ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.1
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:Chirasmarane-Niranjana.pdf/೩
104
12822
317853
246888
2026-05-07T09:04:56Z
Ashwini Rai K
8475
/* Validated */
317853
proofread-page
text/x-wiki
<noinclude><pagequality level="4" user="Ashwini Rai K" /></noinclude>ಸತ್ತು ಬದುಕಿದ,ಬದುಕಿ ಉಳಿದ ನಿರಂಜನ '''...''' </br>
'ಸತ್ತು ನೋಡು'* ಎಂದು ಸಾವನ್ನು ಸ್ವಾಗತಿಸಿ ಸವಾಲೆಸೆದ ನಿರಂಜನ ಮಾರ್ಚಿ 13, 1992ರಂದು ನಿಧನರಾದರು ; ಬದುಕಿ ಉಳಿದರು ; ಕೀರ್ತಿಶೇಷರಾದರು. ಸನಾತನ ನಿತ್ಯನೂತನ ಮಾನವಭವಿತವ್ಯಕ್ಕೆ ತಮ್ಮ ಬದುಕಿನ ಅವಧಿಯಲ್ಲಿ ಹೊಸ ಹೊಸ ಆಯಾಮಗಳನ್ನು ಕಂಡುಂಡು ತೆರದು ತೋರಿದರು.
ಬದುಕಿನುದ್ದಕ್ಕೂ ಅದೆಷ್ಟು ತುಮುಲ ತುಯ್ದಾಟಗಳು, ಸಂಘರ್ಷಗಳು! ಅದೆಷ್ಟೇ ಪ್ರತಿಬಂಧಕಗಳಿರಲಿ, ಮಾನವೀಯ ಮೌಲ್ಯಗಳನ್ನು ಬದುಕಿ ಬಾಳುವ ಛಲ ಹೊತ್ತು ಸಾಗಿದ ಬಾಲ್ಯ ಅದೆಷ್ಟು ಅರ್ಥಪೂರ್ಣ ಭಾವಪೂರ್ಣ! ಅನುಕಂಪದ ಆಮಿಷಕ್ಕಡಗದ ಆತ್ಮಪ್ರತ್ಯಯ ಆತ್ಮವಿಶಾಸಗಳ ಹೆಜ್ಜೆಗಳನ್ನಿಡುತ್ತ ಸಾಗಿದ ಆ ದಿನಗಳು ಅದೆಷ್ಟು ಚರಿತ್ರಾರ್ಹ!
ಹೃನ್ಮನಗಳ ಮಾನವೀಯ ಮಿಲನವೆಂಬಂತೆ ಬಾಳ ಸಂಗಾತಿ ಅನುಪಮಾರೊಂದಿಗಿನ ವಿವಾಹಕೂಡ ವೈಯಕ್ತಿಕ ನೆಲೆ ಮೀರಿ ಲೋಕಕ್ಕೆ ಬೆಳಕಾಗಿ ಮೂಡಿಬಂದದ್ದಾದರೂ ಅದೆಷ್ಟು ಹೃದಯಸ್ಪರ್ಶಿ !
ಬಾಳಿನುದ್ದಕ್ಕೂ ಅಂಶಾಂಶಿಕವಾಗಿ ಸತ್ಯವನ್ನು ಕಂಡುಕೊಳ್ಳುತ್ತ ಸಾಗಿದ ಉತ್ಕಂಠೆಯ ಅನುಭವ-ಅನುಭಾವಗಳ ಪಲುಕುಗಳು ಅದೆಷ್ಟು ಧ್ವನಿಪೂರ್ಣ !
Remarkable restless invincible creative spirit with seminal aesthetic sensibilities....
'ಮೃತ್ಯುಂಜಯ', 'ಚಿರಸ್ಮರಣೆ'--ನಿಜಕ್ಕೂ ನಿರಂಜನರ ಅದಮ್ಯ ಅವಿನಾಶಿ ಚೇತನಕ್ಕೆಷ್ಟು ಅನ್ವರ್ಥ!
ಮೈಸೂರು
ಅಕ್ಟೋಬರ್ 25,2002 -ಡಿ.ವಿ.ಕೆ.
-----
*ನೋಡಿ:ಪುಟ 237<noinclude></noinclude>
7h2glx5oqmnxdsur92lv4zivpx7ev8l
ಪುಟ:Chirasmarane-Niranjana.pdf/೪
104
12823
317854
246893
2026-05-07T09:06:11Z
Ashwini Rai K
8475
/* Validated */
317854
proofread-page
text/x-wiki
<noinclude><pagequality level="4" user="Ashwini Rai K" /></noinclude> ''' ಚಿರಸ್ಮರಣೆ '''
{{center|ನಿರಂಜನ}}
ಡಿ.ವಿ.ಕೆ. ಮೂರ್ತಿ ಪ್ರಕಾಶನ
ಮೈಸೂರು<noinclude></noinclude>
fjhx2hy2abk9qik9vsoap7p25qqpfc1
317855
317854
2026-05-07T09:07:44Z
Ashwini Rai K
8475
317855
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|''' ಚಿರಸ್ಮರಣೆ '''}}
{{center|ನಿರಂಜನ}}
{{center|'''ಡಿ.ವಿ.ಕೆ. ಮೂರ್ತಿ ಪ್ರಕಾಶನ'''}}
{{center|ಮೈಸೂರು}}<noinclude></noinclude>
0mvk4rm4i1syar9vav19q7c1svl0tln
ಪುಟ:Chirasmarane-Niranjana.pdf/೫
104
12824
317856
247068
2026-05-07T09:08:16Z
Ashwini Rai K
8475
/* Validated */
317856
proofread-page
text/x-wiki
<noinclude><pagequality level="4" user="Ashwini Rai K" /></noinclude>'''''CHIRASMARANE''''' : A Novel in Kannda by Niranjana. Twelfth Edition 2013. Published by D.V.K. Murthy Prakashana, Opp. Sri Raghavendraswamy Matha, Krishnamurthipuram, Mysore-570 004. 蛮:2331484
ಮೊದಲನೆಯ ಮುದ್ರಣ : ೧೯೫೫</br> ಎರಡನೆಯ ಮುದ್ರಣ:೧೯೭೫</br> ಮೂರನೆಯ ಮುದ್ರಣ : ೧೯೮೧ </br> ನಾಲ್ಕನೆಯ ಮುದ್ರಣ : ೧೯೮೩</br> ಐದನೆಯ ಮುದ್ರಣ : ೧೯೯೭</br> ಆರನೆಯ ಮುದ್ರಣ : ೨೦೦೧</br> ಏಳನೆಯ ಮುದ್ರಣ : ೨೦೦೨</br> ಎಂಟನೆಯ ಮುದ್ರಣ : ೨೦೦೩</br> ಒಂಭತ್ತನೆಯ ಮುದ್ರಣ : ೨೦೦೪</br> ಹತ್ತನೆಯ ಮುದ್ರಣ : ೨೦೦೫</br> ಹನ್ನೊಂದನೆಯ ಮುದ್ರಣ: ೨೦೧೧</br> ಹನ್ನೆರಡನೆಯ ಮುದ್ರಣ : ೨೦೧೩
@ ಸೀಮಂತಿನೀ ನಿರಂಜನ
ಪುಸ್ತಕದ ಆಕಾರ: 1/8 ಕ್ರೌನ್ </br>
ಬಳಸಿರುವ ಕಾಗದ: 11.2 ಡೆಲ್ಪ
ಬೆಲೆ : ರೂ. 80
ವಿತರಕರು : ಮೆ|| ಡಿ. ವಿ. ಕೆ ಮೂರ್ತಿ</br>
ನಂ.1498/1, ರಾಮಯ್ಯರ್ ರಸ್ತೆ, ಕೃಷ್ಣಮೂರ್ತಿಪುರಂ, ಮೈಸೂರು-570004</br>
ದೂ : 0821-2331484 ಮೊ. : 9342121484
ಮುಖಚಿತ್ರ : ವೆಂಕಟೇಶ್
ಮುದ್ರಕರು : ಎ.ಜಿ. ಸುವ್ರತೀಂದ್ರ</br>
ವಾಣೀ ಪ್ರೆಸ್, ಗೀತಾ ರಸ್ತೆ, ಚಾಮರಾಜಪುರಂ, ಮೈಸೂರು-೫೭೦ ೦೦೫</br>
© : ೨೩೩೦೨೯೫, ೪೨೫೩೨೯೫ ದೂರಶ್ರಾವಣಿ: ೯೮೮೬೭ ೮೫೦೯೫<noinclude></noinclude>
j7h7pua7dp4zn8gx3ve8w96a5jg98cc
ಪುಟ:Chirasmarane-Niranjana.pdf/೧೧
104
12830
317857
246929
2026-05-07T09:36:53Z
Ashwini Rai K
8475
/* Validated */
317857
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=೧೦|right=ಚಿರಸ್ಮರಣೆ}}
ದಿನಾಚರಣೆಯಲ್ಲಿ ಭಾಗವಹಿಸಲು. ಈ ಎರಡು ಭೇಟಿಗಳ ವೇಳೆಯಲ್ಲೂ ನಾನಿದ್ದುದು ರಂಗದ ಮೇಲೆ. ಅದರೊಂದಿಗೆ, ವಿಶಿಷ್ಟವಾದ ಇನ್ನೊಂದು ಪಾತ್ರವೂ ಇತ್ತು. ಅದು ರಂಗದ ಮೇಲಿದ್ದಾಗಲೂ ಬರಹಗಾರನಾಗಿ ತುಸು ದೂರವಿರುವುದು,
ನಡೆಯುತ್ತಿದ್ದುದನ್ನು ವಸ್ತುನಿಷ್ಠವಾಗಿ ಈಕ್ಷಿಸಿ ಅರ್ಥೈಸುವುದು, ಅದನ್ನೆಲ್ಲ ನನ್ನ ಆಳಕ್ಕೆ ಇಂಗಿಸಿಕೊಳ್ಳುವುದು....
</br>{{gap}}
ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕತೆಯಾಗಿದ್ದರು, ದಂತಕಥೆಯಾಗಿದ್ದರು....</br>{{gap}}
ಕಯ್ಯೂರಿಗೆ ಭೇಟಿ ನೀಡಿದಾಗ ನಾನಿದ್ದುದು ರಂಗದ ಮೇಲೆ ಎಂದೆನಲ್ಲ? ಆ ಹೊತ್ತಿಗಾಗಲೇ ನಾನು ಕಮ್ಯೂನಿಸ್ಟ್ ಪಕ್ಷ ಸೇರಿದ್ದೆ. ಅದು ಭೂಗತ ಅವಸ್ಥೆಯಿಂದ ಹೊರಬಂದು ಬೆಳೆಯತೊಡಗಿದ್ದ ಪಕ್ಷ. ನನ್ನ ರಾಜಕೀಯಪ್ರಜ್ಞೆ ಪ್ರಖರಗೊಂಡ
ರೀತಿಯ ಹಿನ್ನಲೆಯಲ್ಲಿ ಆ ಹೆಜ್ಜೆಯನ್ನು ನಾನಿಟ್ಟುದು ತರ್ಕಬದ್ಧವಾಗಿಯೇ ಇತ್ತು. ಅದು ಸಂಭವಿಸಿದ್ದು ಹೀಗೆ:</br>{{gap}}
ಮಂಗಳೂರಿಗೂ ಮುಂಬಯಿಗೂ ಉದ್ಯೋಗದ ನಂಟು. ಆ ಮಹಾನಗರದ ಬಾಣಲೆಯಲ್ಲಿ ಕಮ್ಯೂನಿಸ್ಟರಾಗಿ ಅರಳಿದ 'ಕನ್ನಡಿಗರು' ಬಹಳ ಜನ. ಅವರಲ್ಲಿ ಪ್ರಮುಖರು: 1920ರ ದಶಕದಲ್ಲಿ ಎಸ್. ವಿ. ಘಾಟೆ; 1930ರ ದಶಕದಲ್ಲಿ
ಎಂ. ಬಿ. ರಾವ್, ಉಪಾಧ್ಯಾಯ ಸೋದರರು ಮತ್ತು ಶಾಂತಾರಾಮ್ ಪೈ; 1940ರ ದಶಕದಲ್ಲಿ ತೋನ್ಸೆ ಸಂಜೀವ ಹೆಗ್ಡೆ.... ನಾಜಿ ಪಡೆಗಳು ಸೋವಿಯತ್ ಒಕ್ಕೂಟಕ್ಕೆ ನುಗ್ಗಿದ ಅನಂತರ ಭಾರತ ಕಮ್ಯೂನಿಸ್ಟ್ ಪಕ್ಷದ ಮೇಲಿನ ನಿಷೇಧವನ್ನು ಬ್ರಿಟಿಷ್ ಸರಕಾರ ಹಿಂತೆಗೆದುಕೊಂಡಿತು. ನೂರಾರು ಸೆರೆಮನೆಗಳಿಂದ ಸಹಸ್ರಾರು
ಕಮ್ಯೂನಿಸ್ಟ್ ಮುಖಂಡರು ಹೊರಬಿದ್ದರು. ಅವರಲ್ಲಿ ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸಲು ನಿಯೋಜಿತರಾದವರು ಉಪಾಧ್ಯಾಯ ಸೋದರರು. ಅವರು ಮಂಗಳೂರಿಗೆ ಬಂದರು. ಮೊದಲು ಅಣ್ಣ, ಬಳಿಕ ತಮ್ಮ. ಆ ತನಕ ಅಲ್ಲಿ
ಕಾರ್ಮಿಕಕ್ಷೇತ್ರದಲ್ಲಿ ದುಡಿಯುತ್ತಿದ್ದ ಸೋನ್ಸ್ ಮತ್ತಿತರರನ್ನು, ವಿದ್ಯಾರ್ಥಿರಂಗದ ಹರಿದಾಸ ಆಚಾರ್, ಶಿವಶಂಕರರಾವ್, ಕಕ್ಕಿಲ್ಲಾಯಾದಿ ಮುಖಂಡರನ್ನು ಕಂಡರು. ನನ್ನ ಮೇಲೂ ಕಣ್ಣು ಹಾಯಿಸಿದರು. ನನ್ನ ಬಾಂಧವ್ಯ ಕಾಸರಗೋಡಿನ ದಕ್ಷಿಣಕ್ಕಿದ್ದ ಜನರ ಜತೆ. ಅವರಲ್ಲೊಬ್ಬರು- 1930ರ ದಶಕದಲ್ಲಿ ಹೈಸ್ಕೂಲಿನ ಅಧ್ಯಾಪಕ
ವೃತ್ತಿ ಬಿಟ್ಟು 'ಕ್ರಾಂತಿಯಾರಿ'ಯಾದ ಸಿ. ಎಂ. ಕುಂಞರಾಮನ್ ನಾಯರ್- ಮಂಗಳೂರಿನಲ್ಲಿ ಒಂದು ಮುದ್ರಣಾಲಯ ಇಟ್ಟುಕೊಂಡಿದ್ದರು. ಅವರು ನನ್ನ ಹಿರಿಯ ಗೆಳೆಯರಾದರು. ಒಟ್ಟು ಪರಿಣಾಮ- ನಾನು ಪಕ್ಷದ ಸದಸ್ಯನಾದದ್ದು.<noinclude></noinclude>
mj26fgs3cs7t48w3pc49csrpfg27coi
ಪುಟ:Chirasmarane-Niranjana.pdf/೧೨
104
12831
317858
246970
2026-05-07T09:37:18Z
Ashwini Rai K
8475
/* Validated */
317858
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=ಚಿರಸ್ಮರಣೆ|right=೧೧}}
1945 ರಲ್ಲಿ ಬೆಂಗಳೂರಿಗೆ ಬಂದು 'ಪ್ರಜಾಮತ' ದ ಸಹಾಯಕ ಸಂಪಾದಕನಾದೆ. 1946ರಲ್ಲಿ ಹುಬ್ಬಳ್ಳಿ ಸೇರಿದೆ. ಕನ್ನಡ ಮುಖಪತ್ರ ಆರಂಭಿಸಲು ಪಕ್ಷ ಯೋಚಿಸಿತ್ತು. ಹಣವಿರಲಿಲ್ಲವೆಂದು ಯೋಜನೆ ಮುಂದೆ ಬಿತ್ತು. ಇದ್ದುದರಲ್ಲೇ ಜನತಾ ಸಾಹಿತ್ಯ ಎಂಬ ಪ್ರಕಾಶನ ಸಂಸ್ಥೆ ರೂಪಿಸಿ ಸಾಮಯಿಕವೆನಿಸುವ ಇಪ್ಪತ್ತೇಳು ಪುಸ್ತಿಕೆಗಳನ್ನು ಹೊರತಂದವು. 1947ರ ಮೇ ದಿನದಿಂದ 'ಜನಶಕ್ತಿ' ಸಾಪ್ತಾಹಿಕದ ಪ್ರಸಾರ ಸಂಭ್ರಮ. (ಅದರಲ್ಲಿದ್ದ ಒಂದು ಅಂಕಣ 'ಸಂಗಾತಿ ಸಂಚಯ.'
ಅದರಲ್ಲಿನ ಮೂರು ಅಂಕಣಗಳ ಬರವಣಿಗೆ ಆಕ್ಷೇಪಾರ್ಹವೆಂದು ಮೊರಾರ್ಜಿ ಗೃಹಮಂತ್ರಿಯಾಗಿದ್ದ ಮುಂಬಯಿ ಸರಕಾರ ನನ್ನನ್ನು ಮುಂಬಯಿಗೆ ಕರೆಯಿತು. 'ಪರಿಣಾಮ ಅನುಭವಿಸಲು ಸಿದ್ಧನಾಗು' ಎಂದಿತು) ದಮನಕಾಂಡ ಆರಂಭವಾದಾಗ ಭೂಗತನಾಗಿ ಪತ್ರಿಕೆ ನಡೆಸಿದೆ. ಸರಕಾರ ಪತ್ರಿಕೆಯನ್ನು ನಿಷೇಧಿಸಿತು. ಭೂಗತ ಬದುಕನ್ನು ಮುಂದುವರಿಸಿ, ಪಕ್ಷ ನಿರ್ಧರಿಸಿದ್ದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತನಾದೆ. ಐದು ವರ್ಷ ಸಾಮಾನ್ಯ ಸದಸ್ಯತ್ವ, ಮೂರು ವರ್ಷಗಳ ಭೂಗತ ಜೀವನವೂ ಸೇರಿ ಐದು ವರ್ಷ ಸಕ್ರಿಯ ಸದಸ್ಯತ್ವ- ಹೀಗೆ ಹತ್ತು ವರ್ಷ ಉರುಳಿದ್ದುವು.</br>{{gap}}
ಕಮ್ಯೂನಿಸ್ಟ್ ಪಕ್ಷ ತನ್ನ ಧೋರಣೆಯನ್ನು ಮತ್ತೊಮ್ಮೆ ಬದಲಿಸಿ, ಸರಕಾರದೊಡನೆ ಹೊಸ ಆಟ ಆಡಲು ಒಪ್ಪಿತು. ಅದಕ್ಕೆ ಹಿನ್ನೆಲೆಯಾಗಿ ನಡೆದಿತ್ತು ಒಂದು ಸೈದ್ಧಾಂತಿಕ ತಾಕಲಾಟ. ಇದರಲ್ಲಿ ಉರಿದು ಹೋಗುತ್ತಿದ್ದೇನೆ ಎನಿಸಿದಾಗ,
ನಾನು ಪಕ್ಷದಿಂದ ಬೇರೆಯಾದೆ. ಮಾಜಿ ಸಂಗಾತಿಗಳು ಸಾರ್ವತ್ರಿಕ ಚುನಾವಣೆಗೆ ಅಣಿಯಾಗುತ್ತಿದ್ದಂತೆ, ನಾನು ಒಂಟಿ ಜೀವನದ ಹೊಸ ಅಧ್ಯಾಯ ಬರೆಯತೊಡಗಿದೆ. (ಹಳೆಯ ದಾಖಲೆಗಳೊಡನೆ ಪೊಲೀಸರು ಬಂದರು. ಬಂಧಿಸಿ
'ಹಾತ್ ಬೇಡಿ' ತೊಡಿಸಿದರು. ಇಲ್ಲಿ ಅಲ್ಲಿ ಲಾಕಪ್ಪುಗಳಲ್ಲಿರಿಸಿ, ನ್ಯಾಯಸ್ಥಾನದ ಕಟ್ಟೆ ಹತ್ತಿಸಿದರು. ವಿಚಾರಣೆಯನ್ನು ಸುದೀರ್ಘಗೊಳಿಸಿ ಸಾಕಷ್ಟು ಹಿಂಸೆ ನೀಡಿದ ಬಳಿಕ, ಒಂದಿಷ್ಟು ದಂಡ ವಸೂಲಿ ಮಾಡಿ ನನ್ನ ರಟ್ಟೆಯನ್ನು ಬಿಟ್ಟರು.)</br>{{gap}}
ಅಂತೂ ಕೊನೆಗೊಮ್ಮೆ, ಹಲವು ಚಟುವಟಿಕೆಗಳ ಕುಂಳಕುಂದ ಶಿವರಾಯ ಸಾಹಿತಿ ನಿರಂಜನನಾದ.</br>{{gap}}
ಕನ್ನಡ ಸಾಹಿತ್ಯದ ದೊಡ್ಡಕೆರೆಯಲ್ಲಿ ಕಾದಂಬರಿಯ ತೆಪ್ಪೋತ್ಸವ ನಡೆದಿತ್ತು. ಬರಿಗೈಯವನು ಆ ಸಂತೆಗೆ ಹೋದೆ. ನನ್ನಲ್ಲಿದ್ದುದು ವಿಶಿಷ್ಟವೆನ್ನಬಹುದಾದ ದಟ್ಟ ಅನುಭವದ ಬಂಡವಾಳ ಮಾತ್ರ. ಕಾದಂಬರಿಯ ಕಾಣಿಕೆಯೊಡನೆ ವಾಚಕಲೋಕದ ಬಳಿಸಾರಲು ಮುಂದಾದೆ.<noinclude></noinclude>
r78vyhq627e2dui199nkocerd19r66a
ಪುಟ:Chirasmarane-Niranjana.pdf/೧೩
104
12832
317859
256235
2026-05-07T09:37:31Z
Ashwini Rai K
8475
/* Validated */
317859
proofread-page
text/x-wiki
<noinclude><pagequality level="4" user="Ashwini Rai K" /></noinclude> {{rh|center=|left=೧೨|right=ಚಿರಸ್ಮರಣೆ}}
{{gap}}'ವಿಮೋಚನೆ'ಯಿಂದ ಮೊದಲುಗೊಂಡ ನನ್ನ ಕಾದಂಬರಿ ರಚನೆ 'ಬನಶಂಕರಿ'</br>
'ರಂಗಮ್ಮನ ವಠಾರ'ಗಳಲ್ಲಿ ಕಲಾವಂತಿಕೆಯ ಒಂದು ಹಂತವನ್ನು ಮುಟ್ಟಿತು .</br>
ಅದು ಶೀಘ್ರಪಯಣ.. ಹಣಕಾಸಿನ ಗಳಿಕೆ ಅಷ್ಟಕ್ಕಷ್ಟೇ ಇದ್ದರೂ ಓದುಗರ </br>
ಒಲವನ್ನು ಹೇರಳವಾಗಿ ಸಂಪಾದಿಸಿದ್ದೆ.</br>
{{gap}}ಒಂದು ವಸ್ತು ಒಳಗಿನಿಂದ ನನ್ನನ್ನು ಕುಟುಕುತ್ತಲೇ ಇತ್ತು.ಕಯ್ಯೂರು ರೈತರ</br>
ಸಾವು ಬದುಕಿನ ಹೋರಾಟ.. ಕೆಲ ಗೆಳೆಯರೊಡನೆ ಆ ವಿಷಯ ಹೇಳಿಯೂ ಇದ್ದೆ.</br>
ಐದಾರು ಕಾದಂಬರಿಗಳನ್ನು ಬರೆದು 'ಪ್ರಸಿದ್ಧ'ನಾಗಿದ್ದೆನಲ್ಲ? ಕಯ್ಯೂರಿನ</br>
ಕಥೆಯನ್ನು ಬರೆಯಲು ಇದು ಸಕಾಲ ಎನಿಸಿತು."ಬರೆದುಬಿಡಿ" ಎಂದರು,</br>
ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್ ನ ಜಿ.ಎಚ್.ರಾಮರಾಯರು </br>
(ಪ್ರಗತಿಪರ ಕಾರ್ಯಕ್ರಮಗಳಿಗೆ ಮೊದಲಿನಿಂದಲೂ ಅವರು ಆಸರೆ).</br>
ಪ್ರಕಾಶಕರಾಗಲು ಮೈಸೂರಿನ ಭಾರತೀ ಪ್ರಕಾಶನದ ಬಿ.ನರಸಿಂಗರಾಯರು ಮುಂದೆ </br>ಬಂದರು.</br>
{{gap}}ಆಗ(1957)ನಾನು ವಾಸವಾಗಿದ್ಡುದು ಬೆಂಗಳೂರಿನ ವಿಲ್ಸನ್ ಗಾರ್ಡನಿನಲ್ಲಿ</br>,'ವೈವಾಹಿಕ ಬಂಧನ'ಕ್ಕೆ ಇನ್ನೂ ಒಳಗಾಗಿರಲಿಲ್ಲ, ಬರೆಯತೊಡಗಿದೆ.</br>
ಹದಿನೆಂಟನೆಯ ದಿನ 'ಚಿರಸ್ಮರಣೆ ಮುಗಿಯಿತು.</br>
{{center|೩}} 'ಚಿರಸ್ಮರಣೆ' ಒಂದು ಕಾದಂಬರಿ.ಚರಿತ್ರೆಯಲ್ಲ.ಈ ಕೃತಿಯಲ್ಲಿ ನಾನು</br>
ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು-ಆ ಕಾಲಾವಧಿಯ</br>
ಚೇತನವನ್ನು-ಕಲೆಯನ್ನು ಸೆರೆಹಿಡಿಯುವ ಯತ್ನ. </br>
{{gap}}'ಚಿರಸ್ಮರಣೆ'ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ </br>
ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರನಿರ್ವಹಣೆಗಾಗಿ ರಂಗಸಜ್ಜಿಕೆಯ</br>
ವೇಷಭೂಷಣಗಳನ್ನು ಅವು ನಿರಾಕರಿಸಿಲ್ಲ, ಇನ್ನು ಕೆಲಪಾತ್ರಗಳನ್ನು ನಾನು </br>
ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ,</br>
{{gap}}ರಚಿತವಾಗಿ ಇಪ್ಪತು ವರ್ಷಗಳಾದಮೇಲೆ 'ಚಿರಸ್ಮರಣೆ' ಮಲಯಾಳಂ </br>
ಭಾಷೆಯಲ್ಲಿ ಮರುಹುಟ್ಟು ಪಡೆಯಿತು. ಕೇರಳದಲ್ಲಿ ಅದಕ್ಕೆ ದೊರೆತ ಸ್ವಾಗತದ</br>
ವಿವರ ತಿಳಿದಾಗ 'ಧನ್ಯನಾದೆ' ಎನಿಸಿತು. ಸ್ವಲ್ಪ ಸಮಯದ ಅನಂತರ ಕನ್ನಡದಲ್ಲಿ </br>
ಎರಡನೆಯ ಮುದ್ರಣ ಬಂತು. ಮುಂದೆ ತಮಿಳು, ತೆಲುಗು, ಮರಾಠಿ, ಬಂಗಾಳಿ,</br>
ತುಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನುವಾದಗಳು ಬರತೊಡಗಿದುವು.</br><noinclude></noinclude>
dwhbtwr24l27br6i1l42ups9epuig1w
ಪುಟ:Chirasmarane-Niranjana.pdf/೧೫
104
12834
317860
247056
2026-05-07T09:38:06Z
Ashwini Rai K
8475
/* Validated */
317860
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=೧೪|right=ಚಿರಸ್ಮರಣೆ}}
ರಚಿಸಿಕೊಟ್ಟಿರುವ ಕಲಾವಿದ ವೆಂಕಟೇಶ್ ಅವರಿಗೂ ಮುದ್ರಣ ನಿರ್ವಹಿಸಿರುವ ವಾಣೀ ಪ್ರೆಸ್ನ ಶ್ರೀ ಎ.ಜಿ. ಸುವ್ರತೀಂದ್ರ ಅವರಿಗೂ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.
{{rh|left=25 ಆಗಸ್ಟ್ 1983|right=ನಿರಂಜನ}}
{{rh|left=ಬೆಂಗಳೂರು}}<noinclude></noinclude>
dpzwjkcjk1ev9y2w8wep0mrmttlnzqr
ಪುಟ:Chirasmarane-Niranjana.pdf/೧೬
104
12835
317861
247072
2026-05-07T09:38:20Z
Ashwini Rai K
8475
/* Validated */
317861
proofread-page
text/x-wiki
<noinclude><pagequality level="4" user="Ashwini Rai K" /></noinclude>
{{rh|center='''ಮೊದಲ ಅಧ್ಯಾಯಕ್ಕೆ ಮುನ್ನ'''}}
ಬೆಂಗಳೂರಿನಿಂದ ಮಂಗಳೂರಿಗೆ ಮಂಗಳೂರಿನಿಂದ ಚರ್ವತ್ತೂರಿಗೆ...</br>{{gap}}
ಬನ್ನಿ. ರೈಲುಗಾಡಿ ಇಲ್ಲಿಂದ ಹೊರಡುವುದು ಇನ್ನೂ ತಡ. ಊರು ಇರುವುದು ಆ ಭಾಗದಲ್ಲಿ. ಹಿಂದಕ್ಕೆ ಸಾಗಿ, ರೈಲುಕಂಬಿಯನ್ನು ದಾಟಿ, ಹೊರಟುಹೋಗೋಣ. ಇಷ್ಟು ಜನ ಯಾಕೆ ಬರಬೇಕಿತ್ತು ಎಂದಿರಾ? ಒಳ್ಳೆ ಪ್ರಶ್ನೆ! ಈ ದಿನದ ಮಹೋತ್ಸವಕ್ಕೆ ಇಷ್ಟೊಂದು ದೂರದಿಂದ ಬಂದ ಪ್ರೇಕ್ಷಕರನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದರೆ
ಊರವರು ಏನೆಂದಾರು?</br>{{gap}}
ಯಾಕೆ ಅತ್ತ ನೋಡ್ತಿದ್ದೀರಿ? ಟಿಕೆಟ್ ಕಲೆಕ್ಟರು ಕರೆಯಬಹುದೆಂದೆ? ಇಲ್ಲಿ ಕೊಡಿ ಟಿಕೆಟ್. ಆತನಿಗೆ ಕಳುಹಿಸಿಕೊಡ್ತೇವೆ. ಅವನಾಗಿ ನಮ್ಮನ್ನೆಂದೂ ಕರೆಯಲಾರ. ಇಲ್ಲಿ ಇಳಿದು ನಮ್ಮ ಹಳ್ಳಿಗೆ ಹೋಗುವವರಲ್ಲಿ ಮೋಸಗಾರರು ಯಾರೂ ಇಲ್ಲ ಎಂಬುದು ಆತನಿಗೆ ಗೊತ್ತಿದೆ.</br>{{gap}}
ಎಚ್ಚರದಿಂದ ದಾಟಿ, ಕೈಕಂಬದ ಸಾಲು ತಂತಿ ಕೆಳಗಿದೆ. ಎಡವಿ ಬಿದ್ದೀರಿ. ಬನ್ನಿ ಹೀಗೆ ನಿಂತು, ರೈಲುಗಾಡಿಯತ್ತ ಯಾಕೆ ದಿಟ್ಟಿಸಿದಿರಿ? ಅದೊಂದು ವಿಚಿತ್ರ ಅನುಭವ, ಅಲ್ಲ? ಸಹಸ್ರ ಸಹಸ್ರ ಜನರನ್ನು ಹೊತ್ತು, ನಿಮ್ಮೊಬ್ಬರನ್ನೇ
ಇಳಿಯಬಿಟ್ಟು, ಮುಂದೆ ಸಾಗುವ ಉಗಿ ಶಕಟ. ಸಮುದ್ರದಂಡೆಯುದ್ದಕ್ಕೂ ದಕ್ಷಿಣಾಭಿಮುಖವಾಗಿ, ಮುಂದಕ್ಕೆ.</br>{{gap}}
ಹೊಲಗಳ ನಡುವೆ ನಡೆದೇ ನಿಮಗೆ ಅಭಾಸವಿದೆಯೊ ಇಲ್ಲವೊ. ಏನಂದಿರಿ? ನೀವೂ ಹಳ್ಳಿಯಲ್ಲೆ ಹುಟ್ಟಿದವರೆಂದೆ?ಮಣ್ಣಿನ ಮಗುವೆಂದೆ? ಸಂತೋಷ. ನಾನೂ ಹಾಗೆಯೇ ಊಹಿಸಿದ್ದೆ.</br>{{gap}}
ಈ ಹೊಲದ ಅಂಚುಗಳ ಮೇಲೆ ಒಬ್ಬೊಬ್ಬರೇ ನಡೆಯಬೇಕು. ಒಬ್ಬರ ಹಿಂದೊಬ್ಬರು, ಸಾಲುಸಾಲಾಗಿ. ಮುಂದಿನವರು ನಿಂತರೆ ಹಿಂದಿನವರೂ ನಿಲ್ಲಬೇಕು. ನಗರದಲ್ಲಿ ಮೋಟಾರು ವಾಹನಗಳು ಒಂದರ ಹಿಂದೊಂದು ಹೋಗುವುದಿಲ್ಲವೇ?
ಹಾಗೆ.</br>{{gap}}
ಬಿಸಿಲು ರಣಗುಡುತ್ತಿದ್ದರೂ ವಿಶಾಲವಾದ ಭೂಮಿ ಹಸುರಾಗಿದೆ, ನೋಡಿದಿರಾ? ಇದಕ್ಕೆ ಕಾರಣ ನದಿ. ಅದೋ, ದೂರದಲ್ಲಿ ಹರಿಯುತ್ತಿದೆಯಲ್ಲ, ಕಂಡೂ ಕಾಣಿಸದ ಹಾಗೆ? ತೇಜಸ್ವಿನಿ. ಹೆಸರು ಚೆನ್ನಾಗಿದೆ, ಎಂದಿರಾ? ಇಲ್ಲದೆ!
ನಾಮಕರಣ ಮಾಡಿದವರು ನಮ್ಮ ಜನ.<noinclude></noinclude>
e2cxtyfxe59w09k1u84g890oqjjcyw2
ಪುಟ:Chirasmarane-Niranjana.pdf/೧೭
104
12836
317862
247083
2026-05-07T09:38:36Z
Ashwini Rai K
8475
/* Validated */
317862
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=೧೮|right=ಚಿರಸ್ಮರಣೆ}}
ಕಂಡಿದ್ದೇವೆ. ಇಲ್ಲಿಂದಲೇ ಕಾಣುತ್ತಿವೆಯಲ್ಲವೆ ಆ ಧ್ವಜಸ್ತಂಭಗಳು, ಆ ಬಾವುಟಗಳೆರಡು? ಒಂದು, ಮೂರು ಬಣ್ಣಗಳ ರಾಷ್ಟ್ರಧ್ವಜ; ಇನ್ನೊಂದು, ಶ್ರಮಜೀವಿಗಳ ಹೋರಾಟದ ಗುರಿಯನ್ನು ಸೂಚಿಸುವ ನಿಶಾನೆ. ಅಗೋ, ಆ ಬಳಿಕ ಸ್ವಲ್ಪ ತಗ್ಗಿನಲ್ಲಿ ಬೇರೆ ನಾಲ್ಕು ಬಾವುಟಗಳು. ಕಯ್ಯೂರಿನ ನಾಲ್ವರು ವೀರರ ನಾಲ್ಕು ಮನೆಗಳ ಮೇಲೆ ಅವು ಹಾರಾಡುತ್ತಿವೆ.</br>{{gap}}
.....ಅಂತೂ ಕಯ್ಯೂರು ಸೇರಿದಿರಿ! ದೇಶದ ನಕಾಶೆಯಲ್ಲಿ ಇದೊಂದು ಕುಗ್ರಾಮ. ಭಾರತ ಭೂಮಿಯ ಸಹಸ್ರ ಸಹಸ್ರ ಹಳ್ಳಿಗಳಲ್ಲೊಂದು. ಆದರೆ ನಮ್ಮ ಪಾಲಿಗಿದೇ ಊರು, ಇದೇ ಮಹಾನಗರ.</br>{{gap}}
.....ಬನ್ನಿ, ಹೀಗೆ ಬನ್ನಿ. ಇದು ಕಯ್ಯೂರಿನ ಸಂಘದ ಕಟ್ಟಡ. ಬೇರೆ ಬೇರ ಪ್ರಾಂತಗಳಿಂದ ಬಂದಿರುವ ಅತಿಥಿಗಳೆಲ್ಲ ಇಲ್ಲಿ ನೆರೆದಿದ್ದಾರೆ ನಿಮ್ಮ ಹಾಗೆಯೇ ಬರಹಗಾರರು ಕೆಲವರು, ಇತರ ಕ್ಷೇತ್ರಗಳ ಪ್ರತಿಷ್ಠಿತ ಪ್ರಮುಖರು, ಆಯಸ್ಸಿನ
ಬಹುಭಾಗವನ್ನೆಲ್ಲ ಕಾರಾಗಾರದಲ್ಲಿ ಕಳೆದಿರುವ ವೃದ್ಧನಾಯಕರು. ಬನ್ನಿ, ಪರಿಚಯ
ಮಾಡಿಕೊಳ್ಳಿ.</br>{{gap}}
"ಏ ಸಂಗಾತಿ!"</br>{{gap}}
.....ಅದೋ, ಕಾರ್ಯದರ್ಶಿ ಗದರಿಸುತ್ತಿದ್ದಾರೆ. ಮೊದಲು ನಿಮ್ಮ ಊಟ ವಸತಿಯ ಏರ್ಪಾಟು ಮಾಡಬೇಕಂತೆ. ಈ ಗಡಿಬಿಡಿಯಲ್ಲಿ ಅಷ್ಟು ನನಗೆ ಹೊಳೆಯಬೇಡವೆ? ದೂರದಿಂದ ಪ್ರವಾಸ ಮಾಡಿ ಬಂದಿರುವ ನಿಮಗೆ ವಿಶ್ರಾಂತಿ
ಅಗತ್ಯ ಎನ್ನುವುದರ ಅರಿವಾದರೂ ನನಗಿರಬೇಡವೆ?</br>{{gap}}
ಬನ್ನಿ, ತೇಜಸ್ವಿನಿ ನದಿಯಲ್ಲಿ ಸ್ನಾನ ಮಾಡುವಿರಂತೆ. ಆ ಬಳಿಕ ಒಂದಿಷ್ಟು ಆಹಾರ. ಅದಾದ ಮೇಲೆ ವಿಶ್ರಾಂತಿ.
{{rh|center='''* * *'''}}
{{gap}}
ಎದ್ದಿರಾ? ಆಗಲೇ ಎರಡು ಸಾರೆ ನೋಡಿ ಹೋದೆ, ಮುಗುಳ್ನಗುತ್ತಮಲಗಿದ್ದಿರಿ. ಯಾವ ಕನಸು ಕಾಣುತ್ತಿದ್ದಿರೋ! ಎಬ್ಬಿಸಲು ಮನಸ್ಸಾಗಲಿಲ್ಲ.</br>{{gap}}
ನೋಡಿ, ಆಗಲೇ ಬಿಸಿಲು ಮಾಯವಾಗಿದೆ. ಇನ್ನೊಂದು ಘಳಿಗೆಯಲ್ಲೇ ಕತ್ತಲು.</br>{{gap}}
ಮುಖಕ್ಕಿಷ್ಟು ನೀರು ಹನಿಸಿಕೊಳ್ಳಿ, ಏನು ತರಿಸಲಿ? ಕಾಫಿಯೆ? ಕಾಫಿಯ
ಊರಿನವರು ನೀವು.... 'ನಿಮ್ಮೂರಿಗೆ ಬಂದಾಗ ನಿಮ್ಮೂರಿನ ಪಾನೀಯ' ಎಂದಿರಾ?
ಜನರೊಡನೆ ಸಮರಸವಾಗಬಯಸುವ ಈ ಮನೋವೃತ್ತಿ ನನಗೆ ತಿಳಿಯದೆ?<noinclude></noinclude>
mbket9ti2qhsvno4c43hdb4fd9mekhc
ಪುಟ:Chirasmarane-Niranjana.pdf/೧೮
104
12837
317863
247087
2026-05-07T09:38:50Z
Ashwini Rai K
8475
/* Validated */
317863
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=ಚಿರಸ್ಮರಣೆ|right=೧೯}}
ನಮ್ಮೂರಿನ ಚಹಾ ಕುಡಿದು ನೋಡಿ, ಚೆನ್ನಾಗಿದೆ.</br>{{gap}}
ಹೋಗೋಣವಿನ್ನು, ಇರುಳು ಹಗಲನ್ನು ತನ್ನೆಡೆಗೆ ಬರಸೆಳೆದು ತನ್ನೊಳಗೆ ಲೀನಗೊಳಿಸುವ ದೃಶ್ಯವನ್ನು ನಮ್ಮೂರಲ್ಲಿ ನೀವು ನೋಡಬೇಕು. ಈ ಸೊಬಗು ಅದ್ವಿತೀಯ.'ಎಲ್ಲ ಊರವರೂ ಹೀಗೆಯೇ ಹೇಳ್ತಾರೆ' ಎಂದಿರಾ? ಹಹ್ಹ....! ನಿಮ್ಮೊಡನೆ ಮಾತನಾಡುವುದೇ ಕಷ್ಟ, ನನಗೆ ಗೊತ್ತು.</br>{{gap}}
...ಕಣ್ಣು ಕೋರೈಸುವ ಹಾಗೆ ದೀಪಮಾಲೆ. ದೀಪಾವಳಿಯ ನೆನಪು ಬಂತೆ? ಹಗಲು ಕಂಡ ಹಳ್ಳಿಯೇ ಬೇರೆ, ಈ ಮಾಯಾನಗರಿಯೇ ಬೇರೆ, ಎನ್ನುವ ಹಾಗಿದೆಯಲ್ಲವೆ? ನಮ್ಮೂರಿಗೆ ವಿದ್ಯುಚ್ಛಕ್ತಿ ಇನ್ನೂ ಬಂದಿಲ್ಲ.(ಆದರೆ ವಿಚಾರದ ಹೊಸಬೆಳಕು ಧಾರಾಳವಾಗಿದೆ, ಧಾರಾಳವಾಗಿ...!)ಇಲ್ಲಿರುವುದೆಲ್ಲ ಎಣ್ಣೆಯ ದೀಪಗಳು, ಕಂದೀಲುಗಳು, ಚರ್ವತ್ತೂರು, ತ್ರಿಕರಪುರ, ನೀಲೇಶ್ವರ, ಹೊಸದುರ್ಗಗಳಿಂದ ಹೇರಳವಾಗಿ ತಂದಿರುವ ಪೆಟ್ರೋಮ್ಯಾಕ್ಸುಗಳು...</br>{{gap}}
ಎಡಕ್ಕೆ ತೇಜಸ್ವಿನಿ ನದಿಯತ್ತ ಒಮ್ಮೆ ನೋಡಿ. ಕತ್ತಲೆಯಲ್ಲಿ ಆ ನೀರು ಕಾಣಿಸುವುದೇ ಇಲ್ಲ, ಅಲ್ಲವೆ? ಅದರೆ ಆ ಚಲಿಸುವ ಕಂದೀಲು? ನೀರ ಮೇಲಿನ ಬೆಳಕು? .... ಜನರಿನ್ನೂ ದೋಣಿಗಳಲ್ಲಿ ನದಿಯನ್ನು ದಾಟಿ ಬರುತ್ತಿದ್ದಾರೆ. ತಿಳಿಯಿತೆ? ಬಲಕ್ಕೆ ಬೆಟ್ಟಗಳತ್ತ ನೋಡಿ. ಒಣಗಿದ ತಾಳೆಯ ಗರಿಯನ್ನು ಹಿಡಿಯಾಗಿ ಕಟ್ಟಿ, ಉರಿಯುವ ದೀಪವಾಗಿ ಮಾಡಿ, ಕಯ್ಯೂರಿಗೆ ಇಳಿದು ಬರುತ್ತಿದ್ದಾರೆ. ಕೊಳ್ಳಿದೆವ್ವಗಳು! ನಾನು ಎಳೆಯ ಮಗುವಾಗಿದ್ದಾಗ ನಿದ್ದೆಹೋಗದೆ ಹಟಮಾಡಿದರೆ ನಮ್ಮಜ್ಜಿ ಹೆದರಿಸುವುದಿತ್ತು: "ಕೊಳ್ಳಿದೆವ್ವ ಬರ್ತದೆ. ಹಾಂ" ಅಂತ. ಸುಳ್ಳು ಸುಳ್ಳೇ!.... ದೊಡ್ಡವನಾದ ಮೇಲೆ ನನಗೆ ತಿಳಿಯಿತು! ದೆವ್ವ ಯಾವುದು, ಮನುಷ್ಯರು ಯಾರು, ಎನ್ನುವುದೆಲ್ಲ ಚೆನ್ನಾಗಿ ತಿಳಿಯಿತು.</br>{{gap}}
ವಿಶೇಷ ಸಂಭ್ರಮಕ್ಕೆಂದು ಧ್ವನಿವರ್ಧಕ ಯಂತ್ರಯನ್ನು ತಂದಿದ್ದಾರೆ. ತಲಚೇರಿಯಿ೦ದ. ಹೀಗೆ ಹೇಳಿದೆನೆ೦ದು, ನಮ್ಮೂರವರಿಗೆ ಬಲಶಾಲಿ ಗಂಟಲಿಲ್ಲ---ಎಂದು ತಿಳಿಯಬೇಡಿ! ನದಿಯ ಆ ದಡದಿಂದ 'ಕೂ' ಎಂದರೆ ಸಾಕು, ಅರ್ಧ ಮೈಲಿ ಈಚೆಯ ಈ ದಡಕ್ಕೆ ಕೂಗು ಕೇಳಿಸುತ್ತದೆ. ಕಾಡಿನ ನಡುವಿನಿಂದ ಕರೆಕೊಟ್ಟರೆ ಸಾಕು, ಈ ಬೀಡಿಗೆ ಅದು ಬಂದು ತಲುಪುತ್ತದೆ. ಆದರೂ ಸಭೆ, ಭಾಷಣ, ಹಾಡುಗಾರಿಕೆ, ನಾಟಕ ಎಂದಮೇಲೆ ಧ್ವನಿವರ್ಧಕ ಯಂತ್ರ ಒಂದಿರುವುದೇ ಸೊಗಸು ಅಲ್ಲವೆ?</br>{{gap}}
ಬನ್ನಿ. ಉತ್ಸವ ಏರ್ಪಾಟಾಗಿರುವ ಬಯಲಿನತ್ತ ಹೋಗೋಣ. ಸಿಂಗರಿಸಿದ ಸಭಾಂಗಣ. ತಂತಮ್ಮ ಚಾಪೆಗಳನ್ನು ಅವರವರೇ ಹೊತ್ತು ತಂದು<noinclude></noinclude>
dq4qb9yun0mzs25dslnkgmv35iib9yc
ಪುಟ:Chirasmarane-Niranjana.pdf/೧೯
104
12838
317864
247091
2026-05-07T09:39:04Z
Ashwini Rai K
8475
/* Validated */
317864
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=೨೦|right=ಚಿರಸ್ಮರಣೆ}}
ಸುಖಾಸೀನರಾಗುತ್ತಿದ್ದಾರೆ. ಬೆಳಕು ಹರಿಯುವವರೆಗೂ ಇಲ್ಲಿಯೇ ಇರಲು ಇದು ಸಿದ್ಧತೆ. ನಿಮ್ಮ ನಾಡಿನಲ್ಲೂ ಬಯಲಾಟಗಳಿಗೆ ಜನ ಹೀಗೆಯೇ ಬರುತ್ತಾರೆ, ಅಲ್ಲವೆ?</br>{{gap}}
....'ಕಾರ್ಯಕ್ರಮವೇನು?' ಎಂದಿರಾ? ಅದೋ, ವೇದಿಕೆಯ ಮೇಲಿನಿಂದ ಜಾಹೀರು ಮಾಡುತ್ತಿದ್ದಾರೆ. ಇನ್ನು ಸಮೂಹ ಭೋಜನಕ್ಕೆ ಆರಂಭ. ರಾತ್ರಿ ಒಂಭತ್ತರವರೆಗೂ. ಒಂದೊಂದು ಸಲ ಸಾವಿರ ಜನ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿದ್ದೇವೆ. ಇದು ನಮ್ಮೂರಿನ ಆತಿಥ್ಯ. ಭೋಜನವಾದ ಮೇಲೆ ಈ ಉತ್ಸವದ ಹಿರಿತನ ವಹಿಸಲು ಬಂದಿರುವ ನಮ್ಮ ನಾಡಿನ ವೃದ್ಧ ನಾಯಕರ ಆರಂಭ ಭಾಷಣ. ಅದಾದಮೇಲೆ ಬೆಳಗು ಮುಂಜಾವದವರೆಗೂ ಹಾಡಿನ ಹಿನ್ನೆಲೆಯಲ್ಲಿ ನೃತ್ಯ, ನಾಟಕ ---'ಕಯ್ಯೂರು ವೀರಗಾಥಾ. 'ಆ ಬಳಿಕ ಸೂರ್ಯೋದಯಕ್ಕೆ ಸರಿಯಾಗಿ, ಕೊನೆಯದಾಗಿ... </br>{{gap}}
ಆ ವಾಚನಾಲಯ, ಅಮೃತಶಿಲೆಯ ಸ್ತೂಪ, ಕಾಣಿಸುತ್ತಿವೆ ಅಲ್ಲವೆ?</br>{{gap}}
'ಕಯ್ಯೂರು ವೀರಗಾಥಾ'ಮತ್ತೆ ಆ ನೆನಪು....</br>{{gap}}
ಅದೋ, ಅಲ್ಲಿ ನೋಡಿ. ಸ್ವಯಂಸೇವಕರ ಪೋಷಾಕು ಧರಿಸಿ ನಿಂತಿರುವ ರೈತ ಯುವಕರಿಬ್ಬರನ್ನು ಕಂಡಿರಾ? ಅವರು ಮಠದ ಅಪ್ಪುವಿನ ತಮ್ಮಂದಿರು. ವೇದಿಕೆಯ ಮೇಲೆ ಬಲಭಾಗದಲ್ಲಿ ಕುಳಿತಿರುವ ವೃದ್ಧ ದಂಪತಿಗಳನ್ನು ನೋಡಿ. ಅವರು ಅಪ್ಪುವಿನ ತಾಯಿ ತಂದೆ, ಅವರ ಬಳಿಯಲ್ಲಿರುವ ಹೆಂಗಸೇ ಅಪ್ಪುವಿನ ಹೆಂಡತಿ. ಇನ್ನೂ ಎಳೆಯ ಮಗುವೇನೋ ಎಂಬಂತೆ, ತುಂಬು ಮುಖದ ತನ್ನ ಮಗನನ್ನು ಬಳಿಯಲ್ಲೇ ಕುಳ್ಳಿರಿಸಿಕೊಂಡಿದ್ದಾಳೆ ಆ ತಾಯಿ.</br>{{gap}}
ಆ ಸಂಸಾರದ ಆಚೆಗಿರುವ ವೃದ್ದ ಮತ್ತು ವೃದ್ದೆ ಅವರೇ ಕೋಯಿತಟ್ಟಿನ ಚಿರುಕಂಡನ ತಾಯಿ ತಂದೆ. ಅವರ ಒಬ್ಬನೇ ಮಗ ಚಿರುಕಂಡ. ಬಳಿಯಲ್ಲಿ ಕುಳಿತಿರುವಾಕೆಯೇ ಆ ದಂಪತಿಯ ಸೊಸೆ.</br>{{gap}}
ಮೂರನೆಯ ಕುಟುಂಬ ಸ್ವಲ್ಪ ದೊಡ್ಡದು. ವೇದಿಕೆಯ ಮೇಲೆ ಎಡಭಾಗದಲ್ಲಿರುವ ವಯಸ್ಸಾದ ಗಂಡಹೆಂಡತಿಯೇ ಪೊಡವರ ಕುಂಞಂಬುವನ್ನು ಹೆತ್ತವರು. ಕುಂಞಂಬು ಎಂದರೆ ನಿಮ್ಮ ಭಾಷೆಯಲ್ಲಿ ಪುಟ್ಟಣ್ಣ ಎಂದಹಾಗೆ.
ಅವರಣ್ಣ ಕೇಳು ನಾಯರ್ ಕೆಳಗೆ ನಿಂತಿದ್ದಾನೆ. ತಮ್ಮ ರಾಯನ್ ನಾಯರ್. ಆ ಸೋದರರಲ್ಲಿ ಕೊನೆಯವನು ನಾರಾಯಣನ್ ನಾಯರ್. ಇವನೇ ನಮ್ಮೂರಿನ ಮೊದಲ ಪದವೀಧರ. ಮುಂದಿನ ಜೂನ್ ತಿಂಗಳಲ್ಲಿ ತಲಚೇರಿಯ ಕಾಲೇಜಿನಲ್ಲಿ ಆತ ಅಧ್ಯಾಪಕನಾಗುತ್ತಾನೆ. ನಾವು ಕೇರಳ ನಾಡಿಗೆ ಕೊಡುವ ಕಯ್ಯೂರಿನ ಪ್ರಥಮ<noinclude></noinclude>
hns4y0hw3z87m4plq29v2zthmqqx8fv
ಪುಟ:Chirasmarane-Niranjana.pdf/೨೦
104
12839
317865
256450
2026-05-07T09:41:17Z
Ashwini Rai K
8475
/* Validated */
317865
proofread-page
text/x-wiki
<noinclude><pagequality level="4" user="Ashwini Rai K" />ಚಿರಸ್ಮರಣೆ ೨೧</noinclude>{{rh|left=೨೦|right=ಚಿರಸ್ಮರಣೆ}}
<p style="text-indent: 1cm;">ಪ್ರೊಫೆಸರ್ ಈ ನಾರಾಯಣನ್ ನಾಯರ್. ಹೆಂಗಸರ ಜನಸಂದಣಿಯಿರುವ ಆ ಭಾಗದಲ್ಲಿ ಬಿಳಿಯ ಸೀರೆಯುಟ್ಟು ಸ್ವಯಂ ಸೇವಕರಿಗೆಲ್ಲ ನಿರ್ದೇಶನ ನೀಡುತ್ತಿರುವ ಆ ಸೋದರಿಯನ್ನ ಕಂಡಿರಾ? ಆಕೆಯೇ ಶ್ರೀದೇವಿಯಮ್ಮ, ಕುಂಞಂಬುವಿನ ಕೈಹಿಡಿದಾಕೆ.</p>
<p style="text-indent: 1cm;">}ಉತ್ಸವಕ್ಕೋಸ್ಕರ ಹಾಕಿರುವ ಸಾಲು ಅಂಗಡಿಗಳಾಚೆ ಸಂಘದ ನೇತೃತ್ವದಲ್ಲಿ ಉಚಿತ ಪಾನೀಯದ ಉಸ್ತುವಾರಿ ನೋಡುತ್ತಿರುವ ಆ ಯುವಕ. ಆತನೇ ಅಬೂಬುಕರನ ತಮ್ಮ. ಎಷ್ಟೊಂದು ಚುರುಕಾಗಿದ್ದಾನೆ, ಅಲ್ಲವೆ? ಆತನ ಬಳಿಯಲ್ಲೇ ತಲೆಯ ಮೇಲೆ ಸೆರಗು ಹಾಯಿಸಿ ಊರುಗೋಲನ್ನೂರಿ ನಿಂತಿರುವ {{gap}} ಆಕೆಯೇ ಅಬೂಬಕರನ ತಾಯಿ....</p>
<p style="text-indent: 1cm;">ಬನ್ನಿರಿನ್ನು.
ನೀವು ವೀರರ ಕುಟುಂಬಗಳ ಪರಿಚಯ ಮಾಡಿಕೊಂಡುದಾಯಿತು. ಭೋಜನದ ಕಾರ್ಯಕ್ರಮ ಮುಗಿಸೋಣ, ಹೀಗೆ ಬನ್ನಿ.</p>
<p style="text-indent: 1cm;"> ಹಬ್ಬದ ಅಡುಗೆ, ಭಕ್ಷಭೋಜ್ಯಗಳು. ಸಿಹಿ, ಸಾಗರದ ನದಿಯ ಮೀನು. ಈ ಉತ್ಸವಕ್ಕಾಗಿಯೇ ಸಾಕಿ ಬೆಳೆಸಿದ ಕೋಳಿಗಳು. ಸುತ್ತಮುತ್ತಲಿನ ಹಳ್ಳಿಗಳಿಂದೆಲ್ಲ ಕಾಣಿಕೆಯಾಗಿ ಬಂದ ಆಡುಗಳು. ಬಗೆಬಗೆಯ ತರಕಾರಿ. ಹಣ್ಣು ಹಂಪಲು, ನೀವು ಸಸ್ಯಾಹಾರಿಯೋ ಏನೋ! ಹೇಗೆ ಬೇಕೋ ಹಾಗೆ. ಬನ್ನಿ....</p>
<p style="text-indent: 1cm;"> 'ಈ ದೃಶ್ಯ ನೋಡಿಯೇ ಹೊಟ್ಟೆ ತುಂಬಿತು'ಎಂದಿರಾ?ಹಾಗಾಗುತ್ತದೆ ಎಷ್ಟೋ ಸಾರೆ, ಆದರೆ ಇಲ್ಲಿ ಈ ದಿನ 'ಬೇಡ' ಎನ್ನುವ ಹಾಗೆಯೇ ಇಲ್ಲ. ಬಂದ ಅತಿಥಿಗಳು ಒಂದು ತುತ್ತು ಹೆಚ್ಚಾಗಿಯೇ ಉಣ್ಣಬೇಕು. ಇಲ್ಲದೆ ಹೋದರೆ ಊರಿಗೇ ಅವಮಾನ.</p>
* * *
<p style="text-indent: 1cm;">ಎಲ್ಲಿ ಕುಳುತುಕೊಳ್ಳೊಣ? ವೇದಿಕೆಯ ಬಳಿಗೆ ಹೋಗೋಣವೆ? ಇಲ್ಲಿಯೇ ದೂರದಲ್ಲಿ ಕುಳಿತು ತನ್ಮಯರಾಗೋಣವೆಂದೆ?ಹಾಗೆಯೇ ಆಗಲಿ.</p>
<p style="text-indent: 1cm;"> ಮಂಪರು ಬರುತ್ತಿದೆ, ಅಲ್ಲ?
ಇನ್ನೆರಡೇ ನಿಮಿಷ.
ಭಾಷಣ ಮುಗಿಯಿತು.
ಅದೋ, ಘೋಷ:
"ಇಂಕ್ಲಿಲಾಬ್ ಜಿಂದಾಬಾದ್!"
"ಕ್ರಾಂತಿಗೆ ಜಯವಾಗಲಿ!"
"ಕಯ್ಯೂರು ವೀರರು ಅಮರರಾಗಲಿ!"</p><noinclude></noinclude>
kxsm9eacu2kpyu56qobu3o4epks1wsp
317866
317865
2026-05-07T09:42:32Z
Ashwini Rai K
8475
317866
proofread-page
text/x-wiki
<noinclude><pagequality level="4" user="Ashwini Rai K" />ಚಿರಸ್ಮರಣೆ ೨೧</noinclude>{{rh|left=ಚಿರಸ್ಮರಣೆ|right=೨೧}}
<p style="text-indent: 1cm;">ಪ್ರೊಫೆಸರ್ ಈ ನಾರಾಯಣನ್ ನಾಯರ್. ಹೆಂಗಸರ ಜನಸಂದಣಿಯಿರುವ ಆ ಭಾಗದಲ್ಲಿ ಬಿಳಿಯ ಸೀರೆಯುಟ್ಟು ಸ್ವಯಂ ಸೇವಕರಿಗೆಲ್ಲ ನಿರ್ದೇಶನ ನೀಡುತ್ತಿರುವ ಆ ಸೋದರಿಯನ್ನ ಕಂಡಿರಾ? ಆಕೆಯೇ ಶ್ರೀದೇವಿಯಮ್ಮ, ಕುಂಞಂಬುವಿನ ಕೈಹಿಡಿದಾಕೆ.</p>
<p style="text-indent: 1cm;">ಉತ್ಸವಕ್ಕೋಸ್ಕರ ಹಾಕಿರುವ ಸಾಲು ಅಂಗಡಿಗಳಾಚೆ ಸಂಘದ ನೇತೃತ್ವದಲ್ಲಿ ಉಚಿತ ಪಾನೀಯದ ಉಸ್ತುವಾರಿ ನೋಡುತ್ತಿರುವ ಆ ಯುವಕ. ಆತನೇ ಅಬೂಬುಕರನ ತಮ್ಮ. ಎಷ್ಟೊಂದು ಚುರುಕಾಗಿದ್ದಾನೆ, ಅಲ್ಲವೆ? ಆತನ ಬಳಿಯಲ್ಲೇ ತಲೆಯ ಮೇಲೆ ಸೆರಗು ಹಾಯಿಸಿ ಊರುಗೋಲನ್ನೂರಿ ನಿಂತಿರುವ {{gap}} ಆಕೆಯೇ ಅಬೂಬಕರನ ತಾಯಿ....</p>
<p style="text-indent: 1cm;">ಬನ್ನಿರಿನ್ನು.
ನೀವು ವೀರರ ಕುಟುಂಬಗಳ ಪರಿಚಯ ಮಾಡಿಕೊಂಡುದಾಯಿತು. ಭೋಜನದ ಕಾರ್ಯಕ್ರಮ ಮುಗಿಸೋಣ, ಹೀಗೆ ಬನ್ನಿ.</p>
<p style="text-indent: 1cm;"> ಹಬ್ಬದ ಅಡುಗೆ, ಭಕ್ಷಭೋಜ್ಯಗಳು. ಸಿಹಿ, ಸಾಗರದ ನದಿಯ ಮೀನು. ಈ ಉತ್ಸವಕ್ಕಾಗಿಯೇ ಸಾಕಿ ಬೆಳೆಸಿದ ಕೋಳಿಗಳು. ಸುತ್ತಮುತ್ತಲಿನ ಹಳ್ಳಿಗಳಿಂದೆಲ್ಲ ಕಾಣಿಕೆಯಾಗಿ ಬಂದ ಆಡುಗಳು. ಬಗೆಬಗೆಯ ತರಕಾರಿ. ಹಣ್ಣು ಹಂಪಲು, ನೀವು ಸಸ್ಯಾಹಾರಿಯೋ ಏನೋ! ಹೇಗೆ ಬೇಕೋ ಹಾಗೆ. ಬನ್ನಿ....</p>
<p style="text-indent: 1cm;"> 'ಈ ದೃಶ್ಯ ನೋಡಿಯೇ ಹೊಟ್ಟೆ ತುಂಬಿತು'ಎಂದಿರಾ?ಹಾಗಾಗುತ್ತದೆ ಎಷ್ಟೋ ಸಾರೆ, ಆದರೆ ಇಲ್ಲಿ ಈ ದಿನ 'ಬೇಡ' ಎನ್ನುವ ಹಾಗೆಯೇ ಇಲ್ಲ. ಬಂದ ಅತಿಥಿಗಳು ಒಂದು ತುತ್ತು ಹೆಚ್ಚಾಗಿಯೇ ಉಣ್ಣಬೇಕು. ಇಲ್ಲದೆ ಹೋದರೆ ಊರಿಗೇ ಅವಮಾನ.</p>
* * *
<p style="text-indent: 1cm;">ಎಲ್ಲಿ ಕುಳುತುಕೊಳ್ಳೊಣ? ವೇದಿಕೆಯ ಬಳಿಗೆ ಹೋಗೋಣವೆ? ಇಲ್ಲಿಯೇ ದೂರದಲ್ಲಿ ಕುಳಿತು ತನ್ಮಯರಾಗೋಣವೆಂದೆ?ಹಾಗೆಯೇ ಆಗಲಿ.</p>
<p style="text-indent: 1cm;"> ಮಂಪರು ಬರುತ್ತಿದೆ, ಅಲ್ಲ?
ಇನ್ನೆರಡೇ ನಿಮಿಷ.
ಭಾಷಣ ಮುಗಿಯಿತು.
ಅದೋ, ಘೋಷ:
"ಇಂಕ್ಲಿಲಾಬ್ ಜಿಂದಾಬಾದ್!"
"ಕ್ರಾಂತಿಗೆ ಜಯವಾಗಲಿ!"
"ಕಯ್ಯೂರು ವೀರರು ಅಮರರಾಗಲಿ!"</p><noinclude></noinclude>
bcfe64jp6smfbp6y3aqjasmyh57z1z8
ಪುಟ:Chirasmarane-Niranjana.pdf/೨೧
104
12840
317867
256464
2026-05-07T09:43:53Z
Ashwini Rai K
8475
/* Validated */
317867
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=೨೨|right=ಚಿರಸ್ಮರಣೆ}}
<p style="text-indent:1cm;"> ಹಿಮ್ಮೇಳ ಸಿದ್ದವಾಗುತ್ತಿದೆ. ನಟರು ರಂಗಭೂಮಿಗೆ ಪ್ರವೇಶ ಮಾಡಿದ್ದಾರೆ. ಅವರಿಗಡ್ಡವಾಗಿ ತೆರೆ....
ಠಣಂ ಠಣಕ್ ಠಣಂ...
ನೃತ್ಯವನ್ನು ನೋಡುತ್ತಿರಿ; ಹಾಡಿನ ಅರ್ಥ ನಾನು ಹೇಳುವೆ.
"ಕಯ್ಯೂರು ವೀರಗಾಥಾ!"{{cente|೧}}
೧
<p style="text-indent:1cm;"> ಪರತಂತ್ರ ಭಾರತದ ಕರಿನಾಡು ಕೇರಳ, ಆ ಭೂಮಿಯಲ್ಲೊಂದು ಕಿರು ಗ್ರಾಮ ಕಯ್ಯೂರು. ಇದು ಹಿಂದಿನ ಕಥೆ; ಎಷ್ಟೋ ವರ್ಷಗಳಿಗೆ ಹಿಂದಿನ ಕಥೆ.</p>
<p style="text-indent:1cm;"> ಆಗಲೇ ಸೂರ್ಯೋದಯವಾಗಿದೆ ಗಂಡಸರೆಲ್ಲ ನೊಗಗಳನ್ನು ಹೆಗಲಿಗೇರಿಸಿ ಹೋರಿಗಳನ್ನು ಮುಂದಕ್ಕೆ ನಡೆಸುತ್ತ, ಹೊಲಗಳತ್ತ ಸಾಗಿದ್ದಾರೆ. ಕತ್ತಲೆ ಕರಗಿ
ಮಬ್ಬು ಬೆಳಕು ಮೆಲ್ಲಮೆಲ್ಲನೆ ಶುಭ್ರವಾಗುತ್ತಿದೆ. </p>
<p style="text-indent:1cm;">ಆ ಹಟ್ಟಿಯ ಹೊರಗೊಬ್ಬ ಹದಿನಾಲ್ಕರ ಹುಡುಗ ಬಿದಿರು ತಡಿಕೆಯ ತೂತಿನೊಳಗಿಂದ ಒಳಗಿಣಿಕಿ ನೋಡುತ್ತ ಪಿಸುದನಿಯಲ್ಲಿ ಕರೆಯುತ್ತಿದ್ದಾನೆ;</p>
<p style="text-indent:1cm;"> "ಶ್... ಏಯ್...ಶೂ.... ಅಪ್ಪು....."
ಒಳಗೆ ತನಗೆ ತಿಳಿದೊಂದೇ ಹಾಡನ್ನು ಅಪ್ಪುವಿನ ತಾಯಿ ಕೋಮಲವೂ{{gap}}ಅಲ್ಲದ, ಗಡಸೂ ಅಲ್ಲದ,ಗಡಸೂ ಅಲ್ಲದ ಸ್ವರದಲ್ಲಿ ಹಾಡುತ್ತಿದ್ದಾಳೆ; </p>
<p style="text-indent:1cm;"> "ಓಮನ ಕಿಡಾವೇ...."
"ಓ ಮುದ್ದು ಕಂದಾ..."</p>
<p style="text-indent:1cm;"> ಆದರೆ ಆ ಹಾಡಿನ ಆಲಾಪನೆಗೆ ಭಂಗ ತರುವಂತೆ ಆ ಕರೆ :</p>
<p style="text-indent:1cm;"> "ಶ್....ಅಪ್ಪೂ ಏಳೋ.....!" </p>
<p style="text-indent:1cm;">vಆ ತಾಯಿ ತಿರುಗಿ ನೋಡಿದಳು. ಬರೀ ಚಾಪೆಯ ಮೇಲೆ ತೆಳ್ಳಗಿನದೊಂದು ಕಂಬಳಿ ಹೊದೆದು ಮಲಗಿದ್ದ ಆಕೆಯ ಮಗನಿಗೆ ಆಗಲೇ ಹದಿನೈದು ತುಂಬಿತ್ತು. ಎಳೆಯ ಕಂದಮ್ಮನಲ್ಲ! ಆದರೂ ಮಲಗಿದ್ದ ಮಗನನ್ನು ಪರಕೀಯರು ಯಾರೋ ಕರೆದು ನಿದ್ದೆಗೆ ಭಂಗತರುವುದು ತಾಯಿಗೆ ಸಹನೆಯಾಗದು.</p>
<p style="text-indent:1cm;"> ಹಾಡು ನಿಲ್ಲಿಸಿ, ಧ್ವನಿಯನ್ನು ಗಡುಸುಗೊಳಿಸಿ ತಾಯಿ ಕೇಳಿದಳು: </p>
<p style="text-indent:1cm;">"ಯಾರೋ ಅದು? ಅಪ್ಪು ಮಲಗಿದ್ದಾನೆ." </p>
<p style="text-indent:1cm;">ಆ ತಾಯಿಯ ಸ್ವರ ಕೇಳಿ ಅಲ್ಲಿಂದ ಓಡಬೇಕೆನಿಸಿತು ಹೊರಗಿದ್ದ ಹುಡುಗನಿಗೆ. ಮರುಕ್ಷಣವೇ 'ಕುಂಭಕರ್ಣನ ನಿದ್ದೆ. ಈ ಮಹಾರಾಯನಿಗೊಮ್ಮೆ ಎಚ್ಚರವಾದರೂ</p><noinclude></noinclude>
4yyeuv0fqetfl0yloxyylbpgdnmgdgb
317868
317867
2026-05-07T09:44:13Z
Ashwini Rai K
8475
317868
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=೨೨|right=ಚಿರಸ್ಮರಣೆ}}
<p style="text-indent:1cm;"> ಹಿಮ್ಮೇಳ ಸಿದ್ದವಾಗುತ್ತಿದೆ. ನಟರು ರಂಗಭೂಮಿಗೆ ಪ್ರವೇಶ ಮಾಡಿದ್ದಾರೆ. ಅವರಿಗಡ್ಡವಾಗಿ ತೆರೆ....
ಠಣಂ ಠಣಕ್ ಠಣಂ...
ನೃತ್ಯವನ್ನು ನೋಡುತ್ತಿರಿ; ಹಾಡಿನ ಅರ್ಥ ನಾನು ಹೇಳುವೆ.
"ಕಯ್ಯೂರು ವೀರಗಾಥಾ!
೧
<p style="text-indent:1cm;"> ಪರತಂತ್ರ ಭಾರತದ ಕರಿನಾಡು ಕೇರಳ, ಆ ಭೂಮಿಯಲ್ಲೊಂದು ಕಿರು ಗ್ರಾಮ ಕಯ್ಯೂರು. ಇದು ಹಿಂದಿನ ಕಥೆ; ಎಷ್ಟೋ ವರ್ಷಗಳಿಗೆ ಹಿಂದಿನ ಕಥೆ.</p>
<p style="text-indent:1cm;"> ಆಗಲೇ ಸೂರ್ಯೋದಯವಾಗಿದೆ ಗಂಡಸರೆಲ್ಲ ನೊಗಗಳನ್ನು ಹೆಗಲಿಗೇರಿಸಿ ಹೋರಿಗಳನ್ನು ಮುಂದಕ್ಕೆ ನಡೆಸುತ್ತ, ಹೊಲಗಳತ್ತ ಸಾಗಿದ್ದಾರೆ. ಕತ್ತಲೆ ಕರಗಿ
ಮಬ್ಬು ಬೆಳಕು ಮೆಲ್ಲಮೆಲ್ಲನೆ ಶುಭ್ರವಾಗುತ್ತಿದೆ. </p>
<p style="text-indent:1cm;">ಆ ಹಟ್ಟಿಯ ಹೊರಗೊಬ್ಬ ಹದಿನಾಲ್ಕರ ಹುಡುಗ ಬಿದಿರು ತಡಿಕೆಯ ತೂತಿನೊಳಗಿಂದ ಒಳಗಿಣಿಕಿ ನೋಡುತ್ತ ಪಿಸುದನಿಯಲ್ಲಿ ಕರೆಯುತ್ತಿದ್ದಾನೆ;</p>
<p style="text-indent:1cm;"> "ಶ್... ಏಯ್...ಶೂ.... ಅಪ್ಪು....."
ಒಳಗೆ ತನಗೆ ತಿಳಿದೊಂದೇ ಹಾಡನ್ನು ಅಪ್ಪುವಿನ ತಾಯಿ ಕೋಮಲವೂ{{gap}}ಅಲ್ಲದ, ಗಡಸೂ ಅಲ್ಲದ,ಗಡಸೂ ಅಲ್ಲದ ಸ್ವರದಲ್ಲಿ ಹಾಡುತ್ತಿದ್ದಾಳೆ; </p>
<p style="text-indent:1cm;"> "ಓಮನ ಕಿಡಾವೇ...."
"ಓ ಮುದ್ದು ಕಂದಾ..."</p>
<p style="text-indent:1cm;"> ಆದರೆ ಆ ಹಾಡಿನ ಆಲಾಪನೆಗೆ ಭಂಗ ತರುವಂತೆ ಆ ಕರೆ :</p>
<p style="text-indent:1cm;"> "ಶ್....ಅಪ್ಪೂ ಏಳೋ.....!" </p>
<p style="text-indent:1cm;">vಆ ತಾಯಿ ತಿರುಗಿ ನೋಡಿದಳು. ಬರೀ ಚಾಪೆಯ ಮೇಲೆ ತೆಳ್ಳಗಿನದೊಂದು ಕಂಬಳಿ ಹೊದೆದು ಮಲಗಿದ್ದ ಆಕೆಯ ಮಗನಿಗೆ ಆಗಲೇ ಹದಿನೈದು ತುಂಬಿತ್ತು. ಎಳೆಯ ಕಂದಮ್ಮನಲ್ಲ! ಆದರೂ ಮಲಗಿದ್ದ ಮಗನನ್ನು ಪರಕೀಯರು ಯಾರೋ ಕರೆದು ನಿದ್ದೆಗೆ ಭಂಗತರುವುದು ತಾಯಿಗೆ ಸಹನೆಯಾಗದು.</p>
<p style="text-indent:1cm;"> ಹಾಡು ನಿಲ್ಲಿಸಿ, ಧ್ವನಿಯನ್ನು ಗಡುಸುಗೊಳಿಸಿ ತಾಯಿ ಕೇಳಿದಳು: </p>
<p style="text-indent:1cm;">"ಯಾರೋ ಅದು? ಅಪ್ಪು ಮಲಗಿದ್ದಾನೆ." </p>
<p style="text-indent:1cm;">ಆ ತಾಯಿಯ ಸ್ವರ ಕೇಳಿ ಅಲ್ಲಿಂದ ಓಡಬೇಕೆನಿಸಿತು ಹೊರಗಿದ್ದ ಹುಡುಗನಿಗೆ. ಮರುಕ್ಷಣವೇ 'ಕುಂಭಕರ್ಣನ ನಿದ್ದೆ. ಈ ಮಹಾರಾಯನಿಗೊಮ್ಮೆ ಎಚ್ಚರವಾದರೂ</p><noinclude></noinclude>
l6uu8akwe8mertcr7t54gn815f7y139
317869
317868
2026-05-07T09:45:41Z
Ashwini Rai K
8475
317869
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=೨೨|right=ಚಿರಸ್ಮರಣೆ}}
<p style="text-indent:1cm;"> ಹಿಮ್ಮೇಳ ಸಿದ್ದವಾಗುತ್ತಿದೆ. ನಟರು ರಂಗಭೂಮಿಗೆ ಪ್ರವೇಶ ಮಾಡಿದ್ದಾರೆ. ಅವರಿಗಡ್ಡವಾಗಿ ತೆರೆ....
ಠಣಂ ಠಣಕ್ ಠಣಂ...
ನೃತ್ಯವನ್ನು ನೋಡುತ್ತಿರಿ; ಹಾಡಿನ ಅರ್ಥ ನಾನು ಹೇಳುವೆ.
"ಕಯ್ಯೂರು ವೀರಗಾಥಾ!
{{center|೧}}
<p style="text-indent:1cm;"> ಪರತಂತ್ರ ಭಾರತದ ಕರಿನಾಡು ಕೇರಳ, ಆ ಭೂಮಿಯಲ್ಲೊಂದು ಕಿರು ಗ್ರಾಮ ಕಯ್ಯೂರು. ಇದು ಹಿಂದಿನ ಕಥೆ; ಎಷ್ಟೋ ವರ್ಷಗಳಿಗೆ ಹಿಂದಿನ ಕಥೆ.</p>
<p style="text-indent:1cm;"> ಆಗಲೇ ಸೂರ್ಯೋದಯವಾಗಿದೆ ಗಂಡಸರೆಲ್ಲ ನೊಗಗಳನ್ನು ಹೆಗಲಿಗೇರಿಸಿ ಹೋರಿಗಳನ್ನು ಮುಂದಕ್ಕೆ ನಡೆಸುತ್ತ, ಹೊಲಗಳತ್ತ ಸಾಗಿದ್ದಾರೆ. ಕತ್ತಲೆ ಕರಗಿ
ಮಬ್ಬು ಬೆಳಕು ಮೆಲ್ಲಮೆಲ್ಲನೆ ಶುಭ್ರವಾಗುತ್ತಿದೆ. </p>
<p style="text-indent:1cm;">ಆ ಹಟ್ಟಿಯ ಹೊರಗೊಬ್ಬ ಹದಿನಾಲ್ಕರ ಹುಡುಗ ಬಿದಿರು ತಡಿಕೆಯ ತೂತಿನೊಳಗಿಂದ ಒಳಗಿಣಿಕಿ ನೋಡುತ್ತ ಪಿಸುದನಿಯಲ್ಲಿ ಕರೆಯುತ್ತಿದ್ದಾನೆ;</p>
<p style="text-indent:1cm;"> "ಶ್... ಏಯ್...ಶೂ.... ಅಪ್ಪು....."
ಒಳಗೆ ತನಗೆ ತಿಳಿದೊಂದೇ ಹಾಡನ್ನು ಅಪ್ಪುವಿನ ತಾಯಿ ಕೋಮಲವೂ{{gap}}ಅಲ್ಲದ, ಗಡಸೂ ಅಲ್ಲದ,ಗಡಸೂ ಅಲ್ಲದ ಸ್ವರದಲ್ಲಿ ಹಾಡುತ್ತಿದ್ದಾಳೆ; </p>
<p style="text-indent:1cm;"> "ಓಮನ ಕಿಡಾವೇ...."
"ಓ ಮುದ್ದು ಕಂದಾ..."</p>
<p style="text-indent:1cm;"> ಆದರೆ ಆ ಹಾಡಿನ ಆಲಾಪನೆಗೆ ಭಂಗ ತರುವಂತೆ ಆ ಕರೆ :</p>
<p style="text-indent:1cm;"> "ಶ್....ಅಪ್ಪೂ ಏಳೋ.....!" </p>
<p style="text-indent:1cm;">vಆ ತಾಯಿ ತಿರುಗಿ ನೋಡಿದಳು. ಬರೀ ಚಾಪೆಯ ಮೇಲೆ ತೆಳ್ಳಗಿನದೊಂದು ಕಂಬಳಿ ಹೊದೆದು ಮಲಗಿದ್ದ ಆಕೆಯ ಮಗನಿಗೆ ಆಗಲೇ ಹದಿನೈದು ತುಂಬಿತ್ತು. ಎಳೆಯ ಕಂದಮ್ಮನಲ್ಲ! ಆದರೂ ಮಲಗಿದ್ದ ಮಗನನ್ನು ಪರಕೀಯರು ಯಾರೋ ಕರೆದು ನಿದ್ದೆಗೆ ಭಂಗತರುವುದು ತಾಯಿಗೆ ಸಹನೆಯಾಗದು.</p>
<p style="text-indent:1cm;"> ಹಾಡು ನಿಲ್ಲಿಸಿ, ಧ್ವನಿಯನ್ನು ಗಡುಸುಗೊಳಿಸಿ ತಾಯಿ ಕೇಳಿದಳು: </p>
<p style="text-indent:1cm;">"ಯಾರೋ ಅದು? ಅಪ್ಪು ಮಲಗಿದ್ದಾನೆ." </p>
<p style="text-indent:1cm;">ಆ ತಾಯಿಯ ಸ್ವರ ಕೇಳಿ ಅಲ್ಲಿಂದ ಓಡಬೇಕೆನಿಸಿತು ಹೊರಗಿದ್ದ ಹುಡುಗನಿಗೆ. ಮರುಕ್ಷಣವೇ 'ಕುಂಭಕರ್ಣನ ನಿದ್ದೆ. ಈ ಮಹಾರಾಯನಿಗೊಮ್ಮೆ ಎಚ್ಚರವಾದರೂ</p><noinclude></noinclude>
hmf81k3quzqp4bb6yok3n6kb5oz81v0
ಪುಟ:Chirasmarane-Niranjana.pdf/೨೨
104
12841
317870
256471
2026-05-07T09:51:16Z
Ashwini Rai K
8475
/* Validated */
317870
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಚಿರಸ್ಮರಣೆ|right=೨೩}}
<p style="text-indent:1cm;">ಆಗಿದ್ದರೆ-–ಎನಿಸಿತು. 'ಒಳಗಿನಿಂದ ಅಪ್ಪುವಿನ ತಾಯಿ ಕೇಳಿದ್ದಳು: 'ಯಾರೋ ಅದು?' ಆ ಪ್ರಶ್ನೆಗೆ ತಾನು ಉತ್ತರ ಕೊಡಬೇಕೋ ಬಾರದೋ....</p>
<p style="text-indent:1cm;"> ವಿಚಾರ ತಡವರಿಸಿತು, ಗಂಟಲೋಣಗಿತು.</p>
<p style="text-indent:1cm;">ಉತ್ತರ ಬರಲಿಲ್ಲವೆಂದು ಒಳಗಿದ್ದ ತಾಯಿ ಹಟ್ಟಿಯ ಬಾಗಿಲಿಗೆ ನಡೆದಳು.
ಹೊರಗೆ ಹುಡುಗ ಏನು ಮಾಡಬೇಕೆಂದು ತಿಳಿಯದೆ ನಿಂತಿದ್ದಾಗಲೇ, ಬಾಗಿಲು ಕಿರ್ರೆಂದಿತು.</p>
<p style="text-indent:1cm;">"ಓ ನೀನೇನೋ?"</p>
<p style="text-indent:1cm;"> ಬೆಚ್ಚಿಬಿದ್ದ ಹುಡುಗ ಹಲ್ಲು ಕಿಸಿದ. ಉಟ್ಟಿದ್ದುದು ಮೊಣಕಾಲವರೆಗಿನ ಒಂದು ಅಂಗವಸ್ತ್ರ ಮೈಮೇಲಿದ್ದುದೊಂದು ಹರಕು ಅಂಗಿ. ಆ ವಸನದ ಹೊರಗೆ ಕಾಣುತ್ತಿದ್ದುದೆಲ್ಲ ಕರಿದಾದ ಬಡಕಲು ಮೈ.</p>
<p style="text-indent:1cm;">"ಹೊರಗೆ ಯಾಕೆ ನಿಂತಿದೀಯೋ? ಬಾ ಒಳಕ್ಕೆ." </p>
<p style="text-indent:1cm;"> ಹಾಗೆ ಆದೇಶವಿತ್ತು, ತಾಯಿ ಮಗನತ್ತ ಬಾಗಿ ಮೈಮುಟ್ಟಿದಳು.</p>
<p style="text-indent:1cm;"> ಎಚ್ಚರಗೊಂಡ ಅಪ್ಪು ಮುಖದ ಮೇಲಿನ ಕಂಬಳಿಯನ್ನು ಸರಿಸಿ ಕಣ್ಣು ತೆರೆದು ತನ್ನೆಡೆಗೆ ಬಾಗಿದ್ದ ತಾಯಿಯನ್ನು ನೋಡಿದ. ಆಕೆ ಉಟ್ಟಿದ್ದುದು ಮಾಸಿದ್ದ ಪಂಚೆ; ಎದೆಯ ಮೇಲೆ ಅಷ್ಟು ಮಾಸದೇ ಇದ್ದ ಬಿಳಿಯ ರವಿಕೆ; ಸಡಿಲವಾಗಿ ಗಂಟು
ಹಾಕಿದ್ದ ತುಂಬುಹೆರಳು. ಕಪ್ಪು ಹೆರಳಿಗೆ ಪ್ರತಿಯಾದ ಬಿಳುಪು ಮುಖ: ಆ
ಬಿಳುಪನ್ನು ನಾಚಿಸುವ, ದಂತಪಂಗ್ತಿಯನ್ನು ತೋರಿಸಿಕೊಡುತ್ತಿದ್ದ ನಗೆ.</p>
<p style="text-indent:1cm;"> "ಯಾಕೋ ಹಾಗೆ ನೋಡ್ತಿದ್ದೀಯಾ? ಏಳು ಚಿರುಕಂಡ ಕರೀತಿದ್ದಾನೆ." </p>
<p style="text-indent:1cm;"> ತಾಯಿಯಂತೆ ತಾನೂ ಮುಗುಳುನಗುತ್ತಿದ್ದ ಅಪ್ಪು. ಒಮ್ಮೆಲೆ ಗಡಬಡಿಸಿ
ಎದ್ದ. ಬೇಗನೆ ಏಳುವೆನೆಂದು ಮಾತು ಕೊಟ್ಟಿದ್ದುದು ಆಗ ನೆನಪಾಯಿತು. ಆತನ ದೃಷ್ಟಿ ಬಾಗಿಲಿನತ್ತ ಸರಿಯಿತು. ಕರೆಯಲು ಬಂದಿದ್ದ ಚಿರುಕಂಡ ಅಲ್ಲಿ ನಿಂತಿದ್ದ.
ಅಪ್ಪು ತಾನೂ ಒಂದು ಅಂಗವಸ್ತ್ರವನ್ನು ನಡುವಿಗೆ ಅಡ್ಡವಾಗಿ ಕಟ್ಟಿ,
ತನ್ನುದೊಂದು ಹಸುರು ಷರಟನ್ನು ತೊಟ್ಟು, ಹೊರಟು ನಿಂತ.</p>
<p style="text-indent:1cm;">ಒಳಗೆ ಒಲೆಯ ಬಳಿಗೆ ಹೋದ ತಾಯಿ ಕೇಳಿದಳು:</p>
<p style="text-indent:1cm;">"ಎಲ್ಲಿಗೆ ಹೊರಟಿದ್ದೀರೋ ಇಷ್ಟು ಬೆಳಿಗ್ಗೆ?"
"ಎಲ್ಲಿಗೂ ಇಲ್ಲಮ್ಮ, ಇಲ್ಲೇ..."</p>
<p style="text-indent:1cm;">ಹಾಗೆ ಹೇಳುತ್ತಲಿದ್ದ ಅಪ್ಪುವನ್ನು ಚಿರುಕಂಡನ ಕಣ್ಣುಗಳು ಕಾತರದಿಂದ
ನೋಡಿದುವು. ಆ ನೋಟವನ್ನು ಅಪ್ಪು ಗಮನಿಸದೆ ಇರಲಿಲ್ಲ. ಆತನ ಮರು
ನೋಟದಲ್ಲಿ 'ಗಾಬರಿಯಾಗಬೇಡ, ಹೇಳೋದಿಲ್ಲ'ಎನ್ನುವ ಆಶ್ವಾಸನೇ ಇತ್ತು.</p><noinclude></noinclude>
ggi7z47biaiq4b1u60uf78bzi1tper8
ಪುಟ:Chirasmarane-Niranjana.pdf/೨೩
104
12842
317871
256535
2026-05-07T09:55:40Z
Ashwini Rai K
8475
/* Validated */
317871
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=೨೪|right=ಚಿರಸ್ಮರಣೆ}}
<p style="text-indent:1cm;">"ಬೆಳಿಗ್ಗೆ ಎದ್ದು ಆಟಕ್ಕೆ ಹೊರಟಿದ್ದೀರಿ ಅಲ್ಲ? ಎಳೇ ಮಕ್ಕಳ ಹಾಗೆಥೂ...!"</p>
<p style="text-indent:1cm;">ಹಾಗೆಂದು ತಾಯಿ ಪ್ರೀತಿಯಿಂದ ಗದರಿ ನುಡಿದಳು.</p>
<p style="text-indent:1cm;">ಹಿರಿಯರಿಗೆ ತಿಳಿಯದ ಕೆಲಸಕ್ಕೆ ಕೈಹಾಕಿದ್ದ ಎಳೆಯರು,ತಮ್ಮ ಹಿರಿತನದ ಬಗೆಗೆ ತಾವೇ ಅಭಿಮಾನಪಡುತ್ತ, ಪರಸ್ಪರ ನೋಡಿ ಮುಗುಳ್ನಕ್ಕರು.</p>
<p style="text-indent:1cm;">ಅದನ್ನು ಕಂಡ ತಾಯಿ ಸ್ವರವೇರಿಸಿ ಕೇಳಿದಳು;</p>
<p style="text-indent:1cm;">"ಏನ್ರೋ ಅದು?"</p>
<p style="text-indent:1cm;">"ಏನೂ ಇಲ್ಲವಮ್ಮ.ಇಲ್ಲೇ ಹೋಗಿಬರ್ತೇವೆ."</p>
<p style="text-indent:1cm;">–ತಾಯಿಗೆ ಯಾವ ಸಂದೇಹವೂ ಬರದ ಹಾಗೆ, ನಂಬಿಕೆಯ ಸ್ವರದಲ್ಲಿ ಅಪ್ಪು ನುಡಿದ.</p>
<p style="text-indent:1cm;">ತಾಯಿ, ಒಲೆಯ ಕೆಂಡಗಳೆಡೆಯಿಂದ ನೇಂದ್ರ ಬಾಳೆಯ ಎರಡು ಹಣ್ಣುಗಳನ್ನು ಹೊರಕ್ಕೆಳೆದಳು.ದಪ್ಪಗೆ ಉದ್ದವಾಗಿದ್ದ ಹಣ್ಣುಗಳು ಬೆಂದು ಕೆಂಪಗೆ ಬುಡಕಲಾಗಿದ್ದವು. ಚಿರುಕಂಡ ಅದನ್ನು ನೋಡಿದ.</p>
<p style="text-indent:1cm;">ಹುಡುಗರತ್ತ ದೃಷ್ಟಿ ಹಾಯಿಸುತ್ತ ತಾಯಿ ಹೇಳಿದಳು:,/p>
<p style="text-indent:1cm;">"ಮುಖ ತೊಳ್ಕೊ ಅಪ್ಪು. ಹಣ್ಣು ತಿಂದ್ಕೊಂಡು ಹೋಗಿ. ಬರೀ ಹೊಟ್ಟೇಲಿ ಅಲೀಬೇಡಿ."</p>
<p style="text-indent:1cm;">ಅಪ್ಪು ಒಂದೇ ನೆಗೆತದಲ್ಲಿ ಹೊರಕ್ಕೆ ಧಾವಿಸಿದ.ಆವರಣವಿಲ್ಲದ ಪುಟ್ಟ ಬಾವಿಯಿಂದ ಮಣ್ಣಿನ ಗಡಿಗೆಯಲ್ಲಿ ಸೇದಿದ್ದ ನೀರು, ಬಾಳೆಯ ಗಿಡಗಳ ಬುಡದಲ್ಲಿ ಸಿದ್ಧವಾಗಿತ್ತು.ಅಪ್ಪು ಮುಖಮಾರ್ಜನದ ಶಾಸ್ತ್ರ ಮುಗಿಸಿದ.</p>
<p style="text-indent:1cm;">ತನಗೊಂದು ಮಗನಿಗೊಂದು ಎಂದು ಬೇಯಿಸಿದ್ದ ಹಣ್ಣುಗಳನ್ನು ಮಗನಿಗೂ ಮಗನ ಸ್ನೇಹಿತನಿಗೂ ತಾಯಿ ಕೊಟ್ಟಳು.ಹುಡುಗರು ಬಾಯಿ ಚಪ್ಪರಿಸುತ್ತ,ಸುಟ್ಟು ಹೋಗಿದ್ದ ಸಿಪ್ಪೆ ಸುಲಿದು, ಉಗಿಯೇಳುತ್ತಿದ್ದ ಬಿಸಿಯಾದ ರುಚಿಯಾದ ಹಣ್ಣನ್ನು ಸದ್ದು ಮಾಡುತ್ತ ತಿಂದರು.</p>
<p style="text-indent:1cm;">ಅಲ್ಲಿಂದ ಹೊರಟು ಆ ಗೆಳೆಯರಿಬ್ಬರು ಹೊಲದ ಏರಿಯ ಮೇಲೆ ನಡೆದು ಹೋದರು.</p>
<p style="text-indent:1cm;">ಎಲ್ಲವೂ ಸರಿಯಾಗಿಲ್ಲ ಎನ್ನುವಂತೆ ಚಿರುಕಂಡ ಹೇಳಿದ:</p>
<p style="text-indent:1cm;">"ಏನಪ್ಪ ನೀನು, ಬೆಳಿಗ್ಗೆ ಬೇಗ್ನ ಏಳ್ತೇನೆ ಅಂದೋನು?"</p>
<p style="text-indent:1cm;">"ನಾನೇನು ಮಾಡ್ಲೋ? ಅಪ್ಪ ಎದ್ದಾಗ ನನ್ನೂ ಎಬ್ಸೂಂತ ಅಮ್ಮನಿಗೆ ಹೇಳಿದ್ದೆ.ಅಮ್ಮ ಎಬ್ಬಿಸ್ಲೇ ಇಲ್ಲ."</p><noinclude></noinclude>
96a6jlohkzwqv6j9b05kztlfvvj9f5l
ಪುಟ:Chirasmarane-Niranjana.pdf/೨೪
104
12843
317872
256676
2026-05-07T09:56:01Z
Ashwini Rai K
8475
/* Validated */
317872
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=ಚಿರಸ್ಮರಣೆ|right=೨೫}}
{{gap}}"ಯಾಕೇಂತ ಕೇಳ್ಲಿಲ್ವೆ ಅಮ್ಮ?"</br>{{gap}}--ಚಿರುಕಂಡನ ಪ್ರಶ್ನೆಯಲ್ಲಿ ಕಾತರದ ಛಾಯೆ.</br>
{{gap}}"ಸಾಕು ಬಿಡೋ! ನಾನೇನು ಮಗುವೆ ಹೇಳೋದಕ್ಕೆ?"</br>
{{gap}}-ನೊಂದ ಧ್ವನಿಯಲ್ಲಿ ಅಪ್ಪುವಿನ ಉತ್ತರ.</br>
{{gap}}ಮುಂದೆ ಅಪ್ಪು, ಹಿಂದಿನಿಂದ ಚಿರುಕಂಡ ಇಬ್ಬರೂ ಹೊಲಗಳನ್ನು ಹಿಂದೆ ಬಿಟ್ಟು ನದೀ ದಂಡೆಯತ್ತ ನಡೆದರು.</br>
{{gap}}ಅದು ನದಿಯನ್ನು ದಾಟುವ ಜಾಗ-ಕಡವು. ಅದರ ಮೇಲಕ್ಕೂ ಕೆಳಕ್ಕೂ ಬಂಡೆಕಲ್ಲುಗಳಿದ್ದವು, ಬಟ್ಟೆ ಒಗೆಯುವ ಕಲ್ಲುಗಳು. ಅದೇ ಸ್ನಾನದ ಘಟ್ಟ. ಅಲ್ಲಿಯೇ ಇದ್ದ ಕಾಡುಮರವನ್ನೇರಿ, ನೀರಿನ ವಿಸ್ತಾರಕ್ಕೂ ಚಾಚಬಯಸಿದ್ದ ರೆಂಬೆಗಳ ಮೇಲೆ ನಡೆದುಹೋಗಿ,ಆಳದ ನೀರಿಗೆ ಮೀನಾಗಿ ಧುಮುಕುವುದು ಅಪ್ಪುವಿನ ಪ್ರೀತಿಯ ಆಟ. ಆಗ ಅವನ ಸಂಗಡಿಗರು ಹಲವಾರು ಜನ. ಚಿರುಕಂಡನಿಗೂ ಈಸು ಬರುತ್ತಿತ್ತು.ಆದರೆ ಜಲಕೇಳಿಯಲ್ಲಿ ಆತನಿಗೆ ಆಸಕ್ತಿ ಇರಲಿಲ್ಲ.</br>
{{gap}}ಆದರೆ ಈ ಬೆಳಗ್ಗೆ ಅಪ್ಪು ಮತ್ತು ಚಿರುಕಂಡ ದಡದಮೇಲೆ ನಿಂತು ಮೌನವಾಗಿ ಮಂದಗಮನೆಯಾಗಿ ಹರಿಯುತ್ತಿದ್ದ ತೇಜಸ್ವಿನಿಯನ್ನು ನೋಡಿದರು.ತರಕಾರಿಯ ಮೂಟೆಗಳೊಡನೆ ನೀಲೇಶ್ವರದ ಪೇಟೆಗೆ ಹೊರಟಿದ್ದ ರೈತಸ್ತ್ರೀಯರನ್ನು ಹೊತ್ತ ದೋಣಿ, ನಡುಹೊಳೆಯನ್ನು ದಾಟಿ ಆಚೆಯ ದಡದತ್ತ ಸಾಗುತ್ತಿತ್ತು. ದೃಷ್ಟಿಯ ವ್ಯೂಹದೊಳಗೆ ಬೇರೆಯೂ ದೋಣಿಗಳು ಕಂಡುಬಂದವು.ಮೀನು ಹಿಡಿಯಲೆಂದು ಹೊರಟವರ ದೋಣಿಗಳು. ಅಡ್ಡಾದಿಡ್ಡಿಯಾದ ಚಲನೆ.</br>
{{gap}}ಈ ಗೆಳೆಯರೂ ಆಚೆಯ ದಡಕ್ಕೆ ಹೋಗಬೇಕು.</br>
{{gap}}"ಏನು ಮಾಡೋಣವೋ ಚಿರುಕಂಡ?"</br>
{{gap}}"ಅದೇ ಯೋಚಿಸ್ತಾ ಇದ್ದೇನೆ."</br>
{{gap}}"ಕಡವಿನ ದೋಣೀಲಿ ಹೋದರೆ ಕಾಸು ಕೊಡ್ಬೇಕು."</br>
{{gap}}"ಹೌದು. ಕಾಸೆಲ್ಲಿಂದ ತರೋಣ ಈಗ?"</br>
{{gap}}ಆದರೆ ಚಿರುಕಂಡನ ಮೆದುಳಿನಲ್ಲಿ ಮುನ್ನೆಚ್ಚರಿಕೆಯ ಯೋಚನೆಗಳು ಅಲೆಯಲೆಯಾಗಿ ಎದ್ದುವು.</br>
{{gap}}"ಎಲ್ಲಿಗೆ ಹೋಗ್ತಿರೀಂತ ದೋಣಿಯವನು ಕೇಳಿಯೇ ಕೇಳ್ತಾನೆ."</br>
{{gap}}"ಕೇಳಲಿ ಬಿಡು. ಏನಾದರೂ ಹೇಳಿ ದಬಾಯಿಸ್ಕೊಂಡು ಹೋದರಾಯ್ತು."</br>
{{gap}}"ಬೇಡ ಅಪ್ಪು. ಸಂಶಯ ಬಂದೀತು. ಹಳ್ಳೀಲೆಲ್ಲಾ ಆಮೇಲೆ ಮಾತನಾಡ್ತಾರೆ.</br><noinclude></noinclude>
dp0c6ydqz94ilglhpt53adza08ijg86
ಪುಟ:Chirasmarane-Niranjana.pdf/೨೫
104
12844
317873
256430
2026-05-07T09:57:36Z
Ashwini Rai K
8475
/* Validated */
317873
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=೨೬|right=ಚಿರಸ್ಮರಣೆ}}
ಯಾರಿಗೂ ತಿಳೀದ ಹಾಗೆ ಬನ್ನೀಂತ ಹೇಳಿಲ್ವೆ ಮಾಸ್ತರು."
</p> <p style="text-indent: 1cm;">ಚಿರುಕಂಡನ ಮುಖ ಮುಂದಿನ ದಾರಿ ಹೊಳೆಯದೆ ಸಪ್ಪಗಾದಂತೆ, ಅಪ್ಪುವಿನ ಮುಖ ಅದೇ ಕಾರಣಕ್ಕಾಗಿ ಸಿಡುಕಿನಿಂದ ಕೆಂಪೇರಿತು.
</p> <p style="text-indent: 1cm;">"ಹ್ಯಾಗೆ ಬರಬೇಕೂಂತಲೂ ಮಾಸ್ತರೇ ಹೇಳ್ಬೇಕಾಗಿತ್ತು." </p> <p style="text-indent: 1cm;">ಮಾಸ್ತರ ಮೇಲಿನ ಟೀಕೆ ಚಿರುಕಂಡನಿಗೆ ಸಹನೆಯಾಗಲಿಲ್ಲ. </p> <p style="text-indent: 1cm;">
</p> <p style="text-indent: 1cm;">"ಅವಸರದಲ್ಲಲ್ಪ ಅವರು ಹೋದದ್ದು? ಹಾಗೆಲ್ಲ ಯೋಚಿಸಿ ಹೇಳೋದಕ್ಕೆ ಅವರಿಗೆ ಪುರುಸೊತ್ತೆಲ್ಲಿತ್ತು?"
</p> <p style="text-indent: 1cm;">ಅದು ನಿಜವೆಂಬುದನ್ನು ಮನಗಂಡ ಅಪ್ಪು,ಒಂದು ಕ್ಷಣ ಸುಮ್ಮನಿದ್ದು ಹೇಳಿದ:
</p> <p style="text-indent: 1cm;">"ಈಗೇನ್ಮಾಡೋಣ ಹಾಗಾದರೆ?" </p> <p style="text-indent: 1cm;">ಚಿರುಕಂಡ ತನಗೆ ಹೊಳೆದ ಉಪಾಯವನ್ನು ತನ್ನೊಳಗೇ ತೂಗಿ ನೋಡಿ ಅಪ್ಪುಗೆ ತಿಳಿಸಿದ:
</p> <p style="text-indent: 1cm;">"ಮೇಲಿನ ತೋಟದ ಮುದುಕ ಇಲ್ವ? ಅವನದೊಂದು ಹಳೇ ದೋಣಿ ತೂತಾಗಿ ಬಿದ್ದಿದೆ. ದುರಸ್ತಿ ಮಾಡೇ ಇಲ್ಲ...."
</p> <p style="text-indent: 1cm;">ಆ ಸಲಹೆಯನ್ನು ಆಗಲೇ ಸ್ವೀಕರಿಸಿದವನಂತೆ ಅಪ್ಪು ಹೇಳಿದ: "ದೊಡ್ಡದಾ ತೂತು?"
</p> <p style="text-indent: 1cm;">"ಚಿಕ್ಕದು, ನೀನು ಹುಟ್ಟು ಹಾಕೋ ಹಾಗಿದ್ರೆ ನಾನು ನೀರು ಎತ್ತುತ್ತಾ ಇರ್ತ್ತೇನೆ.
</p> <p style="text-indent: 1cm;">"ಮುದುಕಪ್ಪ ಕೊಡ್ತಾನೋ ಇಲ್ವೋ?" </p> <p style="text-indent: 1cm;">"ಕೊಡದೇ ಏನು? ಮೀನು ಹಿಡಿಯೋಕೆ ಹೋಗ್ತೇವೆ-ನಿನಗೂ ಮೀನು ಕೊಡ್ತೇವೆ ಅನ್ನೋದು."
</p> <p style="text-indent: 1cm;">"ಅದೇನೋ ಸರೀನೆ. ಆದರೆ ಅವನಿಗೆ ಕೊಡೋದಕ್ಕೆ ಮೀನು ಎಲ್ಲಿಂದ ತರೋಣ?"
</p> <p style="text-indent: 1cm;">"ಇವತ್ತು ಸಿಗಲಿಲ್ಲ ನಾಳೆ ಕೊಡ್ತೇವೆ, ಅಂದರಾಯ್ತು,"
</p> <p style="text-indent: 1cm;">ಅಪ್ಪು ಸಂತೋಷದಿಂದ ಮೌನವಾಗಿ ಹುಬ್ಬು ಕುಣಿಸುತ್ತ ತಲೆಯಾಡಿಸಿದ. ನಿಮಿಷವೂ, ತಡಮಾಡದೆ ಮುಂದಕ್ಕೆ ಬೇಗಬೇಗನೆ ಹೆಜ್ಜೆ ಇಟ್ಟ. ಅವನಷ್ಟು ಶಕ್ತಿವಂತನಲ್ಲದ ಚಿರುಕಂಡ ಸ್ವಲ್ಪ ಪ್ರಯಾಸಪಡುತ್ತಲೇ ಅಪ್ಪುವನ್ನು ಹಿಂಬಾಲಿಸಿದ.
</p> <p style="text-indent: 1cm;">ನದಿಯ ದಂಡೆಯದ್ದಕ್ಕೂ ಮೇಲೆ ಸಾಗಿದಾಗ ಆ ಹೊಲ ಹಿತ್ತಿಲು ಕಣ್ಣಿಗೆ ಬಿದ್ದವು. ನದಿಯಿಂದ ಮೇಲಕ್ಕೆಳೆದು ಮಗುಚಿಹಾಕಿದ್ದ ಪುಟ್ಟ ದೋಣಿಯೂ<noinclude></noinclude>
d63irch0nn3gctsjsweotewaq9eewf9
ಪುಟ:Chirasmarane-Niranjana.pdf/೨೬
104
12845
317883
256415
2026-05-07T10:17:08Z
Ashwini Rai K
8475
/* Validated */
317883
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=ಚಿರಸ್ಮರಣೆ|right=೨೭}}
ಕಾಣಿಸಿತು.<br/>
<p style="text-indent: 1cm;">ಅರ್ಧ ಕೆಲಸವಾದಾಗ ಏನೋ ಅಡ್ಡಿ ಯಾದಂತೆ ಅಪ್ಪು ಇಳಿದನಿಯಲ್ಲಿ ಕೇಳಿದ:</p>
<p style="text-indent: 1cm;">"ಮೀನು ಹಿಡಿಯೋದಕ್ಕೆ ಬಲೆ ಎಲ್ಲಿ-ಗಾಳ ಎಲ್ಲಿ-ಅಂತ ಆತ ಕೇಳಿದರೆ?"</p>
<p style="text-indent: 1cm;">"ಕೈಲಿದೆ ಅನ್ನೋದು!"</p>
<p style="text-indent: 1cm;"> "ಏನು ಕೈಲಿದೆ?"</p>
<p style="text-indent: 1cm;">"ಮುದುಕನಿಗೆ ಕಣ್ಣು ಕಾಣಿಸೋದಿಲ್ಲ ಕಣೋ!"</p>
<p style="text-indent: 1cm;">ಇಬ್ಬರೂ ಸಣ್ಣಗೆ ನಕ್ಕರು. ಆದರೆ ಅಪ್ಪುವಿಗೆ ಬೇರೆಯೂ ಒಂದು ಸಂದೇಹ ಇತ್ತು.</p>
<p style="text-indent: 1cm;">"ದೋಣಿ ಕೊಡೋದಿಲ್ಲಾಂತ ಮುದುಕ ಅಂದರೆ?"</p>
<p style="text-indent: 1cm;">"ಬೇಡ ಅನ್ನೋದು."</p>
<p style="text-indent: 1cm;">"ಮತ್ತೆ?"</p>
<p style="text-indent: 1cm;">"ಆಗಲೇ ಅನ್ಲಿಲ್ವೆ, ಮುದುಕನಿಗೆ ಕಣ್ಣು ಕಾಣಿಸೋದಿಲ್ಲಾಂತ ? ಕಿವೀನೂ ಸರಿಯಾಗಿ ಕೇಳಿಸೋದು ಸಂಶಯವೇ!ಅವನೆದುರಲ್ಲೇ ದೋಣೀನೆತ್ತಿ ನೀರಿಗಿಳಿಸಿ ಹೊರಟೇಬಿಡೋದು!"</p>
<p style="text-indent: 1cm;">ಯಾವ ಸಾಹಸಕ್ಕೂ ಸಿದ್ದನಾಗಿದ್ದ ಅಪ್ಪುವಿಗೆ, ಸಾಮಾನ್ಯವಾಗಿ ಸಪ್ಪಗಿರುತ್ತಿದ್ದ
ಚಿರುಕಂಡನೇ ಉತ್ಸಾಹದಿಂದ ಹಾಗೆ ಆಡಿದುದನ್ನು ಕಂಡು, ತುoಬಾ ಸಂತೋಷವಾಯಿತು.</p>
<p style="text-indent: 1cm;">....ಮಗನನ್ನೂ ಸೊಸೆಯನ್ನೂ ಹೊಲಕ್ಕೆ ಕಳುಹಿಸಿದ್ದ ಮುದುಕ, ಆ ಹುಡುಗರಿಗೆ ಅಡ್ಡಿ ಮಾಡಲಿಲ್ಲ. ಆದರೆ, ದೋಣಿಯ ತೂತು ಮುಚ್ಚಿ ಸರಿ ಪಡಿಸಿಕೊಂಡೇ ನೀರಿಗಿಳಿಯಬೇಕೆಂದು ಹಟ ಹಿಡಿದ. ಮೊಮ್ಮಕ್ಕಳಿಲ್ಲದ ತನ್ನನ್ನು ಆ ಎಳೆಯರು "ಅಜ್ಜಾ" ಎಂದಾಗ ಮುದುಕನ ಮನಸ್ಸು ಉಲ್ಲಾಸಗೊಂಡಿತ್ತು.ದೃಷ್ಟಿ ಮಂದವಾಗಿದ್ದರೂ ಆತ ಎಲ್ಲವೂ ಕಾಣಿಸುತ್ತಿದ್ದವನಂತೆ ಮೀನು ಹಿಡಿಯಬೇಕಾದ ಜಾಗಗಳ ಬಗೆಗೆ ನಿರ್ದೇಶನವನ್ನಿತ್ತ.</p>
<p style="text-indent: 1cm;">"ಮರೀದೆ ಮೀನು ಕೊಟ್ಟಿಟ್ಟು ಹೋಗಿ" ಎಂದು ಆತ ಎರಡು ಬಾರಿ ಎಚ್ಚರಿಸಿ ಹೇಳಿದ.
<p style="text-indent: 1cm;">ಅಪ್ಪು ಮತ್ತು ಚಿರುಕಂಡ ದುರಸ್ತಿಯ ನಾಟಕ ಮುಗಿಸಿ ದೋಣಿಯೊಡನ ನೀರಿಗಿಳಿದು ಹೊರಟೇಹೋದರು.
<p style="text-indent: 1cm;">ನುರಿತ ಅಂಬಿಗನಾದ ಅಪ್ಪುವಿನ ಕೈಯಲ್ಲಿ ದೋಣಿ ಬಾಣವಾಯಿತು. ಚಿರುಕಂಡ ಒಳಕ್ಕೆ ನುಗ್ಗುತ್ತಿದ್ದ ನೀರನ್ನು ಬೇಗಬೇಗನೆ ಎತ್ತಿ ನದಿಗೆ ಸುರಿಯುತ್ತ<noinclude></noinclude>
5p1vblk4yiwh2s5u23007vn1w7q9eho
ಪುಟ:Chirasmarane-Niranjana.pdf/೨೭
104
12846
317884
256302
2026-05-07T10:29:56Z
Ashwini Rai K
8475
/* Validated */
317884
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=೨೮|right=ಚಿರಸ್ಮರಣೆ}}
ಕುಳಿತ. ಇನ್ನೇನು ದಡ ಸೇರುವೆವೆಂಬ ಉತ್ಸಾಹದಲ್ಲಿ ಒಬ್ಬರೂ ಮಾತನಾಡಲಿಲ್ಲ. </p> <p style="text-indent: 1cm;">.... ದಡ ಸೇರಿದ ಬಳಿಕ ದೋಣಿಯನ್ನು ಇಬ್ಬರೂ ಮೇಲಕ್ಕೆಳೆದು ಪೊದೆಗಳ ಮರೆಯಲ್ಲಿ ಮಗುಚಿ ಹಾಕಿದರು.
</p> <p style="text-indent: 1cm;">ಆ ಬಳಿಕ ಅವರು ನಡೆಯಬೇಕಾಗಿದ್ದುದು ಎರಡು ಫರ್ಲಾಂಗುಗಳ ದೂರ ಮಾತ್ರ. ಚಪ್ಪಲಿ ಕಾಣದ ಆ ಪಾದಗಳಿಗೆ ಕಲ್ಲು ಮುಳ್ಳುಗಳನ್ನು ತುಳಿಯದೆಯೇ ಹಾದಿ ಕ್ರಮಿಸುವ ಅಭ್ಯಾಸವಿತ್ತು.
</p> <p style="text-indent: 1cm;">ನಿರೀಕ್ಷಿಸಿದ್ದ ಗುರಿ ಸಮೀಪಿಸುತ್ತಿದ್ದ ಸಂದರ್ಭದಲ್ಲಿ, ಆ ಆತುರದಲ್ಲಿ, ಹೃದಯ ಡವಡವನೆ ಹೊಡೆದುಕೊಂಡಾಗ ಮೌನ ಅರ್ಥಹೀನವಾಗಿ ಅಪ್ಪುವಿಗೆ ತೋರಿತು. ನಡೆಯುತ್ತಲಿದ್ದಂತೆಯೇ ಆತ ಕೇಳಿದ:
</p> <p style="text-indent: 1cm;">"ಚಿರುಕಂಡ, ಯಾವ ಜಾಗ ಅಂತ ಸರಿಯಾಗಿ ಗೊತ್ತೇನೋ ನಿಂಗೆ?" </p> <p style="text-indent: 1cm;">"ಹೂಂ. ಆಚೆ ಹಳ್ಳಿ ಶುರುವಾಗೋದಕ್ಮುಂಚೇನೆ ಒಂದು ಚಾದಂಗಡಿ ಇಲ್ವಾ? ಅಲ್ಲೇ."
</p> <p style="text-indent: 1cm;">ಪ್ರಶ್ನೆಗೆ ತಕ್ಕ ಉತ್ತರ ಕೊಟ್ಟು ಮತ್ತೆ ಬಿಲ ಸೇರಿ ಮೌನವಾಗುವ ಮನಸ್ಸು ಚಿರಕಂಡನದು. ಅದನ್ನು ಚೆನ್ನಾಗಿ ತಿಳಿದಿದ್ದ ಅಪ್ಪು ಆ ಮೌನಕ್ಕೆ ಅವಕಾಶ ದೊರೆಯದಂತೆ ಮತ್ತೊಂದು ಪ್ರಶ್ನೆ ಕೇಳಿದ:
</p> <p style="text-indent: 1cm;">"ಎಲ್ಲಾ ಬಿಟ್ಟು ಚಾದಂಗಡೀಲಿ ಕೂತ್ಕೊಳ್ಳೋದು? ಯಾರಿಗಾದರೂ ಸಂಶಯ ಬಂದರೆ?"
</p> <p style="text-indent: 1cm;">ಮಾತಿನ ಸ್ವರ ಗಟ್ಟಿಯಾಗಿತ್ತು. ಮೊದಲು ಅದಕ್ಕೆ ಅಕ್ಷೇಪವೆತ್ತಿ ಚಿರಕಂಡ ಹೇಳಿದ: "ಮೆತ್ತಗೆ ಮಾತಾಡು ಅಪ್ಪು!"
</p> <p style="text-indent: 1cm;">ತಪ್ಪು ಮಾಡಿದವನಂತೆ ಅಪ್ಪುವಿನ ಮುಖ ಅರೆಕ್ಷಣ ಬಣ್ಣ ಬದಲಾಯಿಸಿತು. ತನ್ನ ಮಾತಿನ ಪರಿಣಾಮವನ್ನು ಪರೀಕ್ಷಿಸಿ ನೋಡಿ ತಿಳಿದು ಸಂತೃಪ್ತನಾಗಿ ಚಿರುಕಂಡ ಮಾತು ಮುಂದುವರಿಸಿದ:
</p> <p style="text-indent: 1cm;">"ಚಾದಂಗಡೀಲೇ ಸುರಕ್ಷಿತ ಅಂತ ಮಾಸ್ತರು ಹೇಳಿದ್ರು. ಹಾದಿಹೋಕರೆಲ್ಲ ಬರ್ತಾರೆ ಹೋಗ್ತಾರೆ. ಅದಕ್ಕೆಲ್ಲ ಮಹತ್ವವೇ ಇರೋದಿಲ್ಲ. ಅಲ್ದೆ ವೈರಿಗಳ ಕಡೆಯೋರು ಯಾರಾದರೂ ಬಂದರೆ ಚಾದಂಗಡಿಯವರಿಗೆ ಮೊದಲು ಗೊತ್ತಾಗ್ತದೆ."
</p> <p style="text-indent: 1cm;">ನಾವು ಮತ್ತು ವೈರಿಗಳು....ಒಂದು ಪಕ್ಷ,ಅದಕ್ಕೆ ಇದಿರಾಗಿ ಇನ್ನೊಂದು ಪಕ್ಷ ಇದು ಸ್ವಾರಸ್ಯವಾಗಿ ಅಪ್ಪುವಿಗೆ ತೋರಿತು. ಮೈನವಿರೆಬ್ಬಿಸುವ ಹಾಗಿತ್ತು ಈ ಕದನದ ಯೋಚನೆ.
</p> <p style="text-indent: 1cm;">ಆ ಮಾತುಕತೆ ಮನಸ್ಸಿಗೆ ಹಿತವೆನಿಸಿ ಅಪ್ಪು, ತನ್ನ ಕುತೂಹಲಕ್ಕೆ<noinclude></noinclude>
888mvijnmq07368f1q44pqabzjcbcl2
ಪುಟ:Chirasmarane-Niranjana.pdf/೨೮
104
12847
317885
256407
2026-05-07T10:30:25Z
Ashwini Rai K
8475
/* Validated */
317885
proofread-page
text/x-wiki
<noinclude><pagequality level="4" user="Ashwini Rai K" /></noinclude> {{rh|left=ಚಿರಸ್ಮರಣೆ|right=೨೯}}
ಸಮಾಧಾನವನ್ನು ಬಯಸಿ ಇನ್ನೊಂದು ಪ್ರಶ್ನೆ ಕೇಳಿದ:
<p style="text-indent: 1cm;">"ಅವರು ನೋಡೋದಕ್ಕೆ ಹ್ಯಾಗಿ ಚಿರುಕಂಡ?"</p>
<p style="text-indent: 1cm;">ಚಿರುಕಂಡನಿಗೆ ಅದು ಗೊತ್ತಿರಲಿಲ್ಲ</p>
<p style="text-indent: 1cm;">"ಹ್ಯಾಗಿರ್ರ್ತಾರೋ? ಮಾಸ್ತರು ಹೇಳೇ ಇಲ್ಲ."</p>
<p style="text-indent: 1cm;">'ಅವರ'ನ್ನು ಮರೆತು ಅಪ್ಪು ಮಾಸ್ತರನ್ನು ಕುರಿತು ಯೋಚಿಸಿದ. ಆ ಯೋಚನೆ
ಸಿಹಿಯಾಗಿತ್ತು.</p>
<p style="text-indent: 1cm;">"ಚಿರುಕಂಡ, ನಮ್ಮ ಮಾಸ್ತರು ಬಹಳ ಒಳ್ಳೆಯವರು ಅಲ್ವ?"</p>
<p style="text-indent: 1cm;">ಆ ವಿಷಯದಲ್ಲಿ ಯಾವ ಸಂದೇಹವೂ ಇರದಿದ್ದ ಚಿರುಕಂಡ ಉತ್ಸಾಹದ
ಸ್ವರದಲ್ಲಿ ಉತ್ತರವಿತ್ತ,"ಹೌದು ಮತ್ತೆ !"</p>
<p style="text-indent: 1cm;">ಆ 'ಒಳ್ಳೆಯ ಮಾಸ್ತರು' ಕಯ್ಯೂರಿನಲ್ಲಿ ಪ್ರಾಥಮಿಕ ಅಧ್ಯಯನ ಮುಗಿದೊಡನೆ
ಎಳೆಯರಿಬ್ಬರೂ ನೀಲೇಶ್ವರಕ್ಕೆ ಕಲಿಯಲು ಹೋಗಬೇಕೆಂದು ಬಯಸಿದ್ದರು.
ಆದರೆ, ಅದು ಸಾಧ್ಯವಾಗಿರಲಿಲ್ಲ, ಅಪ್ಪು ಮನೆಯಲ್ಲಿ ಹಿರಿಯ ಮಗ. ಚಿರುಕಂಡ
ಹೆತ್ತವರ ಏಕಮಾತ್ರ ಸಂತಾನ. ಹೊಲದ ಕೆಲಸದಲ್ಲಿ ಹಿರಿಯರಿಗೆ ಅವರು
ನೆರವಾಗಬೇಕು. ಓದು ಅಲ್ಲಿಗೇ ನಿಂತುಹೋಗಿತ್ತು.</p>
<p style="text-indent: 1cm;">ಮಾಸ್ತರರ ಮಾತು ಬಂದಾಗಲೆಲ್ಲ ಮುಂದುವರೆಯದೇಹೋದ ತಮ್ಮ
ಅಧ್ಯಯನದ ವಿಷಯವೂ ಅದರೊಡನೆ ಬೆರೆಯದೆ ಇರುತ್ತಿರಲಿಲ್ಲ.</p>
<p style="text-indent: 1cm;">ಕೊನೆಯ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗಿ ಆಗಲೆ ಐದು ವರ್ಷಗಳು
ಕಳದಿದ್ದುವು.</p>
<p style="text-indent: 1cm;">ಅನಿವಾರ್ಯವಾಗಿ ಅದರ ನೆನಪಾಗುತ್ತ ಅಪ್ಪು ಹೇಳಿದ:</p>
<p style="text-indent: 1cm;">"ನಾವಿನ್ನೂ ಓದ್ಬೇಕಾಗಿತ್ತು ಅಲ್ವ ಚಿರುಕಂಡ ?"</p>
<p style="text-indent: 1cm;">ಆ ಪ್ರಶ್ನೆಗೆ ಉತ್ತರ ಕೊಡುವ ಬದಲು ಚಿರುಕಂಡ, 'ಶ್' ಎನ್ನುತ್ತ ಅಪ್ಪುವಿನ
ಕೈಯನ್ನು ಹಿಡಿದು ಜಗ್ಗಿದ.</p>
<p style="text-indent: 1cm;">"ನೋಡು ಬಂತು ಚಾದಂಗಡಿ; ನಿಧಾನವಾಗಿ ಹೋಗೋಣ."ದಡ್ಡ</p>
<p style="text-indent: 1cm;">ಅಪ್ಪುವಿನ ಎದೆಗುಂಡಿಗೆಯ ಬಡಿತ ಮತ್ತಷ್ಟು ತೀವ್ರವಾಯಿತು.</p>
<p style="text-indent: 1cm;">"ಅಲ್ಲಿಗೆ ಹೋಗಿ ಏನೂಂತ ಕೇಳೋದು? ದುಡ್ಡಾದರೂ ಇದ್ದಿದ್ದರೆ ಚಾ
ಕುಡಿಯೋಕೆ ಬಂದಿದೇವೇಂತ ಹೇಳ್ಬಹುದಾಗಿತ್ತು."</p>
<p style="text-indent: 1cm;">"ಸುಮ್ನೆ ಅಲ್ಲಿಗೆ ಹೋಗಿ ಕೂತಿರೋಣ.... ಮಾಸ್ತರು ಅಲ್ಲೇ ಇದ್ದರೂ
ಇರಬಹುದು.</p>
<p style="text-indent: 1cm;">"ಹೂಂ."</p><noinclude></noinclude>
3k5p506hxpdbnz20ekhc7hk7cgg7cvv
ಪುಟ:Chirasmarane-Niranjana.pdf/೨೯
104
12848
317886
256562
2026-05-07T10:31:17Z
Ashwini Rai K
8475
/* Validated */
317886
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=೩೦|right=ಚಿರಸ್ಮರಣೆ}}
<p style="text-indent: 1cm;">"ಯಾರಾದರೂ ಕೇಳಿದರೆ, ಕೂಲಿ ಮಾಡೋಕೆ ನೀಲೇಶ್ವರದ ಸಂತೆಗೆ ಹೊರಟಿದೇವೇಂತ ಹೇಳೋಣ..."</p>
<p style="text-indent: 1cm;">"ಹೂಂ."</p> <br/>
{{center|೨}}
ಚಹದಂಗಡಿಯವನು, ಸಮೀಪಕ್ಕೆ ಬಂದ ಆ ಇಬ್ಬರು ಹುಡುಗರನ್ನು
ಕುತೂಹಲದಿಂದ ನೋಡಿದ.
<p style="text-indent: 1cm;">"ಬನ್ನಿ ಒಳಕ್ಕೆ. ಕೂತ್ಕೊಳ್ಳಿ."</p>
<p style="text-indent: 1cm;">–ಮುಗುಳುನಕ್ಕು, ತಲೆಯಾಡಿಸಿ, ಆತ ಕರೆದ.</p>
<p style="text-indent: 1cm;">ಅಪ್ಪು ಮತ್ತು ಚಿರುಕoಡನಿಗೆ ಸಂಕೋಚವೆನಿಸಿದರೂ ಅವರು ಒಳಗೆ ಬಂದು ಮುರುಕು ಬೆಂಚಿನ ಮೇಲೆ ಕುಳಿತುಕೊಂಡರು, ಅಂಗಡಿಯವನು ಯುವಕನಾಗಿದ್ದ, ತಲೆಗೆ ಸುತ್ತಿದ್ದ ಅಂಗವಸ್ತ್ರದೊಳಗಿನಿಂದ ನೀಳವಾದ ಕ್ರಾಪು ತೂರಿಬಂದಿತ್ತು.ಬಹಳಮಟ್ಟಿಗೆ ಬರಿಮೈ, ಸೊಂಟದಿಂದ ಮೊಣಕಾಲಿನವರೆಗೆ, ಕೊಳಕಾದ ಅಡ್ದಪಂಚೆಯೊಂದು ಅಂಟಿಕೊಂಡಿತ್ತು. ಗೋಡೆಯಿಲ್ಲದ, ಬಿದಿರ ತಡಿಕೆಯಿಂದಲೆ ಸಿದ್ಧವಾಗಿದ್ದ, ಹೊಟೆಲು, ಒಂದು ಮೂಲೆಯಲ್ಲಿ ಸಣ್ಣನೆ ಉರಿಯುತ್ತಿದ್ದ ಸೌದೆ ಒಲೆ. ಅದರ ಮೇಲೊಂದು ಉಗಿಯಾಡುತ್ತಿದ್ದ ತಾಮ್ರದ ಪಾತ್ರೆ ಪಕ್ಕದಲ್ಲೇ ಮರದ ನಾಲ್ಕು 'ಕಾಲು'ಗಳನ್ನು ನೆಲದೊಳಕ್ಕೆ ಹೂತು, ಅವುಗಳ ಮೇಲೆ ಹಲಿಗೆಗಳನ್ನು ಹಾಸಿ ಮಾಡಿದ್ದ ಮೇಜು, ಆ ಮೇಜಿನ ಮೇಲೆ ನಾಲ್ಕು ಗ್ಲಾಸುಗಳು,ಸಕ್ಕರೆಯ ಚಾಪುಡಿಯ ಡಬ್ಬಗಳು, ಚಾನೀರನ್ನು ಸೋಸಿ ಪುಷ್ಟವಾಗಿದ್ದ ಅರಿವೆ,
ಬೇರೊಂದು ಡಬ್ಬ, ಅದರ ಪಕ್ಕದಲ್ಲಿ ಬೀಡಿಯ ಕಟ್ಟುಗಳು.</p>
<p style="text-indent: 1cm;">ಅಪ್ಪು ಮತ್ತು ಚಿರುಕಂಡ, ಅಲ್ಲಿಯೇ ಕಂಬಕ್ಕೊರಗಿ ನೆಲದ ಮೇಲೆ ಕುಳಿತಿದ್ದ ಧಾಂಡಿಗನೊಬ್ಬನನ್ನು ಕಂಡರು. ಒರಟು ಕೂದಲಿನ ಮನುಷ್ಯ, ಬೀಡಿ ಸೇದುತ್ತಲಿದ್ದ.
ಆತನದು ದಪ್ಪನೆಯ ಹುಬ್ಬು, ಆ ಹುಬ್ಬುಗಳ ಕೆಳಗೆ ಆಳವಾದ ನೋಟದಿಂದ
ತಿವಿದು ನೋಡುವ ಕಣ್ಣುಗಳಿದ್ದುವು.</p>
<p style="text-indent: 1cm;">ಚಹದಂಗಡಿಯವನ ಮುಗುಳು ನಗೆ ಆತ್ಮೀಯವಾಗಿತ್ತು, ಇನ್ನೊಬ್ಬನ ನೋಟ ಪರಕೀಯವಾಗಿತ್ತು.</p>
<p style="text-indent: 1cm;">ಬ೦ದಿದ್ದವರನ್ನು ನೋಡುತ್ತ ಅ೦ಗಡಿಯವನು ಹೇಳಿದ:</p>
<p style="text-indent: 1cm;">"ಒಂದೊಂದು ಆಪು ಚಾ ಕೊಡ್ಲ?"</p>
<p style="text-indent: 1cm;">ಒಂದು ಲೋಟ ಚಹಾವನ್ನು ಎರಡರಲ್ಲಿ ಸುರಿದರೆ ಅದು ಒಂದೊಂದು<noinclude></noinclude>
3lnfr13su0ci1quqiqnfsh7j6n4343o
ಪುಟ:Chirasmarane-Niranjana.pdf/೩೦
104
12849
317887
248961
2026-05-07T10:32:24Z
Ashwini Rai K
8475
/* Validated */
317887
proofread-page
text/x-wiki
<noinclude><pagequality level="4" user="Ashwini Rai K" />{{rh|center=|left=ಚಿರಸ್ಮರಣೆ|right=೩೧}}</noinclude>'ಅಫು'—ಒನ್ ಬೈ ಟು. ಒಬ್ಬೊಬ್ಬರ ಪಾಲಿಗೆ ಮೂರು ಮೂರು ಕಾಸು.</br>
{{gap}}ತಾಯಿಯನ್ನು ಕೇಳಿ ಒಂದಾಣೆಯೋ ಆರು ಕಾಸೋ ಇಸಕೊಳ್ಳಬೇಕಾಗಿತ್ತು</br>ಎಂದು ಅಪ್ಪುವಿಗೆ ಎನಿಸಿತು... ಚಿರುಕಂಡ, ಮೌನ ಸರಿಯಲ್ಲವೆಂದು ಉತ್ತರವಿತ್ತ:</br>
{{gap}}"ನಮ್ಮ ಹತ್ತಿರ ದುಡ್ಡಿಲ್ಲ."</br>
{{gap}}ಆ ಉತ್ತರ ಅನಿರೀಕ್ಷಿತವಲ್ಲವೆನ್ನುವಂತೆ ಅಂಗಡಿಯವನೆಂದ:</br>
{{gap}}"ಅಷ್ಟೇ ತಾನೆ? ನಮ್ಮ ಅಂಗಡಿಗೆ ದುಡ್ಡಿದಿದ್ದೋರು ಮಾತ್ರ ಬರ್ರ್ತಾರೆ</br>ಅಂದ್ಕೊಂಡ್ರಾ?"</br>
{{gap}}ఆ ಮಾತು ಕೇಳಿ ಕುಳಿತಿದ್ದು ಧಾಂಡಿಗ ಗೊಳ್ಳನೆ ನಕ್ಕ. ಎದ್ದು ಒಲೆಯ ಬಳಿಗೆ</br>ಹೋಗಿ ತಾನು ಸೇದುತ್ತಿದ್ದ ಬೀಡಿಯ ತುಂಡನ್ನು ಬೆಂಕಿಗೆ ಎಸೆದು,</br>
ಅಂಗಡಿಯವನನ್ನು ನೋಡುತ್ತ ಹೇಳಿದ:</br>
{{gap}}"ನಾನು ಬರ್ತಿನಪ್ಪೋ. ಇವತ್ತಿಂದೂ ಲೆಕ್ಕಕ್ಕೆ ಬರೆದ್ಬಿಡು, ಎಷ್ಟಾಯ್ತು ಒಟ್ಟು?"</br>
{{gap}}"ಐದಾಣೆ. ಸಾಯಂಕಾಲ ಒಂದು ಸೇರು ಅಕ್ಕಿ ತಂದ್ಕೊಡು. ಇಲ್ಲಿದ್ರೆ ನಾನು</br>
ಉಪವಾಸ ಬಿದ್ದು ಸತ್ಹೋಗ್ತೇನೆ.ನಾಳೆ ಚಾ ಮಾಡಿ ನಿನಗೆ ಕೊಡೋರೇ</br>
ಇರೋದಿಲ್ಲ ನೋಡು!"</br>
{{gap}}ಧಾಂಡಿಗ ಮತ್ತೊಮ್ಮೆ ಗಟ್ಟಿಯಾಗಿ ನಕ್ಕು, ಹುಡುಗರನ್ನು ಪುನಃ ತೀವ್ರ</br>
ನೋಟದಿಂದ ನೋಡಿ, ಹೊರಟುಹೋದ.</br>
{{gap}}ಅಪ್ಪು ಮತ್ತು ಚಿರುಕಂಡನಿಗೆ, ಈಗ ಹೆಚ್ಚು ಸರಾಗವಾಗಿ ಉಸಿರಾಡ</br>
ಬಹುದೆನ್ನಿಸಿತು.</br>
{{gap}}ಅಂಗಡಿಯವನು ಆಗಲೇ ಚಹಾ ಮಾಡತೊಡಗಿದ್ದ, ಹುಡುಗರು ಪರಸ್ಪರರ</br>
ಮುಖ ನೋಡಿ ಸುಮ್ಮನಾದರು.</br>
{{gap}}ದೊಡ್ಡ ಡಬ್ಬವನ್ನು ಮುಟ್ಟಿ ತೋರಿಸಿ ಅಂಗಡಿಯವನೆಂದ:</br>
{{gap}}"ಅವಲಕ್ಕಿ ಇದೆ, ತಿನ್ತೀರಾ?"</br>
{{gap}}ಈ ರೀತಿ ಸಾಲ ಮಾಡುವುದು ಚಿರುಕಂಡನಿಗೆ ಸರಿತೋರಲಿಲ್ಲ. ಅಸಮ್ಮತಿ</br>
ಸೂಚಿಸುತ್ತ ಆತ ಹೇಳಿದ:</br>
{{gap}}"ಬೇಡ ಬೇಡ! ನಾವು ತಿಂಡಿ ತಿಂದೇ ಬಂದಿದ್ದೇವೆ."</br>
{{gap}}"ಹಾಗೇ ಆಗಲಿ, ಚಾ ತಗೊಳ್ಳಿ. ದುಡ್ಡಿನ ಯೋಚ್ನೆ ಮಾಡ್ಬೇಡಿ</br>ಯಾವಾಗಲಾದರೂ ಕೊಟ್ಟೀರಂತೆ."</br>
{{gap}}ಕಯ್ಯೂರಿನಲ್ಲೂ ಒಂದು ಪುಟ್ಟ ಹೋಟೆಲಿತ್ತು. ಮೂರು ನಾಲ್ಕು ಸಾರೆ</br>ಗುಟ್ಟಾಗಿ ಅಲ್ಲಿಗೆ ಹೋಗಿದ್ದ ಆ ಹುಡುಗರಿಗೆ ಅಂಗಡಿ ಚಹಾದ ರುಚಿ</br><noinclude></noinclude>
me2b51v2ohaq76geigek12t42oxzb2g
ಪುಟ:Chirasmarane-Niranjana.pdf/೩೧
104
12850
317888
256550
2026-05-07T10:32:38Z
Ashwini Rai K
8475
/* Validated */
317888
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=೩೨|right=ಚಿರಸ್ಮರಣೆ}}
ಹೊಸತಾಗಿರಲಿಲ್ಲ, ಇಲ್ಲಿಯೂ ಅಷ್ಟೇ ರುಚಿಯಾಗಿತ್ತು ಚಹಾ. ಬಿಸಿಯಾಗಿದ್ದ ಆ ಗುಟುಕು ಪಾನೀಯ ಅವರ ನಾಲಿಗೆಗೆ ಚುರುಕು ಮುಟ್ಟಿಸಿತು. <br/>
{{gap}}ಹುಡುಗರು ಫೂ ಫೂ ಎಂದು ಊದುತ್ತ ಆರಿಸಿ ಚಹಾ ಕುಡಿಯುತ್ತಿದ್ದುದನ್ನೆ ಅಂಗಡಿಯವನು ದಿಟ್ಟಿಸಿದ. <br/>
{{gap}}ಅಪ್ಪುವಿಗೆ ಒಮ್ಮೆಲೆ ಅಸಮಾಧಾನವೆನಿಸಿತು. ತಾವು ಬಂದ ಕೆಲಸವೇನು? ಮಾಡುತ್ತಿದ್ದುದೇನು? ಆತ ಚಿರುಕಂಡನನ್ನು ನೋಡಿದ.ಇವನನ್ನೂ ಅದೇ ಯೋಚನೆ ಬಾಧಿಸುತ್ತಿತ್ತು, ಈತ ಅಪ್ಪುವನ್ನು ನೋಡಿದ. <br/>
{{gap}}ಹುಡುಗರು ಚಾ ಕುಡಿದು ಗ್ಲಾಸುಗಳನ್ನು ಕೆಳಗಿಡುತ್ತಿದ್ದಂತೆಯೇ
ಅಂಗಡಿಯವನೆಂದ: <br/>
{{gap}}"ಎಲ್ಲಿಗೆ ಹೊರಟಿದ್ದೀರಾ?" <br/>
{{gap}}ಇಬ್ಬರಿಗೂ ಒಮ್ಮೆಲೆ ದಿಗಿಲಾಯಿತು. ಆದರೂ ಚಿರುಕಂಡ ಶಾಂತವಾಗಿರಲು ಯತ್ನಿಸುತ್ತ ಹೇಳಿದ: <br/>
{{gap}}"ಹೀಗೇ ಬಂದ್ವಿ." <br/>
{{gap}}"ಹಾಗೋ!" <br/>
{{gap}}ಅದು, 'ಎಲ್ಲಾ ಗೊತ್ತಿದೆ' ಎನ್ನುವ ನಗೆಯ ಧ್ವನಿ. ಅಪ್ಪುವಿಗೆ ಆ ಧ್ವನಿ ಇಷ್ಟವಾಗಲಿಲ್ಲ. <br/>
{{gap}}ಸ್ವಲ್ಪ ಹೊತ್ತಿನ ಮೌನದ ಬಳಿಕ ಅಂಗಡಿಯವನು ಮತ್ತೊಂದು ಪ್ರಶ್ನೆ ಕೇಳಿದ: <br/>
{{gap}}"ನಿಮ್ಮ ಹೆಸರು ಚಿರುಕಂಡ ಮತ್ತು ಅಪ್ಪು ಅಲ್ಲ?" <br/>
{{gap}}ಹುಡುಗರು ಬೆಚ್ಚಿ ಬಿದ್ದರು. ಅಲ್ಲಗಳೆಯುವುದೇ ಯೋಗ್ಯವೆನಿಸಿತು. ಆದರೆ ಮಾತು ಹೊರಡಲಿಲ್ಲ. <br/>
{{gap}}ಅಂಗಡಿಯವನು ನಗುತ್ತ ಎಂದ: <br/>
{{gap}}"ಹೆದರಬೇಡಿ. ನಿಮ್ಮ ಮಾಸ್ತರು ರಾತ್ರಿಯೇ ಹೇಳಿ ಹೋಗಿದ್ದಾರೆ." <br/>
{{gap}}ಇಬ್ಬರ ಮುಖವೂ ಅಗಲವಾಯಿತು. ಉತ್ಸಾಹಗೊಂಡು ಅಪ್ಪು ಕೇಳಿದ: <br/>
{{gap}}"ನಮ್ಮ ಮಾಸ್ತರು ಗೊತ್ತಾ ನಿಮಗೆ?" <br/>
{{gap}}"ಓಹೋ! ಏನು ಗೊತ್ತಿಲೆ?" <br/>
{{gap}}ಚಿರಕಂಡನೆಂದ: <br/>
{{gap}}"ನಾವು ಮಾಸ್ತರನ್ನು ನೋಡ್ಬೇಕು. ಅವರು ನಮ್ಮನ್ನು ಇಲ್ಲಿಗೆ ಬರೋದಕ್ಕೆ ಹೇಳಿದ್ರು." <br/>
{{gap}}"ಎರಡು ನಿಮಿಷ ಇಲ್ಲೇ ಇರಿ. ನೀವು ಬಂದಿರೋದು ಗೊತ್ತಾದ ತಕ್ಷಣ<noinclude></noinclude>
8fwx2qt4qcvlnb0viiuk1u92kwrymu4
ಪುಟ:Chirasmarane-Niranjana.pdf/೩೨
104
12851
317889
256554
2026-05-07T10:32:54Z
Ashwini Rai K
8475
/* Validated */
317889
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=ಚಿರಸ್ಮರಣೆ|right=೩೩}}
ಹೇಳಿಕಳಿಸ್ತಾರೆ." <br/>
{{gap}}"ಹ್ಯಾಗೆ ಗೊತ್ತಾಗ್ತದೆ ನಾವು ಬ೦ದಿರೋದು?"<br/>
{{gap}}"ಧಾಂಡಿಗ ಆಗಲೆ ಹೋದನಲ್ಲಾ!"<br/>
{{gap}}"ಧಾಂಡಿಗ?"<br/>
{{gap}}"ಹೂ. ಧಾಂಡಿಗ ಅಂತಲೆ ನಾವು ಅವನನ್ನು ಕರೆಯೋದು."<br/>
{{gap}}"ಅವನು-ಅವನೂ ನಮ್ಮವನೆ?"<br/>
{{gap}}ಪ್ರಶ್ನೆಯಲ್ಲಿ ಆಶ್ಚರ್ಯ ಬೆರೆತಿತ್ತು. ಅಂಗಡಿಯವನು ನಕ್ಕು ನುಡಿದ:<br/>
{{gap}}"ಯಾಕೆ, ಅವನನ್ನ ನೋಡಿ ಭಯವಾಯ್ತೋ?"<br/>
{{gap}}ಅಪ್ಪುವಿಗೆ ಆ ಪ್ರಶ್ನೆ ಮೆಚ್ಚುಗೆಯಾಗಲಿಲ್ಲ.ಧಾಂಡಿಗನ ವಿಷಯ ತಾನು ಹಾಗೆ ಕೇಳಲೇಬಾರದಿತ್ತು, ಎನಿಸಿತು.<br/>
{{gap}}"ಭಯವೇನಿಲ್ಲ, ಆದರೂ ಒಂದು ಥರ ಆಯ್ತು."<br/>
{{gap}}"ಒಳ್ಳೆಯವನು, ಪಾಪ !"<br/>
{{gap}}ಇದೆಲ್ಲವೂ ತಾನು ಕಲ್ಪಿಸಿಕೊಂಡಂತೆಯೇ ಇದ್ದಹಾಗೆ ಚಿರುಕಂಡನಿಗೆ ತೋರಿ, ಅವನ ಮುಖದಲ್ಲಿ ಕಳೆಯೇರಿತು.<br/>
{{gap}}"ನಾವೇ ಕಯ್ಯೂರಿನೋರೂಂತ ಆತನಿಗೆ ಹ್ಯಾಗೆ ಗೊತ್ತಾಯ್ತು?" <br/>
{{gap}}ಪ್ರಶ್ನೆ ಕೇಳಿದ ಚಿರುಕಂಡನಂತೆಯೇ ಅಪ್ಪುವೂ ಆತುರದಿಂದ ಉತ್ತರವನ್ನು ಇದಿರುನೋಡಿದ.<br/>
{{gap}}"ಆದೆಲ್ಲಾ ಏನು ದೊಡ್ಡ ವಿಷಯ? ನೀವು ನೋಡೋಕೆ ಹ್ಯಾಗಿದ್ದೀರೀಂತ ಮಾಸ್ತರು ಹೇಳಿಯೇ ಇದ್ರು. ಅಲ್ಲದೆ ಇಂಥಾದ್ದರಲ್ಲೆಲ್ಲ ಧಾಂಡಿಗ ಹಳೇ ಹುಲಿ. ನೀವು ಯಾರೂಂತ ಗೊತ್ತಾದ್ದರಿಂದಲೇ, ದುಡ್ಡಿಲ್ಲಾಂತ ನೀವು ಅಂದಮೇಲೂ ನಾನು ಚಹಾ ಮಾಡೋದಕ್ಕೆ ಹೊರಟೆ. ಅದನ್ನ ನೋಡಿ ಖಾತ್ರಿಯಾಗಿ, ಅವನು ಎದ್ದ."<br/>
{{gap}}ಅವರಿಬ್ಬರ ವಿಷಯದಲ್ಲೂ ಅಪ್ಪು ಮತ್ತು ಚಿರುಕಂಡನಿಗೆ ಗೌರವ
ಉತ್ಪನ್ನವಾಯಿತು. ಅಪ್ಪುವೆಂದ: "ಮಾಸ್ತರು ಇರೋ ಜಾಗ ಇಲ್ಲಿಂದ ಎಷ್ಟು
ದೂರ?"<br/>
{{gap}}"ಅದೆಲ್ಲಾ ಕೇಳಬಾರದು. ಹೋದಾಗ ನಿಮಗೇ ಗೊತ್ತಾಗ್ತದೆ."<br/>
{{gap}}ಸಣ್ಣ ತಪ್ಪು ಮಾಡಿದ ಬುದ್ಧಿವಂತ ವಿದ್ಯಾರ್ಥಿಯ ಹಾಗಾಯಿತು ಹುಡುಗನ ಸ್ಥಿತಿ.<br/>
{{gap}}ಅಂಗಡಿಯವನು ಸಣ್ಣನೆ ನಕ್ಕು, ಡಬ್ಬದ ಬಳಿಯಲ್ಲಿ ಮಡಚಿ ಇರಿಸಿದ್ದ<noinclude></noinclude>
rrr347dwc1h3a9r5fcc8x9qwp94ma7r
ಪುಟ:Chirasmarane-Niranjana.pdf/೩೩
104
12852
317890
256537
2026-05-07T10:33:26Z
Ashwini Rai K
8475
/* Validated */
317890
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=೩೪|right=ಚಿರಸ್ಮರಣೆ}}
'ಮಾತೃಭೂಮಿ' ದಿನಪತ್ರಿಕೆಯನ್ನು ಹೊರತೆಗೆದ. <br/>
{{gap}}"ಪತ್ರಿಕೆ ಓದುವುದೊಂದು ಹಿರಿತನವೆಂದು ಭಾವಿಸಿದ್ದ ಅಪ್ಪು ಹೇಳಿದ:<br/>
{{gap}}"ನಮಗೆ ಪತ್ರಿಕೆ ಓದಿ ಅಭ್ಯಾಸವಿಲ್ಲ."<br/>
{{gap}}ಆದರೆ, ಮಾಸ್ತರು ಪತ್ರಿಕೆಯೋದುವುದನ್ನು ದಿನವೂ ಕಾಣುತ್ತಿದ್ದ ಚಿರುಕಂಡನಿಗೆ ತಮಗೆ ಆ ಅಭಾಸವಿಲ್ಲವೆಂದು ಒಪ್ಪಿಕೊಳ್ಳುವುದು ಅಭಿಮಾನದ ವಿಷಯವಾಗಿ ತೋರಲಿಲ್ಲ.<br/>
{{gap}}ಅಂಗಡಿಯವನು ಮುಂದುವರಿಸಿದ: "ಒಳ್ಳೆಯವರು ನೀವು! ಶಾಲೆಗೆ ಹೋಗಿ ವಿದ್ಯೆ ಕಲಿತದ್ದಾದರೂ ಯಾಕೆ? ಪತ್ರಿಕೆಯೋ ಪುಸ್ತಕವೋ ಓದ್ತಾ ಇದ್ದರೆ ಅಕ್ಷರಜ್ಞಾನವಾದರೂ ಉಳೀತದೆ. ಇಲ್ದಿದ್ರೆ ಮರೆತುಬಿಡ್ತೀರಾ!"<br/>
{{gap}}ಅಪ್ಪುವಿಗೂ ಅದು ಹೌದೆನಿಸಿ ಆತ ಖಿನ್ನನಾದ. ಮಾತು ಮುಗಿಸಿ ಅಂಗಡಿಯವನು ಪತ್ರಿಕೆಯನ್ನು ಮುಂದಕ್ಕೆ ಚಾಚಿದಾಗ, ಚಿರುಕಂಡ ಅದನ್ನು ಪಡೆದುಕೊ೦ಡ.<br/>
{{gap}}"ಚಿರುಕಂಡ ಅಂದರೆ ನೀನೇ ಅಲ್ವಾ?"<br/>
{{gap}}ಅಂಗಡಿಯವನ ಈ ಪ್ರಶ್ನೆ ಕೇಳಿ ಚಿರುಕಂಡನಿಗೂ ಆಶ್ಚರ್ಯವಾಯಿತು. ಅಪ್ಪುವಿಗೂ ಆಶ್ಚರ್ಯವಾಯಿತು.<br/>
{{gap}}“ಹ್ಯಾಗೆ ತಿಳೀತು ನಿಮಗೆ?"<br/>
{{gap}}ಅಂಗಡಿಯವನು ನಕ್ಕ.<br/>
{{gap}}"ಊಹಿಸಿ ಹೇಳ್ದೆ. ದಪ್ಪಗಿರೋನು ಅಪ್ಪು, ತೆಳ್ಳಗಿರೋನು ಚಿರುಕಂಡ ಇರಬಹುದೂ೦ತ."<br/>
{{gap}}"ಸರಿ! ಸರಿ!"<br/>
{{gap}}ಅಂಗಡಿಯವನ ತಮಾಷೆಯ ಪ್ರವೃತ್ತಿ ಕಂಡು ಹುಡುಗರಿಗೆ ಖುಷಿಯಾಯಿತು. ಚಿರುಕಂಡ ತೆರೆದು ನೋಡುತ್ತಿದ್ದ ಪತ್ರಿಕೆಯತ್ತ ಅಪ್ಪುವೂ ದೃಷ್ಟಿ ಹಾಯಿಸಿದ. ಓದುವುದು ಸುಲಭವಾಗಿತ್ತು.ಆದರೆ ಆ ಪದಗಳೆಲ್ಲ ವಿಚಿತ್ರವಾಗಿದ್ದುವು.ಓದಿದಾಗ ಯಾವ ಅರ್ಥವೂ ಅಪ್ಪುವಿಗೆ ಆಗಲಿಲ್ಲ. ಆತ ದೃಷ್ಟಿಯನ್ನು ಪತ್ರಿಕೆಯಿಂದ ತೆಗೆದು ಅಂಗಡಿಯಾಚೆ ಹೊರಗೆ-ನೋಡಿದ. ಅಲ್ಲೇ ಸ್ವಲ್ಪ ಆಚೆಗೆ, ಗೇರುಬೀಜದ ಗೋಡ೦ಬಿಯ-ಮರಗಳು, ಒ೦ದೆರಡು ಮಾವು,ಕಾಡುಮರಗಳು ಕೆಲವು, ಅವುಗಳನ್ನು ಬಳಸಿಕೊ೦ಡು ಪೊದೆ ಪೊದರುಗಳನ್ನು ಹಾದು ಏರಿ ಇಳಿದು ಹೊಗುತ್ತಿದ್ದ ಕಾಲು ಹಾದಿ… ಅದನ್ನೆಲ್ಲ ನೋಡಿದ ಬಳಿಕ ಅಪ್ಪು ಮತ್ತೆ ಪತ್ರಿಕೆಯನ್ನು ದಿಟ್ಟಿಸಿದ. ಚಿರುಕಂಡ ಪತ್ರಿಕೆಯನ್ನೋದುವುದರಲ್ಲೆ ಮನಸ್ಸು<noinclude></noinclude>
qs13v7ub2z9qyo5ho7vwj5t01v4w1kb
ಪುಟ:Chirasmarane-Niranjana.pdf/೩೪
104
12853
317891
256515
2026-05-07T10:33:39Z
Ashwini Rai K
8475
/* Validated */
317891
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=ಚಿರಸ್ಮರಣೆ|right=೩೫}}
ನಟ್ಟಿದ್ದುದನ್ನು ಕ೦ಡು ಅವನಿಗೆ ಆಶ್ಚರ್ಯವಾಯಿತು. ಕ್ಷಣಕಾಲ ಅಸಹನೆ ಎನಿಸಿತು. ಮತ್ತೆ, ತನ್ನ ಸ್ನೇಹಿತ ಚಿರುಕಂಡ ಒಳ್ಳೆಯವನು ಬುದ್ಧಿವಂತ ಎನ್ನುವ ಭಾವನೆ, ಯೋಚನೆಗಳನ್ನು ಮಧುರಗೊಳಿಸಿತು. ಆದರೂ ಮೌನವಾಗಿ ತಾನೊಬ್ಬನೇ ಇರಲಾರದೆ ಅಪ್ಪು ಚಿರುಕ೦ಡನ ತೊಡೆಯನ್ನು ಮೆಲ್ಲನೆ ತಿವಿದು ಪಿಸುದನಿಯಲ್ಲಿ ಕೇಳಿದ:<br/>
{{gap}}"ಅವರು ಬಂದಿದ್ದಾರೋ ಏನೂಂತ ಕೇಳಿ ನೋಡು." <br/>
{{gap}}"ಊಹೂಂ. ಹಾಗೆಲ್ಲ ಕೇಳಬಾರ್ದು." <br/>
{{gap}}ಸುಮ್ಮನಿರೆ೦ದು ಸೂಚಿಸುವಹಾಗಿತ್ತು ಚಿರುಕ೦ಡನ ಧ್ವನಿ. <br/>
{{gap}}ಅವಲಕ್ಕಿಯ ಡಬ್ಬದ ಬದಿಯಿ೦ದೊ೦ದು ಬೀಡಿಯನ್ನು ಕೈಗೆತ್ತಿಕೊ೦ಡು ಅಂಗಡಿಯವನು ನಗುತ್ತ ಕೇಳಿದ:"ನೀವು ಬೀಡಿ ಸೇದ್ತೀರೇನು?"<br/>
{{gap}}"ಇಲ್ಲಪ್ಪ !" <br/>
{{gap}}ಹಾಗೆ ಇಬ್ಬರಿಂದಲೂ ಒಂದೇ ರೀತಿಯ ಉತ್ತರ ಬಂತು. <br/>
{{gap}}"ಒಳ್ಳೆದು, ಈಗ್ಲೇ ಸೇದಬೇಡಿ. ಇದರಿಂದ ಯಾವ ಸುಖವೂ ಸಿಗೋದಿಲ್ಲ.<br/>
{{gap}}ಚಿರುಕಂಡ ಪತ್ರಿಕೆಯನ್ನು ಮಡಚಿ ಬದಿಗಿರಿಸಿ ಕೇಳಿದ: <br/>
{{gap}}"ಸುಖ ಇಲ್ದೇ ಇದ್ದ ಮೇಲೆ ನೀವು ಯಾಕೆ ಸೇದ್ತೀರಾ?" <br/>
{{gap}}ಅ೦ಗಡಿಯವನು ಉತ್ತರ ಕೊಡಲಿಲ್ಲ. ಸುಮ್ಮನೆ ನಕ್ಕು, ಒಲೆಯತ್ತ ಬಾಗಿ ಕೆ೦ಡಕ್ಕೆ ಬೀಡಿ ಮುಟ್ಟಿಸಿ, ತುಟಿಗಳಿಗಿಟ್ಟು, ಉಸಿರೆಳೆದು ಛಾವಣಿ ನೋಡುತ್ತ ಹೊಗೆಯುಗುಳಿದ.<br/>
{{gap}}ಅಪ್ಪುವಿಗೆ, ಮಾಸ್ತರು ಬೀಡಿ ಸೇದುವ ರೀತಿ ನೆನಪಾಯಿತು. <br/>
{{gap}}"ನಮ್ಮ ಮಾಸ್ತರು ತುಂಬಾ ಸೇದ್ತಾರೆ, ಅಲ್ಲ?" <br/>
{{gap}}ಚಿರುಕ೦ಡ "ಹೂ೦" ಎನ್ನುವುದಕ್ಕೂ ಬಿಳಿಯ ಅಡ್ಡಪ೦ಚೆ ಜುಬ್ಬ ತೊಟ್ಟಿದ್ದ ಯುವಕನೊಬ್ಬ ಒಳ ಬರುವುದಕ್ಕೂ ಸರಿಹೋಯಿತು.<br/>
{{gap}}ಬಂದವನು ಹುಡುಗರನ್ನೊಮ್ಮೆ ನೋಡಿ ಅಂಗಡಿಯವನನ್ನು ಕೇಳಿದ: <br/>
{{gap}}"ಇವರೇ ಏನು?" <br/>
{{gap}}ಅಂಗಡಿಯವನು ಹೌದೆನ್ನುವಂತೆ ತಲೆದೂಗಿದೊಡನೆ ಹುಡುಗರತ್ತ ಆ ಯುವಕ ತಿರುಗಿದ: "ನನ್ನ ಜತೇಲಿ ಬನ್ನಿ."<br/>
{{gap}}ಅಪ್ಪು ಮತ್ತು ಚಿರುಕಂಡ ಲಗುಬಗೆಯಿಂದ ಎದ್ದರು. <br/>
{{gap}}"ನಾವು ಹೋಗಿ ಬರ್ತೇವೆ ಎಂದು ಅಂಗಡಿಯವನಿಗೆ ಹೇಳಿದರು.<br/>
{{gap}}"ಹೂ೦ ಹೋಗಿ ಬನ್ನಿ. ಅಗಾಗ್ಗೆ ಬರ್ತಾನೆ ಇರಿ. ಇನ್ನೊಂದ್ಸಲ ಬಂದಾಗ ಕೇಟ್ಟಿ<noinclude></noinclude>
d47jtns1qoipgfmppnvcyokq0m68pdl
ಪುಟ:Chirasmarane-Niranjana.pdf/೩೫
104
12854
317892
256512
2026-05-07T10:34:05Z
Ashwini Rai K
8475
/* Validated */
317892
proofread-page
text/x-wiki
<noinclude><pagequality level="4" user="Ashwini Rai K" /> {{rh|right=ಚಿರಸ್ಮರಣೆ|left=೩೬ }}</noinclude>
ಮಾಡ್ಕೊಡ್ತೇನೆ ಸ್ಪೆಷಲ್ ಚಾ! ಈ ಅಂಗಡೀನ ಮರೀಬೇಡಿ. ನನ್ನ ಹೆಸರು ರಾಮುಣ್ಣಿ."<br/>
{{gap}} ಅ೦ಗಡಿಯವನ ಈ ಮಾತು ಕೇಳಿ ಹುಡುಗರಿಗೆ ಸ೦ತೋಷವಾಯಿತು: ಆತನ ಹೆಸರು ತಿಳಿಯಿತೆ೦ದು ಸಮಾಧಾನವೆನಿಸಿತು.</br>
{{gap}}"ಬರ್ತೇನೆ ರಾಮುಣ್ಣಿ" ಎಂದು ಆ ಯುವಕ ಆತ್ಮೀಯತೆಯಿಂದ ಮುಗುಳು ನಕ್ಕು ಹೇಳಿದ.<br/>
{{gap}}…ಆ ಯುವಕನ ತುಟಿಗಳು ಬಿಗಿದಿದ್ದುವು-ತಿಳಿವಳಿಕೆಯ ಭಂಡಾರಕ್ಕೆ ಬೀಗಮುದ್ರೆಯೊತ್ತಿದ್ದಹಾಗೆ. ಆದರೆ ಆ ತುಟಿಗಳ ಮೇಲೆ ಸದಾ ಲಾಸ್ಯವಾಡುತ್ತಿದ್ದ ಮುಗುಳುನಗೆಯೊ೦ದಿತ್ತು. ಕಣ್ಣುಗಳಲ್ಲಿದ್ದುದು ಆತ್ಮೀಯತೆಯ ನೋಟ.<br/>
{{gap}}ಆತ ಮುಂದಾಗಿ ಹಾದಿ ನಡೆದ. ಎತ್ತಿ ಕಟ್ಟಿದ್ದ ಆತನ ಪಂಚೆಯ ಕೆಳಗಿದ್ದ ಬರಿಯ ಕಾಲುಗಳನ್ನೂ ಪಾದಗಳನ್ನೂ ನೋಡುತ್ತ, ನೀಳವಾಗಿ ಹಿಂದಕ್ಕೆ ಸರಿದಿದ್ದ ಆ ತಲೆಗೂದಲನ್ನು ದಿಟ್ಟಿಸುತ್ತ, ಅಪ್ಪುವೂ ಚಿರುಕಂಡನೂ ಆತನನ್ನು ಹಿ೦ಬಾಲಿಸಿದರು. ನಡೆಯಲಾರದೆ ಹಿ೦ದೆ ಬೀಳುತ್ತಿರುವರೇನೋ ಎ೦ದು ಆ ಯುವಕ ಆಗೊಮ್ಮೆ ಈಗೊಮ್ಮೆ ಹಿಂದಕ್ಕೆ ತಿರುಗಿ ಹುಡುಗರನ್ನು ನೋಡುತ್ತಿದ್ದ, ಆದರೆ ನಡಿಗೆಯ ವೇಗದಲ್ಲಿ ಎಳೆಯರು ಸೋಲುವ ಹಾಗೆ ಕಾಣಲಿಲ್ಲ.<br/>
{{gap}}ಈ ಮೌನ–ಪಯಣದ ಅನುಭವವೇ ಇಲ್ಲದ ಅಪ್ಪುವಿಗೆ ಏನನ್ನಾದರೂ ಮಾತನಾಡಬೇಕೆಂದು ತೋರಿತು. ಆ ಯುವಕನ ಹೆಸರನ್ನಾದರೂ ಕೇಳೋಣ ಎನ್ನಿಸಿತು. ಆದರೆ, ಮಾತನಾಡಬಹುದೋ ಬಾರದೋ ಎಂದು ಅನಿಶ್ಚಯತೆ ಆತನನ್ನು ಕಾಡಿತು. ಒಂದೆರಡು ಸಾರೆ ಅಪ್ಪು, ತನ್ನ ಭುಜದ ಮೇಲಿನಿಂದ ದೃಷ್ಟಿ ಹಾಯಿಸಿ, ಹಿಂದಿದ್ದ ಚಿರುಕಂಡನನ್ನು ನೋಡಿದ.<br/>
{{gap}}ಅಪ್ಪು ಏನನನ್ನೋ ಕೇಳಬಯಸುತ್ತಿದ್ದುದು ಚಿರುಕಂಡನಿಗೆ ಸ್ಪಷ್ಟವಾಯಿತು. ಉಸಿರು, ಮೈಯ ಕುಲುಕಾಟ, ಮುಖಭಾವ ಇಷ್ಟರಿಂದಲೇ ಪರಸ್ಪರ ಮನಸ್ಸಿನೊಳಗಿದ್ದುದನ್ನು ತಿಳಿಯುವಂತಹ ಒಡನಾಡಿಗಳು ಅವರು. ಅಪ್ಪು ತನ್ನನ್ನು ನೋಡಿದಾಗ ಚಿರುಕಂಡ, ತುಟಿಗಳ ಮೇಲೆ ಬೆರಳಿಟ್ಟು ಸುಮ್ಮಿನಿರೆಂದು ಸನ್ನೆಮಾಡಿದ.<br/>
{{gap}}ಅಪ್ಪು ಸುಮ್ಮನಿದ್ದ. ಆದರೆ, ಹತ್ತಿಕ್ಕಿದ ಭಾವನೆಗಳ ಕುದಿತ, ಮೇಲು ಮೇಲಕ್ಕೆ ಏರಿಬರುತ್ತಿದ್ದ ಸೂರ್ಯನ ಪ್ರಭಾವಕ್ಕೆ ಸಿಲುಕಿ, ಮೈ ಬೆವರೊಡೆಯಿತು. ಸದಾಕಾಲವೂ ಬಡಕಲು ಪ್ರಕೃತಿಯ ಒಣಜೀವವಾಗಿರುತ್ತಿದ್ದ ಚಿರುಕಂಡನಿಗೆ ಆ ರೀತಿ ಬೆವರಿನ ಸ್ನಾನವಾಗದೆ ಇದ್ದರೂ ಕಂಕುಳಲ್ಲಿ ಹನಿ ಮೂಡಿತು.<noinclude></noinclude>
ochwqoug3qxk8dnd3udi4norpc5yl4m
ಪುಟ:Chirasmarane-Niranjana.pdf/೩೬
104
12855
317893
256480
2026-05-07T11:01:36Z
Ashwini Rai K
8475
/* Validated */
317893
proofread-page
text/x-wiki
<noinclude><pagequality level="4" user="Ashwini Rai K" />{{rh|left=ಚಿರಸ್ಮರಣೆ|right=೩೭}}</noinclude>{{gap}}....ಸ್ವಲ್ಪ ಹೊತ್ತಿನಲ್ಲೇ ತಾವು ಕಾಣಲಿದ್ದ ತಮ್ಮ ಮಾಸ್ತರು, ಅವರು ಪರಿಚಯಮಾಡಿಸಿಕೊಡುವೆನೆ೦ದಿದ್ದ ಆ ದೊಡ್ಡವರು, ಹೊಟೆಲಿನಲ್ಲಿ ಕ೦ಡಿದ್ದ ಧಾಂಡಿಗ... ಇಷ್ಟು ಜನ. ಅಲ್ಲಿ ಬೇರೆ ಯಾರಿರುವರೋ? ' ಅವರು' ಸರಕಾರದ ಕಣ್ಣು ತಪ್ಪಿಸಿ ದುಡಿಯುತ್ತಿದ್ದ ಹಿರಿಯ ನಾಯಕ, ತಮ್ಮ ಮಾಸ್ತರು ಅವರ ಬಗೆಗೆ< ಎಷ್ಟೊಂದು ಆದರದಿಂದ ಮಾತನಾಡಿರಲಿಲ್ಲ! ಮಾಸ್ತರು ಒಮ್ಮೆ ಹೇಳಿದರು: "ಅವರೇ ನನಗೆ ಲೋಕದ ಜ್ಞಾನ ದೊರಕಿಸಿಕೊಟ್ಟವರು.ಅವರೇ ನನ್ನ ತಿಳಿವಳಿಕೆಗೆರೂಪುಗೊಟ್ಟವರು." ಲೋಕಜ್ಞಾನವೆಂದರೇನೊ? ತಿಳಿವಳಿಕೆಗೆ ರೂಪುಗೊಡುವುದೆಂದರೇನೊ? ಅದು ಅಸ್ಪಷ್ಟವಾದ ಮಾತು. ಆದರೆ ಇಷ್ಟು ಮಾತ್ರ</br> ಸ್ಪಷ್ಟ: 'ಅವರು' ಮಾಸ್ತರಿಗಿಂತಲೂ ದೊಡ್ಡವರು...</br>{{gap}}-ಹಾಗೆಂದು ಯೋಚಿಸುತ್ತ ಅಪ್ಪು ಮತ್ತು ಚಿರುಕಂಡ ನಡೆದರು....</br>{{gap}}.... ಮಾಸ್ತರಿಗಿಂತ ದೊಡ್ಡವರಾದ ಆ ವ್ಯಕ್ತಿ ಹೇಗಿರುವರೋ?ಎತ್ತರದ ದೇಹ, ಬಲವಾದ ತೋಳುಗಳು. ಬೆಲೆಬಾಳುವ ಉಡುಪು. ಹುರಿಮಾಡಿದ ಮೀಸೆ, ಭಯಭಕ್ತಿ ಹುಟ್ಟಿಸುವ ಕಣ್ಣುಗಳು ಗಂಭೀರವಾದ ಧ್ವನಿ....</br>
{{gap}}ಆ ಕಲ್ಪನೆಯ ಚಿತ್ರ ಭವ್ಯವಾಗಿತ್ತು. ಆ ಚಿತ್ರದೆದುರು ಸಲಿಗೆಯ ಮನೋಭಾವ </br>ಸಾಧ್ಯವೇ ಇರಲಿಲ್ಲ. ಆದರೆ ಮಾಸ್ತರು ಹಾಗಲ್ಲ.ಅವರು ಎಷ್ಟೊಂದು ಒಳ್ಳೆಯವರು! ಅವರನ್ನು ಕಂಡೊಡನೆ ಮೊಳೆಯುವುದು-ಅವರ ಬಳಿಗೆ ಹೋಗಿ ಅವರಿಗೆ ಅ೦ಟಿಕೊ೦ಡೇ ಕುಳಿತಿರಬೇಕೆ೦ಬ ಆಸೆ. ಎಲ್ಲರೂ ಅವರ ಹಾಗೆಯೇ ಇದ್ದರೆ ಎಷ್ಟು ಚೆನ್ನ! ಆದರೆ ಅವರಿಗಿಂತಲೂ ದೊಡ್ಡವರು ಮಾಸ್ತರರ ಹಾಗಿರುವುದು ಸಾಧ್ಯವಿಲ್ಲವಲ್ಲ....</br>{{gap}}ಇಬ್ಬರ ತಲೆಯಲ್ಲೂ ಸುಳಿಯುತ್ತಿದ್ದುದು ಅ೦ದ್ದದೇ ಯೋಚನೆ.ಸ್ವಲ್ಪ ಹೆಚ್ಚು, ಇಲ್ಲವೇ ಸ್ವಲ್ಪ ಕಡಿಮೆ. 'ಏನು ಯೋಚಿಸ್ತಿದ್ದೀಯಾ?' ಎ೦ದು ಚಿರುಕ೦ಡನನ್ನು</br> ಕೇಳುವ ಆಸೆ ಅಪ್ಪುವಿಗೆ, ಆದರೆ ಸ್ವರವೆತ್ತಿ ಮಾತನಾಡುವ ಹಾಗಿಲ್ಲ, 'ಶ್'< ಸುಮ್ಮನಿರು!" ಎಂದು ಚಿರುಕಂಡನ ಕೈಯಲ್ಲಿ ಛೀಮಾರಿ ಹಾಕಿಸಿಕೊಳ್ಳುವವರು ಯಾರು?</br>{{gap}}ಆದರೆ ಚಿರುಕಂಡ, ಮೌನದ ಕೋಟೆಯೊಳಗೆ ತನ್ನಷ್ಟಕ್ಕೆ ಮಾತನಾಡುತ್ತಿದ್ದ. ಕಳೆದ ನಾಲ್ಕು ತಿ೦ಗಳ ಅವಧಿಯಲ್ಲಿ ಎಷ್ಟೊ೦ದು ಸೋಜಿಗವಾದುದೆಲ್ಲ</br> ನಡೆದುಹೋಗಿತ್ತು! ಸತ್ಯ ಮತ್ತು ನ್ಯಾಯ-ಎಷ್ಟು ಒಳ್ಳೆಯ ಪದಗಳು! ಆ<ಮಾತನ್ನೆತ್ತಿದಾಗ ಮಾಸ್ತರ ಕಣ್ಣುಗಳು ಹೇಗೆ ಮಿನುಗುತ್ತಿದ್ದುವು!.. ನಮ್ಮ ಹಳ್ಳಿ, ಕರಾವಳಿ ಪ್ರದೇಶ, ಭಾರತದೇಶ, ಅದಕ್ಕಿಂತಲೂ ಹೊರಗೆ ದೂರದೂರದ ವಿವಿಧ<noinclude></noinclude>
ipuzrzasvhourzi88lnkbrjwlnoc14u
ಪುಟ:Chirasmarane-Niranjana.pdf/೩೭
104
12856
317894
256492
2026-05-07T11:02:03Z
Ashwini Rai K
8475
/* Validated */
317894
proofread-page
text/x-wiki
<noinclude><pagequality level="4" user="Ashwini Rai K" />{{rh|left=೩೮ |right=ಚಿರಸ್ಮರಣೆ}}</noinclude>
ದೇಶಗಳು.... ಎಲ್ಲೆಲ್ಲೂ ಸತ್ಯ ಮತ್ತು ನ್ಯಾಯದ ಪಕ್ಷ ಹಿಡಿದು ಸೆಣೆಸುವ ಜನರು....</br>{{gap}} ನಡೆಯುತ್ತಿದ್ದ ಚಿರುಕಂಡ ಮೌನವಾಗಿದ್ದರೂ ಏಕಾಕಿಯಾಗಿರಲಿಲ್ಲ. ಆತನೊಳಗಿನ ವಿಶಾಲ ಪ್ರಪಂಚದಲ್ಲಿ ಎಷ್ಟೊಂದು ಜನರಿದ್ದರು-ಎಷ್ಟೊಂದು ಜನರು!</br>{{gap}}ಮೆಲ್ಲನೆ ಬೀಸಿ ಬ೦ದ ಗಾಳಿ ಮಾನವರ ಮಾತನ್ನು ಹೊತ್ತು ತ೦ದಿತ್ತು. ಮಾತು ಯಾರದೊ?-ಎ೦ದು ಚಿರುಕ೦ಡ ಕಿವಿ ನಿಗುರಿಸಿದ; ತಮ್ಮವರದೇ ಇರಬೇಕು-ಎ೦ದು ಅಪ್ಪು ಮುಖವಗಲಿಸಿ ದೂರಕ್ಕೆ ದಿಟ್ಟಿಸಿದ.</br>{{gap}}ಮುಂದಾಗಿ ನಡೆಯುತ್ತಿದ್ದ ಯುವಕನೆಂದ:"ನೋಡಿ, ಅಲ್ಲಿದ್ದಾರೆ."</br>
{{rh|center='''೩'''}}</br>ತೆ೦ಗಿನ ತೋಪಿನಲ್ಲಿ, ಮೂಲೆಯಲ್ಲಿ ಬೆಳೆದಿದ್ದೊ೦ದು ಹಲಸಿನ ಮರದ ನೆರಳಿನಲ್ಲಿ, ಹಸಿರು ಗರಿಕೆ ಹುಲ್ಲಿನ ಮೇಲೆ ನಾಲ್ವರು ಕುಳಿತಿದ್ದರು, ಅವರಲ್ಲಿ ಇಬ್ಬರು, ಅಪ್ಪು ಮತ್ತು ಚಿರುಕಂಡನಿಗೆ ಪರಿಚಿತರು-ಮಾಸ್ತರು ಮತ್ತು ಚಾದಂಗಡಿಯಲ್ಲಿ ಅವರು ಕಂಡಿದ್ದ ಧಾ೦ಡಿಗ, ಮೂರನೆಯವನೊಬ್ಬ ವಯಸ್ಸಾದ ರೈತ,ನಾಲ್ಕನೆಯಾತ-</br>
{{gap}}'ಅವರು' ಬ೦ದಿದ್ದ ಹಾಗೆ ತೋರಲಿಲ್ಲ. ತಮ್ಮವರಾದ ಮಾಸ್ತರು ಅಲ್ಲೇ ಇದ್ದರೆ೦ದು ಅಪ್ಪು ಮತ್ತು ಚಿರುಕ೦ಡನಿಗೆ ಸ೦ತೋಶವಾಯಿತು.ಆದರೆ ತಾವು ಕ೦ಡುಹೋಗಲು ಬ೦ದಿದ್ದ 'ಅವರು' ಇರಲಿಲ್ಲವೆ೦ದು ಬೇಸರವಾಯಿತು.</br>
{{gap}}ನಾಲ್ಕನೆಯವರೊಡನೆ ಅದೇನನ್ನೊ ನಗುತ್ತ ಮಾತನಾಡುತ್ತಿದ್ದ ಮಾಸ್ತರು, ಬಳಿಗೆ ಬಂದವರನ್ನು ಗಮನಿಸಿ ಅತ್ತ ತಿರುಗಿ ಕೇಳಿದರು:</br>
{{gap}}"ಬಹಳ ಹೊತ್ತಾಯ್ತೇನ್ರೋ ಬ೦ದು?"</br> {{gap}}ಚಿರುಕ೦ಡ ಮೌನವಾಗಿ ಹಲ್ಲು ಕಿಸಿದ. ಉತ್ತರ ಕೊಡುವುದರಲ್ಲಿ ಮೊದಲಿಗ ನಾಗಬೇಕೆ೦ದು ಅಪ್ಪು ಲವಲವಿಕೆಯಿ೦ದ ಹೇಳಿದ:</br>{{gap}}"ಬಹಳ ಹೊತ್ತೇನೂ ಆಗಿಲ್ಲ ಸರ್."</br>{{gap}}"ಬನ್ನಿ ಕೂತ್ಕೊಳ್ಳಿ." </br>{{gap}}ಅಪ್ಪು ಸಲಿಗೆಯಿ೦ದ ಮಾಸ್ತರಿಗೆ ಸಮೀಪವಾಗಿಯೂ,ಚಿರುಕ೦ಡ ಪ್ರೀತಿಯಭಕ್ತಿಯಿಂದ ಸ್ವಲ್ಪ ದೂರವಾಗಿಯೂ ಕುಳಿತರು. ಅವರನ್ನು ಕರೆದುತ೦ದಿದ್ದ ಯುವಕನೂ ಕುಳಿತುಕೊ೦ಡ.</br>{{gap}}ಹುಡುಗರ ಕಣ್ಣುಗಳು ಮತ್ತೊಮ್ಮೆ ನೆರೆದಿದ್ದವರ ಮುಖದಿಂದ ಮುಖಕ್ಕೆ<noinclude></noinclude>
pxu1xn92y2mglcoi2ba9g4oc5vwg0b8
ಪುಟ:Chirasmarane-Niranjana.pdf/೩೮
104
12857
317895
256500
2026-05-07T11:02:20Z
Ashwini Rai K
8475
/* Validated */
317895
proofread-page
text/x-wiki
<noinclude><pagequality level="4" user="Ashwini Rai K" />{{rh|right=ಚಿರಸ್ಮರಣೆ|left=೨೯}}</noinclude>ಸಂಚಾರ ಮಾಡಿದುವು.</br>
{{gap}}ಚಹಧಂಗದಡಿಯಲ್ಲಿ ತಮ್ಮನ್ನು ನೋಡುತ್ತಿದ್ದಹಾಗೆಯೇ ಈಗಲೂ ತಿವಿದು ನೋಡುತ್ತಿದ್ದ, ಆ ಧಾಂಡಿಗ. ಮುದುಕ ರೈತನ ಮುಖದ ಮೇಲೆ ನಗೆ ಕುಣಿಯುತ್ತಿತ್ತು. ಈ ಮಕ್ಕಳನ್ನು ಕಂಡು ఆತ ಬೀರುತ್ತಿದ್ದುದು ವಾತ್ಸಲ್ಯದ ದೃಷ್ಟಿ, ಆತನ ನಗೆಗೆ ಪ್ರತ್ಯುತ್ತರವಾಗಿ ಗಾಂಭೀರ್ಯ ಸಲ್ಲದೆಂದು ಹುಡುಗರು ಮುಗುಳು ನಕ್ಕರು. ಆದರೆ ಧಾಂಡಿಗನತ್ತ ಅವರು ನೋಡಲಿಲ್ಲ.</br>
{{gap}}ಆ ಇನ್ನೊಬ್ಬರೂ ಯುವಕರಾಗಿಯೇ ಇದ್ದರು. ಶುಭ್ರವಾಗಿದ್ದ ಬಿಳಿಯ ಅಡ್ಡಪಂಚೆ-ಷರಟು. ತೆಳ್ಳಗಿನ ಕರಿಯ ದೇಹ, ಕೆನ್ನೆಯ ಮೂಳೆಗಳು ಎದ್ದು ಕಾಣಿಸುತ್ತಿದ್ದ ಕ್ಷೀಣ ಪ್ರಕೃತಿ. ಶಾಂತವಾದ ಮುಖಮುದ್ರೆ. ಕಣ್ಣುಗಳು ಚಂಚಲವಾಗಿ ಸಜೀವವಾಗಿ, ನೋಟ ಆತ್ಮೀಯವಾಗಿತ್ತು. ಅವರ ಮುಖದ ಮೇಲೆ ಸದಾ ನೆಲೆಸಿತ್ತು-ಸೂಕ್ಷ್ಮವಾದೊಂದು ಮುಗುಳುನಗು.</br>
{{gap}}'ಇವರು ಮಾಸ್ತರರ ಸ್ನೇಹಿತರಿರಬೇಕು. ಅವರು ಇನ್ನು ಬರಬೇಕಷ್ಟೆ' ಎಂಬ ತೀರ್ಮಾನಕ್ಕೆ ಹುಡುಗರು ಬಂದರು.</br>
{{gap}}ಹುಡುಗರನ್ನು ಕರೆದು ತಂದ ಯುವಕನನ್ನು ಉದ್ದೇಶಿಸಿ ಆ ಮಾಸ್ತರರ 'ಸ್ನೇಹಿತ'ರು ಕೇಳಿದರು:</br>
{{gap}}"ನಡೆದು ನಡೆದು ಕಾಲು ಸೋತಿರಬೇಕು, ಅಲ್ವ ಪ್ರಭು?"</br> {{gap}}"ಹಾಗೇನೂ ಇಲ್ಲ!"</br>{{gap}} ಆ ಯುವಕ ನಗುತ್ತ ಉತ್ತರವಿತ್ತ. ಆ ಸ್ವರದಲ್ಲಿ ವಿನಯವಿತ್ತು. ಇಂತಹ ಪರೀಕ್ಷೆಯಲ್ಲೆಲ್ಲ ತಾನು ಸೋಲುವವನಲ್ಲ ಎಂಬ ಆತ್ಮಾ ಭಿಮಾನವಿತ್ತು.</br>{{gap}}ಅಪ್ಪು ಮತ್ತು ಚಿರುಕಂಡ ಪ್ರಭುವನ್ನು ನೋಡಿದರು. ಪ್ರಭು. ಈತ ತಮ್ಮ\ ಜನವಲ್ಲವೆಂದು-ರೈತನಲ್ಲವೆಂದು ಚಿರುಕಂಡ-ಸುಲಭವಾಗಿ ತಿಳಿದುಕೊಂಡ.ಪರೀಕ್ಷಿಸಿ ನೋಡಿದಾಗ, {{gap}}ಆ ಯುವಕನ ನಡೆನುಡಿಯಲ್ಲಿ ನಯನಾಜೂಕನ್ನು ಆತ ಕಂಡ. ಪಟ್ಟಣವಾಸಿ, ಸಂದೇಹವಿಲ್ಲ, ಆದರೂ ತಮ್ಮ ಪಕ್ಷದವನು...!</br>
{{gap}}ಆ ಇನ್ನೊಬ್ಬರು, ಹುಡುಗರನ್ನು ಸೂಕ್ಷ್ಮವಾಗಿ ದಿಟ್ಟಿಸಿ ನೋಡುತ್ತಿದ್ದು, ಮಾಸ್ತರರತ್ತ ತಿರುಗಿ ಅ೦ದರು: </br>{{gap}}"ಶಿಷ್ಯರು ನಿಮಗೆ ತುಂಬಾ ಅಂಟಿಕೊಂಡಿದ್ದಾರೆ." </br>{{gap}}ಮಾಸ್ತರು ನಕ್ಕರು. ಆ ನಗೆಯಲ್ಲಿ ಸಲಿಗೆಯಿದ್ದರೂ ಅವರ ಮುಖಭಾವದಲ್ಲಿ ವಿನಯವಿತ್ತು. ಆ ಮಾತಿಗೆ ಉತ್ತರವಾಗಿ ಮಾಸ್ತರು ಏನಾದರು ಹೇಳುವರೆಂದು ಹುಡುಗರು ನಿರೀಕ್ಷಿಸಿದ್ದರು. ಆದರೆ ಏನೂ ಹೇಳದೆ ಸುಮ್ಮನಿದ್ದುದನ್ನು ಕಂಡಾಗ<noinclude></noinclude>
m7ez6aoo9uks7tlqgwm2soztysqdjk0
ಪುಟ:Chirasmarane-Niranjana.pdf/೩೯
104
12858
317896
256509
2026-05-07T11:02:40Z
Ashwini Rai K
8475
/* Validated */
317896
proofread-page
text/x-wiki
<noinclude><pagequality level="4" user="Ashwini Rai K" /> {{rh|right=ಚಿರಸ್ಮರಣೆ|left=೪೦}}</noinclude>
ಹುಡುಗರಿಗೆ ಆಶ್ಚರ್ಯವೆನಿಸಿತು.</br>
{{gap}}ಮೌನ. ಹಸುರು ಗಿಡಮರಗಳನ್ನು ಸವರಿಕೊಂಡು ಮೆಲ್ಲನೆ ಬೀಸುತ್ತಿದ್ದ ತಂಗಾಳಿ, ಮೇಲೆ ಎತ್ತರದಲ್ಲಿ ತೆಂಗಿನಮರದ ಸೋಗೆ ಎಲೆಗಳ ಕಚಕಚ ಸದ್ದು.</br>
{{gap}}ಹುಡುಗರತ್ತ ತಿರುಗಿ ಮಾಸ್ತರು ಹೇಳಿದರು:</br> {{gap}}"ಇವರೇ ಕಣ್ರೋ, ಪರಿಚಯ ಮಾಡಿಸಿಕೊಡ್ತೇನೇಂತ ಹೇಳಿದ್ದೆ ನೋಡು. ಇವರೇ."</br>
{{gap}}ಅನಿರೀಕ್ಷಿತವಾಗಿ ತಮ್ಮನ್ನು ಉದ್ದೇಶಿಸಿ ಬಂದ ಆ ಮಾತನ್ನು ಕೇಳಿ ಹುಡುಗರಿಗೆ ಆಶ್ಚರ್ಯವಾಯಿತು. ಮಾಸ್ತರರ ದೃಷ್ಟಿ ತೋರಿಸುತ್ತಿದ್ದ ವ್ಯಕ್ತಿಯನ್ನು ಅವರು ಮತ್ತೊಮ್ಮೆ ನೋಡಿದರು. ಎವೆ ಇಕ್ಕದೆ ನೋಡಿದರು. ತಾವು ಕಾಣಲು ಬಂದುದು ಆ ವ್ಯಕ್ತಿಯನ್ನೇ ಎಂದು ತಿಳಿದಾಗ ಅಪ್ಪು ಮತ್ತು ಚಿರುಕಂಡ ಇಬ್ಬರಿಗೂ ನಿರಾಶೆಯಾಯಿತು. ಎತ್ತರದ ದೇಹದ, ಬಲವಾದ ತೋಳುಗಳ, ಬೆಲೆಬಾಳುವ ಉಡುಪಿನ, ಹುರಿಮಾಡಿದ ಮೀಸೆಯ, ಭಯ ಹುಟ್ಟಿಸುವ ಕಣ್ಣುಗಳ, ಗಂಭೀರ ಧ್ವನಿಯ-ತಮ್ಮ ಕಲ್ಪನೆಯ ವ್ಯಕ್ತಿಗೂ ಇವರಿಗೂ ಹೋಲಿಕೆಯೇ ಇರಲಿಲ್ಲ!</br> {{gap}}ಹುಡುಗರ ಯೋಚನೆಗಳನ್ನು ಊಹಿಸಿಕೊಂಡವರಂತೆ ಆ ವ್ಯಕ್ತಿ ಅಂದರು:</br> {{gap}}"ಜೋರಾದ ಆಸಾಮಿ ಯಾರಾದರು ಇರ್ತ್ತಾರೇಂತ ಭಾವಿಸಿದ್ದಿರಿ, ಅಲ್ವ?"</br>{{gap}} ಹುಡುಗರಿಬ್ಬರೂ ಹಲ್ಲುಕಿಸಿದು ನಕ್ಕರು. ಹಾಗೆ ತಪ್ಪಾಗಿ ಯೋಚಿಸಿ ಅಪಹಾಸ್ಯಕ್ಕೆ ಗುರಿಯಾದೆವಲ್ಲ ಎಂದು ಅವರಿಗೆ ನಾಚಿಕೆಯಾಯಿತು. ತಮ್ಮ ಮನಸ್ಸಿನಲ್ಲಿದ್ದುದನ್ನು ಅವರು ಅಷ್ಟು ಸರಿಯಾಗಿ ತಿಳಿದರಲ್ಲ ಎಂದು ಆಶ್ಚರ್ಯವಾಯಿತು. ಮಾಸ್ತರಿಗಿಂತಲೂ ದೊಡ್ಡವರಾದ ವ್ಯಕ್ತಿ ಯಾವ ಭಯಕ್ಕೂ ಆಸ್ಪದವಿಲ್ಲದ ಹಾಗೆ ಸಾದಾ ಮನುಷ್ಯನಾಗಿದ್ದುದನ್ನು ಕಂಡು, ಅವರಿಗೆ ಸಂತೋಷವಾಯಿತು.</br>
{{gap}}ಹುಡುಗರು ಅಪ್ಪು ಯಾರು, ಚಿರುಕಂಡ ಯಾರು, ಎಂಬುದನ್ನು ಮಾಸ್ತರು 'ಅವರಿಗೆ' ತಿಳಿಸಿದರು. ಅವರ ತಾಯಿತಂದೆಯರ ಪರಿಚಯವನ್ನೂ ಮಾಡಿಕೊಟ್ಟರು.</br>{{gap}} "ಚಿರುಕಂಡ ತಾಯಿತಂದೆಯರ ಒಬ್ಬನೇ ಮಗ. ಇವನಿಗಿರೋದು ಒಳ್ಳೇ ಮೆದುಳು. ಅಪ್ಪುವಿಗಿರೋದು ಒಳ್ಳೇ ಹೃದಯ. ಇವನಿಗಿಬ್ಬರು ತಮ್ಮಂದಿರು ಇದ್ದಾರೆ. ತಂದೆ ಸ್ವಲ್ಪ ಕುಡಿಯೋದು ಹೊಡೆಯೋದು ಜಾಸ್ತಿ...."</br>
{{gap}}ಅವರು ಹಾಗೆ ಹೇಳಿ, ಅಪ್ಪುವಿನತ್ತ ತಿರುಗಿ"ಅಲ್ವೇನೋ?"ಎಂದರು. ಎಲ್ಲರೂ< ತನ್ನನ್ನೇ ನೋಡಿ ನಗುತ್ತಿದ್ದಂತೆ ಆತನಿಗೆ ಭಾಸವಾಯಿತು. 'ಇದನ್ನೆಲ್ಲ ಹೇಳದೇ ಇದ್ದರೆ ಏನಾಗುತ್ತಿತ್ತೊ?"ಎಂದು ಮನಸ್ಸು ಮುನಿಸು ತೋರಿತು.<noinclude></noinclude>
lfjhhy4thhf4t3opl7ry7e16i6o4vsm
ಪುಟ:Chirasmarane-Niranjana.pdf/೪೦
104
12859
317897
256581
2026-05-07T11:03:36Z
Ashwini Rai K
8475
317897
proofread-page
text/x-wiki
<noinclude><pagequality level="3" user="Sakshi Prajna Suvarna" />{{rh|right=ಚಿರಸ್ಮರಣೆ|left= ೪೧ }}</noinclude>
{{gap}}ಅಷ್ಟರಲ್ಲೆ ಮಾಸ್ತರು ಮಧುರವಾದೊಂದು ಬೇರೆಯ ಮಾತನ್ನೂ ಹೇಳಿದರು:</br>
{{gap}}"ಆದರೆ ಇವನ ತಾಯಿ ಬಹಳ ಒಳ್ಳೆಯವರು." </br>
<p>ಅದನ್ನು ಕೇಳಿ, ಸಂತೋಷದಿಂದ ಲಜ್ಜೆಯಿಂದ ಅಪ್ಪುವಿನ ಮುಖ ಬೆಳಗಿತು.</br>
{{gap}}ಇಷ್ಟಾದರೂ ಮಾಸ್ತರು 'ಅವರ' ಹೆಸರು ಹೇಳಿರಲಿಲ್ಲ. 'ಹೇಳೋದನ್ನ </br>
ಮರೆತುಬಿಟ್ಟರೇನೋ. ನಾವಾಗಿಯೇ ಕೇಳಿದರೆ ಏನಾಗ್ತದೆ?' ಎಂದು ಒಳ್ಳೆಯ</br> ಮೆದುಳಿನ ಚಿರುಕಂಡ ಯೋಚಿಸಿದ.</p>
{{gap}}ಆದರೆ ಅಂತಹ ಪ್ರಶ್ನೆಗೆ ಅವಕಾಶವೇ ಇಲ್ಲದಂತೆ ಆ ವ್ಯಕ್ತಿಯೇ ಹುಡುಗರನ್ನು </br>ನೋಡುತ್ತ ಅಂದರು:</br>
"ನನ್ನ ಹೆಸರು ನಿಮಗೆ ಗೊತ್ತಿಲ್ಲ ಅಲ್ವೆ?-ಪಂಡಿತ ಅಂತ." </br>"ಪಂಡಿತರೆಂದರೆ ಅಳಲೇಕಾಯಿ ಪಂಡಿತರಲ್ಲ!" </br>ಧಾಂಡಿಗ ಆ ನಗೆ ಮಾತನ್ನಾಡಿ, ತಾನೇ ಬಿದ್ದುಬಿದ್ದು ನಕ್ಕ. ಉಳಿದವರಿಗೂ</br> ನಗು ಬಂತು.
{{gap}}ಮಾಸ್ತರು ವಿವರಿಸಿ ಹೇಳಿದರು:</br> <p>"ಪಂಡಿತರು ಅಂದರೆ, ತಿಳಿದೋರು ಅಂತ ಅಲ್ವ? ಔಷಧಿ ಕೊಡೋರು </br>ಅಂದರೂ ತಪ್ಪೇನೂ ಅಲ್ಲ. ಆದರೆ ಇವರು ಔಷಧಿ ಕೊಡೋದು ಮನುಷ್ಯನ </br>ಕಾಯಿಲೆಗಲ್ಲ-ಸಮಾಜದ ಕಾಯಿಲೆಗೆ! ಅರ್ಥವಾಯ್ತೇನ್ರೋ?"</p>
<p>ಅರ್ಥವಾಯ್ತೇನ್ರೋ?-ಎಂಬುದು ಅವರ ಪ್ರೀತಿಯ ಪ್ರಶ್ನೆ. ಪದೇಪದೇ </br>ಅವರು ಹಾಗೆ ಕೇಳುತ್ತಿದ್ದುದರಿಂದ ಶಾಲೆಯ ಹುಡುಗರು ತಾವೇ ಇದ್ದಾಗ</br> ತಮ್ಮೊಳಗೆ ಅದೇ ಪ್ರಶ್ನೆ ಕೇಳಿಕೊಂಡು ನಗುವುದಿತ್ತು. ಹುಡುಗರ ಆ ನಗೆಯ </br>ಕಾರಣವನ್ನು ಮೊದಲ ಸಾರೆ ತಿಳಿದಾಗಲೂ ಮಾಸ್ತರು ಸಿಟ್ಟಾಗಿರಲಿಲ್ಲ. </br>ಆಮೇಲೆಯೂ ಅವರು ಆಕ್ಷೇಪಿಸಿರಲಿಲ್ಲ.</p>
<p>ಈಗ ಅದರ ನೆನಪಾಗಿ ಅಪ್ಪುವಿಗೆ ನಗು ಬಂತು. ಆದರೆ ಚಿರುಕoಡ'ಸಮಾಜದ </br>ಕಾಯಿಲೆಗೆ ಔಷಧಿ ಕೊಡೋ ಪಂಡಿತರು' ಎಂಬ ಅರ್ಥಪೂರ್ಣ ಮಾತಿಗಾಗಿ </br>ತಲೆದೂಗಿದ. ಅದನ್ನು ಹೇಳಿದ ಮಾಸ್ತರರ ಬಗೆಗೆ ಅವನ ಗೌರವ ಹೆಚ್ಚಿತು.</br></p>
{{gap}}ಪಂಡಿತರು ಅಪ್ಪುವನ್ನುದ್ದೇಶಿಸಿ ಕೇಳಿದರು:?"</br>ನಿನ್ನ ತಮ್ಮಂದಿರ ಹೆಸರೇನು ಅಪ್ಪು ?"</br> <p>ಅದು ಏನೇನೂ ಮಹತ್ವವಿಲ್ಲದ ಪ್ರಶ್ನೆಯಾಗಿ ಅಪ್ಪುವಿಗೆ ತೋರಿತು. ಆದರೂ</br> ಆತ ಹೆಸರು ಹೇಳಿದ. ಅದರ ಜತೆಯಲ್ಲೆ ಒಂದು ಮಾತು ಸೇರಿಸಿದ:</p>
"ಅವರು ನನಗಿಂತ ತುಂಬಾ ಚಿಕ್ಕೋರು."<noinclude></noinclude>
811sdcnz18dwrk0g6vbd5i0mbdfsp1e
317898
317897
2026-05-07T11:03:59Z
Ashwini Rai K
8475
/* Validated */
317898
proofread-page
text/x-wiki
<noinclude><pagequality level="4" user="Ashwini Rai K" />{{rh|right=ಚಿರಸ್ಮರಣೆ|left= ೪೧ }}</noinclude>
{{gap}}ಅಷ್ಟರಲ್ಲೆ ಮಾಸ್ತರು ಮಧುರವಾದೊಂದು ಬೇರೆಯ ಮಾತನ್ನೂ ಹೇಳಿದರು:</br>
{{gap}}"ಆದರೆ ಇವನ ತಾಯಿ ಬಹಳ ಒಳ್ಳೆಯವರು." </br>
<p>ಅದನ್ನು ಕೇಳಿ, ಸಂತೋಷದಿಂದ ಲಜ್ಜೆಯಿಂದ ಅಪ್ಪುವಿನ ಮುಖ ಬೆಳಗಿತು.</br>
{{gap}}ಇಷ್ಟಾದರೂ ಮಾಸ್ತರು 'ಅವರ' ಹೆಸರು ಹೇಳಿರಲಿಲ್ಲ. 'ಹೇಳೋದನ್ನ </br>
ಮರೆತುಬಿಟ್ಟರೇನೋ. ನಾವಾಗಿಯೇ ಕೇಳಿದರೆ ಏನಾಗ್ತದೆ?' ಎಂದು ಒಳ್ಳೆಯ</br> ಮೆದುಳಿನ ಚಿರುಕಂಡ ಯೋಚಿಸಿದ.</p>
{{gap}}ಆದರೆ ಅಂತಹ ಪ್ರಶ್ನೆಗೆ ಅವಕಾಶವೇ ಇಲ್ಲದಂತೆ ಆ ವ್ಯಕ್ತಿಯೇ ಹುಡುಗರನ್ನು </br>ನೋಡುತ್ತ ಅಂದರು:</br>
"ನನ್ನ ಹೆಸರು ನಿಮಗೆ ಗೊತ್ತಿಲ್ಲ ಅಲ್ವೆ?-ಪಂಡಿತ ಅಂತ." </br>"ಪಂಡಿತರೆಂದರೆ ಅಳಲೇಕಾಯಿ ಪಂಡಿತರಲ್ಲ!" </br>ಧಾಂಡಿಗ ಆ ನಗೆ ಮಾತನ್ನಾಡಿ, ತಾನೇ ಬಿದ್ದುಬಿದ್ದು ನಕ್ಕ. ಉಳಿದವರಿಗೂ</br> ನಗು ಬಂತು.
{{gap}}ಮಾಸ್ತರು ವಿವರಿಸಿ ಹೇಳಿದರು:</br> <p>"ಪಂಡಿತರು ಅಂದರೆ, ತಿಳಿದೋರು ಅಂತ ಅಲ್ವ? ಔಷಧಿ ಕೊಡೋರು </br>ಅಂದರೂ ತಪ್ಪೇನೂ ಅಲ್ಲ. ಆದರೆ ಇವರು ಔಷಧಿ ಕೊಡೋದು ಮನುಷ್ಯನ </br>ಕಾಯಿಲೆಗಲ್ಲ-ಸಮಾಜದ ಕಾಯಿಲೆಗೆ! ಅರ್ಥವಾಯ್ತೇನ್ರೋ?"</p>
<p>ಅರ್ಥವಾಯ್ತೇನ್ರೋ?-ಎಂಬುದು ಅವರ ಪ್ರೀತಿಯ ಪ್ರಶ್ನೆ. ಪದೇಪದೇ </br>ಅವರು ಹಾಗೆ ಕೇಳುತ್ತಿದ್ದುದರಿಂದ ಶಾಲೆಯ ಹುಡುಗರು ತಾವೇ ಇದ್ದಾಗ</br> ತಮ್ಮೊಳಗೆ ಅದೇ ಪ್ರಶ್ನೆ ಕೇಳಿಕೊಂಡು ನಗುವುದಿತ್ತು. ಹುಡುಗರ ಆ ನಗೆಯ </br>ಕಾರಣವನ್ನು ಮೊದಲ ಸಾರೆ ತಿಳಿದಾಗಲೂ ಮಾಸ್ತರು ಸಿಟ್ಟಾಗಿರಲಿಲ್ಲ. </br>ಆಮೇಲೆಯೂ ಅವರು ಆಕ್ಷೇಪಿಸಿರಲಿಲ್ಲ.</p>
<p>ಈಗ ಅದರ ನೆನಪಾಗಿ ಅಪ್ಪುವಿಗೆ ನಗು ಬಂತು. ಆದರೆ ಚಿರುಕoಡ'ಸಮಾಜದ </br>ಕಾಯಿಲೆಗೆ ಔಷಧಿ ಕೊಡೋ ಪಂಡಿತರು' ಎಂಬ ಅರ್ಥಪೂರ್ಣ ಮಾತಿಗಾಗಿ </br>ತಲೆದೂಗಿದ. ಅದನ್ನು ಹೇಳಿದ ಮಾಸ್ತರರ ಬಗೆಗೆ ಅವನ ಗೌರವ ಹೆಚ್ಚಿತು.</br></p>
{{gap}}ಪಂಡಿತರು ಅಪ್ಪುವನ್ನುದ್ದೇಶಿಸಿ ಕೇಳಿದರು:?"</br>ನಿನ್ನ ತಮ್ಮಂದಿರ ಹೆಸರೇನು ಅಪ್ಪು ?"</br> <p>ಅದು ಏನೇನೂ ಮಹತ್ವವಿಲ್ಲದ ಪ್ರಶ್ನೆಯಾಗಿ ಅಪ್ಪುವಿಗೆ ತೋರಿತು. ಆದರೂ</br> ಆತ ಹೆಸರು ಹೇಳಿದ. ಅದರ ಜತೆಯಲ್ಲೆ ಒಂದು ಮಾತು ಸೇರಿಸಿದ:</p>
"ಅವರು ನನಗಿಂತ ತುಂಬಾ ಚಿಕ್ಕೋರು."<noinclude></noinclude>
hcwdlicgg1nhb49pez7pqgy9uwi09rw
ಪುಟ:Chirasmarane-Niranjana.pdf/೪೧
104
12860
317899
256585
2026-05-07T11:04:25Z
Ashwini Rai K
8475
/* Validated */
317899
proofread-page
text/x-wiki
<noinclude><pagequality level="4" user="Ashwini Rai K" />{{rh|left=ಚಿರಸ್ಮರಣೆ|right=೧೩}}</noinclude>
{{gap}}ಪಂಡಿತರಿಗೆ ನಗು ಬಂತು. </br>
<p> "ಗೊತ್ತಪ್ಪಾ. ಆದರೂ ತಿಳ್ಕೊಂಡಿರೋಣಾಂತ ಕೇಳ್ದೆ. ನಿನ್ನ ಹಾಗೆ ನಾನೂ ಹಿರೇ </br>ಮಗ. ನನಗೆ ನಾಲ್ಕು ಜನ ತಮ್ಮಂದಿರಿದ್ದಾರೆ, ಕೊನೆಯವನು ನೀಲೇಶ್ವರ</br> ಹೈಸ್ಕೂಲ್ನಲ್ಲಿ ಓದ್ತಿದ್ದಾನೆ. ಉಳಿದೋರೆಲ್ಲ ಈಗ ಪ್ರಾಯಕ್ಕೆ ಬಂದಿದ್ದಾರೆ. ಆದರೂ </br>ನೀನು ಹೇಳೋ ಹಾಗೆಯೇ ಅವರೆಲ್ಲ ನನಗಿಂತ ತುಂಬ ಚಿಕ್ಕೋರು ಅಂತಿಟ್ಕೊ!"</br></p>
{{gap}}ಮಾಸ್ತರು ಮತ್ತು ಪ್ರಭು ಮುಗುಳುನಕ್ಕರು.</br> ಅಪ್ಪು ತನ್ನ ನಡತೆ ಅಪಾರ್ಥಕ್ಕೆ ಕಾರಣವಾಗಬಾರದು ಎಂದು, ಮೆಲು </br>ಧ್ವನಿಯಲ್ಲಿ ಹೇಳಿದ:</br>
{{gap}}"ನನ್ನ ಒಬ್ಬ ತಮ್ಮ ಶಾಲೆಗೆ ಹೋಗ್ತಾನೆ. ಚಿಕ್ಕೋನು ಮನೇಲೆ ಇರ್ತಾನೆ. </br>ಮನೆಗೆಲಸ ಮಾಡ್ತಾನೆ. ಕೆಲಸ ಇಲ್ದೇ ಇದ್ದಾಗ ಅಜ್ಜೀ ಜತೆ!"</br>
{{gap}}"ಹಾಗೇನು?" </br><p>{{gap}}"ಹೂಂ. ಈಗ ಒಂದು ವಾರದಿಂದ ನಮ್ಮನೇಲಿ ಗಲಾಟೆ ಕಮ್ಮಿ. ಅಜ್ಜಿ </br>ಅವರಿಬ್ಬರನ್ನೂ ಕರಕೊಂಡು ತ್ರಿಕರಪುರಕ್ಕೆ ನಮ್ಮಮ್ಮನ ಮನೆಗೆ ಹೋಗಿದ್ದಾಳೆ."</br></p> {{gap}}ಆ ಪಂಡಿತರು ತಾವೂ ಹುಡುಗನಾಗಿ, ಬಲು ಮುಖ್ಯ ವಿಷಯಗಳನ್ನೇ ಅಪ್ಪು</br> ಆಡುತ್ತಿರುವನೆಂಬಂತೆ ಆತನ ಮಾತುಗಳಿಗೆ ಕಿವಿಗೊಟ್ಟರು.</br>
ಚಿರುಕಂಡನಿಗೇನೋ 'ಈ ಅಪ್ಪುವಿನದು ಶುದ್ಧ ತಲೆಹರಟೆ' ಎನ್ನಿಸಿತು. </br>ಆ ಬಳಿಕ ಪಂಡಿತರು ಶಾಲೆ ಬಿಟ್ಟ ಆ ಹುಡುಗರು ಏನೇನು ಓದುತ್ತಿರುವರೆಂದು </br>ಕೇಳಿದರು.
ತಪ್ಪನ್ನು ಒಪ್ಪಿಕೊಳ್ಳುವ ಧ್ವನಿಯಲ್ಲಿ ಅಪ್ಪು ಹೇಳಿದ: <br>"ನಮಗೆ ಪೇಪರು ಓದಿ ಅಭ್ಯಾಸವಿಲ್ಲ."</br>{{gap}} "ಓ. ಅದನ್ನೋದಬಹುದು."</br> {{gap}}ಪಂಡಿತರು ತನ್ನ ಕಡೆಗೂ ನೋಡಿದರೆಂದು ಚಿರುಕಂಡ ಹೇಳಿದ:</br>{{gap}} "ಇನ್ನುಮೇಲಿಂದ ಪೇಪರು ತಪ್ಪದೆ ಒದ್ತೇವೆ." </br>{{gap}}ಪಂಡಿತರು ಮುಗುಳುನಗುತ್ತಲೇ ಹೇಳಿದರು:</br> "ಹೂನಪ್ಪಾ. ಪತ್ರಿಕೆ ಪುಸ್ತಕ ಎರಡೂ ಓದ್ಬೇಕು. ಓದಿದಷ್ಟೂ ಜ್ಞಾನ ಹೆಚ್ಚಾಗ್ತದೆ;</br> ಓದ್ತಾ ಓದ್ತಾ ವಿಚಾರಮಾಡ್ಬೇಕು. ಇದು ಸರಿಯೆ?-ಅಂತ. ಸರಿಯಾಗಿದ್ದರೆ, </br>ಯಾಕೆ ಸರಿ? ಅಥವಾ ತಪ್ಪೂಂತ ತೋರಿದರೆ ಯಾಕೆ ತಪ್ಪು?-ಅನ್ನೋದನ್ನೆಲ್ಲಾ</br> ಯೋಚಿಸ್ಬೇಕು."</br>
{{gap}} ಉತ್ಸಾಹದಿಂದ ಚಿರುಕಂಡ 'ಹೂಂ'ಗುಟ್ಟಿದ.<noinclude></noinclude>
0tllvbmbxb2cmb6xmnosw9eskcw9axr
ಪುಟ:Chirasmarane-Niranjana.pdf/೪೨
104
12861
317900
256597
2026-05-07T11:05:17Z
Ashwini Rai K
8475
/* Validated */
317900
proofread-page
text/x-wiki
<noinclude><pagequality level="4" user="Ashwini Rai K" />{{rh|right= ಚಿರಸ್ಮರಣೆ|left=೪೩}}</noinclude>
{{gap}}"ಹೊಲದಲ್ಲಿ ಭತ್ತದ ಸಸಿ ಸರಿಯಾಗಿ ಬೆಳೀದೇ ಇದ್ರೆ, ಯಾಕೆ ಅಂತ</br> ಯೋಚಿಸ್ತೇವೆ ಅಲ್ವೇನಪ್ಪ?"</br>
{{gap}}ಹೌದು." </br>
<p>"ಹಾಗೆ ಯೋಚಿಸಿ. ನೀರು ಜಾಸ್ತಿಯಾಗಿದ್ರೆ ಕಡಿಮೆ ಮಾಡ್ತೇವೆ.ಕಡಿಮೆಯಾಗಿದ್ರೆ </br>ನೀರು ಹಾಯಿಸ್ತೇವೆ. ಯಾಕೆ ಬೆಳೆ ಸರಿಯಾಗಿ ಬೆಳೀಲಿಲ್ಲ ಅಂತ ಯೋಚನೆ </br>ಮಾಡೋದ್ರಿಂದ, ಕಾರಣ ಹೊಳೀತದೆ. ಅದು ಗೊತ್ತಾದ ಮೇಲೆ ಕೆಲಸ..."</br></p>
{{gap}}ಚಿರುಕಂಡ ಹೌದೆಂದು ತಲೆಯಾಡಿಸಿದ. ಅಪ್ಪು ಬಾಯಿ ತೆರೆದು ಪ್ರತಿಯೊಂದು </br>ಮಾತನ್ನೂ ತಿಳಿದುಕೊಳ್ಳಲೆತ್ನಿಸುತ್ತ ಕಿವಿಗೊಟ್ಟು ಕೇಳಿದ.</br>
{{gap}}ಅಷ್ಟರಲ್ಲಿ ಒಬ್ಬ ರೈತ ಎಳನೀರುಗಳ ಗೊಂಚಲನ್ನು ಹೊತ್ತು ತಂದ. </br>"ಒಂದೆರಡು ತಾ ಅಂದ್ರೆ ಇಷ್ಟೊಂದು ತಂದಿಯಲ್ಲೋ.ಹೊಟ್ಟೆಗೇನೂ ಹಾಕದೆ </br>ಬರೇ ಎಳನೀರು ಕುಡಿಸಿ ಕಳಿಸ್ಬೇಕೂಂತ ಮಾಡಿದೀಯೇನು?"</br>
{{gap}}–ಧಾಂಡಿಗ ಕಪಟ ಗಾ೦ಭೀರ್ಯ ತೋರುತ್ತ ಆಳವಾದ ದಪ್ಪನಾದ ಸ್ವರದಲ್ಲಿ ಹೇಳಿದ.</br>
{{gap}}ಎಳನೀರು ತಂದ ರೈತನಿಗೇನೂ ಆ ಮಾತು ನಾಟಿದಂತೆ ತೋರಲಿಲ್ಲ. ಆತ ಧಾಂಡಿಗನನ್ನೊಮ್ಮೆ ನೋಡಿ ಹೇಳಿದ:</br>
</br>"ಯಾವಾಗಲೂ ನಿನಗೆ ಹೊಟ್ಟೇದೊಂದೇ ಯೋಚ್ನೆ." </br>{{gap}}"ತಪ್ಪೇನೋ ಅದರಲ್ಲಿ? ಹೋದಸಲವೇ ಪಂಡಿತರು ಹೇಳ್ಲಿಲ್ವ-ಹೊಟ್ಟೆ </br>ಪ್ರಶ್ನೇನೆ ಮುಖ್ಯ ಅಂತ?"</br>
{{gap}}ಧಾಂಡಿಗನ ಆ ಮಾತಿಗೆ ಎಲ್ಲರೂ ನಕ್ಕರು.</br> ರೈತ ಎಳನೀರುಗಳ ತುದಿ ಕತ್ತರಿಸಿ ಕುಡಿಯಲು ಸಿದ್ಧಗೊಳಿಸುತ್ತ ಹೇಳಿದ: </br>"ನೋಡಿ ಪಂಡಿತರೆ, ಧಾಂಡಿಗ ಸೋಮಾರಿಯಾಗ್ತಿದ್ದಾನೆ. ಹೊಟ್ಟೆ ಪ್ರಶ್ನೆ </br>ಬಟ್ಟೆ ಪ್ರಶ್ನೆ ಅಂತ ಮಾತಾಡ್ಕೊಂಡು ಆ ಹೋಟ್ಲಲ್ಲಿ ಕುತಿರ್ತಾನೆಯೆ ಹೊರತು ಮೂರು </br> ಕಾಸಿನ ಕೆಲಸ ಮಾಡೋದಿಲ್ಲ."
{{gap}}ರೇಗಿದವನಂತೆ ಧಾಂಡಿಗನೆಂದ: </br>"ಸಾಕು, ಜಾಸ್ತಿ ಬಿಚ್ಬೇಡ !" </br>ಪಂಡಿತರು ಸ್ವತಃ ತಾವೇ ಹುಡುಗರಿಗೆ ಒಂದೊಂದು ಎಳನೀರು ಕೊಟ್ಟರು. </br>ತೆಗೆದುಕೊಳ್ಳಲು ಹಿಂಜರಿದಾಗ, ಮಾಸ್ತರರ ಪ್ರೋತ್ಸಾಹದ ಸಂಜ್ಞೆ ನೋಟ ಅವರ</br> ನೆರವಿಗೆ ಬಂತು.</br>
{{gap}}ಧಾಂಡಿಗ ಒಂದೇ ಗುಟುಕಿಗೆ ಎಳನೀರು ಕುಡಿದು, ಅದರೊಳಕ್ಕೆ ಬೆರಳು ಹಾಕಿ<noinclude></noinclude>
c834fmxllj1lq86vv78jraarj0teahu
ಪುಟ:Chirasmarane-Niranjana.pdf/೪೩
104
12862
317901
256608
2026-05-07T11:06:42Z
Ashwini Rai K
8475
/* Validated */
317901
proofread-page
text/x-wiki
<noinclude><pagequality level="4" user="Ashwini Rai K" />{{rh|right= ಚಿರಸ್ಮರಣೆ|left=೪೪}}</noinclude>
ನೋಡಿ, ಅದನ್ನು ಎಸೆದು ಅತೃಪ್ತಿಯ ಧ್ವನಿಯಲ್ಲಿ ಹೇಳಿದ: </br>
{{gap}}"ಬರೇ ಎಳೇದು. ಒಂದು ಚೂರಾದರೂ ತಿರುಳು ಬೇಡ್ವೆ, ಅದರಲ್ಲಿ? ಸ್ವಲ್ಪ </br>
ಬೆಳೆದಿರೋದು ತಂದಿದ್ರೆ ಏನು ಕೊಳ್ಳೆ ಹೋಗ್ತಿತ್ತೊ?"
{{gap}} ಆ ರೈತನಿಗೆ ಕೋಪ ಬಂತು:"ನಿಮಿಷಕ್ಕೊಂದು ಮಾತಾಡ್ತೀಯಲೋ! ಈಗ್ತಾನೆ
ಹೇಳ್ದೆ-ಎಳನೀರು ಕುಡಿದ್ರೆ ಊಟಕ್ಕೆ ತೊಂದರೆಯಾಗ್ತದೇಂತ."
{{gap}}ಧಾಂಡಿಗ ಒಂದು ಬೀಡಿ ತೆಗೆದು ಹಚ್ಚಿ, ಹೊಗೆ ಆಕಾಶಕ್ಕೆ ಹೋಗುವುದನ್ನು
ನೋಡುತ್ತ ಅಂದ:
{{gap}}"ಆಗಲಿ, ಇನ್ನು ಊಟ ಅದೆಂಥದು ಹಾಕ್ತಿಯೋ ನೋಡೋಣ!"
ಮಾಸ್ತರು ತಮ್ಮ ಬೀಡಿಯ ಕಟ್ಟನ್ನ ಮುಂದಿಟ್ಟು ತಾವು ಒಂದನ್ನೆತ್ತಿಕೊಂಡರು.
ಪ್ರಭು ಮತ್ತು ರೈತರೂ ಕೈಹಾಕಿದರು.
ಪಂಡಿತರು ಬೀಡಿ ಮುಟ್ಟಲೇ ಇಲ್ಲ.'ಅವರು ಬಹುಶಃ ಸಿಗರೇಟು ಸೇದ್ಬಹುದು' </br>
ಎಂದು ಚಿರುಕಂಡ ಭಾವಿಸಿದ. ಆದರೆ ಸಿಗರೇಟನ್ನೂ ಅವರು ಸೇದಲಿಲ್ಲ.
ಧಾಂಡಿಗ, ಹುಡುಗರನ್ನು ನೋಡುತ್ತ ಹೇಳಿದ:</br>
"ನೀವು ಸೇದದೇ ಇದ್ರೂ ಒಂದೊಂದು ತಗೋಬೇಕು ಕಣ್ರೋ, ತಗೊಂಡು
ನನ್ನಂಥವನಿಗೆ ಕೊಡ್ಬೇಕು."
<p> ಪ್ರಭು ಮುಷ್ಟಿಯಿಂದ ಧಾಂಡಿಗನ ಬೆನ್ನಿನ ಮೇಲೆ ಗುದ್ದಿದ. ಆದರೆ ಆ ದೇಹ </br>
ಮಿಸುಕಲಿಲ್ಲ. "ಅಯ್ಯೋ ನನ್ನ ಕೈ ಬೆರಳು ಮುರಿದೋಯ್ತು" ಎಂದು ಗುದ್ದಿದವನೇ</br>
ಗೋಳಾಡಿದ.</p>
ಎಳನೀರು ತಂದ ರೈತ ಪಂಡಿತರನ್ನು ನೋಡುತ್ತ ಹೇಳಿದ:</br>
"ನೀವೇ ಪುಣ್ಯವಂತರು, ಬೀಡಿ ಸೇದೋ ಈ ಕೆಟ್ಟ ಹವ್ಯಾಸ ನಿಮಗಿಲ್ಲ."</br>
<p> ಪಂಡಿತರು ಸುಮ್ಮನೆ ನಕ್ಕು, ತಲೆಯ ಹಿಂಭಾಗದಲ್ಲಿ ಅಂಗೈಗಳನ್ನಿರಿಸಿ, ಮರದ </br>
ಕಾಂಡಕ್ಕೆ ಒರಗಿಕೊಂಡು ಮೇಲಿದ್ದ ರೆಂಬೆಗಳನ್ನೂ ಎಲೆಗಳನ್ನೂ ನೋಡಿದರು. </br>
ಹಣ್ಣೆಲೆಯೊಂದು ಕೆಳಕ್ಕುದರಿ ಅವರ ಎದೆಯ ಮೇಲೆ ಒರಗಿತು. ಅಪ್ಪು ಕೈಚಾಚಿ </br>
ಅದನ್ನೆತ್ತಿ ಬದಿಗೆ ಸರಿಸಿದ.</p>
<p>ದೂರದಿಂದ ಯಾರೋ ಕೆಮ್ಮಿದ ಸದ್ದಾಯಿತು. ಅಷ್ಟರವರೆಗೂ ವಿಗ್ರಹದಂತೆ </br>
ಕುಳಿತಿದ್ದ ಧಾಂಡಿಗ ಸರಕ್ಕನೆ ತಿರುಗಿ, ಬರುತ್ತಿದ್ದವರು ಯಾರೆಂದು ನೋಡಿ, </br>
ಪಂಡಿತರ ಕಾಲಿಗೆ ತನ್ನ ಬೆರಳು ಸೋಂಕಿಸಿದ. ಅವರು ತಕ್ಷಣವೆ ಪಕ್ಕಕ್ಕೆ ಹೊರಳಿ, </br>
ತೋಳುಗಳೆಡೆಯಲ್ಲಿ ಮುಖ ಮರೆಮಾಡಿ, ನಿದ್ದೆಹೋದವರಂತೆ ನಟಿಸಿದರು. </br></p>
ಉಳಿದವರು ಗಾಬರಿಯಾಗಲಿಲ್ಲ.<noinclude></noinclude>
q26st04ttnh2v08iut4xp975ftm69vo
317902
317901
2026-05-07T11:09:23Z
Ashwini Rai K
8475
317902
proofread-page
text/x-wiki
<noinclude><pagequality level="4" user="Ashwini Rai K" />{{rh|right= ಚಿರಸ್ಮರಣೆ|left=೪೪}}</noinclude>
ನೋಡಿ, ಅದನ್ನು ಎಸೆದು ಅತೃಪ್ತಿಯ ಧ್ವನಿಯಲ್ಲಿ ಹೇಳಿದ: </br>
{{gap}}"ಬರೇ ಎಳೇದು. ಒಂದು ಚೂರಾದರೂ ತಿರುಳು ಬೇಡ್ವೆ, ಅದರಲ್ಲಿ? ಸ್ವಲ್ಪ </br>
ಬೆಳೆದಿರೋದು ತಂದಿದ್ರೆ ಏನು ಕೊಳ್ಳೆ ಹೋಗ್ತಿತ್ತೊ?"
{{gap}} ಆ ರೈತನಿಗೆ ಕೋಪ ಬಂತು:"ನಿಮಿಷಕ್ಕೊಂದು ಮಾತಾಡ್ತೀಯಲೋ! ಈಗ್ತಾನೆ
ಹೇಳ್ದೆ-ಎಳನೀರು ಕುಡಿದ್ರೆ ಊಟಕ್ಕೆ ತೊಂದರೆಯಾಗ್ತದೇಂತ."
{{gap}}ಧಾಂಡಿಗ ಒಂದು ಬೀಡಿ ತೆಗೆದು ಹಚ್ಚಿ, ಹೊಗೆ ಆಕಾಶಕ್ಕೆ ಹೋಗುವುದನ್ನು
ನೋಡುತ್ತ ಅಂದ:
{{gap}}"ಆಗಲಿ, ಇನ್ನು ಊಟ ಅದೆಂಥದು ಹಾಕ್ತಿಯೋ ನೋಡೋಣ!"
ಮಾಸ್ತರು ತಮ್ಮ ಬೀಡಿಯ ಕಟ್ಟನ್ನ ಮುಂದಿಟ್ಟು ತಾವು ಒಂದನ್ನೆತ್ತಿಕೊಂಡರು.
ಪ್ರಭು ಮತ್ತು ರೈತರೂ ಕೈಹಾಕಿದರು.
ಪಂಡಿತರು ಬೀಡಿ ಮುಟ್ಟಲೇ ಇಲ್ಲ.'ಅವರು ಬಹುಶಃ ಸಿಗರೇಟು ಸೇದ್ಬಹುದು' </br
ಎಂದು ಚಿರುಕಂಡ ಭಾವಿಸಿದ. ಆದರೆ ಸಿಗರೇಟನ್ನೂ ಅವರು ಸೇದಲಿಲ್ಲ.
{{gap}}ಧಾಂಡಿಗ, ಹುಡುಗರನ್ನು ನೋಡುತ್ತ ಹೇಳಿದ:</br>
{{gap}}ನೀವು ಸೇದದೇ ಇದ್ರೂ ಒಂದೊಂದು ತಗೋಬೇಕು ಕಣ್ರೋ, ತಗೊಂಡು
ನನ್ನಂಥವನಿಗೆ ಕೊಡ್ಬೇಕು."
<p> ಪ್ರಭು ಮುಷ್ಟಿಯಿಂದ ಧಾಂಡಿಗನ ಬೆನ್ನಿನ ಮೇಲೆ ಗುದ್ದಿದ. ಆದರೆ ಆ ದೇಹ </br>
ಮಿಸುಕಲಿಲ್ಲ. "ಅಯ್ಯೋ ನನ್ನ ಕೈ ಬೆರಳು ಮುರಿದೋಯ್ತು" ಎಂದು ಗುದ್ದಿದವನೇ</br>
ಗೋಳಾಡಿದ.</p>
{{gap}}ಎಳನೀರು ತಂದ ರೈತ ಪಂಡಿತರನ್ನು ನೋಡುತ್ತ ಹೇಳಿದ:</br>
{{gap}}"ನೀವೇ ಪುಣ್ಯವಂತರು, ಬೀಡಿ ಸೇದೋ ಈ ಕೆಟ್ಟ ಹವ್ಯಾಸ ನಿಮಗಿಲ್ಲ."</br>
<p> ಪಂಡಿತರು ಸುಮ್ಮನೆ ನಕ್ಕು, ತಲೆಯ ಹಿಂಭಾಗದಲ್ಲಿ ಅಂಗೈಗಳನ್ನಿರಿಸಿ, ಮರದ </br>
ಕಾಂಡಕ್ಕೆ ಒರಗಿಕೊಂಡು ಮೇಲಿದ್ದ ರೆಂಬೆಗಳನ್ನೂ ಎಲೆಗಳನ್ನೂ ನೋಡಿದರು. </br>
ಹಣ್ಣೆಲೆಯೊಂದು ಕೆಳಕ್ಕುದರಿ ಅವರ ಎದೆಯ ಮೇಲೆ ಒರಗಿತು. ಅಪ್ಪು ಕೈಚಾಚಿ </br>
ಅದನ್ನೆತ್ತಿ ಬದಿಗೆ ಸರಿಸಿದ.</p>
<p>ದೂರದಿಂದ ಯಾರೋ ಕೆಮ್ಮಿದ ಸದ್ದಾಯಿತು. ಅಷ್ಟರವರೆಗೂ ವಿಗ್ರಹದಂತೆ </br>
ಕುಳಿತಿದ್ದ ಧಾಂಡಿಗ ಸರಕ್ಕನೆ ತಿರುಗಿ, ಬರುತ್ತಿದ್ದವರು ಯಾರೆಂದು ನೋಡಿ, </br>
ಪಂಡಿತರ ಕಾಲಿಗೆ ತನ್ನ ಬೆರಳು ಸೋಂಕಿಸಿದ. ಅವರು ತಕ್ಷಣವೆ ಪಕ್ಕಕ್ಕೆ ಹೊರಳಿ, </br>
ತೋಳುಗಳೆಡೆಯಲ್ಲಿ ಮುಖ ಮರೆಮಾಡಿ, ನಿದ್ದೆಹೋದವರಂತೆ ನಟಿಸಿದರು. </br></p>
{{gap}}ಉಳಿದವರು ಗಾಬರಿಯಾಗಲಿಲ್ಲ.<noinclude></noinclude>
crqpo029wz51lkjwu13yb4ub08c7mvd
317904
317902
2026-05-07T11:10:13Z
Ashwini Rai K
8475
317904
proofread-page
text/x-wiki
<noinclude><pagequality level="4" user="Ashwini Rai K" />{{rh|right= ಚಿರಸ್ಮರಣೆ|left=೪೪}}</noinclude>
ನೋಡಿ, ಅದನ್ನು ಎಸೆದು ಅತೃಪ್ತಿಯ ಧ್ವನಿಯಲ್ಲಿ ಹೇಳಿದ: </br>
{{gap}}"ಬರೇ ಎಳೇದು. ಒಂದು ಚೂರಾದರೂ ತಿರುಳು ಬೇಡ್ವೆ, ಅದರಲ್ಲಿ? ಸ್ವಲ್ಪ </br>
ಬೆಳೆದಿರೋದು ತಂದಿದ್ರೆ ಏನು ಕೊಳ್ಳೆ ಹೋಗ್ತಿತ್ತೊ?"
{{gap}} ಆ ರೈತನಿಗೆ ಕೋಪ ಬಂತು:"ನಿಮಿಷಕ್ಕೊಂದು ಮಾತಾಡ್ತೀಯಲೋ! ಈಗ್ತಾನೆ
ಹೇಳ್ದೆ-ಎಳನೀರು ಕುಡಿದ್ರೆ ಊಟಕ್ಕೆ ತೊಂದರೆಯಾಗ್ತದೇಂತ."
{{gap}}ಧಾಂಡಿಗ ಒಂದು ಬೀಡಿ ತೆಗೆದು ಹಚ್ಚಿ, ಹೊಗೆ ಆಕಾಶಕ್ಕೆ ಹೋಗುವುದನ್ನು
ನೋಡುತ್ತ ಅಂದ:
{{gap}}"ಆಗಲಿ, ಇನ್ನು ಊಟ ಅದೆಂಥದು ಹಾಕ್ತಿಯೋ ನೋಡೋಣ!"<br />
{{gap}}ಮಾಸ್ತರು ತಮ್ಮ ಬೀಡಿಯ ಕಟ್ಟನ್ನ ಮುಂದಿಟ್ಟು ತಾವು ಒಂದನ್ನೆತ್ತಿಕೊಂಡರು.
ಪ್ರಭು ಮತ್ತು ರೈತರೂ ಕೈಹಾಕಿದರು.
ಪಂಡಿತರು ಬೀಡಿ ಮುಟ್ಟಲೇ ಇಲ್ಲ.'ಅವರು ಬಹುಶಃ ಸಿಗರೇಟು ಸೇದ್ಬಹುದು' </br
ಎಂದು ಚಿರುಕಂಡ ಭಾವಿಸಿದ. ಆದರೆ ಸಿಗರೇಟನ್ನೂ ಅವರು ಸೇದಲಿಲ್ಲ.
{{gap}}ಧಾಂಡಿಗ, ಹುಡುಗರನ್ನು ನೋಡುತ್ತ ಹೇಳಿದ:</br>
{{gap}}ನೀವು ಸೇದದೇ ಇದ್ರೂ ಒಂದೊಂದು ತಗೋಬೇಕು ಕಣ್ರೋ, ತಗೊಂಡು
ನನ್ನಂಥವನಿಗೆ ಕೊಡ್ಬೇಕು."
<p> ಪ್ರಭು ಮುಷ್ಟಿಯಿಂದ ಧಾಂಡಿಗನ ಬೆನ್ನಿನ ಮೇಲೆ ಗುದ್ದಿದ. ಆದರೆ ಆ ದೇಹ </br>
ಮಿಸುಕಲಿಲ್ಲ. "ಅಯ್ಯೋ ನನ್ನ ಕೈ ಬೆರಳು ಮುರಿದೋಯ್ತು" ಎಂದು ಗುದ್ದಿದವನೇ</br>
ಗೋಳಾಡಿದ.</p>
{{gap}}ಎಳನೀರು ತಂದ ರೈತ ಪಂಡಿತರನ್ನು ನೋಡುತ್ತ ಹೇಳಿದ:</br>
{{gap}}"ನೀವೇ ಪುಣ್ಯವಂತರು, ಬೀಡಿ ಸೇದೋ ಈ ಕೆಟ್ಟ ಹವ್ಯಾಸ ನಿಮಗಿಲ್ಲ."</br>
<p> ಪಂಡಿತರು ಸುಮ್ಮನೆ ನಕ್ಕು, ತಲೆಯ ಹಿಂಭಾಗದಲ್ಲಿ ಅಂಗೈಗಳನ್ನಿರಿಸಿ, ಮರದ </br>
ಕಾಂಡಕ್ಕೆ ಒರಗಿಕೊಂಡು ಮೇಲಿದ್ದ ರೆಂಬೆಗಳನ್ನೂ ಎಲೆಗಳನ್ನೂ ನೋಡಿದರು. </br>
ಹಣ್ಣೆಲೆಯೊಂದು ಕೆಳಕ್ಕುದರಿ ಅವರ ಎದೆಯ ಮೇಲೆ ಒರಗಿತು. ಅಪ್ಪು ಕೈಚಾಚಿ </br>
ಅದನ್ನೆತ್ತಿ ಬದಿಗೆ ಸರಿಸಿದ.</p>
<p>ದೂರದಿಂದ ಯಾರೋ ಕೆಮ್ಮಿದ ಸದ್ದಾಯಿತು. ಅಷ್ಟರವರೆಗೂ ವಿಗ್ರಹದಂತೆ </br>
ಕುಳಿತಿದ್ದ ಧಾಂಡಿಗ ಸರಕ್ಕನೆ ತಿರುಗಿ, ಬರುತ್ತಿದ್ದವರು ಯಾರೆಂದು ನೋಡಿ, </br>
ಪಂಡಿತರ ಕಾಲಿಗೆ ತನ್ನ ಬೆರಳು ಸೋಂಕಿಸಿದ. ಅವರು ತಕ್ಷಣವೆ ಪಕ್ಕಕ್ಕೆ ಹೊರಳಿ, </br>
ತೋಳುಗಳೆಡೆಯಲ್ಲಿ ಮುಖ ಮರೆಮಾಡಿ, ನಿದ್ದೆಹೋದವರಂತೆ ನಟಿಸಿದರು. </br></p>
{{gap}}ಉಳಿದವರು ಗಾಬರಿಯಾಗಲಿಲ್ಲ.<noinclude></noinclude>
bvce84m2l7yps9elpt925n1ggzu7oy6
ಪುಟ:Chirasmarane-Niranjana.pdf/೪೪
104
12863
317905
256606
2026-05-07T11:12:48Z
Ashwini Rai K
8475
/* Validated */
317905
proofread-page
text/x-wiki
<noinclude><pagequality level="4" user="Ashwini Rai K" />{{rh|right= ಚಿರಸ್ಮರಣೆ|left=೪೫}}</noinclude>
ಕೆಮ್ಮಿದ ವ್ಯಕ್ತಿ ನಡು ವಯಸ್ಸಿನ ಒಬ್ಬ ಬಡಕಲು ಜೀವಿ, ಆತ ಸಂಶಯದ
ದೃಷ್ಟಿಯಿಂದಲೆ ಕುಳಿತಿದ್ದವರನ್ನೆಲ್ಲ ನೋಡುತ್ತ, ಅತ್ತ ಬಂದು ಮೆಲ್ಲನೆ ಹೇಳಿದ:
{{gap}}"ಬಹಳ ಜನ ಸ್ನೇಹಿತರು ಬಂದಹಾಗಿದೆಯಲ್ಲ ಕೇಳಪ್ಪ."
ಎಳನೀರು ತಂದ ರೈತ ಎದ್ದು, ಹೊಸಬನತ್ತ ಸರಿದು, ಸುಳ್ಳಿನ ಸರಮಾಲೆ
ನೇಯಲು ಸಿದ್ಧನಾಗುತ್ತ, ಉತ್ತರವಿತ್ತ:
{{gap}} "ಯಾರೂ ಇಲ್ಲಪ್ಪೋ ನೀಲೇಶ್ವರದಿಂದ ನಮ್ಮ ಹುಡುಗನ ಮಾಸ್ಟ್ರುಗಳು
ಹಳ್ಳಿ ನೋಡೋದಕ್ಕೇಂತ ಬಂದಿದ್ರು. ಇವತ್ತು ಅವರಿಗೆಲ್ಲ ರಜಾ ನೋಡು." {{gap}}"ಹಾಗೋ? ಯಾರು ಮಲಕೊಂಡಿರೋದು?"
{{gap}} "ಅವರೂ ಒಬ್ರು ಮಾಸ್ಟ್ರೇ."
{{gap}} "ನಿಮ್ಮ ಹುಡುಗ ಎಲ್ಲೋದ?"
"ಇಷ್ಟೊತ್ತಿನವರೆಗೂ ಇಲ್ಲೇ ಇದ್ದ, ಈಗ ಯಾವ ಕಡೆ ಹೋದ್ನೋ ಕಾಣೆ."
ಆ ಮನುಷ್ಯ ಮತ್ತೂ ಸಂಶಯದಿಂದಲೆ ಕುಳಿತವರನ್ನು ನೋಡುತ್ತ
ಧಾಂಡಿಗನನ್ನು ಗುರುತಿಸಿ ಹೇಳಿದ:
{{gap}}"ಓಹೋ, ನೀನೂ ಇದ್ದೀಯೋ?"
{{gap}} "ನಾನಿಲ್ಲದ ಜಾಗವಿಲ್ಲ; ನಾನಿಲ್ಲದ ದೇಶವಿಲ್ಲ!"
{{gap}}ಮಹತ್ವದ ತತ್ವವನ್ನು ಬೋಧಿಸುವವನಂತೆ ಧಾಂಡಿಗ ಉತ್ತರವಿತ್ತ,
"ಸರಿ,ಸರಿ. ಒಂದು ಬೀಡಿ ಕೊಡಿ ಯಾರಾದರೂ."
ಬಂದವನು ಮುಂದಕ್ಕೆ ಕೈ ಚಾಚಿದ.
ರೈತ ಕೇಳಪ್ಪನ್ ಒಂದು ಬೀಡಿಯನ್ನೊಯ್ದು ಕೊಟ್ಟ, ಉರಿಯುತ್ತಿದ್ದ ತನ್ನ
ಬೀಡಿಯ ಬೆಂಕಿಯಿಂದಲೇ ಅದನ್ನು ಹಚ್ಚಿದ. ಆತ ಹೊಗೆ ಬಿಡುತ್ತ ಮತ್ತಷ್ಟು
ಕೆಮ್ಮಿ ಮುಂದೆ ನಡೆಯತೊಡಗಿದ.
{{gap}}"ಜಮೀನ್ದಾರರು ಊರಲ್ಲಿದ್ದಾರೋ?"
ಕೇಳಪ್ಪ ಆತನನ್ನು ಕೇಳಿದ.
{{gap}}"ಹೂನಪ್ಪ, ಹೊಸದುರ್ಗದಿಂದ ನಿನ್ನೆ ಬಂದ್ರು, ಈಗ ಅವರಲ್ಲಿಗೆ ಹೋಗ್ತಾ
ಇದ್ದೇನೆ."
{{gap}}ಆತ ದೂರ ಹೋದಮೇಲೆ, ಧಾಂಡಿಗ ಮತ್ತೊಮ್ಮೆ ಕಾಲಿಗೆ ಬೆರಳು ಸೋಂಕಿಸಿ
ಸಂಜ್ಞೆ ಮಾಡಿದ ಬಳಿಕ, ಪಂಡಿತರು ಮಗ್ಗುಲು ಹೊರಳಿ ಎದ್ದರು.
{{gap}} ಪರಿಸ್ಥಿತಿಯ ಗಂಭಿರತೆಯನ್ನು ಆಗಲೇ ಊಹಿಸಿಕೊಂಡಿದ್ದ ಅಪ್ಪು ಮತ್ತು
ಚಿರುಕಂಡ ಉಸಿರು ಬಿಗಿಹಿಡಿದೇ ಕುಳಿತಿದ್ದರು. ಕೆಮ್ಮುತ ಬಂದವನು ತಮ್ಮ<noinclude></noinclude>
q4n81vua8uvpym0pv7c01jftr7qrj86
317906
317905
2026-05-07T11:13:23Z
Ashwini Rai K
8475
317906
proofread-page
text/x-wiki
<noinclude><pagequality level="4" user="Ashwini Rai K" />{{rh|right= ಚಿರಸ್ಮರಣೆ|left=೪೫}}</noinclude>
{{gap}}ಕೆಮ್ಮಿದ ವ್ಯಕ್ತಿ ನಡು ವಯಸ್ಸಿನ ಒಬ್ಬ ಬಡಕಲು ಜೀವಿ, ಆತ ಸಂಶಯದ
ದೃಷ್ಟಿಯಿಂದಲೆ ಕುಳಿತಿದ್ದವರನ್ನೆಲ್ಲ ನೋಡುತ್ತ, ಅತ್ತ ಬಂದು ಮೆಲ್ಲನೆ ಹೇಳಿದ:
{{gap}}"ಬಹಳ ಜನ ಸ್ನೇಹಿತರು ಬಂದಹಾಗಿದೆಯಲ್ಲ ಕೇಳಪ್ಪ."
ಎಳನೀರು ತಂದ ರೈತ ಎದ್ದು, ಹೊಸಬನತ್ತ ಸರಿದು, ಸುಳ್ಳಿನ ಸರಮಾಲೆ
ನೇಯಲು ಸಿದ್ಧನಾಗುತ್ತ, ಉತ್ತರವಿತ್ತ:
{{gap}} "ಯಾರೂ ಇಲ್ಲಪ್ಪೋ ನೀಲೇಶ್ವರದಿಂದ ನಮ್ಮ ಹುಡುಗನ ಮಾಸ್ಟ್ರುಗಳು
ಹಳ್ಳಿ ನೋಡೋದಕ್ಕೇಂತ ಬಂದಿದ್ರು. ಇವತ್ತು ಅವರಿಗೆಲ್ಲ ರಜಾ ನೋಡು." {{gap}}"ಹಾಗೋ? ಯಾರು ಮಲಕೊಂಡಿರೋದು?"
{{gap}} "ಅವರೂ ಒಬ್ರು ಮಾಸ್ಟ್ರೇ."
{{gap}} "ನಿಮ್ಮ ಹುಡುಗ ಎಲ್ಲೋದ?"
"ಇಷ್ಟೊತ್ತಿನವರೆಗೂ ಇಲ್ಲೇ ಇದ್ದ, ಈಗ ಯಾವ ಕಡೆ ಹೋದ್ನೋ ಕಾಣೆ."
ಆ ಮನುಷ್ಯ ಮತ್ತೂ ಸಂಶಯದಿಂದಲೆ ಕುಳಿತವರನ್ನು ನೋಡುತ್ತ
ಧಾಂಡಿಗನನ್ನು ಗುರುತಿಸಿ ಹೇಳಿದ:
{{gap}}"ಓಹೋ, ನೀನೂ ಇದ್ದೀಯೋ?"
{{gap}} "ನಾನಿಲ್ಲದ ಜಾಗವಿಲ್ಲ; ನಾನಿಲ್ಲದ ದೇಶವಿಲ್ಲ!"
{{gap}}ಮಹತ್ವದ ತತ್ವವನ್ನು ಬೋಧಿಸುವವನಂತೆ ಧಾಂಡಿಗ ಉತ್ತರವಿತ್ತ,
"ಸರಿ,ಸರಿ. ಒಂದು ಬೀಡಿ ಕೊಡಿ ಯಾರಾದರೂ."
ಬಂದವನು ಮುಂದಕ್ಕೆ ಕೈ ಚಾಚಿದ.
ರೈತ ಕೇಳಪ್ಪನ್ ಒಂದು ಬೀಡಿಯನ್ನೊಯ್ದು ಕೊಟ್ಟ, ಉರಿಯುತ್ತಿದ್ದ ತನ್ನ
ಬೀಡಿಯ ಬೆಂಕಿಯಿಂದಲೇ ಅದನ್ನು ಹಚ್ಚಿದ. ಆತ ಹೊಗೆ ಬಿಡುತ್ತ ಮತ್ತಷ್ಟು
ಕೆಮ್ಮಿ ಮುಂದೆ ನಡೆಯತೊಡಗಿದ.
{{gap}}"ಜಮೀನ್ದಾರರು ಊರಲ್ಲಿದ್ದಾರೋ?"
ಕೇಳಪ್ಪ ಆತನನ್ನು ಕೇಳಿದ.
{{gap}}"ಹೂನಪ್ಪ, ಹೊಸದುರ್ಗದಿಂದ ನಿನ್ನೆ ಬಂದ್ರು, ಈಗ ಅವರಲ್ಲಿಗೆ ಹೋಗ್ತಾ
ಇದ್ದೇನೆ."
{{gap}}ಆತ ದೂರ ಹೋದಮೇಲೆ, ಧಾಂಡಿಗ ಮತ್ತೊಮ್ಮೆ ಕಾಲಿಗೆ ಬೆರಳು ಸೋಂಕಿಸಿ
ಸಂಜ್ಞೆ ಮಾಡಿದ ಬಳಿಕ, ಪಂಡಿತರು ಮಗ್ಗುಲು ಹೊರಳಿ ಎದ್ದರು.
{{gap}} ಪರಿಸ್ಥಿತಿಯ ಗಂಭಿರತೆಯನ್ನು ಆಗಲೇ ಊಹಿಸಿಕೊಂಡಿದ್ದ ಅಪ್ಪು ಮತ್ತು
ಚಿರುಕಂಡ ಉಸಿರು ಬಿಗಿಹಿಡಿದೇ ಕುಳಿತಿದ್ದರು. ಕೆಮ್ಮುತ ಬಂದವನು ತಮ್ಮ<noinclude></noinclude>
1yd5vv3r3tqvxgrgda6k8s4y9cdfmfi
317908
317906
2026-05-07T11:15:06Z
Ashwini Rai K
8475
317908
proofread-page
text/x-wiki
<noinclude><pagequality level="4" user="Ashwini Rai K" />{{rh|right= ಚಿರಸ್ಮರಣೆ|left=೪೫}}</noinclude>
{{gap}}ಕೆಮ್ಮಿದ ವ್ಯಕ್ತಿ ನಡು ವಯಸ್ಸಿನ ಒಬ್ಬ ಬಡಕಲು ಜೀವಿ, ಆತ ಸಂಶಯದ
ದೃಷ್ಟಿಯಿಂದಲೆ ಕುಳಿತಿದ್ದವರನ್ನೆಲ್ಲ ನೋಡುತ್ತ, ಅತ್ತ ಬಂದು ಮೆಲ್ಲನೆ ಹೇಳಿದ:<br />
{{gap}}"ಬಹಳ ಜನ ಸ್ನೇಹಿತರು ಬಂದಹಾಗಿದೆಯಲ್ಲ ಕೇಳಪ್ಪ."
ಎಳನೀರು ತಂದ ರೈತ ಎದ್ದು, ಹೊಸಬನತ್ತ ಸರಿದು, ಸುಳ್ಳಿನ ಸರಮಾಲೆ
ನೇಯಲು ಸಿದ್ಧನಾಗುತ್ತ, ಉತ್ತರವಿತ್ತ:<br />
{{gap}} "ಯಾರೂ ಇಲ್ಲಪ್ಪೋ ನೀಲೇಶ್ವರದಿಂದ ನಮ್ಮ ಹುಡುಗನ ಮಾಸ್ಟ್ರುಗಳು
ಹಳ್ಳಿ ನೋಡೋದಕ್ಕೇಂತ ಬಂದಿದ್ರು. ಇವತ್ತು ಅವರಿಗೆಲ್ಲ ರಜಾ ನೋಡು." <br />{{gap}}"ಹಾಗೋ? ಯಾರು ಮಲಕೊಂಡಿರೋದು?"<br />
{{gap}} "ಅವರೂ ಒಬ್ರು ಮಾಸ್ಟ್ರೇ."<br />
{{gap}} "ನಿಮ್ಮ ಹುಡುಗ ಎಲ್ಲೋದ?"<br />
"ಇಷ್ಟೊತ್ತಿನವರೆಗೂ ಇಲ್ಲೇ ಇದ್ದ, ಈಗ ಯಾವ ಕಡೆ ಹೋದ್ನೋ ಕಾಣೆ."
ಆ ಮನುಷ್ಯ ಮತ್ತೂ ಸಂಶಯದಿಂದಲೆ ಕುಳಿತವರನ್ನು ನೋಡುತ್ತ
ಧಾಂಡಿಗನನ್ನು ಗುರುತಿಸಿ ಹೇಳಿದ:<br />
{{gap}}"ಓಹೋ, ನೀನೂ ಇದ್ದೀಯೋ?"<br />
{{gap}} "ನಾನಿಲ್ಲದ ಜಾಗವಿಲ್ಲ; ನಾನಿಲ್ಲದ ದೇಶವಿಲ್ಲ!"<br />
{{gap}}ಮಹತ್ವದ ತತ್ವವನ್ನು ಬೋಧಿಸುವವನಂತೆ ಧಾಂಡಿಗ ಉತ್ತರವಿತ್ತ,
"ಸರಿ,ಸರಿ. ಒಂದು ಬೀಡಿ ಕೊಡಿ ಯಾರಾದರೂ."
ಬಂದವನು ಮುಂದಕ್ಕೆ ಕೈ ಚಾಚಿದ.
ರೈತ ಕೇಳಪ್ಪನ್ ಒಂದು ಬೀಡಿಯನ್ನೊಯ್ದು ಕೊಟ್ಟ, ಉರಿಯುತ್ತಿದ್ದ ತನ್ನ
ಬೀಡಿಯ ಬೆಂಕಿಯಿಂದಲೇ ಅದನ್ನು ಹಚ್ಚಿದ. ಆತ ಹೊಗೆ ಬಿಡುತ್ತ ಮತ್ತಷ್ಟು
ಕೆಮ್ಮಿ ಮುಂದೆ ನಡೆಯತೊಡಗಿದ.<br />
{{gap}}"ಜಮೀನ್ದಾರರು ಊರಲ್ಲಿದ್ದಾರೋ?"<br />
ಕೇಳಪ್ಪ ಆತನನ್ನು ಕೇಳಿದ.
{{gap}}"ಹೂನಪ್ಪ, ಹೊಸದುರ್ಗದಿಂದ ನಿನ್ನೆ ಬಂದ್ರು, ಈಗ ಅವರಲ್ಲಿಗೆ ಹೋಗ್ತಾ
ಇದ್ದೇನೆ."<br />
{{gap}}ಆತ ದೂರ ಹೋದಮೇಲೆ, ಧಾಂಡಿಗ ಮತ್ತೊಮ್ಮೆ ಕಾಲಿಗೆ ಬೆರಳು ಸೋಂಕಿಸಿ
ಸಂಜ್ಞೆ ಮಾಡಿದ ಬಳಿಕ, ಪಂಡಿತರು ಮಗ್ಗುಲು ಹೊರಳಿ ಎದ್ದರು.<br />
{{gap}} ಪರಿಸ್ಥಿತಿಯ ಗಂಭಿರತೆಯನ್ನು ಆಗಲೇ ಊಹಿಸಿಕೊಂಡಿದ್ದ ಅಪ್ಪು ಮತ್ತು
ಚಿರುಕಂಡ ಉಸಿರು ಬಿಗಿಹಿಡಿದೇ ಕುಳಿತಿದ್ದರು. ಕೆಮ್ಮುತ ಬಂದವನು ತಮ್ಮ<noinclude></noinclude>
a8kzm4kxl7wjcllyunb4sqh6ye2ea92
ಪುಟ:Chirasmarane-Niranjana.pdf/೧೧೦
104
12929
317903
64860
2026-05-07T11:09:33Z
Shreelatha.Halemane
7642
/* Proofread */
317903
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೧೧೧}}
ಗುರುತು ಹಿಡಿಯಲಿಲ್ಲವೆಂದು ಅಪ್ಪು, ನಿರಾಸೆಗೊಂಡು, ಬಳಿ ಸಾರಿ, ಕೇಳಿದ:
{{gap}}"ಏನ್ರಿ, ಮರತ್ತೋಯ್ತಾ? ನಮ್ಮನ್ನು ನೋಡಿದ್ದು ನೆನಪಿಲ್ವ?"
{{gap}}ಧಾಂಡಿಗ ಯೋಚಿಸುತ್ತಿದ್ದಂತೆ ನಟಿಸಿ ಹೇಳಿದ:
{{gap}}"ಹೂಂ.... ಹೂಂ. ನೆನಪಿದೆ. ದ್ವಾಪರ ಯುಗದ
ತ್ರೇತಾಯುಗದಲ್ಲೋ ಯಾವಾಗಲೋ ಒಮ್ಮೆ ನೋಡಿದ್ದೇಕು.
{{gap}}ಅಪ್ಪು ನಕ್ಕು, ಮತ್ತೊಂದು ಪ್ರಶ್ನೆ ಕೇಳಿದ:
{{gap}}"ಈಗೇಲ್ಲಿಂದ ಬಂದಿರಿ?"
{{gap}}"ಪಾತಾಳದಿಂದ ಬಂದವೂ ಸ್ವರ್ಗದಿಂದ ಬಂದವೂ ಎಲ್ಲಿಂದಲೋ !
ಮರೆತ್ತೊಗಿದೆಯಪ್ಪಾ ಮರತ್ತೊಆಗಿದೆ."
{{gap}}ಅಂತಹ ಪ್ರಶ್ನೆ ಕೇಳಬೇಡವೆಂದು "ಶ್!" ಎಂದು ಚಿರುಕಂಡ ಅಪ್ಪುವಿನ ಕೈ
ಮುಟ್ಟಿ ಸನ್ನೆ ಮಾಡಿದ. ಅಪ್ಪುವಿಗೆ ಕೆಡುಕೆನಿಸಿತು. ಆದರೆ ಒಂದು ವರ್ಷದ ಹಿಂದೆ
ತಾವು ಕಂಡಿದ್ದ ಇತರರ ನೆನಪಾಗಿ ಪಿಸುಮಾತಿನಲ್ಲಿ ಅಪ್ಪು ಕೇಳಿದ:
{{gap}}"ಓಹೋ! ರಾಮುಣ್ಣೆಯಂತೂ ನಿಮ್ಮ ವಿಷಯ ವಿಚಾರಿಸ್ತಾನೇ ಇದ್ರಪ್ಪ,
ಸಾಲಮಾಡಿ ಬಂದಿದ್ರೆ ಅವತ್ತು!”
{{gap}}“ಓ!” ಎಂದ ಅಪ್ಪು, ಧಾಂಡಿಗ ತಮಾಷೆಗೆ ಹಾಗೆ ಅಂದನೆಂಬುದರಲ್ಲಿ ಶಂಕ
ಇರಲಿಲ್ಲ. ಆದರೂ ರಾಮುಣ್ಣಿಯನ್ನು ಆ ಬಳಿಕ ಕಾಣಲಿಲ್ಲ ಎಂದು ಅಪ್ಪುವಿಗೆ
ಬೇಸರವೆನಿಸಿತು.
{{gap}}"ಹೌದು ಕಣಿ, ಇಷ್ಟು ಸಮೀಪವಿದ್ದರೂ ಹೋಗೋದಕ್ಕೆ ಆಗಿಲ್ಲ.
{{gap}}*ಮುಖ್ಯ. ಆ ಕಡೆ ಹೋಗುವ ಕೆಲಸವೇ ಇಲ್ಲ' ಎಂದು ಚಿರುಕಂಡ
ವಿವರಣೆಯನ್ನಿತ್ತ.
{{gap}}“ನೀಲೇಶ್ವರ ಜಾತ್ರೆಗೆ ಹೋಗುವಾಗ ಬರಬೇಕೂಂತಿತ್ತು. ಆದರೆ ಈ ಸಲ
ಜಾತ್ರೆಗೆ ಹೋರಡೋದಾಗಲಿಲ್ಲ' ಎಂದು ಸಪ್ಪಗಿನ ಧ್ವನಿಯಲ್ಲಿ ಅಪ್ಪು ಹೇಳಿದ.
ಹುಡುಗರಿಬ್ಬರನ್ನೂ ಧಾಂಡಿಗ ಬದಿಗೆಳೆದ.
{{gap}}"ಅಲ್ಲೊ! ಈ ಊರೇ ಪ್ರಪಂಚ ಅಂತ ಕಪ್ಪೆಗಳ ಹಾಗಿದ್ದೀರಲ್ಲೋ ಒಂದಿಷ್ಟು
ಆಚೆ ಈಚೆ ಹಳ್ಳಿಗೆಲ್ಲಾ ಹೋಗಿ ಬಾರಾ ನೀವು?*
{{gap}}"ಹೋಗಿ ಮಾಡೋದೇನು?” ಎಂದು ಚಿರುಕಂಡ, ಗಹನವಾದ ಯಾವುದೂ
ವಿಷಯದ ಬಗೆಗೆ ಧಾಂಡಿಗ ಪ್ರಸ್ತಾಪಿಸುತ್ತಿರಬಹುದೆಂದು ಭಾವಿಸಿ,
{{gap}}"ಹಲಸಿನ ಹಣ್ಣೂ ಮಾವಿನ ಹಣ್ಣೂ ಹೊತ್ವಾಕೋದು!"
{{gap}}ಹಾಗೆ ಹೇಳುತ್ತಾ ಆತನೂ ನಕ್ಕ. ಆ ಮಾತನ್ನು ಕೇಳಿ ಹುಡುಗರೂ ನಕ್ಕರು.<noinclude></noinclude>
2bozpyhandews85y5vidq0v7m0y785u
ಪುಟ:Chirasmarane-Niranjana.pdf/೧೪೦
104
12959
317912
65423
2026-05-07T11:22:43Z
Shreelatha.Halemane
7642
/* Proofread */
317912
proofread-page
text/x-wiki
<noinclude><pagequality level="3" user="Shreelatha.Halemane" />{{rh|center=|left=ಚಿರಸ್ಮರಣೆ|right=೧೪೧}}</noinclude>ಸ೦ಭ್ರಮ.ಸಹಬಾ೦ಧವನಿಗೆ ನೆರವಾಗಲು ರೈತರ ತ೦ಡವೆ ಬ೦ದಿತ್ತು.ತಮ್ಮ ಕುಯಿಲು ಮುಗಿದಿದ್ದ ಅಕ್ಕಪಕ್ಕದವರೂ ಹೊಲಕ್ಕಿಳಿದರು.ಮೇಲೇರುತ್ತಿದ್ದ ಸೂರ್ಯನೊಡನೆ ಸ್ಪಾರ್ಧಿಸುತ್ತ ಕುಡುಗೋಲು ಹಿಡಿದ ಕೈಗಳು ಫಲಭಾರದಿ೦ದ ಬಾಗಿದ್ದ ಭತ್ತದ ಸಸಿಗಳನ್ನು ಕರಕರನೆ ಕುಯ್ದವು.ರೈತಹ೦ಗಳೆಯರು ಪಾಡ್ಡನಗಳನ್ನು ಹಾಡಿದರು.ಕಣ್ಣ ಹೊಸ ಹಾಡಿನಿ೦ದ ದುಡಿಯುವವರ ಉಲ್ಲಾಸ ಹೆಚ್ಚುವ೦ತೆ.ಕೈಗಳ ಬಿರುಸು ಇಮ್ಮಡಿಯಾಗುವ೦ತೆ ಮಾಡಿದ.ಮಧ್ಯಾಹ್ನದ ವಿರಾಮದ ವೇಳೆಗೆ ಉಳಿದುದು ಸ್ವಾಲ್ಪವೇ,ಮೂರು ಗ೦ಟೆಯ ಹೊತ್ತಿಗೆಲ್ಲ ಕುಯ್ಲು ಮುಗಿದೇ ಹೋಯಿತು.ಕೃಷ್ಣನ್ ನಾಯರ ಮುಖ ಅರಳಿ,ಮೊರದಷ್ಟು ಅಗಲವಾಯಿತು.
{{gap}}ಇನ್ನೇನು,ಕುಯ್ದುದನ್ನು ರಾಶಿ ಹಾಕಿ ಕೃಷ್ಣನ್ ನಾಯರ ಗುಡಿಸಲಿಗೆ ಒಯ್ದು ಮುಟ್ಟಿಸುವುದೊ೦ದೇ ಕೆಲಸ.ಅದಕ್ಕೆ ಪೂರ್ವಭಾವಿಯಾಗಿ ನಾಲ್ಕು ನಿಮಿಷ ದಣಿವಾರಿಸಿಕೊಳ್ಳಲೆ೦ದು ರೈತರೆಲ್ಲ ಕುಳಿತರು.ಅಷ್ಟರಲ್ಲಿ,ಪುಷ್ಟವಾದ ಎತ್ತುಗಳನ್ನು ಹೂಡಿದ್ದ ಗಾಡಿ ಅತ್ತ ಬರತೊಡಗಿತ್ತು.
{{gap}}"ಗಾಡಿಗೆ ಹೇಳಿದ್ದೆ ಏನಪ್ಪ ಕೃಷ್ಣನ್ ನಾಯರ್?ಬರಾ ಇದೆಯಲ್ಲ ಯಾವುದೋ ರಥ!"ಎ೦ದು ಯಾರೋ ಅ೦ದರು.
{{gap}}ಇದೇನು ತಮಾಷೆಯೋ ವಾಸ್ತವವೋ ಎ೦ದು ತಿಳಿಯಲು ಎಲ್ಲರೂ ಅತ್ತ ಕತ್ತು ತಿರುಗಿಸಿ ನೋಡಿದರು.
{{gap}}ಕೃಷ್ಣನ್ ನಾಯರೇ ಮೊದಲು ಹೋರಿಗಳನ್ನು ಗುರುತಿಸಿ,"ಅದು ಜಮೀನ್ದಾರರ ಗಾಡಿ"ಎ೦ದ.ಹಾಗೆ ಹೇಳುತ್ತಲಿದ್ದ೦ತೆ ಆತನ ಮುಖ ಕಪ್ಪಿಟ್ಟಿತು.
{{gap}}"ತನ್ನ ಸಹಾಯವೂ ಒ೦ದಿಷ್ಟು ಇರಲೀ೦ತ ನ೦ಬಿಯಾರರೇ ಕಳಿಸಿದ್ದಾರೋ?"
ಎ೦ದು ಹೇಳಿ ಯಾರೋ ನಕ್ಕರು .
{{gap}}ಆದರೆ ಆ ವಾತಾವರಣ ಬದಲಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ.ಕೃಷ್ಣನ್ ನಾಯರ್ ಊಹಿಸಿದ್ದ೦ತೆಯೇ ಆಯಿತು.ಆತನ ಪೈರನ್ನು ವಶಪಡಿಸಿಕೊ೦ಡು ಜಮೀನ್ದಾರರ ಮನೆಗೊಯ್ಯುವುದಕ್ಕೇ ಆ ಗಾಡಿ ಬ೦ದಿತ್ತು.ಗಾಡಿಯ ಜತೆಯಲ್ಲಿ ಜಮೀನ್ದಾರರ ಕಡೆಯ ಕ್ರೂರಿಗಳೆ೦ದು ಕುಪ್ರಸಿದ್ಧರಾಗಿದ್ದ ಇಬ್ಬರು ಆಳುಗಳೂ ಇದ್ದರು.ಇಷ್ಟೆ೦ದು ಜನರನ್ನು ನೋಡಿ ಆಳುಗಳು ಸ್ವಲ್ಪ ಹಿ೦ತೆಗೆದರೂ ಅವರಲ್ಲೊಬ್ಬ ಕೃಷ್ಣನ್ ನಾಯರನ್ನು ಉದ್ದೇಶಿಸಿ ಹೇಳಿದ:
{{gap}}"ಪೈರನ್ನು ಸಾಗಿಸ್ಕೊ೦ಡು ಬರೋದಕ್ಕೆ ಜಮೀನ್ದಾರರು ಹೇಳಿದ್ದಾರೆ."
{{gap}}ಅದನ್ನು ಕೇಳಿ,ಮೊದಲು ನಿ೦ದೆಯ ಮಾತುಗಳನ್ನಾಡುತ್ತ ಆಕ್ರೋಶ ಮಾಡಿದವಳು ಕೃಷ್ಣನ್ ನಾಯರ ಹೆ೦ಡತಿ.ಅಷ್ಟೊ೦ದು ಜನರ ಸಾಮೀಪ್ಕದಲ್ಲಿ<noinclude></noinclude>
5ign8q91k5uco2rzp33u7zlnfuqfl5b
ಪುಟ:Chirasmarane-Niranjana.pdf/೧೪೩
104
12962
317913
64213
2026-05-07T11:25:10Z
Shreelatha.Halemane
7642
/* Proofread */
317913
proofread-page
text/x-wiki
<noinclude><pagequality level="3" user="Shreelatha.Halemane" />{{rh|center=|left=೧೪೪|right= ಚಿರಸ್ಮರಣೆ}}</noinclude>
{{gap}}"ಇವತು ನೀವು ಇಷ್ಟೆಲ್ಲ ಮಾಡಿದ್ದು ನನಗೋಸ್ಕರ, ನಾನು ನಿಮ್ಮತೇಲಿ ಬರಬೇಕೂಂತ. ಈಗಿನ ಸ್ಥಿತೀಲಿ ನಾನಂತೂ ಬರೋಹಾಗಿಲ್ಲ. ದಯವಿಟ್ಟ ನೀವೆಲ್ಲ ಸಮ್ಮೇಳನಕ್ಕೆ ಹೋಗ್ನನ್ನಿ."
{{gap}}ಆ ಮಾತಿಗೆ ಯಾರೂ ಏನನ್ನೂ ಪ್ರತಿ ಹೇಳಲಿಲ್ಲ, ಎಲ್ಲರೂ ಪರಸ್ಪರರ ಮುಖ ನೋಡಿದರು. ಕೊನೆಗೆ ಕೋರನೆಂದ:
{{gap}}"ನಾನು ಬಂದು ಆಗ್ಬೇಕಾದ್ದೇನು? ನನಗೆ ಅರ್ಥಾವಾಗೋದು ಅಷ್ಟರಲ್ಲೇ ಇದೆ. ನಾನು ಇಲ್ಲೇ ಇರ್ತೇನೆ.'
{{gap}}ಆ ಮಾತನ್ನು ವಿಮರ್ಶಿಸುತ್ತ ಚಿರುಕಂಡ ನುಡಿದ:
{{gap}}"ಅರ್ಥವಾಗೋದಿಲ್ಲ ಅನ್ನೋದೆಲ್ಲ ಬಿಟ್ಟಿಡಿ ಕೋರಣ್ಣ. ಹಾಗಲ್ಲ, ಯಾರಾದರೂ ಒಬ್ಬಿಬ್ಬರು ಇಲ್ಲೇ ಇರಬೇಕಾದದ್ದು ಧರ್ಮ. ನೀವು ಇರೋ ಹಾಗಿದ್ದರೆ ಸಂತೋಷವೇ. ಅಂತೂ ಹೋಗುವ ಕಾರ್ಯಕ್ರಮ ರದ್ದಾಗಬಾರ್ದು."
{{gap}}"ಹೇಗೆ ಹೇಳಿದರೂ ಒಂದೇ ನಿನ್ನ ಮಾತೇ ಇರಲಿ, ನಾನು ಬುದ್ಧಿವಂತ ಅಂತಲೇ ಒಪೊಳ್ಳೋಣ" ಎಂದ ಕೋರ ನಗುತ್ತ.
{{gap}}ಪ್ರಯಾಣದ ಸಿದ್ದತೆಗಾಗಿ ಅವರೆಲ್ಲ ತಮ್ಮ ಗುಡಿಸಲುಗಳತ್ತ ಹೊರಟಾಗ ಕೋರ ಇಳಿಧ್ವನಿಯಲ್ಲಿ ಅಪ್ಪುವಿಗೆಂದ:
{{gap}}"ಹೋಗ್ತ್ತಾ ಮಾಸ್ತರಿಗೆ ಹೇಳ್ಬಿಡು ನಾನು ಇಲ್ಲೇ ಇದೇನೇಂತ."
{{gap}}ಕಯ್ಯೂರಿನ ಎಂಟು ಜನ ರೈತರು, ತಳಿಪರಂಬ ಜಾತ್ರೆಗೆ ಹೋಗುತ್ತಿದ್ದೇವೆ ಎಂದು ಹೇಳಿ ಸಮ್ಮೇಳನಕ್ಕೆ ಹೋದರು. ರಾತ್ರಿಯೇ ರೈತರು ಜಾತ್ರೆಗೆ ಹೋದ ವಾರ್ತೆ ನಂಬಿಯಾರರಿಗೆ ಸಿಗದೆ ಇದುದರಿಂದ, ಕೃಷ್ಣನ್ ನಾಯರನ ಪೈರಿನ ವಿಷಯದಲ್ಲಿ ಅವರೇನನ್ನೂ ಮಾಡಲಿಲ್ಲ. ರೇಗಿ ಕಿಡಿ ಕಾರಿದರೂ,ತಮಗಿರುವ ವಿರೋಧ ಎಷ್ಟೆಂಬುದನ್ನು ಮೊದಲು ಅಳೆದು ನೋಡಬೇಕೆಂಬ ವಿವೇಕ ಅವರಿಗಿತ್ತು. ಅದರ ಫಲವಾಗಿ, ಕೋರ ಮತ್ತು ಕೃಷ್ಣನ್ ನಾಯರ್ ನಸುಕಿನಲ್ಲಿ ಒಂದಿಷ್ಟು ಜೊಂಪು ಹತ್ತಿದ ಕಣ್ಣುಗಳನ್ನು ತಿಕ್ಕಿಕೊಂಡು ಎದ್ದಾಗಲೂ, ಅಂಗಳದಲ್ಲಿ ಪೈರಿನ ರಾಶಿ ನಿಶ್ಚಿಂತೆಯಿಂದ ಮಲಗಿಯೇ ಇತ್ತು.
{{gap}}ಮಾಸ್ತರು ಸಮ್ಮೇಳನಕ್ಕೆ ಹೋಗಲ್ಲಿಲ. "ಬನ್ನಿ ನಾವಿದ್ದೇವೆ" ಎಂದು ರೈತರು ಕರೆದರೂ ಅವರು ಹೊರಡಲಿಲ್ಲ... ಬೆಳಗ್ಗೆ ಎದು ಅವರು 'ಸಾಹಿತ್ಯ' ಓದುತ್ತಾ ಕುಳಿತಿದ್ದರು. 'ಮಾಸ್ತರೆ' ಎಂಬ ಕೂಗು ಕೇಳಿದಾಗ ಒಮ್ಮೆ ಅವರಿಗೆ ಅಳುಕಿತು. ಒಡನೆಯೇ 'ಸಾಹಿತ್ಯ'ವನ್ನು ಹಾಸಿಗೆಯ ಕೆಳಗೆ ಮುಚ್ಚಿಟ್ಟು, ಕರೆದ ಸ್ವರವನ್ನು ಗುರುತಿಸಿ ಅವರು ಹೊರಕ್ಕೆ ಬಂದರು.<noinclude></noinclude>
orq8pq6843myjcvtvj0ldhbal8w6232
ಪುಟ:ಮಿಂಚು.pdf/೧೦೨
104
20461
317666
219864
2026-05-06T14:03:04Z
Shreelatha.Halemane
7642
/* Validated */
317666
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=96|right=ಮಿಂಚು}}
ಜವಾನನೊಬ್ಬ ಏಳಬೇಕೊ ಬೇಡವೊ ಎಂದು ಯೋಚನೆಗೀಡಾದಂತೆ ಕಂಡಿತು.</br> ಕಡೆಗೂ ಆತ ಎದ್ದ.</br>
{{gap}}ಸೌದಾಮಿನಿ ಅಂದಳು :</br>
{{gap}}"ನಕುಲ ದೇವ್ಜಿಯವರನ್ನು ಕಾಣಬೇಕು.”</br>
{{gap}}“ಮೊದಲೇ ಭೇಟಿ ಗೊತಾಗಿದೆಯಾ ?”</br>
{{gap}}"ಹೌದು."</br>
{{gap}}“ಕಾರ್ಡ್ ಕೊಡಿ.”</br>
{{gap}}ಪರಶುರಾಮ ಮುಖ್ಯಮಂತ್ರಿಯ ಕಾರ್ಡನ್ನು ತನ್ನ ಬ್ರೀಫ್ ಕೇಸಿನಿಂದ ತೆಗೆದು</br> ಕೊಟ್ಟ, ಜವಾನ ಅದನ್ನೋದಿ, ನಿರ್ವಿಕಾರ ಭಾವದಿಂದ, ಭೇಟಿಗೆ ಬಂದವರಿ</br> ಗೋಸ್ಕರವೇ ಹೊಸದಾಗಿ ಏರ್ಪಡಿಸಿದ್ದ ನೀಳ ಸೋಫಾಗಳತ್ತ ಬೊಟ್ಟು ಮಾಡಿ,</br> “ಕೂತ್ಕೋಳ್ಳಿ” ಎಂದ : ಕಾರ್ಡನ್ನು ಒಳಗೆ ಕೊಟ್ಟ ಬಂದ, ಎಲ್ಲ ಹೊಸ ವ್ಯವಸ್ಥೆ.</br> ಹೊರ ಹಜಾರದ ಮೂಲೆಯಲ್ಲಿ ಟೆಲಿಫೋನ್ ಆಪರೇಟರ್ ಕುಳಿತಿದ್ದ. ಇಂಟರ್</br> ಕಾಮ್ನಲ್ಲಿ ಸದು, ಮಾತು,ಸಹಕಾರ್ಯದರ್ಶಿ ಎಂದು ಬಾಗಿಲ ಬಳಿ ಹೆಸರು ಹಲಗೆ</br> ಇದ್ದ ಇನ್ನೊಂದು ಕೊ ಬರುತ್ತಿದ್ದುವು, ನಕುಲದೇವ್ ಯಾವನೋ</br> ಧುರೀಣನ ಮೇಲೆ ರೇಗಿ ಕೂಗಾಡುತ್ತಿದ್ದ, ಭೇಟಿಗೆ ಬಂದವನೂ ಏರು ದನಿಯಲ್ಲಿ</br> ಮಾತನಾಡಲು ಯತ್ನಿಸಿದ. ನಕುಲ್ ದೇವ್ ಗರ್ಜಿಸಿದ:</br>
{{gap}}“ಇದೇನು ನಿಮ್ಮ ಜುಜುಬಿ ರಾಜ್ಯದ ವಿಧಾನಮಂಡಲ ಅಂದ್ಕೊಂಡ್ರಾ?</br> ಸ್ವರ ತಗ್ಗಿಸಿ !”</br>
{{gap}}ಎರಡು ನಿಮಿಷ ಮೌನ. ಬೇರೊಂದು ಸ್ವರ ಮೆಲುದನಿಯಲ್ಲಿ ಅಂದಿತು:</br>
{{gap}}“ಅವರಿಗೆ ಇನ್ನೊಂದು ಅವಕಾಶ ಕೊಟ್ಟು ನೋಡಬಾರದೆ ?'</br>
{{gap}}“ಇದು ಮೂರನೇ ಅವಕಾಶ.. ನನಗೆ ನೇರ ಉತ್ತರಬೇಕು, ಸ್ಪಷ್ಟ ಉತ್ತರ</br> ಬೇಕು. ಉಡಾಫೆ ಮಾತಿನಿಂದ ಪ್ರಯೋಜನವಿಲ್ಲ."</br>
{{gap}}ಸಂಬಂಧಪಟ್ಟ ವನು ಕೂಗಾಡಿದ :</br>
{{gap}}ನೀವು ಹಟ ತೊಟ್ಟರೆ ಇದಿರಿಸ್ಬೇಕಾದೀತು.”</br>
{{gap}}“ಬಂಡಾಯ! ಕಂಡಿದೀನಿ. ನೀವು ಹೊರಡಬಹುದು."</br>
{{gap}}ಹೊರಬಂದವನು ಸೌದಾಮಿನಿಗೆ ಹೊಸಬ, ಜುಜುಬಿ ರಾಜ್ಯ' ಎಂದಿದ್ದರಲ್ಲ</br> ಎಂದಿದ್ದರಲ್ಲ ನಕುಲದೇವ್ ? ನಡುವಯಸ್ಕ, ಚಹರೆಯಿಂದ, ಈಶಾನ್ಯ ಪ್ರಾಂತದವನಿರಬೇಕು</br> ಎನಿಸಿತು ಕಿಷ್ಕಿಂಧೆಯ ಮುಖ್ಯಮಂತ್ರಿಗೆ.</br>
{{gap}}ಒಬ್ಬೊಬ್ಬರಾಗಿ ಬೇರೆ ಮನೂವರು ಬ೦ದರು, ಕಾರ್ಡುಗಳು ಒಳ ಹೋದುವು.</br> ನಾಲ್ಕನೆಯ ವ್ಯಕ್ತಿ ಬಾಬ್ ಕತ್ತರಿಸಿದ ಲಲನೆ.</br>
{{gap}}“ಒಂದೇ ನಿಮಿಷ, ಕೇವಲ ಒಂದು ನಿಮಿಷ" ಎಂದಳು ದ್ವಾರಪಾಲಕನೊಡನೆ.</br> ಮುಖದ ಯಾವ ಸಾಯುವನ್ನೂ ಮಿಸುಕಿಸದೆ ಆತನೆಂದ :</br><noinclude></noinclude>
76e4w9ps381nwozn70lorqfgd2qo2ib
ಪುಟ:ಮಿಂಚು.pdf/೧೦೩
104
20462
317667
219861
2026-05-06T14:05:14Z
Shreelatha.Halemane
7642
/* Validated */
317667
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=97}}
{{gap}}“ಕ್ಷಮಿಸಿ. ಸಂಜೆ ಬನ್ನಿ."</br>
{{gap}}ಆಕೆ ಬಂದ ದಾರಿ ಹಿಡಿದಳು</br>
{{gap}}ನಕುಲದೇವರ ಕೊಠಯಿಂದ ಈಗ ಬೇರೆ ಧ್ವನಿಗಳ ಸಂವಾದ,</br>
{{gap}}ಅಧ್ಯಕ್ಷರ ಕೊಠಡಿಯನೂ ಹೆಸರು ಹಲಗೆಯನೂ ಸೌದಾಮಿನಿ ಕುಳಿತಲ್ಲಿಗೆ ಕಾಣಿ ಸುತ್ತಿದ್ದುವು ಮುಚ್ಚಿದ ಬಾಗಿಲು–ಜವಾನನಿಲ್ಲ. ದ್ವಾರದ ಮೇಲ್ಗಡೆ ಗೋಡೆಯಲ್ಲಿ ಮೊಳೆಗಳನ್ನು ಆಧರಿಸಿ ನಿಂತಿತ್ತು ಗಾಂಧೀಜಿಯ ದೊಡ್ಡ ಚಿತ್ರ.</br>
{{gap}}ಒಳಗಿನ ಸಂಭಾಷಣೆಯ ಮಧ್ಯೆ ಎರಡು ಮಿನಿಟುಗಳಿಗೊ೦ದರ೦ತೆ ಫೋನ್ ಫೂತ್ಕಾರ. ಪರಿಚಿತ "ಹಲೋ."</br>
{{gap}}ನಿನ್ನೆ ತನ್ನನ್ನು ಇದಿರ್ಗೊಂಡಿದ್ದ ವ್ಯಕ್ತಿಯನ್ನು ಕಾಣಲು ಕಾಯುವ ಸ್ಥಿತಿ ಬಂತೆ ತನಗೆ ?- ಎಂದು ಸೌದಾಮಿನಿಗೆ ವಿಸ್ಮಯ.</br>
{{gap}}ಒಳಗಿನಿಂದ ಒಬ್ಬ ಹೊರ ಬ೦ದೊಡನೆ ಜವಾನ, 'ಇನ್ನ ನೀವು' ಎನ್ನುವಂತೆ ಸೌದಾಮಿನಿಯತ್ತ ಬೊಟ್ಟು ಮಾಡಿದ. ಸೌದಾಮಿನಿಯ ದಿಲ್ಲಿ ಪ್ರಭಾವದ ಬಗ್ಗೆ</br> ಅದ್ಭುತ ಚಿತ್ರವನ್ನು ಕಲ್ಪಿಸಿಕೊಂಡಿದ್ದ ಪರಶುರಾಮ ಸ್ವಲ್ಪ ವಿಷಣ್ಣನಾಗಿ ಮುಖ್ಯ</br> ಮಂತ್ರಿಯತ್ತ ನೋಡುತ್ತ ಎದ್ದುನಿಂತ.. “ನೀನು ಕೂತ್ಕೋ” ಎಂದಳು ಮುಖ್ಯ</br>ಮಂತ್ರಿ, ಬ್ರೀಫ್ಕೇಸನ್ನು ಅವನಿಂದ ಪಡೆದು.</br>
{{gap}}ಗರ್ಜಿಸಿದ ರೇಗಾಡಿದ ನಕುಲದೇವ್ ಒಳಗಿರಲಿಲ್ಲ, ಆತ ಚಂಗನೆದು ಕೈ</br> ಕುಲುಕಿ ಸೌದಾಮಿನಿಯನ್ನು ತನ್ನ ಮಗ್ಗುಲು ಕೊಠಡಿಗೆ ಒಯ್ದ , ಇಂಟರ್ಕಾಮ್</br> ನಲ್ಲಿ “ಎರಡು ಕಾಫಿ" ಎಂದ.</br>
{{gap}}“ನೋಡಿದಿಯಾ ಕಾರಾಲಯ ಈಗ ಹೇಗೆ ಕಾಣಿಸ್ತಿದೆ?"</br>
{{gap}}“ಆಳುವ ಪಕ್ಷದ ಗುಂಡಿಗೆ ಎಂದರೆ ಹೀಗೆ ಕೆಲಸ ಮಾಡಬೇಕು!”</br>
{{gap}}“ದೇವಿಯನ್ನು ಸ್ವಲ್ಪ ಕಾಯಿಸಿದೆ."</br>
{{gap}}“ರುಬ್ಬುಗುಂಡು ಶಬ್ದ ಕೇಳಿಸ್ತಿತ್ತಲ್ಲ, ಮಜವಾಗಿತ್ತು."</br>
{{gap}}“ಅಸ್ಸಾಂ ಪ್ರಾಂತ ಘಟಕದ ಕಾರ್ಯದರ್ಶಿ: ಶುದ್ಧ ನಾಲಾಯಕ್,"</br>
{{gap}}"ನನ್ನ ಹೆಸರು ಲಾಯಕ್ ಲಸ್ಟಿನಲ್ಲಿದಯೊ</br>
{{gap}}"ರಾಷ್ಟ್ರದಲ್ಲೇ ನೀನು ಮಾಣಿಕ್ಯ, ನೀನು ಯೋಗಾಸನ ಮಾಡೋದನ್ನ</br>
ನೋಡಬೇಕೂಂತಿತ್ತು, ಅದಕ್ಕೋಸ್ಕರವೆ ಬೆಳಗ್ಗೆ ನಾನು ಬೇಗನೆ ಎದ್ದೆ."</br>
{{gap}}“ಆಸೆ ಬುರುಕ! ನಿಜ ಎಂದರೆ, ಪೀಠಸ್ಥಳಾದ ಮೇಲೆ ಮೊದಲಿನಷ್ಟು ಕ್ರಮ</br> ಬದ್ಧವಾಗಿ ಯೋಗಾಸನ ಆಗ್ತಿಲ್ಲ."</br>
{{gap}}"ಛೆ! ಛೆ! ವೇಳಾಪಟ್ಟಿಗೆ ತಪ್ಪಬಾರದು-ಯಾವತ್ತೂ, ಅಲ್ದೆ , ಬಾಬಾಜಿ</br> ಅಂದಿದ್ದು ನಿನ್ನ ರಹಸ್ಯ ಇರೋದು ಯೋಗಾಸನದಲ್ಲಿ ಅಂತ.”</br>
{{gap}}ಲೇಹ್ಯದ ವಿಷಯ ಇವನಿಗೆ ತಿಳಿಯದು ; ತಾನು ಬಾಯಿಬಿಡಬಾರದು</br>
{{Left|7}}<noinclude></noinclude>
gi30aqle85lvxpdv1mb30z0qdif05g8
ಪುಟ:ಮಿಂಚು.pdf/೧೦೪
104
20463
317668
219858
2026-05-06T14:06:36Z
Shreelatha.Halemane
7642
/* Validated */
317668
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=98|right=ಮಿಂಚು}}
ಎಂದುಕೊಂಡು ಸೌದಾಮಿನಿ, ಬರಿದ್ದೆ ನಕ್ಕಳು. ಮೋಹಕವಾಗಿ. ನಕುಲದೇವ್</br> ಸೌದಾಮಿನಿಯ ಭುಜದ ಮೇಲೆ ಕೈ ಇರಿಸಿದ. ತುಟಿಗಳ ಮೋಹಕನಿಗೆ ಬರಿಯು</br>ವಂತೆ ಮಾಡಿದ.</br>
{{gap}}ಹಲಗೆವಕ್ಷಸ್ಥ ಲಕ್ಕೆ ಟಕ್ಟಕ್ ಎಂದು ಬಡೆದು, ಅಪ್ಪಣೆ ದೊರೆತ ಬಳಿಕ,</br> ಕಾಫಿ ಫ್ಯಾಸ್ಟ್ ತಂದ ಹುಡುಗನನ್ನು ಜವಾನ ಒಳಗೆ ಬಿಟ್ಟ.</br>
{{gap}}“ಭಲೆ ಖಿಲಾಡಿ ನೀವು."</br>
{{gap}}"ಹಿಂದಿಯಲ್ಲಿ ಖಿಲಾಡಿ ಅಂದರೆ ಕ್ರೀಡಾಪಟು</br>
{{gap}}“ನಮ್ಮದರಲ್ಲ ಧ್ವನಿ ಅದೇ, ಕ್ರೀಡೆ ಯಾವುದಾದರೇನು ?"</br>
{{gap}}“ನೀನು ಟೆನ್ನಿಸ್ ಆಡೋದನ್ನು ನೋಡಬೇಕಲ್ಲ?”</br>
{{gap}}“ನೋಡಿಯೇ ನೋಡ್ತೀರಿ. ಮೊದಲು ದಿಲ್ಲಿಯಲ್ಲಿ ಕಿಷ್ಟಿಂಧೆಗೊಂದಿಷ್ಟು</br> ಒಳ್ಳೆಯ ಜಾಗ ಕೋಡಿ. ದೊಡ್ಡ ಕಿಷ್ಕಿಂಧಾ ಭವನ ಕಟ್ಟಿ ಕಟ್ಟಿಸ್ತಿನಿ. ಕಂಟ್ರಾಕ್ಟರನ್ನು</br> ನೀವೇ ಗೊತ್ಮಾಡ್ಕೊಡಿ. ಈಗಿರುವ ಕುಟೀರ ನೋಡಿದೀರಲ್ಲ ? ಅವಮಾನ,ಅವಮಾನ !"</br>
{{gap}}“ಅರ್ಜಿ ಕೊಟ್ಟು ಹೋಗು."</br>
{{gap}}“ಹೂಂ.” </br>
{{gap}}“ಅಂದ ಹಾಗೆ ಮಿನಿ, ನಿನ್ನ ಪ್ರಾಂತದಲ್ಲಿ ಪಕ್ಷದ ಸಮಿತಿಯನ್ನು ಪುನಃ ರಚಿಸ</br>
ಬೇಕು, ಒಬ್ಬ ವ್ಯಕ್ತಿ ಎರಡೂ ಸ್ಥಾನಗಳಲ್ಲಿ ಇರಬಾರದು. ನಮಗೆ (ನಿನಗೆ+</br>ನನಗೆ) ಅನುಕೂಲವಾಗಿರೋ ಒಬ್ಬ ಧುರೀಣನ ಹೆಸರು ಹೇಳು.”</br>
{{gap}}"ಯೋಚಿಸಿದೀನಿ. ಕೃಷ್ಣಪ್ರಸಾದ್ ಆ ಸ್ಥಾನಕ್ಕೆ ಯೋಗ್ಯ ಮನುಷ್ಯ."</br>
{{gap}}“ನಿನ್ನ ಐ, ಸಿ.ಎಸ್. ನವನಿಗೆ ಕಾಗದ ಸಿದ್ಧ ಮಾಡಿದೀಯ ?"</br>
{{gap}}“ಬ್ರೀಫ್ ಕೇಸಿನಲ್ಲಿದೆ.”</br>
{{gap}}“ಚೌಗುಲೆಯನ್ನ ಇಲ್ಲಿ ಇವತ್ತು ರಿಲೀವ್ ಮಾಡಾರೆ. ಬೆಳ್ಳಗೆಯೇ ಆ ಕೆಲಸ</br> ಮಾಡಿದೆ."</br>
{{gap}}“ಜಾಣಪ್ಪಗೊಂದು ಗರ್ವನರ್ ಪದವಿ ? "</br>
{{gap}}“ಅಧ್ಯಕ್ಷರ ಜತೆ ಪ್ರಸ್ತಾಪ ಮಾಡು.. ಮುಂದಿನ ವ್ಯವಸ್ಥೆ ನನ್ನ ಜವಾಬು</br> ದಾರಿ. ಇನ್ನೊಂದು ವಾರದಲ್ಲಿ ಅವನು ಕೇರಳದಲ್ಲಿರಾನೆ. ಭಿನ್ನಮತೀಯರು</br>
ಅಂಟಿಕೊಳ್ಳೋದಕ್ಕೆ ಆಮೇಲೆ ಯಾರೂ ಇರೋದಿಲ್ಲ...ಬಜೆಟ್ ಸಿದ್ಧಗೊಳಿಸೋದಕ್ಕೆ</br> ಮುಂಚೆ ನಿನ್ನ ಅರ್ಥಮಂತ್ರಿಯನ್ನೂ ಅರ್ಥಕಾರ್ಯದರ್ಶಿಯನ್ನೂ ಇಲ್ಲಿಗೆ ಕಳಿಸು.</br> ಯೋಜನಾ ಆಯೋಗದ ಜತೆ ಅವರು ಸಮಾಲೋಚನೆ ನಡೆಸಲಿ."</br>
{{gap}}“ಚೌಗುಲೆಯ ಮೊದಲನೆಯ ಕೆಲಸವೇ ಅದು."</br>
{{gap}}"ಅವನು ನಾಳೆ ಪೂರ್ವಾಹ್ನ ನಿನ್ನನ್ನು ಕುಟೀರದಲ್ಲಿ ಕಾಣಾನೆ. ಆಮೇಲೆ</br> ವಿಮಾನ ಏರ್ತಾನೆ.”</br><noinclude></noinclude>
tg0phv1wahng5orp93te9atey1jneyh
ಪುಟ:ಮಿಂಚು.pdf/೧೦೫
104
20464
317669
219856
2026-05-06T14:07:34Z
Shreelatha.Halemane
7642
/* Validated */
317669
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=99}}
{{gap}}"ಐ.ಸಿ.ಎಸ್.ನವನಿಗೆ ಪೋನ್ ಮಾಡಿದಿಯಾ?"</br>
{{gap}}"ಬೆಳಗ್ಗೇನೆ ಮಾಡ್ದೆ."</br>
{{gap}}"ಫೈನ್."</br>
{{gap}}"ನೀವಲ್ಲವೆ ನನ್ನ ಗುರು? ನಿಮ್ಮ ಗುಣದ ಸ್ವಲ್ಪ ಅಂಶವಾದರೂ ಶಿಷ್ಯೆಯಲ್ಲಿ</br>
ಇರಬೇಡವೆ?"</br>
{{gap}}"ಇವತ್ತು ಸಂಜೆ ಪ್ರಧಾನಿಯವರನ್ನ ಕಾಣ್ತೇನೆ."</br>
{{gap}}"ನಾನು ಬಂದಿರೋ ವಿಷಯ__"</br>
{{gap}}ಹೇಳ್ತೇನೆ, ಪಕ್ಷದ ನಿಧಿಗೆ ನಿನ್ನ ರಾಜ್ಯದ ವಂತಿಗೆ ಎಷ್ಟು ಅನ್ನೋದನ್ನ</br>
ನೀನು ವಾಪಸಾಗೋದಕ್ಕೆ ಮುಂಚೆ ತಿಳಿಸ್ತೀನಿ."</br>
{{gap}}ನಕುಲದೇವನೂ ಸೌದಾಮಿನಿಯೂ ಮುಂದುಗಡೆಯ ಕೊಠಡಿಗೆ ಬಂದಿದ್ದರು.</br>
ಆ ತನಕ ತಡೆಹಿಡಿದಿದ್ದ ಪೋನ್ ಕರೆಗಳು ಒಂದಾದ ಮೇಲೊಂದು ಬಂದುವು.</br>
{{gap}}"ನೀವು ದುಡಿಯೋದನ್ನು ನೋಡೋದೇ ಒಂದು ಮಹಾನ್ ಅನುಭವ."</br>
{{gap}}"ನಾಳೆ ಸಂಪಾದಕರ ಜತೆ ಯಾವ ಭಾಷೇಲಿ ಮಾತಾಡ್ತೀಯಾ?"</br>
{{gap}}"ಇಂಗ್ಲೀಷಾದರೆ ಇಂಗ್ಲೀಷು. ಹಿಂದೂಸ್ಥಾನಿಯಾದರೆ ಹಿಂದೂಸ್ಥಾನಿ."</br>
{{gap}}"ಹತ್ತು ಜನ ಸಂಪಾದಕರನ್ನು ಕರೆಯೋದಕ್ಕೆ ಹೇಳಿದೇನೆ. (ಮೇಜಿನ</br>
ಮೇಲೆ ಅತ್ತಿತ್ತ ಹುಡುಕಿ)ತಗೋ ಪಟ್ಟಿ.ನಿನ್ನ ಕುಟೀರದ ಮನುಷ್ಯನೂ ನಾಳೆ ಬೆಳಗ್ಗೆ</br>
ಅವರಿಗೆ ಪೋನ್ ಮಾಡಲಿ."</br>
{{gap}}ಅಧ್ಯಕ್ಷರು ಬಂದಿದಾರೆ-ಎಂದು ಇಂಟರ್ ಕಾಮ್ ತಿಳಿಸಿತು. ನಕುಲದೇವ್</br> ಅವರೊಡನೆ ಮಾತನಾಡಿದ. "ಸೌದಾಮಿನಿ ಬಹೆನ್ ಭೇಟಿಗೆ ಬರ್ತಿದ್ದಾರೆ" ಎಂದ.</br>
{{gap}}"ಯಾರಾದರೂ ಹೋಗಿ ಹಾಳು ಹರಟೆಗೆ ಕೂತ್ಕೊಳ್ಳೋದಕ್ಕೆ ಮೊದಲೇ</br>
ನೀನು ಅವರ ಮುಂದೆ ಪದ್ಮಾಸನ ಹಾಕು" ಎಂದು ನುಡಿದು ಸೌದಾಮಿನಿಯನ್ನು</br>
ಎಬ್ಬಿಸಿದ.</br>
{{gap}}"ಚೌಗುಲೆಗೆ ಕಾಗದ?"</br>
{{gap}}"ಬೆಳಗ್ಗೆ ನೀನೇ ಕೊಡು."</br>
{{gap}}"ಈ ಗಲಾಟೇಲಿ ನಿಮ್ಮನ್ನು ಇವತ್ತು ಪುನಃ ನೋಡೋದಕ್ಕೆ ಆಗುತ್ತೊ</br>
ಇಲ್ಲವೊ?"</br>
{{gap}}"ರಾತ್ರೆ ಕುಟೀರಕ್ಕೆ ಪೋನ್ ಮಾಡ್ತೇನೆ."</br>
{{gap}}"ನಿನ್ನೆಯ ಅಯಾಸ ಪೂರ್ತಿ ಪರಿಹಾರವಾಗಿಲ್ಲ. ಇವತ್ತು ಬೇಗನೆ </br>
ಮಲಕೊಳ್ತೇನೆ,"</br>
{{gap}}ನಕುಲದೇವ್ ಪರೀಕ್ಷಕ ನೋಟದಿಂದ ಸೌದಾಮಿನಿಯ ಕಣ್ಣುಗಳನ್ನು ನೋಡಿದ,</br>
ಆ ಕ್ಷಣದಲ್ಲಿ ಅವು ಮುಚ್ಚಿದ್ದುವು.</br>
{{gap}}ಹೊರಗೆ ಬಂದ ಸೌದಾಮಿನಿ ಕಿಕ್ಕಿರಿದು ನೆರೆದಿದ್ದ ಜನರನ್ನು ಕಂಡಳು.</br><noinclude></noinclude>
dbhf15nwiw96mqntyhqiplk18zucpvo
ಪುಟ:ಮಿಂಚು.pdf/೧೦೬
104
20465
317670
219854
2026-05-06T14:08:52Z
Shreelatha.Halemane
7642
/* Validated */
317670
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=100|right=ಮಿಂಚು}}
ಪರಶುರಾಮನನ್ನು ಅಲ್ಲಯೇ ಕೂತಿರುವಂತೆ ಸನ್ನೆ ಮಾಡಿದಳು, ಆಗಲೇ ಇಬ್ಬರನ್ನು</br>
ಜವಾನ ಒಳಗೆ ಕಳಿಸಿದ್ದ. ಕಿಷ್ಕಿಂಧೆಯ ಮುಖ್ಯಿಮಂತ್ರಿಯತ್ತ ಅವನು ಲಕ್ಷ್ಯ</br>
ಹರಿಸಲೆ ಇಲ್ಲ.</br>
{{gap}}ಇದು ತನ್ನದೇ ಮನೆ ಎನ್ನುವಂತೆ ಸೌದಾಮಿನಿ ಅಧ್ಯಕ್ಷರ ಸಮ್ಮುಖಕ್ಕೆ ತೇಲಿ</br>
ಹೋದಳು.</br>
{{gap}}"ಬಾ" ಎಂದು ಅಧ್ಯಕ್ಷ ಕರೆಯುತ್ತಿದ್ದಂತೆ ಸೌದಾಮಿನಿ ಪಾದಗಳಿಗೆ ನಮಿಸಿ</br>
ದಳು. ಕೊಠಡಿಯ ನೆಲವನ್ನು ಆವರಿಸಿತ್ತು ದಪ್ಪನೆಯ ಹಾಸುಗೆ, ಗೋಡೆಗಳು</br>ದ್ದಕ್ಕೂ
ಒರಗಲು. ದಿಂಬುಗಳು.</br>
{{gap}}"ಏನು ಹೇಳ್ತಿದೆ ನಮ್ಮ ಕಿಷ್ಕಿಂಧೆ? ಮಳೆ__ಬೆಳೆ?"</br>
{{gap}}"ತಜ್ಞರ ಪ್ರಕಾರ ಇದು ಸುಭಿಕ್ಷದ ವರ್ಷ."</br>
{{gap}}"ತಜ್ಞರು ಇರಲಿ. ನೀನು ಪರಂಪರೇನ ಬಿಡಬೇಡ. ಜ್ಯೋತಿಷ್ಕರನ್ನೂ ಕೇಳು."</br>
{{gap}}"ತಾವು ನನ್ನ ತಂದೆ ಸಮಾನ. ತಮ್ಮಲ್ಲಿ ಹೇಳದೆ ಇದ್ದೇನಾ? ಆಗಲೇ</br>
ಜ್ಯೋತಿಷ್ಕರನ್ನು ಕೇಳಿದ್ದಾಯಿತು. ಸುಭಿಕ್ಷದ ವರ್ಷ ಅಂತ ಅವರೇ ಹೇಳಿದ್ರು,"</br>
{{gap}}"ಜಾಣಪ್ಪ ಚೆನ್ನಾಗಿದಾರಾ?"</br>
{{gap}}"ಇದಾರೆ. ಎರಡು ರಾಜ್ಯಪಾಲ ಹುದ್ದೆಗಳು ಖಾಲಿಯಾಗ್ತಿವೆ,"</br>
{{gap}}"ಹೌದು. ಕಾಶ್ಮೀರ ಮತ್ತು ಕೇರಳ,"</br>
{{gap}}"ಕಾಶ್ಮೀರದ ಚಳಿ ತಡಕೊಳ್ಳೋದು ಅವರಿಂದ ಆಗಲಾರದು. ಕೇರಳ ವಾಸಿ,</br>
ಅವರು ರಾಜ್ಯಪಾಲರಾಗಿ ಹೋಗೋದು ನಮ್ಮ ಪಕ್ಷದ ಹಿತದ ದೃಷ್ಟಿಯಿಂದ ಮುಖ್ಯ.</br>
ನಕುಲಧೇವ್ ಜಿ ತಮಗೆಲ್ಲ ಹೇಳಿರಬಹುದು,"</br>
{{gap}}"ಹ್ಞ ಹ್ಞ ಹೇಳಿದಾರೆ. ಪ್ರಧಾನಿಯವರ ಜತೆ ಮಾತಾಡ್ತೇನೆ. ಅವರು</br> ಒಪ್ತಾರೆ."</br>
{{gap}}"ನನ್ನ ಎದೆಯ ಮೇಲಿಂದ ದೊಡ್ಡ ಭಾರ ಇಳಿಸಿದ ಹಾಗಾಯ್ತು."</br>
{{gap}}"ಸೌದಾ ಬೇಟಿ, ಒಂದು ವಿಷಯ ನಿನಗೆ ಗೊತ್ತಿದೆಯೊ ಇಲ್ವೊ? ಕಿಷ್ಕಿಂಧೆಗೆ</br>
ಪಕ್ಷದ ಮುಖ್ಯಸ್ಥೆಯಾಗಿ ನಿನ್ನನ್ನು ಕಳಿಸೋದಕ್ಕೆ ಕೆಲವರ ಪ್ರಬಲ ವಿರೋಧವಿತ್ತು.</br>
ಅವರಲ್ಲೊಬ್ಬ ನಿನ್ನ ನಕುಲದೇವ್. ಅವನಿಗೆ ತಿಳಿಯ ಹೇಳ್ದೆ. ಉಳಿದವರ ಬಾಯಿ</br> ಮುಚ್ಚಿಸ್ದೆ. ನಿನ್ನ ಸಾಮರ್ಥ್ಯದ ವಿಷಯದಲ್ಲಿ ನನಗೆ ಸಂಪೂರ್ಣ ವಿಶ್ವಾಸವಿತ್ತು:</br>
ನನ್ನದು ಸರಿಯಾದ ತೀರ್ಮಾನ ಅನ್ನೋದು ಈಗಾಗಲೇ ಜಗಜ್ಜಾಹೀರಾಗಿದೆ."</br>
{{gap}}"ತಮ್ಮ ಪಿತೃವಾತ್ಸಲ್ಯಕ್ಕಾಗಿ ನಾನು ಚಿರಋಣಿ."</br>
{{gap}}"ಯಾವುದೇ ಸಂಘಟನೆಗಾಗಿ, ಮಹೋದ್ದೇಶಕ್ಕಾಗಿ, ಹಣ ಸಂಗ್ರಹಿಸೋದು</br>
ತಪ್ಪಲ್ಲ, ಮಹಾತ್ಮಾಜಿಯೂ ಅದನ್ನು ಮಾಡ್ತಿದ್ದರು. ಆದರೆ ನಾವು ಧನಪಿಶಾಚಿ</br>
ಗಳಾಗಬಾರದು. ಜನತೆ ನಮ್ಮ ಕೈಗಿತ್ತಿರುವ ಅಧಿಕಾರದ ದುರುಪಯೋಗ ಸಲ್ಲದು,</br>
ಸೇವೆ ಸ್ತುತ್ಯ. ಸೇವನೆ ಅನಾಚಾರ."</br><noinclude></noinclude>
pjav80w9jp4tty9653uizp80gz26gse
ಪುಟ:ಮಿಂಚು.pdf/೧೦೭
104
20466
317671
219852
2026-05-06T14:09:56Z
Shreelatha.Halemane
7642
/* Validated */
317671
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=101}}
{{gap}}"ತಮ್ಮ ಪ್ರವಚನ ಕೇಳ್ತಾ ಇದ್ದರೆ. ಅಧಿಕಾರ ತ್ಯಜಿಸಿ ಇಲ್ಲಿಗೇ ಬಂದು</br> ಬಿಡೋಣ ಅನಿಸ್ತದೆ."</br>
{{gap}}"ಜನ ಹಿತವೇ ಪಕ್ಷದ ಹಿತ. ಪಕ್ಷಕ್ಕೆ ಒಳ್ಳೆಯದಾಗಲೀಂತ ನಿನ್ನನ್ನು ಅಲ್ಲಿಗೆ</br>
ಕಳಿಸಿದೆವು. ಅಧಿಕಾರ ಸೂತ್ರ ನಿನ್ನ ಕೈಗೆ ಬಂತು. ಈಗ ಪಕ್ಷದ ಹಿತ ಜನಹಿತ</br>
ಎರಡನ್ನೂ ನೀನು ಸಾಧಿಸಬೇಕು."</br>
{{gap}}ಸೌದಾಮಿನಿಗೆ ಅನಿಸಿತು. ಈ ವಿಚಾರ ಸರಳವಲ್ಲ; ಗಾಢ, ಗೂಢ. ಜಗ</br>
ದಲಪುರದ ಬಾಬಾಜಿಯ ಪ್ರಸ್ತಾಪ ಬಂದಿರಲಿಲ್ಲ. ಬಾಬಾಗೆ ಈ ಅಧ್ಯಕ್ಷನೂ ಬೇಕು</br>
ಮಹಾ ಕಾರ್ಯದರ್ಶಿಯೂ ಬೇಕು. ಬಾಲ್ಯದಲ್ಲಿ ಕಲಿತಿದ್ದ ಒಂದು ಹಾಡಿನ ಸಾಲು</br> ನೆನಪಾಯಿತು: 'ಯಾರಿಗೆ ಯಾರುಂಟು ಅರಿವಿನ ಸಂಸಾರ ?' ಜತೆಯಲ್ಲೆ ಸ್ವರ</br>
ಪಡೆಯಲು ಚಡಪಡಿಸಿತು: 'ಯಾರು ಹಿತವರು ನಿನಗೆ ಈ ಮೂವರೊಳಗೆ?'</br>
ಮುಖ್ಯಮಂತ್ರಿಯ ಒಳದನಿ ನುಡಿಯಿತು: ಪ್ರಧಾನಿಯನ್ನೂ ಸೇರಿಸಿದರೆ 'ಈ</br>
ನಾಲ್ವರೊಳಗೆ' ಆಗ್ತದೆ ಏನೇ ಇರಲಿ ; ಮಹದಾಸೆಯ ಕಡಲಿಗೆ ತನ್ನನ್ನು ತೇಲಿ</br>
ಬಿಟ್ಟವರು ಧರ್ಮೇಂದರ್ ಬಾಬಾ. ಅವರಿಗೆ ತನ್ನ ನಿಷ್ಠೆ ಅಚಲ.</br>
{{gap}}ಅವಳ ಮೌನ ಅಧ್ಯಕ್ಷರಿಗೆ ಇಷ್ಟವಾಯಿತು.</br>
{{gap}}"ಕಿಷ್ಕಿಂಧೆಯಲ್ಲಿ ಮದ್ಯಪಾನ ನಿಷಿದ್ಧ ಅಲ್ಲವೆ ?'</br>
{{gap}}"ಈಗ ನಿಷಿದ್ಧ. ಆದರೆ ಇನ್ನು ಎಷ್ಟು ಕಾಲ ಹೀಗಿರುತ್ತೋ ಹೇಳಲಾರೆ.</br>
ನೆರೆಯ ಎರಡು ರಾಜ್ಯಗಳಲ್ಲಿ ಹೆಂಡ ಹರೀತಿರೋದರಿಂದ.."</br>
{{gap}}"ನನಗೆ ಗೊತ್ತು. ನಮ್ಮ ಭೂಮಿಯಲ್ಲಿ ಇದು ಹಲವು ಸಹಸ್ರ ವರ್ಷ</br>
ಹಳೆಯ ಚಾಳಿ, ನಮ್ಮ ಪೂರ್ವಜರು ಕುಡೀತಿದ್ದ ಸೋಮರಸ ಏನು ಅಂದ್ಕೊಂಡೆ?</br>
ಯಜ್ಞ ಯಾಗಾದಿಗಳಲ್ಲಿ ದೇವ ದೇವತೆಗಳಿಗೂ ಸೋಮರಸ ಅರ್ಪಿಸ್ತಿದ್ದರು. ನಾವು</br>
ಹೋಗ್ತಿರೋದು ಮುಂದಕ್ಕೊ ಹಿಂದಕ್ಕೊ ಗೊತ್ತಾಗ್ತಿಲ್ಲ."</br>
{{gap}}ಇಂಟರ್ ಕಾಮ್ ಬಸ್ ಮಾಡಿತು.</br>
{{gap}}"ಚಾಚಾಜಿ. ಚೌಧುರಿ ಸಾಹೆಬ್ ಬಂದಿದ್ದಾರೆ. ಕಳಿಸ್ಲಾ ?"</br>
{{gap}}"ಹ್ಞ."</br>
{{gap}}"ಅಧ್ಯಕ್ಷರೆಂದರು :</br>
{{gap}}"ಸರಿ, ಬೇಟಿ. ಮುಂದಿನ ಸಲ ನೀನು ದಿಲ್ಲಿಗೆ ಬಂದಾಗ ಭೇಟಿಯಾಗೋಣ.</br>
ಯಾವತ್ತಾದರೊಮ್ಮೆ ನಾನೇ ಕಿಷ್ಕಿಂಧೆಗೆ ಬಂದರೂ ಬಂದೆ."</br>
{{gap}}"ಆ ದಿವಸ ನನ್ನ ಜೀವನದ ಮಹಾ ಸುದಿನವಾಗ್ತದೆ."</br>
{{gap}}ನಮಸ್ಕರಿಸುತ್ತ ಅವಳೆದ್ದು ಹೊರಟಳು. ಚೌಧುರಿ ಬರುತ್ತಿದ್ದ. ಕುತೂ</br>
ಹಲದಿಂದ ನೋಡಿದ. ಆಕೆ ಯಾರು ಎಂಬುದನ್ನು ನಕುಲದೇವ್ ಆಗಲೆ ಹೇಳಿದ್ದ.</br>
ಹೋಗುವ ಗಂಟೇನು ?</br>
{{gap}}"ನಮಸ್ತೆ" ಎಂದ.<noinclude></noinclude>
b0l8yrg13w6it9yva327waznqhynrlf
ಪುಟ:ಮಿಂಚು.pdf/೧೦೮
104
20467
317672
214934
2026-05-06T14:31:18Z
Shreelatha.Halemane
7642
/* Validated */
317672
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=102|right=ಮಿಂಚು}}
{{gap}}ಮುಗುಳುನಗುತ್ತ ವಂದನೆ ಸ್ವೀಕರಿಸಿ, 'ಯಾರೋ ಉತ್ತರಪ್ರದೇಶದವನಿರ</br>
ಬೇಕು' ಎಂದುಕೊಳ್ಳುತ್ತ. ಸೌದಾಮಿನಿ ಮುಂದಕ್ಕೆ ಹೆಜ್ಜೆ ಇಟ್ಟಳು. ಕುಳಿತೋ</br>
ನಿಂತೋ ತಮ್ಮ ಸರದಿ ಕಾಯುತ್ತಿದ್ದವರು ಇನ್ನೂ ಇದ್ದರು, ಅವರೆಡೆಯಿಂದ</br> ಪರಶುರಾಮ ಎದ್ದು ಬಂದು ಬ್ರೀಫ್ ಕೇಸ್ ಪಡೆದುಕೊಂಡ.</br>
{{gap}}ಕೆಳಗೆ ದ್ವಾರಪಾಲಕ "ಸೆಲ್ಯೂಟ್, ಮಾತಾಜಿ," ಎಂದ. ಸೌದಾಮಿನಿಯ</br>
ಮನಸ್ಸಿನಲ್ಲಿ 'ಜಾಣ ಮುದಿಯ' ಎಂಬ ಮೆಚ್ಚುಗೆಯ ಪದ ರೂಪುಗೊಂಡಿತು.</br>
{{gap}}ಟ್ಯಾಕ್ಸಿಯವನಿಗೆ ಆಕೆ ಅಂದಳು :</br>
{{gap}}"ಕನ್ನಾಟ್ ಪ್ಲೇಸಿಗೆ ಹೋಗು."</br>
{{gap}}ಕೈಯಲ್ಲಿ ಕಾಸಿಲ್ಲದಿರುತ್ತಿದ್ದ ಹಳೆಯ ದಿನಗಳಲ್ಲೂ ಆ ಸ್ಥಳ ಸೌದಾಮಿನಿಗೆ</br>
ಇಷ್ಟವಾಗಿತ್ತು.</br>
{{gap}}ಪರಶುರಾಮ ಬೆರಗುಗಣ್ಣಿನಿಂದ ದಿಲ್ಲಿ ವೈಭವದ ತುಣುಕನ್ನು ನೋಡಿದ.</br>
{{gap}}ಸಂಜೆಯಾಗುತ್ತಿದ್ದಂತೆ ಟ್ಯಾಕ್ಸಿ ಕುಟೀರದ ಮುಂದೆ ನಿಂತಿತು. ಮಾನ್ಯ</br>
ಪ್ರವಾಸಿ ಒಳ ಹೋದೊಡನೆ ಫೆರ್ನಾಂಡೀಸ್ ಬಂದು ಎಷ್ಟನ್ನೋ ಬರೆಸಿದ.</br>
ಎಷ್ಟನ್ನೋ ಕೊಟ್ಟ. ವೃತ್ತಿ ಬಾಂಧವನ ಆ ಚಟುವಟಿಕೆಯಲ್ಲಿ ಪರಶುರಾಮ ತಲೆ</br> ಹಾಕಲಿಲ್ಲ. ಫೆರ್ನಾಂಡೀಸ್
ಕಾಣಿಸಿದೊಡನೆ ಆತನಿಗೆ ಹೇಳಿ, ಸ್ನಾನದ ಮನೆ ಸೇರಿದ.</br>
"ಈಗಲೇ ಹೀಗೆ. ಕಡು ಬೇಸಗೆಯಲ್ಲಿ ಇಲ್ಲಿ ಜನ ಬೆಂದು ಹೋಗೋದೇ ಖಚಿತ,"</br>
ಎಂದುಕೊಳ್ಳುತ್ತ.</br>
{{gap}}ಪರಶುರಾಮ ಮೈಯಿಂದ ಇದ್ದ ಮತ್ತು ಇಲ್ಲದ ಕೊಳೆ ತೊಳೆಯುತ್ತಿದ್ದಂತೆ</br>
ಸೌದಾಮಿನಿ ಸ್ವಲ್ಪ ಅಡ್ಡಾದಳು. ಪಾದಗಳು ಜುಮು ಜುಮು ಎಂದುವು. ಕೆನ್ನೆಯ</br>
ಒಂದು ಬದಿ ಟಿಪಟಿಪನೆ ಸಿಡಿಯ ತೊಡಗಿತು. ಚಿಂತೆ ಅಡರಿತು. ಯಾಕೆ ಹೀಗೆ ?</br>
ಯಾರಾದರೂ ಡಾಕ್ಟರನ್ನು ಕರೆಸೋಣವೆ ? ಇಲ್ಲಿರುವವರು ಮಾತಾಡಿಕೊಳ್ಳುತ್ತಾರೆ.</br>
ವೈದ್ಯ ಪರೀಕ್ಷೆಗೆ ಸೌದಾಮಿನಿ ಒಳಗಾಗುವುದೆಂದರೇನು ? ತನ್ನ ಆರಾಧಕರು</br>
ವ್ಯಥಿತರಾಗಬಹುದು. ಆದರೆ ತನ್ನನ್ನು ಇಷ್ಟಪಡದವರು ? ಸುದ್ದಿಗೆ ಉಪ್ಪು</br>
ಖಾರ ಹಚ್ಚಬಹುದು.</br>
{{gap}}'ಬಾಬಾಜಿ' 'ಬಾಬಾಜಿ' ಎಂದು ಸಣ್ಣನೆ ನರಳಿದಳು. ಅವರೆಂದಿದ್ದರು :</br>
"ಕಾಮನೆಗಳನ್ನು ಹತೋಟಿಯಲ್ಲಿಟ್ಟುಕೋ. ಇಲ್ಲದೆ ಹೋದರೆ, ಈ ವರ್ಷ ಇಲ್ಲಿ</br>
ನೀನು ಗಳಿಸಿದ್ದೆಲ್ಲ ವ್ಯರ್ಥವಾಗ್ತದೆ." ಬಹಳ ದಿನ ಆ ಎಚ್ಚರಿಕೆಯನ್ನು ತಾನು</br>
ಮರೆತಿರಲಿಲ್ಲ. ಆದರೆ, ಕ್ರಮೇಣ ? ಬಾಬಾಜಿ ತನಗೆ ಹೆದ್ದಾರಿ ಹಾಕಿ ಕೊಟ್ಟರು.</br>
ಆದರೆ ತಾನು ?</br><noinclude></noinclude>
4873psefe1o3l94lxsxxtucm6qmb4wp
ಪುಟ:ಮಿಂಚು.pdf/೧೦೯
104
20468
317673
214893
2026-05-06T14:32:36Z
Shreelatha.Halemane
7642
/* Validated */
317673
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=103}}
{{gap}}ಜವಾನ ಬಂದು ಕೇಳಿದ :</br>
{{gap}}"ದೀಪ ಹಾಕಲಾ ಮಾತಾಜಿ ?"</br>
{{gap}}"ಹೂಂ."</br>
{{gap}}ದೀಪಗಳು ಕಣ್ಣನ್ನು ಚುಚ್ಚಲಿಲ್ಲ. ಆದರೂ ಎವೆ ಮುಚ್ಚಿಕೊಳ್ಳಬೇಕು ಎನಿ</br>
ಸಿತು. ಪರಶುರಾಮ ಸ್ನಾನ ಮುಗಿಸಿ ಬರುವುದರೊಳಗೆ ತಾನು ಎದ್ದು ಕುಳಿತಿರ</br>
ಬೇಕು. ಸಿತಾರಾ ? ಊಹೂಂ. ಸರಿಯಲ್ಲ. ಬಾ, ಪರೀಕ್ಷಿಸಿ ನೋಡುತ್ತೇನೆ</br>
ಎಂದರೆ ಪರಶುರಾಮ ಬೇಡ ಎನ್ನುತ್ತಾನೆಯೆ ? ಫೆರ್ನಾಂಡೀಸ್ ? ಛೆ! ಛೆ!</br>
ಹೀಗಾದರೆ ಇಲ್ಲಿರುವ ಎಲ್ಲರನ್ನೂ ನಾನು ತೂಗಲು ಹೊರಟೇನು.... ಇದು ಒಳ್ಳೆಯ</br>
ದಲ್ಲ. ತನಗೆ ಇದರಿಂದ ಒಳ್ಳೆಯದಾಗುವುದಿಲ್ಲ, ಅಲ್ಲ_ಕೆಡುಕಾಗುತ್ತದೆ.</br>
{{gap}}ಆಕೆ ಮಂಚದಿಂದಿಳಿದು ಸೋಫಾದ ಮೇಲೆ ಕುಳಿತಳು. ಆರು ಗಂಟೆಯ</br>
ಸುದ್ದಿ ಪ್ರಸಾರ ತಪ್ಪಿ ಹೋಗಿತ್ತು. ಒಂಭತ್ತು ಗಂಟೆಯದನ್ನು ಮರೆಯದೆ ಕೇಳ</br>
ಬೇಕು. ನಾಳೆ ಬೆಳಗ್ಗೆ ಚೌಗುಲೆ ಬರಬಹುದು. ಮಧ್ಯಾಹ್ನ ಸಂವಾದ ಭೋಜನ,</br>
ಸಂಪಾದಕರೊಂದಿಗೆ. ಒಂದಿಷ್ಟು ಟಿಪ್ಪಣೆ ತಯಾರಿಸಬೇಕು. ಶುಚಿರ್ಭೂತನಾದ </br>
ಪರಶುರಾಮ ಬಂದ.</br>
{{gap}}"ಪರಶು, ಫೆರ್ನಾಂಡೀಸ್ ಗೆ ಆ ಸಂಪಾದಕರ ಪಟ್ಟಿ ಕೊಡು_ಬ್ರೀಫ್ ಕೇಸಿನಲ್ಲಿದೆ.</br>
ಅವನನ್ನು ಒಳಗೆ ಕರಿ."</br>
{{gap}}ಫೆರ್ನಾಂಡೀಸ್ ಬಂದು ವಿನೀತನಾಗಿ ನಿಂತ. ಸಂವಾದ ಭೋಜನ__ ಅದೂ</br>
'ಹೋಟೆಲ್ ಆಶೋಕ'ದಲ್ಲಿ-ವಿಷಯ ತಿಳಿದು, ಅವನಿಗೆ ಖುಶಿಯಾಯಿತು.</br>
{{gap}}"ಆರೆಂಟು ಪತ್ರಕರ್ತರ ಪರಿಚಯ ನನಗಿದೆ, ಮಾತಾಜಿ."</br>
{{gap}}"ಆ ಪಟ್ಟಿ ಓದಿ."</br>
{{gap}}"ಇವರೆಲ್ಲ ಸಂಪಾದಕರು. ನನಗೆ ಅಪರಿಚಿತರು."</br>
{{gap}}ಸೌದಾಮಿನಿ ನಕ್ಕಳು.</br>
{{gap}}"ನಾವೆಲ್ಲ ಹನ್ನೆರಡು ಘಂಟೆಗೆ ಅಶೋಕದಲ್ಲಿರಬೇಕು. ಹತ್ತು ಘಂಟೆಗೆ</br>
ಆಮಂತ್ರಿತರ ಮನೆಗಳಿಗೆ ಫೋನ್ ಹಾಕಿ ಲಂಚ್ ನೆನಪು ಮಾಡಿ. ಪ್ರತಿಯೊಬ್ಬರ</br>
ಕಾರ್ಯಲಯಕ್ಕೆ ಒಂದು ಗಂಟೆಗೆ ಸರಿಯಾಗಿ ಟ್ಯಾಕ್ಸಿ. ಸ್ವಯಂಸೇವಕರು ಬೇಕಾಗ</br>
ಬಹುದು. ನಕುಲದೇವ್ ರಿಗೆ ಫೋನ್ ಮಾಡಿ ಸಹಾಯ ಕೇಳಿ. ಈಗ ಪಕ್ಷದ ಕಚೇರೀಲಿ</br>
ಇದ್ದಾರೆ."</br>
{{gap}}ಫೆರ್ನಾಂಡೀಸ್ ಫೋನ್ ಮಾಡಿದ. ಉತ್ತರ ಬಂತು ;</br>
{{gap}}"ನಿಮ್ಮ ಚೀಫ್ ಮಿನಿಸ್ಟರ್ ಅಲ್ಲಿಲ್ಲವಾ ?"</br>
{{gap}}"ಇದಾರೆ."</br>
{{gap}}"ಅವರನ್ನು ಕೊಡು."</br>
{{gap}}ಸೌದಾಮಿನಿ ಎದ್ದು ಬಂದಳು:</br><noinclude></noinclude>
74355n7pxwrk32ma0d6y2o5x2oplsrq
ಪುಟ:ಮಿಂಚು.pdf/೧೧೦
104
20469
317674
214938
2026-05-06T14:35:00Z
Shreelatha.Halemane
7642
/* Validated */
317674
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=104|right=ಮಿಂಚು}}
{{gap}}"ಏನೂ ಪರವಾಗಿಲ್ಲ. ಹತ್ತು ಲಕ್ಷುರಿ ಟ್ಯಾಕ್ಸಿ ಕರೆತರೋದು ವಾಪಸು</br> ಬಿಡೋದು ಎಲ್ಲ ನನ್ನ ಜವಾಬ್ದಾರಿ."</br>
{{gap}}"ನೀವೂ ಬರ್ತೀರ ?"</br>
{{gap}}"ನಾನು ಬಂದರೆ ಭಾರತವಾಗ್ತದೆ, ಸೌದಾಮಿನಿ ಒಬ್ಬರಿದ್ದರೆ ಮಾತ್ರ ಅದು </br>ಕಿಷಿಂಧೆ."</br>
{{gap}}"ಥಾಂಕ್ಸ್ ದೇವ್ಜಿ," </br>
{{gap}}ಸೌದಾಮಿನಿ ಫೆನಾ೯ಂಡೀಸ್ಗೆ ಅಂದಳು; </br>
{{gap}}"ಸಿತಾರಾ ನಾಳೆಯೂ ಮಧಾಹ್ನವೇ ಬರ್ತಾಳೊ ?" </br>
{{gap}}"ಸಿ.ಎಂ. ಇಲ್ಲಿ ಇರೋವರೆಗೂ ಫುಲ್ ಟೈಮ್ ದುಡಿಬೇಕೂಂತ ಹೇಳಿದೀನಿ."</br>
{{gap}}"ಬುದ್ಧಿ ಓಡಿಸಿದೀರಿ, ಪರವಾಗಿಲ್ಲ, ಈ ಒಂದಿಷ್ಟು ಟಿಪ್ಪಣಿ ಬರಕೊಳ್ಳಿ." </br>
{{gap}}"ಭೋಜನ ಸಂವಾದಕ್ಕೆ ಟಿಪ್ಪಣಿ, ನಾಳೆಯ ದಿನಾಂಕ ಹಾಕಿ."</br>
{{gap}}ಟಿಪ್ಪಣಿ ಪುಸ್ತಕದೊಡನೆ ಫೆರ್ನಾಂಡೀಸ್ ಸಿದ್ಧನಾದ.</br>
{{gap}}"ಬರಕೊಳ್ಳಿ. ಆದಿಕವಿ ವಾಲ್ಮೀಕಿ ಅಮರಗೊಳಿಸಿರುವ ನಾಡು ಕಿಷ್ಕಿಂಧೆ. ದೇಶದಲ್ಲೇ ಅತಿ ದೊಡ್ಡದಾದ ಜಲವಿದ್ಯುತ್ ಸ್ಥಾವರ. ಕಾರ್ಮಿಕ ಗಲಾಟೆಗಳಿಲ್ಲ,</br> ಔದ್ಯಮಿಕ ರಂಗದ ಶಾಂತಿ' ಹೇರಳ ನೀರು-ವಿದ್ಯುತ್ ಇವೆಲ್ಲ ಹೊಸ ಉದ್ಯಮ </br>ಸ್ಥಾಪಿಸ ಬಯಸುವವರಿಗೆ ಸ್ವಾಗತ ಕೋರುತ್ತವೆ. ಚಿತ್ರಾವತಿಯ ಉಕ್ಕಿನ ಕಾರ್ಖಾನೆ </br>ಜಗತ್ಪಸಿದ್ಧ, ರೇಷ್ಮೆ ಉತ್ಪಾದನೆಯಲ್ಲಿ ನಮಗೆ ಮೊದಲ ಸ್ಥಾನ."</br>
{{gap}}ಬರೆದುಕೊಳ್ಳುತ್ತಿದ್ದ ಫೆರ್ನಾಂಡೀಸ್ಗೆ ಥಟ್ಟನೆ ನೆನಪಾಯಿತು. </br>
{{gap}}"ಒಂದು ಸಂಗತಿ ನಾನು ನಿವೇದಿಸಬೇಕು."</br>
{{gap}}"ಏನದು ?" </br>
{{gap}}"ದೇಶೀಯ ವಿದೇಶೀಯ ಪ್ರವಾಸಿಗಳು ಬಂದರೆ ಕೊಡೋದಕ್ಕೇಂತ </br>ಕಿಪ್ಕಿಂಧೆಯ ವಾರ್ತಾ ಇಲಾಖೆ ಒಂದು ಬ್ರೋಷೂರ್ ಮಾಡಿ ಕಳಿಸಿದೆ."</br>
{{gap}}"ಅದೆಂಥಾ ಬ್ರೋಷೂರ್ ? ತಂದು ತೋರಿಸಿ." </br>
{{gap}}ದಾಸ್ತಾನು ಕೊಠಡಿಯಲ್ಲಿ ಸೊಗಸಾದ ವರ್ಣಚಿತ್ರಗಳಿದ್ದ ಪುಸ್ತಿಕೆಗಳ ರಾಶಿಯೇ </br>ಇತ್ತು. ಹತ್ತಿಪ್ಪತ್ತನ್ನು ಕೈಗೆತ್ತಿಕೊಂಡು ಉಳಿದ ರಾಶಿಗೆ ಅಲ್ಲೇ ಇದ್ದ ಗೋಣಿ </br>ತಟ್ಟನ್ನು ಹೊದಿಸಿದ.</br>
{{gap}}ಸೌದಾಮಿನಿ ಪುಟ ಮಗುಚಿದಳು. ಕಿಷ್ಕಿಂಧೆಯ ಮೊದಲ ವಷಿ೯ಕೋತ್ಸವದ</br> ದಿನ ಪ್ರಕಟಿಸಿದ್ದು , ರಕ್ಷಾಕವಚದ ಮೇಲೆ ತನ್ನ ವರ್ಣಚಿತ್ರವಿದ್ದ ಇನ್ನೊಂದು</br> ಬ್ರೋಷೂರ್ ಮಾಡಿಸಬೇಕು. ಸದ್ಯಕ್ಕೆ ಇದು ಸಾಕು.</br>
{{gap}}"ಪರಶು, ನೋಡೊ ಸ್ವಲ್ಪ,"</br>
{{gap}}ಅವನು ನೋಡಿದ, ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.</br>
{{gap}}ಮುಖ್ಯಮಂತ್ರಿ ಕೇಳಿದರು :</br><noinclude></noinclude>
i4v5gkwkcagtbqw9asnnig1zsl2wi23
ಪುಟ:ಮಿಂಚು.pdf/೧೧೧
104
20470
317675
215037
2026-05-06T14:36:10Z
Shreelatha.Halemane
7642
317675
proofread-page
text/x-wiki
<noinclude><pagequality level="4" user="Veeksha Shetty" /></noinclude>{{rh|center=|left=ಮಿಂಚು|right=105}}
{{gap}}"ಇಲ್ಲಿನ ಪತ್ರಿಕೆಗಳಿಗೆ ಇದರ ಹಂಚಿಕೆಯಾಗಿಲ್ಲ ತಾನೆ?"</br>
{{gap}}ಉತ್ತರವೀಯಲು ಫೆರ್ನಾಂಡೀಸ್ ಅನುಮಾನಿಸಿದ.</br>
{{gap}}"ಹೇಳಿ. ನಿಮ್ಮನ್ನೇನೂ ಗಲ್ಲಿಗೆ ಹಾಕೋದಿಲ್ಲ."</br>
{{gap}}"ಆ ಬಗ್ಗೆ ಇಲಾಖೆಯಿಂದ ನಿರ್ದೇಶ ಬಂದಿಲ್ಲ."</br>
{{gap}}"ಒಳ್ಳೇದೇ ಆಯ್ತು. ನಾಳೆ ಆ ಸಂಪಾದಕ ಮಹಾಶಯರಿಗೆ ಇವನ್ನು</br> ಹಂಚೋಣ. ದಿನಾಂಕ ಇದೆಯೋ ನೋಡಿ."</br>
{{gap}}"ಇಲ್ಲ. ವಾರ್ಷಿಕೋತ್ಸವ ಎಂದಷ್ಟೆ ಅಚ್ಚಾಗಿದೆ."</br>{{gap}}"ಸರಿ. ನಾನು ಹೇಳಿದ ಟಿಪ್ಪಣಿ ಈಗ ಟೈಪ್ ಮಾಡ್ರೀರೊ? ನಾಳೆ ಸಿತಾರಾ</br> ಬಂದ್ಮೇಲೆ ಟೈಪ್ ಮಾಡಿಸ್ತೀರೊ?"</br>
{{gap}}"ತಮಗೆ ಹೇಗೆ ಬೇಕೋ ಹಾಗೆ."</br>
{{gap}}"ನಾಳೆ ಸಾಕು. ಇನ್ನು ನೀವು ಮನೆಗೆ ಹೋಗಿ. ಮಕ್ಕಳು ಮರಿ ಎಷ್ಟು</br> ಜನ?"</br>
{{gap}}"ಒಂದೇ. ಹೆಣ್ಣು."</br>
{{gap}}"ಇನ್ನೊಂದು ಗಂಡಾಗ್ತದೇಂತ ಆಸೆ ಪಟ್ಕೊಂಡು ಮೋಸ ಹೋಗ್ಬೇಡಿ."</br>
{{gap}}ಪ್ರಯತ್ನ ಆಗಲೇ ನಡೆದಿತ್ತು. ಅದನ್ನು ತಿಳಿಸುವುದು ಹೇಗೆ ?</br>
{{gap}}ಸೌದಾಮಿನಿಯೇ ಅಂದಳು :</br>
{{gap}}"ಒಂದು ಸಂಸಾರಕ್ಕೆ ಒಂದೇ ಮಗುವಿರಬೇಕು. ಏನು ಹೇಳ್ತೀಯಾ ಪರಶು?"</br>
{{gap}}ಅವನಿಗೆ ನಾಚಿಕೆ. ಸುಮ್ಮನಿದ್ದ.</br>
{{gap}}"ಮಕ್ಕಳೇ ಇಲ್ಲದವರಿಗೆ ಫಸ್ಟ್ ಪ್ರೈಜ್ ; ಒಂದು ಹೆತ್ತವರಿಗೆ ಸೆಕೆಂಡ್</br> ಪ್ರೈಜ್. ಇಂಥದೊಂದು ಘೋಷಣೆ ಹೊರಡಿಸಬೇಕು."</br>
{{gap}}ಅಷ್ಟು ಹೇಳಿ ಮುಖ್ಯಮಂತ್ರಿ ನಕ್ಕ ಮೇಲೆ ಉಳಿದವರೂ ಫಕಫಕ ಅಂದರು.</br> ಇಣಿಕಿ ನೋಡಿದ ಶ್ರೀಪಾದ ವಿಷಯ ಸ್ಪಷ್ಟವಾಗದಿದ್ದರೂ ಸಣ್ಣನೆ ನಕ್ಕ.</br>
{{gap}}"ಆಚಾರ್ರ ಕುಟುಂಬ ಎಷ್ಟು ದೊಡ್ಡದು?"</br>
{{gap}}ಫೆರ್ನಾಂಡೀಸ್ ಉತ್ತರವಿತ್ತ :</br>
{{gap}}"ಐವರು ಮಕ್ಕಳು. ಎಲ್ಲ ಹುಡುಗೀರು ದೊಡ್ಡವಳಿಗೀಗ ಹದಿನೆಂಟು."</br>
{{gap}}"ಆಚಾರ್, ಈಚೆಗೆ ಬನ್ನಿ."</br>
{{gap}}ಶ್ರೀಪಾದ ಎರಡು ಹೆಜ್ಜೆ ಒಳಗೆ ಬಂದು ಕೈಮುಗಿದ. ಮುಖ್ಯಮಂತ್ರಿ</br> ಅಂದರು :</br>
{{gap}}"ನೀವೇನೂ ಯೋಚಿಸ್ಬೇಡಿ, ಎಲ್ಲರಿಗೂ ವಿದ್ಯಾಭಾಸ ಕೊಡಿಸಿ, ಯಾರಾ</br>ದರೂ ವರದಕ್ಷಿಣೆ ಬೇಕು ಅಂದರೆ ಪೋಲೀಸರಿಗೆ ದೂರು ಕೊಡಿ,"</br>
{{gap}}ಫೆರ್ನಾಂಡೀಸ್ ಕೈಗಡಿಯಾರ ನೋಡಿದ,</br>
{{gap}}"ಟೈಮ್ ಎಷ್ಟಪ್ಪ ?" ಎಂದು ಕೇಳಿದರು ಮುಖ್ಯಮಂತ್ರಿ,</br><noinclude></noinclude>
62ooxyqt2kigab4hsn855c8uvys0xgw
ಪುಟ:ಮಿಂಚು.pdf/೧೩೩
104
20492
317680
222090
2026-05-06T14:43:57Z
Shreelatha.Halemane
7642
/* Validated */
317680
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|177}}</br></br></br></br>{{center|೧೩}}
{{gap}}ರಂಗಧಾಮನನ್ನು ಕರೆದು ಸೌದಾಮಿನಿ ಹೇಳಿದಳು:</br>
{{gap}}“ದಿಲ್ಲಿಯಲ್ಲಿ ನನಗೆ ಪ್ರಭಾವ ಇದ್ದರೂ ನನ್ನ ಒಂದು ಯೋಜನೆ ಮಂಜೂ</br>
ರಾಗಲಿಲ್ಲ.”</br>
{{gap}}“ಯೋಜನೆ ಆಯೋಗದ ಭೇಟಿಗೆ ಚೌಗುಲೆಯವರೂ ವಿದ್ಯಾಧರರೂ
ನಿನ್ನೆಯಷ್ಟೇ ಹೋದರು.”</br>
{{gap}}“ಅದಲ್ಲ ರಂಗಧಾಮ್, ಹೆಬ್ಬೆರಳು, ಕಿರುಬೆರಳು, ಮೂರು ಬೆರಳುಗಳ</br>
ವಿಷಯ ಹೇಳಿರಲಿಲ್ಲವೆ ?”</br>
{{gap}}“ನಾನಿನ್ನೂ ಸಂಗ್ರಹ ಶುರು ಮಾಡಿಲ್ಲ. ಬೇಡವಂತೂ ?”</br>
{{gap}}“ಬೇಡ !? ದಿಲ್ಲಿಯ ಪದಕೋಶದಲ್ಲಿ ಇರೋದೊಂದೇ ಪದ 'ಬೇಕು'.”</br>
{{gap}}“ಹಾಗಾದರೆ ನಿಮ್ಮ ಸಲಹೆ ಅವರಿಗೆ ಸ್ವೀಕೃತವಾಗಬೇಕಿತ್ತು.”</br>
{{gap}}"ಪ್ರತಿಯಾಗಿ ಸರಳ ಯೋಜನೆ ರೂಪಿಸಿದ್ದಾರೆ.”</br>
{{gap}}“ಹೇಳಿ, ಮಾತಾಜಿ,”</br>
{{gap}}“ತಿಂಗಳಿಗೆ ಒಂದು ಕೋಟಿ. ಅಷ್ಟು ಅವರಿಗೆ ಹೆಚ್ಚಿಗೆ ಏನಾದರೂ ಇದ್ದರೆ</br>
ಪಕ್ಷದ ರಾಜ್ಯ ಸಮಿತಿಗೆ,”</br>
{{gap}}“ಸಂಗ್ರಹದ ಈ ಜವಾಬ್ದಾರಿ ನೀವೇ ವಹಿಸಿಕೊಳ್ಳಿ.”</br>
{{gap}}“ದಿಲ್ಲಿಯಲ್ಲಿ ನಿಮ್ಮನ್ನ ನೆನೆಸ್ಕೊಂಡೆ ರಂಗಧಾಮ್, ಕನಸಿನಲ್ಲಿ ನೀವು</br>
ಕಾಡ್ತೀರಿ, ನನಸಿನಲ್ಲೂ ಕಾಡ್ತೀರಿ!”</br>
{{gap}}ಮಾತು ತಪ್ಪಿಸಿಕೊಂಡು ರಂಗಧಾಮನ ತುಟಿಗಳೆಡೆಯಿಂದ ಹೊರಬಿತ್ತು :</br>
{{gap}}“ಮೋಹಿನಿ ಕಾಟ ಒಂದಿದೆ.”</br>
{{gap}}“ಮಹಾವ್ಯಾಧನನ್ನು ನೀವು ಮೋಹಿನಿಯಾಗಿ ಕಾಡ್ತೀರಿ, ಧ್ರುವ.”</br>
{{gap}}“ಮಾತಾಜಿ, ನೀವು ಅಪೇಕ್ಷಿಸೋದಾದರೆ ಸಚಿವ ಸ್ಥಾನಕ್ಕೆ ರಾಜಿನಾಮೆ</br>
ಕೊಡ್ತೇನೆ”</br>
{{gap}}“ಹುಚ್ಚಪ್ಪ ! ಮೊನ್ನೆ ತಾನೆ ವಿದೇಶ ಪ್ರವಾಸದ್ದು ಹೇಳೆ, ಅದು ತಮಾಷೆ</br>
ಅಲ್ಲ, ಕೋಟಿಗಟ್ಟಲೆ ವ್ಯವಹಾರ, ನಿಮ್ಮಲ್ಲಿ ನಾನಿಟ್ಟಿರೋ ವಿಶ್ವಾಸಕ್ಕೆ ರುಜು</br>
ವಾತು, ಇವತ್ತು ಸಂಜೆ ಏಳು ಗಂಟೆಗೆ ನಮ್ಮ ನಿವಾಸದಲ್ಲಿ ಸಂಪುಟದ ಅನೌಪಚಾರಿಕ....</br><noinclude></noinclude>
lqrnsg4yav8y3fijqfhadytusd4acsc
ಪುಟ:ಮಿಂಚು.pdf/೧೪೨
104
20512
317677
246922
2026-05-06T14:39:53Z
Shreelatha.Halemane
7642
/* Validated */
317677
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|136}}{{Right|ಮಿಂಚು}}
ದಂಡಪಾಣಿಯನ್ನು ಸುತ್ತುವರಿದರು. ಪೊಲೀಸ್ ತುಕಡಿಯ ಮುಖ್ಯಸ್ಥ ಐಜಿಪಿ<BR/>
ಬಳಿಗೆ ಬಂದು, “ಅವರ ಮೇಲೂ ಛಾರ್ಜ್ ಮಾಡಲಾ ?” ಎಂದು ಕೇಳಿದ, ಶಾಸಕರ<BR/>
ಗುಂಪಿನತ್ತ ಬೊಟ್ಟು ಮಾಡಿ.<BR/>
{{gap}}“ಶುದ್ದ ಕತ್ತೆ ! ಅವರು ಶಾಸಕರು ! ಅಷ್ಟೂ ಗೊತ್ತಾಗೋದಿಲ್ಲ ನಿನಗೆ ?”<BR/>
{{gap}}ಓಡಿದವರನ್ನು ಸ್ವಲ್ಪ ದೂರ ಅಟ್ಟಿಸಿಕೊಂಡು ಹೋದರು. ಕೈಗೆ ಸಿಕ್ಕವರನ್ನು<BR/>
ವ್ಯಾನುಗಳಲ್ಲಿ ತುಂಬಿದರು. ಪ್ರಜಾಪಕ್ಷದ ಶಾಸಕರು-ರಾಪ್ಪ ಪಕ್ಷದ ಕೆಲ ಶಾಸಕರು<BR/>
ದಂಡಪಾಣಿಯನ್ನು ಕೂಡ ಸದನದತ್ತ ಎಳೆದರು. ಪೋಲೀಸರು ಅವನನ್ನು ವ್ಯಾನಿಗೆ<BR/>
ತಳ್ಳಿದರು. ಐಜಿಪಿ ಗುಂಪಿನ ಬಳಿ ಬಂದು ದಂಡಪಾಣಿಗೂ ಉಳಿದವರಿಗೂ “Sorry "<BR/>
ಹೇಳಿದರು.<BR/>
{{gap}}ಶರಟಿನ ಮೇಲೆ ರಕ್ತಧಾರೆ ಹರಿದಿದ್ದ ದಂಡಪಾಣಿ ಸದನದಲ್ಲಿ ನೆಲದ ಮೇಲೆ<BR/>
ಸಭಾಪತಿಯ ಎದುರು ಕುಳಿತ, ಪ್ರಜಾಪಕ್ಷದವರೂ ಅವನ ಜತೆ ಸೇರಿದರು. ಹೊರಗೆ<BR/>
ಆರಂಭಿಸಿದ್ದ ಭಾಷಣವನ್ನು ದಂಡಪಾಣಿ ಅಲ್ಲಿ ಮುಂದುವರಿಸಿದ. ಸಭಾಪತಿ ಶುರು<BR/>
ವಾಗದೆ ಇದ್ದ ಕಲಾಪಗಳನ್ನು ಅರ್ಧಗಂಟೆ ಮುಂದಕ್ಕೆ ಹಾಕಿ, ತಮ್ಮ ಕೊಠಡಿಗೆ ತೆರಳಿ<BR/>
ಐದು ಐದು ಐದು ಸೇದಿದರು.<BR/>
{{gap}}ವಿಧಾನ ಮಂಡಲದಲ್ಲಿ ಇದ್ದ ಡಾಕ್ಟರು ಅಧಿಕೃತ ಆದೇಶ ಬಂದೊಡೆನೆ ಸದನ<BR/>
ವನ್ನು ಹೊಕ್ಕು ದಂಡಪಾಣಿಯ ಹಣೆಗೊಂದು ಪಟ್ಟಿ ಕಟ್ಟಿದರು. ಅವನನ್ನು ಆತನ<BR/>
ಆಸನಕ್ಕೆ ಯಾರೋ ಕೈಹಿಡಿದು ಕರೆದೊಯ್ದರು.<BR/>
{{gap}}ಪ್ರಜಾಪಕ್ಷದ ಮುಖಂಡ ನಾಯಕರಿಗೀಗ ಎಲ್ಲಿಲ್ಲದ ಆವೇಶ ಬಂತು. ಪ್ರಶ್ನೆ<BR/>
ತರವಿಲ್ಲ : ವಿದ್ಯಾ ಇಲಾಖೆಗೆ ಸಂಬಂಧಿಸಿದ ಬೇಡಿಕೆಗಳ ಬಗ್ಗೆ ಚರ್ಚೆ ಇಲ್ಲ. ಈಗ<BR/>
ನಿಲುವಳಿ ಸೂಚನೆ ಒಂದೇ; ಸರ್ಕಾರವನ್ನು ಖಂಡಿಸುವ ನಿರ್ಣಯ ಮಂಡನೆ. ಇನ್ನೂ<BR/>
ಒಂದೈವತ್ತು ಜನರಾದರೂ ತನ್ನ ಪಕ್ಷದಲ್ಲಿ ಈಗ ಇದ್ದಿದ್ದರೆ! ರಾಷ್ಟಪಕ್ಷದ ಅನೇಕ<BR/>
ಶಾಸಕರು ತನ್ನತ್ತ ಬರುತ್ತಿದ್ದರು. ಸೌದಾಮಿನಿ ಸರಕಾರ ಉರುಳುತ್ತಿತ್ತು. ತಾನು<BR/>
ಮುಖ್ಯಮಂತ್ರಿಯಾಗುತ್ತಿದ್ದೆ.<BR/>
{{gap}}ಸಭಾಪತಿ ಬಂದರು.<BR/>
{{gap}}ನಾಯಕ ತುದಿಗಾಲ ಮೇಲೆ ನಿಂತು ಉಚ್ಚ ಕಂಠದಲ್ಲಿ ಅರಚಿದರು :<BR/>
{{gap}}“ಕಾರ್ಯಕಲಾಪಗಳ ಪಟ್ಟಿಯಲ್ಲಿರುವುದರ ಬದಲು ಒಂದು ಮಹತ್ವದ<BR/>
ವಿಷಯ ಈಗ ಚರ್ಚೆ ನಡೆಯಬೇಕಾಗಿದೆ. ಸದನದ ಮುಂದುಗಡೆ ನಿಶ್ಯಸ್ತ ಜನರ<BR/>
ಮೇಲೂ ಸಮತಾ ಶಾಸಕ ದಂಡಪಾಣಿಯವರ ಮೇಲೂ ಪೋಲೀಸರ ದೌರ್ಜನ್ಯ<BR/>
ನಡೆದಿದೆ.”<BR/>
{{gap}}ಸಭಾಪತಿ ದಂಡಪಾಣಿಯ ಕಡೆಗೊಮ್ಮೆ ದೃಷ್ಟಿ ಹಾಯಿಸಿ, ಒಂದಿಷ್ಟೂ ವಿಚಲಿತ<BR/>
ರಾಗದೆ ನಾಯಕರತ್ತ ನೋಡಿ ಅಂದರು :<BR/>
{{gap}}“ನಿಮ್ಮದು ನಿಲುವಳಿ ಸೂಚನೆಯೋ ? ಗಮನ ಸೆಳೆಯುವ ಸೂಚನೆಯೊ ?”<BR/><noinclude></noinclude>
a4wc1oepw7ne7nxjz1q8xxmv5dws7n6
ಪುಟ:ಮಿಂಚು.pdf/೧೪೩
104
20516
317678
248875
2026-05-06T14:41:12Z
Shreelatha.Halemane
7642
/* Validated */
317678
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=137}}
{{gap}}ಯಾವುದಾದರೂ ಸರಿ,” </br>
{{gap}}“ಸದನಕ್ಕೆ ಚಿರಪರಿಚಿತರಾದ ಮಾನ್ಯ ಸದಸ್ಯರು ಹೀಗೆ ಹೇಳಿದರೆ ಹೇಗೆ ? </br>
ಪ್ರತಿಯೊಂದಕ್ಕೂ ನಿಯಮ ಇದೆ. ಈಗಾಗಲೇ ನೀವು ಸದನದ ಗಮನವನ್ನು </br>
ಸೆಳೆದಿರುವುದರಿಂದ__” </br>
{{gap}}“ಗಮನ ಸೆಳೆಯುವ ಸೂಚನೆ ಎಂದೇ ಪರಿಗಣಿಸೋಣಾಗಲಿ, ಗೃಹಖಾತೆ </br>
ಯನ್ನೂ ಹೊಂದಿರುವ ಮುಖ್ಯಮಂತ್ರಿಯವರು ನಡೆದ ಘಟನೆಯ ಬಗ್ಗೆ ಹೇಳಿಕೆ </br>
ನೀಡಬೇಕು.” </br>
{{gap}}ಒಂದು ಹಾಳೆಯಾಗಲೇ ಸೌದಾಮಿನಿಯ ಕೈಸೇರಿತ್ತು. ಅದು ಘಟನೆಯ </br>
ಬಗ್ಗೆ ಐ.ಜಿ.ಪಿ. ನೀಡಿದ್ದ ಚುಟುಕು ವರದಿ. ಸೌದಾಮಿನಿ ಅದರ ಮೇಲೇನನ್ನೋ </br>
ಗೀಚಿದಳು, ಒಂದು ಕ್ಷಣ ಬಾಗಿಲಿನತ್ತ ಸಾಗಿ ಅಲ್ಲಿದ್ದ ಪೋಲೀಸ್ ಅಧಿಕಾರಿಗೆ </br>
ಅವಸರದ ಆದೇಶ ನೀಡಿದಳು. </br>
{{gap}}ಸೌದಾಮಿನಿ ತನ್ನ ಸ್ಥಾನ ಸೇರಿ ನಿಂತಲ್ಲಿಂದಲೇ ಅಂದಳು : </br>
{{gap}}“ಸಮತಾ ಪಕ್ಷದವರು ಒಂದು ವಾರವಿಡೀ ನಡೆಸಿದ ಕಾರಸ್ಥಾನದ ಪರಿಣಾಮವೇ </br>
ಇವತ್ತಿನ ಪ್ರದರ್ಶನ ಮತ್ತು ಘಟನೆ. ನನ್ನ ಪೋಲೀಸರು ಅತ್ಯಂತ ತಾಳ್ಮೆಯಿಂದ </br>
ವರ್ತಿಸಿದ್ದಾರೆ. ಕೋಲು ಬಡಿಗೆ ಇತ್ಯಾದಿಗಳನ್ನು ಹಿಡಿದುಕೊಂಡಿದ್ದುದರಿಂದ </br>
ಪ್ರದರ್ಶನಕಾರರನ್ನು ನಿಶ್ಯಸ್ತರು ಎನ್ನಲಾಗುವುದಿಲ್ಲ. ಮಾನ್ಯ ಶಾಸಕ ದಂಡಪಾಣಿ </br>
ಯವರು ಉದ್ರೇಕಪರ ಭಾಷಣ ಮಾಡದೇ ಇದ್ದಿದ್ದರೆ ಗಮನ ಸೆಳೆಯುವ ಸೂಚನೆಗೆ </br>
ವಿಷಯವೇ ಇರುತ್ತಿರಲಿಲ್ಲ. ನೂರನಲ್ವತ್ತು ಜನರನ್ನು ಬಂಧಿಸಲಾಯಿತು, ಲಾಕಪ್ಪಿ </br>
ನಿಂದ ಅವರನ್ನೆಲ್ಲ ಬಿಡಬೇಕೆಂದು ಆಜ್ಞಾಪಿಸಿದ್ದೇನೆ. ಈಗಾಗಲೇ ಅವರ ಬಿಡುಗಡೆ </br>
ಯಾಗಿದೆ. ಊಟೋಪಚಾರದ ಬಳಿಕ ಅವರನ್ನು ರೈಲು ಮತ್ತು ಬಸ್ ನಿಲ್ದಾಣಗಳಿಗೆ </br>
ವ್ಯಾನಿನಲ್ಲಿ ತಲಪಿಸಬೇಕೆಂದು ಸೂಚಿಸಿದ್ದೇನೆ. (ರಾಷ್ಟ್ರ ಪಕ್ಷದ ಶಾಸಕರಿಂದ </br>
“ಹೀಯರ್ ಹೀಯರ್") (ಅನುಕಂಪ ತುಂಬಿದ ಸ್ವರದಲ್ಲಿ) ಅದರೂ ನೋವು, </br>
ನೋವೇ, ನನ್ನದು ಅಹಿಂಸೆಯಲ್ಲಿ ಅಚಲ ವಿಶ್ವಾಸವಿರುವ ಸರಕಾರ, ಮಾನ್ಯ </br>
ಶಾಸಕ ದಂಡಪಾಣಿಯವರಿಗೆ ನನ್ನ ಹಾಗೂ ಸರಕಾರದ ಸಹಾನುತಾಪವನ್ನು ವ್ಯಕ್ತ </br>
ಪಡಿಸುತ್ತೇನೆ. (ಪ್ರಜಾಪಕ್ಷದ ಸಾಸಕರು : “ಮುಖ್ಯಮಂತ್ರಿ ಅವರ ಕ್ಷಮೆ ಕೋರ </br>
ಬೇಕು" ದಂಡಪಾಣಿಯವರ ಮಾತ್ರವಲ್ಲ ಈ ಊರಿಗೆ ಹೊಸಬರಾದ ಅವರ </br>
ಅಮಾಯಕ ಹಿಂಬಾಲಕರ ಮತ್ತು ನಗರದ ಕಾರ್ಮಿಕ ಬಾಂಧವರ ಕ್ಷಮೆಯನ್ನೂ </br>
ನಿಶ್ಚರ್ತವಾಗಿ ಕೋರುತ್ತೇನೆ. ಈ ಘಟನೆಯಿಂದ ಒಂದು ಸಂಗತಿ ಸಾಬೀತಾಗಿದೆ, </br>
ರೈತ-ಕಾರ್ಮಿಕರ ಹಿತಸಾಧಕ ಸರಕಾರ ಒಂದಿದ್ದರೆ ಅದು ನಮ್ಮದು__ನಮ್ಮದು.)” </br>
{{gap}}(ಆಳುವ ಪಕ್ಷದಿಂದ ಕರತಾಡನ, ಸೌದಾಮಿನಿ ಕುಳಿತಳು.) </br>
{{gap}}ನಾಯಕ : “ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರ<noinclude></noinclude>
cwnprqq4dyz0spe0rnqxr4yhket6vhk
ಪುಟ:ಮಿಂಚು.pdf/೧೪೪
104
20519
317679
248876
2026-05-06T14:42:44Z
Shreelatha.Halemane
7642
/* Validated */
317679
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=138|right=ಮಿಂಚು}}
ಹೇಳಿಕೆಯ ಕೊನೆಯ ವಾಕ್ಯ ದುರುದ್ದೇಶದಿಂದ ಕೂಡಿದೆ, ಅವಹೇಳನಕಾರಕವಾಗಿದೆ. </br>
ಆ ಮಾತನ್ನು ಆವರು ಹಿಂದಕ್ಕೆ ತೆಗೆದುಕೊಳ್ಳಬೇಕು.” </br>
{{gap}}ಆಳುವ ಪಕ್ಷದ ಶಾಸಕರು : "ಇಲ್ಲ, ಇಲ್ಲ.” </br>
{{gap}}ಪ್ರಜಾಪಕ್ಷದ ಇನ್ನೊಬ್ಬ ಶಾಸಕ : “ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ </br>
ಒಪ್ಪಬೇಕು.” </br>
{{gap}}ಆಳುವ ಪಕ್ಷದವರು : “ಇಲ್ಲ. ಅವರು ಒಪ್ಪುವುದಿಲ್ಲ.” </br>
{{gap}}ಸದನದಿಂದ ಹೊರನಡೆದು ಸುದ್ದಿಯಾಗುವುದೊಂದೇ ದಾರಿ - ಎಂದು </br>
ನಾಯಕರು ತಮ್ಮ ಹಿಂಬಾಲಕರಿಗೆ ಸನ್ನೆ ಮಾಡಿದರು. ಪ್ರಜಾಪಕ್ಷದ ಐವರೂ </br>
ದಂಡಪಾಣಿಯೂ ಸದನದಿಂದ ಹೊರಬಿದ್ದರು. ತಾನು ಭಾಷಣ ಮಾಡಿದ್ದ ಮೆಟ್ಟಲ </br>
ಮೇಲೆ ಎರಡು ನಿಮಿಷ ಸಮತಾಶಾಸಕ ನಿಂತ. </br>
{{gap}}"ಇರೋದು ನೀವೊಬ್ಬರೇ. ಆದರೆ ಕೆಲಸ ಎಷ್ಟು ಚೆನ್ನಾಗಿ ಮಾಡ್ತೀರಪ್ಪ” </br>
ಎಂದು ನಾಯಕ ಮೆಚ್ಚುಗೆ ಸೂಚಿಸಿದ.<noinclude></noinclude>
pip152gr68fs3qc82yt8d9j8yqpw2ot
ಪುಟ:ಮಿಂಚು.pdf/೧೪೫
104
20522
317676
222098
2026-05-06T14:37:32Z
Shreelatha.Halemane
7642
/* Validated */
317676
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|139}}
{{center|೧೫}}
{{gap}}ವಿಧಾನ ಮಂಡಲದ ಮುಂಗಡಪತ್ರ ಅಧಿವೇಶನ ಮುಗಿದ ಬಳಿಕ ಒಂದು ದಿನ.</br>
{{gap}}ಮುಖ್ಯಮಂತ್ರಿಯಿಂದ ಆದೇಶಿತನಾಗಿ ಪರಶುರಾಮ ವಾರ್ತಾ ಇಲಾಖೆಯ</br>
ನಿರ್ದೇಶಕರಿಗೆ ಫೋನ್ ಮಾಡಿದ :</br>
{{gap}}“ಸರಕಾರ ಜಾಹೀರಾತು ನೀಡುತ್ತಿರುವ ಎಲ್ಲ ಪತ್ರಿಕೆಗಳ ಪಟ್ಟಿ, ಅವರಿಗೆ ಪ್ರತಿ</br>
ವರ್ಷ ಸಂದಾಯವಾಗುತ್ತಿರುವ ಹಣ-ಈ ಎಲ್ಲ ವಿವರ ಸಿ.ಎಂ.ಗೆ ಬೇಕಂತೆ.”</br>
{{gap}}“ಬಜೆಟ್ ಪಾಸಾಯ್ತು, ಅಧಿವೇಶನ ಮುಗೀತು. ಇನ್ನು ಯಾಕೆ ವಿವರ ?”</br>
{{gap}}“ಕಿಷ್ಕಿಂಧೆಗೆ ಸೌದಾಮಿನಿ ಪ್ರಣಾಳಿಕೆ-ಅಂತ ಜಾಹೀರಾತು ಕೊಡ್ತಿದೀರಲ್ಲ ?</br>
ಆ ಪ್ರಣಾಳಿಕೆಯಲ್ಲಿ ಮಿತವ್ಯಯ ಅಂತ ಒಂದು ಶಬ್ದ ಇದೆ. ಅದಕ್ಕೆ ಸಂಬಂಧಿಸಿ”</br>
{{gap}}“ಮಾತಾಜಿ ಹೇಳಿದರೊ ? ನಿಮ್ಮದೇ ತರ್ಕವೊ ?”</br>
{{gap}}“ಹೇಗೆ ಬೇಕಾದರೂ ಭಾವಿಸಬಹುದು.”</br>
{{gap}}“ನಿಮ್ಮದೇ ಐಡಿಯ ಆದರೆ, ನೀವು ಬೇಗನೆ ವಾರ್ತಾ ಇಲಾಖೆಯ ನಿರ್ದೇಶಕ</br>
ರಾಗೀರಿ,”</br>
{{gap}}“ಯಾರಿಗೆ ಗೊತ್ತು ? ನೀವು ಕಮೀಷನರಾಗಿ ಭಡ್ತಿ ಹೊಂದಿದರೆ....”</br>
{{gap}}ತಮಾಷೆ ಸಾಕು, ಇನ್ನು ಎರಡು ದಿವಸಗಳಲ್ಲಿ ಎಲ್ಲ ವಿವರ ತಂದುಕೊಡೇನೆ.”</br>
{{gap}}“ಮಿತವ್ಯಯ ಅಂತ ಜವಾನರನ್ನೆಲ್ಲ ಮನೆಗೆ ಕಳಿಸಿದಿರಾ ?”</br>
{{gap}}“ಆಗಲಪ್ಪ, ಜವಾನನೇ ತಂದ್ಯೋಡ್ತಾನೆ.”</br>
{{gap}}....ವಾರ್ತಾ ಇಲಾಖೆಯಿಂದ ಬಂದ ಕಟ್ಟನ್ನು ಸೌದಾಮಿನಿ ನಿವಾಸಕ್ಕೆ-ಗೃಹ</br>
ಕಾದ್ಯಾಲಯಕ್ಕೆ ಒಯ್ದು , ತಾನೇ ಬಿಚ್ಚಿದಳು, ಕಣ್ಣುಗಳನ್ನು ಕಿರಿದುಗೊಳಿಸಿ ಪಟ್ಟಿ</br>
ಯನ್ನು ಹಲವು ಹಾಳೆಗಳನ್ನು ಎರಡು ಬಾರಿ ಓದಿದಳು, (ಕಣ್ಣು ಕಿರಿದುಮಾಡಲು</br>
ದೃಷ್ಟಿ ತೊಂದರೆ, ಚಾಳೀಸ್ ? ದೈಹಿಕ ಸಂಪತ್ತು ಮೂವತ್ತು ಎನ್ನಬಹುದು.</br>
ಆದರೆ ಕಣ್ಣು ? 'ಮುಂದೆ ದಿಲ್ಲಿಗೆ ಹೋದಾಗ ಕಾಂಟಾಕ್ಟ್ ಲೆನ್ಸ್ ಹಾಕಿಸಿಕೊಳ್ಳ</br>
ಬೇಕು. ಇರಲಿಲ್ಲ. 'ತುತ್ತೂರಿ' ಎಂಬ ಹೆಸರು ಆ ಪಟ್ಟಿಯಲ್ಲಿರಲಿಲ್ಲ. ಪತ್ರಿಕೆ</br>
ಗಳನ್ನು ನೋಡಿದಳು. ತನ್ನ ಭಾವಚಿತ್ರವೊ ಹೇಳಿಕೆಯೊ ಭಾಷಣವೂ ಅಚ್ಚಾಗಿದ್ದ</br>
ಸಂಚಿಕೆಗಳನ್ನೇ ಆರಿಸಿ ಕಳಿಸಿದ್ದ, ಆ ನಿರ್ದೆಶಕ ಗುರುತು ಹಾಕಿದ ಆ ಭಾಗಗಳನ್ನೆಲ್ಲ</br>
ಮತ್ತೆ ನೋಡಿದಾಗ ಮನಸ್ಸಿಗೆ ಹಾಯೆನಿಸಿತು.</br>
{{gap}}ಗುಪ್ತಚಾರ ದಳದ ಮುಖ್ಯಸ್ಥನಿಗೆ ಸೌದಾಮಿನಿ ಬರಹೇಳಿದಳು.</br><noinclude></noinclude>
9ctvjt4rpw66ffb23npzoof36zqfgho
ಪುಟ:ಮಿಂಚು.pdf/೧೬೮
104
20613
317681
206762
2026-05-06T14:48:56Z
Shreelatha.Halemane
7642
/* Validated */
317681
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|162}}{{Right|ಮಿಂಚು}}
{{gap}}“ನಾನೂ ಆ ಸಂಚಿಕೆ ಇಲ್ಲಿ ನೋಡಿದ್ದೇನೆ.”
{{gap}}ಕೊಠಡಿ ತನಕ ಬಂದ ಸೌದಾಮಿನಿ ಸ್ವಲ್ಪ ಹೊತ್ತು ಕುಳಿತಳು, ಮೃದುಲಾಗೆ
ಅನಿಸಿತು : ಇದು ಏಕಾ೦ತ, ಮಾತನಾಡಬೇಕು,
{{gap}}“ಪುಟ್ಟಾ_ತಪ್ಪಿದೆ_ಸೌದಾ..."
{{gap}}“ಮಿನಿ ಅನ್ನಿ ಸಾಕು.”
{{gap}}“ಮಿನಿ.... ಮರು ಹುಟ್ಟು ಪಡೆದು ಇಲ್ಲಿಗೆ ವಾಪಾಸಾದಾಗ ತೊಂದರೆಯಾಗ
లిಲ್ವೆ ? ಹಿ೦ದಿನ ಗೆಳೆಯರು, ವೈರಿಗಳು, ಯಾರೂ ಗುರುತು ಹಿಡೀಲಿಲ್ವೆ?"
{{gap}}ಮುಖ್ಯಮಂತ್ರಿ ನಕ್ಕಳು.
{{gap}}“ಒಬ್ಬರ ಹಾಗೆ ಇನ್ನೊಬ್ಬರು ಇರೋದಿಲ್ವ? ತದ್ರೂಪವೂ ಅಲ್ಲ, ಆಕೆಗಿಂತ
ವಯಸ್ಸಿನಲ್ಲಿ ನಾನು ಚಿಕ್ಕವಳು. ಹೇಗೆ ಕಾಣಿಸ್ತೀನಿ?”
{{gap}}"ಅದು ఒಪ್ದೆ. ಇದು ಪವಾಡವೇ ಸರಿ. ಕೂದಲಿಗೆ ಬಣ್ಣ ಹಚ್ಚಿಕೊಂಡಿದ್ಯಾ?"
“ಇಲ್ಲ. ಮುಟ್ಟಿ ನೋಡಿ.”
{{gap}}ಮೃದುಲಾಬೆನ್ ಮುಟ್ಟಿದಳು, ನೋಡಿದಳು. ಕೈಗೆ ಎನೊ ಅಂಟಲಿಲ್ಲ.
{{gap}}“ಧರ್ಮೇಂದರ್ ಬಾಬಾರ ಕೃಪೆ.”
{{gap}}“ಅವತಾರ ಪುರುಷ. ಸಂದೇಹವಿಲ್ಲ. ಮಿನಿದೇವಿ, ಒಂದು ಪರಿಚಯ ಪತ್ರ
ಕೊಡಿ."
{{gap}}“ಇದೇನು ಬಹುವಚನ ? ನೀವು ನನ್ನ ಗುರುದೇವಿ. ಮರೆಯಬೇಡಿ.”
{{gap}}“ನನ್ನ ಜೀವ. ಈ ಚಿಕಿತ್ಸೆಗೆ ವಯೋಮಿತಿ ಏನೂ ಇಲ್ಲವಲ್ಲ ?”
{{gap}}“ಗೊತ್ತಿಲ್ಲ ದೀದಿಜಿ. ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನ ಕರುಣಾ ಈಡೇ
ರಿಸೋ ಹಾಗಿದ್ದರೆ ನೀವು ಜಗದಲಪುರಕ್ಕೆ ಆದಷ್ಟು ಬೇಗ ಹೋಗಿ, ಅಲ್ಲಿನ ಹಿರಿಯ
ಯೋಗಿನಿ ಹೇಳ್ತಿದ್ರು_ಇದರಲ್ಲಿ ಅದೃಷ್ಟದ ಆಟವೂ ಇದೆ ಅಂತ."
{{gap}}"ಕರುಣಾ ಒಬ್ಬಳಿಂದಲೇ ಸಾಧ್ಯವಾದೀತೊ ಇಲ್ವೊ? ನಿಧಿಸಂಗ್ರಹ ಪೂರ್ತಿ
ಯಾಗೋವರೆಗೂ ನಾನಿರಬೇಕು. ಆಮೇಲೆ ಮರುಹುಟ್ಟು_ಭಗವದನುಗ್ರಹ
ಇದ್ದರೆ ಆಗುತ್ತೆ.”
{{gap}}“ನಿಮ್ಮ ಶಿಷ್ಟೆಯಾಗಿ ಸಾರ್ವಜನಿಕ ಕ್ಷೇತ್ರ ಪ್ರವೇಶಿಸಿದವಳನ್ನು ಈದಿನ ಎಲ್ಲರು
ಗೌರವದಿಂದ ಮಾತಾಜಿ ಅಂತ ಕರೀತಾರೆ:"
{{gap}}“ನಿನ್ನ ಹಿರಿಯ ಯೋಗಿನಿ ಹೇಳಿದ್ದು నిಜ. ಎಲ್ಲವೂ ವಿಧಿಸಂಕಲ್ಪ. ನೀನೇ
ಯೋಚಿಸಿ, ಕಷ್ಟದ ಘಳಿಗೆಯಲ್ಲಿ ಮುಂಬಯಿಗೆ ಬಂದೆ. ಅನಾಥಾಶ್ರಮದ
ಚಿಟುವಟಿಕೆಯನ್ನ ಇಡೀ ದೇಶಕ್ಕೆ ವಿಸ್ತರಿಸುವ ಮಾತು ಬಂತು. ನನಗೆ ಅದು ಇಷ್ಟ
ವಾಯಿತು. ಪರಿಣಾಮವಾಗಿ ಹುಟ್ಟಿತು ಪ್ರತಿಷ್ಠಾನ. ನನ್ನ ಜತೆ ಇರಬೇಕಾಗಿದ್ದ
ನೀನು ಬೇರೆಯೇ ದಾರೀ ಹಿಡಿದೆ,"
{{gap}}ಇದಕ್ಕಿದಂತೆ ಮೃದುಲಾಬೆನ್ಳ ಕಣ್ಣುಗಳಿಂದ ನೀರು ಹರಿಯತೊಡಗಿತು.<noinclude></noinclude>
rq10e9p8x2qyf1quhbsyah7idyb541x
ಪುಟ:ಮಿಂಚು.pdf/೧೬೯
104
20614
317682
206763
2026-05-06T14:53:13Z
Shreelatha.Halemane
7642
/* Validated */
317682
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮಿಂಚು}}{{Right|163}}
ದುಃಖಾಶ್ರುವೊ ? ಆನಂದಾಶುವೊ ? ಊಹಿಸುವ ತರ್ಕಿಸುವ ಗೊಡವೆಗೆ ಹೋಗದೆ
ಸೌದಾಮಿನಿ ಮೌನವಾಗಿ ಕುಳಿತಳು. ಕಂಬನಿಯ ಒರತೆ ನಿಂತಿತು.
{{gap}}“ಇದು ಸಂತೋಷದ ಮಹಾಪೂರ, ಮಿನಿ. ದಂಡೆ ದಾಟಿ ಆಚೆ ಈಚೆ ಹರಿ
ಯಿತು, ಅಷ್ಟೆ. ನಾನು ಮಲಕೊಳ್ತೀನಿ ಇನ್ನು."
{{gap}}“ಜುಮ್ಕಿಗೆ ಅಲಾಗೆ ನಿದ್ದೆ ಬಂದಿದೆ.'
{{gap}}ಮಲಗಿದ ಮೃದುಲಾಗೆ ಸೌದಾಮಿನಿ ರಗ್ ಹೊದಿಸಿದಳು.
{{gap}}ರಗ್ನ ಸಂದಿಯಿಂದ ಮಾತು ಕೇಳಿಸಿತು:
{{gap}}“ನೀನು ಸಾಕ್ಷಾತ್ ಯೋಗಿನಿಯೇ ಆಗಿದೀಯ, ಆತ್ಮ ಸಂಯಮವೇ ನಿನಗೆ
ಶ್ರೀರಕ್ಷೆ ಶುಭರಾತ್ರಿ!"
{{gap}}“ಗುಡ್ನೈಟ್,”
* * *
{{gap}}ಪತ್ರಿಕೆಗಳಲ್ಲಿ ಅನಾಥಾಶ್ರಮ ಪ್ರತಿಷ್ಠಾನ ಎಂದೆಲ್ಲ ಓದಿದ ವೇಲೆ ಪ್ರತಿಪಕ್ಷದ
ಮುಖಂಡ ಶ್ರೀಮಾನ್ ನಾಯಕರಿಗೆ ಮೈ ಪರಚಿಕೊಳ್ಳಬೇಕೆನಿಸಿತು. “ಈ ಮುಖ್ಯ
ಮಂತ್ರಿಯ ಪೂರ್ವಜನ್ಮದ ವಾಸನೆ ಬಡೀತಿದೆಯಲ್ಲ” ಎಂದುಕೊಂಡರು. ಸಂಜೆ
ರಂಗಸ್ವಾಮಿ ಕ್ಲಬ್ಬಿನಲ್ಲಿ ಸಿಕ್ಕಿದಾಗ ವಿಷಯ ಮತ್ತೆ ಉಸಿರಾಡಿತು.
{{gap}}“ಪೇಪರ್ ನೋಡಿದ್ರಾ ರಂಗಸ್ವಾಮಿ ?”
{{gap}}“ಭಾರತಿ ಅನಾಥಾಶ್ರಮ ಪ್ರತಿಷ್ಠನ! ಮಠ ! ಮಾತಾಜಿ! ನೀವು ಪ್ರತಿಪಕ್ಷದ
ಮುಖಂಡರು. ನಿಮ್ಮ ಆರ್ಭಟವೆಲ್ಲ ವಿಧಾನಮಂಡಲದಲ್ಲಿ, ನಾನು ಬೇಕಾದರೆ
ಸಾರ್ವಜನಿಕರ ಪರವಾಗಿ ಕೋರ್ಟಿಗೆ ಹೋಗ್ತೇನೆ,”
{{gap}}“ಗುಟ್ಟು, ಹತ್ತಿರ ಬನ್ನಿ, ತುತೂರಿ ಅನ್ನೋ ಪತ್ರಿಕೆ ಈಗ ಪ್ರಕಟವಾಗ್ತಿ
ದೆಯೊ ?_ಅಂತ ಮುಖ್ಯಮಂತ್ರಿ ವಿಚಾರಿಸಿದರಂತೆ, ಅದರ ಸಂಪಾದಕ ಎಲ್ಲಿದ್ದಾನೆ?
ಅಂತಲೂ ಕೇಳಿದರಂತೆ.”
{{gap}}“ಇನ್ನೂ ಗಂಭೀರವಾದ್ದು ಏನೂ ನಡೀತಾ ಇಲ್ಲವೆ?”
{{gap}}"ನಾನು ಪಾರ್ಟಿ ಬಿಟ್ಟವನು. ನೀವು ಅಲ್ಲೇ ಇದೀರಾ. ಸ್ವಲ್ಪ ಕಾರ್ಯಸೌಧ
ದಲ್ಲಿ ಓಡಾಡಿ ಅವರಿವರಿಗೆ ಹಲ್ಲೋ ಅನ್ನಿ, ನಿಮ್ಮ ಈ ನಿರಾಸಕ್ತಿಯೋಗ ಸರಿಯಲ್ಲ,"
{{gap}}“ఆಗలి, ಭಾವೀ ಮುಖ್ಯಮಂತ್ರಿಗಳೆ,"
{{gap}}“ಏನಾದರೂ ಬೇಗನೆ ಮಾಡದಿದ್ದರೆ ಬಾವಿನೇ ಗತಿ.”
{{gap}}“ಸಂಪುಟದಲ್ಲಿ ಕೊಳ್ಳೆಗೆ ಸಂಬಂಧಿಸಿ ಭಿನಾಭಿಪ್ರಾಯ ಇದೆಯಂತಲ್ಲ ?"
{{gap}}“ಸಣ್ಣಗೆ ಪಿಸಿಪಿಸಿ ಇದೆ. ತಿದಿ ಊದ್ಬೇಕು. ರಂಗಧಾಮ ಬಂಡಾಯ ಏಳ<noinclude></noinclude>
bgzjs17ebw6414ybxcy8oqaionjy1t9
ಪುಟ:ಮಿಂಚು.pdf/೧೭೦
104
20615
317846
206764
2026-05-07T08:50:17Z
Ashwini Rai K
8475
/* Validated */
317846
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=164|right=ಮಿಂಚು}}
ಬಹುದೊಂತ ಆಸೆ ಇಟ್ಕೊಂಡಿದ್ದೆ. ಅದು ಹುಸಿಯಾಯ್ತು, ಅವನೀಗ ಅವಳ ಕಂಕುಳ ಕೂಸು,"
{{gap}}“ನನಗೂ ಒಂದು ಫಾರೀನ್ ಟ್ರಿಪ್ ಏರ್ಪಾಟು ಮಾಡಿದ್ರೆ ನಾನೂ ಕೂಸಾ
ಗ್ತೀನಿ.
{{gap}}ನನ್ನನ್ನೂ ಅವಳು ಎತ್ಕೋಬಹುದು."
{{gap}}“ನಮ್ಮನ್ನು ಅವಳು ಹೊತ್ಕೊಳ್ಳೋ ಕಾಲ ಕಳೀತು."
{{gap}}ಧ್ವನಿ ಕುಗ್ಗಸಿ ರಂಗಸ್ವಾಮಿ ಕೇಳಿದರು :
{{gap}}“ಇವಳು ಅವಳೇ ಅನ್ನೋದರಲ್ಲಿ ನಿಮಗೆ ಸಂಶಯವಿಲ್ಲ ಅನ್ನಿ.”
{{gap}}“ಇದೆಯಪ್ಪ, ಇನ್ನೂ ಇದೆ....ನಾವು ರಾಜಕೀಯ ನೆಲೆಯಲ್ಲಿ ಹೋರಾಡ್ಬೇಕು.
ಅವಳನ್ನು ಪಟ್ಟದಿಂದ ಇಳಿಸಿ ಜೈಲಿಗೋ ಮಠಕ್ಕೋ ಕಳಿಸ್ಬೇಕು,”
{{gap}} “ಅವಳಿಗೆ ದಿಲ್ಲಿ ಬೆಂಬಲ ಇರೋವರೆಗೂ ಇದೊಂದೂ ಆಗೋದಿಲ್ಲ.”
{{gap}}“ಅವರಿಗೆ ಬೇಕಾದ್ದೇನು ? ರಾಜ್ಯದಲ್ಲಿ ಸುಭದ್ರ ಸರಕಾರ, ಕಾಲಕಾಲಕ್ಕೆ
ಕಪ್ಪ . ಈ ಸೂತ್ರದ ಆಧಾರದ ಮೇಲೆ ಕೆಲಸ ನಡೀಬೇಕು.”
{{gap}}ಇವತ್ತು ನಮ್ಮ ಸ್ನೇಹದ ಪುನರುದ್ದೀಪನ. ಆದರ ನೆನಪಿಗಾಗಿ ಒಂದೊಂದು ಚೋಟಾ ಪೆಗ್.”
{{gap}}"ಸರಿ!"
{{center|*{{gap}}*{{gap}}*}}
{{gap}}ಧನಂಜಯಕುಮಾರ ನಿಗಮದ ಹತ್ತು ಗುದಾಮಗಳನ್ನು ಖಾಲಿ ಮಾಡಿದ್ದ.
ಅರ್ಧಕ್ಕರ್ಧ ರಿಜೆಕ್ಟ್ಸ್ ಎಂದು ಬರೆಸಿದ್ದರಿಂದ ಬಿಲ್ ಕಿರಿದಾಗಿತ್ತು. ಅಂಗಡಿ ಸಣ್ಣ
ಪೇಟೆಯಲ್ಲೇ ಇದ್ದರೂ ಎಷ್ಟು ಎತ್ತರಕ್ಕೆ ಏರಿದ್ದ ಆತ ! ಕೊಡಬೇಕಾದವರಿಗೆಲ್ಲ
ಕೊಡುತ್ತಿದ್ದ, ತಪ್ಪದೆ. ಹೇಳಿದ ಅವಧಿಯೊಳಗೆ ಲೆಕ್ಕ ಚುಕ್ತಾ,
{{gap}}ಸೌದಾಮಿನಿಯ ಎದುರು ಅವನು ತೋಡಿಕೊಂಡಿದ್ದ :
“ನನಗೆ ಹಣ ಮುಖ್ಯ ಅಲ್ಲ ಮಾತಾಜಿ. ಅತ್ಯಂತ ಶ್ರೇಷ್ಠವಾದದ್ದು ತಮ್ಮ
ವಿಶ್ವಾಸ.”
{{gap}}ಆ ವಿಶ್ವಾಸದ ಫಲವಾಗಿಯೇ ನಗರದ ರಾಜಬೀದಿಯಲ್ಲಿ ದೊಡ್ಡ ಕಟ್ಟಡ
ಸಿಕ್ಕಿತು, ಅಂಗಡಿ ಅಲ್ಲಿಗೆ ಸ್ಥಳಾಂತರಿಗೊಂಡಿತು. ಸಣ್ಣ ಪೇಟೆಯಲ್ಲಿದ್ದ ಸೌದಾಮಿನಿ
ಚಿತ್ರ ಇಲ್ಲಿ ಬಂಗಾರದ ಒಪ್ಪವಿಟ್ಟ ಚೌಕಟ್ಟಿನಲ್ಲಿ ಬಂದಿಯಾಯಿತು.
{{gap}}ನೃತ್ಯ ಕಾರ್ಯಕ್ರಮದ ವಿಷಯ ಅವನಿಗೆ ಗೊತ್ತಾದದ್ದು ಪತ್ರಿಕೆಗಳ ಮೂಲಕ,
ನೇರವಾಗಿ ಮುಖ್ಯಮಂತ್ರಿಯ ನಿವಾಸಕ್ಕೆ__ಗೃಹಕಾರ್ಯಾಲಯಕ್ಕೆ ಬಂದ.
{{gap}}ಪರಶುರಾಮ್ನನ್ನು ಕೇಳಿದ :
{{gap}} “ಪ್ರತಿಷ್ಠಾನದವರು ಬಂದಿದ್ದಾರಂತಲ್ಲ, ನಮ್ಮ ಸೇವೆ ಬೇಡವೆ?”<noinclude></noinclude>
eylm43uu7s2q7f1iwbfu6jecz88k6zq
317847
317846
2026-05-07T08:50:48Z
Ashwini Rai K
8475
317847
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=164|right=ಮಿಂಚು}}
ಬಹುದೊಂತ ಆಸೆ ಇಟ್ಕೊಂಡಿದ್ದೆ. ಅದು ಹುಸಿಯಾಯ್ತು, ಅವನೀಗ ಅವಳ ಕಂಕುಳ ಕೂಸು,"
{{gap}}“ನನಗೂ ಒಂದು ಫಾರೀನ್ ಟ್ರಿಪ್ ಏರ್ಪಾಟು ಮಾಡಿದ್ರೆ ನಾನೂ ಕೂಸಾ
ಗ್ತೀನಿ.
{{gap}}ನನ್ನನ್ನೂ ಅವಳು ಎತ್ಕೋಬಹುದು."
{{gap}}“ನಮ್ಮನ್ನು ಅವಳು ಹೊತ್ಕೊಳ್ಳೋ ಕಾಲ ಕಳೀತು."
{{gap}}ಧ್ವನಿ ಕುಗ್ಗಸಿ ರಂಗಸ್ವಾಮಿ ಕೇಳಿದರು :
{{gap}}“ಇವಳು ಅವಳೇ ಅನ್ನೋದರಲ್ಲಿ ನಿಮಗೆ ಸಂಶಯವಿಲ್ಲ ಅನ್ನಿ.”
{{gap}}“ಇದೆಯಪ್ಪ, ಇನ್ನೂ ಇದೆ....ನಾವು ರಾಜಕೀಯ ನೆಲೆಯಲ್ಲಿ ಹೋರಾಡ್ಬೇಕು.
ಅವಳನ್ನು ಪಟ್ಟದಿಂದ ಇಳಿಸಿ ಜೈಲಿಗೋ ಮಠಕ್ಕೋ ಕಳಿಸ್ಬೇಕು,”
{{gap}} “ಅವಳಿಗೆ ದಿಲ್ಲಿ ಬೆಂಬಲ ಇರೋವರೆಗೂ ಇದೊಂದೂ ಆಗೋದಿಲ್ಲ.”
{{gap}}“ಅವರಿಗೆ ಬೇಕಾದ್ದೇನು ? ರಾಜ್ಯದಲ್ಲಿ ಸುಭದ್ರ ಸರಕಾರ, ಕಾಲಕಾಲಕ್ಕೆ
ಕಪ್ಪ . ಈ ಸೂತ್ರದ ಆಧಾರದ ಮೇಲೆ ಕೆಲಸ ನಡೀಬೇಕು.”
{{gap}}ಇವತ್ತು ನಮ್ಮ ಸ್ನೇಹದ ಪುನರುದ್ದೀಪನ. ಆದರ ನೆನಪಿಗಾಗಿ ಒಂದೊಂದು ಚೋಟಾ ಪೆಗ್.”
{{gap}}"ಸರಿ!"
{{center|*{{gap}}*{{gap}}*}}
{{gap}}ಧನಂಜಯಕುಮಾರ ನಿಗಮದ ಹತ್ತು ಗುದಾಮಗಳನ್ನು ಖಾಲಿ ಮಾಡಿದ್ದ.
ಅರ್ಧಕ್ಕರ್ಧ ರಿಜೆಕ್ಟ್ಸ್ ಎಂದು ಬರೆಸಿದ್ದರಿಂದ ಬಿಲ್ ಕಿರಿದಾಗಿತ್ತು. ಅಂಗಡಿ ಸಣ್ಣ
ಪೇಟೆಯಲ್ಲೇ ಇದ್ದರೂ ಎಷ್ಟು ಎತ್ತರಕ್ಕೆ ಏರಿದ್ದ ಆತ ! ಕೊಡಬೇಕಾದವರಿಗೆಲ್ಲ
ಕೊಡುತ್ತಿದ್ದ, ತಪ್ಪದೆ. ಹೇಳಿದ ಅವಧಿಯೊಳಗೆ ಲೆಕ್ಕ ಚುಕ್ತಾ,
{{gap}}ಸೌದಾಮಿನಿಯ ಎದುರು ಅವನು ತೋಡಿಕೊಂಡಿದ್ದ :
{{gap}}“ನನಗೆ ಹಣ ಮುಖ್ಯ ಅಲ್ಲ ಮಾತಾಜಿ. ಅತ್ಯಂತ ಶ್ರೇಷ್ಠವಾದದ್ದು ತಮ್ಮ
ವಿಶ್ವಾಸ.”
{{gap}}ಆ ವಿಶ್ವಾಸದ ಫಲವಾಗಿಯೇ ನಗರದ ರಾಜಬೀದಿಯಲ್ಲಿ ದೊಡ್ಡ ಕಟ್ಟಡ
ಸಿಕ್ಕಿತು, ಅಂಗಡಿ ಅಲ್ಲಿಗೆ ಸ್ಥಳಾಂತರಿಗೊಂಡಿತು. ಸಣ್ಣ ಪೇಟೆಯಲ್ಲಿದ್ದ ಸೌದಾಮಿನಿ
ಚಿತ್ರ ಇಲ್ಲಿ ಬಂಗಾರದ ಒಪ್ಪವಿಟ್ಟ ಚೌಕಟ್ಟಿನಲ್ಲಿ ಬಂದಿಯಾಯಿತು.
{{gap}}ನೃತ್ಯ ಕಾರ್ಯಕ್ರಮದ ವಿಷಯ ಅವನಿಗೆ ಗೊತ್ತಾದದ್ದು ಪತ್ರಿಕೆಗಳ ಮೂಲಕ,
ನೇರವಾಗಿ ಮುಖ್ಯಮಂತ್ರಿಯ ನಿವಾಸಕ್ಕೆ__ಗೃಹಕಾರ್ಯಾಲಯಕ್ಕೆ ಬಂದ.
{{gap}}ಪರಶುರಾಮ್ನನ್ನು ಕೇಳಿದ :
{{gap}} “ಪ್ರತಿಷ್ಠಾನದವರು ಬಂದಿದ್ದಾರಂತಲ್ಲ, ನಮ್ಮ ಸೇವೆ ಬೇಡವೆ?”<noinclude></noinclude>
oy8uf3g587bv9byoq6ow9e0zarzf93p
317848
317847
2026-05-07T08:54:00Z
Ashwini Rai K
8475
317848
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=164|right=ಮಿಂಚು}}
ಬಹುದೊಂತ ಆಸೆ ಇಟ್ಕೊಂಡಿದ್ದೆ. ಅದು ಹುಸಿಯಾಯ್ತು, ಅವನೀಗ ಅವಳ ಕಂಕುಳ ಕೂಸು,"
{{gap}}“ನನಗೂ ಒಂದು ಫಾರೀನ್ ಟ್ರಿಪ್ ಏರ್ಪಾಟು ಮಾಡಿದ್ರೆ ನಾನೂ ಕೂಸಾ
ಗ್ತೀನಿ.
{{gap}}ನನ್ನನ್ನೂ ಅವಳು ಎತ್ಕೋಬಹುದು."
{{gap}}“ನಮ್ಮನ್ನು ಅವಳು ಹೊತ್ಕೊಳ್ಳೋ ಕಾಲ ಕಳೀತು."
{{gap}}ಧ್ವನಿ ಕುಗ್ಗಸಿ ರಂಗಸ್ವಾಮಿ ಕೇಳಿದರು :
{{gap}}“ಇವಳು ಅವಳೇ ಅನ್ನೋದರಲ್ಲಿ ನಿಮಗೆ ಸಂಶಯವಿಲ್ಲ ಅನ್ನಿ.”
{{gap}}“ಇದೆಯಪ್ಪ, ಇನ್ನೂ ಇದೆ....ನಾವು ರಾಜಕೀಯ ನೆಲೆಯಲ್ಲಿ ಹೋರಾಡ್ಬೇಕು.
ಅವಳನ್ನು ಪಟ್ಟದಿಂದ ಇಳಿಸಿ ಜೈಲಿಗೋ ಮಠಕ್ಕೋ ಕಳಿಸ್ಬೇಕು,”
{{gap}} “ಅವಳಿಗೆ ದಿಲ್ಲಿ ಬೆಂಬಲ ಇರೋವರೆಗೂ ಇದೊಂದೂ ಆಗೋದಿಲ್ಲ.”
{{gap}}“ಅವರಿಗೆ ಬೇಕಾದ್ದೇನು ? ರಾಜ್ಯದಲ್ಲಿ ಸುಭದ್ರ ಸರಕಾರ, ಕಾಲಕಾಲಕ್ಕೆ
ಕಪ್ಪ . ಈ ಸೂತ್ರದ ಆಧಾರದ ಮೇಲೆ ಕೆಲಸ ನಡೀಬೇಕು.”
{{gap}}ಇವತ್ತು ನಮ್ಮ ಸ್ನೇಹದ ಪುನರುದ್ದೀಪನ. ಆದರ ನೆನಪಿಗಾಗಿ ಒಂದೊಂದು ಚೋಟಾ ಪೆಗ್.”
{{gap}}"ಸರಿ!"
{{center| *{{gap}}*{{gap}}*}}
{{gap}}ಧನಂಜಯಕುಮಾರ ನಿಗಮದ ಹತ್ತು ಗುದಾಮಗಳನ್ನು ಖಾಲಿ ಮಾಡಿದ್ದ.
ಅರ್ಧಕ್ಕರ್ಧ ರಿಜೆಕ್ಟ್ಸ್ ಎಂದು ಬರೆಸಿದ್ದರಿಂದ ಬಿಲ್ ಕಿರಿದಾಗಿತ್ತು. ಅಂಗಡಿ ಸಣ್ಣ
ಪೇಟೆಯಲ್ಲೇ ಇದ್ದರೂ ಎಷ್ಟು ಎತ್ತರಕ್ಕೆ ಏರಿದ್ದ ಆತ ! ಕೊಡಬೇಕಾದವರಿಗೆಲ್ಲ
ಕೊಡುತ್ತಿದ್ದ, ತಪ್ಪದೆ. ಹೇಳಿದ ಅವಧಿಯೊಳಗೆ ಲೆಕ್ಕ ಚುಕ್ತಾ,
{{gap}}ಸೌದಾಮಿನಿಯ ಎದುರು ಅವನು ತೋಡಿಕೊಂಡಿದ್ದ :
{{gap}}“ನನಗೆ ಹಣ ಮುಖ್ಯ ಅಲ್ಲ ಮಾತಾಜಿ. ಅತ್ಯಂತ ಶ್ರೇಷ್ಠವಾದದ್ದು ತಮ್ಮ
ವಿಶ್ವಾಸ.”
{{gap}}ಆ ವಿಶ್ವಾಸದ ಫಲವಾಗಿಯೇ ನಗರದ ರಾಜಬೀದಿಯಲ್ಲಿ ದೊಡ್ಡ ಕಟ್ಟಡ
ಸಿಕ್ಕಿತು, ಅಂಗಡಿ ಅಲ್ಲಿಗೆ ಸ್ಥಳಾಂತರಿಗೊಂಡಿತು. ಸಣ್ಣ ಪೇಟೆಯಲ್ಲಿದ್ದ ಸೌದಾಮಿನಿ
ಚಿತ್ರ ಇಲ್ಲಿ ಬಂಗಾರದ ಒಪ್ಪವಿಟ್ಟ ಚೌಕಟ್ಟಿನಲ್ಲಿ ಬಂದಿಯಾಯಿತು.
{{gap}}ನೃತ್ಯ ಕಾರ್ಯಕ್ರಮದ ವಿಷಯ ಅವನಿಗೆ ಗೊತ್ತಾದದ್ದು ಪತ್ರಿಕೆಗಳ ಮೂಲಕ,
ನೇರವಾಗಿ ಮುಖ್ಯಮಂತ್ರಿಯ ನಿವಾಸಕ್ಕೆ__ಗೃಹಕಾರ್ಯಾಲಯಕ್ಕೆ ಬಂದ.
{{gap}}ಪರಶುರಾಮ್ನನ್ನು ಕೇಳಿದ :
{{gap}} “ಪ್ರತಿಷ್ಠಾನದವರು ಬಂದಿದ್ದಾರಂತಲ್ಲ, ನಮ್ಮ ಸೇವೆ ಬೇಡವೆ?”<noinclude></noinclude>
8di96b1di5ivsnkwoidtxphrl4xzen7
317849
317848
2026-05-07T08:54:37Z
Ashwini Rai K
8475
317849
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=164|right=ಮಿಂಚು}}
ಬಹುದೊಂತ ಆಸೆ ಇಟ್ಕೊಂಡಿದ್ದೆ. ಅದು ಹುಸಿಯಾಯ್ತು, ಅವನೀಗ ಅವಳ ಕಂಕುಳ ಕೂಸು,"
{{gap}}“ನನಗೂ ಒಂದು ಫಾರೀನ್ ಟ್ರಿಪ್ ಏರ್ಪಾಟು ಮಾಡಿದ್ರೆ ನಾನೂ ಕೂಸಾ
ಗ್ತೀನಿ.
{{gap}}ನನ್ನನ್ನೂ ಅವಳು ಎತ್ಕೋಬಹುದು."
{{gap}}“ನಮ್ಮನ್ನು ಅವಳು ಹೊತ್ಕೊಳ್ಳೋ ಕಾಲ ಕಳೀತು."
{{gap}}ಧ್ವನಿ ಕುಗ್ಗಸಿ ರಂಗಸ್ವಾಮಿ ಕೇಳಿದರು :
{{gap}}“ಇವಳು ಅವಳೇ ಅನ್ನೋದರಲ್ಲಿ ನಿಮಗೆ ಸಂಶಯವಿಲ್ಲ ಅನ್ನಿ.”
{{gap}}“ಇದೆಯಪ್ಪ, ಇನ್ನೂ ಇದೆ....ನಾವು ರಾಜಕೀಯ ನೆಲೆಯಲ್ಲಿ ಹೋರಾಡ್ಬೇಕು.
ಅವಳನ್ನು ಪಟ್ಟದಿಂದ ಇಳಿಸಿ ಜೈಲಿಗೋ ಮಠಕ್ಕೋ ಕಳಿಸ್ಬೇಕು,”
{{gap}} “ಅವಳಿಗೆ ದಿಲ್ಲಿ ಬೆಂಬಲ ಇರೋವರೆಗೂ ಇದೊಂದೂ ಆಗೋದಿಲ್ಲ.”
{{gap}}“ಅವರಿಗೆ ಬೇಕಾದ್ದೇನು ? ರಾಜ್ಯದಲ್ಲಿ ಸುಭದ್ರ ಸರಕಾರ, ಕಾಲಕಾಲಕ್ಕೆ
ಕಪ್ಪ . ಈ ಸೂತ್ರದ ಆಧಾರದ ಮೇಲೆ ಕೆಲಸ ನಡೀಬೇಕು.”
{{gap}}ಇವತ್ತು ನಮ್ಮ ಸ್ನೇಹದ ಪುನರುದ್ದೀಪನ. ಆದರ ನೆನಪಿಗಾಗಿ ಒಂದೊಂದು ಚೋಟಾ ಪೆಗ್.”
{{gap}}"ಸರಿ!"
{{center|*{{gap}}*{{gap}}*}}
{{gap}}ಧನಂಜಯಕುಮಾರ ನಿಗಮದ ಹತ್ತು ಗುದಾಮಗಳನ್ನು ಖಾಲಿ ಮಾಡಿದ್ದ.
ಅರ್ಧಕ್ಕರ್ಧ ರಿಜೆಕ್ಟ್ಸ್ ಎಂದು ಬರೆಸಿದ್ದರಿಂದ ಬಿಲ್ ಕಿರಿದಾಗಿತ್ತು. ಅಂಗಡಿ ಸಣ್ಣ
ಪೇಟೆಯಲ್ಲೇ ಇದ್ದರೂ ಎಷ್ಟು ಎತ್ತರಕ್ಕೆ ಏರಿದ್ದ ಆತ ! ಕೊಡಬೇಕಾದವರಿಗೆಲ್ಲ
ಕೊಡುತ್ತಿದ್ದ, ತಪ್ಪದೆ. ಹೇಳಿದ ಅವಧಿಯೊಳಗೆ ಲೆಕ್ಕ ಚುಕ್ತಾ,
{{gap}}ಸೌದಾಮಿನಿಯ ಎದುರು ಅವನು ತೋಡಿಕೊಂಡಿದ್ದ :
{{gap}}“ನನಗೆ ಹಣ ಮುಖ್ಯ ಅಲ್ಲ ಮಾತಾಜಿ. ಅತ್ಯಂತ ಶ್ರೇಷ್ಠವಾದದ್ದು ತಮ್ಮ
ವಿಶ್ವಾಸ.”
{{gap}}ಆ ವಿಶ್ವಾಸದ ಫಲವಾಗಿಯೇ ನಗರದ ರಾಜಬೀದಿಯಲ್ಲಿ ದೊಡ್ಡ ಕಟ್ಟಡ
ಸಿಕ್ಕಿತು, ಅಂಗಡಿ ಅಲ್ಲಿಗೆ ಸ್ಥಳಾಂತರಿಗೊಂಡಿತು. ಸಣ್ಣ ಪೇಟೆಯಲ್ಲಿದ್ದ ಸೌದಾಮಿನಿ
ಚಿತ್ರ ಇಲ್ಲಿ ಬಂಗಾರದ ಒಪ್ಪವಿಟ್ಟ ಚೌಕಟ್ಟಿನಲ್ಲಿ ಬಂದಿಯಾಯಿತು.
{{gap}}ನೃತ್ಯ ಕಾರ್ಯಕ್ರಮದ ವಿಷಯ ಅವನಿಗೆ ಗೊತ್ತಾದದ್ದು ಪತ್ರಿಕೆಗಳ ಮೂಲಕ,
ನೇರವಾಗಿ ಮುಖ್ಯಮಂತ್ರಿಯ ನಿವಾಸಕ್ಕೆ__ಗೃಹಕಾರ್ಯಾಲಯಕ್ಕೆ ಬಂದ.
{{gap}}ಪರಶುರಾಮ್ನನ್ನು ಕೇಳಿದ :
{{gap}} “ಪ್ರತಿಷ್ಠಾನದವರು ಬಂದಿದ್ದಾರಂತಲ್ಲ, ನಮ್ಮ ಸೇವೆ ಬೇಡವೆ?”<noinclude></noinclude>
6yi8o5a4zhs9r96s4q932pq8dqp5f2q
ಪುಟ:ಮಿಂಚು.pdf/೨೬೨
104
20709
317850
250672
2026-05-07T08:56:13Z
Ashwini Rai K
8475
/* Validated */
317850
proofread-page
text/x-wiki
<noinclude><pagequality level="4" user="Ashwini Rai K" /></noinclude>256{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}ಮಿಂಚು</br>
{{gap}}ಕಲ್ಯಾಣನಗರದ ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಧ್ವನಿವರ್ಧಕಗಳು ಕೇಳಿರಿ !</br>
ಕೇಳಿರಿ !” ಮೊಳಗಿದವು. ಮುಖ್ಯಮಂತ್ರಿಯ ನಿಧನದ ನಿಮಿತ್ತ ಶಾಲೆ ಕಾಲೇಜು</br>
ಗಳಿಗೆ, ಸರಕಾರಿ ಕಚೇರಿಗಳಿಗೆ ರಜಾ, ಮಾಜಿ ಚೀಫ್ ಮಿನಿಸ್ಟರ್ ಸೌದಾಮಿನಿ</br>
ಮಾತಾಜಿಯವರ ಪಾರ್ಥಿವ ಶರೀರಕ್ಕೆ, ಹನ್ನೊಂದು ಗಂಟೆಗೆ ಸರಿಯಾಗಿ ಹರಿಶ್ಚಂದ್ರ</br>
ಘಾಟ್ನಲ್ಲಿ ಧರ್ಮಮಠದ ಸ್ವಾಮೀಜಿಯವರಿಂದ ಅಂತ್ಯ ಸಂಸ್ಕಾರ, “ಕೇಳಿರಿ !</br>
ಕೇಳಿರಿ !”</br>
{{gap}}ಗನ್ ಕ್ಯಾರಿಯೇಜ್ನಲ್ಲಿರಿಸಿದ ಪುಷ್ಪಾಚ್ಛಾದಿತ ಶವವನ್ನು ರಾಜಧಾನಿಯ</br>
ಉದ್ದಕ್ಕೆ ಅಗಲಕ್ಕೆ ಮೆರವಣಿಗೆಯಲ್ಲಿ ಒಯ್ದರು. ಮುಂದೆ ಪೊಲೀಸ್ ಪಟಾಲಂ.</br>
ಹಿಂದಿನಿಂದ ಕಾರುಗಳು.</br>
{{gap}}ಕೊನೆಯ ಕಾರನ್ನು ಕರೀಂ ನಡೆಸುತ್ತಿದ್ದ. ಧನಂಜಯಕುಮಾರನೂ ಕರೀಮನ</br>
ಕಂಪೆನಿಯ ಒಡೆಯನೂ ಆ ಕಾರಿನಲ್ಲಿದ್ದರು.</br>
{{gap}}ಸ್ಮಶಾನದ ಒಳಗೆ-ಹೊರಗೆ, ರಸ್ತೆಗಳಲ್ಲಿ, ಮನೆ ಮಹಡಿಗಳಲ್ಲಿ, ಮರಗಳ</br>
ರೆಂಬೆ ಕೊಂಬೆಗಳಲ್ಲಿ ಜನ ಕಿಕ್ಕಿರಿದಿದ್ದರು.</br>
{{gap}}ಸೀಳು ಸೌದೆಗಳಿಂದ ಅಣಿಗೊಳಿಸಿದ್ದ ಅಟ್ಟಣಿಗೆಯ ಮೇಲೆ, ಪೊಲೀಸ್ ಅಧಿ</br>
ಕಾರಿಗಳು ವಾಹನದಿಂದ ತಾವು ಹೊತ್ತು ಇಳಿಸಿದ ಶವವನ್ನು ಇರಿಸಿದರು. ಅವರದೇ</br>
ಧ್ವನಿವರ್ಧಕ ವಿಶ್ವಂಭರನ ನೆರವಿಗೆ ಬಂತು,</br>
{{gap}}“ಬಾಂಧವರೇ ! ಹಿಂದೆಂದೂ ಅನುಭವಿಸದ ಸಂಕಟದಿಂದ ನಾನು ಬಾಧಿತನಾಗಿ</br>
ದ್ದೇನೆ. ಕಂಠ ಉಮ್ಮಳಿಸುತ್ತಿದೆ, ಅಶ್ರುಭರದಿಂದ ದೃಷ್ಟಿ ಜಡವಾಗಿದೆ, ಇನ್ನು ಹೆಚ್ಚು</br>
ನಾನು ಮಾತನಾಡಲಾರೆ. ನಮ್ಮ ರಾಷ್ಟ್ರ ಪಕ್ಷದ ಹಿರಿಯ ಹುದ್ದರಿಗೆ ನಮ್ಮ ಮಾಜಿ</br>
ಮುಖ್ಯಮಂತ್ರಿಗೆ ಇದೋ ಕಿಂಧೆಯ ಶೋಕತಪ್ತ ವಿದಾಯ !”</br>
{{gap}}ಶವದ ಮೇಲೆ ಸೌದೆ ಒಟ್ಟಿದರು. ಸೂಚನೆ ಬಂದೊಡನೆ ಪೊಲೀಸ್ ದಂಡು</br>
'ಸಲಾಮಿ' ನುಡಿಯಿತು. ಆಕಾಶದತ್ತ ಗುಂಡುಗಳು ಹಾರಿದಾಗ ಕರೀಂ ಒಂದೇ</br>
ಸಮನೆ ತನ್ನ ಕಾರಿನ ಹಾರ್ನ್ ಒತ್ತಿದ. “ಸಾಕು ! ನಿಲ್ಲು !” ಎಂದು ಅವನ ಯಜ</br>
ಮಾನ ಗದರಿಸಿ ತಡೆಯಬೇಕಾಯಿತು.</br>
{{gap}}ಹಸಿ ಸೌದೆ ಹೊಗೆಯುಗುಳುತ್ತ ಕಷ್ಟ ಕೊಟ್ಟಿತು. ಡಬ್ಬ ಡಬ್ಬ ಸೀಮೆ ಎಣ್ಣೆ</br>
ಸುರಿದರು.</br>
{{gap}}ಕಂಠ ಬಿರಿಯುವಂತೆ ಜಯಘೋಷ ಮಾಡಿತು ಜನಸ್ತೋಮ :</br>
{{gap}}“ಸೌದಾಮಿನಿದೇವಿ ಚಿರಾಯುವಾಗಲಿ !”</br>
{{gap}}{{gap}}{{gap}}{{gap}}{{gap}}{{gap}}{{gap}}-0-<noinclude></noinclude>
4bgipftd82d3s4j2r3ljq0k7f6rjg4m
ಪುಟ:Mrutyunjaya.pdf/೪
104
21488
317708
201345
2026-05-06T16:10:40Z
Ashwini Rai K
8475
/* Validated */
317708
proofread-page
text/x-wiki
<noinclude><pagequality level="4" user="Ashwini Rai K" /></noinclude>{{Css image crop
|Image = Mrutyunjaya.pdf
|Page = 4
|bSize = 399
|cWidth = 404
|cHeight = 599
|oTop = 0
|oLeft = -1
|Location = center
|Description =
}}
<noinclude></noinclude>
80qnez3up7q0grdxwx5zqa39cf2ufq2
ಪುಟ:Mrutyunjaya.pdf/೫
104
21489
317709
201349
2026-05-06T16:11:06Z
Ashwini Rai K
8475
/* Validated */
317709
proofread-page
text/x-wiki
<noinclude><pagequality level="4" user="Ashwini Rai K" /></noinclude>{{Css image crop
|Image = Mrutyunjaya.pdf
|Page = 5
|bSize = 396
|cWidth = 395
|cHeight = 597
|oTop = 0
|oLeft = 0
|Location = center
|Description =
}}<noinclude></noinclude>
aw27i0jc4zp5nwu0u8xqa0svqe1oq3z
ಪುಟ:Mrutyunjaya.pdf/೬
104
21490
317711
242844
2026-05-06T16:11:39Z
Ashwini Rai K
8475
/* Validated */
317711
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|'''<big>'ಮೃತ್ಯುಂಜಯ' ಚಿತ್ರಶಾಲೆ</big>'''}}
{{gap}}ಈ ಕಾದಂಬರಿಯಲ್ಲಿ ಚಿತ್ರಿತವಾಗಿರುವ__ಪ್ರಸ್ತಾಪಿಸಲ್ಪಟ್ಟಿರುವ__ವ್ಯಕ್ತಿ<br>ಗಳು, ದೇವರು, ದೇವತೆಯರು, ನದಿ, ಸ್ಥಳ, ವಸ್ತು, ಪ್ರದೇಶ, ದೇಶಗಳು:<br>
ಅನ್ಪು : ನೀರಾನೆಪ್ರಾಂತದ ಮುಖ್ಯ ಪಟ್ಟಣದ ಬಡ ನೇಕಾರ.<br>
ಅನೂಬಿಸ್ : ಸತ್ತವರ ವಿಚಾರಣೆ ನಡೆಸಲು ಪರಲೋಕದ ನ್ಯಾಯಮೂರ್ತಿ<br>
{{gap}}ಒಸೈರಿಸ್ಗೆ ನೆರವಾಗುವ ತೋಳ ತಲೆಯ ದೇವತೆ; ಶವಲೇಪನದ<br>
{{gap}}ದೇವತೆ ಕೂಡಾ.
ಅಪೆಟ್ : ನೀರಾನೆಪ್ರಾಂತದ ಮುಖ್ಯ ಪಟ್ಟಣದ ದೇವಮಂದಿರದ ಅರ್ಚಕ.<br>
ಅಪೋಫಿಸ್ : ರಾಜಧಾನಿಯಲ್ಲಿ ದೇವತಾಮೂರ್ತಿಗಳನ್ನು ಮಾರುವ ಅಂಗಡಿ<br>
{{gap}}ಕಾರ.
ಅಬ್ಟು : ಒಸೈರಿಸ್ ದೇವತೆಯ ಗೋರಿ ಇರುವ ಯಾತ್ರಾಸ್ಥಳ; ಐಗುಪ್ತದ<br>
{{gap}}ಪರಮ ಪುಣ್ಯಕ್ಷೇತ್ರ; ಮುಂದೆ ಗ್ರೀಕರಿಟ್ಟ ಹೆಸರು ಅಬಿಡೋಸ್.<br>
ಅಮನ್ : ರಾ, ಪ್ಟಾ, ಅಮನ್_ಐಗುಪ್ತದ ಮೂವರು ಪರಮ ಶ್ರೇಷ್ಠ <br>
{{gap}}ದೇವರು. ಆರಂಭದಲ್ಲಿ ಅಮನ್ ದಕ್ಷಿಣ ಐಗುಪ್ತದಲ್ಲಷ್ಟೇ ಹಿರಿಯ<br>
{{gap}}ದೇವರೆಂದು ಪ್ರಸಿದ್ಧ.<br>
ಅಮೆನೆಮೊಪೆಟ್ : ಐಗುಪ್ತದ ಸೇನಾನಿ.<br>
ಅಮೋಸೆಸ್ : ಲಿಪಿಕಾರ. <br>
ಅಹಮೋಸ್ : ತೀರಾ ಪ್ರಾಚೀನ ಪೆರೋ.<br>
ಅಹೂರಾ : ನೀರಾನೆಪ್ರಾಂತದ ಗ್ರಾಮೀಣ ಮಹಿಳೆ.<br>
ಆಂಖ್ : ರಾಜಲಾಂಛನ: ಉರುಳಿನಾಕಾರದ ತಲೆಯ, ಹಸುರು ಹೊಳಪಿನ<br>
{{gap}}ಕಿರಿಯ ಶಿಲುಬೆಯಾಕೃತಿ.<br>
ಆನ್ : ರಾ ದೇವರ ಮಹಾಮಂದಿರವಿರುವ ನಗರಿ; ಮುಂದೆ ಗ್ರೀಕರು ಅದನ್ನು<br>
{{gap}}ಹಿಲಿಯೋಪೋಲಿಸ್_ಸೂರ್ಯನಗರಿ_ಎಂದು ಕರೆದರು.<br>
ಆಪಿಸ್ : ಮರಣಾನಂತರ ದೇವತೆಯಾದ ಪವಿತ್ರ ಹೋರಿ.<noinclude></noinclude>
5a62p1zqoj7ksmdg5zikds08heldxqr
ಪುಟ:Mrutyunjaya.pdf/೮
104
21492
317715
61136
2026-05-06T16:13:49Z
Ashwini Rai K
8475
/* Validated */
317715
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ix}}
ಥೊಎರಿಸ್ : ಬಸಿರಿನ ರಕ್ಷಣೆಯ ಮತ್ತು ಸುಖಪ್ರಸವದ ದೇವತೆ ; ಸ್ತ್ರೀ ದೇಹ_ನೇರಾನೆ ಮುಖ.
ಥೋಥ್ : ವಿದಾ ದೇವತೆ ; ತಿಂಗಳ ಹೆಸರು ಕೂಡಾ.
ದೆಂದೆರೆ : ಹಾಥೊರ್ ದೇವತೆಯ ದೇವಾಲಯವಿರುವ ಊರು.
ದೆಬೆನ್ : ಬಂಗಾರದ ತೂಕ: ಎರಡೂವರೆ ಔನ್ಸ್.
ನೀರಾನೆಪ್ರಾಂತ : ಪ್ರತಿಪ್ರಾಂತಕ್ಕೂ ಅಲ್ಲಿನ ಬುಡಕಟ್ಟಿನ ರಕ್ಷಕ ಸಂಕೇತದ ಹೆಸರಿಡುತ್ತಿದ್ದರು ; ಈ ಬಗೆಯವು ಮೊಸಳೆಪ್ರಾಂತ, ಜಿಂಕೆಪ್ರಾಂತ, ಟಗರುಪ್ರಾಂತ, ಇತ್ಯಾದಿ. ಪೆರೋನ ವಿರುದ್ಧ ದಂಗೆ ಎದ್ದದ್ದು ನೀರಾನೆಪ್ರಾಂತ.
ನೀಲ : ನೈಲ್.
ನುಟ್ಮೋಸ್ : ನೀರಾನೆಪ್ರಾಂತದ ಹಿರಿಯ ಭೂಮಾಲಿಕ.
ನುಬಿಯ : ಐಗುಪ್ತದ ದಕ್ಷಿಣಕ್ಕಿರುವ ದೇಶ ; ಈಗಿನ ಉಗಾಂಡ.
ನೆಖೆನ್ : ಹಿರಿಯ ಶಿಲ್ಪಿ.
ನೆಜಮುಟ್ : ನೀರಾನೆಪ್ರಾಂತದ ಪ್ರಮುಖ ಕುಶಲ ಕರ್ಮಿ ಸ್ನೋಪ್ರುವಿನ ಪತ್ನಿ.
ನಿಫರ್ ಟೀಮ್ : ಮಹಾರಾಣಿ : ಪೆರೋ ಪೇಪಿಯ ಪಟ್ಟದ ಮಹಿಷಿ.
ನೆಫರುರಾ : ದಾಸ್ಯದಿಂದ ಮುಕ್ತಳಾಗುವ ಸ್ತ್ರೀ.
ನೆಫಿಸ್ : ನೀರಾನೆಪ್ರಾಂತದ ಜನನಾಯಕ ಮೆನೆಫ್ಟಾನ ಮಡದಿ.
ನೆಬೆತ್ ಪೆರ್ : ಮನೆಯೊಡತಿ.
ನೆಹನವೇಯ್ಟ್ : ಪ್ರಾಂತಪಾಲ ಗೇಬುವಿನ ಪತ್ನಿ.
ಪ್ಟಾ : ಕುಶಲಕರ್ಮಿಗಳ ದೇವರು. ಅವನೇ ಸೃಷ್ಟಿಕರ್ತ ಎಂದು ಒಂದು ಮತ. ರಾ, ಪ್ಟಾ, ಅಮನ್_ಐಗುಪ್ತದ ಮೂವರು ಪರಮ ಶ್ರೇಷ್ಟ ದೇವರು.
ಪಂಟ್ : ಭಾರತದ ತುಳುನಾಡು.
ಪಾವೊಫಿ : ತಿಂಗಳ ಹೆಸರು.
ಪರೋ : ಐಗುಪ್ತದ ದೊರೆ, ಸಮ್ರಾಟ. ಪೆರು : ಮಹಾಮನೆ ; ಪರೋ : ಮಹಾಮನೆಯ ನೆವಾಸ ; ಹೀಬ್ರೂ ಭಾಷೆಯಲ್ಲಿ ಪೆರೋನನ್ನು<noinclude></noinclude>
4v14150k1y33udz3n9c8lpy85h8fxpn
317720
317715
2026-05-06T16:15:30Z
Ashwini Rai K
8475
317720
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ix}}
ಥೊಎರಿಸ್ : ಬಸಿರಿನ ರಕ್ಷಣೆಯ ಮತ್ತು ಸುಖಪ್ರಸವದ ದೇವತೆ ; ಸ್ತ್ರೀ ದೇಹ_ನೇರಾನೆ ಮುಖ.
ಥೋಥ್ : ವಿದಾ ದೇವತೆ ; ತಿಂಗಳ ಹೆಸರು ಕೂಡಾ.
ದೆಂದೆರೆ : ಹಾಥೊರ್ ದೇವತೆಯ ದೇವಾಲಯವಿರುವ ಊರು.
ದೆಬೆನ್ : ಬಂಗಾರದ ತೂಕ: ಎರಡೂವರೆ ಔನ್ಸ್.
ನೀರಾನೆಪ್ರಾಂತ : ಪ್ರತಿಪ್ರಾಂತಕ್ಕೂ ಅಲ್ಲಿನ ಬುಡಕಟ್ಟಿನ ರಕ್ಷಕ ಸಂಕೇತದ ಹೆಸರಿಡುತ್ತಿದ್ದರು ; ಈ ಬಗೆಯವು ಮೊಸಳೆಪ್ರಾಂತ, ಜಿಂಕೆಪ್ರಾಂತ, ಟಗರುಪ್ರಾಂತ, ಇತ್ಯಾದಿ. ಪೆರೋನ ವಿರುದ್ಧ ದಂಗೆ ಎದ್ದದ್ದು ನೀರಾನೆಪ್ರಾಂತ.
ನೀಲ : ನೈಲ್.
ನುಟ್ಮೋಸ್ : ನೀರಾನೆಪ್ರಾಂತದ ಹಿರಿಯ ಭೂಮಾಲಿಕ.
ನುಬಿಯ : ಐಗುಪ್ತದ ದಕ್ಷಿಣಕ್ಕಿರುವ ದೇಶ ; ಈಗಿನ ಉಗಾಂಡ.
ನೆಖೆನ್ : ಹಿರಿಯ ಶಿಲ್ಪಿ.
ನೆಜಮುಟ್ : ನೀರಾನೆಪ್ರಾಂತದ ಪ್ರಮುಖ ಕುಶಲ ಕರ್ಮಿ ಸ್ನೋಪ್ರುವಿನ ಪತ್ನಿ.
ನಿಫರ್ ಟೀಮ್ : ಮಹಾರಾಣಿ : ಪೆರೋ ಪೇಪಿಯ ಪಟ್ಟದ ಮಹಿಷಿ.
ನೆಫರುರಾ : ದಾಸ್ಯದಿಂದ ಮುಕ್ತಳಾಗುವ ಸ್ತ್ರೀ.
ನೆಫಿಸ್ : ನೀರಾನೆಪ್ರಾಂತದ ಜನನಾಯಕ ಮೆನೆಫ್ಟಾನ ಮಡದಿ.
ನೆಬೆತ್ ಪೆರ್ : ಮನೆಯೊಡತಿ.
ನೆಹನವೇಯ್ಟ್ : ಪ್ರಾಂತಪಾಲ ಗೇಬುವಿನ ಪತ್ನಿ.
ಪ್ಟಾ : ಕುಶಲಕರ್ಮಿಗಳ ದೇವರು. ಅವನೇ ಸೃಷ್ಟಿಕರ್ತ ಎಂದು ಒಂದು ಮತ. ರಾ, ಪ್ಟಾ, ಅಮನ್_ಐಗುಪ್ತದ ಮೂವರು ಪರಮ ಶ್ರೇಷ್ಟ ದೇವರು.
ಪಂಟ್ : ಭಾರತದ ತುಳುನಾಡು.
ಪಾವೊಫಿ : ತಿಂಗಳ ಹೆಸರು.
ಪರೋ : ಐಗುಪ್ತದ ದೊರೆ, ಸಮ್ರಾಟ. ಪೆರು : ಮಹಾಮನೆ ; ಪರೋ : ಮಹಾಮನೆಯ ನೆವಾಸ ; ಹೀಬ್ರೂ ಭಾಷೆಯಲ್ಲಿ ಪೆರೋನನ್ನು<noinclude></noinclude>
plu6ryeuzlwxx6gsl65l5h5vl3ai9ni
317725
317720
2026-05-06T16:17:39Z
Ashwini Rai K
8475
317725
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ix}}
ಥೊಎರಿಸ್ : ಬಸಿರಿನ ರಕ್ಷಣೆಯ ಮತ್ತು ಸುಖಪ್ರಸವದ ದೇವತೆ ; ಸ್ತ್ರೀ ದೇಹ_ನೇರಾನೆ ಮುಖ.
ಥೋಥ್ : ವಿದಾ ದೇವತೆ ; ತಿಂಗಳ ಹೆಸರು ಕೂಡಾ.
ದೆಂದೆರೆ : ಹಾಥೊರ್ ದೇವತೆಯ ದೇವಾಲಯವಿರುವ ಊರು.
ದೆಬೆನ್ : ಬಂಗಾರದ ತೂಕ: ಎರಡೂವರೆ ಔನ್ಸ್.
ನೀರಾನೆಪ್ರಾಂತ : ಪ್ರತಿಪ್ರಾಂತಕ್ಕೂ ಅಲ್ಲಿನ ಬುಡಕಟ್ಟಿನ ರಕ್ಷಕ ಸಂಕೇತದ ಹೆಸರಿಡುತ್ತಿದ್ದರು ; ಈ ಬಗೆಯವು ಮೊಸಳೆಪ್ರಾಂತ, ಜಿಂಕೆಪ್ರಾಂತ, ಟಗರುಪ್ರಾಂತ, ಇತ್ಯಾದಿ. ಪೆರೋನ ವಿರುದ್ಧ ದಂಗೆ ಎದ್ದದ್ದು ನೀರಾನೆಪ್ರಾಂತ.
ನೀಲ : ನೈಲ್.
ನುಟ್ಮೋಸ್ : ನೀರಾನೆಪ್ರಾಂತದ ಹಿರಿಯ ಭೂಮಾಲಿಕ.
ನುಬಿಯ : ಐಗುಪ್ತದ ದಕ್ಷಿಣಕ್ಕಿರುವ ದೇಶ ; ಈಗಿನ ಉಗಾಂಡ.
ನೆಖೆನ್ : ಹಿರಿಯ ಶಿಲ್ಪಿ.
ನೆಜಮುಟ್ : ನೀರಾನೆಪ್ರಾಂತದ ಪ್ರಮುಖ ಕುಶಲ ಕರ್ಮಿ ಸ್ನೋಪ್ರುವಿನ ಪತ್ನಿ.
ನಿಫರ್ ಟೀಮ್ : ಮಹಾರಾಣಿ : ಪೆರೋ ಪೇಪಿಯ ಪಟ್ಟದ ಮಹಿಷಿ.
ನೆಫರುರಾ : ದಾಸ್ಯದಿಂದ ಮುಕ್ತಳಾಗುವ ಸ್ತ್ರೀ.
ನೆಫಿಸ್ : ನೀರಾನೆಪ್ರಾಂತದ ಜನನಾಯಕ ಮೆನೆಫ್ಟಾನ ಮಡದಿ.
ನೆಬೆತ್ ಪೆರ್ : ಮನೆಯೊಡತಿ.
ನೆಹನವೇಯ್ಟ್ : ಪ್ರಾಂತಪಾಲ ಗೇಬುವಿನ ಪತ್ನಿ.
ಪ್ಟಾ : ಕುಶಲಕರ್ಮಿಗಳ ದೇವರು. ಅವನೇ ಸೃಷ್ಟಿಕರ್ತ ಎಂದು ಒಂದು ಮತ.
ರಾ, ಪ್ಟಾ, ಅಮನ್_ಐಗುಪ್ತದ ಮೂವರು ಪರಮ ಶ್ರೇಷ್ಟ ದೇವರು.
ಪಂಟ್ : ಭಾರತದ ತುಳುನಾಡು.
ಪಾವೊಫಿ : ತಿಂಗಳ ಹೆಸರು.
ಪರೋ : ಐಗುಪ್ತದ ದೊರೆ, ಸಮ್ರಾಟ. ಪೆರು : ಮಹಾಮನೆ ; ಪರೋ : ಮಹಾಮನೆಯ ನೆವಾಸ ; ಹೀಬ್ರೂ ಭಾಷೆಯಲ್ಲಿ ಪೆರೋನನ್ನು<noinclude></noinclude>
kqxmctveiiekofngx8lkyuzjp0v5rhm
ಪುಟ:Mrutyunjaya.pdf/೧೦
104
21494
317735
218128
2026-05-06T16:22:39Z
Ashwini Rai K
8475
/* Validated */
317735
proofread-page
text/x-wiki
<noinclude><pagequality level="4" user="Ashwini Rai K" />{{rh|center=xi|right=|left=}}</noinclude>ರಾನೋಫರ್ : ರಾಮೆರಿಪ್ಟಾನ ಸಹಪಾಠಿ.</br>
ರಾಮೆರಿಪ್ಟಾ : ಜನನಾಯಕ ಮೆನೆಪ್ಟಾನ ಮಗ.</br>
ಲಿಷ್ಟ್ : ರಾಜಧಾನಿಯ ಹತ್ತಿರದಲ್ಲಿ ದಕ್ಷಿಣಕ್ಕಿರುವ ಸಣ್ಣ ಪಟ್ಟಣ.</br>
ಲೆಬನನ್ : ಐಗುಪ್ತದ ಸಮೀಪ ದೇಶ.</br>
ವೆಸಿ : ಅಮನ್ ದೇವರ ಸ್ವಳ ; ಗ್ರೀಕರು ಮುಂದೆ ಇದನ್ನು ಥೀಬ್ಸ್ ಎಂದು</br> {{gap}}{{gap}}ಕರೆದರು; 'ನೆ' ಎಂಬ ಹೆಸರೂ ಅದಕ್ಕಿತ್ತು.</br>
ಷಾಡೂಫ್ : ಯಾತ.</br>
ಶೀಬಾ : ಅರಮನೆಯಲ್ಲಿ ಕಸಾಯಿ ಮನೆಯ ಕೆಲಸಗಾತಿ.</br>
ಸರು : ರಾಜಧಾನಿಯಲ್ಲಿನ ಹಿರಿಯ ಸಲಹೆಗಾರರ ಮಂಡಲಿ.</br>
ಸಿನ್ಯುಹೆ : ನೀರಾನೆಪ್ರಾಂತದ ಒಬ್ಬ ಭೂಮಾಲಿಕ.</br>
ಸೆರ್ಕೆಟ್ : ಆನ್ ನಗರಿಯ ಅಧಿಕಾರಿ.</br>
ಸೆತ್ : ಅಣ್ಣ ಒಸೈರಿಸನನ್ನು ಕೊಲೆ ಮಾಡಿದ ದುಷ್ಟ; ರಾ ಪುತ್ರ.</br>
ಸೆತ್ನಾ : ನೀರಾನೆಪ್ರಾಂತದ ಬಡಗಿ.</br>
ಸೆತೆಕ್ ನಖ್ತ್ : ನೀರಾನೆಪ್ರಾಂತದ ಇನ್ನೊಬ್ಬ ಭೂಮಾಲಿಕ.</br>
ಸೆನ್ಉಸರ್ಟ್ : ನೀರಾನೆಪ್ರಾಂತದ ಮತ್ತೊಬ್ಬ ಭೂಮಾಲಿಕ.</br>
ಸೆನೆಬ್ : ಅಮಾತ್ಯ ಭವನದ ಹಿರಿಯ ಲಿಪಿಕಾರ.</br>
ಸೆಬೆಕ್ಖು: ನೀರಾನೆಪ್ರಾಂತದ ಒಬ್ಬ ಪ್ರಮುಖ ಪ್ರಜೆ.</br>
ಸೆಮ : ನೀರಾನೆಪ್ರಾಂತದ ಹಿರಿಯರ ಸಮಿತಿಯ ಒಬ್ಬ ಸದಸ್ಯ.</br>
ಸೈಪ್ರಸ್ : ಐಗುಪ್ತತದ ನೆರೆಹೊರೆ ದೇಶ.</br>
ಸೈನೈ : ಐಗುಪ್ತದ ಈಶಾನ್ಯ ಗಡಿ ದೇಶ ;ಸೈನೈ ಎಂದರೂ ಇದೇ.</br>
ಸ್ಯೆನೆ : ಈಗಿನ ಆಸ್ವಾನಿನ ಪ್ರಾಚೀನ ಹೆಸರು.</br>
ಸ್ನೊಫ್ರು : ನೀರಾನೆಪ್ರಾಂತದ ಪ್ರಮುಖ ಪ್ರಜೆ.</br>
ಸೊಬೆಕ್ : ಮೊಸಳೆ ದೇವತೆ.</br>
ಸೊಥಿಸ್ : ಸಿರಿಯಸ್ ನಕ್ಷತ್ರದ ಪ್ರಾಚೀನ ಹೆಸರು;ಲುಬ್ಧಕ ನಕ್ಷತ್ರ.<noinclude></noinclude>
7xggeaqnjo01vzzh0svlthsvp31miiy
ಪುಟ:Mrutyunjaya.pdf/೧೫
104
21499
317747
61139
2026-05-06T16:37:02Z
Ashwini Rai K
8475
/* Validated */
317747
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=ಮೃತ್ಯುಂಜಯ |left=|right= }}
{{gap}} ಎದುರು ದಂಡೆಯಲ್ಲಿ ಪ್ರತಿಧ್ವನಿ ಕಂತುವುದಕ್ಕೆ ಮೊದಲೋ ಮೂರನೆಯ ರಾಜಭಟ ಆದೇಶದ ಪುನರುಚ್ಚಾರ ಆರಂಭಿಸಿದ.
{{gap}}ತನ್ನ ಪ್ರಯಾಣಿಕರು ದೋಣಿಯಿಂದ ಇಳಿಯುತ್ತಿದ್ದಂತೆಯೇ ಬಟಾ ಪರಿಹಾಸ್ಯದ ಧ್ವನಿಯಲ್ಲಿ ನುಡಿದ :
"ಬುತ್ತಿ ಗಿತ್ತಿ ದೋಣೀಲಿ ಬಿಟ್ಹೋಗ್ಬೇಡಿ....ನೀವು ಬರೋದರೊಳಗೆ ಎಲ್ಲಾ ಧ್ವಂಸ ಮಾಡೇವು !”
ಇದನ್ನು ಕೇಳಿ "ಓಹೋ! ಓಹೋ!" ಎಂದರು ಕೆಲವರು.
ಕೈಗೂಸಿನ ತಾಯಿ ಆಹೂರಾ ಕೇಳಿದಳು :
“ನಮ್ಮದರಿಂದ ರೊಟ್ಟಿ ಗಿಟ್ಟಿ ಕೊಟ್ಟಿರ బటా ಅಣ್ಣ?"
ಬಟಾ ಉತ್ತರಿಸಿದ :
“ ಬೇಡ ತಂಗಿ. ನಮಗೆಲ್ಲ ನನ್ನ ಯಜಮಾನಿತಿ ಕಟ್ಕೊಟ್ಟಿದ್ದಾಳೆ.”
ಅಷ್ಟರಲ್ಲೆ ದಕ್ಷಿಣದಿಂದ ಯಾತ್ರಿಕರನ್ನು ಹೊತ್ತಿದ್ದ ದೊಡ್ಡ ದೋಣಿ ಬಂತು.
ಒಬ್ಬ ರಾಜಭಟ ಕಿರಿಚಿದ:
"ಕತ್ತೇ ಮಕ್ಳು! ಯಾರಿಗೆ ಹೇಳ್ತಿರೋದು? ಏಯ್ ನೀನು! ತೆಗೆ ಯಯ್ಯ ದೋಣಿ!"
ಅದು ತನ್ನನ್ನು ಉದ್ದೇಶಿಸಿ ಆಡಿದ ಮಾತು ಎಂಬುದು ಬಟಾನಿಗೆ ಸ್ಪಷ್ಟವಾಯಿತು. ಹುಟ್ಟು ಹಾಕುವಂತೆ ನೌಕರರಿಗೆ ಸೂಚನೆ ನೀಡುತ್ತ, ತನ್ನ ಯಾತ್ರಿಕ ತಂಡದತ್ತ ಕೈಬೀಸಿ ಅವನು ನುಡಿದ :
" ಜಾತ್ರೇಲಿ ತಪ್ಪಿಸ್ಕೊಂಡೀರಿ, ಜಾಗ್ರತೆ! ಮೆನೆಪ್ಟಾ ಅಣ್ಣನ ಮಾತ್ನಂತೆ ನಡ್ಕೊಳ್ಳಿ. ನಾನು ಕೆಳಗಡೆ ಇರ್ತೇನೆ........ ಕತ್ತಲಾದ ತಕ್ಷಣ ಹೊರಟು ಬನ್ನಿ."
ದೋಣಿ ಕಟ್ಟೆಯ ಅಧಿಕಾರಿಯ ಆಜ್ಞೆ ಕೇಳಿಸಿತು:
" ಮೇಲಕ್ಕೂ ಕೆಳಕ್ಕೂ ಹೋಗಿ ! ಬರ್ತಿರೋ ದೋಣಿಗಳನ್ನ ಅಲ್ಲಲ್ಲೇ ತಡೀರಿ!”
ಕಟ್ಟೆಯ ಗೂಟಕ್ಕೆ ಕಟ್ಟಿದ್ದ ಎರಡು ಕಿರುದೋಣಿಗಳನ್ನು ಇಬ್ಬಿಬ್ಬರು<noinclude></noinclude>
37988j26tee4o0b27x6je329re7s0db
317772
317747
2026-05-06T16:48:25Z
Ashwini Rai K
8475
317772
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=ಮೃತ್ಯುಂಜಯ |left=|right= }}
{{gap}} ಎದುರು ದಂಡೆಯಲ್ಲಿ ಪ್ರತಿಧ್ವನಿ ಕಂತುವುದಕ್ಕೆ ಮೊದಲೋ ಮೂರನೆಯ ರಾಜಭಟ ಆದೇಶದ ಪುನರುಚ್ಚಾರ ಆರಂಭಿಸಿದ.
{{gap}}ತನ್ನ ಪ್ರಯಾಣಿಕರು ದೋಣಿಯಿಂದ ಇಳಿಯುತ್ತಿದ್ದಂತೆಯೇ ಬಟಾ ಪರಿಹಾಸ್ಯದ ಧ್ವನಿಯಲ್ಲಿ ನುಡಿದ :
{{gap}}"ಬುತ್ತಿ ಗಿತ್ತಿ ದೋಣೀಲಿ ಬಿಟ್ಹೋಗ್ಬೇಡಿ....ನೀವು ಬರೋದರೊಳಗೆ ಎಲ್ಲಾ ಧ್ವಂಸ ಮಾಡೇವು !”
{{gap}}ಇದನ್ನು ಕೇಳಿ "ಓಹೋ! ಓಹೋ!" ಎಂದರು ಕೆಲವರು.
{{gap}}ಕೈಗೂಸಿನ ತಾಯಿ ಆಹೂರಾ ಕೇಳಿದಳು :
{{gap}}“ನಮ್ಮದರಿಂದ ರೊಟ್ಟಿ ಗಿಟ್ಟಿ ಕೊಟ್ಟಿರ బటా ಅಣ್ಣ?"
{{gap}} ಬಟಾ ಉತ್ತರಿಸಿದ :
{{gap}} “ ಬೇಡ ತಂಗಿ. ನಮಗೆಲ್ಲ ನನ್ನ ಯಜಮಾನಿತಿ ಕಟ್ಕೊಟ್ಟಿದ್ದಾಳೆ.”
{{gap}}ಅಷ್ಟರಲ್ಲೆ ದಕ್ಷಿಣದಿಂದ ಯಾತ್ರಿಕರನ್ನು ಹೊತ್ತಿದ್ದ ದೊಡ್ಡ ದೋಣಿ ಬಂತು.
{{gap}}ಒಬ್ಬ ರಾಜಭಟ ಕಿರಿಚಿದ:
{{gap}}"ಕತ್ತೇ ಮಕ್ಳು! ಯಾರಿಗೆ ಹೇಳ್ತಿರೋದು? ಏಯ್ ನೀನು! ತೆಗೆ ಯಯ್ಯ ದೋಣಿ!"
{{gap}}ಅದು ತನ್ನನ್ನು ಉದ್ದೇಶಿಸಿ ಆಡಿದ ಮಾತು ಎಂಬುದು ಬಟಾನಿಗೆ ಸ್ಪಷ್ಟವಾಯಿತು. ಹುಟ್ಟು ಹಾಕುವಂತೆ ನೌಕರರಿಗೆ ಸೂಚನೆ ನೀಡುತ್ತ, ತನ್ನ ಯಾತ್ರಿಕ ತಂಡದತ್ತ ಕೈಬೀಸಿ ಅವನು ನುಡಿದ :
{{gap}}" ಜಾತ್ರೇಲಿ ತಪ್ಪಿಸ್ಕೊಂಡೀರಿ, ಜಾಗ್ರತೆ! ಮೆನೆಪ್ಟಾ ಅಣ್ಣನ ಮಾತ್ನಂತೆ ನಡ್ಕೊಳ್ಳಿ. ನಾನು ಕೆಳಗಡೆ ಇರ್ತೇನೆ........ ಕತ್ತಲಾದ ತಕ್ಷಣ ಹೊರಟು ಬನ್ನಿ."
{{gap}}ದೋಣಿ ಕಟ್ಟೆಯ ಅಧಿಕಾರಿಯ ಆಜ್ಞೆ ಕೇಳಿಸಿತು:
" ಮೇಲಕ್ಕೂ ಕೆಳಕ್ಕೂ ಹೋಗಿ ! ಬರ್ತಿರೋ ದೋಣಿಗಳನ್ನ ಅಲ್ಲಲ್ಲೇ ತಡೀರಿ!”
ಕಟ್ಟೆಯ ಗೂಟಕ್ಕೆ ಕಟ್ಟಿದ್ದ ಎರಡು ಕಿರುದೋಣಿಗಳನ್ನು ಇಬ್ಬಿಬ್ಬರು<noinclude></noinclude>
507atn51pz4f2o3kkpy31u86v6j4nyj
ಪುಟ:Mrutyunjaya.pdf/೧೬
104
21500
317776
61140
2026-05-06T16:50:21Z
Ashwini Rai K
8475
/* Validated */
317776
proofread-page
text/x-wiki
<noinclude><pagequality level="4" user="Ashwini Rai K" /></noinclude> {{rh|center=ಮೃತ್ಯುಂಜಯ |left=|right= ೫}}
{{gap}}ಯೋಧರು ಏರಿದರು. ಅವುಗಳದು ನೀರು ಸೀಳಿ ಸಾಗುವ ಶೀಘ್ರ ಚಲನೆ. ದೋಣಿ ಕಟ್ಟೆಯುದ್ದಕ್ಕೂ ಬಂದು ಮೇಲಕ್ಕೆ ಸಾಗಿತು ; ಇನ್ನೊಂದು ಕೆಳಕ್ಕೆ ಬರುತ್ತಿದ್ದ ದೋಣಿಗಳನ್ನು ಕಟ್ಟೆಯಿಂದ ದೂರವಿರಿಸುವ ಹೊಣೆ ಅವರದು.
{{gap}}ದೋಣಿಕಟ್ಟೆಯಿಂದ ಗೋರಿಗಳ ಗುಡ್ಡದ ವರೆಗೂ ದಾರಿ ಅಗಲವಾಗಿತ್ತು. ಅದು ಬೆಳಗಾಗುವುದರೊಳಗೆ ರೂಪುಗೊಂಡಿದ್ದ ಜಾತ್ರೆಯ ಸಂತೆ. ಅಲ್ಲಲ್ಲಿ ಸೆಣಬಿನ ಅರಿವೆಯ ಗೂಡಾರಗಳು. ಅಲ್ಲಿ ರಟ್ಟಿ ಪಾನೀಯಗಳಿದ್ದುವು. ಉಪ್ಪು ಬೆರೆಸಿ ಕಾಪಾಡಿದ ಮೀನು, ಒಣಗಿಸಿದ ಮಾಂಸ, ಈರುಳ್ಳಿ, ನೀರುಸೌತೆಕಾಯಿ, ಖರ್ಜೂರ, ಆಂಜೂರ___ಇವೆಲ್ಲ ಇದ್ದುವು ಮಾರಾಟಕ್ಕೆ. ಮರದಲ್ಲಿ ಕೊರೆದ ದೇವ ದೇವತೆಗಳ ಮೂರ್ತಿಗಳನ್ನು ಮಾರುವ ಅಂಗಡಿಗಳು. ಬೆಳ್ಳಿಯ ಬಂಗಾರದ ಉಂಗುರಗಳು, ಓಲೆಗಳು, ಹಾರಗಳು, ತಾಳೆ ಮರದ ತೊಗಟಿಯ ಪಾದರಕ್ಷೆಗಳು ; ಪೀಠೋಪಕರಣಗಳು, ದಂತದ, ಸ್ವರ್ಣದ ಕೆತ್ತನೆಯ ಸಾಮಗ್ರಿಗಳು; ಕಂಚಿನ ಚೂರಿ, ಕಠಾರಿ; ಕೊರೆದ ಮರದ ಕೈಗೋಲು, ನಡೆಗೋಲು; ಸೆಣಬಿನ ನುಣುಪಾದ ಅಂಗವಸ್ತ್ರಗಳು; ಕವಡೆ ಚಿಪ್ಪುಗಳ ಮಣಿ ಸರಗಳು; ಚೆಂಡು, ಗೋಲಿ; ಸುಗಂಧ ದ್ರವ್ಯಗಳು....
{{gap}}ಬಿಸಿಲೇರುವುದಕ್ಕೆ ಮುನ್ನವೇ ಈ ಮಾರ್ಗ ತುಳಿದವರು ಸಹಸ್ರಾರು ಜನ. ಆ ಸಂದಣಿಯ ಒಂದಂಗವಾಗಿತ್ತು, ನೀರಾನೆ ಪ್ರಾಂತದ ನಾಲ್ವತ್ತು ಮಂದಿಯ ತಂಡ. ಅಂಗಡಿಕಾರರೆಲ್ಲ ಗಿರಾಕಿಗಳನ್ನು ಕರೆಯುವವರೇ; ತಮ್ಮಲ್ಲಿದ್ದ ಸರಕುಗಳ ಗುಣಗಾನ ಮಾಡುವವರೇ.
{{gap}}ಮೆನೆಪ್ಟಾ ಗುಡ್ಡದತ್ತ ನೋಡಿದ. ಅದರ ಮೇಲಣ ಭವ್ಯ ಮಂದಿರ ಒಸೈರಿಸ್ ದೇವಾಲಯ ಎಂದು ಆತ ಕೇಳಿ ಬಲ್ಲ. ದಾರಿಯ ಕೊನೆಯ ಏರಿಗೆ ಮುನ್ನ ತಾಳೆ ಮರಗಳ ಒಂದು ಪುಟ್ಟ ತೋಪು ಕಾಣಿಸುತ್ತಿತ್ತು.
{{gap}}ಬಂದವರು ತಮ್ಮೊಡನೆ ತಮ್ಮ ಕೈಕಸಬಿನ ವಸ್ತುಗಳನ್ನು ತಂದಿದ್ದರು. ಅವನ್ನು ಕೊಟ್ಟು ತಮಗೆ ಬೇಕಾದ ಸಾಮಗ್ರಿಗಳನ್ನು ಅವರು ಪಡೆಯಬೇಕು. ಜತೆಗೆ, ಕೆಲವರಿಗೆ ಹಸಿವು ಕೆಲವರಿಗೆ ಬಾಯಾರಿಕೆ. ಸ್ವಲ್ಪ ಹೊತ್ತು ಗುಂಪು ಚೆದರಿದರೆ, ಆ ಕೆಲಸವೆಲ್ಲ ಬೇಗ ಬೇಗನೆ ಆಗಬಹುದು ಎನಿಸಿತು ಮೆನೆಪ್ಟಾಗೆ.<noinclude></noinclude>
o7tq1hdv75p1ib2empffr0vcjpp06q2
317778
317776
2026-05-06T16:50:59Z
Ashwini Rai K
8475
317778
proofread-page
text/x-wiki
<noinclude><pagequality level="4" user="Ashwini Rai K" /></noinclude> {{rh|center=ಮೃತ್ಯುಂಜಯ |left=|right= ೫}}
{{gap}}ಯೋಧರು ಏರಿದರು. ಅವುಗಳದು ನೀರು ಸೀಳಿ ಸಾಗುವ ಶೀಘ್ರ ಚಲನೆ. ದೋಣಿ ಕಟ್ಟೆಯುದ್ದಕ್ಕೂ ಬಂದು ಮೇಲಕ್ಕೆ ಸಾಗಿತು ; ಇನ್ನೊಂದು ಕೆಳಕ್ಕೆ ಬರುತ್ತಿದ್ದ ದೋಣಿಗಳನ್ನು ಕಟ್ಟೆಯಿಂದ ದೂರವಿರಿಸುವ ಹೊಣೆ ಅವರದು.
{{gap}}ದೋಣಿಕಟ್ಟೆಯಿಂದ ಗೋರಿಗಳ ಗುಡ್ಡದ ವರೆಗೂ ದಾರಿ ಅಗಲವಾಗಿತ್ತು. ಅದು ಬೆಳಗಾಗುವುದರೊಳಗೆ ರೂಪುಗೊಂಡಿದ್ದ ಜಾತ್ರೆಯ ಸಂತೆ. ಅಲ್ಲಲ್ಲಿ ಸೆಣಬಿನ ಅರಿವೆಯ ಗೂಡಾರಗಳು. ಅಲ್ಲಿ ರಟ್ಟಿ ಪಾನೀಯಗಳಿದ್ದುವು. ಉಪ್ಪು ಬೆರೆಸಿ ಕಾಪಾಡಿದ ಮೀನು, ಒಣಗಿಸಿದ ಮಾಂಸ, ಈರುಳ್ಳಿ, ನೀರುಸೌತೆಕಾಯಿ, ಖರ್ಜೂರ, ಆಂಜೂರ___ಇವೆಲ್ಲ ಇದ್ದುವು ಮಾರಾಟಕ್ಕೆ. ಮರದಲ್ಲಿ ಕೊರೆದ ದೇವ ದೇವತೆಗಳ ಮೂರ್ತಿಗಳನ್ನು ಮಾರುವ ಅಂಗಡಿಗಳು. ಬೆಳ್ಳಿಯ ಬಂಗಾರದ ಉಂಗುರಗಳು, ಓಲೆಗಳು, ಹಾರಗಳು, ತಾಳೆ ಮರದ ತೊಗಟಿಯ ಪಾದರಕ್ಷೆಗಳು ; ಪೀಠೋಪಕರಣಗಳು, ದಂತದ, ಸ್ವರ್ಣದ ಕೆತ್ತನೆಯ ಸಾಮಗ್ರಿಗಳು; ಕಂಚಿನ ಚೂರಿ, ಕಠಾರಿ; ಕೊರೆದ ಮರದ ಕೈಗೋಲು, ನಡೆಗೋಲು; ಸೆಣಬಿನ ನುಣುಪಾದ ಅಂಗವಸ್ತ್ರಗಳು; ಕವಡೆ ಚಿಪ್ಪುಗಳ ಮಣಿ ಸರಗಳು; ಚೆಂಡು, ಗೋಲಿ; ಸುಗಂಧ ದ್ರವ್ಯಗಳು....
{{gap}}ಬಿಸಿಲೇರುವುದಕ್ಕೆ ಮುನ್ನವೇ ಈ ಮಾರ್ಗ ತುಳಿದವರು ಸಹಸ್ರಾರು ಜನ. ಆ ಸಂದಣಿಯ ಒಂದಂಗವಾಗಿತ್ತು, ನೀರಾನೆ ಪ್ರಾಂತದ ನಾಲ್ವತ್ತು ಮಂದಿಯ ತಂಡ. ಅಂಗಡಿಕಾರರೆಲ್ಲ ಗಿರಾಕಿಗಳನ್ನು ಕರೆಯುವವರೇ; ತಮ್ಮಲ್ಲಿದ್ದ ಸರಕುಗಳ ಗುಣಗಾನ ಮಾಡುವವರೇ.
{{gap}}ಮೆನೆಪ್ಟಾ ಗುಡ್ಡದತ್ತ ನೋಡಿದ. ಅದರ ಮೇಲಣ ಭವ್ಯ ಮಂದಿರ ಒಸೈರಿಸ್ ದೇವಾಲಯ ಎಂದು ಆತ ಕೇಳಿ ಬಲ್ಲ. ದಾರಿಯ ಕೊನೆಯ ಏರಿಗೆ ಮುನ್ನ ತಾಳೆ ಮರಗಳ ಒಂದು ಪುಟ್ಟ ತೋಪು ಕಾಣಿಸುತ್ತಿತ್ತು.
{{gap}}ಬಂದವರು ತಮ್ಮೊಡನೆ ತಮ್ಮ ಕೈಕಸಬಿನ ವಸ್ತುಗಳನ್ನು ತಂದಿದ್ದರು. ಅವನ್ನು ಕೊಟ್ಟು ತಮಗೆ ಬೇಕಾದ ಸಾಮಗ್ರಿಗಳನ್ನು ಅವರು ಪಡೆಯಬೇಕು. ಜತೆಗೆ, ಕೆಲವರಿಗೆ ಹಸಿವು ಕೆಲವರಿಗೆ ಬಾಯಾರಿಕೆ. ಸ್ವಲ್ಪ ಹೊತ್ತು ಗುಂಪು ಚೆದರಿದರೆ, ಆ ಕೆಲಸವೆಲ್ಲ ಬೇಗ ಬೇಗನೆ ಆಗಬಹುದು ಎನಿಸಿತು ಮೆನೆಪ್ಟಾಗೆ.<noinclude></noinclude>
k7b61di4quxyxvjbsdnfmzrx17rhtvt
ಪುಟ:Mrutyunjaya.pdf/೧೭
104
21501
317779
61141
2026-05-06T16:53:45Z
Ashwini Rai K
8475
/* Validated */
317779
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=ಮೃತ್ಯುಂಜಯ |left=೬|right= }}
ಸಹಯಾತ್ರಿಕರನ್ನು ಉದ್ದೇಶಿಸಿ ಅವನೆಂದ:
{{gap}}"ರಾ ದೇವರ ರಥ ನೆತ್ತಿಯ ಮೇಲಕ್ಕೆ ಬರೋಹೊತ್ತಿಗೆ ಆ ತಾಳೆಮರಗಳ ನೆರಳಲ್ಲಿ ನಾವು ಸೇರಬೇಕು. ಅಷ್ಟರವರೆಗೆ ಗುಂಪು ಚೆದರಿದರೂ ಚೆದರಬಹುದು.”
{{gap}}"ಹಾಗೇ ಆಗಲಿ," ಎಂದರು ಗುಂಪಿನ ಹಲವರು.
{{gap}}ದಾರಿ ಏರತೊಡಗಿದಾಗಲೂ ಮುಗಿಯದ ಸಂತೆ. ಕೆಲ ಅಂಗಡಿಗಳ ಮುಂದೆ ಲಿಪಿಕಾರರು ಕುಳಿತಿದ್ದರು. ಲೆಕ್ಕ ಬರೆಯುವವರು. ಒಂದೆರಡು ಕಡೆ ಲಿಪಿಕಾರಾರೇ ವರ್ತಕರು. ಪೆಪೈರಸ್ ಹಾಳೆಯ ಮೇಲೆ ಬರೆದ ಜಾಣ್ನುಡಿಯ ನಾಣ್ನುಡಿಯ ಸುರುಳಿಗಳು ಅವರ ಸರಕು. ದೇವಸೇವಕನೊಬ್ಬ ಜನ್ಮದಿನದ ಆಧಾರದ ಮೇಲೆ ಭವಿಷ್ಯ ನುಡಿಯುತ್ತಿದ್ದ. ಮತ್ತೊಬ್ಬ ದೇವಸೇವಕ ಮಾಂತ್ರಿಕ ವೈದ್ಯ. ಮುಂದಿನವನು ಜಾದುಗಾರ; " ಚಪ್ಪಾಳೆ ತಟ್ಟಿ !” ಎನ್ನುತ್ತಿದ್ದ ನೆರೆದಿದ್ದ ಹುಡುಗರಿಗೆ. ಮತ್ತೂ ಮುಂದಕ್ಕೆ, ಹೆಚ್ಚು ಜನರನ್ನು ಆಕರ್ಷಿಸಿದ್ದ ದೊಂಬರಾಟ.
{{gap}}ನೆಫಿಸ್ ಗಂಡನನ್ನು ಕೇಳಿದಳು :
{{gap}}" ಸುಮ್ಮನೆ ನೋಡ್ತಾ ಹೋಗೋಣ್ವೋ, ಅಥ್ವಾ....ರಾಮೆರಿಗೆ ಹಸಿವಾಗ್ತಿರಬೌದು."
{{gap}}ರಾಮೆರಿಪ್ಟಾಗೆ ವರ್ಣರಂಜಿತ ಮಾಯಾನಗರಿಯ ಗುಂಗು. ತಾಯಿಯ ಕೈ ಕೊಸರಿಕೊಂಡು ಮುಂದೆ ಹೋಗುವ ತವಕ. ಆದರೆ ಹೊಟ್ಟೆ ಚುರುಚುರು ಎನ್ನುತ್ತಿತ್ತು.
{{gap}}ತಂದೆಯೆಂದ :
{{gap}}" ಅವನಿಗಿಷ್ಟು ರೊಟ್ಟಿ ಕೊಡು."
{{gap}}ನೆಫಿಸ್ ಬೀದಿಯ ಬದಿಯಲ್ಲಿ ತನ್ನ ತಲೆಯ ಮೇಲಿನ ಗಂಟನ್ನು ಕೆಳಗಿಳಿಸಿ ಬಿಚ್ಚಿದಳು. ಆ ಗಂಟಿನೊಳಗೇನಿದೆ ಎಂದು ತಿಳಿಯುವ ಕುತೂಹಲ ಹತ್ತಿರದ ಅಂಗಡಿಕಾರರಿಗೆ. ಸೆಣಬಿನಲ್ಲಿ ನೆಯ್ದ ಚಿತ್ತಾರ ಬಿಡಿಸಿದ ಚೀಲಗಳು, ಕುಸುರಿ ಕೆಲಸದ ನಡುವಸ್ತ್ರಗಳು, ಪ್ರತ್ಯೇಕವಾಗಿ ಕಟ್ಟಿದ್ದ ಇನ್ನೊಂದು ಗಂಟು, ಜತೆಗೆ ಬುತ್ತಿ....<noinclude></noinclude>
fh18xs8r5kdavjmrb06zpuvps9pv3s4
317780
317779
2026-05-06T16:55:01Z
Ashwini Rai K
8475
317780
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=ಮೃತ್ಯುಂಜಯ |left=೬|right= }}
ಸಹಯಾತ್ರಿಕರನ್ನು ಉದ್ದೇಶಿಸಿ ಅವನೆಂದ:
{{gap}}"ರಾ ದೇವರ ರಥ ನೆತ್ತಿಯ ಮೇಲಕ್ಕೆ ಬರೋಹೊತ್ತಿಗೆ ಆ ತಾಳೆಮರಗಳ ನೆರಳಲ್ಲಿ ನಾವು ಸೇರಬೇಕು. ಅಷ್ಟರವರೆಗೆ ಗುಂಪು ಚೆದರಿದರೂ ಚೆದರಬಹುದು.”
{{gap}}"ಹಾಗೇ ಆಗಲಿ," ಎಂದರು ಗುಂಪಿನ ಹಲವರು.
{{gap}}ದಾರಿ ಏರತೊಡಗಿದಾಗಲೂ ಮುಗಿಯದ ಸಂತೆ. ಕೆಲ ಅಂಗಡಿಗಳ ಮುಂದೆ ಲಿಪಿಕಾರರು ಕುಳಿತಿದ್ದರು. ಲೆಕ್ಕ ಬರೆಯುವವರು. ಒಂದೆರಡು ಕಡೆ ಲಿಪಿಕಾರಾರೇ ವರ್ತಕರು. ಪೆಪೈರಸ್ ಹಾಳೆಯ ಮೇಲೆ ಬರೆದ ಜಾಣ್ನುಡಿಯ ನಾಣ್ನುಡಿಯ ಸುರುಳಿಗಳು ಅವರ ಸರಕು. ದೇವಸೇವಕನೊಬ್ಬ ಜನ್ಮದಿನದ ಆಧಾರದ ಮೇಲೆ ಭವಿಷ್ಯ ನುಡಿಯುತ್ತಿದ್ದ. ಮತ್ತೊಬ್ಬ ದೇವಸೇವಕ ಮಾಂತ್ರಿಕ ವೈದ್ಯ. ಮುಂದಿನವನು ಜಾದುಗಾರ; " ಚಪ್ಪಾಳೆ ತಟ್ಟಿ !” ಎನ್ನುತ್ತಿದ್ದ ನೆರೆದಿದ್ದ ಹುಡುಗರಿಗೆ. ಮತ್ತೂ ಮುಂದಕ್ಕೆ, ಹೆಚ್ಚು ಜನರನ್ನು ಆಕರ್ಷಿಸಿದ್ದ ದೊಂಬರಾಟ.
{{gap}}ನೆಫಿಸ್ ಗಂಡನನ್ನು ಕೇಳಿದಳು :
{{gap}}" ಸುಮ್ಮನೆ ನೋಡ್ತಾ ಹೋಗೋಣ್ವೋ, ಅಥ್ವಾ....ರಾಮೆರಿಗೆ ಹಸಿವಾಗ್ತಿರಬೌದು."
{{gap}}ರಾಮೆರಿಪ್ಟಾಗೆ ವರ್ಣರಂಜಿತ ಮಾಯಾನಗರಿಯ ಗುಂಗು. ತಾಯಿಯ ಕೈ ಕೊಸರಿಕೊಂಡು ಮುಂದೆ ಹೋಗುವ ತವಕ. ಆದರೆ ಹೊಟ್ಟೆ ಚುರುಚುರು ಎನ್ನುತ್ತಿತ್ತು.
{{gap}}ತಂದೆಯೆಂದ :
{{gap}}" ಅವನಿಗಿಷ್ಟು ರೊಟ್ಟಿ ಕೊಡು."
{{gap}}ನೆಫಿಸ್ ಬೀದಿಯ ಬದಿಯಲ್ಲಿ ತನ್ನ ತಲೆಯ ಮೇಲಿನ ಗಂಟನ್ನು ಕೆಳಗಿಳಿಸಿ ಬಿಚ್ಚಿದಳು. ಆ ಗಂಟಿನೊಳಗೇನಿದೆ ಎಂದು ತಿಳಿಯುವ ಕುತೂಹಲ ಹತ್ತಿರದ ಅಂಗಡಿಕಾರರಿಗೆ. ಸೆಣಬಿನಲ್ಲಿ ನೆಯ್ದ ಚಿತ್ತಾರ ಬಿಡಿಸಿದ ಚೀಲಗಳು, ಕುಸುರಿ ಕೆಲಸದ ನಡುವಸ್ತ್ರಗಳು, ಪ್ರತ್ಯೇಕವಾಗಿ ಕಟ್ಟಿದ್ದ ಇನ್ನೊಂದು ಗಂಟು, ಜತೆಗೆ ಬುತ್ತಿ....<noinclude></noinclude>
1vvrghh2m9znw4h423p5v20b0jxuim6
ಪುಟ:Mrutyunjaya.pdf/೨೨
104
21506
317811
61196
2026-05-07T04:31:20Z
Shreelatha.Halemane
7642
317811
proofread-page
text/x-wiki
<noinclude><pagequality level="3" user="Vinay bhat" /></noinclude>{{rh|center=ಮೃತ್ಯುಂಜಯ|left=|right= ೧೧}}
"ಅವರು ಬಹಳ ನಿಯತಿನ ಮನುಷ್ಯ."
"ಹಾಗೋ? ಪಾಠ ಹೇಳೋದಕ್ಕೆ ಲಾಯಕ್ಕು. ನಿಮ್ಮ ಹುಡುಗನಿಗೆ ಅವನ ಕೈಲೇ ಪಾಠ ಹೇಳ್ಸಿ."
ನಿಮಯ ಮುಗಿಯಿತು. ಸುರುಳಿಯನ್ನೂ ಒಳಗೊಂಡ ಗಂಟನ್ನು ನೆಫಿಸ್ ತನ್ನ ತಲೆಗೆ ಏರಿಸಿದಳು.
ಆ ಮೂವರನ್ನೂ ಬೀಳ್ಕೊಡುತ್ತ ಲಿಪಿಕಾರ ಗಟ್ಟಿ ಸ್ವರದಲ್ಲಿ ನುಡಿದ:
"ನನ್ನ ಹೆಸರು ಲಿಪಿಕಾರ ಅಮೋಸೆಸ್. ಮರಿಬೇಡಿ ! ನನಗೆ ಸಮಾ
ನರು ಆಬ್ಟುವಿನಲ್ಲಿ ಬೇರೆ ಯಾರೂ ಇಲ್ಲ. ಎಲ್ಲರಿಗೂ ತಿಳಿಸಿಬಿಡಿ. ಕುಡುಕರ
ಹಾಡು,ಪ್ರಣಯ ಗೀತೆ___ಎಲ್ಲಾ ಇನೆ. ಬೆಲೆಯೂ ಕಮ್ಮಿ.......ಹೋಗಿ
ಬನ್ನೀಪ್ಪಾ..."
ರಾಮೆರಿಪ್ಟಾ,ಅವನ ತಾಯಿ,ತಂದೆ___ಮೂವರಿಗೂ ನಗು ಬಂತು.
ಮಾರ್ಗ ಕ್ರಮಿಸುತ್ತ ಮೆನೆಪ್ಟಾ ಅಂದ :
"ಎಷ್ಟೊಳ್ಳೆ ವಿಚಾರ ಇದೆ ಆ ಸುರುಳೀಲಿ ! ಯಾವ ಕಾಲದಲ್ಲೋ ಯಾರೋ ಆಡಿದ ಮಾತು. ನಿನ್ನ ತಾಯಿ ನಿನಗಾಗಿ ಏನೇನು ಮಾಡಿದ್ದಾಳೆ ಅನ್ನೋದನ್ನು ಎಂದೂ ಮರೀಬಾರ್ದು....ಅವಳನ್ನು ಮರೆತರೆ ಆಕೆ ನಿನ್ನನ್ನು ದೂರಬಹುದು. ದೇವರಿಗೆ ಅದು ಗೊತ್ತಾಗ್ಬಹುದು."
ಅಭಿಮಾನದಿಂದ ಬೀಗುತ್ತ ನೆಫಿಸ್ ದನಿಗೂಡಿಸಿದಳು :
"ಕೇಳಿಸ್ಕೊಂಡ್ಯಾ ರಾಮೆರಿ ?"
"ಹೂಂ, ಹೂಂ. ಆದರೆ ಆಪ್ಪ ಅವತ್ತು ಹೇಳಿದ ಹೋರಸ್ ಕಥೇಲಿ
ತಂದೆ ತಾಯಿ ಇಬ್ರನ್ನೂ ಹೋರಸ್ ಮರೀಲಿಲ್ಲ."
ಸಣ್ಣಗೆ ನಕ್ಕು ಮೆನೆಪ್ಟಾ ಆಂದ :
“ಅದು ಒಳ್ಳೆ ಮಕ್ಕಳ ಲಕ್ಷಣ ”
ಹುಡುಗನೆಂದ:
"ಅಪ್ಪ, ನಾನು ಒಳ್ಳೇ ಮಗನೆ !ಗೋಲಿ ಕೊಡಿಸ್ಬಿಡು !”
* * * *
"ವೀರರ ವೀರ ಹೋರಸ್ ಉಘೇ !
ತಂದೆಯ ಕೊಂದವನ ಮಣ್ಣು ಮುಕ್ಕಿಸಿದ ಧೀರ ಉಘೇ !<noinclude></noinclude>
infs1fiavtz5pftilfut7ez8x6pxhtu
317816
317811
2026-05-07T04:41:42Z
Shreelatha.Halemane
7642
/* Validated */
317816
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right= ೧೧}}
{{gap}}"ಅವರು ಬಹಳ ನಿಯತಿನ ಮನುಷ್ಯ."
{{gap}}"ಹಾಗೋ? ಪಾಠ ಹೇಳೋದಕ್ಕೆ ಲಾಯಕ್ಕು. ನಿಮ್ಮ ಹುಡುಗನಿಗೆ ಅವನ ಕೈಲೇ ಪಾಠ ಹೇಳ್ಸಿ."
{{gap}}ನಿಮಯ ಮುಗಿಯಿತು. ಸುರುಳಿಯನ್ನೂ ಒಳಗೊಂಡ ಗಂಟನ್ನು ನೆಫಿಸ್ ತನ್ನ ತಲೆಗೆ ಏರಿಸಿದಳು.
{{gap}}ಆ ಮೂವರನ್ನೂ ಬೀಳ್ಕೊಡುತ್ತ ಲಿಪಿಕಾರ ಗಟ್ಟಿ ಸ್ವರದಲ್ಲಿ ನುಡಿದ:
{{gap}}"ನನ್ನ ಹೆಸರು ಲಿಪಿಕಾರ ಅಮೋಸೆಸ್. ಮರಿಬೇಡಿ ! ನನಗೆ ಸಮಾ
ನರು ಆಬ್ಟುವಿನಲ್ಲಿ ಬೇರೆ ಯಾರೂ ಇಲ್ಲ. ಎಲ್ಲರಿಗೂ ತಿಳಿಸಿಬಿಡಿ. ಕುಡುಕರ
ಹಾಡು,ಪ್ರಣಯ ಗೀತೆ___ಎಲ್ಲಾ ಇನೆ. ಬೆಲೆಯೂ ಕಮ್ಮಿ.......ಹೋಗಿ
ಬನ್ನೀಪ್ಪಾ..."
{{gap}}ರಾಮೆರಿಪ್ಟಾ,ಅವನ ತಾಯಿ,ತಂದೆ___ಮೂವರಿಗೂ ನಗು ಬಂತು.
{{gap}}ಮಾರ್ಗ ಕ್ರಮಿಸುತ್ತ ಮೆನೆಪ್ಟಾ ಅಂದ :
{{gap}}"ಎಷ್ಟೊಳ್ಳೆ ವಿಚಾರ ಇದೆ ಆ ಸುರುಳೀಲಿ ! ಯಾವ ಕಾಲದಲ್ಲೋ ಯಾರೋ ಆಡಿದ ಮಾತು. ನಿನ್ನ ತಾಯಿ ನಿನಗಾಗಿ ಏನೇನು ಮಾಡಿದ್ದಾಳೆ ಅನ್ನೋದನ್ನು ಎಂದೂ ಮರೀಬಾರ್ದು....ಅವಳನ್ನು ಮರೆತರೆ ಆಕೆ ನಿನ್ನನ್ನು ದೂರಬಹುದು. ದೇವರಿಗೆ ಅದು ಗೊತ್ತಾಗ್ಬಹುದು."
{{gap}}ಅಭಿಮಾನದಿಂದ ಬೀಗುತ್ತ ನೆಫಿಸ್ ದನಿಗೂಡಿಸಿದಳು :
{{gap}}"ಕೇಳಿಸ್ಕೊಂಡ್ಯಾ ರಾಮೆರಿ ?"
{{gap}}"ಹೂಂ, ಹೂಂ. ಆದರೆ ಆಪ್ಪ ಅವತ್ತು ಹೇಳಿದ ಹೋರಸ್ ಕಥೇಲಿ
{{gap}}ತಂದೆ ತಾಯಿ ಇಬ್ರನ್ನೂ ಹೋರಸ್ ಮರೀಲಿಲ್ಲ."
{{gap}}ಸಣ್ಣಗೆ ನಕ್ಕು ಮೆನೆಪ್ಟಾ ಆಂದ :
{{gap}}“ಅದು ಒಳ್ಳೆ ಮಕ್ಕಳ ಲಕ್ಷಣ ”
{{gap}}ಹುಡುಗನೆಂದ:
{{gap}}"ಅಪ್ಪ, ನಾನು ಒಳ್ಳೇ ಮಗನೆ !ಗೋಲಿ ಕೊಡಿಸ್ಬಿಡು !”
* * * *
{{gap}}"ವೀರರ ವೀರ ಹೋರಸ್ ಉಘೇ !
{{gap}}ತಂದೆಯ ಕೊಂದವನ ಮಣ್ಣು ಮುಕ್ಕಿಸಿದ ಧೀರ ಉಘೇ !<noinclude></noinclude>
koawndzj2z7yjxd3bt9u2wj1jfv49kz
ಪುಟ:Mrutyunjaya.pdf/೨೩
104
21507
317817
61208
2026-05-07T04:44:40Z
Shreelatha.Halemane
7642
/* Validated */
317817
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center= ಮೃತ್ಯುಂಜಯ|left=೧೨|right=}}
ದುರುಳನ ತರಿದ ಮಹಾ ಶೂರ ಉಘೇ !”
{{gap}}....ಬಾಲ್ಯದ ನೆನಪು. ಆಗ ಮೆನೆಪ್ಟಾಗೆ ಹದಿನಾಲ್ಕರ ಹರೆಯ.
{{gap}}ನೀರಾನೆ ಪ್ರಾಂತದಿಂದ ನೀಲ ನದಿಯ ಮೂಲದತ್ತ ಎರಡು ದಿನ ದೋಣಿ ಪ್ರವಾಸ ಮಾಡಿದರೆ ಸಿಗುವ ಊರು ಎಡ್ಛು. ಅಣ್ಣ ಒಸೈರಿಸ್ನನ್ನು ಸೆತ್ ಮೋಸದಿಂದ ಕೊಂದಾಗ, ಹೋರಸ್ ಹಸುಳೆ, ಧರ್ಮಿಷ್ಠ್ನನಾಗಿ ಆಳಿ ದುರ್ಮರಣಕ್ಕೊಳಗಾದ ಪೆರೋ ಒಸೈರಿಸ್ ಸೂರ್ಯದೇವನ ಪುತ್ರ. ಅವನ ಪಟ್ಟದ ರಾಣಿ ಸಾಧ್ವೀಮಣಿ ಐಸಿಸ್. ಮಗನನ್ನು ಆಕೆ ಗೋಪ್ಯದಲ್ಲಿ ಬೆಳೆಸಿದಳು.ಆತ ಯುದ್ಧ ವಿದ್ಯೆ ಕಲಿತ, ರಣಧೀರನಾದ.
{{gap}}ತನ್ನ ತಂದೆಯನ್ನು ಕೊಂದವನಿಗೂ ಹೋರಸ್ಗೂ ನಡೆದುದು ಲೋಕವೇ ತಲ್ಲಣಿಸಿದ ಘನ ಘೋರ ಯುದ್ಧ. ಸೆತ್ ತಿವಿಯುವ ಸೂಕರ ವಾದ; ಹೋರಸ್ ಉರಿಯುಗುಳುವ ಹಾರುವ ತಟ್ಟೆಯಾದ. ಸೆತ್ ಸತ್ತ.ಆದರೆ ಆತನ ದುಷ್ಟ ಚೇತನ ಫೇಂಡಾಮೃಗವಾಗಿ, ನೀಲ ನದಿಯಲ್ಲಿ ಸಾಗಿ, ಎಡ್ಛುವಿನಲ್ಲಿ ಹೋರಸ್ಗಾಗಿ ಕಾದು ನಿಂತಿತು ಹೋರಸ್ ಹತ್ತು ಮೊಳ ಎತ್ತರದ ಯುವಕನಾಗಿ ಇಪ್ಪತ್ತೈದು ಮೊಳ ಉದ್ದನೆಯ ಈಟಿ ಹಿಡಿದು ಥಳ ಥಳಿಸುವ ನಾವೆಯಲ್ಲಿ ಎಡ್ಛುವಿಗೆ ಧಾವಿಸಿದ. ಫೇಂಡಾಮೃಗದ ತೆರೆದ ಬಾಯನ್ನು ಈಟಿ ಹೊಕ್ಕಿತು. ದುಷ್ಟನ ಸಂಹಾರವಾಯಿತು; ಶಿಷ್ಟ ಜನ ಜಯಘೋಷ ಮಾಡಿದರು.
{{gap}}“ ವೀರರ ವೀರ ಹೋರಸ್ ಉಘೇ !
{{gap}}ತಂದೆಯ ಕೊಂದವನ ಮಣ್ಣು ಮುಕ್ಕಿಸಿದ ಧೀರ ಉಘೇ
{{gap}}ದುರುಳನ ತರಿದ ಮಹಾ ಶೂರ ಉಘೇ!”
{{gap}}ಎಡ್ಛುವಿನಲ್ಲಿ ಹೋರಸ್ ದೇವಾಲಯದ ನಿರ್ಮಾಣ ಕಾರ್ಯದಲ್ಲಿ,ತನ್ನೂರಿನ ಪಾಳೆಯಗಾರನ ಪರವಾಗಿ ಜೀತ ದುಡಿಮೆ ಸಲ್ಲಿಸಿದವನು,ಮೆನೆಪ್ಟಾ.
{{gap}}ಆಗ ನಾಲ್ವರು ಗಾಯಕರ ತಂಡ ಹೋರಸ್ನ ಕಥೆಯನ್ನು ಹಾಡಿತ್ತು.ಪ್ರತಿಯೊಬ್ಬರ ಕೈಯಲ್ಲೂ ಏಕನಾದ. ನಾಲ್ವರ ಕಂಠಗಳಿಂದಲೂ ಒಂದೇ ಗಾನ :
"ವೀರರ ವೀರ ಹೋರಸ್ ಉಘೇ!....."<noinclude></noinclude>
boprmq7wpai7nu5lp2gdyvgnwt2uib5
317818
317817
2026-05-07T04:44:58Z
Shreelatha.Halemane
7642
317818
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center= ಮೃತ್ಯುಂಜಯ|left=೧೨|right=}}
{{gap}}ದುರುಳನ ತರಿದ ಮಹಾ ಶೂರ ಉಘೇ !”
{{gap}}....ಬಾಲ್ಯದ ನೆನಪು. ಆಗ ಮೆನೆಪ್ಟಾಗೆ ಹದಿನಾಲ್ಕರ ಹರೆಯ.
{{gap}}ನೀರಾನೆ ಪ್ರಾಂತದಿಂದ ನೀಲ ನದಿಯ ಮೂಲದತ್ತ ಎರಡು ದಿನ ದೋಣಿ ಪ್ರವಾಸ ಮಾಡಿದರೆ ಸಿಗುವ ಊರು ಎಡ್ಛು. ಅಣ್ಣ ಒಸೈರಿಸ್ನನ್ನು ಸೆತ್ ಮೋಸದಿಂದ ಕೊಂದಾಗ, ಹೋರಸ್ ಹಸುಳೆ, ಧರ್ಮಿಷ್ಠ್ನನಾಗಿ ಆಳಿ ದುರ್ಮರಣಕ್ಕೊಳಗಾದ ಪೆರೋ ಒಸೈರಿಸ್ ಸೂರ್ಯದೇವನ ಪುತ್ರ. ಅವನ ಪಟ್ಟದ ರಾಣಿ ಸಾಧ್ವೀಮಣಿ ಐಸಿಸ್. ಮಗನನ್ನು ಆಕೆ ಗೋಪ್ಯದಲ್ಲಿ ಬೆಳೆಸಿದಳು.ಆತ ಯುದ್ಧ ವಿದ್ಯೆ ಕಲಿತ, ರಣಧೀರನಾದ.
{{gap}}ತನ್ನ ತಂದೆಯನ್ನು ಕೊಂದವನಿಗೂ ಹೋರಸ್ಗೂ ನಡೆದುದು ಲೋಕವೇ ತಲ್ಲಣಿಸಿದ ಘನ ಘೋರ ಯುದ್ಧ. ಸೆತ್ ತಿವಿಯುವ ಸೂಕರ ವಾದ; ಹೋರಸ್ ಉರಿಯುಗುಳುವ ಹಾರುವ ತಟ್ಟೆಯಾದ. ಸೆತ್ ಸತ್ತ.ಆದರೆ ಆತನ ದುಷ್ಟ ಚೇತನ ಫೇಂಡಾಮೃಗವಾಗಿ, ನೀಲ ನದಿಯಲ್ಲಿ ಸಾಗಿ, ಎಡ್ಛುವಿನಲ್ಲಿ ಹೋರಸ್ಗಾಗಿ ಕಾದು ನಿಂತಿತು ಹೋರಸ್ ಹತ್ತು ಮೊಳ ಎತ್ತರದ ಯುವಕನಾಗಿ ಇಪ್ಪತ್ತೈದು ಮೊಳ ಉದ್ದನೆಯ ಈಟಿ ಹಿಡಿದು ಥಳ ಥಳಿಸುವ ನಾವೆಯಲ್ಲಿ ಎಡ್ಛುವಿಗೆ ಧಾವಿಸಿದ. ಫೇಂಡಾಮೃಗದ ತೆರೆದ ಬಾಯನ್ನು ಈಟಿ ಹೊಕ್ಕಿತು. ದುಷ್ಟನ ಸಂಹಾರವಾಯಿತು; ಶಿಷ್ಟ ಜನ ಜಯಘೋಷ ಮಾಡಿದರು.
{{gap}}“ ವೀರರ ವೀರ ಹೋರಸ್ ಉಘೇ !
{{gap}}ತಂದೆಯ ಕೊಂದವನ ಮಣ್ಣು ಮುಕ್ಕಿಸಿದ ಧೀರ ಉಘೇ
{{gap}}ದುರುಳನ ತರಿದ ಮಹಾ ಶೂರ ಉಘೇ!”
{{gap}}ಎಡ್ಛುವಿನಲ್ಲಿ ಹೋರಸ್ ದೇವಾಲಯದ ನಿರ್ಮಾಣ ಕಾರ್ಯದಲ್ಲಿ,ತನ್ನೂರಿನ ಪಾಳೆಯಗಾರನ ಪರವಾಗಿ ಜೀತ ದುಡಿಮೆ ಸಲ್ಲಿಸಿದವನು,ಮೆನೆಪ್ಟಾ.
{{gap}}ಆಗ ನಾಲ್ವರು ಗಾಯಕರ ತಂಡ ಹೋರಸ್ನ ಕಥೆಯನ್ನು ಹಾಡಿತ್ತು.ಪ್ರತಿಯೊಬ್ಬರ ಕೈಯಲ್ಲೂ ಏಕನಾದ. ನಾಲ್ವರ ಕಂಠಗಳಿಂದಲೂ ಒಂದೇ ಗಾನ :
"ವೀರರ ವೀರ ಹೋರಸ್ ಉಘೇ!....."<noinclude></noinclude>
mkbq722by9b9s6k2l4pst43mz2lzp6x
ಪುಟ:Mrutyunjaya.pdf/೨೪
104
21508
317851
61217
2026-05-07T09:01:22Z
Ashwini Rai K
8475
/* Validated */
317851
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center= ಮೃತ್ಯುಂಜಯ|left=|right=೧೩}}
ಆಗ ಭಾವಾವೇಶದಿಂದ ಉಳಿದೆಲ್ಲ ದುಡಿಮೆಗಾರರೊಂದಿಗೆ ಮೆನೆಪ್ಟಾ ತಾನೂ ನುಡಿದಿದ್ದ : "ಉಘೇ!”
* * * *
{{gap}}ತಾಯಿತದವನೊಬ್ಬ__ಚಿಲ್ಲರೆ ದೇವಸೇವಕ__ಕೂಗಿ ಕರೆಯುತ್ತಿದ್ದ :<br />
{{gap}}“ಬನ್ನೀ! ಬನ್ನೀ !ಬನ್ನೀ ! ಸಂಕಷ್ಟಕ್ಕೆ ತುತ್ತಾದವರೇ, ನಾಳೆಗೆ ಅಳುಕುವವರೇ, ಅನಾರೋಗ್ಯ ಪೀಡಿತರೇ, ಬನ್ನಿ! ತಾಯತ ಕಟ್ಟಿಸಿಕೊಳ್ಳಿ. ನಡೆಗೋಲು, ಪಾದರಕ್ಷೆ, ಚೀಲ, ಚಾಪೆ, ಬಟ್ಟೆ, ರೊಟ್ಟಿ–ವಿನಿಮಯಕ್ಕೆ ಏನಿದ್ದರೂ ಸರಿ...."<br />
{{gap}}ತಾಯಿತದವನ ಸುತ್ತಲೂ ನೆರೆದಿದ್ದ ಗುಂಪಿನಲ್ಲಿ ಮೆನೆಪ್ಟಾನ ಸಹ ಯಾತ್ರಿಕರೂ ಇದ್ದರು. ನೆಫಿಸ್ ಮೆನೆಪ್ಟಾರನ್ನು ನೋಡಿ 'ನಾವಿಲ್ಲಿದ್ದೇವೆ' ಎನ್ನುವಂತೆ ಅವರು ನಗೆ ಬೀರಿದರು. ರಾಮೆರಿಪ್ಟಾ ಹರ್ಷಿತನಾಗಿ ಅವರತ್ತ ಬೊಟ್ಟುಮಾಡಿದ.<br />
{{gap}}ಏರಿಸಿದ ಧ್ವನಿಯಲ್ಲಿ ತಾಯತದವನು ಮುಂದುವರಿದ :<br />
{{gap}}"ಪರಲೋಕ ಯಾತ್ರೆಯಲ್ಲಿ ನಿಮಗೆ ದಾರಿ ತಪ್ಪೋದು ಬೇಡ. ಈ ಲೋಕದಲ್ಲೂ ನಿಮಗೆ ಎಷ್ಟೊಂದು ಅಪಾಯಗಳು ಕಾದಿವೆ! ನಾಲಿಗೆ ಬಿದ್ದು ಹೋಗಬಹುದು, ತಲೆ ಕೆಡಬಹುದು. ಗುಂಡಿಗೆ ಕೈಕೊಡಬಹುದು ! ಹಾಗಾಗದಂತೆ ತಾಯತ ಕಟ್ಟಿಸಿಕೊಳ್ಳಿ ! ನಿಮ್ಮ ಹೆಸರೇ ನಿಮಗೆ ಮರೆತು ಹೋದೀತು ! ಉಸಿರಾಟ ಕಷ್ಟವಾದೀತು ! ಆಹಾರ-ಪಾನೀಯ ಸೇವನೆಗೆ ಅಡ್ಡಿ ಉಂಟಾದೀತು ! ನಿಮ್ಮ ಅಮೇಧ್ಯವನ್ನು ನೀವೇ ತಿಂದೀರಿ ! ಸರ್ಪಗಳು-ದೈತ್ಯಗಳು ಬಂದಾವು ' ತಾಯತ ಕಟ್ಟಿಕೊಂಡು ರಕ್ಷಣೆ ಪಡೀರಿ!”<br />
{{gap}}ರಾಮೆರಿಪ್ಟಾ ಕುತೂಹಲಿಯಾಗಿ ಹೆತ್ತವರನ್ನು ದಿಟ್ಟಿಸಿದ. ನೆಫಿಸ್ ಗಂಡನ ಮುಖ ನೋಡಿದಳು.<br />
{{gap}}ಅವನೆಂದ :<br />
{{gap}}" ದೇವತಾ ಮೂರ್ತಿಗಳ ಅಂಗಡಿ ಅಗೋ ಅಲ್ಲಿದೆ. ಮಕ್ಕಳ ರಕ್ಷಕಿಯಾದ ಐಸಿಸ್ ದೇವತೆಯ ಮೂರ್ತಿ ಬೇಕು ಅಂದಿದ್ದೆ....”<br />
{{gap}}ಗಂಡ ತೋರಿಸಿದ ಕಡೆಗೆ ನೆಫಿಸ್ ದಿಟ್ಟಿಸಿದಳು. ಚಿಲ್ಲರೆ ದೇವಸೇವಕರ<noinclude></noinclude>
2d5ak589vmwcr9ba7ukb5iqf7f99ecg
317852
317851
2026-05-07T09:02:05Z
Ashwini Rai K
8475
317852
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center= ಮೃತ್ಯುಂಜಯ|left=|right=೧೩}}
ಆಗ ಭಾವಾವೇಶದಿಂದ ಉಳಿದೆಲ್ಲ ದುಡಿಮೆಗಾರರೊಂದಿಗೆ ಮೆನೆಪ್ಟಾ ತಾನೂ ನುಡಿದಿದ್ದ : "ಉಘೇ!”
{{center|* * * *}}
{{gap}}ತಾಯಿತದವನೊಬ್ಬ__ಚಿಲ್ಲರೆ ದೇವಸೇವಕ__ಕೂಗಿ ಕರೆಯುತ್ತಿದ್ದ :<br />
{{gap}}“ಬನ್ನೀ! ಬನ್ನೀ !ಬನ್ನೀ ! ಸಂಕಷ್ಟಕ್ಕೆ ತುತ್ತಾದವರೇ, ನಾಳೆಗೆ ಅಳುಕುವವರೇ, ಅನಾರೋಗ್ಯ ಪೀಡಿತರೇ, ಬನ್ನಿ! ತಾಯತ ಕಟ್ಟಿಸಿಕೊಳ್ಳಿ. ನಡೆಗೋಲು, ಪಾದರಕ್ಷೆ, ಚೀಲ, ಚಾಪೆ, ಬಟ್ಟೆ, ರೊಟ್ಟಿ–ವಿನಿಮಯಕ್ಕೆ ಏನಿದ್ದರೂ ಸರಿ...."<br />
{{gap}}ತಾಯಿತದವನ ಸುತ್ತಲೂ ನೆರೆದಿದ್ದ ಗುಂಪಿನಲ್ಲಿ ಮೆನೆಪ್ಟಾನ ಸಹ ಯಾತ್ರಿಕರೂ ಇದ್ದರು. ನೆಫಿಸ್ ಮೆನೆಪ್ಟಾರನ್ನು ನೋಡಿ 'ನಾವಿಲ್ಲಿದ್ದೇವೆ' ಎನ್ನುವಂತೆ ಅವರು ನಗೆ ಬೀರಿದರು. ರಾಮೆರಿಪ್ಟಾ ಹರ್ಷಿತನಾಗಿ ಅವರತ್ತ ಬೊಟ್ಟುಮಾಡಿದ.<br />
{{gap}}ಏರಿಸಿದ ಧ್ವನಿಯಲ್ಲಿ ತಾಯತದವನು ಮುಂದುವರಿದ :<br />
{{gap}}"ಪರಲೋಕ ಯಾತ್ರೆಯಲ್ಲಿ ನಿಮಗೆ ದಾರಿ ತಪ್ಪೋದು ಬೇಡ. ಈ ಲೋಕದಲ್ಲೂ ನಿಮಗೆ ಎಷ್ಟೊಂದು ಅಪಾಯಗಳು ಕಾದಿವೆ! ನಾಲಿಗೆ ಬಿದ್ದು ಹೋಗಬಹುದು, ತಲೆ ಕೆಡಬಹುದು. ಗುಂಡಿಗೆ ಕೈಕೊಡಬಹುದು ! ಹಾಗಾಗದಂತೆ ತಾಯತ ಕಟ್ಟಿಸಿಕೊಳ್ಳಿ ! ನಿಮ್ಮ ಹೆಸರೇ ನಿಮಗೆ ಮರೆತು ಹೋದೀತು ! ಉಸಿರಾಟ ಕಷ್ಟವಾದೀತು ! ಆಹಾರ-ಪಾನೀಯ ಸೇವನೆಗೆ ಅಡ್ಡಿ ಉಂಟಾದೀತು ! ನಿಮ್ಮ ಅಮೇಧ್ಯವನ್ನು ನೀವೇ ತಿಂದೀರಿ ! ಸರ್ಪಗಳು-ದೈತ್ಯಗಳು ಬಂದಾವು ' ತಾಯತ ಕಟ್ಟಿಕೊಂಡು ರಕ್ಷಣೆ ಪಡೀರಿ!”<br />
{{gap}}ರಾಮೆರಿಪ್ಟಾ ಕುತೂಹಲಿಯಾಗಿ ಹೆತ್ತವರನ್ನು ದಿಟ್ಟಿಸಿದ. ನೆಫಿಸ್ ಗಂಡನ ಮುಖ ನೋಡಿದಳು.<br />
{{gap}}ಅವನೆಂದ :<br />
{{gap}}" ದೇವತಾ ಮೂರ್ತಿಗಳ ಅಂಗಡಿ ಅಗೋ ಅಲ್ಲಿದೆ. ಮಕ್ಕಳ ರಕ್ಷಕಿಯಾದ ಐಸಿಸ್ ದೇವತೆಯ ಮೂರ್ತಿ ಬೇಕು ಅಂದಿದ್ದೆ....”<br />
{{gap}}ಗಂಡ ತೋರಿಸಿದ ಕಡೆಗೆ ನೆಫಿಸ್ ದಿಟ್ಟಿಸಿದಳು. ಚಿಲ್ಲರೆ ದೇವಸೇವಕರ<noinclude></noinclude>
myuzrc72rpxgq2se35p66idd4p1gk16
ಪುಟ:Mrutyunjaya.pdf/೪೨
104
21526
317819
60586
2026-05-07T04:45:51Z
Shreelatha.Halemane
7642
317819
proofread-page
text/x-wiki
<noinclude><pagequality level="3" user="Manojmanu kp" /></noinclude>ಮೃತ್ಯುಂಜಯ
೩೧
ಧಾವಿಸಿದಳು. ಎದೆಗೆ ಹೊಡೆದುಕೊಂಡಳು. ಹಣೆಯನ್ನು ಮಂಚದ ಅಂಚಿಗೆ
ಜಪ್ಪಿಸಿದಳು. ನೆಲದ ಮೇಲೆ ಬಿದ್ದು ಹೊರಳಾಡಿದಳು.
ದೇಗುಲದ ಮಹಾ ದ್ವಾರದ ಬಳಿ ಗಾಯಕರು ಶೋಕದ ಶ್ರುತಿ ಹಿಡಿ
ದರು. ತಂತಿ ವಾದ್ಯಗಳನ್ನು ಮೀಟಿದರು.
ದೇವಸೇವಕಿಯ ಒಡನಿದ್ದ ಶೋಕಸ್ತ್ರೀಯರಲ್ಲದೆ ಕಟಾಂಜನದ ಆಚೆ
ನೆರೆದಿದ್ದವರಿಂದಲೂ ಹಾಹಾಕಾರ ಹೊರಟಿತು.
ಪ್ರಲಾಪ ಕೇಳಿಸಿತು :
"
* ಓ ಒಸೈರಿಸ್, ಓ ಒಸೈರಿಸ್..
ಮುಖ್ಯ ದೇವಸೇವಕನ ಹಿರಿತನದಲ್ಲಿ, ಒಸೈರಿಸನ ಪಾರ್ಥಿವ ಶರೀರ
ದಿಂದ ಶವ ಪಟ್ಟಿಗಳನ್ನು ಬಿಚ್ಚಿದರು; ಸ್ನಾನ ಮಾಡಿಸಿದರು; ಸುಗಂಧ
ದ್ರವ್ಯಗಳನ್ನು ಲೇಪಿಸಿದರು.
ಹೊಸ ಬಟ್ಟೆಗಳನ್ನು ಸುತ್ತಿ ಮತ್ತೆ ಪೆಟ್ಟಿಗೆಯ
ಇಟ್ಟರು. ಅಪರಾಹ್ನ ನಡೆಯುವ ಅಂತಿಮ ಯಾತ್ರೆಗೆ ಮಂಚವನ್ನು ಅಣಿ
ಗೊಳಿಸಿದರು.
ಮುಂದೆ ತುಸುಹೊತ್ತಿನಲ್ಲಿ, ಮೆಂಫಿಸಿನಿಂದ ಆಗಮಿಸಿದ ಪೆರೋ ಪರಿ
ವಾರವೂ ಮಹಾ ಅರ್ಚಕನ ಬಳಗವೂ ದೇಗುಲ ತಲಪಿದುವು. ಮಂದಿರದ
ಮಗ್ಗುಲಿನ ವಿಶ್ರಾಂತಿ ಕೊಠಡಿಗಳಲ್ಲಿ ಅವರು ಸ್ವಲ್ಪ ಹೊತ್ತು ತಂಗಿದರು.
....ಮುಲು ಮುಲು ಅಳುತ್ತ ಮಂಚದ ಕಾಲಿಗೊರಗಿ ಕುಳಿತ ಐಸಿಸ್,
ರೋದನದ ಹಿಮ್ಮೇಳವನ್ನು ಮುಂದುವರಿಸಿದ ಶೋಕಸ್ತ್ರೀಯರು ; ದುಃಖಾ
ಲಾಪದ ಶ್ರುತಿ ಹಿಡಿದ ಗಾಯಕರು; ಬಿಸಿಲಿನ ಪರಿವೆ ಇಲ್ಲದೆ ಕಟಕಟೆಗೆ ಆತು
ನಿಂತ ಜನರು.
ಪವಿತ್ರ ಕೊಳದಲ್ಲಿ ಮಿಂದು, ಬರತೊಡಗಿದ ಮಹಾ ಅರ್ಚಕ ಹೇಪಾಟ್
ಮತ್ತು ಪೆರೋ ಪೇಪಿ....
ಮಂದಿರವನ್ನು ಅವರು ಸಮಾಪಿಸಿದಂತೆ ಪ್ರಲಾಪ ತೀವ್ರಗೊಂಡಿತು :
“ಓ ಒಸೈರಿಸ್, ಓ ಒಸೈರಿಸ್....
"
ಗರ್ಭ ಗುಡಿಯ ದೇವತಾ ಮೂರ್ತಿಗೆ ಪ್ರಣಾಮ ಮಾಡಿ ಮಹಾ
ಅರ್ಚಕ ಎದ್ದ. ಅದೇ ಆಗ ಮಹಾದ್ವಾರವನ್ನು ಹೊಕ್ಕ ಪೆರೋಗೆ ಉಚ್ಚ
ಕಂಠದಲ್ಲಿ ಸ್ವಾಗತ ಬಯಸಿದ :<noinclude></noinclude>
j36vid2f9x29dc248skw0zinenbletr
ಪುಟ:Mrutyunjaya.pdf/೧೧೯
104
21603
317813
252418
2026-05-07T04:33:37Z
Shreelatha.Halemane
7642
/* Proofread */
317813
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಮೃತ್ಯುಂಜಯ|right=೧೦೬}}
{{gap}}"ಒಸೈರಿಸ್ ದೇವರ ರಾಜ್ಯವಾದ ಪರಲೋಕದ ಹೆಬ್ಬಾಗಿಲ బಳಿ <br>
ಮೃತನು ಈಗ ನಿ೦ತು ಹೀಗೆ ಪ್ರಾರ್ಥಿಸುತ್ತಾನೆ: ಉಘೇ! ಮಹಾದೇವನೆ ಸತ್ಯದ ಪ್ರಭುವೆ, ನ್ಯಾಯದ ಪ್ರಭುವೆ, ಉಘೇ! ನನ್ನೊಡೆಯ ನಿನ್ನೆದುರು బంದು ನಿ೦ತಿದೇನೆ ನಾನು. నిನ್ನ ಸೌಂದರ್ಯಾತಿಶಯವನ್ನು ಕಾಣಲೆ೦ದು ನನ್ನನ್ನುಇಲ್ಲಿಗೆ ಕರೆತಂದಿದ್ದಾರೆ. ನಾನು ದಿಟವಾಡುತ್ತಿದ್ದೇನೆ. ಮನುಜರಲ್ಲಿ ನಾನು ಭೇದ ಭಾವ ಎಣಿಸಿಲ್ಲ. ಬಡವರ ಸುಲಿಗೆ ಮಾಡಿಲ್ಲ ನಾನು. ಸ್ವತ೦ತ್ರವಾದ ಯಾವನನ್ನೂ ಅವನ ಇಚ್ಛೆಗಿಂತ ಹೆಚ್ಚಾಗಿ ನಾನು ದುಡಿಸಿಲ್ಲ. ಕರ್ತವ್ಯ ಲೋಪ ಎಸಗಿಲ್ಲ ನಾನು; ದೇವರಿಗೆ ಅಪ್ರಿಯವಾದುದೇನನ್ನೂ ಮಾಡಿಲ್ಲ. ಯಾವ ಯಜಮಾನನೂ ತನ್ನ ದಾಸನೊಡನೆ ಕೆಟ್ಟದಾಗಿ ನಡೆದುಕೊಳ್ಳಲು ನಾನು ಕಾರಣನಾಗಿಲ್ಲ. ನಾನು ಯಾವುದೇ ಮನುಷ್ಯನನ್ನು ಉಪವಾಸ ಕೆಡವಿಲ್ಲ. ಯಾರೂ ಅಳುವಂತೆ ಮಾಡಿಲ್ಲ. ಯಾರನ್ನೂ ನಾನು ಕೊಲೆಗೈದಿಲ್ಲ, ನಾನೆ೦ದೂ ರಾಜದ್ರೋಹ ಎಸಗಿಲ್ಲ. ದೇವಮಂದಿರಕ್ಕೆ ಯಾವ ಸರಬರಾಜನ್ನೂ ನಾನು ಕಡಿಮೆ ಮಾಡಿಲ್ಲ. ದೇವರ ನೈವೇದ್ಯವನ್ನೆ೦ದೂಕೆಡಿಸಿಲ್ಲ. ದೇವಮಂದಿರದ ಪವಿತ್ರ ಸ್ಥಳದಲ್ಲಿ ವಿಷಯಾಸಕ್ತನಾಗಿ ವರ್ತಿಸಿಲ್ಲ. ದೇವರನ್ನು ಧಿಕ್ಕರಿಸಿ ನಡೆದಿಲ್ಲ. ತಕ್ಕಡಿಯಲ್ಲಿ ಮೋಸ ಮಾಡಿಲ್ಲ, ಪಕ್ಕದ ಹೊಲಕ್ಕೆ ನೀರು ತಡೆಹಿಡಿದಿಲ್ಲ.ಎದೆಹಾಲಿನ ಮಕ್ಕಳ ಬಾಯಿ೦ದ ಹಾಲನ್ನು ಕಸಿದಿಲ್ಲ, ದೇವರ ಹಕ್ಕಿಗಳನ್ನು ಬಲೆಯಲ್ಲಿ ಸೆರೆಹಿಡಿದಿಲ್ಲ...ನಾನು ಪರಿಶುದ್ಧ...ನಾನು ಪರಿಶುದ್ಧ.”
{{gap}}ಸುತ್ತಲೂ ಇದ್ದವರನ್ನು ನೋಡಿ ಅಪೆಟ್,"ಹೇಳಿ ನಾನು ಪರಿಶುದ್ಧ ಅ೦ತ ಮೂರು ಸಲ ಹೇಳಿ," ಎ೦ದ.
{{gap}}ಮೆನೆಪ್ ಟಾನ ಆದಿಯಾಗಿ,ಅಪೆಟ್ ನ ಮಾತು ಕೇಳಿಸಿದವರೆಲ್ಲ ಅ೦ದರು:
{{gap}}“ನಾನು ಪರಿಶುದ್ಧ...ನಾನು ಪರಿಶುದ್ಧ.ನಾನು ಪರಿಶುದ್ಧ.”
{{gap}}ಹೊರಗೆ ನಿ೦ತಿದ್ದವರ ಕಿವಿಗೂ ಅದು ಬಿತ್ತು, ಅವರೂ ಅದನ್ನು ಪುನ
ರುಚ್ಚರಿಸಿದರು....
{{gap}}ತಾನು ಸೃಷ್ಟಿಸಿದ ವಾತಾವರಣ ಕ೦ಡು ಅಪೆಟ್ ಉಲ್ಲಾಸಗೊ೦ಡ.<noinclude></noinclude>
dbsdwj99bjkfvfpn5h48cghb15wp00p
ಪುಟ:Mrutyunjaya.pdf/೧೨೪
104
21608
317812
153097
2026-05-07T04:32:31Z
Shreelatha.Halemane
7642
/* Proofread */
317812
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಮ್ರುತ್ಯುಂಜಯ|left=|right=೧೧೧}}
ಮತ್ತು ಹೆಮೊನ್__ಮುಖ್ಯ ಪಟ್ಟಣದಲ್ಲೇ ಇದ್ದರು. "ತೆರವಾಗಿರುವ ಸ್ಥಾನಕ್ಕೆ ನಿವೃತ್ತ ಸೈನಿಕ ಹೆಮ್ಟಿಯನ್ನು ನೇಮಿಸೋಣ." "ಒಳ್ಳೇ ವಿಚಾರ." "ಸಮಿತಿಯಿಂದ ದಿನನಿತ್ಯದ ಆಡಳಿತ ಸಾಧ್ಯವಿಲ್ಲ. ಹಿರಿಯರ ಸಮಿತಿ ತಿಂಗಳಿಗೊಮ್ಮೆ ಸೇರಲಿ. ಎಲ್ಲ ವಿಷಯಗಳನ್ನು ಪರಿಶೀಲಿಸಿಸಲಿ. ಪ್ರತಿದಿನದ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಬೇಕು. "ಮೆನೆಪ್ಟಾ, ನೀನು ಪ್ರಾಂತಪಾಲನಾಗು." "ಹೊಸ ವ್ಯವಸ್ಥೆಯಲ್ಲಿ ಪ್ರಾಂತಪಾಲನ ಸ್ಥಾನವೇ ಬೇಡ, ಸ್ನೊಫ್ರು." "ಸರಿ, ನಾಯಕ ಅನ್ನೋಣ." "ನಾನು__ನಾನು__.... ಯೋಚ್ನೆ ಮಾಡಿ." "ಸಾಕು ಯೋಚ್ನೆ ಮಾಡಿದ್ದು." "ಅಷ್ಟು ಖಡಾಖಂಡಿತವಾಗಿ ನೀವು ಹೇಳೊದಾದ್ರೆ...." "ಹೌದು. ಖಡಾಖಂಡಿತವಾಗಿ." "ನಾವು ಮೂವರೂ ಒಟ್ಟಿಗೆ__" "ಆಗೋದಿಲ್ಲ. ಒಬ್ಬನೇ ನಾಯಕ." "ನೀವು ಸಲಹೆಗಾರರಾಗಿ." "ಆಗಲಿ ನಾವು ಸಲಹೆಗಾರರು."
{{gap}}ತಾವು ಅಧಿಕಾರಕ್ಕೆ ಬರುವುದಕ್ಕೋಸ್ಕರ ಅವರನ್ನು ಓಡಿಸಿದ್ದಲ್ಲ. ಜನರಿಗೆ ಹಿತವಾಗಬೇಕು. ತೆರಿಗೆ__ಕಂದಾಯ ಅರ್ಧಕ್ಕೆ ಇಳಿಯಬೇಕು. "ನೀನು ರಾಜಗೃಹದಲ್ಲಿ ವಾಸಿಸ್ಬೇಕು, ಮೆನೆಪ್ಟಾ." "ಅದು ಮಾತ್ರ ಸಾಧ್ಯವಿಲ್ಲ. ದಿನವೂ ಅಲ್ಲಿಗೆ ಹೋಗಿ ಬರುತ್ತೇನೆ. ಆದರೆ ವಾಸ ಇಲ್ಲೇ." ನದೀ ದಂಡೆಯ ಕಾವಲು ಭಟರು, ಒಳನಾಡಿನ ಕಾವಲಿನವರು__ಇವರೆಲ್ಲರಿಗೂ ಮೇಲಣ ಅಧಿಕಾರಿ ಖ್ನೆಮ್ಹೊಟಿಪ್ ದಳಪತಿ. "ಮಾಡಿ. ಬೇಡ ಅನ್ನೋದಿಲ್ಲ. ಆದರೆ ನನ್ನ ಅಳಿಯನಿಗೆ ಮೂಗಿನ ತುದಿಯಲ್ಲೇ ಕೋಪ. ಮರೀಬೇಡಿ!" "ಜವಾಬುದಾರಿ ಇದ್ದರೆ ಯಾರೂ ಸುಮ್ಮಸುಮ್ಮನೆ ಸಿಟ್ಟಾಗೋದಿಲ್ಲ. "ದೇವ ಮಂದಿರಕ್ಕೆ...." "ಮಂದಿರದ ವೆಚ್ಚ ನಮ್ಮದು. ಅಪೆಟ್ ಚಿಂತಿಸಬೇಕಾಗಿಲ್ಲ. ಕಂದಾಯದ ಸಂಗ್ರಹ ಮಾತ್ರ ರಾಜಗೃಹದ ಕಣಜಗಳಲ್ಲಿ." "ಭೂ ಮಾಲಿಕರು ನಮ್ಮ ಜೊತೆ ಇರುತ್ತಾರೋ ಅಥವಾ ಓಡಿ ಹೋಗ್ತಾರೋ." "ನೋಡ್ಬೇಕು." "ಇಪ್ಯುವರ್ ರಾಜಗೃಹದಲ್ಲಿ ವಾಸ ಮಾಡ್ಲಿ. ಪ್ರಾಂತದ ಹಿರಿಯ ಲಿಪಿಕಾರನಾಗ್ಲಿ. ಬೊಕ್ಕಸದ ಲೆಕ್ಕವನ್ನು ಅವನೇ ಇಡ್ಲಿ...."
{{gap}}ತಮ್ಮ ಊಟ ಮುಗಿಸಿದ ನೆಫಿಸ್, ನೆಜಮುಟ್ ಕುಳಿತು ಕೇಳುತ್ತಿದ್ದರು.<noinclude></noinclude>
27u9udaq98bgvyzt4tqhjbx9whj5w5c
ಪುಟ:Mrutyunjaya.pdf/೧೨೫
104
21609
317814
153098
2026-05-07T04:35:47Z
Shreelatha.Halemane
7642
/* Proofread */
317814
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೧೨|right=}}
ಹಿರಿಯರ ಮಾತಿಗೆ ಕಿವಿಗೊಡುತ್ತ, ಅದನ್ನು ಅರ್ಥಮಾಡಿಕೊಳ್ಳಲೆತ್ನಿಸುತ್ತ ತಾಯಿಯ ಬಳಿ ರಾಮೆರಿಪ್ಟಾ ನಿಂತಿದ್ದ. ಅವನನ್ನು ಮೆನೆಪ್ಟಾ ಕರೆದ.
"ರಾಮೆರಿ, ಹೋಗಿ ಖ್ನೆಮ್ಹೊಟಿಪ್ ಮಾವನನ್ನು ಕರೆದುಕೊಂಡು ಬಾ."
{{gap}}ಹುಡುಗ ಬಾಣದಂತೆ ಓಡಿದ.
{{gap}}ರಾಜಗೃಹದ ದಾಸದಾಸಿಯರ ಪ್ರಶ್ನೆ...." ಅವರಿಗೆಲ್ಲ ಸ್ವಾತಂತ್ರ್ಯ ಕೊಡ್ಬೇಕು. ಅವರು ಮುಕ್ತರು. ಎಲ್ಲಿಗೆ ಬೇಕಾದರೂ ಹೋಗಲಿ," ಎಂದ ಮೆನೆಪ್ಟಾ. ಸೆಬೆಕ್ಖು "ಭೂಮಾಲಿಕರ ದಾಸರ ಬಿಡುಗಡೆಯೂ ಸಾಧ್ಯವಾಗ್ಬೇಕು," ಎಂದ. "ಅದೆಷ್ಟು ಹೊತ್ತು? ಉದಿಸಿದ ರಾ ಮೇಲೆ ಬರದೆ ಇರುತ್ತಾನಾ?" ಎಂದು ಸ್ನೊಫ್ರು ನುಡಿದ.
{{gap}}ಬರಹೇಳಿದಾರೆ ಎಂದನಷ್ಟೇ ಹೊರತು, ಎನ್ನೇನನ್ನೂ ರಾಮೆರಿಪ್ಟಾ ಖ್ನೆಮ್ಹೊಟಿಪ್ಗೆ ತಿಳಿಸಲಿಲ್ಲ. ಖ್ನೆಮ್ ಬಿರುಸಾಗಿ ನಡೆದು ಬಂದು, ಹೊಸ್ತಿಲು ದಾಟಿದೊಡನೆಯೇ ನಿಂತು, ತುಸು ಗೋಣು ಆಡಿಸಿ "ವಂದನೆ" ಎಂದ. ಎಡಭುಜದಲ್ಲಿ ಬಿಲ್ಲು ಬಲಭುಜದಾಚೆ ಬೆನ್ನಲ್ಲಿ ಬತ್ತಳಿಕೆ ಇದ್ದುವು.
{{gap}}ಮೆನೆಪ್ಟಾನೆಂದ:
{{gap}}"ಖ್ನೆಮು, ನೀನಿನ್ನು ಪ್ರಾಂತದ ಕಾವಲು ಭಟರ ದಳಪತಿ. ಇನ್ನು ನಿನ್ನ ಲಾಂಛನ ಕಟಿಯಲ್ಲಿ ಕಠಾರಿ; ಕೈಯಲ್ಲಿ ನೀಳ ಕೋಲು."
{{gap}}ಭಾವೋದ್ವೇಗ ಖ್ನೆಮ್ಹೊಟಿಪ್ನನ್ನು ಬಾಧಿಸಿತು. ವಂದಿಸುವ ನೆಪದಲ್ಲಿ ಆತ ತಲೆಯನ್ನು ಸ್ವಲ್ಪ ಹೆಚ್ಚಾಗಿ ಬಾಗಿಸಿ, ಅಲ್ಲಿದ್ದ ಎಲ್ಲರ ನೋಟದಿಂದ ಮುಖವನ್ನು ಮರೆಮಾಡಿದ.
{{gap}}ಖ್ನೆಮ್ ಇತರ ತೀರ್ಮಾನಗಳ ವಿವರವನ್ನೂ ತಿಳಿದು ಸೆಮ, ಥಾನಿಸ್, ಹೆಮೊನ್ರನ್ನೂ ಹೆಮ್ಟಿಯನ್ನೂ ಕರೆತರಲು ಹೋದ....
{{gap}}ಬಂದವರಲ್ಲಿ ಹೆಮ್ಟಿ ಉತ್ಸುಕನಾಗಿದ್ದ. ಉಳಿದ ಮೂವರು ಯೋಚಿಸುತ್ತಿದಂತೆ ಕಂಡಿತು. ಸ್ನೊಫ್ರು ಬಹಳ ಒತ್ತಾಯಿಸಿದ ಮೇಲೆ ಸೆಮ ಮೆಲ್ಲನೆ ಅಂದ:
{{gap}}"ಹೀಗೆಲ್ಲ ಮಾಡೋದು ಸರಿಯೊ ತಪ್ಪೊ ಗೊತ್ತಾಗ್ತಾ ಎಲ್ಲ."<noinclude></noinclude>
opl696dw4tnedvuju00gz5cfxcwbllr
ಪುಟ:Mrutyunjaya.pdf/೧೨೬
104
21610
317815
60486
2026-05-07T04:39:13Z
Shreelatha.Halemane
7642
/* Proofread */
317815
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೧೩.}}
ಒಲಿಸಿಕೊಲಳ್ಳುವ ದ್ವನಿಯಲ್ಲಿ ಮೆನೆಪ್ಟಾ ನುಡಿದ :
{{gap}}ಇದು ದೈವವಿರೋಧಿ ಕೆಲಸವಂತೂ ಅಲ್ಲ ಹಾಗೆ ನೋಡಿದರೆ ಪೆರೋಗೆ ಇದಿರಾಗಿಯೂ ನಾವೇನೂ ಮಾಡ್ತಾ ಇಲ್ಲ, ತನ್ನ ಮಕ್ಕಳು ನಾಯನಿಷ್ಟರಾಗಿದ್ದರೆ ತಂದೆ ಪೆರೋ ಸಂತೋಷ ಪಡಲೇಬೇಕು ಅಲ್ಲವಾ ?”
{{gap}}ಮತ್ತೂ ಸ್ವಲ್ಪ ಹೊತ್ತು ಯೋಚಿಸಿ ಸೆಮ ಉತ್ತರಿಸಿದ :
{{gap}}''ಈ ಪ್ರಾಂತದ ನಾವೆಲ್ಲ ಒಂದೇ ಬುಡಕಟ್ಟಿನವರು. ನಮ್ಮದು ಒಂದೇ ಪ್ರತೀಕ ನೀರಾನೆ ಏಕರೀತಿಯ ನಡಾವಳಿ.. ಈಗ, ಅಪೂರ್ವ ವಾದದ್ದನ್ನು ನಮ್ಮ ಜನ ಮಾಡಿದಾರೆ. ಆಗಲಿ ಎಲ್ಲರೂ ಒಟ್ಟಿಗೇ ಈಸೋಣ ಮುಳುಗಿದರೆ ಒಟ್ಟಿಗೇ ಮುಳುಗೊಣ."
{{gap}}ಇಂಥ ಮಾತು ತನಗೆ ಇಷ್ಟವಿಲ್ಲವೆಂದು ಹೇಳಲು ಹೋರಟ ಖ್ನಮ್ ಹೊಟಿಪ್ ಪದಗಳನ್ನು ಗಂಟಲಿನ ಆಳಕ್ಕೆ ತಳ್ಳಿದ. ಅಸಹನೆಯಿಂದ ಅವನ ಭುಜ ಚಿಮ್ಮಿತ್ತು. -
{{gap}}ಸ್ನೊಫ್ರುನೆಂದ .
{{gap}}“ಹಾಗೇ ಆಗಲಿ ಸೆಮ. ಹೆಜ್ಜೆ ಮುಂದಿಟ್ಟಿದ್ದೇನೆ. ಇನ್ನು ಹಿಂದಕ್ಕೆ ಸರಿಯೋ ಮಾತೇ ಇಲ್ಲ.”
{{gap}}''ಸಭೆಯ ಏಪಾ೯ಟಿಗಾಗಿ ನಾನು ರಾಜಗೃಹಕ್ಕೆ ಹೋಗ್ಟೇನೆ," ಎಂದು ಖೈಮ್ ಹೊಟೆಪ್, ಪ್ರತಿಕ್ರಿಯೆಗಾಗಿ ಕಾಯದೆ, ವಂದಿಸಿ ಹೊರಬಿದ್ದ.
{{gap}}..ರಾಮೆರಿಪ್ ಟಾ ತಾಯಿಯನ್ನು ಕಾಡಿದ:
{{gap}}''ಅಮ್ಮ, ನಾನು ಹೋಗ್ಲೇಬೇಕು. ನೀನೂ ಬಾ.”
{{gap}}ನೆಜಮುಟ್ ಅಂದಳು :
{{gap}}"ಏನಮ್ಮ ನೆಫಿಸ್-ನಾವೇ ಹೋಗ್ದೆ ಇದ್ದರೆ ಹ್ಯಾಗೆ ?"
{{gap}}ನೆಫಿಸ್ ಗಂಡಸರಿಗೆ ಕೇಳಿಸುವಂತೆ ಅಂದಳು :
{{gap}}... ರಾಜಗೃಹಕ್ಕೆ ನಾವೊ ಬರೋಣವೋ ?”
{{gap}}ಮೌನವಾಗಿದ್ದ ಮಿತ್ರರನ್ನು ಕಂಡು, ಮೆನೆಪ್ಟಾ ಅಂದ ;
{{gap}}''ಬೇಡ ಅನ್ನೋದಕ್ಕೆ ನಾವು ಯಾರು ? ನೀರಾನೆ ಪ್ರಾಂತದಲ್ಲಿ ಎಲ್ಲರೂ ಸ್ವತಂತ್ರರು.”
೮<noinclude></noinclude>
1m0cf5mcfl67mv68ncnfrbaavu3lewm
ಪುಟ:ಹಗಲಿರುಳು.djvu/೩೭
104
38635
317821
293866
2026-05-07T06:30:03Z
Shreelatha.Halemane
7642
/* Validated */
317821
proofread-page
text/x-wiki
<noinclude><pagequality level="4" user="Shreelatha.Halemane" /></noinclude>೨೮
ಕನ್ನಡ ಕೋಗಿಲೆ, ಮೇ ೧೯೧೮,
----------
ಕಲಹಕ್ಕೂ ಎಡೆಯಿಲ್ಲ. ಅದಿಲ್ಲವಾದರೆ, ಮುಖ್ಯವಾದ ಶೃಂಗಾರರಸದ ಜೀವನವೆ ಆರಿದಂತೆ. ನನ್ನ ಪ್ರೇಮಕಲಹದ ಗುಟ್ಟಾದರೂ ಬೇರೆಯಲ್ಲ ; ಆ ಉಪಾಯದ ಮೊಗ್ಗೆಯನ್ನು ನಿನ್ನ ಗಾಳಿಯ ಗಂಟಿನಲ್ಲೆ ಹಾಕಿಕೊಂಡರೆ, ಗಂಧವು ಬಯಲಾಗಿ, ಕೆಟ್ಟು ಹೋಗುವುದೆಂದು ಮಾತ್ರವೆ. ಇರಲಿ, ಆ ಕೋಪದ ಪರದೆಯನ್ನು ಓಸರಿಸಿ, ಪ್ರೀತಿವಿಶ್ವಾಸದ ಕರಡಿಗೆಯ ಮುಚ್ಚಳ
ವನ್ನು ತೆರೆ.
ಸದಾಗತಿ:- (ಸಂತೋಷದಿಂದ) ಪ್ರಿಯನೆ, ನಿನ್ನ ಎಚ್ಚರಿಕೆ ಸರ್ವಥಾ ಸರಿಯೆ.
ಆದರೆ ನಾನಾದರೂ ಆ ಗುಟ್ಟಿನಕಟ್ಟನ್ನು ಮನಸ್ಸಿಗೆ ಮಾತ್ರವಲ್ಲದೆ, ಕೈಗೆ ಕೊಟ್ಟಿಲ್ಲ. ನಿನಗೊಬ್ಬನಿಗೆ ತಿಳಿಸುವುದಷ್ಟೇ ನನ್ನ ಎಣಿಕೆ. ಈಗ ಆ ನಕ್ಷತ್ರಪತಿಯೂ ಅವನ ಪರಿವಾರವೂ ನಮ್ಮ ಜಲಧರನ ಮರೆಹೊಕ್ಕು ಬೆನ್ನು ಹಿಡಿದಿದ್ದಾರೆ. ಇಕ್ಕಡೆಯ ಜಗಳದ ತೀರ್ಪಿನ ಹಕ್ಕೂ ನಮ್ಮವನ ಕೈಗೇ। ಕಟ್ಟಿಕೊಡೋಣಾಗಿದೆ. ನ್ಯಾಯವಿರುದ್ಧವಾದ ಗೊಡ್ಡು ಚಳವಳವು, ನಮಗೆ
ಬೇಡವಾದುದರಿಂದ ಸಂಧಿಗೆ ಇದೇ ಒಳ್ಳೆಯ ಸಮಯವು.
ತೇಜಸ್ವಿ :- ಸರಿ, ಸಂಧಿಗೆ ನನಗೂ ಸಂತೋಷವೆ. ಆದರೆ ಅವರಿಗೆ ಜಲಧರನ
ನಂಬಿಕೆಯಿದ್ದರೆ, ಈ ಕತ್ತಲೆ ಯಾಕೆ ?
ಸದಾಗತಿ:- ಅದರಿಂದೇನು ? ಒಕ್ಕಡೆಯವರನ್ನೇ ಇಟ್ಟುಕೊಂಡು ವಾದವನ್ನು
ತೀರಿಸುವುದು ತಪ್ಪೆಂದೆಣಿಸಿದ ನಮ್ಮ ಜಲಧರನ ಒಪ್ಪಿಗೆಯಿಂದಲೆ ಕತ್ತಲೆ ಇತ್ತ ಕಡೆ ಬಂದಿದೆ.
ತೇಜಸ್ವಿ :- (ಉರಿದೆದ್ದು) ಅ: , ಇದೀಗ ಒಳ್ಳೆಯ ಸಂಧಿ. ಯಾವದು ರಾಜ
ಮಾರ್ಗದಿಂದ ಕವಲುದಾರಿಗೆಳೆದು ಕಾಡಿಗೆ ದೂಡುವುದೊ, ಯಾವುದು, ಮುಂಕುಮಸಿ ಬಳಿದು ಕಂಡವರ ಕಣ್ಣನ್ನು ಕುರುಡಾಗಿಸುವುದೊ, ಯಾವು ದರ ಸಲುವಾಗಿಯೆ ಲೋಕಕ್ಕೆ ಇಷ್ಟು ಅಸಮಾಧಾನವುಂಟಾಗಿದೆಯೊ, ಆ ಕಡುಗತ್ತಲೆಗೆ ಈ ಸಂಧಾನದ ಸಭಿಕತೆಯೆ ! ನಕ್ಷತ್ರಪತಿಯಾಗಲಿ, ಪ್ರತಿನಿಧಿಗಳಾಗಿ ಗುರು ಮೊದಲಾದವರು ಯಾರಾಗಲಿ, ಬರುವಂತೆ ಏರ್ಪಡಿಸಬೇ ಕಿತ್ತು. 'ತಾನು' ರಾಜನು; ತನ್ನವರು ರಾಜಸಭೆಯ ಮಹನೀಯರು. ಲೌಕಿಕ' ರೊಡನೆ ಕೂಡಿ ಕೂತುಕೊಳ್ಳುವುದೆಂದರೆ ಮಾನಹಾನಿ' ಎಂಬೆಣಿಕೆಯಿದ್ದರೆ,<noinclude></noinclude>
5aeev0oujfzsa6v668qbkslziw0two9
ಪುಟ:ಹಗಲಿರುಳು.djvu/೩೮
104
38636
317822
293879
2026-05-07T06:31:05Z
Shreelatha.Halemane
7642
/* Validated */
317822
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|'''ಹಗಲಿರುಳು'''}}
ಅದಕ್ಕೂ ತಕ್ಕ ನಿವೃತ್ತಿಯುಂಟು. ಅಧ್ಯಕ್ಷನಾಗುವ ಜಲಧರನ ಸಿಂಹಾಸನ ವನ್ನು ಸ್ವಲ್ಪ ಚದರಿಸಿ ಆ ಮಹನೀಯರಿಗೆ, ಮೇಲೆಯೆ ಎಡೆಮಾಡಬಹುದು. ಹಾಗಾದರೆ, ಯಾರಿಗೂ ಅಮಾನ್ಯತೆ ಇಲ್ಲವಷ್ಟೆ. ಆ *ದೋಷಾವಿಷ್ಟನಾದ ನಕ್ಷತ್ರಪತಿ ಎದುರಲ್ಲಿ ಬಿಳಿನಗೆ ನಕ್ಕುದು 'ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಸಲಾಂ' ಎಂಬಂತೆಯೆ. ಅಲ್ಲವಾದರೆ ಈ ಕತ್ತಲೆಯ ಪಿಶಾಚಿಯನ್ನು ಕಳು ಹಿದುದೇಕೆ ? ಇರಲಿ, ಅದು ಆ ದೋಷಿಯ ಲಕ್ಷಣವೆ. ಕುಗ್ಗಿದರೆ, ಕೊಂಕಿನ ಕೋಲಾಗಿ, ಉಬ್ಬಿದರೆ, ಕಳಂಕದ ಕುಂಬಳಕಾಯಿಯಂತಾಗುವುದು ಅವನ ಹುಟ್ಟುಗುಣವು. ಆದರೆ, ಲೋಕದ ಇಂಗಿತವನ್ನು ಅರಿತು ಕೊಳ್ಳದೆ, ಜಲಧರನೂ ಈಸ್ವಾಭಿಮಾನಘಾತುಕವಾದ ಹೀನಕೃತ್ಯಕ್ಕೆ ಅಸ್ತುಕೊಟ್ಟುದು ಹೇಗೆ ? ಇರಲಿ, ಸಭೆಗೆ ಬರುವ ಪ್ರತಿನಿಧಿಗಳೆಂದರೆ, ಆಮಂತ್ರಣದ ಅತಿಥಿಗಳಂತೆ, ಮನ್ನಣೆಯಿಂದಿರಬೇಕಲ್ಲದೆ, ಈ ಕತ್ತಲೆಯಂತೆ ಆಕ್ರಮಪ್ರವೇಶಮಾಡಬಹುದೆ ? ನೋಡು, ಎತ್ತೆತ್ತಲೂ ಕತ್ತಲೆಯ ಕಂಬಳಿ ಯಿಂದಾಗಿ ನಮ್ಮವರ ಪೀತಾಂಬರಕ್ಕೂ ಎಡೆಯಿಲ್ಲ. ಹೆಚ್ಚೇಕೆ ? ಆ ಕತ್ತಲೆ ಸಂಧಾನದ ನಿಯಮವನ್ನು, ತನ್ನ ಮಾನದೊಡನೆ ಬಿಟ್ಟು, ಊರಿಗೆ
ಊರನ್ನೆ ಕಣ್ಣುಗಟ್ಟಿ ಸೂಲೆಮಾಡುವಂತಿದೆ.
'''ಸದಾಗತಿ''':- ಅ:, ಹೀಗೆ, ನಮ್ಮವರಲ್ಲಿ ನಂಬಿಕೆ ನಾಸ್ತಿಯಾದರೆ, ಹೇಗೆ ನಡೆ
ದೀತು. ಪ್ರಬಲರಾದ ಹಗೆಗಳ ಎತ್ತಿದ ಕೇನೆದಲೆಗೆ ಕಲ್ಲಿಡಲಿಕ್ಕೆ, ಅಡಿ ಯಲ್ಲಿ ಹರಿಯುವ ಹುಳುಗಳಂತಿರುವ ನಮಗೆ, ಈಗಲೆ ಸಾಧ್ಯವೆ ? ಅದರಿಂದ, ನಾವು ಬಗ್ಗಿ ಪೋಣಿಸಿದರೆ, ಕೆಲಸದ ಬಟ್ಟೆ ನೆಗ್ಗಿ ಕಾಣಿಸುವುದು.' ಎಂಬುದನ್ನು ನೆನಪಿನಲ್ಲಿಡಬೇಕು. ತಂತಮ್ಮಮನೆಗಲ್ಲದೆ, ಲೋಕಕ್ಕೆ ಬೇಲಿ ಹಾಕಲಿಕ್ಕೆ ಯಾರಿಂದಲೂ ಸಾಗದು. ನಮ್ಮ ಕೆಲಸದ ಕಾಲು, ಇಷ್ಟರ ಮಟ್ಟಿಗೆ ಊರಿದುದೆ ಪುಣ್ಯವೆನ್ನಬೇಕು. ಯಾರು ಬಂದರೇನು ? ನಿನ್ನ ಅಮೌಲ್ಯಾಭಿಪ್ರಾಯವನ್ನು ಹೇಳಬಹುದಷ್ಟೆ. ಕಂಬಳಿಯಿಂದಾಗಿ ಪೀತಾಂಬರದ ಬೆಲೆ ತಗ್ಗದು.
'''ತೇಜಸ್ವಿ''' :- ಇದೇನು, ನೀನು ಕಂಡೂ ಕಾಣೆನೆನ್ನುತ್ತಿರುವುದು ! ನಕ್ಷತ್ರಪತಿಗೂ
ಲೋಕಕ್ಕೂ ಇರುವ ವಿರೋಧವೆಂದರೆ, ಈ ಕತ್ತಲೆಯ ವಿಷಯವಾಗಿಯೆ
*ದೋಷ= ರಾತ್ರಿ, ದುರ್ಗುಣ.<noinclude></noinclude>
p8b2uac37ynmo9ynv9n14yeecgh7cry
ಪುಟ:ಹಗಲಿರುಳು.djvu/೩೯
104
38637
317823
293887
2026-05-07T06:31:31Z
Shreelatha.Halemane
7642
/* Validated */
317823
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|'''ಕನ್ನಡ ಕೋಗಿಲೆ, ಮೇ ೧೯೧೮.'''}}
ಇದೆ. ಹಾಗಿರುವಾಗ, ಅಪರಾಧಿಯನ್ನೆ ಸಭ್ಯನನ್ನಾಗಿ--ಯಾಕೆ--ಈಗಿನ ಸ್ಥಿತಿಯನ್ನು ನೋಡಿದರೆ, ಅಧಿಕಾರಿಯನ್ನಾಗಿಯೇ-ಆರಿಸುವುದೆಂದರೇನು !! ಸುಶಿಕ್ಷಿತವಾದ ಮನಸ್ಸು, ಎಲ್ಲ ಇಂದ್ರಿಯಗಳ ಹೇಳಿಕೆಯನ್ನರಿತು, ಸನ್ಮಾರ್ಗವನ್ನೆ ಬೋಧಿಸುವಂತೆ, ಸರ್ವ ಪ್ರತಿನಿಧಿಗಳ ಅಭಿಪ್ರಾಯವನ್ನು ತಿಳಿದು ಪಕ್ಷಪಾತವಿಲ್ಲದೆ ಲೋಕಹಿತವನ್ನು ಹಬ್ಬಿಸುವುದೆ ಮಧ್ಯಸ್ಥನ ಗುರಿಯಾಗಿರಬೇಕು, ಅದಿಲ್ಲದೆ 'ಮನೆ ನಿಮ್ಮದೆ, ತಂಬಿಗೆ ಮಾತ್ರ ಮುಟ್ಟಕೂಡದು' ಎಂಬ ವಂಚಕರ ಮಾತಿಗೆ ಬಾಯಿಬಿಡುವುದೆಂದರೆ, ಲೋಕದ್ರೋಹವೆ ಆಗುವುದು. ಅದು ಸಂಧಿಯಲ್ಲ, ಬಂಧವು.
'''ಸದಾಗತಿ''':- ಮಾಡುವುದೇನು ? ನಮ್ಮವರೆ ಬಹಳ ಮಂದಿ, ನಕ್ಷತಪತಿಯ
ಸಂಚಿಯಲ್ಲಿರುವುದರಿಂದ, ಅವನಿಗೆ ಇಷ್ಟು ಎದೆಗಟ್ಟಿ, ಅಷ್ಟೆ ಅಲ್ಲ. ಅದರಿಂದ, ನಮ್ಮ ಆರ್ಯನ ಆಡಳಿತಕ್ಕೂ ಇಂತಿಷ್ಟೆ ಬೆಲೆಯೆಂಬ ಅವರ ಹೇಳಿಕೆಯೂ ಕೇಳತಕ್ಕುದಲ್ಲವೆ ? ಹಾಗಿರುವಾಗ, ಈ ಮಧ್ಯಸ್ಥತೆಯ ಅಧಿಕಾರವು ನಮ್ಮವರಲ್ಲೊಬ್ಬನ ಪಾಲಿಗೆ ಬಂದುದು, ಹಗೆಗಳ ಸೌಜನ್ಯವನ್ನೂ ನಮ್ಮವರ ಭಾಗ್ಯೊದಯವನ್ನೂ ಸೂಚಿಸುತ್ತದೆ. ಅದನ್ನಷ್ಟೂ ಧಿಕ್ಕರಿಸಿ ತಮ್ಮ ಸ್ಥಿತಿಗತಿಗಳನ್ನೆಣಿಸದೆ 'ನನ್ನ ಎತ್ತಿಗೆ ಮೂರು ಕೊಂಬು' ಎಂದು ಹೇಳುವುದೆಂದರೆ, ಕೆರೆಯಲ್ಲಿ ಕೋಪಿಸಿ ಮುಖಮಜ್ಜನಮಾಡದ ಮೂಢ ತೆಯೆ ಸರಿ.
'''ತೇಜಸ್ವಿ''':- ನಮ್ಮವರೆ ಕೆಲವರು ಆ ಕಡೆಯಲ್ಲಿದ್ದು ವಾದಿಸುತ್ತಾರೆಂದರೆ ಏನು ?
ತೇಜಸ್ಸಂಬಂಧವನ್ನು ನೋಡುವುದಾದರೆ, ಅವರೆಲ್ಲರೂ ನಮ್ಮವರೆ. ನಾವೆಲ್ಲರೂ ಒಂದೆ ಮರದ ಕೊಂಬೆರೆಂಬೆಗಳಂತೆ, ಆರ್ಯನನ್ನೆ ಹಿಡಿದಿರುವವರು. ಈಗ ಆರ್ಯನು ಇಲ್ಲಿಲ್ಲ ದುದರಿಂದ, ಆ ಕೆಲವರು ಮಾತ್ರ ಕತ್ತಲೆಯ ಮಾಯಕ್ಕೆ ಮರುಳಾಗಿ ಹೀಗೆ ತಲೆಕೆಳಗಾಗಿದೆ. ಹೊಟ್ಟೆ ಒಂದಾದರೂ ಹುಟ್ಟು ಗುಣವು ಬೇರೆಂಬುದು ಹೊಳೆದು ಕಾಣುತ್ತಿದೆ. ನಮ್ಮವರಾದ ಮಾತ್ರದಿಂದ ಅವರ ಹೇಳಿಕೆಗೆಲ್ಲ ಸೈಗುಟ್ಟುವುದಾದರೆ, ಮುಂದಣ ನಿಮ್ಮ ತೀರ್ಪನ್ನು ಒರೆಯಲಿಕ್ಕಾದರೂ ಒರೆಗಲ್ಲು ಬೇರೆ ಬೇಡ. ಇರಲಿ, ಆರ್ಯನ ಮೇಲೆ ಅವರ ಆಕ್ಷೇಪವಾದರೂ ಏನು ?<noinclude></noinclude>
ba3lomz02jomcws5ofm4gxk2uszc2ff
ಪುಟ:ಹಗಲಿರುಳು.djvu/೪೦
104
38638
317824
293953
2026-05-07T06:32:09Z
Shreelatha.Halemane
7642
317824
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಹಗಲಿರುಳು.}}
{{Right|೩೧}}
[ಶನಿಯ ಅಂಗಾರಕನೂ, ಆರ್ಯನನ್ನು ಆಕ್ಷೇಪಿಸಿ ವಿವರಿಸಿದ ನಿಂದಾ ಪತ್ರವನ್ನು, ಸದಾಗತಿ ತೇಜಸ್ವಿಗೆ ತೋರಿಸುವನು]
'''ತೇಜಸ್ವೀ''':-(ಪತ್ರವನ್ನೊದಿ) ಅ:, ಈ ಬಿರುಗಾಳಿಯ ಹತ್ತಿಯ ಒಂದು
ಆಕ್ಷೇಪವೆ ? ಕೇಳು, ಶನಿಯೆಂದರೆ, ಪಿತೃದ್ರೋಹಿ: ಮುಂಜಾವದಲ್ಲಿ ಅವನ ಮುಖವನ್ನು ನೋಡಿದ ಮನುಷ್ಯನಿಗೆ ಆ ದಿವಸಕ್ಕೆ ಗಂಜಿಯ ತಿಳಿನೀರೂ ಸಿಕ್ಕಲಾರದು. ಯಾಕಂದರೆ ಅವನ ತಂದೆ ಏನು ಸಾಮಾನ್ಯನೆ ? ಲೋಕಹಿತನಾದ ಆರ್ಯನು, ಹಂದಿಯೊಂದು ಡುರುಂಕೆಂದರೆ ಸಿಂಗವಂಡಲೆವುದೆ?” ಎಂಬಂತೆ, ಈ ಕಿಡುಕನು ಏನೆಂದರೂ ಆ ಮಹಾತ್ಮನಿಗೆ ಕುಂದುಂಟೆ? ಆ ಲೋಕನೇತ್ರನಾದ ತಂದೆಯ ಮಾತನ್ನು ಗಾಳಿಗೆ ಕಟ್ಟಿ, ಈ ಕಳಂಕಿಯನ್ನು ಸೇರಿದ ಸಾಪದಿಂದಲೆ ಸಂಸರ್ಗಜಾರೋಷಗುಣಾಭವಂತಿ' ಎಂಬಂತೆ ನೀಚನಾದನು, ಧಾರ್ಮಿಕನಾದ ನಳ ಚಕ್ರವರ್ತಿಯ ಸತ್ಯಧರ್ಮವನ್ನು ಸೈರಿಸಲಾರದೆ ಕರುಬಿ, ಅಕಟ! ಆ ದೇವತಾ ಸ್ವರೂಪದ ದಂಪತಿಗಳನ್ನು ಊರಿಂದೋಡಿಸಿದನು. ಅಷ್ಟೆ ಅಲ್ಲ; ಪ್ರಿಯ ದಂಪತಿಗಳನ್ನು ಅಗಲಿಸಿ ಮಹಾಪಾಪವನ್ನೂ ಮಾಡಿದನು, “ಓಡಿ ಸಿಕ್ಕ ಬಾರದು, ಎಂಬಂತೆ ಆ ಓಟದಲ್ಲಿ ಯಾದರೂ ಕಡೆಮುಟ್ಟಿದನೆ? ಇಲ್ಲ; ಕಡೆಗೆ ಕಂಗಾಲಾದನೆಂಬುದು ಪ್ರತಿಯೊಬ್ಬನಿಗೂ ಗೊತ್ತುಂಟು. ಅಂಥ ಪಾಪಕರ್ಮದ ಅಭ್ಯಾಸದಿಂದ, ಕಾಲ್ಮುರಿದು, ಗತಿಯುಡುಗಿ ಮತಿಯಡಗಿದ ಕಾರಣದಿಂದಲೆ ಮಂದನಾಗಿರುವುದು ಈಗ ಲೌಕಿಕರಲ್ಲಿ ಕಂಡವರು ಕೇಳಿದವರು, ದುಷ್ಟ ನಾದವನನ್ನು “ಜಿ:, ಶನಿ” ಎಂದು ನಿಂದಿಸುವುದಾದರೂ ಮತ್ತಾವುದರಿಂದ ? ಇನ್ನು, ಅಂಗಾರಕನ ಬಣ್ಣವೊಂದುಂಟು, ಅವನ ಮಾತೃಭಕ್ತಿಯನ್ನು ಬಣ್ಣಿ ಸಿದಷ್ಟೂ ಬಾಯಿ ಮುಚ್ಚದು, ಈ ಮಾತೃಭೂಮಿಯ ಕಷ್ಟವನ್ನು ನೋಡಿ ಊರು ಬಿಟ್ಟೋಡಿ ಹಗೆಗಳನ್ನು ಸೇರಿದ ಆ ಮಹಿಮನಷ್ಟು ಮಾತೃಭಕ್ತಿ ಮತ್ತಾರಿಗಿದೆ ? ದಯಾಮಯನಾದ ಆರ್ಯನು, ಎಂದಿನಂತೆಯೆ ಆಗಲೂ ಭೂಮಿಯನ್ನು ಒಣಗಿಸಿದುದು ಯಾಕೆಂದು ಇವನಿಗೆ ಗೊತ್ತುಂಟೆ?
{{gap}}ನೆಲವು ಕೃಷಿಹೊಂದಿ, ಬಿತ್ತು ಮೊಳೆದು, ಗಿಡುವಾಗಿ ಬೆಳೆದು ಫಲವ ತಾಗಬೇಕಾದರೆ, ಆ ಎಚ್ಚರಿಕೆ ಆವಶ್ಯಕವು, ಬಸಿರಿಯಾದ ಸುವಾಸಿನಿ ಹೆತ್ತು ತಾನೂ ಮಗುವೂ ಪರಿಪುಷ್ಟರಾಗಬೇಕಾದರೆ, ಮೊದಲಿಂದಲೆ ಮದ್ದು ಮಾಡುತ್ತ, ಆಮೇಲೆ ಶೀತನಿವಾರಣೆಗಾಗಿ ಕಡುತರವಾದ ನಂಜಿನ ಮದ್ದುಗ<noinclude></noinclude>
dg02clw3f9yt9m9jg4j1hj8cpz0c3fk
ಪುಟ:ಹಗಲಿರುಳು.djvu/೪೧
104
38639
317825
293955
2026-05-07T06:32:26Z
Shreelatha.Halemane
7642
317825
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೩೨}}
{{center|ಕನ್ನಡ ಕೋಗಿಲೆ, ಮೇ ೧೧೮.}}
ಳನ್ನು ಸೇವಿಸಬೇಕೆಂಬುದು ಹಸುರುಹಳ್ಳಿಯ ಹಾಡಿಗೌಡರಿಗೂ ಗೊತ್ತು, ಯಾಕೆ- ಪ್ರತಿಯೊಂದು ತಿರ್ಯಗಜಂತುವೂ ಹೀಗೆಯೆ ನಡೆಯುತ್ತಿದೆ. ಅಷ್ಟೆ ಅಲ್ಲ; ಹೆತ್ತ ಮಗುವನ್ನು ಎತ್ತಿ ಏಳಿಗೆಗೆ ತರುವ ಲೋಕವೃಕ್ಷದ ತಾಯಿ ಬೇರಾದ ಹೆಂಗುಸು, ಆಕಷ್ಟವನ್ನು ಸಂತೋಷದಿಂದ ಸೈರಿಸಿಕೊಳ್ಳುವಳು. ಅದೇನು, ಉಮ್ಮಿ ಬಂದೀತೆಂದು ಊಟವನ್ನೆ ಬಿಡುವುದುಂಟೆ ? ಈ ಅಂಗಾರಕ ನೊಬ್ಬನು ಹಾರಿಹೋದನೆಂದು ಭೂದೇವಿಯಾದರೂ ಕೊರಗಿ ಕೊ' ಎನ್ನ ಲಿಲ್ಲ, ಬಾಲ್ಯದಲ್ಲಿ ಸ್ವಾತಂತ್ರವನ್ನೀಯದೆ, ವಿದ್ಯಾಭ್ಯಾಸ ಲೋಕವ್ಯವ ಹಾರಜ್ಞಾನಾದಿಗಳ ಕಷ್ಟಕ್ಕೆ ಮಕ್ಕಳನ್ನು ಗುರಿಮಾಡಿ ಆ ಸ್ವಾತಂತ್ರ್ಯದ ಗುಟ್ಟನ್ನು ಕಲಿಸುವುದು ಪೋಷಕರ ಕರ್ತವ್ಯವು, ಜ್ಞಾನಾರ್ಜನೆಯಲ್ಲಿ ಮನ ಸ್ಸಿಲ್ಲದ ಈಗಿನ ಕೆಲವು ಕೆಟ್ಟ ಹುಡುಗರಿಗೆ ಇವೆಲ್ಲ ವೂ ವಿಪರೀತವಾಗಿ ತೋರುತ್ತದೆ. ಅದರಿಂದಲೆ ಮೂರಕ್ಷರವನ್ನೋದಿ ಮೂರು ಲೋಕವನ್ನೋದಿ ದೆವೆಂದೆಣಿಸಿ, ವಿದ್ಯಾಭ್ಯಾಸದ ಆವಾಹನೆಯನ್ನು ಉದ್ಘಾಹಿಸಿ, ಹಿರಿಯರ ಬುದ್ಧಿ ಮಾತನ್ನು ಒದ್ದು, ಅಲ್ಲಿ ಸಲ್ಲ ದವರ ಬಿಳಿನಗೆಗೆ ಬಾಯಿಬಿಟ್ಟು, ಆ ಅಲ್ಪರ ರೀತಿಯೆ: ನಾಗರಿಕತೆಯ ಲಕ್ಷಣವೆಂದೆಣಿಸಿ, ಅಕಟಾ ! ಅನಿಷ್ಟ ಸ್ವರೂಪದ - ಅಂಗಾರಕರಾಗಿ ಹೋಗುತ್ತಾರೆ. ಅಂಥವರಲ್ಲಿ ಇವನೂ ಒಬ್ಬನು. ಒಳಗೆ ಪ್ರೇಮವನ್ನೂ ಹೊರಗೆ ನಿಯಮವನ್ನೂ ತೋರದಿದ್ದರೆ, ಹುಡುಗರು ಹಾಳಾಗುವರೆಂಬುದಕ್ಕೆ ಬಹಳ ದೃಷ್ಟಾಂತಗಳಿವೆ. ಅದಿರಲಿ, ಅವನ ದುಷ್ಕಾರ್ಯಗಳಿಂದಲೆ 4 ಅನಿಷ್ಟಕ್ಕೆ ಅಂಗಾರಕನೆ ಗುರಿ' ಎಂಬ ಮಾತಿಗೆ ಎಡೆಯಾಯಿತು. ಒಬ್ಬೊಬ್ಬನು ಅನ್ಯಾಯವನ್ನೆ ಮಾಡಿದರೂ ಇಡಿ ಲೋಕವು ಬರಿದೆ ಅಪವಾದದ ಆರೋಪವನ್ನು ಹೊರಿಸಲಿಕ್ಕಿಲ್ಲ.
{{gap}}ಅದರಿಂದಲೆ ಹತ್ತಿದ್ದಲ್ಲಿ ಮುತ್ತುಂಟ ಎಂದು ಹೇಳುತ್ತಾರೆ. ಇನ್ನು, ಅಂಗಾರಕ ಶನಿಗಳ ಹುಡುಗಾಟದ ಬಿರುಸು, ಒತ್ತಟ್ಟಿಗಿರಲಿ, ಈ ನಕ್ಷತ್ರಪತಿಯೆಂಬ ಅರಸನಾದರೂ ಯೋಗ್ಯನಾಗುತ್ತಿದ್ದರೆ, ತಾಯ್ತಂದೆಯ ರೊಡನೆ ವಿಚಾರಿಸದೆ, ಈಗಿನ ಕೆಲವು ಸಂಸ್ಥೆಗಳ ವರಂತೆ, ಈ ಬಾಲಕರನ್ನು ತನ್ನಲ್ಲಿ ಸೇರಿಸಿಕೊಳ್ಳಬಹುದೆ? ಹೋ ! ತಪ್ಪಿದೆನು ! ಅವನ ಬಣ್ಣವನ್ನು ಒರೆ ಯುವ ಒರೆಗಲ್ಲೂ ಇಲ್ಲಿ ಯೆ ಇದೆ. ಒಂದೇ ಮಾತಿನಿಂದ ಹೇಳುವುದಾದರೆ, ಇಷ್ಟೆ ಸಾಕು.<noinclude></noinclude>
1secfxj40jpwpzods1vv2afedgom3tb
ಪುಟ:ನನ್ನ ಸಂಸಾರ.djvu/೧೬
104
57299
317844
125913
2026-05-07T08:00:54Z
Shreelatha.Halemane
7642
/* Proofread */
317844
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಕಾದಂಬರಿ ಸಂಗ್ರಹ|left=8|right=}}
ನನ್ನನ್ನು ಕೊಡಬೇಕೆಂದು ಒಂದು ಕಾಗದವನ್ನು ಬರದು ಹಾಕಿದರು. ಆದರೆ ಅವರು ತುಂಬಾ ಪ್ರಸಿದ್ಧಿಯುಳ್ಳ ದೊಡ್ಡ ಮನುಷ್ಯರಾಗಿದ್ದುದುಂದ ಈ ಕಾಗದವನ್ನು ಮೊದಲು ಲಕ್ಷ್ಯಮಾಡಲಿಲ್ಲ. ಹರಪುರದ ಜರ್ಮೀಾದಾರರು ಪ್ರಸಿದ್ಧರಾದ ವಿನಾಯಕಶಾಸ್ತ್ರಿ ಗಳೆಂಬುವರು ತಮ್ಮ ಏಕಮಾತ್ರ ಪುತ್ರಿಯಾದ ಲಕ್ಷ್ಮೀದೇವಿಯೆಂಬ ಕನ್ನೆಯನ್ನು ನೀಲ ಕಂಠಶಾಸ್ತ್ರಿಗಳ ಮನೆಗೆ ಕೊಡಬೇಕೆಂದು ಸಂಕಲ್ಪಿಸಿ ಅದೇ ಸಮಯದಲ್ಲಿಯೇ ವಾಸು ದೇವಶಾಸ್ತ್ರಿಗಳ ಚಾತಕವನ್ನು ತರಿಸಿನೋಡಿದರು, ದಾಂಪತ್ಯಾನುಕೂಲವು ಬಹಳ ಅನು ಕೂಲವಾಗಿದ್ದಿತು. ಇಂತಹ ಅನುಕೂಲವಾದವರನನ್ನು ಈಗ ಉದಾಸೀನ ಮಾಡಿಬಿಟ್ಟರೆ ಮುಂದೆ ತಮಗೆ ಇಷ್ಟು ಅನುಕೂಲವಾದ ಬಾಂಧವ್ಯವು ದೊರೆವುದೋ ಇಲ್ಲವೋ ಎಂದು ಅವರು ಈ ಅಗ್ರವನ್ನು ಆದಷ್ಟು ತ್ವರೆಯಿಂದ ನೆರವೇರಿಸಬೇಕೆಂದು ಬಲವಂತ ಮಾಡತೊ ಡಗಿದರು. ನೀಲಕಂಠಶಾಸ್ತ್ರಿಗಳೂ ಕೂಡ, ಇಂತಹ ಯೋಗ್ಯ ಮನೆತನದ ಕನ್ನಿಕೆಯು ಎರಡನೆಯ ಸಂಬಂಧಕ್ಕೆ ದೊರೆತುದು ಪುಣ್ಯೋದಯವೆಂದೂ, ನಾವು ಈಗ ಅವರು ಹೆಣ್ಣು ಕೊಡು ಎಂದು ಹೇಳುವಾಗಲೇ ಉದಾಸೀನಮಾಡಿಬಿಟ್ಟರೆ ಮುಂದೆ ಅವರ ಮನಸ್ಸು ಹೇಗೇ ಹೇಗೆ ಬದಲಾಯಿಸುವುದೋ, ಆದುದರಿಂದ ಈ ಲಗ್ನವನ್ನು ಮಾಘದಿ ಪಂಚಕಕ್ಕೆ ಮುಂಚೆಯೇ ನೆರವೇರಿಸಿ ಬಿಡಬೇಕೆಂದೂ ವಿನಾಯಕಶಾಸ್ತಿಗಳಿಗೆ ಹೇಳಿ ಕಳು.ಸಿದರು. ''ರೋಗಿ ಬಯಸಿದುದು ಹಾಲನ್ನ'', ವೈದ್ಯ ಹೇಳಿದುದೂ ಹಾಲನ್ನ ” ಇಬ್ಬರ ಮನಸ್ಸೂ ಒಂದೇ ವಿಧ ಭಾವನೆಯಲ್ಲಿದ್ದಿತು.
{{gap}}ವಾಸುದೇವ ಶಾಸ್ತ್ರಿಗಳಿಗೆ ಪ್ರಥಮಪತ್ನಿನಿಯೋಗವದುದು ಸೌಮ್ಯ ಸಂ||ದ ವೈಶಾಲಶುದ್ಧ ಸಪ್ತಮಿ) ಸೋಮವಾರದದಿನ, ವಿನಾಯಕ ಶಾಸ್ತ್ರಿಗಳ ಮಗಳನ್ನು ಕೊಟ್ಟು ಲಗ್ನ ಬೆಳೆಸಲೇರ್ಪಾಡಾದ ದು ಶ್ರಾವಣ ಶುದ್ಧ ದಶಮಿಯದಿನ .ಬೀಗುಬ್ಬರೂ ಒಳ್ಳೆಯ ಉಪಸನ್ನರಾದವರೇ. ಇಬ್ಬರಿಗೂ ಉತ್ಸಾಹವೂ ಇಮ್ಮಡಿಯಾಗಿಯೇ ಇದ್ದುದು, ವಿನಾಯಕ ಶಾಸ್ತ್ರಿಗಳ ಮಗಳು ರೂಪಿನಲ್ಲಿ ಬಹುಚಲುವೆಯಾಗಿಯೂ ಇದ್ದಳು, ನೀಲಕಂಠಶಾಸ್ತ್ರಿಗಳ ಮನೆಯಲ್ಲಿ ಇದು ದ್ವಿತೀಯ ವಿವಾದವೆಂದು ಹೇಳುವುದಕ್ಕಾಗುತ್ತಿರಲಿಲ್ಲ, ಒಬ್ಬರು ಒಂದೊಂದು ಸಾವಿರರೂಪಾಯಿಗಳಿಗೆ ಮೀರಿದವೆಚ್ಚವನ್ನೇ ಮಾಡಿದರು, ನೀಲಕಂಠಶಾಸ್ತ್ರಿಗಳು ತಮ್ಮ ಮೊಮ್ಮಗನ ಕೈಲಿ ವಿವಾಹಾಗ್ನಿಯನ್ನೇ ಧಾರ್ಯಾಗ್ನಿಯನ್ನಾಗಿ ಇಡಿಸಿ ಒಂದು ದರ್ಶನ್ಮಾಲೀಪಾಕವನ್ನೂ ಒಂದು ಪೌರ್ಣಮಾಸೀಸ್ಟಾಲೀಪಾಕವನ್ನೂ ಮಾಡಿಸಿ ತನ್ಮುಖೇನ ವೈಶ್ವದೇವವನ್ನು ಆರಂಭಮಾಡಿಸಿದರು. ಈ ವಿಜೃಂಭಣೆಗಳೆಲ್ಲಾ ಭಾದ್ರಪದ ಶುದ್ಧ ಪ್ರತಿಸತ್ತಿನರ್ಮಗೂ ನಡೆಯಿತು.ಇಷ್ಟು ಹೊತ್ತಿಗೆ ಹ
ರಪುರದಲ್ಲಿ ಅಲ್ಲಲ್ಲಿಯೇ ಒಂದೊಂದು ಇಲಿಗಳು ಸಾಯುತ್ತಾ<noinclude></noinclude>
pd1i4v2fw3leufz06wr9h8gqmbkx42o
ಪುಟ:ನನ್ನ ಸಂಸಾರ.djvu/೧೭
104
57300
317845
125914
2026-05-07T08:09:36Z
Shreelatha.Halemane
7642
/* Proofread */
317845
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ನನ್ನ ಸಂಸಾರ|left=|right=9}}
ಹಾಗೆಯೇ ಪ್ಲೇಗಿನಿಂದ ಒಬ್ಬೊಬ್ಬರು ಸಾಯುವದಕ್ಕೂ ಆರಂಭವಾಗಿತ್ತು. ವಿನಾ ಯಕಶಾಸ್ತ್ರಿಗಳು ಪ್ಲೇಗಿಗೆ ಹೆದರಿ ಭಾದ್ರಪದ ಶುದ್ಧ ಬಿದಿಗೆದಿನ ಸಾಯಂಕಾಲ ಹರಪುರಕ್ಕೆ ಆರು ಮೈಲಿ ದೂರದಲ್ಲಿದ್ದ ತಮ್ಮ ಗ್ರಾಮವಾದ ಕ್ಷೀರಪುರಕ್ಕೆ ಪ್ರಯಾಣಮಾಡಿಕೊಂಡು ಹೊರಟುಹೋದರು. ಇವರು ಪ್ರಯಾಣಮಾಡುವುದಕ್ಕೆ ಮರುದಿನಮುಂಚೆಯೇ ಮದುವೆಯಾದ ಮನೆಯಲ್ಲಿ ಎರಡು ಇಲಿಗಳು ಸತ್ತುಹೋಗಿದ್ದವು. ಆದುದರಿಂದಲೇ ಅವರು ಅಷ್ಟು ತ್ವರೆಯಾಗಿಯೇ ಊರುಬಿಟ್ಟು ಹೋದರು, ಭಾದ್ರಪದ ಶುದ್ಧ ತದಿಗೆ ಚೌತಿ ಇವೆರಡುದಿನವೂ ಊರಿನಲ್ಲೆಲ್ಲರ ಮನೆಯಲ್ಲೂ ಗೌರಿ-ಗಣೇಶ ಹಬ್ಬದ ಸಮಾರಂಭ, ಗಣಪತಿಯನ್ನು ಕೂರಿಸಿದ ಮೇಲೆ ವಿಘ್ಹ್ನೇಶ್ವರನಿಗೆ ಮಂಗಳಾರತಿ ಮಾಡಿ ಬಿಟ್ಟ ಹೊರತು ಮನೆಬಿಟ್ಟು ಹೋಗುವಹಾಗಿಲ್ಲ, ಊರಿನಲ್ಲಾದರೋ ಪ್ಲೇಗು ದಿನೇ ದಿನೇ ಹೆಚ್ಚುತ್ತ ಬಂದು ಬ್ರ್ಹಾಮಣಕೇರಿಯಲ್ಲೇ ದಿನವೊಂದಕ್ಕೆ ಎರಡು ಮೂರು ಹೆಣಗಳು ಹೋಗಲಾರಂಭವಾಯಿತು. ಜನಗಳಿಗೆ ಬಹು ಗಾಬರಿಯಾದ್ದರಿಂದ ಎಲ್ಲರೂ ಊರ ಹೊರಗೆ ಎರಡು ಮೈಲಿ ದೂರದಲ್ಲಿ ಮಟ್ಟೇ ಜೋಪಡಿಗಳನ್ನು ಕಟ್ಟಿಕೊಂಡು ಅಲ್ಲಿಗೆ ವಾಸಕ್ಕೆ ಹೊರಟುಹೋದರು, ಭಾದ್ರಪದ ಶುದ್ಧ ದಶಮಿ ಹೊತ್ತಿಗೆ ಊರೆಲ್ಲವೂ ಖಾಲಿಯಾದವು ನೀಲಕಂಠಶಾಸ್ತ್ರಿಗಳ ಮನೆಯವರೂ ತಮ್ಮ ಮನೆಗೆ ಬೀಗ ಹಾಕಿ ಕೊಂಡು ಗ ಡಿಸಲಿಗೇ ವಾಸಕ್ಕೆ ಹೊರಟುಹೋದರು.
{{gap}}ವಿನಾಯಕ ಶಾಸ್ತ್ರಿಗಳ ಮನೆಯವರು ಕ್ಷೀರಪುರಕ್ಕೆ ಪ್ರಯಾಣ ಮಾಡಿದ ವಿಷಯವನ್ನು ಹಿಂದೆಯೇ ಬರೆದಿದೆಯಷ್ಟೆ? ಅವರು ಅಲ್ಲಿಗೆ ಹೋದ ಮೇಲೆ ಒಂದು ತಿಂಗಳವರಿಗೆ ಕ್ಷೇಮವಾಗಿಯೇ ಇದ್ದರು. ಇಷ್ಟು ಹೊತ್ತಿಗೆ ನವರಾತ್ರಿ ಹಬ್ಬ ಬಂದಿದ್ದಿತು. ನವರಾತ್ರಿ ಪಾದದಿನ ರಾತ್ರಿಯೇ ಏನಾಯಕ ಶಾಸ್ತ್ರಿಗಳು ಒಕ್ಕಲಿದ್ದ ಮನೆಯಲ್ಲಿ ಒಂದು ಇಲಿ ಸತ್ತು ಹೋಯಿತು, ಮನೆಯಮರೆ ಇದನ್ನು ನೋಡಿ ಬಹುಗಾಬರಿಯಾಗಿ ಹೋಯಿತು. ಮಾರನೇ ದಿನವೇ ಬೇರೊಂದು ಮನೆಗೆ ವಾಸ ಹೊರಟು ಹೋದರು. ಅದೇ ದಿನ ಸಾಯಂಕಾಲ ಐದು ಗಂಟೆ ಸಮಯದಲ್ಲಿ ಹೊಸ ಮದವಣಗಿತ್ತಿ ಲಕ್ಷ್ಮೀದೇವಮ್ಮ ನಿಗೆ ಜ್ವರವೂ ತಲೆನೋವೂ ಕಾಣಿಸಿ ಕೊಂಡಿತು, ಮನೆಯವರ ಹೆದರಿ ಕೆಯನ್ನು ಕೇಳಬೇಕೆ ? ವಿನಾಯಕ ಶಾಸ್ತ್ರಿಗಳು ಪೂರ್ವಭಾವಿಯಾಗಿಯೇ ಪ್ರೇಗಿನ ಔಷಧಗಳನ್ನು ಬೇಕಾದಹಾಗೆ ಏರಿಸಿಟ್ಟು ಕೊಂಡಿದ್ದರು, ಅದನ್ನೆಲ್ಲಾ ಜ್ವರ ಬಂದ ಹುಡು ಗಿಗೆ ಕೊಟ್ಟು ದಾಯಿತು. ಮಾರನೇದಿ ಲಕ್ಷ್ಮೀದೇವಮ್ಮನಿಗೆ ಕಂಕುಳು ಸಂದಿಯಲ್ಲಿ ಎರಡು ಗೆಡ್ಡೆಗಳು ಕಾಣಿಸಿಕೊಂಡವು, ಆ ಗ್ರಾಮದವರು ಇದನ್ನು ತಿಳಿದು ಒಟ್ಟು ಗೂಡಿ ಒಂದು ಕ್ಷಣವೂ ತಮ್ಮ ಲನಲ್ಲಿರಲಾಗದೆಂದು ವಿನಾಯಕ ಶಾಸ್ತ್ರಿಗಳ ಮನೆಯ<noinclude></noinclude>
89r2zo0c7yshhsgms5b6bfdi4qbvz1t
ಪುಟ:ಮನಮಂಥನ.pdf/೫
104
62452
317758
268684
2026-05-06T16:42:54Z
Shreelatha.Halemane
7642
/* Proofread */
317758
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|'''ಅಧ್ಯಕ್ಷರ ಮಾತು'''}}
{{gap}}ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ
ಮೇರುಕೃತಿಗಳನ್ನು ಪುನರ್ ಮುದ್ರಣ ಮಾಡಲು ಒಂದು ಯೋಜನೆಯನ್ನು
ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು.
ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ
ಸುಯೋಗ ನನ್ನದಾಯಿತು.
{{gap}}ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ
ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು
ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ
ಸರ್ಕಾರವನ್ನೂ ಇಲಾಖೆಯನ್ನೂ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ
ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ.
{{gap}}ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ
ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ.
ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ
ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು
ಕಷ್ಟಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ
ಸದಸ್ಯರಿಗೂ ಕೃತಜ್ಞನಾಗಿದ್ದೇನೆ.
{{gap}}ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ನಿರ್ದೆಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು
ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ.
{{gap}}ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು
ಹರಡುವ ಈ ಯೋಜನೆಯ ಪೂರ್ಣ ಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ
ಎಂದು ಹಾರೈಸುತ್ತೇನೆ.
ಸಿರಿಗನ್ನಡಂ ಗೆಲ್ಲೆ!
ದಿನಾಂಕ ೧೬.೧೨.೨೦೧೦
ಎಲ್.ಎಸ್. ಶೇಷಗಿರಿ ರಾವ್
ಅಧ್ಯಕ್ಷ
ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ<noinclude></noinclude>
nsyo7704484lxxtsh6cxytsb23ogiqk
ಪುಟ:ಮನಮಂಥನ.pdf/೨೪೦
104
62687
317773
316699
2026-05-06T16:49:30Z
Shreesha Sharma
7840
/* Validated */
317773
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಸ್ಕಿಜೋಫೊನಿಯಾಗಳು}}{{Right|೨೨೧}}
{{gap}}ಹೀಗೆ ಮನಸ್ಸು ಛಿದ್ರವಾದಾಗ, ಆಳ ಮನಸ್ಸಿನಲ್ಲಿ ಹುದುಗಿಕೊಂಡಿದ್ದ
ID-compulsions ವನ್ಯ ಮೃಗಗಳ ನಡತೆಯು ರಘುಪತಿಯನ್ನು ಜಗ್ಗಿಸಿ
ಆಡಿಸಬಹುದು. ಆಗ ಮಾನವ ಸಹಜವಾದ ಆಸೆ, ಆಕಾಂಕ್ಷಿ ; ಸುರಕ್ಷಿತವಾಗಿರಬೇಕು,
ಸಮಾಜದಲ್ಲಿ ಮನ್ನಣೆಯನ್ನು ಪಡೆಯಬೇಕು ಎಂಬುವೆಲ್ಲಾ ನಶಿಸಿಹೋಗುತ್ತಾ
ಇರುತ್ತವೆ. ಇದರ ಲಕ್ಷಣವೇ ಮಹತ್ ಉದಾಸೀನತೆ, ರಘುಪತಿಯು ಮಹಾ
ಉದಾಸೀನನಾಗಿದ್ದು ಈ ಕಾರಣದಿಂದ
{{gap}}ರೋಗದ ಚಿಹ್ನೆಗಳನ್ನೆಲ್ಲಾ ಬರೆದು ರಘುಪತಿಯು ತಂದುಕೊಟ್ಟ
ಯೋಚನೆಗಳನ್ನು ಸಮಂಜಸವಾಗಿ ಬರೆದಿಟ್ಟ ರೀತಿಯನ್ನು ನೋಡಿದರೆ,
ಯೋಚನೆಗಳನ್ನು ಹೊರಪಡಿಸುವಾಗ ಯಾವ ತಪ್ಪ ಇಲ್ಲ ಎನ್ನುವುದು
ಸ್ಪಷ್ಟವಾಯಿತು. ಹೊರಪಡಿಸುವುದು ಸಮಂಜಸವಾಗಿದ್ದರೂ, ಅವ
ಯೋಚನೆಗಳನ್ನು ಮಾಡುವಾಗ ತೀವ್ರವಾಗಿ ಎಡವುತ್ತಿದ್ದ ಎನ್ನುವುದೂ ಸ್ಪಷ್ಟವಾಗಿತ್ತು.
ಭಾವನೆಗಳು ನಶಿಸುತ್ತಿದ್ದುದರಿಂದ ಯೋಚಿಸುವಾಗ ಎಡವುತ್ತಿದ್ದಹಾಗೆ ಹೊರಬಂದ
ಯೋಚನೆಗಳನ್ನು ಮಾತುಗಳಲ್ಲಿ ಮೂಡಿಸುವಾಗ, ಸಮಂಜಸವಾಗಿಯೇ
ಮಾಡುತ್ತಿದ್ದ. ಇವನ ಮನಸ್ಸು ಸರಿಯಾಗಿ ಕೆಲಸ ಮಾಡುತ್ತಿದೆ ; ಇವನಿಗೇನೂ
ಬೇನೆ ಇರಲಾರದು ; ಎಂದು ಅನ್ನುವಂತಿದ್ದ.
{{gap}}ರಘುಪತಿಯು ಕೆಲಸದ ಮೇಲಿದ್ದಾಗಲೂ ಕೂಡ, 'ನನ್ನನ್ನು ನೋಡಿ
ಜನರು ನಗುತ್ತಾರೆ, ನನ್ನ ಹಿಂದೆ ಮೂದಲಿಸುತ್ತಿದ್ದಾರೆ' ಎನ್ನುವ ಯೋಚನೆಗಳು,
ಒದ್ದುಕೊಂಡು ಬಂದು, ಕೆಲಸದ ಮೇಲಿರಬೇಕಾಗಿದ್ದ ಗಮನವನ್ನು ತಪ್ಪಿಸಿದುವು.
ರಘುಪತಿಯ ಈ ಅವಸ್ಥೆಯನ್ನು Thought-disorder ಎಂದು ಕರೆಯುತ್ತಾರೆ,
ಸ್ಕಿಜೋಫೆನ್ರಿಯಗಳ ಒಂದು ಪ್ರಮುಖವಾದ ಚಿಹ್ನೆ ಇದು.
{{gap}}'ಇಷ್ಟು ದುರ್ಬಲವೇನೋ, ನಿನ್ನ ಮನಸ್ಸು, ರಘುಪತಿ ; ಸಾಹಸಪಟ್ಟು
ಮನಸ್ಸಿನ ಯೋಚನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಪ್ಪಾ' ಎಂದು
ಬುದ್ಧಿಯನ್ನು ಹೇಳುವುದು, ಶುದ್ಧ ಮೌಡ್ಯತನ, ಅದು ಸಾಧ್ಯವಾಗಿದ್ದರೆ ಅವ
ಡಾಕ್ಟರ ಬಳಿಗೆ ಏಕೆ ಬರುತ್ತಿದ್ದ? ಮನಸ್ಸು ಹತೋಟಿಯಲ್ಲಿರದೆ, ಸೂತ್ರವನ್ನು
ಹರಿದುಕೊಂಡ, ಹಾಗೂ ಬಾಲಂಗೋಚಿ ಇಲ್ಲದ ಗಾಳಿಪಟದಂತೆ, ತಿಪ್ಪರಲಾಗ
ಹಾಕಿ ಬೆದರಿಸುತ್ತಿರುವಾಗ, ಅವನನ್ನು ಧೈರ್ಯ ತಂದುಕೋಪ್ಪಾ ಎನ್ನುವುದು
ಶುದ್ಧ ಅನ್ಯಾಯ, ಹೀಗಂದರೆ ರಘುಪತಿಯು ಸಿಡುಕಿ ರೇಗುವುದು ಸಹಜ.
ಯೋಚಿಸಿ, ದೃಢ ನಿರ್ಧಾರ ಮಾಡುವ ಶಕ್ತಿಯು ಕಳೆದು ಹೋಗುವುದು
ಜೋಫ್ರೆನಿಯಾಗಳ ಮುಖ್ಯ ಲಕ್ಷಣ.<noinclude></noinclude>
lcwvpelnwnc5o0f52ogjxg5gxo5996q
ಪುಟ:ಮನಮಂಥನ.pdf/೩೭೨
104
62819
317775
317254
2026-05-06T16:50:07Z
Shreesha Sharma
7840
/* Validated */
317775
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೩೫೪}}{{Right|ಮನಮಂಥನ}}
{{center|'''೫. ಮನಸ್ಸಿನ ಚಟುವಟಿಕೆಗಳು'''}}
ಮನಸ್ಸಿನ ಚಟುವಟಿಕೆಗಳು ಯಾವ ರೀತಿಯಲ್ಲಿ ನಡೆಯುತ್ತವೆ ಎಂಬುದನ್ನು
ಒಂದು ನಿದರ್ಶನದೊಂದಿಗೆ ತಿಳಿಯೋಣ. ಸ್ವಂತ ಅನುಭವದ ನಿದರ್ಶನವಾದರೆ
ಓದುಗರಿಗೆ ನೇರವಾಗಿ ತಟ್ಟಬಹುದು.
ಆ ಅಧ್ಯಾಯವನ್ನು ಬರೆದು ಸಂಜೆಯ ಹೊತ್ತಿಗೆ ಪೂರೈಸಬೇಕು ಎಂದು
ಬೆಳಿಗ್ಗೆ ಎದ್ದಾಗ ನಿರ್ಧರಿಸಿದೆ. ಡಿಟೆಕ್ಟಿವ್ ನಾವೆಲ್ಲನ್ನು ಹಿಂದಿನ ರಾತ್ರಿ ಓದಿ
ಮುಗಿಸಿದ್ದೆ. ಹೊಸದು ಇನ್ನೂ ಸಿಕ್ಕಿರಲಿಲ್ಲ. ಹಾಗೂ ಈ ದಿನ ಪೂರ್ತಿ ರಜಾ,
ಅಂದ ಮೇಲೆ ಬರೆದು ಮುಗಿಸಬೇಕು ಎನ್ನುವ ನಿರ್ಧಾರವನ್ನು ಮಾಡಿತು,
ನನ್ನ ಮನಸ್ಸು.
ಬೆಳಗ್ಗೆ ಎದ್ದ ಮೇಲೆ, ಪ್ರಾತರ್ವಿಧಿಗಳನ್ನು ಮುಗಿಸಿದ ನಂತರ ತಿಂಡಿಯನ್ನು
ಬೇಕಾದಷ್ಟು ತಿಂದು, ಕಾಫಿಯನ್ನು ಕುಡಿಯುವ ಅಭ್ಯಾಸ. ಬೇಕಾದ ತಿಂಡಿಯು
ಸಿಗದೆ ಇರುವವರು, ಸಿಕ್ಕ ತಿಂಡಿಯನ್ನು ಬೇಕಾದಷ್ಟು ಮುಕ್ಕುತ್ತಾರೆ. ಆ ಗುಂಪಿನವ
ನಾನು. ಆದರೆ ಈ ಬೆಳಗ್ಗೆ ಹೊಟ್ಟೆ ತುಂಬಾ ತಿಂದರೆ, ನಿದ್ರೆಯು ಬರುತ್ತದೆಯೇ
ಹೊರತು, ಬರೆಯಲಾಗುವುದಿಲ್ಲ ಎಂದು ಅನುಭವದ ವಾಣಿ ಎಚ್ಚರಿಸಿತು.
ಆದಕಾರಣ ಎರಡೇ ಪುಟ್ಟ ಇಡ್ಲಿಗಳನ್ನು ತಿಂದು ಕಾಫಿಯನ್ನು ಕುಡಿದು, ಮೇಜಿನ
ಮುಂದೆ ಬರೆಯಲು ಕುಳಿತೆ.
ಈ ಅಧ್ಯಾಯದಲ್ಲಿ ಬರೆಯಬೇಕಾದ ವಿಷಯಗಳನ್ನು 'ಮನೋ-
ನಂದನ'ದಲ್ಲಿ ಬರೆದಾಗಿದೆಯೇ? ಹಾಗಾಗಿದ್ದರೆ ಪುನಃ ಬರೆಯುವುದು ಪೆಚ್ಚುತನ
ಎಂದೆನಿಸಿತು. 'ಮನೋನಂದನ'ದಲ್ಲಿ ಈ ವಿಷಯವನ್ನು ಕುರಿತು ಏನು
ಬರೆದಿದ್ದೆನೋ, ಅದು ಭಗವಂತನಿಗೇ ಗೊತ್ತು. ನನಗನಕ ಅದರ ನೆನಪು
ಇರಲಿಲ್ಲ. ಆದುದರಿಂದ ಆ ಪುಸ್ತಕವನ್ನು ಹುಡುಕಿ ತೆಗೆದು ಓದೋಣ
ಎಂದುಕೊಂಡೆ. ಕುರ್ಚಿಯಿಂದ ಎದ್ದೆ, ಪುಸ್ತಕಗಳ ಕಪಾಟುಗಳ ಬಳಿಗೆ ಹೋದೆ;
ಎಷ್ಟು ಹುಡುಕಿದರೂ ಆ ಹಾಳು ಪುಸ್ತಕದ ಪ್ರತಿಯು ಸಿಗಲೇ ಇಲ್ಲ. ಒಂದು
ಪ್ರತಿಯನ್ನು ಹುಷಾರಾಗಿ ಮುಚ್ಚಿಟ್ಟಿದ್ದ ನೆನಪು ಸ್ಪಷ್ಟವಾಗಿತ್ತು. ಆದರೆ ಎಲ್ಲಿ ಮುಚ್ಚಿಟ್ಟಿದ್ದೆಎನ್ನುವುದು ಸ್ಮರಣೆಗೆ ಬರಲೇ ಇಲ್ಲ. ಉಳಿದ ಒಂದೇ ಪ್ರತಿಯನ್ನು ಯಾರಿಗೆ<noinclude></noinclude>
exdcya5kycpnlckpkuvywffigcwpx9o
ಪುಟ:ಮನಮಂಥನ.pdf/೩೭೪
104
62821
317777
317266
2026-05-06T16:50:28Z
Shreesha Sharma
7840
/* Validated */
317777
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೩೫೬}}{{Right|ಮನಮಂಥನ}}
ಒಂದೊಂದು ಚಟುವಟಿಕೆಯನ್ನೂ ವಿವರವಾಗಿ ಬರೆಯುವುದು ಬೇಡ. ಬೇರೆಯ
ತರಹಾ ಇನ್ನೂ ಸ್ಪಷ್ಟವಾಗಿ ಬರೆಯಬೇಕು. ವಿಷಯವು ಚೆನ್ನಾಗಿ ತಿಳಿದಿದ್ದರೆ,
ಬರವಣಿಗೆಯು ಸರಳವೂ ಸುಲಭವೂ ಆಗಿರುತ್ತದೆ. ಆದಕಾರಣ ವಿಷಯವನ್ನು
ಮೆಲುಕು ಹಾಕೋಣ ಎನಿಸಿತು.
{{gap}}ಮೇಜಿನ ಮುಂದೆ ಕುರ್ಚಿಯ ಮೇಲೆ ಕುಳಿತು ಮೆಲುಕು ಹಾಕತೊಡಗಿದೆ.
'ಮನಸ್ಸಿನ ಚಟುವಟಿಕೆಗಳು ಈ ವಿಷಯವು ನನ್ನ ಮನಸ್ಸನ್ನು ಕಚ್ಚಿಕೊಳ್ಳಲಿಲ್ಲ.
ನನ್ನ ಮನಸ್ಸು ಅಡ್ಡದಾರಿಯನ್ನು ಹಿಡಿಯಿತು. ಸಿಗರೇಟು ಉರಿಯತೊಡಗಿತು.
{{gap}}'ಈ ಪುಸ್ತಕವನ್ನು ಅತ್ಯುತ್ತಮ ರೀತಿಯಲ್ಲಿ ಬರೆಯುತ್ತೇನೆ. ಕನ್ನಡವನ್ನು
ಕಲಿಯುತ್ತಿರುವ ಹಿಪ್ಪಿ ತರುಣಿಯೊಬ್ಬಳು ಅಕಸ್ಮಾತ್ ಇದನ್ನು ನೋಡುತ್ತಾಳೆ,
ಓದುತ್ತಾಳೆ. ಡಂಗ್ ಆಗಿ ಬಿಡುತ್ತಾಳೆ. ಬಂದು ನನ್ನನ್ನು ಕಂಡು 'ಘನ ವಿದ್ವಾಂಸರೇ!
ನಿಮ್ಮ ಪುಸ್ತಕವನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿ ಅಮೆರಿಕಾದಲ್ಲಿ ಪ್ರಕಟಪಡಿಸುತ್ತೇನೆ. ನನ್ನ ಜತೆಯಲ್ಲಿ ಅಮೆರಿಕಾಕ್ಕೆ ಬನ್ನಿ, ತರ್ಜುಮೆ ಮಾಡಲು ನೆರವಾಗಿ ರಾಜಾತಿಥ್ಯವನ್ನು ನಿಮಗೆ ನೀಡುತ್ತೇನೆ. ಒಂದು ಲಕ್ಷ ಡಾಲರನ್ನು ಗೌರವ
ಧನವನ್ನಾಗಿ ಕೊಡುತ್ತೇನೆ. ನನ್ನ ತಂದೆಯ ಹೆಸರನ್ನು ನೀವು ಕೇಳದೇ ಇರಬಹುದು.
ರಾಕ್ಫೆಲ್ಲರಿನ ಮೊಮ್ಮಗ ಆತ. ನಾನೊಬ್ಬಳೇ ಮಗಳು' ಎಂದನ್ನುತ್ತಾಳೆ. 'ಇಷ್ಟು
ವಿಶ್ವಾಸದಿಂದ ಕರೆಯುತ್ತಾ ಇದಿ, ಆದರೆ ಹಣ್ಣು ಹಣ್ಣು ಮುದುಕ ನಾನು,
ಅಮೆರಿಕಾದ ಆತಿಥ್ಯವನ್ನು ಸವಿಯುವ ಆಯಸ್ಸು ಮಿಂಚಿ ಹೋಗಿದೆಯಲ್ಲೇ!
ಆದರೂ ನೀನೂ ಬಾ ಅಂತ ಬಾಯಿ ಬಿಟ್ಟರೆ, ನನ್ನ ಬಾಯಲ್ಲೂ ಜೊಲ್ಲು
ಸುರಿಯುತ್ತೆ. ಇಲ್ಲಿ ಒಂದಿಷ್ಟು ಚಿಲ್ಲರೆ ಸಾಲಗಳಿವೆ. ಮುಂಗಡವಾಗಿ ಸ್ವಲ್ಪ ಹಣ
ಕೊಟ್ಟರೆ, ಒಂದಿಷ್ಟು ಅಗತ್ಯವಾದ ಬಟ್ಟೆಗಳನ್ನು ಹೊಲಿಸಿಕೊಳ್ಳುತ್ತೀನಿ. ಮತ್ತು
ಸಾಲಗಳನ್ನು ತೀರಿಸುತ್ತೀನಿ. ನಂತರ ನಿನ್ನೊಡನೆ ಎಲ್ಲಿಗಂದರೆ ಅಲ್ಲಿಗೆ ಬತ್ತೀನಿ'
ಎನ್ನುತ್ತೇನೆ. ಅವಳು ತತ್ಕ್ಷಣ, ಐವತ್ತುಸಾವಿರ ಡಾಲರುಗಳ ಚೆಕ್ಕನ್ನು ಬರೆದು
ಕೊಡುತ್ತಾಳೆ. 'ಇನ್ನೆಂಟು ದಿನಗಳಲ್ಲಿ ನಿಮ್ಮ ಪ್ರವಾಸ ಪತ್ರಗಳನ್ನು ಅಣಿ ಮಾಡಿಸುತ್ತೇನೆ.ನಂತರ ಹೊರಡೋಣ' ಎನ್ನುತ್ತಾಳೆ. ಆಮೇಲೆ ಕೇಳಬೇಕೆ? ಅಮೆರಿಕಾದಲ್ಲಿ ಪ್ರಕಟಣೆ ಸ್ಟಾಕ್ ಹೊಂನಲ್ಲಿ ನೊಬೆಲ್ ಪಾರಿತೋಷಕ ಅಂದಮೇಲೆ ದಿಳ್ಳಿಯಲ್ಲಿ ಹಿಂತಿರುಗುವಾಗ ಎಂತದಾದರೂ ಒಂದು 'ಪದ್ಮ' ಬೆಂಗಳೂರಿಗೆ ಬಂದ ಮೇಲೆ,ನಮ್ಮ ಕೇರಿಯ ಕನ್ನಡಿಗರು, ಅದು ಯಾವುದೋ ನಿಮ್ಮ ಪುಸ್ತಕಕ್ಕೆ ಯಾರೋ
ಕೊಳ್ಳೆ ಹಣ ಕೊಟ್ಟರಂತೆ. ಆದ್ದರಿಂದ ನಿಮ್ಮನ್ನು ನಾವೂ ಸನ್ಮಾನಿಸುತ್ತೇವೆ,
ಎನ್ನುತ್ತಾರೆ.<noinclude></noinclude>
emrcq57zbknycdv9dpyco7vmfz7q3op
ಪುಟ:ಮನಮಂಥನ.pdf/೪೩೮
104
62885
317683
314692
2026-05-06T14:55:48Z
Shreelatha.Halemane
7642
/* Proofread */
317683
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೪೨೦}}}{{Right|ಮನಮಂಥನ}}
ಒಕ್ಕೂಡಿಸಿ, ನಡಸಿದರೆ ಧಾರಣ, ಧ್ಯಾನ ಮತ್ತು ಸಮಾಧಿಗಳು ಸುಲಭವಾಗಿ
ಸಾಧ್ಯವಾಗುವುದು. ಇದಾದಾಗ 'ಸಂಯಮ'ವು ಲಭ್ಯವಾಯಿತು. ಆಗ
ವಸ್ತುವಿಷಯಕವಾಗಿ, ಹಿಂದೆ ಈ ರೀತಿಯಲ್ಲಿತ್ತು, ಈಗ ಹೀಗಿದೆ, ಮುಂದೆ
ಹೀಗಾಗುತ್ತದೆ ಎನ್ನುವ ತ್ರಿಕಾಲಜ್ಞಾನವು ಹುಟ್ಟುತ್ತದೆ. ಅಂದರೆ ಭೂತ, ವರ್ತಮಾನ,
ಭವಿಷ್ಯತ್ ಕಾಲಗಳ ಜ್ಞಾನವು ಉಂಟಾಗುತ್ತದೆ. ಉಂಟಾಗುವುದನ್ನು
ವೈಜ್ಞಾನಿಕವಾಗಿಯೂ ಒಪ್ಪಬೇಕು. ಮನಸ್ಸಿನ ಕಾರ್ಯಗಳಲ್ಲಿ ಭೂತಭವಿಷ್ಯತ್ತುಗಳನ್ನು
ಅರಿಯುವುದೂ ಒಂದು. ಆದರೆ ಸೂಕ್ತವಾದ ಮನಸ್ಸಿನ ಹತೋಟಿಯು ಅಗತ್ಯ.
{{gap}}ಶಬ್ದಾರ್ಥ ಪ್ರತ್ಯಯಾನಾಂ ಇತರೇತರ ಅಧ್ಯಾಸಾತ್ ಸಂಕರಸ್ ತತ್ ಪ್ರವಿಭಾಗ
ಸಂಯಮಾತ್ ಸರ್ವಭೂತ ಋತಜ್ಞಾನಂ
{{gap}}ಒಂದು ವಾಕ್ ಅಥವಾ ಮಾತು, ಶಬ್ದದ ಒಂದು ರೀತಿಯ ಸಂಕಲನ.
ಉದಾ; ಹಸು, ಈ ಶಬ್ದವನ್ನು ಕೇಳಿದಾಗ, ಹಾಲು ಕೊಡುವ ಸಾಧುವಾದ
ಪ್ರಾಣಿ ಎಂಬ ಅರ್ಥವು ಅರಿವಾಗುತ್ತದೆ. ಅದರ ಜತೆಯಲ್ಲಿ ಹಸುವಿನ ಆಕಾರ,
ರೂಪ, ದೇಹರಚನೆ, ಅದರ ನಡವಳಿಕೆ ಇತ್ಯಾದಿಗಳೆಲ್ಲವೂ ಮನಸ್ಸಿನಲ್ಲಿ ಸ್ಪುಟವಾಗಿ
ತಿಳಿಯುತ್ತದೆ. ಶಬ್ದ, ಅರ್ಥ, ಅದರಿಂದುಂಟಾದ ಜ್ಞಾನವನ್ನು ಉಂಟುಮಾಡುತ್ತದೆ.
{{gap}}ಶಬ್ದ, ಅರ್ಥ ಮತ್ತು ಜ್ಞಾನ ಇವುಗಳನ್ನು ಚಿತ್ರದ 'ಸಂಯಮ'ದಿಂದ
ಬೇರೆ ಬೇರೆ ಮಾಡಿದರೆ, ಆಗ ಯಾವ ಪ್ರಾಣಿಯು ಉಲಿದ ಶಬ್ದವನ್ನು ಅದರ
ಅರ್ಥ ಮತ್ತು ಜ್ಞಾನದೊಂದಿಗೆ ವಿವರವಾಗಿ ತಿಳಿಯಲು ಸಾಧ್ಯ. ಅಂದರೆ
ಇರುವೆಗಳು ಶಬ್ದದ ಮೂಲಕ ಸಂಪರ್ಕವನ್ನು ಕಲ್ಪಿಸಿಕೊಂಡರೆ, ಅಂತಹ
ಶಬ್ದಗಳನ್ನು ಇರುವೆಗಳ ಭಾಷೆ ಎನ್ನಬೇಕು. ಚಿತ್ತದ 'ಸಂಯಮ'ವನ್ನು
ಪಡೆದುಕೊಂಡವರು ಪ್ರಾಣಿಗಳ ಭಾಷೆಯನ್ನು ತಿಳಿಯುತ್ತಾರೆ ಎನ್ನುವುದು
ವೈಜ್ಞಾನಿಕವಾಗಿ ಸಾಧ್ಯ. ಆದರೆ ಹಾಗೆ ಸಾಧಿಸಿಕೊಂಡ ಮಾನವರನ್ನು ನಾವು
ಕಂಡಿಲ್ಲ. ಕಟ್ಟುಕತೆಗಳಲ್ಲಿ ಕೇಳಿದ್ದೇವೆ. ಅಂದಮಾತ್ರಕ್ಕೆ ಮನಸ್ಸು ಅಥವಾ ಅದರ
ಶೂನ್ಯಸ್ಥಿತಿಯಲ್ಲಿ, ಪ್ರಾಣಿಗಳ ಭಾಷೆಯನ್ನು ತಿಳಿಯಬಹುದು ಎನ್ನುವುದನ್ನು
ಒಪ್ಪಿಕೊಳ್ಳದಿದ್ದರೂ, ನಿರಾಕರಿಸುವಂತೆಯೂ ಇಲ್ಲ.
{{gap}}ಸಂಸ್ಕಾರ ಸಾಕ್ಷಾತ್ ಕರಣಾತ್ ಪೂರ್ವಜಾತಿ ಜ್ಞಾನಂ
{{gap}}'ಸಂಯಮ'ದ ಮೂರನೆಯ ಸಿದ್ಧಿ ಎಂದರೆ, ಪೂರ್ವಜನ್ಮದ ಸ್ಮರಣೆಯನ್ನು
ಪಡೆಯುವುದು. ಹುಟ್ಟುಗುಣಗಳು ಎನ್ನುವುದು Hereditary Characteristics
ಎನ್ನುವ ಅರ್ಥವನ್ನು ನೀಡುತ್ತದೆ. ಇಂದಿನ ಮಾನವ, ಸಹಸ್ರಾರು ವರ್ಷಗಳ
ಹಿಂದೆ ಒಂದು ತೆರನ ಮರ್ಕಟ, Chimpanzee ಆಗಿದ್ದ. ಅದಕ್ಕೆ ಸಹಸ್ರಾರು<noinclude></noinclude>
90gzvcsq8fqcypgpjubx68p6zizs1xd
317684
317683
2026-05-06T14:56:02Z
Shreelatha.Halemane
7642
317684
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೪೨೦}}{{Right|ಮನಮಂಥನ}}
ಒಕ್ಕೂಡಿಸಿ, ನಡಸಿದರೆ ಧಾರಣ, ಧ್ಯಾನ ಮತ್ತು ಸಮಾಧಿಗಳು ಸುಲಭವಾಗಿ
ಸಾಧ್ಯವಾಗುವುದು. ಇದಾದಾಗ 'ಸಂಯಮ'ವು ಲಭ್ಯವಾಯಿತು. ಆಗ
ವಸ್ತುವಿಷಯಕವಾಗಿ, ಹಿಂದೆ ಈ ರೀತಿಯಲ್ಲಿತ್ತು, ಈಗ ಹೀಗಿದೆ, ಮುಂದೆ
ಹೀಗಾಗುತ್ತದೆ ಎನ್ನುವ ತ್ರಿಕಾಲಜ್ಞಾನವು ಹುಟ್ಟುತ್ತದೆ. ಅಂದರೆ ಭೂತ, ವರ್ತಮಾನ,
ಭವಿಷ್ಯತ್ ಕಾಲಗಳ ಜ್ಞಾನವು ಉಂಟಾಗುತ್ತದೆ. ಉಂಟಾಗುವುದನ್ನು
ವೈಜ್ಞಾನಿಕವಾಗಿಯೂ ಒಪ್ಪಬೇಕು. ಮನಸ್ಸಿನ ಕಾರ್ಯಗಳಲ್ಲಿ ಭೂತಭವಿಷ್ಯತ್ತುಗಳನ್ನು
ಅರಿಯುವುದೂ ಒಂದು. ಆದರೆ ಸೂಕ್ತವಾದ ಮನಸ್ಸಿನ ಹತೋಟಿಯು ಅಗತ್ಯ.
{{gap}}ಶಬ್ದಾರ್ಥ ಪ್ರತ್ಯಯಾನಾಂ ಇತರೇತರ ಅಧ್ಯಾಸಾತ್ ಸಂಕರಸ್ ತತ್ ಪ್ರವಿಭಾಗ
ಸಂಯಮಾತ್ ಸರ್ವಭೂತ ಋತಜ್ಞಾನಂ
{{gap}}ಒಂದು ವಾಕ್ ಅಥವಾ ಮಾತು, ಶಬ್ದದ ಒಂದು ರೀತಿಯ ಸಂಕಲನ.
ಉದಾ; ಹಸು, ಈ ಶಬ್ದವನ್ನು ಕೇಳಿದಾಗ, ಹಾಲು ಕೊಡುವ ಸಾಧುವಾದ
ಪ್ರಾಣಿ ಎಂಬ ಅರ್ಥವು ಅರಿವಾಗುತ್ತದೆ. ಅದರ ಜತೆಯಲ್ಲಿ ಹಸುವಿನ ಆಕಾರ,
ರೂಪ, ದೇಹರಚನೆ, ಅದರ ನಡವಳಿಕೆ ಇತ್ಯಾದಿಗಳೆಲ್ಲವೂ ಮನಸ್ಸಿನಲ್ಲಿ ಸ್ಪುಟವಾಗಿ
ತಿಳಿಯುತ್ತದೆ. ಶಬ್ದ, ಅರ್ಥ, ಅದರಿಂದುಂಟಾದ ಜ್ಞಾನವನ್ನು ಉಂಟುಮಾಡುತ್ತದೆ.
{{gap}}ಶಬ್ದ, ಅರ್ಥ ಮತ್ತು ಜ್ಞಾನ ಇವುಗಳನ್ನು ಚಿತ್ರದ 'ಸಂಯಮ'ದಿಂದ
ಬೇರೆ ಬೇರೆ ಮಾಡಿದರೆ, ಆಗ ಯಾವ ಪ್ರಾಣಿಯು ಉಲಿದ ಶಬ್ದವನ್ನು ಅದರ
ಅರ್ಥ ಮತ್ತು ಜ್ಞಾನದೊಂದಿಗೆ ವಿವರವಾಗಿ ತಿಳಿಯಲು ಸಾಧ್ಯ. ಅಂದರೆ
ಇರುವೆಗಳು ಶಬ್ದದ ಮೂಲಕ ಸಂಪರ್ಕವನ್ನು ಕಲ್ಪಿಸಿಕೊಂಡರೆ, ಅಂತಹ
ಶಬ್ದಗಳನ್ನು ಇರುವೆಗಳ ಭಾಷೆ ಎನ್ನಬೇಕು. ಚಿತ್ತದ 'ಸಂಯಮ'ವನ್ನು
ಪಡೆದುಕೊಂಡವರು ಪ್ರಾಣಿಗಳ ಭಾಷೆಯನ್ನು ತಿಳಿಯುತ್ತಾರೆ ಎನ್ನುವುದು
ವೈಜ್ಞಾನಿಕವಾಗಿ ಸಾಧ್ಯ. ಆದರೆ ಹಾಗೆ ಸಾಧಿಸಿಕೊಂಡ ಮಾನವರನ್ನು ನಾವು
ಕಂಡಿಲ್ಲ. ಕಟ್ಟುಕತೆಗಳಲ್ಲಿ ಕೇಳಿದ್ದೇವೆ. ಅಂದಮಾತ್ರಕ್ಕೆ ಮನಸ್ಸು ಅಥವಾ ಅದರ
ಶೂನ್ಯಸ್ಥಿತಿಯಲ್ಲಿ, ಪ್ರಾಣಿಗಳ ಭಾಷೆಯನ್ನು ತಿಳಿಯಬಹುದು ಎನ್ನುವುದನ್ನು
ಒಪ್ಪಿಕೊಳ್ಳದಿದ್ದರೂ, ನಿರಾಕರಿಸುವಂತೆಯೂ ಇಲ್ಲ.
{{gap}}ಸಂಸ್ಕಾರ ಸಾಕ್ಷಾತ್ ಕರಣಾತ್ ಪೂರ್ವಜಾತಿ ಜ್ಞಾನಂ
{{gap}}'ಸಂಯಮ'ದ ಮೂರನೆಯ ಸಿದ್ಧಿ ಎಂದರೆ, ಪೂರ್ವಜನ್ಮದ ಸ್ಮರಣೆಯನ್ನು
ಪಡೆಯುವುದು. ಹುಟ್ಟುಗುಣಗಳು ಎನ್ನುವುದು Hereditary Characteristics
ಎನ್ನುವ ಅರ್ಥವನ್ನು ನೀಡುತ್ತದೆ. ಇಂದಿನ ಮಾನವ, ಸಹಸ್ರಾರು ವರ್ಷಗಳ
ಹಿಂದೆ ಒಂದು ತೆರನ ಮರ್ಕಟ, Chimpanzee ಆಗಿದ್ದ. ಅದಕ್ಕೆ ಸಹಸ್ರಾರು<noinclude></noinclude>
1at6fei9q1zrxdbjbpk9aw5oy0537n6
317690
317684
2026-05-06T15:08:03Z
Shreesha Sharma
7840
/* Validated */
317690
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೪೨೦}}{{Right|ಮನಮಂಥನ}}
ಒಕ್ಕೂಡಿಸಿ, ನಡಸಿದರೆ ಧಾರಣ, ಧ್ಯಾನ ಮತ್ತು ಸಮಾಧಿಗಳು ಸುಲಭವಾಗಿ
ಸಾಧ್ಯವಾಗುವುದು. ಇದಾದಾಗ 'ಸಂಯಮ'ವು ಲಭ್ಯವಾಯಿತು. ಆಗ
ವಸ್ತುವಿಷಯಕವಾಗಿ, ಹಿಂದೆ ಈ ರೀತಿಯಲ್ಲಿತ್ತು, ಈಗ ಹೀಗಿದೆ, ಮುಂದೆ
ಹೀಗಾಗುತ್ತದೆ ಎನ್ನುವ ತ್ರಿಕಾಲಜ್ಞಾನವು ಹುಟ್ಟುತ್ತದೆ. ಅಂದರೆ ಭೂತ, ವರ್ತಮಾನ,
ಭವಿಷ್ಯತ್ ಕಾಲಗಳ ಜ್ಞಾನವು ಉಂಟಾಗುತ್ತದೆ. ಉಂಟಾಗುವುದನ್ನು
ವೈಜ್ಞಾನಿಕವಾಗಿಯೂ ಒಪ್ಪಬೇಕು. ಮನಸ್ಸಿನ ಕಾರ್ಯಗಳಲ್ಲಿ ಭೂತಭವಿಷ್ಯತ್ತುಗಳನ್ನು
ಅರಿಯುವುದೂ ಒಂದು. ಆದರೆ ಸೂಕ್ತವಾದ ಮನಸ್ಸಿನ ಹತೋಟಿಯು ಅಗತ್ಯ.
{{gap}}ಶಬ್ದಾರ್ಥ ಪ್ರತ್ಯಯಾನಾಂ ಇತರೇತರ ಅಧ್ಯಾಸಾತ್ ಸಂಕರಸ್ ತತ್ ಪ್ರವಿಭಾಗ
ಸಂಯಮಾತ್ ಸರ್ವಭೂತ ಋತಜ್ಞಾನಂ
{{gap}}ಒಂದು ವಾಕ್ ಅಥವಾ ಮಾತು, ಶಬ್ದದ ಒಂದು ರೀತಿಯ ಸಂಕಲನ.
ಉದಾ; ಹಸು, ಈ ಶಬ್ದವನ್ನು ಕೇಳಿದಾಗ, ಹಾಲು ಕೊಡುವ ಸಾಧುವಾದ
ಪ್ರಾಣಿ ಎಂಬ ಅರ್ಥವು ಅರಿವಾಗುತ್ತದೆ. ಅದರ ಜತೆಯಲ್ಲಿ ಹಸುವಿನ ಆಕಾರ,
ರೂಪ, ದೇಹರಚನೆ, ಅದರ ನಡವಳಿಕೆ ಇತ್ಯಾದಿಗಳೆಲ್ಲವೂ ಮನಸ್ಸಿನಲ್ಲಿ ಸ್ಪುಟವಾಗಿ
ತಿಳಿಯುತ್ತದೆ. ಶಬ್ದ, ಅರ್ಥ, ಅದರಿಂದುಂಟಾದ ಜ್ಞಾನವನ್ನು ಉಂಟುಮಾಡುತ್ತದೆ.
{{gap}}ಶಬ್ದ, ಅರ್ಥ ಮತ್ತು ಜ್ಞಾನ ಇವುಗಳನ್ನು ಚಿತ್ರದ 'ಸಂಯಮ'ದಿಂದ
ಬೇರೆ ಬೇರೆ ಮಾಡಿದರೆ, ಆಗ ಯಾವ ಪ್ರಾಣಿಯು ಉಲಿದ ಶಬ್ದವನ್ನು ಅದರ
ಅರ್ಥ ಮತ್ತು ಜ್ಞಾನದೊಂದಿಗೆ ವಿವರವಾಗಿ ತಿಳಿಯಲು ಸಾಧ್ಯ. ಅಂದರೆ
ಇರುವೆಗಳು ಶಬ್ದದ ಮೂಲಕ ಸಂಪರ್ಕವನ್ನು ಕಲ್ಪಿಸಿಕೊಂಡರೆ, ಅಂತಹ
ಶಬ್ದಗಳನ್ನು ಇರುವೆಗಳ ಭಾಷೆ ಎನ್ನಬೇಕು. ಚಿತ್ತದ 'ಸಂಯಮ'ವನ್ನು
ಪಡೆದುಕೊಂಡವರು ಪ್ರಾಣಿಗಳ ಭಾಷೆಯನ್ನು ತಿಳಿಯುತ್ತಾರೆ ಎನ್ನುವುದು
ವೈಜ್ಞಾನಿಕವಾಗಿ ಸಾಧ್ಯ. ಆದರೆ ಹಾಗೆ ಸಾಧಿಸಿಕೊಂಡ ಮಾನವರನ್ನು ನಾವು
ಕಂಡಿಲ್ಲ. ಕಟ್ಟುಕತೆಗಳಲ್ಲಿ ಕೇಳಿದ್ದೇವೆ. ಅಂದಮಾತ್ರಕ್ಕೆ ಮನಸ್ಸು ಅಥವಾ ಅದರ
ಶೂನ್ಯಸ್ಥಿತಿಯಲ್ಲಿ, ಪ್ರಾಣಿಗಳ ಭಾಷೆಯನ್ನು ತಿಳಿಯಬಹುದು ಎನ್ನುವುದನ್ನು
ಒಪ್ಪಿಕೊಳ್ಳದಿದ್ದರೂ, ನಿರಾಕರಿಸುವಂತೆಯೂ ಇಲ್ಲ.
{{gap}}ಸಂಸ್ಕಾರ ಸಾಕ್ಷಾತ್ ಕರಣಾತ್ ಪೂರ್ವಜಾತಿ ಜ್ಞಾನಂ
{{gap}}'ಸಂಯಮ'ದ ಮೂರನೆಯ ಸಿದ್ಧಿ ಎಂದರೆ, ಪೂರ್ವಜನ್ಮದ ಸ್ಮರಣೆಯನ್ನು
ಪಡೆಯುವುದು. ಹುಟ್ಟುಗುಣಗಳು ಎನ್ನುವುದು Hereditary Characteristics
ಎನ್ನುವ ಅರ್ಥವನ್ನು ನೀಡುತ್ತದೆ. ಇಂದಿನ ಮಾನವ, ಸಹಸ್ರಾರು ವರ್ಷಗಳ
ಹಿಂದೆ ಒಂದು ತೆರನ ಮರ್ಕಟ, Chimpanzee ಆಗಿದ್ದ. ಅದಕ್ಕೆ ಸಹಸ್ರಾರು<noinclude></noinclude>
ijkl64srkbx9w3qf8ej5ygla64i4lwj
ಪುಟ:ಮನಮಂಥನ.pdf/೪೩೯
104
62886
317685
314691
2026-05-06T14:57:04Z
Shreelatha.Halemane
7642
/* Proofread */
317685
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೨೧}}
ವರ್ಷಗಳ ಹಿಂದೆ ಸಸ್ತನಿಗಳ ಜಾತಿಯ ಪ್ರಾಣಿಯಾಗಿದ್ದ. ಅದಕ್ಕೂ ಲಕ್ಷಾಂತರ
ವರ್ಷಗಳ ಹಿಂದೆ ಖಗ ಮತ್ತು ಉರಗಗಳಾಗಿದ್ದ. ಅದಕ್ಕೂ ಮೊದಲು
ಕ್ರಿಮಿಕೀಟಗಳಾಗಿದ್ದ. ಎಲ್ಲದಕ್ಕೂ ಮೊದಲು ಜೀವವು ಪ್ರಾರಂಭವಾದಾಗ,
ಜಂಗಮವಾಗಿದ್ದಾಗ, ಅಮೀಬಾ ಇತ್ಯಾದಿ ಒಂದು ಸೆಲ್ಲಿನ ಪುಟಾಣಿ ಜೀವಿಯಾಗಿದ್ದ.
ಅದಕ್ಕೂ ಹಿಂದೆ ನಿರ್ಜಿವಿಯಾಗಿರುವ ವಸ್ತುವಾಗಿದ್ದ. ಇವೆಲ್ಲ ಅವಸ್ಥೆಗಳ
ಸ್ಮರಣೆಯು ಮನಸ್ಸಿನ ಯಾವದೋ ಹಗೇವಿನಲ್ಲಿ ಕಣ್ಮರೆಯಾಗಿವೆ. ಮಾನವನ
ಇಂದಿನ ಬಾಳಿಗೆ ಆ ಅವಸ್ಥೆಗಳ ಸ್ಮರಣೆಯು ಅನಗತ್ಯ. ಅಷ್ಟೇ ಅಲ್ಲ, ತೊಡಕೂ
ಆಗುತ್ತದೆ. ಆದಕಾರಣ ಪ್ರಕೃತಿಯ ಪ್ರಗತಿಯು, Natural Evolution ಕೋಟ್ಯಂತರ
ವರ್ಷಗಳ ನೆನಪನ್ನು, ಮಾನವನ ಸ್ಮರಣೆಯ ಆಳ ಆಳದಲ್ಲಿರುವ ಹಗೇವುಗಳಲ್ಲಿ
ಹುದುಗಿಸಿಟ್ಟಿದೆ. ಭದ್ರವಾಗಿ ಬೀಗವನ್ನು ಹಾಕಿಟ್ಟಿದೆ.
{{gap}}'ಸಂಯಮ'ದಿಂದ, ಧಾರಣ, ಧ್ಯಾನ, ಸಮಾಧಿಗಳ ಒಕ್ಕೂಟವು ಲಬ್ಧವಾದಾಗ
ಮಾನವನ ಮನಸ್ಸು ನಿರ್ಮಲವಾಗಿರುತ್ತದೆ. ಲೌಕಿಕವಾಗಿ ನಿರ್ಮಲವಾಗಿರುತ್ತದೆ.
ಅಂತಹ ಸತ್-ಪರಿಸ್ಥಿತಿಯಲ್ಲಿ, ಹಗೇವುಗಳಲ್ಲಿ ಶೇಖರಿಸಿಡಲ್ಪಟ್ಟ ಪುರಾತನ ಸನಾತನ
ಸ್ಮರಣೆಗಳು, ಹುದುಗಿರಬೇಕಾಗಿಲ್ಲ. 'ಸಂಯಮ'ವನ್ನು ಗಳಿಸಿದ ಮಾನವನಿಗೆ
ಅವಾವುದೂ ತೊಡಕುಗಳಾಗುವುದಿಲ್ಲ. ಆದುದರಿಂದ ಅವುಗಳ ಸ್ಮರಣೆಯನ್ನು
ಸಂಯಮಿಯು ಉಪದ್ರವವಾಗದೆ ಪಡೆಯಬಲ್ಲ. ನಿರ್ಜಿವಿಯಾದ ಅವಸ್ಥೆಯ
ಮೂಲಭೂತವಾದುದನ್ನು ಅರಿಯಬಲ್ಲ. ಜೀವಿಯಾದ ಮೇಲೆ ಪ್ರಗತಿಯು,
ಮುಂದು ಮುಂದು ನಡೆದಾಗ, ಹಂತಹಂತದಲ್ಲೂ ತಾನು ಏನು, ಯಾವಾಗ,
ಆಗಿದ್ದ. ಯಾವ ಪ್ರಾಣಿಯಾಗಿದ್ದ ಎಂಬುದನ್ನೂ ತಿಳಿಯಬಲ್ಲ. ಇಂತಹ ಬ್ರಹ್ಮಾಂಡದ
ಜ್ಞಾನ ಸಂಪಾದನೆಯಿಂದ ಲೌಕಿಕವಾದ ಈ ಮಾನವ ಬಾಳಿಗೆ ಅಡಚಣೆಯೂ
ಇಲ್ಲ. ತೊಡಕೂ ಆಗುವುದಿಲ್ಲ. ಆದರೆ ತಾನು, ತನ್ನದು ಎಂಬ ದೃಢವಾದ
ಲೌಕಿಕ ಕಲ್ಪನೆಯು ನಿರ್ಮೂಲವಾಗುತ್ತದೆ. ಬ್ರಹ್ಮಾಂಡವೇ ನಾನು ಎನ್ನುವ
ವಿಶ್ವಕುಟುಂಬಿಯ ಅರಿವು ಬ್ರಹ್ಮಾಂಡದಲ್ಲೆಲ್ಲಾ ಹರಡುತ್ತದೆ. ಹರಡಿ ಅದರೊಡನೆ
ಒಂದಾಗುತ್ತದೆ. ಅ-ದ್ವಿತೀಯವಾಗುತ್ತದೆ.
{{gap}}ಪೂರ್ವಜನ್ಮದ ಸ್ಮರಣೆಯು ಸ್ಪುಟವಾಗಿ, ೭-೮ ವಯಸ್ಸಿನ ಬಾಲಕ
ಬಾಲಕಿಯರು. ಸ್ಮರಣೆಯನ್ನು ವಿವರಿಸಿದಾಗ, ಸಂಶೋಧನೆಯಿಂದ
ಆ ಹುಡುಗರಂದುದು ಚಾರಿತ್ರಿಕವಾಗಿ ನಿಜ ಎಂದು ತಿಳಿದಾಗ, ಆಶ್ಚರ್ಯವು
ಉಂಟಾಗುತ್ತವೆ. ಏಕೆ ? ಹೀಗಾಗುವುದು ಹೇಗೆ ಸಾಧ್ಯ ? ಎಂದು ಅನಿಸುವುದರಿಂದ,
ಆದರೆ 'ಸಂಯಮಿ'ಯ ಅನುಭವ ವಾಕ್ಯಗಳನ್ನು, Natural Evolution ಜತೆಗೆ<noinclude></noinclude>
axupgryz5jnjmq2fu3zn2zgpiwg0fvd
317691
317685
2026-05-06T15:08:14Z
Shreesha Sharma
7840
/* Validated */
317691
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೨೧}}
ವರ್ಷಗಳ ಹಿಂದೆ ಸಸ್ತನಿಗಳ ಜಾತಿಯ ಪ್ರಾಣಿಯಾಗಿದ್ದ. ಅದಕ್ಕೂ ಲಕ್ಷಾಂತರ
ವರ್ಷಗಳ ಹಿಂದೆ ಖಗ ಮತ್ತು ಉರಗಗಳಾಗಿದ್ದ. ಅದಕ್ಕೂ ಮೊದಲು
ಕ್ರಿಮಿಕೀಟಗಳಾಗಿದ್ದ. ಎಲ್ಲದಕ್ಕೂ ಮೊದಲು ಜೀವವು ಪ್ರಾರಂಭವಾದಾಗ,
ಜಂಗಮವಾಗಿದ್ದಾಗ, ಅಮೀಬಾ ಇತ್ಯಾದಿ ಒಂದು ಸೆಲ್ಲಿನ ಪುಟಾಣಿ ಜೀವಿಯಾಗಿದ್ದ.
ಅದಕ್ಕೂ ಹಿಂದೆ ನಿರ್ಜಿವಿಯಾಗಿರುವ ವಸ್ತುವಾಗಿದ್ದ. ಇವೆಲ್ಲ ಅವಸ್ಥೆಗಳ
ಸ್ಮರಣೆಯು ಮನಸ್ಸಿನ ಯಾವದೋ ಹಗೇವಿನಲ್ಲಿ ಕಣ್ಮರೆಯಾಗಿವೆ. ಮಾನವನ
ಇಂದಿನ ಬಾಳಿಗೆ ಆ ಅವಸ್ಥೆಗಳ ಸ್ಮರಣೆಯು ಅನಗತ್ಯ. ಅಷ್ಟೇ ಅಲ್ಲ, ತೊಡಕೂ
ಆಗುತ್ತದೆ. ಆದಕಾರಣ ಪ್ರಕೃತಿಯ ಪ್ರಗತಿಯು, Natural Evolution ಕೋಟ್ಯಂತರ
ವರ್ಷಗಳ ನೆನಪನ್ನು, ಮಾನವನ ಸ್ಮರಣೆಯ ಆಳ ಆಳದಲ್ಲಿರುವ ಹಗೇವುಗಳಲ್ಲಿ
ಹುದುಗಿಸಿಟ್ಟಿದೆ. ಭದ್ರವಾಗಿ ಬೀಗವನ್ನು ಹಾಕಿಟ್ಟಿದೆ.
{{gap}}'ಸಂಯಮ'ದಿಂದ, ಧಾರಣ, ಧ್ಯಾನ, ಸಮಾಧಿಗಳ ಒಕ್ಕೂಟವು ಲಬ್ಧವಾದಾಗ
ಮಾನವನ ಮನಸ್ಸು ನಿರ್ಮಲವಾಗಿರುತ್ತದೆ. ಲೌಕಿಕವಾಗಿ ನಿರ್ಮಲವಾಗಿರುತ್ತದೆ.
ಅಂತಹ ಸತ್-ಪರಿಸ್ಥಿತಿಯಲ್ಲಿ, ಹಗೇವುಗಳಲ್ಲಿ ಶೇಖರಿಸಿಡಲ್ಪಟ್ಟ ಪುರಾತನ ಸನಾತನ
ಸ್ಮರಣೆಗಳು, ಹುದುಗಿರಬೇಕಾಗಿಲ್ಲ. 'ಸಂಯಮ'ವನ್ನು ಗಳಿಸಿದ ಮಾನವನಿಗೆ
ಅವಾವುದೂ ತೊಡಕುಗಳಾಗುವುದಿಲ್ಲ. ಆದುದರಿಂದ ಅವುಗಳ ಸ್ಮರಣೆಯನ್ನು
ಸಂಯಮಿಯು ಉಪದ್ರವವಾಗದೆ ಪಡೆಯಬಲ್ಲ. ನಿರ್ಜಿವಿಯಾದ ಅವಸ್ಥೆಯ
ಮೂಲಭೂತವಾದುದನ್ನು ಅರಿಯಬಲ್ಲ. ಜೀವಿಯಾದ ಮೇಲೆ ಪ್ರಗತಿಯು,
ಮುಂದು ಮುಂದು ನಡೆದಾಗ, ಹಂತಹಂತದಲ್ಲೂ ತಾನು ಏನು, ಯಾವಾಗ,
ಆಗಿದ್ದ. ಯಾವ ಪ್ರಾಣಿಯಾಗಿದ್ದ ಎಂಬುದನ್ನೂ ತಿಳಿಯಬಲ್ಲ. ಇಂತಹ ಬ್ರಹ್ಮಾಂಡದ
ಜ್ಞಾನ ಸಂಪಾದನೆಯಿಂದ ಲೌಕಿಕವಾದ ಈ ಮಾನವ ಬಾಳಿಗೆ ಅಡಚಣೆಯೂ
ಇಲ್ಲ. ತೊಡಕೂ ಆಗುವುದಿಲ್ಲ. ಆದರೆ ತಾನು, ತನ್ನದು ಎಂಬ ದೃಢವಾದ
ಲೌಕಿಕ ಕಲ್ಪನೆಯು ನಿರ್ಮೂಲವಾಗುತ್ತದೆ. ಬ್ರಹ್ಮಾಂಡವೇ ನಾನು ಎನ್ನುವ
ವಿಶ್ವಕುಟುಂಬಿಯ ಅರಿವು ಬ್ರಹ್ಮಾಂಡದಲ್ಲೆಲ್ಲಾ ಹರಡುತ್ತದೆ. ಹರಡಿ ಅದರೊಡನೆ
ಒಂದಾಗುತ್ತದೆ. ಅ-ದ್ವಿತೀಯವಾಗುತ್ತದೆ.
{{gap}}ಪೂರ್ವಜನ್ಮದ ಸ್ಮರಣೆಯು ಸ್ಪುಟವಾಗಿ, ೭-೮ ವಯಸ್ಸಿನ ಬಾಲಕ
ಬಾಲಕಿಯರು. ಸ್ಮರಣೆಯನ್ನು ವಿವರಿಸಿದಾಗ, ಸಂಶೋಧನೆಯಿಂದ
ಆ ಹುಡುಗರಂದುದು ಚಾರಿತ್ರಿಕವಾಗಿ ನಿಜ ಎಂದು ತಿಳಿದಾಗ, ಆಶ್ಚರ್ಯವು
ಉಂಟಾಗುತ್ತವೆ. ಏಕೆ ? ಹೀಗಾಗುವುದು ಹೇಗೆ ಸಾಧ್ಯ ? ಎಂದು ಅನಿಸುವುದರಿಂದ,
ಆದರೆ 'ಸಂಯಮಿ'ಯ ಅನುಭವ ವಾಕ್ಯಗಳನ್ನು, Natural Evolution ಜತೆಗೆ<noinclude></noinclude>
p49pwe0w481awfq8h6jnb1df03vn28d
ಪುಟ:ಮನಮಂಥನ.pdf/೪೪೦
104
62887
317686
314690
2026-05-06T14:58:22Z
Shreelatha.Halemane
7642
/* Proofread */
317686
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೪೨೨}}{{Right|ಮನಮಂಥನ}}
ಸಮನ್ವಯಿಸಿದರೆ, ಆಶ್ಚರ್ಯವಾಗುವುದಿಲ್ಲ. ಅರಿವು ವಿಶಾಲವಾಗುತ್ತದೆ. ಹಿರಿಯರ
ಭಾಷೆಯಲ್ಲಿ ಬ್ರಹ್ಮಾಂಡ ಮತ್ತು ಪಿಂಡಾಂಡಗಳು, ಐಕ್ಯವಾಗುತ್ತವೆ.
{{gap}}Conscious; Sub-conscious; Personal unconcious and total
unconsious ಎಲ್ಲವೂ ಮನಸ್ಸಿನ ಸ್ಥಿತಿಗತಿಗಳೂ, ಮನಸ್ಸನ್ನು ಮೆಟ್ಟಿನಿಂತು
ವೀಕ್ಷಿಸಿದರೆ, ಅಂದರೆ ಅರಿಯತೊಡಗಿದರೆ, ಇವೆಲ್ಲಾ ಮನಸ್ಸಿನ ಸ್ಥಿತಿಗಳೂ,
ಅವಸ್ಥೆಗಳೂ, ಒಂದೇ ಎಂಬ ಅರಿವು ಲಭಿಸುತ್ತದೆ.
{{gap}}ಸಂಯಮಿಯ ಸಾಧನೆಯು, ಈ ಕಡೆ, ಜನ್ಮ ಜನ್ಮಾಂತರದತ್ತ, Focus
ಮಾಡಿದಾಗ, ಜನ್ಮ ಜನ್ಮಾಂತರದ ನೆನಪುಗಳು ಸಹಜವಾಗಿ ಎಚ್ಚರಗೊಂಡು,
ಅರಿವು ವಿಶಾಲವಾಗುತ್ತದೆ. ಸೀಮಾತೀತ, ಕಾಲಾತೀತವಾದ 'ಅರಿವು' ದೇವರು
ಎಂದು ಹೆಸರನ್ನಿಡಿಸಿಕೊಳ್ಳುವುದು, ಸಂಯಮಿಯಾಗಲಾರದ ಕೋಟ್ಯಂತರ
ಮಂದಿಗೆ, ನೆಮ್ಮದಿಯನ್ನೂ ಸಮಾಧಾನವನ್ನೂ ತುಸು ಮಟ್ಟಿಗಾದರೂ ನೀಡುತ್ತದೆ.
ಈ ತೆರನ ಅರಿವು ಹಂತ ಹಂತವಾಗಿ ಉಂಟಾಗುವುದರಿಂದ, ಹಂತ ಹಂತದ
'ದೇವರ ಕಲ್ಪನೆಯೂ ಸಹಜವಾದುದು. ಮೂವತ್ತು ಮೂರು ಕೋಟಿ
ದೇವರುಗಳೂ ನೈಜವಾದುವು. ಸತ್ಯವಾದವು ಆಯಾ ಹಂತದವರಿಗೆ
ಅಗತ್ಯವಾದುದು.
{{gap}}ಪ್ರತ್ಯಯಸ್ಯ ಪರಚಿತ್ತ ಜ್ಞಾನ
{{gap}}ನತತ್ ಸಾಲಂಬನ ತಸ್ಯ ವಿಷಯೇ ಭೂತತ್ವಾತ್
{{gap}}'ಸಂಯಮಿ'ಯು ಪರರನ್ನು ನೋಡಿದಾಗ, ಅವರುಗಳ ಮನಸ್ಸನ್ನು
ಅರಿಯುವನು. ಆದರೆ, ಅವರುಗಳ ಮನಸ್ಸಿನೊಳಗೆ ಇರುವ ಆಲೋಚನೆಗಳನ್ನು
ತಿಳಿಯಲಾರ. “Face is the index of the mind" ಎಂಬ ಅರಿವಿನ ನಾಡ
ನುಡಿಯು ಪ್ರಸಿದ್ಧವಾದುದು.
{{gap}}ರಾಗದ ಆಕಾರಗಳು ಮತ್ತು ವಿಕಾರಗಳು, ರಾಗ ಪ್ರಚೋದಿತನಾದ
ಮಾನವನ ಮುಖದಲ್ಲಿ ಕಾಣಿಸುತ್ತವೆ. ಇದು Obvious, ರೇಗಿರುವ ಗಂಡನ
ಮುಖವು ಧುಮುಗುಟ್ಟುತ್ತಿರುತ್ತದೆ. ಅಜ್ಞಾನದಿಂದಾಗಿ, ರೇಗಿಸಿದ ಹೆಂಡತಿಯ
ಮುಖವೂ ಧುಮು ಧುಮು ಆಗಿರುತ್ತದೆ. ಆದರೆ ಇಬ್ಬರೂ ಲೌಕಿಕ ಬಾಳನ್ನು
ನಡೆಸಬೇಕು. ನಡೆಸಲೇಬೇಕು ! ನನಗೆ ಹಸಿವಿಲ್ಲ. ಒಂದು ಬಟ್ಟಲು ಮೊಸರನ್ನು
ಕೊಡು ಸಾಕು' ಎಂದನ್ನುತ್ತಾನೆ ಗಂಡ, ಸರ್ವ೦ ಭಕ್ಷಯಾಮಿ ಎನ್ನುವಂತೆ
ಅವನ ಹೊಟ್ಟೆಯು ಉರಿಯುತ್ತಿರುತ್ತದೆ. ಮುಖವನ್ನು ಸಿಂಡರಿಸಿಕೊಂಡು ಬಟ್ಟಲು<noinclude></noinclude>
5q3jfkv6yeymlgj8swnbig0e1vwc7jt
317692
317686
2026-05-06T15:08:24Z
Shreesha Sharma
7840
/* Validated */
317692
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೪೨೨}}{{Right|ಮನಮಂಥನ}}
ಸಮನ್ವಯಿಸಿದರೆ, ಆಶ್ಚರ್ಯವಾಗುವುದಿಲ್ಲ. ಅರಿವು ವಿಶಾಲವಾಗುತ್ತದೆ. ಹಿರಿಯರ
ಭಾಷೆಯಲ್ಲಿ ಬ್ರಹ್ಮಾಂಡ ಮತ್ತು ಪಿಂಡಾಂಡಗಳು, ಐಕ್ಯವಾಗುತ್ತವೆ.
{{gap}}Conscious; Sub-conscious; Personal unconcious and total
unconsious ಎಲ್ಲವೂ ಮನಸ್ಸಿನ ಸ್ಥಿತಿಗತಿಗಳೂ, ಮನಸ್ಸನ್ನು ಮೆಟ್ಟಿನಿಂತು
ವೀಕ್ಷಿಸಿದರೆ, ಅಂದರೆ ಅರಿಯತೊಡಗಿದರೆ, ಇವೆಲ್ಲಾ ಮನಸ್ಸಿನ ಸ್ಥಿತಿಗಳೂ,
ಅವಸ್ಥೆಗಳೂ, ಒಂದೇ ಎಂಬ ಅರಿವು ಲಭಿಸುತ್ತದೆ.
{{gap}}ಸಂಯಮಿಯ ಸಾಧನೆಯು, ಈ ಕಡೆ, ಜನ್ಮ ಜನ್ಮಾಂತರದತ್ತ, Focus
ಮಾಡಿದಾಗ, ಜನ್ಮ ಜನ್ಮಾಂತರದ ನೆನಪುಗಳು ಸಹಜವಾಗಿ ಎಚ್ಚರಗೊಂಡು,
ಅರಿವು ವಿಶಾಲವಾಗುತ್ತದೆ. ಸೀಮಾತೀತ, ಕಾಲಾತೀತವಾದ 'ಅರಿವು' ದೇವರು
ಎಂದು ಹೆಸರನ್ನಿಡಿಸಿಕೊಳ್ಳುವುದು, ಸಂಯಮಿಯಾಗಲಾರದ ಕೋಟ್ಯಂತರ
ಮಂದಿಗೆ, ನೆಮ್ಮದಿಯನ್ನೂ ಸಮಾಧಾನವನ್ನೂ ತುಸು ಮಟ್ಟಿಗಾದರೂ ನೀಡುತ್ತದೆ.
ಈ ತೆರನ ಅರಿವು ಹಂತ ಹಂತವಾಗಿ ಉಂಟಾಗುವುದರಿಂದ, ಹಂತ ಹಂತದ
'ದೇವರ ಕಲ್ಪನೆಯೂ ಸಹಜವಾದುದು. ಮೂವತ್ತು ಮೂರು ಕೋಟಿ
ದೇವರುಗಳೂ ನೈಜವಾದುವು. ಸತ್ಯವಾದವು ಆಯಾ ಹಂತದವರಿಗೆ
ಅಗತ್ಯವಾದುದು.
{{gap}}ಪ್ರತ್ಯಯಸ್ಯ ಪರಚಿತ್ತ ಜ್ಞಾನ
{{gap}}ನತತ್ ಸಾಲಂಬನ ತಸ್ಯ ವಿಷಯೇ ಭೂತತ್ವಾತ್
{{gap}}'ಸಂಯಮಿ'ಯು ಪರರನ್ನು ನೋಡಿದಾಗ, ಅವರುಗಳ ಮನಸ್ಸನ್ನು
ಅರಿಯುವನು. ಆದರೆ, ಅವರುಗಳ ಮನಸ್ಸಿನೊಳಗೆ ಇರುವ ಆಲೋಚನೆಗಳನ್ನು
ತಿಳಿಯಲಾರ. “Face is the index of the mind" ಎಂಬ ಅರಿವಿನ ನಾಡ
ನುಡಿಯು ಪ್ರಸಿದ್ಧವಾದುದು.
{{gap}}ರಾಗದ ಆಕಾರಗಳು ಮತ್ತು ವಿಕಾರಗಳು, ರಾಗ ಪ್ರಚೋದಿತನಾದ
ಮಾನವನ ಮುಖದಲ್ಲಿ ಕಾಣಿಸುತ್ತವೆ. ಇದು Obvious, ರೇಗಿರುವ ಗಂಡನ
ಮುಖವು ಧುಮುಗುಟ್ಟುತ್ತಿರುತ್ತದೆ. ಅಜ್ಞಾನದಿಂದಾಗಿ, ರೇಗಿಸಿದ ಹೆಂಡತಿಯ
ಮುಖವೂ ಧುಮು ಧುಮು ಆಗಿರುತ್ತದೆ. ಆದರೆ ಇಬ್ಬರೂ ಲೌಕಿಕ ಬಾಳನ್ನು
ನಡೆಸಬೇಕು. ನಡೆಸಲೇಬೇಕು ! ನನಗೆ ಹಸಿವಿಲ್ಲ. ಒಂದು ಬಟ್ಟಲು ಮೊಸರನ್ನು
ಕೊಡು ಸಾಕು' ಎಂದನ್ನುತ್ತಾನೆ ಗಂಡ, ಸರ್ವ೦ ಭಕ್ಷಯಾಮಿ ಎನ್ನುವಂತೆ
ಅವನ ಹೊಟ್ಟೆಯು ಉರಿಯುತ್ತಿರುತ್ತದೆ. ಮುಖವನ್ನು ಸಿಂಡರಿಸಿಕೊಂಡು ಬಟ್ಟಲು<noinclude></noinclude>
3oo9i0azco5q113qmi1vdzmc61ly0c7
ಪುಟ:ಮನಮಂಥನ.pdf/೪೪೧
104
62888
317687
314689
2026-05-06T15:01:16Z
Shreelatha.Halemane
7642
/* Proofread */
317687
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೨೩}}
ಮೊಸರನ್ನು ಹೆಂಡತಿಯು ತಂದಿಡುತ್ತಾಳೆ. ಅದನ್ನು ಕುಡಿದು ಹೋದಾಗ ಕಲ್ಲಿನ
ಹರಳು ಸಿಗುತ್ತದೆ. ಆದುದರಿಂದಲೇ ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು
ಸಿಕ್ಕಿತು ಎನ್ನುವುದು.
{{gap}}ಅಂತಹವರ ಮುಖವನ್ನು ನೋಡಿದರೆ ಸಾಮಾನ್ಯರಿಗೂ ಅವರುಗಳ
ಮನಸ್ಸು ರೇಗು ಉದ್ವೇಗಗಳಿಂದ ಕೂಡಿದೆ ಎನ್ನುವುದು ಸ್ಪಷ್ಟವಾಗುತ್ತದೆ.
'ಸಂಯಮಿ'ಗಾದರೋ, ಮುಖವನ್ನು ನೋಡಿದಾಗ ಕಾಣಬರುವ ಕಿಂಚಿತ್
ವ್ಯತ್ಯಾಸಗಳಿಂದಲೂ, ಅವರುಗಳ ಮನಸ್ಸಿನಲ್ಲಿ ಯಾವ ರೀತಿಯ ರಾಗವಿದೆ
ಎನ್ನುವುದು ತಿಳಿಯುತ್ತದೆ. ಆದರೆ ಆ ರಾಗ ಭಾವನೆಗೆ ಕಾರಣವಾದ ಮನಸ್ಸಿನಲ್ಲಿರುವ
ಒಳ್ಳೆಯದು ಅಥವಾ ಕೆಟ್ಟುದು ಆದ ಆಲೋಚನೆಯು 'ಸಂಯಮಿ'ಗೂ
ತಿಳಿಯುವುದಿಲ್ಲ.
{{gap}}ಕಾಯ ರೂಪ ಸಂಯಮಾತ್ ತತ್ ಗ್ರಾಹ್ಯ ಶಕ್ತಿ ಸಂಭೇ ಚಕ್ಷುಃ ಪ್ರಕಾಶ
{{gap}}ಸಂಯೋಗ, ಅಂತರ್ಧಾನ
{{gap}}ಸಂಯಮವನ್ನು ತನ್ನ ಕಾಯರೂಪದಲ್ಲಿ ಕೇಂದ್ರೀಕರಿಸಿದಾಗ, ಕಣ್ಣುಗಳ
ಪ್ರಕಾಶವು ಮತ್ತು ಅದನ್ನು ಗ್ರಹಿಸುವ ಶಕ್ತಿಯು ಇವೆರಡೂ ಒಂದಾಗುವುದರಿಂದ,
ಕಾಯರೂಪವು ಇತರರಿಗೆ ಕಾಣಿಸುವುದಿಲ್ಲ. ಅಂದರೆ ಸಂಯಮಿಯು
ಅದೃಶ್ಯನಾಗುತ್ತಾನೆ.
{{gap}}ಸಾಧು ಸಂತರ ಜೀವನದಲ್ಲಿ ಹೀಗಾಗುತ್ತದೆ ಎಂಬುದನ್ನು ಕೇಳಿದ್ದೇವೆ.
ಆದರೆ ವೈಜ್ಞಾನಿಕವಾಗಿ ಇಂದು ಇದನ್ನು ಊಹಿಸಲು ಅಥವಾ ವಿವರಿಸಲು
ಆಗುವುದಿಲ್ಲ.
{{gap}}ಶರೀರದ ಮೇಲೆ ಬೆಳಕು ಬಿದ್ದಾಗ, ಶರೀರದ ಹೊರಪದರದಿಂದ ಹೊರ
ಚೆಲ್ಲಿದ ಬೆಳಕು ಇತರರ ಕಣ್ಣಿಗೆ ಬಿದ್ದಾಗ, ನಮ್ಮ ಶರೀರದ ಸ್ವರೂಪವು, ಇತರರಿಗೆ
ಕಾಣಿಸುತ್ತದೆ. ಆದರೆ ಶರೀರದ ಹೊರ ಪದರವು ಮೇಲೆ ಬಿದ್ದ ಬೆಳಕನ್ನು
ಹೊರ ಚೆಲ್ಲದೆ ಇದ್ದರೆ, ಆಗ ಇತರರಿಗೆ ಕಾಣಿಸುವುದಿಲ್ಲ. ಕಗ್ಗತ್ತಲಲ್ಲಿ ಶರೀರವು
ಕಾಣಿಸುವುದಿಲ್ಲ. ಅಂತಹ ಸ್ಥಿತಿಯನ್ನು ನಮ್ಮ ಶರೀರವು 'ಸಂಯಮ'ದ
ಕೇಂದ್ರೀಕರಣದಿಂದ ಪಡೆಯುತ್ತದೆ ಎನ್ನುತ್ತಾರೆ, ಋಷಿಗಳು.
{{gap}}ಏತೇನ ಶಬ್ದಾದಿ ಅಂತರ್ಧಾನ ಮುಕ್ತಂ
{{gap}}ಮೇಲೆ ಹೇಳಿದ ರೀತಿಯಲ್ಲಿ, 'ಸಂಯಮಿ'ಯು ಶಬ್ದಾದಿಗಳು ಇತರರಿಗೆ
ತಿಳಿಯದಂತೆ ಮಾಡಬಹುದು.
{{gap}}ಬೆಳಕಿನಂತೆಯೇ, ಶಬ್ದ, ರಸ, ಗಂಧ ಇತ್ಯಾದಿಗಳನ್ನೂ ಇತರರಿಗೆ<noinclude></noinclude>
dv5lny2wa1q4d3m21k5ye4ujkkg2s4d
317693
317687
2026-05-06T15:08:34Z
Shreesha Sharma
7840
/* Validated */
317693
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೨೩}}
ಮೊಸರನ್ನು ಹೆಂಡತಿಯು ತಂದಿಡುತ್ತಾಳೆ. ಅದನ್ನು ಕುಡಿದು ಹೋದಾಗ ಕಲ್ಲಿನ
ಹರಳು ಸಿಗುತ್ತದೆ. ಆದುದರಿಂದಲೇ ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು
ಸಿಕ್ಕಿತು ಎನ್ನುವುದು.
{{gap}}ಅಂತಹವರ ಮುಖವನ್ನು ನೋಡಿದರೆ ಸಾಮಾನ್ಯರಿಗೂ ಅವರುಗಳ
ಮನಸ್ಸು ರೇಗು ಉದ್ವೇಗಗಳಿಂದ ಕೂಡಿದೆ ಎನ್ನುವುದು ಸ್ಪಷ್ಟವಾಗುತ್ತದೆ.
'ಸಂಯಮಿ'ಗಾದರೋ, ಮುಖವನ್ನು ನೋಡಿದಾಗ ಕಾಣಬರುವ ಕಿಂಚಿತ್
ವ್ಯತ್ಯಾಸಗಳಿಂದಲೂ, ಅವರುಗಳ ಮನಸ್ಸಿನಲ್ಲಿ ಯಾವ ರೀತಿಯ ರಾಗವಿದೆ
ಎನ್ನುವುದು ತಿಳಿಯುತ್ತದೆ. ಆದರೆ ಆ ರಾಗ ಭಾವನೆಗೆ ಕಾರಣವಾದ ಮನಸ್ಸಿನಲ್ಲಿರುವ
ಒಳ್ಳೆಯದು ಅಥವಾ ಕೆಟ್ಟುದು ಆದ ಆಲೋಚನೆಯು 'ಸಂಯಮಿ'ಗೂ
ತಿಳಿಯುವುದಿಲ್ಲ.
{{gap}}ಕಾಯ ರೂಪ ಸಂಯಮಾತ್ ತತ್ ಗ್ರಾಹ್ಯ ಶಕ್ತಿ ಸಂಭೇ ಚಕ್ಷುಃ ಪ್ರಕಾಶ
{{gap}}ಸಂಯೋಗ, ಅಂತರ್ಧಾನ
{{gap}}ಸಂಯಮವನ್ನು ತನ್ನ ಕಾಯರೂಪದಲ್ಲಿ ಕೇಂದ್ರೀಕರಿಸಿದಾಗ, ಕಣ್ಣುಗಳ
ಪ್ರಕಾಶವು ಮತ್ತು ಅದನ್ನು ಗ್ರಹಿಸುವ ಶಕ್ತಿಯು ಇವೆರಡೂ ಒಂದಾಗುವುದರಿಂದ,
ಕಾಯರೂಪವು ಇತರರಿಗೆ ಕಾಣಿಸುವುದಿಲ್ಲ. ಅಂದರೆ ಸಂಯಮಿಯು
ಅದೃಶ್ಯನಾಗುತ್ತಾನೆ.
{{gap}}ಸಾಧು ಸಂತರ ಜೀವನದಲ್ಲಿ ಹೀಗಾಗುತ್ತದೆ ಎಂಬುದನ್ನು ಕೇಳಿದ್ದೇವೆ.
ಆದರೆ ವೈಜ್ಞಾನಿಕವಾಗಿ ಇಂದು ಇದನ್ನು ಊಹಿಸಲು ಅಥವಾ ವಿವರಿಸಲು
ಆಗುವುದಿಲ್ಲ.
{{gap}}ಶರೀರದ ಮೇಲೆ ಬೆಳಕು ಬಿದ್ದಾಗ, ಶರೀರದ ಹೊರಪದರದಿಂದ ಹೊರ
ಚೆಲ್ಲಿದ ಬೆಳಕು ಇತರರ ಕಣ್ಣಿಗೆ ಬಿದ್ದಾಗ, ನಮ್ಮ ಶರೀರದ ಸ್ವರೂಪವು, ಇತರರಿಗೆ
ಕಾಣಿಸುತ್ತದೆ. ಆದರೆ ಶರೀರದ ಹೊರ ಪದರವು ಮೇಲೆ ಬಿದ್ದ ಬೆಳಕನ್ನು
ಹೊರ ಚೆಲ್ಲದೆ ಇದ್ದರೆ, ಆಗ ಇತರರಿಗೆ ಕಾಣಿಸುವುದಿಲ್ಲ. ಕಗ್ಗತ್ತಲಲ್ಲಿ ಶರೀರವು
ಕಾಣಿಸುವುದಿಲ್ಲ. ಅಂತಹ ಸ್ಥಿತಿಯನ್ನು ನಮ್ಮ ಶರೀರವು 'ಸಂಯಮ'ದ
ಕೇಂದ್ರೀಕರಣದಿಂದ ಪಡೆಯುತ್ತದೆ ಎನ್ನುತ್ತಾರೆ, ಋಷಿಗಳು.
{{gap}}ಏತೇನ ಶಬ್ದಾದಿ ಅಂತರ್ಧಾನ ಮುಕ್ತಂ
{{gap}}ಮೇಲೆ ಹೇಳಿದ ರೀತಿಯಲ್ಲಿ, 'ಸಂಯಮಿ'ಯು ಶಬ್ದಾದಿಗಳು ಇತರರಿಗೆ
ತಿಳಿಯದಂತೆ ಮಾಡಬಹುದು.
{{gap}}ಬೆಳಕಿನಂತೆಯೇ, ಶಬ್ದ, ರಸ, ಗಂಧ ಇತ್ಯಾದಿಗಳನ್ನೂ ಇತರರಿಗೆ<noinclude></noinclude>
tdzf6cfp6cqzmc2liszrka94s1rufke
ಪುಟ:ಮನಮಂಥನ.pdf/೪೪೨
104
62889
317688
314688
2026-05-06T15:02:46Z
Shreelatha.Halemane
7642
/* Proofread */
317688
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೪೨೪}}{{Right|ಮನಮಂಥನ}}
ಅರಿವಾಗದಂತೆ ಮಾಡಬಹುದು. ೨೧ನೇ ಸೂತ್ರವನ್ನು ಒಪ್ಪಿದರೆ ಇದನ್ನೂ
ಒಪ್ಪಬೇಕು.
{{gap}}ಸೋಪಕ್ರಮಂ, ನಿರುಪಕ್ರಮಂಚ ಕರ್ಮ ತತ್ ಸಂಯಮಾಜ್
{{gap}}ಅಪರಾಂತ ಜ್ಞಾನಂ ಅರಿಷ್ಟೇಭ್ಯವಾ
{{gap}}ಸಂಯಮಿಯು ; ಫಲ ನೀಡುವ ಕರ್ಮ ಮತ್ತು ನೀಡದೆ ಇರುವ
ಕರ್ಮ ; ಇವುಗಳಲ್ಲಿ ಸಂಯಮವನ್ನು ಕೇಂದ್ರಿಕರಿಸಿದರೆ, ಮರಣ ಕಾಲವು
ತಿಳಿಯುತ್ತದೆ. ಹಾಗೂ ಅರಿಷ್ಟಗಳು ಅಂದರೆ ಅಪಶಕುನಗಳಿಂದಲೂ
ತಿಳಿಯಬಹುದು. ಅರಿಷ್ಟಗಳಲ್ಲಿ ದೇಹಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ; ಲೋಕಕ್ಕೆ
ಸಂಬಂಧಿಸಿದ ಆದಿಭೌತಿಕ, ಮತ್ತು ಅಗೋಚರವಾದ ಲೋಕಗಳಿಗೆ ಸಂಬಂಧಿಸಿದ
ಆದಿದೈವಿಕ ಎಂದು ಮೂರು ತೆರಗಳುಂಟಂತೆ.
{{gap}}ಹೃದಯಾಘಾತವಾಗುವಾಗ, ಸಾವು ಸನ್ನಿಹಿತವಾಗಿದೆ ಎಂಬ ತೀವ್ರ ಭಯವು
ಮನಸ್ಸಿನ ತುಂಬಾ ಮುತ್ತಿರುತ್ತದೆ. ಮತ್ತೆ ಯಾವ ಲೌಕಿಕ ವಿಚಾರಗಳೂ ಅವನ
ಮನಸ್ಸನ್ನು ಅಂಟುವುದಿಲ್ಲ. ಒಂದು ರೀತಿಯಲ್ಲಿ ಅಂತಹ ರೋಗಿಯ ಮನಸ್ಸು,
ಧಾರಣ, ಧ್ಯಾನ, ಸಮಾಧಿಯನ್ನು ಬದುಕು ಸಾವುಗಳಲ್ಲಿ ಸಂಯಮವನ್ನು
ಮಾಡಿದೆ ಎನ್ನಬಹುದು.
{{gap}}ಆದರೆ ಸಾವಿನ ಅರಿವು, ರೋಗಿಗಳಲ್ಲಿ ಭಯದಿಂದ ತುಂಬಿರುತ್ತದೆ.
ನಿಜವಾಗಿ 'ಸಂಯಮ'ವನ್ನು ಯೋಗ ಮಾರ್ಗದಲ್ಲಿ ಸಾಧಿಸಿದವನಿಗೆ ಸಾವಿನ
ಅರಿವು, ಯಾವ ಭಯವನ್ನೂ ಉಂಟುಮಾಡುವುದಿಲ್ಲ. ಸಮಾಧಾನ ಮನಸ್ಸಿನಿಂದಲೇ
ಇರುತ್ತಾನೆ.
{{gap}}ಮಿಕ್ಕ ಅರಿಷ್ಟಗಳು, ಒಂದೊಂದು ಸಮಾಜವೂ ಕಾಲಾನುಕಾಲದಿಂದ
ರೂಢಿಸಿಕೊಂಡು ಬಂದ ಅಪಶಕುನ ಎಂಬ ನಂಬಿಕೆಗಳು ಎಂದಷ್ಟೇ ಹೇಳಬೇಕು;
ಇಂದಿನ ವೈಜ್ಞಾನಿಕ ಹಂತದಲ್ಲಿ.
{{gap}}ಮೃತ್ತಾದಿಷು ಬಲಾನಿ
ಮೈತ್ರಿ ; ಮುದಿತ ; ಕರುಣ ; ಉಪೇಕ್ಷೆ, ಎಂಬಿವುಗಳಲ್ಲಿ 'ಸಂಯಮ'ವನ್ನು
ಕ್ರೋಡೀಕರಿಸಿದರೆ, ಆ ಗುಣಗಳೆಲ್ಲವೂ ಬಲಗೊಂಡು ಅಭಿವೃದ್ಧಿಯಾಗುತ್ತದೆ.
ಸಂಯಮಿಗೆ ಸ್ವಾರ್ಥದ ಹಾಗೂ ಲೌಕಿಕದ ಆಸೆಗಳಿರುವುದಿಲ್ಲ. ಅಂದಮೇಲೆ
ಮೈತ್ರಾದಿಗಳು ಬಲಗೊಳ್ಳಲೇಬೇಕು.
{{gap}}ಬಲೇದು ಹಸ್ತಿ ಬಲಾನಿ
{{gap}}ಆನೆ, ಸಿಂಹ, ಹುಲಿ ಮೊದಲಾದುವುಗಳ ಬಲದಲ್ಲಿ 'ಸಂಯಮ'ವನ್ನು<noinclude></noinclude>
25tuponzdxa6eb5mastfdr7cu5ugy19
317694
317688
2026-05-06T15:08:45Z
Shreesha Sharma
7840
/* Validated */
317694
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೪೨೪}}{{Right|ಮನಮಂಥನ}}
ಅರಿವಾಗದಂತೆ ಮಾಡಬಹುದು. ೨೧ನೇ ಸೂತ್ರವನ್ನು ಒಪ್ಪಿದರೆ ಇದನ್ನೂ
ಒಪ್ಪಬೇಕು.
{{gap}}ಸೋಪಕ್ರಮಂ, ನಿರುಪಕ್ರಮಂಚ ಕರ್ಮ ತತ್ ಸಂಯಮಾಜ್
{{gap}}ಅಪರಾಂತ ಜ್ಞಾನಂ ಅರಿಷ್ಟೇಭ್ಯವಾ
{{gap}}ಸಂಯಮಿಯು ; ಫಲ ನೀಡುವ ಕರ್ಮ ಮತ್ತು ನೀಡದೆ ಇರುವ
ಕರ್ಮ ; ಇವುಗಳಲ್ಲಿ ಸಂಯಮವನ್ನು ಕೇಂದ್ರಿಕರಿಸಿದರೆ, ಮರಣ ಕಾಲವು
ತಿಳಿಯುತ್ತದೆ. ಹಾಗೂ ಅರಿಷ್ಟಗಳು ಅಂದರೆ ಅಪಶಕುನಗಳಿಂದಲೂ
ತಿಳಿಯಬಹುದು. ಅರಿಷ್ಟಗಳಲ್ಲಿ ದೇಹಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ; ಲೋಕಕ್ಕೆ
ಸಂಬಂಧಿಸಿದ ಆದಿಭೌತಿಕ, ಮತ್ತು ಅಗೋಚರವಾದ ಲೋಕಗಳಿಗೆ ಸಂಬಂಧಿಸಿದ
ಆದಿದೈವಿಕ ಎಂದು ಮೂರು ತೆರಗಳುಂಟಂತೆ.
{{gap}}ಹೃದಯಾಘಾತವಾಗುವಾಗ, ಸಾವು ಸನ್ನಿಹಿತವಾಗಿದೆ ಎಂಬ ತೀವ್ರ ಭಯವು
ಮನಸ್ಸಿನ ತುಂಬಾ ಮುತ್ತಿರುತ್ತದೆ. ಮತ್ತೆ ಯಾವ ಲೌಕಿಕ ವಿಚಾರಗಳೂ ಅವನ
ಮನಸ್ಸನ್ನು ಅಂಟುವುದಿಲ್ಲ. ಒಂದು ರೀತಿಯಲ್ಲಿ ಅಂತಹ ರೋಗಿಯ ಮನಸ್ಸು,
ಧಾರಣ, ಧ್ಯಾನ, ಸಮಾಧಿಯನ್ನು ಬದುಕು ಸಾವುಗಳಲ್ಲಿ ಸಂಯಮವನ್ನು
ಮಾಡಿದೆ ಎನ್ನಬಹುದು.
{{gap}}ಆದರೆ ಸಾವಿನ ಅರಿವು, ರೋಗಿಗಳಲ್ಲಿ ಭಯದಿಂದ ತುಂಬಿರುತ್ತದೆ.
ನಿಜವಾಗಿ 'ಸಂಯಮ'ವನ್ನು ಯೋಗ ಮಾರ್ಗದಲ್ಲಿ ಸಾಧಿಸಿದವನಿಗೆ ಸಾವಿನ
ಅರಿವು, ಯಾವ ಭಯವನ್ನೂ ಉಂಟುಮಾಡುವುದಿಲ್ಲ. ಸಮಾಧಾನ ಮನಸ್ಸಿನಿಂದಲೇ
ಇರುತ್ತಾನೆ.
{{gap}}ಮಿಕ್ಕ ಅರಿಷ್ಟಗಳು, ಒಂದೊಂದು ಸಮಾಜವೂ ಕಾಲಾನುಕಾಲದಿಂದ
ರೂಢಿಸಿಕೊಂಡು ಬಂದ ಅಪಶಕುನ ಎಂಬ ನಂಬಿಕೆಗಳು ಎಂದಷ್ಟೇ ಹೇಳಬೇಕು;
ಇಂದಿನ ವೈಜ್ಞಾನಿಕ ಹಂತದಲ್ಲಿ.
{{gap}}ಮೃತ್ತಾದಿಷು ಬಲಾನಿ
ಮೈತ್ರಿ ; ಮುದಿತ ; ಕರುಣ ; ಉಪೇಕ್ಷೆ, ಎಂಬಿವುಗಳಲ್ಲಿ 'ಸಂಯಮ'ವನ್ನು
ಕ್ರೋಡೀಕರಿಸಿದರೆ, ಆ ಗುಣಗಳೆಲ್ಲವೂ ಬಲಗೊಂಡು ಅಭಿವೃದ್ಧಿಯಾಗುತ್ತದೆ.
ಸಂಯಮಿಗೆ ಸ್ವಾರ್ಥದ ಹಾಗೂ ಲೌಕಿಕದ ಆಸೆಗಳಿರುವುದಿಲ್ಲ. ಅಂದಮೇಲೆ
ಮೈತ್ರಾದಿಗಳು ಬಲಗೊಳ್ಳಲೇಬೇಕು.
{{gap}}ಬಲೇದು ಹಸ್ತಿ ಬಲಾನಿ
{{gap}}ಆನೆ, ಸಿಂಹ, ಹುಲಿ ಮೊದಲಾದುವುಗಳ ಬಲದಲ್ಲಿ 'ಸಂಯಮ'ವನ್ನು<noinclude></noinclude>
0s5642ektu5bn7qrt8m60m2iujjsx49
ಪುಟ:ಮನಮಂಥನ.pdf/೪೪೩
104
62890
317689
314687
2026-05-06T15:07:24Z
Shreelatha.Halemane
7642
/* Proofread */
317689
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೨೫}}
ಮಾಡಿದರೆ ಆ ತೆರನ ಬಲವು ಲಭಿಸುತ್ತದೆ.
{{gap}}ಉನ್ಮಾದಾವಸ್ಥೆಯಲ್ಲಿರುವ ಜನರು ಅಸಾಮಾನ್ಯವಾದ ಶಕ್ತಿ ಪ್ರದರ್ಶನವನ್ನು
ಮಾಡುತ್ತಾರೆ. ಆವೇಶ ಬಂದವರೂ ಅತಿಬಲವನ್ನು ಪ್ರದರ್ಶಿಸುತ್ತಾರೆ. ಹುಲಿಯ
ಬಾಯಿಗೆ ಸಿಕ್ಕಿದ್ದೇನೆ ಎಂದು ಹೆದರಿ ತತ್ಕ್ಷಣ ಜೀವವನ್ನು ಹೇಗಾದರೂ
ಉಳಿಸಿ ಕೊಳ್ಳಬೇಕು ಎಂದು ಉನ್ಮಾದಾವಸ್ಥೆಗೆ ಏರಿದ ಹಲ ಕೆಲವರು,
ಹುಲಿಯೊಂದಿಗೆ ಸೆಣಸಾಡಿ, ಅದನ್ನು ಕೊಂದ ನಿದರ್ಶನಗಳು, ಅತಿ
ವಿರಳವಾದರೂ, ದೊರೆತಿವೆ. ಸಂಯಮಿಗೂ ಇದು ಸಾಧ್ಯ ಎಂದು ನಂಬಬಹುದು.
ಆದರೆ ಯೋಗ ಸಾಧನೆಯಿಂದ ಮೈತ್ರಿಯನ್ನು ಬಲಪಡಿಸಿಕೊಂಡ, ವೈರತ್ವವನ್ನು
ನಿರ್ಮೂಲ ಮಾಡಿಕೊಂಡ, ಸಂಯಮಿಯನ್ನು, ಹುಲಿ ಸಿಂಹ ಇತ್ಯಾದಿ
ಸ್ವಾಭಾವಿಕವಾಗಿ ಕ್ರೂರಿಗಳಾದ ಪ್ರಾಣಿಗಳು, ಹಿಂಸಿಸಹೋಗುವುದಿಲ್ಲ. ಬದಲು
ಅಂತಹವರ ಬಳಿ ಸಾಧುವಾಗುತ್ತದೆ ಎಂಬುದನ್ನು ಕೇಳಿದ್ದೇವೆ. ಸಂಯಮಿಯ
ಅಮೋಘ ಬಲದ ಸಹಜ ಅರಿವಿನಿಂದ ವನ್ಯ ಮೃಗಗಳು, ಸಾಧುವಾಗುತ್ತವೆಯೋ?
ಏನೋ? ಯಾರು ಬಲ್ಲರು?
{{gap}}ಪ್ರವೃತ್ತಿ ಆಲೋಕ ನ್ಯಾಸಾತ್ ಸೂಕ್ಷ್ಮ ವ್ಯವಹಿತ ವಿಪಕೃಷ್ಟ ಜ್ಞಾನ
{{gap}}ಅಣುಗಳಂತೆ ಸೂಕ್ಷ್ಮವಾದ ; ಭೂಗರ್ಭದಲ್ಲಿದ್ದು ಅಗೋಚರವಾದ ;
ಬಹಳ ದೂರದಲ್ಲಿ ಎಲ್ಲಿಯೋ ಅವ್ಯಕ್ತವಾಗಿರುವ, ವಸ್ತುಗಳ ಜ್ಞಾನವನ್ನು
*ಸಂಯಮಿ'ಯು ಪಡೆಯುತ್ತಾನೆ ; ಸಂಯಮವನ್ನು ಅವುಗಳತ್ತ ಕ್ರೋಡೀಕರಿಸಿದಾಗ,
{{gap}}ಅತಿ ದೂರದಲ್ಲಿರುವ ಚಂದ್ರನನ್ನು, ದೂರದರ್ಶಕ ಯಂತ್ರದಿಂದ, ಹತ್ತಿರ
ಬರುವಂತೆ ಮಾಡಿಕೊಂಡು ಸೂಕ್ಷ್ಮ ವಿವರಗಳನ್ನು ತಿಳಿಯುತ್ತೇವೆ. ಅತಿ ಸೂಕ್ಷ್ಮವಾದ
ವಸ್ತುಗಳನ್ನು ಮೈಕ್ರೋಸ್ಕೋಪ್ ನೆರವಿನಿಂದ ಬಲು ದೊಡ್ಡದಾಗಿ ಕಾಣುವಂತೆ
ಮಾಡುತ್ತೇವೆ. ಇವೆರಡು ಸಾಧನೆಗಳಿಗೂ ಬೆಳಕು ಮೂಲವಾದುದು. ಅಂತೆಯೇ
ಬಲು ದೂರದಲ್ಲಾದ ಶಬ್ದಗಳನ್ನು ರೇಡಿಯೋ ಸಾಧನದ ಮೂಲಕ ಸ್ಪಷ್ಟವಾಗಿ
ಕೇಳುತ್ತೇವೆ. ಅತಿ ಸೂಕ್ಷ್ಮವಾದ ಶಬ್ದವನ್ನು ಆಂಪ್ಲಿಫೈಯರ್ ಸಾಧನದಿಂದ
ಲಕ್ಷಣವಾಗಿ ಕೇಳುತ್ತೇವೆ. ಶಬ್ದ ಬೆಳಕು ಇತ್ಯಾದಿಗಳಂತೆ ಎಲ್ಲಿಯೋ ಉತ್ಪಾದಿಸಿದ
ವಿದ್ಯುತ್ ಶಕ್ತಿಯನ್ನು ಮತ್ತೆಲ್ಲೋ ದೂರದಲ್ಲಿ ಬಳಸುತ್ತೇವೆ.
{{gap}}ಈ ತೆರನ ಶಕ್ತಿಗಳಿಗಿಂತ, ಮನಸ್ಸು ಎಂಬುದು ವಿಭಿನ್ನವಾದುದು,
ಪ್ರತ್ಯೇಕವಾದ ಶಕ್ತಿ. ಇದನ್ನೂ ಮನಸ್ಸಿನ ಸಾಧನೆಯಿಂದ, 'ಸಂಯಮ'ದಿಂದ,
ಬಳಸಿ, ಸೂಕ್ಷ್ಮವಾದುವುಗಳನ್ನು ತಿಳಿಯಬಹುದು. ಅಗೋಚರವಾದುದನ್ನು
ಅರಿಯಬಹುದು ; ಅವ್ಯಕ್ತವಾಗಿರುವುದನ್ನು ಕಾಣಬಹುದು. ವೈಜ್ಞಾನಿಕವಾಗಿ<noinclude></noinclude>
cuvo4hic8j23asil2td4qmgfawq6ubi
317695
317689
2026-05-06T15:08:55Z
Shreesha Sharma
7840
/* Validated */
317695
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೨೫}}
ಮಾಡಿದರೆ ಆ ತೆರನ ಬಲವು ಲಭಿಸುತ್ತದೆ.
{{gap}}ಉನ್ಮಾದಾವಸ್ಥೆಯಲ್ಲಿರುವ ಜನರು ಅಸಾಮಾನ್ಯವಾದ ಶಕ್ತಿ ಪ್ರದರ್ಶನವನ್ನು
ಮಾಡುತ್ತಾರೆ. ಆವೇಶ ಬಂದವರೂ ಅತಿಬಲವನ್ನು ಪ್ರದರ್ಶಿಸುತ್ತಾರೆ. ಹುಲಿಯ
ಬಾಯಿಗೆ ಸಿಕ್ಕಿದ್ದೇನೆ ಎಂದು ಹೆದರಿ ತತ್ಕ್ಷಣ ಜೀವವನ್ನು ಹೇಗಾದರೂ
ಉಳಿಸಿ ಕೊಳ್ಳಬೇಕು ಎಂದು ಉನ್ಮಾದಾವಸ್ಥೆಗೆ ಏರಿದ ಹಲ ಕೆಲವರು,
ಹುಲಿಯೊಂದಿಗೆ ಸೆಣಸಾಡಿ, ಅದನ್ನು ಕೊಂದ ನಿದರ್ಶನಗಳು, ಅತಿ
ವಿರಳವಾದರೂ, ದೊರೆತಿವೆ. ಸಂಯಮಿಗೂ ಇದು ಸಾಧ್ಯ ಎಂದು ನಂಬಬಹುದು.
ಆದರೆ ಯೋಗ ಸಾಧನೆಯಿಂದ ಮೈತ್ರಿಯನ್ನು ಬಲಪಡಿಸಿಕೊಂಡ, ವೈರತ್ವವನ್ನು
ನಿರ್ಮೂಲ ಮಾಡಿಕೊಂಡ, ಸಂಯಮಿಯನ್ನು, ಹುಲಿ ಸಿಂಹ ಇತ್ಯಾದಿ
ಸ್ವಾಭಾವಿಕವಾಗಿ ಕ್ರೂರಿಗಳಾದ ಪ್ರಾಣಿಗಳು, ಹಿಂಸಿಸಹೋಗುವುದಿಲ್ಲ. ಬದಲು
ಅಂತಹವರ ಬಳಿ ಸಾಧುವಾಗುತ್ತದೆ ಎಂಬುದನ್ನು ಕೇಳಿದ್ದೇವೆ. ಸಂಯಮಿಯ
ಅಮೋಘ ಬಲದ ಸಹಜ ಅರಿವಿನಿಂದ ವನ್ಯ ಮೃಗಗಳು, ಸಾಧುವಾಗುತ್ತವೆಯೋ?
ಏನೋ? ಯಾರು ಬಲ್ಲರು?
{{gap}}ಪ್ರವೃತ್ತಿ ಆಲೋಕ ನ್ಯಾಸಾತ್ ಸೂಕ್ಷ್ಮ ವ್ಯವಹಿತ ವಿಪಕೃಷ್ಟ ಜ್ಞಾನ
{{gap}}ಅಣುಗಳಂತೆ ಸೂಕ್ಷ್ಮವಾದ ; ಭೂಗರ್ಭದಲ್ಲಿದ್ದು ಅಗೋಚರವಾದ ;
ಬಹಳ ದೂರದಲ್ಲಿ ಎಲ್ಲಿಯೋ ಅವ್ಯಕ್ತವಾಗಿರುವ, ವಸ್ತುಗಳ ಜ್ಞಾನವನ್ನು
*ಸಂಯಮಿ'ಯು ಪಡೆಯುತ್ತಾನೆ ; ಸಂಯಮವನ್ನು ಅವುಗಳತ್ತ ಕ್ರೋಡೀಕರಿಸಿದಾಗ,
{{gap}}ಅತಿ ದೂರದಲ್ಲಿರುವ ಚಂದ್ರನನ್ನು, ದೂರದರ್ಶಕ ಯಂತ್ರದಿಂದ, ಹತ್ತಿರ
ಬರುವಂತೆ ಮಾಡಿಕೊಂಡು ಸೂಕ್ಷ್ಮ ವಿವರಗಳನ್ನು ತಿಳಿಯುತ್ತೇವೆ. ಅತಿ ಸೂಕ್ಷ್ಮವಾದ
ವಸ್ತುಗಳನ್ನು ಮೈಕ್ರೋಸ್ಕೋಪ್ ನೆರವಿನಿಂದ ಬಲು ದೊಡ್ಡದಾಗಿ ಕಾಣುವಂತೆ
ಮಾಡುತ್ತೇವೆ. ಇವೆರಡು ಸಾಧನೆಗಳಿಗೂ ಬೆಳಕು ಮೂಲವಾದುದು. ಅಂತೆಯೇ
ಬಲು ದೂರದಲ್ಲಾದ ಶಬ್ದಗಳನ್ನು ರೇಡಿಯೋ ಸಾಧನದ ಮೂಲಕ ಸ್ಪಷ್ಟವಾಗಿ
ಕೇಳುತ್ತೇವೆ. ಅತಿ ಸೂಕ್ಷ್ಮವಾದ ಶಬ್ದವನ್ನು ಆಂಪ್ಲಿಫೈಯರ್ ಸಾಧನದಿಂದ
ಲಕ್ಷಣವಾಗಿ ಕೇಳುತ್ತೇವೆ. ಶಬ್ದ ಬೆಳಕು ಇತ್ಯಾದಿಗಳಂತೆ ಎಲ್ಲಿಯೋ ಉತ್ಪಾದಿಸಿದ
ವಿದ್ಯುತ್ ಶಕ್ತಿಯನ್ನು ಮತ್ತೆಲ್ಲೋ ದೂರದಲ್ಲಿ ಬಳಸುತ್ತೇವೆ.
{{gap}}ಈ ತೆರನ ಶಕ್ತಿಗಳಿಗಿಂತ, ಮನಸ್ಸು ಎಂಬುದು ವಿಭಿನ್ನವಾದುದು,
ಪ್ರತ್ಯೇಕವಾದ ಶಕ್ತಿ. ಇದನ್ನೂ ಮನಸ್ಸಿನ ಸಾಧನೆಯಿಂದ, 'ಸಂಯಮ'ದಿಂದ,
ಬಳಸಿ, ಸೂಕ್ಷ್ಮವಾದುವುಗಳನ್ನು ತಿಳಿಯಬಹುದು. ಅಗೋಚರವಾದುದನ್ನು
ಅರಿಯಬಹುದು ; ಅವ್ಯಕ್ತವಾಗಿರುವುದನ್ನು ಕಾಣಬಹುದು. ವೈಜ್ಞಾನಿಕವಾಗಿ<noinclude></noinclude>
n70tsptyb5ooen72c4bxcy078ddq46a
ಪುಟ:ಮನಮಂಥನ.pdf/೪೪೪
104
62891
317697
314686
2026-05-06T15:51:25Z
Shreesha Sharma
7840
/* Proofread */
317697
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೪೨೬|right=ಮನಮಂಥನ}}
ಇದು ಸಾಧ್ಯ ಎನ್ನಬೇಕು. 'ಸಂಯಮ'ವನ್ನು ಸಾಧಿಸುವುದು ಮಾತ್ರ ಕಠಿಣ.
ಭುವನ ಜ್ಞಾನಂ ಸೂರ್ಯೋ ಸಂಯಮಾತ್
ಚಂದ್ರ ತಾರಾ ವ್ಯೂಹ ಜ್ಞಾನಂ
ಧ್ರುವೇ ತತ್ ಗತಿ ಜ್ಞಾನಂ
:
ಸೂರ್ಯನಲ್ಲಿ, ಚಂದ್ರನಲ್ಲಿ, ಧ್ರುವ ನಕ್ಷತ್ರದಲ್ಲಿ, 'ಸಂಯಮ'ವನ್ನು ಮಗ್ನ
ಮಾಡಿದರೆ ಭೂಲೋಕ ಇತ್ಯಾದಿ ಹದಿನಾಲ್ಕೂ ಲೋಕಗಳ ಜ್ಞಾನವನ್ನು ; ನಕ್ಷತ್ರ
ಸಮೂಹಗಳ ಜ್ಞಾನವನ್ನೂ ; ಗ್ರಹಗಳ ಮತ್ತು ನಕ್ಷತ್ರಗಳ ಸಂಚಾರದ ರೀತಿಯ
ಜ್ಞಾನವನ್ನೂ ಪಡೆಯಬಹುದು.
ಮನಸ್ಸು ಎಂಬುದು ಒಂದು ತೆರನ ಶಕ್ತಿ ಭೌತಶಾಸ್ತ್ರದ ನಿಯಮಗಳಿಗೆ
ಹೊರತಾದುದು. ಈ ಶಕ್ತಿಯನ್ನು ಕ್ರೋಡೀಕರಿಸಿ, 'ಸಂಯಮ'ವನ್ನು ಸಾಧಿಸಿದರೆ,
ಮನಸ್ಸಿನ ಅಂಶವೊಂದು ಜಿಗಿದು, ಬೆಳಕಿನ ವೇಗಕ್ಕಿಂತ ಬಹಳ ಹೆಚ್ಚಾಗಿ ರಭಸದಿಂದ
ದೌಡುತ್ತದೆ. ಆಗ, ಸೂರ್ಯ, ಚಂದ್ರ, ನಕ್ಷತ್ರಗಳ ಅರಿವು, ಸುಲಭವಾಗಿ
ಉಂಟಾಗುತ್ತದೆ. ವೈಜ್ಞಾನಿಕವಾಗಿ ಇದು ಸಮರ್ಥನೀಯ.
ನಾಭಿ ಚಕ್ರೇ ಕಾಯ ವ್ಯೂಹ ಜ್ಞಾನಂ
ಕಂಠ ಕೂಪೇ ಕ್ಷುತ್ ಪಿಪಾಸ ನಿವೃತ್ತಿ:
ಕೂರ್ಮ ನಾಡ್ಯಾಂ ಸೈರ್ಯಂ
ಮೂರ್ಧ ಜ್ಯೋತಿಷಿ ಸಿದ್ಧ ದರ್ಶನ
ದೇಹದ ಹಲವು ಭಾಗಗಳಲ್ಲಿ 'ಸಂಯಮ'ವನ್ನು ಕೇಂದ್ರೀಕರಿಸಿದರೆ,
ಆಯಾ ದೇಹಭಾಗಗಳ ಕಾರ್ಯಕ್ರಮಗಳ ಮೇಲೆ ಸಂಪೂರ್ಣ ಹತೋಟಿಯನ್ನು
ಪಡೆಯಲಾಗುವುದು.
ನಾಭಿ ಚಕ್ರದಲ್ಲಿ :-ಮಣಿಪುರವೆಂದೂ ಇನ್ನೊಂದು ಹೆಸರು ; - ಇದರಲ್ಲಿ
ಧಾರಣ, ಧ್ಯಾನ, ಸಮಾಧಿಗಳ ಒಕ್ಕೂಟವನ್ನು ಅಂದರೆ ಸಂಯಮವನ್ನು ಸಾಧಿಸಿದರೆ,
ಆಗ ಉದರದಲ್ಲಿರುವ ಸಮಸ್ತ ಅಂಗಗಳ ಸ್ವರೂಪವು ಮತ್ತು ಕಾರ್ಯಕ್ರಮಗಳೂ
ತಿಳಿಯಲ್ಪಡುತ್ತವೆ. ದೇಹಕಾರ್ಯ ಶಾಸ್ತ್ರದ ಪ್ರಕಾರ ಇದು ಸಾಧ್ಯ.
ಕಂಠ ಕೂಪದಲ್ಲಿ ಸಂಯಮವನ್ನು ಮಾಡಿದರೆ ಹಲವು ಬಾಯಾರಿಕೆಗಳು
ನಿವಾರಣೆಯಾಗುವುದು. ಕಂಠಕೂಪ, ಎಂದರೆ ಗಂಟಲಿನ ತಳ ಎನ್ನಬೇಕು.
ವೈಜ್ಞಾನಿಕವಾಗಿ ಇದು ಅಸಮರ್ಥನೀಯ. ಇಂದಿನ ಜ್ಞಾನದ ಹಂತದಲ್ಲಿ.
ಆದರೆ ಮೆದುಳಿನ ಬುಡದಲ್ಲಿ ಹೈಪೊಥೆಲಾಮಸ್ ಎನ್ನುವ ಭಾಗದಲ್ಲಿ
Third ventricle ಎಂಬ ಸೆರಿಬೊ ಸ್ಟೈನಲ್ ದ್ರವವು ಕೂಡುವ ಕೂಪದ, ಬಳಿ,<noinclude></noinclude>
kkyvarujlraps0fcn96nxayo59wi5hv
317734
317697
2026-05-06T16:22:13Z
Shreelatha.Halemane
7642
/* Validated */
317734
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೪೨೬|right=ಮನಮಂಥನ}}
ಇದು ಸಾಧ್ಯ ಎನ್ನಬೇಕು. 'ಸಂಯಮ'ವನ್ನು ಸಾಧಿಸುವುದು ಮಾತ್ರ ಕಠಿಣ.
{{gap}}ಭುವನ ಜ್ಞಾನಂ ಸೂರ್ಯೋ ಸಂಯಮಾತ್
{{gap}}ಚಂದ್ರ ತಾರಾ ವ್ಯೂಹ ಜ್ಞಾನಂ
{{gap}}ಧ್ರುವೇ ತತ್ ಗತಿ ಜ್ಞಾನಂ
{{gap}}ಸೂರ್ಯನಲ್ಲಿ, ಚಂದ್ರನಲ್ಲಿ, ಧ್ರುವ ನಕ್ಷತ್ರದಲ್ಲಿ, 'ಸಂಯಮ'ವನ್ನು ಮಗ್ನ
ಮಾಡಿದರೆ ಭೂಲೋಕ ಇತ್ಯಾದಿ ಹದಿನಾಲ್ಕೂ ಲೋಕಗಳ ಜ್ಞಾನವನ್ನು ; ನಕ್ಷತ್ರ
ಸಮೂಹಗಳ ಜ್ಞಾನವನ್ನೂ ; ಗ್ರಹಗಳ ಮತ್ತು ನಕ್ಷತ್ರಗಳ ಸಂಚಾರದ ರೀತಿಯ
ಜ್ಞಾನವನ್ನೂ ಪಡೆಯಬಹುದು.
{{gap}}ಮನಸ್ಸು ಎಂಬುದು ಒಂದು ತೆರನ ಶಕ್ತಿ ಭೌತಶಾಸ್ತ್ರದ ನಿಯಮಗಳಿಗೆ
ಹೊರತಾದುದು. ಈ ಶಕ್ತಿಯನ್ನು ಕ್ರೋಡೀಕರಿಸಿ, 'ಸಂಯಮ'ವನ್ನು ಸಾಧಿಸಿದರೆ,
ಮನಸ್ಸಿನ ಅಂಶವೊಂದು ಜಿಗಿದು, ಬೆಳಕಿನ ವೇಗಕ್ಕಿಂತ ಬಹಳ ಹೆಚ್ಚಾಗಿ ರಭಸದಿಂದ
ದೌಡುತ್ತದೆ. ಆಗ, ಸೂರ್ಯ, ಚಂದ್ರ, ನಕ್ಷತ್ರಗಳ ಅರಿವು, ಸುಲಭವಾಗಿ
ಉಂಟಾಗುತ್ತದೆ. ವೈಜ್ಞಾನಿಕವಾಗಿ ಇದು ಸಮರ್ಥನೀಯ.
{{gap}}ನಾಭಿ ಚಕ್ರೇ ಕಾಯ ವ್ಯೂಹ ಜ್ಞಾನಂ
{{gap}}ಕಂಠ ಕೂಪೇ ಕ್ಷುತ್ ಪಿಪಾಸ ನಿವೃತ್ತಿ:
{{gap}}ಕೂರ್ಮ ನಾಡ್ಯಾಂ ಸೈರ್ಯಂ
{{gap}}ಮೂರ್ಧ ಜ್ಯೋತಿಷಿ ಸಿದ್ಧ ದರ್ಶನ
{{gap}}ದೇಹದ ಹಲವು ಭಾಗಗಳಲ್ಲಿ 'ಸಂಯಮ'ವನ್ನು ಕೇಂದ್ರೀಕರಿಸಿದರೆ,
ಆಯಾ ದೇಹಭಾಗಗಳ ಕಾರ್ಯಕ್ರಮಗಳ ಮೇಲೆ ಸಂಪೂರ್ಣ ಹತೋಟಿಯನ್ನು
ಪಡೆಯಲಾಗುವುದು.
{{gap}}ನಾಭಿ ಚಕ್ರದಲ್ಲಿ :-ಮಣಿಪುರವೆಂದೂ ಇನ್ನೊಂದು ಹೆಸರು ; - ಇದರಲ್ಲಿ
ಧಾರಣ, ಧ್ಯಾನ, ಸಮಾಧಿಗಳ ಒಕ್ಕೂಟವನ್ನು ಅಂದರೆ ಸಂಯಮವನ್ನು ಸಾಧಿಸಿದರೆ,
ಆಗ ಉದರದಲ್ಲಿರುವ ಸಮಸ್ತ ಅಂಗಗಳ ಸ್ವರೂಪವು ಮತ್ತು ಕಾರ್ಯಕ್ರಮಗಳೂ
ತಿಳಿಯಲ್ಪಡುತ್ತವೆ. ದೇಹಕಾರ್ಯ ಶಾಸ್ತ್ರದ ಪ್ರಕಾರ ಇದು ಸಾಧ್ಯ.
{{gap}}ಕಂಠ ಕೂಪದಲ್ಲಿ ಸಂಯಮವನ್ನು ಮಾಡಿದರೆ ಹಲವು ಬಾಯಾರಿಕೆಗಳು
ನಿವಾರಣೆಯಾಗುವುದು. ಕಂಠಕೂಪ, ಎಂದರೆ ಗಂಟಲಿನ ತಳ ಎನ್ನಬೇಕು.
ವೈಜ್ಞಾನಿಕವಾಗಿ ಇದು ಅಸಮರ್ಥನೀಯ. ಇಂದಿನ ಜ್ಞಾನದ ಹಂತದಲ್ಲಿ.
{{gap}}ಆದರೆ ಮೆದುಳಿನ ಬುಡದಲ್ಲಿ ಹೈಪೊಥೆಲಾಮಸ್ ಎನ್ನುವ ಭಾಗದಲ್ಲಿ
Third ventricle ಎಂಬ ಸೆರಿಬೊ ಸ್ಟೈನಲ್ ದ್ರವವು ಕೂಡುವ ಕೂಪದ, ಬಳಿ,<noinclude></noinclude>
baa7h63o89d77917jrncxlsrzzkuhwr
ಪುಟ:ಮನಮಂಥನ.pdf/೪೪೫
104
62892
317698
314685
2026-05-06T15:53:26Z
Shreesha Sharma
7840
/* Proofread */
317698
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೨೭}}
ಇಕ್ಕೆಲೆಗಳಲ್ಲೂ ಕೆಲವು ನರಕೇಂದ್ರಗಳಿವೆ. Hunger : Thirst ; & Satiety
centres ಎಂದು ಕರೆಯುತ್ತಾರೆ. Satiety centre ಅನ್ನು ಯಾವುದೇ
ವಿಧಾನದಿಂದಾಗಲೀ ಪ್ರಚೋದಿಸಿದರೆ, ದೇಹಕ್ಕೆ ಆಹಾರದ ಅಗತ್ಯವಿದ್ದರೂ,
ಹಸಿವೇ ಆಗುವುದಿಲ್ಲ. ಇದರ ಪರಿಣಾಮದಿಂದಾಗಿ ದೇಹವು ಕೃಶವಾಗುತ್ತದೆ.
Anorexia nervosa ತೆರನ ರೋಗಗಳಲ್ಲಿ, ಕ್ಷುತ್ ಪಿಪಾಸೆಗಳ ನಿವಾರಣೆಯು
ಆದಂತೆಯೇ ಆಗುತ್ತದೆ. ಕೆಲವು ಮಾನಸಿಕ ಬೇನೆಗಳಲ್ಲಿಯೂ ಹೀಗೇ ಆಗುತ್ತದೆ.
ದೇಹವು ತತ್ಕಾರಣ ಕೃಶವಾಗುತ್ತದೆ. ಮೆದುಳಿನ ಬುಡದ ಈ ಪ್ರದೇಶವನ್ನು
ಕಂಠರೂಪ ಎನ್ನುವುದು ಅಸಾಧ್ಯ ಊಹೆ. ನಾಲ್ಕನೆಯ ವೆಂಟ್ರಿಕಲ್ ಎಂಬ
ಇನ್ನೊಂದು ಕೂಪಕ್ಕೆ ಸಂಪರ್ಕವನ್ನು ಕಲ್ಪಿಸುವ Cerebral aqueduct ಎನ್ನುವ
ಕಂಠವೂ ಇದೆ. ಆದರೆ ಹೀಗೆ ಸಮನ್ವಯಿಸಿ ಸಮರ್ಥನೆಯನ್ನು ಮಾಡುವುದು,
ಮನಸ್ಸಿನ ಶೈಶವಾವಸ್ಥೆಯ ಮೋಹಕವಾದ ಆಟ ಮಾತ್ರ !
ಕೂರ್ಮನಾಡಿಯು ಕಂಠದ ಕೆಳಭಾಗದಲ್ಲಿದೆಯಂತೆ. 'ಸಂಯಮ'ವನ್ನು
ಈ ಪ್ರದೇಶದಲ್ಲಿ ಮಾಡಿದರೆ ದೇಹದ ಎಲ್ಲ ಭಾಗಗಳಲ್ಲಿಯೂ ಧೈರ್ಯವು
ಉಂಟಾಗುವುದಂತೆ. ಥೈರಾಯ್ಡ್ ಪ್ರದೇಶಕ್ಕೆ ಕೂರ್ಮನಾಡಿ ಎಂದನ್ನುವುದೂ
ಮೋಹಕವಾದ ಶೈಶವಾವಸ್ಥೆಯ ಮನಸ್ಸಿನ ಚೇಷ್ಟೆ ! ಎನಿಸುತ್ತದೆ.
ಮೆದುಳಿನಲ್ಲಿ ಪ್ರಕಾಶಾತ್ಮವಾದ, ಸುಷುಮ್ನಾಂತದಲ್ಲಿರುವ ಸಹಸ್ರಾರವೆಂಬಲ್ಲಿ
ಸಂಯಮವನ್ನು ಮಾಡಿದರೆ, ಲೌಕಿಕವಾಗಿ ಅಗೋಚರವಾದ, ಸಿದ್ಧ ಪುರುಷರು,
ವಿದೇಹಿಗಳು, ಪ್ರಕೃತಿಲಯರು, ಇಂತಹವರ ದರ್ಶನವಾಗುವುದಂತೆ, ಕಾಲ;
ದೇಶದ ಅಡೆ ತಡೆಗಳು ಆಗ ಇರುವುದಿಲ್ಲವಂತೆ.
ವೈಜ್ಞಾನಿಕ ಸಮರ್ಥನೆಯು ಇಂದು ಸಾಧ್ಯವಿಲ್ಲ.
ಆದರೆ ಮನೋಶಕ್ತಿಯು ತೀವ್ರವಾದಾಗ ಯಾವ ಸಿದ್ಧಿಗಳಾದರೂ ಸಾಧ್ಯ
ಎಂಬುದನ್ನು ಮರೆಯುವಂತಿಲ್ಲ.
{{center|'''ಪ್ರತಿಭಾತ್ ವಾ ಸರ್ವಂ'''}}
ಪ್ರತಿಭೆಯನ್ನು ಉದ್ದೇಶಿಸಿ ಸಂಯಮವನ್ನು ಮಾಡಿದರೆ ಸಕಲ ಜ್ಞಾನವೂ
ಲಭಿಸುತ್ತದೆ. ಪ್ರತಿಭೆ ಎಂದರೆ ನಮ್ಮ ಇಂದಿನ ಭಾಷೆಯಲ್ಲಿ Intuition ಎಂಬ
ಅರ್ಥ ಬರುತ್ತದೆ. ಆದರೆ ಪತಂಜಲಿಗಳ ಕಾಲದಲ್ಲಿ, ಪ್ರತಿಭೆಯ ಮೂರು ತೆರನ
ವಿಧಗಳನ್ನು ವಿವರಿಸುತ್ತಿದ್ದರು.
೧. ಚಿತ್ತದ ಸತ್ವ ಭಾಗದಲ್ಲಿ ಉದ್ಭವಿಸುವ ಚಿತ್ತದಪ್ರಭೆ. ಚಿತ್ರಭೆ.
ಬುದ್ಧಿಯ ಕಾರಣವಿಲ್ಲದೆ ತತ್ಕ್ಷಣದಲ್ಲಿ ಹುಟ್ಟುವ ಜ್ಞಾನವು ಅಥವಾ<noinclude></noinclude>
qls79oe546d0ayqxnsp57j73s2mehz8
317736
317698
2026-05-06T16:22:59Z
Shreelatha.Halemane
7642
/* Validated */
317736
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೨೭}}
ಇಕ್ಕೆಲೆಗಳಲ್ಲೂ ಕೆಲವು ನರಕೇಂದ್ರಗಳಿವೆ. Hunger : Thirst ; & Satiety
centres ಎಂದು ಕರೆಯುತ್ತಾರೆ. Satiety centre ಅನ್ನು ಯಾವುದೇ
ವಿಧಾನದಿಂದಾಗಲೀ ಪ್ರಚೋದಿಸಿದರೆ, ದೇಹಕ್ಕೆ ಆಹಾರದ ಅಗತ್ಯವಿದ್ದರೂ,
ಹಸಿವೇ ಆಗುವುದಿಲ್ಲ. ಇದರ ಪರಿಣಾಮದಿಂದಾಗಿ ದೇಹವು ಕೃಶವಾಗುತ್ತದೆ.
Anorexia nervosa ತೆರನ ರೋಗಗಳಲ್ಲಿ, ಕ್ಷುತ್ ಪಿಪಾಸೆಗಳ ನಿವಾರಣೆಯು
ಆದಂತೆಯೇ ಆಗುತ್ತದೆ. ಕೆಲವು ಮಾನಸಿಕ ಬೇನೆಗಳಲ್ಲಿಯೂ ಹೀಗೇ ಆಗುತ್ತದೆ.
ದೇಹವು ತತ್ಕಾರಣ ಕೃಶವಾಗುತ್ತದೆ. ಮೆದುಳಿನ ಬುಡದ ಈ ಪ್ರದೇಶವನ್ನು
ಕಂಠರೂಪ ಎನ್ನುವುದು ಅಸಾಧ್ಯ ಊಹೆ. ನಾಲ್ಕನೆಯ ವೆಂಟ್ರಿಕಲ್ ಎಂಬ
ಇನ್ನೊಂದು ಕೂಪಕ್ಕೆ ಸಂಪರ್ಕವನ್ನು ಕಲ್ಪಿಸುವ Cerebral aqueduct ಎನ್ನುವ
ಕಂಠವೂ ಇದೆ. ಆದರೆ ಹೀಗೆ ಸಮನ್ವಯಿಸಿ ಸಮರ್ಥನೆಯನ್ನು ಮಾಡುವುದು,
ಮನಸ್ಸಿನ ಶೈಶವಾವಸ್ಥೆಯ ಮೋಹಕವಾದ ಆಟ ಮಾತ್ರ !
{{gap}}ಕೂರ್ಮನಾಡಿಯು ಕಂಠದ ಕೆಳಭಾಗದಲ್ಲಿದೆಯಂತೆ. 'ಸಂಯಮ'ವನ್ನು
ಈ ಪ್ರದೇಶದಲ್ಲಿ ಮಾಡಿದರೆ ದೇಹದ ಎಲ್ಲ ಭಾಗಗಳಲ್ಲಿಯೂ ಧೈರ್ಯವು
ಉಂಟಾಗುವುದಂತೆ. ಥೈರಾಯ್ಡ್ ಪ್ರದೇಶಕ್ಕೆ ಕೂರ್ಮನಾಡಿ ಎಂದನ್ನುವುದೂ
ಮೋಹಕವಾದ ಶೈಶವಾವಸ್ಥೆಯ ಮನಸ್ಸಿನ ಚೇಷ್ಟೆ ! ಎನಿಸುತ್ತದೆ.
{{gap}}ಮೆದುಳಿನಲ್ಲಿ ಪ್ರಕಾಶಾತ್ಮವಾದ, ಸುಷುಮ್ನಾಂತದಲ್ಲಿರುವ ಸಹಸ್ರಾರವೆಂಬಲ್ಲಿ
ಸಂಯಮವನ್ನು ಮಾಡಿದರೆ, ಲೌಕಿಕವಾಗಿ ಅಗೋಚರವಾದ, ಸಿದ್ಧ ಪುರುಷರು,
ವಿದೇಹಿಗಳು, ಪ್ರಕೃತಿಲಯರು, ಇಂತಹವರ ದರ್ಶನವಾಗುವುದಂತೆ, ಕಾಲ;
ದೇಶದ ಅಡೆ ತಡೆಗಳು ಆಗ ಇರುವುದಿಲ್ಲವಂತೆ.
{{gap}}ವೈಜ್ಞಾನಿಕ ಸಮರ್ಥನೆಯು ಇಂದು ಸಾಧ್ಯವಿಲ್ಲ.
ಆದರೆ ಮನೋಶಕ್ತಿಯು ತೀವ್ರವಾದಾಗ ಯಾವ ಸಿದ್ಧಿಗಳಾದರೂ ಸಾಧ್ಯ
ಎಂಬುದನ್ನು ಮರೆಯುವಂತಿಲ್ಲ.
{{center|'''ಪ್ರತಿಭಾತ್ ವಾ ಸರ್ವಂ'''}}
{{gap}}ಪ್ರತಿಭೆಯನ್ನು ಉದ್ದೇಶಿಸಿ ಸಂಯಮವನ್ನು ಮಾಡಿದರೆ ಸಕಲ ಜ್ಞಾನವೂ
ಲಭಿಸುತ್ತದೆ. ಪ್ರತಿಭೆ ಎಂದರೆ ನಮ್ಮ ಇಂದಿನ ಭಾಷೆಯಲ್ಲಿ Intuition ಎಂಬ
ಅರ್ಥ ಬರುತ್ತದೆ. ಆದರೆ ಪತಂಜಲಿಗಳ ಕಾಲದಲ್ಲಿ, ಪ್ರತಿಭೆಯ ಮೂರು ತೆರನ
ವಿಧಗಳನ್ನು ವಿವರಿಸುತ್ತಿದ್ದರು.
{{gap}}೧. ಚಿತ್ತದ ಸತ್ವ ಭಾಗದಲ್ಲಿ ಉದ್ಭವಿಸುವ ಚಿತ್ತದಪ್ರಭೆ. ಚಿತ್ರಭೆ.
ಬುದ್ಧಿಯ ಕಾರಣವಿಲ್ಲದೆ ತತ್ಕ್ಷಣದಲ್ಲಿ ಹುಟ್ಟುವ ಜ್ಞಾನವು ಅಥವಾ<noinclude></noinclude>
6h6dbzkxj3uwqf9vb68bykibd28pfgf
ಪುಟ:ಮನಮಂಥನ.pdf/೪೪೬
104
62893
317699
314684
2026-05-06T15:54:30Z
Shreesha Sharma
7840
/* Proofread */
317699
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೪೨೮|right=ಮನಮಂಥನ}}
ಅರಿವು, ಪ್ರಾತಿಭ ಎನ್ನಲ್ಪಡುತ್ತಿತ್ತು.
ಬ್ರಹ್ಮರಂಧ್ರಕ್ಕೆ ಮೇಲೆ (ಬ್ರಹ್ಮರಂಧ್ರವು ಎಲ್ಲಿದೆಯೋ ಈಗ ನಮಗೆ
ವೈಜ್ಞಾನಿಕವಾಗಿ ತಿಳಿಯದು).
ಸಹಸ್ರಾರಕ್ಕೆ ಕೆಳಗೆ (ಸಹಸ್ರಾರದ ಸ್ಥಾನವು ಆನಂದದ ಕೇಂದ್ರಗಳು,
ಎನ್ನಬಹುದು). ಇರುವ ಪ್ರದೇಶವು ಚಿತ್ತದ ಸಾತ್ವಿಕ ಭಾಗ.
೨. ಬ್ರಹ್ಮರಂಧ್ರದ ಪ್ರಾಂತ್ಯದ ಭಾಗವು ಚಿತ್ರದ ರಾಜಸ ಭಾಗ
೩. ಬ್ರಹ್ಮರಂಧ್ರದ ಕೆಳಗೆ ಇರುವ ಚಿತ್ತದ ಭಾಗವು ತಮೋಗುಣದಿಂದ
ಕೂಡಿದ್ದು.
ಅಲ್ಲದೆ
ಶುದ್ಧ ಸತ್ವಭಾಗವಾದ ಪ್ರಭೆಗೆ ಪ್ರಜ್ಞೆಯೆಂದೂ, ಜ್ಞಾನವೆಂದೂ,
ರಾಜಸ ಭಾಗದ ಪ್ರಭೆಗೆ ಮನಸ್ಸೆಂದೂ
ತಾಮಸ ಭಾಗದ ಪ್ರತಿಭೆಗೆ ಅಹಂಕಾರವೆಂದೂ,
ಇವುಗಳೆಲ್ಲದರ ಒಕ್ಕೂಟಕ್ಕೆ ಅಂತಃಕರಣವೆಂದೂ, ಚಿತ್ತವೆಂದೂ
ಹೇಳುತ್ತಿದ್ದರು.
ಇವುಗಳಲ್ಲಿ ಜ್ಞಾತೃವೆಂಬ ಕರಣಕ್ಕೆ ತ್ರಿಕಾಲ ಜ್ಞಾನವೂ, (ಜ್ಞಾತೃ
80; Experiencer)
ಬುದ್ಧಿಗೆ ವರ್ತಮಾನ ಕಾಲವೂ,
ಮನಸ್ಸಿಗೆ ಭವಿಷ್ಯತ್ ಕಾಲ ಜ್ಞಾನವೂ,
ಚಿತ್ತಕ್ಕೆ ಭೂತಕಾಲ ಜ್ಞಾನವು,
ಅಹಂಕಾರಕ್ಕೆ ಅಜ್ಞಾನವು.
=
ಈ ರೀತಿಯಾಗಿ ಅಂತಃಕರಣಗಳಿಗೆ ಪ್ರತ್ಯೇಕ ಪ್ರತ್ಯೇಕ ಜ್ಞಾನಗಳಿರುತ್ತವೆ,
ಎನ್ನುತ್ತಿದ್ದರು. ಮನೋ, ಬುದ್ಧಿ, ಅಹಂಕಾರ, ಚಿತ್ತಗಳು, ಇವುಗಳು ಪ್ರಪಂಚಾನು
ವರ್ತನೆಯಲ್ಲಿರುವುದರಿಂದ ಅಂತಃಕರಣ ರೂಪವಾಗಿರುತ್ತದೆ. ಇದೆಲ್ಲವನ್ನೂ
ಅರಿಯುವ ಜ್ಞಾತೃವು, ಅಂತಃಕರಣವಾದರೂ, ವಿಷಯಗಳಲ್ಲಿ
ಅನುವರ್ತಿಸುವುದಿಲ್ಲವಾದ್ದರಿಂದ, ಲೌಕಿಕಕ್ಕೆ ಕೇವಲ 'ಸಾಕ್ಷಿ' ಯಾಗಿರುತ್ತಾನೆ.
ಚಿತ್ರಭೆಯಲ್ಲಿ ಸಂಯಮವನ್ನು ಮಾಡುವುದರಿಂದ, ಇತರ ಯೋಗ
ಸಾಧನಗಳನ್ನು ಆಚರಿಸದಿದ್ದರೂ, ಚಿತ್ತವೃತ್ತಿಯನ್ನು ನಿರೋಧಿಸಿ, ಕೈವಲ್ಯ
ಪದವಿಯನ್ನು ಪಡೆಯಬಹುದು. ಕೇವಲ ಪ್ರತಿಭೆಯಿಂದ ಯೋಗದ ಫಲವನ್ನು
ಪಡೆಯಬಹುದಾದ್ದರಿಂದ, ಇಂತಹ ಪ್ರತಿಭೆಯನ್ನು ತಾರಕ - ಜ್ಞಾನ, ಎಂದರು.<noinclude></noinclude>
1jwxk4wfq8fa3oh3fbi4g4uxew7cnax
317738
317699
2026-05-06T16:24:43Z
Shreelatha.Halemane
7642
/* Validated */
317738
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೪೨೮|right=ಮನಮಂಥನ}}
ಅರಿವು, ಪ್ರಾತಿಭ ಎನ್ನಲ್ಪಡುತ್ತಿತ್ತು.
{{gap}}ಬ್ರಹ್ಮರಂಧ್ರಕ್ಕೆ ಮೇಲೆ (ಬ್ರಹ್ಮರಂಧ್ರವು ಎಲ್ಲಿದೆಯೋ ಈಗ ನಮಗೆ
ವೈಜ್ಞಾನಿಕವಾಗಿ ತಿಳಿಯದು).
{{gap}}ಸಹಸ್ರಾರಕ್ಕೆ ಕೆಳಗೆ (ಸಹಸ್ರಾರದ ಸ್ಥಾನವು ಆನಂದದ ಕೇಂದ್ರಗಳು,
ಎನ್ನಬಹುದು). ಇರುವ ಪ್ರದೇಶವು ಚಿತ್ತದ ಸಾತ್ವಿಕ ಭಾಗ
.
{{gap}}೨. ಬ್ರಹ್ಮರಂಧ್ರದ ಪ್ರಾಂತ್ಯದ ಭಾಗವು ಚಿತ್ರದ ರಾಜಸ ಭಾಗ
{{gap}}೩. ಬ್ರಹ್ಮರಂಧ್ರದ ಕೆಳಗೆ ಇರುವ ಚಿತ್ತದ ಭಾಗವು ತಮೋಗುಣದಿಂದ
ಕೂಡಿದ್ದು.
{{center|ಅಲ್ಲದೆ}}
{{gap}}ಶುದ್ಧ ಸತ್ವಭಾಗವಾದ ಪ್ರಭೆಗೆ ಪ್ರಜ್ಞೆಯೆಂದೂ, ಜ್ಞಾನವೆಂದೂ,
{{gap}}ರಾಜಸ ಭಾಗದ ಪ್ರಭೆಗೆ ಮನಸ್ಸೆಂದೂ
{{gap}}ತಾಮಸ ಭಾಗದ ಪ್ರತಿಭೆಗೆ ಅಹಂಕಾರವೆಂದೂ,
{{gap}}ಇವುಗಳೆಲ್ಲದರ ಒಕ್ಕೂಟಕ್ಕೆ ಅಂತಃಕರಣವೆಂದೂ, ಚಿತ್ತವೆಂದೂ
ಹೇಳುತ್ತಿದ್ದರು.
{{gap}}ಇವುಗಳಲ್ಲಿ ಜ್ಞಾತೃವೆಂಬ ಕರಣಕ್ಕೆ ತ್ರಿಕಾಲ ಜ್ಞಾನವೂ, (ಜ್ಞಾತೃ
80; Experiencer)
ಬುದ್ಧಿಗೆ ವರ್ತಮಾನ ಕಾಲವೂ,
ಮನಸ್ಸಿಗೆ ಭವಿಷ್ಯತ್ ಕಾಲ ಜ್ಞಾನವೂ,
ಚಿತ್ತಕ್ಕೆ ಭೂತಕಾಲ ಜ್ಞಾನವು,
ಅಹಂಕಾರಕ್ಕೆ ಅಜ್ಞಾನವು.
{{gap}}ಈ ರೀತಿಯಾಗಿ ಅಂತಃಕರಣಗಳಿಗೆ ಪ್ರತ್ಯೇಕ ಪ್ರತ್ಯೇಕ ಜ್ಞಾನಗಳಿರುತ್ತವೆ,
ಎನ್ನುತ್ತಿದ್ದರು. ಮನೋ, ಬುದ್ಧಿ, ಅಹಂಕಾರ, ಚಿತ್ತಗಳು, ಇವುಗಳು ಪ್ರಪಂಚಾನು
ವರ್ತನೆಯಲ್ಲಿರುವುದರಿಂದ ಅಂತಃಕರಣ ರೂಪವಾಗಿರುತ್ತದೆ. ಇದೆಲ್ಲವನ್ನೂ
ಅರಿಯುವ ಜ್ಞಾತೃವು, ಅಂತಃಕರಣವಾದರೂ, ವಿಷಯಗಳಲ್ಲಿ
ಅನುವರ್ತಿಸುವುದಿಲ್ಲವಾದ್ದರಿಂದ, ಲೌಕಿಕಕ್ಕೆ ಕೇವಲ 'ಸಾಕ್ಷಿ' ಯಾಗಿರುತ್ತಾನೆ.
{{gap}}ಚಿತ್ರಭೆಯಲ್ಲಿ ಸಂಯಮವನ್ನು ಮಾಡುವುದರಿಂದ, ಇತರ ಯೋಗ
ಸಾಧನಗಳನ್ನು ಆಚರಿಸದಿದ್ದರೂ, ಚಿತ್ತವೃತ್ತಿಯನ್ನು ನಿರೋಧಿಸಿ, ಕೈವಲ್ಯ
ಪದವಿಯನ್ನು ಪಡೆಯಬಹುದು. ಕೇವಲ ಪ್ರತಿಭೆಯಿಂದ ಯೋಗದ ಫಲವನ್ನು
ಪಡೆಯಬಹುದಾದ್ದರಿಂದ, ಇಂತಹ ಪ್ರತಿಭೆಯನ್ನು ತಾರಕ - ಜ್ಞಾನ, ಎಂದರು.<noinclude></noinclude>
7ip29fiq8f2hptvepbzun6vqgopd8ch
ಪುಟ:ಮನಮಂಥನ.pdf/೪೪೭
104
62894
317700
314683
2026-05-06T15:55:27Z
Shreesha Sharma
7840
/* Proofread */
317700
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೨೯}}
ತಾರಕಯೋಗ, ರಾಜಯೋಗ, ಎಂದೂ ಈ ವಿಧಾನವನ್ನು ಹೆಸರಿಸಿದರು.
ಪ್ರತಿಭೆಯನ್ನು ಸಂಯಮದಿಂದ ಪಡೆಯುವುದು, ಗಾಯತ್ರೀ ಜಪದ
ಧೈಯ ಆದುದರಿಂದಲೇ ಆ ಜಪದಲ್ಲಿ ಧೀಯೋ ಯೋನಃ ಪ್ರಚೋದಯಾತ್'
ಎನ್ನುವರು.
ಸತ್-ಪೂರ್ಣ ಪ್ರತಿಭೆಯಿಂದ, ಪ್ರಸಿದ್ಧ ವಿಜ್ಞಾನಿಗಳು, ಮಾನವನ ಜ್ಞಾನ
ಭಂಡಾರವನ್ನು ಹಿರಿದಾಗಿಸಿದರು. ರಾಜಸ-ಪೂರ್ಣ ಪ್ರತಿಭೆಯಿಂದ, ಚಕ್ರವರ್ತಿಗಳು,
ರಾಜ ಮಹಾರಾಜರುಗಳು, ಜನನಾಯಕರೂ ಪ್ರಸಿದ್ಧರಾದರು ತಾಮಸಪೂರ್ಣ
ಪ್ರತಿಭೆಯಿಂದ, ಸಮಾಜವನ್ನೇ ಬೆದರಿಸಿ ಕೊಳ್ಳೆ ಹೊಡೆಯುವ ದರೋಡೆಕಾರರು;
ರಾಷ್ಟ್ರದ ಏಕಸ್ವಾಮ್ಯಾಭಿಲಾಷಿಗಳು, ಕುಪ್ರಸಿದ್ಧ ಕಳ್ಳರು, ಇಷ್ಟಾರ್ಥವನ್ನು ಕೆಲ
ಕಾಲ ಪಡೆದರು.
ಅಂದರೆ, ಒಳ್ಳೆಯದಕ್ಕೆ, ಸಮಾಜದ ಹಿತಕ್ಕೆ, ಮಾನವ ಸುಖಕ್ಕಾಗಿಯೇ
ಪ್ರತಿಭೆಯನ್ನು ಬಳಸಕೊಳ್ಳಬೇಕಾಗಿಲ್ಲ. ಸ್ವಾರ್ಥಕ್ಕೂ, ಪರಪೀಡನೆಗೂ, ಪ್ರತಿಭೆಯನ್ನು
ದುರುಪಯೋಗಪಡಿಸಿಕೊಳ್ಳಬಹುದು. ಯೋಗ ಸಾಧನೆಯ ಫಲಿತಾಂಶವನ್ನು
ಸತ್ ಪ್ರತಿಭೆಯಿಂದ, ಅದೊಂದೇ ಮಾರ್ಗದಿಂದ, ಪಡೆಯಬಹುದು. ಭೋಗ
ಸಾಧನೆಯ ಸುಖ-ದುಃಖ, ಫಲವನ್ನೂ ತಾಮಸ ಪ್ರತಿಭೆಯಿಂದ,
ಅನುಭವಿಸಲೂಬಹುದು.
Intuition ಎಂಬ ಪದವು ಇವೆಲ್ಲ ಪರಿಣಾಮಗಳನ್ನು ಸೂಚಿಸ
ಬಹುದಾದರೂ ವ್ಯಾವಹಾರಿಕವಾಗಿ, ಇಂದು, ಸತ್ವಗುಣ ಪ್ರಧಾನವಾದ ಪ್ರತಿಭೆ
ಎಂಬ ಅರ್ಥವನ್ನು ನೀಡುತ್ತದೆ.
ಸಂಯಮದಿಂದ ಫಲಿಸುವ ವಿಧ ವಿಧವಾದ ಸಿದ್ಧಿಗಳನ್ನು ಈ ತನಕ
ತಿಳಿಸಲಾಯಿತು. ಈಗ ಅಂತಹ ಸಿದ್ಧಿಗಳ ಗುಣ ದೋಷಗಳನ್ನು
ವಿವರಿಸಲಾಗುವುದು.
{{center|'''ತೇ ಸಮಾ ಉಪಸರ್ಗೌ ವೃತ್ತಾನೆ ಸಿದ್ಧಯಃ'''}}
ಈ ತನಕ ವಿವರಿಸಲ್ಪಟ್ಟ ಸಿದ್ಧಿಗಳು, ಸಮಾಧಿಯ ಅಭಿವೃದ್ಧಿಯಲ್ಲಿ ವಿಘ್ನಗಳು.
ಸಮಾಧಿ ಸ್ಥಿತಿಯು ಇಲ್ಲದಾಗ, ಫಲಗಳನ್ನು ತಾತ್ಕಾಲಿಕವಾಗಿ, ಲೌಕಿಕವಾಗಿ,
ನೀಡುತ್ತವೆ. ತಾತ್ಕಾಲಿಕವಾಗಿ ತುಸು ಸಮಾಧಾನ, ಮತ್ತು ಸಂತೋಷಗಳನ್ನೂ
ಉಂಟುಮಾಡುತ್ತವೆ.<noinclude></noinclude>
c6pq0q924t3k22b48igh77r2vr0v5j9
317710
317700
2026-05-06T16:11:07Z
Pragathi. BH
7585
/* Validated */
317710
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೨೯}}
ತಾರಕಯೋಗ, ರಾಜಯೋಗ, ಎಂದೂ ಈ ವಿಧಾನವನ್ನು ಹೆಸರಿಸಿದರು.<br />
{{gap}}ಪ್ರತಿಭೆಯನ್ನು ಸಂಯಮದಿಂದ ಪಡೆಯುವುದು, ಗಾಯತ್ರೀ ಜಪದ
ಧೈಯ ಆದುದರಿಂದಲೇ ಆ ಜಪದಲ್ಲಿ ಧೀಯೋ ಯೋನಃ ಪ್ರಚೋದಯಾತ್'
ಎನ್ನುವರು.
{{gap}}ಸತ್-ಪೂರ್ಣ ಪ್ರತಿಭೆಯಿಂದ, ಪ್ರಸಿದ್ಧ ವಿಜ್ಞಾನಿಗಳು, ಮಾನವನ ಜ್ಞಾನ
ಭಂಡಾರವನ್ನು ಹಿರಿದಾಗಿಸಿದರು. ರಾಜಸ-ಪೂರ್ಣ ಪ್ರತಿಭೆಯಿಂದ, ಚಕ್ರವರ್ತಿಗಳು,
ರಾಜ ಮಹಾರಾಜರುಗಳು, ಜನನಾಯಕರೂ ಪ್ರಸಿದ್ಧರಾದರು ತಾಮಸಪೂರ್ಣ
ಪ್ರತಿಭೆಯಿಂದ, ಸಮಾಜವನ್ನೇ ಬೆದರಿಸಿ ಕೊಳ್ಳೆ ಹೊಡೆಯುವ ದರೋಡೆಕಾರರು;
ರಾಷ್ಟ್ರದ ಏಕಸ್ವಾಮ್ಯಾಭಿಲಾಷಿಗಳು, ಕುಪ್ರಸಿದ್ಧ ಕಳ್ಳರು, ಇಷ್ಟಾರ್ಥವನ್ನು ಕೆಲ
ಕಾಲ ಪಡೆದರು.
{{gap}}ಅಂದರೆ, ಒಳ್ಳೆಯದಕ್ಕೆ, ಸಮಾಜದ ಹಿತಕ್ಕೆ, ಮಾನವ ಸುಖಕ್ಕಾಗಿಯೇ
ಪ್ರತಿಭೆಯನ್ನು ಬಳಸಕೊಳ್ಳಬೇಕಾಗಿಲ್ಲ. ಸ್ವಾರ್ಥಕ್ಕೂ, ಪರಪೀಡನೆಗೂ, ಪ್ರತಿಭೆಯನ್ನು
ದುರುಪಯೋಗಪಡಿಸಿಕೊಳ್ಳಬಹುದು. ಯೋಗ ಸಾಧನೆಯ ಫಲಿತಾಂಶವನ್ನು
ಸತ್ ಪ್ರತಿಭೆಯಿಂದ, ಅದೊಂದೇ ಮಾರ್ಗದಿಂದ, ಪಡೆಯಬಹುದು. ಭೋಗ
ಸಾಧನೆಯ ಸುಖ-ದುಃಖ, ಫಲವನ್ನೂ ತಾಮಸ ಪ್ರತಿಭೆಯಿಂದ,
ಅನುಭವಿಸಲೂಬಹುದು.
{{gap}}Intuition ಎಂಬ ಪದವು ಇವೆಲ್ಲ ಪರಿಣಾಮಗಳನ್ನು ಸೂಚಿಸ
ಬಹುದಾದರೂ ವ್ಯಾವಹಾರಿಕವಾಗಿ, ಇಂದು, ಸತ್ವಗುಣ ಪ್ರಧಾನವಾದ ಪ್ರತಿಭೆ
ಎಂಬ ಅರ್ಥವನ್ನು ನೀಡುತ್ತದೆ.
{{gap}}ಸಂಯಮದಿಂದ ಫಲಿಸುವ ವಿಧ ವಿಧವಾದ ಸಿದ್ಧಿಗಳನ್ನು ಈ ತನಕ
ತಿಳಿಸಲಾಯಿತು. ಈಗ ಅಂತಹ ಸಿದ್ಧಿಗಳ ಗುಣ ದೋಷಗಳನ್ನು
ವಿವರಿಸಲಾಗುವುದು.<br />
{{center|'''ತೇ ಸಮಾ ಉಪಸರ್ಗೌ ವೃತ್ತಾನೆ ಸಿದ್ಧಯಃ'''}}
{{gap}}ಈ ತನಕ ವಿವರಿಸಲ್ಪಟ್ಟ ಸಿದ್ಧಿಗಳು, ಸಮಾಧಿಯ ಅಭಿವೃದ್ಧಿಯಲ್ಲಿ ವಿಘ್ನಗಳು.
ಸಮಾಧಿ ಸ್ಥಿತಿಯು ಇಲ್ಲದಾಗ, ಫಲಗಳನ್ನು ತಾತ್ಕಾಲಿಕವಾಗಿ, ಲೌಕಿಕವಾಗಿ,
ನೀಡುತ್ತವೆ. ತಾತ್ಕಾಲಿಕವಾಗಿ ತುಸು ಸಮಾಧಾನ, ಮತ್ತು ಸಂತೋಷಗಳನ್ನೂ
ಉಂಟುಮಾಡುತ್ತವೆ.<noinclude></noinclude>
t16v4jpbtta0vqcb1dft1jrsoygnz0g
ಪುಟ:ಮನಮಂಥನ.pdf/೪೪೮
104
62895
317701
314682
2026-05-06T15:59:45Z
Shreesha Sharma
7840
/* Proofread */
317701
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೪೩೦|right=ಮನಮಂಥನ}}
ಎಚ್ಚರಿಕೆಯನ್ನು ಈ ರೀತಿ ಕೊಟ್ಟ ಮೇಲೆ, ಮಹರ್ಷಿಗಳು, ಮಾನವ
ಮನಸ್ಸಿನ ಅಂತರಾಳವನ್ನು ಸಾಕ್ಷಾತ್ ಕಂಡು, ಮಾನವ ಸ್ವಭಾವವನ್ನು ಅರಿತು
ಮುಂದೆ ನುಡಿಯುತ್ತಾರೆ.
{{center|'''ಬಂಧಕಾರಣ ಶೈಥಿಲ್ಯಾತ್ ಪ್ರಚಾರ ಸಂವೇದನಾಚ್ಯ, ಚಿತ್ತಸ್ಯಪರ ಶರೀರಾವೇಶ:'''}}
ಪರಕಾಯ ಪ್ರವೇಶ ಎನ್ನುವುದರ ವಿವರಣೆ, ಇದು.
ದೇಹದೊಡನೆ ಇರುವ ಬಂಧನವನ್ನು ಕಳೆದುಕೊಂಡಿರುವುದರಿಂದಲೂ,
ಹಾಗೂ ತನ್ನ ಮತ್ತು ಇತರರ ದೇಹಗಳ ಪ್ರಾಣ ನಾಡಿಗಳನ್ನು ಸ್ಪಷ್ಟವಾಗಿ
ಅರಿತಿರುವುದರಿಂದಲೂ, ಚಿತ್ತವು ಇತರ ದೇಹಗಳಲ್ಲಿ ಪ್ರವೇಶಿಸಲು ಸಾಧ್ಯ.
ಜೀವಂತ ದೇಹಗಳಲ್ಲಿಯಾದರೂ ಪ್ರವೇಶಿಸಬಹುದು, ನಿಧನವಾದ
ಕಳೇಬರಗಳಲ್ಲಿಯೂ ಪ್ರವೇಶಿಸಬಹುದು, ಹೀಗನ್ನುತ್ತದೆ ಸೂತ್ರ
ಪ್ರಾಣ ನಾಡಿಗಳೂ ಅಂದರೆ ಯಾವುವು? ವೈಜ್ಞಾನಿಕವಾಗಿ ತಿಳಿದಿಲ್ಲ
ಇಂದು. ಚಿತ್ತವಾಹನಾಡಿಯ ಮೂಲಕ ಚಿತ್ತವು ದೇಹದಿಂದ ಹೋಗಿ, ಇನ್ನು
ಯಾವುದಾದರೂ ದೇಹವನ್ನು ಪ್ರವೇಶಿಸಿ, ಸ್ವಲ್ಪಕಾಲ ಆ ದೇಹದ ಮೂಲಕ
ಇಚ್ಛಾನುವರ್ತಿಯಾಗುತ್ತದೆ. ಆನಂತರ ಸ್ವದೇಹಕ್ಕೆ ಹಿಂತಿರುತ್ತದೆಯಂತೆ.
ಚಿತ್ತವಾಹನಾಡಿಯ ಯಾವ ಸ್ವರೂಪದ್ದು? ಎಲ್ಲಿದೆ? ಯಾರಿಗೂ ಇಂದು
ವೈಜ್ಞಾನಿಕವಾಗಿ ತಿಳಿಯದು.
ಆನಂದದ ಕೇಂದ್ರಗಳು ಮತ್ತು ಅವುಗಳಿಂದ ಯಾವ ಯಾವ ಮಾರ್ಗಗಳಲ್ಲಿ
ಮನಸ್ಸಿನ ಯಾವ ಅಂಶಗಳು ಅಥವಾ ಶಕ್ತಿ ರೂಪಗಳು ಸರಿಯುತ್ತವೆ ಎಂಬುದು
ಮುಂದೆ ಕಂಡು ಹಿಡಿಯಲ್ಪಟ್ಟರೆ, ಆನಂತರ ಪರಕಾಯ ಪ್ರವೇಶವು
ಅರ್ಥವಾಗಬಹುದು.
{{center|'''ಉದಾನ ಜಯಾಜ್ ಜಲ ಪಂಕ ಕಂಟಕಾದಿಷ್ಟಸಂಗಂ ಉತ್ಕಾಂತಿಷ್ಟ'''}}
ಉದಾನ ವಾಯುವಿನಲ್ಲಿ ಸಂಯಮವನ್ನು ಮಾಡಿದರೆ, ನೀರು, ಕೆಸರು,
ಮುಳ್ಳುಗಳ ಮೇಲೆ ಸುಲಭವಾಗಿ ನಡೆಯಬಹುದಂತೆ.
{{center|''ಸಮಾನ ಜಯಾಡ್ ಪ್ರಜ್ವಲನ'''}}
ಸಮಾನ ವಾಯುವಿನಲ್ಲಿ ಸಂಯಮವನ್ನು ಮಾಡಿದರೆ ಮಹಾತೇಜಸ್ಸಿನಂತಹ
ಕಾಂತಿಯು ಉಂಟಾಗುವುದಂತೆ.
{{center|'''ಪ್ರೋತ್ರಾಕಾಶಯೋ ಸಂಬಂಧ ಸಂಯಮಾದ್ ದಿವ್ಯಂ ಸ್ತೋತ್ರಂ'''}}<noinclude></noinclude>
fz17afnalq33ilvc6hb4r4p2sygo6yf
317712
317701
2026-05-06T16:13:28Z
Pragathi. BH
7585
/* Validated */
317712
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೪೩೦|right=ಮನಮಂಥನ}}
{{gap}}ಎಚ್ಚರಿಕೆಯನ್ನು ಈ ರೀತಿ ಕೊಟ್ಟ ಮೇಲೆ, ಮಹರ್ಷಿಗಳು, ಮಾನವ
ಮನಸ್ಸಿನ ಅಂತರಾಳವನ್ನು ಸಾಕ್ಷಾತ್ ಕಂಡು, ಮಾನವ ಸ್ವಭಾವವನ್ನು ಅರಿತು
ಮುಂದೆ ನುಡಿಯುತ್ತಾರೆ.
{{center|'''ಬಂಧಕಾರಣ ಶೈಥಿಲ್ಯಾತ್ ಪ್ರಚಾರ ಸಂವೇದನಾಚ್ಯ, ಚಿತ್ತಸ್ಯಪರ ಶರೀರಾವೇಶ:'''}}<br />
{{gap}}ಪರಕಾಯ ಪ್ರವೇಶ ಎನ್ನುವುದರ ವಿವರಣೆ, ಇದು.<br />
{{gap}}ದೇಹದೊಡನೆ ಇರುವ ಬಂಧನವನ್ನು ಕಳೆದುಕೊಂಡಿರುವುದರಿಂದಲೂ,
ಹಾಗೂ ತನ್ನ ಮತ್ತು ಇತರರ ದೇಹಗಳ ಪ್ರಾಣ ನಾಡಿಗಳನ್ನು ಸ್ಪಷ್ಟವಾಗಿ
ಅರಿತಿರುವುದರಿಂದಲೂ, ಚಿತ್ತವು ಇತರ ದೇಹಗಳಲ್ಲಿ ಪ್ರವೇಶಿಸಲು ಸಾಧ್ಯ.
ಜೀವಂತ ದೇಹಗಳಲ್ಲಿಯಾದರೂ ಪ್ರವೇಶಿಸಬಹುದು, ನಿಧನವಾದ
ಕಳೇಬರಗಳಲ್ಲಿಯೂ ಪ್ರವೇಶಿಸಬಹುದು, ಹೀಗನ್ನುತ್ತದೆ ಸೂತ್ರ
{{gap}}ಪ್ರಾಣ ನಾಡಿಗಳೂ ಅಂದರೆ ಯಾವುವು? ವೈಜ್ಞಾನಿಕವಾಗಿ ತಿಳಿದಿಲ್ಲ
ಇಂದು. ಚಿತ್ತವಾಹನಾಡಿಯ ಮೂಲಕ ಚಿತ್ತವು ದೇಹದಿಂದ ಹೋಗಿ, ಇನ್ನು
ಯಾವುದಾದರೂ ದೇಹವನ್ನು ಪ್ರವೇಶಿಸಿ, ಸ್ವಲ್ಪಕಾಲ ಆ ದೇಹದ ಮೂಲಕ
ಇಚ್ಛಾನುವರ್ತಿಯಾಗುತ್ತದೆ. ಆನಂತರ ಸ್ವದೇಹಕ್ಕೆ ಹಿಂತಿರುತ್ತದೆಯಂತೆ.
ಚಿತ್ತವಾಹನಾಡಿಯ ಯಾವ ಸ್ವರೂಪದ್ದು? ಎಲ್ಲಿದೆ? ಯಾರಿಗೂ ಇಂದು
ವೈಜ್ಞಾನಿಕವಾಗಿ ತಿಳಿಯದು.
{{gap}}ಆನಂದದ ಕೇಂದ್ರಗಳು ಮತ್ತು ಅವುಗಳಿಂದ ಯಾವ ಯಾವ ಮಾರ್ಗಗಳಲ್ಲಿ
ಮನಸ್ಸಿನ ಯಾವ ಅಂಶಗಳು ಅಥವಾ ಶಕ್ತಿ ರೂಪಗಳು ಸರಿಯುತ್ತವೆ ಎಂಬುದು
ಮುಂದೆ ಕಂಡು ಹಿಡಿಯಲ್ಪಟ್ಟರೆ, ಆನಂತರ ಪರಕಾಯ ಪ್ರವೇಶವು
ಅರ್ಥವಾಗಬಹುದು.
{{center|'''ಉದಾನ ಜಯಾಜ್ ಜಲ ಪಂಕ ಕಂಟಕಾದಿಷ್ಟಸಂಗಂ ಉತ್ಕಾಂತಿಷ್ಟ'''}}
{{gap}}ಉದಾನ ವಾಯುವಿನಲ್ಲಿ ಸಂಯಮವನ್ನು ಮಾಡಿದರೆ, ನೀರು, ಕೆಸರು,
ಮುಳ್ಳುಗಳ ಮೇಲೆ ಸುಲಭವಾಗಿ ನಡೆಯಬಹುದಂತೆ.
{{center|''ಸಮಾನ ಜಯಾಡ್ ಪ್ರಜ್ವಲನ'''}}
{{gap}}ಸಮಾನ ವಾಯುವಿನಲ್ಲಿ ಸಂಯಮವನ್ನು ಮಾಡಿದರೆ ಮಹಾತೇಜಸ್ಸಿನಂತಹ
ಕಾಂತಿಯು ಉಂಟಾಗುವುದಂತೆ.
{{center|'''ಪ್ರೋತ್ರಾಕಾಶಯೋ ಸಂಬಂಧ ಸಂಯಮಾದ್ ದಿವ್ಯಂ ಸ್ತೋತ್ರಂ'''}}<noinclude></noinclude>
bhddmf6ms5utmjmquk3dmnxsde7zn5b
317722
317712
2026-05-06T16:15:46Z
Pragathi. BH
7585
317722
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೪೩೦|right=ಮನಮಂಥನ}}
{{gap}}ಎಚ್ಚರಿಕೆಯನ್ನು ಈ ರೀತಿ ಕೊಟ್ಟ ಮೇಲೆ, ಮಹರ್ಷಿಗಳು, ಮಾನವ
ಮನಸ್ಸಿನ ಅಂತರಾಳವನ್ನು ಸಾಕ್ಷಾತ್ ಕಂಡು, ಮಾನವ ಸ್ವಭಾವವನ್ನು ಅರಿತು
ಮುಂದೆ ನುಡಿಯುತ್ತಾರೆ.
{{center|'''ಬಂಧಕಾರಣ ಶೈಥಿಲ್ಯಾತ್ ಪ್ರಚಾರ ಸಂವೇದನಾಚ್ಯ, ಚಿತ್ತಸ್ಯಪರ ಶರೀರಾವೇಶ:'''}}<br />
{{gap}}ಪರಕಾಯ ಪ್ರವೇಶ ಎನ್ನುವುದರ ವಿವರಣೆ, ಇದು.<br />
{{gap}}ದೇಹದೊಡನೆ ಇರುವ ಬಂಧನವನ್ನು ಕಳೆದುಕೊಂಡಿರುವುದರಿಂದಲೂ,
ಹಾಗೂ ತನ್ನ ಮತ್ತು ಇತರರ ದೇಹಗಳ ಪ್ರಾಣ ನಾಡಿಗಳನ್ನು ಸ್ಪಷ್ಟವಾಗಿ
ಅರಿತಿರುವುದರಿಂದಲೂ, ಚಿತ್ತವು ಇತರ ದೇಹಗಳಲ್ಲಿ ಪ್ರವೇಶಿಸಲು ಸಾಧ್ಯ.
ಜೀವಂತ ದೇಹಗಳಲ್ಲಿಯಾದರೂ ಪ್ರವೇಶಿಸಬಹುದು, ನಿಧನವಾದ
ಕಳೇಬರಗಳಲ್ಲಿಯೂ ಪ್ರವೇಶಿಸಬಹುದು, ಹೀಗನ್ನುತ್ತದೆ ಸೂತ್ರ
{{gap}}ಪ್ರಾಣ ನಾಡಿಗಳೂ ಅಂದರೆ ಯಾವುವು? ವೈಜ್ಞಾನಿಕವಾಗಿ ತಿಳಿದಿಲ್ಲ
ಇಂದು. ಚಿತ್ತವಾಹನಾಡಿಯ ಮೂಲಕ ಚಿತ್ತವು ದೇಹದಿಂದ ಹೋಗಿ, ಇನ್ನು
ಯಾವುದಾದರೂ ದೇಹವನ್ನು ಪ್ರವೇಶಿಸಿ, ಸ್ವಲ್ಪಕಾಲ ಆ ದೇಹದ ಮೂಲಕ
ಇಚ್ಛಾನುವರ್ತಿಯಾಗುತ್ತದೆ. ಆನಂತರ ಸ್ವದೇಹಕ್ಕೆ ಹಿಂತಿರುತ್ತದೆಯಂತೆ.
ಚಿತ್ತವಾಹನಾಡಿಯ ಯಾವ ಸ್ವರೂಪದ್ದು? ಎಲ್ಲಿದೆ? ಯಾರಿಗೂ ಇಂದು
ವೈಜ್ಞಾನಿಕವಾಗಿ ತಿಳಿಯದು.
{{gap}}ಆನಂದದ ಕೇಂದ್ರಗಳು ಮತ್ತು ಅವುಗಳಿಂದ ಯಾವ ಯಾವ ಮಾರ್ಗಗಳಲ್ಲಿ
ಮನಸ್ಸಿನ ಯಾವ ಅಂಶಗಳು ಅಥವಾ ಶಕ್ತಿ ರೂಪಗಳು ಸರಿಯುತ್ತವೆ ಎಂಬುದು
ಮುಂದೆ ಕಂಡು ಹಿಡಿಯಲ್ಪಟ್ಟರೆ, ಆನಂತರ ಪರಕಾಯ ಪ್ರವೇಶವು
ಅರ್ಥವಾಗಬಹುದು.
{{center|'''ಉದಾನ ಜಯಾಜ್ ಜಲ ಪಂಕ ಕಂಟಕಾದಿಷ್ಟಸಂಗಂ ಉತ್ಕಾಂತಿಷ್ಟ'''}}
{{gap}}ಉದಾನ ವಾಯುವಿನಲ್ಲಿ ಸಂಯಮವನ್ನು ಮಾಡಿದರೆ, ನೀರು, ಕೆಸರು,
ಮುಳ್ಳುಗಳ ಮೇಲೆ ಸುಲಭವಾಗಿ ನಡೆಯಬಹುದಂತೆ.
{{center|''ಸಮಾನ ಜಯಾಡ್ ಪ್ರಜ್ವಲನ'''}}
{{gap}}ಸಮಾನ ವಾಯುವಿನಲ್ಲಿ ಸಂಯಮವನ್ನು ಮಾಡಿದರೆ ಮಹಾತೇಜಸ್ಸಿನಂತಹ
ಕಾಂತಿಯು ಉಂಟಾಗುವುದಂತೆ.
{{center|'''ಪ್ರೋತ್ರಾಕಾಶಯೋಃ ಸಂಬಂಧ ಸಂಯಮಾದ್ ದಿವ್ಯಂ ಶ್ರೋತ್ರಂ'''}}<noinclude></noinclude>
0mru9q5qoivdfmb2jcxs138gga1ib6v
317724
317722
2026-05-06T16:16:53Z
Pragathi. BH
7585
317724
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೪೩೦|right=ಮನಮಂಥನ}}
{{gap}}ಎಚ್ಚರಿಕೆಯನ್ನು ಈ ರೀತಿ ಕೊಟ್ಟ ಮೇಲೆ, ಮಹರ್ಷಿಗಳು, ಮಾನವ
ಮನಸ್ಸಿನ ಅಂತರಾಳವನ್ನು ಸಾಕ್ಷಾತ್ ಕಂಡು, ಮಾನವ ಸ್ವಭಾವವನ್ನು ಅರಿತು
ಮುಂದೆ ನುಡಿಯುತ್ತಾರೆ.
{{center|'''ಬಂಧಕಾರಣ ಶೈಥಿಲ್ಯಾತ್ ಪ್ರಚಾರ ಸಂವೇದನಾಚ್ಯ, ಚಿತ್ತಸ್ಯಪರ ಶರೀರಾವೇಶ:'''}}<br />
{{gap}}ಪರಕಾಯ ಪ್ರವೇಶ ಎನ್ನುವುದರ ವಿವರಣೆ, ಇದು.<br />
{{gap}}ದೇಹದೊಡನೆ ಇರುವ ಬಂಧನವನ್ನು ಕಳೆದುಕೊಂಡಿರುವುದರಿಂದಲೂ,
ಹಾಗೂ ತನ್ನ ಮತ್ತು ಇತರರ ದೇಹಗಳ ಪ್ರಾಣ ನಾಡಿಗಳನ್ನು ಸ್ಪಷ್ಟವಾಗಿ
ಅರಿತಿರುವುದರಿಂದಲೂ, ಚಿತ್ತವು ಇತರ ದೇಹಗಳಲ್ಲಿ ಪ್ರವೇಶಿಸಲು ಸಾಧ್ಯ.
ಜೀವಂತ ದೇಹಗಳಲ್ಲಿಯಾದರೂ ಪ್ರವೇಶಿಸಬಹುದು, ನಿಧನವಾದ
ಕಳೇಬರಗಳಲ್ಲಿಯೂ ಪ್ರವೇಶಿಸಬಹುದು, ಹೀಗನ್ನುತ್ತದೆ ಸೂತ್ರ
{{gap}}ಪ್ರಾಣ ನಾಡಿಗಳೂ ಅಂದರೆ ಯಾವುವು? ವೈಜ್ಞಾನಿಕವಾಗಿ ತಿಳಿದಿಲ್ಲ
ಇಂದು. ಚಿತ್ತವಾಹನಾಡಿಯ ಮೂಲಕ ಚಿತ್ತವು ದೇಹದಿಂದ ಹೋಗಿ, ಇನ್ನು
ಯಾವುದಾದರೂ ದೇಹವನ್ನು ಪ್ರವೇಶಿಸಿ, ಸ್ವಲ್ಪಕಾಲ ಆ ದೇಹದ ಮೂಲಕ
ಇಚ್ಛಾನುವರ್ತಿಯಾಗುತ್ತದೆ. ಆನಂತರ ಸ್ವದೇಹಕ್ಕೆ ಹಿಂತಿರುತ್ತದೆಯಂತೆ.
ಚಿತ್ತವಾಹನಾಡಿಯ ಯಾವ ಸ್ವರೂಪದ್ದು? ಎಲ್ಲಿದೆ? ಯಾರಿಗೂ ಇಂದು
ವೈಜ್ಞಾನಿಕವಾಗಿ ತಿಳಿಯದು.
{{gap}}ಆನಂದದ ಕೇಂದ್ರಗಳು ಮತ್ತು ಅವುಗಳಿಂದ ಯಾವ ಯಾವ ಮಾರ್ಗಗಳಲ್ಲಿ
ಮನಸ್ಸಿನ ಯಾವ ಅಂಶಗಳು ಅಥವಾ ಶಕ್ತಿ ರೂಪಗಳು ಸರಿಯುತ್ತವೆ ಎಂಬುದು
ಮುಂದೆ ಕಂಡು ಹಿಡಿಯಲ್ಪಟ್ಟರೆ, ಆನಂತರ ಪರಕಾಯ ಪ್ರವೇಶವು
ಅರ್ಥವಾಗಬಹುದು.
{{center|'''ಉದಾನ ಜಯಾಜ್ ಜಲ ಪಂಕ ಕಂಟಕಾದಿಷ್ಟಸಂಗಂ ಉತ್ಕ್ರಾಂತಿಷ್ಟ'''}}
{{gap}}ಉದಾನ ವಾಯುವಿನಲ್ಲಿ ಸಂಯಮವನ್ನು ಮಾಡಿದರೆ, ನೀರು, ಕೆಸರು,
ಮುಳ್ಳುಗಳ ಮೇಲೆ ಸುಲಭವಾಗಿ ನಡೆಯಬಹುದಂತೆ.
{{center|''ಸಮಾನ ಜಯಾಡ್ ಪ್ರಜ್ವಲನ'''}}
{{gap}}ಸಮಾನ ವಾಯುವಿನಲ್ಲಿ ಸಂಯಮವನ್ನು ಮಾಡಿದರೆ ಮಹಾತೇಜಸ್ಸಿನಂತಹ
ಕಾಂತಿಯು ಉಂಟಾಗುವುದಂತೆ.
{{center|'''ಪ್ರೋತ್ರಾಕಾಶಯೋಃ ಸಂಬಂಧ ಸಂಯಮಾದ್ ದಿವ್ಯಂ ಶ್ರೋತ್ರಂ'''}}<noinclude></noinclude>
k0570z8ekxakfmehxqky5sw1hezyqzj
ಪುಟ:ಮನಮಂಥನ.pdf/೪೪೯
104
62896
317702
314681
2026-05-06T16:03:07Z
Shreesha Sharma
7840
/* Proofread */
317702
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೧}}
ಶೋತೇಂದ್ರಿಯ ಮತ್ತು ಆಕಾಶ ಇವುಗಳ ಸಂಬಂಧದ ಮೇಲೆ
ಸಂಯಮವನ್ನು ಮಾಡಿದರೆ ಬಲು ದೂರದಲ್ಲಿ ಹುಟ್ಟಿದ ಶಬ್ದವೂ ಕೇಳಿಸುತ್ತದೆ.
{{center|'''ಕಾಯ ಆಕಾಶಯೋ ಸಂಬಂಧ ಸಂಯಮಾತ್ ಲಫಲ ಸಮಾಪಶ್ಚ'''}}
{{center|'''ಆಕಾಶಗಮನಂ'''}}
ದೇಹ ಮತ್ತು ಆಕಾಶ ಇವುಗಳ ಸಂಬಂಧವನ್ನುದ್ದೇಶಿಸಿ ಸಂಯಮವನ್ನು
ಮಾಡಿದರೆ ಶರೀರವು ಲಘುವಾಗಿ ಆಕಾಶ ಮಾರ್ಗದಲ್ಲಿ ಸಾಗಬಹುದು.
{{center|'''ಬಹಿರ್ ಅಕಲ್ಪಿತಾ ವೃತ್ತಿ ಮಹಾವಿದೇಹಾ ತತಃ ಪ್ರಕಾಶಾವರಣ ಕ್ಷಯ'''}}
ಪರಕಾಯ ಪ್ರವೇಶವನ್ನು ಮಾಡಲಿಚ್ಛಿಸದೆ, ಚಿತ್ತವು ಸಂಯಮದಿಂದ,
ದೇಹಾಹಂಕಾರವಿಲ್ಲದ 'ಮಹಾವಿದೇಹ' ಎನ್ನಲ್ಪಡುತ್ತದೆ.
ಈ ಐದೂ ಸಿದ್ಧಿಗಳು ಇಂದಿನ ಮನಃಶಾಸ್ತ್ರದ ರೀತಿಯಾಗಿ
ಅರ್ಥವಾಗುವುದಿಲ್ಲ. ಸುಂದರವಾಗಿ ಕಾಣುವ ಊಹೆಗಳಿಗೆ ಸಾಕಾದಷ್ಟು
ಅವಕಾಶಗಳಿವೆ. ಕಟ್ಟುಕತೆಗಳಾಗಬಹುದು, ಅಂತಹ ಊಹೆಗಳು. ಆದ ಕಾರಣ
ಮೂಡಿಬಂದ ಊಹೆಗಳನ್ನು ಇಲ್ಲಿ ಪ್ರಚರಿಸುವುದಿಲ್ಲ.
ಸಮಾಧಿಯನ್ನು ಸಾಧಿಸಲು ವಿವಿಧ ಮಾರ್ಗಗಳನ್ನು ಬೋಧಿಸುವ
ಮೊದಲು ಪಂಚಭೂತ ಜಯವನ್ನು ಸಾಧಿಸಬೇಕು.
{{center|'''ಸ್ಕೂಲ ಸ್ವರೂಪ ಸೂಕ್ಷ್ಮ ಅನ್ವಯಾರ್ಥವ ಸಂಯಮಾತ್ ಭೂತಜಯಃ'''}}
ಸ್ಕೂಲ, ಸ್ಥಿರ, ಸೂಕ್ಷ್ಮ, ಎಲ್ಲೆಲ್ಲೂ ಹರಡಿರುವ ಹಾಗೂ ಫಲದಾಯಕ
ಈ ಐದೂ ತೆರನ ಪಂಚಭೂತಗಳಲ್ಲಿ ಸಂಯಮವನ್ನು ಮಾಡುವುದರಿಂದ.
ಭೂತಗಳ ಮೇಲೆ ಪೂರ್ಣ ಹತೋಟಿಯನ್ನು ಪಡೆಯಬಹುದು.
ಪೃಥಿವಿ, ಅಪ್, ತೇಜಸ್, ವಾಯು, ಆಕಾಶಗಳು, ಪಂಚಭೂತಗಳು;
ಆ ಕಾಲದ ಭಾಷೆಯಲ್ಲಿ.
{{center|'''ತತೋ ಅಣಿಮಾದಿ ಪ್ರಾದುರ್ಭಾವಃ ಕಾಯ ಸಂಪದ್ಧರ್ಮಾನ್ ಅಭಿಗಾತತ್ವ'''}}
ಭೂತಜಯದಿಂದ ಅಣಿಮಾದಿ ಅಷ್ಟ ಸಿದ್ಧಿಗಳು; ರೂಪಲಾವಣ್ಯಾದಿ
ದೇಹ ಸಂಪತ್ತು ; ದೇಹರೂಪಾದಿಗಳು ಶಾಶ್ವತವೂ, ಲಭಿಸುತ್ತದೆ.
ಅಷ್ಟಸಿದ್ಧಿಗಳೆಂದರೆ :- ೧. ಅಣಿಮಾ, ಸೂಕ್ಷ್ಮವಾಗುವಿಕೆ. ೨. ಮಹಿಮ
ದೊಡ್ಡದಾಗುವಿಕೆ. ೩. ಗರಿಮ, ಬಹಳ ಭಾರವಾಗುವುದು. ೪. ಲಘಿಮ, ಅತಿ
ಹಗುರವಾಗುವುದು. ೫. ಪ್ರಾಪ್ತಿ, ಸೂರ್ಯ ಚಂದ್ರಾದಿಗಳನ್ನು ಅನಾಯಾಸವಾಗಿ
ಮುಟ್ಟುವಂತಹ ಶಕ್ತಿ. ೬. ಪ್ರಾಕಾಮ್ಯ, ನೆನಸಿದದು ಆಗುವುದು. ೭. ಈಶತ್ವ
ಮಹಿಮಾವಂತನಾಗುವುದು. ೮. ವಶಿತ್ವ ಚರಾಚರ ಪ್ರಪಂಚವನ್ನು<noinclude></noinclude>
lx8uo583st8qb9d3szua7httmoghqk0
317714
317702
2026-05-06T16:13:45Z
Pragathi. BH
7585
/* Validated */
317714
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೧}}
ಶೋತೇಂದ್ರಿಯ ಮತ್ತು ಆಕಾಶ ಇವುಗಳ ಸಂಬಂಧದ ಮೇಲೆ
ಸಂಯಮವನ್ನು ಮಾಡಿದರೆ ಬಲು ದೂರದಲ್ಲಿ ಹುಟ್ಟಿದ ಶಬ್ದವೂ ಕೇಳಿಸುತ್ತದೆ.
{{center|'''ಕಾಯ ಆಕಾಶಯೋ ಸಂಬಂಧ ಸಂಯಮಾತ್ ಲಫಲ ಸಮಾಪಶ್ಚ'''}}
{{center|'''ಆಕಾಶಗಮನಂ'''}}
ದೇಹ ಮತ್ತು ಆಕಾಶ ಇವುಗಳ ಸಂಬಂಧವನ್ನುದ್ದೇಶಿಸಿ ಸಂಯಮವನ್ನು
ಮಾಡಿದರೆ ಶರೀರವು ಲಘುವಾಗಿ ಆಕಾಶ ಮಾರ್ಗದಲ್ಲಿ ಸಾಗಬಹುದು.
{{center|'''ಬಹಿರ್ ಅಕಲ್ಪಿತಾ ವೃತ್ತಿ ಮಹಾವಿದೇಹಾ ತತಃ ಪ್ರಕಾಶಾವರಣ ಕ್ಷಯ'''}}
ಪರಕಾಯ ಪ್ರವೇಶವನ್ನು ಮಾಡಲಿಚ್ಛಿಸದೆ, ಚಿತ್ತವು ಸಂಯಮದಿಂದ,
ದೇಹಾಹಂಕಾರವಿಲ್ಲದ 'ಮಹಾವಿದೇಹ' ಎನ್ನಲ್ಪಡುತ್ತದೆ.
ಈ ಐದೂ ಸಿದ್ಧಿಗಳು ಇಂದಿನ ಮನಃಶಾಸ್ತ್ರದ ರೀತಿಯಾಗಿ
ಅರ್ಥವಾಗುವುದಿಲ್ಲ. ಸುಂದರವಾಗಿ ಕಾಣುವ ಊಹೆಗಳಿಗೆ ಸಾಕಾದಷ್ಟು
ಅವಕಾಶಗಳಿವೆ. ಕಟ್ಟುಕತೆಗಳಾಗಬಹುದು, ಅಂತಹ ಊಹೆಗಳು. ಆದ ಕಾರಣ
ಮೂಡಿಬಂದ ಊಹೆಗಳನ್ನು ಇಲ್ಲಿ ಪ್ರಚರಿಸುವುದಿಲ್ಲ.
ಸಮಾಧಿಯನ್ನು ಸಾಧಿಸಲು ವಿವಿಧ ಮಾರ್ಗಗಳನ್ನು ಬೋಧಿಸುವ
ಮೊದಲು ಪಂಚಭೂತ ಜಯವನ್ನು ಸಾಧಿಸಬೇಕು.
{{center|'''ಸ್ಕೂಲ ಸ್ವರೂಪ ಸೂಕ್ಷ್ಮ ಅನ್ವಯಾರ್ಥವ ಸಂಯಮಾತ್ ಭೂತಜಯಃ'''}}
ಸ್ಕೂಲ, ಸ್ಥಿರ, ಸೂಕ್ಷ್ಮ, ಎಲ್ಲೆಲ್ಲೂ ಹರಡಿರುವ ಹಾಗೂ ಫಲದಾಯಕ
ಈ ಐದೂ ತೆರನ ಪಂಚಭೂತಗಳಲ್ಲಿ ಸಂಯಮವನ್ನು ಮಾಡುವುದರಿಂದ.
ಭೂತಗಳ ಮೇಲೆ ಪೂರ್ಣ ಹತೋಟಿಯನ್ನು ಪಡೆಯಬಹುದು.
ಪೃಥಿವಿ, ಅಪ್, ತೇಜಸ್, ವಾಯು, ಆಕಾಶಗಳು, ಪಂಚಭೂತಗಳು;
ಆ ಕಾಲದ ಭಾಷೆಯಲ್ಲಿ.
{{center|'''ತತೋ ಅಣಿಮಾದಿ ಪ್ರಾದುರ್ಭಾವಃ ಕಾಯ ಸಂಪದ್ಧರ್ಮಾನ್ ಅಭಿಗಾತತ್ವ'''}}
ಭೂತಜಯದಿಂದ ಅಣಿಮಾದಿ ಅಷ್ಟ ಸಿದ್ಧಿಗಳು; ರೂಪಲಾವಣ್ಯಾದಿ
ದೇಹ ಸಂಪತ್ತು ; ದೇಹರೂಪಾದಿಗಳು ಶಾಶ್ವತವೂ, ಲಭಿಸುತ್ತದೆ.
ಅಷ್ಟಸಿದ್ಧಿಗಳೆಂದರೆ :- ೧. ಅಣಿಮಾ, ಸೂಕ್ಷ್ಮವಾಗುವಿಕೆ. ೨. ಮಹಿಮ
ದೊಡ್ಡದಾಗುವಿಕೆ. ೩. ಗರಿಮ, ಬಹಳ ಭಾರವಾಗುವುದು. ೪. ಲಘಿಮ, ಅತಿ
ಹಗುರವಾಗುವುದು. ೫. ಪ್ರಾಪ್ತಿ, ಸೂರ್ಯ ಚಂದ್ರಾದಿಗಳನ್ನು ಅನಾಯಾಸವಾಗಿ
ಮುಟ್ಟುವಂತಹ ಶಕ್ತಿ. ೬. ಪ್ರಾಕಾಮ್ಯ, ನೆನಸಿದದು ಆಗುವುದು. ೭. ಈಶತ್ವ
ಮಹಿಮಾವಂತನಾಗುವುದು. ೮. ವಶಿತ್ವ ಚರಾಚರ ಪ್ರಪಂಚವನ್ನು<noinclude></noinclude>
7i3xpaghyyngqt4jsuvl4vxnjmh7y6j
317730
317714
2026-05-06T16:20:11Z
Pragathi. BH
7585
317730
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೧}}
{{gap}}ಶೋತೇಂದ್ರಿಯ ಮತ್ತು ಆಕಾಶ ಇವುಗಳ ಸಂಬಂಧದ ಮೇಲೆ
ಸಂಯಮವನ್ನು ಮಾಡಿದರೆ ಬಲು ದೂರದಲ್ಲಿ ಹುಟ್ಟಿದ ಶಬ್ದವೂ ಕೇಳಿಸುತ್ತದೆ.
{{center|'''ಕಾಯ ಆಕಾಶಯೋಃ ಸಂಬಂಧ ಸಂಯಮಾತ್ ಲಘುತೂಲ ಸಮಾಪತ್ತೇಶ್ಚ'''}}
{{center|'''ಆಕಾಶಗಮನಂ'''}}
{{gap}}ದೇಹ ಮತ್ತು ಆಕಾಶ ಇವುಗಳ ಸಂಬಂಧವನ್ನುದ್ದೇಶಿಸಿ ಸಂಯಮವನ್ನು
ಮಾಡಿದರೆ ಶರೀರವು ಲಘುವಾಗಿ ಆಕಾಶ ಮಾರ್ಗದಲ್ಲಿ ಸಾಗಬಹುದು.
{{center|'''ಬಹಿರ್ ಅಕಲ್ಪಿತಾ ವೃತ್ತಿರ್ ಮಹಾವಿದೇಹಾ ತತಃ ಪ್ರಕಾಶಾವರಣ ಕ್ಷಯ'''}}
ಪರಕಾಯ ಪ್ರವೇಶವನ್ನು ಮಾಡಲಿಚ್ಛಿಸದೆ, ಚಿತ್ತವು ಸಂಯಮದಿಂದ,
ದೇಹಾಹಂಕಾರವಿಲ್ಲದ 'ಮಹಾವಿದೇಹ' ಎನ್ನಲ್ಪಡುತ್ತದೆ.
ಈ ಐದೂ ಸಿದ್ಧಿಗಳು ಇಂದಿನ ಮನಃಶಾಸ್ತ್ರದ ರೀತಿಯಾಗಿ
ಅರ್ಥವಾಗುವುದಿಲ್ಲ. ಸುಂದರವಾಗಿ ಕಾಣುವ ಊಹೆಗಳಿಗೆ ಸಾಕಾದಷ್ಟು
ಅವಕಾಶಗಳಿವೆ. ಕಟ್ಟುಕತೆಗಳಾಗಬಹುದು, ಅಂತಹ ಊಹೆಗಳು. ಆದ ಕಾರಣ
ಮೂಡಿಬಂದ ಊಹೆಗಳನ್ನು ಇಲ್ಲಿ ಪ್ರಚರಿಸುವುದಿಲ್ಲ.
ಸಮಾಧಿಯನ್ನು ಸಾಧಿಸಲು ವಿವಿಧ ಮಾರ್ಗಗಳನ್ನು ಬೋಧಿಸುವ
ಮೊದಲು ಪಂಚಭೂತ ಜಯವನ್ನು ಸಾಧಿಸಬೇಕು.
{{center|'''ಸ್ಕೂಲ ಸ್ವರೂಪ ಸೂಕ್ಷ್ಮ ಅನ್ವಯಾರ್ಥವ ಸಂಯಮಾತ್ ಭೂತಜಯಃ'''}}
ಸ್ಕೂಲ, ಸ್ಥಿರ, ಸೂಕ್ಷ್ಮ, ಎಲ್ಲೆಲ್ಲೂ ಹರಡಿರುವ ಹಾಗೂ ಫಲದಾಯಕ
ಈ ಐದೂ ತೆರನ ಪಂಚಭೂತಗಳಲ್ಲಿ ಸಂಯಮವನ್ನು ಮಾಡುವುದರಿಂದ.
ಭೂತಗಳ ಮೇಲೆ ಪೂರ್ಣ ಹತೋಟಿಯನ್ನು ಪಡೆಯಬಹುದು.
ಪೃಥಿವಿ, ಅಪ್, ತೇಜಸ್, ವಾಯು, ಆಕಾಶಗಳು, ಪಂಚಭೂತಗಳು;
ಆ ಕಾಲದ ಭಾಷೆಯಲ್ಲಿ.
{{center|'''ತತೋ ಅಣಿಮಾದಿ ಪ್ರಾದುರ್ಭಾವಃ ಕಾಯ ಸಂಪದ್ಧರ್ಮಾನ್ ಅಭಿಗಾತತ್ವ'''}}
ಭೂತಜಯದಿಂದ ಅಣಿಮಾದಿ ಅಷ್ಟ ಸಿದ್ಧಿಗಳು; ರೂಪಲಾವಣ್ಯಾದಿ
ದೇಹ ಸಂಪತ್ತು ; ದೇಹರೂಪಾದಿಗಳು ಶಾಶ್ವತವೂ, ಲಭಿಸುತ್ತದೆ.
ಅಷ್ಟಸಿದ್ಧಿಗಳೆಂದರೆ :- ೧. ಅಣಿಮಾ, ಸೂಕ್ಷ್ಮವಾಗುವಿಕೆ. ೨. ಮಹಿಮ
ದೊಡ್ಡದಾಗುವಿಕೆ. ೩. ಗರಿಮ, ಬಹಳ ಭಾರವಾಗುವುದು. ೪. ಲಘಿಮ, ಅತಿ
ಹಗುರವಾಗುವುದು. ೫. ಪ್ರಾಪ್ತಿ, ಸೂರ್ಯ ಚಂದ್ರಾದಿಗಳನ್ನು ಅನಾಯಾಸವಾಗಿ
ಮುಟ್ಟುವಂತಹ ಶಕ್ತಿ. ೬. ಪ್ರಾಕಾಮ್ಯ, ನೆನಸಿದದು ಆಗುವುದು. ೭. ಈಶತ್ವ
ಮಹಿಮಾವಂತನಾಗುವುದು. ೮. ವಶಿತ್ವ ಚರಾಚರ ಪ್ರಪಂಚವನ್ನು<noinclude></noinclude>
4be4tuxvzd9jj98k8hpavt8dfqnrh8y
317745
317730
2026-05-06T16:36:03Z
Pragathi. BH
7585
317745
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೧}}
{{gap}}ಶೋತೇಂದ್ರಿಯ ಮತ್ತು ಆಕಾಶ ಇವುಗಳ ಸಂಬಂಧದ ಮೇಲೆ
ಸಂಯಮವನ್ನು ಮಾಡಿದರೆ ಬಲು ದೂರದಲ್ಲಿ ಹುಟ್ಟಿದ ಶಬ್ದವೂ ಕೇಳಿಸುತ್ತದೆ.
{{center|'''ಕಾಯ ಆಕಾಶಯೋಃ ಸಂಬಂಧ ಸಂಯಮಾತ್ ಲಘುತೂಲ ಸಮಾಪತ್ತೇಶ್ಚ'''}}
{{center|'''ಆಕಾಶಗಮನಂ'''}}
{{gap}}ದೇಹ ಮತ್ತು ಆಕಾಶ ಇವುಗಳ ಸಂಬಂಧವನ್ನುದ್ದೇಶಿಸಿ ಸಂಯಮವನ್ನು
ಮಾಡಿದರೆ ಶರೀರವು ಲಘುವಾಗಿ ಆಕಾಶ ಮಾರ್ಗದಲ್ಲಿ ಸಾಗಬಹುದು.
{{center|'''ಬಹಿರ್ ಅಕಲ್ಪಿತಾ ವೃತ್ತಿರ್ ಮಹಾವಿದೇಹಾ ತತಃ ಪ್ರಕಾಶಾವರಣ ಕ್ಷಯ'''}}
{{gap}}ಪರಕಾಯ ಪ್ರವೇಶವನ್ನು ಮಾಡಲಿಚ್ಛಿಸದೆ, ಚಿತ್ತವು ಸಂಯಮದಿಂದ,
ದೇಹಾಹಂಕಾರವಿಲ್ಲದ 'ಮಹಾವಿದೇಹ' ಎನ್ನಲ್ಪಡುತ್ತದೆ.
{{gap}}ಈ ಐದೂ ಸಿದ್ಧಿಗಳು ಇಂದಿನ ಮನಃಶಾಸ್ತ್ರದ ರೀತಿಯಾಗಿ
ಅರ್ಥವಾಗುವುದಿಲ್ಲ. ಸುಂದರವಾಗಿ ಕಾಣುವ ಊಹೆಗಳಿಗೆ ಸಾಕಾದಷ್ಟು
ಅವಕಾಶಗಳಿವೆ. ಕಟ್ಟುಕತೆಗಳಾಗಬಹುದು, ಅಂತಹ ಊಹೆಗಳು. ಆದ ಕಾರಣ
ಮೂಡಿಬಂದ ಊಹೆಗಳನ್ನು ಇಲ್ಲಿ ಪ್ರಚರಿಸುವುದಿಲ್ಲ.
{{gap}}ಸಮಾಧಿಯನ್ನು ಸಾಧಿಸಲು ವಿವಿಧ ಮಾರ್ಗಗಳನ್ನು ಬೋಧಿಸುವ
ಮೊದಲು ಪಂಚಭೂತ ಜಯವನ್ನು ಸಾಧಿಸಬೇಕು.
{{center|'''ಸ್ಕೂಲ ಸ್ವರೂಪ ಸೂಕ್ಷ್ಮ ಅನ್ವಯಾರ್ಥವತ್ವ ಸಂಯಮಾತ್ ಭೂತಜಯಃ'''}}
{{gap}}ಸ್ಕೂಲ, ಸ್ಥಿರ, ಸೂಕ್ಷ್ಮ, ಎಲ್ಲೆಲ್ಲೂ ಹರಡಿರುವ ಹಾಗೂ ಫಲದಾಯಕ
ಈ ಐದೂ ತೆರನ ಪಂಚಭೂತಗಳಲ್ಲಿ ಸಂಯಮವನ್ನು ಮಾಡುವುದರಿಂದ.
ಭೂತಗಳ ಮೇಲೆ ಪೂರ್ಣ ಹತೋಟಿಯನ್ನು ಪಡೆಯಬಹುದು.
ಪೃಥಿವಿ, ಅಪ್, ತೇಜಸ್, ವಾಯು, ಆಕಾಶಗಳು, ಪಂಚಭೂತಗಳು;
ಆ ಕಾಲದ ಭಾಷೆಯಲ್ಲಿ.
{{center|'''ತತೋ ಅಣಿಮಾದಿ ಪ್ರಾದುರ್ಭಾವಃ ಕಾಯ ಸಂಪದ್ಧರ್ಮಾನ್ ಅಭಿಗಾತತ್ವ'''}}
ಭೂತಜಯದಿಂದ ಅಣಿಮಾದಿ ಅಷ್ಟ ಸಿದ್ಧಿಗಳು; ರೂಪಲಾವಣ್ಯಾದಿ
ದೇಹ ಸಂಪತ್ತು ; ದೇಹರೂಪಾದಿಗಳು ಶಾಶ್ವತವೂ, ಲಭಿಸುತ್ತದೆ.
{{gap}}ಅಷ್ಟಸಿದ್ಧಿಗಳೆಂದರೆ :- ೧. ಅಣಿಮಾ, ಸೂಕ್ಷ್ಮವಾಗುವಿಕೆ. ೨. ಮಹಿಮ
ದೊಡ್ಡದಾಗುವಿಕೆ. ೩. ಗರಿಮ, ಬಹಳ ಭಾರವಾಗುವುದು. ೪. ಲಘಿಮ, ಅತಿ
ಹಗುರವಾಗುವುದು. ೫. ಪ್ರಾಪ್ತಿ, ಸೂರ್ಯ ಚಂದ್ರಾದಿಗಳನ್ನು ಅನಾಯಾಸವಾಗಿ
ಮುಟ್ಟುವಂತಹ ಶಕ್ತಿ. ೬. ಪ್ರಾಕಾಮ್ಯ, ನೆನಸಿದದು ಆಗುವುದು. ೭. ಈಶತ್ವ
ಮಹಿಮಾವಂತನಾಗುವುದು. ೮. ವಶಿತ್ವ ಚರಾಚರ ಪ್ರಪಂಚವನ್ನು<noinclude></noinclude>
7e9b00vqo9qxzc5820h5ny3u2cbw00r
ಪುಟ:ಮನಮಂಥನ.pdf/೪೫೦
104
62897
317703
314680
2026-05-06T16:04:39Z
Shreesha Sharma
7840
/* Proofread */
317703
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೪೩೨|right=ಮನಮಂಥನ}}
ವಶಪಡಿಸಿಕೊಳ್ಳುವುದು.
ಪಂಚಭೂತಗಳಿಂದ ಬ್ರಹ್ಮಾಂಡವು ರಚಿತವಾಗಿದೆ. ಪಂಚಭೂತಗಳಿಂದಲೇ
ನಮ್ಮ ದೇಹವೂ ರಚಿತವಾಗಿದೆ. ಮೂಲಭೂತಗಳಾದ ಇವುಗಳ ಮೇಲೆ
'ಸಂಯಮ'ವನ್ನು ಮಾಡಿದರೆ, ಅವುಗಳ ರಚನೆಯನ್ನು ವ್ಯತ್ಯಾಸ ಮಾಡಬಹುದು,
ಮೇಲೆ ಹೇಳಿದ ಎಂಟು ತೆರನಾಗಿ, ಇದು ಋಷಿಗಳಂದುದು.
ಪಂಚಭೂತಗಳಿಂದ ಪ್ರಪಂಚವು, ಅಥವಾ ನಾವು ಸೃಷ್ಟಿಸಲ್ಪಟ್ಟಿರುವುದು,
ಎನ್ನುವುದು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಇಂದು ಸಾಧ್ಯವಿಲ್ಲ. ಅಂದಮೇಲೆ
ಅಷ್ಟ ಸಿದ್ಧಿಗಳೂ ಅರ್ಥವಾಗುವುದಿಲ್ಲ.
ಆದರೂ ಹೀಗನ್ನಿಸುತ್ತದೆ :-ಸಂಯಮವನ್ನು ಸಾಧಿಸಿದ ಮನಸ್ಸು ಅಥವಾ
ಚಿತ್ತವು, ಮನಸ್ಸೆಂಬ ಶಕ್ತಿಯನ್ನು ಅತ್ಯಮೋಘವಾಗಿ ಅಪರಿಮಿತವಾಗಿ
ಹೊರಹೊಮ್ಮಿಸುತ್ತದೆ. ಅಣುವನ್ನು ಸಿಡಿಸಿದರೆ ಅದ್ಭುತವಾದ ಶಕ್ತಿಯು
ಉತ್ಪನ್ನವಾಗುವಂತೆ. ಅಂತಹ ಶಕ್ತಿ ಬಣದ ಮೇಲೆ ಹತೋಟಿಯನ್ನು ಮನಸ್ಸಿನದೇ
ಆದ, ಆದರೂ ಆ ಸ್ಥಿತಿಯಲ್ಲಿ ಹೊರತಾಗಿರುವ, ಹಿರಿಯ ಅಂಶವು ಹೊಂದಿರಲು
ಸಾಧ್ಯ. ಅಂತಹ ಹತೋಟಿಯಿಂದ, ಅಲೌಕಿಕವಾದ ಅತ್ಯದ್ಭುತ ಶಕ್ತಿಯಿಂದ,
ದೇಹವನ್ನು ಹೇಗೆಂದರೆ ಹಾಗೆ ಕುಣಿಸಬಹುದು. ಅಣಿಮ, ಮಹಿಮ, ಗರಿಮ,
ಲಘಿಮ, ಪ್ರಾಪ್ತಿ ಈ ಐದೂ ದೇಹಕ್ಕೆ ಪ್ರಾಯಶಃ ಅನ್ವಯಿಸುತ್ತದೆ. ಮಿಕ್ಕ ಮೂರೂ
ಮನಸ್ಸಿನ ಆ ಸ್ಥಿತಿಯಲ್ಲಿ ಪಡೆದ ಹತೋಟಿಗೆ ಒಳಪಡುತ್ತವೆ. ಹೀಗೆ ವಿಶ್ಲೇಷಿಸಿದರೆ,
ಅಣಿಮಾದಿ ಸಿದ್ಧಿಗಳನ್ನು ಅರ್ಥಮಾಡಿಕೊಳ್ಳಬಹುದು. ವೈಜ್ಞಾನಿಕವಾಗಿ
ಒಪ್ಪಲೂಬಹುದು.
ಸಾಮಾನ್ಯ ಜೀವನದಲ್ಲಿ ಪ್ರತ್ಯಕ್ಷವಾಗಿ ಕಾಣುವ ಕೆಲವು ನಿದರ್ಶನಗಳನ್ನು
ವಿಶ್ಲೇಷಿಸುವ.
ಅಣಿಮ : ಮನಸ್ಸು ಅತ್ಯಂತ ಖುಷಿಯಿಂದಿರುವಾಗ, ತೌರಿಗೆ ಮೊದಲಬಾರಿ
ಹೋಗುವ ಹೆಣ್ಣು ಮಗಳಂತೆ, ದೇಹವು ಹೂ ಹಗುರವಾದಂತಿರುತ್ತದೆ.
ನಡಿಗೆಯು ಝಿಗಿ ಝಿಗಿ ಎಂಬಂತಿರುತ್ತದೆ. ಆಗ ಈ ಜನ್ಮದಲ್ಲಿನ ವ್ಯಕ್ತಿಯು,
ಹುಟ್ಟು ತೌರಿಗೆ ಹೋಗುವಂತೆಯೇ ಸಂಭ್ರಮ ಪಡಬೇಕು, ಹಗುರ
ನಡಿಗೆಯಿಂದ ಝಗಿ ಝಗಿ ನಡೆಯಬೇಕು. ದೇಹದಿಂದ ಸಂಬಂಧವನ್ನು
ಇಂತಹ ಪರಿಸ್ಥಿತಿಯಲ್ಲಿರುವ ಮನಸ್ಸು ಹೂ ಹಗುರಾಗಿ ನಡೆಸುತ್ತದೆ ಎನ್ನಲು
ಅಡ್ಡಿಯಿಲ್ಲ.
ಮಹಿಮ :-ಅಣಿಮ ಸಿದ್ಧಿಯನ್ನು ಸಾಧಿಸಿದ ಅಪಾರ ಶಕ್ತಿಯು ಮಹಿಮವನ್ನು<noinclude></noinclude>
cn6plpwzp5vpufkb2c3g6moe91ufzbg
317716
317703
2026-05-06T16:14:02Z
Pragathi. BH
7585
/* Validated */
317716
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೪೩೨|right=ಮನಮಂಥನ}}
ವಶಪಡಿಸಿಕೊಳ್ಳುವುದು.
ಪಂಚಭೂತಗಳಿಂದ ಬ್ರಹ್ಮಾಂಡವು ರಚಿತವಾಗಿದೆ. ಪಂಚಭೂತಗಳಿಂದಲೇ
ನಮ್ಮ ದೇಹವೂ ರಚಿತವಾಗಿದೆ. ಮೂಲಭೂತಗಳಾದ ಇವುಗಳ ಮೇಲೆ
'ಸಂಯಮ'ವನ್ನು ಮಾಡಿದರೆ, ಅವುಗಳ ರಚನೆಯನ್ನು ವ್ಯತ್ಯಾಸ ಮಾಡಬಹುದು,
ಮೇಲೆ ಹೇಳಿದ ಎಂಟು ತೆರನಾಗಿ, ಇದು ಋಷಿಗಳಂದುದು.
ಪಂಚಭೂತಗಳಿಂದ ಪ್ರಪಂಚವು, ಅಥವಾ ನಾವು ಸೃಷ್ಟಿಸಲ್ಪಟ್ಟಿರುವುದು,
ಎನ್ನುವುದು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಇಂದು ಸಾಧ್ಯವಿಲ್ಲ. ಅಂದಮೇಲೆ
ಅಷ್ಟ ಸಿದ್ಧಿಗಳೂ ಅರ್ಥವಾಗುವುದಿಲ್ಲ.
ಆದರೂ ಹೀಗನ್ನಿಸುತ್ತದೆ :-ಸಂಯಮವನ್ನು ಸಾಧಿಸಿದ ಮನಸ್ಸು ಅಥವಾ
ಚಿತ್ತವು, ಮನಸ್ಸೆಂಬ ಶಕ್ತಿಯನ್ನು ಅತ್ಯಮೋಘವಾಗಿ ಅಪರಿಮಿತವಾಗಿ
ಹೊರಹೊಮ್ಮಿಸುತ್ತದೆ. ಅಣುವನ್ನು ಸಿಡಿಸಿದರೆ ಅದ್ಭುತವಾದ ಶಕ್ತಿಯು
ಉತ್ಪನ್ನವಾಗುವಂತೆ. ಅಂತಹ ಶಕ್ತಿ ಬಣದ ಮೇಲೆ ಹತೋಟಿಯನ್ನು ಮನಸ್ಸಿನದೇ
ಆದ, ಆದರೂ ಆ ಸ್ಥಿತಿಯಲ್ಲಿ ಹೊರತಾಗಿರುವ, ಹಿರಿಯ ಅಂಶವು ಹೊಂದಿರಲು
ಸಾಧ್ಯ. ಅಂತಹ ಹತೋಟಿಯಿಂದ, ಅಲೌಕಿಕವಾದ ಅತ್ಯದ್ಭುತ ಶಕ್ತಿಯಿಂದ,
ದೇಹವನ್ನು ಹೇಗೆಂದರೆ ಹಾಗೆ ಕುಣಿಸಬಹುದು. ಅಣಿಮ, ಮಹಿಮ, ಗರಿಮ,
ಲಘಿಮ, ಪ್ರಾಪ್ತಿ ಈ ಐದೂ ದೇಹಕ್ಕೆ ಪ್ರಾಯಶಃ ಅನ್ವಯಿಸುತ್ತದೆ. ಮಿಕ್ಕ ಮೂರೂ
ಮನಸ್ಸಿನ ಆ ಸ್ಥಿತಿಯಲ್ಲಿ ಪಡೆದ ಹತೋಟಿಗೆ ಒಳಪಡುತ್ತವೆ. ಹೀಗೆ ವಿಶ್ಲೇಷಿಸಿದರೆ,
ಅಣಿಮಾದಿ ಸಿದ್ಧಿಗಳನ್ನು ಅರ್ಥಮಾಡಿಕೊಳ್ಳಬಹುದು. ವೈಜ್ಞಾನಿಕವಾಗಿ
ಒಪ್ಪಲೂಬಹುದು.
ಸಾಮಾನ್ಯ ಜೀವನದಲ್ಲಿ ಪ್ರತ್ಯಕ್ಷವಾಗಿ ಕಾಣುವ ಕೆಲವು ನಿದರ್ಶನಗಳನ್ನು
ವಿಶ್ಲೇಷಿಸುವ.
ಅಣಿಮ : ಮನಸ್ಸು ಅತ್ಯಂತ ಖುಷಿಯಿಂದಿರುವಾಗ, ತೌರಿಗೆ ಮೊದಲಬಾರಿ
ಹೋಗುವ ಹೆಣ್ಣು ಮಗಳಂತೆ, ದೇಹವು ಹೂ ಹಗುರವಾದಂತಿರುತ್ತದೆ.
ನಡಿಗೆಯು ಝಿಗಿ ಝಿಗಿ ಎಂಬಂತಿರುತ್ತದೆ. ಆಗ ಈ ಜನ್ಮದಲ್ಲಿನ ವ್ಯಕ್ತಿಯು,
ಹುಟ್ಟು ತೌರಿಗೆ ಹೋಗುವಂತೆಯೇ ಸಂಭ್ರಮ ಪಡಬೇಕು, ಹಗುರ
ನಡಿಗೆಯಿಂದ ಝಗಿ ಝಗಿ ನಡೆಯಬೇಕು. ದೇಹದಿಂದ ಸಂಬಂಧವನ್ನು
ಇಂತಹ ಪರಿಸ್ಥಿತಿಯಲ್ಲಿರುವ ಮನಸ್ಸು ಹೂ ಹಗುರಾಗಿ ನಡೆಸುತ್ತದೆ ಎನ್ನಲು
ಅಡ್ಡಿಯಿಲ್ಲ.
ಮಹಿಮ :-ಅಣಿಮ ಸಿದ್ಧಿಯನ್ನು ಸಾಧಿಸಿದ ಅಪಾರ ಶಕ್ತಿಯು ಮಹಿಮವನ್ನು<noinclude></noinclude>
sf9vtbdniy56wjb1256hqp9dtdxpuoz
317750
317716
2026-05-06T16:38:08Z
Pragathi. BH
7585
317750
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೪೩೨|right=ಮನಮಂಥನ}}
ವಶಪಡಿಸಿಕೊಳ್ಳುವುದು.
{{gap}}ಪಂಚಭೂತಗಳಿಂದ ಬ್ರಹ್ಮಾಂಡವು ರಚಿತವಾಗಿದೆ. ಪಂಚಭೂತಗಳಿಂದಲೇ
ನಮ್ಮ ದೇಹವೂ ರಚಿತವಾಗಿದೆ. ಮೂಲಭೂತಗಳಾದ ಇವುಗಳ ಮೇಲೆ
'ಸಂಯಮ'ವನ್ನು ಮಾಡಿದರೆ, ಅವುಗಳ ರಚನೆಯನ್ನು ವ್ಯತ್ಯಾಸ ಮಾಡಬಹುದು,
ಮೇಲೆ ಹೇಳಿದ ಎಂಟು ತೆರನಾಗಿ, ಇದು ಋಷಿಗಳಂದುದು.
{{gap}}ಪಂಚಭೂತಗಳಿಂದ ಪ್ರಪಂಚವು, ಅಥವಾ ನಾವು ಸೃಷ್ಟಿಸಲ್ಪಟ್ಟಿರುವುದು,
ಎನ್ನುವುದು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಇಂದು ಸಾಧ್ಯವಿಲ್ಲ. ಅಂದಮೇಲೆ
ಅಷ್ಟ ಸಿದ್ಧಿಗಳೂ ಅರ್ಥವಾಗುವುದಿಲ್ಲ.
{{gap}}ಆದರೂ ಹೀಗನ್ನಿಸುತ್ತದೆ :-ಸಂಯಮವನ್ನು ಸಾಧಿಸಿದ ಮನಸ್ಸು ಅಥವಾ
ಚಿತ್ತವು, ಮನಸ್ಸೆಂಬ ಶಕ್ತಿಯನ್ನು ಅತ್ಯಮೋಘವಾಗಿ ಅಪರಿಮಿತವಾಗಿ
ಹೊರಹೊಮ್ಮಿಸುತ್ತದೆ. ಅಣುವನ್ನು ಸಿಡಿಸಿದರೆ ಅದ್ಭುತವಾದ ಶಕ್ತಿಯು
ಉತ್ಪನ್ನವಾಗುವಂತೆ. ಅಂತಹ ಶಕ್ತಿ ಬಣದ ಮೇಲೆ ಹತೋಟಿಯನ್ನು ಮನಸ್ಸಿನದೇ
ಆದ, ಆದರೂ ಆ ಸ್ಥಿತಿಯಲ್ಲಿ ಹೊರತಾಗಿರುವ, ಹಿರಿಯ ಅಂಶವು ಹೊಂದಿರಲು
ಸಾಧ್ಯ. ಅಂತಹ ಹತೋಟಿಯಿಂದ, ಅಲೌಕಿಕವಾದ ಅತ್ಯದ್ಭುತ ಶಕ್ತಿಯಿಂದ,
ದೇಹವನ್ನು ಹೇಗೆಂದರೆ ಹಾಗೆ ಕುಣಿಸಬಹುದು. ಅಣಿಮ, ಮಹಿಮ, ಗರಿಮ,
ಲಘಿಮ, ಪ್ರಾಪ್ತಿ ಈ ಐದೂ ದೇಹಕ್ಕೆ ಪ್ರಾಯಶಃ ಅನ್ವಯಿಸುತ್ತದೆ. ಮಿಕ್ಕ ಮೂರೂ
ಮನಸ್ಸಿನ ಆ ಸ್ಥಿತಿಯಲ್ಲಿ ಪಡೆದ ಹತೋಟಿಗೆ ಒಳಪಡುತ್ತವೆ. ಹೀಗೆ ವಿಶ್ಲೇಷಿಸಿದರೆ,
ಅಣಿಮಾದಿ ಸಿದ್ಧಿಗಳನ್ನು ಅರ್ಥಮಾಡಿಕೊಳ್ಳಬಹುದು. ವೈಜ್ಞಾನಿಕವಾಗಿ
ಒಪ್ಪಲೂಬಹುದು.
{{gap}}ಸಾಮಾನ್ಯ ಜೀವನದಲ್ಲಿ ಪ್ರತ್ಯಕ್ಷವಾಗಿ ಕಾಣುವ ಕೆಲವು ನಿದರ್ಶನಗಳನ್ನು
ವಿಶ್ಲೇಷಿಸುವ.
{{gap}}ಅಣಿಮ : ಮನಸ್ಸು ಅತ್ಯಂತ ಖುಷಿಯಿಂದಿರುವಾಗ, ತೌರಿಗೆ ಮೊದಲಬಾರಿ
ಹೋಗುವ ಹೆಣ್ಣು ಮಗಳಂತೆ, ದೇಹವು ಹೂ ಹಗುರವಾದಂತಿರುತ್ತದೆ.
ನಡಿಗೆಯು ಝಿಗಿ ಝಿಗಿ ಎಂಬಂತಿರುತ್ತದೆ. ಆಗ ಈ ಜನ್ಮದಲ್ಲಿನ ವ್ಯಕ್ತಿಯು,
ಹುಟ್ಟು ತೌರಿಗೆ ಹೋಗುವಂತೆಯೇ ಸಂಭ್ರಮ ಪಡಬೇಕು, ಹಗುರ
ನಡಿಗೆಯಿಂದ ಝಗಿ ಝಗಿ ನಡೆಯಬೇಕು. ದೇಹದಿಂದ ಸಂಬಂಧವನ್ನು
ಇಂತಹ ಪರಿಸ್ಥಿತಿಯಲ್ಲಿರುವ ಮನಸ್ಸು ಹೂ ಹಗುರಾಗಿ ನಡೆಸುತ್ತದೆ ಎನ್ನಲು
ಅಡ್ಡಿಯಿಲ್ಲ.
{{gap}}ಮಹಿಮ :-ಅಣಿಮ ಸಿದ್ಧಿಯನ್ನು ಸಾಧಿಸಿದ ಅಪಾರ ಶಕ್ತಿಯು ಮಹಿಮವನ್ನು<noinclude></noinclude>
lsd1z4w1u3yc33d2j1ixb366xa4dpix
ಪುಟ:ಮನಮಂಥನ.pdf/೪೫೧
104
62898
317704
314679
2026-05-06T16:05:24Z
Shreesha Sharma
7840
/* Proofread */
317704
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೩}}
ಇಚ್ಛಿಸಿದಾಗ ಸಾಧಿಸಬಹುದು. ಇದನ್ನೂ ಒಪ್ಪಬೇಕು. ಅಥವಾ ಒಪ್ಪಬಹುದು.
ಮಹಾತ್ಮರು, ಯೇಸು, ಪ್ರವಾದಿ ಮಹಮದ್ ಇತಹವರು ತಮ್ಮ ಪ್ರಭಾವವನ್ನು
ಅತ್ಯಂತ ವಿಶಾಲವಾಗಿ ಬೀರಿದರು. ಇದೂ ಮಹಿಮೆಯ ಸಣ್ಣ ನಿದರ್ಶನ. 'ಸಣ್ಣ'
ಎನ್ನುವುದು ಅಲೌಕಿಕ ದೃಷ್ಟಿಯಿಂದ, ಲೌಕಿಕ ದೃಷ್ಟಿಯಿಂದ ಇಂತಹ ಮಹಿಮಾ
ಪ್ರಭಾವವು, ಬಲು ದೊಡ್ಡದು.
ಗರಿಮ ಅತ್ಯಂತ ಭಾರವಾಗುವಿಕೆ. ಕೊಲ್ಲುವ ಶತ್ರುವಿಗೂ ಬರಬಾರದಂತಹ
ಅತೀವ ದುಃಖವು ವ್ಯಕ್ತಿಗೆ ಬಡಿದಾಗ, ಅವ ನಡೆಯಲೂ ಆರ. ಅವನ ದೇಹವು
ಅವನಿಗೆ ಅಷ್ಟು ಭಾರವಾಗಿರುತ್ತದೆ. ಲೌಕಿಕ ಅನುಭವವು ಹೀಗಾದಲ್ಲಿ ; ಅಲೌಕಿಕ
ಅನುಭವವು 'ಗರಿಮ'ವನ್ನು ಸಾಧಿಸುವುದು ಸಹಜ.
ಮೋಡಿಹಾಕುವ ಉಪಾಸಕರನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ. ಕೋಳಿಯ
ಮೊಟ್ಟೆಯನ್ನು ಮಂತ್ರಿಸಿ ಮಂಡಲದಲ್ಲಿಟ್ಟು, ಇದನ್ನು ಯಾರಾದರೂ ಬಂದು
ಜಜ್ಜಿ ಒಡೆದರೆ, ಅವರಿಗೆ ವೀಳೆಯವನ್ನು ಕೊಟ್ಟು ನನ್ನ ಸೋಲನ್ನು ಒಪ್ಪಿಕೊಳ್ಳುವೆ,
ಎಂದು ಮೋಡಿಯವ ಸವಾಲು ಹಾಕುತ್ತಾನೆ. ಆ ಕಾಲದಲ್ಲಿ ಮೋಡಿ ಹಾಕುವ
ಧಾಂಡಿಗನ ಮುಖವನ್ನು ನೋಡಿದರೆ, ಸಾಮಾನ್ಯರಿಗೆ ಭಯವಾಗುತ್ತದೆ.
ಸುತ್ತುಗಟ್ಟಿಕೊಂಡಿರುವ ನೂರಾರು ಮಂದಿಯಲ್ಲಿ, ಒಬ್ಬ ಚಿಂದಿ ಬಟ್ಟೆಯನ್ನುಟ್ಟ
ಸೆಣಕಲ, ಐದಾರು ನಿಮಿಷಗಳಲ್ಲಿ, ಯಾರೂ ಬಾರದಿರುವುದನ್ನು ಕಂಡು, ಮುಂದೆ
ಬಂದು ಕ್ಷಣಾರ್ಧದಲ್ಲಿ, ಅನಾಯಾಸವಾಗಿ, ಮುಷ್ಟಿಯಿಂದ, ಮೊಟ್ಟೆಯನ್ನು
ಒಡೆಯುತ್ತಾನೆ. ನಂತರ ಉಪಾಸಕನತ್ತ ಕರುಣಾದೃಷ್ಟಿಯನ್ನು ಬೀರಿ, ವೀಳೆಯನ್ನು,
ಹಾಗೂ ಜಯದ ಸಂಕೇತವನ್ನೂ ಲಕ್ಷಿಸದೆ ಸುತ್ತುವರಿದ ಮಂದಿಯಲ್ಲಿ ಹೇಳ
ಹೆಸರಿಲ್ಲದೆ ಮಾಯವಾಗುತ್ತಾನೆ.
ಇದನ್ನು ಕಂಡ ಉಪಾಸಕನು ಜಜ್ಜಿದ ಮೊಟ್ಟೆಯ ಮುಂದೆ, ಅವಿಮನಸ್ಕನಾಗಿ
ಕೂರುತ್ತಾನೆ. ಅವನ ಭಕ್ತರು ಎಷ್ಟು ಶ್ರಮಪಟ್ಟರೂ, ಹಾಗೆ ಕುಳಿತ ಗುರುವನ್ನು
ಎತ್ತಲಾರರು. ಸ್ವಲ್ಪ ಕಾಲಾನಂತರ ಉಪಾಸಕನು ನಿಟ್ಟುಸಿರು ಬಿಟ್ಟು, ಕಣ್ಣಿಗೆ
ಕಾಣಿಸದ ಯಾವುದನ್ನೋ ದಿಟ್ಟಿಸಿ ನೋಡುತ್ತಾ, ತಾನೇತಾನಾಗಿ ಏಳುತ್ತಾನೆ. ಕೈ
ಮುಗಿಯುತ್ತಾನೆ. ತಲೆ ಬಾಗಿಸುತ್ತಾನೆ. ಮೌನವಾಗಿ ಪ್ರದರ್ಶನದ ತಾವಿನಿಂದ
ಹೊರಬೀಳುತ್ತಾನೆ.
ಎಂಟೂ ಭಕ್ತರು ಎಬ್ಬಿಸಿ ನಿಲಿಸಲಾರದ ಭಾರವು ಮೋಡಿಹಾಕುವ ಹಾಗೂ
ಸೋಲನ್ನೊಪ್ಪಿದ, ಉಪಾಸಕನಿಗೆ, ಹೇಗೆ ಬಿದ್ದಿತು?
ಪ್ರಾಯಶಃ ಅವ ಆ ಸ್ಥಿತಿಯಲ್ಲಿ 'ಗರಿಮ ಸಿದ್ಧಿಯನ್ನು ಪಡೆದಿದ್ದ. ಬಾಳ<noinclude></noinclude>
034fxs15frswmxsqe5lkf6n5xz2colz
317717
317704
2026-05-06T16:14:13Z
Pragathi. BH
7585
/* Validated */
317717
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೩}}
ಇಚ್ಛಿಸಿದಾಗ ಸಾಧಿಸಬಹುದು. ಇದನ್ನೂ ಒಪ್ಪಬೇಕು. ಅಥವಾ ಒಪ್ಪಬಹುದು.
ಮಹಾತ್ಮರು, ಯೇಸು, ಪ್ರವಾದಿ ಮಹಮದ್ ಇತಹವರು ತಮ್ಮ ಪ್ರಭಾವವನ್ನು
ಅತ್ಯಂತ ವಿಶಾಲವಾಗಿ ಬೀರಿದರು. ಇದೂ ಮಹಿಮೆಯ ಸಣ್ಣ ನಿದರ್ಶನ. 'ಸಣ್ಣ'
ಎನ್ನುವುದು ಅಲೌಕಿಕ ದೃಷ್ಟಿಯಿಂದ, ಲೌಕಿಕ ದೃಷ್ಟಿಯಿಂದ ಇಂತಹ ಮಹಿಮಾ
ಪ್ರಭಾವವು, ಬಲು ದೊಡ್ಡದು.
ಗರಿಮ ಅತ್ಯಂತ ಭಾರವಾಗುವಿಕೆ. ಕೊಲ್ಲುವ ಶತ್ರುವಿಗೂ ಬರಬಾರದಂತಹ
ಅತೀವ ದುಃಖವು ವ್ಯಕ್ತಿಗೆ ಬಡಿದಾಗ, ಅವ ನಡೆಯಲೂ ಆರ. ಅವನ ದೇಹವು
ಅವನಿಗೆ ಅಷ್ಟು ಭಾರವಾಗಿರುತ್ತದೆ. ಲೌಕಿಕ ಅನುಭವವು ಹೀಗಾದಲ್ಲಿ ; ಅಲೌಕಿಕ
ಅನುಭವವು 'ಗರಿಮ'ವನ್ನು ಸಾಧಿಸುವುದು ಸಹಜ.
ಮೋಡಿಹಾಕುವ ಉಪಾಸಕರನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ. ಕೋಳಿಯ
ಮೊಟ್ಟೆಯನ್ನು ಮಂತ್ರಿಸಿ ಮಂಡಲದಲ್ಲಿಟ್ಟು, ಇದನ್ನು ಯಾರಾದರೂ ಬಂದು
ಜಜ್ಜಿ ಒಡೆದರೆ, ಅವರಿಗೆ ವೀಳೆಯವನ್ನು ಕೊಟ್ಟು ನನ್ನ ಸೋಲನ್ನು ಒಪ್ಪಿಕೊಳ್ಳುವೆ,
ಎಂದು ಮೋಡಿಯವ ಸವಾಲು ಹಾಕುತ್ತಾನೆ. ಆ ಕಾಲದಲ್ಲಿ ಮೋಡಿ ಹಾಕುವ
ಧಾಂಡಿಗನ ಮುಖವನ್ನು ನೋಡಿದರೆ, ಸಾಮಾನ್ಯರಿಗೆ ಭಯವಾಗುತ್ತದೆ.
ಸುತ್ತುಗಟ್ಟಿಕೊಂಡಿರುವ ನೂರಾರು ಮಂದಿಯಲ್ಲಿ, ಒಬ್ಬ ಚಿಂದಿ ಬಟ್ಟೆಯನ್ನುಟ್ಟ
ಸೆಣಕಲ, ಐದಾರು ನಿಮಿಷಗಳಲ್ಲಿ, ಯಾರೂ ಬಾರದಿರುವುದನ್ನು ಕಂಡು, ಮುಂದೆ
ಬಂದು ಕ್ಷಣಾರ್ಧದಲ್ಲಿ, ಅನಾಯಾಸವಾಗಿ, ಮುಷ್ಟಿಯಿಂದ, ಮೊಟ್ಟೆಯನ್ನು
ಒಡೆಯುತ್ತಾನೆ. ನಂತರ ಉಪಾಸಕನತ್ತ ಕರುಣಾದೃಷ್ಟಿಯನ್ನು ಬೀರಿ, ವೀಳೆಯನ್ನು,
ಹಾಗೂ ಜಯದ ಸಂಕೇತವನ್ನೂ ಲಕ್ಷಿಸದೆ ಸುತ್ತುವರಿದ ಮಂದಿಯಲ್ಲಿ ಹೇಳ
ಹೆಸರಿಲ್ಲದೆ ಮಾಯವಾಗುತ್ತಾನೆ.
ಇದನ್ನು ಕಂಡ ಉಪಾಸಕನು ಜಜ್ಜಿದ ಮೊಟ್ಟೆಯ ಮುಂದೆ, ಅವಿಮನಸ್ಕನಾಗಿ
ಕೂರುತ್ತಾನೆ. ಅವನ ಭಕ್ತರು ಎಷ್ಟು ಶ್ರಮಪಟ್ಟರೂ, ಹಾಗೆ ಕುಳಿತ ಗುರುವನ್ನು
ಎತ್ತಲಾರರು. ಸ್ವಲ್ಪ ಕಾಲಾನಂತರ ಉಪಾಸಕನು ನಿಟ್ಟುಸಿರು ಬಿಟ್ಟು, ಕಣ್ಣಿಗೆ
ಕಾಣಿಸದ ಯಾವುದನ್ನೋ ದಿಟ್ಟಿಸಿ ನೋಡುತ್ತಾ, ತಾನೇತಾನಾಗಿ ಏಳುತ್ತಾನೆ. ಕೈ
ಮುಗಿಯುತ್ತಾನೆ. ತಲೆ ಬಾಗಿಸುತ್ತಾನೆ. ಮೌನವಾಗಿ ಪ್ರದರ್ಶನದ ತಾವಿನಿಂದ
ಹೊರಬೀಳುತ್ತಾನೆ.
ಎಂಟೂ ಭಕ್ತರು ಎಬ್ಬಿಸಿ ನಿಲಿಸಲಾರದ ಭಾರವು ಮೋಡಿಹಾಕುವ ಹಾಗೂ
ಸೋಲನ್ನೊಪ್ಪಿದ, ಉಪಾಸಕನಿಗೆ, ಹೇಗೆ ಬಿದ್ದಿತು?
ಪ್ರಾಯಶಃ ಅವ ಆ ಸ್ಥಿತಿಯಲ್ಲಿ 'ಗರಿಮ ಸಿದ್ಧಿಯನ್ನು ಪಡೆದಿದ್ದ. ಬಾಳ<noinclude></noinclude>
0w006p58vwaaozk7ka4bed450b2jamx
317754
317717
2026-05-06T16:40:49Z
Pragathi. BH
7585
317754
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೩}}
ಇಚ್ಛಿಸಿದಾಗ ಸಾಧಿಸಬಹುದು. ಇದನ್ನೂ ಒಪ್ಪಬೇಕು. ಅಥವಾ ಒಪ್ಪಬಹುದು.
ಮಹಾತ್ಮರು, ಯೇಸು, ಪ್ರವಾದಿ ಮಹಮದ್ ಇತಹವರು ತಮ್ಮ ಪ್ರಭಾವವನ್ನು
ಅತ್ಯಂತ ವಿಶಾಲವಾಗಿ ಬೀರಿದರು. ಇದೂ ಮಹಿಮೆಯ ಸಣ್ಣ ನಿದರ್ಶನ. 'ಸಣ್ಣ'
ಎನ್ನುವುದು ಅಲೌಕಿಕ ದೃಷ್ಟಿಯಿಂದ, ಲೌಕಿಕ ದೃಷ್ಟಿಯಿಂದ ಇಂತಹ ಮಹಿಮಾ
ಪ್ರಭಾವವು, ಬಲು ದೊಡ್ಡದು.
{{gap}}ಗರಿಮ:- ಅತ್ಯಂತ ಭಾರವಾಗುವಿಕೆ. ಕೊಲ್ಲುವ ಶತ್ರುವಿಗೂ ಬರಬಾರದಂತಹ
ಅತೀವ ದುಃಖವು ವ್ಯಕ್ತಿಗೆ ಬಡಿದಾಗ, ಅವ ನಡೆಯಲೂ ಆರ. ಅವನ ದೇಹವು
ಅವನಿಗೆ ಅಷ್ಟು ಭಾರವಾಗಿರುತ್ತದೆ. ಲೌಕಿಕ ಅನುಭವವು ಹೀಗಾದಲ್ಲಿ ; ಅಲೌಕಿಕ
ಅನುಭವವು 'ಗರಿಮ'ವನ್ನು ಸಾಧಿಸುವುದು ಸಹಜ.
{{gap}}ಮೋಡಿಹಾಕುವ ಉಪಾಸಕರನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ. ಕೋಳಿಯ
ಮೊಟ್ಟೆಯನ್ನು ಮಂತ್ರಿಸಿ ಮಂಡಲದಲ್ಲಿಟ್ಟು, ಇದನ್ನು ಯಾರಾದರೂ ಬಂದು
ಜಜ್ಜಿ ಒಡೆದರೆ, ಅವರಿಗೆ ವೀಳೆಯವನ್ನು ಕೊಟ್ಟು ನನ್ನ ಸೋಲನ್ನು ಒಪ್ಪಿಕೊಳ್ಳುವೆ,
ಎಂದು ಮೋಡಿಯವ ಸವಾಲು ಹಾಕುತ್ತಾನೆ. ಆ ಕಾಲದಲ್ಲಿ ಮೋಡಿ ಹಾಕುವ
ಧಾಂಡಿಗನ ಮುಖವನ್ನು ನೋಡಿದರೆ, ಸಾಮಾನ್ಯರಿಗೆ ಭಯವಾಗುತ್ತದೆ.
ಸುತ್ತುಗಟ್ಟಿಕೊಂಡಿರುವ ನೂರಾರು ಮಂದಿಯಲ್ಲಿ, ಒಬ್ಬ ಚಿಂದಿ ಬಟ್ಟೆಯನ್ನುಟ್ಟ
ಸೆಣಕಲ, ಐದಾರು ನಿಮಿಷಗಳಲ್ಲಿ, ಯಾರೂ ಬಾರದಿರುವುದನ್ನು ಕಂಡು, ಮುಂದೆ
ಬಂದು ಕ್ಷಣಾರ್ಧದಲ್ಲಿ, ಅನಾಯಾಸವಾಗಿ, ಮುಷ್ಟಿಯಿಂದ, ಮೊಟ್ಟೆಯನ್ನು
ಒಡೆಯುತ್ತಾನೆ. ನಂತರ ಉಪಾಸಕನತ್ತ ಕರುಣಾದೃಷ್ಟಿಯನ್ನು ಬೀರಿ, ವೀಳೆಯನ್ನು,
ಹಾಗೂ ಜಯದ ಸಂಕೇತವನ್ನೂ ಲಕ್ಷಿಸದೆ ಸುತ್ತುವರಿದ ಮಂದಿಯಲ್ಲಿ ಹೇಳ
ಹೆಸರಿಲ್ಲದೆ ಮಾಯವಾಗುತ್ತಾನೆ.
<br />ಇದನ್ನು ಕಂಡ ಉಪಾಸಕನು ಜಜ್ಜಿದ ಮೊಟ್ಟೆಯ ಮುಂದೆ, ಅವಿಮನಸ್ಕನಾಗಿ
ಕೂರುತ್ತಾನೆ. ಅವನ ಭಕ್ತರು ಎಷ್ಟು ಶ್ರಮಪಟ್ಟರೂ, ಹಾಗೆ ಕುಳಿತ ಗುರುವನ್ನು
ಎತ್ತಲಾರರು. ಸ್ವಲ್ಪ ಕಾಲಾನಂತರ ಉಪಾಸಕನು ನಿಟ್ಟುಸಿರು ಬಿಟ್ಟು, ಕಣ್ಣಿಗೆ
ಕಾಣಿಸದ ಯಾವುದನ್ನೋ ದಿಟ್ಟಿಸಿ ನೋಡುತ್ತಾ, ತಾನೇತಾನಾಗಿ ಏಳುತ್ತಾನೆ. ಕೈ
ಮುಗಿಯುತ್ತಾನೆ. ತಲೆ ಬಾಗಿಸುತ್ತಾನೆ. ಮೌನವಾಗಿ ಪ್ರದರ್ಶನದ ತಾವಿನಿಂದ
ಹೊರಬೀಳುತ್ತಾನೆ.
{{gap}}ಎಂಟೂ ಭಕ್ತರು ಎಬ್ಬಿಸಿ ನಿಲಿಸಲಾರದ ಭಾರವು ಮೋಡಿಹಾಕುವ ಹಾಗೂ
ಸೋಲನ್ನೊಪ್ಪಿದ, ಉಪಾಸಕನಿಗೆ, ಹೇಗೆ ಬಿದ್ದಿತು?
{{gap}}ಪ್ರಾಯಶಃ ಅವ ಆ ಸ್ಥಿತಿಯಲ್ಲಿ 'ಗರಿಮ ಸಿದ್ಧಿಯನ್ನು ಪಡೆದಿದ್ದ. ಬಾಳ<noinclude></noinclude>
m9q4uxn2i2tx5f17cry8upygua3czeu
ಪುಟ:ಮನಮಂಥನ.pdf/೪೫೨
104
62899
317705
314678
2026-05-06T16:06:59Z
Shreesha Sharma
7840
/* Proofread */
317705
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೪೩೪|right=ಮನಮಂಥನ}}
ಗುರಿಯು ಅದಲ್ಲ. ಅದನ್ನು ಅರಿತು ಅವ ಮೌನಿಯಾಗಿ ಎಲ್ಲವನ್ನೂ, ತನ್ನ
ಗುರುತ್ವವನ್ನೂ ಮರೆತು, ಎತ್ತಲೋ ನಡೆದ. ಆಗ ಅವ ಖಿನ್ನತೆಯ ಅತ್ಯುಗ್ರ
ಶಿಖರವನ್ನು ಮುಟ್ಟಿದ್ದ ಎನ್ನಬಹುದು.
ಇಂತಹ ಪ್ರದರ್ಶನಗಳನ್ನು, ಹಾಗೂ ದರ್ಶನಗಳನ್ನು ಸಂತೆಯು ಕೂಡುವಲ್ಲಿ
ಆಗಾಗ್ಗೆ ಈಗಲೂ ಕಾಣುತ್ತೇವೆ.
ಅಂದರೆ ಗರಿಮ ಸಿದ್ಧಿಯು ಇಂದೂ ನಿದರ್ಶಿಸಲ್ಪಡುತ್ತದೆ, ಒಂದು
ರೀತಿಯಲ್ಲಿ.
ಲಘಿಮ :- ಹತ್ತಿಯ ಕಣಕ್ಕಿಂತಲೂ ಹಗುರವಾಗುವಿಕೆ, ಬೀಸಿದ ಹಗೂರ
ಗಾಳಿಯ ಮೇಲೆ ತೇಲಿ ಹೋಗುವಿಕೆ. Taking the path of least resistance.
ಸುತ್ತಮುತ್ತಲೂ ಪರಿಸರದ ಬಾಳನ್ನು ಕರೆದು ನೋಡಿದರೆ, ಬಹಳಷ್ಟು ಮಂದಿ
ಈ ನಿಯಮದಂತೆ ಬಾಳ ನಡೆಸುವುದನ್ನು ಪ್ರತ್ಯಕ್ಷ ಕಾಣುತ್ತೇವೆ. ಇದು
'ಸಂಯಮ'ದಿಂದ ಸಾಧಿಸಿದ ಸಿದ್ಧಿಯಲ್ಲ. ಮೌಡ್ಯದಿಂದ, ಆಳ ಮನಸ್ಸಿನ
ಹೇಡಿತನದಿಂದ, ಭಯದಿಂದ, ಪ್ರಚೋದಿತವಾದ ನಡವಳಿಕೆ. ಇಂತಹ ಲೌಕಿಕರಲ್ಲಿ
ಲಘಿಮಾ ತೆರನ ನಡವಳಿಕೆಯು, ಅವರುಗಳ ಮನಸ್ಸಿನ ಅಸ್ಥಿರತ್ವದಿಂದ, ಹಾಗೂ
ಚಂಚಲತೆಯು ಲೌಕಿಕ ಆಸೆಗಳೊಡನೆ ಬೆಸಗೊಂಡಿರುವುದರಿಂದ.
ಆದರೆ, ಮನಸ್ಸನ್ನು ಸ್ವಪ್ರಯತ್ನದಿಂದ ತುಳಿದು ಹಳ್ಳಕ್ಕೆ ಹಾಕಿ, ನಂತರ
ಎದ್ದು, ಎಚ್ಚರದಿಂದ, ಸಂಯಮದ ಪರಿಣಾಮವಾಗಿ, ಸ್ಟೇಚ್ಛೆಯಿಂದ ಲಘಿಮವನ್ನು
ಪಡೆಯಬಹುದು.
Over taking the path of greatest resistance; in the
phenomenal world ; ಎಂದನ್ನಬಹುದು.
ಪ್ರಾಪ್ತಿ :- ಸೂರ್ಯ ಚಂದ್ರಾದಿಗಳನ್ನು ಅನಾಯಾಸವಾಗಿ ಇದ್ದಲ್ಲಿಂದಲೇ
ಮುಟ್ಟುವಂತಹ ಅಂದರೆ ಅರಿಯುವಂತಹ ಶಕ್ತಿ, ದೂರದರ್ಶಕ ಯಂತ್ರಗಳ,
ಕಾಲ ಕಾಲಕ್ಕೂ ಆಗುವ ಪ್ರಗತಿಯಿಂದ, ಹೆಚ್ಚು ಹೆಚ್ಚಾಗಿ ವಿವರಗಳನ್ನು ಕಾಣುವುದು
ಸಾಧ್ಯವಾಗುತ್ತಿದೆ.
ಮನಸ್ಸೆಂಬ ಶಕ್ತಿಯ ಒಂದು ಹಿರಿಯ ಅಂಶವನ್ನು ಸ್ವಾಧೀನಪಡಿಸಿಕೊಂಡರೆ,
ಅದು ಕೂಡ ದೂರಸ್ಪರ್ಶಕ ಯಂತ್ರವಾಗಲು ಸಾಧ್ಯ. ತೋಳ್ ಬಲದಿಂದ
ಕಲ್ಲನ್ನೆಸೆದರೆ ನೂರುಗಜ ದೂರ ಹೋಗಬಹುದು. ಆದರೆ ಫಿರಂಗಿಯ ಯಂತ್ರದ
ರಚನೆಯಿಂದ, ನೂರಾರು, ಮೈಲಿಗಳ ದೂರ ಗುಂಡನ್ನು ಎಸೆಯಬಹುದು.
'ಸಂಯಮ'ವನ್ನು ಸಾಧಿಸಿದವನ ತೋಳ್ಳಲವು, ಫಿರಂಗಿ ಯಂತ್ರಕ್ಕಿಂತಲೂ ಲಕ್ಷಾಂತರ<noinclude></noinclude>
mq5a229x920xa1d659a5csllmoxfxcr
317718
317705
2026-05-06T16:14:27Z
Pragathi. BH
7585
/* Validated */
317718
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೪೩೪|right=ಮನಮಂಥನ}}
ಗುರಿಯು ಅದಲ್ಲ. ಅದನ್ನು ಅರಿತು ಅವ ಮೌನಿಯಾಗಿ ಎಲ್ಲವನ್ನೂ, ತನ್ನ
ಗುರುತ್ವವನ್ನೂ ಮರೆತು, ಎತ್ತಲೋ ನಡೆದ. ಆಗ ಅವ ಖಿನ್ನತೆಯ ಅತ್ಯುಗ್ರ
ಶಿಖರವನ್ನು ಮುಟ್ಟಿದ್ದ ಎನ್ನಬಹುದು.
ಇಂತಹ ಪ್ರದರ್ಶನಗಳನ್ನು, ಹಾಗೂ ದರ್ಶನಗಳನ್ನು ಸಂತೆಯು ಕೂಡುವಲ್ಲಿ
ಆಗಾಗ್ಗೆ ಈಗಲೂ ಕಾಣುತ್ತೇವೆ.
ಅಂದರೆ ಗರಿಮ ಸಿದ್ಧಿಯು ಇಂದೂ ನಿದರ್ಶಿಸಲ್ಪಡುತ್ತದೆ, ಒಂದು
ರೀತಿಯಲ್ಲಿ.
ಲಘಿಮ :- ಹತ್ತಿಯ ಕಣಕ್ಕಿಂತಲೂ ಹಗುರವಾಗುವಿಕೆ, ಬೀಸಿದ ಹಗೂರ
ಗಾಳಿಯ ಮೇಲೆ ತೇಲಿ ಹೋಗುವಿಕೆ. Taking the path of least resistance.
ಸುತ್ತಮುತ್ತಲೂ ಪರಿಸರದ ಬಾಳನ್ನು ಕರೆದು ನೋಡಿದರೆ, ಬಹಳಷ್ಟು ಮಂದಿ
ಈ ನಿಯಮದಂತೆ ಬಾಳ ನಡೆಸುವುದನ್ನು ಪ್ರತ್ಯಕ್ಷ ಕಾಣುತ್ತೇವೆ. ಇದು
'ಸಂಯಮ'ದಿಂದ ಸಾಧಿಸಿದ ಸಿದ್ಧಿಯಲ್ಲ. ಮೌಡ್ಯದಿಂದ, ಆಳ ಮನಸ್ಸಿನ
ಹೇಡಿತನದಿಂದ, ಭಯದಿಂದ, ಪ್ರಚೋದಿತವಾದ ನಡವಳಿಕೆ. ಇಂತಹ ಲೌಕಿಕರಲ್ಲಿ
ಲಘಿಮಾ ತೆರನ ನಡವಳಿಕೆಯು, ಅವರುಗಳ ಮನಸ್ಸಿನ ಅಸ್ಥಿರತ್ವದಿಂದ, ಹಾಗೂ
ಚಂಚಲತೆಯು ಲೌಕಿಕ ಆಸೆಗಳೊಡನೆ ಬೆಸಗೊಂಡಿರುವುದರಿಂದ.
ಆದರೆ, ಮನಸ್ಸನ್ನು ಸ್ವಪ್ರಯತ್ನದಿಂದ ತುಳಿದು ಹಳ್ಳಕ್ಕೆ ಹಾಕಿ, ನಂತರ
ಎದ್ದು, ಎಚ್ಚರದಿಂದ, ಸಂಯಮದ ಪರಿಣಾಮವಾಗಿ, ಸ್ಟೇಚ್ಛೆಯಿಂದ ಲಘಿಮವನ್ನು
ಪಡೆಯಬಹುದು.
Over taking the path of greatest resistance; in the
phenomenal world ; ಎಂದನ್ನಬಹುದು.
ಪ್ರಾಪ್ತಿ :- ಸೂರ್ಯ ಚಂದ್ರಾದಿಗಳನ್ನು ಅನಾಯಾಸವಾಗಿ ಇದ್ದಲ್ಲಿಂದಲೇ
ಮುಟ್ಟುವಂತಹ ಅಂದರೆ ಅರಿಯುವಂತಹ ಶಕ್ತಿ, ದೂರದರ್ಶಕ ಯಂತ್ರಗಳ,
ಕಾಲ ಕಾಲಕ್ಕೂ ಆಗುವ ಪ್ರಗತಿಯಿಂದ, ಹೆಚ್ಚು ಹೆಚ್ಚಾಗಿ ವಿವರಗಳನ್ನು ಕಾಣುವುದು
ಸಾಧ್ಯವಾಗುತ್ತಿದೆ.
ಮನಸ್ಸೆಂಬ ಶಕ್ತಿಯ ಒಂದು ಹಿರಿಯ ಅಂಶವನ್ನು ಸ್ವಾಧೀನಪಡಿಸಿಕೊಂಡರೆ,
ಅದು ಕೂಡ ದೂರಸ್ಪರ್ಶಕ ಯಂತ್ರವಾಗಲು ಸಾಧ್ಯ. ತೋಳ್ ಬಲದಿಂದ
ಕಲ್ಲನ್ನೆಸೆದರೆ ನೂರುಗಜ ದೂರ ಹೋಗಬಹುದು. ಆದರೆ ಫಿರಂಗಿಯ ಯಂತ್ರದ
ರಚನೆಯಿಂದ, ನೂರಾರು, ಮೈಲಿಗಳ ದೂರ ಗುಂಡನ್ನು ಎಸೆಯಬಹುದು.
'ಸಂಯಮ'ವನ್ನು ಸಾಧಿಸಿದವನ ತೋಳ್ಳಲವು, ಫಿರಂಗಿ ಯಂತ್ರಕ್ಕಿಂತಲೂ ಲಕ್ಷಾಂತರ<noinclude></noinclude>
6kxhrpd23jd3agxmqy3y1hhogqspuy9
317757
317718
2026-05-06T16:42:26Z
Pragathi. BH
7585
317757
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೪೩೪|right=ಮನಮಂಥನ}}
ಗುರಿಯು ಅದಲ್ಲ. ಅದನ್ನು ಅರಿತು ಅವ ಮೌನಿಯಾಗಿ ಎಲ್ಲವನ್ನೂ, ತನ್ನ
ಗುರುತ್ವವನ್ನೂ ಮರೆತು, ಎತ್ತಲೋ ನಡೆದ. ಆಗ ಅವ ಖಿನ್ನತೆಯ ಅತ್ಯುಗ್ರ
ಶಿಖರವನ್ನು ಮುಟ್ಟಿದ್ದ ಎನ್ನಬಹುದು.
{{gap}}ಇಂತಹ ಪ್ರದರ್ಶನಗಳನ್ನು, ಹಾಗೂ ದರ್ಶನಗಳನ್ನು ಸಂತೆಯು ಕೂಡುವಲ್ಲಿ
ಆಗಾಗ್ಗೆ ಈಗಲೂ ಕಾಣುತ್ತೇವೆ.
{{gap}}ಅಂದರೆ ಗರಿಮ ಸಿದ್ಧಿಯು ಇಂದೂ ನಿದರ್ಶಿಸಲ್ಪಡುತ್ತದೆ, ಒಂದು
ರೀತಿಯಲ್ಲಿ.
{{gap}}ಲಘಿಮ :- ಹತ್ತಿಯ ಕಣಕ್ಕಿಂತಲೂ ಹಗುರವಾಗುವಿಕೆ, ಬೀಸಿದ ಹಗೂರ
ಗಾಳಿಯ ಮೇಲೆ ತೇಲಿ ಹೋಗುವಿಕೆ. Taking the path of least resistance.
ಸುತ್ತಮುತ್ತಲೂ ಪರಿಸರದ ಬಾಳನ್ನು ಕರೆದು ನೋಡಿದರೆ, ಬಹಳಷ್ಟು ಮಂದಿ
ಈ ನಿಯಮದಂತೆ ಬಾಳ ನಡೆಸುವುದನ್ನು ಪ್ರತ್ಯಕ್ಷ ಕಾಣುತ್ತೇವೆ. ಇದು
'ಸಂಯಮ'ದಿಂದ ಸಾಧಿಸಿದ ಸಿದ್ಧಿಯಲ್ಲ. ಮೌಡ್ಯದಿಂದ, ಆಳ ಮನಸ್ಸಿನ
ಹೇಡಿತನದಿಂದ, ಭಯದಿಂದ, ಪ್ರಚೋದಿತವಾದ ನಡವಳಿಕೆ. ಇಂತಹ ಲೌಕಿಕರಲ್ಲಿ
ಲಘಿಮಾ ತೆರನ ನಡವಳಿಕೆಯು, ಅವರುಗಳ ಮನಸ್ಸಿನ ಅಸ್ಥಿರತ್ವದಿಂದ, ಹಾಗೂ
ಚಂಚಲತೆಯು ಲೌಕಿಕ ಆಸೆಗಳೊಡನೆ ಬೆಸಗೊಂಡಿರುವುದರಿಂದ.
{{gap}}ಆದರೆ, ಮನಸ್ಸನ್ನು ಸ್ವಪ್ರಯತ್ನದಿಂದ ತುಳಿದು ಹಳ್ಳಕ್ಕೆ ಹಾಕಿ, ನಂತರ
ಎದ್ದು, ಎಚ್ಚರದಿಂದ, ಸಂಯಮದ ಪರಿಣಾಮವಾಗಿ, ಸ್ಟೇಚ್ಛೆಯಿಂದ ಲಘಿಮವನ್ನು
ಪಡೆಯಬಹುದು.
{{gap}}Over taking the path of greatest resistance; in the
phenomenal world ; ಎಂದನ್ನಬಹುದು.
{{gap}}ಪ್ರಾಪ್ತಿ :- ಸೂರ್ಯ ಚಂದ್ರಾದಿಗಳನ್ನು ಅನಾಯಾಸವಾಗಿ ಇದ್ದಲ್ಲಿಂದಲೇ
ಮುಟ್ಟುವಂತಹ ಅಂದರೆ ಅರಿಯುವಂತಹ ಶಕ್ತಿ, ದೂರದರ್ಶಕ ಯಂತ್ರಗಳ,
ಕಾಲ ಕಾಲಕ್ಕೂ ಆಗುವ ಪ್ರಗತಿಯಿಂದ, ಹೆಚ್ಚು ಹೆಚ್ಚಾಗಿ ವಿವರಗಳನ್ನು ಕಾಣುವುದು
ಸಾಧ್ಯವಾಗುತ್ತಿದೆ.
{{gap}}ಮನಸ್ಸೆಂಬ ಶಕ್ತಿಯ ಒಂದು ಹಿರಿಯ ಅಂಶವನ್ನು ಸ್ವಾಧೀನಪಡಿಸಿಕೊಂಡರೆ,
ಅದು ಕೂಡ ದೂರಸ್ಪರ್ಶಕ ಯಂತ್ರವಾಗಲು ಸಾಧ್ಯ. ತೋಳ್ ಬಲದಿಂದ
ಕಲ್ಲನ್ನೆಸೆದರೆ ನೂರುಗಜ ದೂರ ಹೋಗಬಹುದು. ಆದರೆ ಫಿರಂಗಿಯ ಯಂತ್ರದ
ರಚನೆಯಿಂದ, ನೂರಾರು, ಮೈಲಿಗಳ ದೂರ ಗುಂಡನ್ನು ಎಸೆಯಬಹುದು.
'ಸಂಯಮ'ವನ್ನು ಸಾಧಿಸಿದವನ ತೋಳ್ಬಲವು, ಫಿರಂಗಿ ಯಂತ್ರಕ್ಕಿಂತಲೂ ಲಕ್ಷಾಂತರ<noinclude></noinclude>
tt6ajwfe0waeyf5flyuxd50zlhuq4qj
ಪುಟ:ಮನಮಂಥನ.pdf/೪೫೩
104
62900
317706
314677
2026-05-06T16:08:20Z
Shreesha Sharma
7840
/* Proofread */
317706
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೫}}
ಪಟ್ಟು ಅಧಿಕವಾಗಬಹುದು. ವಿಜ್ಞಾನದ ಇಂದಿನ ಹಂತದಲ್ಲಿ ಇದೊಂದು ಊಹೆ.
ದಿಟ. ಆದರೆ ಇಂದಿನ ಊಹೆಯು ಮಾನವನ ಚರಿತ್ರೆಯಲ್ಲಿ, ನಾಳೆ ಅಥವಾ
ನಾಡಿದ್ದು, ವೈಜ್ಞಾನಿಕ ಸಿದ್ಧಾಂತವಾಗುತ್ತದೆ. ಸಾಕಷ್ಟು ನಿದರ್ಶನಗಳಿಗಿರುವ
ಈ ಸತ್ಯವನ್ನು. ವಿಶಾಲಗೊಳಿಸಿದರೆ, 'ಪ್ರಾಪ್ತಿ'ಯ ಅಸಾಧುವಲ್ಲ ಎಂದನಿಸುತ್ತದೆ.
ಪ್ರಾಕಾಮ್ಯ:- ಇಚ್ಛಿಸಿದುದು ನಡೆಯುವುದು. ಸಂಯಮವನ್ನು
ಅಷ್ಟಾಂಗಯೋಗಸಾಧನೆಯಿಂದ ಲಭಿಸಿಕೊಂಡವನು ಇಚ್ಚಿಸುವುದಾದರೂ ಏನನ್ನು?
ಸ್ವಾರ್ಥಕ್ಕಾಗಿ ಏನನ್ನೂ ಇಚ್ಛಿಸಲಾರ. ಪರಾರ್ಥಕ್ಕಾಗಿ, ಸರ್ವ ಜೀವ ಹಿತಕ್ಕಾಗಿ
ಯಾವುದನ್ನಾದರೂ ಬಯಸಬಹುದು. ಅಂತಹ ಪರಿಸ್ಥಿತಿಯಲ್ಲಿ ಬಯಸಿದುದು
ನಡೆದು ಹೋಗುತ್ತದೆ. ಕಾವ್ಯವು ಸ್ವಾರ್ಥವಾಗಿರದೆ, ಪರಿಸರವನ್ನೆಲ್ಲಾ ಮುತ್ತಿಕೊಂಡು
ಪ್ರಪಂಚಕ್ಕೆ ಅನ್ವಯಿಸಿದಾಗ ಪ್ರಾಕಾಮ್ಯವಾಗಿ, ಸಿದ್ಧಿಯನ್ನು ಸುಲಭವಾಗಿ ಪಡೆಯುತ್ತದೆ.
ಅಸ್ತಾವಸ್ಥೆಯಲ್ಲಿದ್ದ ರೋಗಿಯೊಬ್ಬರನ್ನು ಬೆಳಗಿನ ಝಾಮ ಆರರ ವೇಳೆಗೆ
ನೋಡಲು ಹೋಗಿದ್ದೆ. ರೋಗಿಯನ್ನು ಗುಣಪಡಿಸುತ್ತೇನೆ ಎಂಬ ಭರವಸೆಯು
ಸ್ವಲ್ಪವೂ ಇರಲಿಲ್ಲ. ಅವನು ಕಾಲಗತಿ ಹೊಂದಿದರೂ, ಅವನ ಮನೆಯವರಿಗೆ
ತುಸು ಸಮಾಧಾನವಾಗುತ್ತದೆ ಎಂಬ ಆಸೆಯಿಂದ, ಅಲ್ಲಿಗೆ ಹೋಗಿದ್ದೆ.
ಪ್ರದರ್ಶನಕ್ಕಾಗಿ ಚಿಕಿತ್ಸೆಯನ್ನೂ ಮಾಡಿ ಹೊರಬರುತ್ತಿದ್ದೆ. ರೋಗಿಯ ಮನೆಯ
ಗೇಟನ್ನು ತಲುಪಿದಾಗ, ಬೈರಾಗಿಯೊಬ್ಬನು ಭಿಕ್ಷೆಯನ್ನು ಬೇಡಲು ಅಲ್ಲಿಗೆ ಬಂದಿದ್ದ.
ಕಳುಹಿಸಿಕೊಡಲು ನನ್ನೊಂದಿಗೆ ಬಂದಿದ್ದ ರೋಗಿಯ ತಂದೆಯು ಬೈರಾಗಿಯನ್ನು
ಹೀನಾಮಾನವಾಗಿ ಬೈದ, ಸಂಕಟವನ್ನು ಪರಿಹರಿಸಿಕೊಳ್ಳಲು ಆ ನತದೃಷ್ಟ
ತಂದೆಗೆ ರೇಗುವುದೊಂದೇ ಸಾಧನವಾಗಿತ್ತು. ಸಂಸ್ಕೃತಿಯ ಒತ್ತಡದಿಂದಾಗಿ
ನನ್ನನ್ನು ಬೈಯುವಂತಿರಲಿಲ್ಲ.
ಬೈರಾಗಿಯು, ತನ್ನ ಕಳೆಗುಂದಿದ ಮುಖವನ್ನೂ, ಕೆಂಪೇರಿ ಅಡರುತಿದ್ದ
ರೋಗಿಯ ತಂದೆಯ ಮುಖವನ್ನೂ ಅರೆಕ್ಷಣ ನೋಡಿದ. ನನ್ನತ್ತ ದೃಷ್ಟಿಯನ್ನು
ಅಂಬಿನಂತೆ ಹರಿಸಿ, 'ಜೈ ಭಗವತೀ' ಎಂದು ಹೇಳಿದ. ನಂತರ ಮುನ್ನಡೆದ.
'ಬೇಟಾ, ಚಿಂತಾಕರಾನಕೋ' ಎಂದು ನನಗೆ ಹೇಳಿದ. ಹೊರಟು ಹೋದ.
ಆ ರೋಗಿಯು ಬದುಕಿಕೊಂಡ. ಖಂಡಿತವಾಗಿ ಸಾಯುತ್ತಾನೆ ಎಂದು
ವೈಜ್ಞಾನಿಕವಾಗಿ, ವಿಚಾರಪೂರ್ವಕ, ನಿರ್ಧರಿಸಿದ್ದ ನನಗೆ ಅತ್ಯಾಶ್ಚರ್ಯವಾಯಿತು.
ಪ್ರಾಯಶಃ ಆ ಬೈರಾಗಿಯು 'ಪ್ರಾಕಾಮ್ಯ'ವನ್ನು ಈ ರೀತಿ ಬಳಸಿದ್ದನೋ ಎಂಬ
ಸಂದೇಹವುಂಟಾಯಿತು. ಮೊದ ಮೊದಲು ಆನಂತರ ಹಾಗೇ ಆಗಿರಬೇಕು.
ಎಂದು ಮನಸ್ಸಿನಾಳದಲ್ಲಿ ನನಗೆ ದೃಢವಾಯಿತು. ವಯನ್ನೂ ಮುಪ್ಪಾಗುತ್ತಿತ್ತು.<noinclude></noinclude>
7om5x06e6kpr9umr5sgmttwj6ojczi9
317719
317706
2026-05-06T16:14:38Z
Pragathi. BH
7585
/* Validated */
317719
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೫}}
ಪಟ್ಟು ಅಧಿಕವಾಗಬಹುದು. ವಿಜ್ಞಾನದ ಇಂದಿನ ಹಂತದಲ್ಲಿ ಇದೊಂದು ಊಹೆ.
ದಿಟ. ಆದರೆ ಇಂದಿನ ಊಹೆಯು ಮಾನವನ ಚರಿತ್ರೆಯಲ್ಲಿ, ನಾಳೆ ಅಥವಾ
ನಾಡಿದ್ದು, ವೈಜ್ಞಾನಿಕ ಸಿದ್ಧಾಂತವಾಗುತ್ತದೆ. ಸಾಕಷ್ಟು ನಿದರ್ಶನಗಳಿಗಿರುವ
ಈ ಸತ್ಯವನ್ನು. ವಿಶಾಲಗೊಳಿಸಿದರೆ, 'ಪ್ರಾಪ್ತಿ'ಯ ಅಸಾಧುವಲ್ಲ ಎಂದನಿಸುತ್ತದೆ.
ಪ್ರಾಕಾಮ್ಯ:- ಇಚ್ಛಿಸಿದುದು ನಡೆಯುವುದು. ಸಂಯಮವನ್ನು
ಅಷ್ಟಾಂಗಯೋಗಸಾಧನೆಯಿಂದ ಲಭಿಸಿಕೊಂಡವನು ಇಚ್ಚಿಸುವುದಾದರೂ ಏನನ್ನು?
ಸ್ವಾರ್ಥಕ್ಕಾಗಿ ಏನನ್ನೂ ಇಚ್ಛಿಸಲಾರ. ಪರಾರ್ಥಕ್ಕಾಗಿ, ಸರ್ವ ಜೀವ ಹಿತಕ್ಕಾಗಿ
ಯಾವುದನ್ನಾದರೂ ಬಯಸಬಹುದು. ಅಂತಹ ಪರಿಸ್ಥಿತಿಯಲ್ಲಿ ಬಯಸಿದುದು
ನಡೆದು ಹೋಗುತ್ತದೆ. ಕಾವ್ಯವು ಸ್ವಾರ್ಥವಾಗಿರದೆ, ಪರಿಸರವನ್ನೆಲ್ಲಾ ಮುತ್ತಿಕೊಂಡು
ಪ್ರಪಂಚಕ್ಕೆ ಅನ್ವಯಿಸಿದಾಗ ಪ್ರಾಕಾಮ್ಯವಾಗಿ, ಸಿದ್ಧಿಯನ್ನು ಸುಲಭವಾಗಿ ಪಡೆಯುತ್ತದೆ.
ಅಸ್ತಾವಸ್ಥೆಯಲ್ಲಿದ್ದ ರೋಗಿಯೊಬ್ಬರನ್ನು ಬೆಳಗಿನ ಝಾಮ ಆರರ ವೇಳೆಗೆ
ನೋಡಲು ಹೋಗಿದ್ದೆ. ರೋಗಿಯನ್ನು ಗುಣಪಡಿಸುತ್ತೇನೆ ಎಂಬ ಭರವಸೆಯು
ಸ್ವಲ್ಪವೂ ಇರಲಿಲ್ಲ. ಅವನು ಕಾಲಗತಿ ಹೊಂದಿದರೂ, ಅವನ ಮನೆಯವರಿಗೆ
ತುಸು ಸಮಾಧಾನವಾಗುತ್ತದೆ ಎಂಬ ಆಸೆಯಿಂದ, ಅಲ್ಲಿಗೆ ಹೋಗಿದ್ದೆ.
ಪ್ರದರ್ಶನಕ್ಕಾಗಿ ಚಿಕಿತ್ಸೆಯನ್ನೂ ಮಾಡಿ ಹೊರಬರುತ್ತಿದ್ದೆ. ರೋಗಿಯ ಮನೆಯ
ಗೇಟನ್ನು ತಲುಪಿದಾಗ, ಬೈರಾಗಿಯೊಬ್ಬನು ಭಿಕ್ಷೆಯನ್ನು ಬೇಡಲು ಅಲ್ಲಿಗೆ ಬಂದಿದ್ದ.
ಕಳುಹಿಸಿಕೊಡಲು ನನ್ನೊಂದಿಗೆ ಬಂದಿದ್ದ ರೋಗಿಯ ತಂದೆಯು ಬೈರಾಗಿಯನ್ನು
ಹೀನಾಮಾನವಾಗಿ ಬೈದ, ಸಂಕಟವನ್ನು ಪರಿಹರಿಸಿಕೊಳ್ಳಲು ಆ ನತದೃಷ್ಟ
ತಂದೆಗೆ ರೇಗುವುದೊಂದೇ ಸಾಧನವಾಗಿತ್ತು. ಸಂಸ್ಕೃತಿಯ ಒತ್ತಡದಿಂದಾಗಿ
ನನ್ನನ್ನು ಬೈಯುವಂತಿರಲಿಲ್ಲ.
ಬೈರಾಗಿಯು, ತನ್ನ ಕಳೆಗುಂದಿದ ಮುಖವನ್ನೂ, ಕೆಂಪೇರಿ ಅಡರುತಿದ್ದ
ರೋಗಿಯ ತಂದೆಯ ಮುಖವನ್ನೂ ಅರೆಕ್ಷಣ ನೋಡಿದ. ನನ್ನತ್ತ ದೃಷ್ಟಿಯನ್ನು
ಅಂಬಿನಂತೆ ಹರಿಸಿ, 'ಜೈ ಭಗವತೀ' ಎಂದು ಹೇಳಿದ. ನಂತರ ಮುನ್ನಡೆದ.
'ಬೇಟಾ, ಚಿಂತಾಕರಾನಕೋ' ಎಂದು ನನಗೆ ಹೇಳಿದ. ಹೊರಟು ಹೋದ.
ಆ ರೋಗಿಯು ಬದುಕಿಕೊಂಡ. ಖಂಡಿತವಾಗಿ ಸಾಯುತ್ತಾನೆ ಎಂದು
ವೈಜ್ಞಾನಿಕವಾಗಿ, ವಿಚಾರಪೂರ್ವಕ, ನಿರ್ಧರಿಸಿದ್ದ ನನಗೆ ಅತ್ಯಾಶ್ಚರ್ಯವಾಯಿತು.
ಪ್ರಾಯಶಃ ಆ ಬೈರಾಗಿಯು 'ಪ್ರಾಕಾಮ್ಯ'ವನ್ನು ಈ ರೀತಿ ಬಳಸಿದ್ದನೋ ಎಂಬ
ಸಂದೇಹವುಂಟಾಯಿತು. ಮೊದ ಮೊದಲು ಆನಂತರ ಹಾಗೇ ಆಗಿರಬೇಕು.
ಎಂದು ಮನಸ್ಸಿನಾಳದಲ್ಲಿ ನನಗೆ ದೃಢವಾಯಿತು. ವಯನ್ನೂ ಮುಪ್ಪಾಗುತ್ತಿತ್ತು.<noinclude></noinclude>
s5okyg302kz26xih5h9dlxiwio3c80c
317760
317719
2026-05-06T16:43:51Z
Pragathi. BH
7585
317760
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೫}}
ಪಟ್ಟು ಅಧಿಕವಾಗಬಹುದು. ವಿಜ್ಞಾನದ ಇಂದಿನ ಹಂತದಲ್ಲಿ ಇದೊಂದು ಊಹೆ.
ದಿಟ. ಆದರೆ ಇಂದಿನ ಊಹೆಯು ಮಾನವನ ಚರಿತ್ರೆಯಲ್ಲಿ, ನಾಳೆ ಅಥವಾ
ನಾಡಿದ್ದು, ವೈಜ್ಞಾನಿಕ ಸಿದ್ಧಾಂತವಾಗುತ್ತದೆ. ಸಾಕಷ್ಟು ನಿದರ್ಶನಗಳಿಗಿರುವ
ಈ ಸತ್ಯವನ್ನು. ವಿಶಾಲಗೊಳಿಸಿದರೆ, 'ಪ್ರಾಪ್ತಿ'ಯ ಅಸಾಧುವಲ್ಲ ಎಂದನಿಸುತ್ತದೆ.
{{gap}}ಪ್ರಾಕಾಮ್ಯ:- ಇಚ್ಛಿಸಿದುದು ನಡೆಯುವುದು. ಸಂಯಮವನ್ನು
ಅಷ್ಟಾಂಗಯೋಗಸಾಧನೆಯಿಂದ ಲಭಿಸಿಕೊಂಡವನು ಇಚ್ಚಿಸುವುದಾದರೂ ಏನನ್ನು?
ಸ್ವಾರ್ಥಕ್ಕಾಗಿ ಏನನ್ನೂ ಇಚ್ಛಿಸಲಾರ. ಪರಾರ್ಥಕ್ಕಾಗಿ, ಸರ್ವ ಜೀವ ಹಿತಕ್ಕಾಗಿ
ಯಾವುದನ್ನಾದರೂ ಬಯಸಬಹುದು. ಅಂತಹ ಪರಿಸ್ಥಿತಿಯಲ್ಲಿ ಬಯಸಿದುದು
ನಡೆದು ಹೋಗುತ್ತದೆ. ಕಾವ್ಯವು ಸ್ವಾರ್ಥವಾಗಿರದೆ, ಪರಿಸರವನ್ನೆಲ್ಲಾ ಮುತ್ತಿಕೊಂಡು
ಪ್ರಪಂಚಕ್ಕೆ ಅನ್ವಯಿಸಿದಾಗ ಪ್ರಾಕಾಮ್ಯವಾಗಿ, ಸಿದ್ಧಿಯನ್ನು ಸುಲಭವಾಗಿ ಪಡೆಯುತ್ತದೆ.
{{gap}}ಅಸ್ತಾವಸ್ಥೆಯಲ್ಲಿದ್ದ ರೋಗಿಯೊಬ್ಬರನ್ನು ಬೆಳಗಿನ ಝಾಮ ಆರರ ವೇಳೆಗೆ
ನೋಡಲು ಹೋಗಿದ್ದೆ. ರೋಗಿಯನ್ನು ಗುಣಪಡಿಸುತ್ತೇನೆ ಎಂಬ ಭರವಸೆಯು
ಸ್ವಲ್ಪವೂ ಇರಲಿಲ್ಲ. ಅವನು ಕಾಲಗತಿ ಹೊಂದಿದರೂ, ಅವನ ಮನೆಯವರಿಗೆ
ತುಸು ಸಮಾಧಾನವಾಗುತ್ತದೆ ಎಂಬ ಆಸೆಯಿಂದ, ಅಲ್ಲಿಗೆ ಹೋಗಿದ್ದೆ.
ಪ್ರದರ್ಶನಕ್ಕಾಗಿ ಚಿಕಿತ್ಸೆಯನ್ನೂ ಮಾಡಿ ಹೊರಬರುತ್ತಿದ್ದೆ. ರೋಗಿಯ ಮನೆಯ
ಗೇಟನ್ನು ತಲುಪಿದಾಗ, ಬೈರಾಗಿಯೊಬ್ಬನು ಭಿಕ್ಷೆಯನ್ನು ಬೇಡಲು ಅಲ್ಲಿಗೆ ಬಂದಿದ್ದ.
ಕಳುಹಿಸಿಕೊಡಲು ನನ್ನೊಂದಿಗೆ ಬಂದಿದ್ದ ರೋಗಿಯ ತಂದೆಯು ಬೈರಾಗಿಯನ್ನು
ಹೀನಾಮಾನವಾಗಿ ಬೈದ, ಸಂಕಟವನ್ನು ಪರಿಹರಿಸಿಕೊಳ್ಳಲು ಆ ನತದೃಷ್ಟ
ತಂದೆಗೆ ರೇಗುವುದೊಂದೇ ಸಾಧನವಾಗಿತ್ತು. ಸಂಸ್ಕೃತಿಯ ಒತ್ತಡದಿಂದಾಗಿ
ನನ್ನನ್ನು ಬೈಯುವಂತಿರಲಿಲ್ಲ.
{{gap}}ಬೈರಾಗಿಯು, ತನ್ನ ಕಳೆಗುಂದಿದ ಮುಖವನ್ನೂ, ಕೆಂಪೇರಿ ಅಡರುತಿದ್ದ
ರೋಗಿಯ ತಂದೆಯ ಮುಖವನ್ನೂ ಅರೆಕ್ಷಣ ನೋಡಿದ. ನನ್ನತ್ತ ದೃಷ್ಟಿಯನ್ನು
ಅಂಬಿನಂತೆ ಹರಿಸಿ, 'ಜೈ ಭಗವತೀ' ಎಂದು ಹೇಳಿದ. ನಂತರ ಮುನ್ನಡೆದ.
'ಬೇಟಾ, ಚಿಂತಾಕರಾನಕೋ' ಎಂದು ನನಗೆ ಹೇಳಿದ. ಹೊರಟು ಹೋದ.
{{gap}}ಆ ರೋಗಿಯು ಬದುಕಿಕೊಂಡ. ಖಂಡಿತವಾಗಿ ಸಾಯುತ್ತಾನೆ ಎಂದು
ವೈಜ್ಞಾನಿಕವಾಗಿ, ವಿಚಾರಪೂರ್ವಕ, ನಿರ್ಧರಿಸಿದ್ದ ನನಗೆ ಅತ್ಯಾಶ್ಚರ್ಯವಾಯಿತು.
ಪ್ರಾಯಶಃ ಆ ಬೈರಾಗಿಯು 'ಪ್ರಾಕಾಮ್ಯ'ವನ್ನು ಈ ರೀತಿ ಬಳಸಿದ್ದನೋ ಎಂಬ
ಸಂದೇಹವುಂಟಾಯಿತು. ಮೊದ ಮೊದಲು ಆನಂತರ ಹಾಗೇ ಆಗಿರಬೇಕು.
ಎಂದು ಮನಸ್ಸಿನಾಳದಲ್ಲಿ ನನಗೆ ದೃಢವಾಯಿತು. ವಯಸ್ಸೂ ಮುಪ್ಪಾಗುತ್ತಿತ್ತು.<noinclude></noinclude>
td4fmw7cwxetfu1ggye1vw2f7cpgttm
ಪುಟ:ಮನಮಂಥನ.pdf/೪೫೪
104
62901
317707
314676
2026-05-06T16:10:01Z
Shreesha Sharma
7840
/* Proofread */
317707
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೪೩೬|right=ಮನಮಂಥನ}}
ಅಲೌಕಿಕವಾದ, ವಿಚಾರಾತೀತವಾದ, ಈ ಅನುಭವವನ್ನು ಹೇಗೆ
ವೈಜ್ಞಾನಿಕವಾಗಿ ಇಂದು ಸಮರ್ಥಿಸಲಿ? ಮುಂದೆ ಕಾಲಗತಿಯಲ್ಲಿ, ಚಿರಂಜೀವಿಗಳು
ಸಮರ್ಥಿಸುತ್ತಾರೆ ಎನ್ನುವ ದೃಢ ನಂಬಿಕೆಯು ಬೇರೂರಿದೆ, ನನ್ನಲ್ಲಿ.
ಈಶತ್ವ :-ನವ್ಯ ನೂತನ ಸೃಷ್ಟಿಯನ್ನು ಮಾಡುವಂತಹ ಮಹಿಮೆಯನ್ನು
ಈಶತ್ವ ಎನ್ನತ್ತಾರೆ.
ಕಾಲಕಾಲಕ್ಕೂ ದೇಶ, ವಿದೇಶಗಳಲ್ಲಿ, ವೈಜ್ಞಾನಿಕ ಸಂಶೋಧನೆಗಳನ್ನು,
ಪರೀಕ್ಷಾ ಪ್ರಯೋಗಗಳಿಂದ ವಿಜ್ಞಾನಿಗಳು ನಡೆಸುತ್ತಾರೆ, ತುಂಬ ಶ್ರದ್ಧೆಯಿಂದ ;
ಧಾರಣ, ಧ್ಯಾನಗಳಿಂದ ನವ್ಯ ಸಿದ್ಧಾಂತವನ್ನು ಪ್ರಚಾರ ಮಾಡುತ್ತಾರೆ.
ಸಹವಿಜ್ಞಾನಿಗಳು 'ಆಹಾ ! ಎಷ್ಟು ಚೆಂದ ! ಎಷ್ಟು ಸುಲಭ ! ಎಷ್ಟು ದಿಟ' ಎಂದು
ಅಚ್ಚರಿ ಪಡುತ್ತಾರೆ. ಒಂದೆರಡು ದಶಕಗಳಲ್ಲಿ ಹೋರಿ ವಿಜ್ಞಾನಿಗಳು ಸ್ಫೂರ್ತಿಯಿಂದ
ಸಂಶೋಧನೆಗಳನ್ನು ನಡೆಸಿ, ಹಿಂದೆ ಒಪ್ಪಿಕೊಳ್ಳಲಾಗಿದ್ದ ಸಿದ್ಧಾಂತಗಳು
ಅಸಮರ್ಥನೀಯ. ತಿರುಳಿಲ್ಲದುದು ; ಎಂದು ಸಿದ್ಧಾಂತವನ್ನು ಮಾಡುತ್ತಾರೆ.
ಅವರೂ ಕಾಲ ಗತಿಯಲ್ಲಿ ನಿರ್ನಾಮವಾಗುತ್ತಾರೆ. ಆದರೆ ಆ ಕಾಲದ ಧಾರಣ
ಧ್ಯಾನಗಳಿಂದ, ಅವರುಗಳು ಮಾಡಿದ ಸಿದ್ಧಾಂತವು ವೈಜ್ಞಾನಿಕ ದೇಶದಲ್ಲಿ 'ಈಶತ್ವ
ವನ್ನು ಪಡೆದಿರುತ್ತದೆ. ನವ್ಯ ನೂತನ ಸೃಷ್ಟಿಯ ಪರಂಪರೆಯೇ ಈಶತ್ವ, ಹಿಂದೆ,
ಇಂದು, ಮುಂದು, ಎನ್ನುವುದನ್ನೆಲ್ಲಾ ಒಂದೇ ಎಂಬ ಸಿದ್ಧಾಂತವನ್ನು ಅರಿಯುವುದೇ
ಈಶತ್ವ, ಎನ್ನಬಹುದು.
ವಶಿತ್ವ:- ಚರಾಚರ ಪ್ರಪಂಚವನ್ನು ತನ್ನ ಅಧೀನಕ್ಕೆ ವಶಮಾಡಿಕೊಳ್ಳುವುದು.
ಯಮ ನಿಯಮಾದಿಗಳಿಂದ, ಮತ್ತು 'ಸಂಯಮ'ದಿಂದ, ಮನಸ್ಸಿನ
ಹಿರಿಯಂಶವೊಂದನ್ನು ಅತ್ಯುನ್ನತ ಶಕ್ತಿಯ ಹಂತಕ್ಕೆ ಏರಿಸಿದನು. ಪ್ರಪಂಚವನ್ನು
ವಶಮಾಡಿಕೊಂಡ, ಎಂದರೆ ಚಕ್ರಾಧಿಪತಿಯಾದ ಎನ್ನುವ ಲೌಕಿಕ ಅರ್ಥವು
ಬರುವುದಿಲ್ಲ. ಪ್ರಪಂಚದಲ್ಲಿರುವ ಯಾವುದೂ ಆತನನ್ನು ಪ್ರಭಾವಿಸಲಾರದು,
ಕದಲಿಸಲಾರದು, ಹಾಗಾಗಿ ವಶಿತ್ವವನ್ನು ಪಡೆದಿದ್ದಾನೆ ಎನ್ನಬೇಕು.
ಅಣಿಮಾದಿಯಾದ ಅಷ್ಟ ಸಿದ್ಧಿಗಳನ್ನು ಈ ರೀತಿಯಲ್ಲಿ ಸಮರ್ಥಿಸಬಹುದು.
ಆದರೆ ೭೦ ಕಿಲೋಗ್ರಾಂ ದೇಹವು ಒಂದು ಗ್ರಾಮಿಗೆ ಇಳಿಯುತ್ತದೆ ; ಅಥವಾ
ಹತ್ತು ಮೈಲಿಗಳಷ್ಟು ಮೂರೂ ದಿಕ್ಕುಗಳಲ್ಲಿ ಹರಡುತ್ತದೆ, ಎಂದು ವಾಕ್ಯಾರ್ಥ
ಮಾಡುವುದು, ಪೆಚ್ಚುತನವೆನಿಸುತ್ತದೆ.
{{center|'''ರೂಪ ಲಾವಣ್ಯ ಬಲ ವಜ್ರ ಸಂಹನನತ್ವಾನಿ ಕಾಯ ಸಂಪತ್'''}}
ಸಂಯಮದಿಂದ ದೇಹಕ್ಕೆ ರೂಪ, ಲಾವಣ್ಯ, ಬಲ, ದೃಢತೆಗಳು ಲಭಿಸುತ್ತದೆ.<noinclude></noinclude>
qi2pce6pkn8h1381z3fawrul4mxcuks
317726
317707
2026-05-06T16:17:54Z
Shreelatha.Halemane
7642
/* Validated */
317726
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೪೩೬|right=ಮನಮಂಥನ}}
{{gap}}ಅಲೌಕಿಕವಾದ, ವಿಚಾರಾತೀತವಾದ, ಈ ಅನುಭವವನ್ನು ಹೇಗೆ
ವೈಜ್ಞಾನಿಕವಾಗಿ ಇಂದು ಸಮರ್ಥಿಸಲಿ? ಮುಂದೆ ಕಾಲಗತಿಯಲ್ಲಿ, ಚಿರಂಜೀವಿಗಳು
ಸಮರ್ಥಿಸುತ್ತಾರೆ ಎನ್ನುವ ದೃಢ ನಂಬಿಕೆಯು ಬೇರೂರಿದೆ, ನನ್ನಲ್ಲಿ.
{{gap}}ಈಶತ್ವ :-ನವ್ಯ ನೂತನ ಸೃಷ್ಟಿಯನ್ನು ಮಾಡುವಂತಹ ಮಹಿಮೆಯನ್ನು
ಈಶತ್ವ ಎನ್ನತ್ತಾರೆ.
{{gap}}ಕಾಲಕಾಲಕ್ಕೂ ದೇಶ, ವಿದೇಶಗಳಲ್ಲಿ, ವೈಜ್ಞಾನಿಕ ಸಂಶೋಧನೆಗಳನ್ನು,
ಪರೀಕ್ಷಾ ಪ್ರಯೋಗಗಳಿಂದ ವಿಜ್ಞಾನಿಗಳು ನಡೆಸುತ್ತಾರೆ, ತುಂಬ ಶ್ರದ್ಧೆಯಿಂದ ;
ಧಾರಣ, ಧ್ಯಾನಗಳಿಂದ ನವ್ಯ ಸಿದ್ಧಾಂತವನ್ನು ಪ್ರಚಾರ ಮಾಡುತ್ತಾರೆ.
ಸಹವಿಜ್ಞಾನಿಗಳು 'ಆಹಾ ! ಎಷ್ಟು ಚೆಂದ ! ಎಷ್ಟು ಸುಲಭ ! ಎಷ್ಟು ದಿಟ' ಎಂದು
ಅಚ್ಚರಿ ಪಡುತ್ತಾರೆ. ಒಂದೆರಡು ದಶಕಗಳಲ್ಲಿ ಹೋರಿ ವಿಜ್ಞಾನಿಗಳು ಸ್ಫೂರ್ತಿಯಿಂದ
ಸಂಶೋಧನೆಗಳನ್ನು ನಡೆಸಿ, ಹಿಂದೆ ಒಪ್ಪಿಕೊಳ್ಳಲಾಗಿದ್ದ ಸಿದ್ಧಾಂತಗಳು
ಅಸಮರ್ಥನೀಯ. ತಿರುಳಿಲ್ಲದುದು ; ಎಂದು ಸಿದ್ಧಾಂತವನ್ನು ಮಾಡುತ್ತಾರೆ.
ಅವರೂ ಕಾಲ ಗತಿಯಲ್ಲಿ ನಿರ್ನಾಮವಾಗುತ್ತಾರೆ. ಆದರೆ ಆ ಕಾಲದ ಧಾರಣ
ಧ್ಯಾನಗಳಿಂದ, ಅವರುಗಳು ಮಾಡಿದ ಸಿದ್ಧಾಂತವು ವೈಜ್ಞಾನಿಕ ದೇಶದಲ್ಲಿ 'ಈಶತ್ವ
ವನ್ನು ಪಡೆದಿರುತ್ತದೆ. ನವ್ಯ ನೂತನ ಸೃಷ್ಟಿಯ ಪರಂಪರೆಯೇ ಈಶತ್ವ, ಹಿಂದೆ,
ಇಂದು, ಮುಂದು, ಎನ್ನುವುದನ್ನೆಲ್ಲಾ ಒಂದೇ ಎಂಬ ಸಿದ್ಧಾಂತವನ್ನು ಅರಿಯುವುದೇ
ಈಶತ್ವ, ಎನ್ನಬಹುದು.
{{gap}}ವಶಿತ್ವ:- ಚರಾಚರ ಪ್ರಪಂಚವನ್ನು ತನ್ನ ಅಧೀನಕ್ಕೆ ವಶಮಾಡಿಕೊಳ್ಳುವುದು.
ಯಮ ನಿಯಮಾದಿಗಳಿಂದ, ಮತ್ತು 'ಸಂಯಮ'ದಿಂದ, ಮನಸ್ಸಿನ
ಹಿರಿಯಂಶವೊಂದನ್ನು ಅತ್ಯುನ್ನತ ಶಕ್ತಿಯ ಹಂತಕ್ಕೆ ಏರಿಸಿದನು. ಪ್ರಪಂಚವನ್ನು
ವಶಮಾಡಿಕೊಂಡ, ಎಂದರೆ ಚಕ್ರಾಧಿಪತಿಯಾದ ಎನ್ನುವ ಲೌಕಿಕ ಅರ್ಥವು
ಬರುವುದಿಲ್ಲ. ಪ್ರಪಂಚದಲ್ಲಿರುವ ಯಾವುದೂ ಆತನನ್ನು ಪ್ರಭಾವಿಸಲಾರದು,
ಕದಲಿಸಲಾರದು, ಹಾಗಾಗಿ ವಶಿತ್ವವನ್ನು ಪಡೆದಿದ್ದಾನೆ ಎನ್ನಬೇಕು.
{{gap}}ಅಣಿಮಾದಿಯಾದ ಅಷ್ಟ ಸಿದ್ಧಿಗಳನ್ನು ಈ ರೀತಿಯಲ್ಲಿ ಸಮರ್ಥಿಸಬಹುದು.
ಆದರೆ ೭೦ ಕಿಲೋಗ್ರಾಂ ದೇಹವು ಒಂದು ಗ್ರಾಮಿಗೆ ಇಳಿಯುತ್ತದೆ ; ಅಥವಾ
ಹತ್ತು ಮೈಲಿಗಳಷ್ಟು ಮೂರೂ ದಿಕ್ಕುಗಳಲ್ಲಿ ಹರಡುತ್ತದೆ, ಎಂದು ವಾಕ್ಯಾರ್ಥ
ಮಾಡುವುದು, ಪೆಚ್ಚುತನವೆನಿಸುತ್ತದೆ.
{{center|'''ರೂಪ ಲಾವಣ್ಯ ಬಲ ವಜ್ರ ಸಂಹನನತ್ವಾನಿ ಕಾಯ ಸಂಪತ್'''}}
ಸಂಯಮದಿಂದ ದೇಹಕ್ಕೆ ರೂಪ, ಲಾವಣ್ಯ, ಬಲ, ದೃಢತೆಗಳು ಲಭಿಸುತ್ತದೆ.<noinclude></noinclude>
4qbykrj9tss4nnmkecj8zqeuzo9ur2f
ಪುಟ:ಮನಮಂಥನ.pdf/೪೫೫
104
62902
317713
314675
2026-05-06T16:13:40Z
Shreesha Sharma
7840
/* Proofread */
317713
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೭}}
{{center|'''ಗ್ರಹಣ ಸ್ವರೂಪ ಅಸ್ಮಿತ ಅನ್ವಯಾರ್ಥವತ್ವ ಸಂಯಮಾತ್ ಇಂದ್ರಿಯ ಜಯ'''}}
ಇಂದ್ರಿಯಗಳನ್ನು ಗ್ರಹಿಸುವುದು, ಅಥವಾ ತಿಳಿಯುವುದು, ಅವುಗಳ
ಸ್ವರೂಪ, ಅವುಗಳು ನನ್ನಲ್ಲಿವೆ ಎಂದು ತಿಳಿಯುವುದು, ಅವುಗಳ ವೈಶಾಲ್ಯತೆ,
ಮತ್ತು ಅವುಗಳು ನೀಡುವ ಫಲಿತಾಂಶಗಳು, ಇವುಗಳನ್ನು ಕುರಿತು ಸಂಯಮವನ್ನು
ಮಾಡಿದರೆ ; ಅವುಗಳನ್ನು ಜಯಿಸಬಹುದು.
{{center|'''ತತೋ ಮನೋಜವಿತ್ಥಂ ವಿಕಾರಣ ಭಾವಃ ಪ್ರಧಾನ ಯಜ'''}}
ಇಂದ್ರಿಯಗಳನ್ನು ಜಯಿಸುವುದರಿಂದ, ಮನಸ್ಸಿನ ವೇಗದಂತೆ, ಮನಸ್ಸು
ಮತ್ತು ದೇಹದೊಳಗೆ ಇಂದ್ರಿಯಗಳ ಗಮನ, ಆಗಮನಗಳು ; ಬಾಹೇಂದ್ರಿಯ
ಪ್ರಚಾರಗಳು, ಮತ್ತು ಮೂಲ ಪ್ರಕೃತಿಯ ಸ್ವಾಧೀನವು ಹುಟ್ಟುತ್ತದೆ.
ಕಡೆಯ ಐದು ಸೂತ್ರಗಳ ಸಿದ್ಧಿಗಳನ್ನು ಮಧುಪ್ರತೀಕವೆನ್ನುತ್ತಾರೆ. ಹಾಗೂ
ಋತಂಭರ ಪ್ರಜ್ಞಾ; ಸತ್ಯವಾದ, ತಾನೇ ತಾನಾಗಿ ಲಭಿಸುವ ಅರಿವು, ಇಂತಹ
ಅರಿವಿನ ಮೂಲವು ಮಧುಪ್ರತೀಕ ಎಂದೂ ಅರ್ಥಮಾಡುತ್ತಾರೆ.
{{center|'''ಸತ್ತ್ವ ಪುರುಷಾನ್ಯತಾ ಖ್ಯಾತಿ ಮಾತ್ರಸ್ಯ ಸರ್ವ ಭಾವಾಧಿಷ್ಠಾತೃತ್ವಂ ಸರ್ವ ಜ್ಞಾತತ್ವಂಚ'''}}
ಸತ್ವ ಮತ್ತು ಆಧಾರವಾಗಿದ್ದುಕೊಂಡು ಮನಸ್ಸನ್ನು ನಡೆಸುವ ಶಕ್ತಿ ಇವುಗಳ
ಪರಸ್ಪರ ಸಂಬಂಧವನ್ನು ಕುರಿತು ಸಂಯಮವನ್ನು ಮಾಡಿದರೆ, ಸರ್ವಾಧಿಕಾರವು
ಮತ್ತು ಸರ್ವಜ್ಞತೆಯೂ ಲಭಿಸುತ್ತದೆ.
{{center|''ತತ್ ವೈರಾಗ್ಯತ್ ಅಪಿ ದೋಷ ಬೀಜ ಕ್ಷಯೆ ಕೈವಲ್ಯಂ'''}}
ಈ ಸಿದ್ಧಿಗಳನ್ನು ಗಮನಿಸದಿದ್ದರೆ ಅವುಗಳಲ್ಲಿ ಉದಾಸೀನತೆಯು ಹುಟ್ಟಿದರೆ,
ಬಂಧನದ ಎಳೆಗಳು ಕೂಡ ನಾಶವಾಗುತ್ತವೆ. ಆನಂತರ ಕೈವಲ್ಯ ಸ್ಥಿತಿಯು
ಮನಸ್ಸಿಗೆ ದೊರೆಯುತ್ತದೆ.
{{center|'''ಸ್ಥಾನಿ ಉಪನಿಮಂತ್ರಿಣಿ ಸಂಗಮಯಾಕರಣಂ ಪುನಃ ಅನಿಷ್ಟ ಪ್ರಸಂಗಾತ್'''}}
ಲಭಿಸಿದ ಸಿದ್ಧಿಗಳಲ್ಲಿ ಹೆಮ್ಮೆಯನ್ನಾಗಲೀ, ಆಸಕ್ತಿಯನ್ನಾಗಲೀ ಹೊಂದಿದರೆ,
ಅನಿಷ್ಟವು ಪುನಃ ಸಂಭವಿಸಬಹುದು.
{{center|'''ಕ್ಷಣ ತತ್ ಕ್ರಮಯೋ ಸಂಯಮಾತ್, ವಿವೇಕಜಂ ಜ್ಞಾನು'''}}
ಕ್ಷಣಕಾಲದ ಮುಂದಿನ ಹಾಗೂ ಹಿಂದಿನ ಕ್ಷಣಗಳಲ್ಲಿ ಸಂಯಮವನ್ನು
ರೂಢಿಸಿದರೆ ವಿವೇಕಪೂರಿತವಾದ ಜ್ಞಾನವು ಲಭಿಸುತ್ತದೆ.
{{center|'''ಜಾತಿ ಲಕ್ಷಣ ದೇಶ: ಅನ್ಯತಾನ್ ಅವಚ್ಛೇದಾತ್ ತುಲಯೋ ತತಃ ಪ್ರತಿಪತ್ತಿ:'''}}
ಜಾತಿ ಎಂದರೆ Species ಆಕಾರ, ರೂಪವಿಶೇಷಗಳು ; ಇವುಗಳೆಲ್ಲವೂ
ಸಮಾನವಾಗಿರುವಂತೆ ಕಾಣಬಹುದು. ಸಂಯಮವನ್ನು ಅವುಗಳಲ್ಲಿ<noinclude></noinclude>
3y5urec8dkoou2j4ec9our4bqk2psfl
317727
317713
2026-05-06T16:19:02Z
Shreelatha.Halemane
7642
/* Validated */
317727
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೭}}
{{center|'''ಗ್ರಹಣ ಸ್ವರೂಪ ಅಸ್ಮಿತ ಅನ್ವಯಾರ್ಥವತ್ವ ಸಂಯಮಾತ್ ಇಂದ್ರಿಯ ಜಯ'''}}
{{gap}}ಇಂದ್ರಿಯಗಳನ್ನು ಗ್ರಹಿಸುವುದು, ಅಥವಾ ತಿಳಿಯುವುದು, ಅವುಗಳ
ಸ್ವರೂಪ, ಅವುಗಳು ನನ್ನಲ್ಲಿವೆ ಎಂದು ತಿಳಿಯುವುದು, ಅವುಗಳ ವೈಶಾಲ್ಯತೆ,
ಮತ್ತು ಅವುಗಳು ನೀಡುವ ಫಲಿತಾಂಶಗಳು, ಇವುಗಳನ್ನು ಕುರಿತು ಸಂಯಮವನ್ನು
ಮಾಡಿದರೆ ; ಅವುಗಳನ್ನು ಜಯಿಸಬಹುದು.
{{center|'''ತತೋ ಮನೋಜವಿತ್ಥಂ ವಿಕಾರಣ ಭಾವಃ ಪ್ರಧಾನ ಯಜ'''}}
{{gap}}ಇಂದ್ರಿಯಗಳನ್ನು ಜಯಿಸುವುದರಿಂದ, ಮನಸ್ಸಿನ ವೇಗದಂತೆ, ಮನಸ್ಸು
ಮತ್ತು ದೇಹದೊಳಗೆ ಇಂದ್ರಿಯಗಳ ಗಮನ, ಆಗಮನಗಳು ; ಬಾಹೇಂದ್ರಿಯ
ಪ್ರಚಾರಗಳು, ಮತ್ತು ಮೂಲ ಪ್ರಕೃತಿಯ ಸ್ವಾಧೀನವು ಹುಟ್ಟುತ್ತದೆ.
{{gap}}ಕಡೆಯ ಐದು ಸೂತ್ರಗಳ ಸಿದ್ಧಿಗಳನ್ನು ಮಧುಪ್ರತೀಕವೆನ್ನುತ್ತಾರೆ. ಹಾಗೂ
ಋತಂಭರ ಪ್ರಜ್ಞಾ; ಸತ್ಯವಾದ, ತಾನೇ ತಾನಾಗಿ ಲಭಿಸುವ ಅರಿವು, ಇಂತಹ
ಅರಿವಿನ ಮೂಲವು ಮಧುಪ್ರತೀಕ ಎಂದೂ ಅರ್ಥಮಾಡುತ್ತಾರೆ.
{{center|'''ಸತ್ತ್ವ ಪುರುಷಾನ್ಯತಾ ಖ್ಯಾತಿ ಮಾತ್ರಸ್ಯ ಸರ್ವ ಭಾವಾಧಿಷ್ಠಾತೃತ್ವಂ ಸರ್ವ ಜ್ಞಾತತ್ವಂಚ'''}}
ಸತ್ವ ಮತ್ತು ಆಧಾರವಾಗಿದ್ದುಕೊಂಡು ಮನಸ್ಸನ್ನು ನಡೆಸುವ ಶಕ್ತಿ ಇವುಗಳ
ಪರಸ್ಪರ ಸಂಬಂಧವನ್ನು ಕುರಿತು ಸಂಯಮವನ್ನು ಮಾಡಿದರೆ, ಸರ್ವಾಧಿಕಾರವು
ಮತ್ತು ಸರ್ವಜ್ಞತೆಯೂ ಲಭಿಸುತ್ತದೆ.
{{center|''ತತ್ ವೈರಾಗ್ಯತ್ ಅಪಿ ದೋಷ ಬೀಜ ಕ್ಷಯೆ ಕೈವಲ್ಯಂ'''}}
{{gap}}ಈ ಸಿದ್ಧಿಗಳನ್ನು ಗಮನಿಸದಿದ್ದರೆ ಅವುಗಳಲ್ಲಿ ಉದಾಸೀನತೆಯು ಹುಟ್ಟಿದರೆ,
ಬಂಧನದ ಎಳೆಗಳು ಕೂಡ ನಾಶವಾಗುತ್ತವೆ. ಆನಂತರ ಕೈವಲ್ಯ ಸ್ಥಿತಿಯು
ಮನಸ್ಸಿಗೆ ದೊರೆಯುತ್ತದೆ.
{{center|'''ಸ್ಥಾನಿ ಉಪನಿಮಂತ್ರಿಣಿ ಸಂಗಮಯಾಕರಣಂ ಪುನಃ ಅನಿಷ್ಟ ಪ್ರಸಂಗಾತ್'''}}
{{gap}}ಲಭಿಸಿದ ಸಿದ್ಧಿಗಳಲ್ಲಿ ಹೆಮ್ಮೆಯನ್ನಾಗಲೀ, ಆಸಕ್ತಿಯನ್ನಾಗಲೀ ಹೊಂದಿದರೆ,
ಅನಿಷ್ಟವು ಪುನಃ ಸಂಭವಿಸಬಹುದು.
{{center|'''ಕ್ಷಣ ತತ್ ಕ್ರಮಯೋ ಸಂಯಮಾತ್, ವಿವೇಕಜಂ ಜ್ಞಾನು'''}}
{{gap}}ಕ್ಷಣಕಾಲದ ಮುಂದಿನ ಹಾಗೂ ಹಿಂದಿನ ಕ್ಷಣಗಳಲ್ಲಿ ಸಂಯಮವನ್ನು
ರೂಢಿಸಿದರೆ ವಿವೇಕಪೂರಿತವಾದ ಜ್ಞಾನವು ಲಭಿಸುತ್ತದೆ.
{{center|'''ಜಾತಿ ಲಕ್ಷಣ ದೇಶ: ಅನ್ಯತಾನ್ ಅವಚ್ಛೇದಾತ್ ತುಲಯೋ ತತಃ ಪ್ರತಿಪತ್ತಿ:'''}}
{{gap}}ಜಾತಿ ಎಂದರೆ Species ಆಕಾರ, ರೂಪವಿಶೇಷಗಳು ; ಇವುಗಳೆಲ್ಲವೂ
ಸಮಾನವಾಗಿರುವಂತೆ ಕಾಣಬಹುದು. ಸಂಯಮವನ್ನು ಅವುಗಳಲ್ಲಿ<noinclude></noinclude>
if3nxdvant967yvzuld0w6jjoixlf75
ಪುಟ:ಮನಮಂಥನ.pdf/೪೫೬
104
62903
317721
314674
2026-05-06T16:15:38Z
Shreesha Sharma
7840
/* Proofread */
317721
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೪೩೮|right=ಮನಮಂಥನ}}
ಮಾಡುವುದರಿಂದ, ಅವುಗಳಲ್ಲಿರುವ ವ್ಯತ್ಯಾಸವು ಮತ್ತು ವಿವೇಕ ಜ್ಞಾನವು ಲಭಿಸುತ್ತದೆ.
{{center|'''ತಾರಕಂ ಸರ್ವ ವಿಷಯಂ ಸರ್ವಧಾ ವಿಷಯಂ ಅಕ್ರಮಂ ಚ ಇತಿ ವಿವೇಕಜಂ ಜ್ಞಾನಂ'''}}
ವಿವೇಕದಿಂದ ಹುಟ್ಟಿದ ಜ್ಞಾನಕ್ಕೆ ತಾರಕವೆಂದು ಹೆಸರು. ಸಮಸ್ತ
ವಿಷಯಗಳೂ ಏಕಕಾಲದಲ್ಲಿ ಅರಿವಾದಾಗ ತಾರಕ ಎನ್ನುತ್ತಾರೆ.
ಅರಿವನ್ನುಂಟುಮಾಡುವ ಸಾಮಾನ್ಯವಾದ ವಿಧಾನಗಳಿಂದ, ಈ ವಿಧಾನವು
ಪ್ರತ್ಯೇಕವಾದುದು. ಈ ಜ್ಞಾನಕ್ಕೆ ಇಂತಹ ಕ್ರಮ ಎಂಬುದಿಲ್ಲ.
{{center|'''ಸ ಪುರುಷಯೋಃ ಶುದ್ಧಿ ಸಾಮ್ಯ ಕೈವಲ್ಯಂ'''}}
ಸತ್ ಅಂಶವು ರಜಸ್ತಮಗಳಿಂದ ಶುದ್ಧಿಯಾಗಿ, ಮನಸ್ಸಿಗೆ ಆಧಾರವಾದ,
ಮೂಲಭೂತವಾದುದರೊಂದಿಗೆ (ಅದನ್ನು 'ಪುರುಷ' ಎನ್ನುತ್ತಾರೆ)
ಸಮಸಮವಾದಾಗ ಕೈವಲ್ಯ ಸ್ಥಿತಿಯು ಲಭಿಸುತ್ತದೆ.
{{center|'''ಕೈವಲ್ಯ ಪಾದ'''}}
ಸಂಯಮದಿಂದ, ಸಮಾಧಿ ಸ್ಥಿತಿಯನ್ನು ದೃಢಪಡಿಸಿದ ಮೇಲೆ, ಮನಸ್ಸಿನಲ್ಲಿ
'ಪ್ರಜ್ಞೆಯು ಕೇವಲ ಒಂದೇ ಶಾಶ್ವತವಾಗಿ ಅಸ್ತಿತ್ವದಲ್ಲಿರುವುದು' ಎಂಬ ಅರಿವು
ಮೂಡುತ್ತದೆ. ಕೈವಲ್ಯ ಸ್ಥಿತಿಯ ವಿವರಣೆಗಳನ್ನು ಈ ಭಾಗದಲ್ಲಿ ಕೊಡಲಾಗಿದೆ.
'ಪುನರ್ಜನ್ಮವು ಖಂಡಿತ, ಒಂದು ಜನ್ಮದಲ್ಲಿ ನಡೆಸಿದ ಯೋಗ ಅಭ್ಯಾಸವು,
ಸಮಾಧಿ ಸ್ಥಿತಿಯನ್ನು ಪಡೆಯದೆ ಇರಬಹುದು. ಸಂಯಮವು ಲಭಿಸದೆ
ಇರಬಹುದು. ಮುಂದಿನ ಜನ್ಮದಲ್ಲಿ ಹಕ್ಕಿಯಾಗಿ ಹುಟ್ಟಿದರೆ, ಗಾಳಿಯಲ್ಲಿ
ಹಾರಾಡುವ ಸಿದ್ಧಿಯನ್ನು ಪಡೆಯಬಹುದು. ಗೂಬೆಯಾಗಿ ಹುಟ್ಟಿದರೆ ಕತ್ತಲೆಯಲ್ಲಿ
ಕಾಣುವ ಸಿದ್ಧಿಯನ್ನು ಹೊಂದಬಹುದು. ಈ ವಿಷಯಗಳನ್ನು ನಿಸ್ಸಂಶಯವಾಗಿ
ನಂಬಿದವರಿಗೆ ಕೈವಲ್ಯ ಪಾದದ ಸೂತ್ರಗಳು ಅರ್ಥವಾಗುತ್ತವೆ.
{{center|'''ಜನ್ಮ, ಔಷಧಿ, ಮಂತ್ರ, ತಪಸ್, ಸಮಾಧಿ, ಜಾ ಸಿದ್ಧಯ'''}}
ಐದು ಪ್ರಮುಖ ಭಾಗಗಳನ್ನಾಗಿ ಸಿದ್ಧಿಗಳನ್ನು ವಿಂಗಡಿಸಬಹುದು.
(ಆ) ಜನ್ಮಾದಿಗಳಿಗೆ ಅನ್ವಯಿಸುವಂತೆ ಆಕಾಶದಲ್ಲಿ ಸಂಚರಿಸುವಿಕೆ,
ಪಕ್ಷಿಗಳಂತೆ ಅಥವಾ ಜಲಸ್ಥಂಭನವನ್ನು ಮೀನು ಮೊಸಳೆಗಳಂತೆ ಮಾಡುವಿಕೆ.
ಊಸರವಳ್ಳಿಯಂತೆ ರೂಪವನ್ನು ಬದಲಾಯಿಸುವಿಕೆ, ಮರಗಳಂತೆ ಬಹುಕಾಲ
ಬದುಕಿರುವಿಕೆ. ಇಂತಹ ಸಿದ್ಧಿಗಳು, ಆಯಾ ಪ್ರಾಣಿಗೆ ಹುಟ್ಟಿದಂದಿನಿಂದಲೇ
ಲಭಿಸಿರುವ 'ಸಿದ್ಧಿಗಳು' ಪ್ರಾಣಿ ಜನ್ಮವು ಮುಗಿದ ನಂತರ ಹೊಸ ಜನ್ಮವನ್ನು
ಪಡೆಯುವಾಗ, ಇತರ ರೀತಿಯ ಸಿದ್ಧಿಗಳು ಆಜನ್ಮ ಬಳುವಳಿಗಳಾಗಿರುತ್ತದೆ.
(ಆ) ಔಷಧಿಗಳು ಎಂದರೆ ಗಿಡ ಮರ ಬಳ್ಳಿಗಳಿಂದ ಉತ್ಪಾದಿತವಾದುವು.<noinclude></noinclude>
7q87gm4c4dsntnoigc9ea36d3q5x8vg
317729
317721
2026-05-06T16:20:02Z
Shreelatha.Halemane
7642
/* Validated */
317729
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೪೩೮|right=ಮನಮಂಥನ}}
ಮಾಡುವುದರಿಂದ, ಅವುಗಳಲ್ಲಿರುವ ವ್ಯತ್ಯಾಸವು ಮತ್ತು ವಿವೇಕ ಜ್ಞಾನವು ಲಭಿಸುತ್ತದೆ.
{{center|'''ತಾರಕಂ ಸರ್ವ ವಿಷಯಂ ಸರ್ವಧಾ ವಿಷಯಂ ಅಕ್ರಮಂ ಚ ಇತಿ ವಿವೇಕಜಂ ಜ್ಞಾನಂ'''}}
{{gap}}ವಿವೇಕದಿಂದ ಹುಟ್ಟಿದ ಜ್ಞಾನಕ್ಕೆ ತಾರಕವೆಂದು ಹೆಸರು. ಸಮಸ್ತ
ವಿಷಯಗಳೂ ಏಕಕಾಲದಲ್ಲಿ ಅರಿವಾದಾಗ ತಾರಕ ಎನ್ನುತ್ತಾರೆ.
ಅರಿವನ್ನುಂಟುಮಾಡುವ ಸಾಮಾನ್ಯವಾದ ವಿಧಾನಗಳಿಂದ, ಈ ವಿಧಾನವು
ಪ್ರತ್ಯೇಕವಾದುದು. ಈ ಜ್ಞಾನಕ್ಕೆ ಇಂತಹ ಕ್ರಮ ಎಂಬುದಿಲ್ಲ.
{{center|'''ಸ ಪುರುಷಯೋಃ ಶುದ್ಧಿ ಸಾಮ್ಯ ಕೈವಲ್ಯಂ'''}}
{{gap}}ಸತ್ ಅಂಶವು ರಜಸ್ತಮಗಳಿಂದ ಶುದ್ಧಿಯಾಗಿ, ಮನಸ್ಸಿಗೆ ಆಧಾರವಾದ,
ಮೂಲಭೂತವಾದುದರೊಂದಿಗೆ (ಅದನ್ನು 'ಪುರುಷ' ಎನ್ನುತ್ತಾರೆ)
ಸಮಸಮವಾದಾಗ ಕೈವಲ್ಯ ಸ್ಥಿತಿಯು ಲಭಿಸುತ್ತದೆ.
{{center|'''ಕೈವಲ್ಯ ಪಾದ'''}}
{{gap}}ಸಂಯಮದಿಂದ, ಸಮಾಧಿ ಸ್ಥಿತಿಯನ್ನು ದೃಢಪಡಿಸಿದ ಮೇಲೆ, ಮನಸ್ಸಿನಲ್ಲಿ
'ಪ್ರಜ್ಞೆಯು ಕೇವಲ ಒಂದೇ ಶಾಶ್ವತವಾಗಿ ಅಸ್ತಿತ್ವದಲ್ಲಿರುವುದು' ಎಂಬ ಅರಿವು
ಮೂಡುತ್ತದೆ. ಕೈವಲ್ಯ ಸ್ಥಿತಿಯ ವಿವರಣೆಗಳನ್ನು ಈ ಭಾಗದಲ್ಲಿ ಕೊಡಲಾಗಿದೆ.
'ಪುನರ್ಜನ್ಮವು ಖಂಡಿತ, ಒಂದು ಜನ್ಮದಲ್ಲಿ ನಡೆಸಿದ ಯೋಗ ಅಭ್ಯಾಸವು,
ಸಮಾಧಿ ಸ್ಥಿತಿಯನ್ನು ಪಡೆಯದೆ ಇರಬಹುದು. ಸಂಯಮವು ಲಭಿಸದೆ
ಇರಬಹುದು. ಮುಂದಿನ ಜನ್ಮದಲ್ಲಿ ಹಕ್ಕಿಯಾಗಿ ಹುಟ್ಟಿದರೆ, ಗಾಳಿಯಲ್ಲಿ
ಹಾರಾಡುವ ಸಿದ್ಧಿಯನ್ನು ಪಡೆಯಬಹುದು. ಗೂಬೆಯಾಗಿ ಹುಟ್ಟಿದರೆ ಕತ್ತಲೆಯಲ್ಲಿ
ಕಾಣುವ ಸಿದ್ಧಿಯನ್ನು ಹೊಂದಬಹುದು. ಈ ವಿಷಯಗಳನ್ನು ನಿಸ್ಸಂಶಯವಾಗಿ
ನಂಬಿದವರಿಗೆ ಕೈವಲ್ಯ ಪಾದದ ಸೂತ್ರಗಳು ಅರ್ಥವಾಗುತ್ತವೆ.
{{center|'''ಜನ್ಮ, ಔಷಧಿ, ಮಂತ್ರ, ತಪಸ್, ಸಮಾಧಿ, ಜಾ ಸಿದ್ಧಯ'''}}
{{gap}}ಐದು ಪ್ರಮುಖ ಭಾಗಗಳನ್ನಾಗಿ ಸಿದ್ಧಿಗಳನ್ನು ವಿಂಗಡಿಸಬಹುದು.
{{gap}}(ಆ) ಜನ್ಮಾದಿಗಳಿಗೆ ಅನ್ವಯಿಸುವಂತೆ ಆಕಾಶದಲ್ಲಿ ಸಂಚರಿಸುವಿಕೆ,
ಪಕ್ಷಿಗಳಂತೆ ಅಥವಾ ಜಲಸ್ಥಂಭನವನ್ನು ಮೀನು ಮೊಸಳೆಗಳಂತೆ ಮಾಡುವಿಕೆ.
ಊಸರವಳ್ಳಿಯಂತೆ ರೂಪವನ್ನು ಬದಲಾಯಿಸುವಿಕೆ, ಮರಗಳಂತೆ ಬಹುಕಾಲ
ಬದುಕಿರುವಿಕೆ. ಇಂತಹ ಸಿದ್ಧಿಗಳು, ಆಯಾ ಪ್ರಾಣಿಗೆ ಹುಟ್ಟಿದಂದಿನಿಂದಲೇ
ಲಭಿಸಿರುವ 'ಸಿದ್ಧಿಗಳು' ಪ್ರಾಣಿ ಜನ್ಮವು ಮುಗಿದ ನಂತರ ಹೊಸ ಜನ್ಮವನ್ನು
ಪಡೆಯುವಾಗ, ಇತರ ರೀತಿಯ ಸಿದ್ಧಿಗಳು ಆಜನ್ಮ ಬಳುವಳಿಗಳಾಗಿರುತ್ತದೆ.
{{gap}}(ಆ) ಔಷಧಿಗಳು ಎಂದರೆ ಗಿಡ ಮರ ಬಳ್ಳಿಗಳಿಂದ ಉತ್ಪಾದಿತವಾದುವು.<noinclude></noinclude>
t7wft66hpcfhqzds07rc62rkb3i1sua
ಪುಟ:ಮನಮಂಥನ.pdf/೪೫೭
104
62904
317723
314673
2026-05-06T16:16:42Z
Shreesha Sharma
7840
/* Proofread */
317723
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೯}}
ರಾಸಾಯನಿಕವಾಗಿ ತಯಾರಿಸಿದ ಸಿದೌಷಧಿಗಳು. ಶೀತ, ಉಷ್ಣ ಅಥವಾ ಕಾವು,
ಥಂಡಿ ಇತ್ಯಾದಿ ಭೌತ ಪ್ರಕಾರಗಳನ್ನು ಬಳಸುವುದು. ಲೇಹ, ಚೂರ್ಣ ಗುಗ್ಗುಳ
ಇತ್ಯಾದಿ ಮಿಶ್ರ ಔಷಧಿಗಳು ಕಾಯಕಲ್ಪವನ್ನು ಮಾಡುವ ಔಷಧಿಗಳು.
ಇಂತಹವುಗಳಲ್ಲಿ ಹಲವು 'ಸಿದ್ಧಿ'ಯನ್ನು ನೀಡುತ್ತದೆ. ಸೋಮರಸವೆಂಬ
ವೇದದ ಕಾಲದಿಂದ ಪ್ರಸಿದ್ಧವಾಗಿರುವ ಔಷಧಿಯು, ಹಿಮಾಲಯದಲ್ಲಿ
ಕೆಲವು ಗಿಡಗಳ ಎಲೆಗಳ ಮೇಲೆ ಬೆಳೆಯುವ ಬೂಷ್ಟು ಎಂದು,
ವೈಜ್ಞಾನಿಕವಾಗಿ ಇಂದು ಅನುಮಾನಿಸಲ್ಪಟ್ಟಿದೆ. ಮೆಕ್ಸಿಕೋ ದೇಶದಲ್ಲಿ ಪುರಾತನ
ಕಾಲದಿಂದಲೂ ಪಿಯೋಟಲ್ ಎಂಬ ಮೂಲಿಕೆಯನ್ನು ಪವಿತ್ರ ಕಾರ್ಯವೆಂದು
ಸೇವಿಸುತ್ತಿದ್ದರು. ಮೆಸ್ಕೂಲಿನ್ ಎಂಬ ಔಷಧಾಂಶವು Peoytl ನಲ್ಲಿದೆ.
ಭ್ರಮಾಕಾರಕ ಔಷಧಿ ಇದು. ಸೇವಿಸಿದ ನಂತರ ಮನಸ್ಸು ಈ ಲೋಕವನ್ನು
ಮರೆತು, ಅತಿ ಸುಂದರವಾದ, ಅತಿ ಸುಖವೀವ ಇನ್ನಾವುದೋ ಭ್ರಮಾಲೋಕದಲ್ಲಿ
ವಿಹರಿಸುತ್ತದೆ. ಆ ಸ್ಥಿತಿಯಲ್ಲಿ ಭ್ರಮಾಲೋಕವೇ ಸತ್ಯವಾದುದು, ಮಿಕ್ಕ ಬಾಳು
ಮಿಥ್ಯ ಎಂದನಿಸುತ್ತದೆ. ಅಮಲು ಇಳಿದ ಮೇಲೆ, ಅತಿ ಸುಂದರ ಸುಖದ
ಸ್ಮರಣೆಯು ಸ್ವಲ್ಪ ಉಳಿದಿರುತ್ತದೆ. ತಿರುಗಿ ಆ ಅನುಭವವನ್ನು ಪಡೆಯುವ
ಎಂಬ ಹಂಬಲವಿರುತ್ತದೆ. ಅಮಲು ಕೈವಲ್ಯವನ್ನು ದೊರಕಿಸಿತು ಎನ್ನುವ ಭ್ರಮೆಯು
ಇರುತ್ತದೆ.
ಸುಮಾರು ೨೩೦೦ ವರ್ಷಗಳ ಹಿಂದೆ, Hallucinogens ಎಂಬ ಹೆಸರು
ಇರಲಿಲ್ಲ. ಆದರೂ ಔಷಧಿಗಳಿಂದ 'ಸಿದ್ಧಿ'ಯನ್ನು ಅಂದರೆ ಅಲೌಕಿಕ
ಅನುಭವಗಳನ್ನು ಹೊಂದಬಹುದು ಎಂದು ಮಹರ್ಷಿಗಳು ಹೇಳಿದ್ದಾರೆ. ಅಂದರೆ
ಆ ಕಾಲದಲ್ಲಿ ಇಂತಹ ಔಷಧಿಗಳ ಜ್ಞಾನವು ಇದ್ದಿರಲೇಬೇಕು. ಸೋಮ ಎಂಬುದನ್ನು
ಬಿಟ್ಟರೆ ಈ ತೆರನ ಔಷಧಿಗಳು ಯಾವುವು ಇದ್ದುವು? ಗಾಂಜಾ, ಅಫೀಮು,
ಹುದುಗುನೊರೆಗೂಡಿದ ದ್ರಾಕ್ಷಾರಸ, ಇತ್ಯಾದಿಗಳು ಇದ್ದುವು.
(ಇ) ಮಂತ್ರಗಳು :-ಬಾಲ್ಯದಿಂದಲೂ ಮನೆಯಲ್ಲಿ, ಕಲಿಕೆಯಿಂದ, ಹಾಗೂ
ಮನನದಿಂದ, ಪ್ರತಿಯೊಬ್ಬ ವ್ಯಕ್ತಿಯೂ ಮನೆದೇವರು, ಕುಲದೇವತೆ ಎನ್ನುವ
ಕಲ್ಪನೆಯನ್ನು ರೂಢಿಸಿಕೊಂಡಿರುತ್ತಾನೆ. ವಿಚಾರಪರ ಮನಸ್ಸಿಗೆ ಇದು ಒಪ್ಪದೆ
ಇರಬಹುದು. ಆದರೆ ರೂಢಿಗತವಾದ ಈ ಕಲ್ಪನೆಯು ಸ್ಥಿರವಾಗಿರುತ್ತದೆ.
ಮನೆದೇವರು, ಇಷ್ಟದೇವತೆ, ಎಂದಮೇಲೆ ಅದನ್ನು ಆರಾಧಿಸಲು ಎರಡು
ಮಾರ್ಗಗಳಿರುತ್ತವೆ. ಬಹಿರಂಗವಾಗಿ, ಕುಲದವರು ರೂಢಿಸಿಕೊಂಡು ಬಂದ
ಪೂಜಾವಿಧಾನ, ಅಭಿಷೇಕ, ಅರ್ಚನೆ, ಬಲಿ, ನೈವೇದ್ಯ ಇತ್ಯಾದಿಗಳು,<noinclude></noinclude>
3u42nzooilxdwrmbwfxyok9swxjkrc4
317731
317723
2026-05-06T16:20:29Z
Shreelatha.Halemane
7642
/* Validated */
317731
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೩೯}}
ರಾಸಾಯನಿಕವಾಗಿ ತಯಾರಿಸಿದ ಸಿದೌಷಧಿಗಳು. ಶೀತ, ಉಷ್ಣ ಅಥವಾ ಕಾವು,
ಥಂಡಿ ಇತ್ಯಾದಿ ಭೌತ ಪ್ರಕಾರಗಳನ್ನು ಬಳಸುವುದು. ಲೇಹ, ಚೂರ್ಣ ಗುಗ್ಗುಳ
ಇತ್ಯಾದಿ ಮಿಶ್ರ ಔಷಧಿಗಳು ಕಾಯಕಲ್ಪವನ್ನು ಮಾಡುವ ಔಷಧಿಗಳು.
{{gap}}ಇಂತಹವುಗಳಲ್ಲಿ ಹಲವು 'ಸಿದ್ಧಿ'ಯನ್ನು ನೀಡುತ್ತದೆ. ಸೋಮರಸವೆಂಬ
ವೇದದ ಕಾಲದಿಂದ ಪ್ರಸಿದ್ಧವಾಗಿರುವ ಔಷಧಿಯು, ಹಿಮಾಲಯದಲ್ಲಿ
ಕೆಲವು ಗಿಡಗಳ ಎಲೆಗಳ ಮೇಲೆ ಬೆಳೆಯುವ ಬೂಷ್ಟು ಎಂದು,
ವೈಜ್ಞಾನಿಕವಾಗಿ ಇಂದು ಅನುಮಾನಿಸಲ್ಪಟ್ಟಿದೆ. ಮೆಕ್ಸಿಕೋ ದೇಶದಲ್ಲಿ ಪುರಾತನ
ಕಾಲದಿಂದಲೂ ಪಿಯೋಟಲ್ ಎಂಬ ಮೂಲಿಕೆಯನ್ನು ಪವಿತ್ರ ಕಾರ್ಯವೆಂದು
ಸೇವಿಸುತ್ತಿದ್ದರು. ಮೆಸ್ಕೂಲಿನ್ ಎಂಬ ಔಷಧಾಂಶವು Peoytl ನಲ್ಲಿದೆ.
ಭ್ರಮಾಕಾರಕ ಔಷಧಿ ಇದು. ಸೇವಿಸಿದ ನಂತರ ಮನಸ್ಸು ಈ ಲೋಕವನ್ನು
ಮರೆತು, ಅತಿ ಸುಂದರವಾದ, ಅತಿ ಸುಖವೀವ ಇನ್ನಾವುದೋ ಭ್ರಮಾಲೋಕದಲ್ಲಿ
ವಿಹರಿಸುತ್ತದೆ. ಆ ಸ್ಥಿತಿಯಲ್ಲಿ ಭ್ರಮಾಲೋಕವೇ ಸತ್ಯವಾದುದು, ಮಿಕ್ಕ ಬಾಳು
ಮಿಥ್ಯ ಎಂದನಿಸುತ್ತದೆ. ಅಮಲು ಇಳಿದ ಮೇಲೆ, ಅತಿ ಸುಂದರ ಸುಖದ
ಸ್ಮರಣೆಯು ಸ್ವಲ್ಪ ಉಳಿದಿರುತ್ತದೆ. ತಿರುಗಿ ಆ ಅನುಭವವನ್ನು ಪಡೆಯುವ
ಎಂಬ ಹಂಬಲವಿರುತ್ತದೆ. ಅಮಲು ಕೈವಲ್ಯವನ್ನು ದೊರಕಿಸಿತು ಎನ್ನುವ ಭ್ರಮೆಯು
ಇರುತ್ತದೆ.
{{gap}}ಸುಮಾರು ೨೩೦೦ ವರ್ಷಗಳ ಹಿಂದೆ, Hallucinogens ಎಂಬ ಹೆಸರು
ಇರಲಿಲ್ಲ. ಆದರೂ ಔಷಧಿಗಳಿಂದ 'ಸಿದ್ಧಿ'ಯನ್ನು ಅಂದರೆ ಅಲೌಕಿಕ
ಅನುಭವಗಳನ್ನು ಹೊಂದಬಹುದು ಎಂದು ಮಹರ್ಷಿಗಳು ಹೇಳಿದ್ದಾರೆ. ಅಂದರೆ
ಆ ಕಾಲದಲ್ಲಿ ಇಂತಹ ಔಷಧಿಗಳ ಜ್ಞಾನವು ಇದ್ದಿರಲೇಬೇಕು. ಸೋಮ ಎಂಬುದನ್ನು
ಬಿಟ್ಟರೆ ಈ ತೆರನ ಔಷಧಿಗಳು ಯಾವುವು ಇದ್ದುವು? ಗಾಂಜಾ, ಅಫೀಮು,
ಹುದುಗುನೊರೆಗೂಡಿದ ದ್ರಾಕ್ಷಾರಸ, ಇತ್ಯಾದಿಗಳು ಇದ್ದುವು.
{{gap}}(ಇ) ಮಂತ್ರಗಳು :-ಬಾಲ್ಯದಿಂದಲೂ ಮನೆಯಲ್ಲಿ, ಕಲಿಕೆಯಿಂದ, ಹಾಗೂ
ಮನನದಿಂದ, ಪ್ರತಿಯೊಬ್ಬ ವ್ಯಕ್ತಿಯೂ ಮನೆದೇವರು, ಕುಲದೇವತೆ ಎನ್ನುವ
ಕಲ್ಪನೆಯನ್ನು ರೂಢಿಸಿಕೊಂಡಿರುತ್ತಾನೆ. ವಿಚಾರಪರ ಮನಸ್ಸಿಗೆ ಇದು ಒಪ್ಪದೆ
ಇರಬಹುದು. ಆದರೆ ರೂಢಿಗತವಾದ ಈ ಕಲ್ಪನೆಯು ಸ್ಥಿರವಾಗಿರುತ್ತದೆ.
{{gap}}ಮನೆದೇವರು, ಇಷ್ಟದೇವತೆ, ಎಂದಮೇಲೆ ಅದನ್ನು ಆರಾಧಿಸಲು ಎರಡು
ಮಾರ್ಗಗಳಿರುತ್ತವೆ. ಬಹಿರಂಗವಾಗಿ, ಕುಲದವರು ರೂಢಿಸಿಕೊಂಡು ಬಂದ
ಪೂಜಾವಿಧಾನ, ಅಭಿಷೇಕ, ಅರ್ಚನೆ, ಬಲಿ, ನೈವೇದ್ಯ ಇತ್ಯಾದಿಗಳು,<noinclude></noinclude>
jscy38y1vkeofr2rgaq3ip454w3ekkf
ಪುಟ:ಮನಮಂಥನ.pdf/೪೫೮
104
62905
317728
314672
2026-05-06T16:19:53Z
Shreesha Sharma
7840
/* Proofread */
317728
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೪೪೦|right=ಮನಮಂಥನ}}
ಅಂತರಂಗವಾಗಿ, ಗುರುಗಳಿಂದ ಅಥವಾ ತಂದೆಯಿಂದ ಗುಪ್ತವಾಗಿ ಕಲಿತುಕೊಂಡ
ಮಂತ್ರದ ಜಪ. ಜಪಿಸಲ್ಪಡುವ ಮಂತ್ರಗಳು ಸೂತ್ರಗಳಂತೆ ಪುಟ್ಟದಾಗಿರುತ್ತವೆ.
ಸಾಂಕೇತಿಕವಾಗಿಯೂ ಇರುತ್ತವೆ. ಮೇಲಿಂದ ಮೇಲೆ ಪುನಃ ಪುನಃ ಈ
ಮಂತ್ರಗಳನ್ನು ಜಪಿಸಿದರೆ, ಆಗ ಮನಃಶಕ್ತಿಯು, ಚಂಚಲತೆಯನ್ನು ಸ್ವಲ್ಪ
ಮಟ್ಟಿಗಾದರೂ ಕಳೆದುಕೊಳ್ಳುತ್ತದೆ. ದೃಢವಾಗುತ್ತದೆ. ವ್ಯಾಯಾಮವೆಂದಲ್ಲದಿದ್ದರೂ
ಅಂಚೆಪೇದೆಯು ಆರೆಂಟು ಮೈಲಿಗಳು ದಿನಾಲೂ ನಡೆಯಬೇಕು. ಬೇಜಾರಿನಿಂದ
ನಡೆದರೂ ಅವನ ಮಾಂಸಖಂಡಗಳು, ತೊಡೆಯ ಮಾಂಸಗಳು, ಬಲಗೊಳ್ಳುತ್ತದೆ.
ಅದರಂತೆಯೇ ಮಂತ್ರಗಳನ್ನು ಅರ್ಥವಾಗಲೀ, ಆಗದೇ ಇರಲಿ, ಪುನಃ ಪುನಃ
ಜಪಿಸಿದರೆ, ಮನಸ್ಸೆಂಬ ಶಕ್ತಿಯು ಬಲಗೊಳ್ಳುತ್ತದೆ.
ಧಾರಣ, ಧ್ಯಾನ ಇವುಗಳಿಗೆ ಸಮನಿಲ್ಲದಿದ್ದರೂ, ಮಂತ್ರ ಪಠಣವು
ಅದೇ ರೀತಿಯ ಫಲವನ್ನು ಅಲ್ಪ ಸ್ವಲ್ಪ ಪ್ರಮಾಣದಲ್ಲಿಯಾದರೂ ಖಂಡಿತವಾಗಿ
ನೀಡುತ್ತದೆ.
ಅಂದ ಮೇಲೆ, ಬಾಲ್ಯದಿಂದಲೂ ಮನಸ್ಸಿನಲ್ಲಿ ನೆಲೆಸಿ ಪ್ರತಿಷ್ಠವಾಗಿರುವ,
ಇಷ್ಟದೇವತೆಯೆಂಬುದು ಸಿದ್ಧಿಗಳನ್ನು ನೀಡಲೇಬೇಕು. ಏಕೆಂದರೆ ಮನಸ್ಸಿಗೆ
ಇಷ್ಟು ದೇವತೆಯೆಂಬುದು ದೃಢವಾದ ಊರೆಗೋಲಾಗಿರುತ್ತದೆ. ಆಗ ಮನಸ್ಸು
ತುಂಬು ನಂಬುಗೆಯಿಂದ ಯೋಚಿಸಿ, ನಿರ್ಧರಿಸಿ ಕಾರ್ಯವನ್ನು ಮಾಡಿಸುತ್ತದೆ.
ಮನಸ್ಸಿಗೆ ಧೈರ್ಯವು ಲಭಿಸಿರುತ್ತದೆ. ಚಂಚಲತೆಯು ಬಹಳಷ್ಟು
ಕಡಿಮೆಯಾಗಿರುತ್ತದೆ, ಮನೆದೇವರು, ಇಷ್ಟದೇವತೆ, ಕುಲದೇವತೆ, ಇತ್ಯಾದಿಗಳಲ್ಲಿ
ಎಷ್ಟು ನಂಬಿಕೆಯು ಇರುತ್ತದೆಯೋ, ಅದಕ್ಕೆ ಅನುಗುಣವಾಗಿ, ಆಯಾ ಮಂತ್ರಗಳ
ಜಪವು ಮನಸ್ಸನ್ನು ಏಕಾಗ್ರ ಚಿತ್ತತೆಯತ್ತ ನಡೆಸುತ್ತದೆ. ಅದನ್ನನುಸರಿಸಿ ಇಷ್ಟಾರ್ಥಗಳ
ಸಿದ್ಧಿಯೂ ಲಭಿಸುತ್ತದೆ.
ತಾಂತ್ರಿಕ ಸಾಧನೆಗಳಲ್ಲಿ ಮಂತ್ರ ಪಠಣ ಮತ್ತು ಜಪಗಳು ಮುಖ್ಯವಾದ
ಒಂದು ಅಂಶ. ಬಹಿರಂಗವಾಗಿ ಪೂಜಾ ವಿಧಾನಗಳು, ಇತರರಿಗೆ ಬೀಭತ್ಸವಾಗಿ
ಕಾಣಬಹುದು. ಆದರೆ ಮನಸ್ಸು ತುಂಬು ನಂಬುಗೆಯಿಂದ ಧೈರ್ಯವನ್ನು
ಹೊಂದಿರುತ್ತದೆ. ಆದಕಾರಣ ಅವರುಗಳಿಗೂ ಇಷ್ಟಾರ್ಥವು ನೆರವೇರುತ್ತದೆ.
ತಪಸ್ಸು :-ತಪಃ ಎಂದರೆ ಕುದಿಯುವುದು, ಪರಿತಪಿಸುವುದು ಎಂದರೆ
ತೀವ್ರವಾಗಿ ಹಂಬಲಿಸುವುದು, ತಪಸ್ ಎಂದರೆ, ಲೌಕಿಕವಾದ ಅಥವಾ
ಅಲೌಕಿಕವಾದ ಯಾವುದಾದರೂ ಒಂದು ಸಾಧನೆಗೆ, ಮನಸ್ಸು ಕುತ ಕುತ
ಕುದಿಯುವುದು. ಅಕ್ಕಿಯನ್ನು ಹಾಗೆಯೇ ತಿನ್ನಲಾಗುವುದಿಲ್ಲ. ಆದರೆ ನೀರಿನಲ್ಲಿ<noinclude></noinclude>
2d6jm0swkhdzif9pwhm6kr2m53qh6xq
317732
317728
2026-05-06T16:20:55Z
Shreelatha.Halemane
7642
/* Validated */
317732
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೪೪೦|right=ಮನಮಂಥನ}}
ಅಂತರಂಗವಾಗಿ, ಗುರುಗಳಿಂದ ಅಥವಾ ತಂದೆಯಿಂದ ಗುಪ್ತವಾಗಿ ಕಲಿತುಕೊಂಡ
ಮಂತ್ರದ ಜಪ. ಜಪಿಸಲ್ಪಡುವ ಮಂತ್ರಗಳು ಸೂತ್ರಗಳಂತೆ ಪುಟ್ಟದಾಗಿರುತ್ತವೆ.
ಸಾಂಕೇತಿಕವಾಗಿಯೂ ಇರುತ್ತವೆ. ಮೇಲಿಂದ ಮೇಲೆ ಪುನಃ ಪುನಃ ಈ
ಮಂತ್ರಗಳನ್ನು ಜಪಿಸಿದರೆ, ಆಗ ಮನಃಶಕ್ತಿಯು, ಚಂಚಲತೆಯನ್ನು ಸ್ವಲ್ಪ
ಮಟ್ಟಿಗಾದರೂ ಕಳೆದುಕೊಳ್ಳುತ್ತದೆ. ದೃಢವಾಗುತ್ತದೆ. ವ್ಯಾಯಾಮವೆಂದಲ್ಲದಿದ್ದರೂ
ಅಂಚೆಪೇದೆಯು ಆರೆಂಟು ಮೈಲಿಗಳು ದಿನಾಲೂ ನಡೆಯಬೇಕು. ಬೇಜಾರಿನಿಂದ
ನಡೆದರೂ ಅವನ ಮಾಂಸಖಂಡಗಳು, ತೊಡೆಯ ಮಾಂಸಗಳು, ಬಲಗೊಳ್ಳುತ್ತದೆ.
ಅದರಂತೆಯೇ ಮಂತ್ರಗಳನ್ನು ಅರ್ಥವಾಗಲೀ, ಆಗದೇ ಇರಲಿ, ಪುನಃ ಪುನಃ
ಜಪಿಸಿದರೆ, ಮನಸ್ಸೆಂಬ ಶಕ್ತಿಯು ಬಲಗೊಳ್ಳುತ್ತದೆ.
{{gap}}ಧಾರಣ, ಧ್ಯಾನ ಇವುಗಳಿಗೆ ಸಮನಿಲ್ಲದಿದ್ದರೂ, ಮಂತ್ರ ಪಠಣವು
ಅದೇ ರೀತಿಯ ಫಲವನ್ನು ಅಲ್ಪ ಸ್ವಲ್ಪ ಪ್ರಮಾಣದಲ್ಲಿಯಾದರೂ ಖಂಡಿತವಾಗಿ
ನೀಡುತ್ತದೆ.
{{gap}}ಅಂದ ಮೇಲೆ, ಬಾಲ್ಯದಿಂದಲೂ ಮನಸ್ಸಿನಲ್ಲಿ ನೆಲೆಸಿ ಪ್ರತಿಷ್ಠವಾಗಿರುವ,
ಇಷ್ಟದೇವತೆಯೆಂಬುದು ಸಿದ್ಧಿಗಳನ್ನು ನೀಡಲೇಬೇಕು. ಏಕೆಂದರೆ ಮನಸ್ಸಿಗೆ
ಇಷ್ಟು ದೇವತೆಯೆಂಬುದು ದೃಢವಾದ ಊರೆಗೋಲಾಗಿರುತ್ತದೆ. ಆಗ ಮನಸ್ಸು
ತುಂಬು ನಂಬುಗೆಯಿಂದ ಯೋಚಿಸಿ, ನಿರ್ಧರಿಸಿ ಕಾರ್ಯವನ್ನು ಮಾಡಿಸುತ್ತದೆ.
ಮನಸ್ಸಿಗೆ ಧೈರ್ಯವು ಲಭಿಸಿರುತ್ತದೆ. ಚಂಚಲತೆಯು ಬಹಳಷ್ಟು
ಕಡಿಮೆಯಾಗಿರುತ್ತದೆ, ಮನೆದೇವರು, ಇಷ್ಟದೇವತೆ, ಕುಲದೇವತೆ, ಇತ್ಯಾದಿಗಳಲ್ಲಿ
ಎಷ್ಟು ನಂಬಿಕೆಯು ಇರುತ್ತದೆಯೋ, ಅದಕ್ಕೆ ಅನುಗುಣವಾಗಿ, ಆಯಾ ಮಂತ್ರಗಳ
ಜಪವು ಮನಸ್ಸನ್ನು ಏಕಾಗ್ರ ಚಿತ್ತತೆಯತ್ತ ನಡೆಸುತ್ತದೆ. ಅದನ್ನನುಸರಿಸಿ ಇಷ್ಟಾರ್ಥಗಳ
ಸಿದ್ಧಿಯೂ ಲಭಿಸುತ್ತದೆ.
{{gap}}ತಾಂತ್ರಿಕ ಸಾಧನೆಗಳಲ್ಲಿ ಮಂತ್ರ ಪಠಣ ಮತ್ತು ಜಪಗಳು ಮುಖ್ಯವಾದ
ಒಂದು ಅಂಶ. ಬಹಿರಂಗವಾಗಿ ಪೂಜಾ ವಿಧಾನಗಳು, ಇತರರಿಗೆ ಬೀಭತ್ಸವಾಗಿ
ಕಾಣಬಹುದು. ಆದರೆ ಮನಸ್ಸು ತುಂಬು ನಂಬುಗೆಯಿಂದ ಧೈರ್ಯವನ್ನು
ಹೊಂದಿರುತ್ತದೆ. ಆದಕಾರಣ ಅವರುಗಳಿಗೂ ಇಷ್ಟಾರ್ಥವು ನೆರವೇರುತ್ತದೆ.
{{gap}}ತಪಸ್ಸು :-ತಪಃ ಎಂದರೆ ಕುದಿಯುವುದು, ಪರಿತಪಿಸುವುದು ಎಂದರೆ
ತೀವ್ರವಾಗಿ ಹಂಬಲಿಸುವುದು, ತಪಸ್ ಎಂದರೆ, ಲೌಕಿಕವಾದ ಅಥವಾ
ಅಲೌಕಿಕವಾದ ಯಾವುದಾದರೂ ಒಂದು ಸಾಧನೆಗೆ, ಮನಸ್ಸು ಕುತ ಕುತ
ಕುದಿಯುವುದು. ಅಕ್ಕಿಯನ್ನು ಹಾಗೆಯೇ ತಿನ್ನಲಾಗುವುದಿಲ್ಲ. ಆದರೆ ನೀರಿನಲ್ಲಿ<noinclude></noinclude>
e6j9550haskfde3mncz9r7bcn96md9n
ಪುಟ:ಮನಮಂಥನ.pdf/೪೫೯
104
62906
317733
314671
2026-05-06T16:21:36Z
Shreesha Sharma
7840
/* Proofread */
317733
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೪೧}}
ಸಳಮಳ ಕುದಿಸಿ ಅನ್ನವನ್ನು ಮಾಡಿದ ಮೇಲೆ ಉಣ್ಣಲು ಸುಲಭ.
ಆದರೆ ಕೆಲವು ಮಕ್ಕಳೂ ಅಕ್ಕಿಯನ್ನು, ಸೀಮೆಸುಣ್ಣವನ್ನೂ, ಗಾರೆಯನ್ನೂ
ತಿನ್ನಲಾರಂಭಿಸುತ್ತವೆ. ಅಂತಹ ಮಕ್ಕಳಲ್ಲಿ ಕಬ್ಬಿಣದ ಅಂಶವು ಕಡಮೆಯಾಗಿರುತ್ತದೆ.
ಆದುದರಿಂದ ಮಕ್ಕಳು ಹಾಗೆ ಮಾಡುತ್ತವೆ. ಬೆಳೆದವರಲ್ಲಿಯೂ ಕೂಡ, ಕೆಲವರಿಗೆ
ಅಕ್ಕಿಯನ್ನು ಮುಕ್ಕುವ ಚಪಲವು ಉಂಟಾಗುತ್ತದೆ. ಬಯಕೆಯು ಉಂಟಾದವರಲ್ಲಿ
ಚಪಲವು ವಿಚಿತ್ರವಾಗುತ್ತದೆ. ಕಬ್ಬಿಣದ ಅಂಶವು ಇವರಲ್ಲಿ ಕಡಿಮೆಯಾಗಿರುವುದರಿಂದ,
ಮತ್ತು ಇತರ ಕಾರಣಗಳಿಂದಲೂ, ಹಾಗೆ ಮಾಡುತ್ತಾರೆ.
ಅದರಂತೆಯೇ ಮನಸ್ಸಿನಲ್ಲಿ ಯಾವುದೋ ಲೋಪವಿರುವುದರಿಂದ, ಚಪಲಚಿತ್ತರಾಗುತ್ತಾರೆ. ನಡವಳಿಕೆಯು ಕೂಡ ಅಸ್ತವ್ಯಸ್ತವಾಗಿರುತ್ತದೆ. ಆಗ ಮನಸ್ಸು
ತಳಮಳಗೊಂಡು, ಸಳಮಳಮಾಡಿ, ತಪಿಸಿದರೆ, ಕುದಿಯತೊಡಗಿದರೆ, ಮನಸ್ಸು
ಚಪಲತೆಯನ್ನು ಕಳೆದುಕೊಂಡು, ಹಸನಾಗುತ್ತದೆ. ಮನಸ್ಸು ಆಗ ವಿಹಿತವಾದ
ನಿರ್ಣಯವನ್ನು ಮಾಡಿ, ಇಷ್ಟಾರ್ಥವನ್ನು ಪಡೆಯಲು ಸುಲಭವಾಗುತ್ತದೆ.
ಸಮಾಧಿ - ಧಾರಣ, ಎಂದರೆ ಮನಸ್ಸನ್ನು ಒಂದು ವಿಷಯದಲ್ಲಿ
ನಿರಂತರ ಮನನದಿಂದ ನಿಲ್ಲಿಸುವುದು. ನಂತರ ಧ್ಯಾನ, ಎಂದರೆ ಮತ್ತೆ ಯಾವ
ವಿಷಯಗಳೂ ಮನಸ್ಸಿಗೆ ಬಾರದಂತೆ ಸಾಧಿಸುವುದು. ಇವೆರಡನ್ನೂ
ದೃಢವಾಗಿಸಿದರೆ, ಸಮಾಧಿಯ ಸ್ಥಿತಿಯನ್ನು ಮನಸ್ಸು ಪಡೆಯುತ್ತದೆ. ಆಗ ಬಾಹ್ಯ
ಪ್ರಪಂಚದ ಸೆಳೆತ ಬಹಳಷ್ಟು ಕ್ಷೀಣಿಸುತ್ತದೆ. ಅಂತರಂಗದಲ್ಲಿರಬಹುದಾದ, ಅಥವ
ಇರಲೇಬೇಕಾದ, ಅರಿವು ಉಂಟಾಗತೊಡಗುತ್ತದೆ. ಇಂತಹ ಅಲೌಕಿಕ ಅರಿವು
ಬ್ರಹ್ಮಾಂಡದ ಅರಿವು ಹಂತಹಂತವಾಗಿ ಅಭಿವೃದ್ಧಿಯಾಗುತ್ತದೆ. ಹಾಗೂ ಹೆಚ್ಚು
ಹೆಚ್ಚು ಕಾಲ ಇರತೊಡಗುತ್ತದೆ. ಸಮಾಧಿ ಸ್ಥಿತಿಯನ್ನು ಮನಸ್ಸಿನಲ್ಲಿ, ಮನಸ್ಸಿನ
ಮೂಲಕವೇ ಸಾಧಿಸಿಕೊಂಡರೆ, ಮನಸ್ಸಿನ ಆಟ ಅವತಾರಗಳೆಲ್ಲಾ
ನಿರೋಧಿಸಲ್ಪಟ್ಟಾಗ, ಲಭಿಸುವ ಸಿದ್ಧಿಗಳನ್ನು ಮೊದಲ ಮೂರು ಪಾದಗಳ
ವಿವರಣೆಯಲ್ಲಿ ತಿಳಿಸಲಾಗಿದೆ. ಇದೇ ಯೋಗ ಫಲಗಳು.
ಪೂರ್ವಜನ್ಮದಲ್ಲಿ ಸಾಧಿಸಿಕೊಂಡ, ಯಾವ ಹಂತದ ಅಥವಾ ಕಾಲ
ಪರಿಮಿತಿಯ ಸಮಾಧಿಯು ಮುಂದಿನ ಜನ್ಮಗಳಲ್ಲಿ ಅಭಿವೃದ್ಧಿಯನ್ನು ಹೊಂದುತ್ತವೆ.
ಹೀಗಂದಾಗ ಪುನರ್ಜನ್ಮವು ಇದ್ದೇ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕು.
ಅನಂತರವೇ ಪತಂಜಲಿ ಮಹರ್ಷಿಗಳ ಯೋಗ ವಿಚಾರ ಸರಣಿಯನ್ನು
ಅರ್ಥಮಾಡಿಕೊಳ್ಳಬಹುದು.
ಜನ್ಮ : ಪುನರ್ಜನ್ಮ ; ಇವುಗಳ ವಿಶ್ಲೇಷಣೆಯು ಇಲ್ಲಿ ಅಪ್ರಕೃತ. ಆದರೆ<noinclude></noinclude>
j0paz6z87zo25gcr5dys8n2eoao8yqq
317740
317733
2026-05-06T16:27:20Z
Shreelatha.Halemane
7642
/* Validated */
317740
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೪೧}}
ಸಳಮಳ ಕುದಿಸಿ ಅನ್ನವನ್ನು ಮಾಡಿದ ಮೇಲೆ ಉಣ್ಣಲು ಸುಲಭ.
{{gap}}ಆದರೆ ಕೆಲವು ಮಕ್ಕಳೂ ಅಕ್ಕಿಯನ್ನು, ಸೀಮೆಸುಣ್ಣವನ್ನೂ, ಗಾರೆಯನ್ನೂ
ತಿನ್ನಲಾರಂಭಿಸುತ್ತವೆ. ಅಂತಹ ಮಕ್ಕಳಲ್ಲಿ ಕಬ್ಬಿಣದ ಅಂಶವು ಕಡಮೆಯಾಗಿರುತ್ತದೆ.
{{gap}}ಆದುದರಿಂದ ಮಕ್ಕಳು ಹಾಗೆ ಮಾಡುತ್ತವೆ. ಬೆಳೆದವರಲ್ಲಿಯೂ ಕೂಡ, ಕೆಲವರಿಗೆ ಅಕ್ಕಿಯನ್ನು ಮುಕ್ಕುವ ಚಪಲವು ಉಂಟಾಗುತ್ತದೆ. ಬಯಕೆಯು ಉಂಟಾದವರಲ್ಲಿ ಚಪಲವು ವಿಚಿತ್ರವಾಗುತ್ತದೆ. ಕಬ್ಬಿಣದ ಅಂಶವು ಇವರಲ್ಲಿ ಕಡಿಮೆಯಾಗಿರುವುದರಿಂದ, ಮತ್ತು ಇತರ ಕಾರಣಗಳಿಂದಲೂ ಹಾಗೆ ಮಾಡುತ್ತಾರೆ.
{gap}}ಅದರಂತೆಯೇ ಮನಸ್ಸಿನಲ್ಲಿ ಯಾವುದೋ ಲೋಪವಿರುವುದರಿಂದ, ಚಪಲಚಿತ್ತರಾಗುತ್ತಾರೆ. ನಡವಳಿಕೆಯು ಕೂಡ ಅಸ್ತವ್ಯಸ್ತವಾಗಿರುತ್ತದೆ. ಆಗ ಮನಸ್ಸು
ತಳಮಳಗೊಂಡು, ಸಳಮಳಮಾಡಿ, ತಪಿಸಿದರೆ, ಕುದಿಯತೊಡಗಿದರೆ, ಮನಸ್ಸು
ಚಪಲತೆಯನ್ನು ಕಳೆದುಕೊಂಡು, ಹಸನಾಗುತ್ತದೆ. ಮನಸ್ಸು ಆಗ ವಿಹಿತವಾದ
ನಿರ್ಣಯವನ್ನು ಮಾಡಿ, ಇಷ್ಟಾರ್ಥವನ್ನು ಪಡೆಯಲು ಸುಲಭವಾಗುತ್ತದೆ.
{{gap}}ಸಮಾಧಿ - ಧಾರಣ, ಎಂದರೆ ಮನಸ್ಸನ್ನು ಒಂದು ವಿಷಯದಲ್ಲಿ
ನಿರಂತರ ಮನನದಿಂದ ನಿಲ್ಲಿಸುವುದು. ನಂತರ ಧ್ಯಾನ, ಎಂದರೆ ಮತ್ತೆ ಯಾವ
ವಿಷಯಗಳೂ ಮನಸ್ಸಿಗೆ ಬಾರದಂತೆ ಸಾಧಿಸುವುದು. ಇವೆರಡನ್ನೂ
ದೃಢವಾಗಿಸಿದರೆ, ಸಮಾಧಿಯ ಸ್ಥಿತಿಯನ್ನು ಮನಸ್ಸು ಪಡೆಯುತ್ತದೆ. ಆಗ ಬಾಹ್ಯ
ಪ್ರಪಂಚದ ಸೆಳೆತ ಬಹಳಷ್ಟು ಕ್ಷೀಣಿಸುತ್ತದೆ. ಅಂತರಂಗದಲ್ಲಿರಬಹುದಾದ, ಅಥವ
ಇರಲೇಬೇಕಾದ, ಅರಿವು ಉಂಟಾಗತೊಡಗುತ್ತದೆ. ಇಂತಹ ಅಲೌಕಿಕ ಅರಿವು
ಬ್ರಹ್ಮಾಂಡದ ಅರಿವು ಹಂತಹಂತವಾಗಿ ಅಭಿವೃದ್ಧಿಯಾಗುತ್ತದೆ. ಹಾಗೂ ಹೆಚ್ಚು
ಹೆಚ್ಚು ಕಾಲ ಇರತೊಡಗುತ್ತದೆ. ಸಮಾಧಿ ಸ್ಥಿತಿಯನ್ನು ಮನಸ್ಸಿನಲ್ಲಿ, ಮನಸ್ಸಿನ
ಮೂಲಕವೇ ಸಾಧಿಸಿಕೊಂಡರೆ, ಮನಸ್ಸಿನ ಆಟ ಅವತಾರಗಳೆಲ್ಲಾ
ನಿರೋಧಿಸಲ್ಪಟ್ಟಾಗ, ಲಭಿಸುವ ಸಿದ್ಧಿಗಳನ್ನು ಮೊದಲ ಮೂರು ಪಾದಗಳ
ವಿವರಣೆಯಲ್ಲಿ ತಿಳಿಸಲಾಗಿದೆ. ಇದೇ ಯೋಗ ಫಲಗಳು.
{{gap}}ಪೂರ್ವಜನ್ಮದಲ್ಲಿ ಸಾಧಿಸಿಕೊಂಡ, ಯಾವ ಹಂತದ ಅಥವಾ ಕಾಲ
ಪರಿಮಿತಿಯ ಸಮಾಧಿಯು ಮುಂದಿನ ಜನ್ಮಗಳಲ್ಲಿ ಅಭಿವೃದ್ಧಿಯನ್ನು ಹೊಂದುತ್ತವೆ.
ಹೀಗಂದಾಗ ಪುನರ್ಜನ್ಮವು ಇದ್ದೇ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕು.
ಅನಂತರವೇ ಪತಂಜಲಿ ಮಹರ್ಷಿಗಳ ಯೋಗ ವಿಚಾರ ಸರಣಿಯನ್ನು
ಅರ್ಥಮಾಡಿಕೊಳ್ಳಬಹುದು.
{{gap}}ಜನ್ಮ : ಪುನರ್ಜನ್ಮ ; ಇವುಗಳ ವಿಶ್ಲೇಷಣೆಯು ಇಲ್ಲಿ ಅಪ್ರಕೃತ. ಆದರೆ<noinclude></noinclude>
jw5lduwo7ggzjtpwagq5o8hiawi769x
ಪುಟ:ಮನಮಂಥನ.pdf/೪೬೦
104
62907
317737
314231
2026-05-06T16:23:35Z
Shreesha Sharma
7840
/* Proofread */
317737
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೪೪೨|right=ಮನಮಂಥನ}}
ವೈಜ್ಞಾನಿಕವಾಗಿ ಪುನರ್ಜನ್ಮವನ್ನು ಸಿದ್ಧಾಂತ ಮಾಡಬಹುದು, ಎಂದು ಮಾತ್ರ
ಹೇಳಿದರೆ ಸಾಕು.
{{center|'''ಜಾತ್ಯಂತರ ಪರಿಣಾಮ: ಪ್ರಕೃತಿ ಅಪರಾತ್'''}}
ಜನ್ಮ ಒಂದರಲ್ಲೇ, ಪೂರ್ವಾಂತರ ಜನ್ಮಗಳ ಪರಿಣಾಮಗಳು ಪೂರ್ಣವಾಗಿ
ಮುಗಿದುಹೋಗುವುದರಿಂದ, ಮನಸ್ಸು ಹೊಸ ಅರಿವು ಮತ್ತು ಧೈಯಗಳನ್ನು
Metamorphosis ಆದಂತೆ ಪಡೆಯಲು ಸಾಧ್ಯ. ಜಿಪುಣಾಗ್ರೇಸರನಾದ, ಕಾಸಿನ
ಮೇಲಿನ ಕಿಲುಬನ್ನು ಪುನುಗು ಎಂದು ಶೇಖರಿಸುವವನು, ಯಾವುದೋ
ಒಂದು ಘಟನೆಯಿಂದ, ಧನಕನಕಾದಿಗಳನ್ನೆಲ್ಲ ಸರ್ವರಿಗೂ ದಾನ ಮಾಡಿ,
ಪುರಂದರದಾಸನಾದುದು ಈ ಸೂತ್ರಕ್ಕೆ ಸಾಕ್ಷಿ. ಜೀವನದ ಅಗತ್ಯ ಮೌಲ್ಯಗಳು
ಎಂದು ದೃಢವಾಗಿ ನಂಬಿದ್ದವನು, ಹಠಾತ್ತನೆ, ಅಂತಹ ಮೌಲ್ಯಗಳನ್ನು ತೃಣೀಕರಿಸಿ,
ತೀವ್ರ ವಿರುದ್ಧವಾದ ಮೌಲ್ಯಗಳನ್ನು ಕಾಯಾ ವಾಚಾ ಮನಸಾ ಸ್ವೀಕರಿಸುವುದನ್ನು
ಇಂದಿನ ಜೀವನದಲ್ಲಿಯೂ ಕಾಣುತ್ತೇವೆ. ದೇಶಾದ್ಯಂತ ಸುಪ್ರಸಿದ್ಧನಾದ ವಿಜ್ಞಾನಿಯು,
ನವ್ಯ ದೃಷ್ಟಿಯೊಂದನ್ನು ಪಡೆದು, ಮೌಡ್ಯ ಎಂದು ಅನ್ನಿಸಿಕೊಳ್ಳುವಂತೆ,
ನಡೆದುಕೊಳ್ಳುತ್ತಾನೆ. ಸಹೋದ್ಯೋಗಿಗಳಿಗೆ ಅಚ್ಚರಿ ತಂದರೂ, ಹೀಗಾಗುವುದು
ಪೂರ್ವಜನ್ಮಗಳ ಪರಿಣಾಮವು ಮುಗಿದುಹೋದದ್ದರಿಂದ ಅದೂ ಈ ಜನ್ಮದ
ಒಂದು ಹಂತದಲ್ಲಿ.
ಮನಸ್ಸಿನ ರೂಢಿಗತವಾದ ಗುರಿ ಮತ್ತು ಆಚರಣೆಗಳು ಒಂದು ಜಾತಿಯವು.
ಹಠಾತ್ತನೆ ವಿರುದ್ಧವಾದ ಗುರಿ ಮತ್ತು ಆಚರಣೆಗಳನ್ನು ನಂಬತೊಡಗಿದಾಗ
ಬೇರೆ ಜಾತಿಯೇ ಆರಂಭವಾದಂತಾಯಿತು. ಈಗಿನ ಕಾಲದಲ್ಲಿ 'ಜಾತಿ' ಎನ್ನುವ
ಅರ್ಥಕ್ಕೂ ಪತಂಜಲಿಗಳ ಕಾಲದ ಜಾತಿ ಎಂಬ ಪದದ ಅರ್ಥಕ್ಕೂ ಅರ್ಥಾರ್ಥಕ
ಸಂಬಂಧವಿಲ್ಲ ಎನ್ನುವುದನ್ನು ಮರೆಯಬಾರದು.
{{center|'''ನಿಮಿತ್ತಂ ಅಪ್ರಯೋಜಕಂ ಪ್ರಕೃತೀನಾಂ ವರಣ ಭೇದನ್ನು ತತಃ ಕ್ಷೇತ್ರಿಕವತ್'''}}
ಒಂದೇ ಜನ್ಮದಲ್ಲಿ ಒಂದು ಹಂತದಲ್ಲಿ ಜಾತ್ಯಂತರವಾಗುವುದು, ಹಿಂದಿನ
ಜನ್ಮಗಳ ಕರ್ಮಗಳಿಂದ ಮಾತ್ರವಲ್ಲ, ಕರ್ಮಗಳು ಬಂಧಿತವಾದ, ಎಲ್ಲೆಗಳು,
ಅಡ್ಡಿ ತೊಡಕುಗಳೂ ಇರುವ ಮಾರ್ಗದಲ್ಲಿ ಮಾತ್ರ ಪರಿಣಾಮವನ್ನು ಬೀರುತ್ತವೆ.
ಆದರೆ 'ಸಂಯಮ'ದಿಂದಾಗಿ, ಅಡ್ಡಿ ತೊಡಕುಗಳನ್ನು ಕಿತ್ತೊಗೆದು, ಇನ್ನೊಂದು
ವಿಹಿತ ಮಾರ್ಗದಲ್ಲಿ ನಡೆಯುವಂತೆ ಮಾಡಬಹುದು.
{{center|'''ನಿರ್ಮಣ ಚಿತ್ತಾನಿ ಅಸ್ಮಿತಾ ಮಾಡ್ತಾತ್'''}}
'ಸಂಯಮ'ದಿಂದಾಗಿ ಮನಸ್ಸನ್ನು ಸ್ಥಿರಗೊಳಿಸಿದ ಮೇಲೆ, ಪೂರ್ವ ಜನ್ಮಗಳ<noinclude></noinclude>
gvxdhjm6z7l6mohqfkf8w7g2unhze0s
317741
317737
2026-05-06T16:28:04Z
Shreelatha.Halemane
7642
/* Validated */
317741
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೪೪೨|right=ಮನಮಂಥನ}}
ವೈಜ್ಞಾನಿಕವಾಗಿ ಪುನರ್ಜನ್ಮವನ್ನು ಸಿದ್ಧಾಂತ ಮಾಡಬಹುದು, ಎಂದು ಮಾತ್ರ
ಹೇಳಿದರೆ ಸಾಕು.
{{center|'''ಜಾತ್ಯಂತರ ಪರಿಣಾಮ: ಪ್ರಕೃತಿ ಅಪರಾತ್'''}}
{{gap}}ಜನ್ಮ ಒಂದರಲ್ಲೇ, ಪೂರ್ವಾಂತರ ಜನ್ಮಗಳ ಪರಿಣಾಮಗಳು ಪೂರ್ಣವಾಗಿ
ಮುಗಿದುಹೋಗುವುದರಿಂದ, ಮನಸ್ಸು ಹೊಸ ಅರಿವು ಮತ್ತು ಧೈಯಗಳನ್ನು
Metamorphosis ಆದಂತೆ ಪಡೆಯಲು ಸಾಧ್ಯ. ಜಿಪುಣಾಗ್ರೇಸರನಾದ, ಕಾಸಿನ
ಮೇಲಿನ ಕಿಲುಬನ್ನು ಪುನುಗು ಎಂದು ಶೇಖರಿಸುವವನು, ಯಾವುದೋ
ಒಂದು ಘಟನೆಯಿಂದ, ಧನಕನಕಾದಿಗಳನ್ನೆಲ್ಲ ಸರ್ವರಿಗೂ ದಾನ ಮಾಡಿ,
ಪುರಂದರದಾಸನಾದುದು ಈ ಸೂತ್ರಕ್ಕೆ ಸಾಕ್ಷಿ. ಜೀವನದ ಅಗತ್ಯ ಮೌಲ್ಯಗಳು
ಎಂದು ದೃಢವಾಗಿ ನಂಬಿದ್ದವನು, ಹಠಾತ್ತನೆ, ಅಂತಹ ಮೌಲ್ಯಗಳನ್ನು ತೃಣೀಕರಿಸಿ,
ತೀವ್ರ ವಿರುದ್ಧವಾದ ಮೌಲ್ಯಗಳನ್ನು ಕಾಯಾ ವಾಚಾ ಮನಸಾ ಸ್ವೀಕರಿಸುವುದನ್ನು
ಇಂದಿನ ಜೀವನದಲ್ಲಿಯೂ ಕಾಣುತ್ತೇವೆ. ದೇಶಾದ್ಯಂತ ಸುಪ್ರಸಿದ್ಧನಾದ ವಿಜ್ಞಾನಿಯು,
ನವ್ಯ ದೃಷ್ಟಿಯೊಂದನ್ನು ಪಡೆದು, ಮೌಡ್ಯ ಎಂದು ಅನ್ನಿಸಿಕೊಳ್ಳುವಂತೆ,
ನಡೆದುಕೊಳ್ಳುತ್ತಾನೆ. ಸಹೋದ್ಯೋಗಿಗಳಿಗೆ ಅಚ್ಚರಿ ತಂದರೂ, ಹೀಗಾಗುವುದು
ಪೂರ್ವಜನ್ಮಗಳ ಪರಿಣಾಮವು ಮುಗಿದುಹೋದದ್ದರಿಂದ ಅದೂ ಈ ಜನ್ಮದ
ಒಂದು ಹಂತದಲ್ಲಿ.
{{gap}}ಮನಸ್ಸಿನ ರೂಢಿಗತವಾದ ಗುರಿ ಮತ್ತು ಆಚರಣೆಗಳು ಒಂದು ಜಾತಿಯವು.
ಹಠಾತ್ತನೆ ವಿರುದ್ಧವಾದ ಗುರಿ ಮತ್ತು ಆಚರಣೆಗಳನ್ನು ನಂಬತೊಡಗಿದಾಗ
ಬೇರೆ ಜಾತಿಯೇ ಆರಂಭವಾದಂತಾಯಿತು. ಈಗಿನ ಕಾಲದಲ್ಲಿ 'ಜಾತಿ' ಎನ್ನುವ
ಅರ್ಥಕ್ಕೂ ಪತಂಜಲಿಗಳ ಕಾಲದ ಜಾತಿ ಎಂಬ ಪದದ ಅರ್ಥಕ್ಕೂ ಅರ್ಥಾರ್ಥಕ
ಸಂಬಂಧವಿಲ್ಲ ಎನ್ನುವುದನ್ನು ಮರೆಯಬಾರದು.
{{center|'''ನಿಮಿತ್ತಂ ಅಪ್ರಯೋಜಕಂ ಪ್ರಕೃತೀನಾಂ ವರಣ ಭೇದನ್ನು ತತಃ ಕ್ಷೇತ್ರಿಕವತ್'''}}
{{gap}}ಒಂದೇ ಜನ್ಮದಲ್ಲಿ ಒಂದು ಹಂತದಲ್ಲಿ ಜಾತ್ಯಂತರವಾಗುವುದು, ಹಿಂದಿನ
ಜನ್ಮಗಳ ಕರ್ಮಗಳಿಂದ ಮಾತ್ರವಲ್ಲ, ಕರ್ಮಗಳು ಬಂಧಿತವಾದ, ಎಲ್ಲೆಗಳು,
ಅಡ್ಡಿ ತೊಡಕುಗಳೂ ಇರುವ ಮಾರ್ಗದಲ್ಲಿ ಮಾತ್ರ ಪರಿಣಾಮವನ್ನು ಬೀರುತ್ತವೆ.
ಆದರೆ 'ಸಂಯಮ'ದಿಂದಾಗಿ, ಅಡ್ಡಿ ತೊಡಕುಗಳನ್ನು ಕಿತ್ತೊಗೆದು, ಇನ್ನೊಂದು
ವಿಹಿತ ಮಾರ್ಗದಲ್ಲಿ ನಡೆಯುವಂತೆ ಮಾಡಬಹುದು.
{{center|'''ನಿರ್ಮಣ ಚಿತ್ತಾನಿ ಅಸ್ಮಿತಾ ಮಾಡ್ತಾತ್'''}}
{{gap}}'ಸಂಯಮ'ದಿಂದಾಗಿ ಮನಸ್ಸನ್ನು ಸ್ಥಿರಗೊಳಿಸಿದ ಮೇಲೆ, ಪೂರ್ವ ಜನ್ಮಗಳ<noinclude></noinclude>
f4k8jjw1k5buq9b9ev9ervlzrhlr6f3
ಪುಟ:ಮನಮಂಥನ.pdf/೪೬೨
104
62909
317696
316770
2026-05-06T15:09:33Z
Shreesha Sharma
7840
/* Validated */
317696
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೪೪೪}}{{Right|ಮನಮಂಥನ}}
Hereditary characters ಎಂಬುವು ದೇಹದ ವಿಷಯದಲ್ಲಿ ಸಾಮಾನ್ಯ
ಅನುಭವದಿಂದಲೂ ಹಾಗೂ ವೈಜ್ಞಾನಿಕವಾಗಿಯೂ ಸಮರ್ಥನೀಯವಾಗಿವೆ.
Memory is the deified from of hereditary characteristics o
ಥಾಮಸ್ ಮ್ಯಾನ್ ಹೇಳಿದ್ದಾನೆ. ಮನಸ್ಸು ಎಂಬ ಶಕ್ತಿಯ ವಿಚಾರವು ಇಂದಿನ್ನೂ
ನಮಗೆ ವಿಶದವಾಗಿ ತಿಳಿದಿಲ್ಲ. ದೇಹವು ಇಲ್ಲವಾದಾಗ, ಮನಸೂ
ಶೂನ್ಯವಾಗುತ್ತದೆಯೇ? ಅಥವಾ ಇನ್ನೊಂದು ತರಹ ಶಕ್ತಿಯಾಗಿ ಪರಿವರ್ತನೆಯನ್ನು
ಹೊಂದುತ್ತದೆಯೇ? ಯಾರೂ ತಿಳಿದಿಲ್ಲ. ಪುನರ್ಜನ್ಮವನ್ನು ನಂಬಿದವರು, ಸತ್ತವರ
ಮನಸ್ಸು ಅಥವಾ ಅದರ ಮುಖ್ಯಾಂಶವೊಂದು ಉಳಿದಿರುತ್ತದೆ. ಆದರೆ ಅದಕ್ಕೆ
ದೇಹವಿಲ್ಲದಿದುದರಿಂದ, ಇತರ ಲೌಕಿಕರ ಕಣ್ಣಿಗೆ ಕಾಣುವುದಿಲ್ಲ. ಇನ್ನೊಂದು
ದೇಹವು, ಯಾವ ಪ್ರಾಣಿಯದೇ ಆಗಲಿ ದೊರೆತರೆ, ಅದರಲ್ಲಿ ಪ್ರತಿಷ್ಠಿತವಾಗಿ,
ಆ ದೇಹದೊಂದಿಗೆ ಜನಿಸುತ್ತದೆ. ಇದನ್ನು ನಂಬುವುದಾದರೆ, ಹಿಂದಿನ ಜನ್ಮದ
ಕರ್ಮಫಲಗಳು ಅಥವಾ ಸ್ಮರಣೆಗಳು, ಅಂತಹ ಮನಸ್ಸಿನಲ್ಲಿ ಉಳಿದಿರುವುದು
ಸಮರ್ಥನೀಯ. ಈ ದೃಷ್ಟಿಯಿಂದ ನೋಡಿದರೆ ಮೇಲೆ ಉಲ್ಲೇಖಿಸಿರುವ
ಸೂತ್ರಗಳು ಅರ್ಥಗರ್ಭಿತವಾಗಿರುತ್ತವೆ.
{{center|ತೇ ವ್ಯಕ್ತ ಸೂಕ್ಷ್ಮ ಗುಣಾತ್ಮಾನ:}}
{{gap}}ತೇ, ಎಂದರೆ ಭೂತ, ವರ್ತಮಾನ, ಭವಿಷ್ಯ :-ವ್ಯಕ್ತವಾದುವು, ಮತ್ತು
ಅವ್ಯಕ್ತವಾದುವು, ಅನುಭವಿಸಿದುದು, ಹಾಗೂ ಅತಿ ಸೂಕ್ಷ್ಮವಾಗಿದ್ದು ಇನ್ನೂ
ಅನುಭವಕ್ಕೆ ಬಾರದೆ ಇರುವುವು, ಇವೆಲ್ಲವೂ ಸತ್ವ, ರಜಸ್, ತಮೋಗುಣಗಳ
ವಿಧ ವಿಧವಾದ ಸಮ್ಮಿಶ್ರಣದ ಫಲಗಳು. ಮೂರೂ ಈ ಗುಣಗಳ ಮೊದಲ
ಅವಸ್ಥೆಯು 'ಮಹತ್' ತತ್ತ್ವ ಎಂದು ಸಾಂಖ್ಯಕಾರಕರೂ, ಚಿತ್ರ ಎಂದು
ಯೋಗವಾದಿಗಳೂ ಹೆಸರಿಸುತ್ತಾರೆ.
{{center|ಪರಿಣಾಮೈಕತ್ವಾದ್ ವಸ್ತು ತತ್ತ್ವಂ}}
{{gap}}ಮೂರು ಗುಣಗಳ ಪರಿಣಾಮದ ಐಕ್ಯದಿಂದ, ವಸ್ತುವು ಒಂದು ಎಂಬ
ಭಾವನೆಯು ಮೂಡುತ್ತದೆ.
{{center|ವಸ್ತು ಸಾಮ್ಯ ಚಿತ್ತ ಭೇದಾತ್ ತಯೋ ವಿಭಕ್ತ ಪಂಥಾ}}
{{gap}}ಭೇದ ಭೇದವಾದ ಮನಸ್ಸುಗಳಿರುವುದರಿಂದ, ವಸ್ತುವು ಒಂದೇ ಆಗಿದ್ದರೂ,
ಅದು ವಿಧವಿಧವಾಗಿ ಕಾಣಿಸುತ್ತದೆ ; ಅಥವಾ ಗ್ರಹಿಸಲ್ಪಡುತ್ತದೆ. ಸ್ತ್ರೀಯು ಒಬ್ಬಳೇ
ಆಗಿದ್ದರೂ, ಪ್ರಿಯನ ಮನಸ್ಸಿನಲ್ಲಿ ಆಹ್ಲಾದವನ್ನುಂಟುಮಾಡಿ, ಸವತಿಯ ಮನಸ್ಸಿನಲ್ಲಿ
ಮತ್ಸರವನ್ನು ಮಾಡಿ, ಸಂನ್ಯಾಸಿಯ ಮನಸ್ಸಿನಲ್ಲಿ ಯಾವ ಪರಿಣಾಮವನ್ನೂ<noinclude></noinclude>
qtn2nikqg2nj1477r1tekdozw9rye8v
ಪುಟ:ಮನಮಂಥನ.pdf/೪೬೩
104
62910
317739
314712
2026-05-06T16:26:27Z
Shreesha Sharma
7840
/* Proofread */
317739
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೪೫}}
ಹೂಡದೆ ವಿಧವಿಧ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತಾಳೆ. ವಸ್ತುವು ಒಂದೇ
ಆಗಿದ್ದರೂ, ನೋಡಿದವರ ಮನಸ್ಸು ವಿಧವಿಧವಾಗಿರುವುದರಿಂದ, ವಿಭಿನ್ನವಾದ
ಪರಿಣಾಮಗಳು ಅವರುಗಳ ಮನಸ್ಸಿನಲ್ಲಿ ಉಂಟಾಗುತ್ತದೆ.
{{center|'''ತತ್ ಉಪರಾಗಾ ಪ್ರೇಕ್ಷಿತ್ವಾಡ್ ಚಿತ್ತಸ್ಯ ವಸ್ತು ಜ್ಞಾತ, ಅಜಾತಂ'''}}
ಯಾವುದಾದರೂ ವಸ್ತುವನ್ನು ನೋಡಿದರೆ, ಅದರ ರೂಪವನ್ನು ಮನಸ್ಸು
ಆ ಕ್ಷಣಾವಧಿಯಲ್ಲಿ ಹೊಂದುತ್ತದೆ. ಮನಸ್ಸೆಂಬ ಶಕ್ತಿಯು ಸರ್ವಾಂತರ್ಯಾಮಿ
ಯಾಗಿದೆ. ಅಂದರೆ ಪ್ರಪಂಚವೆಲ್ಲಾ ಮನಸ್ಸಿಗೆ ವ್ಯಕ್ತವಾಗಬೇಕು. ಆದರೆ
ನೋಡಿದುದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಗ್ರಹಿಸುತ್ತೇವೆ. ಏಕೆಂದರೆ ನೋಡುವುದರ
ಜತೆಗೆ, ಉಪರಾಗ ಎಂದರೆ ಎಂತದಾದರೂ ತುಸು ಆಸಕ್ತಿ ಅಥವಾ ರಾಗ
ಪ್ರಚೋದನೆಯನ್ನು ಮಾಡಬೇಕು, ಆಗ ಗ್ರಹಿಸಲು ಸಾಧ್ಯ. ಆಸಕ್ತಿಯು
ಉಂಟಾಗಬೇಕಾದರೆ, ಮನಸ್ಸನ್ನು ತತ್ಕಾಲಾವಧಿಯಲ್ಲಿ, ಮತ್ತೊಂದು ಮನಸ್ಸಿನಲ್ಲಿ
ಅಡಗಿರುವ ಶಕ್ತಿಯು ಪ್ರಚೋದಿಸಬೇಕು. Perception ಅಥವಾ ಗ್ರಹಿಸುವಿಕೆಗೆ,
ಇತ್ತ ಇಂದ್ರಿಯಗಳು ಮತ್ತು ಇಂದ್ರಿಯಾರ್ಥಭ್ಯಗಳು ಇರಬೇಕು. ಮತ್ತೊಂದು
ಕಡೆ ಮನಸ್ಸನ್ನು ಆಸಕ್ತಿ ವಹಿಸುವಂತೆ ಪ್ರಚೋದಿಸುವ ಶಕ್ತಿಯು ಇರಬೇಕು.
ಹಾಗಾದಾಗ ಇವೆರಡರ ಮಧ್ಯದಲ್ಲಿರುವ ಮನಸ್ಸು ಕಂಡುದನ್ನು ಗ್ರಹಿಸುತ್ತದೆ.
ಕಂಡುದು Conscious mind ಇಗೆ ವ್ಯಕ್ತವಾಗುತ್ತದೆ. ಹಾಗೆ
ಪ್ರಚೋದನೆಯಾಗದಿದ್ದರೆ, ಮನಸ್ಸು, ಅಜ್ಞಾತಂ, ಗ್ರಹಿಸುವುದಿಲ್ಲ.
{{center|'''ಸದಾ ಜ್ಞಾತಾ ಚಿತ್ತ ವೃತ್ತಯಃ ತತ್ ಪ್ರಭೋ: ಪುರುಷಸ್ಯಾ ಪರಿಣಾಮಿತ್ವಾತ್'''}}
ತತ್ ಪ್ರಭೋ, ಮನಸ್ಸಿನಲ್ಲಿ ಹುದುಗಿದ್ದುಕೊಂಡು, ಪ್ರಭುವಿನಂತೆ ಮನಸ್ಸನ್ನು
ನಡೆಸುವ ಶಕ್ತಿಯು, ಸದಾ ಜ್ಞಾತಾಃ ಎಲ್ಲವನ್ನೂ ಎಲ್ಲ ಕಾಲದಲ್ಲೂ ಅರಿತಿರುತ್ತದೆ.
ಚಿತ್ತವೃತ್ತಿಗಳ ಪರಿಣಾಮದಿಂದ ಆಗುವ ಗ್ರಹಿಸುವಿಕೆಯು ಆ ಶಕ್ತಿಯಿಂದಲೇ.
ಆ ಶಕ್ತಿಯನ್ನು 'ಪುರುಷ' ಎಂದು ಹೆಸರಿಸಿದ್ದರು. 'ಪುರುಷ'ನು ಚಿತ್ತವೃತ್ತಿಗಳಿಗೆ
ಪ್ರಚೋದಕನಾಗಿದ್ದರೂ, ಚಿತ್ತವೃತ್ತಗಳಿಗೆ ಸಾಕ್ಷಿಯಾಗಿದ್ದರೂ, ಅವುಗಳಿಂದ ಯಾವ
ಸೋಂಕನ್ನೂ ಪಡೆಯುವುದಿಲ್ಲ. ಮೆದುಳಿನಲ್ಲಿರುವ ಆನಂದದ ಕೇಂದ್ರಗಳ
ಪ್ರಚೋದನೆಯಿಂದ, ಇದು ಸಾಧ್ಯವಾಗುತ್ತದೆ ಎಂದು ಊಹಿಸಬಹುದು.
{{center|'''ನ ತತ್ ಸ್ವಾಭಾಸಂ ದೃಶ್ಯತಾಪ್'''}}
ಮನಸ್ಸು ಎಂಬುದನ್ನು ಗ್ರಹಿಸಬಹುದು. ಆದರೆ ಮನಸ್ಸನ್ನು ಪ್ರಚೋದಿಸುವ
'ಪುರುಷ' ಎಂಬುದು ಮನಸ್ಸಿನ ಎಲ್ಲ ಪರಿವರ್ತನೆಗಳಿಗೆ ಸಾಕ್ಷಿಯಾಗಿರುತ್ತದೆ.
ಕಾಣುತ್ತದೆ. ಆದಕಾರಣ ಮನಸ್ಸು, ಸ್ವಯಂಪ್ರಕಾಶಮಾನವಾದುದಲ್ಲ. 'ಪುರುಷ'<noinclude></noinclude>
a31csnafk2gws3gn9nsx984pg419kno
317742
317739
2026-05-06T16:29:43Z
Shreelatha.Halemane
7642
/* Validated */
317742
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೪೫}}
ಹೂಡದೆ ವಿಧವಿಧ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತಾಳೆ. ವಸ್ತುವು ಒಂದೇ
ಆಗಿದ್ದರೂ, ನೋಡಿದವರ ಮನಸ್ಸು ವಿಧವಿಧವಾಗಿರುವುದರಿಂದ, ವಿಭಿನ್ನವಾದ
ಪರಿಣಾಮಗಳು ಅವರುಗಳ ಮನಸ್ಸಿನಲ್ಲಿ ಉಂಟಾಗುತ್ತದೆ.
{{center|'''ತತ್ ಉಪರಾಗಾ ಪ್ರೇಕ್ಷಿತ್ವಾಡ್ ಚಿತ್ತಸ್ಯ ವಸ್ತು ಜ್ಞಾತ, ಅಜಾತಂ'''}}
{{gap}}ಯಾವುದಾದರೂ ವಸ್ತುವನ್ನು ನೋಡಿದರೆ, ಅದರ ರೂಪವನ್ನು ಮನಸ್ಸು
ಆ ಕ್ಷಣಾವಧಿಯಲ್ಲಿ ಹೊಂದುತ್ತದೆ. ಮನಸ್ಸೆಂಬ ಶಕ್ತಿಯು ಸರ್ವಾಂತರ್ಯಾಮಿ
ಯಾಗಿದೆ. ಅಂದರೆ ಪ್ರಪಂಚವೆಲ್ಲಾ ಮನಸ್ಸಿಗೆ ವ್ಯಕ್ತವಾಗಬೇಕು. ಆದರೆ
ನೋಡಿದುದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಗ್ರಹಿಸುತ್ತೇವೆ. ಏಕೆಂದರೆ ನೋಡುವುದರ
ಜತೆಗೆ, ಉಪರಾಗ ಎಂದರೆ ಎಂತದಾದರೂ ತುಸು ಆಸಕ್ತಿ ಅಥವಾ ರಾಗ
ಪ್ರಚೋದನೆಯನ್ನು ಮಾಡಬೇಕು, ಆಗ ಗ್ರಹಿಸಲು ಸಾಧ್ಯ. ಆಸಕ್ತಿಯು
ಉಂಟಾಗಬೇಕಾದರೆ, ಮನಸ್ಸನ್ನು ತತ್ಕಾಲಾವಧಿಯಲ್ಲಿ, ಮತ್ತೊಂದು ಮನಸ್ಸಿನಲ್ಲಿ
ಅಡಗಿರುವ ಶಕ್ತಿಯು ಪ್ರಚೋದಿಸಬೇಕು. Perception ಅಥವಾ ಗ್ರಹಿಸುವಿಕೆಗೆ,
ಇತ್ತ ಇಂದ್ರಿಯಗಳು ಮತ್ತು ಇಂದ್ರಿಯಾರ್ಥಭ್ಯಗಳು ಇರಬೇಕು. ಮತ್ತೊಂದು
ಕಡೆ ಮನಸ್ಸನ್ನು ಆಸಕ್ತಿ ವಹಿಸುವಂತೆ ಪ್ರಚೋದಿಸುವ ಶಕ್ತಿಯು ಇರಬೇಕು.
ಹಾಗಾದಾಗ ಇವೆರಡರ ಮಧ್ಯದಲ್ಲಿರುವ ಮನಸ್ಸು ಕಂಡುದನ್ನು ಗ್ರಹಿಸುತ್ತದೆ.
ಕಂಡುದು Conscious mind ಇಗೆ ವ್ಯಕ್ತವಾಗುತ್ತದೆ. ಹಾಗೆ
ಪ್ರಚೋದನೆಯಾಗದಿದ್ದರೆ, ಮನಸ್ಸು, ಅಜ್ಞಾತಂ, ಗ್ರಹಿಸುವುದಿಲ್ಲ.
{{center|'''ಸದಾ ಜ್ಞಾತಾ ಚಿತ್ತ ವೃತ್ತಯಃ ತತ್ ಪ್ರಭೋ: ಪುರುಷಸ್ಯಾ ಪರಿಣಾಮಿತ್ವಾತ್'''}}
{{gap}}ತತ್ ಪ್ರಭೋ, ಮನಸ್ಸಿನಲ್ಲಿ ಹುದುಗಿದ್ದುಕೊಂಡು, ಪ್ರಭುವಿನಂತೆ ಮನಸ್ಸನ್ನು
ನಡೆಸುವ ಶಕ್ತಿಯು, ಸದಾ ಜ್ಞಾತಾಃ ಎಲ್ಲವನ್ನೂ ಎಲ್ಲ ಕಾಲದಲ್ಲೂ ಅರಿತಿರುತ್ತದೆ.
ಚಿತ್ತವೃತ್ತಿಗಳ ಪರಿಣಾಮದಿಂದ ಆಗುವ ಗ್ರಹಿಸುವಿಕೆಯು ಆ ಶಕ್ತಿಯಿಂದಲೇ.
ಆ ಶಕ್ತಿಯನ್ನು 'ಪುರುಷ' ಎಂದು ಹೆಸರಿಸಿದ್ದರು. 'ಪುರುಷ'ನು ಚಿತ್ತವೃತ್ತಿಗಳಿಗೆ
ಪ್ರಚೋದಕನಾಗಿದ್ದರೂ, ಚಿತ್ತವೃತ್ತಗಳಿಗೆ ಸಾಕ್ಷಿಯಾಗಿದ್ದರೂ, ಅವುಗಳಿಂದ ಯಾವ
ಸೋಂಕನ್ನೂ ಪಡೆಯುವುದಿಲ್ಲ. ಮೆದುಳಿನಲ್ಲಿರುವ ಆನಂದದ ಕೇಂದ್ರಗಳ
ಪ್ರಚೋದನೆಯಿಂದ, ಇದು ಸಾಧ್ಯವಾಗುತ್ತದೆ ಎಂದು ಊಹಿಸಬಹುದು.
{{center|'''ನ ತತ್ ಸ್ವಾಭಾಸಂ ದೃಶ್ಯತಾಪ್'''}}
{{gap}}ಮನಸ್ಸು ಎಂಬುದನ್ನು ಗ್ರಹಿಸಬಹುದು. ಆದರೆ ಮನಸ್ಸನ್ನು ಪ್ರಚೋದಿಸುವ
'ಪುರುಷ' ಎಂಬುದು ಮನಸ್ಸಿನ ಎಲ್ಲ ಪರಿವರ್ತನೆಗಳಿಗೆ ಸಾಕ್ಷಿಯಾಗಿರುತ್ತದೆ.
ಕಾಣುತ್ತದೆ. ಆದಕಾರಣ ಮನಸ್ಸು, ಸ್ವಯಂಪ್ರಕಾಶಮಾನವಾದುದಲ್ಲ. 'ಪುರುಷ'<noinclude></noinclude>
gs3x4qrjtox74k0o7aalkk4do9mcdn4
ಪುಟ:ಮನಮಂಥನ.pdf/೪೬೪
104
62911
317743
314713
2026-05-06T16:33:04Z
Shreesha Sharma
7840
/* Proofread */
317743
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೪೪೬|right=ಮನಮಂಥನ}}
ಮಾತ್ರ ಸ್ವಯಂ ಪ್ರಕಾಶಮಾನವಾದುದು.
{{center|'''ಏಕ ಸಮಯೇಚ ಉಭಯಾನ್ ಅವಧಾರಣು'''}}
ಒಂದೇ ಕಾಲದಲ್ಲಿ ಚಿತ್ತವು ತನ್ನ ಸ್ವರೂಪವನ್ನೂ ವಸ್ತುವನ್ನೂ ಕೂಡ
ಗ್ರಹಿಸಲಸಾಧ್ಯ. ಆದಕಾರಣ ಚಿತ್ತವು ಸ್ವಪ್ರಕಾಶವಾದದ್ದಲ್ಲ. ಆದರೆ ದೃಶ್ಯವಾಗಬಹುದು.
ಪುರುಷನ ಸ್ವಯಂ ಪ್ರಕಾಶದಿಂದ ಪ್ರಚೋದಿತವಾದಾಗ,
{{center|'''ಚಿತ್ತಾಸ್ತರ ದೃಶ್ಯ ಬುದ್ಧಿ ಬುದ್ಧತ್ ಅತಿ ಪ್ರಸಂಗ ; ಸ್ಮೃತಿ ಸಂಕರಷ್ಟ'''}}
ಮನಸ್ಸು ಸ್ವಯಂ ಪ್ರಕಾಶವಲ್ಲದಿದ್ದರೂ, ಬೇರೊಂದು ಮನಸ್ಸಿನಿಂದ
ಪ್ರಕಾಶಗೊಳ್ಳಬಹುದು ಎಂದು ಅನ್ನಬಹುದು. ಆದರೆ ಈ ವಾದವು ಅತಿಪ್ರಸಂಗ
ಬೇರೊಂದು ಮನಸ್ಸನ್ನು ಪ್ರಚೋದಿಸಲು, ಮತ್ತೊಂದು ಮನಸ್ಸು ಅಗತ್ಯ. ಈ
ತೆರನಾಗಿ ಇದಕ್ಕೆ ಆದಿಯಾದ ಮನಸ್ಸು ಯಾವುದು ಎಂದು ತಿಳಿಯಲಸಾಧ್ಯ.
'ಪುರುಷ'ನ ಪ್ರಚೋದನೆಯು ಎಲ್ಲ ಮನಸ್ಸುಗಳಿಗೂ ಆಧಾರ ಭೂತವಾದುದು
ಎಂಬುದು ಖಚಿತವಾಗುತ್ತದೆ.
ಅಲ್ಲದೆ ಪ್ರತಿಯೊಂದು ಮನಸ್ಸಿನ ಸ್ಮರಣೆಗಳು ಕೂಡಿಕೊಂಡು, ಇನ್ನೊಂದು
ಮನಸ್ಸನ್ನು ಪ್ರಚೋದಿಸುವಾಗ, ಭ್ರಮಣೆ ಮತ್ತು ಗೊಂದಲಗಳೂ ಉಂಟಾಗುತ್ತವೆ.
{{center|'''ಚಿತೇ ಅಪ್ರತಿ ಸಂಕ್ರಮಾಯಾಃ ತದಾ ಕಾರಾಪತ್ತೆ ಸ್ವಬುದ್ಧಿ ಸಂವೇದನಂ'''}}
ಚಿತ್ತವು ಅಥವಾ ಮನಸ್ಸು ವೃತ್ತಿಗಳಿಂದ ಬಾಧಿಸಲ್ಪಡದಿದ್ದಾಗ, ಚಿತ್ತದಲ್ಲಿರುವ
'ಪುರುಷ'ನ ಅರಿವು ಉಂಟಾಗುತ್ತದೆ. 'ಪುರುಷ'ನಲ್ಲಿ ಎರಡು ತೆರನ ಅಂಶಗಳಿವೆ.
ಒಂದು, ನಿತ್ಯೋದಿತ ; ಶಾಶ್ವತವಾಗಿರುವುದು. ಎರಡು, ಅಭಿವ್ಯಂಗ್ಯ, ಈ ಅಂಶವು
ಮನಸ್ಸನ್ನು ವ್ಯಾವಹಾರಿಕವಾಗಿಯೂ ಹಾಗೂ ಪಾರಮಾರ್ಥಿಕವಾಗಿಯೂ,
ಪ್ರಚೋದಿಸುತ್ತದೆ. ಪಾರಮಾರ್ಥಿಕವಾಗಿ ನಡೆಯತೊಡಗಿದರೆ, ಮನಸ್ಸು,
ಹಸನಾದಾಗ 'ಪುರುಷ'ನನ್ನು ಅರಿಯುತ್ತದೆ.
{{center|'''ದೃಷ್ಟ ದೃಶ್ಯ ಪರಕಂ ಚಿತ್ತಂ ಸರ್ವಾರ್ಥಂ'''}}
ಮನಸ್ಸನ್ನು ಪ್ರಚೋದಿಸಿ ನಡೆಸುವ ಪುರುಷ : ಮತ್ತು ಮನಸ್ಸಿನಿಂದ
ಬಾಹ್ಯ ಲೋಕದ ವಿಷಯಗಳನ್ನು ತಿಳಿದುಕೊಳ್ಳುವ ರೀತಿ ; ಇವೆರಡೂ ಯೋಗ
ಅಥವಾ ಒಟ್ಟು ಗೂಡಿದರೆ ಸರ್ವ ವಿಷಯಗಳನ್ನೂ ತಿಳಿದುಕೊಳ್ಳಬಹುದು.
ಆಗ ಬಾಹ್ಯ ಲೋಕದ ಭೋಗಗಳ ನಶ್ವರತ್ವವೂ, 'ಪುರುಷ'ನ ಅರಿವಿನ ಶಾಶ್ವತತ್ತ್ವವೂ,
ಸ್ಪಷ್ಟವಾಗಿ ತಿಳಿಯುತ್ತದೆ. ಶಾಶ್ವತವಾದುದರತ್ತ ಸುಲಭವಾಗಿ ಮನಸ್ಸು
ಹರಿಯತೊಡಗುತ್ತದೆ.
{{center|'''ತತ್ ಅಸಂಖ್ಯೆಯ ವಾಸನಾಭಿ ಚಿತ್ರಮಪಿ ಪರಾರ್ಥಂ ಸಂಹತ್ಯೆ ಕಾರಿತ್ವಾತ್'''}}<noinclude></noinclude>
5u5dorbrsfm5n5vy3a8jwttekhuw6me
317744
317743
2026-05-06T16:33:42Z
Shreelatha.Halemane
7642
/* Validated */
317744
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೪೪೬|right=ಮನಮಂಥನ}}
ಮಾತ್ರ ಸ್ವಯಂ ಪ್ರಕಾಶಮಾನವಾದುದು
{{center|ಏಕ ಸಮಯೇಚ ಉಭಯಾನ್ ಅವಧಾರಣು}}
{{gap}}ಒಂದೇ ಕಾಲದಲ್ಲಿ ಚಿತ್ತವು ತನ್ನ ಸ್ವರೂಪವನ್ನೂ ವಸ್ತುವನ್ನೂ ಕೂಡ
ಗ್ರಹಿಸಲಸಾಧ್ಯ. ಆದಕಾರಣ ಚಿತ್ತವು ಸ್ವಪ್ರಕಾಶವಾದದ್ದಲ್ಲ. ಆದರೆ ದೃಶ್ಯವಾಗಬಹುದು.ಪುರುಷನ ಸ್ವಯಂ ಪ್ರಕಾಶದಿಂದ ಪ್ರಚೋದಿತವಾದಾಗ,
{{center|ಚಿತ್ತಾಸ್ತರ ದೃಶ್ಯ ಬುದ್ಧಿ ಬುದ್ಧತ್ ಅತಿ ಪ್ರಸಂಗ ; ಸ್ಮೃತಿ ಸಂಕರಷ್ಟ}}
{{gap}}ಮನಸ್ಸು ಸ್ವಯಂ ಪ್ರಕಾಶವಲ್ಲದಿದ್ದರೂ, ಬೇರೊಂದು ಮನಸ್ಸಿನಿಂದ
ಪ್ರಕಾಶಗೊಳ್ಳಬಹುದು ಎಂದು ಅನ್ನಬಹುದು. ಆದರೆ ಈ ವಾದವು ಅತಿಪ್ರಸಂಗ
ಬೇರೊಂದು ಮನಸ್ಸನ್ನು ಪ್ರಚೋದಿಸಲು, ಮತ್ತೊಂದು ಮನಸ್ಸು ಅಗತ್ಯ. ಈ
ತೆರನಾಗಿ ಇದಕ್ಕೆ ಆದಿಯಾದ ಮನಸ್ಸು ಯಾವುದು ಎಂದು ತಿಳಿಯಲಸಾಧ್ಯ.
'ಪುರುಷ'ನ ಪ್ರಚೋದನೆಯು ಎಲ್ಲ ಮನಸ್ಸುಗಳಿಗೂ ಆಧಾರ ಭೂತವಾದುದು
ಎಂಬುದು ಖಚಿತವಾಗುತ್ತದೆ.
{{gap}}ಅಲ್ಲದೆ ಪ್ರತಿಯೊಂದು ಮನಸ್ಸಿನ ಸ್ಮರಣೆಗಳು ಕೂಡಿಕೊಂಡು, ಇನ್ನೊಂದು
ಮನಸ್ಸನ್ನು ಪ್ರಚೋದಿಸುವಾಗ, ಭ್ರಮಣೆ ಮತ್ತು ಗೊಂದಲಗಳೂ ಉಂಟಾಗುತ್ತವೆ.
{{center|ಚಿತೇ ಅಪ್ರತಿ ಸಂಕ್ರಮಾಯಾಃ ತದಾ ಕಾರಾಪತ್ತೆ ಸ್ವಬುದ್ಧಿ ಸಂವೇದನಂ}}
{{gap}}ಚಿತ್ತವು ಅಥವಾ ಮನಸ್ಸು ವೃತ್ತಿಗಳಿಂದ ಬಾಧಿಸಲ್ಪಡದಿದ್ದಾಗ, ಚಿತ್ತದಲ್ಲಿರುವ
'ಪುರುಷ'ನ ಅರಿವು ಉಂಟಾಗುತ್ತದೆ. 'ಪುರುಷ'ನಲ್ಲಿ ಎರಡು ತೆರನ ಅಂಶಗಳಿವೆ.
ಒಂದು, ನಿತ್ಯೋದಿತ ; ಶಾಶ್ವತವಾಗಿರುವುದು. ಎರಡು, ಅಭಿವ್ಯಂಗ್ಯ, ಈ ಅಂಶವು
ಮನಸ್ಸನ್ನು ವ್ಯಾವಹಾರಿಕವಾಗಿಯೂ ಹಾಗೂ ಪಾರಮಾರ್ಥಿಕವಾಗಿಯೂ,
ಪ್ರಚೋದಿಸುತ್ತದೆ. ಪಾರಮಾರ್ಥಿಕವಾಗಿ ನಡೆಯತೊಡಗಿದರೆ, ಮನಸ್ಸು,
ಹಸನಾದಾಗ 'ಪುರುಷ'ನನ್ನು ಅರಿಯುತ್ತದೆ.
{{center|ದೃಷ್ಟ ದೃಶ್ಯ ಪರಕಂ ಚಿತ್ತಂ ಸರ್ವಾರ್ಥಂ}}
{{gap}}ಮನಸ್ಸನ್ನು ಪ್ರಚೋದಿಸಿ ನಡೆಸುವ ಪುರುಷ : ಮತ್ತು ಮನಸ್ಸಿನಿಂದ
ಬಾಹ್ಯ ಲೋಕದ ವಿಷಯಗಳನ್ನು ತಿಳಿದುಕೊಳ್ಳುವ ರೀತಿ ; ಇವೆರಡೂ ಯೋಗ
ಅಥವಾ ಒಟ್ಟು ಗೂಡಿದರೆ ಸರ್ವ ವಿಷಯಗಳನ್ನೂ ತಿಳಿದುಕೊಳ್ಳಬಹುದು.
ಆಗ ಬಾಹ್ಯ ಲೋಕದ ಭೋಗಗಳ ನಶ್ವರತ್ವವೂ, 'ಪುರುಷ'ನ ಅರಿವಿನ ಶಾಶ್ವತತ್ತ್ವವೂ,
ಸ್ಪಷ್ಟವಾಗಿ ತಿಳಿಯುತ್ತದೆ. ಶಾಶ್ವತವಾದುದರತ್ತ ಸುಲಭವಾಗಿ ಮನಸ್ಸು
ಹರಿಯತೊಡಗುತ್ತದೆ.
{{gap}}ತತ್ ಅಸಂಖ್ಯೆಯ ವಾಸನಾಭಿ ಚಿತ್ರಮಪಿ ಪರಾರ್ಥಂ ಸಂಹತ್ಯೆ ಕಾರಿತ್ವಾತ್<noinclude></noinclude>
eivtslm4vkpo0zf3lgc7281wwgepcku
ಪುಟ:ಮನಮಂಥನ.pdf/೪೬೫
104
62912
317746
314714
2026-05-06T16:36:38Z
Shreesha Sharma
7840
/* Proofread */
317746
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೪೪೭|right=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}
'ಪುರುಷ' ಎನ್ನುವ ಪರಮಶಕ್ತಿಯು ಮನಸ್ಸನ್ನು ನಡೆಸುತ್ತದೆ. ಮನಸ್ಸಾದರೋ
ಬಾಹ್ಯ ಪ್ರಪಂಚದ ಸಂಪರ್ಕವನ್ನು ಹೊಂದಿ ಭೋಗ್ಯ ಕಾವ್ಯಗಳನ್ನು ಅನುಭವಿಸಲು
ಉತ್ಸುಕವಾಗಿರುತ್ತದೆ. ಇಂತಹ ಮನಸ್ಸುಗಳು ಅಸಂಖ್ಯಾತವೂ, ಸ್ಮರಣಾರೂಪಿಯಾದ
ವಾಸನೆಗಳಿಂದಲೂ, ಚಿತ್ರಿಸಲ್ಪಡುತ್ತವೆ. ಆದರೂ ಮನಸ್ಸಿನ ಅಂತರಾಳದಲ್ಲಿ, ತೋರ
ಮನಸ್ಸಿನ ಗಮನಕ್ಕೆ ಬರದೆ, ಬಹಳಷ್ಟು ಕಾರ್ಯಗಳು ನಡೆಯುತ್ತವೆ. ಇವೆಲ್ಲವೂ,
ಮನಸ್ಸಿನ ಪ್ರಭುವಾದ, 'ಪುರುಷನ'ನ ಪ್ರಚೋದನೆಯಿಂದ ಸಾಧ್ಯವಾಗಿದೆ. ಹೀಗಾಗಿ
ಭೋಗ ಕಾಮ್ಯಗಳಿಂದ ವಿಮುಕ್ತಿಯನ್ನು ಪುರುಷನು ಹೊಂದಿರುತ್ತಾನೆ.
ಮನಸ್ಸಿನಲ್ಲಿರುವ ಪ್ರವೃತ್ತಿಗಳೆರಡು ; ನಿತ್ಯೋದಿತ ಮತ್ತು ಅಭಿವ್ಯಂಗ್ಯ ಎನ್ನುವುದರ
ವಿವರಣೆಯಿದು.
{{center|'''ವಿಶೇಷ ದರ್ಶಿನ ಆತ್ಮಭಾವ ಭಾವನಾವಿ ನಿವೃತ್ತಿ:'''}}
'ಪುರುಷ'ನ ಅರಿವು ಮೂಡಿದ ನಂತರ, ಪುರುಷ ಮತ್ತು ಚಿತ್ತ ಇವುಗಳ
ವ್ಯತ್ಯಾಸವನ್ನು ತಿಳಿಯುವ ಆಸೆಯು ನಿವೃತ್ತಿಯಾಗುತ್ತದೆ. ಅನಂತರ ಯಾವ
ಆಸೆಯೂ ಉಂಟಾಗುವುದಿಲ್ಲ.
{{center|'''ತದಾಹಿ ವಿವೇಕ ನಿಮ್ಮ ಕೈವಲ್ಯ ಪ್ರಾರಂ ಚಿತ್ತಂ'''}}
ಮೇಲೆ ಹೇಳಿದ ಸ್ಥಿತಿಯು ಉಂಟಾದಾಗ, ವಿವೇಕ (Discrimination)
ಸ್ಪುಟವಾಗಿ ಮನಸ್ಸು, ಅಥವಾ ಚಿತ್ತವೇ ಎಲ್ಲವೂ ಎಂಬ ಭ್ರಾಂತಿಯು ಹೋಗಿ,
ಕೈವಲ್ಯ ಸ್ಥಿತಿಯ ಹೊಸಿಲನ್ನು ದಾಟುತ್ತಾನೆ.
{{center|'''ತತ್ ಛಿದ್ರೇಕು ಪ್ರತ್ಯಯಾಂತರಾಣಿ ಸಂಸ್ಕಾರೇಭ್ಯ:'''}}
ಹಾಗಾದರೂ, ಸ್ಮರಣ ಸಂಸ್ಕಾರಗಳಿಂದ, ನನಗೆ ಕೈವಲ್ಯ ಪದವಿಯು
ಲಭಿಸಿದೆ ಎಂಬ ಲೌಕಿಕವಾದ ಅಭಿಮಾನವು ತುಸು ಕಾಣಿಸಿಕೊಳ್ಳಬಹುದು.
{{center|'''ಹಾನ ಮೇಷ ಕ್ಷೇತವತ್ ಉಕ್ತಂ'''}}
ಇಂತಹ ಲೌಕಿಕ ಅಭಿಮಾನವನ್ನು, ಇತರ ಕೇಶಗಳನ್ನು ಜ್ಞಾನಾರ್ಜನೆಯಿಂದ
ತ್ಯಜಿಸಿದ ಹಾಗೆ, ವಿವೇಕಜ್ಞಾನದಿಂದ ನಿವೃತ್ತಿಗೊಳಿಸಬೇಕು.
{{center|'''ಪ್ರಸಂಖ್ಯಾನೇಪಿ ಅಕುಸಿದಸ್ಯ ಸರ್ವಥಾ ವಿವೇಕ ಖ್ಯಾತೇ'''}}
{{center|'''ಧರ್ಮ ಮೇಘ: ಸಮಾಧಿ:'''}}
ಪ್ರಸಂಖ್ಯಾನ ಎಂದರೆ (Illumination) 'ಪುರುಷ'ನ ಅರಿವಿನಿಂದ
ಉಂಟಾಗುವ ಪರಮೋತ್ತಮ ವಿವೇಕ, ಯಾವ ಆಸೆಯನ್ನೂ ಹೊಂದದ
ಇಂತಹವರಲ್ಲಿ, ವಿವೇಕದಿಂದಾಗಿ ಸಮಾಧಿಯು ದೊರಕುತ್ತದೆ. ಈ ತೆರನ
ಸಮಾಧಿಯನ್ನು 'ಧರ್ಮ ಮೇಘ' ಎನ್ನುತ್ತಾರೆ. ಮೋಡಗಳು ಮಳೆಯನ್ನು<noinclude></noinclude>
mirtw8iu999lhlvc8mp1y2ua19twx2j
317749
317746
2026-05-06T16:37:32Z
Shreesha Sharma
7840
317749
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೪೭}}
'ಪುರುಷ' ಎನ್ನುವ ಪರಮಶಕ್ತಿಯು ಮನಸ್ಸನ್ನು ನಡೆಸುತ್ತದೆ. ಮನಸ್ಸಾದರೋ
ಬಾಹ್ಯ ಪ್ರಪಂಚದ ಸಂಪರ್ಕವನ್ನು ಹೊಂದಿ ಭೋಗ್ಯ ಕಾವ್ಯಗಳನ್ನು ಅನುಭವಿಸಲು
ಉತ್ಸುಕವಾಗಿರುತ್ತದೆ. ಇಂತಹ ಮನಸ್ಸುಗಳು ಅಸಂಖ್ಯಾತವೂ, ಸ್ಮರಣಾರೂಪಿಯಾದ
ವಾಸನೆಗಳಿಂದಲೂ, ಚಿತ್ರಿಸಲ್ಪಡುತ್ತವೆ. ಆದರೂ ಮನಸ್ಸಿನ ಅಂತರಾಳದಲ್ಲಿ, ತೋರ
ಮನಸ್ಸಿನ ಗಮನಕ್ಕೆ ಬರದೆ, ಬಹಳಷ್ಟು ಕಾರ್ಯಗಳು ನಡೆಯುತ್ತವೆ. ಇವೆಲ್ಲವೂ,
ಮನಸ್ಸಿನ ಪ್ರಭುವಾದ, 'ಪುರುಷನ'ನ ಪ್ರಚೋದನೆಯಿಂದ ಸಾಧ್ಯವಾಗಿದೆ. ಹೀಗಾಗಿ
ಭೋಗ ಕಾಮ್ಯಗಳಿಂದ ವಿಮುಕ್ತಿಯನ್ನು ಪುರುಷನು ಹೊಂದಿರುತ್ತಾನೆ.
ಮನಸ್ಸಿನಲ್ಲಿರುವ ಪ್ರವೃತ್ತಿಗಳೆರಡು ; ನಿತ್ಯೋದಿತ ಮತ್ತು ಅಭಿವ್ಯಂಗ್ಯ ಎನ್ನುವುದರ
ವಿವರಣೆಯಿದು.
{{center|'''ವಿಶೇಷ ದರ್ಶಿನ ಆತ್ಮಭಾವ ಭಾವನಾವಿ ನಿವೃತ್ತಿ:'''}}
'ಪುರುಷ'ನ ಅರಿವು ಮೂಡಿದ ನಂತರ, ಪುರುಷ ಮತ್ತು ಚಿತ್ತ ಇವುಗಳ
ವ್ಯತ್ಯಾಸವನ್ನು ತಿಳಿಯುವ ಆಸೆಯು ನಿವೃತ್ತಿಯಾಗುತ್ತದೆ. ಅನಂತರ ಯಾವ
ಆಸೆಯೂ ಉಂಟಾಗುವುದಿಲ್ಲ.
{{center|'''ತದಾಹಿ ವಿವೇಕ ನಿಮ್ಮ ಕೈವಲ್ಯ ಪ್ರಾರಂ ಚಿತ್ತಂ'''}}
ಮೇಲೆ ಹೇಳಿದ ಸ್ಥಿತಿಯು ಉಂಟಾದಾಗ, ವಿವೇಕ (Discrimination)
ಸ್ಪುಟವಾಗಿ ಮನಸ್ಸು, ಅಥವಾ ಚಿತ್ತವೇ ಎಲ್ಲವೂ ಎಂಬ ಭ್ರಾಂತಿಯು ಹೋಗಿ,
ಕೈವಲ್ಯ ಸ್ಥಿತಿಯ ಹೊಸಿಲನ್ನು ದಾಟುತ್ತಾನೆ.
{{center|'''ತತ್ ಛಿದ್ರೇಕು ಪ್ರತ್ಯಯಾಂತರಾಣಿ ಸಂಸ್ಕಾರೇಭ್ಯ:'''}}
ಹಾಗಾದರೂ, ಸ್ಮರಣ ಸಂಸ್ಕಾರಗಳಿಂದ, ನನಗೆ ಕೈವಲ್ಯ ಪದವಿಯು
ಲಭಿಸಿದೆ ಎಂಬ ಲೌಕಿಕವಾದ ಅಭಿಮಾನವು ತುಸು ಕಾಣಿಸಿಕೊಳ್ಳಬಹುದು.
{{center|'''ಹಾನ ಮೇಷ ಕ್ಷೇತವತ್ ಉಕ್ತಂ'''}}
ಇಂತಹ ಲೌಕಿಕ ಅಭಿಮಾನವನ್ನು, ಇತರ ಕೇಶಗಳನ್ನು ಜ್ಞಾನಾರ್ಜನೆಯಿಂದ
ತ್ಯಜಿಸಿದ ಹಾಗೆ, ವಿವೇಕಜ್ಞಾನದಿಂದ ನಿವೃತ್ತಿಗೊಳಿಸಬೇಕು.
{{center|'''ಪ್ರಸಂಖ್ಯಾನೇಪಿ ಅಕುಸಿದಸ್ಯ ಸರ್ವಥಾ ವಿವೇಕ ಖ್ಯಾತೇ'''}}
{{center|'''ಧರ್ಮ ಮೇಘ: ಸಮಾಧಿ:'''}}
ಪ್ರಸಂಖ್ಯಾನ ಎಂದರೆ (Illumination) 'ಪುರುಷ'ನ ಅರಿವಿನಿಂದ
ಉಂಟಾಗುವ ಪರಮೋತ್ತಮ ವಿವೇಕ, ಯಾವ ಆಸೆಯನ್ನೂ ಹೊಂದದ
ಇಂತಹವರಲ್ಲಿ, ವಿವೇಕದಿಂದಾಗಿ ಸಮಾಧಿಯು ದೊರಕುತ್ತದೆ. ಈ ತೆರನ
ಸಮಾಧಿಯನ್ನು 'ಧರ್ಮ ಮೇಘ' ಎನ್ನುತ್ತಾರೆ. ಮೋಡಗಳು ಮಳೆಯನ್ನು<noinclude></noinclude>
4mwzcdufstfpi51y0dbdob4kd35hz0u
317753
317749
2026-05-06T16:40:20Z
Shreelatha.Halemane
7642
/* Validated */
317753
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೪೭}}
{{gap}}'ಪುರುಷ' ಎನ್ನುವ ಪರಮಶಕ್ತಿಯು ಮನಸ್ಸನ್ನು ನಡೆಸುತ್ತದೆ. ಮನಸ್ಸಾದರೋ
ಬಾಹ್ಯ ಪ್ರಪಂಚದ ಸಂಪರ್ಕವನ್ನು ಹೊಂದಿ ಭೋಗ್ಯ ಕಾವ್ಯಗಳನ್ನು ಅನುಭವಿಸಲು
ಉತ್ಸುಕವಾಗಿರುತ್ತದೆ. ಇಂತಹ ಮನಸ್ಸುಗಳು ಅಸಂಖ್ಯಾತವೂ, ಸ್ಮರಣಾರೂಪಿಯಾದ
ವಾಸನೆಗಳಿಂದಲೂ, ಚಿತ್ರಿಸಲ್ಪಡುತ್ತವೆ. ಆದರೂ ಮನಸ್ಸಿನ ಅಂತರಾಳದಲ್ಲಿ, ತೋರ
ಮನಸ್ಸಿನ ಗಮನಕ್ಕೆ ಬರದೆ, ಬಹಳಷ್ಟು ಕಾರ್ಯಗಳು ನಡೆಯುತ್ತವೆ. ಇವೆಲ್ಲವೂ,
ಮನಸ್ಸಿನ ಪ್ರಭುವಾದ, 'ಪುರುಷನ'ನ ಪ್ರಚೋದನೆಯಿಂದ ಸಾಧ್ಯವಾಗಿದೆ. ಹೀಗಾಗಿ
ಭೋಗ ಕಾಮ್ಯಗಳಿಂದ ವಿಮುಕ್ತಿಯನ್ನು ಪುರುಷನು ಹೊಂದಿರುತ್ತಾನೆ.
ಮನಸ್ಸಿನಲ್ಲಿರುವ ಪ್ರವೃತ್ತಿಗಳೆರಡು ; ನಿತ್ಯೋದಿತ ಮತ್ತು ಅಭಿವ್ಯಂಗ್ಯ ಎನ್ನುವುದರ
ವಿವರಣೆಯಿದು.
{{center|'''ವಿಶೇಷ ದರ್ಶಿನ ಆತ್ಮಭಾವ ಭಾವನಾವಿ ನಿವೃತ್ತಿ:'''}}
{{gap}}'ಪುರುಷ'ನ ಅರಿವು ಮೂಡಿದ ನಂತರ, ಪುರುಷ ಮತ್ತು ಚಿತ್ತ ಇವುಗಳ
ವ್ಯತ್ಯಾಸವನ್ನು ತಿಳಿಯುವ ಆಸೆಯು ನಿವೃತ್ತಿಯಾಗುತ್ತದೆ. ಅನಂತರ ಯಾವ
ಆಸೆಯೂ ಉಂಟಾಗುವುದಿಲ್ಲ.
{{center|'''ತದಾಹಿ ವಿವೇಕ ನಿಮ್ಮ ಕೈವಲ್ಯ ಪ್ರಾರಂ ಚಿತ್ತಂ'''}}
{{gap}}ಮೇಲೆ ಹೇಳಿದ ಸ್ಥಿತಿಯು ಉಂಟಾದಾಗ, ವಿವೇಕ (Discrimination)
ಸ್ಪುಟವಾಗಿ ಮನಸ್ಸು, ಅಥವಾ ಚಿತ್ತವೇ ಎಲ್ಲವೂ ಎಂಬ ಭ್ರಾಂತಿಯು ಹೋಗಿ,
ಕೈವಲ್ಯ ಸ್ಥಿತಿಯ ಹೊಸಿಲನ್ನು ದಾಟುತ್ತಾನೆ.
{{center|'''ತತ್ ಛಿದ್ರೇಕು ಪ್ರತ್ಯಯಾಂತರಾಣಿ ಸಂಸ್ಕಾರೇಭ್ಯ:'''}}
{{gap}}ಹಾಗಾದರೂ, ಸ್ಮರಣ ಸಂಸ್ಕಾರಗಳಿಂದ, ನನಗೆ ಕೈವಲ್ಯ ಪದವಿಯು
ಲಭಿಸಿದೆ ಎಂಬ ಲೌಕಿಕವಾದ ಅಭಿಮಾನವು ತುಸು ಕಾಣಿಸಿಕೊಳ್ಳಬಹುದು.
{{center|'''ಹಾನ ಮೇಷ ಕ್ಷೇತವತ್ ಉಕ್ತಂ'''}}
{{gap}}ಇಂತಹ ಲೌಕಿಕ ಅಭಿಮಾನವನ್ನು, ಇತರ ಕೇಶಗಳನ್ನು ಜ್ಞಾನಾರ್ಜನೆಯಿಂದ
ತ್ಯಜಿಸಿದ ಹಾಗೆ, ವಿವೇಕಜ್ಞಾನದಿಂದ ನಿವೃತ್ತಿಗೊಳಿಸಬೇಕು.
{{center|'''ಪ್ರಸಂಖ್ಯಾನೇಪಿ ಅಕುಸಿದಸ್ಯ ಸರ್ವಥಾ ವಿವೇಕ ಖ್ಯಾತೇ'''}}
{{center|'''ಧರ್ಮ ಮೇಘ: ಸಮಾಧಿ:'''}}
{{gap}}ಪ್ರಸಂಖ್ಯಾನ ಎಂದರೆ (Illumination) 'ಪುರುಷ'ನ ಅರಿವಿನಿಂದ
ಉಂಟಾಗುವ ಪರಮೋತ್ತಮ ವಿವೇಕ, ಯಾವ ಆಸೆಯನ್ನೂ ಹೊಂದದ
ಇಂತಹವರಲ್ಲಿ, ವಿವೇಕದಿಂದಾಗಿ ಸಮಾಧಿಯು ದೊರಕುತ್ತದೆ. ಈ ತೆರನ
ಸಮಾಧಿಯನ್ನು 'ಧರ್ಮ ಮೇಘ' ಎನ್ನುತ್ತಾರೆ. ಮೋಡಗಳು ಮಳೆಯನ್ನು<noinclude></noinclude>
1nx5q1r81cpxgvow9d2jfnuwy0k7del
ಪುಟ:ಮನಮಂಥನ.pdf/೪೬೬
104
62913
317752
314715
2026-05-06T16:39:45Z
Shreesha Sharma
7840
/* Proofread */
317752
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೪೪೮|right=ಮನಮಂಥನ}}
ಸುರಿಸಿ, ಸಸ್ಯಗಳನ್ನು ಪ್ರಚೋದಿಸಿ ಮೊಳಕೆ ಒಡೆದು ಬೆಳೆಸುವಂತೆ, ಈ
'ಧರ್ಮಮೇಘ'ವು 'ಸಮಾಧಿಸ್ಥಿತಿ'ಯನ್ನು ಪ್ರಚೋದಿಸಿ ಬೆಳೆಸಿ ಅಭಿವೃದ್ಧಿಸುತ್ತದೆ.
{{center|'''ತತಃ ಕ್ಷೇಶ ಕರ್ಮ ನಿವೃತ್ತಿ'''}}
'ಧರ್ಮಮೇಘ' ಸಮಾಧಿಯಿಂದ, ಕೇಶ ಕರ್ಮಗಳು, ಎಂದರೆ ಅವಿದ್ಯಾ
ಪಾಪಪುಣ್ಯ ಕರ್ಮಗಳೆಂಬ ಭೇದ ; ಇತ್ಯಾದಿಗಳು ನಿವೃತ್ತಿಯಾಗುತ್ತವೆ. ಅಂದರೆ
ಯಾವ ಲೌಕಿಕ ಕೆಲಸಗಳನ್ನು ಇಂತಹ ಯೋಗಿಯು ಮಾಡಿದರೂ, ಅವುಗಳ
ಫಲಗಳು, ಅವನಿಗೆ ಅಂಟುವುದಿಲ್ಲ. ಇಂತಹ ಯೋಗಿಯು, ಸ್ವಾರ್ಥ ಫಲವೀಯು
ವಂತಹ ಕಾರ್ಯಗಳನ್ನು ಮಾಡುವುದೇ ಇಲ್ಲ, ಏಕೆಂದರೆ 'ಆಸೆ'ಯೇ
ಇರುವುದಿಲ್ಲವಾದ್ದರಿಂದ.
{{center|'''ತದಾ ಸರ್ವಾವರಣ ಮಲಾದೇತಸ್ಯ ಜ್ಞಾನ ಗ್ಯಾನಂತಾತ್ ಜೈಯಂ ಅಲ್ಪಂ'''}}
ಸರ್ವಾವರಣ ಮಲಾಪೇತಸ್ಯ ಎಂದರೆ ಸುತ್ತಲೂ ಆವರಿಸಿಕೊಂಡಿರುವ,
ಆಸೆಯಿಂದುಂಟಾದ ಕ್ಷೇಶಗಳು ಮತ್ತು ಕರ್ಮಗಳು, ಈ ಕಲ್ಮಷದಿಂದ ತೊಡೆದು
ಹಾಕಲ್ಪಟ್ಟ ಜ್ಞಾನಕ್ಕೆ, ಆನಂತರ ಅರಿಯಬೇಕಾದುದು ಅತ್ಯಲ್ಪವಾಗಿರುತ್ತದೆ. ಅಂದರೆ
ರಜಸ್ಸು ಮತ್ತು ತಮ, ಈ ಗುಣಗಳಿಂದ ಬಿಡುಗಡೆಯನ್ನು ಪಡೆದ ಮೇಲೆ, ಸತ್ವ
ಗುಣಾಧಿಕ್ಯದಿಂದ, ಅತ್ಯಧಿಕವಾದ ಜ್ಞಾನವನ್ನು ಪಡೆಯಬಹುದು. ಲೌಕಿಕವಾಗಿ
ಸಾಮಾನ್ಯ ಮನುಷ್ಯನು ಪಡೆಯುವ ಜ್ಞಾನವು, ಯೋಗಿಯು ಪಡೆಯುವ ಪರಮ
ಜ್ಞಾನಕ್ಕೆ ಹೋಲಿಸಿದರೆ, ಅತ್ಯಲ್ಪವಾಗಿರುತ್ತದೆ. Insignificant ಎನ್ನಬೇಕು.
ಯೋಗಿಯು ಈ ಹಂತದಲ್ಲಿ ಸರ್ವಜ್ಞನಾಗಿರುತ್ತಾನೆ.
{{center|'''ತತಃ ಕೃತಾರ್ಥಾನಾಂ ಪರಿಣಾಮಕ್ರಮ ಸಮಾಪ್ತಿ: ಗುಣಾನಾಂ'''}}
ಧರ್ಮಮೇಘದ ಸಂಪೋಕ್ಷಣೆಯ ನಂತರ, ಮೂರೂ ಗುಣಗಳ ಚೆಲ್ಲಾಟವು
ಸ್ತಬ್ಧವಾಗುತ್ತದೆ. ಅವುಗಳ ನಿಯಮಿತ ಕಾರ್ಯವು ನೆರವೇರಿಸಲ್ಪಟ್ಟಿರುವುದರಿಂದ,
ಮೂರು ಗುಣಗಳು, ಸತ್ವ ರಜಸ್ ತಮಗಳು, 'ಪುರುಷ'ನ ; ಮನಸ್ಸಿನ ಪ್ರಭುವಿನ
ಅಣತಿಯನ್ನು ನೆರವೇರಿಸಿದ ನಂತರ, ಸ್ತಬ್ಧವಾಗುತ್ತವೆ. ಮಾನವ ಮನಸ್ಸಿನ
ಅಂತಹ ಸ್ಥಿತಿಯನ್ನು 'ತ್ರಿಗುಣಾತ್ಮಕ ಪ್ರಧಾನ'ವೆನ್ನುತ್ತಾರೆ. ಆಗ ಚಿತ್ತವು ಶಾಂತಿಯನ್ನು
ಪಡೆಯುತ್ತದೆ. ಲೌಕಿಕದಲ್ಲಿ ಇದ್ದು ಬಾಳುತ್ತಿರುವಾಗಲೂ ಕೂಡ.
{{center|'''ಕ್ಷಣ ಪ್ರತಿಯೋಗೀ ಪರಿಣಾಮ ಪರಾಂತ ನಿರ್ಗಾತ್ಯ ಕ್ರಮ'''}}
ಚಿತ್ತವು ಎಂದರೆ ಮನಸ್ಸು ವೃತ್ತಿಗಳನ್ನು ಹೊಂದುವಾಗ,
ವೃತ್ತಿಯೊಂದೊಂದಕ್ಕೂ ಕಾಲಾವಧಿಯು ಇರಬೇಕು. ಅತ್ಯಂತ ಸೂಕ್ಷ್ಮವೂ,
ವಿಭೇದಿಸಲಾಗದದೂ ಆದ ಕಾಲಾವಧಿಯನ್ನು ಸಾಂಖ್ಯಕಾರರು “ಕ್ಷಣ' ಎಂದು<noinclude></noinclude>
oavgiujrd3pumma87s2euqfxcha8990
317755
317752
2026-05-06T16:40:50Z
Shreelatha.Halemane
7642
/* Validated */
317755
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೪೪೮|right=ಮನಮಂಥನ}}
ಸುರಿಸಿ, ಸಸ್ಯಗಳನ್ನು ಪ್ರಚೋದಿಸಿ ಮೊಳಕೆ ಒಡೆದು ಬೆಳೆಸುವಂತೆ, ಈ
'ಧರ್ಮಮೇಘ'ವು 'ಸಮಾಧಿಸ್ಥಿತಿ'ಯನ್ನು ಪ್ರಚೋದಿಸಿ ಬೆಳೆಸಿ ಅಭಿವೃದ್ಧಿಸುತ್ತದೆ.
{{center|'''ತತಃ ಕ್ಷೇಶ ಕರ್ಮ ನಿವೃತ್ತಿ'''}}
{{gap}}'ಧರ್ಮಮೇಘ' ಸಮಾಧಿಯಿಂದ, ಕೇಶ ಕರ್ಮಗಳು, ಎಂದರೆ ಅವಿದ್ಯಾ
ಪಾಪಪುಣ್ಯ ಕರ್ಮಗಳೆಂಬ ಭೇದ ; ಇತ್ಯಾದಿಗಳು ನಿವೃತ್ತಿಯಾಗುತ್ತವೆ. ಅಂದರೆ
ಯಾವ ಲೌಕಿಕ ಕೆಲಸಗಳನ್ನು ಇಂತಹ ಯೋಗಿಯು ಮಾಡಿದರೂ, ಅವುಗಳ
ಫಲಗಳು, ಅವನಿಗೆ ಅಂಟುವುದಿಲ್ಲ. ಇಂತಹ ಯೋಗಿಯು, ಸ್ವಾರ್ಥ ಫಲವೀಯು
ವಂತಹ ಕಾರ್ಯಗಳನ್ನು ಮಾಡುವುದೇ ಇಲ್ಲ, ಏಕೆಂದರೆ 'ಆಸೆ'ಯೇ
ಇರುವುದಿಲ್ಲವಾದ್ದರಿಂದ.
{{center|'''ತದಾ ಸರ್ವಾವರಣ ಮಲಾದೇತಸ್ಯ ಜ್ಞಾನ ಗ್ಯಾನಂತಾತ್ ಜೈಯಂ ಅಲ್ಪಂ'''}}
{{gap}}ಸರ್ವಾವರಣ ಮಲಾಪೇತಸ್ಯ ಎಂದರೆ ಸುತ್ತಲೂ ಆವರಿಸಿಕೊಂಡಿರುವ,
ಆಸೆಯಿಂದುಂಟಾದ ಕ್ಷೇಶಗಳು ಮತ್ತು ಕರ್ಮಗಳು, ಈ ಕಲ್ಮಷದಿಂದ ತೊಡೆದು
ಹಾಕಲ್ಪಟ್ಟ ಜ್ಞಾನಕ್ಕೆ, ಆನಂತರ ಅರಿಯಬೇಕಾದುದು ಅತ್ಯಲ್ಪವಾಗಿರುತ್ತದೆ. ಅಂದರೆ
ರಜಸ್ಸು ಮತ್ತು ತಮ, ಈ ಗುಣಗಳಿಂದ ಬಿಡುಗಡೆಯನ್ನು ಪಡೆದ ಮೇಲೆ, ಸತ್ವ
ಗುಣಾಧಿಕ್ಯದಿಂದ, ಅತ್ಯಧಿಕವಾದ ಜ್ಞಾನವನ್ನು ಪಡೆಯಬಹುದು. ಲೌಕಿಕವಾಗಿ
ಸಾಮಾನ್ಯ ಮನುಷ್ಯನು ಪಡೆಯುವ ಜ್ಞಾನವು, ಯೋಗಿಯು ಪಡೆಯುವ ಪರಮ
ಜ್ಞಾನಕ್ಕೆ ಹೋಲಿಸಿದರೆ, ಅತ್ಯಲ್ಪವಾಗಿರುತ್ತದೆ. Insignificant ಎನ್ನಬೇಕು.
ಯೋಗಿಯು ಈ ಹಂತದಲ್ಲಿ ಸರ್ವಜ್ಞನಾಗಿರುತ್ತಾನೆ.
{{center|'''ತತಃ ಕೃತಾರ್ಥಾನಾಂ ಪರಿಣಾಮಕ್ರಮ ಸಮಾಪ್ತಿ: ಗುಣಾನಾಂ'''}}
{{gap}}ಧರ್ಮಮೇಘದ ಸಂಪೋಕ್ಷಣೆಯ ನಂತರ, ಮೂರೂ ಗುಣಗಳ ಚೆಲ್ಲಾಟವು
ಸ್ತಬ್ಧವಾಗುತ್ತದೆ. ಅವುಗಳ ನಿಯಮಿತ ಕಾರ್ಯವು ನೆರವೇರಿಸಲ್ಪಟ್ಟಿರುವುದರಿಂದ,
ಮೂರು ಗುಣಗಳು, ಸತ್ವ ರಜಸ್ ತಮಗಳು, 'ಪುರುಷ'ನ ; ಮನಸ್ಸಿನ ಪ್ರಭುವಿನ
ಅಣತಿಯನ್ನು ನೆರವೇರಿಸಿದ ನಂತರ, ಸ್ತಬ್ಧವಾಗುತ್ತವೆ. ಮಾನವ ಮನಸ್ಸಿನ
ಅಂತಹ ಸ್ಥಿತಿಯನ್ನು 'ತ್ರಿಗುಣಾತ್ಮಕ ಪ್ರಧಾನ'ವೆನ್ನುತ್ತಾರೆ. ಆಗ ಚಿತ್ತವು ಶಾಂತಿಯನ್ನು
ಪಡೆಯುತ್ತದೆ. ಲೌಕಿಕದಲ್ಲಿ ಇದ್ದು ಬಾಳುತ್ತಿರುವಾಗಲೂ ಕೂಡ.
{{center|'''ಕ್ಷಣ ಪ್ರತಿಯೋಗೀ ಪರಿಣಾಮ ಪರಾಂತ ನಿರ್ಗಾತ್ಯ ಕ್ರಮ'''}}
{{gap}}ಚಿತ್ತವು ಎಂದರೆ ಮನಸ್ಸು ವೃತ್ತಿಗಳನ್ನು ಹೊಂದುವಾಗ,
ವೃತ್ತಿಯೊಂದೊಂದಕ್ಕೂ ಕಾಲಾವಧಿಯು ಇರಬೇಕು. ಅತ್ಯಂತ ಸೂಕ್ಷ್ಮವೂ,
ವಿಭೇದಿಸಲಾಗದದೂ ಆದ ಕಾಲಾವಧಿಯನ್ನು ಸಾಂಖ್ಯಕಾರರು “ಕ್ಷಣ' ಎಂದು<noinclude></noinclude>
hldeasmfy2h2k8nfomjqotdzmggxgy2
ಪುಟ:ಮನಮಂಥನ.pdf/೪೬೭
104
62914
317756
268783
2026-05-06T16:41:00Z
Shreesha Sharma
7840
/* Proofread */
317756
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೪೯}}
ಹೆಸರಿಸಿದ್ದರು. ಕ್ಷಣ ಕ್ಷಣವೂ ಆಗುವ ಮನಸ್ಸಿನ ಕ್ರಮವಾದ ಪರಿವರ್ತನೆಯನ್ನು,
ಪರಿಣಾಮವಾದ ಮೇಲೆ ಗ್ರಹಿಸಲು, ಅಥವಾ ತಿಳಿಯಲು ಸಾಧ್ಯ. ದೈನಂದಿನ
ಲೋಕಾನುಭವವು ಇದಕ್ಕೆ ಸಾಕ್ಷಿ.
{{center|'''ಪುರುಷಾರ್ಥ ಶೂನ್ಯಾನಾಂ ಗುಣಾನಾಂ ಪ್ರತಿ ಪ್ರಸವ ಕೈವಲ್ಯಂ'''}}
{{center|'''ಸ್ವರೂಪ ಪ್ರತಿಷ್ಠಾ ವಾ ಚಿತಿ ಶಕ್ತಿ: ಇತಿ'''}}
ಪುರುಷಾರ್ಥವೆಂಬುದು, ತ್ರಿಗುಣಗಳು ಶೂನ್ಯವಾದಾಗ ಲಭಿಸುವ ಅರಿವು.
ಇದರಿಂದ ಕೈವಲ್ಯವು, ಅಂದರೆ, ಆದಿ ಮೂಲವಾದ ಸ್ವ ಸ್ವರೂಪವು, ಸಾಕ್ಷಾತ್
ಆಗುತ್ತ ಲಭಿಸುತ್ತದೆ. ಚಿತಿಶಕ್ತಿ ಅಥವಾ ಮನಸ್ಸೆಂಬ ಶಕ್ತಿಯನ್ನು, ವಿವೇಕ ಜ್ಞಾನದ
ಮೂಲಕ ಬಳಸುವುದರಿಂದ, ಶಾಶ್ವತವಾದ, ತ್ರಿಗುಣಾತೀತವಾದ, ಕೈವಲ ಸ್ಥಿತಿಯನ್ನು
ಲಭಿಸಿಕೊಳ್ಳಬಹುದು. ಕೈವಲ್ಯವೇ ಪುರುಷಾರ್ಥದ ಹೆಗ್ಗುರಿ.
{{center|ಓಂ ಶಾಂತಿ, ಶಾಂತಿ, ಶಾಂತಿಃ}}<noinclude></noinclude>
exclt618nl4gf4klqx6jb20gaco5449
317759
317756
2026-05-06T16:43:22Z
Shreelatha.Halemane
7642
/* Validated */
317759
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೪೪೯}}
ಹೆಸರಿಸಿದ್ದರು. ಕ್ಷಣ ಕ್ಷಣವೂ ಆಗುವ ಮನಸ್ಸಿನ ಕ್ರಮವಾದ ಪರಿವರ್ತನೆಯನ್ನು,
ಪರಿಣಾಮವಾದ ಮೇಲೆ ಗ್ರಹಿಸಲು, ಅಥವಾ ತಿಳಿಯಲು ಸಾಧ್ಯ. ದೈನಂದಿನ
ಲೋಕಾನುಭವವು ಇದಕ್ಕೆ ಸಾಕ್ಷಿ.
{{center|'''ಪುರುಷಾರ್ಥ ಶೂನ್ಯಾನಾಂ ಗುಣಾನಾಂ ಪ್ರತಿ ಪ್ರಸವ ಕೈವಲ್ಯಂ'''}}
{{center|'''ಸ್ವರೂಪ ಪ್ರತಿಷ್ಠಾ ವಾ ಚಿತಿ ಶಕ್ತಿ: ಇತಿ'''}}
{{gap}}ಪುರುಷಾರ್ಥವೆಂಬುದು, ತ್ರಿಗುಣಗಳು ಶೂನ್ಯವಾದಾಗ ಲಭಿಸುವ ಅರಿವು.
ಇದರಿಂದ ಕೈವಲ್ಯವು, ಅಂದರೆ, ಆದಿ ಮೂಲವಾದ ಸ್ವ ಸ್ವರೂಪವು, ಸಾಕ್ಷಾತ್
ಆಗುತ್ತ ಲಭಿಸುತ್ತದೆ. ಚಿತಿಶಕ್ತಿ ಅಥವಾ ಮನಸ್ಸೆಂಬ ಶಕ್ತಿಯನ್ನು, ವಿವೇಕ ಜ್ಞಾನದ
ಮೂಲಕ ಬಳಸುವುದರಿಂದ, ಶಾಶ್ವತವಾದ, ತ್ರಿಗುಣಾತೀತವಾದ, ಕೈವಲ ಸ್ಥಿತಿಯನ್ನು
ಲಭಿಸಿಕೊಳ್ಳಬಹುದು. ಕೈವಲ್ಯವೇ ಪುರುಷಾರ್ಥದ ಹೆಗ್ಗುರಿ.
{{center|ಓಂ ಶಾಂತಿ, ಶಾಂತಿ, ಶಾಂತಿಃ}}<noinclude></noinclude>
30wawjlaj5v8vlfbeq64v0sd4jqnwne
ಪುಟ:ಕ್ರಾಂತಿ ಕಲ್ಯಾಣ.pdf/೨೪೩
104
78490
317639
252164
2026-05-06T13:19:07Z
Shreelatha.Halemane
7642
/* Validated */
317639
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೩೦||ಕ್ರಾಂತಿ ಕಲ್ಯಾಣ}}</noinclude>
ತಿಳಿಸಿದಿರಿ, ಅಲ್ಲವೆ?” ಎಂದು ಕ್ರಮಿತನು ಪುನಃ ಪ್ರಶ್ನಿಸಿದನು.
{{gap}}ನ್ಯಾಯಪೀಠದ ಪ್ರಶ್ನೆಗಳಿಗೆ ತನ್ನ ಉತ್ತರ ಸರಿಯೆ ? ಎಂದು ಲಾವಣ್ಯವತಿಗೆ ಸಂದೇಹವಾಯಿತು. “ನಾನು ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡೆ. ತಂದೆ ನನ್ನನ್ನು ಸಾಕಿ ಸಲಹಿದರು. ನನ್ನ ಮನಸ್ಸನ್ನು ಅವರಿಗೆ ತಿಳಿಸದೆ ಮತ್ತಾರಿಗೆ ತಿಳಿಸಲಿ ?” ಎಂದು ಅವಳು ಮಾರುತ್ತರ ಕೊಟ್ಟಳು.
{{gap}}“ನಿಮ್ಮ ಮೆಚ್ಚಿಗೆ ತಿಳಿದ ಮೇಲೆ ನಿಮ್ಮ ತಂದೆ ಹರಳಯ್ಯನ ಹತ್ತಿರ ಮದುವೆಯ ಪ್ರಸ್ತಾಪ ಮಾಡಿದರಲ್ಲವೆ?”
{{gap}}“ನೀವು ಮತ್ತೆ ಮತ್ತೆ ಕೇಳಿದ್ದನ್ನೇ ಕೇಳುತ್ತಿದ್ದೀರಿ. ನಾನು ಮಧುವರಸರ ಮಗಳಲ್ಲದೆ ನಿಮ್ಮ ಮಗಳಾಗಿದ್ದರೆ ಏನು ಮಾಡುತ್ತಿದ್ದಿರಿ ?”
{{gap}}“ನಿನ್ನನ್ನು ಕತ್ತಲ ಕೋಣೆಯಲ್ಲಿ ಕೂಡಿ ಉಪವಾಸ ಹಾಕುತ್ತಿದ್ದೆ. ವರ್ಣ ಸಂಕರದ ಈ ಮದುವೆಗೆ ಒಪ್ಪುತ್ತಿರಲಿಲ್ಲ.” – ಕ್ರಮಿತನು ಕೋಪದಿಂದ ಸಿಡಿದೆದ್ದು ಹೇಳಿದನು.
{{gap}}“ಶರಣ ಧರ್ಮಕ್ಕೂ ವೈದಿಕ ಧರ್ಮಕ್ಕೂ ಇರುವ ಅಂತರವನ್ನು ನಿಮ್ಮ ಮಾತುಗಳು ಹೇಳುತ್ತಿವೆ. ಜಾತಿಪಂಥ ಮೇಲು ಕೀಳು ಭಾವನೆಗಳನ್ನು ಶರಣಧರ್ಮ ಒಪ್ಪುವುದಿಲ್ಲ. ಅವರ ದೃಷ್ಟಿಯಲ್ಲಿ ಶಿವನ ಭಕ್ತರೆಲ್ಲ ಸಮಾನರು. ಪುರುಷರಂತೆ ಸ್ತ್ರೀಯರಿಗೂ ಸಮಾನಾಧಿಕಾರವಿದೆ.” -ಲಾವಣ್ಯವತಿ ಅಷ್ಟೇ ಆವೇಶದಿಂದ ಹೇಳಿದಳು. ಅವಳ ಪ್ರಗಲ್ಭತೆ ಜಾಗ್ರತವಾಗಿತ್ತು.
{{gap}}ವಿಚಾರಣೆ ಪ್ರಕೋಪಕ್ಕೇರುವುದೆಂದು ಭಾವಿಸಿ ಮಂಚಣನು, "ಸಾಕಾದಷ್ಟು ಕಾಲ ಪ್ರಶೋತ್ತರಗಳೂ ನಡೆದಿವೆ. ಇನ್ನು ಮುಗಿಸಿದರೆ ಒಳ್ಳೆಯದಲ್ಲವೆ?” ಎಂದು ಸಲಹೆ ಮಾಡಿದನು.
{{gap}}ಕ್ರಮಿತನಿಗೂ ಅದು ಉಚಿತವಾಗಿ ಕಂಡಿತು. "ಕೊನೆಯದಾಗಿ ನನ್ನದೊಂದು ಪ್ರಶ್ನೆಯಿದೆ. ಅದನ್ನು ಬರೆದುಕೊಡುತ್ತೇನೆ. ಮಂಚಣನವರು ಓದಿಕೊಂಡು ಸಾಕ್ಷಿಗೆ ಕೊಡಬಹುದು. ಸಾಕ್ಷಿ ಇಚ್ಛೆಯಂತೆ ಪ್ರಕಟವಾಗಿಯೋ ಬರಹದಲ್ಲಿಯೋ ಅದಕ್ಕೆ ಉತ್ತರ ಕೊಡಲಿ,” ಎಂದನು.
{{gap}}ಮಂಚಣನ ಒಪ್ಪಿಗೆ ಪಡೆದು ಕ್ರಮಿತನು ಪ್ರಶ್ನೆಯನ್ನು ಹಲಿಗೆಯ ಮೇಲೆ ಬರೆದನು. ಓದಿ ಮಂಚಣನ ಹುಬ್ಬು ಕುಂಚಿತವಾದವು. “ಪ್ರಶ್ನೆ ಅಸಭ್ಯ ಅಶ್ಲೀಲವಷ್ಟೇ ಅಲ್ಲ, ನಮ್ಮ ಮುಂದಿರುವ ವ್ಯವಹಾರಕ್ಕೆ ಯಾವ ವಿಧದಲ್ಲಿಯೂ ಸಂಬಂಧಿಸುವುದಿಲ್ಲ. ಇದನ್ನು ಸಾಕ್ಷಿಗೆ ಕೊಡಲು ನಿರಾಕರಿಸುತ್ತೇನೆ,” ಎಂದು ಮಂಚಣ ಹಲಿಗೆಯನ್ನು ಕ್ರಮಿತನಿಗೆ ಹಿಂತಿರುಗಿ ಕೊಟ್ಟನು.<noinclude></noinclude>
dnphxsaccrlw7v8thlbmuzd21wuzula
ಪುಟ:ಕ್ರಾಂತಿ ಕಲ್ಯಾಣ.pdf/೨೪೦
104
78572
317636
252161
2026-05-06T13:14:01Z
Shreelatha.Halemane
7642
/* Validated */
317636
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೨೨೭}}</noinclude>
ಸರ್ವಾಧಿಕಾರಿಗಳು ತಮ್ಮ ಆಜ್ಞಾಪತ್ರದಲ್ಲಿ ಅದನ್ನು ಸ್ಪಷ್ಟಪಡಿಸಿದ್ದಾರೆ. ಈಗ ನಾವು, ನಡೆದಿರುವ ಅಪರಾಧದ ವ್ಯಾಪ್ತಿ ಮತ್ತು ಅದರ ರಹಸ್ಯೋದ್ದೇಶಗಳನ್ನು ಕುರಿತು ವಿಚಾರಣೆ ನಡೆಸಬೇಕಾಗಿದೆ. ಈ ದೃಷ್ಟಿಯಿಂದ ನಾನು ಮಂಚಣ ನಾಯಕರ ಸಲಹೆಯನ್ನು ವಿರೋಧಿಸುತ್ತೇನೆ,”
{{gap}}-ಎಂದು ರುದ್ರಭಟ್ಟನು ಹೇಳಿದಾಗ, ನ್ಯಾಯಪೀಠದಲ್ಲಿ ತಾನು ಒಂಟಿಗನೆಂದು ಮಂಚಣನು ತಿಳಿದನು. ಆದರೂ ಹೋರಾಟವಿಲ್ಲದೆ ಕ್ರಮಿತನಿಗೆ ಮಣಿಯುವುದು ಅವನಿಗೆ ಇಷ್ಟವಿರಲಿಲ್ಲ.
{{gap}}“ಶೀಲವಂತನ ಸಾಕ್ಷ್ಯ ತೆಗೆದುಕೊಳ್ಳಲು ನನ್ನ ಅಡ್ಡಿಯಿಲ್ಲ. ಆದರೆ ಲಾವಣ್ಯವತಿ ಅರಿಯದ ಹೆಣ್ಣು. ಸಾಕ್ಷ್ಯ ತೆಗೆದುಕೊಳ್ಳುವ ನೆವದಿಂದ ಅವಳನ್ನು ನ್ಯಾಯಾಸ್ಥಾನದ ಮುಂದೆ ನಿಲ್ಲಿಸುವುದು ಉಚಿತವೆನಿಸದು,” -ಎಂದು ಅವನು ಪುನಃ ಆಕ್ಷೇಪಿಸಿದನು.
{{gap}}“ಮದುವೆಗೆ ಸಂಬಂಧಿಸಿದ ಕೆಲವು ವಿವರಗಳನ್ನು ತಿಳಿಯಲು ಲಾವಣ್ಯವತಿಯ ಸಾಕ್ಷ್ಯ ಅಗತ್ಯ, ಹೆಂಗಸೆಂಬ ಕಾರಣದಿಂದ ನಾವು ಮಾಡಬೇಕಾದ್ದನ್ನು ಮಾಡದೆ ಹೋದರೆ ಸರ್ವಾಧಿಕಾರಿಗಳ ಕೋಪಕ್ಕೆ ಪಾತ್ರರಾಗುವೆವು. ನ್ಯಾಯಪೀಠದ ಅಧ್ಯಕ್ಷನಾಗಿ ನಾನು ಈ ಎಚ್ಚರಿಕೆ ಕೊಡುತ್ತಿದ್ದೇನೆ.” ತಿರಸ್ಕಾರದ ಬಿರುದನಿಯಿಂದ ಕ್ರಮಿತನು ನುಡಿದನು. ಬೇರೆ ಮಾರ್ಗವಿಲ್ಲದೆ ಮಂಚಣನು ಸಲಹೆಗೆ ಒಪ್ಪಬೇಕಾಯಿತು.
{{gap}}ರಾಜಪುರೋಹಿತ ನಾರಣಕ್ರಮಿತನು ಬಿಜ್ಜಳನ ಧರ್ಮಾಧಿಕರಣದ ಶ್ರೇಷ್ಠ ನ್ಯಾಯಾಧೀಶನಾಗಿದ್ದರೂ ಭೋಗವಿಲಾಸಗಳ ಆಕರ್ಷಣೆಯಿಂದ ದೂರವಾಗಿರಲಿಲ್ಲ. ಲಾವಣ್ಯವತಿಯಂತಹ ಪ್ರಬುದ್ಧ ಸುಂದರ ಯುವತಿಯನ್ನು ನ್ಯಾಯಪೀಠದ ಮುಂದೆ ನಿಲ್ಲಿಸಿ ವಿಚಾರಣೆಯ ನೆವದಿಂದ ಸಂಬದ್ಧವೋ ಅಸಂಬದ್ಧವೋ ಆದ ಅಸಭ್ಯ ಅಶ್ಲೀಲ ಪ್ರಶ್ನೆಗಳನ್ನು ಕೇಳುವುದು ಅವನ ಉದ್ದೇಶವಾಗಿತ್ತು. ಭೋಗಕ್ಕೆ ಬಾರದ ವಸ್ತುವನ್ನು ನೋಡಿಯಾದರೂ ಆನಂದಿಸುವೆನೆಂದು ಅವನು ಭಾವಿಸಿದನು.
{{gap}}ಆದರೆ ಮರುದಿನ ಮಧ್ಯಾಹ್ನ ಸಾಕ್ಷ್ಯ ಕೊಡಲು ಬಂದ ಲಾವಣ್ಯವತಿ ನ್ಯಾಯಪೀಠದ ಮುಂದೆ ನಿಂತಾಗ ಕ್ರಮಿತನಿಗೆ ತೀವ್ರ ನಿರಾಶೆಯಾಯಿತು. ಸಾಮಾನ್ಯ ಸ್ತ್ರೀಯಂತೆ ಯಾವ ಅಲಂಕಾರವೂ ಇಲ್ಲದೆ ತಲೆ ತುಂಬ ಸೆರಗು ಹೊದೆದು ಅವಳು ನ್ಯಾಯಾಸ್ಥಾನಕ್ಕೆ ಬಂದಿದ್ದಳು. ಏಕಕಾಲದಲ್ಲಿ ತಂದೆ ಮತ್ತು ಮಾವ, ಇವರಿಬ್ಬರ ಬಂಧನದಿಂದ ಅವಳ ಹೃದಯದಲ್ಲಿ ದುಗುಡ ತುಂಬಿದ್ದಂತೆ ಕಂಡಿತು. ಅತ್ತು ಅತ್ತು ಕಣ್ಣುಗಳು ಕೆಂಪಾಗಿದ್ದವು. ಹಣೆಯ ವಿಭೂತಿ ವಿರಕ್ತಿಯನ್ನು ಮೆರೆಸಿತ್ತು.
{{gap}}ಕರಣಿಕನ ಪ್ರಶ್ನೆಗಳಿಗೆ ಯಾಂತ್ರಿಕವಾಗಿ ಉತ್ತರ ಕೊಟ್ಟು, ನ್ಯಾಯಪೀಠಕ್ಕೆ ವಂದಿಸಿ ಅವಳು ತಲೆಬಾಗಿ ನಿಂತಳು.<noinclude></noinclude>
j4146zkb6zi5sbet60lxgz5n3au7axj
ಪುಟ:ಕ್ರಾಂತಿ ಕಲ್ಯಾಣ.pdf/೨೪೧
104
78573
317637
252162
2026-05-06T13:16:17Z
Shreelatha.Halemane
7642
/* Validated */
317637
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೨೮||ಕ್ರಾಂತಿ ಕಲ್ಯಾಣ}}</noinclude>
{{gap}}“ಸಾಕ್ಷಿ ಕುಳಿತುಕೊಂಡು ಉತ್ತರ ಕೊಡಬಹುದು,” –ಕ್ರಮಿತನು ಗೌರವದಿಂದ ಹೇಳಿದನು.
{{gap}}“ನಿಂತುಕೊಂಡೇ ಉತ್ತರ ಕೊಡಲು ನ್ಯಾಯಪೀಠದ ಅನುಮತಿ ಕೇಳುತ್ತೇನೆ,” -ಲಾವಣ್ಯವತಿ ವಿನಯದಿಂದ ಬಿನ್ನವಿಸಿಕೊಂಡಳು.
{{gap}}“ಶೀಲವಂತನೊಡನೆ ನಿಮ್ಮ ಮದುವೆ ನಿಮ್ಮ ಒಪ್ಪಿಗೆಯಿಂದ ನಡೆಯಿತೆ ?” -ಕೆಲವು ಕ್ಷಣಗಳು ಯೋಚಿಸುತ್ತಿದ್ದು ಕ್ರಮಿತನು ಪ್ರಶ್ನಿಸಿದನು.
{{gap}}“ಹೌದು, ಒಪ್ಪಿಗೆಯಿಂದಲೆ ನಡೆಯಿತು.”
{{gap}}“ಮದುವೆಯಾಗುವ ಮೊದಲು ನೀವು ಶೀಲವಂತನನ್ನು ನೋಡಿದ್ದಿರಾ?” :“ನೋಡಿದ್ದೆ.”
{{gap}}“ಯಾವಾಗ? ಎಲ್ಲಿ ನೋಡಿದ್ದಿರಿ ?”
{{gap}}“ಮಹಮನೆಯ ಆರೋಗ್ಯಧಾಮದಲ್ಲಿ ಅವರ ಚಿಕಿತ್ಸೆ ನಡೆಯುತ್ತಿದ್ದಾಗ.” :“ನೋಡಲು ಕಾರಣ?”
{{gap}}“ಆಗ ಹರಳಯ್ಯನವರು ಕಲ್ಯಾಣದಲ್ಲಿರಲಿಲ್ಲ. ರೋಗಿಗೆ ಬೇಕಾದ ಫಲೋಪಹಾರಗಳನ್ನು ನಾನು ತೆಗೆದುಕೊಂಡುಹೋಗಿ ಕೊಡುತ್ತಿದ್ದೆ.”
{{gap}}“ಆಗ ನೀವು ಶೀಲವಂತಯ್ಯನೊಡನೆ ಹೆಚ್ಚು ಸಲಿಗೆಯಿಂದ ನಡೆದುಕೊಳ್ಳುತ್ತಿದ್ದಿರಾ ?”
{{gap}}“ಉಪಚಾರಕ್ಕೆ ಎಷ್ಟು ಅಗತ್ಯವೋ ಅಷ್ಟು ಸಲಿಗೆಯಿಂದ ನಡೆದುಕೊಳ್ಳುತ್ತಿದ್ದೆ.”
{{gap}}“ಆಗ ನಿಮ್ಮಲ್ಲಿ ಪರಸ್ಪರ ಪ್ರೇಮ ಹುಟ್ಟಿತಲ್ಲವೆ?”
{{gap}}“ಅದೆಲ್ಲ ನನಗೆ ತಿಳಿಯದು,” -ಲಾವಣ್ಯವತಿ ಸಿಡುಕಿನಿಂದ ಉತ್ತರ ಕೊಟ್ಟಳು.
{{gap}}“ತಿಳಿಯದಿದ್ದರೆ ಹೋಗಲಿ. ಶೀಲವಂತನಿಗೆ ಗುಣಮುಖವಾದ ಮೇಲೆ ಒಂದು ದಿನ ಅಪರಾಹ್ನ ನೀವಿಬ್ಬರೂ ಗಾಡಿಯಲ್ಲಿ ಎಲ್ಲಿಗೆ ಹೋಗಿದ್ದಿರಿ ?” - ಕುಹಕದ ನಗೆ ಬೀರಿ ಕ್ರಮಿತನು ಪ್ರಶ್ನಿಸಿದನು.
{{gap}}“ಮೋಳಿಗೆ ಮಾರಯ್ಯನವರನ್ನು ನೋಡಿಬರಲು, ನಗರದ ಹೊರಗಿರುವ ಬಾಂಧವರ ಓಣಿಗೆ.”
{{gap}}ಹಠಾತ್ತನೆ ಕ್ರಮಿತನು ದನಿಯನ್ನು ಗಡುಸಾಗಿ ಮಾಡಿಕೊಂಡು, “ನಿಜ ಹೇಳಿರಿ, ನೀವು ಹೋಗಿದ್ದದ್ದು ಮಾರಯ್ಯನವರನ್ನು ನೋಡುವುದಕ್ಕಲ್ಲ. ಭೋಗ ವಿಹಾರಕ್ಕಾಗಿ ನಗರದ ಹೊರಗಿನ ಯಾವುದೋ ರಹಸ್ಯ ಸ್ಥಳಕ್ಕೆ. ಆಗಲೇ ನೀವು ಪ್ರಣಯಿಗಳಾಗಿ ಒಬ್ಬರನ್ನೊಬ್ಬರು ಬಯಸುತ್ತಿದ್ದಿರಿ, ಅಲ್ಲವೆ ?” ಎಂದು ಗಜರಿ ಕೇಳಿದನು.<noinclude></noinclude>
hcsc72mff5n3yyngg87zp05ht8dz42a
ಪುಟ:ಕ್ರಾಂತಿ ಕಲ್ಯಾಣ.pdf/೨೪೨
104
78574
317638
252163
2026-05-06T13:18:08Z
Shreelatha.Halemane
7642
/* Validated */
317638
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೨೨೯}}</noinclude>
{{gap}}ಲಾವಣ್ಯವತಿ ಬೆದರಿದಳು. ಏನೋ ಹೇಳತೊಡಗಿ, ತುಟಿ ಕಚ್ಚಿಕೊಂಡು ಆಕ್ರೋಶದ ಬಿರುದನಿಯಿಂದ, “ಇಂತಹ ಅಸಭ್ಯ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದಿಲ್ಲ,” ಎಂದಳು.
{{gap}}ಕ್ರಮಿತನು ಅಸಮಾಧಾನದಿಂದ ಚಡಪಡಿಸುತ್ತಿರುವುದನ್ನು ಕಂಡು ಮಂಚಣನು
{{gap}}“ಅವರು ಬಾಂಧವರ ಓಣಿಗೆ ಹೋಗಿದ್ದರೇ ಇಲ್ಲವೇ ಎಂಬುದನ್ನು ನಾವು ಮಾರಯ್ಯನವರಿಂದ ತಿಳಿಯಬಹುದು. ಅಧ್ಯಕ್ಷರು ದಯಮಾಡಿ ಮುಂದಿನ ಪ್ರಶ್ನೆಗೆ ಹೋದರೆ ಒಳ್ಳೆಯದು,” ಎಂದು ಸೂಚನೆಯಿತ್ತನು.
{{gap}}ಕ್ರಮಿತನು ಮಂಚಣನನ್ನು ದುರು ದುರು ನೋಡುತ್ತ ಲಾವಣ್ಯವತಿಯ ಕಡೆ ತಿರುಗಿ, “ಕ್ಷಮಿಸಿರಿ. ಮುಂದೆ ಸಭ್ಯತೆಗೆ ಕುಂದು ಬಾರದಂತೆ ನೋಡಿಕೊಳ್ಳುತ್ತೇನೆ. ಶೀಲವಂತ ಆಕರ್ಷಕ ವ್ಯಕ್ತಿಯಲ್ಲವೆ?” ಎಂದು ಕೇಳಿದನು.
{{gap}}“ನಿಮ್ಮ ಪ್ರಶ್ನೆ ನನಗೆ ಅರ್ಥವಾಗಲಿಲ್ಲ,” ಲಾವಣ್ಯವತಿ ಬೇಸರದಿಂದ ಉತ್ತರ ಕೊಟ್ಟಳು.
{{gap}}“ಅರ್ಥವಾಗುವ ಹಾಗೆ ಕೇಳುತ್ತೇನೆ,” ಎಂದು ಕ್ರಮಿತನು ಕ್ಷಣಕಾಲ ಯೋಚಿಸಿ “ಶೀಲವಂತನಂತಹ ಕಲಾವಿದ ಸುಂದರ ತರುಣನನ್ನು ಕಂಡಾಗ ಸಾಮಾನ್ಯವಾಗಿ ಹೆಂಗಸರು ಮೋಹಿಸುವರಲ್ಲವೆ ?” ಎಂದು ಕೇಳಿದನು.
{{gap}}ಪ್ರಶ್ನೆ ತಾನು ಅಪೇಕ್ಷಿಸಿದಷ್ಟು ಸಭ್ಯತೆಯಿಂದ ಕೂಡಿರಲಿಲ್ಲವೆಂಬುದನ್ನು ಅರಿತು ಕ್ರಮಿತನಿಗೆ ಸಂಕೋಚವಾಯಿತು. ಅದನ್ನು ಗಮನಿಸಿದ ಲಾವಣ್ಯವತಿ ಚತುರತೆಯಿಂದ, “ಸಾಮಾನ್ಯ ಹೆಂಗಸರ ಮನಸ್ಸು ನನಗೆ ಹೇಗೆ ತಿಳಿಯಬೇಕು? ನನ್ನ ವಿಚಾರ ಕೇಳಿದರೆ ಹೇಳುತ್ತೇನೆ,” ಎಂದು ಉತ್ತರಿಸಿದಳು.
{{gap}}“ನೀವು ಶೀಲವಂತನನ್ನು ಆರೋಗ್ಯಧಾಮದಲ್ಲಿ ನೋಡಿದಾಗಲೆ ಮೋಹಿಸಿದಿರಲ್ಲವೆ?” ಕ್ರಮಿತನು ಪುನಃ ಪ್ರಶ್ನಿಸಿದನು.
{{gap}}ಲಾವಣ್ಯವತಿ ಮೌನ.
{{gap}}“ಮೋಹಿಸಿ ಎಂದರೆ ಮೆಚ್ಚಿ ಎಂದು ಅರ್ಥ. ಅದರಲ್ಲಿ ಅಸಭ್ಯತೆಯೇನೂ ಇರುವುದಿಲ್ಲ. ಸಾಕ್ಷಿ ಸಂಕೋಚವಿಲ್ಲದೆ ಉತ್ತರ ಕೊಡಬಹುದು,” ಎಂದು ರುದ್ರಭಟ್ಟನು ವಿವರಣೆ ಕೊಟ್ಟನು.
{{gap}}“ಪ್ರಾಪ್ತ ವಯಸ್ಕರಾದ ವಧೂವರರು ಪರಸ್ಪರ ಮೆಚ್ಚಿದ ಮೇಲೆ ಮದುವೆ ಮಾಡುವುದು ಶರಣರ ಸಂಪ್ರದಾಯ,” -ಎಂದು ಲಾವಣ್ಯವತಿ ದಿಟ್ಟತನದಿಂದ ಉತ್ತರಕೊಟ್ಟಳು.
{{gap}}“ಮೊದಲು ನೀವು ಮೆಚ್ಚಿದಿರಿ. ಆಮೇಲೆ ತಂದೆಗೆ ನಿಮ್ಮ ಮೆಚ್ಚುಗೆಯನ್ನು<noinclude></noinclude>
jmtwcpzkxc3znmldps6gmmb4l4x73hl
ಪುಟ:ಕ್ರಾಂತಿ ಕಲ್ಯಾಣ.pdf/೨೪೪
104
78575
317641
252171
2026-05-06T13:20:36Z
Shreelatha.Halemane
7642
317641
proofread-page
text/x-wiki
<noinclude><pagequality level="4" user="~aanzx" />{{rh|ಮಾನವನು ದಾನವನಾದಾಗ||೨೩೧}}</noinclude>{{gap}}ಲಾವಣ್ಯವತಿಯ ಕುತೂಹಲ ಕೆರಳಿತು. ನ್ಯಾಯಪೀಠದ ಮುಂದಿದ್ದ ಹಲಿಗೆಯನ್ನು ಅವಳು ತಾನಾಗಿ ತೆಗೆದುಕೊಂಡು ಓದಿದಳು. ನಿರ್ಮಲ ಗಗನದಲ್ಲಿ ಇದ್ದಕ್ಕಿದ್ದಂತೆ ಮಿಂಚು ತಲೆದೋರಿತು. ಲಾವಣ್ಯವತಿಯ ಕಣ್ಣುಗಳಿಂದ ಕಿಡಿಗಳು ಉದುರಿದವು.
{{gap}}ಬರೆದಿದ್ದುದನ್ನು ಅಳಿಸಿ ಅವಳು ಕರ್ಕಶಕಂಠದಿಂದ, "ಘೋರನಾರಕಿಗಳು ನೀವು. ನಿಮ್ಮ ಮನಸ್ಸಿನಲ್ಲಿ ಇಂತಹ ಕಲುಷಿತ ಭಾವನೆ ನೆಲೆಸಿದೆಯೆಂದು ನಾನು ಕನಸಿನಲ್ಲಿಯೂ ಭಾವಿಸಿರಲಿಲ್ಲ, ನಿಮ್ಮ ಮುಂದೆ ನಿಲ್ಲುವುದೂ ಅಪರಾಧ!"
{{gap}}-ಎಂದು ಹೇಳಿ ಹಲಿಗೆಯನ್ನು ಕ್ರಮಿತನ ಮುಂದೆಸೆದು ನ್ಯಾಯಪೀಠದಿಂದ ಹೊರಟುಹೋದಳು.
{{***|4}}
{{gap}}"ಸಾಮಾನ್ಯವಾಗಿ ಹೆಂಗಸರು ಬಹುಬೇಗ ಉದ್ರೇಕಗೊಳ್ಳುತ್ತಾರೆ. ಮದುವೆಯಾದ ಮೇಲಿನ ಘಟನೆಗಳಿಂದ ಲಾವಣ್ಯವತಿ ಹೆಚ್ಚು ನೊಂದಿದ್ದಾಳೆ. ದುರ್ಬಲೆ ಯಾಗಿದ್ದಾಳೆ. ಈ ಪರಿಸ್ಥಿತಿಯಲ್ಲಿ ನೀವು ಅವಳ ವಿಚಾರಣೆಯನ್ನು ದೀರ್ಘಕಾಲ ಎಳೆಯಬಾರದಾಗಿತ್ತು"-ಮಂಚಣನೆಂದನು, ಲಾವಣ್ಯವತಿ ಹೋದಮೇಲೆ.
{{gap}}"ಹೆಂಗಸೆಂಬ ಕಾರಣದಿಂದ ಅಗತ್ಯವೆನಿಸುವ ಎಲ್ಲ ಪ್ರಶ್ನೆಗಳನ್ನೂ ಕೇಳದೆ ಹೋದರೆ ಧರ್ಮಾಧಿಕರಣಕ್ಕೆ ದ್ರೋಹ ಮಾಡಿದಂತೆ." –ಕರ್ತವ್ಯ ನಿಷ್ಠೆಯ ಸೋಗಿನಲ್ಲಿ ಕ್ರಮಿತನು ಹೇಳಿದನು.
{{gap}}"ಆದರೂ ನೀವು ಬರೆದುಕೊಟ್ಟ ಪ್ರಶ್ನೆ ಯಾವ ದೃಷ್ಟಿಯಿಂದಲೂ ಉಚಿತವೆನಿಸದು. ನಿಮ್ಮ ಪರಿಶ್ರಮ ವಿಫಲವಾಯಿತು.
{{gap}}"ವಿಫಲವಾಗಲಿಲ್ಲ, ಮಂಚಣನಾಯಕರೆ. ನಾನು ನಿರೀಕ್ಷಿಸಿದ್ದ ಉತ್ತರ ದೊರಕಿತು."
{{gap}}"ಯಾವುದು ಆ ಉತ್ತರ?"
{{gap}}"ಪ್ರಶ್ನೆ ಓದಿದಾಗ ಲಾವಣ್ಯವತಿಯಲ್ಲಾದ ಪ್ರತಿಕ್ರಿಯೆ."
{{gap}}"ಅದರಿಂದ ನಮ್ಮ ಮುಂದಿರುವ ವರ್ಣಸಂಕರ ವ್ಯವಹಾರಕ್ಕೆ ಆದ ಪ್ರಯೋಜನವೇನು?"
{{gap}}"ಮುಂದೆ ನೀವೇ ಅದನ್ನು ತಿಳಿಯುವಿರಿ," –ಕ್ರಮಿತನ ಉತ್ತರ ಅರ್ಥಗರ್ಭಿತವಾಗಿತ್ತು.
{{gap}}"ಆದರೆ ಪ್ರಶ್ನೆಯೇನೆಂಬುದು ನ್ಯಾಯಪೀಠದ ಮೂರನೆಯ ಸದಸ್ಯ ರುದ್ರಭಟ್ಟರಿಗೆ ತಿಳಿಯದು," -ಎಂದು ಮಂಚಣನು ಆಕ್ಷೇಪಿಸಿದನು.<noinclude></noinclude>
fu9ywijm4t0szxf4guqg20bqm1g4fww
ಪುಟ:ಕ್ರಾಂತಿ ಕಲ್ಯಾಣ.pdf/೨೪೭
104
78578
317650
252081
2026-05-06T13:33:18Z
Shreelatha.Halemane
7642
/* Validated */
317650
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೩೪||ಕ್ರಾಂತಿ ಕಲ್ಯಾಣ}}</noinclude>
{{gap}}“ನನ್ನದೇನೂ ಕ್ರಾಂತಿಕಾರಿ ಸಲಹೆಯಲ್ಲ. ಘಟಸ್ಫೋಟದ ವಿಚಾರ ನೀವು ಪ್ರಶ್ನಿಸಬೇಡಿರಿ. ಶೀಲವಂತಯ್ಯ ತನ್ನ ಆಕ್ಷೇಪವನ್ನು ಹಿಂದಕ್ಕೆ ತೆಗೆದುಕೊಳ್ಳಲಿ.”
{{gap}}-ಮಂಚಣನ ಸಲಹೆಗೆ ಕ್ರಮಿತನು ಒಪ್ಪಿದನು. ಶೀಲವಂತ ಆಕ್ಷೇಪಿಸಲಿಲ್ಲ. ವಿಚಾರಣೆ ಪುನರಾರಂಭವಾಯಿತು.
{{gap}}“ಮಧುವರಸರ ಮಗಳು ಲಾವಣ್ಯವತಿ ನಿಮಗೆ ಯಾವಾಗ ಪರಿಚಯವಾದದ್ದು?”
{{gap}}“ಮಹಮನೆಯ ಆರೋಗ್ಯಧಾಮದಲ್ಲಿ ಹಾವು ಕಚ್ಚಿದ್ದಕ್ಕಾಗಿ ನಾನು ಚಿಕಿತ್ಸೆ ಪಡೆಯುತ್ತಿದ್ದಾಗ.” ಶೀಲವಂತ ಉತ್ತರ ಕೊಟ್ಟನು.
{{gap}}“ಹಾವು ಕಚ್ಚಿದಾಗ ನೀವು ಎಲ್ಲಿದ್ದೀರಿ?”
{{gap}}“ದೇವಗಿರಿಯ ಒಂದು ಗುಹೆಯಲ್ಲಿ. ಶರಣರ ಯಾತ್ರಾತಂಡದೊಡನೆ ನಾನು ಅಲ್ಲಿಗೆ ಹೋಗಿದ್ದೆ.”
{{gap}}“ಗುಹೆಯಲ್ಲಿ ನಿಮ್ಮ ಸಂಗಡಿದ್ದ ಕದಂಬ ರಾಜಕನ್ಯೆ ಕುಸುಮಾವಳಿ ಘಾಯದಿಂದ ವಿಷಹೀರಿ ನಿಮ್ಮ ಪ್ರಾಣ ಉಳಿಸಿದ್ದು ನಿಜವೆ?”
{{gap}}“ನಿಜ. ಕುಸುಮಾವಳಿಯ ಬಲಿದಾನದಿಂದ ನಾನು ಉಳಿದೆ. ಆಗ ನಾನು ಪ್ರಜ್ಞಾಹೀನನಾಗಿದ್ದರೂ ಸಂಗಡಿದ್ದವರಿಂದ ಈ ವಿಚಾರ ತಿಳಿದುಕೊಂಡಿದ್ದೇನೆ,"
{{gap}}ನುಡಿಯುತ್ತಿದ್ದಂತೆ ದೇವಗಿರಿಯ ಆ ಗುಹೆಯಲ್ಲಿ ಆದ ಚಮತ್ಕಾರದ ಘಟನೆಯ ನೆನಪಿಂದ ಶೀಲವಂತ ವಿಚಲಿತನಾದನು. ಕಂಠ ಗದ್ಗದಿತವಾಯಿತ.
{{gap}}“ಕುಸುಮಾವಳಿಯ ಬಲಿದಾನದ ಕಾರಣವೇನು?”
{{gap}}“ತಿಳಿಯದು. ಅದರಿಂದ ನನಗೇ ಆಶ್ಚರ್ಯವಾಗಿದೆ."
{{gap}}“ನಿಮಗೆ ಕುಸುಮಾವಳಿಯ ಪರಿಚಯವಾದದ್ದು ಯಾವಾಗ?”
{{gap}}“ಏಳು ವರ್ಷಗಳ ಹಿಂದೆ, ಕಲ್ಯಾಣದ ಚಾಲುಕ್ಯ ಅರಮನೆಯಲ್ಲಿ ನಾನು ಚಿತ್ರಕಾರನಾಗಿದ್ದಾಗ."
{{gap}}“ನೀವು ಚಾಲುಕ್ಯ ಅರಮನೆಯ ಚಿತ್ರಕಾರರಾದದ್ದು ಹೇಗೆ?"
{{gap}}ಒಂದು ದಿನ ನಾನು ಚಾಲುಕ್ಯ ರಾಣಿ ಕಾಮೇಶ್ವರೀದೇವಿಯವರಿಗೆ ಪಾದರಕ್ಷೆಗಳನ್ನು ಕೊಡಲು ಅರಮನೆಗೆ ಹೋಗಿದ್ದಾಗ ರಾಣಿಯವರು ನನ್ನ ಚಿತ್ರಗಳನ್ನು ನೋಡಿ ಮೆಚ್ಚಿ ಚಿತ್ರಕಾರನನ್ನಾಗಿ ನಿಯಮಿಸಿಕೊಂಡರು. ರಾಣಿಯವರ ಸಂಗಡಿದ್ದ ಕುಸುಮಾವಳಿಯ ಪರಿಚಯವಾಯಿತು.”
{{gap}}ಆಗ ನಿಮ್ಮ ವಯಸ್ಸೆಷ್ಟು?”
{{gap}}“ಸುಮಾರು ಇಪ್ಪತ್ತು.”<noinclude></noinclude>
nnsi8re1v61r7ruq7tqau4zkkysw0zc
ಪುಟ:ಕ್ರಾಂತಿ ಕಲ್ಯಾಣ.pdf/೨೪೮
104
78579
317651
252170
2026-05-06T13:34:45Z
Shreelatha.Halemane
7642
/* Validated */
317651
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೨೩೫}}</noinclude>
{{gap}}ಪ್ರಶ್ನೋತ್ತರಗಳನ್ನು ಕೇಳಿ ಮಂಚಣ ರುದ್ರಭಟ್ಟರು ಅಚ್ಚರಿಗೊಂಡರು. “ಈಗ ನಮ್ಮ ಮುಂದಿರುವ ವರ್ಣಸಂಕರದ ವ್ಯವಹಾರಕ್ಕೂ ಈ ಘಟನೆಗಳಿಗೂ ಇರುವ ಸಂಬಂಧವೇನು ?” ಎಂದು ಮಂಚಣನು ಪ್ರಶ್ನಿಸಿದನು.
{{gap}}“ನಾನು ವಿಚಾರಣೆ ನಡೆಸುತ್ತಿರುವ ವರ್ಣಸಂಕರದ ವ್ಯಾಪ್ತಿ ತೀವ್ರತೆಗಳನ್ನು ತಿಳಿದುಕೊಳ್ಳಲು ಈ ಘಟನೆಗಳು ಸಹಾಯಕವಾಗುವುವು.”
{{gap}}-ಎಂದು ಹೇಳಿ ಕಮಿತನು ಪಾರ್ಶ್ವದ ಪೀಠದ ಮೇಲೆ ದಾಖಲೆಗಳ ನಡುವೆ ಇಟ್ಟಿದ್ದ ಚಿತ್ರವೊಂದನ್ನು ತೆಗೆದು ಶೀಲವಂತನಿಗೆ ಕೊಟ್ಟು, “ಇದು ನೀವು ಬರೆದ ಚಿತ್ರವೆ?” ಎಂದು ಕೇಳಿದನು.
{{gap}}ಶೀಲವಂತ ಚಿತ್ರವನ್ನು ನೋಡಿ ಸ್ತಂಭಿತನಾದನು. ಏಳು ವರ್ಷಗಳ ಹಿಂದೆ ತಾನು ಚಾಲುಕ್ಯ ಅರಮನೆಯಲ್ಲಿದ್ದಾಗ ಬರೆದ ಈ ಚಿತ್ರ ಕ್ರಮಿತನ ಕೈಗೆ ಬಂದದ್ದು ಹೇಗೆ ? ಎಂದು ಅವನು ಯೋಚಿಸುತ್ತಿದ್ದಂತೆ ಕ್ರಮಿತನು ಮುಂದುವರಿದು,
{{gap}}“ಇದರಲ್ಲಿ ನೀವು ನಗ್ನೆಯಾದ ಹೆಣ್ಣೊಬ್ಬಳ ಬೆನ್ನ ಕಡೆಯ ನಿಲುವನ್ನು ಚಿತ್ರಿಸಿರುವಿರಲ್ಲವೆ ? ಈ ಹೆಣ್ಣು ಯಾರು ? ಯಾವ ಸಂದರ್ಭದಲ್ಲಿ ನೀವು ಇದನ್ನು ಬರೆದಿರಿ?”
{{gap}}-ಎಂದು ಪ್ರಶ್ನಿಸಿದನು.
{{gap}}“ನಿಮ್ಮ ಮುಂದಿರುವ ವ್ಯವಹಾರಕ್ಕೂ ಈ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲ. ನಿಮ್ಮ ಪ್ರಶ್ನೆಗಳೀಗೆ ಉತ್ತರ ಕೊಡಲು ನಾನು ನಿರಾಕರಿಸುತ್ತೇನೆ.”
{{gap}}ಚಿತ್ರದ ಬಗೆಗೆ ತನ್ನ ನಿಲುವೇನೆಂಬುದನ್ನು ನಿರ್ಧರಿಸಿಕೊಂಡು ಶೀಲವಂತ ದಿಟ್ಟತನದಿಂದ ಉತ್ತರ ಕೊಟ್ಟನು.
{{gap}}“ಚಿತ್ರಕ್ಕೂ ಈಗ ನಮ್ಮ ಮುಂದಿರುವ ವರ್ಣಸಂಕರ ವ್ಯವಹಾರಕ್ಕೂ ಇರುವ ಸಂಬಂಧ ಮುಂದೆ ನಿಮಗೆ ತಿಳಿಯುವುದು. ಈಗ ನನ್ನ ಪ್ರಶ್ನೆಗಳಿಗೆ ನೀವು ಉತ್ತರ ಕೊಡಲೇಬೇಕು. ಇಲ್ಲವೆ ಚಿತ್ರಹಿಂಸೆಯಿಂದ ಉತ್ತರ ಪಡೆಯುವ ಅಧಿಕಾರ ನ್ಯಾಯ ಪೀಠಕ್ಕಿರುತ್ತದೆ. ಅಧಿಕಾರವಾಣಿಯಿಂದ ಕ್ರಮಿತನು ಹೇಳಿದನು.
{{gap}}ಆಗಿನ ನ್ಯಾಯಾಲಯಗಳಲ್ಲಿ ಚಿತ್ರಹಿಂಸೆ ವಿಚಾರಣೆಯ ಅಂಗವಾಗಿತ್ತು. ಅದಕ್ಕೆ ಬೇಕಾದ ವಿಚಿತ್ರ ಉಪಕರಣಗಳೂ ಅವುಗಳ ಪ್ರಯೋಗದಲ್ಲಿ ಚತುರರಾದ ಕರ್ಮಚಾರಿ ಭಟರೂ ಯಾವಾಗಲೂ ಸಿದ್ದರಾಗಿರುತ್ತಿದ್ದರು.
{{gap}}ಶೀಲವಂತ ಬೆದರಿದನು. ಕೆಲವು ಕಣಗಳು ಯೋಚಿಸಿ, “ನಿಮ್ಮ ಪ್ರಶ್ನೆ ಸಮರ್ಪಕವಾಗಿ ಕಂಡರೆ ಉತ್ತರ ಹೇಳುತ್ತೇನೆ,” ಎಂದನು.
{{gap}}“ಆಗಬಹುದು. ಈ ಚಿತ್ರದ ಕೆಳಗಿನ ಮೂಲೆಯಲ್ಲಿ 'ಶೀಲ' ಎಂದು<noinclude></noinclude>
hzugb1o3bcdr9mn1t08ibikzcp2uhb5
ಪುಟ:ಕ್ರಾಂತಿ ಕಲ್ಯಾಣ.pdf/೨೪೯
104
78580
317657
252172
2026-05-06T13:44:26Z
Shreelatha.Halemane
7642
/* Validated */
317657
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೩೬||ಕ್ರಾಂತಿ ಕಲ್ಯಾಣ}}</noinclude>ಬರೆದಿರುವುದು ನಿಮ್ಮ ಹೆಸರಿನ ಮೊದಲೆರಡು ಅಕ್ಷರಗಳಲ್ಲವೆ?”
{{gap}}“ಹೌದು.”
{{gap}}“ನೀವು ಬರೆದ ಚಿತ್ರಗಳಿಗೆ ಈ ಹೆಸರಿನ ಗುರುತು ಹಾಕುತ್ತಿದ್ದಿರಿ, ಅಲ್ಲವೆ?”
{{gap}}“ನಿಜ.”
{{gap}}“ಈ ಚಿತ್ರದಲ್ಲಿರುವ ಹೆಂಗಸು ಯಾರು ?”
{{gap}}“ಆ ಪ್ರಶ್ನೆಗೆ ನಾನು ಉತ್ತರ ಕೊಡುವುದಿಲ್ಲ.”
{{gap}}ಕ್ರಮಿತನು ಕುಹಕದ ನಗೆ ಬೀರಿ, “ನಿಮಗೆ ಉತ್ತರ ಕೊಡುವ ಇಚ್ಛೆಯಿಲ್ಲದೆ ಹೋದರೆ ನಾನು ಒತ್ತಾಯಪಡಿಸುವುದಿಲ್ಲ, ಶೀಲವಂತಯ್ಯ. ಹೆಣ್ಣು ಹಿಂದಿರುಗಿ ನೋಡುತ್ತಿರುವಂತೆ ಮುಖದ ಅರ್ಧಭಾಗವನ್ನು ಚಿತ್ರಿಸಿರುವುದರಿಂದ ನಾವೇ ಗುರುತು ಹಿಡಿಯಬಹುದು,” ಎಂದು ಹೇಳಿ ಪಾರ್ಶ್ವದ ಪೀಠದಿಂದ ಇನ್ನೊಂದು ಚಿತ್ರವನ್ನು ತೆಗೆದುಕೊಟ್ಟು “ಇವೆರಡರಲ್ಲಿಯೂ ಚಿತ್ರಿಸಲ್ಪಟ್ಟಿರುವ ಹೆಣ್ಣು ಒಬ್ಬಳೇ ಅಲ್ಲವೆ?” ಎಂದು ಪುನಃ ಪ್ರಶ್ನಿಸಿದನು.
{{gap}}“ಈ ಚಿತ್ರಕ್ಕೆ ಸಂಬಂಧಿಸಿದ ಯಾವ ಪ್ರಶ್ನೆಗೂ ನಾನು ಉತ್ತರ ಕೊಡುವುದಿಲ್ಲ.”
{{gap}}-ಈ ಸಾರಿ ಶೀಲವಂತ ಖಂಡಿತವಾಗಿ ಹೇಳಿದನು.
{{gap}}ಆಗ ಕ್ರಮಿತನು ಎರಡು ಚಿತ್ರಗಳನ್ನೂ ಮಂಚಣನಿಗೆ ಕೊಟ್ಟು “ನೀವು ಮತ್ತು ರುದ್ರಭಟ್ಟರು ಈ ಎರಡು ಚಿತ್ರಗಳನ್ನು ನೋಡಿ ಅವುಗಳಲ್ಲಿ ಚಿತ್ರಿಸಲ್ಪಟ್ಟಿರುವ ಹೆಣ್ಣು ಒಬ್ಬಳೇಯೋ ಅಥವಾ ಬೇರೆ ಬೇರೆ ವ್ಯಕ್ತಿಗಳೇ ಎಂಬುದನ್ನು ನಿರ್ಧರಿಸಿ ಹೇಳಬೇಕಾಗಿ ಕೋರುತ್ತೇನೆ,” ಎಂದನು.
{{gap}}ಒಂದು ಚಿತ್ರದಲ್ಲಿ ನಗ್ನೆಯಾದ ಹೆಣ್ಣೊಬ್ಬಳ ಬೆನ್ನು ಕಡೆಯ ಚಿತ್ರ. ಹೆಣ್ಣು ಹಿಂದಕ್ಕೆ ತಿರುಗಿ ನೋಡುತ್ತಿರುವಂತೆ ಮುಖದ ಪಾರ್ಶ್ವವನ್ನು ಮಾತ್ರ ಚಿತ್ರಿಸಲಾಗಿತ್ತು. ಇನ್ನೊಂದರಲ್ಲಿ ವಸ್ತ್ರಾಭರಣಗಳಿಂದ ಭೂಷಿತೆಯಾದ ರಾಜರಮಣಿಯೊಬ್ಬಳು ಮಣಿಖಚಿತವಾದ ಭದ್ರಾಸನದ ಮೇಲೆ ಕುಳಿತಿರುವಂತೆ ಚಿತ್ರಿಸಲಾಗಿತ್ತು. ವರ್ಣ ಮತ್ತು ರೇಖಾವಿನ್ಯಾಸದಿಂದ ಎರಡು ಚಿತ್ರಗಳು ಬೇರೆ ಬೇರೆ ಕಲಾಕಾರರ ಕೃತಿಗಳೆಂದು ಸ್ಪಷ್ಟವಾಗಿ ತಿಳಿಯುತ್ತಿತ್ತು.
{{gap}}ಮಂಚಣ ರುದ್ರಭಟ್ಟರು ಚಿತ್ರಗಳನ್ನು ಪರಿಶೀಲಿಸಿ, “ಈ ಎರಡು ಚಿತ್ರಗಳಲ್ಲಿರುವ ಹೆಣ್ಣು ಒಬ್ಬಳೇ ಎಂದು ನಿರ್ಧಾರವಾಗಿ ಹೇಳಬಹುದು,” ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
{{gap}}“ಆ ಹೆಣ್ಣು ಯಾರೆಂಬುದು ಈಗ ನಿಮಗೆ ತಿಳಿದಿರಬೇಕಲ್ಲವೆ?”
{{gap}}-ವ್ಯಂಗ್ಯದ ಚುಚ್ಚುದನಿಯಿಂದ ಕ್ರಮಿತನು ಅವರನ್ನು ಪ್ರಶ್ನಿಸಿದನು.<noinclude></noinclude>
czv7ka93oyamijerik7wekhwwfgkf7y
ಪುಟ:ಕ್ರಾಂತಿ ಕಲ್ಯಾಣ.pdf/೨೫೧
104
78582
317658
252142
2026-05-06T13:45:00Z
Shreelatha.Halemane
7642
/* Validated */
317658
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೩೮||ಕ್ರಾಂತಿ ಕಲ್ಯಾಣ}}</noinclude>
{{gap}}ಕೆಟ್ಟ ಕನಸು ಕಂಡು ಬೆಚ್ಚಿ ಎಚ್ಚೆತ್ತವನಂತೆ ಶೀಲವಂತ ಕಣ್ಣೊರೆಸಿಕೊಂಡು ಕೆಕ್ಕರಿಸಿ ನೋಡುತ್ತ, ಉದ್ವೇಗದ ಕೀರಲು ಕೊರಳಿಂದ,
{{gap}}“ಸ್ವರ್ಗಸ್ಥರಾಗಿ, ಈಗ ನಿಮಗೆ ಉತ್ತರ ಕೊಡಲಾರದ ಇಬ್ಬರು ಸಭ್ಯ ಮಹಿಳೆಯರ ವಿಚಾರದಲ್ಲಿ ನೀವು ಈ ಅಸಭ್ಯ ಅಶ್ಲೀಲ ಅನುಚಿತ ಆಪಾದನೆಗಳನ್ನು ಮಾಡುತ್ತಿದ್ದೀರಿ. ಕುಸುಮಾವಳಿ ದೇವಗಿರಿಯಲ್ಲಿ ಬಲಿದಾನ ಮಾಡಿಕೊಂಡಳು. ಚಾಲುಕ್ಯ ರಾಣಿ ಕಾಮೇಶ್ವರಿ ಮಂಗಳವೇಡೆಯ ಅಗ್ನಿ ಅಪಘಾತಕ್ಕೆ ಅಹುತಿಯಾದಳು. ಅವರ ವಿಚಾರದಲ್ಲಿ ನಾನು ಯಾವಾಗಲೂ ಹೆಚ್ಚಿನ ಗೌರವ ಸಭ್ಯತೆಗಳಿಂದ ನಡೆದುಕೊಂಡಿದ್ದೇನೆ. ಚಾಲುಕ್ಯ ರಾಣಿಯನ್ನು ಒಡತಿಯೆಂದು, ಕುಸುಮಾವಳಿಯನ್ನು ಸಹೋದರಿಯೆಂದು ತಿಳಿದಿದ್ದೆ. ಅವರ ವಿಚಾರದಲ್ಲಿ ಕೆಟ್ಟ ಭಾವನೆಗೆ ಎಂದಿಗೂ ಎಡೆಗೊಡಲಿಲ್ಲ. ನೀವು ತೋರಿಸಿದ ನಗ್ನಚಿತ್ರ ವಾಸ್ತವದಲ್ಲಿ ಕಾಮೇಶ್ವರಿಯ ಚಿತ್ರವಲ್ಲ. ಅದನ್ನು ನಾನು ಬರೆದಾಗ ಕಾಮೇಶ್ವರೀದೇವಿ ನನ್ನೆದುರಿಗೆ ನಗ್ನೆಯಾಗಿ ನಿಂತಿದ್ದಳೆಂದು ನೀವು ಭಾವಿಸಿದ್ದರೆ ಅದು ತಪ್ಪು. ತಾರುಣ್ಯದ ಉನ್ಮತ್ತ ಉತ್ಸಾಹದಿಂದ, ಕಲೆಯ ಪಾರದರ್ಶಕ ಪ್ರತಿಭೆಯನ್ನು ಮೆರೆಸಲು ಆ ಕಲ್ಪನಾ ಚಿತ್ರವನ್ನು ನಾನು ಬರೆದೆ. ನನ್ನ ಆ ಕಾರ್ಯ ಎಷ್ಟೊಂದು ಅನುಚಿತವೆಂಬುದು ಈಗ ಅರ್ಥವಾಗುತ್ತಿದೆ. ನನ್ನ ಅವಿವೇಕದ ಫಲವಾದ ಈ ಕಲ್ಪನಾಚಿತ್ರವನ್ನು ಆಧರಿಸಿ ನೀವು ಈ ಅಪವಾದದ ನಿಂದಾಸೌಧವನ್ನು ರಚಿಸಬಾರದೆಂದೂ, ಮೃತರಾದ ಆ ಇಬ್ಬರು ಮಹಿಳೆಯರ ಬಗೆಗೆ ಪರೋಕ್ಷ ವಿನಯದ ಗುರುತಾಗಿ ಚಿತ್ರಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ವಿಚಾರಣೆಯ ಕಡತದಿಂದ ತೆಗೆದುಹಾಕಬೇಕೆಂದೂ ನಾನು ನ್ಯಾಯಪೀಠಕ್ಕೆ ಮನವಿಮಾಡಿಕೊಳ್ಳುತ್ತೇನೆ,” ಎಂದು ಬಿನ್ನವಿಸಿಕೊಂಡನು.
{{gap}}ವಿನಯ ಔಚಿತ್ಯಗಳಿಂದ ಕೂಡಿದ ಶೀಲವಂತನ ನುಡಿಗಳಿಂದ ಪ್ರಭಾವಿತರಾಗಿ, ಮಂಚಣ ರುದ್ರಭಟ್ಟರು, “ಶೀಲವಂತಯ್ಯನ ಸಲಹೆ ಉಚಿತವಾಗಿದೆ. ನ್ಯಾಯಪೀಠ ಅದರಂತೆ ನಡೆದು ಈ ಅಪ್ರೀತಿಕರ ಪ್ರಸಂಗವನ್ನು ಕೊನೆಗಾಣಿಸಿದರೆ ಒಳ್ಳೆಯದು,” ಎಂದು ಸೂಚಿಸಿದರು.
{{gap}}ಕ್ರಮಿತನು ತಿರಸ್ಕಾರದ ನಗೆ ಬೀರಿ, “ಚಿತ್ರಕಾರ ಶೀಲವಂತಯ್ಯನ ರೂಪ ಯೌವನ ಸವಿನುಡಿಗಳಿಗೆ ಹೆಂಗಸರು ಮರುಳಾಗುವರೆಂದು ಜನ ಹೇಳುತ್ತಾರೆ. ಈಗ ಅವನು ನಿಮ್ಮನ್ನೂ ಮರುಳುಮಾಡಿದಂತಿದೆ. ಈ ಮುಖ್ಯ ಪ್ರಸಂಗವನ್ನು ನಾವು ವಿಚಾರಣೆಯ ಕಡತದಿಂದ ತೆಗೆದುಹಾಕಿದ ಧರ್ಮಾಧಿಕರಣಕ್ಕೆ ಅಪಚಾರಮಾಡಿ ದಂತಾಗುತ್ತದೆ. ಅದಕ್ಕೆ ನಾನು ಒಪ್ಪುವುದಿಲ್ಲ. ಅಲ್ಲದೆ ಸಾಕ್ಷಿ ಹೇಳುವಂತೆ ಈ ಅಪವಾದ ಕಲ್ಪಿತವಲ್ಲ. ದಾಖಲೆಗಳ ಆಧಾರದಿಂದ ನಾನು ಈ ಮಾತು ಹೇಳುತ್ತಿದ್ದೇನೆ.”<noinclude></noinclude>
h83biqqtof7qutq7jvhso8kzbfmhb9s
ಪುಟ:ಕ್ರಾಂತಿ ಕಲ್ಯಾಣ.pdf/೨೬೩
104
78594
317642
252153
2026-05-06T13:24:10Z
Shreelatha.Halemane
7642
/* Validated */
317642
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೫೦||ಕ್ರಾಂತಿ ಕಲ್ಯಾಣ}}</noinclude>
ಪ್ರವೇಶಿಸಿ, “ಮಂತ್ರಿ ಚೆನ್ನಬಸವಣ್ಣನವರು ದರ್ಶನಕ್ಕಾಗಿ ಬಂದಿದ್ದಾರೆ,” ಎಂದು ಅರಿಕೆ ಮಾಡಿದನು.
{{gap}}“ಈ ಆವೇಳೆಯಲ್ಲಿ ದರ್ಶನಕ್ಕಾಗಿ ! ಅವರ ಅವಸರ ಕಾರ್ಯ ನಾಳಿನವರೆಗೆ ತಡೆಯಲಿ,” -ಅಸಹನೆಯಿಂದ ಬಿಜ್ಜಳನೆಂದನು.
{{gap}}“ಹಾಗಾದರೆ ಈಗ ಅವಕಾಶವಿಲ್ಲವೆಂದು ಹೇಳಿಬಿಡುತ್ತೇನೆ.” -ಎಂದು
ಹೆಗ್ಗಡೆ ಹೋಗುತ್ತಿದ್ದಂತೆ ಬಿಜ್ಜಳನು ಅವನನ್ನು ಕರೆದು, ಕ್ರಮಿತನು ಇಲ್ಲಿರುವ ವಿಚಾರ ಚೆನ್ನಬಸವಣ್ಣನವರಿಗೆ ತಿಳಿದಿದೆಯೇ?” ಎಂದು ಕೇಳಿದನು.
{{gap}}“ಪ್ರಭುಗಳು ವಿಶ್ರಾಂತಿ ಪಡೆಯುತ್ತಿರುವರೆಂದು ಹೇಳಿದೆ. ಕ್ರಮಿತರ ವಿಚಾರ ತಿಳಿಸಲಿಲ್ಲ.” -ಹೆಗ್ಗಡೆ ಉತ್ತರ ಕೊಟ್ಟನು.
{{gap}}ಬಿಜ್ಜಳನು ಕೆಲವು ಕ್ಷಣಗಳು ಯೋಚಿಸಿ, “ಹಾಗಾದರೆ ಚೆನ್ನಬಸವಣ್ಣನವರನ್ನು ಕರೆದುಕೊಂಡು ಬಾ,” ಎಂದು ಆಜ್ಞೆ ಮಾಡಿದನು.
{{gap}}ಹೆಗ್ಗಡೆ ಹೋದಕೂಡಲೆ ಬಿಜ್ಜಳನು ಕ್ರಮಿತನ ಕಡೆ ತಿರುಗಿ, “ನೀವು ಇಲ್ಲಿದ್ದಿರೆಂದು ಆ ಶರಣನಿಗೆ ತಿಳಿಯದಿದ್ದರೆ ಒಳ್ಳೆಯದು. ಕೊಂಚಕಾಲ ಪಾರ್ಶ್ವದ ಆ ಸಣ್ಣ ಕೋಣೆಯಲ್ಲಿರಿ,” ಎಂದನು. ಬಿಜ್ಜಳನ ವಿಚಿತ್ರ ಸಲಹೆ ಕ್ರಮಿತನನ್ನು ಅಚ್ಚರಿಗೊಳಿಸಿತು. 'ಪ್ರಭುಗಳು ಇಂದು ಹೀಗೇಕೆ ವರ್ತಿಸುತ್ತಿದ್ದಾರೆ. ಸಂದರ್ಶನದಲ್ಲಿ ನಡೆಯುವ ಮಾತುಕಥೆಗಳು ನನಗೆ ತಿಳಿದಿರಲೆಂದೇ?' ಎಂದು ಯೋಚಿಸುತ್ತ ಅವಸರದಲ್ಲಿ ಒಳಹೊಕ್ಕು ತೆರೆ ಸರಿಸಿಕೊಂಡನು.
{{gap}}ವಿಶ್ರಾಂತಿಗೃಹದ ಚಿತ್ರಾಲಂಕೃತವಾದ ನೆಲದಮೇಲೆ ಬಿಜ್ಜಳನು ಶತಪಥ ತಿರುಗಾಡುತ್ತಿದ್ದಂತೆ ಹೆಗ್ಗಡೆ ಚೆನ್ನಬಸವಣ್ಣನವರನ್ನು ಕರೆದುಕೊಂಡು ಅಲ್ಲಿಗೆ ಬಂದನು.
{{gap}}“ಅವೇಳೆಯಲ್ಲಿ ಪ್ರಭುಗಳಿಗೆ ತೊಂದರೆ ಕೊಟ್ಟಿದ್ದಕ್ಕಾಗಿ ಕ್ಷಮೆ ಬೇಡುತ್ತೇನೆ. ಕಾರ್ಯಾವಸರ ನನ್ನನ್ನು ಈ ಸಾಹಸಕ್ಕೆ ತಳ್ಳಿತು.”
{{gap}}:-ಎಂದು ಹೇಳಿ ಚೆನ್ನಬಸವಣ್ಣನವರು ಬಿಜ್ಜಳನಿಗೆ ವಂದಿಸಿದರು.
{{gap}}ಮಾರ್ದವ ಗಾಂಭೀರ್ಯಗಳ ಸಹಜ ಮಿಶ್ರಣದಿಂದ ಗುರುಮನೆಗೆ ಅಗತ್ಯವೂ ಅರಮನೆಗೆ ಅಪರೂಪವೂ ಆಗಿದ್ದ ಚೆನ್ನಬಸವಣ್ಣನವರ ಕಂಠ, ಅವರ ಮಾತುಗಳಿಗೆ ಸ್ವಾಭಿಮಾನ ಸರಳತೆಗಳನ್ನು ಕೊಟ್ಟಿತ್ತು. ನಿನ್ನೆ ಮೊನ್ನಿನ ಈ ಬಾಲಕ, ಪಾಂಡಿತ್ಯದ ಪ್ರತಿಭೆಯಿಂದ ನೈಷ್ಠಿಕ ಜೀವನದ ತೇಜಸ್ಸಿನಿಂದ ತನ್ನೊಡನೆ ಸಮಾನಸ್ಕಂದನಂತೆ ವರ್ತಿಸುವುದನ್ನು ಕಂಡು ಬಿಜ್ಜಳನು ಮೊದಲಿಂದ ಅಸಮಾಧಾನಗೊಂಡಿದ್ದನು. ಕುಳಿತುಕೊಳ್ಳುವ ಅವಕಾಶವನ್ನೂ ಕೊಡದೆ ನಾಲ್ಕೇ ಮಾತುಗಳಿಂದ ಸಂದರ್ಶನವನ್ನು<noinclude></noinclude>
grm70mbtgovc2aph5bvd7wfwtcgv20s
ಪುಟ:ಕ್ರಾಂತಿ ಕಲ್ಯಾಣ.pdf/೨೬೪
104
78595
317643
252154
2026-05-06T13:24:54Z
Shreelatha.Halemane
7642
/* Validated */
317643
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೨೫೧}}</noinclude>
ಮುಗಿಸುವುದು ಈಗ ಅವನ ಉದ್ದೇಶವಾಗಿತ್ತು.
{{gap}}“ರಾಜಕಾರ್ಯದ ಹೊಣೆ ನಿಮ್ಮಂತೆ ನನ್ನನ್ನೂ ತ್ವರಿತಗೊಳಿಸುತ್ತಿದೆ, ಚೆನ್ನಬಸವಣ್ಣನವರೆ, ಮಂಗಳವೇಡೆಯ ಅಗ್ನಿಅಪಘಾತದಿಂದ ನಾನು ಕೆಲವು ದಿನಗಳು ನಿಶ್ಚೇಷ್ಟಿತನಾದೆ. ಇಲ್ಲವೆ ವಾರಕ್ಕೆ ಮೊದಲೆ ಕಲ್ಯಾಣಕ್ಕೆ ಬರಬೇಕಾಗಿತ್ತು. ನೀವು ಬಂದ ಅವಸರದ ಕಾರ್ಯವೇನು?” ಎಂದು ಬಿಜ್ಜಳನು ತಾನೇ ಮಾತಿಗೆ ಪ್ರಾರಂಭಿಸಿದನು.
{{gap}}“ಪ್ರಭುಗಳು ಚಾಲುಕ್ಯರಾಜ್ಯದ ಸರ್ವಾಧಿಕಾರಿಯಾಗಿರುವಾಗ ಧರ್ಮಾಧಿಕರಣದ ಹೆಸರಿನಲ್ಲಿ ನಡೆಯುತ್ತಿರುವ ಸತ್ಯಧರ್ಮಗಳ ಅಪಚಾರವನ್ನು ತಮ್ಮ ಗಮನಕ್ಕೆ ತರುವ ಉದ್ದೇಶದಿಂದ ನಾನಿಲ್ಲಿಗೆ ಬಂದೆ. ಮಧುವರಸ ಹರಳಯ್ಯಗಳ ಬಂಧನ, ಸಾಕ್ಷ್ಯ ಕೊಡಲು ಹೋದ ಶೀಲವಂತನನ್ನು ಅಲ್ಲಿಯೇ ಬಂಧಿಸಿ ಸೆರೆಮನಗೆ ಕಳುಹಿಸಿದ್ದು, ಧರ್ಮಾಧಿಕರಣದ ಈ ಕಾರ್ಯಗಳು ಕಲ್ಯಾಣದ ನಾಗರಿಕರನ್ನು ಸ್ತಂಭಿತಗೊಳಿಸಿವೆ. ಜನರು ಬೆದರಿದ್ದಾರೆ. ಪ್ರಭುಗಳ ಪರೋಕ್ಷದಲ್ಲಿ ನಡೆದ ಈ ಅಕ್ರಮ ಅನ್ಯಾಯಗಳನ್ನು ಸರಿಪಡಿಸಬೇಕಾಗಿ ಬೇಡಿಕೊಳ್ಳುತ್ತೇನೆ.” – ಎಂದು ಚೆನ್ನಬಸವಣ್ಣನವರು ಬಿನ್ನವಿಸಿಕೊಂಡರು.
ಬಿಜ್ಜಳನು ಕೂಡಲೆ ಉತ್ತರ ಕೊಡಲಿಲ್ಲ. ತುಸು ಹೊತ್ತು ಯೋಚಿಸಿ ಗಂಭೀರವಾಗಿ,
{{gap}}“ವಸ್ತುಸ್ಥಿತಿ ಏನೆಂಬುದನ್ನು ತಿಳಿಯದೆ ನೀವು ಈ ವಿಷಯಕ್ಕೆ ಪ್ರವೇಶಿಸುತ್ತಿದ್ದೀರಿ, ಚೆನ್ನಬಸವಣ್ಣನವರೆ. ಈ ಎಲ್ಲ ಬಂಧನಗಳೂ ನನ್ನ ಆಜ್ಞೆಯಿಂದ ನಡೆದವು. ಹರಳಯ್ಯ ಮಧುವರಸರಿಂದ ವರ್ಣಸಂಕರದ ಅಪರಾಧ ನಡೆದಿದೆಯೆಂದು ನಮಗೆ ಖಚಿತವಾಗಿ ತಿಳಿದಮೇಲೆ, ಚಾಲುಕ್ಯ ರಾಜ್ಯದ ಘನತೆ ಗೌರವ ಸಂಪ್ರದಾಯಗಳ ರಕ್ಷಣೆಗಾಗಿ ಆ ಅವಸರದ ಆಜ್ಞೆಯನ್ನು ಮಾಡಬೇಕಾಯಿತು. ಈ ಅಕೃತ್ಯದಲ್ಲಿ ಶೀಲವಂತ ಪ್ರಮುಖ ವ್ಯಕ್ತಿ. ಅವನ ಬಂಧನ ಮತ್ತು ವಿಚಾರಣೆ ಧರ್ಮಾಧಿಕರಣದ ನಿಯಮ ನಿಬಂಧನೆಗಳಂತೆ ನಡೆಯುತ್ತಿದೆ.” ಎಂದು ಹೇಳಿದನು.
{{gap}}"ಪ್ರಭುಗಳು ಧರ್ಮಾಧಿಕಾರಿಗಳಾಗಿ ನಡೆಸಿದ ರಾಜಸಭೆಯಲ್ಲಿ ವರ್ಣಸಂಕರದ ವಿಚಾರವಾಗಿ ಚರ್ಚೆ ನಡೆದು, ನಿಪುಣರ ಸಮಿತಿ ನೇಮಕವಾಯಿತು. ಆ ಸಮಿತಿ ವರದಿ ಮಾಡುವ ಮೊದಲೇ ಪ್ರಭುಗಳು ಈ ಹೊಸ ಆಜ್ಞೆ ಹೊರಡಿಸಿ ವಧುವರಸ ಹರಳಯ್ಯಗಳನ್ನು ನ್ಯಾಯಪೀಠದ ಮುಂದೆ ನಿಲ್ಲಿಸಿದ್ದು ಕ್ರಮಬದ್ಧವಲ್ಲವೆಂದು ಅರಿಕೆ ಮಾಡಿಕೊಳ್ಳುತ್ತೇನೆ.”
{{gap}}-ಇಮ್ಮಡಿ ವಿನಯದಿಂದ ಚೆನ್ನಬಸವಣ್ಣನವರು ಮತ್ತೆ ಬಿನ್ನವಿಸಿಕೊಂಡರು.<noinclude></noinclude>
fjtnz92752p4nkpwac8dyznrd10kpeh
ಪುಟ:ಕ್ರಾಂತಿ ಕಲ್ಯಾಣ.pdf/೨೬೫
104
78596
317644
252155
2026-05-06T13:25:28Z
Shreelatha.Halemane
7642
/* Validated */
317644
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೫೨||ಕ್ರಾಂತಿ ಕಲ್ಯಾಣ}}</noinclude>
{{gap}}“ರಾಜಸಭೆ ಧರ್ಮಾಧಿಕರಣವಲ್ಲ. ವರ್ಣಸಂಕರದ ಬಗೆಗೆ ನಾಗರಿಕರ ಮನವಿ ಪತ್ರವನ್ನು ಅಧಿಕೃತವಾಗಿ ಸ್ವೀಕರಿಸಿ, ಉಭಯಪಕ್ಷಗಳ ಅಭಿಮತವನ್ನು ತಿಳಿದುಕೊಳ್ಳುವುದು, ಸಭೆ ನಡೆಸುವುದರಲ್ಲಿ ನಮ್ಮ ಉದ್ದೇಶವಾಗಿತ್ತು. ಆ ಸಂದರ್ಭದಲ್ಲಿ ನಡೆದ ವಾದ ವಿವಾದಗಳು ನ್ಯಾಯಪೀಠದ ವಿಚಾರಣೆಯ ರೂಪ ತಾಳುವುದೆಂದು ನಾವು ನಿರೀಕ್ಷಿಸಿರಲಿಲ್ಲ. ಪರಿಸ್ಥಿತಿಯ ಅವಸರ ಆವೇಗಗಳನ್ನು ಗಮನಿಸಿ ಆಗ ನಾವು ನಿಪುಣರ ಸತ್ಯಶೋಧನಾ ಸಮಿತಿಯನ್ನು ನೇಮಿಸುವುದು ಅಗತ್ಯವಾಯಿತು. ನ್ಯಾಯಪೀಠದ ಸಾಮಾನ್ಯ ಅಧಿಕಾರಗಳೂ ಆ ಸಮಿತಿಗಿರಲಿಲ್ಲ. ಯಥಾಕಾಲದಲ್ಲಿ ಸಭೆ ಸೇರಿ ವರದಿ ಮಾಡದಿದ್ದುದರಿಂದ ಸಮಿತಿಯನ್ನು ವಿಸರ್ಜಿಸಿ ಅದರ ಸ್ಥಾನದಲ್ಲಿ ನ್ಯಾಯಪೀಠವನ್ನು ರಚಿಸಿದೆ. ಚಾಲುಕ್ಯರಾಜ್ಯದಲ್ಲಿ ಅನಾದಿಕಾಲದಿಂದ ಆಚರಣೆಯಲ್ಲಿರುವ ಜಾತಿಪಂಥ ವರ್ಣಾಶ್ರಮಧರ್ಮಗಳ ರಕ್ಷಣೆಗಾಗಿ ಈ ಕಾರ್ಯ ಅಗತ್ಯವಾಯಿತು. ವರ್ಣಸಂಕರದ ಅಪರಾಧ ನಡೆದಿದೆಯೆಂದು ದೃಢವಾಗಿ ತಿಳಿದ ಮೇಲೆ, ಅಪರಾಧಿಗಳನ್ನು ದಂಡಿಸಿ, ಆ ಬಗೆಯ ದುಷ್ಟಪ್ರವೃತ್ತಿಯನ್ನು ನಿರ್ಮೂಲ ಮಾಡುವುದು ನಮ್ಮ ಕರ್ತವ್ಯ. ಅದನ್ನು ನಿರ್ವಹಿಸಲು ನಾನು ಪಣ ತೊಟ್ಟಿದ್ದೇನೆ.” -ಅಧಿಕಾರ ದರ್ಪದಿಂದ ಬಿಜ್ಜಳನು ಹೇಳಿದನು.
{{gap}}ಬಿಜ್ಜಳನ ರಾಜ್ಯಾಪಹಾರದ ಅನಂತರ ಪ್ರಚಾರಕ್ಕೆ ಬಂದಿದ್ದ ನಿರಂಕುಶ ಪ್ರಭುತ್ವದ ನಗ್ನರೂಪವನ್ನು ಕಂಡು ಚೆನ್ನಬಸವಣ್ಣನವರು ಸ್ತಂಭಿತರಾದರು. ಈ ದುರ್ದಮ್ಯ ದಬ್ಬಾಳಿಕೆಯ ಕೋರೆದಾಡೆಗಳಿಂದ ಶರಣರನ್ನು ರಕ್ಷಿಸಲು ನಾನು ಸಮರ್ಥನಾಗುವೆನೆ? ಎಂಬ ಸಂದೇಹ ಅವರ ಮನಸ್ಸಿನಲ್ಲಿ ಮೊದಲಬಾರಿಗೆ ತಲೆದೋರಿತು. ಆದರೆ ನಿರಾಶೆಯಿಂದ ಕರ್ತವ್ಯವಿಮುಖರಾಗುವುದು ಅವರ ಸ್ವಭಾವವಾಗಿರಲಿಲ್ಲ. ನ್ಯಾಯಧರ್ಮಶಾಸ್ತ್ರಗಳ ಅಧ್ಯಯನದಿಂದ ಹುಟ್ಟಿದ ದೃಢ ವಿಶ್ವಾಸದಿಂದ ಅವರು,
{{gap}}“ಆದರೆ ಈ ಕರ್ತವ್ಯ ನಿರ್ವಹಣೆಯಲ್ಲಿ ಪ್ರಭುಗಳು ಧರ್ಮವಿರುದ್ಧವಾದ ಮಾರ್ಗ ಹಿಡಿಯಬಾರದಾಗಿ ನನ್ನ ಮನವಿ. ಪ್ರಭುತ್ವ ವಿಚಾರಣೆ ನಡೆಸಿ ಶಿಕ್ಷೆ ವಿಧಿಸುವ ಹದಿನೆಂಟು ಅಪರಾಧ ಸ್ಥಾನಗಳಲ್ಲಿ ವರ್ಣಸಂಕರ ಸೇರುವುದಿಲ್ಲ. ಕುಲವೃದ್ಧರು, ಮಠಾಧಿಪತಿಗಳೂ ವಿಚಾರಣೆ ನಡೆಸಿ ತೀರ್ಪುಕೊಡುವ ಆ ವಿಷಯದಲ್ಲಿ ಪ್ರಭುತ್ವದ ಪ್ರವೇಶವನ್ನು ಧರ್ಮಶಾಸ್ತ್ರಗಳು ನಿಷೇಧಿಸುತ್ತವೆ. ಚಾಲುಕ್ಯ ರಾಜ್ಯದಲ್ಲಿ ಸತ್ಯ ಧರ್ಮಗಳ ರಕ್ಷಣೆಗಾಗಿ ಪಣತೊಟ್ಟ ಪ್ರಭುಗಳು, ಬಂಧನದಲ್ಲಿರುವವರನ್ನು ಬಿಡುಗಡೆ ಮಾಡಿ ಅವರ ವಿಚಾರಣೆಯ ಹೊಣೆಯನ್ನು ಕುಲವೃದ್ಧ ಮಠಾಧಿಪತಿಗಳಿಗೊಪ್ಪಿಸುವುದು ಸೂಕ್ತವಾದ ಮಾರ್ಗ,” ಎಂದು ನುಡಿದರು.<noinclude></noinclude>
rojhjrk7l7pi5vq44dxpoxhlz94wbh9
ಪುಟ:ಕ್ರಾಂತಿ ಕಲ್ಯಾಣ.pdf/೨೬೬
104
78597
317645
252156
2026-05-06T13:26:15Z
Shreelatha.Halemane
7642
/* Validated */
317645
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೨೫೩}}</noinclude>
{{gap}}“ಎಲ್ಲ ಸಂದರ್ಭಗಳಲ್ಲಿಯೂ ಧರ್ಮಶಾಸ್ತ್ರ ನಿಬಂಧನೆಯಂತೆ ಆಡಳಿತ ನಡೆಸುವುದು ಸಾಧ್ಯವಲ್ಲ. ಯುದ್ಧ ಕ್ಷಾಮ ಡಾಮರ ಮುಂತಾದ ವಿಶೇಷ ಸಂದರ್ಭಗಳಲ್ಲಿ ಕುಲವೃದ್ಧ ಮಠಾಧಿಕಾರಿಗಳ ಅಧಿಕಾರವನ್ನು ರಾಜನೇ ನಿರ್ವಹಿಸುವುದು ಅಗತ್ಯವಾಗುತ್ತದೆ. ಈಗ ಚಾಲುಕ್ಯ ರಾಜ್ಯಕ್ಕೆ ಅಂತಹ ವಿಶೇಷ ಪರಿಸ್ಥಿತಿ ಒದಗಿದೆಯೆಂದು ಭಾವಿಸಿ, ಕುಲವೃದ್ದ ಮಠಾಧಿಕಾರಿಗಳ ಅಧಿಕಾರವನ್ನು ನಾವು ವಹಿಸಿಕೊಂಡಿದ್ದೇವೆ. ಅದರಂತೆ ರಚಿತವಾದ ನ್ಯಾಯಪೀಠದ ಮುಂದೆ ಆಪಾದಿತರ ಪರವಾಗಿ ನೀವು ಮನವಿ ಸಲ್ಲಿಸಬಹುದು,” ಎಂದು ನುಡಿದು ಬಿಜ್ಜಳನು ಸಂದರ್ಶನ ಮುಗಿದುದನ್ನು ಸೂಚಿಸಲು ಹೊರಡಲನುವಾದನು.
{{gap}}“ಸತ್ಯಧರ್ಮಗಳಿಗೆ ವಿರುದ್ಧವಾಗಿ ರಚಿತವಾದ ಈ ನ್ಯಾಯಪೀಠವನ್ನು ನಾಗರಿಕರು ಒಪ್ಪುವುದಿಲ್ಲ. ಅದು ನಡೆಸುವ ವಿಚಾರಣೆಗೆ, ಕೊಡುವ ತೀರ್ಪಿಗೆ ಆಪಾದಿತರು ಬದ್ದರಾಗುವುದಿಲ್ಲ. ಪ್ರಭುಗಳ ಈ ನಿರಂಕುಶ ವರ್ತನೆಯನ್ನು ವಿರೋಧಿಸುವುದು ಮಂತ್ರಿಮಂಡಲದ ಸದಸ್ಯನಾದ ನನ್ನ ಕರ್ತವ್ಯ.” - ಚೆನ್ನಬಸವಣ್ಣನವರ ದನಿಯಲ್ಲಿ ಕರ್ಕಶತೆ ಇಚ್ಛೆಯಿಲ್ಲದೆ ತಲೆಹಾಕಿತ್ತು. ತಿರಸ್ಕಾರದ ಸ್ಪರ್ಧಾಭಾವದಿಂದ ಅವರು ನುಡಿದರು.
{{gap}}ಬಿಜ್ಜಳನ ಹುಬ್ಬುಗಳು ಕುಂಚಿತವಾದವು. ಕಣ್ಣುಗಳಿಂದ ಉನ್ಮತ್ತ ಕೋಪದ ಕಿಡಿಗಳು ಹಾರಿದವು. ದೀರ್ಘಾಭ್ಯಾಸದಿಂದ ಅವನು ಉಕ್ಕಿಬರುತ್ತಿದ್ದ ಆವೇಗವನ್ನು ಅದಮಿಟ್ಟು ಮುಖದಲ್ಲಿ ಕುಹಕದ ನಗೆ ಮೂಡಿಸಿ,
{{gap}}“ನೀವು ರಾಜಕೀಯಾನುಭವವಿಲ್ಲದ ತರುಣರು, ಚೆನ್ನಬಸವಣ್ಣನವರೆ. ಬಸವ ದಂಡನಾಥರ ಬಂಧುವೆಂಬ ಕಾರಣದಿಂದ ನಿಮ್ಮನ್ನು ಮಂತ್ರಿಯಾಗಿ ತೆಗೆದುಕೊಳ್ಳುವುದು ಅಗತ್ಯವಾಯಿತು. ಆದರೆ ನೀವು ಪ್ರಭು-ಭೃತ್ಯ ಸಂಬಂಧವನ್ನು ಮರೆತು, ಸಭೆಯ ಮರ್ಯಾದೆಯನ್ನು ಕಡೆಗಣಿಸಿ, ನನ್ನೊಡನೆ ಈ ರೀತಿ ವರ್ತಿಸುವಿರೆಂದು ನಾನು ಯಾವಾಗಲೂ ನಿರೀಕ್ಷಿಸಿರಲಿಲ್ಲ. ಶರಣಧರ್ಮದ ದರ್ಪ ದುರಭಿಮಾನಗಳು ನಿಮ್ಮನ್ನು ನುಡಿಸುತ್ತಿದೆಯೆಂದು ತಿಳಿದು ಮನ್ನಿಸಿದ್ದೇನೆ. ದೀರ್ಘ ಪ್ರವಾಸದಿಂದ ಬಳಲಿದ ನನಗೆ ಈಗ ವಿಶ್ರಾಂತಿ ಅಗತ್ಯ. ಸಂದರ್ಶನ ಮುಗಿಯಿತು.” -ಎಂದು ನುಡಿದು ಮುಖ ತಿರುಗಿಸಿದನು.
{{gap}}ಪ್ರಯತ್ನ ವಿಫಲವಾಯಿತೆಂದು ಚೆನ್ನಬಸವಣ್ಣನವರು ತಿಳಿದರು. ಬರಿಗೈಯಿಂದ ಮಹಮನೆಗೆ ಹಿಂದಿರುಗುವುದು ಹೇಗೆ ? ಎಂದು ಚಿಂತಿಸಿ,
{{gap}}“ಸೆರೆಮನೆಯಲ್ಲಿ ಆಪಾದಿತರನ್ನು ಅಮಾನುಷ ಕೌಂರ್ತದಿಂದ ನಡೆಸಿಕೊಳ್ಳುತ್ತಿದ್ದಾರೆ. ಈ ಸಾಮಾನ್ಯ ವಿಚಾರದಲ್ಲಾದರೂ ಪ್ರಭುಗಳು<noinclude></noinclude>
6z5myor4j6q74uynx8dkfhjbps0w1np
ಪುಟ:ಕ್ರಾಂತಿ ಕಲ್ಯಾಣ.pdf/೨೬೭
104
78598
317646
252157
2026-05-06T13:27:36Z
Shreelatha.Halemane
7642
/* Validated */
317646
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೫೪||ಕ್ರಾಂತಿ ಕಲ್ಯಾಣ}}</noinclude>
ಉದಾರತೆಯಿಂದ ನಡೆದುಕೊಳ್ಳಬೇಕಾಗಿ ಬೇಡುತ್ತೇನೆ,” -ಎಂದು ಬಿನ್ನವಿಸಿಕೊಂಡರು.
{{gap}}ಬಿಜ್ಜಳನು ಮುಖ ತಿರುಗಿಸಿ ಉಪೇಕ್ಷೆಯ ಕಟು ಧ್ವನಿಯಿಂದ, "ಧರ್ಮಾಧಿಕರಣದ ಧಿಕರಣದ ಸಾಮಾನ್ಯ ನಿಬಂಧನೆಗಳಂತೆ ಬಂಧಿತರನ್ನು ನಡೆಸಿಕೊಳ್ಳಲಾಗುತ್ತಿದೆ. ಶರಣರೆಂಬ ಕಾರಣದಿಂದ ಯಾವ ಹೊಸ ಪದ್ಧತಿಯನ್ನೂ ಆಚರಣೆಗೆ ತಂದಿಲ್ಲ,” ಎಂದು ಹೇಳಿದನು.
{{gap}}ಚೆನ್ನಬಸವಣ್ಣನವರು ನಿರಾಶೆಯ ತೀವ್ರತೆಯಿಂದ ನಿಟ್ಟುಸಿರಿಟ್ಟುಹೆಗ್ಗಡೆಯೊಡನೆ ಅಲ್ಲಿಂದ ಸರಿದರು.
{{gap}}ತುಸುಹೊತ್ತಿನ ಮೇಲೆ ಬಿಜ್ಜಳನು ಕ್ರಮಿತನನ್ನು ಹೊರಗೆ ಕರೆದು “ಹೇಗಿತ್ತು ನನ್ನ ಅಭಿನಯ?” ಎಂದು ನಗುತ್ತ ಕೇಳಿದನು.
{{gap}}“ಪ್ರಭುಗಳ ರಾಜನೀತಿ ಅನುಭವಗಳು ಅಗಾಧ. ಕ್ಷಣಕಾಲ ನಾನೆಲ್ಲಿರುವೆ ನೆಂಬುದನ್ನೇ ಮರೆತೆ.” -ಮೆಚ್ಚುಗೆಯ ಆವೇಶದಿಂದ ಕ್ರಮಿತನು ನುಡಿದನು “ಇಷ್ಟೆಲ್ಲ ಚಾತುರ್ಯ ಕೌಶಲಗಳು ರಾಜಿಕಕ್ಕೆ ಅಗತ್ಯವೇ?” -ಬೇಸರದಿಂದ ಹೇಳಿದನು ಬಿಜ್ಜಳ.
{{gap}}“ಅಗತ್ಯ, ಪ್ರಭು. 'ವಾರಾಂಗನೇವ ನೃಪನೀತಿರನೇಕ ರೂಪಾ' ಎಂದು ಕವಿ ಹೇಳಿದ್ದಾನೆ. ಸೂಳೆಯಂತೆ ರಾಜನೂ ಸಂದರ್ಭೋಚಿತವಾಗಿ ಬೇರೆ ಬೇರೆ ಮುಖವಾಡಗಳನ್ನು ಧರಿಸಿ ಅಭಿನಯಿಸಬೇಕಾಗುವುದು.”
{{gap}}“ನೀವು ವಾರಾಂಗನೆಯೆಂದದ್ದು ನೆನಪಾಯಿತು, ಕ್ರಮಿತರೆ. ಕಲ್ಯಾಣದ ನಮ್ಮ ಗಣಿಕಾವಾಸಗಳಲ್ಲಿ ಯಾವುದು ತೆರವಾಗಿದೆ?”
{{gap}}“ಧರ್ಮಾಧಿಕರಣದ ಪಾರ್ಶ್ವದಲ್ಲಿರುವ ಸಮ್ಮುಖದ ಚಾವಡಿ. ಉಳಿದೆಲ್ಲ ಕಡೆಗಳಲ್ಲಿ ಮಂಗಳವೇಡೆಗೆ ಬಂದಿದ್ದ ನರ್ತಕಿಯರು ಬಿಡಾರ ಮಾಡಿದ್ದಾರೆ. ಇನ್ನೆರಡು ವಾರಗಳವರೆಗೆ ಅವುಗಳಲ್ಲಿ ಯಾವುದೂ ತೆರವಾಗುವುದಿಲ್ಲ.”
{{gap}}“ಹಾಗಾದರೆ ಸಮ್ಮುಖದ ಚಾವಡಿಗಳನ್ನು ಅತ್ಯಾಧುನಿಕ ಅಲಂಕಾರ ವಸ್ತುಗಳಿಂದ ಸಜ್ಜುಗೊಳಿಸಿರಿ, ಕ್ರಮಿತರೆ. ಮಂಗಳವೇಡೆಯ ಹೊಸ ಹೆಗ್ಗಡತಿಯೊಬ್ಬಳು ಇನ್ನೆರಡು ದಿನಗಳಲ್ಲಿ ಅದರ ಒಡತಿಯಾಗಿ ಬರುತ್ತಾಳೆ. ನಂಬಿಕಸ್ಥರಾದ ಎಂಟುಮಂದಿ ದಾಸದಾಸಿಯರು, ಕಾವಲುಭಟರು ಸಿದ್ಧರಾಗಿರಬೇಕು.”
{{gap}}"ಆಜ್ಞೆ"
{{gap}}“ನೀವಿನ್ನು ಹೋಗಬಹುದು. ನ್ಯಾಯಪೀಠದ ತೀರ್ಪಿನ ವಿಚಾರದಲ್ಲಿ ನನ್ನ ಆದೇಶ ನೆನಪಿರಲಿ.”<noinclude></noinclude>
m0vzbyjgs1zxhnpcdfojl0xlwrbssnf
ಪುಟ:ಕ್ರಾಂತಿ ಕಲ್ಯಾಣ.pdf/೨೬೮
104
78599
317647
218378
2026-05-06T13:29:31Z
Shreelatha.Halemane
7642
/* Validated */
317647
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಾನವನು ದಾನವವಾದಾಗ|right=೨೫೫}}
{{gap}}ಕ್ರಮಿತನು ತಲೆಬಾಗಿ ನಮಸ್ಕಾರ ಮಾಡಿ ಹೊರಗೆ ಹೋಗುತ್ತಿದ್ದಂತೆ ಪಾನ</br>
ಪಾತ್ರೆ ಬೀಸಣಿಗೆಗಳನ್ನು ಹಿಡಿದ ದಾಸದಾಸಿಯರು ಪುನಃ ಅಲ್ಲಿಗೆ ಬಂದರು.</br>
{{gap}}ರಾಜಪೌರೋಹಿತ್ಯ-ಧರ್ಮಾಧಿಕರಣಗಳಂತೆ ಬಿಜ್ಜಳನ ಗಣಿಕಾವಾಸಗಳ</br>
ಮೇಲ್ವಿಚಾರಣೆಯನ್ನೂ ಕ್ರಮಿತನೇ ನೋಡಿಕೊಳ್ಳಬೇಕಾಗಿತ್ತು. ಅಗ್ನಿ ಅಪಘಾತದ</br>
ಅನಂತರ, ತಾನು ಮಂಗಳವೇಡೆಯನ್ನು ಬಿಟ್ಟ ನಾಲ್ಕು ದಿನಗಳ ಅಂತರದಲ್ಲಿ</br>
ಪ್ರಭುಗಳ ಮೇಲೆ ಮೋಹದ ಇಂದ್ರಜಾಲ ಬೀರಿದ ಆ ಹೊಸ ಹೆಗ್ಗಡತಿ ಯಾರು?</br>
ಎಂಬ ಚಿಂತೆಯಲ್ಲಿ ಕ್ರಮಿತನು ಮಗ್ನನಾದನು. ತಾನೇ ಏರ್ಪಡಿಸಿದ್ದ ಮಹಾ ವ್ರತದ</br>
ಬಯಲಾಟದಲ್ಲಿ ಗಣಿಕೆಯ ಪಾತ್ರ ವಹಿಸಿದ್ದ ಪಂಡಿತ ಪತ್ನಿಯೇ ಆ ಹೊಸ</br>
ಹೆಗ್ಗಡತಿಯೆಂಬುದು ಆಗ ಕ್ರಮಿತನಿಗೆ ತಿಳಿದಿದ್ದರೆ, ಅವನ ಏಳು ತಲೆಮಾರಿನ</br>
ಪಿತೃಗಳು ಸ್ವರ್ಗದಲ್ಲಿ ಬೆಚ್ಚಿ ಏಳುತ್ತಿದ್ದರು.
* * *</br>
{{gap}}ಚೆನ್ನಬಸವಣ್ಣನವರ ಮ್ಲಾನ ಮುಖವನ್ನು ಕಂಡಾಗ ಮಾಚಿದೇವ ಸಕಲೇಶ</br>
ಮಾದರಸರು ತಿಳಿದರು, ಸಂಧಾನ ವಿಫಲವಾಯಿತೆಂದು. ಸಂದರ್ಶನದಲ್ಲಿ ನಡೆದುದನ್ನು
ವಿವರಿಸಿ ಚೆನ್ನಬಸವಣ್ಣನವರು,</br>
{{gap}}“ಬಿಜ್ಜಳರಾಯರ ಸವಿನುಡಿಗಳಿಗೆ ಮರುಳಾಗಿ ಮಂತ್ರಿಯಾಗಿರಲು ನಾನು</br>
ಒಪ್ಪಿಕೊಂಡದ್ದು ತಪ್ಪು ಹೆಜ್ಜೆಯೆಂದು ಈಗ ಅರಿವಾಗುತ್ತಿದೆ. ರಾಜಕೀಯಾನುಭವವಿಲ್ಲದ
ನಾನು ರಾಜಕೀಯ ವ್ಯವಹಾರದಲ್ಲಿ ಚತುರರಾದ ಬಿಜ್ಜಳರಾಯರೊಡನೆ ಸೆಣಸುವುದು</br>
ಸಾಧ್ಯವೆ? ಮಂತ್ರಿಮಂಡಲದಿಂದ ನಿವೃತ್ತನಾಗಲು ಯೋಚಿಸಿದ್ದೇನೆ,” ಎಂದರು.</br>
{{gap}}ಚೆನ್ನಬಸವಣ್ಣನವರ ನುಡಿಗಳಿಂದ ಶರಣರಲ್ಲಿ ನಿರಾಶೆ ಮೂಡಿತು. ಮಧುವರಸ</br>
ಹರಳಯ್ಯಗಳ ಬಂಧನದಿಂದ ತಳಮಳಗೊಂಡಿದ್ದ ಅವರು ಹಿಂದಿನ ಸಂಜೆ</br>
ಲಾವಣ್ಯವತಿಯಿಂದ ಶೀಲವಂತನ ಬಂಧನದ ಸುದ್ದಿ ಕೇಳಿ ಕರ್ತವ್ಯಮೂಢರಾದರು.</br>
ಬಿಜ್ಜಳರಾಯರ ಪರೋಕ್ಷದಲ್ಲಿ ನಾರಣಕ್ರಮಿತನಿಂದ ಈ ಕಾರ್ಯ ನಡೆದಿದೆಯೆಂದೂ,</br>
ಪ್ರಭುಗಳು ಕಲ್ಯಾಣಕ್ಕೆ ಬಂದಕೂಡಲೆ ಅವರನ್ನು ಸಂದರ್ಶಿಸಿ ಶರಣರ ಬಿಡುಗಡೆಗೆ</br>
ಪ್ರಂರತ್ನಿಸುವುದಾಗಿಯೂ ಹೇಳಿ ಚೆನ್ನಬಸವಣ್ಣನವರು ಅವರನ್ನು</br>
ಸಮಾಧಾನಗೊಳಿಸಿದ್ದರು.
{{gap}}“ಹಾಗಾದರೆ ಬಂಧನದಲ್ಲಿರುವ ಶರಣರ ಗತಿಯೇನು ? ಅವರ ರಕ್ಷಣೆಗೆ</br>
ಯಾವ ಉಪಾಯವೂ ಇಲ್ಲವೆ?” ತೀವ್ರ ನಿರಾಶೆಯಿಂದ ಶರಣನೊಬ್ಬನು ಪ್ರಶ್ನಿಸಿದನು.
{{gap}}ದೀರ್ಘಕಾಲ ಪರ್ಯಾಲೋಚನೆ ನಡೆದು ಕೊನೆಗೆ ಸಕಲೇಶ ಮಾದರಸರು</br>
ಹೇಳಿದರು: “ಧರ್ಮಾಧಿಕರಣದಲ್ಲಿ ಪ್ರಾರಂಭವಾದ ಈ ವ್ಯವಹಾರ ಅಷ್ಟಕ್ಕೇ<noinclude></noinclude>
dtryn6qhf1g643p3ayzhiden5l8gbaw
ಪುಟ:ಕ್ರಾಂತಿ ಕಲ್ಯಾಣ.pdf/೨೬೯
104
78600
317648
252175
2026-05-06T13:30:08Z
Shreelatha.Halemane
7642
/* Validated */
317648
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೫೬||ಕ್ರಾಂತಿ ಕಲ್ಯಾಣ}}</noinclude>
ಮುಗಿಯುವುದಿಲ್ಲ. ರಾಜಕೀಯ ಆಡಳಿತಗಳಲ್ಲಿಯೂ ಹರಡುತ್ತದೆ. ಶರಣಧರ್ಮವನ್ನು ನಿರ್ಮೂಲಗೊಳಿಸುವುದು ಬಿಜ್ಜಳನ ಉದ್ದೇಶ. ಈಗ ಚೆನ್ನಬಸವಣ್ಣನವರು ಮಂತ್ರಿಪದವಿಯಿಂದ ನಿವೃತ್ತರಾದರೆ ರಾಜ್ಯದಲ್ಲಿ ಶರಣರ ಬಲ ಕುಂದುವುದು. ನಾನು ಆ ಮಾರ್ಗವನ್ನು ಅನುಮೋದಿಸುವುದಿಲ್ಲ. ನ್ಯಾಯಪೀಠದ ವಿಚಾರಣೆ ಯಾವ ರೀತಿ ಮುಗಿಯುವುದೆಂಬುದನ್ನು ಕಾದು ನೋಡಿ ಆಮೇಲೆ ನಾವು ಮುಂದಿನ ಕಾರ್ಯಕ್ರಮವನ್ನು ನಿರ್ಧರಿಸಬೇಕಾಗುವುದು.”
{{gap}}ಮಾಚಿದೇವರ ಅಭಿಪ್ರಾಯ ಬೇರೆಯಾಗಿತ್ತು. ಅವರು ಹೇಳಿದರು : “ನ್ಯಾಯಪೀಠದ ರಚನೆಯಲ್ಲಿ ಬಿಜ್ಜಳನು ಸತ್ಯಧರ್ಮಗಳನ್ನು ಕಡೆಗಣಿಸಿ, ನಿರಂಕುಶ ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾನೆ. ಚಾಲುಕ್ಯ ಧರ್ಮಾಧಿಕರಣ ಅಧರ್ಮ ಅತ್ಯಾಚಾರಗಳ ನೆಲೆವೀಡಾಗುತ್ತಿದೆ. ಈ ದುಷ್ಟ ಪ್ರವೃತ್ತಿಯನ್ನು ಪ್ರತಿಭಟಿಸುವುದು ನಮ್ಮ ಮೊದಲ ಕರ್ತವ್ಯ. ಶರಣರು ಸೆರೆಮನೆಯಲ್ಲಿರಲಿ, ಹೊರಗಿರಲಿ, ಈ ಅನ್ಯಾಯದ ವ್ಯವಹಾರದಲ್ಲಿ ಧರ್ಮಾಧಿಕರಣದೊಡನೆ ಸಹಕರಿಸಲು ನಿರಾಕರಿಸಬೇಕು. ನ್ಯಾಯಪೀಠದ ವಿಚಾರದಲ್ಲಿ ನಮ್ಮ ಆಕ್ಷೇಪಣೆಗಳೇನೆಂಬುದನ್ನು ಚೆನ್ನಬಸವಣ್ಣನವರು ಆಗಲೇ ಬಿಜ್ಜಳರಾಯರಿಗೆ ತಿಳಿಸಿದ್ದಾರೆ. ಮುಂದಿನ ಕಾರ್ಯವಿಧಾನವನ್ನು ಅದಕ್ಕೆ ಅನುಗುಣವಾಗಿ ರೂಪಿಸಬೇಕು.”
{{gap}}“ನಾಳೆ ಪುನಃ ನ್ಯಾಯಪೀಠದ ವಿಚಾರಣೆ ಪ್ರಾರಂಭವಾಗುತ್ತದೆ. ಆಪಾದಿತರು ಹೇಳಿಕೆ ಕೊಡಬೇಕಾಗುತ್ತದೆ. ಈ ವಿಚಾರದಲ್ಲಿ ನಿಮ್ಮ ಸಲಹೆಯೇನು?” -ಎಂದು ಪ್ರಶ್ನಿಸಿದರು ಚೆನ್ನಬಸವಣ್ಣನವರು.
{{gap}}“ವರ್ಣಸಂಕರದ ಅಪರಾಧ ನಮ್ಮಿಂದ ನಡೆದಿಲ್ಲ. ಧರ್ಮಾಧಿಕರಣದ ಮೂಲತತ್ವಗಳಿಗೆ ವಿರುದ್ಧವಾಗಿ ರಚಿತವಾದ ನ್ಯಾಯಪೀಠದೊಡನೆ ನಾವು ಸಹಕರಿಸುವುದಿಲ್ಲ ಎಂದು ಮೂವರೂ ಒಂದೇ ರೀತಿಯ ಪ್ರತ್ಯೇಕ ಹೇಳಿಕೆಗಳನ್ನು ಕೊಟ್ಟರೆ ಸಾಕು,” -ಎಂದು ಮಾಚಿದೇವರು ಉತ್ತರ ಕೊಟ್ಟರು.
:ಶರಣರೆಲ್ಲ ಅದಕ್ಕೊಪ್ಪಿದರು.
{{gap}}ಮರುದಿನ ನ್ಯಾಯಪೀಠ ಕೂಡಿದಾಗ ಆಪಾದಿತರು ಒಂದೇ ರೀತಿಯ ಮೂರು ಪ್ರತ್ಯೇಕ ಹೇಳಿಕೆಗಳನ್ನು ಕೊಟ್ಟು ನ್ಯಾಯಪೀಠದೊಡನೆ ಸಹಕರಿಸಲು ನಿರಾಕರಿಸಿದಾಗ ಕ್ರಮಿತನು ಗೊಂದಲದಲ್ಲಿ ಬಿದ್ದನು. ಆಪಾದಿತರನ್ನು ಕಳುಹಿಸಿ, ಸಹೋದ್ಯೋಗಿಗಳ ಕಡೆ ತಿರುಗಿ ಅವನು,
{{gap}}“ನಾವು ಮೂವರನ್ನೂ ಪ್ರತ್ಯೇಕ ಬಂಧನದಲ್ಲಿಟ್ಟಿದ್ದೇವೆ. ಒಬ್ಬರನ್ನೊಬ್ಬರು ನೋಡುವ ಅವಕಾಶವೂ ಇರುವುದಿಲ್ಲ. ಆದರೂ ಮೂವರ ಹೇಳಿಕೆಗಳು ಒಂದೇ ಆಗಿರುವುದು ಆಶ್ಚರ್ಯ,” ಎಂದನು.<noinclude></noinclude>
h3obug61v5z0tteilaozyxsswa3jl2s
ಪುಟ:ಕ್ರಾಂತಿ ಕಲ್ಯಾಣ.pdf/೨೭೦
104
78601
317649
252176
2026-05-06T13:31:04Z
Shreelatha.Halemane
7642
/* Validated */
317649
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೨೫೭}}</noinclude>
{{gap}}ರುದ್ರಭಟ್ಟನು ಮೌನ.
{{gap}}“ಶರಣರು ಪ್ರತ್ಯೇಕವಾಗಿ ಬಂಧಿಸಲ್ಪಟ್ಟಿದ್ದರೂ ಅವರ ರೀತಿ ನೀತಿ ಕಾರ್ಯ ವಿಧಾನ ಒಂದೇ ಅಲ್ಲವೆ? ಅದರಂತೆ ಹೇಳಿಕೆ ಒಂದೇ ಆಗಿರುವುದರಲ್ಲಿ ಆಶ್ಚರ್ಯವೇನಿದೆ? ಈ ಪರಿಸ್ಥಿತಿಯಲ್ಲಿ ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸಿಕೊಳ್ಳಬೇಕು,” ಎಂದನು ಮಂಚಣ.
{{gap}}ಕ್ರಮಿತನು ತುಸುಹೊತ್ತು ಯೋಚಿಸಿ, “ಆಪಾದಿತರ ಹೇಳಿಕೆಯ ವಿಚಾರದಲ್ಲಿ ಪಭುಗಳ ಪ್ರತಿಕ್ರಿಯೆ ಏನೆಂಬುದನ್ನು ನಾವು ಮೊದಲು ತಿಳಿಯಬೇಕು. ಆಮೇಲೆ ಮುಂದಿನ ಕಾರ್ಯ,” ಎಂದು ಹೇಳಿದನು.
{{gap}}ನ್ಯಾಯಪೀಠದ ಅಂದಿನ ಅಧಿವೇಶನ ಸಂದಿಗ್ಧದಲ್ಲಿ ಮುಗಿಯಿತು. ಬಂಧಿತರೊಡನೆ ಹೊರಗಿನವರ ಸಂಬಂಧವಿಲ್ಲದಂತೆ ಎಚ್ಚರದಿಂದ ನೋಡಿಕೊಳ್ಳಬೇಕೆಂದು ಸೆರೆಮನೆಯ ಅಧಿಕಾರಿಗಳಿಗೆ ಎಚ್ಚರಿಕೆ ಕೊಡಲು ಕ್ರಮಿತನು ಮರೆಯಲಿಲ್ಲ.
{{gap}}ಮರುದಿನ ಸಂಜೆ ಮಂಚಣನು ಸ್ನಾನ ಮುಗಿಸಿ ವಾಸಗೃಹದಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾಗ ಕ್ರಮಿತನು ಅಲ್ಲಿಗೆ ಬಂದು, ವಂದನೆ ಪ್ರತಿವಂದನೆಗಳು ಮುಗಿದ ಮೇಲೆ ಆಸನದಲ್ಲಿ ಕುಳಿತು, ಧರ್ಮಾಧಿಕರಣದ ಆಜ್ಞಾಪತ್ರವೊಂದನ್ನು ಮುಂದಿಟ್ಟು “ಇದಕ್ಕೆ ನಿಮ್ಮ ಒಪ್ಪಿಗೆಯ ಹಸ್ತಾಕ್ಷರ ಬೇಕಾಗಿದೆ,” ಎಂದನು.
{{gap}}“ಇಷ್ಟಕ್ಕಾಗಿ ನೀವೇಕೆ ಬರಬೇಕಾಗಿತ್ತು? ಕರಣಿಕನನ್ನು ಕಳುಹಿಸಿದ್ದರೆ ಒಪ್ಪಿಗೆ ಹಾಕುತ್ತಿದ್ದೆ,” ಎನ್ನುತ್ತ ಮಂಚಣನು ದೀಪದ ಬೆಳಕಿನಲ್ಲಿ ಪತ್ರವನ್ನು ಓದಿದನು. ಆಶ್ಚರ್ಯ ಭೀಭತ್ಸಗಳಿಂದ ಅವನ ಮುಖ ಬಿಳುಪೇರಿತು. ಕೈಗಳು ನಡುಗಿ ಆಜ್ಞಾಪತ್ರ ಕೆಳಗೆ ಬಿತ್ತು.
{{gap}}ಕ್ರಮಿತನು ಬಾಗಿ ಪತ್ರವನ್ನು ತೆಗೆದುಕೊಂಡು ಪೀಠದ ಮೇಲಿಟ್ಟು, “ಏಕೆ ಮಂಚಣನವರೆ ? ಸ್ವಸ್ಥವಿಲ್ಲವೆ?” ಎಂದನು.
{{gap}}ಅನೇಕ ಕ್ಷಣಗಳು ಮಂಚಣ ಉತ್ತರ ಕೊಡಲಿಲ್ಲ. ಆಮೇಲೆ ಕಂಪಿಸುವ ಕಂಠದಿಂದ, “ಇದೇನು ಉಪಹಾಸವೆ, ಕ್ರಮಿತರೆ? ಅಥವಾ ಈ ಅನ್ಯಾಯದ ಭೀಕರ ದಂಡಾಜ್ಞೆಗೆ ನನ್ನ ಒಪ್ಪಿಗೆ ಪಡೆಯಲು ಪ್ರಭುಗಳು ನಿಮ್ಮನ್ನು ಕಳುಹಿಸಿದರೆ?” ಎಂದನು.
{{gap}}“ಆಪಾದಿತರು ನ್ಯಾಯಪೀಠದ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಹಕರಿಸಲು ನಿರಾಕರಿಸಿದರೆಂದು ಕೇಳಿದಾಗ ಪ್ರಭುಗಳು ರೌದ್ರಾವತಾರವಾದರು. ಅವರನ್ನು ಸಮಾಧಾನಪಡಿಸುವುದು ಕಷ್ಟವಾಯಿತು. ಕೊನೆಗೆ ಅವರೇ ಕರಣಿಕನಿಂದ ಈ<noinclude></noinclude>
dr6s4s6tb6lylgd6ucn5uswwcdxr1j5
ಪುಟ:ಕ್ರಾಂತಿ ಕಲ್ಯಾಣ.pdf/೩೮೫
104
86312
317748
203604
2026-05-06T16:37:08Z
Shreelatha.Halemane
7642
/* Proofread */
317748
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=೩೭೨|right=ಕ್ರಾಂತಿ ಕಲ್ಯಾಣ}}
ಸುರಾಸುರಾಃ ಕಿಂಪುರುಷೋರಗೇಂದ್ರಾಃ
ಗಂಧರ್ವ ವಿದ್ಯಾಧರ ಪನ್ನಗಶ್ಚ
ಸೀದಂತಿ ಸರ್ವೆ ವಿಷಮಸ್ಥಿತೇನ
ತಸ್ಮಿನಮಃ ಶ್ರೀ ರವಿನಂದನಾಯ ||೧||
ದೇಶಾಶ್ಚ ದುರ್ಗಾಣಿ ತಥಾ ಬಲಾನಿ
ಸೇನಾನಿವೇಶಾಃ ಪುರ ಪತನಾನಿ
ಸೀದುತಿ ಸರ್ವೆ ವಿಷಮಸ್ಥಿತೇನ
ತಸ್ಯೆ ನಮಃ ಶ್ರೀ ರವಿನಂದನಾಯ ||೨||
ಭ್ರಷ್ಟಾ ಸ್ವಯಂಭೂ ಭುವನ ತ್ರಯಸ್ಯ
ಪಾತಾ ಹರಿಃ ಸಂಹರತೇ ಪಿನಾಕಿ
ಏಕಧಾ ಋಗ್ ಯಜು ಸಾಮ ಮೂರ್ತಿ
ತಸ್ಯೆ ನಮಃ ಶ್ರೀ ರವಿನಂದನಾಯ 1೩1*
{{gap}}ಬಾಗಿಲುಗಳಿಗೆ ಹಾಕಿದ್ದ ಜವನಿಕೆ ಸರಿಸಿದಂತಾಗಿ ಬಿಜ್ಜಳನು ತಿರುಗಿ ನೋಡಿದನು. ಕರಣಿಕನು ನಿರೂಪಗಳನ್ನು ಸಿದ್ಧಪಡಿಸಿ ತಂದಿರಬಹುದೇ ? ಮೊದಲು ಅವುಗಳಿಗೆ ಹಸ್ತಾಕ್ಷರ ಮಾಡಿ ಮಾಧವನಾಯಕನಿಗೆ ಕಳುಹಿಸಬೇಕು. ಆಮೇಲೆ ಸೋಮೇಶ್ವರನ ಪತ್ರ,
{{gap}}ಪುನಃ ಅದೇ ಶಬ್ದ, ಜವನಿಕೆಗಳನ್ನು ಸರಿಸಿದಂತೆ.
{{gap}}ಬಿಜ್ಜಳನು ತಲೆಯೆತ್ತಿ ನೋಡಿದನು. ಅಂತಃಗೃಹದ ತೆರೆ ಸರಿದು, ದೇಹವಿಲ್ಲದ ರುಂಡವೊಂದು, ಕಿಡಿಯುಗುಳುವ ಕಣ್ಣುಗಳಿಂದ ತನ್ನನ್ನೇ ನೋಡುತ್ತಿರುವುದನ್ನು ಕಂಡನು. ಕಂದುಬಣ್ಣದ ಕೇಶ, ಸುರಗಿಯ ಮೊನೆಯಂತ ತೀಕ್ಷವಾದ ಕಣ್ಣುಗಳು, ಇಲಿ ಹೆಗ್ಗಣಗಳಂತೆ ಮುಂದೆ ಚಾಚಿದ ದೊಡ್ಡ ಮೂಗು.
{{gap}}*ದೇವದಾನವರು, ಕಿನ್ನರ ಕಿಂಪುರುಷರು, ಗಂಧರ್ವ ವಿದ್ಯಾಧರರು, ಮುಂತಾದವರೆಲ್ಲ ಯಾವನ ಕ್ರೂರ ದೃಷ್ಟಿಯಿಂದ ನಾಶವಾಗುವರೋ ಆ ಶನೈಶ್ಚರನಿಗೆ ನನ್ನ ನಮಸ್ಕಾರಗಳು ||೧||
{{gap}}ದೇಶದುರ್ಗಗಳು, ಸೈನ್ಯ ಬಲ, ಸೇನಾ ನಿವೇಶನಗಳು, ನಗರ ಪಟ್ಟಣಗಳು, ಯಾವನ ಕೂರದೃಷ್ಟಿಯಿಂದ ನಾಶವಾಗುವವೋ ಆ ಶನೈಶ್ಚರನಿಗೆ ನನ್ನ ನಮಸ್ಕಾರಗಳು ||೨||
{{gap}}ಒಂದೇ ಆದ ವೇದ, ಋಗ್ಯಜುಃ ಸಾಮ ಎಂದು ಮೂರಾಗಿ ಕಾಣುವಂತೆ ಮೂರು ಲೋಕಗಳನ್ನು ಸೃಷ್ಟಿಸುವ ಬ್ರಹ್ಮನೂ, ಸಲಹುವ ಹರಿಯೂ, ಸಂಹಾರ ಮಾಡುವ ಶಿವನೂ ತಾನೇ ಆದ ಶನೈಶ್ಚರನಿಗೆ ನನ್ನ ನಮಸ್ಕಾರಗಳು |೩||<noinclude></noinclude>
c29ze5irihbybvs6fss6uv5maal9lw8
ಪುಟ:ಕ್ರಾಂತಿ ಕಲ್ಯಾಣ.pdf/೩೮೮
104
86316
317820
203608
2026-05-07T04:50:56Z
Shreelatha.Halemane
7642
/* Proofread */
317820
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ|right=೩೭೫}}
{{gap}}“ಕೃತ್ಯ ನಡೆದ ಹೊನ್ನಮ್ಮನ ಚಾವಡಿಯ ಬಾಗಿಲುಮುಚ್ಚಿ ಭಟರನ್ನು ಕಾವಲಿಟ್ಟಿದ್ದೇನೆ. ಕರ್ಣದೇವರಸರು ಬರುವವರೆಗೆ ನಾವಾರೂ ಒಳಗೆ ಹೋಗುವಂತಿಲ್ಲ.”
{{gap}}“ಕರ್ಣದೇವರಸರು!” -
{{gap}}ಅಚ್ಚರಿಗೊಂಡವನಂತೆ ಮಾಧವ ನಾಯಕನು ಪ್ರಶ್ನಿಸಿದನು.
{{gap}}“ಅಹುದು. ಅವರೇ ಈಗ ಕಲ್ಯಾಣದಲ್ಲಿರುವ ಪ್ರಭುಗಳ ಬಂಧು.” -
{{gap}}ಹೆಗ್ಗಡೆ ಉತ್ತರ ಕೊಟ್ಟನು.
{{gap}}ಮಾಧವ ನಾಯಕನು ಕೆಲವು ಕ್ಷಣಗಳು ಯೋಚಿಸುತ್ತಿದ್ದು, “ಹೊನ್ನಮ್ಮನ ಚಾವಡಿಯೆಂದರೆ ಎಲ್ಲಿ? ಅದು ಅರಮನೆಯ ಒಂದು ಭಾಗವೆ?” ಎಂದು ಕೇಳಿದನು.
{{gap}}“ಸರ್ವಾಧಿಕಾರಿ ಚಾವಡಿಗೆ ಅದು ಇನ್ನೊಂದು ಹೆಸರು. ವಾರಕ್ಕೆ ಮೊದಲು ಅಲ್ಲಿ ನಡೆದ ಒಂದು ಘಟನೆಯಿಂದಾಗಿ ಪರಿವಾರದ ಜನ ಈಗ ಆ ಚಾವಡಿಯನ್ನು ಆ ಹೆಸರಿಂದ ಕರೆಯುತ್ತಾರೆ.”
{{gap}}ಘಟನೆಯೇನೆಂದು ಮಾಧವ ನಾಯಕನು ಪ್ರಶ್ನಿಸಲಿಲ್ಲ. ನಾರಣ ಕ್ರಮಿತನ ಮುಖಾಂತರ ಅವನಿಗೆ ಆ ವಿಚಾರ ತಿಳಿದಿತ್ತು.
{{gap}}ಈ ಮಾತುಗಳು ನಡೆಯುತ್ತಿದ್ದಂತೆ ಮೇನೆಯೊಂದು ಅಲ್ಲಿಗೆ ಬಂದಿತು.
{{gap}}ಕರ್ಣದೇವನು ಕೆಳಗಿಳಿದು, “ಹೆಗ್ಗಡೆಯೆಲ್ಲಿ?” ಎಂದು ಭಟರನ್ನು ಪ್ರಶ್ನಿಸಿದನು.
ಹೆಗ್ಗಡೆ ಕೈಮುಗಿದು ತಲೆಬಾಗಿ ಎದುರಿಗೆ ನಿಂತನು. ಅವನ ಕಣ್ಣುಗಳಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು.
{{gap}}ಮಾಧವ ನಾಯಕನ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರ ಕೊಟ್ಟ ಹೆಗ್ಗಡೆ, ಕರ್ಣದೇವನ ಎದುರಿಗೆ ಮಾತಾಡಲೂ ಅಶಕ್ತನಾದನು. ಅದರ ಕಾರಣವಿಷ್ಟೆಪ್ರಭುಶೃತ್ಯರ ಆತ್ಮೀಯತೆಯಲ್ಲಿ ಕರ್ಣದೇವನಿಗೆ ಒಂದು ಸ್ಥಾನವಿತ್ತು. ಮಾಧವ ನಾಯಕನು ಅದಕ್ಕೆ ದೂರವಾಗಿದ್ದನು.
{{gap}}ಜಗತ್ತಿನ ದೃಷ್ಟಿಯಿಂದ ಕರ್ಣದೇವ ಚತುರನಲ್ಲದಿದ್ದರೂ ಹೆಗ್ಗಡೆಯ ದುಃಖದ ಕಾರಣವನ್ನು ಸುಲಭವಾಗಿ ಅರ್ಥಮಾಡಿಕೊಂಡರು. ಸಹಾನುಭೂತಿಯಿಂದ ಹೆಗ್ಗಡೆಯ ಬೆನ್ನುತಟ್ಟಿ “ಅಳಬೇಡಿರಿ, ಹೆಗ್ಗಡೆಗಳೆ. ಅಣ್ಣನವರೆಲ್ಲಿದ್ದಾರೆ ತೋರಿಸಿರಿ,” ಎಂದು ಹೇಳಿ ಮಾಧವ ನಾಯಕನ ಕಡೆ ತಿರುಗಿ, “ನೀವೂ ಸಂಗಡ ಬನ್ನಿರಿ, ದಂಡ ನಾಯಕರೆ” ಎಂದನು.
{{gap}}ಹೆಗ್ಗಡೆ ಅವರಿಬ್ಬರನ್ನೂ ಸರ್ವಾಧಿಕಾರಿ ಚಾವಡಿಗೆ ಕರೆದುಕೊಂಡು ಹೋಗಿ<noinclude></noinclude>
p1i3nbxxuhfxrplvhe3m0wjotegikl4
ಪುಟ:ಕ್ರಾಂತಿ ಕಲ್ಯಾಣ.pdf/೩೭೭
104
86322
317656
252247
2026-05-06T13:43:04Z
Shreelatha.Halemane
7642
/* Validated */
317656
proofread-page
text/x-wiki
<noinclude><pagequality level="4" user="Shreelatha.Halemane" />{{rh|೩೬೪||ಕ್ರಾಂತಿ ಕಲ್ಯಾಣ}}</noinclude>
ಬತ್ತಿಗಳನ್ನು ಸರಿಪಡಿಸಲು ಅವಕಾಶವಿತ್ತು ಬಿಜ್ಜಳನು, “ನಿಮ್ಮ ಅವಸರದ ಕಾರ್ಯ ವಿಧಾನವನ್ನು ಸಭಾಸದರಿಗೆ ವಿವರಿಸಿರಿ, ಮಾಧವ ನಾಯಕರೆ,” ಎಂದನು.
{{gap}}ಮಾಧವ ನಾಯಕನು ಮುಂದುವರಿದು ಹೇಳಿದನು : “ಕಲ್ಯಾಣದ ಒಂದೊಂದು ಶೈವಮಠವೂ ಕ್ರಾಂತಿಯ ಕೇಂದ್ರ. ಮಠಪತಿಗಳು, ಕಾರ್ಯಕರ್ತರು, ಜಂಗಮ ಸನ್ಯಾಸಿಗಳು, ಗಣಾಚಾರದ ಭಕ್ತರು, ಇವರೆಲ್ಲ ನಗರದಲ್ಲಿ ಅಶಾಂತಿ ಹರಡಲು ಸಮಯ ಕಾಯುತ್ತಿದ್ದಾರೆ. ಮಹಮನೆಯು ಈ ಕ್ರಾಂತಿಯ ಮಹಾಕೇಂದ್ರ, ಅದರ ಅಂಗವಾದ ಅನುಭವಮಂಟಪದ ವಿಚಾರಗೋಷ್ಠಿ, ಧಾರ್ಮಿಕ ಪ್ರಸಾರದ ಸೋಗಿನಲ್ಲಿ ರಾಜನಿಗೆ ವಿರುದ್ಧವಾದ ಕ್ರಾಂತಿಭಾವನೆಗಳನ್ನು ಹರಡುತ್ತಿದೆ. ತಮ್ಮ ಮೇಲೆ ರಾಜನು ದಬ್ಬಾಳಿಕೆ ನಡೆಸುತ್ತಿರುವನೆಂಬ ಅಪವಾದವನ್ನು ಜನರಲ್ಲಿ ಹರಡಿ ಕಲ್ಯಾಣವನ್ನು ಬಿಟ್ಟು ಹೋಗಲು ಈಗ ಶರಣರು ಹವಣಿಸುತ್ತಿದ್ದಾರೆ. ಈ ವಲಸೆಗೆ ನಾವು ಅವಕಾಶ ಕೊಟ್ಟರೆ, ಕಲ್ಯಾಣದ ಕ್ರಾಂತಿ ರಾಜ್ಯದ ಎಲ್ಲ ಕಡೆ ಹರಡಲು ಅನುವು ಮಾಡಿಕೊಟ್ಟಂತಾಗುವುದು ಶರಣರು ಯಾರೇ ಆಗಲಿ, ನಗರವನ್ನು ಬಿಟ್ಟು ಹೋಗದಂತೆ ಆಜ್ಞೆ ಮಾಡಿ, ಚಳುವಳಿಯಲ್ಲಿ ಮುಖ್ಯಪಾತ್ರ ವಹಿಸಿದ ಎಲ್ಲ ಶೈವಮಠಗಳನ್ನೂ ನಾಶಮಾಡುವುದು ಈಗ ನಾವು ಅನುಸರಿಸಬೇಕಾದ ಅವಸರದ ಕಾರ್ಯಕ್ರಮ. ನೀವು ಅನುಮತಿ ಕೊಡುವುದಾದರೆ ನನ್ನ ಮಹಾಸೈನ್ಯ ಒಂದೇ ದಿನದಲ್ಲಿ ಈ ಕಾರ್ಯ ಮಾಡಬಲ್ಲುದು.
{{gap}}ಸಭೆಯಲ್ಲಿ ಗಂಭೀರ ಮೌನ. ಬಿಜ್ಜಳನ ಹೊರತಾಗಿ ಉಳಿದವರೆಲ್ಲ ಸ್ತಂಭಿತರಾಗಿ ಕುಳಿತಿದ್ದರು. ಮಾಧವ ನಾಯಕನ ದ್ವೇಷಸಾಧನೆ ಇಂತಹ ಉಗ್ರರೂಪ ತಾಳುವುದೆಂಬ ಕಲ್ಪನೆಯೂ ಅವರಿಗಿರಲಿಲ್ಲ. ಸಭಾಸದರ ಪ್ರತಿಕ್ರಿಯೆಗಾಗಿ ಕಾಯುತ್ತ ಬಿಜ್ಜಳನು ಸುಮ್ಮನೆ ಕುಳಿತನು. ಸೂಚನೆಯನ್ನು ಅನುಮೋದಿಸಿ ಕಾರ್ಯಾಚರಣೆಯ ಹೊಣೆಯನ್ನು ಮಾಧವ ನಾಯಕನಿಗೆ ವಹಿಸುವುದು ಅವನ ಉದ್ದೇಶವಾಗಿತ್ತು.
{{gap}}ಅಷ್ಟರಲ್ಲಿ ಕರ್ಣದೇವನು ಎದ್ದು ನಿಂತು, “ಈ ವಿಚಾರದಲ್ಲಿ ನಾನು ಮಾತಾಡಬೇಕಾಗಿದೆ,” ಎಂದನು.
{{gap}}ಸಭಾಸದರು ಕುತೂಹಲದಿಂದ ಕರ್ಣದೇವನ ಕಡೆ ತಿರುಗಿದರು. “ಸೂಚನೆಯ ಅನುಮೋದನೆಗೆ ಪ್ರಭುಗಳು ಇವನನ್ನೇಕೆ ಆರಿಸಿದರು?” “ಸೋದರನೆಂಬ ಅಭಿಮಾನದಿಂದಲೇ?” “ವಾಗ್ಮಿಯೂ ಚತುರನೂ ಆದ ನಾರಣಕ್ರಮಿತನೇಕೆ ಸುಮ್ಮನೆ ಕುಳಿತಿದ್ದಾನೆ ?” ಎಂದು ಅವರು ತಮ್ಮ ತಮ್ಮಲ್ಲಿ ಆಡಿಕೊಂಡರು. ಕರ್ಣದೇವನು ಚರ್ಚೆಯಲ್ಲಿ ಭಾಗವಹಿಸುವುದು ಬಿಜ್ಜಳನಿಗೂ ಇಷ್ಟವಿರಲಿಲ್ಲ. ರಾಜಕೀಯದಲ್ಲಿ ಚತುರನಲ್ಲವೆಂಬ ಕಾರಣದಿಂದ, “ಹೇಳುವುದನ್ನು ಬೇಗ ಮುಗಿಸು<noinclude></noinclude>
6z7wnf65jd177c0vdfmowqe9267t7l7
ಪುಟ:ಕ್ರಾಂತಿ ಕಲ್ಯಾಣ.pdf/೩೭೮
104
86323
317655
252246
2026-05-06T13:42:32Z
Shreelatha.Halemane
7642
/* Validated */
317655
proofread-page
text/x-wiki
<noinclude><pagequality level="4" user="Shreelatha.Halemane" />{{rh|ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ||೩೬೫}}</noinclude>
ಕರ್ಣದೇವ. ಸಭೆಯಲ್ಲಿ ಇನ್ನೂ ಅನೇಕ ಮುಖ್ಯ ವಿಷಯಗಳನ್ನು ಪರ್ಯಾಲೋಚಿಸಬೇಕಾಗಿದೆ,” ಎಂದು ಅವನು ಎಚ್ಚರಿಕೆ ಕೊಟ್ಟನು.
{{gap}}“ಮಾಧವನಾಯಕರ ಸಲಹೆಯನ್ನು ನಾನು ವಿರೋಧಿಸುತ್ತೇನೆ,” ಎಂದು ಕರ್ಣದೇವನು ಪ್ರಾರಂಭಿಸಿದಾಗ, ಆ ರಾತ್ರಿ ಎರಡನೆಯ ಸಾರಿ ಸಭಾಸದರು ಸ್ತಂಭಿತರಾದರು.
{{gap}}ಮಾಧವ ನಾಯಕನ ಅವಸರ ಕಾರ್ಯಾಚರಣೆಯ ಸಲಹೆ ಬಿಜ್ಜಳನ ಅನುಮೋದನೆ ಪಡೆದಿತ್ತೆಂದು ಸಭಾಸದರು ತಿಳಿದಿದ್ದರು. ಕೆಲವರ ದೃಷ್ಟಿಯಲ್ಲಿ ಅದು ಬಿಜ್ಜಳನ ಸಲಹೆಯೇ ಆಗಿತ್ತು. ಅಣ್ಣನ ಸಲಹೆಯನ್ನು ತಮ್ಮನು ವಿರೋಧಿಸುವುದೆ? ಎಂದಿನಿಂದ ಈ ಭ್ರಾತೃಕಲಹ ? ಎಂದು ಅವರು ವಿಸ್ಮಿತರಾದರು.
{{gap}}ಈ ಆಶ್ಚರ್ಯ ನಿಮಗ್ನ ವಿರುದ್ಧ ವಾತಾವರಣದಲ್ಲಿ ಕರ್ಣದೇವ, ಮಾತು ಮಾತಿಗೆ ಮುಗ್ಗರಿಸಿ, ಸರಿಯಾದ ಶಬ್ದಗಳನ್ನು ಹುಡುಕುತ್ತಾ, ಸೂಚನೆಯನ್ನು ವಿರೋಧಿಸಲು ಕಾರಣಗಳನ್ನು ವಿವರಿಸಿದನು :
{{gap}}“ಬಸವೇಶ ದಂಡನಾಯಕರು ಮಂತ್ರಿಮಂಡಲದಿಂದ ನಿವೃತ್ತರಾಗಿ ಆರು ವರ್ಷಗಳು ಕಳೆದಿದ್ದರೂ ಈಗಲೂ ಅವರು ರಾಜ್ಯದಲ್ಲಿ ಪ್ರಭಾವಶಾಲಿಯಾದ ವ್ಯಕ್ತಿ. ಅವರು ಆಚರಣೆಗೆ ತಂದ ಧಾರ್ಮಿಕ ಆರ್ಥಿಕ ಸುಧಾರಣೆಗಳನ್ನು ಚಾಲುಕ್ಯ ರಾಜ್ಯದ ಪ್ರಜೆಗಳು ಇಂದಿಗೂ ಕೃತಜ್ಞತೆಯಿಂದ ನೆನೆಸಿಕೊಳ್ಳುತ್ತಾರೆ. ಅಂತಹವರನ್ನು 'ಕಸಪಯಾದಿ ದುರ್ಮಂತ್ರಿಗಳು,' ಎಂದು ಕರೆದು ಮಾಧವ ನಾಯಕರು ಸಭೆಗೆ ಅಪಮಾನ ಮಾಡಿದ್ದಾರೆ. ಬಸವೇಶ ದಂಡನಾಯಕರು ಈಗ ಮಂತ್ರಿಮಂಡಲದಲ್ಲಿದ್ದಿದ್ದರೆ, ಈಗ ನಾವು ಎದುರಿಸಬೇಕಾಗಿರುವ ವಿಷಮ ಪರಿಸ್ಥಿತಿ ಉಂಟಾಗುತ್ತಲೇ ಇರಲಿಲ್ಲ.
{{gap}}“ಮಾಧವ ನಾಯಕರು ಹೇಳುವಂತೆ ಶರಣಧರ್ಮದ ಪ್ರಸಾರ ಈ ಪರಿಸ್ಥಿತಿಯ ಕಾರಣವಲ್ಲ. ನಮ್ಮ ಅವಿವೇಕದ ವರ್ತನೆಯಿಂದ ನಾವೇ ಈ ವಿಪತ್ತನ್ನು ತಂದುಕೊಂಡಿದ್ದೇವೆ. ಮಧುವರಸಾದಿಗಳ ವಿಚಾರಣೆಯಲ್ಲಿ ಧರ್ಮಶಾಸ್ತ್ರ ನಿಬಂಧನೆಗಳ ಅಪಚಾರವಾಗಿದೆಯೆಂಬ ಕೂಗು ಕಲ್ಯಾಣದ ನಾಗರಿಕರಲ್ಲಿ ಬೆಳೆಯುತ್ತಿದ್ದಾಗ ಆಪಾದಿತರಿಗೆ ಮರಣದಂಡನೆ ವಿಧಿಸುವ ಆಜ್ಞೆ ಪ್ರಕಟವಾಯಿತು. ಅಮಾನುಷ ಕ್ರೌರ್ಯ ಪ್ರದರ್ಶನದಿಂದ ಮಾಧವ ನಾಯಕರು ದಂಡಾಜ್ಞೆಯನ್ನು ಕಾರ್ಯಗತ ಮಾಡಿದರು. ಈ ಘಟನೆಗಳಿಂದ ಬೆದರಿದ ಶರಣರು ಕಲ್ಯಾಣವನ್ನೇ ಬಿಡಲು ಯೋಚಿಸಿದ್ದು ಸಹಜವಾಗಿದೆ. ಅವರನ್ನು ತಡೆಯುವುದರಿಂದ ಪರಿಸ್ಥಿತಿ ಇನ್ನಷ್ಟು ಕೆಡುವುದು. ಪ್ರಭುಗಳು ಅದಕ್ಕೆ ಅವಕಾಶ ಕೊಡಲಾಗದೆಂದು ಬೇಡುತ್ತೇನೆ.<noinclude></noinclude>
fe32nqm2lcl39yyf53id7v2jnsgnjls
ಪುಟ:ಕ್ರಾಂತಿ ಕಲ್ಯಾಣ.pdf/೩೭೯
104
86324
317654
252245
2026-05-06T13:41:55Z
Shreelatha.Halemane
7642
/* Validated */
317654
proofread-page
text/x-wiki
<noinclude><pagequality level="4" user="Shreelatha.Halemane" />{{rh|೩೬೬||ಕ್ರಾಂತಿ ಕಲ್ಯಾಣ}}</noinclude>
{{gap}}“ನಗರದ ಶೈವಮಠಗಳೆಲ್ಲವನ್ನು ನಾಶಮಾಡಬೇಕೆಂಬ ಮಾಧವ ನಾಯಕರ ಸಲಹೆ ನನಗೆ ಆಶ್ಚರ್ಯವನ್ನುಂಟುಮಾಡಿದೆ. ರಾಜ್ಯದಲ್ಲಿ ಎಲ್ಲ ಧರ್ಮಗಳನ್ನು ರಕ್ಷಿಸುವುದು ರಾಜನ ಕರ್ತವ್ಯವೆಂಬುದನ್ನು ಮರೆತು ನಾವು, ಮಾಧವನಾಯಕರ ಸಲಹೆಯಂತೆ ನಡೆದರೆ ಚಾಲುಕ್ಯರಾಜ್ಯದ ವಿನಾಶ ಸಮೀಪಿಸಿದಂತೆಯೇ ಎಂದು ತಿಳಿಯಬಹುದು. ಕಲ್ಯಾಣದ ಶೈವಮಠಗಳು ಚಾಲುಕ್ಯರಾಜ್ಯದಲ್ಲಿ ಅತ್ಯಂತ ಪ್ರಭಾವಶಾಲಿ ಸಂಸ್ಥೆಗಳೆಂದು ಹೆಸರಾಗಿವೆ. ದೇಶದ ಬಹುಸಂಖ್ಯಾತ ಪ್ರಜೆಗಳು, ಸಾಮಂತರು ಈ ಮಠಗಳ ಭಕ್ತರಾಗಿದ್ದಾರೆ. ಈ ಮಠಗಳನ್ನು ನಾಶಮಾಡುವುದರಿಂದ ಅವರೆಲ್ಲ ನಮ್ಮ ಶತೃಗಳಾಗುತ್ತಾರೆ. ಅಂತಃಕಲಹ ಪ್ರಾರಂಭವಾಗುತ್ತದೆ. ಶರಣಧರ್ಮದ ಮೇಲಿನ ವಿದ್ವೇಷದಿಂದ ಮಾಧವನಾಯಕರು ಈ ಅವಿವೇಕದ ಕಾರ್ಯಕ್ರಮವನ್ನು ಸೂಚಿಸಿದ್ದಾರೆ. ಸಭೆ ಅದನ್ನು ನಿರಾಕರಿಸಿ, ರಾಜ್ಯದಲ್ಲಿ ಸುಖ ಶಾಂತಿ ಸಮೃದ್ಧಿಗಳನ್ನು ಸ್ಥಾಪಿಸಲು ಸಹಾಯಕವಾದ ಶಾಂತಿಧರ್ಮಗಳ ಮಾರ್ಗವನ್ನು ಅನುಸರಿಸಬೇಕಾಗಿ ಬೇಡುತ್ತೇನೆ.”
{{gap}}ಕರ್ಣದೇವನ ವಾದದಲ್ಲಿ ನೈಪುಣ್ಯ ಚತುರೋಕ್ತಿಗಳಿಲ್ಲದಿದ್ದರೂ ಸರಳತೆ ಸದುದ್ದೇಶಗಳ ಪ್ರಾಸಾದಿಕ ಗುಣದಿಂದ ಅದು ಶ್ರೋತೃಗಳನ್ನು ತನ್ನ ಕಡೆಗೆ ತಿರುಗಿಸಿಕೊಂಡಿತು. ಸಭಾಸದರಲ್ಲಿ ಹೆಚ್ಚು ಮಂದಿ ಮನದಲ್ಲೇ ಅದನ್ನು ಮೆಚ್ಚಿಕೊಂಡರು. ಆದರೆ ಬಿಜ್ಜಳನನ್ನು ವಿರೋಧಿಸುವ ಧೈರ್ಯ ಸಾಹಸಗಳು ಅವರಲ್ಲಿ ಯಾರಿಗೂ ಇರಲಿಲ್ಲ. ಮಾಧವ ನಾಯಕನು ಉತ್ತರ ಕೊಡಲು ಎದ್ದು ನಿಂತಾಗ ಅವರು, ವಧಾಪೀಠಕ್ಕೆ ಕಟ್ಟಿದ ಬಲಿಪಶುಗಳಂತೆ ನಿಶ್ಚೇಷ್ಟವಾಗಿ ಸುಮ್ಮನಿದ್ದರು.
{{gap}}ಮಾಧವ ನಾಯಕನು ಹೇಳಿದನು : “ಎಲ್ಲ ವೃತ್ತಿಗಳಂತೆ ಪ್ರಭುತ್ವ ಅಧಿಕಾರಗಳೂ ಶಿಕ್ಷಣ ಅಭ್ಯಾಸಗಳಿಂದ ಕಲಿಯಬೇಕಾದ ಒಂದು ವಿಶಿಷ್ಟ ವೃತ್ತಿ, ಕಲಿತು ಮಾಡಿದ ಕೆಲಸ ಯಶಸ್ವಿಯಾಗಿ ಫಲ ಕೊಡುವುದು. ಬಸವೇಶ ದಂಡನಾಯಕರು ಧಾರ್ಮಿಕ ವಿಚಾರದಲ್ಲಿ ಅನುಭಾವಿಗಳೂ ಶ್ರೇಷ್ಠರೂ ಆಗಿರಬಹುದು. ಆದರೆ ಅವರು ತಮಗೆ ಪರಿಚಯವಿಲ್ಲದ ರಾಜಿಕಕ್ಷೇತ್ರಕ್ಕೆ ಪ್ರವೇಶಿಸಿ ಅನರ್ಥಕ್ಕೆ ಕಾರಣರಾದರು. ಅವರು ಮಹಾಮಂತ್ರಿಯಾಗಿ ಅನುಸರಿಸಿದ ಕಾರ್ಯವಿಧಾನದಿಂದ ಚಾಲುಕ್ಯರಾಜ್ಯದ ಪ್ರಜೆಗಳಲ್ಲಿ ರಾಜಕೀಯ ಧಾರ್ಮಿಕ ಜಾಗೃತಿ ಎಚ್ಚರಗೊಂಡಿತು. ನಾವು ಈಗ ಎದುರಿಸಬೇಕಾಗಿರುವ ವಿಷಮ ಪರಿಸ್ಥಿತಿಗೆ ಈ ಜಾಗೃತಿಯೇ ಮುಖ್ಯ ಕಾರಣ. ಪ್ರಭುತ್ವವು ಕ್ಷತ್ರಿಯನ ಜನ್ಮಸಿದ್ಧವಾದ ಅಧಿಕಾರ. ಬ್ರಹ್ಮ, ವೈಶ್ಯ, ಶೂದ್ರ ವರ್ಣಗಳವರು ಕ್ಷತ್ರಿಯನ ಅಧೀನರಾಗಿ ಅವನು ಹೇಳಿದಂತೆ ನಡೆದುಕೊಳ್ಳಬೇಕು. ಬಸವೇಶ ದಂಡನಾಥರು ಮಂತ್ರಿಯಾಗಿ ತಮ್ಮ ಆಡಳಿತ ನೀತಿಯಿಂದ ಈ ವರ್ಣ ವ್ಯವಸ್ಥೆಗೆ<noinclude></noinclude>
2clgg3p24dp37aytw18f0iy53gzqida
ಪುಟ:ಕ್ರಾಂತಿ ಕಲ್ಯಾಣ.pdf/೩೮೦
104
86325
317653
252244
2026-05-06T13:41:24Z
Shreelatha.Halemane
7642
/* Validated */
317653
proofread-page
text/x-wiki
<noinclude><pagequality level="4" user="Shreelatha.Halemane" />{{rh|ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ||೩೬೭}}</noinclude>
ಭಂಗ ತಂದರು. ವರ್ಣಭೇದವನ್ನು ನಿರಾಕರಿಸಿ ಸ್ತ್ರೀ ಶೂದ್ರ ಅಸ್ಪೃಶ್ಯರಿಗೂ ಸಮಾನಾಧಿಕಾರ ಕೊಟ್ಟರು. ಅದರಿಂದಾದ ವಿಷಫಲವನ್ನು ನಾವು ಉಣ್ಣಬೇಕಾಗಿದೆ. ಕರ್ಣದೇವರಸರು ಬಿಜ್ಜಳರಾಯರ ಸಹೋದರರೆಂಬ ಕಾರಣದಿಂದ ನಾನು ಅವರನ್ನು ಗೌರವಿಸುತ್ತೇನೆ. ಆದರೆ ಪ್ರಭುತ್ವ ರಾಜಕೀಯಗಳಲ್ಲಿ ಅವರು ಕೇವಲ ಶಿಶು, ಅಭ್ಯಾಸ ಅನುಭವಗಳಿಲ್ಲದ ಹಸುಗೂಸು. ತಮ್ಮ ಬುದ್ಧಿ ಪರಿಮಿತಿಯನ್ನು ತಿಳಿದುಕೊಳ್ಳಲಾರದೆ ಅವರು, ತಮಗೆ ತಿಳಿಯದ ರಾಜಿಕಕ್ಕೆ ಪ್ರವೇಶಿಸಿ ಅಪಹಾಸ್ಯಕ್ಕೆ ಗುರಿಯಾಗಿದ್ದು ವಿಷಾದಕರ. ಅವರು ನನ್ನ ಸಲಹೆಯ ವಿಚಾರದಲ್ಲಿ ಪ್ರಕಟಿಸಿದ ವಿರೋಧಕ್ಕೆ ಅವರ ಅವಿವೇಕ ಅನನುಭವಗಳು ಕಾರಣವೆಂದು ಉಪೇಕ್ಷಿಸುತ್ತೇನೆ,”
{{gap}}“ಅವಿವೇಕ! ಅನನುಭವ! ವ್ಯಕ್ತಿನಿಂದೆ! ಅಧ್ಯಕ್ಷರು ಇದನ್ನು ಅನುಮೋದಿಸುವರೆ?” ಎಂದು ಕರ್ಣದೇವನು ಚಡಪಡಿಸಿ ಎದ್ದು ನಿಂತನು.
{{gap}}ಬಿಜ್ಜಳನು ಮಾತಾಡಲಿಲ್ಲ. ಕರ್ಣದೇವನಿಗೆ ಕುಳಿತುಕೊಳ್ಳುವಂತೆ ಸನ್ನೆ ಮಾಡಿ, ಮಾಧವ ನಾಯಕನ ಮೇಲೆ ಅನುಮೋದನೆಯ ದೃಷ್ಟಿ ಬೀರಿದನು.
{{gap}}ಮಾಧವ ನಾಯಕನು ಮುಂದುವರಿದು ಹೇಳಿದನು: “ಕರ್ಣದೇವರಸರು ರಸಿಕರು, ವಿಲಾಸಪ್ರಿಯರು. ರಾಜಗೃಹದ ಗಣಿಕಾವಾಸ ಅವರಿಗೆ ಅನುಕೂಲವಾದ ಕಾರ್ಯಕ್ಷೇತ್ರ, ಆ ತಾವರೆ ಕೊಳದಲ್ಲಿ ಗಜರಾಜನಂತ ವಿಹರಿಸಲಿ ಅವರು. ನನ್ನ ಅಡ್ಡಿಯಿಲ್ಲ. ದಯಮಾಡಿ ಅವರು ರಾಜಿಕದಿಂದ ವಿರಮಿಸಿದರೆ ನಾವು ಉಳಿದುಕೊಳ್ಳುತ್ತೇವೆ.”
{{gap}}ಕರ್ಣದೇವನ ಕಣ್ಣುಗಳು ಕಿಡಿಯುಗುಳಿದವು. ಕ್ರೋಧಾವೇಶದಿಂದ ಸಿಡಿದೆದ್ದು ಅವನು, "ಸಾಮಂತ ಸಭೆಯನ್ನು ಕೊಂಡೆಯರ ಪಡಸಾಲೆಯಾಗಿ ಮಾಡುವುದು ನಿಮ್ಮಿಚ್ಛೆಯಾದರೆ ನನಗೆ ಹೋಗಲು ಅನುಮತಿ ಕೊಡಿರಿ. ಒಂದು ಕ್ಷಣವೂ ನಾನಿಲ್ಲಿರುವುದಿಲ್ಲ,” ಎಂದು ಸಭೆಯಿಂದ ಹೊರಗೆ ಹೋದನು. ಅವನನ್ನು ಯಾರೂ ತಡೆಯಲಿಲ್ಲ. ಸಮಾಧಾನ ಪಡಿಸಲು ಪ್ರಯತ್ನಮಾಡಲಿಲ್ಲ.
{{gap}}ಸಭೆಯಲ್ಲಿ ಸ್ತಬ್ಧಮೌನ. ಸಭಾಂಗಣದ ಬಾಗಿಲು ಮೊಗಶಾಲೆಗಳಲ್ಲಿ ಕಾದು ನಿಂತಿದ್ದ ಪರಿವಾರದ ಭಟ ಪಸಾಯಿತ ದೀವಟಿಗೆಯವರಲ್ಲಿ ಸ್ವಲ್ಪ ಗೊಂದಲವಾಯಿತು. ಕರ್ಣದೇವನ ಪರಿವಾರದವರು ತಮ್ಮ ಪ್ರಭುವಿನ ಹಿಂದೆ ಹೋದರು. ಅವರಲ್ಲಿ ದೀವಟಿಗೆಯ ಭಟರಿಬ್ಬರು ಅಲ್ಲಿಯೇ ಉಳಿದು, ಬಿಜ್ಜಳನ ಪರಿವಾರದೊಡನೆ ಸೇರಿಕೊಂಡದ್ದನ್ನು ಯಾರೂ ಗಮನಿಸಲಿಲ್ಲ.
{{gap}}ಸಭೆ ಮುಂದುವರಿದು ಮಾಧವ ನಾಯಕನ ಸಲಹೆ ಅಂಗೀಕರಿಸಲ್ಪಟ್ಟಿತು. ನಾರಣಕ್ರಮಿತನು ಸಲಹೆಯ ಪ್ರಯೋಜನ ಸಮರ್ಪಕತೆಗಳನ್ನು ಕುರಿತು ದೀರ್ಘವಾಗಿ<noinclude></noinclude>
g8u4sc5vhdknche1nfhes3ty62wy4yi
ಪುಟ:ಕ್ರಾಂತಿ ಕಲ್ಯಾಣ.pdf/೩೮೧
104
86326
317652
252243
2026-05-06T13:35:58Z
Shreelatha.Halemane
7642
/* Validated */
317652
proofread-page
text/x-wiki
<noinclude><pagequality level="4" user="Shreelatha.Halemane" />{{rh|೩೬೮||ಕ್ರಾಂತಿ ಕಲ್ಯಾಣ}}</noinclude>
ಮಾತಾಡಿದನು. ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವ ಹೊಣೆ ಮಾಧವ ನಾಯಕನಿಗೆ ವಹಿಸಲ್ಪಟ್ಟಿತು.
{{gap}}ಸಭೆ ಮುಗಿದು ಬಿಜ್ಜಳನು ಅಂದಣವೇರಿ ಕಲಚೂರ್ಯ ಅರಮನೆಗೆ ಹೊರಟಾಗ ಅವನ ಸುತ್ತ ಇದ್ದ ವಿಪುಲ ಪರಿವಾರದಲ್ಲಿ ಇಬ್ಬರು ಹೊಸ ದೀವಟಿಗೆಯವರಿದ್ದುದನ್ನು ತಿಳಿಯುವ ಅವಕಾಶವಾಗಲಿ, ನಿಪುಣತೆಯಾಗಲಿ, ಹೆಗ್ಗಡೆ ಕಾರ್ಯಕರ್ತರಿಗೆ ಉಳಿದಿರಲಿಲ್ಲ.
{{gap}}ಬಿಜ್ಜಳ ಕರ್ಣದೇವರ ನಡುವೆ ಆ ರಾತ್ರಿ ಪ್ರಕಟ ಸಭೆಯಲ್ಲಿ ನಡೆದ ಘರ್ಷಣೆ ಅವರಿಬ್ಬರ ಪರಿವಾರದ ಹೆಗ್ಗಡೆ ಕಾರ್ಯಕರ್ತರನ್ನು ತಲ್ಲಣಗೊಳಿಸಿತ್ತು.
{{***|3}
{{gap}}ಕಲಚೂರ್ಯ ಅರಮನೆಯನ್ನು ಸೇರಿದೊಡನೆಯೇ ಬಿಜ್ಜಳನು ಸರ್ವಾಧಿಕಾರಿ ಚಾವಡಿಯ ವಿಶ್ರಾಂತಿ ಗೃಹದಲ್ಲಿ ಕುಳಿತು ಕರಣಿಕ ಕಾರ್ಯಕರ್ತರಿಗೆ ಹೇಳಿ ಕಳುಹಿಸಿದನು. ಆರೋಗಣೆಗಾಗಿ ಅಂತಃಪುರಕ್ಕೆ ಹೋಗುವ ಮೊದಲು ಅವಸರದ ರಾಜಕಾರ್ಯವನ್ನು ಮುಗಿಸುವುದು ಅವನ ಉದ್ದೇಶವಾಗಿತ್ತು.
{{gap}}ಪ್ರಭುವಿನ ಆಗಮನಕ್ಕಾಗಿ ಕಾದಿದ್ದ ಕರಣಿಕ ಹೆಗ್ಗಡೆಗಳು ಕಾರ್ಯಕರ್ತರು ಓಡುತ್ತ ಅಲ್ಲಿಗೆ ಬಂದರು. ಸಾಮಂತ ಸಭೆಯಲ್ಲಿ ಅಂಗೀಕರಿಸಲ್ಪಟ್ಟ ನಿರ್ಣಯದ ಪ್ರತಿಯನ್ನು ಕರಣಿಕನಿಗೆ ಕೊಟ್ಟ ಬಿಜ್ಜಳನು, “ಇದರಂತೆ ನಿರೂಪಗಳನ್ನು ಕೂಡಲೇ ಸಿದ್ಧಗೊಳಿಸಿ ನನ್ನ ಹಸ್ತಾಕ್ಷರಕ್ಕಾಗಿ ತರತಕ್ಕದ್ದು,” ಎಂದು ಹೇಳಿದನು.
{{gap}}ಕರಣಿಕನು ಹೋದ ಮೇಲೆ ಬಿಜ್ಜಳನು ಕಾರ್ಯಕರ್ತನ ಕಡೆ ತಿರುಗಿ, “ಈ ರಾತ್ರಿಯೇ ಮಂಗಳವೇಡೆಗೆ ಹೊರಡಲು ಅವಸರದ ಭಟರಿಬ್ಬರು ಸಿದ್ಧವಾಗಿರಲಿ. ಇನ್ನೆರಡು ಘಳಿಗೆ ಬಿಟ್ಟು ಬಂದರೆ ಪತ್ರ ಕೊಡುತ್ತೇನೆ. ಅಲ್ಲಿಯವರೆಗೆ ಯಾರನ್ನೂ ಒಳಗೆ ಬಿಡದಂತೆ ಕಾವಲುಗಾರರಿಗೆ ಆಜ್ಞೆಮಾಡು,” ಎಂದು ಹೇಳಿಕಳುಹಿಸಿದನು.
{{gap}}ಪಾರ್ಶ್ವದಲ್ಲಿ ಪೀಠದ ಮೇಲೆ ಲೇಖನೋಪಕರಣಗಳು ಅಣಿಯಾಗಿದ್ದವು. ಬಿಜ್ಜಳನು ತನಗೆ ಬೇಕಾದ ಕಡತ ಓಲೆಕಂಠಗಳನ್ನು ತಗೆದುಕೊಂಡು ಕುಮಾರ ಸೋಮೇಶ್ವರನಿಗೆ ಪತ್ರ ಬರೆಯಲು ಕುಳಿತನು.
{{gap}}ಆರಂಭದ ಒಕ್ಕಣೆ ಮುಗಿದ ಮೇಲೆ ಮುಂದೇನು ಬರೆಯುವುದೆಂಬ ಯೋಚನೆಗೆ ಮೊದಲಾಯಿತು. ತಾನು ಮಂಗಳವೇಡೆಯಿಂದ ಕಲ್ಯಾಣಕ್ಕೆ ಬಂದ ಮೇಲಿನ ನಾಲ್ಕು ವಾರಗಳ ಅವಧಿಯಲ್ಲಿ ಎಷ್ಟೆಲ್ಲ ಪ್ರಾಮುಖ್ಯ ಘಟನೆಗಳು ನಡೆದವು ! ಧರ್ಮಾಧಿಕರಣದ ವಧಾಜ್ಞೆ, ಅಪರಾಧಿಗಳನ್ನು ಉಳಿಸಲು ನಡೆದ ಪ್ರಯತ್ನಗಳು, ಅಪರಾಧಿಗಳನ್ನು ಶೂಲಕ್ಕೇರಿಸಿದುದು, ವಲಸೆ ಹೋಗಲು ಶರಣರ<noinclude></noinclude>
jn28am6wyv88zghyn7ais441txunvsb
ಪುಟ:ಕ್ರಾಂತಿ ಕಲ್ಯಾಣ.pdf/೩೮೬
104
86330
317751
203622
2026-05-06T16:39:20Z
Shreelatha.Halemane
7642
/* Proofread */
317751
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ|right=೩೭೩}}
{{gap}}“ನನ್ನ ಆರಾಧ್ಯ ದೇವತೆ ಶನೈಶ್ಚರನು ನನ್ನನ್ನು ಅನುಗ್ರಹಿಸಲು, ಗಗನದ - ತನ್ನ ಉನ್ನತಾಸನವನ್ನು ಬಿಟ್ಟು ಭೂಮಿಗಿಳಿದು ಬಂದನೆ ?” ಎಂದು ಅವನ ಹೃದಯ ತವಕಿಸಿತು.
{{gap}}ಬಿಜ್ಜಳನು ಸುಖಾಸನದಿಂದೆದ್ದು ಮಂತ್ರಮುಗ್ಧನಂತೆ ತೆರೆಯ ಬಳಿಗೆ ಹೋಗಿ ನಿಂತನು.
{{gap}}ಆ ದೇಹಹೀನ ರುಂಡ ಮಂದಹಾಸದಿಂದ ತನ್ನನ್ನು ಸ್ವಾಗತಿಸುತ್ತಿರುವಂತೆ ಅವನು ಭಾವಿಸಿದನು. ಅದರ ತುಟಿಗಳು ತೆರೆದವು. ಕಣ್ಣಗಳು ಚಲಿಸಿದವು. ಹಣೆ ಸುರಗಿತು. ಕಂದು ಬಣ್ಣದ ತಲೆಗೂದಲು ನಿಮಿರಿ ನಿಂತಿತು.
{{gap}}ಬಿಜ್ಜಳನು ಬೆಬ್ಬೆರಗಾಗಿ ನೋಡುತ್ತಿದ್ದಂತೆ ಹರಿತವಾದ ಯಾವುದೋ ಒಂದು ವಸ್ತು ತಟ್ಟನೆ ಹೊಟ್ಟೆಯನ್ನು ಇರಿದಂತಾಗಿ ಬೆಚ್ಚಿ ಚೀರಿಡಲು ಬಾಯ್ದೆರೆದನು.
{{gap}}ಬಾಯಿಂದ ಶಬ್ದ ಹೊರಗೆ ಬರುವಷ್ಟರಲ್ಲಿ, ಚಾವಡಿಯ ಇನ್ನೊಂದು ಕಡೆಯ ತರೆ ಸರಿಸಿಕೊಂಡು ಹಿಂದಿನಿಂದ ಬಿಜ್ಜಳನ ಬಳಿ ಬಂದ ಎರಡನೆಯ ದೀವಟಿಗನು, ಕೈಯಲ್ಲಿ ಹಿಡಿದಿದ್ದ ಜಮದಂಡಿಯನ್ನು ಬಲವಾಗಿ ಬೀಸಿದನು.
{{gap}}ಬಿಜ್ಜಳನ ರುಂಡ, ಮುಂಡದಿಂದ ಬೇರೆಯಾಗಿ ನೆಲಕ್ಕುರುಳಿತು.
{{gap}}ಬಳಿಕ ಆ ಇಬ್ಬರು ದೀವಟಿಗೆಯ ಭಟರು ಚಾವಡಿಯ ಹೊರಗಿನ ಮೊಗಶಾಲೆಗೆ ಹೋಗಿ ನಿಂತು, “ಹರಳಯ್ಯ ಮಧುವಯ್ಯಗಳನ್ನು ನೋಯಿಸಿದ ಪರವಾದಿ ಬಿಜ್ಜಳನನ್ನು ಕೊಂದ ವೀರ ಕುಮಾರರು ನಾವು, ಜಗದೇಕಮಲ್ಲ ಬೊಮ್ಮರಸರು !” ಎಂದು ಬೊಬ್ಬಿಟ್ಟರು.
{{gap}}ಅವರು ಧರಿಸಿದ್ದ ಸಮವಸ್ತ್ರಗಳನ್ನು ನೋಡಿ ಮೊಗಶಾಲೆಯಲ್ಲಿದ್ದ ಭಟರು ತಮ್ಮ ಕಡೆಯ ದೀವಟಿಗೆಯವರೆಂದು ಮೊದಲು ಉಪೇಕ್ಷಿಸಿದರು. ಅವರು ಕೈಯಲ್ಲಿ ಹಿಡಿದಿದ್ದ ರಕ್ತಮಯ ಜಮದಂಡಿಗಳನ್ನು ಕಂಡಾಗ, ಅವರು ಬೊಬ್ಬಿಟ್ಟ ನುಡಿಗಳ ಅರ್ಥ ಸಿಡಿಲೆರಗಿದಂತೆ ಸ್ಪುಟವಾದಾಗ, ಭಟರು ಬೆಚ್ಚಿ ಎಚ್ಚೆತ್ತು ಅವರನ್ನು ಹಿಡಿಯಲು ಮುನ್ನುಗ್ಗಿದ್ದರು.
{{gap}}ಅಷ್ಟರಲ್ಲಿ ಆ ಕೊಲೆಗಡುಕ ದೀವಟಿಗರು ಜಮದಂಡಿಗಳನ್ನು ತಿರುಗಿಸುತ್ತ ಅರಮನೆಯ ಮಹಾದ್ವಾರದ ಕಡೆಗೆ ಓಡಿದರು.
{{gap}}ಮಾಧವ ನಾಯಕನು ಬಿಜ್ಜಳನ ನಿರೂಪವನ್ನು ಆತುರದಿಂದ ಎದುರು ನೋಡುತ್ತಿದ್ದರು. ಆರಿಸಿದ ಸೈನ್ಯ ದಳಗಳು ಸಜ್ಜಾಗಿ ನಿಂತಿದ್ದವು. ಅಂದು ಮಧ್ಯರಾತ್ರಿ ಎರಡನೆಯ ಪ್ರಹರ ಮುಗಿದ ಘಂಟೆ ಹೊಡೆಯುತ್ತಲೆ, ಕಲ್ಯಾಣದ ಶೈವಮಠಗಳನ್ನು<noinclude></noinclude>
kfmxjhvxeaukafy83eq63vb3x53tznn
ಪುಟ:ಕ್ರಾಂತಿ ಕಲ್ಯಾಣ.pdf/೩೮೭
104
86331
317762
203623
2026-05-06T16:45:51Z
Shreelatha.Halemane
7642
/* Proofread */
317762
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=೩೭೪|right=ಕ್ರಾಂತಿ ಕಲ್ಯಾಣ}}
ನಾಶಮಾಡುವ ಅವಸರದ ಕಾರ್ಯಾಚರಣೆ ಪ್ರಾರಂಭವಾಗಬೇಕಾಗಿತ್ತು.
{{gap}}ತನ್ನ ಹನ್ನೆರಡು ವರ್ಷಗಳ ಕನಸು ಇಂದು ನಿಜವಾಗುವುದೆಂದು ಮಾಧವ ನಾಯಕನ ಉತ್ಸಾಹ ತುತ್ತ ತುದಿಯನ್ನು ಮುಟ್ಟಿತ್ತು. ನಿರೂಪ ಸಿದ್ಧವಾದ ಕೂಡಲೇ ತನಗೆ ತಂದುಕೊಡಲು ಅವಸರದ ಭಟನೊಬ್ಬನನ್ನು ಅವನು ಕಲಚೂರ್ಯ ಅರಮನೆಗೆ ಕಳುಹಿಸಿದ್ದನು. ಇನ್ನೂ ಅವನೇಕೆ ಬರಲಿಲ್ಲ ಎಂದು ಅವನು ತವಕಿಸುತ್ತ ನಿಮಿಷಗಳನ್ನೆಣಿಸಲು ಪ್ರಾರಂಭಿಸಿದನು.
{{gap}}ತುಸುಹೊತ್ತಿನ ಮೇಲೆ ಅವಸರದ ಭಟನು ಅಲ್ಲಿಗೆ ಬಂದನು. ಆದರೆ ಅವನು ತಂದದ್ದು ನಿರೂಪವನ್ನಲ್ಲ. ಬಿಜ್ಜಳನು ಮಡಿದ ಸುದ್ದಿಯನ್ನು.
{{gap}}“ಅರಮನೆಯಲ್ಲಿ ಭಾರೀಗೊಂದಲ. ಬಿಜ್ಜಳರಾಯರು ಮಡಿದರೆಂದು ಸುದ್ದಿ ಹರಡಿದೆ,” ಎಂದು ಅವನು ಹೇಳಿದನು.
ಕೂಡಲೆ ಮಾಧವ ನಾಯಕನು ಸಜ್ಜಾಗಿದ್ದ ಸೈನ್ಯದಳಗಳೊಡನೆ ಕಲಚೂರ್ಯ ಅರಮನೆಗೆ ಹೊರಟನು.
{{gap}}ಅರಮನೆಯ ಹೆಗ್ಗಡೆ ಮಹಾದ್ವಾರದಲ್ಲಿ ಮಾಧವ ನಾಯಕನಿಗೆ ಎದುರಾಗಿ, “ನಡೆಯಬಾರದ್ದು ನಡೆದು ಹೋಯಿತು, ದಂಡನಾಯಕರ ?” ಎಂದು ವಿಷಾದದಿಂದ ಹೇಳಿದನು.
{{gap}}“ಹಾಗಾದರೆ ಪ್ರಭುಗಳು ಮುಡುಪಿದರೆಂದು ಜನ ಹೇಳುತ್ತಿರುವುದು ನಿಜವೆ?”
{{gap}}"ಪ್ರಭುಗಳು ಕೊಲೆಯಾದರು.” ಹೆಗ್ಗಡೆ ಉತ್ತರ ಕೊಟ್ಟನು, ಗದ್ಗದ ಕಂಠದಿಂದ.
{{gap}}“ಕೊಲೆ !”
{{gap}}“ಅಹುದು ಕೊಲೆ. ದೀವಟಿಗರ ವೇಷಧರಿಸಿ ಅಪರಿಚಿತರಿಬ್ಬರು ಅರಮನೆಗೆ ಬಂದು ಪ್ರಭುಗಳನ್ನು ಕೊಲೆ ಮಾಡಿದರು.”
{{gap}}“ಕೊಲೆಗಡುಕರನ್ನು ಹಿಡಿದಿರಾ?”
{{gap}}“ಅವರು ಮಹಾದ್ವಾರದ ಬಳಿ ಬಂದಾಗ ಭಟರು ಸುತ್ತುಗಟ್ಟಿದ್ದರು. ಅವರಲ್ಲೊಬ್ಬನು ತಪ್ಪಿಸಿಕೊಂಡನು. ಇನ್ನೊಬ್ಬನು ಸತ್ತನು. ಭಟರಿಬ್ಬರು ಮಡಿದರು. ನಾಲ್ಕು ಮಂದಿಗೆ ಗಾಯಗಳಾಗಿವೆ,” -ಎಂದು ಹೆಗ್ಗಡೆ ಮಹಾದ್ವಾರದ ಒಳಾಂಗಣದ ಬಯಲಲ್ಲಿ ಬಿದ್ದಿದ್ದ ದೇಹಗಳನ್ನು ತೋರಿಸಿದನು. ಸಮೀಪದಲ್ಲಿ ಭಟರಿಬ್ಬರು ಕಾವಲಿದ್ದರು.
{{gap}}“ಈಗ ಪ್ರಭುಗಳ ಮೃತದೇಹವೆಲ್ಲಿದೆ? ನಾನದನ್ನು ನೋಡಬಹುದೆ?”ಮಾಧವ ನಾಯಕನು ಹೆಗ್ಗಡೆಯನ್ನು ಕೇಳಿದನು.<noinclude></noinclude>
jlb0nv5kzx4s69teokg89matw1tbjw3
ಪುಟ:ಕ್ರಾಂತಿ ಕಲ್ಯಾಣ.pdf/೩೮೯
104
86332
317826
203624
2026-05-07T06:37:32Z
Shreelatha.Halemane
7642
/* Proofread */
317826
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=೩೭೬|right=ಕ್ರಾಂತಿ ಕಲ್ಯಾಣ}}
ಮುಚ್ಚಿದ್ದ ಬಾಗಿಲನ್ನು ತೆರೆಸಿದನು. ಅಲ್ಲಿ ಅವರು ಕಂಡ ದೃಶ್ಯ ರೌದ್ರ ಬೀಭತ್ಸಗಳ ವ್ಯಂಗ್ಯ ನಿರೂಪಣದಂತಿತ್ತು. ಕೊನೆಗಾಲದ ಒದ್ದಾಟದಲ್ಲಿ ಕೈಕಾಲುಗಳು ತಿರುವು ಮುರುವಾಗಿದ್ದ ಬಿಜ್ಜಳನ ದೇಹ ಒಂದು ಕಡೆ, ಅದರ ಹತ್ತಿರ ಇನಿಸು ದೂರದಲ್ಲಿ ಕಡಿಯಲ್ಪಟ್ಟಿದ್ದ ತಲೆ ಇನ್ನೊಂದು ಕಡೆ, ಬಿದ್ದಿದ್ದವು. ಕಡಿದ ಕೊರಳ, ಇರಿದ ಹೊಟ್ಟೆಯ ಗಾಯಗಳಿಂದ ರಕ್ತ ಹರಿದು ಹೆಪ್ಪು ಕಟ್ಟಿತ್ತು.
{{gap}}ಹೆಗ್ಗಡೆಗೆ ಧೈರ್ಯ ಹೇಳಿದ ಕರ್ಣದೇವ, ಈ ಘೋರ ದೃಶ್ಯವನ್ನು ಕಂಡಾಗ, “ಅಣ್ಣಾ ! ಅಣ್ಣಾ!” ಎಂದು ಚೀರಿದನು. ಕೆಳಗೆ ಬಿದ್ದಿದ್ದ ತಲೆಯನ್ನೆತ್ತಿ ಹಿಡಿದು, “ಎಂಥ ಘೋರ ಮೃತ್ಯು ನಿನಗಾಗಿ ಕಾದಿತ್ತು !” ಎಂದು ಕೊರಗಿ ನುಡಿದನು.
{{gap}}ಅಷ್ಟರಲ್ಲಿ ಹೆಗ್ಗಡೆ ಅಂತಃಗೃಹದಿಂದ ಪ್ರಶಸ್ತವಾದ ಮಂಚವೊಂದನ್ನು ತರಿಸಿ ಚಾವಡಿಯಲ್ಲಿ ಹಾಕಿಸಿ, ಇಬ್ಬರು ಭಟರ ಸಹಾಯದಿಂದ ಬಿಜ್ಜಳನ ದೇಹವನ್ನು ಅದರ ಮೇಲಿಟ್ಟನು. ಕರ್ಣದೇವ ಕೈಯ್ಯಲ್ಲಿದ್ದ ರುಂಡವನ್ನು ಮುಂಡಕ್ಕೆ ಸೇರಿಸಿ ಕಾಲುಗಳ ಮೇಲೆ ತಲೆಯಿಟ್ಟು ಅಳುವುದಕ್ಕೆ ಪ್ರಾರಂಭಿಸಿದನು.
{{gap}}ಅಣ್ಣನ ಅಕಾಲ ಮರಣಕ್ಕಾಗಿ ಅಳುತ್ತಿದ್ದ ತಮ್ಮನನ್ನು ಸಮಾಧಾನಪಡಿಸುವ ಸಾಂತ್ವನದ ಮಾತುಗಳನ್ನಾಡುವ ಅವಕಾಶವಾಗಲಿ, ಅನುಕಂಪವಾಗಲಿ, ಆಗ ಅಲ್ಲಿದ್ದ ಹಿರಿಯ ಅಧಿಕಾರಿಗಳಾದ ಹೆಗ್ಗಡೆ ದಂಡನಾಯಕರಿಗಿರಲಿಲ್ಲ. ಚಾವಡಿಯ ನೆಲದ ಮೇಲಿನ ರಕ್ತದ ಕಲೆಗಳನ್ನು ತೊಳೆಸುವುದರಲ್ಲಿ ಹೆಗ್ಗಡೆ ಕರ್ಣದೇವನನ್ನು ಮರೆತನು. ತನ್ನೊಡನೆ ಬಂದಿದ್ದ ಸೈನ್ಯದಳಗಳ ನಿಯಂತ್ರಣದ ಚಿಂತೆಯಲ್ಲಿ ಮಾಧವ ನಾಯಕನು ಹೊರಗೆ ಹೋದನು. ಅವನು ಮಹಾದ್ವಾರದ ಬಳಿ ಬಂದಾಗ ಅರಮನೆಯ ಕಾವಲು ಭಟರಿಗೂ, ಸೈನ್ಯದಳಗಳ ನಾಯಕರಿಗೂ ವಾಗ್ಯುದ್ಧ ಆರಂಭವಾಗಿತ್ತು. ಕಾವಲು ಭಟರು ಸೈನ್ಯದಳಗಳನ್ನು ಒಳಗೆ ಬಿಡಲು ನಿರಾಕರಿಸಿದ್ದರು. ಸೈನ್ಯದಳದವರು ನುಗ್ಗಿ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದರು.
{{gap}}ಮಾಧವ ನಾಯಕನು ತನ್ನ ಕಡೆಯವರನ್ನು ಜಂಕಿಸಿ, “ತಾನು ಒಳಗೆ ಹೋಗಿ ಬರುವಷ್ಟರಲ್ಲಿ ಇಷ್ಟೆಲ್ಲ ಗೊಂದಲ ಮಾಡುವುದೆ? ಬಿಜ್ಜಳರಾಯರ ಅವಸಾನದಿಂದ ಅರಮನೆ ಈಗ ಸಾವಿನ ಮನೆಯಾಗಿದೆ. ಅಲ್ಲಿಗೆ ನಿಮ್ಮ ಪ್ರವೇಶವನ್ನು ನಿರಾಕರಿಸಿ ಕಾವಲು ಭಟರು ಸೂಕ್ತವನ್ನೇ ಮಾಡಿದರು. ನೀವು ಮುಂಜಾವಿನವರೆಗೆ ಅರಮನೆಯ ಸುತ್ತ ಕಾವಲಿರತಕ್ಕದ್ದು", ಎಂದು ಆಜ್ಞೆ ಮಾಡಿದನು.
{{gap}}ದಳದ ನಾಯಕನನ್ನು ಕರೆದು ರಹಸ್ಯವಾಗಿ, “ನನ್ನ ಅನುಮತಿ ಪತ್ರವಿಲ್ಲದೆ ಅರಮನೆಗೆ ಯಾರನ್ನೂ ಬಿಡಲಾಗದು. ಸಾವಿನ ಸುದ್ದಿ ನಗರದಲ್ಲಿ ಹರಡಿದರೆ<noinclude></noinclude>
s9irawexe12dwp1e1akd8z4z0mfa3c8
ಪುಟ:ಕ್ರಾಂತಿ ಕಲ್ಯಾಣ.pdf/೩೯೦
104
86333
317827
203625
2026-05-07T06:39:45Z
Shreelatha.Halemane
7642
/* Proofread */
317827
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ|right=೩೭೭}}
ಗಲಭೆಯಾಗಬಹುದು. ಶಾಂತಿರಕ್ಷಣೆಗೆ ಅಗತ್ಯವಾದ ಸೈನ್ಯದಳಗಳು ಸಿದ್ದವಾಗಿರುವಂತೆ ಕಾರ್ಯಕರ್ತನಿಗೆ ಸುದ್ದಿ ಕಳುಹಿಸತಕ್ಕದ್ದು,” ಎಂದು ಹೇಳಿದನು.
{{gap}}ನಗರ ಅರಮನೆಗಳ ಸುರಕ್ಷತೆಗೆ ಅಗತ್ಯವಾದ ಈ ನಿಯಂತ್ರಣ ಕಾರ್ಯವನ್ನು ಮುಗಿಸಿದ ಮೇಲೆ ಮಾಧವ ನಾಯಕನು ತನ್ನ ಆಪ್ತ ಕಾರ್ಯದರ್ಶಿಯನ್ನು ಕರೆದು, "ಈ ರಾತ್ರಿಯೇ ಮಂಗಳವೇಡೆಗೆ ಅವಸರದ ಓಲೆ ಕಳುಹಿಸಬೇಕಾಗಿದೆ,” ಎಂದನು.
{{gap}}ಕಾರ್ಯದರ್ಶಿ ಹೇಳಿದನು : “ಶಿಬಿರದಲ್ಲಿನ ಅವಸರದ ಭಟರಿಗೆ ಸಿದ್ಧವಾಗಿರುವಂತೆ ಹೇಳಿದ್ದೇನೆ. ಅವರಲ್ಲೊಬ್ಬನನ್ನು ಕಳುಹಿಸಬಹುದು.”
{{gap}}ಹಾಗಾದರೆ ಮಂಗಳವೇಡೆಯ ಮಂಡಲೇಶ್ವರ ಕುಮಾರ ಸೋಮೇಶ್ವರ ದೇವರಿಗೆ ಕಳುಹಿಸಲು ಇಂದಿನ ಘಟನೆಗಳ ಸಂಕ್ಷಿಪ್ತ ವರದಿಯೊಂದನ್ನು ರಚಿಸಬೇಕಾಗುವುದು.”
{{gap}}“ಆಜ್ಞೆ ಬಿಜ್ಜಳರಾಯರ ಮರಣದ ಸುದ್ದಿ.....”
{{gap}}“ಕೊಲೆಯ ವಿವರಗಳನ್ನು ತಿಳಿಸುವ ಅಗತ್ಯವಿಲ್ಲ. ಬಿಜ್ಜಳರಾಯರು ಚಾವಡಿಯಲ್ಲಿದ್ದಾಗ ಅಪರಿಚಿತರಿಬ್ಬರು ಒಳಗೆ ಬಂದು ಅವರನ್ನು ಇರಿದು ಕೊಂದರು ಎಂದು ಬರೆದರೆ ಸಾಕು.”
{{gap}}“ಹಾಗೆಯೇ ಮಾಡುತ್ತೇನೆ.”
{{gap}}“ಮತ್ತು ಸೋಮೇಶ್ವರ ದೇವರಿಗೆ ನಾನು ಬರೆದಂತೆ ಒಂದು ಪತ್ರ - ಬರೆಯಬೇಕು. ವಿಷಯ ಬಹಳ ರಹಸ್ಯವಾದದ್ದು.”
{{gap}}“ವಿಷಯವೇನೆಂಬುದನ್ನು ತಿಳಿಸಿದರೆ ಪತ್ರ ಬರೆಯುತ್ತೇನೆ.”
{{gap}}“ಬಿಜ್ಜಳರಾಯರು ಹತರಾದಾಗ ನಿಮಗೆ ಪತ್ರ ಬರೆಯುತ್ತಿದ್ದರು. ಅರ್ಧ ಮುಗಿದ ಆ ಪತ್ರ ನನ್ನ ಹತ್ತಿರ ಇದೆ. ನೀವು ಕಲ್ಯಾಣಕ್ಕೆ ಬಂದಾಗ ಕೊಡುತ್ತೇನೆ. ತಮ್ಮ ಅನಂತರ ಚಾಲುಕ್ಯರಾಜ್ಯದ ಸರ್ವಾಧಿಕಾರವನ್ನು ನಿಮಗೆ ಕೊಡುವುದು ಬಿಜ್ಜಳ ರಾಯರ ಉದ್ದೇಶವಾಗಿತ್ತು. ಅವರು ಅದನ್ನು ನನಗೆ ತಿಳಿಸಿದ್ದರು. ಅವರ ಪತ್ರದಲ್ಲಿ ಅದರ ಸ್ಪಷ್ಟ ಸೂಚನೆ ಇದೆ. ನಿಮ್ಮ ಪೂಜ್ಯ ಪಿತೃವರ್ಯರು ಉದ್ದೇಶಿಸಿದ್ದಂತೆ ಚಾಲುಕ್ಯರಾಜ್ಯದ ಸರ್ವಾಧಿಕಾರವನ್ನು ವಹಿಸಿಕೊಳ್ಳಲು ಅಗತ್ಯವಾದ ಸೈನ್ಯದೊಡನೆ ನೀವು ಕೂಡಲೇ ಕಲ್ಯಾಣಕ್ಕೆ ಪ್ರಯಾಣ ಮಾಡಬೇಕಾಗಿ ನಮ್ರತೆಯಿಂದ ಸೂಚಿಸುತ್ತೇನೆ' ಎಂದು ಕುಮಾರ ಸೋಮೇಶ್ವರ ದೇವರಿಗೆ ನಾನು ಬರೆದಂತೆ ಬರೆಯಬೇಕು.”
{{gap}}ಆಜ್ಞೆಯಂತೆ ವರದಿಯನ್ನೂ ಪತ್ರವನ್ನೂ ಕೂಡಲೇ ಸಿದ್ಧಗೊಳಿಸುವುದಾಗಿ ಕಾರ್ಯಕರ್ತ ಹೇಳಿದನು. ಅವನ ಸ್ವಾಮಿನಿಷ್ಠೆ ದಕ್ಷತೆಗಳಲ್ಲಿ ಮಾಧವ ನಾಯಕನಿಗೆ ಸಂಪೂರ್ಣ ವಿಶ್ವಾಸವಿದ್ದಿತು.<noinclude></noinclude>
b61avgkjhkhdvg7kuz7afjjg65g9ui1
ಪುಟ:ಕ್ರಾಂತಿ ಕಲ್ಯಾಣ.pdf/೩೯೧
104
86334
317828
203626
2026-05-07T06:42:07Z
Shreelatha.Halemane
7642
/* Proofread */
317828
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=೩೭೮|right=ಕ್ರಾಂತಿ ಕಲ್ಯಾಣ}}
{{gap}}ಕರ್ಣದೇವನೂ, ಮನೆಹೆಗ್ಗಡೆಯೂ ಬಿಜ್ಜಳನ ದೇಹವನ್ನು ಮಂಚದ ಮೇಲಿಡುತ್ತಿದ್ದಾಗ, ಮಾಧವ ನಾಯಕನ ದೃಷ್ಟಿ ಚಾವಡಿಯಲ್ಲಿನ ಲೇಖನೋಪಕರಣ, ಕಾಗದ ಪತ್ರಗಳ ಕಡೆ ತಿರುಗಿತು. ಅವುಗಳನ್ನು ಸರಿಪಡಿಸುವ ನೆವದಲ್ಲಿ ತಾನು ನಿರೀಕ್ಷಿಸುತ್ತಿದ್ದ ರಾಜನಿರೂಪವನ್ನು ಹುಡುಕಿದನು. ಅದು ಅಲ್ಲಿರಲಿಲ್ಲ. ಕುಮಾರ ಸೋಮೇಶ್ವರನಿಗೆ ಬರೆಯಲು ಪ್ರಾರಂಭಿಸಿ ಅರ್ಧ ಮುಗಿದಿದ್ದ ಪತ್ರ ದೊರಕಿತು. ಮುಂದೆ ಉಪಯುಕ್ತವಾಗುವುದೆಂದು ತಿಳಿದು ರಹಸ್ಯವಾಗಿ ತೆಗೆದಿಟ್ಟುಕೊಂಡನು. ಚಾವಡಿಯಿಂದ ಹೊರಗೆ ಬಂದು ಮಹಾದ್ವಾರದ ಬಳಿ ಪಂಜಿನ ಬೆಳಕಿನಲ್ಲಿ ಪತ್ರವನ್ನು ಓದಿದಾಗ ಅವನ ರಾಜಕೀಯ ಜಾಗ್ರತಿ ಎಚ್ಚೆತ್ತಿತು. ಕುಮಾರ ಸೋಮೇಶ್ವರನಿಗೆ ಆ ರಾತ್ರಿಯೇ ಅವಸರದ ಓಲೆ ಕಳುಹಿಸಲು ನಿರ್ಧರಿಸಿ ಅದರಂತೆ ಮಾಡಿದನು.
{{gap}}ಈ ರಾಜಕೀಯ ಶೋಧನೆ ಸಾಧನಗಳಲ್ಲಿ ಮಾಧವ ನಾಯಕನು ನಿರತನಾಗಿದ್ದಾಗ, ಕೊಲೆ ನಡೆದ ಸರ್ವಾಧಿಕಾರಿ ಚಾವಡಿಯಲ್ಲಿ ಅಷ್ಟೇ ಸ್ವಾರಸ್ಯವಾದ ಇನ್ನೊಂದು ಪ್ರಸಂಗ ನಡೆಯಿತು.
{{gap}}ಮಾಧವ ನಾಯಕನು ಹೊರಗೆಹೋದ ಕೊಂಚಹೊತ್ತಿನ ಮೇಲೆ ಕರ್ಣದೇವನು ಹೆಗ್ಗಡೆಯನ್ನು ಕರೆದು, “ಕೋಲೆ ನಡೆದದ್ದು ಹೇಗೆ ?” ಎಂದು ಕೇಳಿದನು.
{{gap}}ಭಟರಿಂದ ಕೇಳಿದುದನ್ನು ಹೆಗ್ಗಡೆ ವಿವರಿಸಿದನು.
{{gap}}“ಹಂತಕರು ಅರಮನೆಗೆ ಹೇಗೆ ಬಂದರೆಂಬುದು ತಿಳಿಯದೆ?”
{{gap}}ಪ್ರಭುಗಳು ಸಾಮಂತರ ಸಭೆಯಿಂದ ಹಿಂದಿರುಗಿದಾಗ ಪರಿವಾರದೊಡನೆ ಒಳಗೆ ಬಂದು ಚಾವಡಿಯಲ್ಲಿ ಅವಿತುಕೊಂಡಿರಬೇಕು. ಪರಿವಾರದ ದೀವಟಿಗರಂತೆಯೇ ಅವರು ಸಮವಸ್ತ್ರಗಳನ್ನು ಧರಿಸಿದ್ದರು.”
{{gap}}“ಸಾಮಂತ ಸಭೆಯಿಂದ ಹಿಂದಿರುಗಿದ ಅಣ್ಣನವರು ಆರೋಗಣೆಗಾಗಿ ಅಂತಃಪುರಕ್ಕೆ ಹೋಗದೆ ಚಾವಡಿಯಲ್ಲಿ ಕುಳಿತ ಕಾರಣ?”
{{gap}}“ಮಂಗಳವೇಡೆಯಿಂದ ಬಂದ ಮೇಲೆ ಪ್ರಭುಗಳು ಯಾವಾಗಲೂ ರಾಜಕೀಯದಲ್ಲಿ ಆಸಕ್ತರಾಗಿರುತ್ತಿದ್ದರು. ಸರ್ವಾಧಿಕಾರಿ ಚಾವಡಿಯಲ್ಲೇ ಹೆಚ್ಚು ಹೊತ್ತು ಕಳೆಯುತ್ತಿದ್ದರು.”
{{gap}}“ಇಂದು ರಾತ್ರಿ ಚಾವಡಿಯಲ್ಲಿ ಅಣ್ಣನವರೇನು ಮಾಡುತ್ತಿದ್ದರು?”
{{gap}}“ಸಮುಖದ ಕರಣಿಕನನ್ನು ಕೇಳಿದರೆ ತಿಳಿಯುತ್ತದೆ.”
{{gap}}ಕರ್ಣದೇವನ ಸಲಹೆಯಂತೆ ಹೆಗ್ಗಡೆ ಕರಣಿಕನನ್ನು ಕರೆಸಿದನು. ಬಿಜ್ಜಳನು<noinclude></noinclude>
cempsvkowhtg8kcavspp6vp7znpuq65
ಪುಟ:ಕ್ರಾಂತಿ ಕಲ್ಯಾಣ.pdf/೩೯೨
104
86335
317829
203627
2026-05-07T06:43:57Z
Shreelatha.Halemane
7642
/* Proofread */
317829
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ|right=೩೭೯}}
ಕೊಟ್ಟಿದ್ದ ನಿರ್ಣಯಗಳ ಪ್ರತಿಯನ್ನೂ, ಅದರಂತೆ ಸಿದ್ದವಾಗಿದ್ದ ನಿರೂಪಗಳನ್ನೂ ಕರಣಿಕನು ಕರ್ಣದೇವನಿಗೆ ತೋರಿಸಿದನು. ಅವುಗಳನ್ನು ಓದಿದಾಗ ಕರ್ಣದೇವನ ಹುಬ್ಬುಗಳು ಗಂಟಿಕ್ಕಿದವು, ಹಣೆ ಸುಕ್ಕುಗಟ್ಟಿತು. ತೀವ್ರ ಯಾತನೆಯಿಂದ ಎದೆ ಹಿಂಡಿದಂತಾಯಿತು.
{{gap}}ಕಲ್ಯಾಣದ ಎಲ್ಲ ಶೈವಮಠಗಳನ್ನು ಧ್ವಂಸಮಾಡಿ, ಪ್ರತಿಭಟಿಸುವ ಶರಣರನ್ನು ಕರುಣೆಯಿಲ್ಲದೆ ಕೊಲ್ಲಲು ಮಾಧವ ನಾಯಕನಿಗೆ ಅಧಿಕಾರ ಕೊಡುವ ನಿರೂಪಗಳಾಗಿದ್ದವು ಅವು. ಹಿಂದೆ ಎಂದೆಂದೂ ಚಾಲುಕ್ಯರಾಜ್ಯದಲ್ಲಿ ನಡೆಯದಿದ್ದ ಈ ಮಹಾನ್ ಘೋರ ಹತ್ಯೆ, ಅತ್ಯಾಚಾರ ಅಂದು ಮಧ್ಯರಾತ್ರಿ ಆರಂಭವಾಗಬೇಕಾಗಿತ್ತು. ಇನ್ನೊಂದು ಘಳಿಗೆ ತಡವಾಗಿದ್ದರೆ ನಿರೂಪಗಳಿಗೆ ಹಸ್ತಾಕ್ಷರ ಬಿದ್ದು ಮಾಧವ ನಾಯಕನ ಕೈ ಸೇರುತ್ತಿದ್ದವು. ಅಣ್ಣನಿಗೆ ನಿಜವಾಗಿ ಉನ್ಮಾದ. ಇಲ್ಲವೇ ಇಂತಹ ಆಜ್ಞೆಯನ್ನು ಚಿಂತಿಸುವುದಾಗಲಿ, ಕಾರ್ಯಗತಮಾಡುವುದಾಗಲಿ ಸಾಧ್ಯವೆ?
{{gap}}ಕರ್ಣದೇವ ಕರಣಿಕನ ಕಡೆ ತಿರುಗಿ, “ ಈ ನಿರ್ಣಯ ನಿರೂಪಗಳ ವಿಚಾರ ಸದ್ಯದಲ್ಲಿ ರಹಸ್ಯವಾಗಿರಬೇಕು. ಯಾರಾದರೂ ನಿನ್ನನ್ನು ಕೇಳಿದರೆ, 'ಪ್ರಭುಗಳು ಸಾಮಂತ ಸಭೆಯಿಂದ ಹಿಂದಿರುಗಿದ ಮೇಲೆ ನನಗೇನು ಹೇಳಲಿಲ್ಲ' ಎಂದು ಉತ್ತರ ಕೊಡಬೇಕು, ತಿಳಿಯಿತೇ, ತಲೆ ಹೋಗುವ ವಿಚಾರ. ಇವು ಸದ್ಯದಲ್ಲಿ ನನ್ನ ಹತ್ತಿರ ಇರಲಿ,” ಎಂದನು. -
{{gap}}“ಒಡೆಯರ ಆಜ್ಞೆ” ಎಂದು ಕರಣಿಕ ಒಪ್ಪಿಕೊಂಡನು.
{{gap}}ಅವನನ್ನು ಕಳುಹಿಸಿ ಕರ್ಣದೇವ, "ಹತನಾದ ಹಂತಕನ ದೇಹವೆಲ್ಲಿದೆ?” ಎಂದನು.
{{gap}}ಬಳಿಕ ಅವರು ಮಹಾದ್ವಾರದ ಒಳಗಿನ ಬಯಲಲ್ಲಿ ಮಡಿದ ಹಂತಕನ ಮತ್ತು ಕಾವಲುಭಟರ ದೇಹಗಳಿದ್ದ ಸ್ಥಳಕ್ಕೆ ಹೋದರು. ಪಂಜಿನ ಬೆಳಕಿನಲ್ಲಿ ಹಂತಕನ ಮುಖ ನೋಡಿದಾಗ ಕರ್ಣದೇವ ಬೆದರಿದನು. ದೊಡ್ಡಾಟದಲ್ಲಿ ಖಳನಾಯಕನ ಪಾತ್ರದಂತೆ ಮುಖಕ್ಕೆ ಬಳಿದಿದ್ದ ಹಸಿರು, ಕೆಂಪು ಬಣ್ಣಗಳ ಚಿತ್ರಣದಲ್ಲಿಯೂ ಹಂತಕನ ಗುರುತು ಹಿಡಿದನು ಕರ್ಣದೇವ. ಅವನು ತನ್ನ ಪಾನಗೋಷ್ಠಿಯ ಗೆಳೆಯ, ಪಟ್ಟಾಭಿಷಿಕ್ತ ಚಾಲುಕ್ಯ ಅರಸು, ಭಂಡರಾಜ ಜಗದೇಕಮಲ್ಲನೆಂಬುದನ್ನು ತಿಳಿದನು.
{{gap}}ರಾಜಗೃಹದಿಂದ ಅವನು ತಪ್ಪಿಸಿಕೊಂಡದ್ದು ಹೇಗೆ? ದೀವಟಿಗರ ಸಮವಸ್ತ್ರ ಅವನಿಗೆಲ್ಲಿ ಸಿಕ್ಕಿತು ? ಅವನ ಸಂಗಡಿದ್ದ ಇನ್ನೊಬ್ಬ ಹಂತಕನಾರು?<noinclude></noinclude>
nv2dezq3w8m9e7xp9r1bx23gmwq1eb0
ಪುಟ:ಕ್ರಾಂತಿ ಕಲ್ಯಾಣ.pdf/೩೯೩
104
86336
317830
203632
2026-05-07T06:45:46Z
Shreelatha.Halemane
7642
/* Proofread */
317830
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=೩೮೦|right=ಕ್ರಾಂತಿ ಕಲ್ಯಾಣ}}
{{gap}}ಕರ್ಣದೇವನ ಮನೋಭೂಮಿಯಲ್ಲಿ ಈ ಪ್ರಶ್ನೆಗಳು ಮಿಂಚಿನ ವೇಗದಿಂದ ಉದಯಿಸಿ ಅಸ್ತವಾದವು. ಮಡಿದ ಹಂತಕನು ಯಾರೆಂಬುದು ಪ್ರಕಟವಾದರೆ ಕೊಲೆಯ ಹೊಣೆ, ನಿರ್ಬಂಧಿತ ಅರಸನ ರಕ್ಷಕನಾಗಿದ್ದ ತನ್ನ ಮೇಲೆ ಬೀಳುವುದೆಂದು ಕರ್ಣದೇವ ತಿಳಿದನು.
{{gap}}ಗುರುತು ಹಚ್ಚಲು ಪ್ರಯತ್ನಿಸುವವನಂತೆ ಕೆಲವು ಕ್ಷಣಗಳು ನೆಟ್ಟ ದೃಷ್ಟಿಯಿಂದ ಹಂತಕನನ್ನು ನೋಡುತ್ತಿದ್ದು ಬಳಿಕ ಕರ್ಣದೇವ, “ನೀವು ಹೇಳಿದ್ದು ಸರಿ, ಹೆಗ್ಗಡೆಗಳೆ. ಯಾರೋ ಅಪರಿಚಿತ ಮನುಷ್ಯ, ನಗರದ ನಿವಾಸಿಯಲ್ಲವೆಂದು ಕಾಣುತ್ತದೆ,” ಎಂದನು.
{{gap}}ಅವರು ಪುನಃ ಚಾವಡಿಗೆ ಹಿಂದಿರುಗಿದಾಗ ಮಂಚದ ನಾಲ್ಕು ಕಡೆಗಳಲ್ಲಿ ದೀಪಗಳು ಬೆಳಗುತ್ತಿದ್ದವು. ಮೃತದೇಹದ ಮೇಲೆ ಹೂವುಗಳನ್ನು ಹರಡಿತ್ತು. ಅಂತಃಪುರದ ರಾಣಿಯರು, ಹೆಗ್ಗಡತಿಯರು, ದಾಸಿಯರು ಸುತ್ತ ನಿಂತಿದ್ದರು. ಅಳುವಿನ ದನಿ ಎಲ್ಲೆಡೆ ಕೇಳಿ ಬರುತ್ತಿತ್ತು.
{{gap}}“ನೀವು ಇಲ್ಲಿಯೇ ಇರುವುದು ಅಗತ್ಯ ಹೆಗ್ಗಡೆಗಳೆ. ಯಾರೂ ದೇಹವನ್ನು ಮುಟ್ಟದಂತೆ ಎಚ್ಚರದಿಂದ ನೋಡಿಕೊಳ್ಳಿರಿ. ನಾನು ಬಿಡಾರಕ್ಕೆ ಹೋಗಿ ಪುನಃ ಮುಂಜಾವಿಗೆ ಬರುತ್ತೇನೆ. ಅಂತ್ಯದರ್ಶನಕ್ಕಾಗಿ ಜಗದೇಕಮಲ್ಲರಸರನ್ನು ಸಂಗಡ ಕರೆದುಕೊಂಡು ಬರಬೇಕಾಗುವುದು,” ಎಂದು ಹೆಗ್ಗಡೆಗೆ ಹೇಳಿ ಕರ್ಣದೇವ ಮಹಾದ್ವಾರದ ಒಳಗಣ ಬಯಲಿಗೆ ಬಂದನು.
{{gap}}ತನ್ನೊಡನೆ ಬಂದಿದ್ದ ಬೋಯಿಗಳು, ರಕ್ಷಕ ಭಟರು, ಮೇನೆಯನ್ನು ಅಲ್ಲಿ ಬಿಟ್ಟು ಎಲ್ಲಿಯೋ ಹೋಗಿದ್ದರು. ಮೇನೆಯ ಹಿಂದೆ ನಾಲ್ಕಾರು ಮಾರು ದೂರದಲ್ಲಿ ಹತರಾದ ಹಂತಕ ಮತ್ತು ಕಾವಲು ಭಟರ ದೇಹಗಳು ಬಿದ್ದಿದ್ದವು. ಇಬ್ಬರು ಭಟರು ಅಲ್ಲಿ ಕಾವಲಿದ್ದರು.
{{gap}}ಕರ್ಣದೇವ ಭಟರನ್ನು ಕರೆದು, “ನನ್ನ ಬೋಯಿಗಳು ಭಟರು ಎಲ್ಲಿರುವರೋ ಹುಡುಕಿ ಕರೆದುಕೊಂಡು ಬನ್ನಿರಿ,” ಎಂದು ಹೇಳಿದನು.
{{gap}}“ನಾನು ಹೋಗಿ ಹುಡುಕುತ್ತೇನೆ, ಒಡೆಯರೆ. ನನ್ನ ಸಂಗಡಿಗ ಇಲ್ಲಿ ಕಾವಲಿರುತ್ತಾನೆ,” ಎಂದು ಭಟನು ಬಿನ್ನವಿಸಿಕೊಂಡನು.
{{gap}}“ಅವರು ಅರಮನೆಯ ಅಂಗಣದಲ್ಲಿರುವರೋ ಹೊರಗೆ ಹೋಗಿರುವರೋ ತಿಳಿಯದು. ನೀವು ಒಬ್ಬೊಬ್ಬರು ಒಂದೊಂದು ಕಡೆ ಹೋಗಿ ಹುಡುಕಿರಿ. ನಾನು ಇಲಿಯೇ ಇರುತ್ತೇನೆ. ಸತ್ತ ದೇಹಗಳು ಎದ್ದು ಓಡಿ ಹೋಗುವುದಿಲ್ಲ,” ಎಂದನು ಪುನಃ ಕರ್ಣದೇವ.<noinclude></noinclude>
p4y46zk6xke7prhis12x4r0ebx1mj88
ಪುಟ:ಕ್ರಾಂತಿ ಕಲ್ಯಾಣ.pdf/೪೨೯
104
86371
317660
252045
2026-05-06T13:58:16Z
Shreelatha.Halemane
7642
/* Validated */
317660
proofread-page
text/x-wiki
<noinclude><pagequality level="4" user="Shreelatha.Halemane" />{{rh|೪೧೬||ಕ್ರಾಂತಿ ಕಲ್ಯಾಣ}}</noinclude>ಆಡಳಿತ ನಡೆಸುತ್ತಿದ್ದವು. ಕಾಲಕ್ರಮದಲ್ಲಿ ಅವು ನಾಶವಾಗಿ ಪ್ರಜಾಪೀಡೆಗೆ ಅನುಕೂಲವಾದ ರಾಜಸತ್ತೆ ಪ್ರಚಾರಕ್ಕೆ ಬಂದಿತು.”
{{gap}}“ಗಣರಾಜ್ಯಗಳು ನಾಶವಾದದ್ದು ಹೇಗೆ?”
{{gap}}“ವರ್ಣವಿಭಜನೆಯ ಅವಿವೇಕ ವಿಧಾನ, ಅದಕ್ಕೆ ಕಾರಣವಾಯಿತು. ಬುದ್ದಿ ಜೀವಿಯಾದ ಬ್ರಾಹ್ಮಣನ ಅನಾಸಕ್ತಿ, ಶಸ್ತ್ರಜೀವಿಯಾದ ಕ್ಷತ್ರಿಯನ ಸ್ವಾರ್ಥ, ಕೃಷಿ ವಾಣಿಜ್ಯಗಳಿಂದ ಗಳಿಸಿದ ಧನವನ್ನು ಮೇಲಿನ ಎರಡು ವರ್ಣಗಳವರಿಗೆ ಸೂರೆಗೊಡುತ್ತಿದ್ದ ವೈಶ್ಯ ಶೂದ್ರರ ಅಸಹಾಯಕತೆ, ಇವುಗಳಿಂದ ಗಣರಾಜ್ಯಗಳ ವಿನಾಶ ತ್ವರಿತಗೊಂಡು, ಅದರ ಸ್ಥಾನದಲ್ಲಿ ರಾಜಸತ್ತೆ ಪ್ರತಿಷ್ಠಿತವಾಯಿತು. ಈ ಅನರ್ಥಕ್ಕೆ ಕಾರಣವಾದ ವರ್ಣವ್ಯವಸ್ಥೆಯನ್ನು ಮತ್ತು ಅದರ ದುಷ್ಫಲವಾದ ಜಾತಿಪದ್ಧತಿಯನ್ನು ಸಮಾಜದಿಂದ ತೊಡೆದು ಹಾಕುವುದು ಶರಣಧರ್ಮದ ಉದ್ದೇಶ. ಪರಿಮಿತ ವಲಯದಲ್ಲಿ ಶರಣರು ಸಾಧಿಸಿರುವ ಈ ಸುಧಾರಣೆ ದೇಶಾದ್ಯಂತ ಹರಡಿದಾಗ ಪ್ರಜೆಗಳ ಸುಖೀರಾಜ್ಯ ಪ್ರತಿಷ್ಠಿತವಾಗುವುದು.”
{{gap}}“ಆ ಕನಸಿನ ರಾಜ್ಯವನ್ನು ಕಾಣುವುದಕ್ಕಾಗಿಯೇ ಅಣ್ಣನವರು ದೂರದ ಕಾಶ್ಮೀರವನ್ನು ಬಿಟ್ಟು ಕಲ್ಯಾಣಕ್ಕೆ ಬಂದದ್ದು-ಅಲ್ಲವೆ?”
{{gap}}ನುಡಿಯಲ್ಲಿ ಕಟಕಿಯಿದ್ದರೂ ಕಟಕಿಯಾಡುವುದು ಕರ್ಣದೇವನ ಉದ್ದೇಶವಾಗಿರಲಿಲ್ಲ.
{{gap}}ಇದನ್ನು ಅರಿತ ಮಾರಯ್ಯನವರು ನಿರ್ಲಿಪ್ತರಾಗಿ ಉತ್ತರ ಕೊಟ್ಟರು : “ಆ ಹಿರಿಯಾಸೆಯಿಂದಲೇ ನಾನು ರಾಜ್ಯವನ್ನು ತ್ಯಜಿಸಿ ಕಲ್ಯಾಣಕ್ಕೆ ಬಂದೆ, ಕರ್ಣದೇವರಸರೆ. ಆದರೆ ನಾನು ಇಲ್ಲಿ ಕಂಡದ್ದು ಆ ಪ್ರಜಾಪೀಡಕ ರಾಜಸತ್ತೆಯ ಇನ್ನೊಂದು ಭಯಂಕರ ರೂಪವನ್ನು ! ರಾಜ್ಯಾಪಹಾರಿ ಮಂಡಲೇಶ್ವರನೊಬ್ಬನ ನಿರಂಕುಶ ದಬ್ಬಾಳಿಕೆ, ಸ್ವಾರ್ಥ, ಕ್ರೌರ್ಯಗಳಿಂದ ಪ್ರಚೋದನೆ ಪಡೆದು, ಧರ್ಮಾಂಧ ಸಮಾಜ ಆ ದಬ್ಬಾಳಿಕೆಗೆ ಕೊಟ್ಟ ಬೆಂಬಲ, ಅದರ ಫಲವಾಗಿ ಶರಣರ ಮೇಲೆ ನಡೆಸಿದ ಘೋರ ಅತ್ಯಾಚಾರ,-ಈ ಅಪ್ರೀತಕರ ವಸ್ತುವಿನ ದುರಂತ ನಾಟಕವೊಂದು ನನ್ನ ಕಣ್ಣುಗಳ ಮುಂದೆ ಅಭಿನೀತವಾಯಿತು. ಶರಣರು ಅಪೇಕ್ಷಿಸುವ ಸುಖೀರಾಜ್ಯ, ಇನ್ನೂ ದೂರ...ದೂರ....ಬಹು ದೂರದಲ್ಲಿದೆಯೆಂದು ತಿಳಿದೆ.”
{{gap}}ಮಾರಯ್ಯನವರ ನುಡಿಗಳ ಆವೇಗ ನಿರಾಶೆಯ ಭಾವಗಳು ಹೇಮಂತದ ಚಳಿಗಾಳಿಯಂತೆ ಅಲ್ಲಿದ್ದವರನ್ನು ತಲ್ಲಣಗೊಳಿಸಿದವು.
{{gap}}ಆಶಾಹತನಂತೆ ಕರ್ಣದೇವ ಕೊಂಚ ಹೊತ್ತು ತಲೆಬಾಗಿ ಸುಮ್ಮನೆ ಕುಳಿತಿದ್ದನು. ಅನಂತರ ಅವನು ದಢಾರನೆ ಎದ್ದು ಸಿದ್ದರಾಮೇಶ್ವರರಿಗೆ ವಂದಿಸಿ, “ನಿಮಗೆ<noinclude></noinclude>
0ae1glin4405d2bkgc9h1qhchb1fc0h
ಪುಟ:ಕ್ರಾಂತಿ ಕಲ್ಯಾಣ.pdf/೪೨೮
104
86372
317659
252044
2026-05-06T13:45:56Z
Shreelatha.Halemane
7642
/* Validated */
317659
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಹಾಪ್ರಸ್ಥಾನ||೪೧೫}}</noinclude>ಸಂಕೇತವಾಗಿ. ಪ್ರಜಾಪೀಡಕ ರಾಜಸತ್ತೆ ಅಧಿಕಾರದಲ್ಲಿರುವವರೆಗೆ ನಿರುಪದ್ರವಿಗಳೂ ನಿಸ್ಸಹಾಯಕರೂ ಆದ ಪ್ರಜೆಗಳಿಗೆ ಅರಣ್ಯವೇ ವಾಸಿ. ಅದಕ್ಕಾಗಿ ಶರಣರು ಸಹ್ಯಾದ್ರಿಯ ವನ್ಯಪ್ರದೇಶಗಳಲ್ಲಿ ಆಶ್ರಮಗಳನ್ನು ರಚಿಸಿಕೊಂಡು ಅರಣ್ಯವಾಸಿಗಳಾಗಿ ತಮ್ಮ ಮಣಿಹವನ್ನು ಪೂರೈಸಲು ನಿರ್ಧರಿಸಿದ್ದಾರೆ.”
{{gap}}ಮಾರಯ್ಯನವರ ನುಡಿಗಳೂ ಕರ್ಣದೇವನನ್ನು ಮತ್ತೆ ತೊಡಕಿನಲ್ಲಿ ಹಾಕಿದವು. “ನಿಮ್ಮ ಮಾತುಗಳು ನನಗೆ ಅರ್ಥವಾಗುತ್ತಿಲ್ಲ, ಅಣ್ಣನವರೆ,” ಎಂದನು ಅವನು.
{{gap}}ಮಾರಯ್ಯನವರು ಮತ್ತೆ ನುಡಿದರು : “ಶರಣರು ತಿಳಿದಿರುವಂತೆ ಮಾನವರಲ್ಲಿ ಎರಡು ವರ್ಗ-ಪ್ರಜಾಪೀಡಕರು, ಪ್ರಜಾಸಾಮಾನ್ಯರು ಎಂದು. ರಾಜನು, ಅವನ ಅಧೀನರಾಗಿ ರಾಜಾಜ್ಞೆಗಳನ್ನು ಕಾರ್ಯಗತ ಮಾಡುವ ಮಂತ್ರಿ ಸಾಮಂತರು, ಅಧಿಕಾರಿ ನಿಯುಕ್ತರು. ಕರಣಿಕ-ಸೈನಿಕ-ಭಟರು, ಇವರು ಮೊದಲ ವರ್ಗ. ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಪ್ರಜಾಪೀಡಕರು. ತಾವು ದುಡಿಯದೆ ಬೇರೆಯವರ ದುಡಿತದಲ್ಲಿ ಹೆಚ್ಚಿನ ಭಾಗವನ್ನು ವಂಚನೆಯಿಂದಲೋ ಬಲಾತ್ಕಾರದಿಂದಲೋ ಕಸಿದುಕೊಂಡು ಅದರಿಂದ ಜೀವಿಸುವುದರಿಂದ ಇವರನ್ನು ಪರೋಪಜೀವಿಗಳೆಂದೂ ಕರೆಯುತ್ತಾರೆ. ಕೃಷಿ, ಕಲೆ, ವಾಣಿಜ್ಯ ಮುಂತಾದ ಕಾಯಕಗಳಿಂದ ಜೀವಿಸುವವರೆಲ್ಲ ಎರಡನೆಯ ವರ್ಗ. ಪ್ರಜಾಸಾಮಾನ್ಯರು, ಪ್ರಜಾಪೀಡಕರೆಂದು ಕರೆಯಲ್ಪಡುವ ಮೊದಲನೆಯ ವರ್ಗದವರು, ಪ್ರಜಾಸಾಮಾನ್ಯರೆಂದು ಕರೆಯಲ್ಪಡುವ ಎರಡನೆಯ ವರ್ಗದವರನ್ನು ಸುಲಿದು ತಿನ್ನಲು ರಾಜಸತ್ತೆಯಲ್ಲಿ ಹೆಚ್ಚು ಅವಕಾಶ ಅನುಕೂಲಗಳಿರುವುದರಿಂದ ಶರಣರು ಅದನ್ನು ವಿರೋಧಿಸುತ್ತಾರೆ. ರಾಜಸತ್ತೆಯ ಪ್ರಭಾವಲಯದಿಂದ ಸಾಧ್ಯವಿದ್ದಷ್ಟು ದೂರದಲ್ಲಿರುವುದು ವಲಸೆಯ ಉದ್ದೇಶಗಳಲ್ಲೊಂದು.”
{{gap}}“ರಾಜನಿಲ್ಲದ ರಾಜ್ಯವುಂಟೆ ? ನೀವು ಹೇಳುವುದು ಪರಸ್ಪರ ವಿರೋಧವಾಗಿದೆ, ಅಣ್ಣನವರೆ.” -ಕರ್ಣದೇವ ಯೋಚಿಸಿ ಹೇಳಿದನು.
{{gap}}ಮಾರಯ್ಯನವರೆಂದರು : “ಪ್ರಜಾಪೀಡೆಗೆ ಎಲ್ಲಿ ಅವಕಾಶವಿರುವುದಿಲ್ಲವೋ, ಅಥವಾ ಗಣನೀಯವಲ್ಲದ ಅಲ್ಪ ಅವಕಾಶ ಮಾತ್ರ ಇರುವುದೋ ಅಂತಹ ರಾಜ್ಯ ಪದ್ದತಿ ಬೇಕು ಶರಣರಿಗೆ.”
{{gap}}“ಯಾವುದಿದೆ ಅಂತಹ ರಾಜ್ಯ ವಿಧಾನ?”
{{gap}}“ಭಾರತದ ಇತಿಹಾಸ ಪುರಾಣಗಳು ಅದಕ್ಕೆ ಉತ್ತರ ಕೊಡುತ್ತವೆ, ಕರ್ಣ ದೇವರಸರೆ. ನಮ್ಮ ದೇಶದಲ್ಲಿ ವೇದಗಳ ಕಾಲದಿಂದ ಗಣರಾಜ್ಯ ಪದ್ಧತಿ ಆಚರಣೆಯಲ್ಲಿತ್ತು. ಪ್ರಜೆಗಳನ್ನು ಪ್ರತಿನಿಧಿಸುವ ಸಮಿತಿ ಸಂಸ್ಥೆಗಳು ರಾಜ್ಯದ<noinclude></noinclude>
h6z59seey6m9hwj6ry4nigtk6t22zl5
ಪುಟ:ಕ್ರಾಂತಿ ಕಲ್ಯಾಣ.pdf/೪೩೦
104
86376
317661
252046
2026-05-06T13:59:03Z
Shreelatha.Halemane
7642
/* Validated */
317661
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಹಾಪ್ರಸ್ಥಾನ||೪೧೭}}</noinclude>
ತೊಂದರೆ ಕೊಟ್ಟಿದ್ದಕ್ಕಾಗಿ ಕ್ಷಮಿಸಿ, ಅಣ್ಣನವರೆ,” ಎಂದು ಹೇಳಿ ಉಳಿದ ಶರಣರ ಕಡೆ ತಿರುಗಿ, ನೀವು ಭಾವಿಸಿದಂತೆ ಕ್ಷತ್ರಿಯನು ಪ್ರಜಾಪೀಡಕನಾಗಬಹುದು. ಆದರೆ ಎಂದಿಗೂ ಹೇಡಿಯಾಗುವುದಿಲ್ಲ. ಶರಣರು ನನಗೆ ಸಹಾಯ ಮಾಡಲಿ, ಮಾಡದಿರಲಿ, ಮಾಧವ ನಾಯಕನ ಸಂಗಡ ನಾನು ಯುದ್ಧಹೂಡುತ್ತೇನೆ. ಗೆದ್ದು ಸರ್ವಾಧಿಕಾರಿಯಾಗುವುದು, ಇಲ್ಲವೇ ಯುದ್ಧದಲ್ಲಿ ಸತ್ತು ವೀರಸ್ವರ್ಗ ಪಡೆಯುವುದು, ಇದು ನನ್ನ ನಿರ್ಧಾರ,” ಎಂದು ನುಡಿದು ಅಲ್ಲಿಂದ ಹೊರಟನು.
{{gap}}ಅಂತೇವಾಸಿಯಂತೆ ವೇಷಧರಿಸಿ ಸಂಗಡ ಬಂದಿದ್ದ ಅಂಗರಕ್ಷಕ ಭಟನು, ಕರ್ಣದೇವ ಬಿಸುಟಿದ್ದ ಸನ್ಯಾಸಿಯ ಅಂಗಕಾರ್ಯಗಳನ್ನು ತೆಗೆದುಕೊಂಡು ಹೋಗಲು ಮರೆಯಲಿಲ್ಲ.
{{gap}}ಆ ದಿನ ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆ ಅವರು ಕಲ್ಯಾಣದ ಈಶಾನ್ಯ ಮಹಾದ್ವಾರಕ್ಕೆ ಬಂದರು. ಅಲ್ಲಿ ಕಾವಲಿದ್ದ ಭಟನಾಯಕನು, "ಅಯ್ಯನವರು ಆಗಲೇ ವಲಸೆಯಿಂದ ಹಿಂದಿರುಗಿದಂತಿದೆ,” ಎಂದು ನಗೆಯಾಡಿದನು.
{{gap}}ಯೋಗದಂಡವನ್ನು ಆಡಿಸುತ್ತ ಕರ್ಣದೇವ, “ನನ್ನ ಕಪಿನಿ ಚೀವರಗಳ ಗಂಟನ್ನು ಮಠದಲ್ಲಿ ಮರೆತಿದ್ದೆ, ಭಟನಾಯಕ. ಅಲ್ಲದೆ ರಾಜಗೃಹದ ಹೆಣ್ಣು ಬೆಕ್ಕು ಮರಿ ಹಾಕಿದೆಯಂತೆ. ನಾನು ವಲಸೆ ಹೋದರೆ ಅದನ್ನು ನೋಡಿಕೊಳ್ಳುವವರಾರು? ನಾಲ್ಕು ದಿನ ಬಿಟ್ಟು ಹೋದರಾಯಿತು. ಸಹ್ಯಾದ್ರಿಯ ವನಪ್ರದೇಶ ಅಷ್ಟರಲ್ಲಿ ಎಲ್ಲಿಯೂ ಓಡಿಹೋಗುವುದಿಲ್ಲ,” ಎಂದು ತಾನೂ ನಗೆಯಾಡಿದನು.
{{gap}}ಶರಣರ ಸಹಾಯಕ್ಕಾಗಿ ಕರ್ಣದೇವ ನಡೆಸಿದ ಸಂಧಾನ ಈ ರೀತಿ ಮುಗಿಯಿತು.
{{***|3}}
{{gap}}ಆಂಜನೇಯ ಹೊಳೆಯಾಚಿನ ಶರಣ ಶಿಬಿರವನ್ನು ಬಿಟ್ಟ ಮಾರನೆಯ ದಿನ ಅಪರಾಹ್ನ ಎರಡನೆಯ ಜಾಮದಲ್ಲಿ ಪಡಿಹಾರಿ ಅಪ್ಪಣ್ಣ, ಕೂಡಲ ಸಂಗಮವನ್ನು ಸೇರಿದನು. ನದೀ ತೀರದಲ್ಲಿ ಸಂಗಮೇಶ್ವರ ದೇಗುಲದೆದುರು ಮರ ಬಿದುರುಗಳಿಂದ ಹೊಸದಾಗಿ ಕಟ್ಟಿದ್ದ ನವಕಲ್ಯಾಣಮಂಟಪದಲ್ಲಿ ಪ್ರವಚನ ಸಭೆ ಪ್ರಾರಂಭವಾಗಿತ್ತು. ಮಂಟಪದ ನಡುವೆ ವೇದಿಕೆಯ ಮೇಲೆ ಕುಳಿತು ಬಸವಣ್ಣನವರು ಭಾಷಣ ಮಾಡುತ್ತಿದ್ದರು. ಸಮೀಪದ ಅಗ್ರಹಾರಗಳ ಶಿಷ್ಯರು, ಗುರುಕುಲದ ವಟು ಅಧ್ಯಾಪಕರು, ಗ್ರಾಮವಾಸಿಗಳು, ಸುತ್ತ ಮೌನವಾಗಿ ಕುಳಿತು ಕೇಳುತ್ತಿದ್ದರು. ಸಮಯಕ್ಕಾಗಿ ಕಾಯುತ್ತ ಸಭೆಯ ಅಂಚಿನಲ್ಲಿ ಅಪ್ಪಣ್ಣ ತಾನೂ ಕುಳಿತನು.
{{gap}}ಕಳೆದೆರಡು ವಾರಗಳಿಂದ ಬಸವಣ್ಣನವರು ಶರಣಧರ್ಮದ<noinclude></noinclude>
9vzuy2vhnp8eus9y47jfdk4i2jwiede
ಪುಟ:ಕ್ರಾಂತಿ ಕಲ್ಯಾಣ.pdf/೪೩೨
104
86379
317664
252048
2026-05-06T14:01:09Z
Shreelatha.Halemane
7642
/* Validated */
317664
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಹಾಪ್ರಸ್ಥಾನ||೪೧೯}}</noinclude>ಭಕ್ತ, ಮಾಹೇಶ್ವರ, ಪ್ರಸಾದಿ, ಈ ಮೂರು ಸ್ಥಳಗಳಲ್ಲಿ, ಸೀಮಿತವಾಗಿದ್ದ ಶರಣಧರ್ಮ, ಪ್ರಾಣಲಿಂಗಿ ಸ್ಥಳದಲ್ಲಿ ಆ ಸೀಮಾಬಂಧನಗಳಿಂದ ಮುಕ್ತವಾಗಿ ವಿಶ್ವದತ್ತ ನಡೆಯುತ್ತದೆ; ಜಾತಿ ಮತ ಕಾಲ ದೇಶಗಳ ಪರಿಮಿತಿಯನ್ನು ದಾಟಿ ತನ್ನ ಪ್ರಭಾವಲಯದಲ್ಲಿ ಮನುಕುಲವನ್ನೇ ಅಳವಡಿಸಿಕೊಳ್ಳುವ ವಿಶ್ವಧರ್ಮವಾಗುತ್ತದೆ.
{{gap}}" 'ಕಕ್ಷೆ, ಕರಸ್ಥಳ, ಕಂಠ' ಎಂದು ಪ್ರಾರಂಭವಾಗುವ ಈ ವಚನದಲ್ಲಿ ಪ್ರಭುದೇವರು ಪ್ರಾಣಲಿಂಗಿ ಸ್ಥಳವನ್ನು ನಿರೂಪಿಸುತ್ತ ಶರಣಧರ್ಮವನ್ನು ವಿಶ್ವಧರ್ಮವನ್ನಾಗಿ ಮಾರ್ಪಡಿಸುವ ಯುಕ್ತಿಯನ್ನು ಸೂಚಿಸಿದ್ದಾರೆ. ಅಂಗವೆಂದರೆ ಜೀವ, ಲಿಂಗವೆಂದರೆ ಬ್ರಹ್ಮ. ಈ ಜೀವಬ್ರಹ್ಮೈಕ್ಯವನ್ನು ಶರಣಧರ್ಮ ಲಿಂಗಾಂಗ ಸಾಮರಸ್ಯವೆಂದು ನಿರ್ದೇಶಿಸುತ್ತದೆ. ಕ್ರಮ ಕ್ರಮವಾಗಿ ಜೀವಬ್ರಹ್ಮೈಕ್ಯವನ್ನು ಸಾಧಿಸುವುದು ಷಟ್ಸ್ಥಳದ ಉದ್ದೇಶ. ಭಕ್ತ, ಮಾಹೇಶ್ವರ, ಪ್ರಸಾದಿ ಸ್ಥಳಗಳಲ್ಲಿ ಹೇಳಲ್ಪಟ್ಟ ವಿಧಿನಿಷೇದ ರೂಪವಾದ ಕರ್ಮಗಳಿಂದ ಸಂಸ್ಕಾರ ವಿಭಿನ್ನವೂ, ನಿವೃತ್ತಿ ಪ್ರಧಾನವೂ ಆದ ಜ್ಞಾನದ ಕಡೆಗೆ ತಿರುಗುತ್ತಾನೆ. ಅಂತರಂಗದಲ್ಲಿ ಬ್ರಹ್ಮವನ್ನು ಅರಿಯುವ ಶಿವಯೋಗ ವಿಧಾನವನ್ನು ತಿಳಿಯದ ಭಕ್ತ ಮಾಹೇಶ್ವರ ಪ್ರಸಾದಿ ಸ್ಥಳದ ಸಾಧಕರು, ಕಂಕುಳು, ಅಂಗೈ, ಕೊರಳು, ಶಿರಸ್ಸು, ಮುಖ, ಈ ಸ್ಥಾನಗಳಲ್ಲಿ, ಬ್ರಹ್ಮನ ಪ್ರತೀಕವಾದ ಲಿಂಗವನ್ನು ಸಜ್ಜೆ ಅಥವಾ ಸಂಪುಟದಲ್ಲಿಟ್ಟು ಆ ಸೆಜ್ಜೆ ಅಂಗಕ್ಕೆ ಸೋಂಕುವಂತೆ ಧರಿಸುವ ವಿಧಾನ ಹೇಳಲ್ಪಟ್ಟಿತು. ಇವು ಬಹಿರಂಗ ಲಾಂಛನಗಳು ಮಾತ್ರ. ಅಂತರಂಗದಲ್ಲಿ ಬ್ರಹ್ಮವನ್ನು ಅಳವಡಿಸಿಕೊಳ್ಳುವ ಶಿವಯೋಗ ವಿಧಾನವನ್ನು ಪ್ರಭುದೇವರು ಈ ವಚನದಲ್ಲಿ ಮುಂದೆ ನಿರೂಪಿಸಿದ್ದಾರೆ.
{{gap}}“ಬ್ರಹ್ಮರಂಧ್ರ, ಹುಬ್ಬುಗಳ ನಡುವಿನ ಸ್ಥಳ, ಮೂಗಿನ ತುದಿ ಮತ್ತು ಚೌಕ ಅಥವಾ ಮೂಲಾಧಾರ ಚಕ್ರ, ಈ ನಾಲ್ಕು ಸ್ಥಾನಗಳಲ್ಲಿ ಪ್ರಾಣಲಿಂಗಿಯು ಬ್ರಹ್ಮವನ್ನು ಅರಿಯಬೇಕು. ಬ್ರಹ್ಮರಂಧ್ರದಲ್ಲಿ ಬ್ರಹ್ಮನ ಪ್ರತಿಕವಾದ ಪರಮಾತ್ಮನು, ಹುಬ್ಬಿನ ನಡುವೆ ಜಂಗಮದ ಸಂಕೇತವಾದ ಜ್ಞಾನ, ಮೂಗಿನ ತುದಿಯಲ್ಲಿ ಆನಂದದ ಗುರುತಾದ ಪ್ರಸಾದ ಮತ್ತು ಮೂಲಾಧಾರದಲ್ಲಿ, ವಿಶ್ರಾಂತಿಯ ಸಂಕೇತವಾದ ಅನುಭಾವ, ಇವು ತಮ್ಮ ನಿಜರೂಪದಿಂದ ಅಭಿವ್ಯಕ್ತವಾಗುತ್ತವೆ. ಹೃದಯದ ಮಧ್ಯದ ಅನಾಹತ ಚಕ್ರವೇ ಈ ಎಲ್ಲ ಸಾಕ್ಷಾತ್ಕಾರಗಳ ಕೇಂದ್ರವೆಂಬುದನ್ನು 'ಅಷ್ಟದಳ ಮಧ್ಯದಲ್ಲಿ ಸರ್ವಸ್ವಾಯತ' ಎಂಬ ನುಡಿ ಸೂಚಿಸುತ್ತದೆ. ಈ ವಿಧಾನದಿಂದ ಬ್ರಹ್ಮವನ್ನು ತನ್ನಲ್ಲಿ ಅಳವಡಿಸಿಕೊಂಡ ಶರಣರಿಗೆ ಮುಕ್ತಿ ಸಮೀಪವಾಗುತ್ತದೆ, ಎಂದು ವಚನದ ತಾತ್ಪರ್ಯ.
{{gap}}“ಮೇಲಿನ ವಚನದಲ್ಲಿ ಸೂಚಿಸಲ್ಪಟ್ಟಿರುವ ಶಿವಯೋಗ ಪ್ರಕ್ರಿಯೆಯನ್ನು<noinclude></noinclude>
rm6muqs57gn4w5e2yxyzefsnplrcgrd
ಪುಟ:ಕ್ರಾಂತಿ ಕಲ್ಯಾಣ.pdf/೪೩೧
104
86380
317662
252047
2026-05-06T14:00:16Z
Shreelatha.Halemane
7642
/* Validated */
317662
proofread-page
text/x-wiki
<noinclude><pagequality level="4" user="Shreelatha.Halemane" />{{rh|೪೮||ಕ್ರಾಂತಿ ಕಲ್ಯಾಣ}}</noinclude>ಆಧಾರಸ್ಥಂಭಗಳಾದ ಷಟ್ಸ್ಥಳಗಳ ಬಗ್ಗೆ ವಿವರಿಸಿ ಭಾಷಣ ಮಾಡುತ್ತಿದ್ದರು. ಭಕ್ತ, ಮಹೇಶ್ವರ, ಪ್ರಸಾದಿ, ಈ ಮೂರು ಸ್ಥಳಗಳ ವಿವರಣೆ ಮುಗಿದು ಪ್ರಾಣಲಿಂಗಿ ಸ್ಥಳದ ನಿರೂಪಣೆ ಅಂದು ಪ್ರಾರಂಭವಾಗಿತ್ತು.
{{gap}}ಮೊದಲಲ್ಲಿ ಪ್ರಭುದೇವರ ಕೆಲವು ವಚನಗಳನ್ನು ಆಶ್ರಮದ ವಟುಗಳಿಬ್ಬರು ಹಾಡಿದರು. ಆರಂಭದ ವಚನ ಈ ರೀತಿಯಿತ್ತು :
{{gap}}ಕಕ್ಷೆ, ಕರಸ್ಥಳ, ಕಂಠ, ಉತ್ತಮಾಂಗ, ಮುಖ ಸಜ್ಜೆ,
{{gap}}ಅಂಗಸೋಂಕೆಂಬವು ಷಡುಸ್ಥಳದ ದರ್ಶನಾದಿಗಳಿಗೆ
{{gap}}ಬಹಿರಂಗದಲ್ಲಿ ವೇಷ ಲಾಂಛನವಯ್ಯಾ,
{{gap}}ಅಂತರಂಗದಲ್ಲಿ ನಾಲ್ಕು ಸ್ಥಳ-ಬ್ರಹ್ಮರಂಧ್ರ, ಭೂಮಧ್ಯ,
{{gap}}ನಾಸಿಕಾಗ್ರ, ಚೌಕಮಧ್ಯ, ಇಂತೀ ಸ್ಥಾನಂಗಳನರಿಯರಾಗಿ.
{{gap}}ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ,
{{gap}}ಭ್ರೂ ಮಧ್ಯದಲ್ಲಿ ಜಂಗಮ ಸ್ವಾಯತ,
{{gap}}ನಾಸಿಕಾಗ್ರದಲ್ಲಿ ಪ್ರಸಾದ ಸ್ವಾಯತ,
{{gap}}ಚೌಕಮಧ್ಯದಲ್ಲಿ ಅನುಭಾವ ಸ್ವಾಯತ,
{{gap}}ಅಷ್ಟದಳ ಕಮಲದಲ್ಲಿ ಸರ್ವ ಸ್ವಾಯತ,
{{gap}}ಇದು ಕಾರಣ ಗುಹೇಶ್ವರಾ, ನಿಮ್ಮ ಶರಣರು ಸದಾ ಸನ್ನಿಹಿತರು *
{{gap}}ಗೀತೆ ಮುಗಿದ ಮೇಲೆ ಬಸವಣ್ಣನವರು ಹೇಳಿದರು :
{{gap}}“ಶೈವಧರ್ಮದ ನಿಬಿಡಾರಣ್ಯದಲ್ಲಿ ಸಂಚರಿಸುತ್ತ ಮುಂದೆ ನಾವೊಂದು ಸುಂದರ ಉದ್ಯಾನವನ್ನು ಕಾಣುತ್ತೇವೆ. ಪುರಾತನರ ತತ್ವಶಾಸ್ತ್ರ ಅನುಭಾವಗಳು ಅಲ್ಲಿ ಚೆಲುವಿನ ಹೂಗಳಾಗಿ ನಮ್ಮನ್ನು ನಲಿಸುತ್ತವೆ ; ತಮ್ಮ ಅನುಪಮ ಪರಿಮಳದಿಂದ ನಮಗೆ ಶಾಶ್ವತವಾದ ಆನಂದವನ್ನು ಕೊಡುತ್ತವೆ. ಷಟ್ಸ್ಥಳದ ಕೊನೆಯ ಮೂರು ಹಂತಗಳಾದ ಪ್ರಾಣಲಿಂಗಿ, ಶರಣ, ಐಕ್ಯ ಸ್ಥಳಗಳೇ ಆ ಉದ್ಯಾನ, ಭಕ್ತ ಮಾಹೇಶ್ವರ, ಪ್ರಸಾದಿ ಎಂಬ ಮೊದಲ ಮೂರು ಸ್ಥಳಗಳು ಕರ್ಮ ಪ್ರಧಾನವಾದರೆ, ಆಮೇಲಿನ ಮೂರು ಸ್ಥಳಗಳು ಜ್ಞಾನ ಪ್ರಧಾನ. ಷಟ್ಸ್ಥಳದ ಈ ಎರಡು ವಿಭಾಗಗಳನ್ನು ಕರ್ಮಕಾಂಡ, ಜ್ಞಾನಕಾಂಡ ಎಂದೂ ಕರೆಯಬಹುದು. ಕರ್ಮಕಾಂಡದಲ್ಲಿ, ಸಾಧಕನ ಆಗಿನ ಅವಸ್ಥೆಯಲ್ಲಿ ಅಗತ್ಯವೆಂದು ಹೇಳಲ್ಪಟ್ಟ ವಿಧಿ ನಿಷೇಧಗಳ ಬಂಧನದಿಂದ ಜೀವನನ್ನು ಬಿಡುಗಡೆ ಮಾಡುವುದು ಜ್ಞಾನಕಾಂಡದ ಉದ್ದೇಶ.
___________<noinclude>{{left|* ಪ್ರಭುದೇವರ ವಚನಗಳು ಪುಟ ೯೯}}</noinclude>
6jmbnnozhpv921jihkikut0q4i29xrq
317663
317662
2026-05-06T14:00:45Z
Shreelatha.Halemane
7642
317663
proofread-page
text/x-wiki
<noinclude><pagequality level="4" user="Shreelatha.Halemane" />{{rh|೪೮||ಕ್ರಾಂತಿ ಕಲ್ಯಾಣ}}</noinclude>ಆಧಾರಸ್ಥಂಭಗಳಾದ ಷಟ್ಸ್ಥಳಗಳ ಬಗ್ಗೆ ವಿವರಿಸಿ ಭಾಷಣ ಮಾಡುತ್ತಿದ್ದರು. ಭಕ್ತ, ಮಹೇಶ್ವರ, ಪ್ರಸಾದಿ, ಈ ಮೂರು ಸ್ಥಳಗಳ ವಿವರಣೆ ಮುಗಿದು ಪ್ರಾಣಲಿಂಗಿ ಸ್ಥಳದ ನಿರೂಪಣೆ ಅಂದು ಪ್ರಾರಂಭವಾಗಿತ್ತು.
{{gap}}ಮೊದಲಲ್ಲಿ ಪ್ರಭುದೇವರ ಕೆಲವು ವಚನಗಳನ್ನು ಆಶ್ರಮದ ವಟುಗಳಿಬ್ಬರು ಹಾಡಿದರು. ಆರಂಭದ ವಚನ ಈ ರೀತಿಯಿತ್ತು :
{{gap}}ಕಕ್ಷೆ, ಕರಸ್ಥಳ, ಕಂಠ, ಉತ್ತಮಾಂಗ, ಮುಖ ಸಜ್ಜೆ,
{{gap}}ಅಂಗಸೋಂಕೆಂಬವು ಷಡುಸ್ಥಳದ ದರ್ಶನಾದಿಗಳಿಗೆ
{{gap}}ಬಹಿರಂಗದಲ್ಲಿ ವೇಷ ಲಾಂಛನವಯ್ಯಾ,
{{gap}}ಅಂತರಂಗದಲ್ಲಿ ನಾಲ್ಕು ಸ್ಥಳ-ಬ್ರಹ್ಮರಂಧ್ರ, ಭೂಮಧ್ಯ,
{{gap}}ನಾಸಿಕಾಗ್ರ, ಚೌಕಮಧ್ಯ, ಇಂತೀ ಸ್ಥಾನಂಗಳನರಿಯರಾಗಿ.
{{gap}}ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ,
{{gap}}ಭ್ರೂ ಮಧ್ಯದಲ್ಲಿ ಜಂಗಮ ಸ್ವಾಯತ,
{{gap}}ನಾಸಿಕಾಗ್ರದಲ್ಲಿ ಪ್ರಸಾದ ಸ್ವಾಯತ,
{{gap}}ಚೌಕಮಧ್ಯದಲ್ಲಿ ಅನುಭಾವ ಸ್ವಾಯತ,
{{gap}}ಅಷ್ಟದಳ ಕಮಲದಲ್ಲಿ ಸರ್ವ ಸ್ವಾಯತ,
{{gap}}ಇದು ಕಾರಣ ಗುಹೇಶ್ವರಾ, ನಿಮ್ಮ ಶರಣರು ಸದಾ ಸನ್ನಿಹಿತರು *
{{gap}}ಗೀತೆ ಮುಗಿದ ಮೇಲೆ ಬಸವಣ್ಣನವರು ಹೇಳಿದರು :
{{gap}}“ಶೈವಧರ್ಮದ ನಿಬಿಡಾರಣ್ಯದಲ್ಲಿ ಸಂಚರಿಸುತ್ತ ಮುಂದೆ ನಾವೊಂದು ಸುಂದರ ಉದ್ಯಾನವನ್ನು ಕಾಣುತ್ತೇವೆ. ಪುರಾತನರ ತತ್ವಶಾಸ್ತ್ರ ಅನುಭಾವಗಳು ಅಲ್ಲಿ ಚೆಲುವಿನ ಹೂಗಳಾಗಿ ನಮ್ಮನ್ನು ನಲಿಸುತ್ತವೆ ; ತಮ್ಮ ಅನುಪಮ ಪರಿಮಳದಿಂದ ನಮಗೆ ಶಾಶ್ವತವಾದ ಆನಂದವನ್ನು ಕೊಡುತ್ತವೆ. ಷಟ್ಸ್ಥಳದ ಕೊನೆಯ ಮೂರು ಹಂತಗಳಾದ ಪ್ರಾಣಲಿಂಗಿ, ಶರಣ, ಐಕ್ಯ ಸ್ಥಳಗಳೇ ಆ ಉದ್ಯಾನ, ಭಕ್ತ ಮಾಹೇಶ್ವರ, ಪ್ರಸಾದಿ ಎಂಬ ಮೊದಲ ಮೂರು ಸ್ಥಳಗಳು ಕರ್ಮ ಪ್ರಧಾನವಾದರೆ, ಆಮೇಲಿನ ಮೂರು ಸ್ಥಳಗಳು ಜ್ಞಾನ ಪ್ರಧಾನ. ಷಟ್ಸ್ಥಳದ ಈ ಎರಡು ವಿಭಾಗಗಳನ್ನು ಕರ್ಮಕಾಂಡ, ಜ್ಞಾನಕಾಂಡ ಎಂದೂ ಕರೆಯಬಹುದು. ಕರ್ಮಕಾಂಡದಲ್ಲಿ, ಸಾಧಕನ ಆಗಿನ ಅವಸ್ಥೆಯಲ್ಲಿ ಅಗತ್ಯವೆಂದು ಹೇಳಲ್ಪಟ್ಟ ವಿಧಿ ನಿಷೇಧಗಳ ಬಂಧನದಿಂದ ಜೀವನನ್ನು ಬಿಡುಗಡೆ ಮಾಡುವುದು ಜ್ಞಾನಕಾಂಡದ ಉದ್ದೇಶ.
___________<noinclude>{{left|* ಪ್ರಭುದೇವರ ವಚನಗಳು ಪುಟ ೯೯}}</noinclude>
plnvovpgogqlnvwvviyej3p5curvo49
ಪುಟ:ಕ್ರಾಂತಿ ಕಲ್ಯಾಣ.pdf/೪೫೧
104
86394
317665
279619
2026-05-06T14:01:47Z
Shreelatha.Halemane
7642
/* Validated */
317665
proofread-page
text/x-wiki
<noinclude><pagequality level="4" user="Shreelatha.Halemane" /></noinclude>
{{rh|left=೪೩೮ |center=|right=ಕ್ರಾಂತಿ ಕಲ್ಯಾಣ}}
ಜನಸಂದಣಿ, ಈ ಅನುಕ್ರಮದಲ್ಲಿ ಮೆರವಣಿಗೆ ನಡೆಯಿತು. “ಹರ ! ಹರ ! ಮಹಾದೇವ !” “ಬಸವರಾಜದೇವ ಉಘೇ ಉಘೇ !” ಎಂಬ ಘೋಷಣೆ ಎಲ್ಲ ಕಡೆ ಕೇಳಿ ಬರುತ್ತಿತ್ತು.<br />
{{gap}}ಮೆರವಣಿಗೆ ನದೀ ತೀರದ ಶಿಲಾಮಂಟಪಕ್ಕೆ ಹಿಂದಿರುಗಿದಾಗ ಕಲ್ಯಾಣ ಶಕ್ತಿ ದೇವರ ಮೇಲ್ವಿಚಾರಣೆಯಲ್ಲಿ ಬಸವಣ್ಣನವರ ಸಮಾಧಿ ಅಲ್ಲಿ ರಚಿತವಾಗಿತ್ತು.<br />
{{gap}}ಮುಕುಟಾಗಮದಲ್ಲಿ ಹೇಳಿರುವ ಸಮಾಧಿ ರಚನಾವಿಧಾನದಂತೆ ಕಲ್ಯಾಣ ಶಕ್ತಿ ಪಂಡಿತರು ಸಮಾಧಿಯನ್ನು ಕಟ್ಟಿಸಿದರು. ಅದಕ್ಕಾಗಿ ಅವರು ಬಸವಣ್ಣನವರ ಅಂಗಾಲ ಮಡಿಕೆಯಿಂದ ಉಂಗುಷ್ಟದ ತುದಿಯವರೆಗಿನ ಅಳತೆ ತೆಗೆದುಕೊಂಡು, ಅದರಂತೆ ಐದು ಅಡಿ ಚೌಕವೂ ಒಂಭತ್ತು ಅಡಿ ಆಳವೂ ಇರುವ ಹಳ್ಳ ತೋಡಿಸಿದರು. ಅದರ ದಕ್ಷಿಣ ಕಡೆಯ ಮೂರಡಿಯನ್ನು ಮೂರು ತತ್ವಗಳ ಸಂಕೇತವಾದ ತ್ರಿಕೋನಾಕೃತಿಯನ್ನು ಅಗೆದು, ಅದಕ್ಕೆ ಎದುರಾಗಿ ಉತ್ತರದ ಕಡೆ ಮೂರಡಿ ಅಗಲವೂ ಅನುಕ್ರಮವಾಗಿ ಮೇಲಿಂದ ಕೆಳಗೆ ಒಂದು ಎರಡು ಮೂರು ಅಡಿ ಎತ್ತರವೂ ಇರುವ ಮೂರು ಪಾವಟಿಗೆಗಳನ್ನು ಮಾಡಿಸಿದರು. ತ್ರಿಕೋನದೆದುರಿಗೆ ವೇದಿಕೆಯನ್ನು ಕಟ್ಟಿದರು.<br />
{{gap}}ಬಳಿಕ ಅದನ್ನು ಸ್ವಚ್ಛಗೊಳಿಸಿ ಸಾರಿಸಿ, ಐದು ಬಣ್ಣಗಳ ಹಿಟ್ಟಿನಿಂದ ನೆಲದ ಮೇಲೆ ಪಂಚಮುದ್ರೆಗಳನ್ನು ಬರೆದು ಕೋನಗಳಲ್ಲಿ ಪಂಚಾಕ್ಷರಿಯನ್ನೂ, ನಡುವೆ ಪ್ರಣವವನ್ನೂ ಅಂಕಿಸಿ, ಎಡ ಬಲಗಳಲ್ಲಿ ಪಂಚಬ್ರಹ್ಮ ಮಂತ್ರಗಳನ್ನು ಬರೆದರು.<br />
{{gap}}ಆಮೇಲೆ ತಗಡಿನಲ್ಲಿ ಮಾಡಿದ ಲಿಂಗಮುದ್ರೆಗಳನ್ನು ನಾಲ್ಕು ಮೂಲೆಗಳಿಗೆ ಜೋಡಿಸಿ ಚಾವಣಿ ಹಾಕಿ, ಮೇಲ್ಕಟ್ಟುಗಳನ್ನು ಕಟ್ಟಿದರು. ಹೊಂಬಾಳೆ, ಮಡಿವಾಳ, ಕಾಯಿ ಹಣ್ಣು, ಹವಳ ಮುತ್ತುಗಳ ಜಾಲರಗಳನ್ನು ಸುತ್ತ ಅಳವಡಿಸಿದರು. ಗೊನೆ ಸಹಿತವಾದ ಬಾಳೆಯ ಕಂಬಗಳನ್ನು ಚಾವಣಿಯ ನಾಲ್ಕು ಮೂಲೆಗಳಿಗೆ ಕಟ್ಟಿದರು. ಕಬ್ಬಿನ ಜಲ್ಲೆ, ಕೆಂದೆಂಗು, ಎಳೆನೀರಗೊನೆಗಳಿಂದ ಚಾವಣಿಯನ್ನು ಅಲಂಕರಿಸಿದರು.<br />
{{gap}}ಬಳಿಕ ಅವರು ಬಸವಣ್ಣನವರ ಪಾರ್ಥಿವ ದೇಹವಿದ್ದ ಅಂದಣಕ್ಕೆ ಬಲವಂದು, ದೇಹವನ್ನು ಅಂದಣದಿಂದ ತಂದು ಪಾವಟಿಗೆಗಳನ್ನು ಇಳಿಸಿ, ವೇದಿಕೆಯ ಮೇಲೆ ಮೂರ್ತಗೊಳಿಸಿದರು. ಚರಲಿಂಗ ಪಾದೋದಕದಿಂದ ಮುಖವನ್ನು ತೊಳೆದರು. ಭಸಿತವಿಟ್ಟು ಹೂಗಳಿಂದ ಅರ್ಚಿಸಿ, ಗಂಧಾಕ್ಷತೆಗಳಿಂದ ಅಲಂಕರಿಸಿ, ಧೂಪವಿಟ್ಟು ಆರತಿ ಬೆಳಗಿದರು. ಆಮೇಲೆ ದೇಹವನ್ನು ತ್ರಿಕೋಣ ಸ್ಥಾನದಲ್ಲಿ ಕುಳ್ಳಿರಿಸಿ, ಭಸಿತದಿಂದ ತುಂಬಿ ಸಮಾಧಿಯನ್ನು ಮುಚ್ಚಿದರು.<br />
{{gap}}ಈ ಕ್ರಿಯೆ ನಡೆಯುತ್ತಿದ್ದಂತೆ ಸಮಾಧಿಯ ಸುತ್ತ ನೆರೆದಿದ್ದ ಜಂಗಮ<noinclude></noinclude>
eg2gi3blzrjb10g27igal7fgthwopdc
ಪುಟ:ಕುಕ್ಕಿಲ ಸಂಪುಟ.pdf/೧೭೯
104
97668
317907
268796
2026-05-07T11:13:56Z
Shreelatha.Halemane
7642
/* Validated */
317907
proofread-page
text/x-wiki
<noinclude><pagequality level="4" user="Shreelatha.Halemane" />{{right|ಅಧ್ಯಕ್ಷ ಭಾಷಣ / ೧೬೩}}</noinclude>{{gap}}ವಸುದೇವನು ಆಡಿದ ಮಾತಿಗೆ ತಪ್ಪೆನೆಂದು ಬೇಕಾದ ನಂಬುಗೆಯನ್ನು ಕೊಟ್ಟ
ಮೇಲೆ ಕಡೆಗೆ ತಂಗಿಯನ್ನು ಕೊಲ್ಲದೆ ಬಿಟ್ಟು ಮನೆಗೆ ಬಂದ ಕಂಸನ ಮನೋಭಾವವನ್ನು
ಸುಬ್ಬನು ಹೀಗೆ ವರ್ಣಿಸುತ್ತಾನೆ :
ದುಷ್ಟಭಾವವದೊಂದು, ಅನುಜೆಯಕ್ಕರವೊಂದು |
ಕೃಷ್ಣಜನನ ಸ್ಥಿತಿಯ ಮರಣಭಯ ಮತ್ತೊಂದು |
ಅಷ್ಟಮದಮಾನಹಂಕಾರವೊಂದನಿತರಿಂ ಭ್ರಷ್ಟಮನ ಕರಗುತಿರ್ದ ||
{{gap}}ಅನಂತರ ಹುಟ್ಟಿದ ಆರು ಮಕ್ಕಳನ್ನೂ ಕೊಟ್ಟ ಮಾತಿಗೆ ತಪ್ಪದೆ ವಸುದೇವನು
ಕಣ್ಣೀರ ಧಾರೆಯಿಂದ 'ಮದಕಂಸ'ನಿಗೆ ಬಲಿಯೊಪ್ಪಿಸಿದರೆ, ಕಂಸನು :
ಆರು ಮಕ್ಕಳನೊರಸಿ ಶಿಲೆಯಲಿ |
ಸೇರಿಸಿದ ದಂಪತಿಗಳಿರ್ವರ |
ಕಾರಗರದೊಳು ಕಾಲೆ ಸಂಕಲೆ ಸೇರಿಸಿದನು ||
{{gap}}ಮತ್ತೆ ಕಾರಾಗೃಹದಲ್ಲಿ ದೇವಕಿಯು ಗರ್ಭವತಿಯಾಗುತ್ತಾಳೆ. ಬಸಿರಲ್ಲಿ ಬೆಳೆಯುವ
ಕಂಸನ ಏಳನೆಯ ಪಿಂಡಕ್ಕೆ ಬೇಯುತ್ತಾಳೆ. ದೇವಕಿಯ ಬಿಸಿಯುಸಿರು ಸತ್ಯಲೋಕಕ್ಕೆ
ಸೆಕೆಯಾಯಿತು. ಬ್ರಹ್ಮನ ಮನಸ್ಸು ಕರಗಿತು. ಒಡನೆಯ ದೇವಕಿಯನ್ನು ಸಂತೈಸು
ವುದಕ್ಕಾಗಿ 'ಆ ಸೃಷ್ಟಿಯರಸನು'-
{{center|ತ್ರಿವುಡೆ :}}
ಅರಸಕೇಳಾ ಹರಿಯ ಜನನದ |
ಹರುಷ ದೇವಕಿಗೊರೆಯಲೋಸುಗ
ಸರಸಿಜೋದ್ಭವನಂದು ಮಾಯದ ಕೊರವಿಯಾದ
ಉತ್ತಮರ ಭಯತಾಪಶರಧಿಯ
ನುತ್ತರಿಪ ಮಂತ್ರವನುಸುರ್ವಡೆ |
ಬಿತ್ತರಿಸಿ ಕೊರವಂಜಿ ವೇಷವ ಹೊತ್ತನಜನು ||
{{gap}}ಹೀಗೆ ಬ್ರಹ್ಮನ 'ಭಾಮಿನೀರನ್ನೆ'ಯಾದ ಕೊರವಂಜಿಯು ಶೃಂಗಾರವಾಗಿ ಬಣ್ಣ
ಗೋಲನ್ನು ಧರಿಸಿ ಕಮಂಡಲನ್ನು ಮುದ್ದು ಬಾಲನನ್ನಾಗಿ ಮಾಡಿ 'ಮಗ್ಗುಲೊಳಗಿರಿಸಿ,
ಕನಕವಸ್ತ್ರವನು ಮುಸುಕಿಕ್ಕಿ' ಭೂಲೋಕಕ್ಕಿಳಿಯುವ ಸುಬ್ಬನ ಕವಿತಾ ಕಾಮಿನಿಯ
ಸೊಬಗನ್ನು ಪ್ರತ್ಯಕ್ಷ ಈ ಪದ್ಯದಲ್ಲಿ ನೋಡಿರಿ.
.
{{center|(ಸೊಬಗಿನ ಸೋನೆ) ಅಷ್ಟತಾಳ :}}
ಮುಕುರಕಪೋಲೆ ಮಂದಸ್ಮಿತ ಮೃದುಹಸ್ತ |
ಮಕರಧ್ವಜನ ಚಿನ್ನದ ಬೊಂಬೆ ||
ಸಕಲಕಲಾನ್ವಿತ ನಳಿತೋಳ ಳಬಲೆ ಕಂ]
ಚುಕವನಿಟ್ಟಳು ಮುದ್ದು ಲಲಿತಾಂಗಿ ||
ಮುತ್ತಿನ ಓಲೆ ಮೂಗುತಿ ಕೊಪ್ಪಿನೆಸಳುಗ |
ಳುತ್ತಮ ಚೌಲಿ ರಾಕಟೆ ಬಂದಿ |
ರತ್ನದ ಕಾಲಹಿಂಬಳೆ ಚೌಕಿಗಳಿಂದ |
ಮತ್ತೇಭಗಮನೆ ರಾಜಿಸಿದಳು ||<noinclude></noinclude>
amyhok5y69l36bxr5kjem1r3ymtii9z
ಪುಟ:ಕುಕ್ಕಿಲ ಸಂಪುಟ.pdf/೧೮೯
104
97679
317909
276193
2026-05-07T11:16:13Z
Shreelatha.Halemane
7642
317909
proofread-page
text/x-wiki
<noinclude><pagequality level="3" user="Shreelatha.Halemane" />{{right=ಅಧ್ಯಕ್ಷ ಭಾಷಣ | ೧೭೩}}</noinclude>
{{gap}}{{center|}}ಅಣ್ಣರಾಮರಿಯದಂದದೊಳೊಮ್ಮೆ ಬಂದಿವಳ</br>
{{gap}}{{center|}}ಬಣ್ಣದುಟಿಯ ಸವಿದ- ಕೇಳು ವಿನೋದ || ಸಣ್ಣವರಾಟವಲ್ಲ ||</br>
ಗೋಪಿ: {{gap}} ಎಂದೂ ಎನ್ನಣುಗನಿಗೆ-ಆಲದ ಹಣ್ಣ |</br>
{{gap}}{{gap}}{{gap}}ತಿಂದು ಅಭ್ಯಾಸವಾಗೆ |</br>
{{gap}}{{gap}}{{gap}}ಒಂದರಿಯದ ಬಾಲ ಮುಗುದ ನಿನ್ನಧರವ |</br>
{{gap}}{{gap}}{{gap}}ತಿಂದರಿಂದೇನಾಯಿತೆ?- ಪೇಳೆಲೆ ಕಾಂತೆ || ಚಿಕ್ಕವನಲ್ಲವೇನೆ? || </br>
ದಿಟ್ಟೆ:{{gap}} ನಸುಬೆಳಗಾಗುವಾಗ- ಯವ್ವನವತಿ |</br>
{{gap}}{{gap}}{{gap}}ಮೊಸರ ಮಂತಿಸುತಿಪ್ಪಾಗ ||</br>
{{gap}}{{gap}}{{gap}}ಕುಶಲದಿಂದಳೆದಮರ್ದಪುತ ತರುಣಿಯ |</br>
{{gap}}{{gap}}{{gap}}ಪೊಸಕುಚಂಗಳ ಮುಟ್ಟಿದ ನೋಡು ವಿನೋದ || ಸಣ್ಣವನಾಟ ||</br>
{{gap}} ಗೋಪಿ:ದೇವತಾರ್ಚನೆಗೆನ್ನುತ-ನತ್ಯದಲ್ಲಿ ರಾ |</br>
{{gap}}ಜೀವಗಳನೆ ಕೊಯ್ಯುತ |</br>
{{gap}}ತಾವರೆ ಮೊಗ್ಗ ಎಂದರಿಯದೆ ಮುಟ್ಟಲು |</br>
{{gap}}ಅವಮಾನ ಘನವಾಯಿತೆ?- ಹೇಳೆಲೆ ಕಾಂತ || ಚಿಕ್ಕವನಲ್ಲವೇನೆ?||</br>
{{gap}}ದಿಟ್ಟೆ:ನೀರನು ತರ ಹೋಹಾಗ- ಈ ಸುದತಿಯ |</br>
{{gap}}ದಾರಿಯಡ್ಡವ ಕಟ್ಟಿದ |</br>
{{gap}}ನಾರಿ ಹೇಳಿದಕೇನು ಬೆಲೆ ಕೊಟ್ಟೆ? ಎನುತುಟ್ಟ |</br>
{{gap}}ಸೀರೆಯನೆಗೆದೋಡಿದ ಕೇಳು ವಿನೋದ || ಸಣ್ಣವರಾಟವಲ್ಲ ||</br>
{{gap}}ಗೋಪಿ:ಆರೇಳು ವರ್ಷವಾದ- ಬಾಲಕನುಟ್ಟ</br>
{{gap}}ಸೀರೆಯಂದವ ನೋಡಿದ |</br>
{{gap}}ಸೌರಮ್ಯಾಂಬರವಿದರ ಬೆಲೆ ಏನೆನುತ ಮೇಲೆ |</br>
{{gap}}ಹಾರಿಸಲೇನಾಯಿತೆ? |- ಹೇಳೆಲೆ ಕಾಂತ || ಚಿಕ್ಕವನಲ್ಲವೇನೆ?||</br>
{{gap}}ಈ ರೀತಿ ಹಲವು ಪರಿಯ ಚಾಟುಸಂಭಾಷಣೆಗಳಾಗಿ ಕಡೆಗೆ ಗೋಪಿಯು 'ಇನ್ನು
ಮುಂದೆ ಕೃಷ್ಣನು ನಿಮ್ಮಲ್ಲಿ ಕಳ್ಳಚೇಷ್ಟೆಗೆ ಬಂದರೆ ಆತನನ್ನು ಹಿಡಿದೆಳೆದು ತನ್ನಿರಿ, ತಕ್ಕ
ಶಿಕ್ಷೆ ಮಾಡುತ್ತೇನೆ' ಎಂದು ಸಮಾಧಾನ ಹೇಳಲು ಗೊಲ್ಲತಿಯರು ಹಿಂತೆರಳುತ್ತಾರೆ.
ಆಮೇಲೊಂದು ದಿನ ಸಮಯ ಸಾಧಿಸಿ ಪಾಲ್ಮೊಸರು ಕದ್ದೋಡುವ ಗೋಪಾಲಕೃಷ್ಣ
ಅವರ ಕೈಗೆ ಸಿಕ್ಕುತ್ತಾನೆ. ಕಳ್ಳ ಸಿಕ್ಕಿದ ಸಂತೋಷದಿಂದ ಅವರು ತಮ್ಮೊಳಗೆ
ಒಬ್ಬರಿಗೊಬ್ಬರು ಕೃಷ್ಣನ ತಪ್ಪುಗಳನ್ನು ಹೀಗೆ ಮೆಚ್ಚಿಸಿಕೊಳ್ಳುತ್ತಾರೆ.</br>
{{gap}}ಸಿಕ್ಕಿದ ಕಳ್ಳ-ಸಿಕ್ಕಿದ ಇವನ |
{{gap}}{{center|ಅಷ್ಟತಾಳ :}}
{{center|}}ಸೊಕ್ಕುಗಳನೆ ಮುರಿದಿಕ್ಕದೆ ಬಿಡೆವೀಗ || ಪಲ್ಲ ||
{{center|}}ಬೊಂಬೆಯ ಮದುವೆಯಾಟದೊಳಿರಲಿವ ಬಾಲ |
{{center|}}ನೆಂಬುದಕ್ಕಾಗಿ ಸುಮ್ಮನೆ ಬಿಟ್ಟೆವು |
{{center|}}ಕಂಬದ ಮರೆಗಾಗಿ ಕರೆದೊಯ್ದಿ ತರುಣಿಯ |
{{center|}}ಚುಂಬಿಸಿ ತುಟಿಕಚ್ಚಲುಚಿತವೇನಮ್ಮ? ||</br><noinclude></noinclude>
qwi202cro2wtf17mmc6iosdu86cfww4
317910
317909
2026-05-07T11:17:09Z
Shreelatha.Halemane
7642
317910
proofread-page
text/x-wiki
<noinclude><pagequality level="3" user="Shreelatha.Halemane" />{{right|=ಅಧ್ಯಕ್ಷ ಭಾಷಣ/೧೭೩}}</noinclude>
{{gap}}{{center|}}ಅಣ್ಣರಾಮರಿಯದಂದದೊಳೊಮ್ಮೆ ಬಂದಿವಳ</br>
{{gap}}{{center|}}ಬಣ್ಣದುಟಿಯ ಸವಿದ- ಕೇಳು ವಿನೋದ || ಸಣ್ಣವರಾಟವಲ್ಲ ||</br>
ಗೋಪಿ: {{gap}} ಎಂದೂ ಎನ್ನಣುಗನಿಗೆ-ಆಲದ ಹಣ್ಣ |</br>
{{gap}}{{gap}}{{gap}}ತಿಂದು ಅಭ್ಯಾಸವಾಗೆ |</br>
{{gap}}{{gap}}{{gap}}ಒಂದರಿಯದ ಬಾಲ ಮುಗುದ ನಿನ್ನಧರವ |</br>
{{gap}}{{gap}}{{gap}}ತಿಂದರಿಂದೇನಾಯಿತೆ?- ಪೇಳೆಲೆ ಕಾಂತೆ || ಚಿಕ್ಕವನಲ್ಲವೇನೆ? || </br>
ದಿಟ್ಟೆ:{{gap}} ನಸುಬೆಳಗಾಗುವಾಗ- ಯವ್ವನವತಿ |</br>
{{gap}}{{gap}}{{gap}}ಮೊಸರ ಮಂತಿಸುತಿಪ್ಪಾಗ ||</br>
{{gap}}{{gap}}{{gap}}ಕುಶಲದಿಂದಳೆದಮರ್ದಪುತ ತರುಣಿಯ |</br>
{{gap}}{{gap}}{{gap}}ಪೊಸಕುಚಂಗಳ ಮುಟ್ಟಿದ ನೋಡು ವಿನೋದ || ಸಣ್ಣವನಾಟ ||</br>
{{gap}} ಗೋಪಿ:ದೇವತಾರ್ಚನೆಗೆನ್ನುತ-ನತ್ಯದಲ್ಲಿ ರಾ |</br>
{{gap}}ಜೀವಗಳನೆ ಕೊಯ್ಯುತ |</br>
{{gap}}ತಾವರೆ ಮೊಗ್ಗ ಎಂದರಿಯದೆ ಮುಟ್ಟಲು |</br>
{{gap}}ಅವಮಾನ ಘನವಾಯಿತೆ?- ಹೇಳೆಲೆ ಕಾಂತ || ಚಿಕ್ಕವನಲ್ಲವೇನೆ?||</br>
{{gap}}ದಿಟ್ಟೆ:ನೀರನು ತರ ಹೋಹಾಗ- ಈ ಸುದತಿಯ |</br>
{{gap}}ದಾರಿಯಡ್ಡವ ಕಟ್ಟಿದ |</br>
{{gap}}ನಾರಿ ಹೇಳಿದಕೇನು ಬೆಲೆ ಕೊಟ್ಟೆ? ಎನುತುಟ್ಟ |</br>
{{gap}}ಸೀರೆಯನೆಗೆದೋಡಿದ ಕೇಳು ವಿನೋದ || ಸಣ್ಣವರಾಟವಲ್ಲ ||</br>
{{gap}}ಗೋಪಿ:ಆರೇಳು ವರ್ಷವಾದ- ಬಾಲಕನುಟ್ಟ</br>
{{gap}}ಸೀರೆಯಂದವ ನೋಡಿದ |</br>
{{gap}}ಸೌರಮ್ಯಾಂಬರವಿದರ ಬೆಲೆ ಏನೆನುತ ಮೇಲೆ |</br>
{{gap}}ಹಾರಿಸಲೇನಾಯಿತೆ? |- ಹೇಳೆಲೆ ಕಾಂತ || ಚಿಕ್ಕವನಲ್ಲವೇನೆ?||</br>
{{gap}}ಈ ರೀತಿ ಹಲವು ಪರಿಯ ಚಾಟುಸಂಭಾಷಣೆಗಳಾಗಿ ಕಡೆಗೆ ಗೋಪಿಯು 'ಇನ್ನು
ಮುಂದೆ ಕೃಷ್ಣನು ನಿಮ್ಮಲ್ಲಿ ಕಳ್ಳಚೇಷ್ಟೆಗೆ ಬಂದರೆ ಆತನನ್ನು ಹಿಡಿದೆಳೆದು ತನ್ನಿರಿ, ತಕ್ಕ
ಶಿಕ್ಷೆ ಮಾಡುತ್ತೇನೆ' ಎಂದು ಸಮಾಧಾನ ಹೇಳಲು ಗೊಲ್ಲತಿಯರು ಹಿಂತೆರಳುತ್ತಾರೆ.
ಆಮೇಲೊಂದು ದಿನ ಸಮಯ ಸಾಧಿಸಿ ಪಾಲ್ಮೊಸರು ಕದ್ದೋಡುವ ಗೋಪಾಲಕೃಷ್ಣ
ಅವರ ಕೈಗೆ ಸಿಕ್ಕುತ್ತಾನೆ. ಕಳ್ಳ ಸಿಕ್ಕಿದ ಸಂತೋಷದಿಂದ ಅವರು ತಮ್ಮೊಳಗೆ
ಒಬ್ಬರಿಗೊಬ್ಬರು ಕೃಷ್ಣನ ತಪ್ಪುಗಳನ್ನು ಹೀಗೆ ಮೆಚ್ಚಿಸಿಕೊಳ್ಳುತ್ತಾರೆ.</br>
{{gap}}ಸಿಕ್ಕಿದ ಕಳ್ಳ-ಸಿಕ್ಕಿದ ಇವನ |
{{gap}}{{center|ಅಷ್ಟತಾಳ :}}
{{center|}}ಸೊಕ್ಕುಗಳನೆ ಮುರಿದಿಕ್ಕದೆ ಬಿಡೆವೀಗ || ಪಲ್ಲ ||
{{center|}}ಬೊಂಬೆಯ ಮದುವೆಯಾಟದೊಳಿರಲಿವ ಬಾಲ |
{{center|}}ನೆಂಬುದಕ್ಕಾಗಿ ಸುಮ್ಮನೆ ಬಿಟ್ಟೆವು |
{{center|}}ಕಂಬದ ಮರೆಗಾಗಿ ಕರೆದೊಯ್ದಿ ತರುಣಿಯ |
{{center|}}ಚುಂಬಿಸಿ ತುಟಿಕಚ್ಚಲುಚಿತವೇನಮ್ಮ? ||</br><noinclude></noinclude>
spxwaxz0jfzr12hh1hjzo9wc33ocy69
ಪುಟ:ಕುಕ್ಕಿಲ ಸಂಪುಟ.pdf/೨೧೬
104
97704
317911
272924
2026-05-07T11:20:20Z
Shreelatha.Halemane
7642
/* Validated */
317911
proofread-page
text/x-wiki
<noinclude><pagequality level="4" user="Shreelatha.Halemane" />{{Left|೨೦೦ / ಕುಕ್ಕಿಲ ಸಂಪುಟ}}</noinclude>(ಕ್ರಿ. ಶ. ೧೪೯೭)ರಲ್ಲಿ ಆ ದೇವಸ್ಥಾನದಲ್ಲಿ ಮೊದಲಾಗಿ ಪ್ರಯೋಗಕ್ಕೆ ತಂದಿರುವುದಾಗಿ
ತಿಳಿಸಿದ್ದಾರೆ.ಇದು ಸಪ್ರಮಾಣವಾಗಿದೆಯೆಂದು 'ಕಥಕಳಿಪ್ರಕಾರಂ' (Kathakali
Prakaram by Panniseril Nanu Pillai, Kottayam. 1965) Dow
ಗ್ರಂಥದಲ್ಲಿ ಸವಿಮರ್ಶವಾಗಿ ಸಮರ್ಥಿಸಲಾಗಿದೆ.<br>
{{gap}}ಮೊದಲು ಪಾರ್ತಿಸುಬ್ಬನ ಕಾಲನಿರ್ಣಯಕ್ಕೆ ಪ್ರಾಮಾಣಿಕ ಆಧಾರ ದೊರೆಯ
ದಿದ್ದುದರಿಂದ, ಈಗ ಸು. ೧೫೦ ವರ್ಷಕ್ಕೆ ಹಿಂದೆ ಆ ಕಣಿಪುರದಲ್ಲಿದ್ದ ಅದೇ ಹೆಸರಿನ
ಇನ್ನೊಬ್ಬ ವ್ಯಕ್ತಿಯೇ ಈತನೆಂಬ ತಪ್ಪು ತಿಳುವಳಿಕೆ ಸಾಕಷ್ಟು ಹಿಂದಿನಿಂದಲೇ ರೂಢ
ಮೂಲವಾಗಿತ್ತು. ಇದಕ್ಕೆ ಕಾರಣವೆಂದರೆ, ಮಧೂರು (ಮದವೂರು) ಗಣಪತಿ ದೇವಸ್ಥಾನ
ದಲ್ಲಿ ೧೭೯೭ನೇ ಇಸವಿಯ ಪಿಂಗಳ ಸಂವತ್ಸರದಲ್ಲಿ ನಡೆದಿದ್ದ ಮೂಡಪ್ಪ ಸೇವೆ ಎಂಬ
ಉತ್ಸವಕ್ಕೆ ಸಂಬಂಧಪಟ್ಟ ಒಂದು ಲೆಕ್ಕದ ದಾಖಲೆ, ಅದರಲ್ಲಿ, ಉತ್ಸವದ ಬೇರೆ ಬೇರೆ
ವಿನಿಯೋಗಕ್ಕೆ ಹಾಗೂ ಬ್ರಾಹ್ಮಣ ಭೋಜನಕ್ಕೆ ಬೇಕಾಗುವ ದವಸಧಾನ್ಯಾದಿಗಳ ವಿವರ
ಮತ್ತು ಬೇರೆ ಬೇರೆ ಕ್ರಿಯಾಭಾಗಗಳನ್ನು ನಡೆಸುವ ಬಗ್ಗೆ ಸೀಮೆಯೊಳಗಿನ ಯಾವ
ಯಾವ ಗ್ರಾಮಗಳಿಂದ ಎಷ್ಟೆಷ್ಟು ಜನರು ಬರತಕ್ಕದ್ದು ಎಂಬ ವಿವರಗಳನ್ನು ಪ್ರತ್ಯೇಕ
ಕಲಮುಗಳಲ್ಲಿ ಬರೆಯಲಾಗಿದೆ. ವಿನಿಯೋಗಗಳ ವಿವರ ಬರೆದಿರುವ ಮೊದಲ ಕಲಮಿನ
ಶಿರೋಲೇಖನ ಸಮೇತ, ಕೆಲಸಕಾರ್ಯಗಳಿಗೆ ಬರತಕ್ಕವರ ಪೈಕಿ ಕಣಿಪುರ ಪಾರ್ತಿಸುಬ್ಬನ
ಹೆಸರಿರುವ ನಾಲ್ಕನೆಯ ಕಲಮಿನ ಮೊದಲ ಭಾಗವನ್ನು ಕೆಳಗೆ ಪಡಿಯಚ್ಚಿನಲ್ಲಿ
ಕೊಡಲಾಗಿದೆ. (ಒದಗಿಸಿಕೊಟ್ಟವರು- ದಿ| ಕೂಡಲು ಈಶ್ವರ ಶ್ಯಾನುಭೋಗರು)<br>
ಚಿತ್ರ ೪-೨ (ಒಂದನೇ ಕಲಮು)
ಯದಾಸ್ತು ಮದ ಊರ ಶ್ರೀ ಮಹಾ
ಗಣಪತಿ ದೇವರ ಸಂನ್ನಿಧಿಯಲ್ಲು
ಆಗುವಂತ್ರ ಮೂಡಪ್ಪದ ಲೆಬ್ಬಿ-
ಪ್ರಾಕು ಲೆ ದಾಖಲೆ ಪ್ರಕಾರ, ಪಿಂಗಳ ಸಂ
ವತ್ಸರದಾ ವಯಿಶಾಖ ಬಳಯು ಆದಿತ್ಯ
ವಾರ ದಿವ್ಯ ನಡವ ಬಗ್ಗೆ ಬರದ ಲೆಬ್ಬಿದ
ನಖಲು
ಗಣಪತಿಯಿಡುವದು
ಮೆಲಾಗ್ರ ಹಚ್ಚುವಲ್ಲಿ ಬಡಗ ಅ೦ಬಲದಲು
ಯಿಡುವ ಗಣಪ ೧ರ ವಿವರ-
ಚಿತ್ರ ೪-೧(ನಾಲ್ಕನೆಯ- ಕಲಮು)
ಸ್ಥಾನಿಕರು ಮೆಲಾಗ್ರಕೆ ಹಚ್ಚುವ ಬಗ್ಗೆ
ಬ್ರಾಂಹರ ಯೆಂಜಿಲುತ್ತೆಗವ ಬಗ್ಗೆ-
ಬಂಟರಿಗೆ ಯಿಕ್ಕುವ ಬಗೆ ಸಹಾ-
ಪೆರಡಾಲ ಅಪ್ಪಯನ (ಅಪಯ್ಯನ?) ಮುಖಾಂತ
ಜನ ೬೦ರ ವಿವರ-
ವಿವರ-
ಕುಂಬಳೆ ಮಾಗಣೆಯಿಂದ-
ಕಣಿಪುರದಿ೦ದಾ ಪಾರ್ತಿಸುಬ್ಬ ಜನ<noinclude></noinclude>
gfpjgbmiqkzjcnv1opjcorz39zpfmwy
ಪುಟ:ಯಕ್ಷಗಾನ ಮಕರಂದ.pdf/೨೧೪
104
100134
317784
317169
2026-05-06T16:59:47Z
Pragathi. BH
7585
/* Validated */
317784
proofread-page
text/x-wiki
<noinclude><pagequality level="4" user="Pragathi. BH" /></noinclude>
{{Left|'''"ಪರಿಪೂರ್ಣ ಕಲಾವಿದ"'''}}
----------------------------------------------------
{{Right|'''- ಜೆಡ್ಡು ನಾರಾಯಣ ಭಟ್ಟ.'''}}
{{gap}}ನನಗೆ ಶಾಸ್ತ್ರಿಗಳ ಪರಿಚಯವಾಗಿದ್ದು 1956ರಲ್ಲಿ. ಆ ಮೊದಲು ಅವರನ್ನು
ಮೆಚ್ಚಿದವರಲ್ಲಿ ನಾನೂ ಒಬ್ಬ, ಅಷ್ಟೆ. ಅವರ ಕೌರವ, ಶಲ್ಯನ ಪಾತ್ರ ನಿರ್ವಹಣೆ
ಯನ್ನು ದಿ! ಕಿಲ್ಲೆಯವರ ಒಡನಾಟದಲ್ಲಿ ಕಂಡಿದ್ದೆ, ಕೇಳಿದ್ದೆ ಸಂಪೂರ್ಣ ಮೆಚ್ಚಿದ್ದ.
ಪ್ರಾಯಶಃ ಭೀಷ್ಮ, ಮಾಗಧರ ಪಾತ್ರಗಳನ್ನು ಬಹಳ ಚಿಕ್ಕವನಿದ್ದಾಗ- ಆರೆನಿದ್ದೆ
ಯಲ್ಲಿ ಕೇಳಿರಬೇಕು. ಶ್ರೀಯುತ ಶಾಸ್ತ್ರಿಗಳು, ತೆಕ್ಕುಂಜೆಯವರು ಮತ್ತು ಮಹಾ
ಬಲ ಭಟ್ಟರು-ಹೀಗೆ ಒಂದಾಗಿ ಅಲ್ಲಲ್ಲಿ ಯಕ್ಷಗಾನ ತಾಳಮದ್ದಳೆಗಳಾಗು
ತಿದ್ದಾಗ ಯಕ್ಷಗಾನದ ಕೇವಲ 'ಮರುಳು' ಪ್ರಬಲವಾಗಿ- ಹಾಗೆಯೇ ನನ್ನ
ಆತ್ಮೀಯ ಬಂಧು ಮಹಾಬಲ ಭಟ್ಟರ ಒಡನಾಟಕ್ಕಾಗಿ-ಇವರುಗಳೊಂದಿಗೆ ಕೂಟ
ಗಳಿಗೆಲ್ಲಾ ಹೋಗುತ್ತಿದ್ದೆ. ಯಕ್ಷಗಾನ ವಾಯಾಭಿನಯಗಳಲ್ಲಿ ಪ್ರೌಢಿಮೆ
ನನಗಿರಲಿಲ್ಲವಾದರೂ, ಬೇರೆ ಬೇರೆ ಅರ್ಥಧಾರಿಗಳ ಪಾತ್ರ ನಿರ್ವಹಣೆಯ ಕುರಿತು
ನನ್ನ ಮನಸ್ಸಿಗೆ ಕಂಡುದನ್ನು ಕಂಡ ಹಾಗೆ ಹೇಳಿಬಿಡುತ್ತಿದ್ದೆ. ಕೂಟ ಮುಗಿಸಿ
ಹಿಂದೆ ಬರುವಾಗ ಬಹುಮಟ್ಟಿಗೆ ಕೂಟಗಳ ವಿಮರ್ಶೆಗಳು-ಹಳೆಯ ಕಾಲದ ಮತ್ತು
ಆಗ ತಾನೆ ನಡೆದ ಕೂಟಗಳ ನಡೆಯುತ್ತಿದ್ದುವು. ಹಳೆಯ ನೆನಹುಗಳು ಅನಿವಾರ್ಯ
ವಾಗಿ ಬಂದೇ ಬರುತ್ತಿದ್ದುವು. ನಮ್ಮ ಪರಿಚಯ ಹಳೆಯದಾಗುತ್ತ ಹೋದಂತೆ
ನಾನೊಬ್ಬ 'ಸಹೃದಯ'ನೆಂದು ಶಾಸ್ತ್ರಿಗಳು ತೀರ್ಮಾನಿಸಿರಬೇಕು. ಒಂದು ದಿವಸ
ನನ್ನನ್ನು ನೋಡಿ ಹುಸಿ ಗಾಂಭೀರ್ಯದಿಂದ “ನೀವಿಷ್ಟೆಲ್ಲಾ ಮಾತಾಡುವವರು ಅರ್ಥ
ಹೇಳಬೇಕಯ್ಯ -ಸುಮ್ಮನೆ ನಮ್ಮೊಟ್ಟಿಗೆ ಬಂದರೆ ಸಾಲದು, ” ಎಂದೇ
ಬಿಟ್ಟರು. ಅಂದಿನಿಂದ ನಾನು ತಾಳಮದ್ದಳೆಗಳಲ್ಲಿ ಅರ್ಥ ಹೇಳಲು ಪ್ರಾರಂಭಿಸಿದೆ.
1956 ನವೆಂಬರ್ 3ರಂದು ಬೋಳಾರದ ಮಂಗಳಾದೇವಿ ದೇವಸ್ಥಾನದ ಗೋಪುರ
ದಲ್ಲಿ 'ಕರ್ಣಪರ್ವ' ತಾಳಮದ್ದಳೆ. ಶಾಸ್ತ್ರಿಗಳ ಕರ್ಣ, ಮಹಾಬಲ ಭಟ್ಟರ
ಅರ್ಜುನ, ತೆಕ್ಕುಂಜೆಯವರ ಶಲ್ಯ-ನಾನು ಸರ್ಪಾಸ್ತ್ರದ ಪಾತ್ರದಲ್ಲಿ. ಅಂದಿನಿಂದ
ನಾನೊಬ್ಬ “ಖಾಯಂ ಅರ್ಥಧಾರಿ'ಯಾಗಿ, ಶಾಸ್ತ್ರಿಗಳು ಹೋದಲ್ಲೆಲ್ಲ ಹಿಂಬಾಲಿಸು
ತಿದ್ದೆ. ನನಗೆ ಪಾತ್ರವಿರಲಿ, ಇಲ್ಲದಿರಲಿ, ಹೋಗದಿರುತ್ತಿರಲಿಲ್ಲ. ಅನೇಕ ಕಡೆಗಳಲ್ಲಿ
ನನಗೆ ಉತ್ಸಾಹ ಭಂಗವಾಗದಿರಲೆಂದಿರಬೇಕು - ಪಾತ್ರಗಳನ್ನು ಹಂಚುವವರಿಗೆ<noinclude></noinclude>
1cneb8po1rka3570a91sxh9ns9rht34
ಪುಟ:ಯಕ್ಷಗಾನ ಮಕರಂದ.pdf/೨೧೫
104
100135
317785
316912
2026-05-06T17:00:50Z
Pragathi. BH
7585
/* Validated */
317785
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|'''189'''}}
ನನ್ನನ್ನು ತೋರಿಸಿ, ನನಗೊಂದು 'ಅರ್ಥ' ಕೊಡಿಸುತ್ತಿದ್ದರು. ಕೆಲವು ವರ್ಷಗಳು
ಈ ರೀತಿ ಕಳೆದರೂ ನನ್ನ ಅರ್ಥಗಾರಿಕೆ ಬಹಳ ಮುಂದುವರಿಯದಿದ್ದುದನ್ನು ಗಮನಿಸಿ,
“ನೀವು ಯಾವುದಾದರೂ ಸಂಘದ ಸದಸ್ಯರಾಗಿ ವಾರಕ್ಕೊಮ್ಮೆ ನಡೆಯುವ ಕೂಟ
ಗಳಲ್ಲಿ ಅಭ್ಯಾಸ ಮಾಡಿದರೆ ಒಳ್ಳೆಯದು” ಎಂದು ಸಲಹೆಯಿತ್ತರು.
{{gap}}ಅವರ ಹಾಸ್ಯರಸವು ಎಂತಹ ಸಮುದ್ರಗಂಭೀರರನ್ನೂ ನಗಿಸುವಂತಿತ್ತು.
ಒಂದು ಸಾರಿ 'ಜರಾಸಂಧ'ನಾಗಿ ಕೃಷ್ಣ ತಮ್ಮ ಮೂವರ ಪರಿಚಯ ಮಾಡಿಕೊಡು
ತಿದ್ದಾಗ, ಅರ್ಜುನನ ಕಡೆಗೆ ಬೆಟ್ಟು ತೋರಿಸಿ, “ಈ ಪಡುವಲ ಕಾಯಿಗೆ ಕೈಕಾಲು
ಬಂದಂತಿರುವ ಇವನಾರು........?” ಎಂದು ಸಮಯ ಸ್ಫೂರ್ತಿಯಿಂದ ಕೇಳಿದಾಗ,
ಸಭೆಯಲ್ಲ ನಗೆಗಡಲಲ್ಲಿ ತೇಲಾಡಿತು. ಮತ್ತೊಮ್ಮೆ ಸೇತುಬಂಧನದ 'ರಾವಣ'ನ
ಪಾತ್ರವನ್ನು ವಹಿಸಿ-ರಾಮನ ದಂಡಿನ ಬರೋಣವನ್ನು ತಿಳಿದು, ಬೇಕಾದ ರಕ್ಷಣಾ
ವ್ಯವಸ್ಥೆಯನ್ನು ಮಾಡಿಸುವ ಭರದಲ್ಲಿ ನಮ್ಮ ಸಹಾಯಕ್ಕಾಗಿ ಬಂದಿರುವ ಭೂತ
ಭೇತಾಳಾದಿಗಳನ್ನು ಕೋಟೆಯ ಸುತ್ತಲೂ ನಿಲ್ಲಿಸಿಬಿಟ್ಟು ನಿಮಗೀವೊತ್ತು ಊಟ
ಇಲ್ಲ' ಎಂದು ಬಿಟ್ಟರೆ ಸಾಕು, ಬಂದಿರುವ ರಾಮನ ಕಡೆಯ ಮಂಗಗಳನ್ನೆಲ್ಲಾ ನುಂಗಿ
ಬಿಡುತ್ತಾವೆ........” ಎಂದಾಗ ಬಾಯಿ ತುಂಬಾ ತಾಂಬೂಲ ತುಂಬಿಕೊಂಡಿದ್ದ
ಒಬ್ಬಿಬ್ಬರು ಬಾಯಿ ಮುಚ್ಚಿರಲಾರದೆ, ಅಕ್ಕ ಪಕ್ಕದವರ ಮೇಲೆ ತಾಂಬೂಲ ಸೇಚನ
ಮಾಡಿದರು. ಗುರಿಯಾದವರು ಸುಣ್ಣದ 'ಡಬ್ಬಿ'ಗಳಿರುವ ಮಹನೀಯರ ಆಶ್ರಯ
ಪಡೆದು ಗಾರೆಬಳಿದುಕೊಳ್ಳಬೇಕಾಯಿತು.
{{gap}}ಕರ್ಣಪರ್ವದಲ್ಲಿ ಶ್ರೀಯುತರು ಹೆಚ್ಚಾಗಿ ಶಲ್ಯನ ಪಾತ್ರವಹಿಸುತ್ತಿದ್ದರು
ದಿ| ಕಿಲ್ಲೆಯವರಿದ್ದಷ್ಟು ದಿವಸ, ಆ ಕರ್ಣ-ಶಲ್ಯರ ಉಪಾಲಂಭದ ವೈಖರಿ, ಇವ
ರಿನ್ನು ಮುಖ ನೋಡಿ ಮಾತಾಡಿಕೊಳ್ಳಬಹುದೇ' ಎಂಬ ಸಂದೇಹವನ್ನು ಹುಟ್ಟಿಸು
ತಿತ್ತು. ಒಮ್ಮೆ ಒಂದು ತಾಳಮದ್ದಳೆ ಬೆಳಕು ಹರಿದು ಬಿಸಿಲು ಹೊಡೆಯುವ ತನಕ
ನಡೆದರೂ, ಆ ಕರ್ಣ-ಶಲ್ಯರ ಅಬ್ಬರಕ್ಕೆ ಸಭಿಕರೆಲ್ಲ ಸ್ತಂಭಿತರಾಗಿ ಕುಳಿತಿದ್ದರು.
'ಕರ್ಣಪರ್ವದ' ದುರ್ಯೋಧನನ ಪಾತ್ರದಲ್ಲಿ ದುರ್ಯೋಧನನ ವಾಕ್ಚಾತುರ್ಯ
ಅದ್ಭುತವಾಗಿ ಎದ್ದು ಕಾಣುತ್ತಿತ್ತು. ಆ ಭಾಗದ ದುರ್ಯೋಧನ “ಶಾಸ್ತ್ರಿಗಳಂತೆ
ಹೇಳುವವರಿಲ್ಲ” ಎಂದು ದೇರಾಜೆ ಸೀತಾರಾಮಯ್ಯನವರ ಮತ.
{{gap}}ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಒಮ್ಮೆ 'ಭೀಷ್ಮಾರ್ಜನ' ನಡೆದಿತ್ತು.
ಅಂದಿನ ಭೀಷ್ಮನ ಕೊರಗು, ಮನದಳಲು, ಸಭಿಕರಿಗೆ ಜೀವಂತವಾಗಿ ಕಂಡು ಬಂತು.
ಕರ್ಮ ಬಂಧನದ ವಿಚಾರವಾಗಿ ಕೃಷ್ಣನೊಡನೆ ನಡೆದ ಜಿಜ್ಞಾಸೆ, ಮಾನಸ ಗಂಗೋತ್ರಿ
ಯಿಂದ ಆಗಮಿಸಿದ್ದ ಅತಿಥಿಗಳೊಬ್ಬರು ಉದ್ಧಾರವೆತ್ತುವಂತೆ ಮಾಡಿತ್ತು.
{{gap}}ಎಡಪದವಿನ ವಿವೇಕಾನಂದ ಹೈಸ್ಕೂಲಿನಲ್ಲಿ 'ಸುಧನ್ವ ತಾಮ್ರಧ್ವಜ......
ನಡೆದಿತ್ತು. ದಿವಂಗತರು ಮಯೂರಧ್ವಜೆ ಹೇಳಿದ್ದರು, ಕೃಷ್ಣ ಬ್ರಾಹ್ಮಣನಾಗಿ<noinclude></noinclude>
jypy2pw8xmzmvxgztaxhb2ra5xthxa4
ಪುಟ:ಯಕ್ಷಗಾನ ಮಕರಂದ.pdf/೨೧೬
104
100136
317786
307118
2026-05-06T17:01:38Z
Pragathi. BH
7585
317786
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|'''190'''}}
ಶರೀರದ ಅರ್ಧವನ್ನು ಬೇಡಿದಾಗ, ಪತ್ನಿ ಪುತ್ರರಿಗೆ ಕೊನೆಯ ಬುದ್ಧಿ ಮಾತು
ಗಳನ್ನು ಹೇಳಿದಾಗ, ಕುಮುದ್ವತಿಯ ಪಾತ್ರ ವಹಿಸಿದ್ದ ಕೋಳೂರು ಶ್ರೀ ರಾಮ
ಚಂದ್ರರಾಯರು ಗಳಗಳನೆ ಅತ್ತು ಮಾತಾಡಲಾರದಾದರು. ಶೋತೃಗಳ ಮೇಲೆ
ಆ ರಾತ್ರಿ ಆದ ಪರಿಣಾಮ ಚಿರಸ್ಮರಣೀಯವಾಗಿದೆ.
{{gap}}ಯಾವ ಪಾತ್ರವನ್ನೇ ಆಗಲಿ ವಹಿಸಿಕೊಂಡರೆ, ನಿರ್ವಹಣೆಯಲ್ಲಿ ಸಂದರ್ಭೋ
ಚಿತವಾದ ರಸಗಳು ಸಮಾವೇಶಗೊಳ್ಳುತ್ತಿದ್ದುದು ಮಾತ್ರವಲ್ಲದೆ, ಆ ಕಥೆ ನಡೆದ
ಕಾಲದ ವಾತಾವರಣ ನಿರ್ಮಾಣ ಆಗಿಂದಾಗ ಆಗಿಬಿಡುತ್ತಿತ್ತು. 'ತಾಳಮದ್ದಳೆ ವಾದ
ಪ್ರಧಾನವಾದ ಕಲೆ ಎಂಬ ಸಿದ್ಧಾಂತ ಇತ್ತೀಚೆಗೆ ಪ್ರಬಲಗೊಂಡಿದೆ. ಶ್ರೀಯುತರ
ದೃಷ್ಟಿಯಲ್ಲಿ, ಅನುಷ್ಠಾನದಲ್ಲಿ, ಅದು ರಸಪ್ರಧಾನವಾಗಿ ಕೊನೆಯ ವರೆಗೆ ಉಳಿದಿತ್ತು.
“ಇದು ಇತರ ವಾಹ್ಮಯ ಕಲೆಗಳಿಗಿಂತ ಕಷ್ಟಸಾಧ್ಯವಾದುದು, ಏಕೆಂದರೆ ಇದರಲ್ಲಿ
ಆಟನಾಟಕಗಳ ಬಣ್ಣ, ವೇಷಭೂಷಣಗಳ, ದೃಶ್ಯಾವಳಿಗಳ ಆಸರೆ, ಪರಿಕರಗಳಿಲ್ಲದೆ,
ಬರೇ ಮಾತಿನ ಮೂಲಕ ರಸೋತ್ಪತ್ತಿ ಮಾಡಬೇಕಾಗುತ್ತದೆ. ರಸಭಂಗವಾದರೆ,
ಪಾತ್ರದ ಬದಲು ಅದನ್ನು ವಹಿಸಿಕೊಂಡವನ ನಿಜರೂಪದ ಅರಿವು ಸಭಿಕರಿಗಾಗುತ್ತದೆ.
ರಸಭಂಗವಾಗುವ ಸಂಭವವಿದ್ದಲ್ಲಿ ವಾದವನ್ನು ಕೈ ಬಿಡಬೇಕು.........
ಎಂದು ಒಮ್ಮೆ ನನ್ನಲ್ಲಿ ಹೇಳಿದ್ದರು.
{{gap}}ಯಾವ ಪಾತ್ರವನ್ನೇ ಆಗಲಿ, ಅದರ ಹೃದಯವನ್ನು ಹೊಕ್ಕು, ಔಚಿತ್ಯ ಭಂಗ
ವಾಗದಂತೆ ರಸಪೋಷಣೆ ನೀಡಿ, ನಿರ್ವಹಿಸುತ್ತಿದ್ದುದು ಶ್ರೀಯುತರ ಅರ್ಥಗಾರಿಕೆಯ
ಪ್ರಧಾನ ಲಕ್ಷಣ, ಗುಣ, ರಾವಣನ ಪಾತ್ರವಹಿಸಿಕೊಂಡಾಗ ರಾಕ್ಷಸ ಸಿದ್ಧಾಂತಗಳ
ಪ್ರತಿಪಾದನೆ ಮಾಡುವ ರೀತಿಯನ್ನು ಕೇಳಿ, ಕೆಲ ಹಳಬರು “ನೀವು ಇಂತಹ ಪಾತ್ರ
ಗಳನ್ನು ಹೇಳಬಾರದು; ಏಕೆಂದರೆ, ನಿಮ್ಮ ಮಾತು ಕೇಳಿದರೆ, ರಾವಣಾದಿಗಳು
ಮಾಡಿದ್ದೇ ಸರಿ ಎನ್ನುವ ಭಾವನೆ ಬೆಳೆದು ಬಂದೀತು... ” ಎಂದಿದ್ದರು.
{{gap}}ಒಬ್ಬ ಕಲಾವಿದನಲ್ಲಿ ಪರಿಶ್ರಮ, ರಸಪ್ರಜ್ಞೆ, ವಿದ್ವತ್ತು, ಅನುಭವ,
ಸೌಜನ್ಯ-ಇವೆಲ್ಲಾ ಏಕಕಾಲದಲ್ಲಿ ಮೈಗೂಡಿರುವುದು ಅಪೂರ್ವ. ಶಾಸ್ತ್ರಿಗಳಲ್ಲಿ ಈ
ಅಪೂರ್ವತೆ ಮನೆ ಮಾಡಿತ್ತು. ಇನ್ನೊಂದು ಅಂತಹ ಇನ್ನೊಬ್ಬರನ್ನು ಕಂಡೇವು ?
{{center|————}}<noinclude></noinclude>
1fv9k7hiz24y12ybi90yi1pdq96m894
317787
317786
2026-05-06T17:01:46Z
Pragathi. BH
7585
/* Validated */
317787
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|'''190'''}}
ಶರೀರದ ಅರ್ಧವನ್ನು ಬೇಡಿದಾಗ, ಪತ್ನಿ ಪುತ್ರರಿಗೆ ಕೊನೆಯ ಬುದ್ಧಿ ಮಾತು
ಗಳನ್ನು ಹೇಳಿದಾಗ, ಕುಮುದ್ವತಿಯ ಪಾತ್ರ ವಹಿಸಿದ್ದ ಕೋಳೂರು ಶ್ರೀ ರಾಮ
ಚಂದ್ರರಾಯರು ಗಳಗಳನೆ ಅತ್ತು ಮಾತಾಡಲಾರದಾದರು. ಶೋತೃಗಳ ಮೇಲೆ
ಆ ರಾತ್ರಿ ಆದ ಪರಿಣಾಮ ಚಿರಸ್ಮರಣೀಯವಾಗಿದೆ.
{{gap}}ಯಾವ ಪಾತ್ರವನ್ನೇ ಆಗಲಿ ವಹಿಸಿಕೊಂಡರೆ, ನಿರ್ವಹಣೆಯಲ್ಲಿ ಸಂದರ್ಭೋ
ಚಿತವಾದ ರಸಗಳು ಸಮಾವೇಶಗೊಳ್ಳುತ್ತಿದ್ದುದು ಮಾತ್ರವಲ್ಲದೆ, ಆ ಕಥೆ ನಡೆದ
ಕಾಲದ ವಾತಾವರಣ ನಿರ್ಮಾಣ ಆಗಿಂದಾಗ ಆಗಿಬಿಡುತ್ತಿತ್ತು. 'ತಾಳಮದ್ದಳೆ ವಾದ
ಪ್ರಧಾನವಾದ ಕಲೆ ಎಂಬ ಸಿದ್ಧಾಂತ ಇತ್ತೀಚೆಗೆ ಪ್ರಬಲಗೊಂಡಿದೆ. ಶ್ರೀಯುತರ
ದೃಷ್ಟಿಯಲ್ಲಿ, ಅನುಷ್ಠಾನದಲ್ಲಿ, ಅದು ರಸಪ್ರಧಾನವಾಗಿ ಕೊನೆಯ ವರೆಗೆ ಉಳಿದಿತ್ತು.
“ಇದು ಇತರ ವಾಹ್ಮಯ ಕಲೆಗಳಿಗಿಂತ ಕಷ್ಟಸಾಧ್ಯವಾದುದು, ಏಕೆಂದರೆ ಇದರಲ್ಲಿ
ಆಟನಾಟಕಗಳ ಬಣ್ಣ, ವೇಷಭೂಷಣಗಳ, ದೃಶ್ಯಾವಳಿಗಳ ಆಸರೆ, ಪರಿಕರಗಳಿಲ್ಲದೆ,
ಬರೇ ಮಾತಿನ ಮೂಲಕ ರಸೋತ್ಪತ್ತಿ ಮಾಡಬೇಕಾಗುತ್ತದೆ. ರಸಭಂಗವಾದರೆ,
ಪಾತ್ರದ ಬದಲು ಅದನ್ನು ವಹಿಸಿಕೊಂಡವನ ನಿಜರೂಪದ ಅರಿವು ಸಭಿಕರಿಗಾಗುತ್ತದೆ.
ರಸಭಂಗವಾಗುವ ಸಂಭವವಿದ್ದಲ್ಲಿ ವಾದವನ್ನು ಕೈ ಬಿಡಬೇಕು.........
ಎಂದು ಒಮ್ಮೆ ನನ್ನಲ್ಲಿ ಹೇಳಿದ್ದರು.
{{gap}}ಯಾವ ಪಾತ್ರವನ್ನೇ ಆಗಲಿ, ಅದರ ಹೃದಯವನ್ನು ಹೊಕ್ಕು, ಔಚಿತ್ಯ ಭಂಗ
ವಾಗದಂತೆ ರಸಪೋಷಣೆ ನೀಡಿ, ನಿರ್ವಹಿಸುತ್ತಿದ್ದುದು ಶ್ರೀಯುತರ ಅರ್ಥಗಾರಿಕೆಯ
ಪ್ರಧಾನ ಲಕ್ಷಣ, ಗುಣ, ರಾವಣನ ಪಾತ್ರವಹಿಸಿಕೊಂಡಾಗ ರಾಕ್ಷಸ ಸಿದ್ಧಾಂತಗಳ
ಪ್ರತಿಪಾದನೆ ಮಾಡುವ ರೀತಿಯನ್ನು ಕೇಳಿ, ಕೆಲ ಹಳಬರು “ನೀವು ಇಂತಹ ಪಾತ್ರ
ಗಳನ್ನು ಹೇಳಬಾರದು; ಏಕೆಂದರೆ, ನಿಮ್ಮ ಮಾತು ಕೇಳಿದರೆ, ರಾವಣಾದಿಗಳು
ಮಾಡಿದ್ದೇ ಸರಿ ಎನ್ನುವ ಭಾವನೆ ಬೆಳೆದು ಬಂದೀತು... ” ಎಂದಿದ್ದರು.
{{gap}}ಒಬ್ಬ ಕಲಾವಿದನಲ್ಲಿ ಪರಿಶ್ರಮ, ರಸಪ್ರಜ್ಞೆ, ವಿದ್ವತ್ತು, ಅನುಭವ,
ಸೌಜನ್ಯ-ಇವೆಲ್ಲಾ ಏಕಕಾಲದಲ್ಲಿ ಮೈಗೂಡಿರುವುದು ಅಪೂರ್ವ. ಶಾಸ್ತ್ರಿಗಳಲ್ಲಿ ಈ
ಅಪೂರ್ವತೆ ಮನೆ ಮಾಡಿತ್ತು. ಇನ್ನೊಂದು ಅಂತಹ ಇನ್ನೊಬ್ಬರನ್ನು ಕಂಡೇವು ?
{{center|————}}<noinclude></noinclude>
cfnqloi5zhhj5w9z3m9rh8gcv6cgnv4
ಪುಟ:ಯಕ್ಷಗಾನ ಮಕರಂದ.pdf/೨೧೭
104
100137
317788
307119
2026-05-06T17:02:39Z
Pragathi. BH
7585
/* Validated */
317788
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|'''ಜೀವಂತ ವ್ಯಕ್ತಿತ್ವ'''}}
—————————————————————————————————
{{Right|'''ಕಜೆ ಈಶ್ವರ ಭಟ್ಟ,'''}}
{{gap}}ದಿ/ ಪೊಳಲಿ ಶಾಸ್ತ್ರಿಗಳೊಂದಿಗೆ, ಕೆಲವು ಮಟ್ಟಿಗೆ ನಿಕಟವರ್ತಿಯಾಗುವ
ಸಂದರ್ಭ ಒದಗಿರುವವರಲ್ಲಿ ನಾನೊಬ್ಬ. ಅವರ ಒಡನಾಟದಲ್ಲಿ, ಅವರು ಕಲಾವಿದ
ರಾಗಿಯೂ, ವ್ಯಕ್ತಿಯಾಗಿಯೂ ಎಂತಹ ಎತ್ತರದವರು ಎಂಬುದನ್ನು ನಾನು
ಮನಗಂಡಿದ್ದೇನೆ. ನನಗೆ ಅವರ ಪರಿಚಯವಾದುದು 1956ರಲ್ಲಿ, ಕೆದಿಲದಲ್ಲಿ.
ಮಂಗಳೂರಿನ ಸಾಂಸ್ಕೃತಿಕ ಶಿಷ್ಟ ಮಂಡಲವೊಂದು, ಕರ್ನಾಟಕ ಪ್ರವಾಸ ಮುಗಿಸಿ
ಮರಳಿತ್ತು. ಈ ಮಂಡಲದ ಸದಸ್ಯರಲ್ಲಿ ಶಾಸ್ತ್ರಿಗಳೂ ಒಬ್ಬರು. ಈ ತಂಡಕ್ಕೆ
ಕೆದಿಲದಲ್ಲಿ ಸ್ವಾಗತ ಸಮಾರಂಭ ಏರ್ಪಡಿಸಿದ್ದೆವು. ಈ ಸಮಾರಂಭದಲ್ಲಿ ನಮ್ಮೊಳ
ಗಾದ ಪರಿಚಯ, ಆತ್ಮೀಯತೆಯಾಗಿ ಬೆಳೆಯಿತು.
{{gap}}ಮುಂದೆ ಪುತ್ತೂರಿನ ತಾಳಮದ್ದಲೆಯೊಂದರಲ್ಲಿ ನಡೆದ ತಿಕ್ಕಾಟದ ಪರಿಣಾಮ,
ತಾಳಮದ್ದಲೆ ರಂಗದ ಖ್ಯಾತ ಅರ್ಥಧಾರಿಗಳು ಎರಡು ಪಂಗಡಗಳಾಗಿ ಒಡೆದರು.
ಇಂತಹ ಗುಂಪುಗಾರಿಕೆ ಏರ್ಪಟ್ಟದ್ದು ನಮಗೆಲ್ಲ ಬೇಸರವಾಗಿತ್ತು. ಏನಾದರೂ ಮಾಡಿ ಎರಡು ಪಂಗಡಗಳೊಳಗೆ ರಾಜಿಮಾಡಬೇಕೆಂದು, ನಾನು ಮತ್ತು ಗೆಳೆಯ ಶ್ರೀ ಎನ್. ವಿ. ಕೃಷ್ಣ ರಾವ್ ಯತ್ನಿಸಿದಾಗ ಶಾಸ್ತ್ರಿಗಳೊಂದಿಗೆ ಹತ್ತಿರದಿಂದ ಮಾತಾಡುವ ಸಂದರ್ಭ ಒದಗಿತು. ರಾಜಿಯ ಸಂಬಂಧವಾಗಿ ಅವರು ವಹಿಸಿದ ಧೋರಣೆ, ಅದರ ಸಮಾಲೋಚನೆ ಮಾಡುವಾಗ ಅವರ ಮಾತಿನ ರೀತಿ, ನಮಗೆ ಅವರಲ್ಲಿದ್ದ ಗೌರವವನ್ನು ಹೆಚ್ಚಿಸಿತು. ಆ ಸಂಬಂಧವಾಗಿ ನಾನೊಮ್ಮೆ ಅವರ ಮನೆಗೆ
ಹೋದಾಗ ಶಾಸ್ತ್ರಿಗಳ ಜಪ, ಪೂಜೆ, ನೇಮ, ನಿಷ್ಠೆಗಳ ಪರಿಚಯ ನನಗಾದುದು.
{{gap}}ಗೆಳೆಯರ ಒಡನಾಟದಲ್ಲಿ ಶಾಸ್ತ್ರಿಗಳು ವಿನೋದಪ್ರಿಯರು, ರಸಿಕರು. ಅವರ
ಮಾತಿಗೆ ತಿಳಿಹಾಸ್ಯದ ಶೈಲಿ. ಅವರ ಹಾಸ್ಯವಾದರೂ, ಯಾರನ್ನೂ ನೋಯಿಸದೆ,
ಎಲ್ಲರನ್ನೂ ನಗಿಸುವ ರೀತಿಯದಾಗಿತ್ತು. ನಾವು ಪರವೂರುಗಳಲ್ಲಿ, ಅವರೊಂದಿಗೆ
ಹೋದಾಗ, ನಮಗೆಲ್ಲ ಟೇಬಲಿನಲ್ಲಿ ಊಟವಾದರೆ, ಶಾಸ್ತ್ರಿಗಳಿಗೆ ಮಾತ್ರ ಟೇಬಲಿನಲ್ಲಿ
ಊಟ ಮಾಡುವುದು ಸೇರದು. “ನನ್ನ ಪಂಕ್ತಿ ಬೇರೆ” ಅನ್ನುತ್ತಿದ್ದರು.
{{gap}}ಕಟೀಲಿನ ತಾಳಮದ್ದಲೆಯಲ್ಲಿ, ಒಮ್ಮೆ ಅವರಿಗೆ ವಿದುರನ ಪಾತ್ರ. ಅದು
ಅವರು ಯಾವಾಗಲೂ ಹೇಳುವ ಅರ್ಥವಲ್ಲ, ಅಂದು ಅವರು ಚಿತ್ರಿಸಿದ ವಿದುರ<noinclude></noinclude>
e1rv0id01wrc1x8y4f9x3mupev0hfcd
ಪುಟ:ಯಕ್ಷಗಾನ ಮಕರಂದ.pdf/೨೧೮
104
100138
317789
307120
2026-05-06T17:04:33Z
Pragathi. BH
7585
/* Validated */
317789
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|'''192'''}}
ಪಾತ್ರ, ಇಂದಿಗೂ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಪಾತ್ರಚಿತ್ರಣದಲ್ಲಿ,
ವಿದುರನ ಭಕ್ತಿ ಪ್ರಕಟನೆಯಲ್ಲಿ ಅವರು ತೋರಿದ ಕಲಾಪ್ರೌಢಿಮೆ - ಆ ಪಾತ್ರವನ್ನು
ಅವರು ಹೊಸದಾಗಿ ಅಂದು ವಹಿಸಿದ್ದರು ಎಂಬುದು ಎಳ್ಳಷ್ಟೂ ಗೊತ್ತಾಗು
ವಂತಿರಲಿಲ್ಲ. ಬದಲಾಗಿ, ವಿದುರ ಅವರಿಗಾಗಿಯೇ ಹೇಳಿಸಿದ ಪಾತ್ರ ಎಂಬಂತಿತ್ತು.
{{gap}}ಬೆಳ್ಳಾರೆಯಲ್ಲಿ ಒಮ್ಮೆ ಅವರು ಜರಾಸಂಧನ ಪಾತ್ರ ವಹಿಸಿದಾಗ, ಅವರಲ್ಲಿ
ಹುದುಗಿದ್ದ ಅದ್ಭುತ ಕಲಾಶಕ್ತಿಯ ದರ್ಶನ ನಮಗಾಯಿತು. “ಕೇಳ್ತಾ ಬಿರುನಗೆ
” ಎಂಬ ಪದ್ಯಕ್ಕೆ ಕೃಷ್ಣನನ್ನು ಕುರಿತು ಅವರು ನಗೆಯಾಡಿದ ರೀತಿ ಅನುಪಮ
ವಾದುದು. ನಗೆಯೊಂದರಲ್ಲಿ ಎಷ್ಟು ವೈವಿಧ್ಯ, ಎಷ್ಟು ಭಾವಗಳು, ಎಂತಹ ಏರಿಳಿತ!
ಆ ನಗೆಯೆಂದರೆ ಬರಿಯ ನಗೆಯಲ್ಲ. ಅದು ಭಾವಗಳ ಸರಮಾಲೆ. ಆ ನಗುವಿನಲ್ಲಿ,
ಅವರೆಂತಹ ಭಾವಜೀವಿ ಎಂಬುದನ್ನು ಮನಗಂಡು ನಾವು ವಿಸ್ಮಯಪಟ್ಟೆವು. ಅವರ
ನಗೆಯ ಅಲೆಗಳಲ್ಲಿ ಇಡಿಯ ಸಭೆ ಓಲಾಡಿತು.
{{gap}}ಶ್ರೀ ದೇರಾಜೆ ಸೀತಾರಾಮಯ್ಯನವರ ಮನೆಯಲ್ಲಿ, ಅವರ ಪುರಾಣ ವಾಚನ
'ಸೀತಾಕಲ್ಯಾಣ'ವನ್ನು ಕೇಳಿದ್ದೆ. ಓದುವಲ್ಲಿ, ಅರ್ಥ ಹೇಳುವಲ್ಲಿ ಅವರಿಗಿದ
ತಾದಾತ್ಮ, ಮನಮುಟ್ಟುವ ವಿವರಣೆಗಳಿಂದ ಪ್ರವಚನದಲ್ಲಿ ಅವರ ಸಿದ್ದಿ ಎಷ್ಟು
ಸುಂದರ ಮತ್ತು ಉನ್ನತವಾದುದೆಂದು ಸ್ಪಷ್ಟವಾಗಿ ಕಾಣುತ್ತಿತ್ತು.
{{gap}}ಹಲವು ಪಾತ್ರಗಳಲ್ಲಿ, ಪ್ರೌಢವಾಗಿ, ಬಗೆಬಗೆಯ ಜಾತ್ರೆಯನ್ನು ತೋರಿ
ಮಾತಾಡುತ್ತಿದ್ದ ಶಾಸ್ತ್ರಿಗಳು, 'ಸುಭದ್ರಾ ಕಲ್ಯಾಣ'ದ ಬಲರಾಮನಾದಾಗ ಕಪಟ
ವರಿಯದ ಶುದ್ಧ ಭೋಳೆ' ಆಗುತ್ತಿದ್ದರು. ಬಲರಾಮನ ಪಾತ್ರ ಚಿತ್ರಣ ಅವರ
ಕಲಾಭಿವ್ಯಕ್ತಿಯ ಒಂದು ವಿಶಿಷ್ಟವಾದ ಮುಖ.
{{gap}}ಶಾಸ್ತ್ರಿಗಳೊಂದಿಗೆ ಚಿಕ್ಕಪುಟ್ಟ ಪಾತ್ರಗಳನ್ನು ವಹಿಸಿ ಭಾಗವಹಿಸುವ
ಸದವಕಾಶವೂ ಲಭಿಸಿತ್ತು. ಕೆದಿಲದ ಪಡೀಲು ಈಶ್ವರ ಭಟ್ಟರ ಮನೆಯಲ್ಲಿ ಕೃಷ್ಣ
ಸಂಧಾನ ಪ್ರಸಂಗ, ದೇರಾಜೆ ಅವರು ಕೌರವ, ಶಾಸ್ತ್ರಿಗಳು ಕೃಷ್ಣ, ನಾನು ಅರ್ಜುನನ
ಪಾತ್ರ ವಹಿಸಿದ್ದೆ. ಅಂದಿನ ಇಡಿಯ ತಾಳಮದ್ದಲೆ, ಅವಿಸ್ಮರಣೀಯ, ಶಾಸ್ತ್ರಿ
ಗಳು ಅರ್ಜುನನನ್ನು ಮಾತಾಡಿಸಿದ ರೀತಿ, ಅರ್ಥ ಹೇಳುವುದರಲ್ಲಿ ಸಂವಾದ ಕ್ರಮಕ್ಕೆ
ಒಂದು ಉತ್ತಮ ಉದಾಹರಣೆ. ಸ್ವಾರಸ್ಯವಾದ ಸಂಭಾಷಣೆ ಜೋಡಿಸುವ
ಶಾಸ್ತ್ರಿಗಳ ರೀತಿಯಿಂದ, ಅವರೊಂದಿಗೆ ಅರ್ಥ ಹೇಳುವುದೇ ಒಂದು ವಿಶಿಷ್ಟ ಅನುಭವ
ಕಿರಿಯ ಕಲಾವಿದರನ್ನು ಅವರು ಮೇಲಕ್ಕೊಯ್ಯುವ ಕ್ರಮ ಮರೆಯಲಾಗದಂತಹದು.
{{gap}}ತಮ್ಮ ಆದರ್ಶ ವ್ಯಕ್ತಿತ್ವದಿಂದ, ಸೌಜನ್ಯ, ಗುಣ ಗೌರವಗಳಿಂದ, ಉನ್ನತ
ಕಲಾ ಪರಿಣತಿಯಿಂದ, ಶಾಸ್ತ್ರಿಗಳು ನಮ್ಮ ನೆನಪಿನಲ್ಲಿ ಸದಾ ಜೀವಂತರಾಗಿದ್ದಾರೆ.
{{center|———}}<noinclude></noinclude>
fmz6d9ol6kj3jk6seyg294g030yfu4s
ಪುಟ:ಯಕ್ಷಗಾನ ಮಕರಂದ.pdf/೨೧೯
104
100139
317764
307121
2026-05-06T16:46:24Z
Pragathi. BH
7585
/* Validated */
317764
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|'''ತುಂಬಿದ ಕೊಡ'''}}
——————————————————————————————————
{{Right|'''-ಕೂರಾಡಿ ಸದಾಶಿವ ಕಲ್ಕೂರ.'''}}
{{gap}}1957-59ರ ಅವಧಿ. ನಾನಾಗ ಮಂಗಳೂರು ಬುನಾದಿ ತರಬೇತಿ ಶಾಲೆ
ಯಲ್ಲಿ ಕಲಿಯುತ್ತಿದ್ದೆ. ನನ್ನಲ್ಲಿರುವ ಯಕ್ಷಗಾನದ ಅರ್ಥಗಾರಿಕೆಯ ಒಲವಿಗೆ
ಕದ್ರಿ ಯಕ್ಷಗಾನ ಸಂಘ, ಮಹಾಮ್ಮಾಯಿ (ವಾಗೀಶ್ವರೀ) ಸಂಘಗಳು ಉಣಿ
ಸನ್ನಿತ್ತವು. ಆಗ ಕದ್ರಿ, ಶಂಕರನಾರಾಯಣ ಅಡಿಗರ ಸ್ನೇಹವಾಯಿತು. ಅವರು
ಮಾತೆತ್ತಿದಾಗೆಲ್ಲ “ನಮ್ಮ ಗುರುಗಳು” ಎನ್ನುತ್ತಿದ್ದರು. “ಯಾರಯ್ಯ ನಿಮ್ಮ ಗುರು
ಗಳು?” ಎಂದು ನಾನೆಂದಾಗ, ಒಮ್ಮೆ ಕದ್ರಿಯಲ್ಲಿ ನನಗೆ ತೋರಿಸಿದರು. ಈ ಗುರು
ಗಳನ್ನು ನಾನು ಎಷ್ಟೋ ಬಾರಿ ಕೊಡಿಯಾಲಬೈಲಿನಲ್ಲಿ ಕಂಡಿದ್ದೆ. ರಸ್ತೆಯ ಬದಿಯ
ಚರಂಡಿಗೆ ತಾಗಿದಂತೆ, ಅತ್ತಿತ್ತ ಇಣುಕದೆ ನಡೆಯುವ, ಸರ್ವಾಂಗ ಬಿಳೇ ಹೊದಿಕೆಯ
ರೂಪು. ಪಾದದಿಂದ ನೆತ್ತಿ ತನಕ ಕಡ್ಡಿ ಕಡ್ಡಿ ಆಕೃತಿ. ಎದ್ದು ತೋರುವ ಮೂಗು,
ಮಿಂಚುವ ಸಾತ್ವಿಕತೆ. ವಿದ್ಯಾವಿನಯಸಂಪನ್ನತೆಯ ಸಲ್ಲಕ್ಷಣ.
{{gap}}ಈ ಕಾಲಕ್ಕಾಗಲೇ ಶಾಸ್ತ್ರಿಗಳು ಅರ್ಥಗಾರಿಕೆ, ಪುರಾಣ ಪ್ರವಚನಗಳೆರಡರಲ್ಲ
ಖ್ಯಾತರಾಗಿದ್ದರು. ಇವರ ಅರ್ಥ ನಾನು ಕೇಳಿದ್ದು ಒಂದೇ ಒಂದು. ಬಾಳಿಲ
ಹೈಸ್ಕೂಲಿನಲ್ಲಿ ನಡೆದ 'ಶರಸೇತು ಬಂಧನ'ದ ಬ್ರಾಹ್ಮಣವೇಷಧಾರಿಯಾದ ಶ್ರೀ
ಕೃಷ್ಣನ ಅರ್ಥ, ಪ್ರವಚನದಲ್ಲಿ ಶಾಸ್ತ್ರಿಗಳ ಸಿದ್ದಿ ಅತ್ಯುನ್ನತವಾದುದು. ಬಕಾಸುರ
ವಧೆ, ದಧೀಚಿ, ಜೀಮೂತವಾಹನರ ಕತೆ- - ಇವುಗಳನ್ನೆಲ್ಲ ಅವರ ಬಾಯಲ್ಲಿ ಕೇಳಿ
ಬಹಳ ಆನಂದಪಟ್ಟವನು ನಾನು, ಕಾವ್ಯದ ವಕ್ರೋಕ್ತಿ, ಧ್ವನಿ, ಅರ್ಥಶ್ರೀಮಂತಿಕೆ,
ಕವಿಹೃದಯಗಳನ್ನು ತಿಳಿಯುವ ಅವರ ಸಹೃದಯತೆ ಅಸಾಮಾನ್ಯವಾದುದು
ಎರಡು ಮೂರು ಗಂಟೆ ಕಾಲ ಕುಳಿತ ಭಂಗಿಯಲ್ಲಿ, ಅತ್ತಿತ್ತ ಹೊಂಗದೆ, ಮುಖದ
ಕಳೆಗೆಡದೆ, ಆಯಾಸದ ವಿಕಾರಕ್ಕೆ ಒಳಗಾಗದೆ ಇರುವ ಅವರ ನಿಲುವು, ಹಸನ್ಮುಖ,
ಅವರ ಕಾವ್ಯಾಧ್ಯಯನಶೀಲತೆಯ ತನ್ಮಯತೆಯನ್ನೂ, ರಸ ಸೌಂದರವನ್ನು ಹೀರಿ
ಅನ್ಯರಿಗೆ ಹಂಚುವಲ್ಲಿ ಇದ್ದ ಉತ್ಸಾಹವನ್ನೂ ಸಾರುತ್ತಿದ್ದುವು.
{{gap}}ನಾನು ಪಂಜದಲ್ಲಿ ಅಧ್ಯಾಪಕನಾಗಿ ಸೇರಿದ ಹೊಸದರಲ್ಲಿ ಒಮ್ಮೆ ಮಂಗಳೂರಿಗೆ
ಬಂದಾಗ ಅವರ ಮನೆಗೆ ಹೋಗಿದ್ದೆ. ಈ ಭಟ್ಟಿಯೇ ಕೊನೆಯದಾಗಬಹುದೆಂದು<noinclude></noinclude>
iu7yglf1fwswp74t2l97xjo4rje5lud
ಪುಟ:ಯಕ್ಷಗಾನ ಮಕರಂದ.pdf/೨೨೦
104
100140
317765
307123
2026-05-06T16:46:41Z
Pragathi. BH
7585
/* Validated */
317765
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|'''194'''}}
ನಾನು ಊಹಿಸಿರಲಿಲ್ಲ. ಪತ್ರಿಕಾವಾರ್ತೆ ಓದಿ ಯಕ್ಷಗಾನದ ಭೀಷ್ಮರು ಉತ್ತರಾ
ಯಣಕ್ಕೆ ಸಂದರೆಂದು ತಿಳಿದು, ಬೊಗಸೆ ನೀರುಬಿಟ್ಟೆ. ಕೇವಲ ಎರಡು ಗಂಟೆಯ
ಸಂಭಾಷಣೆಯಲ್ಲಿ ಅವರ ಸತ್ವ ನನ್ನನ್ನು ಅಷ್ಟು ಆವರಿಸಿತ್ತು.
ಶಾಸ್ತ್ರಿಗಳನ್ನು ನೆನೆದಾಗ ಕಣ್ಣು ತೇವವಾಗುತ್ತದೆ. ಅರ್ಥಗಾರಿಕೆಯಲ್ಲಿ ಶಾಸ್ತ್ರಿ
ಗಳು “ಸಾಕ್ಷಾತ್ಕಾರ”ದಂತಹ ಸಿದ್ದಿ ಪಡೆದವರು. ಸಿದ್ಧರಾಮನಂತಹ ಅಂತಃಕರಣ
ಅವರದು. ತ್ಯಾಗಯ್ಯನಿಗೆ ಸಂಗೀತ ಹೇಗೋ ಹಾಗೆ ಶಾಸ್ತ್ರಿಗಳಿಗೆ ಸಾಹಿತ್ಯ ಚಿಂತನ.
ವೃಥಾ ವಿರೋಧ, ಮಾನಸಿಕ ಹಿಂಸೆ, ಉಪಟಳ ಬಂದಾಗಲೂ ಅದನ್ನು ಪೊಳಲಿ
ಅಮ್ಮನ ಪ್ರಸಾದವೆಂದು, ನಂಜುಂಡನಂತೆ ಸ್ವೀಕರಿಸಿದ ಸ್ಥಿತಪ್ರಜ್ಞ ಅವರು. ಅವರಿಗೆ
ತೊಂದರೆ ಕೊಟ್ಟವರೂ ಅವರನ್ನು ಹೊಗಳಬಹುದು. ನಾವು ಗರುಡಪುರಾಣದ
ಭಕ್ತರು, ಹಿರಿಯರನ್ನು ಹರಕುಗೋಣಿಯಲ್ಲಿರಿಸಿದರೂ ಹನ್ನೆರಡನೆಯ ದಿನ ಹಾಸಿಗೆ
ದಾನ ನೀಡಿ ಶಹಭಾಸ್ ಗಿಟ್ಟಿಸಿದರೆ ಶ್ರೇಯ, ನಿಶ್ರೇಯ ದೊರಕುತ್ತದೆ !
ಕಲೆಯಲ್ಲಿ ಶಿವರಾಮ ಕಾರಂತರ ಪ್ರಯತ್ನಗಳನ್ನು ಮೆಚ್ಚುತ್ತಿದ್ದ ಶಾಸ್ತ್ರಿಗಳು
“ಯಾರೆಷ್ಟು ಪ್ರಯತ್ನಿಸಲಿ, ಯಕ್ಷಗಾನ ಕ್ಷೇತ್ರದಲ್ಲಿರುವ ಅಸೂಯೆ, ವೈಷಮ್ಯಗಳು
ಹೋಗದೆ, ಇದು ಮೇಲೆ ಹೋಗಲಾರದು” ಅನ್ನುತ್ತಿದ್ದರು. “ಯಕ್ಷಗಾನಕ್ಕಿಂತ
ನನಗೆ ಈಗೀಗ ಪುರಾಣಪ್ರವಚನವೇ ಸುಖ ನೀಡುತ್ತಿದೆ. ಓದುವವರಾಗಲಿ, ಪುಸ್ತಕ
ವಾಗಲಿ ನನ್ನ ಮಾತನ್ನು ತಪ್ಪಾಗಿ ತಿಳಿಯುವುದಿಲ್ಲ ನೋಡಿ” ಅಂದರು.
ಓರ್ವ ವ್ಯಕ್ತಿಯ ಕುರಿತಾಗಿ ಹೇಳುವಾಗ ಶಾಸ್ತ್ರಿಗಳ ಚಿಕ್ಕ ಮುಖ ದುಂಡಗಾಗು
ತಿತ್ತು. ಆ ವ್ಯಕ್ತಿ ನಾರಾಯಣ ಕಿಲ್ಲೆಯವರು. ಆತನ ಗಾಂಭೀರ, ಧೀಮಂತಿಕೆ,
ವಿನಯ, ಯಾರಿಗೆ ಬರಬೇಕು? ಆತ ನನ್ನನ್ನು “ಶಾಸ್ತ್ರಿಗಳೇ” ಅಂದಂದಿಲ್ಲ, ಅಣ್ಣೀರೇ?
ಎಂದೇ ಕರೆಯುತ್ತಿದ್ದುದು. ಅವನಿಗೆ ಯಕ್ಷಗಾನದ ಗೀಳು. ಕುಳಿತಲ್ಲಿ ಕೂಟವಾದರೆ
ಸಾಲದು. ಹೋಗುವಾಗಲೂ ಕೂಟ ಕಟ್ಟಿಕೊಂಡೇ ಹೋಗಬೇಕು. ಖರ್ಚು ವೆಚ್ಚಕ್ಕೆ
ಹೆದರುವವನಲ್ಲ. ಎಂತಹ ಔನ್ನತ್ಯ, ಎಂತಹ ಧ್ವನಿ! ಎಲ್ಲಕ್ಕಿಂತ ಹೆಚ್ಚಾಗಿ ಸ್ವಚ್ಛ
ಹೃದಯಿ. ಜೀವನದಲ್ಲಿ ಕರ್ಣನೇ ಆಗಿದ್ದ. ಅವನನ್ನು ಕಳಕೊಂಡು ಯಕ್ಷಗಾನ
ಮಾತ್ರವಲ್ಲ, ನಾನು ಬಡವನಾದೆ” ಎಂದರು.
“ಅರ್ಥಗಾರಿಕೆ ಹೇಗಿರಬೇಕು ಸ್ವಾಮೀ ?” ಅಂದರೆ, “ಮೊದಲು ಪಾತ್ರದ
ವ್ಯಕ್ತಿತ್ವದ ಬಗ್ಗೆ ಚಿಂತನೆ ನಡೆಸಬೇಕು. ಇದೇ ಪಾತ್ರಗೌರವ, ಕರ್ಣಾರ್ಜುನ'ದ
ಅಶ್ವತ್ಥಾಮನನ್ನೆ ಇರಿಸಿಕೊಳ್ಳಿ. ಒಂದು ಸಣ್ಣ ಪಾತ್ರ. ಆದರೆ, ಇಂದು ನಾವು
ನೋಡುವ ಬ್ರಾಹ್ಮಣರ ಹೋಲಿಕೆಯವನಲ್ಲ. ಅವನಲ್ಲಿ ಕ್ಷತ್ರಿಯ ತೇಜಸ್ಸಿದೆ,
ಬ್ರಾಹ್ಮಣನ ಜ್ಞಾನಸಿದ್ಧಿ ಇದೆ, ಮಿಗಿಲಾಗಿ ಚಿರಂಜೀವಿ. ಈ ಗುಣಗಳಿಗೆ ವಿರುದ್ಧ
ವಾದ ನಿರೂಪಣೆ ಬರಬಾರದು” ಎಂದರು. ಅರೆನಕ್ಕು, “ದಕ್ಷಿಣೆಯ ಆಸೆಗಾಗಿ
ದುರ್ದಾನಕ್ಕೆ ಕೈನೀಡುವ ಬ್ರಾಹ್ಮಣನಂತೆ ಚಿತ್ರಿಸಿದರೆ ಹೇಗೆ ? ಮಾಗದ ನೋಡಿ,<noinclude></noinclude>
cc7oo8f268f0umfq90639plpx6qmk6i
ಪುಟ:ಯಕ್ಷಗಾನ ಮಕರಂದ.pdf/೨೨೧
104
100141
317766
307125
2026-05-06T16:46:52Z
Pragathi. BH
7585
/* Validated */
317766
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|'''195'''}}
ಅದೆಷ್ಟೋ ರಾಜಪುತ್ರರನ್ನು ಸೋಲಿಸಬೇಕೆಂದು ಸಂಕಲ್ಪ ಮಾಡಿದವನು. ಅವನ
ಹೃದಯ ಎಷ್ಟು ಕಠಿನವಿರಬೇಡ ! ಎರಡು ಹೆಣ್ಣು ಮಕ್ಕಳ ವೈಧವ್ಯದಿಂದ ಅವನ
ಹೃದಯಕ್ಕೆ ಎಷ್ಟು ಆಘಾತವಾಗಿರಬಹುದು! ಇದನ್ನು ಅರ್ಥಮಾಡಿಕೊಳ್ಳಬೇಡವೆ? ”
ಯಕ್ಷಗಾನದ ಕುರಿತು ಮಾತಾಡುವಾಗ ಒಮ್ಮೊಮ್ಮೆ ಮನನೋಯುವ ಕಹಿ
ಘಟನೆಗಳನ್ನು ಸ್ಮರಿಸಿದರು. ಆದರೆ “ಜೀವನದಲ್ಲಿ ನಾನು ತೃಪ್ತ” ಎಂದಿದ್ದರು. “ಸತ್ಯ
ನಾರಾಯಣ ಕತೆ ಹೇಳುತ್ತಿದ್ದ ನನ್ನನ್ನು ಅರ್ಥಧಾರಿಯಾಗಿ ಮಾಡಿದವರು
ಸುಬ್ರಾಯಾಚಾರಿ” ಎಂದು ಕೃತಜ್ಞತೆಯಿಂದ ನೆನೆದರು. ಈ ಸಂಸ್ಕೃತ, ಪುರಾಣ
ಗ್ರಂಥಗಳಲ್ಲಿ ಪಟ್ಟ ಪರಿಶ್ರಮದಿಂದ, ಯತ್ನಿಸಿದ್ದರೆ ಎಂ. ಎ. ಮಾಡಬಹುದಿತ್ತು.
ಅದರಿಂದ ಅತೃಪ್ತಿ ಅಲ್ಲ, ಹೀಗೇ, ಮನಸ್ಸಿಗೆ ಬಂದುದನ್ನು ಹೇಳಿದೆ” ಎಂದರು.
ಮಾತುಮಾತಿಗೆ, ಜಿ. ಪಿ. ರಾಜರತ್ನಂರಂತೆ, ಪುರಾಣದ ಕತೆಗಳು ಬರುತ್ತಿದ್ದುವು.
ಇನ್ನು ಹೊರಡುವುದೆಂದು, ಕೆಲವು ಹಣ್ಣು, ಕಿಂಚಿತ್ತು ಹಣ ಅವರೆದುರು
ಇರಿಸಿ ನಮಸ್ಕರಿಸಿದೆ. ನನ್ನ ರಟ್ಟೆ ಹಿಡಿದು ಕುರ್ಚಿಯಲ್ಲಿ ಕುಳ್ಳಿರಿಸಿ, ಪುನಃ
ಮಾತಾಡಿದರು. ಹಣ್ಣನ್ನು ನನಗೂ ಕೊಟ್ಟು, ತಾವೂ ಸ್ವಲ್ಪ ತಿಂದು, ಇರಿಸಿದ
ಹಣವನ್ನು ನಗುತ್ತ ನನ್ನ ಕಿಸೆಗೆ ಹಾಕಿದರು. ಕಷ್ಟಪಟ್ಟು ಬಂದುದಕ್ಕೆ ನಾನೇ
ನಿಮಗೆ ಕೊಡಬೇಕಿತ್ತು” ಅಂದರು. “ಭಕ್ತಿಯ ಕಾಣಿಕೆ, ಪುನಃ ಹೇಗೆ ಪಡೆಯಲಿ?”
ಎಂದೆ. “ಹಾಗೇನಿಲ್ಲ, ನೀವು ನನಗೆ ಕೊಟ್ಟಂತೆ, ನಾನು ನಿಮಗೆ ಕೊಟ್ಟೆ” ಎಂದರು
ಗುಣದಲ್ಲಿ, ತಪಸ್ಸಿನಲ್ಲಿ, ವ್ಯಕ್ತಿತ್ವದಲ್ಲಿ ಭೀಷ್ಮನ ಪ್ರಭಾವ ಅವರ ಮೇಲೆ ಬಿದ್ದಿರಬೇಕು.
ಆ ತಾಳಧ್ವಜ ಭೀಷ್ಮರಂತೆ ಅವರ ಜೀವನಕಲ್ಪತರು ಎತ್ತರಕ್ಕೆ
ಬೆಳೆದಿತ್ತು. ತುಂಬಿದ ಕೊಡ ಅದು, ತುಳುಕುತ್ತಿರಲಿಲ್ಲ.
{{center|————}}<noinclude></noinclude>
j06ygsazekoi71g4srj586jgq6n2ysm
ಪುಟ:ಯಕ್ಷಗಾನ ಮಕರಂದ.pdf/೨೨೩
104
100142
317768
307127
2026-05-06T16:47:17Z
Pragathi. BH
7585
/* Validated */
317768
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|'''197'''}}
ನಾನು ಅವರಲ್ಲಿ, “ಸ್ವಾವಿ, ನಾನು ಇನ್ನೂ ಅಕ್ಷರಾಭ್ಯಾಸ ನಡೆಸುವ ಬಾಲಕ,
ತಾವು ಮುಂದೆ ಕುಳಿತಿರುವಾಗ, ನನ್ನಿಂದ ಅರ್ಥ ವಿವರಿಸುವುದಕ್ಕೆ ಸಾಧ್ಯವಿಲ್ಲ.
ನನ್ನ ಮೇಲೆ ಅನುಗ್ರಹವಿರುವುದಾದರೆ ಇಂದು ಯಾವುದಾದರೊಂದು ಸಂಧಿಯನ್ನು
ತಾವು ವಿವರಿಸಿ ನನ್ನನ್ನು ಹರಸಬೇಕು, ಪ್ರಾರಂಭ ಮಾಡಿದ ಕಾವ್ಯದ ಮಂಗಳ ಪದ್ಯ
ಮಾತ್ರ ನಾನು ಹೇಳುತ್ತೇನೆ” ಎಂದು ಬಿನ್ನವಿಸಿಕೊಂಡೆ.
ಶಾಸ್ತ್ರಿಗಳು ನನ್ನ ಬೆನ್ನು ತಟ್ಟುತ್ತಾ “ಹೆದರಬೇಡಿ, ನಿಮ್ಮಂತಹರ ಅಭಿವೃದ್ಧಿ
ನನಗೆ ಸಂತೋಷ. ಆದರೂ ಇಂದು ನಿಮ್ಮ ಅಭಿಲಾಷೆಯನ್ನು ನಾನು ಪೂರೈಸದಿರ
ಲಾರೆ” ಎಂದು ಹೇಳಿದಾಗ ನಾನು ನೆಮ್ಮದಿಯಿಂದ ಉಸಿರುಬಿಡುವಂತಾಯಿತು.
ಅಂದಿನ ಸನ್ನಿವೇಶಕ್ಕೆ ಯಾವ ಕಾವ್ಯ ಸಂದರ್ಭ ಉಚಿತವಾಗಬಹುದೆಂದು
ಅವರೇ ಆಯ್ಕೆ ಮಾಡಿಕೊಂಡು 'ವಿಭೀಷಣ ಶರಣಾಗತಿಯ ಸಂಧಿಯನ್ನು ನನ್ನಿಂದ
ಪುಸ್ತಕ ತರಿಸಿ ನೋಡಿಕೊಂಡರು. ಸಭಾಕಾರ್ಯ ಮುಗಿದೊಡನೆ ಶ್ರೀ ಶಾಸ್ತ್ರಿಗಳು
ಹೆಗಲ ಮೇಲಿನ ಖದ್ದರ್ ಶಾಲನ್ನು ಅಧ್ಯಕ್ಷ ಪೀಠದಲ್ಲಿ ಇರಿಸಿ, ಪ್ರವಚನ ವೇದಿಕೆಗೆ
ದಯಮಾಡಿಸಿದರು. ಸಭೆಯ ಅಧ್ಯಕ್ಷರೇ ಪ್ರವಚನಕಾರರಾದ ಅಪೂರ್ವ ಪ್ರಸಂಗ
ವದು, ಸಭಿಕರೆಲ್ಲ ಬೆರಗಾದರು. ಶ್ರೀ ಶಾಸ್ತ್ರಿಗಳ ಹಿರಿತನಕ್ಕೆ ನಾನೂ ತಲೆಬಾಗಿದೆ.
ವೇದಿಕೆಯನ್ನೇರಿ ಅರ್ಥ ವಿವರಣೆಗೆ ತೊಡಗಿದ ಶ್ರೀ ಶಾಸ್ತ್ರಿಗಳು ತಾವಂದು
ವಹಿಸಿಕೊಂಡ ದ್ವಿಪಾತ್ರಗಳನ್ನೂ ಸಮರ್ಥವಾಗಿಯೇ ನಡೆಸಿಕೊಟ್ಟರು.
ಕಥಾ ಸನ್ನಿವೇಶದಲ್ಲಿ, “ಶ್ರೀ ರಾಮಚಂದ್ರನ ಸನ್ನಿಧಾನಕ್ಕೆ ಶರಣಾಗತನಾಗಿ
ಬಂದ ವಿಭೀಷಣ ವೈಷ್ಣವ ಚಿಹ್ನೆಗಳಿಂದೊಡಗೂಡಿದವನು” ಎಂದು ವಿವರಿಸುತ್ತಾ
“ಇಂದು ತುಳಸಿಮಣಿ ಸರ, ಅಂಗಾರಾಕ್ಷತೆಗಳಿಂದ ಕೂಡಿದ ಶ್ರೀಧರಾಚಾರ್ಯರು
ನನ್ನನ್ನು ಈ ಸ್ಥಾನಕ್ಕೆ ಬರುವಂತೆ ಮಾಡಿರುವುದನ್ನು ಕಂಡರೆ -ವೈಷ್ಣವರು
(ವಿಭೀಷಣನಂತೆ !) ಇನ್ನೊಬ್ಬರ ಮನಸ್ಸನ್ನು ವಿಶೇಷವಾಗಿ ಆಕರ್ಷಿಸಬಲ್ಲರು-
ಎಂದೂ ಹೇಳಬಹುದು” ಎನ್ನುತ್ತಾ ಸಭ್ಯರನ್ನು ಆನಂದ ಪಡಿಸುತ್ತಾ ಕಾರ್ಯ
ಕ್ರಮವನ್ನು ಪೂರೈಸಿಕೊಟ್ಟು, ಕೊನೆಗೆ ನನ್ನಿಂದಲೇ ಮಂಗಳ ಹಾಡಿಸಿ, “ನೀವು
ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ ಹಿರಿಯರ ಆಶೀರ್ವಾದದಿಂದ ನಾಡಿನ ಗೌರ
ವಕ್ಕೆ ಪಾತ್ರರಾಗಿರಿ” ಎಂದೂ ನನ್ನನ್ನು ಹರಸಿದರು. ಅವರ ಹರಕೆಯ ನುಡಿಗಳನ್ನು
ಕಾರ್ಯರೂಪಕ್ಕೆ ತರುವಂತೆ ಪ್ರಯತ್ನಿಸುವ ಭಾಗ್ಯ ನನ್ನದಾಯಿತು.
ಮುಂದೆ, ಊರ ಸಮ್ಮಿತ್ರರ ಸಹಕಾರದಿಂದ, ಪೂಜ್ಯ ಪೇಜಾವರ ಸೀತಾರಾಮಾ
ಚಾರ್ಯರ ಅಧ್ಯಕ್ಷತೆಯಲ್ಲಿ ಶ್ರೀ ಶಾಸ್ತ್ರಿಗಳಿಗೆ ಸನ್ಮಾನ ಸಭೆ ಏರ್ಪಡಿಸಿ, ಮಾನಪತ್ರ)
ಸಮರ್ಪಿಸುವುದರಲ್ಲಿ ಪಾಲ್ಗೊಳ್ಳುವಂತಾದುದು ನನ್ನ ಪುಣ್ಯ.
{{center|——————}}<noinclude></noinclude>
epoj79j1ku73hxt7401g3g8x5vwlned
317774
317768
2026-05-06T16:49:41Z
Pragathi. BH
7585
317774
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|'''197'''}}
ನಾನು ಅವರಲ್ಲಿ, “ಸ್ವಾವಿ, ನಾನು ಇನ್ನೂ ಅಕ್ಷರಾಭ್ಯಾಸ ನಡೆಸುವ ಬಾಲಕ,
ತಾವು ಮುಂದೆ ಕುಳಿತಿರುವಾಗ, ನನ್ನಿಂದ ಅರ್ಥ ವಿವರಿಸುವುದಕ್ಕೆ ಸಾಧ್ಯವಿಲ್ಲ.
ನನ್ನ ಮೇಲೆ ಅನುಗ್ರಹವಿರುವುದಾದರೆ ಇಂದು ಯಾವುದಾದರೊಂದು ಸಂಧಿಯನ್ನು
ತಾವು ವಿವರಿಸಿ ನನ್ನನ್ನು ಹರಸಬೇಕು, ಪ್ರಾರಂಭ ಮಾಡಿದ ಕಾವ್ಯದ ಮಂಗಳ ಪದ್ಯ
ಮಾತ್ರ ನಾನು ಹೇಳುತ್ತೇನೆ” ಎಂದು ಬಿನ್ನವಿಸಿಕೊಂಡೆ.
{{gap}}ಶಾಸ್ತ್ರಿಗಳು ನನ್ನ ಬೆನ್ನು ತಟ್ಟುತ್ತಾ “ಹೆದರಬೇಡಿ, ನಿಮ್ಮಂತಹರ ಅಭಿವೃದ್ಧಿ
ನನಗೆ ಸಂತೋಷ. ಆದರೂ ಇಂದು ನಿಮ್ಮ ಅಭಿಲಾಷೆಯನ್ನು ನಾನು ಪೂರೈಸದಿರ
ಲಾರೆ” ಎಂದು ಹೇಳಿದಾಗ ನಾನು ನೆಮ್ಮದಿಯಿಂದ ಉಸಿರುಬಿಡುವಂತಾಯಿತು.
{{gap}}ಅಂದಿನ ಸನ್ನಿವೇಶಕ್ಕೆ ಯಾವ ಕಾವ್ಯ ಸಂದರ್ಭ ಉಚಿತವಾಗಬಹುದೆಂದು
ಅವರೇ ಆಯ್ಕೆ ಮಾಡಿಕೊಂಡು 'ವಿಭೀಷಣ ಶರಣಾಗತಿಯ ಸಂಧಿಯನ್ನು ನನ್ನಿಂದ
ಪುಸ್ತಕ ತರಿಸಿ ನೋಡಿಕೊಂಡರು. ಸಭಾಕಾರ್ಯ ಮುಗಿದೊಡನೆ ಶ್ರೀ ಶಾಸ್ತ್ರಿಗಳು
ಹೆಗಲ ಮೇಲಿನ ಖದ್ದರ್ ಶಾಲನ್ನು ಅಧ್ಯಕ್ಷ ಪೀಠದಲ್ಲಿ ಇರಿಸಿ, ಪ್ರವಚನ ವೇದಿಕೆಗೆ
ದಯಮಾಡಿಸಿದರು. ಸಭೆಯ ಅಧ್ಯಕ್ಷರೇ ಪ್ರವಚನಕಾರರಾದ ಅಪೂರ್ವ ಪ್ರಸಂಗ
ವದು, ಸಭಿಕರೆಲ್ಲ ಬೆರಗಾದರು. ಶ್ರೀ ಶಾಸ್ತ್ರಿಗಳ ಹಿರಿತನಕ್ಕೆ ನಾನೂ ತಲೆಬಾಗಿದೆ.
{{gap}}ವೇದಿಕೆಯನ್ನೇರಿ ಅರ್ಥ ವಿವರಣೆಗೆ ತೊಡಗಿದ ಶ್ರೀ ಶಾಸ್ತ್ರಿಗಳು ತಾವಂದು
ವಹಿಸಿಕೊಂಡ ದ್ವಿಪಾತ್ರಗಳನ್ನೂ ಸಮರ್ಥವಾಗಿಯೇ ನಡೆಸಿಕೊಟ್ಟರು.
{{gap}}ಕಥಾ ಸನ್ನಿವೇಶದಲ್ಲಿ, “ಶ್ರೀ ರಾಮಚಂದ್ರನ ಸನ್ನಿಧಾನಕ್ಕೆ ಶರಣಾಗತನಾಗಿ
ಬಂದ ವಿಭೀಷಣ ವೈಷ್ಣವ ಚಿಹ್ನೆಗಳಿಂದೊಡಗೂಡಿದವನು” ಎಂದು ವಿವರಿಸುತ್ತಾ
“ಇಂದು ತುಳಸಿಮಣಿ ಸರ, ಅಂಗಾರಾಕ್ಷತೆಗಳಿಂದ ಕೂಡಿದ ಶ್ರೀಧರಾಚಾರ್ಯರು
ನನ್ನನ್ನು ಈ ಸ್ಥಾನಕ್ಕೆ ಬರುವಂತೆ ಮಾಡಿರುವುದನ್ನು ಕಂಡರೆ -ವೈಷ್ಣವರು
(ವಿಭೀಷಣನಂತೆ !) ಇನ್ನೊಬ್ಬರ ಮನಸ್ಸನ್ನು ವಿಶೇಷವಾಗಿ ಆಕರ್ಷಿಸಬಲ್ಲರು-
ಎಂದೂ ಹೇಳಬಹುದು” ಎನ್ನುತ್ತಾ ಸಭ್ಯರನ್ನು ಆನಂದ ಪಡಿಸುತ್ತಾ ಕಾರ್ಯ
ಕ್ರಮವನ್ನು ಪೂರೈಸಿಕೊಟ್ಟು, ಕೊನೆಗೆ ನನ್ನಿಂದಲೇ ಮಂಗಳ ಹಾಡಿಸಿ, “ನೀವು
ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ ಹಿರಿಯರ ಆಶೀರ್ವಾದದಿಂದ ನಾಡಿನ ಗೌರ
ವಕ್ಕೆ ಪಾತ್ರರಾಗಿರಿ” ಎಂದೂ ನನ್ನನ್ನು ಹರಸಿದರು. ಅವರ ಹರಕೆಯ ನುಡಿಗಳನ್ನು
ಕಾರ್ಯರೂಪಕ್ಕೆ ತರುವಂತೆ ಪ್ರಯತ್ನಿಸುವ ಭಾಗ್ಯ ನನ್ನದಾಯಿತು.
{{gap}}ಮುಂದೆ, ಊರ ಸಮ್ಮಿತ್ರರ ಸಹಕಾರದಿಂದ, ಪೂಜ್ಯ ಪೇಜಾವರ ಸೀತಾರಾಮಾ
ಚಾರ್ಯರ ಅಧ್ಯಕ್ಷತೆಯಲ್ಲಿ ಶ್ರೀ ಶಾಸ್ತ್ರಿಗಳಿಗೆ ಸನ್ಮಾನ ಸಭೆ ಏರ್ಪಡಿಸಿ, ಮಾನಪತ್ರ)
ಸಮರ್ಪಿಸುವುದರಲ್ಲಿ ಪಾಲ್ಗೊಳ್ಳುವಂತಾದುದು ನನ್ನ ಪುಣ್ಯ.
{{center|——————}}<noinclude></noinclude>
nl891hdgh4h23ho2jpd6nymzmykpffp
ಪುಟ:ಯಕ್ಷಗಾನ ಮಕರಂದ.pdf/೨೨೪
104
100143
317769
307128
2026-05-06T16:47:30Z
Pragathi. BH
7585
/* Validated */
317769
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|'''ನನ್ನ ಪೂಜ್ಯ ಗುರುಗಳು'''}}
——————————————————————————————————
{{Right|'''ಗುರುಪುರ ವಾಸುದೇವ ಪ್ರಭು.'''}}
ಒಳ್ಳೆಯ ವಿದ್ವಾಂಸರ-ಕಲಾವಿದರ ಒಡನಾಟ, ಶಿಷ್ಯವೃತ್ತಿ ಒದಗುವುದೆಂದರೆ ಅದೇ ಒಂದು ಭಾಗ್ಯ ಇಂತಹ ಭಾಗ್ಯ ನನಗೆ ಪೊಳಲಿ ಶಾಸ್ತ್ರಿಗಳ ಶಿಷ್ಯನಾಗಿ ಒದ
ಗಿತ್ತು. ಅವರ ಬಗೆಗೆ ನಾಲ್ಕು ಮಾತುಗಳನ್ನು ಬರೆಯುವ ಸಂದರ್ಭ ಬಂದುದು
ಮತ್ತೂ ಹೆಮ್ಮೆಯ, ಆನಂದದ ವಿಷಯ.
ಆಸಕ್ತಿ-ಶ್ರದ್ಧೆಗಳಿಲ್ಲದೆ, ಕೇವಲ ಪದವಿಗಾಗಿಯೋ, ಪ್ರತಿಷ್ಠೆಗಾಗಿಯೇ ಹವ
ಣಿಸುವ ಶಿಷ್ಯರನ್ನು ಕಂಡರೆ ಶಾಸ್ತ್ರಿಗಳು ಕೆರಳುತ್ತಿದ್ದರು. ಕಲಿಯಲೆಂದು ಬಂದ
ಶಿಷ್ಯ'ನ ಶ್ರದ್ಧೆ-ಪ್ರಾಮಾಣಿಕತೆಗಳ ಆಳವನ್ನು ಬಲು ಬೇಗನೆ ಕಂಡುಕೊಳ್ಳುವ
ಒಂದು ವಿಶೇಷವಾದ ಶಕ್ತಿ ಅವರಲ್ಲಿತ್ತು. ಶ್ರದ್ಧಾ ಹೀನರಿಗೆ ಪಾಠ ಹೇಳಲು ನಿರಾ
ಕರಿಸಿ ಶಾಸ್ತ್ರಿಗಳು ಅವರನ್ನು ಹಿಂದೆ ಕಳುಹಿಸಿದ ಘಟನೆಗಳನ್ನು ನಾನು ಕಂಡಿದ್ದೇನೆ.
ಸುಮಾರು 1930ರಲ್ಲಿ ನಾನು ನಮ್ಮೂರಲ್ಲಿ ಅಧ್ಯಾಪಕನಾಗಿದ್ದೆ. ನನಗೆ
ಅದಕ್ಕೆ ಬೇಕಾದ ಅರ್ಹತೆ (Qualification) ಇರಲಿಲ್ಲ. ಅದಕ್ಕಾಗಿ ಪರೀಕ್ಷೆಗಳಿಗೆ
ಕುಳಿತು ಪದವಿ ಗಳಿಸುವುದಕ್ಕಾಗಿ ಇಂಗ್ಲಿಷ್ ಕಲಿಯಲೂ ಆರಂಭಿಸಿದೆ. ಸಂಸ್ಕೃತ
ವನ್ನೂ ಸ್ವಲ್ಪ ಓದಿಕೊಂಡಿದ್ದೆ. ಸಂಸ್ಕೃತ ಕಲಿಯುವ ಅಭಿರುಚಿ ನನ್ನಲ್ಲಿ ಮೂಡಿತ್ತು.
ಆಗ ಸಂಸ್ಕೃತ ಪಾಠ ಹೇಳುವುದರಲ್ಲಿ ಶಾಸ್ತ್ರಿಗಳ ಖ್ಯಾತಿ ಪಸರಿಸಲಾರಂಭಿಸಿತ್ತು. ಅವ
ರೊಮ್ಮೆ ಗುರುಪುರಕ್ಕೆ ಬಂದಾಗ ಮೆಲ್ಲನೆ ಅವರನ್ನು ಹಿಂಬಾಲಿಸಿ ನನ್ನ ಅಭಿಲಾಷೆ
ಯನ್ನು ಹೇಳಿಕೊಂಡಾಗ, ಕೂಡಲೆ ಒಪ್ಪಿಕೊಂಡರು. ಪೊಳಲಿಯಲ್ಲಿ ಪಾಠ ಹೇಳು
ತಿದ್ದ ಶಾಸ್ತ್ರಿಗಳ ಶಿಷ್ಯವರ್ಗದಲ್ಲಿ ನಾನೂ ಸೇರಿಕೊಂಡೆ.
ಶಾಸ್ತ್ರಿಗಳು ಅಭಿಜಾತ ಅಧ್ಯಾಪಕರು. ಅವರ ಪಾಠದ ಕ್ರಮವು ವಿಶಿಷ್ಟ
ವಾದುದು. ಮೊದಲು ಸಿದ್ದಾಂತ ಕೌಮುದಿ, ಆ ಮೇಲೆ ಶಿಶುಪಾಲ ವಧ ಮೊದಲಾದ ಕಾವ್ಯಗಳ ಪಾಠ.ಯಾವ ಪಾಠವೇ ಆಗಲಿ, ಪುಸ್ತಕ ನೋಡಿ ಹೇಳುವ ಪರಿಪಾಟ
ಅವರದಲ್ಲ. ವಿವಿಧ ಟೀಕೆಗಳು, ಭಾಷ್ಯಗಳು, ವ್ಯಾಖ್ಯಾನಗಳು- ಇವುಗಳನ್ನೆಲ್ಲ
ವ್ಯವಸ್ಥಿತವಾಗಿ ನೆನಪಿನಿಂದಲೇ ಹೇಳುತ್ತಿದ್ದರು. ಕಾವ್ಯ ಪಾಠದಲ್ಲಿ, ಲೋಕಾನು
ಭವದಿಂದ ಪರಿಪಕ್ವವಾದ ತಮ್ಮ ಅಭಿಪ್ರಾಯಗಳನ್ನು ಕೂಡ ಹೇಳುತ್ತಿದ್ದರು.<noinclude></noinclude>
jntukumt216553econ6q99mrdz1qe96
317781
317769
2026-05-06T16:56:36Z
Pragathi. BH
7585
317781
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|'''ನನ್ನ ಪೂಜ್ಯ ಗುರುಗಳು'''}}
——————————————————————————————————
{{Right|'''ಗುರುಪುರ ವಾಸುದೇವ ಪ್ರಭು.'''}}
{{gap}}ಒಳ್ಳೆಯ ವಿದ್ವಾಂಸರ-ಕಲಾವಿದರ ಒಡನಾಟ, ಶಿಷ್ಯವೃತ್ತಿ ಒದಗುವುದೆಂದರೆ ಅದೇ ಒಂದು ಭಾಗ್ಯ ಇಂತಹ ಭಾಗ್ಯ ನನಗೆ ಪೊಳಲಿ ಶಾಸ್ತ್ರಿಗಳ ಶಿಷ್ಯನಾಗಿ ಒದ
ಗಿತ್ತು. ಅವರ ಬಗೆಗೆ ನಾಲ್ಕು ಮಾತುಗಳನ್ನು ಬರೆಯುವ ಸಂದರ್ಭ ಬಂದುದು
ಮತ್ತೂ ಹೆಮ್ಮೆಯ, ಆನಂದದ ವಿಷಯ.
{{gap}}ಆಸಕ್ತಿ-ಶ್ರದ್ಧೆಗಳಿಲ್ಲದೆ, ಕೇವಲ ಪದವಿಗಾಗಿಯೋ, ಪ್ರತಿಷ್ಠೆಗಾಗಿಯೇ ಹವ
ಣಿಸುವ ಶಿಷ್ಯರನ್ನು ಕಂಡರೆ ಶಾಸ್ತ್ರಿಗಳು ಕೆರಳುತ್ತಿದ್ದರು. ಕಲಿಯಲೆಂದು ಬಂದ
ಶಿಷ್ಯ'ನ ಶ್ರದ್ಧೆ-ಪ್ರಾಮಾಣಿಕತೆಗಳ ಆಳವನ್ನು ಬಲು ಬೇಗನೆ ಕಂಡುಕೊಳ್ಳುವ
ಒಂದು ವಿಶೇಷವಾದ ಶಕ್ತಿ ಅವರಲ್ಲಿತ್ತು. ಶ್ರದ್ಧಾ ಹೀನರಿಗೆ ಪಾಠ ಹೇಳಲು ನಿರಾ
ಕರಿಸಿ ಶಾಸ್ತ್ರಿಗಳು ಅವರನ್ನು ಹಿಂದೆ ಕಳುಹಿಸಿದ ಘಟನೆಗಳನ್ನು ನಾನು ಕಂಡಿದ್ದೇನೆ.
{{gap}}ಸುಮಾರು 1930ರಲ್ಲಿ ನಾನು ನಮ್ಮೂರಲ್ಲಿ ಅಧ್ಯಾಪಕನಾಗಿದ್ದೆ. ನನಗೆ
ಅದಕ್ಕೆ ಬೇಕಾದ ಅರ್ಹತೆ (Qualification) ಇರಲಿಲ್ಲ. ಅದಕ್ಕಾಗಿ ಪರೀಕ್ಷೆಗಳಿಗೆ
ಕುಳಿತು ಪದವಿ ಗಳಿಸುವುದಕ್ಕಾಗಿ ಇಂಗ್ಲಿಷ್ ಕಲಿಯಲೂ ಆರಂಭಿಸಿದೆ. ಸಂಸ್ಕೃತ
ವನ್ನೂ ಸ್ವಲ್ಪ ಓದಿಕೊಂಡಿದ್ದೆ. ಸಂಸ್ಕೃತ ಕಲಿಯುವ ಅಭಿರುಚಿ ನನ್ನಲ್ಲಿ ಮೂಡಿತ್ತು.
ಆಗ ಸಂಸ್ಕೃತ ಪಾಠ ಹೇಳುವುದರಲ್ಲಿ ಶಾಸ್ತ್ರಿಗಳ ಖ್ಯಾತಿ ಪಸರಿಸಲಾರಂಭಿಸಿತ್ತು. ಅವ
ರೊಮ್ಮೆ ಗುರುಪುರಕ್ಕೆ ಬಂದಾಗ ಮೆಲ್ಲನೆ ಅವರನ್ನು ಹಿಂಬಾಲಿಸಿ ನನ್ನ ಅಭಿಲಾಷೆ
ಯನ್ನು ಹೇಳಿಕೊಂಡಾಗ, ಕೂಡಲೆ ಒಪ್ಪಿಕೊಂಡರು. ಪೊಳಲಿಯಲ್ಲಿ ಪಾಠ ಹೇಳು
ತಿದ್ದ ಶಾಸ್ತ್ರಿಗಳ ಶಿಷ್ಯವರ್ಗದಲ್ಲಿ ನಾನೂ ಸೇರಿಕೊಂಡೆ.
{{gap}}ಶಾಸ್ತ್ರಿಗಳು ಅಭಿಜಾತ ಅಧ್ಯಾಪಕರು. ಅವರ ಪಾಠದ ಕ್ರಮವು ವಿಶಿಷ್ಟ
ವಾದುದು. ಮೊದಲು ಸಿದ್ದಾಂತ ಕೌಮುದಿ, ಆ ಮೇಲೆ ಶಿಶುಪಾಲ ವಧ ಮೊದಲಾದ ಕಾವ್ಯಗಳ ಪಾಠ.ಯಾವ ಪಾಠವೇ ಆಗಲಿ, ಪುಸ್ತಕ ನೋಡಿ ಹೇಳುವ ಪರಿಪಾಟ
ಅವರದಲ್ಲ. ವಿವಿಧ ಟೀಕೆಗಳು, ಭಾಷ್ಯಗಳು, ವ್ಯಾಖ್ಯಾನಗಳು- ಇವುಗಳನ್ನೆಲ್ಲ
ವ್ಯವಸ್ಥಿತವಾಗಿ ನೆನಪಿನಿಂದಲೇ ಹೇಳುತ್ತಿದ್ದರು. ಕಾವ್ಯ ಪಾಠದಲ್ಲಿ, ಲೋಕಾನು
ಭವದಿಂದ ಪರಿಪಕ್ವವಾದ ತಮ್ಮ ಅಭಿಪ್ರಾಯಗಳನ್ನು ಕೂಡ ಹೇಳುತ್ತಿದ್ದರು.<noinclude></noinclude>
0ri5cdwhgtd9ahe8225hgwecdqlpzux
ಪುಟ:ಯಕ್ಷಗಾನ ಮಕರಂದ.pdf/೨೨೨
104
100144
317767
307126
2026-05-06T16:47:01Z
Pragathi. BH
7585
/* Validated */
317767
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|'''ಹಿರಿಯ ಚೇತನಕ್ಕೆ ನಮನ - ಒಂದು ಸವಿ ನೆನಹು'''}}
{{Right|'''-ಹರಿದಾಸ ಯಚ್. ಶ್ರೀಧರಾಚಾರ್ಯ.'''}}
ಮೂವತ್ತೈದು ವರ್ಷಗಳಿಗೂ ಹಿಂದಿನ ಮಾತು ಮೈರ್ಪಾಡಿ (ಕುಳಾಯಿ )
ಶ್ರೀ ವೆಂಕಟರಮಣ ಮೂಲ ಪಾಠಶಾಲೆ (ಇಂದು ಇದು ಹಿರಿಯ ಪ್ರಾಥಮಿಕ ಶಾಲೆ
ಯಾಗಿ ಬೆಳೆದಿದೆ)ಯಲ್ಲಿ ಶ್ರೀ ಭಾರತೀ ವಾಚನಾಲಯದ ಕಾರ್ಯಕ್ರಮವಾಗಿ ಆಗ
ಸುಮಾರು ಹತ್ತು ವರ್ಷಗಳಿಂದ ಪ್ರತಿ ಮಳೆಗಾಲದ ದಿನಗಳಲ್ಲಿ ಸಂಜೆ ನಡೆದು
ಬರುತಿದ್ದ ಪುರಾಣ ಪ್ರವಚನದ ಸಂದರ್ಭ. ಆ ವರ್ಷ ಶ್ರೀ ಹತ್ವಾರಿ ನಾರಾಯಣ
ರಾಯ (ಶ್ರೀ ಕಕ್ಕೆಸಾರು ವೆಂಕಟರಮಣ ಜೋಯಿಸರ ಈ ಸಂಬಂಧವಾಗಿ ಸ್ಮರಣೀ
ಯರು)ರಿಂದ ತೊರವೆ ರಾಮಾಯಣ ಕಾವ್ಯ ವಾಚನ. ನನ್ನಿಂದ ಅರ್ಥ ವಿವರಣೆ.
ಶ್ರೀ ಭಾರತೀ ವಾಚನಾಲಯದ ವಾರ್ಷಿಕೋತ್ಸವ ಮತ್ತು ಪುರಾಣ ಪ್ರವಚನದ
ಮಂಗಲೋತ್ಸವಗಳು ಸಂಯುಕ್ತವಾಗಿ ನಡೆಯುವ ಏರ್ಪಾಡಾಗಿತ್ತು. ಅಂದಿನ
ಸಭೆಗೆ ಪುರಾಣ ಪ್ರವಚನಪಟುಗಳಾದ ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ
ಅಧ್ಯಕ್ಷತೆಯೆಂದೂ, ಅಂದು ಕಾವ್ಯದ ಒಂದು ಸಂಧಿಯ ಪ್ರವಚನ ನನ್ನಿಂದ ನಡೆಯ
ಬೇಕೆಂದೂ ತೀರ್ಮಾನವಾದದ್ದನ್ನು ತಿಳಿದು ನನಗೆ ಎದೆ ನಡುಗಿತು !
ಶ್ರೀ ಶಾಸ್ತ್ರಿಗಳ ಮುಂದೆ ನಾನೇನು ಪ್ರವಚನ ಮಾಡುವುದೆಂದು ಹಗಲಿರುಳು
ಚಿಂತಿಸಿದೆ; ಚಡಪಡಿಸಿದೆ. “ನನ್ನ ಕಾರ್ಯಕ್ರಮ ಬೇಡ, ದಯವಿಟ್ಟು ರದ್ದು ಮಾಡಿ”,
ಎಂದು ಕಾರ್ಯಕರ್ತರನ್ನು ಕೇಳಿಕೊಂಡೆ. ಅವರು ಅದಕ್ಕೊಪ್ಪಲಿಲ್ಲ. ನನ್ನ ಚಿಂತೆ
ತಪ್ಪಲಿಲ್ಲ. ನಾನಾಗಿಯೇ ಶ್ರೀ ಶಾಸ್ತ್ರಿಗಳಲ್ಲಿ ಮಾತಾಡಿ ಅವರಿಂದಲೇ ಅಂದಿನ ಅರ್ಥ
ವಿವರಣೆ ಮಾಡಿಸಬೇಕೆಂಬ ಅಂತರಾತ್ಮನ ಪ್ರೇರಣೆ ನನ್ನ ಪಾಲಿನ ಆಶಾಕಿರಣವಾಗಿತ್ತು.
ಆ ದಿನ ಬಂದೇ ಬಂತು. ಸಭಾಂಗಣ ಕಿಕ್ಕಿರಿದಿತ್ತು. ಬಸ್ಸಿನಲ್ಲಿ ಶ್ರೀ ಶಾಸ್ತ್ರಿಗಳು
ಬಂದೇ ಬಂದರು. ರಸ್ತೆಯ ಅಂಚಿನಲ್ಲಿ ಅವರನ್ನು ಎದುರು ನೋಡುತಿದ್ದ ನನ್ನನ್ನು
ಕಂಡೊಡನೆ ಚಿಕ್ಕವನೆಂದು ಭಾವಿಸದೆ-ಪ್ರೀತಿ, ಗೌರವ ಮಿಶ್ರಿತ ಭಾಷೆಯಲ್ಲಿ “ಏನು
ಆಚಾರ್ಯರೇ ! ಈ ವರ್ಷದ ಪ್ರವಚನಕಾರರು ನೀವಂತೆ ! ಬಹಳ ಸಂತೋಷ!”
ಎಂದರು. “ಅಲುಗುವ ಹಲ್ಲಿಗೆ ಹಲಗೆ ಕಲ್ಲು ಬಿತ್ತು' ಎಂಬಂತಾಯಿತು ನನ್ನ ಸ್ಥಿತಿ.
ನನ್ನನ್ನು ಶಾಸ್ತ್ರಿಗಳು ಮೆಟ್ಟಲಿಲ್ಲದ ಉಪ್ಪರಿಗೆಗೇರಿಸಿದರೆಂದು ಸಂಕೋಚಗೊಂಡ<noinclude></noinclude>
d6eptit0bu68vmxlc6ewqbn5v7lixkx
ಪುಟ:ಯಕ್ಷಗಾನ ಮಕರಂದ.pdf/೨೨೫
104
100145
317770
307130
2026-05-06T16:47:40Z
Pragathi. BH
7585
/* Validated */
317770
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|'''199'''}}
ಇದರಿಂದಾಗಿ ಎಂತಹ ಗಂಭೀರವಾದ ವಿಷಯವಾಗಲಿ, ಕ್ಲಿಷ್ಟವಾದ ಕಾವ್ಯವಾಗಲಿ,
'ಶುಷ್ಕ'ವೆನ್ನಿಸಿದ ವ್ಯಾಕರಣವೇ ಆಗಲಿ, ಆಕರ್ಷಕವೂ ರುಚಿಕರವೂ ಆಗಿ ಪರಿಣಮಿಸು
ತ್ತಿತ್ತು. “ಪಾಠದ ವೇಳೆಯಲ್ಲಿ ಟಿಪ್ಪಣಿ (Notes) ಬರೆಯಬಾರದು, ಇದರಿಂದ
ಕೇಳುವವನ ಏಕಾಗ್ರತೆ ಭಂಗವಾಗುತ್ತದೆ” ಎನ್ನುತ್ತಿದ್ದರು.
ಕೆಲವು ಕಾಲದ ಅನಂತರ ಶಾಸ್ತ್ರಿಗಳು ಪೊಳಲಿಯನ್ನು ಬಿಟ್ಟು ತಮ್ಮ ಹುಟ್ಟೂ
ರಾದ ಕಿಲೆಂಜಾರಿನಲ್ಲಿಯೇ ನೆಲಸಿದರು. ನಾನು ಗುರುಪುರದಿಂದ ಪಾಠಕ್ಕಾಗಿ ಕಿಲೆಂಜಾ
ರಿಗೆ ಹೋಗಲಾರಂಭಿಸಿದೆ. ಆಗ ಅವರು ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ
ಪ್ರಸಿದ್ಧರೂ ಜನಪ್ರಿಯರೂ ಆಗಿದ್ದ ಕಾರಣ, ಆಗಾಗ ತಾಳಮದ್ದಳೆಗಳಿಗೆ ಹೋಗಿ
ನಿದ್ದೆ ಕೆಡಬೇಕಾಗುತ್ತಿತ್ತು. ಆದರೂ ಪಾಠಕ್ಕಾಗಿ ಬಂದವನನ್ನು ಹಿಂದೆ ಕಳಿಸುತ್ತಿರ
ಲಿಲ್ಲ. ಒಂದು ತಂಬಿಗೆಯಲ್ಲಿ ತಣ್ಣೀರನಿಟ್ಟುಕೊಂಡು, ಆವರಿಸುತ್ತಿದ್ದ ನಿದ್ದೆಯನ್ನು
ಓಡಿಸಲು ತಲೆಗೆ, ಕಣ್ಣಿಗೆ ನೀರನ್ನು ಚಿಮುಕಿಸುತ್ತ, ಪಾಠವನ್ನು ಸಾಂಗವಾಗಿ ಹೇಳು
ತಿದ್ದುದನ್ನು ಕಂಡು ನಾನು ಅನೇಕ ಬಾರಿ ಕಳವಳಗೊಂಡುದುಂಟು. ಆದರೂ
ಪಾಠವನ್ನು ರದ್ದು ಮಾಡಲು ಅವರು ಎಂದೂ ಒಪ್ಪಿದ್ದಿಲ್ಲ. ಆ ನಿಷ್ಠೆ, ಆ ಶಿಷ್ಯ
ವಾತ್ಸಲ್ಯ, ಇನ್ನೆಲ್ಲಿಯೂ ಕಾಣಸಿಗುವುದು ಅಪೂರ್ವ. ಈ ಅಧ್ಯಾಪನದಲ್ಲಿ ಅವರಿಗೆ
ಪ್ರತಿಫಲದ ಅಪೇಕ್ಷೆ ಇರಲಿಲ್ಲ. ಕೆಲವರು ಹುಟ್ಟಿನಿಂದಲೆ ಅಧ್ಯಾಪಕರಾಗಿರುತ್ತಾರೆ.
ತಮ್ಮಲ್ಲಿರುವ ಜ್ಞಾನವನ್ನೂ ಅನುಭವವನ್ನೂ ಇತರರಿಗೆ ನೀಡುವುದರಲ್ಲಿ ಅವರಿಗೆ
ತೃಪ್ತಿ, ಆನಂದ, ಶಾಸ್ತ್ರಿಗಳು ಅಂತಹ ವ್ಯಕ್ತಿ.
'ಎ' ವಿದ್ವಾನ್ ಪರೀಕ್ಷೆಗೆ ಆ ಕಾಲದಲ್ಲಿ ಕುಳಿತುಕೊಳ್ಳಬೇಕಾದರೆ ಮದ್ರಾಸ್
ವಿಶ್ವವಿದ್ಯಾನಿಲಯದ ಬೋರ್ಡ್ ಒಫ್ ಸ್ಟಡೀಸ್ನ ಸದಸ್ಯರೊಬ್ಬರಿಂದ ಒಂದು
ವಿನಾಯತಿ ಪತ್ರ (Exemption Certificate) ಪಡೆದುಕೊಳ್ಳಬೇಕಾಗಿತ್ತು. ಆಗ
ಪಂಡಿತ ಮುಳಿಯ ತಿಮ್ಮಪ್ಪಯ್ಯನವರು ಬೋರ್ಡ್ ಒಫ್ ಸ್ಟಡೀಸ್ನ ಸದಸ್ಯರಾಗಿ
ದ್ದರು. ಕೇವಲ ಅಪರಿಚಿತನಾದ ನನಗೆ ಅವರು 'ಸರ್ಟಿಫಿಕೇಟ್' ಕೊಡುತ್ತಾರೋ
ಇಲ್ಲವೋ ಎಂದು ಅನುಮಾನಿಸುತ್ತಲೇ ಅವರಲ್ಲಿಗೆ ಹೋದೆ. ನಾನು ಶಾಸ್ತ್ರಿಗಳ ಶಿಷ್ಯ
ಎಂದು ಗೊತ್ತಾದ ಕೂಡಲೆ ಬೇರೇನೂ ಕೇಳದೆ 'ಸರ್ಟಿಫಿಕೇಟ್' ಬರೆದುಕೊಟ್ಟರು.
ಶಾಸ್ತ್ರಿಗಳಿಗೆ ಸರಸ್ವತಿಯ ಪೂರ್ಣಾನುಗ್ರಹವಿದ್ದಿತಾದರೂ, ಲಕ್ಷ್ಮಿಯ ಕಟಾಕ್ಷ
ದಿಂದ ವಂಚಿತರಾಗಿದ್ದರು.ಇದು ಲೋಕ ರೂಢಿ. ಆದುದರಿಂದ ಮಹಾವಿದ್ವಾಂಸ
ರಾದ ಅವರೂ ಕೂಡ ಉದ್ಯೋಗ ದೊರಕಿಸಿಕೊಳ್ಳುವುದಕ್ಕಾಗಿ ವಿದ್ವಾನ್ ಪರೀಕ್ಷೆಗೆ
ಕುಳಿತುಕೊಳ್ಳಬೇಕಾಗಿ ಬಂತು. “ನಾವಿಬ್ಬರೂ ಒಟ್ಟಿಗೆ ಪರೀಕ್ಷೆಗೆ ಕುಳಿತುಕೊಳ್ಳು
ವುದು” ಎಂದು ಅಪ್ಪಣೆ ಕೊಟ್ಟರು. ಪರೀಕ್ಷೆಗೆ ಮೊದಲ ಅಭ್ಯಾಸವನ್ನು ನಾವಿಬ್ಬರೂ
ಒಟ್ಟಿಗೆ ಮಂಗಳೂರಿನ ಶ್ರೀ ತ್ರಿಶೂಲೇಶ್ವರ ದೇವಸ್ಥಾನದಲ್ಲಿ ಮಾಡಿದೆವು. ಪರೀ
ಕ್ಷೆಯ ಮೊದಲ ದಿನ, ಮೇಲ್ವಿಚಾರಕರಾಗಿದ್ದ ಶ್ರೀ ನಿಡ್ಕೊಡಿ ಅನಂತ ಉಪಾಧ್ಯಾಯ<noinclude></noinclude>
75hvik0wdopr2kw64zjww1bqrebnhi1
317782
317770
2026-05-06T16:57:40Z
Pragathi. BH
7585
317782
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|'''199'''}}
ಇದರಿಂದಾಗಿ ಎಂತಹ ಗಂಭೀರವಾದ ವಿಷಯವಾಗಲಿ, ಕ್ಲಿಷ್ಟವಾದ ಕಾವ್ಯವಾಗಲಿ,
'ಶುಷ್ಕ'ವೆನ್ನಿಸಿದ ವ್ಯಾಕರಣವೇ ಆಗಲಿ, ಆಕರ್ಷಕವೂ ರುಚಿಕರವೂ ಆಗಿ ಪರಿಣಮಿಸು
ತ್ತಿತ್ತು. “ಪಾಠದ ವೇಳೆಯಲ್ಲಿ ಟಿಪ್ಪಣಿ (Notes) ಬರೆಯಬಾರದು, ಇದರಿಂದ
ಕೇಳುವವನ ಏಕಾಗ್ರತೆ ಭಂಗವಾಗುತ್ತದೆ” ಎನ್ನುತ್ತಿದ್ದರು.
{{gap}}ಕೆಲವು ಕಾಲದ ಅನಂತರ ಶಾಸ್ತ್ರಿಗಳು ಪೊಳಲಿಯನ್ನು ಬಿಟ್ಟು ತಮ್ಮ ಹುಟ್ಟೂ
ರಾದ ಕಿಲೆಂಜಾರಿನಲ್ಲಿಯೇ ನೆಲಸಿದರು. ನಾನು ಗುರುಪುರದಿಂದ ಪಾಠಕ್ಕಾಗಿ ಕಿಲೆಂಜಾ
ರಿಗೆ ಹೋಗಲಾರಂಭಿಸಿದೆ. ಆಗ ಅವರು ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ
ಪ್ರಸಿದ್ಧರೂ ಜನಪ್ರಿಯರೂ ಆಗಿದ್ದ ಕಾರಣ, ಆಗಾಗ ತಾಳಮದ್ದಳೆಗಳಿಗೆ ಹೋಗಿ
ನಿದ್ದೆ ಕೆಡಬೇಕಾಗುತ್ತಿತ್ತು. ಆದರೂ ಪಾಠಕ್ಕಾಗಿ ಬಂದವನನ್ನು ಹಿಂದೆ ಕಳಿಸುತ್ತಿರ
ಲಿಲ್ಲ. ಒಂದು ತಂಬಿಗೆಯಲ್ಲಿ ತಣ್ಣೀರನಿಟ್ಟುಕೊಂಡು, ಆವರಿಸುತ್ತಿದ್ದ ನಿದ್ದೆಯನ್ನು
ಓಡಿಸಲು ತಲೆಗೆ, ಕಣ್ಣಿಗೆ ನೀರನ್ನು ಚಿಮುಕಿಸುತ್ತ, ಪಾಠವನ್ನು ಸಾಂಗವಾಗಿ ಹೇಳು
ತಿದ್ದುದನ್ನು ಕಂಡು ನಾನು ಅನೇಕ ಬಾರಿ ಕಳವಳಗೊಂಡುದುಂಟು. ಆದರೂ
ಪಾಠವನ್ನು ರದ್ದು ಮಾಡಲು ಅವರು ಎಂದೂ ಒಪ್ಪಿದ್ದಿಲ್ಲ. ಆ ನಿಷ್ಠೆ, ಆ ಶಿಷ್ಯ
ವಾತ್ಸಲ್ಯ, ಇನ್ನೆಲ್ಲಿಯೂ ಕಾಣಸಿಗುವುದು ಅಪೂರ್ವ. ಈ ಅಧ್ಯಾಪನದಲ್ಲಿ ಅವರಿಗೆ
ಪ್ರತಿಫಲದ ಅಪೇಕ್ಷೆ ಇರಲಿಲ್ಲ. ಕೆಲವರು ಹುಟ್ಟಿನಿಂದಲೆ ಅಧ್ಯಾಪಕರಾಗಿರುತ್ತಾರೆ.
ತಮ್ಮಲ್ಲಿರುವ ಜ್ಞಾನವನ್ನೂ ಅನುಭವವನ್ನೂ ಇತರರಿಗೆ ನೀಡುವುದರಲ್ಲಿ ಅವರಿಗೆ
ತೃಪ್ತಿ, ಆನಂದ, ಶಾಸ್ತ್ರಿಗಳು ಅಂತಹ ವ್ಯಕ್ತಿ.
{{gap}}'ಎ' ವಿದ್ವಾನ್ ಪರೀಕ್ಷೆಗೆ ಆ ಕಾಲದಲ್ಲಿ ಕುಳಿತುಕೊಳ್ಳಬೇಕಾದರೆ ಮದ್ರಾಸ್
ವಿಶ್ವವಿದ್ಯಾನಿಲಯದ ಬೋರ್ಡ್ ಒಫ್ ಸ್ಟಡೀಸ್ನ ಸದಸ್ಯರೊಬ್ಬರಿಂದ ಒಂದು
ವಿನಾಯತಿ ಪತ್ರ (Exemption Certificate) ಪಡೆದುಕೊಳ್ಳಬೇಕಾಗಿತ್ತು. ಆಗ
ಪಂಡಿತ ಮುಳಿಯ ತಿಮ್ಮಪ್ಪಯ್ಯನವರು ಬೋರ್ಡ್ ಒಫ್ ಸ್ಟಡೀಸ್ನ ಸದಸ್ಯರಾಗಿ
ದ್ದರು. ಕೇವಲ ಅಪರಿಚಿತನಾದ ನನಗೆ ಅವರು 'ಸರ್ಟಿಫಿಕೇಟ್' ಕೊಡುತ್ತಾರೋ
ಇಲ್ಲವೋ ಎಂದು ಅನುಮಾನಿಸುತ್ತಲೇ ಅವರಲ್ಲಿಗೆ ಹೋದೆ. ನಾನು ಶಾಸ್ತ್ರಿಗಳ ಶಿಷ್ಯ
ಎಂದು ಗೊತ್ತಾದ ಕೂಡಲೆ ಬೇರೇನೂ ಕೇಳದೆ 'ಸರ್ಟಿಫಿಕೇಟ್' ಬರೆದುಕೊಟ್ಟರು.
{{gap}}ಶಾಸ್ತ್ರಿಗಳಿಗೆ ಸರಸ್ವತಿಯ ಪೂರ್ಣಾನುಗ್ರಹವಿದ್ದಿತಾದರೂ, ಲಕ್ಷ್ಮಿಯ ಕಟಾಕ್ಷ
ದಿಂದ ವಂಚಿತರಾಗಿದ್ದರು.ಇದು ಲೋಕ ರೂಢಿ. ಆದುದರಿಂದ ಮಹಾವಿದ್ವಾಂಸ
ರಾದ ಅವರೂ ಕೂಡ ಉದ್ಯೋಗ ದೊರಕಿಸಿಕೊಳ್ಳುವುದಕ್ಕಾಗಿ ವಿದ್ವಾನ್ ಪರೀಕ್ಷೆಗೆ
ಕುಳಿತುಕೊಳ್ಳಬೇಕಾಗಿ ಬಂತು. “ನಾವಿಬ್ಬರೂ ಒಟ್ಟಿಗೆ ಪರೀಕ್ಷೆಗೆ ಕುಳಿತುಕೊಳ್ಳು
ವುದು” ಎಂದು ಅಪ್ಪಣೆ ಕೊಟ್ಟರು. ಪರೀಕ್ಷೆಗೆ ಮೊದಲ ಅಭ್ಯಾಸವನ್ನು ನಾವಿಬ್ಬರೂ
ಒಟ್ಟಿಗೆ ಮಂಗಳೂರಿನ ಶ್ರೀ ತ್ರಿಶೂಲೇಶ್ವರ ದೇವಸ್ಥಾನದಲ್ಲಿ ಮಾಡಿದೆವು. ಪರೀ
ಕ್ಷೆಯ ಮೊದಲ ದಿನ, ಮೇಲ್ವಿಚಾರಕರಾಗಿದ್ದ ಶ್ರೀ ನಿಡ್ಕೊಡಿ ಅನಂತ ಉಪಾಧ್ಯಾಯ<noinclude></noinclude>
drejrts2jgtsd72yhgs02iy0a39avvi
ಪುಟ:ಯಕ್ಷಗಾನ ಮಕರಂದ.pdf/೨೨೬
104
100146
317771
307131
2026-05-06T16:47:51Z
Pragathi. BH
7585
/* Validated */
317771
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|200}}
ರೊಂದಿಗೆ ಮಾತನಾಡುತ್ತಾ, “ನಾನು ಪಾಸಾಗದಿದ್ದರೂ ನಮ್ಮ ವಾಸುದೇವ ಪಾಸಾ
ಗಿಯೇ ಆಗುತ್ತಾನೆ” ಎಂದರು ಶಾಸ್ತ್ರಿಗಳು !
ಅವರ ತಾಳಮದ್ದಳೆಯ ಅರ್ಥಗಳನ್ನು ನಾನು ಹೆಚ್ಚು ಕೇಳಿದವನಲ್ಲ. ಕೇಳಿದ
ಒಂದೆರಡು ಸಂದರ್ಭಗಳಲ್ಲಿ ಅವರ ಗಂಭೀರವಾದ ಪಾತ್ರ ನಿರ್ವಹಣ, ಪಾಂಡಿತ್ಯ
ಪೂರ್ಣ, ಆದರೆ ಸರಳವಾದ ನಿರೂಪಣಾ ಶೈಲಿ, ಭಾವಪರಿಪೂರ್ಣವಾದ ವಾಕ್
ಶ್ರೀಮಂತಿಕೆಗಳು ನನ್ನ ನೆನಪಿನಲ್ಲಿ ಅಚ್ಚ ಳಿಯದೆ ಉಳಿದಿವೆ. ಅವರ ಪುರಾಣ
ಪ್ರವಚನಗಳನ್ನೂ, ಗೀತಾ ಜಯಂತಿಯ ಒಂದು ಸಂದರ್ಭದಲ್ಲಿ ಅವರು ಮಾಡಿದ
ಭಾಷಣವನ್ನೂ ಕೇಳಿದ್ದೆ. ಹೃದಯಸ್ಪರ್ಶಿಯಾಗಿದ್ದುವು.
ಎಷ್ಟೋ ಬಾರಿ ಶಾಸ್ತ್ರಿಗಳು ಗುರುಪುರಕ್ಕೆ ಬಂದಾಗ ನಾವು ಭೇಟಿಯಾಗಿ
ತುಂಬ ಮಾತುಕತೆ ಆಡುತ್ತಿದ್ದೆವು. ಅವರ ನಿಷ್ಕಪಟ ಸರಳ ಸಾತ್ವಿಕತೆ, ವಿನಯ-
ಸೌಜನ್ಯಗಳು ಎಂದೂ ಮರೆಯಲಾರದಂಥವುಗಳು. ಅದೆಷ್ಟೋ ಬಾರಿ “ನೀವು
ನಿಮ್ಮ ಆತ್ಮಕಥೆ ಬರೆಯಬೇಕು” ಎಂದು ನಾನು ಅವರನ್ನು ಒತ್ತಾಯಿಸಿದ್ದೆ. ಆಗ
ನಸುನಕ್ಕು, “ಆತ್ಮಕಥೆ ಬರೆಯಲು ನಾನೆಷ್ಟರವನು? ಅದೆಲ್ಲ ದೊಡ್ಡವರು ಮಾಡುವ
ಕೆಲಸ” ಎಂದು ಬಿಡುತ್ತಿದ್ದರು.
ಅಂತಹ ಶಾಸ್ತ್ರಿಗಳು ಇತಿಹಾಸಕ್ಕೆ ಸಂದಿದ್ದಾರೆ. ಅಧ್ಯಾಪಕನಾಗಿ ಬದುಕನ್ನು
ಆರಂಭಿಸಿದ ನಾನು ದಾರಿ ಬದಲಿಸಿ ವ್ಯಾಪಾರಿಯಾದೆ. ಆದರೆ ಶಾಸ್ತ್ರಿಗಳ ಒಡನಾಟ
ದಿಂದ ನನಗೊದಗಿದ ಅನಿರ್ವಚನೀಯವಾದ ಅನುಭವವು ನನ್ನೊಂದಿಗೇ ಇದೆ.
{{center|——}}<noinclude></noinclude>
b1yme1qrzfejy31ju6y8ym5upsbiva8
317783
317771
2026-05-06T16:58:39Z
Pragathi. BH
7585
317783
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|200}}
ರೊಂದಿಗೆ ಮಾತನಾಡುತ್ತಾ, “ನಾನು ಪಾಸಾಗದಿದ್ದರೂ ನಮ್ಮ ವಾಸುದೇವ ಪಾಸಾ
ಗಿಯೇ ಆಗುತ್ತಾನೆ” ಎಂದರು ಶಾಸ್ತ್ರಿಗಳು !
{{gap}}ಅವರ ತಾಳಮದ್ದಳೆಯ ಅರ್ಥಗಳನ್ನು ನಾನು ಹೆಚ್ಚು ಕೇಳಿದವನಲ್ಲ. ಕೇಳಿದ
ಒಂದೆರಡು ಸಂದರ್ಭಗಳಲ್ಲಿ ಅವರ ಗಂಭೀರವಾದ ಪಾತ್ರ ನಿರ್ವಹಣ, ಪಾಂಡಿತ್ಯ
ಪೂರ್ಣ, ಆದರೆ ಸರಳವಾದ ನಿರೂಪಣಾ ಶೈಲಿ, ಭಾವಪರಿಪೂರ್ಣವಾದ ವಾಕ್
ಶ್ರೀಮಂತಿಕೆಗಳು ನನ್ನ ನೆನಪಿನಲ್ಲಿ ಅಚ್ಚ ಳಿಯದೆ ಉಳಿದಿವೆ. ಅವರ ಪುರಾಣ
ಪ್ರವಚನಗಳನ್ನೂ, ಗೀತಾ ಜಯಂತಿಯ ಒಂದು ಸಂದರ್ಭದಲ್ಲಿ ಅವರು ಮಾಡಿದ
ಭಾಷಣವನ್ನೂ ಕೇಳಿದ್ದೆ. ಹೃದಯಸ್ಪರ್ಶಿಯಾಗಿದ್ದುವು.
{{gap}}ಎಷ್ಟೋ ಬಾರಿ ಶಾಸ್ತ್ರಿಗಳು ಗುರುಪುರಕ್ಕೆ ಬಂದಾಗ ನಾವು ಭೇಟಿಯಾಗಿ
ತುಂಬ ಮಾತುಕತೆ ಆಡುತ್ತಿದ್ದೆವು. ಅವರ ನಿಷ್ಕಪಟ ಸರಳ ಸಾತ್ವಿಕತೆ, ವಿನಯ-
ಸೌಜನ್ಯಗಳು ಎಂದೂ ಮರೆಯಲಾರದಂಥವುಗಳು. ಅದೆಷ್ಟೋ ಬಾರಿ “ನೀವು
ನಿಮ್ಮ ಆತ್ಮಕಥೆ ಬರೆಯಬೇಕು” ಎಂದು ನಾನು ಅವರನ್ನು ಒತ್ತಾಯಿಸಿದ್ದೆ. ಆಗ
ನಸುನಕ್ಕು, “ಆತ್ಮಕಥೆ ಬರೆಯಲು ನಾನೆಷ್ಟರವನು? ಅದೆಲ್ಲ ದೊಡ್ಡವರು ಮಾಡುವ
ಕೆಲಸ” ಎಂದು ಬಿಡುತ್ತಿದ್ದರು.
{{gap}}ಅಂತಹ ಶಾಸ್ತ್ರಿಗಳು ಇತಿಹಾಸಕ್ಕೆ ಸಂದಿದ್ದಾರೆ. ಅಧ್ಯಾಪಕನಾಗಿ ಬದುಕನ್ನು
ಆರಂಭಿಸಿದ ನಾನು ದಾರಿ ಬದಲಿಸಿ ವ್ಯಾಪಾರಿಯಾದೆ. ಆದರೆ ಶಾಸ್ತ್ರಿಗಳ ಒಡನಾಟ
ದಿಂದ ನನಗೊದಗಿದ ಅನಿರ್ವಚನೀಯವಾದ ಅನುಭವವು ನನ್ನೊಂದಿಗೇ ಇದೆ.
{{center|——}}<noinclude></noinclude>
iasn62227c3zsbsyen6aoaynkeoqh4f
ಪುಟ:ಯಕ್ಷಗಾನ ಮಕರಂದ.pdf/೨೩೮
104
100158
317790
308521
2026-05-06T17:06:11Z
Pragathi. BH
7585
/* Validated */
317790
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|212}}
ಬಾಣೌ ಬೆಸಸು ಬೆಸಸು ಎಂದು ಬತ್ತಳಿಕೆಯಿಂದ ನುಗ್ಗುತ್ತಾ ಬರುತ್ತಿದೆ''
ಎಂದರು. ಸರ್ಪದ ಬುಸುಗುಟ್ಟುವಿಕೆಯನ್ನು ಹೀಗೆ ಅರ್ಥವಿಸಿದುದು ಅವರ ಹೆಚ್ಚುಗಾರಿಕೆಯೇ. ಹಾಗೆಯೇ ಕರ್ಣಪರ್ವದ ಅರ್ಜನನಾಗಿ “ಅಸಮಬಲನೆಂದ
ನುಡಿಗಾ ಧನಂಜಯಂ... ಎಂಬುದಕ್ಕೆ “ಅತ್ಯಂತ ಬಲಿಷ್ಠನಾದ ಕರ್ಣ?
ಎಂಬರ್ಥವನ್ನು ಹೇಳದೆ, ಅರ್ಜುನನಿಗೆ ಸಮಾನವಾದ ಬಲವಿಲ್ಲದವನು ಎಂದು ವಿವರಣೆಯನ್ನಿತ್ತರು. ಇದು ಮುಂದೆ ಬರುವ ''ಸಾಯಕಗಳಿಲ್ಲವಗೆ ಕರದೊಳ ) ಗಾಯತದ ಧನುವಿಲ್ಲ ಬರಿದೆ ನಿ । ರಾಯಧನ ಕೊಲಲೆಂದಡೆಂತೈ ನೋಡು ಮನದೊಳಗೆ /”.ಎಂಬುದಕ್ಕೆ ಸಂವಾದಿಯಾಗಿದೆ... ಅದು ವರೆಗೆ ಅೆಸಮ ಬಲ ಎಂಬುದಕ್ಕೆ ಆ ರೀತಿಯ ಅರ್ಥ ಹೇಳಿದುದನ್ನು ನಾನು ಕೇಳಿರಲಿಲ್ಲ.
{{gap}}“ಅತಿಕಾಯ ಕಾಳಗ'ದಲ್ಲಿ ಶಾಸ್ತ್ರಿಗಳು *ಅತಿಕಾಯ', ಇನ್ನೊಬ್ಬರು ನನ್ನ
ಮಿತ್ರರು ಲಕ್ಷ್ಮಣ, ರಣರಂಗ ಪ್ರವೇಶ ಮಾಡಿ ಲಕ್ಷ್ಮಣನಿಗೆದುರಾಗಿ....
{{gap}}«ಭಳಿರೆ ಬಲು ಭಟನೆಂಬುದರಿತೆನು । ತಳುವದೆನ್ನೊಳು ಪೇಳು ರಘುಕುಲ ॥
ತಿಲಕನೋ ಲಕ್ಷ್ಮಣನೊ ನೀನಾ । ರಲಸದೀಗ ||
ಎಂಬ ಅತಿಕಾಯನ ಪ್ರಶ್ನೆಗೆ.... ಲಕ್ಷ್ಮಣನೆಂದ ನಿನ್ನಯ. |ಮನಸಿನೊಳ.
ಗೇನೆಂದು ತೋರಿದು |ದನಿತು ಬಗೆಯಲು ಬಹುದು ನೀಕೇ|ಳೆನುತಲವಗೆ"
ಲಕ್ಷ್ಮಣನು ಉತ್ತರ ಹೇಳಿದನು. ಅಲ್ಲಿ ಶಾಸ್ತ್ರಿಗಳು ಮತ್ತೆ ಆ ಪ್ರಶ್ನೆಗೆ ಸಂಬಂಧಿಸಿದ
ಹೆಚ್ಚಿನ ಉಪಪ್ರಶ್ನೆಗಳನ್ನೇನೂ ಕೇಳಲಿಲ್ಲ, ಮುಂದೆ ಅತಿಕಾಯನು ''ಸರಳ ಭಕ್ತಿ''
ಯನ್ನ ಕಾಣಿಸಿದಾಗ ಲಕ್ಷ್ಮಣನು ''... ಅಸುರಾರಿಯ ಪದದಾಣೆ | ರಾ. | ಕ್ಷಸ,
ರೊಳು ನಿನಗೆಣೆಗಾಣೆ || ಸ್ತುತಿಸುವ ಮಾತಿದೆ. ಇದಕ್ಕೆ ಲಕ್ಷ್ಮಣ ಪಾತ್ರ,
ವಹಿಸಿದವರು “ರಾಮಚಂದ್ರನ ಪಾದದಾಣೆಯಾಗಿ ನೀನು ಭಕ್ತ, ಶ್ರೇಷ್ಟ"ಎಂದರು,
ಕೂಡಲೇ ಶಾಸ್ತ್ರಿಗಳು “ಶಹಭಾಸ್, ನೀನು ಎಷ್ಟೇ ಗುಟ್ಟು ಮಾಡಿದರೂ ಸತ್ಯ
ತಿಳಿದೇ ಹೋಯಿತು ! `ರಾವಂಚಂದ್ರನ। 'ಪಾದದಾಣೆ. ಹಾಕುವೆ ನೀನು 'ರಾಮನಲ್ಲ
ಅವನ ತಮ್ಮ ಲಕ್ಷ್ಮಣ !'? ಎಂದು ನಗುತ್ತಾ ಹೇಳಿದರು.
{{gap}}"ಕೃಷ್ಣ ಸಂಧಾನ'ದಲ್ಲಿ ಶಾಸ್ತ್ರಿಗಳು ಕೃಷ್ಣನ ಪಾತ್ರವನ್ನು ವಹಿಸಿದ್ದರು.
ಸಂಧಾನ ಮಾಡಿಕೊಳ್ಳುವಂತೆ | ದುರ್ಯೋಧನನೊನೆ. ಹೇಳುವಲ್ಲಿ ಕೃಷ್ಣನಾಗಿ ಶಾಸ್ತ್ರಿ
ಗಳು "“ಎಲವೊ ಪಾತಕಿ ಬರಿದೆ ಸಾಯದಿ । ರೊಲಿದು ಪಾಂಡವರುಗಳ ಕೂಡಿಕೊ ।
ಕೊಲಿಸಲಾರೆನು ಸರ್ವಥಾ ಕೊಳು । ಗುಳದಿ ನಿನ್ನ” ಎಂಬ ಪದ್ಯಕ್ಕೆ ಬಿಡಿಬಿಡಿಯಾಗಿ.
ಅರ್ಥ ಹೇಳಿದರು, ದುರ್ಯೋಧನನ ಪದ್ಯ ಹೀಗಿದೆ...<noinclude></noinclude>
lcno4mode5t6mdk77803285awijn8lc
ಪುಟ:ಯಕ್ಷಗಾನ ಮಕರಂದ.pdf/೨೩೯
104
100159
317791
311097
2026-05-06T17:06:43Z
Pragathi. BH
7585
/* Validated */
317791
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|213}}
“ಎನೆ ಧರಾಧಿಪ ನುಡಿದನರಿತಿಹೆ ॥ ದನುಜರಿಪು ನೀನಿಳೆಯ ಭಾರವ ॥
ನೊನೆಯಲವತರಿಸಿ ಮಾಯಾ|ಮನುಜನೆಂದು||''
{{gap}}ಇದಕ್ಕೆ ಅರ್ಥ ಹೇಳುತಾ ದುರ್ಯೋಧನ ಪಾತ್ರವಹಿಸಿದವರು ಹಲವು ಮಾತುಗಳನ್ನು ಹೇಳಿ
''ಕ್ರೃಷ್ಣ ನೀನು ಭಗವಂತನೆಂದು ಬಲ್ಲೆ... ನೀನು ನನ್ನ್ನ ಅಂತರಂಗದಲ್ಲಿದ್ದು ಯುದ್ದ ಮಾಡು
ಎಂದು ಪ್ರೇರಿಸುತ್ತಿ. "' ಈ ಸಭೆಯ ಮುಂದೆ.'ಸಂಧಾನ ಮಾಡು? ಎಂದು ನನಗೆ ಉಪದೇಶ ಮಾಡುತ್ತಿ... ನೀನು ಮಾಯಾ ನಾಟಕಸೂತ್ರಧಾರಿ,......* ಎಂದೆಲ್ಲ ಹೇಳಿದರು. ಇದಕ್ಕುತ್ತರವಾಗಿ ಶಾಸ್ತ್ರಿಗಳು ನಿನ್ನ
ಮಾತಿನ.ಪ್ರಕಾರ ನನ್ನಂತಹ ವಂಚಕ ಇನ್ನೊಬ್ಬನಿಲ್ಲ ಎಂದಾಗುತ್ತದೆ
ಎಂದರು. *ಭಗವಂತ ಎಲ್ಲರ ಆಂತರಂಗದಲ್ಲಿದ್ದು ಎಲ್ಲ ಬಗೆಯ ಪ್ರೇರಣ
ಕೊಡುತ್ತಾನೆಂಬ ಅಭಿಪ್ರಾಯವನ್ನು ಕೌರವನು “ಹೇಳಿದಾಗ, ಕೃಷ್ಣನು ಭಗವಂತನು.
ಕರ್ಮಸಾಕ್ಷಿಯಾಗಿ ಅಂತರಂಗದಲ್ಲಿರುತ್ತಾನೆ. ಹೊರತು, ಪ್ರೇರಣೆ ಕೊಡುವುದಿಲ್ಲ
ಪ್ರೇರಣೆಯೆಲ್ಲ. ಅವರವರದೇ... ಎಂದರು. ಇಲ್ಲಿ ಕಲಹವೇ ಏರ್ಪಟ್ಟಿತು,
ಕೌರವ “ಇದು ಕನ್ನಡ ಭಾರತದಲ್ಲಿಯೇ ಇದೆ''ಎಂದಾಗಕ್ರೃಷ್ಣ ಅದನ್ನು ಕೌರವ
ಧೃತರಾಷ್ಟ್ರನಿಗೆ ಹೇಳಿದುದು), ಕೃಷ್ಣ ನಿಗಲ್ಲ, ಎಂದನು. * ಹೀಗೆ ವಾಗ್ವಾದವು
ವ್ಯಕ್ಥಿಗತವಾಗಿ ಮಾರ್ಪಟ್ಟು ತಾಳಮದ್ದಳೇ ಅಲ್ಲಿಗೇ ನಿಂತಿತು.
{{gap}}ಮಂಗಳೂರಿನ ಶರವು ದೇವಸ್ಥಾನದಲ್ಲಿ “ಕೃಷ್ಣ ಸಂಧಾನ'ದ ಬಲರಾಮನ
ಪಾತ್ರವನ್ನು ಬಹು ಮನೋಹರವಾಗಿ" ನಿರ್ವಹಿಸುತ್ತಾ ಇದ್ದರು. ಶಾಸ್ತ್ರಿಗಳು; ಬೆಳ್ಳ
ಗಿದ್ದುದೆಲ್ಲಾ ಹಾಲು ಎಂಬ ಮುಗ್ಧ ಸ್ವಭಾವವನ್ನು ಜನರ ಮನಸ್ಸಿಗೆ 'ನಾಟುವಂತೆ
ಚಿತ್ರಿಸುತ್ತಾ. ಇದ್ದರು. ತನ್ನ ಪಾಲಿಗೆ ಗೋಹತ್ಯಾ ಪಾಪವು ಅಂಟಿಕೊಂಡಿತೆಂದು
ದುಃಖಾಕ್ರಾಂತನಾಗಿದ್ದಾಗ ಕೃಷ್ಣನು ಬಂದು *ಸುರಭಿಹತ ಪಾತಕವು ಭೂಮಿಯೂ |
ಚರಿಸಿ ಬಹುತೀರ್ಥಗಳ ಸ್ನಾನವ ವಿರಚಿಸಲು ಪರಿಣಾಮ ಹೊಂದುವುದೆನಲು”
ಬಲರಾಮನು *ವಿಷಯಾಂತರಕೆ ತೆರಳಲು? ಸಿದ್ಧನಾಗುತ್ತಾನೆ. ಆಗ ಕೃಷ್ಣ “ಅಣ್ಣಾ,
ಕೌರವನಿಗೆ ಸಹಾಯವೀಯುವುದಾಗಿ ಮಾತು ಕೊಟ್ಟಿ ದ್ದೀರಲ್ಲ!?ಎಂದು ಕೆಣಕುತ್ತಾನೆ. ಆಗ ಬಲಭದ್ರನು “ಏನು ಮಾಡುವುದು? ನನ್ನ ಪಾಪಕ್ಕೆ ಪ್ರಾಯಶ್ಚಿತ್ತ.
ಮಾಡದೆ ಗತ್ಯಂತರಎಲ್ಲವೆಂದಾಗಿ ಬಿಟ್ಟಿತು, ಇಲ್ಲವಾದರೆ ಖಂಡಿತ ಅವನ ಬೆಂಬಲಕ್ಕೆ
ಹೋಗಬೇಕಾಗಿತ್ತು. 'ಆದರೂ ಏನು? ಅವನಗೆ ಈಗಾಗಲೇ ಹನ್ನೊಂದು ಅಕ್ಶೌಹಿಣಿ
ಸೈನ್ಯದ ಸಹಾಯವಿದೆ, ಸಾಲದುದಕ್ಕೆ ನಿವಾತಕವಚರೂ 'ಸಹಾಯ ಕೊಡುವ
ಭರವಸೆ ಕೊಟ್ಟಿದ್ದಾರೆ? ಈ ಮಾತು ಪ್ರಮಾದವಶಾತ್ ಶಾಸ್ತ್ರಿಗಳ ಬಾಯಿಂದ
ಜಗುಳಿತು.ಕೂಡಲೇ ಅವರು “ದುಃಖ ಹೆಚ್ಚಾಗಿ ಈ ಸುಟ್ಟ ಬಾಯಲ್ಲಿ ಸತ್ತವರ<noinclude></noinclude>
kfm5u8duu27ohy97ed6pwm586avuhmg
ಪುಟ:ಯಕ್ಷಗಾನ ಮಕರಂದ.pdf/೨೪೦
104
100160
317792
312220
2026-05-06T17:07:19Z
Pragathi. BH
7585
/* Validated */
317792
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|214}}
ಹೆಸರೆಲ್ಲಾ ಬರುತ್ತದೆ! ....... ಆ ನಿವಾತಕವಚರ ಸಂತತಿಯವರಾದ ಸಂಶಪ್ತಕರು
ಕೌರವನಿಗೆ ಸಹಾಯಕ್ಕಿದ್ದಾರೆ? ಎಂದು ತಿದ್ದಿಕೊಂಡರು.
{{gap}}'ಸೇತುಬಂಧನ'ದಲ್ಲಿ ರಾವಣನಾಗಿ ಸೇನಾಸಿದ್ಧತೆ ಮಾಡಿದ ಕ್ರಮ ವೈಶಿಷ್ಟ್ಯ
ಪೂರ್ಣವಾದುದು. ಏಳು ತಾಳೆಯ ಮರದಷ್ಟು ಎತ್ತರವಾದ ಕೋಟೆಯನ್ನು ಕಟ್ಟಿ,
ಇದರೆ ರಕ್ಷಣೆಗಾಗಿ ಭೂತಭೇತಾಳಗಳನ್ನು ನಿಯಮಿಸಿದ ಬಗೆ, ಈ ಕೋಟೆಯ.
ಸುತ್ತಲೂ ಆಳವಾದ ಕಂದಕ...... ಇತ್ಯಾದಿಗಳನ್ನು ಹೇಳುತ್ತಾ ಹೇಳುತ್ತಾ, ರಾಮನ
ಕಡೆಯ ಮಂಗಗಳ ಬಂದರೆ ಒಂದೊಂದನ್ನೇ ಹಿಡಿದು ನುಂಗುವ ಭೇತಾಳಗಳ ಭೈರ
ವತೆ, ಒಂದು ವೇಳೆ ಕೋಟೆಯೇರಿದರೆ ಆಗಲೇ ಅವುಗಳ ತಲೆಗೆ ಕಲ್ಲುಗುಂಡುಗಳನ್ನು
ಬೀಳಿಸಿ ಕೊಲ್ಲುವ ವಿಧಾನ, ಅದೂ ಅಲ್ಲವಾದರೆ ತಾವಾಗಿ ಕೈಕಾಲು ಜಾರಿ ಬಿದ್ದರೆ
ಸುತ್ತ, ಕೆಂದಕದ ನೀರಲ್ಲಿ ಮೊಸಳೆಗಳಿಗೆ ಆಹಾರವಾಗುವ ಸಾಧ್ಯತೆ, ಲಂಕೆಯ ಸಹಜ.
ವಾದ ಕಂದಕೆದಂತಿರುವ ಸಮುದ್ರದಲ್ಲಿ ಮುಳುಗಿಸಿ ಉಪ್ಪು ಹಾಕಿದ ಪದಾರ್ಥದಂತೆ
ಬಾಯಿಗೆ ಹಾಕಿ ನುಂಗುವ ರಾಕ್ಷಸ ಕಿಂಕರರು. ಇತ್ಯಾದಿಗಳನ್ನು ವಿವರಿಸಿ ಈ ಲಂಕೆಗೆ
ಯಾರೂ ದಾಳಿಯಿಡಲು ಸಾಧ್ಯವಿಲ್ಲವೆಂಬಂತೆ ಬಣ್ಣಿಸಿದರು.. ಮುಂದೆ ಸೀತೆಯನ್ನು.
ಸರ್ವಥಾ ರಾಮನಿಗೆ ಕೊಡಲೊಲ್ಲೆನೆಂದು ಹೇಳುವಲ್ಲಿ “ಆ ಕಾಡಾಡಿ ರಾಮನಿಗೆ ಸೀತೆ
ಯನ್ನು ಕೊಟ್ಟೆನೆಂದಾದರೆ ಈ “ಸುಟ್ಟ ಮೀಸೆ ಯಾಕೆ? ಎಂದು .ಅಬ್ಬರಿಸಿದರು..
ಆಗ ಲಂಕಾದಹನದಲ್ಲಿ ರಾವಣನ ಮೀಸೆ ಸುಟ್ಟುಹೋಗಿತ್ತೆಂದು ಕತೆ ಕೇಳಿದವರಿಗೆಲ್ಲ.
ರಾವಣನ ಮಾತು ಅತ್ಯಂತ ಸಮರ್ಪಕವೆಂದು ತೋರಿತ್ತು.
{{gap}}ಹಳ್ಳಿಯೊಂದರಲ್ಲಿ ಒಬ್ಬರ ಮನೆಯಲ್ಲಿ ಒಂದು ವಿಶೇಷ ಸಂದರ್ಭದಲ್ಲಿ ತಾಳ
ಮದ್ದಳೆ, ವ್ಯವಸ್ಥಿತವಾಗಿತ್ತು... ಆಲ್ಲಿಯವರ ಅಪೇಕ್ಷೆಯಂತೆ ಭೀಷ್ಮಾರ್ಜುನ
ಕಾಳಗವೆಂಬ ಪ್ರಸಂಗವನ್ನು” ಆಯ್ದ ಕೊಳ್ಳಲಾಗಿತ್ತು...ಶಾಸ್ತ್ರೈಗಳು ಭೀಷ್ಮನ,
ಪಾತ್ರವನ್ನು ವಹಿಸಿದರು. ಮಧ್ಯರಾತ್ರಿಯ ಹೊತ್ತು ಕಳೆಯಿತು. ಕೌರವ- ಭೀಷ್ಮರ
ಸಂವಾದ ಮುಗಿದು ಭೀಷ್ಮನು ರಣರಂಗವನ್ನು ಪ್ರವೇಶಿಸಿದ ಸಂದರ್ಭ ನಡೆಯುತ್ತಿತ್ತು.,
ಭೀಷ್ಮ- ಕೃಷ್ಣರ ಸಂವಾದ ನಡೆಯುತ್ತಿದ್ದಂತೆ. ಶಾಸ್ತಿಗಳು ಅಸ್ವಸ್ಥರಾದಂತೆಯೂ
ಉದ್ವಿಗ್ನರಾದಂತೆಯೂ ಚಡಪಡಿಸತೊಡಗಿದರು. ನೀರು ತರುವಂತೆ ಹೇಳಿ, ಎದ್ದು ಬಾಯಿ ಮುಕ್ಕುಳಿಸಿ ಉಗುಳಿ ಬಂದರು. ಮತ್ತೂ ಯಥಾಸ್ಥಿತಿಗೆ ಬರಲಿಲ್ಲ. ಮತ್ತೂ
ಒಂದೆರಡು ಬಾರಿ ಎದ್ದು ಹೋಗಿ ಕೇಕರಿಸಿ ಉಗುಳಿ ಬಂದು ಕುಳಿತರು. ಮಾತು ಮೊದಲಿನಂತೆ ಮುಂದುವರಿಯಲಿಲ್ಲ.ಆದರೂ ಪ್ರಯತ್ನ ಪೂರ್ವಕ ಮಾತಾಡಿ
ಕ್ರಮವಾಗಿ ಮೊದಲಿನಂತಾದರು,ಇದೇನು. ಹೀಗಾಯಿತು, ಎಂದು ಕೇಳಿದಾಗ
ವಿಷಯವು ಬಯಲಾಯಿತು. ಶಾಸ್ತ್ರಿಗಳು ನಶ್ಯ ಸೇವಿಸುವವರಾಗಿರಬಹುದು.<noinclude></noinclude>
nya427rce1j3erovlcwh69v37hsmuuu
ಪುಟ:ಯಕ್ಷಗಾನ ಮಕರಂದ.pdf/೨೪೧
104
100161
317793
314977
2026-05-06T17:08:14Z
Pragathi. BH
7585
/* Validated */
317793
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|215}}
(ಏಕೆಂದರೆ ಸಂಸ್ಕೃತ ಪಂಡಿತರುಗಳು ಹೆಚ್ಚಾಗಿ ನಶ್ಯ, ಸೇವಿಸುತ್ತಿದ್ದರು) ಎಂದೆಣಿಸಿದ
ಮನೆಯ ಪೈಕಿಯವರೊಬ್ಬರು ಒಂದು ಕಟ್ಟಿನಲ್ಲಿ ಸ್ವಲ್ಪ ಹೊಸ ನಶ್ಯವನ್ನು ಅವರ
ಮುಂದಿಟ್ಟರು. ಶಾಸ್ತ್ರಿಸಳು ಒಳ್ಳೆ. (ಕರಿ) ಮೆಣಸಿನ ಪುಡಿಯಾಗಿರಬಹುದೆಂದು
(ಗಂಟಲು ಕಟ್ಟಿ ಬರುವವರು ಕರಿಮೆಣಸಿನ ಪುಡಿಯನ್ನು ಬಾಯಿಗೆ ಹಾಕಿಕೊಳ್ಳುವುದೂ
ಇದೆ) ಅದನ್ನು ತೆಗೆದು ಬಾಯಿಗೆ ಹಾಕಿಕೊಂಡುಬಿಟ್ಟರು... ಹೊಗೆಸೊಪ್ಪಿನ
ಅಭ್ಯಾಸವೇ ಇಲ್ಲದ ಅವರು ಒಡನೆಯೇ ಯಾತನೆಗೊಳಗಾದರು. ಆರ್ಥಹೇಳುವು
ದಕ್ಕೂ ಅಲ್ಲ, ಬಿಡುವುದಕ್ಕೂ ಅಲ್ಲ ಎಂಬ ಸಂಕಟಕ್ಕೆ ಗುರಿಯಾದರು. ನಸ್ಯವನ್ನು
ತಂದಿಟ್ಟವರಿಗೂ, ವಿಷಯ ತಿಳಿದಾಗ ಖೇದವಾಯಿತು... ಶಾಸ್ತ್ರಿಗಳು ಮನೆಯವರ
ಸದುದ್ದೇಶವನ್ನು ಅರ್ಥ ಮಾಡಿಕೊಂಡರಾದ ಕಾರಣ ಯಾವ ಅಹಿತಕರ ಘಟನೆಯೂ
ನಡೆಯದೆ ತಾಳಮದ್ದಳೆ ನಡೆಯಿತು. ಅವರನ್ನು ಕರೆದುಕೊಂಡು ಹೋಗುವುದರಲ್ಲಿ
ನನಗೆ ಪ್ರಮುಖ ಪಾತ್ರವಿದ್ದುದರಿಂದ "ಹೀಗಾಯಿತಲ್ಲ' ಎಂಬ ಖೇದ ನನಗಾಯಿತು.
{{gap}}ಕೋಟೆಕಾರು ಶಾಲೆಯಲ್ಲಿ *ವಾಲಿಸಂಹಾರ' ಪ್ರಸಂಗ. ಶಾಸ್ತ್ರಿಗಳು ಸುಗ್ರೀ
ವನ ಪಾತ್ರವನ್ನು ವಹಿಸಿದ್ದರು. ವಾಲಿ ಸುಗ್ರೀವನೊಡನೆ "ನನ್ನೊಡನೆ ಮಲ್ಲ
ಯುದ್ಧವನ್ನು ನೀನು ಯಾವ ಕ್ರಮದಲ್ಲಿ ಮಾಡುತ್ತಿ?'' ಎಂದು ಕೇಳಿದಾಗ ಸುಗ್ರೀವ
“ಯುದ್ದದಲ್ಲಿ ಇಂತಿಂತಹ ಕ್ರಮದಲ್ಲಿ ಯುದ್ಧ ಮಾಡುತ್ತೇನೆ -ಎನ್ನುವುದೆ? ವೈರಿ.
ಯಾವ ಶ್ರಮದಲ್ಲಿ ಹೋರಾಡುತ್ತಾನೋ ಅದಿಕ್ಕೆ ತಕ್ಕ ಪ್ರತಿವಿಧಾನಗಳನ್ನು ಕೈ
ಕೊಳ್ಳುವುದೇ ಯುದ್ಧ ಧರ್ಮ'' ಎಂದನು. ಮಲ್ಲಯುದ್ದದ ಹಿಡಿತ (ಪಟ್ಟು)ಗಳನ್ನ
ಓದಿ ತಿಳಿದಿದ್ದ ವಾಲಿ ಆ ರೀತಿ ಪ್ರಶ್ನಿಸಿದುದಕ್ಕೆ ಸುಗ್ರೀವನ ಉತ್ತರ ಈ ರೀತಿ.
ಯಾಗಿತ್ತು. ಆದುದರಿಂದ ಮಲ್ಲಯುದ್ಧದ ಪಟ್ಟುಗಳ ಪಟ್ಟಿ ಮುಂದೆ ಬರಲಿಲ್ಲ.
{{Right|-ತೆಕ್ಕುಂಜ ಗೋಷಾಲಕೃಷ್ಣ ಭಟ್ಟ.}}
{{center|—————————————————————————————————}}
{{center|೮}}
{{gap}}ಸುಮಾರು ಇಪ್ಪತ್ತು ವರ್ಷಗಳಿಗೂ ಹಿಂದಿನ ಮಾತು.. ಆಗ ಕಾರ್ಕಳ.
S.V.T ಶಾಲಾ ವಠಾರದಲ್ಲಿ ದೊಡ್ಡ ಮಟ್ಟದ ತಾಳಮದ್ದಳೆಗಳು ಜರಗುತ್ತಿದ್ದವು.
ಒಂದು ತಾಳಮದ್ದಳೆ ದಿನ ಶಾಸ್ತ್ರಿಗಳು ಸಂಜೆ ನಾಲ್ಕು ಗಂಟೆ ಹೊತ್ತಿಗೇ ಕಾರ್ಕಳಕ್ಕೆ
ಬಂದರು, ಅದಕ್ಕೆ? ಹಿಂದೆ, ರಂಜಾಳದಲ್ಲಿ ನಡೆದ. ತಾಳಮದ್ದಳೆಯಲ್ಲಿ ನಮಗೆ
ಪರಿಚಯವಾಗಿತ್ತು. ಕಂಡೊಡನೆ. ನಾನು ಅವರನ್ನು ಮಾತಾಡಿಸಿದೆ... ಉಪಾಹಾರ
ತೀರಿಸಿ ಕಾರ್ಕಳ ರಾಮಸಮುದ್ರದ ಕಡೆ ಹೋದೆವು. ನಾನು ಅವರ ಸನಿಹದಲ್ಲೆ
ನಡೆಯದೆ ಹಿಂಬಾಲಿಸಿಕೊಂಡು ಹೋದಾಗ, ಮುಂದೆ ಬನ್ನಿ, ಜತೆಯಾಗಿ ಬನ್ನಿ''<noinclude></noinclude>
6j4zi80c0yufvvrg3extsvvtzswntga
ಪುಟ:ಯಕ್ಷಗಾನ ಮಕರಂದ.pdf/೨೪೨
104
100162
317794
314978
2026-05-06T17:09:20Z
Pragathi. BH
7585
/* Validated */
317794
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|216}}
ಅಂದರು. ಮಾತಾಡುತ್ತ, ಜೈನಧರ್ಮದ ಬಗ್ಗೆ ಮಾತು ಬಂತು. ಶಾಸ್ತ್ರಿಗಳು.
ಸಂಸ್ಕೃತ ಗ್ರಂಥಗಳ ಆಧಾರದಿಂದ ಹೇಳಿದ ಗಾಥೆಗಳು, ಜೈನಧರ್ಮದ ವಿಚಾರ,
ಜೈನಧರ್ಮದ ಕುರಿತು ಅವರಿಗಿದ್ದ ಅನುಭವ, ಜೈನನಾದ ನನ್ನನ್ನೂ ದಂಗುಬಡಿಸಿತು.
{{gap}}ರಾತ್ರೆ ತಾಳಮದ್ದಳೆ ಜರಗುವಲ್ಲಿಗೆ ತಲುಪಿದೆವು. ಅಲ್ಲಿದ್ದ ದಿ। ಕಿಲ್ಲೆಯವರು.
“ಶಾಸ್ತ್ರಿಗಳೇ, ನೀವು ಬೇಗ ಬಂದಿದ್ದಿರಂತೆ, ಎಲ್ಲಿದ್ದಿರಿ ?” ಎಂದರು. ಶಾಸ್ತ್ರಿಗಳು.
ನನಗೆ ಬಾಬು ಶೆಟ್ರ ಸರ್ಪರಕ್ಷಣೆ” ಎಂದರು. ಅಂದಿನ ತಾಳಮದ್ದ ಳೆಯಲ್ಲಿ ನಾನು.
ಸರ್ಪಾಸ್ತ್ರದ ಅರ್ಥ ಹೇಳಿದ್ದೆ. ' ಶಾಸ್ತ್ರಿಗಳ ಮಾತಿನಿಂದ ನಗೆಯ ಬುಗ್ಗೆ ಚಿಮ್ಮಿತು,
{{gap}}ಇನ್ನೊಮ್ಮೆ ಕೃಷ್ಣ ಸಂಧಾನದ ಕೃಷ್ಣನ ಪಾತ್ರದಲ್ಲಿ, ಅವರು ಬಲರಾಮನಲ್ಲಿ
ಮಾತಾಡುವಾಗ ಆಡಿದ ಮಾತು ಮಾರ್ಮಿಕವಾದುದು. ಬಲರಾಮನಿಗೆ, ಜರಡು
ದನವೊಂದನ್ನು ಹತ್ಯೆ ಮಾಡಿದ ದೋಷ ಬಂದು, ಅವನು ಚಿಂತೆಯಲ್ಲಿದ್ದ ಸಂದ
ರ್ಭದ ಸಂವಾದ. ಶಾಸ್ತ್ರಿಗಳು "ಅಣ್ಣಾ, ನೀನು ದೇವರನ್ನು ಕೊಂದೆಯಲ್ಲ"! ಅಂದರು,
{{gap}}ಹಿಂದೊಮ್ಮೆ, ಮೂಡಬಿದ್ರೆಯಲ್ಲಿ ಅವರು ವಹಿಸಿದ್ದ ಜರಾಸಂಧನ ಪಾತ್ರ,
ವಂತೂ ನನ್ನ ಮನಸ್ಸಿನಲ್ಲಿ ಜೀವಂತವಾಗಿದೆ. ಮಾಗಧನ ಆ ಅಬ್ಬರ, ಸಿಟ್ಟು,
ಆವೇಶ, ಕಣ್ಣಿಗೆ ಕಟ್ಟಿದಂತಿದೆ. ಹಾಸ್ಕ, ವ್ಯಂಗ್ಯೋಕ್ತಿ, ನಗೆ, ಎಲ್ಲದರಲ್ಲೂ. ಗಾಂಭೀರ್ಯ
ಇತ್ತು. ಜರಾಸಂಧನ ವಾಮಾಚಾರ, ನರಮೇಧಗಳ ಶಾಸ್ತ್ರೀಯವಾದ ಸಮರ್ಥನೆ,
ಅಶ್ಲೀಲ ಶಬ್ದಗಳನ್ನು ಬಳಸದೆ ಕೃಷ್ಣನನ್ನು ಜರೆಯುವ ರೀತಿ, ಕಟಕಿ, ವರ್ಣನೆಯ
ವೈಖಿರಿಗಳಿಂದ ಅಂದಿನ ಚಿತ್ರಣ ಅಪ್ರತಿಮವಾಗಿತ್ತು.
{{Right|-ನೆಲ್ಲಿಕಾರು ಬಾಬು ಶೆಟ್ಟಿ,}}
{{center|೯}}
{{gap}}'ಕರ್ಣಾವಸಾನ' ಪ್ರಸಂಗ. ಎಸೆ ಮರುಳೆ ಗಾಂಡೀವಿ,....'' ಎಂಬ. ಪದ್ಯದ
ಸನ್ನಿವೇಶ. ಏಕಾಂಗಿಯಾಗಿ, ಅಸಹಾಯಕ ಸ್ಥಿತಿಯಲ್ಲಿರುವ ಕರ್ಣನನ್ನು ಕೊಲ್ಲುವುದು.
ಧರ್ಮಸಮ್ಮತವೇ? ಎಂಬ. ಸಂದಿಗ್ಹ ದಿಂದ ಅರ್ಜುನ ಮತ್ತೆ ಮತ್ತೆ. ತನ್ನ ವಾದ
ಮುಂದುವರಿಸಿದಾಗ ಕೃಷ್ಣನ ಅರ್ಥದಲ್ಲಿ ಶಾಸ್ತ್ರಿಗಳು ಹೇಳುತ್ತಿದ್ದುದು ಹಂಚಿನ.
ಮೇಲೆ ಹೋಳಿಗೆ ಕಾಯುತ್ತಾಇದೆ. ನೀನು ಕೆಂಡ ಲೆಕ್ಕ ಮಾಡುತ್ತಾ ಕೂತಿದ್ದಿ.ಏ ಹೆಡ್ಡ!ಏನು ಹೇಳಬೇಕು!<noinclude></noinclude>
c4radql7ztfhktfz7f45euvjppme9bz
317795
317794
2026-05-06T17:10:17Z
Pragathi. BH
7585
317795
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|216}}
ಅಂದರು. ಮಾತಾಡುತ್ತ, ಜೈನಧರ್ಮದ ಬಗ್ಗೆ ಮಾತು ಬಂತು. ಶಾಸ್ತ್ರಿಗಳು.
ಸಂಸ್ಕೃತ ಗ್ರಂಥಗಳ ಆಧಾರದಿಂದ ಹೇಳಿದ ಗಾಥೆಗಳು, ಜೈನಧರ್ಮದ ವಿಚಾರ,
ಜೈನಧರ್ಮದ ಕುರಿತು ಅವರಿಗಿದ್ದ ಅನುಭವ, ಜೈನನಾದ ನನ್ನನ್ನೂ ದಂಗುಬಡಿಸಿತು.
{{gap}}ರಾತ್ರೆ ತಾಳಮದ್ದಳೆ ಜರಗುವಲ್ಲಿಗೆ ತಲುಪಿದೆವು. ಅಲ್ಲಿದ್ದ ದಿ। ಕಿಲ್ಲೆಯವರು.
“ಶಾಸ್ತ್ರಿಗಳೇ, ನೀವು ಬೇಗ ಬಂದಿದ್ದಿರಂತೆ, ಎಲ್ಲಿದ್ದಿರಿ ?” ಎಂದರು. ಶಾಸ್ತ್ರಿಗಳು.
ನನಗೆ ಬಾಬು ಶೆಟ್ರ ಸರ್ಪರಕ್ಷಣೆ” ಎಂದರು. ಅಂದಿನ ತಾಳಮದ್ದ ಳೆಯಲ್ಲಿ ನಾನು.
ಸರ್ಪಾಸ್ತ್ರದ ಅರ್ಥ ಹೇಳಿದ್ದೆ. ' ಶಾಸ್ತ್ರಿಗಳ ಮಾತಿನಿಂದ ನಗೆಯ ಬುಗ್ಗೆ ಚಿಮ್ಮಿತು,
{{gap}}ಇನ್ನೊಮ್ಮೆ ಕೃಷ್ಣ ಸಂಧಾನದ ಕೃಷ್ಣನ ಪಾತ್ರದಲ್ಲಿ, ಅವರು ಬಲರಾಮನಲ್ಲಿ
ಮಾತಾಡುವಾಗ ಆಡಿದ ಮಾತು ಮಾರ್ಮಿಕವಾದುದು. ಬಲರಾಮನಿಗೆ, ಜರಡು
ದನವೊಂದನ್ನು ಹತ್ಯೆ ಮಾಡಿದ ದೋಷ ಬಂದು, ಅವನು ಚಿಂತೆಯಲ್ಲಿದ್ದ ಸಂದ
ರ್ಭದ ಸಂವಾದ. ಶಾಸ್ತ್ರಿಗಳು "ಅಣ್ಣಾ, ನೀನು ದೇವರನ್ನು ಕೊಂದೆಯಲ್ಲ"! ಅಂದರು,
{{gap}}ಹಿಂದೊಮ್ಮೆ, ಮೂಡಬಿದ್ರೆಯಲ್ಲಿ ಅವರು ವಹಿಸಿದ್ದ ಜರಾಸಂಧನ ಪಾತ್ರ,
ವಂತೂ ನನ್ನ ಮನಸ್ಸಿನಲ್ಲಿ ಜೀವಂತವಾಗಿದೆ. ಮಾಗಧನ ಆ ಅಬ್ಬರ, ಸಿಟ್ಟು,
ಆವೇಶ, ಕಣ್ಣಿಗೆ ಕಟ್ಟಿದಂತಿದೆ. ಹಾಸ್ಕ, ವ್ಯಂಗ್ಯೋಕ್ತಿ, ನಗೆ, ಎಲ್ಲದರಲ್ಲೂ. ಗಾಂಭೀರ್ಯ
ಇತ್ತು. ಜರಾಸಂಧನ ವಾಮಾಚಾರ, ನರಮೇಧಗಳ ಶಾಸ್ತ್ರೀಯವಾದ ಸಮರ್ಥನೆ,
ಅಶ್ಲೀಲ ಶಬ್ದಗಳನ್ನು ಬಳಸದೆ ಕೃಷ್ಣನನ್ನು ಜರೆಯುವ ರೀತಿ, ಕಟಕಿ, ವರ್ಣನೆಯ
ವೈಖಿರಿಗಳಿಂದ ಅಂದಿನ ಚಿತ್ರಣ ಅಪ್ರತಿಮವಾಗಿತ್ತು.
{{Right|-ನೆಲ್ಲಿಕಾರು ಬಾಬು ಶೆಟ್ಟಿ,}}
{{center|—————————————————————————————————}}
{{center|೯}}
{{gap}}'ಕರ್ಣಾವಸಾನ' ಪ್ರಸಂಗ. ಎಸೆ ಮರುಳೆ ಗಾಂಡೀವಿ,....'' ಎಂಬ. ಪದ್ಯದ
ಸನ್ನಿವೇಶ. ಏಕಾಂಗಿಯಾಗಿ, ಅಸಹಾಯಕ ಸ್ಥಿತಿಯಲ್ಲಿರುವ ಕರ್ಣನನ್ನು ಕೊಲ್ಲುವುದು.
ಧರ್ಮಸಮ್ಮತವೇ? ಎಂಬ. ಸಂದಿಗ್ಹ ದಿಂದ ಅರ್ಜುನ ಮತ್ತೆ ಮತ್ತೆ. ತನ್ನ ವಾದ
ಮುಂದುವರಿಸಿದಾಗ ಕೃಷ್ಣನ ಅರ್ಥದಲ್ಲಿ ಶಾಸ್ತ್ರಿಗಳು ಹೇಳುತ್ತಿದ್ದುದು ಹಂಚಿನ.
ಮೇಲೆ ಹೋಳಿಗೆ ಕಾಯುತ್ತಾಇದೆ. ನೀನು ಕೆಂಡ ಲೆಕ್ಕ ಮಾಡುತ್ತಾ ಕೂತಿದ್ದಿ.ಏ ಹೆಡ್ಡ!ಏನು ಹೇಳಬೇಕು!<noinclude></noinclude>
qhqdtvyonc0vy05070md94tzld8lz7u
ಪುಟ:ಯಕ್ಷಗಾನ ಮಕರಂದ.pdf/೨೪೩
104
100163
317796
316914
2026-05-06T17:10:50Z
Pragathi. BH
7585
/* Validated */
317796
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|217}}
{{gap}}ಒಂದು ಕಡೆ *ಭೀಷ್ಮಾರ್ಜುನ' ಪ್ರಸಂಗ. ಶಾಸ್ತ್ರಿಗಳು ಭೀಷ್ಮ. ತಲೆಯಲ್ಲಿ
ಸಾಕಷ್ಟು ತುಂಬಿಕೊಂಡಿದ್ದ ಕೌರವ ಪಾತ್ರಧಾರಿ "ಆಕ್ಟೋಹಿಣಿ' ಎಂಬ ಪರಿಭಾಷೆಯ
ಮೇಲೆ ಪಟ್ಟು ಹಿಡಿದು ಪರೀಕ್ಷಿಸಲೋ ಎಂಬಂತೆ ಅದಷ್ಟು? ಇದೆಷ್ಟು ? ಎಂದು.
ಕುತ್ತಿ ಕುತ್ತಿ ಪ್ರಶ್ನಿಸತೊಡಗಿದಾಗ, ಶಾಸ್ತ್ರಿಗಳು. . *ಕೃಪಾಚಾರ್ಯರಂದ ಅಷ್ಟು
ವರ್ಷ, ದ್ರೋಣಾಚಾರ್ಯರಿಂದ ಅಷ್ಟು ವರ್ಷ ಪಾಠ ಹೇಳಿಸಿದ್ದೇನಲ್ಲ? ನಾನು
ಈಗ ಹೇಳಬೇಕೇನೋ ನಿನಗೆ?'' ಎಂದು "ಜಬರ್ದಸ್ತು' ಮಾಡಿದುಗ "ಕೌರವ?
ತೆಪ್ಪಗಾಗಬೇಕಾಯಿತು.
{{gap}}ಸ್ಥಳ: ಮಂಗಳೂರು ಪುರಭವನ. ಪ್ರಸಂಗ *ಶರಸೇತು ಭಂಗ', ದೇರಾಜೆಯವರ
ಅರ್ಜುನ, ಇನ್ನೊಬ್ಬ ಪ್ರಸಿದ್ಧ ಅರ್ಥಧಾರಿಯ ಹನೂಮಂತ. ಶಾಸ್ತ್ರಿಗಳ ವೃದ್ಧ.
ವಿಪ್ರ. ಹನೂಮಂತನ ಅರ್ಥ ಹೇಳಿದವರು ಅರ್ಜುನನೊಡನೆ. ಪಟ್ಟು ಬಿಡದೆ ತಮ್ಮ
ವಾದದ ಎಳೆಯನ್ನು ಹಿಡಿದು ಜಗ್ಗುಡಿದಾಗ ಬಹಳ ಹೊತ್ತು ಆಲಿಸಿದ ಶ್ರೋತೃಗಳ
ಸಹನೆಯೂ ತಪ್ಪವಲ್ಲಿಗೆ ಮುಟ್ಟಿ. ಆಗ (ವೃದ್ಧ ಬ್ರಾಹ್ಮಣ) ಮಧ್ಯ ಪ್ರವೇಶಿಸಿ,
ವಾದ ಹೇಗಿರಬೇಕೆಂಬುದಕ್ಕೆ ಶಾಸ್ತ್ರಿಗಳು ಕೊಟ್ಟ ಒಂದು ಉದಾಹರಣೆ: ವಾದ
ಎಂದರೆ ಅದು ದೀಪ ಬೆಳಗಿದಂತೆ ಇರಬೇಕು. ಎಣ್ಣೆ. ಮುಗಿದ ಮೇಲೂ ಉರಿಯುತ್ತಾ
ಇದ್ದರೆ ಬತ್ತಿ ಕರಟಿಹೋಗಿ ಕಮಟು ವಾಸನೆ 'ದಾತ್ರ ಬಂದೀತು. ಫಲಿತಾಂಶ.
ಹನೂಮಂತನ ಅರ್ಥಧಾರಿ ಚಿಕ್ಕ ಮಗುವಿನಂತೆ ತಪ್ಪೊಪ್ಪಿಕೊಂಡರು,
{{gap}}"ಭೀಷ್ಮ ಪರ್ವ'ದ ಒಂದು ಸನ್ನಿವೇಶ, ಶಾಸ್ತ್ರಿಗಳ ಕೃಷ್ಣ, ದೇರಾಜೆಯವರ.
ಭೀಷ್ಮ... “ನೂಸಲೊಡೆದು ರಕ್ತ ಸೂಸೆ,?? ಎಂಬಲ್ಲಿ- "ಭೀಷ್ಮನ ಬಾಣದಿಂದ
ಕೃಷ್ಣನ ಹಣೆಗೆ ಗಾಯವಾಗಿ ರಕ್ತ ಸುರಿಯುತ್ತಿದೆ. ಭೀಷ್ಮ: ಸ್ವಾಮೀ, ನೋವಾ
'ಯಿತೇ ? ಕೃಷ್ಣ (ಹುಸಿ ಮುನಿಸಿಸಿಂದ): ಬಾಣ ಹೊಡೆದು ಗಾಯವಾಗಿ ರಕ್ತ ಸುರಿ
ಯುತ್ತಾ ಇದೆ. ನೋವಾಯಿತೋ ಎಂದು ಕೇಳುತ್ತಿದ್ದಾನೆ. ಭೀಷ್ಮ
(ವಿಷಾದ ಸೂಚಿಸುವ ಧ್ವನಿಯಲ್ಲಿ): ದೇವರಿಗೇ ಹೊಡೆದು ನೋವುಂಟು ಮಾಡಿದೆ.
ಪಾಪಿ ನಾನು, ಕೃಷ್ಣ; ಆಚಾರ್ಯರೇ, ನೋವಾಯಿತು ಎಂದು ನಿಮಗೆ ಯಾರು.
ಹೇಳಿದರು? ಗಾಯ ಮೂತ್ರ ಆಯಿತು, (ಮೊಲೆಯುಣ್ಣುವ ಮಗು ತಾಯಿಯನ್ನು
ಓದೆಯುತ್ತದೆ, ಪರಚುತ್ತದೆ. ತಾಯಿಗೆ ಅದರಿಂದ ನೋವಾಗುವುದೇ? -- ಈ ಭಾವ.)
{{gap}}ಶಾಸ್ತ್ರಿಗಳು ಯಕ್ಷಗಾನ ರಂಗದ ಭೀಷ್ಮ? ಎಂದೇ. ಪ್ರತೀತಿ ಆಗಿದ್ದ ವರಂಃ
ಅನಂತಾಡಿ. ಎಂಬಲ್ಲಿ *ಭೀಷ್ಮಾರ್ಜುನ' ಪ್ರಸಂಗ," *ಧರಿಸಿದೆಯ ಮತ್ಸ್ಯಾದಿ ರೂಪ.
ಗಳ,.....'' ಎಂಬ ಷದ್ಯದ ಭಾಗ್ಯ ಭೀಷ್ಮ (ಶಾಸ್ತ್ರಿಗಳು). ನಿನ್ನ ಅವತಾರದ<noinclude></noinclude>
eikzxj1ndlww6d7kk8ows2fd5q2tf5y
ಪುಟ:ಯಕ್ಷಗಾನ ಮಕರಂದ.pdf/೨೪೪
104
100164
317831
316915
2026-05-07T07:00:36Z
Shreelatha.Halemane
7642
/* Proofread */
317831
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|218}}
ಉದ್ದೇಶವೇನೆಂದು ಕೃಷ್ಣನನ್ನು ಕೇಳಿದಾಗ ಭಕ್ಥರೋಧ್ಹಾರಕ್ಕಾಗಿ ಎಂದು ಕೃಷ್ಣನ
ಉತ್ತರ.ಆಗ ಹರಿಯಿತು ಶಾಸ್ತ್ರಿಗಳ ತರ್ಕಸರಣೀ'' ಭಕ್ತರ ಉದ್ಧಾರಕ್ಕಾಗಿ ಅವತಾರವೇ?
ಹಿಂದೆ ಮೊಸಳೆಯ ಬಾಯಿಯಲ್ಲಿ ಸಿಕ್ಕಿಬಿದ್ದ ಗಜೇಂದ್ರ ಆರ್ತನಾಗಿ ಮೊರೆಯಿಟ್ಟಾಗ ಗಜೇಂದ್ರ ಮೋಕ್ಷ) ಯಾವ ಅವತಾರವೂ ಆಗಲಿಲ್ಲ.ಸ್ವಯಂ
ಗರುಡವಾಹನನಾಗಿ ಭಕ್ತನನ್ನು ಉದ್ದರಿಸಿದ್ದಾನೆ.ನಮ್ಮ ಕಾಲದಲ್ಲೇ ಹಸ್ತಿನಾ.
ವತಿಯ ದ್ಯೂತಸಭೆಯಲ್ಲಿ ದ್ರೌಪದಿಯ ಮಾನಹರಣದ ಪ್ರಯತ್ನ ನಡೆದಾಗ
ನೀನೇ ಗತಿಯೆಂದು ಮೊರೆಯಿಟ್ಟ ಆಕೆಯ ಮಾನಸಂರಕ್ಷಣೆಗೆ ಯಾವ ಅವತಾರವೂ
ಆಗಲಿಲ್ಲ. . ನಿನ್ನೆ ಮಹಿಮೆ ಮಾತ್ರ ಸಾಕಾಯಿತು. ಹಾಗಾದರೆ ಭಕ್ತೋದ್ದಾರಕ್ಕೆ
ಅವತಾರವೇ ಅವಶ್ಯವಿಲ್ಲ ಎಂದಂತಾಯಿತು. ಮತ್ತೆ ಈ ಅವತಾರದ ಉದ್ದೇಶ
ವೇನು? ತಿಳಿದವರು. ಹೇಳಿದರು, ಧರ್ಮೋದ್ಧಾರ ಆಂತ. ಅದೇ ಸರಿಯೋ$
ಅಭ್ಲ ನೀನು ಹೇಳಿದಂತೆ ಭಕ್ತೋದ್ಭಾರಕ್ಳಾಗಿಯೇ ಎಂಬುದೇ ಸರಿಯೊ! ನಿಜ
ಹೇಳು... ಕೃಷ್ಣನ ಅರ್ಥ ಹೆೇಳಿದವರಿಗೆ 'ಪಾಪ, ಬೆವತುಹೋಯಿತು.
{{gap}}ಹಳ್ಳಿಯ ಮನೆಯೊಂದರಲ್ಲಿ ವಿಜೃಂಭಣೆಯ ತಾಳಮದ್ದಳೆ. ಶ್ರೋತೃಗಳಲ್ಲಿ
ಹಳಬರೇ ಹೆಚ್ಚು.ಭೀಷ್ಮಪರ್ವದಲ್ಲಿ ಭೀಷ್ಮನು ಕೃಷ್ಣನ ಹಣೆಗೇ ಗುರಿಯಿಟ್ಟು
ಗಾಯಗೊಳಿಸುವ ಸನ್ನಿವೇಶ, ಶಾಸ್ತ್ರಿಗಳು.ಹಳೆಯ ಅರ್ಥಧಾರಿಗಳ ಕ್ರ ಕ್ರಮದಲ್ಲಿ
“ಓಯ್, ಏನಾಶ್ವರ್ಯವಿದು? ಪರಶುರಾಮ ಗುರುಗಳಲ್ಲಿ ಇಷ್ಟು ಕಾಲ ಕಲಿತ
ವಿದ್ಯೆಯೆಲ್ಲ ನಿಷ್ಫಲವಾಯಿತೇ | ಅರ್ಜುನನು ಹೊಡೆದ ಬಾಣಗಳು ನೆರವಾಗಿ ನನ್ನ್ನ
ಎದೆಗೇ ಬೀಳುತ್ತಿವೆ. ಮಧ್ಯದಲ್ಲಿ ಅವುಗಳನ್ನು ನಾನು ತುಂಡರಿಸದೆ ಇದ್ದರೆ ನನ್ನ
ಎದೆಯನ್ನೇ ಭೇದಿಸುವುದು ಖಂಡಿತ... ಅರ್ಜುನನ, ಎದೆಗೇ. ಗುರಿಹಿಡಿದೆ ಎಷ್ಟು.
ಬಾಣ ಹೊಡೆದಿದ್ದೆದ್ದೇನೆ, . ಒಂದಾದರೂ ಅವನ ಕೂದಲಿಗಾದರೂ ತಾಗಿದೆಯೇ?
'ಬಾಣಗಳೆಲ್ಲ ಹೋಗಿ, ತಾಗಿದ್ದು ರಥದ ಕಂಬಗಳಿಗಲ್ಲವೆ? ಇದೆಲ್ಲ ಈ ಕರಿಯನ ತಂತ್ರ ]
ರಥವನ್ನು ಅತ್ತಿಂದಿತ್ತ, ಇತ್ತಿಂದತ್ತ ಹಾರಿಸಿ, ಕುಣಿಸಿ, ನನ್ನ ಬಾಣಗಳೆಲ್ಲ ಗುರಿ ತಪ್ಪುವಂತೆ ಮಾಡಿದ್ದಾನೆ. ಇವನಿಗೆ ಬುದ್ಧಿ ಕಲಿಸಿಯೇ ಬಿಡುತ್ತೇನೆ. ಇವನ. ಮೇಲೆಯೇ
ಬಾಣ ಹೊಡದು ಗಾಸಿಗೊಳಿಸಿದರೆ ಮತ್ತೆ ಏನು ಮಾಡುತ್ತಾನೋ ನೋಡುತ್ತೇನೆ
ಬತ್ತಳಿಕೆಯಿಂದತ್ ಒಂದು ಬಾಣ ತೆಗೆದಿದ್ದೇನೆ. ಇದನ್ನು ಹೂಡಿ ಈ ಕರಿಯನ ಹಣೆಗೆ
ಗುರಿಯುಟ್ಟು,ಝಮಾಯಿಸಿ ಬಿಡುತ್ತೇನೆ ಆಗದೆ??? ಎಂದು ಹೂಂಕರಿಸಿದರು,
ಅಲ್ಲಿದ್ದ. ಹಳಬರಿಗೆ ಖ್ಹುಷಿಯೋ ಖುಶಿ!
{{gap}}ಸೈಂಟ್ ಅಲೋಸಿಯಸ' ಕಾಲೇಜಿನಲ್ಲಿ ಮುದ್ದಣ ಜಯಂತಿಯಂದು *ಕುಮಾರ.
ವಿಜಯದ ಒಂದು ಭಾಗದ ತಾಳಮದ್ದಳೆ. ಶೂರಪದ್ಮಾಸುರನ ಮಗನಾದ ಹಿರಣ್ಯ<noinclude></noinclude>
nizj60f91ewjnhdiwah6it2f2m720mh
ಪುಟ:ಯಕ್ಷಗಾನ ಮಕರಂದ.pdf/೨೪೫
104
100165
317797
312219
2026-05-06T17:11:49Z
Pragathi. BH
7585
/* Validated */
317797
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|219}}
ಕನು ಶಿವನಲ್ಲಿ ವೈರ ಬೇಡವೆಂದು ತಂದೆಗೆ ಉಪದೇಶ ಮಾಡುತ್ತಾನೆ. ಶೂರಪದ್ಮನು
ಕೋಪದಿಂದ ಧಿಕ್ಕರಿಸುತ್ತಾನೆ. . ಶಾಸ್ತ್ರಿಗಳು ಅಂದು ಶೂರಪದ್ಮನ ಪಾತ್ರವಹಿಸಿ
ಹಿರಣ್ಯಕನಲ್ಲಿ ಅಬ್ಬರಿಸಿದ ಆಟೋಪದ ಅರ್ಥಗಾರಿಕೆಯನ್ನು ಕೇಳಿ, ಭಾಷೆ ತಿಳಿಯ
ಬಿದ್ದರೂ ಭಾವವನ್ನು ಚೆನ್ನಾಗಿ ಗ್ರಹಿಸಿಕೊಂಡ ಬ್ರದರ್ ಗೆರ್ಮೆಕ್ ಎಂಬ ಇಟಾಲಿ.
ಯನ್ ಧರ್ಮಗುರುಗಳು, ತಾಳಮದ್ದಳೆ ಮುಗಿದ ಕೂಡಲೇ ಶಾಸ್ತ್ರಿಗಳ ಬಳಿಗೆ
ಧಾವಿಸಿ ಇಂಗ್ಲಿಷಿನಲ್ಲಿ ಇಷ್ಟು ವಯಸ್ಸಾದರೂ ಇಪ್ಪತ್ತರ ಯುವಕನ ಹುಮ್ಮಸ್ಸನ್ನು
ಅಭಿಸಯಿಸಿದ್ದೀರಿ! ಅದ್ಭುತವಾಗಿತ್ತು! . ಸುಂದರವಾಗಿತ್ತು | ಅಭಿನಂದನೆಗಳು
ಹ್ಹೊ ಜ್ಹೊ.ಡ್ಜೂ'' ಎಂದು ಅವರನ್ನು ತಬ್ಬಿಕೊಂಡು ಸುತ್ತಲೂ ಕುಣಿದಾಡಿದರು.
ಆ ಮೇಲೆ, ಮೂರು ಲೋಕವನ್ನು ನಡುಗಿಸಿದೆ ಶೂರಪದ್ಮ, ''ಏನಯ್ಯಾ ಆ ಮಹಾ
ರಾಯ ಉತ್ಸಾಹದಲ್ಲಿ ನನ್ನೆ ಎಲುಬುಗಳನ್ನೇ ಪುಡಿಮಾಡಿಬಿಡುತ್ತಾರೋ ಎಂದು.
ಅಂಜಿಕೆಯಾಯಿತು. . ಸದ್ಯ ಸಾಬೀತಿನಿಂದ ಬಚಾವಾದೆ! ಎನ್ನಬೇಕೇ |
{{gap}}ಶಾಸ್ತ್ರಿಗಳು ವಿದ್ವಾನ್ ಪರೀಕ್ಷೆಗೆ ಕಟ್ಟಿದ್ದ ಸಂದರ್ಭ. ಪರೀಕ್ಷೆಯ ಮುನ್ನಾ
ದಿನ ತಾಳಮದ್ದಳೆ ಕೂಟಕ್ಕೆ. ಕರೆ ಬಂತು. ' ಪರೀಕ್ಷೆಯಾದರೂ ತಾಳಮದ್ದಳೆ
ಬಿಡುವುದುಂಟೇ “ಸುಧನ್ವ ಕಾಳಗದಲ್ಲಿ ಆ ದಿನ. ಅವರು. ಹಂಸಧ್ವಜನ ಆರ್ಥ
ಹೇಳುವುದೆಂದಾಯಿತು. ಸುಧನ್ವನನ್ನು. ತಪ್ತತೈಲ ಕಟಾಹಕ್ಕೆ ಹಾಕುವ ಸನ್ನಿವೇಶ.
ಅವಸರದಲ್ಲಿದ್ದ ಶಾಸ್ತ್ರಿಗಳು ಪುರೋಹಿತರಾದ ಶಂಖಲಿಖಿತರು ಕೂಡಲೇ ಬರಲಿ”.
ಎಂದರು. ಶಂಖಲಿಖಿತರು ಪೀಠಿಕೆ ಹೇಳದೆ ಬರುವವರೇ? ಹದಿನೈದು ಇಪ್ಪತ್ತು
ನಿಮಿಷ ಭರ್ಜರಿ ಪೀಠಿಕೆ ಬಿಗಿದು, ''ರಾಜಾ! ಭೋಜನಕ್ಕೆ ಹೊಳಗೆ ಮಾಡಿಸಿ
ದ್ದೇವೆ. ಈಗ ನಮ್ಮನ್ನು ಕರೆಯಿಸಿದ ಕಾರಣವೇನು?'' ಎಂದು ಶಾಸ್ತ್ರಿಗಳ ಮುಂದೆ.
ತಮ್ಮ ಅರ್ಥಗಾಂಭೀರ್ಯ ಪ್ರದರ್ಶಿಸಿದರು, ಶಾಸ್ತ್ರಿಗಳ ಮೂಗಿನ ತುದಿ ಕೆಂಪಾ
ಯಿತು.ಶಂಖಲಿತರೆ ಅಪ್ರಸ್ತುತ ಮಾತುಗಾರಿಕೆಯಿಂದ ಮೊದಲೇ ಬೇಸರಿಸಿದ್ದ
ಶಾಸ್ತ್ರಿಗಳಿಗೆ ಇನ್ನೊಂದು ಕಡೆಯಿಂದ ಮರುದಿನದ ಪರೀಕ್ಷೆಯ ಬಿಸಿಯೂ ಇತ್ತು.
ಅಪ್ರಾಸಂಗಿಕ ಮಾತುಗಳು ಬಂದರೆ ಅವರು ಯಾವಾಗಲೂ ಹಾಗೆಯೆ. ಸಿಟ್ಟು
ನೆತ್ತಿಗೇರಿತು,"ಹಂಸಧ್ವಜನ ಅಧಿಕಾರದಲ್ಲಿ ಪುರೋಹಿತರಿಗೆ ಅಡುಗೆ ಮಾಡಿಸುವ
ಕೆಲಸ ಕೊಟ್ಟವರಾರು? 'ನಿಮ್ಮನ್ನು ಕರೆಸಿದ್ದು ಒಂದು ಧರ್ಮಸೂಕ್ಷ್ಮದ ಇತ್ಯರ್ಥ
ಕ್ಕಾಗಿ ವಂದು ಶಾಸ್ತ್ರಿಗಳು ಗುಡುಗಿದಾಗ! ಶಂಖಲಿಖಿತರ ನಾಲಿಗೆ ಪಸೆ ಪೂರಾ
ಆರಿತು. .ಎರಡೆರಡೇ ಮಾತುಗಳಲ್ಲಿ ಮತ್ತೆ ಅವರ ಅರ್ಥ.
{{gap}}ಪುತ್ತೂರಿನಲ್ಲಿ ದಸರೆಯ ಕಾರ್ಯಕ್ರಮಗಳೆಂದರೆ ತಾಳಮದ್ದಳೆ ಇದ್ದೇ ತೀರ
ಬೇಕು. ಶಾಸ್ತ್ರಿ ಕಿಲ್ಲೆಯವರ ಕಾಲದಲ್ಲಂತೂ ಮೇಲೆಂದ ಮೇಲೆ ತಾಳಮದ್ದಳೆಗಳು<noinclude></noinclude>
k9qo0zqmqnl75oq8dj7g3q0lvni32dz
ಪುಟ:ಯಕ್ಷಗಾನ ಮಕರಂದ.pdf/೨೪೭
104
100167
317803
314382
2026-05-07T04:06:10Z
Shreelatha.Halemane
7642
/* Proofread */
317803
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|'''ಶಾಸ್ತ್ರಿಗಳ ಬರವಣಿಗೆ'''}}
{{gap}}ಶಾಸ್ತ್ರಿಗಳು ಬರವಣಿಗೆಯ ತಡೆಗೆ ವಿಶೇಷ ಗಮನ ಕೊಟ್ಟವರಲ್ಲಿ. ಅದರಲ್ಲೂ ಅವರ
ಗದ್ಯಲೇಖನ ತೀರ ವಿರಳ. ಆದರೆ ನಿರೂಪಣಾ ಸಾಮರ್ಥ್ಯ, ವಿಶ್ಲೇಷಣಾ ವಿಚಕ್ಜಣ
ತೆಗಳಿಂದ ಅವರಿಗೆ ಒಳ್ಳೆಯ ಬರಹಗಾರನಾಗುವ ಯೋಗ್ಯಶೆ ಇತ್ತೆಂಬುದು ನಿರ್ವಿವಾದ.
ಆ ದಿಸೆಯಲ್ಲಿ ವ್ಯವಸಾಯ ಮಾಡಿದ್ದರೆ ಅವರ ನಾಲಿಗೆಯಷ್ಟೇ ಲೇಖನಿಯೂ ಸತ್ವಶಾಲಿ
ಯೌಗುತ್ತಿದ್ದಿತೆಂಬುದಕ್ಕೆ ಕೆಳೆಗೆ ಉದ್ಧರಿಸಿದ ಅವರ ಚಿಕ್ಕದೊಂದು ಲೇಖನವೇ ಸತ್ವ.
ಸಂಪಾದಕ,
{{Left|ಯಕ್ಷಗಾನದಲ್ಲಿ ಶ್ರೀ ಕಿಲ್ಲೆಯವರು.}}
———————————————————————————————————
{{Right|ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು,}}
{{gap}}ಶ್ರೀ ದಿವಂಗತ ನಾರಾಯಂಣ ಕಿಲ್ಲೆಯವರಿಗೂ ನನಗೂ ಪ್ರಥಮ ಪರಿಚಯ.
ವಾದುದು ಯಕಕ್ಷ್ಣಗಾನ ರುಗದಲ್ಲಿ.. ನಮ್ಮೊಳಗೆ ಅಂದಂ ನಡೆದ ರೀತಿಯ ವಚನ
ಘರ್ಷಣೆಯು ಮತ್ತೆಂದೂ ನಡೆದಿಲ್ಲ... ಇದು ಸಾಧಾರಣ 1928ನೆಯ ಇಸವಿ
ಯಲ್ಲಿರಬಹುದೆಂದು ನನ್ನ ನೆನಪು, ಶ್ರೀ ಕಿಲ್ಲೆಯವರು ಯಕ್ನಗುನರಂಗಕ್ಕೆ ಪ್ರವೇಶಿಸಿ
ಐದಾರು ತಿಂಗಳಾಗುವ ಸಮಯವದು. ಆ ದಿನ "ಶ್ರೀ ಕೃಷ್ಣ ಸಂಧಾನ' ಪ್ರಸಂಗ,
{{gap}}ಶ್ರೀ ಕಿಲ್ಲೆಯವರಿಗೂ ನನಗೂ ಯಕ್ಷಗಾನದಲ್ಲಿ ಕೊನೆಯ ಕೂಟವೆಂದರೆ ಕಳೆದ.
ಅಕ್ಟೋಬರ್ ತಿಂಗಳಲ್ಲಿ ಕಟೀಲಿನ ಹಾಯರ್ ಎಲಿಮೆಂಟರಿ ಶಾಲೆಯಲ್ಲಿ, ಅಂದು.
ಕೂಡಾ ಕೃಷ್ಣ ಸಂಧಾನವೇ ಪ್ರಸಂಗ, ಅಂತು ನಮ್ಮಿಬ್ಬರ ಕೂಟವು ಕೃಷ್ಣ ಸಂಧಾನ.
ದಲ್ಲೇ ಪ್ರಾರಂಭವಾಗಿ ಅದರಲ್ಲೇ ಮುಕ್ತಾಯಂಗೊಂಡುದು ಏಚಿತ್ರ ಘಟನೆ.
{{gap}}ಆದರೆ ಆ ಎರಡು ಯಃಕ್ಚ್ರಗಾನ ಕೂಟಗಳ ಪಾಕವು ಮಾತ್ರ ನಮ್ಮ ವಯಸ್ಸಿಗೆ
ತಕ್ಕಂತೆ ತೀರ ಭಿನ್ನರುಚಿಯಾಗಿಯೇ ಇತ್ತು, ಮೊದಲನೆಯ ಕೂಟವು ಮಾವಿನ
ಕಾಯಿಯ ರಸವನ್ನು ಹೊರಡಿಸಿದ್ದರೆ, ಕೊನೆಯ ಕೂಟವು ಒಳ್ಳೆ ಮಾವಿನ ಹಣ್ಣಿನ
ಸವಿಯನ್ನು ಬೀರುತ್ತಿತ್ತು. . ""ಫಲವು ಕಾಲುನುಗಂಣವಾರಿ, ಪಾಕವಶಾತ್--ರೂಪ<noinclude></noinclude>
4ezqzw5iwx0w0uwz4lz7nou8jwy1aex
ಪುಟ:ಯಕ್ಷಗಾನ ಮಕರಂದ.pdf/೨೪೮
104
100168
317804
281787
2026-05-07T04:12:27Z
Shreelatha.Halemane
7642
/* Proofread */
317804
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|222}}
_ರಸ.-ಗಂಧ- .ಸ್ಪರ್ಶಗಳಲ್ಲಿ ಬದಲಾವಣೆ ಹೊಂದಂವಂತೆ, ಪುರುಷನ ಹೃದಯ.
ದಲ್ಲಿಯೂ ವ್ಯತ್ಯಾಸವುಂಟಾಗುವುದು'' ಎಂಬುದಕ್ಕೆ ಇದೊಂದು ನಿರರ್ಶನವಾಗ,
ಬಹುದು, ಅಂತೂ ಸುಮಾರು 25 ವರ್ಷಗಳ ಮಧ್ಯ ಕಾಲದಲ್ಲಿ ಕಿಲ್ಲೆಯವರಿಗೂ
ನನಗೂ ಸ್ನೇಹವು ಕ್ರೆಮೇಣ ಬೆಳೆದು ಬಂದುದಕ್ಕೆ ಮುಖ್ಯ ಕಾರಣವು ಯಕ್ಷ್ನಗಾನವೇ.
{{gap}}ಶ್ರೀ ಕಿಲ್ಲೆಯವರಿಗೆ ಯಕ್ಷಗಾನವೆಂದರೆ ಬಹು ಪ್ರೀತಿ, ಬಹು ಉತ್ಸಾಹ.
ಅವರು ವಹಿಸುವ ಪಾತ್ರಕ್ಕೆ, ಸಭೆಯಲ್ಲಿ ವ್ಯವಹರಿಸಲಿಕ್ಕೆ ಬೇಕಾದಷ್ಟು ಅನುಭವ
ವನ್ನು ಭಾರತ, ರಾಮಾಯಣಾದಿ ಕನ್ನಡ ಗ್ರಂಥಗಳಿಂದ ಒದಗಿಸಿಕೊಳ್ಳದಿರುತ್ತಿದ್ದಿಲ್ಲ.
ಅವರಿಗೆ ಜ್ಞ್ಯಾಪಕ ಶಕ್ತಿ ಚನ್ನಾಗಿತ್ತು. ಅವರ ಮಾತಿನ ಪ್ರವಾಹವು ವಿಲಕ್ಷ್ಮಣ
ವಾಗಿತ್ತು. ವೀರರಸವು ಆವರಿಗೆ ಸ್ವಾಭಾವಿಕವಾಗಿತ್ತು. ಆದಂದರಿಂದ ಕರ್ಣಾರ್ಜುನ
ಮಾತುಗಳು ಅವರಿಗೆ ಒಪ್ಪು ತ್ತಿತ್ತು ಅರ್ಥಗಾರಿಕೆಯಲ್ಲೂ ವಾದಸರಣಿಯಲ್ಲಿ ಅವರಿಗೆ
ಆಸಕ್ತಿ ಹೆಚ್ಚು. ತನ್ನ ಮಾತಿನ ಜಾಣ್ಮೆಯಿಂದ ಸಭಿಕರನ್ನು ತನ್ನ ಕಡೆಗೆ ಸೆಳೆದು.
ಕೊಳ್ಳುತ್ತಿದ್ದರು... ನ್ಯಾಯವಾದ ಮೂಲಗ್ರಂಥಗಳ ಸರಿಯಾದ ಅನುಭವದ
ಕಲ್ಲೆದೆಯವರನ್ನು ಹೊರತು, ಬೇರೆ ಸಾಮಾನ್ಯರಾರನ್ನಾದರೂ ಇವರ ವಾಗ್ಧರಿಯು.
ತೇಲಿಸದೆ ಬಿಡುತ್ತಿರಲಿಲ್ಲ.
{{gap}}ಶ್ರೀ ಕೃಷ್ಣನ ಅರ್ಥವೆಂದರೆ ಶ್ರೀ ಕೆಲ್ಲೆಯವರಿಗೆ ಬಹಳೆ ಪ್ರೀತಿ, ಕ್ರಾಂತಿಕಾರ.
ನಾದ ಮಾಗಧನ ಮುಂದೆ ಶಾಂತಿಯನ್ನು ಹೂಡುವ ಕೃಷ್ಣ, ಪಾರ್ಥನಿಗೆ ಗೀತೆಯನ್ನು.
ಹೇಳುವ ಕೃಷ್ಣ, ಶರಸೇತು ಬಂಧನದಲ್ಲಿ ಹನುಮಾರ್ಜುನರೂಳಗೆ ಸ್ನೇಹ ಮಾಡಿಸುವ
ಕೃಷ್ಣ, ಎಂದರೆ ಆಯಿತು, ಅವರಿಗೆ ಬಹಳ ಉತ್ಸಾಹ, ಅಂತು ಯಕ್ಷ್ನಗಾನದಲ್ಲಿ.
ಹಲವರು ಬೇರೆ ಬೇರೆ ರೀತಿಯಿಂದ ಅರ್ಥಗಾರಿಕೆಯಲ್ಲಿ ಪ್ರಸಿದ್ಧಿಗೆ ಬಂದಂತೆ ಶ್ರೀ
ಕಿಲ್ಲೆಯವರು ವಾಕ್ಟಾಟವದಿಂದ ಪ್ರಸಿದ್ಧಿಗೆ ಬಂದವರೆಂಬುದರಲ್ಲಿ ಸಂದೇಹವಿಲ್ಲ.
{{gap}}ನನ್ನ ಅನುಭವದ ಪ್ರಕಾರ ಶ್ರೀ ಕಿಲ್ಲೆಯವರ ಅರ್ಥಗಾರಿಕೆಯನ್ನು ಮೂರು.
ರೀತಿಯಿಂದ ವಿಭಾಗಿಸಬಹುದು, ಸುಮಾರು 128ನೆಯ ಇಸವಿಯಿಂದ 138ರ ವರೆಗೆ:
ಅವರ ಅರ್ಥವೆಂದರೆ ಅದೊಂದು ಮಳೆಗಾಲದ ಗರಿನದಿಯ ಪ್ರವಾಹವೇ ಆಗಿತ್ತು,
ಆ ಪ್ರವಾಹದಲ್ಲಿ ಯಕ್ಷಗಾನ ವಸ್ತುವೇ ತೇಲಿಹೋಗಂವಂತಿತ್ತಾ, . ಒಂದು ಪದ್ಯ
ವಾದ ಕೂಡಲೇ ಅರ್ಧ ಗಂಟೆಯವರೆಗೂ ತನ್ನ ಅನುಭವವನ್ನು ಮಾತಾಡು.
ತ್ತಿದ್ದರು. . ಸಹಜ ಮಾಕ್ಫಟುವಾಗಿರುವ ಇವರಿಗೆ ಅದೊಂದು ಪ್ರಯಾಸದ ಕೆಲಸವೇ
ಆಗಿರಲಿಲ್ಲ. ಅಂದಿನ ಸ್ಥಿತಿಯಲ್ಲಿ ಅವರೊಬ್ಬ ಯಕ್ಷಗಾನದ "ಅತಿವಕ್ತೃ'ವಾಗಿದ್ದರು,
{{gap}}ಬಳಿಕ ಅವರ ಅರ್ಥಗಾರಿಕೆಯಲ್ಲಿ ಫಕ್ಕನೆ ಒಂದು ಬದಲಾವಣೆಯಾಯಿತು.
ಅಕಸ್ಮಾತ್ತಾದ ಈ ಬದಲುವಣೆಯು ನನಗೂ ಅಶ್ವರ್ಕವನ್ನುಂಯು ಮಾಡಿತು. ಈ
ಹಂತದಲ್ಲಿ ಅವರು ತನ್ನ ಮೊದಲಿನ ಆ ಇಚ್ಛಾನುಸಾರವಾಡ ಶೈಲಿಯನ್ನು ಬಿಗಿ.<noinclude></noinclude>
d59xv77jpw5h6vwzyp31vrnv49x43ei
ಪುಟ:ಯಕ್ಷಗಾನ ಮಕರಂದ.pdf/೨೪೯
104
100169
317805
281788
2026-05-07T04:22:53Z
Shreelatha.Halemane
7642
/* Proofread */
317805
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Right|223}}
ಹಿಡಿದು, ಯಕ್ಷ್ನಗಾನದ ಹಳೆಯ ಸಂಪ್ರದಾಯವನ್ನು ಬೆರಸಿ ಮಾತನಾಡತೊಡಗಿದರು,
ಪ್ರಸಂಗದ ಕಥಾಭಾಗ, ಪದ್ಯ, ಶಬ್ದ ಇವುಗಳೆ ಮೇಲೆ ಜಾಗರೂಕತೆಯಿಂದ ಲಕ್ಶ್ಯ
ವಿಟ್ಟು ಮಾತಾಡತೊಡಗಿದರು.. ಯಕ್ಷಗಾನದ ಒಂದು ವರಿಷ್ಟ ಗುಣವಾದ
ಪೂರ್ವಾಪರ ಪದ್ಯಗಳಿಗೆ ಪರಸ್ಪರ ಸಂಬಂಧವನ್ನು ತಂದೊಡ್ಡಿ. 'ಮಾತಾಡುವ ಆ
ಸಂಪ್ರದಾಯಕ್ಕೆ ಹೆಚ್ಚು ಗಮನ ಕೊಡುತ್ತಾ ಬಂದರು. ಅರ್ಥಧಾರಿಯಲ್ಲಿರ
ಬೇಕಾದ ಈ ವೃಶಿಷ್ಟ್ಯವನ್ನು ಅತಿಕ್ರಮಿಸಿದ ಸಂದರ್ಭದಲ್ಲಿ ಪ್ರತಿವಕ್ಷೃವನ್ನು
ಸಂಪೂರ್ಣ ವಿರೋಧಿಸುತ್ತಿದ್ದರು. ಈಗ ಯಕ್ಷಗಾನದ ಸಂಪ್ರದಾಯಕ್ಕೆ ಬದ್ದರಾಗಿ
ತನ್ನ ವಾಕ್ಪಟುತ್ವವನ್ನೂ ಕನ್ನಡ ಮೂಲಗ್ರಂಥಗಳ ಅನುಭವವನ್ನೂ ಬೆರಸಿ ಮಾತ
ನಾಡುವಾಗ *ಅತಿವೃಕ್ತ" . ಕಿಲ್ಲೆಯವರು ಜೋಗಿ "ಅರ್ಥಧಾರಿ" ಕಿಲ್ಲೆಯವರಾದರು,
ಈಗ ಇವರ ವಾಕ್ಪ್ರಹಾಹವು ಶರತ್ಕಾಲದ ನದೀ ಪ್ರವಾಹವನ್ನು ಹೋಲತೊಡಗಿತು.
ಇವರ ಅರ್ಥವು ಸರ್ವಾದರಣೀಯವಾಯಿತು... ಎರಡನೆಯ ಹಂತದ ಈ ಬದಲಾವಣೆ.
'ದಿವಂಗತರಿಗೆ ಪ್ರಾಯಶಃ ಅವರ ಕೆಲವು ಮಂದಿ ಯಕ್ಷಗಾನ ಮಿತ್ರರ ಹಾಗೂ ಕಾಲದ
ಸಂಪರ್ಕದಿಂದಲೇ ನೇರ್ಪಟ್ಟುದಾಗಿರಬಹುದು.
{{gap}}ಸಾಧಾರಣ 145ನೆಯ ಇಸವಿಯಿಂದೀಚೆಗೆ ದಿವಂಗತ ಕಿಲ್ಲೆಯವರ ಅರ್ಥದಲ್ಲಿ
ಹೊಸ ಸಂಸ್ಕಾರವೊಂದು ತೋರಿ ಬಂತು. ಸಂಸ್ಕೃತ ರಾಮಾಯಣ ಭಾರತಾದಿ ಮೂಲ.
ಗ್ರಂಥಗಳ ಭಾಷುಂತರಗಳಲ್ಲಿ ಹೆಚ್ಚಿನ. ಶ್ರಮದ ಉದ್ದಿಷ್ಟ ಪಾತ್ರಕ್ಕೆ ಉಪ
ಯುಕ್ತವಾಗುವ ಯಾವದನುಭವನ್ನು ಪಡೆದು, ಅದನ್ನು. ತನ್ನೆ ಮತ್ರ 'ನರ್ವಾಹದಲ್ಲಿ
ಪ್ರತಿಪಾದಿಸತೊಡಗಿದರು. ಇದರಿಂದ ಅವರ ಅರ್ಥಕ್ಕೊಂದು ಸೌಂದರ್ಯವೊದ
ತು, . ಮುಗ್ದ ರಿಯು ಸವಿಯಾಗತೊಡಗಿತು. ಇದುವೆ ಆ ಹೊಸ. ಸಂಸ್ಕಾರ.
ಆದರೂ ದಿವಂಗತರ ಅರ್ಥಗಾರಿಕೆಯ ಅವಸ್ವಾ ತತ್ರೆಯದಲ್ಲೂ ಎಲ್ಲದಕ್ಕಿಂತ 'ಮೇಲುಗಿ
ಅವರ ವಾಕ್ಟವಾಹವೇ ಎದ್ದು ಕಾಣುತ್ತಿತ್ತು.
{{gap}}ದಿವಂಗತರು ಕಠಿಣವಾದ ರುಜೆಗೆ ತುತ್ತಾಗಿ ಹಾಸುಹಿಡಿದಿದ್ದಾಗಲೂ, ಯಕ್ಷ
ಗಾನದಲ್ಲಿ ತನಗಿರುವ ಪ್ರೇಮ, ಆಸಕ್ತಿ, ಉತ್ಸಾಹ, ಪಾತ್ರನಿರ್ವಾಹದ ಹಂಬಲ,
ತಾನು ಆರೋಗ್ಯ ಹೊಂದಿದ ಮೇಲೆ ಯಕ್ಷಗಾನದಲ್ಲಿ ಮಾಡಲಿರುವ ಕೆಲವು ಕಾರ್ಯ
ಕ್ರಮ ಮುಂತಾದ ವಿಷಯಗಳ ಕುರಿತಾಗಿ ನನ್ನೊಡನೆ ಪದೇ ಪದೇ ತುಂಬ ಮಾತಾ
ಡಿದ್ದರು, ಇದರಿಂದ ಯಕ್ಷಗಾನದಲ್ಲಿ ಅವರ ಪ್ರೀತಿಉತ್ಸಾಹಗಳು. ಎಷ್ಟೆಂದು ಊಹಿಸಿ.
ಕೊಳ್ಳಬಹುದು. ಆದರೆ ಮಾಡುವುದೇನು? “ದೈವಂ ಹಿ ದುರತಿ ಕ್ರಮ, ಅವರ
ಸಂಕಲ್ಪಗಳು ಕೊನೆಗೊಳ್ಳದಾದುವು. ಜನ್ಮಾಂತರದಲ್ಲದರೂ ಅವು ಪೂರ್ತಿಗೊಳ್ಳ
'ಲೆಂದು' ಪರಮಾತ್ಮನಲ್ಲಿ ಪ್ರಾರ್ಥಿಸುವೆನು.
{{center|'ಶಾಂತಿರಸ್ತು '?}}
{{center|(1353ರಲ್ಲಿ ಪ್ರಕಟವಾದ ಇಲ್ಲಿ ಸ್ಮಾರಕ ಗ್ರಂಥ ದಂದು)}}<noinclude></noinclude>
petmmhjuvzxftmcriiy1sstvkit10fq
ಪುಟ:ಯಕ್ಷಗಾನ ಮಕರಂದ.pdf/೨೫೧
104
100171
317832
281790
2026-05-07T07:03:13Z
Shreelatha.Halemane
7642
/* Proofread */
317832
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|'''ಕನ್ನಡನಾಡಿನ ಜಾನಪದ ರಂಗಭೂಮಿ'''}}
{{Right|ಶಿವರಾಮ ಕಾರಂತ,}}
{{gap}}ದಕ್ಷಿಣ ಕನ್ನಡದ ನಮಗೆ ರೂಢಿಯಾದದ್ದು ಒಂದ ತೆರನ ದಶಾವತಾರ ಬಯ
ಲಾಟ. ಅದನ್ನು ಈ ಜಿಲ್ಲೇ ಯವರು. ತೆಂಕುತಿದ್ದು, ಬಡಗುತಿ! ತ್ಬಿಗಳೆಂಬ ಸಂಪು
ಮ ವರ್ಗೀಕರಣ. ಮಾಡಿದ್ದಾ ರೆ. ಬಲು ಹಿಂದನ ಹಳೆಯ. ಭಾಗವತರಿಂದಲೂ,
ಬ್ಬರು ವ್ರುದ್ದರಿಂದಲೂ ವಿಚಾರಿಸಿ ತಿಳಿದ ನನಗೆ ಆರಂಭದ ದೆಸೆಯಲ್ಲಿ ಇಂಥ
ಒಂದು ಭೇದ ಇತ್ತೆಂದು ಅನಿಸುವುದಿಲ್ಲ. ಅ ಹಳಬರ. ಅಭಿಪ್ರಾಯದುತಿ ನಮ್ಮ,
ಜಿಲ್ಲೇ ಯ ತೆಂಕಣ ಭಾಗಗಳಿಗೆ ಬಯಲಾಟದ. ರಂಗಸ್ಥ್ಯ« ೪ ಪ್ರವೇಶಿಸಿದ್ದು ಮತ್ತು. ಬಕ
ದದ್ದೆ ಇಕ್ಕೇರಿ ಅರಸರ ದಂಡಿನಲ್ಲಿ ಕೆಲಸ ಮಾಡೆತ್ತಿದ್ದ ಕೊ! ಇೀಚಿದೊವರೆಂಬ ಜನ.
ಗ೦ಡ... ಆ ಜನರು ಕನ್ನಡ ಮಾತಾಡುವ ಬಳಗದೆರರು. ಹೈದರಾಲಿಯಿಂದ.
ಬಿದನೂರು ಪತನವಾದ ಮೇಲೆ ಅವರ ಸೇನಾವೃತ್ತಿ ಕೊನೆಗೋಡಿತು. ಅವರಲ್ಲಿ
ಹೆಚ್ಚಿನ ಜನರು ಬೇಕಲ, ಕಾಸರಗೋಡುಗಳಲ್ಲಿ ನೆಲೆಸತೊಡಗಿದರು. ಅವರಿಗೆ ಬಯ
ಲಾಟ ತುಂಬ ಪ್ರಿಯವಾಗಿತ್ತು. ಇಲ್ಲಿಗೆ ಬಂದ ಮೇಲೆಯೂ ಅವರು ಮೇಳ ಕಟ್ಟಿ.
ಕೊಂಡು ಪುತ್ತೂರು, ಕಾಸರಗೋಡು ತಾಲೂಕುಗಳಲ್ಲಿ ಆಡುತ್ತಿದ್ದ ರೆಂದು, ಅವರು
ಆಡುತ್ತಿದ್ದ ಆಟಿಗಳಿಗೂ, ವೇಷಭೂಷಣಗಳಿಗೂ, ಸಂಪ್ರದಾಯಗಿಗೂ, ಬಡಗಣ
ದವರು ಆಡುತ್ತಿದ್ದ ಸಂಪ್ರದಾಯಗಳಿಗೂ ವ್ಯತ್ಯಾಸವಿರಲಿಲ್ಲವಂದು ಅಲ್ಲಿನ ಕೆಲವು
ಆ ಹೇಳಿದ್ದನ್ನು ಕೇಳಿದ್ದೇನೆ. ಮುಂದೈ ಕಳೆದ ಶತಮಾನದ ವಲ್ಲಿ
ಾಸರಗೋಡು ತಾಲೂಕಿಗೆ ಸೇರಿದ ಕೂಡಲು ಎಂಬಲ್ಲಿ ಬಯಲಾಟದ ಒಂದು.
ಡ್ ಕಟ್ಟಿ: ದರು. ಅಲ್ಲಿಂದ ಮುಂದೆ ಅಂಥ ಮೇಳಗಳಿಗೆ. ಕನ್ನ! ಡ್ಕ ತುಳು, ಮಲ.
ಯಾಳಿ 'ಮನಮಾತಿನವರು ಸೇರಿಕೊಂಡರು. ಮಲಯಾಳಿ ಪಾತ್ರಧಾರಿಗಳ ಜಿಸೆ.
ಯಿಂದಾಗಿಯೋ ಏನೋ, ವೇಷದ ಅನೇಕ ಉಪಕರಣಗಳು, ಆಭರಣಗಳು ಕೇರಳದ.
ಓಟ್ಟಂತುಳ್ಳಲ್, ಕಥಕ್ಕಳಿ ಆಟಗಳ ವೇಷಗಳ ಅನುಕರಣೆಯ ದಾರಿ ಹಿಡಿದವು. ತೀರ
ಆರಂಭದಲ್ಲಿ ಆಲ್ಲಿನ. ಯೆ! ಗಾನ ಹಾಡುಗಾರಿಕೆಯ ರೀತಿ ಉತ್ತರದಲ್ಲಿರುವಂಥದೇ
ಇದ್ದಿ ತ್ತಾದರೂ ಅಲ್ಲಿ ಚಂಡ ಜಾಗಟೆಗಳಂತಹ ವಾದ್ಯಗಳು ಬಳಕೆಗೊಳ್ಳುತ್ತಿದ್ದು ವ-
{{gap}}ಕ್ರಮೇಣ ಹಲವು ಯಕ್ಷಗಾನ ಪಾತ್ರಗಳ ಮತ ಮತ್ತು ವೇಷಗಳಲ್ಲಿ.
ಭದಲಾವಣೆ ಬರತೊಡಗಿತು. "' ಈ ಉಡುಗೆತೊಡುಗೆಗಳು ಸ್ವಲ್ಪ ಮಟ್ಟಿಗೆ ಕೇರಳದ<noinclude></noinclude>
e5bcm17ksl6czgudcybl7s3a5s8swsk
ಪುಟ:ಯಕ್ಷಗಾನ ಮಕರಂದ.pdf/೨೮೫
104
100207
317806
314766
2026-05-07T04:24:33Z
Shreelatha.Halemane
7642
/* Validated */
317806
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಯಕ್ಷಗಾನ ಬಯಲಾಟದ ಮೂಲ ಗೊಂಬೆಯಾಟ ?}}
--------------------------------------------
{{Right|-ಗೌರೀಶ ಕಾಯ್ಕಿಣಿ.}}
{{gap}}ಈ ವಿಷಯವನ್ನು ಕುರಿತು ನಾನು ಅರವತ್ತರ ದಶಕದಲ್ಲಿ ಹೊನ್ನಾವರದ
“ಶೃಂಗಾರ” ಮಾಸಿಕದ ಒಂದು ಸಂಚಿಕೆಯಲ್ಲಿ ಒಮ್ಮೆ ಬರೆದಿದ್ದೆ. ಆಗಲೂ ನನ್ನ ಈ
ಪ್ರಮೇಯವನ್ನು ಈ ಕಲಾಕ್ಷೇತ್ರದ ತಜ್ಞರು ಯಾರೂ ಹೆಚ್ಚಾಗಿ ಗಮನಿಸಿದಂತೆ,
ಅನಿಸಿದ್ದಿಲ್ಲ. ಈಗಲೂ ಅದೇ ಬಗೆಯ ಸ್ವಾಗತ' ಈ ಪ್ರಬಂಧಕ್ಕೂ ಸಿಗುವ
ಸಾಧ್ಯತೆ ಇದೆ. ಆದಾಗ್ಯೂ ಈ ಒಂದು ಸಂದರ್ಭವನ್ನು ಸಾಧಿಸಿ ಈ ಪ್ರಮೇಯ
ವನ್ನು, ಅಂದಿನಿಂದ ಹೆಚ್ಚು ವಿಶಾಲವಾದ ವಾಚಕವಲಯದ ಕಣ್ಣಿಗೆ ಬೀಳಬಹು
ದೆಂಬ ಹಾರೈಕೆಯಿಂದ ಇಲ್ಲಿ ಇನ್ನೊಮ್ಮೆ ಪ್ರಸ್ತಾಪಿಸುತ್ತಿದ್ದೇನೆ.
{{gap}}ಯಕ್ಷಗಾನ ಬಯಲಾಟ ಒಂದನ್ನು ಒಂದೊಂದು ಸಲ ಹೊರಗಿನಿಂದ ಹೊಸ
ತಾಗಿ, ಹೆರವನಾಗಿ ನೋಡಿದಾಗ ನನಗೆ ತಟಕ್ಕನೆ ಹೊಳೆದ ಪ್ರಶ್ನೆಯಿದು : ಯಕ್ಷಗಾನ
ವೇಷ, ಭಾಷೆ, ಹಾವ-ಭಾವ, ಆರಂಭದಲ್ಲಿ ಆಡುವ ಈ ಆಖ್ಯಾನಗಳ ಒಟ್ಟಂದದ
ಸ್ವರೂಪ, ಆ ಪಾತ್ರಗಳ, ಅಲ್ಲ ವೇಷಧಾರಿಗಳ ರಂಗಪ್ರವೇಶ, ನಿಷ್ಕಮಣ, ಕಾಳಗ,
ಕುಣಿದಾಟ, 'ಪೀಠಿಕಾಸಂಧಿ'ಗಳು, ನೇಪಥ್ಯ ವಿಧಾನದ ಕೆಲವೊಂದು ಕೊರತೆಗಳು,
ಅಲಂಕಾರಗಳ ಕೆಲವೊಂದು ವೈಶಿಷ್ಟ್ಯಗಳು-ಇವೇ ಮುಂತಾದ ಅಂಶಗಳನ್ನು ಮತ್ತೆ
ಮತ್ತೆ ಮಾರ್ಮಿಕವಾಗಿ ನೋಡಿ ಮನಗಂಡಾಗ ನನ್ನ ಮಟ್ಟಿಗೆ ಈ ಪ್ರಮೇಯದ
ಇತ್ಯರ್ಥ ಇನ್ನಿಷ್ಟು ಮನದಟ್ಟಾಗುತ್ತಲೇ ಹೋಯಿತು. ಈ ಪ್ರಮೇಯಂ
(Hypothesis) ಅಂದರೆ, ಯಕ್ಷಗಾನ ಬಯಲಾಟವು ಮೂಲತಃ ಗೊಂಬೆಯಾಟ
ದಿಂದ ಎತ್ತಿಕೊಂಡ ಒಂದು ನೃತ್ಯನಾಟ್ಯ ರೂಪಕ ವಿಧಾನ. ಅಲ್ಲಿ ತೆರೆಯ ಮರೆ
ಯಿಂದ 'ಸೂತ್ರಧಾರನು ಕುಣಿದಾಡಿಸುವ ನಿರ್ಜೀವ ಗೊಂಬೆಗಳೇ ಇಲ್ಲಿ ಭಾಗವತನ
ಸಂಚಾಲನೆಯಲ್ಲಿ ಸಜೀವವಾಗಿ ಕುಣಿದಾಡುತ್ತವೆ. (ನಮ್ಮ ಸಂಸ್ಕೃತ ನಾಟಕಗಳಲ್ಲಿ
ಯಂತೂ ತೆರೆಯ ಮರೆಯ 'ಸೂತ್ರಧಾರ' 'ನಾಂದ್ಯಂತ'ದಲ್ಲಿ ರಂಗದಲ್ಲಿಯೇ ಬಂದು
ನಾಟಕದ ಪ್ರಸ್ತಾವನೆಯನ್ನು ಆಡುತ್ತಾನೆ.) ಯಕ್ಷಗಾನ ಬಯಲಾಟದಲ್ಲಿ ತೆರೆಯ
ಮರೆಯ ವೇಷಗಳೇ ಒಂದೊಂದಾಗಿ ತೆರೆಯ ಮುಂದೆ ಬಂದು ಕುಣಿಯುತ್ತವೆ. ಈ
ರಂಗಪ್ರವೇಶವೂ ಈ ಜೀವಂತ ಗೊಂಬೆಗಳ ಮಟ್ಟಿಗೆ 'ತೆರೆಮರೆಯ ಕುಣಿತ'ವೆಂಬ
ವಿಶಿಷ್ಟ ನೃತ್ಯಪ್ರಕಾರವೇ ಆಗಿ ರೂಢಿಗೊಂಡಿದೆ.<noinclude></noinclude>
6wsi98uyiy0p7kot1hxh2cdce7hddus
ಪುಟ:ಯಕ್ಷಗಾನ ಮಕರಂದ.pdf/೨೮೬
104
100208
317807
314769
2026-05-07T04:25:28Z
Shreelatha.Halemane
7642
/* Validated */
317807
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|34}}
{{gap}}ಡಾ| ಶಿವರಾಮ ಕಾರಂತರು ಯಕ್ಷಗಾನ ಬಯಲಾಟಕ್ಕೆ ದೇಶ-ವಿದೇಶಗಳ
ರಂಗಪ್ರದರ್ಶನದ ಕಲಾಪ್ರಪಂಚದ ನಕಾಶೆಯಲ್ಲಿ ಒಂದು ಶಾಶ್ವತ ಸ್ಥಾನವನ್ನು ಕಲ್ಪಿಸಿ
ಕೊಟ್ಟ ಆಚಾರ್ಯ ಪುರುಷರು. ಕಥಕ್ಕಲಿಗೆ ವಲ್ಗೊಥೆಲ್ ಇದ್ದಂತೆ ಯಕ್ಷಗಾನ
ಬಯಲಾಟಕ್ಕೆ ನಮ್ಮ ಡಾ| ಕಾರಂತರು. ಅವರು ಈ ಕಲೆಯ ಕುರಿತು ಪ್ರಕಟಿಸಿದ
ಉದ್ಧಂಥದಲ್ಲಿ ಗೊಂಬೆಯಾಟ ಬಯಲಾಟದ ಅನುಕರಣವೆಂದೇ ಹೇಳಿದ್ದಾರೆ.
ಆದರೆ ನನ್ನ ಅಲ್ಪ ಅನಭಿಜ್ಞಮತಿಗೆ ಇದು ಏಕೋ ಹಿಡಿಸದು. ಈ ನಾಟ್ಯರೂಪದ
ವಿಕಾಸಕ್ರಮದಲ್ಲಿ ವಸ್ತುಸ್ಥಿತಿಯು ತದ್ವಿರುದ್ಧವೇ ಇದ್ದಿರಬೇಕೆಂದು ನನ್ನ ಗ್ರಹಿಕೆ.]
{{gap}}ಈ ಬಯಲಾಟಗಳು ಹಿಂದೊಮ್ಮೆ 'ದಶಾವತಾರ'ದ ಆಟಗಳೆಂದು ಪ್ರಸಿದ್ದ
ವಿದ್ದವು. ನಮ್ಮ ಬಾಲ್ಯದಲ್ಲಿ ನಮ್ಮ ಊರಿನಲ್ಲಿ ಶಿವರಾತ್ರಿಯ ಜಾತ್ರೆಗೆ 'ತೆಂಕಲಾಗಿನ
ದಶಾವತಾರ ಮೇಳಗಳು ಆಟ ಆಡಲು ಬರುತ್ತಿದ್ದವು. ಗೊಂಬೆಯಾಟಗಳಿಗೂ
ಇದೇ ''ದಶಾವತಾರ'ಗಳ ಕಥೆಗಳೇ ನಾಟ್ಯವಸ್ತು. ನಮ್ಮಲ್ಲಿ ಹಿಂದಿನಿಂದಲೂ
ಇಂದು 'ತಾಳಮದ್ದಳೆ' ಎಂಬ ವಾಚಿಕ ಪ್ರಯೋಗಕ್ಕೆ 'ಯಕ್ಷಗಾನ ಪ್ರಸಂಗ'ವೆಂದೂ
ಬಯಲಾಟಗಳಿಗೆ ದಶಾವತಾರದಾಟ'ವೆಂದೂ ಕರೆಯುವ ವಾಡಿಕೆ ಇತ್ತು. (ದಕ್ಷಿಣ
ಕನ್ನಡದಲ್ಲಿ ಈ ದಶಾವತಾರದ ಆಟಕ್ಕೇ 'ಯಕ್ಷಗಾನ ಬಯಲಾಟ'ವೆಂದು ಕರೆಯುವ
ಸಂಪ್ರದಾಯ ಎಂದಿನಿಂದ ಇತ್ತೋ ಗೊತ್ತಿಲ್ಲ. ನಮ್ಮಂಥ ಪರಿಷ್ಕೃತ ನಾಟ್ಯರಸಿಕರ
ಚಿತ್ರವನ್ನು ಈ ದಶಾವತಾರ ಮೇಳಗಳ ರಂಗಪ್ರದರ್ಶನಗಳು ಸೆಳೆದದ್ದು ಡಾ|
ಕಾರಂತರ ಸುಪ್ರಸಿದ್ದ ಗ್ರಂಥ 'ಯಕ್ಷಗಾನ ಬಯಲಾಟ'ವೆಂಬ ಹೆಸರನ್ನು ತಾಳಿಯೇ.
ಈ ಕೆಲವು ದಶಕಗಳಲ್ಲಿ ಈ ಆಟಗಳನ್ನು 'ಯಕ್ಷಗಾನ ಬಯಲಾಟ' ಅಥವಾ 'ಯಕ್ಷ
ಗಾನ ಆಟ'ವೆಂದು ನಾವೆಲ್ಲ ಗುರುತಿಸಹತ್ತಿದ್ದೇವೆ. ಆದರೆ ದಕ್ಷಿಣ ಕನ್ನಡದಲ್ಲಿ
ಬಯಲಾಟ' ಶಬ್ದ ಪ್ರಾಕ್ಕಿನಿಂದಲೂ ಪ್ರಚಲಿತವಿರಬೇಕು. ಈ ಹೆಸರನ್ನು ಸ್ವಲ್ಪ
ಸಮೀಕ್ಷಿಸೋಣ: 'ಬಯಲಾಟ'ವೆಂದರೆ ಬಯಲಲ್ಲಿ ನಡೆಯುವ ಆಟ, ಆಡುವ
ರೂಪಕ, ಅಂದರೆ ಬಯಲಲ್ಲದೆ ಅಂಗಳದಲ್ಲಿಯೇ ಪೌಳಿಯಲ್ಲಿಯೋ | ಮುಚ್ಚಿನ,
ಮರೆಯುಳ್ಳ ಸ್ಥಳದಲ್ಲಿಯೋ ಆಟ ನಡೆಯುತ್ತಿತ್ತು. ಅದು ಬಯಲಿಗೆ ಬಂದಿತು-
ಎಂಬರ್ಥ ಇಲ್ಲಿ ಸೂಚಿತವಿದೆ. ಈ ಒಳಗೆ, ಪರಿಮಿತ ಸ್ಥಳದಲ್ಲಿ ನಡೆಯುತ್ತಿದ್ದ ಆಟ
ಯಾವದು? ಆಡಿಸುವವರಾರು? ಆಟಿಗ (ಆಟಿಗೆ ?) ಯಾರು? ಏನು?
{{gap}}ಅಕಬರನು ಫತೇಪುರ ಸಿಕ್ರೆ ಎಂಬ ಭವ್ಯ ರಾಜಧಾನಿ ನಗರ ಕಟ್ಟಿಸಿ ಮುಂದೆ
ಅದನ್ನು ಹಾಗೆಯೇ ಬಯಲಿಗೆ ಬಿಟ್ಟನು. ಆ ರಾಜಧಾನಿಯಲ್ಲಿ ಒಂದು ವಿಶಾಲ
ಸಭಾಮಂಟಪವಿದೆ. ಅಲ್ಲಿಯ ನೆಲವೆಂದರೆ ಆ ಮುಗಲ್ ದೊರೆ ಆಡಲು ಸಿದ್ದ
ಮಾಡಿದ ಚದುರಂಗದ ವಿಸ್ತೀರ್ಣವಾದ ಪಟ. ಅಂದರೆ ಅಲ್ಲಿ ದೊರೆ ಮೇಲೆ ಅಟ್ಟಲಿಕೆ
ಯಲ್ಲಿ ಕುಳಿತು. ಆ ಪಟದಲ್ಲಿ ಚದುರಂಗ ಆಡುವ ಏರ್ಪಾಟವಿತ್ತು. ಅದೆಂಥ ಚದು
ರಂಗ ? ಈ ಆಟದ ದಂತದ ಇಲ್ಲವೇ ಲೋಹದ ಆನೆ, ಕುದುರೆ, ಪೇದೆಗಳ ಬದಲು<noinclude></noinclude>
02mxuigk2y1xl6ibtjw76ba9v44ubih
ಪುಟ:ಯಕ್ಷಗಾನ ಮಕರಂದ.pdf/೨೮೭
104
100209
317808
314772
2026-05-07T04:26:00Z
Shreelatha.Halemane
7642
/* Validated */
317808
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|35}}
ನಿಜವಾದ ಜೀವಂತ ಆನೆ, ಕುದುರೆ, ಪೇದೆಗಳನ್ನ ಅಲ್ಲಲ್ಲಿ ನಿಲ್ಲಿಸಿ ಆತ ಆಟವಾಡುತ್ತಿದ್ದ!
ಗೊಂಬೆಯಾಟ ಬಯಲಾಟದ ರೀತಿಯ ಬಹುಶಃ ಹೀಗೆಯೇ ಎಂದು ನನ್ನ ಊಹೆ.
{{gap}}ಬಯಲಾಟದ ಯಾವದೇ ವೇಷವನ್ನು ನೋಡಿದರೆ ಅದರ ಉಡಿಗೆ ತೊಡಿಗೆ
ಗಳಿಂದ ಒಮ್ಮೆಲೇ ಅನಿಸುವದೇನು ? ಅದರ ಕಿರೀಟ, ಪೊಗಡೆ (ಮುಂಡಾಸ), ಭುಜ
ಕೀರ್ತಿ, ಎದೆಯ ಅಲಂಕಾರ ಇತ್ಯಾದಿ ಆಯಾ ದೇಹದ ಅಂಗಾಗಗಳಿಂದ ಪ್ರತ್ಯೇಕ
ವಾಗಿ ಕಾಣುವದಿಲ್ಲ. ಆ ಒಡವೆಗಳೊಂದಿಗೇ ಆ ವೇಷ ಆಳೆತ್ತರದ ಪ್ರತಿಮೆಯನ್ನೇ
ಕೊರೆದು ಕೆತ್ತಿ ನಿಲ್ಲಿಸಿದಂತೆ ಭಾಸವಾಗುವದು. ಅಂದರೆ ಮೂಲತಃ ಗೊಂಬೆಯಲ್ಲಿ
ಕೆತ್ತಿದ ವಸ್ತ್ರ ಒಡವೆಗಳ ಪಡಿಯಚ್ಚನ್ನೇ ದೊಡ್ಡ ಆಯ ಆಕಾರದಲ್ಲಿ ಪುರುಷ
ಪ್ರಮಾಣಕ್ಕೆ ಹೊಂದಿಸಿ ಸಜ್ಜು ಮಾಡಿಕೊಂಡಂತೆಯೇ ಅನಿಸುವದು. ಇದೂ ಸಾಲ
ದಂತೆ ಇವೆಲ್ಲ ಭೂಷಣಗಳು ಮರದಿಂದ ತಯಾರಿಸಿದ ಚಿನ್ನ ! ಮೈಗಂಟಿಕೊಂಡೇ ಇರು
ವಂತೆ ಬಟ್ಟೆಯ ಅಟ್ಟೆಗಳಿಂದ ಎದೆಕಟ್ಟುಗಳಿಂದ ರಚಿಸಿದ ಅಲಂಕಾರ, ಮುಡಿಯಿಂದ
ಅಡಿಯ ವರೆಗೂ ಈ ವೇಷಭೂಷೆಯು ಒಂದು ಅಖಂಡ ರೇಖಾ ವಿನ್ಯಾಸವನ್ನು,
ಆಕೃತಿಯ ಶಿಲ್ಪವನ್ನೇ ಕಣ್ಣೆದುರು ಕಟ್ಟಿ ನಿಲ್ಲಿಸುತ್ತವೆ. ಒಂದೊಂದು ವೇಷವೂ
ಚಲಿಸುವ – ಸೂತ್ರವಿಲ್ಲದೆ ಸ್ವಯಂ ಚಲನ ವಲನ ಮಾಡುವ ಜೀವಂತ ಗೊಂಬೆಯೇ
{{gap}}ಇನ್ನು ಈ ಆಳೆತ್ತರದ ಗೊಂಬೆಗಳ ಹಾವಭಾವ ವಿಶೇಷತಃ ಅವುಗಳ ತೋಳು
ಕೈಗಳು ಮಣಿದಾಡುವಾಗ ತೊನೆದಾಡುವಾಗ ಆ 'ತರಂಗಿತತೆ' ಯಾರೋ ಅದೃಶ್ಯ
ದಾರಗಳಿಂದ ಅವುಗಳನ್ನು ಸೂತ್ರದ ಗೊಂಬೆಗಳ ಅಂಗಾಂಗಗಳಂತೆಯೇ ಎಳೆದಾಡಿ
ಕುಣಿಸುವರೋ ಎಂಬಂತೆ ತೋರುತ್ತದೆ. ಇಲ್ಲಿ ಒಂದು ಅಂಶವನ್ನು ನಾವು ನೆನಪಿಸಿ
ಕೊಳ್ಳಬೇಕು. ಇಂದಿಗೆ ಒಂದು ಶತಮಾನದಲ್ಲಿ - ಅದೂ ಈಚಿನ ದಶಕಗಳಲ್ಲಿ ಈ
ಬಯಲಾಟದ ನಟ- ನರ್ತಕರ ಭಾವ ಭಂಗಿ ನೃತ್ಯನಾಟ್ಯಗಳಲ್ಲಿ ತುಂಬ ಪರಿಷ್ಕರಣ
ವನ್ನೋ ಸಂಸ್ಕರಣವನ್ನೂ ಹೊಂದಿದೆ. ಭರತನಾಟ್ಯ, ಕಥಕ್ಕಲಿಯೇ ಮುಂತಾದ
ಶಾಸ್ತ್ರೀಯ ನೃತ್ಯಮಾದರಿಗಳ ಅನುಕರಣವೂ ಬಹಳಷ್ಟು ಪದ್ಯಾರ್ಥಸೂಚಕವಾದ
ಅಂಗವಿಕ್ಷೇಪ (Miming)ವೂ ಸೇರಿಕೊಳ್ಳುತ್ತ ಬಂದಿದೆ. ಆದರೆ ಹಿಂದೆಲ್ಲ ಈ ಮೈ
ಕೈಗಳ ಕುಣಿತ ಮಣಿತಗಳಲ್ಲಿ ತಾಳಲಯದ ಅನುಸರಣದ ಹೊರಗೆ, ಅದಕ್ಕೆ ತಮ್ಮ
ತೋಲ ಕಾಪಾಡಿಕೊಳ್ಳುವ ಚಲನವಲನಗಳ ಹೊರಗೆ ವಿಶೇಷ ಇಲ್ಲವೆ ವಿಶಿಷ್ಟ ನ್ಯಾಸ-
ಮುದ್ರೆಗಳ ವಿನ್ಯಾಸವಿದ್ದಿಲ್ಲ. ಬಹಳಷ್ಟು ಅರ್ಥಶೂನ್ಯ ಹಾವಭಾವಗಳು ಗೊಂಬೆ
ಗಳ ಅಂಗವಿಕ್ಷೇಪಗಳನ್ನೇ ಹೆಚ್ಚು ಬೀಸಾಗಿ ನಯವಾಗಿ ನವಿರಾಗಿ ಇಲ್ಲವೇ ಸ್ಪುಟವಾಗಿ
ತೋರ್ಪಡಿಸುತ್ತಿದ್ದವು-ಇವು ಮಾನವ ಗೊಂಬೆಗಳಾಗಿದ್ದರಿಂದ ಪ್ರಸಂಗದ ಸಂದ
ರ್ಭಕ್ಕೆ ಅನಿವಾರ್ಯವಾಗಿ ತನ್ಮಯತೆಯ ಭಾವೋದ್ರೇಕ ಹೊಂದುವದರಿಂದ, ನಟಿಕೆ,
ಬೆರಳು ಮುರಿ (ಮಕ್ಕಳ ದೃಷ್ಟಿ ಬಾಧೆ ನೀಗಿಸಲು ಮಾಡುವಂತೆ !) ಇಲ್ಲವೆ ಬೆರಳು
ಕುಣಿಸು ಶಬ್ದ 'ನಟ' ಮೂಲದಿಂದಲೇ ಬಂದದ್ದು. ನಟನಿಗೆ ಸೋಗು ಮುಖ್ಯ<noinclude></noinclude>
n1cxqk3alftwctjdzj4pezoze3dpghf
ಪುಟ:ಯಕ್ಷಗಾನ ಮಕರಂದ.pdf/೨೮೯
104
100211
317809
314778
2026-05-07T04:26:57Z
Shreelatha.Halemane
7642
/* Validated */
317809
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|37}}
{{gap}}ಹಾಗೆಯೇ ಏಳನೆಯದೆಂದರೆ, ಈ ಬಯಲಾಟಗಳ ಆಖ್ಯಾನಗಳು ಹೆಚ್ಚಾಗಿ
“ಕಾಳಗ'ಗಳು. ಈಚೆಗೆ ಹೆಸರುಗಳನ್ನು ಸಂಸ್ಕಾರಗೊಳಿಸಿದರೂ ಅವು ಹಿಂದೆಲ್ಲ ಲವ
ಕುಶರ ಕಾಳಗ, ಬಭ್ರುವಾಹನ ಕಾಳಗ ಹೀಗೆಯೇ ಪ್ರಸಿದ್ಧವಾಗಿದ್ದವು. ಗೊಂಬೆ
ಗಳಲ್ಲಿ ಇಂಥ ರಭಸದ ಚಟುವಟಿಕೆಯಲ್ಲದೆ ನಯ ನಾಜೂಕಿನ ನಾಟ್ಯ ತೀರ ಕಷ್ಟಸಾಧ್ಯ.
ಅವುಗಳನ್ನೇ ಅನುಕರಿಸುವ ಈ ಜೀವಂತ ಗೊಂಬೆಗಳಿಗೂ ಅದೇ ಕಾಳಗಗಳ ರಾಪಿನ
ರೀತಿ ಮೈಗೂಡಿ ಬಂದರೆ ಅದು ಸ್ವಾಭಾವಿಕವೇ ಸರಿ.
{{gap}}ಈ ಕಾಳಗಗಳೂ ಕೈಗೆ ಕೈ ಹತ್ತಿ ಅಲ್ಲ, ಕತ್ತಿ ವರಸೆಯೂ ಅಲ್ಲ. ದೂರದಿಂದಲೇ
ಸಾಂಕೇತಿಕ ಹಾವಭಾವಗಳಿಂದ ಮಂಡಲಾಕೃತಿಯಾಗಿ ಎಂಟರಂಕೆಯ (8) ಕಕ್ಷೆಯಲ್ಲಿ
ಒಬ್ಬರನ್ನೊಬ್ಬರು ಸುತ್ತು ಹಾಕುತ್ತ ಕುಣಿಯುವದು. ತೆಕ್ಕೆ ಬಿದ್ದು ಕಾದಾಡುವದು
ಗೊಂಬೆಗಳಿಗೆ ಅಸಾಧ್ಯ. ಅದೇ ಸಂಪ್ರದಾಯ ಬಯಲಾಟದಲ್ಲಿಯೂ ಪಳಗಿ ಬಂತು.
{{gap}}ಎಂಟನೆಯದಾಗಿ, ಬಯಲಾಟದಲ್ಲಿ ಪಾತ್ರದ ವ್ಯಕ್ತಿತ್ವಕ್ಕಿಂತ ಅದರ ವಿಶಿಷ್ಟ
ಮಾದರಿ (Type) ಗೇ ಹೆಚ್ಚಿನ ಮಹತ್ವ. ಎರಡನೆಯ ವೇಷಧಾರಿ, ಬಣ್ಣದ ವೇಷ
ಕಿರಾತ ಇತ್ಯಾದಿ. ಅಲ್ಲದೇ ಅವರವರ ವೇಷದಿಂದಲೇ ಕಿರೀಟ, ಪೊಗಡೆ, ಅಡ್ಡ ಪೊಗಡೆ
ಮುಂತಾಗಿ ಆಯಾ ವೇಷದ ಸ್ವರೂಪ ನಿರ್ಣಯ, ಗೊಂಬೆಗಳ ಗುರುತಿಸುವ ಬಗೆಯ
ಪಳೆಯುಳಿಕೆ, ಮಾತು ಪ್ರಧಾನವಾದ ರೂಪಕದಲ್ಲಿ ಈ ಬಗೆಯ Typeಗಳನ್ನು ಹಾಕಿ
ಕೊಡಬೇಕಾಗಿಲ್ಲ. ಅದೇ ರೀತಿ ಪ್ರತಿ ಪಾತ್ರ ಮೊದಲು ಪ್ರವೇಶಿಸಿದೊಡನೆ ತನ್ನ
ಪರಿಚಯ ಪೀಠಿಕೆಯಲ್ಲಿ ಮಾಡಿಕೊಡುವ ಪರಿಪಾಟ. ಗೊಂಬೆ ರಂಗದಲ್ಲಿ ನಿಂತೊಡನೆ
ಅದಕ್ಕೆ ಸೂತ್ರಧಾರನಿಂದ ಪರಿಚಯ ಅಗತ್ಯ. ಆದರೆ ನಾಟ್ಯರೂಪದಲ್ಲಿ ಸಂಭಾಷಣ
ದಿಂದ ಅದು ತಾನಾಗಿಯೇ ಆಗುತ್ತದೆ. ಆದರೆ ಬಯಲಾಟದ ಮೇಲೆ ಗೊಂಬೆಯಾ
ಟದ ಕಟ್ಟುಪಾಡಿನ ನೆಳಲು ದಟ್ಟವಾಗಿ ಉಳಿದುಬಿಟ್ಟಿದೆ!
{{gap}}ಒಂಬತ್ತನೆಯದು, ಅರ್ಥಪೂರ್ಣವೆನಿಸುವ ಅಂಗವಿಕ್ಷೇಪಗಳಲ್ಲಿ ಅತಿಶಯತೆ
(Exaggeration). ಗೊಂಬೆಗಳಿಗೆ ಇದು ಅಗತ್ಯ. ಹೀಗೆ ಎತ್ತಿ ಒತ್ತಿ ಚಟುವಟಿಕೆ
ಗೈಯದಿದ್ದರೆ ಅವುಗಳ ಪರಿಣಾಮ ಆಗುವದಿಲ್ಲ. ಆದರೆ ಬಯಲಾಟದಲ್ಲಿಯೂ
ಪ್ರತಿಮಾತಿಗೂ ಈ 'ಅತಿಕರಣ' ಎದ್ದು ಕಾಣುತ್ತದೆ. ಆದ್ದರಿಂದ ವೇಷಧಾರಿಗಳ
ನಡೆ ನುಡಿ ನಿಲುಮೆ ನೋಟ ಎಲ್ಲವುಗಳಲ್ಲಿಯ ನೈಜತ ಸಹಜತೆಗಿಂತ ಕೃತಕ
(Stilted) ಠೀವಿ, ನಾಟ್ಯಮಯತೆಗಿಂತ ನಾಟಕೀಯತೆ, ಸ್ಥಿರನಾಟ್ಯದ ಆವಿರ್ಭಾವ
(tableau), ಇವುಗಳೇ ವಿಶೇಷ, ಮೂವತ್ತು-ನಾಲ್ವತ್ತು ವರ್ಷಗಳ ಆಚೆಗೆ ನಾನು
ತೆಂಕಲಾಗಿನ ಒಂದು ಮೇಳದ 'ಸುಭದ್ರಾಹರಣ ನೋಡಿದೆ. ಅದರಲ್ಲಿಯ ಧರ್ಮ,
ಅರ್ಜುನ, ಕೃಷ್ಣ, ಬಲರಾಮ ಪ್ರಕೃತಿಗಳು ನಿಲ್ಲುವ ಭಂಗಿ ಇಂದಿಗೂ ನನ್ನ ಕಣ್ಣಿನಲ್ಲಿ ಕಟ್ಟಿ ನಿಂತಿದೆ. ಒಂದೊಂದು ವೇಷವೂ ಒಂದೊಂದು ಕಂಚಿನ ಪ್ರತಿಮೆಯಂತೆ ತನ್ನ ದೇ
ನಿಲುಮೆಯ ಭಂಗಿಯಲ್ಲಿ ನಿಲ್ಲುತ್ತಿತ್ತು, ಇನ್ನೊಬ್ಬ ವೇಷಧಾರಿ ಕುಣಿದು ಮಾತನಾ<noinclude></noinclude>
dgpo4on7boebkf91u2tqb74x4yu3j4s
ಪುಟ:ಯಕ್ಷಗಾನ ಮಕರಂದ.pdf/೨೯೦
104
100212
317810
314780
2026-05-07T04:28:10Z
Shreelatha.Halemane
7642
/* Validated */
317810
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|38}}
ಡುವ ತನಕ. ಒಂದು ದಶಕದ ಹಿಂದೆ ಸುಭದ್ರಾಹರಣದ ಗೊಂಬೆ ಆಟವನ್ನು
ಕಂಡಾಗ ಆ ಹಳೆಯ ಆಟದ ಪ್ರಥಮ ದರ್ಶನದ ಬೆಡಗು ಮರುಕಳಚಿದಂತಾಯಿತು.
{{gap}}ಹತ್ತನೆಯದಾಗಿ, ಬಯಲಾಟದ ರಂಗದಲ್ಲಿಯ ಚಕ್ರಕುಣಿತ, ಮಂಡಿಗುಣಿತ
ಮುಂತಾದ ನೃತ್ಯಪ್ರಕಾರಗಳ ಮೂಲ ಗೊಂಬೆಗಳ ಕುಣಿತದಲ್ಲಿ ಇದ್ದಂತೆ ಕಾಣು
ಇದೆ. ಬಯಲಾಟದ ಈ ನರ್ತನ ವಿಧಾನಕ್ಕೆ ಹೆಚ್ಚಿನ ಬೇರೆ ಯಾವ ಶಾಸ್ತ್ರೀಯ
ಆಧಾರ-ಆಕಾರವೂ ಇದ್ದಂತಿಲ್ಲ.
{{gap}}ವೇಷಧಾರಿಗಳು ರಂಗವನ್ನು ಪ್ರವೇಶಿಸುವ ಮತ್ತು ಬಿಟ್ಟು ನಡೆಯುವ
'ಬಿಡಗಿ ಕುಣಿತ ಗೊಂಬೆಗಳು ಸರಿದ ಭಾಸವನ್ನುಂಟುಮಾಡುತ್ತವೆ. ಅದೇ ರೀತಿ
ಇವೆಲ್ಲ ವೇಷಗಳು ರಂಗದಿಂದ ಒಳಗೆ ಹೋಗುವಾಗ ಒಮ್ಮೆಲೇ ತಮ್ಮ ಠೀವಿ
(bearing) ಮರೆತು ಸಾದಾ ಮಂದಿಯಂತೆ ಹೊರಟುಹೋಗುವ ತೆಪ್ಪಗಿನ ಈ ರೀತಿ
ಸೂತ್ರಧಾರ ಗೊಂಬೆಗಳನ್ನು ಒಮ್ಮೆಲೆ ಸಡಿಲು ಬಿಟ್ಟಂತೆ ಅನಿಸುತ್ತದೆ. (ಹಿಂದೊಮ್ಮೆ
ನಮ್ಮ ಅಪ್ರತಿಮ ವೇಷಧಾರಿ ನಟವರ್ಯ ಚಿಟ್ಟಾಣಿ ರಾಮಚಂದ್ರರು ಭಸ್ಮಾಸುರನ
ಕೊನೆಯ ಅಗ್ನಿ ಹಸ್ತ ತಲೆಗಿಟ್ಟುಕೊಂಡ ಸನ್ನಿವೇಶದಲ್ಲಿ ಮೈತುಂಬ ಜ್ವಾಲೆಗಳೇರಿ
ಬಂದು ಸಾಯುವಾಗ ರಂಗದಿಂದ ನಿಮಣ ಒಮ್ಮೆಲೆ ಸಪ್ಪಗಿನ ಅವಸರದ
ಖಾಸಗಿ ನಡೆಯದಾಗುತ್ತಿತ್ತು. ಆಗ ನಾನು ಅವರಿಗೆ “ಅದು ಸಲ್ಲದು. ಆ ಮರಣ
ಯಾತನೆಯ ರೌದ್ರ ರಭಸದ ಅಭಿನಯದ ಭಂಗಿಯಲ್ಲಿಯೇ ಭಸ್ಮಾಸುರ ನಿಮ್ಮ ಮಿಸ
ಬೇಕು ವೇಷ ಮರೆತ ಚಿಟ್ಟಾಣಿಯವರಲ್ಲ” ಎಂದು ಸೂಚಿಸಿದ್ದನ್ನು ಆ ಕಲಾಪ್ರಜ್ಞ
ಒಪ್ಪಿಕೊಂಡು ಅದೇ ರೀತಿ ನಿಷ್ಕಣದ ರೀತಿಯನ್ನು ಮಾರ್ಪಡಿಸಿಕೊಂಡರು.
ಹೀಗೆ ತೆರೆಮರೆ ಆಗುವಲ್ಲಿ ಈ ನರಗೊಂಬೆಗಳು ಮರಗೊಂಬೆಗಳಂತೆ ವರ್ತಿಸುತ್ತವೆ.
{{gap}}ತೆರೆಮರೆ' ಅಂದಾಗ ಇನ್ನೊಂದು ಅರ್ಥಪೂರ್ಣ ಅಂಶ ಗಮನಕ್ಕೆ ಬರುತ್ತದೆ.
ಯಕ್ಷಗಾನ ನಾಟಕ(?)ದ ಪ್ರಾಚೀನತೆಯನ್ನು ಹೇಳುವಾಗ ಡಾ| ಕಾರಂತ ಪ್ರಕೃತಿ
ಹಲವಾರು ವಿದ್ವಾಂಸರು ರತ್ನಾಕರ ವರ್ಣಿಯ ಭರತೇಶ ವೈಭವ'ದಿಂದ ಗಾನ
ನರ್ತಕಿಯರು ಭರತ ಚಕ್ರೇಶನ ಓಲಗದಲ್ಲಿ ಕುಣಿಯಲು ಮುಂದೆ ಬಂದ ಒಂದು
ಸಂಭ್ರಮದ ಸನ್ನಿವೇಶವನ್ನು ಬಣ್ಣಿಸುವ ಪದ್ಯವನ್ನು ಉದಾಹರಿಸುವದುಂಟು.
ಆದರೆ ಆ ಪದ್ಯದಿಂದ ಒಂದು ಸಂಗತಿ ಖಚಿತವಾಗುತ್ತದೆ. ಅಲ್ಲಿಯ ತೆರೆಯ ಮರೆಯ
ಕುಣಿತದಿಂದ ಆರಂಭ ಮಾಡಿ ಆ ಮತ್ತ ಕಾಶಿನಿಯರು ತೆರೆಯನ್ನು ತಗ್ಗಿಸಿ ಕನ್ನಡಿಯ
ಬಿಂಬಗಳಂತೆ ತಮ್ಮ ಮೋರೆಗಳನ್ನು ಸಾಲಾಗಿ ಬೆಳಗಿ ಮುಂದೆ ಕ್ರಮೇಣ ತೆರೆ ಇಳಿ
ಬಿಟ್ಟು ರಂಗದಲ್ಲಿ ಕುಣಿಯುತ್ತ ಕಾಣಿಸಿಕೊಳ್ಳುತ್ತಾರೆ. ಅಂದಾಗ ಈ ತೆರೆಮರೆಯ
ಕುಣಿತ ಹಾಗೂ ಪರ್ಯಾಯವಾಗಿ ರಂಗಪ್ರವೇಶ ಯಕ್ಷಗಾನ ರಂಗ ಪ್ರದರ್ಶನದ್ದೇ
ಒಂದು ವಿಶಿಷ್ಟ ಲಕ್ಷಣವಿದ್ದಿಲ್ಲ. ಅಂದು ಇಂಥ ಎಲ್ಲ ನಟ ನರ್ತಕರ ತೆರೆಯ ಮರೆ
ಯಿಂದಲೇ ಕುಣಿಯುತ್ತ ಹೊರಬಂದು ಕಾಣಿಸಿಕೊಳ್ಳುತ್ತಿರಬೇಕು. ಸಂಸ್ಕೃತ ನಾಟಕ<noinclude></noinclude>
hyjf2tod5qyjjnhkqzbkq1c3zo5auls
ಪುಟ:ಯಕ್ಷಗಾನ ಮಕರಂದ.pdf/೮೫೫
104
100772
317800
297832
2026-05-07T03:18:02Z
Shreesha Sharma
7840
/* Validated */
317800
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|586}}
{{gap}}ಕೊಹೊಬ ಕಂಕಾರಿಯ ಎಂಬ ಯಾಗದಲ್ಲಿ ಸಿಂಹಳದ ರಂಗಭೂಮಿಯ
ಎಲ್ಲಾ ಅಂಶಗಳನ್ನು ಕಾಣಬಹುದಾಗಿದೆ, ರಂಗಭೂಮಿ, ರಂಗಮಂದಿರ, ರಂಗ
ಭೂಮಿಯ ಒತ್ತಿನಲ್ಲೇ ಚೌಕಿ-ಇವೆಲ್ಲದರ ವ್ಯವಸ್ಥೆ ಉತ್ತಮ ನಾಟ್ಯ ಪ್ರದರ್ಶನದ
ಏರ್ಪಾಡಿನಂತಿರುತ್ತದೆ. ಕೊಹೊಬ ಕಂಕಾರಿಯವು ಪಾಂಡು ವಸುರಾಜನಿಗೆ
ಬಂದ ಕುಷ್ಠರೋಗದ ನಿವಾರಣೆಗಾಗಿ ಮಾಡಿಸುವ ಯಾಗ ಕುವೆನಿ ಎಂಬ ಯಕ್ಷ
ಕನೈಯಿಂದ ವಿಜಯರಾಜನ ವಂಶಜನಾದ ಪಾಂಡು ವಸುರಾಜನಿಗೆ ಈ ರೋಗವು
ಬಂದಿದೆ ಎಂದು ಪೊತೆಗುರು (ಜ್ಯೋತಿಷ್ಯರು) ತಿಳಿಸುತ್ತಾರೆ. ಅದಕ್ಕೆ ಅರ್ಚಕ
ರನ್ನು ಯಕ್ಷದೇಶದಿಂದ (ಬಡಗು ಪಟ್ಟಣದಿಂದ) ಬರಮಾಡಿಸಿಕೊಳ್ಳುತ್ತಾರೆ.
'ವಡಿಗ ಪಟುನದ ಪ್ರವಾಸಿಗಳಿಬ್ಬರು ಈ ಕಂಕಾರಿಯದಲ್ಲಿ ಭಾಗವಹಿಸುತ್ತಾರೆ.
ಬೌದ್ಧ ಧರ್ಮ ಮತ್ತು ಹಿಂದೂ ಧರ್ಮಗಳ ಮಹತ್ವವು ಚರ್ಚಿಸಲ್ಪಡುತ್ತದೆ.
ಪಾಲಿ ಮತ್ತು ಸಿಂಹೆಲ ಹಾಡುಗಳು ವಿವಿಧ ತಾಳಗತಿಗಳಲ್ಲಿರುತ್ತವೆ. ತಾಳರಹಿತ
ವಚನಗಳು ಪ್ರೌಢ ಶೈಲಿಯಲ್ಲಿರುತ್ತವೆ.
{{gap}}ನಮ್ಮ ದೊಡ್ಡಾಟ, ಬೊಂಬೆಯಾಟ, ಬಡಗುತಿಟ್ಟಿನ ಯಕ್ಷಗಾನದಂತೆ ಮುಖ್ಯ
ಹಾಡುಗಾರನೆಂದಿಗೆ ಮೇಳದವರು ಸಮೂಹವಾಗಿ ಹಾಡುವ ಕ್ರಮವೂ ಇದೆ.
ವಾದ್ಯಮೇಳದವರು ಯಕ್ ಬೆರ, ಗೆಟಬೆರ, ದೌಲು, ತಮ್ಮಟೆಗಳನ್ನು
ಸ್ಪರ್ಧೆಯ ರೀತಿಯಲ್ಲಿ ನುಡಿಸುತ್ತಾರೆ. ಬೇರೆ ಬೇರೆ ಪಾತ್ರಗಳು ನೃತ್ಯದಲ್ಲಿಯ
ಸ್ಪರ್ಧಿಸುತ್ತವೆ. ನಮ್ಮಲ್ಲಿಯ ಜೋಡಾಟದ ಸ್ಪರ್ಧೆಯನ್ನು ಹೋಲುವಂತೆ ಬೇರೆ
ಬೇರೆ ತಂಡಗಳವರು ಈ ಕೊಹೊಬ ಕಂಕಾರಿಯದಲ್ಲಿ ಸ್ಪರ್ಧಿಸುತ್ತಾರೆ.
{{gap}}ಸೋಕಾರಿ ನೃತ್ಯ ನಾಟಕವು ಚಾಪೆ ಹೆಣೆಯುವ ವೃತ್ತಿಯ ಕಿನ್ನರಯ
(ಕಿನ್ನರರು) ಎಂಬವರ ನಾಟಕ ಕಲೆಯಾಗಿದೆ. ಇದ ಪ್ರಾಚೀನವಾದ ಜನಪದ
ನಾಟಕ ಪದ್ಧತಿಯಾಗಿದೆ. ಇದು ದಕ್ಷಿಣ ಭಾರತದ ಬೀದಿ ನಾಟಕ, ಬಯಲು
ನಾಟಕಗಳನ್ನು ಹೋಲುತ್ತದೆ. ಸೋಕಾರಿ ನೃತ್ಯ ನಾಟಕದಲ್ಲಿಯೂ ಯಕ್ಷಗಾನ
ಬಯಲಾಟದ ಹಲವಂಶಗಳು ಕಂಡುಬರುತ್ತವೆ. ಇವೆಲ್ಲಾ ಕಂಕಾರಿಯದಿಂದ
ಬಂದಿರಬೇಕೆಂದು ಊಹನೆ.
{{gap}}ಸಿಂಹಳದ ನಾಡಗಂ ಎಂಬುದು ಕೆಲ ಸಂಪ್ರದಾಯವೇ ಬೆಳೆದ ನಾಟಕ
ರೂಪ. ಇದರಲ್ಲಿ ನೃತ್ಯ, ಸಂಗೀತ, ಸಂಭಾಷಣೆಗಳಿರುತ್ತವೆ. ಇದರ ಮಾತಿನ
ಗದ್ಯವೂ ಪದ್ಯಕ್ಕೆ ಹತ್ತಿರದ 'ವಚನ' ರೀತಿಯಲ್ಲಿರುತ್ತದೆ. ಡಾ| ಶರತ್ ಚಂದ್ರ
ಅವರ 'ಮನವೆ' ನಾಡಗಂ ಅರ್ಧಚಂದ್ರಾಕೃತಿಯ ರಂಗಮಂಟಪದಲ್ಲಿ ಹಳೆಯ
ಪದ್ಧತಿಯಲ್ಲಿ ಪ್ರಯೋಗವಾದುದನ್ನು ನೋಡಿದಾಗ ದಕ್ಷಿಣ ಭಾರತದ ನೃತ್ಯ
ನಾಟಕ ಸಂಪ್ರದಾಯಗಳಿಗೆ ಇದೆಷ್ಟು ಹತ್ತಿರವಾಗಿದೆ ಎಂಬುದು ನಮಗೆ ಅನ್ನಿ ಸಂ
ತದೆ. ಪ್ರಸಂಗದ ಭಾಷೆಯಲ್ಲಿ ಸಂಸ್ಕೃತ, ಪಾಲಿ, ತಮಿಳು ಪದಗಳು ಸಾಕಷ್ಟು<noinclude></noinclude>
rsbfsczw69jp8ec13jo798capbs3cr7
ಪುಟ:ಯಕ್ಷಗಾನ ಮಕರಂದ.pdf/೮೫೭
104
100776
317802
297838
2026-05-07T03:20:34Z
Shreesha Sharma
7840
/* Validated */
317802
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|588}}
ಗಳಿಂದ ಕಲಿತು, ತಿಳಿದು, ತಿಳಿಸುವುದು ಅಗತ್ಯ. ಹಾಗೆ ಹಿನ್ನೆಲೆಯಿಲ್ಲದೆ ಆಡಿದ
ಮಾತು, ಮಾಡಿದ ಪ್ರಯೋಗ ತಾತ್ಕಾಲಿಕವಾಗಿದ್ದು ಕಾಲದ ಹೊಡೆತಕ್ಕೆ ಸಿಕ್ಕಿ
ಮಾಯವಾಗುತ್ತದೆ. ಆದರೂ ಪ್ರಯೋಗಶೀಲನು ಸುಮ್ಮನಿರಲು ಸಾಧ್ಯವೇ?
{{center|'''ಕೇಂಡಿಯನ್ ವೆಸ್ ನೃತ್ಯದ ಉಡುಗೆತೊಡುಗೆ'''}}
{{gap}}ಇವುಗಳಿಗೆ ಒಟ್ಟಾಗಿ ಸುಸೆತ ಆಭರಣ ಎನ್ನುತ್ತಾರೆ. ಶಿಖ ಬಂಧನ,
ನಲಲ್ ಹೆಡೆ, ನೆತ್ತಿ ಮಾಲೆ, ಪಾಯಂಪೋತ (ಅರಳೀ ಮರದ ಎಲೆಯಂತಹ
ಜಾಲರಿ), ಜಟಾವ (ಮರದಿಂದ ಮಾಡಿದ ಜಡೆಯ ಆಕಾರ), ಜಟಾಪಟಿಯ
(ಜಟಾರಾಲ), ಸುಮಾರು 45 ಇಂಚು ಉದ್ದದ ಅಲಂಕೃತ ಬಣ್ಣದ ಪಟ್ಟಿ, ಅದು
ಮರದ ಜಡೆಯ ಆಕಾರದಿಂದ ಹಿಂಬದಿಯಲ್ಲಿ ತೂಗಾಡುತ್ತಿರುತ್ತದೆ. ನರ್ತಿಸುವಾಗ
ಅದು ಸುತ್ತಿ ಸುಳಿಯುವುದೇ ಒಂದು ಚಂದ, ತೊಡುಪಟ್ಟಿ (ಬೆಳ್ಳಿಯ ಕುಸುರಿ
ಕೆಲಸದ-ಕಿವಿಯ ಮುಂದೆ ಕಟ್ಟುವ ಆಭರಣ, ಬಂದಿವಲಲು (ಮರು ಜತೆಲೋಹದ
ಕೈ ಬಳೆಗಳು), ಮಣಿಯ ಕತ್ತಿನ ಹಾರ.' ಅವುಲ್ ಹೆರ (ಬೆಳ್ಳಿ, ದಂತ, ಕೊಂಬಿನ
ಕೆಲಸ, ಮಣಿಯ ಅಲಂಕಾರಗಳಿಂದ ಕೂಡಿದ ಎದೆಕವಚ), ಲೋಹದ ಭುಜಕೀರ್ತಿ.
{{gap}}ಸುರಾಲ್ ಎಂಬ ಪಾಯಜಾವದ ಮೇಲೆ ಉಲುದಯ (ಉಡುವ ಬಿಳಿ
ಬಟ್ಟೆ)ವನ್ನು ಉಡುತ್ತಾರೆ. ಇದು 3 ಗಜ ಉದ್ದವಿರುತ್ತದೆ. ಅದರ ಮೇಲೆ ಸಪೂರ
ಉದ್ದದ ಬಟ್ಟೆಯನ್ನು ಅಂತರ ಅಂತರವಾಗಿ ಕಟ್ಟುತ್ತಾರೆ. ರೈತ ಜೊತ ಎಂಬ
ತೆಳು ಬಟ್ಟೆಯ ನೆರಿಯು ಸೊಂಟದ ಸುತ್ತ ಬರುವಂತೆ ಕಟ್ಟುತ್ತಾರೆ. ಬುಬುಲು
ಪಟಿಯ (ಬೆಳ್ಳಿಯ ಅಲಂಕಾರದ ಸೊಂಟದ ಪಟ್ಟಿ), ಇದು ಮೂರರಿಂದ ನಾಲ್ಕು
ಇಂಚು ಅಗಲವಿರುತ್ತದೆ. ಸೊಂಟದ ಪಟ್ಟಿಯ ಮಧ್ಯದಿಂದ ಇನಹೆಡಿಯ ಎಂಬ
ತ್ರಿಕೋನಾಕಾರದ ಪಟ್ಟಿಯೊಂದು ವಂಡಿಯ ತನಕ ತೂಗಾಡುತ್ತಿರುತ್ತದೆ.
ಮುಂದುಗಡೆಯಲ್ಲಿರುವ ಇದನ್ನು ಕೆಂಪು ಅಥವಾ ನೀಲಿ ವೆಲ್ವೆಟ್ ಅಥವಾ ಸಿಲು
ಬಟ್ಟೆಯಿಂದ ಮಾಡಿ ಬೆಳ್ಳಿಯ ತಗಡಿನ ಚುಕ್ಕೆಗಳಿಂದ ಕಸೂತಿ ಮಾಡಿರುತ್ತಾರೆ.
ವಿನಖಂಡಕ್ಕೆ ರಾಸುಪಟ್ಟಿಯ (ಚರ್ಮದ ಪಟ್ಟಿಗಳಿಗೆ ಗೆಜ್ಜೆಗಳನ್ನು ಪೋಣಿಸಿದ್ದು)
ಕಟ್ಟುತ್ತಾರೆ. ಕಾಲಿಗೆ ಶಿಲಂಬು (ಗಗ್ಗರ) ಸಿಕ್ಕಿಸಿರುತ್ತಾರೆ. ಇಷ್ಟರಲ್ಲಿ ಹೆಚ್ಚು
ಕಮ್ಮಿ ಸಿಂಹಳದ ವೆಸ್ ನೃತ್ಯದ ವೇಷ ಭೂಷಣಗಳು ತುಂಬಿರುತ್ತವೆ. ಇವುಗಳನ್ನು
ತಯಾರಿಸುವ ಪರಂಪರೆಯ ಮನೆತನಗಳಿರುತ್ತವೆ.
{{center|——}}<noinclude></noinclude>
ooy2oui5elsvnz01bs7on3h7rnme2ry
ಪುಟ:ಯಕ್ಷಗಾನ ಮಕರಂದ.pdf/೮೫೬
104
100777
317801
297835
2026-05-07T03:20:09Z
Shreesha Sharma
7840
/* Validated */
317801
proofread-page
text/x-wiki
<noinclude><pagequality level="4" user="Shreesha Sharma" /></noinclude>{{Right|587}}
ಇರುತ್ತವೆ. ಗ್ರಾಮ್ಯ ಸಿಂಹಳೀ ಪದಗಳಿಂದ ಕೂಡಿ ಸಂಕೀರ್ಣವೂ ಆಗಿದೆ. ಆರಂಭದ
ಪ್ರಾರ್ಥನಾ ವಿಧಿಗೆ 'ಪೂರ್ಣ ಸಿಂದುವ' ಎನ್ನುತ್ತಾರೆ. ಸ್ತುತಿಯಾದ ಬಳಿಕ
“ಬಹುಬೂತಾಯ' (ಹಾಸ್ಯಗಾರ) ಪ್ರವೇಶಿಸುತ್ತಾನೆ, 'ಕೋಮಾಲಿ' (ಕೋ
ಡಂಗಿ) ಎಲ್ಲಾ ಬಯಲು ನಾಟಕಗಳಲ್ಲಿರುವಂತೆ ಇಲ್ಲಿಯ ಬರುತ್ತಾನೆ. ಮುಖ್ಯ
ಹಾಡುಗಾರ 'ಪೋತೆಗುರು' ನಾಟಕವನ್ನು ನಡೆಸಿ ಕೊಡುವವನು. ಇವನನ್ನು
ನಮ್ಮ ಭಾಗವತರಿಗೆ ಹೋಲಿಸಬಹುದು. ವಿವಿಧ ರಾಗ, ತಾಳಗಳಲ್ಲಿ ಹಾಡುತ್ತಾನೆ.
ಗದ್ಯವನ್ನೂ ರಾಗವಾಗಿ ಹಾಡುವುದಿದೆ. ಈಗೀಗ ಕರ್ನಾಟಕ, ಹಿಂದುಸ್ತಾನಿ ಮತ್ತು
ಸಿನೆಮಾ ಮಟ್ಟಿನ ರಾಗಗಳೂ ಬರುತ್ತವೆ. ರಂಗಕ್ಕೆ ಬಂದ ಪಾತ್ರಗಳನ್ನು ಪೋತ
ಗುರು ಪ್ರೇಕ್ಷಕರಿಗೆ ಪರಿಚಯ ಮಾಡಿಸುತ್ತಾನೆ. ಅವನ ಪಕ್ಕಗಳಲ್ಲಿ 'ಪಕ್ಕಿವಾದಮ'
ಅಥವಾ “ಬೆರಕಾರಯೊ' ಇರುತ್ತಾರೆ. ದಕ್ಷಿಣ ಭಾರತದ ಕಲಾಸ್ವರೂಪಗಳಿಗ
ಸಿಂಹಳದ ಕಲೆಗಳಿಗೂ ನಿಕಟ ಸಂಬಂಧವಿರುವುದು ಸಾಧ್ಯ. ಯಕ್ಷಾರಾಧನೆಯಿಂದಲೇ
ಈ ನಾಟಕ ಪದ್ಧತಿಗಳು ವಿಕಾಸವಾಗಿರಬೇಕು. ನಮ್ಮಲ್ಲಿಯ ಯಕ್ಷಪೂಜೆ, ಭೂತಾ
ರಾಧನೆಯಿಂದಲೇ ಯಕ್ಷಗಾನ ಬಯಲಾಟವು ವಿಕಾಸವಾಗಿರಬೇಕೆಂದು ಕಾಣುತ್ತದೆ.
{{gap}}ಸಿಂಹಳದಲ್ಲಿ ನಾವಿಂದು ಯಕ್ಷಾರಾಧನೆಯನ್ನು ರುಹುನು ಸಂಪ್ರದಾಯದಲ್ಲಿ
ಹೆಚ್ಚಾಗಿ ಕಾಣುತ್ತೇವೆ. 'ಉಡರಟ' ಸಂಪ್ರದಾಯದಲ್ಲಿ (ಕೇಂಡಿಯನ್ ಸಂಪ್ರ
ದಾಯ) ಬೌದ್ಧ ಧರ್ಮದ ಪ್ರಭಾವವನ್ನೇ ಕಾಣುತ್ತೇವಾದರೂ ಅದರ ವಿಕಾಸಕ್ಕೆ
ಕಾರಣವಾದ ಯಕ್ಷ ಸಂಪ್ರದಾಯವನ್ನು ಅದರ 'ವೆಸ್' ಉಡುಗೆ ತೊಡುಗೆಯಲ್ಲಿ
ಕಾಣಬಹುದು. ಈ 'ವೆಸ್' ಉಡುಗೆ ತೊಡುಗೆಗಳನ್ನು ಧರಿಸುವ ಕಾಠ್ಯಕ್ರಮಕ್ಕೆ
'ವೆಸ್ ಬಂದ್' ಎನ್ನುತ್ತಾರೆ. ಇದು ಬೌದ್ಧ ದೇವಾಲಯದಲ್ಲಿ ಜರಗುತ್ತದೆ.
{{gap}}ನಮ್ಮ ಬಯಲಾಟಗಳಿಗೆಲ್ಲಾ ಪ್ರಾರಂಭದಲ್ಲಿ ಶಿವಲೀಲೆಗಳೇ ಪ್ರಸಂಗದ
ವಸ್ತುಗಳಾಗಿದ್ದಿರಬೇಕು. ಕ್ರಮೇಣ ಬೌದ್ಧ, ಜೈನ, ವೈಷ್ಣವ ಕಥಾವಸ್ತುಗಳ
ಪ್ರಸಂಗಗಳು ಧಾರ್ಮಿಕ ಪ್ರಭಾವಕ್ಕನುಗುಣವಾಗಿ ರೂಢಿಗೆ ಬಂದಿರಬೇಕು.ಶಿವ
ಪಾರ್ವತಿಯರ ತಾಂಡವ-ಲಾಸ್ಯ ನೃತ್ಯಗಳು, ಜಾನಪದ ಪೂಜಾರಾಧನೆಗಳೊಂದಿಗೆ
ಸೇರಿ, ಎಲ್ಲಾ ನಾಟ್ಯ ಕಲೆಗಳಲ್ಲಿ ಸೋದರ ಸಂಬಂಧವನ್ನು ಕಾಣುತ್ತೇವೆ. ನಿಗೂಢ,
ಚೋದ್ಯಕಾರಕ ಶಕ್ತಿಗಳನ್ನು ಆರಾಧಿಸುವ ರೂಢಿಯು ನೃತ್ಯಕಲೆಯ ಹುಟ್ಟಿಗೆ ಕಾರಣ
ವಾಯಿತು. ಅದೇ ಭೂತಾರಾಧನೆ, ಯಕ್ಷಾರಾಧನೆ, ಯಕ್ಷಗಾನ ಕಲೆಗೂ ವಲ
ವಾಯಿತು. ಜನಪದ ಆಚರಣೆ, ಕುಣಿತ, ಹಾಡು, ಸಂಸ್ಕೃತ ನಾಟಕ, ಭರತನ ನಾಟ್ಯ
ಶಾಸ್ತ್ರ ಗ್ರಂಥ, ಕಾಲಕಾಲಕ್ಕೆ ಆದ ಧಾರ್ಮಿಕ ಆಂದೋಲನ, ಪ್ರತಿಭಾಶಾಲಿಗಳ
ವೈಯಕ್ತಿಕ ಪ್ರಯೋಗಗಳಿಂದ ಸಿಂಹಳದ ನೃತ್ಯಕಲೆ ಪ್ರಭಾವಿತವಾಗಿದೆ. ನಮ್ಮ
ಯಕ್ಷಗಾನ ಬಯಲಾಟವೂ ಇತರ ಯಕ್ಷ ನಾಟ್ಯ ಕಲೆಗಳಂತೆ ಮೇಲಿನ ಪ್ರಭಾವಗಳಿಗೆ
ಒಳಗಾಗಿ ಈಗಿನ ಸ್ಥಿತಿಗೆ ಬಂದಿದೆ, ಅದನ್ನು ಪರಂಪರಾಗತವಾಗಿ ಬಂದ ಗುರು<noinclude></noinclude>
cj3r3hr5dbfvib31t9vvwk21yg1tibe
ಪುಟ:ಯಕ್ಷಗಾನ ಮಕರಂದ.pdf/೮೫೩
104
100778
317798
293968
2026-05-07T03:17:11Z
Shreesha Sharma
7840
/* Validated */
317798
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|584}}
{{gap}}ಯಕ್ಷರು ಸಿಂಹಳದಲ್ಲಿಯೂ ಇದ್ದರು. ಪ್ರತಾಪಿಗಳಾದವರು ಗತಿಸಿದ ನಂತರ
ಮುಂದಿನ ತಲೆಮಾರಿನವರಿಂದ ಪೂಜೆ ಆರಾಧನೆ ಪಡೆಯುವುದು ಸಮಾಜದ ಸಂಪ್ರ
ದಾಯ. ದುಷ್ಟರಾದವರು (ಗತಿಸಿದ ಮೇಲೆ) ಪೀಡೆ ಕೊಡದಂತೆ, ಶಿಷ್ಟರಾದವರು
ಅನುಗ್ರಹಿಸುವಂತೆ, ಪೂಜಿಸುವುದು ಹಲವು ಜನಾಂಗಗಳಲ್ಲಿ ರೂಢಿಯಾಗಿದೆ.
ಧಾರ್ಮಿಕ ವಿಧಿ ವಿಧಾನಗಳೇ ನಾಟ್ಯಕಲೆಗಳೆಲ್ಲದರ ಬೀಜರೂಪ, ದೇಶ-ಭಾಷೆ-ಕಾಲ
ಗತಿಗಳಿಗನುಗುಣವಾಗಿ ಆದ ಮಾರ್ಪಾಡುಗಳೇ ನಾಟ್ಯಕಲೆಯ ವಿವಿಧತೆಗೆ ಕಾರಣ.
ತುಳುನಾಡಿನ ಯಕ್ಷಗಾನ ಕಲೆಯ ಅವುಗಳಲ್ಲಿ ಒಂದು
{{gap}}ದಕ್ಷಿಣೋತ್ತರ ಭಾರತದ ಧರ್ಮ, ಸಂಸ್ಕೃತಿಗಳಿಂದ ಪ್ರಭಾವಿತವಾದ ಸಿಂಹ
ಳದ ಯಕ್ಷಕಲೆಯಲ್ಲಿ ಪಾಶ್ಚಿಮಾತ್ಯ ಪ್ರಭಾವವು ಇತ್ತೀಚೆಗೆ ಆಗಿದ್ದರೂ, ಅಧ್ಯಯನ
ಶೀಲರಾದವರಿಗೆ ಗೋಚರಿಸುವ ಹಲವಂಶಗಳು ಇನ್ನೂ ಉಳಿದುಕೊಂಡಿವೆ.
{{gap}}ಯಕ್ಷಾರಾಧನೆಯಲ್ಲಿ ಬಲಿ, ಕೊಲಂ, ಕಂಕಾರಿಯ, ಮದುವಗಳೆಂದು
ವಿಧಗಳಿರುತ್ತವೆ. ಯಕ್ಷರಲ್ಲಿ ರಿರೀಯಕ, ಮಹಾಕಲ, ಸನ್ನಿ, ಒಡ್ಡಿ
ಕುಮಾರ, ಹೂನಿಯಮ, ಮಹಾಸೋಹನ್, ಕಳುಕುಮಾರ, ಭೈರವ,
ರಟಯಕ, ಗರಯಕರು ಮುಖ್ಯ, ಮಹಾಸನ್ನಿಯಕಕ್ಕೆ ಭೂತಸನ್ನಿ,
ಮರುಸನ್ನಿ, ಜಲಸನ್ನಿ, ನಾಗಸನ್ನಿ, ವಾತಸನ್ನಿ, ಪಿತ್ತ ಸನ್ನಿ, ಸಮಸನ್ನಿ,
ದೇವಸನ್ನಿ, ದೆಮಲ (ತಮಿಳ) ಸನ್ನಿ-ಹೀಗೆ ಹದಿನೆಂಟು ಸನ್ನಿ ಸೇವಕರಿರು
ತ್ತಾರೆ. ಮಹಾಸೋಹನ್ ಯಕವು ಎಪ್ಪತ್ತು ಸಾವಿರ ಭೂತಗಳಿಗೆ ಒಡೆಯನಂತೆ.
{{gap}}ಈ ಯಕ್ಷಗಳಿಗೆ ಬಲಿ ನಡೆಯುವಾಗ ರಾಕ್ಷಸ, ಶಿವ, ಉಮೆ, ಲಕ್ಷ್ಮಿಯರೊಂದಿಗೆ
ಬುದ್ಧ ದೇವನನ್ನೂ ಆಹ್ವಾನಿಸುವ ವಾದ್ಯವಾದನ ಸ್ತುತಿ ಪಾಠಗಳಿರುತ್ತವೆ. ಪ್ರತಿ
ಯೊಂದು ದೆವ್ವ ದೇವರನ್ನು ಆಹ್ವಾನಿಸಿದಾಗ ನೃತ್ಯದ ಬಿಡ್ತಿಗೆಯಿರುತ್ತದೆ. ಯಕ್
ಬೆರ (ಯಕ್ಷಡೋಲು) ದಲ್ಲಿ ಬಾಯಿತಾಳವನ್ನು ಹೇಳಿ ನುಡಿಸುತ್ತಾರೆ,
ಮಂಟಪ ರಚನೆಯು ರಂಗಮಂದಿರದ ಮೂಲಸ್ವರೂಪವನ್ನು ಹೊಂದಿರುತ್ತದೆ.
ಚೌಕಿಯಲ್ಲಿ ನಮ್ಮ ಯಕ್ಷಗಾನ ನಟರು ಸಿದ್ಧತೆ ನಡೆಸುವ ವಿಧಿವಿಧಾನಗಳಂತೆ ಯಕ್ಷ
ವೇಷಧಾರಣೆಯಿರುತ್ತದೆ. ರಂಗದಲ್ಲಿ ಸಂಭಾಷಣೆ, ನೃತ್ಯ ಮೇಳಗಳಿದ್ದು ರಾತ್ರಿ
ಯೆಲ್ಲಾ ವರ್ಣರಂಜಿತವಾಗಿ ಜರಗುತ್ತದೆ.
{{gap}}ಕೋಲಂ ಅಂದರೆ ಅವಸ್ಥಾನುಕರಣ ಎಂದೇ ಅರ್ಥ, ವೇಷಧಾರಣೆ,
ಅಲಂಕಾರವೆಂಬುದಾಗಿಯೂ ಅದರ ವಿನಿಯೋಗವಿದೆ. ತಮ್ಮ ವ್ಯಕ್ತಿತ್ವವನ್ನು ಮರೆ
ಸುವುದಕ್ಕೆ ನಟರು ಮುಖವಾಡಗಳನ್ನು ಧರಿಸುತ್ತಾರೆ. ಕೋಲಂನಲ್ಲಿ ಮನುಷ್ಯ,
ದೇವತೆ, ಅಸುರ, ಯಕ್ಷ, ಕಿನ್ನರ, ನಾಗ, ಪಕ್ಷಿ, ಪ್ರಾಣಿವರ್ಗದ ಹಲವಾರು ಪಾತ್ರ
ಗಳು ಬರುತ್ತವೆ. ಇವೆಲ್ಲವುಗಳಿಗೆ ವಿವಿಧ ರೀತಿಯ ಮುಖವಾಡಗಳಿರುತ್ತವೆ.
ಒಂದೇ ಗುಣ ಸ್ವಭಾವದ ಪಾತ್ರಗಳಿಗೆ ಒಂದರ ಮುಖವಾಡವನ್ನು ಇನ್ನೊಂದಕ್ಕೆ<noinclude></noinclude>
mfy9eg0i91nnlj50bm59fegrctjefhv
ಪುಟ:ಯಕ್ಷಗಾನ ಮಕರಂದ.pdf/೮೫೪
104
100779
317799
293970
2026-05-07T03:17:32Z
Shreesha Sharma
7840
/* Validated */
317799
proofread-page
text/x-wiki
<noinclude><pagequality level="4" user="Shreesha Sharma" /></noinclude>{{Right|585}}
ಉಪಯೋಗಿಸುವುದೂ ಇದೆ. ಆ ವೇಷಭೂಷಣ,ಮುಖವಾಡದಿಂದ ಇದು
ಇಂತಹ ಪಾತ್ರವೆಂದು ಪ್ರೇಕ್ಷಕರು ಅರ್ಥ ಮಾಡಿಕೊಳ್ಳುತ್ತಾರೆ. ಕೊಲಂಗೆ ಸಂಬಂಧ
ಪಟ್ಟ ಪಠ್ಯ ಗ್ರಂಥವಿದೆ. ಯಕ್ಷಗಾನ ಬಯಲಾಟದ ಪೂರ್ವರಂಗ ವಿಧಿಯ ಪದ್ಧತಿ
ಇಲ್ಲ ಇದೆ. ಮುಖವಾಡಗಳು ಈಗೀಗ ಕಡಿಮೆಯಾಗುತ್ತಿವೆ. ಅಪರೂಪವಾದ
ವುಗಳನ್ನು ನಾವೀಗ ಮಸಿಯಂನಲ್ಲೇ ಕಾಣಬೇಕಾಗುತ್ತದೆ. ನಮ್ಮ ದೈವ
ದೇವರು, ಭೂತಾರಾಧನೆಯಲ್ಲಿರುವ 'ಮುಗ'ಗಳು ಮಾಯವಾಗಿ, ಯಕ್ಷಗಾನದ
ಮುಖವರ್ಣಿಕೆ ಬಂದಂತೆ ಅಲ್ಲಿ ಆಗುತ್ತಿದೆ. ಹಿಂದೆ ಡೋಲು ನುಡಿಸುವವರೂ
ಮುಖವಾಡ ಧರಿಸುತ್ತಿದ್ದರು. ನೊಂಚಿ ಎಂಬ ಹೆಸರಿನ ಅವನ ಪತ್ನಿಯು ಮುಖ
ವಾಡ ಧರಿಸಿ ಬರುತ್ತಾಳೆ. ಅವರೊಳಗೆ ಸಂಭಾಷಣೆ ಜರಗುತ್ತದೆ. ಇದು ಕೋಲಂ
ಕಾಠ್ಯಕ್ರಮದ ಸುದೀರ್ಘತೆಯನ್ನು ಮರೆಯಿಸುವುದಕ್ಕೆ. ಅಗಸ, ಅವನ ಸಹಾಯಕ
ಮತ್ತವನ ಪತ್ನಿಯ ಉಪಕಥೆ ಮಧ್ಯದಲ್ಲಿ ಬಂದು ಜನತೆಗೆ ಮನೋರಂಜನೆಯೊಂದಿಗೆ
ಪ್ರಚಲಿತ ವಿಚಾರವನ್ನು ತಿಳಿಸುವ ಕ್ರಮವಿದೆ. ಮುದಲಿ, ಆರಾಚಿ (ಗ್ರಾಮ
ಮುಖಂಡ), ಹೇವಯ (ಸೈನಿಕ), ರಾಜ, ರಾಣಿ, ರೈತ (ಕಲುವ), ಕಾಪಿರಿ
ಗಾನಿ (ನೀಗೊ ಮಹಿಳೆ), ಹೆಟ್ಟಿಯ (ಸಾಲಗಾರ) ಈ ಮುಖವಾಡಗಳೆಲ್ಲಾ ಪ್ರತಿ
ಯೊಂದು ಪಾತ್ರದ ಮುಖ್ಯ ಗುಣ ಸ್ವಭಾವವನ್ನು ತೋರಿಸಿಕೊಡುತ್ತವೆ. ತುಳು
ನಾಡಿನ ಭೂತಕೋಲಗಳನ್ನು ಈ ಕೋಲಂಗಳು ಹಲವು ರೀತಿಯಲ್ಲಿ ಹೋಲುತ್ತವೆ.
ಕೋಲಂಗೆ ಒಂದು ಮುಖ್ಯ ಪ್ರಸಂಗವಿರುತ್ತದೆ. ವಾದ್ಯಮೇಳದ ಉಗ್ಗಡಣೆ
ಯಲ್ಲಿಂದ ಪ್ರಸಂಗ ಪ್ರಾರಂಭವಾಗುವಲ್ಲಿಯ ವರೆಗಿನ ಅಂಶವನ್ನು, ನಮ್ಮ ಯಕ್ಷಗಾನ
ದಲ್ಲಿ ಮುಖ್ಯ ಭಾಗವತರು ಬರುವಲ್ಲಿಯ ವರೆಗೆ ಒತ್ತುಭಾಗವತರು (ಸಂಗೀತ
ಗಾರರು) ನಡೆಸುವ ಅಂಶಕ್ಕೆ ಹೋಲಿಸಬಹುದು. ಮುಂದೆ ಬರುವ ಯಕ್ಷ, ರಾಕ್ಷಸ,
ನಾಗಕೋಲು (ಮುಖವಾಡಗಳು ಅದ್ಭುತರಮ್ಯ ಪಾತ್ರಗಳಾಗಿ ನಮ್ಮನ್ನು ಕಾಲ್ಪ
ನಿಕ ಲೋಕಕ್ಕೆ ಕೊಂಡೊಯುತ್ತವೆ. ಈ ಪಾತ್ರಗಳ ಕಲ್ಪನೆಯನ್ನು ಪ್ರತಿಬಿಂಬಿಸು
ವುದಕ್ಕೆ ಮಾನವ ಮುಖಮುದ್ರೆಯು ಸಮರ್ಥವಾಗದ ಕಾರಣ ಮುಖವಾಡ
ಗಳೊಂದಿಗೆ ಇತರ ವೇಷಭೂಷಣಗಳು ಬೇಕಾಗುತ್ತವೆ.
{{gap}}ತೋವಿಲ್ ಅನ್ನುವ ಭೂತಾರಾಧನೆಯಲ್ಲಿಯ ಸನ್ನಿ ಮುಖವಾಡಗಳನ್ನು
ಉಪಯೋಗಿಸುತ್ತಾರೆ. ಸನ್ನಿ ಎಂದರೆ ರೋಗವೆಂದು ಅರ್ಥ, ಬರುವ ರೋಗ
ನಿವಾರಣೆಗೆ ಮಾಡುವ ತೊವಿಲ್ ಒಂದು ಪುಟ್ಟ ನಾಟಕೀಯ ಅಭಿನಯವಾಗಿ
ಕಾಣಿಸುತ್ತದೆ. ಇದರಲ್ಲಿ ಕೊನೆಯದಾಗಿ ಬರುವ 'ಗರಯಕವು ರಂಗಭೂಮಿಂ
ಯನ್ನು ಶುದ್ದೀಕರಿಸುತ್ತದೆ ಎಂಬ ನಂಬಿಕೆಯಿದೆ. ಮಂಗಲ ಹಾಡುವ ರೀತಿಯಲ್ಲಿ
ಈ ಗರಯಕದ ಪ್ರವೇಶ ನಿರ್ಗಮನವಿರುತ್ತದೆ.<noinclude></noinclude>
lqv656gqw6miktu2stv2fuend309y5m
ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು
4
101285
317640
317248
2026-05-06T13:20:31Z
A826
6806
317640
wikitext
text/x-wiki
{| class="wikitable sortable" style="text-align:center; width:100%; font-size:90%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 33954<br><small>ದತ್ತಾಂಶ ಪಡೆದ ಸಮಯ: 2026-05-06 13:19:10 UTC / 2026-05-06 18:49:10 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 8218 (8453) || 0 || 0 || 7961 || 100 (200) || 140 (420) || 8519 || '''8453'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 5982 (7561) || 0 || 0 || 4727 || 651 (1302) || 522 (1566) || 6301 || '''7561'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 2883 (3493) || 0 || 0 || 1995 || 276 (552) || 182 (546) || 3345 || '''3493'''
|-
| 4 || [[Special:Contributions/Sharanya K H|Sharanya K H]] || 0 || 0 || 3051 (3077) || 0 || 0 || 3032 || 18 (36) || 4 (12) || 3090 || '''3077'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 465 (1099) || 0 || 0 || 70 || 63 (126) || 327 (981) || 558 || '''1099'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 184 (230) || 24 || 0 || 3 || 2 (4) || 27 (81) || 10960 || '''252'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 10 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 11 || [[Special:Contributions/Vikashegde|Vikashegde]] || 0 || 0 || 27 (48) || 0 || 0 || 0 || 11 (22) || 8 (24) || 32 || '''48'''
|-
| 12 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 13 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 14 || [[Special:Contributions/Hariprasad Shetty10|Hariprasad Shetty10]] || 0 || 0 || 10 (18) || 0 || 0 || 0 || 0 (0) || 5 (15) || 46 || '''18'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:90%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
hgiym2do3obev4mvah8amrnyzm9zru2
317833
317640
2026-05-07T07:07:27Z
A826
6806
317833
wikitext
text/x-wiki
{| class="wikitable sortable" style="text-align:center; width:100%; font-size:90%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 33954<br><small>ದತ್ತಾಂಶ ಪಡೆದ ಸಮಯ: 2026-05-06 13:19:10 UTC / 2026-05-06 18:49:10 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 8218 (8453) || 0 || 0 || 7961 || 100 (200) || 140 (420) || 8519 || '''8453'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 5982 (7561) || 0 || 0 || 4727 || 651 (1302) || 522 (1566) || 6301 || '''7561'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 2883 (3493) || 0 || 0 || 1995 || 276 (552) || 182 (546) || 3345 || '''3493'''
|-
| 4 || [[Special:Contributions/Sharanya K H|Sharanya K H]] || 0 || 0 || 3051 (3077) || 0 || 0 || 3032 || 18 (36) || 4 (12) || 3090 || '''3077'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 465 (1099) || 0 || 0 || 70 || 63 (126) || 327 (981) || 558 || '''1099'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 184 (230) || 24 || 0 || 3 || 2 (4) || 27 (81) || 10960 || '''252'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 10 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 11 || [[Special:Contributions/Vikashegde|Vikashegde]] || 0 || 0 || 27 (48) || 0 || 0 || 0 || 11 (22) || 8 (24) || 32 || '''48'''
|-
| 12 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 13 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 14 || [[Special:Contributions/Hariprasad Shetty10|Hariprasad Shetty10]] || 0 || 0 || 10 (18) || 0 || 0 || 0 || 0 (0) || 5 (15) || 46 || '''18'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
igmyc7pqv9xnfrnkk7rffd4i8nt7e1d
317834
317833
2026-05-07T07:16:02Z
A826
6806
317834
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 34146<br><small>ದತ್ತಾಂಶ ಪಡೆದ ಸಮಯ: 2026-05-07 07:09:58 UTC / 2026-05-07 12:39:58 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 8245 (8512) || 0 || 0 || 7961 || 100 (200) || 167 (501) || 8560 || '''8512'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 6071 (7796) || 0 || 0 || 4727 || 676 (1352) || 586 (1758) || 6399 || '''7796'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 2893 (3554) || 0 || 0 || 1997 || 298 (596) || 197 (591) || 3385 || '''3554'''
|-
| 4 || [[Special:Contributions/Sharanya K H|Sharanya K H]] || 0 || 0 || 3051 (3077) || 0 || 0 || 3032 || 18 (36) || 4 (12) || 3090 || '''3077'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 473 (1115) || 0 || 0 || 70 || 63 (126) || 335 (1005) || 571 || '''1115'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 184 (230) || 24 || 0 || 3 || 2 (4) || 27 (81) || 10960 || '''252'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 10 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 11 || [[Special:Contributions/Vikashegde|Vikashegde]] || 0 || 0 || 27 (48) || 0 || 0 || 0 || 11 (22) || 8 (24) || 32 || '''48'''
|-
| 12 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 13 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 14 || [[Special:Contributions/Hariprasad Shetty10|Hariprasad Shetty10]] || 0 || 0 || 10 (18) || 0 || 0 || 0 || 0 (0) || 5 (15) || 46 || '''18'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
dx3ohc53pjiucgix0l2kpz8g0kfxp3h
ಪುಟ:ನಿತ್ಯ ನೇಮಾವಲಿ.pdf/೭೨
104
101886
317835
284259
2026-05-07T07:18:07Z
Shreelatha.Halemane
7642
/* Proofread */
317835
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಪ್ರಾತಃಕಾಲದ ಭಜನೆ}}
ಮೂರೂ ಲೋಕಗಳನ್ನೇ ತುಂಬಿಕೊಂಡಿದೆ. ಹರಿಹರರ ರೂಪಗಳು ಈ
ಬಿಂದುವಿನಲ್ಲಿ ಕಾಣಿಸಿ ಅಡಗುತ್ತವೆ. ಈ ಬಿಂದುವು ಮೂರೂ ಲೋಕಗಳನ್ನು
ತುಂಬಿಕೊಂಡಿದೆ ಎಂದು ತುಕಾರಾಮರು ಮತ್ತೊಮ್ಮೆ ಹೇಳುತ್ತಾರೆ.
{{center|೭}}
ಆನಂದು ಈ ಆಜಿ ಆನಂದು ರೇ।
ಸಬಾಹ್ಯ ಅಭ್ಯಂತರೀ ಅವಘಾ ಪರಮಾನಂದು ಈ ||೧||
ಏಕ ದೋನ ತೀನ ಜಾರ ಪಾಚ ಸಹಾ|
ಇತಕೇ ವಿಚಾರುನಿ ಅಂತರ ಶೋಧನಿಯಾ ಪಹಾ || ೨ ||
ಸಾತವಾ ರಾಮ ಆಥವಾ ವೇಳೋವೇಳಾ
ಬಾಪರಖುಮಾದೇವಿವರು ವಿಠಲ ಜವಳಾ||೩||
'''ಭಾವಾರ್ಥ''': ಇಂದು ಆನಂದವೇ ಆನಂದ; ಹೊರಗೆ ಒಳಗೆ ಎಲ್ಲೆಡೆಯಲ್ಲಿಯೂ
ಪರಮಾನಂದವು ತುಂಬಿತುಳುಕುತ್ತದೆ. ಮನವು ನಿರ್ವಿಕಾರವಾಯಿತಂದರೆ
ದೇವನು ದೂರ ಉಳಿಯನು. ಆದ್ದರಿಂದ ಅಂತರ್ನಿರೀಕ್ಷಣೆಯಿಂದ ಆರೂ
ವಿಕಾರಗಳನ್ನು ದೂರಮಾಡಿರಿ. ಏಳನೆಯವನಾದ ದೇವನನ್ನು
ಮೇಲಿಂದಮೇಲೆ ನೆನೆಯಿರಿ. ಆಗ ವಿಠಲನು ಹತ್ತಿರವೇ ಇರುತ್ತಾನೆ ಎಂದು
ಜ್ಞಾನೇಶ್ವರರು ಹೇಳುತ್ತಾರೆ.
{{center|೭೧}}<noinclude></noinclude>
h7il7x980x5pk91p0wrdbyxzdk59zto
ಪುಟ:ನಿತ್ಯ ನೇಮಾವಲಿ.pdf/೭೩
104
101888
317836
284261
2026-05-07T07:21:13Z
Shreelatha.Halemane
7642
/* Proofread */
317836
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}}
{{center|೮}}
ಕೃಪಾಳು ಸಜ್ಜನ ತುಮ್ಹೀ ಸಂತಜನ|
ಹೇಚಿ ಕೃಪಾದಾನ ದ್ಯಾವೇ ಮಜ||೧||
ಆಠವಣ ತುಮ್ಹೀ ದ್ಯಾವೀ ಪಾಂಡುರಂಗಾ|
ದೇವಾ ಮಾಝೀ ಸಾಂಗಾ ಕಾಕುಳತೀ||೨||
ಅನಾಥ ಅಪರಾಧೀ ಪತಿತ ಆಗಳಾ|
ಪರಿ ಪಾಯಾವೇಗಳಾ ನಕಾ ಕರೂ||೩||
ತುಕಾ ಮ್ಹಣೇ ತುಮ್ಹೀ ನಿರವಿಲ್ಯಾವರೀ|
ಮಗ ಮಜ ಹರಿ ಉಪೇಕ್ಷ್ಮೀನಾ|||೪||
'''ಭಾವಾರ್ಥ''': ಕೃಪಾಳುವಾದ ಸಂತಸಜ್ಜನರೇ, ಇದನ್ನೇ ನನಗೆ ಕೃಪಾದಾನವಾಗಿ
ಕೊಡಿರಿ. (ಏನೆಂದರೆ) ಪಾಂಡುರಂಗನಿಗೆ ನನ್ನ ನೆನಪುಕೊಡಿರಿ, ದೇವನಿಗೆ
ನನ್ನ ಕಳಕಳಿಯ ಪ್ರಾರ್ಥನೆಯನ್ನು ಅರುಹಿರಿ, ನಾನು ಅನ್ಯಾಯವನ್ನೆಸಗಿದ್ದೇನೆ.
ಅನಾಥನಾಗಿ ನಿಮಗೆ ಶರಣು ಬಂದಿದ್ದೇನೆ. ನಾನು ಅಪರಾಧಿಯೂ ಅತ್ಯಂತ
ಪತಿತನೂ ಆಗಿದ್ದರೂ ನನ್ನನ್ನು ನಿಮ್ಮ ಚರಣಗಳಿಂದ ದೂರಮಾಡಬೇಡಿರಿ.
ನೀವು ಪಾಂಡುರಂಗನಿಗೆ ನನ್ನಬಗ್ಗೆ ಹೇಳಿದಿರಾದರೆ ದೇವನು ನನ್ನನ
ಉಪೇಕ್ಷಿಸನು ಎಂದು ತುಕಾರಾಮರೆನ್ನುತ್ತಾರೆ.
{{center|೭೨}}<noinclude></noinclude>
fduaz9598rikzb8lk799a1izz900k7m
ಪುಟ:ನಿತ್ಯ ನೇಮಾವಲಿ.pdf/೭೪
104
101890
317837
284263
2026-05-07T07:25:55Z
Shreelatha.Halemane
7642
/* Proofread */
317837
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಪ್ರಾತಃಕಾಲದ ಭಜನೆ}}
{{center|೯}}
ನಾಮ ವಾಚೇ ಶ್ರವಣ್ ಕೀರ್ತಿ|
ಪಾವೂಲೇ ಚಿತ್ತೀ ಸಮಾನ||೧||
ಕಾಳ ಸಾರ್ಥಕ ಕಲ್ಯಾ ತ್ಯಾನೀ|
ಧರಿಲಾ 'ಮನೀ ವಿಠಲ||೨||
ಕೀರ್ತನಾಚಾ ಸಮಾರಂಭ|
ನಿರ್ಧ್ವಂದ್ವ ಸರ್ವದಾ||೩||
ನಿಳಾ ಮಹ್ಣೇ ಸ್ವರೂಪಸಿದ್ಧಿ|
ನಿತ್ಯ ಸಮಾಧಿ ಹರಿನಾಮ||೪||
ಭಾವಾರ್ಥ: ಮುಖದಲ್ಲಿ ಸದಾ ನಾಮವಿದ್ದು, ಕಿವಿಯಿಂದ ದೇವರ (ಗುರುಗಳ)
ಕೀರ್ತಿ ಕೇಳುತ್ತ ಚಿತ್ತದಲ್ಲಿ ದೇವನ ಸಮಚರಣಗಳನ್ನು ಕಾಣುತ್ತಿದ್ದು, ಮನದಲ್ಲಿ
ವಿಠಲನನ್ನು ಹಿಡಿದಿರುವವನು, ಜನ್ಮಸಾರ್ಥಕ ಮಾಡಿಕೊಳ್ಳುತ್ತಾನೆ. ಹರಿಯ
ನಾಮಸ್ಮರಣೆಯಿಂದ ಯಾವಾಗಲೂ ಕೀರ್ತನದಲ್ಲಿ ನಿರ್ಧ್ವಂದ್ವ
ಸ್ಥಿತಿಯಲ್ಲಿರುತ್ತಾನೆ. ಆತ್ಮಸ್ವರೂಪದ ಸಾಕ್ಷಾತ್ಕಾರಕ್ಕಾಗಿ ಯಾವಾಗಲೂ ಆ
ಅನುಭವದಲ್ಲಿಯೇ ತಲ್ಲೀನನಾಗಿರುತ್ತಾನೆಂದು ನಿಳೋಬಾ ಹೇಳುತ್ತಾರೆ.
{{center|೧೦}}
ಅಮ್ಹೀ ವೈಕುಂಠವಾಸೀ ಆಲೋ ಯಾಚಿ ಕಾರಣಾಸೀ|
ಬೊಲಿಲೇ ಜೇ ಋಷಿ| ಸಾಚ ಭಾವೇ ವರ್ತಾಯಾ ||೧||
{{center|೭೩}}<noinclude></noinclude>
ow774mrv9izy51wjykgmrcorb6zyjjr
317838
317837
2026-05-07T07:26:18Z
Shreelatha.Halemane
7642
317838
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಪ್ರಾತಃಕಾಲದ ಭಜನೆ}}
{{center|೯}}
ನಾಮ ವಾಚೇ ಶ್ರವಣ್ ಕೀರ್ತಿ|
ಪಾವೂಲೇ ಚಿತ್ತೀ ಸಮಾನ||೧||
ಕಾಳ ಸಾರ್ಥಕ ಕಲ್ಯಾ ತ್ಯಾನೀ|
ಧರಿಲಾ 'ಮನೀ ವಿಠಲ||೨||
ಕೀರ್ತನಾಚಾ ಸಮಾರಂಭ|
ನಿರ್ಧ್ವಂದ್ವ ಸರ್ವದಾ||೩||
ನಿಳಾ ಮಹ್ಣೇ ಸ್ವರೂಪಸಿದ್ಧಿ|
ನಿತ್ಯ ಸಮಾಧಿ ಹರಿನಾಮ||೪||
ಭಾವಾರ್ಥ: ಮುಖದಲ್ಲಿ ಸದಾ ನಾಮವಿದ್ದು, ಕಿವಿಯಿಂದ ದೇವರ (ಗುರುಗಳ)
ಕೀರ್ತಿ ಕೇಳುತ್ತ ಚಿತ್ತದಲ್ಲಿ ದೇವನ ಸಮಚರಣಗಳನ್ನು ಕಾಣುತ್ತಿದ್ದು, ಮನದಲ್ಲಿ
ವಿಠಲನನ್ನು ಹಿಡಿದಿರುವವನು, ಜನ್ಮಸಾರ್ಥಕ ಮಾಡಿಕೊಳ್ಳುತ್ತಾನೆ. ಹರಿಯ
ನಾಮಸ್ಮರಣೆಯಿಂದ ಯಾವಾಗಲೂ ಕೀರ್ತನದಲ್ಲಿ ನಿರ್ಧ್ವಂದ್ವ
ಸ್ಥಿತಿಯಲ್ಲಿರುತ್ತಾನೆ. ಆತ್ಮಸ್ವರೂಪದ ಸಾಕ್ಷಾತ್ಕಾರಕ್ಕಾಗಿ ಯಾವಾಗಲೂ ಆ
ಅನುಭವದಲ್ಲಿಯೇ ತಲ್ಲೀನನಾಗಿರುತ್ತಾನೆಂದು ನಿಳೋಬಾ ಹೇಳುತ್ತಾರೆ.
{{center|೧೦}}
ಅಮ್ಹೀ ವೈಕುಂಠವಾಸೀ ಆಲೋ ಯಾಚಿ ಕಾರಣಾಸೀ|
ಬೊಲಿಲೇ ಜೇ ಋಷಿ| ಸಾಚ ಭಾವೇ ವರ್ತಾಯಾ ||೧||
{{center|೭೩}}<noinclude></noinclude>
7ea7u7tyxucf9oyw9brpz8cx7i8eawv
ಪುಟ:ನಿತ್ಯ ನೇಮಾವಲಿ.pdf/೭೫
104
101891
317839
284264
2026-05-07T07:29:16Z
Shreelatha.Halemane
7642
/* Proofread */
317839
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}}
ದೇವನಲ್ಲಿ
ಝಾಡೂ ಸಂತಾಂಚೆ ಮಾರಗ| ಆಡರಾನೀ ಭರಲೇ ಜಗ|
ಉಚ್ಛಿಷ್ಟಾಚಾ ಭಾಗ। ಶೇಷ ಉರಲಾ ತೊ ಸೇವೂ||೨||
ಅರ್ಥ ಲೋಪಲೀ ಪುರಾಣೇ| ನಾಶಕೀಲಾ ಶಬ್ದಜ್ಞಾನೇ।
ವಿಷಯಲೋಭೀ ಮನೇ| ಸಾಧನೇ ಬುಡವಿಲೀ||೩||
ಪಿಟೂ ಭಕ್ತಿಚಾ ಡಾಂಗೋರಾ| ಕಳಿಕಾಳಾಸೀ ದರಾರಾ।
ತುಕಾ ಮ್ಹಣೇ ಕರಾ| ಜಯಜಯಕಾರ ಆನಂದೇ||೪||
'''ಭಾವಾರ್ಥ''': ನಾವು ವೈಕುಂಠವಾಸಿಗಳು, ಎಂದರೆ ದೇವನಲ್ಲಿ
ಲೀನರಾದಂಥವರು. ಹಿಂದೆ ಆಗಿಹೋದ ಋಷಿಮುನಿಗಳು ಹೇಳಿದಂತೆ
ಸತ್ಯಮಾರ್ಗದಲ್ಲಿ ನಡೆದು ಜನರಿಗೆ ನೈತಿಕ ಆದರ್ಶವನ್ನು ನೀಡುವದಕ್ಕಾಗಿಯೇ
ನಾವು ಇಲ್ಲಿಗೆ ಬಂದಿದ್ದೇವೆ. ಸಂತಪ್ರಣೀತ ಸಾಕ್ಷಾತ್ಕಾರ ಮಾರ್ಗದಲ್ಲಿ ಜನರು
ಹೋಗುತ್ತಿರುವುದಿಲ್ಲ. ಅಲ್ಲಿ ಕಲ್ಲುಮುಳ್ಳುಗಳು ಬಿದ್ದಿವೆ. ಅದನ್ನು ಉಡುಗಿ
ಸ್ವಚ್ಛಮಾಡೋಣ. ಅಡ್ಡದಾರಿಯಲ್ಲಿ ಜನರು ತುಂಬಿಕೊಂಡಿದ್ದಾರೆ.
ಆತ್ಮಸಾಕ್ಷಾತ್ಕಾರವನ್ನು ಪಡೆದ ಸಂತರ ಮುಖದಿಂದಬಂದ ನಾಮವನ್ನು
ಸೇವಿಸೋಣ. ಅವರು ನಮಗಾಗಿ ಉಳಿಸಿದ ಭಾಗವನ್ನು ಎಂದರೆ
ಉಪದೇಶವನ್ನು ಸ್ವೀಕರಿಸೋಣ. ಪುರಾಣಗಳ ನಿಜವಾದ ಅರ್ಥವು
ಲುಪ್ತವಾಗಿ ಹೋಗಿದೆ. ಶಬ್ದಜ್ಞಾನವು ವಿನಾಶಕ್ಕೆ ಕಾರಣವಾಗಿದೆ. ಮನವು
ವಿಷಯಲಾಲಸೆಯುಳ್ಳದ್ದಾಗಿದೆ. ಆದ್ದರಿಂದ ಶ್ರವಣ, ನಾಮಸ್ಮರಣೆ
ಮೊದಲಾದ ಸಾಧನಗಳು ಮುಳುಗಿಹೋಗಿವೆ. ಭಕ್ತಿಯಡಂಗುರ ಸಾರೋಣ.
{{center|೭೪}}<noinclude></noinclude>
4z8tdlhr3lwkuydkis0ttlmwgp1rrwa
317882
317839
2026-05-07T10:05:40Z
Ashwini Rai K
8475
/* Validated */
317882
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}}
ದೇವನಲ್ಲಿ
ಝಾಡೂ ಸಂತಾಂಚೆ ಮಾರಗ| ಆಡರಾನೀ ಭರಲೇ ಜಗ|
ಉಚ್ಛಿಷ್ಟಾಚಾ ಭಾಗ। ಶೇಷ ಉರಲಾ ತೊ ಸೇವೂ||೨||
ಅರ್ಥ ಲೋಪಲೀ ಪುರಾಣೇ| ನಾಶಕೀಲಾ ಶಬ್ದಜ್ಞಾನೇ।
ವಿಷಯಲೋಭೀ ಮನೇ| ಸಾಧನೇ ಬುಡವಿಲೀ||೩||
ಪಿಟೂ ಭಕ್ತಿಚಾ ಡಾಂಗೋರಾ| ಕಳಿಕಾಳಾಸೀ ದರಾರಾ।
ತುಕಾ ಮ್ಹಣೇ ಕರಾ| ಜಯಜಯಕಾರ ಆನಂದೇ||೪||
'''ಭಾವಾರ್ಥ''': ನಾವು ವೈಕುಂಠವಾಸಿಗಳು, ಎಂದರೆ ದೇವನಲ್ಲಿ
ಲೀನರಾದಂಥವರು. ಹಿಂದೆ ಆಗಿಹೋದ ಋಷಿಮುನಿಗಳು ಹೇಳಿದಂತೆ
ಸತ್ಯಮಾರ್ಗದಲ್ಲಿ ನಡೆದು ಜನರಿಗೆ ನೈತಿಕ ಆದರ್ಶವನ್ನು ನೀಡುವದಕ್ಕಾಗಿಯೇ
ನಾವು ಇಲ್ಲಿಗೆ ಬಂದಿದ್ದೇವೆ. ಸಂತಪ್ರಣೀತ ಸಾಕ್ಷಾತ್ಕಾರ ಮಾರ್ಗದಲ್ಲಿ ಜನರು
ಹೋಗುತ್ತಿರುವುದಿಲ್ಲ. ಅಲ್ಲಿ ಕಲ್ಲುಮುಳ್ಳುಗಳು ಬಿದ್ದಿವೆ. ಅದನ್ನು ಉಡುಗಿ
ಸ್ವಚ್ಛಮಾಡೋಣ. ಅಡ್ಡದಾರಿಯಲ್ಲಿ ಜನರು ತುಂಬಿಕೊಂಡಿದ್ದಾರೆ.
ಆತ್ಮಸಾಕ್ಷಾತ್ಕಾರವನ್ನು ಪಡೆದ ಸಂತರ ಮುಖದಿಂದಬಂದ ನಾಮವನ್ನು
ಸೇವಿಸೋಣ. ಅವರು ನಮಗಾಗಿ ಉಳಿಸಿದ ಭಾಗವನ್ನು ಎಂದರೆ
ಉಪದೇಶವನ್ನು ಸ್ವೀಕರಿಸೋಣ. ಪುರಾಣಗಳ ನಿಜವಾದ ಅರ್ಥವು
ಲುಪ್ತವಾಗಿ ಹೋಗಿದೆ. ಶಬ್ದಜ್ಞಾನವು ವಿನಾಶಕ್ಕೆ ಕಾರಣವಾಗಿದೆ. ಮನವು
ವಿಷಯಲಾಲಸೆಯುಳ್ಳದ್ದಾಗಿದೆ. ಆದ್ದರಿಂದ ಶ್ರವಣ, ನಾಮಸ್ಮರಣೆ
ಮೊದಲಾದ ಸಾಧನಗಳು ಮುಳುಗಿಹೋಗಿವೆ. ಭಕ್ತಿಯಡಂಗುರ ಸಾರೋಣ.
{{center|೭೪}}<noinclude></noinclude>
3tgruqt23d9ksxanq9bncre735felpt
ಪುಟ:ನಿತ್ಯ ನೇಮಾವಲಿ.pdf/೭೬
104
101893
317840
284266
2026-05-07T07:32:17Z
Shreelatha.Halemane
7642
/* Proofread */
317840
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}}
ದೇವರನಾಮದ ಜಯಘೋಷ ಮಾಡೋಣ. ಅದು ಯಮನ (ಕಾಲನ)
ಹೃದಯದಲ್ಲಿ ಭೀತಿಯನ್ನುಂಟುಮಾಡುವುದು; ಆನಂದದಿಂದ ಜಯಜಯಕಾರ
ಮಾಡುವಾ ಅಂತ ತುಕಾರಾಮರು ಹೇಳುತ್ತಾರೆ.
{{center|೧೧}}
ಗುರು ಪರಮಾತ್ಮಾ ಪರೇಶು|
ಹಾಚಿ ಜ್ಯಾಚಾ ದೃಢ ವಿಶ್ವಾಸೂ||
ದೇವ ತಯಾಚಾ ಅಂಕಿಲಾ|
ಸ್ವಯೇ ತ್ಯಾಚೇ ಘರೀ ಸಂಚಲಾ||
ಏಕಾಜನಾರ್ದನೀ ಗುರು ದೇವ|
ಏಥ ನಾಹೀ ಬಾ ಸಂಶಯ।।
'''ಭಾವಾರ್ಥ''': ಗುರುವೇ ಪರಮಾತ್ಮ, ಪರದೈವವೆಂದು, ವಿಶ್ವಾಸವಿಟ್ಟವನ
ಅಂಕಿತನಾಗಿರುತ್ತಾನೆ ದೇವನು. ಅಂಥ ಭಕ್ತನ ಮನೆಯಲ್ಲಿ ದೇವನು
ವಾಸವಾಗಿರುತ್ತಾನೆಂಬುದರಲ್ಲಿ ಸಂಶಯವಿಲ್ಲವೆಂದು ಏಕನಾಥರು ಹೇಳುತ್ತಾರೆ.
{{center|ಮಧ್ಯಾಹ್ನದ ಭಜನೆ (ಭಾಗ-೧)}}
ನಾಮ ಭಜೇ ಗುರುನಾಮ ಭಜೇ ಹರನಾಮ ಭಜ
ಶಿವನಾಮ ಭಜೇ||ಪಲ್ಲ ||
{{center|೭೫}}<noinclude></noinclude>
8zufzi77nphmc8qu9ryik6qrs81a1ss
317877
317840
2026-05-07T10:01:25Z
Ashwini Rai K
8475
/* Validated */
317877
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}}
ದೇವರನಾಮದ ಜಯಘೋಷ ಮಾಡೋಣ. ಅದು ಯಮನ (ಕಾಲನ)
ಹೃದಯದಲ್ಲಿ ಭೀತಿಯನ್ನುಂಟುಮಾಡುವುದು; ಆನಂದದಿಂದ ಜಯಜಯಕಾರ
ಮಾಡುವಾ ಅಂತ ತುಕಾರಾಮರು ಹೇಳುತ್ತಾರೆ.
{{center|೧೧}}<br />
{{center|ಗುರು ಪರಮಾತ್ಮಾ ಪರೇಶು|}}<br />
{{center|ಹಾಚಿ ಜ್ಯಾಚಾ ದೃಢ ವಿಶ್ವಾಸೂ||}}<br />
ದೇವ ತಯಾಚಾ ಅಂಕಿಲಾ|
ಸ್ವಯೇ ತ್ಯಾಚೇ ಘರೀ ಸಂಚಲಾ||
ಏಕಾಜನಾರ್ದನೀ ಗುರು ದೇವ|
ಏಥ ನಾಹೀ ಬಾ ಸಂಶಯ।।
'''ಭಾವಾರ್ಥ''': ಗುರುವೇ ಪರಮಾತ್ಮ, ಪರದೈವವೆಂದು, ವಿಶ್ವಾಸವಿಟ್ಟವನ
ಅಂಕಿತನಾಗಿರುತ್ತಾನೆ ದೇವನು. ಅಂಥ ಭಕ್ತನ ಮನೆಯಲ್ಲಿ ದೇವನು
ವಾಸವಾಗಿರುತ್ತಾನೆಂಬುದರಲ್ಲಿ ಸಂಶಯವಿಲ್ಲವೆಂದು ಏಕನಾಥರು ಹೇಳುತ್ತಾರೆ.
{{center|ಮಧ್ಯಾಹ್ನದ ಭಜನೆ (ಭಾಗ-೧)}}
ನಾಮ ಭಜೇ ಗುರುನಾಮ ಭಜೇ ಹರನಾಮ ಭಜ
ಶಿವನಾಮ ಭಜೇ||ಪಲ್ಲ ||
{{center|೭೫}}<noinclude></noinclude>
sllozib7vtey55vnmh34tenvi8u3na1
317878
317877
2026-05-07T10:02:42Z
Ashwini Rai K
8475
317878
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}}
ದೇವರನಾಮದ ಜಯಘೋಷ ಮಾಡೋಣ. ಅದು ಯಮನ (ಕಾಲನ)
ಹೃದಯದಲ್ಲಿ ಭೀತಿಯನ್ನುಂಟುಮಾಡುವುದು; ಆನಂದದಿಂದ ಜಯಜಯಕಾರ
ಮಾಡುವಾ ಅಂತ ತುಕಾರಾಮರು ಹೇಳುತ್ತಾರೆ.
{{center|೧೧}}<br />
{{center|ಗುರು ಪರಮಾತ್ಮಾ ಪರೇಶು|}}
{{center|ಹಾಚಿ ಜ್ಯಾಚಾ ದೃಢ ವಿಶ್ವಾಸೂ||}}
{{center|ದೇವ ತಯಾಚಾ ಅಂಕಿಲಾ|}}
{{center|ಸ್ವಯೇ ತ್ಯಾಚೇ ಘರೀ ಸಂಚಲಾ||}}
{{center|ಏಕಾಜನಾರ್ದನೀ ಗುರು ದೇವ|}}
{{center|ಏಥ ನಾಹೀ ಬಾ ಸಂಶಯ।।}}
'''ಭಾವಾರ್ಥ''': ಗುರುವೇ ಪರಮಾತ್ಮ, ಪರದೈವವೆಂದು, ವಿಶ್ವಾಸವಿಟ್ಟವನ
ಅಂಕಿತನಾಗಿರುತ್ತಾನೆ ದೇವನು. ಅಂಥ ಭಕ್ತನ ಮನೆಯಲ್ಲಿ ದೇವನು
ವಾಸವಾಗಿರುತ್ತಾನೆಂಬುದರಲ್ಲಿ ಸಂಶಯವಿಲ್ಲವೆಂದು ಏಕನಾಥರು ಹೇಳುತ್ತಾರೆ.
{{center|ಮಧ್ಯಾಹ್ನದ ಭಜನೆ (ಭಾಗ-೧)}}
ನಾಮ ಭಜೇ ಗುರುನಾಮ ಭಜೇ ಹರನಾಮ ಭಜ
ಶಿವನಾಮ ಭಜೇ||ಪಲ್ಲ ||
{{center|೭೫}}<noinclude></noinclude>
o2ak06v974optjqvsolqonp1mo4w9e2
317879
317878
2026-05-07T10:03:42Z
Ashwini Rai K
8475
317879
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}}
ದೇವರನಾಮದ ಜಯಘೋಷ ಮಾಡೋಣ. ಅದು ಯಮನ (ಕಾಲನ)
ಹೃದಯದಲ್ಲಿ ಭೀತಿಯನ್ನುಂಟುಮಾಡುವುದು; ಆನಂದದಿಂದ ಜಯಜಯಕಾರ
ಮಾಡುವಾ ಅಂತ ತುಕಾರಾಮರು ಹೇಳುತ್ತಾರೆ.
{{center|೧೧}}<br />
{{center|ಗುರು ಪರಮಾತ್ಮಾ ಪರೇಶು||}}
{{center|ಹಾಚಿ ಜ್ಯಾಚಾ ದೃಢ ವಿಶ್ವಾಸೂ|||}}
{{center|ದೇವ ತಯಾಚಾ ಅಂಕಿಲಾ||}}
{{center|ಸ್ವಯೇ ತ್ಯಾಚೇ ಘರೀ ಸಂಚಲಾ||}}
{{center|ಏಕಾಜನಾರ್ದನೀ ಗುರು ದೇವ||}}
{{center|ಏಥ ನಾಹೀ ಬಾ ಸಂಶಯ|।।}}
'''ಭಾವಾರ್ಥ''': ಗುರುವೇ ಪರಮಾತ್ಮ, ಪರದೈವವೆಂದು, ವಿಶ್ವಾಸವಿಟ್ಟವನ
ಅಂಕಿತನಾಗಿರುತ್ತಾನೆ ದೇವನು. ಅಂಥ ಭಕ್ತನ ಮನೆಯಲ್ಲಿ ದೇವನು
ವಾಸವಾಗಿರುತ್ತಾನೆಂಬುದರಲ್ಲಿ ಸಂಶಯವಿಲ್ಲವೆಂದು ಏಕನಾಥರು ಹೇಳುತ್ತಾರೆ.
{{center|ಮಧ್ಯಾಹ್ನದ ಭಜನೆ (ಭಾಗ-೧)}}
ನಾಮ ಭಜೇ ಗುರುನಾಮ ಭಜೇ ಹರನಾಮ ಭಜ
ಶಿವನಾಮ ಭಜೇ||ಪಲ್ಲ ||
{{center|೭೫}}<noinclude></noinclude>
cea10a9swdpv68ykgl5bj77qmiocdne
317880
317879
2026-05-07T10:04:30Z
Ashwini Rai K
8475
317880
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}}
ದೇವರನಾಮದ ಜಯಘೋಷ ಮಾಡೋಣ. ಅದು ಯಮನ (ಕಾಲನ)
ಹೃದಯದಲ್ಲಿ ಭೀತಿಯನ್ನುಂಟುಮಾಡುವುದು; ಆನಂದದಿಂದ ಜಯಜಯಕಾರ
ಮಾಡುವಾ ಅಂತ ತುಕಾರಾಮರು ಹೇಳುತ್ತಾರೆ.
{{center|೧೧}}<br />
{{center|ಗುರು ಪರಮಾತ್ಮಾ ಪರೇಶು|}}|
{{center|ಹಾಚಿ ಜ್ಯಾಚಾ ದೃಢ ವಿಶ್ವಾಸೂ||}}|
{{center|ದೇವ ತಯಾಚಾ ಅಂಕಿಲಾ||}}|
{{center|ಸ್ವಯೇ ತ್ಯಾಚೇ ಘರೀ ಸಂಚಲಾ||}}
{{center|ಏಕಾಜನಾರ್ದನೀ ಗುರು ದೇವ||}}|
{{center|ಏಥ ನಾಹೀ ಬಾ ಸಂಶಯ|।।}}||
'''ಭಾವಾರ್ಥ''': ಗುರುವೇ ಪರಮಾತ್ಮ, ಪರದೈವವೆಂದು, ವಿಶ್ವಾಸವಿಟ್ಟವನ
ಅಂಕಿತನಾಗಿರುತ್ತಾನೆ ದೇವನು. ಅಂಥ ಭಕ್ತನ ಮನೆಯಲ್ಲಿ ದೇವನು
ವಾಸವಾಗಿರುತ್ತಾನೆಂಬುದರಲ್ಲಿ ಸಂಶಯವಿಲ್ಲವೆಂದು ಏಕನಾಥರು ಹೇಳುತ್ತಾರೆ.
{{center|ಮಧ್ಯಾಹ್ನದ ಭಜನೆ (ಭಾಗ-೧)}}
ನಾಮ ಭಜೇ ಗುರುನಾಮ ಭಜೇ ಹರನಾಮ ಭಜ
ಶಿವನಾಮ ಭಜೇ||ಪಲ್ಲ ||
{{center|೭೫}}<noinclude></noinclude>
nhfhwuqoba6opt9gvaeqwvee9f9f79c
317881
317880
2026-05-07T10:05:16Z
Ashwini Rai K
8475
317881
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}}
ದೇವರನಾಮದ ಜಯಘೋಷ ಮಾಡೋಣ. ಅದು ಯಮನ (ಕಾಲನ)
ಹೃದಯದಲ್ಲಿ ಭೀತಿಯನ್ನುಂಟುಮಾಡುವುದು; ಆನಂದದಿಂದ ಜಯಜಯಕಾರ
ಮಾಡುವಾ ಅಂತ ತುಕಾರಾಮರು ಹೇಳುತ್ತಾರೆ.
{{center|೧೧}}<br />
{{center|ಗುರು ಪರಮಾತ್ಮಾ ಪರೇಶು|}}
{{center|ಹಾಚಿ ಜ್ಯಾಚಾ ದೃಢ ವಿಶ್ವಾಸೂ||}}
{{center|ದೇವ ತಯಾಚಾ ಅಂಕಿಲಾ||}}
{{center|ಸ್ವಯೇ ತ್ಯಾಚೇ ಘರೀ ಸಂಚಲಾ||}}
{{center|ಏಕಾಜನಾರ್ದನೀ ಗುರು ದೇವ||}}
{{center|ಏಥ ನಾಹೀ ಬಾ ಸಂಶಯ|।।}}
'''ಭಾವಾರ್ಥ''': ಗುರುವೇ ಪರಮಾತ್ಮ, ಪರದೈವವೆಂದು, ವಿಶ್ವಾಸವಿಟ್ಟವನ
ಅಂಕಿತನಾಗಿರುತ್ತಾನೆ ದೇವನು. ಅಂಥ ಭಕ್ತನ ಮನೆಯಲ್ಲಿ ದೇವನು
ವಾಸವಾಗಿರುತ್ತಾನೆಂಬುದರಲ್ಲಿ ಸಂಶಯವಿಲ್ಲವೆಂದು ಏಕನಾಥರು ಹೇಳುತ್ತಾರೆ.
{{center|ಮಧ್ಯಾಹ್ನದ ಭಜನೆ (ಭಾಗ-೧)}}
ನಾಮ ಭಜೇ ಗುರುನಾಮ ಭಜೇ ಹರನಾಮ ಭಜ
ಶಿವನಾಮ ಭಜೇ||ಪಲ್ಲ ||
{{center|೭೫}}<noinclude></noinclude>
rr2g0jm8t8xcugfd66z2jkd0zlzo69s
ಪುಟ:ನಿತ್ಯ ನೇಮಾವಲಿ.pdf/೭೭
104
101895
317841
284268
2026-05-07T07:41:13Z
Shreelatha.Halemane
7642
/* Proofread */
317841
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}}
ಕಹೋ ಕಹೋ ಜೀ ಗುರುಭಜನಕಾ
ಕರ್ಣರಂಧ್ರ ಮೇರೇ ಸುನತಾ ಹೈ।
ನವ ದರವಾಜೇ ಬಂದ ಕಿಯೇ ತೋ
ದಶವಿಧ ನಾದ ಬಜತಾ ಹೈ||೧||
ಅಜಬ ಬಜಾಯಾ ಮೌಲಿ ದೇಖೋ
ಸದಾಶಿವಕೋ ಸುನತಾ ಹೈ।
ಆದಿ ಪೂರಸೆ ಫೇರೇ ಫಿರಸೇ
ಸಹಸ್ರಾರಪರ ನಾದ ಬಜತಾ ಹೈ||೨||
ಏಕ ಅಕ್ಷರಕಾ ಮಾರ್ಗ ಜಾನಿಲಾ
ದುಸರೇ ಉಸಮೇ ನ್ಯಾರಾ ಹೈ।
ದೋ ಅಕ್ಷರಕಾ ಮಾರ್ಗ ಮಿಲೇ ತೋ
ಫಿರನೇ ನ್ಯಾರಾ ಹೋತಾ ಹೈ||೩||
ತೀನ ಅಕ್ಷರಕಾ ಮಾರ್ಗ ಜಾನಿಲಾ
ತೀನ ಮೂರ್ತಿಕಾ ಹೋತಾ ಹೈ।
ನಾದಬಿಂದುಕಲ ಏಕ ಬನಾ ತೋ
ದುನಿಯಾ ಡುಬಕರ ಪಿಚಡೇ ಹೈ||೪||
ಚಿಂತಾ ಕರಕರ ದೇಖೋ ದಿಲಪರ
ತೀನ ಗುಣಮೇ ನ್ಯಾರಾ ಹೈ।
{{center|೭೬}}<noinclude></noinclude>
jzlnrnldfosyg7c6tp8lmc0wpt88iri
317876
317841
2026-05-07T09:59:30Z
Ashwini Rai K
8475
/* Validated */
317876
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}}
ಕಹೋ ಕಹೋ ಜೀ ಗುರುಭಜನಕಾ
ಕರ್ಣರಂಧ್ರ ಮೇರೇ ಸುನತಾ ಹೈ।
ನವ ದರವಾಜೇ ಬಂದ ಕಿಯೇ ತೋ
ದಶವಿಧ ನಾದ ಬಜತಾ ಹೈ||೧||
ಅಜಬ ಬಜಾಯಾ ಮೌಲಿ ದೇಖೋ
ಸದಾಶಿವಕೋ ಸುನತಾ ಹೈ।
ಆದಿ ಪೂರಸೆ ಫೇರೇ ಫಿರಸೇ
ಸಹಸ್ರಾರಪರ ನಾದ ಬಜತಾ ಹೈ||೨||
ಏಕ ಅಕ್ಷರಕಾ ಮಾರ್ಗ ಜಾನಿಲಾ
ದುಸರೇ ಉಸಮೇ ನ್ಯಾರಾ ಹೈ।
ದೋ ಅಕ್ಷರಕಾ ಮಾರ್ಗ ಮಿಲೇ ತೋ
ಫಿರನೇ ನ್ಯಾರಾ ಹೋತಾ ಹೈ||೩||
ತೀನ ಅಕ್ಷರಕಾ ಮಾರ್ಗ ಜಾನಿಲಾ
ತೀನ ಮೂರ್ತಿಕಾ ಹೋತಾ ಹೈ।
ನಾದಬಿಂದುಕಲ ಏಕ ಬನಾ ತೋ
ದುನಿಯಾ ಡುಬಕರ ಪಿಚಡೇ ಹೈ||೪||
ಚಿಂತಾ ಕರಕರ ದೇಖೋ ದಿಲಪರ
ತೀನ ಗುಣಮೇ ನ್ಯಾರಾ ಹೈ।
{{center|೭೬}}<noinclude></noinclude>
j42gbfqyheeqkqi1360hb636t0mymb3
ಪುಟ:ನಿತ್ಯ ನೇಮಾವಲಿ.pdf/೭೮
104
101897
317842
284270
2026-05-07T07:46:21Z
Shreelatha.Halemane
7642
/* Proofread */
317842
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}}
ಪಂಚಲಿಂಗ ಜಪ ಏಕ ಬನಾ ತೋ
ಆತ್ಮಕ ಬ್ರಹ್ಮ ಬಜತಾ ಹೈ ||೫||
ಶಿವಾನಗರಪರ ಶಂಕರ ಮುನಶೀ
ಸಿದ್ಧಾಸನ ಪರ ಬೈಠೇ ಹೈ।
ಮಾಯಾ ಶಂಕರಿ ತೀನ ಗುಣಮೇ
ಮದರಸ ಜಪತೋ ಪಿಚಡೇ ಹೈ||೬||
ಚಿದಾನಂದಗುರು ಬ್ರಹ್ಮ ಕೃಪಾಸೇ
ಬೋಧಸಾರಮೇ ಬೋಲತ ಹೈ।
ಅಂತರಂಗಸೇ ಮಾರ್ಗ ಜಾನಿಲಾ
ಲಿಂಗಸಂಗ ಜಪ ಹೋತಾ ಹೈ||೭||
'''ಭಾವಾರ್ಥ''': ನಾಮಸ್ಮರಣೆ ಮಾಡೋಣ: ಗುರುಗಳು ಉಪದೇಶಿಸಿದ
ನಾಮವನ್ನು ಸ್ಮರಿಸೋಣ. “ಹರಹರ” ನಾಮವನ್ನೂ ಶಿವಶಿವ”
ನಾಮವನ್ನೂ ಸ್ಮರಿಸೋಣ, ಗುರುಭಜನೆಯ ಗುಣಗಾನಮಾಡು. ಅದು
ನನ್ನ ಕರ್ಣರಂಧ್ರದಲ್ಲಿ ಕೇಳಿಸುತ್ತದೆ. ನವದ್ವಾರಗಳನ್ನು ಮುಚ್ಚಿದಾಗ
ದಶವಿಧನಾದಗಳು ಕೇಳಿಸಹತ್ತಿದವು. ಗುರುವು ಆಶ್ಚರ್ಯಕರವಾದ ವಾದ್ಯಗಳನ್ನು
ಬಾರಿಸಿದನು. ಅದು ಒಳಗಿರುವ ಸದಾಶಿವನಿಗೆ ಕೇಳಿಸುತ್ತದೆ.
ಮೂಲಾಧಾರದಿಂದ ಸಹಸ್ರಾರಕ್ಕೆ ತಲುಪಿದ ನಾದವು ಕೇಳಿಸುತ್ತದೆ.
ಒಂದಕ್ಷರದ ಮಾರ್ಗವನ್ನು ತಿಳಿದುಕೋ ಬೇರೆಯಾಗಿರುವದಿನ್ನೊಂದು ಇದೆ.
{{center|೭೭}}<noinclude></noinclude>
97iug8r4yi3jo8gc33gbc7nwcrf15mq
317875
317842
2026-05-07T09:58:55Z
Ashwini Rai K
8475
/* Validated */
317875
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}}
ಪಂಚಲಿಂಗ ಜಪ ಏಕ ಬನಾ ತೋ
ಆತ್ಮಕ ಬ್ರಹ್ಮ ಬಜತಾ ಹೈ ||೫||
ಶಿವಾನಗರಪರ ಶಂಕರ ಮುನಶೀ
ಸಿದ್ಧಾಸನ ಪರ ಬೈಠೇ ಹೈ।
ಮಾಯಾ ಶಂಕರಿ ತೀನ ಗುಣಮೇ
ಮದರಸ ಜಪತೋ ಪಿಚಡೇ ಹೈ||೬||
ಚಿದಾನಂದಗುರು ಬ್ರಹ್ಮ ಕೃಪಾಸೇ
ಬೋಧಸಾರಮೇ ಬೋಲತ ಹೈ।
ಅಂತರಂಗಸೇ ಮಾರ್ಗ ಜಾನಿಲಾ
ಲಿಂಗಸಂಗ ಜಪ ಹೋತಾ ಹೈ||೭||
'''ಭಾವಾರ್ಥ''': ನಾಮಸ್ಮರಣೆ ಮಾಡೋಣ: ಗುರುಗಳು ಉಪದೇಶಿಸಿದ
ನಾಮವನ್ನು ಸ್ಮರಿಸೋಣ. “ಹರಹರ” ನಾಮವನ್ನೂ ಶಿವಶಿವ”
ನಾಮವನ್ನೂ ಸ್ಮರಿಸೋಣ, ಗುರುಭಜನೆಯ ಗುಣಗಾನಮಾಡು. ಅದು
ನನ್ನ ಕರ್ಣರಂಧ್ರದಲ್ಲಿ ಕೇಳಿಸುತ್ತದೆ. ನವದ್ವಾರಗಳನ್ನು ಮುಚ್ಚಿದಾಗ
ದಶವಿಧನಾದಗಳು ಕೇಳಿಸಹತ್ತಿದವು. ಗುರುವು ಆಶ್ಚರ್ಯಕರವಾದ ವಾದ್ಯಗಳನ್ನು
ಬಾರಿಸಿದನು. ಅದು ಒಳಗಿರುವ ಸದಾಶಿವನಿಗೆ ಕೇಳಿಸುತ್ತದೆ.
ಮೂಲಾಧಾರದಿಂದ ಸಹಸ್ರಾರಕ್ಕೆ ತಲುಪಿದ ನಾದವು ಕೇಳಿಸುತ್ತದೆ.
ಒಂದಕ್ಷರದ ಮಾರ್ಗವನ್ನು ತಿಳಿದುಕೋ ಬೇರೆಯಾಗಿರುವದಿನ್ನೊಂದು ಇದೆ.
{{center|೭೭}}<noinclude></noinclude>
m6l4xj60mplna4tspqzjh00siswurs0
ಪುಟ:ನಿತ್ಯ ನೇಮಾವಲಿ.pdf/೭೯
104
101899
317843
284272
2026-05-07T07:50:55Z
Shreelatha.Halemane
7642
/* Proofread */
317843
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}}
ಎರಡಕ್ಷರಗಳ ಮಾರ್ಗ ದೊರೆತರೆ ಅದು ಇನ್ನೂ ಬೇರೆಯದಾಗಿದೆ.
ಮೂರಕ್ಷರಗಳ ಮಾರ್ಗವು ತ್ರಿಮೂರ್ತಿಗಳ ದರ್ಶನ ಮಾಡಿಸುತ್ತದೆ ಎಂದು
ತಿಳಿದುಕೊ (ನಿಂಬರಗಿಮಹಾರಾಜರಿಗೆ ಬ್ರಹ್ಮ-ವಿಷ್ಣು-ಮಹೇಶ್ವರರ
ಮೂರ್ತಿಗಳು ಒಂದರ ಮೇಲೊಂದು ಕಾಣಿಸುತ್ತಿದ್ದವೆಂದು ಹೇಳಲಾಗಿದೆ).
ನಾದ-ಬಿಂದು-ಕಲಾ ಇವು ಮೂರೂ ಒಂದಡೆ ಸೇರಿದರೆ ಜಗವು ಮುಳುಗಿ
ಹೋಗುವುದು. (ಅದರ ಅರಿವು ಉಳಿಯದು). ಮನದಲ್ಲಿ ವಿಚಾರಮಾಡಿ
ನೋಡು ತ್ರಿಗುಣಗಳಿಂದ ಬೇರೆಯೇಆದ ಶುದ್ಧಸತ್ವಗುಣ ಒಂದಿದೆ. ಐದೂ
ಲಿಂಗಗಳು ಒಂದುಗೂಡಿದವೆಂದರೆ ಬ್ರಹ್ಮವು ಆತ್ಮನನ್ನು ತೋರಿಸುವುದು.
ಈಶ್ವರನು ಕೈಲಾಸದಲ್ಲಿ ಸಿದ್ಧಾಸನದಲ್ಲಿ ಕುಳಿತು ಧ್ಯಾನಮಗ್ನನಾಗಿದ್ದಾನೆ.
ತ್ರಿಗುಣಮಯೇ ಮಾಯೆಯಲ್ಲಿರುವವರಿಗೆ ಶಂಕರನು ನಾಮಜಪವನ್ನು
ಹೇಳಿಕೊಡುತ್ತಾನೆ. ದೇವರಕೃಪೆಯಿಂದ ಗುರುಗಳಾದ ಚಿದಾನಂದರು ಈ
ಬೋಧದಸಾರವನ್ನು ಹೇಳಿದ್ದಾರೆ. ನಿಮ್ಮ ಅಂತರಂಗದಲ್ಲಿಯೇ ಈ
ಮಾರ್ಗವನ್ನು ತಿಳಿದುಕೊಳ್ಳಿರಿ. ಲಿಂಗದಸಂಗದಲ್ಲಿ ನಾಮಸ್ಮರಣೆ
ನಡೆಯಹತ್ತುವುದು.
{{center|೨}}
ಸಹಜ ಮಾದೋ ಮಾಡೋ ಗುರುಭಜನೀ|
ಸಾಧುಸಂತರ ಚರಣವ ಪಿಡಿನೀ|| ಪಲ್ಲ ||
{{center|೭೮}}<noinclude></noinclude>
b4vljum8uw530y4jep0kxkt148eupju
317874
317843
2026-05-07T09:58:27Z
Ashwini Rai K
8475
/* Validated */
317874
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}}
ಎರಡಕ್ಷರಗಳ ಮಾರ್ಗ ದೊರೆತರೆ ಅದು ಇನ್ನೂ ಬೇರೆಯದಾಗಿದೆ.
ಮೂರಕ್ಷರಗಳ ಮಾರ್ಗವು ತ್ರಿಮೂರ್ತಿಗಳ ದರ್ಶನ ಮಾಡಿಸುತ್ತದೆ ಎಂದು
ತಿಳಿದುಕೊ (ನಿಂಬರಗಿಮಹಾರಾಜರಿಗೆ ಬ್ರಹ್ಮ-ವಿಷ್ಣು-ಮಹೇಶ್ವರರ
ಮೂರ್ತಿಗಳು ಒಂದರ ಮೇಲೊಂದು ಕಾಣಿಸುತ್ತಿದ್ದವೆಂದು ಹೇಳಲಾಗಿದೆ).
ನಾದ-ಬಿಂದು-ಕಲಾ ಇವು ಮೂರೂ ಒಂದಡೆ ಸೇರಿದರೆ ಜಗವು ಮುಳುಗಿ
ಹೋಗುವುದು. (ಅದರ ಅರಿವು ಉಳಿಯದು). ಮನದಲ್ಲಿ ವಿಚಾರಮಾಡಿ
ನೋಡು ತ್ರಿಗುಣಗಳಿಂದ ಬೇರೆಯೇಆದ ಶುದ್ಧಸತ್ವಗುಣ ಒಂದಿದೆ. ಐದೂ
ಲಿಂಗಗಳು ಒಂದುಗೂಡಿದವೆಂದರೆ ಬ್ರಹ್ಮವು ಆತ್ಮನನ್ನು ತೋರಿಸುವುದು.
ಈಶ್ವರನು ಕೈಲಾಸದಲ್ಲಿ ಸಿದ್ಧಾಸನದಲ್ಲಿ ಕುಳಿತು ಧ್ಯಾನಮಗ್ನನಾಗಿದ್ದಾನೆ.
ತ್ರಿಗುಣಮಯೇ ಮಾಯೆಯಲ್ಲಿರುವವರಿಗೆ ಶಂಕರನು ನಾಮಜಪವನ್ನು
ಹೇಳಿಕೊಡುತ್ತಾನೆ. ದೇವರಕೃಪೆಯಿಂದ ಗುರುಗಳಾದ ಚಿದಾನಂದರು ಈ
ಬೋಧದಸಾರವನ್ನು ಹೇಳಿದ್ದಾರೆ. ನಿಮ್ಮ ಅಂತರಂಗದಲ್ಲಿಯೇ ಈ
ಮಾರ್ಗವನ್ನು ತಿಳಿದುಕೊಳ್ಳಿರಿ. ಲಿಂಗದಸಂಗದಲ್ಲಿ ನಾಮಸ್ಮರಣೆ
ನಡೆಯಹತ್ತುವುದು.
{{center|೨}}
ಸಹಜ ಮಾದೋ ಮಾಡೋ ಗುರುಭಜನೀ|
ಸಾಧುಸಂತರ ಚರಣವ ಪಿಡಿನೀ|| ಪಲ್ಲ ||
{{center|೭೮}}<noinclude></noinclude>
buj261l01j032jwnjmh18pm9xvvpzpx
ಪುಟ:Gandhi, 1927, The Story of My Experiments With Truth, Vol 1.pdf/೨೮
104
119826
317761
2026-05-06T16:45:14Z
Shreesha Sharma
7840
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 8 INTRODUCTION me in pursuit of this quest. sacrifice demanded be my hope I may be prepared to Even if the very life I give it. But as long as I have not realised this Absolute Truth, so long must I hold by the relative truth as I have conceived it. That relative truth must, meanwhile, be my beacon, my shield and buckler. Though this path is strait and narrow and sharp as the razor's edge, for me it has been the quickest and easiest. Even my Himalayan blunders h...
317761
proofread-page
text/x-wiki
<noinclude><pagequality level="1" user="Shreesha Sharma" /></noinclude>8
INTRODUCTION
me in pursuit of this quest.
sacrifice demanded be my
hope I may be prepared to
Even if the
very life I
give it. But
as long as I have not realised this
Absolute Truth, so long must I hold by
the relative truth as I have conceived it.
That relative truth must, meanwhile, be
my beacon, my shield and buckler. Though
this path is strait and narrow and sharp
as the razor's edge, for me it has been the
quickest and easiest. Even my Himalayan
blunders have seemed trifling to me
because I have kept strictly to this
path. For the path has saved me from
coming to grief, and I have gone forward
according to my light. Often in my
progress I have had faint glimpses of the
Absolute Truth, God, and daily the
conviction is growing upon me that He
alone is real and all else is unreal.
Let those, who wish, realise how the
conviction has grown upon me; let them
share my experiments and share also
my conviction if they can. The further
conviction has been growing upon me that<noinclude></noinclude>
mkmp38hwga6gtkh6dgbbmrizb2hvrzj
ಪುಟ:Gandhi, 1927, The Story of My Experiments With Truth, Vol 1.pdf/೩೭೫
104
119827
317763
2026-05-06T16:46:11Z
Shreesha Sharma
7840
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: NATAL INDIAN CONGRESS 353 but they contained themselves. At last, when day was already breaking, the host yielded, paid down £6 and feasted us. This happened at Tongaat, but the repercussion of the incident was felt as far as Stanger on the North Coast and Charlestown in the interior. It also hastened our work of collection. But collecting funds was not the only thing to do. In fact I had long learnt the principle of never having more money at one's disposal tha...
317763
proofread-page
text/x-wiki
<noinclude><pagequality level="1" user="Shreesha Sharma" /></noinclude>NATAL INDIAN CONGRESS
353
but they contained themselves. At last,
when day was already breaking, the host
yielded, paid down £6 and feasted us.
This happened at Tongaat, but the
repercussion of the incident was felt as
far as Stanger on the North Coast and
Charlestown in the interior. It also
hastened our work of collection.
But collecting funds was not the only
thing to do. In fact I had long learnt
the principle of never having more money
at one's disposal than necessary.
Meetings used to be held once a
month or even once a week, if required.
Minutes of the proceedings of the
preceding meeting would be read, and all
sorts of questions would be discussed.
People had no experience of taking part
in public discussions or of speaking briefly
and to the point. Every one hesitated
to stand up to speak. I explained to
them the rules of procedure at meetings
and they respected them. They realised,
that it was an education for them, and
many, who had never been accustomed<noinclude></noinclude>
65h9bkpagiamusd6ohbnhhuvzcwee69