ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.8
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಫಕೀರ ಮಹಮದ್ ಕಟ್ಪಾಡಿ
0
10903
1375853
1354384
2026-06-26T05:30:40Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1375853
wikitext
text/x-wiki
'''ಫಕೀರ ಮಹಮದ್ ಕಟ್ಪಾಡಿ'''ಯವರು ತಮ್ಮ ಕನ್ನಡ ಸಾಹಿತ್ಯದಲ್ಲಿ ವಿಶೇಷವಾಗಿ [[ದಕ್ಷಿಣ ಕನ್ನಡ]]ದ ಮುಸ್ಲಿಂ ಸಮುದಾಯದ ಸಂಪ್ರದಾಯಗಳನ್ನು ಹಾಗು ನೋವು ನಲಿವುಗಳನ್ನು ನೈಜವಾಗಿ ವ್ಯಕ್ತಪಡಿಸಿದ್ದಾರೆ.ಇವರ ಕಥೆಗಳು [[ಭಾರತ]]ದ ವಿವಿಧ [[ಭಾಷೆ]]ಗಳಿಗೆ ಅನುವಾದಗೊಂಡಿವೆ. ಕಟ್ಪಾಡಿಯವರ ಕೃತಿಗಳು.
===ಜೀವನ ವಿವರ===
*ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
===ಸಾಹಿತ್ಯ===
’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.
’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ’ಸೂಫಿ ಮಹಿಳೆಯರು’, ’ಉತ್ತರ ಕರ್ನಾಟಕದ ಸೂಫಿಸಂತರು’ ಕೃತಿಗಳನ್ನು ಪ್ರಕಟಿಸಿದ್ದಾರೆ.
===ಪ್ರಶಸ್ತಿ===
*ಕಟ್ಪಾಡಿ ಅವರು ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿಗಳು ದೊರೆತಿವೆ.
.<br>
== ಕಥಾಸಂಕಲನಗಳು ==
* ಗೋರಿ ಕಟ್ಟಿಕೊಂಡವರು
* ನೋಂಬು.
* ದಜ್ಜಾಲ
* ಸರಕುಗಳು.(ಕಾದಂಬರಿ)
* ಕಚ್ಚಾದ <ref>[https://www.thehindu.com/features/friday-review/can-my-language-brighten-your- ;Deepa Ganesh;AUGUST 13, 2015 UPDATED: MARCH 29, 2016]</ref><ref>{{Cite web |url=https://www.bookbrahma.com/author/fakir-muhammad-katpadi |title=ABOUT THE AUTHOR |access-date=2020-12-26 |archive-date=2021-10-17 |archive-url=https://web.archive.org/web/20211017155855/https://www.bookbrahma.com/author/fakir-muhammad-katpadi |url-status=dead }}</ref>
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಚುಟುಕು]]
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ:ಸಾಹಿತಿಗಳು|ಫಕೀರ ಮಹಮದ್ ಕಟ್ಪಾಡಿ]]
q8x6ez9u0z209hqk38y86tqz7hiinkh
ಫ್ರ್ಯಾನ್ಝ್ ಕಾಫ್ಕ
0
24063
1375855
1354679
2026-06-26T06:50:27Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1375855
wikitext
text/x-wiki
{{Infobox Writer <!-- for more information see [[:Template:Infobox Writer/doc]] -->
| name = Franz Kafka
| image = Kafka portrait.jpg
| imagesize = 200px
| caption = Franz Kafka in 1906
| birthdate = {{Birth date|1883|7|3|df=yes}}
| birthplace = [[Prague]], [[Austria–Hungary]]
| deathdate = {{death date and age |1924|6|3|1883|7|3|df=y}}
| deathplace = Kierling near [[Vienna]], Austria
| occupation = Insurance officer, factory manager, novelist, short story writer
| language = [[German language literature|German]], Czech
| nationality = [[Bohemia]]n ([[Austria–Hungary]])
| genre = [[Fiction]], [[short story]]
| movement = [[Modernism]], [[existentialism]]
| notableworks = ''[[The Trial]]'', ''[[The Castle (novel)|The Castle]]'', ''[[The Metamorphosis]]''
| influences = [[Knut Hamsun]], [[Arthur Schopenhauer|Schopenhauer]], [[Johann Wolfgang von Goethe|Goethe]], [[Heinrich von Kleist|von Kleist]], [[Søren Kierkegaard|Kierkegaard]], [[Peter Altenberg|Altenberg]], [[Fyodor Dostoyevsky|Dostoyevsky]], [[Charles Dickens|Dickens]], [[Friedrich Nietzsche|Nietzsche]], [[August Strindberg|Strindberg]], [[Gustave Flaubert|Flaubert]], [[Jeremy Bentham|Bentham]], [[Robert Walser (writer)|Walser]], [[Otto Weininger|Weininger]]
| influenced = [[Harold Pinter|Pinter]], [[Vladimir Nabokov|Nabokov]], [[Philip Roth|Roth]], [[Samuel Beckett|Beckett]], [[Albert Camus|Camus]], [[Robert Musil|Musil]], [[Federico Fellini|Fellini]], [[Hannah Arendt|Arendt]], [[Walter Benjamin|Benjamin]], [[Isaac Bashevis Singer|Singer]], [[Jorge Luis Borges|Borges]], [[Gabriel García Márquez|García Márquez]], [[Carlos Fuentes|Fuentes]], [[Milan Kundera|Kundera]], [[Drago Jančar|Jančar]], [[Salman Rushdie|Rushdie]], [[Haruki Murakami|Murakami]], [[Günter Grass|Grass]], [[Park Chan-wook|Park]], [[Jhonen Vasquez|Vasquez]], [[Amanda Filipacchi|Filipacchi]], [[J. D. Salinger]], [[David Lynch|Lynch]], [[Charles Bukowski|Bukowski]], [[Elias Canetti|Canetti]], [[Kōbō Abe|Abe]], [[ಟಾರ್ಸ್ಟನ್ ಹಾ|Haß]]
| signature = Kafka.gif}}
'''ಫ್ರ್ಯಾನ್ಝ್ ಕಾಫ್ಕ''' ({{IPA-de|ˈfʁants ˈkafka}}; 3 ಜುಲೈ 1883 – 3 ಜೂನ್ 1924) 20ನೆಯ ಶತಮಾನ ಕಂಡ ಬಹಳ ಪ್ರಭಾವಿ [[ಕಲ್ಪಿತಕಥೆ]]ಗಳ ಬರಹಗಾರರಲ್ಲಿ ಒಬ್ಬರಾಗಿದ್ದರು; [[ಕಾದಂಬರಿ]]ಕಾರ ಮತ್ತು [[ಸಣ್ಣ ಕಥೆ]]ಗಳ ಬರಹಗಾರರಾಗಿದ್ದ ಇವರ ಕೃತಿಗಳು, 20ನೆಯ ಶತಮಾನದ ಸಾಹಿತ್ಯಕ್ಷೇತ್ರದ ಪ್ರಮುಖ ಸಾಧನೆಗಳಲ್ಲಿ ಒಂದು ಎಂಬುದನ್ನು ಇವರ ನಿಧನದ ನಂತರವೇ ಗಮನಿಸಲಾಯಿತು.
ಅವರು ಅಂದಿನ [[ಆಸ್ಟ್ರೋ-ಹಂಗೇರಿಯನ್ ರಾಜ್ಯ]]ಕ್ಕೆ ಸೇರಿದ್ದ, ಈಗಿನ [[ಝೆಕ್ ರಿಪಬ್ಲಿಕ್]] ಗೆ ಸೇರಿದ, [[ಬೊಹೇಮಿಯಾ]]ದ [[ಪ್ರೇಗ್]] ನಲ್ಲಿ ಜರ್ಮನ್ ಭಾಷೆ ಮಾತನಾಡುವ [[ಮಧ್ಯಮ ವರ್ಗ]]ದ [[ಯಹೂದಿ]] ದಂಪತಿಗಳಿಗೆ ಜನಿಸಿದರು. [[ಓಲ್ಡ್ ಟೌನ್ ಸ್ಕ್ವೇರ್]] ನಲ್ಲಿರುವ ಪ್ರೇಗ್ ನ [[ಚರ್ಚ್ ಆಫ್ ಸೇಂಟ್ ನಿಕೋಲಸ್]] ಪಕ್ಕದಲ್ಲಿರುವ ಕಾಫ್ಕ ಜನಿಸಿದ ಮನೆಯು ಈಗ ಈ ಬರಹಗಾರರ ಕೃತಿ ಮತ್ತು ಜೀವನದ ವಿಷಯಗಳ ಕುರಿತು ಪ್ರದರ್ಶನವನ್ನೂ ಸರ್ವಕಾಲದಲ್ಲೂ ಹೊಂದಿರುತ್ತದೆ.<ref>[http://www.grandhotelpraha.cz/en/franz-kafka-1/ ಫ್ರ್ಯಾನ್ಝ್ ಕಾಫ್ಕ] {{Webarchive|url=https://web.archive.org/web/20100405024919/http://www.grandhotelpraha.cz/en/franz-kafka-1/ |date=2010-04-05 }} ಫ್ರ್ಯಾನ್ಝ್ ಕಾಫ್ಕ</ref>
ಕಾಫ್ಕರ ಕೃತಿಗಳು — ಕಾದಂಬರಿಗಳಾದ ''[[ದ ಟ್ರಯಲ್]]'' (1925), ''[[ದ ಕ್ಯಾಸಲ್]]'',''[[ದ ಮೆಟಮಾರ್ಫಾಸಿಸ್]]'' (1915) ಮತ್ತು ''[[ಇನ್ ದ ಪೀನಲ್ ಕಾಲೋನಿ]]'' (1914)ಗಳನ್ನು ಒಳಗೊಂಡಂತಹ ಸಣ್ಣಕಥೆಗಳು — ಈಗ ಆಧುನಿಕ [[ಪಾಶ್ಚಿಮಾತ್ಯ ಸಾಹಿತ್ಯ]]ದಲ್ಲಿ ಅತ್ಯಂತ ಸ್ವಂತಿಕೆಯುಳ್ಳ ಕೃತಿಗಳ ಪೈಕಿ ಇರುವಂತಹವೆಂದು ಸಮಗ್ರವಾಗಿ ಪರಿಗಣಿಸಲಾಗಿದೆ. ಅವರ ಹಲವಾರು ಕೃತಿಗಳು, ನಿಧನಕಾಲದಲ್ಲಿ [[ಅಪೂರ್ಣ]]ವಾಗಿದ್ದು, [[wikt:posthumous|ಮರಣಾನಂತರ]] ಪ್ರಕಟಣೆಗೊಂಡವು.<ref name="esp">{{es icon}}ಕಾಂಟಿಜಾಚ್, ಫ್ರ್ಯಾನ್ಸೆಸ್ಕ್ ಮಿರಾಲ್ಲೆಸ್ (2000) "ಫ್ರ್ಯಾನ್ಝ್ ಕಾಫ್ಕ". ''ಓಷಿಯಾನೋ ಗ್ರೂಪೋ ಎಡಿಟೋರಿಯಲ್, S.A. ಬಾರ್ಸಿಲೋನಾ.'' ISBN 0-521-22515-9.</ref>
ಈ ಲೇಖಕರ ಹೆಸರಿನಿಂದ "[[wikt:Kafkaesque|ಕಾಫ್ಕಾಯಿಸ್ಕ್]]" ಎಂಬ ಪದವು ಜನ್ಮತಾಳಿ ಇಂಗ್ಲಿಷ್ ಭಾಷೆಯಲ್ಲಿ ಅದನ್ನು ಬಳಸಲಾಗುತ್ತಿದೆ.
== ಜೀವನ ಚರಿತ್ರೆ ==
[[ಚಿತ್ರ:Kafka5jahre.jpg|thumb|ಐದರ ಹರೆಯದ ಕಾಫ್ಕ]][[ಬೊಹೇಮಿಯಾ]]ದ ರಾಜಧಾನಿಯಾದ [[ಪ್ರೇಗ್]] ನಲ್ಲಿ ಮಧ್ಯಮವರ್ಗದ [[ಯಹೂದಿ]] ಕುಟುಂಬದಲ್ಲಿ ಕಾಫ್ಕರ ಜನನವಾಯಿತು.
[[ಚಿತ್ರ:Franz Kafka House.JPG|thumb|left|ಫ್ರ್ಯಾನ್ಝ್ ಕಾಫ್ಕರು ಮೊದಲಿದ್ದ ಮನೆ.ಅದು ಈಗ ಸಾರ್ವಜನಿಕರು ಶುಲ್ಕರಹಿತವಾಗಿ ಪ್ರವೇಶಿಸಬಹುದಾದ ಸ್ಮಾರಕವಾಗಿ ನಿಂತಿದೆ, ಆದರೆ ಅದರಲ್ಲಿ ಕಾಫ್ಕ ಹಾಗೂ ಪ್ರೇಗ್ ಗೆ ಸಂಬಂಧಿಸಿದ ವಸ್ತುಗಳ ಮಾರಾಟವೂ ನಡೆಯುತ್ತದೆ.]]
ಅವರ ತಂದೆ, ಹರ್ಮನ್ ಕಾಫ್ಕ (1852-1931)ರು "ದೈತ್ಯಾಕಾರದ, ಸ್ವಾರ್ಥ,ಸೊಕ್ಕಿನ ಉದ್ಯಮಿ"<ref>ಕಾರ್ನ್ ಗೋಲ್ಡ್ 1973</ref> ಎಂದು ವರ್ಣಿಸಲಾಗಿದ್ದು, ಕಾಫ್ಕರೇ "ಶಕ್ತಿ, ಆರೋಗ್ಯ, ಆಹಾರಸೇವನೆ, ಗಡುಸು ಕಂಠ, ಮಾತುಕತೆ, ಸ್ವಯಂ-ತೃಪ್ತಿ, ಜಗವನ್ನು ಆಳುವ ಗುಣ, ತಾಳಿಕೆಯ ಸಾಮರ್ಥ್ಯ, ಸಮಯಪ್ರಜ್ಞೆ, ಮತ್ತು ಜನರ ಗುಣಗಳ ಬಗ್ಗೆ ಅರಿವುಗಳ ವಿಷಯದಲ್ಲಿ ಅವರು ನಿಜವಾದ ಕಾಫ್ಕ ಆಗಿದ್ದರು" ಎಂದು ಬಣ್ಣಿಸಿದ್ದಾರೆ. ಹರ್ಮನ್ ಜೇಕಬ್ ಕಾಫ್ಕ ಎಂಬ ''ಷಾಚೆಟ್'' ([[ಸಂಪ್ರದಾಯಬದ್ಧ ಆಚರಣೆಗಳಲ್ಲಿ ಕಟುಕ]]ರಾಗಿದ್ದವರು) ರ ನಾಲ್ಕನೆಯ ಮಗನಾಗಿದ್ದು, ದಕ್ಷಿಣ ಬೊಹೇಮಿಯಾದ [[ಪಿಸೆಕ್]] ನ ಸಮೀಪದ ಝೆಕ್ ಭಾಷೆ ಮಾತನಾಡುವ ಯಹೂದಿಗಳಿರುವ ಒಂದು ಹಳ್ಳಿಯಾದ ಒಸೆಕ್ ನಿಂದ ಪ್ರೇಗ್ ಗೆ ವಲಸೆ ಬಂದವರಾಗಿದ್ದರು. ಪ್ರವಾಸದ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡಿದನಂತರ, ಅವರು [[ಜ್ಯಾಕ್ಡಾ]](ಝೆಕ್ ನಲ್ಲಿ ''ಕಾವ್ಕಾ'' ) ಲಾಂಛನವನ್ನು ತನ್ನ ವ್ಯವಹಾರಸಂಸ್ಥೆಯ ಕುರುಹಾಗಿ ಹೊಂದಿದ ಪುರುಷರ ಮತ್ತು ಮಹಿಳೆಯರ ಅಭಿರುಚಿಯನ್ನು ಪೂರೈಸುವ ವಸ್ತುಗಳು ಮತ್ತು ಸಾಧನಗಳ ಅಂಗಡಿಯನ್ನು ಸ್ವತಂತ್ರವಾಗಿ ತೆರೆದು, 15 ನೌಕರರಿಗೆ ಉದ್ಯೋಗವಿತ್ತಿದ್ದರು. ಕಾಫ್ಕರ ತಾಯಿ, ಜೂಲಿ (1856–1934)[[ಪೋಡೆಬ್ರಾಡಿ]]ಯ ಶ್ರೀಮಂತ ಮದ್ಯೋತ್ಪಾದಕರಾದ ಜೇಕಬ್ ಲೋಯಿಯವರ ಪುತ್ರಿಯಾಗಿದ್ದು, ತನ್ನ ಪತಿಗಿಂತಲೂ ಹೆಚ್ಚು ವಿದ್ಯಾವಂತೆಯಾಗಿದ್ದರು.<ref>ಗಿಲ್ಮನ್, ಸ್ಯಾಂಡರ್ ಎಲ್. (2005) ''ಫ್ರ್ಯಾನ್ಝ್ ಕಾಫ್ಕ''. ರೀಕ್ಟನ್ ಬುಕ್ಸ್ ಲಿಮಿಟೆಡ್. ಲಂಡನ್, ಯುಕೆ. ಪುಟಗಳು 20–21. ISBN 1-59474-023-2</ref>
ಫ್ರ್ಯಾನ್ಝ್ ಆರು ಮಕ್ಕಳ ಪೈಕಿ ಜ್ಯೇಷ್ಠಪುತ್ರರಾಗಿದ್ದರು.<ref>ಹಮಾಲಿಯನ್ ([1975], 3).</ref> ಅವರಿಗೆ ಇಬ್ಬರು ತಮ್ಮಂದಿರು: ಜಾರ್ಜ್ ಮತ್ತು ಹೀನ್ರಿಚ್; ಎರಡು ಹಸುಳೆಗಳೂ ಕ್ರಮವಾಗಿ ಹದಿನೈದು ತಿಂಗಳು ಹಾಗೂ ಆರು ತಿಂಗಳ ವಯಸ್ಸಿನಲ್ಲೇ, ಫ್ರ್ಯಾನ್ಝ್ ತನ್ನ ಏಳನೆಯ ವಯಸ್ಸಿನಲ್ಲಿದ್ದಾಗಲೇ, ಕೊನೆಯುಸಿರೆಳೆದವು.ಅವರಿಗೆ ಮೂರು ತಂಗಿಯರೂ ಇದ್ದರು - ಗ್ಯಾಬ್ರಿಯೆಲೆ ("ಎಲ್ಲಿ") (1889–1944), ವ್ಯಾಲೆರಿ ("ವಲ್ಲಿ") (1890–1944), ಮತ್ತು ಓಟ್ಟಿಲೆ ("ಓಟ್ಲಾ") (1892–1943). ವ್ಯಾಪಾರದ ದಿನಗಳಲ್ಲಿ ತಂದೆತಾಯಿಗಳಿಬ್ಬರೂ ಮನೆಯಿಂದ ಗೈರುಹಾಜರಿರುತ್ತಿದ್ದರು. ಅವರ ತಾಯಿಯು ತನ್ನ ಪತಿಯ ವ್ಯಾಪಾರದಲ್ಲಿ ಸಹಕಾರ ನೀಡುತ್ತಿದ್ದರು ಹಾಗೂ ದಿನಕ್ಕೆ 12 ಗಂಟೆಗಳ ಕಾಲ ದುಡಿಯುತ್ತಿದ್ದರು. ಮಕ್ಕಳನ್ನು ಹೆಚ್ಚಾಗಿ ಬೆಳೆಸಿದುದು ದಾದಿಗಳು ಹಾಗೂ ಸೇವಕರೇ. ''[[ಲೆಟರ್ ಟು ಹಿಸ್ ಫಾದರ್]]'' ನಲ್ಲಿ ತನ್ನ ತಂದೆಯ ಅಧಿಕಾರಯುತ ಹಾಗೂ ಕಂಡದ್ದೆಲ್ಲಾ ತನ್ನದಾಗಬೇಕೆಂದು ತಗಾದೆ ಹೂಡುವ ಗುಣಗಳು ತನ್ನ ಮೇಲೆ ಅಗಾಧವಾದ ಪ್ರಭಾವ ಬೀರಿದವೆಂದು ದೂರುತ್ತಾ, ತನ್ನ ಅಪ್ಪನ ಅವಗುಣಗಳನ್ನು ವಿವರವಾಗಿ ಬರೆಯುವುದರ ಮೂಲಕ, ವರ ತಂದೆಯೊಡನೆ ಅವರ ಸಂಬಂಧವು ಬಹಳ ತೊಡಕಿನದಾಗಿತ್ತೆಂಬುದು ಸ್ಪಷ್ಟವಾಗುತ್ತದೆ.
ಎರಡನೆಯ ಮಹಾಯುದ್ಧದಲ್ಲಿ, ಫ್ರ್ಯಾನ್ಝ್ ರ ತಂಗಿಯರನ್ನು, ಅವರ ಕುಟುಂಬದೊಡನೆ [[ಲಾಡ್ಝ್ ಘೆಟ್ಟೋ]]ಗೆ ಕಳುಹಿಸಲಾಗಿ, ಅಲ್ಲಿನ ಕಾಂಸೆಂಟ್ರೇಷನ್ ಕ್ಯಾಂಪ್ (ಚಿತ್ರಹಿಂಸಾ ಶಿಬಿರ)ಗಳಲ್ಲಿ ಅವರೆಲ್ಲರೂ ಕೊಲ್ಲಲ್ಪಟ್ಟರು. ಓಟ್ಲಾರನ್ನು [[ಥೆರೆಸಿಯೆನ್ಸ್ಟಾಡ್ಟ್]] ನ ಹಿಂಸಾಶಿಬಿರಕ್ಕೆ ಕಳುಹಿಸಲಾಯಿತು ಮತ್ತು 1943ರ ಅಕ್ಟೋಬರ್ ಏಳರಂದು [[ಆಷ್ವಿಟ್ಝ್]] ನ [[ಸಾವಿನ ಶಿಬಿರ]]ಕ್ಕೆ ಕರೆದೊಯ್ಯಲಾಯಿತು; ಅಲ್ಲಿ ಓಟ್ಲಾ ಸೇರಿದಂತೆ 1267 ಮಕ್ಕಳು ಮತ್ತು 51 ಪೋಷಕರನ್ನು ಬರುತ್ತಿದ್ದಂತೆಯೇ ವಿಷಾನಿಲವನ್ನು ನೀಡಿ ಕೊಲ್ಲಲಾಯಿತು.<ref>ಡಾನ್ಯುಟಾ ಝೆಕ್: ಕಲೆಂಡಾರ್ಝ್ ವೈಡಾರ್ಝೆನ್ w KL ಆಷ್ವಿಟ್ಝ್, ಓಸ್ವೀಕಿಮ್ 1992, ಪುಟ 534. ಕ್ಯಾಂಪ್ ನ ಲೆಕ್ಕಪತ್ರಾಲಯದಲ್ಲಿ ಪೋಷಕರ ಹೆಸರುಗಳ ಪಟ್ಟಿಯು ಜೋಪಾನವಾಗಿ ಇರಿಸಲ್ಪಟ್ಟಿತ್ತು.</ref>
=== ಶಿಕ್ಷಣ ===
[[ಚಿತ್ರ:Prague Palace Kinsky PC.jpg|thumb|ಕಾಫ್ಕ ಜಿಮ್ನಾಷಿಯಂಗೆ ಹಾಜರಾಗುತ್ತಿದ್ದ ಹಾಗೂ ಅವರ ತಂದೆಯು ನಂತರ ಒಂದು ಅಂಗಡಿಯ ಮಾಲಿಕರಾಗಿದ್ದ ಕಿಂಸ್ಕೀ ಅರಮನೆ.]]
ಕಾಫ್ಕರ ಮಾತೃಭಾಷೆ ಜರ್ಮನ್ ಆಗಿದ್ದರೂ, ಅವರು ಝೆಕ್ ಭಾಷೆಯಲ್ಲೂ ನಿರರ್ಗಳತೆ ಹೊಂದಿದ್ದರು.<ref>ಡೆರೆಕ್ ಸೇಯರ್, "ದ ಲ್ಯಾಂಗ್ವೇಜ್ ಆಫ್ ನ್ಯಾಷನಾಲಿಟಿ ಎಂಡ್ ದ ನ್ಯಾಷನಾಲಿಟಿ ಆಫ್ ಲ್ಯಾಂಗ್ವೇಜ್: ಪ್ರೇಗ್ 1780–1920 – ಝೆಕ್ ರಿಪಬ್ಲಿಕ್ ಹಿಸ್ಟರಿ", ಪಾಸ್ಟ್ ಎಂಡ್ ಪ್ರೆಸೆಂಟ್, 1996; 153: 164–210.</ref> ನಂತರ ಕಾಫ್ಕ [[ಫ್ರೆಂಚ್ ಭಾಷೆ]] ಮತ್ತು ಸಂಸ್ಕೃತಿಯನ್ನೂ ಒಂದಷ್ಟು ಕಲಿತರು; [[ಫ್ಲಾಬರ್ಟ್]] ಅವರ ನೆಚ್ಚಿನ ಬರಹಗಾರರಲ್ಲಿ ಒಬ್ಬರಾಗಿದ್ದರು. 1889ರಿಂದ 1893ರವರೆಗೆ ಅವರು ಈಗ ಮಾಸ್ನಾ ಬೀದಿ ಎಂದು ಕರೆಯಲ್ಪಡುವ, ''ಮ್ಯಾಸ್ನಿ ಟ್ರ್ಹ್/ಫ್ಲೀಷ್ ಮಾರ್ಕ್ಟ್'' (ಮಾಂಸದ ಮಾರುಕಟ್ಟೆ)ಯ ಬಳಿಯ ''ಡ್ಯೂಟ್ಷೆ ಕ್ನಾಬೆನ್ಸ್ಕೂಲೆ'', ಬಾಲಕೆ ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು. ಅವರ [[ಯಹೂದಿ]] ಶಿಕ್ಷಣವು ತಮ್ಮ 13ನೆಯ ವಯಸ್ಸಿನಲ್ಲಿ ಆಚರಿಸಿದ ''[[ಬಾರ್ ಮಿಟ್ಝ್ವಾ]]'' ಹಾಗೂ, ತಾವು ದ್ವೇಷಿಸುತ್ತಿದ್ದ, ತನ್ನ ತಂದೆಯೊಡನೆ ವರ್ಷಕ್ಕೆ ನಾಲ್ಕು ಬಾರಿ ಹೋಗಲೇಬೇಕಾದಂತಹ [[ಸಿನಗಾಗ್]] (ಯಹೂದ್ಯರ ದೇಗುಲ)ಭೇಟಿಗೆ ಸೀಮಿತವಾಗಿತ್ತು.<ref>ಲೆಟರ್ ಟು ಹಿಸ್ ಫಾದರ್, ಪುಟ 150</ref> ಪ್ರಾಥಮಿಕ ಶಾಲೆಯ ನಂತರ, ''ಆಲ್ಟ್ ಸ್ಟ್ಯಾಡ್ಟರ್ ಡ್ಯೂಟ್ಷೆಸ್ ಜಿಮ್ನಾಷಿಯಂ'' ಎಂಬ ಶಾಸ್ತ್ರೀಯತೆಯತ್ತ ವಾಲುವಂತಹ, ಕಠಿಣವಾದ ರಾಜ್ಯ ''ಜಿಮ್ನಾಷಿಯಂ'' ನಲ್ಲಿನ,ಮಾಧ್ಯಮಿಕ ಶಿಕ್ಷಣ ಶಾಲೆಗೆ ಸೇರಿಸಲಾಯಿತು; ಈ ಶಾಲೆಯಲ್ಲಿ ಎಂಟು ಗ್ರೇಡ್ ಹಂತಗಳಿದ್ದು, ಬೋಧನೆಯು ಜರ್ಮನ್ ಭಾಷೆಯಲ್ಲಿ ಸಹ ನಡೆಯುತ್ತಿತ್ತು. ಈ ಶಾಲೆಯು ಕಿಂಸ್ಕಿ ಅರಮನೆಯೊಳಗಿನ [[ಓಲ್ಡ್ ಟೈಂ ಸ್ಕ್ವೇರ್]] ನಲ್ಲಿದ್ದಿತು. ಅವರು ತಮ್ಮ [[ಮೆಚ್ಯೂರಿಟಾ]] ಪರೀಕ್ಷೆಯಲ್ಲಿ 1901ರಲ್ಲಿ ಉತ್ತೀರ್ಣರಾದರು.<ref>''ಲ್ಯಾಂಬೆಂಟ್ ಟ್ರೇಸಸ್: ಫ್ರ್ಯಾನ್ಝ್ ಕಾಫ್ಕ'' S ಕಾರ್ನ್ ಗೋಲ್ಡ್ - 2004</ref>
ಪ್ರೇಗ್ ನ [[ಚಾರ್ಲ್ಸ್-ಫರ್ಡಿನಾಂಡ್ ಯೂನಿವರ್ಸಿಟಿ]]ಯನ್ನು ಸೇರಿದ ಕಾಫ್ಕ ಮೊದಲಿಗೆ ರಸಾಯನಶಾಸ್ತ್ರದ ಅಧ್ಯಯನದಲ್ಲಿ ತೊಡಗಿದರೂ, ಎರಡು ವಾರಗಳ ನಂತರ ಕಾನೂನು ವಿಭಾಗಕ್ಕೆ ವರ್ಗಾಯಿಸಿಕೊಂಡರು. ಇದರಿಂದ ಹಲವಾರು ವೃತ್ತಿಗಳ ಆಯ್ಕೆ ಮಾಡಲು ಅನುಕೂಲವಾಯಿತು ಹಾಗೂ ಅವರ ತಂದೆಯೂ ಇದರಿಂದ ಪ್ರಸನ್ನರಾದರು; ಈ ವ್ಯಾಸಂಗವು ದೀರ್ಘಕಾಲದ್ದಾದ್ದರಿಂದ ಕಾಫ್ಕ ಇದೇ ಸಮಯದಲ್ಲಿ ಜರ್ಮನ್ ಅಧ್ಯಯನ ಹಾಗೂ ಕಲೆಯ ಇತಿಹಾಸಗಳ ವಿಷಯದಲ್ಲೂ ತರಗತಿಗಳನ್ನು ಸೇರಲು ಅವಕಾಶವಾಯಿತು. ಯೂನಿವರ್ಸಿಟಿಯಲ್ಲಿ ಅವರು ''ಲೆಸೆ-ಉಂಡ್-ರೆಡೆಹಲ್ಲೆ ಡೆರ್ ಡ್ಯೂಟ್ಷೆನ್ ಸ್ಟೂಡೆಂಟೆನ್'' ಎಂಬ ಸಾಹಿತ್ಯ ಸಂಬಂಧಿತ ಕಾರ್ಯಕರ್ಮಗಳನ್ನು, ಓದುವಿಕೆಗಳನ್ನು ಮತ್ತು ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ವಿದ್ಯಾರ್ಥಿ ಸಂಘವನ್ನು ಸೇರಿದರು. ಮೊದಲ ವರ್ಷದ ಅಧ್ಯಯನದ ಕಡೆಯ ವೇಳೆಗೆ ಅವರ ಜೀವನಪರ್ಯಂತ ಆಪ್ತಗೆಳೆಯರಾದ [[ಮ್ಯಾಕ್ಸ್ ಬ್ರಾಡ್]] ಅನ್ನು ಹಾಗೂ ಪತ್ರಕರ್ತ [[ಫೆಲಿಕ್ಸ್ ವೆಲ್ಟ್ಷ್]] ಎಂಬ ಕಾನೂನಿ ವಿದ್ಯಾರ್ಥಿಯನ್ನೂ ಭೇಟಿಯಾದರು. ಕಾಫ್ಕ ಡಾಕ್ಟರ್ ಆಫ್ ಲಾ ಡಿಗ್ರಿಯನ್ನು 1906ರ ಜೂನ್ 18ರಂದು ಪಡೆದರು ಹಾಗೂ ಒಂದು ವರ್ಷದ ಕಾಲ ನಾಗರಿಕ ಮತ್ತು ಅಪರಾಧ ನ್ಯಾಯಾಲಯಗಳಲ್ಲಿ ಕಾನೂನು ಗುಮಾಸ್ತರಾಗಿ ಕಡ್ಡಾಯವಾಗಿ ಎಸಗಬೇಕಾದ ಸೇವೆಯನ್ನು ಪೂರೈಸಿದರು.<ref name="esp"/>
=== ಉದ್ಯೋಗ ===
ನವೆಂಬರ್ 1, 1907ರಂದು [[ಅಸ್ಸಿಕ್ಯುರಾಝಿಯೋನಿ ಜನರಲಿ]] ಎಂಬ ಬೃಹತ್ ಇಟಲಿಯ ವಿಮಾ ಕಂಪನಿಯು ಇವರನ್ನು ಉದ್ಯೋಗಕ್ಕೆ ನೇಮಿಸಿಕೊಂಡಿತು; ಅಲ್ಲಿ ಅವರು ಸುಮಾರು ಒಂದು ವರ್ಷ ಕಾಲ ಸೇವೆ ಸಲ್ಲಿಸಿದರು. ಆ ದಿನಗಳಲ್ಲಿ ಅವರು ಬರೆದ ಕಾಗದ ಪತ್ರಗಳಲ್ಲಿ ಅವರು ತಮ್ಮ ಉದ್ಯೋಗದ ವೇಳೆ - ರಾತ್ರಿ ಎಂಟು ಗಂಟೆ(20:00)ಯಿಂದ ಬೆಳಗ್ಗೆ ಆರರವರೆಗೆ(06:00) - ಯ ಬಗ್ಗೆ ಅಸಂತುಷ್ಟರಾಗಿದ್ದರೆಂದು ಸೂಚಿಸುತ್ತವೆ; ತನ್ನ ಬರವಣಿಗೆಗೆ ಆ ವೇಳೆಯು ಬಹಳ ಅಡಚಣೆಯುಂಟುಮಾಡುತ್ತದೆ ಎಂಬುದು ಅವರ ಮನೋಗತವಾಗಿತ್ತು. ಜುಲೈ 15,1908ರಂದು ಅವರು ತಮ್ಮ ಕೆಲಸಕ್ಕೆ ರಾಜಿನಾಮೆ ಇತ್ತರು ಮತ್ತು ಎರಡು ವಾರಗಳ ನಂತರ ಹೆಚ್ಚು ಹೊಂದಾಣಿಕೆಯಾಗುವಂತಹ ಕೆಲಸವನ್ನು [[ಬೊಹೇಮಿಯಾ ಸಂಸ್ಥಾನ]]ದ ಸಂಸ್ಥೆಯಾದ [[ವರ್ಕರ್ಸ್ ಆಕ್ಸಿಡೆಂಟ್ ಇಂಷ್ಯೂರೆನ್ಸ್]] ನಲ್ಲಿ ಪಡೆದರು. ಈ ಉದ್ಯೋಗದಲ್ಲಿ ಕೈಗಾರಿಕಾ ನೌಕರರಿಗೆ [[ವೈಯುಕ್ತಿಕವಾದ ಗಾಯ]]ಗಳನ್ನು ಪರೀಕ್ಷಿಸಿ ಅದಕ್ಕೆ ನೀಡಬೇಕಾದ ಪರಿಹಾರವನ್ನು ನಮೂದಿದಬೇಕಿತ್ತು. ಕಾಫ್ಕರು ನೌಕರರ ಅಪಘಾತ ವಿಮಾ ಸಂಸ್ಥೆಯ ಉದ್ಯೋಗಿಯಾಗಿದ್ದಾಗ ನಾಗರಿಕರು ಬಳಸುವ ಮೊದಲ ಗಟ್ಟಿಯಾದ ಟೊಪ್ಪಿಗೆಯನ್ನು ಕಂಡುಹಿಡಿದರೆಂದು ವ್ಯವಸ್ಥಾಪಕ ಪ್ರೊಫೆಸರ್ ಆದ [[ಪೀಟರ್ ಡ್ರಕ್ಕರ್]] ಹೇಳುವರಾದರೂ, ಅದನ್ನು ಪುಷ್ಟೀಕರಿಸುವಂತಹ ಯಾವುದೇ ದಾಖಲೆಗಳು ಲಭ್ಯವಿಲ್ಲ.<ref>ಡ್ರಕ್ಕರ್, ಪೀಟರ್. ಮುಂದಿನ ಸಮಾಜವನ್ನು ನಿಭಾಯಿಸುವಿಕೆ. ನೋಡಿ: ಫ್ರ್ಯಾನ್ಝ್ ಕಾಫ್ಕ, ''ಆಮ್ಟ್ಲಿಚೆ ಸ್ಕ್ರಿಫ್ಟೆನ್ ''. (ಸಂಪಾದಕರು) ಕೆ. ಹರ್ಮ್ಸ್ ಡಾರ್ಫ್ & ಬಿ. ವ್ಯಾಗ್ನರ್ (2004) (ಇಂಗ್ಲಿಷ್ ಅನುವಾದ.: ''ದ ಆಫೀಸ್ ರೈಟಿಂಗ್ಸ್''. (ಸಂಪಾದಕರು) ಎಸ್. ಕಾರ್ನ್ ಗೋಲ್ಡ್, ಜೆ. ಗ್ರೀನ್ಸ್ ಬರ್ಗ್ & ಬಿ. ವ್ಯಾಗ್ನರ್. ಅನುವಾದ. ಇ. ಪ್ಯಾಟನ್ ರೊಂದಿ್ಗೆ ಆರ್. ಹೀನ್(2008)); cf. ಹೆಚ್..ಜಿ. ಕಾಚ್ & ಕೆ. ವಾಗೆನ್ ಬ್ಯಾಚ್ (ಸಂಪಾದಕರು.), ''ಕಾಫ್ಕಾಸ್ ಫ್ಯಾಬ್ರಿಕೆನ್'' (2002).</ref> ಅವರ ತಂದೆಯು ಮಗನ ವಿಮಾ ಅಧಿಕಾರಿತ್ವವನ್ನು "ಬ್ರಾಟ್ ಬೆರಫ್", ಎಂದರೆ "ಆಹಾರ ನೌಕರಿ", ಅರ್ಥಾತ್ ಖರ್ಚನ್ನು ಸರಿದೂಗಿಸಲೆಂದೇ ಮಾಡಬಲ್ಲ ನೌಕರಿ ಎಂದು ಕರೆಯುತ್ತಿದ್ದರು. ಕಾಫ್ಕ ಆಗಾಗ್ಗೆ ಈ ಕೆಲಸದ ಬಗ್ಗೆ ತಮಗೆ ಒಲವಿಲ್ಲವೆಂದು ಹೇಳುತ್ತಿದ್ದರಾದರೂ, ಅವರು ಪರಿಶ್ರಮಿ ಹಾಗೂ ಸಮರ್ಥ ಉದ್ಯೋಗಿಯಾಗಿದ್ದರು. ಸಂಸ್ಥೆಯ [[ವಾರ್ಷಿಕ ವರದಿ]]ಯನ್ನು ಸಂಗ್ರಹಿಸಿ, ರಚಿಸುವ ಕಾರ್ಯವನ್ನೂ ಅವರಿಗೆ ಒಪ್ಪಿಸಲಾಯಿತು ಹಾಗೂ ಅದರ ಫಲಿತವು ಅವರಿಗೆ ಹೆಮ್ಮೆಯೆನಿಸಿತೆಂದು ವರದಿಯಾಗಿದ್ದು, ಆ ವರದಿಯ ಪ್ರತಿಗಳನ್ನು ತಮ್ಮ ಸ್ನೇಹಿತರು ಹಾಗೂ ಕುಟುಂಬಕ್ಕೂ ಕಳುಹಿಸಿದರಂತೆ. ಜೊತೆಜೊತೆಗೇ ಕಾಫ್ಕ ತಮ್ಮ ಸಾಹಿತ್ಯ ಕೃತಿ ರಚನೆಗೂ ಬದ್ಧರಾಗಿದ್ದರು. ಅವರ ಆಪ್ತ ಸ್ನೇಹಿತರಾದ [[ಮ್ಯಾಕ್ಸ್ ಬ್ರಾಡ್]] ಮತ್ತು [[ಫೆಲಿಕ್ಸ್ ವೆಲ್ಟ್ಷ್]] ರನ್ನೂ ಸೇರಿಸಿ, ಈ ಮೂವರ ತಂಡವನ್ನು "ಡೆರ್ ಎಂಗೆ ಪ್ರೇಗರ್ ಕ್ರೀಸ್", ನಿಕಟವಾದ ಪ್ರೇಗ್ ವರ್ತುಲ, ಎಂದು ಕರೆದರು; ಇದು ಪ್ರೇಗ್ ನ ಒಂದು ದೊಡ್ಡ ವರ್ತುಲದ ಒಂದು ಭಾಗವಾಗಿದ್ದು, ಆ ವರ್ತುಲವು (ಸಮಾನಮನಸ್ಕರ ತಂಡವು) "ಪ್ರೇಗ್ ನ ಫಲವತ್ತಾದ ಸಂಸ್ಕೃತಿಯ ನೆಲಕ್ಕೆ 1880ರ ದಶಕದಿಂದ ಮೊದಲನೆಯ ಮಹಾಯುದ್ಧದ ನಂತರದವರೆಗೂ ಕೊಡುಗೆಗಳನ್ನು ನೀಡಿದ ಜರ್ಮನ್-ಯಹೂದಿ ಬರಹಗಾರರ, ಕಟ್ಟುನಿಟ್ಟುರಹಿತ ಗುಂಪು" ಆಗಿತ್ತು.<ref name="Czermak">''ದ ಮೆಟಮಾರ್ಫಾಸಿಸ್ ಎಂಡ್ ಅದರ್ ಸ್ಟೋರೀಸ್'', ಟಿಪ್ಪಣಿಗಳು. ಹರ್ಬರ್ತ್ ಝೆರ್ಮಾಕ್. ಲಿಂಕನ್, ನೆಬ್ರಾಸ್ಕ: ಕ್ಲಿಫ್ಸ್ ನೋಟ್ಸ್ 1973, 1996.</ref>
1911ರಲ್ಲಿ ಇವರ ತಂಗಿ ಎಲ್ಲಿಯ ಪತಿಯಾದ ಕಾರ್ಲ್ ಹರ್ಮನ್ ಪ್ರೇಗರ್ ಆಸ್ಬೆಸ್ಟ್ ವರ್ಕ್ ಹರ್ಮನ್ ಎಂಡ್ ಕೋ ಎಂಬ [[ಆಸ್ಬೆಸ್ಟಾಸ್]] ಕಾರ್ಖಾನೆಯ ಕಾರ್ಯಾಚರಣೆಗೆ ಕೈಜೋಡಿಸಲು ಕಾಫ್ಕರನ್ನು ಕೋರಿದರು. ಕಾಫ್ಕ ಮೊದಲಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿ, ತಮ್ಮ ಬಿಡುವಿನ ವೇಳೆಯ ಬಹುಭಾಗವನ್ನು ಈ ಕೆಲಸಕ್ಕೆ ತೊಡಗಿಸಿದರು. ಆ ಸಮಯದಲ್ಲಿ, ಮ್ಯಾಕ್ಸ್ ಬ್ರಾಡ್ ರಂತಹ, ಇವರ ಎಲ್ಲಾ ವಿಷಯಗಳನ್ನೂ ಅನುಮೋದಿಸುವಂತಹ, ಆಪ್ತರು ವಿರೋಧಿಸಿದಾಗಲೂ ಸಹ, ಕಾಫ್ಕ [[ಯಿಡ್ಡಿಷ್ ರಂಗಭೂಮಿ]]ಯ ಪ್ರದರ್ಶನ ಮತ್ತು ಮನರಂಜನೆಯತ್ತ ಆಸಕ್ತಿ ತೋರಿದರು. ಆ ಪ್ರದರ್ಶನಗಳು ತಮ್ಮ [[ಜುದಾಯಿಸಂ]]ನೊಡನೆ ಬೆಳೆದ ಸಂಬಂಧಗಳ ಬೀಜಾಂಕುರಕ್ಕೆ ಕಾರಣವಾದವು.<ref name="victorian">{{cite web |url=http://victorian.fortunecity.com/vermeer/287/judaism.htm |title=Kafka and Judaism |publisher=Victorian.fortunecity.com |accessdate=28 May 2009 |archive-date=21 ಫೆಬ್ರವರಿ 1999 |archive-url=https://web.archive.org/web/19990221072227/http://victorian.fortunecity.com/vermeer/287/judaism.htm |url-status=dead }}</ref>
=== ನಂತರದ ವರ್ಷಗಳು ===
1912ರಲ್ಲಿ, ಮ್ಯಾಕ್ಸ್ ಬ್ರಾಡ್ ರ ಮನೆಯಲ್ಲಿ, ಬರ್ಲಿನ್ ವಾಸಿಯಾದ ಮತ್ತು [[ಡಿಕ್ಟಾಫೋನ್]] ಕಂಪನಿಯ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಫೆಲಿಸ್ ಬಾಯೆರ್ ರನ್ನು ಭೇಟಿಯಾದರು. ಮುಂದಿನ ಐದು ವರ್ಷಗಳಲ್ಲಿ ಅವರು ಹಲವಾರು ಬಾರಿ ಪರಸ್ಪರ ಪತ್ರ ಬರೆದರು, ಭೇಟಿಯಾದರು ಹಾಗೂ ಎರಡು ಬಾರಿ ವಿವಾಹವಾಗಲು ನಿಶ್ಚಿತಾರ್ಥವನ್ನೂ ಮಾಡಿಕೊಂಡರು. ಅವರ ಸಂಬಂಧವು ಕಡೆಗೆ 1917ರಲ್ಲಿ ಅಂತ್ಯವಾಯಿತು.
1917ರಲ್ಲಿ ಕಾಫ್ಕ [[ಕ್ಷಯರೋಗ]]ದಿಂದ ನರಳಲಾರಂಭಿಸಿದರು; ಈ ಪರಿಸ್ಥಿತಿಯಲ್ಲಿ ಆಗಾಗ್ಗೆ ಚೇತರಿಕೆಯುಂಟಾಗಬೇಕಿತ್ತು ಹಾಗೂ ಆ ಸಂದರ್ಭಗಳಲ್ಲಿ ಅವರನ್ನು ಅವರ ಕುಟುಂಬದ ಸದಸ್ಯರು, ವಿಶೇಷತಃ ತಂಗಿ ಓಟ್ಲಾ, ಬೆಂಬಲಿಸಿದರು. ತನ್ನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಎಲ್ಲಿ ಜನರು ತಿರಸ್ಕಾರಾರ್ಹವೆಂದು ಪರಿಗಣಿಸಿಬಿಡುವರೋ ಎಂಬ ಶಂಕೆ ಅವರಿಗಿದ್ದರೂ, ತಮ್ಮ ಬಾಲಕನಂತಹ ರೂಪ, ಸ್ವಚ್ಛತೆ ಮತ್ತು ಸೌಮ್ಯವಾದ ಸುಂದರ ರೂಪ, ಸರಳ ಹಾಗೂ ತಣ್ಣನೆಯ ಭಾವ, ಗೋಚರಿಸುವ ಬುದ್ಧಿಮತ್ತೆ ಮತ್ತು ನಿರಾರ್ದ್ರ ಹಾಸ್ಯಪ್ರಜ್ಞೆಯಿಂದ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದರು.<ref>[https://web.archive.org/web/20080501080645/http://www.amrep.org/articles/3_3c/ disappearing.html ''ಅಮೆರಿಕಾ'' ದ ಬಗ್ಗೆ ರಿಯಾನ್ ಮೆಕ್ ಕಿಟ್ರಿಕ್ ರವರು ನಿರ್ದೇಶಕ ಡಾಮಿನಿಕ್ ಸೆರ್ರಾಂಡ್ ಮತ್ತು ಗಿಡಿಯನ್ ಲೆಸ್ಟರ್ ರೊಡನೆ ಮಾತನಾಡುವರು www.amrep.org]</ref>
ಕಾಪ್ಕ ಝೆಕ್ ಪತ್ರಕರ್ತೆಯಾದ [[ಮಿಲೇನಾ ಜೆಸೆನ್ಸ್ಕಾ]]ರೊಡನೆ ಗಾಢವಾದ ಸಂಬಂಧವನ್ನು ಬೆಳೆಸಿಕೊಂಡರು. ಜುಲೈ 1923ರಲ್ಲಿ [[ಬಾಲ್ಟಿಕ್ ಸಮುದ್ರ]]ದ [[ಗ್ರಾಲ್-ಮ್ಯುರಿಟ್ಝ್]] ನಲ್ಲಿ ಕಳೆದ ಸಮಗ್ರ ರಜೆಯ ದಿನಗಳಲ್ಲಿ, ಅವರು [[ಡೋರಾ ಡಯಾಮಂಟ್]] ರೊಡನೆ ಭೇಟಿಯಾದರು ಮತ್ತು ಕೆಲವು ಕಾಲ, ತಮ್ಮ ಕುಟುಂಬದವರ ಪ್ರಭಾವದಿಂದು ಹೊರಗುಳಿದು ಬರವಣಿಗೆಯತ್ತ ಗಮನ ಹರಿಸುವ ಸಲುವಾಗಿ, ಬರ್ಲಿನ್ ನಲ್ಲಿ ಉಳಿದುಕೊಂಡರು. ಬರ್ಲಿನ್ ನಲ್ಲಿ, ತನ್ನ ಘೆಟ್ಟೋದ ನಿನ್ನೆಗಳನ್ನು ಮರೆಯುವಷ್ಟು ಸ್ವತಂತ್ರ ಮನೋಭಾವ ಹೊಂದಿದ್ದ, ಸಂಪ್ರದಾಯಸ್ಥ ಯಹೂದಿ ಕುಟುಂಬಕ್ಕೆ ಸೇರಿದ ಹಾಗೂ ಕಿಂಡರ್ ಗಾರ್ಟನ್ ನಲ್ಲಿ ಶಿಕ್ಷಕಿಯಾಗಿದ್ದ 25ರ ಹರೆಯದ ಡಯಾಮಂಟ್ ರೊಡನೆ ನೆಲೆಸಿದರು. ಡಯಾಮಂಟ್ ಅವರ ಪ್ರೇಯಸಿಯಾಗಿ, ಕಾಫ್ಕರು [[ಟಾಲ್ಮಡ್]] ಬಗ್ಗೆ ಆಸಕ್ತಿಹೊಂದುವತ್ತ ಪ್ರಭಾವ ಬೀರಿದರು.<ref>[https://web.archive.org/web/20050924095502/http://www.atlegerhardsen.com/pages/lothar_hempel/presse_eng_0802.htm Lothar Hempel] www.atlegerhardsen.com</ref>
[[ನೈಸರ್ಗಿಕ ಚಿಕಿತ್ಸೆ]]ಗಳನ್ನು ನೀಡುದರೂ ಸಹ ಕಾಫ್ಕರ ಕ್ಷಯವು ಉಲ್ಬಣಿಸುತ್ತಲೇ ಸಾಗಿತು; ಅವರು ಪ್ರೇಗ್ ಗೆ ಮರಳಿದರು, ನಂತರ ಚಿಕಿತ್ಸೆಗಾಗಿ [[ವಿಯೆನ್ನಾ]]ದ ಬಳಿಯ ಕಿಯರ್ಲಿಂಗ್ ನಲ್ಲಿದ್ದ ಡಾಕ್ಟರ್ ಹಾಫ್ ಮನ್ ರ [[ಕ್ಷಯರೋಗಚಿಕಿತ್ಸಾಕೇಂದ್ರ]]ಕ್ಕೆ ಹೋದರು. ಅಲ್ಲಿ, ಪ್ರಾಯಶಃ ಹಸಿವಿನಿಂದಲೇ, 1924ರ ಜೂನ್ 3ರಂದು, ಅವರು ತಮ್ಮ ಕೊನೆಯುಸಿರೆಳೆದರು. ಕಾಫ್ಕರ ಗಂಟಲಿನ ಸ್ಥಿತಿಯು ಬಹಳ ಹದಗೆಟ್ಟಿದ್ದು, ನುಂಗುವುದು ಬಹಳ ತ್ರಾಸದಾಯಕ ಹಾಗೂ ನೋವು ಉಂಟುಮಾಡುತ್ತಿದ್ದುದರಿಂದಲೂ, ಆಗಿನ ಕಾಲದಲ್ಲಿ [[ಬಾಹ್ಯದಿಂದ ಪೌಷ್ಟಿಕಾಂಶ]] ನೀಡುವುದು ಇನ್ನೂ ಅಭಿವೃದ್ಧಿಯಾಗಿಲ್ಲದಿದ್ದುದರಿಂದಲೂ, ಅವರಿಗೆ ಆಹಾರ ನೀಡುವ ಯಾವುದೇ ಮಾರ್ಗಗಳು ಇರಲಿಲ್ಲ. ಅವರ ದೇಹವನ್ನು ಕಡೆಗೆ ಪ್ರೇಗ್ ಗೆ ತರಲಾಯಿತು ಹಾಗೂ 1924ರ ಜೂನ್ 11ರಂದು [[ಪ್ರೇಗ್-ಝಿಝ್ಕೋವ್]] ನ ಹೊಸ ಯಹೂದಿಗಳ ಸ್ಮಶಾನದಲ್ಲಿ(ವಿಭಾಗ 21, ಸಾಲು 14, ನಿವೇಶನ ಸಂಖ್ಯೆ 33) ಅವರನ್ನು ಹೂಳಲಾಯಿತು.
== ರಾಜಕೀಯ ನಿಲುವು ==
ಕಾಫ್ಕ [[ಅನಿರ್ಬಂಧಿತ ಸಮಾಜವಾದಿ]] (ಅಥವಾ [[ಕ್ರಾಂತಿಕಾರಿ]])ಯಾಗಿದ್ದರು,ಮ್ಲಾಡಿಚ್ ಕ್ಲಬ್ ಎಂಬ ಝೆಕ್ ಕ್ರಾಂತಿಕಾರಿ, [[ಸೇನಾಪ್ರವೃತ್ತಿವಿರೋಧಿ]], [[ಪಾದ್ರಿ-ವಿರೋಧಿ]] ಸಂಘದ ಸಭೆಗಳಲ್ಲಿ ಭಾಗವಹಿಸುತ್ತಿದ್ದರು.<ref>http://libcom.org/ಗ್ರಂಥಾಲಯ/ಫ್ರ್ಯಾನ್ಝ್-ಕಾಫ್ಕ-ಲಿಬರ್ಟೇರಿಯನ್-ಸಮಾಜವಾದ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಕಾಫ್ಕರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಹಪಾಠಿಯಾದ ಹ್ಯೂಗೋ ಬರ್ಗ್ ಮನ್ ತಮ್ಮ ಕಡೆಯ ಶೈಕ್ಷಣಿಕ ವರ್ಷ(1900-1901)ದಲ್ಲಿ ಕಾಫ್ಕರಿಂದ ದೂರವಾದ ಕಾರಣವೆಂದರೆ "(ಕಾಫ್ಕರ) ಸಮಾಜವಾದ ಮತ್ತು ನನ್ನ ಝಿಯಾನಿಸಂ ಎರಡೂ ಬಹಳ ಗಟ್ಟಿಯಾಗಿದ್ದವು." "ಫ್ರ್ಯಾನ್ಝ್ ಸಮಾಜವಾದಿಯಾದರು, ನಾನು 1898ರಲ್ಲಿ [[ಝಿಯಾನಿಸ್ಟ್]] ಆದೆ. ಝಿಯಾನಿಸಂ ಮತ್ತು ಸಮಾಜವಾದದ ಹೊಂದಾಣಿಕೆ ಆಗಿನ್ನೂ ಇರಲಿಲ್ಲ." ಕಾಫ್ಕ ಎಲ್ಲರಿಗೆ ಕಾಣುವಂತೆ [[ಸಮಾಜವಾದ]]ದ ಬೆಂಬಲವನ್ನು ಸಾರುವ ಕೆಂಪು ಗುಲಾಬಿಯ ಬಣ್ಣದ ಲಾಂಛನವನ್ನು ಧರಿಸಿ ಶಾಲೆಗೆ ಬರುತ್ತಿದ್ದರು ಎಂದು ಬರ್ಗ್ ಮನ್ ಹೇಳುತ್ತಾರೆ.<ref>https://books.google.com/books?id=d1wxHUOcPdcC&pg=PA17&lpg=PA17&dq=%22Hugo+Bergmann%22+Kafka+socialism&source=bl&ots=ruBA-NWq6r&sig=G-0DLO1TFwiSahfPQllY_cGong4&hl=en&ei=CCcETPqECoH98Aaj2OCeDQ&sa=X&oi=book_result&ct=result&resnum=2&ved=0CBcQ6AEwAQ#v=onepage&q=%22Hugo%20Bergmann%22%20Kafka%20socialism&f=false
</ref> ತಮ್ಮ ಡೈರಿಯಲ್ಲಿ ಒಮ್ಮೆ ಕಾಫ್ಕ ಪ್ರಭಾಗಿ ಕ್ರಾಂತಿಕಾರಿ ತತ್ತ್ವಜ್ಞಾನಿ [[ಪೀಟರ್ ಕ್ರೋಪೋಟ್ಕಿನ್]] ರ ಉಲ್ಲೇಖ ಮಾಡಿದ್ದಾರೆ: "ಡೋಂಟ್ ಫರ್ಗೆಟ್ ಕ್ರೋಪೋಟ್ಕಿನ್!"<ref>https://books.google.com/books?id=wVz2auyt81sC&pg=PA148&dq=Kafka+Kropotkin&cd=4#v=onepage&q=Kropotkin&f=false</ref>
== ಜುದಾಯಿಸಂ ಮತ್ತು ಝಿಯಾನಿಸಂ ==
ಕಾಫ್ಕ ಸಾಂಪ್ರದಾಯಿಕ ಯಹೂದಿ ಧರ್ಮದ ಜೀವನವನ್ನೇನೂ ಅನುಸರಿಸುತ್ತಿರಲಿಲ್ಲ, ಆದರೆ ಯಹೂದಿಗಳ ಸಂಸ್ಕೃತಿ ಮತ್ತು ಆಧ್ಯಾತ್ಮದ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು. [[ಯಿಡ್ಡಿಷ್ ಸಾಹಿತ್ಯ]]ದ ಆಳವಾದ ಅರಿವು ಅವರಿಗಿತ್ತು ಮತ್ತು [[ಯಿಡ್ಡಿಷ್ ರಂಗ]]ದತ್ತ ಅವರಿಗೆ ಒಲವು ಇದ್ದಿತು.<ref name="palestine1">{{cite web |url=http://www.haaretz.com/hasen/spages/1040561.html |title=Sadness in Palestine |publisher=Haaretz.com |date= |accessdate=28 May 2009 |archive-date=20 ಡಿಸೆಂಬರ್ 2008 |archive-url=https://web.archive.org/web/20081220232543/http://www.haaretz.com/hasen/spages/1040561.html |url-status=dead }}</ref>
[[ಡ್ಯಾನ್ ಮಿರಾನ್]] ತಮ್ಮ ಪ್ರಬಂಧವಾದ ''ಸ್ಯಾಡ್ನೆಸ್ ಇನ್ ಪ್ಯಾಲೆಸ್ಟೈನ್?'' ನಲ್ಲಿ ಕಾಫ್ಕರ ಹಾಗೂ ಝಿಯಾನಿಸಂನ ಸಂಬಂಧವನ್ನು ಸಂಶೋಧಿಸಿದ್ದಾರೆ. "ಝಿಯಾನಿಸಂ ಮತ್ತು ಕಾಫ್ಕರಿಗೆ ಸಂಬಂಧವಿದ್ದು, ಅದು ಅವರ ಜೀವನ ಮತ್ತು ಸಾಹಿತ್ಯ ಕೃತಿಗಳ ಮೇಲೆ ಪ್ರಭಾವ ಬೀರಿತು ಎನ್ನುವವರು ಹಾಗೂ ಆ ಸಂಬಂಧವನ್ನು ನಿರಾಕರಿಸುವವರು ಅಥವಾ ಅದರ ಪ್ರಾಮುಖ್ಯತೆಯನ್ನು ಅಲ್ಲಗಳೆಯುವವರು, ಇಬ್ಬರೂ ತಪ್ಪೇ. ನಿಜವು ಈ ಎರಡೂ ಸರಳವಾದ ಧೃವಗಳ ನಡುವೆ ಎಲ್ಲೋ ನಿಲುಕದ ಸ್ಥಳದಲ್ಲಿ ಅಡಗಿದೆ" ಎಂಬುದು ಅವರ ಅಭಿಮತ.<ref name="palestine1"/>
[[ಜೇಮ್ಸ್ ಹಾಸ್]] ರವರ ಪ್ರಕಾರ, ಕಾಫ್ಕರಿಗೆ ತಮ್ಮ ಯಹೂದಿತನದ ಬಗ್ಗೆ ಸಾಕಷ್ಟು ಅರಿವಿದ್ದರೂ, ತಮ್ಮ ಯಹೂದಿತನವನ್ನು ತಮ್ಮ ಕೃತಿಗಳಲ್ಲಿ ಅಳವಡಿಸಲಿಲ್ಲ. "ಅಲ್ಲಿ ಯಹೂದಿತನ ನಿಜಕ್ಕೂ ಶೂನ್ಯ" ಅಲ್ಲದೆ ಯಾವುದೇ ಯಹೂದಿ ಪಾತ್ರಗಳು ಅಥವಾ ಯಹೂದಿ ಚಿತ್ರಣಗಳು ಅವರ ಕೃತಿಗಳಲ್ಲಿಲ್ಲ, ಎನ್ನುತ್ತಾರೆ ಹಾಸ್.<ref name="timesonline1">[http://entertainment.timesonline.co.uk/tol/arts_and_entertainment/books/article4446131.ece ಮರೆಯಿಂದ ಹೊರತರಲ್ಪಟ್ಟ ಫ್ರ್ಯಾನ್ಝ್ ಕಾಫ್ಕರ ಅಶ್ಲೀಲ - ಟೈಮ್ಸ್ ಆನ್ ಲೈನ್] {{Webarchive|url=https://web.archive.org/web/20091005114330/http://entertainment.timesonline.co.uk/tol/arts_and_entertainment/books/article4446131.ece |date=2009-10-05 }} entertainment.timesonline.co.uk ಯಲ್ಲಿ</ref> ಆದರೆ, ''ದ ವೆಸ್ಟರ್ನ್ ಕ್ಯಾನನ್'' ನ ಲೇಖಕರಾದ ಹಾಗೂ ಸಾಹಿತ್ಯ ವಿಮರ್ಶಕರಾದ [[ಹೆರಾಲ್ಡ್ ಬ್ಲೂಮ್]] ರ ಅಭಿಪ್ರಾಯ ಹೀಗಿದೆ:"ಅವರ ಅಲ್ಲಗಳೆಯುವಿಕೆಗಳು ಹಾಗೂ ಸುಂದರವಾದ ನೆಪಗಳ ಹೊರತಾಗಿಯೂ,(ಕಾಫ್ಕರ ಬರಹಗಳು) ನಿಜಕ್ಕೂ ಯಹೂದ್ಯ ಬರವಣಿಗೆಗಳೇ."<ref name="victorian"/> ಲೋಥರ್ ಕಾಹ್ನ್ ಸಹ ತಮ್ಮ ಸ್ಪಷ್ಟವಾದ ನಿಲುವನ್ನು ಹೀಗೆ ಮಂಡಿಸಿದ್ದಾರೆ: "ಕಾಫ್ಕರ ''ಈಯೂವ್ರೆ'' ಯಲ್ಲಿನ ಯಹೂದಿತನದ ಅಸ್ತಿತ್ವವು ನಿಂಸದೇಹವಾದುದು."<ref>ಲೋಥರ್ ಕಾಹ್ನ್, in ''ಬಿಟ್ವೀನ್ ಟೂ ವರ್ಲ್ಡ್ಸ್: ಎ ಕಲ್ಚರಲ್ ಹಿಸ್ಟರಿ ಆಫ್ ಜರ್ಮನ್-ಜ್ಯೂಯಿಷ್ ರೈಟರ್ಸ್,'' ನಲ್ಲಿ, ಪುಟ 191</ref> ಕಾಫ್ಕರ ಕೃತಿಗಳ ಮೊದಲ ಅನುವಾದಕರಲ್ಲಿ ಒಬ್ಬರಾದ [[ಪಾವೆಲ್ ಈಸ್ನರ್]] ಸರ್ವಕಾಲಿಕ ಕೃತಿಯಾದ ''ದ ಟ್ರಯಲ್'' ಅನ್ನು ಅರ್ಥೈಸುತ್ತಾ, "ಕಾಫ್ಕರ ''ದ ಟ್ರಯಲ್'' ನಲ್ಲಿ ಪ್ರೇಗ್ ನಲ್ಲಿ ಯಹೂದಿಗಳ ಅಸ್ತಿತ್ವವೇ ಮೂರು ಆಯಾಮಗಳಲ್ಲಿ ಮೂರ್ತಿವೆತ್ತಂತೆ ಇದೆ: ಆ ಕಥೆಯಲ್ಲಿನ ಅಗ್ರೇಸರನಾದ ಜೋಸೆಫ್ ಕೆ.ಯು (ಲಾಕ್ಷಣಿಕವಾಗಿ) ಒಬ್ಬ ಜರ್ಮನ (ರಾಬೆನ್ ಸ್ಟೀನರ್), ಒಬ್ಬ ಝೆಕ್ (ಕುಲ್ಲಿಚ್) ಮತ್ತು ಒಬ್ಬ ಯಹೂದಿ (ಕಾಮಿನೆರ್)ಇಂದ ಬಂಧಿತನಾಗುತ್ತಾನೆ. ಅವನು "ತಪ್ಪಿಲ್ಲದ ತಪ್ಪು" ಪ್ರತಿಪಾದಿಸುವುದು ಆಧುನಿಕ ಜಗದ ಯಹೂದಿಯ ರಂಗನ್ನು ತೋರುತ್ತದೆ, ಅವನು ಯಹೂದಿಯೆಂಬ ಪುರಾವೆ ಎಲ್ಲೂ ಇಲ್ಲದಿದ್ದರೂ ಸಹ." <ref name="Rothkirchen">ಲಿವಿಯಾ ರಾಥ್ಕಿರ್ಚೆನ್, ''ದ ಜ್ಯೂಸ್ ಆಫ್ ಬೊಹೇಮಿಯಾ ಎಂಡ್ ಮೊರಾವಿಯಾ: ಫೇಸಿಂಗ್ ದ ಹೋಲೋಕಾಸ್ಟ್'', ಯೂನಿವರ್ಸಿಟಿ ಆಫ್ ನೆಬ್ರಾಸ್ಕಾ ಪ್ರೆಸ್, 2005 ಪುಟ 23</ref>
ಲಿವಿಯಾ ರಾಥ್ಕಿರ್ಚೆನ್ ಕಾಫ್ಕರನ್ನು "ಅವರ ಕಾಲದ ದ್ಯೋತಕ" ಎಂದು ಕರೆಯುತ್ತಾರೆ. ಅವರ ಕಾಲಫಟ್ಟದಲ್ಲಿ ಹಲವಾರು ಇತರ ಯಹೂದಿ ಬರಹಗಾರರರು (ಝೆಕ್, ಜರ್ಮನ್, ಮತ್ತು ರಾಷ್ಟ್ರೀಯ ಯಹೂದಿಗಳು)ಇದ್ದು, ಅವರುಗಳು ಜರ್ಮನ್, ಝೆಕ್, ಆಸ್ಟ್ರಿಯನ್ ಮತ್ತು ಯಹೂದಿಗಳ ಸಂಸ್ಕೃತಿಯ ಬಗ್ಗೆ ಸೂಕ್ಷ್ಮಮತಿಗಳಾಗಿದ್ದರು. ರಾಥ್ಕಿರ್ಚೆನ್ ಇಂತೆಂದರು:"ಈ ಪರಿಸ್ಥಿತಿಯು ಅವರ ಬರಹಗಳಿಗೆ ವಿಶಾಲವಾದ ಸಮದರ್ಶಿತ್ವದ ದೃಷ್ಟಿಯನ್ನು ನೀಡಿತು ಮತ್ತು ಅತೀಂದ್ರಿಯ ಆಧ್ಯಾತ್ಮಿಕ ಅನುಸಂಧಾನಕ್ಕೆ ಹತ್ತಿರದ ಗುಣಮಟ್ಟದ ಉತ್ಕರ್ಷವನ್ನು ನೀಡಿತು. ಫ್ರ್ಯಾನ್ಝ್ ಕಾಫ್ಕ ಅದಕ್ಕೊಂದು ಸುಪ್ರಸಿದ್ಧ ಉದಾಹರಣೆ."<ref name="Rothkirchen"/>
== ಸಾಹಿತ್ಯ ಜೀವನ ==
[[ಚಿತ್ರ:Grave of Kafka.JPG|thumb|ಪ್ರೇಗ್-ಝಿಝ್ಕೋವ್ ನಲ್ಲಿರುವ ಫ್ರ್ಯಾನ್ಝ್ ಕಾಫ್ಕರ ಸಮಾಧಿ.]]
ಕಾಫ್ಕ ಸಾಯುವ ನಂತರದವರೆಗೂ ಅವರ ಬರಹಗಳು ಗಮನ ಸೆಳೆದದ್ದು ವಿರಳ. ಅವರ ಜೀವಿತಾವಧಿಯಲ್ಲಿ, ಅವರು ಪ್ರಕಟಿಸಿದ್ದು ಕೇವಲ ಕೆಲವೇ ಸಣ್ಣ ಕಥೆಗಳನ್ನು; ''[[ದ ಮೆಟಮಾರ್ಫಾಸಿಸ್]]'' ಅನ್ನು (ಸಣ್ಣ) ಕಾದಂಬರಿ ಎಂದು ಪರಿಗಣಿಸದಿದ್ದಲ್ಲಿ, ಅವರು ತಮ್ಮ ಯಾವುದೇ ಕಾದಂಬರಿಗಳನ್ನು ತಮ್ಮ ಜೀವಿತದಲ್ಲಿ ಬರೆದು ಮುಗಿಸಲಿಲ್ಲ. ಅವರ ಸಾವಿಗೆ ಮುನ್ನ, ಕಾಫ್ಕ ತಮ್ಮ ಸ್ನೇಹಿತ ಹಾಗೂ ಸಾಹಿತ್ಯ ನಿರ್ವಾಹಕ [[ಮ್ಯಾಕ್ಸ್ ಬ್ರಾಡ್]] ಗೆ ಹೀಗೆ ಬರೆದರು: "ಆತ್ಮೀಯ ಮ್ಯಾಕ್ಸ್, ನನ್ನ ಕೊನೆಯ ಕೋರಿಕೆ: ನಾನು ಬಿಟ್ಟುಹೋಗುವಂತಹ ಎಲ್ಲವನ್ನೂ... ಡೈರಿಗಳು, ಹಸ್ತಾಕ್ಷರಗಳು, ಕಾಗದಗಳು (ನನ್ನ ಸ್ವಂತದ್ದು ಹಾಗೂ ಇತರರದು), ಚಿತ್ರಗಳು ಹಾಗೂ ಇತ್ಯಾದಿಗಳ ರೂಪದಲ್ಲಿ... ಅವುಗಳನ್ನು ಓದದೆಯೇ ಸುಡತಕ್ಕದ್ದು."<ref>''ದ ಕ್ಯಾಸಲ್'' ನ ಪ್ರಕಾಶಕರ ನುಡಿಯಲ್ಲಿ ಉಲ್ಲೇಖಿಸಲಾಗಿದೆ, ಸ್ಖೋಕ್ಕೆನ್ ಬುಕ್ಸ್.</ref> ಬ್ರಾಡ್ ಕಾಫ್ಕರ ಬಯಕೆಯನ್ನು ಅವಗಣಿಸಿದರು, ಕಾಫ್ಕರು ತಾನು ಹೇಗೂ ಆ ಕೋರಿಕೆಗಳನ್ನು ಮನ್ನಿಸುವುದಿಲ್ಲವೆಂದು ತಿಳಿದೇ ಹಾಗೆ ತನಗೇ ಹೇಳಿದುದೆಂದು ಅವರು ಅಭಿಪ್ರಾಯಪಟ್ಟರು - ಬ್ರಾಡ್ ಹಾಗೆಂದು ಕಾಫ್ಕರಿಗೆ ಹೇಳಿಯೂ ಆಗಿತ್ತು. (ಅವರ ಪ್ರಿಯತಮೆ ಡೋರಾ ಡಯಾಮಂಟ್ ಸಹ ಅವರ ಕೋರಿಕೆಗಳನ್ನು ಅವಗಣನೆ ಮಾಡಿ, ಗುಪ್ತವಾಗಿ 20 ನೋಟ್ ಬುಕ್ ಗಳು ಮತ್ತು 35 ಕಾಗದಗಳನ್ನು ಎತ್ತಿಟ್ಟುಕೊಂಡಿದ್ದರು; 1933ರಲ್ಲಿ ಅವುಗಳನ್ನು [[ಗೆಸ್ಟಾಪೋ]]ದವರು ವಶಪಡಿಸಿಕೊಂಡರು. ಕಾಫ್ಕರ ಈ ಪತ್ತೆಯಾಗದ ಕಾಗದಗಳಿಗಾಗಿ ಈಗಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹುಡುಕಾಟ ಸಾಗಿದೆ. ವಾಸ್ತವವಾಗಿ ಬ್ರಾಡ್ ತಮ್ಮ ವಶದಲ್ಲಿರುವ ಕಾಫ್ಕರ ಬಹುತೇಕ ಕೃತಿಗಳ ಪ್ರಕಾಶನದ ಮೇಲ್ವಿಚಾರಣೆ ವಹಿಸಿದರು ಹಾಗೂ ಈ ಕೃತಿಗಳು ಬೇಗನೆ ಗಮನ ಸೆಳೆಯಲಾರಂಭಿಸಿ ಉತ್ತಮ ವಿಮರ್ಶೆಗಳನ್ನೂ ಗಿಟ್ಟಿಸಲಾರಂಭಿಸಿದವು.
ಝೆಕ್ ನಲ್ಲಿ ಮಿಲೇನಾ ಜೆಸೆನ್ಸ್ಕಾಗೆ ಬರೆದ ಹಲವು ಕಾಗದಗಳ ಹೊರತು, ಕಾಫ್ಕರ ಎಲ್ಲಾ ಪ್ರಕಟಿತ ಕೃತಿಗಳೂ ಜರ್ಮನ್ ಭಾಷೆಯಲ್ಲಿ ಬರೆದಂತಹವಾಗಿದ್ದವು.
=== ಬರವಣಿಗೆಯ ಶೈಲಿ ===
ಕಾಫ್ಕ ಸಾಕಷ್ಟು ಬಾರಿ [[ಜರ್ಮನ್ ಭಾಷೆ]]ಗೆ ವಿಚಿತ್ರವೆನಿಸುವಂತಹ ಗುಣಲಕ್ಷಣಗಳನ್ನು ವ್ಯಾಪಕವಾಗಿ ಬಳಸುತ್ತಿದ್ದರು. ಬಹಳ ದೀರ್ಘವಾದ ವಾಕ್ಯಗಳನ್ನು, ಕೆಲವೊಮ್ಮೆ ಒಂದು ಇಡೀ ಪುಟದಷ್ಟು ದೊಡ್ಸ ವಾಕ್ಯಗಳನ್ನು ಬರೆಯುತ್ತಿದ್ದರು. ನಂತರ ಪೂರ್ಣವಿರಾಮ ಇಡುವ ಮುನ್ನ ಕಾಫ್ಕರ ವಾಕ್ಯಗಳು ಒಂದು ಅನಿರೀಕ್ಷಿತ ಪ್ರಭಾವವನ್ನು ಬೀರುತ್ತವೆ - ಅದೇ ತೀರ್ಮಾನವಾದ ಅರ್ಥ ಮತ್ತು ಕೇಂದ್ರಬಿಂದುವಾಗಿರುತ್ತದೆ. ಕೆಲವು ವಾಕ್ಯಗಳನ್ನು ಜರ್ಮನ್ ಭಾಷೆಯಲ್ಲಿ ರಚಿಸುತ್ತಿದ್ದುದರಿಂದಲೂ ಹಾಗೂ ಆ ಭಾಷೆಯಲ್ಲಿ ಕ್ರಿಯಾಪದವು ವಾಕ್ಯದ ಕೊನೆಯಲ್ಲಿ ಇಡಲಾಗುವುದರಿಂದಲೂ ಈ ರೀತಿಯ ಬರಹದ ಉದ್ಭವವಾಗುತ್ತಿತ್ತು. ಇಂತಹ ರಚನೆಗಳನ್ನು ಆಂಗ್ಲಕ್ಕೆ ನಕಲಿಸಲು ಸಾಧ್ಯವಿಲ್ಲ,ಆದ್ದರಿಂದ ಓದುಗನಿಗೆ ಮೂಲ ವಾಕ್ಯದ ಪರಿಣಾಮವೇ(ಅಥವಾ ಅದರ ಸಮನಾದುದು) ಉಂಟಾಗುವಂತೆ ಮಾಡುವುದು ಅನುವಾದಕನ ಸಾಮರ್ಥ್ಯವನ್ನು ಅವಲಂಬಿಸುತ್ತದೆ.<ref>ಕಾಫ್ಕ (1996, xi).</ref>
ಅನುವಾದಕರು ಎದುರಿಸುವ ಮತ್ತೊಂದು ಬಗೆಹರಿಸಲಾಗದ ತೊಂದರೆಯೆಂದರೆ ಲೇಖಕರು ಉಪಯೋಗಿಸುವ ನಿಗೂಢಾರ್ಥದ ಅಥವಾ ವಿವಿಧಾರ್ಥವುಳ್ಳ ಪದಗಳು. ''[[ದ ಮೆಟಮಾರ್ಪಾಸಿಸ್]]'' ನ ಮೊದಲ ವಾಕ್ಯದಲ್ಲೇ ಅಂತಹ ಒಂದು ದೃಷ್ಟಾಂತವಿದೆ. ಇಂಗ್ಲಿಷ್ ಅನುವಾದಕರು ''ಉಂಗೆಝೀಫೆರ್'' ಎಂಬ ಪದಕ್ಕೆ "ಕೀಟ" ಎಂಬ ಅರ್ಥವನ್ನು ನೀಡಲು ಬಯಸಿದ್ದಾರೆ; ಆದರೆ, ಮಧ್ಯಕಾಲೀನ ಜರ್ಮನ್ ನಲ್ಲಿ, ''ಉಂಗೆಝೀಫೆರ್'' ನ ಅಕ್ಷರಶಃ "ಬಲಿಕೊಡಲು ಅನರ್ಹವಾದ ಸ್ವಚ್ಛವಿಲ್ಲದ ಪ್ರಾಣಿ"<ref>{{Cite web |url=http://www.beolingus.org/dings.cgi?lang=en&service=deen&opterrors=0&optpro=0&query=ungeziefer&iservice=&dlink=self&comment= |title=ಉಂಗೆಝೀಫರ್ : ಡಿಕ್ಷ್ನರಿ/ವೋರ್ಟರ್ಬಕ್ (ಬಿಯೋಲಿಂಗಸ್, TU ಕೆಮಿಂಟ್ಝ್) |access-date=2026-06-26 |archive-date=2007-12-13 |archive-url=https://web.archive.org/web/20071213224614/http://www.beolingus.org/dings.cgi?lang=en&service=deen&opterrors=0&optpro=0&query=ungeziefer&iservice=&dlink=self&comment= |url-status=dead }}</ref> ಎಂಬ ಅರ್ಥವಿದೆ ಹಾಗೂ ಕೆಲವೊಮ್ಮೆ ರೂಢಿಯಲ್ಲಿನ ಅರ್ಥವು "ಹುಳು" – ಎಂಬ ಒಂದು ಸಾಮಾನ್ಯ ಪದವಾಗಿದ್ದು, ವಿಜ್ಞಾನದ ಛಾಯೆ ಹೊತ್ತ "ಕೀಟ"ವೆಂದಲ್ಲ. ಕಾಫ್ಕರಿಗೆ ಗ್ರೆಗರ್,ಎಂದರೆ ಆ ಕಥೆಯ ನಾಯಕ,ನನ್ನು ಯಾವುದೇ ವಸ್ತುವಿನ ಕುರುಹಿನಿಂದ ಕರೆಯುವ ಅಭಿಪ್ರಾಯವಿರಲಿಲ್ಲ, ಆದರೆ ಗ್ರೆಗರ್ ಮಾರ್ಪಾಟಿನಿಂದ ಅನುಭವಿಸಿದ ಜಿಗುಪ್ಸೆಯನ್ನು ಓದುಗನಿಗೆ ತಲುಪಿಸಬೇಕಿತ್ತಷ್ಟೆ. ಮತ್ತೊಂದು ಉದಾಹರಣೆಯೆಂದರೆ ಕಾಫ್ಕರ ಜರ್ಮನ್ ನಾಮಪದವಾದ, ''[[ದ ಜಡ್ಜ್ ಮೆಂಟ್]]'' ನ ಕೊನೆಯ ವಾಕ್ಯದಲ್ಲಿ ಬಳಸಿರುವ ''[[wikt:Verkehr|ವೆರ್ಕೆಹ್ರ್]]'' ಎಂಬ ಪದ. ವಾಸ್ತವವಾಗಿ, ''ವೆರ್ಕೆಹ್ರ್'' ಎಂದರೆ ಇಂಗ್ಲಿಷ್ ನಲ್ಲಿ ಇಂಟರ್ಕೋರ್ಸ್ ಎಂದು ಅರ್ಥವಿದ್ದು, ಇಂಗ್ಲಿಷ್ ನಲ್ಲಿ ಆ ಪದಕ್ಕೆ ಲೈಂಗಿಕ ಹಾಗೂ ಅ-ಲೈಂಗಿಕ ಅರ್ಥೈಸುವಂತೆಯೇ ಇಲ್ಲೂ ಅರ್ಥೈಸಬಹುದಾಗಿದೆ; ಅಲ್ಲದೆ ಆ ಪದಕ್ಕೆ ಸಾರಿಗೆ ಮತ್ತು ವಾಹನದಟ್ಟಣೆ ಎಂಬ ಅರ್ಥಗಳೂ ಇವೆ. ಆ ವಾಕ್ಯವನ್ನು ಹೀಗೆ ಅನುವಾದಿಸಬಹುದು: "ಆ ಕ್ಷಣದಲ್ಲಿ ಕೊನೆಯೇ ಇಲ್ಲದಂತಹ ವಾಹನದಟ್ಟಣೆಯ ಹೊಳೆಯು ಸೇತುವೆಯ ಮೇಲೆ ಹಾದುಹೋಯಿತು."<ref>ಕಾಫ್ಕ (1996, 75).</ref> 'ವೆರ್ಕೆಹ್ರ್' ಪದದ ದ್ವಂದ್ವಾರ್ಥಕ್ಕೆ ಹೆಚ್ಚಿನ ತೂಕ ಬರಲು ಕಾರಣವೇನೆಂದರೆ ಕಾಫ್ಕರು, ಮ್ಯಾಕ್ಸ್ ಬ್ರಾಡ್ ರಿಗೆ, ಆ ಕೊನೆಯ ವಾಕ್ಯವನ್ನು ಬರೆದಾಗ ಅವರು "ಒಂದು ತೀವ್ರವಾದ ಸ್ಖಲನ"ದ ಬಗ್ಗೆ ಯೋಚಿಸುತ್ತಿದ್ದರೆಂದು ಹೇಳಿದುದು.<ref>ಬ್ರಾಡ್. ಮ್ಯಾಕ್ಸ್: "ಫ್ರ್ಯಾನ್ಝ್ ಕಾಫ್ಕ: ಎ ಬಯಾಗ್ರಫಿ". (ಅನುವಾದ ಹಂಫ್ರೇಸ್ ರಾಬರ್ಟ್ಸ್) ನ್ಯೂ ಯಾರ್ಕ್: ಸ್ಖೋಕ್ಕೆನ್ ಬುಕ್ಸ್,1960. ಪುಟ 129.</ref>
=== ವಿಮರ್ಶಾತ್ಮಕ ವ್ಯಾಖ್ಯಾನಗಳು ===
[[ಚಿತ್ರ:Kafka statue Prague.jpg|ಉಪ್ರಿಘ್ತ್|thumb|ಪ್ರೇಗ್ ನಲ್ಲಿರುವ ಫ್ರ್ಯಾನ್ಝ್ ಕಾಫ್ಕರ ಕಂಚಿನ ಪ್ರತಿಮೆ.]]
ವಿಮರ್ಶಕರು ಕಾಫ್ಕರ ಕೃತಿಗಳನ್ನು ವಿವಿಧ ಸಾಹಿತ್ಯಿಕ ನೆಲೆಗಟ್ಟುಗಳ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿದ್ದಾರೆ; ಇವುಗಳಲ್ಲಿ [[ಮಾಡ್ರನಿಸಂ(ಆಧುನಿಕತೆ)]], [[ಮ್ಯಾಜಿಕ್ ಸರ್ರಿಯಲಿಸಂ (ಐಂದ್ರಜಾಲಿಕ ಕಾಲ್ಪನಿಕತೆ)]], ಇತ್ಯಾದಿ ನೆಲೆಗಟ್ಟುಗಳು ಪ್ರಸ್ತುತವಾಗಿವೆ.<ref name="interpretation">[http://www.coskunfineart.com/details.asp?workID=40 ಫ್ರ್ಯಾನ್ಝ್ ಕಾಫ್ಕ 1883 – 1924] {{Webarchive|url=https://web.archive.org/web/20080426004050/http://www.coskunfineart.com/details.asp?workID=40 |date=2008-04-26 }} www.coskunfineart.com</ref> ಅಸಮಂಜಸತೆ ಮತ್ತು ಅಸಹಾಯಕತೆಗಳು ಅವರ ಕೃತಿಗಳಲ್ಲಿ ಗೋಚರಿಸುವಂತಿದ್ದು, ಅವುಗಳನ್ನು [[ಅಸ್ತಿತ್ವವಾದ]]ದ ಚಿಹ್ನೆಗಳೆಂದು ಪರಿಗಣಿಸಲಾಗುತ್ತದೆ. ''[[ಇನ್ ದ ಪೀನಲ್ ಕಾಲೋನಿ]]'', ''[[ದ ಟ್ರಯಲ್]]'' ಮತ್ತು ''[[ದ ಕ್ಯಾಸಲ್]]'' <ref name="interpretation"/> ನಂತಹ ಕೃತಿಗಳಲ್ಲಿ [[ಅಧಿಕಾರಿವರ್ಗ]]ದ ಲೇವಡಿ ಇರುವುದರಿಂದ ಇವರ ಮೇಲೆ ಸಂಭವಿಸಿರಬಹುದಾದ [[ಮಾರ್ಕ್ಸಿಸ್ಟ್]] ಪ್ರಭಾವವನ್ನು ಪತ್ತೆ ಹಚ್ಚಲು ಕೆಲವರು ಯತ್ನಿಸಿದ್ದಾರೆ; ಇನ್ನು ಕೆಲವರು ಕಾಫ್ಕರ ಅಧಿಕಾರಶಾಹಿ-ವಿರೋಧಿ ದೃಷ್ಟಿಕೋನವು [[ಕ್ರಾಂತಿಕಾರಿ ಮನೋಗುಣ]]ದ ಪ್ರಭಾವ ಎಂದರು.
ಮತ್ತೂ ಕೆಲವರು ಅವರ ಕೃತಿಗಳನ್ನು [[ಜುದಾಯಿಸಂ]] ನ ಗಾಜಿನಿಂದ ಕಂಡರು([[ಬೊರ್ಜೆಸ್]] ಈ ವಿಷಯದಲ್ಲಿ ಕೆಲವು ಗ್ರಾಹ್ಯ ಟೀಕೆಗಳನ್ನು ಮಾಡಿದರು), [[ಫ್ರಾಯ್ಡಿಯಾನಿಸಂ]]<ref name="interpretation"/> ಮೂಲಕ (ಅವರ ಕೌಟುಂಬಿಕ ತೊಂದರೆಗಳ ಕಾರಣದಿಂದ) ಅಥವಾ ಆಧ್ಯಾತ್ಮಕವಾಗಿ [[ದೇವ]]ರನ್ನು ಹುಡುಕುವುದರ ರೂಪಕತೆಗಳಾಗಿ ವ್ಯಾಖ್ಯಾನಿಸಿದರು([[ಥಾಮಸ್ ಮ್ಯಾನ್ನ್]] ಈ ಸಿದ್ಧಾಂತದ ಪೂರ್ವವಾದಿಯಾಗಿದ್ದರು).<ref>''ಥಾಮಸ್ ಮಾನ್ನ್, ದ ಐರಾನಿಕ್ ಜರ್ಮನ್''. ಇ ಹೆಲರ್, ಟಿ. ಮಾನ್ನ್ - 1981</ref>
ಕಾಫ್ಕರ ಕೃತಿಗಳಲ್ಲಿ ವಿಮುಖತೆ ಮತ್ತು ಕಿರುಕುಳಗಳ ಪ್ರಸ್ತಾಪಗಳನ್ನು ಮತ್ತೆ ಮತ್ತೆ ಒತ್ತಿಹೇಳಲಾಗುತ್ತದೆ ಹಾಗೂ ಈ ಗುಣದ ಪ್ರಭಾವವು, ವಿಶೇಷತಃ ಮಾರ್ಥೆ ರಾಬರ್ಟ್ ರ ಕೃತಿಗಳ ಮೇಲುಂಟಾದುದು, [[ಗಿಲ್ಲೆಸ್ ಡೆಲ್ಯೂಝ್]] ಮತ್ತು [[ಫೆಲಿಕ್ಸ್ ಗಾಟ್ಟಾರಿ]]ಯವರ ಪ್ರತಿ-ವಿಮರ್ಶೆಗೆ ಭಾಗಶಃ ಪ್ರೇರಕವಾಯಿತು;
"''ಕಾಫ್ಕ: ಟುವರ್ಡ್ ಎ ಮೈನರ್ ಲಿಟರೇಚರ್'' " ನಲ್ಲಿ ಅವರು ಕಾಫ್ಕರ ಕೃತಿಗಳಲ್ಲಿ ಒಂಟಿ ವ್ಯಕ್ತಿಯೊನ್ನ ಆತಂಕದಿಂದ ಬರೆಯುತ್ತಾ ಸಾಗುವ ಏಕತಾನತೆಗಿಂತಲೂ ಹೆಚ್ಚಿನದಿತ್ತು ಎಂಬ ವಾದವನ್ನು ಮಂಡಿಸುತ್ತಾರೆ ಮತ್ತು ಅವರ ಕೃತಿಗಳು ಗೋಚರಿಸುವುದಕ್ಕಿಂತಲೂ ಹೆಚ್ಚು ಉದ್ದೇಶಪೂರ್ವಕ, ಬುಡಮೇಲಾಗಿಸುವಂತಹವು, ಹಾಗೂ ಹೆಚ್ಚಿನ "ಸಂತೋಷದಾಯಕ" ರೀತಿಯವಾಗಿದ್ದವು ಎನ್ನುತ್ತಾರೆ.
ಹೀಗೇ ಮುಂದುವರೆದು, ಕಾಫ್ಕರ ಕೃತಿಯನ್ನು ಯಾವುದೇ ಛಾಯೆಯಡಿಯಲ್ಲಿ ಓದದೆ, ಹಾಗೆಯೇ ಓದಿದಾಗ - ಅವರ ಕೃತಿಗಳಲ್ಲಿನ ಪಾತ್ರಗಳು ಕಷ್ಟಗಳನ್ನು ಹತ್ತಕ್ಕುವ ವ್ಯರ್ಥ ಯತ್ನಗಳನ್ನು ಕಾಫ್ಕರ ಬದುಕಿನ ಘಟನೆಗಳ ಆಧ್ಯಯನದ ಮೂಸೆಯಲ್ಲಿ ಕಾಣದಿದ್ದಾಗ - ಕಾಫ್ಕರ ಹಾಸ್ಯಪ್ರಜ್ಞೆಯ ಪರಿಚಯವಾಗುತ್ತದೆ. ಈ ನಿಟ್ಟಿನಲ್ಲಿ ಕಂಡಾಗ, ಕಾಫ್ಕರ ಬರಹಗಳು ಅವರ ಜೀವನದ ಕೋಟಲೆಗಳ ಲಿಖಿತ ಬಿಂಬಗಳಲ್ಲ, ಜನರು ಕಷ್ಟಗಳನ್ನು ಹೇಗೆ ಬರಮಾಡಿಕೊಳ್ಳುತ್ತಾರೆ ಎಂಬುದರ ಪ್ರತಿಬಿಂಬ ಎಂಬುದು ಸ್ಪಷ್ಟವಾಗುತ್ತದೆ.<ref>''ಫ್ರ್ಯಾನ್ಝ್ ಕಾಫ್ಕ'' (1883-1924)ನಿಹ್.ಗವ್.ಡಿ ಫೆಲಿಸಾಟಿ, ಜಿ ಸ್ಪೆರಾಟಿ - ಆಕ್ಟಾ ಓಟೋರ್ಹಿನೋಲಾರಿಂಗೋಲಾಜಿಕ್ ಅ ಇಟಾಲಿಕಾ, 2005 - ncbi.nlm.nih.gov</ref>
ಅವರ ಜೀವನಚರಿತ್ರೆ ಬರೆಯುವವರು, ಕಾಫ್ಕರು ತಾವು ಬರೆಯುತ್ತಿದ್ದ ಅಧ್ಯಾಯಗಳನ್ನು ತಮ್ಮ ಆಪ್ತ ಸ್ನೇಹಿತರಿಗೆ ಓದಿ ಹೇಳುತ್ತಿದ್ದರೆಂದೂ, ಆ ಓದುವಿಕೆಗಳಲ್ಲಿ ಗದ್ಯದ ಹಾಸ್ಯದ ಮುಖಕ್ಕೇ ಸಾಮಾನ್ಯವಾಗಿ ಒತ್ತುನೀಡಲಾಗುತ್ತಿತ್ತೆಂದೂ ಹೇಳುತ್ತಾರೆ. [[ಮಿಲಾನ್ ಕುಂದೇರ]]ರು ಕಾಫ್ಕರ ಅವಶ್ಯಕವಾದ ಕಾಲ್ಪನಿಕ ಹಾಸ್ಯಪ್ರಜ್ಞೆಯ ಬಗ್ಗೆ ಮಾತನಾಡುತ್ತಾ ಕಾಫ್ಕ ಮುಂದಿನ ಹಲವಾರು ಕಲಾವಿದರಿಗೆ ಪ್ರಮುಖ ಪೂರ್ವಜರಾದರೆನ್ನುತ್ತಾರೆ. ಆ ಕಲಾವಿದರಲ್ಲಿ ಪ್ರಮುಖರೆಂದರೆ [[ಫೆಡೆರಿಕೋ ಫೆಲಿನಿ]], [[ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್]], [[ಕಾರ್ಲೋಸ್ ಫ್ಯೂಯೆಂಟೆಸ್]] ಮತ್ತು [[ಸಲ್ಮಾನ್ ರಷ್ದಿ]]. ಗಾರ್ಸಿಯಾ ಮಾರ್ಕ್ವೆಝ್ ರೇ ಹೇಳುವಂತೆ, ಕಾಫ್ಕರ ''[[ದ ಮೆಟಪಾರ್ಪಾಸಿಸ್]]'' ಓದಿದ ನಂತರವೇ ಅವರಿಗೆ "ವಿಭಿನ್ನ ರೀತಿಯಲ್ಲಿ ಬರೆಯುವುದು ಸಾಧ್ಯವಿದೆ" ಅರಿವಾದದ್ದು.
=== ಕಾಫ್ಕರ ಕಾಲ್ಪನಿಕ ಕಥೆಗಳಲ್ಲಿ ಕಾನೂನು ===
ಕಾಫ್ಕರ ಕಾನೂನಿನ ಅರಿವಿನ ಹಿನ್ನೆಲೆ ಹಾಗೂ ಅವರ ಕಥೆಗಳಲ್ಲಿ ಕಾನೂನಿನ ಪಾತ್ರದ ಬಗ್ಗೆ ಅರಿಯಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ. ಕಾಫ್ಕರ ಜೀವನ ಮತ್ತು ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿದುದಕ್ಕೆ ಹೋಲಿಸಿದರೆ ಈ ಪ್ರಯತ್ನಗಳು ಬಹಳ ಕಡಿಮೆಯೇ ಆಗಿವೆ ಹಾಗೂ ಕಾನೂನು ಪಾಂಡಿತ್ಯಕ್ಕೆ ನಹಳ ಸಣ್ಣ ಪ್ರಮಾಣದ ಕೊಡುಗೆಯಾಗಿವೆ. ಕಾಫ್ಕರ ಕೃತಿಗಳ ಅಧ್ಯಯನದ ಮುಖ್ಯವಾಹಿನಿಯು ಸಾಮಾನ್ಯವಾಗಿ ಅವರ ಕಥೆಗಳು ಅಸಂಜಸತೆಗೆ ತಳುಕುಹಾಕಿದಂತಹವು, ಆಡಳಿತಶಾಹಿಯ ವಿಮರ್ಶೆ, ಅಥವಾ ಪ್ರಾಯಶ್ಚಿತ್ತ/ವಿಮೋಚನೆಗಾಗಿ ಶೋಧನೆ ಎನ್ನುತ್ತದೆ; ಅವರ ಕಥೆಗಳಲ್ಲಿನ "ಅರ್ಥದ ದಿಗಂತ"ದ ಮುಖ್ಯ ಅಂಶಗಳಾದ ಕಾನೂನು ಮತ್ತು ನ್ಯಾಯವನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ಸೋಲುತ್ತದೆ. ''ದ ಟ್ರಯಲ್'' ನಲ್ಲಿನ ಕಾನೂನು ವಾದವಿವಾದಗಳ ವಿವರಣೆಗಳು - ಆಧ್ಯಾತ್ಮಿಕ,ಅಸಮಂಜಸ, ದಿಗ್ಭ್ರಮೆಕಾರಕ ಮತ್ತು "ಕಾಫ್ಕಾಯಿಸ್ಕ್" ಎಂದೆನ್ನಿಸಬಹುದಾದರೂ - ವಾಸ್ತವವಾಗಿ ಆ ಕಾಲಘಟ್ಟದ ಜರ್ಮನ್ ಮತ್ತು ಆಸ್ಟ್ರಿಯನ್ ಅಪರಾಧ ಪರಿಶೋಧನೆಯ ನಿಖರವಾದ ಹಾಗೂ ವಿಷಯಯುಕ್ತವಾದ ವಿವರಣೆಗಳಾಗಿದ್ದವು. ಕಾಫ್ಕರ ಕಥೆಗಳಲ್ಲಿನ ಕಾನೂನಿನ ಪ್ರಾಮುಖ್ಯತೆಯು ಕಾನೂನು ಪಂಡಿತರಿಂದಲೂ ಉಪೇಕ್ಷೆಗೆ ಒಳಗಾಗಿದೆ; ರಿಚರ್ಡ್ ಪಾಸ್ನರ್ ರೇ ಸೂಚಿಸಿದಂತೆ, ಕಾನೂನು ಅಭ್ಯಾಸ ಮಾಡಲು ಅಥವಾ ಅರ್ಥ ಮಾಡಿಕೊಳ್ಳಲು ಕಾಲ್ಪನಿಕ ಕಥೆಗಳ ರೂಪದಲ್ಲಿ ಬರೆದ ಯಾವುದೇ ಕಾನೂನಿನ ಉಲ್ಲೇಖಗಳನ್ನು ಬಹುತೇಕ ವಕೀಲರು ಕಾನೂನಿ ಚೌಕಟ್ಟಿಗೆ ಸಂಬಂಧಿಸಿದುದೆಂದು ಪರಿಗಣಿಸುವುದಿಲ್ಲ. ಕಾಫ್ಕರ ಲೇಖನಗಳಲ್ಲಿನ ವಿಮೋಚನೆ/ಪ್ರಾಯಶ್ಚಿತ್ತ ಹಾಗೂ ಅಸಮಂಜಸತೆಯ ಅಧ್ಯಯನದ ಬಗ್ಗೆ ಮುಖ್ಯವಾಹಿನಿಯ ಚಿಂತನೆಗಳು ಏನೇ ಇರಲಿ, ಹಾಗೂ ನ್ಯಾಯಾಧೀಶ ಪಾಸ್ನರ್ ರಂತಹ ಜ್ಯೂರಿಗಳು ಇವುಗಳು ಕಾನೂನು ಹಾಗೂ ನ್ಯಾಯ ವೃತ್ತಿ ಅಭ್ಯಾಸಕ್ಕೆ ಸಂಬಂಧಿಸಿದುದರ ಬಗ್ಗೆ ಏನೇ ನಿಲುವು ತಾಳಲಿ, ಕಾಫ್ಕ ಒಬ್ಬ ವಿಮಾ ವಕೀಲರಾಗಿದ್ದರೆಂಬುದು ವಾಸ್ತವಿಕ ಸಂಗತಿ; ಅವರು ಕಾನೂನು ವ್ಯಾಜ್ಯಗಳಲ್ಲಿ ತೊಡಗಿದ್ದರಷ್ಟೇ ಅಲ್ಲದೆ "ಆ ಕಾಲದ ಕಾನೂನು ಚರ್ಚೆಗಳ ಸ್ಪಷ್ಟ ಅರಿವು ಉಳ್ಳವರಾಗಿದ್ದರು"(ಝಿಯೋಲ್ಕೋವ್ಸ್ಕಿ, 2003, ಪುಟ 224).<ref>ಕಾಫ್ಕರ ಬಿಂಬಿತ ಕಾನೂನುಗಳ ಬಗ್ಗೆ ಕೇಂದ್ರಿತವಾದ ಅಧ್ಯಯನಗಳ ಮೇಲ್ನೋಟವನ್ನು ಪಡೆಯಲು ನೋಡಿರಿ ಬನಕರ್, ರೆಝಾ. “ಇನ್ ಸರ್ಚ್ ಆಫ್ ಹೀಮಟ್: ಎ ನೋಟ್ ಆನ್ ಫ್ರ್ಯಾನ್ಝ್ ಕಾಫ್ಕಾಸ್ ಕಾನ್ಸೆಪ್ಟ್ ಆಫ್ ಲಾ”. ಕಾನೂನು ಮತ್ತು ಸಾಹಿತ್ಯದಲ್ಲಿ 2010ರಲ್ಲಿ ಮುಂದಬರುವಂತಹವು. ಒಂದು ಈ-ಕಾಪಿಯು ಇಲ್ಲಿ ದೊರೆಯುತ್ತದೆ http://papers.ssrn.com/sol3/papers.cfm?abstract_id=1574870</ref>
ಕಾಫ್ಕರ ಕಚೇರಿಯ ಬರವಣಿಗೆಗಳನ್ನು<ref>ಕಾರ್ನ್ ಗೋಲ್ಡ್, ಸ್ಟ್ಯಾನ್ಲೀ, ಮುಂತಾದವರು (ಸಂಪಾದಕರು) ಫ್ರ್ಯಾನ್ಝ್ ಕಾಫ್ಕ: ದ ಆಫೀಸ್ ರೈಟಿಂಗಸ್. ಪ್ರಿನ್ಸ್ ಟನ್, ಪ್ರಿನ್ಸ್ ಟನ್ ವಿಶ್ವವಿದ್ಯಾಲಯ ಮುದ್ರಣಾಲಯ, 2009.</ref> ಅದರ ನಿರ್ಗಮನ ಬಿಂದುವಾಗಿ ಬಳಸುವ ಇತ್ತೀಚಿನ ಒಂದು ಅಧ್ಯಯನವನ್ನು ಕೈಗೊಂಡ ರೆಝಾ ಬನಕರ್Iತಮ್ಮ ವಾದವನ್ನು ಹೀಗೆ ಮಂಡಿಸುತ್ತಾರೆ:"ಕಾಫ್ಕರ ಕಾಲ್ಪನಿಕ ಕಥೆಗಳಲ್ಲಿ ಬರುವ ಕಾನೂನಿನ ಬಿಂಬಗಳು ಪರೀಕ್ಷಿಸಲು ಅರ್ಹವಾಗಿವೆ. ಇದಕ್ಕೆ ಕಾರಣ ಅವುಗಳ ದಿಗ್ಭ್ರಮೆಗೊಳಿಸುವ, ಅರ್ಥವಾಗದ, ವಿಚಿತ್ರವಾದ, ಕುಭಾಷೆಯುಳ್ಳ ಹಾಗೂ ದೂರೀಕರಿಸುವ ಗುಣಗಳುಳ್ಳ ಅಂಶಗಳಷ್ಟೇ ಅಲ್ಲದೆ, ಗಂಭೀರವಾದ ಅಧ್ಯಾತ್ಮಕ ಚಿಂತನೆ ಅಥವಾ ಅವು ಸೂಚಿಸುವ ಅಸ್ತಿತ್ವವಾದದ ಅರ್ಥಗಳು ಸಹ ಆಗಿವೆ.ಅಲ್ಲದೆ, ಉಭಯತಾಪಿ ಆಧುನಿಕ ಮಾನವ ಪರಿಸ್ಥಿತಿಯ ಒಂದು ಅಂಶವೇ ಆಗಿ ಕಾರ್ಯವೆಸಗುವಂತಹ ಒಂದು ನಿರ್ದಿಷ್ಟವಾದ ಕಾನೂನಿನ ಹಾಗೂ ನ್ಯಾಯದ ಚಿಂತನೆಗಾಗಿಯೂ ಸಹ ಈ ಅಧ್ಯಯನ ಅವಶ್ಯ<ref>"ಇನ್ ಸರ್ಚ್ ಆಫ್ ಹೀಮಟ್: ಎ ನೋಟ್ ಆನ್ ಫ್ರ್ಯಾನ್ಝ್ ಕಾಫ್ಕಾಸ್ ಕಾನ್ಸೆಪ್ಟ್ ಆಫ್ ಲಾ" ನೋಡಿ http://papers.ssrn.com/sol3/papers.cfm?abstract_id=1574870</ref>. ಕಾಫ್ಕರ ಕಾನೂನಿನ ವಿಚಾರಗಳ ಈ ದೃಷ್ಟಿಕೋನವನ್ನು ಪರೀಕ್ಷಿಸಲು, [[ಹೀಮಟ್]] ಗೆ ಅವರ ಇಡೀ ಬರಹಗಳ ಹಿನ್ನೆಲೆಯಲ್ಲಿ ಇದನ್ನು ತುಲನೆ ಮಾಡಬೇಕೆನ್ನಲಾಗಿದೆ; ಇದರಿಂದ ಹಲವಾರು ಸಕಾರಾತ್ಮಕ ಕಾನೂನು ಶಿಕ್ಷಣ ಶಾಲೆಗಳು ಬೋಧಿಸುವ ಕಾನೂನಿನ ಸಾಧನೋಪಾಯಗಳನ್ನು ಅರಿಯುವುದಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಇದು ನಮ್ಮನ್ನು ತಲುಪಿಸುತ್ತದೆ; ಇದರಿಂದ ನಮಗೆ ಕಾನೂನನ್ನು ಒಂದು ಅನುಭವವಾಗಿ ಅರಿಯಲು ಅನುಕೂಲವಾಗುತ್ತದೆ"(ನೋಡಿ ಬನಕರ್ 2010).
=== ಪ್ರಕಟಣೆಗಳು ===
ಕಾಫ್ಕರ ಬಹುತೇಕ ಕೃತಿಗಳು ಅಪೂರ್ಣವಾಗಿದ್ದವು ಅಥವಾ ಮರಣಾನಂತರ ಪ್ರಕಟಣೆಗಾಗಿ ಮ್ಯಾಕ್ಸ್ ಬ್ರಾಡ್ ರಿಂದ ಅಣಿಗೊಳಿಸಲ್ಪಟ್ಟವಾಗಿದ್ದವು. ಕಾದಂಬರಿಗಳಾದ ''[[ದ ಕ್ಯಾಸಲ್]]'' (ಮಧ್ಯ-ವಾಕ್ಯದಲ್ಲಿ ನಿಲ್ಲಿಸಲ್ಪಟ್ಟಿತ್ತು ಹಾಗೂ ಅದರ ವಸ್ತುವಿಷಯದ ಬಗ್ಗೆ ಅಸ್ಪಷ್ಟತೆಯಿದ್ದಿತು), ''[[ದ ಟ್ರಯಲ್]]'' (ಅಧ್ಯಾಯಗಳ ಸಂಖ್ಯೆಗಳು ನಮೂದಿತವಾಗಿರಲಿಲ್ಲ ಮತ್ತು ಕೆಲವು ಅಧ್ಯಾಯಗಳು ಅಪೂರ್ಣವಾಗಿದ್ದವು) ಮತ್ತು ''[[ಅಮೆರಿಕಾ]]'' (ಕಾಫ್ಕರು ಇದಕ್ಕೆ ಮೊದಲು ಇಟ್ಟ ಹೆಸರು ''ದ ಮ್ಯಾನ್ ಹೂ ದಿಸಪಿಯರ್ಡ್'' ) ಎಂದು, ಎಲ್ಲವನ್ನೂ ಬ್ರಾಡ್ ಪ್ರಕಟಣೆಗಾಗಿ ಅಣಿಗೊಳಿಸಿದರು. ಹಸ್ತಾಕ್ಷರದ ಬಗ್ಗೆ ಕೆಲವು ಸ್ವಾತಂತ್ರ್ಯಗಳನ್ನು ಬ್ರಾಡ್ ತೆಗೆದುಕೊಂಡಂತರೆನಿಸುತ್ತದೆ (ಅಧ್ಯಾಯಗಳ ವರ್ಗಾವಣೆ, ಜರ್ಮನ್ ಭಾಷೆಯ ಬದಲಾವಣೆ ಮತ್ತು ವಾಕ್ಯದಲ್ಲಿನ ಚಿಹ್ನೆಗಳಾದ ಅರ್ಧ ವಿರಾಮ, ಪೂರ್ಣವಿರಾಮ, ಇತ್ಯಾದಿಗಳನ್ನು ಸರಿಗೊಳಿಸುವುದು) ಹಾಗೂ ತತ್ಕಾರಣವಾಗಿ ಮೂಲ ಜರ್ಮನ್ ಪಠ್ಯವು ಪ್ರಕಟಣೆಗೆ ಮುನ್ನ ತಿದ್ದಲ್ಪಟ್ಟಿತು. ಬ್ರಾಡ್ ರ ಆವೃತ್ತಿಗಳನ್ನು ಸಾಮಾನ್ಯವಾಗಿ ಡೆಫೆನೆಟಿವ್ ಆವೃತ್ತಿಗಳು ಎಂದು ಕರೆಯಲಾಗುತ್ತದೆ.
''ದ ಕ್ಯಾಸಲ್'' <ref>[[ಸ್ಖೋಕ್ಕೆನ್ ಬುಕ್ಸ್]], 1998</ref> ನ ಪ್ರಕಾಶಕರ ನುಡಿಯಂತೆ<ref>{1)ಎ ಕಾಫ್ಕ ಫಾರ್ ದ 21ಸ್ಟ್ ಸೆಂಚುರಿ ಬೈ ಆರ್ಥರ್ ಸ್ಯಾಮುಯಲ್ಸನ್, ಪಬ್ಲಿಷರ್, ಸ್ಖೋಕ್ಕೆನ್ ಬುಕ್ಸ್ {/1} www.jhom.com</ref>, [[ಮಾಲ್ಕಮ್ ಪಾಸ್ಲೇ]] ಕಾಫ್ಕರ ಬಹುತೇಕ ಮೂಲ ಹಸ್ತಾಕ್ಷರ ಕೃತಿಗಳನ್ನು 1961ರಲ್ಲಿ [[ಆಕ್ಸ್ ಫ]]ರ್ಡ್ [[ಬೋಡ್ಲೀಯನ್]] ಗ್ರಂಥಾಲಯಕ್ಕೆ ಒಯ್ಯಲು ಸಾಧ್ಯವಾಯಿತು. ''[[ದ ಟ್ರಯಲ್]]'' ನ ಪಠ್ಯವನ್ನು ಹರಾಜಿನ ಮೂಲಕ ತೆಗೆದುಕೊಳ್ಳಲಾಯಿತು ಹಾಗೂ ಜರ್ಮನಿಯ [[ಮಾರ್ಬಾಚ್]] ಜರ್ಮನ್ ಲಿಟರರಿ ಆರ್ಕೈವ್ಸ್<ref>{{de icon}} [http://www.dla-marbach.de/ ಹೆರ್ಝ್ಲಿಚ್ ವಿಲ್ಕೋಮ್ಮೆನ್] {{Webarchive|url=https://web.archive.org/web/20100726190652/http://www.dla-marbach.de/ |date=2010-07-26 }} www.dla-marbach.de</ref> ನಲ್ಲಿ ಸಂಗ್ರಹಿಸಿಡಲಾಗಿದೆ.<ref>(ಪ್ರಕಾಶಕರ ಟಿಪ್ಪಣಿ, ''ದ ಟ್ರಯಲ್'', ಸ್ಖೋಕೆನ್ ಬುಕ್ಸ್, 1998</ref>
ಕ್ರಮೇಣ, ಪಾಲ್ಸೇಯ ನೇತೃತ್ವ ತಂಡವೊಂದು (ಇದರಲ್ಲಿ [[ಗೆರ್ಹಾರ್ಡ್ ನ್ಯೂಮನ್]], ಜಾಸ್ಟ್ ಸ್ಕಿಲ್ಲೆಮೀಯ್ಟ್, ಮತ್ತು ಜುರ್ಗೆನ್ ಬಾರ್ನ್ ಇದ್ದರು) ಕಾಫ್ಕರ ಜರ್ಮನ್ ಕಾದಂಬರಿಗಳ ಪುನಾರಚನೆಯ ಕಾರ್ಯವನ್ನು ಕೈಗೊಂಡಿತು ಮತ್ತು [[ಎಸ್. ಫಿಶರ್ ವೆರ್ಲಾಗ್]] ಅದನ್ನು ಮರುಪ್ರಕಟಣೆ ಮಾಡಿದರು.<ref name="Adler_oct131995">''ಸ್ಟೆಪಿಂಗ್ ಇಂಟು ಕಾಫ್ಕ'ಸ್ ಹೆಡ್'', ಜೆರೆಮಿ ಆಡ್ಲರ್, ಟೈಮ್ಸ್ ಸಾಹಿತ್ಯಿಕ ಪುರವಣಿ, 13 ಅಕ್ಟೋಬರ್ 1995 <http://www.textkritik.de/rezensionen/kafka/einl_04.htm></ref> ಪಾಸ್ಕೇ 1982ರಲ್ಲಿ ಪ್ರಕಟಣೆಗೊಂಡ ''ದಾಸ್ ಸ್ಕ್ಲಾಬ್ (ದ ಕ್ಯಾಸಲ್)'', ಮತ್ತು 1990ರಲ್ಲಿ ಪ್ರಕಟಣೆಗೊಂಡ ''[[ಡೆರ್ ಪ್ರೋಝೆಸ್ (ದ ಟ್ರಯಲ್)]]'' ಗಳ ಸಂಪಾದಕರಾಗಿದ್ದರು. ಜಾಸ್ಟ್ ಸ್ಕಿಲ್ಲೆಮೀಯ್ಟ್ 1983ರಲ್ಲಿ ಪ್ರಕಟಿತವಾದ ''ಡೆರ್ ವರ್ಸಕೋಲ್ಲಿನಿ'' (''ಅಮೆರಿಕಾ'' )ದ ಸಂಪಾದಕರಾಗಿದ್ದರು. ಇವೆಲ್ಲವನ್ನೂ "ಕ್ರಿಟಿಕಲ್ ಆವೃತ್ತಿಗಳು" ಅಥವಾ "ಫಿಷರ್ ಆವೃತ್ತಿಗಳು" ಎಂದು ಕರೆಯಲಾಗುತ್ತದೆ. ಇದರ ಜರ್ಮನ್ ವಿಮರ್ಶಾತ್ಮಕ ಪಠ್ಯ ಮತ್ತು ಕಾಫ್ಕರ ಇತರ ಕೃತಿಗಳು ''ದ ಕಾಫ್ಕ ಪ್ರಾಜೆಕ್ಟ್'' ಎಂಬ ಆನ್ ಲೈನ್ ಜಾಲದಲ್ಲಿ ದೊರಕುತ್ತವೆ.<ref>[http://www.kafka.org/index.php?project ದ ಕಾಫ್ಕ ಪ್ರಾಜೆಕ್ಟ್ – ಹಸ್ತಪ್ರತಿಯ ಮೇರೆಗೆ ಕಾಫ್ಕರ ಎಲ್ಲಾ ಪಠ್ಯಗಳೂ ಜರ್ಮನ್ ಭಾಷೆಯಲ್ಲಿ] {{Webarchive|url=https://web.archive.org/web/20230612162044/http://www.kafka.org/index.php?project |date=2023-06-12 }} www.kafka.org</ref> ಈ ತಾಣವು ತನ್ನ ಭಂಡಾರವನ್ನು ಅವಿರತವಾಗಿ ಬೆಳೆಸಿಕೊಳ್ಳುತ್ತಿದೆ.
[[ಸ್ಯಾನ್ ಡೀಗೋ ರಾಜ್ಯ ವಿಶ್ವವಿದ್ಯಾಲಯ]]ದಲ್ಲಿ ಕೇಂದ್ರಿತವಾದ ಮತ್ತೊಂದು ಕಾಫ್ಕ ಯೋಜನೆಯು 1998ರಲ್ಲಿ ಆರಂಭವಾಗಿ, ಕಾಫ್ಕರ ಕಡೆಯ ಬರಹಗಳ ಅಧಿಕೃತ ಅಂತರರಾಷ್ಟ್ರೀಯ ಶೋಧವನ್ನು ಕೈಗೊಂಡಿದೆ. ಕಾಫ್ಕರ ಕಡೆಯ ಸಂಗಾತಿಯಾದ ಡೋರಾ ಡಯಾಮಂಟ್(ನಂತರ, ಡೈಮಾಂಟ್-ಲಾಸ್ಕ್) ರ ಬಳಿಯಿದ್ದ 20 ನೋಟ್ ಬುಕ್ ಗಳು ಮತ್ತು 35 ಪತ್ರಗಳ ಈ ಕಳೆದುಹೋದ ಅಮೂಲ್ಯ ಸಾಹಿತ್ಯ ಭಂಡಾರವನ್ನು ಗೆಸ್ಟಾಪೋದವರು ಆಕೆಯಿಂದ 1933ರಲ್ಲಿ ಬರ್ಲಿನ್ ನಲ್ಲಿ ವಶಪಡಿಸಿಕೊಂಡಿದ್ದರು. ಕಾಫ್ಕ ಯೋಜನೆಯ ನಾಲ್ಕು-ತಿಂಗಳ, ಬರ್ಲಿನ್ ನ ಹಳೆಯ ಸರ್ಕಾರಿ ಕಡತಗಳ ಹುಡುಕಾಟವು 1998ರಲ್ಲಿ ವಶಪಡಿಸಿಕೊಳ್ಳಲು ನೀಡಿದ ಆಜ್ಞಾಪತ್ರ ಮತ್ತು ಇತರ ಪ್ರಮುಖ ದಸ್ತಾವೇಜುಗಳನ್ನು ಪತ್ತೆ ಹಚ್ಚುವಲ್ಲಿ ಸಹಾಯಕವಾಯಿತು. 2003ರಲ್ಲಿ, ಕಾಫ್ಕ 1923ರಲ್ಲಿ ಬರೆದ ಮೂರು ಅಸಲಿ ಓಲೆಗಳನ್ನು ಪತ್ತೆ ಹಚ್ಚುವಲ್ಲಿ ಕಾಫ್ಕ ಯೋಜನೆ ಯಶಸ್ವಿಯಾಯಿತು. 1950ರ ದಶಕದ ಮಧ್ಯಭಾಗದಲ್ಲಿ ಮ್ಯಾಕ್ಸ್ ಬ್ರಾಡ್ ಮತ್ತು ಕ್ಲಾಸ್ ವ್ಯಾಗನ್ ಬ್ಯಾಚ್ ನಡೆಸಿದ ಶೋಧನೆಯನ್ನೇ ಅನುಸರಿಸಿ, SDSUವಿನ ಕಾಫ್ಕ ಯೋಜನೆಯು ಒಂದು ಸಲಹಾ ಸಮಿತಿಯನ್ನು ಹೊಂದಿದ್ದು, ಇದರಲ್ಲಿ ಅಂತರರಾಷ್ಟ್ರೀಯ ಮಟ್ಟದ ಪಂಡಿತರು ಮತ್ತು ಸಂಶೋದಕರು ಇದ್ದಾರೆ; ಅಲ್ಲದೆ ಈ ಸಾಹಿತ್ಯಿಕ ರಹಸ್ಯವನ್ನು ಬಗೆಹರಿಸಲು ಸಹಾಯ ಮಾಡಬಯಸುವ ಸ್ವಯಂಸೇವಕರಿಗೂ ಆಹ್ವಾನವಿದೆ.<ref>ಮೂಲಗಳು: ಕಾಫ್ಕ, ಲೇಖಕ ನಿಕೋಲಸ್ ಮರ್ರೆ, ಪುಟಗಳು 367, 374; ಕಾಫ್ಕ'ಸ್ ಲಾಸ್ಟ್ ಲವ್, ಲೇಖಕಿ ಕಾಥಿ ಡಯಾಮಂಟ್; "ಸಮ್ಮರಿ ಆಫ್ ದ ರಿಸಲ್ಟ್ಸ್ ಆಫ್ ದ ಕಾಫ್ಕ ಪ್ರಾಜೆಕ್ಟ್ ಬರ್ಲಿನ್ ರಿಸರ್ಚ್ 1 ಜೂನ್ – ಸೆಪ್ಟೆಂಬರ್ 1998" ಡಿಸೆಂಬರ್ 1998ರಲ್ಲಿ ಕಾಫ್ಕ ಕಾಟೆರ್ನ್ ಎಂಬ ನೆದರ್ಲ್ಯಾಂಡ್ಸ್ ನ ಕಾಫ್ಕ ಗುಂಪಿನ ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟ. ಹೆಚ್ಚಿನ ಮಾಹಿತಿಗಾಗಿ http://www.kafkaproject.com</ref>
2008ರಲ್ಲಿ, ಶೈಕ್ಷಣಿಕ ಮತ್ತು ಕಾಫ್ಕ ತಜ್ಞರಾದ ಜೇಮ್ಸ್ ಹಾಸ್ ಕಾಫ್ಕ ಕ್ವಾಸಿ-ಸಂತನಂತಹ "ಹೊರಗಿನವನು" ಎಂದು ಬಿಂಬಿಸಿರುವ ಅಭಿಪ್ರಾಯವನ್ನು ಕಾಪಾಡಲು ಪಂಡಿತರು ಕಾಫ್ಕ ಸಮ್ಮತಿಸುತ್ತಿದ್ದಂತಹ ಅಶ್ಲೀಲತೆಗಳ ವಿವರಗಳನ್ನು(ಕಾಫ್ಕರ ಮೊದಲ ಪ್ರಕಾಶಕರೇ ಇದನ್ನೂ ಪ್ರಕಟಿಸಿದ್ದು) ಐಚ್ಛಿಕವಾಗಿ ಮುಚ್ಚಿಡುತ್ತಿದ್ದಾರೆ ಎಂದು ಅರೋಪಿಸಿದರು.<ref name="timesonline1"/>
=== ಭಾಷಾಂತರಗಳು ===
ಜರ್ಮನ್ ಸಂಪಾದಿತ ಕೃತಿಗಳನ್ನು ಆಧಾರವಾಗಿರಿಸಿಕೊಂಡು ಅನುವಾದ ಕೈಗೊಳ್ಳಲು ಎರಡು ಪ್ರಧಾನ ಮೂಲಗಳಿವೆ. ಮೊದಮೊದಲ ಇಂಗ್ಲಿಷ್ ಅನುವಾದಗಳನ್ನು [[ಎಡ್ವಿನ್]] ಮತ್ತು ವಿಲ್ಲಾ ಮುಯಿರ್ ಮಾಡಿದರು ಮತ್ತು ಇವುಗಳನ್ನು [[ಆಲ್ಫ್ರೆಡ್ ಎ. ನಾಪ್ಫ್]] ಪ್ರಕಟಿಸಿದರು. ಈ ಆವೃತ್ತಿಗಳು ವ್ಯಾಪಕವಾಗಿ ಪ್ರಕಾಶನಗೊಂಡವು ಮತ್ತು 1940ರ ಅಂತ್ಯದಲ್ಲಿ ಕಾಫ್ಕರ ಜನಪ್ರಿಯತೆಯು ಪ್ರವಾಹದಂತೆ ಮುನ್ನುಗ್ಗಿತು. ನಂತರದ ಆವೃತ್ತಿಗಳಲ್ಲಿ (ವಿಶೇಷತಃ 1954ರ ಆವೃತ್ತಿಗಳು) [[ಐಥ್ನೆ ವಿಲ್ಕಿನ್ಸ್]] ಮತ್ತು [[ಅರ್ನ್ಸ್ಟ್ ಕೈಸರ್]] ಅವರು ಬರೆದಿದ್ದು, ತೆಗೆದುಹಾಕಲಾಗಿದ್ದ ಪಠ್ಯಗಳೂ ಸೇರಿಸಲ್ಪಟ್ಟವು. ಇವುಗಳನ್ನು "ಡಿಫೆನೆಟಿವ್ ಎಡಿಷನ್ಸ್" ಎಂದು ಕರೆಯಲಾಯಿತು. ಅವರು ''[[ದ ಟ್ರಯಲ್, ಡೆಫೆನೆಟಿವ್]]'' ಮತ್ತು ''[[ದ ಕ್ಯಾಸಲ್, ಡೆಫೆನೆಟಿವ್]]'' ಗಳನ್ನು ತರ್ಜುಮೆ ಇತರ ಅನುವಾದಗಳೊಡನೆ ಅನುವಾದ ಮಾಡಿದರು. ಡೆಫೆನೆಟಿವ್ ಆವೃತ್ತಿಗಳು ಹಲವಾರು ಪಕ್ಷಪಾತಗಳನ್ನು ಹೊಂದಿವೆ ಎಂದು ಹೇಳಲಾಗಿದ್ದು, ಅರ್ಥೈಸುವಿಕೆಯಲ್ಲೂ ಹಳತು ಎಂದು ಒಪ್ಪಿಕೊಳ್ಳಲಾಗಿದೆ.
ಪಾಸ್ಲೇ ಮತ್ತು ಸ್ಕಿಲ್ಲೆಮಯೀಯ್ಟ್ ರವರು ಜರ್ಮನ್ ಪಠ್ಯದ ಮರುಸಂಕಲಿಕೆಯನ್ನು ಪೂರ್ಣಗೊಳಿಸಿದ ನಂತರ, ನೂತನ ಅನುವಾದಗಳು ಸಂಪೂರ್ಣಗೊಂಡು ಪ್ರಕಟಣೆಗೋಂಡವು – ಮಾರ್ಕ್ ಹರ್ಮನ್ ರಿಂದ''[[ದ ಕ್ಯಾಸಲ್, ಕ್ರಿಟಿಕಲ್]]'' ([[ಸ್ಖೋಕ್ಕೆನ್ ಬುಕ್ಸ್]], 1998), [[ಬ್ರಿಯೋನ್ ಮಿಚೆಲ್]] ರಿಂದ''[[ದ ಟ್ರಯಲ್, ಕ್ರಿಟಿಕಲ್]]'' ([[ಸ್ಖೋಕ್ಕೆನ್ ಬುಕ್ಸ್]], 1998) ಮತ್ತು ಮೈಕೆಲ್ ಹಾಫ್ ಮನ್ ರಿಂದ ''ಅಮೆರಿಕಾ: ದ ಮ್ಯಾನ್ ಹೂ ಡಿಸಪಿಯರ್ಡ್'' ([[ನ್ಯೂ ಡೈರೆಕ್ಷನ್ಸ್ ಪಬ್ಲಿಷಿಂಗ್]], 2004). ಈ ಆವೃತ್ತಿಗಳನ್ನು ಮರುಸಂಗ್ರಹಿಸಿದ ಪಠ್ಯಗಳ ಆಧಾರಿತವಾದುದು ಎಂದು ಆಗಾಗ್ಗೆ ಗುರುತಿಸಲಾಗುತ್ತದೆ.
== ಪ್ರಕಟಿತ ಕೃತಿಗಳು ==
{{See also|Franz Kafka bibliography}}
;ಸಣ್ಣ ಕಥೆಗಳು
* ''[[ಡಿಸ್ಕ್ರಿಪ್ಷನ್ ಆಫ್ ಎ ಸ್ಟ್ರಗಲ್]]'' (''ಬೆಷ್ರೀಬಂಗ್ ಯ್ಯೀನೆಸ್ ಕಾಂಪ್ಫೆಸ್'', 1904–1905)
* ''[[ವೆಡ್ಡಿಂಗ್ ಪ್ರಿಪರೇಷನ್ಸ್ ಇನ್ ದ ಕಂಟ್ರಿ]]'' (''ಹಾಕ್ಝೀಟ್ಸ್ವೋರ್ಬೆರೀಟಂಜೆನ್ ಆಫ್ ಡೆಂ ಲ್ಯಾಂಡೆ'', 1907–1908)
* ''[[ಕಾಂಟೆಂಪ್ಲೇಷನ್]]'' (ಬಿಟ್ರಾಕ್ಟಟಂಗ್, 1904–1912)
* ''[[ದ ಜಡ್ಜ್ ಮೆಂಟ್]]'' (''ದಾಸ್ ಉರ್ಟೀಲ್'', 22–23 ಸೆಪ್ಟೆಂಬರ್ 1912)
* ''[[ದ ಸ್ಟೋಕರ್]]''
* ''[[ಇನ್ ದ ಪೀನಲ್ ಕಾಲೋನಿ]]'' (''ಇನ್ ಡೆರ್ ಸ್ಟ್ರಾಫ್ಕೋಲೋನಿ'', ಅಕ್ಟೋಬರ್ 1914)
* ''[[ದ ವಿಲೇಜ್ ಸ್ಕೂಲ್ ಮಾಸ್ಟರ್]]'' (''ಡೆರ್ ಡಾರ್ಫ್ಸ್ಕಲ್ಲೆನ್ಹೆರರ್(/1) ಅಥವಾ ''ಡೆರ್ ರೀಸೆನ್ಮಾಲ್ವುರ್ಫ್'' '', 1914–1915)
* ''[[ಬ್ಲಂಫೆಲ್ಡ್, ಎನ್ ಎಲ್ಡರ್ಲಿ ಬ್ಯಾಚೆಲರ್]]'' (''ಬ್ಲಂಫೆಲ್ಡ್, ಯೀಯ್ನ್ ಆಲ್ಟೆರೆರ್ ಜಂಗೆಸೆಲ್ಲೆ '', 1915)
* ''[[ದ ವಾರ್ಡನ್ ಆಫ್ ದ ಟೋಂಬ್]]'' (''ಡೆರ್ ಗ್ರಫ್ಟ್ ವಾಕ್ಟರ್'', 1916–1917), ಕಾಫ್ಕ ಬರೆದ ಏಕೈಕ ನಾಟಕ
* ''[[ದ ಹಂಟರ್ ಗ್ರಾಚ್ಚಸ್]]'' (''ಡೆರ್ ಜಾಗರ್ ಚ್ರಾಚ್ಚಸ್'', 1917)
* ''[[ದ ಗ್ರೇಟ್ ವಾಲ್ ಆಫ್ ಚೈನಾ]]'' (''ಬೀಯ್ಮ್ ಬಾ ಡೆರ್ ಚೈನಿಸಿಸ್ಚೆನ್ ಮಾಯೆರ್'', 1917)
* ''[[ಎ ರಿಪೋರ್ಟ್ ಟು ಎನ್ ಅಕಾಡೆಮಿ]]'' (''ಈಯ್ನ್ ಬೆರಿಕ್ಟ್ ಫರ್ ಈಯ್ನ್ ಅಕ್ಯಾಡೆಮೀ '', 1917)
* ''[[ಜಾಕಾಲ್ಸ್ ಎಂಡ್ ಅರಬ್ಸ್]]'' (''ಸ್ಕಾಕಾಲೆ ಉಂಡ್ ಅರಾಬೆರ್'', 1917)
* ''[[ಎ ಕಂಟ್ರಿ ಡಾಕ್ಟರ್]]'' (''ಈಯ್ನ್ ಲ್ಯಾಂಡಾರ್ಝ್ಟ್'', 1919)
* ''[[ಎ ಮೆಸೇಜ್ ಫ್ರಂ ದ ಎಂಪರರ್]]'' (''ಯೀಯ್ನೆ ಕೇಯ್ಸರ್ಲಿಚೆ ಬಾಟ್ಸ್ ಚಾಫ್ಟ್ '', 1919)
* ''[[ಎನ್ ಓಲ್ಡ್ ಮ್ಯಾನುಸ್ಕ್ರಿಪ್ಟ್]]'' (''ಈಯ್ನ್ ಆಲ್ಟೆಸ್ ಬ್ಲ್ಯಾಟ್ಟ್'', 1919)
* ''[[ದ ರೆಫ್ಯೂಸಲ್l]]'' (''ಡಯ್ ಅಬ್ವೀಸಂಗ್'', 1920)
* ''[[ಎ ಹಂಗರ್ ಆರ್ಟಿಸ್ಟ್]]'' (''ಯೀಯ್ನ್ ಹಂಗರ್ ಕಂಸ್ಟ್ಲರ್'', 1924)
* ''[[ಇನ್ವೆಸ್ಟಿಗೇಷನ್ಸ್ ಆಫ್ ಎ ಡಾಗ್]]'' (''ಫಾರ್ಶುಂಗೆನ್ ಯೀಯ್ನೆಸ್ ಹುಂಡೆಸ್'', 1922)
* ''[[ಎ ಲಿಟಲ್ ವುಮನ್]]'' (''ಯೀಯ್ನ್ ಕ್ಲೀಯೆನ್ ಫ್ರಾ'', 1923)
* ''[[ಫಸ್ಟ್ ಸಾರೋ]]'' (''ಎರ್ಸ್ಟೆಸ್ ಲೀಯ್ಡ್'', 1921–1922)
* ''[[ದ ಬರೋ]]'' (''ಡೆರ್ ಬಾ'', 1923–1924)
* ''[[ಜೋಸೆಫೈನ್ ದ ಸಿಂಗರ್ ಆರ್ ದ ಮೌಸ್ ಫೋಲ್ಕ್]]'' (''ಜೋಸೆಫೈನ್, ಡೈ ಸ್ಯಾಂಗರಿನ್, ಓಡರ್ ದಾಸ್ ವೋಲ್ಕ್ ಡೆರ್ ಮಾಸ್'', 1924)
ಇವರ ಕಥೆಗಳ ಹಲವಾರು ಸಂಗ್ರಹಗಳು ಪ್ರಕಟವಾಗಿವೆ ಹಾಗೂ ಅವುಗಳು ಈ ಕೆಲಕಂಡವನ್ನು ಒಳಗೊಂಡಿವೆ:
* ''[[The Penal Colony: Stories and Short Pieces]]''. ನ್ಯೂ ಯಾರ್ಕ್: ಸ್ಖಾಕೆನ್ ಬುಕ್ಸ್, 1948.
* ''[[ದ ಕಂಪ್ಲೀಟ್ ಸ್ಟೋರೀಸ್]]'', (ಸಂ. ನಾಹುಂ ಎನ್, ಗ್ಲಾಟ್ಝರ್). ನ್ಯೂ ಯಾರ್ಕ್: ಸ್ಖಾಕೆನ್ ಬುಕ್ಸ್, 1971.
* ''ದ ಬೇಸಿಕ್ ಕಾಫ್ಕ''. ನ್ಯೂ ಯಾರ್ಕ್: ಪಾಕೆಟ್ ಬುಕ್ಸ್, 1997.
* ''[[ದ ಸನ್ಸ್]]''. ನ್ಯೂ ಯಾರ್ಕ್: ಸ್ಖಾಕೆನ್ ಬುಕ್ಸ್, 1989.
* ''ದ ಮೆಟಮಾರ್ಫಾಸಿಸ್, ಇನ್ ದ ಪೀನಲ್ ಕಾಲೋನಿ, ಮತ್ತು ಇತರ ಕಥೆಗಳು''. ನ್ಯೂ ಯಾರ್ಕ್: ಸ್ಖಾಕೆನ್ ಬುಕ್ಸ್, 1995.
* ''[[ಕಾಂಟೆಂಪ್ಲೇಷನ್]]''. ಟ್ವಿಸ್ಟೆಡ್ ಸ್ಪೂನ್ ಪ್ರೆಸ್, 1998.
* ''ಮೆಟಮಾರ್ಫಾಸಿಸ್ ಎಂಡ್ ಅದರ್ ಸ್ಟೋರೀಸ್''. ಪೆಂಗ್ವಿನ್ ಕ್ಲಾಸಿಕ್ಸ್, 2007
;ಸಣ್ಣ ಕಾದಂಬರಿಗಳು
* ''[[ದ ಮೆಟಮಾರ್ಫಾಸಿಸ್]]'' (''ಡೈ ವೆರ್ವಾಂಡ್ಲಂಗ್'', ನವೆಂಬರ್ – ಡಿಸೆಂಬರ್ 1915)
;ಕಾದಂಬರಿಗಳು
* ''[[ದ ಟ್ರಯಲ್]]'' (''ಡೆರ್ ಪ್ರೋಝೆಭ್'', 1925) ([[ಬಿಫೋರ್ ದ ಲಾ]]ಎಂಬ ಸಣ್ಣಕಥೆಯನ್ನೂ ಒಳಗೊಂಡಿದೆ)
* ''[[ದ ಕ್ಯಾಸಲ್]]'' (''ದಾಸ್ ಸ್ಕ್ಲಾಭ್'', 1926)
* ''[[ಅಮೆರಿಕಾ]]'' (''ಅಮೆರಿಕಾ'' ಅಥವಾ ''ಡೆರ್ ವೆರಸ್ಕೋಲ್ಲಿನಿ'', 1927)
;ಡೈರಿಗಳು ಮತ್ತು ನೋಟ್ ಬುಕ್ ಗಳು
* ''[[ಡೈರಿಗಳು 1910–1923]]''
* ''[[ದ ಬ್ಲೂ ಆಕ್ಟೇವೋ ನೋಟ್ ಬುಕ್ಸ್]]''
;ಪತ್ರಗಳು
* ''[[ತಂದೆಗೆ ಬರೆದ ಪತ್ರಗಳು]]''
* ''[[ಫೆಲಿಸ್ ಗೆ ಬರೆದ ಪತ್ರಗಳು]]''
* ''[[ಓಟ್ಲಾಗೆ ಬರೆದ ಪತ್ರಗಳು]]''
* ''[[ಮಿಲೆನಾಗೆ ಬರೆದ ಪತ್ರಗಳು]]''
* ''[[ಕುಟುಂಬ, ಸ್ನೇಹಿತರು ಮತ್ತು ಸಂಪಾದಕರುಗಳಿಗೆ ಬರೆದ ಪತ್ರಗಳು]]''
== ಸ್ಮರಣೆ ==
[[ಚಿತ್ರ:Kafka Museum.JPG|thumb|ಪ್ರೇಗ್ ನ ಫ್ರ್ಯಾನ್ಝ್ ಕಾಫ್ಕ ವಸ್ತುಸಂಗ್ರಹಾಲಯದ ಪ್ರವೇಶದ್ವಾರ.]]
ತಮ್ಮ ಕೃತಿಗಳಿಗೇ ಬದ್ಧವಾದ ವಸ್ತುಸಂಗ್ರಹಾಲಯವನ್ನು ಝೆಕ್ ರಿಪಬ್ಲಿಕ್ ನ [[ಪ್ರೇಗ್]] ನಲ್ಲಿ ಫ್ರ್ಯಾನ್ಝ್ ಕಾಫ್ಕ ಹೊಂದಿದ್ದಾರೆ.
"[[ಕಾಫ್ಕಾಯಿಸ್ಕ್]]" ಎಂಬ ಪದವನ್ನು ಕಾಫ್ಕರ ಕೃತಿಗಳಲ್ಲಿ ಬರುವ, ಅದರಲ್ಲೂ ವಿಶೇಷವಾಗಿ ''ದ ಟ್ರಯಲ್'' ಮತ್ತು ''ದ ಮೆಟಮಾರ್ಫಾಸಿಸ್'' ಗಳಲ್ಲಿ ಬರುವ, ಕಲ್ಪನೆಗಳು, ಪರಿಸ್ಥಿತಿಗಳು ಮತ್ತು ಆಲೋಚನೆಗಳನ್ನು ಹೋಲುವಂತಹವುಗಳನ್ನು ಸೂಚಿಸಲು/ವಿವರಿಸಲು ಬಳಸಲಾಗುತ್ತದೆ.
ಮೆಕ್ಸಿಕೋದಲ್ಲಿ, "ಸಿ ಫ್ರಾನ್ಝ್ ಕಾಫ್ಕ ಫ್ಯುಯೆರ ಮೆಕ್ಸಿಕಾನೋ, ಸಿಯೆರಾ ಕೋಸ್ಟುಂಬ್ರಿಸ್ಟಾ" (ಫ್ರಾನ್ಝ್ ಕಾಫ್ಕ ಮೆಕ್ಸಿಕೋದವರಾಗಿದ್ದಿದ್ದರೆ ಅವರು ಕೋಸ್ಟುಂಬ್ರಿಸ್ಟಾ ಲೇಖಕರಾಗಿರುತ್ತಿದ್ದರು) ಎಂಬ ನುಡಿಗಟ್ಟನ್ನು ಸಾಮಾನ್ಯವಾಗಿ ವೃತ್ತಪತ್ರಿಗಕೆಗಳು, ಬ್ಲಾಗ್ ಗಳು,ಮತ್ತು ಆನ್ ಲೈನ್ ಚರ್ಚಾಸ್ಥಳಗಳಲ್ಲಿ ದೇಶದ ಪರಿಸ್ಥಿತಿಯು ಎಷ್ಟು ಬಾಲಿಶವೂ, ನಿರಾಶಾದಾಯಕವೂ ಆಗಿದೆ ಎಂಬುದನ್ನು ಹೇಳಲು ಬಳಸಲಾಗುತ್ತದೆ.<ref>{{cite web
| last =Aquella
| first =Daniel
| authorlink =
| coauthors =
| title =México kafkiano y costumbrista
| work =Daquella manera:Paseo personal por inquietudes culturales, sociales y lo que tengamos a bien obrar.
| publisher =
| date =22 November 2006
| url =http://www.daquellamanera.org/?q=node/144
| doi =
| accessdate =16 February 2007
| archive-date =16 ಡಿಸೆಂಬರ್ 2007
| archive-url =https://web.archive.org/web/20071216081625/http://www.daquellamanera.org/?q=node%2F144
| url-status =dead
}}</ref>
"ಝೆಕ್ ದೃಷ್ಟಿಕೋನದಲ್ಲಿ ಕಾಫ್ಕ ಜರ್ಮನ್ ಆಗಿದ್ದರು ಮತ್ತು ಜರ್ಮನ್ನರ ದೃಷ್ಟಿಕೋನದಲ್ಲಿ, ಅವರು, ಬೇರೆಲ್ಲಕ್ಕಿಂತಲೂ ಮಿಗಿಲಾಗಿ, ಯಹೂದಿಯಾಗಿದ್ದರು" ಮತ್ತು ಇದು ಸಾಮಾನ್ಯವಾಗಿ "ಬಹುತೇಕ ಪಾಶ್ಚಿಮಾತ್ಯ ಯಹೂದಿಗಳ ಹಣೆಬರಹ"ವಾಗಿತ್ತು.<ref name="Czermak"/>
== ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಉಲ್ಲೇಖಗಳು ==
=== ಸಾಹಿತ್ಯ ===
* [[ನೊಬೆಲ್ ಪ್ರಶಸ್ತಿ]] ವಿಜೇತ [[ಐಸಾಕ್ ಬಾಷೆವಿಸ್ ಸಿಂಗರ್]] "ಎ ಫ್ರೆಂಡ್ ಆಫ್ ಕಾಫ್ಕ" ಎಂಬ ಒಂದು ಸಣ್ಣ ಕಥೆ ಬರೆದರು; ಅದು ಜೇಕ್ಸ್ ಕಾಹ್ನ್ ಎಂಬ ಒಬ್ಬ [[ಯಿಡ್ಡಿಷ್]] ನಟ ಫ್ರ್ಯಾನ್ಝ್ ಕಾಫ್ಕ ತನಗೆ ತಿಳಿದಿದ್ದರೆಂದು ಹೇಳಿದುದರ ಬಗ್ಗೆ ಬರೆದ ಕಥೆಯಾಗಿತ್ತು. ಈ ಕಥೆಯಲ್ಲಿ, ಜೇಕ್ಸ್ ಕಾಹ್ನ್ ಹೇಳುವಂತೆ, ಕಾಫ್ಕ [[ಗೋಲೆಮ್]] ಎಂಬ [[ಯಹೂದಿಗಳ ಜನಪದ]]ದ ಕಥೆಗಳಲ್ಲಿ ಬರುವ ಪ್ರಾಣಿಯಲ್ಲಿ ನಂಬಿಕೆ ಇಟ್ಟಿದ್ದರು.<ref>{{cite book
| last =Bashevis Singer
| first =Isaac
| authorlink =
| coauthors =
| title =A Friend of Kafka, and Other Stories
| publisher =Farrar, Straus and Giroux
| date= 1970
| location =
| page =311
| url =
| doi =
| isbn = 0-37415-880-0 }}</ref>
* ''[[ಕಾಫ್ಕ ಅಮೆರಿಕಾನಾ]]'' ಲೇಖಕರು [[ಜೊನಾಥನ್ ಲೆದೆಂ]] ಮತ್ತು ಕಾರ್ಟರ್ ಸ್ಕಾಲ್ಝ್; ಇದು ಕಾಫ್ಕರ ಜೀವನ ಮತ್ತು ಕೃತಿಗಳನ್ನು ಆಧರಿಸಿದ ಕಥೆಗಳ ಸಂಕಲನ.
* ''[[ಕಾಫ್ಕ ಆನ್ ದ ಶೋರ್]]'' ಲೇಖಕ [[ಹಾರೂಕಿ ಮುರಾಕಾಮಿ]]
* ''[[ಕಾಫ್ಕ ವಾಸ್ ದ ರೇಜ್, ಎ ಗ್ರೀನ್ವಿಚ್ ವಿಲೇಜ್ ಮೆಮಾಯ್ರ್]]'' ಲೇಖಕ [[ಅನಾಟೊಲೆ ಬ್ರೊಯಾರ್ಡ್]]
* ''ಕಾಫ್ಕಾಸ್ ಕರ್ಸ್'' ಲೇಖಕ [[ಅಖ್ಮತ್ ಡ್ಯಾಂಗರ್]]
* ''[[ದ ಕಾಫ್ಕ ಎಫೆಕ್ಟ್]]'' ಬರೆದವರು ಅಮೆರಿಕದ [[ಬಿಝಾರೋ]] ಲೇಖಕ [[ಡಿ. ಹಾರ್ಲಾನ್ ವಿಲ್ಸನ್]];[[ಇರ್ರಿಯಾಲಿಸಂ]] ವರ್ಗದ ಸಾಹಿತ್ಯದ ಬಗ್ಗೆ ಇರುವ ತಮ್ಮ ನಿಲುವನ್ನು ಫ್ರ್ಯಾನ್ಝ್ ಕಾಫ್ಕರ ಸಾಹಿತ್ಯಕ್ಕೆ ಹಾಗೂ [[ವಿಲಿಯಮ್ ಎಸ್. ಬರೋಸ್]] ರ ಸಾಹಿತ್ಯಕ್ಕೆ ಹೋಲಿಸುವುದರ ಮೂಲಕ ಮಂಡಿಸಿದರು.
* ''[[ಕ್ರಿಮಿನಲ್ (ಚಿತ್ರಕಥಾ ಪುಸ್ತಕಗಳು)]]'' ಲೇಖಕರು [[ಎಡ್ ಬ್ರೂಬಾಕರ್]] ಮತ್ತು ಸೀನ್ ಫಿಲಿಪ್ಸ್/2}; ವೃತ್ತಪತ್ರಿಕೆಗಳಲ್ಲಿ ಮರುಕಳಿಸುವ ಕಾಮಿಕ್ ಅಂಕಣಗಳಲ್ಲಿ ಕಾಣಬರುವ ವಿಶಿಷ್ಟ ಪಾತ್ರಗಳನ್ನೊಳಗೊಂಡ ದ ಅಡ್ವೆಂಚರ್ಸ್ ಆಫ್ 'ಫ್ರ್ಯಾನ್ಝ್ ಕಾಫ್ಕ PI'.
ಈ ಅಂಕಣದ 4ನೆಯ ವಿಭಾಗದ ಕಥಾಂಕಣವು ಇದರ ಸೃಷ್ಟಕರ್ತನನ್ನೂ ಒಳಗೊಂಡಿದೆ. [[ಮ್ಯಾಟ್ ಫ್ರ್ಯಾಕ್ಷನ್]] ಬರೆದಿರುವ ಕಥಾಸರಣಿಯ ಬಗ್ಗೆಯೂ ಸುದ್ದಿಗಳು ಹರಡಿವೆ.
==== ಸಣ್ಣ ಕಥೆಗಳು ====
* ಝೋಟ್ರೋಪ್ :[[ಚಾರ್ಲೀ ಡ್ಯೂಕ್ಸ್]] ರವರ ಒಂದು ಪ್ರಾಯೋಗಿಕ ನವ್ಯ ಕಿರುಚಿತ್ರ {{imdb title|id=0343217 |title=Zoetrope (1999)}}. "ಇನ್ ದ ಪೀನಲ್ ಕಾಲೋನಿ"ಯ ಅಳವಡಿಕೆ.
* {{imdb title|id=0356714 |title=The Hunger Artist (2002)}} :ಟಾಮ್ ಗಿಬ್ಬನ್ಸ್ ರವರ ಅನಿಮೇಟೆಡ್ ಸಾಕ್ಷ್ಯಚಿತ್ರ.
* {{imdb title|id=0411641 |title=Menschenkörper (2004)}}<ref>{{de icon}} [http://www.menschenkoerper.de/ ಮೆನ್ಷೆನ್ ಕೋರ್ಪರ್ ಮೂವೀ ವೆಬ್ ಸೈಟ್] www.menschenkoerper.de</ref> "ಎ ಕಂಟ್ರಿ ಡಾಕ್ಟರ್" ನ ಅವತರಣಿಕೆ. ಟೋಬಿಯಾಸ್ ಫ್ರಹ್ಮೋರ್ಗನ್ ರವರು ತೆಗೆದ ಕಿರುಚಿತ್ರ.
* {{imdb title|id=1118665 |title=A Country Doctor (2007)}}"ಎ ಕಂಟ್ರಿ ಡಾಕ್ಟರ್"ನ ಅಳವಡಿಕೆ. ಕೋಜೀ ಯಾಮಾಮೂರಾ ತೆಗೆದ ಕಿರುಚಿತ್ರ.
* ಜೇಕಬ್ ಎಂ. ಅಪ್ಪೆಲ್ ನ ಕಥೆ, "ಹುಳದ ವೃತ್ತಾಂತ," ಸಂಸಾನ ಪಕ್ಕದ ಮನೆಯವರ ದೃಷ್ಟಿಕೋನದಿಂದ ಮಾರ್ಪಾಡಾದ ಕಥೆಯ ಮರುನಿರೂಪಣೆ.<ref>ಇಮೇಜ್, ಸಂಪುಟ 62</ref>
* ವೈಜ್ಞಾನಿಕ ಕಾಲ್ಪನಿಕ ಕಥೆಗಳ ಲೇಖಕ ರೂಡಿ ರಕ್ಕರ್ "ದ 57ತ್ ಫ್ರ್ಯಾನ್ಝ್ ಕಾಫ್ಕ" ಎಂಬ ಶೀರ್ಷಿಕೆ ಹೊತ್ತ ಸಣ್ಣ ಕಥೆಯನ್ನು ಪ್ರಕಟಿಸಿದ್ದಾರೆ; ಇದು ಅವರ ಸಣ್ಣ ಕಥೆಗಳ ಸಂಕಲನದ ಹೊತ್ತಿಗೆಯ ಶೀರ್ಷಿಕೆಯೂ ಹೌದು.
=== ಚಲನಚಿತ್ರಗಳು ಮತ್ತು ಟೆಲಿವಿಷನ್ ===
* ''[[ಕಾಫ್ಕ]]'' (1990) [[ಜೆರೆಮಿ ಐರನ್ಸ್]][[ಸ್ಥಳ/ವ್ಯಕ್ತಿ/ಆವಿಷ್ಕಾರಗಳಿಗೆ ತನ್ನ ಹೆಸರನ್ನು ನೀಡುವಷ್ಟರ ಮಟ್ಟದ ಖ್ಯಾತಿ]]ಹೊಂದಿದೆ ಲೇಖಕರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಥೆ [[ಲೆಮ್ ಡಾಬ್ಸ್]] ಹಾಗೂ ನಿರ್ದೇಶನ [[ಸ್ಟೀವನ್ ಸಾಡೆರ್ಬರ್ಗ್]].ಈ ಚಿತ್ರವು ಅವರ ಜೀವನ ಮತ್ತು ಕಾದಂಬರಿಗಳ ಮಿಶ್ರಕಥಾವಸ್ತುವನ್ನು ಹೊಂದಿದ್ದು ಕಾಫ್ಕರ ಜೀವನ ಮತ್ತು ಕೃತಿಗಳ ಅರೆ-ಜೀವನಚರಿತ್ರೆಯನ್ನು ಮುಂದಿಡುತ್ತದೆ. ತನ್ನ ಸಹೋದ್ಯೋಗಿಗಳೊಬ್ಬರು ಕಾಣೆಯಾದುದರ ಬಗ್ಗೆ ಕಾಫ್ಕ ನಡೆಸುವ ತನಿಖೆ ಸುತ್ತ ಕಥೆ ಹೆಣೆಯಲ್ಪಟ್ಟಿದೆ. ಕಥಾಹಂದರವು ಕಾಫ್ಕರನ್ನು ಕೃತಿಕಾರರ ಕೃತಿಗಳ ಮೂಲಕ ಹಾದುಹೋಗುವಂತೆ ಮಾಡುತ್ತದೆ, ವಿಶೇಷವಾಗಿ ''[[ದ ಕ್ಯಾಸಲ್]]'' ಮತ್ತು ''[[ದ ಟ್ರಯಲ್]]'' ಗಳ ಮೂಲಕ.
* {{imdb title|id=0432858 |title=Franz Kafka (1992)}} : [[ಪಿಯೀಟರ್ ಡ್ಯುಮಾಲಾ]] ರಿಂದ ಒಂದು ಅನಿಮೇಷನ್ ಚಿತ್ರ.
* ''[[ದ ಟ್ರಯಲ್]]'' (1962) [[ಆರ್ಸನ್ ವೆಲ್ಸ್]] ರು ಚಿತ್ರಕಥೆ ಬರೆದು ನಿರ್ದೇಶಿಸಿದ ಈ ಕಥೆಯ ಆಧಾರಿತ ಚಿತ್ರದಲ್ಲಿ [[ಆಂಥೋನಿ ಪರ್ಕಿನ್ಸ್]], [[ಜಿಯನ್ನೆ ಮೋರಿಯಾ]], ಮತ್ತು [[ರೋಮಿ ಸ್ಕ್ನೀಡರ್]] ಅಭಿನಯಿಸಿದ್ದರು. 1962ರ BBC ಸಂದರ್ಶನವೊಂದರಲ್ಲಿ ಹವ್ ವೆಲ್ಡನ್ ರೊಡನೆ ಮಾತನಾಡುತ್ತಾ, ಆರ್ಸನ್ ವೆಲ್ಸ್,"ನೀವು ಏನಾದರೂ ಹೇಳಿಕೊಳ್ಳಿ, ಆದರೆ ''ದ ಟ್ರಯಲ್l'' ನಾನು ತಯಾರಿಸಿದ ಎಲ್ಲಾ ಚಿತ್ರಗಳಿಗಿಂತಲೂ ಉತ್ಕೃಷ್ಟವಾದುದು" ಎಂದರು.
* ''[[ಕ್ಲಾಸೆನ್ವೆರ್ಹಾಲ್ಟ್ನಿಸ್ಸೆ]]'' ''ಕ್ಲ್ಯಾಸ್ ರಿಲೇಷನ್ಸ್'' (1984) ಪ್ರಯೋಗಾತ್ಮಕ ಚಿತ್ರ ನಿರ್ದೇಶಕದ್ವಯಯರಾದ [[ಜೀನ್-ಮೇರಿ ಸ್ಟ್ರಾಬ್]] ಮತ್ತು [[ಡೇನಿಯೆಲೆ ಹ್ಯುಯಿಲ್ಲಿಟ್]] ನಿರ್ದೇಶಿಸಿದ, ಕಾಫ್ಕರ ಕಾದಂಬರಿ ''[[ಅಮೆರಿಕಾ]]'' ಆಧಾರಿತ ಚಿತ್ರ.
* ''[[ದ ಟ್ರಯಲ್]]'' (1993)[[ಕೈಲ್ ಮೆಕ್ಲಾಕ್ಲಾನ್]] ಜೋಸೆಫ್ ಕೆ. ಪಾತ್ರದಲ್ಲಿ ನಟಿಸಿರುವ, [[ಆಂಥೋನಿ ಹಾಪ್ಕಿನ್ಸ್]] ಪಾದ್ರಿಯ ಚಿಕ್ಕ, ಚೊಕ್ಕ ಪಾತ್ರದಲ್ಲಿ ಅಭಿನಯಿಸಿರುವ, ಕಾದಂಬರಿಯ ಯಥಾವತ್ತು ಅಳವಡಿಕೆಯಾದ, ನಾಟಕ ರಚನಕಾರ [[ಹೆರಾಲ್ಡ್ ಪಿಂಟರ್]] ರ ಚಿತ್ರಕಥೆ ಹೊಂದಿರುವ ಚಿತ್ರ.
* ದ ಕ್ಯಾಸಲ್ ನ ಚಲನಚಿತ್ರ ಅವತರಣಿಕೆ{{imdb title|id=0120075 |title=Das Schloß (1997)}} [[ಮೈಕಲ್ ಹನೆಕೆ]]ಯವರಿಂದ. ಮತ್ತಷ್ಟು[[ದಾಸ್ ಸ್ಕ್ಲಾಭ್ (ಚಲನಚಿತ್ರ)]]ದಲ್ಲಿ
* [[MTV]]'ಯ ''[[ಡಾರಿಯಾ]]'' ದಲ್ಲಿನ ಪಾತ್ರಧಾರಿಯಾದ ಡಾರಿಯಾ ತನ್ನ ಶಯ್ಯಾಗೃಹದಲ್ಲಿ ಕಾಫ್ಕರ ಭಿತ್ತಿಚಿತ್ರವನ್ನು ಹೊಂದಿರುತ್ತಾಳೆ. [[ಸೆವೆಂಟೀನ್ ಮ್ಯಾಗಝೈನ್]] ಡಾರಿಯಾಳ ಶಯ್ಯಾಗೃಹದ ಬಗ್ಗೆ ಒಂದು ಲೇಖನವನ್ನು ಬರೆದು, ಈ ಭಿತ್ತಿಚಿತ್ರವನ್ನೂ ಉಲ್ಲೇಖಿಸಿದೆ. ''ಸೆವೆಂಟೀನ್ ಡಾರಿಯಾಳನ್ನು ಅಸ್ತಿತ್ವವಾದಿ ಲೇಖಕ ಪ್ರ್ಯಾನ್ಝ್ ಕಾಫ್ಕ ಅವಳ ಹೀರೋ ಆಗಿರುವನೆಂದು ಕೇಳಿತು. '' ''ಅವಳು "ಆ ವ್ಯಕ್ತಿಯು ಒಬ್ಬ ಮನುಷ್ಯನು ಜಿರಳೆಯಾಗಿ ಬದಲಾಗುವ ಒಂದು ಕಾದಂಬರಿಯನ್ನು ಬರೆದಿದ್ದಾರೆ, ಹಾಗಿದ್ದೂ ಅವರು ಹೀರೋವೇನು ಎಂದು ಕೇಳಬೇಕೇನು?" ಎಂದು ಉತ್ತರವಿತ್ತಳು.''
* [[ಅಡಲ್ಟ್ ಸ್ವಿಮ್]] ನ '' [[ಹೋಂ ಮೂವೀಸ್ (TV ಸರಣಿ)]]'' ಯ ಒಂದು ಕಂತಿನಲ್ಲಿ, ರಾಕ್ ತಂಡ ಸ್ಕ್ಯಾಬ್ ನ ಡ್ಯುಯೇನ್ ಫ್ರ್ಯಾನ್ಝ್ ಕಾಫ್ಕರ ಜೀವನದ ಬಗ್ಗೆ ಒಂದು [[ರಾಕ್ ಒಪೇರಾ]] ಬರೆದರು ಮತ್ತು ಶೀರ್ಷಿಕಾ ಪಾತ್ರದಲ್ಲಿ ತಾವೇ ನಟಿಸಿದರು.
* [[ಸುಡಾ51]]''ದ ಕ್ಯಾಸಲ್'' ಆಧಾರಿತವಾದ "ಕುರಾಯಾಮಿ" ಹೆಸರಿನ ಒಂದು ಆಟವನ್ನು ರೂಪಿಸಲು ಆಲೋಚಿಸುತ್ತಿದೆ.
* ''ಕಾಫ್ಕ ಗೋಸ್ ಟು ದ ಫಾರೆಸ್ಟ್'' (2009) ಒಂದು ಪ್ರಾಯೋಗಿಕ ಕಿರುಚಿತ್ರ; ನಿರ್ದೇಶನ ಡೇನಿಯಲ್ ಮೇಟೋಸ್(/1); ಈ ಚಲನಚಿತ್ರವು ಕಾಫ್ಕರ ಕಡೆಯ ದಿನಗಳ ಆಂತರಿಕ ತುಮುಲಗಳ ಕಾಲ್ಪನಿಕ ಪ್ರಾತಿನಿಧ್ಯವಾಗಿದೆ.
==== ಮೆಟಮಾರ್ಫಾಸಿಸ್ ====
* {{imdb title|id=0174019|title=Die Verwandlung}}
* {{imdb title|id=0074561|title=Förvandlingen}}
* {{imdb title|id=0076389|title=The Metamorphosis of Mr. Samsa}}, ಒಂದು ಅನಿಮೇಟೆಡ್ ಪುಟ್ಟದು, ತೆಗೆದವರು [[ಕ್ಯಾರೋಲಿನ್ ಲೀಫ್]]
* {{imdb title|id=0093530|title=Metamorphosis}}
* ''ಫ್ರ್ಯಾನ್ಝ್ ಕಾಫ್ಕರ 'ಇಟ್ಸ್ ಎ ವಂಡರ್ ಫುಲ್ ಲೈಫ್' '' (1993) ಒಂದು [[ಆಸ್ಕರ್]]-ಪ್ರಶಸ್ತಿ ವಿಜೇತ ಕಿರುಚಿತ್ರವಾಗಿದ್ದು, ಇದರ ಕಥೆ ಹಾಗೂ ನಿರ್ದೇಶನ [[ಪೀಟರ್ ಕಪಾಲ್ಡಿ]]ಯವರದಾಗಿತ್ತು ಮತ್ತು ಪಾತ್ರವರ್ಗದಲ್ಲಿ [[ರಿಚರ್ಡ್ ಇ. ಗ್ರ್ಯಾಂಟ್]] ಕಾಫ್ಕರ ಪಾತ್ರ ವಹಿಸಿದ್ದರು. ಈ ಚಿತ್ರವು ''[[ದ ಮೆಟಮಾರ್ಫಾಸಿಸ್]]'' ನೊಂದಿಗೆ[[ಫ್ರ್ಯಾಂಕ್ ಕ್ಯಾಪ್ರಾ]]ರವರ ''[[ಇಟ್ಸ್ ಎ ವಂಡರ್ ಫುಲ್ ಲೈಫ್]]'' ಅನ್ನೂ ಹದವಾಗಿ ಮೇಳೈಸಿದೆ.
* ''[http://www.carlosatanes.com/metamorphosis_franz_kafka_online.html ದ ಮೆಟಮಾರ್ಫಾಸಿಸ್ ಆಫ್ ಫ್ರ್ಯಾನ್ಝ್ ಕಾಫ್ಕ (1993)] {{Webarchive|url=https://web.archive.org/web/20090915181326/http://www.carlosatanes.com/metamorphosis_franz_kafka_online.html |date=2009-09-15 }}'' ಲೇಖಕ [[ಕಾರ್ಲೋಸ್ ಅಟಾನೆಸ್]].
* {{imdb title|id=0328279 |title=Prevrashcheniye}}
* {{imdb title|id=0463603 |title=Metamorfosis}}
=== ರಂಗಭೂಮಿ ===
* [[ಅಲನ್ ಬೆನೆಟ್]], ''[[ಕಾಫ್ಕ'ಸ್ ಡಿಕ್]]'', 1986, ಈ ನಾಟಕದಲ್ಲಿ ಕಾಫ್ಕ, ಅವರ ತಂದೆ ಹರ್ಮನ್, ಮತ್ತು ಮ್ಯಾಕ್ಸ್ ಬ್ರಾಡ್ ಒಬ್ಬ ಆಂಗ್ಲ ವಿಮಾ ಗುಮಾಸ್ತ(ಮತ್ತು ಕಾಫ್ಕರ ಅಭಿಮಾನಿ) ಹಾಗೂ ಅವನ ಪತ್ನಿ ಇರುವ ಮನೆಗೆ ಬರುತ್ತಾರೆ.
* [[ಮಿಲಾನ್ ರಿಕ್ಟರ್]], ''[[ಕಾಫ್ಕ'ಸ್ ಹೆಲ್-ಪ್ಯಾರಡೈಸ್]]'', 2006, 5 ಪಾತ್ರಧಾರಿಗಳಿರುವ ಈ ನಾಟಕವು, ಕಾಫ್ಕರ ಸಾರೋಕ್ತಿಗಳು, ಕನಸುಗಳನ್ನು ಬಳಸಿ ಕಾಫ್ಕರ ತಂದೆಯೊಡನೆಯ ಯಾಗೂ ಹೆಣ್ಣುಗಳೊಂದಿಗಿನ ಸಂಬಂಧವನ್ನು ಮರು-ಉಲ್ಲೇಖಿಸುತ್ತದೆ. ಸ್ಲೋವಾಕ್ ನಿಂದ ಅನುವಾದ ಮಾಡಿದವರು ಎವಾಲ್ಡ್ ಓಸರ್ಸ್.
* [[ಮಿಲಾನ್ ರಿಕ್ಟರ್]], ''[[ಕಾಫ್ಕಸ್ ಸೆಕೆಂಡ್ ಲೈಫ್]]'', 2007, ಹದಿನೇಳು ಪಾತ್ರಧಾರಿಗಳನ್ನು ಹೊಂದಿರುವ ಈ ನಾಟಕವು ಕಾಫ್ಕ ಮರಣ ಹೊಂದಿದ ಕಿಯರ್ಲಿಂಗ್ ನಲ್ಲಿ ಆರಂಭವಾಗಿ 1961ರ ಪ್ರೇಗ್ ನಲ್ಲಿ ಕೊನೆಗೊಳ್ಳುತ್ತದೆ. ಸ್ಲೋವಾಕ್ ನಿಂದ ಅನುವಾದ ಎವಾಲ್ಡ್ ಆಸರ್ಸ್ ರಿಂದ.
* [[ಟಾಡ್ಯೂಸ್ಝ್ ರೋಝೆವಿಕ್ಸ್]], ''ಪುಲಪ್ಕ'' (''ದ ಟ್ರ್ಯಾಪ್'' ), 1982, ಕಾಫ್ಕರ ಡೈರಿಗಳು ಮತ್ತು ಪತ್ರಗಳ ಮೇಲೆ ಕೊಂಚಮಟ್ಟಿಗೆ ಆಧಾರಿತವಾದ ನಾಟಕ.
=== ಸಂಗೀತ ===
* ಹಂಗೇರಿಯ ಸಂಕಲನಕಾರ [[ಗಿಯೋಗಿ ಕುರ್ಟಾಗ್]] ಕಾಫ್ಕರ ಡೈರಿ ಮತ್ತು ಪತ್ರಗಳ ತುಣುಕುಗಳನ್ನು ಬಳಸಿ ಸೋಪ್ರಾನೋ ಮತ್ತು ವಾಯ್ಲನ್ ಗೆ ಒಂದು ಗೀತೆಯನ್ನು ರಚಿಸಿದರು: ''ಕಾಫ್ಕ-ಫ್ರ್ಯಾಗ್ಮೆಂಟರ'', Op. 24, 1985.
* ರಷ್ಯಾದ [[ಹಿಪ್ ಹಾಪ್]] ತಂಡ [[:ru:2H Company|2H ಕಂಪನಿ]] refers to ''ದ ಮೆಟಮಾರ್ಪಾಸಿಸ್'' ಅನ್ನು ಪ್ರಾಯಶಃ ತನ್ನ ಅತ್ಯಂತ ಪ್ರಸಿದ್ಧವಾದ ಹಾಡಾದ "ಅಡಾಪ್ಟೇಷನ್" ನಲ್ಲಿ ಉಲ್ಲೇಖಿಸುತ್ತದೆ. ಆ ಹಾಡಿನ ಪ್ರಮುಖ ನಾಯಕನು ನಾವೆಲ್ಲಾವನ್ನು(ಕಿರುಕಾದಂಬರಿಯನ್ನು) ಮಲಗುವ ಮುನ್ನ ಓದಿದನು, ನಂತರ ಎಲ್ಲಾ ಮನುಷ್ಯರ ದೇಹಗಳೂ ಮಾರ್ಪಾಡಾದಂತಹ ಕನಸು ಕಂಡನು.
* ಆಸ್ಟ್ರೇಲಿಯಾದ ತಂಡ [[ಲಾಸ್ಟ್ ವ್ಯಾಲೆಂಟಿನೋಸ್]] ತಾವು ರಚಿಸಿದ "ಕಾಫ್ಕ" ಹಾಡನ್ನು, "ದ ವ್ಯಾಲೆಂಟಿನೋಸ್" ಎಂಬ ಶೀರ್ಷಿಕೆಯಡಿಯಲ್ಲಿ 2005 EP ರಿಲೀಸ್ ನಲ್ಲಿ ಬಿಡುಗಡೆಮಾಡಿದರು. "ಕಾಫ್ಕ" ಗೀತೆಯು(ಟ್ರ್ಯಾಕ್) ಕಾಫ್ಕರ ಮರಣದ ಬಗ್ಗೆ ದೊರೆತ ಮಾಹಿತಿಯನ್ನು ನೈರಾಶ್ಯದ ಕುರುಹಾಗಿ ಮತ್ತು ಒಂದು ಸಂಬಂಧದ ಪತನವಾದಾಗ ಉಂಟಾಗುವ ಆಶಾಹೀನ ಅಸಹಾಯಕತೆಯನ್ನು ಬಿಂಬಿಸುತ್ತದೆ.
* (0}ಜೇಸನ್ ವೆಬ್ಲಿಯವರ ಹಾಡಾದ "ಇಲೆವೆನ್ ಸೇಂಟ್ಸ್" ನಲ್ಲಿ ಕಾಫ್ಕರು ಹಾಡಿನ ಸಾಲುಗಳಲ್ಲಿ ಉಲ್ಲೇಖಿತರಾಗುತ್ತಾರೆ, "...ವಿ ಆರ್ ಜಸ್ಟ್ ಸಿಟಿಂಗ್ ಬೈ ದ ಟ್ರೈನ್ ಟ್ರ್ಯಾಕ್ಸ್ ರೀಡಿಂಗ್ ಕಾಫ್ಕ ಟು ದ ಸ್ಕೈ,".
* [[ಜೋಸೆಫ್ ಟಾಲ್]] ರ ಕಡೆಯ ಅಪೆರಾ ಆದ ಜೋಸೆಫ್(1993), ಭಾಗಶಃ ಫ್ರ್ಯಾನ್ಝ್ ಕಾಫ್ಕರಿಂದ ಪ್ರಭಾವಿತವಾಗಿದೆ [http://www.iamic.net/news/israel/josef-tal-%E2%80%93-memoriam ಜೋಸೆಫ್ ಟಾಲ್ – ಇನ್ ಮೆಮೋರಿಯಂ] {{Webarchive|url=https://web.archive.org/web/20110723150217/http://www.iamic.net/news/israel/josef-tal-%E2%80%93-memoriam |date=2011-07-23 }}
* ಅಮೆರಿಕದ [[ಲೋ-ಫೈ]] ತಂಡ {1ಗ್ಲ್ಯಾಸ್ ಗ್ರೇವ್ಸ್{/1} ಕಾಫ್ಕರ ಬರಹಗಳನ್ನು ಓದಿರುವುದರ ಬಗ್ಗೆ "ದ ಟ್ವಿನ್"ಎಂಬ ಹಾಡಿನಲ್ಲಿ ಉಲ್ಲೇಖಿಸುತ್ತದೆ; ಇದು [[2010]]ರಲ್ಲಿ ಬಿಡುಗಡೆಯಾದ ಆರ್ಕಿಟೆಕ್ಚರ್ ಎಂಬ ರೆಕಾರ್ಡ್ ನಲ್ಲಿ ಲಭ್ಯವಿದೆ.
== ಇವನ್ನೂ ನೋಡಿ ==
* [[ಆಸ್ಟರಾಯ್ಡ್]] [[3412 ಕಾಫ್ಕ]], ಲೇಖಕರ ಹೆಸರನ್ನೇ ಅದಕ್ಕೆ ಇರಿಸಲಾಗಿದೆ.
* [[ಫ್ರ್ಯಾನ್ಝ್ ಕಾಫ್ಕ ಬಹುಮಾನ]]
== ಆಕರಗಳು ==
{{reflist|2}}
== ಗ್ರಂಥಸೂಚಿ ==
* ಅಡೋರ್ನೋ, ಥಿಯೋಡರ್. ''ಪ್ರಿಸಮ್ಸ್'' ಕೇಂಬ್ರಿಡ್ಜ್: MIT ಪ್ರೆಸ್, 1967.
* ಬಾನಕರ್, ರೆಝಾ. "ಇನ್ ಸರ್ಚ್ ಆಫ್ ಹೀಮಟ್: ಎ ನೋಟ್ ಆನ್ ಫ್ರ್ಯಾನ್ಝ್ ಕಾಫ್ಕಾಸ್ ಕಾನ್ಸೆಪ್ಟ್ ಆಫ್ ಲಾ". ಫೋರ್ತ್ಕಮಿಂಗ್ ಇನ್ ಲಾ ಅಂಡ್ ಲಿಟರೇಚರ್ ಸಂಪುಟ 22, 2010. [http://papers.ssrn.com/sol3/papers.cfm?abstract_id=1574870 ]
* ಕಾರ್ನ್ ಗೋಲ್ಡ್, ಸ್ಟ್ಯಾನ್ಲೀ. ''ಇಂಟ್ರೊಡಕ್ಷನ್ ಟು ದ ಮೆಟಮಾರ್ಫಾಸಿಸ್''. ಬಂತಮ್ ಕ್ಲ್ಯಾಸಿಕ್ಸ್, 1972. ISBN 0-7922-7391-5.
* ಹಮಾಲಿಯನ್, ಲಿಯೋ, ಸಂಪಾದಕ ''ಫ್ರ್ಯಾನ್ಝ್ ಕಾಫ್ಕ: ಎ ಕಲೆಕ್ಷನ್ ಆಫ್ ಕ್ರಿಟಿಸಿಸಂ''. ನ್ಯೂಯಾರ್ಕ್: ಮೆಕ್ಗ್ರಾ-ಹಿಲ್:1. ISBN 0-471-80580-7.
* ಹೆಲೆರ್, ಪಾಲ್. ''ಫ್ರ್ಯಾನ್ಝ್ ಕಾಫ್ಕ: ವಿಸೆನ್ಷಾಫ್ಟ್ ಉಂಡ್ ವಿಸೆನ್ಷಾಫ್ಟ್ಸ್ ಕ್ರಿಟಿಕ್''. ಟ್ಯೂಬಿಂಜೆನ್: ಸ್ಟಾಫ್ಫೆನ್ ಬರ್ಗ್, 1989. ISBN 3-85052-197-4.
* ಕಾಫ್ಕ, ಫ್ರ್ಯಾನ್ಝ್. ''ದ ಮೆಟಮಾರ್ಪಾಸಿಸ್ ಎಂಡ್ ಅದರ್ ಸ್ಟೋರೀಸ್''. ಅನುವಾದ ಡೊನ್ನಾ ಫ್ರೀಡ್. ನ್ಯೂ ಯಾರ್ಕ್: ಬಾರ್ನ್ಸ್& ನೋಬಲ್, 1996. ISBN 1-85158-833-7.
* ಕಾಫ್ಕ, ಫ್ರ್ಯಾನ್ಝ್. ''ಕಾಫ್ಕ'ಸ್ ಸೆಲೆಕ್ಟೆಸ್ ಸ್ಟೋರೀಸ್''. ನಾರ್ಟನ್ ಕ್ರಿಟಿಕಲ್ ಆವೃತ್ತಿ. ಅನುವಾದ ಸ್ಟ್ಯಾನ್ಲೀ ಕಾರ್ನ್ ಗೋಲ್ಡ್. ನ್ಯೂ ಯಾರ್ಕ್: ನಾರ್ಟನ್, 2005. ISBN 0-7910-6772-6
* ಬ್ರಾಡ್, ಮ್ಯಾಕ್ಸ್. ''ಫ್ರ್ಯಾನ್ಝ್ ಕಾಫ್ಕ: ಎ ಬಯಾಗ್ರಫಿ.'' ನ್ಯೂ ಯಾರ್ಕ್: ಡಾ ಕ್ಯಾಪೋ ಪ್ರೆಸ್, 1995. ISBN 0-385-49062-3
* ಬ್ರಾಡ್, ಮ್ಯಾಕ್ಸ್. ''ದ ಬಯಾಗ್ರಫಿ ಆಫ್ ಫ್ರ್ಯಾನ್ಝ್ ಕಾಫ್ಕ'', ಜರ್ಮನ್ ನಿಂದ ಅನುವಾದ ಮಾಡಿದವರು ಜಿ. ಹಂಫ್ರೇಸ್ ರಾಬರ್ಟ್ಸ್. ಲಂಡನ್: [[ಸೆಕ್ಕರ್ & ವಾರ್ಬರ್ಗ್]], 1947. {{OCLC|2771397}}
* ಕಲಾಸ್ಸೋ, ರಾಬರ್ಟೋ. ''ಕೆ.'' ಕ್ನಾಪ್ಫ್, 2005. ISBN 1-59474-023-2
* [[ಸಿಟಾಟಿ, ಪಿಯೆಟ್ರೋ]], ''ಕಾಫ್ಕ'', 1987. ISBN 0-471-80580-7.
* ಕೂಟ್ಸ್, ಸ್ಟೀವ್. ''ಫ್ರ್ಯಾನ್ಝ್ ಕಾಫ್ಕ (ಆರಂಭಿಕ ಕೈಪಿಡಿ)''. ಹೆಡ್ವೇ, 2002, ISBN 0-340-84648-8
* [[ಡೆಲ್ಯೂಝೆ, ಗಿಲ್ಲೆಸ್]] & [[ಫೆಲಿಕ್ಸ್ ಗಾಟ್ಟಾರಿ]]. ''ಕಾಫ್ಕ: ಟುವರ್ಡ್ ಎ ಮೈನರ್ ಲಿಟರೇಚರ್ (ಸಾಹಿತ್ಯದ ಸಿದ್ಧಂತ ಮತ್ತು ಚರಿತ್ರೆ, ಸಂಪುಟ 30).'' ಮಿನ್ನಿಯಾಪೋಲಿಸ್, ಮಿನ್ನೆಸೊಟಾ ವಿಶ್ವವಿದ್ಯಾಲಯ, 1986. ISBN 0-674-44301-2
* ಡಾಂಟಾ, ಕ್ರಿಸ್. "[[ಸಾರಾ]]'ಸ್ ಲಾಫ್ಟರ್: ಕಾಫ್ಕ'ಸ್ [[ಅಬ್ರಹಾಮ್]]" ಇ್ನ ''[[ಮಾಡ್ರನಿಸಂ/ಮಾಡ್ರನಿಟಿ]]'' ದಲ್ಲಿ 15:2 ([http://muse.jhu.edu/journals/modernism-modernity/toc/mod15.2.html ] ಏಪ್ರಿಲ್ 2008), 343–59.
* ಗ್ಲಾಟ್ಝರ್, ನಾಹುಮ್ ಎನ್., ''ದ ಲವ್ಸ್ ಆಫ್ ಫ್ರಾನ್ಝ್ ಕಾಫ್ಕ''. ನ್ಯೂ ಯಾರ್ಕ: ಸ್ಖಾಕ್ಕೆನ್ ಬುಕ್ಸ್, 1986. ISBN 0-674-44301-2
* ಗ್ರೀನ್ ಬರ್ಗ್, ಮಾರ್ಟಿನ್, ''ದ ಟೆರರ್ ಆಫ್ ಆರ್ಟ್: ಕಾಫ್ಕ ಎಂಡ್ ಮಾಡರ್ನ್ ಲಿಟರೇಚರ್''. ನ್ಯೂ ಯಾರ್ಕ್, ಬೇಸಿಕ್ ಬುಕ್ಸ್, 1968. ISBN 0-06-095339-X
* ಗಾರ್ಡಿಮರ್, ನಡೈನ್ (1984). ''ಸಂಥಿಂಗ್ ಔಟ್ ದೇರ್'' ನಲ್ಲಿ "ಲೆಟರ್ ಫ್ರಂ ಹಿಸ್ ಫಾದರ್", ಲಂಡನ್, ಪೆಂಗ್ವಿನ್ ಬುಕ್ಸ್. ISBN 0-595-20284-5.
* ಹೇಮನ್, ರೊನಾಲ್ಡ್. ''ಕೆ, ಎ ಬಯಾಗ್ರಫಿ ಆಫ್ ಕಾಫ್ಕ''. ಲಂಡನ್: ಫೀನಿಕ್ಸ್ ಪ್ರೆಸ್, 2001.ISBN 974-8496-78-3.
* ಜ್ಯಾನೌಚ್, ಗುಸ್ಟಾವ್. ''ಕಾನ್ವರ್ಸೇಷನ್ಸ್ ವಿತ್ ಕಾಫ್ಕ''. ನ್ಯೂ ಯಾರ್ಕ್: ನ್ಯೂ ಡೈರೆಕ್ಷನ್ಸ್ ಬುಕ್ಸ್, ಎರಡನೆಯ ಆವೃತ್ತಿ 1971. (ಅನುವಾದಕರು ಗೊರೋನ್ವಿ ರೀಸ್.)ISBN 0-06-095339-X
* ಮರ್ರೇ, ನಿಕೋಲಸ್. ''ಕಾಫ್ಕ.'' ನ್ಯೂ ಹ್ಯಾವನ್: ಯೇಲ್, 2004.
* ಪವೆಲ್, ಅರ್ನ್ಸ್ಟ್. ''ದ ನೈಟ್ ಮೇರ್ ಆಫ್ ರೀಸನ್: ಎ ಲೈಫ್ ಆಫ್ ಫ್ರ್ಯಾನ್ಝ್ ಕಾಫ್ಕ.'' ನ್ಯೂ ಯಾರ್ಕ್: ವಿಂಟೇಜ್ ಬುಕ್ಸ್, 1985. ISBN 0-7922-7391-5.
* ಥಿಹರ್, ಅಲೆನ್ (ಸಂಪಾದಕ). ''ಫ್ರ್ಯಾನ್ಝ್ ಕಾಫ್ಕ: ಎ ಸ್ಟಡಿ ಆಫ್ ದ ಷಾರ್ಟ್ ಫಿಕ್ಷನ್ '' ( ಟ್ವೇಯ್ನ್ ರ ಸಣ್ಣ ಕಲ್ಪಿತ ಕಥೆಗಳ ಅಧ್ಯಯನ, ಸಂಖ್ಯೆ. 12). ISBN 0-471-80580-7.
* ಫಿಲಿಪ್ ಝಾರ್ಡ್: ''ಲಾ ಫಿಕ್ಷನ್ ಡಿ ಎಲ್'ಓಕ್ಸಿಡಂಟ್ : ಥಾಮಸ್ ಮ್ಯಾನ್ನ್, ಫ್ರ್ಯಾನ್ಝ್ ಕಾಫ್ಕ, ಆಲ್ಬರ್ಟ್ ಕೊಹೆನ್'', ಪ್ಯಾರಿಸ್, P.U.F., 1999.
* ಫಿಲಿಪ್ ಝಾರ್ಡ್ (ಸಂಪಾದಕ) : ''ಸಿಲ್ಲೇಜ್ ಡಿ ಕಾಫ್ಕ'', ಪ್ಯಾರಿಸ್, ಲೆ ಮ್ಯಾನುಸ್ಕ್ರಿಪ್ಟ್, 2007, ISBN 2-7481-8610-9.
* ಝಿಯೋಲ್ಕೋವ್ಸ್ಕಿ, ಥಿಯೋಡೋರ್, ದ ಮಿರರ್ ಆಫ್ ಜಸ್ಟಿಸ್: ಲಿಟರರಿ ರಿಫ್ಲೆಕ್ಷನ್ಸ್ ಆಫ್ ಲೀಗಲ್ ಕ್ರೈಸಿಸ್. ಪ್ರಿನ್ಸ್ ಟನ್, ಪ್ರಿನ್ಸ್ ಟನ್ ವಿಶ್ವವಿದ್ಯಾಲಯ ಮುದ್ರಣಾಲಯ, 2003 (ಮೊದಲ ಆವೃತ್ತಿ 1997)
== ಬಾಹ್ಯ ಕೊಂಡಿಗಳು ==
{{sisterlinks|s=Author:Franz Kafka}}
* {{PND|118559230}}
* {{gutenberg author| id=Franz+Kafka | name=Franz Kafka}}
* {{imdb name|0434525}}
* [http://kafka-metamorphosis.wikispaces.com/ ಕಾಫ್ಕ-ಮೆಟಮಾರ್ಫಾಸಿಸ್] {{Webarchive|url=https://web.archive.org/web/20121120015907/http://kafka-metamorphosis.wikispaces.com/ |date=2012-11-20 }} ಕಾಫ್ಕ ಮತ್ತು ಅವರ ಕೃತಿಗಳಿಗೆ ಬದ್ಧವಾದ ಸಾರ್ವಜನಿಕ ವಿಕಿ
* [http://www.kafka.org/ ದ ಕಾಫ್ಕ ಪ್ರಾಜೆಕ್ಟ್] {{Webarchive|url=https://web.archive.org/web/20201206132133/http://www.kafka.org/ |date=2020-12-06 }} ಕಾಫ್ಕರ ಜರ್ಮನ್ ಭಾಷೆಯ ಎಲ್ಲಾ ಕೃತಿಗಳನ್ನೂ ಆನ್ ಲೈನ್ ಪ್ರಕಟಿಸುವ ಯೋಜನೆ
* [http://books.guardian.co.uk/news/articles/0,,2289734,00.html ಎಂಡ್ ಆಫ್ ಕಾಫ್ಕಾಯಿಸ್ಕ್ ನೈಟ್ಮೇರ್: ಬರಹಗಾರರ ಪತ್ರಗಳು ಕಡೆಗೂ ಬೆಳಕನ್ನು ಕಂಡವು]
* [http://www.kafkasocietyofamerica.org/ ಕಾಫ್ಕ ಸೊಸೈಟಿ ಆಫ್ ಅಮೆರಿಕ]
* [http://www.kafka-gesellschaft.de/ ಡ್ಯೂಟ್ಷೆ ಕಾಫ್ಕ-ಜೆಸೆಲ್ಷಾಫ್ಟ್]
* [http://www.franzkafka-soc.cz/index.php?action=view&page=cnakladatelstvi ಸ್ಪೊಲೆಕ್ನಾಸ್ಟ್ ಫ್ರಾನ್ಝೆ ಕಾಫ್ಕಿ ಅ ನಕ್ಲಡಟೆಲ್ಸ್ ಟ್ವಿ ಫ್ರಾನ್ಝೆ ಕಾಫ್ಕಿ] {{Webarchive|url=https://web.archive.org/web/20170630120310/http://www.franzkafka-soc.cz/index.php?action=view&page=cnakladatelstvi |date=2017-06-30 }} ಪ್ರೇಗ್ ನ ಫ್ರ್ಯಾನ್ಝ್ ಕಾಫ್ಕ ಸಂಘ ಮತ್ತು ಪ್ರಕಟಣಾ ಗೃಹ
* [http://www.kafka-research.ox.ac.uk/ ಆಕ್ಸ್ ಫರ್ಡ್ ಕಾಫ್ಕ ರಿಸರ್ಚ್ ಸೆಂಟರ್] – ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಕಾಫ್ಕ ಸಂಶೋಧನೆಯ ಬಗ್ಗೆ ಮಾಹಿತಿ
* [http://www.franzkafka.info/ ಜರ್ನೀಸ್ ಆಫ್ ಫ್ರ್ಯಾನ್ಝ್ ಕಾಫ್ಕ] ಕಾಫ್ಕ ಇದ್ದ ಮತ್ತು ಕೆಲಸ ಮಾಡಿದ ಸ್ಥಳಗಳ ಚಿತ್ರಗಳು
* [http://www.alicewhittenburg.com/kafka_prague/kafka_home.html ಫೈಂಡಿಂಗ್ ಕಾಫ್ಕ ಇನ್ ಪ್ರೇಗ್] {{Webarchive|url=https://web.archive.org/web/20120821210156/http://www.alicewhittenburg.com/kafka_prague/kafka_home.html |date=2012-08-21 }} ಇಂದಿನ ಪ್ರೇಗ್ ನಲ್ಲಿ ಕಾಫ್ಕರನ್ನು ಕಾಣುವ ಯತ್ನ
{{Normdaten|LCCN=n/81/063091}}
{{kafka}}
{{Kafka adaptations}}
{{Persondata <!-- Metadata: see [[Wikipedia:Persondata]] -->
|NAME=Kafka, Franz
|ALTERNATIVE NAMES=
|SHORT DESCRIPTION=German Czech novelist
|DATE OF BIRTH={{birth date|df=yes|1883|7|3}}
|PLACE OF BIRTH=[[Prague]], [[Austria-Hungary]]
|DATE OF DEATH={{death date|df=yes|1924|6|3}}
|PLACE OF DEATH=[[Vienna]], Austria
}}
{{DEFAULTSORT:Kafka, Franz}}
{{Interwikineeded}}
[[ವರ್ಗ:೧೮೮೩ ಜನನ]]
[[ವರ್ಗ:1924ರಲ್ಲಿ ಗತಿಸಿದವರು]]
[[ವರ್ಗ:ಪ್ರೇಗ್ ನ ಜನಗಳು]]
[[ವರ್ಗ:ಆಷ್ಕೆನಾಝಿ ಯಹೂದಿಗಳು]]
[[ವರ್ಗ:ಆಸ್ಟ್ರಿಯಾದ ಕಾದಂಬರಿಕಾರರು]]
[[ವರ್ಗ:ಚಾರ್ಲ್ಸ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ]]
[[ವರ್ಗ:ಝೆಕಾಸ್ಲೋವಾಕಿಯಾ-ಆಸ್ಟ್ರಿಯಾದ ಯಹೂದಿಗಳು]]
[[ವರ್ಗ:ಝೆಕಾಸ್ಲೋವಾಕಿಯಾದ ಕಾದಂಬರಿಕಾರರು]]
[[ವರ್ಗ:ಕ್ಷಯದಿಂದ ಸಂಭವಿಸಿದ ಮರಣಗಳು]]
[[ವರ್ಗ:ಫ್ಯಾಬುಲಿಸ್ಟ್ ಗಳು]]
[[ವರ್ಗ:ಫ್ರ್ಯಾನ್ಝ್ ಕಾಫ್ಕ]]
[[ವರ್ಗ:ಝೆಕ್ ಕ್ರಾಂತಿಕಾರರು]]
[[ವರ್ಗ:ಝೆಕ್ ಸಮಾಜವಾದಿಗಳು]]
[[ವರ್ಗ:ಝೆಕ್ ಡೈರಿ ಬರೆಯುವ ಜನಗಳು]]
[[ವರ್ಗ:ಜರ್ಮನ್ ಭಾಷೆಯ ಲೇಖಕರು]]
[[ವರ್ಗ:ಆಸ್ಟ್ರಿಯಾದಲ್ಲಿ ಸಂಭವಿಸಿದ ಸೋಂಕು ತಗುಲಿದ ರೋಗದಿಂದ ಸಂಭವಿಸಿದ ಮರಣಗಳು]]
[[ವರ್ಗ:ಯಹೂದಿ ಕ್ರಾಂತಿಕಾರಿಗಳು]]
[[ವರ್ಗ:ಯಹೂದಿ ಕಾದಂಬರಿಕಾರರು]]
[[ವರ್ಗ:ಮಾಂತ್ರಿಕ ನೈಜತೆಯ ಬರಹಗಾರರು]]
[[ವರ್ಗ:ಅಸ್ತಿತ್ವವಾದಿ ಯಹೂದಿಗಳು]]
[[ವರ್ಗ:ಝೆಕ್-ಆಸ್ಟ್ರೋ-ಹಂಗೇರಿಯ ಜನಗಳು]]
[[ವರ್ಗ:20ನೆಯ ಶತಮಾನದ ಕಾದಂಬರಿಕಾರರು]]
[[ವರ್ಗ:ಸಾಹಿತಿಗಳು]]
[[ವರ್ಗ:ಆಧುನಿಕತಾ ಸಿದ್ಧಾಂತ]]
h7x8sr3ihgk0rrb9ohabm7dtz901gox
ಬಾಕ್ಸಿಂಗ್ ಡೇ
0
29946
1375859
1355173
2026-06-26T09:30:15Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1375859
wikitext
text/x-wiki
{{Infobox Holiday
| holiday_name = Boxing Day
| type = Bank Holiday / Public Holiday bd
| longtype = [[Bank holiday]] / [[Public holiday]]
| image =
| caption =
| observedby = some members and former members of the [[Commonwealth of Nations]]
| date = 26 December - Bank or public holiday<br>(or 28 December - public holiday only)
| relatedto = [[St. Stephen's Day]]
}}
ಈ '''ಬಾಕ್ಸಿಂಗ್ ಡೇ''' ಎನ್ನುವುದು ಒಂದು ಬ್ಯಾಂಕ್ ಅಥವಾ ಸಾರ್ವಜನಿಕ ರಜಾದಿನವಾಗಿದೆ.ಇದನ್ನು ಪ್ರತಿ ಡಿಸೆಂಬರ್ ೨೬ ರಂದು ಘೋಷಿಸಲಾಗುತ್ತದೆ.ಅಥವಾ ಕ್ರಿಸ್ಮಸ್ ಡೇ ಆಚರಣೆಯ ಮೊದಲ ಅಥವಾ ಎರಡನೆಯ ವಾರದ ದಿನವಾಗಿರುತ್ತದೆ.ಇದನ್ನು ಕೂಡಾ ಆಯಾ ರಾಷ್ಟ್ರೀಯ ಅಥವಾ ಪ್ರಾದೇಶಿಕ ಕಾನೂನುಗಳನ್ನು ಅವಲಂಬಿಸಿ ಘೋಷಿಸಲಾಗುತ್ತದೆ. ಇದನ್ನು [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]], [[ಕೆನಡಾ]], [[ನ್ಯೂ ಜೀಲ್ಯಾಂಡ್|ನ್ಯುಜಿಲೆಂಡ್]], ದಿ [[ಯುನೈಟೆಡ್ ಕಿಂಗ್ಡಮ್|ಯುನೈಟೆಡ್ ಕಿಂಗ್ಡಮ್]] ಮತ್ತು ಇನ್ನುಳಿದ ಕೆಲವು ಕಾಮನ್ ವೆಲ್ತ್ ದೇಶಗಳು ಜಾರಿಗೊಳಿಸಿ ಆಚರಿಸುತ್ತವೆ. ಐರ್ಲೆಂಡ್ ನಲ್ಲಿ ಇದನ್ನು ಸೇಂಟ್ ಸ್ಟಿಫನ್ಸ ಡೇ ಎಂದು ಗುರ್ತಿಸಲಾಗುತ್ತದೆ.ಅಥವಾ ಡೇ ಆಫ್ ದಿ ರೆನ್ ಎಂದೂ ಕರೆಯಲಾಗುತ್ತದೆ.({{Lang-ga|Lá an Dreoilín}}) [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದಲ್ಲಿ]] ಬಾಕ್ಸಿಂಗ್ ಡೇಯನ್ನು, ಡೇ ಆಫ್ ಗುಡ್ ಉಯಿಲ್ ಎಂದು ೧೯೯೪ರಲ್ಲಿ ಮರುನಾಮಕರಣ ಮಾಡಲಾಗಿದೆ. ಐತಿಹಾಸಿಕವಾಗಿ ಇದನ್ನು ದಿ ಸೆಕೆಂಡ್ ಡೇ ಆಫ್ ಕ್ರಿಸ್ಮಸ್ ಎಂದು ಆಚರಿಸಲಾಗುತ್ತದೆ.(''೨. '' ಈ ''Weihnachtsfeiertag'' ) ಆಚರಣೆಯನ್ನು ಹಳೆಯ ಪೂರ್ವ ಜರ್ಮನಿಯಲ್ಲಿ ಆಚರಿಸಲಾಗುತ್ತದೆ.
ಇಲ್ಲಿ ಅದೇ ತೆರನಾದ ಶಾಸನ-ದಿ ಬ್ಯಾಂಕ್ ಹಾಲಿಡೇಸ್ ಆಕ್ಟ್ ೧೮೭೧ -ಇದನ್ನು ಮೂಲದಲ್ಲಿ ಇಡೀ UKದಾದ್ಯಂತ ರಜಾದಿನ ಎಂದು ಪರಿಗಣನೆ ಮಾಡಲಾಗುತ್ತದೆ.ಹೀಗೆ ಕ್ರಿಸ್ಮಸ್ ದಿನದ ನಂತರದ ದಿನವನ್ನು ಬಾಕ್ಸಿಂಗ್ ಡೇ ಎಂದು ಇಂಗ್ಲೆಂಡ್, [[ಸ್ಕಾಟ್ಲಂಡ್|ಸ್ಕಾಟ್ ಲೆಂಡ್]] ಮತ್ತು ವೇಲ್ಸ್, ಅದಲ್ಲದೇ ಅದನ್ನು ಐರ್ಲೆಂಡ್ ನಲ್ಲಿ ದಿ ಸೇಂಟ್ ಸ್ಟಿಫನ್ಸ್ ನ ಹಬ್ಬದ ದಿನ ಎಂದು ಆಚರಿಸಲಾಗುತ್ತದೆ.<ref name="Directgov" /> ಈ 'ರಜಾದಿನ ಡಿಸೆಂಬರ್ ೨೬ ರ ಪರ್ಯಾಯ ರಜಾ ದಿನ'ವನ್ನು ಉತ್ತರ ಐರ್ಲೆಂಡ್ ನಲ್ಲಿ ಮಾತ್ರ ಕೊಡಲು ಸಾಧ್ಯವಿದೆ.ಅಂದರೆ ಸೇಂಟ್.ಸ್ಟಿಫನ್ಸ್ ಡೇ ಗೆ ನೀಡುವ ರಜೆ ಇಲ್ಲಿ ಆಚರಣೆಯ ದಿನದ ಮುಂದಿನ ಸೋಮವಾರ ಅಂದರೆ ಬಾಕ್ಸಿಂಗ್ ಡೇ ಗೆ ಸಮನಾಗಿರುತ್ತದೆ.
ಆದರೆ [[ಕೆನಡಾ|ಕೆನಡಾದಲ್ಲಿ]], ಬಾಕ್ಸಿಂಗ್ ಡೇಯನ್ನು ಕೆನಡಾ ಲೇಬರ್ ಕೋಡ್ ನ ಪಟ್ಟಿಯಲ್ಲಿ ಒಂದು ಐಚ್ಛಿಕ ರಜಾದಿನವನ್ನಾಗಿ ಮಾಡಲಾಗಿದೆ. ಕೇವಲ ಒಂಟಾರಿಯೊ ಪ್ರಾಂತದಲ್ಲಿ ಮಾತ್ರ ಇದನ್ನು ಶಾಸನವಿಹಿತ ರಜಾದಿನವನ್ನಾಗಿ ಘೋಷಿಸಲಾಗಿದೆ.ಎಲ್ಲಾ ಕೆಲಸಗಾರರಿಗೆ ಆ ದಿನ ರಜೆಯೊಂದಿಗೆ ಸಂಬಳವನ್ನೂ ನೀಡಲಾಗುತ್ತದೆ.<ref>{{cite web|url=http://www.statutoryholidays.com/ |title=Statutory holidays in Canada both national and provincial |publisher=Statutoryholidays.com |date= |accessdate=2010-12-26}}</ref>
==ವ್ಯುತ್ಪತ್ತಿ==
ಈ ಪದ "ಬಾಕ್ಸಿಂಗ್ "ಎನ್ನುವುದಕ್ಕೆ ಸರಿಯಾದ ವ್ಯುತ್ಪತ್ತಿ ದೊರಕಿಲ್ಲ;ಹಾಗಾಗಿ ಅದು ಅಸ್ಪಷ್ಟವಾಗಿದೆಯಲ್ಲದೇ ಸ್ಪರ್ಧಾತ್ಮಕವಾಗಿ ಹಲವು ಸಿದ್ಧಾಂತಗಳಿವೆ,ಆದರೆ ಅದಾವದರಲ್ಲಿಯೂ ಯಾವುದೇ ನಿರ್ಣಾಯಕ ಆಧಾರಗಳಿಲ್ಲ.<ref>[http://www.snopes.com/holidays/christmas/boxingday.asp ಬಾಕ್ಸಿಂಗ್ ಡೇ]. Snopes.com.</ref> ಇಂತಹ ಒಂದು ಸಂಪ್ರದಾಯವು ಬಹುಕಾಲದಿಂದಲೂ ನಡೆದು ಬಂದಿದ್ದು, ಅಗತ್ಯವಿದ್ದವರಿಗೆ ಮತ್ತು ಸೇವೆಗಳಲ್ಲಿರುವವರಿಗೆ ಹಣ ಹಾಗು ಕೆಲವು ಇನ್ನಿತರ ಕಾಣಿಕೆಗಳನ್ನು ನೀಡಲಾಗುತ್ತದೆ. ಈ ಯುರೊಪಿಯನ್ ಸಂಪ್ರದಾಯವು ಮಧ್ಯಯುಗದಿಂದಲೂ ಆಚರಣೆಯಲ್ಲಿದೆ.ನಿಖರವಾದ ಕಾಲದ ಆಧಾರ ತಿಳಿದಿಲ್ಲವಾದರೂ ಕೆಲವರ ಪ್ರಕಾರ ಈ ರೂಢಿಯು ರೋಮನ್/ಆರಂಭಿಕ ಕ್ರಿಶ್ಚಿಯನ್ ಕಾಲದಲ್ಲಿಯೂ ಇತ್ತೆನ್ನಲಾಗುತ್ತದೆ;ಆಗ ಚರ್ಚ್ ಗಳ ಹೊರಭಾಗದಲ್ಲಿ ಲೋಹದ ಪೆಟ್ಟಿಗೆಗಳನ್ನು ಇಟ್ಟು ಫೀಸ್ಟ್ ಆಫ್ ಸೇಂಟ್ ಸ್ಟಿಫನ್ ಹೆಸರು ಲಗತ್ತಿಸಿದ ವಿಶೇಷ ಕಾಣಿಕೆಗಳನ್ನು ಅಲ್ಲಿ ಸಂಗ್ರಹಿಸಲಾಗುತ್ತಿತ್ತು.<ref>[17] ^ ಕಾಲಿನ್ಸ್ (೨೦೦೧) ಪುಟ.೨೩೪.</ref>
ವರ್ಷದುದ್ದಕ್ಕೂ ಉತ್ತಮ ಸೇವೆಗೈದ ಕುಶಲಕರ್ಮಿಗಳಿಗೆ UK ದಲ್ಲಿ ಕ್ರಿಸ್ಮಸ್ ನ ಮೊದಲ ವಾರದ ದಿನದಂದು ದೇವರಿಗೆ ಕೃತಜ್ಞತೆ ಸಲ್ಲಿಸಲು "ಕ್ರಿಸ್ಮಸ್ ಬಾಕ್ಸಸ್ "ಗಳಲ್ಲಿ ಹಣ ಮತ್ತು ಕಾಣಿಕೆಗಳನ್ನು ನೀಡಲಾಗುತ್ತದೆ.<ref>ಎನ್ ಸೈಕ್ಲೊಪಿಡಿಯಾ ಬ್ರಿಟಾನ್ನಿಕಾ, ೧೯೫೩ "ಬಾಕ್ಸಿಂಗ್ ಡೇ"</ref> ಇದನ್ನು ಸ್ಯಾಮ್ಯುವಲ್ ಪೆಪೀಸ್ ದಿನಚರಿಯ ೧೯ ಡಿಸೆಂಬರ್ ೧೬೬೩ರಲ್ಲಿನ ದಾಖಲೆಯಲ್ಲಿ ನಮೂದಿಸಲಾಗಿದೆ.<ref>{{cite web|url=http://www.pepysdiary.com/archive/1663/12/19/ |title=Saturday 19 December 1663 (Pepys' Diary) |publisher=Pepysdiary.com |date= |accessdate=2010-12-26}}</ref>
ಈ ರೂಢಿಯು ಹಳೆಯ ಇಂಗ್ಲೀಷ್ ಸಂಪ್ರದಾಯಕ್ಕೆ ಸೇರಿದ ಕೊಂಡಿಯಾಗಿದೆ:ಆಗಿನ ಸಿರಿವಂತ ಭೂಮಾಲಿಕರು ಕ್ರಿಸ್ಮಸ್ ಉತ್ತಮವಾಗಿ ಆಚರಿಸಲು ಈ ಕಾಣಿಕೆಗಳನ್ನು ರೂಢಿಗೆ ತಂದರು.ಅವರ ಸೇವಕರು ೨೬ನೆಯ ದಿನಾಂಕದಂದು ತಮ್ಮ ಕುಟುಂಬದವರನ್ನು ಭೇಟಿ ಮಾಡಲು ತಮ್ಮ ಊರುಗಳಿಗೆ ಹೋಗುವ ಅವಕಾಶವಿತ್ತು. ಉದ್ಯೋಗದಾತರು ಪ್ರತಿಯೊಬ್ಬ ಸೇವಕನಿಗೆ ಕಾಣಿಕೆಗಳು ಮತ್ತು ಹೆಚ್ಚುವರಿ ಹಣಯುಳ್ಳ ಪೆಟ್ಟಿಗೆಯೊಂದನ್ನು ನೀಡುತ್ತಿದ್ದರು.(ಕೆಲವು ವೇಳೆ ಉಳಿದ ಆಹಾರವನ್ನೂ ನೀಡುತ್ತಿದ್ದರು).
==ಕಾರ್ಯಾವಧಿ==
ಈ ಬಾಕ್ಸಿಂಗ್ ಡೇ ಎನ್ನುವ ರಜಾದಿನವು ಸಾಂಪ್ರದಾಯಿಕವಾಗಿ ಡಿಸೆಂಬರ್ ೨೬ ರಂದು ಕ್ರಿಸ್ಮಸ್ ದಿನದ ನಂತರದ ದಿನದಂದು ಬರುವುದಲ್ಲದೇ, ಅದನ್ನು ಮತಧರ್ಮಾತೀತವಾಗಿ ನೀಡಲಾಗುತ್ತದೆ.ಅಷ್ಟೇ ಅಲ್ಲದೇ ಸೇಂಟ್.ಸ್ಟಿಫನ್ಸ್ ಡೇ ಎಂಬ ಧಾರ್ಮಿಕ ರಜಾದಿನವೂ ಅಂದೇ ಬರುತ್ತದೆ.<ref>''ಅಮೆರಿಕನ್ ಹೆರಿಟೇಜ್ ಡಿಕ್ಷನರಿ'', ಫೊರ್ತ್ ಎಡಿಶನ್- 'ಬಾಕ್ಸಿಂಗ್ ಡೇ'</ref><ref>''ಆಕ್ಸ್ ಫರ್ಡ್ ಇಂಗ್ಲೀಷ್''</ref><ref>{{cite web |url=http://www.bbc.co.uk/pressoffice/pressreleases/stories/2004/11_november/17/radio4_sun26.shtml |title=BBC Radio 4 schedule, 03 December 2004 |date = 17 November 2004 |accessdate = 17 December 2009}}</ref> ಆದರೆ ಡಿಸೆಂಬರ್ ೨೬ ಭಾನುವಾರ ಬಂದರೆ,ಹಲವು ಪ್ರದೇಶಗಳಲ್ಲಿ ಬಾಕ್ಸಿಂಗ್ ಡೇಯನ್ನು ಡಿಸೆಂಬರ್ ೨೭ ರಂದು ನಿಗದಿಪಡಿಸುತ್ತಾರೆ. ಆದರೆ UKದಲ್ಲಿ ಬಾಕ್ಸಿಂಗ್ ಡೇ ದಿನವನ್ನು ಬ್ಯಾಂಕ್ ರಜಾದಿನವನ್ನಾಗಿ ನೀಡಲಾಗುತ್ತದೆ.ಈ ದಿನ ಶನಿವಾರ ಬಂದರೆ ಶಾಸನಬದ್ಧ ರಜಾದಿನಕ್ಕೆ ಪರ್ಯಾಯವಾಗಿ ಅದನ್ನು ಸೋಮವಾರದಂದು ನೀಡುತ್ತಾರೆ.ಒಂದು ವೇಳೆ ಬಾಕ್ಸಿಂಗ್ ಡೇ ಭಾನುವಾರ ಬಂದರೆ ಅಂದರೆ ಕ್ರಿಸ್ಮಸ್ ದಿನ ಅಂದು ಇನ್ನೊಂದು ಬ್ಯಾಂಕ್ ರಜಾದಿನವಿರುತ್ತದೆ;ಒಂದು ವೇಳೆ ಶನಿವಾರ ಬಂದರೆ-ಆಗ ಶಾಸನವಿಹಿತ ಬಾಕ್ಸಿಂಗ್ ಡೇ ರಜಾದಿನವನ್ನು ಮಂಗಳವಾರ ೨೮ ಡಿಸೆಂಬರ್ ರಂದು ನೀಡಲಾಗುತ್ತದೆ.<ref name="Directgov">{{cite web |title= Bank Holidays and British Summertime |author = Directgov |url=http://www.direct.gov.uk/en/Governmentcitizensandrights/LivingintheUK/DG_073741 |date= |accessdate = 17 December 2009}}</ref>
ಸ್ಕಾಟ್ ಲ್ಯಾಂಡ್ ನಲ್ಲಿ ಬಾಕ್ಸಿಂಗ್ ಡೇಯನ್ನು ಹೆಚ್ಚುವರಿ ಬ್ಯಾಂಕ್ ರಜಾದಿನವೆಂದು ೧೯೭೪ರಿಂದ <ref>{{cite web |url=http://www.london-gazette.co.uk/issues/46377/pages/9343 |title=London Gazette, 18 October 1974 |publisher=London-gazette.co.uk |date=1974-10-18 |accessdate=2010-12-26 |archive-date=2011-06-09 |archive-url=https://web.archive.org/web/20110609202216/http://www.london-gazette.co.uk/issues/46377/pages/9343 |url-status=dead }}</ref> ನೀಡಲಾಗುತ್ತಿದೆ.ಇದನ್ನು ರಾಯಲ್ ಪ್ರೊಕ್ಲೇಮೇಶನ್ ತನ್ನ ಬ್ಯಾಂಕಿಂಗ್ ಅಂಡ್ ಫೈನಾನ್ಸಿಯಲ್ ಡೀಲಿಂಗ್ಸ್ ಆಕ್ಟ್ ೧೯೭೧ರ ಅಡಿಯಲ್ಲಿ ನೀಡುತ್ತದೆ.<ref>{{Cite web |url=http://www.scotland.gov.uk/Topics/People/bank-holidays/FAQs |title=ಸ್ಕಾಟಿಶ್ ಗವರ್ನ್ ಮೆಂಟ್ ವೆಬ್ ಸೈಟ್ -ಬ್ಯಾಂಕ್ ಹಾಲಿಡೇಸ್ |access-date=2011-05-27 |archive-date=2011-06-06 |archive-url=https://web.archive.org/web/20110606203459/http://www.scotland.gov.uk/Topics/People/bank-holidays/FAQs |url-status=dead }}</ref>
[[ಐರ್ಲೆಂಡ್|ಐರ್ಲೆಂಡ್ನಲ್ಲಿ]]-ಅದು ಯಾವಾಗ ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟೇನ್ ಅಂಡ್ ಐರ್ಲೆಂಡ್ ಅಡಿ ಇತ್ತೋ ಆಗಿನಿಂದ ಬ್ಯಾಂಕ್ ಹಾಲಿಡೇಸ್ ಆಕ್ಟ್ ೧೮೭೧ ರಲ್ಲಿ ಸೇಂಟ್.ಸ್ಟಿಫನ್ ಫೀಸ್ಟ್ ಡೇ ಎಂದು ಡಿಸೆಂಬರ್ ೨೬ ರಂದು ಸಾರ್ವಜನಿಕ ರಜಾದಿನವೆಂದು ಖಾಯಂ ನಿಯಮದಡಿ ನೀಡಲಾಗುತ್ತದೆ. ಆವಾಗಿನಿಂದ ಐರಿಶ್ ವಾರ್ ಆಫ್ ಇಂಡೆಪೆಂಡೆನ್ಸ್ ಹೆಸರಲ್ಲಿ ಈ "ಬಾಕ್ಸಿಂಗ್ ಡೇ"ರಜಾದಿನವನ್ನು ನಾರ್ದರ್ನ್ ಐರ್ಲೆಂಡ್ ನಲ್ಲಿ ಅಲ್ಲಿನ ಅಧಿಕಾರಿಗಳು ರಜಾದಿನವೆಂದು ಘೋಷಿಸಿದ್ದಾರೆ.ಇದು ಈಗಲೂ UK ದ ಒಂದು ಭಾಗವಾಗಿಯೇ ಉಳಿದುಕೊಂಡಿದೆ.ಇನ್ನುಳಿದ UK ಭಾಗದಲ್ಲಿ ಬದಲಾವಣೆಗೊಳಪಟ್ಟ ರಜಾದಿನವಾಗಿ ಉಳಿದುಕೊಂಡಿದೆ.
ಆಸ್ಟ್ರೇಲಿಯಾದ ಸೌತ್ ಆಸ್ಟ್ರೇಲಿಯಾ ರಾಜ್ಯದಲ್ಲಿ ಡಿಸೆಂಬರ್ ೨೬ ರನ್ನು ಸಾರ್ವಜನಿಕ ರಜಾದಿನವಾಗಿ ಇದನ್ನು ಪ್ರೊಕ್ಲೇಮೇಶನ್ ಡೇ ಎನ್ನಲಾಗುತ್ತದೆ.ಆದರೆ ಬಾಕ್ಸಿಂಗ್ ಡೇ ಸಾಮಾನ್ಯವಾಗಿ ಸಾರ್ವಜನಿಕ ರಜಾದಿನವಲ್ಲ.<ref>{{Cite web |url=http://www.safework.sa.gov.au/show_page.jsp?id=2483 |title=ಆರ್ಕೈವ್ ನಕಲು |access-date=2011-05-27 |archive-date=2015-12-19 |archive-url=https://web.archive.org/web/20151219143813/http://www.safework.sa.gov.au/show_page.jsp?id=2483 |url-status=dead }}</ref>
ಕೆನಡಾದ ಪ್ರಾಂತಗಳಲ್ಲಿ ಬಾಕ್ಸಿಂಗ್ ಡೇಯನ್ನು ಶಾಸನವಿಹಿತ ರಜಾದಿನವೆಂದು ಘೋಷಿಸಲಾಗಿದೆ,ಇದನ್ನು ಯಾವಾಗಲೂ ಡಿಸೆಂಬರ್ ೨೬ ರಂದು ನೀಡಲಾಗುತ್ತದೆ.<ref name="Manitoba">{{cite web |url=http://www.gov.mb.ca/labour/standards/doc,gen-holidays-after-april-30-07,factsheet.html#q13 |title = Fact Sheet |author = Manitoba Employment Standards Branch |date = 27 November 2009 |accessdate = 17 December 2009}}</ref> ಕೆನಡಾದ ಪ್ರಾಂತಗಳಲ್ಲಿ ಬಾಕ್ಸಿಂಗ್ ಡೇ ಶಾಸನಬದ್ಧ ರಜಾ ದಿನವಾಗಿದೆ.ಅದು ಒಂದು ವೇಳೆ ಶನಿವಾರ ಅಥವಾ ಭಾನುವಾರ ಬಂದರೆ ಅದಕ್ಕೆ ಪರ್ಯಾಯವಾಗಿ ಮುಂದೆ ಬರುವ ವಾರದ ದಿನದಲ್ಲಿ ನೀಡಲಾಗುತ್ತದೆ.<ref name="Manitoba" />
==ಶಾಪಿಂಗ್==
[[File:Boxing Day at the Toronto Eaton Centre (cropped).jpg|thumb|ಬಾಕ್ಸಿಂಗ್ ಡೇ ಕ್ರೌಡ್ಸ್ ಶಾಪಿಂಗ್ ಎಟ್ ದಿ ಟೊರಂಟೊ ಐಟಾನ್ ಸೆಂಟರ್ ಇನ್ ಕೆನಡಾ]]
ಬ್ರಿಟೇನ್,<ref>{{cite news |url=http://www.independent.co.uk/news/uk/this-britain/boxing-day-sales-soar-as-shoppers-flock-to-malls-429935.html |title = Boxing Day sales soar as shoppers flock to malls |author = Terry Kirby |date = 27 December 2006 |accessdate = 17 December 2009 | location=London | work=The Independent}}</ref> ಕೆನಡಾ,<ref name="ctv.ca">{{cite web |url=http://www.ctv.ca/servlet/ArticleNews/story/CTVNews/20051226/boxing_day_051226/20051226?hub=CTVNewsAt11 |title=Boxing Day expected to rake in $1.8 billion |author=CTV.ca News Staff |date=26 December 2005 |accessdate=17 December 2009 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ನ್ಯುಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಕೆಲವು ರಾಜ್ಯಗಳಲ್ಲಿ <ref>{{cite web | url = https://www.myer.com.au/resources.ashx/Files/284/File/9C52AE41D01721690D788E4771510E2E/FY11_Stocktake_Trading_Hours_Version_16_by_State.pdf | title = Stocktake Trading Hours | accessdate = 2011-01-07 | year = 2010 | format = PDF | publisher = Myer|archiveurl=https://web.archive.org/web/20110615001240/https://www.myer.com.au/resources.ashx/Files/284/File/9C52AE41D01721690D788E4771510E2E/FY11_Stocktake_Trading_Hours_Version_16_by_State.pdf|archivedate=2011-06-15}}</ref> ಬಾಕ್ಸಿಂಗ್ ಡೇ ದಿನವನ್ನು ಪ್ರಧಾನವಾಗಿ ಶಾಪಿಂಗ್ ಹಾಲಿಡೇ ಅಥವಾ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವ ದಿನವೆಂದು ಪರಿಗಣಿಸಲಾಗುತ್ತದೆ.ಹೆಚ್ಚಾಗಿ ಇದನ್ನು ದಿ ಡೇ ಆಫ್ಟರ್ ಥ್ಯಾಂಕ್ಸ್ ಗಿವಿಂಗ್ ಇನ್ ದಿ ಯುನೈಟೆಡ್ ಸ್ಟೇಟ್ಸ್ ಎಂದು ಪರಿಗಣಿಸಲಾಗುತ್ತದೆ.ಯುನೈಟೆಡ್ ಸ್ಟೇಟ್ಸ್ ನ ಕೃತಜ್ಞತಾ ದಿನದ ನಂತರದ ದಿನವೆಂದು ಬಹುತೇಕರು ಪರಿಗಣಿಸುತ್ತಾರೆ. ಈ ಸಂದರ್ಭದಲ್ಲಿ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರದ ಭರಾಟೆ ಕಾಣುತ್ತದೆ.ಅದಲ್ಲದೇ ಬೆಲೆಗಳಲ್ಲಿ ಇಳಿಮುಖ ಅಥವಾ ರಿಯಾಯ್ತಿ ಮಾರಾಟ ಸಾಮಾನ್ಯವಾಗಿರುತ್ತದೆ. ಬಹಳಷ್ಟು ವರ್ತಕರಿಗೆ,ಈ ಬಾಕ್ಸಿಂಗ್ ಡೇ ಆ ವರ್ಷದ ಅತ್ಯಧಿಕ ಆದಾಯ ತರುವ ದಿನವಾಗಿದೆ. ಒಂದು ಅಂದಾಜಿನಂತೆ UK ನಲ್ಲಿ ೨೦೦೯ ರ ಸುಮಾರಿಗೆ ಸುಮಾರು೧೨ ದಶಲಕ್ಷ ಗ್ರಾಹಕರು ಮಾರಾಟ ಮಳಿಗೆಗೆಳಿಗೆ ಭೇಟಿ ನೀಡಿದ್ದಾರೆ.(ಇದನ್ನು ೨೦೦೮ರ ಮಾರಾಟಕ್ಕೆ ಹೋಲಿಸಿದರೆ ಸುಮಾರು ೨೦%ರಷ್ಟು ಹೆಚ್ಚಳ ಕಂಡಿದೆ.ಅದಲ್ಲದೇ VAT ನ್ನು ೧ನೆಯ ಜನವರಿಯಿಂದ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಕೂಡ ಈ ಹೆಚ್ಚಳಕ್ಕೆ ಕಾರಣವಾಯಿತು.<ref>{{cite news|url=http://news.bbc.co.uk/2/hi/business/8432144.stm |title=Boxing Day sales attract 'record' number of shoppers |publisher=BBC News |date=2009-12-28 |accessdate=2010-12-26}}</ref>
ಹಲವಾರು ಸಣ್ಣ ವ್ಯಾಪಾರಿಗಳು ಅತ್ಯಂತ ಬೇಗ ತಮ್ಮ ಅಂಗಡಿಗಳನ್ನು ತೆಗೆಯುತ್ತಿದ್ದರು.(ಸಾಮಾನ್ಯವಾಗಿ ಬೆಳಗ್ಗೆ ೫ಕ್ಕೆ ಅಥವಾ ಅದಕ್ಕೂ ಮೊದಲು)ಅದಲ್ಲದೇ ಮನೆಬಾಗಿಲಿಗೆ ವಸ್ತುಗಳ ಪೂರೈಕೆ ಅವರ ಮತ್ತೊಂದು ಸೌಲಭ್ಯವಾಗಿತ್ತು.ಅದಲ್ಲದೇ ನಷ್ಟದ ವಹಿವಾಟುದಾರರು ಬಗೆಬಗೆಯ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ತಮ್ಮ ಅಂಗಡಿಗಳೆಡೆಗೆ ಸೆಳೆಯುತ್ತಿದ್ದರು. ಡಿಸೆಂಬರ್ ೨೬ ರಂದು ಬೆಳಗಿನ ಜಾವ ಅಂಗಡಿಗಳ ಮುಂದೆ ಉದ್ದದ ಗ್ರಾಹಕರ ಸಾಲು ಅತ್ಯಂತ ಸಾಮಾನ್ಯ ದೃಶ್ಯವಾಗಿರುತ್ತದೆ.ಅಂಗಡಿಗಳು ಪ್ರಾರಂಭವಾಗುವ ಮುಂಚೆಯೇ ಜನರು ಸಾಲುಗಟ್ಟಿ ನಿಲ್ಲುವುದು ಅಂದಿನ ವಿಶೇಷವಾಗಿದೆ.ವಿಶೇಷವಾಗಿ ಬಹುದೊಡ್ಡ-ಪೆಟ್ಟಿಗೆ ಮಳಿಗೆಗಳು ಗ್ರಾಹಕರ ಎಲೆಕ್ಟ್ರಾನಿಕ್ಸ್ ಸಣ್ಣ ವ್ಯಾಪಾರಿಗಳಿಗೆ ಇದು ಭರಾಟೆಯ ದಿನವಾಗಿರುತ್ತದೆ.<ref name="ctv.ca" /> ಹಲವು ಮಳಿಗೆಗಳು ಸೀಮಿತ ಪ್ರಮಾಣದ ಸಾಮಗ್ರಿಗಳನ್ನು ಒಳಗೊಂಡಿರುತ್ತವೆ,ಅಥವಾ ಅತ್ಯಧಿಕ ರಿಯಾಯ್ತಿ ಸಾಮಾನುಗಳ ಮಾರಾಟ ಹೊಂದಿರುವುದು ಸಾಮಾನ್ಯವಾಗಿದೆ.<ref name="toronto.ctv.ca">{{cite web |url = http://toronto.ctv.ca/servlet/an/local/CTVNews/20071213/boxing_day_071213?hub=EdmontonHome |title = How to become a Boxing Day shopping pro |date = 25 December 2007 |author = Ashleigh Patterson |accessdate = 17 December 2009 |archive-date = 27 ಆಗಸ್ಟ್ 2009 |archive-url = https://web.archive.org/web/20090827232435/http://toronto.ctv.ca/servlet/an/local/CTVNews/20071213/boxing_day_071213?hub=EdmontonHome |url-status = dead }}</ref> ಅತ್ಯಂತ ಜನ-ನಿಬಿಡ-ತಾಣಗಳಲ್ಲಿ ವ್ಯಾಪಾರದ ಅನುಭವ ಪಡೆಯಲು ಹಿಂದೇಟು ಹಾಕುವವರು ಮನೆಯಲ್ಲೇ ಉಳಿದು ಈ ದಟ್ಟಣೆಯಿಂದ ಪಾರಾಗುವವರೂ ಇರುತ್ತಾರೆ. ಅಲ್ಲಿನ ಸ್ಥಳೀಯ ಮಾಧ್ಯಮಗಳು ಹೇಗೆ ಅಲ್ಲಿನ ಅಂಗಡಿಗಳ ಮುಂದೆ ಸಾಲುಗಟ್ಟಿ ಜನರಿರುತ್ತಾರೆ,ವ್ಯಾಪಾರಿಗಳ ವಹಿವಾಟಿನ ಬಗ್ಗೆ ಬರೆಯುತ್ತವೆ,ಗ್ರಾಹಕರ ಸಾಲುಗಳು,ಅವರು ಕೊಂಡುಕೊಳ್ಳುವ ಸಾಮಾನುಗಳ ಬಗ್ಗೆ ಅವರು ಚಿತ್ರೀಕರಿಸಿದ ವಿಡಿಯೊವನ್ನೂ ಅವರು ಬಿತ್ತರಿಸುತ್ತಾರೆ.<ref>{{cite web |url=http://www.ctv.ca/servlet/ArticleNews/story/CTVNews/20071226/Boxing_Day_071226/20071226?hub=Canada |title=Boxing Day begins with early rush of bargain hunters |author=toronto.ctv.ca |date=26 December 2007 |accessdate=17 December 2009 |archive-date=27 ಮೇ 2012 |archive-url=https://archive.today/20120527031233/http://www.ctv.ca/servlet/ArticleNews/story/CTVNews/20071226/Boxing_Day_071226/20071226?hub=Canada |url-status=dead }}</ref> ಈ ಬಾಕ್ಸಿಂಗ್ ಡೇದಲ್ಲಿನ ಮಾರಾಟದ ಸಂದರ್ಭದಲ್ಲಿ ಗ್ರಾಹಕರ ಕಾಲ್ತುಳಿತಗಳು,ಗಾಯಗೊಳ್ಳುವಿಕೆಗಳು ಮತ್ತು ಒಮ್ಮೊಮ್ಮೆ ಸಾವು-ನೋವುಗಳೂ ಸಂಭವಿಸುವ ಸಾಧ್ಯತೆ ಇದೆ.<ref>{{cite news |url = http://www.nydailynews.com/ny_local/2008/11/28/2008-11-28_worker_dies_at_long_island_walmart_after.html |title = Worker dies at Long Island Wal-Mart after being trampled in Black Friday stampede |authors = Joe Gould, Clare Trapasso and Rich Schapiro |date = 28 November 2008 |accessdate = 17 December 2009 |location = New York |work = Daily News |archive-date = 28 ನವೆಂಬರ್ 2008 |archive-url = https://web.archive.org/web/20081128175609/http://www.nydailynews.com/ny_local/2008/11/28/2008-11-28_worker_dies_at_long_island_walmart_after.html |url-status = dead }}</ref> ಇದರಿಂದಾಗಿ ಹಲವಾರು ಸಣ್ಣ ವ್ಯಾಪಾರಿಗಳು ಇಂತಹ ದೊಡ್ಡ ಗುಂಪುಗಳನ್ನು ನಿಯಂತ್ರಿಸಲು ಕೆಲವು ಪ್ರಾಯೋಗಿಕ ಕ್ರಮಗಳಿಗೆ ಮುಂದಾಗುತ್ತವೆ.ತೀಕ್ಷ್ಣ ಚಳಿಗಾಲದಲ್ಲಿ ಇವು ಹೆಚ್ಚು ಸಂಭವಿಸುತ್ತವೆ.(ಅಥವಾ ಆಸ್ಟ್ರೇಲಿಯಾ ಮತ್ತು ನ್ಯುಜಿಲೆಂಡ್ ಗಳಲ್ಲಿನ ಬಿರುಬೇಸಿಗೆ) ವಾತಾವರಣ ಗ್ರಾಹಕರಲ್ಲಿ ವ್ಯಾಪಾರದ ಬೇಡಿಕೆಗಳಿಗೆ ಪಕ್ವವಾಗಿರುತ್ತವೆ. ಅವರು ಪ್ರವೇಶಗಳನ್ನು ನಿರ್ಬಂಧಿಸಬಹುದು,ಒಂದೇ ವೇಳೆಗೆ ದೊಡ್ಡ ಸಂಖ್ಯೆಯ ಗಿರಾಕಿಗಳಿಗೂ ಕಡಿವಾಣ ಹಾಕಬಹುದು,ಅಥವಾ ಹೆಚ್ಚು ಮಾರಾಟದ ವಸ್ತುಗಳ ಮಾರಾಟದ ಖಾತ್ರಿಗಾಗಿ ಕೂಪನ್ ಗಳನ್ನು ನೀಡಬಹುದು.ಅಲ್ಲದೇ ಸರದಿಯಲ್ಲಿರುವವರಿಗೆ ತಮ್ಮಲ್ಲಿರುವ ದಾಸ್ತಾನುಗಳ ಬಗೆಗೆ ಜಾಹಿರು ಮಾಡುವ ಮೂಲಕ ನಿಯಂತ್ರಿಸಲಾಗುತ್ತದೆ.<ref name="toronto.ctv.ca" />
ಇತ್ತೀಚಿನ ವರ್ಷಗಳಲ್ಲಿ ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು "ಬಾಕ್ಸಿಂಗ್ ವಾರ"ದ ವರೆಗೂ ವಿಸ್ತರಿಸುತ್ತಿವೆ. ಈ ಬಾಕ್ಸಿಂಗ್ ಡೇ ಡಿಸೆಂಬರ್ ೨೬ ಇದ್ದರೂ ಹಲವು ವ್ಯಾಪಾರಿಗಳು ''ಬಾಕ್ಸಿಂಗ್ ಡೇ ಸೇಲ್ಸ್'' ನ್ನು ಈ ದಿನಾಂಕಕ್ಕಿಂತ ಕೆಲದಿನ ಮೊದಲು ನಂತರ ಕೆಲದಿನಗಳ ವರೆಗೆ ತಮ್ಮ ವಹಿವಾಟನ್ನು ವಿಸ್ತರಿಸುತ್ತಾರೆ.ಇದು ಹೊಸ ವರ್ಷದ ನಿವ್ ಇಯರ್ ಈವ್ ವರೆಗೂ ಮುಂದುವರೆಯುತ್ತದೆ.ಬಹುಮುಖ್ಯವಾಗಿ ೨೦೦೮ ರ ಕೊನೆಯ ಆರ್ಥಿಕ ಕುಸಿತದ ಸಂದರ್ಭದಲ್ಲಿ ಇದು ನಡೆದಿತ್ತು.ಆಗ ಕೆಲವು ವ್ಯಾಪಾರಿಗಳು ಉತ್ತಮ ವ್ಯಾಪಾರವನ್ನು ಪಡೆದು ತಮ್ಮನ್ನು ಹೆಚ್ಚು ವಹಿವಾಟುಗಳಲ್ಲಿ ತೊಡಗಿಸಿಕೊಂಡದ್ದೂ ಇದೆ.<ref>{{cite web |url = http://www.ctv.ca/servlet/ArticleNews/story/CTVNews/20081221/Shopping_Deals_081222/20081221?hub=TopStories |title = Boxing Day comes early as shoppers search for deals |author = CTV.ca News Staff |date = 21 December 2008 |accessdate = 17 December 2009 |archive-date = 22 ಡಿಸೆಂಬರ್ 2008 |archive-url = https://web.archive.org/web/20081222190901/http://www.ctv.ca/servlet/ArticleNews/story/CTVNews/20081221/Shopping_Deals_081222/20081221?hub=TopStories |url-status = dead }}</ref> ಕೆನಡಾದ ಬಾಕ್ಸಿಂಗ್ ಡೇ ಸಂದರ್ಭವನ್ನು ಅಮೆರಿಕನ್ ಸೂಪರ್ ಸ್ಯಾಟರ್ಡೇ ವ್ಯಾಪಾರಕ್ಕೆ ಹೋಲಿಕೆ ಮಾಡಲಾಗುತ್ತದೆ.ಇದು ಕ್ರಿಸ್ಮಸ್ ಗಿಂತ ಮೊದಲು ಬರುವ ಶನಿವಾರವಾಗಿರುತ್ತದೆ. ಆಗ ೨೦೦೯ರಲ್ಲಿ ಪ್ರಮುಖ ಕೆನಡಾದ ಸಣ್ಣ ವ್ಯಾಪಾರಿಗಳು ತಮ್ಮ ಬ್ಲ್ಯಾಕ್ ಫ್ರೈಯ್ಡೇ ವಹಿವಾಟುಗಳನ್ನು ನಡೆಸಿ ವ್ಯಾಪಾರಿಗಳು ಗ್ರಾಹಕರ ದಟ್ಟಣೆ ಮಿತಿ ಮೀರದಂತೆ ಮಾಡುವ ಸಂದರ್ಭಗಳೂ ಇವೆ.<ref>{{cite news |url=http://www.cbc.ca/money/story/2009/11/27/consumer-black-friday.html |author = CBC News |title=Canadian retailers try their own Black Friday |date = 27 November 2009 |accessdate = 17 December 2009|archiveurl=https://web.archive.org/web/20091130205758/http://www.cbc.ca/money/story/2009/11/27/consumer-black-friday.html|archivedate=30 November 2009}}</ref>
ಕೆನಡಾ ಕೆಲವು ಆಯ್ದ ಭಾಗಗಳಲ್ಲಿ ವಿಶೇಷವಾಗಿ ಅಟ್ಲಾಂಟಿಕ್ ಕೆನಡಾ ಮತ್ತು ನಾರ್ದರ್ನ್ ಒಂಟಾರಿಯೊ (ಇದರಲ್ಲಿ ಸಾಲ್ಟ್ ಸ್ಟೆ.ಮೇರಿ)<ref>{{cite web |url=http://www.city.sault-ste-marie.on.ca/newsitem.aspx?ID=641 |title=Advisory - Boxing Day |author=www.city.sault-ste-marie.on.ca |year=2010 |accessdate=2010-12-25}}</ref> ಮುಂತಾದೆಡೆ ಸಣ್ಣ ವ್ಯಾಪಾರಿಗಳನ್ನು ಬಾಕ್ಸಿಂಗ್ ಡೇ ದಿನ ಅಂಗಡಿ ತೆಗೆಯುವಲ್ಲಿ ನಿರ್ಬಂಧ ವಿಧಿಸಲಾಗುತ್ತದೆ.ಇದಕ್ಕಾಗಿ ಅಲ್ಲಿನ ಪ್ರಾಂತೀಯ ಕಾನೂನು ಅಥವಾ ಉಪಕಾನೂನುಗಳ ಮೂಲಕ ಇದನ್ನು ಜಾರಿ ಮಾಡಲಾಗುತ್ತದೆ. ಇಂತಹ ಪ್ರದೇಶಗಳಲ್ಲಿ ವ್ಯಾಪಾರವನ್ನು ೨೬ ಡಿಸೆಂಬರ್ ಗೆ ಅಥವಾ ೨೭ಕ್ಕೆ ಮುಂದೂಡಲಾಗುತ್ತದೆ.<ref>{{cite web |url=http://www.soonews.ca/viewarticle.php?id=15342 |title=Boxing Day, The Debate Continues |author=soonews.ca |date=2007-12-22 |accessdate=2009-12-26 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>{{cite web |url=http://www.google.com/hostednews/canadianpress/article/ALeqM5hAtdtyDSIeYttaUmCcZLT_bGhGzg |title=Boxing Day madness: shoppers descend on stores looking for deals |author=The Canadian Press |date=2009-12-26 |accessdate=2009-12-26 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
ಐರ್ಲೆಂಡ್ ನಲ್ಲಿ ೧೯೦೨ರಿಂದಲೂ ಬಹಳಷ್ಟು ಮಳಿಗೆಗಳು ಸ್ಟೇಂಟ್.ಸ್ಟಿಫನ್ಸ್ ಡೇ ದಿನ ಮುಚ್ಚಲ್ಪಡುತ್ತವೆ,ಕ್ರಿಸ್ಮಸ್ ಡೇ ಮಾದರಿಯಲ್ಲಿಯೇ ಇದನ್ನು ಅನುಸರಿಸಲಾಗುತ್ತದೆ. ಆದರೆ ೨೦೦೯ ರಲ್ಲಿ ಕೆಲವು ವ್ಯಾಪಾರಿ ಮಳಿಗೆಗಳು ಇದೇ ದಿನ ಅಂಗಡಿಗಳನ್ನು ತೆರೆದು ೧೦೭-ವರ್ಷದ ಸಂಪ್ರದಾಯವನ್ನು ಮುರಿದು ಹಾಕಿವೆ. ಕೆಲವು ಅಂಗಡಿಗಳವರು ತಮ್ಮ ಜನವರಿ ಸೇಲ್ಸ್ ವಹಿವಾಟನ್ನು ಅಂದೇ ಆರಂಭಿದ್ದಾರೆ.
===ಸೈಬರ್ ಬಾಕ್ಸಿಂಗ್ ಡೇ ===
ಈ ಆನ್ ಲೈನ್ ಬಾಕ್ಸಿಂಗ್ ಡೇ ಅನ್ನು "ಸೈಬರ್ ಬಾಕ್ಸಿಂಗ್ ಡೇ"ಎಂದು ಉಲ್ಲೇಖಿಸಲಾಗುತ್ತದೆ. ಆಗ UK ನಲ್ಲಿ ೨೦೦೮ ರ ವರ್ಷದಲ್ಲಿ ಬಾಕ್ಸಿಂಗ್ ಡೇ ಅತ್ಯಧಿಕ ಆನ್ ಲೈನ್ ಶಾಪಿಂಗ್ ದಿನವಾಗಿತ್ತು.<ref>{{cite web |url = http://www.imrg.org/8025741F0065E9B8/%28httpPressReleases%29/2947A86A04A12E2180257694003BB487?OpenDocument |title = Many retailers’ sales to start on Christmas Eve. |date = 22 December 2009 |author = IMRG |accessdate = 22 December 2009 |archive-date = 26 ಡಿಸೆಂಬರ್ 2009 |archive-url = https://web.archive.org/web/20091226235932/http://www.imrg.org/8025741F0065E9B8/(httpPressReleases)/2947A86A04A12E2180257694003BB487?OpenDocument |url-status = dead }}</ref> ನಂತರ ೨೦೦೯ ರಲ್ಲಿ ಹಲವು ಸಣ್ಣ ವ್ಯಾಪಾರಿಗಳು ಆನ್ ಲೈನ್ ಮತ್ತು ಹೈಸ್ಟ್ರೀಟ್ ಮಳಿಗೆಗಳು ಕ್ರಿಸ್ಮಸ್ ಈವ್ ವ್ಯಾಪಾರವನ್ನು ಒಟ್ಟಿಗೆ ಆರಂಭಿಸಿದರು.ಅದಲ್ಲದೇ ತಮ್ಮ ಹೈ ಸ್ಟ್ರೀಟ್ ಸೇಲ್ಸ್ ಆನ್ ಬಾಕ್ಸಿಂಗ್ ಡೇ ವಹಿವಾಟನ್ನೂ ನಡೆಸಿದರು.<ref>{{cite news |url=http://www.telegraph.co.uk/topics/christmas/6858609/Boxing-Day-sales-start-on-Christmas-Eve.html |title = Boxing Day sales start on Christmas Eve. |date = 22 December 2009 |author = Telegraph |accessdate = 22 December 2009 | location=London | work=The Daily Telegraph}}</ref>
==ಕ್ರೀಡೆ==
[[File:Keswick Boxing Day hunt 1962.jpg|thumb|287px|ಟ್ರೆಡಿಶನಲ್ ಬಾಕ್ಸಿಂಗ್ ಡೇ ಹಂಟ್ ಮೀಟ್ ಇನ್ ಕೆಸ್ವಿಕ್ (ಇಂಗ್ಲೆಂಡ್) 1962]]
ಈ ಬಾಕ್ಸಿಂಗ್ ಡೇ ಕೂಡ ಆರಂಭದಲ್ಲಿ ಕ್ರೀಡಾ ಚಟುವಟಿಕೆಯೊಂದಿಗೆ ತನ್ನ ಸಂಬಂಧ ಹೊಂದಿತ್ತು,ಗ್ರಾಮೀಣ ಭಾಗದಲ್ಲಿ ಈ ಜಾನಪದ ವ್ಯುತ್ಪತ್ತಿ ಸಂಪ್ರದಾಯದ ಬಗ್ಗೆ ನೋಡಿದಾಗ ಈ ಬಾಕ್ಸಿಂಗ್ ಎಂಬ ಕ್ರೀಡೆ ಕೂಡ ಜನಪ್ರಿಯವಾಗಿದೆ.ಆದರೆ ಈ ಬಾಕ್ಸ್ ಎಂದರೆ ಕ್ರಿಸ್ಮಸ್ ನಲ್ಲಿ ''ಪೆಟ್ಟಿಗೆ'' ಗಳಲ್ಲಿ ಅದರಲ್ಲೂ ಬ್ರಿಟೇನ್ ನಲ್ಲಿ ನೀಡುವ ಕಾಣಿಕೆ ಎಂದು ಜನಜನಿತವಾಗಿದೆ. ಆಫ್ರಿಕಾದ ಕಾಮನ್ ವೆಲ್ತ್ ದೇಶಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಘಾನಾ,ಉಗಾಂಡಾ,ಮಲವಿ,ಝಾಂಬಿಯಾ ಮತ್ತು ತಾಂಜೇನಿಯಾಗಳಲ್ಲಿ ಬಾಕ್ಸಿಂಗ್ ಡೇದಂದು ಬಹುಮಾನ ನೀಡುವ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ.<ref name="wsj">{{cite news|title=Season's Beatings: 'Boxing Day' Takes a Pugilistic Turn|first=Joel|last=Millman|work=Wall Street Journal|date=December 26, 2009|page=1}}</ref> ಇದೇ ಆಚರಣೆಯು ದಶಕಗಳಿಂದ [[ಗಯಾನ|ಗಯಾನಾ]] ಮತ್ತು [[ಇಟಲಿ|ಇಟಲಿಯಲ್ಲಿ]] ನಡೆಯುತ್ತಿದೆ.<ref name="wsj" />
ಇಂಗ್ಲೆಂಡ್,ಸ್ಕಾಟ್ ಲೆಂಡ್ ಮತ್ತು ನಾರ್ದರ್ನ್ ಐರ್ಲೆಂಡ್ ಗಳಲ್ಲಿ ಸಾಂಪ್ರದಾಯಿಕವಾಗಿ [[ಪ್ರೀಮಿಯರ್ ಲೀಗ್|ಪ್ರಿಮಿಯರ್ ಲೀಗ್]],ಸ್ಕಾಟಿಶ್ ಪ್ರಿಮಿಯರ್ ಲೀಗ್ ಮತ್ತು ಐರಿಶ್ ಪ್ರಿಮಿಯರ್ ಲೀಗ್ ಅನುಕ್ರಮವಾಗಿ ನಡೆಯುತ್ತವೆ.ಇನ್ನು ಕೆಳಮಟ್ಟದ ವಿಭಾಗಗಳಲ್ಲಿ ರಗ್ ಬೈ ಫೂಟ್ಬಾಲ್ ಲೀಗ್ಸ್ ಗಳು ಪೂರ್ಣಾವಧಿಯ [[ಫುಟ್ಬಾಲ್|ಫೂಟ್ಬಾಲ್]] ಪಂದ್ಯಗಳನ್ನು ಏರ್ಪಡಿಸುತ್ತವೆ.ಬಾಕ್ಸಿಂಗ್ ಡೇ ದಿನ ರಗ್ ಬೈ ಕ್ರೀಡೆಗಳನ್ನು ಆಯೋಜಿಸುತ್ತವೆ. ಸಾಂಪ್ರದಾಯಿಕವಾಗಿ ಬಾಕ್ಸಿಂಗ್ ಡೇ ದಿನದಂದು ಸ್ಥಳೀಯ ಗುಂಪುಗಳೊಂದಿಗೆ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಇದನ್ನು ಮೂಲದಲ್ಲಿ ಆಟದ ತಂಡಗಳು ಬೇರೆಡೆಗೆ ದೂರದ ಪ್ರದೇಶಗಳಿಗೆ ಕ್ರಿಸ್ಮಸ್ ದಿನದ ನಂತರ ಹೋಗುವುದನ್ನು ತಪ್ಪಿಸಲು ಈ ವ್ಯವಸ್ಥೆ ಇರುತ್ತದೆ. ಅಷ್ಟೇ ಅಲ್ಲದೇ ಇದು ಆ ದಿನವನ್ನು ಮಹತ್ವದ ದಿನವನ್ನಾಗಿ ಮಾಡುತ್ತದೆ.
ಕುದರೆ ಓಟದ ಸ್ಪರ್ಧೆಗಳಲ್ಲಿ ಕಿಂಗ್ ಜಾರ್ಜ್ VI ಚೇಜ್ ನ್ನು ಸುರ್ರೆಯ ಕೆಂಪ್ಟನ್ ಪಾರ್ಕ್ ರೇಸ್ ಕೋರ್ಸ್ ನಲ್ಲಿ ಆಯೋಜಿಸಲಾಗುತ್ತದೆ. ಚೆಲ್ತೆನ್ ಹ್ಯಾಮ್ ಗೊಲ್ಡ್ ಕಪ್ ನಂತರ ಇದು ಅತ್ಯಂತ ಪ್ರತಿಷ್ಟೆಯ ಎರಡನೆಯ ಚೇಸ್ ಕ್ರೀಡೆಯಾಗಿದೆ.
UK ಮತ್ತು US ಗಳಲ್ಲಿ ಬಾಕ್ಸಿಂಗ್ ಡೇ ನರಿ ಬೇಟೆಗಾರರಿಗೆ ಅತ್ಯಂತ ಪ್ರಶಸ್ತ ದಿನವಾಗಿದೆ. ಈ ನರಿಗಳ ಬೇಟೆಯನ್ನು ಹಂಟಿಂಗ್ ಆಕ್ಟ್ ೨೦೦೪ ರ ಮೂಲಕ ನಿಷೇಧಿಸಲಾಗಿದ್ದರೂ ಬಾಕ್ಸಿಂಗ್ ಡೇ ಮಾತ್ರ ಅತಿ ದೊಡ್ಡ ಬೇಟೆಯ ದಿನವಾಗಿ UK ನಲ್ಲಿ ಪರಿಗಣಿತವಾಗುತ್ತದೆ.ಕೆಲವು ವಾಸನೆ ಪೂಸಿತ ನಾಯಿಗಳ ಮೂಲಕ ಇದನ್ನು ಆಚರಿಸಿ ಸಜೀವ ಪ್ರಾಣಿಗಳ ಕೊಲ್ಲುವ ಈ ಆಟವನ್ನು ಮರೆಮಾಚಲಾಗುತ್ತದೆ.
ಆಸ್ಟ್ರೇಲಿಯಾವು ಬಾಕ್ಸಿಂಗ್ ಡೇಟೆಸ್ಟ್ ನ್ನು ಮೊದಲ ದಿನದಂದು ಮೆಲ್ಬೊರ್ನ್ ನಲ್ಲಿನ ಮೆಲ್ಬೊರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಕೈಗೊಂಡು ಸಿಡ್ನಿ ಉ ಹೊಬಾರ್ಟ್ ಯಾಕ್ಟ್ ರೇಸ್ ನಡೆಸುತ್ತದೆ.
ಈ IIHF ವರ್ಲ್ಡ್ U೨೦ ಚ್ಯಾಂಪಿಯನ್ ಶಿಪ್ (ಐಸ್ ಹಾಕಿ) ಸಾಮಾನ್ಯವಾಗಿ ಡಿಸೆಂಬರ್ ೨೬ ರಂದು ನೆರವೇರುತ್ತದೆ. ಕೆನಡಾದಲ್ಲಿ ಈ ಪಂದ್ಯಾವಳಿಯು ಆ ವರ್ಷದ ಅತ್ಯಂತ ದೊಡ್ಡ ಕ್ರೀಡಾ ಆಯೋಜನಗಳಲ್ಲಿ ಒಂದಾಗಿದೆ,ಇದನ್ನು ಸಾಮಾನ್ಯವಾಗಿ USನಲ್ಲಿ ನಡೆವ ಸೂಪರ್ ಬೌಲ್ ಜೊತೆಗೆ ಹೋಲಿಸಲಾಗುತ್ತದೆ.
ಈ NHL ಕೂಡಾ ಕ್ರೀಡೆಗಳಲ್ಲಿ ತನ್ನ ಪರಿಪೂರ್ಣತೆ ಸಾಧಿಸುವತ್ತ ನಡೆದಿರುವುದು ಕಾಣುತ್ತದೆ.(೧೧ ಕ್ರೀಡೆಗಳನ್ನು ೨೦೧೦ ನಲ್ಲಿ ಆಡಲಾಗಿದೆ.ಯಾಕೆಂದರೆ ಕ್ರಿಸ್ಮಸ್ ಈವ್ ಮತ್ತು ಕ್ರಿಸ್ಮಸ್ ಡೇ ರಜಾದಿನಗಳು ಹೆಚ್ಚು ಕ್ರೀಡೆಗಳನ್ನು ಆಯೋಜಿಸಲು ಅನುವು ಮಾಡಿವೆ.
ಈ ಸ್ಪೆಂಗ್ಲರ್ ಕಪ್ (ಐಸ್ ಹಾಕಿ) ಕೂಡ ಡಿಸೆಂಬರ್ ೨೬ ರಂದೇ [[ಸ್ವಿಟ್ಜರ್ಲ್ಯಾಂಡ್|ಸ್ವಿಜರ್ ಲೆಂಡ್]] ನ ದಾವೊಸ್ ನಲ್ಲಿ ಆರಂಭಗೊಳ್ಳುತ್ತದೆ.ಇದರಲ್ಲಿ HC ದಾವೊಸ್,ಟೀಮ್ ಕೆನಡಾ ಮತ್ತು ಇನ್ನುಳಿದ ಉನ್ನತ ಶ್ರೇಣಿಯ ಯುರೊಪಿಯನ್ ಹಾಕಿ ಟೀಮ್ ಗಳು ಇರುತ್ತವೆ.
==ಇವನ್ನೂ ಗಮನಿಸಿ==
*ಸೇಂಟ್ ಸ್ಟಿಫನ್ಸ್ ಡೇ
*ಬಾಕ್ಸಿಂಗ್ ಡೇ ಸುನಾಮಿ
==ಉಲ್ಲೇಖಗಳು==
{{Reflist|2}}
==ಬಾಹ್ಯ ಕೊಂಡಿಗಳು==
{{Commons category|Boxing Day}}
*[http://www.snopes.com/holidays/christmas/boxingday.asp ಸ್ನೊಪ್ಸ್: ದಿ ಒರಿಜಿನ್ಸ್ ಆಫ್ ಬಾಕ್ಸಿಂಗ್ ಡೇ]
*[http://www.holidayyear.com/holidays/boxing-day.html ಬಾಕ್ಸಿಂಗ್ ಡೇ ಸೆಲೆಬ್ರೇಶನ್ಸ್] {{Webarchive|url=https://web.archive.org/web/20110712214116/http://www.holidayyear.com/holidays/boxing-day.html |date=2011-07-12 }}
{{Christmas}}
{{Navboxes|list1=
{{Australia Holidays}}
{{Canada Holidays}}
{{UK Holidays}}
{{South Africa Holidays}}
{{New Zealand Holidays}}
}}
{{Interwikineeded}}
[[ವರ್ಗ:ಕ್ರಿಸ್ಮಸ್ ಸಂಪ್ರದಾಯಗಳು]]
[[ವರ್ಗ:ಕ್ರಿಸ್ಮಸ್ -ಸಂಬಂಧಿತ ರಜಾದಿನಗಳು]]
[[ವರ್ಗ:ಆಸ್ಟ್ರೇಲಿಯಾದಲ್ಲಿ ಸಾರ್ವಜನಿಕ ರಜಾದಿನಗಳು]]
[[ವರ್ಗ:ಕೆನಡಾದಲ್ಲಿನ ರಜಾದಿನಗಳು]]
[[ವರ್ಗ:ನ್ಯುಜಿಲ್ಯಾಂಡ್ ನಲ್ಲಿನ ರಜಾದಿನಗಳು]]
[[ವರ್ಗ:ಯುನೈಟೆಡ್ ಕಿಂಗ್ಡಮ್ ನಲ್ಲಿನ ರಜಾದಿನಗಳು]]
[[ವರ್ಗ:ಡಿಸೆಂಬರ್ ಆಚರಣೆಗಳು]]
[[ವರ್ಗ:ಹಬ್ಬಗಳು]]
[[ವರ್ಗ:ಕ್ರೈಸ್ತ ಧರ್ಮದ ಹಬ್ಬಗಳು]]
7qqqt6qrrrryz8w1kmlkzs7oxvfm0bc
ನಾರಾಯಣಪುರ ಜಲಾಶಯ
0
33576
1375845
1351765
2026-06-25T19:15:29Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1375845
wikitext
text/x-wiki
{{Infobox dam
| name = ನಾರಾಯಣಪುರ ಜಲಾಶಯ(ಬಸವ ಸಾಗರ )
| image =
| image_caption = ನಾರಾಯಣಪುರ ಜಲಾಶಯ(ಬಸವ ಸಾಗರ ಜಲಾಶಯ)
| name_official = Upper Krishna-I
| dam_crosses = [[ಕೃಷ್ಣಾ ನದಿ]]
| res_name =
| location = [[ನಾರಾಯಣಪುರ]],[[ಸುರಪುರ]] ತಾಲ್ಲೂಕು, [[ಯಾದಗಿರಿ ಜಿಲ್ಲೆ]], [[ಕರ್ನಾಟಕ]]
| dam_operator = ಕರ್ನಾಟಕ ವಿದ್ಯುತ್ ನಿಗಮ
| dam_length = 10,637 meters
| dam_height = 29 meters
| dam_width_base =
| construction_began =
| opening =
| closed =
| cost =
| res_capacity_total = 31.47 TMC.
| res_catchment =
| res_surface =
| coordinates =
| lat_d =
| long_d =
| extra
}}
ನಾರಾಯಣಪುರ ಜಲಾಶಯ(ಬಸವ ಸಾಗರ ಜಲಾಶಯ)ವು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.<ref>{{cite web | url=http://www.kbjnl.com/Comp-OM-Narayanpur-dam | title=Narayanpur Dam | publisher=Krishna Bhagya Jal Nigam Ltd. | accessdate=21 June 2016 | archive-date=8 ಫೆಬ್ರವರಿ 2013 | archive-url=https://web.archive.org/web/20130208080725/http://www.kbjnl.com/Comp-OM-Narayanpur-dam | url-status=dead }}</ref> ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ.
[[ಯಾದಗಿರಿ ಜಿಲ್ಲೆ]]ಯ [[ಸುರಪುರ]] ತಾಲ್ಲೂಕಿನ [[ನಾರಾಯಣಪುರ]] ಎಂಬಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. [[ವಿಜಯಪುರ]], [[ಕಲಬುರಗಿ]], [[ಯಾದಗಿರಿ]] ಹಾಗೂ [[ರಾಯಚೂರು]] ಜಿಲ್ಲೆಗಳ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಜಲಾಶಯವನ್ನು '''ಬಸವ ಸಾಗರ ಜಲಾಶಯ''' ಎಂಬ ಇನ್ನೂಂದು ಹೆಸರಿನಿಂದ ಕರೆಯಲಾಗುತ್ತದೆ.
==ಉಲ್ಲೇಖಗಳು==
{{Reflist}}
==ಬಾಹ್ಯ ಕೊಂಡಿಗಳು ==
* Photos: {{Cite web|title=Narayanpur Dam|publisher=Mysore Construction Company|url=http://www.myconltd.com/Irrigation%20Home.htm|archiveurl=https://web.archive.org/web/20120609050957/http://www.myconltd.com/Irrigation%20Home.htm|archivedate=9 June 2012|deadurl=no}}
{{-}}
{{Interwikineeded}}
[[ವರ್ಗ:ಜಲಾಶಯಗಳು]]
5agdd8z4ukgbo7nkj9ahmy2kketfdnd
ಪಿಚ್ಚಳ್ಳಿ ಶ್ರೀನಿವಾಸ್
0
72320
1375852
1353363
2026-06-26T01:09:31Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1375852
wikitext
text/x-wiki
{{Wikify}}
{{Infobox person
|name=
|image=Picchalli Shrinivas.jpg
|occupation=ಗಾಯಕ, ರಂಗಕರ್ಮಿ
|birth_place= ಪಿಚ್ಚಳ್ಳಿ, [[ಬಂಗಾರಪೇಟೆ]], [[ಕೋಲಾರ]], [[ಕರ್ನಾಟಕ]]
}}
'''ಪಿಚ್ಚಳ್ಳಿ ಶ್ರೀನಿವಾಸ್''' ಖ್ಯಾತ [[ಜನಪದ]] ಹಿನ್ನೆಲೆ ಗಾಯಕ<ref>ಕಲಾವಿದರ ಬದುಕಿಗೆ ಘನತೆ ತರುವುದು ನನ್ನ ಆದ್ಯತೆ: ಪಿಚ್ಚಳ್ಳಿ ಶ್ರೀನಿವಾಸ್</ref><ref>{{Cite web |url=http://www.vbnewsonline.com/Writer/157465/ |title=ಆರ್ಕೈವ್ ನಕಲು |access-date=2015-10-06 |archive-date=2014-06-28 |archive-url=https://web.archive.org/web/20140628233855/http://vbnewsonline.com/Writer/157465/ |url-status=dead }}</ref>. ಇವರು ಹಾಡಲು ನಿಂತರೇ, ಜಾನಪದ ಗೀತೆ, ಹೋರಾಟದ ಹಾಡು<ref>ಪಿಚ್ಚಳ್ಳಿ ಶ್ರೀನಿವಾಸ್ ಅವರ ಹೋರಾಟದ ಹಾಡುಗಳು ಆಡಿಯೋ, ಮತ್ತು ಜನಪದ ಮತ್ತು ಜನಪರ ಹಾಡುಗಳ ಡಿವಿಡಿಗಳು ಬಿಡುಗಡೆ</ref><ref>http://ladaiprakashanabasu.blogspot.in/2011/09/blog-post_4700.html</ref> ಹಾಗೂ ಕ್ರಾಂತಿಗೀತೆಗಳು ಕಾವೇರಿಯ ನೀರಿನಂತೆ ಹರಿದುಬರುತ್ತದೆ. ಕರ್ನಾಟಕದ ಗದ್ದರ್<ref>ಕರ್ನಾಟಕದ ಗದ್ದರ್ ಪಿಚ್ಚಳ್ಳಿ ಶ್ರೀನಿವಾಸ್</ref><ref>{{Cite web |url=http://sampada.net/article/20968 |title=ಆರ್ಕೈವ್ ನಕಲು |access-date=2015-10-06 |archive-date=2016-03-17 |archive-url=https://web.archive.org/web/20160317045953/https://sampada.net/article/20968 |url-status=dead }}</ref> ಎಂದೆ ಖ್ಯಾತರು ಅವರು. ಕೋಲಾರ ಜಿಲ್ಲೆಯ ಖ್ಯಾತ ಜಾನಪದ ಗಾಯಕ<ref>{{Cite web |url=http://www.ekanasu.com/2011/01/blog-post_7468.html |title=ಆರ್ಕೈವ್ ನಕಲು |access-date=2015-10-06 |archive-date=2025-01-25 |archive-url=https://web.archive.org/web/20250125000946/http://www.ekanasu.com/2011/01/blog-post_7468.html |url-status=dead }}</ref> ಪಿಚ್ಚಳ್ಳಿ ಶ್ರೀನಿವಾಸ್ ಪ್ರಸ್ತುತ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷರು<ref>{{Cite web |url=http://publictv.in/kannada/news/national/archives/tag/%E0%B2%AA%E0%B2%BF%E0%B2%9A%E0%B3%8D%E0%B2%9A%E0%B2%B3%E0%B3%8D%E0%B2%B3%E0%B2%BF-%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8%E0%B3%8D/ |title=ಆರ್ಕೈವ್ ನಕಲು |access-date=2015-10-06 |archive-date=2015-05-23 |archive-url=https://web.archive.org/web/20150523054431/http://publictv.in/kannada/news/national/archives/tag/%e0%b2%aa%e0%b2%bf%e0%b2%9a%e0%b3%8d%e0%b2%9a%e0%b2%b3%e0%b3%8d%e0%b2%b3%e0%b2%bf-%e0%b2%b6%e0%b3%8d%e0%b2%b0%e0%b3%80%e0%b2%a8%e0%b2%bf%e0%b2%b5%e0%b2%be%e0%b2%b8%e0%b3%8d/ |url-status=dead }}</ref>.<ref>http://www.planetkannada.com/node/9647{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
==ಜನನ==
ಮೂಲತಃ ಕೋಲಾರ ಜಿಲ್ಲೆಯ, ಬಂಗಾರಪೇಟೆ ತಾಲ್ಲೂಕಿನ ಪಿಚ್ಚಳ್ಳಿಯಲ್ಲಿ ಬಡಕುಟುಂಬದಲ್ಲಿ ಜನಿಸಿದವರು.
==ಬಹುಮುಖ ಪ್ರತಿಭಾ ಸಾಧನೆ==
ದೇವನೂರು ಮಹದೇವರವರ "ಅಮಾಸ" ಚಲನ ಚಿತ್ರಕ್ಕೆ ಇವರು ಹಾಡಿದ ಹಾಡಿಗೆ ರಾಜ್ಯ ಸರ್ಕಾರ ಉತ್ತಮ ಗಾಯಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಷ್ಟೆ ಅಲ್ಲದೇ ನಾಟಕ ಮತ್ತು ಟೆಲಿಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಧ್ವನಿಸುರಳಿಗಳಿಗೆ ಸಂಗೀತ ಸಂಯೋಜನೆಮಾಡಿದ್ದಾರೆ.16 ಕ್ಕೂ ಹೆಚ್ಚು ಜಾನಪದ ಧ್ವನಿ ಸುರಳಿಗಳನ್ನು ಹೊರತಂದಿದ್ದಾರೆ<ref>http://www.kannadaprabha.com/districts/kolar/%E0%B2%9C%E0%B2%A8%E0%B2%AA%E0%B2%A6-%E0%B2%95%E0%B2%B2%E0%B2%BE%E0%B2%B5%E0%B2%BF%E0%B2%A6%E0%B2%B0-%E0%B2%8F%E0%B2%B3%E0%B2%BF%E0%B2%97%E0%B3%86%E0%B2%97%E0%B2%BE%E0%B2%97%E0%B2%BF-%E0%B2%AA%E0%B3%8D%E0%B2%B0%E0%B2%AF%E0%B2%A4%E0%B3%8D%E0%B2%A8-%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8%E0%B3%8D/181683.html{{Dead link|date=ಫೆಬ್ರವರಿ 2024 |bot=InternetArchiveBot |fix-attempted=yes }}</ref>. ಕಾಲಿಗೆ ಗೆಜ್ಜೆ ಇಲ್ಲದೆ,ತಮಟೆ, ಡೋಲು ಬೇಕಿಲ್ಲದೇ, ಯಾವುದೇ ತಾಳ ಮೇಳಗಳಿಲ್ಲದೇ ಬರೀ ಧ್ವನಿಯ ಮೂಲಕವೇ ಕೇಳುಗರನ್ನು ಬರೀ ಕಂಠಸಿರಿಯಿಂದಲೇ ಸೆಳೆಯುವ ಶಕ್ತಿ ಅವರದು. ಮಹಿಳೆಯರ ಹಕ್ಕುಗಳ ಕುರಿತ ಸುಮಾರು 9 ಸಾಕ್ಷ್ಯ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಕ್ಷರತಾ ಆಂದೋಲನಕ್ಕೆ ಹಲವಾರು ಬೀದಿನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಸಾಕ್ಷರತೆ, ಆದಿವಾಸಿ, ಬುಡಕಟ್ಟು, ಗ್ರಾಮಪಂಚಾಯತಿಯಲ್ಲಿ ಚುನಾಯಿತರಾದ ಮಹಿಳೆಯರಿಗೆ ಜಾಗೃತಿ ಮೂಡಿಸುವಲ್ಲಿ ಹಲವಾರು ಬೀದಿ ನಾಟಕಗಳನ್ನು ಬರೆದಿದ್ದಾರೆ. ಜೊತೆಗೆ ಹಲವಾರು ಸಾಂಸ್ಕೃತಿಕ ಶಿಬಿರಗಳನ್ನು ನಡೆಸಿದ್ದಾರೆ<ref>{{Cite web |url=http://www.kannadaprabha.com/districts/kolar/%E0%B2%AD%E0%B3%82%E0%B2%AE%E0%B2%BF-%E0%B2%87%E0%B2%B2%E0%B3%8D%E0%B2%B2%E0%B2%A6%E0%B2%BF%E0%B2%A6%E0%B3%8D%E0%B2%A6%E0%B2%B0%E0%B3%86-%E0%B2%8E%E0%B2%B2%E0%B3%8D%E0%B2%B2%E0%B2%BF%E0%B2%AF-%E0%B2%A8%E0%B2%BE%E0%B2%A1%E0%B3%81-%E0%B2%A8%E0%B3%81%E0%B2%A1%E0%B2%BF-%E0%B2%AC%E0%B3%86%E0%B2%B3%E0%B2%B5%E0%B2%A3%E0%B2%BF%E0%B2%97%E0%B3%86-%E0%B2%AA%E0%B2%BF%E0%B2%9A%E0%B3%8D%E0%B2%9A%E0%B2%B3%E0%B3%8D%E0%B2%B3%E0%B2%BF-%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8%E0%B3%8D-%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86/219525.html |title=ಆರ್ಕೈವ್ ನಕಲು |access-date=2015-10-06 |archive-date=2016-03-04 |archive-url=https://web.archive.org/web/20160304225209/http://www.kannadaprabha.com/districts/kolar/%E0%B2%AD%E0%B3%82%E0%B2%AE%E0%B2%BF-%E0%B2%87%E0%B2%B2%E0%B3%8D%E0%B2%B2%E0%B2%A6%E0%B2%BF%E0%B2%A6%E0%B3%8D%E0%B2%A6%E0%B2%B0%E0%B3%86-%E0%B2%8E%E0%B2%B2%E0%B3%8D%E0%B2%B2%E0%B2%BF%E0%B2%AF-%E0%B2%A8%E0%B2%BE%E0%B2%A1%E0%B3%81-%E0%B2%A8%E0%B3%81%E0%B2%A1%E0%B2%BF-%E0%B2%AC%E0%B3%86%E0%B2%B3%E0%B2%B5%E0%B2%A3%E0%B2%BF%E0%B2%97%E0%B3%86-%E0%B2%AA%E0%B2%BF%E0%B2%9A%E0%B3%8D%E0%B2%9A%E0%B2%B3%E0%B3%8D%E0%B2%B3%E0%B2%BF-%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8%E0%B3%8D-%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86/219525.html |url-status=dead }}</ref>.
==ಪ್ರಶಸ್ತಿ, ಗೌರವ==
# ಪಿಚ್ಚಳ್ಳಿ ಶ್ರೀನಿವಾಸ್ ರವರಿಗೆ 1999 ರಲ್ಲಿ ರಾಜ್ಯ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ
# 2000ದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
# ಅದೇ ವರ್ಷದಲ್ಲಿ ಕೋಲಾರ ಜಿಲ್ಲಾಡಳಿತವು ನಂದಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
# ಜೊತೆಗೆ 2005ರಲ್ಲಿ ರಾಜ್ಯ ಪ್ರಶಸ್ತಿಯು ಸಹ ಪಿಚ್ಚಳ್ಳಿ ಶ್ರೀನಿವಾಸ್ ರವರ ಮಡಲಿಗೆ ಬಂದಿದೆ.
# ದೇವನೂರು ಮಹದೇವರವರ "ಅಮಾಸ" ಚಲನ ಚಿತ್ರಕ್ಕೆ ಇವರು ಹಾಡಿದ ಹಾಡಿಗೆ ರಾಜ್ಯ ಸರ್ಕಾರ ಉತ್ತಮ ಗಾಯಕ ಪ್ರಶಸ್ತಿ
# ಜಾನಪದ ಅಕಾಡೆಮಿಯು 2012 ಮತ್ತು 2013ರ ಸಾಲಿನ ಜಾನಪದ ಪ್ರಶಸ್ತಿಯನ್ನು ನೀಡಿದೆ<ref>http://www.bangalorewaves.com/news/bangalorewaves-related-news.php?tagval=%E0%B2%AA%E0%B2%BF%E0%B2%9A%E0%B3%8D%E0%B2%9A%E0%B2%B3%E0%B3%8D%E0%B2%B3%E0%B2%BF%20%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8%E0%B3%8D&id=15964{{Dead link|date=ಡಿಸೆಂಬರ್ 2024 |bot=InternetArchiveBot |fix-attempted=yes }}</ref>
==ಉಲ್ಲೇಖಗಳು==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಜನಪದ ಗಾಯಕರು]]
ehr958ya39yf70vgu33kyjj644e67f3
ಥಿಯಾಡರ್ ಕ್ರಾಮರ್
0
80898
1375830
1374583
2026-06-25T12:46:43Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1375830
wikitext
text/x-wiki
ಥಿಯಾಡರ್ ಕ್ರಾಮರ್ (1897-1958) : [[ಆಸ್ಟ್ರಿಯ|ಆಸ್ಟ್ರಿಯದ]] ಜಾನಪದ ಕವಿ. [[ಇಂಗ್ಲೆಂಡ್|ಇಂಗ್ಲೆಂಡಿನಲ್ಲಿ]] ನೆಲೆಸಿದವ.
[[ಚಿತ್ರ:GuentherZ 2007-11-03 1320 Gedenktafel Theodor Kramer Wien02.jpg|thumb|right|ಥಿಯಾಡರ್ ಕ್ರಾಮರ್ ನ ಸ್ಮಾರಕ]]
==ಬದುಕು==
ಹಳ್ಳಿಯ ವೈದ್ಯನ ಮಗನಾಗಿ ಹುಟ್ಟಿದ ಈತ [[ಒಂದನೆಯ ಮಹಾಯುದ್ಧ]]ದಲ್ಲಿ ಅಂಗವಿಕಲನಾದ. ಅನಂತರ ಪುಸ್ತಕ ವ್ಯಾಪಾರಿಯಾಗಿ ಜೀವನ ನಡೆಸಿದ. ಅದರಲ್ಲೂ ವಿಫಲನಾಗಿ ಸಣ್ಣ ಪುಟ್ಟ ಹುದ್ದೆಗಳಲ್ಲಿದ್ದ. ಆದರೆ 1930ರಲ್ಲಿ ಆದ ಆರ್ಥಿಕಮೌಲ್ಯ ಕುಸಿತದಿಂದಾಗಿ ಕೆಲಸ ಕಳೆದುಕೊಂಡ. [[ಎರಡನೇ ಮಹಾಯುದ್ಧ|ಎರಡನೆಯ ಮಹಾಯುದ್ಧ]]ದಲ್ಲಿ [[ಅಡೋಲ್ಫ್ ಹಿಟ್ಲರ್|ಹಿಟ್ಲರ್]] [[ಆಸ್ಟ್ರಿಯ]]ವನ್ನು ಆಕ್ರಮಿಸಿದಾಗ, [[ನಾಜಿಸಮ್|ನಾಜಿ]]ಗಳಿಂದ ತಪ್ಪಿಸಿಕೊಂಡು [[ಇಂಗ್ಲೆಂಡ್|ಇಂಗ್ಲೆಂಡಿ]]ಗೆ ತೆರಳಿ, ಅಲ್ಲಿ ಗಿಲ್ಫರ್ಡ್ ವೃತ್ತಿಶಿಕ್ಷಣಶಾಲೆಯಲ್ಲಿ ಗ್ರಂಥಪಾಲನಾದ.
==ಜೀವನ ಚರಿತ್ರೆ==
ಅವರ ತಂದೆ ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದ ಸಮಯದಲ್ಲಿ ಲೋವರ್ [[ಆಸ್ಟ್ರಿಯ|ಆಸ್ಟ್ರಿಯಾ]]ದ ವೈನ್ವಿರ್ಟೆಲ್ ಪ್ರದೇಶದ ನೀಡರ್ಹೊಲ್ಲಾಬ್ರನ್ ಎಂಬ ಹಳ್ಳಿಯ ವೈದ್ಯರಾಗಿದ್ದರು . ಅವರ ತಾಯಿಯ ಬಗ್ಗೆ ಹೆಚ್ಚು ತಿಳಿದಿಲ್ಲ.
ಮಾಧ್ಯಮಿಕ ಶಾಲೆಯನ್ನು ಪೂರ್ಣಗೊಳಿಸಿದ ನಂತರ, ಕ್ರಾಮರ್ ಯುದ್ಧದ ಕೊನೆಯವರೆಗೂ ಆಸ್ಟ್ರಿಯನ್ ಸೈನ್ಯದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಯುದ್ಧದ ನಂತರ, ಅವರು ಜರ್ಮನಿಕ್ [[ಭಾಷಾ ವಿಜ್ಞಾನ|ಭಾಷಾಶಾಸ್ತ್ರ]] ಮತ್ತು ಸಾರ್ವಜನಿಕ ಆಡಳಿತವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು, ಆದರೆ ನಾಗರಿಕ ಸೇವಕರಾಗಿ ಮತ್ತು ನಂತರ ಪುಸ್ತಕ ಮಾರಾಟಗಾರರಾಗಿ ಕೆಲಸ ಮಾಡಲು ತಮ್ಮ ವಿಶ್ವವಿದ್ಯಾಲಯದ ಶಿಕ್ಷಣವನ್ನು ನಿಲ್ಲಿಸಿದರು.
೧೯೩೧ ರಿಂದ ಅವರು ಬರವಣಿಗೆಯ ಮೂಲಕ ತಮ್ಮ ಜೀವನೋಪಾಯವನ್ನು ಸಂಪಾದಿಸಿದರು. ಅವರ ಸಾಹಿತ್ಯಿಕ ಕೃತಿಗಳು, ಬಹುತೇಕ ಕಾವ್ಯ ಮಾತ್ರ, ಅವರಿಗೆ ಉತ್ತಮ ಯಶಸ್ಸನ್ನು ತಂದುಕೊಟ್ಟವು ಮತ್ತು ಅವರು [[ಜರ್ಮನ್ ಭಾಷೆ|ಜರ್ಮನ್]] ಮಾತನಾಡುವ ಜಗತ್ತಿನಲ್ಲಿ ಪ್ರಸಿದ್ಧರಾದರು. ಅವರ [[ಭಾವಗೀತೆ|ಭಾವಗೀತಾ]]ತ್ಮಕ ಆದರೆ ಪ್ರಣಯವಲ್ಲದ ಕಾವ್ಯವು ಹೊರಗಿನವರ ಚಿತ್ರಣದಿಂದ ಅದರ ಶಕ್ತಿ ಮತ್ತು ಕಾವ್ಯಾತ್ಮಕ ಗುಣವನ್ನು ಪಡೆದುಕೊಂಡಿದೆ. ಕ್ರೇಮರ್ ಜನರು ಮತ್ತು ಭೂದೃಶ್ಯಗಳ ಸೂಕ್ಷ್ಮ ಕಾವ್ಯಾತ್ಮಕ ಭಾವಚಿತ್ರಗಳನ್ನು ಬರೆದಿದ್ದಾರೆ. ಕ್ರೇಮರ್ ಅವರ ಕೃತಿಗಳು ೧೦,೦೦೦ ಕೃತಿಗಳನ್ನು ಒಳಗೊಂಡಿವೆ, ಅವುಗಳಲ್ಲಿ ಹಲವು ಅಪ್ರಕಟಿತವಾಗಿ ಉಳಿದಿವೆ.
==ಜಾರ್ಜ್ ಟ್ರಾಕ್ಲ್ ಮತ್ತು ಬರ್ಟೋಲ್ಟ್ ಬ್ರೆಕ್ಟ್ ಅವರ ಸಾಹಿತ್ಯಿಕ ಪ್ರಭಾವಗಳು ==
ನಾಜಿ ಜರ್ಮನಿಯೊಂದಿಗಿನ ಅನ್ಶ್ಲಸ್ ನಂತರ , ಕ್ರೇಮರ್ ಒಬ್ಬ ಯಹೂದಿ ಸಾಮಾಜಿಕ ಪ್ರಜಾಪ್ರಭುತ್ವವಾದಿಯಾಗಿ, [[ನ್ಯುರೆಂಬರ್ಗ್|ನ್ಯೂರೆಂಬರ್ಗ್]] ಕಾನೂನುಗಳಿಂದಾಗಿ ತನ್ನ ಸ್ವಂತ ದೇಶದಲ್ಲಿ ಕೆಲಸ ಮಾಡಲು ಅವಕಾಶವಿರಲಿಲ್ಲ , ಇದು ಪ್ರತಿಯೊಬ್ಬ ಯಹೂದಿ ನಾಗರಿಕನು ಈ ಕಾನೂನುಗಳನ್ನು ಪಾಲಿಸುವಂತೆ ನಿರ್ಬಂಧಿಸಿತು. 1939 ರಲ್ಲಿ, ಎಲ್ಲಾ ನಿರೀಕ್ಷೆಗಳಿಗೆ ವಿರುದ್ಧವಾಗಿ, ಅವರು ಮೊದಲು ತಮ್ಮ ಹೆಂಡತಿಗಾಗಿ ಮತ್ತು ನಂತರ ತನಗಾಗಿ [[ಯುನೈಟೆಡ್ ಕಿಂಗ್ಡಂ|ಯುನೈಟೆಡ್ ಕಿಂಗ್ಡಮ್]]ಗೆ ವಲಸೆ ಹೋಗುವಲ್ಲಿ ಯಶಸ್ವಿಯಾದರು. 1940 ರಿಂದ 1941 ರವರೆಗೆ, ಅವರನ್ನು "ಹಗೆತನದ ಏಲಿಯನ್" ಎಂದು ಬಂಧಿಸಲಾಯಿತು, ಇದು ನಾಗರಿಕರ ದೇಶವು ಸಂಘರ್ಷದಲ್ಲಿರುವ ದೇಶವನ್ನು ಪ್ರವೇಶಿಸಿದ ನಾಗರಿಕರಿಗೆ ನೀಡಲಾದ ಬಿರುದು. 1943 ರಲ್ಲಿ, ಅವರು ಗಿಲ್ಡ್ಫೋರ್ಡ್ನಲ್ಲಿ ವಿಶ್ವವಿದ್ಯಾಲಯ ಗ್ರಂಥಪಾಲಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 1946 ರಲ್ಲಿ, ಅವರು ಬ್ರಿಟಿಷ್ ಪೌರತ್ವವನ್ನು ಪಡೆದರು ಮತ್ತು 1957 ರವರೆಗೆ ತಮ್ಮ ವೃತ್ತಿಯಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು. ಕಿರುಕುಳಕ್ಕೊಳಗಾದ ಬರಹಗಾರರ ಸಂಘವಾದ ಆಸ್ಟ್ರಿಯನ್ PEN ಕ್ಲಬ್ನ ಆಡಳಿತ ಮಂಡಳಿಯಲ್ಲಿ ಅವರು ಸೇವೆ ಸಲ್ಲಿಸಿದರು. ಎಲಿಯಾಸ್ ಕ್ಯಾನೆಟ್ಟಿ ಮತ್ತು ಎರಿಚ್ ಫ್ರೈಡ್ರಂತಹ ಕ್ಲಬ್ನ ಇತರ ಸದಸ್ಯರೊಂದಿಗೆ ಅವರು ನಿಕಟ ಸಂಪರ್ಕದಲ್ಲಿದ್ದರು . 1950 ರ ದಶಕದಲ್ಲಿ, ಅವರು ಕ್ರಮೇಣ ಸಾಮಾಜಿಕ ಸಂಪರ್ಕದಿಂದ ಹಿಂದೆ ಸರಿದರು ಮತ್ತು ಅವರ ಆರೋಗ್ಯವು ಹದಗೆಟ್ಟಿತು. ೧೯೫೭ ರಲ್ಲಿ ಅವರನ್ನು [[ವಿಯೆನ್ನಾ]]ಕ್ಕೆ ಕರೆಸಿಕೊಳ್ಳಲಾಯಿತು, ಅಲ್ಲಿ ಅವರಿಗೆ ಪಿಂಚಣಿ ದೊರೆಯಿತು. ಅವರು ಏಪ್ರಿಲ್ ೩, ೧೯೫೮ ರಂದು ವಿಯೆನ್ನಾದಲ್ಲಿ ನಿಧನರಾದರು ಮತ್ತು ವಿಯೆನ್ನಾ ಕೇಂದ್ರ ಸ್ಮಶಾನದಲ್ಲಿ (೩೦ಬಿ - ೧-೨) ಗೌರವ ಸಮಾಧಿಯಲ್ಲಿ (ವಿಶೇಷವಾಗಿ ಪ್ರಮುಖ ನಾಗರಿಕರಿಗೆ ನೀಡಲಾಗುವ ಸಮಾಧಿ) ಸಮಾಧಿ ಮಾಡಲಾಯಿತು.
೧೯೭೦ ರ ದಶಕದ ಅಂತ್ಯದ ವೇಳೆಗೆ, ಅವರ ಕೃತಿಗಳನ್ನು ಜರ್ಮನ್ ಜಾನಪದ ಗುಂಪು ಜುಪ್ಫ್ಗೀಗೆನ್ಹಾನ್ಸೆಲ್ ಪುನರುಜ್ಜೀವನಗೊಳಿಸಿತು .
ಅವರ ಅತ್ಯಂತ ಪ್ರಸಿದ್ಧ ಹಾಡು *ಆಂಡ್ರೆ, ಡೈ ದಾಸ್ ಲ್ಯಾಂಡ್ ಸೋ ಸೆಹರ್ ನಿಚ್ಟ್ ಲೈಬ್ಟೆನ್* (ಭೂಮಿಯನ್ನು ಹಗುರವಾಗಿ ಪರಿಗಣಿಸದ ಇತರರು). ಈ ಹಾಡು ಥರ್ಡ್ ರೀಚ್ನ ನಂತರದ ಪರಿಣಾಮಗಳು ಮತ್ತು "ಜರ್ಮನ್" ನಿಂದ ವಲಸಿಗನಾಗಿ ರೂಪಾಂತರಗೊಂಡ ಬಗ್ಗೆ. ಈ ಹಾಡು ಅವನ ಬೇರುಗಳನ್ನು ಚಾಕುವಿನಿಂದ ಕತ್ತರಿಸುವ ಮೂಲಕ ತೆಗೆದುಹಾಕುವ ಬಗ್ಗೆ ಹೇಳುತ್ತದೆ.
==ಹೋರಾಟ ಮತ್ತು ಸಾಹಿತ್ಯ ==
ಕ್ರಾಮರನದು ಹೋರಾಟದ ಬದುಕು. ವಿಧಿಯೆದುರು ಸೆಣಸಿದುದೇ ಅಲ್ಲದೆ, [[ಕ್ರೌರ್ಯ]], ದಬ್ಬಾಳಿಕೆ, ಕೃತಕತೆಯ ವಿರುದ್ಧವೂ ಈತ ಹೋರಾಡಿದ. ತನ್ನ ಜೀವನದುದ್ದಕ್ಕೂ ದುರ್ಬಲರು ಹಾಗೂ ಶ್ರೀಸಾಮಾನ್ಯರ ಪರವಾಗಿ ಕಾದಾಡಿದ. ಆದರೂ ಈತ ತನ್ನ ಲೇಖಣಿಯನ್ನು ಸಮಾಜದ ವಿರುದ್ಧ ಬಳಸಿದವನಲ್ಲ. ಆಸ್ಟ್ರಿಯದ [[ವಿಯೆನ್ನ|ವಿಯನ್ನ]] ನಗರದ ಹೊರವಲಯಗಳಲ್ಲಿ ವಾಸಿಸುವ ಜನರ ಜೀವನವನ್ನು ಈತ ಯಾವ ವಕ್ರೋಕ್ತಿಯೂ ಇಲ್ಲದೆ ಸರಳವಾಗಿ ನಿರೂಪಿಸಿದ್ದಾನೆ, ತನ್ನ ಕೃತಿಗಳಲ್ಲಿ ಜನಜೀವನಕ್ಕೆ ಕೈಗನ್ನಡಿಯಾದ ಈತನ ಕೃತಿಗಳು ಸಾಹಿತ್ಯ ಲೋಕದಲ್ಲಿ ಕೋಲಾಹಲವನ್ನುಂಟು ಮಾಡಿ ಯಶಸ್ಸು ತಂದವು. ಅನೇಕ ಪ್ರಶಸ್ತಿಗಳು ಈತನ ಪಾಲಿನವಾದವು.
ಇಂಗ್ಲೆಂಡಿನಲ್ಲಿ ನೆಲೆಸಿದ್ದರೂ ಕ್ರಾಮರ್ನ ಹೃದಯ ವಿಯನ್ನದಲ್ಲೇ ಇತ್ತು. ಆಧುನಿಕ [[ಜಾನಪದ ಗೀತೆ]]ಗಳನ್ನು ಸರಳ ಹಾಗೂ ಮಧುರವಾದ ಶೈಲಿಯಲ್ಲಿ ಬರೆದ ಕೆಲವೇ [[ಕವಿ]]ಗಳಲ್ಲಿ ಈತನೂ ಒಬ್ಬ.
==ಬಾಹ್ಯ ಸಂಪರ್ಕಗಳು==
* [https://web.archive.org/web/20001205161100/http://www.sbg.ac.at/ger/kmueller/theodor_kramer_gesellschaft.htm Theodor Kramer Gesellschaft] includes biography, bibliography and excerpts of his works {{in lang|de}}.
* [https://www.welt.de/print-welt/article572353/Ich_leb_verstoert_dahin.html Ich leb' verstört dahin] Article by Hannes Schwenger in ''Die Welt'' (in German).
* [https://www.kramerprogramm.de/cd.html Kramerprogramm] by Kellerman and Rieck with song lyrics and audio clips {{in lang|de}}.
* [http://www.neuhauser-kunstmuehle.at/lesung-kramer.htm Kramer-Lesung] {{Webarchive|url=https://web.archive.org/web/20120226042955/http://www.neuhauser-kunstmuehle.at/lesung-kramer.htm |date=2012-02-26 }} Biography and poems of Kramer {{in lang|de}}.
* [https://www.onb.ac.at/bibliothek/sammlungen/literatur/bestaende/personen/kramer-theodor-1897-1958/ Theodor Kramer] {{Webarchive|url=https://web.archive.org/web/20230510155838/https://www.onb.ac.at/bibliothek/sammlungen/literatur/bestaende/personen/kramer-theodor-1897-1958 |date=2023-05-10 }} im {{ill|Literaturarchiv der Österreichischen Nationalbibliothek|de}} {{in lang|de}}.
* [http://litkult1920er.aau.at/?q=lexikon/kramer-theodor Entry for Theodor Kramer at litkult1920er.aau.at], a project by the University of Klagenfurt
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರಾಮರ್, ಥಿಯಾಡರ್|ಕ್ರಾಮರ್, ಥಿಯಾಡರ್}}
{{Unreferenced}}
{{Interwikineeded}}
[[ವರ್ಗ:ಆಸ್ಟ್ರಿಯ]]
[[ವರ್ಗ:ಸಾಹಿತಿಗಳು]]
[[ವರ್ಗ:ಕವಿಗಳು]]
4hpll2gnea04nf3ij3bhxwjieqxfrdo
ಸದಸ್ಯರ ಚರ್ಚೆಪುಟ:ArtificialHumanity
3
97127
1375850
825260
2026-06-26T01:03:08Z
Mfield
97709
Mfield [[ಸದಸ್ಯರ ಚರ್ಚೆಪುಟ:Fandi89]] ಪುಟವನ್ನು [[ಸದಸ್ಯರ ಚರ್ಚೆಪುಟ:ArtificialHumanity]] ಕ್ಕೆ ಸರಿಸಿದ್ದಾರೆ: Automatically moved page while renaming the user "[[Special:CentralAuth/Fandi89|Fandi89]]" to "[[Special:CentralAuth/ArtificialHumanity|ArtificialHumanity]]"
825260
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Fandi89}}
-- [[ಸದಸ್ಯ:New user message|New user message]] ([[ಸದಸ್ಯರ ಚರ್ಚೆಪುಟ:New user message|ಚರ್ಚೆ]]) ೦೨:೩೯, ೧೦ ಫೆಬ್ರುವರಿ ೨೦೧೮ (UTC)
f8lwy4lq4s0jm964k6e18f2th0vnsvh
ನಯನತಾರ
0
99932
1375843
1351388
2026-06-25T17:55:14Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1375843
wikitext
text/x-wiki
{{Infobox person
| name = ನಯನತಾರ
| image = File:Nayanthara at Filmfare Awards.jpg
| caption =ನಯನತಾರ, ೨೦೧೩ರ SIIMA ಪ್ರಶಸ್ತಿ ಸಮಾರಂಭದಲ್ಲಿ
| birth_name = ಡಯಾನಾ ಮರಿಯಮ್ ಕುರಿಯನ್
| birth_date = {{birth date and age|df=yes|1984|11|18}}<ref>[http://www.rediff.com/movies/report/slide-show-1-birthday-special-nayantara-turns-28/20121119.htm Sri Birthday Special: Nayanthara Turns 28]. Rediff.com (19 November 2012). Retrieved 2012-04-10.</ref><ref>[http://indiatoday.intoday.in/gallery/happy-birthday-nayantara/1/10523.html Happy birthday Nayantara]. indiatoday.com (5 December 2008). Retrieved 2012-04-10.</ref><ref>[http://www.rediff.com/movies/report/birthday-special-nayantaras-fashiobale-screen-avatars/20141118.htm Birthday Special Nayantara] rediff.com (18 November 2014)</ref>
| birth_place = [[ಬೆಂಗಳೂರು]], [[ಕರ್ನಾಟಕ]], ಭಾರತ<!-- PLEASE, DON'T CHANGE THIS AGAIN! SEE THE LINK!! --><ref name="indiatimes1">{{cite news| url=http://timesofindia.indiatimes.com/entertainment/regional/news-interviews/Nayanthara-in-Sandalwood-now/articleshow/5452870.cms |work=The Times of India | title=Nayanthara in Sandalwood now | date=17 January 2010}}</ref><ref>[http://www.sify.com/movies/chat-transcript-of-nayanthara-news-others-kkfusdhhaja.html Chat Transcript of Nayanthara] {{Webarchive|url=https://web.archive.org/web/20130812154424/http://www.sify.com/movies/chat-transcript-of-nayanthara-news-others-kkfusdhhaja.html |date=2013-08-12 }}. Sify.com (10 March 2008). Retrieved 2012-04-10.</ref>
| occupation = {{hlist|ನಟಿ|ನಿರ್ಮಾಪಕಿ|ರೂಪದರ್ಶಿ}}
| nationality = ಭಾರತೀಯ
| yearsactive = ೨೦೦೩-ಇಂದಿನವರೆಗೆ
| partner = ವಿಘ್ನೇಶ್ ಶಿವನ್ (೨೦೧೫-ಇಂದಿನವರೆಗೆ)<ref>{{cite web|url=http://timesofindia.indiatimes.com/entertainment/malayalam/movies/news/Malayalis-should-be-proud-of-Nayanthara/articleshow/49970330.cms|title=‘Malayalis should be proud of Nayanthara’|publisher=TOI|date=29 November 2015|accessdate=22 March 2016}}</ref>
| awards = ಕಲೈಮಾಮಣಿ,<ref>{{cite web|url=http://www.thehindu.com/todays-paper/tp-national/tp-tamilnadu/70-artists-get-kalaimamani-awards/article362528.ece|title=70 artists get Kalaimamamani awards|publisher=[[ದಿ ಹಿಂದೂ]]|date=25 February 2009|accessdate=6 April 2015}}</ref> ನಂದಿ ಪ್ರಶಸ್ತಿ,<ref>{{cite web|url=https://timesofindia.indiatimes.com/entertainment/telugu/movies/news/2011-nandi-awards-winners-list/articleshow/16797289.cms|title=2011 Nandi Awards winners list|publisher=TOI (Times Of India)|date=13 October 2012}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ತಮಿಳುನಾಡು ರಾಜ್ಯ ಪ್ರಶಸ್ತಿ,<ref>{{cite web|url=http://www.indianexpress.com/article/entertainment/tamil/tamil-nadu-announces-the-state-film-awards-for-six-consecutive-years-in-surprise-movie-heres-the-complete-list-of-winners-4750350/lite/|title=Tamil Nadu announces the State Film Awards for
six consecutive years|publisher=The Indian Express|date=14 July 2017}}</ref> ಫಿಲಂಫೇರ್ ಪ್ರಶಸ್ತಿ.
| signature = Nayantara-transperent-signature.png
}}
'''ನಯನತಾರ ಅವರು''' ೨೦೦೩ ರ [[ಮಲಯಾಳಂ]] ಚಿತ್ರ ಮನಾಸ್ಸಿನಕ್ಕರೆಯಲ್ಲಿ ಜಯರಾಮ್ ಅವರೊಂದಿಗೆ ಅಭಿನಯಿಸಿದರು. [[ತಮಿಳು]] ಚಿತ್ರರಂಗದಲ್ಲಿ ಆಯ್ಯ ಮತ್ತು [[ತೆಲುಗು]] ಚಿತ್ರರಂಗದಲ್ಲಿ ಲಕ್ಷ್ಮಿ ಚಲನಚಿತ್ರದೊಂದಿಗೆ ಅವರು ಚೊಚ್ಚಲ ಪ್ರವೇಶ ಮಾಡಿದರು. ಇದರ ನಂತರ ಅವರು ಚಂದ್ರಮುಖಿ, ದುಬೈ ಸೀನು, ತುಲಿಯಾಸಿ, ಬಿಲ್ಲಾ, ಯಾರಡಿ ನೀ ಮೊಹಿನಿ, ಆಧವನ್, ಅಡರ್ಸ್, ರಾಜಾ ರಾಣಿ, ಅರಂಬಮ್, ಥನಿ ಒರುವಾನ್, ಮಾಯಾ, ನಾನು ರೌಡಿ ಧಾನ್, ಬಾಬು ಬಂಗಾರಮ್ ಮತ್ತು ಇರು ಮುಗಾನ್ ಮೊದಲಾದ ತಮಿಳು ಮತ್ತು ತೆಲಗು ಚಲನಚಿತ್ರಗಳಲ್ಲಿ ಯಶಸ್ವಿಯಾಗಿ ನಟಿಸಿದರು.
೨೦೧೦ ರಲ್ಲಿ [[ಕನ್ನಡ]] ಮತ್ತು [[ತೆಲುಗು]] ಭಾಷೆಯ ದ್ವಿಭಾಷಾ ಸಿನಿಮಾ ಸೂಪರ್,<ref name="filmibeat.com">{{cite web|url=http://www.filmibeat.com/kannada/news/2011/upendra-super-remake-rights-demand-190111-aid0062.html|title=Upendra's Super remake rights in great demand|date=19 January 2011|publisher=|accessdate=16 August 2016}}</ref> ಚಲನಚಿತ್ರದ ಮೂಲಕ ಕನ್ನಡ ಚಲನಚಿತ್ರದಲ್ಲಿ ಮೊದಲು ಕಾಣಿಸಿಕೊಂಡರು. ಶ್ರೀ ರಾಮ ರಾಜ್ಯಮ್ ಚಿತ್ರದಲ್ಲಿ ಸೀತಾ ಅವರ ಪಾತ್ರವು ಅವರಿಗೆ ಅತ್ಯುತ್ತಮ ತೆಲುಗು ನಟಿಗಾಗಿ [[ಫಿಲ್ಮ್ಫೇರ್ ಪ್ರಶಸ್ತಿಗಳು|ಫಿಲ್ಮ್ಫೇರ್]] ಪ್ರಶಸ್ತಿ ಮತ್ತು ಅತ್ಯುತ್ತಮ ನಟಿಗಾಗಿ ನಂದಿ ಪ್ರಶಸ್ತಿಯನ್ನು ಗಳಿಸಿ ಕೊಟ್ಟಿತು. ರಾಜಾ ರಾಣಿ ಮತ್ತು ನಾನು ರೌಡಿ ಧನ್ ಚಿತ್ರಗಳಲ್ಲಿ ಅಭಿನಯಕ್ಕಾಗಿ ಅವರು ಅತ್ಯುತ್ತಮ ತಮಿಳು ನಟಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೊಚ್ಚಿ ಟೈಮ್ಸ್ ತನ್ನ "೨೦೧೪ ರಲ್ಲಿ ೧೫ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿ"ಯಲ್ಲಿ ಇವರನ್ನು ಹೆಸರಿಸಿತು.<ref>{{cite news | url=http://timesofindia.indiatimes.com/entertainment/malayalam/movies/news/Kochi-Times-15-Most-Desirable-Women-in-2014/articleshow/46944844.cms | title=Kochi Times 15 Most Desirable Women in 2014 | date=17 April 2015 | agency=[[ದಿ ಟೈಮ್ಸ್ ಆಫ್ ಇಂಡಿಯಾ]] | accessdate=2 June 2015 | author=TNN}}</ref> ೨೦೧೭ ರಲ್ಲಿ, ಅವರು ನಿಮಯಂ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ಫಿಲ್ಮ್ಫೇರ್ ಅತ್ಯುತ್ತಮ ಮಲಯಾಳಂ ನಟಿ ಪ್ರಶಸ್ತಿಯನ್ನು ಪಡೆದರು. ಇದು ಮಲಯಾಳಂನಲ್ಲಿ ಅವರ ಮೊದಲ ಫಿಲ್ಮ್ಫೇರ್ ಪ್ರಶಸ್ತಿ.
== ಆರಂಭಿಕ ಜೀವನ ==
ನಯನತಾರ [[ಭಾರತ|ಭಾರತ ದೇಶದಲ್ಲಿ]] [[ಕರ್ನಾಟಕ]] ರಾಜ್ಯದ [[ಬೆಂಗಳೂರು|ಬೆಂಗಳೂರಿನಲ್ಲಿ]], ಪೋಷಕರಾದ ಕುರಿಯನ್ ಕೊಡಿಯಾಟ್ ಮತ್ತು ಒಮಾನ ಕುರಿಯನ್ ಅವರಿಗೆ ಮಗಳಾಗಿ ಜನಿಸಿದರು. ಇವರು [[ಕೇರಳ|ಕೇರಳದ]] ತಿರುವಳ್ಳದ ಶ್ರೀಮಂತ ಕೊಡಿಯಾಟ್ ಕುಟುಂಬದಿಂದ ಬಂದವರು.<ref name="The Telegraph">{{cite news| url=http://www.telegraphindia.com/1060514/asp/look/story_6217361.asp | location=Calcutta, India | work=The Telegraph | title=Tamil filmdom's top stars ' Kerala women | date=14 May 2006}}</ref><ref>{{cite web |url=http://www.indiaglitz.com/channels/tamil/interview/6240.html |title=Nayanthara: A Dream comes true |publisher=IndiaGlitz |date=25 January 2005 |accessdate=8 October 2011 |archive-date=26 ಡಿಸೆಂಬರ್ 2018 |archive-url=https://web.archive.org/web/20181226111939/https://www.indiaglitz.com/tamil |url-status=dead }}</ref> ಓರ್ವ ಸಹೋದರ ಲೆನೊ, [[ಯುನೈಟೆಡ್ ಅರಬ್ ಎಮಿರೇಟ್ಸ್]], [[ದುಬೈ|ದುಬೈನಲ್ಲಿ]] ವಾಸಿಸುತ್ತಿದ್ದಾರೆ.<ref name="autogenerated1">{{cite web|url=http://sify.com/movies/tamil/interview.php?id=13682609&cid=2408 |title=Welcome to |publisher=Sify |date=20 January 2007 |accessdate=18 October 2011}}</ref> ಆಕೆಯ ತಂದೆ ಭಾರತೀಯ ವಾಯುಪಡೆಯ ಅಧಿಕಾರಿಯಾಗಿದ್ದ ಕಾರಣ, ನಯನತಾರ ಅವರು ಭಾರತದ ಹಲವು ಭಾಗಗಳಲ್ಲಿ, ಮುಖ್ಯವಾಗಿ ಉತ್ತರ ಭಾರತದಲ್ಲಿ ಅಧ್ಯಯನ ಮಾಡಿದರು.<ref name="autogenerated1"/> ಅವರು [[ದೆಹಲಿ]] ಮತ್ತು [[ಗುಜರಾತ್|ಗುಜರಾತಿನ]] ಜಾಮ್ ನಗರದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು. ತಿರುವಳ್ಳದಲ್ಲಿ, ಬಾಳಿಕಮಡಮ್ ಗರ್ಲ್ಸ್ ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮಾಡಿದರು ಮತ್ತು ನಂತರ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಗಾಗಿ ತಿರುವಳ್ಳಾ ಮಾರ್ಥೊಮಾ ಕಾಲೇಜಿಗೆ ಸೇರಿದರು.<ref>[http://specials.rediff.com/movies/2005/jan/13south6.htm rediff.com: Meet Rajnikanth's new heroine!]. Rediff.com. Retrieved 10 April 2012.</ref>
== ವೃತ್ತಿಜೀವನ ==
=== ಮಲಯಾಳಂ ಸಿನೆಮಾದಲ್ಲಿ ಪ್ರಾರಂಭ (೨೦೦೩-೦೪) ===
ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ, ನಯನತಾರ ಅವರು ಪಾರ್ಟ್-ಟೈಮ್ ಆಗಿ ಒಬ್ಬ ರೂಪದರ್ಶಿಯಾಗಿ ಕಾರ್ಯನಿರ್ವಹಿಸಿದರು. ನಿರ್ದೇಶಕ ಸತ್ಯನ್ ಅಂತಿಕಾಡ್ ಅವರಿಂದ ಗುರುತಿಸಲ್ಪಟ್ಟರು. ಇವರು ಕೆಲವು ಮಾಡೆಲಿಂಗ್ ಕಾರ್ಯಯೋಜನೆಗಳನ್ನು ಕಂಡರು ಮತ್ತು ಅವರ ಚಿತ್ರ ಮನಾಸ್ಸಿನಕ್ಕರೆ (೨೦೦೩) ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.<ref name="rediff2005">[http://specials.rediff.com/movies/2005/jan/13south5.htm rediff.com: Meet Rajnikanth's new heroine!]. Rediff.com. Retrieved 10 April 2012.</ref> ಅವರು ಚಲನಚಿತ್ರಗಳಲ್ಲಿ ಆಸಕ್ತಿ ಹೊಂದಿರಲಿಲ್ಲವಾದ್ದರಿಂದ ಆರಂಭದಲ್ಲಿ ಈ ಪ್ರಸ್ತಾಪವನ್ನು ಅವರು ತಿರಸ್ಕರಿಸಿದರೂ, ಅಂತಿಮವಾಗಿ "ಒಂದೇ ಚಿತ್ರ" ಎಂದು ಒಪ್ಪಿಕೊಂಡರು.<ref name="rediff2005"/> ಮನಾಸ್ಸಿನಕ್ಕರೆ ಚಿತ್ರದಿಂದ ಅವರು ಹೆಚ್ಚಿನ ಆರ್ಥಿಕ ಯಶಸ್ಸನ್ನು ಗಳಿಸಿದರು ಮತ್ತು ಆಕೆ ಅನೇಕ ನಟನೆಯ ಪ್ರಸ್ತಾಪಗಳನ್ನು ಪಡೆದರು. 2004 ರಲ್ಲಿ ಬಿಡುಗಡೆಯಾದ ಷಾಜಿ ಕೈಲಾಸ್ ಅವರ ನಟುರಾಜವು, ಮತ್ತು ಫಝಿಲ್ನ ಮಾನಸಿಕ ರೋಮಾಂಚಕ ವಿಸ್ಮಯತಂಬುತ್ ಎರಡೂ ಚಿತ್ರಗಳಲ್ಲಿಯೂ ಅವರು ಮೋಹನ್ ಲಾಲ್ ಜೊತೆಯಲ್ಲಿ ನಟಿಸಿದರು.<ref>[http://www.sify.com/movies/nayantara-is-the-new-flavour-of-kollywood-news-tamil-kkfvDojbjgf.html?ref=false Nayantara is the new flavour of Kollywood] {{Webarchive|url=https://web.archive.org/web/20150924185838/http://www.sify.com/movies/nayantara-is-the-new-flavour-of-kollywood-news-tamil-kkfvDojbjgf.html?ref=false |date=2015-09-24 }}. Sify.com (6 December 2004). Retrieved 2012-04-10.</ref> ವಿಶೇಷವಾಗಿ ವಿಸ್ಮಯತಂಬುತ್ ಚಿತ್ರದಲ್ಲಿನ ಅವರ ಅಭಿನಯವು ಪ್ರಶಂಸಿಸಲ್ಪಟ್ಟಿತು. ವಿಮರ್ಶಕರು "ಅವರು ತನ್ನ ಲೇಖಕ-ಬೆಂಬಲಿತ ಪಾತ್ರದೊಂದಿಗೆ ಗುಡುಗನ್ನು ಕದ್ದಿದ್ದಾರೆ" ಎಂದು ಹೇಳಿಕೊಂಡರು,<ref>[http://www.indiaglitz.com/channels/malayalam/review/7049.html Vismayathumbathu Malayalam Movie Review] {{Webarchive|url=https://web.archive.org/web/20120718125355/http://www.indiaglitz.com/channels/malayalam/review/7049.html |date=2012-07-18 }}. IndiaGlitz (4 April 2004). Retrieved 2012-04-10.</ref> ಅವರು ತಸ್ಕರಾ ವೀರನ್ ಮತ್ತು ರಪ್ಪಕಲ್ನಲ್ಲಿ ಅಭಿನಯಿಸಿದ್ದಾರೆ.
===ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ (೨೦೦೫-೨೦೦೭)===
ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಯನತಾರ ಕಾಣಿಸಿಕೊಂಡರು. ೨೦೦೫ ರಲ್ಲಿ, ಅವರು ತಮಿಳು ಚಲನಚಿತ್ರೋದ್ಯಮದಲ್ಲಿ ಚೊಚ್ಚಲ ಚಿತ್ರ ಹರಿಯ ಐಯಾದಲ್ಲಿ ಅಭಿನಯಿಸಿದರು. ಬೆಹಿಂಡ್ವುಡ್ಸ್.ಕಾಮ್ನಲ್ಲಿ ಅವರು "ತಮಿಳಿನಲ್ಲಿ ಸಂವೇದನೆಯ ಚೊಚ್ಚಲ ಚಿತ್ರ"<ref>[http://www.behindwoods.com/features/Reviews/reviews1/ayya_review.html Ayya Review]. Behindwoods (17 January 2005). Retrieved 2012-04-10.</ref> ಮಾಡಿದ್ದಾರೆಂದು ತಿಳಿಸಿದರು. ಆದರೆ "ತನ್ನ ಸುಂದರವಾದ ನಗುವಿನ ಮೂಲಕ ಜನತೆಯನ್ನು ಗೆದ್ದರು" ಎಂದು Nowrunning.com ನ ವಿಮರ್ಶಕರು ಹೇಳಿದ್ದಾರೆ.<ref>[http://www.nowrunning.com/movie/1973/tamil/ayya/393/review.htm Ayya Review] {{Webarchive|url=https://web.archive.org/web/20140111211044/http://www.nowrunning.com/movie/1973/tamil/ayya/393/review.htm |date=2014-01-11 }}. Nowrunning.com (12 January 2005). Retrieved 2012-04-10.</ref> ಇನ್ನೂ ಆಯ್ಯಾ ಚಿತ್ರೀಕರಣದಲ್ಲಿದ್ದಾಗ, ಅದರ ನಿರ್ದೇಶಕ ಪಿ. ವಾಸು ಪತ್ನಿ ಮನಸ್ಸಿನಕ್ಕರೆರನ್ನು ನೋಡಿದ ಮತ್ತು ಅವಳನ್ನು ಶಿಫಾರಸು ಮಾಡಿದ ನಂತರ ಅವರು ಹಾಸ್ಯ ಭಯಾನಕ ಚಲನಚಿತ್ರ ಚಂದ್ರಮುಖಿಗಾಗಿ <ref>[http://specials.rediff.com/movies/2005/jan/13south1.htm rediff.com: Meet Rajnikanth's new heroine!]. Rediff.com. Retrieved 10 April 2012.</ref> ಆಯ್ಕೆಯಾದರು.<ref>[http://specials.rediff.com/movies/2006/oct/12slid3.htm rediff.com: Nayantara, the Diwali queen]. Specials.rediff.com (12 October 2006). Retrieved 2012-04-10.</ref> ಚಿತ್ರವು ಚಿತ್ರಮಂದಿರಗಳಲ್ಲಿ ಸುಮಾರು 800 ದಿನಗಳವರೆಗೆ ನಡೆಯಿತು,<ref>{{cite web|url=http://www.behindwoods.com/tamil-movie-news/june-07-02/11-06-07-rajini.html |title=tamil movie news rajinikanth Chandramukhi 800th day Thyagaraja Bhagavathar Haridas director P Vasu Shanthi theatre karunanidhi hot stills picture image gallery |publisher=Behindwoods |accessdate=18 October 2011}}</ref> ಅಂತಿಮವಾಗಿ ತಮಿಳು ಭಾಷೆಯಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿ ನಟಿಸಿದ್ದರು.<ref name="autogenerated2">{{cite web|url=http://sify.com/movies/tamil/interview.php?id=14226712&cid=2408 |title=Welcome to |publisher=Sify |date=20 January 2007 |accessdate=18 October 2011}}</ref> ಆ ವರ್ಷದ ನಂತರ ಅವರು ಎ ಆರ್ ಮುರುಗಡೋಸ್ನ ಘಜಿನಿ ಚಿತ್ರದಲ್ಲಿ ಕಾಣಿಸಿಕೊಂಡರು, ಇದರಲ್ಲಿ ಅವರು ದ್ವಿತೀಯ ಸ್ತ್ರೀ ಪಾತ್ರವನ್ನು ನಿರ್ವಹಿಸಿದರು.<ref name="autogenerated2"/> ನಂತರ ಅವರು ಪೆರಾರಾಸು ನಿರ್ದೇಶನದ ಮಸಾಲಾ ಸಿನಿಮಾ ಶಿವಕಾಶಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.<ref>[http://www.sify.com/movies/nayan-s-item-number-news-tamil-kkfv12ejggg.html?ref=false Nayan's item number] {{Webarchive|url=https://web.archive.org/web/20150806012225/http://www.sify.com/movies/nayan-s-item-number-news-tamil-kkfv12ejggg.html?ref=false |date=2015-08-06 }}. Sify.com (6 August 2005). Retrieved 2012-04-10.</ref>
=== ಸಾರ್ವಜನಿಕ ಗುರುತಿಸುವಿಕೆ ಮತ್ತು ವ್ಯಾಪಕ ಯಶಸ್ಸು (೨೦೦೭-೧೧) ===
ವಿಷ್ಣುವರ್ಧನ್-ನಿರ್ದೇಶಿತ ದರೋಡೆಕೋರ ಚಿತ್ರ ಬಿಲ್ಲಾ ನಲ್ಲಿ ನಟಿಸಿದ ಕೊಲೈವುಡ್ನಲ್ಲಿ ನಯನತಾರಾ ತನ್ನ ಸ್ಟಾರ್ ಬಿಲ್ಲಿಂಗ್ ಅನ್ನು ಪುನಃ ಪಡೆದುಕೊಂಡರು. ಅದೇ ಹೆಸರಿನ ೧೯೮೦ ರ ತಮಿಳು ಚಿತ್ರದ ರಿಮೇಕ್ ಇದು ಬಾಕ್ಸ್ ಆಫೀಸ್<ref>{{cite web|url=http://sify.com/movies/billa-hits-a-century-news-tamil-kkftJhhddhe.html |title=Billa hits a century! |publisher=Sify |date=22 March 2008 |accessdate=18 October 2011}}</ref> ನಲ್ಲಿ ಯಶಸ್ಸನ್ನು ಗಳಿಸಿತು, ಮತ್ತು ಸಯಾನಾ ಅವರ ಹೊಸ ಗ್ಲಾಮರ್ ನೋಟದಲ್ಲಿ ನಯನತಾರಾ ಅವರ ಅಭಿನಯಕ್ಕಾಗಿ ಹಲವು ಪ್ರಶಸ್ತಿಗಳನ್ನು ಪಡೆದರು.<ref>{{cite web|url=http://sify.com/movies/tamil/interview.php?id=14582061&cid=2408 |title=Welcome to |publisher=Sify |date=20 January 2007 |accessdate=18 October 2011}}</ref>. ವಿಮರ್ಶಕರು ಮತ್ತಷ್ಟು ಬರೆದರು: "ನಯಂತರಾ ತನ್ನ ಸೆಕ್ಸಿಯೆಸ್ಟ್ ಅತ್ಯುತ್ತಮ ಸುಂದರವಾದ ದೇಹವನ್ನು ಹೊಂದಿದ್ದಾರೆ, ಅವರು ಧೈರ್ಯದಿಂದ ಕೂಡಿರುವ ಸುಂದರವಾದ ದೇಹವನ್ನು ಹೊಂದಿದ್ದರು ಮತ್ತು ಅವರ ಪಾತ್ರದ ತಣ್ಣನೆಯ ಒಲವು ಮತ್ತು ಕಹಿ<ref>[http://www.sify.com/movies/billa-review-tamil-14575572.html Movie Review:Billa] {{Webarchive|url=https://web.archive.org/web/20131128161433/http://www.sify.com/movies/billa-review-tamil-14575572.html |date=2013-11-28 }}. Sify.com. Retrieved 2012-04-10.</ref> ಅದೇ ರೀತಿ, ನೊವ್ರನ್ನಿಂಗ್.ಕಾಮ್ನ ವಿಮರ್ಶಕ ಅವರು "ಮಿನಿ ಸ್ಕರ್ಟ್ಗಳು, ಜಾಕೆಟ್, ಗಾಢ ಕನ್ನಡಕಗಳು ಮತ್ತು ಎತ್ತರದ ಬೂಟುಗಳಲ್ಲಿ ಮಹಾನ್" ಎಂದು ನೋಡಿದ್ದಾರೆ.
<ref>[http://www.nowrunning.com/movie/4506/tamil/billa/1436/review.htm Billa Review – Tamil Movie Review by Mythily Ramachandran] {{Webarchive|url=https://web.archive.org/web/20120226005332/http://www.nowrunning.com/movie/4506/tamil/billa/1436/review.htm |date=2012-02-26 }}. Nowrunning.com (15 December 2007). Retrieved 2012-04-10.</ref>
೨೦೦೮ ರಲ್ಲಿ ಅವರು ಐದು ಬಿಡುಗಡೆಗಳನ್ನು ಹೊಂದಿದ್ದರು, ಅವುಗಳಲ್ಲಿ ನಾಲ್ಕು ತಮಿಳಿನಲ್ಲಿವೆ. ಇವರು ೫೬ ನೆಯ ಫಿಲ್ಮ್ಫೇರ್ ಪ್ರಶಸ್ತಿ ದಕ್ಷಿಣದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಅವರ ನಂತರದ ಬಿಡುಗಡೆಗಳು ಕುಸೆಲಾನ್, ಸತ್ಯಂ, ವಿಲ್ಲು ಮತ್ತು ಏಗನ್.೨೦೦೯ ರಲ್ಲಿ ಅವರು ಆದರ್ಶನ್ ಅನ್ನು ಬಿಡುಗಡೆ ಮಾಡಿದರು. ೨೦೧೦ ರಲ್ಲಿ, ಆಕೆಯ ಬಿಡುಗಡೆಯಾದ ಎಲ್ಲಾ ಚಲನಚಿತ್ರಗಳು ವಾಣಿಜ್ಯ ಯಶಸ್ಸು ಗಳಿಸಿದವು: ಆಕೆ ನಾಲ್ಕು ದಕ್ಷಿಣದ ಭಾಷೆಗಳಲ್ಲಿ ಐದು ಬಾಕ್ಸ್ ಆಫೀಸ್ ಹಿಟ್ಗಳನ್ನು ಹೊಂದಿದ್ದರು - ಆದುರ್ಗಳು (ತೆಲುಗು) ಬಾಡಿಗಾರ್ಡ್ (ಮಲಯಾಳಂ), ಸಿಂಹ (ತೆಲುಗು), ಬಾಸ್ ಎಂಜಿರಾ ಭಾಸ್ಕರನ್ (ತಮಿಳು) ಮತ್ತು ಸೂಪರ್ (ಕನ್ನಡ, ತೆಲುಗು).<ref>{{cite news | url=http://articles.timesofindia.indiatimes.com/2010-12-20/news-interviews/28222815_1_films-southern-languages-boss-engira-baskaran | work=The Times of India | title=I feel blessed to play Sita: Nayanthara | date=20 December 2010 | access-date=2018-05-05 | archive-date=2012-11-04 | archive-url=https://web.archive.org/web/20121104062227/http://articles.timesofindia.indiatimes.com/2010-12-20/news-interviews/28222815_1_films-southern-languages-boss-engira-baskaran | url-status=dead }}</ref><ref>{{cite web |url=http://www.sify.com/movies/people-now-trust-my-abilities-nayanthara-news-tamil-kmikivhgjhj.html?scategory=tamil |title=People now trust my abilities: Nayanthara |publisher=Sify |accessdate=18 October 2011 |archive-date=27 ಜುಲೈ 2011 |archive-url=https://web.archive.org/web/20110727025526/http://www.sify.com/movies/people-now-trust-my-abilities-nayanthara-news-tamil-kmikivhgjhj.html?scategory=tamil |url-status=dead }}</ref> ಸಿಂಹದಲ್ಲಿನ ಅವರ ಅಭಿನಯ, ಬಾಸ್ ಇಂಜೀರಾ ಭಾಸ್ಕರನ್ ಮತ್ತು ಸೂಪರ್ ಅಂತಿಮವಾಗಿ ಆಯಾ ಭಾಷೆಗಳಲ್ಲಿ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಪಡೆದರು.<ref name="IndiaGlitz">{{cite web |url=http://www.indiaglitz.com/channels/telugu/article/67255.html |title=Nominees of Idea Filmfare Awards South |publisher=IndiaGlitz |accessdate=18 October 2011 |archive-date=3 ಜೂನ್ 2011 |archive-url=https://web.archive.org/web/20110603091403/http://www.indiaglitz.com/channels/telugu/article/67255.html |url-status=dead }}</ref><ref name="indiaglitz.com">{{cite web |url=http://www.indiaglitz.com/channels/tamil/article/67252.html |title=Nominees of Idea Filmfare Awards South – Tamil Movie News |publisher=IndiaGlitz |accessdate=18 October 2011 |archive-date=4 ಜೂನ್ 2011 |archive-url=https://web.archive.org/web/20110604053400/http://www.indiaglitz.com/channels/tamil/article/67252.html |url-status=dead }}</ref><ref name="ReferenceA">{{cite web |url=http://www.indiaglitz.com/channels/kannada/article/67258.html |title=Nominees of Idea Filmfare Awards South – Kannada Movie News |publisher=IndiaGlitz |accessdate=18 October 2011 |archive-date=4 ಜೂನ್ 2011 |archive-url=https://web.archive.org/web/20110604004613/http://www.indiaglitz.com/channels/kannada/article/67258.html |url-status=dead }}</ref> ಅವರು ಶ್ಯಾಮಪ್ರಸಾದ್ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಮಲಯಾಳಂ ಚಲನಚಿತ್ರ ಎಲೆಕ್ಟ್ರಾದಲ್ಲಿ ಅಭಿನಯಿಸಿದ್ದಾರೆ. ಅವರ ಈ ಚಿತ್ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಾಗ ಅವರ ಅಭಿನಯವು ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು.<ref>{{cite web|url=http://www.pib.nic.in/newsite/PrintRelease.aspx?relid=67541|title=Elektra Dazzles IFFI with Its Electrifying Performances|publisher=Press Information Bureau |accessdate=24 November 2010}}</ref> ಈ ಚಿತ್ರವು ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಹ ಪ್ರದರ್ಶಿಸಲ್ಪಟ್ಟಿತು.<ref>{{cite web|url=http://www.emirates247.com/entertainment/films-music/dubai-premiere-for-manisha-koirala-s-elektra-2010-11-14-1.317224|title=Dubai premiere for Manisha Koirala's "Elektra"|publisher=Emirates247.com|accessdate=14 December 2010|archive-date=2010-11-19|archive-url=https://web.archive.org/web/20101119051701/http://www.emirates247.com/entertainment/films-music/dubai-premiere-for-manisha-koirala-s-elektra-2010-11-14-1.317224|url-status=dead}}</ref>
ಅವರ ೨೦೧೧ ರಲ್ಲಿ ಬಿಡುಗಡೆಯಾದ ಬಾಪು ಅವರ ಪೌರಾಣಿಕ ಚಿತ್ರ ಶ್ರೀ ರಾಮ ರಾಜ್ಯಮ್, ಇದರಲ್ಲಿ ಅವರು ಸೀತಾ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು, ರಿಡಿಫ್.ಕಾಂ "ನಯನತಾರಾ ಚಿತ್ರದ ಆಶ್ಚರ್ಯಕರ ಪ್ಯಾಕೇಜ್ ಆಗಿದೆ, ಸೀತಾ ಪಾತ್ರದಲ್ಲಿ ಅವರು ಕೂಡಾ ತನ್ನ ಜೀವಿತಾವಧಿಯಲ್ಲಿ ಪಾತ್ರವನ್ನು ನಿರ್ವಹಿಸುತ್ತಾರೆ.ಅವರು ಕೆಲಿಡೋಸ್ಕೋಪ್ನ ಭಾವನೆಗಳನ್ನು ಯಶಸ್ವಿಯಾಗಿ ವ್ಯಕ್ತಪಡಿಸಿದ್ದಾರೆ."ಎಂದು ವಿಮರ್ಶಿಸಿದೆ.<ref>{{cite web|url=http://www.rediff.com/movies/review/review-sri-ramarajyam/20111117.htm|title=Review: Sri Rama Rajyam is a visual treat|publisher=Rediff|accessdate=9 July 2012}}</ref> "ಎಲ್ಲರಿಗೂ ಸೂಕ್ತವಾದ ಉತ್ತರವನ್ನು ನಯನತಾರಾ ನೀಡಿದರು, ಸಂಪೂರ್ಣ ಅನುಕಂಪದೊಂದಿಗೆ ನಿಯೋಜನೆಯನ್ನು ಪೂರ್ಣಗೊಳಿಸಿದರು "ಎಂದು ಸಿಫಿ ಅಭಿಪ್ರಾಯಪಟ್ಟಿದೆ.<ref>{{cite web|url=http://www.sify.com/movies/sri-ramarajyam-review-review-telugu-14983681.html|title=Sri Ramarajyam review|publisher=Sify|accessdate=9 July 2012|archive-date=1 ಡಿಸೆಂಬರ್ 2013|archive-url=https://web.archive.org/web/20131201051940/http://www.sify.com/movies/sri-ramarajyam-review-review-telugu-14983681.html|url-status=dead}}</ref> ತರುವಾಯ, ಅವರು ಅತ್ಯುತ್ತಮ ನಟಿಗಾಗಿ ನಂದಿ ಪ್ರಶಸ್ತಿ ಮತ್ತು ಅತ್ಯುತ್ತಮ ತೆಲುಗು ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು.<ref>{{cite web|url=http://www.ifilmish.com/sita-devotes-her-award-to-rama/|title=ifilmish.com<!-- Bot generated title -->|publisher=|accessdate=16 August 2016|deadurl=yes|archiveurl=https://web.archive.org/web/20120711232630/http://www.ifilmish.com/sita-devotes-her-award-to-rama/|archivedate=11 July 2012|df=dmy-all}}</ref> ಈ ಚಲನಚಿತ್ರವನ್ನು ಮಾಧ್ಯಮಗಳಲ್ಲಿ ಅವಳ ಸ್ವನ್ ಹಾಡು ಎಂದು ಕರೆಯಲಾಯಿತು ಮತ್ತು ಆಕೆಯು ತನ್ನ ಮದುವೆಯ ಮುಂಚೆಯೇ ಚಿತ್ರಗಳು ಬಿಡುಗಡೆಯಾಗುವುದಾಗಿ ಪರಿಗಣಿಸಿದಳು, ನಂತರ ಅವಳು ನಟನೆಯನ್ನು ತೊರೆದಳು ಎಂದು ವರದಿಯಾಗಿದೆ.<ref>[http://www.sify.com/movies/ramarajyam-nayanthara-s-swan-song-news-news-llpj05ejaaa.html?ref=false Ramarajyam- Nayanthara`s swan song] {{Webarchive|url=https://web.archive.org/web/20140130140316/http://www.sify.com/movies/ramarajyam-nayanthara-s-swan-song-news-news-llpj05ejaaa.html?ref=false |date=2014-01-30 }}. Sify.com (15 November 2011). Retrieved 2012-04-10.</ref>
==ವೈಯಕ್ತಿಕ ಜೀವನ==
ನಯನತಾರಾ ಅವರು ಸಿರಿಯನ್ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು.<ref name="The Telegraph"/> ಆಗಸ್ಟ್ ೭, ೨೦೧೧ ರಂದು ಚೆನ್ನೈನ [[ಆರ್ಯ ಸಮಾಜ]] ದೇವಾಲಯದಲ್ಲಿ ಅವರು [[ಹಿಂದೂ ಧರ್ಮ|ಹಿಂದೂ ಧರ್ಮಕ್ಕೆ]] ಮತಾಂತರಗೊಂಡರು. ಅವರ ತೆರೆಮೇಲಿನ ಹೆಸರಾಗಿದ್ದ ನಯನತಾರಾ, ಅವರ ಅಧಿಕೃತ ಹೆಸರಾಯಿತು.<ref>{{cite web|url=http://www.behindwoods.com/tamil-movie-news-1/aug-11-02/nayanthara-prabhu-deva-08-08-11.html|title=Nayanthara converts to Hinduism|publisher=Behindwoods|date=8 August 2011|accessdate=9 August 2011}}</ref> ಮೇ 2014 ರಲ್ಲಿ ಅವರು [[ಹರಿದ್ವಾರ]] ಮತ್ತು [[ರಿಷಿಕೇಶ]] ಸೇರಿದಂತೆ ಹಲವಾರು ಪವಿತ್ರ ಸ್ಥಳಗಳನ್ನು ಭೇಟಿ ಮಾಡಿದರು.<ref>{{cite web|title=Nayanthara visits Haridwar and Rishikesh|url=http://deccan-journal.com/content/nayathara-looking-peace-mind|work=Deccan-Journal|accessdate=28 May 2014|archive-date=26 ಡಿಸೆಂಬರ್ 2018|archive-url=https://web.archive.org/web/20181226111936/http://deccan-journal.com/content/nayathara-looking-peace-mind|url-status=dead}}</ref>
ನಯನತಾರಾ ಅವರು ನಟ ಸಿಂಬುವಿನೊಂದಿಗೆ ಸಂಬಂಧ ಹೊಂದಿದ್ದರು, ಅವರೊಂದಿಗೆ ಅವರು ವಲ್ಲವನ್ ನಲ್ಲಿ ಕೆಲಸ ಮಾಡಿದರು.<ref>http://www.behindwoods.com/tamil-movie-articles/movies-05/18-11-06-simbu-nayantara.html</ref><ref>https://www.youtube.com/watch?v=EQpaUMpSyVs</ref> 2010 ರಲ್ಲಿ, [[ಪ್ರಭುದೇವ|ಪ್ರಭುದೇವರವರ]] ಪತ್ನಿ ಲತಾ ಅವರು ಕುಟುಂಬದ ನ್ಯಾಯಾಲಯದಲ್ಲಿ ಪ್ರಭುದೇವ ಮತ್ತು ನಯನತಾರಾ ಅವರ ಸಂಬಂಧದ ವಿರುದ್ಧ ಮನವಿ ಸಲ್ಲಿಸಿದರು ಮತ್ತು ಆತನೊಂದಿಗೆ ಒಂದು ಪುನರ್ಮಿಲನವನ್ನು ಕೋರಿದರು.<ref>{{cite news | url=http://articles.timesofindia.indiatimes.com/2010-10-07/news-interviews/28249293_1_nayanthara-prabhu-deva-latha | work=The Times Of India | title=Prabhu's wife files for second petition | date=7 October 2010 | access-date=2018-05-06 | archive-date=2012-11-04 | archive-url=https://web.archive.org/web/20121104013850/http://articles.timesofindia.indiatimes.com/2010-10-07/news-interviews/28249293_1_nayanthara-prabhu-deva-latha | url-status=dead }}</ref> ಇದಲ್ಲದೆ, ಪ್ರಭುದೇವ ನಯನತಾರಾಳನ್ನು ವಿವಾಹವಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಕೆ ಹಾಕಿದರು. ತಮಿಳು ಸಂಸ್ಕೃತಿಯನ್ನು ಹೀನಾಯಗೊಳಿಸಿದರೆಂದು ನಯನತಾರಾ ವಿರುದ್ಧ ಹಲವಾರು ಮಹಿಳಾ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದವು ಮತ್ತು ಅವರ ಒಂದು ಪ್ರತಿಕೃತಿಯನ್ನು ಸುಟ್ಟುಹಾಕಿದವು.<ref>{{cite web|url=http://www.behindwoods.com/tamil-movie-news-1/oct-10-02/nayanthara-prabhu-deva-06-10-10.html |title=Nayanthara – Tamil Movie News – Nayanthara's effigy burnt – Nayanthara | Prabhu Deva | Ramlath | Kalpana |publisher=Behindwoods.com |date=6 October 2010 |accessdate=18 October 2011}}</ref> 2012 ರಲ್ಲಿ, [[ಪ್ರಭುದೇವ|ಪ್ರಭುದೇವರೊಂದಿಗಿನ]] ತನ್ನ ಸಂಬಂಧವನ್ನು ಕೊನೆಗೊಳಿಸಿರುವುದಾಗಿ ನಯನತಾರಾ ದೃಢಪಡಿಸಿದರು.<ref name="The Times Of India">{{cite news | url=http://articles.timesofindia.indiatimes.com/2012-01-28/news-interviews/30673544_1_prabhu-deva-prabhu-and-nayan-source | work=The Times Of India | title=Nayanthara, Prabhu Deva call it quits | date=28 January 2012 | access-date=2018-05-06 | archive-date=2012-04-09 | archive-url=https://web.archive.org/web/20120409203807/http://articles.timesofindia.indiatimes.com/2012-01-28/news-interviews/30673544_1_prabhu-deva-prabhu-and-nayan-source | url-status=dead }}</ref><ref name="The Times Of India" /><ref>{{cite news|url=http://articles.timesofindia.indiatimes.com/2010-12-29/india/28237143_1_actor-prabhu-deva-latha-restitution-of-conjugal-rights|title=Prabhu Deva enters into divorce deal with wife|date=29 December 2010|work=The Times Of India|access-date=2018-05-06|archive-date=2012-06-06|archive-url=https://web.archive.org/web/20120606143713/http://articles.timesofindia.indiatimes.com/2010-12-29/india/28237143_1_actor-prabhu-deva-latha-restitution-of-conjugal-rights|url-status=dead}}</ref><ref>{{cite news |url=http://www.sify.com/movies/prabhu-deva-granted-divorce-news-tamil-lhcucBcjchd.html |title=Prabhu Deva granted divorce |date=2 July 2011 |accessdate=2 July 2011 |publisher=[[Sify]] |archive-date=5 ಜುಲೈ 2011 |archive-url=https://web.archive.org/web/20110705120914/http://www.sify.com/movies/prabhu-deva-granted-divorce-news-tamil-lhcucBcjchd.html |url-status=dead }}</ref> ಅವರು ಈಗ ನಿರ್ದೇಶಕ ವಿಘ್ನೇಶ್ ಶಿವನೊಂದಿಗೆ ಸಂಬಂಧ ಹೊಂದಿದ್ದಾರೆ-ಅವರು ನಾನುಮ್ ರೌಡಿ ಥಾನ್ನಲ್ಲಿ ಕೆಲಸ ಮಾಡಿದ್ದಾರೆ-ಅವರು [[ಸಿಂಗಾಪುರ|ಸಿಂಗಪುರದಲ್ಲಿ]] ಪ್ರಶಸ್ತಿ ಸಮಾರಂಭದಲ್ಲಿ ಒಟ್ಟಿಗೆ ನಡೆದಾಗ ಅಧಿಕೃತರಾದರು.<ref>http://timesofindia.indiatimes.com/entertainment/telugu/movies/news/Its-official-Nayanthara-and-Vignesh-are-in-love/articleshow/53021486.cms</ref><ref>http://timesofindia.indiatimes.com/entertainment/telugu/movies/news/Vignesh-Shivans-Onam-selfie-with-Nayan-goes-viral/articleshow/54331805.cms</ref>
==ಉಲ್ಲೇಖಗಳು==
{{reflist}}
{{Interwikineeded}}
[[ವರ್ಗ:ನಟಿಯರು]]
[[ವರ್ಗ:ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ]]
[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]
epxc0j6x84hu27uzow0guenmvyne2cf
ನುಡಿ (ತಂತ್ರಾಂಶ)
0
107523
1375846
1372193
2026-06-25T20:52:38Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1375846
wikitext
text/x-wiki
{{ಯಂತ್ರಾನುವಾದ}}
'''ನುಡಿ''' ಕಂಪ್ಯೂಟರ್ ಪ್ರೊಗ್ರಾಮ್ ಮತ್ತು ಫಾಂಟ್-ಎನ್ಕೋಡಿಂಗ್ ಸ್ಟ್ಯಾಂಡರ್ಡ್. ಇದನ್ನು ಕನ್ನಡ ಲಿಪಿಯನ್ನು ನಿರ್ವಹಿಸಲು ಮತ್ತು ಪ್ರದರ್ಶಿಸಲು ಬಳಸಲಾಗುತ್ತದೆ.
ನುಡಿ ತಂತ್ರಾಂಶ [[ಕರ್ನಾಟಕ ಸರ್ಕಾರ]]ದ ಸ್ವಾಮ್ಯದಲ್ಲಿದೆ ಮತ್ತು ಉಚಿತವಾಗಿ ಲಭ್ಯವಿದೆ. ಇದನ್ನುಲಾಭರಹಿತ ಸಂಸ್ಥೆಯಾದ [[ಕನ್ನಡ ಗಣಕ ಪರಿಷತ್ತು]] ಅಭಿವೃದ್ಧಿಪಡಿಸಿದೆ.<ref>{{Cite web |url=http://www.kagapa.in/kannada/ |title=ಆರ್ಕೈವ್ ನಕಲು |access-date=2018-11-01 |archive-date=2018-11-05 |archive-url=https://web.archive.org/web/20181105022826/http://www.kagapa.in/kannada/ |url-status=dead }}</ref> ನುಡಿಯೊಂದಿಗೆ ಸೇರಿಸಲಾಗಿರುವ ಹೆಚ್ಚಿನ ಫಾಂಟ್ಗಳು ಡೈನಾಮಿಕ್ ಫಾಂಟ್ ಎಂಬೆಡಿಂಗ್ ಉದ್ದೇಶಗಳಿಗಾಗಿ ಬಳಸಬಹುದು.<ref>[https://www.thehindu.com/todays-paper/tp-national/tp-karnataka/nudi-scripting-a-comeback-to-stay-relevant-in-digital-age/article21252578.ece Nudi scripting a comeback to stay relevant in digital age ]</ref> ಆದರೂ, ಫಾಂಟ್ಗಳು ಮತ್ತು ತಂತ್ರಾಂಶವು ಉಚಿತವಾಗಿ ಸಿಗುವುದರಿಂದ [[ಡೇಟಾಬೇಸ್ ನಿರ್ವಹಣಾ ವ್ಯವಸ್ಥೆ|ಡೇಟಾಬೇಸ್ ನಿರ್ವಹಣೆ]] ಮುಂತಾದ ಇತರೆ ಸಂದರ್ಭಗಳಲ್ಲೂ ಬಳಸಬಹುದು.
ಇದು ಫಾಂಟ್-ಎನ್ಕೋಡಿಂಗ್ ಆಧಾರಿತ ಪ್ರಮಾಣಿತವಾಗಿದೆ (ಅಂದರೆ, ಇದು ಗ್ಲಿಫ್ಗಳನ್ನು ಶೇಖರಿಸಲು ASCII ಮೌಲ್ಯಗಳನ್ನು ಬಳಸುತ್ತದೆ).<ref>[https://www.thehindu.com/news/national/karnataka/kda-to-launch-new-version-of-nudi-soon/article18210266.ece KDA to launch new version of ‘Nudi’ soon]</ref>
ನುಡಿ ಎಡಿಟರ್ [[ಯುನಿಕೋಡ್]]ನಲ್ಲಿ ಉಳಿಸುವಲ್ಲಿ ಮತ್ತು ನುಡಿ ಎಂಜಿನ್ [[ಯುನಿಕೋಡ್]]ನಲ್ಲಿ ದತ್ತವನ್ನು ಸೇರಿಸುವುದನ್ನು ಅನುವು ಮಾಡಿಕೊಡುವುದು, ಈ ವ್ಯವಸ್ಥೆಯು [[ಯೂನಿಕೋಡ್]]ಗೆ ಬೆಂಬಲವನ್ನು ಒದಗಿಸುತ್ತದೆ. ಅದರೆ ಇದು ವ್ಯವಸ್ಥೆ(system )ಯಲ್ಲಿ [[ಯುನಿಕೋಡ್]]ಗೆ ಬೆಂಬಲ ವಿದ್ದರೆ ಮತ್ತು ಮತ್ತು ವ್ಯವಸ್ಥೆ(system )ಯಲ್ಲಿ ಒಂದು ಮುಕ್ತ ಫಾಂಟ್ ಇದ್ದರೆ ಮಾತ್ರ ಸಾದ್ಯವಾಗುವುದು..
ನುಡಿ ಅಕ್ಸೆಸ್(Access), ಒರ್ಯಾಕಲ್(Oracle), ಎಸ್ಕ್ಯುಎಲ್(SQL), ಡಿಬಿ೨(DB2) ಮುಂತಾದ ಬಹಳಷ್ಟು [[ಮೈಕ್ರೋಸಾಫ್ಟ್ ವಿಂಡೋಸ್|ವಿಂಡೋಸ್]] ಆಧಾರಿತ ಡೇಟಾಬೇಸ್ ವ್ಯವಸ್ಥೆಗಳನ್ನು ಬೆಂಬಲಿಸುತ್ತದೆ.
== ನುಡಿ ಕನ್ನಡ ಲಿಪಿ ತಂತ್ರಾಂಶ 6.0, 6.1, 6.5<ref>[https://kagapa.in/kannada/content/%E0%B2%A4%E0%B2%82%E0%B2%A4%E0%B3%8D%E0%B2%B0%E0%B2%BE%E0%B2%82%E0%B2%B6%E0%B2%97%E0%B2%B3%E0%B3%81]</ref> ==
ನುಡಿ [https://kagapa.in/kannada/sites/default/files/downloads/Nudi-6.0/Nudi_6.0_setup.exe 6] {{Webarchive|url=https://web.archive.org/web/20200717021626/http://www.kagapa.in/kannada/sites/default/files/downloads/Nudi-6.0/Nudi_6.0_setup.exe |date=2020-07-17 }} ಮತ್ತು [https://kagapa.in/kannada/sites/default/files/downloads/Nudi-6.1/Nudi_6.1_setup.exe 6.1] {{Webarchive|url=https://web.archive.org/web/20230806142206/https://kagapa.in/kannada/sites/default/files/downloads/Nudi-6.1/Nudi_6.1_setup.exe |date=2023-08-06 }} ಆವೃತ್ತಿಯನ್ನು '''09/06/2022 ರಂದು''' ಬಿಡುಗಡೆ ಮಾಡಲಾಯಿತು <ref>https://nudi.updatestar.com/en</ref>. ಇದರಲ್ಲಿ ಮುಖ್ಯವಾಗಿ ಇದುವರೆಗೂ ಜನಪ್ರಿಯವಾಗಿದ್ದ ಮುದ್ರಣಾಲಯದವರಿಗೆ ವಿಶೇಷ ರೂಪದಲ್ಲಿ ಬಳಕೆಗೆ ಬರುತ್ತಿದ್ದ ಆನ್ಸಿ/ ಆಸ್ಕಿ ( [[:en:ASCII|ANSI/ASCII]]) ಶಿಷ್ಟತೆ ಸಂಪೂರ್ಣವಾಗಿ ಕೈಬಿಟ್ಟು ಸರಕಾರದ ನಿಯಮದನ್ವಯ ಕೇವಲ [[ಯುನಿಕೋಡ್]] ಶಿಷ್ಟತೆಯನ್ನು ಮಾತ್ರ ಅಳವಡಿಸಲಾಗಿದೆ. ಆದಾಗ್ಯೂ ಮತ್ತೆ ನುಡಿ 5.0ರಲ್ಲಿ ಬಳಕೆಯಲ್ಲಿದ್ದ [[:en:ASCII|ANSI/ASCI]]I ರೀತಿಯ ಶಿಷ್ಟತೆಗೆ ಬದಲಾಯಿಸಲು [http://www.kagapa.in/conversion/ ಪರಿವರ್ತಕ] ವನ್ನು ಸಹ ಬಳಕೆದಾರರಿಗೆ ನೀಡಲಾಗಿದೆ<ref>https://kagapa.in/kannada/content/%E0%B2%B6%E0%B2%BF%E0%B2%B7%E0%B3%8D%E0%B2%9F%E0%B2%A4%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%8F%E0%B2%95%E0%B2%B0%E0%B3%82%E0%B2%AA%E0%B2%A4%E0%B3%86</ref>.
ಇದರ ನಂತರ ಇತ್ತೀಚೆಗೆ [https://kagapa.in/kannada/sites/default/files/downloads/MNudi-6.5/Multi_Nudi_Setup.exe ನುಡಿ 6.5 ಬಹುಭಾಷಾ] {{Webarchive|url=https://web.archive.org/web/20230806142205/https://kagapa.in/kannada/sites/default/files/downloads/MNudi-6.5/Multi_Nudi_Setup.exe |date=2023-08-06 }} ಆವೃತ್ತಿಯನ್ನು ಸಹಾ ಬಿಡುಗಡೆ ಮಾಡಲಾಗಿದೆ. ಇವರೆಡೂ (6.1 ಮತ್ತು 6.5 )- ಉಚಿತ ಡೌನ್ಲೋಡುಗಳಾಗಿ ಕಗಪ ಜಾಲತಾಣದಲ್ಲಿ [https://kagapa.in/kannada/sites/default/files/downloads/MNudi-6.5/Multi_Nudi_Setup.exe ಲಭ್ಯ] {{Webarchive|url=https://web.archive.org/web/20230806142205/https://kagapa.in/kannada/sites/default/files/downloads/MNudi-6.5/Multi_Nudi_Setup.exe |date=2023-08-06 }}ವಿದೆ.
==ನುಡಿ ಕನ್ನಡ ಲಿಪಿ ತಂತ್ರಾಂಶ 4 ==
*[[ಯೂನಿಕೋಡ್]] ಮತ್ತು ಯುಟಿಎಫ್-8 ಶಿಷ್ಟತೆಗಳನ್ನು ಅಳವಡಿಸಲಾಗಿದೆ;
*ಹೊಸ ಅಕ್ಷರ ಶೈಲಿಗಳು ಲಭ್ಯವಿವೆ;
*ಎಂಎಸ್ವರ್ಡ್ನಲ್ಲಿ ಪದಪರೀಕ್ಷೆ, ನಮೂದಿಸುವಾಗಲೇ ಬದಲಾವಣೆ ಸೌಲಭ್ಯವನ್ನು ನೀಡಲಾಗಿದೆ.
==ನೋಡಿ==
*[[ಸಹಾಯ:ಲಿಪ್ಯಂತರ]] -ಅಲ್ಲಿ ವಿವರಕ್ಕೆ-> ಕಗಪ/ನುಡಿ-KGP/Nudi/KPRao- ಕೀಲಿಮಣೆ ಸಹಾಯ -ನುಡಿ ಲಿಪಿ ಉಪಯೋಗ ಕ್ರಮ
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
* [http://202.138.101.165/bims/nudi4r3setup.zip - Nudi software 4.0]<!--Kannada-->
* [http://www.kagapa.in/kannada/ KaGaPa - Kannada Ganaka Parishad - Nudi 5.0] {{Webarchive|url=https://web.archive.org/web/20181105022826/http://www.kagapa.in/kannada/ |date=2018-11-05 }}
*[https://kagapa.in/kannada/#%E0%B2%89%E0%B2%9A%E0%B2%BF%E0%B2%A4_%E0%B2%A4%E0%B2%82%E0%B2%A4%E0%B3%8D%E0%B2%B0%E0%B2%BE%E0%B2%82%E0%B2%B6%E0%B2%97%E0%B2%B3%E0%B3%81 Nudi 5, 6, 6.1 and 6.5] {{Webarchive|url=https://web.archive.org/web/20230806150038/https://kagapa.in/kannada/#%E0%B2%89%E0%B2%9A%E0%B2%BF%E0%B2%A4_%E0%B2%A4%E0%B2%82%E0%B2%A4%E0%B3%8D%E0%B2%B0%E0%B2%BE%E0%B2%82%E0%B2%B6%E0%B2%97%E0%B2%B3%E0%B3%81 |date=2023-08-06 }} {{Webarchive|url=https://web.archive.org/web/20230806150038/https://kagapa.in/kannada/#%E0%B2%89%E0%B2%9A%E0%B2%BF%E0%B2%A4_%E0%B2%A4%E0%B2%82%E0%B2%A4%E0%B3%8D%E0%B2%B0%E0%B2%BE%E0%B2%82%E0%B2%B6%E0%B2%97%E0%B2%B3%E0%B3%81 |date=2023-08-06 }}
*[https://nuditounicode.joy.ind.in/ ನುಡಿಯನ್ನು ಯೂನಿಕೋಡ್ಗೆ ಪರಿವರ್ತಿಸಿ] {{Webarchive|url=https://web.archive.org/web/20260429061452/https://nuditounicode.joy.ind.in/ |date=2026-04-29 }}<!--Kannada-->
{{Interwikineeded}}
[[ವರ್ಗ:ಕನ್ನಡ ತಂತ್ರಾಂಶಗಳು]]
n6x71ewe2ifn5fqb0jregwhrjwx0tzs
ವಿಕಿಪೀಡಿಯ:ಅರಳಿ ಕಟ್ಟೆ
4
112271
1375833
1375763
2026-06-25T13:29:38Z
MediaWiki message delivery
17558
/* Deployment of Legal and Safety Contacts Link in the Footer of Your Wiki */ ಹೊಸ ವಿಭಾಗ
1375833
wikitext
text/x-wiki
[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on [[WP:Newbotrequest|this page]]. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below.
* Admin/other rights can be requested at [[ವಿಕಿಪೀಡಿಯ:ನಿರ್ವಾಹಕ_ಮನವಿ_ಪುಟ]]
{{ಆರ್ಕೈವ್-ಅರಳಿಕಟ್ಟೆ}}
{{clear}}
== ಭಾರತದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ==
[[ಭಾರತದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ]] ಪುಟ Simple English ನ [[:en:Shah Bano case]] ಪುಟಕ್ಕೆ ಲಿಂಕ್ ಆಗಿದೆ, ದಯವಿಟ್ಟು ಯಾರಾದರು ಆ ಪುಟವನ್ನು [[:en:Minority appeasement in India]] ಪುಟಕ್ಕೆ ಲಿಂಕ್ ಮಾಡಿ. Thanks!-[[ಸದಸ್ಯ:Baangla|Baangla]] ([[ಸದಸ್ಯರ ಚರ್ಚೆಪುಟ:Baangla|ಚರ್ಚೆ]]) ೦೯:೪೭, ೧೭ ಡಿಸೆಂಬರ್ ೨೦೨೫ (IST)
:@[[ಸದಸ್ಯ:Baangla|Baangla]] , {{done}} --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೦:೩೭, ೧೭ ಡಿಸೆಂಬರ್ ೨೦೨೫ (IST)
::Thanks!-[[ಸದಸ್ಯ:Baangla|Baangla]] ([[ಸದಸ್ಯರ ಚರ್ಚೆಪುಟ:Baangla|ಚರ್ಚೆ]]) ೧೩:೧೩, ೧೭ ಡಿಸೆಂಬರ್ ೨೦೨೫ (IST)
== {{t|databox}} ==
ವಿಕಿಡೇಟಾದಿಂದ ಡೇಟಾವನ್ನು ಪಡೆಯಲು ಮತ್ತು ಇನ್ಫೋಬಾಕ್ಸ್ನಲ್ಲಿ ಲೈವ್ ಮಾಹಿತಿಯನ್ನು ಒದಗಿಸಲು ಇನ್ಫೋಬಾಕ್ಸ್ ಟೆಂಪ್ಲೇಟ್ಗಳನ್ನು ಸೇರಿಸುವ ಬದಲು ನೀವು {{t|Databox}} ಅನ್ನು ಬಳಸಬಹುದು, ಹೆಚ್ಚಿನ ಮಾಹಿತಿ [[ಟೆಂಪ್ಲೇಟು:Databox/doc]] ಪುಟದಲ್ಲಿ ಇದೆ.--<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೨:೫೨, ೨೨ ಡಿಸೆಂಬರ್ ೨೦೨೫ (IST)
ಇದು ಬಹಳ ಅನುಕೂಲ. ಇದು ಕೆಲಸ ಮಾಡಬೇಕು ಅಂದ್ರೆ,
# ಬರೆವ ಪುಟಕ್ಕೆ ಇಂಗ್ಲೀಷ್ ವಿಕಿಯಲ್ಲಿ ಲೇಖನ ಮತ್ತು ವಿಕಿಡೇಟಾ ವಸ್ತು ಮುಂಚೆಯೇ ಇರಬೇಕು
# ಕನ್ನಡ ಲೇಖನವನ್ನು ವಿಕಿಡೇಟಾದಲ್ಲಿ ಸೇರಿಸಬೇಕು
[[User:Mallikarjunasj|Mallikarjunasj]] ([[User talk:Mallikarjunasj|talk]]) ೦೯:೫೩, ೨೫ ಡಿಸೆಂಬರ್ ೨೦೨೫ (IST)
:@[[ಸದಸ್ಯ:Mallikarjunasj|Mallikarjunasj]] , ಹೌದು, ಡೇಟಾಬಾಕ್ಸ್ ಕೆಲಸ ಮಾಡಲು ವಿಕಿಡೇಟಾ ಐಟಂ ಖಂಡಿತವಾಗಿಯೂ ಅಗತ್ಯವಿದೆ. --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೫:೩೩, ೨೫ ಡಿಸೆಂಬರ್ ೨೦೨೫ (IST)
== Help panel question on [[:ಸದಸ್ಯರ ಚರ್ಚೆಪುಟ:~2025-41292-57|ಸದಸ್ಯರ ಚರ್ಚೆಪುಟ:~2025-41292-57]] (೧೫:೫೬, ೧೬ ಜನವರಿ ೨೦೨೬) ==
ಧನ್ಯವಾದಗಳು ಸರ್ 🙏. ನ. ನಾಗಲಿಂಗ ಸ್ವಾಮಿ ( ಕನ್ನಡ ಯೋಧ. ಕನ್ನಡ ಕ್ರಾಂತಿದಳ) ಇವರ ಚಿತ್ರವನ್ನು ಸೇರಿಸುವ ಕುರಿತು. --[[ಸದಸ್ಯ:Punyavathi nagalingaswmy|Punyavathi nagalingaswmy]] ([[ಸದಸ್ಯರ ಚರ್ಚೆಪುಟ:Punyavathi nagalingaswmy|ಚರ್ಚೆ]]) ೧೫:೫೬, ೧೬ ಜನವರಿ ೨೦೨೬ (IST)
== Thank You for Last Year – Join Wiki Loves Ramadan 2026 ==
Dear Wikimedia communities,
We hope you are doing well, and we wish you a happy New Year.
''Last year, we captured light. This year, we’ll capture legacy.''
In 2025, communities around the world shared the glow of Ramadan nights and the warmth of collective iftars. In 2026, ''Wiki Loves Ramadan'' is expanding, bringing more stories, more cultures, and deeper global connections across Wikimedia projects.
We invite you to explore the ''Wiki Loves Ramadan 2026'' [[m:Special:MyLanguage/Wiki Loves Ramadan 2026|Meta page]] to learn how you can participate and [[m:Special:MyLanguage/Wiki Loves Ramadan 2026/Participating communities|sign up]] your community.
📷 ''Photo campaign on '' [[c:Special:MyLanguage/Commons:Wiki Loves Ramadan 2026|Wikimedia Commons]]
If you have questions about the project, please refer to the FAQs:
* [[m:Special:MyLanguage/Wiki Loves Ramadan/FAQ/|Meta-Wiki]]
* [[c:Special:MyLanguage/Commons:Wiki Loves Ramadan/FAQ|Wikimedia Commons]]
''Early registration for updates is now open via the '''[[m:Special:RegisterForEvent/2710|Event page]]'''''
''Stay connected and receive updates:''
* [https://t.me/WikiLovesRamadan Telegram channel]
* [https://lists.wikimedia.org/postorius/lists/wikilovesramadan.lists.wikimedia.org/ Mailing list]
We look forward to collaborating with you and your community.
'''The Wiki Loves Ramadan 2026 Organizing Team''' ೦೧:೧೫, ೧೭ ಜನವರಿ ೨೦೨೬ (IST)
<!-- Message sent by User:ZI Jony@metawiki using the list at https://meta.wikimedia.org/w/index.php?title=Distribution_list/Non-Technical_Village_Pumps_distribution_list&oldid=29879549 -->
== Feminism and Folklore 2026 starts soon ==
<div style="border:8px maroon ridge;padding:6px;">
[[File:Feminism and Folklore 2026 logo.svg|centre|550px|frameless]]
::<div lang="en" dir="ltr" class="mw-content-ltr">
<div style="text-align: center; width: 100%;">''{{int:please-translate}}''</div>
;Invitation to Organize Feminism and Folklore 2026
Dear Wiki Community,
We are pleased to invite Wikimedia communities, affiliates, and independent contributors to organize the '''[[:m:Feminism and Folklore 2026|Feminism and Folklore 2026]]''' writing competition on your local Wikipedia.
The international campaign will run from '''1 February to 31 March 2026''' and aims to improve coverage of feminism, women’s histories, gender-related topics, and folk culture across Wikipedia projects.
;About the Campaign
'''Feminism and Folklore''' is a global writing initiative that complements the '''[[:c:Commons:Wiki Loves Folklore 2026|Wiki Loves Folklore]]''' photography competition. While Wiki Loves Folklore focuses on visual documentation, this writing campaign addresses the '''gender gap on Wikipedia''' by improving encyclopedic content related to folk culture and marginalized voices.
;What Can Participants Write About?
Communities can contribute by creating, expanding, or translating articles related to:
* Folk festivals, rituals, and celebrations
* Folk dances, music, and traditional performances
* Women and queer figures in folklore
* Women in mythology and oral traditions
* Women warriors, witches, and witch-hunting narratives
* Fairy tales, folk stories, and legends
* Folk games, sports, and cultural practices
Participants may work from curated article lists or generate new article suggestions using campaign tools.
;How to Sign Up as an Organizer
Organizers are requested to complete the following steps to register their community:
# Create a local project page on your wiki [[:m:Feminism and Folklore/Sample|(see sample)]]
# Set up the campaign using the '''CampWiz''' tool
# Prepare a local article list and clearly mention:
#* Campaign timeline
#* Local and international prizes
# Request a site notice from local administrators [[:mr:Template:SN-FNF|(see sample)]]
# Add your local project page and CampWiz link to the '''[[:m:Feminism and Folklore 2026/Project Page|Meta project page]]'''
;Campaign Tools
The Wiki Loves Folklore Tech Team has introduced tools to support organizers and participants:
* '''Article List Generator by Topic''' – Helps identify articles available on English Wikipedia but missing in your local language Wikipedia. The tool allows customized filters and provides downloadable article lists in CSV and wikitable formats.
* '''CampWiz''' – Enables communities to manage writing campaigns effectively, including jury-based evaluation. This will be the third year CampWiz is officially used for Feminism and Folklore.
Both tools are now available for use in the campaign. '''[https://tools.wikilovesfolklore.org/ Click here to access the tools]'''
;Learn More & Get Support
For detailed information about rules, timelines, and prizes, please visit the
'''[[:m:Feminism and Folklore 2026|Feminism and Folklore 2026 project page]]'''.
If you have any questions or need assistance, feel free to reach out via:
* '''[[:m:Talk:Feminism and Folklore 2026/Project Page|Meta talk page]]'''
* Email us using details on the contact page.
;Join Us
We look forward to your collaboration and coordination in making Feminism and Folklore 2026 a meaningful and impactful campaign for closing gender gaps and enriching folk culture content on Wikipedia.
Thank you and best wishes,
'''[[:m:Feminism and Folklore 2026|Feminism and Folklore 2026 International Team]]'''
----
''Stay connected:''
[[File:B&W Facebook icon.png|link=https://www.facebook.com/feminismandfolklore/|30x30px]]
[[File:B&W Twitter icon.png|link=https://twitter.com/wikifolklore|30x30px]]
</div></div>
== Invitation to Host Wiki Loves Folklore 2026 in Your Country ==
<div lang="en" dir="ltr" class="mw-content-ltr">
<div style="text-align: center; width: 100%;">''{{int:please-translate}}''</div>
[[File:Wiki Loves Folklore Logo.svg|right|150px|frameless]]
Hello everyone,
We are delighted to invite Wikimedia affiliates, user groups, and community organizations worldwide to participate in '''Wiki Loves Folklore 2026''', an international initiative dedicated to documenting and celebrating folk culture across the globe.
;About Wiki Loves Folklore
'''Wiki Loves Folklore''' is an annual international photography competition hosted on Wikimedia Commons. The campaign runs from '''1 February to 31 March 2026''' and encourages photographers, cultural enthusiasts, and community members to contribute photographs that highlight:
* Folk traditions and rituals
* Cultural festivals and celebrations
* Traditional attire and crafts
* Performing arts, music, and dance
* Everyday practices rooted in folk heritage
Through this campaign, we aim to preserve and promote diverse folk cultures and make them freely accessible to the world.
[[:c:Commons:Wiki_Loves_Folklore_2026|Project page on Wikimedia Commons]]
; Host a Local Edition
As we celebrate the '''eight edition''' of Wiki Loves Folklore, we warmly invite communities to organize a local edition in their country or region. Hosting a local campaign is a great opportunity to:
* Increase visibility of your region’s folk culture
* Engage new contributors in your community
* Enrich Wikimedia Commons with high-quality cultural content
'''[[:c:Commons:Wiki_Loves_Folklore_2026/Organize|Sign up to organize]]:'''
If your team prefers to organize the competition in ''either February or March only'', please feel free to let us know.
If you are unable to organize, we encourage you to share this opportunity with other interested groups or organizations in your region.
;Get in Touch
If you have any questions, need support, or would like to explore collaboration opportunities, please feel free to contact us via:
* The project Talk pages
* Email: '''support@wikilovesfolklore.org'''
We are also happy to connect via an online meeting if your team would like to discuss planning or coordination in more detail.
Warm regards,
'''The Wiki Loves Folklore International Team'''
</div>
[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೮:೫೧, ೧೮ ಜನವರಿ ೨೦೨೬ (IST)
<!-- Message sent by User:Tiven2240@metawiki using the list at https://meta.wikimedia.org/w/index.php?title=Distribution_list/Global_message_delivery/Wikipedia&oldid=29228188 -->
== <span lang="en" dir="ltr">Annual review of the Universal Code of Conduct and Enforcement Guidelines</span> ==
<div lang="en" dir="ltr">
<section begin="announcement-content" />
I am writing to you to let you know the annual review period for the Universal Code of Conduct and Enforcement Guidelines is open now. You can make suggestions for changes through 9 February 2026. This is the first step of several to be taken for the annual review. [[m:Special:MyLanguage/Universal Code of Conduct/Annual review/2026|Read more information and find a conversation to join on the UCoC page on Meta]].
The [[m:Special:MyLanguage/Universal Code of Conduct/Coordinating Committee|Universal Code of Conduct Coordinating Committee]] (U4C) is a global group dedicated to providing an equitable and consistent implementation of the UCoC. This annual review was planned and implemented by the U4C. For more information and the responsibilities of the U4C, [[m:Special:MyLanguage/Universal Code of Conduct/Coordinating Committee/Charter|you may review the U4C Charter]].
Please share this information with other members in your community wherever else might be appropriate.
-- In cooperation with the U4C, [[m:User:Keegan (WMF)|Keegan (WMF)]] ([[m:User talk:Keegan (WMF)|talk]])<section end="announcement-content" />
</div>
೦೨:೩೧, ೨೦ ಜನವರಿ ೨೦೨೬ (IST)
<!-- Message sent by User:Keegan (WMF)@metawiki using the list at https://meta.wikimedia.org/w/index.php?title=Distribution_list/Global_message_delivery&oldid=29905753 -->
== ಸ್ಪ್ರಿಂಗ್ ಮಂತ್ ಎಡಿಟ್-ಅಥಾನ್ - ೨೦೨೬ ==
ಫೆಬ್ರವರಿ 1ರಿಂದ ಮಾರ್ಚ್ 31, 2026ರವರೆಗೆ ನಡೆಯುವ “ವಿಕಿ ಲವ್ಸ್ ಫೋಕ್ಲೋರ್” ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯನ್ನು ಚಂದ್ರ ನವ ವರ್ಷದ ಅಂಗವಾಗಿ ಮುಖ್ಯಭೂಮಿ ಚೀನಾದಲ್ಲಿ WMGMC ಹಾಗೂ ವಿಕಿಪ್ರಾಜೆಕ್ಟ್ ಚೈನಾ ಕಲ್ಚರಲ್ ಹೆರಿಟೇಜ್ ಸಹ-ಆಯೋಜಿಸುತ್ತಿವೆ; ಇದರೊಂದಿಗೆ ಫೆಬ್ರವರಿ 10ರಿಂದ ಮಾರ್ಚ್ 18ರವರೆಗೆ ಆರನೇ ಸ್ಪ್ರಿಂಗ್ ಮಂತ್ ಎಡಿಟ್-ಅಥಾನ್ ಕೂಡ ನಡೆಯಲಿದ್ದು, ಚೀನಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವಿಶ್ವದ ವಿವಿಧ ಸಮುದಾಯಗಳ ನವ ವರ್ಷದ ಸಂಪ್ರದಾಯಗಳನ್ನು ಬರವಣಿಗೆ ಹಾಗೂ ಛಾಯಾಚಿತ್ರಗಳ ಮೂಲಕ ದಾಖಲಿಸಲು ಆಹ್ವಾನಿಸಲಾಗುತ್ತದೆ, ಈ ಎಡಿಟ್-ಅಥಾನ್ ವುಡ್ ಸ್ನೇಕ್ ವರ್ಷದ ಕೊನೆಯ ಚಂದ್ರ ತಿಂಗಳ ಅವಧಿ (ಫೆಬ್ರವರಿ 10–16) ಮತ್ತು ಫೈರ್ ಹಾರ್ಸ್ ವರ್ಷದ ಮೊದಲ ಚಂದ್ರ ತಿಂಗಳ ಅವಧಿ (ಫೆಬ್ರವರಿ 17–ಮಾರ್ಚ್ 18) ಎಂಬ ಎರಡು ಹಂತಗಳಲ್ಲಿ ನಡೆಯುತ್ತದೆ ಮತ್ತು ಕಾರ್ಯಗಳನ್ನು ಪೂರ್ಣಗೊಳಿಸಿದವರಿಗೆ ವರ್ಚುವಲ್ ಹಾಗೂ ಭೌತಿಕ ಬಹುಮಾನಗಳನ್ನು ನೀಡಲಾಗುತ್ತದೆ.
Page Link: https://kn.wikipedia.org/wiki/%E0%B2%B8%E0%B3%8D%E0%B2%AA%E0%B3%8D%E0%B2%B0%E0%B2%BF%E0%B2%82%E0%B2%97%E0%B3%8D_%E0%B2%AE%E0%B2%82%E0%B2%A4%E0%B3%8D_%E0%B2%8E%E0%B2%A1%E0%B2%BF%E0%B2%9F%E0%B3%8D-%E0%B2%85%E0%B2%A5%E0%B2%BE%E0%B2%A8%E0%B3%8D
ಈ ಸಂಪಾದನೆಗಾಗಿ ಸೈಟ್ ಸೂಚನೆಯನ್ನು ಒದಗಿಸಲು ವಿನಂತಿಸುತ್ತಿದ್ದೇನೆ. [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೭:೦೮, ೩೦ ಜನವರಿ ೨೦೨೬ (IST)
:{{done}} --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೨:೩೯, ೧೧ ಫೆಬ್ರವರಿ ೨೦೨೬ (IST)
==ಸ್ತ್ರೀವಾದ ಮತ್ತು ಜಾನಪದ ೨೦೨೬- ಕನ್ನಡ ವಿಕಿಪೀಡಿಯ==
ನಾನು ಈ ಸ್ಪರ್ದೆಯಲ್ಲಿ ಭಾಗವಹಿಸುತ್ತಿದ್ದೇನೆ. ನನಗೆ ಎರಡು ವಿಷಯಗಳಲ್ಲಿ ಸ್ಪಷ್ಟೀಕರಣ ಬೇಕಾಗಿದೆ.
# ಬ್ಯಾನರ್ ನ ಲಿಂಕ್ ನಲ್ಲಿರುವ ಲೇಖನಗಳ ಪಟ್ಟಿಯಲ್ಲಿರುವ ಲೇಖನಗಳು ಅನರ್ಹ ಹೇಗಾಗುತ್ತದೆ? ಆ ಪಟ್ಟಿ ಸರಿ ಇಲ್ಲದಿದ್ದರೆ ಅದನ್ನು ಪರಿಷ್ಕರಿಸಿ ಪ್ರಕಟಿಸಿದರೆ ನಮ್ಮ ಲೇಖನಗಳು ಅನರ್ಹವಾಗುವುದು ತಪ್ಪುತ್ತದೆ.
# ಸ್ಪರ್ಧೆಯಲ್ಲಿ ಭಾಗವಹಿಸುವವರೇ ಜ್ಯೂರಿಗಳಾಗಿ ಕಾರ್ಯನಿರ್ವಹಿಸುವುದು ಎಷ್ಟು ಸರಿ? Conflict of interest ಆಗುವುದಿಲ್ಲವೇ?
ದಯವಿಟ್ಟು ನಿರ್ವಾಹಕರು ಸ್ಪಷ್ಟೀಕರಣ ಕೊಡಬೇಕಾಗಿ ವಿನಂತಿ.
ದನ್ಯವಾದಗಳು [[ಸದಸ್ಯ:VASANTH S.N.|VASANTH S.N.]] ([[ಸದಸ್ಯರ ಚರ್ಚೆಪುಟ:VASANTH S.N.|ಚರ್ಚೆ]])
::#ಮೊದಲನೆಯದಾಗಿ, ವಿಕಿಪೀಡಿಯ, ಸ್ತ್ರೀವಾದ ಮತ್ತು ಜಾನಪದ ಸ್ಪರ್ಧೆಗೆ ನೀವು ನೀಡಿದ ಕೊಡುಗೆಗೆ ನಾನು ಕೃತಜ್ಞನಾಗಿದ್ದೇನೆ. ಮೇಲಿನ ಪಟ್ಟಿಯಿಂದ ಯಾವುದೇ ಪುಟವನ್ನು ಸ್ಪರ್ಧೆಗೆ ಬಳಸಬಹುದು. ಆದರೆ ಭಾರತೀಯ ಪಾಕಪದ್ಧತಿಯು ಭಾರತೀಯ ಸಂಸ್ಕೃತಿಯ ಅಡಿಯಲ್ಲಿ ಬರುವುದರಿಂದ ಆ ಪುಟಗಳನ್ನು ಪಟ್ಟಿಗೆ ಸೇರಿದೆ. ಆ ಪುಟಗಳನ್ನು ಪರಿಶೀಲಿಸುವುದು ಮತ್ತು ಮೌಲ್ಯಮಾಪನ ಮಾಡುವುದರಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮ. ದಯವಿಟ್ಟು ಸೂಕ್ತವಾದ ಲೇಖನ ಆಯ್ಕೆ ಮಾಡಿ.
::#ಮತ್ತು ನಾನು ಈಗ ಪರಿಶೀಲಿಸಿದಂತೆ ಯಾವುದೇ ಲೇಖನವನ್ನು ಸಲ್ಲಿಸುವವರು ಸ್ವತಃ ಮೌಲ್ಯಮಾಪನ ಮಾಡಿಲ್ಲ, ಆದ್ದರಿಂದ ಹಿತಾಸಕ್ತಿ ಸಂಘರ್ಷ(conflict of interest) ಇಲ್ಲಿ ಅನ್ವಯಿಸುವುದಿಲ್ಲ, ಹಾಗೂ ಕನ್ನಡ ಚಿಕ್ಕದಾದ ಸಮುದಾಯ ಭಾಗವಹಿಸುವಿಕೆ ಇತರ ಭಾಷೆಗಳಿಗೆ ಹೋಲಿಸಿದರೆ ತುಂಬಾ ಕಡಿಮೆ, ಅನೇಕ ಭಾಷೆಗಳ ಹಾಗೆ ಕನ್ನಡದಲ್ಲಿ ತೀರ್ಪುಗಾರರು ಮತ್ತು ಸಂಘಟಕರು ಸಹ ಭಾಗವಹಿಸಬಹುದು.--<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೨೨:೨೧, ೭ ಫೆಬ್ರವರಿ ೨೦೨೬ (IST)
:@[[ಸದಸ್ಯ:VASANTH S.N.|VASANTH S.N.]] , ಪಟ್ಟಿ ಕೇವಲ ಒಂದು ಉದಾಹರಣೆ, ನೀವು ವಿಕಿಗೆ ಸೂಕ್ತವಾದ ಸ್ತ್ರೀವಾದ ಮತ್ತು ಜಾನಪದ ಸಂಬಂಧಿತ ವಿಷಯಗಳನ್ನು ಆಯ್ಕೆ ಮಾಡಬಹುದು. --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೨೨:೨೫, ೭ ಫೆಬ್ರವರಿ ೨೦೨೬ (IST)
== <span lang="en" dir="ltr">Migration to Parsoid</span> ==
<div lang="en" dir="ltr">
<section begin="announcement-content" />
<em>[[m:Special:MyLanguage/Wikimedia Foundation/Product and Technology/Parsoid Read Views/Read View Announcement|Read this in another language]]</em>
Hello everyone! I am glad to inform you that as the next step in the [[mw:Special:MyLanguage/Parsoid/Parser Unification|Parser Unification]] project, Parsoid will soon be turned on as the default article renderer on your wiki. We are gradually increasing the number of wikis using Parsoid, with the intention of making it the default wikitext parser for MediaWiki's next long-term support release. This will make our wikis more reliable and consistent for editors, readers, and tools to use, as well as making the development of future wikitext features easier.
If this disrupts your workflow, don’t worry! You can still opt out through a user preference or turn Parsoid off on the current page using the Tools submenu, as described in the [[mw:Special:MyLanguage/Help:Extension:ParserMigration|Extension:ParserMigration]] documentation.
There is [[mw:Special:MyLanguage/Parsoid/Parser Unification/Confidence Framework|more information about our roll-out strategy]] available, including the testing done before we turn on Parsoid for a new wiki.
To report bugs and issues, please look at our [[mw:Special:MyLanguage/Parsoid/Parser Unification/Known Issues|known issues]] documentation and if you found a new bug please create a phab ticket and tag the [[phab:project/view/5846|Content Transform Team in Phabricator]].
<section end="announcement-content" />
</div>
<bdi lang="en" dir="ltr">[[mw:User:ABreault (WMF)|Content Transform Team]]</bdi> ೦೬:೧೨, ೧೮ ಫೆಬ್ರವರಿ ೨೦೨೬ (IST)
<!-- Message sent by User:ABreault (WMF)@metawiki using the list at https://meta.wikimedia.org/w/index.php?title=Wikimedia_Foundation/Product_and_Technology/Parsoid_Read_Views/2026-02-16_Wikipedias&oldid=30094589 -->
== Request for Comment: VisualEditor automatic reference names ==
<div lang="en" dir="ltr">
Hi, I’m Johannes from [[:m:Wikimedia Deutschland|Wikimedia Deutschland]]’s [[:m:WMDE Technical Wishes|Technical Wishes team]]. Apologies for writing in English. {{Int:Please-translate}}! We are considering to work on [[:m:Community Wishlist/W17|Community Wishlist/W17: Improve VE references' automatic names and reuse]]. This has been a long-term issue for wikitext editors (see e.g. [[:en:WP:VisualEditor/Named references]]) which has been among the top-voted wishes in several [[:m:Community Wishlist Survey|Community Wishlist Surveys]], e.g. [[:m:Community Wishlist Survey 2017/Editing/VisualEditor: Allow editing of auto-generated references before adding them|2017]], [[:m:Community Wishlist Survey 2019/Citations/VisualEditor: Allow references to be named|2019]], [[:m:Community Wishlist Survey 2022/Editing/VisualEditor should use human-like names for references|2022]] or [[:m:Community Wishlist Survey 2023/Editing/VisualEditor should use proper names for references|2023]].
We would like your input on the [[:m:WMDE Technical Wishes/References/VisualEditor automatic reference names#Proposed solutions|solutions]] proposed on our project page: '''[[:m:WMDE Technical Wishes/References/VisualEditor automatic reference names]]'''. We are considering several options, which can be combined if desired by the community.
* Changing the default pattern for automatically generated reference names (currently <code>":n"</code>, e.g. <code>":0"</code>, <code>":1"</code>...) to use the [[:mw:Help:Reference Previews#Exposed reference types|reference type]] instead (e.g. <code>"book_reference-1"</code>).
* Providing a simple mechanism for communities to configure a different default name.
* Generating automatic reference names based on the [[:en:domain name|domain name]] (if it’s a web citation).
* Generating automatic reference names based on template parameters (e.g. "title" or "last"+"first") – defined by the community.
=== Feedback ===
[[:m:WMDE Technical Wishes/References/VisualEditor automatic reference names|Visit our project page]] to read about our proposal in detail and share your thoughts [[:m:Talk:WMDE Technical Wishes/References/VisualEditor automatic reference names#Request for comment|on metawiki]].
'''Please note''': We will only implement a solution if there’s clear consensus among the global community. Our intention is not to build the perfect solution, but to find a simple and lean one that alleviates the pain caused by auto generated names. We are aware that some experienced VisualEditor users might prefer an option to manually change reference names in VisualEditor, but such a UX intervention is difficult to achieve across reference types and thus out of scope for our team, we can only improve the auto-naming mechanism.
We are happy about suggestions for improving certain details of the proposed solutions. Any other feedback and alternative proposals are also welcome – even though it’s out of scope for us, it might still be relevant for future work on this topic.
Please support us interpreting consensus by clearly indicating your opinion (e.g. by using support/neutral/oppose templates). We are aware of [[:en:WP:NOTVOTE]], but given that we are facilitating this discussion with users from different wikis, potentially commenting in their native language, clearly indicating your position helps us avoid misunderstandings.
Thank you for participating!</div> <bdi lang="en" dir="ltr">[[User:Johannes Richter (WMDE)|Johannes Richter (WMDE)]] ([[User talk:Johannes Richter (WMDE)|ಚರ್ಚೆ]])</bdi> ೧೬:೪೫, ೧೯ ಮಾರ್ಚ್ ೨೦೨೬ (IST)
<!-- Message sent by User:Johannes Richter (WMDE)@metawiki using the list at https://meta.wikimedia.org/w/index.php?title=User:Johannes_Richter_(WMDE)/MassMessageRecipients&oldid=30281362 -->
== ವಿಕಿಕಾನ್ಫರೆನ್ಸ್ ಇಂಡಿಯಾ 2026: ವಿದ್ಯಾರ್ಥಿವೇತನಕ್ಕೆ (ಸ್ಕಾಲರ್ಶಿಪ್) ಅರ್ಜಿ ಸಲ್ಲಿಕೆ ಆರಂಭ ==
ಎಲ್ಲರಿಗೂ ನಮಸ್ಕಾರ,
ವಿಕಿಕಾನ್ಫರೆನ್ಸ್ ಇಂಡಿಯಾ 2026 ಸಮ್ಮೇಳನಕ್ಕಾಗಿ ವಿದ್ಯಾರ್ಥಿವೇತನ (ಸ್ಕಾಲರ್ಶಿಪ್) ಅರ್ಜಿಗಳನ್ನು ಈಗ ಆಹ್ವಾನಿಸಲಾಗುತ್ತಿದೆ. ಈ ಸಮ್ಮೇಳನವು ಭಾರತದ ಕೊಚ್ಚಿಯಲ್ಲಿ 2026 ರ ಸೆಪ್ಟೆಂಬರ್ 4 ರಿಂದ 6 ರವರೆಗೆ ನಡೆಯಲಿದೆ.
ವಿಕಿಕಾನ್ಫರೆನ್ಸ್ ಇಂಡಿಯಾವು ಭಾರತ, ದಕ್ಷಿಣ ಏಷ್ಯಾ ಮತ್ತು ಇತರ ಪ್ರದೇಶಗಳ ವಿಕಿಮೀಡಿಯನ್ನರು, ಸಮುದಾಯದ ಸಂಘಟಕರು ಮತ್ತು ಕೊಡುಗೆದಾರರನ್ನು ಒಗ್ಗೂಡಿಸುತ್ತದೆ. ಮುಕ್ತ ಜ್ಞಾನ ಚಳುವಳಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಬ್ಬರನೊಬ್ಬರು ಅರಿಯಲು, ಹೊಸ ವಿಚಾರ ಕಲಿಯಲು, ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಒಟ್ಟಾಗಿ ಕೆಲಸ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ.
ನೀವು ವಿಕಿಮೀಡಿಯಾ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರೆ ಅಥವಾ ಸಮುದಾಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ, ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ನಿಮ್ಮನ್ನು ಪ್ರೋತ್ಸಾಹಿಸಲಾಗುತ್ತದೆ. ವಿವರವಾದ ಪ್ರಕಟಣೆ ಇಲ್ಲಿದೆ. 🙂
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: [15 ಏಪ್ರಿಲ್ 2026, ರಾತ್ರಿ 11:59 ಕ್ಕೆ (IST)]
ಅರ್ಜಿ ಸಲ್ಲಿಸುವ ಕೊಂಡಿ: https://docs.google.com/forms/d/e/1FAIpQLSdA3rR9xX_k31dzJrjM5MTDNYNUIRcAB45S4TflsYCbGJNrzg/viewform
ಹೆಚ್ಚಿನ ಮಾಹಿತಿಗಾಗಿ: [[metawiki:WikiConference_India_2026/Scholarship|WCI 2026 Scholarship]]
ದಯವಿಟ್ಟು ಈ ಪ್ರಕಟಣೆಯನ್ನು ನಿಮ್ಮ ಸಮುದಾಯದ ಇತರರೊಂದಿಗೆ ಹಂಚಿಕೊಳ್ಳಿ.
ಧನ್ಯವಾದಗಳು.
ವಿಕಿಕಾನ್ಫರೆನ್ಸ್ ಇಂಡಿಯಾ 2026 ಆಯೋಜನಾ ಸಮಿತಿ
-[[ಸದಸ್ಯ:Gnoeee|Gnoeee]] ([[ಸದಸ್ಯರ ಚರ್ಚೆಪುಟ:Gnoeee|ಚರ್ಚೆ]]) ೦೨:೩೨, ೨೯ ಮಾರ್ಚ್ ೨೦೨೬ (IST)
== Join the sixth Ukraine’s Cultural Diplomacy Month on Wikipedia! ==
<div lang="en" dir="ltr">
[[File:Ukraine’s Cultural Diplomacy Month on Wikipedia 2026.png|right|250px|thumb|link=https://meta.wikimedia.org/wiki/Ukraine%27s_Cultural_Diplomacy_Month_2026|Join our campaign!]]
{{int:please-translate}}
Dear Wikipedians!
[[:m:Special:MyLanguage/Wikimedia Ukraine|Wikimedia Ukraine]], in cooperation with the [[:en:Ministry of Foreign Affairs of Ukraine|MFA of Ukraine]] and [[:en:Ukrainian Institute|Ukrainian Institute]], has launched the sixth edition of writing challenge "'''[[:m:Special:MyLanguage/Ukraine's Cultural Diplomacy Month 2026|Ukraine's Cultural Diplomacy Month]]'''", which lasts from '''1st April''' until '''30th April 2026'''.
The initiative aims to promote knowledge about Ukrainian culture abroad by creating and improving Wikipedia articles in multiple languages. This year marks the sixth edition of the campaign, which will focus on contemporary culture, making today’s artistic voices and practices more visible to international audiences.
🧩'''How to participate?'''
Choose an article from the suggested list → Write an article in your language, or improve an existing one according to the rules → Add your contribution to the contest page and calculate your points → Win prizes and receive a certificate of participation → Become a promoter of truthful knowledge about Ukraine.
🧩'''[[m:Special:MyLanguage/Ukraine's Cultural Diplomacy Month 2026|Check our main page for more information]]'''.
'''If you are interested in coordinating long-term community engagement for the campaign and becoming a local ambassador, we would love to hear from you! Please let us know your interest.'''
If not, then we encourage you to translate the [[m:Special:MyLanguage/Ukraine's Cultural Diplomacy Month 2026|landing page of the contest]] and [https://meta.wikimedia.org/wiki/Special:MessageGroupStats?group=Centralnotice-tgroup-UCDM2026banner&messages=&language=en&x=D banner] into your own language.
Also, we set up a [[:m:CentralNotice/Request/Ukraine's Cultural Diplomacy Month 2026|banner]] to notify users of the possibility to participate in this challenge!
[[:m:User:OlesiaLukaniuk (WMUA)|OlesiaLukaniuk (WMUA)]] ([[:m:User talk:OlesiaLukaniuk (WMUA)|talk]]) 04:35, 1 April 2026 (UTC)
</div>
<!-- Message sent by User:OlesiaLukaniuk (WMUA)@metawiki using the list at https://meta.wikimedia.org/w/index.php?title=User:OlesiaLukaniuk_(WMUA)/list_of_wikis&oldid=28552112 -->
== Action Required: Update templates/modules for electoral maps (Migrating from P1846 to P14226) ==
Hello everyone,
This is a notice regarding an ongoing data migration on Wikidata that may affect your election-related templates and Lua modules (such as <code>Module:Itemgroup/list</code>).
'''The Change:'''<br />
Currently, many templates pull electoral maps from Wikidata using the property [[:d:Property:P1846|P1846]], combined with the qualifier [[:d:Property:P180|P180]]: [[:d:Q19571328|Q19571328]].
We are migrating this data (across roughly 4,000 items) to a newly created, dedicated property: '''[[:d:Property:P14226|P14226]]'''.
'''What You Need To Do:'''<br />
To ensure your templates and infoboxes do not break or lose their maps, please update your local code to fetch data from [[:d:Property:P14226|P14226]] instead of the old [[:d:Property:P1846|P1846]] + [[:d:Property:P180|P180]] structure. A [[m:Wikidata/Property Migration: P1846 to P14226/List|list of pages]] was generated using Wikimedia Global Search.
'''Deadline:'''<br />
We are temporarily retaining the old data on [[:d:Property:P1846|P1846]] to allow for a smooth transition. However, to complete the data cleanup on Wikidata, the old [[:d:Property:P1846|P1846]] statements will be removed after '''May 1, 2026'''. Please update your modules and templates before this date to prevent any disruption to your wiki's election articles.
Let us know if you have any questions or need assistance with the query logic. Thank you for your help! [[User:ZI Jony|ZI Jony]] using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೨೨:೪೨, ೩ ಏಪ್ರಿಲ್ ೨೦೨೬ (IST)
<!-- Message sent by User:ZI Jony@metawiki using the list at https://meta.wikimedia.org/w/index.php?title=Distribution_list/Non-Technical_Village_Pumps_distribution_list&oldid=29941252 -->
== Invitation to join South Asian Community and the Annual Planning Discussions with WMF ==
"Kindly feel free to translate this text into your own language."
Dear Community member,
We would like to invite you all to the April edition of the South Asia Open Community Call that will focus on a discussion with the leadership of the Wikimedia Foundation on their [[:m:Wikimedia Foundation Annual Plan/2026-2027|Annual Plan (2026-2027)]].
The [[:m:Wikimedia Foundation Annual Plan|Foundation’s Annual Plan]] is a high-level roadmap for what the organisation aims to achieve in the coming year. It includes not only the foundation’s Goals, Progress, and plan but also a summary of Global Trends that impact the present and future of our movement.
This is the right time for the South Asia community to participate and share their thoughts on the Wikimedia Foundation’s annual plan, helping shape it together. Share your hopes, concerns, bold ideas, and specific requests to contribute to the Foundation’s planning.
Hence, the next [[:m:South Asia Open Community Call|South Asia Open Community Call]] will be hosted on the following dates/times. Please mark the same in your calendar and sign up [[:m:Event:South Asia Open Community Call, April 2026|here]].
* Platform: Google Meet
* Date: 17th April, 2026
* Time: 1930-2045 IST (1400-1515 UTC)
* Registration Link: [[:m:Event:South Asia Open Community Call, April 2026|here]]
Note: Only those who have registered will receive the joining link.
Look forward to seeing you on the call,
Best, [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೦:೧೧, ೬ ಏಪ್ರಿಲ್ ೨೦೨೬ (IST)
<!-- Message sent by User:Nitesh Gill@metawiki using the list at https://meta.wikimedia.org/w/index.php?title=User:Nitesh_Gill/lists/Indic_VPs&oldid=29127818 -->
== Request for comment (global AI policy) ==
<bdi lang="en" dir="ltr" class="mw-content-ltr">
Apologies for writing in English. {{int:Please-translate}}
A [[:m:Requests for comment/Artificial intelligence policy|request for comment]] is currently being held to decide on a global AI policy. {{int:Feedback-thanks-title}}
[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೨೭, ೨೬ ಏಪ್ರಿಲ್ ೨೦೨೬ (IST)
</bdi>
<!-- Message sent by User:Codename Noreste@metawiki using the list at https://meta.wikimedia.org/w/index.php?title=Distribution_list/Global_message_delivery&oldid=30424282 -->
== Call for Applications: TTT 2026 (Deadline Extended to 20 May) ==
''<small>Apologies for writing in English. Please feel free to translate this into your language.</small>''
Hello everyone,
We hope you are doing well.
We would like to share that applications for the [[:m:IIITH-OKI/Train the Trainer Program/2026|Train the Trainer (TTT) 2026]] program are currently open. TTT is a capacity-building initiative aimed at supporting Wikimedians in developing training, facilitation, and leadership skills.
We are happy to inform you that the scholarship application deadline has been [[:m:IIITH-OKI/Train the Trainer Program/2026/Scholarship|extended until 20 May 2026]]. We are still receiving applications and encourage interested community members, especially emerging leaders, to [https://docs.google.com/forms/d/17eq6lJNCTVBoKRqz5IdSCiYWv-eHBrYRnx1wXfncwLI/viewform?edit_requested=true&pli=1 apply].
We also request your support in sharing this opportunity within your communities and networks, so that it can reach a wider and more diverse group of participants.
Thank you for your continued support. '''OKI (IIIT-H)''' [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೮:೩೨, ೧೭ ಮೇ ೨೦೨೬ (IST)
<!-- Message sent by User:Nitesh (OKI)@metawiki using the list at https://meta.wikimedia.org/w/index.php?title=User:Nitesh_Gill/lists/Indic_VPs&oldid=30361720 -->
== <span lang="en" dir="ltr">Vote now in the 2026 U4C election</span> ==
<div lang="en" dir="ltr">
<section begin="announcement-content" />
Eligible voters are asked to participate in the 2026 [[m:Special:MyLanguage/Universal_Code_of_Conduct/Coordinating_Committee|Universal Code of Conduct Coordinating Committee]] election. More information–including an eligibility check, voting process information, candidate information, and a link to the vote–are available on Meta at the [[m:Special:MyLanguage/Universal_Code_of_Conduct/Coordinating_Committee/Election/2026|2026 Election information page]]. The vote closes on 2 June 2026 at [https://zonestamp.toolforge.org/1780358400 00:00 UTC].
Please vote if your account is eligible. Results will be available by 14 June 2026. -- In cooperation with the U4C,<section end="announcement-content" />
</div>
[[m:User:Keegan (WMF)|Keegan (WMF)]] ([[m:User talk:Keegan (WMF)|talk]]) ೨೨:೪೪, ೨೭ ಮೇ ೨೦೨೬ (IST)
<!-- Message sent by User:Keegan (WMF)@metawiki using the list at https://meta.wikimedia.org/w/index.php?title=Distribution_list/Global_message_delivery&oldid=30513860 -->
== RFC about AI-generated content in Wikimedia Commons ==
<bdi lang="en" dir="ltr">Apologies for writing in English, please help translate this message to your language. You are invited to participate in a [[c:Commons:Requests for comment/Policy update for AI content|request for comment on Wikimedia Commons about a policy update for AI content]]. This may affect files that are uploaded to Wikimedia Commons for use on this project. Thank you. [[m:User:Codename Noreste|Codename Noreste]] ([[m:User talk:Codename Noreste|ಚರ್ಚೆ]])</bdi> ೨೨:೪೧, ೨೩ ಜೂನ್ ೨೦೨೬ (IST)
<!-- Message sent by User:Codename Noreste@metawiki using the list at https://meta.wikimedia.org/w/index.php?title=Distribution_list/Global_message_delivery&oldid=30513860 -->
== <span lang="en" dir="ltr">Deployment of Legal and Safety Contacts Link in the Footer of Your Wiki</span> ==
<div lang="en" dir="ltr">
<section begin="Message"/>
'''Legal & Safety Contacts'''
Hello community, the Wikimedia Foundation has provided a [[wmf:Special:MyLanguage/Legal:Wikimedia Foundation Legal and Safety Contact Information|single legal and safety contact page]], to be linked in the footer of your wiki, to ensure access to accurate legal information. This is a regulatory requirement. We have already rolled out links to English, German, Italian, Spanish and other wikis and we will deploy to your wiki soon. [[m:Special:MyLanguage/Wikimedia_Foundation_Legal_and_Safety_Contacts_FAQ|Please read more on the project page]] and leave any comments in this thread or on the [[m:Special:MyLanguage/Talk:Wikimedia Foundation Legal and Safety Contacts FAQ|talk page]].
<section end="Message"/>
</div>
-- [[User:Sannita (WMF)|User:Sannita (WMF)]] ([[User talk:Sannita (WMF)|talk]]) ೧೮:೫೯, ೨೫ ಜೂನ್ ೨೦೨೬ (IST)
<!-- Message sent by User:Sannita (WMF)@metawiki using the list at https://meta.wikimedia.org/w/index.php?title=User:Sannita_(WMF)/Mass_sending_test&oldid=30731267 -->
kuwpvzg9yz8jnfnl278r99ogbgbgaxa
ಸದಸ್ಯರ ಚರ್ಚೆಪುಟ:Shankar Baichabal
3
116317
1375840
922616
2026-06-25T14:31:17Z
~2026-36116-88
100140
/* */
1375840
wikitext
text/x-wiki
* ಹೆಸರು : ಶಂಕರ ಮ. ಬೈಚಬಾಳ
* ತಂದೆ : ಮಲ್ಲಪ್ಪ
* ತಾಯಿ : ಗಂಗಮ್ಮ
* ಜನನ ಸ್ಥಳ : ಮಸಬಿನಾಳ,
ತಾ: ಬಸವನಬಾಗೇವಾಡಿ
ಜಿ: ವಿಜಯಪುರ
* ಕುಟುಂಬ
ಪತ್ನಿ : ವಿಮಲಾ
ಮಕ್ಕಳು : ಸುಪ್ರಿಯಾ, ಸೌಮ್ಯ
* ಶಿಕ್ಷಣ : ಪದವಿ (ಬಿ.ಎಫ್.ಎ.)
*ಹುದ್ದೆ : 'ಜಾನುವಾರು ಅಧಿಕಾರಿ' ಪಶು ಪಾಲನೆ ಮತ್ತು ಪಶುವೈದ್ಯ ಸೇವೆಗಳು
* ವಿಳಾಸ
* ಶಂಕರ ಬೈಚಬಾಳ
"ವಚನ" ರಾಜಾಜಿನಗರ, ವಿಜಯಪುರ-೫೮೬ ೧೦೯
Shankar Baichabal
'VACHAN' Rajaji Nagar, VIJAYAPUR-586 109
* ಶಂಕರ ಬೈಚಬಾಳ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳದಲ್ಲಿ 1966ರ ಜುಲೈ 22 ರಂದು ಜನನ, ಓದಿದ್ದು ಚಿತ್ರಕಲೆಯಲ್ಲಿ ಪದವಿ, ಸಾಹಿತ್ಯ, ಸಂಘಟನೆ, ಚಿತ್ರಕಲೆ, ನಟನೆ ಇವರ ಪ್ರವೃತ್ತಿಗಳು ರೂಪಿಲ್ಲದವರ ರೂಪಿಸಿ, 'ರಾಷ್ಟ್ರಮಾತೆ, ಚನ್ನಮ್ಮ ಹೌದಾ?' ಮಸಬಿನಾಳ-ಒಂದು ಸಾಂಸ್ಕೃತಿಕ ಅಧ್ಯಯನ, ಜಾನಪದ ಚಿಂತನ, ಒಡ್ಡು ಹೇಳು ಹೌದೌದಂತೀನಿ, ಹಲಸಂಗಿ ಭಾಗದ ಲಾವಣಿಕಾರರು, ನಿರ್ನೆರ, ಸೈತಾನ, ಆದೇನ್ ಕಾಗದಂತ, ಮುಜಾಹಿದ್ದೀನ್, ಸಿಂಹಾಸನ ಮಾಮಲೇದಾರ, ಪಡಗಾನೂರ ಶಂಕರಗೌಡ್ರು, ಅಡ್ಡ ಹೆಸರುಗಳು. ರಾಜಗುರು, ಇತಿಹಾಸ ಸತ್ಯವಲ್ಲ !, ಕೃಷಿ ಪಂಡಿತ, ಬಿ.ಎಸ್.ಪಾಟೀಲ, ಭಾರತ ಸಿಂಹಾಸನ ರಶ್ಮಿ, ಕೆಂಪು ಹುಡುಗಿ ಕಪ್ಪು ಕಾಲ್ಕರಿ, ತೋಂಟದ ಸಿದ್ಧಲಿಂಗ ಶ್ರೀಗಳು, ಬುದ್ಧ ಸಿಕ್ಕಿದ್ದ, ದಾಸೋಹಿ, ಶಬ್ದಾತೀತರೊಂದಿಗಿನ ಶಬ್ದಗಳು ಮತ್ತು ಬೈಚಬಾಳ ಕಥನ ಮಾದರಿ ಕೃತಿಗಳು ಪ್ರಕಟವಾಗಿವೆ.
ಮದ್ರಾಸ, ದೆಹಲಿಗಳ ಕರ್ನಾಟಕ ಸಂಘದ ಸದಸ್ಯರು, ಗಡಿನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಸದಸ್ಯ ಫೋಕ್ಲೋರ್ ಸೊಸೈಟಿ ಆಫ್ ಸೌಥ್ ಇಂಡಿಯನ್ ಲ್ಯಾಂಗ್ಜಿಸ್ ಕೇರಳ, ಕನ್ನಡ ಜಾಗೃತಿ ಸಮಿತಿ ಬೆಂಗಳೂರು, ಕನ್ನಡ ಪುಸ್ತಕ ಪರಿಷತ್ತಿನ ಸದಸ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಜಿಲ್ಲಾ ಸಂಚಾಲಕತ್ವದ ಮೂಲಕ ಅನೇಕ ಸಾಹಿತ್ಯಕ ಕಾರ್ಯಕ್ರಮಗಳು ಆಯೋಜನೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪರಿಚಾರಕ. ಜಾನಪದ ಚಿಂತನ ಕೃತಿಗೆ ಗೊರೂರು ಪ್ರಶಸ್ತಿ, ಸರ್ಕಾರಿ ಎಮ್ಮಿ ಸತ್ತಾಗ ಕಥೆಗೆ ಸಂಕ್ರಮಣ ಬಹುಮಾನ, ಭೂಮಿ ತೂಕದ ಜಕ್ಕವ್ವ ಕೃತಿಗೆ ಮುಂಬೈನ ಅಮೂಲ್ಯ ಕಾದಂಬರಿ ಪುರಸ್ಕಾರ, ತಣನ ತಣ್ಣ... ಕಥೆಗೆ ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮನ್ನಣೆ ಸಿಕ್ಕಿದೆ. 'ಮಸಬಿನಾಳದ ಪಶುವಾದಿಗಳು' ಕಥೆಯು ಗುಲ್ಬರ್ಗಾ ವಿಶ್ವವಿದ್ಯಾಲಯ ಹಾಗೂ 'ವಂದೆ ಮಾತರಂ-ಸಲಿಂ' ಕಥೆಯು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ. ಕುವೆಂಪು ಜನ್ಮಶತಮಾನೋತ್ಸವ ನಿಮಿತ್ತ 'ಕುವೆಂಪುಶ್ರೀ' ಗೌರವ, 'ಡಾ.ರಾಧಾಕೃಷ್ಣ ಪ್ರಶಸ್ತಿ' ಉತ್ತರ ಕರ್ನಾಟಕ ಲೇಖಕರ 'ಸನ್ಮಾನ' ತೋಂಟದ ಸಿದ್ದಲಿಂಗ ಶ್ರೀಗಳು ಕೃತಿಗೆ, 'ಕೆಂಪು ಹುಡುಗಿ ಕಪ್ಪು ಕಾಲ್ಮರಿ' ಕಥೆಗೆ, 'ಭಾರತ ಸಿಂಹಾಸನ ರಶ್ಮಿ ಕಾದಂಬರಿಗೆ' ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರಗಳು ಲಭಿಸಿವೆ.
'ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ' ಇವರ ಕೃತಿ ಅನ್ಯಭಾಷೆಗಳಿಗೆ ಭಾಷಾಂತರಗೊಂಡಿದೆ. ಸದ್ಯ ಇವರು ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ 'ಜಾನುವಾರು ಅಧಿಕಾರಿ'ಯಾಗಿದ್ದಾರೆ.
"ಕೃತಿಗಳು"
ದೆವ್ವ ಬಂತೋ ದೆವ್ವ,ಭೀಮಾರಥಿ ಸ್ಮರಣ ಸಂಚಿಕೆ,
ಹಿಂಗಾರಿ ಹಿಡ್ಯಾಗ್ ಮುಂಗಾರಿ ಉಡ್ಯಾಗಜಾನಪದ,ರಾಜಗುರು ಚರಿತ್ರೆ,1998 ಜಾನಪದ ಅನ್ನದ ಮುಲ್ಲಾ ಕಥೆಗಳು,
ಮುಜಾಹಿದ್ದೀನ್,ಸೈತಾನ ಕವನ ಸಂಕಲನ,ಸಹಕಾರ ಸಿಂಧು
ಒಡ್ದು ಹೇಳು ಹೌದೌದಂತಿನಿ,ಇತಿಹಾಸ ಸತ್ಯವಲ್ಲ,ಜೀರಲಭಾವಿ ಅಪ್ಪಗಳು ರೂಪಿಲ್ಲದವರ ರೂಪಿಸಿ ಕಾದಂಬರಿ,ಕರಪಲ್ ಕಲೆ ಜಾನಪದ,ಹಂತಿ,ಬಿಜಾಪುರ ಜಿಲ್ಲಾ ಮಕ್ಕಳ ಜಾನಪದ ಆಟಗಳು,ಅದೇನ ಕಾಗದಂತಲ್ಲರಿ ನಾಟಕ,
ಶಿವಾನಂದ ಶಿವಯೋಗಿಗಳು ಜೀವನ ಚರಿತ್ರೆ
ಮಸಬಿನಾಳ ದರ್ಶನ ದೀಪ್ತಿ ಸಂಪಾದನೆ,ಬುದ್ಧ ಸಿಕ್ಕಿದ್ದ ಕಾದಂಬರಿ, ಮಸಬಿನಾಳದ ಪಶುವಾದಿಗಳು ಕಥೆ,ಮಸಬಿನಾಳ ಸಾಂಸ್ಕೃತಿಕ,ಅಧ್ಯಯನ-ಸಂಶೋಧನೆ,ಹೊನ್ನ ಉಟ್ಟಿಗೆ-ಸಂಪಾದನೆ,ವಾಲ್ಮೀಕಿ ಸಮುದಾಯದ ಜಾತ್ರೆ ಉತ್ಸವಗಳು-ಜಾನಪದ,ಹಲಸಂಗಿ ಭಾಗದ ಲಾವಣಿಕಾರರು
ತವನಿಧಿ,ನಿರ್ನೆರ-ಕಥೆಗಳು,ದಾಸೋಹ,
ಮಕ್ಕಳ ಜಾನಪದ ಆಟಗಳು ತರ್ದವಾಡಿ ಜಾನಪದ,ರಂಗವಿಲಾಸ,ಗಾಂಧಿ ಮತ್ತು ಗಾಂಧಿ
ದೇಶಗತಿ ಇಲ್ಲ, ದೇಶಾಭಿಮಾನವೇ ಎಲ್ಲ,ಸಿಂಹಾಸನ ಮಾಮಲೇದಾರ,
ಬಸರಿಗಿಡದ ವೀರಪ್ಪನವರು,
ಪಡಗಾನೂರ ಶಂಕರಗೌಡರು,ಕೃಷಿ ಪಂಡಿತ -ಗೌರವ
ಗ್ರಂಥ,ಬಿ.ಎಸ್ ಪಾಟೀಲ ಸಾಸನೂರ,ಭಾರತ ಸಿಂಹಾಸನ ರಶ್ಮಿ -ಕಾದಂಬರಿ,
ಕನ್ನಡದ ಮಠ ಪುಸ್ತಕದ ಜಗದ್ಗುರುಗಳು,ಸಿದ್ದಪ್ಪ ಶರಣರು
ದಾಸೋಹಿ ಸಂಪಾದನೆ, ಗೊಲ್ಲಾಳೇಶತನಯ ಸಂಪಾದಾನೆ ಸ್ವಾತಂತ್ರ್ಯ ಹೋರಾಟದಲ್ಲಿ ಮಸಬಿನಾಳ ಇತಿಹಾಸ, ಶಬ್ಬಾತೀತರೊಂದಿಗಿನ ಶಬ್ದಗಳು ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಗಳು ಆಯ್ದ ಕಥೆಗಳು,ಮೂರರ್ವತ್ತುಗಳಿಗೆ,ಮೂರಿಪ್ಪತ್ತು ಮುನ್ನುಡಿ,ತಿಪ್ಪಣ್ಣಪ್ಪ ಗುದ್ದಿ ಚರಿತ್ರೆ,ಪ್ರಕಾಶಮಾನ ಸಂಪಾದನೆ,
"ಬೈಚಬಾಳರ ಕುರಿತು ವಿವಿಧ ಲೇಖಕರ ಕೃತಿಗಳು"
1) 'ಕೆಂಪು ಹುಡುಗಿ ಕಪ್ಪು ಕಾಲ್ಮರಿ' ಪುಸ್ತಕ ಅನುಸಂಧಾನ ಸಂಪಾದಕರು ಡಾ|| ರಮೇಶ ಕತ್ತಿ
2) ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊ. ತೇಜಶ್ವಿನಿ ಜಿ.ಎಂ.ಅವರು 'ಶಂಕರ ಬೈಚಬಾಳ ಬದುಕು-ಬರಹ' ಪಿ.ಎಚ್.ಡಿ. ಸಂಶೋಧನಾ ಅಧ್ಯಯನ ನಡೆಸುತ್ತಿದ್ದಾರೆ.
3) ಶಂಕರನಾರಾಯಣ ಭದ್ರಾವತಿ ಅವರು ಪಡೆದ ಪಿ.ಎಚ್.ಡಿ. ಪದವಿಗೆ ಇವರ ರೇಡಿಯೋ ಭಾಷಣಗಳು ಕೃತಿ, ಆಕರ ಗ್ರಂಥವಾಗಿದೆ.
4) ಶಂಕರ ಬೈಚಬಾಳ ಅವರ ಭಾಷಣಗಳ ಕುರಿತು ರಾವ್ ಸಾಹೇಬ ಬಿರಾದಾರ ವಿಮರ್ಶಾ ಗ್ರಂಥ ಬೈಚಬಾಳ ಭಾಷಣ' ಬರೆದಿದ್ದಾರೆ.
5) ಸ್ವಾತಂತ್ರ್ಯ ಹೋರಾಟದಲ್ಲಿ ಮಸಬಿನಾಳ, Masabinal in the Freedom Struggle ಇಂಗ್ಲೀಷಿಗೆ ಭಾಷಾಂತರ -ಡಾ. ಶ್ರೀಕಾಂತ ಕೃಷ್ಣಮೂರ್ತಿ.
6) 'ಸಾಕ್ಷರತಾ ಸ್ಪಂದನ' ಶಂಕರ ಬೈಚಬಾಳರ ಸಾಕ್ಷರತಾ ಕಾರ್ಯಕ್ರಮಗಳ ಕುರಿತು ಪುಸ್ತಕ – ಡಾ. ಶ್ರೀಶೈಲ ಪಾಟೀಲ
7) 'ಪಶು ವೈದ್ಯನ ಪಯಣ-ಶಂಕರ ಬೈಚಬಾಳರ ಹೆಜ್ಜೆಗಳ :ಗುರುರಾಜ ಲೂತಿ
"ಪ್ರಶಸ್ತಿ"
* ದೆಹಲಿಯ ಬಾಲ ಶಿಕ್ಷಣ ಪರಿಷತ್ ಪುರಸ್ಕಾರ -1988
* ಮೂರು ಸಾವಿರ ಮಠ ಹುಬ್ಬಳ್ಳಿಯ ಯುವ ಚೇತನ ಪುರಸ್ಕಾರ -1988
* ರಾಜಗುರು ಪ್ರತಿಷ್ಟಾನ ಗಚ್ಚಿನಮಠ ಅಮೀನಗಡ ಅಮೃತಮತಿ ಗೌರವ ಪುರಸ್ಕಾರ-1990,
* ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ರಂಗೋತ್ಸವ -90 ಉತ್ತಮ ನಟ
* ಪಣಜಿಯ ಕನ್ನಡ ಕಾರ್ಮಿಕರ ಸಮಿತಿ ಸಾಹಿತ್ಯ ಭೂಷಣ ಗೌರವ ಪುರಸ್ಕಾರ 1994
* ತಪೋವನ ಧಾರವಾಡದ ಕುಮಾರಸ್ವಾಮಿಗಳಿಂದ ಸಾಹಿತ್ಯ ಸಾಧಕ' ಸನ್ಮಾನ 1995
* ಉತ್ತರ ಕರ್ನಾಟಕ ಲೇಖಕರ ವೇದಿಕೆ ವಿಜಯಪುರ ಶ್ರೇಷ್ಠ ಯುವಸಾಹಿತಿ ಪ್ರಶಸ್ತಿ' 1998
* ಆನಂದಮಠ ಜೀರಂಬಾವಿ ಮುದ್ದೇಬಿಹಾಳ ಸಂಸ್ಥೆಯ ಸಾಹಿತ್ಯ ಸಾರತಿ' ಪುರಸ್ಕಾರ 1998
* ಗೊರೂರು ಪ್ರತಿಷ್ಠಾನ (ರಿ) ಬೆಂಗಳೂರು ಜಾನಪದ ಚಿಂತನ' ಕೃತಿಗೆ ಪುಸ್ತಕ ಪ್ರಶಸ್ತಿ 1998
* ಸರ್ ಎಂ ವಿಶ್ವೇಶ್ವರಯ್ಯ ಸಾಹಿತ್ಯ ಸಂಘಟನೆ ಬೆಂಗಳೂರು, ವಿಶ್ವೇಶ್ವರಯ್ಯ' ಪುರಸ್ಕಾರ 1999
* ಕುಲಾಲಸುಧಾರಕ ಸಂಘ ಮುಂಬೈ ಅಮೂಲ್ಯ ಕಥಾ' ಬಹುಮಾನ ಜಕ್ಕವ್ವನ ಗುಡಿ) 1999
*ಸಂಕ್ರಮಣ ಸಾಹಿತ್ಯ ಸ್ಪರ್ಧೆ ಬೆಂಗಳೂರು, ಸರ್ಕಾರಿ ಎಮ್ಮೆ ಸತ್ತಾಗ ಕಥೆಗೆ ಬಹುಮಾನ 2000
* ಚುಟುಕು ಸಾಹಿತ್ಯ ಪರಿಷತ್ತು ಮೈಸೂರು ಕೊಡಮಾಡುವ ಚುಟುಕುಶ್ರೀ' ಗೌರವ 2001
* ತಿಲಕ ಗೆಳೆಯರ ಬಳಗ ಕಡಣೆ, ಅಲಮೇಲ ಕರ್ನಾಟಕ ಯುವ ಪ್ರತಿಭಾಶ್ರೀ 2003'
* ಕನ್ನಡ ಅಭಿವೃದ್ಧಿ ಬಳಗ ಬೆಂಗಳೂರು, ಕುವೆಂಪುಶ್ರೀ' ಶತಮಾನೋತ್ಸವ ಪ್ರಶಸ್ತಿ 2004
* ವಿಶ್ವ ಆರೋಗ್ಯ ಕ್ರೀಡಾ ಪ್ರತಿಷ್ಠಾನ ಕಲಬುರಗಿ 'ಯುವ ಚೇತನ' ಪ್ರಶಸ್ತಿ 2005
* ಕಾಸರಗೋಡಿನ ಕರಾವಳಿಯ ಪ್ರತಿಷ್ಠಾನದ ಸುವರ್ಣ ಕನ್ನಡಿಗ ಗೌರವ' 2006
* ಬಸವಜ್ಯೋತಿ ಸಾಹಿತ್ಯವೃಂದ ಮುಂಬೈ (ರಿ) 'ಪಂದ್ರಹಾಸ ಸಂದು ಸಾಹಿತ್ಯ ಪುರಸ್ಕಾರ' 2006
* ಜಿಲ್ಲಾ ಆಡಳಿತ ಸುವರ್ಣ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ' 2007
* ಮೈಸೂರು ದಸರಾ ಮಹೋತ್ಸವ 2008 'ದಸರಾ ಕಾವೋತ್ಸವ' ಗೌರವ 2008
* ಅಖಿಲ ಭಾರತ ಹಿಂದು ಮಹಾಸಭಾದ 'ಸ್ವಾತಂತ್ರ್ಯವೀರ ಸಾವರ್ಕರ ರತ್ನ' 2009
* ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಕನ್ನಡ ವಿ.ವಿ. ಹಂಪಿ ಅಭಿನಂದನಾ ಗೌರವ' 2010
* ನವರಸಪುರ ಉತ್ಸವ 2011 ವಿಜಯಪುರ ನವರಸಪುರ ಕಾವ್ಯ' ಅಭಿನಂದನಾ ಪತ್ರ 2011
* ರಾಷ್ಟ್ರೀಯ ಭಾವೈಕ್ಯತಾ ಪುರಸ್ಕಾರ ಹರಿಹರ-ರಾಣಿಬೆನ್ನೂರ 'ಭಾವೈಕ್ಯ ಬಂಧು' 2011
* ಸುಧಾವಾಹಿನಿ ಕಲಾ ಕೇಂದ್ರ ಬೆಂಗಳೂರು ಹೊಯ್ಸಳ ವಿಷ್ಣುವರ್ಧನ' ಪ್ರಶಸ್ತಿ 2012
* ಕನ್ನಡ ವಿ.ವಿ. ಹಂಪಿ ವಾಲ್ಮೀಕಿ ಅಧ್ಯಯನ ಪೀಠ 'ಅಭಿನಂದನಾ ಪತ್ರ' (ಜಾತ್ರೆ/ಉತ್ಸವ) 2012
* ಭಾರತೀಯಾರ್ ಯುನಿವರ್ಸಿಟಿ ಕೊಯಿಮತ್ತೂರ (ತಮಿಳನಾಡು) 'ಅಭಿನಂದನಾ ಪತ್ರ' 2013
* 'ಸಂಯುಕ್ತ ಕರ್ನಾಟಕ 80'ರ ಸಂಭ್ರಮದ ನಿಮಿತ್ಯ ಸಹಸ್ರ ಚಂದ್ರ ದರ್ಶನ ಸನ್ಮಾನ' 2013
* ಜಗದ್ಗುರು ಅನ್ನದಾನೇಶ್ವರ ಮಠ ಹೊಸಪೇಟೆ ಅವರಿಂದ 'ಸಾಹಿತ್ಯ ಚೇತನ' ಬಿರುದು 2014
* 40ನೇ ಅ.ಕ.ಜಾನಪದಸಮ್ಮೇಳನ ಧಾರವಾಡ 'ಜಾನಪದ ತಜ್ಞ' ಪುರಸ್ಕಾರ 2014
* ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ ಹುಟ್ಟುಗುರುಡರ ಚಾಳೀಸ್' ಕಥಾ ಬಹುಮಾನ 2015
* ಕರ್ನಾಟಕ ವಿ.ವಿ ಧಾರವಾಡ, ಶಿರೂರಿನಲ್ಲಿ ನಡೆದ ಜಾನಪದ ಉತ್ಸವದಲ್ಲಿ ಗೌರವ ಸಮ್ಮಾನ' 2015
* ತೋಂಟದಾರ್ಯ ಸಂಸ್ಥಾನಮಠ ಗದಗ ಪುಸ್ತಕ ಜಾತ್ರೆಯಲ್ಲಿ 'ಗುರುಕಾರುಣ್ಯ' ಸನ್ಮಾನ 2016
* ಕನ್ನಡ ಪುಸ್ತಕ ಪರಿಷತ್ತು ವಿಜಯಪುರ, 'ಜಿಲ್ಲಾ ಸಾಹಿತ್ಯೋತ್ಸವ 19' ಸರ್ವಾಧ್ಯಕ್ಷತೆ 2019
* ರಾಣಿ ಚನ್ನಮ್ಮ ಅಧ್ಯಯನ ಪೀಠ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಅಭಿನಂದನಾ ಪತ್ರ' 2022
* ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಕಾವ್ಯಾಭಿನಂದನಾ ನುಡಿ' ಗೌರವ 2022
* ಕರ್ನಾಟಕಸಾಹಿತ್ಯ ಅಕಾಡೆಮಿ ಬೆಂಗಳೂರು ಡಾ.ಸಿದ್ದಲಿಂಗಯ್ಯ ಬದುಕು ಬರಹದಲ್ಲಿ 'ಸನ್ಮಾನ' 2022
* 'ಭಾರತ ಸಿಂಹಾಸನ ರಶ್ಮಿ' ಕೃತಿಗೆ ಕ.ಸಾ.ಪ. ಸಮೀರವಾಡಿ 'ದತ್ತಿ ಪುರಸ್ಕಾರ' 2022
* ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಅವರಿಂದ ಗದುಗಿನ ತೋಂಟದಶ್ರೀ' ಪುರಸ್ಕಾರ 2022
* ಕೆಂಪು ಹುಡುಗಿ, ಕಪ್ಪು ಕಾಲ್ಕರಿ' ಹಸ್ತಪ್ರತಿಗೆ 'ಡಾ' ಎಚ್.ಬಿ ಪೋತೆ ಕಥಾ ಪ್ರಶಸ್ತಿ' 2022
* ಕನ್ನಡ ಬುಕ್ ಆಫ್ ರೆಕಾರ್ಡ್ ಚೆನೈ ಅವರಿಂದ ಸಿದ್ದೇಶ್ವರಶ್ರೀ 'ನುಡಿ ಗೌರವ' 2023
* ಶರಣ ಸಂಸ್ಕೃತಿ ಮೇಳ ತಿಮ್ಮಾಪುರ ಜಿಲಾ ರಾಯಚೂರ 'ಸಾಹಿತ್ಯ ಸಾಧಕ' ಪುರಸ್ಕಾರ 2023
* ತೋಂಟದ ಸಿದ್ಧಲಿಂಗ ಶ್ರೀಗಳು' ಕ 4/4 - ಪರಿಷತ್ತಿನ 'ದತ್ತಿ ಪುರಸ್ಕಾರ' 2023
* ಕ.ಸಾ.ಪ. ಮೈಸೂರು ಮೇಘ ಮೈತ್ರಿ ಕೆಯ್ದ ಕಥೆಗಳು ಕೃತಿಗೆ 2024
q9km4ohuwvug1baevxn3pa68g3j2q11
ನರೇಶ್ ಗೋಯಲ್
0
146304
1375844
1351439
2026-06-25T18:12:26Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1375844
wikitext
text/x-wiki
{{short description|Non-resident Indian businessman}}
{{Use British English|date=October 2011}}
{{Use dmy dates|date=July 2020}}
{{Infobox person
| name = ನರೇಶ್ ಗೋಯಲ್
| image =
| image_size = 150px
| birth_date = {{Birth date and age|df=yes|1949|12|29}}<ref name="Vulture">{{cite book |last1=Joseph |first1=Josy |title=A Feast of Vultures—The Hidden Business of Democracy in India |date=2 October 2016 |publisher=Harper Collins |location=Mumbai }}</ref>
| birth_place = [[ಸಂಗ್ರೂರ್]], [[ಪಂಜಾಬ್]], ಭಾರತದ ಡೊಮಿನಿಯನ್
| nationality = [[ಭಾರತೀಯ]]
| occupation = ಜೆಟ್ ಏರ್ವೇಸ್ ನ ಮಾಜಿ ಅಧ್ಯಕ್ಷರು<ref name="forbes.com">{{cite web|url=https://www.forbes.com/profile/naresh-goyal/|title=Naresh Goyal}}</ref>
| children = 2<ref name="livemint.com">{{cite web|url=http://www.livemint.com/Companies/R99xh6Qyc0QJnuaDDWafmN/Still-uncertain-Namrata-and-Nivaan-Goyal.html|title=Companies|first=P.R.|last=Sanjai|date=7 March 2013}}</ref>
| networth =
| years_active = ೧೯೬೭ – ೨೦೧೯
}}
'''ನರೇಶ್ ಗೋಯಲ್''' (ಜನನ ೨೯ ಜುಲೈ ೧೯೪೯) ಒಬ್ಬ [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಅನಿವಾಸಿ ಭಾರತೀಯ]] (ಎನ್ಅರ್ಐ) ಉದ್ಯಮಿ ಮತ್ತು [[ಜೆಟ್ ಏರ್ವೇಸ್|ಜೆಟ್ ಏರ್ವೇಸ್ನ]] ಸಂಸ್ಥಾಪಕ ಅಧ್ಯಕ್ಷರು.<ref>{{Cite news|url=https://www.outlookindia.com/magazine/story/a-jet-propelled-by-don-ibrahim/297557|title=A jet propelled by Don Ibrahim|last=Joseph|first=Josy|date=21 July 2016|access-date=26 October 2018|publisher=Outlook India}}</ref> ಅವರು ೧೯೯೩ ರಲ್ಲಿ ಇಸ್ಲೆ ಆಫ್ ಮ್ಯಾನ್ ಅನ್ನು ಸಂಯೋಜಿಸಿದ ಟೈಲ್ ವಿಂಡ್ಸ್ನಿಂದ ಆರಂಭಿಕ ಬೀಜದ ಹಣದಿಂದ ಜೆಟ್ ಏರ್ವೇಸ್ ಅನ್ನು ಪ್ರಾರಂಭಿಸಿದರು.<ref>{{Cite news|url=https://www.business-standard.com/article/companies/jet-airways-chief-goyal-denies-tax-evasion-111122800004_1.html|title=Jet Airways chief Goyal denies tax evasion|date=20 January 2013|work=Business Standard|access-date=26 October 2018}}</ref> ಜೆಟ್ ಏರ್ವೇಸ್ನ ೨೦೦೫ ರ [[ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ|ಐಪಿಒ]] ನಂತರ, ''[[ಫೋರ್ಬ್ಸ್]]'' ನಿಯತಕಾಲಿಕವು ಅವರನ್ನು ಯುಎಸ್$೧.೯ ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ [[ಭಾರತ|ಭಾರತದ]] ೧೬ ನೇ ಶ್ರೀಮಂತ ವ್ಯಕ್ತಿ ಎಂದು ಘೋಷಿಸಿತು. ಅವರು ಪ್ರಸ್ತುತ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.<ref>{{Cite web|url=https://www.forbes.com/lists/2005/77/D67A.html|title=#16 Naresh Goyal|website=Forbes.com|access-date=25 July 2013}}</ref><ref name="Indian Billionaires">{{Cite news|url=https://www.forbes.com/billionaires/list/#version:static_country:India|title=The World's Billionaires - India|work=[[Forbes]]|access-date=2016-09-07}}</ref>
== ಆರಂಭಿಕ ಜೀವನ ==
ನರೇಶ್ ಗೋಯಲ್ ಅವರು [[ಪಂಜಾಬ್|ಪಂಜಾಬ್ನ]] [[ಸಂಗ್ರೂರ್|ಸಂಗ್ರೂರ್ನಲ್ಲಿ]] <ref name="theguardian.com">{{Cite web|url=https://www.theguardian.com/business/2006/jul/21/theairlineindustry.india|title=Naresh Goyal: Indian high-flyer with the world on his radar|last=Teather|first=David|date=21 July 2006|website=The Guardian}}</ref> ೧೯೪೯ ರಲ್ಲಿ ಆಭರಣ ವ್ಯಾಪಾರಿಯೊಬ್ಬರ ಮನೆಯಲ್ಲಿ ಜನಿಸಿದರು. ಅವನು ಮಗುವಾಗಿದ್ದಾಗ ಅವನ ತಂದೆ ತೀರಿಕೊಂಡರು. ಅವರು ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯವರೆಗೆ ಓದಿದ್ದಾರೆ. ಬಾಲಕರ ರಾಜ್ ಪ್ರೌಢ ಶಾಲೆ. ಅವರು ಹನ್ನೊಂದು ವರ್ಷದವರಾಗಿದ್ದಾಗ, ಅವರ ಕುಟುಂಬವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು ಮತ್ತು ಅವರ ಮನೆಯನ್ನು ಹರಾಜು ಮಾಡಲಾಯಿತು. ನಂತರ ಅವನು ತನ್ನ ತಾಯಿಯ ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದನು. ಗೋಯಲ್ ಸರ್ಕಾರದಿಂದ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ. ಬಿಕ್ರಮ್ ಕಾಲೇಜ್ ಆಫ್ ಕಾಮರ್ಸ್, [[ಪಟಿಯಾಲ]].<ref name="business-standard.com">{{Cite news|url=http://www.business-standard.com/article/beyond-business/newsmaker-naresh-goyal-106012101064_1.html|title=Newsmaker: Naresh Goyal|last=Sanjai|first=P. R.|date=21 January 2006|work=Business Standard India}}</ref>
== ವೃತ್ತಿ ==
೧೯೬೭ ರಲ್ಲಿ, ಗೋಯಲ್ ಅವರು ತಮ್ಮ ತಾಯಿಯ ಚಿಕ್ಕಪ್ಪ ಸೇಠ್ ಚರಣ್ ದಾಸ್ ರಾಮ್ ಲಾಲ್ ಅವರ ಟ್ರಾವೆಲ್ ಏಜೆನ್ಸಿ, ಈಸ್ಟ್ ವೆಸ್ಟ್ ಏಜೆನ್ಸಿಗಳಲ್ಲಿ ಕ್ಯಾಷಿಯರ್ ಆಗಿ ತಿಂಗಳಿಗೆ ರೂ ೩೦೦ ರ ಆರಂಭಿಕ ಸಂಬಳದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.<ref name="business-standard.com"/> ವಾಣಿಜ್ಯದಲ್ಲಿ ಪದವಿ ಪಡೆದ ನಂತರ, ಗೋಯಲ್ ಲೆಬನಾನಿನ ಇಂಟರ್ನ್ಯಾಷನಲ್ ಏರ್ಲೈನ್ಸ್ಗಾಗಿ ಜಿಸಿಎ ಯೊಂದಿಗೆ ಪ್ರಯಾಣ ವ್ಯವಹಾರವನ್ನು ಸೇರಿಕೊಂಡರು.<ref name="jetairways.com">{{Cite web|url=http://www.jetairways.com/EN/IN/jetexperience/chairman.aspx|title=Chairman's Profile at Jet Airways|archive-url=https://web.archive.org/web/20160529184308/http://www.jetairways.com/EN/IN/jetexperience/chairman.aspx|archive-date=29 May 2016|access-date=7 February 2016}}</ref>
೧೯೬೭ ರಿಂದ ೧೯೭೪ ರವರೆಗೆ, ಅವರು ಹಲವಾರು ವಿದೇಶಿ ವಿಮಾನಯಾನ ಸಂಸ್ಥೆಗಳೊಂದಿಗೆ ತಮ್ಮ ಒಡನಾಟದ ಮೂಲಕ ಪ್ರಯಾಣ ವ್ಯವಹಾರದಲ್ಲಿ ವ್ಯಾಪಕ ತರಬೇತಿಯನ್ನು ಪಡೆದರು. ಈ ಅವಧಿಯಲ್ಲಿ ಅವರು ವ್ಯಾಪಾರದ ನಿಮಿತ್ತ ವಿದೇಶಗಳಿಗೆ ವ್ಯಾಪಕವಾಗಿ ಪ್ರಯಾಣಿಸಿದರು.<ref name="jetairways.com"/>
೧೯೬೯ ರಲ್ಲಿ, ಅವರು ಇರಾಕಿ ಏರ್ವೇಸ್ನ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕರಾಗಿ ನೇಮಕಗೊಂಡರು ಮತ್ತು ೧೯೭೧ ರಿಂದ ೧೯೭೪ ರವರೆಗೆ ಎಎಲ್ಐಎ, ರಾಯಲ್ ಜೋರ್ಡಾನಿಯನ್ ಏರ್ಲೈನ್ಸ್ನ ಪ್ರಾದೇಶಿಕ ವ್ಯವಸ್ಥಾಪಕರಾಗಿದ್ದರು. ಅವರು ಮಧ್ಯಪ್ರಾಚ್ಯ ಏರ್ಲೈನ್ಸ್ (ಎಮ್ಇಎ) ನ ಭಾರತೀಯ ಕಚೇರಿಗಳೊಂದಿಗೆ ಕೆಲಸ ಮಾಡಿದರು, ಅಲ್ಲಿ ಅವರು ಟಿಕೆಟ್, ಮೀಸಲಾತಿ ಮತ್ತು ಮಾರಾಟ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನುಭವವನ್ನು ಪಡೆದರು.<ref name="business-standard.com"/> ೧೯೭೪ ರಲ್ಲಿ, ಅವರ ತಾಯಿಯಿಂದ £ ೫೦೦ ನೊಂದಿಗೆ, ಅವರು [[ಏರ್ ಫ್ರಾನ್ಸ್]], ಆಸ್ಟ್ರಿಯನ್ ಏರ್ಲೈನ್ಸ್ ಮತ್ತು ಕ್ಯಾಥೆ ಪೆಸಿಫಿಕ್ ಅನ್ನು ಪ್ರತಿನಿಧಿಸುವ ಜೆಟೈರ್ ಎಂಬ ತನ್ನದೇ ಆದ ಏಜೆನ್ಸಿಯನ್ನು ಸ್ಥಾಪಿಸಿದರು.<ref name="theguardian.com"/>
೧೯೭೫ ರಲ್ಲಿ, ಅವರು ಭಾರತದಲ್ಲಿ ಫಿಲಿಪೈನ್ಸ್ ಏರ್ಲೈನ್ಸ್ನ ಪ್ರಾದೇಶಿಕ ವ್ಯವಸ್ಥಾಪಕರಾಗಿ ನೇಮಕಗೊಂಡರು.<ref name="business-standard.com"/>
ಏರ್ಲೈನ್ನಲ್ಲಿನ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಮತ್ತು ಮೂರನೇ ಎರಡರಷ್ಟು ಫ್ಲೀಟ್ ಗ್ರೌಂಡ್ ಆದ ನಂತರ ನರೇಶ್ ಗೋಯಲ್ ಅವರು ತಮ್ಮ ಪತ್ನಿ ಅನಿತಾ ಗೋಯಲ್ ಅವರೊಂದಿಗೆ ೨೫ ಮಾರ್ಚ್ ೨೦೧೯ ರಂದು [[ಜೆಟ್ ಏರ್ವೇಸ್|ಜೆಟ್ ಏರ್ವೇಸ್]] ಮಂಡಳಿಯಿಂದ ಕೆಳಗಿಳಿದರು.<ref>{{Cite news|url=https://www.bbc.com/news/world-asia-india-47693075|title=Jet Airways founder Naresh Goyal steps down amid crisis|date=2019-03-25|work=BBC News|access-date=2020-11-26|language=en-GB}}</ref><ref>{{Cite news|url=https://www.bloomberg.com/news/articles/2019-03-25/founder-naresh-goyal-resigns-from-debt-laden-jet-airways|title=Jet Airways Chairman Resigns After Two-Thirds of Fleet Grounded|date=2019-03-25|work=Bloomberg.com|access-date=2020-11-26|language=en}}</ref>
ಅವರು ೨೦೧೯ ರಲ್ಲಿ ಹಾರಿಹೋಗದಂತೆ ತಡೆಯಲಾಯಿತು [https://www.businesstoday.in/industry/aviation/story/jet-airways-crisis-naresh-goyal-wife-stopped-from-leaving-abroad-at-mumbai-airport-200272-2019-05-25]
== ಮನಿ ಲಾಂಡರಿಂಗ್ ==
ಸೆಪ್ಟೆಂಬರ್ ೨೦೧೯ ರಲ್ಲಿ, [[ಜಾರಿ ನಿರ್ದೇಶನಾಲಯ|ಜಾರಿ ನಿರ್ದೇಶನಾಲಯವು]] ಗೋಯಲ್ ಅವರ ವಿರುದ್ಧದ ವಿದೇಶಿ ವಿನಿಮಯ ಉಲ್ಲಂಘನೆಯ ಆರೋಪಗಳನ್ನು ತನಿಖೆಗಾಗಿ ಪ್ರಶ್ನಿಸಿತು.<ref>{{Cite web|url=https://timesofindia.indiatimes.com/business/india-business/jet-airways-founder-naresh-goyal-questioned-by-ed/articleshow/71010565.cms|title=Jet Airways founder Naresh Goyal questioned by ED - Times of India|website=The Times of India|access-date=2019-09-06}}</ref> ೨೦೨೦ <ref>{{Cite web|url=https://timesofindia.indiatimes.com/india/jet-ex-promoter-naresh-goyal-detained-by-ed-booked-for-laundering/articleshow/74483943.cms|title=Jet ex-promoter Naresh Goyal detained by ED, booked for laundering {{!}} India News - Times of India|last=Mar 5|first=Vijay V. Singh / TNN / Updated|website=timesofindia.indiatimes.com|language=en}}</ref> ಇಡಿ ಯಿಂದ ಮನಿ ಲಾಂಡರಿಂಗ್ಗಾಗಿ ಅವರನ್ನು ಬಂಧಿಸಲಾಯಿತು ಮತ್ತು ಪ್ರಶ್ನಿಸಲಾಯಿತು.
== ಜೆಟ್ ಏರ್ವೇಸ್ ==
೧೯೯೩ ರಲ್ಲಿ, ಆಗಿನ [[ಭಾರತದ ಪ್ರಧಾನ ಮಂತ್ರಿ|ಭಾರತದ ಪ್ರಧಾನಿಯಾಗಿದ್ದ]] ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಭಾರತೀಯ ಆರ್ಥಿಕತೆಯನ್ನು ತೆರೆಯುವುದರ ಲಾಭವನ್ನು ಗೋಯಲ್ ಪಡೆದುಕೊಂಡರು ಮತ್ತು ಕಾರ್ಯಾಚರಣೆಗಾಗಿ ಜೆಟ್ ಏರ್ವೇಸ್ ಅನ್ನು ಸ್ಥಾಪಿಸಲು [[ಭಾರತ ಸರ್ಕಾರ|ಭಾರತ ಸರ್ಕಾರವು]] ಓಪನ್ ಸ್ಕೈಸ್ ನೀತಿಯನ್ನು ಘೋಷಿಸಿದರು. ಭಾರತದಲ್ಲಿನ ದೇಶೀಯ ವಲಯಗಳಲ್ಲಿ ನಿಗದಿತ ವಿಮಾನ ಸೇವೆಗಳು. ಜೆಟ್ ಏರ್ವೇಸ್ <ref name="jetairways.com"/> ಮೇ ೧೯೯೩ ರಂದು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಭಾರತದಲ್ಲಿ ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಮಾರಾಟ ಮತ್ತು ಮಾರುಕಟ್ಟೆ ಪ್ರಾತಿನಿಧ್ಯವನ್ನು ಒದಗಿಸುವ ಉದ್ದೇಶದಿಂದ ಗೋಯಲ್ ಜೆಟ್ ಏರ್ವೇಸ್ (ಪ್ರೈವೇಟ್) ಲಿಮಿಟೆಡ್ <ref>{{Cite news|url=https://www.telegraph.co.uk/travel/picturegalleries/10009598/The-richest-people-in-travel.html?frame=2542673|title=The richest people in travel|date=8 May 2017|work=The Telegraph}}</ref> ಅನ್ನು ಸ್ಥಾಪಿಸಿದರು.<ref name="jetairways.com" />
ಗೋಯಲ್ ೨೦೦೪-೨೦೦೬ ರಿಂದ [[ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ|ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಶನ್]] (ಐಎಟಿಎ) ಮಂಡಳಿಯಲ್ಲಿ ಸೇವೆ ಸಲ್ಲಿಸಿದರು. ಜೂನ್ ೨೦೧೬ ರವರೆಗೆ ಅವರ ಅಧಿಕಾರಾವಧಿಯನ್ನು ವಿಸ್ತರಿಸುವುದರೊಂದಿಗೆ ಅವರು ೨೦೦೮ <ref name="jetairways.com"/> ಮರು ಆಯ್ಕೆಯಾದರು. ನರೇಶ್ ಗೋಯಲ್ ಅವರು ತಮ್ಮ ಪತ್ನಿಯೊಂದಿಗೆ ೨೫ ಮಾರ್ಚ್ ೨೦೧೯ ರಂದು ಜೆಟ್ ಏರ್ವೇಸ್ ಮಂಡಳಿಯಿಂದ ಕೆಳಗಿಳಿದರು.
== ವೈಯಕ್ತಿಕ ಜೀವನ ==
೧೯೭೯ ರಲ್ಲಿ ಮಾರ್ಕೆಟಿಂಗ್ ವಿಶ್ಲೇಷಕರಾಗಿ ಕಂಪನಿಗೆ ಸೇರಿದ ನಂತರ ಗೋಯಲ್ ಅವರ ಪತ್ನಿ ಅನಿತಾ ಅವರನ್ನು ಭೇಟಿಯಾದರು ಮತ್ತು ಮಾರ್ಕೆಟಿಂಗ್ ಮತ್ತು ಮಾರಾಟದ ಮುಖ್ಯಸ್ಥರಾದರು. ಅವರು ಒಂಬತ್ತು ವರ್ಷಗಳ ನಂತರ ವಿವಾಹವಾದರು.<ref name="theguardian.com"/> ದಂಪತಿಗೆ ಒಬ್ಬ ಮಗಳು ಮತ್ತು ಮಗನಿದ್ದಾರೆ.
== ಪ್ರಶಸ್ತಿಗಳು ==
{| class="wikitable"
!ಪ್ರಶಸ್ತಿ
! ವರ್ಷ
|-
| ಅರ್ನ್ಸ್ಟ್ ಮತ್ತು ಯಂಗ್ನಿಂದ ಸೇವೆಗಳಿಗಾಗಿ ವರ್ಷದ ವಾಣಿಜ್ಯೋದ್ಯಮಿ ಪ್ರಶಸ್ತಿ
| ಸೆಪ್ಟೆಂಬರ್ ೨೦೧೦
|-
| ಒಬ್ಬ ವಾಣಿಜ್ಯೋದ್ಯಮಿಯಾಗಿ ಪ್ರತಿಭಾನ್ವಿತ ಮತ್ತು ವಿಶಿಷ್ಟ ಸಾಧನೆಗಾಗಿ ಡಿಸ್ಟಿಂಗ್ವಿಶ್ಡ್ ಅಲುಮ್ನಿ ಅವಾರ್ಡ್-೨೦೦೦
| ಅಕ್ಟೋಬರ್ ೨೦೦೦
|-
| ಇಂಡಿಯನ್ ಅಮೇರಿಕನ್ ಸೆಂಟರ್ ಫಾರ್ ಪೊಲಿಟಿಕಲ್ ಅವೇರ್ನೆಸ್ ನೀಡಿದ ಜಾಗತಿಕ ಸಮುದಾಯಕ್ಕೆ ನಾಯಕತ್ವ ಮತ್ತು ಕೊಡುಗೆಗಾಗಿ ಅತ್ಯುತ್ತಮ ಏಷ್ಯನ್-ಭಾರತೀಯ ಪ್ರಶಸ್ತಿ
| ನವೆಂಬರ್ ೨೦೦೩
|-
| ವಾಣಿಜ್ಯ ವಾಯು ಸಾರಿಗೆ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಗಾಗಿ ಏರೋಸ್ಪೇಸ್ ಪ್ರಶಸ್ತಿಗಳು
| ಏಪ್ರಿಲ್ ೨೦೦೦ ಮತ್ತು ಫೆಬ್ರವರಿ ೨೦೦೪
|-
| ಖಾಸಗಿ ವಲಯದ ವಿಭಾಗದಲ್ಲಿ ಕಲಿಕೆ ಮತ್ತು ಅಭಿವೃದ್ಧಿಯಲ್ಲಿನ ಶ್ರೇಷ್ಠತೆಗಾಗಿ ಮೊದಲ BML ಮುಂಜಾಲ್ ಪ್ರಶಸ್ತಿ
| ೬ ಜನವರಿ ೨೦೦೬
|-
| ಎನ್ಡಿಟಿವಿ ಪ್ರಾಫಿಟ್ ಬಿಸಿನೆಸ್ ಅವಾರ್ಡ್ ೨೦೦೬
| ೨೮ ಜುಲೈ ೨೦೦೬
|-
| ಟಾಟಾ ಎಐಜಿ - ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ
| ೮ ಸೆಪ್ಟೆಂಬರ್ ೨೦೦೭
|-
| ೧೯ ನೇ ವಾರ್ಷಿಕ ಟಿಟಿಜಿ (ಟ್ರಾವೆಲ್ ಟ್ರೇಡ್ ಗೆಜೆಟ್) ಪ್ರಯಾಣ ಪ್ರಶಸ್ತಿಗಳಲ್ಲಿ ವರ್ಷದ ಪ್ರಯಾಣ ಉದ್ಯಮಿ ಪ್ರಶಸ್ತಿ
| ೨೫ ಅಕ್ಟೋಬರ್ ೨೦೦೭
|-
| ಏವಿಯೇಷನ್ ಪ್ರೆಸ್ ಕ್ಲಬ್ (ಎಪಿಸಿ) ಯಿಂದ ವರ್ಷದ ವ್ಯಕ್ತಿ ಪ್ರಶಸ್ತಿ
| ೯ ಏಪ್ರಿಲ್ ೨೦೦೮
|-
| ಇಂಡಿಯಾ ಬಿಸಿನೆಸ್ ಅವಾರ್ಡ್ಸ್ ೨೦೦೮ ರಲ್ಲಿ ಯೂಕೆ ಟ್ರೇಡ್ ಮತ್ತು ಇನ್ವೆಸ್ಟ್ಮೆಂಟ್ನಿಂದ ವರ್ಷದ ವ್ಯಾಪಾರ ವ್ಯಕ್ತಿ ಪ್ರಶಸ್ತಿ
| ೯ ಸೆಪ್ಟೆಂಬರ್ ೨೦೦೮
|-
| ಸಿಎನ್ಬಿಸಿ ಟಿವಿ೧೮ ಇಂಡಿಯಾ ಬಿಸಿನೆಸ್ ಲೀಡರ್ ಪ್ರಶಸ್ತಿಗಳು
| ೨೨ ಜನವರಿ ೨೦೦೯
|-
| ''ಏಷ್ಯನ್ ವಾಯ್ಸ್'' ಓದುಗರಿಂದ ವರ್ಷದ ಅಂತಾರಾಷ್ಟ್ರೀಯ ವಾಣಿಜ್ಯೋದ್ಯಮಿಗಳು
| ೨೭ ಫೆಬ್ರವರಿ ೨೦೦೯
|-
| ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ (ಟಿಎಎಐ) ವರ್ಷದ ಜೀವಮಾನ ಸಾಧನೆ ಪ್ರಶಸ್ತಿ
| ಆಗಸ್ಟ್ ೨೦೧೦
|-
| ಹೋಟೆಲ್ ಇನ್ವೆಸ್ಟ್ಮೆಂಟ್ ಫೋರಮ್ ಆಫ್ ಇಂಡಿಯಾ ೨೦೧೧ ರಿಂದ ಹಾಲ್ ಆಫ್ ಫೇಮ್ ಗೌರವ
| ಜನವರಿ ೨೦೧೧
|-
| ಬೆಲ್ಜಿಯಂ ದೇಶದ ಅತ್ಯುನ್ನತ ನಾಗರಿಕ ಭಿನ್ನತೆಗಳಲ್ಲಿ ಒಂದಾದ ಲಿಯೋಪೋಲ್ಡ್ II ರ ಕಮಾಂಡಿಯರ್ ಅನ್ನು ನೀಡಿತು
| ನವೆಂಬರ್ ೨೦೧೧
|-
| ವ್ಯಾಪಾರ ಶ್ರೇಷ್ಠತೆಗಾಗಿ ಅಮಿಟಿ ಲೀಡರ್ಶಿಪ್ ಪ್ರಶಸ್ತಿ
| ಅಕ್ಟೋಬರ್ ೨೦೧೨
|}
== ಉಲ್ಲೇಖಗಳು ==
{{Reflist|refs=<ref name="ET_Jet-Etihad_1">{{cite news|url=http://economictimes.indiatimes.com/opinion/comments-analysis/jet-etihad-deal-why-naresh-goyal-and-rahul-bhatia-must-work-together/articleshow/21322661.cms|title=Jet-Etihad deal; why Naresh Goyal and Rahul Bhatia must work together - The Economic Times|newspaper=The Economic Times}}</ref>}}
== ಬಾಹ್ಯ ಕೊಂಡಿಗಳು ==
* [http://images.businessweek.com/ss/05/06/0528asiastars/image/bp283220.jpg ನರೇಶ್ ಗೋಯಲ್ ಚಿತ್ರ] {{Webarchive|url=https://web.archive.org/web/20120308092013/http://images.businessweek.com/ss/05/06/0528asiastars/image/bp283220.jpg |date=8 ಮಾರ್ಚ್ 2012 }}
* [http://www.jetairways.com/Cultures/en-US/India/About+Us/Corporate+Information/Chairmans+Profile// ಜೆಟ್ ಏರ್ವೇಸ್ ಸೈಟ್ ಅಧ್ಯಕ್ಷರ ವಿವರ] {{Webarchive|url=https://web.archive.org/web/20090522165603/http://www.jetairways.com/Cultures/en-US/India/About+Us/Corporate+Information/Chairmans+Profile/ |date=22 ಮೇ 2009 }}
* [http://www.flightglobal.com/articles/2005/11/21/202980/naresh-goyal-jet-propelled.html ಏರ್ಲೈನ್ ಬ್ಯುಸಿನೆಸ್ ಮ್ಯಾಗಜೀನ್ ಪ್ರೊಫೈಲ್]
* [https://www.forbes.com/lists/2005/77/D67A.html ಫೋರ್ಬ್ಸ್ - ಭಾರತದ 40 ಶ್ರೀಮಂತರು]
* [http://news.bbc.co.uk/2/hi/south_asia/6547941.stm ಸ್ವಾಧೀನ ಲಿಂಕ್]
* [http://www.agarwaltoday.com/jul062.html ಜೆಟ್ 500 ಕೋಟಿ ಮೊಕದ್ದಮೆ ಹೂಡಿದೆ - ಅಗರ್ವಾಲ್ ಟುಡೇ ವರದಿ] {{Webarchive|url=https://web.archive.org/web/20070830230605/http://www.agarwaltoday.com/jul062.html |date=30 ಆಗಸ್ಟ್ 2007 }}
<nowiki>
{{Interwikineeded}}
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:೧೯೪೯ ಜನನ]]
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ]]</nowiki>
eweakd3vp47mqtsi98r0v5ab2p9l15l
ಪರ್ವೀನ್ ಬಾಬಿ
0
146755
1375848
1372571
2026-06-25T23:40:30Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1375848
wikitext
text/x-wiki
{{Infobox person
| name = ಪರ್ವೀನ್ ಬಾಬಿ
| image = Parveen Babi.jpg
| caption = ''[[:en:Amar Akbar Anthony|ಅಮರ್ ಅಕ್ಬರ್ ಅಂತೋನಿ]]'' (೧೯೭೭) ಚಿತ್ರದಲ್ಲಿ ಪರ್ವೀನ್ ಬಾಬಿ
| image_size =
| birth_name = ಪರ್ವೀನ್ ಮೊಹಮ್ಮದ್ ಅಲಿ ಖಾನ್ಜಿ ಬಾಬಿ<ref>{{cite book |author=Karishma Upadhyay |title=Parveen Babi: A Life |url=https://books.google.com/books?id=zLnuDwAAQBAJ |year=2020 |publisher=[[Hachette India]] |isbn=978-93-88322-94-2}}</ref>
| parents = ವಾಲಿ ಮೊಹಮ್ಮದ್ ಖಾನ್ ಬಾಬಿ(ತಂದೆ), ಜಮಾಲ್ ಬಖ್ತೆ ಬಾಬಿ(ತಾಯಿ)
| birth_date = {{Birth date|df=yes|1949|4|4}}<ref name="bhaskar"/>
| birth_place = [[ಜುನಾಗಢ]], [[ಗುಜರಾತ್]], [[ಭಾರತ]]
| occupation = ನಟಿ, ರೂಪದರ್ಶಿ
| death_date = ಜನವರಿ ೨೦, ೨೦೦೫(ವಯಸ್ಸು ೫೫)
| death_place = [[ಮುಂಬೈ]], [[ಮಹಾರಾಷ್ಟ್ರ]], [[ಭಾರತ]]
}}
'''ಪರ್ವೀನ್ ಬಾಬಿ''' (೪ [[ಏಪ್ರಿಲ್]] ೧೯೪೯-೨೦ [[ಜನವರಿ]] ೨೦೦೫)ಯವರು [[ಹಿಂದಿ]] ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಭಾರತೀಯ ನಟಿ ಮತ್ತು ರೂಪದರ್ಶಿಯಾಗಿದ್ದರು. ಭಾರತೀಯ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಅವರು, ೧೯೭೦ರ ದಶಕ ಮತ್ತು ೧೯೮೦ರ ದಶಕದ ಆರಂಭದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರಲ್ಲಿ ಒಬ್ಬರು.<ref>[https://web.archive.org/web/20080725192936/http://timesofindia.indiatimes.com/articleshow/msid-1005269,flstry-1.cms "Parveen wanted to be left alone"], ''[[The Times of India]]'', 30 January 2005 </ref> [[:en:Parveen Babi|ಪರ್ವೀನ್ ಬಾಬಿ]] ತನ್ನ "ಮನಮೋಹಕ" ನಟನಾ ಶೈಲಿಗೆ ಹೆಸರುವಾಸಿಯಾಗಿದ್ದಳು ಹಾಗೂ ಅವಳ ಮಾಡೆಲಿಂಗ್ ಮತ್ತು ಫ್ಯಾಷನ್ ಸೆನ್ಸ್ ಕೂಡ ಅವಳನ್ನು ಐಕಾನ್ ಆಗಿ ಸ್ಥಾಪಿಸಿತು.<ref>{{Cite news |date=23 November 2010 |title=Manish Malhotra picks his five favourite super stylish heroines of the seventies |work=The Telegraph |url=http://www.telegraphindia.com/1101123/jsp/entertainment/story_13209188.jsp |url-status=dead |access-date=19 July 2012 |archive-url=https://web.archive.org/web/20101128022642/http://www.telegraphindia.com/1101123/jsp/entertainment/story_13209188.jsp |archive-date=28 November 2010}}</ref><ref>{{Cite web |date=19 January 2022 |title=Parveen Babi Death Anniversary: 5 best movies of the glamourous [sic] actress |url=https://www.freepressjournal.in/entertainment/bollywood/parveen-babi-death-anniversary-5-best-movies-of-the-glamourous-actress |website=Free Press Journal India |access-date=19 ಮೇ 2024 |archive-date=27 ಜನವರಿ 2022 |archive-url=https://web.archive.org/web/20220127125041/https://www.freepressjournal.in/entertainment/bollywood/parveen-babi-death-anniversary-5-best-movies-of-the-glamourous-actress |url-status=dead }}</ref>
ಬಾಬಿ ಅವರು ಚರಿತ್ರ (೧೯೭೩) ಚಿತ್ರದ ಮೂಲಕ ತನ್ನ ನಟನೆಯನ್ನು ಪ್ರಾರಂಭಿಸಿದಳು ಮತ್ತು ಮಜ್ಬೂರ್ (೧೯೭೪) ಚಿತ್ರದಿಂದ ಮನ್ನಣೆಯನ್ನು ಪಡೆದರು. ಅವರು ದೀವಾರ್ (೧೯೭೫), ಮತ್ತು ಅಮರ್ ಅಕ್ಬರ್ ಆಂಥೋನಿ (೧೯೭೭), ಸುಹಾಗ್ (೧೯೭೯), ಕಾಲಾ ಪತ್ತರ್ (೧೯೭೯), ದಿ ಬರ್ನಿಂಗ್ ಟ್ರೈನ್ (೧೯೮೦), ಶಾನ್ (೧೯೮೦), ಕ್ರಾಂತಿ (೧೯೮೧), ಕಾಲಿಯಾ (೧೯೮೧) ಮತ್ತು ನಮಕ್ ಹಲಾಲ್ (೧೯೮೨) ಮುಂತಾದ ಯಶಸ್ವಿ ಚಲನಚಿತ್ರಗಳೊಂದಿಗೆ ತನ್ನ ಪ್ರಗತಿಯನ್ನು ಸಾಧಿಸಿದರು. ೧೯೭೬ ರಲ್ಲಿ, ''ಟೈಮ್'' ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಬಾಲಿವುಡ್ ತಾರೆ ಇವರಾಗಿದ್ದರು.<ref>{{Cite web |date=11 June 2014 |title=Time magazine features starlet Parveen Babi on its cover, sets Bombay on fire |url=https://www.indiatoday.in/magazine/indiascope/story/19760731-time-magazine-features-starlet-parveen-babi-on-its-cover-sets-bombay-on-fire-824041-2014-06-11 |access-date=16 February 2021 |website=India Today |language=en}}</ref> ೧೯೯೧ ರಲ್ಲಿ ಬಿಡುಗಡೆಯಾದ ''ಇರಾದ'' ಚಲನಚಿತ್ರವು ಅವರು ತಮ್ಮ ನಿವೃತ್ತಿಯ ಮೊದಲು ತೆಗೆದ ಅಂತಿಮ ಚಲನಚಿತ್ರವಾಗಿ ಗುರುತಿಸಿದೆ.<ref>{{Cite web |date=20 February 2020 |title=Remembering Parveen Babi: The Tragic Life and Death of One of Bollywood's Most Beautiful Actress |url=https://www.masala.com/remembering-parveen-babi-the-tragic-life-and-death-of-one-of-bollywoods-most-beautiful-actress |website=Masala!}}</ref>
ಬಾಬಿಯ ವೈಯಕ್ತಿಕ ಜೀವನವನ್ನು ಮಾಧ್ಯಮಗಳು ಉತ್ತಮವಾಗಿ ದಾಖಲಿಸಿವೆ. ಕಬೀರ್ ಬೇಡಿ, ಡ್ಯಾನಿ ಡೆನ್ಜಾಂಗ್ಪಾ ಮತ್ತು ಮಹೇಶ್ ಭಟ್ ಅವರೊಂದಿಗಿನ ಸಂಬಂಧಗಳ ಸರಣಿಯ ನಂತರ ಅವಳು ಅವಿವಾಹಿತಳಾಗಿದ್ದಳು. ಆಕೆಗೆ ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾ ರೋಗನಿರ್ಣಯ ಮಾಡಲಾಯಿತು. ಇದು ವಿವಿಧ ಘಟನೆಗಳ ನಂತರ ಸಾರ್ವಜನಿಕರ ಗಮನಕ್ಕೆ ಬಂದಿತು. ಜೊತೆಗೆ ಆಕೆಗೆ [[ಮಧುಮೇಹ]] ಹಾಗೂ ಮೊಣಕಾಲಿನ ಅಸ್ಥಿಸಂಧಿವಾತವೂ ಇತ್ತು. ೨೦ ಜನವರಿ ೨೦೦೫ ರಂದು, ಬಾಬಿಯವರು ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು.<ref>[https://web.archive.org/web/20121022035323/http://articles.timesofindia.indiatimes.com/2005-01-22/india/27842530_1_parveen-babi-body-injury-marks "Parveen Babi dies, alone in death as in life"], ''[[The Times of India]], Retrieved 22 January 2005.''</ref>
== ಆರಂಭಿಕ ಜೀವನ ==
ಪರ್ವೀನ್ ಬಾಬಿ ೪ ಏಪ್ರಿಲ್ ೧೯೪೯ ರಂದು ಗುಜರಾತ್ನ ಜುನಾಗಢದಲ್ಲಿ ಜನಿಸಿದರು. ಗುಜರಾತ್ನಲ್ಲಿ ದೀರ್ಘಕಾಲ ನೆಲೆಸಿದ್ದ '''ಗುಜರಾತ್ನ ಪಠಾಣರು''' ಎಂದು ಕರೆಯಲ್ಪಡುವ ಪಶ್ತೂನ್ಗಳ ಬಾಬಿ ಬುಡಕಟ್ಟಿಗೆ ಸೇರಿದ ಜುನಾಗಢ ಮೂಲದ ಕುಟುಂಬದಲ್ಲಿ ಅವಳು ಏಕೈಕ ಮಗುವಾಗಿದ್ದಳು. ಪರ್ವೀನ್ ತನ್ನ ಹೆತ್ತವರ ಮದುವೆಯಾದ ಹದಿನಾಲ್ಕು ವರ್ಷಗಳ ನಂತರ ಜನಿಸಿದಳು. ಆಕೆಯ ತಂದೆ ವಾಲಿ ಮೊಹಮ್ಮದ್ ಖಾನ್ ಬಾಬಿಯವರು ಜುನಾಗಢ್ ನವಾಬನೊಂದಿಗೆ ಆಡಳಿತಗಾರರಾಗಿದ್ದರು ಮತ್ತು ಅವಳ ತಾಯಿ ಜಮಾಲ್ ಬಖ್ತೆ ಬಾಬಿ(ಮರಣ ೨೦೦೧). ಆಕೆ ಆರು ವರ್ಷದವಳಿದ್ದಾಗ ೧೯೫೯ ರಲ್ಲಿ ತನ್ನ ತಂದೆಯನ್ನು ಕಳೆದುಕೊಂಡಳು. ಅವಳು ತನ್ನ ಆರಂಭಿಕ ಶಾಲಾ ಶಿಕ್ಷಣವನ್ನು ಅಹಮದಾಬಾದ್ನ ಮೌಂಟ್ ಕಾರ್ಮೆಲ್ ಹೈಸ್ಕೂಲ್ನಲ್ಲಿ ಮಾಡಿದಳು ಮತ್ತು ನಂತರ ಅಹಮದಾಬಾದ್ನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದಳು. ಅಲ್ಲಿ ಅವಳು ಇಂಗ್ಲಿಷ್ ಸಾಹಿತ್ಯದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಅನ್ನು ಗಳಿಸಿದಳು.
== ವೃತ್ತಿಜೀವನ ==
=== ೧೯೭೨-೧೯೭೫: ಮಾಡೆಲಿಂಗ್, ಬಾಲಿವುಡ್ಗೆ ಪರಿವರ್ತನೆ ಮತ್ತು ಪ್ರಗತಿ ===
ಪರ್ವೀನ್ ಬಾಬಿ ಅವರ ಮಾಡೆಲಿಂಗ್ ವೃತ್ತಿಜೀವನವು ೧೯೭೨ ರಲ್ಲಿ ಪ್ರಾರಂಭವಾಯಿತು ಮತ್ತು ಶೀಘ್ರದಲ್ಲೇ ಕ್ರಿಕೆಟಿಗ ಸಲೀಂ ದುರ್ರಾನಿಯವರೊಂದಿಗೆ ಚರಿತ್ರ (೧೯೭೩) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.<ref>[http://news.bbc.co.uk/2/hi/entertainment/4198219.stm "Bollywood star Parveen Babi dies"] ''[[BBC News]]'', 22 January 2005</ref> ಈ ಚಿತ್ರವು ವಿಫಲವಾಯಿತು, ಆದರೆ ಆಕೆ ಗಮನ ಸೆಳೆದರು ಮತ್ತು ಇನ್ನೂ ಹಲವಾರು ಚಿತ್ರಗಳಿಗೆ ಆಯ್ಕೆಯಾದರು. ೧೯೭೪ರಲ್ಲಿ ಬಂದ ''ಮಜ್ಬೂರ್'' ಎಂಬ ನಾಟಕ ಚಲನಚಿತ್ರದಲ್ಲಿ ನೀಲಾ ಪಾತ್ರಕ್ಕಾಗಿ ಬಾಬಿ ಮೊದಲ ಬಾರಿಗೆ ಮನ್ನಣೆ ಪಡೆದರು. ಆಕೆ ಆಕ್ಷನ್ ಕ್ರೈಮ್-ಡ್ರಾಮಾ ಚಲನಚಿತ್ರವಾದ ''ದೀವಾರ್'' (೧೯೭೫)ನಲ್ಲಿ ವೇಶ್ಯೆಯಾಗಿ ನಟಿಸಿದಳು. ಇದು ಆಕೆಗೆ ಅನುಯಾಯಿಗಳನ್ನು ಗಳಿಸಿತು ಮತ್ತು ಆಕೆಯನ್ನು ನಾಯಕಿಯಾಗಿ ಸ್ಥಾಪಿಸಲು ಸಹಾಯ ಮಾಡಿತು.
=== ೧೯೭೫-೧೯೮೨: ಸ್ಥಾಪಿತ ನಟಿ ===
ಆಕೆ ೧೯೭೦ ರ ದಶಕದುದ್ದಕ್ಕೂ ಮತ್ತು ೧೯೮೦ ರ ದಶಕದ ಆರಂಭದಲ್ಲಿ ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಮುಖ್ಯವಾಗಿ ''ಅಮರ್ ಅಕ್ಬರ್ ಆಂಥೋನಿ'' (೧೯೭೭)ನಲ್ಲಿ ಜೆನ್ನಿ ಪಾತ್ರದಲ್ಲಿ, ''ಸುಹಾಗ್''(೧೯೭೯)ನಲ್ಲಿ ಅನು ಪಾತ್ರದಲ್ಲಿ, ಕಾಲಾ ಪತ್ತಾರ್(೧೯೭೯)ನಲ್ಲಿ ಅನಿತಾ ಪಾತ್ರದಲ್ಲಿ, ದಿ ಬರ್ನಿಂಗ್ ಟ್ರೈನ್(೧೯೮೦)ನಲ್ಲಿ ಶೀತಲ್ ಪಾತ್ರದಲ್ಲಿ, ''ಶಾನ್''(೧೯೮೦)ನಲ್ಲಿ ಸುನೀತಾ ಪಾತ್ರದಲ್ಲಿ, ''ಕಾಲಿಯಾ''(೧೯೮೧)''ದಲ್ಲಿ'' ಶಾಲಿನೀ/ರಾಣಿ ಪಾತ್ರದಲ್ಲಿ ಮತ್ತು ''ನಮಕ್ ಹಲಾಲ್''(೧೯೮೨)ನಲ್ಲಿ ನಿಶಾ ಪಾತ್ರದಲ್ಲಿ ನಟಿಸಿದ್ದಾರೆ.
[[ಹೇಮ ಮಾಲಿನಿ|ಹೇಮಾ ಮಾಲಿನಿ]], [[ರೇಖಾ]], ಜೀನತ್ ಅಮನ್, ನೀತು ಸಿಂಗ್ ರೀನಾ ರಾಯ್, ರಾಖೀ ಗುಲ್ಜಾರ್, [[ಸ್ಮಿತಾ ಪಾಟೀಲ್]] ಮತ್ತು [[ಶಬಾನ ಆಜ್ಮಿ|ಶಬಾನಾ ಆಜ್ಮಿ]] ಅವರೊಂದಿಗೆ ಪರ್ವೀನ್ ತನ್ನ ಕಾಲದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದರು. ಆಕೆ ಎಂಟು ಚಿತ್ರಗಳಲ್ಲಿ [[ಅಮಿತಾಭ್ ಬಚ್ಚನ್|ಅಮಿತಾಬ್ ಬಚ್ಚನ್]] ಅವರೊಂದಿಗೆ ನಟಿಸಿದರು ಜೊತೆಗೆ ಎಲ್ಲವೂ ಹಿಟ್ ಅಥವಾ ಸೂಪರ್-ಹಿಟ್ ಆಗಿದ್ದವು. ಆಕೆ ಇತರ ಹಿಟ್ ಚಿತ್ರಗಳಾದ ''ಸುಹಾಗ್'' (೧೯೭೯) ''ಕಾಲಾ ಪತ್ತರ್'' (೧೯೭೯) ಮತ್ತು ''ನಮಕ್ ಹಲಾಲ್'' (೧೯೮೨) ನಲ್ಲಿ [[ಶಶಿ ಕಪೂರ್]] ಜೊತೆಗೆ, ''ಕಾಲಾ ಸೋನಾ'' (೧೯೭೫) ನಲ್ಲಿ [[ಫಿರೋಜ್ ಖಾನ್]] ಜೊತೆಗೆ, ''ಚಂಡಿ ಸೋನಾ'' (೧೯೭೭) ದಲ್ಲಿ ಸಂಜಯ್ ಖಾನ್ ಜೊತೆಗೆ ಮತ್ತು ''ಜಾನಿ ದೋಸ್ತ್'' (೧೯೮೩) ನಲ್ಲಿ ಧರ್ಮೇಂದ್ರ ಜೊತೆಗೆ ನಟಿಸಿದ್ದಾರೆ. ನಂತರ ಅವರ ವೃತ್ತಿಜೀವನದಲ್ಲಿ, ವಿನೋದ್ ಪಾಂಡೆ ಅವರ ಯೇ ನಜ್ದೀಕಿಯಾನ್ (೧೯೮೨) ಚಿತ್ರದಲ್ಲಿ ಮಾರ್ಕ್ ಜುಬರ್ ಎದುರು "ಇನ್ನೊಬ್ಬ ಮಹಿಳೆ" ಮತ್ತು ನಾಸಿರುದ್ದೀನ್ ಷಾ ಅವರೊಂದಿಗೆ ದಿಲ್... ಅಖಿರ್ ದಿಲ್ ಹೈ (೧೯೮೨) ನಂತಹ ಆಫ್-ಬೀಟ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.<ref>[http://www.brns.com/bollywood/pages1/bolly89.html "Ashanti"]. ''brns.com''.</ref>
ಹೆಚ್ಚಿನ ನಾಯಕಿಯರು ಭಾರತೀಯ ಗುಣಲಕ್ಷಣಗಳಲ್ಲಿ ಮುಳುಗಿದ್ದಾಗ, ಬಾಬಿ ಅವರ ಉಡುಪು ಸಂಪೂರ್ಣವಾಗಿ ಪಾಶ್ಚಿಮಾತ್ಯೀಕರಿಸಿದ ಕೆಲವೇ ನಟಿಯರಲ್ಲಿ ಒಬ್ಬರಾಗಿದ್ದರು ಮತ್ತು ಇದು ಅವರಿಗೆ ಒಂದು ನಿರ್ದಿಷ್ಟ ಅಕ್ಷಾಂಶವನ್ನು ಒದಗಿಸಿತು. ಭಾರತದ ಪುರುಷ ಪ್ರಾಬಲ್ಯ ಮತ್ತು ಸ್ತ್ರೀದ್ವೇಷದ ಸಿನಿಮೀಯ ಸಾಮ್ರಾಜ್ಯದಲ್ಲಿ ಅನೇಕ ಸಮಕಾಲೀನ ಮಹಿಳಾ ಕಲಾವಿದರನ್ನು ನಿರಾಕರಿಸಲಾಯಿತು. ಜೀನತ್ ಅಮನ್ ಜೊತೆಗೆ ಪರ್ವೀನ್ ಬಾಬಿ ತಮ್ಮ ಚಿತ್ತಾಕರ್ಷಕ ನೋಟ, ಉತ್ತಮವಾದ ಶಿಲ್ಪಕಲೆ ಮತ್ತು ಆಂಗ್ಲೀಕೃತ ಉಚ್ಚಾರಣೆಗಳೊಂದಿಗೆ, ಪಾಶ್ಚಿಮಾತ್ಯ ಭಾರತೀಯ ನಾಯಕಿಯ ನಿಲುವಂಗಿಯನ್ನು ಧರಿಸಿ, [[ಬಾಲಿವುಡ್]] ಮಹಿಳಾ ಪ್ರೈಮಾ ಡೊನ್ನಾಗೆ ಅವರ ವಿಶಿಷ್ಟ ನಡವಳಿಕೆಗಳನ್ನು ಶಾಶ್ವತವಾಗಿ ನೀಡಿದರು.<ref>{{Cite web |date=26 April 2012 |title=The Myth & Madness of Parveen Babi |url=http://idiva.com/news-entertainment/the-myth-madness-of-the-late-parveen-babi/12285 |url-status=dead |archive-url=https://web.archive.org/web/20121023045905/http://idiva.com/news-entertainment/the-myth-madness-of-the-late-parveen-babi/12285 |archive-date=23 October 2012 |access-date=28 October 2012 |publisher=iDiva.com}}</ref> ವಾಸ್ತವವಾಗಿ, ಆಕೆ ಅಮನ್ ಅವರೊಂದಿಗೆ ''ಮಹನ್'' (೧೯೮೩) ಮತ್ತು ''ಅಶಾಂತಿ'' (೧೯೮೨)ನಲ್ಲಿ ನಟಿಸಿದ್ದಾರೆ (ಅಮೇರಿಕನ್ ದೂರದರ್ಶನ ಕಾರ್ಯಕ್ರಮ ಚಾರ್ಲೀಸ್ ಏಂಜಲ್ಸ್ನಿಂದ ಸ್ಫೂರ್ತಿ ಪಡೆದಿದ್ದು, ಮೂರನೇ ಪಾತ್ರವನ್ನು [[ಶಬಾನ ಆಜ್ಮಿ|ಶಬಾನಾ ಆಜ್ಮಿ]] ನಿರ್ವಹಿಸಿದ್ದಾರೆ).
ಬಾಬಿಯ ವ್ಯಕ್ತಿತ್ವವು ಪಾಶ್ಚಿಮಾತ್ಯ ಮಾನದಂಡಗಳನ್ನು ಸಂಕೇತಿಸುತ್ತಿತ್ತಾದ್ದರಿಂದ, ಬಾಲಿವುಡ್ ನಿರ್ಮಾಪಕರು ಆಕೆಗೆ ವಿಶಿಷ್ಟವಾದ ''ಭಾರತೀಯ ನಾರಿ'' ಮತ್ತು ''ಗಾಂವ್ ಕಿ ಗೋರಿ'' ಪಾತ್ರಗಳನ್ನು ನೀಡುವುದು ಕಷ್ಟಕರವಾಗಿತ್ತು. ಆಕೆ ಮುಖ್ಯವಾಗಿ ಪಾಶ್ಚಿಮಾತ್ಯ ಮತ್ತು ಆಕರ್ಷಕ ಪಾತ್ರಗಳಲ್ಲಿ ನಟಿಸಿದರು. ಅದು ಆಕೆಯ ಸ್ಥಾನಮಾನವನ್ನು ಉನ್ನತ ನಾಯಕಿಯಾಗಿ ಸ್ಥಾಪಿಸಿತು. ಆಕೆ ಆ ಯುಗದ ಹಲವಾರು ವಾಣಿಜ್ಯಿಕವಾಗಿ ಯಶಸ್ವಿಯಾದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು ಮತ್ತು ಆಕೆಯ ಪ್ರಮುಖ ಸಹ-ನಟರೆಂದರೆ [[ಅಮಿತಾಭ್ ಬಚ್ಚನ್|ಅಮಿತಾಬ್ ಬಚ್ಚನ್]], [[ಶಶಿ ಕಪೂರ್]], [[ಫಿರೋಜ್ ಖಾನ್]], ಧರ್ಮೇಂದ್ರ ಮತ್ತು [[ವಿನೋದ್ ಖನ್ನಾ]]. ಇವರೆಲ್ಲರೂ ೧೯೭೦ ಮತ್ತು ೧೯೮೦ರ ದಶಕದ ಪ್ರಮುಖ ತಾರೆಯರು.<ref name="rediff2003">{{Cite web |title=Parveen Babi: A bohemian rhapsody |url=http://www.rediff.com/movies/2003/may/03dinesh.htm |access-date=28 October 2012 |website=Rediff.com}}</ref> ನಟನೆಯ ಜೊತೆಗೆ, ಬಾಬಿ ತನ್ನ ವೃತ್ತಿಜೀವನದಲ್ಲಿ ರೂಪದರ್ಶಿಯಾಗಿಯೂ ಕೆಲಸ ಮಾಡಿದರು. ಆಕೆ ಸಾಮಾನ್ಯವಾಗಿ ''[[ಫಿಲ್ಮ್ಫೇರ್|ಫಿಲ್ಮ್ಫೇರ್]]'', ''ದಿ ಸ್ಟಾರ್ಡಸ್ಟ್'' ಮತ್ತು ''ಬಾಂಬೆ ಡೈಯಿಂಗ್'' ಸೇರಿದಂತೆ ಪ್ರತಿ ಚಲನಚಿತ್ರ ನಿಯತಕಾಲಿಕೆಯ ಮೊದಲ ಪುಟದಲ್ಲಿ ಕಾಣಿಸಿಕೊಳ್ಳುತ್ತಿದ್ದರು.<ref>{{Cite web |title=Parveen Babi |url=http://parveen-babi.ememorials.in/ |url-status=dead |archive-url=https://web.archive.org/web/20110910141957/http://parveen-babi.ememorials.in/ |archive-date=10 September 2011 |access-date=28 October 2012 |publisher=Parveen-babi.ememorials.in}}</ref> ಅವರು ಜುಲೈ ೧೯೭೬ ರಲ್ಲಿ ಟೈಮ್ ನ ಮೊದಲ ಪುಟದಲ್ಲಿ ಕಾಣಿಸಿಕೊಂಡ ಮೊದಲ ಬಾಲಿವುಡ್ ನಟಿಯಾಗಿದ್ದರು. ಇದಕ್ಕಾಗಿ ಅವರು ಇತಿಹಾಸವನ್ನು ಸೃಷ್ಟಿಸಿದರು;ನಂತರ ಮುಖಪುಟವು ಸಾಂಪ್ರದಾಯಿಕವಾಯಿತು.<ref>{{Cite web |date=31 August 2012 |title=Parveen Babi's iconic Time magazine cover – Movies News – Bollywood – ibnlive |url=http://ibnlive.in.com/news/parveen-babis-iconic-time-magazine-cover/287085-8-66.html |url-status=dead |archive-url=https://web.archive.org/web/20120901175013/http://ibnlive.in.com/news/parveen-babis-iconic-time-magazine-cover/287085-8-66.html |archive-date=1 September 2012 |access-date=6 October 2012 |publisher=Ibnlive.in.com}}</ref>
ಪುರುಷರೊಂದಿಗೆ ಲಿವ್-ಇನ್ ಸಂಬಂಧವನ್ನು ಹೊಂದಿರುವ ಮತ್ತು ಬಹಿರಂಗವಾಗಿ ಮದ್ಯಪಾನ ಮಾಡುವ ಮಹಿಳೆಯರ ಪಾತ್ರಗಳನ್ನು ಚಿತ್ರಿಸುವುದರಿಂದ ಅವಳು ಎಂದಿಗೂ ಹಿಂದೆ ಸರಿಯಲಿಲ್ಲ. ಇವೆರಡೂ ಆ ಕಾಲದಲ್ಲಿ ನಿಷೇಧಿತವಾಗಿದ್ದವು. ಬಿಗ್ ಬಿ ಉನ್ಮಾದದ ಉತ್ತುಂಗದ ಸಮಯದಲ್ಲಿ ಪರ್ವೀನ್ ಎಂಟು ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ಜೋಡಿಯಾಗಿರುವುದು ಅವರ ನಿಲುವು ಮತ್ತು ಸ್ಟಾರ್ ಪವರ್ ಅನ್ನು ದೃಢೀಕರಿಸುತ್ತದೆ. ಆಂಗ್ರಿ ಯಂಗ್ ಮ್ಯಾನ್ ವಿದ್ಯಮಾನದ ಮೊದಲ ವರ್ಷಗಳಲ್ಲಿ ಅಮಿತಾಬ್ ಮತ್ತು ಪರ್ವೀನ್ ಪರಸ್ಪರ ಪೂರಕವಾಗಿದ್ದರು.<ref>{{Cite web |title=Parveen Babi – The Diva of Hindi Film Industry |url=http://song.ezinemark.com/parveen-babi-the-diva-of-hindi-film-industry-7d2e57e2443f.html |access-date=28 October 2012 |publisher=Song.ezinemark.com}}</ref>
=== ೧೯೮೩-೨೦೦೫: ನಂತರದ ಜೀವನ ===
ಬಾಬಿ ನಂತರ ೧೯೮೩ ರಲ್ಲಿ ಚಲನಚಿತ್ರ ದೃಶ್ಯದಿಂದ "ಕಣ್ಮರೆಯಾದಳು". ಅವಳು ಇರುವಿಕೆಯ ಬಗ್ಗೆ ಯಾರಿಗೂ ತಿಳಿಸಲಿಲ್ಲ. ಇದು ಉತ್ಪ್ರೇಕ್ಷಿತ ವದಂತಿಗಳು ಮತ್ತು "ಭೂಗತ ಜಗತ್ತಿನ" ವ್ಯಕ್ತಿಗಳ "ನಿಯಂತ್ರಣದಲ್ಲಿ" ಇರಬಹುದೆಂಬ ಆಡಂಬರದ ಹೇಳಿಕೆಗಳಿಗೆ ಅವಕಾಶ ಮಾಡಿಕೊಟ್ಟಿತು. ೧೯೮೮ ರಲ್ಲಿ ಅವರ ಕೊನೆಯ ಚಿತ್ರ ಆಕರ್ಶನ್ ವರೆಗೆ ಅವರ ಪೂರ್ಣಗೊಂಡ ಅನೇಕ ಚಲನಚಿತ್ರಗಳು ಮುಂದಿನ ವರ್ಷಗಳಲ್ಲಿ ಬಿಡುಗಡೆಯಾದವು.<ref>{{Cite web |date=27 January 2005 |title=Amitabh on Parveen Babi |url=http://www.rediff.com/entertai/2005/jan/27pb1.htm |access-date=28 October 2012 |website=Rediff.com}}</ref> ಅವರು ೧೯೮೩ ರಲ್ಲಿ ಇಂಟೀರಿಯರ್ ಡೆಕೋರೇಟರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು.<ref>{{Cite news |date=23 January 2005 |title=As in life, so in death: lonely and lovelorn |work=The Telegraph |location=Calcutta, India |url=http://www.telegraphindia.com/1050123/asp/nation/story_4287764.asp |url-status=dead |access-date=19 July 2012 |archive-url=https://web.archive.org/web/20050124013015/http://www.telegraphindia.com/1050123/asp/nation/story_4287764.asp |archive-date=24 January 2005}}</ref> ಪ್ರದರ್ಶನ ವ್ಯವಹಾರದಿಂದ ಹಿಂದೆ ಸರಿದ ನಂತರ, ಅವರು ಸಂಗೀತ, ಪಿಯಾನೋ, ಚಿತ್ರಕಲೆ, ವಾಸ್ತುಶಿಲ್ಪ, ಸಾಹಿತ್ಯ, ಬರವಣಿಗೆ, ಸಾಂಸ್ಕೃತಿಕ ಮತ್ತು ಪುರಾತತ್ತ್ವ ಶಾಸ್ತ್ರದ ಅಧ್ಯಯನ, ರಾಜಕೀಯ, ಛಾಯಾಗ್ರಹಣ, ಶಿಲ್ಪಕಲೆ ಮತ್ತು ಮಾನವ ಹಕ್ಕುಗಳ ಸಮಸ್ಯೆಗಳನ್ನು ತೆಗೆದುಕೊಂಡರು. ಅವರು ೧೯೭೩ ರಿಂದ ೧೯೯೨ ರವರೆಗೆ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವರು ಉತ್ತಮ ಆರ್ಥಿಕ ಹೂಡಿಕೆಯಿಂದ ಶ್ರೀಮಂತವಾಗಿ ಮುಂಬೈನ ಪೆಂಟ್ಹೌಸ್ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು.<ref>{{Cite web |date=24 January 2005 |title=Parveen Babi's Juhu apartment sealed |url=http://www.rediff.co.in/news/2005/jan/24babi.htm |access-date=28 October 2012 |publisher=Rediff.co.in }}{{Dead link|date=ಫೆಬ್ರವರಿ 2025 |bot=InternetArchiveBot |fix-attempted=yes }}</ref>
== ವೈಯಕ್ತಿಕ ಜೀವನ ==
ಬಾಬಿ ನಾಲ್ಕು ವರ್ಷಗಳ ಕಾಲ ಡ್ಯಾನಿ ಡೆನ್ಜೋಂಗ್ಪಾ ಅವರೊಂದಿಗೆ ಸಂಬಂಧ ಹೊಂದಿದ್ದರು. ನಂತರ ಆಕೆ [[ಕಬೀರ್ ಬೇಡಿ]] ಮತ್ತು ನಂತರ ಮಹೇಶ್ ಭಟ್ ಅವರೊಂದಿಗೆ ಡೇಟಿಂಗ್ ಮಾಡಿದರು.<ref>{{Cite web |date=7 June 2012 |title=Danny Denzongpa: Girls Are Attracted to Bad Guys | Entertainment |url=http://idiva.com/news-entertainment/danny-denzongpa-girls-are-attracted-to-bad-guys/13073 |access-date=21 July 2020 |publisher=iDiva.com}}</ref> ಬಾಬಿ ಒಂಟಿಯಾಗಿ ವಾಸಿಸುತ್ತಿದ್ದರು ಮತ್ತು ೧೯೯೦ ರ ದಶಕದ ಉತ್ತರಾರ್ಧದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು ಎಂದು ಹೇಳಲಾಗುತ್ತದೆ.<ref>{{Cite web |date=3 July 2011 |title=Parveen Babi – Memories |url=http://cineplot.com/parveen-babi-memories/ |access-date=6 October 2012 |publisher=Cineplot.com}}</ref><ref>{{Cite web |last=Snehal Fernandes |title=She said we were her only family |url=http://www.expressindia.com/news/fullstory.php?newsid=41179 |archive-url=https://web.archive.org/web/20160110034451/http://expressindia.indianexpress.com/news/fullstory.php?newsid=41179 |archive-date=10 January 2016 |access-date=6 October 2012 |publisher=Express India}}</ref>
೩೦ ಜುಲೈ ೧೯೮೩ ರಂದು, ಪರ್ವೀನ್ ಬಾಬಿ ಭಾರತವನ್ನು ತೊರೆದರು ಮತ್ತು ಯು.ಜಿ. ಕೃಷ್ಣಮೂರ್ತಿ ಮತ್ತು ಅವರ ಸ್ನೇಹಿತ ವ್ಯಾಲೆಂಟೈನ್ ಅವರೊಂದಿಗೆ ಆಧ್ಯಾತ್ಮಿಕ ಪ್ರಯಾಣಕ್ಕಾಗಿ ವಿವಿಧ ದೇಶಗಳಿಗೆ ಪ್ರಯಾಣಿಸಿದರು ಮತ್ತು ಕ್ಯಾಲಿಫೋರ್ನಿಯಾ ಮತ್ತು ಹೂಸ್ಟನ್ನಲ್ಲಿ ಸ್ವಲ್ಪ ಸಮಯವನ್ನು ಕಳೆದರು. ಅವರು ನವೆಂಬರ್ ೧೯೮೯ ರಲ್ಲಿ ಮುಂಬೈಗೆ ಮರಳಿದರು. ಆಕೆಗೆ ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾ ರೋಗನಿರ್ಣಯ ಮಾಡಲಾಗಿದೆ ಎಂದು ವದಂತಿಗಳಿವೆ, ಆದರೂ ಅವಳು ಇದನ್ನು ನಿಯಮಿತವಾಗಿ ನಿರಾಕರಿಸಿದಳು. ಅವಳನ್ನು ಹಾಗೆ ಲೇಬಲ್ ಮಾಡುವುದು ಚಲನಚಿತ್ರೋದ್ಯಮ ಮತ್ತು ಮಾಧ್ಯಮಗಳು ತನ್ನ ಇಮೇಜ್ ಅನ್ನು ಹಾಳುಮಾಡಲು ಮಾಡಿದ ಪಿತೂರಿಯಾಗಿದೆ ಎಂದು ಹೇಳಿದರು. ಇದು ಪರ್ವೀನ್ ತನ್ನ ಹೆಚ್ಚಿನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಬಂಧವನ್ನು ಮುರಿಯಲು ಮತ್ತು ಏಕಾಂಗಿಯಾಗಲು ಕಾರಣವಾಯಿತು. ಅಮಿತಾಬ್ ಬಚ್ಚನ್, ಬಿಲ್ ಕ್ಲಿಂಟನ್, ರಾಬರ್ಟ್ ರೆಡ್ಫೋರ್ಡ್, ಪ್ರಿನ್ಸ್ ಚಾರ್ಲ್ಸ್, ಅಲ್ ಗೋರ್, ಯುಎಸ್ ಸರ್ಕಾರ, ಬ್ರಿಟಿಷ್ ಸರ್ಕಾರ, ಫ್ರೆಂಚ್ ಸರ್ಕಾರ, ಬಿಜೆಪಿ ಸರ್ಕಾರ, ರೋಮನ್ ಕ್ಯಾಥೋಲಿಕ್ ಚರ್ಚ್, ಸಿಐಎ, ಸಿಬಿಐ, ಕೆಜಿಬಿ ಸೇರಿದಂತೆ ಅನೇಕ ವಿದೇಶಿ ಗಣ್ಯರು ಮತ್ತು ಭಾರತೀಯ ಚಿತ್ರರಂಗದ ವ್ಯಕ್ತಿಗಳನ್ನು ಅವರು ಆರೋಪಿಸಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಆಕೆಯ ಅರ್ಜಿಯನ್ನು ಸಾಕ್ಷ್ಯಾಧಾರದ ಕೊರತೆಯಿಂದ ವಜಾಗೊಳಿಸಲಾಯಿತು. ಅವಳ ಪುರಾವೆಗಳು ನೋಟ್ಪ್ಯಾಡ್ನಲ್ಲಿ ಸ್ಕ್ರಿಬ್ಲಿಂಗ್ಗಳಾಗಿವೆ.
೭ ಏಪ್ರಿಲ್ ೧೯೮೪ ರಂದು, ಬಾಬಿ ತನ್ನ ಗುರುತಿನ ಪತ್ರಗಳನ್ನು ಸಲ್ಲಿಸಲು ವಿಫಲವಾದ ನಂತರ ಜಾನ್ ಎಫ್. ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತಳಾಗಿದ್ದಳು ಮತ್ತು ಅಧಿಕಾರಿಗಳು ಅವಳಿಗೆ ಕೈಕೋಳವನ್ನು ಹಾಕಿದರು ಮತ್ತು ಮೂವತ್ತು ಇತರ ಮಾನಸಿಕ ಅಸ್ವಸ್ಥ ರೋಗಿಗಳೊಂದಿಗೆ ಸಾಮಾನ್ಯ ವಾರ್ಡ್ನಲ್ಲಿ ಇರಿಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಭಾರತೀಯ ಕಾನ್ಸುಲ್ ಜನರಲ್ ಅವರು ಆಸ್ಪತ್ರೆಗೆ ಭೇಟಿ ನೀಡಲು ಬಂದಿದ್ದರು. ಯು.ಜಿ ಅವರ ಭೇಟಿಯ ಸಮಯದಲ್ಲಿ, ಪರ್ವೀನ್ ಮುಗುಳ್ನಕ್ಕು ಏನೂ ಆಗಿಲ್ಲ ಎಂಬಂತೆ ಕಾನ್ಸುಲ್ ಜೊತೆ ಹರಟೆ ಹೊಡೆದರು. ೧೯೮೯ ರ ಚಲನಚಿತ್ರ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಹೀಗೆ ಹೇಳಿದರು: "ಅಮಿತಾಭ್ ಬಚ್ಚನ್ ಒಬ್ಬ ಸೂಪರ್ ಇಂಟರ್ನ್ಯಾಷನಲ್ ದರೋಡೆಕೋರ. ಅವರು ನನ್ನ ಜೀವನದ ನಂತರ ಇದ್ದಾರೆ. ಅವರ ಗೂಂಡಾಗಳು ನನ್ನನ್ನು ಅಪಹರಿಸಿದರು ಮತ್ತು ನನ್ನನ್ನು ದ್ವೀಪದಲ್ಲಿ ಇರಿಸಲಾಯಿತು ಅಲ್ಲಿ ಅವರು ನನಗೆ ಶಸ್ತ್ರಚಿಕಿತ್ಸೆ ಮಾಡಿದರು ಮತ್ತು ಒಂದು ಟ್ರಾನ್ಸ್ಮಿಟರ್/ಚಿಪ್/ಎಲೆಕ್ಟ್ರಾನಿಕ್ ಬಗ್ ಅನ್ನು ನನ್ನ ಕಿವಿಯ ಕೆಳಗೆ ನೆಟ್ಟರು." ಬಾಬಿಯ ಛಾಯಾಚಿತ್ರವು ಅವಳ ಕಿವಿಯ ಕೆಳಗೆ ಗಾಯವನ್ನು ತೋರಿಸುತ್ತಿತ್ತು.
೨೦೦೨ ರಲ್ಲಿ, ೧೯೯೩ ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ನಟ ಸಂಜಯ್ ದತ್ ವಿರುದ್ಧ ಸಾಕ್ಷ್ಯವನ್ನು ಸಂಗ್ರಹಿಸಿದ್ದಾರೆ ಎಂದು ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ಅಫಿದವಿತ್ ಸಲ್ಲಿಸಿದಾಗ ಆಕೆ ಮತ್ತೊಮ್ಮೆ ಮುಖ್ಯಾಂಶಗಳಲ್ಲಿ ಕಾಣಿಸಿಕೊಂಡರು. ಆದರೆ ನ್ಯಾಲಯಯ ಕರೆ ನೀಡಿದಾಗ ಆಕೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಮತ್ತು ತಾನು ಕೊಲ್ಲಲ್ಪಡುತ್ತೇನೆ ಎಂದು ಹೆದರುತ್ತಿದ್ದೆ ಎಂದು ಹೇಳಿದರು.<ref>{{Cite web |title=Gone too soon |url=http://in.omg.yahoo.com/photos/gone-too-soon-1329276353-slideshow/gone-too-soon-photo-1329276177.html |url-status=dead |archive-url=https://web.archive.org/web/20120218121023/http://in.omg.yahoo.com/photos/gone-too-soon-1329276353-slideshow/gone-too-soon-photo-1329276177.html |archive-date=18 February 2012 |access-date=16 February 2012 |website=Rediff.com}}</ref> ತನ್ನ ಜೀವನದ ಕೊನೆಯ ನಾಲ್ಕು ವರ್ಷಗಳಲ್ಲಿ, ಬಾಬಿ ಪ್ರತಿ ಫೋನ್ ಕರೆಯನ್ನು ರೆಕಾರ್ಡ್ ಮಾಡುತ್ತಿದ್ದಳು. ಯಾವಾಗಲೂ ಕಾಲರ್ಗೆ ಕಣ್ಗಾವಲು ಕುರಿತು ಸಮಯಕ್ಕೆ ತಿಳಿಸುತ್ತಿದ್ದಳು.
== ಸಾವು ==
ಆಕೆ ಮೂರು ದಿನಗಳಿಂದ ತನ್ನ ಮನೆ ಬಾಗಿಲಿನಿಂದ ದಿನಸಿ ಮತ್ತು ಪತ್ರಿಕೆಗಳನ್ನು ಸಂಗ್ರಹಿಸಿಲ್ಲ ಎಂದು ಆಕೆಯ ವಸತಿ ಸೊಸೈಟಿಯ ಕಾರ್ಯದರ್ಶಿ ಪೊಲೀಸರಿಗೆ ಎಚ್ಚರಿಕೆ ನೀಡಿದ ನಂತರ ೨೦೦೫ ರ ಜನವರಿ ೨೨ ರಂದು ಬಾಬಿ ಶವವಾಗಿ ಪತ್ತೆಯಾಗಿದ್ದರು.<ref>[http://www.indiaexpress.com/news/entertainment/20050122-0.html "Parveen Babi found dead in Mumbai"] {{Webarchive|url=https://web.archive.org/web/20150924034311/http://www.indiaexpress.com/news/entertainment/20050122-0.html |date=24 ಸೆಪ್ಟೆಂಬರ್ 2015 }}, ''[[ಇಂಡಿಯನ್ ಎಕ್ಸ್ಪ್ರೆಸ್|The Indian Express]]'', 22 January 2005.</ref> ಆಕೆಯ ಶವ ಪತ್ತೆಯಾಗುವ ಮೊದಲು ಆಕೆ ೭೨ ಗಂಟೆಗಳ ಕಾಲ ಸತ್ತಿದ್ದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆಕೆಯ ಸಾವಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಆಕೆಗೆ ಎಡ ಪಾದದ ಗ್ಯಾಂಗ್ರೀನ್ ಇರುವುದು ಪತ್ತೆಯಾಗಿದ್ದು, ಇದು ಆಕೆಯ ಮಧುಮೇಹ ಸ್ಥಿತಿಯ ತೊಡಕು. ಆಕೆಯ ಹಾಸಿಗೆಯ ಬಳಿ ಗಾಲಿಕುರ್ಚಿಯು ಅಸ್ತವ್ಯಸ್ತವಾಗಿರುವ ವರ್ಣಚಿತ್ರಗಳು, ಬಟ್ಟೆಗಳು, ಔಷಧಗಳು ಮತ್ತು ಹಳೆಯ ದಿನಪತ್ರಿಕೆಗಳ ಸರಣಿಯೊಂದಿಗೆ ಕಂಡುಬಂದಿದೆ. ಆಕೆಯ ಕೊನೆಯ ದಿನಗಳಲ್ಲಿ ಗ್ಯಾಂಗ್ರಿನಸ್ ಪಾದದ ಕಾರಣದಿಂದಾಗಿ ನಡೆಯಲು ಸಾಧ್ಯವಾಗಲಿಲ್ಲ ಮತ್ತು ಆಕೆಯ ಫ್ಲಾಟ್ ಸುತ್ತಲು ಗಾಲಿಕುರ್ಚಿಯ ಬಳಕೆಯ ಅಗತ್ಯವಿತ್ತು.<ref>[http://www.mid-day.com/news/2005/jan/102106.htm Parveen Babi found dead in her flat] {{Webarchive|url=https://web.archive.org/web/20130519170211/http://www.mid-day.com/news/2005/jan/102106.htm |date=2013-05-19 }}. ''mid-day.com''. 23 January 2005</ref> ಕೂಪರ್ ಆಸ್ಪತ್ರೆ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು ಮತ್ತು ಆಕೆಯ ಹೊಟ್ಟೆಯಲ್ಲಿ ಯಾವುದೇ ಆಹಾರದ ಕುರುಹುಗಳಿಲ್ಲ ಎಂದು ವರದಿಗಳು ತೋರಿಸಿದವು. ಆದರೆ ಸ್ವಲ್ಪ ಆಲ್ಕೋಹಾಲ್ (ಬಹುಶಃ ಆಕೆಯ ಔಷಧಿಗಳಿಂದ) ಕಂಡುಬಂದಿದೆ ಮತ್ತು ಆಕೆ ಮೂರು ದಿನಗಳಿಗಿಂತ ಹೆಚ್ಚು ಕಾಲ ಏನನ್ನೂ ಸೇವಿಸಿರಲಿಲ್ಲ ಮತ್ತು ಇದರ ಪರಿಣಾಮವಾಗಿ ಹಸಿವಿನಿಂದ ಸಾವನ್ನಪ್ಪಿದರು. ಪೊಲೀಸರು ಈ ತಪ್ಪನ್ನು ತಳ್ಳಿಹಾಕಿದರು ಮತ್ತು ಆಕೆ ಸಂಪೂರ್ಣ ಅಂಗಾಂಗ ವೈಫಲ್ಯ ಮತ್ತು [[ಮಧುಮೇಹ|ಮಧುಮೇಹಕ್ಕೆ]] ಬಲಿಯಾದಳು ಎಂದು ನಿರ್ಧರಿಸಿದರು.<ref name="bhaskar">{{Cite web |title=Parveen Babi: Jeeti thi shaan se |url=http://daily.bhaskar.com/article/ENT-parveen-babi-jeete-thi-shaan-se-3059105.html |access-date=6 October 2012 |publisher=daily.bhaskar.com |archive-date=28 ಜೂನ್ 2012 |archive-url=https://web.archive.org/web/20120628132852/http://daily.bhaskar.com/article/ENT-parveen-babi-jeete-thi-shaan-se-3059105.html |url-status=dead }}</ref>
ಸಂದರ್ಶನವೊಂದರಲ್ಲಿ ಹೇಳಿದಂತೆ, ಪರ್ವೀನ್ ಬಾಬಿ ತನ್ನ ಜೀವನದ ಕೊನೆಯ ವರ್ಷಗಳಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಳು ಮತ್ತು ಮಲಬಾರ್ ಬೆಟ್ಟ ಪ್ರೊಟೆಸ್ಟೆಂಟ್ ಆಂಗ್ಲಿಕನ್ ಚರ್ಚ್ನಲ್ಲಿ ದೀಕ್ಷಾಸ್ನಾನ ಪಡೆದಳು.<ref>{{Cite web |date=20 November 2007 |title=Church completes 125 years |url=http://epaper.timesofindia.com/Repository/getFiles.asp?Style=OliveXLib:LowLevelEntityToPrint_PASTISSUES2&Type=text/html&Locale=english-skin-custom&Path=TOIM/2007/11/20&ID=Ar00700 |url-status=dead |archive-url=https://web.archive.org/web/20131220235121/http://epaper.timesofindia.com/Repository/getFiles.asp?Style=OliveXLib%3ALowLevelEntityToPrint_PASTISSUES2&Type=text%2Fhtml&Locale=english-skin-custom&Path=TOIM%2F2007%2F11%2F20&ID=Ar00700 |archive-date=20 December 2013 |access-date=6 October 2012 |website=The Times of India}}</ref> ಆಕೆ ಕ್ರಿಶ್ಚಿಯನ್ ವಿಧಿಗಳ ಪ್ರಕಾರ ತನ್ನನ್ನು ಸಮಾಧಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದಳು. ಆದರೆ ಮುಸ್ಲಿಮರಾಗಿದ್ದ ಆಕೆಯ ಸಂಬಂಧಿಕರು ಆಕೆಯ ಮರಣದ ನಂತರ ಆಕೆಯ ದೇಹವನ್ನು ಪಡೆದರು ಮತ್ತು [[ಇಸ್ಲಾಂ ಧರ್ಮ|ಇಸ್ಲಾಮಿಕ್]] ವಿಧಿಗಳ ಪ್ರಕಾರ ಅವಳನ್ನು ಸಮಾಧಿ ಮಾಡಿದರು.<ref name="cineplot1">{{Cite web |date=3 July 2011 |title=Parveen Babi – Memories |url=http://cineplot.com/parveen-babi-memories/ |access-date=6 October 2012 |publisher=Cineplot.com}}<cite class="citation web cs1" data-ve-ignore="true">[http://cineplot.com/parveen-babi-memories/ "Parveen Babi – Memories"]. Cineplot.com. 3 July 2011<span class="reference-accessdate">. Retrieved <span class="nowrap">6 October</span> 2012</span>.</cite></ref><ref>{{Cite news |date=23 January 2005 |title=Parveen Babi wanted Christian last rites |work=[[The Times of India]] |url=http://articles.timesofindia.indiatimes.com/2005-01-23/india/27854098_1_parveen-babi-trooped-into-juhu-police-babi-legacy |url-status=dead |access-date=6 October 2012 |archive-url=https://web.archive.org/web/20130511014713/http://articles.timesofindia.indiatimes.com/2005-01-23/india/27854098_1_parveen-babi-trooped-into-juhu-police-babi-legacy |archive-date=11 May 2013}}</ref> ಪರ್ವೀನ್ ಬಾಬಿಯನ್ನು ಮುಂಬೈನ ಸಾಂತಾಕ್ರೂಜ್ನಲ್ಲಿರುವ ಜುಹು ಮುಸ್ಲಿಂ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.<ref>[http://www.expressindia.com/news/fullstory.php?newsid=41105 "Chaos, confusion mark Parveen Babi's funeral"] {{Webarchive|url=https://web.archive.org/web/20121001160035/http://www.expressindia.com/news/fullstory.php?newsid=41105 |date=1 ಅಕ್ಟೋಬರ್ 2012 }}. ''expressindia.com''.</ref>
ಆಕೆಯ ಮರಣದ ನಂತರ ಮಹಾರಾಷ್ಟ್ರ ರಾಜ್ಯದ ಅಡ್ಮಿನಿಸ್ಟ್ರೇಟರ್ ಜನರಲ್ ಆಕೆಯ ಆಸ್ತಿಯ ಏಕೈಕ ಪಾಲಕರಾದರು.<ref>{{Cite news |date=17 February 2007 |title=Actress Parveen Babi's kin claims her assets | India News - Times of India |work=The Times of India |url=https://timesofindia.indiatimes.com/india/Actress-Parveen-Babis-kin-claims-her-assets/articleshow/1633614.cms}}</ref> ಆಕೆಯ ಸಾವಿನ ನಂತರ, ನಟ ಮತ್ತು ಸ್ನೇಹಿತ ಮುರಾದ್ ಖಾನ್ ಬಾಬಿಯವರು ಜಂಟಿಯಾಗಿ ಕಾರ್ಯಗತಗೊಳಿಸಿದ ಜುನಾಗಢ ಬ್ಯಾಂಕಿನ ಲಾಕರ್ನಲ್ಲಿದ್ದ ಆಕೆಯ ಆಸ್ತಿಯ ಇಚ್ಛೆಗೆ ಸಂಬಂಧಿಸಿದಂತೆ ವಿವಿಧ ದೂರದ ಸಂಬಂಧಿಕರು ಹೈಕೋರ್ಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಿದಾಗ ಅವ್ಯವಸ್ಥೆ ಭುಗಿಲೆದ್ದಿತು. ಬಾಬಿ ಕುಟುಂಬದ ಬಡ ಸದಸ್ಯರಿಗೆ ಸಹಾಯ ಮಾಡಲು ಆಕೆಯ ಆಸ್ತಿಯ ೭೦% ಅನ್ನು ಆಕೆಯ ಹೆಸರಿನಲ್ಲಿ ಟ್ರಸ್ಟ್ನಲ್ಲಿ ಇಡಬೇಕೆಂದು ವೀಲುನಾಮೆಯಲ್ಲಿ ತಿಳಿಸಲಾಗಿತ್ತು. "ಮಾರ್ಗದರ್ಶಿ ಶಕ್ತಿ" ಯಾಗಿದ್ದರಿಂದ ಮುರಾದ್ ಖಾನ್ ಬಾಬಿಗೆ ೨೦% ಮತ್ತು ಕ್ರಿಶ್ಚಿಯನ್ ಮಿಷನರಿ ನಿಧಿಗಳಿಗೆ ೧೦% ನೀಡುವುದಾಗಿ ವಾಗ್ದಾನ ಮಾಡಲಾಯಿತು.<ref>{{Cite news |date=28 April 2005 |title=Babi will leaves relatives high and dry |work=[[The Times of India]] |url=http://articles.timesofindia.indiatimes.com/2005-04-28/ahmedabad/27834794_1_parveen-babi-babi-family-babi-property |url-status=dead |access-date=6 October 2012 |archive-url=https://web.archive.org/web/20131108222916/http://articles.timesofindia.indiatimes.com/2005-04-28/ahmedabad/27834794_1_parveen-babi-babi-family-babi-property |archive-date=8 November 2013}}</ref><ref>{{Cite news |date=29 April 2005 |title=Babi will leaves kin high and dry |work=[[The Times of India]] |url=http://articles.timesofindia.indiatimes.com/2005-04-29/india/27858574_1_parveen-babi-murad-khan-babi-junagadh-court |url-status=dead |access-date=6 October 2012 |archive-url=https://archive.today/20130103175315/http://articles.timesofindia.indiatimes.com/2005-04-29/india/27858574_1_parveen-babi-murad-khan-babi-junagadh-court |archive-date=3 January 2013}}</ref>
ಐದು ವರ್ಷಗಳ ನಂತರ, ಸಮಾಧಿ ಮಾಡಲು ಸ್ಥಳಾವಕಾಶದ ಕೊರತೆಯಿಂದಾಗಿ, ಸಾಂಟಾ ಕ್ರೂಜ್ ಮುಸ್ಲಿಂ ಸ್ಮಶಾನದಲ್ಲಿ ಸಮಾಧಿ ಮಾಡಿದ್ದ ಪರ್ವೀನ್ ಬಾಬಿ ಹಾಗೂ ಇತರ [[ಬಾಲಿವುಡ್]] ಸೆಲೆಬ್ರಿಟಿಗಳಾದ ಮೊಹಮ್ಮದ್ ರಫಿ, [[ಮಧುಬಾಲಾ]], [[ಸಾಹಿರ್ ಲುಧಿಯಾನ್ವಿ]], ತಲತ್ ಮಹಮೂದ್, [[ನೌಷಾದ್ ಅಲಿ|ನೌಶಾದ್ ಅಲಿ]] ಅವರನ್ನು ಹೊರತೆಗೆಯಲಾಯಿತು ಮತ್ತು ಅವರ ಅವಶೇಷಗಳನ್ನು ಹೊಸ ವಿಶ್ರಾಂತಿ ಸ್ಥಳಕ್ಕೆ ಸ್ಥಳಾಂತರಿಸಲಾಯಿತು<ref>{{Cite web |date=16 February 2010 |title=Juhu Muslim Cemetery: Mumbai's multi-story graveyard |url=http://www.cnngo.com/mumbai/none/juhus-islamic-cemetary-mumbais-muslim-icons-thrown-out-their-graves-275298 |url-status=dead |archive-url=https://web.archive.org/web/20121110013304/http://www.cnngo.com/mumbai/none/juhus-islamic-cemetary-mumbais-muslim-icons-thrown-out-their-graves-275298 |archive-date=10 November 2012 |access-date=13 October 2013 |publisher=CNNGo.com}}</ref><ref>{{Cite web |title=Rafi, Naushad's Graves Could be Dug for Space |url=http://news.outlookindia.com/items.aspx?artid=674579 |url-status=dead |archive-url=https://web.archive.org/web/20120929055211/http://news.outlookindia.com/items.aspx?artid=674579 |archive-date=29 September 2012 |access-date=6 October 2012 |publisher=news.outlookindia.com}}</ref><ref>{{Cite web |title=The old resting places of the beautiful |url=http://www.ketan.net/art2_29.html |url-status=dead |archive-url=https://web.archive.org/web/20110719144940/http://www.ketan.net/art2_29.html |archive-date=19 July 2011 |website=The Times of India}}</ref>
== ಕಲೆ ಮತ್ತು ಪರಂಪರೆ ==
ಬಾಬಿಯನ್ನು [[ಭಾರತದ ಚಲನಚಿತ್ರೋದ್ಯಮ|ಭಾರತೀಯ ಚಿತ್ರರಂಗದ]] ಶ್ರೇಷ್ಠ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.<ref>{{Cite news |title=Top heroines of Bollywood |work=[[India Today]] |url=https://www.indiatoday.in/cinema/100-years-of-indian-cinema/photo/top-actresses-of-bollywood-ever-367543-2012-05-01/5 |url-status=live |access-date=24 August 2020 |archive-url=https://web.archive.org/web/20201128234730/https://www.indiatoday.in/cinema/100-years-of-indian-cinema/photo/top-actresses-of-bollywood-ever-367543-2012-05-01/5 |archive-date=28 November 2020}}</ref> ೧೯೭೦ರ ದಶಕದಿಂದ ೧೯೮೦ರ ದಶಕದ ಆರಂಭದವರೆಗೆ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರಲ್ಲಿ ಒಬ್ಬರಾದ ಅವರು, ೨೦೨೨ರಲ್ಲಿ ಔಟ್ಲುಕ್ ಇಂಡಿಯಾದ "೭೫ ಅತ್ಯುತ್ತಮ ಬಾಲಿವುಡ್ ನಟಿಯರು" ಈ ಪಟ್ಟಿಯಲ್ಲಿ ಅವರು ಸ್ಥಾನವನ್ನು ಪಡೆದರು.<ref>{{Cite web |title=75 Bollywood Actresses Who Ruled The Silver Screen With Grace, Beauty And Talent |url=https://www.outlookindia.com/art-entertainment/75-bollywood-actresses-who-ruled-the-silver-screen-with-grace-beauty-and-talent-news-216694/amp |url-status=live |archive-url=https://web.archive.org/web/20220816142138/https://www.outlookindia.com/art-entertainment/75-bollywood-actresses-who-ruled-the-silver-screen-with-grace-beauty-and-talent-news-216694/amp |archive-date=16 August 2022 |access-date=16 August 2022 |website=Outlook India}}</ref> ಬಾಬಿ ಹಿಂದಿ ಚಿತ್ರರಂಗದ ಅತ್ಯಂತ ಸ್ಟೈಲಿಶ್ ಮತ್ತು ಸುಂದರ ನಟಿಯರಲ್ಲಿ ಒಬ್ಬರಾಗಿದ್ದರು. ''[[ದಿ ಟೈಮ್ಸ್ ಆಫ್ ಇಂಡಿಯಾ|ಟೈಮ್ಸ್ ಆಫ್ ಇಂಡಿಯಾ]]'' ತನ್ನ "೫೦ ಸುಂದರ ಮುಖಗಳು" ಎಂಬ ಪಟ್ಟಿಯಲ್ಲಿ ಆಕೆಯನ್ನು ಸೇರಿಸಿತು.<ref>{{Cite web |title=Photos - 50 Beautiful Faces: 100 years of Indian Cinema |url=https://photogallery.indiatimes.com/movies/100-yrs-of-indian-cinema/50-beautiful-faces-100-years-of-indian-cinema/morphshow/19720061.cms?from=mdr |access-date=28 November 2021 |website=Times of India}}</ref> ೧೯೭೬ರಲ್ಲಿ ಟೈಮ್ ನಿಯತಕಾಲಿಕೆಯ ಏಷ್ಯಾ ಆವೃತ್ತಿಯ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ತಾರೆ ಆಕೆಯಾಗಿದ್ದಳು.<ref>{{Cite web |title=Parveen Babi Death Anniversary: Lesser-known facts about the stylish actress |url=https://www.news18.com/news/lifestyle/parveen-babi-death-anniversary-lesser-known-facts-about-the-actress-2464839.html |access-date=22 January 2021 |website=News18 India}}</ref> ''Rediff.com'' ಬಾಬಿಯನ್ನು ತನ್ನ "ಸಾರ್ವಕಾಲಿಕ ಸೆಕ್ಸಿಯೆಸ್ಟ್ ಬಾಲಿವುಡ್ ಸ್ಟಾರ್ಸ್" ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರಿಸಿದೆ.<ref>{{Cite web |title=Sexiest Bollywood stars of all times |url=http://movies.rediff.com/slide-show/2010/may/11/slide-show-1-sexiest-bollywood-stars-of-all-times.htm |url-status=live |archive-url=https://web.archive.org/web/20220816142138/http://movies.rediff.com/slide-show/2010/may/11/slide-show-1-sexiest-bollywood-stars-of-all-times.htm |archive-date=16 August 2022 |access-date=16 December 2018 |website=Rediff.com}}</ref> ಬಾಬಿ ಅವರನ್ನು ಸಾರ್ವಕಾಲಿಕ ಅತ್ಯಂತ ಜನಪ್ರಿಯ ಬಾಲಿವುಡ್ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.<ref>{{Cite news |last=Subhash K. Jha |title=Exclusive - 10 hottest Bollywood actresses of all time |work=Bollywood Hungama |url=https://www.bollywoodhungama.com/news/features/10-hottest-bollywood-actresses-time/ |access-date=26 February 2020}}</ref>
ಫಸ್ಟ್ ಪೋಸ್ಟ್ಗಾಗಿ ಬರೆಯುತ್ತಾ, ಸುಭಾಷ್ ಕೆ. ಝಾರವರು, "ಆಕೆಯ ಸುಂದರ ನೋಟ, ಆಕರ್ಷಣೆ, ಸಮತೋಲನ ಮತ್ತು ಲೈಂಗಿಕ ಆಕರ್ಷಣೆಯಿಂದ, ಪರ್ವೀನ್ ಬಾಬಿಗೆ ಆಕಾಶವೇ ಮಿತಿ" ಎಂದು ಬರೆದರು. ''[[ಫಿಲ್ಮ್ಫೇರ್|ಫಿಲ್ಮ್ಫೇರ್]]'' ಗಮನಿಸಿದಂತೆ, "೧೯೭೦ ಮತ್ತು ೧೯೮೦ ರ ದಶಕಗಳಲ್ಲಿ, ಪರ್ವೀನ್ ಬಾಬಿ ಅವರು ಶ್ರದ್ಧಾಭಕ್ತಿಯ ಅಭಿಮಾನಿ ಬಳಗವನ್ನು ಹೊಂದಿದ್ದರು ಮತ್ತು ಅವರು ಆಕೆಯನ್ನು ಪರದೆಯಲ್ಲಿ ತೋರಿಸಿದಾಗಲೆಲ್ಲಾ ಪರದೆಯನ್ನು ಬೆಳಗಿಸುತ್ತಿದ್ದರು". ಇಂಡಿಯಾ ಟುಡೇಯು, "ಪರ್ವೀನ್ ಬಾಬಿ ತನ್ನ ಕೆತ್ತನೆಯ ನೋಟ, ಉತ್ತಮ ಕೆತ್ತನೆಯ ದೇಹ ಮತ್ತು ಆಂಗ್ಲೀಕೃತ ಉಚ್ಚಾರಣೆಯೊಂದಿಗೆ ಪುರಾತನ ಭಾರತೀಯ ನಾಯಕಿಯ ನಿಲುವಂಗಿಯನ್ನು ಧರಿಸಿದ್ದಾಳೆ ಮತ್ತು ಬಾಲಿವುಡ್ನ ಮಹಿಳಾ ಪ್ರೈಮಾ ಡೊನ್ನಾಗೆ ತನ್ನ ವಿಶಿಷ್ಟ ನಡವಳಿಕೆಯನ್ನು ಶಾಶ್ವತವಾಗಿ ನೀಡಿದ್ದಾಳೆ." ಎಂದು ಬರೆದಿದೆ. ''ದಿ ಸಂಡೇ ಗಾರ್ಡಿಯನ್'' ಲತಾ ಶ್ರೀನಿವಾಸನ್ರವರು ಆಕೆಯನ್ನು "ಆಕರ್ಷಕ ಆದರೆ ಬಹಿರಂಗವಾಗಿ ಮಾತನಾಡುವವಳು" ಎಂದು ಕರೆದರು ಮತ್ತು "೧೯೭೦ ರ ದಶಕದಲ್ಲಿ ಒಂದು ಸಂವೇದನೆ" ಎಂದು ಹೇಳಿದರು.<ref>{{Cite web |title=Parveen Babi death anniversary: The actor died a lonely death isolated by her insecurities |url=https://www.firstpost.com/entertainment/parveen-babi-death-anniversary-the-actor-died-a-lonely-death-isolated-by-her-insecurities-10303711.html/amp |url-status=live |archive-url=https://web.archive.org/web/20220816142138/https://www.firstpost.com/entertainment/parveen-babi-death-anniversary-the-actor-died-a-lonely-death-isolated-by-her-insecurities-10303711.html/amp |archive-date=16 August 2022 |access-date=16 June 2022 |website=Firstpost}}</ref><ref>{{Cite web |title=10 Timeless Classics featuring Parveen Babi |url=https://m.filmfare.com/photos/parveen-babi-birth-anniversary-10-timeless-classics-featuring-the-actress-57749.amp |url-status=live |archive-url=https://web.archive.org/web/20220816142138/https://m.filmfare.com/photos/parveen-babi-birth-anniversary-10-timeless-classics-featuring-the-actress-57749.amp |archive-date=16 August 2022 |access-date=10 August 2023 |website=Filmfare}}</ref><ref>{{Cite news |title=Remembering Parveen Babi on her 65th birth anniversary |work=India Today |url=https://www.indiatoday.in/entertainment/photo/remembering-parveen-babi-367346-2012-04-04/1 |url-status=live |access-date=24 July 2022 |archive-url=https://web.archive.org/web/20201128234730/https://www.indiatoday.in/entertainment/photo/remembering-parveen-babi-367346-2012-04-04/1 |archive-date=28 November 2020}}</ref><ref>{{Cite news |title=Parveen Babi Retrospective: Glimpse into the stargirl's life |work=The Sunday Guardian |url=https://sundayguardianlive.com/culture/parveen-babi-retrospective-glimpse-stargirls-life |url-status=live |access-date=24 May 2021 |archive-url=https://web.archive.org/web/20201128234730/https://sundayguardianlive.com/culture/parveen-babi-retrospective-glimpse-stargirls-life |archive-date=28 November 2020}}</ref>
== ಚಲನಚಿತ್ರಗಳ ಪಟ್ಟಿ ==
{| class="wikitable sortable"
!ವರ್ಷ.
!ಶೀರ್ಷಿಕೆ
!ಪಾತ್ರ
! class="unsortable" |ಟಿಪ್ಪಣಿಗಳು
! class="unsortable" |ಉಲ್ಲೇಖ.
|-
|೧೯೭೩
|''ಚರಿತ್ರಾ''
|
|
|
|-
| rowspan="4" |೧೯೭೪
|''ತ್ರಿಮೂರ್ತಿ''
|ಸುನೀತಾ
|
|<ref>{{Cite web |title=Trimurti (1971) - Rotten Tomatoes |url=https://www.rottentomatoes.com/m/trimurti_1974 |access-date=2020-09-11 |website=www.rottentomatoes.com |language=en}}</ref>
|-
|''ಮಜ್ಬೂರ್''
|ನೀಲಾ
|
|
|-
|''ಧುಯೆನ್ ಕಿ ಲೇಕರ್''
|
|
|
|-
|''೩೬ ಗಂಟೆ''
|ನೈನಾ ರಾಯ್
|
|
|-
| rowspan="2" |೧೯೭೫
|''ದೀವಾರ್''
|ಅನಿತಾ
|
|<ref>{{Cite web |date=29 January 2017 |title=Deewaar was the perfect script: Amitabh Bachchan on 42 years of the cult film |url=https://www.hindustantimes.com/bollywood/deewaar-was-the-perfect-script-amitabh-bachchan-on-42-years-of-the-cult-film/story-x2hy87zQ0ebVlsVMV59U2I.html |url-status=live |archive-url=https://web.archive.org/web/20180705181552/https://www.hindustantimes.com/bollywood/deewaar-was-the-perfect-script-amitabh-bachchan-on-42-years-of-the-cult-film/story-x2hy87zQ0ebVlsVMV59U2I.html |archive-date=5 July 2018 |access-date=15 July 2019 |website=Hindustan Times}}</ref>
|-
|''ಕಾಲಾ ಸೋನಾ''
|ದುರ್ಗಾ
|
|
|-
| rowspan="4" |೧೯೭೬
|''ಭನ್ವರ್''
|ರೂಪಾ ಡಿಸೋಜಾ
|
|
|-
|ಬುಲೆಟ್
|ಸಪ್ನಾ
|
|
|-
|''ರಂಗಿಲಾ ರತನ್''
|ಮಧು
|
|
|-
|''ಮಜ್ದೂರ್ ಜಿಂದಾಬಾದ್''
|ಕಮಲಾ
|
|
|-
| rowspan="7" |1977
|''ಅಮರ್ ಅಕ್ಬರ್ ಆಂಥೋನಿ''
|ಜೆನ್ನಿ
|
|<ref>{{Cite web |date=3 August 2013 |title=Excerpt: Amar Akbar Anthony |url=http://www.livemint.com/Leisure/toFX50k1D6H0dep49vQXVK/Excerpt--Amar-Akbar-Anthony.html |url-status=live |archive-url=https://web.archive.org/web/20130806021336/http://www.livemint.com/Leisure/toFX50k1D6H0dep49vQXVK/Excerpt--Amar-Akbar-Anthony.html |archive-date=6 August 2013 |access-date=6 August 2013 |website=Live Mint}}</ref>
|-
|''ಚಲ್ತಾ ಪುರ್ಝಾ''
|ಶೀತಲ್
|
|
|-
|''ದರಿಂದಾ''
|ಕೀರ್ತಿ ಠಾಕೂರ್
|
|
|-
|''ಮಸ್ತಾನ್ ದಾದಾ''
|
|
|
|-
|''ಮಾಮಾ ಭಂಜ''
|ಮಧು ಮಾಲಿನಿ
|
|
|-
|''ಚೋರ್ ಸಿಪಾಹಿ''
|ಭಾರತಿ ಖನ್ನಾ
|
|
|-
|''ಚಾಂದಿ ಸೋನಾ''
|ರೀಟಾ
|
|
|-
| rowspan="2" |1978
|''ಪತಿ, ಪತ್ನಿ ಔರ್ ವೋ''
|ನೀಟಾ
|ಅತಿಥಿ ಪಾತ್ರ
|
|-
|''ಆಹುತಿ''
|ರೇಖಾ
|
|
|-
| rowspan="2" |1979
|''ಕಾಲಾ ಪತ್ತರ್''
|ಅನಿತಾ
|
|
|-
|''ಸುಹಾಗ್''
|ಅನು
|
|<ref>{{Cite web |title=Top Earners 1979 |url=http://www.boxofficeindia.com/showProd.php?itemCat=185&catName=MTk3OQ== |url-status=dead |archive-url=https://web.archive.org/web/20131020102901/http://www.boxofficeindia.com/showProd.php?itemCat=185&catName=MTk3OQ== |archive-date=20 October 2013 |access-date=20 November 2008 |website=Box Office India}}</ref>
|-
| rowspan="5" |1980
|''ದೋ ಔರ್ ದೋ ಪಾಂಚ್''
|ಅಂಜು ಶರ್ಮಾ
|
|
|-
|''ದಿ ಬರ್ನಿಂಗ್ ಟ್ರೈನ್''
|ಶೀತಲ್ ವಿನೋದ್ ವರ್ಮಾ
|
|
|-
|''ಶಾನ್''
|ಸುನೀತಾ ವಿಜಯ್ ಕುಮಾರ್
|ಹಿನ್ನೆಲೆ ಗಾಯಕರೂ ಆಗಿದ್ದಾರೆ.
|
|-
|ಗುನೆಹ್ಗಾರ್
|ಮಧು
|
|
|-
|''ಏಕ್ ಗುನಾಹ್ ಔರ್ ಸಾಹಿ''
|ಪಾರೋ
|
|
|-
| rowspan="5" |1981
|''ಕ್ರಾಂತಿ''
|ಸುರೇಲಿ
|
|<ref>{{Cite web |date=2021-02-03 |title=Kranti at 40: Celebrating the classic film with 20 fun facts |url=https://www.easterneye.biz/kranti-at-40-celebrating-the-classic-film-with-20-fun-facts/ |access-date=2021-10-18 |website=EasternEye |language=en-GB}}</ref>
|-
|''ಖೂನ್ ಔರ್ ಪಾನಿ''
|ರೀಟಾ
|
|
|-
|''ಮೇರಿ ಆವಾಜ್ ಸುನೋ''
|ರೀಟಾ
|
|
|-
|''ಕಾಲಿಯಾ''
|ಶಾಲಿನಿ/ರಾಣಿ ಸಿಂಗ್
|
|
|-
|''ರಕ್ಷಾ''
|ಚಂದಾ/ಬಿಜ್ಲಿ
|
|
|-
| rowspan="7" |1982
|''ದೇಶ್ ಪ್ರೇಮಿ''
|ಡಾ. ಪ್ರೀತಿ
|
|
|-
|''ನಮಕ್ ಹಲಾಲ್''
|ನಿಶಾ
|
|<ref>{{Cite web |date=5 October 2013 |title=Box Office 1982 |url=http://www.boxofficeindia.com/showProd.php?itemCat=188&catName=MTk4Mg== |url-status=dead |archive-url=https://web.archive.org/web/20131005013955/http://www.boxofficeindia.com/showProd.php?itemCat=188&catName=MTk4Mg== |archive-date=5 October 2013 |access-date=9 September 2019 |website=Box Office India}}</ref>
|-
|''ಅಶಾಂತಿ''
|ಸುನೀತಾ
|
|
|-
|''ದಿಲ್... ಆಖಿರ್ ದಿಲ್ ಹೈ''
|ಸಪ್ನಾ
|
|
|-
|''ಖುದ್-ದಾರ್''
|ಮೇರಿ
|
|
|-
|''ಯೇ ನಜ್ಡೀಕಿಯಾನ್''
|ಕಿರಣ್
|
|
|-
|''ತಾಕತ್''
|ಅಂಬಿಕಾ
|
|
|-
| rowspan="8" |1983
|''[[ಮಂಗಲ್ ಪಾಂಡೆ]]''
|ಕವಿತಾ
|ಗುರುತಿಸಲಾಗದ ಪಾತ್ರ
|
|-
|''ದುರ್ದೇಶ್''
|ರೇಣು
|ಇಂಡೋ-ಕೆನಡಿಯನ್ ಚಲನಚಿತ್ರ
|
|-
|''ಅರ್ಪಣ್''
|ಸೋನಾ
|
|
|-
|''ರಂಗ್ ಬಿರಂಗಿ''
|ನಿರ್ಮಲಾ ಶರ್ಮಾ
|
|
|-
|''ಮಹಾನ್''
|ಮಂಜು
|
|
|-
|''ಜಾನಿ ದೋಸ್ತ್''
|ಮೀನಾ
|
|
|-
|''ರಜಿಯಾ ಸುಲ್ತಾನ್''
|ಕಾಕೂನ್
|
|<ref>{{Cite web |last=Kapoor |first=Sunil Sethi Coomi |title=Kamal Amrohi's dream film Razia Sultan bombs at the box-office |url=https://www.indiatoday.in/magazine/society-the-arts/films/story/19831015-kamal-amrohi-dream-film-razia-sultan-bombs-at-the-box-office-771082-2013-07-17 |access-date=21 May 2020 |website=India Today}}</ref>
|-
|''ಚೋರ್ ಪೊಲೀಸ್''
|ಸೀಮಾ
|
|
|-
| rowspan="3" |೧೯೮೪
|''ಬ್ಯಾಡ್ ಔರ್ ಬದ್ನಾಮ್''
|
|
|
|-
|''ತೇರಿ ಬಾಹೊನ್ ಮೇ''
|ನರ್ತಕಿ
|ಹಾಡಿನಲ್ಲಿ ವಿಶೇಷ ಪಾತ್ರ
|
|-
|''ಕಾನೂನ್ ಮೇರಿ ಮುಟ್ಟಿ ಮೇ''
|ಗೀತಾ 'ಜ್ವಾಲಾ'
|
|
|-
| rowspan="5" |೧೯೮೫
|''ಅಮೀರ್ ಆದ್ಮಿ ಗರೀಬ್ ಆದ್ಮಿ''
|ನರ್ತಕಿ
|ಅತಿಥಿ ಪಾತ್ರ
|
|-
|ಸೀತಮ್ಗರ್
|ಶೀಲಾ
|
|
|-
|ಟೆಲಿಫೋನ್
|ಅನಿತಾ
|
|
|-
|''ಬಾಂಡ್ ೩೦೩''
|ಗೀತಾ/ಸುಜಿಯಾನಾ
|ದ್ವಿಪಾತ್ರ
|
|-
|''ಕರ್ಮ ಯುಧ್''
|ಸ್ವತಃ
|ಅತಿಥಿ ಪಾತ್ರ
|<ref>{{Cite web |title=Karm Yudh (1985) - Review, Star Cast, News, Photos, Videos |url=https://www.cinestaan.com/movies/karm-yudh-5988 |url-status=dead |archive-url=https://web.archive.org/web/20190504151558/https://www.cinestaan.com/movies/karm-yudh-5988 |archive-date=4 May 2019 |access-date=2022-11-17 |website=Cinestaan}}</ref>
|-
|೧೯೮೬
|''ಅವಿನಾಶ್''
|ನಿಶಾ
|
|
|-
|೧೯೮೮
|''ಆಕರ್ಷಣ್''
|
|ಅತಿಥಿ ಪಾತ್ರ
|
|-
|೧೯೯೧
|ಇರಾದಾ
|ಕಿರಣ್
|ಅಂತಿಮ ಚಿತ್ರ
|
|}
==ಗೌರವಗಳು==
ಬಾಬಿಯ ಮಾಜಿ ಪಾಲುದಾರರಾದ ಮಹೇಶ್ ಭಟ್ ಅವರು ಆರ್ತ್ (೧೯೮೨) ಅನ್ನು ಬರೆದು ನಿರ್ದೇಶಿಸಿದರು. ಇದು ಬಾಬಿಯೊಂದಿಗಿನ ಅವರ ಸಂಬಂಧದ ಬಗ್ಗೆ ಅರೆ-ಆತ್ಮಚರಿತ್ರೆಯ ಚಲನಚಿತ್ರವಾಗಿದೆ. ಚಿತ್ರದಲ್ಲಿ ಸ್ಮಿತಾ ಪಾಟೀಲ್ ಅವರ ಪಾತ್ರವು ಬಾಬಿಯಿಂದ ಸ್ಫೂರ್ತಿ ಪಡೆದಿದೆ. ಭಟ್ ಅವರು ತಮ್ಮ ಸೋದರಳಿಯ ಮೋಹಿತ್ ಸೂರಿ ನಿರ್ದೇಶಿಸಿದ ವೋ ಲಮ್ಹೆ (೨೦೦೬) ಅನ್ನು ಬರೆದು ನಿರ್ಮಿಸಿದರು. ಇದು ಬಾಬಿಯೊಂದಿಗಿನ ಅವರ ಸಂಬಂಧದ ನೆನಪು ಮತ್ತು ವ್ಯಾಖ್ಯಾನದ ಆಧಾರದ ಮೇಲೆ ಹಾಗೂ ಅವಳಿಂದ ಯಾವುದೇ ಒಳಹರಿವು ಇಲ್ಲದೆ ನಿರ್ಮಿಸಲಾಗಿದೆ. ಆಕೆಯಿಂದ ಸ್ಫೂರ್ತಿ ಪಡೆದ ಪಾತ್ರವನ್ನು ಕಂಗನಾ ರಣಾವತ್ ನಿರ್ವಹಿಸಿದ್ದಾರೆ.
ನಟಿ ಜೀನತ್ ಅಮನ್ರವರು, "ಪರ್ವೀನ್ ಸುಂದರವಾದ, ಮನಮೋಹಕ ಮತ್ತು ಪ್ರತಿಭಾವಂತಳಾಗಿದ್ದಳು. ೭೦ ರ ದಶಕದಲ್ಲಿ, ನಾವು ನಮ್ಮ ಕೂದಲನ್ನು ಇದೇ ರೀತಿಯಲ್ಲಿ ಧರಿಸುತ್ತಿದ್ದೆವು ಮತ್ತು ಪಾಶ್ಚಿಮಾತ್ಯ ಶೈಲಿಯನ್ನು ಆನಂದಿಸುತ್ತಿದ್ದೆವು. ಆಕೆಯ ಮರಣದ ನಂತರ, ಅವಳು ಹೇಗೆ ನೆನಪಿಸಿಕೊಳ್ಳಲ್ಪಟ್ಟಳು ಎಂಬುದರ ಬಗ್ಗೆ ನಾನು ಆಗಾಗ್ಗೆ ಯೋಚಿಸುತ್ತಿದ್ದೆ. ಪರ್ವೀ`ನ್ ಅವರು ಯಾರೊಂದಿಗೆ ಡೇಟಿಂಗ್ ಮಾಡಿದರು ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರು ಏನು ಹೇಳಿದರು ಎಂಬುದಕ್ಕಿಂತ ಹೆಚ್ಚು. ಆಕೆಗೆ ನಿಜವಾಗಿಯೂ ತನ್ನ ತುಣುಕನ್ನು ಹೇಳಲು ಎಂದಿಗೂ ಅವಕಾಶ ಸಿಗಲಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು. ಡಿಸೈನರ್ ಮನೀಶ್ ಮಲ್ಹೋತ್ರಾರವರು, "ಪರ್ವೀನ್ ಬಾಬಿ ಕನಿಷ್ಠೀಯತೆಯನ್ನು ಫ್ಯಾಶನ್ಗೆ ತಂದರು. ಅವರು ಯಾವಾಗಲೂ ನಿಷ್ಪಾಪರಾಗಿದ್ದರು ಹಾಗೂ ಒಮ್ಮೆ ಕೂಡ ಅದನ್ನು ಅತಿಯಾಗಿ ಮಾಡಲಿಲ್ಲ." ಎಂದು ಹೇಳಿದರು. ಮಲ್ಹೋತ್ರಾ ಅವರು ತಮ್ಮ "ಎಪ್ಪತ್ತರ ದಶಕದ ಐದು ಸೂಪರ್ ಸ್ಟೈಲಿಶ್ ನಾಯಕಿಯರು" ಪಟ್ಟಿಯಲ್ಲಿ ಅವರನ್ನು ಸೇರಿಸಿದ್ದಾರೆ.<ref>[https://www.hindustantimes.com/entertainment/bollywood/zeenat-aman-remembers-remarkable-parveen-babi-on-her-birthday-never-truly-got-the-chance-to-say-her-piece-101680611872575-amp.html Zeenat Aman remembers 'remarkable' Parveen Babi on her birthday: Never truly got the chance to say her piece] ''Hindustan Times''. Retrieved 29 April 2022.</ref><ref>{{Cite web |date=21 June 2021 |title=The Damsel That Was-Parveen Babi |url=https://www.radiocity.in/film/photo-gallery-details/The-Damsel-That-Was-Parveen-Babi/1306 |access-date=11 November 2022 |website=Radiocity.in |language=en |archive-date=2 ಫೆಬ್ರವರಿ 2021 |archive-url=https://web.archive.org/web/20210202141452/https://www.radiocity.in/film/photo-gallery-details/The-Damsel-That-Was-Parveen-Babi/1306 |url-status=dead }}</ref><ref name="Telegraph India">{{Cite news |date=23 November 2010 |title=Manish Malhotra picks his five favourite super stylish heroines of the seventies |work=The Telegraph |url=http://www.telegraphindia.com/1101123/jsp/entertainment/story_13209188.jsp |url-status=dead |access-date=19 July 2012 |archive-url=https://web.archive.org/web/20101128022642/http://www.telegraphindia.com/1101123/jsp/entertainment/story_13209188.jsp |archive-date=28 November 2010}}<cite class="citation news cs1" data-ve-ignore="true">[https://web.archive.org/web/20101128022642/http://www.telegraphindia.com/1101123/jsp/entertainment/story_13209188.jsp "Manish Malhotra picks his five favourite super stylish heroines of the seventies"]. ''The Telegraph''. 23 November 2010. Archived from [http://www.telegraphindia.com/1101123/jsp/entertainment/story_13209188.jsp the original] on 28 November 2010<span class="reference-accessdate">. Retrieved <span class="nowrap">19 July</span> 2012</span>.</cite></ref> ೨೦೦೬ ರಲ್ಲಿ, ಭಾರತದ ೩೭ ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಬಾಬಿ ಅವರ ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಗೌರವಿಸಿತು.<ref>{{Cite web |title=37th IIFA: Directorate of Film Festival |url=http://iffi.nic.in/Dff2011/Frm37IIFAAward.aspx?PdfName=37IIFA.pdf |url-status=dead |archive-url=https://web.archive.org/web/20160415013528/http://iffi.nic.in/Dff2011/Frm37IIFAAward.aspx?PdfName=37IIFA.pdf |archive-date=2016-04-15 |access-date=2018-03-19 |website=iffi.nic.in}}</ref> ೨೦೨೦ ರಲ್ಲಿ, ಕರಿಷ್ಮಾ ಉಪಾಧ್ಯಾಯ ಅವರು ತಮ್ಮ ಜೀವನಚರಿತ್ರೆಯನ್ನು "ಪರ್ವೀನ್ ಬಾಬಿ: ಎ ಲೈಫ್" ಎಂದು ಬರೆದರು.<ref>[https://www.huffpost.com/archive/in/entry/parveen-babi-a-life-by-karishma-upadhyay-book-review-mental-heatlh_in_5f6b45d9c5b6189caefa8e0e/amp Parveen Babi: A Life by Karishma Upadhyay fetishises actor’s suffering!] ''[[HuffPost]]''. Retrieved 23 September 2021.</ref>
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಭಾರತೀಯ ಚಲನಚಿತ್ರ ನಟಿಯರು]]
[[ವರ್ಗ:೨೦೦೫ ನಿಧನ]]
[[ವರ್ಗ:೧೯೫೪ ಜನನ]]
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
gqkct0h85qe8t1u6l81dvl9tgl7vppb
ಪಾರದೀಪ ಬಂದರು
0
149374
1375849
1353175
2026-06-26T00:25:11Z
InternetArchiveBot
69876
Rescuing 3 sources and tagging 0 as dead.) #IABot (v2.0.9.5
1375849
wikitext
text/x-wiki
{{Infobox Port
| name = ಪಾರದೀಪ ಬಂದರು ಪ್ರಾಧಿಕಾರ
| image = Paradip Port Authority Administrative Building.jpg
| image_caption = ಪಾರದೀಪ ಬಂದರು ಪ್ರಾಧಿಕಾರದ ಆಡಳಿತ ಕಟ್ಟಡ, ಒಡಿಶಾ, ಭಾರತ
| country = ಭಾರತ
| location = ಪಾರದೀಪ, ಜಗತ್ಸಿಂಗ್ಪುರ ಜಿಲ್ಲೆ, ಒಡಿಶಾ, ಭಾರತ
| coordinates = {{coord|20|15|55.44|N|86|40|34.62|E}}
| opened = {{start date|df=yes|1966|03|12}}
| operated = ಪಾರದೀಪ ಬಂದರು ಪ್ರಾಧಿಕಾರ (PPA)
| owner = [[ಭಾರತ ಸರ್ಕಾರ]]
| type = ಕರಾವಳಿ ನೈಸರ್ಗಿಕ
| sizewater =
| sizeland =
| size =
| berths = 20
| wharfs =
| piers =
| employees = 750
| leadershiptitle = [[ಅಧ್ಯಕ್ಷ]]
| leader = ಪಿ.ಎಲ್. ಹರನಾಧ್<ref>{{Cite web|last=|first=|date=2021-10-07|title=P L Haranadh takes over as Chairman of Paradip Port Trust|url=https://orissadiary.com/p-l-haranadh-takes-over-as-chairman-of-paradip-port-trust/|access-date=2022-02-16|website=Odisha Diary|archive-date=2022-02-16|archive-url=https://web.archive.org/web/20220216113437/https://orissadiary.com/p-l-haranadh-takes-over-as-chairman-of-paradip-port-trust/|url-status=dead}}</ref><ref name="Telangana Today 2020">{{cite web | title=Paradip port handles highest volume of cargo in country during first quarter | website=Telangana Today | date=2020-07-04 | url=https://telanganatoday.com/paradip-port-handles-highest-volume-of-cargo-in-country-during-first-quarter | access-date=2020-07-12|quote=Overcoming the hurdles caused by the COVID-19 outbreak, the port has handled 25.73 million tonnes of cargo during the April to June quarter of 2020-21 financial year, Paradip Port Trust (PPT) Chairman Rinkesh Roy said.}}</ref>
| blankdetailstitle1 =
| blankdetails1 =
| blankdetailstitle2 =
| blankdetails2 =
| blankdetailstitle3 =
| blankdetails3 =
| arrivals =
| containervolume =
| cargovalue =
| passengertraffic =
| revenue =
| profit =
| blankstatstitle1 =
| blankstats1 =
| blankstatstitle2 =
| blankstats2 =
| blankstatstitle3 =
| blankstats3 =
| website = {{URL|http://paradipport.gov.in}}
| logo =
| logo_size = 100px
| image_alt =
}}
'''ಪಾರದೀಪ ಬಂದರು''' ನೈಸರ್ಗಿಕ, ಆಳವಾದ ನೀರಿನ ಬಂದರು, ಇದು ಭಾರತದ ಪೂರ್ವ ಕರಾವಳಿಯಲ್ಲಿರುವ [[ಪಾರದೀಪ]], [[ಒರಿಸ್ಸಾ|ಭಾರತದ ಒಡಿಶಾದ]] ಜಗತ್ಸಿಂಗ್ಪುರ ಜಿಲ್ಲೆಯ
ಜಗತ್ಸಿಂಗ್ಪುರ ನಗರದಿಂದ ಕೇವಲ 53 ಕಿಮೀ ಇದೆ.ಬಂದರನ್ನು [[ಭಾರತ ಸರ್ಕಾರ|ಸಂಪೂರ್ಣವಾಗಿ ಭಾರತ ಸರ್ಕಾರದ]] ಒಡೆತನದ ಸ್ವಾಯತ್ತ ನಿಗಮವಾದ '''ಪಾರದೀಪ ಪೋರ್ಟ್ ಅಥಾರಿಟಿ''' (ಪಿಪಿಎ) (ಹಿಂದೆ '''ಪಾರದೀಪ ಪೋರ್ಟ್ ಟ್ರಸ್ಟ್''' ) ನಿರ್ವಹಿಸುತ್ತದೆ.<ref name="pp-about">{{Cite web |title=About Us |url=http://paradipport.gov.in/ |url-status=dead |archive-url=https://web.archive.org/web/20160415063634/http://www.paradipport.gov.in/ |archive-date=15 April 2016 |access-date=2011-09-27 |publisher=Paradip Port Trust}}</ref>
== ಇತಿಹಾಸ ==
ಪರದೀಪ್ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ ಮತ್ತು ಒಡಿಶಾದ ಏಕೈಕ ಪ್ರಮುಖ ಬಂದರು. ಒಡಿಶಾದ ಅಂದಿನ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರು ಪಾರಾದೀಪ್ ಬಂದರಿನ ಸ್ಥಾಪಕರಾಗಿದ್ದಾರೆ. ಇದು ಕೋಲ್ಕತ್ತಾದ ದಕ್ಷಿಣಕ್ಕೆ 210 ನಾಟಿಕಲ್ ಮೈಲುಗಳು ಮತ್ತು ವಿಶಾಖಪಟ್ಟಣದಿಂದ ಉತ್ತರಕ್ಕೆ 260 ನಾಟಿಕಲ್ ಮೈಲುಗಳಷ್ಟು ಪೂರ್ವ ಕರಾವಳಿಯಲ್ಲಿ ಬಂಗಾಳ ಕೊಲ್ಲಿಯ ತೀರದಲ್ಲಿದೆ.<ref>{{Cite web |title=Port History |url=https://paradipport.gov.in/port_history.aspx |access-date=2023-03-22 |archive-date=2018-08-30 |archive-url=https://web.archive.org/web/20180830212048/http://paradipport.gov.in/port_history.aspx |url-status=dead }}</ref>
ಭಾರತದ ಆಗಿನ ಪ್ರಧಾನಿಯಾಗಿದ್ದ [[ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರು ಅವರು]] 1962 ರ ಜನವರಿ 3 ರಂದು ಮಹಾನದಿ ಮತ್ತು ಬಂಗಾಳ ಕೊಲ್ಲಿಯ ಸಂಗಮದ ಬಳಿ ಬಂದರಿನ ಅಡಿಪಾಯವನ್ನು ಹಾಕಿದರು.<ref name="Batra 1970 p.10">{{Cite book|url=https://books.google.com/books?id=h_UvAQAAMAAJ|title=The Major Ports of India|last=Batra|first=S.|publisher=Kandla Commercial Publications|year=1970|page=10|access-date=2020-07-12}}</ref>
ಭಾರತ ಸರ್ಕಾರವು 1 ಜೂನ್ 1965 ರಂದು ಒಡಿಶಾ ಸರ್ಕಾರದಿಂದ ಬಂದರಿನ ನಿರ್ವಹಣೆಯನ್ನು ವಹಿಸಿಕೊಂಡಿತು. 12 ಮಾರ್ಚ್ 1966 ರಂದು ''ಇನ್ವೆಸ್ಟಿಗೇಟರ್ನಿಂದ'' ಮೊದಲ ಬರ್ತಿಂಗ್ ಆಗಿತ್ತು. ಅದೇ ದಿನ ಯುಗೊಸ್ಲಾವಿಯಾದ ಪ್ರಧಾನ ಮಂತ್ರಿ ಪೀಟರ್ ಸ್ಟಾಂಬೋಲಿಕ್ ಅವರು ಬಂದರನ್ನು ಮುಕ್ತಗೊಳಿಸಿದರು.<ref name="Sahai 1986 p. 121">{{Cite book|url=https://books.google.com/books?id=O5b3DQAAQBAJ&pg=PT121|title=The Ports of India|last=Sahai|first=B.|publisher=Publication Division Ministry of Information & Broadcasting Government of India|year=1986|isbn=978-81-230-2343-4|page=121|access-date=2020-07-12}}</ref><ref name="Ray 1999 p.254">{{Cite book|url=https://books.google.com/books?id=pTFPAAAAMAAJ|title=Maritime India: Ports and Shipping|last=Ray|first=A.|publisher=Munshiram Manoharlal|year=1999|isbn=978-81-215-0691-5|page=254|quote=...Petar Stambolic, Prime Minister of Yugoslavia, inaugurates the Port to traffic as INS "INVESTIGATOR" moves into the harbour and berths at the iron-ore...|access-date=2020-07-12}}</ref> ಭಾರತ ಸರ್ಕಾರವು 18 ಏಪ್ರಿಲ್ 1966 ರಂದು ಭಾರತದ ಎಂಟನೇ ಪ್ರಮುಖ ಬಂದರು ಎಂದು ಪ್ಯಾರಾದೀಪ್ ಬಂದರನ್ನು ಘೋಷಿಸಿತು, ಇದು ಸ್ವಾತಂತ್ರ್ಯದ ನಂತರ ಕಾರ್ಯಾರಂಭಗೊಂಡ ಪೂರ್ವ ಕರಾವಳಿಯ ಮೊದಲ ಪ್ರಮುಖ ಬಂದರು.
1963 ರ ಮೇಜರ್ ಪೋರ್ಟ್ ಟ್ರಸ್ಟ್ ಆಕ್ಟ್ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ಪ್ಯಾರಾದಿಪ್ ಬಂದರು, ಶಿಪ್ಪಿಂಗ್ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಅಧ್ಯಕ್ಷರ ನೇತೃತ್ವದ ಭಾರತ ಸರ್ಕಾರವು ಸ್ಥಾಪಿಸಿದ ಟ್ರಸ್ಟಿಗಳ ಮಂಡಳಿಯಿಂದ ನಿರ್ವಹಿಸಲ್ಪಡುತ್ತದೆ. ಟ್ರಸ್ಟ್ ಬೋರ್ಡ್ನ ಟ್ರಸ್ಟಿಗಳನ್ನು ಭಾರತ ಸರ್ಕಾರವು ಬಂದರಿನ ವಿವಿಧ ಬಳಕೆದಾರರಾದ ಸಾಗಣೆದಾರರು, ಹಡಗು ಮಾಲೀಕರು, ಸಂಬಂಧಿಸಿದ ಸರ್ಕಾರಿ ಇಲಾಖೆಗಳು ಮತ್ತು ಬಂದರು ಕಾರ್ಮಿಕರಿಂದ ನಾಮನಿರ್ದೇಶನ ಮಾಡುತ್ತದೆ. ದೈನಂದಿನ ಆಡಳಿತವನ್ನು ಅಧ್ಯಕ್ಷರ ಸಾಮಾನ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿ ಕೈಗೊಳ್ಳಲಾಗುತ್ತದೆ, ಉಪ ಅಧ್ಯಕ್ಷರು ಮತ್ತು ಇತರ ಇಲಾಖಾ ಮುಖ್ಯಸ್ಥರು ಸಹಾಯ ಮಾಡುತ್ತಾರೆ.<ref>{{Cite web |title=Port History |url=https://paradipport.gov.in/port_history.aspx |access-date=2019-01-08 |website=paradipport.gov.in |archive-date=2018-08-30 |archive-url=https://web.archive.org/web/20180830212048/http://paradipport.gov.in/port_history.aspx |url-status=dead }}</ref>
== ಸಂಪರ್ಕ ==
ಬಂದರು ಈಸ್ಟ್-ಕೋಸ್ಟ್ ರೈಲ್ವೇಗಾಗಿ ಬ್ರಾಡ್-ಗೇಜ್ ವಿದ್ಯುದೀಕೃತ ರೈಲ್ವೇ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದೆ ಮತ್ತು ರಾಷ್ಟ್ರೀಯ ಹೆದ್ದಾರಿ 53 ಮತ್ತು ರಾಜ್ಯ ಹೆದ್ದಾರಿ ನಂ.12 ರಿಂದಲೂ ಸೇವೆಯನ್ನು ಹೊಂದಿದೆ. ಬಂದರು ಕಟಕ್ ಮತ್ತು ಭುವನೇಶ್ವರದೊಂದಿಗೆ ಬಸ್ ಮತ್ತು ರೈಲು ಎರಡೂ ಸೇವೆಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.<ref>{{Cite web |title=Location |url=https://paradipport.gov.in/connectivity.aspx |access-date=2023-03-22 |archive-date=2023-03-22 |archive-url=https://web.archive.org/web/20230322130939/https://paradipport.gov.in/connectivity.aspx |url-status=dead }}</ref>
[[ಚಿತ್ರ:Paradeep_Railway_station.jpg|thumb| ಪರದೀಪ್ ರೈಲು ನಿಲ್ದಾಣ]]
ಈ ಬಂದರು ಕೋಲ್ಕತ್ತಾದ ಉಕ್ಕಿನ ನಗರವಾದ ರೂರ್ಕೆಲಾ ಮತ್ತು ಪವಿತ್ರ ಪಟ್ಟಣವಾದ ಪುರಿ ಮತ್ತು ಕೋನಾರ್ಕ್ಗೆ ಬಸ್ ಮಾರ್ಗಗಳ ಮೂಲಕ ಸಂಪರ್ಕ ಹೊಂದಿದೆ.
ಬಂದರು ಲೀಸ್ ಲೈನ್ ಮತ್ತು ಬ್ರಾಡ್ಬ್ಯಾಂಡ್ ಮೂಲಕ ಇತರ ಬಂದರುಗಳು, ಸಚಿವಾಲಯ ಸಂಪರ್ಕ ಹೊಂದಿದೆ. ರಿಲಯನ್ಸ್, ಬಿಎಸ್ಎನ್ಎಲ್, ಏರ್ಟೆಲ್, ಟಾಟಾ ಇಂಡಿಕಾಮ್ ಇತ್ಯಾದಿಗಳು ಪರದೀಪ್ ಬಂದರಿನಲ್ಲಿ ಸೆಲ್ಯುಲಾರ್ ಸೇವೆಗಳನ್ನು ಹೊಂದಿವೆ. ಪರದೀಪ್ ಬಂದರು ಪಟ್ಟಣದಲ್ಲಿ 4ಜಿ ನೆಟ್ವರ್ಕ್ ಸೌಲಭ್ಯ ಲಭ್ಯವಿದೆ.
[[ಚಿತ್ರ:PARADEEP_LIGHT_HOUSE._-_panoramio.jpg|thumb| ಪರದೀಪ್ ಲೈಟ್ ಹೌಸ್]]
[[ಚಿತ್ರ:Paradip_Port.jpg|thumb| ಪರದೀಪ್ ಬಂದರು]]
== ಉಲ್ಲೇಖಗಳು ==
{{Reflist}}
{{Interwikineeded}}
[[ವರ್ಗ:ಬಂದರುಗಳು]]
n1jsfie80lww6q6o0hr68qzq4wykbvo
ದೋಹರ್ (ಬ್ಯಾಂಡ್)
0
173205
1375842
1350961
2026-06-25T16:20:44Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1375842
wikitext
text/x-wiki
{{Infobox musical artist
| name = ದೋಹರ್
| native_name = দোহার
| origin = ಕೋಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ
| genre = ಬಂಗಾಳಿ ಜಾನಪದ ಸಂಗೀತ
| years_active = ಆಗಸ್ಟ್ ೦೭, ೧೯೯೯-ಪ್ರಸ್ತುತ
| current_members =ರಾಜೀಬ್ ದಾಸ್ (ತಂಡದ ನಾಯಕ), ರಿತ್ತಿಕ್ ಗುಚೈತ್, ಮೃಗ್ನಾಭಿ ಚಟ್ಟೋಪಾಧ್ಯಾಯ, ಸತ್ಯಜಿತ್ ಸರ್ಕಾರ್, ನಿರಂಜನ್ ಹಲ್ದಾರ್, ಅಮಿತ್ ಸುರ್, ಸುದೀಪ್ತೋ ಚಕ್ರವರ್ತಿ
| label = ಕಾನ್ಕಾರ್ಡ್ ಮ್ಯೂಸಿಕ್, ಸೋನಿ ಮ್ಯೂಸಿಕ್, ಸರೆಗಮಾ ಹೆಚ್.ಎಂ.ವಿ., ಓರಿಯನ್ ಎಂಟರ್ಟೈನ್ಮೆಂಟ್, ಪಿಕಾಸೊ ಎಂಟರ್ಟೈನ್ಮೆಂಟ್
| image = KALIKA.jpg
| website = http://www.doharfolk.com/
| caption = ದೋಹರ್ನ ಸ್ಥಾಪಕ ಸದಸ್ಯರಾದ ಕಾಳಿಕಾ ಪ್ರಸಾದ್ ಭಟ್ಟಾಚಾರ್ಯ ಅವರ ಜಾನಪದ ಸಂಗೀತ ಕಚೇರಿಯಲ್ಲಿ ನಡೆದ ಕಾರ್ಯಕ್ರಮ.
| past_members =ಕಾಳಿಕಾ ಪ್ರಸಾದ್ ಭಟ್ಟಾಚಾರ್ಜಿ
}}
[[File:TEAM DOHAR 20 copy.jpg without logo.jpg|alt=Team DOHAR - a group of folk musicians|thumb|'''ದೋಹರ್''' ತಂಡ - ಜಾನಪದ ಸಂಗೀತಗಾರರ ಗುಂಪು.]]
'''ದೋಹರ್''' ಇದು ಭಾರತೀಯ [[ಜಾನಪದ ಸಂಗೀತ]] [[:en: musical ensemble|ಸಂಗೀತ ಮೇಳವಾಗಿದ್ದು]], [[ಬಂಗಾಳ]] ಮತ್ತು [[:en: North East Indi|ಈಶಾನ್ಯ ಭಾರತದ]] ಶೈಲಿಗಳಲ್ಲಿ ಪರಿಣತಿ ಹೊಂದಿದೆ.<ref>{{Cite news|url=http://www.bbc.com/bengali/39189367|title=দোহার ব্যান্ডের কালিকাপ্রসাদ মারা গেছেন|date=2017-03-07|work=BBC বাংলা|access-date=2017-10-02|language=en-GB}}</ref> ಇದು ಭಾರತದ ರಾಜ್ಯಗಳಾದ [[ಪಶ್ಚಿಮ ಬಂಗಾಳ]], [[ಅಸ್ಸಾಂ]] ಮತ್ತು [[ಬಾಂಗ್ಲಾದೇಶ|ಬಾಂಗ್ಲಾದೇಶದಲ್ಲಿ]] ಬಹಳ ಜನಪ್ರಿಯವಾಗಿದೆ.<ref>{{Cite web|url=http://esamakal.net/?archiev=yes&arch_date=23-10-2013|title=The Daily eSamakal|website=esamakal.net|access-date=2017-10-02|archive-date=2017-10-02|archive-url=https://web.archive.org/web/20171002170016/http://esamakal.net/?archiev=yes&arch_date=23-10-2013|url-status=dead}}</ref><ref>{{Cite news|url=http://www.samakal.com/music/article/1703275490/%E0%A6%AC%E0%A6%BE%E0%A6%82%E0%A6%B2%E0%A6%BE%E0%A6%A6%E0%A7%87%E0%A6%B6%E0%A7%87%E0%A6%B0-%E0%A6%97%E0%A6%BE%E0%A6%A8-%E0%A6%97%E0%A7%87%E0%A7%9F%E0%A7%87%E0%A6%87-%E0%A6%AF%E0%A6%BE%E0%A6%A4%E0%A7%8D%E0%A6%B0%E0%A6%BE-%E0%A6%A6%E0%A7%8B%E0%A6%B9%E0%A6%BE%E0%A6%B0-%E0%A6%AC%E0%A7%8D%E0%A6%AF%E0%A6%BE%E0%A6%A8%E0%A7%8D%E0%A6%A1%E0%A7%87%E0%A6%B0|title=বাংলাদেশের গান গেয়েই যাত্রা 'দোহার' ব্যান্ডের|last=Team|first=Samakal Online|work=সমকাল|access-date=2017-10-02|language=bn}}</ref>
ದೋಹರ್ ತಂಡವು [[ಬಂಗಾಳಿ ಭಾಷೆ|ಬಂಗಾಳಿ]] ಮತ್ತು [[ಅಸ್ಸಾಮಿ ಭಾಷೆ|ಅಸ್ಸಾಮಿ]] ಜಾನಪದ ಸಂಗೀತವನ್ನು ಜನಪ್ರಿಯಗೊಳಿಸಿದ್ದಾರೆ.<ref>{{Cite news|url=http://timesofindia.indiatimes.com/entertainment/kannada/music/Sway-to-the-beats-of-folk-tunes/articleshow/52743776.cms|title=Sway to the beats of folk tunes|newspaper=The Times of India |date=26 February 2017 }}</ref> ಅವರು [[ಭಾರತ]] ಮತ್ತು ವಿದೇಶಗಳಲ್ಲಿನ ವಿವಿಧ ಬಂಗಾಳಿ ಸಮುದಾಯಗಳಿಗಾಗಿ ಹಾಡಿದ್ದಾರೆ.<ref>{{Cite web|url=http://www.emirates247.com/entertainment/bangla-folk-band-dohar-to-perform-in-dubai-on-may-29-2015-05-26-1.591879|title=Bangla folk band Dohar to perform in Dubai on May 29|date=26 May 2015|access-date=2025-03-15|archive-date=2024-11-26|archive-url=https://web.archive.org/web/20241126195751/https://www.emirates247.com/entertainment/bangla-folk-band-dohar-to-perform-in-dubai-on-may-29-2015-05-26-1.591879|url-status=dead}}</ref>
==ಇತಿಹಾಸ==
ಆಗಸ್ಟ್ ೭, ೧೯೯೯ ರಂದು ರಾಜೀಬ್ ದಾಸ್ ಮತ್ತು [[:en: Kalika Prasad Bhattacharya|ಕಾಳಿಕಾ ಪ್ರಸಾದ್ ಭಟ್ಟಾಚಾರ್ಯ]] ಅವರು ಈ ಗುಂಪನ್ನು ಸಹ-ಸ್ಥಾಪಿಸಿದರು. ಇಬ್ಬರೂ ಸದಸ್ಯರು ಅಸ್ಸಾಂನ ಬರಾಕ್ ಕಣಿವೆಯಿಂದ [[ಕೋಲ್ಕತ್ತಾ|ಕೋಲ್ಕತ್ತಾಗೆ]] ಬಂದಿದ್ದರು. [[:en:Jadavpur University|ಜಾದವ್ಪುರ ವಿಶ್ವವಿದ್ಯಾಲಯದ]] ಪ್ರೊಫೆಸರ್ ಅವೀಕ್ ಮಜುಂದಾರ್ ಅವರು ಬ್ಯಾಂಡ್ಗೆ 'ದೋಹರ್' ಎಂದು ಹೆಸರಿಟ್ಟರು.<ref>{{Cite news|url=http://www.anandabazar.com/calcutta/kalikaprasad-passes-away-dgtl-1.575593|title=গাড়ি দুর্ঘটনায় প্রয়াত দোহারের কালিকাপ্রসাদ|work=Anandabazar Patrika|access-date=2017-10-02|language=bn}}</ref> ದೋಹರ್ ಎಂದರೆ 'ಕೋರಸ್' ಎಂದರ್ಥ. [[:en:Kalika Prasad Bhattacharya|ಕಾಳಿಕಾ ಪ್ರಸಾದ್ ಭಟ್ಟಾಚಾರ್ಯ]] ಮತ್ತು ರಾಜೀಬ್ ದಾಸ್ ಇಬ್ಬರೂ ದೋಹರ್ನ ಪ್ರಮುಖ ಗಾಯಕರು ಮತ್ತು ನಾಯಕರಾಗಿದ್ದರು.<ref>{{Cite news|url=http://www.anandabazar.com/calcutta/kalikaprasad-the-artist-of-the-soil-who-wanted-to-popularize-folk-music-on-urban-dias-dgtl-1.575685?ref=hm-ft-stry|title=মাটিতে পা রেখেই শহরের মঞ্চে লোকগান শোনাতে চেয়েছেন কালিকাপ্রসাদ|work=Anandabazar Patrika|access-date=2017-10-02|language=bn}}</ref> ಭಟ್ಟಾಚಾರ್ಯ ಅವರು ಮಾರ್ಚ್ ೭, ೨೦೧೭ ರಂದು [[:en:Hooghly district|ಹೂಗ್ಲಿ ಜಿಲ್ಲೆಯ]] ಗುರಾಪ್ ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ ನಿಧನರಾದರು. ಇತರ ೫ ಸದಸ್ಯರು ಸಹ ಗಾಯಗೊಂಡರು. ಬ್ಯಾಂಡ್ನ ಉಳಿದ ಸದಸ್ಯರು ರಾಜೀಬ್ ದಾಸ್ ಅವರ ನಾಯಕತ್ವದಲ್ಲಿ ಹಾಡುವುದನ್ನು ಮುಂದುವರಿಸಿದ್ದಾರೆ.<ref>{{Cite news|url=http://www.anandabazar.com/district/purolia-birvhum-bankura/dohar-started-performing-in-district-but-kalika-prasad-went-missing-on-stage-1.602768|title=জেলায় 'দোহার', নেই শুধু কালিকা|work=Anandabazar Patrika|access-date=2017-10-02|language=bn}}</ref>
==ಸದಸ್ಯರು==
ಮೂಲಗಳು:<ref>{{Cite web|url=http://doharfolk.com/|title=Dohar – A Group of Folk Musicians|website=doharfolk.com|language=en-US|access-date=2017-03-07}}</ref>
* [[:en:Kalikaprasad Bhattacharjee|ಕಾಳಿಕಾಪ್ರಸಾದ್ ಭಟ್ಟಾಚಾರ್ಜಿ]]
* ರಾಜೀಬ್ ದಾಸ್ <ref>{{cite web | url=https://www.google.com/maps/place/RAJIB+DAS+DOHAR/@22.6248159,88.4186605,17z/data=!3m1!4b1!4m6!3m5!1s0x39f89fa5229fa0b5:0x1e1984174f072d4a!8m2!3d22.6248159!4d88.4186605!16s%2Fg%2F11gjnwjtvw?entry=ttu | title=RAJIB DAS DOHAR · ANNEX TO LOKNATH ASHRAM, 2/15 KHUDIRAM BOSE SARANI, MALL ROAD CHALACHAL APARTMENT, North Dumdum, West Bengal 700080, India }}</ref>
* ರಿತಿಕ್ ಗುಚೈತ್
* ಮೃಗಾಭಿ ಚಟ್ಟೋಪಾಧ್ಯಾಯ
* ಸತ್ಯಜಿತ್ ಸರ್ಕಾರ್
* ನಿರಂಜನ್ ಹಲ್ದಾರ್
* ಅಮಿತ್ ಸುರ್
* ಸುದೀಪ್ತೋ ಚಕ್ರವರ್ತಿ
* ರಾಹುಲ್ ಕರ್ಮಾಕರ್
==ಆಲ್ಬಂಗಳು ಮತ್ತು ಸಂಗೀತ ಸಿ.ಡಿ.ಗಳು==
ಮೂಲ:<ref>{{Cite web|url=http://doharfolk.com/achievements/|title=Achievements – Dohar|website=doharfolk.com|language=en-US|access-date=2017-10-02}}</ref>
* ಕಾಂಕಾರ್ಡ್ ರೆಕಾರ್ಡ್ಸ್ ಇಂಡಿಯಾದಿಂದ "ಬಂದೂರ್ ದೇಶೇ" - ೨೦೦೧
* [[:en:Sony Music|ಸೋನಿ ಮ್ಯೂಸಿಕ್ನಿಂದ]] "ಬಂಗ್ಲಾರ್ ಗಾನ್ ಶಿಕೋರೆರ್ ತಾನ್" - ೨೦೦೨
* [[:en:SAREGAMA|ಸರಿಗಮ]] [[:en: HMV|ಎಚ್ಎಂವಿಯಿಂದ]] "ರುಪ್ಸಾಗರೆ" - ೨೦೦೪
* ಸರಿಗಮ ಎಚ್ಎಂವಿಯಿಂದ "ಬಾಂಗ್ಲಾ" - ೨೦೦೬
* "೨೦೦೭" ಸರಿಗಮ ಎಚ್ಎಂವಿ - ೨೦೦೭
* [[:en: ORION ENTERTAINMENT|ಒರಿಯನ್ ಎಂಟರ್ಟೈನ್ಮೆಂಟ್ನಿಂದ]] "ಮತಿ'ಸ್ವರ್" - ೨೦೦೯
* "ಮತಿರ್ ಕೆಲ್ಲಾ" - ವಿಡಿಯೋ ಆಲ್ಬಂ, ಸಾರೆಗಮ ಎಚ್ಎಂವಿ -೨೦೧೧ ರ ಬಂಗಾಳದ ಜಾನಪದ ಸಂಗೀತದ ಸಂಗೀತ ಸಾಕ್ಷ್ಯಚಿತ್ರ.
* ಒರಿಯನ್ ಎಂಟರ್ಟೈನ್ಮೆಂಟ್ನಿಂದ "ಬೌಲ್ ಫೋಕಿರೆರ್ ರವೀಂದ್ರನಾಥ್" - ೨೦೧೨
* ಒರಿಯನ್ ಎಂಟರ್ಟೈನ್ಮೆಂಟ್ನಿಂದ "ಸಹಸ್ರ ದೋತಾರಾ" - ೨೦೧೩
* "ಯುನಿಶರ್ ಡಿಎಕೆ" - ಪಿಕಾಸೊ ಎಂಟರ್ಟೈನ್ಮೆಂಟ್-೨೦೧೫<ref>{{Cite news|url=http://www.anandabazar.com/supplementary/anandaplus/a-new-album-by-kalikaprasad-of-dohar-bangla-band-for-bengali-spoken-people-1.144791|title=শুধু ভাষার জন্য|work=Anandabazar Patrika|access-date=2017-10-02|language=bn}}</ref>
* "ರಾಜೀಬ್ ದಾಸ್ ಕಾಳಿಕಾಪ್ರಸಾದ್ ಅವರನ್ನು ನೆನಪಿಸಿಕೊಳ್ಳುತ್ತಾರೆ" - ರಜೀಬ್ ದಾಸ್ ೨೦೧೮<ref>{{Cite news|url=http://www.anandabazar.com/calcutta/rajib-das-remembers-kalikaprasad-on-day-before-of-his-first-death-anniversary-dgtlx-1.766090?ref=hm-ft-stry-6|title=কালিকাদা, তোমার ওপর খুব রাগ হয়|work=Anandabazar Patrika|access-date=2018-03-05|language=bn}}</ref>
==ಉಲ್ಲೇಖಗಳು==
{{Interwikineeded}}
[[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೫ ಸ್ಪರ್ಧಾ ಲೇಖನ]]
[[ವರ್ಗ:ಸಂಗೀತ]]
h84cgkq9ac1rbtyw2g07exfkmsump1w
ಫ್ಲೋರಾ ಆನಿ ಸ್ಟೀಲ್
0
173241
1375856
1354690
2026-06-26T06:57:01Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1375856
wikitext
text/x-wiki
{{under construction}}
{{Infobox writer <!-- for more information see [[:Template:Infobox writer/doc]] -->
|name = Flora Annie Steel
|image = Flora Annie Steel.jpg
|imagesize = 200px
|caption = Flora Annie Steel, c. 1903
|pseudonym =
|birth_date = {{birth date|1847|4|2|df=y}}
|birth_place = [[Sudbury, London|Sudbury]], [[Middlesex]], England<ref name="orlando">{{Cite web |url=http://orlando.cambridge.org/public/svPeople?person_id=steefl |title=Flora Annie Steel entry: Overview screen |publisher=Cambridge University Press Online |work=Orlando: Women's Writing in the British Isles from the Beginnings to the Present |date=2006 |access-date=28 November 2014 |author1=Brown, Susan |author2=Patricia Clements |author3=Isobel Grundy |name-list-style=amp |archive-date=24 September 2019 |archive-url=https://web.archive.org/web/20190924092920/http://orlando.cambridge.org/public/svPeople?person_id=steefl |url-status=dead }}</ref>
|death_date = {{death date and age|1929|4|12|1847|4|2|df=y}}
|death_place = [[Minchinhampton]], [[Gloucestershire]], England<ref name=orlando/>
<!-- dates and places, http://orlando.cambridge.org/public/svPeople?person_id=steefl -->
|occupation = Writer
|period = 19th century
|genre = [[History]], [[Fiction]], [[Children's Literature]]
|subject =
|movement =
|influences =
|influenced =
|signature =
|website =
}}
ಫ್ಲೋರಾ ಅನ್ನಿ ಸ್ಟೀಲ್ (2 ಏಪ್ರಿಲ್ 1847 - 12 ಏಪ್ರಿಲ್ 1929) ಬ್ರಿಟಿಷ್ ಭಾರತದಲ್ಲಿ 22 ವರ್ಷಗಳ ಕಾಲ ವಾಸಿಸುತ್ತಿದ್ದ ಬರಹಗಾರ್ತಿ. ಅವರು ವಿಶೇಷವಾಗಿ ಭಾರತೀಯ ಉಪಖಂಡದಲ್ಲಿ ಸ್ಥಾಪಿಸಲಾದ ಅಥವಾ ಅದಕ್ಕೆ ಸಂಬಂಧಿಸಿದ ಪುಸ್ತಕಗಳಿಗಾಗಿ ಹೆಸರುವಾಸಿಯಾಗಿದ್ದರು. ಅವರ ಕಾದಂಬರಿ ಆನ್ ದಿ ಫೇಸ್ ಆಫ್ ದಿ ವಾಟರ್ಸ್ (1896) ಭಾರತೀಯ ದಂಗೆಯ ಘಟನೆಗಳನ್ನು ವಿವರಿಸುತ್ತದೆ.
==ವೈಯಕ್ತಿಕ ಜೀವನ==
ಅವರು ಜಾರ್ಜ್ ವೆಬ್ಸ್ಟರ್ ಅವರ ಆರನೇ ಮಗುವಾಗಿ ಮಿಡ್ಲ್ಸೆಕ್ಸ್ನ ಸಡ್ಬರಿ ಪ್ರಿಯರಿ, ಸಡ್ಬರಿ ಪ್ರಿಯರಿಯಲ್ಲಿ ಫ್ಲೋರಾ ಅನ್ನಿ ವೆಬ್ಸ್ಟರ್ ಜನಿಸಿದರು. [೧] ಅವರ ತಾಯಿ, ಇಸಾಬೆಲ್ಲಾ ಮೆಕಲ್ಲಮ್, ಉತ್ತರಾಧಿಕಾರಿಯಾಗಿದ್ದರು. 1867 ರಲ್ಲಿ ಅವರು ಭಾರತೀಯ ನಾಗರಿಕ ಸೇವೆಯ ಸದಸ್ಯ ಹೆನ್ರಿ ವಿಲಿಯಂ ಸ್ಟೀಲ್ ಅವರನ್ನು ವಿವಾಹವಾದರು, ಮತ್ತು ಅವರು 1889 ರವರೆಗೆ ಭಾರತದಲ್ಲಿ ವಾಸಿಸುತ್ತಿದ್ದರು, ಮುಖ್ಯವಾಗಿ ಪಂಜಾಬ್ನಲ್ಲಿ, ಅವರ ಹೆಚ್ಚಿನ ಪುಸ್ತಕಗಳು ಸಂಪರ್ಕ ಹೊಂದಿವೆ. ಅವರು ಸ್ಥಳೀಯ ಭಾರತೀಯ ಜೀವನದ ಬಗ್ಗೆ ಆಳವಾದ ಆಸಕ್ತಿಯನ್ನು ಬೆಳೆಸಿಕೊಂಡರು ಮತ್ತು ಭಾರತ ಸರ್ಕಾರದ ಮೇಲೆ ಶೈಕ್ಷಣಿಕ ಸುಧಾರಣೆಗಳನ್ನು ಒತ್ತಾಯಿಸಲು ಪ್ರಾರಂಭಿಸಿದರು. ಶ್ರೀಮತಿ ಸ್ಟೀಲ್ ಸ್ವತಃ ಪಂಜಾಬಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಪರಿವೀಕ್ಷಕರಾದರು ಮತ್ತು ರುಡ್ಯಾರ್ಡ್ ಕಿಪ್ಲಿಂಗ್ ಅವರ ತಂದೆ ಜಾನ್ ಲಾಕ್ವುಡ್ ಕಿಪ್ಲಿಂಗ್ ಅವರೊಂದಿಗೆ ಕೆಲಸ ಮಾಡಿದರು, ಭಾರತೀಯ ಕಲೆ ಮತ್ತು ಕರಕುಶಲತೆಯನ್ನು ಬೆಳೆಸಿದರು. ಅವರ ಪತಿಯ ಆರೋಗ್ಯವು ದುರ್ಬಲವಾದಾಗ, ಫ್ಲೋರಾ ಅನ್ನಿ ಸ್ಟೀಲ್ ಅವರ ಕೆಲವು ಜವಾಬ್ದಾರಿಗಳನ್ನು ವಹಿಸಿಕೊಂಡರು.
ಅವರು ಏಪ್ರಿಲ್ 12, 1929 ರಂದು ಗ್ಲೌಸೆಸ್ಟರ್ಶೈರ್ನ ಮಿಂಚನ್ಹ್ಯಾಂಪ್ಟನ್ನಲ್ಲಿರುವ ತಮ್ಮ ಮಗಳ ಮನೆಯಲ್ಲಿ ನಿಧನರಾದರು. ಅವರ ಜೀವನಚರಿತ್ರೆಕಾರರಲ್ಲಿ ನೇರಳೆ ಪೊವೆಲ್[೭][೨] ಮತ್ತು ದಯಾ ಪಟವರ್ಧನ್ ಸೇರಿದ್ದಾರೆ. [8][9]
==ಬರವಣಿಗೆ==
ಫ್ಲೋರಾ ಭಾರತೀಯ ಸಮಾಜದ ಎಲ್ಲಾ ವರ್ಗಗಳೊಂದಿಗೆ ಸಂಬಂಧ ಹೊಂದಲು ಆಸಕ್ತಿ ಹೊಂದಿದ್ದರು. ಅವರ ಮಗಳ ಜನನವು ಸ್ಥಳೀಯ ಮಹಿಳೆಯರೊಂದಿಗೆ ಸಂವಹನ ನಡೆಸಲು ಮತ್ತು ಅವರ ಭಾಷೆಯನ್ನು ಕಲಿಯಲು ಅವಕಾಶವನ್ನು ನೀಡಿತು. ಅವರು ಸ್ಥಳೀಯ ಕರಕುಶಲ ವಸ್ತುಗಳ ಉತ್ಪಾದನೆಯನ್ನು ಪ್ರೋತ್ಸಾಹಿಸಿದರು ಮತ್ತು ಜಾನಪದ ಕಥೆಗಳನ್ನು ಸಂಗ್ರಹಿಸಿದರು, ಅವುಗಳ ಸಂಗ್ರಹವನ್ನು ಅವರು 1894 ರಲ್ಲಿ ಪ್ರಕಟಿಸಿದರು.
ಶಾಲೆಗಳಲ್ಲಿ ಮತ್ತು ಮಹಿಳೆಯರ ಶಿಕ್ಷಣದಲ್ಲಿ ಅವರ ಆಸಕ್ತಿಯು ಸ್ಥಳೀಯ ಜೀವನ ಮತ್ತು ಪಾತ್ರದ ಬಗ್ಗೆ ಒಳನೋಟವನ್ನು ನೀಡಿತು. [೪] ಭಾರತವನ್ನು ತೊರೆಯುವ ಒಂದು ವರ್ಷದ ಮೊದಲು, ಅವರು ದಿ ಕಂಪ್ಲೀಟ್ ಇಂಡಿಯನ್ ಹೌಸ್ ಕೀಪರ್ ಅಂಡ್ ಕುಕ್ ಅನ್ನು ಸಹ-ಲೇಖಕರಾಗಿ ಪ್ರಕಟಿಸಿದರು, ಇದು ಭಾರತದಲ್ಲಿ ಕುಟುಂಬ ನಿರ್ವಹಣೆಯ ಎಲ್ಲಾ ಅಂಶಗಳ ಬಗ್ಗೆ ಯುರೋಪಿಯನ್ ಮಹಿಳೆಯರಿಗೆ ವಿವರವಾದ ನಿರ್ದೇಶನಗಳನ್ನು ನೀಡಿತು.
1889 ರಲ್ಲಿ ಕುಟುಂಬವು ಬ್ರಿಟನ್ಗೆ ಮರಳಿತು, ಮತ್ತು ಅವರು ಅಲ್ಲಿ ತಮ್ಮ ಬರವಣಿಗೆಯನ್ನು ಮುಂದುವರೆಸಿದರು. 1911 ರ ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಪ್ರಕಾರ, ಅವರ ಕೆಲವು ಅತ್ಯುತ್ತಮ ಕೃತಿಗಳು ಅವರ ಸಣ್ಣ ಕಥೆಗಳ ಎರಡು ಸಂಗ್ರಹಗಳಲ್ಲಿವೆ, ಫ್ರಮ್ ದಿ ಫೈವ್ ರಿವರ್ಸ್ ಮತ್ತು ಟೇಲ್ಸ್ ಆಫ್ ದಿ ಪಂಜಾಬ್. [4]
ಅವರು ಭಾರತದ ಜನಪ್ರಿಯ ಇತಿಹಾಸವನ್ನು ಸಹ ಬರೆದಿದ್ದಾರೆ. [೪] ಜಾನ್ ಎಫ್ ರಿಡ್ಡಿಕ್ ಸ್ಟೀಲ್ ನ ದಿ ಹೋಸ್ಟ್ಸ್ ಆಫ್ ದಿ ಲಾರ್ಡ್ ಅನ್ನು ಭಾರತೀಯ ಮಿಷನರಿಗಳ ಬಗ್ಗೆ ಆಂಗ್ಲೋ-ಇಂಡಿಯನ್ ಬರಹಗಾರರು ನಿರ್ಮಿಸಿದ "ಮೂರು ಪ್ರಮುಖ ಕೃತಿಗಳಲ್ಲಿ" ಒಂದಾಗಿದೆ ಎಂದು ವಿವರಿಸುತ್ತಾರೆ, ಜೊತೆಗೆ ವಿಲಿಯಂ ವಿಲ್ಸನ್ ಹಂಟರ್ ಅವರ ದಿ ಓಲ್ಡ್ ಮಿಷನರಿ (1895) ಮತ್ತು ಆಲಿಸ್ ಪೆರಿನ್ ಅವರ ವಿಗ್ರಹಾರಾಧನೆ (1909). [೧೦] ಭಾರತದಲ್ಲಿನ ಅವರ ಇತರ ಸಾಹಿತ್ಯ ಸಹವರ್ತಿಗಳಲ್ಲಿ ಬಿಥಿಯಾ ಮೇರಿ ಕ್ರೋಕರ್ ಕೂಡ ಒಬ್ಬರು. [11]
==ಗ್ರಂಥಸೂಚಿ==
[[File:STEEL(1894) Tales of the Punjab (15628450798).jpg|thumbnail|''Tales of the Punjab'' (1894), illustrated by John Lockwood Kipling]]
ವೈಡ್ ಅವೇಕ್ ಸ್ಟೋರಿಸ್ (1884)
ಫ್ರಮ್ ದಿ ಫೈವ್ ರಿವರ್ಸ್ (1893)
ಮಿಸ್ ಸ್ಟುವರ್ಟ್ಸ್ ಲೆಗಸಿ (1893)
ಟೇಲ್ಸ್ ಆಫ್ ದಿ ಪಂಜಾಬ್ (1894)
ಕ್ಷಮೆಯ ಹೂವು (1894)
ದಿ ಪಾಟರ್ಸ್ ಥಂಬ್ (1894)
ರೆಡ್ ರೋವನ್ಸ್ (1895)
ಆನ್ ದಿ ಫೇಸ್ ಆಫ್ ದಿ ವಾಟರ್ಸ್ (1896)
ಇನ್ ದಿ ಪರ್ಮನೆಂಟ್ ವೇ, ಮತ್ತು ಇತರ ಕಥೆಗಳು (1897)
ಇನ್ ದಿ ಟೈಡ್ ವೇ (1897)
ದಿ ಕಂಪ್ಲೀಟ್ ಇಂಡಿಯನ್ ಹೌಸ್ ಕೀಪರ್ ಅಂಡ್ ಕುಕ್ (1888)
ದಿ ಹೋಸ್ಟ್ಸ್ ಆಫ್ ದಿ ಲಾರ್ಡ್ (1900)[೧೨]
ವಾಯ್ಸಸ್ ಇನ್ ದಿ ನೈಟ್ (1900)
ಇನ್ ದಿ ಗಾರ್ಡಿಯನ್ಶಿಪ್ ಆಫ್ ಗಾಡ್ (1903)
ಎ ಬುಕ್ ಆಫ್ ಮಾರ್ಟಲ್ಸ್ (1905)
ಭಾರತ (1905)
ಎ ಸಾರ್ವಭೌಮ ಪರಿಹಾರ (1906)[೧೩]
ಎ ಪ್ರಿನ್ಸ್ ಆಫ್ ಡ್ರೀಮರ್ಸ್ (1908)
ಯುಗಯುಗಗಳಿಂದಲೂ ಭಾರತ; ಹಿಂದೂಸ್ತಾನದ ಜನಪ್ರಿಯ ಮತ್ತು ಸುಂದರವಾದ ಇತಿಹಾಸ (1908)
ಕಿಂಗ್-ಎರ್ರಂಟ್ (1912)
ದಿ ಅಡ್ವೆಂಚರ್ಸ್ ಆಫ್ ಅಕ್ಬರ್ (1913)
ದಿ ಮರ್ಸಿ ಆಫ್ ದಿ ಲಾರ್ಡ್ (1914)
ಮರ್ಮಡುಕೆ (1917)
ಮಿಸ್ಟ್ರೆಸ್ ಆಫ್ ಮೆನ್ (1918)
ಇಂಗ್ಲಿಷ್ ಫೇರಿ ಟೇಲ್ಸ್ (1918)
ಎ ಟೇಲ್ ಆಫ್ ಇಂಡಿಯನ್ ಹೀರೋಸ್ (1923)
"ಲಾಲ್"
ಒಂದು ಅಡುಗೆ ಪುಸ್ತಕ
ಲೇಟ್ ಟೇಲ್ಸ್
ಹವ್ವಳ ಶಾಪ
ದೇವತೆಗಳ ಕೊಡುಗೆ
ಮಿತಿಯ ನಿಯಮ
ಮಹಿಳಾ ಪ್ರಶ್ನೆ
ದಿ ಗಾರ್ಡನ್ ಆಫ್ ಫಿಡೆಲಿಟಿ: ಬೀಯಿಂಗ್ ದಿ ಆಟೋಬಯೋಗ್ರಫಿ ಆಫ್ ಫ್ಲೋರಾ ಅನ್ನಿ ಸ್ಟೀಲ್ 1847–1929[೧೪]
==ಉಲ್ಲೇಖಗಳು==
{{ಉಲ್ಲೇಖಗಳು}}
==ಬಾಹ್ಯ ಕೊಂಡಿಗಳು==
*{{Gutenberg author |id=1973|name=Flora Annie Webster Steel}}
*{{Internet Archive author |sname=Flora Annie Steel}}
*{{Librivox author |id=3527}}
*[https://www.greatwartheatre.org.uk/db/script/1875/ Play 'Grand-dad' by Steel on Great War Theatre] {{Webarchive|url=https://web.archive.org/web/20230406103040/https://www.greatwartheatre.org.uk/db/script/1875/ |date=2023-04-06 }}
{{Interwikineeded}}
mrd6mbl3o86x0zzzayh0xd1ueivlclp
ಸದಸ್ಯ:ಗಣೇಶ್ ಎಂ/ನನ್ನ ಪ್ರಯೋಗಪುಟ
2
179308
1375854
1375197
2026-06-26T06:36:46Z
ಗಣೇಶ್ ಎಂ
88310
1375854
wikitext
text/x-wiki
ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ
ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು.
ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು.
ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು.
ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು
ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ
ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ
ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ
ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ
ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ
ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ
ಕನಪಾಯಿಯ ಮಗಳು - ಸೀತಮ್ಮ,
ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ.
ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು.
ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು.
1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು.
ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು.
ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು.
ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು.
ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ.
2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು.
ಖುಷಿಯಿಂದ ಓಡಿದೆನು
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಖುಷಿಯಿಂದ ಓಡಿದೆನು ಅಂದು ನಾನು
ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು,
ನೋಡುವಿರಿ ಸಾಕೆನಗೆ ಅದುವೆ ಬಹುಮಾನ
ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು,
ನೋಡುವಿರಿ ಸಾಕೆನಗೆ ಅದುವೆ ಬಹುಮಾನ
ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ?
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ
ಓಡುವುದು ಅನಿವಾರ್ಯ ಕರ್ಮ ನನಗೆ
ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ
ಓಡುವುದು ಅನಿವಾರ್ಯ ಕರ್ಮ ನನಗೆ
ನೋಡುವವರಿಹರೆಂದು ನಾ ಬಲ್ಲೆ ಅದರಿಂದ
ಓಡುವುದು ಮೈ ದುಂಬಿ ಎಂದಿನಂತೆ
ಯಾರು ಏನು ಹೇಳಿದರೂ
ಯಾರು ಏನು ಹೇಳಿದರೂ
ನನಗಿಲ್ಲ ಚಿಂತೆ
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಗಣೇಶ್.ಎಂ
(ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ)
ನಿವ್ರತ್ತಿ
ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು
ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು
ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ
ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ
ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ
ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ
ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು
ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು
ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ
ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ
ರೋಟರಿ ನಾ ಕಂಡಂತೆ
ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ,
ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥
ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು,
ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥
ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ,
ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥
ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ,
ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥
ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು
ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥
ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ,
ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥
ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ,
ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥
ಗಣೇಶ್.ಎಂ
ನಮ್ಮ ಸತೀಷ
ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ,
ತಿಲಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ.
ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ,
ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ.
ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ,
ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ.
ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ,
ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ.
ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ,
ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ.
ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ,
ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ.
ಗಣೇಶ್ ಎಂ
7ipglplbhh4rq6r9spxa2bs7cme118w
1375857
1375854
2026-06-26T07:40:40Z
ಗಣೇಶ್ ಎಂ
88310
1375857
wikitext
text/x-wiki
ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ
ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು.
ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು.
ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು.
ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು
ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ
ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ
ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ
ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ
ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ
ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ
ಕನಪಾಯಿಯ ಮಗಳು - ಸೀತಮ್ಮ,
ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ.
ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು.
ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು.
1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು.
ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು.
ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು.
ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು.
ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ.
2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು.
ಖುಷಿಯಿಂದ ಓಡಿದೆನು
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಖುಷಿಯಿಂದ ಓಡಿದೆನು ಅಂದು ನಾನು
ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು,
ನೋಡುವಿರಿ ಸಾಕೆನಗೆ ಅದುವೆ ಬಹುಮಾನ
ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು,
ನೋಡುವಿರಿ ಸಾಕೆನಗೆ ಅದುವೆ ಬಹುಮಾನ
ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ?
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ
ಓಡುವುದು ಅನಿವಾರ್ಯ ಕರ್ಮ ನನಗೆ
ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ
ಓಡುವುದು ಅನಿವಾರ್ಯ ಕರ್ಮ ನನಗೆ
ನೋಡುವವರಿಹರೆಂದು ನಾ ಬಲ್ಲೆ ಅದರಿಂದ
ಓಡುವುದು ಮೈ ದುಂಬಿ ಎಂದಿನಂತೆ
ಯಾರು ಏನು ಹೇಳಿದರೂ
ಯಾರು ಏನು ಹೇಳಿದರೂ
ನನಗಿಲ್ಲ ಚಿಂತೆ
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಗಣೇಶ್.ಎಂ
(ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ)
ನಿವ್ರತ್ತಿ
ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು
ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು
ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ
ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ
ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ
ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ
ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು
ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು
ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ
ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ
ರೋಟರಿ ನಾ ಕಂಡಂತೆ
ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ,
ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥
ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು,
ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥
ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ,
ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥
ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ,
ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥
ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು
ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥
ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ,
ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥
ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ,
ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥
ಗಣೇಶ್.ಎಂ
ನಮ್ಮ ಸತೀಷ
ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ,
ತಿಲಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ.
ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ,
ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ.
ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ,
ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ.
ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ,
ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ.
ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ,
ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ.
ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ,
ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ.
ಗಣೇಶ್ ಎಂ
06e7iit044b0junxgisb1og0k7xjno4
ಸದಸ್ಯ:ಗುರು ಜೋಗೂರ/sandbox
2
179435
1375841
1375803
2026-06-25T14:38:01Z
~2026-36116-88
100140
/* */
1375841
wikitext
text/x-wiki
ಶಂಕರ ಬೈಚಬಾಳ ಅವರ ಪರಿಚಯ
ಹೆಸರು : ಶಂಕರ ಮ. ಬೈಚಬಾಳ
ತಂದೆ : ಮಲ್ಲಪ್ಪ
ತಾಯಿ : ಗಂಗಮ್ಮ
ಜನ್ಮ ದಿನಾಂಕ: 22-7-1966
ಜನನ ಸ್ಥಳ : ಮಸಬಿನಾಳ-586203
ಬಸವನಬಾಗೇವಾಡಿ
ಜಿ: ವಿಜಯಪುರ
ಕುಟುಂಬ : ಪತ್ನಿ : ವಿಮಲಾ
: ಮಕ್ಕಳು: ಸುಪ್ರಿಯಾ; ಸೌಮ್ಯ
ಶಿಕ್ಷಣ : ಪದವಿ ( ಬಿ.ಎಫ್.ಎ)
ಹುದ್ದೆ : ಜಾನುವಾರುಅಧಿಕಾರಿ
ಪಶು ಪಾಲನಾ ಇಲಾಖೆ ಬೆಂಗಳೂರು
ವಿಳಾಸ : ಶಂಕರ ಬೈಚಬಾಳ
"ವಚನ"
ರಾಜಾಜಿ ನಗರ
ವಿಜಯಪುರ-586109
Ph- 9448751980
shankarb66@gmail.com
____________________________________
"ಶಂಕರ ಬೈಚಬಾಳ ಅವರ ಮಾಹಿತಿ"
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳದಲ್ಲಿ1966 ಜುಲೈ 22 ರಂದು ಜನನ. ಓದಿದ್ದು ಚಿತ್ರಕಲೆಯಲ್ಲಿ ಪದವಿ.ಸಾಹಿತ್ಯ ,ಸಂಘಟನೆ, ಚಿತ್ರಕಲೆ, ಸಂಗೀತ, ಹೋರಾಟ, ನಟನೆ ಇವರ ಪ್ರವರ್ತಿಗಳು. ರೂಪಿಲ್ಲದವರ ರೂಪಿಸಿ,ರಾಷ್ಟ್ರಮಾತೆ ಚೆನ್ನಮ್ಮ ಹೌದಾ?, ಮಸಬಿನಾಳ- ಒಂದು ಸಾಂಸ್ಕೃತಿಕ ಅಧ್ಯಯನ, ಜಾನಪದ ಚಿಂತನ,ಒಡೆದು ಹೇಳು ಹೌದೌದಂತಿನಿ,ಬುದ್ಧ ಸಿಕ್ಕಿದ್ದ, ಹಲಸಂಗಿ ಭಾಗದ ಲಾವಣಿಕಾರರು, ನಿರ್ನೇರ, ಮಸಬಿನಾಳದ ಪಶುವಾದಿಗಳು, ಭೂಮಿ ತೂಕದ ಜಕ್ಕವ್ವ, ಸೈತಾನ,ಅದೇನ ಕಾಗದಂತಲ್ಲರಿ, ಮುಜಾಹಿದ್ದೀನ್, ಸಿಂಹಾಸನ ಮಾಮಲೇದಾರ, ಪಡಗಾನೂರು ಶಂಕರ ಗೌಡರು, ಅಡ್ಡ ಹೆಸರುಗಳು, ರಾಜಗುರು, ಸೊನ್ನದಶಿವಾನಂದ ಶಿವಯೋಗಿಗಳು, ಇತಿಹಾಸ ಸತ್ಯವಲ್ಲ,ಕೃಷಿ ಪಂಡಿತ, ಬಿ.ಎಸ್. ಪಾಟೀಲ ಸಾಸನೂರ, ಭಾರತ ಸಿಂಹಾಸನ ರಶ್ಮಿ, ಕೆಂಪು ಹುಡುಗಿ ಕಪ್ಪು ಕಾಲ್ಮರಿ, ತೋಂಟದ ಸಿದ್ಧಲಿಂಗಶ್ರೀಗಳು, ದಾಸೋಹಿ,ಶಬ್ಧಾತೀತರೊಂದಿಗಿನ ಶಬ್ಧಗಳು, ಆಯ್ದ ಕಥೆಗಳು, ಮೂರರವತ್ತು ಗಳಿಗೆ, ತಿಪ್ಪಣ್ಣಪ್ಪ ಗುದ್ದಿ, ಮೂರಿಪ್ಪತ್ತು ಮುನ್ನುಡಿ, ಪ್ರಕಾಶಮಾನ ಮುಂತಾದ 60ಕೃತಿಗಳು ಪ್ರಕಟವಾಗಿವೆ.
*****
"*ಶಂಕರ ಬೈಚಬಾಳರ ಸಾಧನೆ*"
ಮದ್ರಾಸ್, ದೆಹಲಿ, ಕುಂಬಕೋಣಂಗಳ ಕರ್ನಾಟಕ ಸಂಘದ ಸದಸರು. ಗಡಿನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಫೊಕ್ಲೋರ್ ಸೊಸೈಟಿ ಆಫ್ ಸೌತ್ ಇಂಡಿಯನ್ ಲ್ಯಾಂಗವೇಜಿಸ್ ಕೇರಳ, ಮುಂಬೈನ ಹೊರನಾಡ ಕನ್ನಡಿಗ, ಕನ್ನಡ ಜಾಗೃತಿ ಸಮೀತಿ ಬೆಂಗಳೂರು, ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಜಯಪುರ, ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಮನೆ ಮನೆ ಗ್ರಂಥಾಲಯದ ಜಿಲ್ಲಾ ಸಂಚಾಲಕ, ಮಹಾನಗರ ಪಾಲಿಕೆಯ ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯ, ಕನ್ನಡ ಪುಸ್ತಕ ಪರಿಷತ್ತು ಬೆಂಗಳೂರು, ಉತ್ತರ ಕರ್ನಾಟಕ ಲೇಖಕಯರ ವೇದಿಕೆ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್,ರಾಷ್ಟ್ರೀಯ ಬಹುಭಾಷಾ ಮಂಡಳ ಕಲಕತ್ತಾ ಮುಂತಾದವುಗಳ ಸಂಚಾಲಕತ್ವದ ಮೂಲಕ ಅನೇಕ ಸಾಹಿತ್ಯಕ ಕಾರ್ಯಕ್ರಮಗಳ ಆಯೋಜನೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪರಿಚಾರಕರಾಗಿದ್ದಾರೆ .
<nowiki>*</nowiki>ಶಂಕರ ಬೈಚಬಾಳ ಅವರ ವೈಶಿಷ್ಟ್ಯಗಳು*
"ಜಾನಪದ ಚಿಂತನ" ಕೃತಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, "ಸರ್ಕಾರಿ ಎಮ್ಮೆ ಸತ್ತಾಗ" ಕಥೆಗೆ ಸಂಕ್ರಮಣ ಸಾಹಿತ್ಯ ಪುರಸ್ಕಾರ, "ಭೂಮಿ ತೂಕದ ಜಕ್ಕವ್ವ " ರಚನೆಗೆ ಮುಂಬೈ ಇಂಡಿಯನ್ಸ್ ಅಮೂಲ್ಯ ಕಾದಂಬರಿ ಬಹುಮಾನ, "ಠಣನ ಠಣ್ಣ..." ಕಥೆಗೆ ವಿಜಯವಾಣಿ ದೀಪಾವಳಿ ಕಥಾ ಮನ್ನಣೆ, "ಅಬ್ದುಲ್ ನ ಕೊರಳಲ್ಲಿ ಲಿಂಗ್" "ಪಶು ಆಸ್ಪತ್ರೆಯಿಂದ ಫಾರೆನ್" "ದನದ ಡಾಕ್ಟರ್ ಧರ್ಮಪತ್ನಿ" "ನನ್ನವ್ವ"ಮುಂತಾದ ಕಥೆಗಳು ಬೈಚಬಾಳ್ ಕಥನ ಮಾರ್ಗ ತೋರಿಸುವುದಲ್ಲದೆ, ಪ್ರಜಾವಾಣಿ ಓದುಗರ ಹೃದಯ ಗೆದ್ದಿವೆ. "ಮಸಬಿನಾಳದ ಪಶುವಾದಿಗಳು" ಕಥೆಯು ಗುಲಬರ್ಗಾ ವಿಶ್ವವಿದ್ಯಾಲಯ, "ವಂದೆ ಮಾತರಂ- ಸಲೀಂ" ಕಥೆಯು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ. ಕುವೆಂಪು ಶತಮಾನೋತ್ಸವ ಸಂಭ್ರಮ ನಿಮಿತ್ಯ "ಕುವೇಂಪುಶ್ರೀ" ಗೌರವ, ಡಾ. ರಾಧಾಕೃಷ್ಣನ್ ಪ್ರಶಸ್ತಿ, ಉತ್ತರ ಕರ್ನಾಟಕ ಲೇಖಕರ "ಪುರಸ್ಕಾರ" "ತೋಂಟದ ಸಿದ್ಧಲಿಂಗ ಶ್ರೀಗಳು" ಕೃತಿಗೆ "ಭಾರತ ಸಿಂಹಾಸನ ರಶ್ಮಿ"ಕಾದಂಬರಿಗೆ, "ಕೆಂಪು ಹುಡುಗಿ ಕಪ್ಪು ಕಾಲ್ಮರಿ" ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಪರಿಷತ್ತಿನ ದತ್ತಿ ಗೌರವಗಳು ಲಭಿಸಿವೆ. "ಸ್ವಾತಂತ್ರ ಹೋರಾಟದಲ್ಲಿ ಕರ್ನಾಟಕ' ಮಸಬಿನಾಳ" ಕೃತಿಯು ಅನ್ಯ ಭಾಷೆಗಳಿಗೆ ಅನುವಾದವಾಗಿದೆ .
"ಶಂಕರ ಬೈಚಬಾಳ ಅವರ ಪುಸ್ತಕಗಳು"
1 ಸತ್ಯ ನುಂಗಿದ ಸಾವು - ನಾಟಕ
2 ಬಡವ ಬಲ್ಲಿದ - ನಾಟಕ
3 ರಾಷ್ಟ್ರಮಾತೆ ಚನ್ನಮ್ಮ ಯಾಕಲ್ಲ? - ನಾಟಕ
4 ಅಡ್ಡ ಹೆಸರುಗಳು - ಜಾನಪದ
5 ಕಂಟ್ರೋಲ ಕಥೆ - ನಾಟಕ
6 ಶಿವಾನಂದ ಅಪ್ಪಗಳು - ಚರಿತ್ರೆ
7 ದೆವ್ವ ಬಂತೋ ದೆವ್ವ - ನಾಟಕ
8 ಭೀಮಾರಥಿ - ಸ್ಮರಣ ಸಂಚಿಕೆ
9 ಹಿಂಗಾರಿ ಹಿಡ್ಯಾಗ ಮುಂಗಾರಿ ಉಡ್ಯಗ - ಜಾನಪದ
10 ರಾಜಗುರು - ಚರಿತ್ರೆ
11 ಜಾನಪದ ಚಿಂತನ - ಜಾನಪದ
12 ಅನ್ನದ ಮುತ್ಯಾ - ಕಥೆಗಳು
13 ಬಾನುಲಿ ಭಾಷಣಗಳು - ಜಾನಪದ
14 ಮುಜಾಹಿದ್ದೀನ್ - ಕಾವ್ಯ
15 ಸೈತಾನ - ಕಾವ್ಯ
16 ಸಹಕಾರ ಸಿಂಧು - ಸ್ಮರಣ ಸಂಚಿಕೆ
17ಒಡ್ದ ಹೇಳು ಹೌದೌದಂತಿನಿ - ಜಾನಪದ
18 ಇತಿಹಾಸ ಸತ್ಯವಲ್ಲ - ಕಾವ್ಯ
19 ಜೀರಲಭಾವಿ ಅಪ್ಪಗಳು - ಚರಿತ್ರೆ
20 ರೂಪಿಲ್ಲದವರ ರೂಪಿಸಿ - ಕಾದಂಬರಿ
21 ಕರಪಲ್ ಕಲೆ - ಜಾನಪದ
22 ಹಂತಿ - ಜಾನಪದ
23 ಬಿಜಾಪೂರ ಜಿಲ್ಲಾ ಮಕಳ ಆಟಗಳು - ಜಾನಪದ
24 ಅದೇನ ಕಾಗದಂತಲ್ಲರಿ - ನಾಟಕ
25 ಶಿವಾನಂದ ಶಿವಯೋಗಿಗಳು - ಚರಿತ್ರೆ
26ಮಸಬಿನಾಳ ಧರ್ಶನ ದೀಪ್ತ - ಸ್ಮರಣ ಸಂಚಿಕೆ
27ಬುದ್ದ ಸಿಕ್ಕಿದ್ದ - ಕಾದಂಬರಿ
28 ಮಸಬಿನಾಳದ ಪಶುವಾದಿಗಳು - ಕಥೆಗಳು
29 ಮಸಬಿನಾಳ, ಸಾಂಸ್ಕೃತಿಕ ಅಧ್ಯಯನ - ಸಂಶೋಧನೆ
30 ಹೊನ್ನ ಉಟ್ಟಿಗೆ - ಜಾನಪದ
31 ವಾಲ್ಮಿಖಿ ಸಮುದಾಯದ ಉತ್ಸವಗಳು - ಜಾನಪದ
32ಹಲಸಂಗಿ ಭಾಗದ ಲಾವಣಿಕಾರರು - ಜಾನಪದ
33 ತವನಿಧಿ - ಜಾನಪದ
34ನಿರ್ನೇರ - ಕಥೆಗಳು
35 ದಾಸೋಹ - ಸಂಪಾದನೆ
36 ಮಕ್ಕಳ ಜಾನಪದ ಆಟಗಳು - ಜಾನಪದ
37 ತರ್ದವಾಡಿ ಜಾನಪದ - ಜಾನಪದ
38ರಂಗವಿಲಾಸ - ಸಂಪಾದನೆ
39ಗಾಂಧಿ ಮತ್ತು ಗಾಂಧಿ - ಕಾವ್ಯ
40 ದೇಶಗತಿ ಇಲ್ಲ, ದೇಶಾಭಿಮಾನವೆ ಎಲ್ಲ - ಇತಿಹಾಸ
41ಸಿಂಹಾಸನ ಮಾಮಲೇದಾರ - ಚರಿತ್ರೆ
42ಬಸರಿಗಿಡದ ವೀರಪ್ಪನವರು - ಚರಿತ್ರೆ
43 ಪಡಗಾನೂರ ಶಂಕರಗೌಡರು - ಚರಿತ್ರೆ
44 ಕೃಷಿ ಪಂಡಿತ - ಚರಿತ್ರೆ
45 ಬಿ .ಎಸ್. ಪಾಟೀಲ ಸಾಸನೂರ - ಚರಿತ್ರೆ
46 ಕನ್ನಡದ ಮಠ ಪುಸ್ತಕ ಜಗದ್ಗುರು - ಚರಿತ್ರೆ
47 ಗುರುಸಿದ್ಧಪ್ಪ ಶರಣರು - ಚರಿತ್ರೆ
48 ಭಾರತ ಸಿಂಹಾಸನ ರಶ್ಮಿ - ಕಾದಂಬರಿ
49 ಕೆಂಪು ಹುಡುಗಿ ಕಪ್ಪು ಕಾಲ್ಮರಿ - ಕಥೆಗಳು
50 ಸ್ವಾತಂತ್ರ್ಯ ಹೋರಾಟದಲ್ಲಿ ಮಸಬಿನಾಳ - ಇತಿಹಾಸ
51 ದಾಸೋಹಿ - ಸಂಪಾದನೆ
52 ಗೊಲ್ಲಾಳೇಶತನಯ - ವಿಮರ್ಶೆ
53 ಶಬ್ಧಾತೀತರೊಂದಿಗಿನ ಶಬ್ಧಗಳು - ಸಂದರ್ಶನ
54 ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳು - ಚರಿತ್ರೆ
55 ಆಯ್ದ ಕಥೆಗಳು - ಕಥೆಗಳು
56 ಮೂರರ್ವತ್ತುಗಳಿಗೆಗಳು - ಘಟನೆಗಳು
57 ಮೂರಿಪ್ಪತ್ತು ಮುನ್ನುಡಿ - ಮುನ್ನುಡಿಗಳು
58 ತಿಪ್ಪಣ್ಣಪ್ಪ ಗುದ್ದಿ - ಚರಿತ್ರೆ
59 ಪ್ರಕಾಶಮಾನ - ಸಂಪಾದನೆ
60 ತಾನು ಎಲ್ಲರಿಗಾಗಿ... - ಚರಿತ್ರೆ
61 ವಚನ ಮಾಂಗಲ್ಯ - ವಚನಗಳು
_______________________________________________
ಶಂಕರ ಬೈಚಬಾಳ ಅವರ ಕುರಿತು ಪತ್ರಿಕಾ ಪ್ರಶಂಸಾ ಲೇಖನಗಳು
1 ಭಿನ್ನ ವೃತ್ತಿ ಪ್ರವೃತ್ತಿಯಲ್ಲೂ ಭಿನ್ನ"ಸಂಯುಕ್ತ ಕರ್ನಾಟಕ "ವಾರದ ಮಲ್ಲಿಗೆಯಲ್ಲಿ- ಡಾ.ಪ್ರಕಾಶ ಖಾಡೆ*11-8-1989.
2 ಅಮೀನಗಡದ ಐದು ರೂಪಾಯಿ ದನದ ಡಾಕ್ಟರ್ " ನ ವೋದಯ ಪತ್ರಿಕೆ" - ತಾರಾತನಯರಾಜ*20-7-1992.
3 ಶಂಕರ ಬೈಚಬಾಳ ಹಾಡಿದ್ದೇ ಬಾಳು, ಬಾಳಿದ್ದೇ ಹಾಡು " ವಿಧ್ಯಮಾನ ಪತ್ರಿಕೆ" ಡಾ. ಬಸವಾರಾಧ್ಯ* 19-6-1993.
4 ಯುವ ಸಾಹಿತಿ ಪ್ರಶಸ್ತಿ ಪುರಸ್ಕೃತ ಪಶು ನೀರಿಕ್ಷಕ " ಅಗ್ನಿ ಅಂಕುಶ ಪತ್ರಿಕೆ" - ದೇವೇಂದ್ರ ಕೊಣ *8-6-1994.
5 ಸಾಹಿತ್ಯ ರಚನೆ ಮತ್ತು ಜನಪ್ರಿಯತೆ "ಪ್ರಪಂಚ ಪತ್ರಿಕೆ" ಕನಾ೯ಟಕದ ಕಥೆ ಕಾಲಂ- ಡಾ. ಪ್ರಕಾಶ ಖಾಡೆ*7-5-1994.
6 ಯುವ ಶಕ್ತಿ ಕ್ರಿಯಾಶೀಲಗೊಳಿಸಿದ ಯುವಕ "ಸಾಕ್ಷರ ಗುಮ್ಮಟ"- ಶ್ರೀ ನಂದಕುಮಾರ್ ಜೋಶಿ *10-6-1996.
7 ಸೂಜಿ ಹಿಡಿದ ಕೈ ಕುಂಚ ಹಿಡಿದಾಗ-"ಸಂಯುಕ್ತ ಕರ್ನಾಟಕ" ಸಾಪ್ತಾಹಿಕ ಸೌರಭದಲ್ಲಿ - ಶ್ರೀಶೈಲ ಕೊರಹಳ್ಳಿ* 2-4-1996.
8 ಸಾಂಸ್ಕೃತಿಕ ಜೀವಂತಿಕೆ ಇವರ ಕಾವ್ಯದಲ್ಲಿದೆ- "ತುಷಾರ-11-1997" ತುಷಾರೊತ್ಸವ * ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ.
9 ಗಪ್ಪು ಚಿಪ್ಪಾಗಿ ಇದ್ದರೆ ಗೌರವ ಬೈಚಬಾಳಗಿಲ್ಲ- "ಸುದ್ದಿಮೂಲ" ಮೂಡಬಿದರೆ ಸಮ್ಮೇಳನ * ಆರ್. ಎಂ. ಪೂಜಾರಿ -6-9-1997.
10 ಬೈಚಬಾಳ ಪ್ರಶಸ್ತಿಯೊಳಗೊಂದು ಪ್ರಶಸ್ತಿ- " ಪ್ರಜಾವಾಣಿ" ವಿಶೇಷ ವರದಿ * ಮಲ್ಲಿಕಾರ್ಜುನ ಹುಲಗಬಾಳಿ-23-11-98
11ಈ ನೆಲದ ಸಾಂಸ್ಕೃತಿಕ ಆತ್ಮಈ ಕೃತಿ- "ಜಾನಪದ ಚಿಂತನ ಕೃತಿ ವಿಮರ್ಶೆ"ರೇಡಿಯೊದಲ್ಲಿ * ಬಾನಂದೂರು ಕೆಂಪಯ್ಯ-6-12-98
12 ಬೈಚಬಾಳ ಕೆಲಸ ಮಾಡಿದರು ಸಪ್ಪಳ ಮಾಡಲಿಲ್ಲ- "ಪ್ರಪಂಚ" ಪತ್ರಿಕೆಯ ಸಾಹಿತ್ಯಸಂಗತಿ- *ಪಾಪು-10-1-1999
13 ಸಿರಿಂಜ್ ಹಿಡಿದ ಕೈ ಬಣ್ಣಗಳೊಂದಿಗೆ- "ಉಷಾಕಿರಣ" ಮನೋವಿಕಾಶ ಕಾಲಂ * ರಾಜಕುಮಾರ ಧನಶೆಟ್ಟಿ-1-3-1999
14 ಪಶು ಆಸ್ಪತ್ರೆಯಲೊಬ್ಬ ಜಾನಪದ ಸಂಶೋಧಕ- "ಕಿತ್ತೂರು ಕರ್ನಾಟಕ" ಪರಿಚಯ ಅಂಕಣ *ದಾನಪ್ಪ ಬಗಲಿ -2-4-1999
15 ಗೋರೂರು ಪ್ರಶಸ್ತಿ ವಿಜೇತ ಶಂಕರ ಬೈಚಬಾಳ- "ವಿಜಯ ಕರ್ನಾಟಕ"- * ಡಾ. ಉಮೇಶ್ ಕೊಳೇಕರ- 12-03-2000
16 ಶಂಕರ ಬೈಚಬಾಳರ ಕಾವ್ಯದ ಕಮಿಟ್ಮೆಂಟ್ ಜನಪರವಾಗಿದೆ- "ಕನ್ನಡ ಪ್ರಭ" - * ಡಾ. ಸರಜೂ ಕಾಟಕರ್- 13-10-2000
17 ಸಾಹಿತ್ಯದ ಬರ ಅಳಿಸಿದ ಬರೆಹಗಾರರಿವರು- "ಕನ್ನಡ ಪ್ರಭ" * ಶ್ರೀಶೈಲ ಬಿರಾದಾರ- ಸಾಂದರ್ಭಿಕ ಲೇಖನ -6-4-2001
18 ಬೈಚಬಾಳರಂತಹ ಯುವಕರು ಈ ಸಮಾಜಕ್ಕೆ ಆಶಾಕಿರಣ- "ಪುಸ್ತಕ ಮುನ್ನುಡಿ"ಯಲ್ಲಿ-* ಡಾ. ನಲ್ಲೂರ ಪ್ರಸಾದ-2-122001
19 ಬೈಚಬಾಳರ ಕಥೆಗಳು ಓದುಗರಿಗೆ ಹೊಸ ಲೋಕವನ್ನೇ ತೆರೆದಿಡುತ್ತವೆ-"ಕಥೆಗಳ ಬಗ್ಗೆ " * ವೈದೇಹಿ- 7-8-2001
20 ಕ್ರಿಯಾಶೀಲ ವ್ಯಕ್ತಿತ್ವದ ಶಂಕರ ಬೈಚಬಾಳ-"ಕನ್ನಡಮ್ಮ ಪತ್ರಿಕೆ"-*ತೆರೆ ಮರೆಯ ಮುಖ-*ಮರಲಿಂಗ ಹೊರಗಿನಮನಿ.
21 ಬೈಚಬಾಳ ಕಥೆಗಳಲ್ಲಿ ಶಬ್ದಗಾರುಡಿಗತನ ಹೊಸದು- "ವಿಮರ್ಶೆಯ ಪತ್ರ" * ವಿರೇಂದ್ರ ಸಿಂಪಿ- 7-4-2002.
22 ಶಾಸಕರಾದ ಪಶುವೈದ್ಯ ಶಂಕರ ಬೈಚಬಾಳ-" ಸಂಯುಕ್ತ ಕರ್ನಾಟಕ" ಸುದ್ದಿ ಸ್ವಾರಸ್ಯ-* ಶಿವಯ್ಯ ಹಿರೇಪಟ್ಟ14-2-2002.
23 ಅನಲ ನಂದಿಸಿ ಭಾವೈಕ್ಯತೆಯ ಪಸರ ಇಟ್ಟವ-"ರೇಡಿಯೋ ಭಾಷಣ" * ಇಬ್ರಾಹಿಂ ಸುತಾರ- 2-2-2010
24 ಶಂಕರ ಬೈಚಬಾಳ ಕಿರುತೆರೆಗೆ-" ಮೌನ ಕ್ರಾಂತಿ ದಾರಾವಾಹಿ ಸಹ ನಿರ್ದೇಶನ"ಪರಿಚಯಿಸುತ್ತ* ಸಂಗಮೇಶ ಕೋಟಿ4-9-11
25 ಭಾಷೆ ಪ್ರದೇಶಗಳ ಹಂಂಗು ತೊರೆದ ಕಥೆಗಾರ" ಅಬ್ದುಲ್ ರಶೀದ್"ವಿಜಯವಾಣಿ ಕಥಾ ಸ್ಪರ್ಧೆಯ ವಿಮರ್ಶೆ -15-1-2016.
26 ದೇವನೂರ, ಕಂಬಾರರ ಮುಂದುವರೆದ ದೇಶಿ ಪರಂಪರೆ ಬೈಚಬಾಳರ ಕಥೆ-" ವಿಮರ್ಶೆ"- ಡಿ. ಎಂ. ನದಾಫ್-7-12-1918
27 ಕಥೆಗಾರರ ಕಥಾ ಶೈಲಿ ಅತ್ಯದ್ಬುತವಾಗಿದೆ, ಮನಮುಟ್ಟುತ್ತದೆ-"ಕಥನ ಮಾರ್ಗದಲ್ಲಿ"* ಸೋಮಲಿಂಗ್ ಗೆಣ್ಣೂರ್-19-07-2019
28 ಖಡೆ...ಖಡೆ...ವೀರಭದ್ರ ಕನ್ನಡ ಬೆಳಸದಿದ್ರ...? "ಸಾಕ್ಷರತಾ ಗುಮ್ಮಟ"- ಪತ್ರಿಕೆ. ಎಂ.ಆಯ್. ಬಿರಾದಾರ- 8-8-2019
29 ಭೀಮಾತೀರದ ಸಾಹಿತ್ಯ ಸಾಧಕ ಶಂಕರ ಬೈಚಬಾಳ" ಪ್ರಜಾ ವಾಣಿ" ಬಾನುವಾರ ಪುರ.*ನಿಂಗಪ್ಪ ಮುದೆನೂರ-29-8-2021.
30 ಬಸವ ಭೂಮಿಯ ಕುಸುಮ-" ವಿಶ್ವ ದರ್ಶನ" -'ಭಾರತ ಸಿಂಹಾಸನ ರಶ್ಮಿ'* ಮಂಜುನಾಥ ಜುನಗೊಂಡ-26-5-2022.
31 ಬೈಚಬಾಳರದ್ದು ವಿಶಿಷ್ಟ ಭಾಷಾ ಪ್ರಯೋಗ-"ವಿಶ್ವವಾಣಿ " ಪುಸ್ತಕ ವಿಮಾನದಲ್ಲಿ -* ಡಿ. ಎಂ .ನದಾಫ್.- 4-12-2022
32 ಕುತೂಹಲದ ಕೌತುಕ ಈ "ಕೆಂಪು ಹುಡುಗಿ ಕಪ್ಪು ಕಾಲ್ಮರಿ" ಹೊಸ ಓದು ರೇಡಿಯೋದಲ್ಲಿ* ಸಿ. ಎಸ್. ಅನಂದ.-4-12-2022
33 ಬೈಚಬಾಳರ ಜವಾರಿ ಕನ್ನಡದ ತಾಜಾ ಕಥೆಗಳು-"ಸಂಯುಕ್ತ ಕರ್ನಾಟಕ"- ಡಾ. ಮಲ್ಲೇಪುರ ಜಿ.ವೇಂಕಟೇಶ- 8-6-2025
34 ಕಂಬಾರರಿಗೆ ಶಿವಾಪುರ ,ಬೈಚಬಾಳರಿಗೆ ಮಸಬಿನಾಳ-"ಅಂತರರ್ಜಾಲ ವಿಮರ್ಶೆ " ಪ್ರಕಾಶ ಗಿರಿಮಲ್ಲನವರ6-2-25
35 ಬೈಚಬಾಳ ಬರೆಹದಲ್ಲಿಜಾನಪದಕ್ಕೆ ಬರ ಎಂಬುದಿಲ್ಲ- "ಬೈಚಬಾಳ ಕಥನ ಮಾರ್ಗ"* ಸಹನಾ ಕಾಂತಬಯಲು-29-3-25
nvq5mznftm8w8q8mhsqtzlddz03k4d5
ನಾಗವೇಣಿ ರಂಗನ್
0
179445
1375831
1375828
2026-06-25T12:59:01Z
Sandeepa S Hegde
100002
ಇದು ಸಣ್ಣ ಸಂಪಾದನೆ
1375831
wikitext
text/x-wiki
{{Infobox musical artist
| name = ನಾಗವೇಣಿ ರಂಗನ್
| image = Nagaveni Rangan Portrait.png
| caption = ನಾಗವೇಣಿ ರಂಗನ್
| birth_date = {{Birth date and age|1952|5|14}}
| birth_place = ಹಾಸನ, ಕರ್ನಾಟಕ
| occupation = ಲೇಖಕಿ, ರಂಗಕರ್ಮಿ, ಸಮಾಜ ಸೇವಕಿ
| spouse = ಕೆ. ಆರ್. ಶ್ರೀನಿವಾಸ್ ರಂಗನ್ (ದಿವಂಗತ)
}}
'''ನಾಗವೇಣಿ ರಂಗನ್''' ಕರ್ನಾಟಕದ ಒಬ್ಬ ಪ್ರಸಿದ್ಧ ಲೇಖಕಿ, ರಂಗಕರ್ಮಿ ಹಾಗೂ ಸಮಾಜ ಸೇವಕಿ. ಇವರು ಪ್ರಮುಖವಾಗಿ ಕನ್ನಡ ರಂಗಭೂಮಿಯಲ್ಲಿ ನಾಟಕಗಾರ್ತಿಯಾಗಿ ಮತ್ತು ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ರಚಿಸಿದ 'ಹಸ್ಬೆಂಡ್ 360' ಮತ್ತು 'ಬಾಯಿ ತುಂಬ ನಕ್ಬಿಡಿ' ಸೇರಿದಂತೆ ಹಲವು ಹಾಸ್ಯ ಪ್ರಧಾನ ನಾಟಕಗಳು ಕರ್ನಾಟಕದಾದ್ಯಂತ ಪ್ರದರ್ಶನಗೊಂಡಿವೆ. ಸಾಹಿತ್ಯ, ರಂಗಭೂಮಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ಇವರ ಕೊಡುಗೆಗಳಿಗಾಗಿ ವಿವಿಧ ಪ್ರಶಸ್ತಿಗಳು ಲಭಿಸಿವೆ.<ref>https://in.bookmyshow.com/person/nagaveni-rangan/2017555</ref>
== ವೈಯಕ್ತಿಕ ಜೀವನ ಮತ್ತು ಹಿನ್ನೆಲೆ ==
ನಾಗವೇಣಿ ರಂಗನ್ ಅವರು 1952ರ ಮೇ 14 ರಂದು ಹಾಸನದಲ್ಲಿ ಜನಿಸಿದರು. ಇವರು ವಿಜ್ಞಾನ ಪದವಿ (BSc) ಶಿಕ್ಷಣವನ್ನು ಪೂರೈಸಿದ್ದಾರೆ. ಇವರ ಪೋಷಕರು ಶ್ರೀ ಶ್ರೀನಿವಾಸ ಅಯ್ಯಂಗಾರ್ ಮತ್ತು ಶ್ರೀಮತಿ ರುಕ್ಮಿಣಿ.
ಇವರ ಪತಿ ಕೆ. ಆರ್. ಶ್ರೀನಿವಾಸ್ ರಂಗನ್ (ದಿವಂಗತ) ಅವರು ಕರ್ನಾಟಕ ಲೋಕಾಯುಕ್ತದಲ್ಲಿ ನಿವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ವೃತ್ತಿಜೀವನದಲ್ಲಿ ನಾಗವೇಣಿ ಅವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ (ಪ್ರಸ್ತುತ ಭಾರತೀಯ ಸ್ಟೇಟ್ ಬ್ಯಾಂಕ್) 30 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ, ಸಾಹಿತ್ಯ ಮತ್ತು ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸ್ವಯಂ ನಿವೃತ್ತಿ (VRS) ಪಡೆದರು. ಸದ್ಯ ಇವರು ಬೆಂಗಳೂರಿನ ಹನುಮಂತನಗರ್ ಪ್ರದೇಶದಲ್ಲಿ ವಾಸವಾಗಿದ್ದಾರೆ.
== ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರ ==
=== ಸಾಹಿತ್ಯ ಕೊಡುಗೆಗಳು ===
ನಾಗವೇಣಿ ರಂಗನ್ ಅವರು ಮುನ್ನೂರಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದಾರೆ. ಇವರ ಕವನಗಳು "ಬಿಚ್ಚು ಮನದ ನೆಚ್ಚಿನ ನುಡಿ" ಮತ್ತು "ಬಂಗಾರದಕ್ಷರದ ಶೃಂಗಾರದೊಡವೆ" ಎಂಬ ಎರಡು ಪ್ರಮುಖ ಕವನ ಸಂಕಲನಗಳಾಗಿ ಪ್ರಕಟಗೊಂಡಿವೆ. ಇವರು ದಿನಪತ್ರಿಕೆಗಳಿಗೆ ನಿಯಮಿತವಾಗಿ ಲೇಖನಗಳನ್ನು ಬರೆಯುತ್ತಾರೆ. ಇವರು ರಚಿಸಿದ ಹಲವಾರು ಕವಿತೆಗಳು 'ದಿನಕ್ಕೊಂದು ಹಾಡು' ಮತ್ತು 'ನಿತ್ಯ ಗಾಯನ' ಎಂಬ ಯೂಟ್ಯೂಬ್ (YouTube) ವಾಹಿನಿಗಳ ಮೂಲಕ ಧ್ವನಿಮುದ್ರಿತ ಗೀತೆಗಳಾಗಿ ಪ್ರಸಾರವಾಗಿವೆ.<ref>https://www.youtube.com/watch?v=o8lBvnFbL2M</ref>
=== ರಂಗಭೂಮಿ ಮತ್ತು ಚಲನಚಿತ್ರ ===
ಆರಂಭದಲ್ಲಿ ಇವರು 'ನಕ್ಕು ನಲಿ' ಎಂಬ ಸ್ವಂತ ನಾಟಕ ತಂಡವನ್ನು ಕಟ್ಟಿ ನಾಟಕಗಳನ್ನು ನಿರ್ದೇಶಿಸಿ, ನಟಿಸುತ್ತಿದ್ದರು. ನಂತರ ಪ್ರಸಿದ್ಧ ಹವ್ಯಾಸಿ ನಾಟಕ ತಂಡಗಳಾದ 'ಅಂತರಂಗ', 'ಅಂತರಂಗ-ಬಹಿರಂಗ' ಮತ್ತು 'ಪ್ರಕಸಂ' ತಂಡಗಳೊಂದಿಗೆ ಕೈಜೋಡಿಸಿ ನಾಟಕಗಾರ್ತಿಯಾಗಿ ಕಾರ್ಯನಿರ್ವಹಿಸಿದರು. ಇವರು ಬರೆದ ಪ್ರಮುಖ ನಾಟಕಗಳು 25ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ಯಶಸ್ವಿಯಾಗಿವೆ.
{| class="wikitable" style="width: 80%;"
|- style="background-color:#1B365D; color:white; text-align:center;"
! | ಕ್ರ.ಸಂ. !! ನಾಟಕ !! ತಂಡ !! ಪ್ರದರ್ಶನಗಳು
|-
| 1 || ಹಸ್ಬೆಂಡ್ 360 || ಅಂತರಂಗ || 28ಕ್ಕೂ ಹೆಚ್ಚು ಪ್ರದರ್ಶನಗಳು <ref>https://www.thehindu.com/news/national/karnataka/antharangas-19th-show-of-husband-360-on-july-16/article67075680.ece</ref> <ref>https://www.mumbaitheatreguide.com/dramas/kannada/husband-360-kannada-play-preview.asp#</ref>
|-
| 2 || ಹಿಂಗ್ ಮಾಡಿದ್ರ ಹೆಂಗೆ || ಅಂತರಂಗ-ಬಹಿರಂಗ || 27ಕ್ಕೂ ಹೆಚ್ಚು ಪ್ರದರ್ಶನಗಳು
|-
| 3 || ಬಾಯಿ ತುಂಬ ನಕ್ಬಿಡಿ || ಅಂತರಂಗ-ಬಹಿರಂಗ || 28ಕ್ಕೂ ಹೆಚ್ಚು ಪ್ರದರ್ಶನಗಳು
|-
| 4 || ವರಲಕ್ಷ್ಮಿ ಅವಾಂತರ || ಪ್ರಕಸಂ || 11 ಪ್ರದರ್ಶನಗಳು
|-
| 5 || ನಿನ್ ಹಣೆ ಬರಹ ನೀನೇ ಬರಕೊ || — || 2026ರಲ್ಲಿ ಪ್ರದರ್ಶನಕ್ಕೆ ಸಿದ್ಧತೆ
|}
ಇದಲ್ಲದೆ, ಇವರು 'ಚಿಣ್ಣರ ಕ್ರಾಂತಿ' ಎಂಬ ಮಕ್ಕಳ ಚಲನಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಈ ಚಿತ್ರವು ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಯೂಟ್ಯೂಬ್ ಮಾಧ್ಯಮದಲ್ಲಿ ಪ್ರಸಾರವಾಗುವ ಕೆಲವು ಕಿರುಚಿತ್ರಗಳಿಗೂ ಇವರು ಕಥೆ ಮತ್ತು ಸಂಭಾಷಣೆಯನ್ನು ಒದಗಿಸಿದ್ದಾರೆ.
==== ಸಾಂಸ್ಕೃತಿಕ ಯೋಜನೆಗಳು ====
ಇವರು ಪ್ರಸ್ತುತ ಎರಡು ಪ್ರಮುಖ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿದ್ದಾರೆ:
* '''ಸಂಸ್ಕೃತಿಯ ರಂಗ ಸಂಭ್ರಮ:''' ಈ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪೌರಾಣಿಕ ರಂಗ ತರಬೇತಿಯನ್ನು ನೀಡಿ, ಅವರಿಂದ ನಾಟಕ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದಾರೆ.
* '''ನಕ್ಕು ನಲಿ ಕಲೆತು ಬೆರಿ:''' ಈ ಯೋಜನೆಯಡಿ ವಿವಿಧ ವೃದ್ಧಾಶ್ರಮಗಳಿಗೆ ನಿರಂತರವಾಗಿ ಭೇಟಿ ನೀಡಿ, ಅಲ್ಲಿನ ಹಿರಿಯ ನಾಗರಿಕರಿಗಾಗಿ ಉಚಿತ ಸಂಗೀತ, ಹಾಸ್ಯ ಪ್ರಹಸನ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಆರ್ಥಿಕ ಧನಸಹಾಯವನ್ನು ಒದಗಿಸುತ್ತಿದ್ದಾರೆ.
== ಸಾಮಾಜಿಕ ಸೇವೆ ಮತ್ತು ನಾಯಕತ್ವ ==
ನಾಗವೇಣಿ ಅವರು ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ:
* ಹನುಮಂತನಗರ್ ಲಯನ್ಸ್ ಸಂಸ್ಥೆಯ ಕ್ರಿಯಾಶೀಲ ಸದಸ್ಯೆ ಮತ್ತು ಲಯನ್ಸ್ ಸರ್ವಿಸ್ ಟ್ರಸ್ಟ್ನ ಫಂಡ್ ರೈಸಿಂಗ್ ಚೇರ್ಪರ್ಸನ್ (Fund Raising Chairperson).
* ಅಖಿಲ ಭಾರತ ಸಾಹಿತ್ಯ ಪರಿಷದ್ ಕರ್ನಾಟಕ ದಕ್ಷಿಣ ವಲಯದ ಖಜಾಂಚಿ.
* ಶ್ರೀ ಶೇಷಮಹಾಗಣಪತಿ ದೇವಸ್ಥಾನದ ಟ್ರಸ್ಟಿ.
* ಬಲಮುರಿ ಶೇಷಮಹಾಗಣಪತಿ ಮಹಿಳಾ ಸಂಘ, ಮಧುರಾ ಲೇಡಿಸ್ ಕ್ಲಬ್, ಸಖಿ, ಹಾಗೂ ಸಿತಾರಾ ಸಂಘಗಳ ಸಕ್ರಿಯ ಸದಸ್ಯೆ.
=== ಪ್ರಮುಖ ಸಮಾಜ ಸೇವೆಗಳು ===
* '''ಆರೋಗ್ಯ ಮತ್ತು ಉದ್ಯೋಗ:''' ಸಾರ್ವಜನಿಕ ಉದ್ಯಾನವನಗಳಲ್ಲಿ ವಾಯುವಿಹಾರಿಗಳಿಗೆ ಉಚಿತವಾಗಿ ರಕ್ತದೊತ್ತಡ (BP) ಹಾಗೂ ಸಕ್ಕರೆ ಕಾಯಿಲೆ ತಪಾಸಣಾ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಪರಿಸರ ಸಂರಕ್ಷಣೆಯ ಭಾಗವಾಗಿ ಹಳೆಯ ಸೀರೆಗಳಿಂದ ಬಟ್ಟೆ ಬ್ಯಾಗ್ಗಳನ್ನು ತಯಾರಿಸಿ ಬಡ ವ್ಯಾಪಾರಿಗಳಿಗೆ ಉಚಿತವಾಗಿ ವಿತರಿಸುತ್ತಾರೆ ಹಾಗೂ ಇವುಗಳನ್ನು ಹೊಲಿಯುವ ಟೈಲರ್ಗಳಿಗೆ ಪ್ರತಿ ಬ್ಯಾಗ್ಗೆ 2 ರೂ. ನೀಡಿ ಸ್ವಯಂ ಉದ್ಯೋಗ ಕಲ್ಪಿಸಿದ್ದಾರೆ.
* '''ಕೋವಿಡ್-19 ಪರಿಹಾರ:''' ಕೋವಿಡ್ ಲಾಕ್ಡೌನ್ ಸಮಯದಲ್ಲಿ ಇವರು ವಿವಿಧ ದಾನಿಗಳ ಸಹಕಾರದೊಂದಿಗೆ ಸಂಕಷ್ಟದಲ್ಲಿದ್ದ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳಿಗೆ ತಲಾ 800 ರೂ. ಮೌಲ್ಯದ ಪಡಿತರ ಕಿಟ್ಗಳನ್ನು ವಿತರಿಸಿದ್ದಾರೆ (ಒಟ್ಟು ಮೌಲ್ಯ ಅಂದಾಜು 4,00,000 ರೂ.).
* '''ಆರ್ಥಿಕ ದೇಣಿಗೆಗಳು ಮತ್ತು ನೆರವು:''' ನಾಟಕಗಳ ಚಾರಿಟಿ ಪ್ರದರ್ಶನಗಳ ಮೂಲಕ ಹಾಗೂ ವೈಯಕ್ತಿಕವಾಗಿ ವಿವಿಧ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಒಟ್ಟಾರೆಯಾಗಿ ಇದುವರೆಗೆ 35 ಲಕ್ಷಕ್ಕೂ ಹೆಚ್ಚು ಆರ್ಥಿಕ ಧನಸಹಾಯವನ್ನು ನೀಡಿದ್ದಾರೆ.
{| class="wikitable" style="width: 80%;"
|- style="background-color:#1B365D; color:white; text-align:center;"
! ಕ್ರ.ಸಂ. !! ಸಂಸ್ಥೆ / ಯೋಜನೆ !! ಆರ್ಥಿಕ ದೇಣಿಗೆ ವಿವರ
|-
| 1 || ಹನುಮಂತನಗರ್ ಲಯನ್ಸ್ ಡಯಾಲಿಸಿಸ್ ಸಂಸ್ಥೆ || 10 ಲಕ್ಷ ರೂ.
|-
| 2 || ಸಂಪಿಗೆ ಶ್ರೀ ಶ್ರೀನಿವಾಸ ದೇವಸ್ಥಾನದ ಅತಿಥಿಗೃಹ || 5 ಲಕ್ಷ ರೂ.
|-
| 3 || ಮೈಸೂರಿನ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಗೋಪುರ || 1.5 ಲಕ್ಷ ರೂ.
|-
| 4 || ಅಖಿಲ ಭಾರತೀಯ ಸಾಹಿತ್ಯ ಪರಿಷತ್ || 1 ಲಕ್ಷ ರೂ.
|-
| 5 || ಶ್ರೀ ಶೇಷಮಹಾಗಣಪತಿ ದೇವಸ್ಥಾನ || 50,000 ರೂ.
|-
| 6 || ಅಂಧರ ಶಾಲೆ (ಬಾಹ್ಯ ಸಂಸ್ಥೆ) || 25,000 ರೂ.
|-
| 7 || ಕಿವುಡು ಮತ್ತು ಮೂಗರ ಶಾಲೆ (ಬಾಹ್ಯ ಸಂಸ್ಥೆ) || 25,000 ರೂ.
|}
ಇದಲ್ಲದೆ ಪ್ರತಿವರ್ಷ ಶಾಲಾ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ, ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಹಾಗೂ ಬಡ ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ವಾರ್ಷಿಕವಾಗಿ 2 ಲಕ್ಷಕ್ಕೂ ಹೆಚ್ಚು ಹಣವನ್ನು ಮೀಸಲಿಟ್ಟಿದ್ದಾರೆ.
== ಹವ್ಯಾಸಗಳು ಮತ್ತು ಬಹುಮುಖ ಪ್ರತಿಭೆ ==
ಇವರು ಸಾಹಿತ್ಯ ಮತ್ತು ರಂಗಭೂಮಿಯಲ್ಲದೆ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತರಬೇತಿ ಹಾಗೂ ಪ್ರಾವೀಣ್ಯತೆ ಹೊಂದಿದ್ದಾರೆ:
* '''ಸಂಗೀತ:''' ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಮಟ್ಟದ ಶಿಕ್ಷಣ ಪಡೆದಿದ್ದಾರೆ.
* '''ವೇದ ಮತ್ತು ತೋಟಗಾರಿಕೆ:''' ವೇದ ಸೂಕ್ತಿಗಳ ಪಾರಾಯಣ ಹಾಗೂ ಇಕಬಾನಾ (ಜಪಾನಿ ಪುಷ್ಪ ವಿನ್ಯಾಸ ಕಲೆ) ತೋಟಗಾರಿಕೆಯಲ್ಲಿ ಪರಿಣಿತಿ ಪಡೆದಿದ್ದಾರೆ. ಇವರು ತಮ್ಮ ನಿವಾಸದಲ್ಲಿ 350ಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿ ನಿರ್ಮಿಸಿರುವ ಮನೆ ತೋಟದ ಕುರಿತು ಮಾಧ್ಯಮಗಳಲ್ಲಿ ವಿಶೇಷ ವರದಿಗಳು ಪ್ರಸಾರವಾಗಿವೆ.
== ಪ್ರಶಸ್ತಿ ಮತ್ತು ಗೌರವಗಳು ==
ಇವರ ಸಾಹಿತ್ಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಧನೆಗಳನ್ನು ಗುರುತಿಸಿ ವಿವಿಧ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ:
* ಲಯನ್ಸ್ ಇಂಟರ್ನ್ಯಾಷನಲ್ ಸಂಸ್ಥೆಯಿಂದ (ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ) — 'ಸಾಹಿತ್ಯ ರತ್ನ' ಪ್ರಶಸ್ತಿ.
* ಲಯನ್ಸ್ ಇಂಟರ್ನ್ಯಾಷನಲ್ ಸಂಸ್ಥೆಯಿಂದ (ಮಹಿಳಾ ದಿನಾಚರಣೆಯ ಅಂಗವಾಗಿ) — 'ಮಹಿಳಾ ಸಾಧಕಿ' ಪ್ರಶಸ್ತಿ.
* ಚಿಗುರು ಸಂಸ್ಥೆಯಿಂದ — 'ಸಾಹಿತ್ಯ ಸೇವಾ ಪ್ರಶಸ್ತಿ'.
* ನವಚೈತನ್ಯ ಸಂಸ್ಥೆಯಿಂದ — 'ಸ್ತ್ರೀರತ್ನ' ಪ್ರಶಸ್ತಿ.
* ನಿರಂತರಂ ಸಂಸ್ಥೆಯಿಂದ — 'ಸಂಭ್ರಮ' ಪ್ರಶಸ್ತಿ.
* ಲೇಖಿಕಾ ಸಾಹಿತ್ಯ ವೇದಿಕೆಯಿಂದ — 'ಲೇಖಿಕಾ ಶ್ರೀ' ಪ್ರಶಸ್ತಿ. <ref>https://starofmysore.com/literary-award-winners/</ref>
* ಅಂತರಂಗ-ಬಹಿರಂಗ ರಂಗತಂಡದಿಂದ — 'ಹಾಸ್ಯದರಸಿ' ಗೌರವ ಪ್ರಶಸ್ತಿ.
ದೂರದರ್ಶನ ಚಂದನ ವಾಹಿನಿಯು ಇವರ ಸಾಧನೆಯನ್ನು ಗುರುತಿಸಿ 'ಬೆಳಗು', 'ಓ ಸಖಿ', 'ಶಕ್ತಿ' ಮತ್ತು 'ಶುಭೋದಯ' ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಆಹ್ವಾನಿಸಿ ವಿಶೇಷ ಸಂದರ್ಶನಗಳನ್ನು ಪ್ರಸಾರ ಮಾಡಿದೆ. ಇವರ ಸಾಂಸ್ಕೃತಿಕ ಕೊಡುಗೆಗಳು ಹಾಗೂ ಮನೆ ತೋಟದ ಕುರಿತು 'ಪ್ರಜಾವಾಣಿ', 'ಪ್ರಿಯಾಂಕ' ಮತ್ತು 'ಇಂದು ಸಂಜೆ' ಪತ್ರಿಕೆಗಳಲ್ಲಿ ವಿಶೇಷ ಸುದ್ದಿಗಳು ಪ್ರಕಟಗೊಂಡಿವೆ.<ref>https://www.youtube.com/watch?v=Gl88jgufGvc</ref>
== ಉಲ್ಲೇಖಗಳು ==
{{Reflist}}
[[ವರ್ಗ:ಕನ್ನಡ ಲೇಖಕರು]]
[[ವರ್ಗ:ರಂಗಕರ್ಮಿಗಳು]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ಹಾಸನದ ವ್ಯಕ್ತಿಗಳು]]
kraowy8d7ze5q0sehyk99q925b0ey4l
ಸದಸ್ಯ:2511171tejaswi
2
179447
1375838
1375745
2026-06-25T14:18:19Z
2511171tejaswi
100017
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
1375838
wikitext
text/x-wiki
phoiac9h4m842xq45sp7s6u21eteeq1
1375839
1375838
2026-06-25T14:27:20Z
2511171tejaswi
100017
1375839
wikitext
text/x-wiki
<nowiki>{{db-u1}}</nowiki>
o3zovhw808v05ei1in4cxaxls8zngih
ಸದಸ್ಯ:2510453sahana/ನನ್ನ ಪ್ರಯೋಗಪುಟ
2
179449
1375829
1375785
2026-06-25T12:25:10Z
~2026-36586-08
100181
1375829
wikitext
text/x-wiki
ನನ್ನ ಹೆಸರು ಸಹನಾ ಸ್ ನಾಯಕ್.ನಾನು ಪ್ರಸ್ತುತ ಬೆಂಗಳೂರಿನಲ್ಲಿ ಬ್ಯಾಚೆರ್ಲೊರ್ ಆ ಕಾಮರ್ಸ್ ಜೊತೆಗೆ ಚಾರ್ಟರ್ಡ್ ಅಕೌಂಟೆನ್ಸಿ ಓದುತ್ತಿದ್ದೇನೆ.ನನ್ನ ಶಿಕ್ಷಕರು ಕೊಟ್ಟ ಅಸೈನ್ಮೆಂಟ್ ಚಟುವಟಿಕೆಯ ಭಾಗವಾಗಿ ಈ ಪ್ರಬಂಧವನ್ನು ಬರೆಯುತ್ತಿದ್ದೇನೆ.ಈ ಪ್ರಬಂಧ ನನ್ನನ್ನು ಪರಿಚಯಿಸಿಕೊಳ್ಲು , ನನ್ನ ಶೈಕ್ಷಣಿಕ ಪಯಣ ಆಸಕ್ತಿಗಳು ಸಾಧನೆಗ ಮತ್ತು ಭವಿಷ್ಯದ ಗುರಿಗಳ ಬಗ್ಗೆ ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದೇನೆ .ಬೆಂಗಳೂರು ತನ್ನ ಉತ್ತಮ ಶೈಕ್ಷಣಿಕ ಅವಕಾಶಗಳು , ಸಾಂಸ್ಕೃತಿಕ ವೈವಿಧ್ಯತೆ ಮತ್ತು ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಪ್ರಸಿದ್ಧವಿದೆ.ಇಂಥ ಚೈತನ್ಯಮಯ ವಾತಾವರಣದಲ್ಲಿ ಬೆಳದಿದ್ದರಿಂದ ನಾನೇಗೆ ವಿಶಾಲ ದೃಷ್ಟಿಕೋನ ಮತ್ತು ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವ ಬೆಳೆಯಲು ಸಹಾಯವಾಗಿದೆ .ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಕಥೆ ಇದೆ ಎಂದು ನಾನು ನಂಬುತ್ತೇನೆ, ಮತ್ತು ಈ ಪ್ರಬಂಧ ನನ್ನ ಪಯಣ ಮೌಲ್ಯಗಳು ಮತ್ತುಆಕಾಂಶಗಳನ್ನು ಪ್ರತಿಬಿಂಬಿಸುತ್ತದೆ.
ನಾನು ಆರು ಸದಸ್ಯರು ಇರುವ ಪ್ರೀತಿ ಮತ್ತು ಬೆಂಬಲ ತುಂಬಿದ ಕುಟುಂಬದಲ್ಲಿ ವಾಸಿಸುತ್ತೇನೆ. ನನ್ನ ಕುಟುಂಬದಲ್ಲಿ ನನ್ನ ತಂದೆ, ತಾಯಿ ,ತಂಗಿ , ಅಜ್ಜಿ ಮಾವ ಮತ್ತು ನಾನು ಇದ್ಹೇವೆ . ನನ್ನ ಕುಟುಂಬವೇ ನನ್ನ ದೊಡ್ಡ ಶಕ್ತಿ ಮತ್ತು ಪ್ರೇರಣೆ. ಅವರು ಯಾವಾಗಲು ಕಷ್ಟಪಟ್ಟು ಕೆಲಸ ಮಾಡಲು ಶಿಸ್ತನ್ನು ಪಾಲಿಸಲು ಮತ್ತು ನನ್ನ ಗುರಿಗಳನ್ನು ಸಾಧಿಸಲು ನನಗೆ ಪ್ರೋತ್ಸಾಹ ನೀಡಿದ್ದಾರೆ. ನಾನು ಹೊಂದಿರುವ ನಿಷ್ಠೆ ,ಗೌರವ , ದಯೆ ಮತ್ತು ಸಹನೆ ಎಂಭ ಮೌಲ್ಯಗಳು ಅವರ ಮಾರ್ಗದರ್ಶನ ಮತ್ತು ಬೆಂಬಲಿನಿಂದ ಬಂದಿವೆ .ನನ್ನ ಶೈಕ್ಷಣಿಕ ಪಯಣವು ಬಹಳ ಸಮೃದ್ಧ ಮತ್ತು ಪ್ರೇರಣಾದಾಯಕವಿದೆ .ನಾನು ಬಗ್ಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ನನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ , ಬೋರ್ಡ್ ಪರೀಕ್ಷೆಯಲ್ಲಿ 84% ಅಂಕಗಳನ್ನು ಪಡೆದಿದ್ದೇನೆ.ಶಾಲಾ ದಿನಗಳು ನನಗೆ ಉತ್ತಮ ಶೈಕ್ಷಣಿಕ ಅಡಿಪಾಯವನ್ನು ನೀಡುವುದರ ಜೊತೆಗೆ ಟೀಮ್ವರ್ಕ್ ಮತ್ತು ಟೈಮ್ ಮ್ಯಾನೇಜ್ಮೆಂಟ್ ಥರ ಮುಖ್ಯ ಕೌಶಲ್ಯಗಳನನ್ನು ಕಳಿಸಿದವು .
ನಂತರ ನಾನು ಹೋಲಿ ಸ್ಪಿರಿಟ್ ಪು ಕಾಲೇಜು ನಲ್ಲಿ ನನ್ನ ಪುಚ್ ಶಿಕ್ಷಣವನ್ನು ಪೂರ್ಣಗೊಳಿಸಿ 94% ಅಂಕಗಳನ್ನು.ಈ ಸಾಧನೆ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಇನ್ನು ಹೆಚ್ಚಿನ ಗುರಿಗಳನನ್ನು ಸಾಧಿಸಲು ಪ್ರೇರಣೆ ನೀಡಿತು. ಇದರಿಂದ ನಿರಂತರ ಪ್ರಯತ್ನ, ಸಮರ್ಪಣೆ ಮತ್ತು ಸರಿಯಾದ ಯೋಜನೆಯ ಮಹತ್ತ್ವವನ್ನು ಕಲಿತಿದ್ದೇನೆ.ನಾನು ಓದಿದ ಎಲ್ಲ ವಿಷಯಗಳಲ್ಲಿ ಅಕೌಂಟೆನ್ಸಿ ಮತ್ತು ಕನ್ನಡ ನನ್ನ ಅತ್ಯಂತ ಇಷ್ಟದ ವಿಷಯಗಳು. ಅಕೌಂಟೆನ್ಸಿ ನನಗೆ ಇಷ್ಟ ಯಾಕೆಂದ್ರೆ ಅದು ತಾರ್ಕಿಕ ಚಿಂತನೆ, ಸಮಸ್ಯಾ ಪರಿಹಾರ ಮತ್ತು ಹಣಕಾಸಿನ ವಿಷಯಗಳ ಅರಿವನ್ನು ಒಳಗೊಂಡಿದೆ. ಕನ್ನಡ ವಿಷಯ ಅದರ ಸಮೃದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಮಹತ್ವದಿಂದ ನನ್ನನ್ನು ಆಕರ್ಷಿಸುತ್ತದೆ.
ಶೈಕ್ಷಣಿಕ ಜೀವನದ ಜೊತೆಗೆ ನಾನು ಅನೇಕ ಕೋ-ಕರಿಕ್ಯುಲರ್ ಮತ್ತು ಎಸ್ತ್ರಕರಿಕ್ಯುಲರ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ . ಶಿಕ್ಷಣ ಕೇವಲ ಪುಸ್ತಕಗಳು ಮತ್ತು ಪರೀಕ್ಷೆಗಳಿಗೆ ಸೀಮಿತವಲ್ಲ ಎಂದು ನಾನು ನಂಬುತ್ತೇನೆ . ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನನಗೆ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ನಾಯಕತ್ವ ಗುಣಗಳು ಬೆಳೆದಿವೆ. ಹಾಡುಗಾರಿಕೆ, ಪೆನ್ಸಿಲ್ ಸ್ಕೇಟಚಿಂಗ್ , ಸೋಲೋ ಡಾನ್ಸ್, ಗ್ಲಾಸ್ ಪೇಂಟಿಂಗ್ ಮತ್ತು ಇತರ ಸೃಜನಾತ್ಮಕ ಸ್ಪರ್ಧೆಗಳಲ್ಲಿ ನಾನು ಬಹುಮಾನ ಮತ್ತು ಗುರುತಿಸುವಿಕೆಯನ್ನು ಪಡೆದಿದ್ದೇನೆ.
ನನ್ನ ಫ್ರೀ ಟೈಮ್ ನಲ್ಲಿ ಸಂಗೀತ ಕೇಳುವುದು ನನಗೆ ತುಂಬಾ ಇಷ್ಟ. ಅದು ನನ್ನ ಮನಸ್ಸನ್ನು ತಾಜಾವಾಗಿಸುತ್ತದೆ ಮತ್ತು ಒತ್ತಡವನನ್ನು ಕಡಿಮೆ ಮಾಡುತ್ತದೆ. ಮತ್ತೊಬ್ಬ ಹವ್ಯಾಸ ಅಂದರೆ ಒಡಹುವುದು ಮತ್ತು ಹೊಸ ವಿಷಯಗಳನನ್ನು ಕಾಲಿವುದು. ಜ್ಞಾನ ಗಳಿಸುವುದು ಮತ್ತು ಹೊಸ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವುದು ನನಗೆ ತುಂಬಾ ನನ್ನ ಫ್ರೀ ಟೈಮ್ ನಲ್ಲಿ ಸಂಗೀತ ಕೇಳುವುದು ನನಗೆ ತುಂಬಾ ಇಷ್ಟ . ಅದು ನನ್ನ ಮನಸ್ಸನ್ನು ತಾಜಾವಾಗಿಸುತ್ತದೆ ಮತ್ತು ಒತ್ತಡವನನ್ನು ಕಡಿಮೆ ಮಾಡುತ್ತದೆ. ಮತ್ತೊಬ್ಬ ಹವ್ಯಾಸ ಅಂದರೆ ಒಡಹುವುದು ಮತ್ತು ಹೊಸ ವಿಷಯಗಳನನ್ನು ಕಾಲಿವುದು . ಜ್ಞಾನ ಗಳಿಸುವುದು ಮತ್ತು ಹೊಸ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವುದು ನನಗೆ ತುಂಬಾ ಸಂತೋಷ ನೀಡುತ್ತದೆ.ಪೆನ್ಸಿಲ್ ಸ್ಕೇಟಚಿಂಗ್ ಮತ್ತು ಗ್ಲಾಸ್ ಪೇಂಟಿಂಗ್ ಥರ ಕಲಾತ್ಮಕ ಚಟುವಟಿಕೆಗಳು ನನ್ನ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಸಹಾಯ ಮಾಡಿವೆ. ಇವುಗಳು ನನಗೆ ತಾಳ್ಮೆ, ವಿವರಗಳಿಗೆ ಗಮನ ಮತ್ತು ಸಮರ್ಪಣೆಯ ಮಹತ್ವವನ್ನು ಕಳಿಸಿವೆ. ಅದೇ ರೀತಿಯಲ್ಲಿ ಸೋಲೋ ಡಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನನ್ನ ವೇದಿಕೆ ಆತ್ಮವಿಶ್ವಾಸ ಹೆಚ್ಚಾಗಿದೆ. ಪ್ರತಿಯೊಂದು ಸಾಧನೆ ಮತ್ತು ಅನುಭವ ನನ್ನ ವ್ಯಕ್ತಿತ್ವ ಅಭಿವೃದ್ಧಿಗೆ ಸಹಕರಿಸಿಧೆ.
ಕೊನೆಗೆ, ನಾನು ಸಹನಾ ಸ್. ನಾಯಕ್ , ಒಬ್ಬ ಉತ್ಸಾಹಭರಿತ ಕಲಿಕೆಗಾರ್ತಿ, ಭವಿಷ್ಯದ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಶೈಕ್ಷಣಿಕ ಹಾಗು ಪತ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ವಿದ್ಯಾರ್ಥಿನಿ. ನನ್ನ ಕುಟುಂಬ, ಶಿಕ್ಷಣ, ಸಾಧನೆಗಳು ಮತ್ತು ಆಸಕ್ತಿಗಳು ನನ್ನನ್ನು ಇಂದಿನ ವ್ಯಕ್ತಿಯಾಗಿ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ನನ್ನ ಸಾಧನೆಗಳ ಬಗ್ಗೆ ನನಗೆ ಹೆಮ್ಮೆ ಇದೆ ಮತ್ತು ಭವಿಷ್ಯದಲ್ಲಿ ಇನ್ನು ಹೆಚ್ಚಿನ ಯಶಸ್ಸುಗಳನನ್ನು ಸಾಧಿಸಲು ಉತ್ಸುಕಳಾಗಿರುತ್ತೇನೆ. ದೃಢ ಸಂಕಲ್ಪ, ಸಮರ್ಪಣೆ ಮತ್ತು ಸಕಾರಾತ್ಮಕ ಮನೋಭಾವದೊಂದಿಗೆ ನನ್ನ ಕನಸುಗಳನನ್ನು ನನಸಾಗಿಸಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಬಯಸುತ್ತೇನೆ.
fs5d2j5u488iiywbkl1x6153ieflb4j
ಸದಸ್ಯ:2511174TulasiKJ/ನನ್ನ ಪ್ರಯೋಗಪುಟ
2
179455
1375835
1375821
2026-06-25T14:04:22Z
2511174TulasiKJ
100019
1375835
wikitext
text/x-wiki
ಮೈ ನೇಮ್ ಐಸ್ ತುಳಸಿ ಕೆಜೆ ಅಂಡ್ ಈ ಆಮ್ ೧೯ತ್ ಇಯರ್ಸ್ ಓಲ್ಡ್.ಈ ಆಮ್ ಕರೆಂಟಿಲಿ ಲಿವಿಂಗ್ ಇನ್ ಬ್ಯಾಂಗಲೋರ್ ,ಕಾರಾಂತಕ ಅಂಡ್ ಮೈ ನೇಟಿವ್ ಐಸ್ ಕೂರ್ಗ್.ಈ ಕಮ್ ಫ್ರಮ್ ಆ ಲವಿಂಗ್ ಅಂಡ್ ಸುಪ್ಪೋರ್ಟಿನ್ಗ್ ಫ್ಯಾಮಿಲಿ.ಮೈ ಫಾದರ್ ನೇಮ್ ಐಸ್ ಜಗದೀಶ್ ಕುಯ್ಯಮುಡಿ ಅಂಡ್ ಮೈ ಮಾತೃ ನೇಮ್ ಐಸ್ ಪ್ರೀತಿ ಉದಿಯನ .ಥೆಯ್ ಬೋಥ್ ಅರೆ ವರ್ಕಿಂಗ್ ಪ್ರೊಫೆಶನಲ್ಸ್ ಅಟ್ ಐಬಿಎಂ.ಥೆಯ್ ಹಾವೇ ಆಲ್ವೇಸ್ ಸ್ಟೊವ್ಡ್ ಬೈ ಮೈ ಸೈಡ್ ಅಂಡ್ ಎಂಕೋರ್ಜ್ಡ್ ಮೇ ಫಾರ್ ಎಲ್ಲ ಮೈ ಚೊಯ್ಸ್ಸ್.ಈ ಆಲ್ಸೋ ಹಾವೇ ಆ ಯಂಗ್ರ್ ಬ್ರದರ್ ನೇಮ್ಡ್ ಪ್ರೀತಮ್ ಕೆಜೆ.ವೀ ಅಫೆನ್ ಫೈಟ್ ಫಾರ್ ಟಿವಿ ಅಂಡ್ ಫೋನ್,ಮೋಸ್ಟ್ಲಿ ಫಾರ್ ಜಂಕ್ ಫುಡ್ ಇಫ್ ಈ ಎಟ್ ಹಿಸ್ ಶೇರ್ ಆ ಚಿಪ್ಸ್ ಹೇ ವಿಲ್ ಕಮ್ ಫಾರ್ ಆ ಫೈಟ್ ವಿಥ್ ಮೇ.ಸೋಮೇಟಿಂಗ್ಸ್ ಯಸ್ ಈ ಎಂಜಾಯ್ ಸ್ಪೆನ್ಡಿಂಗ್ ಟೈಮ್ ವಿಥ್ ಹಿಮ್.ಈ ಕಂಪ್ಲೀಟೆಡ್ ಮೈ ಸ್ಕೂಲಿಂಗ್ ಇನ್ ಮಗನೋಲಿತ್ ಮಮರ್ರುತಿ ಪಬ್ಲಿಕ್ ಸ್ಕೂಲ್.ಈಡಿದ ಎಂಜಾಯ್ ಮೈ ಸ್ಕೂಲ್ ಲೈಫ್ ,ಈ ಹಾಡ್ ಮೈ ಫ್ರೆಂಡ್ಸ್ ಅಂಡ್ ಡ್ಯೂರಿಂಗ್ ಲಂಚ್ ಹೌರ್ಸ್ ಆಫ್ಟರ್ ಫಿನಿಶಿಂಗ್ ಅವರ್ ಲಂಚ್ ವೀ ಉಷೆ ಟು ರಶ್ ಟು ದಿ ಬ್ಯಾಡ್ಮಿಂಟನ್ ಕೋರ್ಟ್ ಫಾರ್ ಪ್ಲೇಯಿಂಗ್ ಬ್ಯಾಡ್ಮಿಂಟನ್ ಇಟ್ ವಾಸ್ ಸೊ ಫುನ.ಅಂಡ್ ಡ್ಯೂರಿಂಗ್ ಎಕ್ಷಮ
ಟೈಮ್ ಕಾಲಿಂಗ್ ಎವೆರಿನ್ ಇಫ್ ಥೆಯ್ ಸ್ಟುಡಿಎಡ್ ,ಶೇರಿಂಗ್ ಫುಡ್ಸ್, ಗೋಯಿಂಗ್ ಔಟ್ ಫಾರ್ ಆ ಟ್ರಿಪ್ಸ್.ಈ ಮೇಡ್ ಮೆನಿ ವಂಡರ್ಫುಲ್ ಮೆಮರೀಸ್ ಅಂಡ್ ಫ್ರೆಂಡ್ಶಿಪ್ಸ್ ಥಟ್ ಕಂಟಿನ್ಯೂ ಟು ಬಿ ವಾಲುಅಬಲೆ ಟು ಮೇ.ಆಫ್ಟರ್ ಕಂಪ್ಲೇಟಿಂಗ್ ಮೈ ಸ್ಕೂಲಿಂಗ್, ಈ ಪುರ್ಸುಎಡ್ ಮೈ ಕಾಲೇಜು ಇನ್ ಕ್ರೈಸ್ಟ್ ಜೂನಿಯರ್ ಕಾಲೇಜು.ಮೈ ಕಾಲೇಜು ಹೆಲ್ಪೇಡ್ ಮೇ ಮೇ ಟು ಬಿಲ್ಡ್ ಅಪ್ ಸಾಫ್ಟ್ ಸ್ಕಿಲ್ಲ್ಡ್ ಲೈಕ್ ರೆಸ್ಪೋನ್ಸಿಬಲ್ ಅಂಡ್ ಗೋಲ್ ಓರಿಎಂಟೆಡ್. ಒನ್ ಆ ಮೈ ಸ್ಟ್ರಾಂಗೆಸ್ಟ್ ಕ್ವಾಲಿಟಿಸ್ ಐಸ್ ಮೈ ವಿಲ್ಲಿಂಗ್ನ್ಸ್ ಟು ಲರ್ನ್ ನವ ಥಿಂಗ್ಸ್. ಈ ಲವ್ ಎಸ್ಪ್ಲೋರಿಂಗ್ ಅಬೌಟ್ ನವ ಇಂಟೆರೆಸ್ಟಿಂಗ್ ಥಿಂಗ್ಸ್.wಹೆನೆವೆರ್ ಈ ಆಮ್ ಇನ್ ಆ ಡಿಫಿಕಲ್ಟ್ ಸ್ಪಾಟ್ ಈ ಓನ್ಲಿ ಫೋಕಸ್ ಆನ್ ಫೈಂಡಿಂಗ್ ದಿ ಸೊಲ್ಯೂಷನ್ ಔಟ್ ಆ ಇಟ್ ಇನ್ಸ್ಟೆಡ್ ಆ ಗೆಟಿಂಗ್ ಸ್ಕ್ಯಾರ್ಡ್ ಅಬೌಟ್ ದಿ ಸಿತುಆಶನ್.ಈ ಆಲ್ಸೋ ವ್ಯಾಲ್ಯೂ ಹಾನೆಸ್ಟಿ ,ಕಿಂಡನೆಸ್ಸ್ ಅಂಡ್ ರೆಸ್ಪೆಕ್ಟ್ ಇನ್ ಮೈ ರಿಲೇಷನ್ಶಿಪ್ಸ್ ವಿಥ್ ಓಥೆರ್ಸ್.ಸ್ವಿಮ್ಮಿಂಗ್ ಐಸ್ ಒನ್ ಆ ಮೈ ಫೇವರಿಟ್ ಸ್ಪೋರ್ಟ್ ಅಂಡ್ ಆಕ್ಟಿವಿಟಿ ಈ ತೃಲೇ ಎಂಜಾಯ್. ಈ ಎಂಜಾಯ್ ಸ್ಪೆನ್ಡಿಂಗ್ ಮೈ ಟೈಮ್ ಇನ್ ವಾಟರ್ ಬೇಕಾಉಜ್ ಇಟ್ ಆಲ್ವೇಸ್ ಮೇ ಟು ಓವೆರಿಕೋಮ್ ಎಲ್ಲ ಮೈ ಮೆಂಟಲ್ ಸ್ಟ್ರೆಸ್.ಅನೊಥೆರ್ ಸ್ಪೋರ್ಟ್ ಥಟ್ ಈ ಎಂಜಾಯ್ ಪ್ಲೇಯಿಂಗ್ ಐಸ್ ಬ್ಯಾಡ್ಮಿಂಟನ್.ಸಿನ್ಸ್ ಚಿಲ್ಧೂದ್ ಗ್ರೇಡ್ ಆ ೬ಥಂ ಈ ಹಾವೇ ಬೀನ್ ಅತ್ತೆಂಡಿಂಗ್ ಕೋಚಿಂಗ್ ಅಂಡ್ ಪ್ಲೇಯೆಡ್ ಮೆನಿ ಇಂಟೆರ್ಸ್ಕೂಲ್.ಪ್ಲೇಯಿಂಗ್ ಬ್ಯಾಡ್ಮಿಂಟನ್ ಹೆಲ್ಫ್ಸ್ ಮೇ ಟು ಓವೆರಿಕೋಮ್ ಮೈ ಲೇಝಿನೆಸ್ಸ್ ಅಂಡ್ ಹೆಲ್ಪ್ ಮೇ ಸ್ಟೇ ಫೋಕಸ್ ಆನ್ ದಿ ವರ್ಕ್ ಈ ಡಾ.ಡಾನ್ಸ್ ಐಸ್ ಒನ್ ಆ ಮೈ ಬಿಗ್ಗೆಸ್ಟ್ ಪ್ಯಾಶನ್ ಇನ್ ಮೈ ಲೈಫ್,ಸಿನ್ಸ್ ಚಿಲ್ಧೂದ್ ಈ ಲವ್ಡ್ ಡ್ಯಾನ್ಸಿಂಗ್.ಈ ಫೀಲ್ ನರ್ಜಟಿಕ್ ಅಂಡ್ ಕಾಂಫಿಡೆಂಟ್.ಅಪಾರ್ಟ್ ಫ್ರಮ್ ಮೈ ಹೊಬಿಬಿಎಸ್ ಅಂಡ್ ಇಂಟರೆಸ್ಟ್,ಈ ಬಿಲೀವ್ ಇನ್ ಪರ್ಸನಲ್ ಗ್ರೋಥ್,ಎವೆರಿದಯ್ ಪ್ರೆಸೆಂಟ್ಸ್ ನವ ಒಪ್ಪೋರ್ಚುನಿಟಿಸ್ ಟು ಲರ್ನ್ ಅಂಡ್ ಬೇಕಷ್ಟೇ ಆ ಬೆಟರ್ ವರ್ಷನ್ ಆ ಓರ್ಸಿಲ್ವೇಸ್.ಒನ್ ಆ ಮೈ ಫ್ಯೂಚರ್ ಗೊಯಲ್ಸ್ ಐಸ್ ಟು ಬಿಲ್ಡ್ ಆ ಸುಸ್ಸ್ಸ್ಫ್ಯೂಲ್ ಕೆರಿಯರ್ ವೇಳೆ ಕಂಟಿನ್ಯೂಇಂಗ್ ಟು ಲರ್ನ್ ಅಂಡ್ ಗ್ರೋ ಅಸ ಎನ್ ಇಂಡಿವಿಜುಯಲ್. ಈ ವಾಂಟ್ ಟು ಮೇಕ್ ಮೆಲಾನಿನ್ಗ್ಫುಲ್ ಕಂತ್ರಿಬುಷನ್ಸ್ ಟು ಸೊಸೈಟಿ ಅಂಡ್ ಕ್ರೆತೆ ಆ ಪಾಸಿಟಿವ್ ಇಂಪ್ಯಾಕ್ಟ್ ಥ್ರೂ ಮೈ ವರ್ಕ್.ಈ ಬಿಲೀವ್ ಥಟ್ ಎವ್ರಿ ಎಕ್ಸ್ಪೀರಿಯೆನ್ಸ್ ,wಹೆತ್ರ್ ಪಾಸಿಟಿವ್ ಓರ್ ನೆಗೆಟಿವ್,ಟೀಚೆಸ್ ಅಸ್ ಸಂಥಿಂಗ್ ವಾಲುಅಬಲೆ.ದಿ ಸಪೋರ್ಟ್ ಆ ಮೈ ಫ್ಯಾಮಿಲಿ ,ದಿ ಫ್ರೆಂಡ್ಷಿಪ್ಸ್ ಈ ಬಿಲ್ಟ್,ದಿ ಲೆಸೆನ್ಸ್ ಈ ಲೇಅರ್ನ್ಟ್ ಥ್ರೂ ಎಜುಕೇಶನ್ ಅಂಡ್ ದಿ ಎಸ್ಪಿಎರಿಎನ್ಸ್ಡ್ ಈ ಗೈನೇಡ್ ಫ್ರಮ್ ಸ್ಪಿರಿಟ್ಸ್ ಅಂಡ್ ಡಾನ್ಸ್ ಪ್ಲೇಸ್ ಆ ಕೀ ರೋಲ್ ಇನ್ ಮೈ ಲೈಫ್ ಜರ್ನಿ.
ಈ ಆಮ್ ಆಲ್ಸೋ ಆ ಬಿಗ್ ಫುಡ್ ಲೋವರ್. ಒನ್ ಥಿಂಗ್ ಥಟ್ ಮೈ ಫ್ಯಾಮಿಲಿ ಅಂಡ್ ಫ್ರೆಂಡ್ಸ್ ಕ್ನೌ ವೆರಿ ವೆಲ್ ಅಬೌಟ್ ಮೇ ಐಸ್ ಮೈ ಲವ್ ಫಾರ್ ಜಂಕ್ ಫುಡ್.wಹೆತ್ರ್ ಇಟ್ ಐಸ್ ಬರ್ಗರ್ ,ಪಿಜ್ಜಾ,ಫ್ರೈಸ್,ಚಿಪ್ಸ್ ಓರ್ ಸ್ಟ್ರೀಟ್ ಫುಡ್ಸ್. ಈ ಆಮ್ ಆಲ್ವೇಸ್ ಎಕ್ಸಿಕ್ಟ್ದ್ ಟು ಟ್ರೈ ಡಿಫರೆಂಟ್ ಫುಡ್ಸ್.ಆ ಕೋರ್ಸ್, ಈ ಟ್ರೈ ಟು ಮೈನ್ಟೈನ್ ಆ ಬ್ಯಾಲೆನ್ಸ್ ,ಬಟ್ ಈ ಡೆಫಿನಿಟೇಲ್ಯ್ ಎಂಜಾಯ್ ತ್ರೆಯೇಟಿಂಗ್ ಮೈಸೆಲ್ಫ್ wಹೆನೆವೆರ್ ಈ ಗೆಟ್ ಆ ಚಾನ್ಸ್.
ಮೈ ಲವ್ ಫಾರ್ ಫುಡ್ ಆಲ್ಸೋ ದೆವೆಲೊಪೆದ್ ಇಂಟು ಎನ್ ಇಂಟರೆಸ್ಟ್ ಇನ್ ಕುಕಿಂಗ್ . ಈ ಎಂಜಾಯ್ ಸ್ಪೆನ್ಡಿಂಗ್ ಟೈಮ್ ಇನ್ ದಿ ಕಿಚನ್ ಅಂಡ್ ಎಸ್ಪಿರಿಮೆಂಟಿಂಗ್ ವಿಥ್ಡಿಫರೆಂಟ್ ರೆಸಿಪೀಸ್.ಕುಕಿಂಗ್ ಹೆಲ್ಫ್ಸ್ ಮೇ ರೆಲಕ್ಷ ಅಂಡ್ ಜಿವ್ಸ್ ಮೇ ಆ ಸೆನ್ಸ್ ಆ ಸ್ಯಾಟಿಸ್ಫ್ಯಾಕ್ಷನ್ wಹಿನಿ ಕ್ರೆತೆ ಸಂಥಿಂಗ್ ಡೆಲಿಷಿಔಸ್. ಈ ಎಸ್ಪಿಎಸಿಎಲ್ಯ್ ಎಂಜಾಯ್ ಟ್ರೈಯಿಂಗ್ ನವ ದಿಶೆಸ್,ಲರ್ನಿಂಗ್ ಕುಕಿಂಗ್ ಟೆಕ್ನಿಕ್ಯೂಸ್ ಅಂಡ್ ಪ್ರೆಪ್ರಿಂಗ್ ಫುಡ್ ಫಾರ್ ಮೈ ಫ್ಯಾಮಿಲಿ ಅಂಡ್ ಫ್ರೆಂಡ್ಸ್.
m0t9uycifyq4bhe1f4506u232lqpy4w
ಸದಸ್ಯರ ಚರ್ಚೆಪುಟ:2511171Tejaswi.C
3
179456
1375832
2026-06-25T13:20:41Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1375832
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2511171Tejaswi.C}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೮:೫೦, ೨೫ ಜೂನ್ ೨೦೨೬ (IST)
dfe6ecl6p3vioe7tcm4odrz5twj5nmn
ಸದಸ್ಯರ ಚರ್ಚೆಪುಟ:Chandana Kl
3
179457
1375834
2026-06-25T13:37:21Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1375834
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Chandana Kl}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೯:೦೭, ೨೫ ಜೂನ್ ೨೦೨೬ (IST)
tpc16cm9g3goislxby2u7mbbiqs00b2
ಸದಸ್ಯ:2510115chandanakl/ನನ್ನ ಪ್ರಯೋಗಪುಟ
2
179458
1375836
2026-06-25T14:06:42Z
2510115chandanakl
100048
ಹೊಸ ಪುಟ: ನನ್ನ ಹೆಸರು ಚಂದನ.
1375836
wikitext
text/x-wiki
ನನ್ನ ಹೆಸರು ಚಂದನ.
0uk0mjoempyfm1njd6jgn2gafuql3nv
1375837
1375836
2026-06-25T14:17:26Z
2510115chandanakl
100048
/* */
1375837
wikitext
text/x-wiki
ನನ್ನ ಹೆಸರು ಚಂದನ.naanu ಬೆಂಗಳೂರಿನಲ್ಲಿರುವ ಕ್ರೈಸ್ಟ್
ಯೂನಿವರ್ಸಿಟಿ (ಸೆಂಟ್ರಲ್ ಕ್ಯಾಂಪಸ್) ನಲ್ಲಿ
iqkicgq38zag30c66wtedsyi4qyuh7o
ಸದಸ್ಯರ ಚರ್ಚೆಪುಟ:Naveenvishrutha
3
179459
1375847
2026-06-25T21:30:56Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1375847
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Naveenvishrutha}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೩:೦೦, ೨೬ ಜೂನ್ ೨೦೨೬ (IST)
80omq63i87gucrkukliawn5xi0jbser
ಸದಸ್ಯರ ಚರ್ಚೆಪುಟ:Fandi89
3
179460
1375851
2026-06-26T01:03:08Z
Mfield
97709
Mfield [[ಸದಸ್ಯರ ಚರ್ಚೆಪುಟ:Fandi89]] ಪುಟವನ್ನು [[ಸದಸ್ಯರ ಚರ್ಚೆಪುಟ:ArtificialHumanity]] ಕ್ಕೆ ಸರಿಸಿದ್ದಾರೆ: Automatically moved page while renaming the user "[[Special:CentralAuth/Fandi89|Fandi89]]" to "[[Special:CentralAuth/ArtificialHumanity|ArtificialHumanity]]"
1375851
wikitext
text/x-wiki
#REDIRECT [[ಸದಸ್ಯರ ಚರ್ಚೆಪುಟ:ArtificialHumanity]]
96wkukr5z7r070uxfc8un1z8u7ss5wy
ಸದಸ್ಯ:2510563tanishqas/ನನ್ನ ಪ್ರಯೋಗಪುಟ
2
179461
1375858
2026-06-26T08:30:35Z
2510563tanishqas
100021
ಹೊಸ ಪುಟ: ನಮಸ್ಕಾರ ಎಲ್ಲರಿಗೂ, ನನ್ನ ಹೆಸರು ತನಿಷ್ಕಾ ಎಸ್. ನಾನು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಲ್ಲಿ ಜನಿಸಿ, ಅಲ್ಲಿಯೇ ಬೆಳೆದೆ. ಬೆಂಗಳೂರು ತನ್ನ ವೈವಿಧ್ಯಮಯ ಸಂಸ್ಕೃತಿ, ಉತ್ತಮ ಶಿಕ್ಷಣ ಸಂಸ್ಥೆಗಳು, ತಂತ್ರಜ್ಞಾ...
1375858
wikitext
text/x-wiki
ನಮಸ್ಕಾರ ಎಲ್ಲರಿಗೂ,
ನನ್ನ ಹೆಸರು ತನಿಷ್ಕಾ ಎಸ್. ನಾನು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಲ್ಲಿ ಜನಿಸಿ, ಅಲ್ಲಿಯೇ ಬೆಳೆದೆ. ಬೆಂಗಳೂರು ತನ್ನ ವೈವಿಧ್ಯಮಯ ಸಂಸ್ಕೃತಿ, ಉತ್ತಮ ಶಿಕ್ಷಣ ಸಂಸ್ಥೆಗಳು, ತಂತ್ರಜ್ಞಾನ ಮತ್ತು ಆಧುನಿಕ ಜೀವನಶೈಲಿಯಿಂದ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಈ ನಗರದಲ್ಲಿ ಬೆಳೆದಿರುವುದರಿಂದ ವಿವಿಧ ಸಂಸ್ಕೃತಿಗಳ ಜನರೊಂದಿಗೆ ಬೆರೆಯುವ ಅವಕಾಶ ದೊರೆತಿದೆ. ಇದರಿಂದ ನನ್ನಲ್ಲಿ ಹೊಸ ವಿಚಾರಗಳನ್ನು ಸ್ವೀಕರಿಸುವ ಮನೋಭಾವ, ಹೊಂದಿಕೊಳ್ಳುವ ಗುಣ ಮತ್ತು ವಿಶಾಲವಾದ ದೃಷ್ಟಿಕೋನ ಬೆಳೆಯಿತು.
ನನ್ನ ಕುಟುಂಬವು ನನ್ನ ಜೀವನದ ಅತ್ಯಂತ ದೊಡ್ಡ ಶಕ್ತಿ ಮತ್ತು ಪ್ರೇರಣೆಯಾಗಿದೆ. ನನ್ನ ತಂದೆಯ ಹೆಸರು ಶ್ರೀ ಸುರೇಶ್ ಡಿ .ಎಚ್., ನನ್ನ ತಾಯಿಯ ಹೆಸರು ಶ್ರೀಮತಿ ಮಮತಾ ಜಿ. ಅವರು ನನಗೆ ಬಾಲ್ಯದಿಂದಲೇ ಪ್ರಾಮಾಣಿಕತೆ, ಶಿಸ್ತು, ಗೌರವ, ಕಠಿಣ ಪರಿಶ್ರಮ ಮತ್ತು ಜವಾಬ್ದಾರಿಯಂತಹ ಜೀವನ ಮೌಲ್ಯಗಳನ್ನು ಕಲಿಸಿದ್ದಾರೆ. ಅವರ ಪ್ರೀತಿ, ಕಾಳಜಿ ಮತ್ತು ನಿರಂತರ ಪ್ರೋತ್ಸಾಹವೇ ನನ್ನ ಆತ್ಮವಿಶ್ವಾಸದ ಮೂಲವಾಗಿದೆ. ನನಗೆ ಸುಹಾನಾ ಎಸ್ ಎಂಬ ಒಬ್ಬ ಸಹೋದರಿ ಇದ್ದಾಳೆ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದ್ದು, ನಾವು ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತೇವೆ.
ನನ್ನ ಶೈಕ್ಷಣಿಕ ಪಯಣವು ಕಾವೇರಿ ವಿದ್ಯಾಕ್ಷೇತ್ರಂ ಪಬ್ಲಿಕ್ ಶಾಲೆಯಲ್ಲಿ ಆರಂಭವಾಯಿತು. ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಅಲ್ಲಿಯೇ ಪೂರ್ಣಗೊಳಿಸಿದೆ. ಶಾಲಾ ಜೀವನವು ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅಲ್ಲಿ ನಾನು ಕೇವಲ ಪಠ್ಯ ವಿಷಯಗಳನ್ನಷ್ಟೇ ಅಲ್ಲದೆ, ಸಮಯಪಾಲನೆ, ಶಿಸ್ತು, ನಾಯಕತ್ವ, ಸಹಕಾರ, ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳನ್ನು ಕಲಿತೆ. ಶಾಲೆಯ ವಿವಿಧ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ನನ್ನ ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯಗಳು ಅಭಿವೃದ್ಧಿಯಾದವು.
ನಂತರ ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ನನ್ನ ದ್ವಿತೀಯ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದೆ. ಕಾಲೇಜಿನ ದಿನಗಳು ನನ್ನ ಜೀವನದಲ್ಲಿ ಹೊಸ ಅನುಭವಗಳನ್ನು ನೀಡಿದವು. ಅಲ್ಲಿ ನಾನು ಶೈಕ್ಷಣಿಕ ಜ್ಞಾನವನ್ನು ವಿಸ್ತರಿಸಿಕೊಂಡು, ಉತ್ತಮ ಸ್ನೇಹಿತರನ್ನು ಸಂಪಾದಿಸಿ, ವಿಭಿನ್ನ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ನನ್ನ ವ್ಯಕ್ತಿತ್ವವನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಂಡೆ.
ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಬಿ.ಕಾಂ. ವಿದ್ಯಾರ್ಥಿನಿಯಾಗಿದ್ದೇನೆ. ವಾಣಿಜ್ಯ ಕ್ಷೇತ್ರದ ಮೇಲಿನ ನನ್ನ ಆಸಕ್ತಿಯಿಂದ ಈ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಈ ಕೋರ್ಸ್ ಮೂಲಕ ಲೆಕ್ಕಶಾಸ್ತ್ರ, ಹಣಕಾಸು, ವ್ಯವಹಾರ ನಿರ್ವಹಣೆ, ಅರ್ಥಶಾಸ್ತ್ರ, ತೆರಿಗೆ, ಡೇಟಾ ವಿಶ್ಲೇಷಣೆ ಮತ್ತು ಆಧುನಿಕ ವ್ಯವಹಾರ ಪದ್ಧತಿಗಳ ಬಗ್ಗೆ ಆಳವಾದ ಜ್ಞಾನವನ್ನು ಪಡೆಯುತ್ತಿದ್ದೇನೆ. ಭವಿಷ್ಯದಲ್ಲಿ ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳುವುದು ನನ್ನ ಪ್ರಮುಖ ಗುರಿಯಾಗಿದೆ.
ನನಗೆ ಹೊಸ ವಿಷಯಗಳನ್ನು ಕಲಿಯುವುದು ಅತ್ಯಂತ ಇಷ್ಟ. ಪ್ರತಿಯೊಂದು ಹೊಸ ಅನುಭವವೂ, ಹೊಸ ಜ್ಞಾನವನ್ನು ನೀಡುತ್ತದೆ ಎಂಬ ನಂಬಿಕೆ ನನ್ನದು. ವಿಶೇಷವಾಗಿ ವಾಣಿಜ್ಯ ಕ್ಷೇತ್ರದ ಹೊಸ ವಿಭಾಗಗಳು, ಡೇಟಾ ಅನಾಲಿಟಿಕ್ಸ್, ಹಣಕಾಸು, ತಂತ್ರಜ್ಞಾನ ಮತ್ತು ವ್ಯವಹಾರ ಜಗತ್ತಿನ ಹೊಸ ಬೆಳವಣಿಗೆಗಳನ್ನು ತಿಳಿದುಕೊಳ್ಳುವುದು ನನಗೆ ಬಹಳ ಆಸಕ್ತಿಯ ವಿಷಯವಾಗಿದೆ. ನಾನು ಸದಾ ಹೊಸ ಕೌಶಲ್ಯಗಳನ್ನು ಕಲಿಯುವ ಮನೋಭಾವವನ್ನು ಹೊಂದಿದ್ದು, ನಿರಂತರವಾಗಿ ನನ್ನ ಜ್ಞಾನವನ್ನು ವಿಸ್ತರಿಸಲು ಪ್ರಯತ್ನಿಸುತ್ತೇನೆ.
ನನ್ನ ವ್ಯಕ್ತಿತ್ವದ ಪ್ರಮುಖ ಗುಣಗಳಲ್ಲಿ ಒಂದು, ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ. ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಅತ್ಯಂತ ಮುಖ್ಯ. ಯಾವುದೇ ಹೊಸ ಸವಾಲು ಅಥವಾ ಅವಕಾಶ ಬಂದರೂ ಅದನ್ನು ಧನಾತ್ಮಕವಾಗಿ ಸ್ವೀಕರಿಸಿ, ಅದರಿಂದ ಕಲಿಯಲು ನಾನು ಸದಾ ಸಿದ್ಧಳಾಗಿರುತ್ತೇನೆ.
ನನ್ನ ಕೆಲವು ಪ್ರಮುಖ ಶಕ್ತಿಗಳು ನನ್ನ ವ್ಯಕ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತವೆ. ಮೊದಲನೆಯದಾಗಿ, ನಾನು ನನ್ನ ಭಾವನೆಗಳನ್ನು ನಿಯಂತ್ರಿಸಬಲ್ಲೆ. ಯಾವುದೇ ಒತ್ತಡದ ಪರಿಸ್ಥಿತಿಯಲ್ಲಿಯೂ ಶಾಂತವಾಗಿ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸುತ್ತೇನೆ. ಎರಡನೆಯದಾಗಿ, ನಾನು ಕೆಲಸದಲ್ಲಿ ದಕ್ಷತೆ ಹೊಂದಿದ್ದೇನೆ. ನನಗೆ ನೀಡಿದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸುವ ಅಭ್ಯಾಸವಿದೆ. ಮೂರನೆಯದಾಗಿ, ನಾನು ತ್ವರಿತವಾಗಿ ಕಲಿಯುವ ವ್ಯಕ್ತಿ. ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ಪ್ರಾಯೋಗಿಕವಾಗಿ ಬಳಸುವುದು ನನಗೆ ಸುಲಭವಾಗುತ್ತದೆ. ಈ ಗುಣಗಳು ನನ್ನ ಶೈಕ್ಷಣಿಕ ಹಾಗೂ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಹಾಯ ಮಾಡುತ್ತವೆ.
ನನ್ನ ಹವ್ಯಾಸಗಳಲ್ಲಿ ಕಾದಂಬರಿಗಳನ್ನು ಓದುವುದು, ಹಾಡುವುದು, ನೃತ್ಯ ಮಾಡುವುದು ಹಾಗೂ ಹೊಸ ವಿಷಯಗಳನ್ನು ಕಲಿಯುವುದು ಪ್ರಮುಖವಾಗಿವೆ. ಕಾದಂಬರಿಗಳನ್ನು ಓದುವುದರಿಂದ ನನ್ನ ಕಲ್ಪನಾ ಶಕ್ತಿ, ಭಾಷಾ ಜ್ಞಾನ ಮತ್ತು ಆಲೋಚನಾ ಸಾಮರ್ಥ್ಯ ವೃದ್ಧಿಯಾಗುತ್ತದೆ. ಸಂಗೀತ ಮತ್ತು ನೃತ್ಯ ನನಗೆ ಮಾನಸಿಕ ನೆಮ್ಮದಿ ಹಾಗೂ ಸಂತೋಷವನ್ನು ನೀಡುತ್ತವೆ. ಹೊಸ ವಿಷಯಗಳನ್ನು ಕಲಿಯುವುದು ನನ್ನ ಜೀವನದ ನಿರಂತರ ಭಾಗವಾಗಿದೆ.
ನಾನು ನನ್ನ ವೃತ್ತಿಜೀವನದ ಬೆಳವಣಿಗೆಗಾಗಿ ಹಲವು ಪ್ರಮಾಣಪತ್ರ ಕೋರ್ಸ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ. ಅವುಗಳಲ್ಲಿ ಮೈಕ್ರೋಸಾಫ್ಟ್ ವತಿಯಿಂದ ಎಂ ಎಸ್ ಎಕ್ಸೆಲ್ ಕೋರ್ಸ್ , ಡಿ ಓ ಸಿ ಅನಾಲಿಟಿಕ ವತಿಯಿಂದ ಡೇಟಾ ವಿಸುಅಳಿಸಷನ್ ಯೂಸಿಂಗ್ ಪೈಥಾನ್ , ನೋವಿ ಟೆಕ್ ವತಿಯಿಂದ ಡ್ಯಾಶ್ಬೋರ್ಡ್ ಇನ್ ಎಂ ಎಸ್ ಎಕ್ಸೆಲ್ ಹಾಗೂ ಡೇಟಾ ಅನಲಿಟಿಕ್ಸ್ ಕೋರ್ಸ್ , ಮತ್ತು ಸಿಸ್ಕೋ ವತಿಯಿಂದ ಡೇಟಾ ಅನಲಿಟಿಕ್ಸ್ ಕೋರ್ಸ್ ಸೇರಿವೆ. ಈ ಕೋರ್ಸ್ಗಳು ನನಗೆ ಡೇಟಾವನ್ನು ವಿಶ್ಲೇಷಿಸುವುದು, ಅರ್ಥೈಸುವುದು ಮತ್ತು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಕೌಶಲ್ಯಗಳನ್ನು ಬೆಳೆಸಿವೆ.
ನಾನು ಹಲವು ತಾಂತ್ರಿಕ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಹೊಂದಿದ್ದೇನೆ. ಟ್ಯಾಲಿ, ಎಂ ಎಸ್ ಎಕ್ಸೆಲ್, ಪವರ್ ಬಿ ಐ, ಎಂ ಎಸ್ ವರ್ಡ್, ಜೆನೆರೇಟಿವ್ ಎ ಐ
ಉಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸಬಲ್ಲೆ. ಇವುಗಳು ಇಂದಿನ ವ್ಯವಹಾರ ಮತ್ತು ಡೇಟಾ ವಿಶ್ಲೇಷಣೆಯ ಕ್ಷೇತ್ರದಲ್ಲಿ ಅತ್ಯಂತ ಉಪಯುಕ್ತವಾಗಿದ್ದು, ನನ್ನ ವೃತ್ತಿಜೀವನಕ್ಕೆ ಬಲವಾದ ಅಡಿಪಾಯವನ್ನು ನಿರ್ಮಿಸುತ್ತಿವೆ.
ಭಾಷಾ ಕೌಶಲ್ಯದ ವಿಷಯದಲ್ಲಿ ನಾನು ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದಿದ್ದೇನೆ. ವಿವಿಧ ಭಾಷೆಗಳಲ್ಲಿ ಸಂವಹನ ನಡೆಸುವ ಸಾಮರ್ಥ್ಯವು ವಿಭಿನ್ನ ಹಿನ್ನೆಲೆಯ ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಲು ಸಹಾಯ ಮಾಡುತ್ತದೆ. ಜೊತೆಗೆ, ನನಗೆ ಉತ್ತಮ ಸಂವಹನ ಕೌಶಲ್ಯ ಇದೆ. ನನ್ನ ಆಲೋಚನೆಗಳನ್ನು ಸ್ಪಷ್ಟವಾಗಿ ಮತ್ತು ಆತ್ಮವಿಶ್ವಾಸದಿಂದ ವ್ಯಕ್ತಪಡಿಸಲು ನಾನು ಪ್ರಯತ್ನಿಸುತ್ತೇನೆ.
ನನಗೆ ತಂಡದೊಂದಿಗೆ ಕೆಲಸ ಮಾಡುವುದು ತುಂಬಾ ಇಷ್ಟ. ತಂಡದಲ್ಲಿ ಕೆಲಸ ಮಾಡುವುದರಿಂದ ಪರಸ್ಪರ ಸಹಕಾರ, ನಾಯಕತ್ವ, ಜವಾಬ್ದಾರಿ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳು ಬೆಳೆಯುತ್ತವೆ ಎಂದು ನಾನು ನಂಬುತ್ತೇನೆ. ಇತರರ ಅಭಿಪ್ರಾಯಗಳನ್ನು ಗೌರವಿಸುತ್ತಾ, ಒಟ್ಟಾಗಿ ಉತ್ತಮ ಫಲಿತಾಂಶ ಸಾಧಿಸುವುದೇ ಯಶಸ್ಸಿನ ಗುಟ್ಟು ಎಂದು ನಾನು ಭಾವಿಸುತ್ತೇನೆ.
ನನ್ನ ಜೀವನದ ಪ್ರಮುಖ ಗುರಿಯು ಉತ್ತಮ ಶಿಕ್ಷಣವನ್ನು ಪಡೆದು, ವಾಣಿಜ್ಯ ಮತ್ತು ಡೇಟಾ ಅನಾಲಿಟಿಕ್ಸ್ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳುವುದಾಗಿದೆ. ನಿರಂತರವಾಗಿ ಹೊಸ ಕೌಶಲ್ಯಗಳನ್ನು ಕಲಿಯುತ್ತಾ, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುತ್ತಾ, ನನ್ನ ವೃತ್ತಿಪರ ಸಾಮರ್ಥ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಬಯಸುತ್ತೇನೆ. ಜೊತೆಗೆ, ನನ್ನ ಕುಟುಂಬಕ್ಕೆ ಹೆಮ್ಮೆ ತರುವ ಮಗಳಾಗಿ ಮತ್ತು ಸಮಾಜಕ್ಕೆ ಉಪಯುಕ್ತ ನಾಗರಿಕಳಾಗಿ ಬೆಳೆಯುವುದು ನನ್ನ ಕನಸು.
ಕೊನೆಯದಾಗಿ, ನಾನು ಜೀವನದಲ್ಲಿ ಕಲಿಯುವುದನ್ನು ಎಂದಿಗೂ ನಿಲ್ಲಿಸಬಾರದು ಎಂಬ ತತ್ವವನ್ನು ಅನುಸರಿಸುತ್ತೇನೆ. ಪ್ರತಿಯೊಂದು ದಿನವೂ ಹೊಸ ಅವಕಾಶಗಳನ್ನು ನೀಡುತ್ತದೆ ಮತ್ತು ಪ್ರತಿಯೊಂದು ಅನುಭವವೂ ನಮ್ಮನ್ನು ಇನ್ನಷ್ಟು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂದು ನಾನು ನಂಬುತ್ತೇನೆ. ಪರಿಶ್ರಮ, ಆತ್ಮವಿಶ್ವಾಸ, ಶಿಸ್ತು ಮತ್ತು ಸಕಾರಾತ್ಮಕ ಮನೋಭಾವದೊಂದಿಗೆ ನನ್ನ ಕನಸುಗಳನ್ನು ನನಸಾಗಿಸಲು ನಾನು ಸದಾ ಪ್ರಯತ್ನಿಸುತ್ತೇನೆ.
ಧನ್ಯವಾದಗಳು.
hq1i2e6vn67kqx7vfa4zbd4nek5ixnb