ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.11 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಚಾಮರಾಜನಗರ ಜಿಲ್ಲೆ 0 1031 1376960 1346361 2026-07-20T07:34:37Z Manikanta Basavaraju 100644 /* ಜಿಲ್ಲೆಯ ಪ್ರವಾಸಿ ತಾಣಗಳು */ 1376960 wikitext text/x-wiki {{Infobox ಊರು | name = ಚಾಮರಾಜನಗರ ಜಿಲ್ಲೆ | native_name = | native_name_lang = | other_name = | settlement_type = ಜಿಲ್ಲೆ | image_skyline = Chamrajnagar3.jpg | image_alt = | image_caption = | nickname = | image_map = Chamarajanagar in Karnataka (India).svg | map_alt = | map_caption = | pushpin_map = | pushpin_label_position = left | pushpin_map_alt = | pushpin_map_caption = | latd = 12 | latm = | lats = | latNS = N | longd = 77.3 | longm = | longs = | longEW = E | coordinates_display = | subdivision_type = ದೇಶ | subdivision_name = [[ಭಾರತ]] | subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]] | subdivision_name1 = [[ಕರ್ನಾಟಕ]] | established_title = <!-- Established --> | established_date = | founder = | named_for = | parts_type = ತಾಲ್ಲೂಕುಗಳು | parts = [[ಯಳಂದೂರು]], [[ಗುಂಡ್ಲುಪೇಟೆ]], ಚಾಮರಾಜನಗರ, [[ಕೊಳ್ಳೇಗಾಲ]], [[ಹನೂರು]] | seat_type = ಕೇಂದ್ರ | seat = ಚಾಮರಾಜನಗರ | government_type = | governing_body = | leader_title = Deputy Commissioner | leader_name = | unit_pref = Metric | area_footnotes = | area_rank = | area_total_km2 = 5101 | elevation_footnotes = | elevation_m = | population_total = 965462 | population_as_of = 2001 | population_rank = | population_density_km2 = 189 | population_demonym = | population_footnotes = | demographics_type1 = ಭಾಷೆಗಳು | demographics1_title1 = ಅಧಿಕೃತ | demographics1_info1 = [[ಕನ್ನಡ]] | timezone1 = [[ಭಾರತದ ನಿರ್ದಿಷ್ಟ ಕಾಲಮಾನ|IST]] | utc_offset1 = +5:30 | postal_code_type = [[ಪಿನ್ ಕೋಡ್]] | postal_code = 571 313 | area_code_type = ದೂರವಾಣಿ ಕೋಡ್ | area_code = 08226 | registration_plate = KA-10 | website = {{ url | chamrajnagar.nic.in }} | footnotes = }} '''ಚಾಮರಾಜನಗರ''' ದಕ್ಷಿಣ [[ಕರ್ನಾಟಕ]]ದಲ್ಲಿರುವ ಒಂದು ಜಿಲ್ಲೆ. ಮೊದಲಿಗೆ [[ಮೈಸೂರು]] ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಈಗ ಒಂದು ಸ್ವತಂತ್ರ ಜಿಲ್ಲೆಯಾಗಿದೆ. ಈ ಜಿಲ್ಲೆಯ [[ಕೇಂದ್ರ]] ಅದೇ ಹೆಸರಿನ ಪಟ್ಟಣ. ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕುಗಳು ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ. ಇತ್ತೀಚೆಗೆ ಹನೂರು ತಾಲೂಕು ರಚನೆಯಾಯಿತು. ==ಇತಿವೃತ್ತ== *ಚಾಮರಾಜನಗರ ಜಿಲ್ಲೆಯಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆ [[ಕನ್ನಡ]]. ಇಲ್ಲಿ ಮಾತನಾಡಲ್ಪಡುವ ಅಲ್ಪಸಂಖ್ಯಾತ ಭಾಷೆಗಳಲ್ಲಿ ಪ್ರಮುಖವಾದವು '''ಸೋಲಿಗನುಡಿ''' (ಮುಖ್ಯವಾಗಿ [[ಬಿಳಿಗಿರಿರಂಗ]]ನ ಬೆಟ್ಟದ ಪ್ರದೇಶದಲ್ಲಿ) *ಚಾಮರಾಜನಗರ ಜಿಲ್ಲೆಯಲ್ಲಿ ಧಾರ್ಮಿಕ ಪ್ರಾಮುಖ್ಯತೆಯ ಸಾಕಷ್ಟು ಸ್ಥಳಗಳಿವೆ. ಇವುಗಳಲ್ಲಿ ಪ್ರಸಿದ್ಧವಾದದ್ದು '''ಮಲೆಮಹದೇಶ್ವರ ಬೆಟ್ಟ'''. ಇಲ್ಲಿ ನಡೆಯುವ ವಾರ್ಷಿಕ ಜಾತ್ರೆ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತದೆ. ಈ ಜಿಲ್ಲೆಯಲ್ಲಿ ನೈಸರ್ಗಿಕ ಸೌಂದರ್ಯದ ಉದಾಹರಣೆಗಳಲ್ಲಿ ಮುಖ್ಯವಾದವುಗಳೆಂದರೆ- # [[ಬಿಳಿಗಿರಿರಂಗನ ಬೆಟ್ಟ]], # [[ಮಲೆಮಹದೇಶ್ವರ ಬೆಟ್ಟ]] ಮತ್ತು # [[ಹಿಮವದ್ಗೋಪಾಲಸ್ವಾಮಿಬೆಟ್ಟ]]. #ಶಿವನ ಸಮುದ್ರ # [[ಬಂಡಿಪುರ ರಾಷ್ಟ್ರೀಯ ಉದ್ಯಾನ]]ವು ಜಿಲ್ಲೆಯ ದಕ್ಷಿಣಭಾಗದಲ್ಲಿದೆ. ಈ ಜಿಲ್ಲೆಯ ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯಗಳಿದ್ದು ಇಲ್ಲಿನ ಪ್ರಮುಖ ವನ್ಯಜೀವಿಗಳು ಆನೆ, ಹುಲಿ, ಕರಡಿ, ಜಿಂಕೆ, ಇತ್ಯಾದಿ. ಇಲ್ಲಿನ ಕಾಡುಗಳು, ಮುಖ್ಯವಾಗಿ ಮಲೆಮಹದೇಶ್ವರ ಬೆಟ್ಟ, ಕುಖ್ಯಾತವಾದ ಕಾಡುಗಳ್ಳ [[ವೀರಪ್ಪನ್]] ನ ಅಡಗುದಾಣಗಳಾಗಿದ್ದವು. # ==ಚಾಮರಾಜನಗರ ಜಿಲ್ಲೆಯ ಪರಿಚಯ== *ಕರ್ನಾಟಕದ ದಕ್ಷಿಣ ತುತ್ತತುದಿಯಲ್ಲಿರುವ ಚಾಮರಾಜನಗರ ಜಿಲ್ಲೆ ಭೂಪಟದಲ್ಲಿ ಬಾಹುಬಲಿಯ ಬಲಭಾಗದ ಪಾದುಕೆಯಂತೆ ಕಂಗೊಳಿಸುವುದನ್ನು ಕಾಣಬಹುದು. ದಕ್ಷಿಣ ಒಳನಾಡಿನ ಎಲೆ ಉದುರುವ, ಮಳೆಗಾಲದಲ್ಲಿ ಸದಾ ಹಸಿರಾಗಿರುವ ಅರಣ್ಯ ಸಾಲನ್ನು ಹೊಂದಿದೆ. ತಮಿಳುನಾಡು ಮತ್ತು ಕೇರಳಗಡಿಗುಂಟ ಹಂಚಿಕೊಂಡಿರುವ ಈ ಜಿಲ್ಲೆ ೧೧.೩೫ ಉತ್ತರ ಅಕ್ಷಾಂಶದಿಂದ ೧೨.೧೮ ಉತ್ತರ ಅಕ್ಷಾಂಶದವರೆವಿಗೂ, ೭೨.೨೪ ಪೂರ್ವ ರೇಖಾಂಶದಿಂದ ೭೭.೪೬ ಪೂರ್ವ ರೇಖಾಂಶದ ನಡುವೆ ೫೬೮೫ ಚ.ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. [[File:Physical map of Chamarajanagar district.png|thumb|]] *1997 ರಲ್ಲಿ ಮೈಸೂರು ಜಿಲ್ಲೆಯಿಂದ ವಿಭಜಿಸಿ ಚಾಮರಾಜನಗರವನ್ನು ಜಿಲ್ಲೆಯಾಗಿ ಪರಿವರ್ತಿಸಲಾಯಿತು . ಈ ಜಿಲ್ಲೆಯ ಜಿಲ್ಲಾ ಕೇಂದ್ರವು ಚಾಮರಾಜನಗರ ಪಟ್ಟಣವಾಗಿದೆ. ವಿಜಯ ಪಾರ್ಶ್ವನಾಥ ಬಸದಿ, ಪವಿತ್ರ ಜೈನ ದೇವಾಲಯವನ್ನು ಹೊಯ್ಸಳ ರಾಜನಾದ ಗಂಗರಾಜ ಅಧಿಪತಿ ಪುನೀಶಂಡನಾಯಕ 1117 ರಲ್ಲಿ ನಿರ್ಮಿಸಿದರು.<ref>{{cite web |title=ಚಾಮರಾಜನಗರ ಇತಿಹಾಸ |url=https://chamrajnagar.nic.in/ |website=chamrajnagar.nic.in |access-date=4 April 2025}}</ref> *ಪೂರ್ವ ಮತ್ತು ಪಶ್ಚಿಮ ಘಟ್ಟ ಸಂದಿಸುವ ನೀಲಗಿರಿ ಅರಣ್ಯ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನ ಬೆಟ್ಟ ವನ್ಯಧಾಮ ಮತ್ತು ಬಂಡೀಪುರ ರಾಷ್ಟ್ರೀಯ ಹುಲಿ ಅಭಯಾರಣ್ಯ ೧೪೧೩ ಚ.ಕಿ.ಮೀ. ವಿಸ್ತೀರ್ಣದಲ್ಲಿ ಹಬ್ಬಿದೆ. ಜಿಲ್ಲೆಯ ಎತ್ತರದ ಕತ್ತರಿಬೆಟ್ಟ ೧೮೧೬ ಮೀ (ಇದು ಅತ್ತಿಖಾನೆ ಗ್ರಾಮದ ಹತ್ತಿರದಲ್ಲಿದೆ), ಬಿಳಿಗಿರಿರಂಗನ ಬೆಟ್ಟ ೧೧೫೧ ಎಂ, ಬೇಡಗುಳಿ ಎಸ್ಟೇಟು ೧೪೦೦ ಮೀ ಗಳಾಗಿದ್ದು ಆನೆ, ಹುಲಿ, ಚಿರತೆ, ಕಾಡುಕೋಣ, ಸೀಳುನಾಯಿ, ಜಿಂಕೆ, ಕರಡಿ, ಸಾರಂಗ, ಸಿಂಗಳೀಕ, ನವಿಲು, ಅಪರೂಪದ ಕೀಟ ಪ್ರಭೇದವನ್ನು ಒಳಗೊಂಡಿದೆ. *ಕೀಟಭಕ್ಷಕ ಸಸ್ಯವರ್ಗ ಒಳಗೊಂಡಂತೆ ಶ್ರೀಗಂಧ, ಬೀಟೆ, ಹೊನ್ನೆ, ನೀಲಗಿರಿ ಮತ್ತು ಸಿಂಕೋನ ವೃಕ್ಷಗಳ ಜೀವ-ವೈವಿದ್ಯತಾ ಆವಾಸಗಳ ನಡುವೆ ಕಾಣಬರುತ್ತದೆ.ಕ್ರಿಸ್ತಪೂರ್ವದಿಂದಲೂ ಆದಿ ಮಾನವನ ನೆಲೆಯಾಗಿದ್ದ ಶಿಲಾ ಸಮಾಧಿಗಳನ್ನು ಬುಡಕಟ್ಟು ಜನಾಂಗ ಸೋಲಿಗರು ವಾಸಿಸುವುದನ್ನು ಬಿಳಿಗಿರಿರಂಗನ ಬೆಟ್ಟದ ಪೋಡುಗಳಲ್ಲಿ ಕಾಣಬಹುದಾಗಿದೆ. ಈ ಭಾಗದ ಜೀವನದಿಗಳಾದ ಸುವರ್ಣವತಿ ಚಿಕ್ಕಹೊಳೆ ಕಬಿನಿ, ಗುಂಡ್ಲು ನದಿಗಳು ಜಿಲ್ಲೆಯಲ್ಲಿ ಹರಿಯುವ ಕಾವೇರಿ ನದಿಯ ಉಪನದಿಗಳಾಗಿವೆ. *ಇವುಗಳಿಗೆ ಅಲ್ಲಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದೆ. ಜೀವನದಿ ಕಾವೇರಿ ೧೧೦ ಕಿ.ಮೀ. ದೂರವನ್ನು ಕ್ರಮಿಸಿ, ಗಗನಚುಕ್ಕಿ, ಭರಚುಕ್ಕಿ ಜಲಪಾತ ಸೃಷ್ಟಿಸಿ ೧೯೦೨ ರಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ತಯಾರಿಕೆ ನೆಲೆಯಾಗಿದ್ದು ಇದೇ ಜಿಲ್ಲೆಯಲ್ಲಿ. ಮುಂದೆ ಮಹದೇಶ್ವರ ಬೆಟ್ಟದಿಂದ ೫೦ ಕಿ.ಮೀ ಅಂತರದಲ್ಲಿರುವ ಹೊಗೆನಕಲ್ ಜಲಪಾತ ನೈಸರ್ಗಿಕ ಶಿಲೆಗಳನ್ನು ಸೃಷ್ಟಿಸಿದೆ. *ರಾಜ್ಯ, ರಾಷ್ಟ್ರ, ವಿದೇಶಿಯರ ಆಕರ್ಷಣೀಯ ನೈಸರ್ಗಿಕ ಜಲಪಾತಗಳು ಇಲ್ಲಿನ ವೈಶಿಷ್ಟ್ಯ ಗಂಗರು, ಹೊಯ್ಸಳರು, ವಿಜಯನಗರ, ಮೈಸೂರರಸರ ಕಲಾವೈಭವವನ್ನು ಚಾಮರಾಜನಗರದ ಬಳಿ ಇರುವ ನರಸಮಂಗಲ, ಹರದನಹಳ್ಳಿ, ಶಿಲಾಶಾಸನ, ಗುಂಡ್ಲುಪೇಟೆ ತಾಲೂಕಿನಲ್ಲಿ ಕಂಡುಬರುವ ವರಹಾವಾಸುದೇವ ಮಂದಿರ, ಹುಲುಗನ ಮೊರಡಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರಿನ ಬಳೇಮಂಟಪ, ಜಹಾಗಿರ್‌ದಾರ್ ಬಂಗಲೆ, ಕೊಳ್ಳೆಗಾಲದ ಬಳಿಯ ಮಧ್ಯರಂಗ ಇಲ್ಲಿನ ಐತಿಹಾಸಿಕ ಕುರುಹುಗಳಾಗಿವೆ. ===ಜನಸಂಖ್ಯೆ=== ಗಡಿಗಳಲ್ಲಿ ತಮಿಳು, ಮಲೆಯಾಳಂ ಮಾತನಾಡುವ ಜನರಿದ್ದು ಅತಿ ಹೆಚ್ಚು ಕನ್ನಡಿಗರಿದ್ದಾರೆ. ಹಿಂದೂ, ಮುಸ್ಲಿಂ,jaina, ಕ್ರಿಶ್ಚಿಯನ್ ಧರ್ಮಗಳ ಸಮನ್ವಯವನ್ನು ಕಾಣಬಹುದು. ಪ್ರಪಂಚದಲ್ಲಿಯೆ ವಿಶಿಷ್ಟವೆನಿಸಿದ ಕಪ್ಪುಶಿಲೆ ಅಥವ ಕರಿಕಲ್ಲು(ಗ್ರಾನೈಟ್) ಇಲ್ಲಿ ಕಂಡು ಬರುತ್ತದೆ. ಜತೆಗೆ ಸುಣ್ಣದ ಕಲ್ಲಿನ ನಿಕ್ಷೇಪವು ಹೇರಳವಾಗಿದೆ. ಶೇ ೪೮ ದಟ್ಟಾರಣ್ಯದಿಂದ ಸುತ್ತುವರಿದಿರುವ ಈ ಜಿಲ್ಲೆ ರಾಜ್ಯದಲ್ಲಿ ೨೫ನೇ ಸ್ಥಾನದಲ್ಲಿದೆ. ೨೦೦ ಯಿಂದ ೩೫೦ ಉಷ್ಣಾಂಶವನ್ನು ಹೊಂದಿದ್ದು ೭೦ ರಿಂದ ೧೦೦ ಸೆಂ.ಮೀ. ಮಳೆಯನ್ನು ಪಡೆಯುತ್ತದೆ. *ಕೃಷಿಯ ಬಹುಭಾಗ ಮಳೆ ಆಶ್ರಯದ ಜತೆಗೆ ಕೊಳವೆ ಬಾವಿ, ತೆರೆದ ಬಾವಿ, ಕಬಿನಿ ನಾಲೆಗಳು ಕೃಷಿಕಾರ‍್ಯಗಳಿಗೆ ನೀರನ್ನು ಒದಗಿಸುತ್ತವೆ. ರೈತರು ಕಬ್ಬು, ಭತ್ತ, ರಾಗಿ, ಬಾಳೆ, ಕಡ್ಲೆಕಾಯಿ, ತೆಂಗು ಮತ್ತು ಅಡಿಕೆ ಬೆಳೆಗಳ ಜತೆಗೆ ಹಣ್ಣು, ತರಕಾರಿಗಳನ್ನು ಬೆಳೆಯುತ್ತಾರೆ. ೨೦೧೧ರ ಜನಗಣತಿಯ ಪ್ರಕಾರ ೧೦,೨೦,೭೯೧ ಜನಸಂಖ್ಯೆ ಹೊಂದಿದ್ದು ಪ್ರತಿ ಚ.ಕಿ.ಮೀ. ಪ್ರದೇಶದಲ್ಲಿ ೧೮೯ ಜನರು ವಾಸಿಸುತ್ತಿದ್ದಾರೆ. ೫೧.೨೬% ಸಾಕ್ಷರ ಪ್ರಮಾಣವಿದ್ದು ಲಿಂಗಾನುಪಾತ ೯೯೩ ಆಗಿದೆ. *೧೯೯೭ರಲ್ಲಿ ಜಿಲ್ಲಾ ಸ್ಥಾನ ಪಡೆದ ನಂತರ ೪ ತಾಲೂಕುಗಳನ್ನು ಹೊಂದಿದ್ದು ೧೫,೮೧೮ ತಲಾಧಾಯ ಇದೆ. ಮಲೆ ಮಹದೇಶ್ವರ, ರಾಚಪ್ಪಾಜಿ, ಸಿದ್ಧಪ್ಪಾಜಿ, [[ಮಂಟೇಸ್ವಾಮಿ]] ಮೊದಲಾದ ಪವಾಡ ಪುರುಷರ ಪಾದ ಸ್ಪರ್ಶದಿಂದ ಧಾರ್ಮಿಕವಾಗಿ ಮಹದೇಶ್ವರ ಬೆಟ್ಟ, ಚಿಕ್ಕಲೂರು, ಬಿಳಿಗಿರಿರಂಗ ಬೆಟ್ಟದ ಜಾತ್ರೆ, ಶಿಂಷಾದ ಬಳಿಯ ದರ್ಗಾಗಳು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನ ಜನಪದ ಕಾವ್ಯಗಳಿಗೆ ಸ್ಫೂರ್ತಿಯಾಗಿವೆ. ಗೊರವರ ಕುಣಿತ, ಕಂಸಾಳೆ, ವೀರಗಾಸೆ, ಧಾರ್ಮಿಕ ಹಿನ್ನೆಲೆಯಲ್ಲಿ ರೂಪತಳೆದಿವೆ. *ಮುರಾರ್ಜಿ, ವಸತಿ ಶಾಲೆಗಳ ಜತೆಗೆ ನವೋದಯ ಕೇಂದ್ರೀಯ ವಿದ್ಯಾಲಯದ ಮತ್ತು ವೃತ್ತಿ ಕಾಲೇಜುಗಳಾದ ಎಂಜಿನಿಯರ್, ಪಾಲಿಟೆಕ್ನಿಕ್, (ಡಿ.ಎಡ್) ಬಿ.ಎಡ್., ಪದವಿ., ಕಾಲೇಜುಗಳು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿತವಾಗಿವೆ. ರಾಷ್ಟ್ರೀಯ ಹೆದ್ದಾರಿ ೨೦೯ ಮತ್ತು ೨೧೨ ಇಲ್ಲಿ ಹಾದು ಹೋಗಿರುವುದರ ಜತೆಗೆ ಬ್ರಾಡ್‌ಗೇಜ್ ರೈಲು ಮಾರ್ಗ ಕರ್ನಾಟಕದ ದಕ್ಷಿಣ ತುದಿಯ ಈ ಜಿಲ್ಲೆಯನ್ನು ಸಂಪರ್ಕಿಸುತ್ತದೆ. *ಚಾಮರಾಜನಗರ ಉತ್ತರ ಭಾಗದಲ್ಲಿ ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಿದ್ದು ದಕ್ಷಿಣದಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಜಿಲ್ಲೆಯ ಗಡಿಯನ್ನು ಹಂಚಿಕೊಂಡಿವೆ. ಪೂರ್ವ ಪಶ್ಚಿಮಭಾಗಗಳು ಬಹುತೇಕ ಅರಣ್ಯಗಳಿಂದ ಕೂಡಿವೆ. ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ಹಲವಾರು ಕವಿ, ಕಲಾವಿದರ ಜತೆಗೆ ನಟ ಡಾ||ರಾಜಕುಮಾರ ರಂತವರನ್ನು ನೀಡಿರುವ ಈ ಜಿಲ್ಲೆ, ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ ಹಾಗೂ ಉತ್ತಮ ಜನರನ್ನು ಕೊಡುಗೆ ನೀಡಿದೆ. ==ಜಿಲ್ಲೆಯ ಪ್ರವಾಸಿ ತಾಣಗಳು== ===ಚಾಮರಾಜೇಶ್ವರ ದೇವಾಲಯ=== * *ಚಾಮರಾಜೇಶ್ವರ ದೇವಾಲಯ ಜಿಲ್ಲೆಯ ಪ್ರಮುಖ ದೇಗುಲಗಳಲ್ಲಿ ಒಂದಾಗಿದೆ. ನಗರದ ಹೃದಯ ಭಾಗದಲ್ಲಿರುವ ದೇವಾಲಯ ಸ್ಥಾಪನೆಯಾದದ್ದು, ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಒಂದು ಕಾಲದಲ್ಲಿ ಅರಿಕುಠಾರ ಎಂಬ ಗ್ರಾಮವಾಗಿದ್ದು, ಇದು ಚಾಮರಾಜ ಒಡೆಯರ್ ಜನಿಸಿದ್ದರಿಂದ ಚಾಮರಾಜನಗರ ಎಂಬ ಹೆಸರನ್ನು ಪಡೆಯಿತು. ದೇವಾಲಯದ ಮಹಾದ್ವಾರ ಪೂರ್ವ ದಿಕ್ಕಿಗಿದ್ದು ೫ ಅಂತಸ್ತಿನ ಗೋಪುರವಿದೆ. ತುದಿಯಲ್ಲಿ ೫ ಸುಂದರ ಚಿನ್ನದ ರಂಗಿನ ಕಲಶಗಳಿದ್ದು ಮುಂದೆ ಗರುಡಗಂಬವಿದೆ. *ದೇವಾಲಯ ಪ್ರವೇಶ ಮಾಡಿದಾಗ ಈಶ್ವರನಿಗೆ ಮುಖ ಮಾಡಿರುವ ಬೃಹತ್ ನಂದಿ ಇದೆ. ದೇವಾಲಯದ ಪ್ರಕಾರದಲ್ಲಿ ೬೪ ಪುರಾತನ ಭಕ್ತರ ವಿಗ್ರಹಗಳಿವೆ. ಉತ್ತರದಲ್ಲಿ ಈಶ್ವರ ವಿಗ್ರಹ, ಈಶಾನ್ಯದಲ್ಲಿ ಯೋಗಶಾಲೆ, ಆಗ್ನೇಯದಲ್ಲಿ ಪಾಕ ಶಾಲೆಯೂ ಇದೆ. ಇಲ್ಲಿ ವಾಸ್ತುಶಿಲ್ಪವು ಹೊಯ್ಸಳರ ಕಲೆಯನ್ನು ನೆನಪಿಸುತ್ತವೆ. *ಈ ದೇವಾಲಯದ ಒಳಭಾಗದಲ್ಲಿ ಕಂಡು ಬರುವ ಚಿತ್ರಗಳೆಂದರೆ ಗಿರಿಜಾ ಕಲ್ಯಾಣ, ಸಮುದ್ರಮಥನ ಮತ್ತು ಚಾಮುಂಡೇಶ್ವರಿ, ಇವು ೧೦೦ ವರ್ಷದ ಹಳೆಯವು. ಇಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲಿ ಆಷಾಡದ ಹುಣ್ಣಿಮೆಯ ದಿನ ರಥೋತ್ಸವ ನಡೆಯುತ್ತದೆ. ಈ ರಥೋತ್ಸವಕ್ಕೆ ನವದಂಪತಿಗಳು ಹಣ್ಣು ಜವನವನ್ನು ಎಸೆದು ಭಕ್ತಿ ಭಾವ ಮೆರೆಯುವರು. ಅರಿಕುಠಾರ:- ಈ ಸ್ಥಳಕ್ಕೆ ಹಿಂದೆ ಅರಿಕುಠಾರ ಅಥವಾ ಅರಿಕೂಠಾರ ಎಂಬ ಹೆಸರಿತ್ತು. ಒಡೆಯನೂರು ಎಂದು ಕರೆಯಲಾಗುತ್ತಿತ್ತು. ಹರಳುಕೋಟೆ:- ನಗರದಿಂದ ಪೂವ್ಕ್ಕೆ 5 ಕಿ.ಮೀ. ದೂರದಲ್ಲಿ ಹರಳುಕೋಟೆ, ಶ್ರೀ ಆಂಜನೇಯ ಸ್ವಾಮಿ ದೇವಾಲಯವಿದೆ. “ಹನುಮಚ್ಚಿಂತನ” ಎಂಬ ಗದ್ಯ ಕೃತಿಯೂ “ಶ್ರೀ ಹನುಮತ್ ಸುಪ್ರಭಾತ” ಎಂಬ ಪಠ್ಯಮಾಲಿಕೆಯೂ ಈ ಕ್ಷೇತ್ರದ ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವಗಳನ್ನು ಕುರಿತು ಬಣ್ಣಿಸಿರುವ ಕೃತಿಗಳು. == '''ದೀನ ಬಂಧು''' == ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಪುತ್ರರಾದ ಜಿ.ಎಸ್. ಜಯದೇವ್ ಇವರು ದೀನ-ದಲಿತರ ಉದ್ಧಾರಕ್ಕಾಗಿ ಹೆಸರೇ ಸೂಚಿಸುವಂತೆ ದೀನಬಂಧು ಸಂಸ್ಥೆಯನ್ನು ೧೯೯೨ರಲ್ಲಿ ಪ್ರಾರಂಭಿಸಿದರು. ಇದು ಜಿಲ್ಲಾ ಕೇಂದ್ರದಿಂದ ೩ ಕಿ.ಮೀ. ದೂರದಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯ ಪಕ್ಕದ ಅರಣ್ಯ ಇಲಾಖೆಯ ನರ್ಸರಿ ಫಾರಂಗೆ ಹೊಂದಿಕೊಂಡಂತೆ ಇದೆ. ===ದೀನ ಬಂಧು=== *ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಪುತ್ರರಾದ ಜಿ.ಎಸ್. ಜಯದೇವ್ ಇವರು ದೀನ-ದಲಿತರ ಉದ್ಧಾರಕ್ಕಾಗಿ ಹೆಸರೇ ಸೂಚಿಸುವಂತೆ ದೀನಬಂಧು ಸಂಸ್ಥೆಯನ್ನು ೧೯೯೨ರಲ್ಲಿ ಪ್ರಾರಂಭಿಸಿದರು. ಇದು ಜಿಲ್ಲಾ ಕೇಂದ್ರದಿಂದ ೩ ಕಿ.ಮೀ. ದೂರದಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯ ಪಕ್ಕದ ಅರಣ್ಯ ಇಲಾಖೆಯ ನರ್ಸರಿ ಫಾರಂಗೆ ಹೊಂದಿಕೊಂಡಂತೆ ಇದೆ. *ಸಂಸ್ಥಾಪಕರ ಮೆಚ್ಚುಗೆಗೆ ಪಾತ್ರರಾದ ಅನೇಕ ಸಂಘಸಂಸ್ಥೆಗಳು ಮತ್ತು ದಾನಿಗಳ ಉದಾರ ಕೊಡುಗೆಯಿಂದ ೧ ರಿಂದ ೧೦ನೇ ತರಗತಿಯವರೆಗೆ ಸ್ವಂತ ಕಟ್ಟಡದಲ್ಲಿ “ಸೃಜನಶೀಲ ಕಲಿಕೆ” ತತ್ವದ ಮಾದರಿಯಲ್ಲಿ ನಡೆಯುತ್ತದೆ. ಅನಾಥ ಮಕ್ಕಳ ವಸತಿ ಸಹಿತ ಶಾಲೆ, ಗಂಡು ಹೆಣ್ಣು ಮಕ್ಕಳಿಗೆ "ದೀನಬಂಧು ಮಕ್ಕಳ ಮನೆ" ಎಂಬ ಹೆಸರಿನ "ವಸತಿ ಸಹಿತ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರ" ಸುಸಜ್ಜಿತ ಕಟ್ಟಡದಲ್ಲಿ ನಡೆಯುತ್ತಿದೆ. ಇದು ಶಿಕ್ಷಕರ ಸಂಪನ್ಮೂಲ ಕೇಂದ್ರ ಹೊಂದಿದ್ದು ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಅವಿರತ ಪ್ರಯತ್ನ ನಡೆಸುತ್ತಿದೆ. ===ಸುವರ್ಣಾವತಿ ಜಲಾಶಯ=== ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೧೮ ಕಿ.ಮೀ. ಚಾಮರಾಜನಗರ ತಾಲೂಕಿನ ಜೀವನಾಡಿಯಾದ ಸುವರ್ಣಾವತಿ ನದಿಯು ಆಗ್ನೇಯ ಭಾಗದ ಗಜ್ಜಲ ಹಟ್ಟಿ ಎಂಬಲ್ಲಿ ಹುಟ್ಟುತ್ತದೆ. ಈ ನದಿಗೆ ಚಾಮರಾಜನಗರ ಮತ್ತು ಕೊಯಮತ್ತೂರು ರಸ್ತೆಯ ಹೆದ್ದಾರಿಯಲ್ಲಿ ೧೯೭೭ರಲ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. ೨೬ ಮೀ. ಎತ್ತರ, ಉದ್ದ ೧೧೫೮ ಮೀ. ಇದ್ದು, ಈ ಜಲಾಶಯವು ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕಿನ ಪ್ರದೇಶಗಳಿಗೆ ನೀರೊದಗಿಸುತ್ತದೆ. *ಕಾವೇರಿ ಕಣಿವೆಗೆ ಸೇರಿದ [[ಸುವರ್ಣಾವತಿ ಜಲಾಶಯ]]ದ ನೀರಿನ ಸಾಮರ್ಥ್ಯ ೨೫೮,೭೮ ಕ್ಯೂಸೆಕ್ಸ್ ಇದೆ. ಇದರ ೨ ಕಿ.ಮೀ. ದೂರದಲ್ಲಿ ರಸ್ತೆಯ ಬಲಭಾಗದಲ್ಲಿ ಚಿಕ್ಕಹೊಳೆ ಅಣೆಕಟ್ಟು ಇದ್ದು ಇದು ಮಧ್ಯಮಗಾತ್ರದ ಅಣೆಕಟ್ಟು ಆಗಿದೆ. ಈ ಎರಡೂ ಜಲಾಶಯಗಳು ನಿಸರ್ಗದ ಮಡಿಲಲ್ಲಿದ್ದು, ನೀರಾವರಿ, ಮೀನುಗಾರಿಕೆ, ತೋಟಗಾರಿಕೆಗೆ ಪ್ರೋತ್ಸಾಹವಿದೆ. ಇದು ನೀರಾವರಿ ಇಲಾಖೆಗೆ ಸೇರಿದ್ದು ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ಸೌಕರ್ಯವಿದೆ. ===ನರಸಮಂಗಲ=== ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೨೪ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ನೈರುತ್ಯದಲ್ಲಿರುವ ಗಂಗರ ಇತಿಹಾಸ ಬಿಂಬಿಸುವ ಗ್ರಾಮ ನರಸಮಂಗಲ, ಈ ಸ್ಥಳವು ಪ್ರಾಚೀನ ರಾಮಲಿಂಗೇಶ್ವರ ದೇವಾಲಯದಿಂದ ಪ್ರಸಿದ್ಧವಾಗಿದೆ. ಗಂಗರ ಕಾಲದಲ್ಲಿ ಅನೇಕ ಸುಂದರ ದೇವಾಲಯ ಮತ್ತು ಬಸದಿಗಳು ನಿರ್ಮಾಣಗೊಂಡವು ಅವುಗಳಲ್ಲಿ ಈ ದೇವಾಲಯವು ಒಂದು. ಇಲ್ಲಿನ ಶಿವಲಿಂಗವು ೬ ಅಡಿ ಎತ್ತರ ೧೨ ಅಡಿಗಳನ್ನು ಸುತ್ತಳತೆ ಹೊಂದಿದೆ. *ಈ ದೇವಾಲಯವು ವಿಶಾಲವಾದ ಗರ್ಭಗೃಹ, ಕಿರಿದಾದ ಸುಖನಾಸಿ ಒಂಭತ್ತು ಅಂಕಣಗಳ ನವರಂಗಗಳಿವೆ. ಮೇಲೆ ವಿಮಾನ ಗೋಪುರವಿದೆ. ಇದು ತಮಿಳುನಾಡಿನ ಮಹಾಬಲಿಪುರಂ ಶಿಲ್ಪವನ್ನು ಹೋಲುವುದು. ಶಿಲ್ಪಗಳು ಬಹು ಸುಂದರ ಕಲಾ ಕೃತಿಗಳಾಗಿವೆ. ರಾಮಾಯಣ ಮಹಾಭಾರತ ಕಥೆಗೆ ಸಂಬಂಧಪಟ್ಟ ಹಲವಾರು ಸನ್ನಿವೇಷಗಳನ್ನು ಗೋಡೆಗಳ ಮೇಲೆ ಕೆತ್ತಲಾಗಿದೆ. ಈ ದೇವಾಲಯವನ್ನು ಭಾರತ ಸರ್ಕಾರವು ೧೯೫೮ರಲ್ಲಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಗಿದೆ. ===ಮಲೆಯೂರಿನ ಕನಕಗಿರಿ=== ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೨೫ ಕಿ.ಮೀ. ಚಾಮರಾಜನಗರ ಪಶ್ಚಿಮದಲ್ಲಿರುವ ಮಲೆಯೂರಿನ ಕನಕಗಿರಿ ಜಗತ್ತಿನ ಸುಪ್ರಸಿದ್ಧ ಜೈನ ಕ್ಷೇತ್ರಗಳಲ್ಲಿ ಒಂದಾಗಿದೆ. ಮಲೆಯೂರಿನ ಪಶ್ಚಿಮಕ್ಕಿರುವ ಈ ಬೆಟ್ಟದ ಬಂಡೆಗಳ ಮೇಲೆ ಚರಣ ಪಾದುಕೆಗಳು, ಶಿಲಾಶಾಸನಗಳು, ಸಮಾಧಿ ಮಂಟಪ ಮತ್ತು ಗುಹೆಗಳಿವೆ. ೧೦ನೇ ಶತಮಾನಕ್ಕೆ ಸೇರಿದ ಕನಕಗಿರಿ ಮೇಲಿನ ಪಾರ್ಶ್ವನಾಥ ಬಸದಿ ಅತಿ ಪುರಾತನ ಹಾಗೂ ಸುಂದರ ಬಸದಿಯಾಗಿದೆ. ಈ ಸ್ಥಳದಲ್ಲಿ ನಾಗಾರ್ಜುನನಿಗೆ ಪದ್ಮಾವತಿ ಅಮ್ಮನವರು ಲೋಹ ವನ್ನು ಚಿನ್ನ ಮಾಡುವ ವಿದ್ಯೆಯನ್ನು ತಿಳಿಸಿದರು. * ಈ ಕಾರಣದಿಂದ ಇದಕ್ಕೆ ಕನಕಗಿರಿ ಎಂಬ ಹೆಸರು ಬಂದಿದೆ. ಗಂಗರು ಮತ್ತು ಹೊಯ್ಸಳ ಕಾಲದ ಕಟ್ಟಡಗಳು, ಶಿಲಾಶಾಸನಗಳು ಇಲ್ಲಿ ಕಂಡು ಬರುತ್ತವೆ. ಇಲ್ಲಿನ ಶಿಲಾಶಾಸನಗಳ ಪ್ರಕಾರ ಅಜಿತಮುನಿ ಚಂದ್ರಸೇನಾಚಾರ್ಯ ಮುಂತಾದ ಹಲವರು ಸಲ್ಲೇಖನ ವ್ರತ ಕೈಗೊಂಡು ಸಮಾಧಿ ಪಡೆದರೆಂದು ತಿಳಿಯುತ್ತದೆ. 'ಕಲ್ಯಾಣಕಾರಕ ಚಿಕಿತ್ಸಾಶಾಸ್ತ್ರ' ಗ್ರಂಥ ಬರೆದ ಶ್ರೀ ಪೂಜ್ಯಪಾದರು ಈ ಊರಿನವರು. ===ದಿವ್ಯಲಿಂಗೇಶ್ವರ ದೇಗುಲ=== *ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೫ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಆಗ್ನೇಯದಿಕ್ಕಿಗಿರುವ ಹೋಬಳಿಕೇಂದ್ರ ಹರದನಹಳ್ಳಿ ಗ್ರಾಮದಲ್ಲಿ ಈ ದೇವಾಲಯವಿದೆ. ಹಿಂದೆ ಹೊಯ್ಸಳರು, ವಿಜಯನಗರ ಅರಸರು ಮತ್ತು ಮೈಸೂರು ಅರಸರು ಆಳುತ್ತಿದ್ದರು. ಈ ಊರಿನಲ್ಲಿ ಹಿಂದೆ ಕೋಟೆಯಿದ್ದು ಈಗ ಹಾಳಾಗಿದೆ. ಈ ಊರಿಗೆ ಕಳಸಪ್ರಾಯವಾಗಿರುವುದು ದಿವ್ಯ ಲಿಂಗೇಶ್ವರ ದೇವಾಲಯ. ಈ ದೇಗುಲವು ಗೋಪುರ ಮತ್ತು ಗರುಡಗಂಭವನ್ನು ಒಳಗೊಂಡಿದ್ದು ೨೦೦೧ನೇ ಇಸವಿಯ ಮಳೆಗಾಲದಲ್ಲಿ ರಾಜಗೋಪರವು ಶಿಥಿಲಗೊಂಡು ನೆಲಸಮವಾಗಿದೆ. *೧೩ನೇ ಶತಮಾನದಲ್ಲಿ ಹೊಯ್ಸಳ ವೀರಬಲ್ಲಾಳರ ಕಾಲದಲ್ಲಿ ನಿರ್ಮಾಣವಾಗಿತ್ತು. ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಕಲಾತ್ಮಕವಾಗಿದೆ. ಇದರಿಂದ ೧೦೫ ಅಡಿ ದೂರದಲ್ಲಿ ನಂದೀಶ್ವರನ ವಿಗ್ರಹವಿದೆ. ಇದೊಂದು ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾಗಿದ್ದು ಆಕರ್ಷಿಣಿಯ ಸ್ಥಳವಾಗಿದೆ. ಈ ಗ್ರಾಮವು ಮಹಿಮಾಪುರುಷರಾದ "ಎಡೆಯೂರು ಸಿದ್ಧಲಿಂಗೇಶ್ವರ"ರ ಜನ್ಮಸ್ಥಳವೂ ಹೌದು. ===ಬೂದಿ ಪಡಗ=== *ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೩೦ ಕಿ.ಮೀ. ಸುವರ್ಣಾವತಿ ಜಲಾಶಯದ ಹಿನ್ನೀರಿನ ಕಾಡಂಚಿನಲ್ಲಿರುವ ಬೂದಿಪಡಗ ಪ್ರಸಿದ್ಧ ವನ್ಯಜೀವಿ ವಿಶ್ರಾಂತಿಧಾಮ, ಮೈಸೂರು ಮಹಾರಾಜರು – ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾದ ವಸತಿಗೃಹಗಳು ವಿಶಾಲಹುಲ್ಲು ಮೈದಾನ. ಅಮೂಲ್ಯ ವನ್ಯ ಜೀವಿಗಳು, ಬೂದಿಪಡಗದ ವಿಶೇಷಗಳು. ವನ್ಯಜೀವಿ ಛಾಯಾ ಗ್ರಾಹಕರಿಗೆ, ಪ್ರವಾಸಿಗರಿಗೆ ಸಂಶೋಧಕರಿಗೆ ಇದು ಅಚ್ಚುಮೆಚ್ಚಿನ ಪ್ರವಾಸಿ ಸ್ಥಳವಾಗಿದೆ. ಬೂದಿಪಡಗ ಬಿಳಿಗಿರಿರಂಗನ ಬೆಟ್ಟಗಳಲ್ಲಿ ವನ್ಯ ಜೀವಿಧಾಮದ ಭಾಗವಾಗಿದೆ. ===ಬೇಡಗುಳಿ ಮತ್ತು ಅತ್ತಿಖಾನೆ=== *ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೫೦ ಮತ್ತು ೬೨ ಕಿ.ಮೀ ಚಾಮರಾಜನಗರದಿಂದ ತಮಿಳುನಾಡಿಗೆ ತೆರಳುವ ಮುಖ್ಯ ರಸ್ತೆಯ ನೀಲಗಿರಿ ಶ್ರೇಣಿಯ ಅಂಜಿನಲ್ಲಿರುವ ಬೇಡಗುಳಿ ಕರ್ನಾಟಕ – ತಮಿಳುನಾಡಿನ ಸೀಮಾರೇಖೆ. ನಿತ್ಯಹರಿದ್ವರ್ಣದ ವನ್ಯಜೀವಿಧಾಮ. ಬೇಡಗುಳಿ ಮತ್ತು ಅತ್ತಿಖಾನೆ ಪ್ರದೇಶದಲ್ಲಿ ವಾಸಿಸುವ ಗಿರಿಜನರು ಮತ್ತು ಯುರೋಪಿಯನ್ನರ ಕಾಲದ ಕಾಫಿ ತೋಟಗಳು ವಿಶೇಷಗಳು. ಬೇಡಗುಳಿ ಮತ್ತು ಅತ್ತಿಖಾನೆ ಗಿರಿಜನರ ಹಾಡಿಗಳು ಅವರ ಹಾಡುಪಾಡು. *ಅವರ ಜೀವನ ಶೈಲಿ ಮತ್ತು ಸಂಸ್ಕೃತಿ ಸಂಪ್ರದಾಯಗಳು ಅಧ್ಯಯನ ಯೋಗ್ಯವಾಗಿದೆ. ಸುಂದರ ಗಿರಿಶ್ರೇಣಿಗಳು ಅದ್ಭುತ ಕಣಿವೆಗಳು ಮನೋಹರ ಜಲಪಾತಗಳು ಆಕರ್ಷಕ. ವನ್ಯಜೀವಿಗಳು ಬೇಡಗುಳಿ ಮತ್ತು ಅತ್ತಿಖಾನೆ ಅರಣ್ಯ ಪ್ರದೇಶದ ವಿಶೇಷ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಬೇಡಗುಳಿ ಅತಿಥಿಗೃಹ ನೂರು ವರುಷಗಳಷ್ಟು ಪುರಾತನವಾಗಿದೆ. ವನ್ಯಜೀವಿ ಪ್ರದೇಶವಾಗಿರುವುದರಿಂದ ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಅಗತ್ಯ. * ಎಲೆಮರೆಯ ಕಾಯಿಯಂತಿರುವ ಅತ್ತಿಖಾನೆಯ ಕತ್ತರಿ ಬೆಟ್ಟವು (ಸಮುದ್ರ ಮಟ್ಟದಿಂದ ೧೮೧೬ ಮೀ) ಈ ಜಿಲ್ಲೆಯಲ್ಲೆ ಅತಿ ಎತ್ತರವಾದ ಬೆಟ್ಟವಾಗಿದ್ದು, ಇದರ ತಪ್ಪಲಿನಲ್ಲಿ ಹುಟ್ಟುವ ಝರಿಗಳೆ ತೊರೆಯಾಗಿ ಹರಿದು ಚಾಮರಾಜನಗರ ಜಿಲ್ಲೆಯ ಜೀವನಾಡಿಯಾದ ಸುವರ್ಣಾವತಿ ನದಿಯಾಗಿ ಹರಿದು ಸುವರ್ಣಾವತಿ ಜಲಾಶಯದ ಒಡಲಸೇರಿ ಜಿಲ್ಲೆಯ ಆಧಾರವಾಗಿದೆ. ಅತ್ತಿಖಾನೆ ಗ್ರಾಮವು ಕೊಳ್ಳೇಗಾಲ ತಾಲ್ಲೂಕಿಗೆ ಸೇರಿದ್ದು ಸುಂದರ ಅತಿಸುಂದರ ಗಿರಿಕಣಿವೆಗಳ ಆಗರವೇ ಆಗಿದೆ. ===ಜೋಡಿಗೆರೆ=== *ಜೋಡಿಗೆರೆ ಸೌಂದರ್ಯವನ್ನು ಒಂದೆರಡು ಮಾತಿನಲ್ಲಿ ವರ್ಣಿಸಲಾಗದು. ಇದೊಂದು ಪ್ರಕೃತಿಯ ಅಪ್ರತಿಮ ಕೊಡುಗೆ ನಿಂತು ನೋಡಿದರೆ ನೋಡಿದಷ್ಟು ಆನಂದ. ವಿಶಾಲ ಹುಲ್ಲು ಗಾವಲು. ಶೋಲಾ ಅರಣ್ಯ ಪ್ರದೇಶ. ಮನಬಿಚ್ಚಿ ಓಡಾಡುವ ವನ್ಯಜೀವಿಗಳು ಸುಯ್‌ಗುಡುವ ತಂಗಾಳಿ. ಇವೆಲ್ಲವೂ ಒಂದು ಮಾಯಾಲೋಕವನ್ನು ಸೃಷ್ಟಿಸುತ್ತವೆ. *ಜಗತ್ತಿನ ಅಪರೂಪದ ಪ್ರದೇಶವೆಂಬಂತೆ ವನ್ಯಜೀವಿಗಳು ಹುಲ್ಲುಗಾವಲಿನಲ್ಲಿ ಗುಂಪುಗುಂಪಾಗಿ ನಲಿದಾಡುವುದನ್ನು ನೋಡಿದರೆ ಇದೊಂದು ಮಿನಿ ಜುರಾಸಿಕ್ ಪಾರ್ಕ್‌ನಂತೆ ಕಾಣುತ್ತದೆ. ಸಮುದ್ರ ಮಟ್ಟದಿಂದ ಸುಮಾರು ೧೬೦೦ ಮೀಟರ್‌ಗಳಷ್ಟು ಎತ್ತರದಲ್ಲಿರುವ ಜೋಡಿಗೆರೆ ಬಿಳಿಗಿರಿ ರಂಗನಬೆಟ್ಟ ವನ್ಯಜೀವಿಧಾಮದ ಒಂದು ಭಾಗವಾಗಿದ್ದು ಇಲ್ಲಿಗೆ ಪ್ರವೇಶಿಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ. ===ಕೆ. ಗುಡಿ (ಕ್ಯಾತೇದೇವರ ಗುಡಿ)=== *ಚಾಮರಾಜನಗರದ ಪೂರ್ವಕ್ಕಿರುವ ಪ್ರಕೃತಿ ಧಾಮ. ಸಮುದ್ರ ಮಟ್ಟದಿಂದ ೧೪೫೦ ಮೀಟರ್‌ಗಳಷ್ಟು ಎತ್ತರದಲ್ಲಿದೆ. ಇಲ್ಲಿ ಕರ್ನಾಟಕ ಜಂಗಲ್ ಲಾಡ್ಜ್ ನ ವನ್ಯಜೀವಿ ಪ್ರವಾಸೋದ್ಯಮ ಕೆಲಸ ಮಾಡುತ್ತಿದೆ. ಜೊತೆಗೆ ಅರಣ್ಯ ಇಲಾಖೆಯ ಅತಿಥಿಗೃಹವಿದೆ. ಅರಣ್ಯ ಇಲಾಖೆಯ ಆನೆ ಸಫಾರಿ ಮತ್ತು ವನ್ಯಜೀವಿ ಸಫಾರಿ ಬಹಳ ಪ್ರಸಿದ್ಧ. *ಕೆ. ಗುಡಿಗೆ ದೇಶ-ವಿದೇಶಗಳು ಪ್ರವಾಸಿಗರ ಆಗಮನವಿದೆ. ಪ್ರಾಣಿ ಪಕ್ಷಿ, ಪ್ರಕೃತಿ ಸಂಶೋಧಕರಿಗೆ ಮತ್ತು ಪ್ರವಾಸಿಗರಿಗೆ ಕೆ. ಗುಡಿ ರಮ್ಯತಾಣವಾಗಿದ್ದು ಇಲ್ಲಿ ಆನೆ, ಹುಲಿ, ಚಿರತೆ, ಕಾಡೆಮ್ಮೆ, ಕರಡಿ, ಜಿಂಕೆ, ಕಡವೆ ಈ ಅರಣ್ಯದ ಪ್ರಮುಖ ವನ್ಯಜೀವಿಗಳು. ===ಬೆಲ್ಲತ್ತ ಪಕ್ಷಿರಾಶಿ=== ಚಾಮರಾಜನಗರ ತಾಲ್ಲೋಕಿ ನಲ್ಲಿರುವ ಬೆಲ್ಲತ್ತ ಜಲಾಶಯ ಬಿಳಿಗಿರಿರಂಗನ ಬೆಟ್ಟದ ಕಾಡಂಚಿನಲ್ಲಿದೆ. ಕಾಡಂಚಿಗೆ ತಾಗಿಕೊಂಡಿರುವ ಹಿನ್ನೀರಿ ನಿಂದಾಗಿ ಪ್ರಾಣಿಗಳು ಪಕ್ಷಿಗಳಿಗೆ ಸಮೃದ್ಧ ಪ್ರದೇಶವಾಗಿದೆ. ಈ ಜಲಾಶಯದ ಸುತ್ತ ದೇಶ ವಿದೇಶಗಳ ವೈವಿಧ್ಯಮಯ ಪಕ್ಷಿಗಳ ಸಮ್ಮಿಲನವಾಗುತ್ತದೆ. ನಿಸರ್ಗ ಪ್ರಿಯರಿಗೆ ಪಕ್ಷಿ ಛಾಯಗ್ರಾಹಕರಿಗೆ ಮತ್ತು ಸಂಶೋಧಕರಿಗೆ ಇದೊಂದು ಉತ್ತಮ ತಾಣವಾಗಿದೆ. ===ಯಳಂದೂರು=== *ಬಹಳ ಹಿಂದೆ ಯಳಂದೂರು ಪದಿನಾಡಿನ ರಾಜವಂಶಸ್ಥರ ಮುಖ್ಯ ಪಟ್ಟಣ ಅಥವಾ ರಾಜಧಾನಿಯಾಗಿತ್ತು. ಈ ವಿಷಯ ಹದಿನಾಡಿನ ಉಲ್ಲೇಖ ಕ್ರಿ.ಶ. ೧೦೧೮ರ ಚೋಳ ದೊರೆ ಒಂದನೇ ರಾಜೇಂದ್ರನ ಕಾಲದ ಶಾಸನದಲ್ಲಿ ಕಂಡು ಬಂದಿದೆ. ಜೈನಧರ್ಮದ ಪ್ರಮುಖ ಮುನಿಗಳಾದ ಶ್ರೀ ಬಾಲಚಂದ್ರ ಮುನಿಗಳ ಹೆಸರು ಈ ಊರಿಗೆ ಇತ್ತು. ನಂತರ ಬಾಲೇಂದುಪುರ ಎಂದಾಯಿತು. ನಂತರ ಎಳವಂದೂರಾಯಿತು. ಮುಂದೆ ಯಳಂದೂರಾಯಿತು. ಇಲ್ಲಿ ಜೈನ ಧರ್ಮದ ಮತ್ತು ವೀರಶೈವ ಧರ್ಮದ ಅನೇಕ ಹೆಸರಾಂತ ಮಹಾಕವಿಗಳು ಇಲ್ಲಿ ಇದ್ದರು. *ಇವರು ರಚಿಸಿರುವ ಲೀಲಾವತಿ ಪ್ರಬಂಧ ರಾಜಶೇಖರ ವಿಲಾಸ ಹಾಗೂ ಸಂಚಿ ಹೊನ್ನಮ್ಮ ರಚಿಸಿದ ಹದಿಬದಿಯ ಧರ್ಮ ಶ್ರೇಷ್ಠ ಕೃತಿಗಳಾಗಿವೆ. ಇಂತಹ ಪುಣ್ಯ ಭೂಮಿಯಲ್ಲಿ (ಸುವರ್ಣಾವತಿ) ಹೊನ್ನು ಹೊಳೆ ಹರಿಯುತ್ತದೆ. ಇದಕ್ಕೆ ಇರುವ ದಂತ ಕಥೆಯ ಉಲ್ಲೇಖವು ಶಾಸನವೊಂದರಲ್ಲಿ ದೊರೆಯುತ್ತದೆ. ಯಳಂದೂರು ಸಂಪದ್ಭರಿತವಾದ ಹಾಗೂ ಜನಾಕರ್ಷಕವಾದ ಸ್ಥಳವಾಗಿದ್ದು ನಿರ್ದಿಷ್ಟ ರಾಜಮನೆತನಗಳು ಇದ್ದವು ಎಂಬುದು ತಿಳಿದು ಬಂದಿದೆ. ===ಬಳೇ ಮಂಟಪ=== ಯಳಂದೂರಿನ ಗೌರೀಶ್ವರ ದೇವಾಲಯದ ಮುಖ ಮಂಟಪವನ್ನು ಕ್ರಿ.ಶ. ೧೬೫೪ರಲ್ಲಿ ಮುದ್ದುರಾಜನು ಬಹಳ ರಮ್ಯವಾಗಿ ಕಟ್ಟಿಸಿದ್ದಾನೆ. ಇದು ಬಹಳ ಸುಂದರವಾದ ಅತ್ಯಂತ ಪ್ರಾಚೀನ ಹಾಗೂ ಕಲಾಪೂರ್ಣ ಕಗ್ಗಲ್ಲಿನ ಮಂಟಪವಾಗಿದೆ. ಈ ಮಂಟಪ ಹಂಪೆಯ ೨೭ ಕಲ್ಲಿನ ರಥವನ್ನು ಹೋಲುತ್ತದೆ. ಈ ಮಂಟಪವು ಬೇಲೂರು ಮತ್ತು ಹಳೇ ಬೀಡಿನ ದೇವಾಲಯದ ಶಿಲ್ಪಕಲೆಯಂತೆ ಇದೆ. ಈ ಮಂಟಪವೂ ಚತುರ್ಮುಖಗಳನ್ನು ಹೊಂದಿದ್ದು ಸುಂದರವಾದ ಕಲ್ಲಿನ ಬಳೆಗಳಿಂದ ಕೂಡಿದ ಮಂಟಪವಾಗಿದೆ. *ಶಿಲೆಯ ಗೋಡೆಯಲ್ಲಿ ಶೈವ ಪುರಾಣದ, ರಾಮಾಯಣದ ಹಾಗೂ ಮಹಾಭಾರತದ ಕೆಲವು ಘಟನೆಗಳನ್ನು ಅತ್ಯಂತ ಮನೋಹರವಾಗಿ ಸುಂದರವಾಗಿ ಕೆತ್ತಿರುವುದನ್ನು ನೋಡಬಹುದು. ಈ ಮಂಟಪದ ಮಧ್ಯಭಾಗದಲ್ಲಿ ಒಂದೇ ಕಲ್ಲಿನಿಂದ ಕಮಲದ ಮೊಗ್ಗನ್ನು ಬಿಡಿಸಿ ಮೇಲ್ಭಾಗದಲ್ಲಿ ಜೋಡಿಸಿರುವುದು ಮನೋಹರವಾಗಿದೆ. ಈ ಮಂಟಪದ ಮೂಲೆಗಳಲ್ಲಿ ಬಳೆಗಳನ್ನು ಒಂದರೊಳಗೊಂದು ಜೋಡಿಸಿದಂತೆ ಒಂದೇ ಕಲ್ಲಿನಿಂದ ಮಾಡಿರುವುದು ಅದ್ಭುತವಾಗಿದೆ. ಈ ಬಳೆಗಳು ಇರುವುದರಿಂದಲೇ ರೂಢಿಯಿಂದ ಈ ಮಂಟಪವನ್ನು ಬಳೆ ಮಂಟಪ ಎಂದು ಕರೆಯುತ್ತಾರೆ. ===ಗೌರೀಶ್ವರ ದೇವಾಲಯ=== *ಯಳಂದೂರಿನಲ್ಲಿರುವ ಗೌರೀಶ್ವರ ದೇವಾಲಯದ ವೈಶಿಷ್ಟತೆಯನ್ನು ತಿಳಿಯಲು ಇಲ್ಲಿರುವ ಶಿಲಾಶಾಸನ ಒಂದೇ ಆಧಾರ ಯಳಂದೂರಿನಲ್ಲಿ ಆಳಿದ ರಾಜ ಮನೆತನಗಳಲ್ಲಿ ಪದಿನಾಡ ಅರಸರೇ ಪ್ರಮುಖರು. ಈ ಮನೆತನದ ಮೊದಲನೆರಾಜ ಸಿಂಗದೇವಭೂಪನು ಗೌರೀಶ್ವರ ದೇವಾಲಯವನ್ನು ಮುದ್ದುರಾಜನು ಕ್ರಿ.ಶ. ೧೬೫೪ರಲ್ಲಿ ದೇವಾಲಯದ ಮುಖ ಮಂಟಪ ಪಂಚಲಿಂಗಗಳನ್ನೊಳಗೊಂಡ ಗುಡಿಗಳನ್ನು ಕಟ್ಟಿಸಿದ್ದಾನೆ. * ಈ ಗೌರೀಶ್ವರನು ಹಿಂದೆ ಕೃತಾಯುಗದಲ್ಲಿ ಜಮದಗ್ನಿ ಮಹಾರ್ಷಿಯಿಂದ “ತ್ರಿಪುರಾಂತಕ”ನೆಂದೂ ತ್ರೇತಾಯುಗದಲ್ಲಿ ಶ್ರೀರಾಮಚಂದ್ರನಿಂದ “ನೀಲಕಂಠ” ನೆಂದೂ, ದ್ವಾಪರಾಯುಗದಲ್ಲಿ ಪಾಂಡವರಿಂದ ಲೋಕೇಶ್ವರನೆಂದೂ ಕಲಿಯುಗದಲ್ಲಿ ಪದಿನಾಡಿನ ರಾಜ ವಂಶಸ್ಥರು ಗೌರೀಶ್ವರನೆಂದೂ ಪೂಜಿಸುತ್ತಿದ್ದರು. ಈ ದೇವಾಲಯದ ಆವರಣದಲ್ಲಿರುವ ಎರಡು ಪಗಡೆ ಮರಗಳು ದೇವಾಲಯದ ಆವರಣವನ್ನು ಬೇಸಿಗೆಯಲ್ಲೂ ತಂಪಾಗಿಸುತ್ತಿದೆ. ===ಬಿಳಿಗಿರಿರಂಗನಬೆಟ್ಟ=== *ಪೂರ್ವ ಘಟ್ಟದಲ್ಲಿ ಮಲೈ ಮಹಾದೇಶ್ವರ ಬೆಟ್ಟ ಶ್ರೇಣಿ ಹಾಗೂ ದಿಂಬಮ್ ಬೆಟ್ಟ ಶ್ರೇಣಿಗಳ ನಡುವೆ ೩೦ ಮೈಲಿ ದೂರ ಫಲವತ್ತಾದ ಮಣ್ಣು ಮತ್ತು ದಟ್ಟ ಅರಣ್ಯದಿಂದ ಕೂಡಿರುವ ಬೆಟ್ಟವೇ ಬಿಳಿಗಿರಿರಂಗನ ಬೆಟ್ಟ. ಯಳಂದೂರು ತಾಲ್ಲೂಕಿನಿಂದ ೨೪ ಕಿ.ಮೀ. ದೂರದಲ್ಲಿರುವ ಈ ಬೆಟ್ಟವು ಬಿಳಿಕಲ್ಲು ಬೆಟ್ಟ. ಶ್ವೇತಾದ್ರಿಬೆಟ್ಟ. ಬಿಳಿಗಿರಿರಂಗಸ್ವಾಮಿ ಬೆಟ್ಟ ಎಂದು ಹಲವಾರು ಹೆಸರುಗಳಿಂದ ಪ್ರಸಿದ್ಧವಾಗಿದೆ. *ಈ ಬೆಟ್ಟವು ಸಮುದ್ರಮಟ್ಟದಿಂದ ೪೪೭೦ ಅಡಿಗಳ ಎತ್ತರದಲ್ಲಿದ್ದು, ಔಷಧಿ ಸಸ್ಯಗಳಿಂದಲೂ, ತೇಗ, ಬೀಟೆ, ಹೊನ್ನೇ, ಮತ್ತಿ, ಬಿದುರು, ಮುಂತಾದ ಬೆಲೆ ಬಾಳುವ ಮರಗಳಿಂದ ಕೂಡಿದ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿ ಹುಲಿ, ಚಿರತೆ, ಜಿಂಕೆ, ಆನೆ, ಕಾಡೆಮ್ಮೆ, ಕರಡಿ, ಮುಂತಾದ ಕಾಡು ಮೃಗಗಳು ಇವೆ. ಈ ಕಾನನ ಪ್ರದೇಶವನ್ನು ಪಾಂಡವರ ಕಾಲದಲ್ಲಿ ಚಂಪಕಾರಣ್ಯ ಎಂದು, ಗಂಗರ ಕಾಲದಲ್ಲಿ ಗಜಾರಾಣ್ಯ ಎಂದು ಕರೆಯುತ್ತಿದ್ದರು. *ಶಿಲಾಯುಗದ ಮಾನವರು ಬಳಸುತ್ತಿದ್ದ ಆಯುಧಗಳು, ಮಡಿಕೆಗಳು, ಮತ್ತು ಅವರ ಸಮಾಧಿಗಳು, ಕಂಡು ಬಂದಿದೆ. ಬಿಳಿಗಿರಿರಂಗಸ್ವಾಮಿ ಬೆಟ್ಟದಲ್ಲಿರುವ ಶ್ರೀ ರಂಗಸ್ವಾಮಿ ದೇವಾಲಯವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಏಪ್ರಿಲ್ ಮೇ ತಿಂಗಳಲ್ಲಿ ನಡೆಯುವ ದೊಡ್ಡ ಜಾತ್ರೆಯು ಬಹಳ ಪ್ರಸಿದ್ಧಿಯನ್ನು ಪಡೆದಿದೆ. ===ದೊಡ್ಡ ಸಂಪಿಗೆ=== ಇದು ಬಿಳಿಗಿರರಂಗನ ಬೆಟ್ಟದ ಕಾಡಿಗೆ ಸೇರಿದ ಪ್ರದೇಶದಲ್ಲಿದ್ದು ಈ ಸ್ಥಳದಲ್ಲಿ ಭಾರ್ಗವೀ ನದಿ ನಯನ ಮನೋಹರವಾದ ಕಣಿವೆಯಲ್ಲಿ ಹರಿಯುತ್ತಿದೆ. ಪರಶುರಾಮನು ಮಾತೃ ಹತ್ಯಾ ದೋಷ ಪರಿಹಾರಕ್ಕಾಗಿ ಈ ಪರ್ವತದ ಮೇಲೆ ತಪಸ್ಸಾಚರಿಸಿದರೆಂದು ಪ್ರತೀತಿ. ಈ ಸ್ಥಳದಲ್ಲಿ ದೊಡ್ಡ ಸಂಪಿಗೆ ವೃಕ್ಷವಿದೆ. ಈ ಮಹಾವೃಕ್ಷದಲ್ಲಿ ೩ ಕೊಂಬೆಗಳಿದ್ದು ಇವು ಬ್ರಹ್ಮ-ವಿಷ್ಣು ಮತ್ತು ಮಹೇಶ್ವರರ ಸಂಕೇತ ಎಂದು ತಿಳಿಯಲಾಗಿದೆ. ಈ ಮಹಾವೃಕ್ಷವನ್ನು ‘ಸೋಲಿಗರು’ ತಮ್ಮ ಆರಾಧ್ಯ ದೈವವಾಗಿ ಭಯ ಭಕ್ತಿಯಿಂದ ಪೂಜಿಸುತ್ತಾರೆ. ===ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿ.ಜಿ.ಕೆ.ಕೆ.)=== *ತಲೆತಲಾಂತರದಿಂದ ಗುಡ್ಡಗಾಡುಗಳಲ್ಲಿ ಸಂಚರಿಸುತ್ತಾ ನಾಡಿನ ಸಂಪರ್ಕವನ್ನು ಕಳೆದುಕೊಂಡಿದ್ದ ಸೋಲಿಗ ಬುಡಕಟ್ಟು ಜನರಲ್ಲಿ ಆತ್ಮ ವಿಶ್ವಾಸ ತುಂಬಿ ವಂಶ ಪರಂಪರೆಯಾಗಿ ಅವರಲ್ಲಿ ಮನೆ ಮಾಡಿದ್ದ ಅನಿಮಿಯ ರೋಗದಿಂದ ಅವರನ್ನು ಪಾರು ಮಾಡಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ದೆಸೆಯಲ್ಲಿ ೧೯೮೧ರಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರವೇ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ. *ಸೋಲಿಗರ ಪ್ರಗತಿಯನ್ನು ಕೇಂದ್ರವಾಗಿರಿಸಿಕೊಂಡಿರುವ ಈ ಕೇಂದ್ರ ಅವರಿಗೆ ಸೀಮಿತವಾಗಿರದೆ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ, ಪಣಿಯ, ಹಕ್ಕಿಪಿಕ್ಕಿ, ಯರವ, ಲಂಬಾಣಿ,ಕೊರಮ ಇತ್ಯಾದಿ ಬುಡಕಟ್ಟಿನ ಜನರ ಪ್ರಗತಿಗೆ ಶ್ರಮಿಸುತ್ತಿದೆ. ಆರಂಭದಲ್ಲಿ ಏಳು ಮಕ್ಕಳ ಪ್ರವೇಶದೊಂದಿಗೆ ಆರಂಭವಾದ ಪ್ರಾಥಮಿಕ ಶಾಲೆ, ಇಂದು ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು, ಮತ್ತು ವೃತ್ತಿಪರ ಕಾಲೇಜನ್ನು ಹೊಂದಿರುವುದರ ಜೊತೆಗೆ ಸಾಮಾಜಿಕವಾಗಿಯೂ ಬೆಳೆದು ಹೆಮ್ಮರವಾಗಿದೆ. * ಬುಡಕಟ್ಟು ಜನರ ಅರಿವಿನ ಆಶ್ರಯಧಾಮವಾಗಿದೆ.ಸೋಲಿಗರ ಬದುಕನ್ನು ಹಸನು ಮಾಡಲು ಜೀವನ ತ್ಯಾಗ ಮಾಡಿದ ಡಾ. ಎಚ್. ಸುದರ್ಶನ್ ರವರಿಗೆ ಮಹತ್ಕಾರ‍್ಯವನ್ನು ಪ್ರಶಂಸಿಸಿ ೯ ಡಿಸೆಂಬರ್ ೧೯೯೪ರಂದು ಅಂತರರಾಷ್ಟ್ರೀಯ ಸಂಸ್ಥೆಯೊಂದು ‘ರೈಟ್ ಲೈವಿಲಿಹುಡ್ ಅವಾರ್ಡ್’ನೀಡಿ ಗೌರವಿಸಿದೆ. ==ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಲಯದ ಪ್ರವಾಸಿ ತಾಣಗಳು== # ಮರಡಿಗುಡ್ಡ, # ಚಿಲಕವಾಡಿ, # ಕುಂತೂರು, # ಕುರುಬನ ಕಟ್ಟೆ, # ಕನಕಗಿರಿ ಕ್ಷೇತ್ರ, # ಚಿಕ್ಕಲ್ಲೂರು, # ಉಗನಿಯ, # ಶಿವನ ಸಮುದ್ರ, # ವೆಸ್ಲಿ ಸೇತುವೆ, # ಬೂದಬಾಳು ಕ್ಷೇತ್ರ, # ಭರಚುಕ್ಕಿ, # ಯಡಕುರಿ ಕೊಳ್ಳೇಗಾಲ ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೦ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೪೦ ಕಿ.ಮೀ. ಕೊಳ್ಳೇಗಾಲ ವಲಯ ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಗಡಿ ತಾಲ್ಲೂಕು, ಪ್ರಕೃತಿ ಸಂಪತ್ತು ಬಹಳಷ್ಟಿದ್ದು ಜಲಪಾತಗಳು, ದೇವಸ್ಥಾನಗಳನ್ನು ಹೊಂದಿದೆ. ವಲಯದ ಸ್ವಲ್ಪಭಾಗ ನೀರಾವರಿ ಹೊಂದಿದೆ. ಈ ಹಿಂದೆ ಈ ಪಟ್ಟಣದಲ್ಲಿ ಕೌಹಳ ಮತ್ತು ಗಾಲವ ಎಂಬ ಈರ್ವರು ಮಹರ್ಷಿಗಳು ನೆಲೆಸಿದ್ದರಿಂದ ಕೌಹಳಗಾಲವ ನಗರವಾಗಿ ಮುಂದೆ ಕೊಳ್ಳೇಗಾಲವೆಂದು ಪ್ರಸಿದ್ಧಿ ಪಡೆಯಿತು. ಇಲ್ಲಿಯ ರೇಷ್ಮೆ ಮಾರುಕಟ್ಟೆಯು ರೇಷ್ಮೆ ಬೆಳೆಗಾರರಿಗೆ ವರದಾನವಾಗಿದೆ. ಕೊಳ್ಳೇಗಾಲದ ಚಾರಿತ್ರಿಕ ಮುಖವನ್ನು ಅವಲೋಕಿಸಿದರೆ ಜನಪದ ನಾಯಕರಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಸತ್ ಸಂಕಲ್ಪಗಳಿಗೆ ಸದಾ ಪ್ರೇರಣೆ ನೀಡುತ್ತಿರುವ ಮಲೆ ಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿಯಂತಹ ಜಂಗಮ ಶ್ರೇಷ್ಠರು ನಡೆದಾಡಿದ ಪುಣ್ಯಭೂಮಿ. ನಾಡಿನ ಹಿರಿಯ ಕವಿ ಷಟ್ ಶಾಸ್ತ್ರ ಕೋವಿದ ಶ್ರೀ ನಿಜಗುಣಶಿವಯೋಗಿ ನಂತರದ ಶ್ರೀ ಕುಮಾರ ನಿಜಗುಣಸ್ವಾಮಿ ಹಾಗೂ ಡಾ. ರಾಜ್‌ಕುಮಾರ್ ಸಿಂಗಾನಲ್ಲೂರಿನವರಾಗಿದ್ದು ಇವರೆಲ್ಲರಿಂದ ಸಾಂಸ್ಕೃತಿಕವಾಗಿ ಶ್ರೀಮಂತಗೊಂಡ ಪ್ರದೇಶವಾಗಿದೆ. ===ಮರಡಿಗುಡ್ಡ === ಪವಾಡ ಪುರುಷ ಶ್ರೀ ಮಹದೇಶ್ವರರು ಮಂಡಿ ಊರಿದ ಸ್ಥಳ ಮರಡಿಗುಡ್ಡವಾಗಿದೆ. ಬಸ್ತೀಪುರ : ಪಟ್ಟಣದ ಉತ್ತರ ದಿಕ್ಕಿನಲ್ಲಿದ್ದು, ಜೈನ ಬಸದಿಗಳಿದ್ದ ಪುರಾವೆಗಳಿವೆ. ===ಇತರೆ ಸ್ಥಳಗಳು=== # ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನ, # ಮಾಳಿಗೆ ಮಾರಮ್ಮ, # ಸೋಮೇಶ್ವರ ಸ್ವಾಮಿ ದೇವಸ್ಥಾನ, # ಚೌಡೇಶ್ವರಿ ದೇವಸ್ಥಾನ, # ಮುರುಡೇಶ್ವರ ಸ್ವಾಮಿ ದೇವಸ್ಥಾನ, # ಕನ್ನಿಕಾ ಪರಮೇಶ್ವರಿ ದೇವಸ್ಥಾನ, # ಉಚ್ಛಾಲಮ್ಮ ದೇವಸ್ಥಾನ, # ಮಕ್ಕಳ ಮಹದೇಶ್ವರ ದೇವಸ್ಥಾನ, # ನಾರಾಯಣ ಸ್ವಾಮಿ ದೇವಸ್ಥಾನ ಹಾಗೂ # ಕಲ್ಯಾಣಿ. ===ಚಿಲಕವಾಡಿ=== ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೧೨ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೨ ಕಿ.ಮೀ. ಇದೊಂದು ಧಾರ್ಮಿಕ ಹಾಗೂ ಕವಿಗಳ ಊರು. ಇಲ್ಲಿ ಶ್ರೀ ಶಂಭುಲಿಂಗೇಶ್ವರರ ಬೆಟ್ಟವಿದ್ದು, ದುರ್ಗಾಂಭ ದೇವಿಯ ದೇವಸ್ಥಾನ ಕೂಡ ಇದೆ. ದೀಪಾವಳಿಯ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಸ್ವಾಮಿಯ ಉತ್ಸವ ನಡೆಯುತ್ತಿದ್ದು, ಜಾತ್ರೆ ಕೂಡ ಏರ್ಪಾಡಾಗುತ್ತದೆ. ದೇವಸ್ಥಾನದ ಸಮೀಪದಲ್ಲಿ ಅನುಭವ ಮಂಟಪ ಇದ್ದು, ಕುಮಾರ ನಿಜಗುಣ ಸ್ವಾಮಿಗಳವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇವರು ಬರೆದ ’ಬೋಳು ಬಸವನ ಬೊಂತೆ” ಒಂದು ಅಮರ ಕೃತಿ. ಇವರು ಸಂಸಾರಿಕ ಜೀವನವನ್ನು ತ್ಯಜಿಸಿ, ಶ್ರೀ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿಗಳವರಿಂದ ದೀಕ್ಷೆಯನ್ನು ಪಡೆದು ವಿರಕ್ತಿ ಮಾರ್ಗದೆಡೆಗೆ ನಡೆದಿದ್ದಾರೆ. ಈ ಸ್ಥಳದಲ್ಲಿ ಶ್ರೀ ನಿಜಗುಣಶಿವಯೋಗಿಗಳು ತಪೋಗೈದ ಗುಹೆ ಇದೆ. ===ಕುಂತೂರು=== ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೧೦ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೦ ಕಿ.ಮೀ. ಈ ಗ್ರಾಮದಲ್ಲಿ ಶ್ರೀ ಪ್ರಭುದೇವಸ್ವಾಮಿಯವರ ಬೆಟ್ಟ ಇದ್ದು, ವರ್ಷಕ್ಕೊಮ್ಮೆ ಸ್ವಾಮಿಗೆ ಹಾಲೆರೆವ ಉತ್ಸವ ಹಾಗೂ ಜಾತ್ರೆ ನಡೆಯುತ್ತದೆ. ಬೆಟ್ಟದ ತಪ್ಪಲಿನ ಪರಿಸರದಲ್ಲಿ ಶ್ರೀ ಮಹದೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ ಇದ್ದು, ಈವಾಗ ಶ್ರೀ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸುತ್ತಮುತ್ತಲಿನ ಕಬ್ಬು ಬೆಳೆಗಾರರಿಗೆ ವರದಾನವಾಗಿದೆ. ಇಲ್ಲಿ ಕಾರ್ಖಾನೆಯ ನೌಕರರಿಗೆ ವಸತಿಗೃಹಗಳಿದ್ದು, ಕಾಲೋನಿಯೊಂದು ನಿರ್ಮಾಣಗೊಂಡಿದೆ. ಊರಿನ ಕೇಂದ್ರಸ್ಥಳದಲ್ಲಿ ದಾಸೋಹ ಮಠವಿದ್ದು, ಈ ಮಠದಲ್ಲಿ ಹಿಂದೆ ಶ್ರೀ ಮಾದೇಶ್ವರರವರು ಬಂದು ಹೋಗಿದ್ದ ಐತಿಹ್ಯವಿದೆ. ಶ್ರೀ ಮಠದಲ್ಲಿ ಅನ್ನದಾಸೋಹ ನಡೆಯುತ್ತದೆ. ===ಶ್ರೀ ಸಿದ್ಧೇಶ್ವರ ಕ್ಷೇತ್ರ=== ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೩ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೪೩ ಕಿ.ಮೀ. ಹೊಂಡರಬಾಳು ಶ್ರೀ ಸಿದ್ಧೇಶ್ವರ ಕ್ಷೇತ್ರವು ಪುರಾಣ ಪ್ರಸಿದ್ಧವಾದ ಸ್ಥಳವಾಗಿದೆ. ಗಿರಿಯಲ್ಲಿ ಗುಹೆಗಳು ಅಧಿಕವಾಗಿವೆ. ತುಟ್ಟತುದಿಯಲ್ಲಿರುವ ಮೊದಲ ಗುಹೆ ವಿಶಾಲವಾದುದು. ಪೂಜಾ ಬಾಗಿಲು, ದರ್ಶನ ಬಾಗಿಲು, ಸ್ವರ್ಗದ ಬಾಗಿಲು ಈ ರೀತಿ ೦೩ ಬಾಗಿಲುಗಳಿವೆ. ಪೂಜೆಯನ್ನು ಭಕ್ತರು ದರ್ಶನದ ಬಾಗಿಲ ಹತ್ತಿರ ಬಂದು ಮಾಡಿಸುತ್ತಾರೆ. ಸ್ವರ್ಗದ ಬಾಗಿಲ ಬಗ್ಗೆ ಒಂದು ದಂತಕಥೆಯಿದ್ದು, ಒಮ್ಮೆ ಮಕ್ಕಳಿಲ್ಲದ ದಂಪತಿಗಳು ಮಗುವಾದರೆ ಅದನ್ನು ಅದರ ಆಭರಣ ಉಡುಪಿನ ಜೊತೆ ನಿನಗರ್ಪಿಸುತ್ತೇವೆಂದು ವಿಚಿತ್ರ ಹರಕೆ ಹೊತ್ತರು. ಮಗುವಾಯಿತು. ಬಹಳ ದಿನಗಳ ನಂತರ ಮಗುವನ್ನು ಸಿಂಗರಿಸಿ ದೇವರ ದರ್ಶನಕ್ಕೆ ಹೋದರು. ಮಗು ಸ್ವರ್ಗದ ಬಾಗಿಲಲ್ಲಿ ಹೋಗಿ ಮತ್ತೆ ಹಿಂತಿರುಗಲಿಲ್ಲ. ಈಗಲೂ ಕೆಲವು ಸಂರ್ದಬ ಗುಹೆಯಲ್ಲಿ ಮಗುವಿನ ಗೆಜ್ಜೆಯ ಸದ್ದು ಕೇಳಿಸುವುದೆಂದು ಪ್ರತೀತಿ ಇದೆ. ===ಕುರುಬನ ಕಟ್ಟೆ=== ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೮ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೮ ಕಿ.ಮೀ. ಕೊಳ್ಳೇಗಾಲದ ಪಕ್ಕದಲ್ಲಿರುವ ಕುರುಬನ ಕಟ್ಟೆಯು ಶೀ ಮಂಟೆಸ್ವಾಮಿ ಯವರು ತಪಗೈದ ಸ್ಥಳ. ಇಲ್ಲಿ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆಗಳು ನಡೆಯುತ್ತದೆ. ಪರಮ ಪರಂಜ್ಯೋತಿ ನೀವೇ ಬನ್ನಿ, ಮಂಟೇದ ಲಿಂಗಯ್ಯ ನೀವೇ ಬನ್ನಿ ಎಂದು ಹಾಡುವ ನೀಲಗಾರರ ಮೇಳ ಈ ಸ್ಥಳದಲ್ಲಿ ಕಾಣಬಹುದು. ಈ ಸ್ಥಳದ ಪಕ್ಕದಲ್ಲಿ ಕರಳಕಟ್ಟೆ ಎಂಬ ಗ್ರಾಮವಿದ್ದು, ಸೋಲಿಗರು ಇಲ್ಲಿ ವಾಸವಾಗಿದ್ದಾರೆ. ===ಕನಕಗಿರಿ ಕ್ಷೇತ್ರ=== ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೯ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೯ ಕಿ.ಮೀ. ಕ್ಷೇತ್ರವು ದೊಡ್ಡಿಂದವಾಡಿ ಗ್ರಾಮದ ಸನಿಹದಲ್ಲಿರುವ ಗಿರಿ ಪ್ರದೇಶ ಇಲ್ಲಿ ಪಾರ್ವತಿ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ. ಪಂಚಲಿಂಗ ದರ್ಶನದಂದು ತಲಕಾಡಿನ ೦೫ ಲಿಂಗಗಳನ್ನು ದರ್ಶನ ಮಾಡಿ, ಕನಕಗಿರಿಯ ಪಾರ್ವತಿ-ಪರಮೇಶ್ವರರ ದರ್ಶನ ಪಡೆದರೆ ಕೈಲಾಸ ಪದವಿ ಪ್ರಾಪ್ತವಾಗುವುದೆಂದು ಪ್ರತೀತಿ ಇದೆ. ಆದ್ದರಿಂದಾಗಿ ಈ ದೇವರ ದರ್ಶನ ಪಡೆಯಲು ಭಕ್ತಾದಿಗಳು ಹೆಚ್ಚಾಗಿ ಬರುತ್ತಿದ್ದಾರೆ. ಇದೊಂದು ವೈದಿಕ ಮತ್ತು ಜಾನಪದ ಸಾಂಸ್ಕೃತಿಕ ಆಚರಣೆಯ ಸಂಗಮ, ಇಲ್ಲಿನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ವೈದಿಕ ಪರಂಪರೆಯನ್ನು ಪ್ರತಿನಿಧಿಸಿದರೆ ’ಶ್ರೀ ಗುಡ್ಡದ ಮಾರಮ್ಮನ ದೇವಸ್ಥಾನ ಜಾನಪದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿರುವ ಕೆಂಡಗಣ್ಣ ಸ್ವಾಮಿಗಳ ಗದ್ದುಗೆಯೂ ಪ್ರಮುಖವಾದುದಾಗಿದೆ. ===ಗುಂಡಾಲ್ ಜಲಾಶಯ=== ತಾಲ್ಲೂಕು ಕೇಂದ್ರದಿಂದ = ೨೭ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೬೭ ಕಿ.ಮೀ. ಕೊಳ್ಳೇಗಾಲದಿಂದ ಲೊಕ್ಕನ ಹಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಎದುರಾಗುವುದೇ ಗುಂಡಲ್ ಅರಣ್ಯ. ಇಲ್ಲಿ ಬೆಟ್ಟ ಗುಡ್ಡಗಳಿವೆ, ಅಡ್ಡಲಾಗಿ ಆಕರ್ಷಕವಾಗಿ ಜಲಾಶಯವನ್ನು ನಿರ್ಮಿಸಲಾಗಿದೆ. ಸುಂದರ ಪರಿಸರ ಬಯಸುವವರಿಗೆ ಇದು ಅಚ್ಚುಮೆಚ್ಚಿನ ತಾಣವಾಗಿದೆ. ವಾಸ್ತವ್ಯಕ್ಕೆ ಪ್ರವಾಸಿ ಬಂಗಲೆಯಿದೆ. ಈ ಜಲಾಶಯದಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ===ಚಿಕ್ಕಲ್ಲೂರು=== ತಾಲ್ಲೂಕು ಕೇಂದ್ರದಿಂದ = ೨೭ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೬೭ ಕಿ.ಮೀ. ಶ್ರೀ ಚಕ್ಕಲ್ಲೂರು ಪುಣ್ಯಕ್ಷೇತ್ರವು ಧರೆಗೆ ದೊಡ್ಡವರು ಮಂಟೇಸ್ವಾಮಿಯವರ ಶಿಷ್ಯರಾದ ಸಿದ್ದಪ್ಪಾಜಿಯವರು ಐಕ್ಯವಾದ ಸ್ಥಳವಾಗಿದೆ. ಪವಾಡ ಪುರುಷ ಶ್ರೀ ಸಿದ್ದಪ್ಪಾಜಿಯವರು ನಿಡುಗಟ್ಟ ಗ್ರಾಮದ ಮುದ್ದೋಜಿ ಲಿಂಗವಂತ ಪಂಚಾಳದವರು, ಆತನ ಕಿರಿಯ ಮಗ ಕೆಂಪಣ್ಣ ಮಂಟೇಸ್ವಾಮಿಯ ಶಿಷ್ಯರಾಗಿ ಅನೇಕ ಪವಾಡಗಳನ್ನು ಮೆರೆಸಿ, ಕೊನೆಯಲ್ಲಿ ಚಿಕ್ಕಲ್ಲೂರು ಬಂದು ಐಕ್ಯವಾಗುತ್ತಾರೆ. ಈ ಕ್ಷೇತ್ರದಲ್ಲಿ ಪ್ರತೀ ವರ್ಷ ಜನವರಿ ಮಾಸದಲ್ಲಿ ಬರುವ ಪೌರ್ಣಿಮೆ ದಿನ ಸಂಕ್ರಾಂತಿಯ ಸಮಯದಲ್ಲಿ ಚಂದ್ರಮಂಡಲ ಆರಂಭದಿಂದ ಪಂತಿ ಸೇವೆಯಲ್ಲಿ ಮುಕ್ತಾಯವಾಗುವ ೦೫ ದಿನಗಳ ಜಾತ್ರೆ ನಡೆಯುತ್ತದೆ. ಪ್ರತೀ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ಕಾವೇರಿ ನದಿಯು ಸನಿಹದಲ್ಲಿ ಹರಿಯುತ್ತದೆ. ಸಮೀಪದಲ್ಲಿಯೇ ಮುತ್ತತ್ತಿರಾಯನ ಕ್ಷೇತ್ರವಿದೆ. ===ಉಗನಿಯ=== ತಾಲ್ಲೂಕು ಕೇಂದ್ರದಿಂದ = ೧೨ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೨ ಕಿ.ಮೀ. ವಾಸವಾಡಿ ಶ್ರೀ ವೀರಭದ್ರೇಶ್ವರ ಸ್ವಾಮಿ ಸನ್ನಿಧಿ : ಕೊಳ್ಳೇಗಾಲದಿಂದ ಬೆಂಗಳೂರು ರಸ್ತೆಯಲ್ಲಿ ಕ್ರಮಿಸಿ ಧನಗೆರೆ ಊರಿನಿಂದ ಸ್ವಲ್ಪದೂರ ಮುಂದೆ ಹೋದಾಗ ಒಂದು ಕಚ್ಚಾ ರಸ್ತೆಯ ಮೂಲಕ ತಲುಪಿದಾಗ ಸಿಗುವ ಭವ್ಯ ದೇವಾಲಯ ಶ್ರೀ ವಾಸವಾಡಿ ವೀರಭದ್ರೇಶ್ವರ ಸನ್ನಿದಿ ಹಲವಾರು ಭಕ್ತರ ಸಮೂಹ ಹೊಂದಿರುವ ಅತಿ ಪುರಾತನ ದೇವಾಲಯ ಇದಾಗಿದೆ. ದೇವಾಲಯದಲ್ಲಿ ತಯಾರಿಸಿ ನೀಡುವ ಅನ್ನ ಚಟ್ನಿ ತುಂಬಾ ವಿಶೇಷವಾದ ಪ್ರಸಾದವಾಗಿದೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಅನ್ನಬ್ರಹ್ಮೋತ್ಸವವ ನಡೆಯಲಿದ್ದು ತುಂಬಾ ಸಂಖ್ಯೆಯ ಭಕ್ತಾದಿಗಳು ಸೇರಿ ರಾತ್ರಿ ಪೂರ್ತಿ ಜಾಗರಣೆ ಮಾಡುತ್ತಾರೆ. ದೇವಾಲಯದ ಪಕ್ಕದಲ್ಲಿ ಕೆರೆ ಇದ್ದು ಸುತ್ತಲಿನ ಪರಿಸರ ಸುಂದರ ಹಾಗೂ ಆಕರ್ಷಣೀಯವಾಗಿದೆ. ===ಶಿವನ ಸಮುದ್ರ=== ತಾಲ್ಲೂಕು ಕೇಂದ್ರದಿಂದ = ೧೮ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೮ ಕಿ.ಮೀ. ಕಾವೇರಿ ನದಿ ತೀರದಲ್ಲಿದೆ. ಇಲ್ಲಿನ ವೈಷ್ಣವ, ಶೈವ ಹಾಗೂ ಶಕ್ತಿ ದೇವತೆಗಳಿಗೆ ಸೋಮೇಶ್ವರ ದೇವಾಲಯ ಬಹಳ ಪ್ರಾಚೀನವಾದ ದೇವಾಲಯ. ಇದರ ಸಮೀಪ ಶಕ್ತಿ ದೇವತೆ ಶಿವನ ಸಮುದ್ರ ಮಾರಮ್ಮ ಬಹಳ ಪ್ರಸಿದ್ಧ ದೇವಾಲಯ. ಭಯ- ಭಕ್ತಿಯಿಂದ ಜನರು ಇಲ್ಲಿಗೆ ಬಂದು, ಹೊತ್ತ ಹರಕೆಯನ್ನು ತೀರಿಸುವ ವಾಡಿಕೆ ಇಂದಿಗೂ ಕಂಡು ಬರುತ್ತದೆ. ವೈಷ್ಣವ ದೇವಾಲಯವಾದ ವೆಂಕಟರಮಣ ಸ್ವಾಮಿ ದೇವಸ್ಥಾನ ಬಹಳ ವಿಶಾಲವಾದುದು. ಶಯನ ಭಂಗಿಯಲ್ಲಿರುವ ವಿಷ್ಣುವಿನ ಮೂರ್ತಿ ಇದೆ. ಇದಕ್ಕೆ ಮಧ್ಯರಂಗ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಹೊಂದಿದೆ. ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದ ಮಧ್ಯರಂಗ, ತಮಿಳುನಾಡಿನ ಶ್ರೀರಂಗಂನ ಅಂತ್ಯರಂಗವನ್ನು ಸೂರ್ಯೋದಯದಿಂದ- ಸೂರ್ಯಾಸ್ತದವರೆಗೆ ನೋಡಿದವರಿಗೆ ಪುಣ್ಯ ಬರುತ್ತದೆ ಎಂದು ಪ್ರತೀತಿ ಇದೆ. ಪ್ರತೀ ವರ್ಷ ಜಾತ್ರೆ ಸೇರು ನಡೆಯುತ್ತದೆ. ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀಚಕ್ರವಿದೆ. ===ವೆಸ್ಲಿ ಸೇತುವೆ=== ಶಿವನಸಮುದ್ರ ಪ್ರದೇಶದಲ್ಲಿ ಕಾವೇರಿನದಿಗೆ ಅಡ್ಡಲಾಗಿ ೩ ಸೇತುವೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವೆಸ್ಲೆ ಸೇತುವೆ ಹಳೆಯಕಾಲದ ಇಂಜಿನಿಯರಿಂಗ್ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ===ಬೂದಬಾಳು ಕ್ಷೇತ್ರ=== ತಾಲ್ಲೂಕು ಕೇಂದ್ರದಿಂದ = ೧೮ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೮ ಕಿ.ಮೀ. ಬೂದಬಾಳು : ಕೊಳ್ಳೇಗಾಲ ತಾಲ್ಲೂಕಿನ ಬೂದಬಾಳು ಗ್ರಾಮದಲ್ಲಿ ಗುಡಿಹಟ್ಟಿ ವೆಂಕರಮಣಸ್ವಾಮಿ ಪ್ರಸಿದ್ಧ ದೇವಾಲಯವಿದೆ. ಇದು ಈ ಭಾಗದಲ್ಲಿ ಚಿಕ್ಕ ತಿರುಪತಿ ಎಂದು ಹೆಸರಾಗಿದೆ. ವರ್ಷದಲ್ಲಿ ಒಮ್ಮೆ ಜಾತ್ರೆ ನಡೆಯುತ್ತದೆ. ಇದು ಮೂರು ದಿನಗಳ ಜಾತ್ರೆಯಾಗಿದ್ದು ಮೊದಲ ದಿನ ತೇರು, ಎರಡನೇ ದಿನ ವಧೆ ಅಥವಾ ರಾಕ್ಷಸನ ಸಂಹಾರ. ಮೂರನೇ ದಿನ ವಸಂತೋತ್ಸವ ನಡೆಯುತ್ತದೆ. ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ===ದರ್ಗಾ=== ತಾಲ್ಲೂಕು ಕೇಂದ್ರದಿಂದ = ೨೦ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೬೦ ಕಿ.ಮೀ. ಮುಸಲ್ಮಾನರ ಪವಿತ್ರ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರ. ಭೋರ್ಗರೆದು ಧುಮ್ಮಿಕ್ಕುವ ಕಾವೇರಿ ತಟದಲ್ಲಿದ್ದು, ಗಗನಚುಕ್ಕಿ ಜಲಪಾತವನ್ನು ಉಂಟು ಮಾಡುವ ಸ್ಥಳವಾಗಿದೆ. ಈ ಜಲಾಶಯ ಉಕ್ಕಿ ಹರಿಯುವ ನೀರಿನಿಂದ ರಮ್ಯ ಮನೋಹರವಾಗಿದೆ. ಈ ತಟದಿಂದ ನಿಂತು ನೋಡಿದರೆ ವಿಶ್ವವಿಖ್ಯಾತ ಏಷ್ಯಾ ಖಂಡದ ಪ್ರಪ್ರಥಮ ಜಲ ವಿದ್ಯುತ್ ಸ್ಥಾವರವಾದ ಬ್ಲಫ್‌ನ ಸುಂದರ ನೋಟ ಕಾಣಿಸುತ್ತದೆ. ಈ ದರ್ಗ ಹಿಂದು-ಮುಸಲ್ಮಾನರ ಐಕ್ಯದ ಸಂಕೇತವನ್ನು ಸೂಚಿಸುವ ಸ್ಥಳವಾಗಿದೆ. ===ಭರಚುಕ್ಕಿ=== ಇಲ್ಲಿಂದ ಸ್ವಲ್ಪ ದೂರ ಮುಂದೆ ಹೋದಾಗ ಜಗತ್ತಿನಲ್ಲಿಯೇ ಅಪರೂಪದ ಭೂಸೃಷ್ಟಿಯ ಅಚ್ಚರಿ ಕಾವೇರಿಯ ಆರ್ಭಟ ಭರಚುಕ್ಕಿ ಜಲಪಾತವಿದೆ. ಇಲ್ಲಿ ಸುಮಾರು ೧ ಕಿ.ಮೀ. ಅಗಲವಾಗಿ ಮೈದೆಳೆದಿರುವ ಕಾವೇರಿ ಸುಮಾರು ೭೫ ರಿಂದ ೧೦೦ ಅಡಿಯವರೆಗೆ ಭೂಮಿಯಿಂದ ಭೂಮಿಗೆ ಧುಮ್ಮಿಕ್ಕುವಳು. ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತ ವಿಶ್ವದ ಜಲಪಾತಗಳಲ್ಲಿ ೮೩ನೇ ಸ್ಥಾನವನ್ನು ಪಡೆದಿದೆ. ===ಯಡಕುರಿ=== ತಾಲ್ಲೂಕು ಕೇಂದ್ರದಿಂದ = ೧೪ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೪ ಕಿ.ಮೀ. ಚಾಮರಾಜನಗರ ಜಿಲ್ಲೆಯ ಏಕೈಕ ದ್ವೀಪ ಸ್ಥಳ. ಕಾವೇರಿ ನದಿಯು ತಲ ಕಾವೇರಿಯಲ್ಲಿ ಉಗಮವಾಗಿ ತಾನು ಹರಿಯುವ ಉದ್ದಕ್ಕೂ ವೈಚಿತ್ರಗಳನ್ನು ಸೃಷ್ಟಿಮಾಡುತ್ತದೆ. ಇಂತಹ ವೈಚಿತ್ರ್ಯಗಳಲ್ಲಿ ಯಡಕುರಿಯ ಕೂಡ ಒಂದು. ಇಲ್ಲಿ ಕಾವೇರಿ ನದಿ ಕವಲೊಡೆದು ಎರಡು ಭಾಗಗಳಾಗಿ ಮುಂದೆ ಮತ್ತೆ ಒಂದಾಗಿ ಸೇರುತ್ತದೆ. ಈ ಒಂದಾಗಿ ಸೇರುವ ಸ್ಥಳಕ್ಕೆ ಕೂಡುಮೂಲೆ ಎಂದು ಅಲ್ಲಿನ ಜನರು ಕರೆಯುತ್ತಾರೆ. ಯಡಕುರಿಯ ಸುತ್ತಲೂ ನೀರಿನಿಂದ ಸುತ್ತುವರಿದ ದ್ವೀಪ ಊರು. ಊರಿಗೆ ಹೋಗಲು ಹರಿಗೋಲೆ ಬೇಕು. ಅಂಬಿಗಣ್ಣನ ಅಪ್ಪಣೆ ಇಲ್ಲದೆ ಊರಿಗೆ ಪ್ರವೇಶವಿಲ್ಲ. ಇಲ್ಲಿಗೆ ವಿಶೇಷವಾಗಿ ಪಕ್ಷಿಗಳು ವಲಸೆ ಬರುವುದನ್ನು ಕಾಣಬಹುದು. ==ಚಾಮರಾಜನಗರದ ತಾಲೂಕುಗಳು== ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು ಐದು ತಾಲೂಕುಗಳಿವೆ. ಅವುಗಳೆಂದರೆ: # ಚಾಮರಾಜನಗರ # [[ಯಳಂದೂರು]] # [[ಕೊಳ್ಳೇಗಾಲ]] # [[ಗುಂಡ್ಲುಪೇಟೆ]] # [[ಹನೂರು]] === ಚಾರಣ === [[ಬಂಡೀಪುರ ]], [[ಬಿಳಿಗಿರಿ ರಂಗನ ಬೆಟ್ಟ ]], [[ಮಲೆ ಮಹದೇಶ್ವರ ಬೆಟ್ಟ ]], [[ಹಿಮವದ್ ಗೋಪಾಲಸ್ವಾಮಿ ಬೆಟ್ಟ]] ಇವುಗಳು ಚಾಮರಾಜನಗರದಲ್ಲಿರುವ ಪ್ರಸಿದ್ದ ಚಾರಣ ಸ್ಥಳವಾಗಿವೆ. ==ಇದನ್ನೂ ನೋಡಿ== *[[ಚಾಮರಾಜನಗರ (ಲೋಕ ಸಭೆ ಚುನಾವಣಾ ಕ್ಷೇತ್ರ)]] == ಉಲ್ಲೇಖಗಳು == {{Reflist}} <ref>http://chamrajnagar.nic.in/</ref> <ref>https://www.tripadvisor.in/Attractions-g12392996-Activities-Chamarajanagar_District_Karnataka.html</ref> <ref>https://m.timesofindia.com/topic/Chamarajanagar-district</ref> ==ಬಾಹ್ಯ ಸಂಪರ್ಕಗಳು== {{commons category|Chamarajanagar district}} * [http://www.mysterytrails.com/ Mystery Trails - Eco-tourism in Chamarajanagar] {{Webarchive|url=https://web.archive.org/web/20121123043055/http://www.mysterytrails.com/ |date=2012-11-23 }} * [http://www.onefivenine.com/india/villag/Chamarajanagar] List of cities and Tourism places in Chamarajanagar * [http://mapsofindia.com/maps/karnataka/districts/chamrajanagar.htm Maps Of India - Map of Chamarajanagar district] {{ಕರ್ನಾಟಕದ ಜಿಲ್ಲೆಗಳು}} {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} {{Interwikineeded}} [[ವರ್ಗ:ಚಾಮರಾಜನಗರ ಜಿಲ್ಲೆ]] [[ವರ್ಗ:ಕರ್ನಾಟಕದ ಜಿಲ್ಲೆಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} rvwbi9ru07xdukjj7yx4vft1emr5j6o 1376961 1376960 2026-07-20T07:35:03Z Manikanta Basavaraju 100644 /* ದೀನ ಬಂಧು */ 1376961 wikitext text/x-wiki {{Infobox ಊರು | name = ಚಾಮರಾಜನಗರ ಜಿಲ್ಲೆ | native_name = | native_name_lang = | other_name = | settlement_type = ಜಿಲ್ಲೆ | image_skyline = Chamrajnagar3.jpg | image_alt = | image_caption = | nickname = | image_map = Chamarajanagar in Karnataka (India).svg | map_alt = | map_caption = | pushpin_map = | pushpin_label_position = left | pushpin_map_alt = | pushpin_map_caption = | latd = 12 | latm = | lats = | latNS = N | longd = 77.3 | longm = | longs = | longEW = E | coordinates_display = | subdivision_type = ದೇಶ | subdivision_name = [[ಭಾರತ]] | subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]] | subdivision_name1 = [[ಕರ್ನಾಟಕ]] | established_title = <!-- Established --> | established_date = | founder = | named_for = | parts_type = ತಾಲ್ಲೂಕುಗಳು | parts = [[ಯಳಂದೂರು]], [[ಗುಂಡ್ಲುಪೇಟೆ]], ಚಾಮರಾಜನಗರ, [[ಕೊಳ್ಳೇಗಾಲ]], [[ಹನೂರು]] | seat_type = ಕೇಂದ್ರ | seat = ಚಾಮರಾಜನಗರ | government_type = | governing_body = | leader_title = Deputy Commissioner | leader_name = | unit_pref = Metric | area_footnotes = | area_rank = | area_total_km2 = 5101 | elevation_footnotes = | elevation_m = | population_total = 965462 | population_as_of = 2001 | population_rank = | population_density_km2 = 189 | population_demonym = | population_footnotes = | demographics_type1 = ಭಾಷೆಗಳು | demographics1_title1 = ಅಧಿಕೃತ | demographics1_info1 = [[ಕನ್ನಡ]] | timezone1 = [[ಭಾರತದ ನಿರ್ದಿಷ್ಟ ಕಾಲಮಾನ|IST]] | utc_offset1 = +5:30 | postal_code_type = [[ಪಿನ್ ಕೋಡ್]] | postal_code = 571 313 | area_code_type = ದೂರವಾಣಿ ಕೋಡ್ | area_code = 08226 | registration_plate = KA-10 | website = {{ url | chamrajnagar.nic.in }} | footnotes = }} '''ಚಾಮರಾಜನಗರ''' ದಕ್ಷಿಣ [[ಕರ್ನಾಟಕ]]ದಲ್ಲಿರುವ ಒಂದು ಜಿಲ್ಲೆ. ಮೊದಲಿಗೆ [[ಮೈಸೂರು]] ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಈಗ ಒಂದು ಸ್ವತಂತ್ರ ಜಿಲ್ಲೆಯಾಗಿದೆ. ಈ ಜಿಲ್ಲೆಯ [[ಕೇಂದ್ರ]] ಅದೇ ಹೆಸರಿನ ಪಟ್ಟಣ. ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕುಗಳು ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ. ಇತ್ತೀಚೆಗೆ ಹನೂರು ತಾಲೂಕು ರಚನೆಯಾಯಿತು. ==ಇತಿವೃತ್ತ== *ಚಾಮರಾಜನಗರ ಜಿಲ್ಲೆಯಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆ [[ಕನ್ನಡ]]. ಇಲ್ಲಿ ಮಾತನಾಡಲ್ಪಡುವ ಅಲ್ಪಸಂಖ್ಯಾತ ಭಾಷೆಗಳಲ್ಲಿ ಪ್ರಮುಖವಾದವು '''ಸೋಲಿಗನುಡಿ''' (ಮುಖ್ಯವಾಗಿ [[ಬಿಳಿಗಿರಿರಂಗ]]ನ ಬೆಟ್ಟದ ಪ್ರದೇಶದಲ್ಲಿ) *ಚಾಮರಾಜನಗರ ಜಿಲ್ಲೆಯಲ್ಲಿ ಧಾರ್ಮಿಕ ಪ್ರಾಮುಖ್ಯತೆಯ ಸಾಕಷ್ಟು ಸ್ಥಳಗಳಿವೆ. ಇವುಗಳಲ್ಲಿ ಪ್ರಸಿದ್ಧವಾದದ್ದು '''ಮಲೆಮಹದೇಶ್ವರ ಬೆಟ್ಟ'''. ಇಲ್ಲಿ ನಡೆಯುವ ವಾರ್ಷಿಕ ಜಾತ್ರೆ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತದೆ. ಈ ಜಿಲ್ಲೆಯಲ್ಲಿ ನೈಸರ್ಗಿಕ ಸೌಂದರ್ಯದ ಉದಾಹರಣೆಗಳಲ್ಲಿ ಮುಖ್ಯವಾದವುಗಳೆಂದರೆ- # [[ಬಿಳಿಗಿರಿರಂಗನ ಬೆಟ್ಟ]], # [[ಮಲೆಮಹದೇಶ್ವರ ಬೆಟ್ಟ]] ಮತ್ತು # [[ಹಿಮವದ್ಗೋಪಾಲಸ್ವಾಮಿಬೆಟ್ಟ]]. #ಶಿವನ ಸಮುದ್ರ # [[ಬಂಡಿಪುರ ರಾಷ್ಟ್ರೀಯ ಉದ್ಯಾನ]]ವು ಜಿಲ್ಲೆಯ ದಕ್ಷಿಣಭಾಗದಲ್ಲಿದೆ. ಈ ಜಿಲ್ಲೆಯ ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯಗಳಿದ್ದು ಇಲ್ಲಿನ ಪ್ರಮುಖ ವನ್ಯಜೀವಿಗಳು ಆನೆ, ಹುಲಿ, ಕರಡಿ, ಜಿಂಕೆ, ಇತ್ಯಾದಿ. ಇಲ್ಲಿನ ಕಾಡುಗಳು, ಮುಖ್ಯವಾಗಿ ಮಲೆಮಹದೇಶ್ವರ ಬೆಟ್ಟ, ಕುಖ್ಯಾತವಾದ ಕಾಡುಗಳ್ಳ [[ವೀರಪ್ಪನ್]] ನ ಅಡಗುದಾಣಗಳಾಗಿದ್ದವು. # ==ಚಾಮರಾಜನಗರ ಜಿಲ್ಲೆಯ ಪರಿಚಯ== *ಕರ್ನಾಟಕದ ದಕ್ಷಿಣ ತುತ್ತತುದಿಯಲ್ಲಿರುವ ಚಾಮರಾಜನಗರ ಜಿಲ್ಲೆ ಭೂಪಟದಲ್ಲಿ ಬಾಹುಬಲಿಯ ಬಲಭಾಗದ ಪಾದುಕೆಯಂತೆ ಕಂಗೊಳಿಸುವುದನ್ನು ಕಾಣಬಹುದು. ದಕ್ಷಿಣ ಒಳನಾಡಿನ ಎಲೆ ಉದುರುವ, ಮಳೆಗಾಲದಲ್ಲಿ ಸದಾ ಹಸಿರಾಗಿರುವ ಅರಣ್ಯ ಸಾಲನ್ನು ಹೊಂದಿದೆ. ತಮಿಳುನಾಡು ಮತ್ತು ಕೇರಳಗಡಿಗುಂಟ ಹಂಚಿಕೊಂಡಿರುವ ಈ ಜಿಲ್ಲೆ ೧೧.೩೫ ಉತ್ತರ ಅಕ್ಷಾಂಶದಿಂದ ೧೨.೧೮ ಉತ್ತರ ಅಕ್ಷಾಂಶದವರೆವಿಗೂ, ೭೨.೨೪ ಪೂರ್ವ ರೇಖಾಂಶದಿಂದ ೭೭.೪೬ ಪೂರ್ವ ರೇಖಾಂಶದ ನಡುವೆ ೫೬೮೫ ಚ.ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. [[File:Physical map of Chamarajanagar district.png|thumb|]] *1997 ರಲ್ಲಿ ಮೈಸೂರು ಜಿಲ್ಲೆಯಿಂದ ವಿಭಜಿಸಿ ಚಾಮರಾಜನಗರವನ್ನು ಜಿಲ್ಲೆಯಾಗಿ ಪರಿವರ್ತಿಸಲಾಯಿತು . ಈ ಜಿಲ್ಲೆಯ ಜಿಲ್ಲಾ ಕೇಂದ್ರವು ಚಾಮರಾಜನಗರ ಪಟ್ಟಣವಾಗಿದೆ. ವಿಜಯ ಪಾರ್ಶ್ವನಾಥ ಬಸದಿ, ಪವಿತ್ರ ಜೈನ ದೇವಾಲಯವನ್ನು ಹೊಯ್ಸಳ ರಾಜನಾದ ಗಂಗರಾಜ ಅಧಿಪತಿ ಪುನೀಶಂಡನಾಯಕ 1117 ರಲ್ಲಿ ನಿರ್ಮಿಸಿದರು.<ref>{{cite web |title=ಚಾಮರಾಜನಗರ ಇತಿಹಾಸ |url=https://chamrajnagar.nic.in/ |website=chamrajnagar.nic.in |access-date=4 April 2025}}</ref> *ಪೂರ್ವ ಮತ್ತು ಪಶ್ಚಿಮ ಘಟ್ಟ ಸಂದಿಸುವ ನೀಲಗಿರಿ ಅರಣ್ಯ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನ ಬೆಟ್ಟ ವನ್ಯಧಾಮ ಮತ್ತು ಬಂಡೀಪುರ ರಾಷ್ಟ್ರೀಯ ಹುಲಿ ಅಭಯಾರಣ್ಯ ೧೪೧೩ ಚ.ಕಿ.ಮೀ. ವಿಸ್ತೀರ್ಣದಲ್ಲಿ ಹಬ್ಬಿದೆ. ಜಿಲ್ಲೆಯ ಎತ್ತರದ ಕತ್ತರಿಬೆಟ್ಟ ೧೮೧೬ ಮೀ (ಇದು ಅತ್ತಿಖಾನೆ ಗ್ರಾಮದ ಹತ್ತಿರದಲ್ಲಿದೆ), ಬಿಳಿಗಿರಿರಂಗನ ಬೆಟ್ಟ ೧೧೫೧ ಎಂ, ಬೇಡಗುಳಿ ಎಸ್ಟೇಟು ೧೪೦೦ ಮೀ ಗಳಾಗಿದ್ದು ಆನೆ, ಹುಲಿ, ಚಿರತೆ, ಕಾಡುಕೋಣ, ಸೀಳುನಾಯಿ, ಜಿಂಕೆ, ಕರಡಿ, ಸಾರಂಗ, ಸಿಂಗಳೀಕ, ನವಿಲು, ಅಪರೂಪದ ಕೀಟ ಪ್ರಭೇದವನ್ನು ಒಳಗೊಂಡಿದೆ. *ಕೀಟಭಕ್ಷಕ ಸಸ್ಯವರ್ಗ ಒಳಗೊಂಡಂತೆ ಶ್ರೀಗಂಧ, ಬೀಟೆ, ಹೊನ್ನೆ, ನೀಲಗಿರಿ ಮತ್ತು ಸಿಂಕೋನ ವೃಕ್ಷಗಳ ಜೀವ-ವೈವಿದ್ಯತಾ ಆವಾಸಗಳ ನಡುವೆ ಕಾಣಬರುತ್ತದೆ.ಕ್ರಿಸ್ತಪೂರ್ವದಿಂದಲೂ ಆದಿ ಮಾನವನ ನೆಲೆಯಾಗಿದ್ದ ಶಿಲಾ ಸಮಾಧಿಗಳನ್ನು ಬುಡಕಟ್ಟು ಜನಾಂಗ ಸೋಲಿಗರು ವಾಸಿಸುವುದನ್ನು ಬಿಳಿಗಿರಿರಂಗನ ಬೆಟ್ಟದ ಪೋಡುಗಳಲ್ಲಿ ಕಾಣಬಹುದಾಗಿದೆ. ಈ ಭಾಗದ ಜೀವನದಿಗಳಾದ ಸುವರ್ಣವತಿ ಚಿಕ್ಕಹೊಳೆ ಕಬಿನಿ, ಗುಂಡ್ಲು ನದಿಗಳು ಜಿಲ್ಲೆಯಲ್ಲಿ ಹರಿಯುವ ಕಾವೇರಿ ನದಿಯ ಉಪನದಿಗಳಾಗಿವೆ. *ಇವುಗಳಿಗೆ ಅಲ್ಲಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದೆ. ಜೀವನದಿ ಕಾವೇರಿ ೧೧೦ ಕಿ.ಮೀ. ದೂರವನ್ನು ಕ್ರಮಿಸಿ, ಗಗನಚುಕ್ಕಿ, ಭರಚುಕ್ಕಿ ಜಲಪಾತ ಸೃಷ್ಟಿಸಿ ೧೯೦೨ ರಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ತಯಾರಿಕೆ ನೆಲೆಯಾಗಿದ್ದು ಇದೇ ಜಿಲ್ಲೆಯಲ್ಲಿ. ಮುಂದೆ ಮಹದೇಶ್ವರ ಬೆಟ್ಟದಿಂದ ೫೦ ಕಿ.ಮೀ ಅಂತರದಲ್ಲಿರುವ ಹೊಗೆನಕಲ್ ಜಲಪಾತ ನೈಸರ್ಗಿಕ ಶಿಲೆಗಳನ್ನು ಸೃಷ್ಟಿಸಿದೆ. *ರಾಜ್ಯ, ರಾಷ್ಟ್ರ, ವಿದೇಶಿಯರ ಆಕರ್ಷಣೀಯ ನೈಸರ್ಗಿಕ ಜಲಪಾತಗಳು ಇಲ್ಲಿನ ವೈಶಿಷ್ಟ್ಯ ಗಂಗರು, ಹೊಯ್ಸಳರು, ವಿಜಯನಗರ, ಮೈಸೂರರಸರ ಕಲಾವೈಭವವನ್ನು ಚಾಮರಾಜನಗರದ ಬಳಿ ಇರುವ ನರಸಮಂಗಲ, ಹರದನಹಳ್ಳಿ, ಶಿಲಾಶಾಸನ, ಗುಂಡ್ಲುಪೇಟೆ ತಾಲೂಕಿನಲ್ಲಿ ಕಂಡುಬರುವ ವರಹಾವಾಸುದೇವ ಮಂದಿರ, ಹುಲುಗನ ಮೊರಡಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರಿನ ಬಳೇಮಂಟಪ, ಜಹಾಗಿರ್‌ದಾರ್ ಬಂಗಲೆ, ಕೊಳ್ಳೆಗಾಲದ ಬಳಿಯ ಮಧ್ಯರಂಗ ಇಲ್ಲಿನ ಐತಿಹಾಸಿಕ ಕುರುಹುಗಳಾಗಿವೆ. ===ಜನಸಂಖ್ಯೆ=== ಗಡಿಗಳಲ್ಲಿ ತಮಿಳು, ಮಲೆಯಾಳಂ ಮಾತನಾಡುವ ಜನರಿದ್ದು ಅತಿ ಹೆಚ್ಚು ಕನ್ನಡಿಗರಿದ್ದಾರೆ. ಹಿಂದೂ, ಮುಸ್ಲಿಂ,jaina, ಕ್ರಿಶ್ಚಿಯನ್ ಧರ್ಮಗಳ ಸಮನ್ವಯವನ್ನು ಕಾಣಬಹುದು. ಪ್ರಪಂಚದಲ್ಲಿಯೆ ವಿಶಿಷ್ಟವೆನಿಸಿದ ಕಪ್ಪುಶಿಲೆ ಅಥವ ಕರಿಕಲ್ಲು(ಗ್ರಾನೈಟ್) ಇಲ್ಲಿ ಕಂಡು ಬರುತ್ತದೆ. ಜತೆಗೆ ಸುಣ್ಣದ ಕಲ್ಲಿನ ನಿಕ್ಷೇಪವು ಹೇರಳವಾಗಿದೆ. ಶೇ ೪೮ ದಟ್ಟಾರಣ್ಯದಿಂದ ಸುತ್ತುವರಿದಿರುವ ಈ ಜಿಲ್ಲೆ ರಾಜ್ಯದಲ್ಲಿ ೨೫ನೇ ಸ್ಥಾನದಲ್ಲಿದೆ. ೨೦೦ ಯಿಂದ ೩೫೦ ಉಷ್ಣಾಂಶವನ್ನು ಹೊಂದಿದ್ದು ೭೦ ರಿಂದ ೧೦೦ ಸೆಂ.ಮೀ. ಮಳೆಯನ್ನು ಪಡೆಯುತ್ತದೆ. *ಕೃಷಿಯ ಬಹುಭಾಗ ಮಳೆ ಆಶ್ರಯದ ಜತೆಗೆ ಕೊಳವೆ ಬಾವಿ, ತೆರೆದ ಬಾವಿ, ಕಬಿನಿ ನಾಲೆಗಳು ಕೃಷಿಕಾರ‍್ಯಗಳಿಗೆ ನೀರನ್ನು ಒದಗಿಸುತ್ತವೆ. ರೈತರು ಕಬ್ಬು, ಭತ್ತ, ರಾಗಿ, ಬಾಳೆ, ಕಡ್ಲೆಕಾಯಿ, ತೆಂಗು ಮತ್ತು ಅಡಿಕೆ ಬೆಳೆಗಳ ಜತೆಗೆ ಹಣ್ಣು, ತರಕಾರಿಗಳನ್ನು ಬೆಳೆಯುತ್ತಾರೆ. ೨೦೧೧ರ ಜನಗಣತಿಯ ಪ್ರಕಾರ ೧೦,೨೦,೭೯೧ ಜನಸಂಖ್ಯೆ ಹೊಂದಿದ್ದು ಪ್ರತಿ ಚ.ಕಿ.ಮೀ. ಪ್ರದೇಶದಲ್ಲಿ ೧೮೯ ಜನರು ವಾಸಿಸುತ್ತಿದ್ದಾರೆ. ೫೧.೨೬% ಸಾಕ್ಷರ ಪ್ರಮಾಣವಿದ್ದು ಲಿಂಗಾನುಪಾತ ೯೯೩ ಆಗಿದೆ. *೧೯೯೭ರಲ್ಲಿ ಜಿಲ್ಲಾ ಸ್ಥಾನ ಪಡೆದ ನಂತರ ೪ ತಾಲೂಕುಗಳನ್ನು ಹೊಂದಿದ್ದು ೧೫,೮೧೮ ತಲಾಧಾಯ ಇದೆ. ಮಲೆ ಮಹದೇಶ್ವರ, ರಾಚಪ್ಪಾಜಿ, ಸಿದ್ಧಪ್ಪಾಜಿ, [[ಮಂಟೇಸ್ವಾಮಿ]] ಮೊದಲಾದ ಪವಾಡ ಪುರುಷರ ಪಾದ ಸ್ಪರ್ಶದಿಂದ ಧಾರ್ಮಿಕವಾಗಿ ಮಹದೇಶ್ವರ ಬೆಟ್ಟ, ಚಿಕ್ಕಲೂರು, ಬಿಳಿಗಿರಿರಂಗ ಬೆಟ್ಟದ ಜಾತ್ರೆ, ಶಿಂಷಾದ ಬಳಿಯ ದರ್ಗಾಗಳು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನ ಜನಪದ ಕಾವ್ಯಗಳಿಗೆ ಸ್ಫೂರ್ತಿಯಾಗಿವೆ. ಗೊರವರ ಕುಣಿತ, ಕಂಸಾಳೆ, ವೀರಗಾಸೆ, ಧಾರ್ಮಿಕ ಹಿನ್ನೆಲೆಯಲ್ಲಿ ರೂಪತಳೆದಿವೆ. *ಮುರಾರ್ಜಿ, ವಸತಿ ಶಾಲೆಗಳ ಜತೆಗೆ ನವೋದಯ ಕೇಂದ್ರೀಯ ವಿದ್ಯಾಲಯದ ಮತ್ತು ವೃತ್ತಿ ಕಾಲೇಜುಗಳಾದ ಎಂಜಿನಿಯರ್, ಪಾಲಿಟೆಕ್ನಿಕ್, (ಡಿ.ಎಡ್) ಬಿ.ಎಡ್., ಪದವಿ., ಕಾಲೇಜುಗಳು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿತವಾಗಿವೆ. ರಾಷ್ಟ್ರೀಯ ಹೆದ್ದಾರಿ ೨೦೯ ಮತ್ತು ೨೧೨ ಇಲ್ಲಿ ಹಾದು ಹೋಗಿರುವುದರ ಜತೆಗೆ ಬ್ರಾಡ್‌ಗೇಜ್ ರೈಲು ಮಾರ್ಗ ಕರ್ನಾಟಕದ ದಕ್ಷಿಣ ತುದಿಯ ಈ ಜಿಲ್ಲೆಯನ್ನು ಸಂಪರ್ಕಿಸುತ್ತದೆ. *ಚಾಮರಾಜನಗರ ಉತ್ತರ ಭಾಗದಲ್ಲಿ ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಿದ್ದು ದಕ್ಷಿಣದಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಜಿಲ್ಲೆಯ ಗಡಿಯನ್ನು ಹಂಚಿಕೊಂಡಿವೆ. ಪೂರ್ವ ಪಶ್ಚಿಮಭಾಗಗಳು ಬಹುತೇಕ ಅರಣ್ಯಗಳಿಂದ ಕೂಡಿವೆ. ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ಹಲವಾರು ಕವಿ, ಕಲಾವಿದರ ಜತೆಗೆ ನಟ ಡಾ||ರಾಜಕುಮಾರ ರಂತವರನ್ನು ನೀಡಿರುವ ಈ ಜಿಲ್ಲೆ, ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ ಹಾಗೂ ಉತ್ತಮ ಜನರನ್ನು ಕೊಡುಗೆ ನೀಡಿದೆ. ==ಜಿಲ್ಲೆಯ ಪ್ರವಾಸಿ ತಾಣಗಳು== ===ಚಾಮರಾಜೇಶ್ವರ ದೇವಾಲಯ=== * *ಚಾಮರಾಜೇಶ್ವರ ದೇವಾಲಯ ಜಿಲ್ಲೆಯ ಪ್ರಮುಖ ದೇಗುಲಗಳಲ್ಲಿ ಒಂದಾಗಿದೆ. ನಗರದ ಹೃದಯ ಭಾಗದಲ್ಲಿರುವ ದೇವಾಲಯ ಸ್ಥಾಪನೆಯಾದದ್ದು, ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಒಂದು ಕಾಲದಲ್ಲಿ ಅರಿಕುಠಾರ ಎಂಬ ಗ್ರಾಮವಾಗಿದ್ದು, ಇದು ಚಾಮರಾಜ ಒಡೆಯರ್ ಜನಿಸಿದ್ದರಿಂದ ಚಾಮರಾಜನಗರ ಎಂಬ ಹೆಸರನ್ನು ಪಡೆಯಿತು. ದೇವಾಲಯದ ಮಹಾದ್ವಾರ ಪೂರ್ವ ದಿಕ್ಕಿಗಿದ್ದು ೫ ಅಂತಸ್ತಿನ ಗೋಪುರವಿದೆ. ತುದಿಯಲ್ಲಿ ೫ ಸುಂದರ ಚಿನ್ನದ ರಂಗಿನ ಕಲಶಗಳಿದ್ದು ಮುಂದೆ ಗರುಡಗಂಬವಿದೆ. *ದೇವಾಲಯ ಪ್ರವೇಶ ಮಾಡಿದಾಗ ಈಶ್ವರನಿಗೆ ಮುಖ ಮಾಡಿರುವ ಬೃಹತ್ ನಂದಿ ಇದೆ. ದೇವಾಲಯದ ಪ್ರಕಾರದಲ್ಲಿ ೬೪ ಪುರಾತನ ಭಕ್ತರ ವಿಗ್ರಹಗಳಿವೆ. ಉತ್ತರದಲ್ಲಿ ಈಶ್ವರ ವಿಗ್ರಹ, ಈಶಾನ್ಯದಲ್ಲಿ ಯೋಗಶಾಲೆ, ಆಗ್ನೇಯದಲ್ಲಿ ಪಾಕ ಶಾಲೆಯೂ ಇದೆ. ಇಲ್ಲಿ ವಾಸ್ತುಶಿಲ್ಪವು ಹೊಯ್ಸಳರ ಕಲೆಯನ್ನು ನೆನಪಿಸುತ್ತವೆ. *ಈ ದೇವಾಲಯದ ಒಳಭಾಗದಲ್ಲಿ ಕಂಡು ಬರುವ ಚಿತ್ರಗಳೆಂದರೆ ಗಿರಿಜಾ ಕಲ್ಯಾಣ, ಸಮುದ್ರಮಥನ ಮತ್ತು ಚಾಮುಂಡೇಶ್ವರಿ, ಇವು ೧೦೦ ವರ್ಷದ ಹಳೆಯವು. ಇಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲಿ ಆಷಾಡದ ಹುಣ್ಣಿಮೆಯ ದಿನ ರಥೋತ್ಸವ ನಡೆಯುತ್ತದೆ. ಈ ರಥೋತ್ಸವಕ್ಕೆ ನವದಂಪತಿಗಳು ಹಣ್ಣು ಜವನವನ್ನು ಎಸೆದು ಭಕ್ತಿ ಭಾವ ಮೆರೆಯುವರು. ಅರಿಕುಠಾರ:- ಈ ಸ್ಥಳಕ್ಕೆ ಹಿಂದೆ ಅರಿಕುಠಾರ ಅಥವಾ ಅರಿಕೂಠಾರ ಎಂಬ ಹೆಸರಿತ್ತು. ಒಡೆಯನೂರು ಎಂದು ಕರೆಯಲಾಗುತ್ತಿತ್ತು. ಹರಳುಕೋಟೆ:- ನಗರದಿಂದ ಪೂವ್ಕ್ಕೆ 5 ಕಿ.ಮೀ. ದೂರದಲ್ಲಿ ಹರಳುಕೋಟೆ, ಶ್ರೀ ಆಂಜನೇಯ ಸ್ವಾಮಿ ದೇವಾಲಯವಿದೆ. “ಹನುಮಚ್ಚಿಂತನ” ಎಂಬ ಗದ್ಯ ಕೃತಿಯೂ “ಶ್ರೀ ಹನುಮತ್ ಸುಪ್ರಭಾತ” ಎಂಬ ಪಠ್ಯಮಾಲಿಕೆಯೂ ಈ ಕ್ಷೇತ್ರದ ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವಗಳನ್ನು ಕುರಿತು ಬಣ್ಣಿಸಿರುವ ಕೃತಿಗಳು. ===ದೀನ ಬಂಧು=== *ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಪುತ್ರರಾದ ಜಿ.ಎಸ್. ಜಯದೇವ್ ಇವರು ದೀನ-ದಲಿತರ ಉದ್ಧಾರಕ್ಕಾಗಿ ಹೆಸರೇ ಸೂಚಿಸುವಂತೆ ದೀನಬಂಧು ಸಂಸ್ಥೆಯನ್ನು ೧೯೯೨ರಲ್ಲಿ ಪ್ರಾರಂಭಿಸಿದರು. ಇದು ಜಿಲ್ಲಾ ಕೇಂದ್ರದಿಂದ ೩ ಕಿ.ಮೀ. ದೂರದಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯ ಪಕ್ಕದ ಅರಣ್ಯ ಇಲಾಖೆಯ ನರ್ಸರಿ ಫಾರಂಗೆ ಹೊಂದಿಕೊಂಡಂತೆ ಇದೆ. *ಸಂಸ್ಥಾಪಕರ ಮೆಚ್ಚುಗೆಗೆ ಪಾತ್ರರಾದ ಅನೇಕ ಸಂಘಸಂಸ್ಥೆಗಳು ಮತ್ತು ದಾನಿಗಳ ಉದಾರ ಕೊಡುಗೆಯಿಂದ ೧ ರಿಂದ ೧೦ನೇ ತರಗತಿಯವರೆಗೆ ಸ್ವಂತ ಕಟ್ಟಡದಲ್ಲಿ “ಸೃಜನಶೀಲ ಕಲಿಕೆ” ತತ್ವದ ಮಾದರಿಯಲ್ಲಿ ನಡೆಯುತ್ತದೆ. ಅನಾಥ ಮಕ್ಕಳ ವಸತಿ ಸಹಿತ ಶಾಲೆ, ಗಂಡು ಹೆಣ್ಣು ಮಕ್ಕಳಿಗೆ "ದೀನಬಂಧು ಮಕ್ಕಳ ಮನೆ" ಎಂಬ ಹೆಸರಿನ "ವಸತಿ ಸಹಿತ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರ" ಸುಸಜ್ಜಿತ ಕಟ್ಟಡದಲ್ಲಿ ನಡೆಯುತ್ತಿದೆ. ಇದು ಶಿಕ್ಷಕರ ಸಂಪನ್ಮೂಲ ಕೇಂದ್ರ ಹೊಂದಿದ್ದು ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಅವಿರತ ಪ್ರಯತ್ನ ನಡೆಸುತ್ತಿದೆ. ===ಸುವರ್ಣಾವತಿ ಜಲಾಶಯ=== ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೧೮ ಕಿ.ಮೀ. ಚಾಮರಾಜನಗರ ತಾಲೂಕಿನ ಜೀವನಾಡಿಯಾದ ಸುವರ್ಣಾವತಿ ನದಿಯು ಆಗ್ನೇಯ ಭಾಗದ ಗಜ್ಜಲ ಹಟ್ಟಿ ಎಂಬಲ್ಲಿ ಹುಟ್ಟುತ್ತದೆ. ಈ ನದಿಗೆ ಚಾಮರಾಜನಗರ ಮತ್ತು ಕೊಯಮತ್ತೂರು ರಸ್ತೆಯ ಹೆದ್ದಾರಿಯಲ್ಲಿ ೧೯೭೭ರಲ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. ೨೬ ಮೀ. ಎತ್ತರ, ಉದ್ದ ೧೧೫೮ ಮೀ. ಇದ್ದು, ಈ ಜಲಾಶಯವು ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕಿನ ಪ್ರದೇಶಗಳಿಗೆ ನೀರೊದಗಿಸುತ್ತದೆ. *ಕಾವೇರಿ ಕಣಿವೆಗೆ ಸೇರಿದ [[ಸುವರ್ಣಾವತಿ ಜಲಾಶಯ]]ದ ನೀರಿನ ಸಾಮರ್ಥ್ಯ ೨೫೮,೭೮ ಕ್ಯೂಸೆಕ್ಸ್ ಇದೆ. ಇದರ ೨ ಕಿ.ಮೀ. ದೂರದಲ್ಲಿ ರಸ್ತೆಯ ಬಲಭಾಗದಲ್ಲಿ ಚಿಕ್ಕಹೊಳೆ ಅಣೆಕಟ್ಟು ಇದ್ದು ಇದು ಮಧ್ಯಮಗಾತ್ರದ ಅಣೆಕಟ್ಟು ಆಗಿದೆ. ಈ ಎರಡೂ ಜಲಾಶಯಗಳು ನಿಸರ್ಗದ ಮಡಿಲಲ್ಲಿದ್ದು, ನೀರಾವರಿ, ಮೀನುಗಾರಿಕೆ, ತೋಟಗಾರಿಕೆಗೆ ಪ್ರೋತ್ಸಾಹವಿದೆ. ಇದು ನೀರಾವರಿ ಇಲಾಖೆಗೆ ಸೇರಿದ್ದು ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ಸೌಕರ್ಯವಿದೆ. ===ನರಸಮಂಗಲ=== ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೨೪ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ನೈರುತ್ಯದಲ್ಲಿರುವ ಗಂಗರ ಇತಿಹಾಸ ಬಿಂಬಿಸುವ ಗ್ರಾಮ ನರಸಮಂಗಲ, ಈ ಸ್ಥಳವು ಪ್ರಾಚೀನ ರಾಮಲಿಂಗೇಶ್ವರ ದೇವಾಲಯದಿಂದ ಪ್ರಸಿದ್ಧವಾಗಿದೆ. ಗಂಗರ ಕಾಲದಲ್ಲಿ ಅನೇಕ ಸುಂದರ ದೇವಾಲಯ ಮತ್ತು ಬಸದಿಗಳು ನಿರ್ಮಾಣಗೊಂಡವು ಅವುಗಳಲ್ಲಿ ಈ ದೇವಾಲಯವು ಒಂದು. ಇಲ್ಲಿನ ಶಿವಲಿಂಗವು ೬ ಅಡಿ ಎತ್ತರ ೧೨ ಅಡಿಗಳನ್ನು ಸುತ್ತಳತೆ ಹೊಂದಿದೆ. *ಈ ದೇವಾಲಯವು ವಿಶಾಲವಾದ ಗರ್ಭಗೃಹ, ಕಿರಿದಾದ ಸುಖನಾಸಿ ಒಂಭತ್ತು ಅಂಕಣಗಳ ನವರಂಗಗಳಿವೆ. ಮೇಲೆ ವಿಮಾನ ಗೋಪುರವಿದೆ. ಇದು ತಮಿಳುನಾಡಿನ ಮಹಾಬಲಿಪುರಂ ಶಿಲ್ಪವನ್ನು ಹೋಲುವುದು. ಶಿಲ್ಪಗಳು ಬಹು ಸುಂದರ ಕಲಾ ಕೃತಿಗಳಾಗಿವೆ. ರಾಮಾಯಣ ಮಹಾಭಾರತ ಕಥೆಗೆ ಸಂಬಂಧಪಟ್ಟ ಹಲವಾರು ಸನ್ನಿವೇಷಗಳನ್ನು ಗೋಡೆಗಳ ಮೇಲೆ ಕೆತ್ತಲಾಗಿದೆ. ಈ ದೇವಾಲಯವನ್ನು ಭಾರತ ಸರ್ಕಾರವು ೧೯೫೮ರಲ್ಲಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಗಿದೆ. ===ಮಲೆಯೂರಿನ ಕನಕಗಿರಿ=== ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೨೫ ಕಿ.ಮೀ. ಚಾಮರಾಜನಗರ ಪಶ್ಚಿಮದಲ್ಲಿರುವ ಮಲೆಯೂರಿನ ಕನಕಗಿರಿ ಜಗತ್ತಿನ ಸುಪ್ರಸಿದ್ಧ ಜೈನ ಕ್ಷೇತ್ರಗಳಲ್ಲಿ ಒಂದಾಗಿದೆ. ಮಲೆಯೂರಿನ ಪಶ್ಚಿಮಕ್ಕಿರುವ ಈ ಬೆಟ್ಟದ ಬಂಡೆಗಳ ಮೇಲೆ ಚರಣ ಪಾದುಕೆಗಳು, ಶಿಲಾಶಾಸನಗಳು, ಸಮಾಧಿ ಮಂಟಪ ಮತ್ತು ಗುಹೆಗಳಿವೆ. ೧೦ನೇ ಶತಮಾನಕ್ಕೆ ಸೇರಿದ ಕನಕಗಿರಿ ಮೇಲಿನ ಪಾರ್ಶ್ವನಾಥ ಬಸದಿ ಅತಿ ಪುರಾತನ ಹಾಗೂ ಸುಂದರ ಬಸದಿಯಾಗಿದೆ. ಈ ಸ್ಥಳದಲ್ಲಿ ನಾಗಾರ್ಜುನನಿಗೆ ಪದ್ಮಾವತಿ ಅಮ್ಮನವರು ಲೋಹ ವನ್ನು ಚಿನ್ನ ಮಾಡುವ ವಿದ್ಯೆಯನ್ನು ತಿಳಿಸಿದರು. * ಈ ಕಾರಣದಿಂದ ಇದಕ್ಕೆ ಕನಕಗಿರಿ ಎಂಬ ಹೆಸರು ಬಂದಿದೆ. ಗಂಗರು ಮತ್ತು ಹೊಯ್ಸಳ ಕಾಲದ ಕಟ್ಟಡಗಳು, ಶಿಲಾಶಾಸನಗಳು ಇಲ್ಲಿ ಕಂಡು ಬರುತ್ತವೆ. ಇಲ್ಲಿನ ಶಿಲಾಶಾಸನಗಳ ಪ್ರಕಾರ ಅಜಿತಮುನಿ ಚಂದ್ರಸೇನಾಚಾರ್ಯ ಮುಂತಾದ ಹಲವರು ಸಲ್ಲೇಖನ ವ್ರತ ಕೈಗೊಂಡು ಸಮಾಧಿ ಪಡೆದರೆಂದು ತಿಳಿಯುತ್ತದೆ. 'ಕಲ್ಯಾಣಕಾರಕ ಚಿಕಿತ್ಸಾಶಾಸ್ತ್ರ' ಗ್ರಂಥ ಬರೆದ ಶ್ರೀ ಪೂಜ್ಯಪಾದರು ಈ ಊರಿನವರು. ===ದಿವ್ಯಲಿಂಗೇಶ್ವರ ದೇಗುಲ=== *ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೫ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಆಗ್ನೇಯದಿಕ್ಕಿಗಿರುವ ಹೋಬಳಿಕೇಂದ್ರ ಹರದನಹಳ್ಳಿ ಗ್ರಾಮದಲ್ಲಿ ಈ ದೇವಾಲಯವಿದೆ. ಹಿಂದೆ ಹೊಯ್ಸಳರು, ವಿಜಯನಗರ ಅರಸರು ಮತ್ತು ಮೈಸೂರು ಅರಸರು ಆಳುತ್ತಿದ್ದರು. ಈ ಊರಿನಲ್ಲಿ ಹಿಂದೆ ಕೋಟೆಯಿದ್ದು ಈಗ ಹಾಳಾಗಿದೆ. ಈ ಊರಿಗೆ ಕಳಸಪ್ರಾಯವಾಗಿರುವುದು ದಿವ್ಯ ಲಿಂಗೇಶ್ವರ ದೇವಾಲಯ. ಈ ದೇಗುಲವು ಗೋಪುರ ಮತ್ತು ಗರುಡಗಂಭವನ್ನು ಒಳಗೊಂಡಿದ್ದು ೨೦೦೧ನೇ ಇಸವಿಯ ಮಳೆಗಾಲದಲ್ಲಿ ರಾಜಗೋಪರವು ಶಿಥಿಲಗೊಂಡು ನೆಲಸಮವಾಗಿದೆ. *೧೩ನೇ ಶತಮಾನದಲ್ಲಿ ಹೊಯ್ಸಳ ವೀರಬಲ್ಲಾಳರ ಕಾಲದಲ್ಲಿ ನಿರ್ಮಾಣವಾಗಿತ್ತು. ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಕಲಾತ್ಮಕವಾಗಿದೆ. ಇದರಿಂದ ೧೦೫ ಅಡಿ ದೂರದಲ್ಲಿ ನಂದೀಶ್ವರನ ವಿಗ್ರಹವಿದೆ. ಇದೊಂದು ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾಗಿದ್ದು ಆಕರ್ಷಿಣಿಯ ಸ್ಥಳವಾಗಿದೆ. ಈ ಗ್ರಾಮವು ಮಹಿಮಾಪುರುಷರಾದ "ಎಡೆಯೂರು ಸಿದ್ಧಲಿಂಗೇಶ್ವರ"ರ ಜನ್ಮಸ್ಥಳವೂ ಹೌದು. ===ಬೂದಿ ಪಡಗ=== *ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೩೦ ಕಿ.ಮೀ. ಸುವರ್ಣಾವತಿ ಜಲಾಶಯದ ಹಿನ್ನೀರಿನ ಕಾಡಂಚಿನಲ್ಲಿರುವ ಬೂದಿಪಡಗ ಪ್ರಸಿದ್ಧ ವನ್ಯಜೀವಿ ವಿಶ್ರಾಂತಿಧಾಮ, ಮೈಸೂರು ಮಹಾರಾಜರು – ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾದ ವಸತಿಗೃಹಗಳು ವಿಶಾಲಹುಲ್ಲು ಮೈದಾನ. ಅಮೂಲ್ಯ ವನ್ಯ ಜೀವಿಗಳು, ಬೂದಿಪಡಗದ ವಿಶೇಷಗಳು. ವನ್ಯಜೀವಿ ಛಾಯಾ ಗ್ರಾಹಕರಿಗೆ, ಪ್ರವಾಸಿಗರಿಗೆ ಸಂಶೋಧಕರಿಗೆ ಇದು ಅಚ್ಚುಮೆಚ್ಚಿನ ಪ್ರವಾಸಿ ಸ್ಥಳವಾಗಿದೆ. ಬೂದಿಪಡಗ ಬಿಳಿಗಿರಿರಂಗನ ಬೆಟ್ಟಗಳಲ್ಲಿ ವನ್ಯ ಜೀವಿಧಾಮದ ಭಾಗವಾಗಿದೆ. ===ಬೇಡಗುಳಿ ಮತ್ತು ಅತ್ತಿಖಾನೆ=== *ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೫೦ ಮತ್ತು ೬೨ ಕಿ.ಮೀ ಚಾಮರಾಜನಗರದಿಂದ ತಮಿಳುನಾಡಿಗೆ ತೆರಳುವ ಮುಖ್ಯ ರಸ್ತೆಯ ನೀಲಗಿರಿ ಶ್ರೇಣಿಯ ಅಂಜಿನಲ್ಲಿರುವ ಬೇಡಗುಳಿ ಕರ್ನಾಟಕ – ತಮಿಳುನಾಡಿನ ಸೀಮಾರೇಖೆ. ನಿತ್ಯಹರಿದ್ವರ್ಣದ ವನ್ಯಜೀವಿಧಾಮ. ಬೇಡಗುಳಿ ಮತ್ತು ಅತ್ತಿಖಾನೆ ಪ್ರದೇಶದಲ್ಲಿ ವಾಸಿಸುವ ಗಿರಿಜನರು ಮತ್ತು ಯುರೋಪಿಯನ್ನರ ಕಾಲದ ಕಾಫಿ ತೋಟಗಳು ವಿಶೇಷಗಳು. ಬೇಡಗುಳಿ ಮತ್ತು ಅತ್ತಿಖಾನೆ ಗಿರಿಜನರ ಹಾಡಿಗಳು ಅವರ ಹಾಡುಪಾಡು. *ಅವರ ಜೀವನ ಶೈಲಿ ಮತ್ತು ಸಂಸ್ಕೃತಿ ಸಂಪ್ರದಾಯಗಳು ಅಧ್ಯಯನ ಯೋಗ್ಯವಾಗಿದೆ. ಸುಂದರ ಗಿರಿಶ್ರೇಣಿಗಳು ಅದ್ಭುತ ಕಣಿವೆಗಳು ಮನೋಹರ ಜಲಪಾತಗಳು ಆಕರ್ಷಕ. ವನ್ಯಜೀವಿಗಳು ಬೇಡಗುಳಿ ಮತ್ತು ಅತ್ತಿಖಾನೆ ಅರಣ್ಯ ಪ್ರದೇಶದ ವಿಶೇಷ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಬೇಡಗುಳಿ ಅತಿಥಿಗೃಹ ನೂರು ವರುಷಗಳಷ್ಟು ಪುರಾತನವಾಗಿದೆ. ವನ್ಯಜೀವಿ ಪ್ರದೇಶವಾಗಿರುವುದರಿಂದ ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಅಗತ್ಯ. * ಎಲೆಮರೆಯ ಕಾಯಿಯಂತಿರುವ ಅತ್ತಿಖಾನೆಯ ಕತ್ತರಿ ಬೆಟ್ಟವು (ಸಮುದ್ರ ಮಟ್ಟದಿಂದ ೧೮೧೬ ಮೀ) ಈ ಜಿಲ್ಲೆಯಲ್ಲೆ ಅತಿ ಎತ್ತರವಾದ ಬೆಟ್ಟವಾಗಿದ್ದು, ಇದರ ತಪ್ಪಲಿನಲ್ಲಿ ಹುಟ್ಟುವ ಝರಿಗಳೆ ತೊರೆಯಾಗಿ ಹರಿದು ಚಾಮರಾಜನಗರ ಜಿಲ್ಲೆಯ ಜೀವನಾಡಿಯಾದ ಸುವರ್ಣಾವತಿ ನದಿಯಾಗಿ ಹರಿದು ಸುವರ್ಣಾವತಿ ಜಲಾಶಯದ ಒಡಲಸೇರಿ ಜಿಲ್ಲೆಯ ಆಧಾರವಾಗಿದೆ. ಅತ್ತಿಖಾನೆ ಗ್ರಾಮವು ಕೊಳ್ಳೇಗಾಲ ತಾಲ್ಲೂಕಿಗೆ ಸೇರಿದ್ದು ಸುಂದರ ಅತಿಸುಂದರ ಗಿರಿಕಣಿವೆಗಳ ಆಗರವೇ ಆಗಿದೆ. ===ಜೋಡಿಗೆರೆ=== *ಜೋಡಿಗೆರೆ ಸೌಂದರ್ಯವನ್ನು ಒಂದೆರಡು ಮಾತಿನಲ್ಲಿ ವರ್ಣಿಸಲಾಗದು. ಇದೊಂದು ಪ್ರಕೃತಿಯ ಅಪ್ರತಿಮ ಕೊಡುಗೆ ನಿಂತು ನೋಡಿದರೆ ನೋಡಿದಷ್ಟು ಆನಂದ. ವಿಶಾಲ ಹುಲ್ಲು ಗಾವಲು. ಶೋಲಾ ಅರಣ್ಯ ಪ್ರದೇಶ. ಮನಬಿಚ್ಚಿ ಓಡಾಡುವ ವನ್ಯಜೀವಿಗಳು ಸುಯ್‌ಗುಡುವ ತಂಗಾಳಿ. ಇವೆಲ್ಲವೂ ಒಂದು ಮಾಯಾಲೋಕವನ್ನು ಸೃಷ್ಟಿಸುತ್ತವೆ. *ಜಗತ್ತಿನ ಅಪರೂಪದ ಪ್ರದೇಶವೆಂಬಂತೆ ವನ್ಯಜೀವಿಗಳು ಹುಲ್ಲುಗಾವಲಿನಲ್ಲಿ ಗುಂಪುಗುಂಪಾಗಿ ನಲಿದಾಡುವುದನ್ನು ನೋಡಿದರೆ ಇದೊಂದು ಮಿನಿ ಜುರಾಸಿಕ್ ಪಾರ್ಕ್‌ನಂತೆ ಕಾಣುತ್ತದೆ. ಸಮುದ್ರ ಮಟ್ಟದಿಂದ ಸುಮಾರು ೧೬೦೦ ಮೀಟರ್‌ಗಳಷ್ಟು ಎತ್ತರದಲ್ಲಿರುವ ಜೋಡಿಗೆರೆ ಬಿಳಿಗಿರಿ ರಂಗನಬೆಟ್ಟ ವನ್ಯಜೀವಿಧಾಮದ ಒಂದು ಭಾಗವಾಗಿದ್ದು ಇಲ್ಲಿಗೆ ಪ್ರವೇಶಿಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ. ===ಕೆ. ಗುಡಿ (ಕ್ಯಾತೇದೇವರ ಗುಡಿ)=== *ಚಾಮರಾಜನಗರದ ಪೂರ್ವಕ್ಕಿರುವ ಪ್ರಕೃತಿ ಧಾಮ. ಸಮುದ್ರ ಮಟ್ಟದಿಂದ ೧೪೫೦ ಮೀಟರ್‌ಗಳಷ್ಟು ಎತ್ತರದಲ್ಲಿದೆ. ಇಲ್ಲಿ ಕರ್ನಾಟಕ ಜಂಗಲ್ ಲಾಡ್ಜ್ ನ ವನ್ಯಜೀವಿ ಪ್ರವಾಸೋದ್ಯಮ ಕೆಲಸ ಮಾಡುತ್ತಿದೆ. ಜೊತೆಗೆ ಅರಣ್ಯ ಇಲಾಖೆಯ ಅತಿಥಿಗೃಹವಿದೆ. ಅರಣ್ಯ ಇಲಾಖೆಯ ಆನೆ ಸಫಾರಿ ಮತ್ತು ವನ್ಯಜೀವಿ ಸಫಾರಿ ಬಹಳ ಪ್ರಸಿದ್ಧ. *ಕೆ. ಗುಡಿಗೆ ದೇಶ-ವಿದೇಶಗಳು ಪ್ರವಾಸಿಗರ ಆಗಮನವಿದೆ. ಪ್ರಾಣಿ ಪಕ್ಷಿ, ಪ್ರಕೃತಿ ಸಂಶೋಧಕರಿಗೆ ಮತ್ತು ಪ್ರವಾಸಿಗರಿಗೆ ಕೆ. ಗುಡಿ ರಮ್ಯತಾಣವಾಗಿದ್ದು ಇಲ್ಲಿ ಆನೆ, ಹುಲಿ, ಚಿರತೆ, ಕಾಡೆಮ್ಮೆ, ಕರಡಿ, ಜಿಂಕೆ, ಕಡವೆ ಈ ಅರಣ್ಯದ ಪ್ರಮುಖ ವನ್ಯಜೀವಿಗಳು. ===ಬೆಲ್ಲತ್ತ ಪಕ್ಷಿರಾಶಿ=== ಚಾಮರಾಜನಗರ ತಾಲ್ಲೋಕಿ ನಲ್ಲಿರುವ ಬೆಲ್ಲತ್ತ ಜಲಾಶಯ ಬಿಳಿಗಿರಿರಂಗನ ಬೆಟ್ಟದ ಕಾಡಂಚಿನಲ್ಲಿದೆ. ಕಾಡಂಚಿಗೆ ತಾಗಿಕೊಂಡಿರುವ ಹಿನ್ನೀರಿ ನಿಂದಾಗಿ ಪ್ರಾಣಿಗಳು ಪಕ್ಷಿಗಳಿಗೆ ಸಮೃದ್ಧ ಪ್ರದೇಶವಾಗಿದೆ. ಈ ಜಲಾಶಯದ ಸುತ್ತ ದೇಶ ವಿದೇಶಗಳ ವೈವಿಧ್ಯಮಯ ಪಕ್ಷಿಗಳ ಸಮ್ಮಿಲನವಾಗುತ್ತದೆ. ನಿಸರ್ಗ ಪ್ರಿಯರಿಗೆ ಪಕ್ಷಿ ಛಾಯಗ್ರಾಹಕರಿಗೆ ಮತ್ತು ಸಂಶೋಧಕರಿಗೆ ಇದೊಂದು ಉತ್ತಮ ತಾಣವಾಗಿದೆ. ===ಯಳಂದೂರು=== *ಬಹಳ ಹಿಂದೆ ಯಳಂದೂರು ಪದಿನಾಡಿನ ರಾಜವಂಶಸ್ಥರ ಮುಖ್ಯ ಪಟ್ಟಣ ಅಥವಾ ರಾಜಧಾನಿಯಾಗಿತ್ತು. ಈ ವಿಷಯ ಹದಿನಾಡಿನ ಉಲ್ಲೇಖ ಕ್ರಿ.ಶ. ೧೦೧೮ರ ಚೋಳ ದೊರೆ ಒಂದನೇ ರಾಜೇಂದ್ರನ ಕಾಲದ ಶಾಸನದಲ್ಲಿ ಕಂಡು ಬಂದಿದೆ. ಜೈನಧರ್ಮದ ಪ್ರಮುಖ ಮುನಿಗಳಾದ ಶ್ರೀ ಬಾಲಚಂದ್ರ ಮುನಿಗಳ ಹೆಸರು ಈ ಊರಿಗೆ ಇತ್ತು. ನಂತರ ಬಾಲೇಂದುಪುರ ಎಂದಾಯಿತು. ನಂತರ ಎಳವಂದೂರಾಯಿತು. ಮುಂದೆ ಯಳಂದೂರಾಯಿತು. ಇಲ್ಲಿ ಜೈನ ಧರ್ಮದ ಮತ್ತು ವೀರಶೈವ ಧರ್ಮದ ಅನೇಕ ಹೆಸರಾಂತ ಮಹಾಕವಿಗಳು ಇಲ್ಲಿ ಇದ್ದರು. *ಇವರು ರಚಿಸಿರುವ ಲೀಲಾವತಿ ಪ್ರಬಂಧ ರಾಜಶೇಖರ ವಿಲಾಸ ಹಾಗೂ ಸಂಚಿ ಹೊನ್ನಮ್ಮ ರಚಿಸಿದ ಹದಿಬದಿಯ ಧರ್ಮ ಶ್ರೇಷ್ಠ ಕೃತಿಗಳಾಗಿವೆ. ಇಂತಹ ಪುಣ್ಯ ಭೂಮಿಯಲ್ಲಿ (ಸುವರ್ಣಾವತಿ) ಹೊನ್ನು ಹೊಳೆ ಹರಿಯುತ್ತದೆ. ಇದಕ್ಕೆ ಇರುವ ದಂತ ಕಥೆಯ ಉಲ್ಲೇಖವು ಶಾಸನವೊಂದರಲ್ಲಿ ದೊರೆಯುತ್ತದೆ. ಯಳಂದೂರು ಸಂಪದ್ಭರಿತವಾದ ಹಾಗೂ ಜನಾಕರ್ಷಕವಾದ ಸ್ಥಳವಾಗಿದ್ದು ನಿರ್ದಿಷ್ಟ ರಾಜಮನೆತನಗಳು ಇದ್ದವು ಎಂಬುದು ತಿಳಿದು ಬಂದಿದೆ. ===ಬಳೇ ಮಂಟಪ=== ಯಳಂದೂರಿನ ಗೌರೀಶ್ವರ ದೇವಾಲಯದ ಮುಖ ಮಂಟಪವನ್ನು ಕ್ರಿ.ಶ. ೧೬೫೪ರಲ್ಲಿ ಮುದ್ದುರಾಜನು ಬಹಳ ರಮ್ಯವಾಗಿ ಕಟ್ಟಿಸಿದ್ದಾನೆ. ಇದು ಬಹಳ ಸುಂದರವಾದ ಅತ್ಯಂತ ಪ್ರಾಚೀನ ಹಾಗೂ ಕಲಾಪೂರ್ಣ ಕಗ್ಗಲ್ಲಿನ ಮಂಟಪವಾಗಿದೆ. ಈ ಮಂಟಪ ಹಂಪೆಯ ೨೭ ಕಲ್ಲಿನ ರಥವನ್ನು ಹೋಲುತ್ತದೆ. ಈ ಮಂಟಪವು ಬೇಲೂರು ಮತ್ತು ಹಳೇ ಬೀಡಿನ ದೇವಾಲಯದ ಶಿಲ್ಪಕಲೆಯಂತೆ ಇದೆ. ಈ ಮಂಟಪವೂ ಚತುರ್ಮುಖಗಳನ್ನು ಹೊಂದಿದ್ದು ಸುಂದರವಾದ ಕಲ್ಲಿನ ಬಳೆಗಳಿಂದ ಕೂಡಿದ ಮಂಟಪವಾಗಿದೆ. *ಶಿಲೆಯ ಗೋಡೆಯಲ್ಲಿ ಶೈವ ಪುರಾಣದ, ರಾಮಾಯಣದ ಹಾಗೂ ಮಹಾಭಾರತದ ಕೆಲವು ಘಟನೆಗಳನ್ನು ಅತ್ಯಂತ ಮನೋಹರವಾಗಿ ಸುಂದರವಾಗಿ ಕೆತ್ತಿರುವುದನ್ನು ನೋಡಬಹುದು. ಈ ಮಂಟಪದ ಮಧ್ಯಭಾಗದಲ್ಲಿ ಒಂದೇ ಕಲ್ಲಿನಿಂದ ಕಮಲದ ಮೊಗ್ಗನ್ನು ಬಿಡಿಸಿ ಮೇಲ್ಭಾಗದಲ್ಲಿ ಜೋಡಿಸಿರುವುದು ಮನೋಹರವಾಗಿದೆ. ಈ ಮಂಟಪದ ಮೂಲೆಗಳಲ್ಲಿ ಬಳೆಗಳನ್ನು ಒಂದರೊಳಗೊಂದು ಜೋಡಿಸಿದಂತೆ ಒಂದೇ ಕಲ್ಲಿನಿಂದ ಮಾಡಿರುವುದು ಅದ್ಭುತವಾಗಿದೆ. ಈ ಬಳೆಗಳು ಇರುವುದರಿಂದಲೇ ರೂಢಿಯಿಂದ ಈ ಮಂಟಪವನ್ನು ಬಳೆ ಮಂಟಪ ಎಂದು ಕರೆಯುತ್ತಾರೆ. ===ಗೌರೀಶ್ವರ ದೇವಾಲಯ=== *ಯಳಂದೂರಿನಲ್ಲಿರುವ ಗೌರೀಶ್ವರ ದೇವಾಲಯದ ವೈಶಿಷ್ಟತೆಯನ್ನು ತಿಳಿಯಲು ಇಲ್ಲಿರುವ ಶಿಲಾಶಾಸನ ಒಂದೇ ಆಧಾರ ಯಳಂದೂರಿನಲ್ಲಿ ಆಳಿದ ರಾಜ ಮನೆತನಗಳಲ್ಲಿ ಪದಿನಾಡ ಅರಸರೇ ಪ್ರಮುಖರು. ಈ ಮನೆತನದ ಮೊದಲನೆರಾಜ ಸಿಂಗದೇವಭೂಪನು ಗೌರೀಶ್ವರ ದೇವಾಲಯವನ್ನು ಮುದ್ದುರಾಜನು ಕ್ರಿ.ಶ. ೧೬೫೪ರಲ್ಲಿ ದೇವಾಲಯದ ಮುಖ ಮಂಟಪ ಪಂಚಲಿಂಗಗಳನ್ನೊಳಗೊಂಡ ಗುಡಿಗಳನ್ನು ಕಟ್ಟಿಸಿದ್ದಾನೆ. * ಈ ಗೌರೀಶ್ವರನು ಹಿಂದೆ ಕೃತಾಯುಗದಲ್ಲಿ ಜಮದಗ್ನಿ ಮಹಾರ್ಷಿಯಿಂದ “ತ್ರಿಪುರಾಂತಕ”ನೆಂದೂ ತ್ರೇತಾಯುಗದಲ್ಲಿ ಶ್ರೀರಾಮಚಂದ್ರನಿಂದ “ನೀಲಕಂಠ” ನೆಂದೂ, ದ್ವಾಪರಾಯುಗದಲ್ಲಿ ಪಾಂಡವರಿಂದ ಲೋಕೇಶ್ವರನೆಂದೂ ಕಲಿಯುಗದಲ್ಲಿ ಪದಿನಾಡಿನ ರಾಜ ವಂಶಸ್ಥರು ಗೌರೀಶ್ವರನೆಂದೂ ಪೂಜಿಸುತ್ತಿದ್ದರು. ಈ ದೇವಾಲಯದ ಆವರಣದಲ್ಲಿರುವ ಎರಡು ಪಗಡೆ ಮರಗಳು ದೇವಾಲಯದ ಆವರಣವನ್ನು ಬೇಸಿಗೆಯಲ್ಲೂ ತಂಪಾಗಿಸುತ್ತಿದೆ. ===ಬಿಳಿಗಿರಿರಂಗನಬೆಟ್ಟ=== *ಪೂರ್ವ ಘಟ್ಟದಲ್ಲಿ ಮಲೈ ಮಹಾದೇಶ್ವರ ಬೆಟ್ಟ ಶ್ರೇಣಿ ಹಾಗೂ ದಿಂಬಮ್ ಬೆಟ್ಟ ಶ್ರೇಣಿಗಳ ನಡುವೆ ೩೦ ಮೈಲಿ ದೂರ ಫಲವತ್ತಾದ ಮಣ್ಣು ಮತ್ತು ದಟ್ಟ ಅರಣ್ಯದಿಂದ ಕೂಡಿರುವ ಬೆಟ್ಟವೇ ಬಿಳಿಗಿರಿರಂಗನ ಬೆಟ್ಟ. ಯಳಂದೂರು ತಾಲ್ಲೂಕಿನಿಂದ ೨೪ ಕಿ.ಮೀ. ದೂರದಲ್ಲಿರುವ ಈ ಬೆಟ್ಟವು ಬಿಳಿಕಲ್ಲು ಬೆಟ್ಟ. ಶ್ವೇತಾದ್ರಿಬೆಟ್ಟ. ಬಿಳಿಗಿರಿರಂಗಸ್ವಾಮಿ ಬೆಟ್ಟ ಎಂದು ಹಲವಾರು ಹೆಸರುಗಳಿಂದ ಪ್ರಸಿದ್ಧವಾಗಿದೆ. *ಈ ಬೆಟ್ಟವು ಸಮುದ್ರಮಟ್ಟದಿಂದ ೪೪೭೦ ಅಡಿಗಳ ಎತ್ತರದಲ್ಲಿದ್ದು, ಔಷಧಿ ಸಸ್ಯಗಳಿಂದಲೂ, ತೇಗ, ಬೀಟೆ, ಹೊನ್ನೇ, ಮತ್ತಿ, ಬಿದುರು, ಮುಂತಾದ ಬೆಲೆ ಬಾಳುವ ಮರಗಳಿಂದ ಕೂಡಿದ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿ ಹುಲಿ, ಚಿರತೆ, ಜಿಂಕೆ, ಆನೆ, ಕಾಡೆಮ್ಮೆ, ಕರಡಿ, ಮುಂತಾದ ಕಾಡು ಮೃಗಗಳು ಇವೆ. ಈ ಕಾನನ ಪ್ರದೇಶವನ್ನು ಪಾಂಡವರ ಕಾಲದಲ್ಲಿ ಚಂಪಕಾರಣ್ಯ ಎಂದು, ಗಂಗರ ಕಾಲದಲ್ಲಿ ಗಜಾರಾಣ್ಯ ಎಂದು ಕರೆಯುತ್ತಿದ್ದರು. *ಶಿಲಾಯುಗದ ಮಾನವರು ಬಳಸುತ್ತಿದ್ದ ಆಯುಧಗಳು, ಮಡಿಕೆಗಳು, ಮತ್ತು ಅವರ ಸಮಾಧಿಗಳು, ಕಂಡು ಬಂದಿದೆ. ಬಿಳಿಗಿರಿರಂಗಸ್ವಾಮಿ ಬೆಟ್ಟದಲ್ಲಿರುವ ಶ್ರೀ ರಂಗಸ್ವಾಮಿ ದೇವಾಲಯವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಏಪ್ರಿಲ್ ಮೇ ತಿಂಗಳಲ್ಲಿ ನಡೆಯುವ ದೊಡ್ಡ ಜಾತ್ರೆಯು ಬಹಳ ಪ್ರಸಿದ್ಧಿಯನ್ನು ಪಡೆದಿದೆ. ===ದೊಡ್ಡ ಸಂಪಿಗೆ=== ಇದು ಬಿಳಿಗಿರರಂಗನ ಬೆಟ್ಟದ ಕಾಡಿಗೆ ಸೇರಿದ ಪ್ರದೇಶದಲ್ಲಿದ್ದು ಈ ಸ್ಥಳದಲ್ಲಿ ಭಾರ್ಗವೀ ನದಿ ನಯನ ಮನೋಹರವಾದ ಕಣಿವೆಯಲ್ಲಿ ಹರಿಯುತ್ತಿದೆ. ಪರಶುರಾಮನು ಮಾತೃ ಹತ್ಯಾ ದೋಷ ಪರಿಹಾರಕ್ಕಾಗಿ ಈ ಪರ್ವತದ ಮೇಲೆ ತಪಸ್ಸಾಚರಿಸಿದರೆಂದು ಪ್ರತೀತಿ. ಈ ಸ್ಥಳದಲ್ಲಿ ದೊಡ್ಡ ಸಂಪಿಗೆ ವೃಕ್ಷವಿದೆ. ಈ ಮಹಾವೃಕ್ಷದಲ್ಲಿ ೩ ಕೊಂಬೆಗಳಿದ್ದು ಇವು ಬ್ರಹ್ಮ-ವಿಷ್ಣು ಮತ್ತು ಮಹೇಶ್ವರರ ಸಂಕೇತ ಎಂದು ತಿಳಿಯಲಾಗಿದೆ. ಈ ಮಹಾವೃಕ್ಷವನ್ನು ‘ಸೋಲಿಗರು’ ತಮ್ಮ ಆರಾಧ್ಯ ದೈವವಾಗಿ ಭಯ ಭಕ್ತಿಯಿಂದ ಪೂಜಿಸುತ್ತಾರೆ. ===ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿ.ಜಿ.ಕೆ.ಕೆ.)=== *ತಲೆತಲಾಂತರದಿಂದ ಗುಡ್ಡಗಾಡುಗಳಲ್ಲಿ ಸಂಚರಿಸುತ್ತಾ ನಾಡಿನ ಸಂಪರ್ಕವನ್ನು ಕಳೆದುಕೊಂಡಿದ್ದ ಸೋಲಿಗ ಬುಡಕಟ್ಟು ಜನರಲ್ಲಿ ಆತ್ಮ ವಿಶ್ವಾಸ ತುಂಬಿ ವಂಶ ಪರಂಪರೆಯಾಗಿ ಅವರಲ್ಲಿ ಮನೆ ಮಾಡಿದ್ದ ಅನಿಮಿಯ ರೋಗದಿಂದ ಅವರನ್ನು ಪಾರು ಮಾಡಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ದೆಸೆಯಲ್ಲಿ ೧೯೮೧ರಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರವೇ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ. *ಸೋಲಿಗರ ಪ್ರಗತಿಯನ್ನು ಕೇಂದ್ರವಾಗಿರಿಸಿಕೊಂಡಿರುವ ಈ ಕೇಂದ್ರ ಅವರಿಗೆ ಸೀಮಿತವಾಗಿರದೆ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ, ಪಣಿಯ, ಹಕ್ಕಿಪಿಕ್ಕಿ, ಯರವ, ಲಂಬಾಣಿ,ಕೊರಮ ಇತ್ಯಾದಿ ಬುಡಕಟ್ಟಿನ ಜನರ ಪ್ರಗತಿಗೆ ಶ್ರಮಿಸುತ್ತಿದೆ. ಆರಂಭದಲ್ಲಿ ಏಳು ಮಕ್ಕಳ ಪ್ರವೇಶದೊಂದಿಗೆ ಆರಂಭವಾದ ಪ್ರಾಥಮಿಕ ಶಾಲೆ, ಇಂದು ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು, ಮತ್ತು ವೃತ್ತಿಪರ ಕಾಲೇಜನ್ನು ಹೊಂದಿರುವುದರ ಜೊತೆಗೆ ಸಾಮಾಜಿಕವಾಗಿಯೂ ಬೆಳೆದು ಹೆಮ್ಮರವಾಗಿದೆ. * ಬುಡಕಟ್ಟು ಜನರ ಅರಿವಿನ ಆಶ್ರಯಧಾಮವಾಗಿದೆ.ಸೋಲಿಗರ ಬದುಕನ್ನು ಹಸನು ಮಾಡಲು ಜೀವನ ತ್ಯಾಗ ಮಾಡಿದ ಡಾ. ಎಚ್. ಸುದರ್ಶನ್ ರವರಿಗೆ ಮಹತ್ಕಾರ‍್ಯವನ್ನು ಪ್ರಶಂಸಿಸಿ ೯ ಡಿಸೆಂಬರ್ ೧೯೯೪ರಂದು ಅಂತರರಾಷ್ಟ್ರೀಯ ಸಂಸ್ಥೆಯೊಂದು ‘ರೈಟ್ ಲೈವಿಲಿಹುಡ್ ಅವಾರ್ಡ್’ನೀಡಿ ಗೌರವಿಸಿದೆ. ==ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಲಯದ ಪ್ರವಾಸಿ ತಾಣಗಳು== # ಮರಡಿಗುಡ್ಡ, # ಚಿಲಕವಾಡಿ, # ಕುಂತೂರು, # ಕುರುಬನ ಕಟ್ಟೆ, # ಕನಕಗಿರಿ ಕ್ಷೇತ್ರ, # ಚಿಕ್ಕಲ್ಲೂರು, # ಉಗನಿಯ, # ಶಿವನ ಸಮುದ್ರ, # ವೆಸ್ಲಿ ಸೇತುವೆ, # ಬೂದಬಾಳು ಕ್ಷೇತ್ರ, # ಭರಚುಕ್ಕಿ, # ಯಡಕುರಿ ಕೊಳ್ಳೇಗಾಲ ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೦ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೪೦ ಕಿ.ಮೀ. ಕೊಳ್ಳೇಗಾಲ ವಲಯ ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಗಡಿ ತಾಲ್ಲೂಕು, ಪ್ರಕೃತಿ ಸಂಪತ್ತು ಬಹಳಷ್ಟಿದ್ದು ಜಲಪಾತಗಳು, ದೇವಸ್ಥಾನಗಳನ್ನು ಹೊಂದಿದೆ. ವಲಯದ ಸ್ವಲ್ಪಭಾಗ ನೀರಾವರಿ ಹೊಂದಿದೆ. ಈ ಹಿಂದೆ ಈ ಪಟ್ಟಣದಲ್ಲಿ ಕೌಹಳ ಮತ್ತು ಗಾಲವ ಎಂಬ ಈರ್ವರು ಮಹರ್ಷಿಗಳು ನೆಲೆಸಿದ್ದರಿಂದ ಕೌಹಳಗಾಲವ ನಗರವಾಗಿ ಮುಂದೆ ಕೊಳ್ಳೇಗಾಲವೆಂದು ಪ್ರಸಿದ್ಧಿ ಪಡೆಯಿತು. ಇಲ್ಲಿಯ ರೇಷ್ಮೆ ಮಾರುಕಟ್ಟೆಯು ರೇಷ್ಮೆ ಬೆಳೆಗಾರರಿಗೆ ವರದಾನವಾಗಿದೆ. ಕೊಳ್ಳೇಗಾಲದ ಚಾರಿತ್ರಿಕ ಮುಖವನ್ನು ಅವಲೋಕಿಸಿದರೆ ಜನಪದ ನಾಯಕರಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಸತ್ ಸಂಕಲ್ಪಗಳಿಗೆ ಸದಾ ಪ್ರೇರಣೆ ನೀಡುತ್ತಿರುವ ಮಲೆ ಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿಯಂತಹ ಜಂಗಮ ಶ್ರೇಷ್ಠರು ನಡೆದಾಡಿದ ಪುಣ್ಯಭೂಮಿ. ನಾಡಿನ ಹಿರಿಯ ಕವಿ ಷಟ್ ಶಾಸ್ತ್ರ ಕೋವಿದ ಶ್ರೀ ನಿಜಗುಣಶಿವಯೋಗಿ ನಂತರದ ಶ್ರೀ ಕುಮಾರ ನಿಜಗುಣಸ್ವಾಮಿ ಹಾಗೂ ಡಾ. ರಾಜ್‌ಕುಮಾರ್ ಸಿಂಗಾನಲ್ಲೂರಿನವರಾಗಿದ್ದು ಇವರೆಲ್ಲರಿಂದ ಸಾಂಸ್ಕೃತಿಕವಾಗಿ ಶ್ರೀಮಂತಗೊಂಡ ಪ್ರದೇಶವಾಗಿದೆ. ===ಮರಡಿಗುಡ್ಡ === ಪವಾಡ ಪುರುಷ ಶ್ರೀ ಮಹದೇಶ್ವರರು ಮಂಡಿ ಊರಿದ ಸ್ಥಳ ಮರಡಿಗುಡ್ಡವಾಗಿದೆ. ಬಸ್ತೀಪುರ : ಪಟ್ಟಣದ ಉತ್ತರ ದಿಕ್ಕಿನಲ್ಲಿದ್ದು, ಜೈನ ಬಸದಿಗಳಿದ್ದ ಪುರಾವೆಗಳಿವೆ. ===ಇತರೆ ಸ್ಥಳಗಳು=== # ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನ, # ಮಾಳಿಗೆ ಮಾರಮ್ಮ, # ಸೋಮೇಶ್ವರ ಸ್ವಾಮಿ ದೇವಸ್ಥಾನ, # ಚೌಡೇಶ್ವರಿ ದೇವಸ್ಥಾನ, # ಮುರುಡೇಶ್ವರ ಸ್ವಾಮಿ ದೇವಸ್ಥಾನ, # ಕನ್ನಿಕಾ ಪರಮೇಶ್ವರಿ ದೇವಸ್ಥಾನ, # ಉಚ್ಛಾಲಮ್ಮ ದೇವಸ್ಥಾನ, # ಮಕ್ಕಳ ಮಹದೇಶ್ವರ ದೇವಸ್ಥಾನ, # ನಾರಾಯಣ ಸ್ವಾಮಿ ದೇವಸ್ಥಾನ ಹಾಗೂ # ಕಲ್ಯಾಣಿ. ===ಚಿಲಕವಾಡಿ=== ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೧೨ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೨ ಕಿ.ಮೀ. ಇದೊಂದು ಧಾರ್ಮಿಕ ಹಾಗೂ ಕವಿಗಳ ಊರು. ಇಲ್ಲಿ ಶ್ರೀ ಶಂಭುಲಿಂಗೇಶ್ವರರ ಬೆಟ್ಟವಿದ್ದು, ದುರ್ಗಾಂಭ ದೇವಿಯ ದೇವಸ್ಥಾನ ಕೂಡ ಇದೆ. ದೀಪಾವಳಿಯ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಸ್ವಾಮಿಯ ಉತ್ಸವ ನಡೆಯುತ್ತಿದ್ದು, ಜಾತ್ರೆ ಕೂಡ ಏರ್ಪಾಡಾಗುತ್ತದೆ. ದೇವಸ್ಥಾನದ ಸಮೀಪದಲ್ಲಿ ಅನುಭವ ಮಂಟಪ ಇದ್ದು, ಕುಮಾರ ನಿಜಗುಣ ಸ್ವಾಮಿಗಳವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇವರು ಬರೆದ ’ಬೋಳು ಬಸವನ ಬೊಂತೆ” ಒಂದು ಅಮರ ಕೃತಿ. ಇವರು ಸಂಸಾರಿಕ ಜೀವನವನ್ನು ತ್ಯಜಿಸಿ, ಶ್ರೀ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿಗಳವರಿಂದ ದೀಕ್ಷೆಯನ್ನು ಪಡೆದು ವಿರಕ್ತಿ ಮಾರ್ಗದೆಡೆಗೆ ನಡೆದಿದ್ದಾರೆ. ಈ ಸ್ಥಳದಲ್ಲಿ ಶ್ರೀ ನಿಜಗುಣಶಿವಯೋಗಿಗಳು ತಪೋಗೈದ ಗುಹೆ ಇದೆ. ===ಕುಂತೂರು=== ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೧೦ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೦ ಕಿ.ಮೀ. ಈ ಗ್ರಾಮದಲ್ಲಿ ಶ್ರೀ ಪ್ರಭುದೇವಸ್ವಾಮಿಯವರ ಬೆಟ್ಟ ಇದ್ದು, ವರ್ಷಕ್ಕೊಮ್ಮೆ ಸ್ವಾಮಿಗೆ ಹಾಲೆರೆವ ಉತ್ಸವ ಹಾಗೂ ಜಾತ್ರೆ ನಡೆಯುತ್ತದೆ. ಬೆಟ್ಟದ ತಪ್ಪಲಿನ ಪರಿಸರದಲ್ಲಿ ಶ್ರೀ ಮಹದೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ ಇದ್ದು, ಈವಾಗ ಶ್ರೀ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸುತ್ತಮುತ್ತಲಿನ ಕಬ್ಬು ಬೆಳೆಗಾರರಿಗೆ ವರದಾನವಾಗಿದೆ. ಇಲ್ಲಿ ಕಾರ್ಖಾನೆಯ ನೌಕರರಿಗೆ ವಸತಿಗೃಹಗಳಿದ್ದು, ಕಾಲೋನಿಯೊಂದು ನಿರ್ಮಾಣಗೊಂಡಿದೆ. ಊರಿನ ಕೇಂದ್ರಸ್ಥಳದಲ್ಲಿ ದಾಸೋಹ ಮಠವಿದ್ದು, ಈ ಮಠದಲ್ಲಿ ಹಿಂದೆ ಶ್ರೀ ಮಾದೇಶ್ವರರವರು ಬಂದು ಹೋಗಿದ್ದ ಐತಿಹ್ಯವಿದೆ. ಶ್ರೀ ಮಠದಲ್ಲಿ ಅನ್ನದಾಸೋಹ ನಡೆಯುತ್ತದೆ. ===ಶ್ರೀ ಸಿದ್ಧೇಶ್ವರ ಕ್ಷೇತ್ರ=== ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೩ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೪೩ ಕಿ.ಮೀ. ಹೊಂಡರಬಾಳು ಶ್ರೀ ಸಿದ್ಧೇಶ್ವರ ಕ್ಷೇತ್ರವು ಪುರಾಣ ಪ್ರಸಿದ್ಧವಾದ ಸ್ಥಳವಾಗಿದೆ. ಗಿರಿಯಲ್ಲಿ ಗುಹೆಗಳು ಅಧಿಕವಾಗಿವೆ. ತುಟ್ಟತುದಿಯಲ್ಲಿರುವ ಮೊದಲ ಗುಹೆ ವಿಶಾಲವಾದುದು. ಪೂಜಾ ಬಾಗಿಲು, ದರ್ಶನ ಬಾಗಿಲು, ಸ್ವರ್ಗದ ಬಾಗಿಲು ಈ ರೀತಿ ೦೩ ಬಾಗಿಲುಗಳಿವೆ. ಪೂಜೆಯನ್ನು ಭಕ್ತರು ದರ್ಶನದ ಬಾಗಿಲ ಹತ್ತಿರ ಬಂದು ಮಾಡಿಸುತ್ತಾರೆ. ಸ್ವರ್ಗದ ಬಾಗಿಲ ಬಗ್ಗೆ ಒಂದು ದಂತಕಥೆಯಿದ್ದು, ಒಮ್ಮೆ ಮಕ್ಕಳಿಲ್ಲದ ದಂಪತಿಗಳು ಮಗುವಾದರೆ ಅದನ್ನು ಅದರ ಆಭರಣ ಉಡುಪಿನ ಜೊತೆ ನಿನಗರ್ಪಿಸುತ್ತೇವೆಂದು ವಿಚಿತ್ರ ಹರಕೆ ಹೊತ್ತರು. ಮಗುವಾಯಿತು. ಬಹಳ ದಿನಗಳ ನಂತರ ಮಗುವನ್ನು ಸಿಂಗರಿಸಿ ದೇವರ ದರ್ಶನಕ್ಕೆ ಹೋದರು. ಮಗು ಸ್ವರ್ಗದ ಬಾಗಿಲಲ್ಲಿ ಹೋಗಿ ಮತ್ತೆ ಹಿಂತಿರುಗಲಿಲ್ಲ. ಈಗಲೂ ಕೆಲವು ಸಂರ್ದಬ ಗುಹೆಯಲ್ಲಿ ಮಗುವಿನ ಗೆಜ್ಜೆಯ ಸದ್ದು ಕೇಳಿಸುವುದೆಂದು ಪ್ರತೀತಿ ಇದೆ. ===ಕುರುಬನ ಕಟ್ಟೆ=== ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೮ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೮ ಕಿ.ಮೀ. ಕೊಳ್ಳೇಗಾಲದ ಪಕ್ಕದಲ್ಲಿರುವ ಕುರುಬನ ಕಟ್ಟೆಯು ಶೀ ಮಂಟೆಸ್ವಾಮಿ ಯವರು ತಪಗೈದ ಸ್ಥಳ. ಇಲ್ಲಿ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆಗಳು ನಡೆಯುತ್ತದೆ. ಪರಮ ಪರಂಜ್ಯೋತಿ ನೀವೇ ಬನ್ನಿ, ಮಂಟೇದ ಲಿಂಗಯ್ಯ ನೀವೇ ಬನ್ನಿ ಎಂದು ಹಾಡುವ ನೀಲಗಾರರ ಮೇಳ ಈ ಸ್ಥಳದಲ್ಲಿ ಕಾಣಬಹುದು. ಈ ಸ್ಥಳದ ಪಕ್ಕದಲ್ಲಿ ಕರಳಕಟ್ಟೆ ಎಂಬ ಗ್ರಾಮವಿದ್ದು, ಸೋಲಿಗರು ಇಲ್ಲಿ ವಾಸವಾಗಿದ್ದಾರೆ. ===ಕನಕಗಿರಿ ಕ್ಷೇತ್ರ=== ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೯ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೯ ಕಿ.ಮೀ. ಕ್ಷೇತ್ರವು ದೊಡ್ಡಿಂದವಾಡಿ ಗ್ರಾಮದ ಸನಿಹದಲ್ಲಿರುವ ಗಿರಿ ಪ್ರದೇಶ ಇಲ್ಲಿ ಪಾರ್ವತಿ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ. ಪಂಚಲಿಂಗ ದರ್ಶನದಂದು ತಲಕಾಡಿನ ೦೫ ಲಿಂಗಗಳನ್ನು ದರ್ಶನ ಮಾಡಿ, ಕನಕಗಿರಿಯ ಪಾರ್ವತಿ-ಪರಮೇಶ್ವರರ ದರ್ಶನ ಪಡೆದರೆ ಕೈಲಾಸ ಪದವಿ ಪ್ರಾಪ್ತವಾಗುವುದೆಂದು ಪ್ರತೀತಿ ಇದೆ. ಆದ್ದರಿಂದಾಗಿ ಈ ದೇವರ ದರ್ಶನ ಪಡೆಯಲು ಭಕ್ತಾದಿಗಳು ಹೆಚ್ಚಾಗಿ ಬರುತ್ತಿದ್ದಾರೆ. ಇದೊಂದು ವೈದಿಕ ಮತ್ತು ಜಾನಪದ ಸಾಂಸ್ಕೃತಿಕ ಆಚರಣೆಯ ಸಂಗಮ, ಇಲ್ಲಿನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ವೈದಿಕ ಪರಂಪರೆಯನ್ನು ಪ್ರತಿನಿಧಿಸಿದರೆ ’ಶ್ರೀ ಗುಡ್ಡದ ಮಾರಮ್ಮನ ದೇವಸ್ಥಾನ ಜಾನಪದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿರುವ ಕೆಂಡಗಣ್ಣ ಸ್ವಾಮಿಗಳ ಗದ್ದುಗೆಯೂ ಪ್ರಮುಖವಾದುದಾಗಿದೆ. ===ಗುಂಡಾಲ್ ಜಲಾಶಯ=== ತಾಲ್ಲೂಕು ಕೇಂದ್ರದಿಂದ = ೨೭ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೬೭ ಕಿ.ಮೀ. ಕೊಳ್ಳೇಗಾಲದಿಂದ ಲೊಕ್ಕನ ಹಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಎದುರಾಗುವುದೇ ಗುಂಡಲ್ ಅರಣ್ಯ. ಇಲ್ಲಿ ಬೆಟ್ಟ ಗುಡ್ಡಗಳಿವೆ, ಅಡ್ಡಲಾಗಿ ಆಕರ್ಷಕವಾಗಿ ಜಲಾಶಯವನ್ನು ನಿರ್ಮಿಸಲಾಗಿದೆ. ಸುಂದರ ಪರಿಸರ ಬಯಸುವವರಿಗೆ ಇದು ಅಚ್ಚುಮೆಚ್ಚಿನ ತಾಣವಾಗಿದೆ. ವಾಸ್ತವ್ಯಕ್ಕೆ ಪ್ರವಾಸಿ ಬಂಗಲೆಯಿದೆ. ಈ ಜಲಾಶಯದಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ===ಚಿಕ್ಕಲ್ಲೂರು=== ತಾಲ್ಲೂಕು ಕೇಂದ್ರದಿಂದ = ೨೭ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೬೭ ಕಿ.ಮೀ. ಶ್ರೀ ಚಕ್ಕಲ್ಲೂರು ಪುಣ್ಯಕ್ಷೇತ್ರವು ಧರೆಗೆ ದೊಡ್ಡವರು ಮಂಟೇಸ್ವಾಮಿಯವರ ಶಿಷ್ಯರಾದ ಸಿದ್ದಪ್ಪಾಜಿಯವರು ಐಕ್ಯವಾದ ಸ್ಥಳವಾಗಿದೆ. ಪವಾಡ ಪುರುಷ ಶ್ರೀ ಸಿದ್ದಪ್ಪಾಜಿಯವರು ನಿಡುಗಟ್ಟ ಗ್ರಾಮದ ಮುದ್ದೋಜಿ ಲಿಂಗವಂತ ಪಂಚಾಳದವರು, ಆತನ ಕಿರಿಯ ಮಗ ಕೆಂಪಣ್ಣ ಮಂಟೇಸ್ವಾಮಿಯ ಶಿಷ್ಯರಾಗಿ ಅನೇಕ ಪವಾಡಗಳನ್ನು ಮೆರೆಸಿ, ಕೊನೆಯಲ್ಲಿ ಚಿಕ್ಕಲ್ಲೂರು ಬಂದು ಐಕ್ಯವಾಗುತ್ತಾರೆ. ಈ ಕ್ಷೇತ್ರದಲ್ಲಿ ಪ್ರತೀ ವರ್ಷ ಜನವರಿ ಮಾಸದಲ್ಲಿ ಬರುವ ಪೌರ್ಣಿಮೆ ದಿನ ಸಂಕ್ರಾಂತಿಯ ಸಮಯದಲ್ಲಿ ಚಂದ್ರಮಂಡಲ ಆರಂಭದಿಂದ ಪಂತಿ ಸೇವೆಯಲ್ಲಿ ಮುಕ್ತಾಯವಾಗುವ ೦೫ ದಿನಗಳ ಜಾತ್ರೆ ನಡೆಯುತ್ತದೆ. ಪ್ರತೀ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ಕಾವೇರಿ ನದಿಯು ಸನಿಹದಲ್ಲಿ ಹರಿಯುತ್ತದೆ. ಸಮೀಪದಲ್ಲಿಯೇ ಮುತ್ತತ್ತಿರಾಯನ ಕ್ಷೇತ್ರವಿದೆ. ===ಉಗನಿಯ=== ತಾಲ್ಲೂಕು ಕೇಂದ್ರದಿಂದ = ೧೨ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೨ ಕಿ.ಮೀ. ವಾಸವಾಡಿ ಶ್ರೀ ವೀರಭದ್ರೇಶ್ವರ ಸ್ವಾಮಿ ಸನ್ನಿಧಿ : ಕೊಳ್ಳೇಗಾಲದಿಂದ ಬೆಂಗಳೂರು ರಸ್ತೆಯಲ್ಲಿ ಕ್ರಮಿಸಿ ಧನಗೆರೆ ಊರಿನಿಂದ ಸ್ವಲ್ಪದೂರ ಮುಂದೆ ಹೋದಾಗ ಒಂದು ಕಚ್ಚಾ ರಸ್ತೆಯ ಮೂಲಕ ತಲುಪಿದಾಗ ಸಿಗುವ ಭವ್ಯ ದೇವಾಲಯ ಶ್ರೀ ವಾಸವಾಡಿ ವೀರಭದ್ರೇಶ್ವರ ಸನ್ನಿದಿ ಹಲವಾರು ಭಕ್ತರ ಸಮೂಹ ಹೊಂದಿರುವ ಅತಿ ಪುರಾತನ ದೇವಾಲಯ ಇದಾಗಿದೆ. ದೇವಾಲಯದಲ್ಲಿ ತಯಾರಿಸಿ ನೀಡುವ ಅನ್ನ ಚಟ್ನಿ ತುಂಬಾ ವಿಶೇಷವಾದ ಪ್ರಸಾದವಾಗಿದೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಅನ್ನಬ್ರಹ್ಮೋತ್ಸವವ ನಡೆಯಲಿದ್ದು ತುಂಬಾ ಸಂಖ್ಯೆಯ ಭಕ್ತಾದಿಗಳು ಸೇರಿ ರಾತ್ರಿ ಪೂರ್ತಿ ಜಾಗರಣೆ ಮಾಡುತ್ತಾರೆ. ದೇವಾಲಯದ ಪಕ್ಕದಲ್ಲಿ ಕೆರೆ ಇದ್ದು ಸುತ್ತಲಿನ ಪರಿಸರ ಸುಂದರ ಹಾಗೂ ಆಕರ್ಷಣೀಯವಾಗಿದೆ. ===ಶಿವನ ಸಮುದ್ರ=== ತಾಲ್ಲೂಕು ಕೇಂದ್ರದಿಂದ = ೧೮ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೮ ಕಿ.ಮೀ. ಕಾವೇರಿ ನದಿ ತೀರದಲ್ಲಿದೆ. ಇಲ್ಲಿನ ವೈಷ್ಣವ, ಶೈವ ಹಾಗೂ ಶಕ್ತಿ ದೇವತೆಗಳಿಗೆ ಸೋಮೇಶ್ವರ ದೇವಾಲಯ ಬಹಳ ಪ್ರಾಚೀನವಾದ ದೇವಾಲಯ. ಇದರ ಸಮೀಪ ಶಕ್ತಿ ದೇವತೆ ಶಿವನ ಸಮುದ್ರ ಮಾರಮ್ಮ ಬಹಳ ಪ್ರಸಿದ್ಧ ದೇವಾಲಯ. ಭಯ- ಭಕ್ತಿಯಿಂದ ಜನರು ಇಲ್ಲಿಗೆ ಬಂದು, ಹೊತ್ತ ಹರಕೆಯನ್ನು ತೀರಿಸುವ ವಾಡಿಕೆ ಇಂದಿಗೂ ಕಂಡು ಬರುತ್ತದೆ. ವೈಷ್ಣವ ದೇವಾಲಯವಾದ ವೆಂಕಟರಮಣ ಸ್ವಾಮಿ ದೇವಸ್ಥಾನ ಬಹಳ ವಿಶಾಲವಾದುದು. ಶಯನ ಭಂಗಿಯಲ್ಲಿರುವ ವಿಷ್ಣುವಿನ ಮೂರ್ತಿ ಇದೆ. ಇದಕ್ಕೆ ಮಧ್ಯರಂಗ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಹೊಂದಿದೆ. ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದ ಮಧ್ಯರಂಗ, ತಮಿಳುನಾಡಿನ ಶ್ರೀರಂಗಂನ ಅಂತ್ಯರಂಗವನ್ನು ಸೂರ್ಯೋದಯದಿಂದ- ಸೂರ್ಯಾಸ್ತದವರೆಗೆ ನೋಡಿದವರಿಗೆ ಪುಣ್ಯ ಬರುತ್ತದೆ ಎಂದು ಪ್ರತೀತಿ ಇದೆ. ಪ್ರತೀ ವರ್ಷ ಜಾತ್ರೆ ಸೇರು ನಡೆಯುತ್ತದೆ. ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀಚಕ್ರವಿದೆ. ===ವೆಸ್ಲಿ ಸೇತುವೆ=== ಶಿವನಸಮುದ್ರ ಪ್ರದೇಶದಲ್ಲಿ ಕಾವೇರಿನದಿಗೆ ಅಡ್ಡಲಾಗಿ ೩ ಸೇತುವೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವೆಸ್ಲೆ ಸೇತುವೆ ಹಳೆಯಕಾಲದ ಇಂಜಿನಿಯರಿಂಗ್ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ===ಬೂದಬಾಳು ಕ್ಷೇತ್ರ=== ತಾಲ್ಲೂಕು ಕೇಂದ್ರದಿಂದ = ೧೮ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೮ ಕಿ.ಮೀ. ಬೂದಬಾಳು : ಕೊಳ್ಳೇಗಾಲ ತಾಲ್ಲೂಕಿನ ಬೂದಬಾಳು ಗ್ರಾಮದಲ್ಲಿ ಗುಡಿಹಟ್ಟಿ ವೆಂಕರಮಣಸ್ವಾಮಿ ಪ್ರಸಿದ್ಧ ದೇವಾಲಯವಿದೆ. ಇದು ಈ ಭಾಗದಲ್ಲಿ ಚಿಕ್ಕ ತಿರುಪತಿ ಎಂದು ಹೆಸರಾಗಿದೆ. ವರ್ಷದಲ್ಲಿ ಒಮ್ಮೆ ಜಾತ್ರೆ ನಡೆಯುತ್ತದೆ. ಇದು ಮೂರು ದಿನಗಳ ಜಾತ್ರೆಯಾಗಿದ್ದು ಮೊದಲ ದಿನ ತೇರು, ಎರಡನೇ ದಿನ ವಧೆ ಅಥವಾ ರಾಕ್ಷಸನ ಸಂಹಾರ. ಮೂರನೇ ದಿನ ವಸಂತೋತ್ಸವ ನಡೆಯುತ್ತದೆ. ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ===ದರ್ಗಾ=== ತಾಲ್ಲೂಕು ಕೇಂದ್ರದಿಂದ = ೨೦ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೬೦ ಕಿ.ಮೀ. ಮುಸಲ್ಮಾನರ ಪವಿತ್ರ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರ. ಭೋರ್ಗರೆದು ಧುಮ್ಮಿಕ್ಕುವ ಕಾವೇರಿ ತಟದಲ್ಲಿದ್ದು, ಗಗನಚುಕ್ಕಿ ಜಲಪಾತವನ್ನು ಉಂಟು ಮಾಡುವ ಸ್ಥಳವಾಗಿದೆ. ಈ ಜಲಾಶಯ ಉಕ್ಕಿ ಹರಿಯುವ ನೀರಿನಿಂದ ರಮ್ಯ ಮನೋಹರವಾಗಿದೆ. ಈ ತಟದಿಂದ ನಿಂತು ನೋಡಿದರೆ ವಿಶ್ವವಿಖ್ಯಾತ ಏಷ್ಯಾ ಖಂಡದ ಪ್ರಪ್ರಥಮ ಜಲ ವಿದ್ಯುತ್ ಸ್ಥಾವರವಾದ ಬ್ಲಫ್‌ನ ಸುಂದರ ನೋಟ ಕಾಣಿಸುತ್ತದೆ. ಈ ದರ್ಗ ಹಿಂದು-ಮುಸಲ್ಮಾನರ ಐಕ್ಯದ ಸಂಕೇತವನ್ನು ಸೂಚಿಸುವ ಸ್ಥಳವಾಗಿದೆ. ===ಭರಚುಕ್ಕಿ=== ಇಲ್ಲಿಂದ ಸ್ವಲ್ಪ ದೂರ ಮುಂದೆ ಹೋದಾಗ ಜಗತ್ತಿನಲ್ಲಿಯೇ ಅಪರೂಪದ ಭೂಸೃಷ್ಟಿಯ ಅಚ್ಚರಿ ಕಾವೇರಿಯ ಆರ್ಭಟ ಭರಚುಕ್ಕಿ ಜಲಪಾತವಿದೆ. ಇಲ್ಲಿ ಸುಮಾರು ೧ ಕಿ.ಮೀ. ಅಗಲವಾಗಿ ಮೈದೆಳೆದಿರುವ ಕಾವೇರಿ ಸುಮಾರು ೭೫ ರಿಂದ ೧೦೦ ಅಡಿಯವರೆಗೆ ಭೂಮಿಯಿಂದ ಭೂಮಿಗೆ ಧುಮ್ಮಿಕ್ಕುವಳು. ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತ ವಿಶ್ವದ ಜಲಪಾತಗಳಲ್ಲಿ ೮೩ನೇ ಸ್ಥಾನವನ್ನು ಪಡೆದಿದೆ. ===ಯಡಕುರಿ=== ತಾಲ್ಲೂಕು ಕೇಂದ್ರದಿಂದ = ೧೪ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೪ ಕಿ.ಮೀ. ಚಾಮರಾಜನಗರ ಜಿಲ್ಲೆಯ ಏಕೈಕ ದ್ವೀಪ ಸ್ಥಳ. ಕಾವೇರಿ ನದಿಯು ತಲ ಕಾವೇರಿಯಲ್ಲಿ ಉಗಮವಾಗಿ ತಾನು ಹರಿಯುವ ಉದ್ದಕ್ಕೂ ವೈಚಿತ್ರಗಳನ್ನು ಸೃಷ್ಟಿಮಾಡುತ್ತದೆ. ಇಂತಹ ವೈಚಿತ್ರ್ಯಗಳಲ್ಲಿ ಯಡಕುರಿಯ ಕೂಡ ಒಂದು. ಇಲ್ಲಿ ಕಾವೇರಿ ನದಿ ಕವಲೊಡೆದು ಎರಡು ಭಾಗಗಳಾಗಿ ಮುಂದೆ ಮತ್ತೆ ಒಂದಾಗಿ ಸೇರುತ್ತದೆ. ಈ ಒಂದಾಗಿ ಸೇರುವ ಸ್ಥಳಕ್ಕೆ ಕೂಡುಮೂಲೆ ಎಂದು ಅಲ್ಲಿನ ಜನರು ಕರೆಯುತ್ತಾರೆ. ಯಡಕುರಿಯ ಸುತ್ತಲೂ ನೀರಿನಿಂದ ಸುತ್ತುವರಿದ ದ್ವೀಪ ಊರು. ಊರಿಗೆ ಹೋಗಲು ಹರಿಗೋಲೆ ಬೇಕು. ಅಂಬಿಗಣ್ಣನ ಅಪ್ಪಣೆ ಇಲ್ಲದೆ ಊರಿಗೆ ಪ್ರವೇಶವಿಲ್ಲ. ಇಲ್ಲಿಗೆ ವಿಶೇಷವಾಗಿ ಪಕ್ಷಿಗಳು ವಲಸೆ ಬರುವುದನ್ನು ಕಾಣಬಹುದು. ==ಚಾಮರಾಜನಗರದ ತಾಲೂಕುಗಳು== ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು ಐದು ತಾಲೂಕುಗಳಿವೆ. ಅವುಗಳೆಂದರೆ: # ಚಾಮರಾಜನಗರ # [[ಯಳಂದೂರು]] # [[ಕೊಳ್ಳೇಗಾಲ]] # [[ಗುಂಡ್ಲುಪೇಟೆ]] # [[ಹನೂರು]] === ಚಾರಣ === [[ಬಂಡೀಪುರ ]], [[ಬಿಳಿಗಿರಿ ರಂಗನ ಬೆಟ್ಟ ]], [[ಮಲೆ ಮಹದೇಶ್ವರ ಬೆಟ್ಟ ]], [[ಹಿಮವದ್ ಗೋಪಾಲಸ್ವಾಮಿ ಬೆಟ್ಟ]] ಇವುಗಳು ಚಾಮರಾಜನಗರದಲ್ಲಿರುವ ಪ್ರಸಿದ್ದ ಚಾರಣ ಸ್ಥಳವಾಗಿವೆ. ==ಇದನ್ನೂ ನೋಡಿ== *[[ಚಾಮರಾಜನಗರ (ಲೋಕ ಸಭೆ ಚುನಾವಣಾ ಕ್ಷೇತ್ರ)]] == ಉಲ್ಲೇಖಗಳು == {{Reflist}} <ref>http://chamrajnagar.nic.in/</ref> <ref>https://www.tripadvisor.in/Attractions-g12392996-Activities-Chamarajanagar_District_Karnataka.html</ref> <ref>https://m.timesofindia.com/topic/Chamarajanagar-district</ref> ==ಬಾಹ್ಯ ಸಂಪರ್ಕಗಳು== {{commons category|Chamarajanagar district}} * [http://www.mysterytrails.com/ Mystery Trails - Eco-tourism in Chamarajanagar] {{Webarchive|url=https://web.archive.org/web/20121123043055/http://www.mysterytrails.com/ |date=2012-11-23 }} * [http://www.onefivenine.com/india/villag/Chamarajanagar] List of cities and Tourism places in Chamarajanagar * [http://mapsofindia.com/maps/karnataka/districts/chamrajanagar.htm Maps Of India - Map of Chamarajanagar district] {{ಕರ್ನಾಟಕದ ಜಿಲ್ಲೆಗಳು}} {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} {{Interwikineeded}} [[ವರ್ಗ:ಚಾಮರಾಜನಗರ ಜಿಲ್ಲೆ]] [[ವರ್ಗ:ಕರ್ನಾಟಕದ ಜಿಲ್ಲೆಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} sv0qhm63onn1pov4tp9kpha3564lp18 ಹೆಚ್.ಡಿ.ದೇವೇಗೌಡ 0 1154 1376950 1376940 2026-07-19T15:56:17Z A826 72368 1376950 wikitext text/x-wiki {{Infobox officeholder | name = ಹೆಚ್. ಡಿ. ದೇವೇಗೌಡ | image = H. D. Deve Gowda BNC.jpg | image_size = | caption = | office = [[ಭಾರತ]]ದ ೧೧ನೇ [[ಪ್ರಧಾನ ಮಂತ್ರಿ|ಪ್ರಧಾನಮಂತ್ರಿ]]<ref>{{cite web |last1=Depar of Justice |last2=Ministry of Law & Justice |last3=Government of India |title=H. D. Deve Gowda |url=https://doj.gov.in/about-us/minister/former-minister/h-d-deve-gowda |website=doj.gov.in |access-date=13 December 2021 |quote=[H. D.] Deve Gowda [...] served as the 11th Prime Minister of India from June 1996 to April 1997.}}</ref> | president = [[ಶಂಕರ್ ದಯಾಳ್ ಶರ್ಮಾ]] | term_start = ೧ ಜೂನ್ ೧೯೯೬ | term_end = ೨೧ ಎಪ್ರಿಲ್ ೧೯೯೭ | predecessor = [[ಅಟಲ್ ಬಿಹಾರಿ ವಾಜಪೇಯಿ]] | successor = [[ಇಂದ್ರಕುಮಾರ್ ಗುಜ್ರಾಲ್]] | office3 = ಗೃಹ ಮಂತ್ರಿ | term_start3 = ೧ ಜೂನ್ ೧೯೯೬ | term_end3 = ೨೮ ಜೂನ್ ೧೯೯೬ | primeminister3 = | predecessor3 = ಮುರಳಿ ಮನೋಹರ ಜೋಶಿ | successor3 = [[ಇಂದ್ರಜಿತ್ ಗುಪ್ತಾ]] | office4 = [[ಕರ್ನಾಟಕ]] ರಾಜ್ಯದ ೮ನೇ ಮುಖ್ಯಮಂತ್ರಿ | governor4 = [[ಖುರ್ಷೆದ್ ಅಲಂ ಖಾನ್|ಖುರ್ಷಿದ್ ಅಲಮ್ ಖಾನ್]] | term_start4 = ೧೧ ಡಿಸೆಂಬರ್ ೧೯೯೪ | term_end4 = ೩೧ ಮೇ ೧೯೯೬ | predecessor4 = [[ವೀರಪ್ಪ ಮೊಯ್ಲಿ]] | successor4 = [[ಜೆ ಹೆಚ್ ಪಟೇಲ್|ಜೆ. ಹೆಚ್. ಪಟೇಲ್]] | office1 = ರಾಜ್ಯಸಭಾ ಸದಸ್ಯ | constituency1 = ಕರ್ನಾಟಕ | term_start1 = ೨೬ ಜೂನ್ ೨೦೨೦ | term_end1 = | predecessor1 = [[ಡಿ. ಕುಪ್ಪೇಂದ್ರ ರೆಡ್ಡಿ]] | successor1 = | constituency2 = ಕರ್ನಾಟಕ | term_start2 = ೨೩ ಸೆಪ್ಟೆಂಬರ್ ೧೯೯೬ | term_end2 = ೨ ಮಾರ್ಚ್ ೧೯೯೮ | predecessor2 = ಲೀಲಾದೇವಿ ಆರ್. ಪ್ರಸಾದ್ | successor2 = ಎ. ಲಕ್ಷ್ಮೀಸಾಗರ್ | office5 = [[ಜನತಾ ದಳ (ಜಾತ್ಯಾತೀತ)]] ಪಕ್ಷದ ಅಧ್ಯಕ್ಷ | term_start5 = ಜುಲೈ ೧೯೯೯ | term_end5 = | predecessor5 = ಪ್ರಥಮ ಅಧ್ಯಕ್ಷ | successor5 = | office6 = ಲೋಕಸಭಾ ಸದಸ್ಯ | constituency6 = [[ಹಾಸನ (ಲೋಕ ಸಭೆ ಚುನಾವಣಾ ಕ್ಷೇತ್ರ)|ಹಾಸನ]] | term_start6 = ೧೭ ಮೇ ೨೦೦೪ | term_end6 = ೨೩ ಮೇ ೨೦೧೯ | predecessor6 = ಜಿ. ಪುಟ್ಟಸ್ವಾಮಿ ಗೌಡ | successor6 = [[ಪ್ರಜ್ವಲ್ ರೇವಣ್ಣ]] | constituency7 = ಕನಕಪುರ | term_start7 = ೨ ಫೆಬ್ರವರಿ ೨೦೦೨ | term_end7 = ೧೬ ಮೇ ೨೦೦೪ | predecessor7 = ಎಮ್. ವಿ. ಚಂದ್ರಶೇಖರಮೂರ್ತಿ | successor7 = ತೇಜಸ್ವಿನಿ ಶ್ರೀರಮೇಶ್ | constituency8 = ಹಾಸನ | term_start8 = ೧೦ ಮಾರ್ಚ್ ೧೯೯೮ | term_end8 = ೨೬ ಎಪ್ರಿಲ್ ೧೯೯೯ | predecessor8 = ರುದ್ರೇಶ್ ಗೌಡ | successor8 = ಜಿ. ಪುಟ್ಟಸ್ವಾಮಿಗೌಡ | constituency9 = ಹಾಸನ | term_start9 = ೨೦ ಜೂನ್ ೧೯೯೧ | term_end9 = ೧೧ ಡಿಸೆಂಬರ್ ೧೯೯೪ | predecessor9 = ಹೆಚ್. ಸಿ. ಶ್ರಿಕಂಠಯ್ಯ | successor9 = ರುದ್ರೇಶ್ ಗೌಡ | office10 = [[ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳು|ಕರ್ನಾಟಕ ವಿಧಾನಸಭಾ]] ಸದಸ್ಯ | constituency10 = [[ರಾಮನಗರ]] | term_start10 = ೧೯೯೪ | term_end10 = ೧೯೯೬ | predecessor10 = ಸಿ. ಎಮ್. ಲಿಂಗಪ್ಪ | successor10 = ಸಿ. ಎಮ್. ಲಿಂಗಪ್ಪ | constituency11 = ಹೊಳೆನರಸೀಪುರ | term_start11 = ೧೯೬೨ | term_end11 = ೧೯೮೯ | predecessor11 = ವೈ. ವೀರಪ್ಪ | successor11 = ಜಿ. ಪುಟ್ಟಸ್ವಾಮಿಗೌಡ | birth_date = {{birth date and age|1933|05|18}} | birth_place = ಆಗಿನ ಬ್ರಿಟೀಷ್ ಆಡಳಿತದ [[ಹರದನಹಳ್ಳಿ]], [[ಮೈಸೂರು ರಾಜ್ಯ]], <br /> {{small|(ಈಗಿನ [[ಕರ್ನಾಟಕ]] ರಾಜ್ಯ, [[ಭಾರತ]])}} | party = [[ಜಾತ್ಯಾತೀತ ಜನತಾದಳ]]<br />{{small|(೧೯೯೯ರಿಂದ)}} | otherparty = *[[ಜನತಾದಳ]] <small>(೧೯೯೦–೧೯೯೯)</small> *[[ಜನತಾ ಪಕ್ಷ]] <small>(೧೯೭೭–೧೯೯೦)</small> *[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಒ)]] <small>(೧೯೭೨–೧೯೭೬)</small> *ಯುಒಪಿ <small>(೧೯೭೬–೧೯೭೭)</small><ref>{{Cite web|title=Leaders of the Opposition of Karnataka Legislative Assembly since 1962|url=http://kla.kar.nic.in/assembly/review/previousleaderofopposition.htm|access-date=2021-08-09|website=kla.kar.nic.in}}</ref> *[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] <small>(೧೯೫೩–೧೯೬೨)</small> | spouse = {{Marriage|ಚೆನ್ನಮ್ಮ|25 May 1954|18 July 2026|end=died}} | children = ಮಕ್ಕಳು ೬ | profession = ರಾಜಕಾರಿಣಿ, ಕೃಷಿಕ, ಅಭಿಯಂತರ | website = {{URL|http://hddevegowda.in}} | signature = DeveGowda autograph.jpg | education = ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ | nationality = ಭಾರತೀಯ | alma_mater = ಎಲ್. ವಿ. ಪಾಲಿಟೆಕ್ನಿಕ್ | nickname = ಮಣ್ಣಿನ ಮಗ <br /> ದೊಡ್ ಗೌಡ್ರು }} '''ಎಚ್.ಡಿ. ದೇವೇಗೌಡ''' (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು [[ಭಾರತ|ಭಾರತದ]] ೧೨ ನೆಯ ಪ್ರಧಾನ ಮಂತ್ರಿಗಳು ಮತ್ತು [[ಕರ್ನಾಟಕ]] ರಾಜ್ಯದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿ|ಮುಖ್ಯಮಂತ್ರಿಗಳು]].<ref name="pmindia1">{{cite web|url=http://www.pmindia.gov.in/en/former_pm/shri-h-d-deve-gowda/|title=Shri H. D. Deve Gowda|publisher=pmindia.gov.in}}</ref><ref name="www.britannica.com">{{cite web|url=http://www.britannica.com/EBchecked/topic/938170/HD-Deve-Gowda |title=Britannica article}}</ref><ref name="janata.in">{{cite web|title=JDS Leader: H. D. Deve Gowda Profile|url=http://www.janata.in/index.php?option=com_content&view=article&id=55&Itemid=62|publisher=janata.in|archiveurl=https://web.archive.org/web/20100925020517/http://www.janata.in/index.php?option=com_content&view=article&id=55&Itemid=62}}</ref> 'ಮಣ್ಣಿನ ಮಗ' ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು. ==ಜೀವನ== ದೇವೇಗೌಡರು [[ಮೇ ೧೮]], [[೧೯೩೩]] ರಂದು [[ಹಾಸನ]] ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪಡೆದ ಬಳಿಕ, ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾದರು. ಅವರಿಗೆ [[ಎಚ್. ಡಿ. ಕುಮಾರಸ್ವಾಮಿ|ಎಚ್.ಡಿ. ಕುಮಾರಸ್ವಾಮಿ]] ಹಾಗೂ ಎಚ್.ಡಿ. ರೇವಣ್ಣ ಸೇರಿದಂತೆ ನಾಲ್ಕು ಜನ ಗಂಡು ಮಕ್ಕಳೂ, ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ.<ref>{{cite web|url=http://www.asiaweek.com/asiaweek/96/0607/nat4.html|title=Asiaweek article}}</ref><ref>{{cite web|url=http://www.newindianexpress.com/states/karnataka/At-81-Gowda-Lives-on-Ragi-Mudde-on-the-Campaign-Trail/2014/03/28/article2135490.ece#.UzU21qiSySo|title=New Indian Express article|access-date=2017-06-11|archive-date=2014-03-29|archive-url=https://web.archive.org/web/20140329014142/http://www.newindianexpress.com/states/karnataka/At-81-Gowda-Lives-on-Ragi-Mudde-on-the-Campaign-Trail/2014/03/28/article2135490.ece#.UzU21qiSySo|url-status=dead}}</ref><ref>{{cite web|title=Deve Gowda goes down memory lane|url=http://www.thehindu.com/todays-paper/tp-national/tp-karnataka/Deve-Gowda-goes-down-memory-lane/article16652770.ece|work=The Hindu}}</ref> [[ಎಚ್. ಡಿ. ಕುಮಾರಸ್ವಾಮಿ|ಎಚ್.ಡಿ. ಕುಮಾರಸ್ವಾಮಿ]] ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಎಚ್.ಡಿ. ರೇವಣ್ಣ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ದೇವೇಗೌಡರ ಅಳಿಯ. ಅವರ ಪತ್ನಿ ಚೆನ್ನಮ್ಮನವರು ೧೮ ಜುಲೈ ೨೦೨೬ ರಂದು ಉಸಿರಾಟದ ತೊಂದರೆ ಹಾಗೂ ಹೃದಯಾಘಾತದಿಂದ ನಿಧನರಾದರು<ref>{{Cite web |first= |title=ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ |url=https://www.prajavani.net/news/karnataka-news/chennamma-devegowda-wife-of-former-pm-passes-away-4132539 |access-date=2026-07-18 |website=Prajavani |language=kn}}</ref>. ==ಸಾರ್ವಜನಿಕ ಜೀವನ== [[೧೯೫೩]]ರಲ್ಲಿ [[ಕಾಂಗ್ರೆಸ್ ಪಕ್ಷ|ಕಾಂಗ್ರೆಸ್ ಪಕ್ಷದ]] ಸದಸ್ಯರಾದರು. [[೧೯೬೨]] ರವರೆಗೆ [[ಕಾಂಗ್ರೆಸ್]] ಪಕ್ಷದಲ್ಲಿದ್ದು ನಂತರ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು [[ವಿಧಾನ ಸಭೆ|ವಿಧಾನ ಸಭೆಗೆ]] ಚುನಾಯಿತರಾದರು.<ref>{{cite web|last1=Maitra|first1=Susan|last2=Maitra|first2=Ramtanu|title=The 'leftist' United Front takes the helm|url=http://www.larouchepub.com/eiw/public/1996/eirv23n26-19960621/eirv23n26-19960621.pdf|website=[[Executive Intelligence Review]]|publisher=larouchepub.com|page=45}}</ref> ಮುಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. [[೧೯೭೨]] ರಿಂದ [[೧೯೭೬]] ರವರೆಗೆ ಮತ್ತು [[ನವೆಂಬರ್]] [[೧೯೭೬]] ರಿಂದ [[೧೯೭೭]] ರ ವರೆಗೆ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. [[೧೯೭೫]]-[[೧೯೭೬|೭೬]]ರ [[ತುರ್ತು ಪರಿಸ್ಥಿತಿ|ತುರ್ತು ಪರಿಸ್ಥಿತಿಯಲ್ಲಿ]] ಬಂಧನಕ್ಕೊಳಗಾಗಿದ್ದ ದೇವೇಗೌಡರು ನಂತರ [[ಕರ್ನಾಟಕ]] ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾದರು. [[೧೯೮೭]]ರಲ್ಲಿ ನೀರಾವರಿ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. [[೧೯೯೧]]ರಲ್ಲಿ [[ಹಾಸನ]] ಲೋಕಸಭಾ ಕ್ಷೇತ್ರದಿಂದ [[ಲೋಕಸಭೆ|ಲೋಕಸಭೆಗೆ]] ಚುನಾಯಿತರಾದರು. ==ಮುಖ್ಯಮಂತ್ರಿ== ಇದರ ನಂತರ [[ಜನತಾ ದಳ|ಜನತಾ ದಳಕ್ಕೆ]] ರಾಜ್ಯಾಧ್ಯಕ್ಷರಾದ ದೇವೇಗೌಡರು [[೧೯೯೪]] ರಲ್ಲಿ [[ಕರ್ನಾಟಕ]] ರಾಜ್ಯದ ೧೪ ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.<ref>{{cite web |url=http://www.janatadalsecular.org.in/ourleaders_devegowda.htm |title=Janata Dal (Secular) |publisher=Janatadalsecular.org.in |access-date=2017-06-11 |archive-date=2012-08-04 |archive-url=https://archive.is/20120804132733/http://www.janatadalsecular.org.in/ourleaders_devegowda.htm |url-status=deviated |archivedate=2012-08-04 |archiveurl=https://archive.is/20120804132733/http://www.janatadalsecular.org.in/ourleaders_devegowda.htm }}</ref><ref>{{cite web |url=http://www.janata.in/index.php?option=com_content&view=article&id=53:janata-dal-secular&catid=36:jds&Itemid=60 |title=Janata Dal Secular |publisher=Janata.in |access-date=2017-06-11 |archive-date=2011-10-07 |archive-url=https://web.archive.org/web/20111007035451/http://www.janata.in/index.php?option=com_content&view=article&id=53:janata-dal-secular&catid=36:jds&Itemid=60 |url-status=dead }}</ref><ref>{{cite web |url=http://www.janatadalsecular.org.in/history.htm |title=Janata Dal (Secular) |publisher=Janatadalsecular.org.in |access-date=2017-06-11 |archive-date=2012-08-04 |archive-url=https://archive.is/20120804112104/http://www.janatadalsecular.org.in/history.htm |url-status=deviated |archivedate=2012-08-04 |archiveurl=https://archive.is/20120804112104/http://www.janatadalsecular.org.in/history.htm }}</ref> ==ಪ್ರಧಾನಮಂತ್ರಿ== [[೧೯೯೬]] ರಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ ಯುನೈಟೆಡ್ ಫ್ರಂಟ್ (ಕಾಂಗ್ರೆಸ್ ಹೊರತು ಮತ್ತು ಬಿಜೆಪಿ ಹೊರತುಪಡಿಸಿದ ಪ್ರಾದೇಶಿಕ ಪಕ್ಷಗಳ ಒಂದು ಸಂಘ) ಕಾಂಗ್ರೆಸ್ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ನಿರ್ಧರಿಸಿದರು. ಅನಿರೀಕ್ಷಿತವಾಗಿ, ದೇವೇಗೌಡರು ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾದರು ಮತ್ತು ಭಾರತದ 11 ನೇ ಪ್ರಧಾನಿಯಾದರು. ಅವರು 1 ಜೂನ್ 1996 ರಂದು ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಮತ್ತು 1997 ರ ಏಪ್ರಿಲ್ 21 ರವರೆಗೆ ಅಧಿಕಾರದಲ್ಲಿ ಮುಂದುವರೆದರು. ಅಲ್ಲದೆ, ಅವರು ಯುನೈಟೆಡ್ ಫ್ರಂಟ್‌ನ ಸ್ಟೀರಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದರು.<ref>{{Cite web |last=Ram |title=JDS LEADERS |url=http://www.janata.in/index.php?option=com_content&view=article&id=55&Itemid=62 |archive-url=https://web.archive.org/web/20100925020517/http://www.janata.in/index.php?option=com_content&view=article&id=55&Itemid=62 |archive-date=2010-09-25 |access-date=2026-03-08 |website=www.janata.in |language=en-gb}}</ref> ದೆಹಲಿ ಮೆಟ್ರೋ ಯೋಜನೆಯ ಕೀರ್ತಿ ಅವರು ಸಲ್ಲುತ್ತದೆ.<ref>{{Cite news |last=Sugata Srinivasaraju |title=The derailment of E Sreedharan |url=https://timesofindia.indiatimes.com/india/the-derailment-of-e-sreedharan/articleshow/81295358.cms |access-date=2026-03-08 |work=The Times of India |issn=0971-8257 |language=en-IN}}</ref> ನಂತರದ ವರ್ಷಗಳಲ್ಲಿ ಜಾತ್ಯತೀತ ಜನತಾ ದಳದ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ==ಉಲ್ಲೇಖಗಳು == {{commonscat|H. D. Deve Gowda}} {{reflist}} {{Clear}} {{ಭಾರತದ ಪ್ರಧಾನಮಂತ್ರಿಗಳು}} {{ಕರ್ನಾಟಕದ ಮುಖ್ಯಮಂತ್ರಿಗಳು}} <br> <br> {{Interwikineeded}} [[ವರ್ಗ:ಕರ್ನಾಟಕದ ರಾಜಕೀಯ]] [[ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು]] [[ವರ್ಗ:ಭಾರತದ ಪ್ರಧಾನ ಮಂತ್ರಿಗಳು]] [[ವರ್ಗ:೧೯೩೩ ಜನನ]] [[ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು]] [[ವರ್ಗ:ಕರ್ನಾಟಕದ ಲೋಕ ಸಭೆ ಸದಸ್ಯರು]] [[ವರ್ಗ:ಕರ್ನಾಟಕ ರಾಜಕಾರಣಿಗಳು]] ps4bfhau7y6pum2exns1of73ejkllyh ಧೂಮಕೇತು 0 2741 1376954 1351140 2026-07-19T22:17:04Z Redaktor GLAM 90508 Higher resolution version of image 1376954 wikitext text/x-wiki {{ದ್ವಂದ್ವ|'ಧೂಮಕೇತು' - [[ಕನ್ನಡ]] ಚಲನಚಿತ್ರದ ಬಗ್ಗೆ ಮಾಹಿತಿಗೆ [[ಧೂಮಕೇತು (ಚಲನಚಿತ್ರ)|ಈ ಲೇಖನವನ್ನು]] ನೋಡಿ.}} [[ಚಿತ್ರ:Comet tails.gif|thumb|right|250px|ಧೂಮಕೇತು -ಪರಿಭ್ರಮಣ]] [[ಚಿತ್ರ:Hb apr 97.jpg|thumb|250px|[[:en:Comet Hale–Bopp|ಹೇಲಿ-ಬೊಪ್ ಧೂಮಕೇತು]], ಎಪ್ರಿಲ್ ೧೯೯೭]] '''ಧೂಮಕೇತು''' - [[ಸೂರ್ಯ]] ನನ್ನು ಪರಿಭ್ರಮಿಸಿ, ಕಡೇ ಪಕ್ಷ ಒಮ್ಮೊಮ್ಮೆ ಒಂದು ವಾಯುಮಂಡಲ ಮತ್ತು ಒಂದು ಬಾಲವನ್ನು ಹೊಂದಿರುವ ಸಣ್ಣ ಕಾಯ. ಧೂಮಕೇತುವನ್ನು ಆಂಗ್ಲಭಾಷೆಯಲ್ಲಿ '''comet''' ಎನ್ನುತಾರೆ. ಧೂಮಕೇತು ಎನ್ನುವ ಪದ ಸಂಸ್ಕೃತದ್ದು. ಧೂಮಕೇತು ಸೂರ್ಯನ ಸುತ್ತ ಪರಿಭ್ರಮಿಸುವಾಗ, ದೂರದಲ್ಲಿ ಇದ್ದ ಸಮಯದಲ್ಲಿ ಅತಿಶೀತಲ ವಾಗಿ, ಇದರಲ್ಲಿ ಇರುವ ಪದಾರ್ಥಗಳು, ಆವಿ(gas)ಗಳು ಘನೀಭವಿಸಿ, ಘನಸ್ಥಿತಿಯಲ್ಲಿರುತ್ತವೆ. ಹತ್ತಿರದಲ್ಲಿ ಪರಿಭ್ರಮಿಸುವ ಸಮಯದಲ್ಲಿ, ಸೂರ್ಯನ ಬೇಗೆಯಿಂದ ಕರಗಿ ಹೋಗುತ್ತವೆ. ಒಂದು ಭಾಗದಲ್ಲಿ ತಲೆ, ಕೊನೆಯ ಭಾಗದಲ್ಲಿ ಬಾಲ(Tail)ವನ್ನು ಹೊಂದಿರುತ್ತದೆ. ಧೂಮಕೇತು ತಲೆಭಾಗದಲ್ಲಿ ಮಿಥೇನ್, ಅಮ್ಮೋನಿಯಾ ಆವಿಗಳು ಮತ್ತು ನೀರು ಘನಸ್ಥಿತಿಯಲ್ಲಿ ಇರುತ್ತವೆ. ಇನ್ನು ಗಡ್ಡೆಯಲ್ಲಿ ಕಬ್ಬಿಣ, ನಿಕೆಲ್ ಕ್ಯಾ ಲ್ಷಿಯಂ, ಮೆಗ್ನೀಷಿಯಂ, ಸಿಲಿಕಾನ್, ಸೋಡಿಯಂ ಮುಂತಾದ ಧಾತು (elements)ಗಳು ಇರುತ್ತವೆ.<ref>Randall, Lisa (2015). Dark Matter and the Dinosaurs: The Astounding Interconnectedness of the Universe. New York: Ecco/HarperCollins Publishers. pp. 104–105. ISBN 978-0-06-232847-2.</ref> == ಹ್ಯಾಲಿ ಧೂಮಕೇತು == *ಒಬ್ಬ ವ್ಯಕ್ತಿ ಜೀವಿತಾವಧಿಯಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾತ್ರ ನೋಡಬಹುದಾದುದೆಂದರೆ ಹ್ಯಾಲಿ ಧೂಮಕೇತು. ಕ್ರಿಸ್ತಪೂರ್ವ ೨೩೯, ಕ್ರಿ.ಪೂ ೧೬೪, ಕ್ರಿ.ಪೂ ೮೭ ನಂತರ ಕ್ರಿಸ್ತಶಕ ೧೫೩೧, ಕ್ರಿ.ಶ ೧೬೦೭, ಕ್ರಿಶ ೧೬೮೨, ಕ್ರಿಶ ೧೭೫೮ ಹೀಗೆ ೭೫-೭೬ ವರ್ಷಗಳ ಅಂತರದಲ್ಲಿ ಇದನ್ನು ಕಂಡ ಚೀನೀಯರು ಮತ್ತು ಬ್ಯಾಬಿಲೋನಿಯನ್ನರು ದಾಖಲಿಸಿದ್ದಾರೆ. *ಈ ನಿರ್ದಿಷ್ಟ ಅವಧಿಯ ಧೂಮಕೇತು ಆಗಮನ ಲೆಕ್ಕ ಹಾಕಿದ ಇಂಗ್ಲೆಂಡಿನ ಖಗೋಳ ವಿಜ್ಞಾನಿ ಎಡ್ಮಂಡ್ ಹ್ಯಾಲಿ ಮುಂದಿನ ಅದರ ಭೇಟಿ ಬಗ್ಗೆ ಮುಂಚಿತವಾಗಿಯೇ ತಿಳಿಸಿದ್ದ. ೧೭೪೨ರಲ್ಲಿ ನಿಧನನಾದ ಎಡ್ಮಂಡ್ ಹ್ಯಾಲಿ ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ಆ ಧೂಮಕೇತುವನ್ನು ನೋಡಲೇ ಇಲ್ಲ. ೧೭೫೮ರಲ್ಲಿ ಪುನಃ ಕಾಣಿಸಿದ ಧೂಮಕೇತು ಹ್ಯಾಲಿ ಎಂದು ನಾಮಕರಣ ಗೊಂಡು ಜಗದ್ವಿಖ್ಯಾತವಾಯಿತು. *ಎಡ್ಮಂಡ್ ಹ್ಯಾಲಿ ಧೂಮಕೇತುವಿನ ನಿರ್ದಿಷ್ಟ ಅವಧಿಯ ಲೆಕ್ಕಾಚಾರವನ್ನು ಸಾಬೀತುಪಡಿಸುವುದಕ್ಕೆ ೧೦೫ ವರ್ಷಗಳ ಮುಂಚೆ ಷೇಕ್ಸ್‌ಪಿಯರ್ ‘ಜ್ಯೂಲಿಯಸ್ ಸೀಸರ್’ ನಾಟಕದಲ್ಲಿ ಅದರ ಉಲ್ಲೇಖ ಮಾಡಿದ್ದಾನೆ. ೧೩೦೧ರಲ್ಲಿ ಇಟಲಿ ಚಿತ್ರಕಾರ ಗಿಯೆಟ್ಟೋನ ‘ಸ್ಟಾರ್ ಆಫ್ ಬೆತ್ಲೇಹೇಮ್’ ಕೃತಿಗೆ ಪ್ರೇರಣೆ ಈ ಧೂಮಕೇತು ಎಂದು ಬ್ರಿಟಾನಿಕಾ ವಿಶ್ವಕೋಶ ದಾಖಲಿಸಿದೆ. *ಷೇಕ್ಸ್‌ಪಿಯರ್‌ ಕೃತಿಯಲ್ಲಿ ಧೂಮಕೇತುವಿನ ಪ್ರಸ್ತಾಪವಾದ ನಂತರ ಖಗೋಳ ವಿದ್ಯಮಾನದ ಅಧ್ಯಯನ ಬಹು ವೇಗದಿಂದ ಬೆಳೆಯಿತು. ೧೯೧೦ ಮತ್ತು ೧೯೮೬ರಲ್ಲಿ ಧೂಮಕೇತು ಹ್ಯಾಲಿ ಹಲವು ಅಧ್ಯಯನಗಳಿಗೆ ತೆರೆದುಕೊಂಡಿತು. ೧೯೮೬ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯಿಂದ ಧೂಮಕೇತುವಿನ ಸಮೀಪ ದರ್ಶನವಾಯಿತು. ೩೯0 ಲಕ್ಷ ಮೈಲಿಗಳಷ್ಟು ಹತ್ತಿರ ಬಂದಿದ್ದ ಹ್ಯಾಲಿ ಧೂಮಕೇತುವಿನ ಬಳಿಗೆ ವೇಗಾ೧ ಮತ್ತು ವೇಗಾ೨ ಹೆಸರಿನ ವಿಶೇಷ ನೌಕೆಗಳನ್ನು ಅಂದಿನ ಸೋವಿಯೆಟ್ ಯೂನಿಯನ್, ಮತ್ತು ಫ್ರಾನ್ಸ್ ಜಂಟಿಯಾಗಿ ಕಳುಹಿಸಿದ್ದವು. ಧೂಮಕೇತುವಿನ ಹೃದಯ ಭಾಗವೆಂದೇ ಹೆಸರಾದ ನ್ಯೂಕ್ಲಿಯಸ್‌ನ ಸ್ಪಷ್ಟ ಚಿತ್ರ ಆಗ ಮೊದಲ ಬಾರಿಗೆ ದೊರಕಿತ್ತು. *ಯೂರೋಪಿಯನ್ ಏಜೆನ್ಸಿ ಗಿಯೆಟ್ಟೋ ಸಹ ನ್ಯೂಕ್ಲಿಯಸ್‌ ಸನಿಹಕ್ಕೆ ತೆರಳಿತ್ತು. ಅಲ್ಲಿಂದ ಭೂಮಿಯೆಡೆಗೆ ತಿರುಗಿ ಅದ್ಭುತ ವಾದ ಭೂಮಿಯ ಚಿತ್ರವನ್ನು ಕಳುಹಿಸಿತು. ಜಪಾನ್ ಬಾಹ್ಯಾಕಾಶ ಯೋಜನೆಯಲ್ಲಿ ‘ಸಾಕಿ ಗಾಕಿ’ ಮತ್ತು ಸ್ಯುಸೈ ಎಂಬ ನೌಕೆಗಳಿಂದ ಕುತೂಹಲಕಾರಿ ಮಾಹಿತಿಯನ್ನು ಕಲೆ ಹಾಕಿತು. *ಹ್ಯಾಲಿ ಬರುತ್ತಿರುವಾಗಲೇ ಬಹಳ ಉತ್ಸುಕವಾಗಿದ್ದ ಅಮೆರಿಕದ ನಾಸಾ ಸಂಸ್ಥೆ, ಖಗೋಳ ವಿಜ್ಞಾನಿಗಳನ್ನು ಹೊತ್ತ ಎಸ್‌ಟಿಎಸ್‌೫೧ಎಲ್‌ ಛಾಲೆಂಜರ್ ಬಾಹ್ಯಾಕಾಶ ನೌಕೆ ಹ್ಯಾಲಿ ಧೂಮಕೇತುವಿನ ಕಕ್ಷೆಯತ್ತ ಧಾವಿಸುವ ಯೋಜನೆ ಹಾಕಿ ಕೊಂಡಿತ್ತು. ೧೯೮೬ರ ಜ. ೨೮ರಂದು ಉಡ್ಡಯನವಾದ ಎರಡು ನಿಮಿಷದಲ್ಲಿಯೇ ಸ್ಫೋಟಗೊಂಡು ದಾರುಣ ಅಂತ್ಯ ಕಂಡಿತು. *ಪುನಃ ೨೦೬೧ರಲ್ಲಿ ಹ್ಯಾಲಿ ಧೂಮಕೇತುವಿನ ನಿರೀಕ್ಷೆಯಿದೆ. ಆಗ ೧೯೮೬ರಲ್ಲಿ ಕಂಡಿದ್ದಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ, ಸೂರ್ಯ ಮತ್ತು ಭೂಮಿಗೆ ಒಂದೇ ಬದಿಯಲ್ಲಿ ಕಾಣ ಸಿಗುತ್ತದೆ.$ ==ಆಧಾರ== $--(ಪ್ರಜಾವಾಣಿ ಟಿ.ಎಸ್.ಮಾಧವ:30-11-2013) == ಚಿತ್ರ ಗ್ಯಾಲರಿ == <gallery mode="packed" heights="150px"> File:Comet P1 McNaught02 - 23-01-07-edited.jpg|ಸಂಪಾದನೆ:ಕಾಮೆಟ್ [[:en:C/2006 P1|ಸಿ /2006 ಪಿ 1]] (ಮೆಕ್ನಾಟ್) ವಿಕ್ಟೋರಿಯಾ, ಆಸ್ಟ್ರೇಲಿಯಾ 2007 File:Great Comet of 1882.jpg|[[:en:Great Comet of 1882|ಗ್ರೇಟ್ 1882 ಕಾಮೆಟ್]] ಸದಸ್ಯ [[:en:Kreutz Sungrazers|ಕ್ರೆಟ್ಙ್ ಗುಂಪು]] File:Great Comet 1861 (128495343).jpg|[[:en:C/1861 J1|Great Comet 1861|ಗ್ರೇಟ್ 1882 ಕಾಮೆಟ್]] File:X-rays from Hyakutake.jpg|ಕಾಮೆಟ್ [[:en:Hyakutake|Hyakutake]] ([[:en:X-ray|ಎಕ್ಸ್‌ರೇ]], [[:en:ROSAT|ರೋಸಾಟ್]] ಉಪಗ್ರಹ) File:Asteroid P2013 P5 v2.jpg|ಸಕ್ರಿಯ ಕ್ಷುದ್ರಗ್ರಹ "[[:en:P/2013 P5|ಪಿ / 2013 ಪಿ 5]] (Panstarrs) ಹಲವಾರು ಬಾಲ<ref>{{Cite web |url=http://hubblesite.org/newscenter/archive/releases/2013/52/image/a/ |title=Active Asteroid P/2013 P5 |access-date=2017-02-18 |archive-date=2015-05-22 |archive-url=https://web.archive.org/web/20150522173808/http://hubblesite.org/newscenter/archive/releases/2013/52/image/a/ |url-status=dead }}</ref> File:NASA-14090-Comet-C2013A1-SidingSpring-Hubble-20140311.jpg|[[:en:C/2013 A1|ಕಾಮೆಟ್ ಕವಲುದಾರಿಯ ಸ್ಪ್ರಿಂಗ್]] to pass near [[:en:Mars|ಮಂಗಳ ಗ್ರಹ]] 19 ಅಕ್ಟೋಬರ್ 2014 ([[:en:Hubble Space Telescope|ಹಬಲ್]]; 11 ಮಾರ್ಚ್ 2014) File:Comets WISE.jpg|ಬಾಹ್ಯಾಕಾಶ ದೂರದರ್ಶಕಗಳ ಮೂಲಕ ಪತ್ತೆಮಾಡಿದ ಧೂಮಕೇತುಗಳ ಪಟ್ಟಿ [[:en:Wide-field Infrared Survey Explorer|ವೈಸೆ]] File:Lovejoy-hi1a srem dec12 14.gif|ಸಿ/2011 ಸೇರಿಸಲಾಗಿದೆ W3 (ಲವ್ಜಾಯ್) ಸೂರ್ಯನ ತುತ್ತತುದಿ File:ITS Impact.gif|ಡೀಪ್ ಇಂಪ್ಯಾಕ್ಟ್ ಕಾಮೆಟ್ ಒಡೆಯುವ ಮುನ್ನ ತನ್ನ 'ಧ್ಯೇಯದ' ಕೊನೆಯ ಕ್ಷಣಗಳಲ್ಲಿ ಇಂಪ್ಯಾಕ್ಟರ್‍ನ ಒಂದು ನೋಟ </gallery> ==ಬಾಹ್ಯ ಸಂಪರ್ಕಗಳು== * {{dmoz|Science/Astronomy/Solar_System/Small_Bodies/Comets/|Comets}} * [http://solarsystem.nasa.gov/planets/profile.cfm?Object=Comets Comets Page] {{Webarchive|url=https://web.archive.org/web/20110219084029/http://solarsystem.nasa.gov/ |date=2011-02-19 }} at [http://solarsystem.nasa.gov/ NASA's Solar System Exploration] * [http://www.icq.eps.harvard.edu/ International Comet Quarterly] * [http://www.magnet.fsu.edu/education/community/slideshows/comet/index.html How to Make a Model of a Comet] {{Webarchive|url=https://web.archive.org/web/20090223102619/http://www.magnet.fsu.edu/education/community/slideshows/comet/index.html |date=2009-02-23 }} audio slideshow – [[National High Magnetic Field Laboratory]] * [http://smallbodies.ru/en/ Catalogue of the Solar System Small Bodies Orbital Evolution] * [https://sites.google.com/site/nearearthobjectwatch/ Information about comets and asteroids] == ಉಲ್ಲೇಖಗಳು == <references /> {{Refimprove}} {{Interwikineeded}} [[ವರ್ಗ:ಖಗೋಳಶಾಸ್ತ್ರ]] pc86fdnmezzik92cklzo05t7nzlp757 ರಾಗಿ ಮುದ್ದೆ 0 7391 1376952 1361257 2026-07-19T18:36:32Z Wikinmo 94844 1376952 wikitext text/x-wiki {{Orphan|date=ಡಿಸೆಂಬರ್ ೨೦೧೫}} [[File:A Scene of Ragi.JPG|thumb|right|200px|ರಾಗಿ]] [[Image:ragi.jpg|thumb|ರಾಗಿ]] [[image:Ragi mudde2.jpg|thumb|ರಾಗಿ ಮುದ್ದೆ|left]] [[File:Ragi und bajji.jpg|thumb|right|200px|ರಾಗಿ ಮುದ್ದೆ,ಬಜ್ಜಿ]] '''ರಾಗಿ ಮುದ್ದೆ''' <ref>[http://www.justkannada.in/ragi-mudde-gkvk-bangalore-invention/ ಈಗೋ ಬಂದಿದೆ ಇನ್‍ಸ್ಟಂಟ್ ರಾಗಿ ಮುದ್ದೆ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> [[ಕರ್ನಾಟಕ|ಕರ್ನಾಟಕದ]] ಗ್ರಾಮೀಣ ಜನರ ಒಂದು ಮುಖ್ಯ ಆಹಾರ. ಶ್ರಮಜೀವಿಗಳು ಮತ್ತು ಗ್ರಾಮಾಂತರ ಪ್ರದೇಶಗಳ ಜನರು ಹೆಚ್ಚಾಗಿ ಇದನ್ನು ಉಪಯೋಗಿಸುತ್ತಾರೆ. [[ರಾಗಿ]] ಹಿಟ್ಟಿನಿಂದ ತಯಾರಿಸುವ ಈ ಆಹಾರ ಆರೋಗ್ಯಕರವೆಂದು ಪರಿಗಣಿಸಲ್ಪಟ್ಟಿದೆ. "ಹಿಟ್ಟು ತಿಂದು ಗಟ್ಟಿಯಾಗು", "ಹಿಟ್ಟಂ ತಿಂದಂ ಬೆಟ್ಟಂ ಕಿತ್ತಟ್ಟಂ"<ref>{{Cite web |last=admin |date=2025-01-15 |title="ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ!" |url=https://www.kannadasethu.com/hittam-thindam-bettam-kithittam/ |access-date=2026-07-19 |website=ಕನ್ನಡ ಸೇತು |language=en-US}}</ref> ಎಂಬ ಗಾದೆಗಳು ರಾಗಿಮುದ್ದೆಯ ಮಹತ್ವವನ್ನು ಸಾರುತ್ತವೆ. ಕರ್ನಾಟಕ ಸ್ಕೌಟ್ ಅಂಡ್ ಗೈಡ್ಸ್ ಪಡೆಯವರಲ್ಲಿ "ರಾಗಿ ಮುದ್ದೆ ತಿಂದು ತಿಂದು ಗಟ್ಟಿಯಾಗಿ ಎದ್ದೆವು" ಎಂಬ ಹಾಡು ಜನಪ್ರಿಯವಾಗಿದೆ. ==ರಾಗಿಮುದ್ದೆ ಪ್ರಿಯರು== * ಮಾಜಿ ಪ್ರಧಾನಿ [[ಹೆಚ್.ಡಿ.ದೇವೇಗೌಡ|ಶ್ರೀ ದೇವೇಗೌಡರಿಂದಾಗಿ]] ರಾಗಿಮುದ್ದೆ ರಾಷ್ಟ್ರವ್ಯಾಪಿ ಹೆಸರು ಮಾಡಿದೆ. ಅವರು ರಾಗಿ-ಮುದ್ದೆ ಊಟವನ್ನು ಪ್ರತಿದಿನ ಮಾಡುತ್ತಾರೆ. ಅವರು ಪರದೇಶಕ್ಕೆ ಹೋದಾಗಲೂ ತಮ್ಮ ಅಡುಗೆಯವರನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು ಮತ್ತು ಅಲ್ಲಿಯೂ ತಪ್ಪದೆ ರಾಗಿ-ಮುದ್ದೆ ಊಟವನ್ನು ಮಾಡಿದ್ದರು. ಚಿತ್ರನಟ, [[ಡಾ.ರಾಜ್‍ಕುಮಾರ್|ಡಾ.ರಾಜ್ ಕುಮಾರ್]] ಅವರಿಗೆ ರಾಗಿ-ಮುದ್ದೆ ನಾಟಿಕೋಳಿ ಸಾರು ಬಹುಪ್ರಿಯವಾದ ಆಹಾರವಾಗಿತ್ತು. ಅದರೊಂದಿಗೆ ರಾಗಿಮುದ್ದೆ ಜೊತೆ ಹಿದಕ್ಬೇಳೆ ಹುಳಿ, [[ಮೆಂತೆ|ಮೆಂತ್ಯ]] ಸೊಪ್ಪಿನ್ಹುಳಿ, ಮೆಂತ್ಯ ಹಿಟ್ಟು, ಮಸ್ಸೊಪ್ಪಿನ ಸಾರು, ಉಪ್ಪುಸಾರು, ಮೊಳಕೆಕಾಳಿನ ಸಾರು ಇಲ್ಲವೆ [[ಹಾಗಲಕಾಯಿ]] ಗೊಜ್ಜು- ಒಳ್ಳೆ ನಂಟು. *ಹಳ್ಳಿಯ ರೈತಾಪಿಜನ, ಕಷ್ಟಪಟ್ಟು ಹೊಲಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಅವರ ಹೊಟ್ಟೆಗೆ ದಿಪ್ಪಾದ/ದಿಂಡಾದ ರೀತಿಯ ಊಟವನ್ನು ರಾಗಿಮುದ್ದೆ ಒದಗಿಸುತ್ತದೆ. ==ಮಾಡುವ ವಿಧಾನ== *೧.'''ಬೇಕಾದ ಪದಾರ್ಥಗಳು ಹಾಗೂ ಪರಿಕರಗಳು :''' ಒಂದು ದಪ್ಪತಳದ ಹಿತ್ತಾಳೆ ಪಾತ್ರೆ ಅಥವಾ ಅಲ್ಯೂಮಿನಿಯಮ್ ಪಾತ್ರೆಯೂ ಈ ಕೆಲಸಕ್ಕೆ ಬರುತ್ತದೆ.<ref>[https://www.youtube.com/watch?v=PTZFMQDUyVQ ಯೂ ಟ್ಯೂಬ್]</ref> ಒಂದು ಮುದ್ದೆ ಗೊಟಾಯಿಸುವ ಮರದ ಕೋಲು, ಒಂದು ಪಾತ್ರೆಯಲ್ಲಿ ನೀರು, ಒಂದು ಚಿಕ್ಕ ಪಾತ್ರೆ, ಚಮಚ, ಗ್ಯಾಸ್ ಒಲೆ, ಸಣ್ಣಗೆ ಉರಿ ಮಾಡಿರಬೇಕು. ರಾಗಿಹಿಟ್ಟು ಹೆಚ್ಚು ತರಿಯೂ ಇರಬಾರದು ಅಥವಾ ತೀರ ನುಣ್ಣಗೂ ಇರಬಾರದು. ಮುದ್ದೆಗೆ ಹದವಾಗಿರಬೇಕು. ಹಳೆ [[ರಾಗಿ|ರಾಗಿಯನ್ನು]] "ಹಗೇವು"ನಿಂದ ತಂದು, ಮಿಶಿನ್ ನಲ್ಲೋ, [[ಬೀಸುವ ಕಲ್ಲು|ಬೀಸೋ ಕಲ್ಲಿನಲ್ಲೋ]] ಅಥವಾ ಮಿಕ್ಸಿಯಲ್ಲೋ ಬೀಸಿ, ಅದನ್ನು ಪಕ್ಕದಲ್ಲಿ ಇಟ್ಟುಕೊಳ್ಳಬೇಕು. ಉದಾಹರಣೆಗೆ ನಿಮಗೆ ಒಂದು ಕಪ್ ಹಿಟ್ಟಿನ ರಾಗಿಮುದ್ದೆ ಮಾಡಬೇಕೆಂದರೆ, ಒಂದೂವರೆ ಕಪ್/ಎರಡು ಕಪ್ ನೀರಿನ ಅಗತ್ಯವಿದೆ. *೨.'''ಮಾಡುವ ವಿಧಾನ:''' ಮೊದಲು ಒಂದು ಚಮಚ [[ರಾಗಿ]] ಹಿಟ್ಟನ್ನು, ಸ್ವಲ್ಪ ನೀರಿಗೆ ಹಾಕಿ, ಚೆನ್ನಾಗಿ ಪೇಸ್ಟ್ ತರಹ ಮಾಡಿಕೊಳ್ಳಿ. ಒಲೆಯ ಮೇಲೆ ಹಿತ್ತಾಳೆ ಪಾತ್ರೆ ಇಟ್ಟು ಅದಕ್ಕೆ, ಎರಡು ಕಪ್ ನೀರು ಹಾಕಿ, ಸಣ್ಣ ಉರಿಯಲ್ಲಿ ಕುದಿಸಿ. ಈ ನೀರಿಗೆ ಚಿಕ್ಕಪಾತ್ರೆಯಲ್ಲಿ ಮಾಡಿಟ್ಟುಕೊಂಡ ರಾಗಿಹಿಟ್ಟಿನ-ಪೇಸ್ಟನ್ನು ಹಾಕಿ, ಕೈಯಾಡಿಸಿ. ಉಳಿದ ರಾಗಿ ಹಿಟ್ಟನ್ನು ನೀರಿನ ಮೇಲೆ ನಿಧಾನವಾಗಿ ಉದುರಿಸುತ್ತಾ ಹೋಗಿ. ರಾಗಿ-ಹಿಟ್ಟು ಮಿಶ್ರಿತ ನೀರನ್ನು, ಮರದ ಕೋಲಿನಿಂದ ಗೊಟಾಯಿಸಿ, ಪಾತ್ರೆಯಲ್ಲಿ ನೀರು, ಹಿಟ್ಟು ನಿಧಾನವಾಗಿ ಬೆರೆತುಕೊಳ್ಳುತ್ತಾ ಹೋಗುವುದು ನಮಗೆ ಕಾಣಿಸುತ್ತದೆ. ಅದಲ್ಲದೆ, ಚಿಕ್ಕ-ಚಿಕ್ಕ ಗುಳ್ಳೆಗಳು ಬರುತ್ತವೆ. ಸಣ್ಣ ಉರಿ ಮಾಡಿಕೊಂಡು, ಹಿಟ್ಟು ಗಂಟು ಬರದಂತೆ ಗೊಟಾಯಿಸಿದಾಗ ಹಿಟ್ಟು ಹದ ಬರುವುದು ತಿಳಿಯುತ್ತದೆ. ಬೆಂದ ಹಿಟ್ಟಿನಿಂದ ಸುವಾಸನೆಯನ್ನು ನಾವು ಮನಗಾಣಬಹುದು. ಆಗ ಪಾತ್ರೆಯನ್ನು ಕೆಳಗಿಳಿಸಿ, ನಿಧಾನವಾಗಿ ಮರದ ಬೋಗುಣಿಗೋ, ಇಲ್ಲದಿದ್ದರೆ, ಒಂದು ದೊಡ್ಡ ತಟ್ಟೆಯ ಮೇಲೋ, ಬೇಸಿದ ಹಿಟ್ಟನ್ನು ಸುರಿಯಿರಿ. ಇಲ್ಲಿಗೆ ರಾಗಿ ಮುದ್ದೆ ತಯಾರಿ ಮುಗಿಯುತ್ತದೆ. ==ಮುದ್ದೆ-ತೊಳೆಸುವ/ಕಟ್ಟುವ ಪ್ರಕ್ರಿಯೆ== ಒಂದು ಪಾತ್ರೆಯಲ್ಲಿ ಸ್ವಲ್ಪ ತಣ್ಣನೆಯ ನೀರು ಇರಲಿ. ನಿಮ್ಮ ಕೈಯನ್ನು ತಣ್ಣನೆಯ ನೀರಿನಲ್ಲಿ ಅದ್ದಿ-ಅದ್ದಿ, ಅದೇ ಸಮಯದಲ್ಲಿ ಬೇಸಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಕರಂಡಿಯ ನೆರವಿನಿಂದ ತೆಗೆದುಕೊಂಡು, ಮುದ್ದೆಯ ಆಕಾರದಲ್ಲಿ ತಯಾರಿಸಿ. ಇದನ್ನು "ಮುದ್ದೆ ತೊಳೆಸುವ/ಕಟ್ಟುವ ಪ್ರಕ್ರಿಯೆ" ಎನ್ನುತ್ತಾರೆ. ಹೊಸಬರಿಗೆ ಸ್ವಲ್ಪ ಅನುಭವಸ್ಥರ ಸಹಾಯದ ಅಗತ್ಯವಿದೆ. ಒಮ್ಮೊಮ್ಮೆ ಕೈ ಬೊಬ್ಬೆ ಬರುವ ಸಂಭವವೂ ಉಂಟು. ಬಿಸಿ ಇದ್ದಾಗಲೇ ರಾಗಿಮುದ್ದೆ ಕಟ್ಟಿದರೆ ಆ ಮುದ್ದೆ ನುಣ್ಣಗೆ ಚೆಂಡಿನ ಆಕೃತಿಯಲ್ಲಿರುತ್ತದೆ. ಕೊಂಚ ಆರಿದ ಮೇಲೆ ಕಟ್ಟಿದರೆ ಬೇರೆ ಆಕಾರವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಅನುಭವಸ್ಥ ಹೆಣ್ಣುಮಕ್ಕಳು/ಹಿರಿಯ ಹೆಂಗಸರು ಪಕ್ಕದಲ್ಲೇ ಇದ್ದರೆ ಒಳ್ಳೆಯದು. ಈಗ ತಾಜಾ ರಾಗಿಮುದ್ದೆ ಸಿದ್ಧ. ಜೋಳದ ಮುದ್ದೆಯನ್ನು ಇದೇ ತರಹ ಮಾಡಿ ಕೊಳ್ಳಬೇಕು. ಅಂದರೆ ಮೇಲೆ ತಿಳಿಸಿದ ವಿಧಿ-ಕ್ರಮ ಸರ್ವೇ ಸಾಮಾನ್ಯವಾದದ್ದು. ==ಬಡಿಸುವುದು== ಇದನ್ನು ಬಡಿಸುವುದು ಹಾಗೂ ಅದರ ಸೇವನೆ ಅತಿಮುಖ್ಯವಾದ ಹಂತಗಳು. ಬಡಿಸಲು ಇನ್ನೊಬ್ಬರ ಸಹಾಯ ಪಡೆಯುವುದು ಒಳ್ಳೆಯದು. ಹೊಸಬರಿಗೆ, ಎರಡನ್ನೂ ಒಟ್ಟಿಗೆ ಮಾಡುವಾಗ ಕಷ್ಟವಾಗಬಹುದು. ರಾಗಿಮುದ್ದೆಯ ಮೇಲೆ ಒಳ್ಳೆಯ ಬೆಣ್ಣೆಕಾಸಿದ ಹಸುವಿನ [[ತುಪ್ಪ]], ಬಹಳ ರುಚಿ ಕೊಡುತ್ತದೆ. ಮೇಲೆ ಹೇಳಿದಂತೆ ಬಿಸಿ-ಬಿಸಿ ಮುದ್ದೆಯ ಜೊತೆಗೆ, [[ಹಾಗಲಕಾಯಿ]] ಗೊಜ್ಜು, [[ಮೆಂತ್ಯ|ಮೆಂತ್ಯದ]] ಹಿಟ್ಟು, ಮಸ್ಸೊಪ್ಪಿನ ಸಾರು, ಮೊಳಕೆಕಾಳಿನ ಸಾರು, ಉಪ್ಪುಸಾರು, ಹಿದುಕು-ಬೇಳೆ ಹುಳಿ ಮತ್ತು ಬೇಳೆ ಸಾರು ಇವೆಲ್ಲವೂ ಅತ್ಯಂತ ರುಚಿ ಕೊಡುವ ಸಾಧನಗಳು. ನಿಮಗೆ ಬೇಕಾದ ಹಾಗೆ ರುಚಿಯನ್ನು ನೀವೇ ಬದಲಿಸಿಕೊಳ್ಳಬಹುದು. ಉದಾಹರಣೆಗೆ:ಕುರೆಶ್ಯಾಣಿಪುಡಿ ಮತ್ತು [[ಮೊಸರು|ಮೊಸರನ್ನು]] ಸೇರಿಸಿ,ರಾಗಿಮುದ್ದೆ-ಊಟಮಾಡಿ. [[ಬೆಂಡೆಕಾಯಿ]] ಗೊಜ್ಜು, [[ಈರುಳ್ಳಿ]] ಗೊಜ್ಜು, [[ದೊಡ್ಡಪತ್ರೆ]] [[ತಂಬುಳಿ|ತಂಬೂಳಿ]], ಮಜ್ಗೆ ಪಳದ್ಯ, [[ಸೌತೆಕಾಯಿ]]-[[ಮೊಸರು]] ಸಾಸಿವೆ, [[ಚಟ್ನಿ|ಚಟ್ಣೀ]]-ಪುಡಿ, ಮತ್ತು ಮೊಸರು ಇತ್ಯಾದಿಗಳನ್ನು ಧಾರಾಳವಾಗಿ ಬಳಸಬಹುದು. ಎಲ್ಲಾ ತರಕಾರಿಗಳಿಂದ ಮಾಡಿದ ಹುಳಿ, ಮುದ್ದೆ-ಊಟಕ್ಕೆ ಹೇಳಿ ಮಾಡಿಸಿದಂತೆ ಕೆಲಸ ಮಾಡುತ್ತವೆ. ಉದಾಹರಣೆಗಾಗಿ: [[ಆಲೂಗಡ್ಡೆ|ಆಲೂಗೆಡ್ಡೆ]], [[ಎಲೆಕೋಸು]], [[ಹೂಕೋಸು]], [[ಸೀಮೆಬದ್ನೇಕಾಯಿ ಬೆಳೆ|ಸೀಮೆ ಬದ್ನೇಕಾಯಿ]], ಸೀ-ಅಥವಾ-ಬಿಳಿ-[[ಕುಂಬಳಕಾಯಿ|ಕುಂಬಳ್ಕಾಯಿ]], ಕಡ್ಳೆಕಾಳ್ಹುಳಿ, [[ಬದ್ನೆಕಾಯಿ]], ಚಿಕ್ಕೀರುಳ್ಳಿ, [[ನುಗ್ಗೆಕಾಯಿ]], ಇತ್ಯಾದಿ. [[ಸಬ್ಬಸಿಗೆ|ಸಬ್ಬಸ್ಗೆ]] ಸೊಪ್ಪಿನ ಸಾರು, ಚೆನ್ನಾಗಿರುತ್ತದೆ. [[ಕಾಳುಮೆಣಸು|ಕಾಳುಮೆಣಸಿನ]] ಸಾರಿನಲ್ಲೂ ಒಮ್ಮೆ ರುಚಿ ನೋಡಬಹುದು. ರಾಗಿಮುದ್ದೆಯನ್ನು ಆದಷ್ಟು ಮಾಡಿದ ಕೂಡಲೆ ಸೇವಿಸಿದರೆ ಚೆನ್ನಾಗಿರುತ್ತದೆ. ಒಂದು ವೇಳೆ ಸ್ವಲ್ಪ ಸಮಯದ ನಂತರ ತಿನ್ನಬೇಕಾದ ಅಗತ್ಯವಿದ್ದಾಗ ಮುದ್ದೆಯ ಮೇಲೆ ಚಿಕ್ಕ ಬಿಳಿ/ ಒದ್ದೆ ಮಾಡಿದ ಅರಿವೆಯನ್ನು ಮುಚ್ಚಿ ನಂತರ ತಿನ್ನಬಹುದು. ==ಎಲ್ಲರಿಗೂ ತಿಳಿದ ಸಂಗತಿ :== * ರಾಗಿ-ಮುದ್ದೆಯನ್ನು ನುಂಗಬೇಕು, ಅಗಿಯಬಾರದು ಈ ವಿಷಯವನ್ನು ಗಮನದಲ್ಲಿಡಿ. ರಾಗಿಮುದ್ದೆ ಒಳ್ಳೆಯ ಪೌಷ್ಟಿಕ ಆಹಾರ. ಸುಲಭವಾಗಿ ಜೀರ್ಣವಾಗುವುದು. ಅಬಾಲ ವೃದ್ಧರಾದಿಯಾಗಿ ಸರ್ವರೂ ಸೇವಿಸಬಹುದಾದ, ಅತ್ಯುತ್ತಮ ಆಹಾರ. ರಾಗಿ ಮುದ್ದೆಯು ಮೂಲತಃ ಕರ್ನಾಟಕದ ದಕ್ಷಿಣ ಭಾಗದಲ್ಲಿ ಹೆಚ್ಚಾಗಿ ಉಪಯೋಗಿಸುವರಾದರೂ ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಕನ್ನಡಿಗರು ರಾಗಿಮುದ್ದೆಯನ್ನು ಬಳಸುತ್ತಿದ್ದಾರೆ. *ಅಲ್ಲದೆ ಈ ರಾಗಿಮುದ್ದೆಯು [[ವಿಜಯನಗರ ಸಾಮ್ರಾಜ್ಯ|ವಿಜಯನಗರ]] ರಾಜರ ಕಾಲದಲ್ಲಿ ದಕ್ಷಿಣ ಆಂಧ್ರ ಪ್ರದೇಶ, ಉತ್ತರ ತಮಿಳುನಾಡುಗಳನ್ನು ಪ್ರವೇಶಿಸಿ ಅಲ್ಲಿಯ ಜನರ ಆಹಾರ ಪದ್ದತಿಯಾಗಿದೆ. ವಿಜಯನಗರ ಅರಸರಾದ '[[ಪ್ರೌಡದೇವರಾಯ|ಪ್ರೌಢದೇವರಾಯ]]' ಹಾಗೂ '[[ಕೃಷ್ಣದೇವರಾಯ|ಕೃಷ್ಣದೇವರಾಯರು]]' ಇವರ ಮುಖ್ಯ ಆಹಾರ ರಾಗಿ'[[ಮುದ್ದೆ]]'ಯಾಗಿದ್ದಿತು. ==ಉಲ್ಲೇಖಗಳು== {{reflist}} {{Refimprove}} {{Interwikineeded}} [[ವರ್ಗ:ಖಾದ್ಯ, ತಿನಿಸು]] [[ವರ್ಗ:ಕರ್ನಾಟಕ]] [[ವರ್ಗ:ಸಂಸ್ಕೃತಿ]] [[ವರ್ಗ:ಜಾನಪದ]] [[ವರ್ಗ:ಆಹಾರ]] lyace540enml8z263a2d22oayuhv1w7 ಮಸೂದೆ 0 39354 1376963 1358392 2026-07-20T10:11:01Z Santosh Vastrad 100645 Add photo to text 1376963 wikitext text/x-wiki '''ಮಸೂದೆ'''ಯು [[ಶಾಸನ ಸಭೆ]]ಯಿಂದ ಪರಿಗಣನೆಯಲ್ಲಿರುವ ಪ್ರಸ್ತಾಪಿತ ಕಾನೂನು. ಶಾಸಕಾಂಗದಿಂದ ಅಂಗೀಕರಿಸಲ್ಪಡುವವರೆಗೆ ಮತ್ತು, ಹೆಚ್ಚಿನ ಸಂದರ್ಭಗಳಲ್ಲಿ, [[ಕಾರ್ಯಾಂಗ]]ದಿಂದ ಅನುಮೋದಿಸಲ್ಪಡುವವರೆಗೆ ಮಸೂದೆಯು ಕಾನೂನಾಗುವುದಿಲ್ಲ. ಒಮ್ಮೆ ಮಸೂದೆಯು ಕಾನೂನಾಗಿ ಜಾರಿಗೆ ಬಂದಮೇಲೆ, ಅದನ್ನು ''[[ಸಂಸತ್ತಿನ ಕಾಯಿದೆ|ಕಾಯಿದೆ]]'' ಅಥವಾ ''[[ಶಾಸನಬದ್ಧ ಕಾನೂನು|ಶಾಸನ]]'' ಎಂದು ಕರೆಯಲಾಗುತ್ತದೆ. {{ಚುಟುಕು}} {{Unreferenced}} {{Interwikineeded}} [[ವರ್ಗ:ಶಾಸನಬದ್ಧ ಕಾನೂನು]] [[ವರ್ಗ:ಕಾನೂನು]] pzn1oe95kela5nmpye22ys2neruycxz 1376964 1376963 2026-07-20T10:18:06Z Santosh Vastrad 100645 1376964 wikitext text/x-wiki '''ಮಸೂದೆ'''ಯು [[ಶಾಸನ ಸಭೆ]]ಯಿಂದ ಪರಿಗಣನೆಯಲ್ಲಿರುವ ಪ್ರಸ್ತಾಪಿತ ಕಾನೂನು. ಶಾಸಕಾಂಗದಿಂದ ಅಂಗೀಕರಿಸಲ್ಪಡುವವರೆಗೆ ಮತ್ತು, ಹೆಚ್ಚಿನ ಸಂದರ್ಭಗಳಲ್ಲಿ, [[ಕಾರ್ಯಾಂಗ]]ದಿಂದ ಅನುಮೋದಿಸಲ್ಪಡುವವರೆಗೆ ಮಸೂದೆಯು ಕಾನೂನಾಗುವುದಿಲ್ಲ. ಒಮ್ಮೆ ಮಸೂದೆಯು ಕಾನೂನಾಗಿ ಜಾರಿಗೆ ಬಂದಮೇಲೆ, ಅದನ್ನು ''[[ಸಂಸತ್ತಿನ ಕಾಯಿದೆ|ಕಾಯಿದೆ]]'' ಅಥವಾ ''[[ಶಾಸನಬದ್ಧ ಕಾನೂನು|ಶಾಸನ]]'' ಎಂದು ಕರೆಯಲಾಗುತ್ತದೆ. {{ಚುಟುಕು}} {{Unreferenced}} {{Interwikineeded}} [[ವರ್ಗ:ಶಾಸನಬದ್ಧ ಕಾನೂನು]] [[ವರ್ಗ:ಕಾನೂನು]] ಸಾಮಾನ್ಯ ಮಸೂದೆಯೂ ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಮಂಡಿಸಿಬಹುದು ಆದರೆ ಆ ಮಸೂದೆಗೆ ಎರಡು ಸದನಗಳ ಒಪ್ಪಿಗೆ ಬೇಕು ಹಾಗೆ ಒಂದು ಸದನದಿಂದ ಮಂಡಿಸಿದ ಮಸೂದೆಯನ್ನು ಇನ್ನೊಂದು ಸದನ ಒಪ್ಪಿಗೆಗೆ ಕಳುಹಿಸಿದಾಗ ಅದು ಆ ಮಸೂದೆಯನ್ನು ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದು ಅಥವಾ ಅದ್ದನು ತನ್ನಲ್ಲಿ ಆರು ತಿಂಗಳು ಕಾಲ ಹಿಡಿದಿಟ್ಟುಕೊಳ್ಳಬಹುದು ಎರಡು ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಸಿಕ್ಕ ಮಸೂದೆಗಳು ರಾಷ್ಟ್ರಪತಿ ಅಂಕಿತಕ್ಕೆ ಹೋಗುತ್ತವೆ. ರಾಷ್ಟ್ರಪತಿ ಅಂಕಿತವಾದ ಮೇಲೆ ಮಸೂದೆ ಕಾಯ್ದೆಯಾಗಿ ಹೊರ ಹೊಮ್ಮತ್ತವೆ. n74c9x32z4pa4cga9td980q495e3igl ಟೆಂಪ್ಲೇಟು:Marriage 10 131871 1376945 1329340 2026-07-19T15:37:21Z A826 72368 ಪುಟದ ಮಾಹಿತಿ ತಗೆದು '<includeonly>{{#if:{{{1|}}}|{{{1}}} }}{{#if:{{{2|}}}{{{3|}}}|(}}{{#if:{{{2|}}}|{{#if:{{{end|{{{reason|}}}}}}||m. }}{{#time:Y|{{{2}}}}}{{#if:{{{3|}}}|–{{#time:Y|{{{3}}}}}}|}}{{#if:{{{end|{{{reason|}}}}}}|{{#if:{{{2|}}}|; }}{{#switch:{{lc:{{{end|{{{reason}}}}}}}}|died|d.=died|divorced|div.=divorced|separated|sep.=separated|annulled|ann.=annulled|#default={{{end}}}}} {{#time:Y|{{{3}}}}}}}{{#if:{{{2|...' ಎಂದು ಬರೆಯಲಾಗಿದೆ 1376945 wikitext text/x-wiki <includeonly>{{#if:{{{1|}}}|{{{1}}} }}{{#if:{{{2|}}}{{{3|}}}|(}}{{#if:{{{2|}}}|{{#if:{{{end|{{{reason|}}}}}}||m. }}{{#time:Y|{{{2}}}}}{{#if:{{{3|}}}|–{{#time:Y|{{{3}}}}}}|}}{{#if:{{{end|{{{reason|}}}}}}|{{#if:{{{2|}}}|; }}{{#switch:{{lc:{{{end|{{{reason}}}}}}}}|died|d.=died|divorced|div.=divorced|separated|sep.=separated|annulled|ann.=annulled|#default={{{end}}}}} {{#time:Y|{{{3}}}}}}}{{#if:{{{2|}}}{{{3|}}}|)}}</includeonly> kagtor0niov6xyic3lw9kxezlbslisz 1376946 1376945 2026-07-19T15:39:16Z A826 72368 1376946 wikitext text/x-wiki <includeonly>{{#if:{{{1|}}}|{{{1}}} }}(m. {{#time:Y|{{{2}}}}}{{#if:{{{3|}}}|–{{#time:Y|{{{3}}}}}}})</includeonly> 9qojaro8wxmdltnhl4pifz1cnif3ucu 1376948 1376946 2026-07-19T15:49:12Z A826 72368 1376948 wikitext text/x-wiki <includeonly>{{#if:{{{1|}}}|{{{1}}} }}({{#if:{{{2|}}}|m. {{#time:Y|{{{2}}}}} }}{{#if:{{{3|}}}|{{#if:{{{2|}}}|{{#if:{{{end|{{{reason|}}}}}}|; |– }}}}{{#if:{{{end|{{{reason|}}}}}}|{{#switch:{{lc:{{{end|{{{reason}}}}}}}}|died|d.=died|divorced|div.=divorced|separated|sep.=separated|annulled|ann.=annulled|#default={{{end}}}}} }}{{#time:Y|{{{3}}}}}{{#if:{{{2|}}}{{{3|}}}|)}}</includeonly> bmc63t9vwt8myt3xl3a5ppltrif6b41 1376949 1376948 2026-07-19T15:51:22Z A826 72368 1376949 wikitext text/x-wiki <includeonly>{{#if:{{{1|}}}|{{{1}}} }}({{#if:{{{2|}}}|m. {{#time:Y|{{{2}}}}} }}{{#if:{{{3|}}}|{{#if:{{{2|}}}|{{#if:{{{end|{{{reason|}}}}}}|; |– }}}}{{#if:{{{end|{{{reason|}}}}}}|{{#switch:{{lc:{{{end|{{{reason}}}}}}}}|died|d.=died|divorced|div.=divorced|separated|sep.=separated|annulled|ann.=annulled|#default={{{end|{{{reason}}}}}}}} }}{{#time:Y|{{{3}}}}}}})</includeonly> 3oj0mtq3knxv6r5mxwregcv698gpfl4 ಹನೋಯ್‌ನ ಸಾಹಿತ್ಯ ದೇವಾಲಯ 0 179622 1376957 1376909 2026-07-20T04:55:41Z Joyce Muriel 87647 /* ಎರಡನೇ ಪ್ರಾಂಗಣ */ 1376957 wikitext text/x-wiki {{Infobox religious building | name = ಕನ್ಫ್ಯೂಷಿಯಸ್ ದೇವಾಲಯ | native_name = ವಾನ್ ಮಿಯು | native_name_lang = | image = Hanoi Temple of Literature (cropped).jpg | caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ. | religious_affiliation = [[Confucianism|Ruism]] | location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ | established = 1070; 956 ವರ್ಷಗಳ ಹಿಂದೆ }}  '''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್‌ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು. <templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}} ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್‌ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ. ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್‌ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ. == ಇತಿಹಾಸ == [[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]] ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್‌ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref> ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್‌ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್‌ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು. 1076ರಲ್ಲಿ, ಲಿ ನ್ಹಾನ್ ಟೋಂಗ್ ಅವರ ಆಳ್ವಿಕೆಯ ಅವಧಿಯಲ್ಲಿ, ವಿಯೆಟ್ನಾಂನ ಮೊದಲ ವಿಶ್ವವಿದ್ಯಾಲಯವಾದ "ಕ್ವೋಕ್ ತು ಜಿಯಾಮ್" ಅಥವಾ ಸಾಮ್ರಾಜ್ಯ ಅಕಾಡೆಮಿಯನ್ನು ಈ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಯಿತು. ವಿಯೆಟ್ನಾಂನ ಆಡಳಿತಾಧಿಕಾರಿಗಳು, ಶ್ರೀಮಂತ ವರ್ಗದವರು, ರಾಜಮನೆತನದ ಸದಸ್ಯರು ಹಾಗೂ ಇತರ ಗಣ್ಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯವು 1076ರಿಂದ 1779ರವರೆಗೆ ಕಾರ್ಯನಿರ್ವಹಿಸಿತು. 1802ರಲ್ಲಿ, ನ್ಗುಯೆನ್ ರಾಜವಂಶದ ಅರಸರು ಹುವೆ ನಗರವನ್ನು ತಮ್ಮ ರಾಜಧಾನಿಯಾಗಿ ಸ್ಥಾಪಿಸಿ, ಅಲ್ಲಿ ಹೊಸ ಸಾಮ್ರಾಜ್ಯ ಅಕಾಡೆಮಿಯನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ, ಹನೋಯಿಯ ದೇವಾಲಯದಲ್ಲಿದ್ದ ಅಕಾಡೆಮಿಯ ಮಹತ್ವ ಕ್ರಮೇಣ ಕಡಿಮೆಯಾಗಿ, ಅದು ನಂತರ ಹೋಯ್ ಡುಕ್ ಜಿಲ್ಲೆಯ ಒಂದು ಶಾಲೆಯಾಗಿ ಪರಿವರ್ತನೆಯಾಯಿತು. ಫ್ರೆಂಚರ ಸಂರಕ್ಷಿತ ಆಡಳಿತದ ಅವಧಿಯಲ್ಲಿ, ವಾನ್ ಮಿಯು – ಕ್ವೋಕ್ ತು ಜಿಯಾಮ್ ಅನ್ನು 1906ರಲ್ಲಿ ಐತಿಹಾಸಿಕ ಸ್ಮಾರಕ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು. 1945ರಿಂದ 1954ರ ಅವಧಿಯಲ್ಲಿ, ಯುದ್ಧದ ಸಮಯದಲ್ಲಿ ಸೇಂಟ್ ಪಾಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಯನ್ನು ವಿಸ್ತರಿಸಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಫ್ರೆಂಚರು ದೇವಾಲಯದ ಕೆಲವು ಭಾಗಗಳನ್ನು ನೆಲಸಮಗೊಳಿಸಿದರು. ನಂತರ, ಎಕೋಲ್ ಫ್ರಾಂಸೆಸ್ ದ್ ಎಕ್ಸ್ಟ್ರೀಮ್-ಓರಿಯಾಂ (ಫ್ರೆಂಚ್ ಸ್ಕೂಲ್ ಆಫ್ ದ ಫಾರ್ ಈಸ್ಟ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1920 ಮತ್ತು 1947ರಲ್ಲಿ ದೇವಾಲಯದ ಪುನರುಜ್ಜೀವನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು.<ref>https://www.persee.fr/doc/befeo_0336-1519_1951_num_45_1_5513</ref> == ವಿನ್ಯಾಸ == ''' [[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್‌ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]] [[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]]ಈ ದೇವಾಲಯದ ವಿನ್ಯಾಸವು, ಕನ್‌ಫ್ಯೂಷಿಯಸ್ ಅವರ ಜನ್ಮಸ್ಥಳವಾದ ಚೀನಾದ ಶಾಂಡಾಂಗ್ ಪ್ರಾಂತ್ಯದ ಕುಫು ನಗರದಲ್ಲಿರುವ ದೇವಾಲಯದ ಮಾದರಿಯನ್ನು ಹೋಲುತ್ತದೆ. ಈ ದೇವಾಲಯವು ಸುಮಾರು 54,000 ಚದರ ಮೀಟರ್ (ಸುಮಾರು 5,80,000 ಚದರ ಅಡಿ) ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ ವಾನ್ ಸರೋವರ, ಜಿಯಾಮ್ ಉದ್ಯಾನ ಹಾಗೂ ಇಟ್ಟಿಗೆಯ ಗೋಡೆಯಿಂದ ಆವೃತವಾಗಿರುವ ಒಳಾಂಗಣ ಪ್ರಾಂಗಣಗಳೂ ಸೇರಿವೆ<ref>https://web.archive.org/web/20171210021047/http://english.vietnamnet.vn/fms/art-entertainment/166406/master-plan-built-for-van-mieu---quoc-tu-giam.html</ref>. ಈ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ನಾಲ್ಕು ಎತ್ತರದ ಕಂಬಗಳಿವೆ. ಈ ಕಂಬಗಳ ಎರಡೂ ಬದಿಗಳಲ್ಲಿ ಕುದುರೆ ಸವಾರರು ತಮ್ಮ ಕುದುರೆಗಳಿಂದ ಇಳಿಯಬೇಕೆಂದು ಸೂಚಿಸುವ ಎರಡು ಕಲ್ಲಿನ ಶಾಸನಗಳು ಸ್ಥಾಪಿಸಲಾಗಿದೆ. ದೇವಾಲಯದ ಪ್ರವೇಶ ದ್ವಾರವು ಮೂರು ದಾರಿಗಳಿಗೆ ತೆರೆದುಕೊಳ್ಳುತ್ತದೆ. ಈ ಮೂರು ದಾರಿಗಳು ದೇವಾಲಯದ ಸಂಪೂರ್ಣ ಆವರಣದೊಳಗೆ ಮುಂದುವರಿಯುತ್ತವೆ. ಮಧ್ಯದ ದಾರಿಯನ್ನು ರಾಜನ (ಚಕ್ರವರ್ತಿಯ) ಸಂಚಾರಕ್ಕಾಗಿ ಮಾತ್ರ ಮೀಸಲಿಡಲಾಗಿತ್ತು. ಈ ಮಧ್ಯದ ದಾರಿಯ ಮೇಲ್ಭಾಗದಲ್ಲಿ ಒಂದು ದೊಡ್ಡ ಕಂಚಿನ ಗಂಟೆಯನ್ನು ಅಳವಡಿಸಲಾಗಿದೆ. ಎಡಭಾಗದ ದಾರಿಯನ್ನು ಆಡಳಿತಾಧಿಕಾರಿಗಳಾದ ಮ್ಯಾಂಡರಿನ್‌ಗಳು ಬಳಸುತ್ತಿದ್ದರೆ, ಬಲಭಾಗದ ದಾರಿಯನ್ನು ಸೇನಾ ಅಧಿಕಾರಿಗಳಾದ ಮಿಲಿಟರಿ ಮ್ಯಾಂಡರಿನ್‌ಗಳು ಬಳಸುತ್ತಿದ್ದರು. ದೇವಾಲಯದ ಒಳಭಾಗವನ್ನು ಐದು ಪ್ರಾಂಗಣಗಳಾಗಿ ವಿಭಾಗಿಸಲಾಗಿದೆ. ಮೊದಲ ಎರಡು ಪ್ರಾಂಗಣಗಳು ಶಾಂತ ವಾತಾವರಣವನ್ನು ಹೊಂದಿದ್ದು, ಪುರಾತನ ಮರಗಳು ಮತ್ತು ಅಂದವಾಗಿ ನಿರ್ವಹಿಸಲಾದ ಹಸಿರು ಹುಲ್ಲಿನ ಮೈದಾನಗಳಿಂದ ಕೂಡಿವೆ. ಹೊರಗಿನ ಗದ್ದಲದಿಂದ ದೂರವಾಗಿ, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮುಖ್ಯ ದ್ವಾರದ ಮೇಲಿರುವ ಕಂಚಿನ ಗಂಟೆಯನ್ನು, ಯಾವುದೇ ಪ್ರಮುಖ ವ್ಯಕ್ತಿ ದೇವಾಲಯಕ್ಕೆ ಆಗಮಿಸುತ್ತಿರುವುದನ್ನು ಸೂಚಿಸಲು ಬಳಸಲಾಗುತ್ತಿತ್ತು. ಈ ಗಂಟೆಯನ್ನು 19ನೇ ಶತಮಾನದಲ್ಲಿ ವಾನ್ ಮಿಯು ದೇವಾಲಯಕ್ಕೆ ಸೇರಿಸಲಾಯಿತು. ಕಂಚಿನಿಂದ ತಯಾರಿಸಲಾದ ಈ ಗಂಟೆಯನ್ನು ಸನ್ಯಾಸಿಗಳಿಗೆ ಮಾತ್ರ ಮುಟ್ಟಲು ಅನುಮತಿ ಇತ್ತು. ಈ ಗಂಟೆಯ ಮೇಲೆ ಅನೇಕ ಅಲಂಕಾರಿಕ ಕೆತ್ತನೆಗಳಿದ್ದು, ಅವುಗಳಲ್ಲಿ ಫೀನಿಕ್ಸ್ ಪಕ್ಷಿಯ ಚಿತ್ರವು ಸೌಂದರ್ಯದ ಸಂಕೇತವಾಗಿದ್ದರೆ, ಡ್ರ್ಯಾಗನ್ ಶಕ್ತಿ ಮತ್ತು ಸಾಮರ್ಥ್ಯದ ಸಂಕೇತವಾಗಿದೆ. ಈ ಎರಡೂ ಚಿಹ್ನೆಗಳು ಕ್ರಮವಾಗಿ ಸಾಮ್ರಾಜ್ಞಿ ಮತ್ತು ಚಕ್ರವರ್ತಿಯನ್ನು ಪ್ರತಿನಿಧಿಸುತ್ತವೆ. ಇಂತಹ ಕಂಚಿನ ಗಂಟೆಗಳನ್ನು ವಿಯೆಟ್ನಾಂನ ಬಹುತೇಕ ಎಲ್ಲ ಪಗೋಡಾಗಳಲ್ಲಿಯೂ ಕಾಣಬಹುದು. === ಮೊದಲನೇಯ ಪ್ರಾಂಗಣ === ಮೊದಲ ಪ್ರಾಂಗಣವು ಮಹಾ ಪ್ರವೇಶ ದ್ವಾರದಿಂದ ಆರಂಭವಾಗಿ ಡೈ ಟ್ರುಂಗ್ ಎಂಬ ಮುಖ್ಯ ದ್ವಾರದವರೆಗೆ ವಿಸ್ತರಿಸಿದೆ. ಈ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ಎರಡು ಸಣ್ಣ ದ್ವಾರಗಳಿವೆ. ಅವುಗಳಲ್ಲಿ ಒಂದನ್ನು ಡಾಟ್ ತಾಯಿ ದ್ವಾರ ಎಂದು ಕರೆಯಲಾಗುತ್ತದೆ. ಇದು ಪ್ರತಿಭೆ ಮತ್ತು ಸಾಧನೆಯ ಸಂಕೇತವಾಗಿದೆ. ಮತ್ತೊಂದು ಥಾನ್ ಡುಕ್ ದ್ವಾರ ಆಗಿದ್ದು, ಇದು ಸದ್ಗುಣ ಮತ್ತು ನೈತಿಕತೆಯ ಸಂಕೇತವಾಗಿದೆ. ಈ ಎರಡು ದ್ವಾರಗಳು ಜ್ಞಾನ ಮತ್ತು ಉತ್ತಮ ಗುಣಗಳು ಒಂದಕ್ಕೊಂದು ಪೂರಕವಾಗಿವೆ ಎಂಬ ಕನ್‌ಫ್ಯೂಷಿಯಸ್ ಅವರ ತತ್ವವನ್ನು ಪ್ರತಿಬಿಂಬಿಸುತ್ತವೆ. === ಎರಡನೇ ಪ್ರಾಂಗಣ === ಎರಡನೇ ಪ್ರಾಂಗಣವನ್ನು ಮಹಾ ಕೇಂದ್ರ ಪ್ರಾಂಗಣ ಅಥವಾ ಮಹಾ ಯಶಸ್ಸಿನ ಪ್ರಾಂಗಣ ಎಂದೂ ಕರೆಯಲಾಗುತ್ತದೆ. ಈ ಪ್ರಾಂಗಣದ ಪ್ರಮುಖ ಆಕರ್ಷಣೆಯೆಂದರೆ ಖುಯೆ ವಾನ್ ಪೆವಿಲಿಯನ್. ಇದು 1805ರಲ್ಲಿ ನಿರ್ಮಿಸಲಾದ ವಿಶಿಷ್ಟ ವಾಸ್ತುಶಿಲ್ಪದ ಕೃತಿಯಾಗಿದ್ದು, ಇಂದಿನ ಹನೋಯಿ ನಗರದ ಸಂಕೇತಗಳಲ್ಲಿ ಒಂದಾಗಿದೆ. ಖುಯೆ ವಾನ್ ಪೆವಿಲಿಯನ್ ಅನ್ನು ಸುಣ್ಣದಿಂದ ಲೇಪಿಸಲಾದ ನಾಲ್ಕು ಕಲ್ಲಿನ ಕಂಬಗಳ ಮೇಲೆ ನಿರ್ಮಿಸಲಾಗಿದೆ. ಇದರ ಮೇಲ್ಭಾಗವು ಕೆಂಪು ಬಣ್ಣದಲ್ಲಿದ್ದು, ಎರಡು ವೃತ್ತಾಕಾರದ ಕಿಟಕಿಗಳು ಹಾಗೂ ಸುಂದರವಾಗಿ ವಿನ್ಯಾಸಗೊಳಿಸಲಾದ ಮೇಲ್ಛಾವಣಿಯನ್ನು ಹೊಂದಿದೆ. ಇದರ ಒಳಭಾಗದಲ್ಲಿ ಕಂಚಿನ ಗಂಟೆಯೊಂದನ್ನು ತೂಗುಹಾಕಲಾಗಿದ್ದು, ಶುಭ ಸಮಾರಂಭಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಅದನ್ನು ಬಾರಿಸಲಾಗುತ್ತದೆ. ಈ ಪೆವಿಲಿಯನ್‌ನಲ್ಲಿ ಕೆತ್ತಲಾಗಿರುವ ಅನೇಕ ಕಾವ್ಯಮಯ ವಾಕ್ಯಗಳು ವಿಯೆಟ್ನಾಂನ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಸಾಹಿತ್ಯದ ಮಹಿಮೆಯನ್ನು ಸಾರುತ್ತವೆ. ಖುಯೆ ವಾನ್ ಪೆವಿಲಿಯನ್ನ ಎರಡೂ ಬದಿಗಳಲ್ಲಿ ಸುಕ್ ವಾನ್ ದ್ವಾರ ಮತ್ತು ಬಿ ವಾನ್ ದ್ವಾರ ಇವೆ. ಈ ಎರಡೂ ದ್ವಾರಗಳನ್ನು ಸಾಹಿತ್ಯದ ಸೌಂದರ್ಯಕ್ಕೆ ಸಮರ್ಪಿಸಲಾಗಿದ್ದು, ಅದರ ವಿಷಯವಸ್ತು ಹಾಗೂ ಅಭಿವ್ಯಕ್ತಿಯ ಶೈಲಿ ಎರಡನ್ನೂ ಗೌರವಿಸುತ್ತವೆ. === ಮೂರನೇ ಪ್ರಾಂಗಣ === [[File:Van Mieu Hanoi 5.jpg|thumb|ದೇವಾಲಯದ ಮೂರನೇ ಪ್ರಾಂಗಣದಲ್ಲಿ, ಥಿಯೆನ್ ಕ್ವಾಂಗ್ ಬಾವಿ ಮತ್ತು ಕೆಂಪು ಬಣ್ಣದ ಖುಯೆ ವಾನ್ ಪೆವಿಲಿಯನ್ ಪ್ರಮುಖ ಆಕರ್ಷಣೆಗಳಾಗಿವೆ.]] ಖುಯೆ ವಾನ್ ಪೆವಿಲಿಯನ್ ಮೂಲಕ ಪ್ರವೇಶಿಸಿದರೆ ದೇವಾಲಯದ ಮೂರನೇ ಪ್ರಾಂಗಣಕ್ಕೆ ತಲುಪಬಹುದು. ಈ ಪ್ರಾಂಗಣದ ಮಧ್ಯಭಾಗದಲ್ಲಿ ಥಿಯೆನ್ ಕ್ವಾಂಗ್ ಬಾವಿ ಇದೆ. ಈ ಬಾವಿಯ ಎರಡೂ ಬದಿಗಳಲ್ಲಿ ಎರಡು ಭವ್ಯ ಸಭಾಂಗಣಗಳಿದ್ದು, ಅವುಗಳಲ್ಲಿ ದೇವಾಲಯದ ಅಮೂಲ್ಯ ಪರಂಪರೆಯ ವಸ್ತುಗಳು ಮತ್ತು ಐತಿಹಾಸಿಕ ಸಂಪತ್ತನ್ನು ಸಂರಕ್ಷಿಸಲಾಗಿದೆ. ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು. <gallery> ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ. ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ </gallery> [[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]] == ಜನಪ್ರಿಯ ಸಂಸ್ಕೃತಿ == * ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು. <gallery> ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Nguyen_mandarin.jpg ಚಿತ್ರ:Mandarin7.jpg|alt=Mandarins in Hanoi| ಹನೋಯ್‌ನಲ್ಲಿ ಮ್ಯಾಂಡರಿನ್‌ಗಳು </gallery> m6mzazex3pxjepoligjsom0bxhhtxn3 ಟೆಂಪ್ಲೇಟು ಚರ್ಚೆಪುಟ:Marriage 11 179744 1376947 1376941 2026-07-19T15:41:08Z A826 72368 /* ಮೂರನೇ ನಿಯತಾಂಕದಲ್ಲಿ ದೋಷ */ ಪ್ರತಿಕ್ರಿಯೆ 1376947 wikitext text/x-wiki == ಮೂರನೇ ನಿಯತಾಂಕದಲ್ಲಿ ದೋಷ == {{Marriage|ಚೆನ್ನಮ್ಮ|25 May 1954|18 July 2026}} ಬಳಸಿದಾಗ "ಗುರುತಿಸಲಾಗದ ವಿರಾಮ ಚಿಹ್ನೆ: '೨'" ಎಂಬ parser ದೋಷ ಬರುತ್ತಿದೆ. ಮೊದಲ ಎರಡು ನಿಯತಾಂಕಗಳು ಮಾತ್ರ ಇದ್ದರೆ ಟೆಂಪ್ಲೇಟ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ: <nowiki>{{Marriage|ಚೆನ್ನಮ್ಮ|25 May 1954}}</nowiki> ಆದರೆ ಮೂರನೇ ನಿಯತಾಂಕ (ವಿವಾಹ ಅಂತ್ಯದ ದಿನಾಂಕ) ಸೇರಿಸಿದ ತಕ್ಷಣ ದೋಷ ಉಂಟಾಗುತ್ತದೆ. ದಯವಿಟ್ಟು ಟೆಂಪ್ಲೇಟ್ ಪರಿಶೀಲಿಸಿ. [[ಸದಸ್ಯ:Wikinmo|Wikinmo]] ([[ಸದಸ್ಯರ ಚರ್ಚೆಪುಟ:Wikinmo|ಚರ್ಚೆ]]) ೦೩:೨೮, ೧೯ ಜುಲೈ ೨೦೨೬ (IST) :@[[ಸದಸ್ಯ:Wikinmo|Wikinmo]] ಪರಿಹರಿಸಲಾಗಿದೆ, ವರದಿಗೆ ಧನ್ಯವಾದಗಳು. --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೨೧:೧೧, ೧೯ ಜುಲೈ ೨೦೨೬ (IST) kzebf5huy575yfg7v11hhilie8p7zq7 ಸದಸ್ಯರ ಚರ್ಚೆಪುಟ:Ashwini shivappa horakeri 3 179746 1376944 2026-07-19T13:38:33Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376944 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Ashwini shivappa horakeri}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೯:೦೮, ೧೯ ಜುಲೈ ೨೦೨೬ (IST) aaafp1ump0p0843v2qsdo8nzylog6pp ಸದಸ್ಯರ ಚರ್ಚೆಪುಟ:ಗಣಪತಿ ಹೆಗಡೆ 3 179747 1376951 2026-07-19T16:25:01Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376951 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ಗಣಪತಿ ಹೆಗಡೆ}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೧:೫೫, ೧೯ ಜುಲೈ ೨೦೨೬ (IST) egsgoxfbxv9lnkpgorzywtee35kqjaj ಸದಸ್ಯರ ಚರ್ಚೆಪುಟ:ಅರ್ಜುನ ದೊಡಮನಿ 3 179748 1376953 2026-07-19T19:06:50Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376953 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ಅರ್ಜುನ ದೊಡಮನಿ}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೦:೩೬, ೨೦ ಜುಲೈ ೨೦೨೬ (IST) inib9qen9q4q4ccnepsbcr4m9esvzdz ಸದಸ್ಯರ ಚರ್ಚೆಪುಟ:Pavankumarupsc 3 179749 1376955 2026-07-20T01:56:19Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376955 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Pavankumarupsc}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೭:೨೬, ೨೦ ಜುಲೈ ೨೦೨೬ (IST) if1ydzyxhfukklk8af8p5a5lid3j358 ಸದಸ್ಯರ ಚರ್ಚೆಪುಟ:Muhammad ashraf m 3 179750 1376956 2026-07-20T03:26:04Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376956 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Muhammad ashraf m}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೮:೫೬, ೨೦ ಜುಲೈ ೨೦೨೬ (IST) gb424y5ipzh0ajfqgkwx94mmdg7jer9 ಸದಸ್ಯರ ಚರ್ಚೆಪುಟ:Abhishek Lamani 3 179751 1376958 2026-07-20T06:37:53Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376958 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Abhishek Lamani}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೨:೦೭, ೨೦ ಜುಲೈ ೨೦೨೬ (IST) t0j3ldk63gix72dxu8r5j2tonc41t2l ಸದಸ್ಯರ ಚರ್ಚೆಪುಟ:Manikanta Basavaraju 3 179752 1376959 2026-07-20T07:21:16Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376959 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Manikanta Basavaraju}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೨:೫೧, ೨೦ ಜುಲೈ ೨೦೨೬ (IST) ojnkr4ahjv1dj8ohzcmte9hi3gq9tyj ಸದಸ್ಯರ ಚರ್ಚೆಪುಟ:Santosh Vastrad 3 179753 1376962 2026-07-20T10:08:56Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376962 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Santosh Vastrad}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೩೮, ೨೦ ಜುಲೈ ೨೦೨೬ (IST) r06p2j4cvbyrixhy6jhzuxfk3qr6jxm