ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.1
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:Chirasmarane-Niranjana.pdf/೪೫
104
12864
317915
256365
2026-05-07T13:14:08Z
Shreelatha.Halemane
7642
/* Validated */
317915
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೪೬|right=ಚಿರಸ್ಮರಣೆ}}
ವಿರೋಧಿ ಎಂಬುದು ಸ್ಪಷ್ಟವಾಗಿತ್ತು. ಎದ್ದು ಕುಳಿತ ಪಂಡಿತರ ಮುಖವನ್ನು
ಹುಡುಗರು ಕಾತರದಿಂದ ನೋಡಿದರು.
<p>ಆ ಮುಖದ ಮೇಲೆ ಗಾಬರಿಯ ಯಾವ ಚಿಹ್ನೆಯೂ ಇರಲಿಲ್ಲ. ಹಿಂದಿದ್ದ
ಹಾಗೆಯೇ ಮುಖ ಶಾಂತವಾಗಿತ್ತು. ಆ ಮುಗುಳುನಗೆಯೂ ಮಾಯವಾಗಿರಲಿಲ್ಲ.</p>
{{gap}}ಅಪ್ಪು ಮತ್ತು ಚಿರುಕಂಡನತ್ತ ನೋಡಿ ಮಾಸ್ತರು ಕೇಳಿದರು:</br>
{{gap}}“ಅವನು ಯಾರು ಗೊತ್ತಾಯ್ತನೋ?"</br>
{{gap}}ಇಬ್ಬರಿಗೂ ಗೊತ್ತಾಗಿತ್ತು. ಚಿರುಕಂಡ ಹೇಳಿದ:</br>
{{gap}}"ಗೊತ್ತಾಯ್ತು.ಅವನು ಸತ್ಕಾರದ ಕಡೆಯೋನು.ಜಮೀನ್ದಾರರ ಕಡೆಯೋನು."</br>
{{gap}}ಪಂಡಿತರು ನಕ್ಕು ಅಂದರು:</br>
{{gap}}"ಸರಿಯಾಗಿ ಊಹಿಸ್ಕೊಂಡಿದ್ದೀರಿ, ಪರವಾಗಿಲ್ಲ. ಒಬ್ಬ ಮನುಷ್ಯನನ್ನು ನೋಡಿದ ತಕ್ಷಣ ಅವನು ಒಳ್ಳೆಯವನೇ ಕೆಟ್ಟವನೇ ಅಂತ ತಿಳಿಯೋದನ್ನು ಕಲೀಬೇಕು. ಅವನು ಮಾಡುವ ಒಂದು ಮುಖಭಂಗಿ, ಆಡುವ ಒಂದು ಮಾತು, ಅಷ್ಟರಿಂದ ಆತ ಎಂಥವನು ಅನ್ನೋದನ್ನ ಗೊತ್ಮಾಡೇಕು."</p>
{{gap}}ಹುಡುಗರೂ ಇತರರೂ ಆ ಮಾತುಗಳನ್ನು ಕವಿಗೊಟ್ಟು ಕೇಳಿದರು.
{{gap}}ಹುಡುಗರತ್ತ ನೋಡುತ್ತ ಪಂಡಿತರೆಂದರು:
{{gap}}“ನೀವು ಕಯೂರಿನಿಂದ ಹ್ಯಾಗ್ನಂದ್ರಿ ಹೇಳೇ ಇಲ್ವಲ್ಲಾ...."
{{gap}}ಅಪ್ಪುವಿನ ಮುಖ ಅರಳಿತು. ಚಿರುಕಂಡ ಮತ್ತು ಮಾಸ್ತರರತ್ತ ಆತ ಒಮ್ಮೆ ದೃಷ್ಟಿ ಹರಿಸಿದ. ಆದರೆ ಅವರ ಪ್ರತಿಕ್ರಿಯೆಯ ಹಾದಿ ನೋಡದೆ, ತನ್ನ
ಗೆಳೆಯನೊಡನೆ ತಾನು ದಾಟಿಬಂದ ಸಾಹಸ ಕಥೆಯನ್ನು ಇದ್ದಂತೆಯೆ ತಿಳಿಸಿದ...
ಹೇಳಬೇಕಾಗಿದ್ದ ವಿಷಯಗಳು ಮುಗಿಯುತ್ತ ಬಂದಾಗ ಅಪ್ಪು ಎಂದ:</p>
{{gap}}“ಚಿರುಕಂಡ ಬಹಳ ಸೂಕ್ಷ್ಮ, ಸ್ವಲ್ಪ ಗಟ್ಟಿಯಾಗಿ ಮಾತನಾಡಿದರೂ ಸಾಕು,
ನನ್ನ ಬಾಯಿ ಮುಚ್ಚಿಸಿದ್ದ. ಪ್ರತಿಯೊಂದು ವಿಷಯದಲ್ಲೂ ಅವನಿಗೆ
ದೂರಾಲೋಚನೆಯೇ."</p>
{{gap}}ಸ್ನೇಹಿತನ ಬಾಯಲ್ಲಿ ತನ್ನ ಹೊಗಳಿಕೆ ಕೇಳುತ್ತ ಚಿರುಕಂಡನಿಗೆ 'ಒಂದು
ವಿಧ'ವಾಯಿತು. ಪ್ರಶಂಸೆ ಅವನಿಗೆ ಯಾವ ಕಾಲದಲ್ಲೂ ಇಷ್ಟವಿರಲಿಲ್ಲ. ಆದರೆ
ಅಪ್ಪು ಹಾಗಲ್ಲ. ಮಾಡಿದ ಕೆಲಸದ ಬಗೆಗೆ ಹೆಮ್ಮೆ ಪಡುತ್ತ ತನ್ನ ಪ್ರಶಂಸೆಯನ್ನು
ತಾನೇ ಮಾಡಿಕೊಳ್ಳುತ್ತಿದ್ದ; ಇತರರನ್ನೂ ಅದೇ ರೀತಿಯಲ್ಲಿ ಮುಕ್ತಕಂಠದಿಂದ
ಹೊಗಳುತ್ತಿದ್ದ. ಆದರೆ ಹಾಗೆ ಮಾಡುವಾಗ, ಸತ್ಯಕ್ಕೆಂದೂ ಚ್ಯುತಿ ಬರುತ್ತಿರಲಿಲ್ಲ.
{{gap}}ಅಪ್ಪು ಹೇಳಿದುದನ್ನು ಕೇಳಿ ಎಲ್ಲರಿಗೂ ಸಂತೋಷವಾಯಿತು.</p><noinclude></noinclude>
8cj3fbod91hsrglelmuzljhtjic71yh
ಪುಟ:Chirasmarane-Niranjana.pdf/೧೧೮
104
12937
318089
256536
2026-05-08T10:05:44Z
Shreelatha.Halemane
7642
/* Validated */
318089
proofread-page
text/x-wiki
<noinclude><pagequality level="4" user="Shreelatha.Halemane" /></noinclude>
ಅಕ್ಷರಗಳನ್ನು ಬರೆದುಕೊಟ್ಟರು.ಸ್ಲೇಟನ್ನು ಹಿಂದಕ್ಕೆ ಕೊಟ್ಟು ಕಣ್ಣನ ಭುಜವನ್ನು ಅವರು ಮೃದುವಾಗಿ ಅದುಮಿದರು.ಆತ ತಲೆಯೆತ್ತಿ ನೊಡಿದ.ಅವನ ಎರಡು ಕಣ್ಣುಗಳಲ್ಲೂ ಕಂಬನಿ ತುಂಬಿತ್ತು.....
{{gap}}......ಆ ರಾತ್ರಿ-ಶಾಲೆಗೆ ಎಂದಾದರೊಮ್ಮೆ ಬೇರೆ ಹಳ್ಳಿಯ ಅಪರಿಚಿತರು ಬರುವುದಿತ್ತು.ಅವರೆಲ್ಲರನ್ನೂ ಉಪಧ್ಯಾಯರೆಂದೇ ಮಾಸ್ತರು ಪರಿಚಯಮಾಡಿ ಕೊಡುತ್ತಿದ್ದರು.ಹಾಗೆ ಬಂದವರು ಎಷ್ಟೋಸಾರೆ ಅಲ್ಲಿ ನೆರೆದಿದ್ದವರನ್ನು ಕುರಿತು ಲೋಕಜ್ಞಾನದ ವಿಷಯವಾಗಿ ಮಾತನಾಡುವುದಿತ್ತು.
{{gap}}ಈ ರೀತಿ ಬರುತ್ತಿದ್ದವರ ಮೂಲಕ ಪೆನ್ಸಿಲಿನಲ್ಲಿ ಬರೆದ ಹಾಳೆಗಳು ಕಯ್ಯೂರು ತಲುಪುತ್ತಿದ್ದವು.ಮಾಸ್ತರು ಅವುಗಳನ್ನು ಅಪ್ಪು-ಚಿರುಕಂಡನಿಗೆ ಕೊಟ್ಟು ಓದಿಸುತ್ತಿದ್ದರು;ಓದಿ ಅವರೊಡನೆ ಚರ್ಚಿಸುತ್ತಿದ್ದರು.
{{gap}}ಅದು ಹೋರಾಟದ 'ವಿಶಿಷ್ಟ ಸಾಹಿತ್ಯ.'</br> ಅಂತಹ ಒಂದು ಶಿರೋನಾಮೆ ಹೀಗಿತ್ತು:'ರೈತ-ಕೂಲಿಕಾರರ ಕ್ರಾಂತಿಯ ಮೂಲಕವೇ ಸ್ವಾತಂತ್ರ್ಯ ಸಾಧ್ಯ!'ಮಸಕು ಮಸಕಾದ ಅಕ್ಷರಗಳು.ಆದರೂ ಅಪ್ಪು ಮತ್ತು ಚಿರುಕಂಡ ಜತೆಯಾಗಿ ಅದನ್ನೋದಿದ್ರು.ಲೇಖನದ ಮೊದಲಲ್ಲೇ ಒಂದು ಸಂಬೋಧನೆಯಿತ್ತು:'ಸಂಗಾತಿಗಳೇ!'ಅ ಪದದಿಂದ
ಹೊರಟುದು ಆತ್ಮೀಯತೆಯ ಧ್ವನಿ.ಕೊನೆಯಲ್ಲೊಂದಿತ್ತು:'ಲೋಕದೆಲ್ಲಾ ದುಡಿಯುವ ಜನರೇ ಒಗ್ಗಟ್ಟಾಗಿರಿ!'ಎಂಬ ಘೋಷ.ಆ ಸಾಲಲ್ಲೇ ರಣಘರ್ಡನೆ:'ಸಾಮ್ರಾಜ್ಯಶಾಹಿ ನಾಶವಾಗಲಿ!' 'ಕ್ರಾಂತಿಗೆ ಜಯವಾಗಲಿ!'
{{gap}}ಆ ಪದಗಳ ಗುಂಯಾರವದಲ್ಲೇ ಸ್ವಲ್ಪ ಹೊತ್ತು ತನ್ಮಯನಾಗಿ ಕುಳಿತ ಅಪ್ಪು ಎಚ್ಚತ್ತು ಹೇಳಿದ:</br>"ನಮ್ಮದೆಲ್ಲ ಮಾತಿನಲ್ಲೇ ಮುಗೀತು ಕಣೋ.ತ್ರಿಕರಪುರಕ್ಕೆ ಹೋಗಿ ಚಂದುವನ್ನಾದರೂ ನೋಡಬಹುದಿತ್ತು.ಧಾಂಡಿಗ ಆವತ್ತು ಹೇಳಿದಹಾಗೆ ನಾವು ಬಾವೀಲಿರೋ ಕಪ್ಪೆಗಳು...."
{{gap}}ಪದಗಳನ್ನು ತೂಗಿ ನೋಡುತ್ತ ಚಿರುಕಂಡನೆಂದ:</br>
{{gap}}"ನಾವು ಗಿಡುಗಗಳಾಗ್ಬೇಕೂಂತ ತಾನೆ ನೀನು ಹೇಳೋದು? ಆಗಲಿ;ತ್ರಿಕರಪುರ ಒಂದೇ ಏನು?ಮಡಿಕೈಗೆ ಹೋಗೋಣ,ಪುದುಕೈಗೆ ಹೋಗೋಣ-
{{gap}}ನೀಲೇಷ್ವರಕ್ಕೆ,ಹೊಸದುರ್ಗಕ್ಕೆ,ಕಲ್ಲಿಕೋಟೆಗೆ,ದಿಲ್ಲಿಗೆ...ಸಾಕೇನಪ್ಪ?
{{gap}}ಅಪ್ಪು,ಚಿರುಕಂಡನ ಕೊರಳನ್ನು ತನ್ನ ಬಲಗೈಯಿಂದ ಸುತ್ತುವರಿದು ತನ್ನೆಡೆಗೆ ಬರಸೆಳೆದ.<noinclude></noinclude>
7afet044jmf8i0ec3kgw97d0cqs97o8
ಪುಟ:Chirasmarane-Niranjana.pdf/೧೧೯
104
12938
318090
246943
2026-05-08T10:06:51Z
Shreelatha.Halemane
7642
/* Validated */
318090
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|೯}}
ಅಮವಾಸ್ಯೆಯ ಅದೊಂದು ರಾತ್ರಿ ತರಗತಿ ಮುಗಿದು ಕೊನೆಯದಾಗಿ ಹೊರಬಿದ್ದವರು ಮಾಸ್ತರು,ಕಣ್ಣ ಮತ್ತು ಅಪ್ಪು.ಮಾಸ್ತರು ತಮ್ಮ ಶಾಲೆಯತ್ತ ತಿರುಗಿದ ಮೇಲೆ ಕಣ್ಣ-ಅಪ್ಪು ಇಬ್ಬರೇ ಹಾದಿ ನಡೆದರು.
{{gap}}"ನಮ್ಮನೆವರೆಗೂ ಬಾ ಅಪ್ಪು,ಅಮ್ಮ ಇವತ್ತು ಸಿಹಿಗಡುಬು ಮಾಡಿಟ್ಟಿದ್ದಾಳೆ.ತಿಂದು ಹೋಗುವಿಯಂತೆ"ಎಂದು ಕಣ್ಣ ಅಪ್ಪುವಿಗೆ ಆಹ್ವಾನ ನೀಡಿದ.
{{gap}}"ಬೇಡ ಕಣ್ಣ, ತಡವಾಗ್ತದೆ. ಇನ್ನೊಂದ್ಸಲ ಯಾವತ್ತಾದರೂ ಬರ್ತೇನೆ" ಎಂದು ಹೇಳಿ ಅಪ್ಪು ತಪ್ಪಿಸಿಕೊಳ್ಳಲು ಯತ್ನಿಸಿದ.
{{gap}}"ನೀನು ಹೀಗೆ ಹೇಳ್ತಿರೋದು ಮೂರನೆಯ ಸಲ. ಊಹುಂ, ಇವತ್ತು ನೀನು ಬಂದೇ ತೀರ್ಬೇಕು. ಕಡುಬು ತಿಂದಾದ್ಮೇಲೆ ನಿನ್ನ ಮನೆವರೆಗೂ ಬಿಟ್ಟು ಬರ್ತೇನೆ."
{{gap}}ಈ ಆಗ್ರಹದ ಕರೆಯನ್ನು ನಿರಾಕರಿಸಲಾರದೆ, ಅಪ್ಪು ಕಣ್ಣನನ್ನು ಹಿಂಬಾಲಿಸಿದ. ಆತನ ಗುಡಿಸಲು ಇದ್ದುದು ನದಿಯ ದಡದಲ್ಲಿ. ದೋಣಿ ನಡೆಸುತ್ತಿದ್ದ ತಂದೆ ನೀರು ಪಾಲಾದಾಗ ಕಣ್ಣ ಎಳೆ ಮಗು. ತಂದೆ ಸತ್ತ ಆ ಮಗುವನ್ನು ಬಡತಾಯಿ ಸಾಕಿ ದೊಡ್ಡವನಾಗಿ ಮಾಡಿದ್ದಳು. ಇದ್ದ ಇಷ್ಟಗಲ ಜಾಗದಲ್ಲಿ ತರಕಾರಿ ಬೆಳೆಸಿ, ನೀಲೇಶ್ವರದ ಪೇಟೆಗೊಯ್ದು ಮಾರಿ ಮಗನ ಲಾಲನೆ ಪೋಷಣೆ ನಡೆಸಿದ್ದಳು. ಮಗ ದೊಡ್ಡವನಾದ ಮೇಲೂ-ಆ ತರಕಾರಿ ತೋಟದ ಕೆಲಸವನ್ನೆಲ್ಲ ಒಬ್ಬನೆ ಮಾಡಲು ಸಮರ್ಥನಾದ ಮೇಲೂ-ಆ ತಾಯಿ ದುಡಿಯುವುದನ್ನು ಬಿಟ್ಟಿರಲಿಲ್ಲ. ನೆರೆಗೂದಲಿನ, ಸುಕ್ಕು ಮುಖದ ಆ ಜೀವ ಕಣ್ಣನನ್ನು ಈಗಲೂ ಎಳೆಯ ಮಗುವಾಗಿಯೇ ಕಾಣುತ್ತಿತ್ತು.
{{gap}}....ಆ ಹೊಲದ ಈ ಕೊನೆಯಲ್ಲಿ ಹಾದಿಗಳು ಕವಲೊಡೆದಿದ್ದುವು. ಎಡಕ್ಕೆ ತಿರುಗಿ ನಡೆದರೆ, ಕಣ್ಣನ ಗುಡಿಸಲು. ಆದರೆ ಕಣ್ಣ ತಿರುಗದೆ ತಡೆದು ನಿಂತು, ಬಲಕ್ಕೆ ನೋಡಿದ. ಅಲ್ಲೇ ಕೂಗಳತೆಯ ದೂರದಿಂದ ಒಂದು ಹೆಣ್ಣಿನ ಒಂದು ಗಂಡಿನ ಧ್ವನಿಗಳು ತೀವ್ರಗತಿಯಿಂದ ಕೇಳಿಸುತ್ತಿದ್ದುವು. ಕಣ್ಣ ಆಲಿಸಿದ. ಅಪ್ಪುವೂ ಕಿವಿ ನಿಗುರಿಸಿದ. ಉದ್ವೇಗದ ಜಗಳದ ನುಡಿಗಳು....ಅಸಹಾಯಕತೆಯಿಂದ ಕಂಪಿಸುತ್ತಿದ್ದ ಹೆಣ್ಣು ಧ್ವನಿ. ಗಂಡಿನ ಕೆಣಕುತ್ತಿದ್ದ ಗಡಸುಸ್ವರ.
{{gap}}ಕಣ್ಣ ಕಾತರಗೊಂಡು ಕೇಳಿದ:<br />
{{gap}}"ಅಪ್ಪು, ಕೇಳಿಸ್ತಾ?"<br />
{{gap}}"ಹೂಂ.ಅದು ಯಾರ ಮನೆ?"<noinclude></noinclude>
47hwstmk2axn5z3m44399atncyudglp
ಪುಟ:Chirasmarane-Niranjana.pdf/೨೧೧
104
13030
318065
256310
2026-05-08T09:48:47Z
Ashwini Rai K
8475
/* Validated */
318065
proofread-page
text/x-wiki
<noinclude><pagequality level="4" user="Ashwini Rai K" /></noinclude>
೨೧೨ ಚಿರಸ್ಮರಣೆ
<p>ಸಶಸ್ತ್ರದಳದವರು ದಸ್ತಗಿರಿ ಮಾಡಿದ ಮೂವತ್ತು ಜನರನ್ನು ಪೋಲೀಸರ
ವಶಕ್ಕೆ ಕೊಟ್ಟು ಹೊಸದುರ್ಗಕ್ಕೆ ಕಳುಹಲು ಅಧಿಕಾರಗಳು ತೀರ್ಮಾನಿಸಿದರು.
ವಿಜೃಂಭಣೆಯಿಂದಲೆ ನಡೆಯಿತು ಬೀಳ್ಕೊಡುಗೆ, ಕೈದಿಗಳು ಹೊರಗೆ ನಿಲ್ಲಿಸಿ
ಸಂಘದ ಛಾವಣಿಗೆ ಸೈನಿಕರು ಬೆಂಕಿ ಕೊಟ್ಟರು. ಉರಿ ಆಕಾಶವೇರುತ್ತಿದ್ದಾಗ
ಅಧಿಕಾರಿಯ ಅನುಜ್ಞೆಯಂತೆ "ಸಂಘ ನಾಶವಾಗಲಿ! ಬ್ರಿಟಿಷ್ ಸರಕಾರಕ್ಕೆ
ಜಯವಾಗಲಿ! ಜಮೀನ್ದಾರರು ನೂರು ವರ್ಷ ಬಾಳಲಿ!" ಎಂದು ನಂಬಿಯಾರರ
ಸೇವಕರು ಕೂಗಿದರು. ಬಳಿಕ ದಿನವೆಲ್ಲ ಉಪವಾಸ ಇದ್ದು ರಾತ್ರೆ ನಿದ್ದೆಗೆಟ್ಟಿದ್ದ
ಬಂಧಿತರನ್ನು ಚರ್ವತ್ತೂರು ನಿಲ್ದಾಣಕ್ಕೆ ಪೋಲೀಸರು ನಡೆಸಿದರು.<\p>
{{gap}}<p>ಈ ಬೀಳ್ಕೊಡುಗೆಯ ಬಳಿಕ ಮತ್ತೆ ಬೇಟೆ, ಏನೂ ಸಿಗದೆ ಹೋದಾಗ,
ಒಬ್ಬೊಬ್ಬರನ್ನೇ ಕರೆಸಿ ಚತುರನಾದ ಪೋಲೀಸ್ ಅಧಿಕಾರಿಯಿಂದ ವಿಚಾರಣೆ.</p>
<p>ಕಯ್ಯೂರು ಶಾಲೆಯ ಹೊಸ ಮಾಸ್ತರು ಅವರೆದುರು ಕೈಕಟ್ಟಿ ನಿಲ್ಲಿಬೀಕಾಯಿತು.
ಸ್ವತಃ ನಂಬಿಯಾರರೇ ಓಡಿ ಬಂದು,"ಈತ ನಮ್ಮವನು" ಎಂದು ಹೇಳಿದುದರಿಂದ
ఆ ಉಪಾಧ್ಯಾಯನಿಗೆ ಹೊಡೆತ ತಪ್ಪಿತು.<\p><br>
<p> ಆದರೂ ಅಧಿಕಾರಿ ಕೇಳಿದ:<\p>
<p> "ಈತ ಕ್ರಾಂತಿಕಾರನಲ್ಲ ಅನ್ನೋದು ಖಂಡಿತವೋ?"<\p>
"ನಾನು ಭರವಸೆ ಕೊಡ್ತೇನೆ" ಎಂದರು ನಂಬಿಯಾರರು.
ಅಧಿಕಾರಿ ಉಪಾಸಧ್ಯಾಯನನ್ನು ಪ್ರಶ್ನಿಸಿದ:
"ಏನಯ್ಯಾ, ಇವತ್ತು ಶಾಲೆ ಯಾಕೆ ನಡೆಸ್ಬಾರ್ದು?"
ನಡುಗುತ್ತಿದ್ದವನಿಂದ ತೊದಲು ಉತ್ತರ ಬಂತು.
"ಹುಡುಗರಿಲ್ಲ ಸರ್."
"ಹುಡುಗರಿಲ್ಲದಿದ್ದರೂ ಶಾಲೆ ನಡೆಸ್ಬೇಕು!"
"ಆಗಲಿ ಸಾರ್."
"ಪರೀಕ್ಷೆ ಹತ್ತಿರ ಬಂತು, ಏನ್ಮಾಡ್ತೀಯಾ?"
"ಹುಡುಗರು--"
"ಹುಡುಗರ್ನ ಕೂಡಿಸ್ಕೊಂಡು ಬಂದು ಪರೀಕ್ಷೆ ನಡೆಸ್ಬೇಕು."
"ಆಗಲಿ--ಆಗಲಿ ಸಾರ್."
"ಹೂಂ. ಹೋಗು!"
<p> ಬದುಕಿನೆಂದು ಆತ ತಿರುಗಿದೊಡನೆ ಅಧಿಕಾರಿ ಪುನಃ ಕರೆದ:<\p>
<p> "ಎಲ್ಲಿ ಹೇಳು---ಲಾಂಗ್ ಲಿವ್ ದಿ ಕಿಂಗ್!"<\p><noinclude></noinclude>
gtiu07v6t0rkyhq18pdiigtand0evzq
318066
318065
2026-05-08T09:51:52Z
Ashwini Rai K
8475
318066
proofread-page
text/x-wiki
<noinclude><pagequality level="4" user="Ashwini Rai K" /></noinclude>೨೧೨ {{gap}} {{gap}}{{gap}} ಚಿರಸ್ಮರಣೆ
<p>ಸಶಸ್ತ್ರದಳದವರು ದಸ್ತಗಿರಿ ಮಾಡಿದ ಮೂವತ್ತು ಜನರನ್ನು ಪೋಲೀಸರ
ವಶಕ್ಕೆ ಕೊಟ್ಟು ಹೊಸದುರ್ಗಕ್ಕೆ ಕಳುಹಲು ಅಧಿಕಾರಗಳು ತೀರ್ಮಾನಿಸಿದರು.
ವಿಜೃಂಭಣೆಯಿಂದಲೆ ನಡೆಯಿತು ಬೀಳ್ಕೊಡುಗೆ, ಕೈದಿಗಳು ಹೊರಗೆ ನಿಲ್ಲಿಸಿ
ಸಂಘದ ಛಾವಣಿಗೆ ಸೈನಿಕರು ಬೆಂಕಿ ಕೊಟ್ಟರು. ಉರಿ ಆಕಾಶವೇರುತ್ತಿದ್ದಾಗ
ಅಧಿಕಾರಿಯ ಅನುಜ್ಞೆಯಂತೆ "ಸಂಘ ನಾಶವಾಗಲಿ! ಬ್ರಿಟಿಷ್ ಸರಕಾರಕ್ಕೆ
ಜಯವಾಗಲಿ! ಜಮೀನ್ದಾರರು ನೂರು ವರ್ಷ ಬಾಳಲಿ!" ಎಂದು ನಂಬಿಯಾರರ
ಸೇವಕರು ಕೂಗಿದರು. ಬಳಿಕ ದಿನವೆಲ್ಲ ಉಪವಾಸ ಇದ್ದು ರಾತ್ರೆ ನಿದ್ದೆಗೆಟ್ಟಿದ್ದ
ಬಂಧಿತರನ್ನು ಚರ್ವತ್ತೂರು ನಿಲ್ದಾಣಕ್ಕೆ ಪೋಲೀಸರು ನಡೆಸಿದರು.<\p>
{{gap}}<p>ಈ ಬೀಳ್ಕೊಡುಗೆಯ ಬಳಿಕ ಮತ್ತೆ ಬೇಟೆ, ಏನೂ ಸಿಗದೆ ಹೋದಾಗ,
ಒಬ್ಬೊಬ್ಬರನ್ನೇ ಕರೆಸಿ ಚತುರನಾದ ಪೋಲೀಸ್ ಅಧಿಕಾರಿಯಿಂದ ವಿಚಾರಣೆ.</p>
<p>ಕಯ್ಯೂರು ಶಾಲೆಯ ಹೊಸ ಮಾಸ್ತರು ಅವರೆದುರು ಕೈಕಟ್ಟಿ ನಿಲ್ಲಿಬೀಕಾಯಿತು.
ಸ್ವತಃ ನಂಬಿಯಾರರೇ ಓಡಿ ಬಂದು,"ಈತ ನಮ್ಮವನು" ಎಂದು ಹೇಳಿದುದರಿಂದ
ఆ ಉಪಾಧ್ಯಾಯನಿಗೆ ಹೊಡೆತ ತಪ್ಪಿತು.<\p><br>
<p> ಆದರೂ ಅಧಿಕಾರಿ ಕೇಳಿದ:<\p>
<p> "ಈತ ಕ್ರಾಂತಿಕಾರನಲ್ಲ ಅನ್ನೋದು ಖಂಡಿತವೋ?"<\p>
"ನಾನು ಭರವಸೆ ಕೊಡ್ತೇನೆ" ಎಂದರು ನಂಬಿಯಾರರು.
ಅಧಿಕಾರಿ ಉಪಾಸಧ್ಯಾಯನನ್ನು ಪ್ರಶ್ನಿಸಿದ:
"ಏನಯ್ಯಾ, ಇವತ್ತು ಶಾಲೆ ಯಾಕೆ ನಡೆಸ್ಬಾರ್ದು?"
ನಡುಗುತ್ತಿದ್ದವನಿಂದ ತೊದಲು ಉತ್ತರ ಬಂತು.
"ಹುಡುಗರಿಲ್ಲ ಸರ್."
"ಹುಡುಗರಿಲ್ಲದಿದ್ದರೂ ಶಾಲೆ ನಡೆಸ್ಬೇಕು!"
"ಆಗಲಿ ಸಾರ್."
"ಪರೀಕ್ಷೆ ಹತ್ತಿರ ಬಂತು, ಏನ್ಮಾಡ್ತೀಯಾ?"
"ಹುಡುಗರು--"
"ಹುಡುಗರ್ನ ಕೂಡಿಸ್ಕೊಂಡು ಬಂದು ಪರೀಕ್ಷೆ ನಡೆಸ್ಬೇಕು."
"ಆಗಲಿ--ಆಗಲಿ ಸಾರ್."
"ಹೂಂ. ಹೋಗು!"
<p> ಬದುಕಿನೆಂದು ಆತ ತಿರುಗಿದೊಡನೆ ಅಧಿಕಾರಿ ಪುನಃ ಕರೆದ:<\p>
<p> "ಎಲ್ಲಿ ಹೇಳು---ಲಾಂಗ್ ಲಿವ್ ದಿ ಕಿಂಗ್!"<\p><noinclude></noinclude>
pf76b11u83a6zc6xhyw12exq01rdkk9
318067
318066
2026-05-08T09:52:39Z
Ashwini Rai K
8475
318067
proofread-page
text/x-wiki
<noinclude><pagequality level="4" user="Ashwini Rai K" /></noinclude>೨೧೨ {{gap}} {{gap}}{{gap}}{{gap}}{{gap}}{{gap}}{{gap}}{{gap}} ಚಿರಸ್ಮರಣೆ
<p>ಸಶಸ್ತ್ರದಳದವರು ದಸ್ತಗಿರಿ ಮಾಡಿದ ಮೂವತ್ತು ಜನರನ್ನು ಪೋಲೀಸರ
ವಶಕ್ಕೆ ಕೊಟ್ಟು ಹೊಸದುರ್ಗಕ್ಕೆ ಕಳುಹಲು ಅಧಿಕಾರಗಳು ತೀರ್ಮಾನಿಸಿದರು.
ವಿಜೃಂಭಣೆಯಿಂದಲೆ ನಡೆಯಿತು ಬೀಳ್ಕೊಡುಗೆ, ಕೈದಿಗಳು ಹೊರಗೆ ನಿಲ್ಲಿಸಿ
ಸಂಘದ ಛಾವಣಿಗೆ ಸೈನಿಕರು ಬೆಂಕಿ ಕೊಟ್ಟರು. ಉರಿ ಆಕಾಶವೇರುತ್ತಿದ್ದಾಗ
ಅಧಿಕಾರಿಯ ಅನುಜ್ಞೆಯಂತೆ "ಸಂಘ ನಾಶವಾಗಲಿ! ಬ್ರಿಟಿಷ್ ಸರಕಾರಕ್ಕೆ
ಜಯವಾಗಲಿ! ಜಮೀನ್ದಾರರು ನೂರು ವರ್ಷ ಬಾಳಲಿ!" ಎಂದು ನಂಬಿಯಾರರ
ಸೇವಕರು ಕೂಗಿದರು. ಬಳಿಕ ದಿನವೆಲ್ಲ ಉಪವಾಸ ಇದ್ದು ರಾತ್ರೆ ನಿದ್ದೆಗೆಟ್ಟಿದ್ದ
ಬಂಧಿತರನ್ನು ಚರ್ವತ್ತೂರು ನಿಲ್ದಾಣಕ್ಕೆ ಪೋಲೀಸರು ನಡೆಸಿದರು.<\p>
{{gap}}<p>ಈ ಬೀಳ್ಕೊಡುಗೆಯ ಬಳಿಕ ಮತ್ತೆ ಬೇಟೆ, ಏನೂ ಸಿಗದೆ ಹೋದಾಗ,
ಒಬ್ಬೊಬ್ಬರನ್ನೇ ಕರೆಸಿ ಚತುರನಾದ ಪೋಲೀಸ್ ಅಧಿಕಾರಿಯಿಂದ ವಿಚಾರಣೆ.</p>
<p>ಕಯ್ಯೂರು ಶಾಲೆಯ ಹೊಸ ಮಾಸ್ತರು ಅವರೆದುರು ಕೈಕಟ್ಟಿ ನಿಲ್ಲಿಬೀಕಾಯಿತು.
ಸ್ವತಃ ನಂಬಿಯಾರರೇ ಓಡಿ ಬಂದು,"ಈತ ನಮ್ಮವನು" ಎಂದು ಹೇಳಿದುದರಿಂದ
ఆ ಉಪಾಧ್ಯಾಯನಿಗೆ ಹೊಡೆತ ತಪ್ಪಿತು.<\p><br>
<p> ಆದರೂ ಅಧಿಕಾರಿ ಕೇಳಿದ:<\p>
<p> "ಈತ ಕ್ರಾಂತಿಕಾರನಲ್ಲ ಅನ್ನೋದು ಖಂಡಿತವೋ?"<\p>
"ನಾನು ಭರವಸೆ ಕೊಡ್ತೇನೆ" ಎಂದರು ನಂಬಿಯಾರರು.
ಅಧಿಕಾರಿ ಉಪಾಸಧ್ಯಾಯನನ್ನು ಪ್ರಶ್ನಿಸಿದ:
"ಏನಯ್ಯಾ, ಇವತ್ತು ಶಾಲೆ ಯಾಕೆ ನಡೆಸ್ಬಾರ್ದು?"
ನಡುಗುತ್ತಿದ್ದವನಿಂದ ತೊದಲು ಉತ್ತರ ಬಂತು.
"ಹುಡುಗರಿಲ್ಲ ಸರ್."
"ಹುಡುಗರಿಲ್ಲದಿದ್ದರೂ ಶಾಲೆ ನಡೆಸ್ಬೇಕು!"
"ಆಗಲಿ ಸಾರ್."
"ಪರೀಕ್ಷೆ ಹತ್ತಿರ ಬಂತು, ಏನ್ಮಾಡ್ತೀಯಾ?"
"ಹುಡುಗರು--"
"ಹುಡುಗರ್ನ ಕೂಡಿಸ್ಕೊಂಡು ಬಂದು ಪರೀಕ್ಷೆ ನಡೆಸ್ಬೇಕು."
"ಆಗಲಿ--ಆಗಲಿ ಸಾರ್."
"ಹೂಂ. ಹೋಗು!"
<p> ಬದುಕಿನೆಂದು ಆತ ತಿರುಗಿದೊಡನೆ ಅಧಿಕಾರಿ ಪುನಃ ಕರೆದ:<\p>
<p> "ಎಲ್ಲಿ ಹೇಳು---ಲಾಂಗ್ ಲಿವ್ ದಿ ಕಿಂಗ್!"<\p><noinclude></noinclude>
kc94aks9iu8emib0517aos7y0my6uqr
ಪುಟ:Chirasmarane-Niranjana.pdf/೨೧೨
104
13031
318070
256352
2026-05-08T09:53:56Z
Ashwini Rai K
8475
/* Validated */
318070
proofread-page
text/x-wiki
<noinclude><pagequality level="4" user="Ashwini Rai K" /></noinclude>
ಚಿರಸ್ಮರಣೆ {{gap}}{{gap}}{{gap}}{{gap}}{{gap}}{{gap}}{{gap}} ೨೧೩
<p> "ಲಾಂಗ್ ಲಿವ್ ದಿ ಕಿಂಗ್." <\p>
<p> ಉಪಾಧ್ಯಾಯರು ಪಾಠ ಒಪ್ಪಿಸಿದರು.<\p>
<p> "ಇನ್ನು ಹೊರಡು!"<\p>
<p>ಬೇರೆಯವರಿಗೆ ಬೇರೆ ರೀತಿಯ ಪ್ರಶ್ನೆ. ಹೆಂಗಸರೇಲ್ಲಿ ಮಾಯವಾದರು?ಎಂದು
ಗುಡುಗು. ತಲೆ ತಪ್ಪಿಸಿಕೊಂಡಿದ್ದ ಮುಂಡೇಗಂಡರಿಗಾಗಿ ಗರ್ಜನೆ. <\p>
<p>"ಅಪ್ಪು---ಅಬೂಬಕರ್....ಎಂಥ ಶಿಕ್ಷೆಕೊಟ್ಟರೂ ಸಾಲದು ಅವರಿಬ್ಬರಿಗೆ!"<\p>
<p>ಮತ್ತೊಂದು ದಿನ ಕಳೆಯಿತು. ಬೇಟೆಯ ರೀತಿಯೂ ಬದಲಾಯಿತು. ಸಶಸ್ತ್ರ
ದಳದವರು, ನಂಬಿಯಾರರ ಸೇವಕರು ತೋರಿಸಿಕೊಟ್ಟ ಕೆಲವು ಗುಡಿಸಲುಗಳನ್ನು
ಸುಟ್ಟ ಹೋಳಿ ಮಾಡಿದರು. ಒಂದೆಡೆ, ಕಾಯಿಲೆಬಿದ್ದು ಓಡಿ ಹೋಗಲಾರದೆ
ಉಳಿದಿದ್ದ ಹೆಂಗಸೊಬ್ಬಳ ಮೇಲೆ ನಾಲ್ಕಾರು ಜನ ಸೈನಿಕರಿಂದ ಅತ್ಯಾಚಾರ
ನಡೆಯಿತು. ತಮ್ಮನ್ನು ನೋಡಿ ಹತ್ತಿರ ಬಂದು ಬೊಗಳಿತೆಂದು ಒಂದು
ನಾಯಿಯನ್ನು ಅವರು ಕೊಂದರು. <\p>
<p>ಹಳ್ಳಿಯ ಹೊರ ವಲಯದಲ್ಲೇ ನಿಂತಿದ್ದ ಹಲವಾರು ಜನ ಹಸಿವನ್ನು
ತಾಳಲಾರದೆಹೋದರು. ಗುಡಿಸಲುಗಳಿಂದ ಕಂಡು ಬಂದ ಬೆಂಕಿಯಂತೂ ಅವರನ್ನು
ಅಪಾರ ಕಳವಳಕ್ಕೆ ಗುರಿಮಾಡಿತು. ಆ ಕಂಗಾಲ ಪರಿಸ್ಥಿತಿಯಲ್ಲಿ ಅಪ್ಪುವೆಂದ:
<p>"ನೀವು ಹೋಗಿ ಸಂಗಾತಿಗಳೇ!" ಇಲ್ಲಿದು ಏನೂ ಗೊತ್ತಾಗದೆ ಸಂಕಟ
ಪಡೋದಕ್ಕಿಂತ ಹಳ್ಳೀಲೇ ನೀವಿರೋಸದು ಮೇಲು."
ಕೆಲವರೆಂದರು:
<p>"ನೀವೂ ಬಂದ್ಬಿಡಿ ಅಪ್ಪು. ಅಷ್ಟು ಜನರನ್ನು ಹಿಡ್ಕೊಂಡು ಹೋಗಿದ್ದಾರೆ.
ಅವರ ಜತೇಲಿ ನಾವೂ."
"ಇಲ್ಲ. ನಾನು ಮತ್ತು ಅಬೂಬಕರ್ ಇನ್ನೊ ಸ್ವಲ್ಪ ದಿವಸ ಹೊರಗಿರ್ತ್ತೆವೆ.
ಪಂಡಿತರು-ಮಾಸ್ತರು ಯಾರನ್ನಾದರೂ ನೋಡೋದಕ್ಕೆ ಪ್ರಯತ್ನ ಪಡ್ತೇವೆ."
"ಆಗಲಿ--ಹಾಗೇ ಮಾಡಿ."
ಆ ಇಬ್ಬರನ್ನುಳಿದು ರೈತರೆಲ್ಲ ಹಳ್ಳಿಗೆ ಮರಳಿ ನುಸುಳಿದರು.
ಬೇರೊಂದು ದಿನದ ಬೇಟೆಯಲ್ಲಿ, ಮತ್ತೆ ಹದಿನೈದು ಜನ ರೈತರ
ಬಂಧನವಾಯಿತು. ಅಷ್ಟು ಜನ, ಅಪ್ಪು -ಅಬೂಬಕರರ ಸಂಗಡಿಗರೆಂದು ಅತ್ಯಧಿಕ
ಹಿಂಸೆಗೆ ಗುರಿಯಾದರು. ಆದರೆ ಅವರಿಂದಲೂ ಅಧಿಕಾರಿಗಳಿಗೆ ಬೇಕಾದ ವಾರ್ತೆ
ಸಿಗಲಿಲ್ಲ.
"ಅಪ್ಪು -ಅಬೂಬಕರರನ್ನು ಹಿಡಿದುಕೊಟ್ಟವರಿಗೆ ಭಾರಿ ಬಹುಮಾನ ಎಂದು<noinclude></noinclude>
k6onfmvpooyq42ift8jw0bg9roxxim5
318072
318070
2026-05-08T09:54:39Z
Ashwini Rai K
8475
318072
proofread-page
text/x-wiki
<noinclude><pagequality level="4" user="Ashwini Rai K" /></noinclude>
ಚಿರಸ್ಮರಣೆ {{gap}}{{gap}}{{gap}}{{gap}}{{gap}}{{gap}}{{gap}} {{gap}}{{gap}}{{gap}} ೨೧೩
<p> "ಲಾಂಗ್ ಲಿವ್ ದಿ ಕಿಂಗ್." <\p>
<p> ಉಪಾಧ್ಯಾಯರು ಪಾಠ ಒಪ್ಪಿಸಿದರು.<\p>
<p> "ಇನ್ನು ಹೊರಡು!"<\p>
<p>ಬೇರೆಯವರಿಗೆ ಬೇರೆ ರೀತಿಯ ಪ್ರಶ್ನೆ. ಹೆಂಗಸರೇಲ್ಲಿ ಮಾಯವಾದರು?ಎಂದು
ಗುಡುಗು. ತಲೆ ತಪ್ಪಿಸಿಕೊಂಡಿದ್ದ ಮುಂಡೇಗಂಡರಿಗಾಗಿ ಗರ್ಜನೆ. <\p>
<p>"ಅಪ್ಪು---ಅಬೂಬಕರ್....ಎಂಥ ಶಿಕ್ಷೆಕೊಟ್ಟರೂ ಸಾಲದು ಅವರಿಬ್ಬರಿಗೆ!"<\p>
<p>ಮತ್ತೊಂದು ದಿನ ಕಳೆಯಿತು. ಬೇಟೆಯ ರೀತಿಯೂ ಬದಲಾಯಿತು. ಸಶಸ್ತ್ರ
ದಳದವರು, ನಂಬಿಯಾರರ ಸೇವಕರು ತೋರಿಸಿಕೊಟ್ಟ ಕೆಲವು ಗುಡಿಸಲುಗಳನ್ನು
ಸುಟ್ಟ ಹೋಳಿ ಮಾಡಿದರು. ಒಂದೆಡೆ, ಕಾಯಿಲೆಬಿದ್ದು ಓಡಿ ಹೋಗಲಾರದೆ
ಉಳಿದಿದ್ದ ಹೆಂಗಸೊಬ್ಬಳ ಮೇಲೆ ನಾಲ್ಕಾರು ಜನ ಸೈನಿಕರಿಂದ ಅತ್ಯಾಚಾರ
ನಡೆಯಿತು. ತಮ್ಮನ್ನು ನೋಡಿ ಹತ್ತಿರ ಬಂದು ಬೊಗಳಿತೆಂದು ಒಂದು
ನಾಯಿಯನ್ನು ಅವರು ಕೊಂದರು. <\p>
<p>ಹಳ್ಳಿಯ ಹೊರ ವಲಯದಲ್ಲೇ ನಿಂತಿದ್ದ ಹಲವಾರು ಜನ ಹಸಿವನ್ನು
ತಾಳಲಾರದೆಹೋದರು. ಗುಡಿಸಲುಗಳಿಂದ ಕಂಡು ಬಂದ ಬೆಂಕಿಯಂತೂ ಅವರನ್ನು
ಅಪಾರ ಕಳವಳಕ್ಕೆ ಗುರಿಮಾಡಿತು. ಆ ಕಂಗಾಲ ಪರಿಸ್ಥಿತಿಯಲ್ಲಿ ಅಪ್ಪುವೆಂದ:
<p>"ನೀವು ಹೋಗಿ ಸಂಗಾತಿಗಳೇ!" ಇಲ್ಲಿದು ಏನೂ ಗೊತ್ತಾಗದೆ ಸಂಕಟ
ಪಡೋದಕ್ಕಿಂತ ಹಳ್ಳೀಲೇ ನೀವಿರೋಸದು ಮೇಲು."
ಕೆಲವರೆಂದರು:
<p>"ನೀವೂ ಬಂದ್ಬಿಡಿ ಅಪ್ಪು. ಅಷ್ಟು ಜನರನ್ನು ಹಿಡ್ಕೊಂಡು ಹೋಗಿದ್ದಾರೆ.
ಅವರ ಜತೇಲಿ ನಾವೂ."
"ಇಲ್ಲ. ನಾನು ಮತ್ತು ಅಬೂಬಕರ್ ಇನ್ನೊ ಸ್ವಲ್ಪ ದಿವಸ ಹೊರಗಿರ್ತ್ತೆವೆ.
ಪಂಡಿತರು-ಮಾಸ್ತರು ಯಾರನ್ನಾದರೂ ನೋಡೋದಕ್ಕೆ ಪ್ರಯತ್ನ ಪಡ್ತೇವೆ."
"ಆಗಲಿ--ಹಾಗೇ ಮಾಡಿ."
ಆ ಇಬ್ಬರನ್ನುಳಿದು ರೈತರೆಲ್ಲ ಹಳ್ಳಿಗೆ ಮರಳಿ ನುಸುಳಿದರು.
ಬೇರೊಂದು ದಿನದ ಬೇಟೆಯಲ್ಲಿ, ಮತ್ತೆ ಹದಿನೈದು ಜನ ರೈತರ
ಬಂಧನವಾಯಿತು. ಅಷ್ಟು ಜನ, ಅಪ್ಪು -ಅಬೂಬಕರರ ಸಂಗಡಿಗರೆಂದು ಅತ್ಯಧಿಕ
ಹಿಂಸೆಗೆ ಗುರಿಯಾದರು. ಆದರೆ ಅವರಿಂದಲೂ ಅಧಿಕಾರಿಗಳಿಗೆ ಬೇಕಾದ ವಾರ್ತೆ
ಸಿಗಲಿಲ್ಲ.
"ಅಪ್ಪು -ಅಬೂಬಕರರನ್ನು ಹಿಡಿದುಕೊಟ್ಟವರಿಗೆ ಭಾರಿ ಬಹುಮಾನ ಎಂದು<noinclude></noinclude>
d81sfinj5okani53w87bocqp1u9p01p
318073
318072
2026-05-08T09:55:12Z
Ashwini Rai K
8475
318073
proofread-page
text/x-wiki
<noinclude><pagequality level="4" user="Ashwini Rai K" /></noinclude>
ಚಿರಸ್ಮರಣೆ {{gap}}{{gap}}{{gap}}{{gap}}{{gap}}{{gap}}{{gap}} {{gap}}{{gap}}{{gap}} ೨೧೩
<p> "ಲಾಂಗ್ ಲಿವ್ ದಿ ಕಿಂಗ್."
<p> ಉಪಾಧ್ಯಾಯರು ಪಾಠ ಒಪ್ಪಿಸಿದರು.
<p> "ಇನ್ನು ಹೊರಡು!"
<p>ಬೇರೆಯವರಿಗೆ ಬೇರೆ ರೀತಿಯ ಪ್ರಶ್ನೆ. ಹೆಂಗಸರೇಲ್ಲಿ ಮಾಯವಾದರು?ಎಂದು
ಗುಡುಗು. ತಲೆ ತಪ್ಪಿಸಿಕೊಂಡಿದ್ದ ಮುಂಡೇಗಂಡರಿಗಾಗಿ ಗರ್ಜನೆ. <\p>
<p>"ಅಪ್ಪು---ಅಬೂಬಕರ್....ಎಂಥ ಶಿಕ್ಷೆಕೊಟ್ಟರೂ ಸಾಲದು ಅವರಿಬ್ಬರಿಗೆ!"<\p>
<p>ಮತ್ತೊಂದು ದಿನ ಕಳೆಯಿತು. ಬೇಟೆಯ ರೀತಿಯೂ ಬದಲಾಯಿತು. ಸಶಸ್ತ್ರ
ದಳದವರು, ನಂಬಿಯಾರರ ಸೇವಕರು ತೋರಿಸಿಕೊಟ್ಟ ಕೆಲವು ಗುಡಿಸಲುಗಳನ್ನು
ಸುಟ್ಟ ಹೋಳಿ ಮಾಡಿದರು. ಒಂದೆಡೆ, ಕಾಯಿಲೆಬಿದ್ದು ಓಡಿ ಹೋಗಲಾರದೆ
ಉಳಿದಿದ್ದ ಹೆಂಗಸೊಬ್ಬಳ ಮೇಲೆ ನಾಲ್ಕಾರು ಜನ ಸೈನಿಕರಿಂದ ಅತ್ಯಾಚಾರ
ನಡೆಯಿತು. ತಮ್ಮನ್ನು ನೋಡಿ ಹತ್ತಿರ ಬಂದು ಬೊಗಳಿತೆಂದು ಒಂದು
ನಾಯಿಯನ್ನು ಅವರು ಕೊಂದರು. <\p>
<p>ಹಳ್ಳಿಯ ಹೊರ ವಲಯದಲ್ಲೇ ನಿಂತಿದ್ದ ಹಲವಾರು ಜನ ಹಸಿವನ್ನು
ತಾಳಲಾರದೆಹೋದರು. ಗುಡಿಸಲುಗಳಿಂದ ಕಂಡು ಬಂದ ಬೆಂಕಿಯಂತೂ ಅವರನ್ನು
ಅಪಾರ ಕಳವಳಕ್ಕೆ ಗುರಿಮಾಡಿತು. ಆ ಕಂಗಾಲ ಪರಿಸ್ಥಿತಿಯಲ್ಲಿ ಅಪ್ಪುವೆಂದ:
<p>"ನೀವು ಹೋಗಿ ಸಂಗಾತಿಗಳೇ!" ಇಲ್ಲಿದು ಏನೂ ಗೊತ್ತಾಗದೆ ಸಂಕಟ
ಪಡೋದಕ್ಕಿಂತ ಹಳ್ಳೀಲೇ ನೀವಿರೋಸದು ಮೇಲು."
ಕೆಲವರೆಂದರು:
<p>"ನೀವೂ ಬಂದ್ಬಿಡಿ ಅಪ್ಪು. ಅಷ್ಟು ಜನರನ್ನು ಹಿಡ್ಕೊಂಡು ಹೋಗಿದ್ದಾರೆ.
ಅವರ ಜತೇಲಿ ನಾವೂ."
"ಇಲ್ಲ. ನಾನು ಮತ್ತು ಅಬೂಬಕರ್ ಇನ್ನೊ ಸ್ವಲ್ಪ ದಿವಸ ಹೊರಗಿರ್ತ್ತೆವೆ.
ಪಂಡಿತರು-ಮಾಸ್ತರು ಯಾರನ್ನಾದರೂ ನೋಡೋದಕ್ಕೆ ಪ್ರಯತ್ನ ಪಡ್ತೇವೆ."
"ಆಗಲಿ--ಹಾಗೇ ಮಾಡಿ."
ಆ ಇಬ್ಬರನ್ನುಳಿದು ರೈತರೆಲ್ಲ ಹಳ್ಳಿಗೆ ಮರಳಿ ನುಸುಳಿದರು.
ಬೇರೊಂದು ದಿನದ ಬೇಟೆಯಲ್ಲಿ, ಮತ್ತೆ ಹದಿನೈದು ಜನ ರೈತರ
ಬಂಧನವಾಯಿತು. ಅಷ್ಟು ಜನ, ಅಪ್ಪು -ಅಬೂಬಕರರ ಸಂಗಡಿಗರೆಂದು ಅತ್ಯಧಿಕ
ಹಿಂಸೆಗೆ ಗುರಿಯಾದರು. ಆದರೆ ಅವರಿಂದಲೂ ಅಧಿಕಾರಿಗಳಿಗೆ ಬೇಕಾದ ವಾರ್ತೆ
ಸಿಗಲಿಲ್ಲ.
"ಅಪ್ಪು -ಅಬೂಬಕರರನ್ನು ಹಿಡಿದುಕೊಟ್ಟವರಿಗೆ ಭಾರಿ ಬಹುಮಾನ ಎಂದು<noinclude></noinclude>
eomtddyu3t5o66urwbhiz35q580ag2t
318075
318073
2026-05-08T09:55:44Z
Ashwini Rai K
8475
318075
proofread-page
text/x-wiki
<noinclude><pagequality level="4" user="Ashwini Rai K" /></noinclude>
ಚಿರಸ್ಮರಣೆ {{gap}}{{gap}}{{gap}}{{gap}}{{gap}}{{gap}}{{gap}} {{gap}}{{gap}}{{gap}} ೨೧೩
<p> "ಲಾಂಗ್ ಲಿವ್ ದಿ ಕಿಂಗ್."
<p> ಉಪಾಧ್ಯಾಯರು ಪಾಠ ಒಪ್ಪಿಸಿದರು.
<p> "ಇನ್ನು ಹೊರಡು!"
<p>ಬೇರೆಯವರಿಗೆ ಬೇರೆ ರೀತಿಯ ಪ್ರಶ್ನೆ. ಹೆಂಗಸರೇಲ್ಲಿ ಮಾಯವಾದರು?ಎಂದು
ಗುಡುಗು. ತಲೆ ತಪ್ಪಿಸಿಕೊಂಡಿದ್ದ ಮುಂಡೇಗಂಡರಿಗಾಗಿ ಗರ್ಜನೆ. <\p>
<p>"ಅಪ್ಪು---ಅಬೂಬಕರ್....ಎಂಥ ಶಿಕ್ಷೆಕೊಟ್ಟರೂ ಸಾಲದು ಅವರಿಬ್ಬರಿಗೆ!"
<p>ಮತ್ತೊಂದು ದಿನ ಕಳೆಯಿತು. ಬೇಟೆಯ ರೀತಿಯೂ ಬದಲಾಯಿತು. ಸಶಸ್ತ್ರ
ದಳದವರು, ನಂಬಿಯಾರರ ಸೇವಕರು ತೋರಿಸಿಕೊಟ್ಟ ಕೆಲವು ಗುಡಿಸಲುಗಳನ್ನು
ಸುಟ್ಟ ಹೋಳಿ ಮಾಡಿದರು. ಒಂದೆಡೆ, ಕಾಯಿಲೆಬಿದ್ದು ಓಡಿ ಹೋಗಲಾರದೆ
ಉಳಿದಿದ್ದ ಹೆಂಗಸೊಬ್ಬಳ ಮೇಲೆ ನಾಲ್ಕಾರು ಜನ ಸೈನಿಕರಿಂದ ಅತ್ಯಾಚಾರ
ನಡೆಯಿತು. ತಮ್ಮನ್ನು ನೋಡಿ ಹತ್ತಿರ ಬಂದು ಬೊಗಳಿತೆಂದು ಒಂದು
ನಾಯಿಯನ್ನು ಅವರು ಕೊಂದರು.
<p>ಹಳ್ಳಿಯ ಹೊರ ವಲಯದಲ್ಲೇ ನಿಂತಿದ್ದ ಹಲವಾರು ಜನ ಹಸಿವನ್ನು
ತಾಳಲಾರದೆಹೋದರು. ಗುಡಿಸಲುಗಳಿಂದ ಕಂಡು ಬಂದ ಬೆಂಕಿಯಂತೂ ಅವರನ್ನು
ಅಪಾರ ಕಳವಳಕ್ಕೆ ಗುರಿಮಾಡಿತು. ಆ ಕಂಗಾಲ ಪರಿಸ್ಥಿತಿಯಲ್ಲಿ ಅಪ್ಪುವೆಂದ:
<p>"ನೀವು ಹೋಗಿ ಸಂಗಾತಿಗಳೇ!" ಇಲ್ಲಿದು ಏನೂ ಗೊತ್ತಾಗದೆ ಸಂಕಟ
ಪಡೋದಕ್ಕಿಂತ ಹಳ್ಳೀಲೇ ನೀವಿರೋಸದು ಮೇಲು."
ಕೆಲವರೆಂದರು:
<p>"ನೀವೂ ಬಂದ್ಬಿಡಿ ಅಪ್ಪು. ಅಷ್ಟು ಜನರನ್ನು ಹಿಡ್ಕೊಂಡು ಹೋಗಿದ್ದಾರೆ.
ಅವರ ಜತೇಲಿ ನಾವೂ."
"ಇಲ್ಲ. ನಾನು ಮತ್ತು ಅಬೂಬಕರ್ ಇನ್ನೊ ಸ್ವಲ್ಪ ದಿವಸ ಹೊರಗಿರ್ತ್ತೆವೆ.
ಪಂಡಿತರು-ಮಾಸ್ತರು ಯಾರನ್ನಾದರೂ ನೋಡೋದಕ್ಕೆ ಪ್ರಯತ್ನ ಪಡ್ತೇವೆ."
"ಆಗಲಿ--ಹಾಗೇ ಮಾಡಿ."
ಆ ಇಬ್ಬರನ್ನುಳಿದು ರೈತರೆಲ್ಲ ಹಳ್ಳಿಗೆ ಮರಳಿ ನುಸುಳಿದರು.
ಬೇರೊಂದು ದಿನದ ಬೇಟೆಯಲ್ಲಿ, ಮತ್ತೆ ಹದಿನೈದು ಜನ ರೈತರ
ಬಂಧನವಾಯಿತು. ಅಷ್ಟು ಜನ, ಅಪ್ಪು -ಅಬೂಬಕರರ ಸಂಗಡಿಗರೆಂದು ಅತ್ಯಧಿಕ
ಹಿಂಸೆಗೆ ಗುರಿಯಾದರು. ಆದರೆ ಅವರಿಂದಲೂ ಅಧಿಕಾರಿಗಳಿಗೆ ಬೇಕಾದ ವಾರ್ತೆ
ಸಿಗಲಿಲ್ಲ.
"ಅಪ್ಪು -ಅಬೂಬಕರರನ್ನು ಹಿಡಿದುಕೊಟ್ಟವರಿಗೆ ಭಾರಿ ಬಹುಮಾನ ಎಂದು<noinclude></noinclude>
kqkk6xxewlhst43j8mt635pt3ti5p0x
318077
318075
2026-05-08T09:56:01Z
Ashwini Rai K
8475
318077
proofread-page
text/x-wiki
<noinclude><pagequality level="4" user="Ashwini Rai K" /></noinclude>
ಚಿರಸ್ಮರಣೆ {{gap}}{{gap}}{{gap}}{{gap}}{{gap}}{{gap}}{{gap}} {{gap}}{{gap}}{{gap}} ೨೧೩
<p> "ಲಾಂಗ್ ಲಿವ್ ದಿ ಕಿಂಗ್."
<p> ಉಪಾಧ್ಯಾಯರು ಪಾಠ ಒಪ್ಪಿಸಿದರು.
<p> "ಇನ್ನು ಹೊರಡು!"
<p>ಬೇರೆಯವರಿಗೆ ಬೇರೆ ರೀತಿಯ ಪ್ರಶ್ನೆ. ಹೆಂಗಸರೇಲ್ಲಿ ಮಾಯವಾದರು?ಎಂದು
ಗುಡುಗು. ತಲೆ ತಪ್ಪಿಸಿಕೊಂಡಿದ್ದ ಮುಂಡೇಗಂಡರಿಗಾಗಿ ಗರ್ಜನೆ.
<p>"ಅಪ್ಪು---ಅಬೂಬಕರ್....ಎಂಥ ಶಿಕ್ಷೆಕೊಟ್ಟರೂ ಸಾಲದು ಅವರಿಬ್ಬರಿಗೆ!"
<p>ಮತ್ತೊಂದು ದಿನ ಕಳೆಯಿತು. ಬೇಟೆಯ ರೀತಿಯೂ ಬದಲಾಯಿತು. ಸಶಸ್ತ್ರ
ದಳದವರು, ನಂಬಿಯಾರರ ಸೇವಕರು ತೋರಿಸಿಕೊಟ್ಟ ಕೆಲವು ಗುಡಿಸಲುಗಳನ್ನು
ಸುಟ್ಟ ಹೋಳಿ ಮಾಡಿದರು. ಒಂದೆಡೆ, ಕಾಯಿಲೆಬಿದ್ದು ಓಡಿ ಹೋಗಲಾರದೆ
ಉಳಿದಿದ್ದ ಹೆಂಗಸೊಬ್ಬಳ ಮೇಲೆ ನಾಲ್ಕಾರು ಜನ ಸೈನಿಕರಿಂದ ಅತ್ಯಾಚಾರ
ನಡೆಯಿತು. ತಮ್ಮನ್ನು ನೋಡಿ ಹತ್ತಿರ ಬಂದು ಬೊಗಳಿತೆಂದು ಒಂದು
ನಾಯಿಯನ್ನು ಅವರು ಕೊಂದರು.
<p>ಹಳ್ಳಿಯ ಹೊರ ವಲಯದಲ್ಲೇ ನಿಂತಿದ್ದ ಹಲವಾರು ಜನ ಹಸಿವನ್ನು
ತಾಳಲಾರದೆಹೋದರು. ಗುಡಿಸಲುಗಳಿಂದ ಕಂಡು ಬಂದ ಬೆಂಕಿಯಂತೂ ಅವರನ್ನು
ಅಪಾರ ಕಳವಳಕ್ಕೆ ಗುರಿಮಾಡಿತು. ಆ ಕಂಗಾಲ ಪರಿಸ್ಥಿತಿಯಲ್ಲಿ ಅಪ್ಪುವೆಂದ:
<p>"ನೀವು ಹೋಗಿ ಸಂಗಾತಿಗಳೇ!" ಇಲ್ಲಿದು ಏನೂ ಗೊತ್ತಾಗದೆ ಸಂಕಟ
ಪಡೋದಕ್ಕಿಂತ ಹಳ್ಳೀಲೇ ನೀವಿರೋಸದು ಮೇಲು."
ಕೆಲವರೆಂದರು:
<p>"ನೀವೂ ಬಂದ್ಬಿಡಿ ಅಪ್ಪು. ಅಷ್ಟು ಜನರನ್ನು ಹಿಡ್ಕೊಂಡು ಹೋಗಿದ್ದಾರೆ.
ಅವರ ಜತೇಲಿ ನಾವೂ."
"ಇಲ್ಲ. ನಾನು ಮತ್ತು ಅಬೂಬಕರ್ ಇನ್ನೊ ಸ್ವಲ್ಪ ದಿವಸ ಹೊರಗಿರ್ತ್ತೆವೆ.
ಪಂಡಿತರು-ಮಾಸ್ತರು ಯಾರನ್ನಾದರೂ ನೋಡೋದಕ್ಕೆ ಪ್ರಯತ್ನ ಪಡ್ತೇವೆ."
"ಆಗಲಿ--ಹಾಗೇ ಮಾಡಿ."
ಆ ಇಬ್ಬರನ್ನುಳಿದು ರೈತರೆಲ್ಲ ಹಳ್ಳಿಗೆ ಮರಳಿ ನುಸುಳಿದರು.
ಬೇರೊಂದು ದಿನದ ಬೇಟೆಯಲ್ಲಿ, ಮತ್ತೆ ಹದಿನೈದು ಜನ ರೈತರ
ಬಂಧನವಾಯಿತು. ಅಷ್ಟು ಜನ, ಅಪ್ಪು -ಅಬೂಬಕರರ ಸಂಗಡಿಗರೆಂದು ಅತ್ಯಧಿಕ
ಹಿಂಸೆಗೆ ಗುರಿಯಾದರು. ಆದರೆ ಅವರಿಂದಲೂ ಅಧಿಕಾರಿಗಳಿಗೆ ಬೇಕಾದ ವಾರ್ತೆ
ಸಿಗಲಿಲ್ಲ.
"ಅಪ್ಪು -ಅಬೂಬಕರರನ್ನು ಹಿಡಿದುಕೊಟ್ಟವರಿಗೆ ಭಾರಿ ಬಹುಮಾನ ಎಂದು<noinclude></noinclude>
814wj4wzqz7xd65jaozvy8new53g27b
ಪುಟ:Chirasmarane-Niranjana.pdf/೨೧೩
104
13032
318078
256363
2026-05-08T09:56:47Z
Ashwini Rai K
8475
/* Validated */
318078
proofread-page
text/x-wiki
<noinclude><pagequality level="4" user="Ashwini Rai K" /></noinclude>
೨೧೪ {{gap}}{{gap}}{{gap}}{{gap}}{{gap}}{{gap}}{{gap}} {{gap}}{{gap}}{{gap}} ಚಿರಸ್ಮರಣೆ
<p>ಹಳ್ಳಿಯಲ್ಲೆಲ್ಲ ಅಧಿಕಾರಿಗಳು ಡಂಗುರ ಸಾರಿಸಿದರು.<\p>
<p> ಆದರೂ ಆ ಇಬ್ಬರ ಪತ್ತೆ ಇಲ್ಲದೆಯೇ ದಿನಗಳು ಕಳೆದುವು........<\p>
<p>ಅಂತೂ ಯುದ್ದ ಬಂದಿತ್ತು ಕಯ್ಯೂರಿಗೆ. ತಾವು ಗೆದ್ದ ಹಳ್ಳಿಯಲ್ಲಿ
ಸಶಸ್ತ್ರದಳದವರು, ವಿಜೇತ ಸೈನಿಕರಂತೆ ವರ್ತಿಸಿದರು. ಅವರನ್ನು ತೃಪ್ತಿಪಡಿಸುವುದು
ಸಾಮಾನ್ಯ ವೆಚ್ಚದ ಮಾತಲ್ಲವೆ೦ಬುದು ನಂಬಿಯಾರರಿಗೆ ಬೇಗನೆ
ಮನದಟ್ಟಾಯಿತು. ಮರಳಿ ದೊರೆತ ಗದುಗೆಗಾಗಿ ಅವರು ತೆರುತ್ತಿದ್ದ ಬೆಲೆ ಅಪಾರ.
ಇದಕ್ಕೂ ಒಂದು ಮಿತಿ ಇರಬೇಕು ಎಂದು ರೋದಿಸಿತು ಅವರ ಮನಸ್ಸು. ಇದಕ್ಕೆ
ಮುಖ್ಯ ಕಾರಣ--ಸಶಸ್ತ್ರ ದಳದ ಅಧಿಕಾರಿ ಜಮೀನ್ದಾರರ ಅಂತಃಪುರದತ್ತ ನೋಟ
ಬೀರಿದ್ದು. ಹಳ್ಳಿ ಬರಡಾಗಿತ್ತೆಂದು, ತಮ್ಮ ಮೆಚ್ಚುಗೆಯ ಒಬ್ಬಳನ್ನು ಅವರು
ಅಧಿಕಾರಗೋಸ್ಕರ ಬಿಟ್ಟುಕೊಡಬೇಕಾಯಿತು. ಆ ನಷ್ಟವನ್ನು ಬಲು ಸಂಕಟದಿಂದ
ಅವರು ಅನುಭವಿಸಿದರು. ರಾಜ್ಯವನ್ನು ಸದ್ಯಃ ತಮ್ಮ ವಶಕೊಟ್ಟು ಇವರೊಮ್ಮೆ
ಹೊರಡಬಾರದೆ ಎಂದು ಗೊಣಗಿದರು.
ಆದರೆ ಸೈನಿಕರು ಹೊರಡುವ ಸ್ಥಿತಿಯಲ್ಲಿರಲಿಲ್ಲ, ಊಟ ಉಪಾಹಾರ
ಬಡವಾಗಬಾರದೆಂದು, ಹಳ್ಳಿಯಲ್ಲಿ ಸಿಕ್ಕಿದ ಕೋಳಿಗಳನ್ನೂ ಆಡುಗಳನ್ನೂ
ಹಂದಿಗಳನ್ನೂ ಅವರು ಹಿಡಿದು ತಂದರು. ಅಕ್ಕಿಯನ್ನು ಶಿಬಿರಕ್ಕೆ ಸಾಗಿಸಿದರು.
ಬಾಳೆಯ ಗೊನೆಗಳನ್ನು ಕಡಿದರು. ಮರಗಳ ಮೇಲೆ ಇನ್ನೂ ಉಳಿದಿದ್ದ ಹಣ್ಣು
ಹಂಪಲುಗಳನ್ನು ಸೂರೆ ಮಾಡಿದರು.
ತೇಜಸ್ವಿನಿ ನದಿ ಅವರ ಜಲಕೇಳಿಯಿಂದ ಬೇಸತ್ತಿತು.............
....... ಮುಂದಿನ ಕಾರ್ಯಕ್ರಮವೇನೆಂದು ಸಶಸ್ತ್ರ ದಳದ ಅಧಿಕಾರಿಯನ್ನು
ಕೇಳಲು ಹೊರಟ ನಂಬಿಯಾರರು, ಪ್ರಶ್ನೆಯನ್ನು ಉಚ್ಚರಿಸಿಲು ಧೈರ್ಯಬಾರದೆ
"ಆ ನಾಯಿಗಳೆರಡು ಸಿಗಲೇ ಇಲ್ಲ" ಎಂದರು.
'ನೋಡೋಣ. ಎಷ್ಟು ದಿವಸ ತಪ್ಪಿಸ್ಕೊಳ್ತಾವೇಂತ. ನಾವೇನು ಅವರನ್ನು
ಹಿಡೀದೆ ಇಲ್ಲಿಂದ ಹೊರಡೋದಿಲ್ಲ."
ತಮ್ಮ ಸಂಕಟದ ಕಾಲ ಇನ್ನೂ ಲಂಬಿಸುವ ಸೂಚನೆ ಕಂಡು ನಂಬಿಯಾರರು
ತಣ್ಣಗಾದರು. ಬಂದವರಿಗೆ ಸಿಗರೇಟು ಕೊಟ್ಟುಕೊಟ್ಟು ಸಾಕಾಗಿ, ಸ್ವತಃ ತಾವು
ಸೇದುವುದನ್ನೇ ನಿಲ್ಲಿಸಿಬಿಟ್ಟಿದ್ದರು ಜಮೀನ್ದಾರರು. ಸುಮ್ಮನೆ ಕುಳಿತು ಯೋಚಿಸಿ
ಯೋಚಿಸಿ ಅವರೆಂದರು:
<p> "ಅವರಿಬ್ಬರೂ ಬೇರೆ ಊರಿಗೆ ಓಡಿ ಹೋಗಿದ್ದರೂ ಹೋಗಿರಬಹುದು."<\p>
<p>ಕುಡಿದುದು ಸ್ವಲ್ಪ ಜಾಸ್ತಿಯಾಗಿ ಮತ್ತೇರಿದ್ದ ಆ ಅಧಿಕಾರಯೆಂದ:<\p><noinclude></noinclude>
1nr3eu4o3g0b8cq8wcsdr4iv0g752ea
318079
318078
2026-05-08T09:57:14Z
Ashwini Rai K
8475
318079
proofread-page
text/x-wiki
<noinclude><pagequality level="4" user="Ashwini Rai K" /></noinclude>
೨೧೪ {{gap}}{{gap}}{{gap}}{{gap}}{{gap}}{{gap}}{{gap}} {{gap}}{{gap}}{{gap}} ಚಿರಸ್ಮರಣೆ
<p>ಹಳ್ಳಿಯಲ್ಲೆಲ್ಲ ಅಧಿಕಾರಿಗಳು ಡಂಗುರ ಸಾರಿಸಿದರು.
<p> ಆದರೂ ಆ ಇಬ್ಬರ ಪತ್ತೆ ಇಲ್ಲದೆಯೇ ದಿನಗಳು ಕಳೆದುವು........
<p>ಅಂತೂ ಯುದ್ದ ಬಂದಿತ್ತು ಕಯ್ಯೂರಿಗೆ. ತಾವು ಗೆದ್ದ ಹಳ್ಳಿಯಲ್ಲಿ
ಸಶಸ್ತ್ರದಳದವರು, ವಿಜೇತ ಸೈನಿಕರಂತೆ ವರ್ತಿಸಿದರು. ಅವರನ್ನು ತೃಪ್ತಿಪಡಿಸುವುದು
ಸಾಮಾನ್ಯ ವೆಚ್ಚದ ಮಾತಲ್ಲವೆ೦ಬುದು ನಂಬಿಯಾರರಿಗೆ ಬೇಗನೆ
ಮನದಟ್ಟಾಯಿತು. ಮರಳಿ ದೊರೆತ ಗದುಗೆಗಾಗಿ ಅವರು ತೆರುತ್ತಿದ್ದ ಬೆಲೆ ಅಪಾರ.
ಇದಕ್ಕೂ ಒಂದು ಮಿತಿ ಇರಬೇಕು ಎಂದು ರೋದಿಸಿತು ಅವರ ಮನಸ್ಸು. ಇದಕ್ಕೆ
ಮುಖ್ಯ ಕಾರಣ--ಸಶಸ್ತ್ರ ದಳದ ಅಧಿಕಾರಿ ಜಮೀನ್ದಾರರ ಅಂತಃಪುರದತ್ತ ನೋಟ
ಬೀರಿದ್ದು. ಹಳ್ಳಿ ಬರಡಾಗಿತ್ತೆಂದು, ತಮ್ಮ ಮೆಚ್ಚುಗೆಯ ಒಬ್ಬಳನ್ನು ಅವರು
ಅಧಿಕಾರಗೋಸ್ಕರ ಬಿಟ್ಟುಕೊಡಬೇಕಾಯಿತು. ಆ ನಷ್ಟವನ್ನು ಬಲು ಸಂಕಟದಿಂದ
ಅವರು ಅನುಭವಿಸಿದರು. ರಾಜ್ಯವನ್ನು ಸದ್ಯಃ ತಮ್ಮ ವಶಕೊಟ್ಟು ಇವರೊಮ್ಮೆ
ಹೊರಡಬಾರದೆ ಎಂದು ಗೊಣಗಿದರು.
ಆದರೆ ಸೈನಿಕರು ಹೊರಡುವ ಸ್ಥಿತಿಯಲ್ಲಿರಲಿಲ್ಲ, ಊಟ ಉಪಾಹಾರ
ಬಡವಾಗಬಾರದೆಂದು, ಹಳ್ಳಿಯಲ್ಲಿ ಸಿಕ್ಕಿದ ಕೋಳಿಗಳನ್ನೂ ಆಡುಗಳನ್ನೂ
ಹಂದಿಗಳನ್ನೂ ಅವರು ಹಿಡಿದು ತಂದರು. ಅಕ್ಕಿಯನ್ನು ಶಿಬಿರಕ್ಕೆ ಸಾಗಿಸಿದರು.
ಬಾಳೆಯ ಗೊನೆಗಳನ್ನು ಕಡಿದರು. ಮರಗಳ ಮೇಲೆ ಇನ್ನೂ ಉಳಿದಿದ್ದ ಹಣ್ಣು
ಹಂಪಲುಗಳನ್ನು ಸೂರೆ ಮಾಡಿದರು.
ತೇಜಸ್ವಿನಿ ನದಿ ಅವರ ಜಲಕೇಳಿಯಿಂದ ಬೇಸತ್ತಿತು.............
....... ಮುಂದಿನ ಕಾರ್ಯಕ್ರಮವೇನೆಂದು ಸಶಸ್ತ್ರ ದಳದ ಅಧಿಕಾರಿಯನ್ನು
ಕೇಳಲು ಹೊರಟ ನಂಬಿಯಾರರು, ಪ್ರಶ್ನೆಯನ್ನು ಉಚ್ಚರಿಸಿಲು ಧೈರ್ಯಬಾರದೆ
"ಆ ನಾಯಿಗಳೆರಡು ಸಿಗಲೇ ಇಲ್ಲ" ಎಂದರು.
'ನೋಡೋಣ. ಎಷ್ಟು ದಿವಸ ತಪ್ಪಿಸ್ಕೊಳ್ತಾವೇಂತ. ನಾವೇನು ಅವರನ್ನು
ಹಿಡೀದೆ ಇಲ್ಲಿಂದ ಹೊರಡೋದಿಲ್ಲ."
ತಮ್ಮ ಸಂಕಟದ ಕಾಲ ಇನ್ನೂ ಲಂಬಿಸುವ ಸೂಚನೆ ಕಂಡು ನಂಬಿಯಾರರು
ತಣ್ಣಗಾದರು. ಬಂದವರಿಗೆ ಸಿಗರೇಟು ಕೊಟ್ಟುಕೊಟ್ಟು ಸಾಕಾಗಿ, ಸ್ವತಃ ತಾವು
ಸೇದುವುದನ್ನೇ ನಿಲ್ಲಿಸಿಬಿಟ್ಟಿದ್ದರು ಜಮೀನ್ದಾರರು. ಸುಮ್ಮನೆ ಕುಳಿತು ಯೋಚಿಸಿ
ಯೋಚಿಸಿ ಅವರೆಂದರು:
<p> "ಅವರಿಬ್ಬರೂ ಬೇರೆ ಊರಿಗೆ ಓಡಿ ಹೋಗಿದ್ದರೂ ಹೋಗಿರಬಹುದು."<\p>
<p>ಕುಡಿದುದು ಸ್ವಲ್ಪ ಜಾಸ್ತಿಯಾಗಿ ಮತ್ತೇರಿದ್ದ ಆ ಅಧಿಕಾರಯೆಂದ:<\p><noinclude></noinclude>
fn9z0y0wyi6eg03d3vnfdji6i7330ar
ಪುಟ:Chirasmarane-Niranjana.pdf/೨೧೪
104
13033
318080
256466
2026-05-08T09:58:29Z
Ashwini Rai K
8475
/* Validated */
318080
proofread-page
text/x-wiki
<noinclude><pagequality level="4" user="Ashwini Rai K" /></noinclude>
ಚಿರಸ್ಮರಣೆ {{gap}}{{gap}}{{gap}}{{gap}}{{gap}}{{gap}}{{gap}} {{gap}}{{gap}}{{gap}} ೨೧೫
<p> "ನೀನಾಕಪ್ಪ ಹೆದರ್ತಿಯಾ? ನಾವಿಷ್ಟು ಜನ ಇರುವಾಗ ಯಾಕಪ್ಪ ಹೆದರ್ಕೆ?"
<p>ತಮ್ಮ ಮಾನ ಏಕವಚನದ ಮಟ್ಟಕ್ಕಿಳಿಯಿತಲ್ಲ ಎಂದು ನಂಬಿಯಾರರು
ಉಗುಳು ನುಂಗಿ, ತಣ್ಣಗಾದರು.
<p><br> ಅತಿಥಿಸತ್ಕಾರ ಮಾಡಿ ಬಳಲಿದ ಜಮೀನ್ದಾರರ ಗೋಳು ನೋಡಿ ಮುಗುಳು
ನಕ್ಕು, ಸಶಸ್ತ್ರ ದಳದವರಿಗಿಂತ ತಾನು ಮೇಲೆಂದು ತೋರಿಸಿಕೊಳ್ಳುತ್ತ, ಪೋಲೀಸ್
ಅಧಿಕಾರಿಯೆಂದ:
<p>{{gap}}"ನಾನೇನೋ ನಾಳೆ ಹೊರಡ್ತೇನೆ. ಮುಂದಿನ ಕೆಲಸಕ್ಕೆ ಏರ್ಪಾಟು ಮಾಡ್ಬೇಕು.<\p>
<p>ಅಂತೂ ನಿಮಗೆ ಸ್ವಲ್ಪ ಭಾರ ಕಡಿಮೆಯಾಗ್ತದೆ."
<p>{{gap}}ನಗಬೇಕೆಂದು ನಂಬಿಯಾರರು ಯತ್ನಿಸಿದರು; ಆದರೆ ಅದರ ಬದಲು ಅಳು
ಬಂತು.
<p><br> "ಆ ನಂಬೂದಿರಿ ನೋಡಿ. ಬರಲೇ ಇಲ್ಲ. ನೀಲೇಶ್ವರದಲ್ಲೇ ಇದ್ದಾನೆ" ಎಂದು
ತನ್ನ ವ್ಯವಸಾಯ ಬಂಧುವನ್ನು ಅವರು ಜರೆದರು, ಬಂದವರನ್ನು ನೋಡಿಕೊಳ್ಳುವ
ಜವಾಬ್ದಾರಿಯಿಂದ ನಂಬೂದಿರಿ ನುಣುಚಿಕೊಂಡನೆಂದು ನಂಬಿಯಾರರಿಗೆ
ಬ್ರಹ್ಮಾಂಡ ಕೋಪ ಬಂದಿತ್ತು.
<p>ಪೋಲೀಸ್ ಅಧಿಕಾರಿ ಸ್ವಲ್ಪ ತಗ್ಗಿಸಿ ಅಂದ:
<p> "ಏನಿದ್ದರೂ ಮಳೆಗಾಲದವರೆಗೆ. ಮಳೆ ಬಂದ ಮೇಲೆ ಸಶಸ್ತ್ರದಳ ಇಲ್ಲಿ
ಇರೋದಕ್ಕಾಗೋದಿಲ್ಲ."
ಆದರೆ, ಮುಂಗಾರು ಮಳೆ ಬರಲು ದೀರ್ಘವಾದೊಂದು ತಿಂಗಳಿತ್ತು ಇನ್ನೂ.
ನಂಬಿಯಾರರು ಮನೆಯಿಂದ ಹೊರಬಿದ್ದಾಗಲೆಲ್ಲ ಕರಿ ಮೋಡ ಕಾಣಿಸುವುದೇನೋ
ಎಂದು ಪಶ್ಚಿಮದತ್ತ ನೋಡಿದರು.
೩
ಮೈಯೆಲ್ಲ ಕಣ್ಣಾಗಿ, ಎದುರು ಬಂದ ಅಪರಿಚಿತರೆಲ್ಲ ಗೂಢಚಾರರೇ ಎಂದು
ಸಂಶಯಪಡುತ್ತ, ಹಗಲು ಗುಡ್ಡಕಾಡುಗಳ ಹಾದಿಯೂ ರಾತ್ರೆ ರಾಜಮಾರ್ಗದ
ಮೇಲೂ ನಡೆಯುತ್ತ, ಅಪ್ಪು ಮತ್ತು ಅಬೂಬಕರ್ ತಲಚೇರಿ ಸೇರಿದರು.
ಅಬೂಬಕರ್ ಕೂಲಿಕಾರ ಚಳವಳಿಯ ಯೋಧನಾಗಿ ರೂಪುಗೊಂಡಿದ್ದ ಊರು.
ಕತ್ತಲಾಗುವವರೆಗೂ ಕಾದಿದ್ದು, ಬಳಿಕ ರಾತ್ರೆ ಶಾಲೆಗೆ ಅವರು ಸುದ್ದಿ ಕಳುಹಿದರು.
ಅಲ್ಲಿಂದ ಆಬೂಬಕರನ ಜತೆಗಾರನಾಗಿದ್ದವನೊಬ್ಬ ಬಂದ. ಪತ್ರಿಕೆಗಳ ಮೂಲಕ
ಆಗಲೇ ಎಲ್ಲವನ್ನೂ ತಿಳಿದಿದ್ದ ಆತನಿಗೆ ಏನನ್ನೂ ವಿವರಿಸಬೇಕಾದುದಿರಲಿಲ್ಲ.<\p><noinclude></noinclude>
nf8blu5shkdtw7njenkr3u3bomyusa8
ಪುಟ:Chirasmarane-Niranjana.pdf/೨೧೫
104
13034
318082
256613
2026-05-08T09:59:15Z
Ashwini Rai K
8475
/* Validated */
318082
proofread-page
text/x-wiki
<noinclude><pagequality level="4" user="Ashwini Rai K" /></noinclude>
೨೧೬ {{gap}}{{gap}}{{gap}}{{gap}}{{gap}}{{gap}}{{gap}} {{gap}}{{gap}}{{gap}} ಚಿರಸ್ಮರಣೆ
<p> ಬಳಲಿಕೆಯಿಂದ ಬತ್ತಿಹೋಗಿದ್ದ ಮುಖಗಳು ಅವರು ಬಂದ ರೀತಿ
ಎಂಥದೆಂಬುದನ್ನು ಸಾರಿ ಹೇಳಿದವು.
<p>"ನಾವು ಮಾಸ್ತರನ್ನು ಈಗ್ಲೇ ನೋಡಬೇಕಾಗಿದೆ" ಎಂದು ಅಪ್ಪು.,
<p> ನೀನು ಯಾರು?--ಎಂದು ಆತ ಕೇಳಲಿಲ್ಲ. ತಲೆಯಾಲ್ಲಾಡಿಸಿ ಆತನೆಂದ:
"ನೀವು ಬಂದದ್ದು ಒಂದು ದಿನ ತಡವಾಯಿತು. ನಿನ್ನೆಯೇ ಮಾಸ್ತರು ಇಲ್ಲಿಂದ
ಹೋದ್ರು."
"ಎಲ್ಲಿಗೆ?"
ಹೇಳಬೇಕೋ ಬೇಡವೋ ಎಂದು ಅರೆಕ್ಷಣ ಸುಮ್ಮನಿದ್ದು ಆತ ಉತ್ತರವಿತ್ತ:
"ಭೂಗತರಾದ್ರು. ನಿಮ್ಮೂರಿನ ಗಲಾಟೆಗೆ ಸಂಬಂಧಿಸಿಯೇ ಅವರ ಮೇಲೆ
ವಾರಂಟು ಹೊರಟಿದೇಂತ ತೋರ್ತದೆ."
ಅಪ್ಪು, ನೆಲ ನೋಡಿ ತಲೆ ಎತ್ತಿದ.
"ಅವರು ನಮಗೆ ಸಿಗೋದು ಸಾಧ್ಯವೇ ಇಲ್ಲ ಅಂತೀರಾ?"
"ಅವರು ಈ ಊರಲ್ಲಿಲ್ಲ. ನಿಮ್ಮ ಕಡೆಗೆ ಹೋಗಿರ್ತಾರೆ."
ಧೃಢವಾದ ಧ್ವನಿಯಲ್ಲಿ ಉತ್ತರ ಬಂತು:
"ಇಲ್ಲ, ಈಗ ಊರಲ್ಲಿ ಯಾರೂ ಇಲ್ಲ ಸಂಗಾತಿ."
ಅಪ್ಪು ಅಬೂಬಕರನತ್ತ ನೋಡಿ ಹೇಳಿದ.
"ಹಾಗಾದರೆ ಇಲ್ಲೇನೂ ನಮಗಿನ್ನು ಕೆಲಸವಿಲ್ಲ ಹೊರಡೋಣ."
ಅಬೂಬಕರನ ಸ್ನೇಹಿತನೆಂದ:
"ರಕ್ಷಣೆ ಬೇಕಾದರೆ ಹೇಳಿ. ನೀವಿಬ್ಬರೂ ಇರೋದಕ್ಕೆ ಏರ್ಪಾಟು ಮಾಡ್ತೇವೆ."
ಅಪ್ಪು ಕೊಟ್ಟದು ನಿರ್ಧಾರದ ಉತ್ತರ :
"ಇಲ್ಲ, ನಾವು ಊರಿಗೆ ಹೋಗ್ಬೇಕು."
ಹಾಗೆ ಹೇಳಿದೊಡನೆಯೇ ಏನೋ ಯೋಚಿಸಿ ಆತ ಅಬೂಬಕರನತ್ತ ತಿರುಗಿ
ಹೇಳಿದ:
"ನೀನು ಬೇಕಾದರೆ ಇಲ್ಲಿರು, ಸಂಗಾತಿ."
ಆ ಯೋಚನೆಯ ಅಗತ್ಯವೇ ಇಲ್ಲವೆನ್ನುವಂತೆ ಅಬೂಬಕರ್ ತಕ್ಷಣ
ಉತ್ತರವಿತ್ತ:
<p> "ಇಲ್ಲ, ನಾನೂ ಜತೆಯಲ್ಲೇ ಬರ್ತೇನೆ. ನಡಿ."<\p>
..............
<p> ಹಾದಿ ವೆಚ್ಚಕ್ಕೆಂದು ಸ್ವಲ್ಪ ಹಣ ಪಡೆದು ನಡುರಾತ್ರೆಯ ರೈಲಿನಲ್ಲಿ ಅವರು,<noinclude></noinclude>
ml9foopawze5zeqgg6i56nzmt69umf1
318084
318082
2026-05-08T10:01:11Z
Ashwini Rai K
8475
318084
proofread-page
text/x-wiki
<noinclude><pagequality level="4" user="Ashwini Rai K" /></noinclude>
೨೧೬ {{gap}}{{gap}}{{gap}}{{gap}}{{gap}}{{gap}}{{gap}} {{gap}}{{gap}}{{gap}} ಚಿರಸ್ಮರಣೆ
<p> ಬಳಲಿಕೆಯಿಂದ ಬತ್ತಿಹೋಗಿದ್ದ ಮುಖಗಳು ಅವರು ಬಂದ ರೀತಿ
ಎಂಥದೆಂಬುದನ್ನು ಸಾರಿ ಹೇಳಿದವು.
<p>"ನಾವು ಮಾಸ್ತರನ್ನು ಈಗ್ಲೇ ನೋಡಬೇಕಾಗಿದೆ" ಎಂದು ಅಪ್ಪು.,<br />
<p> ನೀನು ಯಾರು?--ಎಂದು ಆತ ಕೇಳಲಿಲ್ಲ. ತಲೆಯಾಲ್ಲಾಡಿಸಿ ಆತನೆಂದ:<br />
"ನೀವು ಬಂದದ್ದು ಒಂದು ದಿನ ತಡವಾಯಿತು. ನಿನ್ನೆಯೇ ಮಾಸ್ತರು ಇಲ್ಲಿಂದ
ಹೋದ್ರು."<br />
"ಎಲ್ಲಿಗೆ?"
ಹೇಳಬೇಕೋ ಬೇಡವೋ ಎಂದು ಅರೆಕ್ಷಣ ಸುಮ್ಮನಿದ್ದು ಆತ ಉತ್ತರವಿತ್ತ:
"ಭೂಗತರಾದ್ರು. ನಿಮ್ಮೂರಿನ ಗಲಾಟೆಗೆ ಸಂಬಂಧಿಸಿಯೇ ಅವರ ಮೇಲೆ
ವಾರಂಟು ಹೊರಟಿದೇಂತ ತೋರ್ತದೆ."
ಅಪ್ಪು, ನೆಲ ನೋಡಿ ತಲೆ ಎತ್ತಿದ.
"ಅವರು ನಮಗೆ ಸಿಗೋದು ಸಾಧ್ಯವೇ ಇಲ್ಲ ಅಂತೀರಾ?"
"ಅವರು ಈ ಊರಲ್ಲಿಲ್ಲ. ನಿಮ್ಮ ಕಡೆಗೆ ಹೋಗಿರ್ತಾರೆ."
ಧೃಢವಾದ ಧ್ವನಿಯಲ್ಲಿ ಉತ್ತರ ಬಂತು:
"ಇಲ್ಲ, ಈಗ ಊರಲ್ಲಿ ಯಾರೂ ಇಲ್ಲ ಸಂಗಾತಿ."
ಅಪ್ಪು ಅಬೂಬಕರನತ್ತ ನೋಡಿ ಹೇಳಿದ.
"ಹಾಗಾದರೆ ಇಲ್ಲೇನೂ ನಮಗಿನ್ನು ಕೆಲಸವಿಲ್ಲ ಹೊರಡೋಣ."
ಅಬೂಬಕರನ ಸ್ನೇಹಿತನೆಂದ:
"ರಕ್ಷಣೆ ಬೇಕಾದರೆ ಹೇಳಿ. ನೀವಿಬ್ಬರೂ ಇರೋದಕ್ಕೆ ಏರ್ಪಾಟು ಮಾಡ್ತೇವೆ."
ಅಪ್ಪು ಕೊಟ್ಟದು ನಿರ್ಧಾರದ ಉತ್ತರ :
"ಇಲ್ಲ, ನಾವು ಊರಿಗೆ ಹೋಗ್ಬೇಕು."
ಹಾಗೆ ಹೇಳಿದೊಡನೆಯೇ ಏನೋ ಯೋಚಿಸಿ ಆತ ಅಬೂಬಕರನತ್ತ ತಿರುಗಿ
ಹೇಳಿದ:
"ನೀನು ಬೇಕಾದರೆ ಇಲ್ಲಿರು, ಸಂಗಾತಿ."
ಆ ಯೋಚನೆಯ ಅಗತ್ಯವೇ ಇಲ್ಲವೆನ್ನುವಂತೆ ಅಬೂಬಕರ್ ತಕ್ಷಣ
ಉತ್ತರವಿತ್ತ:
<p> "ಇಲ್ಲ, ನಾನೂ ಜತೆಯಲ್ಲೇ ಬರ್ತೇನೆ. ನಡಿ."<\p>
..............
<p> ಹಾದಿ ವೆಚ್ಚಕ್ಕೆಂದು ಸ್ವಲ್ಪ ಹಣ ಪಡೆದು ನಡುರಾತ್ರೆಯ ರೈಲಿನಲ್ಲಿ ಅವರು,<noinclude></noinclude>
2v2959cvt9r12m4owbowmcahyvtx322
ಪುಟ:ನಡೆದದ್ದೇ ದಾರಿ.pdf/೨೬
104
30477
317963
220657
2026-05-08T02:59:28Z
Shreelatha.Halemane
7642
317963
proofread-page
text/x-wiki
<noinclude><pagequality level="4" user="Prakrithi jain" /></noinclude>{{rh|center=|right=೧೯|left=ಮುಳ್ಳುಗಳು/ಮುಳ್ಳುಗಳು}}
{{gap}}'ಬರುತ್ತೀರಾ ಶಾಂತಿ?'....'ಬರುತ್ತೀರಾ ಶಾಂತಿ?'</br>
{{gap}}-ಕಿಟಾರನೆ ಕಿರುಚಬೇಕೆನಿಸಿತು ಅವಳಿಗೆ.ಹತ್ತಾಗಿ-ನೂರಾಗಿ ಕೀಸರಿಟ್ಟಿರುವ</br> ಈ ಅಪರಿಚಿತ ದನಿಗಳು ಎಲ್ಲಿಯವು?ಯಾರು ಹೀಗೆ ಕರೆಯುವವರು?</br> ಎಲ್ಲಿದ್ದಾರೆ?ಹೀಗೆ ಬಹಿರಂಗವಾಗಿ ತನ್ನ ಅವಮಾನ ಮಾಡಲು ಎಷ್ಟು ಧೈರ್ಯ</br> ಈ ಅಯೋಗ್ಯರಿಗೆ? ಒಬ್ಬೊಬ್ಬರನ್ನಾಗಿ ಒದ್ದು ಕಳಿಸಬೇಕು ಇವರೆಲ್ಲರನ್ನೂ.</br>
{{gap}}ಮುಳ್ಳು ಚುಚ್ಚಿದಂತಾಗುವ ಈ ಸೊಳ್ಳೆಗಳ ಕಡಿತ ಸಹಿಸಲಾಗುವುದಿಲ್ಲ ಇನ್ನು.</br> ಎದ್ದು ಸುತ್ತಲೂ ಮಚ್ಛರದಾನಿ ಹಾಕಬೇಕು. ಇಲ್ಲವಾದರೆ ರಾತ್ರಿಯಿಡೀ ಕಣ್ಣಿಗೆ ಕಣ್ಣು</br> ಹತ್ತಲಿಕ್ಕಿಲ್ಲ.</br>
{{gap}}'ಬರುವುದಿಲ್ಲ ಹಾಳಾಗಿ ಹೋಗಿರೋ' ಎಂದುಕೊಂಡು ಶಾಂತಿ </br>ಮಚ್ಛರದಾನಿಯನ್ನು ಇಳಿಬಿಟ್ಟಳು. ತುಂಬ ಹೊದ್ದುಕೊಂಡು ಮಲಗಿದಳು.</br>
{{gap}}ದೇಸಾಯಿಯೊಬ್ಬ ವಿಚಿತ್ರ ಮನುಷ್ಯ. ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ</br> ಹೆಚ್ಚು ಗೂಢವಾಗುತ್ತ ನಡೆದಿದೆ ಅವನ ವ್ಯಕ್ತಿತ್ವ.ಬಹಳ ಮಜಾ ಇದ್ದಾನೆ....</br>
{{gap}}-ಒಂದು ಸೊಳ್ಳೆ ಹೇಗೋ ತಪ್ಪಿಸಿಕೊಂಡು ಒಳಸೇರಿದೆ.ಗುಯ್ನ್ ಎಂದು</br> ಒಂದೇ ಸಮನೆ ಕಿರಿಚುತ್ತ ಹಾರತೊಡಗಿದೆ. ಇದರಿಂದೇನೂ ನಿದ್ರೆಗೆ ಬಹಳ ಭಂಗ</br> ಬರಲಾರದು. ಇರಲಿ, ಇಡೀ ದಿನ ಇಷ್ಟು ದಣಿದ ನಂತರ ಯಾರು ಈಗ ಈ ಒಂಟಿ</br> ಸೊಳ್ಳೆಯನ್ನು ಓಡಿಸಲೆಂದು ಎದ್ದು ದೀಪ ಹಾಕುವ ತ್ರಾಸು ತೆಗೆದುಕೊಳ್ಳಬೇಕು?</br>
{{gap}}-ನಿದ್ರೆಯೇಕೆ ಬರಲೋಲ್ಲದು?ಇದೂ ನನ್ನ ಜೊತೆ ಆಟ ಆಡತೊಡಗಿದೆ.</br> ಇದಕ್ಕೆ ಸೋಲಬಾರದು. ನಿದ್ರೆ ಬರಿಸಿಕೊಳ್ಳುವ ಸುಲಭ ಸಾಧನ ನನಗೆ</br> ಗೊತ್ತಿದೆ-ಭವಿಷ್ಯದ ಬಗೆಗೆ ನಿಷ್ಫಲ, ಆದರೆ ಕನಸು ಕಾಣುವುದು....</br>ಹೌದು, ಒಂದೇ ದಾರಿ.ಮುಳ್ಳುಗಳ ನೆನೆಪಿನಿಂದ ದೂರ ಹೋಗಲು ಇದೊಂದೇ</br> ದಾರಿ....</br>
{{gap}}ಥಟ್ಟನೇ 'ಅವನ' ನೆನಪು. ಈಗ ರಾತ್ರಿ ಹತ್ತು ಗಂಟೆ. 'ಅವನು' ಏನು</br> ಮಾಡುತ್ತಿರಬಹುದು?ಮಲಗಿಕೊಂಡಿರಬಹುದು....ತನ್ನ ಹೆಂಡತಿಗೆ, ತನಗೆ ಬಹಳ</br> ವಿಧೇಯಳಾಗಿರುವಳೆಂದುಕೊಂಡು ಆರಿಸಿ ಮದುವೆಯಾದ ಆ ಎರಡು ಸಾರಿ</br> ಮ್ಯಾಟ್ರಿಕ್ ನಾಪಾಸಾದ ಹುಡುಗೆಗೆ ಹೇಳುತ್ತಿರಬಹುದು-'ಪ್ರಿಯೆ, ನನ್ನ</br> ಹೃದಯದಲ್ಲಿ ನಿನ್ನ ಮೂರ್ತಿ ಭದ್ರವಾಗಿ ನೆಲೆಯೂರಿದೆ'. -ಎಂದು.</br>
{{gap}}ಛೇ, ಈ ವಿಚಾರ ಬೇಡವೇ ಬೇಡ.</br>
{{gap}}ಮತ್ತೇನು ವಿಚಾರಿಸುವುದು ಹಾಗಾದರೆ?</br>
{{gap}}-ಮುಂಜಾನೆ, ನಾಳೆಯಲ್ಲ, ಮುಂದೊಂದು ದಿನ ಮುಂಜಾನೆ, ತನ್ನನ್ನೆಬ್ಬಿಸಲು</br><noinclude><references/></noinclude>
gh8mpj5rnsr1jorkgj6jgup2eeoql0p
ಪುಟ:ನಡೆದದ್ದೇ ದಾರಿ.pdf/೨೯೩
104
30480
318056
250434
2026-05-08T09:31:01Z
Shreelatha.Halemane
7642
/* Validated */
318056
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೨೮೬|right=ನಡೆದದ್ದೇ ದಾರಿ}}</noinclude>
ಗೊತ್ತಾಯಿತು-ತಾನು ಈ ಗುರುತಿಲ್ಲದ ಹುಡುಗಿ ಶೋಭಾ ನಾಯಕಳನ್ನು ಪ್ರೀತಿಸುತ್ತಿದ್ದೇನೆ-ಎಂದು.
{{gap}}ಅಷ್ಟರಲ್ಲಾಗಲೇ ಆಕೆ ರಸ್ತೆಗೆ ಬಂದು ತನಗಾಗಿ ಕಾಯುತ್ತಿದ್ದ ತನ್ನ ಬ್ಯಾಂಕಿನ
ವ್ಯಾನಿನಲ್ಲಿ ಕೂತಿದ್ದಳು.ಆಕೆ ಕೂತಿದ್ದರೂ ವ್ಯಾನು ಹೊರಟಿರಲಿಲ್ಲ.ಆಕೆ
ಸತೀಶನತ್ತಲೇ ತಾಳ್ಮೆಯಿಂದ ನೋಡುತ್ತಿದ್ದವಳು ಆತ ಹತ್ತಿರ ಬಂದೊಡನೆ ದೃಢವಾಗಿ
ಮೂಗುಳ್ನಕ್ಕಳು. ಅದಕ್ಕಾಗಿಯೇ ಕಾದಿದ್ದಂತೆ ಆತನೂ ಪ್ರತಿನಕ್ಕು "ಹಲೋ"ಅಂದ.
{{gap}}"ಮುಂಜಾನೆ ಮಳೆಯಾಗಿದ್ದರಿಂದ ಹವೆ ತಂಪಾಗಿವೆ ಅಲ್ಲವೇ?"ಅಂದಳು
ಆಕೆ.
{{gap}}"ಹೌದು"ಅಂದ ಆತ ತುಸು ನಿಂತು ಕೇಳಿದ,"ನಾಳೆ ರವಿವಾರ ನಿಮಗೂ ರಜೆ.
ನಂದೀದಂಡೆಗೆ ತಿರುಗಾಡಲು ಬರುತ್ತೀರಾ?"
{{gap}}"ತಿರುಗಾಡಲು?ಊಹ್ಞೂ. ಆಗುವುದಿಲ್ಲ."
{{gap}}ತಾನು ಒಮ್ಮೆಲೇ ಹಾಗೆ ಕೇಳಿದ್ದು ತಪ್ಪಾಯಿತು ಅನಿಸಿತು ಸತೀಶನಿಗೆ. ಆಕೆ
ಸಿಟ್ಟಾದರೆ?ಛೆ, ಕೆಲಸ ಕೆಟ್ಟಿತೇನೋ.ಇದನ್ನು ಹೇಗೆ ಸುಧಾರಿಸುವುದು?-ಹೀಗೆಲ್ಲ
ಆತ ಚಡಪಡಿಸುತ್ತಿದ್ದಾಗ ಆಕೆಯೇ ಮತ್ತೆ ಮಾತನಾಡಿದಳು."ಮುಂದಿನ ಶನಿವಾರ
ಸಾಧ್ಯವಾದರೆ ಅರ್ಧದಿನದ ರಜೆ ಹಾಕಿ ನನ್ನೊಂದಿಗೇ ಬರ್ರಿ.ನಮ್ಮ ಬ್ಯಾಂಕಿಗೆ ಹೋಗಿ
ಅಲ್ಲಿಂದ ಮುಂದೆ ನಮ್ಮ ಮನೆಗೆ ಹೋಗೋಣ.ಆದೀತೆ?"
{{gap}}"ಓಹೋ"ಎಂದ ಸತೀಶ ಸಂತೋಷದಿಂದ.
{{gap}}"ನಮ್ಮ ಮನೆ ನದೀದಂಡೆಯ ಮೇಲಿದೆ"-ಎಂದು ಮುಗುಳ್ನಗುತ್ತ ಹೇಳಿ
ಆಕೆ ಡ್ರೈವ್ಹರನಿಗೆ ಸೂಚನೆ ಕೊಟ್ಟೊಡನೆ ಆಕೆ ಕೂತಿದ್ದ ವ್ಯಾನು ಮುಂದೆ ಚಲಿಸಿತು.
ಐದು ನಿಮಿಷಗಳ ನಂತರ ಶಿಳ್ಳೆ ಹಾಕುತ್ತಾ ಒಳಬಂದ ಸತೀಶನನ್ನು ಆತನ
ಸಹೋದ್ಯೋಗಿಗಳು ಹುಬ್ಬೇರಿಸಿ ನೋಡಿದರು.
{{gap}}ಸತೀಶ ಬಹಳ ಉತ್ಕಂಠೇಯಿಂದ ಕಾಯುತ್ತಿದ್ದ ಆ ಶನಿವಾರ ಕೊನೆಗೂ ಬಂದಿತು.ಆ ದಿನ ಅರ್ಧ ದಿನದ ರಜೆ ಹಾಕಿ ಆಕೆ ಬರುವ ಮೊದಲೇ ಸತೀಶ ಹೊರಡಲು
ತಯಾರಾಗಿ ನಿಂತಿದ್ದ.ಸರಿಯಾದ ಸಮಯಕ್ಕೆ ಆಕೆಯ ಬ್ಯಾಂಕಿನ ವ್ಯಾನು ಬಂದಿತು.
ಆದರೆ ಫೈಲುಗಳ ಜೊತೆ ಕೆಳಗಿಳಿದದ್ದು ಆಕೆಯಾಗಿರದೆ ಬೇರೆ ಯಾರೋ ಒಬ್ಬ
ಗಂಡಸಾಗಿದ್ದ.ಒಂದು ಕ್ಷಣ ದಿಗ್ಭ್ರಮೆಗೊಂಡ ಸತೀಶನನ್ನು ವ್ಯಾನಿನಿಂದ ಬಂದ ಕಿಲಕಿಲ ನಗು ಎಚ್ಚರಿಸಿತು. ಆತ ವ್ಯಾನಿನೊಳಗೆ ಬಗ್ಗಿ ನೋಡಿದ.ಶೋಭಾ ನಾಯಕ ಕೂತಿದ್ದಳು.ಆತ ಏನಾದರೂ ಕೇಳುವ ಮೊದಲೇ ಉತ್ತರಿಸಿದಳು,"ಈ ದಿನ ನಾನೂ ಹಾಫ್ ಡೇ ಲೀವ್ಹ್ ತಗೊಂಡೆ.ಬರ್ರಿ. ಒಳಗಡೆ ಹೋದ ನಮ್ಮ ಕೊಲೀಗ್ ಬಂದಕೂಡಲೇ<noinclude><references/></noinclude>
mhkqvash2r25ibpoow02omtvz98befg
ಪುಟ:ನಡೆದದ್ದೇ ದಾರಿ.pdf/೪೪
104
30482
317980
210756
2026-05-08T04:11:45Z
Shreelatha.Halemane
7642
/* Validated */
317980
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮುಳ್ಳುಗಳು / ಅತಿಥಿ|right=೩೭}}
ಹುಚ್ಚು-ಎಂದುಕೊಂಡು. ಕಣ್ಣೀರೊರೆಸಿಕೊಳ್ಳುತ್ತ ಆಕೆ ಪಕಪಕನೆ ನಕ್ಕುಬಿಟ್ಪಳು.</br> ನಂತರ ಕೂಡಲೆ ಅವಳಿಗೆ ರೂಮಿನಲ್ಲಿ ತಾನೊಬ್ಬಳೇ ಇರುವದು ನೆನಪಾಗಿ. ತಾನು</br> ನಕ್ಕದ್ದನ್ನು ಯಾರಾದರೂ ಹೊರಗಿನಿಂದ ಕೇಳಿಸಿಕೂoಡರೆ ಏನೆಂದುಕೊoಡಾರೆಂಬ</br> ವಿಚಾರ ಬಂದು, ಮತ್ತಷ್ಟು ತಮಾಷೆ ಎನ್ನಿಸಿ, ಇನ್ನೂ ನಕ್ಕಳು.</br>
{{gap}}-ಕೆಳಗೆ ಬಿದ್ದ ಪೆನ್ನನ್ನು ನೋಡಿದಾಗ ಅತಿಥಿ ಭಾಷಣದ ನೆನಪಾಯಿತು ಆಕೆಗೆ.</br> ಬಗ್ಗಿ ಅ ಪೆನ್ನನ್ನೆತ್ತಿಕೊoಡು, ನಾಳಿನ ಸನ್ಮಾನ್ಯ ಆತಿಥಿಯ ಸ್ಥಾನನದಲ್ಲಿ ತನ್ನನ್ನು</br> ಕಲ್ಪಿಸಿಕೊಳ್ಳುತ್ತ, ನಿಜವಾಗಿಯೂ ಎಲ್ಲಾ ಮರೆತೆನೆಂದು ಸೀರಿಯಸ್ಸಾಗಿ ಭಾಷಣವನ್ನು</br> ತಯಾರಿಸುವದರಲ್ಲಿ ಮಗ್ನಳಾದಳು.</br><noinclude><references/></noinclude>
r0er0fkcwry7qxuqc4ve7eyzswxeiqn
ಪುಟ:ನಡೆದದ್ದೇ ದಾರಿ.pdf/೨೦
104
30484
317955
196837
2026-05-08T02:51:06Z
Shreelatha.Halemane
7642
/* Validated */
317955
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=೧೩|left=ಮುಳ್ಳುಗಳು /ಮುಳ್ಳುಗಳು}}
ಯಾಕೆ ಸುಮ್ಮನೆ ದುಷ್ಟರ ಸಹವಾಸ ಎಂದು ಬಿಟ್ಟಿರಬೇಕು. ತಾನವನ ಗುರು. ಈಗ</br> ಗುಡ್-ಮಾರ್ನಿಂಗ್ ಹೇಳುವಾಗ ಒಬ್ಬ ಗರ್ಲ್ ಫ್ರೆಂಡಿನೊಂದಿಗೆ ಮಾತಾಡುವಾಗ</br> ಇರುವಂಥ ಮುಖಭಾವ. ಹಾಳಾಗಿ ಹೋಗಲಿ. ಇವನಿಗೆ ಪ್ರತಿಯಾಗಿ</br> ಉತ್ತರಿಸಬಾರದು.</br>
{{gap}}ಗಂಟು ಮುಖ ಹಾಕಿ ಹಾಗೇ ಮುಂದೆ ನಡೆದಳು ಶಾಂತಿ.</br>
{{gap}}ಅಲ್ಲಾ, ಅಂದು ಹಾಗೆ 'ಪಿಕ್ಚರಿಗೆ ಬರುವಿರಾ ಮ್ಯಾಡಂ ಪ್ಲೀಜ್ ?' ಎಂದು ಈ</br> ಶೆಟ್ಟಿ ಕೇಳಿದಾಗ ಬರೇ ಸಿಟ್ಟೇ ಬಂದಿತ್ತೇ ತನಗೆ ? ಏನು ಅಭಿಮಾನವೂ ಅನ್ನಿಸಿತ್ತೋ?</br> ಸ್ವಲ್ಪ-ಸ್ವಲ್ಪ?</br>
{{gap}}ಛೆ, ಅಂಥ ಗೂಂಡಾ ಕರೆದರೆ ಯಾವ ಹುಡುಗಿಗೆ ಅಭಿಮಾನವೆನ್ನಿಸಲು ಸಾಧ್ಯ.</br> ತನಗಂತೂ ಅವನ ಕಣ್ಣಿನಲ್ಲಿಯ ಜಾಲೀ ಮುಳ್ಳುಗಳ
ಬಗೆಗೆ ಎಂದಿನಿಂದಲೂ ಹೇಸಿಗೆ.</br> ತನಗೆ ಹೇಗೆ ಅಭಿಮಾನವೆನಿಸುವುದು ಶಕ್ಯವಿದೆ?
{{gap}}ಆದರೂ ಶೆಟ್ಟಿ ಹ್ಯಾಂಡ್ ಸಮ್ ಇದ್ದಾನೆ ... ಸ್ಕೂಟರೂ ಚೆನ್ನಾಗಿದೆ ...</br>
{{gap}}ನೂರಾಐವತ್ತು ಅಜ್ನಾನಿ-ಅವಿವೇಕಿಗಳ ದೊಡ್ಡ ಗುಂಪು ಪಿ. ಯು. ಸಿ.</br> ಕ್ಲಾಸಿನಲ್ಲಿ. ಇವರಿಗೆ ವ್ಯಾಕರಣ ಕಲಿಸಬೇಕು. ಅಂದರೆ
ಭಾಷೆ ಸುಧಾರಿಸುತ್ತದೆ. ತಳಹದಿ ಭದ್ರವಾಗಿದ್ದರೆ ಮನೆ ಗಟ್ಟಿಮುಟ್ಟಾಗುವುದಿಲ್ಲವೆ. ಹಾಗೆ.</br>
{{gap}}ಏನೋ ಅಪಸ್ವರ.... ತನ್ನ ಜೀವನದ ವ್ಯಾಕರಣಪಾಠ ಸರಿಯಾಗಿ</br> ಆಗಲಿಲ್ಲವೇನೋ! ಈಗ ಮತ್ತೆ ಮೊದಲಿನಿಂದ ತಾನು ವ್ಯಾಕರಣ ಕಲಿಯಲು</br> ಸುರುಮಾಡಬೇಕೆ ಹಾಗಾದರೆ ? ಬಿ. ಎ. ಕ್ಲಾಸಿಗೆ ಬಂದು ಅಂಕಲೆಯ ಒಂದನೇ</br> ಭಾಷಾಂತರ ಓದಿದ ಹಾಗೆ ಆಗುತ್ತದಲ್ಲ!</br>
{{gap}}ಬೋರ್ಡಿನ ಮೇಲೆ ಯಾವನೋ ಪ್ರೇಮವೀರ ದೊಡ್ಡ ಅಕ್ಷರಗಳಲ್ಲಿ ''I love you'' ಎಂದು ಬರೆದಿದ್ದಾನೆ. ಬಹುಶಃ ಪಂಜಾಬೀ ಡ್ರೆಸ್ಸಿನ ಆ ಚೆಂದ</br> ಹುಡುಗಿಯ ಸಲುವಾಗಿ ಇರಬೇಕು. ಮಧ್ಯಾಹ್ನ ಟೀಗೆ ಹೋದಾಗ ದೇಸಾಯಿಗೆ</br> ಹೇಳಲು ಒಳ್ಳೆ ವಿಷಯ.ರೊಮ್ಯಾಂಟಿಕ್ ಆಗಿ ಗಂಡಸರನ್ನು ಬೈಯಬಹುದು. ಇವರ</br> ಧೈರ್ಯ ಇಷ್ಟೇ. ಎದುರಿಗೆ ಹೋಗಿ ಬೊಗಳುವ ತಾಕತ್ತಿಲ್ಲ. ತೆರ ಮರೆಯಲ್ಲಿ ನಿಂತು</br> ವೊವ್ ಅನ್ನುತ್ತಾರೆ. ಮುಂದೆ ಹೋದರೆ ಸ್ತಬ್ಧ. ಜಾಗೃತವಾಗಿ ಉರಿಯುವುದು</br> ಕಣ್ಣಲ್ಲಿನ ಬೆಂಕಿಯೊಂದೇ. ಥತ್- ಅನ್ನಬಹುದು.... ವಾಹ್, ಇಂದು ನಿಜವಾಗಿಯೂ</br> ತಮ್ಮ ಮಾತುಕತೆಗೆ ರಂಗೇರುವುದು.</br>
{{gap}}ಬಹುಶಃ ತಾನು ಹೀಗೆಲ್ಲ ರೊಚ್ಚಿನಿಂದ ಮಾತಾಡುತ್ತಿದ್ದುದರಿಂದಲೇ</br> ಇರಬೇಕು 'ಅವನು' ತನಗೆ ಹೆದರಿದ್ದು. ತನ್ನಿಂದ ದೂರ ಸರಿದಿದ್ದು. ಸಹಜವೆ. ಪಾಪ,<noinclude><references/></noinclude>
mw3yo20eqp67h02jtqtfq45pbxi873m
ಪುಟ:ನಡೆದದ್ದೇ ದಾರಿ.pdf/೩೪
104
30492
317971
200508
2026-05-08T03:37:24Z
Shreelatha.Halemane
7642
/* Validated */
317971
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=೨೭|left=ಮುಳ್ಳುಗಳು / ಅತಿಥಿ}}
ನಗೆಯ ಕಹಿ ಸರೋಜಿನಿಯ ಗಮನಕ್ಕೆ ಬಂದಿದೆ. ಅವಳ ಮುಖ ಚಿಕ್ಕದಾಗಿದೆ.</br>
ಅಡ್ದಿಯಿಲ್ಲ,ಹಸಿವು ಎಷ್ಟೋ ಕಡಿಮೆಯಾದಹಾಗಾಯಿತು
{{gap}}ಎರಡು ನಿಮಿಷದ ಕೆಲಸ ಊಟ.ಈ ಹುಡುಗಿಯರು ಎರಡು ತಾಸು ಡೈನಿಂಗ್</br>
ಹಾಲಿನಲ್ಲಿ ಕೂತಿರುತ್ತಾರಲ್ಲ,ಏನು ಕತ್ತೆ ಕಾಯುತ್ತಾರೋ!</br>
{{gap}}ಎರಡು ನಿಮಿಷದ ಕೆಲಸ ಮುಗಿದಾದ ನಂತರ ಮಲಗುವ ಮೊದಲು</br>
ಮಾಡಿ ಮುಗಿಸಬೇಕಾಗಿರುವುದು ಇನ್ನೊಂದು ಮಹತ್ವದ ಕೆಲಸ-ರಾತ್ರಿಯ ರೌಂಡ</br>
ಹಾಕಿ ಬರವುದು ಹಾಸ್ಟೆಲಿನಲ್ಲಿ.ಅಲ್ಲಷ್ಟು-ಇಲ್ಲಷ್ಟು ನಿಂತು,ಅವಳ ಸುದ್ದಿ ಇವಳಿಂದ</br>
ಕೇಳಿ,ಇವಳ ಸುದ್ದಿ ಅವಳಿಗೆ ಹೇಳಿ,ಯಾರ್ಯಾರಿಗೆ ಬಾಯ್ ಫ್ರೆಂಡ್ಸ್ ಇರುತ್ತಾರೋ</br>
ಅವರನ್ನೆಲ್ಲ ಕಾಳಜೀಪೂರ್ವಕವಾಗಿ ಒಂದು ನೆವ ಹುಡುಕಿ ತೃಪ್ತಿಯಾಗುವಂತೆ</br>
ಬೈಯ್ದು,ತನ್ನ ರೂಮು ಸೇರುವ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆಯಾಗಿರುತ್ತದೆ.</br>
ಆಗಲೇ ತನಗೆ ಸುಖನಿದ್ರೆ ಬರುವುದು.ಇದರಲ್ಲೆಂದೂ ಏನೂ ಕಡಿಮೆಯಾಗಕೂಡದು</br>
{{gap}}ಸಾಲಾಗಿದ್ದ ಬಾಗಿಲುಗಳು-ಕೆಲವು ಮುಚ್ಚಿವೆ,ಕೆಲವು ತರೆದಿವೆ,ಕೆಲವು</br>
ಅರ್ಧಮರ್ಧ ಮುಚ್ಚಿ ತೆರೆದಿವೆ.ಯಾವಯಾವವೋ ಇಂಗ್ಲಿಷ್,ಹಿಂದಿ,ನಡುನಡುವೆ</br>
ಕನ್ನಡ ಸಿನೆಮಾ ಹಾಡಿನ ಧ್ವನಿ ಕೇಳಿಬರುತ್ತವೆ.ಕಲಲ್ಲಿಯ ಸ್ಲಿಪರ್ಸ್ ಸದ್ದಾಗದ</br>
ಹಾಗೆ,ಒಳಗಿನಿಂದ ಕೇಳಿಬರುವ ಹುಡುಗಿಯರು ಪಿಸುಧ್ವನಿಗಳನ್ನು ಕದ್ದು ಆಲಿಸುತ್ತ,</br>
ಆ ಕಾರಿಡಾರ್ನೊಳಗಿನಿಂದ ನಡೆದು ಬರುವುದೆಂದರೆ ಫ್ರೊ.ಲೀಲಾವತಿಗೆ ಬಹಳ ಪ್ರೀತಿ.</br>
ಸುತ್ತಲೂ ಯಾರೂ ಇಲ್ಲವೆಂದು ಖಚಿತವಾದರೆ ಆಕೆ ಬಳುಕಿ ನಡೆಯುವ</br>
ಪ್ರಯತ್ನವನ್ನೂ ಮಾಡುತ್ತಾಳೆ.</br>
{{gap}}ಅಲ್ಲ,ತನಗೇನು ಅಂಥ ಆಗಬಾರದ ವಯಸ್ಸಾಗಿದೆ?ಮದುವೆಯಾದರೆ,</br>
ಹನ್ನೆರಡು ಮಕ್ಕಳಾದರೆ ಮಾತ್ರ ಹೆಂಗಸರು ಸೌಂದರ್ಯವನ್ನು ಕಳೆದುಕೊಂಡು</br>
ಮುದುಕಿಯರ ಹಾಗೆ ಕಾಣುವುದು.ತನಗೆ ಆ ಯಾವ ತಾಪತ್ರಯವೂ ಇಲ್ಲ.ತನ್ನ</br>
'ಫಾರ್ಮು' ಕೆಡಲು ಕಾರಣವೇ ಇಲ್ಲ.ತಾನಿನ್ನೂ ಸಣ್ಣ ಹುಡುಗಿಯ ಹಾಗೆ</br>
ಕಾಣುವೆನೆಂದು ಮೊನ್ನೆ ಪ್ರಿನ್ಸಿಪಾಲರೇ ಹೇಳಲಿಲ್ಲವೆ?ಹಾಗೆ ನೋಡಿದರೆ ತಾನೇನು</br>
ಅಂಥಾ ಪರಿ ದಪ್ಪಗೂ ಇಲ್ಲ.....</br>
{{gap}}ಕುಣಿತದ ನಡಿಗೆಯಲ್ಲ ಮುಂದುವರಿದಿದ್ದ ಫ್ರೊ.ಲೀಲಾನನ್ನು ಇಪ್ಪತ್ತನೇ</br>
ನಂಬರು ರೂಮಿನಲ್ಲಿಂದ ಕೇಳಿಬಂದ ಮಾತು ಹೊಡೆದು ನಿಲ್ಲಿ ಸಿದಂತಾಯಿತು.</br>
{{gap}}'ಹಂಗಾರ ನಾಳೆ ಸಂಜೀನ್ಯಾಗ ಪಿಕ್ಚರಿಗೆ ಹೋಗೋದು ಡೆಫಿನಿಟ್ ಹೌದಲ್ಲೊ ?</br>
ದಾದೀಮಾ ಆಂತೂ ಲೇಟಾಗಿ ಬರತಾಳ'.</br>
{{gap}}ಯಾರದು ಈ ಧ್ವನಿ?ಇಂಗ್ಲೇಷ ಬಿ.ಎ.ಮಾಡುತ್ತಿರುವ ಲೂಸಿಯದೆ?</br><noinclude><references/></noinclude>
pdip976nq9ndu2uz31hwe85bl4miwbg
ಪುಟ:ನಡೆದದ್ದೇ ದಾರಿ.pdf/೮೩
104
30493
318043
201477
2026-05-08T09:20:55Z
Shreelatha.Halemane
7642
/* Validated */
318043
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೭೬}}
{{gap}}-ಥೂ, ಕೆಟ್ಟ ಕನಸು.ಎಲ್ಲ ಹರಿದುಕೊಂಡು ಚೆಲ್ಲಿಕೊಟ್ಟು ಬಿಟ್ಟುಬಿಟ್ಟು ಹೇಗೆ</br>
ಇಷ್ಟು ದೂರ ಬಂದೆ, ಹೇಗೆ ದಿನ ಕಳೆದೆ, ಹೇಗೆ ಹೊಸ ಮನುಷ್ಯಳಾದೆ- ಈ ಎಲ್ಲ</br>
ಎಂದಾದರೂ ಮರೆತೇನೇ?</br>
{{gap}}ಲಗ್ನವಂತೆ ಲಗ್ನ. ಮತ್ತೊಂದು ಪಶುವಿನ ಕೂಡ. ಛಿ...</br>
{{gap}}'ಎಲ್ಲಾ ಗಂಡಸ್ರೂ ಕೆಟ್ಟ ವರಿರೋದಿಲ್ಲ ಲೀಲಾ, ನೀ ಸಣ್ಣ ಹುಡುಗಿ,</br>
ಒಬ್ಬಾಕೀನೇ ಇರಬಾರದು. ಮತ್ತ ಬ್ಯಾರೆ ಲಗ್ನ ಆಗು .ನೀ ಹ ಆಂದರ ನಾ ಅದರ</br>
ವ್ಯವಸ್ಥಾ ಮಾಡ್ತೀನಿ '-ಆನ್ನುತ್ತಾರೆ ಶಂಕರಗೌಡರು.</br>
{{gap}}ಹೌದು. ಶಂಕರಗೌಡರಂಥ ಒಳ್ಳೆಯ ಗಂಡಸರೂ ಇರುತ್ತಾರೆಂದು ನನಗೆ</br>
ಗೊತ್ತು. ಎಂತಹ ಮನುಷ್ಯ! ಮಾಡಿಕೊಂಡ ಹೆಂಡತಿಗೆ ಮದುವೆಯಾಗಿ ಇಪ್ಪತ್ತೈದು</br>
ವರ್ಷಗಳಾದರೂ ಮಕ್ಕಳಾಗದೇ ಇದ್ದರೂ, ಸ್ವಲ್ಪವೂ ಬೇಸರಿಸದೆ ನಿಷ್ಠೆಯಿಂದಿರುವ</br>
ಮನುಷ್ಯ.ಯಾರು ಏನು ಕೇಳಿದರೂ ಇಲ್ಲ ಅಂದವರಲ್ಲ . ಎಂತಹ ಮನುಸ್ಸು!ಅವರ</br>
ಪ್ರೀತಿ-ಅನುಕಂಪ ಎಂದೋ ಸತ್ತುಹೋದ ಆಪ್ಪನ ನೆನಪು ತರುತ್ತದೆ...</br>
{{gap}}ಆದರೆ ಹಾಗೆಂದು ನಾನು ಆವರ ಉಪದೇಶದಂತೆ ಮತ್ತೆ ಮದುವೆಯಾಗಲಿಕ್ಕೆ</br>
ಹೇಗೆ ಶಕ್ಯವಿದೆ? ಒಮ್ಮೆ ಬಿದ್ದು ಎದ್ದ ಬಾವಿಯಲ್ಲೇ ಮತ್ತೆ ಬೀಳಲೊಲ್ಲೆ ನಾನು.</br>
{{gap}}-ಹಾಗಾದರೆ ಮುನ್ನಿ ? ಎಷ್ಟು ಮುದ್ದು ಮಗು. ನನಗೆ ಬೇಕು ಅಂಥ ಒಂದು</br>
ಮಗು. ಬರೇ ಮಗು. ಯಾರಿಂದಲಾದರೂ ಸರಿಯೆ. ಹೇಗಾದರೂ ಸರಿಯೆ. ಆದರೆ</br>
ಹೇಗೆ?</br>
{{gap}}ಮಧ್ಯಾಹ್ನ ಆಫೀಸಿನಲ್ಲಿ ಲೆಕ್ಕ ಬರೆಯುತ್ತಾ ಇದನ್ನೇ ಯೋಚಿಸುತ್ತಿದ್ದಾಗ</br>
ಎದುರಿನ ಟೇಬಲಿಗೆ ಕೂತಿದ್ದ ವಿಲಿಯಮ್ಸ್ ಕಾಣಿಸಿದ. ಇನ್ನು ವಿಲಿಯಮ್ಸ್ ನನ್ನು</br>
ನೋಡಿ ಉಪಯೋಗವಿಲ್ಲ. ಮೊನ್ನ ಸ್ಪಷ್ಟ ಹೇಳಿಬಿಟ್ಟಿದ್ದಾನೆ- ಇನ್ನು ನನ್ನ</br>
ಭೆಟ್ಟಿಯಾಗುವುದಿಲ್ಲ ಅಂತ. ಹಾಗೇನಾದರೂ ಭೆಟ್ಟಿಯಾದರೆ ಅವನ ದಪ್ಪ ಹೊಟ್ಟೆಯ</br>ಆಂಟಿ ತನ್ನ ಆಸ್ತಿಯಲ್ಲಿ ಚಿಕ್ಕಾಸೂ ಅವನಿಗೆ ಕೊಡುವುದಿಲ್ಲ ಅಂತ. ಅಷ್ಟೇ ಅಲ್ಲ,ಆ</br>ಆಂಟಿಯ ಮಗಳು ತೆಳು ನಡುವಿನ ಇವನ ಕಸಿನ್ ಇವನೊಂದಿಗಿನ ತನ್ನ</br>engagement ಸಹ break ಮಾಡಿಕೊಳ್ಳುತ್ತಾಳೆ ಅಂತ. ಇಷ್ಟೆಲ್ಲ ಲುಕ್ಸಾನು</br>ಎದುರಿಸಿ ಅವನೇಕೆ ನನ್ನನ್ನು ಪ್ರತಿ ರವಿವಾರ ಪಿಕ್ಚರಿಗೆ ಕರೆದೊಯ್ಯಬೇಕು?</br> ನನ್ನೊಂದಿಗೆ ರಾತ್ರಿ ಕಳೆಯಬೇಕು? ಮತ್ತು ಹೇಗೆ?-"ನಿನ್ನ ಕೂಡ ಕಳೆದ ಸುಖದ</br>ದಿನಗಳನ್ನ ನಾನೆಂದೂ ಮರೆಯೋದಿಲ್ಲ ಲಿಲಿ, ದಿನಾ ನಿನಗಾಗಿ-ನಿನ್ನ ಒಳ್ಳೆಯದಕ್ಕಾಗಿ</br>ನಾನು ಜೀಸಸ್ ನಲ್ಲಿ ಪ್ರಾರ್ಥನೆ ಮಾಡುವೆ.God bless you"-ಅಂತ ಹೇಳಿ</br>ನನ್ನ ಕೈ ಅದುಮಿ ತುಂಬ ಚಿಂತಾಜನಕ ರೀತಿಯಲ್ಲಿ ತಲೆ ಕೊಡವಿ ಹೊರಟು ಹೋಗಿದ್ದ</br><noinclude><references/></noinclude>
b0lspavekpuo64him6xqatdtzr8rrn8
ಪುಟ:ನಡೆದದ್ದೇ ದಾರಿ.pdf/೭೭
104
30494
318038
250755
2026-05-08T09:13:03Z
Shreelatha.Halemane
7642
/* Validated */
318038
proofread-page
text/x-wiki
<noinclude><pagequality level="4" user="Shreelatha.Halemane" />{{rh|left=೭೦|right=ನಡೆದದ್ದೇ ದಾರಿ}}</noinclude>
ಮೊದಲೆ,ವಿಧಿ ನಮ್ಮಿಬ್ಬರ ಭೆಟ್ಟಿ ಮಾಡಿಸಿದ್ದರೆ ಏನಾಗುತ್ತಿತ್ತು ಹೇಳಬಲ್ಲೆಯ ?<br>
ಯಾಕೆ ಹಾಗಾಗಲಿಲ್ಲ ?....ಯಾಕೆ ?<br>
{{gap}}ತಲೆ ಸುತ್ತಿ-ಸುತ್ತಿ ಬರತೊಡಗಿದೆ ಅವಳಿಗೆ.ಒಳಗಿನಿಂದ ಏನೋ ಉಕ್ಕುಕ್ಕಿ<br>
ಹೊರಬರಲು ಪ್ರಯತ್ನಿಸುತ್ತಿರುವಂತೆ, ಆದರೆ ಸಾಧ್ಯವಾಗದೆ ಗಂಟಲಿನ ಬಳಿ<br>
ತಡೆಹಿಡಿಯಲ್ಪಟ್ಟಂತೆ,ಉಸಿರು ಕಟ್ಟಿಹೋಗುತ್ತಿರುವಂತೆ ಭಾಸ.ತಡೆಹಿಡಿಯುವುದಿನ್ನು<br>ಅಸಾಧ್ಯವಾಗಿ ಎಲ್ಲಾ-ಎಲ್ಲಾ ಹೊರಗೆಡಹುತ್ತಿರುವೆನೆಂದು ಅನ್ನಿಸಿತು ಅಕೆಗೆ.<br>
ತಟ್ಟನೆ ಅವಳು ಪಂಜರದ ಬಾಗಿಲನ್ನು ತೆರೆದುಬಿಟ್ಟಳು. ಬಿರುಗಾಳಿಯಂತೆ ಹೊರನುಗ್ಗಿದ<br>ಹರೀಶನ ಪ್ರೀತಿಯ ಗಿಳಿ ಕಿಡಿಕಿಯಿಂದಾಚೆ ಭುರ್ರೆಂದು ಹಾರಿ ಒಂದೇ ಕ್ಷಣದಲ್ಲಿ<br>ಹೊರಗಿನ ಮಸಗುಗತ್ತಲಲ್ಲಿ ಮರೆಯಾಗಿಹೋಯಿತು. ದೆವ್ವ ಬಡಿದಹಾಗೆ<br>ನಿಶ್ಚಲಳಾಗಿ ಆಕೆ ಅದು ಹಾರಿಹೋಗಿ ಮರೆಯಾದ ಕಡೆ-ಶೂನ್ಯದ ಕಡೆ-ನೋಡುತ್ತ<br>ನಿಂತಳು....ನಿಂತೇ ಇದ್ದಳು.
<center> * * *</center><noinclude><references/></noinclude>
priy40mf33n8px2cv6o2yrnjuff1tw4
ಪುಟ:ನಡೆದದ್ದೇ ದಾರಿ.pdf/೨೭
104
30495
317964
197006
2026-05-08T02:59:51Z
Shreelatha.Halemane
7642
/* Validated */
317964
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೨೦}}
ಬರುವ ಆ ಗಂಡ ಹೇಗಿರಬೇಕು? ಕ್ರಿಕೆಟಿಯರ್ ಸುಧೀರನ ಹಾಗೆ ಬೇಡ. ಅಂಥವರಿಗೆ</br> ಬಹಳ ಹುಡುಗಿಯರು ಬೆನ್ನು ಹತ್ತುತ್ತಾರೆ. 'ಅವನ' ಹಾಗಂತೂ ಬೇಡವೇ ಬೇಡ.</br> 'ಅವನ' ಕಣ್ಣತುಂಬ ಬರೀ ಚೂಪುಮುಳ್ಳು. ಇನ್ನ್ಯಾರ ಹಾಗೆ?</br>
{{gap}}ಹಾಳಾದವನು ಹೇಗಾದರೂ ಇರಲೊಲ್ಲನೇಕೆ, ಈಗಂತೂ ಪುಣ್ಯಕ್ಕೆ ನಿದ್ರೆ</br> ಬರತೊಡಗಿದೆ.....</br>
{{gap}}ಏ ದೇಸಾಯಿ, ಈ ಹೊತ್ತಿನಲ್ಲಿ ಸುಳ್ಳೇ ನೆನಪಿಗೆ ಬಂದು ಕಾಡಬೇಡ ಹೋಗು,</br> ನಡೆ.</br>
{{gap}}-ಶಾಂತಿ ಗಟ್ಟಿಯಾಗಿ ಮುಸುಕೆಳೆದುಕೊಂಡಳು.</br><noinclude><references/></noinclude>
naxi72hr2m2t8vgj3x7e6obfcnijr4p
ಪುಟ:ನಡೆದದ್ದೇ ದಾರಿ.pdf/೮೨
104
30497
318041
250776
2026-05-08T09:16:37Z
Shreelatha.Halemane
7642
/* Validated */
318041
proofread-page
text/x-wiki
<noinclude><pagequality level="4" user="Shreelatha.Halemane" />{{rh|left=ಕೊನೆಯ ದಾರಿ / ಕೊನಯ ದಾರಿ|right=೭೫}}</noinclude>ಹೆಚ್ಛಿನದು ಏನೂ ಇಲ್ಲ. ನಾನು ವಿರೋಧಿಸುತ್ತೀನಿ ಅಂತ ತಿಳಿದಿದ್ದನೇನೋ. ನಾನು<br>
ಏನೂ ವಿರೋಧ ಮಾಡದೇ ಇದ್ದಾಗ ಎಷ್ಟು ಆಶ್ಚರ್ಯ ಆವನಿಗೆ!...<br>
ಗೋವಿಂದಮೂರ್ತಿಯಿಂದ ಸಿಗಲಾರದ್ದು ಇವನಿಂದಲಾದರೂ ಸಿಕ್ಕೀತೆಂದು ಹ್ಞೂ<br>
ಅಂದೆ. ಆದರೆ ಛೆ, ಇವನೂ ಹೇಡಿಯೇ 'ಏನಂದಿ ಲಿಲಿ? ಮಗು ಬೇಕೆ ನಿನಗೆ? ತೋಬಾ<br>
ತೋಬಾ. ನೀನು ಇನ್ನೂ ಮದುವೆಯಾಗದ ಹುಡುಗಿ. ನಮ್ಮಿಂದ ಇಂಥ ಪಾಪದ ಕೆಲ್ಸ<br>
ಆಗೋದಿಲ್ಲ. -'ಅಲ್ಲಾಕೆ ಕಸಮ್' - ಅಂತ ತಡವರಿಸಿದ.
{{gap}}ಇವನ ಗಡ್ಡಕ್ಕೆ ಬೆಂಕಿ ಹಚ್ಚಬೇಕು. ಮದುವೆಯಾಗದ ಹುಡುಗಿಯ ಕೂಡ<br>
ಮಲಗಲಿಕ್ಕೆ ಬೇಕು ಈ ಸಾಬನಿಗೆ. ಆದರೆ ಅವಳಿಗೆ ಇಷ್ಟೊಂದು ಅವಶ್ಯವಾಗಿರುವ<br>
ಒಂದು ಸಣ್ಣ favour ಮಾಡಲಿಕ್ಕೆ ಬೇಡ ಅವನಿಗೆ. ಪಾಪವಂತೆ. ಥೂ....<br>
{{gap}}- ಗೊವಿಂದಮೂರ್ತಿಯಿಂದ ಆಗಬೇಕಿತ್ತು ಈ ಕೆಲಸ. ಅವನೇನೂ ಪಾಪ-<br>
ಪುಣ್ಯದ ಬಗ್ಗೆ care ಮಾಡುವುದಿಲ್ಲ. ಆದರೆ ಅವನು ಸದಾ ಜಾಗರೂಕನಾಗಿರುವ<br>
ಮನುಷ್ಯ. ನನಗೆ ಬೇಕಾದ್ದನ್ನು ಕರುಣಿಸಿ ಬಂಧನದಲ್ಲಿ ಸಿಲುಕಿಕೊಳ್ಳುವ ಇಚ್ಛೆಯಿಲ್ಲ<br>
ಅವನಿಗೆ. ಈ ಬಂಧನದ ಒಂದು ಎಳೆಯನ್ನು ಅವನಿಗೆ ಸೋಕಿಸಿಕೊಡುವುದಿಲ್ಲವೆಂದು,<br>
ಈಗಿನ ಹಾಗೆಯೇ ನಂತರವೂ ಅವನು free ಆಗಿರಬಹುದೆಂದು ನಾನೆಷ್ಟು ಹೇಳಿದರೂ<br>
ಕೇಳುವುದಿಲ್ಲ ಅವನು. 'ಲಿಲಿ, excuse me. ನನ್ನನ್ನ ಅಂಥ ಜಂಜಡದೊಳಗೆ<br>
ಸಿಗಿಸಬೇಡ. ನಾನೇನು ಮನುಷ್ಯನಲ್ಲವೆ? ನೀನು ನನಗೆ ಬಂಧನ ಹಾಕದಿದ್ದರೂ<br>
ನನ್ನಿಂದ ನಿನಗೆ ಹುಟ್ಟಿದ ಮಗು ಬಗ್ಗೆ ತಾನಾಗಿಯೇ ನನ್ನಲ್ಲಿ ಪ್ರೀತಿ-ಗೀತಿ ಹುಟ್ಟಿದರೆ?<br>
ಆಗ? ನನ್ನ ಜೀವನದೊಳಗಿನ ಮಜಾ ಎಲ್ಲಾ ಖಲಾಸ್'- ಅನ್ನುತ್ತಾನೆ?<br>
{{gap}}-ಇವರೆಲ್ಲ ನಿರುಪಯೋಗಿಗಳು....
{{gap}}ವಿನಯ ಸಾಳಕರನನ್ನೇ ಸಾದು ಮಾಡಬೇಕು.
{{Right|೩೧ ಜುಲೈ, ೧೯೫೮ }}
{{gap}}ಆಫೀಸಿನಿಂದ ಬರುವಾಗ ತಂದಿದ್ದ ಚಾಕಲೇಟನ್ನು ಬಾಗಿಲಲ್ಲಿ ನಿಂತಿದ್ದ ಮುನ್ನಿಗೆ ಕೊಟ್ಟಾಗ ಮುನ್ನಿಯ ಮಮ್ಮಿ ಕೇಳಿದಳು. ಮಕ್ಕಳನ್ನ ಇಷ್ಟು ಪ್ರೀತಿ ಮಾಡ್ತೀರಿ, ಲಗೂನ ಲಗ್ನ ಆಗಿ ಬಿಡ್ರೆಲ್ಲ?'
{{gap}}ಹ್ಞ, ಲಗ್ನ. ಲಗ್ನ ಅಂದ ಕೂಡಲೇ ನೆನಪಾಗುವುದು ಆ ಕತೆಯೆಲ್ಲಾ. ಆ ಗದ್ದಲ ಬಜಂತ್ರಿ, ಅರಿಷಿಣ ಮತ್ತು ಆ ಮನು<noinclude><references/></noinclude>
rxl6azr5e0x1mlsvlnnmkrdwxnwflig
318042
318041
2026-05-08T09:19:57Z
Shreelatha.Halemane
7642
318042
proofread-page
text/x-wiki
<noinclude><pagequality level="4" user="Shreelatha.Halemane" />{{rh|left=ಕೊನೆಯ ದಾರಿ / ಕೊನಯ ದಾರಿ|right=೭೫}}</noinclude>ಹೆಚ್ಛಿನದು ಏನೂ ಇಲ್ಲ. ನಾನು ವಿರೋಧಿಸುತ್ತೀನಿ ಅಂತ ತಿಳಿದಿದ್ದನೇನೋ. ನಾನು<br>
ಏನೂ ವಿರೋಧ ಮಾಡದೇ ಇದ್ದಾಗ ಎಷ್ಟು ಆಶ್ಚರ್ಯ ಆವನಿಗೆ!...<br>
ಗೋವಿಂದಮೂರ್ತಿಯಿಂದ ಸಿಗಲಾರದ್ದು ಇವನಿಂದಲಾದರೂ ಸಿಕ್ಕೀತೆಂದು ಹ್ಞೂ<br>
ಅಂದೆ. ಆದರೆ ಛೆ, ಇವನೂ ಹೇಡಿಯೇ 'ಏನಂದಿ ಲಿಲಿ? ಮಗು ಬೇಕೆ ನಿನಗೆ? ತೋಬಾ<br>
ತೋಬಾ. ನೀನು ಇನ್ನೂ ಮದುವೆಯಾಗದ ಹುಡುಗಿ. ನಮ್ಮಿಂದ ಇಂಥ ಪಾಪದ ಕೆಲ್ಸ<br>
ಆಗೋದಿಲ್ಲ. -'ಅಲ್ಲಾಕೆ ಕಸಮ್' - ಅಂತ ತಡವರಿಸಿದ.
{{gap}}ಇವನ ಗಡ್ಡಕ್ಕೆ ಬೆಂಕಿ ಹಚ್ಚಬೇಕು. ಮದುವೆಯಾಗದ ಹುಡುಗಿಯ ಕೂಡ<br>
ಮಲಗಲಿಕ್ಕೆ ಬೇಕು ಈ ಸಾಬನಿಗೆ. ಆದರೆ ಅವಳಿಗೆ ಇಷ್ಟೊಂದು ಅವಶ್ಯವಾಗಿರುವ<br>
ಒಂದು ಸಣ್ಣ favour ಮಾಡಲಿಕ್ಕೆ ಬೇಡ ಅವನಿಗೆ. ಪಾಪವಂತೆ. ಥೂ....<br>
{{gap}}- ಗೊವಿಂದಮೂರ್ತಿಯಿಂದ ಆಗಬೇಕಿತ್ತು ಈ ಕೆಲಸ. ಅವನೇನೂ ಪಾಪ-<br>
ಪುಣ್ಯದ ಬಗ್ಗೆ care ಮಾಡುವುದಿಲ್ಲ. ಆದರೆ ಅವನು ಸದಾ ಜಾಗರೂಕನಾಗಿರುವ<br>
ಮನುಷ್ಯ. ನನಗೆ ಬೇಕಾದ್ದನ್ನು ಕರುಣಿಸಿ ಬಂಧನದಲ್ಲಿ ಸಿಲುಕಿಕೊಳ್ಳುವ ಇಚ್ಛೆಯಿಲ್ಲ<br> ಅವನಿಗೆ. ಈ ಬಂಧನದ ಒಂದು ಎಳೆಯನ್ನು ಅವನಿಗೆ ಸೋಕಿಸಿಕೊಡುವುದಿಲ್ಲವೆಂದು,<br> ಈಗಿನ ಹಾಗೆಯೇ ನಂತರವೂ ಅವನು free ಆಗಿರಬಹುದೆಂದು ನಾನೆಷ್ಟು ಹೇಳಿದರೂ<br> ಕೇಳುವುದಿಲ್ಲ ಅವನು. 'ಲಿಲಿ, excuse me. ನನ್ನನ್ನ ಅಂಥ ಜಂಜಡದೊಳಗೆ<br> ಸಿಗಿಸಬೇಡ. ನಾನೇನು ಮನುಷ್ಯನಲ್ಲವೆ? ನೀನು ನನಗೆ ಬಂಧನ ಹಾಕದಿದ್ದರೂ<br> ನನ್ನಿಂದ ನಿನಗೆ ಹುಟ್ಟಿದ ಮಗು ಬಗ್ಗೆ ತಾನಾಗಿಯೇ ನನ್ನಲ್ಲಿ ಪ್ರೀತಿ-ಗೀತಿ ಹುಟ್ಟಿದರೆ?<br> ಆಗ? ನನ್ನ ಜೀವನದೊಳಗಿನ ಮಜಾ ಎಲ್ಲಾ ಖಲಾಸ್'- ಅನ್ನುತ್ತಾನೆ?<br>
{{gap}}-ಇವರೆಲ್ಲ ನಿರುಪಯೋಗಿಗಳು....
{{gap}}ವಿನಯ ಸಾಳಕರನನ್ನೇ ಸಾದು ಮಾಡಬೇಕು.
{{Right|೩೧ ಜುಲೈ, ೧೯೫೮ }}
{{gap}}ಆಫೀಸಿನಿಂದ ಬರುವಾಗ ತಂದಿದ್ದ ಚಾಕಲೇಟನ್ನು ಬಾಗಿಲಲ್ಲಿ ನಿಂತಿದ್ದ ಮುನ್ನಿಗೆ ಕೊಟ್ಟಾಗ ಮುನ್ನಿಯ ಮಮ್ಮಿ ಕೇಳಿದಳು. ಮಕ್ಕಳನ್ನ ಇಷ್ಟು ಪ್ರೀತಿ ಮಾಡ್ತೀರಿ, ಲಗೂನ ಲಗ್ನ ಆಗಿ ಬಿಡ್ರೆಲ್ಲ?'
{{gap}}ಹ್ಞ, ಲಗ್ನ. ಲಗ್ನ ಅಂದ ಕೂಡಲೇ ನೆನಪಾಗುವುದು ಆ ಕತೆಯೆಲ್ಲಾ. ಆ ಗದ್ದಲ ಬಜಂತ್ರಿ, ಅರಿಷಿಣ ಮತ್ತು ಆ ಮನುಷ್ಯ.ನನ್ನ ಕೈ ಹಿಡಿದಿದ್ದ ಆ ಪಶು. ಪತಿದೇವರು.ಅವನೊಂದಿಗೆ ನೆನಪಾಗುವುದು ಅವನ ಆ ಅಬ್ಬರ.ಅವನ ಕುಡಿತ.ಅವನ ಸೂಳೆಯರು.ಅವನು ನನಗೆ ಕೊಟ್ಟ ಹಿಂಸೆ...<noinclude><references/></noinclude>
h72hgjr8kd948sq4sswpy6wamrimty3
ಪುಟ:ನಡೆದದ್ದೇ ದಾರಿ.pdf/೪೯
104
30504
318030
251874
2026-05-08T09:03:07Z
Shreelatha.Halemane
7642
/* Validated */
318030
proofread-page
text/x-wiki
<noinclude><pagequality level="4" user="Shreelatha.Halemane" />{{rh|left=೪೨|right=ನಡೆದದ್ದೇ ದಾರಿ}}</noinclude>ನಾಯಿಗಳು ಒಮ್ಮೆಲೆ ವಿಕಾರವಾದ ಧ್ವನಿ ತೆಗೆದು ಇಂದೇ ಹೀಗೆ ಅಳಲು ಸುರು ಮಾಡಬೇಕೆ?
{{gap}}ತಾನು ಅವನನ್ನು-ಛೆ,ತಪ್ಪಿತು,No. IVನನ್ನು-ಹೀಗೆ ಆಕ್ಷೇಪಿಸುವುದು,ನಂತರ ಕೊರಗುವುದು ತಪ್ಪು ಎನ್ನಿಸಿತು ಶಶಿಗೆ. No.II ಹಾಗೂ No.IIIಗಳು ತನ್ನನ್ನು ಇದೇ ಬಗೆಯಾಗಿ ಆಕ್ಷೇಪಿಸಬಾರದೇಕೆ? ಕೈಕೊಟ್ಟುಹೋದ ಆ ಹುಡುಗಿಯನ್ನು ಪ್ರೀತಿಸುವಾಗ No.IVನ ಮನಸ್ಥಿತಿ ಹೇಗಿತ್ತೋ ಆ ಮನಸ್ಥಿತಿಯಲ್ಲಿ ತಾನಿದ್ದಾಗ,ತನ್ನಲ್ಲೂ ಜೀವಶಕ್ತಿ ತುಂಬಿ ಹರಿಯುತ್ತಿದ್ದಾಗ,ಜಗತ್ತಿನಲ್ಲಿನ ಎಲ್ಲದರ ಬಗೆಗೂ ಮೃದು ಮಧುರ ಪ್ರೀತಿ ಇದ್ದಾಗ,ಬಹಳ ವರ್ಷಗಳ ಹಿಂದೆ,No.Iನ ಪ್ರವೇಶವಾಗಿತ್ತು ತನ್ನ ಜೀವನದಲ್ಲಿ. ಸುದೈವದಿಂದಲೋ ದುರ್ದೈವದಿಂದಲೋ- ಈ ಎರಡು ಶಬ್ದಗಳಲ್ಲಿ ಈಗ ಏನೂ ವ್ಯತ್ಯಾಸವೇ ಉಳಿದಿಲ್ಲವಲ್ಲ! — No.I ತನ್ನಿಂದ ದೂರವಾದ. ಆಗ ಕಮರಿ ಹೋದ ಉತ್ಸಾಹ, ಬತ್ತಿಹೋದ ಮಧುರತೆ, ಬೂದಿಯಾದ ಆಸೆ-ಎಲ್ಲಾ ಅಲ್ಲಿಗೇ ಕೊನೆಗಂಡಿದ್ದವು. ಅಂತೆಯೇ ಇರಬೇಕು, ನಂತರ ಬಂದ No. IIನ ಜೊತೆ ತನಗೆ ಬೆಕ್ಕು ಇಲಿಯೊಡನೆ ಚಿನ್ನಾಟವಾಡುವಂತೆ ಆಡಿ ಕೊಂದು ಬೀಸಾಕಬೇಕು ಎನ್ನಿಸಿದ್ದು. ಈ ತೃಷ್ಣೆ, ಕೊಲ್ಲಬೇಕು ಎನ್ನುವ ದಾಹ, ಇನ್ನೂ ಇದ್ದಾಗಲೇ ಅಲ್ಲವೆ No. IIIನ್ನು ಕಂಡದ್ದು?ಆದರೆ ಅಯ್ಯಾ No. III, ನೀನು ಬದುಕಿಕೊಂಡೆ. ನನ್ನ ಒಳಗಿನ ಉರಿಯ ಬಿಸಿ ತಾಗುವಷ್ಟು ನನಗೆ ಸಮೀಪ ಬರದೆ ದೂರದೂರವೇ ಪ್ಲೆಟೋನಿಕ್ ಪ್ರೇಮಿಯಾಗಿದ್ದುಕೊಂಡು ನೀನು ಬದುಕಿದೆ. ನೀನೊಂದು ಬೇರೆ ತರದ ವಿಚಿತ್ರ ವ್ಯಕ್ತಿ. ಪ್ರೀತಿಯನ್ನು ಹೃದಯದಲ್ಲಿ ಬಚ್ಚಿಡುವದರಲ್ಲೇ ತೃಪ್ತಿ ಸಿಗುತ್ತದೆ ಎನ್ನುತ್ತೀ. ಬಚ್ಚಿಡುವ ನಿನ್ನ ಪ್ರಯತ್ನವಂತೂ ವ್ಯರ್ಥವಾಗಿದೆ. ಆದರೆ ನೀನು ನನ್ನನ್ನು ಪ್ರೀತಿಸುವುದು ತಿಳಿದಿದ್ದರೂ, ನಿನ್ನ ಈ ಉದ್ವೇಗರಹಿತವಾದ-ಉಸಿರು ಕಟ್ಟಿಸುವ ಹಾಗೆ ಶಾಂತವಾದ-ಕಣ್ಣು ಕತ್ತಲಗೂಡುವಷ್ಟು ಆಳವಾದ- ಪ್ರೀತಿಯನ್ನು ನಾನು ಒಲ್ಲೆ. ನೀನು ನನ್ನಿಂದ ದೂರವೇ ಇರು.
{{gap}}ಎಷ್ಟು ಬೇಗ ಮೂರುಗಂಟೆಯಾಯಿತಲ್ಲ.... ಈ ಹಾಳಾದವರ ಬಗೆಗೆಲ್ಲಾ ವಿಚಾರ ಮಾಡುವುದು ಬಿಟ್ಟು ಇನ್ನಾದರೂ ಸ್ವಲ್ಪ ನಿದ್ರೆ ಮಾಡಬೇಕೆಂದು ಶಶಿ ಮಗ್ಗುಲಾದಳು. ಯಾಕೋ ಕಿಡಿಕಿಯ ಹೊರಗಿನ ಗಾಢಾಂಧಕಾರವನ್ನು ನೋಡುತ್ತಿರಲು ಅವಳಿಗೆ ಬೇಸರವೆನಿಸಿತು. ಎದ್ದು ದೀಪ ಹಾಕೋಣವೇ ಎಂಬ ವಿಚಾರ ಬಂದು ಕೂಡಲೇ ಮರೆಯಾಯಿತು. ಕಣ್ಣು ಕುಕ್ಕಿಸುವ ಈ ವಿದ್ಯುತ್ ದೀಪ ಬೇಡ-ಹೀಗೇ ಮಲಗಿ ಕಿಡಿಕಿಯ ಹೊರಗಿನ ಕತ್ತಲನ್ನೇ ನೋಡುತ್ತಿರಬೇಕು, ಯಾವಾಗ ಪೂರಾ<noinclude><references/></noinclude>
mkehiv70c9iibrvom67ekvce53t9kiy
ಪುಟ:ನಡೆದದ್ದೇ ದಾರಿ.pdf/೭೪
104
30722
318035
200792
2026-05-08T09:09:30Z
Shreelatha.Halemane
7642
/* Validated */
318035
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=೬೭|left=ಮುಳ್ಳುಗಳು / ನೀನೇ ತಂತಿ}}
ಭಯಂಕರವಾದುದನ್ನು ಮಾಡಬೇಕು ; ಹರೀಶನಿಂದ ದೂರ ಹೋಗಬೇಕು ; ಅವನ</br>
ಕಡೆ ಹಾರಿ ಹೋಗಬೇಕು ; ಅವನ ಕುತ್ತಿಗೆಗೆ ಹಗ್ಗ ಹಾಕಿ ಅವನನ್ನು ಅವನ</br>
ಕೋಟೆಗೋಡೆಯ ಮೇಲಿಂದ ಕೆಳಗೆ ಜಗ್ಗಿಕೊಳ್ಳಬೇಕು ; ಇಬ್ಬರೂ ದಾಂಡೇಲಿಯ</br>
ಅಟ್ಟಂಬಟ್ಟ ಅರಣ್ಯಕ್ಕೆ ಓಡಿ ಹೋಗಬೇಕು ; ಅಲ್ಲಿಂದ ಜಗತ್ತಿಗೇ ಕೇಳಿಸುವ ಹಾಗೆ</br>
'ನೀನೇ ತಂತಿ' ಎಂದು ಒದರಿ ಹಾಡಬೇಕು....</br>
{{gap}}ಅಲ್ಲಿಗೆ ಈ ಕತೆ ಮುಗಿಯುವುದೆ ?</br>
{{gap}}ಸಂಜೆ ಆಫೀಸಿನಿಂದ ಬಂದ ಹರೀಶ ಮೊದಲು ಸೀದಾ ತನ್ನ ಪ್ರೀತಿಯ ಗಿಳಿಯ</br>ಕಡೆ ಹೋಗಿ, ಅದಕ್ಕೆ ಕೆಂಪಾದ ಸೇಬುವಿನ ಹೋಳುಗಳನ್ನು ತಿನ್ನಿಸಿ, ಪಂಜರದ ಸಲಾಕೆಗಳಲ್ಲಿ ತನ್ನ ತುಟಿಗಳನ್ನು ತೂರಿ ಅದರ ಚುಂಚಿನ ಮೇಲೆ ಮುತ್ತಿನ</br>
ಮುದ್ರೆಯನ್ನೊತ್ತಿದನು. ಇಷ್ಟೊತ್ತು ಅರಚುತ್ತಲಿದ್ದ ಗಿಳಿ ಅದಾವ</br>
ಮಾಯದಿಂದಲೋ ಸುಮ್ಮನಾಯಿತು.</br>
{{gap}}-ಸರಯೂ ನೋಡುತ್ತಲೇ ಇದ್ದಳು.</br>
{{gap}}ಹರೀಶನ ಮುಖ ಯಾಕೋ ಎಂದಿಗಿಂತ ಹೆಚ್ಚಾಗಿ ಅರಳಿತ್ತು. ಹೆಂಡತಿಯನ್ನು</br> ಸಮೀಸುತ್ತಿದ್ದಂತೆ ಆತ ನಗುತ್ತ ಕೇಳಿದ,"ಸರೂ, ನಿನಗೊಂದು ಸ್ವೀಟ್ ನ್ಯೂಜ್</br>
ಹೇಳಿದರ ಏನು ಕೊಡ್ತೀ ನನಗ ?"</br>
{{gap}}ಅವನ ಉತ್ಸಾಹಕ್ಕೆ ಪ್ರಯತ್ನಪಟ್ಟು ಸಾಥ ಕೊಡುತ್ತ ತುಟಿಯರಳಿಸಿದಳು ಆಕೆ,</br>"ನೀನು ಕೇಳಿದ್ದು."</br>
{{gap}}"ಆಞ ?ಖರೇನs ? ಹಂಗಾರ ಕೇಳಿಲ್ಲೆ."</br>
{{gap}}ತನ್ನನ್ನು ಬಳಸುತ್ತಿದ್ದ ಆತನ ತೋಳುಗಳಿಂದ ದೂರವಾಗಬೇಕೆಂಬಾಸೆಯಿಂದ</br>
ಆಕೆಯ ಮನಸ್ಸು ಹುಚ್ಚೆದ್ದು ಕುಣಿಯಿತು. ಆದರೆ ಆತ ಹೇಳಲಿರುವ ಆ 'ಸ್ವೀಟ್</br>
ನ್ಯೂಜ'ನ ಕಲ್ಪನೆ ಯಾಕೋ ಅವಳಿಗೆ ಹೆದರಿಕೆ ತರಿಸಿತು; ಇಲ್ಲಿಂದ ಹಾರಿಹೋಗಲು</br>
ತಾನು ಶತಪ್ರಯತ್ನ ಮಾಡುತ್ತಿದ್ದಾಗ ಯಾರೋ ತನ್ನ ರೆಕ್ಕೆಗಳನ್ನೇ ಕತ್ತರಿಸುತ್ತಿದ್ದಾರೆ</br>
ಎನ್ನಿಸಿತು ; ಸೋತು ಹೋಗುತ್ತಿದ್ದೇನೆ, ಬಿದ್ದು ಹೋಗುತ್ತಿದ್ದೇನೆ ಎನ್ನಿಸಿತು ; ಇದೇ</br>
ಎಲ್ಲದರ ಕೊನೆಯೇನೋ ಎಂದು ಅಂಜಿಕೆಯಾಗತೊಡಗಿತು......</br>
{{gap}}'ನಿನ್ನೆ ಸಂಜೀನ್ಯಾಗ ಎಲ್ಲೆ ಹೋಗಿದ್ವಿ ನೆನಪದs ಏನು ಸರೂ ?"</br>
{{gap}}"ಅದೇ ಡಾಕ್ಟರರ ಕಡೆ. ಸುಳ್ಳs ನನಗ ಜಡ್ಡಗೇದಂತ ಹೇಳಿ ಅವರ ಕಡೆ</br>
ಕರಕೊಂಡು ಹೋದಿ.ನನಗೇನು ಧಾಡೀನೂ ಆಗಿಲ್ಲ. ಅವರರೆ ಏನು ಹೇಳ್ಯಾರು ಪಾಪ".</br>
{{gap}}"ಅವರು ನಿನ್ನೆ ಮುದ್ದಾಂ ಹೇಳಲಿಲ್ಲಂತ. ಇವತ್ತ ನನಗ ಆಫೀಸಿಗೆ ಫೋನ್</br><noinclude><references/></noinclude>
c6eggcoxglrbu9lzocczuexded018e2
ಪುಟ:ನಡೆದದ್ದೇ ದಾರಿ.pdf/೮೦
104
30834
318039
200701
2026-05-08T09:14:03Z
Shreelatha.Halemane
7642
/* Validated */
318039
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=೭೩|left=}}
{{rh|center='''<big>'''ಕೊನೆಯ ದಾರಿ'''</big>'''|right=|left=}}
{{rh|center=|right=೨೪ ಜುಲೈ, ೧೯೫೮|left=}}
{{gap}}ಇಂದು ಇಡಿಯ ದಿನ ತಿರುಗಾಡೀ ಸಾಕಾಯಿತು. ಆಬ್ಬ, ಎಂತಹ ಹಸಿವು ಆ</br> ಗೋವಿಂದಮೂತಿರ್ವಗೆ! ಎಷ್ಟೆ ಲ್ಲ ತಿಳಕೊಂಡಿದ್ದಾನೆ ಅವನು ಈ ವಿಷಯದ ಬಗ್ಗೆ!</br> ಡಾಕ್ಟರ್ ಆಲ್ಲವೆ? ಛಿ, ಈ ಡಾಕ್ಟರರೆಲ್ಲಾ ಹೊಲಸು್ ಜನವಪ್ಪ. ಮನುಷ್ಯನ</br> ದೇಹವನ್ನು ಕೊಯ್ದು-ಕೊಯ್ದು ಎಲ್ಲ analyse ಮಾಡಿ ಎಲ್ಲ ನೋಡಿದವರು</br> ಇವರು. ಅದಕ್ಕೇ ಗೋವಿಂದಮೂತಿ೯ಗೆ ಈ ಬಗ್ಗೆ ಏನು ಮಾತಾಡಲಿಕ್ಕೂ</br> ನಾಚಿಕೆಯಿಲ್ಲ. ಇದು ಹೀಗೆ, ಆದು ಹಾಗೆ ಅಂತ ನನಗೇ ವಿವರಿಸಿ ಹೇಳುತ್ತಾನೆ.</br> 'ಲಿಲಿ, you are a perfect woman'- ಅಂದ ನನಗೆ ಇವತ್ತು, ಕೆರೆಯ ಪಕ್ಕದ ದಿನ್ನೆಯ</br> ಆಚೆ ಕೂತಿದ್ದಾಗ, ನನಗೆ ಆಭಿಮಾನ ಅನ್ನಿಸಿತೆ ನನ್ನ ಬಗ್ಗೆ ? ಹೌದು ಅಂತ ಕಾಣುತ್ತದೆ.</br> ಯಾಕನ್ನಿಸಬಾರದು? ನಿನ್ನ ದೇಹ ರಚನೆ ಚೆನ್ನಾಗಿದೆ, ಪೊಣ೯ವಾಗಿದೆ ಅಂತ ಹೇಳಿದಾಗ</br> ಯಾವ ಹೆಂಗಸಿಗೆ ಅಭಿಮಾನ ಅನ್ನಿಸುವುದಿಲ್ಲ?</br>
{{gap}}ಅದರೆ ಛೆ, ಗೋವಿಂದಮೂತಿ೯ಯೊಂದಿಗೆ ಇಡೀ ದಿನ ತಿರುಗಿ ಕೂತು ಮಲಗಿ</br> ಏನು ಮಾಡಿದರೂ ಒಮ್ಮೆ ಸಹ ಮೈ ಜುಮ್ ಅನ್ನಲಿಲ್ಲ.</br> ನನಗೆ ಇಂಥವರ ಗೆಳೆತನ</br> ಈಗ ಬೇಡವಾಗಿದೆ. ಇವರಿಂದ ಏನೂ ಉಪಯೋಗವಿಲ್ಲ. ಭಯಂಕರ ಮನುಷ್ಯ ಈ</br> ಗೋವಿಂದಮೂತಿ೯. ಎಂದೂ ತೀರದ ದಾಹ ಅವನದು. ಬೇರೆ ಮಾತಿಗೆ ಅವಕಾಶವೇ</br> ಕೊಡುವುದಿಲ್ಲ ಅವನು. 'ಜೀವನ ಇರೋದೇ ಸುಖ ಅನುಭವಿಸೋದಕ್ಕೆ ಲಿಲಿ,</br> ಈಗಲ್ಲದಿದ್ದರೆ ಇನ್ಯಾವಾಗ ನಾವು ಮಜವಾಗಿರುವುದು? ಮುದುಕರಾದ</br> ಮೇಲೆಯೇ? ಏನು ? ಪಾಪ? ಪಾಪ ಬಂದೀತು ಅನ್ನುತ್ತಿಯಾ?' - ಅಂತ ಅಂದು</br> ಅವನು ಭಯಂಕರವಾಗಿ ನಕ್ಕದ್ದು ಇನ್ನೂ ನೆನಪಿದೆ ನನಗೆ. 'ಇಲ್ಲಿ ಕೇಳು ಲಿಲಿ, ಪಾಪ</br> ಪುಣ್ಯ ಎಲ್ಲಾ ಸುಳ್ಳು. ನನ್ನ ಪಾಲಿಗಂತೂ ಇದೊಂದೇ ಖರೆ- ಇದೊಂದೇ ಖರೆ'</br> ಅನ್ನುತ್ತಾನೆ ಅವನು. ಅವನಂದದ್ದು ಖರೆ ಅಂತ ನನಗೂ ಅನ್ನಿಸಿತಲ್ಲ!</br>
{{gap}}ಈ ಗೋವಿಂದಮೂತಿ೯ಗೂ ಆ ವಿನಯ ಸಾಳಕರಗೂ ಎಲ್ಲಿಂದೆಲ್ಲಿಯ</br> ಹೋಲಿಕೆ! ಮಾತೆತ್ತಿದರೆ ಪಾಪ-ಪುಣ್ಯ, Morality-ethics ದ ಗಂಟನ್ನೇ</br> ಬಿಚ್ಚುತ್ತಾನೆ ಅವನು. ಕಾಲೇಜಿನಲ್ಲಿ ಹುಡುಗರಿಗೆ ಫಿಲೊಸೊಫಿ ಕಲಿಸಿ-ಕಲಿಸಿ ಅಭ್ಯಾಸ.</br><noinclude><references/></noinclude>
fzlg04heprvgfzbwzs3iybfhi4qakdm
ಪುಟ:ನಡೆದದ್ದೇ ದಾರಿ.pdf/೪೮
104
30837
318029
251873
2026-05-08T09:02:14Z
Shreelatha.Halemane
7642
/* Validated */
318029
proofread-page
text/x-wiki
<noinclude><pagequality level="4" user="Shreelatha.Halemane" />{{rh|left=ಮುಳ್ಳುಗಳು/ಪ್ರಶ್ನೆ |right=೪೧}}</noinclude>ಕಲತಾಕಿ. ತಿಳವಳಿಕೆ ಇದ್ದಾಕಿ.ಲಗ್ನಾ ಒಲ್ಲೆ ಅಂದ್ರ ಏನ ಮಾಡಬೇಕು ನಿನ್ನ ಹಡದವು?'-ಅದು ಅವಳ ತಂದೆಯ ಪ್ರಶ್ನೆ:ವಿದ್ಯಾವತಿಯಾದ,ವಯಸ್ಕಳಾದ ಪ್ರೀತಿಯ ಮಗಳು ಶಶಿ ಯಾಕೆ ಮದುವೆಗೆ ಒಪ್ಪಲೊಲ್ಲಳು ಎಂದು. ಸೋದರಮಾವನ ಒಬ್ಬನೇ ಮಗ ಆರುಣ,ಅಪ್ಪನ ಲಕ್ಷದ ಆಸ್ತಿಗೆ ಉತ್ತರಾಧಿಕಾರಿ.'ಛಲೋ ಪಗಾರ' ಇರುವ ಆಫೀಸರು,ಶಶಿಯನ್ನೇ ಲಗ್ನ ವಾಗುವೆನೆಂದು ಕಾದು ಕುಳಿತವನು.ಒಲ್ಲೆನೆನ್ನುವ ಈ ಹುಡುಗಿಗೆ ತಲೆ ಕೆಟ್ಟಿದೆಯೇನೋ ಎಂಬ ಪ್ರಶ್ನೆ ಅವಳ ತಂದೆಗೆ.
{{gap}}-ಏ ಇವನೇ, ನನ್ನ 'ನೆನಪು'ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವವನೇ, ಸರಿಯಾಗಿ ನೆನಪಾಯಿತು- ನಿನ್ನ ನಂಬರು ನಾಲ್ಕು.ನಿನ್ನನ್ನು ನೆನಸಿಕೂಳ್ಳುವಾಗಲೆಲ್ಲಾ ನನ್ನ ಮನಸಿನಲ್ಲಿ ನೀನು "NO.IV" ಎಂಬ ರೂಪದಲ್ಲಿ ಕಾಣಿಸಿಕೊಳ್ಳುವಿ. ನಿನ್ನ ನೆನಪು ನನ್ನ ಚಿತ್ತದಲ್ಲಿ ಈ ರೂಪು ತಳೆಯಲಿಕ್ಕಿಲ್ಲವೆಂದು ಬಹಳ ಆಶಿಸಿದ್ದೆ. ತಳೆಯಬಾರೆದೆಂದು ಬಹಳ ಪ್ರಯತ್ನಿಸಿದೆ. ಆದರೆ ನನ್ನ ಆಶೆ- ಪ್ರಯತ್ನಗಳಿಗೆ ಮೀರಿ ಇಂದು ಸಂಜೆ ನೀನು ನಿನ್ನ ರೂಪವನ್ನು ನಿರ್ಧರಿಸಿಕೊಂಡು ಬಿಟ್ಟಿರುವಿ. ನಿನ್ನ ಪರಿಚಯವಾದಂದಿನಿಂದ ಇಂದಿನ ವರೆಗೂ, ನನ್ನ ಅಂತರಾಳದಲ್ಲಿ ಸದಾ ಮೂಡಿ ಬರುತ್ತಿದ್ದ ನಿನ್ನ ನೆನಪಿಗೆ ಜೀವವಿರುತ್ತಿತ್ತು. ಎಷ್ಟೋಸಲ ಈ ಸಜೀವ ನೆನಪಿನ ಆಸರೆಯಲ್ಲಿ ಬೆಚ್ಚಗೆ ಮಲಗಿ ನಾನು 'NO. I', 'NO.II', 'NO.III' ಗಳ ಬಗೆಗೆ ಒಂದು ರೀತಿಯ ನಿರ್ಲಕ್ಷದಿಂದ, 'NO.i', 'NO.ii' ಇತ್ಯಾದಿಗಳ ಬಗೆಗೆ ಒಂದು ರೀತಿಯ ತಾತ್ಸಾರದಿಂದ ವಿಚಾರ ಮಾಡಿದ್ದುಂಟು. ಆದರೆ ಇಂದು ಸಂಜೆ ಅದು ಜೀವ ಕಳೆದುಕೊಂಡು ಬರಿಯ ನೆನಪಾಗಿದೆ; 'NO.IV' ಆಗಿದೆ. ನಾನೂ ಸಹ-ನಿನ್ನ ಹಾಗೆ, 'ಆತ್ಮಶೋಧನೆ' ಮಾಡಿಕೊಂಡಿರುವೆನೆಂಬ ಪ್ರಾಮಾಣಿಕ ಭ್ರಮೆಯಿಂದ- ನಿನಗಿದನ್ನೆಲ್ಲ ಹೇಳಿಬಿಡಬೇಕಾಗಿತ್ತು. ಹಾಗೆ ಹೇಳಲಿಲ್ಲ. 'ನನ್ನಲ್ಲಿ ಅಲ್ಲದಿದ್ದರೆ ಹೋಗಲಿ, ಎಲ್ಲಾದರೂ ಆಗಲಿ, ನಿನ್ನ ಪ್ರಶ್ನೆಗೆ ಉತ್ತರ ಕಂಡುಕೊಂಡು ಸುಖವಾಗಿರು' ಎಂದು ಹರಸಿ ಕಳಿಸಿದೆ, ಇದರರ್ಥ-ಇದ್ದುದನ್ನು ಇದ್ದಂತೆ ಹೇಳಲು ನನಗೆ ಧೈರ್ಯವಿಲ್ಲವೆಂದೇ?
{{gap}}-'ಶಶೀ, ನಿನಗೆ ಧೈರ್ಯವಿಲ್ಲ. ಶಶೀ, ನೀನು ಹೇಡಿ' ಎಂದು ಯಾರೋ ಕೂಗಿದಂತೆನಿಸಿ ಆಕೆ ಒಮ್ಮೆಲೆ ಬೆಚ್ಚಿಬಿದ್ದಳು. ದೂರ ಸರಿಸಿದ್ದ ಹೊದಿಕೆಯನ್ನೆಳೆದು ಮತ್ತೆ ಹೊದ್ದುಕೊಂಡಳು. ಕಿಡಕಿಯ ಹೊರಗೆ ನೋಡಿದರೆ ಇನ್ನೂ ಅದೇ ಕತ್ತಲು. ಮಧ್ಯರಾತ್ರಿ ಈಗ, ಅಮವಾಯೆ ಬೇರೆ. ಕಂಪೌಂಡಿನಲ್ಲಿನ ಗಿಡಗಳು ಮರಮರ ಸಪ್ಪಳ ಮಾಡುತ್ತಿವೆ. ದೂರದಲ್ಲೆಲ್ಲೋ ನಾಯಿಗಳು ಅಳುವ ಸದ್ದು ಕೇಳಿಸುತ್ತಿದೆ. ಕೆಟ್ಟಧ್ವನಿಯಲ್ಲಿ, ಅಂಜಿಕೆ ಬರಿಸುವ ಹಾಗೆ- ಒಂದಲ್ಲ, ಎರಡಲ್ಲ,ಹಲವಾರು<noinclude><references/></noinclude>
p2b3z7c3cnrlxujjkuxb0brk3l7fore
ಪುಟ:ನಡೆದದ್ದೇ ದಾರಿ.pdf/೭೬
104
30850
318037
250656
2026-05-08T09:12:28Z
Shreelatha.Halemane
7642
/* Validated */
318037
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|left=ಮುಳ್ಳುಗಳು / ನೀನೇ ತಂತಿ|right=69}}</small></noinclude>ಅಲ್ಲ ; ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಹರೀಶನ ಮಗುವಿಗಾಗಿ?... ಹೌದು,<br>
ಅದಕ್ಕಾಗಿ ತಾನು ಸ್ಥಿ ತಪ್ರಜ್ಞಳಾಗಬೇಕು ; ದಾಂಡೇಲಿಯ ಅಡವಿಯ ಕನಸು ಕಾಣಬಾರದು<br>
ಹಳೇ ವಾದ್ಯಕ್ಕೆ ಹೊಸ ತಂತಿ ಹಾಕಿ ಹೊಸ ರಾಗ ಸುರು ಮಾಡಬೇಕು ;<br>
ಹಿಂದಿನದೆಲ್ಲ ಬರಿ 'ಪ್ಲೆಟೋನಿಕ್' ಎಂದು ಮರೆತು ಬಿಡಬೇಕು; ಹಳೆಯ ಕತೆ ಎಂದು<br>
ದೂರ-ದೂರ ಸರಿಸಿಬಿಡಬೇಕು....<br>
{{gap}}<p>ಆ ರಾತ್ರಿ ಎಂದಿನಂತೆ ಊಟದ ನಂತರ ಮಾಳಿಗೆಯ ಮೇಲೆ ಹರಟುತ್ತ ಕೂತಾಗ<br>
ಸರಯೂ ಹರೀಶನಿಂದ ಹೇಳಿಕೊಳ್ಳದೆಯೇ ತನ್ನ ಪ್ರೀತಿಯ ಆ ಹಾಡು ಹಾಡಿದಳು.<br>
ಹಾಡು ಮುಗಿದ ಕೂಡಲೆ ಹರೀಶ ಅವಳನ್ನು ಎದೆಗೊತ್ತಿಕೊಳ್ಳುತ್ತ ಅವಳ ಕಿವಿಯಲ್ಲಿ<br>
ಪಿಸುನುಡಿದ, "ಸರೂ, ಇವತ್ತ - ಇವತ್ತ ಮಾತ್ರ ಮಾತ್ರ ನೀ ಹಾಡೋವಾಗ 'ನೀನೇ<br>
ತಂತಿ' ಅಂತ ಅಗದೀ ಪ್ರಾಮಾಣಿಕ ಆಗಿ ಹೇಳಲಿಕ್ಹತ್ತೀ ಅಂತ ಅನಿಸಿತು. ಯಾಕೋ<br>
ಗೊತ್ತಿಲ್ಲ. ಇನ್ನ ಮ್ಯಾಲ ಮಾತ್ರ ನಾನು ತಂತಿ ಅನ್ನೋ ಈ ನಂಬಿಕೆ ನಾ ಅಂತೂ<br>
ಕಳಕೊಳ್ಳೊದಿಲ್ಲ. ಭಾಳ ದಿವಸದ ಮ್ಯಾಲ ಇವತ್ತ ನಾವು ಒಬ್ಬರಿಗೊಬ್ಬರು ಸಮೀಪ<br>
- ಅಗದೀ ಸಮೀಪ ಬಂದೀವಿ ಅನಸ್ತದ. ನಾವು ಹೀಂಗ ಇರೋಣ ಸರೂ, ಏನಂತೀ?"</p>
{{gap}}"ಹೂ ಹೂ" - ಕಣ್ಣು ಮುಚ್ಚಿದ್ದಳು ಸರಯೂ.<br>
<center>* * * *</center>
{{gap}}ಹರೀಶ ಸುಖವಾಗಿ ನಿದ್ರಿಸುತ್ತಿದ್ದಾನೆ. ಸರಯೂಗೆ ನಿದ್ರೆಯೇ ಬರಲೊಲ್ಲದು.<br>ಬೆಳಗಾಗುತ್ತ ಬಂದಿದೆ. ಆದರೆ ರಾತ್ರಿಯೆಲ್ಲ ವಿಪರೀತ ಮಳೆಯಾಗಿದ್ದರಿಂದ ಇನ್ನೂ<br>ಕತ್ತಲೋ ಕತ್ತಲು. ಹಾಸಿಗೆಯ ಮೇಲೆ ಮಲಗಿರುವುದು ಸಾಧ್ಯವಾಗದೆ ಅವಳು<br>ಸಾವಕಾಶವಾಗಿ ಎದ್ದು ಪಡಸಾಲೆಗೆ ಬಂದಳು. ಮೆಲ್ಲನೆ ನಡೆದು ಕಿಡಿಕಿಯ ಹತ್ತಿರವಿದ್ದ<br>ಗಿಳಿಯ ಪಂಜರದೆದುರಿಗೆ ಹೋಗಿ ನಿಂತಳು. ಕತ್ತಲಲ್ಲಿ ಅದರ ಕಣ್ಣುಗಳು ಪಳಪಳನೆ<br>
ಹೊಳೆದವು. ಅದರ ಗಂಟಲಿನಿಂದ 'ಹರಿ ಹರಿ'ಯ ಬದಲು ಎಂಥದೋ ಹತ್ತಿಕ್ಕಿದಂಥ<br>ಗೊಗ್ಗರು ಧ್ವನಿ ಹೊರಡುತ್ತಲಿದೆ. ಏನು ಹೇಳುತ್ತಿದೆ ಈ ಗಿಳಿ ? <br>
{{gap}}ತೆರೆದಿರಿಸಿದ್ದ ಕಿಡಿಕಿಯ ಬಾಗಿಲಿಂದ ಭರ್ರ್ ಎಂದು ತಣ್ಣನೆಯ ಗಾಳಿ ಒಳಗೆ<br>
ಬೀಸಿ ಬರುತ್ತಲಿದೆ. ಕಿಡಿಕಿಯ ಸಲಾಕೆಗಳನ್ನು ಬಿಗಿಯಾಗಿ ಅದುಮಿದಳು ಸರಯೂ....<br>
{{gap}}ಏ ಹುಡುಗನೇ, ಅಂದು-ಇಂದು-ಬಹುಶಃ ಮುಂದೂ ಸಹ-ನನ್ನ ವೀಣೆಯ<br>
ತಂತಿಯಾದವನೇ, ಕೇಳು. ಹತ್ತು ವರುಷಗಳ ಹಿಂದೆಯೆ, ನನ್ನ-ನಿನ್ನ ಜೀವನದಲ್ಲಿ<br>
ಬೇರೆಯವರ ನಿರುಪಯೋಗಿ ಪ್ರವೇಶ ಆಗುವ ಮೊದಲೆ, ಅಂದರೆ ನಾನಿನ್ನೂ ನನ್ನ<br>ವೀಣೆಯನ್ನು ಶ್ರುತಿ ಮಾಡುವ ಹಾಗೂ ನೀನು ಎಲೆಕ್ಟ್ರಿಕ್ ಕಂಭಕ್ಕೆ ಬಿಗಿಯಲ್ಪಡುವ<br><noinclude><references/></noinclude>
b6lx8i2cnasrvbh6wzvs1jw89pwguuk
ಪುಟ:ನಡೆದದ್ದೇ ದಾರಿ.pdf/೨೯
104
30857
317968
250367
2026-05-08T03:32:34Z
Shreelatha.Halemane
7642
/* Validated */
317968
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೨೨.|right=ನಡೆದದ್ದೇ ದಾರಿ}}
ಅಲ್ಲಾಡಿಸುತ್ತಾ ತಮ್ಮ ಹಿಂದಿಂದೆ ತಿರುಗಿದರೆ ಸಾಕು,ಎಲ್ಲಾ ಮರೆತುಬಿಡುತ್ತಾರೆ.</br>
ಇವರಿಗೆ ಬುದ್ಧಿ ಹೇಳುವದು ವಾಡ೯ನ್ ಆಗಿರುವ ತನ್ನ ಕರ್ತವ್ಯ.</br>
{{gap}}ಎತ್ತರದ ದನಿಯಲ್ಲೇ ಮುಂದುವರಿಸಿದಳು ಪ್ರೊ. ಲೀಲಾವತಿ, "ನಾ ನಿಮಗ</br>
ಸ್ಪಷ್ಟ ಹೇಳಿರತೀನಿ. ಇಂಥಾದೆಲ್ಲಾ ಹಾಸ್ಪಲಿನೊಳಗೆ ನಾ ನಡಸಿಗೊಡಲಿಕ್ಕಿಲ್ಲ.</br>
ನಾಳಿನಿಂದ ನಿಮಗೆ ಎಲ್ಲೆರs ಹೋಗೂದಿದ್ರ ನನಗೆ ಹೇಳಿ ಹೋಗತಕ್ಕದ್ದು. ತಡಾ</br>
ಆಗಿ ಬಂದ್ರ ಬಾಗಲಾನೇ ತಗೀಬ್ಯಾಡಂತ ನಾ ಬಸ್ಯಗ ಹೇಳಿಬಿಡತೀನಿ.ಒಂದು ಹೋಗಿ</br> ಒಂದು ಆತಂದ್ರ ನಾ ಜವಾಬ್ದಾರ ಆಗಬೇಕಾಗತದ. ನಿಮಗೇನು? ನೆನಪಿನ್ಯಾಗಿಟಗೊಳ್ರಿ</br> ನಾ ಹೇಳಿದ್ದು. ತಿಳೀತಿಲ್ಲೋ?"</br>
{{gap}}....ಎಷ್ಟು ಸೊಕ್ಕು ಈ ಹುಡಿಗಿಯರಿಗೆ ! ತಾನಿಷ್ಟು ಗಂಟಲುಹರಿದುಕೊಂಡರೂ</br> ಒಬ್ಬಳು 'ಹ್ಞೂ' ಅನ್ನಲಿಲ್ಲ. ಮುಖ ಕೆಳಗೆ ಮಾಡಿ ಹಲ್ಲು ಕಿಸಿಯುತ್ತಿದ್ದಾಳೆ ಆ</br> ಮೂಲೆಯಲ್ಲಿ ನಿಂತವಳು. ಇವರಿಗೆ ಏನಾದರೂ ಶಿಕ್ಷೆ ವಿಧಿಸಬೇಕು.ಅಂದಾಗಲೇ</br> ದಾರಿಗೆ ಬರುತ್ತಾರೆ.
{{gap}}"ಸರೋಜಿನಿ ಬಂದ ಕೂಡ್ಲೇ ನನಗೆ ಭೆಟ್ಟ್ಯಾಗಂತ ಹೇಳ್ರಿ ಅಕೀಗೆ."</br>
{{gap}}-ಹಾಜರಿ ಪುಸ್ತಕವನ್ನು ಟೇಬಲ್ ಮೇಲೇ ಬಿಟ್ಟು ಪ್ರೋ.ಲೀಲಾವತಿ ತನ್ನ</br>
ರೂಮಿಗೆ ಬಂದು ದೀಪ ಹಾಕಿ ಉಸ್ಸೆಂದು ಕುರ್ಚಿಯ ಮೇಲೆ ಕುಳಿತಳು.</br>
{{gap}}ಹಲವಾರು ಪತ್ರಗಳು ಟೇಬಲ್ ಮೇಲೇ : "To ಪ್ರೊ. ಮಿಸ್ ಲೀಲಾಬಾಯಿ</br>
ನಾಯಿಕ, ಎಂ.ಎಸ್ಸಿ."
{{gap}}ಥೂ, ಯಾಕೆ ತನ್ನ ಹೆಸರಿಗೆ 'ಬಾಯಿ' ಸೀರಿಸುವರೋ ಪತ್ರ ಬರೆಯುವ</br>
ಮುಟ್ಠಾಳರು? ಅದೇನು ಗೌರವವಾಚಕವೇ? ಇದ್ದೀತು. ಆದರೆ ತಾನು ನಲವತ್ತೈದು</br> ದಾಟಿರುವೆನೆಂದು ನೆನಪಿಸಿಕೊಡುವ ಈ 'ಬಾಯಿ' ಕಂಡರೆ ತನಗೇಕೋ ಬಹಳ ಸಿಟ್ಟು.</br> ಆ ಪತ್ರ ಓದುವ ಮನಸ್ಸೇ ಆಗುವದಿಲ್ಲ. ಪತ್ರ ಬಂದು ಇಲ್ಲಿ ಬಿದ್ದು ತಾಸಿನ</br> ಮೇಲಾಗಿದೆ. ಆದರೂ ಒಡೆದು ನೋಡುವ ಆತುರವಿಲ್ಲ. ಮೇಲೇ 'From' ಎಂದಲ್ಲಿ</br> ಯಾವುದೋ ಸ್ಕೂಲಿನ ಸಿಕ್ಕಾ ಇದೆ. ಯಾವುದಾದರೂ ಕಾರ್ಯಕ್ರಮಕ್ಕೆ ಅತಿಥಿಯಾಗಿ</br>ತನ್ನನ್ನು ಅಮಂತ್ರಿಸಿರಬೇಕು. ಅದಕ್ಕಿಂತ ಹೆಚ್ಚಿನದು ಏನೂ ತನಗೆ ಬರುವ ಯಾವ</br> ಪತ್ರಗಳಲ್ಲೂ ಇರುವುದೇ ಇಲ್ಲ.
{{gap}}ಮುಂಜಾನೆ ಅಭ್ಯಾಸ ಮಾಡುವುದು ಬಿಟ್ಟು, ಅಥವಾ ಎದುರಿಗೆ</br>
ಪುಸ್ತಕವಿದ್ದರೂ ರಸ್ತೆಯ ಮೇಲೆ ಕಣ್ಣು ನೆಟ್ಟು, ಹಾಸ್ಟೆಲಿನ ಗೇಟಿನ ಹೊರಗೆ ದೂರ</br> ಆ ಖಾಕಿ ಡ್ರೆಸ್ಸಿನ ಪೋಸ್ಟಮನ್ ಕಾಣಿಸಿದಾಗ ಉಟ್ಟ ಸೀರೆಯ ಪರಿವೆಯೂ ಇಲ್ಲದೆ</br> ಹೊರಬಾಗಿಲ ವರೆಗೆ ಓಡಿ ಹೋಗುತ್ತಾರಲ್ಲ ಈ ಹುಡುಗಿಯರು. ಅವರಿಗೆ ಬರುವ<noinclude><references/></noinclude>
d059z5p3x29ubuqhmlqkzdfmwt18kd3
ಪುಟ:ನಡೆದದ್ದೇ ದಾರಿ.pdf/೭೦
104
30860
317986
274768
2026-05-08T04:47:40Z
Vikashegde
1258
/* Validated */
317986
proofread-page
text/x-wiki
<noinclude><pagequality level="4" user="Vikashegde" />{{rh|left=ಮುಳ್ಳುಗಳು / ನೀನೆ ತಂತಿ |right=೬೩}}</noinclude>ಈ ಭ್ರಮೆ ಸಥ್ಯವೆನಿಸುವಷ್ಟು ತೀಕ್ಷ್ಣವಾಗಿದ್ದ ಕ್ಷಣಗಳಲ್ಲಿ ಅಕಸ್ಮಾತ್ ಶ್ರುತಿ ತಪ್ಪಿ ಗಾನದಲ್ಲಿ ಅಪಸ್ವರ ಕೇಳಿಬಂದ ಅನುಭವವಾಗುವುದು. ಎಲ್ಲ ಬಿಟ್ಟು ದೂರ, ಮತ್ತೆ ಆ ಹಳೆಯ ಜಗತ್ತಿಗೆ ಓಡಿಹೋಗಬೇಕು ಎನಿಸುವುದು. ಹಿಂದೇ ಆದದ್ದೆಲ್ಲಾ ಮತ್ತೊಮ್ಮೆ ಆಗಬೇಕು ಎನಿಸುವುದು. ಎಲ್ಲರಿಂದ ಬೈಯಿಸಿಕೊಳ್ಳುವ ಹಾಗೆ, ದೂರಗೊಳಿಸಲ್ಪಡುವ ಹಾಗೆ, ಎಲ್ಲರೂ ಅತ್ಯಾಶ್ಚರ್ಯ ಪಡುವ ಹಾಗೆ ಏನಾದರೊಂದನ್ನು ಮಾಡಬೇಕೆನಿಸುವುದು...ಬರೇ ಅನಿಸುವುದು...
{{gap}}-ಹೇಗೆ ನಂಬುವುದು ಹರೀಶನೇ ತಂತಿ ಎಂದು?
<center>* * * *</center>
{{gap}} 'ಸರೊ, ನಾನ ತಂತಿ ಅಂತ ನೀ ನಂಬಿಯಲಾ, ಇದನ್ನು ಉಳಿಸಿಕೊಂಡು ಹೋಗೋದು ಎಷ್ಟ ಕಠಿಣ ಅನ್ನೊದರ ಕಲ್ಪನೆ ಅದ<sub>s</sub> ಏನು ನಿನಗ ? ಸುಮನ ನಾವು ದೂರ ದೂರ ಇರೋದೇ ಸರಿ ಅನ್ನುಸ್ತದ ನನಗ.'
{{gap}} -ಎಂದು ಹೇಳಿದ್ದ ಅವನು ಹಿಂದೆ; ಅವನು, ತಾನು ತನ್ನ ತಂತಿ ಎಂದು ತಿಳಿದುಕೊಂಡವನು...
{{gap}}ತನ್ನ ತಂತಿ, ಎಂಥ ತಂತಿ?
{{gap}}-ಶ್ರುತಿ ಮಾಡಿ ತಂಬೂರಿಗೆ ಜೋಡಿಸಿದರೆ ಮಧುರ ಗಾನ ಹೊರಡಿಸಬಹುದಾಗಿದ್ದ ತಂತಿ. ಆದರೆ ಹಾಗಾಗದೆ ಯಾಕೋ ಎಂತೋ (ಹಿಂದಿನ ಜನ್ಮದ ಕರ್ಮಕ್ಕಾಗಿ ಇರಬಹುದೇ?) ಬೀದಿಯಲ್ಲಿನ ಎಲೆಕ್ಟ್ರಿಕ್ ದೀಪದ ಕಂಭಕ್ಕೆ ಬಿಗಿಯಲಟ್ಟಿದ್ದ ತಂತಿ.
{{gap}}ಯಾಕೆ ಹಾಗಾಯಿತು
{{gap}}ಬಹುಶಃ: ತಾವಿಬ್ಬರೂ ಭೆಟ್ಟಿಯಾದದ್ದೇ ತಪ್ಪು ಗಳಿಗೆಯಲ್ಲಿ ; ಪರಸ್ಪರರ ದಾರಿಗಳು ಬೇರೆ-ಬೇರೆ ಎಂದು ನಿರ್ಧಾರವಾಗಿ ಹೋದ ನಂತರ; ಅರ್ಧದಾರಿಯಿಂದ ತಿರುಗಿ ಬರುವುದು ಆಗದೆ, ಮುಂದರಿಯಲೂ ಆಗದೆ, ತಿರುಗಿತಿರುಗಿ ನೋಡುತ್ತ ಎಡವುತ್ತ ಮುಗ್ಗರಿಸುತ ಹೊರಟಿದ್ದ ಅವನು ಹೌದು; ಅವನ ಪ್ರೀತಿ ಸುಡುವ ಬೆಂಕಿಯಂಥದಲ್ಲ; ಅದರದು ಶೀತಲ ತೀವ್ರತೆ, ಅದು ಯಾವಾಗಲೂ ಇದೆ, ಇದ್ದೇ ಇರುತ್ತದೆ ಎಂದು ತನಗೆ ಗೂತ್ತಿದರು ಅದೆಂದೂ ಜೀವಂತವಾಗಿದೆ ಎನ್ನಿಸುವುದಿಲ್ಲ; ಸತ್ತು ಹೋಗಿದೆ ಎಂದೂ ಅನ್ನಿಸುವುದಿಲ್ಲ; ಅದು ನಿಶ್ಚೇಷ್ಟಿತವಾಗಿ ಬಿದ್ದುಕೊಂಡಿದೆ ಅನ್ನಿಸುವುದು. ಅಂತೆಯೇ ಅದಕ್ಕೆ 'ಪ್ಲೇಟೋನಿಕ್' ಎಂದು ಶುದ್ದವಾಗಿ ಮಡಿಯಾಗಿ ಹೆಸರಿಸಿ, ಆದರ ಭಾರ ಹೊರುವುದರಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದಿರಬೇಕು ಅವನು.<noinclude></noinclude>
9l3xog0mhdb6151ozj8msvnfff1agae
ಪುಟ:ನಡೆದದ್ದೇ ದಾರಿ.pdf/೨೧
104
30863
317959
196843
2026-05-08T02:54:10Z
Shreelatha.Halemane
7642
/* Validated */
317959
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೧೪}}.
ಕಟ್ಟಿಕೊಂಡ ಹೆಂಡತಿ ತನಗೆ ಪೂರಾ ವಿಧೇಯಳಾಗಿರಬೇಕೆ೦ದು ಯಾವ</br> ಪೌರುಷಪ್ರಿಯನಾದ ಗಂಡಸು ಬಯಸುವದಿಲ್ಲ ? 'ಅವನ'ದೇನೂ ತಪ್ಪಿಲ್ಲ. ಎರಡೂ</br> ಹೊತ್ತು ಅಡಿಗೆ ಮಾಡಿ ಹಾಕಿ,ರಾತ್ರಿ ಅವನೊಟ್ಟಿಗೆ ಮಲಗಿ, ಹಗಲು ಅವನೇನು</br> ಮಾಡಿದರೂ ಸುಮ್ಮನಿದ್ದು, ಸಾಕಿದ ನಾಯಿಯ ಹಾಗೆ ಬರೇ ಗೋಣು ಹಾಕುವ</br> ಆದರ್ಶ ಹೆ೦ಡತಿ ಬೇಕಾಗಿದ್ದಳು 'ಅವನಿ'ಗೆ. ಯಾರಿಗೆ ಬೇಡ ? ಹೆಂಡಿರ</br>ಡಿಗ್ರಿ- ಸುಡುಗಾಡು ತೆಗೆದುಕೊ೦ಡು ಏನು ಮಣ್ಣು ಮಾಡುವುದು?</br>
{{gap}}ಮೂಲೆಯಲ್ಲಿ ಕುಳಿತ ಆ ಕ್ರಿಶ್ಚನ್ ಹುಡುಗ ಕಿಡಿಕಿಯ ಹೊರಗಡೆ</br> ನೋಡುತ್ತಿದ್ದಾನೆ, ಕಾರಿಡಾರ್ ನಲ್ಲಿ ಮಾತಾಡುತ್ತ ನಿಂತ ಹುಡುಗಿಯರ ಬೆನ್ನುಗಳ</br> ಕಡೆ. ಸಣ್ಣ ಹುಡುಗ ,ಹದಿನೇಳು ದಾಟಿರಲಾರದು. ಆದರೂ ನೋಟದಲ್ಲಿ ಮುಳ್ಳಿನ</br> ಪ್ರಖರತೆಯಿದೆ. ಕ್ಲಾಸಿನ ಕಡೆ ಇವನಿಗೆ ಲಕ್ಷ್ಯವೇ ಇದ್ದಂತಿಲ್ಲ. ಇವನನ್ನೇ ಎದ್ದುನಿಲ್ಲಿಸಿ</br> ಪ್ರಶ್ನೆ ಕೇಳಬೇಕು -ಕೂಗಿ ನಿಲ್ಲಿಸಿದಾಗ ಹೇಗೆ ಹಲ್ಲು ಕಿರಿಯುತ್ತಾನೆ ಅಯೋಗ್ಯ!</br> ಕಾಲರ ಹಿಡಿದು ಹೊರಗೆ ನುಗಿಸಿಬಿಡಬೇಕು. ಆದು ಸಾಧ್ಯವಿದ್ದಿದ್ದರೆ....
{{gap}}'Lovely' ವಿಶೇಷಣವನ್ನು ನಿನ್ನ ವಾಕ್ಯದಲ್ಲಿ ಉಪಯೋಗಿಸು ನೋಡೋಣ</br> ಎಂದರೆ, "Madam, you are lovely" ಎನ್ನುತ್ತಾನೆ ಅವನು, ಇವನ ಮಾತು</br> ಪ್ರಾಮಾಣಿಕವಾಗಿರಬಹುದೆ? ಅವನ ವಯಸ್ಸಿನ ಎರಡರಷ್ಟು ವಯಸ್ಸಾ ಗಲು</br> ಬಂದಿತು ನನಗೆ .ನನ್ನನ್ನೇ ವರ್ಣಿಸಹೊರಟಿದ್ದಾನೆ ಮಗ. ನನ್ನ ಮೇಲೊಂದು ಕವಿತೆ</br> ಬರೆಯುತ್ತಾನೇನೋ ಇನ್ನ ಕಾಲೇಜ ಮಿಸೆಲೆನಿಗೆ !ಇವನ ಮಾತು ಕೇಳಿ ಉಳಿದ</br> ಮುಠ್ಠಾಳರೆಲ್ಲ ಕ್ಲಾ ಸರೂಮಿನ ಮೇಲಿನ ಛಪ್ಪ ರ ಹಾರಿಹೋಗುವ ಹಾಗೆ</br> ನಗುತ್ತಿದ್ದಾರಲ್ಲ....</br>
{{gap}}ಒಂದು ಕ್ಷಣ ಅವಳಿಗೆ ಬಹಳ ಸೆಂಟಿಮೆಂಟಲ್ ವಿಚಾರಗಳು ಬಂದವು. ಜಗತ್ತೇ
ತನ್ನನ್ನು ಅವಮಾನಿಸುತ್ತಿದೆ. ಇಡೀ ಜಗತ್ತಿನ ವಿರುದ್ಧ ಬಂಡೇಳಬೇಕು.</br>
ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಜೀವಂತ ಸುಡಬೇಕು . ಕೊನೆಗೆ ತಾನೂ ಅದೇ</br> ಬೆಂಕಿಯಲ್ಲಿ ಬಿದ್ದು ಬೆಂದು ಹೋಗಬೇಕು....ಹಹ್ಹ ಹ್ಹ.......ಏ ಹುಡುಗಾ ,ನಿನ್ನಂತವರ</br> ಧೈರ್ಯ ಎಷ್ಟೊಂದು, ಕಿಮ್ಮತ್ತು ಏನೆಂದು ನನಗೆ ಗೊತ್ತಿದೆಯೋ. ಎಂಥ ಗಂಡಸು</br> ನೀನು! ಬರೇ ನಾನು ನಿನ್ನ ಉತ್ತರ ಕೇಳಿ ಕೆಂಗಣ್ಣು ಮಾಡಿದ್ದಕ್ಕೆ ಪೆದ್ದು ಪೆದ್ದಾಗಿ</br> ಕೂತುಬಿಟ್ಟಿ.......</br>
{{gap}}ನಿಜವಾದ ಕಷ್ಟ ಪರಿಹಾರಕನೆ೦ದರೆ ಕ್ಲಾಸು ಮುಗಿಯಿತೆಂದು ಗಂಟೆ</br> ಹೊಡೆಯುವ ಪ್ಯೂನ್ ಒಬ್ಬನೇ. ಗಂಟೆಯ ಸದ್ದು ಸ್ವರ್ಗದ ಬಾಗಿಲೇ ಎನಿಸುತ್ತದೆ.............</br>
{{gap}}"ಹಲೋ ಮಿಸ್ ಶಾಂತಿ ,ಟೀಗೆ ಬರ್ತೀರೇನು?"</br><noinclude><references/></noinclude>
gq931uk6d4xonvg4ytremyslnn0hevv
ಪುಟ:ನಡೆದದ್ದೇ ದಾರಿ.pdf/೨೯೫
104
30869
317947
250471
2026-05-07T15:44:36Z
Pragathi. BH
7585
/* Validated */
317947
proofread-page
text/x-wiki
<noinclude><pagequality level="4" user="Pragathi. BH" />{{rh|center=|left=೨೮೮|right=ನಡೆದದ್ದೇ ದಾರಿ}}</noinclude>
ಹಾಕಲಾರೆನೆಂದು ಆತ ಆಗಲೇ ಮನಸ್ಸಿನಲಿ ನಿರ್ಧರಿಸಿಯಾಗಿತ್ತು.<br>
{{gap}}ಆದರೆ ಮುಂದಿನ ಶನಿವಾರ ಸತೀಶ ಕುಲಕರ್ಣಿ ಮತ್ತೆ ಶೋಭಾ ನಾಯಕನ
ತೋಟದ ಮನೆಗೆ ಹಾಜರಾದ. "ಬರುತೀರೇನು ? ತಂದೆಯವರು ನಿಮ್ಮನ್ನು
ನೆನೆಸುತ್ತಿದ್ದರು" ಅಂತ ಶೋಭಾ ಕೇಳಿದಾಗ ಆತನಿಗೆ ಇಲ್ಲ ವೆನ್ನಲಾಗಿರಲಿಲ್ಲ.
ಆಶ್ಚರ್ಯವೆಂದರೆ ಈ ಸಲ ಆ ಮನೆ,ತೋಟ, ಶೋಭಾಳ ಮೊಂಡು ಎಡಗೈ ಈ
ಯಾವುದರಿಂದಲೂ ಆತನಿಗೆ ಮುಜುಗರವೆನಿಸಲಿಲ್ಲ. ಆತ ಮಧ್ಯಾಹ್ನ ವಿಡೀ
ಆವರೊಂದಿಗೆ ತೆಂಗಿನ ಗಿಡಗಳಿಗೆ ಪಾತಿ ಮಾಡುವುದರಲ್ಲಿ, ಗುಲಾಬಿ ಗಿಡಗಲಿಗೆ
ಗೊಬ್ಬರ ಹಾಕುವುದರಲ್ಲಿ , ಮೆಣಸಿನ ಸಸಿಗಳಿಗೆ ನೀರು ಹಾಯಿಸುವುದರಲ್ಲಿ
ಸಂತೋಷದಿಂದ ಕಳೆದ. ಸಂಜೆಯಾಗುತ್ತ ಬಂದಂತೆ ಶೋಭಾ "ನೀವಿಬ್ಬರೂ ಕೈಕಾಲು
ತೊಳಕೊಂಡು ಬರ್ರಿ.ನಾನೊಂದಿಷ್ಟು ತಿನ್ನಲು ಏನಾದರೂ ಮಾಡಿ ತರುತ್ತೇನೆ"ಎಂದು
ಹೇಳಿ ಒಳಗೆ ಹೊರಟಳು . ಹಿಂದಿನಿಂದ ಆವಳನ್ನು ಗಮನಿಸುತ್ತಿದ್ದಂತೆ
ಸತೀಶನಿಗನಿಸಿತು-ಈ ಹುಡುಗಿ ಧ್ಯರ್ಯವಂತೆ.ಪ್ರಯತ್ನಶೀಲೆ.ತನ್ನದೊಂದು ಆಂಗವೇ
ಊನವಾಗಿದ್ದರೂ ಏನೂ ಆಗಿಲ್ಲದವರಂತ್ತೆ ಇರಲು , ಭೇರೆಯವರನ್ನೂ ಹಾಗೇ
ನಂಬಿಸಲು,ಹೆಣಗುತ್ತಿದ್ದಾಳೆ. ತೋಟಗಾರಿಕೆ ಅವಳ ಹವ್ಯಾಸವಲ್ಲ, ಜೀವನಾಧಾರ.
ಪ್ರತಿಯೊಂದನ್ನೂ ಆಕೆ ಶ್ರದ್ದೆಯಿಂದ ಆಚ್ಛುಕಟ್ಟಾಗಿ ಮಾಡುತ್ತಾಳೆ. ತಾನೂ
ಎಲ್ಲರಂತೆ ಜೀವಿಸಲು, ಕೆಲಸ ಮಾಡಲು, ಮದುವೆಯಾಗಲು ಅವಳು ಬಯಸುತ್ತಾಳೆ.
ನಿಜವಾಗಿ ಆ ಒಂದೇ ಕೈಯಿಂದ ಅವಳು ಏನೆಲ್ಲಾ ಮಾಡುತ್ತಾಳೆ!<br>
{{gap}}"ಶೋಭಾ ಎರಡು ವರ್ಷದ ಮಗು ಆಗಿದ್ದಾಗ ನಾವು ಊತ್ತರದ ಕಡೆ
ತೀರ್ಥಯಾತ್ರೆಗೆ ಹೋಗಿದ್ದೆವು. ನಮ್ಮ ಬಸ್ಸು ಆಪಘಾತಕ್ಕೀಡಾಯಿತ್ತು.ಆದರಲ್ಲಿ ನನ್ನ
ಮಗಳು ಎಡಗೈ ಕಳಕೊಂಡಳು.ತನ್ನ ತಾಯಿಯನ್ನೂ ಕಳಕೊಂಡಳು."-ಆವಳ ತಂದೆ
ವಿಷಾದದಿಂದ ಹೇಳಿದರು.
{{gap}}ಸತೀಶ ತನ್ನ ಪ್ರಾಮಾಣಿಕ ಸಂತಾಪ ಸೂಚಿಸಿದ.<br>
{{gap}}"ಆದರೆ ನನ್ನ ಮಗಳು ಧೈರ್ಯವಂತೆ.ಮನೆಕೆಲಸ,ಸ್ಕೂಲು-ಕಾಲೇಜಿನ ಓದು,
ಬ್ಯಾಂಕ್ ನೌಕರಿ,ತೋಟದ ಕೆಲಸ ಎಲ್ಲಾ ನಿಭಾಯಿಸುತ್ತಾಳೆ.ಅವಳ ಪಗಾರ ಕಡಿಮೆ
ಇದ್ದರೂ ತೋಟದಿಂದ ಬರುವ ಆಲ್ಪ - ಸ್ವಲ್ಪ ಉತ್ಪನ್ನದಿಂದಾಗಿ ಮನೆಯ ಸಾಲ
ತೀರಿಸುತ್ತಾ ಇದ್ದೇವೆ. ಅಂತೂ ಹೇಗೋ ಸೋಲದೆ ತಲೆಯೆತ್ತಿ ಬದುಕುವ ಪ್ರಯತ್ನ
ಮಾಡುತ್ತಾ ಇದ್ದೇವೆ"-ಆಂದರು ಆತ.<br>
{{gap}}ಅವರ ಆ ಪ್ರಯತ್ನದಲ್ಲಿ ಕ್ರಮೇಣವಾಗಿ ಸತೀಶನೂ ಭಾಗಿಯಾಗತೊಡಗಿದ.
ಶನಿವಾರ ಮಧ್ಯಾಹ್ನ ಹಾಗೂ ಸಂಜೆಯೆಲ್ಲ ಆತ ಶೋಭಾಳ ತೋಟದಲ್ಲಿ ಆಕೆಯ<noinclude><references/></noinclude>
jtuzpsvxv1l67kvp2figkk7rkkkdeu9
317948
317947
2026-05-07T15:45:33Z
Pragathi. BH
7585
317948
proofread-page
text/x-wiki
<noinclude><pagequality level="4" user="Pragathi. BH" />{{rh|center=|left=೨೮೮|right=ನಡೆದದ್ದೇ ದಾರಿ}}</noinclude>
ಹಾಕಲಾರೆನೆಂದು ಆತ ಆಗಲೇ ಮನಸ್ಸಿನಲಿ ನಿರ್ಧರಿಸಿಯಾಗಿತ್ತು.<br>
{{gap}}ಆದರೆ ಮುಂದಿನ ಶನಿವಾರ ಸತೀಶ ಕುಲಕರ್ಣಿ ಮತ್ತೆ ಶೋಭಾ ನಾಯಕನ
ತೋಟದ ಮನೆಗೆ ಹಾಜರಾದ. "ಬರುತೀರೇನು ? ತಂದೆಯವರು ನಿಮ್ಮನ್ನು
ನೆನೆಸುತ್ತಿದ್ದರು" ಅಂತ ಶೋಭಾ ಕೇಳಿದಾಗ ಆತನಿಗೆ ಇಲ್ಲ ವೆನ್ನಲಾಗಿರಲಿಲ್ಲ.
ಆಶ್ಚರ್ಯವೆಂದರೆ ಈ ಸಲ ಆ ಮನೆ,ತೋಟ, ಶೋಭಾಳ ಮೊಂಡು ಎಡಗೈ ಈ
ಯಾವುದರಿಂದಲೂ ಆತನಿಗೆ ಮುಜುಗರವೆನಿಸಲಿಲ್ಲ. ಆತ ಮಧ್ಯಾಹ್ನ ವಿಡೀ
ಆವರೊಂದಿಗೆ ತೆಂಗಿನ ಗಿಡಗಳಿಗೆ ಪಾತಿ ಮಾಡುವುದರಲ್ಲಿ, ಗುಲಾಬಿ ಗಿಡಗಲಿಗೆ
ಗೊಬ್ಬರ ಹಾಕುವುದರಲ್ಲಿ , ಮೆಣಸಿನ ಸಸಿಗಳಿಗೆ ನೀರು ಹಾಯಿಸುವುದರಲ್ಲಿ
ಸಂತೋಷದಿಂದ ಕಳೆದ. ಸಂಜೆಯಾಗುತ್ತ ಬಂದಂತೆ ಶೋಭಾ "ನೀವಿಬ್ಬರೂ ಕೈಕಾಲು
ತೊಳಕೊಂಡು ಬರ್ರಿ.ನಾನೊಂದಿಷ್ಟು ತಿನ್ನಲು ಏನಾದರೂ ಮಾಡಿ ತರುತ್ತೇನೆ"ಎಂದು
ಹೇಳಿ ಒಳಗೆ ಹೊರಟಳು . ಹಿಂದಿನಿಂದ ಆವಳನ್ನು ಗಮನಿಸುತ್ತಿದ್ದಂತೆ
ಸತೀಶನಿಗನಿಸಿತು-ಈ ಹುಡುಗಿ ಧ್ಯರ್ಯವಂತೆ.ಪ್ರಯತ್ನಶೀಲೆ.ತನ್ನದೊಂದು ಆಂಗವೇ
ಊನವಾಗಿದ್ದರೂ ಏನೂ ಆಗಿಲ್ಲದವರಂತ್ತೆ ಇರಲು , ಭೇರೆಯವರನ್ನೂ ಹಾಗೇ
ನಂಬಿಸಲು,ಹೆಣಗುತ್ತಿದ್ದಾಳೆ. ತೋಟಗಾರಿಕೆ ಅವಳ ಹವ್ಯಾಸವಲ್ಲ, ಜೀವನಾಧಾರ.
ಪ್ರತಿಯೊಂದನ್ನೂ ಆಕೆ ಶ್ರದ್ದೆಯಿಂದ ಆಚ್ಛುಕಟ್ಟಾಗಿ ಮಾಡುತ್ತಾಳೆ. ತಾನೂ
ಎಲ್ಲರಂತೆ ಜೀವಿಸಲು, ಕೆಲಸ ಮಾಡಲು, ಮದುವೆಯಾಗಲು ಅವಳು ಬಯಸುತ್ತಾಳೆ.
ನಿಜವಾಗಿ ಆ ಒಂದೇ ಕೈಯಿಂದ ಅವಳು ಏನೆಲ್ಲಾ ಮಾಡುತ್ತಾಳೆ!<br />
{{gap}}"ಶೋಭಾ ಎರಡು ವರ್ಷದ ಮಗು ಆಗಿದ್ದಾಗ ನಾವು ಊತ್ತರದ ಕಡೆ
ತೀರ್ಥಯಾತ್ರೆಗೆ ಹೋಗಿದ್ದೆವು. ನಮ್ಮ ಬಸ್ಸು ಆಪಘಾತಕ್ಕೀಡಾಯಿತ್ತು.ಆದರಲ್ಲಿ ನನ್ನ
ಮಗಳು ಎಡಗೈ ಕಳಕೊಂಡಳು.ತನ್ನ ತಾಯಿಯನ್ನೂ ಕಳಕೊಂಡಳು."-ಆವಳ ತಂದೆ
ವಿಷಾದದಿಂದ ಹೇಳಿದರು.
{{gap}}ಸತೀಶ ತನ್ನ ಪ್ರಾಮಾಣಿಕ ಸಂತಾಪ ಸೂಚಿಸಿದ.<br />
{{gap}}"ಆದರೆ ನನ್ನ ಮಗಳು ಧೈರ್ಯವಂತೆ.ಮನೆಕೆಲಸ,ಸ್ಕೂಲು-ಕಾಲೇಜಿನ ಓದು,
ಬ್ಯಾಂಕ್ ನೌಕರಿ,ತೋಟದ ಕೆಲಸ ಎಲ್ಲಾ ನಿಭಾಯಿಸುತ್ತಾಳೆ.ಅವಳ ಪಗಾರ ಕಡಿಮೆ
ಇದ್ದರೂ ತೋಟದಿಂದ ಬರುವ ಆಲ್ಪ - ಸ್ವಲ್ಪ ಉತ್ಪನ್ನದಿಂದಾಗಿ ಮನೆಯ ಸಾಲ
ತೀರಿಸುತ್ತಾ ಇದ್ದೇವೆ. ಅಂತೂ ಹೇಗೋ ಸೋಲದೆ ತಲೆಯೆತ್ತಿ ಬದುಕುವ ಪ್ರಯತ್ನ
ಮಾಡುತ್ತಾ ಇದ್ದೇವೆ"-ಆಂದರು ಆತ.<br />
{{gap}}ಅವರ ಆ ಪ್ರಯತ್ನದಲ್ಲಿ ಕ್ರಮೇಣವಾಗಿ ಸತೀಶನೂ ಭಾಗಿಯಾಗತೊಡಗಿದ.
ಶನಿವಾರ ಮಧ್ಯಾಹ್ನ ಹಾಗೂ ಸಂಜೆಯೆಲ್ಲ ಆತ ಶೋಭಾಳ ತೋಟದಲ್ಲಿ ಆಕೆಯ<noinclude><references/></noinclude>
7uoc6dzlbq53ig6jj0qtmuzl8orrzbf
317949
317948
2026-05-07T15:46:12Z
Pragathi. BH
7585
317949
proofread-page
text/x-wiki
<noinclude><pagequality level="4" user="Pragathi. BH" />{{rh|center=|left=೨೮೮|right=ನಡೆದದ್ದೇ ದಾರಿ}}</noinclude>
ಹಾಕಲಾರೆನೆಂದು ಆತ ಆಗಲೇ ಮನಸ್ಸಿನಲಿ ನಿರ್ಧರಿಸಿಯಾಗಿತ್ತು.<br>
{{gap}}ಆದರೆ ಮುಂದಿನ ಶನಿವಾರ ಸತೀಶ ಕುಲಕರ್ಣಿ ಮತ್ತೆ ಶೋಭಾ ನಾಯಕನ
ತೋಟದ ಮನೆಗೆ ಹಾಜರಾದ. "ಬರುತೀರೇನು ? ತಂದೆಯವರು ನಿಮ್ಮನ್ನು
ನೆನೆಸುತ್ತಿದ್ದರು" ಅಂತ ಶೋಭಾ ಕೇಳಿದಾಗ ಆತನಿಗೆ ಇಲ್ಲ ವೆನ್ನಲಾಗಿರಲಿಲ್ಲ.
ಆಶ್ಚರ್ಯವೆಂದರೆ ಈ ಸಲ ಆ ಮನೆ,ತೋಟ, ಶೋಭಾಳ ಮೊಂಡು ಎಡಗೈ ಈ
ಯಾವುದರಿಂದಲೂ ಆತನಿಗೆ ಮುಜುಗರವೆನಿಸಲಿಲ್ಲ. ಆತ ಮಧ್ಯಾಹ್ನ ವಿಡೀ
ಆವರೊಂದಿಗೆ ತೆಂಗಿನ ಗಿಡಗಳಿಗೆ ಪಾತಿ ಮಾಡುವುದರಲ್ಲಿ, ಗುಲಾಬಿ ಗಿಡಗಲಿಗೆ
ಗೊಬ್ಬರ ಹಾಕುವುದರಲ್ಲಿ , ಮೆಣಸಿನ ಸಸಿಗಳಿಗೆ ನೀರು ಹಾಯಿಸುವುದರಲ್ಲಿ
ಸಂತೋಷದಿಂದ ಕಳೆದ. ಸಂಜೆಯಾಗುತ್ತ ಬಂದಂತೆ ಶೋಭಾ "ನೀವಿಬ್ಬರೂ ಕೈಕಾಲು
ತೊಳಕೊಂಡು ಬರ್ರಿ.ನಾನೊಂದಿಷ್ಟು ತಿನ್ನಲು ಏನಾದರೂ ಮಾಡಿ ತರುತ್ತೇನೆ"ಎಂದು
ಹೇಳಿ ಒಳಗೆ ಹೊರಟಳು . ಹಿಂದಿನಿಂದ ಆವಳನ್ನು ಗಮನಿಸುತ್ತಿದ್ದಂತೆ
ಸತೀಶನಿಗನಿಸಿತು-ಈ ಹುಡುಗಿ ಧ್ಯರ್ಯವಂತೆ.ಪ್ರಯತ್ನಶೀಲೆ.ತನ್ನದೊಂದು ಆಂಗವೇ
ಊನವಾಗಿದ್ದರೂ ಏನೂ ಆಗಿಲ್ಲದವರಂತ್ತೆ ಇರಲು , ಭೇರೆಯವರನ್ನೂ ಹಾಗೇ
ನಂಬಿಸಲು,ಹೆಣಗುತ್ತಿದ್ದಾಳೆ. ತೋಟಗಾರಿಕೆ ಅವಳ ಹವ್ಯಾಸವಲ್ಲ, ಜೀವನಾಧಾರ.
ಪ್ರತಿಯೊಂದನ್ನೂ ಆಕೆ ಶ್ರದ್ದೆಯಿಂದ ಆಚ್ಛುಕಟ್ಟಾಗಿ ಮಾಡುತ್ತಾಳೆ. ತಾನೂ
ಎಲ್ಲರಂತೆ ಜೀವಿಸಲು, ಕೆಲಸ ಮಾಡಲು, ಮದುವೆಯಾಗಲು ಅವಳು ಬಯಸುತ್ತಾಳೆ.
ನಿಜವಾಗಿ ಆ ಒಂದೇ ಕೈಯಿಂದ ಅವಳು ಏನೆಲ್ಲಾ ಮಾಡುತ್ತಾಳೆ!<br />
{{gap}}"ಶೋಭಾ ಎರಡು ವರ್ಷದ ಮಗು ಆಗಿದ್ದಾಗ ನಾವು ಊತ್ತರದ ಕಡೆ
ತೀರ್ಥಯಾತ್ರೆಗೆ ಹೋಗಿದ್ದೆವು. ನಮ್ಮ ಬಸ್ಸು ಆಪಘಾತಕ್ಕೀಡಾಯಿತ್ತು.ಆದರಲ್ಲಿ ನನ್ನ
ಮಗಳು ಎಡಗೈ ಕಳಕೊಂಡಳು.ತನ್ನ ತಾಯಿಯನ್ನೂ ಕಳಕೊಂಡಳು."-ಆವಳ ತಂದೆ
ವಿಷಾದದಿಂದ ಹೇಳಿದರು.<br />
{{gap}}ಸತೀಶ ತನ್ನ ಪ್ರಾಮಾಣಿಕ ಸಂತಾಪ ಸೂಚಿಸಿದ.<br />
{{gap}}"ಆದರೆ ನನ್ನ ಮಗಳು ಧೈರ್ಯವಂತೆ.ಮನೆಕೆಲಸ,ಸ್ಕೂಲು-ಕಾಲೇಜಿನ ಓದು,
ಬ್ಯಾಂಕ್ ನೌಕರಿ,ತೋಟದ ಕೆಲಸ ಎಲ್ಲಾ ನಿಭಾಯಿಸುತ್ತಾಳೆ.ಅವಳ ಪಗಾರ ಕಡಿಮೆ
ಇದ್ದರೂ ತೋಟದಿಂದ ಬರುವ ಆಲ್ಪ - ಸ್ವಲ್ಪ ಉತ್ಪನ್ನದಿಂದಾಗಿ ಮನೆಯ ಸಾಲ
ತೀರಿಸುತ್ತಾ ಇದ್ದೇವೆ. ಅಂತೂ ಹೇಗೋ ಸೋಲದೆ ತಲೆಯೆತ್ತಿ ಬದುಕುವ ಪ್ರಯತ್ನ
ಮಾಡುತ್ತಾ ಇದ್ದೇವೆ"-ಆಂದರು ಆತ.<br />
{{gap}}ಅವರ ಆ ಪ್ರಯತ್ನದಲ್ಲಿ ಕ್ರಮೇಣವಾಗಿ ಸತೀಶನೂ ಭಾಗಿಯಾಗತೊಡಗಿದ.
ಶನಿವಾರ ಮಧ್ಯಾಹ್ನ ಹಾಗೂ ಸಂಜೆಯೆಲ್ಲ ಆತ ಶೋಭಾಳ ತೋಟದಲ್ಲಿ ಆಕೆಯ<noinclude><references/></noinclude>
eo5kxlwctoo1116eqjs80pngkionciv
ಪುಟ:ನಡೆದದ್ದೇ ದಾರಿ.pdf/೮೪
104
30883
318044
251880
2026-05-08T09:21:38Z
Shreelatha.Halemane
7642
/* Validated */
318044
proofread-page
text/x-wiki
<noinclude><pagequality level="4" user="Shreelatha.Halemane" />{{rh|ಕೊನೆಯ ದಾರಿ/ ಕೊನೆಯ ದಾರಿ |right=೭೭}}</noinclude>ಈ ವೀಲೀಯಮ್ಸ್ .....ಇ೦ದು ತಲೆ ಕೆಳಗೆ ಹಾಕಿ ಕುತು ಎನೋ ಗ್ರಾಫ್ ತಯಾರಿಸುತ್ತಿದ್ದ. ಅವನ ಹಣೆಯ ಮೇಲೆ ಸುರುಳಿಯಾಗಿ ಬಿದ್ದ ಆಲೆಗೂದಲನ್ನೆ ನೋಡುತ್ತಿದ್ದೆ ಏಷ್ಟೋ ಹೋತ್ತಿನ ತನಕ.
{{gap}}-ವಿಲಿಯಮ್ಸ್ ಈ ಅಲೆಗೂದಲೇ ಅಲ್ಲವೆ ಅವನು 'ಬಾ' ಆ೦ದಾಗ ನಾನು ' ಹೂ' ಅನ್ನಲು ಕಾರಣವಾದದದ್ದು? ಗೋವಿ೦ದಮೂತಿ೯ಯ ಹಾಗೆ ಕಾಡು-ಒರಟು ಅಲ್ಲ ವಿಲಿಯಮ್ಸ್ .ತೀರ ಮೃದು.ತೀರ gentle . ಹಾ,ಎಲ್ಲಾ ವಿಷಯದಲ್ಲೂ . ಅವನ ಹಾಗೇ gentle ಆದ, ನೀಲಿ ಕಣ್ಣಿನ, ಅಲೆಗಗೂದಲಿನ ಒ೦ದು ಮಗು ಅವನಿ೦ದ ನನಗೆ ಆಗೇ ತಿರುವುದೆ೦ದು ಎಷ್ಟು ಆಸೆ ಹೊತ್ತಿದ್ದೆ. ಮೂರು ತಿ೦ಗಳ ಶ್ರಮ ವ್ಯಥ೯ವಾಗಿ ಹೋಯಿತು.ವಿಲಿಯಮ್ಸ್ ನ ಸಹವಾಸ ಫಲಿಸುವ ಮೊದಲೇ ಅವನು ದೂರ ಹೋದ. ಅವನ ಕಸಿನ್,ಅವನ ಆ೦ಟಿ,ಎಲ್ಲಕ್ಕಿ೦ತ ಮುಖ್ಯವಾಗಿ ಆ ಆ೦ಟಿಯ ಆಸ್ತಿ - ಅವನನ್ನ ದೂರ ಒಯ್ಯಿತು....
{{gap}}-ಮುನ್ನಿ. ಮುನ್ನಿಯ ನೆನಪು ನನ್ನನು ಅಸ್ತವ್ಯಸ್ತ ಮಾಡುತ್ತದೆ.....
{{gap}}ವಿನಯ ಸಾಳಕರನೊ೦ದಿಗೆ appointment,ನಾಳೆ ಸ೦ಜೆ ಐದು ಗ೦ಟೆಗೆ ಆಪೇರಾದಲ್ಲಿ.
{{rh|right=೪ ಆಗಸ್ಟ್, ೧೯೫೮}}
{{gap}}ಶ೦ಕರಗೌಡರು ಯಾಕೋ ಬಹಳ ಚಿ೦ತೆಯಲ್ಲಿದ್ದ ಹಾಗಿತ್ತು. ಅಧ೯ ತಾಸು ಸಹ ನಿಲ್ಲ ಲಿಲ್ಲ. ಹೈಬ್ರೀಡ್ ಬೆಳೆಗೆ ಗೊಬ್ಬರ ಕೊಳ್ಳಲಿಕ್ಕೆ ಬ೦ದಿದ್ದೆ.ಹಾಗೆ ನಿನ್ನ್ ನೋಡಿ ಹೋಗೋಣ ಆ೦ಟತ ಈ ಕಡೆ ಬ೦ದೆ.ಹೋಗ್ತೀನವ್ವಾ, ಕತ್ತಲಾಗೊದರಾಗ ದೇವೂರೂ ಮುಟ್ಟಬೇಕು, ಹ್ಯಾ೦ಗಿದ್ದೀ? '
{{gap}}-ಅವರ ಮಾತಿನ ಕಡೆ ಲಕ್ಷ್ಯವಿರಲ್ಲ ನನಗೆ. ಅವರ ಹೊಸ ಇ೦ಪಾಲಾ ನೋಡುತ್ತಿದ್ದೆ. ಆರಡಿ ಎತ್ತರದ, ಆಗಲವಾದ ಎದೆಯ, ಗಿರಿಜಾ ಮೀಸೆಯ ಶ್೦ಕರಗೌಡರಿಗೆ ಆ ಮೊದಲಿನ ಫಿಯಾಟ್ಗಿ೦ತ ಇದೇ ಹೆಚ್ಚು ಒಪ್ಪುತ್ತದೆ- ಅ೦ದುಕೊಳ್ಳುತ್ತಿದ್ದೆ.
{{gap}}-ಕಾಲ,ದುಃಖ,ಬೇಸಿಗೆ ಈ ಯಾವುದೂ ಗುಡ್ಡಗಳನ್ನು-ಗಿಡಗಳನು ದಾಟಿ ದೇವೂರು ಮುಟ್ಟಿ ಈ ಗೌಡರ ತನಕ ಎ೦ದು ಹೋಗಿಯೆ ಇಲ್ಲ ವೇನೋ ಆನಿಸುವುದು. ಬಹಳ ಹಿ೦ದೆ, ನಾನು ಕನ್ನಡ ಶಾಲೆಯಲ್ಲಿದ್ದಾಗ್ಗ, ಮೊದಲಸಲ ಅಪ್ಪ ಅವರನ್ನು ಮನೆಗೆ ಕರಕೊ೦ಡ ಬ೦ದು,"ಎ ಏನು ನಡೆಸೀಯೇ?" ಅ೦ತ ಅವ್ವನನ್ನು ಕೂಗಿ ಕರೆದು,"ನೋಡು, ಶ೦ಕರು - ನನ್ನ ಜಾನಿದೋಸ್ತ ಬ೦ದಾನೆ. ಶ್ಯಾವಿಗೆ<noinclude><references/></noinclude>
asew0rsizu6gxz08htyy02cl5hrx5h2
ಪುಟ:ನಡೆದದ್ದೇ ದಾರಿ.pdf/೨೨
104
30887
317960
196852
2026-05-08T02:55:33Z
Shreelatha.Halemane
7642
/* Validated */
317960
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=೧೫|left=ಮುಳ್ಳುಗಳು / ಮುಳ್ಳುಗಳು}}
{{gap}}ಕೇಳಿದವನು ಪ್ರೊ.ದೇಸಾಯಿ.ಮರೆಯತೊಡಗಿದ ಹಳೆಯ ಕನಸಿನೆಡೆ</br>
ಎಳೆಯುತ್ತಿವೆ ಇವನ ಮುಖದ ಮೇಲಿನ ಈ ಮುಗ್ಧತೆ, ನಿಷ್ಕಪಟ ಭಾವ-ಇದು</br>
ಬರೇ ಛದ್ಮವೇಷವೆಂದು ತನಗೆ ಗೊತ್ತಿಲ್ಲವೆ? ಒಬ್ಬ ಗಂಡಸು ಹೀಗಿರಲು ಸಾಧ್ಯವೇ</br>
ಇಲ್ಲ. ಆದರೆ ಇವನು ಎಲ್ಲರಿಗಿಂತ ಬೇರೆಯಾಗಿದ್ದಂತೆ ತೋರಿ ನನಗೆ ಮತ್ತೆ</br> ಮುಳ್ಳುಗಳಿಲ್ಲದ, ಹೂವುಗಳಿರುವ ದ್ವೀಪದ ಬಗ್ಗೆ ವಿಚಾರ ಮಾಡಲು</br>
ಹಚ್ಚುತ್ತಾನಲ್ಲ! ಇವನ ಕಣ್ಣಲ್ಲೂ ಮುಳ್ಳುಗಳು ಕಂಡರೆ ಎಷ್ತು ಒಳ್ಳೆಯದು!</br>
ಮುಳ್ಳುಗಳೆಂದರೆ ಜೀವನದ ಒಂದು ಅನಿವಾರ್ಯ ಭಾಗವೆಂದು ನಂಬಿ ಬಿಡುವದು
ಆಗ ಸುಲಭವಾಗುತ್ತಿತ್ತು. ಇವನನ್ನು ನೋಡಿದಾಗ, ಇವನೊಂದಿಗೆ ಇದ್ದಾಗೆಲ್ಲ,</br>
ಮುಳ್ಳುಗಳಿಂದ ತಪ್ಪಿಸಿಕೊಳ್ಳುವದು ಸಾಧ್ಯವಾದರೂ ಆದೀತೆಂಬ ಅಸಹಾಯ,</br>
ಬಲಹೀನ,ನಿರುಪಯೋಗಿ ಆಸೆಯೊಂದು ಹುಟ್ಟುತ್ತದೆ-ಬೇಡ ಬೇಡವೆಂದರೂ.</br>
'ಆಸೆಯೇ ದುಃಖದ ಮೂಲ'ವೆಂದು ಹೇಳಿದ ಜ್ಜಾನಿಗಳು ಇಂಥದೇ ಆಸೆಯನ್ನು</br>
ದೃಷ್ಟಿಯಲ್ಲಿಟ್ಟುಕೊಂಡಿದ್ದರೇನೋ!</br>
{{gap}}"ಟೀಗೆ ಬರಲಿಕ್ಕೂ ಇಷ್ಟ ವಿಚಾರ ಮಾಡಬೇಕಾಗತದೇನ್ರೀ? ಬರ್ರಿ ಬರ್ರಿ</br> ಹೋಗೋಣ."
{{gap}}ಹೌದು-ವಿಚಾರ ಮಡುವದನ್ನು ಇನ್ನು ಬಿಟ್ಟುಬಿಡಬೇಕು. ಬರೇ ಕಾರ್ಯ</br> ಮಾಡಬೇಕು. ಕರ್ಮಯೋಗಿಯೊಗಬೇಕು....</br>
{{gap}}ದೇಸಾಯಿಯ ವ್ಯಕ್ತಿತ್ವದಲ್ಲಿ ನಿಜವಾಗಿಯೂ ಎಂಥದೋ ಜಾದೂ ಇದೆ.</br>
ಇಲ್ಲವಾದರೆ ಸುಮ್ಮನೆ ಅವನನ್ನು ಹಿಂಬಾಲಿಸುವ ಮನಸ್ಸು ತನಗೇಕೆ ಆಗುತ್ತಿತ್ತು?</br>
{{gap}}"ಇವತ್ತ ನಮ್ಮ ಡಿಪಾರ್ಟಮೆಂಟಿನ್ಯಾಗ ಫಿಲ್ಮ ಶೋ ಅದ, ನೋಡ್ಲಿಕ್ಕೆ</br>
ಬರೀರೇನು ಮಿಸ್ ಶಾಂತಿ?"</br>
{{gap}}-ಚಹಾ ಕುಡಿಯುತ್ತಿದ್ದಾಗ ಕೇಳಿದ ಪ್ರೊ.ದೆಸಾಯಿ.</br>
{{gap}}ಫಿಲ್ಮ ಶೋದಲ್ಲಿ ಏನಿರುತ್ತದೆ ಸುಡುಗಾಡು? ರಾತ್ರಿ ಎನಾದರೂ</br>
ಪ್ರೋಗ್ರ್ಯಾಮ್ಸ್ ಇದ್ದಾಗ, ಅಥವಾ ಪಿಕ್ಚರು ನೋಡಲಿಕ್ಕೆ ಹೋದಾಗ ತಿರುಗಿ ಬರುವಾಗ</br>ಕತ್ತಲಾಗುವದೆಂದು 'ಅವನು' ಹಾಸ್ಟೆಲಿಗೆ ಕಳಿಸಲು ಬರುತ್ತಿದ್ದ. ಪಿಕ್ಚರಿನ ಸೊಗಸು</br>ಹೆಚ್ಚಿನದೋ?'ಅವನ' ಜೊತೆಯ ಸೊಗಸು ಹೆಚ್ಚಿನದೋ? ಎಷ್ಟೋ ಸಲ</br>
ಬೇಕಂತಲೇ ರಾತ್ರಿ ಹಾಸ್ಟೆಲಿಗೆ ಹೋಗಲು ತಡಮಾಡಿದ ಪ್ರಸಂಗ ತರಿಸಿಕೊಂಡದ್ದೂ</br>ಉ೦ಟು. ತನಗೇಕೆ ಆಗ ಒಮ್ಮೆಯೂ 'ಅವನ' ಕಣ್ಣಮುಳ್ಳಿನ ಅರಿವು ಬರಲಿಲ್ಲ?</br>
ಅಷ್ಟೊಂದು ಮಬ್ಬು ಮುಸುಕಿರಬಹುದು. ಅಥವಾ 'ಅವನೇ' ಅದನ್ನು</br>
ವ್ಯಕ್ತಗೊಳಿಸಿರಲಿಕ್ಕಿಲ್ಲ.ಎನಾಯಿತೋ, ಅಂತೂ ಆಗ ಆದದ್ದೆಲ್ಲಾ ನೋವಿನ ನೆನಪು...</br><noinclude><references/></noinclude>
5b3y2yd99qz1mm1rnrosgk8tfte8ey0
ಪುಟ:ನಡೆದದ್ದೇ ದಾರಿ.pdf/೬೭
104
30889
317982
274776
2026-05-08T04:12:57Z
Shreelatha.Halemane
7642
/* Validated */
317982
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದ್ದೇ ದಾರಿ|left=೬೦}}
{{rh|center=<big>'''"ನೀನೇ ತಂತಿ"'''</big>|right=|left=}}
{{gap}}"ಹರಿ, ಹರಿ, ಹರಿ..."</br>
{{gap}}-ಪಂಜರದಲ್ಲಿನ ಗಿಳಿ ಒಂದೇ ಸಮನೆ ಕಿರುಚುತ್ತಿದೆ. ಈ ಹಾಳು ಗಿಳಿಗೆ ಮಾತಾಡಲು ಬರುತ್ತಿದ್ದುದು ಇದೊಂದೆ ಶಬ್ದ. ಯಾವಾಗ ನೋಡಿದರೂ 'ಹರಿ, ಹರಿ'. ಹಸಿವೆಯಾದಾಗ ರೆಕ್ಕೆಗಳನ್ನು ಫಡಫಡಿಸುತ್ತ ತನ್ನ ಪುಟ್ಟ ಪಂಜರದಲ್ಲಿ ಹಾರಾಡುವ ವಿಫಲ ಯತ್ನ ಮಾಡುತ್ತ ಅದು 'ಹರಿ ಹರಿ' ಅನ್ನುತ್ತದೆ; ಹೊಟ್ಟೆತುಂಬಿದಾಗ ಸುಮ್ಮನೆ ಬಿದ್ದುಕೊಂಡು 'ಹರಿ ಹರಿ' ಆನ್ನುತ್ತದೆ; ಆದೇನು ಹರೀಶನನ್ನು ತನ್ನ ಬಳಿಗೆ ಬಾ ಎಂದು ಕರೆಯುತ್ತದೆಯೋ ಆಥವಾ ತಾನೇ ಈ ಪಂಜರದಿಂದ ಹೋಗಬಯಸಿ ತನ್ನನ್ನು ಹೋಗಗೋಡು ಎಂದು ಕೂಗುತ್ತದೆಯೋ ಗೊತ್ತಾಗುವುದಿಲ್ಲ. ಹರೀಶ ಅದಕ್ಕೆ ಹಣ್ಣು ತಿನ್ನಿಸುತ್ತ ಮುದ್ದು ಮಾಡುತ್ತಿರುವಾಗ</br> ಸುಮ್ಮನಿರುತ್ತದೆ; ಸೋತುಹೋದ ಹಾಗೆ ತೆಪ್ಪಗೆ ಬೆದ್ದಿರುತ್ತದೆ. ಆದರೆ ಹರೀಶ</br> ಇಲ್ಲ ದಾಗ ಮತ್ತೆ 'ಹರಿ ಹರಿ' ಎಂದು ಒದರಲು ಸುರು ಮಾಡುತ್ತದೆ. ಒಂದೊಂದು</br> ಸಲ ಆದರ ಈ ಹರಿನಾಮ-ಜಪ ಕೇಳುವುದು ತೀರ ಅಸಹ್ಯವಾಗಿ ಪಂಜರದ ಬಾಗಿಲು</br> ತೆರೆದು ಅದುನ್ನು ಬಿಟ್ಟುಬಿಡಲೇ ಎಂದು ವಿಚಾರ ಬರುತ್ತದೆ. ಆದರೆ ಹರೀಶನ ಪ್ರೀತಿಯ</br> ಗಿಳಿ ಅದು. ಅದನ್ನು ಹಾರಿಬಿಟ್ಟರೆ ಆತ ಬಹಳ ನೊಂದುಕೊಳ್ಳುತ್ತಾನೆ. ಈ ಗಿಳಿಯ</br> ಮೇಲಿನ ಆತನ ಪ್ರೀತಿ ಎಷ್ಟೊಂದು ಕುರುಡಾಗಿದೆಯೆಂದರೆ ತಾನಿಲ್ಲದಾಗ ಈ</br> ಪಂಜರದ ಒಳಗೆ ಈ ಗಿಳಿ ಆನುಭವಿಸುತ್ತಿರಬಹುದಾದ ಮೂಕವ್ಯಥೆಯ ಬಗ್ಗೆ ಆತನಿಗೆ</br> ಕಲ್ಪನೆಯೇ ಬರುವುದಿಲ್ಲ...</br>
{{gap}}ಈ ಗಿಳಿ ತನಗೆ ಸಿಕ್ಕ ಬಗೆಯನ್ನು ಕತೆಯಾಗಿ ಬಣ್ಣಿಸಿ ಹೇಳುವುದರಲ್ಲಿ</br> ಆತನಿಗೆಷ್ಟು ಉತ್ಸಾಹ!</br>
{{gap}}'ನಾ ಹಿಂದಕ ಫೈನಲ್ ಬಿ.ಇ.ಕ್ಲಾಸಿನಲ್ಲಿದ್ದಾಗ ಇಂಡಸ್ಟ್ರಿಯಲ್ ಟೂರಿಗೆ</br> ಅಂತ ದಾಂಡೇಲಿಗೆ ಹೋಗಿದ್ವಿ. ಸಂಜೀನ್ಯಾಗ ಆಡಿವ್ಯಾಗ ತಿರಗ್ಯಾಡಿಕೋತ ಹೋದಾಗ</br> ಈ ಗಿಳೀ ಭೆಟ್ಟಿ ಆತು. ಆದೂ ಎಷ್ಟ ಮಜಾ ಅಂತೀ ಸರೂ, ಗಿಡದ ಕೆಳಗೆ ಹುಲ್ಲಿನ</br> ಮ್ಯಾಲ ಇದು ಸುಮ್ಮನ ಕೆಟ್ಟ ಧ್ವನಿಯೊಳಗ ಒದರಿಕೋತ ಬಿದ್ದಿತ್ತು. ನಾ ಸಮೀಪ</br> ಹೋದಾಗ ಹಾರೋ ಪ್ರಯತ್ನಾನೂ ಮಾಡಲಿಲ್ಲ. ನನಗ್ಯಾಕೋ ಭಾಳ ಕೆಟ್ಟನಿಸಿ</br><noinclude><references/></noinclude>
i69est3zy68gjjtc8c33ngeioptt26t
ಪುಟ:ನಡೆದದ್ದೇ ದಾರಿ.pdf/೪೩
104
30895
317979
250642
2026-05-08T04:09:00Z
Shreelatha.Halemane
7642
/* Validated */
317979
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೩೬|right=ನಡೆದದ್ದೇ ದಾರಿ}}</noinclude>ಮೂರ್ಖ ಆನಂದವೋ ಇವರಿಗೆ 1 ....ಕಿಡಕಿಯ ಹೊರಗೆ ಏನೋ ಸದ್ದಾಗುತ್ತಿದೆ,</br>
ಯಾರದೋ ಬೂಟುಗಾಲಿನ ಹೆಜ್ಜೆಯ ಸದ್ದು. ಛೇ, ಇಲ್ಲ್ಯಾರು ಬರಬೇಕು ಬೂಟು</br>
ಹಾಕಿಕೊಂಡು ? ಎಲ್ಲೋ ದನ ಇರಬೇಕು. ಸುಮ್ಮನೆ ಅಂಜಿಕೆ ತನಗೆ. ಹೀಗೆ ವ್ಯರ್ಥ</br>
ವಿಚಾರ ಮಾಡುವ ಬದಲು ನಾಳೆ ಆ ಸ್ಕೂಲಿನಲ್ಲಿ ಮುಖ್ಯ ಅತಿಥಿಯಾಗಿ ಮಾಡಲಿರುವ</br>ಭಾಷಣದ ತಯಾರಿ ಮಾಡಬೇಕು.</br>
{{gap}}-ಯಾಕೋ ಎದೆನೋವು ಹೆಚ್ಚಾಗತೊಡಗಿದೆ....</br>
{{gap}}“ಒಂದ ಮನೀ ಇಲ್ಲ, ಮಾರಿಲ್ಲ. ಸುಡಗಾಡ ಸಿದ್ಧರಾಂಗ ಬರೆ ಗೆಸ್ಟ್ ಆಗಿ</br>
ತಿರಗೋದರಾಗ ಇರ್ತಾಳ...."</br>
{{gap}}-ಪ್ರೊ. ಲೀಲಾವತಿ ಒಂದು ಕೈಯಿಂದ ಎಡಭಾಗದ ಎದೆಯನ್ನು ಗಟ್ಟಿಯಾಗಿ</br>ಒತ್ತಿ ಹಿಡಿದಳು, ಪೆನ್ನು ಟೇಬಲ್ ಮೇಲಿನಿಂದ ಜಾರಿ ಬಿದ್ದಿತು.</br>
{{gap}}ತನಗೆ ಮನೆ-ಮಾರು ಇಲ್ಲವೆ ? ತಾನು ಸುಡಗಾಡುಸಿದ್ಧರ ಹಾಗೆ ನೆಲೆಯೇ</br>
ಇಲ್ಲದವಳೇ ? ಬರೇ ಅತಿಥಿಯಾಗಿ ಅಲ್ಲಲ್ಲಿ ತಿರುಗುವುದರೊಳಗೇ ತನ್ನ ಜೀವನ</br>
ಸವೆದುಹೋಗುತ್ತಿದೆಯೇ ? ಈ ಕಾರ್ಯಕ್ರಮಗಳಿಗೆ ಮಾತ್ರವಲ್ಲ, ಈ ಜೀವನಕ್ಕೇ</br>
ತಾನು ಅತಿಥಿಯೆಂದು ಬಂದವಳೇ ? ದುಡಿದು-ದಣಿದು ಬಂದಾಗ ತನ್ನನ್ನು</br>
ಸ್ವಾಗತಿಸುವ, ದಣಿವು ಕಡಿಮೆ ಮಾಡುವ, ಪ್ರೀತಿಸುವ ಯಾವ ಜೀವವೂ ಇಲ್ಲಿಲ್ಲವೇ ?</br>
ಯಾರೇಕೆ ಬೇಕು, ಒಬ್ಬಳೇ ಜೀವನವನ್ನೆದುರಿಸುವೆನೆಂಬ ಆ ಧೈರ್ಯ ಈಗ ಎಲ್ಲಿಗೆ</br>
ಹೋಯಿತು ? ತಾನು ಎಲ್ಲಿ ಹೋದರೂ, ಬಂದರೂ, ಸತ್ತರೂ,</br>
“ಮನೆ"ಯವಳಲ್ಲವೆಂಬ, ಬರೇ “ಅತಿಥಿ"ಯೆಂಬ ಈ ಪ್ರಜ್ಞೆ ಎಷ್ಟೊಂದು ತೀಕ್ಷ್ಣವಾಗಿ</br>
ಹೃದಯವನ್ನು ಕೊರೆಯತೊಡಗಿದೆಯಲ್ಲ...ಏ ಸದಾನಂದ, ಈ</br>
ಕಣ್ಣುಮುಚ್ಚಾಲೆಯನ್ನು ಸಾಕುಮಾಡು. ಒಮ್ಮೆ ತಪ್ಪಾಯಿತೆಂದು ಒಪ್ಪಿಕೊಂಡುಬಿಟ್ಟೆ.</br>ಇದೇನು ನಿನ್ನ ಹಟ ? ಯಾಕೆ ಹೀಗೆ ಕಾಡತೊಡಗಿರುವಿ ? ನಿನ್ನ ಮನೆಗೆ ನಾನು</br>ಮನೆಯವಳಾಗಲಿಲ್ಲವೆಂದು, ಈ ಜಗತ್ತೇ ನನ್ನನ್ನು ಅತಿಥಿಯ ಹಾಗೆ ಕಾಣಲೆಂದು</br>ನೀನೇನು ಶಾಪ-ಗೀಪ ಕೊಟ್ಟಿದ್ದೀಯಾ ಹೇಗೆ ? ಈ ಶಾಪವನ್ನು ಹಿಂದಿರುಗಿಸಿಕೊಳ್ಳೋ</br>ಪುಣ್ಯಾತ್ಮ.... ನಿನಗಷ್ಟು ಮನಸ್ಸಿದ್ದರೆ, ನಾನು ಸೋತೆನೆಂದು ನನ್ನಿಂದಲೇ</br>ಹೇಳಿಸಬೇಕೆಂಬ ಇಚ್ಛೆಯಿದ್ದರೆ, ಇದೋ ಹೇಳುತ್ತಿದ್ದೇನೆ. ಬೇಕಾದರೆ ಅತ್ತು</br>ಬಿಡಲೇನು ? ನಿನಗೆ ಸಮಾಧಾನವಾಗುವಂತಿದ್ದರೆ ಅಳಲು ನನ್ನ ಅಡ್ಡಿಯೇನಿಲ್ಲ....</br>
{{gap}}-ಕಣ್ಣೀರು ಜಾರಿ ಪೇಪರಿನ ಮೇಲೆ ಬಿದ್ದು ಟಪ್ ಎಂದು ಸದ್ದಾದಾಗ ಪ್ರೊ.</br>
ಲೀಲಾವತಿ ಒಮ್ಮೆಲೆ ಅರಿವಿಗೆ ಬಂದಳು. ತನ್ನ ಈ ರೊಮ್ಯಾಂಟಿಕ್ ಕಲ್ಪನೆಯಿಂದ</br>
ಅವಳಿಗೆ ಬಹಳ ಮಜಾ ಅನಿಸಿತು. ಇದೇನು, ನಿಜವಾಗಿಯೂ ಅಳುತ್ತಿದ್ದೇನಲ್ಲ,<noinclude><references/></noinclude>
mkwgtgkga2mu1ng2a6ol34p87zl3q3f
ಪುಟ:ನಡೆದದ್ದೇ ದಾರಿ.pdf/೨೯೬
104
30924
317950
250536
2026-05-07T15:50:20Z
Pragathi. BH
7585
/* Validated */
317950
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಬಿಡುಗಡೆ/ಒಲವೆ ಜೀವನ|right= ೨೮೯}}
ತಂದೆಯೊಂದಿಗೆ ಕೆಲಸ ಮಾಡುವುದರಲ್ಲಿ ಕಳೆಯತೊಡಗಿದೆ. ಕಾಯಿ-ಪಲ್ಯಗಳನು,
ಅನುಗಳನ್ನು ಎಳೆನಿರುಗಳನು ಗಿಡಗಳಿಂದ ಇಳಿಸಿ, ರಾಶಿ ಮಾಡಿ ,ಬುಟ್ಟಿಗಳಲ್ಲಿ
ತುಂಬಿ ಸಂತೆಗೆ ಒಯ್ದು ತಲುಪಿಸುವ ಕೆಲಸದಲ್ಲೂ ಅವರಿಗೆ ನೆರವಾಗತೊಡಗಿದೆ.
ಅವರ ಮನೆಗೆ ಹೊಸ ಹೆಂಚು ಹೊಡಿಸುವುದು,ಸುಣ್ಣ ಬಳಿಯೂವುದು,ತೋಟಗಾರಿಕೆ<br>
ಇಲಾಖೆಯಿಂದ ಬೀಜಗಳನ್ನು ತರುವುದು, ಲಾರಿಯಲ್ಲಿ ಗೊಬ್ಬರ ತರಿಸುವುದು.
ಶೋಭಾಳ ತಂದೆಗೆ ಕಾಯಿಲೆಯಾದಾಗ ಡಾಕ್ಟರನ್ನು ಕರೆತರುವುದು, ಬ್ಯಾಂಕಿನ
ಪರೀಕ್ಷೆಗಾಗಿ ಓದಲು ಅವಳಿಗೆ ನೆರವಾಗುವುದು-ಇತ್ಯಾದಿ ಕೆಲಸಗಳೆಲ್ಲಾ
ದಿನಗಳೆದಂತೆ ಸತೀಶನ ಸ್ವಂತ ಜವಾಬ್ದಾರಿಗಳೇ ಆದವು.<br>
{{gap}}ಹಾಗಿದ್ದಾಗ ಒಂದು ಶನಿವಾರ ಕೆಲಸಗಳನ್ನೆಲ್ಲ ಮುಗಿಸಿ ವರಾಂ ಡದಲ್ಲಿ ಕುರ್ಚಿ
ಹಾಕಿಕೊಂಡು ಕೂತು ಮಾತಾಡುತ್ತಿದ್ದಾಗ ಏನೊಂದು ಪೀಠಿಕೆಯೂ ಇಲ್ಲದೆ
ಶೋಭಾಳ ತಂದೆ ಸತೀಶನನ್ನು ಕೇಳಿದರು,"ಶೋಭಾಳನ್ನು ನೀವು
ಮದುವೆಯಾಗಲೆಂದು ನನ್ನ ಇಚೆ-ಆದಷ್ಟು ಬೇಗ ಈ ಕೆಲಸವಾಗಬೇಕು.ನನಗೂ
ವಯಸಾಯಿತು.ಏನಂತೀರಿ ಸತೀಶ?"<br />
{{gap}}ಎರಡು ನಿಮಿಷ ಸತೀಶ ಸುಮ್ಮನಿದ್ದಾಗ ಅವರೇ ಮತ್ತೆ ಅಂದರು:"ಹೀಗೆ
ಒಮ್ಮೆಲೆ ಕೇಳಬಾರದಿತ್ತೇನೋ.ಹೋಗಲಿ.ಯೋಚನೆ ಮಾಡಿ ಹೇಳಿರಿ."<br />
{{gap}}ಸತೀಶ ತಟ್ಟನೆ ಅಲ್ಲಿಂದೆದ್ದು ಹೊರಗೆ ಹೊರಟ. ಬಾಗಿಲಿನಾಚೆ ನಿಂತಿದ್ದ ಶೋಭಾ
ಅವನನ್ನು ಹಿಂಬಾಳಿಸಿದಳು.ಗೇಟಿನ ಕಡೆ ನೇರವಾಗಿ ಹೋಗುತ್ತಿದ್ದ ಆತನ ಸಮಕ್ಕೇ
ಹೆಚ್ಚಿ ಹಾಕುತ್ತ ಊಟಕ್ಕೂಠೇಯೆಂದ ಆಕೆ ಹೇಳಿದಳು,"ಪ್ಲಿಜ್,ತಪ್ಪು ತಿಳೀಬಾರದು
ಸತೀಶ,ನೀವು ಈ ಬಗ್ಗೆ ವಿಚಾರ ಮಾಡಿಯೇ ನಿರ್ದಾರ ಮಾಡಿರಿ.ನನಗ್ಗೊತ್ತು,ಈ
ವಿಷಯದಲ್ಲಿ ರುವ ಅಡಚಣೆ ಏನು ಅಂತ.ಅದೆಕ್ಕೆ ನಾನು ಇಲ್ಲಿವರೆಗೂ ಏನೂ
ಕೇಳಲಿಲ್ಲ. ನೀವು ಚೆನ್ನಾಗಿ ಯೋಚನೆ ಮಾಡಿರಿ.ನಂತರವೇ ನಿಮ್ಮ ನಿರ್ಧಾರ ತಿಳಿಸಿರಿ.
ನಾನು ಕಾಯುತ್ತಿರುತ್ತೇನೆ."<br>
{{gap}}ತನ್ನ ಬಲಗಡೆ ತನ್ನ ಸಮೀಪವೇ ನಡೆದು ಬರುತ್ತಿದ್ದ ಆಕೆಯ ವೊಂಡಾದ
ಎಡಗೈ ನೋಡುತ್ತಿದ್ದಂತೆ ತಲೆಯೆಲ್ಲ ಬಿಸಿಯಾದಂತೆನಿಸಿ ತಟ್ಟನೆ ನಿಂತು ಆತ
ಉತ್ತರಿಸಿದ,"ನಾನು ವಿಚಾರ ಮಾಡುತ್ತೇನೆ ಶೋಭಾ,ಮುದ್ದಿನ ವಾರ ಬಂದಾಗ
ಹೇಳುತ್ತೆನೆ.ನೀವು ಇಲ್ಲೇ ನಿಂತಿರ್ರಿ. ನನ್ನನ್ನು ಕಳಿಸಲು ಬರುವುದು ಬೇಡ. ನಾನೀಗ
ಹೋಗುತ್ತೆನೆ.ಇಲ್ಲವಾದರೆ ಕೊನೆಯ ಬಸ್ಸು ಸಿಗಲಾರದು"-ಅಷ್ಟಾಂದು ಹಿಂತಿರುಗಿ
ನೋಡದೆ ಆತ ವೇಗವಾಗಿ ಹೊರತುಬಂದ.<noinclude><references/></noinclude>
fxxzasccbzvqc1ym5n3lwqo0z4sq66a
317953
317950
2026-05-07T15:59:53Z
Pragathi. BH
7585
317953
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಬಿಡುಗಡೆ/ಒಲವೆ ಜೀವನ|right= ೨೮೯}}
ತಂದೆಯೊಂದಿಗೆ ಕೆಲಸ ಮಾಡುವುದರಲ್ಲಿ ಕಳೆಯತೊಡಗಿದೆ. ಕಾಯಿ-ಪಲ್ಯಗಳನು,
ಅನುಗಳನ್ನು ಎಳೆನಿರುಗಳನು ಗಿಡಗಳಿಂದ ಇಳಿಸಿ, ರಾಶಿ ಮಾಡಿ ,ಬುಟ್ಟಿಗಳಲ್ಲಿ
ತುಂಬಿ ಸಂತೆಗೆ ಒಯ್ದು ತಲುಪಿಸುವ ಕೆಲಸದಲ್ಲೂ ಅವರಿಗೆ ನೆರವಾಗತೊಡಗಿದೆ.
ಅವರ ಮನೆಗೆ ಹೊಸ ಹೆಂಚು ಹೊಡಿಸುವುದು,ಸುಣ್ಣ ಬಳಿಯೂವುದು,ತೋಟಗಾರಿಕೆ<br>
ಇಲಾಖೆಯಿಂದ ಬೀಜಗಳನ್ನು ತರುವುದು, ಲಾರಿಯಲ್ಲಿ ಗೊಬ್ಬರ ತರಿಸುವುದು.
ಶೋಭಾಳ ತಂದೆಗೆ ಕಾಯಿಲೆಯಾದಾಗ ಡಾಕ್ಟರನ್ನು ಕರೆತರುವುದು, ಬ್ಯಾಂಕಿನ
ಪರೀಕ್ಷೆಗಾಗಿ ಓದಲು ಅವಳಿಗೆ ನೆರವಾಗುವುದು-ಇತ್ಯಾದಿ ಕೆಲಸಗಳೆಲ್ಲಾ
ದಿನಗಳೆದಂತೆ ಸತೀಶನ ಸ್ವಂತ ಜವಾಬ್ದಾರಿಗಳೇ ಆದವು.<br>
{{gap}}ಹಾಗಿದ್ದಾಗ ಒಂದು ಶನಿವಾರ ಕೆಲಸಗಳನ್ನೆಲ್ಲ ಮುಗಿಸಿ ವರಾಂ ಡದಲ್ಲಿ ಕುರ್ಚಿ
ಹಾಕಿಕೊಂಡು ಕೂತು ಮಾತಾಡುತ್ತಿದ್ದಾಗ ಏನೊಂದು ಪೀಠಿಕೆಯೂ ಇಲ್ಲದೆ
ಶೋಭಾಳ ತಂದೆ ಸತೀಶನನ್ನು ಕೇಳಿದರು,"ಶೋಭಾಳನ್ನು ನೀವು
ಮದುವೆಯಾಗಲೆಂದು ನನ್ನ ಇಚೆ-ಆದಷ್ಟು ಬೇಗ ಈ ಕೆಲಸವಾಗಬೇಕು.ನನಗೂ
ವಯಸಾಯಿತು.ಏನಂತೀರಿ ಸತೀಶ?"<br />
{{gap}}ಎರಡು ನಿಮಿಷ ಸತೀಶ ಸುಮ್ಮನಿದ್ದಾಗ ಅವರೇ ಮತ್ತೆ ಅಂದರು:"ಹೀಗೆ
ಒಮ್ಮೆಲೆ ಕೇಳಬಾರದಿತ್ತೇನೋ.ಹೋಗಲಿ.ಯೋಚನೆ ಮಾಡಿ ಹೇಳಿರಿ."<br />
{{gap}}ಸತೀಶ ತಟ್ಟನೆ ಅಲ್ಲಿಂದೆದ್ದು ಹೊರಗೆ ಹೊರಟ. ಬಾಗಿಲಿನಾಚೆ ನಿಂತಿದ್ದ ಶೋಭಾ
ಅವನನ್ನು ಹಿಂಬಾಳಿಸಿದಳು.ಗೇಟಿನ ಕಡೆ ನೇರವಾಗಿ ಹೋಗುತ್ತಿದ್ದ ಆತನ ಸಮಕ್ಕೇ
ಹೆಚ್ಚಿ ಹಾಕುತ್ತ ಊಟಕ್ಕೂಠೇಯೆಂದ ಆಕೆ ಹೇಳಿದಳು,"ಪ್ಲಿಜ್,ತಪ್ಪು ತಿಳೀಬಾರದು
ಸತೀಶ,ನೀವು ಈ ಬಗ್ಗೆ ವಿಚಾರ ಮಾಡಿಯೇ ನಿರ್ದಾರ ಮಾಡಿರಿ.ನನಗ್ಗೊತ್ತು,ಈ
ವಿಷಯದಲ್ಲಿ ರುವ ಅಡಚಣೆ ಏನು ಅಂತ.ಅದೆಕ್ಕೆ ನಾನು ಇಲ್ಲಿವರೆಗೂ ಏನೂ
ಕೇಳಲಿಲ್ಲ. ನೀವು ಚೆನ್ನಾಗಿ ಯೋಚನೆ ಮಾಡಿರಿ.ನಂತರವೇ ನಿಮ್ಮ ನಿರ್ಧಾರ ತಿಳಿಸಿರಿ.
ನಾನು ಕಾಯುತ್ತಿರುತ್ತೇನೆ."<br>
{{gap}}ತನ್ನ ಬಲಗಡೆ ತನ್ನ ಸಮೀಪವೇ ನಡೆದು ಬರುತ್ತಿದ್ದ ಆಕೆಯ ವೊಂಡಾದ
ಎಡಗೈ ನೋಡುತ್ತಿದ್ದಂತೆ ತಲೆಯೆಲ್ಲ ಬಿಸಿಯಾದಂತೆನಿಸಿ ತಟ್ಟನೆ ನಿಂತು ಆತ
ಉತ್ತರಿಸಿದ,"ನಾನು ವಿಚಾರ ಮಾಡುತ್ತೇನೆ ಶೋಭಾ,ಮುದ್ದಿನ ವಾರ ಬಂದಾಗ
ಹೇಳುತ್ತೆನೆ.ನೀವು ಇಲ್ಲೇ ನಿಂತಿರ್ರಿ. ನನ್ನನ್ನು ಕಳಿಸಲು ಬರುವುದು ಬೇಡ. ನಾನೀಗ
ಹೋಗುತ್ತೆನೆ.ಇಲ್ಲವಾದರೆ ಕೊನೆಯ ಬಸ್ಸು ಸಿಗಲಾರದು"-ಅಷ್ಟಾಂದು ಹಿಂತಿರುಗಿ
ನೋಡದೆ ಆತ ವೇಗವಾಗಿ ಹೊರತುಬಂದ.
{{rh|center=* * *}}<noinclude><references/></noinclude>
nsy2brm9x3vyz5fmwa3uc2uwx9ffkzi
ಪುಟ:ನಡೆದದ್ದೇ ದಾರಿ.pdf/೧೩
104
30926
317958
249942
2026-05-08T02:52:27Z
Shreelatha.Halemane
7642
/* Validated */
317958
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|'''ಮುಳ್ಳುಗಳು(೧೯೬೮)'''}}
{{gap}}೧. ಮುಳ್ಳುಗಳು
{{gap}}೨. ಅತಿಥಿ
{{gap}}೩. ಪ್ರಶ್ನೆ
{{gap}}೪. ನೆನಪು..ಬರಿ ನೆನಪು
{{gap}}೫. ನೀನೇ ತಂತಿ<noinclude><references/></noinclude>
5prmmu44l95x7oi2wh82buar2z3wcgw
ಪುಟ:ನಡೆದದ್ದೇ ದಾರಿ.pdf/೪೧
104
30927
317977
250566
2026-05-08T04:04:09Z
Shreelatha.Halemane
7642
/* Validated */
317977
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೩೪|right=ನಡೆದದ್ದೇ ದಾರಿ}}</noinclude>ಕಾಲೇಜೊಂದರ ಡಿಬೇಟ್ ಯೂನಿಯನ್ನಿನ ಯಾವುದೋ ಕಾರ್ಯಕ್ರಮಕ್ಕೆ ತಾನು</br>
ಅತಿಥಿಯಾಗಿ ಹೋದಾಗ, ಅಲ್ಲೇ ಪ್ರೊಫೆಸರಾಗಿದ್ದ ಸದಾನಂದನನ್ನು -ಈಗ ಆರು</br>
ಮಕ್ಕಳ ತಂದೆಯಾಗಿದ್ದ ಸದಾನಂದನನ್ನು - ಕಂಡಾಗ, ಇಂಥದೇ ಅಪಸ್ವರದ</br>
ಅನುಭವವಾಗಿರಲಿಲ್ಲವೆ ತನಗೆ ? ಆತ ಅಲ್ಲಿರುವನೆಂದು ಮೊದಲೇ ಗೊತ್ತಿತ್ತು.</br>
ಹಳೆಯ ಪರಿಚಿತನೊಬ್ಬನನ್ನು ಸಹಜ ಮಾತಾಡಿಸುವ ಹಾಗೆ ಮಾತಾಡಿಸಿ,</br>
ಅದ್ಭುತವಾದ ಅತಿಥಿ ಭಾಷಣ ಮಾಡಿ, ತಾನೆಷ್ಟು ಹೃದಯಹೀನಳೆಂಬುದನ್ನು</br>
ಮತ್ತೊಮ್ಮೆ ಅವನ ನೆನಪಿಗೆ ತಂದುಕೊಟ್ಟು, ಆಗ ಅವನ ಕಣ್ಣಲ್ಲಿ ಮೂಡಬಹುದಾದ</br>
ಹಳೆಯ ನಿರಾಸೆಯ ಹೊಸ ರೂಪ ಕಂಡು, ಹೊಸ ಹುರುಪು ಪಡೆದು ತಿರುಗಿ ಮತ್ತೆ</br>
ದೂರ ಬರುವ ಬೃಹದಾಸೆ ಹೊತ್ತು ಹೋಗಿದ್ದೆ. ಆದರೆ ಆದದ್ದೇನು ? ಬಹಳ ಶೀತಲ</br>
ನಿರ್ಲಿಪ್ತತೆಯಿಂದ ಅವನನ್ನು “ಹಲೋ" ಎಂದು ಮಾತಾಡಿಸುವದರಲ್ಲಿ ತಾನು</br>
ಸಮರ್ಥಳಾಗಿದ್ದೆ ; ತನ್ನ ಭಾಷಣವಂತೂ “Excellent !' ಎಂದಿದ್ದರು ಎಲ್ಲರೂ ;</br>
ತಾನು ಹೃದಯವಿಲ್ಲದವಳೆಂಬುದನ್ನು ಅವನ ಗಮನಕ್ಕೆ ತಂದುಕೊಡುವ ಪ್ರಯತ್ನವೂ</br>
ಯಶಸ್ವಿಯಾಗಿತ್ತು ; ಆದರೆ ಕೊನೆಗಳಿಗೆಯಲ್ಲಿ ತನ್ನ ಲೆಕ್ಕ ತಪ್ಪಿತ್ತು. ಅವನ ಕಣ್ಣಲ್ಲಿ</br>
ತಾನು ನೋಡಿ ಆನಂದಿಸಬಯಸಿದ್ದ ಆ ಅನಿಸಿಕೆ - ಹಳೆ ನಿರಾಸೆಯ ಹೊಸ ರೂಪವಲ್ಲ</br>
ಅದು, ಒಂದು ಬಗೆಯ ವಿಜಯದ ಆನಂದ ಅದನ್ನು ಕಂಡ ಕ್ಷಣ ಮಾತ್ರ</br>
ಸೋತವಳು, ಸೋಲುತ್ತಿದ್ದವಳು ತಾನೇ ಎಂಬ ತೀವ್ರ ಆರಿವು ತನ್ನ ಇಡೀ</br>
ವ್ಯಕ್ತಿತ್ವವನ್ನು ಚಿತ್ರಹಿಂಸೆ ಮಾಡಿ ಕೊಲ್ಲಲಾರಂಭಿಸಿತ್ತು. ತಾನಲ್ಲಿಗೆ ಹೋದುದು</br>
ಬರೇ ಅತಿಥಿ ಎಂದು ; ಭಾಷಣ ಮಾಡಲು ಎಂದು ; ಭಾಷಣ ಮುಗಿದ ನಂತರ ತನ್ನ</br>
ಅಲ್ಲಿನ ಕೆಲಸವೂ ಮುಗಿಯಿತು ; ಅತಿಥಿಯಾಗಿ ಹೋದವಳು ಹಾರ- ತುರಾಯಿಗಳಿಂದ</br>
ಸನ್ಮಾನಿಸಲ್ಪಟ್ಟು ಬಂದ ದಾರಿಯಿಂದಲೇ ಮರಳಬೇಕು, ಹಾಗೆ ಮರಳಿ ಬಂದವಳು</br>
ತಾನು ಮತ್ತೆ ಇಲ್ಲಿಗೆ : ಈ ಹಳೆಯ ಊರಿಗೆ : ಹಳೆಯ ಜಾಗಕ್ಕೆ : ಹಳೆಯ</br>
“ಮನೆಗೆ" ? ಛೇ, ತನಗೆಲ್ಲಿಯ ಮನೆ ? ಮುದುಕ ತಂದೆ ಇದ್ದುದು ತನ್ನ ಅಣ್ಣನ</br>
ಮನೆಯಲ್ಲಿ. ಅಲ್ಲಿಯೂ ತಾನು ಅತಿಥಿಯೇ ಸರಿ ಒಂದು ರೀತಿಯಿಂದ. ತಾನು ಗಳಿಸಿ</br>
ಕೂಡಿಸಿಟ್ಟ ಹಣದಿಂದ ಕಟ್ಟಿಸಿದ ದೊಡ್ಡ ಬಂಗಲೆ- ತನ್ನ ಸ್ವಂತ ಬಂಗಲೆ- ಒಂದಿದೆ</br>
ಊರ ಹೊರಗೆ. ಹೌದು, ಅದು ಬರಿಯ ಬಂಗಲೆ ಮನೆಯಲ್ಲ... ಮನೆಯಲ್ಲ....</br>
{{gap}}ಇದೇನು ಈ ವಯಸ್ಸಿನಲ್ಲಿ ಈ ರಾತ್ರಿಯಲ್ಲಿ ಹೀಗೆ ಸೆಂಟಿಮೆಂಟಲ್ ಆಗಿ</br>
ವಿಚಾರ ಮಾಡುವುದು, ನಾಚಿಕೆಗೇಡು ಎಂದುಕೊಂಡು ನಕ್ಕು ಪ್ರೊ. ಲೀಲಾವತಿ</br>
ಉಳಿದಿದ್ದ ಪತ್ರಗಳಿಗೆ ಉತ್ತರ ಬರೆಯಲೆಂದು ಪೆನ್ ತೆರೆದಳು.</br>
{{gap}}-ರಾತ್ರಿ ಹನ್ನೊಂದು ಗಂಟೆಯಾಗಿ ಹೋಗಿರಬೇಕು. ಹಾಸ್ಟೆಲು ತಣ್ಣಗಾಗಿದೆ.</br><noinclude><references/></noinclude>
ag2v3g9s0nqpimihxxbuw6xqtfi3p7g
ಪುಟ:ನಡೆದದ್ದೇ ದಾರಿ.pdf/೭೩
104
30931
318034
200645
2026-05-08T09:08:06Z
Shreelatha.Halemane
7642
/* Validated */
318034
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೬೬}}
ಗೂಡು ಸೇರಿಯೇನೋ ಎನ್ನಿಸಿಬಿಡುತ್ತಿತ್ತು ಅವನಿಗೆ.</br>
{{gap}}ಅವನು ಅವನ ಕೋಟೆಯೊಳಗೇ ಇರಲಿ. 'ಸುಖ'ವಾಗಿರಲಿ. ಹೇಗಾದರೂ ಇರಲಿ.</br> ತನಗೇನೂ? ತನ್ನ ದಾರಿ ಬೇರೆ, ಅವನದು ಬೇರೆ. ಆ ಕತ್ತರಿಯಲ್ಲಿ ಒಂದು ಕ್ಷಣ</br> ಸಂಧಿಸಿದಾಗ ತಾವಿಬ್ಬರೂ ಕೈಕುಲುಕಿ ನಕ್ಕು ಆಡಿದ್ದೇ ತಪ್ಪು. ಅವನ ಪ್ಲೇಟೋನಿಕ್</br> ವಿಚಾರಗಳ ಪ್ರಕಾರ ಇದೆಲ್ಲ ತಪ್ಪಲ್ಲ. ಎಲೆಕ್ಟ್ರಿಕ್ ದೀಪದ ಕಂಭಕ್ಕೆ ಬಿಗಿದ</br> ತಂತಿಯಾದರೇನಾಯಿತು. ಪ್ರೇಮಗೀತೆ ಹಾಡಲು ಸಾಧ್ಯವಾಗದಿದ್ದರೂ</br> ಸತ್ತ ತುಟಿಗಳಲ್ಲಿ ಗುನುಗುನಿಸಬಹುದು.....</br>
ಹೀಗೆಂದುಕೊಂಡೇ ಅವನು ಪ್ಲೇಟೋನಿಕ್ ದ ಶರಾಣುಹೋಗಿದ್ದ; ಒಳಗೆ</br> ಮುಚ್ಚಿಟ್ಟುಕೊಂಡಿದ್ದ; ಅಳುತ್ತದ್ದ; ಆದರೂ ನಗುತ್ತಿದ್ದ;</br>
{{gap}}ಮುಂದೆ? ಮುಂದೇನು??</br>
{{gap}}'ಹರಿ ಹರಿ' ಎನ್ನುತ್ತ ಈ ಗಿಳಿ ಯಾಕೋ ಬಹಳ ಹೊತ್ತಿನಿಂದ ರೆಕ್ಕೆ</br> ಫಡಫಡಿಸತೊಡಗಿದೆ. ನೋವಾಗುವ ಭಯವೂ ಇಲ್ಲದೆ ಪಂಜರದ ಸಲಾಕೆಗಳಿಗೆ,</br> ಬಾಗಿಲಿಗೆ ತನ್ನ ಮೂತಿ-ಕಣ್ಣು-ಚುಂಚುಗಳನ್ನು ಒಂದೇ ಸಮನೆ ಅಪ್ಪಳಿಸತೊಡಗಿದೆ.</br>
ಅದಕ್ಕೆ ಯಾವ ವ್ಯಥೆಯೋ ಬಲ್ಲವರು ಯಾರು? ಬಹುಶಃ ಅದಕ್ಕೆ ಹಿಂದಿನ</br> ನೆನಪಾಗಿರಬಹುದೆ? ದಾಂಡೇಲಿಯ ಅಡವಿಯ ನೆನಪಾಗಿರಬಹುದೆ? ಅಲ್ಲಿ ತಾನು</br> ಹಾರಾಡಿದ ಗಿಡಗಳ, ಕುದುಕಿದ ಹಣ್ಣುಗಳ, ಜೊತೆಯ ಗಿಳಿಯ ನೆನಪಾಗಿರಬಹುದೆ?</br>
{{gap}}ಹರೀಶ ಇನ್ನೂ ಆಫೀಸಿನಿಂದ ಬಂದಿಲ್ಲ. ಅಷ್ಟರಲ್ಲೇ ಪಂಜರದ ಬಾಗಿಲು</br> ತೆರೆದು ಈ ಗಿಳಿಯನ್ನು ಮುಕ್ತಗೊಳಿಸಿದರೆ.....</br>
{{gap}}-ತೀವ್ರ ಇಚ್ಛೆಯಿಂದ ಸರಯೂ ಎದ್ದು ನಿಂತಳು. ಆದರೆ ಯಾಕೋ ತಲೆ</br> ತಿರುಗಿದಂತಾಗಿ ನಿಂತಲ್ಲೇ ಕೂತು ಬಿಟ್ಟಳು.</br>
{{gap}}ಇತ್ತೀಚೆ ಈ ವಿಚಿತ್ರ ಜಡ್ಡು ಸುರುವಾಗಿದೆ. ಹರೀಶನ ಪ್ರೀತಿ ಉಸಿರು-</br>ಕಟ್ಟಿಸುವಂತೆನಿಸಿದಾಗ, ಅವನೇ ತಂತಿಯೆಂಬ ನಂಬಿಕೆಯನ್ನು ಅವನಲ್ಲಿ ಹುಟ್ಟಿಸಲು</br> ತಾನು ಅಸಮರ್ಥಳಾದಾಗ, ಆ ಹಿಂದಿನ ಪ್ಲೇಟೋನಿಕ್ ದ ಕನಸಿಗೇ ಜಿಗಿಯಲು ಮನಸ್ಸು</br> ತೀವ್ರವಾಗಿ ತವಕಿಸಿದಾಗ, ಮತ್ತೊಮ್ಮೆ ಆ ಮಾವಿನ ಮರದ ಕೆಳಗೆ ಹೋಗಿ ಆ ಅವನ</br> ತೋಳುಗಳ ಆಶ್ರಯದಲ್ಲಿ ಮಲಗಿ ಆ ಅದೇ ಹಳೇ ಹಾಡು ಹಾಡಬೇಕೆನಿಸಿದಾಗ, ಛೇ.....</br>
ಇದೇನು ಜಡ್ಡು? ಅಶಕ್ತತೆ? ಆಲಸ್ಯ?</br>
{{gap}}ಇದೂ ಸಹ ತನ್ನ ಭ್ರಮೆಯೇ ಇರಬೇಕು ಎನ್ನಿಸಿತು ಸರಾಯೂಗೆ. ಇದನ್ನು</br> ಕಿತ್ತೊಗೆಯಬೇಕು;ಎಲ್ಲಾ ಬಂಧನಗಳನ್ನೂ ಕಡಿದೊಗೆಯಬೇಕು; ಏನಾದರೊಂದನ್ನು</br><noinclude></noinclude>
pe2uomuk29wseeihlgb1ezc2ygugwzj
ಪುಟ:ನಡೆದದ್ದೇ ದಾರಿ.pdf/೪೦
104
30932
317976
250314
2026-05-08T04:03:10Z
Shreelatha.Halemane
7642
/* Validated */
317976
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=೩೩|left=ಮುಳ್ಳುಗಳು / ಅತಿಥಿ}}
ಡಿಪಾರ್ಟ್ಮೆಂಟಿನಲ್ಲಿ, ಪ್ರ್ಯಾಕ್ಟಿಕಲ್ಸು ನಡೆದಾಗ ಸಹ, ಆ ಪಾಪಿ ಹುಡುಗರನ್ನು ಅವರ
ಪಾಡಿಗೆ ಬಿಟ್ಟು ಈ ಸಂಭಾವಿತರೆಲ್ಲ ಕೂತು ಹರಟುತ್ತಿರುವುದನ್ನು, ತನ್ನಂಥ</br>
ಸೀನಿಯರ್ (ಮುದುಕ?) ಪ್ರೊಫೆಸರುಗಳ ದಾದು ಮಾಡದೆ ನಗುತ್ತಿರುವುದನ್ನು</br>
ನೋಡಿದಾಗ ಎಷ್ಟೋ ಸಲ ತನಗೆ ಹೊಟ್ಟಿಯುರಿಯುತ್ತದೆ.ತಾನೂ ಅವರಂತೆ ಖಾಲಿ
ಹರಟೆ-ನಗೆಯಲ್ಲಿ ಜಗತ್ತನ್ನೆ ಮರೆಯಬೇಕೆಂಬ ಇಚ್ಛೆಯೂ ಆಗುತ್ತದೆ ಒಮ್ಮೆಮ್ಮೆ.</br>
ಆದರೆ ತಾನು ಹಾಗೆ ಅವರೊಂದಿಗೆ ಒಬ್ಬಳಾಗಲು ಪ್ರಯತ್ತಿಸುತ್ತ,ಅವರಂತೆಯೇ</br>
ಹಹ್ಹಹ್ಹಾ ಎಂದು ನಗಲೆತ್ನಿಸಿದ ಪ್ರತಿ ಸಾರೆಯೂ ಅವರೆಲ್ಲ ಯಾವುದೋ</br>
ಎತ್ತರದಲ್ಲಿದ್ದಂತೆ,ಎಷ್ಟು ಜಿಗಿದರೂ ತನ್ನ ಕೈಗದು ನಿಲುಕದಂತೆ ಭಾಸವಾಗಿ,</br>
ಅವರೆಲ್ಲರ ಮೇಲೂ ವಿಪರೀತ ಸಿಟ್ಟು ಬರುತ್ತದೆ. ಏನಾದರೊಂದು ನೆವ ತೆಗೆದು,</br>
ವ್ಹೈಸ್ ಪ್ರಿನ್ಸಿಪಾಲಳ ಅಧಿಕಾರದಿಂದ ಅವರನ್ನೆಲ್ಲ ಮನಸ್ವೀ ಬೈಯಬೇಕೆನಿಸುತ್ತದೆ.</br>
ಈ ಊರ್ಮಿಲಾ ಹಾಗೆಲ್ಲ ಬೈಯಿಸಿಕೊಳ್ಳುವವಳಲ್ಲ; ಬೆರಿಕಿ ಹುಡುಗಿ. ಇತ್ತೀಚೆ ಆ</br>
ಪ್ರೊ. ಕುಲಕರ್ಣಿಯೊಡನೆ ಇವಳದೇನೋ ಭಾನಗಡಿ ನಡೆದಿರುವ ಹಾಗೆ ಕಾಣುತ್ತದೆ.</br>
ನಡೆಯಲಿ,ನಡೆಯಲಿ,ಎಷ್ಟು ದಿನ ನಡೆದೀತು? ಹೂವಿನಿಂದ ಹೂವಿಗೆ ಹಾರುವ</br>
ಪತಂಗ ಆತ.ಬೇಸಿಗೆ ಸೂಟಿ ಮುಗಿದು ಮತ್ತೆ ಕಾಲೇಜು ಸುರುವಾಗುವ ಹೊತ್ತಿಗೆ</br>
ಅವನೆಲ್ಲೋ ಇವಳೆಲ್ಲೋ! ಬಹಳ ಮಜಾ....
{{gap}}ಈ ಸರೋಜಿನಿಯ ಎತ್ತರದ ಬಾಯ್ಫ್ರೆಂಡ್ನ ಬಣ್ಣಬಣ್ಣದ ಕಥೆ</br>
ಕೇಳಿದಾಗಿನಿಂದ ಎದೆನೋವು ಎಷ್ಟೋ ಕಡಿಮೆಯಾದಂತೆನಿಸುತ್ತಿದೆ. ಇನ್ನ್ಯಾರ ಜೊತೆ</br>
ಆಕೆ ವಾಕಿಂಗ್ ಹೋಗುವುದು? ಇನ್ನ್ಯಾರಿಗೆ ಆಕೆ ಪ್ರೇಮಪತ್ರ ಬರೆಯುವುದು?</br>
ಸಂಜೆಯಾದರೆ ಸಾಕು,ಸಿನೆಮಾ ಸ್ಟಾರ್ ಹಾಗೆ ಮೇಕಪ್ ಮಾಡಿಕೊಂಡು ಜಿಗಿಯುತ್ತ</br>
ಓಡುತ್ತಿದ್ದ ಸರೋಜಿನಿ ಇನ್ನು ಸಪ್ಪೆ ಮುಖ ಮಾಡಿಕೊಂಡು, ಕೂದಲನ್ನು ಬೆನ್ನಮೇಲೆ</br>
ಹರಡಿಕೊಂಡು, ಅಂಚಿಲ್ಲದ ಕರೀ ಸೀರೆ ಉಟ್ಟುಕೊಂಡು, ನೆಪಮಾತ್ರಕ್ಕೆ</br>
ಕೈಯಲ್ಲೊಂದು ಟೆಕ್ಸ್ಟ್ ಬುಕ್ ಹಿಡಿದುಕೊ೦ಡು,ಹಾಸ್ಟೆ ಲಿನ ಟೆರೇಸಿನ</br>
ಮೇಲೆ- ಗೆಳತಿಯರಿಂದ ದೂರ- ಏಕಾಕಿಯಾಗಿ, 'ಮೇರೆ ಘರ್ ಸೆ ಪ್ಯಾರಕೀ ಪಾಲಕೀ</br>
ಚಲೀಗಯಿ ಎಂದು ಗುನುಗುನಿಸುತ್ತ ಬೆಳದಿಂಗಳ ರಾತ್ರಿಗಳಲ್ಲಿ ಶತಪಧ ಹಾಕುವ</br>
ದೃಶ್ಯ ಕಣ್ಣೆದುರಿಗೆ ಬಂದಾಗ ಎಂಥದೋ ತೃಪ್ತಿ....</br>
{{gap}}-ಯಾರು ಹೇಳುತ್ತಾರೆ ಮುದುಕ ಪ್ರೊಫೆಸರುಗಳಿಗೆ ಭಾವನೆಗಳಿಲ್ಲವೆಂದು?</br>
ಹೃದಯವಿಲ್ಲವೆಂದು? ಈ "ಪಾಲಕೀ ಚಲೀಗಯಿ" ತನ್ನ ಹೃದಯದಲ್ಲೂ</br>
ಒಮ್ಮೆಮ್ಮೆ ಮುರಿದುಹೋದ ವೀಣೆಯ ತಂತಿಗಳನ್ನು ಜೋರಿನಿಂದ ಮೀಟಿ ಅಪಸ್ವರ</br>
ಹೊರಡಿಸುವುದಿಲ್ಲವೇ? ಹೋದ ವರ್ಷ ಡಿಸೆಂಬರದಲ್ಲಿ ಹೊಸದಾಗಿ ಸುರುವಾಗಿದ್ದ<noinclude><references/></noinclude>
54caerqfi6emfhhsodwr5pjnj2hhplm
ಪುಟ:ನಡೆದದ್ದೇ ದಾರಿ.pdf/೩೯
104
30934
317974
250503
2026-05-08T04:01:28Z
Shreelatha.Halemane
7642
/* Validated */
317974
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಲಗ್ನ ಆಗೇದ. ಹೆಂಡತಿ ಕಲತಾಕಿ ಅಲ್ಲ. ಅದಕ್ಕ ಇವಗ ಅಷ್ಟ ಸೇರೂದಿಲ್ಲ ಕಾಣಸ್ತದ.</br>
ಮಾವನ ದುಡ್ಡಿನಿಂದ ಇಲ್ಲೆ ಈ ಮಗಾ ಕಾಲೇಜ ಕಲೀತಾನ. ಚೈನೀ ಮಾಡತಾನ.</br>
ನನಗೂ ಗೊತ್ತಿದ್ದಿಲ್ಲ. ಇವತ್ತ ನನ್ನ ಕಝಿನ್ ಬಂದಿದ್ನಲಾ, ಅಂವಾ ಹೇಳಿದಾ. ಅಂತೂ</br>
ಈ ಸರೋಜಿನಿಯ ಗತಿ ಮಾತ್ರ ಕಠಿಣ ಅದs ಅಲ್ರೀ ಮ್ಯಾಡಂ ?"</br>
{{gap}}- ಊರ್ಮಿಲಾನ ಧ್ವನಿಯಲ್ಲಿ ನಿಜವಾಗಿಯೂ ಸಂತಾಪವಿತ್ತು. ತಾನೂ ಈಗ</br>ಸಂತಾಪ ಸೂಚಿಸದಿದ್ದರೆ ಎಂಥ ವಿರೋಧಾಭಾಸವಾಗುವುದೆಂಬುದರ ಕಲ್ಪನೆಯನ್ನೂ</br>
ಮಾಡದೆ ಪ್ರೊ. ಲೀಲಾವತಿಯ ಹೃದಯ ಎಂಥದೋ ಸಮಾಧಾನದಿಂದ ಕುಣಿಯಿತು.</br>
ಸರಿಯಾಗಿ ಸೆಟೆದು ಕುಳಿತಳು ಆಕೆ, “ಖರೇನ ಊರ್ಮಿಲಾ ? ಸರೋಜಿನಿಗೆ</br>
ಗೊತ್ತಿದ್ಧಾಂಗ ಕಾಣ್ಸೂದಿಲ್ಲಲ್ಲ ?"</br>
{{gap}}“ಇಲ್ರೀ ಪಾಪ, ಆಕಿಗ್ಯಾರು ಹೇಳಬೇಕು ?"</br>
{{gap}}“ಯಾಕ, ನಾ ಹೇಳತೀನಿ. ಇಂಥಾ ಲಫಂಗನ ಜೋಡೀ ತಿರಿಗಿ ಜೀವನಾ ಹಾಳ</br>ಮಾಡಿಕೋಬ್ಯಾಡಾ ಅಂತ ನಾನs ಆಕೀಗೆ ಹೇಳತೀನಿ. ಆಕಿ ಸಣ್ಣಾಕಿ, ತಿಳವಳಿಕಿ ಇಲ್ಲದಾಕಿ.</br>ಮತ್ತ ಮ್ಯಾಲ ನನ್ನ ವಾರ್ಡ್. ಆಕೀಗೆ ಉಪದೇಶ ಕೊಟ್ಟು ನಾ ದಾರಿಗೆ ತರಬೇಕು.</br>It is my duty, ಅಲ್ಲೇನು ?"</br>
{{gap}}-ಹುರುಪು ಏರತೊಡಗಿತ್ತು ಆಕೆಗೆ. ತಾನು ಈ ಸುದ್ದಿ ಹೇಳಿದಾಗ ಸರೋಜಿನಿ</br>ಕಣ್ಣೀರಿನ ಕಾಲುವೆ ಹರಿಸುವ, ಉಪವಾಸ ಬೀಳುವ, ಮೂರ್ಛೆ ಹೋಗುವ,</br>
ಹುಚ್ಚಿಯಾಗುವ ಅದ್ಭುತ ಚಿತ್ರಗಳೆಲ್ಲಾ ಕಣ್ಣೆದುರು ಕಟ್ಟಿ ನಿಂತಂತಾಗಿ, ಆಗ</br>
ವಾರ್ಡನ್ ಎಂದು -ಸಹೃದಯ ವೈಸ್ ಪ್ರಿನ್ಸಿಪಾಲ ಎಂದು - ತಾನು ಹೇಗೆ ಸಹಾಯ,</br>ಸಮಾಧಾನ ಮಾಡಬೇಕೆಂಬುದರ ಬಗ್ಗೆ ಆಕೆ ಲೆಕ್ಕ ಹಾಕತೊಡಗಿದಳು.</br>
{{gap}}“ಹೌದ್ರೀ ಮ್ಯಾಡಂ, ಹಂಗs ಮಾಡ್ರಿ. ನಾ ಇನ್ನ ಬರ್ತೀನಿ, ಈ ಬ್ಯಾಗು ನಾಳೆ</br>
ರಾತ್ರಿ ಕೊಡ್ತೀನಿ ಹಂಗಾರ, ಗುಡ್ನೈಟ್'- ಎಂದೆನ್ನುತ್ತ, ಉತ್ತರಕ್ಕಾಗಿ ಕಾಯದೆ</br>
ಊರ್ಮಿಲಾ ಕುಣಿಯುತ್ತ ಹೊರಗೋಡಿದಳು.</br>
{{gap}}ಕೆಲಹೊತ್ತಿನ ಮುಂಚೆ ಬೇಸತ್ತು ಮಲಗಿದ್ದ ಪ್ರೊ. ಲೀಲಾವತಿ ಈಗ ಮತ್ತೆ</br>
ಚೈತನ್ಯ ತುಂಬಿದಂತಾಗಿ ಅರ್ಧಕ್ಕೆ ಬಿಟ್ಟ ಕೆಲಸ ಮಾಡಲೆಂದು ಎದ್ದು ಕುರ್ಚಿಯ ಮೇಲೆ</br>ಆಸೀನಳಾದಳು.</br>
{{gap}}-ಮುದುಕ ಪ್ರೊಫೆಸರ್ಸ್ ಜೊತೆಗೆ ಬಂದರೆ ಪಿಕ್ನಿಕ್ಕು ಸಪ್ಪಗಾಗುವದಂತೆ.</br>
ಎಷ್ಟು ಧಿಮಾಕು ಈ ಊರ್ಮಿಲಾಗೆ ! ಅವಳದಾದರೂ ಏನು ತಪ್ಪು ? ಆ</br>
ನಾಚಿಗೆಯಿಲ್ಲದ ಗಂಡಸರು ತಮ್ಮ ಮನೆಮಾರನ್ನೆಲ್ಲ ಮರೆತುಬಿಟ್ಟು ಇವಳ ಹಿಂದೆ</br>ತಿರುಗುತ್ತಿದ್ದುದರಿಂದಲೇ ಅಲ್ಲವೆ ಇವಳಿಗಿಷ್ಟು ಸೊಕ್ಕು ಬಂದದ್ದು ?<noinclude><references/></noinclude>
4oydu5v9h1jnq7m60xdmk26detv0e9v
ಪುಟ:ನಡೆದದ್ದೇ ದಾರಿ.pdf/೨೮
104
30938
317965
197010
2026-05-08T03:01:19Z
Shreelatha.Halemane
7642
/* Validated */
317965
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''ಆತಿಥಿ'''|right=೨೧|left=}}
{{gap}}"ಶೀಲಾ ದೇಸಾಯಿ",</br>
{{gap}}"ಪ್ರೆಜೆಂಟ್ ಮ್ಯಾಡಂ",</br>
{{gap}}"ಶಾಂತಾ ಪಾಟೀಲ",</br>
{{gap}}"ಪ್ರೆಜೆಂಟ್ ಮ್ಯಾಡಂ",</br>
{{gap}}"ಸರೋಜಿನಿ ದೇಶಪಾಂಡೆ",</br>
{{gap}}"........"</br>
{{gap}}"ಸರೋಜಿನಿ ದೇಶಪಾಂಡೆ",</br>
{{gap}}"........"</br>
{{gap}}-ಹಾಜರಿ ಪುಸ್ತಕದಿಂದ ತಲೆಯೆತ್ತಿ ಒಮ್ಮೆ ಸುತ್ತಲೂ ದ್ರುಷ್ಟಿ ಹಾಯಿಸಿದಳು</br>
ಪ್ರೊ. ಲೀಲಾವತಿ. ಸರೋಜಿನಿ ಕಾಣಲಿಲ್ಲ. ಯಕೋ ಅವಳಿಗೆ ಒಮ್ಮೆಲೇ ಎಲ್ಲಾ</br>
ಹುಡುಗಿಯರ ಮೇಲೂ ವಿಪರೀತ ಸಿಟ್ಟು ಬಂದಿತ್ತು. ಟೇಬಲ್ ಮೇಲೆ ವಿನಾಕಾರಣ</br>ಕೈ ನೋಯುವ ಹಾಗೆ ಒಮ್ಮೆ ಗುದ್ದಿ ಗರ್ಜಿಸಿದಳು. "Where is she? ಆಕೀಗೇನ</br>
ಯಾರೂ ಹೇಳವ್ರು-ಕೇಳವ್ರು ಇದ್ಧಾಂಗ ಕಾಣ್ಸೂದಿಲ್ಲ. ನಿನ್ನೇನೂ ತಡಾ ಮಾಡೇ</br>
ಬಂದಳು. ಅಟೆಂಡನ್ಸ್ ಹೊತ್ತಿಗೆ ಇಲ್ಲೆ ಇರಬೇಕೆನ್ನೂದು ಗೊತ್ತದನೊ ಇಲ್ಲೋ?</br>
ಹಾಸ್ಟೆಲಿನ್ಯಾಗ ಇದ್ದಮ್ಯಾಲ ರೂಲ್ಸು ಅಂದರ ರೂಲ್ಸು. ರಾತ್ರಿ ಎಂಟ ಘಂಟೇದ ತನಕಾ</br>ತಿರಗ್ಯಾಡೂದು ಅಂದ್ರೇನು? ನೀವೇನಿಲ್ಲೆ ಕಲೀಲಿಕ್ಕೆ ಬಂದೀರೋ ಏನ ಮಜಾ</br>ಮಾಡಲಿಕ್ಕೊ? ಅಂಥಾ ಅವಶ್ಯ ಕೆಲಸ ಇದ್ದರನಾ ದೆವ್ವನ್ಹಾಂಗ ಸೂಪರಿಂಟೆಂಡೆಂಟ</br>ಜೀವಂತ ಇದ್ದೀನಿ. ನನಗ ಹೇಳಿ ಹೋಗಲಿಕ್ಕೆ ಏನಾಗತದ ನಿಮಗ?"</br>
{{gap}}ಉತ್ತರ ಬರಲಿಲ್ಲ. ದರಿದ್ರ ಹುಡುಗಿಯರು ಒಬ್ಬರನ್ನೊಬ್ಬರು ನೋಡಿ ಕಣ್ಣು</br> ಮಿಟುಕಿಸುತ್ತಿದ್ದಾರೆ. ತಾನು ಎದುರಿಗೆ ನಿಂತಿರಲಿಕ್ಕೇ ಎಷ್ಟು ಧೈರ್ಯ ಇವರಿಗೆ! ಇಷ್ಟು</br>ಬೈದರೂ ನಾಚಿಕೆಯಿಲ್ಲವಲ್ಲ! ಆದರೆ ಈ ಸರೋಜಿನಿ ಎಲ್ಲಿಗೆ ಹೋದಳು? ಮತ್ತೆ</br>ಆ ತನ್ನ ಎತ್ತರ ಬಾಯ್ ಫ್ರೆಂಡ್ ಜೊತೆ ತಿರುಗಾಡಲು ಹೋಗಿರಬಹುದೇ? ಛೇ,</br>ಅವಳ ಉದ್ಧಟತನ ಮಿತಿಮೀರುತ್ತಿದೆ. ತಾನಿಷ್ಟು ಬೈದರೂ ಲಕ್ಶ್ಯವಿಲ್ಲವಲ್ಲ ಅವಳಿಗೆ!</br>ಈ ಹುಡುಗಿಯರೇ ಇಷ್ಟು; ಯಾರಾದರೂ ಗಂಡುಹುಡುಗರು ನಾಯಿಯ ಹಾಗೆ ಬಾಲ</br><noinclude><references/></noinclude>
i6y6hvt3i8ugsmqmb50xicr6fxsayle
ಪುಟ:ನಡೆದದ್ದೇ ದಾರಿ.pdf/೧೨
104
30941
317957
249941
2026-05-08T02:52:10Z
Shreelatha.Halemane
7642
/* Validated */
317957
proofread-page
text/x-wiki
<noinclude><pagequality level="4" user="Shreelatha.Halemane" /></noinclude> ೩
{{center|'''ಕಥಾಸಂಕಲನಗಳು'''}}
{{gap}}೧. ಮುಳ್ಳುಗಳು
{{gap}}೨. ಕೊನೆಯ ದಾರಿ
{{gap}}೩. ಕವಲು
{{gap}}೪. ಹಸಿವು
{{gap}}೫. ಬಿಡುಗಡೆ<noinclude><references/></noinclude>
lx0u54793fiml85xrgnodoe248i3ues
ಪುಟ:ನಡೆದದ್ದೇ ದಾರಿ.pdf/೨೯೭
104
30943
317951
250558
2026-05-07T15:54:54Z
Pragathi. BH
7585
/* Validated */
317951
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೨೯೦|right=ನಡೆದದ್ದೇ ದಾರಿ}}
{{gap}}ಮರುವಾರದ ಮೊದಲ ದಿನಗಳಲ್ಲಿ ಒಂದು ಬೆಳಿಗ್ಗೆ ಅತ್ಯಂತ ಆಕಸ್ಮಿಕವಾಗಿ
ಸತೀಶನ ಟೇಬಲ್ಲಿನೆದುರು ಕುಸುಮಾ ಪಾಟೀಲ ಪ್ರತ್ಯಕ್ಷಳಾದಳು.ತುಂಬು ಆತ್ಮ
ವಿಶ್ವಾಸದಿಂದ ನಗುತ್ತ "ಹಲೋ ಸತೀಶ,ಹೇಗಿದ್ದೀರಿ?ಬರ್ರಿ,ಚಹಾ ಕುಡಿದು
ಬರೋಣ" ಎಂದು ಆಹ್ವಾನಿಸಿದಳು.ಅವಳಲ್ಲಾಗಿದ್ದ ಬದಲಾವಣೆ ನಿಜವಾಗಿ
ಆಶ್ಚರ್ಯಕಾರಕವಾಗಿದ್ದು ಆತ ಅವಳತ್ತ ಬಹಳ ಹೊತ್ತು ನೋಡುತ್ತಲೇ ಇದ್ದಆಕೆ
ಮೈತುಂಬಿಕೊಂಡಿದ್ದಳು.ಕೂದಲನ್ನು ಕತ್ತರಿಸಿ ಬಾಬ್ ಮಾಡಿದ್ದಳು. ಸುಂದರವಾದ
ಶೈಲಿಯಲ್ಲಿ ಸೀರೆ ಉಟ್ಟು ಸ್ಲೇವ್ಲೆಸ್ ಬ್ಲೌಜ್ ಹಾಕಿದ್ದಳು.ದುಂಡಗಿನ ಅವಳ
ಎರಡೂ ತೋಳುಗಳು,ತುಂಬಿಕೊಂಡು ಎರಡೂ ಮುಂಗೈಗಳು,ನೇಲ್ ಪಾಲಿಶ್ ಹಾಕಿದ್ದ
ಶೇಪ್ ಮಾಡಿದ್ದ ಉಗುರುಗಳುಳ್ಳ ಹತ್ತು ಬೆರಳುಗಳು ನಿಜವಾಗಿ ಅದ್ಭುತವೆನಿಸಿದವು.<br />
{{gap}}ಚಹಾ ಕುಡಿಯುತ್ತ ಆಕೆ ತನ್ನ ಬಗ್ಗೆ ಹೇಳಿಕೊಂಡಳು.ಬೇರೆ ಊರಿಗೆ ವರ್ಗವಾಗಿ
ಹೋಗಿದ್ದ ಆಕೆ ಕೆಲಸದೊಂದಿಗೆ ಓದನ್ನೂ ಮುಂದುವರಿಸಿ ಡಿಗ್ರಿ ಪಡೆದಿದ್ದಳು.
ಇಲಾಖೆಯ ಪರೀಕ್ಷೆಗಳನ್ನೂ ಪಾಸು ಮಾಡಿ ಮ್ಯಾನೇಜರ್ ಆಗಿದ್ದಳು.ಅವಳ
ಧ್ವನಿಯಲ್ಲಿ,ನಡೆನುಡಿಯಲ್ಲಿ ಠೀವಿ-ಗತ್ತು-ಆತ್ಮವಿಶ್ವಾಸ ಎದ್ದು ಕಾಣುತ್ತಿದ್ದವು.
ಎಲ್ಲ ಹೇಳಿದ ನಂತರ ಕೊನೆಗೆ ದನಿಯಿಳಿಸಿ ಕುಸುಮಾ ಅಂದಳು,"ಇಷ್ಟು ದಿನ ಕಳೆದು
ನಿಮ್ಮನ್ನು ನೋಡಲೆಂದೇ ನಾನಿಲ್ಲಿಗೆ ಬಂದೆ ಸತೀಶ,ನಿಮ್ಮ ಬಗೆಗಿನ ನನ್ನ ಭಾವನೆಗಳು
ಇಂದಿಗೂ ಹಾಗೇಯೇ ಇವೆ."<br>
{{gap}}ಚಹದ ಕಪ್ಪನ್ನು ಕೆಳಗಿರಿಸಿ ಎದ್ದು ನಿಲ್ಲುತ್ತ ಆತ ಹೇಳಿದ,"ಚಹಕ್ಕಾಗಿಥ್ಯಾಂಕ್ಸ್
ಕುಸುಮಾ.ಈಗ ಕೆಲಸದ ಹೊತ್ತು.ಮತ್ತೆ ಭೆಟ್ಟಿಯಾಗಿ ಮಾತನಾಡೋಣ.ಬಾಯ್"<br>
{{gap}}ಕುಸುಮಾಳಿಂದ ಬೀಳ್ಕೊಂಡು ಬಂದ ನಂತರ ಸತೀಶ ಆಕೆಯನ್ನು ಮತ್ತೆ
ಭೆಟ್ಟಿಯಾಗಲಿಲ್ಲ.ಆದರೆ ಈ ಭೆಟ್ಟಿ ಆತನ ಮೇಲೆ ಆಳವಾದ
ಪರಿಣಾಮವನ್ನುಂಟುಮಾಡಿತು.ಎರಡೂ ಕೈಗಳನ್ನು ಹೊಂದಿರುವುದು ಎಷ್ಟೊಂದು
ಸುಂದರವಾದ,ಅದ್ಭುತವಾದ ವಿಷಯ ಅನ್ನುವುದನ್ನು ಆಕೆ ತೋರಿಸಿಕೊಟ್ಟಿದ್ದಳು.
ಅಂದಿನಿಂದ ಆತ ಎದುರಿಗೆ ಬಂದ ಎಲ್ಲಾ ಹೆಂಗಸರ ಕೈಗಳನ್ನು ಗಮನಿಸತೊಡಗಿದ
ದಪ್ಪಗಿನ ಕೈಗಳು,ತೆಳ್ಳಗಿನ ಕೈಗಳು,ದುಂಡಾಗಿ ಸುಂದರವಾಗಿದ್ದ ಕೈಗಳು,
ಚಪ್ಪಟೆಯಾಗಿ ರೋಮ ತುಂಬಿದ ಕೈಗಳು,ಸಶಕ್ತ ಕೈಗಳು,ಬಲಹೀನ ಕೈಗಳು,ಎಲ್ಲ
ಬಗೆಯ ಜೋಡು ಕೈಗಳಲ್ಲಿ ಅದೆಂತಹ ಸೌಂದರ್ಯ ಅಡಗಿತ್ತು! ಈ ಹಿನ್ನೆಲೆಯಲ್ಲಿ
ಶೋಭಾಳ ಯೋಚನೆ ಬಂದಾಗ ಆತನಿಗೆ ಗಂಟಲಲ್ಲಿ ಏನೋ ಸಿಕ್ಕಿಕೊಂಡ ಹಾಗೆ ಅನಿಸತೊಡಗಿತು.ಇಲ್ಲ,ಸಾಧ್ಯವಿಲ್ಲ,ಎಂದಿಗೂ ಸಾಧ್ಯವಿಲ್ಲ-ಅನಿಸತೊಡಗಿತು.
ಶನಿವಾರ ಬರಲಿ,ಒಮ್ಮೆ ಹೋಗಿ ಸ್ಟಷ್ಟವಾಗಿ ಹಾಗೆಂದು ಹೇಳಿಬಿಟ್ಟು ಈ ನೋವಿನ<br><noinclude><references/></noinclude>
ncdhgu13jrkw6frzsgsbfonbcu3quth
ಪುಟ:ನಡೆದದ್ದೇ ದಾರಿ.pdf/೫೨
104
30944
318033
220661
2026-05-08T09:06:53Z
Shreelatha.Halemane
7642
318033
proofread-page
text/x-wiki
<noinclude><pagequality level="4" user="Prakrithi jain" /></noinclude>{{rh|center=|right=೪೫|left=ಮುಳ್ಳುಗಳು/ಪ್ರಶ್ನೆ}}
ಸರ್ವಸ್ವವನ್ನೂ ಕಸಿದುಕೊಂಡು, ನಿನ್ನ ಎದೆಯ ಉರಿಯಲ್ಲಿ ಅದನ್ನು ಸುಟ್ಟು, ಆ</br>ಬೂದಿಯಲ್ಲಿ ಹೇಳಹೆಸರಿಲ್ಲದಂತೆ ಗಾಳಿಗೆ ತೂರಿ, ಈಗ ನೀನು ಹೇಳುತ್ತಿರುವಿ-</br>
"ಕ್ಷಮಿಸು ಶಶೀ, ನಿನ್ನ ಸಹವಾಸದಿಂದ ನನಗೆ ದೊರೆತಿರುವ ತಣ್ಪನ್ನು ನಾನು</br>
ಅಲ್ಲಗಳೆಯುವದಿಲ್ಲ; ಆದರೆ ಅದಕ್ಕೆ ನನ್ನಲ್ಲಿ ಭೂತಕಾಲದ ಬೆಂಕಿಯನ್ನು ಆರಿಸುವ</br>ಸಮರ್ಥ್ಯವಿಲ್ಲ" ಬೆಂಕಿ_ಆರಲಾರದ ಬೆಂಕಿ....ನಿನ್ನಲ್ಲಿ ನಿನ್ನ ಅವಳು</br>
ಹೋತ್ತಿಸಿಬಿಟ್ಟು ಹೋದ ಬೆಂಕಿ....ನನ್ನನ್ನೇಕೆ ಎಳೆದುತಂದು ಈ ಬೆಂಕಿಯಲ್ಲಿ</br>
ಅರ್ಧಮರ್ಧ ಬೇಯಿಸಬೇಕಾಗಿತ್ತು? ಬಹುಶಃ ನಾನೂ ಇಂಥದೆ ಬೆಂಕಿಯನ್ನು</br>
ನಿನ್ನಲ್ಲಿ ಹೋತ್ತಿಸಿ ಅವಳಂತೆ ದೂರವಾಗಿದ್ದರೆ ನಿನ್ನಲ್ಲಿನ ನನ್ನ ನೆನಪಿಗೆ ತುಕ್ಕು</br>
ಹಿಡಿಯುತ್ತಿರಲಿಲ್ಲವೇನೋ! ನಿನಗೆ ತಂಪು ನೀಡಬಯಸಿದ್ದೇ ನನ್ನ ತಪ್ಪೇನು</br>
ಹಾಗಾದರೆ? ಹೀಗೆ ಮಾಡಲು ನನ್ನನ್ನು ಪ್ರೆರೇಪಿಸಿದ ಅ ಅವ್ಯಕ್ತ ದುಷ್ಟ ಶಕ್ತಿ</br>
ಯವುದು? ಎಲ್ಲಿದೆ?</br>
{{gap}}-ಸುತ್ತಲೆಲ್ಲ ಕತ್ತಲೋ ಕತ್ತಲಾಗಿರುವಾಗ ಈ ಪ್ರಶ್ನೆಗೆ ಉತ್ತರ ಸಿಗುವುದು</br>
ಬಹಳ ಕಷ್ಠತಮವೆಂದು ತೋರಿತು ಶಶಿಗೆ. ಬೇಗನೆ ಬೆಳಗಾದರೂ ಆಗಬಾರದೇ ಎಂದು</br>ಅವಳಿಗೆ ಕಸಿವಿಯಾಯಿತು. ಬೆಳಗಾದರೆ ಮಾಡಲು ಕಾದಿರುವ ಕೆಲಸಗಳು ನೂರು.</br>ಮೋದಲು ಮನೆಗೆ ಪತ್ರ ಬರೆಯಬೇಕು. ಅರುಣನ ತಂದೆ ಬಹಳ</br>
ಆತುರಪಡಿಸುತ್ತಿದ್ದಾರೆಂದು ಮೋನ್ನೆಯೇ ಊರಿಗೆ ಹೋಗಿದ್ದಾಗ ತಿಳಿದುಬಂದಿತ್ತು.</br>ಅವರಾದರೂ ಎಷ್ಟೆಂದು ಕಾಯಬೇಕು ? ತಾನೀಗ ಒಂದು ನಿರ್ಧಾರ ಮಾಡಲೇಬೇಕು.</br>
{{gap}}-ಬಹಳ ದಿನಗಳ ಹಿಂದೆಯೆ ಮಾಡಬೇಕಾಗಿದ್ದ ನಿರ್ಧಾರ. ಯಾಕೆ ಇಷ್ಟು</br>
ತಡವಾಯಿತು..........?</br>
{{gap}}ಏ No.IV, ನನ್ನ ಬಗೆಗಿನ ನಿನ್ನ ಪ್ರೀತಿ, ನಿನ್ನ ಸಾಹಿತ್ಯದಂತೆ, ಎಷ್ಟೇ</br>
ಪ್ರಾಮಾಣಿಕವೆಂದು ನೀನು ತಿಳಿದಿದ್ದರೂ ತಳಬುಡವಿಲ್ಲದ್ದೆಂದು, ಅದರೆ ಕೊನೆ</br>
ಶೂನ್ಯವೆಂದು, ಅದರಿಂದ ನಮ್ಮಿಬ್ಬರಿಗೂ ಹಿತವಿಲ್ಲವೆಂದು ನನಗೆ ಗೋತ್ತಿತ್ತು;</br>
ಗೋತ್ತಿದ್ದರು ನಿನ್ನಿಂದ ದೂರ ಹೋಗುವ ನಿರ್ಧಾರ ಕೈಗೊಳ್ಳುವದು ಇಷ್ಟು ದಿನ</br>
ನನಗೆ ಸಾಧ್ಯವಾಗಲಿಲ್ಲ. ಅಗಲುವ ಗಳಿಗೆ ಒಮ್ಮಿಲ್ಲೊಮ್ಮೆ ಬರುವುದೆಂದು ಕೂಡುವ</br>ಮೊದಲೇ ಗೋತ್ತಿದ್ದೂ, ಕೂಡಿದ್ದಷ್ಟು ದಿನ ಎಂದೂ ಅಗಲುವದಿಲ್ಲೆಂಬ ಭ್ರಮೇಯೇ ಇತ್ತು. ಆದರೆ ನಿನ್ನೆ ಸಂಜೆಯ ನಿನ್ನ ವರ್ತನೆ ಕೊನೆಗೊಮ್ಮೆ ಆ ಭ್ರಮೆಯನ್ನುನಿರಸನಗೊಳಿಸಿತು. ನಾನು ಮುಂದೂಡತೊಡಗಿದ್ದ, ಭಯಪಟ್ಟುಕೊಂಡಿದ್ದ,ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದ ಈ ಗಳಿಗೆ ಈಗ ಭೂತದಂತೆ ಥೈ ಎಂದು ನನ್ನೆದುರು ನಿಂತಿದೆ...<noinclude><references/></noinclude>
d8edqpgtogapv6ubyfnsxg76brqnbvh
ಪುಟ:ನಡೆದದ್ದೇ ದಾರಿ.pdf/೭೧
104
30945
317987
274769
2026-05-08T04:56:14Z
Vikashegde
1258
/* Validated */
317987
proofread-page
text/x-wiki
<noinclude><pagequality level="4" user="Vikashegde" />{{rh|center=ನಡೆದದ್ದೇ ದಾರಿ|left=೬೪|right=}}</noinclude>{{gap}}ದೂರದೂರವಾಗಿರುವುದೇ ಸರಿ ಅನಿಸುವುದಂತೆ. ಅನಿಸದೇ ಏನು ಮಾಡೀತು? ಅದು ಅವನೊಬ್ಬನ ತಪ್ಪಲ್ಲ. ಅವನ 'ಸರಿ'-'ತಪ್ಪು'ಗಳ ಬಗೆಗಿನ ನಂಬಿಕೆಗೆ ಸಂಪ್ರದಾಯದ ಭದ್ರ ತಳಹದಿಯಿದ್ದಿತಲ್ಲ! ಆ ನಂಬಿಕೆಯಲ್ಲಿ ನಂಬಿಕೆಯಿಲ್ಲದಿದ್ದರೂ ಅವನದನ್ನು ನಂಬುವ ನಟನೆ ಮಾಡಬೇಕಿತ್ತು. ಆ ನಂಬಿಕೆ ಸ್ವಲ್ಪ ಸಡಿಲಾಯಿತೋ, ಆತ ಬಿದ್ದ. ಬಿದ್ದರೆ ಪೆಟ್ಟಾದೀತೆಂಬ ಅಂಜಿಕೆ ಅವನಿಗೆ. ಕನಿಕರ ಆನಿಸುತ್ತದೆ ಒಮ್ಮೊಮ್ಮೆ ಅವನ ಬಗ್ಗೆ. ಬಿದ್ದ ಪೆಟ್ಟಿಗೆ ಅಂಜುವ ಮನುಷ್ಯನ ಭಾವನೆಗೆ ಬೆಲೆಯೇನು?
{{gap}} ಎದೆಯಲ್ಲಿ ಸಂಕಟದ ಪರ್ವತವನ್ನು ಹುದುಗಿಟ್ಟುಕೊಂಡು ಎಷ್ಟು ಸೊಗಸಾಗಿ ನಟಿಸುತ್ತಿದ್ದ ಆತ! ಅದಕ್ಕೇನು 'ಆತ್ಮವಂಚನೆ' ಎಂದು, 'hypocrisy' ಎಂದು ಕರೆದು ಹೊಲಸು ಮಾಡಬಹುದಾಗಿತ್ತೆ? ಛೇ ಇಲ್ಲ. ಅದರ ಬದಲು ಅದಕ್ಕ 'ಪ್ಲೆಟೋನಿಕ್ ಪ್ರೇಮ' ಎಂದು ಚೆಂದ ಹೆಸರು ಕೊಟ್ಟದ್ದೇ ಒಳ್ಳೆಯದಾಯಿತು. ಅವನು ತನಗೆ ಎಂದೂ ಏನೂ ಹೇಳಲಿಲ್ಲ. ತನ್ನಿಂದ ಏನೂ ಬಯಸಲಿಲ್ಲ, ತನ್ನೊಂದಿಗೆ ಕೇವಲ ಒಳ್ಳೆಯ ವ್ಯಕ್ತಿಯ ಹಾಗೆ ನಡೆದುಕೊಂಡ, ಯಾರೆದುರಿಗೂ ತನ್ನ ಬಗ್ಗೆ ಚಕಾರ ಎತ್ತಲಿಲ್ಲ; ಆದರೆ ಅವನ ಕಣ್ಣಲ್ಲಿ ಒತ್ತಿ ಹಿಡಿದ ಎಂಥದೋ ಎನೋ ಇತ್ತು. ರಾತ್ರಿ ಆತ
ನಿದ್ರೆಗೆಡುತ್ತಿದ್ದ. ಹಗಲು ಕನಸು ಕಾಣುವಂತಿದ್ದ, ಅವನ ಉತ್ಕಟ- ತೀವ್ರ-ಅಸ್ಪಷ್ಟ ಅನಿಸಿಕೆಯನ್ನು ತಡೆಯಲಾರದೆ ಹೇಳಲು ಹೊಗಿ ಒಮ್ಮಲೆ ತಡೆಹಿಡಿಯುತಿದ್ದ; ಮತ್ತೆ ಯಥಾಪ್ರಕಾರ ಇರುತಿದ್ದ. ಇದಕ್ಕಲ್ಲದಿದ್ದರೆ ಇನ್ನಾವುದಕ್ಕೆನ್ನುವುದು ಪ್ಲೆಟೋನಿಕ್ ಪ್ರೇಮವೆಂದು? ಸಾಯುವವರೆಗೂ ಕೊಲ್ಲುತ್ತಿರಬಹುದಾದ ಈ ಪ್ರಜ್ಞೆಗೆ ಮರ್ಯಾದಿಗಾಗಿ 'ಪ್ಲೆಟೋನಿಕ್' ವಿಶೇಷಣವನ್ನು ಹಚ್ಚಿ ಅವನು
ಸ್ಥಿತಪ್ರಜ್ಞನಾಗಿದ್ದ; ಅಥವಾ ಆದಂತೆ ತೋರಿಸಿಕೊಳ್ಳುತ್ತಿದ್ದ. ಆದರೆ ತಾನು? ತನ್ನಲ್ಲಿ ಈ ಪ್ಲೆಟೊನಿಕ್ ದ ಬೆಂಕಿ ಹತ್ತಿ ಕ್ರಮೇಣ ಉರಿಯಾಗತೊಡಗಿತ್ತು. ಅವನಿಗದರ ಝಳ ತಾಗಿದರೂ ಆವನು ಸುಮ್ಮನಿದ್ದ; ಅವನ ಮೈ ಅದರಿಂದ ಸುಡತೊಡಗಿದ್ದರೂ ಏನೂ ಆಗದವನಂತಿದ್ದ. ಅದೇನು ತಾಳ್ಮೆಯೇ ಅಥವಾ ಹೇಡಿತನವೇ?
{{gap}}ಎರಡೂ ಒಂದೇ. ಏನೋ ಅಂತೂ ಒಟ್ಟು ತನ್ನ ಆನಿಸಿಕೆಯೇನೂ ಈ 'ಪ್ಲೆಟೋನಿಕ್' ವಿಶೇಷಣದ ಢೊಂಗೀ ನೈತಿಕ ಬಲ ಪಡೆದು ಜೀವಿಸಬೇಕಾಗಿದ್ದಿಲ್ಲ. ಆಗಿನದು ಹೋಗಲಿ, ಈಗಲೂ ತನಗೆ ಸ್ಪಷ್ಟವಾಗಿ ಅನಿಸುವುದು; ಅವನಿಂದ ತಾನೇನೂ ಬಯಸುವುದಿಲ್ಲೆಂದು ಸುಳ್ಳೇಕೆ ಹೇಳಬೇಕು? ಹರೀಶನ, ತನ್ನ ಗಂಡನ ತೊಳುಗಳಲ್ಲಿ ಮೈಮರೆತಿದ್ದಾಗ ಎಲ್ಲಿಂದಲೋ ಅವನ ಮೈಯ ವಾಸನೆ ಮೂಗಿಗೆ ಹೊಡೆಯುವುದು... ಕಣ್ಣು ಗಟ್ಟಿಯಾಗಿ ಮುಚ್ಚಿ ಹರೀಶನೆ ಅವನು, ತಾನಿರುವುದು ಹರೀಶನ ಮನೆಯ ಬೆಡ್ ರೂಮಲ್ಲ-ಮೂರು ವರ್ಶಗಳ ಹಿಂದಿನ ಅಮಾವಾಸ್ಯೆಯ{{nop}}<noinclude></noinclude>
8bvavkbrsbaq8udd7635cgjf9cq7iw2
ಪುಟ:ನಡೆದದ್ದೇ ದಾರಿ.pdf/೪೭
104
30949
318028
251871
2026-05-08T09:01:14Z
Shreelatha.Halemane
7642
/* Validated */
318028
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೪೦|right=ನಡೆದದ್ದೇ ದಾರಿ}}</noinclude>ಅವನಲ್ಲಿನ್ನೂ ಹೊಸ ಜೀವಶಕ್ತಿ ತುಂಬಿ ಹರಿಯುತ್ತಿದ್ದಾಗ, ಅವನು ಪ್ರೀತಿಸಿದ ಹುಡುಗಿಯೊಬ್ಬಳು ಬೇಕಾಗಿಯೋ ನಿರುಪಾಯಳಾಗಿಯೋ ಅವನಿಗೆ ಕೈಕೊಟ್ಟು ಹೋದಳೆಂದು, ಮನುಷ್ಯತ್ವ ಕಳೆದುಕೊಂಡು, ಕನಸು ಒಡೆಯಿತೆಂದು, ಜೀವಶಕ್ತಿ ಉರಿದು ಬೂದಿಯಾಯಿತೆಂದು, ಪ್ರೀತಿ ಬರಿ ಹೊಗೆಯಾಯಿತೆಂದು, ಎಲ್ಲದರ ಮೇಲೆ—ಎಲ್ಲರ ಮೇಲೆ ಸಿಟ್ಟಾಗಿ ಈ ರೀತಿಯಲ್ಲಿ ಸೇಡು ತೀರಿಸಿಕೊಳ್ಳಲು ಬಯಸಿದನೆ?
{{gap}}'ಶಶಿ, ಹಿಂದೆ ಜೀವನದಲ್ಲಿ ನನಗಾದ ಆಘಾತದಿಂದ ನಾನೆಂದೂ ಚೇತರಿಸಿಕೊಳ್ಳಲಾರೆನೇನೋ ಎನಿಸಿದ್ದ ದಿನಗಳಲ್ಲಿ ನಿನ್ನನ್ನು ಕಂಡೆ. ನಿನ್ನಿಂದ ನನ್ನ ಜೀವನಕ್ಕೊಂದು ಅರ್ಥ ಬರುತ್ತಿದೆ. ಜನ್ಮಾಂತರಗಳಿಂದಲೂ ನನ್ನ ಅತೃಪ್ತ ಆತ್ಮ ಅರಸುತ್ತಿದ್ದ ಉತ್ತರ ನಿನ್ನಲ್ಲಿ ಸಿಗತೊಡಗಿದೆ. ಈ ಉತ್ತರವನ್ನು ಪರಿಪೂರ್ಣಗೊಳಿಸಿ ನನ್ನ ವ್ಯಕ್ತಿತ್ವವನ್ನೇ ಹರಿದುತಿನ್ನುತ್ತಿರುವ ಪ್ರಶ್ನೆಯನ್ನು ಕೊನೆಗೊಳಿಸು, ಇಲ್ಲದಂತಾಗಿಸು'- ಎಂದು ಮೊದಲಲ್ಲಿ ಯಾಚಿ ದಾಗ ಎಷ್ಟು ಪ್ರಾಮಾಣಿಕನಾಗಿ ತೋರಿದ್ದನೋ ಇಂದು ಬಹಳ ದಿನಗಳ ನಂತರದ ಒಂದು ಸಂಜೆ ತನ್ನ ಸತ್ಯ ಸ್ವರೂಪವನ್ನು ಬಯಲಿಗಿಡುವಾಗಲೂ ಅದೇ, ಅಂಥದೇ ನಿರ್ಲಜ್ಜ ಪ್ರಾಮಾಣಿಕತೆ ಕಾಣುತ್ತಿತ್ತು ಅವನ ಹಿಂಡಿ ಹಿಪ್ಪೆಯಾದಂಥ ಮುಖದಲ್ಲಿ. 'ಕ್ಷಮಿಸು ಶಶಿ, ಇಷ್ಟು ದಿನಗಳ ನಂತರದ ಆತ್ಮಶೋಧನೆಯಿಂದ ನನ್ನ ಪ್ರಶ್ನೆಯ ಉತ್ತರ ನೀನಲ್ಲ—ನೀನಾಗಲಾರೆಯೆಂದು ನನಗೆ ತಿಳಿದು ಬಂದಿದೆ' ಎಂದನಲ್ಲ, ಇವನ "ಆತ್ಮಶೋಧನೆ'ಯ ಅರ್ಥವೇನು? ಇವನ, ಇವನ ಸಾಹಿತ್ಯದ, ಹಣೆಬರಹವೇ ಇಷ್ಟೆಯೇ? 'ಶೋಧನೆ' ಮಾಡಲು 'ಆತ್ಮ'ವಾದರೂ ಇವನಿಗಿದೆಯೆ? ಅಥವಾ ಉಳಿದೆಲ್ಲದರ ಹಾಗೆ ಈ ಕಲ್ಪನೆಯೂ ಬರಿ ಭ್ರಮೆಯೋ? ಒಂದು ಸೂತ್ರವನ್ನೋ ತತ್ವವನ್ನೋ ಕಂಡು ಹಿಡಿಯಲು ನಿರ್ಜಿವ ಅಂಕಿ-ಸಂಖ್ಯೆಗಳ ಮೇಲೆ, ಸಜೀವ ಕ್ರಿಮಿಕೀಟಗಳ ಮೇಲೆ ಪ್ರಯೋಗ ಮಾಡುತ್ತಾರಲ್ಲ, ಹಾಗಿವನು ತನ್ನ ಪ್ರಶ್ನೆಗೆ ಉತ್ತರ ಹುಡುಕಲು ನನ್ನ ಮೇಲೆ ಪ್ರೀತಿಯ ಪ್ರಯೋಗ ಮಾಡಿ ನೋಡಿದನೇ?
{{gap}}ಬರೇ ಪ್ರಶ್ನೆ. ಇವನ ಸಹವಾಸದಿಂದ ಜೀವನವೇ ಒಂದು ಪ್ರಶ್ನೆಯಾಗತೊಡಗಿದೆ. ಉತ್ತರವಿಲ್ಲದ ಪ್ರಶ್ನೆ: ಉತ್ತರ ಬೇಕೆಂದು ಕಿರುಚುತ್ತಿರುವ ಪ್ರಶ್ನೆ.
{{gap}}ಮೊನ್ನೆ-ಮೊನ್ನೆ ಮನೆಗೆ ಹೋದಾಗ, ಯಾರೊಂದಿಗೋ ಹರಟುತ್ತಿರುವಾಗ ಜೀವನವೇ ಒಂದು ಪ್ರಶ್ನೆ ಎಂದು ತಾನಂದದ್ದನ್ನು ಕೇಳಿಸಿಕೊಂಡ ತಂದೆ ಹೇಳಿದ್ದರು, "ಹೆಣ್ಮಕ್ಕಳು ಲಗ್ನಾ ಮಾಡಿಕೊಂಡ ಮ್ಯಾಲೆ ಎಲ್ಲಾ ಪ್ರಶ್ನಿನೂ ಬಗೀಹರೀತಾವ. ನೀ<noinclude><references/></noinclude>
ek8jv8aamxqoeqsuyol4572507xb4ry
ಪುಟ:ನಡೆದದ್ದೇ ದಾರಿ.pdf/೮೫
104
30960
318045
201488
2026-05-08T09:22:20Z
Shreelatha.Halemane
7642
/* Validated */
318045
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೭೮}}
ಹಾಕು.'-ಅಂತ ಹೇಳಿದಾಗ, ನನ್ನನ್ನ ಆ ಆಜಾನುಬಾಹು ಹೆಗಲಮೇಲೆ ಹೊತ್ತು</br> ಮೂರು ಸುತ್ತು ಕುಣಿದಾಗ, ಹೇಗಿದ್ದರೋ ಇನ್ನೂ ಹಾಗೆಯೇ ಇದ್ದಾರೆ. ಅವರ</br> ಜೇವನದಲ್ಲಿ ಎಂದೂ ಏನೂ ಬದಲಾಗಿಲ್ಲ. ಆ ಅರ್ಧಾಂಗವಾಯುವಿನಿಂದ ಹಾಸಿಗೆ</br> ಹಿಡಿದ ಹೆಂಡತಿ,ಮನೆಯಲ್ಲಿ ನಿತ್ಯದಾಸೋಹ, ನೂರಾಎಂಟು ಕಮಿಟಿಗಳ</br> ಮೆಂಬರಶಿಪ್ಪು, ತೋಟಕ್ಕೆ ಹೊಸ ಬಾವಿ, ಹೊಲಕ್ಕೆ ಟ್ರಾಕ್ಟರ್, ಆ ಜೋಡುನಳಿಯ</br> ಬಂದೂಕು-ಎಲ್ಲ ಹಾಗೇ ಇವೆ.ಅದರೊಂದಿಗೆ ಈ ಗೌಡರ ಎತ್ತರ, ಆಗಲ, ಮೀಸೆಯ</br> ಹುರಿ ಸಹ-ಹಾಗೇ ಇವೆ.</br>
{{gap}}-'ನಿನ್ನ ಜೀವನ ಸುಖೀ ಆಗಲಿಕ್ಕೆ ನನ್ನ ಜೀವಾ ಕೊಟ್ಟೇನು'!ಅಂತ ಎಷ್ಟು</br> ಸಲ ಹೇಳಿಲ್ಲ ಈ ಗೌಡರು....</br>
{{gap}}ಅಂಥ ಮನುಷ್ಯನಿಗೆ ಏನು ಚಿಂತೆಯೋ.ಇಂದು ಮೊದಲ ಸಹ ಆ ದೊಡ್ಡ</br>
ಹಣೆಯ ಮೇಲೆ ನಿರಿಗೆ ಕಂಡೆ. ಮಾತಾಡದೆ ಆತ ಸುಮ್ಮನೆ ಕೂತಿದ್ದಾಗ ಓಡಿಹೋಗಿ</br> ಅವರ ತಲೆಯನ್ನೆ ನನ್ನ ಎದೆಯೊಳಗೆ ಬಚ್ಚಿಟ್ಟುಕೊಂಡು ಮಗುವನ್ನು ರಮಿಸುವಂತೆ</br> ರಮಿಸಾಬೇಕು ಅನ್ನಿಸಿತು.</br>
{{gap}}ಧೂಳೆಬ್ಬಿಸುತ್ತ ಆ ಇಂಪಾಲಾ ಕಣ್ಮರೆಯಾದಾಗ ಕೋಣೆಯ ಕಡೆ ತಿರುಗಿಬರುತ್ತ</br> ದಾರಿಯೊಳಗೆ ಮತ್ತೆ ಮುನ್ನಿ-'ಆಂಟಿ, ಚಾಕಲೇಟು ತಂದಿಲ್ಲ ?'</br>
{{gap}}ಈ ಮುನ್ನಯನ್ನೇ kidnap ಮಾಡಿಕೂಂಡು ಹೋದರೆ....</br>
{{rh|center=|right=೧೪ ಆಗಸ್ಟ್ ೧೯೫೮|left=}}
{{gap}}ಎಷ್ಟು ದಿನಗಳ ನಂತರ ಇಂದು ವಿನಯ ಸಾಳಕರನ ಭೆಟ್ಟಿ....ದುಃಖಾಂತ</br> ಸಿನೇಮದ ಹೀರೋನ ಹಾಗೆ ಗದ್ಗದಿತ ಧ್ವನಿಯಲ್ಲಿ ನನ್ನನ್ನು ಬೈಯ್ದು, ಶಪಿಸಿ ಅವನು</br> ಹೂರಟು ಹೋದ ಮಾತಿಗೆ ಆರು ತಿಂಗಳು ಕಳೆದುಹೋಗಿತ್ತು.</br>
{{gap}}'ನಿನ್ನನ್ನ ದೇವಿಯ ಹಾಗೆ ಪೂಜಿಸಿದ್ದೇ ಲಿಲಿ,ಎಷ್ಟೋ ಜನ್ಮಗಳಿಂದ ನನ್ನ</br> ಅಂತರಾತ್ಮ ಹುಡುಕುತ್ತಿದ್ದ ವ್ಯಕ್ತಿ ನೀನೇ ಅಂತ ನಂಬಿದ್ದೆ. ನಿನ್ನ ಬಿಟ್ಟು ನನಗೆ ಜೀವನವೇ</br> ಇಲ್ಲಿ ಅಂತ ತಿಳಿದಿದ್ದೆ,'-ವಿನಯ ಕೆಂಪುಕಣ್ಣು ಮಾಡಿಕೂಂಡು ಹೇಳಿದ್ದ,'ನೀನು ನನ್ನ</br> ಹೃದಯ ಹೊಸಕಿ ಹಾಕಿದಿ. ನನ್ನ ಕನಸುಗಳನ್ನು ಮಣ್ಣು ಮುಕ್ಕಿಸಿದಿ.ನನ್ನ ಜೀವನಕ್ಕೆ</br> ಬೆಂಕಿ ಹಚ್ಚಿದಿ...'</br>
{{gap}}-ನಾನು ಸುಮ್ಮನೇ ಇದ್ದೆ. ವಿನಯ ಹೇಳುತ್ತಿದ್ದುದರಲ್ಲಿ ಸತ್ಯಾಂಶ</br> ಇತ್ತೇನೋ.ಎಷ್ಟು ಸಲ ಅವನು ನನ್ನ ಕಾಲ ಬಳಿ ಕೂತು ನನ್ನ ಪಾದಗಳನ್ನು</br> ಚುಂಬಿಸಿದ್ದುಂಟು.'ನೀನು ನನ್ನ ಸವಸ್ವ' ಅಂದಿದ್ದುಂಟು.ಕಾಲೇಜು ಬಿಟ್ಟೊಡನೆ</br><noinclude><references/></noinclude>
kpfozuyo0upkx9s3sxg10rfofihqrmh
ಪುಟ:ನಡೆದದ್ದೇ ದಾರಿ.pdf/೧೦೩
104
30965
318049
201956
2026-05-08T09:24:43Z
Shreelatha.Halemane
7642
/* Validated */
318049
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೯೬}}
{{gap}}"ವ್ಹಾ, ಹಿ೦ಗ ಪ್ಲ್ಯಾನ್ ಮಾಡತಾರೇನು ಯಾರರೆ ? ನಿನ್ನ ನೋಡಿದರ ದೆವ್ವ</br>
ಬಡದದೇನೋ ಅನಸ್ತದ. ಅರೆ, ಇದ್ಯಾವ ಚಿತ್ರ ? ಇದನ್ನ್ಯಾಕ ಹಿ೦ಗ ಮು೦ದ</br>
ಇಟಗೊ೦ಡು ಕೂತೀದಿ ? ನೋಡೋಣ ತಾ ಇಲ್ಲೆ.... ಅದ್ಭುತ! ಮಳೆಯೊಳಗ</br>
ತೋಯಿಸಿಗೋತ ಹೊರಟಾನಲ್ಲ ಈ ಚಿತ್ರದಾಗಿನ ಮನುಷ್ಯ, ಖರೇನs ಸಹನಾ,</br>
ಆಗದೀ ನ್ಯಾಚರಲ್ ಆಗೇದ. ಇದನ್ನ್ಯಾವಾಗ ತಗದಿ ?"</br>
{{gap}}"ಒ೦ದು ವರ್ಷ ಆತು."</br>
{{gap}}"ಖರೇ, ಭಾಳ ಛೆ೦ದ ಆಗೇದ. ಆದರ ಹಿ೦ಗ್ಯಾಕ ಮಳೆಯೊಳಗ ಹೊ೦ಟಾನ</br>
ಈತ? ಯಾರ ಚಿತ್ರ ಇದು?"</br>
{{gap}}"ಇದು", ನಕ್ಕು ಹೇಳಿದಳು ಸಹನಾ, "ನಿನ್ನ ಪ್ರಕಾರ ಹೇಳಬೇಕ೦ದರ ಒಬ್ಬ
ಹುಚ್ಚನ ಚಿತ್ರ."</br>
{{gap}}"ಅ೦ದರş? ತಿಳೀಲಿಲ್ಲ ನನಗ"</br>.
{{gap}}"ನೆಟ್ಟಗ ನೋಡು. ಅವನ ಕಣ್ಣೊಳಗ ಏನರೆ ಕಾಣಸ್ತದೇನು ನೋಡು."</br>
{{gap}}-ಸರೋಜ ಚಿತ್ರವನ್ನು ತಿರುಗಿಸಿ ತಿರುಗಿಸಿ ನೋಡುತ್ತಿದ್ದಾಗ ಮಜಾ ಅನಿಸಿತು.</br>ಯಾವುದೋ ಎತ್ತರದಿ೦ದೆ೦ಬ೦ತೆ ಅವಳನ್ನೆ ನೋಡುತ್ತ ಕೂತಳು ಸಹನಾ.</br>
{{gap}}"ನನಗೇನೂ ತಿಳೀವಲ್ಲದು.ಅದರ ಒಟ್ಟಿನ ಮ್ಯಾಲ ಭಾಳ ದುಃಖಿ ಇದ್ದಾನ.</br>
ಹಿ೦ದಿನದೇನೋ ನೆನಿಸಿಗೋತ ಹೊರಟಾನ ಅನಸ್ತದ, ಹೌದೇನು?</br>"
{{gap}}"ಕರೆಕ್ಟ್.ಅವನ ಸುದ್ದಿ ಎಲ್ಲಾ ಇನ್ನೂಮ್ಮೆ ಹೇಳತೀನಿ. ಈಗ ನನಗ ಚಿತ್ರಾ</br>
ತಗೀಬೇಕು ಅನಸಲಿಕ್ಹತ್ತೇದ. ನನಗ ತ್ರಾಸು ಕೊಡಬ್ಯಾಡ. ಹಾ, ಇನ್ನಮ್ಯಾಲ ದಿನಾ</br>ಸ೦ಜೀನ್ಯಾಗ ಒ೦ದು ತಾಸು ಅಷ್ಟṣ ನನ್ನ ಮಾತಾಡಸು. ನಾ ಇದನ್ನ ಹಗಲೂ ರಾತ್ರಿ</br>ಕೂತು ಮುಗಸ್ತೀನಿ."</br>
{{gap}}"ತಿಳೀತು. ನಾ ಇನ್ನ ಖಾಲಿ ಮಾತಾಡಿ ನಿನಗ ತ್ರಾಸು ಕೊಡುವುದಿಲ್ಲ.</br>
ಮಾರಾಯಳṣ ಆದರ ಒ೦ದು ಮಾತು: ನೀ ಇನ್ನೊ೦ದು ಚಿತ್ರಾ ತಗಿಯೋ ಬದಲು</br>
ಮಳೆಯೊಳಗ ತೊಯ್ಸಿಗೋತ ಹೊ೦ಟಾನಲಾ ಈ ಮನುಷ್ಯಾನ ಚಿತ್ರಾನೇ ಯಾಕ</br>
ಕಳಿಸಬಾರದೂ ಅ೦ತೀನಿ. ನಿನಗ ಖಾತ್ರಿ ಫರ್ಸ್ಟ್ ಪ್ರೈಜ್ ಸಿಗತದ ನೋಡು."</br>
{{gap}}"ಛೇ ಬ್ಯಾಡ, ಸರೋಜ. ಈ ಚಿತ್ರಾ ನಾ ತಗದು ಭಾಳ ದಿವಸಾತು.</br>
ಆಗಿನಿ೦ದಲೂ ನನ್ನ ಮನಸ್ಸಿಗೆ ಸಮಾಧಾನ ಇಲ್ಲ. ಈಗ ಇದನ್ನ ಅಲ್ಲಲ್ಲೆ ಟಚ್ ಮಾಡಿ</br> ಇದಕ್ಕೊ೦ದು ಹೊಸ ರೂಪ ಕೊಡಬೇಕೆ೦ತೀನಿ .ನನ್ನ ಮನಸ್ಸಿನ್ಯಾಗ ಈಗ ಕಲ್ಪನಾ</br>ಬ೦ಧಾಂಗನṣ ಇದಕ್ಕ ಪ್ರತ್ಯಕ್ಷ ರೂಪ ಕೊಡೋದು ಸಾಧ್ಯ ಆತ೦ದ್ರ ಇದು</br>ಈಗಿನಕಿ೦ತಾ ಛೆ೦ದ ಆಗತದ, ನೀನṣ ನೋಡೀಯ೦ತ."</br><noinclude><references/></noinclude>
0w6ssex63odgbzuks1uvbnp4njmtjzo
ಪುಟ:ನಡೆದದ್ದೇ ದಾರಿ.pdf/೩೬
104
30967
317972
250275
2026-05-08T03:57:51Z
Shreelatha.Halemane
7642
/* Validated */
317972
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮುಳ್ಳುಗಳು/ಅತಿಥಿ |right=೨೯}}
{{gap}}'ಛೆ, ಹಾ೦ಗೆಲ್ಲಾ ಅ೦ವಾ ಭಾಳ ವಿಶಾಲ ಮನಸ್ಸಿನವಾ ಇದ್ದಾನ.'<br>
{{gap}}-ನೂರು ಹುಡುಗಿಯರ ಸ್ನೇಹವಿದ್ದೂ, ಎಲ್ಲ ರೊ೦ದಿಗೂ ಅಷ್ಟೇ<br>
'ವಿಶ್ವಾಸ'ದಿ೦ದ ವತಿ೯ಸುವ ಈ ಜಾಜ್೯ ವಿಶಾಲ ಮನಸ್ಸಿನವನೇ ಹೌದು. ತಾನು<br>
ಸ್ಕೂಲ್ ಕಮಿಟಿ ಚೇರ್ಮನ್ರ ಕಾರಿನಲ್ಲಿ ಬ೦ದರೆ ತಪ್ಪಲ್ಲ. ಲೂಸಿ ಜಾಜ್೯ನ<br>
ಕಾರಿನಲ್ಲಿ ಬ೦ದರೆ? ಅದು?.... ಹಾಗೆ ನೋಡಿದರೆ ಈ ಹುಡುಗಿಯರದು ಬಹಳ<br>
ಸ೦ಕುಚಿತ ಬುದ್ದಿ. ಏನೆಲ್ಲ ವಿಚಾರಗಳು ಇವರಿಗೆ....<br>
{{gap}}'ಹ೦ಗಾರ ನಾಳೆ ದಾದೀಮಾ ಗೆಸ್ಟ್ ಆಗಿ ಹೋಗತಾಳ೦ತೇನು? ಹೋಗ್ಲಿ<br>
ಬಿಡು. ಬರೇ ದಿನಾ ಒ೦ದ ಕಡೆ ಹೋಗಿ ಗೆಸ್ಟ್ ಆಗಿ ಭಾಷಣಾ ಮಾಡಿ ಬರೂದರಾಗೇ<br>
ಈಕೀ ಜೀವನ ಕಳೀತು. ಒ೦ದ ಮನೀ ಇಲ್ಲ, ಮಾರಿಲ್ಲ, ಸುಡಗಾಡಸಿದ್ಧರ್ಹಾಂಗ ಗೆಸ್ಟ್<br> ಆಗಿ ತಿರಗೂದರಾಗs ಇರ್ತಾಳ.'<br>
{{gap}}-ಪ್ರೊ.ಲೀಲಾವತಿಯ ರಕ್ತ ಕುದಿಯಿತು. ಆದರೆ ಯಾಕೋ ಒಳಗೆ ಹೋಗಿ<br>
ಹುಡುಗಿಯರನ್ನು ಬೈಯುವ ಅವಳ ಸ೦ಕಲ್ಪ ತಕ್ಷಣವೆ ತಣ್ಣಗಾಯಿತು. ಒಮ್ಮೆಲೆ<br>
ಸೋತು ಹೋಗುತ್ತಿರುವ ಅನುಭವವಾಗಿ ಪ್ರಯತ್ನಪೂರ್ವಕವಾಗಿ ಆಕೆ ಮು೦ದೆ<br>
ನಡೆದಳು. ಜಯಲಕ್ಶ್ಮಿಯ ಕೊನೆಯ ಮಾತು ಆಕೆಗೆ ಕೇಳಿಸಿದ್ದು ತೀರಾ ಅಸ್ಟಷ್ಶವಾಗಿ:<br>
{{gap}}'ಲೂಸೀ, ನೀ ಇವತ್ತ ನನ್ನ ಜೋಡೀನೇ ಮಲಕೋತೀಯಾ ಪ್ಲೀಜ್? ನಿನ್ನಿನ<br>
ಹಾ೦ಗ ರಾತ್ರೀ ಕೆಟ್ಟ ಕನಸು ಬಿತ್ತ೦ದ್ರ ನನಗ ಅ೦ಜಿಕಿ ಬರತದ.'<br>
{{gap}}-ಧಡಧಡನೆ ಮೆಟ್ಟಲುಗಳನ್ನೇರಿ ತನ್ನ ರೂಮಿಗೆ ಬ೦ದಳು ಪ್ರೊ. ಲೀಲಾವತಿ.<br> ಇನ್ನೂ ಕೆಲವು ರೂಮುಗಳ ಕಡೆ ಹೋಗುವುದು ಉಳಿದೇಹೋಯಿತು. ಯಾಕೋ<br>ಎದೆಯಲ್ಲಿ ವಿನಾಕಾರಣ ನೋವು ಸುರುವಾಗಿದೆ.<br>
{{gap}}'ಹಾಟ್೯ ವೀಕ್ ಆಗಿದೆ, ಟ್ರೀಟ್ಮೆ೦ಟ್ ತಗೋಳ್ರಿ' ಎ೦ದಿದ್ದರು ಡಾಕ್ಟರು.<br>
{{gap}}'ನನ್ನ ತ೦ಗಿಗೆ ಹಾಟೇ೯ ಇಲ್ರೀ ಡಾಕ್ಟರ್, ವೀಕ್ ಆಗೋದೇನು ಬ೦ತು?'<br>
ಎ೦ದು ತನ್ನ ಅಣ್ಣ ಡಾಕ್ಟರರ ಎದುರಿಗೇ ಚೇಷ್ಟೆ ಮಾಡಿದ್ದ.<br>
{{gap}}ತಾನೊಬ್ಬ ಹೃದಯಹೀನ ಕಲ್ಲು ಮನಷ್ಯಳಾಗಿ ಕಾಣುತ್ತಿರುವೆನೇ ಜಗತ್ತಿನ<br>
ಕಣ್ಣಿಗೆ? 'ಲೀಲಾ, ನಿನಗೆ ಭಾವನೆಗಳಿಲ್ಲವೆ? ಹೃದಯವೇ ಇಲ್ಲವೇ? ಯಾಕೆ ಹೀಗೆ<br>
ಕಲ್ಲಾಗಿರುವಿ?' ಎ೦ದು ಹಿ೦ದೆ ಸದಾನ೦ದ ಹಲುಬಿದಾಗ ತನಗೇನೋ<br>
ಅಭಿಮಾನವೆನ್ನಿಸಿತ್ತಲ್ಲವೆ? ಅವನ ಬೇಡಿಕೆಯನ್ನು ತಿರಸ್ಕರಿಸುವಾಗ ಇದೇ ಅಭಿಮಾನ<br> ತನಗೆ ಪ್ರೇರಕವಾಗಿತ್ತೇ? .... ಆದರೆ ಈಗ? ಯಾವುದು ತನಗಿಲ್ಲವೆ೦ದು<br> ಬೇರೆಯವರೆ೦ದಾಗ ಹೆಮ್ಮೆಯೆನಿಸುತ್ತಿತ್ತೋ ಅದು ನಿಜವಾಗಿಯೂ<br> ತನಗಿರಲಿಲ್ಲವೇ? ಇದ್ದರೂ ಅದರ ಯಾವ ಚಟುವಟಿಕೆಗಳಿಗೂ ಆಸ್ಪದ ಸಿಗದ೦ತೆ<noinclude><references/></noinclude>
bxbfz3o6ymib7vonkbloskxnn8w4lff
ಪುಟ:ನಡೆದದ್ದೇ ದಾರಿ.pdf/೭೨
104
30970
317988
84412
2026-05-08T05:05:21Z
Vikashegde
1258
/* Validated */
317988
proofread-page
text/x-wiki
<noinclude><pagequality level="4" user="Vikashegde" />{{rh|center=|left=ಮುಳ್ಳುಗಳು / ನೀನೇ ತಂತಿ|right=೬೫}}</noinclude>ರಾತ್ರಿಗಳಲ್ಲಿ ನಾವಿಬ್ಬರೂ ಕೂಡುತ್ತಿದ್ದ ಆ ಮಾವಿನ ಮರದ ಕೆಳಗಿನ ಹುಲ್ಲುಹಾಸಿಗೆ -ಎಂದೆಲ್ಲ ವಿಚಾರ ಬರುವುದು. ಆದರೆ ಅಷ್ಟರಲ್ಲೇ-
{{gap}}-ಅಷ್ಟರಲ್ಲೇ ಕೇಳಿಸುವದು, 'ಹರಿ ಹರಿ', ಹರೀಶನ ಗಿಳಿಯ ಹಳೇ ಹಾಡು. ಅದರೊಂದಿಗೆ ಹಳೆಯ ತಂತಿ ಕಡಿದು ಬೀಳುತ್ತದೆ. ಮತ್ತೆ ತನ್ನ ಸುತ್ತಲಿನ ಎತ್ತರ ಗೋಡೆಗಳ, ಮುಚ್ಚಿದ ಬಾಗಿಲಿನ ಅರಿವಾಗುತ್ತದೆ. 'ಎಚ್ಚರ'ವಾಗುತ್ತದೆ.
{{gap}}ಅಂದಮೇಲೆ ತನ್ನದು ಪ್ಲೇಟೋನಿಕ್ ಪ್ರೇಮ ಅಲ್ಲವೆಂದಾಯಿತು. ಇದು ಪ್ರೀತಿ-ಪ್ರೀತಿ ಅನ್ನುತ್ತಾರಲ್ಲ, ಅಂಥ ಭಾವನೆ; ನೇರವಾದ, ಮತ್ತ್ಯಾರಾದರೂ ಕೇಳಿದರೆ ನೈತಿಕ ಆಘಾತವಾಗುವಂತಹ, ಸೀದಾ-ಸರಳ ಭಾವನೆ. ತಾನಿದನ್ನು ನೀಡುವೆನೆಂದರೆ ಸಾಕು, ನೂರು ಕೈಚಾಚಿ ಅದನ್ನು ಬಳಿದುಕೊಂಡು ಎದೆಯಲ್ಲಿ ಬಚ್ಚಿಡುವ ಆಸೆ ಅವನಿಗೆ. ತನಗೆ ತಿಳಿಯದು ಎಂದುಕೊಂಡಿದ್ದಾನೇನೊ ! ಆದರೆ ಅವನದು ಬರಿಯ ಆಸೆ, ನಿಃಶಬ್ದವಾದ ಆಸೆ, ಮಳೆ ಹನಿಯಂತೆ ಬಿದ್ದಲ್ಲೇ ಸದ್ದಿಲ್ಲದೆ ಇಂಗಿ ಹೋಗುವ ಆಸೆ. ಅವನದನ್ನು ಎಂದಿಗೂ ಕೃತಿಯಲ್ಲಿಳಿಸಲಾರ.
{{gap}}ಯಾಕೆ ?
{{gap}}ಮತ್ತೆ ಈ 'ಸರಿ'-'ತಪ್ಪು'ಗಳ ಪ್ರಶ್ನೆ. ಅವನ ಸುತ್ತ ಅವನೇ-ಬೇಕಾಗಿಯೋ ಬೇಡವಾಗಿಯೇ ನಿರ್ವಾಹವಿಲ್ಲದೆಯೋ-ನಿರ್ಮಿಸಿಕೊಂಡ ಕಲ್ಲಿನ ಕೋಟೆಯಲ್ಲಿ ಅವನು ಬಂದಿ. ಅವನದರ ಅಧಿಪತಿಯಾದರೂ ಅವನಲ್ಲಿ ಬಂದಿ. ಈ ಕೋಟೆಯ ಬಲಿಷ್ಠವಾದ, ಎತ್ತರವಾದ ಗೋಡೆಯ ಮೇಲೆ ನಿಂತು ತನ್ನ ಕಡೆ ಒಂದು ಥರಾ ದೃಷ್ಟಿಯಿಂದ ಆತ ನೋಡುತ್ತಿದ್ದ. ಆಗ ಎಷ್ಟೋ ಸಲ ತನಗನಿಸುತ್ತಿತ್ತು- ಅಲ್ಲಿಂದ ಕೆಳಗೆ ಧುಮುಕುವುದು, ಪಾರಾಗುವುದು ಸಾಧ್ಯವಿದೆಯೋ ಇಲ್ಲವೋ ಎಂದು ಅವನು ವಿಚಾರಿಸುತ್ತಿರಬಹುದೇ ಎಂದು. ಹಾಗೆ ಧುಮುಕಿದರೆ ಒಳಗಿನ ಅವನ ಪ್ರಜೆಗಳ ಗತಿ ಏನಾಗಬೇಡ! ಅಷ್ಟಲ್ಲದೆ ಬಿದ್ದು ಅವನೇ ಕಾಲು ಮುರಿದುಕೊಂಡರೆ ಅವನ ಗತಿ? ಅವನನ್ನೆಬ್ಬಿಸಿ ತಾನು ನಡೆಸುವೆನೋ ಇಲ್ಲವೋ ಅದೂ ಸಂಶಯ ಅವನಿಗೆ. ಅಂಥ ಸಂದಿಗ್ಧ ಸಂದರ್ಭದಲ್ಲಿ ಇಲ್ಲದ ಹುಚ್ಚುತನ ಮಾಡಿ ದುಡುಕುವ ಬುದ್ಧಿ ಅವನದಲ್ಲ. ಆಗೊಮ್ಮೆ-ಈಗೊಮ್ಮೆ ಕೋಟೆಯ ಹೆಬ್ಬಾಗಿಲು ತೆರೆದು, ಒಳಗೇ ನಿಂತು, ಹೊರಗೆ ಹಣಿಕಿ ಹಾಕಿ ತನ್ನ ಕ್ಷೇಮ ಸಮಾಚಾರ ವಿಚಾರಿಸುವಷ್ಟರಲ್ಲೇ ತೃಪ್ತಿ ಅವನಿಗೆ. ಈ ಬಾಗಿಲಾದರೂ ಎಷ್ಟು ಹಳೆಯದೋ ! ತೆರೆದರೆ ಕಿರ್ರ್ ಎಂದು ಹೃದಯ ಸೀಳುವ ಸಪ್ಪಳ ಮಾಡುತ್ತಿತ್ತು. ಎಲ್ಲಿ ಉಳಿದವರೆಲ್ಲರ ಲಕ್ಷ ಇತ್ತ ಕಡೆ ಹರಿಯುವುದೋ ಎಂದು ಗಾಬರಿಯಾಗಿ. ತುಂಬಿದ ಸಂತೆಯ ಮಧ್ಯೆ ತೊಟ್ಟ ಬಟ್ಟೆ ಕಳಚಿ ಬಿದ್ದಂತೆ ಪೆಚ್ಚುಪೆಚ್ಚಾಗಿ, ಯಾವಾಗ ಈ ಬಾಗಿಲನ್ನು ಮುಚ್ಚಿ ಮತ್ತೆ ಒಳಗಿನ ಉಸಿರುಗಟ್ಟಿಸುವ{{nop}}<noinclude></noinclude>
emqmxrpssyugew44yex16ddgwaelpuz
ಪುಟ:ನಡೆದದ್ದೇ ದಾರಿ.pdf/೬೯
104
30972
317983
274774
2026-05-08T04:13:42Z
Shreelatha.Halemane
7642
/* Validated */
317983
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೬೨}}
ಆ ಹಾಡು ಹಾಡುತ್ತಿರುವಾಗ, ಆ ಹಾಡಿನ ಭಾವವನ್ನು ತನ್ನ ಕಣ್ಣಿನ ಬೆಳಕಿನಲ್ಲಿ ಹುಡುಕಬಯಸುವಷ್ಟು ಹುಚ್ಚು ಕಲ್ಪನಾಜೀವಿ ಹರೀಶ. ಎಷ್ಟೋ ಸಲ ತಾನು ಆ</br> ಹಾಡು ಹಾಡಿ ಮುಗಿಸಿ ಸುಂದಾಗಿ ಕೂತಾಗ ತನ್ನ ಕಡೆ ಬೆನ್ನು ಮಾಡಿ ನಿಂತು, ದೂರ</br> ಎಲ್ಲೋ ನೋಡುತ್ತ, ನೊಂದ ದನಿಯಲ್ಲಿ ತನಗೆ ಹೇಳಿರಲಿಲ್ಲವೆ ಆತ ? - “ಸರಯೂ,</br> ನಿನ್ನ ಈ ಹಾಡು ಕೇಳಿದಾಗೆಲ್ಲಾ ನನಗೆ ಒಂದು ಥರಾ ಅಸಮಾಧಾನ ಅನಸ್ತದ, ಸ್ಪಷ್ಟ</br> ಮಾತಾಡತೀನಿ ಅಂತ ಕೆಟ್ಟನಿಸಿಗೋ ಬ್ಯಾಡ. 'ನಾನೇ ವೀಣೆ ನೀನೇ ತಂತಿ' ಅಂತ ನೀ</br> ಹಾಡತೀಯಲಾ, ಆವಾಗ ನಾನs ತಂತಿ ಅಂತ ನಂಬಬೇಕು ಅನಸ್ತದ ನನಗ. ಆದರ</br> ನಿನ್ನ ನೋಡಿದರ "ನೀನೇ ತಂತಿ' ಅಂತ ನೀನು ಬ್ಯಾರೆ ಯಾರಿಗೋ</br> ಹೇಳಲಿಕ್ಹತೀಯೇನೋ ಅಂತನಸ್ತದ. ಹೀಂಗ್ಯಾಕ ಆಗತದನಬೇಕು ?"</br>
{{gap}}“ನೀ ಹೀಂಗೆಲ್ಲಾ ವಿಚಾರ ಮಾಡಿದರ ನಾ ಏನು ಹೇಳಿ ಹರೀಶ ? ನನ್ನ</br> ಸಲುವಾಗಿ ನಿನಗ ಏನೇನರs ಅನಿಸಿದರೆ ಅದೂ ನಂದೇ ತಪ್ಪೇನು ?"</br>
{{gap}}'ಛೇ, ತಪ್ಪಲ್ಲ ಸರೂ, ಆದರ ನನಗ್ಯಾಕೋ ಈ ನಿನ್ನ ಹಾಡು ಕೇಳಿದಾಗೆಲ್ಲ</br> ಈ ಸಮಸ್ಯಾ ಬರತದ ನೋಡು."</br>
{{gap}}“ಬಿಡು, ನಾ ಇನ್ನಮ್ಯಾಲ ಹಾಡೋದೇ ಇಲ್ಲ."</br>
{{gap}}“ನೀ ಅದನ್ನ ಬಾಯಿಬಿಟ್ಟು ಹಾಡದಿದ್ರೇನಾತು, ನನಗ ನಾನು ತಂತಿ ಅಂತ</br> ವಿಶ್ವಾಸ ಹುಟ್ರೋತನಕಾ ಈ ಸಮಸ್ಯಾ -ಒಗಟು ಬಗೀಹರಿಯೂದಿಲ್ಲ."</br>
{{gap}}“ನೀ ಬರಬರತ ಭಾಳs ಸೆಂಟಿಮೆಂಟಲ್ ಆಗಲಿಕ್ಹತ್ತೀ ಹರೀಶ, ಸ್ವಲ್ಪ</br> ಭೂಮಿಗೆ ಇಳದ ಬಾ ಇನ್ನ."</br>
{{gap}}-ಯಾಕೋ ಈ ವಿಷಯವನ್ನು ಮುಂದುವರೆಸುವುದು ಅವಳಿಗೆ</br> ಇಷ್ಟವಿಲ್ಲ. ಈ 'ತಂತಿ'- 'ವಿಶ್ವಾಸ'-'ಸಮಸ್ಯೆಗಳು' ಅವಳನ್ನು ವಾಸ್ತವಿಕತೆಯಿಂದ</br> ದೂರ ಎಳೆದೊಯ್ದು ಆ ಹಿಂದಿನ ಕನಸಿನ ಲೋಕದಲ್ಲಿ ಬೀಸಾಡುತ್ತವೆ. ಪ್ರಯತ್ನ</br>ಪಟ್ಟು ಮರೆಯತೊಡಗಿರುವ ಆ ಹಳೆಯ ದಿನಗಳಿಂದ ಸಾಧ್ಯವಾದಷ್ಟು ದೂರ</br> ದೂರವಾಗಬೇಕೆಂದು ಅವಳಿಗೆ ಆಸೆ. ಹಳೆಯದರಿಂದ ದೂರ.... ಹೊಸದಕ್ಕೆ ಸಮೀಪ....</br>
{{gap}}-ನೀನೇ ತಂತಿಯೆಂಬ ನಂಬಿಗೆಯನ್ನು ಹರೀಶನಲ್ಲಿ ಹುಟ್ಟಿಸುವುದು ಹೇಗೆ ?</br> ಅದಕ್ಕೆ ಮೊದಲು ತಾನು ಹಾಗೆ ನಂಬಬೇಕು, ಹರೀಶನೇ ತಂತಿ ಎಂದು ತನ್ನ ವೀಣೆಯ</br> ಗಾನಕ್ಕೆ ಆತನೇ ಸ್ವರ ಎಂದು ; ಆತ ಬರಿ ಕುಂಬಳಕಾಯಿ ಅಲ್ಲವೆಂದು ;</br>
{{gap}}ಮದುವೆಯಾದ ಹೊಸದರಲ್ಲಿ ಹಾಗೆ ನಂಬಲು ತಾನು ಪ್ರಾಮಾಣಿಕವಾಗಿ</br> ಪ್ರಯತ್ನ ಮಾಡಿದ್ದಳು. ಆ ಪ್ರಯತ್ನದಲ್ಲಿ ಯಶಸ್ಸು ದೊರೆಯತೊಡಗಿದೆಯೆಂದೂ</br> ಅನಿಸಿತ್ತು. ಆದರೆ ಅದೆಲ್ಲ ಭ್ರಮೆಯೆಂಬ ತೀವ್ರ ಅರಿವು ಇತ್ತೀಚೆ ಉಂಟಾಗತೊಡಗಿದೆ.</br><noinclude><references/></noinclude>
6wgzj2q7gph6gf2yxrjqy6mbpiu5uas
ಪುಟ:ನಡೆದದ್ದೇ ದಾರಿ.pdf/೩೦೧
104
30975
317989
250662
2026-05-08T05:09:24Z
Pragathi. BH
7585
/* Validated */
317989
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೨೯೪|right=ನಡೆದದ್ದೇ ದಾರಿ}}
ತತ್ವಗಳಿಗೆ ಬದ್ದಳಾಗಿ ದುಡೀತಾ ಇದ್ದದ್ದು ಮ್ಯಾಲಿನವ್ರಿಗೆಲ್ಲಾ ಗೊತ್ತದ. ನೀವು
ಹೊಸದಾಗಿ ಬಂದೀರಿ.ನಿಮಗ ಇಲ್ಲಿಯ ಪರಿಸ್ಥಿತಿಯ ಖರೇ ಪರಿಚಯ ಮಾಡಿ
ಕೊಡೂದು ನನ್ನ ಕರ್ತವ್ಯ.ಅದಕ್ಕಽ ನಿಮಗೆ ಆ ಬಗ್ಗೆ ನಾಲ್ಕು ಮಾತು ಹೇಳೋಣಂತ
ಬಂದೆ.ಅಧಿಕಾರಿಗೆ ಮೊದಲೇ ಎಲ್ಲಾ ಕ್ಲಿಯರ್ ಪಿಕ್ಚರ್ ಕೊಡೋದು ಅಸಿಸ್ಟೆಂಟ್ನ
ಧರ್ಮ. ಈ ತತ್ವವನ್ನ ಪಾಲಿಸ್ಲಿಕ್ಕೇಂತ ನಾ ಬಂದೀನಿ ಹೊರತಾಗಿ ಬ್ಯಾರೆ ಉದ್ದೇಶ
ನನಗಿಲ್ಲ."
{{gap}}ಆಕೆಯ ಆಸ್ಖಲಿತ ಮಾತುಗಳ ಪರಿಣಾಮ ಆಗಲೇ ಹೊಸ ಅಧಿಕಾರಿಯ ಮೇಲೆ
ಆಗತೊಡಗಿತ್ತು.'ತತ್ವಗಳಿಗೆ ಬದ್ದ'ರಾಗಿಯೇ ಕೆಲಸ ಮಾಡುವ ಉದ್ದೇಶದಿಂದ ಅಲ್ಲಿಗೆ
ಬಂದಿದ್ದ ಆತನಿಗೆ 'ತತ್ವ'ಗಳ ಬಗ್ಗೆ ಮಾತಾಡುವ ಈ ಮಹಿಳೆಯ ಬಗ್ಗೆ ಗೌರವ
ಮೂಡತೊಡಗಿತ್ತು.ಸ್ವಭಾವತಃ ತುಸು ರಸಿಕರೂ ಆಗಿದ್ದ ಆತನಿಗೆ
ಸುಂದರಿಯಲ್ಲದಿದ್ದರೂ ವೈಯಾರಿಯಾಗಿ ಕಾಣುತ್ತಿದ್ದ ಈಕೆಯನ್ನು ತುಸು ಹೊತ್ತು
ಕೂಡ್ರಿಸಿಕೊಂಡು ಈಕೆ ಹೇಳುವುದನ್ನು ಕೇಳುವುದರಲ್ಲಿ ತಪ್ಪೇನಿಲ್ಲ ಅನ್ನಿಸಿತು. ಆತ
ಮಾತಾಡದಿದ್ದರೂ ಜಾಣೆಯಾಗಿದ್ದ ತಾರಾ ಅತನ ಅನಿಸಿಕೆಯನ್ನು
ಅರ್ಥಮಾಡಿಕೂಂಡು ಇನ್ನಷ್ಟು ಮಾತಾಡಿದಳು:"ಸರ್.ಇತ್ತಿತ್ಲಾಗ ೩-೪ ವರ್ಷ
ಅಫೀಸಿನ ಮ್ಯಾನೇಜಮೆಂಟು ಪೂರಾ ಕೆಟ್ಟು ಹೋಗೇದ,ನಿಮ್ಮ ಹಿಂದಿನ ನಿರ್ದೇಶಕರಿಗೆ
ಸಿನ್ಸಿಯರ್ ವರ್ಕರ್ಸನ್ನು ಎನ್ಕರೇಜ್ ಮಾಡೋ ಬುಧ್ದೀನೇ ಇರಲಿಲ್ಲ. ಹಿಂಗಾಗಿ
ನನ್ನಂಥವರು ಭಾಳ ಕಷ್ಟ ಅನುಭವಿಸಿದಿವಿ. ನಾನಂತೂ ಯಾವಾಗಲೂ ತತ್ವನಿಷ್ಠಳಾಗಿ
ಕೆಲಸ ಮಾಡುವಾಕಿ.ಪ್ರತಿಯೊಂದೂ ರೂಲ್ಸ್ ಪ್ರಕಾರೇ ಆಗಬೇಕು ಅನ್ನುವಾಕಿ
ಡಿಪಾರ್ಟ್ಮೆಂಟಿನ ಕಲ್ಯಾಣವೇ ನನ್ನ ಕಲ್ಯಾಣ ಅಂದುಕೊಂಡಾಕಿ.ಅಫೀಸೇ ನನ್ನ ಮನೆ
ಅಂತ ತಿಳದು ಕೆಲಸಾ ಮಾಡುವಾಕಿ ಹಿಂಗಾಗಿ ಉಳಿದ ಅಸಿಸ್ಟೆಂಟ್ ಡೈರೆಕ್ಟರ್ಸು,
ಕ್ಲಾರ್ಕುಗಳು-ಎಲ್ಲಾರಿಗೂ ನಾ ಬ್ಯಾಡಾದೆ ನನ್ನ ಯವ ಯೋಜನೆಗೂ ಪ್ರೋತ್ಸಾಹ
ಸಿಗ್ಲಿಲ್ಲ.ಯಾಕಂದರೆ ಉಳಿದವ್ರೆಲ್ಲಾ ಹೆಚ್ಚಾಗಿ ಸೋಮಾರಿಗಳು, ದಡ್ಡರು,
ಭ್ರಷ್ಟಾಚಾರಿಗಳು, ಸ್ವಾರ್ಥಿಗಳು. ಇದು ನಿಮಗೂ ಲಗೂನೇ ಗೊತ್ತಾಗ್ತದ,
ಯಾಕಂದರ ನೀವು ಭಾಳ ಕೀನ್ ಅಬ್ಜರ್ವರ್ ಇದ್ದೀರಿ.ನಾ ಒಬ್ಬಾಕೀನೇ ತತ್ವ-ತತ್ವ
ಅಂತ ಬಡಿದಾಡಿ ಸುಸ್ತಾದೆ,ಸೋತೆ,ನಿರಾಶ ಅದೆ,"ಬಹಳ ನಾಟಕೀಯವಾಗಿ ಆದರೆ
ಪರಿಣಾಮಕಾರಿಯಾಗಿ ಧ್ವನಿಯಲ್ಲಿ ನೋವು ಹಾಗೂ ಪ್ರಾಮಾಣಿಕ ಅಸಹಾಯಕತೆ
ವ್ಯಕ್ತಪಡಿಸುತ್ತ ಅಕೆ ಅಂದಳು."ಅಂಥಾ ಹೊತ್ತಿನ್ಯಾಗ ನೀವು ಬಂದೀರಿ. ನನಗ ಹೊಸಾ
ಬೆಳಕು ಕಾಣಿಸಿಧಾಂಗ ಅನಿಸ್ಲಿಕ್ಹತ್ತೇದ.ಈ ಡಿಪಾರ್ಟ್ಮೆಂಟಿನ ಉನ್ನತಿಯ ಸಲುವಾಗಿ
ನಾನು ಹಾಕಿಕೊಂಡಿರೋ ಪ್ಲ್ಯಾನುಗಳೆಲ್ಲಾ ಇನ್ನಾದರೂ ನಿಮ್ಮ ಸಹಾಯದಿಂದ<noinclude><references/></noinclude>
5gom60rbr0gth3vgjywt4e58c4k9dif
ಪುಟ:ನಡೆದದ್ದೇ ದಾರಿ.pdf/೪೨
104
30983
317978
83487
2026-05-08T04:07:26Z
Shreelatha.Halemane
7642
/* Validated */
317978
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮುಳ್ಳುಗಳು / ಅತಿಥಿ |right=೩೫}}
ಆಗೊಮ್ಮೆ ಈಗೊಮ್ಮೆ ಬಾಥರೂಮಿನಲ್ಲಿ ನಳ ತಿರುಗಿಸಿದ.ಲ್ಯಾವೆಟ್ರಿಯ ಬಾಗಿಲು
ಹಾಕಿದ, ಪಿಸುಧ್ವನಿಯಲ್ಲಿ ಯಾರು ಯಾರಿಗೋ ' ಸ್ವೀಟ್ ಡ್ರೀಮ್ಸ್ ' ಹೇಳಿದ
ಒಂದೆರಡು ಸಪ್ಪಳ - ಧ್ವನಿ ಬಿಟ್ಟರೆ ಬೇರೇನೂ ಕೇಳಿ ಬರುತ್ತಿಲ್ಲ. ಸತ್ತಲೂ ಕತ್ತಲು,
ನೀರವತೆ.
{{gap}}-ತನಗೆ ಯಾರು ' ಸ್ವೀಟ್ ಡ್ರೀಮ್ಸ್ ' ಹೇಳಬೇಕು ? ತನಗೆ ಕನಸೇ
ಬೀಳುವುದಿಲ್ಲವೆಂದು, ಗಾಢ ನಿದ್ರೆ ಬರುವುದೆಂದು, ರಾತ್ರಿ ಎಂದೂ
ಅಂಜಿಕೆಯಾಗುವುದಿಲ್ಲವೆಂದು ಎಷ್ಟೋ ಸಲ ಹುಡುಗಿಯರೆದುರಿಗೆ
ಕೊಚ್ಚಿಕೊಂಡದ್ದುಂಟು.ಎಷ್ಟ ಮಟ್ಟಿಗೆ ಪ್ರಾಮಾಣಿಕ ಈ ಜಂಭ ? ತನಗೂ
ಒಮ್ಮೊಮ್ಮೆ ಕನಸು ಬೀಳುತ್ತವೆ - ತಮ್ಮ ತಮ್ಮ ಗೆಳೆಯರ ಜೊತೆ ತಿರುಗಾಡಲು ಹೊರಟು ಹಾಸ್ಟೆಲಿನ ಹುಡುಗಿಯರು ಬರುತ್ತಾರೆ ಕನಸಿನಲ್ಲಿ ; ಊರ್ಮಿಲಾ, ಅವಳ ಸಹೋದ್ಯೋಗಿಗಳು, ಜಯಲಕ್ಪ್ಮಿಯನ್ನು ಹಾಸ್ಟೆಲಿಗೆ ಬಿಟ್ಟುಹೋಗಲು ಬಂದಿದ್ದ
ಅವಳ ಗಂಡ, ಲೂಸಿಯ ಜಾರ್ಜ, ಕಾಲೇಜಿನ ಪ್ರಿನ್ಸಿಪಾಲರು, ಹುಡುಗಿಯರ ಸ್ಕೂಲಿನ
ಕಮೀಟಿ ಚೇರ್ ಮನ್ ಅವನ ಕಾರುಸಹಿತವಾಗಿ - ಈ ಎಲ್ಲರೂ ಬರುತ್ತಾರೆ ;
ಕನಸಿನಲ್ಲಿ ದೆವ್ವಗಳಂತೆ ನರ್ತಿಸುತ್ತಾರೆ ; ಪ್ರಯತ್ನ ಮಾಡಿ ಎಲ್ಲರನ್ನೂ ಹೊರಗೆ
ಹಾಕಿ ನಿದ್ರೆ ಬರಿಸಿಕೊಳ್ಳಬೇಕಾಗುತ್ತದೆ. ಹಾಗೆ ನಿದ್ರೆ ಬರಿಸಿಕೊಂಡಾಗ, ಇನ್ನೇನು
ಗಾಢನಿದ್ರೆಯಲ್ಲಿ ಮುಳುಗಿರುವೆನೆಂದು ನಂಬಿದಾಗ,ಅರ್ಧ ಕನಸು - ಅರ್ಧ ಎಚ್ಚರ...
ದೂರದಲ್ಲೆಲ್ಲೋ ಅಸ್ಟಷ್ಟವಾಗಿ, ಮುಸಕು-ಮಸುಕಾಗಿ ತೇಲಿ ಬರುವದು ಒಂದು
ಮುಖ. ಬರಬರುತ್ತಾ ಆ ಮುಖ ಮಾಯವಾಗಿ ಉಳಿಯುವವು ಬರೇ ಎರಡು
ಕಣ್ಣುಗಳು.ಶಾಂತವಾದ, ಅದರೆ ಉದ್ವಿಗ್ನವಾದ - ಛೇ,ಅಲ್ಲಿ ಈಗ ಹಳೆಯ
ಉದ್ವಿಗ್ನತೆಯಿಲ್ಲ, ಎಂಥದೋ ಸಮಾಧಾನ, ತೃಪ್ತಿ ಇದೆ - ಕಣ್ಣುಗಳು....ತನ್ನನ್ನು
ನೋಡಿ ನಗುತ್ತಿರುವಂತೆ, ಆಣ್ಕಿಸುವಂತೆ ಭಾಸ....
{{gap}}- ಕತ್ತಲಲ್ಲಿ ಅಂಜಿ ಚೀರುವಂತಾಯಿತು ಪ್ರೊ. ಲೀಲಾವತಿಗೆ....ಎದ್ದು ಆಕೆ
ರೂಮಿನ ಕಿಡಿಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ ಬೋಲ್ಟ್ ಹಾಕಿದಳು.
{{gap}}'ಲೂಸಿ, ಪ್ಲೀಜ್ ಇವತ್ತ ನನ್ನ ಜೋಡೀ ಮಲಕೊ ' ಎಂದು ಜಯಲಕ್ಪ್ಮಿ
ಕೇಳಿಕೊಂಡದ್ದು ನೆನಪಾಯಿತು.ರಾತ್ರಿ ಬೀಳಬಹುದಾದ ಕೆಟ್ಟ ಕನಸಿನ ಆಂಜಿಕಿಯಿಂದ
ದೂರವಿರಲು ಅವಳಿಗೆ ಲೂಸಿಯ ಜೊತೆ ಬೇಕಂತೆ.ಗಂಡನನ್ನು ಫಾರೆನ್ನಿಗೆ
ಕಳಿಸಿದಾಗಿನಿಂದ ಇವಳ ಈ ಭಯಪ್ರದರ್ಶನ, ನಟನೆ ಹೆಚ್ಚಾಗಿದೆ. ಎಂಥ ಮಳ್ಳ,
ಅಂಜುಬುರುಕ ಹುಡುಗಿಯರು ! ಇವರಿಗೆ ಸದಾ ಒಬ್ಬನ ಆಸರೆ ಬೇಕು, ಸಹಾಯ ಬೇಕು,ಸ್ವತಃದ ದುರ್ಬಲತೆಯಲ್ಲಿ, ಅದನ್ನು ಜಗತ್ತಿನೆದುರಿಗೆ ಬಿಚ್ಚಿಡುವುದರಲ್ಲಿ, ಅದೆಂಥ<noinclude><references/></noinclude>
o0mbwj0xui2vb2h339xtc8h6qs8m5rp
ಪುಟ:ನಡೆದದ್ದೇ ದಾರಿ.pdf/೩೦೨
104
30988
317990
250696
2026-05-08T05:11:43Z
Pragathi. BH
7585
/* Validated */
317990
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=ಬಿಡುಗಡೆ/ತಾರಾ ಮ್ಯಾಡಮ್ ಮತ್ತು ತತ್ವಗಳು|right=೨೯೫}}
ಕಾರ್ಯರೂಪಕ್ಕೆ ಬಂದಾವು ಅನಸ್ತದ. ನಿಮ್ಮ ಗಾಯಡನ್ಸ್ ದೊಳಗ ನನ್ನ ತತ್ವನಿಷ್ಠ
ಸರ್ವ್ಹಿಸ್ ಗೆ ರೆಕಗ್ನಿಷನ್ ಸಿಕ್ಕು ನಾನು ಇನ್ನೂ ಹೆಚ್ಚು ಕೆಲಸಾ ಮಾಡಬಹುದು, ನಮ್ಮ
ಸೆಕ್ಶನ್ನು ಇಡೀ ರಾಜ್ಯದೊಳಗೇ ಅತ್ಯುತ್ತಮ ಸೆಕ್ಶನ್ ಅಂತ ಮನ್ನಣೆ ಪಡೀಬಹುದು,
ಅನಸ್ತದ" -ಅಷ್ಟಂದು ದಣಿವಾರಿಸಿಕೊಳ್ಳಲೆಂಬಂತೆ ಆಕೆ ಸುಮ್ಮನಾದಳು. <br>
{{gap}}ಆತ ಆಶ್ವಾಸನೆಯ ದನಿಯಲ್ಲಿ ಎರಡು ಮಾತು ಹೇಳಿದರು, "ಇಲ್ಲಿಯ ಆಡಳಿತ
ಹದಗೆಟ್ಟು ಹೋಗಿದ್ದು ಅದನ್ನ ಸರಿಪಡಿಸಲಿಕ್ಕೆ ಅಂತಲೇ ಮೇಲಧಿಕಾರಿಗಳು ನನ್ನನ್ನು
ಇಲ್ಲಿ ಕಳಿಸಿದ್ದು. ಇದು ಸಮಾಜ ಕಲ್ಯಾಣ ಇಲಾಖೆ. ಮಹಿಳೆಯರಿಗೆ-ಮಕ್ಕಳಿಗೆ
ಸಂಬಂಧಿಸಿದ ಹಾಗೆ ಅನೇಕ ಯೋಜನೆಗಳನ್ನು ನಾವು ಯಶಸ್ವಿಯಾಗಿ ಪೂರೈಸಬೇಕು.
ನಿಮಗೆ ಈ ಲೈನಿನೊಳಗೆ ಅನುಭವ ಇದೆ. ತತ್ವಗಳ ಬಗ್ಗೆ ನೀವು ಹೇಳಿದ್ದು ನನಗೆ
ಮೆಚ್ಚಿಕೆಯಾಗಿದೆ. ನಾನು ನಿಮಗೆ ಪೂರಾ ಸ್ವಾತಂತ್ರ್ಯ ಕೊಡುವೆ. ಸಿನ್ಸಿಯರ್ಲೀ ಕೆಲಸ
ಮಾಡ್ರಿ. ಪ್ರಗತಿ ಸಾಧಿಸಿ ತೋರಿಸಿರಿ. ಎಲ್ಲಾ ಸಹಾಯ ನೀಡುವೆ. ನಿಮ್ಮಂಥ ತತ್ವನಿಷ್ಠ
ಮಹಿಳೆಯರೇ ಈ ಇಲಾಖೆಗೆ ಬೇಕು. ಕೆಟ್ಟು ಹೋದದ್ದನ್ನು ಸರಿಪಡಿಸಲು ಏನೇನು
ಬೇಕೋ ಎಲ್ಲ ಮಾಡ್ರಿ. ನಿಮ್ಮ ಹಿಂದೆ ನಾನಿದ್ದೇನೆ." <br>
{{gap}}"ಥ್ಯಾಂಕ್ಯೂ ಸರ್, ಥ್ಯಾಂಕ್ಯೂ" -ತಾರಾಳ ದನಿಯಲ್ಲಿ ಕೃತಜ್ಞತೆಯ
ಭಾವವಿತ್ತು<br />.
{{gap}}ಬಾಸ್ನ ಚೇಂಬರಿನಿಂದ ಅರ್ಧ ಗಂಟೆಯ ನಂತರ ಹೊರಬಿದ್ದಾಗ ಆಕೆ ಇನ್ನೂ
ಐದು ವರ್ಷ ಚಿಕ್ಕವಳಾದಂತೆ ಬಳುಕುತ್ತ ನಡೆಯತೊಡಗಿದಳು. ಬಾಸ್ನ
ಬೆಂಬಲವಿರುವಾಗ ಇನ್ಯಾರ ಹೆದರಿಕೆ? ತನ್ನ ತತ್ವನಿಷ್ಠೆ ಕಾರ್ಯಾಚರಣೆಯನ್ನು
ಪ್ರಾರಂಭಿಸಿಯೇ ಬಿಡೋಣವೆಂದುಕೊಳ್ಳುತ್ತ ಹುರುಪಿನಿಂದ ಆಕೆ ದೃಢ ಹೆಜ್ಜೆ
ಹಾಕಿದಳು. ಮೂಲೆಯ ಟೇಬಲಿನಿಂದ ಬಂದ 'ಅಂತೂ ತಾರಾ ಮ್ಯಾಡಮ್ ಹೊಸ
ಮಿಕವನ್ನ ಬಲೆಗೆ ಹಾಕ್ಕೊಂಡ್ಹಾಂಗ ಕಾಣಸ್ತದ'ಎಂಬ ಪಿಸುಧ್ವನಿ ಆ ಹುಮ್ಮಸ್ಸಿನಲ್ಲಿ
ಆಕೆಗೆ ಕೇಳಿಸಲೇ ಇಲ್ಲ. <br>
{{rh|center=***}}
{{gap}}ನಂತರದ ದಿನಗಳಲ್ಲಿ ಆ ಆಫೀಸಿನಲ್ಲಿ ಪ್ರತಿದಿನ ಒಂದು ವ್ಯವಸ್ಥಿತ
ಕಾರ್ಯಕ್ರಮ ನಿಯಮಿತವಾಗಿ ನಡೆಯತೊಡಗಿತು. ಅದೇನೆಂದರೆ ಆಫೀಸು
ಸುರುವಾಗುವ ಅರ್ಧ ಗಂಟೆ ಮೊದಲೇ ತಾರಾ ಮ್ಯಾಡಮ್ ನಿರ್ದೇಶಕರ ಚೇಂಬರು
ಸೇರುತ್ತಿದ್ದಳು. ಸುಮಾರು ಒಂದು ತಾಸಿನ ನಂತರ ಆಕೆ ಅಲ್ಲಿಂದ ಹೊರಬಿದ್ದು ತನ್ನ
ಚೇಂಬರಿಗೆ ಹೋದ ಕೆಲವೇ ನಿಮಿಷಗಳಲ್ಲಿ ಯಾರಾದರೊಬ್ಬರಿಗೆ, ವಿಶೇಷವಾಗಿ
ಹೆಣ್ಣುಮಕ್ಕಳಿಗೇ, ನಿರ್ದೇಶಕರಿಂದ ಬುಲಾವ್ ಬರುತ್ತಿತ್ತು. ಮುಂದೆ ಅರ್ಧ <br><noinclude><references/></noinclude>
3cg55wap4rdujgevn4b6v8rzde4gjjq
ಪುಟ:ನಡೆದದ್ದೇ ದಾರಿ.pdf/೨೫
104
30993
317962
196964
2026-05-08T02:58:21Z
Shreelatha.Halemane
7642
/* Validated */
317962
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೧೮}}
ಕೊಡಬಹುದು ನಿಮಗ ಏನನಸ್ತದರೀ ಮಿಸ್ ಶಾಂತಿ!"</br>
{{gap}}-ಈತ ಸುಳ್ಳೇ ತನ್ನ ಉದ್ವಿಗ್ನತಗೆ ಮುಸುಕು ಹಾಕುತ್ತಿದ್ದಾನೆ. ಆದರೆ ನನಗೆ</br>
ಗೊತ್ತಾಗುವದಿಲ್ಲವೇ ಇವನಿಗೆ ಈ ಕತ್ತಲೊಳಗೆ ನಿಶೆ ಏರಿದ್ದು? ಏರುತ್ತಲೇ</br>
ಹೊರಟಿದ್ದು?</br>
{{gap}}"ನೀವ್ಯಾಕೋ ಸೀರಿಯಸ್ ಕಾಣಸ್ತೀರೆಲಾ, ಕಾರಣಾ ಕೇಳಬಹುದೇನು ?"</br>
{{gap}}-ಬೇಡವೋ ಮಹಾರ್ರಯ. ನನ್ನ ಮನಸಿನ್ನಲ್ಲಿ ಈ ಕ್ಷಣದಲ್ಲಿ ನಡೆದಿರುವ</br>
ಗೊಂದಲವನ್ನೆಲ್ಲಾ ನಿನಗೆ ಹೇಳಿದರೆ, ಅದನ್ನು ಕೇಳಿ ನಿನಗೆ ಶಾಕ್ ಆಗುವುದು.</br>
{{gap}}'ಛೇ, ಅಸಹ್ಯ' ಅನಿಸುವದು. ನನಗೆ ಗೋತ್ತೋ ದೇಸಾಯಿ-ನೀನೋ ಬೇರೆ</br>
ಎಲ್ಲರಂತ ಒಬ್ಬ ಸಾಮಾನ್ಯ ಮನುಷ್ಯ.'ಅ' ಸಾಮಾನ್ಯವಾದುದ್ದಕ್ಕೇ ಅಂಜುವ</br>
ಮನುಷ್ಯ. ಬೇಡ, ಸುಮ್ಮನೇ ನಡೆ.</br>
{{gap}}ಹತ್ತು ನಿಮಿಷಗಳು ಎಷ್ಟು ಬೇಗ ಕಳೆದು ಹೋದವು! ತಾನೆಣಿಸಿದಂತೆ ಏನೂ</br>ಅನಾಹುತವಾಗಲಿಲ್ಲ. ದೇಸಾಯಿ ಸುಮ್ಮನೇ ಎದ್ದಾನೆ. ಒಮ್ಮೆ ಸಹ ತನ್ನ ಸವೀಪ</br>ಕೂಡಾ-ನಡೆಯುವಾಗ ಸಹಜವೆಂಬಂತೆ, 'ಅವನ'ಹಾಗೆ!-ಬರಲಿಲ್ಲ.</br>
{{gap}}-ಹಾಸ್ಟೇಲಿನ ಗೇಟು ಕಂಡಾಗ ಎಂತದೋ ಉದ್ವಿಗ್ನತೆ ಹೃದಯದಲ್ಲಿ ತುಂಬಿ
ಹರಿಯಿತು.</br>
{{gap}}ಸುರಕ್ಷಿತವಾಗಿ ಬಂದೇನಲ್ಲಾ, ಎಂಬ ಸಮಾದಾನವೆ?</br>
{{gap}}-ಇರಬಹುದು.;</br>
{{gap}}ಏನೂ ಮಜಾ ನಡೆಯಲಿಲ್ಲವಲ್ಲಾ, ಎಂಬ ಅಸಮಧಾನವೆ?</br>
{{gap}}-ಯಾಕಿರಬಾರದು?</br>
{{gap}}"ಥ್ಯಾಂಕ್ಸ್, ಗುಡ್ ನೈಟ್" ಎಂದು ಒಳಗೋಡಿದಳು ಶಾಂತಿ.</br>
{{gap}}ಎಂಥದೋ ಅನಿರ್ದಿಷ್ಟ ಮದುರ ಭಾವ. ದೀಪ ಹಾಕಿದರೆ ಅದೆಲ್ಲಿ</br>
ಕಳೆದು ಹೋಗುವುದೋ ಎಂದು ಕತ್ತಲಲೇ ಆಕೆ ಕಾಟಿನ ಮೇಲೆ ಬಿದ್ದುಕೊಂಡಳು.</br>
-ಊಟ? ಇವತ್ತು ಬೇಡ.</br>
{{gap}}ಗುಯ್ಞ್ ಎಂದು ಹಾರಡುತ್ತಿವೆ ಸೊಳ್ಳೆಗಳು. ಪರದೆ ಹಾಕಲು ಬೇಸರ.</br>
{{gap}}'ಬರುತ್ತೀರಾ ಮಿಸ್ ಶಾಂತಿ ನನ್ನ ಜೊತೆ?'</br>
{{gap}}'ಟೀಗೆ ಬರುತ್ತೀರ ಶಾಂತಿ?'</br>
{{gap}}ಬ್ಯಾಡ್ಮಿಂಡನ್ ಆಡ್ಲಿಕ್ಕೆ ಬರುತ್ತೀರಾ ಶಾಂತಿ?'</br>
{{gap}}'ಫಿಲ್ಮ ಶೋ ನೋಡಲಿಕ್ಕೇ ಬರುತೀರಾ ಶಾಂತಿ?'</br>
{{gap}}'ಮ್ಯಾಡಂ, ಪಿಕ್ಚರಿಗೆ ಬರುತೀರಾ?'</br><noinclude><references/></noinclude>
egb0wug46vj1dfiawiwj9q0m4hrg3pl
ಪುಟ:ನಡೆದದ್ದೇ ದಾರಿ.pdf/೮
104
30995
317956
235133
2026-05-08T02:51:40Z
Shreelatha.Halemane
7642
/* Validated */
317956
proofread-page
text/x-wiki
<noinclude><pagequality level="4" user="Shreelatha.Halemane" />xi</noinclude>
* ಸೂಕ್ಷ್ಮ ವಿಶ್ಲೇಷಣಾತ್ಮಕ ಮುನ್ನುಡಿ ಬರೆದುಕೊಟ್ಟ ಗುರುಗಳಾದ ಡಾ.ಜಿ.ಎಸ್. ಆಮೂರ ಅವರಿಗೆ.
* ಸ್ತ್ರೀವಾದಿ ದೃಷ್ಟಿಕೋನದಿಂದ ಕೃತಿಯನ್ನು ಪರಿಶೀಲಿಸಿರುವ ಡಾ. ಸುಮಿತ್ರಾ ಅವರಿಗೆ,
* ಈ ಕೃತಿಯನ್ನು ಪ್ರಕಟಿಸುತ್ತಿರುವ ಆತ್ಮೀಯ ಸೋದರ ಡಾ. ಶಿವಾನಂದ ಗಾಳಿ ಅವರಿಗೆ ಮತ್ತು ಶ್ರೀಮತಿ ಸಂಪೂರ್ಣಗಾಳಿ ಇವರಿಗೆ,
* ಅಲ್ಪಾವಧಿಯಲ್ಲಿ ಅಚ್ಚುಕಟ್ಟಾಗಿ ಮುದ್ರಣಕಾರ್ಯ ನಿರ್ವಹಿಸಿದ ......
* ಅರ್ಥಪೂರ್ಣ ಮುಖಪುಟದ ವಿನ್ಯಾಸಕಾರ.....ಅವರಿಗೆ,
* ಹಲವು ಬಗೆಯಿಂದ ಬೆಂಬಲ ನೀಡಿದ ಮೀರ, ಪ್ರವೀಣ, ಜ್ಯೋತಿರ್ಲಿಂಗ ಇವರಿಗೆ,
ಕೃತಜ್ಞತೆಗಳು.
{{right|'''ವೀಣಾ ಶಾಂತೇಶ್ವರ'''}}<noinclude></noinclude>
kb0y7m3z49f0m7mkkz025ymli9vg7m0
ಪುಟ:ನಡೆದದ್ದೇ ದಾರಿ.pdf/೨೩
104
30996
317961
196858
2026-05-08T02:56:32Z
Shreelatha.Halemane
7642
/* Validated */
317961
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೧೬}}
{{gap}}ಉಳಿದಿದ್ದು ಬರಿ ಕತ್ತಲು...</br>
{{gap}}'ಇಲ್ಲ' ಎಂದು ದೇಸಾಯಿಗೆ ಹೇಳಬೇಕೇನು?</br>
{{gap}}"ತಿರುಗಿ ಹೊಗಲಿಕ್ಕೆ ಕತ್ತಲಾಗತದ...."</br>
{{gap}}"ಅದಕ್ಯಾಕ ಚಿಂತಿ? ನಾ ಕಳಿಸಲಿಕ್ಕೆ ಬರ್ತಿನಿ."</br>
{{gap}}ವಾಹ್, ದೇಸಾಯಿ ಎಷ್ಟು ಫಾರ್ ವರ್ಡ್ ಆಗಿರುವನಲ್ಲ, ಎಂದು ಅವಳಿಗೆ</br> ನಗೆ ಬಂದಿತು.</br>
{{gap}}ಸಂಜೆಯ ತನಕವವೂ ಅವಳು ವಿಚಾರ ಮಾಡುತ್ತಲೇ ಇದ್ದಳು. ಫಿಲ್ಮ ಶೋದಲ್ಲಿ</br> ಎಂದಿಲ್ಲದೇ ಇಂದೇಕೆ ಆಸಕ್ತಿ ಬಂದಿತು ತನಗೆ? ಯಾಕೆ ಮತ್ತೆ </br>ಸಣ್ಣ ಹುಡುಗಿಯಾಗಬೇಕು ಅನೆಸುತ್ತದೆ. ತನ್ನನ್ನು ದೇಸಾಯಿಯ ಜೊತೆ ರಾತ್ರಿ</br> ನೋಡಿದ ಯಾರಾದರೂ ವಿದ್ಯಾರ್ಥಿಗಳು ನಾಳೆ ಕಾಲೇಜಿನಲ್ಲಿ ಸುಮ್ಮನೆ ಗದ್ದಲ</br> ಮಾಡಬೇಕು.... ಛೆ, ಇಂಥದರಲ್ಲಿ ಆನಂದಿಸುವ ದಿನಗಳು ಇನ್ನೂ </br> ಕಳೆದುಹೋಗಿಲ್ಲವೆ? ಈಗ ಈ ಎಲ್ಲದರಿಂದ ದೂರವಾಗುವ ಪ್ರಬಲ</br> ( ಪ್ರಾಮಾಣಿಕ?) ಇಚ್ಛೆಯುಂಟಾಗಿದೆ. ಕಂಡ ಕಂಡ ಮುಠ್ಠಾಳರ ಕಣ್ಣುಗಳಲ್ಲಿನ</br> ಮುಳ್ಳುಗಳಿಂದ ಚ್ಚುಚ್ಚಿಸಿಕೊಂಡು-ಚ್ಚುಚ್ಚಿಸಿಕೊಂಡು ಹೇಸಿಹೋಗಿದೆ. ಸಾಧ್ಯವಾದಷ್ಟು</br> ಬೇಗ ಇದರಿಂದ ಮುಕ್ತವಾಗಬೇಕು..... ಹೌದು....</br>
{{gap}}ಹಾಗಾದರೆ ದೇಸಾಯಿ' ಹ್ಞೂ' ಅಂದದ್ದೇಕೆ?</br>
{{gap}}ಥೂ, ಇಂಥ ಉಪಯೋಗವಿಲ್ಲದ ವಿಚಾರಗಳಿಂದಲೇ ನನ್ನ ತಲೆ ಅರ್ಧ</br> ಬೆಳ್ಳಗಾದದ್ದು. ಇದನ್ನಿನ್ನು ಬಿಟ್ಟುಬಿಡಬೇಕು.</br>
{{gap}}"ಎಕ್ಸಕ್ಯೂಜ್ ಮಿ ಮಿಸ್ ಶಾಂತಿ, ಬ್ಯಾಡ್ಮಿಂಟನ್ ಆಡಲಿಕ್ಕೆ ಬರ್ತೀರೇನು?"</br>
{{gap}}-ಹೊಸದಾಗಿ ಲೆಕ್ಚರರ್ ಆಗಿ ಸೇರಿದ, ಪುಣೆಯಿಂದ ಬಂದಿದ್ದ ಹುಡುಗ,</br> ವಡಗಾಂವಕರ. ಇನ್ನೂ ಸಣ್ಣವನಿದ್ದಾನೆ. ಇರಲಿ, ಇಂಥವರ ಗೆಳತನ ಕುತ್ತಿಗೆಗೆ</br> ಬರುವುದಿಲ್ಲ.</br>
{{gap}}ಪಟ್-ಪಟ್ ಎಂದು ಒಂದರಮೇಲೊಂದರಂತೆ ಶಾಂತಿ ಶಾಟ್ ಹೊಡೆದಾಗ</br> ಆಟ ನಿಲ್ಲಿಸಿ ಹೇಳಿದ ವಡಗಾಂವಕರ, "ನಿಮ್ಮ ಆಟ ಎಕ್ಸಲೆಂಟ್! ನಾಳಿನ</br> ಟೂರ್ನಾಮೆಂಟಿನ್ಯಾಗ ನನ್ನ ಪಾರ್ಟನರ್ ಆಗ್ತೀರೇನು, ಪ್ಲೀಜ್?</br>"
{{gap}}-ಟೂರ್ನಾಮೆಂಟ್ಸಿನಲ್ಲಿ ಪಾರ್ಟನರ್ ಆಗಬೇಕಂತೆ. ಟೂರ್ನಾಮೆಂಟ್ಸು</br> ಮುಗಿದ ನಂತರ? ಅವನ್ಯಾರೋ ತ್ಯಾನ್ಯಾರೋ?</br>
{{gap}}-ಟೂರ್ನಾಮೆಂಟ್ಸಿನ್ಯಾಗss?" ಎಂದಳು ಶಾಂತಿ.</br>
{{gap}}ಪೆಚ್ಚು ಪೆಚ್ಚಾಗಿ ಮುಖ ನೋಡಿದ ಆತ, "ಹ್ಞೂ, ಯಾಕ? ನೀವು ಈಗಾಗಲೇ</br><noinclude><references/></noinclude>
r3obzegomyyn1439ufnodk9kpvg4g2h
ಪುಟ:ನಡೆದದ್ದೇ ದಾರಿ.pdf/೨೯೮
104
31001
317952
250608
2026-05-07T15:58:44Z
Pragathi. BH
7585
/* Validated */
317952
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=ಬಿಡುಗಡೆ / ಒಲವೆ ಜೀವನ|right=೨೯೧}}
ಪ್ರಕರಣಕ್ಕೆ ತೆರೆ ಎಳೆದುಬಿಡೋಣ ಎಂದಾತ ನಿರ್ಧರಿಸಿಬಿಟ್ಟ. ನಂತರವೇ
ಕುದಿಯುತ್ತಲಿದ್ದ ಆತನ ಒಳಮನಸ್ಸು ಹತೋಟಿಗೆ ಬಂದದ್ದು. ಆ ನಿರ್ಧಾರದ ನಂತರ
ಶನಿವಾರದ ವರೆಗಿನ ದಿನಗಳನ್ನು ಆತ ಒಂದು ಬಗೆಯ ಶೂನ್ಯ ಮನಸ್ಥಿತಿಯಲ್ಲಿ ಕಳೆದ.
{{rh|center=* * *}}
{{gap}}ಶನಿವಾರ ಮಧ್ಯಾಹ್ನ ಎಂದಿಗಿಂತ ತುಸು ಮುಂಚೆಯೇ ಸತೀಶ ಶೋಭಾಳ
ತೋಟದ ಮನೆಗೆ ಹೋದಾಗ ಮನೆಯಲ್ಲಿ ಯಾರೂ ಇರಲಿಲ್ಲ.ಆಕೆಯ ತಂದೆ ಪೇಟೆಗೆ
ಹೋಗಿದ್ದಿರಬಹುದು. ಶೋಭಾ ತೋಟದಲ್ಲಿ ಏನೋ ಕೆಲಸ
ಮಾಡುತ್ತಿದ್ದಿರಬಹುದು. ಆಕೆಯನ್ನು ಕಂಡು ತನ್ನ ನಿರ್ಧಾರ ತಿಳಿಸಿಬಿಟ್ಟು ಬೇಗನೇ
ತಿರುಗಿಹೋಗಿ ಬಿಡೋಣವೆಂದುಕೊಂಡು ಆತ ತೋಟದ ಕಡೆ ನಡೆದ.<br>
{{gap}}ಗಿಡಗಳಿಗೆ ನೀರುಣಿಸಿ ಬರುತ್ತಿದ್ದಳೆಂದು ಕಂಡಿತು- ಶೋಭಾಳ ಸೀರೆ <br>
ಒದ್ದೆಯಾಗಿತ್ತು. ಕೂದಲು ಕೆದರಿತ್ತು. ಕೈಗೆ ಮಣ್ಣು ಅಂಟಿತ್ತು. ಆತನನ್ನು ಕಂಡೊಡನೆ
ಅವಳ ಕಣ್ಣುಗಳು ಹೊಳೆದವು : "ಸತೀಶ, ಯಾವಾಗ ಬಂದಿರಿ ? ಇದೇನು ಈ ದಿನ
ಬೇಗನೆ ಬಂದಿರಲ್ಲ ?" <br />
{{gap}}"ಹೌದು", ಆತ ದೃಢವಾಗಿ ಅಂದ, "ಈ ದಿನ ನಾನು ಬೇಗನೆ ತಿರುಗಿ
ಹೋಗಬೇಕು, ಈಗಲೇ."<br>
{{gap}}"ಅಂದರೆ ? ಈಗಲೇ ಅಂದರೆ ?" -ಆಕೆಯ ಕಣ್ಣುಗಳ ಬೆಳಕಿನಲ್ಲಿ ಒಮ್ಮೆಲೆ
ನೋವಿನ ಸೆಳಕು ಮಿಂಚಿತು.<br>
{{gap}}"ಈಗಲೇ ಅಂದರೆ ಈಗಲೇ. ನಾನು ಹೋಗುತ್ತಿದ್ದೇನೆ. ಮತ್ತೆ ಇಲ್ಲಿಗೆ
ಬರುವುದಿಲ್ಲ."<br>
{{gap}}"ಅಂದರೆ ? ನಿಮ್ಮ ಉತ್ತರ 'ಇಲ್ಲ, ಆಗುವುದಿಲ್ಲ' ಎಂದೆ ?" ಗಾಯಗೊಂಡ
ಹರಿಣಿಯ ಹಾಗೆ ಕಂಡಳು ಶೋಭಾ. <br>
{{gap}}"ಇಲ್ಲ, ಆಗುವುದಿಲ್ಲ " ಅಂದ ಸತೀಶ.<br>
{{gap}}"ನೀವು ಹಾಗೆ ಹೇಳಲು ಕಾರಣವೇನೆಂದು ಊಹಿಸಬಲ್ಲೆ. ಆದರೂ ಸತೀಶ-"
{{gap}}ಆಕೆಯನ್ನು ಮಧ್ಯದಲ್ಲೇ ತಡೆದ ಆತ, "ಇಲ್ಲ, ಆಗುವುದಿಲ್ಲ. ಈ ಬಗ್ಗೆ ಚರ್ಚೆ
ಬೇಡ." ಅಷ್ಟಂದು ಮುಂದಿನ ದೃಶ್ಯವನ್ನು ಎದುರಿಸುವ ಮನಸ್ಸಿಲ್ಲದೆ ಆತ ನೇರವಾಗಿ
ಗೇಟಿನ ಕಡೆ ನಡೆದ. ಎರಡು ಕ್ಷಣಗಳ ನಂತರ ಹಿಂದಿನಿಂದ ಆಕೆಯ ನೋವು ತುಂಬಿದ
ಧ್ವನಿ ಆತನಿಗೆ ಕೇಳಿಸಿತು: "ನೀನು ಹಾಗೆ ಹೇಳಲು ಕಾರಣವೇನೆಂದು ನನಗೆ ಗೊತ್ತು.
ಆದರೆ ನೀನು ಯಾಕೆ ಮೇಲಿಂದ ಮೇಲೆ ಇಲ್ಲಿಗೆ ಬಂದೆ ? ನನ್ನ ಬಗ್ಗೆ ನಿನಗೆ ಏನೂ
ಅನ್ನಿಸದಿದ್ದರೆ ಯಾಕೆ ಬರುತ್ತಲೇ ಇದ್ದೆ ? ಯಾಕೆ ?... ಯಾಕೆ..."<noinclude><references/></noinclude>
tt58vqpqnwua7d3zoxxv8n7eqvzfkzx
ಪುಟ:ನಡೆದದ್ದೇ ದಾರಿ.pdf/೭೫
104
31015
318036
201264
2026-05-08T09:11:16Z
Shreelatha.Halemane
7642
/* Validated */
318036
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೬೮}}
ಮಾಡಿದ್ದರು."</br>
{{gap}}"ಏನ೦ತ ?"-ಬೇಡವೆನಿಸಿದ ಅವನ ವಿಶಾಲವಾದ ಎದೆಗೆ ಸ್ವಲ್ಪ-ಸ್ವಲ್ಪವಾಗಿ</br> ಸಮೀಪ ಬರುತ್ತ ಎ೦ಥದೋ ಭಯದಿ೦ದ ಕೇಳಿದಳು ಸರಯೂ.</br>
{{gap}}"ನಿನಗ ಏನು ಧಾಡಿ ಆಗೇದ೦ತ."</br>
{{gap}}"ಛೇ,ನನಗೇನಾಗೇದ ? ಡಾಕ್ಟರು ಏನು ಹೇಳಿದ್ರು ಹರೀಶ? ನೀ ಹೀಂಗ್ಯಾಕ</br> ನೋಡಲಿಕ್ಹತ್ತೀದಿ ನನ್ನ?"-ಅವಳಿಗರಿಯದಂತೆಯೇ ದನಿ ನದಡುಗಿತು.</br>
{{gap}}ಅವಳ ಕಣ್ಣಲ್ಲಿ ಕಣ್ಣಿಡುತ್ತ ಕೇಳಿದ ಹರೀಶ,'ನಿನಗೇನಾಗೇದನ್ನೂದು ಖರೇನs</br> ನಿನಗ ಗೊತ್ತಿಲ್ಲs ಸರೂ?"</br>
{{gap}}-ದಾಂಡೇಲಿಯ ಅಡವಿಯ ಕನಸನ್ನು ಕಸಿದುಕೊಳ್ಳಲೆತ್ನಿಸುತ್ತಿದ್ದ ಆ ನೋಟ</br> ವನ್ನೆದುರಿಸುವುದು ಸಾಧ್ಯವಾಗದೆ ಕಣ್ಣು ಮುಚ್ಚಿಕೊಂಡು ತಲೆ ಕೊಡಹಿದಳು ಆಕೆ.</br>
{{gap}}"ಹಂಗಾರ ನಾ ಹೇಳ್ತೀನಿ ಕೇಳು. ಇನ್ನೂ ಸಮೀಪ ಬಾ. ನಿನ್ನ ಕಿವಿಯೊಳಗೆ</br> ಹೇಳತೀನಿ."</br>
{{gap}}ತನ್ನ ಕಿವಿಗೆ ಆತನ ತುಟಿಗಳ ಬೆಚ್ಚಗಿನ ಸ್ಪರ್ಶವಾಗಿ,ಆತ ಹೊತ್ತು ತಂದ</br> 'ಸ್ವೀಟ್ ನ್ಯೂಜು'ಕಾದ ಪಾದರಸದಂತೆ ಕಿವಿಗುಂಟು ಒಳಗಿಳಿದಾಗ, ಒಂದು ಕ್ಷಣ</br> ಅವಳಿಗೆ ಜಗತ್ತೆಲ್ಲ ಕತ್ತಲಿನಿಂದ ತುಂಬಿದಂತೆನಿಸಿತು. ಮರುಕ್ಷಣ ಆಕೆ ಆತನನ್ನು</br> ಗಟ್ಟಿಯಾಗಿ ತಬ್ಬಿಕೊಂಡಳು.</br>
{{gap}}ಎಷ್ಟೋ ಹೊತ್ತಿನ ವರೆಗೆ ಹರೀಶನ ಕೈ ಹವುರಗೆ ಅವಳ ಬೆನ್ನು-ಮುಖ-</br>ತಲೆಯನ್ನು ಸವರುತ್ತಲೇ ಇತ್ತು.</br>
{{gap}}ಎಂಥದೋ ತೃಪ್ತಿ;ಏನೋ ವೇದನಾಮಯ ಸುಖ,'ಹರಿ ಹರಿ' ಎಂದು</br> ಕಿರುಚುವ ಗಿಳಿಯ ದನಿಯಲ್ಲಿ ಸರಯೂಗೆ ಈಗ ಹಿಂದಿನ ರೊಚ್ಚು ಕಾಣುವುದಿಲ್ಲ;</br>ಕಳವಳ ಕಾಣುವುದಿಲ್ಲ;ಅದೂ ಯಾಕೋ ಈಗ ಒದರುವುದನ್ನು ಕಡಿಮೆ ಮಾಡಿದೆ,</br>ಆದರೆ ಅದರ ಈ ಮೌನ ಅದರ ಸಮಾಧಾನದ ಲಕ್ಷಣವೋ ಅಥವಾ</br> ಅಸಮಾಧಾನವನ್ನು ಬಚ್ಚಿಡುವ ಪ್ರಯತ್ನವೋ ಅಥವಾ ಅಸಮಾಧಾನವನ್ನು</br> ಪ್ರಲಕಗೊಳಿಸಲು ಸಾಧ್ಯಾವಾಗದ ಅಸಹಾಯಕತೆಯೋ ತನಗೆ ತಿಳಿಯುವುದಿಲ್ಲ...</br>
{{gap}}ಇದು ತೃಪ್ತಿ ಎನ್ನಲು, ಸುಖ ಎನ್ನಲು,ಏನು ಆಧಾರ?</br>
{{gap}}ಹಾಗಾದರೆ ಇದು ಸ್ಥಿತಪ್ರಜ್ಞತೆಯೇ?</br>
{{gap}}ಇರಬಹುದು.</br>
{{gap}}-ಯಾರಿಗಾಗಿ? ಯಾರಿಗಾಗಿ ಈ ಸ್ಥಿತಪ್ರಜ್ಞತೆ(ಯ ಭ್ರಮೆ)?</br>
{{gap}}ಹರೀಶನಿಗಾಗಿ ಅಲ್ಲ; ಆವನಿಗಾಗಿಯಂತೂ ಅಲ್ಲವೇ ಅಲ್ಲ; ತನಗಾಗಿಯೂ</br><noinclude><references/></noinclude>
jyzhjkcpuxc93y5fxtbp4pkruurmlqn
ಪುಟ:ನಡೆದದ್ದೇ ದಾರಿ.pdf/೩೭
104
31016
317973
250465
2026-05-08T03:59:43Z
Shreelatha.Halemane
7642
/* Validated */
317973
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೩೦|right=ನಡೆದದ್ದೇ ದಾರಿ}}</noinclude>ಅದರ ಮೇಲೆ ಬಲವಾಗಿ ಎಳೆದು ಮುಚ್ಚಿದ್ದ ಈ ಕಬ್ಬಿಣದ ಪರದೆ ಇತ್ತೀಚೆ ಸ್ವಲ್ಪ-</br>
ಸ್ವಲ್ಪವಾಗಿ ಕರಗಿ ಹೋಗುತ್ತಿರುವುದೇಕೆ ? ಈಗೇಕೆ ತನಗೆ</br>
ಹೃದಯವಿಲ್ಲವೆಂಬುದೊಂದು ಹೆಚ್ಚಳವಾಗಿ ತೋರಲೊಲ್ಲದು?</br>
{{gap}}"ಎಕ್ಸ್ಕ್ಯೂಜ್ ಮಿ ಮ್ಯಾಡಂ. ಒಳಗೆ ಬರ್ಲೇನು?" ಬಾಗಿಲ ಹೊರಗಿನಿಂದ</br>
ಮೃದುವಾಗಿ ಧ್ವನಿ. ಇದೇ ವರ್ಷ ಎಮ್.ಎಸ್ ಸಿ. ಮುಗಿಸಿ ಕೆಮಿಸ್ಟ್ರಿ</br>
ಡಿಪಾರ್ಟಮೆಂಟಿನಲ್ಲಿ ರಿಸಚ್೯ ಅಸಿಸ್ಟಂಟ್ ಆಗಿ ಸೇರಿರುವ ಮರಾಠಿ ಹುಡುಗಿ</br>
ಊರ್ಮಿಲಾ ಕೇಳಕರ.</br>
{{gap}}ತಲೆಯನ್ನು ಕೊಡಹಿ. ಲೂಸಿ-ಜಯಲಕ್ಶ್ಮಿ-ಸ್ಕೂಲ್ ಕಮೀಟಿ ಚೇರಮನ್</br>
ಎಲ್ಲರನ್ನೂ, ಹಾಳು ಸದಾನಂದನನ್ನೂ ಸಹ ದೂರ ಕಳಿಸಲು ಪ್ರಯತ್ನಿಸುತ್ತ ಪ್ರೊ.</br> ಲೀಲಾವತಿ ಹಾಸಿಗೆಯ ಮೇಲೆಯೇ ಎದ್ದು ಕುಳಿತಳು. "ಓ ಹಲೋ. ಊರ್ಮಿಲಾ</br> ಏನು ? ಬರ್ರಿ ಬರ್ರಿ,ಕೊಡ ಬರ್ರಿ."</br>
{{gap}}ಕುಣಿಯುತ್ತಲೇ ಒಳಬಂದಳು ಊಮಿ೯ಲಾ. ಬಹುಶಃ ಹುಟ್ಟುತ್ತಲೇ</br>
ಕುಣಿಯಲು ಸುರುಮಾಡಿದಳೇನೋ ಎನ್ನಿಸುವಂಥ ಹುಡುಗಿ. ಎತ್ತರವಾಗಿ. ಬೆಳ್ಳಗೆ</br> ಚಂದ ಇದ್ದಾಳೆ. ಇವಳು ಬಂದಾಗಿನಿಂದ ಕೆಮಿಸ್ಟ್ರಿ ಡಿಪಾರ್ಟಮೆಂಟಿನ ಎಲ್ಲ</br>
ಜ್ಯೂನಿಯರ್ ಲೆಕ್ಚರರುಗಳು. ಡೆಮಾನ್ಸ್ಟೇಟರುಗಳು, ಕೆಲವರು ವಿದ್ಯಾರ್ಥಿಗಳು ಸಹ</br>
{{gap}}- ಇವಳಿಗಾಗಿ ಹುಚ್ಚಾಗಿದ್ದಾರೆ. ಅವಳು ತಮ್ಮೊಡನೆ ಕ್ಯಾಂಟೀನಿಗೆ ಬಂದರೆ ತಮ್ಮ</br> ಅಹೋಭಾಗ್ಯ ಎಂದುಕೊಳ್ಳುತ್ತಾರೆ. ನಕ್ಕು ತಮ್ಮನ್ನು ಮಾತಾಡಿಸಿದರೆ ತಾವು ಧನ್ಯ</br> ಎಂದುಕೊಳ್ಳುತ್ತಾರೆ. ಗಂಡಸರ ಜಾತಿಯೇ ನಾಯಿಜಾತಿ. ಎಲ್ಲಾ ಮೂಸಿ ನೋಡಬೇಕು</br>ಎನ್ನುವ ಚಪಲ ಅವರಿಗೆ. ಥೂ....</br>
{{gap}}"ಮತ್ತೇನಿಲ್ಲ ಮ್ಯಾಡಂ. ನಿಮ್ಮ ಕಡೆ ಆ ಪ್ಲ್ಯಾಸ್ಟಿಕ್ ಟ್ರ್ಯಾವೆಲ್ಹಿಂಗ್ ಬ್ಯಾಗು</br>
ಅದs ಅಲ್ಲಾ, ಅದು ಸ್ವಲ್ಪ ಬೇಕಾಗಿತ್ತು."</br>
{{gap}}-ನಿ೦ತೇ ಹೇಳಿದಳು ಊರ್ಮಿಲಾ.</br>
{{gap}}"ಕೊಡತೀನೆಂತ ಕೂಡ್ರಿ. ಯಾಕ, ನಾಳೆ ರವಿವಾರ ಏನರೆ ಸ್ಪೆಶಲ್ ಪ್ರೋಗ್ರ್ಯಾಮು</br> ಅದs ಏನು ? ಎಲ್ಲಿಗೆ ಸವಾರಿ ?"</br>
{{gap}}"ಇಲ್ಲೇ ಆ ಡ್ಯಾಮ್ಸೈಟಿಗೆ ಪಿಕ್ನಿಕ್ ಅಂತ ಹೋಗವರಿದ್ದಾರ ನಮ್ಮ</br>
ಡಿಪಾರ್ಟಮೆಂಟಿನವರು. ಸಂಜೀನ್ಯಾಗ ತಿರಿಗಿ ಬರ್ತೀವಿ."</br>
{{gap}}-ನಾಳಿನ ತಯಾರಿ. ಅದರ ಪೂರ್ವಗನಸು ಇವುಗಳ ಸಂಭ್ರಮದಲ್ಲಿ ಅವಳಿಗೆ</br> ಈಗ ಕೂಡುವ ಮನಸ್ಸಿದ್ದಂತೆ ತೋರಲಿಲ್ಲ. ಆದರೆ ಯಾಕೋ ಈಗ</br>
ಊರ್ಮಿಲಾನನ್ನು ಕಳಿಸಿಬಿಟ್ಟು ತಾನು ಒಂಟಿಯಾಗಿದ್ದರೆ ಮತ್ತೆಲ್ಲಿ ಇಲ್ಲದ<noinclude><references/></noinclude>
gpdvyjm6ob0yutd3lhtpv0wjk50zcic
ಪುಟ:ನಡೆದದ್ದೇ ದಾರಿ.pdf/೩೨
104
31024
317969
200493
2026-05-08T03:34:26Z
Shreelatha.Halemane
7642
/* Validated */
317969
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=೨೫|left=ಮುಳ್ಳುಗಳು / ಅತಿಥಿ}}
ಹೊಣೆಗಾರಿಕೆಯ ಬಗ್ಗೆ ? ಅವರು ಸ್ವತಂತ್ರ ವಿಚಾರದವರಾಗಬೇಕು, ಗಂಡಸರ</br> ದಾಸ್ಯದಲ್ಲಿ ಬಿದ್ದು ಕೊಳೆಯಬಾರದು, ಗಂಡಸರ ದಬ್ಬಾಳಿಕೆಯನ್ನು ಸಹಿಸಬಾರದು.</br> ಗಂಡಸರ ಅಧಿಕಾರವನ್ನು ವಿರೋಧಿಸಬೇಕು. ಎಂದೆ ? ತಾನು ಎಲ್ಲಿ ಅತಿಥಿಯಾಗಿ</br> ಹೋದರೂ ಇದೇ ಬಗೆಯ ಭಾಷಣ ಮಾಡುತ್ತೆನೆಂದು, ಸುಮ್ಮನೆ ಇದರದೊಂದು</br> ಟೇಪ್ರಿಕಾಡು೯ ಮಾಡಿಸಿಬಿಡೆಂದು ಮೊನ್ನೆ ತನ್ನ ಅಣ್ಣ ಚೇಷ್ಟೆ ಮಾಡಿದ್ದನಲ್ಲವೆ?</br> ಅವನೂ ಅಯೋಗ್ಯ. ಅವನಿಗಾದರೂ ಏನು ತಿಳಿಯುತ್ತದೆ? ಬುದ್ದಿಯಿಲ್ಲದೆ</br> ಏನಾದರೊಂದು ಬೊಗಳುತ್ತಾನೆ. ಗಂಡಸಲ್ಲವೆ ಮತ್ತೆ?</br>
{{gap}}"ಗಂಡಸರ ಮ್ಯಾಲ ಇಷ್ಟ್ಯಾಕ ಕೆಂಡ ಕಾರತೀರಿ ನೀವು?"-ಕಾಲೇಜಿನಲ್ಲಿ</br> ಚಚಾ೯ಕೂಟ ನಡೆದಾಗ ತನ್ನ ಸಹೋದ್ಯೋಗಿಯೊಬ್ಬ ಕೇಳಿದ್ದ ಮೊನ್ನೆ-ಮೊನ್ನೆ.</br> ಯಾಕೋ! ಗೊತ್ತಿಲ್ಲ. ಒಟ್ಟು ಗಂಡುಪ್ರಾಣಿಯನ್ನು ನೋಡಿದರೆ ತನಗೆ</br> ಹೇಳತೀರದ ಸಿಟ್ಟು ಬರುತ್ತದೆ. ಅವರು ಹೆಂಗಸರ ಮುಗ್ಧತೆಯ ದುರುಪಯೋಗ</br> ತೆಗೆದುಕೋಳ್ಳುತ್ತಾರೆಂದು, ಸರ್ವಶಕ್ತಿಯನ್ನು ಪ್ರಯೋಗಿಸಿ ತಾನದನ್ನು</br> ವಿರೋಧಿಸಬೇಕೆಂದು ಅನಿಸುತ್ತಿದೆ. ಈ ಪುರುಷದ್ವೇಷ ಈಗ ಹೆಚ್ಚಾಗತೊಡಗಿದೆಯೇ?</br> ಅಥವಾ ಮೋದಲಿನಿಂದಲೂ ಇತ್ತೋ? -ಮೋದಲು? ತಾನು ಪ್ರೋಫೆಸರ ಆಗುವ</br> ಮೊದಲು? ವ್ಹಯ್ಸ್ ಪ್ರಿನ್ಸಿಪಾಲ ಆಗುವ ಮೊದಲು? ಹಾಸ್ಟೆಲಿನ ವಾರ್ಡನ್ ಆಗುವ</br> ಮೊದಲು? ಇಪ್ಪತ್ತು ವರ್ಷಗಳ ಮೊದಲ?...ತಾನು ಎಂ.ಎಸ್.ಸಿ ಗೆ</br> ಓದುತ್ತಿದ್ದಾಗ?</br>
{{gap}}"ಮಿಸ್ ನಾಯಿಕ, ಈ ಸರೆ ದೀಪಾವಳಿ ಸೂಟಿಯೊಳಗ ಹಂಪಿಗೆ ಟ್ರಿಪ್</br> ಇಡೋಣಂತ ವಿಚಾರ ಮಾಡೀವಿ. ನೀವು ಬರ್ತೀರಲ್ಲಾ?</br>
{{gap}}-ಯಾರು ಕೇಳಿದ್ದು?</br>
{{gap}}"ಮಿಸ್ ಲೀಲಾವತಿ, ಈ ಹಳದಿ ಸೀರೆಯೊಳಗ ನೀವು ವಂಡರ್ಫುಲ್ ಕಾಣಸ್ತೀರಿ."</br>
-ಯಾರು ಹೇಳಿದ್ದು?</br>
{{gap}}"ಮಿಸ್ ಲೀಲಾ, ಭಾಳ ದಿವಸದಿಂದ ಕೇಳಬೇಕಂದಿದ್ದ ಪ್ರಶ್ನೆ ಇವತ್ತ ಧೈರ್ಯ</br> ಮಾಡಿ ಕೇಳಲಿಕ್ಹತ್ತೀನಿ. ನೀವು ನನ್ನ ಲೈಫ್ ಪಾರ್ಟನರ್ ಆಗತೀರಾ?</br>
{{gap}}-ಒಹ್ ಎಲ್ಲಿಂದ ಬಂದಿತು ಈ ಧ್ವನಿ?</br>
{{gap}}ಅದು ಬಂದದ್ದು-ಈಗಲ್ಲ, ಇಪ್ಪತ್ತು ವರ್ಷಗಳ ಹಿಂದೆ-ತನ್ನ ಪ್ರಾಕ್ಟಿಕಲ್ಸ್ ದ</br> ಪಾರ್ಟನರ್ ಸದಾನಂದನಿಂದ. ಎಮ್.ಎಸ್ ಸಿಯಲ್ಲಿ ಪ್ರಾಕ್ಟಿಕಲ್ಸ್ ಮಾಡುವಾಗ ತನ್ನ ಟೇಬಲ್ಮೇಟ್ ಆಗಿದ್ದ ಆತ.</br><noinclude><references/></noinclude>
n0r3483l3uzb3uhd8cwypdssrz7v8b2
ಪುಟ:ನಡೆದದ್ದೇ ದಾರಿ.pdf/೫೭
104
31025
317981
200544
2026-05-08T04:12:23Z
Shreelatha.Halemane
7642
/* Validated */
317981
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೫೦}}
{{rh|center=ನೆನಪು.... ಬರಿ ನೆನಪು|right=|left=}}
{{gap}}ಮುಂಜಾನೆ ಗಂಟೆ ಒಂಬತ್ತೇ ಆಗಿದ್ದರೂ ಎಂತಹ ಬಿಸಿಲು ! ಇನ್ನು ಮಧ್ಯಾಹ್ನ</br> ಹೇಗಿರುವುದೋ.... ಆ ಕಲ್ಪನೆಯಿಂದಲೇ ತುಂಬ ಸೆಕೆಯೆನಿಸಿ ಪಾವನಾ ತನ್ನ</br> ಕೋಣೆಯಿಂದ ಎದ್ದು ಪಡಸಾಲೆಗೆ ಬಂದಳು.</br>
{{gap}}ಬೇಸಿಗೆಯ ರಜೆ. ಮುಂಜಾನೆ ಅಲಾರಂ ಇಟ್ಟು ಟೈಂಪೀಸನ್ನು ಶಪಿಸುತ್ತ</br> ನಾಲ್ಕಕ್ಕೆ ಏಳಬೇಕಾದ ಪ್ರಮೇಯವಿರಲಿಲ್ಲ. ಪೂರ ಹನ್ನೆರಡು ತಾಸು ನಿದ್ರೆ</br> ಮಾಡಬಹುದು. ಒಂದು ತಾಸಿನ ಹಿಂದೆಯಷ್ಟೇ ಅವಳು ಎದ್ದದ್ದು.ಚಹಾ ಕುಡಿದಾದ</br> ನಂತರ ಕೂಡಲೆ ಸ್ನಾನ ಮಾಡಲು ಮನಸ್ಸು ಬರದೆ Grace Metaliousನ</br> ಕಾದಂಬರಿಯೊಂದನ್ನು ತಿರುವಿಹಾಕುತ್ತಾ ಕುಳಿತಳಾಕೆ.</br>
{{gap}}-'ಓದಬೇಡ ಅದನ್ನು, ಹೊಲಸು ಪುಸ್ತಕ,' ಮೂರ್ತಿ ಹೇಳಿದ್ದ ಅವಳಿಗೆ</br> ಒಂದು ವರ್ಷದ ಹಿಂದೆ. ಕಾದಂಬರಿ ಎಂತಹದಾದರೇನು, ಬಿಡುವಿನ ವೇಳೆ ಕಳೆಯಲು</br> ಅದು ಆಪ್ಯಾಯಮಾನವೇ ಅಲ್ಲವೆ ? ಮೂರ್ತಿಯದೊಂದು ತಲೆ ಎಂದು</br> ಮನಸ್ಸಿನಲ್ಲಿಯೇ ನಕ್ಕಳು ಪಾವನಾ.</br>
{{gap}}ಮೂರ್ತಿಯ ನೆನಪು ಧಾರವಾಡದ ಆ ಸೆಕೆಯನ್ನು ಕ್ಷಣಕಾಲ ಮರೆಯಿಸಿತು.</br> ಜೂನ್ ಬರಲು ಇನ್ನೂ ಪೂರ ಒಂದು ತಿಂಗಳ ಅವಧಿ ಇದೆ. ಅಷ್ಟು ಕಾಲ</br> ಮೂರ್ತಿಯನ್ನು ಕಾಣದೇ ಇರಬೇಕಲ್ಲ ! ಆದರೇನು, ನಂತರ ಜೀವಮಾನವಿಡೀ</br> ಮೂರ್ತಿಯ ಜೊತೆಗೇ ಕಳೆಯುವದಿದೆ.</br>
{{gap}}ಮದುವೆಯ ನೆನಪಿನಿಂದ ಪಾವನಾ ತುಸು ಉಲ್ಹಸಿತಳಾದಳು. ಆದರೆ</br> ಯಾಕೋ ಹೆಚ್ಚುತ್ತಿರುವ ಬಿಸಿಲಿನಿಂದ ಅವಳಿಗೆ ಬಹಳ ಬೇಸರವೆನಿಸಿತು. ಅವ್ಯಕ್ತ</br> ಅಸ್ವಸ್ಥತೆಯಿಂದ ಮನಸ್ಸು ಅತ್ತಿತ್ತ ಪರದಾಡಿತು.</br>
{{gap}}"ಬರ್ರಿ ಒಳಗೆ" -ಹೊರಗಿನಿಂದ ಅವಳ ತಮ್ಮ ಗೋಪಿಯ ಧ್ವನಿ ಕೇಳಿಸಿತು.</br> ಯಾರೋ ಬಂದಿರಬೇಕು. ಪಾವನಾ ಕತ್ತೆತ್ತಿ ನೋಡಿದಾಗ ಒಳಬಂದ ಗೋಪಿ ಹೇಳಿದ,</br> "ಅಕ್ಕಾ, ಯಾರೋ ಮಿ.ಪಿಂಟೋ ಕಾರವಾರದವರು."</br>
{{gap}}ಎದೆಯೊಳಗೆ ಒಮ್ಮೆಲೆ ವಿನಾಕಾರಣ ನೋವಾದಂತೆನಿಸಿ ಅವಳು ತಟ್ಟನೆ ಎದ್ದು</br> ನಿಂತಳು. ಪಿಂಟೋ ? ಎಲಿಸನ್ ಪಿಂಟೋ ? ಈಗೇಕೆ ಬಂದ ? ಎಲ್ಲಿಂದ ? ಹೇಗೆ ?</br><noinclude><references/></noinclude>
jgil6ie5bqbkepr09cz1try9kz2mre9
ಪುಟ:ನಡೆದದ್ದೇ ದಾರಿ.pdf/೪೫
104
31026
317984
250681
2026-05-08T04:17:04Z
Shreelatha.Halemane
7642
/* Validated */
317984
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೩೮|right=ನಡೆದದ್ದೇ ದಾರಿ}}</noinclude>
{{center|'''ಪ್ರಶ್ನೆ'''}}
{{gap}}ಮತ್ತೊಂದು ಭ್ರಮೆ ನಿರಸನವಾಯಿತು; ಕನಸು ಒಡೆಯಿತು;</br>
{{gap}}-ಆನಿರೀಕ್ಷಿತವಾಗಿ ಅಲ್ಲ; ಗೊತ್ತಿದ್ದದ್ದೇ. ಆದರೆ ಇಷ್ಟು ಬೇಗ ಎಂದು</br>
ಅನಿಸಿರಲಿಲ್ಲ ಅಷ್ಟೆ. ಇನ್ನು ಸ್ವಲ್ಪ ದಿನ ಈ ಕನಸಿನಲ್ಲೆ ಸುಖಿಸಬಹುದೆಂದು. ಈ</br>
ಭ್ರಮೆಯಲ್ಲೆ ಮೈಮರೆತಿರಬಹುದೆಂದು ಆಸೆಯೊಂದಿತ್ತು. ಬರಿಯ ಆಸೆ. ಹಿಂದಿನ</br>
ಆಸೆಗಳಂತೆಯೇ ಮಣ್ಣುಗೂಡಿದ- ಮಣ್ಣುಗೂಡಲೆಂದೇ ಮೈದಳೆದಿದ್ದ-ಆಸೆ. ಹಾಃ,</br>ಅಂದಹಾಗೆ ಇದರ ಸರದಿ ಎಷ್ಟನೆಯದು? ಇದರ ಕ್ರಮಾಂಕ,ಅಂದರೆ ನಂಬರು,</br>ಎಷ್ಟು? ಸ್ವಲ್ಪ ವಿರಾಮವಾಗಿ ಕೂತು ನೆನಪಿಸಿಕೊಳ್ಳಬೇಕು. ಯಾಕೋ ಇತ್ತೀಚೆ ಎಲ್ಲ</br>ಮರೆಯತೊಡಗಿತ್ತು. ಭೂತಕಾಲದ ಕರಿನೆರಳುಗಳ ಸತತ ಅಸ್ತಿತ್ವದ ಬಗೆಗೆ,</br>ಅಪರಿಹಾರ್ಯ ಬಾಧೆಯ ಬಗೆಗೆ, ಸ್ವಲ್ಪ-ಸ್ವಲ್ಪ ನಿರ್ಲಕ್ಷ ಬೆಳೆಯತೊಡಗಿತ್ತು. ಅವುಗಳ</br>ಕಪಿಮುಷ್ಟಿಯಿಂದ ಪಾರಾಗುವುದು ಸಾಧ್ಯವಾಗಬಹುದೇನೋ,</br>
ಸಾಧ್ಯವಾಗತೊಡಗಿದೆಯೇನೋ ಎಂದು ಅನ್ನಿಸತೊಡಗಿತ್ತು. ಆದರೆ ಇದೆಲ್ಲಾ ಸುಳ್ಳು,</br>ಬರೇ ಭ್ರಮೆ ಎಂಬ ಸತ್ಯ-ಹಿಂದೆ ಅನೇಕ ಸಲ ತಿಳಿದು ಬಂದಂತೆ- ಈಗ ಮತ್ತೆ</br> ತಿಳಿದು ಬಂದಿತು. ಈ ಅನುಭವ ಹಿಂದಿನ ಅನುಭವಗಳಿಗಿಂತ ಬೇರೆಯದು ಎಂದು -</br>ಹಿಂದೆ ಪ್ರತಿಸಲ ಅಂದುಕೊಂಡ ಹಾಗೆ-ಅಂದುಕೊಂಡಿದ್ದು ಮತ್ತೊಂದು ಭ್ರಮೆ. ಇದು</br>ಯಾವ ಬಗೆಯಲ್ಲೂ ಬೇರೆಯದಲ್ಲವೆಂಬುದು ಕಹಿ ಸತ್ಯ;</br> ಬಹಳ ಕಹಿ,ಆದರೆ ಸತ್ಯ.ಇದೊಂದು ಹೊಸ ಅನುಭವ ಅಷ್ಟೆ.</br>
{{gap}}ನಂಬರು-ಮೂರೆ? ನಾಲ್ಕೆ?</br>
{{gap}}ಸರಿಯಾಗಿ ನೆನಪಿಸಿಕೊಳ್ಳಲೆಂದು ಆಕೆ ಮಲಗಿದ್ದಲ್ಲೇ ಆತ್ತಿತ್ತ ಹೊರಳಾಡಿ</br>
ಚಡಪಡಿಸಿದಳು. ಯಾಕೋ ಈ ಅನುಭವಕ್ಕೂ ಒಂದು ನಂಬರು ಕೊಟ್ಟು ಬಿಟ್ಟು,</br>
ಇದನ್ನೂ ಬರಿಯ 'ನೆನಪು'ಗಳ ಪಟ್ಟಿಯಲ್ಲಿ ಕೊನೆಯದನ್ನಾಗಿ ಸೇರಿಸಿ ದೂರವಾಗಿಸಲು</br>ಆಕೆಗೆ ಮನಸ್ಸು ಬರಲಿಲ್ಲ. ಇದರಲ್ಲಿ ಏನಾದರೂ ಸ್ವಲ್ಪ ಪ್ರತ್ಯೇಕತೆಯನ್ನು,</br>ವಿಶೇಷವನ್ನು ಕಂಡುಕೊಂಡು, ಕಳೆದುಹೋದ ಈ ಭವ್ಯ ಕನಸಿಗಾಗಿ ಕಣ್ಣೀರು ಸುರಿಸಿ</br>ಸಮಾಧಾನ ಹೊಂದಬೇಕೆಂದು ಅವಳಿಗೆ ತೀವ್ರ ಆಸೆಯಾಯಿತು. ಆದರೆ ಯಾಕೋ,</br>ಎಷ್ಟು ಪ್ರಯತ್ನಿಸಿದರೂ ಈ ಅನುಭವದಲ್ಲಿ ಹಿಂದಿನವುಗಳಿಗಿಂತ ಭಿನ್ನವಾದುದು.<noinclude><references/></noinclude>
0wrfew3bl4fo2pw538gh60sv5yydflv
ಪುಟ:ನಡೆದದ್ದೇ ದಾರಿ.pdf/೧೦೨
104
31034
318048
201916
2026-05-08T09:23:55Z
Shreelatha.Halemane
7642
/* Validated */
318048
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=೯೫|left=ಕೊನೆಯ ದಾರಿ\ ಮಳೆ ಬ೦ದಾಗ}}
{{gap}}ಇಲ್ಲ, ಸರೋಜಳಿಗೆ ತಿಳಿಯುವುದಿಲ್ಲ. ಎಲ್ಲ ಅವಳಿಗೆ ತಿಳಿಸಿ ಹೇಳಬೇಕಾದ</br> ಅವಶ್ಯಕತೆಯೂ ಇಲ್ಲ. ಹೋಗಲಿ.</br>
{{gap}}"ಹಿಂಗ ಸುಮ್ನ ಕೂತರ ಏನು ಬಂತು, ಸಹನಾ? ಮುಂಬೈಯ ಸುದ್ದೀನರೆ</br> ಹೇಳಲಾ, ನಿನ್ನ ಕಾಲೇಜಿನ ಸುದ್ದಿ, ನಿಮ್ಮ ಕಾಕಾ ಡಾಕ್ಟರ್ ದೇಶಮುಖರ</br> ಹುಚ್ಚರಾಸ್ಪತ್ರೆಯ ಸುದ್ದಿ-"</br>
{{gap}}ಅವಳನ್ನು ತಡೆದು ಹೇಳಿದಳು ಸಹನಾ, "ಏ, ನಮ್ಮ ಕಾಕಾನದು ಹುಚ್ಚರಆಸ್ಪತ್ರೆ</br> ಅಲ್ಲಾ ಅಂತ ಎಷ್ಟು ಸರೆ ಹೇಳೀನಿ ನಿನಗೆ, ಮತ್ತ್ಯಾಕ ಹಾಂಗಂತೀ? ಅವರು</br> ಹುಚ್ಚರಾಸ್ಪತ್ರೆಯ ಡಾಕ್ಟರ್ ಅಲ್ಲ, ಅವರ ಕಡೆ ಬರವ್ರು ಹುಚ್ಚರಲ್ಲ. ನಮ್ಮ ಕಾಕಾ</br> ಒಬ್ಬರು ಸೈಕಿಯಾಟ್ರಿಸ್ಟ್. ಹಾಂಗಂದ್ರ ಏನು ಅಂತ ಕೇಳತೀಯೇನು? ಅದರ ಅರ್ಥಾ</br> ಹೇಳೀನಿ ನಿನಗ; ಮತ್ತ ಕೇಳಬ್ಯಾಡ. ಏನರೆ ಕಾರಣದಿಂದ ತಲೀಗೆ ತ್ರಾಸ ಆದವರು,</br> ಮನಸ್ಸಿನ ಚಿಂತಿ ಇದ್ದವರು ಅವರ ಕಡೆ ಬರ್ತಾರ. ಅವರ ತಲಿಯೊಳಗಿನ ವಿಚಾರ ತಗದು</br> ಅವರಿಗೆ ಸಮಾಧಾನ ಹೇಳೊದು, ಅವರ ಜಡ್ಡು ನೆಟ್ಟಗ ಮಾಡೂದು ನಮ್ಮ ಕಾಕಾನ</br> ಕೆಲಸ. ತಿಳೀತೇನು?"</br>
{{gap}}"ಮತ್ತ ನಾಯೇನ ಅಂದೆ? ನನ್ನಂಥಾ ಸಾಮಾನ್ಯ ಮಂದೀ ಪ್ರಕಾರ ಅವರದು</br> ಹುಚ್ಚರಾಸ್ಪತ್ರೇನs ಖರೆ."</br>
{{gap}}ಸರೋಜಳೊಂದಿಗೆ ವಾದಿಸಿ ಫಲವಿಲ್ಲ. ಮಳೆಗೂ ಬಿಸಿಲಿಗೂ ಅಂತರ</br> ಕಾಣದವಳು ಹುಚ್ಚರಿಗೂ ದುಃಖಿಗಳಿಗೂ ಏನು ಅಂತರ ಕಂಡಾಳು? ಅವಳ</br> ದೃಷ್ಟಿಯಲ್ಲಿ ಎಲ್ಲ ಒಂದೇ.</br>
{{gap}}*</br>{{gap}}*{{gap}}</br>*</br>
{{gap}}ಎರಡು ದಿನ ಕಳೆದ ನಂತರ ಇಂದು ಮಳೆ ಸ್ವಲ್ಪ ಕಡಿಮೆಯಾಗಿದೆ. ಬಿಸಿಲು</br> ಬೀಳದಿದ್ದರೂ ಮುಗಿಲು ಸ್ವಚ್ಛವಾಗಿದೆ. ಇಂದಾದರೂ ಚಿತ್ರ ಬರೆಯಲು ಸುರು</br> ಮಾಡಲೇಬೇಕು....</br>
{{gap}}-"ಏನು ಸಹನಾ, ಮಧ್ಯಾಹ್ನದಿಂದ ಕೂತು ಇದೇನು ನಡೆಸೀ ನೀನು?</br> ಇಷ್ಟೆಲ್ಲಾ ಬಣ್ಣದ ಟ್ಯೂಬ್ಸು, ಬ್ರಷ್, ಕಾಗದಾ ಎಲ್ಲಾ ಹರವಿಕೊಂಡು ಥಣ್ಣಗ</br> ಕೂತೀಯಲ್ಲಾ. ನಿನಗ ಆಗೇದರೆ ಏನು?" ಸಂಜೆ ರೂಮಿನೊಳಗೆ ಬರುತ್ತ ಕೇಳಿದಳು</br> ಸರೋಜ.</br>
{{gap}}"ಏನೂ ಇಲ್ಲ ಸರೋಜ, ಚಿತ್ರದ ಪ್ಲ್ಯಾನ್ ನಡಿಸೀನಿ."</br><noinclude><references/></noinclude>
t8as2fcd59k4qk29otxnb654j9lf6hs
ಪುಟ:ನಡೆದದ್ದೇ ದಾರಿ.pdf/೯೯
104
31036
318046
276359
2026-05-08T09:22:52Z
Shreelatha.Halemane
7642
/* Validated */
318046
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೯೨}}
{{gap}}'ಏ ಏಳು, ಎಷ್ಟೊತ್ತದು ಮಲಗೋದು ? ಕವಿತಾ ಬರದು ಮುಗಿಸಿಯೇ</br> ಬಿಟ್ಟಿಯೇನು ನಿನ್ನೆ ರಾತ್ರಿ ? ಚಹಾದ ಹೊತ್ತಾತು ಏಳಿನ್ನ.' -ಹೊದಿಕೆಯನ್ನೆಳೆದು</br> ಎಬ್ಬಿಸಲು ಪ್ರಯತ್ನಿಸುತ್ತಿದ್ದ ಶ್ರೀ.</br>
{{gap}}ನಿಧಾನವಾಗಿ ಕಣ್ಣು ಬಿಟ್ಟೆ, ಆ ಹೂ....ಏನಂದೀ ?'</br> {{gap}}'ಕವಿತಾ ಬರದು ಮುಗಿಸಿದೇನು ಅಂದೆ.'</br>
{{gap}}'ಕವಿತಾ ? ಛೇ ಇಲ್ಲ. 'ಆಗೂದಿಲ್ಲ, Excuse me' -ಅಂತ ಈಗ ಮೊದಲ</br> ಒಂದು ಪತ್ರಾ ಬರೀಬೇಕು ಆ ಸಂಪಾದಕಗ. ನಿನಗ ಚಹಾ ಆಮ್ಯಾಲೆ ಮಾಡ್ತೀನಿ.'</br>
{{Css image crop
|Image = ನಡೆದದ್ದೇ_ದಾರಿ.pdf
|Page = 99
|bSize = 395
|cWidth = 69
|cHeight = 29
|oTop = 224
|oLeft = 153
|Location = center
|Description =
}}<noinclude><references/></noinclude>
noqcq44ohh07wztdmzn0g60xma57y6c
ಪುಟ:ನಡೆದದ್ದೇ ದಾರಿ.pdf/೮೧
104
31038
318040
201375
2026-05-08T09:15:10Z
Shreelatha.Halemane
7642
/* Validated */
318040
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೭೪}}
ಅವನಿಗೆ.ಏನು ಮಾಡಬೇಕು,ಏನು ಮಾಡಬಾರದು ಅ೦ತ ವಿವೇಚಿಸುವುದಲ್ಲೇ</br>
ಜೀವನ ಸವೆಸುತ್ತಿದ್ದಾನೆ.ವಿನಯ.ಒಮ್ಮೆ ಏನಾದರೂ ಪ್ರಯತ್ನ ಮಾಡಿ ಅವನನ್ನು ದಾರಿಗೆ ಹೆಚ್ಚಬೇಕು.</br>
{{gap}}ದಾರಿ?ಡಾ. ಗೋವಿನಿ೦ದಮೂತಿ೯ಯ ದಾರಿಗೇ? ಊಹ್ಞೂ.ವಿನಯನ ಕೂಡ</br> ನಿಷ್ಟೆ,ಪಾವಿತ್ರ್ಯ, ಜೀವನದ ಮೌಲ್ಯಗಳು ಇತ್ಯಾದಿ ಬಗ್ಗೆ ತಾಸುಗಟ್ಟಲೆ ಸೀರಿಯಸ್ಸಾಗಿ</br> ಚಚೆ೯ ಮಾಡುವಾಗ ಸಿಗಿವ ಏನೋ ಒ೦ದು ಬಗೆಯ ಗಾಳಿಯಲ್ಲಿ ತೇಲಿಸಿದ೦ತಹ</br>
ಅನಿಸಿಕೆಯನ್ನು ವ್ಯಥ೯ ಕಳೆದುಕೊಳ್ಳಲು ಮನಸ್ಸಿಲ್ಲ ನನಗೆ.</br>
{{gap}}ನಿದ್ದೆ ಬರುತ್ತಿದೆ ಮೈ-ಕೈ ನೋವು....ಛೆ,ಇನ್ನು ಈ ಗೋವಿ೦ದಮೂತಿ೯ಯ</br>
ಜೊತೆಗೆ outing ಗೆ ಹೋಗಬಾರದು.ಅವನ ಸಹವಾಸವೇ ಸಾಕು ಇನ್ನ.ಅವನೆ೦ದೂ</br>ನನಗೆ ಬೇಕಾದದ್ದು ಕೊಡಲಾರ.</br>
{{gap}}ನಾಳೆ ಬಾಸ್ ಗೆ ಕಳೆದ ತಿ೦ಗಳು accounts ಒಪ್ಪಿಸಬೇಕು. ಆಫೀಸ್ ಬಿಟ್ಟ ಮೇಲೆ</br>
ಸ೦ಜೆ ಮನೆಗೆ ಬಾ ಅ೦ದಿದ್ದರು ನಿನ್ನೆ. ಯಾಕೆ ಬರಲಿಲ್ಲ ಅ೦ತ ಕೇಳಬಹುದು ನಾಳೆ.</br>
ಹೇಳಿಬಿಡುತ್ತೇನೆ ಸ್ಪಷ್ಟ್ ವಾಗಿ-ನಿಮ್ಮ ಹೆ೦ಡತಿ ಊರಿಗೆ ಹೋದಾಗ ಇನ್ನು ನಿಮ್ಮ</br>
ಮನೆಗೆ ಬರುವುದಿಲ್ಲ ಎ೦ದು.ಇವರಿಗೆ ತಮ್ಮ ಆ ಟಿ. ಬಿ. ಹೆ೦ಡತಿ ಬುಖಾ೯</br>
ಹಾಕಿಕೊ೦ಡು ಏಳೊ ಮಕ್ಕಳನ್ನು ಕಟ್ಟಿಕೊ೦ಡು ತವರಿಗೆ ಹೋದಾಗಲೆಲ್ಲ ಆಫೀಸಿನ</br>
ಕೆಲಸಕ್ಕಾಗಿ ನನಗೆ ಮನೆಗೆ ಬಾ ಅ೦ತ ಹೇಳುವ ಹುಕಿ ಬರುತ್ತದೆ.ಅಯೋ ,ಅವರ ಆ</br>
ಗಡ್ಡ, ಉದ್ದನ್ನ ಟೋಪಿ,ಮಾತಿಗೊಮ್ಮೆ 'ಅಲ್ಲಾ ಕೆ ಕಸಮ್' ಪಲ್ಲವಿ .ಈ ಯಾವುದೂ</br>
ನಾನು like ಮಾಡುವುದಿಲ್ಲ. ಆ ಪುಷ್ಪಾ ಕುಲಕಣಿ೯ ಹೇಗೆ ಸಹಿಸುತ್ತಾಳೋ ? ಟೈಪ್</br>
ಎಲ್ಲಾ ಅವರ ಮನೆಯಲ್ಲಿಯೇ ಕೂತು ಮಾಡುತ್ತಾಳೆ.</br>
{{gap}}ನನಗೆ ಆಗುವುದಿಲ್ಲ ಎ೦ದು ಹೇಳಿಬಿಡುತ್ತೇನೆ ನಾಳೆ. ಮೆಮೊ ಕಳಿಸಿದರೆ ಕಳಿಸಲಿ.</br>
ಕೆಲಸದಿಂದಲೂ ತೆಗೆದುಬಿಡಲಿ ಬೇಕಾದರೆ. 'ನಿನಗ ಬೇಕು ಅನಿಸಿದಾಗ ಬಂದುಬಿಡು.</br> ನನ್ನ ಎಸ್ಟೇಟು ನೋಡಿಕೋ೦ಡು ಇದ್ದುಬಿಡು. ನನಗರೆ ಬ್ಯಾರೆ</br> ಯಾರಿದ್ದಾರ?'-ಅ೦ದರು ಶ೦ಕರಗಡರು ಮೊನ್ನೆ.ದೇವೂರು ಸಣ್ಣ ಹಳ್ಳಿಯಾದರೂ</br> ಅಡ್ಡಿಯಿಲ್ಲಿ. ಈ ಬಾಸ್ ನ 'ಅಲ್ಲಾಕೆ ಕಸಮ್' ನಾನು ತಾಳಲಾರೆ....</br>
{{rh|center=|right=೨೮ ಜುಲೈ, ೧೯೫೮|left=}}
{{gap}}ಬೇಸರ.....ಬೇಸರ ಈ ಬಾಸ್ ಬಹಳ ಕಾಡುತ್ತಿದ್ದಾನೆ. ಇವತ್ತು ಸಂಜೆ ಆ ಎಲ್ಲಾ</br> accounts ಬರೆದು ಮುಗಿಸುವ ತನಕ ನನ್ನ ಭುಜದ ಮೇಲಿನ ಕೈ ತೆಗೆಯಲೇ ಇಲ್ಲ.</br> ಮುದುಕನಾದರೂ ಇಷ್ಟು ಚಪಲ ಅವನಿಗೆ. ಚಪಲ-ಹ್ಞಾ, ಬರೇ ಚಪಲ. ಅದಕ್ಕಿಂತ</br><noinclude><references/></noinclude>
8efc2ok72tosblw9zdm5pijbjuwcjmc
ಪುಟ:ನಡೆದದ್ದೇ ದಾರಿ.pdf/೪೬
104
31043
317985
250716
2026-05-08T04:19:25Z
Shreelatha.Halemane
7642
/* Validated */
317985
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಮುಳ್ಳುಗಳು / ಪ್ರಶ್ನೆ|right=೩೯}}</noinclude>ಮುಳ್ಳುಗಳು / ಪ್ರಶ್ನೆ
ಏನೂ ಎದ್ದು ಕಾಣಲಿಲ್ಲ. ಬಹಳ ಬೇಸರವೆನಿಸಿ ಹೊದ್ದುಕೊಂಡಿದ್ದ ರಗ್ಗನ್ನು ಆಕೆ</br>ಜೋರಾಗಿ ಒದ್ದು ದೂರ ಸರಿಸಿದಳು.</br>
{{gap}}ಎಲ್ಲಿಯೋ ಹನ್ನೆರಡು ಗಂಟೆ ಬಡಿದ ಸದ್ದು ಕೇಳಿಸಿತು. ಕಿಡಿಕಿಯಲ್ಲಿಂದ</br>
ಹೊರಗೆ ಕತ್ತಲು ತುಂಬಿದ ದೂರದ ಆಕಾಶವನ್ನೆ ದಿಟ್ಟಿಸುತ್ತಿದ್ದಂತೆ ಮತ್ತೆ ಅವಳಿಗೆ</br>ಸಂಜೆ ನಡೆದದ್ದೆಲ್ಲ ನೆನಪಾಗಿ, ಎಂಥದೋ ಘೋರ ಅಪಮಾನವಾದಂತೆನಿಸಿ, ಎದೆ</br>ಕುದಿಯಿತು. ಕಿಡಿಕಿಯ ಕಬ್ಬಿಣದ ಸಲಾಕೆಗಳನ್ನು ಕಿತ್ತಿ, ಹೊರಗಿನ ಗೇಟಿನ ಚಿಲಕ</br>ಮುರಿದು, ರಸ್ತೆಯ ಮೇಲಿಂದ ಈ ಅಪರಾತ್ರಿ ಹಾರಿಹೋಗಿ, ಸೀದಾ ಅವನ ಮುಂದೆ</br>ಧುತ್ತೆಂದು ಇಳಿದು, ಅವನ ಎದೆ ಸೀಳಿ ರಕ್ತ ಕುಡಿಯಬೇಕು ಎನ್ನಿಸಿತು.</br>
{{gap}}ಛೇ, ಇದು ರಾಕ್ಷಸೀವೃತ್ತಿ. ಹುಚ್ಚುತನದ ಪರಮಾವಧಿ. ಹಾಗಾದರೆ ಮತ್ತೇನು</br>ಮಾಡುವುದು ? ಸಂಜೆ ಅಷ್ಟೆಲ್ಲ ಬೊಗಳಿ ಕೆಟ್ಟ ಮುಖ ಮಾಡಿಕೊಂಡು ಆತ</br>
ಹೊರಟುಹೋಗುತ್ತಿದ್ದಾಗ ಹಿಡಿದು ನಿಲ್ಲಿಸಿ ಕಪಾಳಿಗೆರಡು ಕೊಡಬೇಕಾಗಿತ್ತೆ ?</br>
ಸುಮ್ಮನೆ ಅವನನ್ನು (ಎಂದಿನ ಹಾಗೆ) ಗಟ್ಟಿಯಾಗಿ ಎದೆಗೊತ್ತಿಕೊಂಡು ತನ್ನೊಳಗೆ</br>
ಅಡಗಿಸಿಕೊಳ್ಳುವುದು, ಕರಗಿಸಿಬಿಡುವುದು ಸಾಧ್ಯವಿದ್ದಿದ್ದರೆ....</br>
{{gap}}ಅಲ್ಲ, ತಾನೇಕೆ ಇಲ್ಲದ ದೊಡ್ಡಸ್ತನ ತೋರಿಸಲು ಹೋಗಿ, 'ನಿನ್ನ ಸುಖವೇ</br>
ನನ್ನ ಸುಖ, ನನಗೆ ನಿನ್ನ ಮೇಲೆ ಸಿಟ್ಟಿಲ್ಲ' ಎಂದೆಲ್ಲ ಹೇಳಬೇಕಾಗಿತ್ತು ? ಎಷ್ಟರ</br>
ಮಟ್ಟಿಗೆ ಪ್ರಾಮಾಣಿಕವಾದುದು ಆ ಮಾತು ? ತಾನು ದುಃಖದ ಮಡುವಿನಲ್ಲಿ</br>
ಮುಳುಗೇಳುತ್ತಿದ್ದಾಗಲೂ ಆತ ಮಾತ್ರ ಸುಖಿಯಾಗಿರಲೆಂದು ಬಯಸಲು ತಾನೇನು</br>ಸಿನೆಮಾದಲ್ಲಿನ ಆದರ್ಶ ನಾಯಕಿಯೆ ?</br>
{{gap}}ಅಲ್ಲ; ತಾನು ಮನುಷ್ಯಳು, ರಕ್ತ-ಮಾಂಸಗಳಿಂದ ತುಂಬಿದ ದೇಹವುಳ್ಳ,</br>
ದ್ವೇಷ-ಕ್ರೋಧ-ಅಸೂಯೆ ಎಲ್ಲವನ್ನೊಳಗೊಂಡ ಮನಸ್ಸುಳ್ಳ ಮನುಷ್ಯಳು.</br>
ಈಗಲೂ ಈ ರಾತ್ರಿ ಹನ್ನೆರಡರಲ್ಲಿ, ತನಗೆ ಅನಿಸುತ್ತಿಲ್ಲವೆ</br>
ಮನಸ್ಸಿನಲ್ಲಿದ್ದುದನ್ನೆಲ್ಲಾ ಕಿರುಚಿಬಿಡಬೇಕು ಎಂದು ? ಅವನಿಗೆ ಕೇಳಿಸುವುದೇ ?</br>
ತಿಳಿಯುವುದೇ ? 'ಶಶೀ, ನಿನ್ನ ಮನಸ್ಸಿನಲ್ಲಿದ್ದುದನ್ನೆಲ್ಲ ನೀನು ಹೇಳದೆಯೆ ನಾನು</br>
ತಿಳಿದುಕೊಳ್ಳಬಲ್ಲೆ, ನಿನ್ನ ಕಣ್ಣುಗಳಲ್ಲಿ ಮಿಂಚುವ ಬೆಳಕಿನಲ್ಲಿ ನಿನ್ನ ಹೃದಯವನ್ನು</br>ಕಾಣಬಲ್ಲೆ'- ಎಂದು ಹೇಳಿದ್ದ, ಬರೆದಿದ್ದ, ಕವಿತೆ ಕಟ್ಟಿ ಹಾಡಿದ್ದ, ಕುಣಿದಿದ್ದ,</br>ಮೈಮರೆತಿದ್ದ; ಸಾಹಿತಿ ಅಲ್ಲವೆ!</br>
{{gap}}ಈಗ ? ಎಲ್ಲಾ ಮರೆತನೆ ? ಅಥವಾ ಬೇಕೆಂದೇ ಹೀಗೆ ಮಾಡುತ್ತಿದ್ದಾನೆಯೇ ?</br>ಸೇಡು ತೀರಿಸಿಕೊಳ್ಳುತ್ತಿದ್ದಾನೆಯೇ ? ಯಾರ ಸೇಡು ಯಾರ ಮೇಲೆ ? ಹಿಂದೊಮ್ಮೆ,</br>ಅವನಿನ್ನೂ 'ಮನುಷ್ಯ'ನಾಗಿದ್ದಾಗ, ಭವಿಷ್ಯದ ಬಗ್ಗೆ ಸವಿಗನಸು ಕಾಣುತ್ತಿದ್ದಾಗ,</br><noinclude><references/></noinclude>
6suwppv9dtdj9ggpo5mk610h1kf7fd4
ಪುಟ:ಅರಮನೆ.pdf/೫೦
104
31054
317930
242441
2026-05-07T14:07:40Z
Shreelatha.Halemane
7642
/* Proofread */
317930
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=ಅರಮನೆ|right=೧೯}}
ಹೊತ್ತಿಗೆ ಹಿ೦ಗಾಗಿ ಬಿಟ್ಟಿರವನಲ್ಲಾ ಯಾದಾರ ದೆವ್ವ ಗಿವ್ವ ಬಡಕೊ೦ಡರಬೌದೋ</br>
ಹೆ೦ಗೆ ಅ೦ತ ಮಮ್ಮಲನೆ ಯೋಚಿಸಿದಳು. ಜಗಲೂರೆಜ್ಜನನ್ನು ಮನದಾಗೆ</br>
ಸ್ಮರಿಸಿದಳು.ರಾಜಮಾತೆ ಭ್ರಯ್ರಮಾ೦ಬೆಯ ಮೆಳ್ಳಗಣ್ಣು ತಾಕಿರಬೌದೆ೦ದು ಭಾವಿಸಿ</br>
ವುಫ್ಫು ಬೆಳ್ಳಗಡ್ಡೆ ಯಿಳೇ ತೆಗೆದು ಹಾಕಿ ನೋಡಿದಳು. ವಲೇಲಿ ಆಟೊ೦ದು</br>
ಘಾಟ ಆದರೂ ಆತನ ಮೂಗಿನಿ೦ದ ವ೦ದಾರ ಸೀನು ಬಾರಲಿಲ್ಲ .. ಕಲ್ಲು </br>
ಗು೦ಡಿನ೦ಗ ಕೂಕ೦ಡೇ ಕೂಕ೦ಡಿದ್ದ , ಯಿ೦ಥ ಅನುಭವ ಥನಗೆ೦ದೂ ಆದುದಿಲ್ಲ</br>ಯಿದು ಯಿದೇ ಮೊದಲ ಸಲ.. ಯೀಸು ವರುಸು ದಿನಮಾನ ತಾನು ಹೇಳಿದ೦ಗ </br>
ಕೇಳಿಕ೦ಡಿದ್ದ ತನ್ನ ಗ೦ಡ ತನ್ನತ್ತ ವ೦ದು ಸಲ ಕಣ್ಣೆತ್ತಿ </br>ಮಾತುದುರಿಸದಿರುವು
ದೆಂದರೇನು? ವ೦ದೇ ವ೦ದ ಮಾತುದುರಿಸದಿರುವು</br>ದೆ೦ದರೇನು? ಯೀತನು ತೀತನೊಳಗೆ ಪೀಡೆ ಪಿಶಾಚಿ </br>
ಸೇರಿಕೊ೦ಡಿರಬೌದೆ೦ದು ಭಾವಿಸಿದ ಆಕಿಯು ಮ೦ತ್ರಗಾರ ಮರೆಪ್ಪನ ಮನೆಗೆ</br> ಹೋಗಿ "ಮಾವಾ
ಯಾಕಾ ಮುದೇತ ಅವುಸದಕ ಬೇಕ೦ದಗ ವ೦ದs ವ೦ದ </br>ಮಾತಾಡುತಾಯಿಲ್ಲಾ.. ಅಯುಗೇಡಿ ಹ೦ಗ ಕು೦ತುಗ೦ಡಾನ ವ೦ದs ಅ೦ತರ </br>ಮ೦ತರಿಸಿಕೊಟ್ಟು ಆತನ್ನ ನಿಸೂರು ಮಾಡು" ಯ೦ತ ಕೇಳಿಕೊ೦ಡಿದ್ದಕ್ಕೆ </br>ಆತನಿದ್ದು "ಮಾವಾ..ಗಾಳಿ ಸವುಡಿರಬೇಕವ್ವಾ" ಯ೦ದು ಅ೦ತರ ಮ೦ತರಿಸಿ </br>ಕೊಟ್ಟನು .ಆಕೆಯು ಅದನ್ನು ತ೦ದು ತನ್ನ ಮುದೇತನ ರೆಟ್ಟೆಗೆ ಕಟ್ಟಲು ಧಯರ್ಯ </br>ಸಾಲದೆ ಮುಂದಿಟ್ಟು ಲೋಬಾನದ ಹೊಗೆ ಹಾಕಿದಳು. "ಯೀಗ್ಲಾರ</br>ಯದ್ದೇಳೋ.. ಸಣಕಂದಮ್ಮನಂಗ ನೋಡ್ಕಂಡಿರೋ ನನ ಸಂಗಾಟ ವಂದೆಲ್ಡು </br>ಮಾತಾಡೋ " ಯಂದು ಗದರಿಸಿ ಕೇಳಿದಳು. ಆದರೆ ಆತ ತುಟಿ ಪಿಟಕ್ಕೆನ್ನಲಿಲ್ಲ</br>.. ಹಿಂಗ ಆಕೆ ಮಾಡಿದ್ದು ತರಾವರಿ ಯತ್ನಗಳ ಪಯ್ಕಿ ವಂದಾರ </br>ಫಲಕಾರಿಯಾಗಲಿಲ್ಲ. ಯಂದೂ ಗಂಡನೆದರು ಅತ್ತಾಕಿಯಲ್ಲದ ಆಕೆಯ ಕಣ್ಣಲ್ಲಿ</br> ವರತೆ ಮೂಡಿತು. ಅಯ್ಯೋ ನನ್ನ ಕರುಮವೇ.. ಯೀ ಯಿಳೀ ವಯಸ್ಸಿನಾಗ</br> ಕಣ್ಣೀರ್ನ ಕಪಾಳಕ್ಕ ತಂದುಕೋಬೇಕಾಗಿ ಬಂತಲ್ಲಾ.. ನಾನು ಮಾಡಿರೋ</br> ತಪ್ಪೇನಾರ ಯಿದ್ರಅದನ್ನಾರ ಹೇಳೋ"" ಯಂದು ಆತನೆದುರ ತಲೆಗೆ ಕಯ್ನ</br> ಹಚಕಂಡು ಕೂತಳು. ಆದರೂ ಆತನ ಬಾಯಿಯಿಂದ ವಂದಾರ ಮಾತು</br> ವುದುರಲಿಲ್ಲ</br>
{{gap}}ಧಯರ್ಯ ಆತುಮ ಯಿಸುವಾಸಕ್ಕೆ ತವರೆಂದೆನಿಸಿದ್ದ ಜಗಲೂರೆವ್ವ ಬಿರು </br>ಬಿರನೆ ಅಂಗಳಕ್ಕೋಡಿ 'ಯ್ಯೋಯ್ ಭರಮಜ್ ಮಾಮೋ ಬರ್ರೆಪ್ಪಾ..<noinclude><references/></noinclude>
fixfct9pq0emblr3y9csen3gi8q4mse
ಪುಟ:ನಡೆದದ್ದೇ ದಾರಿ.pdf/೩೦೩
104
31057
317991
250737
2026-05-08T05:14:08Z
Pragathi. BH
7585
/* Validated */
317991
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೨೯೬|right=ನಡೆದದ್ದೇ ದಾರಿ.}}
{{gap}}ಗ೦ಟೆಯವರೆಗೂ ನಿದೇ೯ಶಕರ ಚೇ೦ಬರಿನಿ೦ದ ಅವರು ಏರುದನಿಯಲ್ಲಿ ಬೈಯ್ದದ್ದು
ಕೇಳಿ ಬರುತ್ತಿತ್ತು. ಆಮೇಲೆ ಬೈಯಿಸಿಕೊ೦ಡಾಕೆ ಕೆ೦ಪಾದ ಕಣ್ಣುಗಳೊ೦ದಿಗೆ ಅಲ್ಲಿ೦ದ
ಹೊರಬ೦ದು ಇಡೀ ದಿನ ಆಳುತ್ತಲೇ ಇರುತ್ತಿದ್ದಳು. ಆನೇಕ ಸಲ ಆಕೆ ಮತ್ತು ತಾರಾ
ಮ್ಯಾಡಮ್ನ ಚೇ೦ಬರಿಗೆ ಹೋಗುವುದು. ಅಲ್ಲಿ ತಾರಾ ಮ್ಯಾಡಮ್ನಿ೦ದಲೂ
ಬೈಯಿಸಿಕೊಳ್ಳುವುದು, ಅಲ್ಲಿ೦ದಲೂ ಅಳುತ್ತಲೇ ಹೊರ ಬರುವುದು, ಮು೦ದೆ ಅನೇಕ
ದಿನ ಅಳುತ್ತಲೇ ಇರುವುದು -ಹೀಗೆ. <br>
{{gap}}ವಾರದಲ್ಲಿ ಮೂರು-ನಾಲ್ಕು ಬಾರಿ ಜಿಲ್ಹಾಮುಖ್ಯಸ್ಥಳವಾದ ಆ ಊರಲ್ಲಿನ
ವಿವಿಧ ಮಹಿಳಾ ಸ೦ಘಟನೆಗಳಿ೦ದ ಡಾ.ತಾರಾ ಪೋಕಳೆಗೆ ಭಾಷಣದ ಅಮ೦ತ್ರಣಗಳು
ಬರುತ್ತಿದ್ದವು. ಸಮಾಜ ವಿಜ़್ನಾನದಲ್ಲಿ ಡಾಕ್ಟರೇಟ್ ಪಡೆದು ಸಮಾಜ ಕಲ್ಯಾಣ
ಇಲಾಖೆಯಲ್ಲಿ ಸರಕಾರೀ ಆಫೀಸರ್ ಆಗಿದ್ದ ತಾರಾ ಮಹಿಳಾ ವಿವೋಚನಾ
ಹೋರಾಟಗಾತಿ೯ಯೂ ಸಾಮಾಜಿಕ ಕಾಯ೯ಕತೆ೯ಯೂ ಆಗಿದ್ದಳು.
ಸ್ತ್ರೀಶೋಷಣೆಯನ್ನು ಧಿಕ್ಕರಿಸಿ ಅಸ್ಖಲಿತವಾಗಿ ಮಾತಾಡಬಲ್ಲವಳಾಗಿದ್ದಳು. ಹೀಗಾಗಿ
ಊರಲ್ಲಿನ ಮಹಿಳಾ ಸ೦ಘಗಳು, ಕಾಲೇಜುಗಳು, ಅಕ್ಕನ ಬಳಗಗಳು, ಭಗಿನೀ
ಮಂಡಳಗಳು- ಎಲ್ಲರೂ ಆಕೆಯನ್ನು ಅತಿಥಿಯೆ೦ದು ಆಮ೦ತ್ರಿಸುತ್ತಿದ್ದರು.
ಈ ತನ್ನೆಲ್ಲ ಚಟುವಟಿಕೆಗಳ ಬಗ್ಗೆ ಆಕೆ ಮೇಲಿ೦ದ ಮೇಲೆ ನಿದೇ೯ಶಕರಿಗೆ ಹೇಳುತ್ತಲೇ
ಹೋದದ್ದರಿ೦ದ ಆಕೆಯ ಕತೃ೯ತ್ವ ಶಕ್ತಿಯ ಬಗ್ಗೆ ಅವರಿಗೆ ಯಾವುದೇ ಸ೦ಶಯ
ಉಳಿಯದ೦ತಾಯಿತು. <br>
* * *
{{gap}}ಅ೦ದು ಶನಿ ವಕ್ರಿಸಿದ್ದು ಯೋಜನಾ ವಿಭಾಗದಲ್ಲಿ ವರದಿಗಾರಳಾಗಿ ಕೆಲಸ
ಮಾಡುತ್ತಿದ್ದ ನಮ೯ದಾ ಕುಲಕಣಿ೯ಯ ಮೇಲೆ. ಯಾವ ಮುನ್ಸೂಚನೆಯೂ ಇಲ್ಲದೆ
ಆಕೆಯನ್ನು ಕರೆಸಿದ ಸಾಹೇಬರು ಆಕೆಯ ಮೇಲೆ ಕಾಗದವೊ೦ದನ್ನು ಎಸೆದು, "ಏನ್ರೀ
ಇದು, ಹೀಗೇ ಏನು ನೀವು ಕೆಲಸ ಮಾಡುವುದು? ಪಗಾರ ತಗೋತೀರಿ, ದುಡೀಲಿಕ್ಕೆ
ಏನಾಗ್ತದ ನಿಮಗ? ಇಷ್ಟು ಲೇಝೀ ಇದ್ದರ ಕೆಲಸಾ ಬಿಟ್ಟು ಮನ್ಯಾಗಿರಿ. ನೌಕರಿ
ಅ೦ದು ಮ್ಯಾಲ ತತ್ವನಿಷ್ಡರಾಗಿ ಮಾಡಬೇಕು," ಅ೦ತ ಇನ್ನೂ ಏನೇನೋ ಒದರಿದರು. <br />
{{gap}}ಪ್ರಸ೦ಗದ ತಲೆ-ಬುಡ ತಿಳಿಯದೆ ಕಕ್ಕಾವಿಕ್ಕಿಯಾಗಿದ್ದ ನಮ೯ದಾಗೆ 'ತತ್ವ' ಶಬ್ದ
ಕೇಳಿದೊಡನೆ ತಲೆಯಲ್ಲಿ ಮಿ೦ಚು ಹೊಡೆದ೦ತಾಗಿ ಇದರ ಹಿ೦ದಿನ ಕೈವಾಡ
ಯಾರದೆ೦ದು ಗೊತ್ತಾಗಿ ಹಲ್ಲು ಕಡಿದಳು. ಹಾಗೆಯೇ ಒಮ್ಮೆ ಆತ ತನ್ನ ಮೇಲೆಸದಿದ್ದ
ಕಾಗದದ ಮೇಲೆ ಕಣ್ಣು ಹಾಯಿಸಿದಳು. ಅದು ಆಕೆಯ ಮೇಲಧಿಕಾರಿ ಡಾ. ತಾರಾ
ಪೋಕಳೆ ಬರೆದಿದ್ದ ಕ೦ಪ್ಲೇ೦ಟು : ತಾನು ಒ೦ದು ಬಹುಮುಖ್ಯವಾದ ಯೋಜನೆಯ <br><noinclude><references/></noinclude>
i0xmljd4h3t0zd5d82lzc8fwg8khce3
317992
317991
2026-05-08T05:14:56Z
Pragathi. BH
7585
317992
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೨೯೬|right=ನಡೆದದ್ದೇ ದಾರಿ.}}
{{gap}}ಗ೦ಟೆಯವರೆಗೂ ನಿದೇ೯ಶಕರ ಚೇ೦ಬರಿನಿ೦ದ ಅವರು ಏರುದನಿಯಲ್ಲಿ ಬೈಯ್ದದ್ದು
ಕೇಳಿ ಬರುತ್ತಿತ್ತು. ಆಮೇಲೆ ಬೈಯಿಸಿಕೊ೦ಡಾಕೆ ಕೆ೦ಪಾದ ಕಣ್ಣುಗಳೊ೦ದಿಗೆ ಅಲ್ಲಿ೦ದ
ಹೊರಬ೦ದು ಇಡೀ ದಿನ ಆಳುತ್ತಲೇ ಇರುತ್ತಿದ್ದಳು. ಆನೇಕ ಸಲ ಆಕೆ ಮತ್ತು ತಾರಾ
ಮ್ಯಾಡಮ್ನ ಚೇ೦ಬರಿಗೆ ಹೋಗುವುದು. ಅಲ್ಲಿ ತಾರಾ ಮ್ಯಾಡಮ್ನಿ೦ದಲೂ
ಬೈಯಿಸಿಕೊಳ್ಳುವುದು, ಅಲ್ಲಿ೦ದಲೂ ಅಳುತ್ತಲೇ ಹೊರ ಬರುವುದು, ಮು೦ದೆ ಅನೇಕ
ದಿನ ಅಳುತ್ತಲೇ ಇರುವುದು -ಹೀಗೆ. <br>
{{gap}}ವಾರದಲ್ಲಿ ಮೂರು-ನಾಲ್ಕು ಬಾರಿ ಜಿಲ್ಹಾಮುಖ್ಯಸ್ಥಳವಾದ ಆ ಊರಲ್ಲಿನ
ವಿವಿಧ ಮಹಿಳಾ ಸ೦ಘಟನೆಗಳಿ೦ದ ಡಾ.ತಾರಾ ಪೋಕಳೆಗೆ ಭಾಷಣದ ಅಮ೦ತ್ರಣಗಳು
ಬರುತ್ತಿದ್ದವು. ಸಮಾಜ ವಿಜ़್ನಾನದಲ್ಲಿ ಡಾಕ್ಟರೇಟ್ ಪಡೆದು ಸಮಾಜ ಕಲ್ಯಾಣ
ಇಲಾಖೆಯಲ್ಲಿ ಸರಕಾರೀ ಆಫೀಸರ್ ಆಗಿದ್ದ ತಾರಾ ಮಹಿಳಾ ವಿವೋಚನಾ
ಹೋರಾಟಗಾತಿ೯ಯೂ ಸಾಮಾಜಿಕ ಕಾಯ೯ಕತೆ೯ಯೂ ಆಗಿದ್ದಳು.
ಸ್ತ್ರೀಶೋಷಣೆಯನ್ನು ಧಿಕ್ಕರಿಸಿ ಅಸ್ಖಲಿತವಾಗಿ ಮಾತಾಡಬಲ್ಲವಳಾಗಿದ್ದಳು. ಹೀಗಾಗಿ
ಊರಲ್ಲಿನ ಮಹಿಳಾ ಸ೦ಘಗಳು, ಕಾಲೇಜುಗಳು, ಅಕ್ಕನ ಬಳಗಗಳು, ಭಗಿನೀ
ಮಂಡಳಗಳು- ಎಲ್ಲರೂ ಆಕೆಯನ್ನು ಅತಿಥಿಯೆ೦ದು ಆಮ೦ತ್ರಿಸುತ್ತಿದ್ದರು.
ಈ ತನ್ನೆಲ್ಲ ಚಟುವಟಿಕೆಗಳ ಬಗ್ಗೆ ಆಕೆ ಮೇಲಿ೦ದ ಮೇಲೆ ನಿದೇ೯ಶಕರಿಗೆ ಹೇಳುತ್ತಲೇ
ಹೋದದ್ದರಿ೦ದ ಆಕೆಯ ಕತೃ೯ತ್ವ ಶಕ್ತಿಯ ಬಗ್ಗೆ ಅವರಿಗೆ ಯಾವುದೇ ಸ೦ಶಯ
ಉಳಿಯದ೦ತಾಯಿತು. <br>
{{rh|center=* * *}}
{{gap}}ಅ೦ದು ಶನಿ ವಕ್ರಿಸಿದ್ದು ಯೋಜನಾ ವಿಭಾಗದಲ್ಲಿ ವರದಿಗಾರಳಾಗಿ ಕೆಲಸ
ಮಾಡುತ್ತಿದ್ದ ನಮ೯ದಾ ಕುಲಕಣಿ೯ಯ ಮೇಲೆ. ಯಾವ ಮುನ್ಸೂಚನೆಯೂ ಇಲ್ಲದೆ
ಆಕೆಯನ್ನು ಕರೆಸಿದ ಸಾಹೇಬರು ಆಕೆಯ ಮೇಲೆ ಕಾಗದವೊ೦ದನ್ನು ಎಸೆದು, "ಏನ್ರೀ
ಇದು, ಹೀಗೇ ಏನು ನೀವು ಕೆಲಸ ಮಾಡುವುದು? ಪಗಾರ ತಗೋತೀರಿ, ದುಡೀಲಿಕ್ಕೆ
ಏನಾಗ್ತದ ನಿಮಗ? ಇಷ್ಟು ಲೇಝೀ ಇದ್ದರ ಕೆಲಸಾ ಬಿಟ್ಟು ಮನ್ಯಾಗಿರಿ. ನೌಕರಿ
ಅ೦ದು ಮ್ಯಾಲ ತತ್ವನಿಷ್ಡರಾಗಿ ಮಾಡಬೇಕು," ಅ೦ತ ಇನ್ನೂ ಏನೇನೋ ಒದರಿದರು. <br />
{{gap}}ಪ್ರಸ೦ಗದ ತಲೆ-ಬುಡ ತಿಳಿಯದೆ ಕಕ್ಕಾವಿಕ್ಕಿಯಾಗಿದ್ದ ನಮ೯ದಾಗೆ 'ತತ್ವ' ಶಬ್ದ
ಕೇಳಿದೊಡನೆ ತಲೆಯಲ್ಲಿ ಮಿ೦ಚು ಹೊಡೆದ೦ತಾಗಿ ಇದರ ಹಿ೦ದಿನ ಕೈವಾಡ
ಯಾರದೆ೦ದು ಗೊತ್ತಾಗಿ ಹಲ್ಲು ಕಡಿದಳು. ಹಾಗೆಯೇ ಒಮ್ಮೆ ಆತ ತನ್ನ ಮೇಲೆಸದಿದ್ದ
ಕಾಗದದ ಮೇಲೆ ಕಣ್ಣು ಹಾಯಿಸಿದಳು. ಅದು ಆಕೆಯ ಮೇಲಧಿಕಾರಿ ಡಾ. ತಾರಾ
ಪೋಕಳೆ ಬರೆದಿದ್ದ ಕ೦ಪ್ಲೇ೦ಟು : ತಾನು ಒ೦ದು ಬಹುಮುಖ್ಯವಾದ ಯೋಜನೆಯ <br><noinclude><references/></noinclude>
ozzj3nchegol4vajokuln5tl4ariy7f
317993
317992
2026-05-08T05:48:18Z
A826
6806
317993
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೨೯೬|right=ನಡೆದದ್ದೇ ದಾರಿ.}}
{{gap}}ಗ೦ಟೆಯವರೆಗೂ ನಿದೇ೯ಶಕರ ಚೇ೦ಬರಿನಿ೦ದ ಅವರು ಏರುದನಿಯಲ್ಲಿ ಬೈಯ್ದದ್ದು ಕೇಳಿ ಬರುತ್ತಿತ್ತು. ಆಮೇಲೆ ಬೈಯಿಸಿಕೊ೦ಡಾಕೆ ಕೆ೦ಪಾದ ಕಣ್ಣುಗಳೊ೦ದಿಗೆ ಅಲ್ಲಿ೦ದ ಹೊರಬ೦ದು ಇಡೀ ದಿನ ಆಳುತ್ತಲೇ ಇರುತ್ತಿದ್ದಳು. ಆನೇಕ ಸಲ ಆಕೆ ಮತ್ತು ತಾರಾ ಮ್ಯಾಡಮ್ನ ಚೇ೦ಬರಿಗೆ ಹೋಗುವುದು. ಅಲ್ಲಿ ತಾರಾ ಮ್ಯಾಡಮ್ನಿ೦ದಲೂ ಬೈಯಿಸಿಕೊಳ್ಳುವುದು, ಅಲ್ಲಿ೦ದಲೂ ಅಳುತ್ತಲೇ ಹೊರ ಬರುವುದು, ಮು೦ದೆ ಅನೇಕ ದಿನ ಅಳುತ್ತಲೇ ಇರುವುದು -ಹೀಗೆ.
{{gap}}ವಾರದಲ್ಲಿ ಮೂರು-ನಾಲ್ಕು ಬಾರಿ ಜಿಲ್ಹಾಮುಖ್ಯಸ್ಥಳವಾದ ಆ ಊರಲ್ಲಿನ ವಿವಿಧ ಮಹಿಳಾ ಸ೦ಘಟನೆಗಳಿ೦ದ ಡಾ.ತಾರಾ ಪೋಕಳೆಗೆ ಭಾಷಣದ ಅಮ೦ತ್ರಣಗಳು ಬರುತ್ತಿದ್ದವು. ಸಮಾಜ ವಿಜ़್ನಾನದಲ್ಲಿ ಡಾಕ್ಟರೇಟ್ ಪಡೆದು ಸಮಾಜ ಕಲ್ಯಾಣ ಇಲಾಖೆಯಲ್ಲಿ ಸರಕಾರೀ ಆಫೀಸರ್ ಆಗಿದ್ದ ತಾರಾ ಮಹಿಳಾ ವಿವೋಚನಾ ಹೋರಾಟಗಾತಿ೯ಯೂ ಸಾಮಾಜಿಕ ಕಾಯ೯ಕತೆ೯ಯೂ ಆಗಿದ್ದಳು. ಸ್ತ್ರೀಶೋಷಣೆಯನ್ನು ಧಿಕ್ಕರಿಸಿ ಅಸ್ಖಲಿತವಾಗಿ ಮಾತಾಡಬಲ್ಲವಳಾಗಿದ್ದಳು. ಹೀಗಾಗಿ ಊರಲ್ಲಿನ ಮಹಿಳಾ ಸ೦ಘಗಳು, ಕಾಲೇಜುಗಳು, ಅಕ್ಕನ ಬಳಗಗಳು, ಭಗಿನೀ ಮಂಡಳಗಳು- ಎಲ್ಲರೂ ಆಕೆಯನ್ನು ಅತಿಥಿಯೆ೦ದು ಆಮ೦ತ್ರಿಸುತ್ತಿದ್ದರು. ಈ ತನ್ನೆಲ್ಲ ಚಟುವಟಿಕೆಗಳ ಬಗ್ಗೆ ಆಕೆ ಮೇಲಿ೦ದ ಮೇಲೆ ನಿದೇ೯ಶಕರಿಗೆ ಹೇಳುತ್ತಲೇ ಹೋದದ್ದರಿ೦ದ ಆಕೆಯ ಕತೃ೯ತ್ವ ಶಕ್ತಿಯ ಬಗ್ಗೆ ಅವರಿಗೆ ಯಾವುದೇ ಸ೦ಶಯ ಉಳಿಯದ೦ತಾಯಿತು.
{{***|3}}
{{gap}}ಅ೦ದು ಶನಿ ವಕ್ರಿಸಿದ್ದು ಯೋಜನಾ ವಿಭಾಗದಲ್ಲಿ ವರದಿಗಾರಳಾಗಿ ಕೆಲಸ ಮಾಡುತ್ತಿದ್ದ ನಮ೯ದಾ ಕುಲಕಣಿ೯ಯ ಮೇಲೆ. ಯಾವ ಮುನ್ಸೂಚನೆಯೂ ಇಲ್ಲದೆ ಆಕೆಯನ್ನು ಕರೆಸಿದ ಸಾಹೇಬರು ಆಕೆಯ ಮೇಲೆ ಕಾಗದವೊ೦ದನ್ನು ಎಸೆದು, "ಏನ್ರೀ ಇದು, ಹೀಗೇ ಏನು ನೀವು ಕೆಲಸ ಮಾಡುವುದು? ಪಗಾರ ತಗೋತೀರಿ, ದುಡೀಲಿಕ್ಕೆ ಏನಾಗ್ತದ ನಿಮಗ? ಇಷ್ಟು ಲೇಝೀ ಇದ್ದರ ಕೆಲಸಾ ಬಿಟ್ಟು ಮನ್ಯಾಗಿರಿ. ನೌಕರಿ ಅ೦ದು ಮ್ಯಾಲ ತತ್ವನಿಷ್ಡರಾಗಿ ಮಾಡಬೇಕು," ಅ೦ತ ಇನ್ನೂ ಏನೇನೋ ಒದರಿದರು.
{{gap}}ಪ್ರಸ೦ಗದ ತಲೆ-ಬುಡ ತಿಳಿಯದೆ ಕಕ್ಕಾವಿಕ್ಕಿಯಾಗಿದ್ದ ನಮ೯ದಾಗೆ 'ತತ್ವ' ಶಬ್ದ ಕೇಳಿದೊಡನೆ ತಲೆಯಲ್ಲಿ ಮಿ೦ಚು ಹೊಡೆದ೦ತಾಗಿ ಇದರ ಹಿ೦ದಿನ ಕೈವಾಡ ಯಾರದೆ೦ದು ಗೊತ್ತಾಗಿ ಹಲ್ಲು ಕಡಿದಳು. ಹಾಗೆಯೇ ಒಮ್ಮೆ ಆತ ತನ್ನ ಮೇಲೆಸದಿದ್ದ ಕಾಗದದ ಮೇಲೆ ಕಣ್ಣು ಹಾಯಿಸಿದಳು. ಅದು ಆಕೆಯ ಮೇಲಧಿಕಾರಿ ಡಾ. ತಾರಾ ಪೋಕಳೆ ಬರೆದಿದ್ದ ಕ೦ಪ್ಲೇ೦ಟು: ತಾನು ಒ೦ದು ಬಹುಮುಖ್ಯವಾದ ಯೋಜನೆಯ<noinclude></noinclude>
2dx6iru4ni62sxecv6m52tcmrr5onci
ಪುಟ:ನಡೆದದ್ದೇ ದಾರಿ.pdf/೧೨೭
104
31080
318062
83849
2026-05-08T09:44:51Z
Shreelatha.Halemane
7642
/* Proofread */
318062
proofread-page
text/x-wiki
<noinclude><pagequality level="3" user="Shreelatha.Halemane" /></noinclude>ಏನು ? ಕಡೀಕೆ ನನ್ನ ಪ್ರಯತ್ನಕ್ಕ ಫಲ ಸಿಕ್ಕಿತು ಅಂತ ಸಮಾಧಾನ ನನಗ.
{{gap}}"ನೀವು ಕೈಹಾಕಿದ ಕೆಲಸ ಎಂದೂ ಫೇಲ್ಗೊಡಿಲಾ ಬಿಡ್ರಿ
{{gap}}"ಹಹ್ಹಹ್ಹ........."
{{gap}}ಪ್ರಿಯವಾಗಿತ್ತು ಆ ಕಾಂಪ್ಲಿಮೆಂಟು,ಯೋಗ್ಯವೂ ಆಗಿತು . .......
ಹೌದು ಬಹಳ ಪ್ರಮಾಣಿಕವಾಗಿ ಪ್ರಯತ್ನಿಸಿದ್ದ ತಾನು, ಚಂದೂಲಾಲ್ ತಮ್ಮ ಜನರಲ್ ಮ್ಯಾನೇಜರ್ ಮಗಳನ್ನು ಮದುವೆಯಾಗಲು ಒಪ್ಪುವಂತೆ ; ಕಾಲದ ವರ್ಶ ನಡೆದದ್ದೆಲ್ಲಾ ಆತ ಮರೆತುಬಿಡುವಂತೆ :ಅದೆಲ್ಲ ಬರಿ ಕನಸು ಎಂದೂ, ಹುಚ್ಚು ಎಂದೂ ನಂಬುವಂತೆ : ತನ್ನ ಪ್ರಯತನ ಸಿದ್ಧಿಸಿದ್ದೇನು ಸಣ್ಣ ಮಾತೆ ? ಕೊನೆಗೊಮೆ ತಾನು ನಿರೀಕ್ಷಿಸಿದಂತೆ ಎಲ್ಲ ನಡೆಯತೊಡಗಿತ್ತು.
{{gap}}-'ನಾ ಹಿಂದಿನದೆಲ್ಲಾ ಮರ್ರ್ತಬಿಟೇನಿಶಂಕರಮಾಮಾ, ನೀವು ಹೇಳಿಧಾಂಗ ಬಾಸ್ ಮಗಳನ್ನು ಲಗ್ನಾ ಮಾಡಿಕೊಳ್ಳಿಕ್ಕೆ ತಯಾರಿದ್ದೀನಿ. ಇಷ್ಟ ದಿವಸ ಆದದೆಲ್ಲಾ ಮನಸಿನ್ನ್ಯಾಗಿನಿಂದ ತಗದ ಬಿಟ್ಟು ಹೊಸಾ ಜೀವನ ಸುರು ಮಾಡುತೀನಿ' -ಅಂದಿದ್ದ ಚಂದೂಲಾಲ್ ಅಂದು ಸಂಜೆ ಚೌಪಾಟಿಯಲ್ಲಿ ಅಡ್ಡಾಡುತಿದ್ದಾಗ, ಬಹಳ ಆತ್ಮೀಯವಾಗಿ.
{{gap}}ತನ್ನ ಗೆಲುವು ಅದು
{{gap}}ಆ ಗೆಲುವು ಪೂರ್ಣವಾಗಲು ಇನ್ನೂ ಒಂದಿಷ್ಟು ಏನೋ ಆಗಬೇಕಿತ್ತು. ಅದು ಆದದ್ದು ಇಂದು ಮುಂಜಾನೆ.
{{gap}}"ಚಹಾ ತಗೋಬರ್ರಿ ಮಾಮಾ" -ಬಾಗಿಲಲ್ಲಿ ನಿಂತು ಹೇಳಿದ್ದಳು ಕಲಾ
{{gap}}ತಲೆಯ ಮೇಲೆ ಸ್ನಾನ ಮಾಡಿದ್ದಿರಬೇಕು, ಕೂದಲು ಬೆನ್ನಮೇಲೆ ಹರಡಿದ್ದವು : ಸಾದಾ ಬಿಳಿಯ ಸೀರೆ : ಯಾವ ಅಲಂಕಾರವು ಇಲ್ಲದ್ದೇ ಇದ್ದರೂ ಮಿಂಚುತ್ತಿದ್ದ ಕಣ್ಣುಗಳು.... ಇಪ್ಪತ್ತು ವರ್ಷಗಳ ಹಿಂದೆ ಇವಳ ಅಕ್ಕನನ್ನು ತಾನು ಮಾದುವೆಯಾದಾಗ ಆವಳೂ ಹೀಗೇ ಕಾಣುತ್ತಿದ್ದಳು. ಈಗ..ಓಹ್, ಕರಿ ಬಿಳಿ ಕೂದಲಿನ ನಿರಿಗೆಗಟ್ಟಿದ ಹಣೆಯ,ಜೋತುಬಿದ್ದ ಎದೆಯ,ದಪ್ಪ ನಿತಂಬದ ಸಿಡುಕಿ ಹೆಂಡತಿಯ ಈಗಿನ ಸ್ವರೂಪ ನೆನೆಯಲೂ ಬೇಸರವಾಯಿತು ಶಂಕರಮಾಮಾಮನಿಗೆ.ಅದರ ಬದಲು ಇನ್ನೊಮ್ಮೆ ಕಲಾನನ್ನೇ ನೋಡಿದರೆ ಈ ಫೈಲುಗಳಿಂದ ಹಿಡಿದ ತಲೆಚಿಟ್ಟು ಕಡಿಮೆಯಾದೀತು'
{{gap}}-ಕಲಾ:ತಾಯಿ-ತಂದೆಯಿಲ್ಲದ ತಬ್ಬಲಿಯೆಂದು ತನ್ನ ಹೆಂಡತಿ ಮದುವೆಯಾದಾಗ ತನ್ನೋಂದಿಗೇ ಈ ಪುಟ್ಟ ತಂಗಿಯನ್ನೂ ಕರೆತಂದಿದ್ದಳು ಗಂಡನ ಮನೆಗೆ.ಆಗಿನ್ನೂ ಕಲಾಗೆ ಎಂಟು ಹತ್ತು ವರ್ಷವಿದ್ದೀತು.ಆವಳನ್ನು ತಾನೂ ತನ್ನ<noinclude><references/></noinclude>
1flqvqm7a2t4fqk7eonhcep7kbvekzw
ಪುಟ:ನಡೆದದ್ದೇ ದಾರಿ.pdf/೧೧೪
104
31126
318051
214769
2026-05-08T09:26:04Z
Shreelatha.Halemane
7642
/* Validated */
318051
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಕೊನೆಯ ದಾರಿ / ಮಳೆ ಬಂದಾಗ|right=೧೦೭}}
ಇದೇನು ಸಹನಾ?ನಿನಗೇನು ಹುಚ್ಚುಗಿಚ್ಚು ಹಿಡದsದೋ ಏನು? ಇಷ್ಟು ದಿವಸ</br> ಕೂತು ತೆಗೆದ ಚಿತ್ರಾ ಈ ಮಳೆಯ ನೀರೊಳಗ ನೆನಸತಾ ಇದ್ದೀಯಲ್ಲ ! ಅಯ್ಯೋ</br> ದೇವರs,ಎಲ್ಲಾ ಬಣ್ಣ ನೀರಿಗೆ ಕರಗಿ ಹರಿದು ಹೋಗಲಿಕ್ಹತ್ತೇದಲ್ಲ s ಸಹನಾ.</br> ಹಿಂಗ್ಯಾಕ ನಮ್ಮವ್ವಾ? ತಲೀ ಗಿಲೀ ಕೆಟ್ಟsದೇನು?'</br>
{{gap}}'ಬಿಡು ನನ್ನ ಸರೋಜ,ನೀ ಒಳಗ ಹೋಗು'.</br>
{{gap}}'ಅಲ್ಲ s ಹುಚ್ಚಿ,ನೀ ಬೇಕಾದರ ತೋಯ್ಸಿಗೋ. ಆದರ ಆ ಚಿತ್ರಾ ಯಾಕ</br> ಕೆಡಸತೀ? ಛೆ,ಇದರಾಗೇನೂ ಉಳೀಲಿಲ್ಲ ಈಗ.ಒಂದ ಸ್ವಲ್ಪ ಕಣ್ಣಿನ ಹೊರತು</br> ಮತ್ತೇನೂ ಕಾಣ್ಸೂದಿಲ್ಲ. ಈ ಮನುಷ್ಯಾನ ಮೈ-ಕೈ,ಗಿಡಾ-ಗುಡ್ಡ ಎಲ್ಲಾ ಮಳೆಯ</br> ನೀರೂಳಗ ತೊಯ್ಡು ಹೋದವಲ್ಲ ಪೂರಾ ಬಿಳೇ ಕಾಗದ ಆಗಿಹೋಯ್ತೂ. ಹಿಂಗ್ಯಾಕ</br> ಮಾಡಿದೀ ಸಹನಾ?'</br>
{{gap}}Incurable....Incurable...'</br>
{{gap}}-ಮಳೆಯ ನೀರು ಅವಳನ್ನು ಪೂರಾ ತೋಯಿಸಿತ್ತು.ಅವಳ ಮುಖದ ಮೇಲೆ</br> ಹರಿಯುತ್ತಿದ್ದ ನೀರಿನಲ್ಲಿ ಅವಳ ಕಂಬನಿ ಬೆರೆತಿದೆಯೇ ಎಂದು ತಿಳಿದುಕೊಳ್ಳಲು</br> ವ್ಯರ್ಥಪ್ರಯತ್ನ ಮಾಡುತ್ತಿದ್ದಳು ಸರೋಜ.</br>
{{gap}}-ಮಳೆ ಸುರಿಯುತ್ತಲೇ ಇತ್ತು.</br><noinclude><references/></noinclude>
qbxufct5yysqwngxkgmzgbys4mbp4yt
ಪುಟ:ನಡೆದದ್ದೇ ದಾರಿ.pdf/೧೨೦
104
31236
318055
250450
2026-05-08T09:29:02Z
Shreelatha.Halemane
7642
/* Validated */
318055
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|center=|left=ಕೊನೆಯ ದಾರಿ / ನೆರಳು|right=೧೧೨}}</small></noinclude>
{{gap}} ಹ್ಞು, ತನ್ನ ಅವ್ವ ಅವನನ್ನೇಕೆ ಮದುವೆಯೂಗಲಿಲ್ಲ ?<br>
{{gap}}<p>-'ಮಾಲೀ. ನನಗ ಗೊತ್ತದಽ ಎನು ? ನಾ ಸ್ಕೂಲಿನ್ಯಾಗ ಕಲಿಯೋವಾಗ<br>
ಸದಾಶಿವ ನನಗ ಇಂಗ್ಲೀಷು ಹೇಳಿಕೊಡತಿದ್ಡ.ಅವನ ಲಗ್ನಕ್ಕ ಆದದ್ದು ಗೊತ್ತಿದ್ರೂ<br>
ನಾ ಅವನನ್ನ ಪ್ರೀತಿ ಮಾಡತಿದ್ದೆ. ಪ್ರೀತಿಗೆ-ಲಗ್ನಕ್ಕ ಎನೂ ಸಂಬಂಧ ಇಲ್ಲಂತ ಅವನ<br>
ಹೇಳಿದ್ದ.ಆದರ-'</p>
{{gap}}<p>ಮುಂದಿನ ಕತೆ ಗೊತ್ತಿದೆ ಮಾಲತಿಗೆ.ಅವ್ವನಂತೆಯೇ ಇನ್ನೂ ಬಹಳ<br>
ಹುಡುಗಿಯರಿಗೆ ಅವನು ಇಂಗ್ಲೀಷು ಹೇಳಿಕೊಡುತ್ತಿದ್ದುದು,ಅವರೆಲ್ಲರಿಗೂ ಅವನು<br>
ಪ್ರೀತಿಗೂ-ಲಗ್ನಕ್ಕೂ ಸಂಬಂಧವಿಲ್ಲ ವೆಂದು ಹೇಳುತ್ತಿದ್ದುದು ....ಅವ್ವನಿಗೆ ಈ<br>
ವಿಷಯ ಗೊತ್ತಾದಾಗ ಅವಳಿಗೆ ಬಹಳ ಶಾಕ್ ಆದದ್ದು,ಮುಂದೆ ಅವನು ಲಾ ಓದಲಿಕ್ಕೆ<br>
ಬೇರೆ ಊರಿಗೆ ಹೋದದ್ದು.ಎಲೆಕ್ಷನ್ನು ಸುಡುಗಾಡು ಅಂತ ರಾಜಕಾರಣ ಸೇರಿದ್ದು,<br>
ಅನೇಕ ವರ್ಷಗಳ ನಂತರ ಬೇಸರವಾಗಿ ಅಪ್ಪನನ್ನು ಮದುವೆಯಾಗಲು ಒಪ್ಪಿದ್ದು,<br>
ಸದಾಶಿವರಾಯನನ್ನು ಮರೆತುಬಿಟ್ಟದ್ದು......</P>
{{gap}}<p>ಹಳೆಯ ಕತೆ.ಅವ್ವನ ಹೃದಯದ ತೀರ ಒಳಗಿನ ಪದರಿನ ಕೆಳಗಿನ<br>
ಪಾತಾಳಗವಿಯೊಳಗುಳಿದಿರಬೇಕು ಅದು.ಮೇಲೆ ಮಾತ್ರ ಅವ್ವ ಗಂಭೀರ.ಸ್ಥಿರ.ಎಲ್ಲ<br>
ಗೊತ್ತಿದ್ದೂ ಎಲ್ಲವನ್ನೂ ಸಹನಯಿಂದ ಎದುರಿಸಿ ಜೀವಿಸಿದ್ದೂ.ಮುಪ್ಪಿನ<br>
ದಿನಗಳಲ್ಲೇಕೆ ಹೀಗಾಗತೊಡಗಿದ್ದಾಳೆ ಅವ್ವ ?<br></p>
{{gap}}''ಏ ಮಾಲತೀ...''<br>
{{gap}}''ಏನವ್ವಾ?''<br>
{{gap}}"ಯಾರೋ ಬಂದಾರ ನೋಡಽ"<br>
{{gap}}<p>ಯಾರೇ ಬಂದಿದ್ದರೂ ಬಂದವರ ಹೆಸರು-ಕುಲಗೋತ್ರ ಎಲ್ಲವನ್ನೂ<br>
ಒಳಗಡೆ ಕೂತಿರುವ ಅವ್ವನಿಗೆ <br>ಒಯ್ದು ತಿಳಿಸಬೇಕು.ಇಲ್ಲವಾದರೆ ಕೂಗಾಡಲು ಸುರು.<br>
ಈಗೀಗ ಅವ್ವ ಎಲ್ಲದರಲ್ಲೂ ಬಾಯಿಹಾಕಿ ಬೇಸರವುಂಟು ಮಾಡುತ್ತಿದ್ದಾಳೆ. ಅವಳಿಗೆ
ಎಲ್ಲರ ಬಗೆಗೆ ವಿಪರೀತ ಕುತೂಹಲ.<br>
{{gap}}''ಏ ಮಾಲತೀ..''<br>
{{gap}}''ಯಾರೂ ಇಲ್ಲವ್ವಾ,ಸುಮ್ನಿರು.''<br>
''ಯಾರೋ ಮಾತಾಡ್ತಾರಲ್ಲಽ,ಸುಳ್ಳ ಯಾಕ ಹೇಳತೀ ?ನನ್ನ ಮಾತು ಅಂದ್ರ<br>
ಎಷ್ಟು ಅಲಕ್ಷ್ಯ ನಿನಗ-''<br>
{{gap}}ಮುಂದೆ ಕೇಳಲಾಗದೆ ಮಾಲತಿ ಎದ್ದು ಅವ್ವನ ಕೋಣೆಗೆ ಹೋಗಿ<br>
ಪಿಸುಧ್ವನಿಯುಲ್ಲಿ ಹೇಳಿದಳು.''ಅವ್ವಾ,ದಯಮಾಡಿ ಬಾಯಿಮಾಡಬೇಡ.ಬೀನಾನ<br><noinclude><references/></noinclude>
pqa4izhdfzeonhuybykoi5natt6fd2g
ಪುಟ:ನಡೆದದ್ದೇ ದಾರಿ.pdf/೩೩
104
31237
317970
200501
2026-05-08T03:35:48Z
Shreelatha.Halemane
7642
/* Validated */
317970
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೨೬}}
{{gap}}ಆತನೂ ಗಂಡಸೇ.ತಾನಾತನನ್ನು ದ್ವೇಷಿಸಿದ್ದೆನೇ?</br>
{{gap}}-ಎದ್ದು ರೂಮಿನ ಬಾಗಿಲು ಮುಚ್ಚಿ ಪ್ರೊ.ಲೀಲಾವತಿ ಅಂದಿನ ಪತ್ರಗಳಿಗೆ</br> ಉತ್ತರ ಬರೆಯಲೆಂದು ಕಾಗದ-ಪೆನ್ನು ಹಿಡಿದು ಕುಳಿತಳು.</br>
{{gap}}ಕಳೆದ ಕೆಲ ತಿಂಗಳುಗಳಿಂದ ಹಲವಾರು ಕಡೆ ಅತಿಥಿಯಾಗಿ ಹೋಗಿ-ಹೋಗಿ</br> ಬೇಸರ ಬಂದದೆ.ಇನ್ನು ಕೆಲವು ದಿವಸವಾದರೂ ಯಾವ ಆಮಂತ್ರಣವನ್ನೂ</br> ಸ್ವೀಕರಿಸಬಾರದು."ಇಲ್ಲ,ಆಗುವುದಿಲ್ಲ"ಎಂದು ಉತ್ತರಿಸಿಬಿಟ್ಟರೆ ತೀರಿತು. ತೊಂದರೆ</br> ತಪ್ಪಿತು;ಕಾಟ ಕಳೆಯಿತು.</br>
{{gap}}ಅಂದೊಮ್ಮೆ ಸದಾನಂದನ ಪ್ರಶ್ನೆಗೆ "ಇಲ್ಲ,ಆಗುವುದಿಲ್ಲ"ಎಂದುತ್ತರಿಸಿದ್ದೆ</br> ತಾನು.ಯಾಕೆ? ಈ ಇಪ್ಪತ್ತು ವರ್ಷ್ಗಳಲ್ಲಿ ಲೆಕ್ಕವಿಲ್ಲದಷ್ಟು ಸಲ "ಯಾಕೆ"? ಎಂದು</br> ತನ್ನನ್ನು ತಾನೇ ಕೇಳಿಕೊಂಡುದುಂಟು.ಯಾಕೆ?ತಂದೆ ಬೇಡವೆಂದರೆಂದೇ? ಸ್ವಲ್ಪ</br> ಮಟ್ಟಿಗೆ ಹೌದು;ತನಗೆ ಮದುವೆಯಾಗದೆ ಒಂಟಿಯಾಗಿದ್ದು</br> ಜೀವನವನ್ನೆದುರಿಸಬೇಕೆಂಬ ಉತ್ಸಾಹವಿತ್ತೆಂದೆ? ಇತ್ತೇನೋ! ಈಗಿಲ್ಲ;</br> ಸದಾನಂದನನ್ನು ತಾನು ಪ್ರೀತಿಸುತ್ತಿರಲಿಲ್ಲವೆಂದೆ?-ಛೇ,ಇದೇನು ಹುಚ್ಚುಚ್ಚಾರ</br> ವಿಚಾರ ಈ ರಾತ್ರಿ ಹೊತ್ತಿನಲ್ಲಿ! ಮಾಡಬೇಕಾದ ಕೆಲಸ ಗುಡ್ಡದೃಷ್ಟಿಗೆ ಎಲ್ಲಾ ಬಿಟ್ಟು</br> ಎಂದೋ ಒಮ್ಮೆ ಆಗಿ ಹೋದ ಏನೋ ಒಂದನ್ನು ನಡೆಯುತ್ತ ಕೂಡಲು ತಾನೇನು</br> ಈ ತನ್ನ ವಾರ್ಡಗಳ ಪೈಕಿ ಒಬ್ಬಳಾದೆನೇ!</br>
{{gap}}ಭರಾ ಭರಾ ಪತ್ರ ಗೀಚಿ ಮುಗಿಸಿದಳು ಪ್ರೊ.ಲೀಲಾವತಿ. ನಂತರ ಎದ್ದು</br> ಡೈನಿಂಗ್ ಹಾಲಿಗೆ ನಡೆದಳು.</br>
{{gap}}ಇವತ್ತೇಕೋ ಹಸಿವೆಯಾಗಿದೆ. ಈ ಹುಡುಗಿಯರೆಲ್ಲ ಎಷ್ಟು ಮಜವಾಗಿ</br> ಕೂಳು ಬಕ್ಕರಿಸುತ್ತಿದ್ದಾರಲ್ಲ, ಇವರ ಹೊಟ್ಟೆಯಲ್ಲಿ ಬಕಾಸುರನೇ ಇರಬೇಕು. ತನಗೆ</br> ಮಾತ್ರ ಹೊಟ್ಟೆತುಂಬ ತಿನ್ನಲಿಕ್ಕೂ ಸ್ವಾತಂತ್ರ್ಯವಿಲ್ಲ. ಈಗಲೇ ತನ್ನ ತೂಕ</br> ನೂರಾಎಂಬತ್ತು ಪೌಂಡುಗಳಾಗಿ ಹೋಗಿದೆ.ಇನ್ನು ಹೆಚ್ಚಾದರೆ ತೀರ ನಾಚಿಕೆಗೇಡು........</br>
{{gap}}ಆರಾಮಾಗಿ ಕೂತು ಚಪಾತಿ ತಿನ್ನುತ್ತಿದ್ದಾಳೆ ಸರೋಜಿನಿ. ತಾನವಳಿಗೆ</br> ಬೈಯುವುದು ಆಗಲೇ ಮುಗಿದಿದೆ. ಆದರೂ ಅವಳಿಷ್ಟು ನಿಶ್ಚಿಂತೆಯಾಗಿ ಕೂತು ಊಟ</br> ಮಾಡುವದು ನೋಡಿದರೆ ಇನ್ನೊಂದಿಷ್ಟು ಏನಾದರೂ ಅಂದು ಹೋಗಬೇಕೆಂಬ</br> ಆಸೆಯುಂಟಾಗುತ್ತದೆ. ಸ್ವಲ್ಪವೂ ತೂಕದ ಸಮಸ್ಯೆಯಿಲ್ಲವಲ್ಲ ಈ ಹಾಳಾದವಳಿಗೆ!</br>
{{gap}}"ಏನs ಸರೋಜಿನಿ,ರಾತ್ರಿ ನಿದ್ದೀ ಮಾಡತೀಯೋ ಏನು ಬರೇ ಕನಸು</br> ಕಾಣತಿರತೀಯೋ?"</br>
{{gap}}ಹುಡುಗಿಯರೆಲ್ಲ ನಕ್ಕರು. ತಾನೂ ಅದನ್ನು ನಗುತ್ತಲೇ ಹೇಳಿದ್ದರೂ ಆ</br><noinclude><references/></noinclude>
p9w95r2yng1ppn823ncesll6js96ja5
ಪುಟ:ನಡೆದದ್ದೇ ದಾರಿ.pdf/೩೦೦
104
31240
317966
250638
2026-05-08T03:18:46Z
Pragathi. BH
7585
/* Validated */
317966
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ತಾರಾ ಮ್ಯಾಡಮ್ ಮತ್ತು ತತ್ವಗಳು}}
{{gap}}"ಮೇ ಆಯ್ ಕಮಿನ್ ಸರ್?"-ತೂಗುಬಾಗಿಲಿನಾಚೆಯಿಂದ ಸ್ಟ್ಯೆಲಿಶ್
ಇಂಗ್ಲಿಶ್ ಉಚ್ಚಾರಣೆಯ ಮಧುರ ಸ್ವರ ತೇಲಿ ಬಂದಿತು.<br>
{{gap}}"ಯೆಸ್, ಕಮಿನ್".-ಅಂದರು,ಓದುತ್ತಿದ್ದ ಫೈಲಿನಿಂದ ತಲೆಯೆತ್ತದೆಯೇ,
ಹಿಂದಿನ ದಿನವೇ ಆ ಕಚೇರಿಗೆ ಹಾಜರಾಗಿ ಚಾರ್ಜು ವಹಿಸಿಕೊಂಡಿದ್ದ ಇಲಾಖೆಯ
ನಿರ್ದೇಶಕರು. ಹೆಣ್ಣು ದನಿ ಕೇಳಿ ಬಳೆಗಳ ಕಿಣಿಕಿಣಿ ನಾದ ನಿರೀಕ್ಷಿಸಿದ್ದ ನಿರ್ದೇಶಕರು
ಅದು ಕೇಳದಿದ್ದಾಗ ತಲೆಯೆತ್ತಿ ಒಳಬಂದಾಕೆಯನ್ನು ಒಮ್ಮೆ ನೋಡಿದರು.
ಸ್ಲೀಲೆಸ್ ಬ್ಲೌಜು, ಬಾಯ್ ಕಟ್ ಕೂದಲು,ಹೊಕ್ಕುಳ ಕೆಳಗೆ ಸೀರೆ,ಅಪ್ಪಟ
ಮಾಡರ್ನ್ ವನತೆ.ಆ ಕಿವಿಯಿಂದು ಈ ಕಿವಿಯವರೆಗೂ ತುಟಿಯರಳಿಸಿ ಆಕೆ
ಮಾತಾಡಿದಳು. "ಸರ್,ನಾನು ಡಾ.ತಾರಾ ಪೋಕಳೆ.ಈ ಆಫೀಸಿನ ಸಹಾಯಕ
ನಿರ್ದೇಶಕಿ.ನಿನ್ನೆ ನೀವು ಚಾರ್ಜು ತಗೊಂಡಾಗ ನಾನು ಲೀವ್ ಮ್ಯಾಲಿದ್ದೆ.ಇವತ್ತ
ಬಂದ ಕೂಡಲೇ ನಿಮ್ಮನ್ನ ಭೆಟ್ಟಿ ಆಗ್ಲಿಕ್ಕೆ ಓಡಿ ಬಂದೀನಿ."ಅಷ್ಟಂದು ಅವರು ಹೇಳುವ
ಮೊದಲೇ ಆವರೆದುರು ಕೂತು ಕಣ್ಣುಗಳಲ್ಲಿ ಪ್ರಶಂಸೆಯ ಮಿಂಚು ತುಳುಕಿಸುತ್ತ
ಮುಂದುವರಿಸಿದಳು, "ನಿಮ್ಮ ಬಗ್ಗೆ ನಾ ಭಾಳ ಕೇಳೀನಿ ಸರ್.ನೀವು ಬಹಳ
ಎಫಿಶಿಯಂಟ್,ಮತ್ತ ಅಷ್ಟೇಸ್ತ್ರಿಕ್ಟ್,ಅಗದೀ ಕೇಪೆಬಲ್,ಅಂತ.ನನಗೆ ಭಾಳ ಖುಷಿ
ಆಗೇದ ಸರ್,ಹಾಳಾಗಿ ಹೋಗತಾ ಇರೋ ಈ ಆಫೀಸನ್ನ ಸುಧಾರಸ್ಲಿ ಕ್ಕೆ ನಿಮ್ಮಂಥಾ
ಕೆಲವೇ ಕೆಲವು ಸಿನ್ಸಿಯರ್ ಮತ್ತ ಆನೆಸ್ಟ್ ವರ್ಕರ್ಸ್ಗೆ ಭಾಳ ಸಂತೋಷ ಆಗೇದ."<br>
{{gap}}ಹೊಗಳಿಕೆ ಯಾರಿಗೆ ಪ್ರಿಯವಲ್ಲ? ಸಾಹೇಬರ ಹುಬ್ಬು ಸಡಿಲಗೊಂಡವು.
ತುಟಿಗಳ ಮೇಲೆ ಕಂಡೂ ಕಾಣದ ಹಾಗೆ ಮುಗುಳ್ನಗು ಮೂಡಿತು.
ಈ ಪ್ರತಿಕ್ರಿಯೆಯಿಂದ ಪ್ರಚೋದನೆ ಸಿಕ್ಕಂತೆನಿಸಿ ತಾರಾ ಪೋಕಳೆ ತನ್ನ ನಿವೇದನೆ ಸುರು
ಮಾಡಿಯೇ ಬಿಟ್ಟಳು: "ಸರ್, ಈ ಆಫೀಸಿನ್ಯಾಗ ನಾನು ಹದಿನೈದು ವರ್ಷದಿಂದ
ಕೆಲಸಾ ಮಾಡ್ಲಿಕತ್ತೀನಿ,ನಾಲ್ಕು ಸರೆ ಟ್ರಾನ್ಸಫರ್ ಆದದ್ದನ್ನ ಕ್ಯಾನ್ಸಲ್
ಮಾಡಿಸಿಗೊಂಡೀನಿ; ನಾನು ಈ ಆಫೀಸಿನ ಆಧಾರಸ್ತಂಭಧಾಂಗ ಪ್ರಾಮಾಣಿಕವಾಗಿ,<br><noinclude><references/></noinclude>
hvd8iisacj2qhdkkp4q4cgjnh1iq8uw
ಪುಟ:ನಡೆದದ್ದೇ ದಾರಿ.pdf/೧೨೩
104
31241
318058
84016
2026-05-08T09:34:44Z
Shreelatha.Halemane
7642
/* Proofread */
318058
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=೧೧೬|right=ನಡೆದದ್ದೇ ದಾರಿ }}
{{gap}}ಉತ್ತರದ ಅವಶ್ಯಕತೆಯಿರಲಿಲ್ಲ . ಕೆದರಿನ ಕೂದಲಿನ , ಮಾಸಿದ ಸೀರೆಯ ಅವ್ವ ತನ್ನ ಕೋಲು ಸಹಿತವಾಗಿ ಹೊರಗೆ ಬ೦ದು ಸೋಫಾದ ಮೇಲೆ ಆಫೀಸರುಗಳ ಮಧ್ಯದಲ್ಲಿ ಕೂತುಬಿಟ್ಟಿದ್ದಳು . ತನ್ನ ಗ೦ಡನ ಕೆ೦ಗಣ್ಣಿನ ದೃಷ್ಟಿಯನ್ನೆದುರಿಸುವ ದೈರ್ಯವಾಗದೆ ಮಾಲತಿ ತಾಯಿಯ ಸಮೀಪ ಬ೦ದು ರಮಿಸುವ ಧ್ವನಿಯಲ್ಲಿ ಹೇಳಿದಳು,'ಒಳಗೆ ನಡೀ ಅವ್ವಾ."
{{gap}}" ನಾ ಒಲ್ಲೆ ವಾ ಒಲ್ಲೆ . ನನಗೆ ಅ೦ಜಿಕೆ ಬರ್ತದ, ಯಾರೋ ನನ್ನ ಹಿ೦ದಿ೦ದೇ ಇದ್ದಾ೦ಗ ಅನಸತದ."
{{gap}}ಅವ್ವ ನಿಜವಾಗಿಯೂ ಹೆದರಿದ್ದಳು.ಏನು ಮಾಡಲೂ ತೋಚದೆ ಇಲ್ಲದ ನಗೆ ತ೦ದುಕೊ೦ಡು ಎಲ್ಲರನ್ನೂ ನೋಡುತ್ತಾ ಪೆಚ್ಚುಧ್ವನಿಯಲ್ಲಿ ಹೇಳಿದಳು ಮಾಲತಿ," ನನ್ನ ಮದರ್ ಬಹಳ ಸೋಶಿಯಲ್ . ಇಷ್ಟು ವಯಸ್ಸಾದ್ರೂ ಬಹಳ ಹುರುಪು ."
{{gap}}"ಹೆ ಹ್ಹೆ ಹ್ಹೆ" ಎ೦ದರು ಕೆಲವರು.
{{gap}}ನ೦ತರ ಬಹಳ ಹೊತ್ತುನಿಲ್ಲದೆ ಬ೦ದ ಆತಿಥಿಗಳೆಲ್ಲ ಒಬ್ಬೊಬ್ಬರಾಗಿ ಗುಡ್ ನೈಟ್ ಹೇಳಿ ಹೊರಟುಹೋದರು.
{{gap}}- " ನಾ ಇಷ್ಟದಿವಸ ನಿನ್ನ ಸಲುವಾಗಿ ತಡಕೊ೦ಡಿದ್ದೆ ಮಾಲತಿ, ಈಗ ನನಗ ಸಾಧ್ಯಿಲ್ಲ . ನಿನಗೆ ನಾ ಬೇಕಾಗಿದ್ರ ನಿನ್ನ ಅವ್ವನ್ನ ಬಿಡಬೇಕಾಗತದ ನೀ.ತಿಳೀತಿಲ್ಲೊ? ಇಲ್ಲೆ ಹಾಸ್ಪಿಟಲಿನ ಡಾಕ್ಟರು ನನಗ ಗುರುತ್ತಿದ್ದಾರ .ಅವರು ಹೊಸದಾಗಿ ಮುದುಕರ ಸಲುವಾಗಿ ಒ೦ದು ಹೋಮ್ ತೆಗೆದಾರ .ಅಲ್ಲೆ ಸೇರಸೂಣ೦ತ ನಿಮ್ಮವ್ವನ್ನ ."
{{gap}}_ ದೃಡವಾದ ಧ್ವನಿಯಲ್ಲಿ ಹೇಳಿದ್ದ ಅವಳ ಗ೦ಡ ............
{{gap}}ಮಾಲತಿಯಲ್ಲಿ ಉತ್ತರಿಸುವ ಶಕ್ತಿ ಇರಲೇ ಇಲ್ಲ .
*
{{gap}}ಎಲ್ಲರ ಒತ್ತಾಯದ೦ತೆ ಮುದುಕಿಯನ್ನು ಕಳಿಸಿ ಒ೦ದು ವಾರವಾಯಿತು. ಅವ್ವನ ರೂಮಿನ ಕಡೆ ಹಣಿಕಿಹಾಕಲೂ ಸಾಧ್ಯವಾಗಿರಲಿಲ್ಲ ಮಾಲತಿಗೆ. ಅವಳ ಮನಸ್ಸು ಶೂನ್ಯವಾಗಿದೆ.'ಅವ್ವಾ ,ನಿಮ್ಮೂರಿಗೆ ಹೋಗೋಣ ನಡಿ , ಬರ್ತೀಯೇನು?" ಎ೦ದು ಕೇಳಿದಾಗ ಮುದುಕಿಯ ಕಣ್ಣಲ್ಲಿ ಎ೦ಥದೋ ಬೆಳಕು ಮಿ೦ಚಿತ್ತು. ಆ ಬೆಳಕಿನಲ್ಲಿ ನೂರು ಕತೆಗಳ -ಸಾವಿರ ನೆನಪುಗಳ ಜೀವ೦ತ ದರ್ಶನವಾಗಿತ್ತು ಮಾಲತಿಗೆ ಏನೂ ತಕರಾರು ಮಾಡದೆ ,ಕೂಗಾಡದೆ ,ವಿರೋಧಿಸದೆ ಹೊರಡಲು ತಯಾರಾಗಿದ್ದಳು ಅವ್ವ . ತಲೆಬಾಚಿ ಒಳ್ಳೆಯ ಸೀರೆ ಉಟ್ಟು ' ನಾನು ರೆಡಿ' ಅ೦ದಿದ್ದಳು . ಅಳಿಯನೊ೦ದಿಗೆ ಟ್ಯಾಕ್ಸಿಯಲ್ಲಿ ಕೂತು ಬಾಗಿಲಲ್ಲಿ ನಿ೦ತ ಮಗಳ ಕಡೆ ತಿರುಗಿ,'ಟಾಟಾ 'ಹೇಳಿದಾಗ ಮಾಲತಿಯ ಕಣ್ಣಿಗೆ ಕತ್ತಲು ಬ೦ದ೦ತಾಗಿತ್ತು.ಇನ್ನು ಮುಗಿಯಿತು ಅವ್ವನೊ೦ದಿಗಿನ ಸ೦ಬ೦ಧ . ಇನ್ನು ತಾವೆಲ್ಲ ಸುಖವಾಗಿರಬಹುದು.ಹೌದು.<noinclude><references/></noinclude>
qvfksd43yn85g1u3npg07ifafcbkzgs
ಪುಟ:ನಡೆದದ್ದೇ ದಾರಿ.pdf/೧೦೪
104
31256
318050
202009
2026-05-08T09:25:34Z
Shreelatha.Halemane
7642
/* Validated */
318050
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=೯೭|left=ಕೊನೆಯ ದಾರಿ / ಮಳೆ ಬಂದಾಗ}}
{{gap}}'ನೋಡು ಸಹನಾ, ಸ್ಪಷ್ಪ ಹೇಳತೀನಂತ ಕೆಟ್ಟನಿಸಿಗೋಬ್ಯಾಡ. ಈ ಚಿತ್ರ</br> ಇದ್ದಾಂಗನ ಛಲೋ ಅದ. ಇದನ್ನು ಬದಲಿ ಮಾಡಿದರ ಕೆಟ್ಟುಹೋಗಬಹುದೇನೋ</br> ಅನಸತದ.</br>
{{gap}}"ಅದನ್ನೀಗ ಹೇಳಬ್ಯಾಡ. ಆದಮ್ಯಾಲ ನೋಡಿ ಹೇಳು."</br>
{{gap}}"ನಿನಗ್ಯಾರು ಹೇಳಬೇಕು ? ಬೇಕಾದ್ದು ಮಾಡು. ನನ್ನ ಅಡಿಗೀಗೆ ಹೊತ್ತಾತು."
{{gap}}*</br>{{gap}}*</br>{{gap}}*</br>
{{gap}}"ಒಳಗ ಬರಲೇನು, ಸಹನಾ? ಸಂಜೆ ಆಗೇದ. ಈಗ ಬರಲಿಕ್ಕೆ ಅಡ್ದಿ ಇಲ್ಲಂತ</br>
{{gap}}ಹೇಳಿದ್ದಿ."
{{gap}}"ಓ, ಬಾರ ಬಾ. ನಿನ್ನ ಮನ್ಯಾಗ ನಿನಗ ಪರವಾನಿಗಿ ಬೇಕೇನು?''- ಬ್ರಷ್</br> ಕೆಳಗಿಟ್ಟು ಹೇಳಿದಳು ಸಹನಾ.</br>
{{gap}}"ಎಲ್ಲೀಗೆ ಬಂತು ನಿನ್ನ ಚಿತ್ರ? ಛೇ, ಇದೇನು ಮಾಡಿದಿ ಸಹನಾ? ನಿನ್ನೆ</br> ನೋಡಿದಾಗ ಈ ಚಿತ್ರದಾಗಿನ ಮನುಷ್ಯ ಪೂರಾ ತೋಯಿಸಿಗೊಂಡಿದ್ದ. ಈಗ ಅವನ</br> ಶರ್ಟು ಒಣಗೇದ, ಇಸ್ತ್ರೀ ಮಾಡಿದಾಂಗ ಕಾಣಸ್ತದ. ಅಲ್ಲಾ, ನೀ ಏನು ನಡಸೀ ಒಟ್ಟಿನ</br> ಮ್ಯಾಲೆ?"</br>
{{gap}}'ನಾ ಏನು ನಡಸೀನಿ ಕಾಣವಲ್ಲದೇನು ನಿನಗ? ಈ ಚಿತ್ರದ ಸೆಟಿಂಗ್ ಎಲ್ಲಾ</br> ಹಿಂಗೇ ಇಟ್ಟು ಮಳೆ ಮಾತ್ರ ತಗದಬಿಡಬೇಕಂತ ಮಾಡೀನಿ. ಮಳೆ ಬಂದದ್ದು ಒಂದೂ</br> ಗುರುತು ಇಲ್ಲದಾಂಗ ಸಣ್ಣದಾಗಿ ಹೂ ಬಿಸಲು ಬಿದ್ದಾಂಗ ಮಾಡಬೇಕಾಗೇದ ಈ</br> ಚಿತ್ರಾ."'</br>
{{gap}}"ಹಾಂಗಾರ ಬ್ಯಾರೇ ಚಿತ್ರ ತಗೀಬೇಕಾಗಿತ್ತು?"</br>
{{gap}}"ನೋಡು ಸರೋಜ, ಈ ಚಿತ್ರದಾಗಿನ ವ್ಯಕ್ತಿಯ ಮುಖದ ಮ್ಯಾಲೆ ಈ</br> ಭಾವನಾ ಮೂಡಿಸಲಿಕ್ಕೆ ನಾ ಹಿಂದ ಭಾಳ ತ್ರಾಸ ತಗೊಂಡೀನಿ. ಅಂಥಾದು ಮತೋಮ್ಮೆ</br> ಮಾಡೋದು ಸಾಧ್ಯಿಲ್ಲ ನನಗ. ಅಷ್ಟಲ್ಲದ ಇದರ ಹಿನ್ನೆಲೆ-ಅಂದರ ಬ್ಯಾಕ್ ಗ್ರೌಂಡು</br> ಭಾಳ ಮಹತ್ವದ್ದದ. ಈ ಒಂಟಿ ಗಿಡಾ, ರಸ್ತೇದಾಗಿನ ಕಲ್ಲು, ದೂರದಾಗಿನ ಗುಡ್ಡ,</br> ಒಂದೊಂದು ತಿಂಗಳು ಕೂತು ಬಣ್ಣಾ ಕೊಟ್ಟೀನಿ. ಅದನ್ನು ಬಿಟ್ಟು</br> ಬ್ಯಾರೇ ಚಿತ್ರ ತಗದರ ಅದು ಇಷ್ಟು ಜೀವಂತ ಕಾಣಿಸಲಾರದು."</br>
{{gap}}"ಏನೋ ಎಂತೋ ನನಗೇನ ತಿಳಿಯೂದಿಲ್ಲ. ಅದೇನರೆ ಇರಲಿ ಸಹನಾ, ಆ</br> ಮನುಷ್ಯಾನ ಸುದ್ದಿ ಹೋಳ್ತೇನಿ ಅಂದಿದ್ದಿ ನಿನ್ನೆ, ಈಗ ಹೇಳಲಾ, ನನಗೂ ಕೆಲಸ ಇಲ್ಲ,</br><noinclude><references/></noinclude>
qkz3axevb33puap7yo1r8n2y1b6jeqd
ಪುಟ:ನಡೆದದ್ದೇ ದಾರಿ.pdf/೧೩೦
104
31266
318068
84110
2026-05-08T09:53:24Z
Shreelatha.Halemane
7642
/* Proofread */
318068
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=ಕೊನೆಯ ದಾರಿ / ಮುಕ್ತಿ.|right= ೧೨೩}}
ನಿಮಗಂತೂ,ಒಂದಿಷ್ಟು ದವಾಖಾನೀರೆ ಹೊಗಿಬರಿ."
{{gap}}-ದವಾಖಾನೆಗೆಂದು ಹೊರಟಿದ್ದ ತಾನು.ಆದರೆ ಯಾಕೋ ದಾದರಿನಿಂದ ಹಾಗೇ ತಿರುಗಿ ಬರುವ ಮನಸ್ಸಾಗಿರಲಿಲ್ಲ.ಎತ್ತ ಕಡೆಗೋ ಚಿತ್ತ.ಎತ್ತ ಕಡೆಗೋ ಧ್ಯಾನ.ಹೋಗಿದ್ದು ಕೊನೆಗೆ ಜುಹು ಬೀಚಿಗೇ.
{{gap}}ಎಲ್ಲೋ ಏನೋ ತಪ್ಪಿದಂತೆನಿಸುತ್ತಿದೆ ತನ್ನ ಜೀವನದಲ್ಲಿ.ಈ ಸಂಸಾರದ ತಾಪತ್ರಯ, ಹೆಂಡತಿ, ಮಕ್ಕಳು, ಆಫೀಸು,ಕೆಲಸ,ಮುಂಬಯಿಯ ಯಾಂತ್ರಿಕತೆ-ಯಾರಿಗೂ ಬಿಟ್ಟಿದ್ದಲ್ಲ.ಇದರಲ್ಲಿ ಹೊಸದಾಗಿ ಕೆಡುಕನಿಸಿಕೊಳ್ಳುವಂಥದೇನೂ ಇಲ್ಲ.
ಆದರೂ ಯಾಕೋ ಒಂದು ನಮೂನೆ ಅತೃಪ್ತಿ, ಕಳವಳ.
{{gap}}ಸುಮ್ಮನೆ ಹೊರಟಿದ್ದವನನ್ನು ಹೊಡೆದೆಬ್ಬಿಸಿದಂತಾಗಿತ್ತು ಎದುರಿಗೆ ನೋಡಿದಾಗ-ಮಂದ ಬೆಳದಿಂಗಳಲ್ಲಿ ಹಿಂದಿನಿಂದ ಅಜಂತಯ ಶಿಲಾಬಾಲಕಿಯ ಹಾಗೆ ಕಾಣುತಿದ್ದ ಚಂದೂಲಾಲ.
{{gap}}ಹೊಟ್ಟೆಯಲ್ಲಿ ಚಿಟುಗು ಮುಳ್ಳು. ಹುಡುಗಿಯರನ್ನು ಮಳ್ಳು ಮಾಡುವ ಮಾತುಗಾರಿಕೆ,ಒಳ್ಳೆಯ ಕೆಲಸ,ಇನ್ನೂ ಮದುವೆಯಲ್ಲ,ಇನ್ನೇನು ಬೇಕು? ಚೈನೀ ಹೊಡೆಯುತ್ತಿದ್ದಾನೆ ಮಗ.....
{{gap}}ತನಗೆ ಶಾಕ್ ಆದದ್ದು ಆ ಹುಡುಗಿಯ ಗುರುತು ಸಿಕ್ಕಾಗ.ಗಾಳಿಯಲ್ಲಿ ತೇಲುತ್ತಿರುವಂತೆ ಅವನ ಭುಜಕ್ಕೆ ತಲೆಯಾನಿಸಿ ಹೊರಟಿದ್ದವಳು-ಕಲಾ,ತಮ್ಮ
ಕಲಾ....
{{gap}}ಆಫೀನಲ್ಲಿ ಅವರಿಬ್ಬರೂ ಪರಸ್ಪರರನ್ನು ನೋಡುತ್ತಿದ್ದ ಬಗೆ, ಇಪ್ಪತ್ತು ಸಲ ಅವಳನ್ನು ಒಳಗೆ ಕರೆ ಕಳಿಸುತ್ತಿದ್ದುದು,ಟೀ ತೆಗೆದುಕೊಳ್ಳುವ ಬಿಡುವಿನಲ್ಲಿ
ಅವರಿಬ್ಬರೂ ಒಂದೇ ಟೇಬಲ್ಲಿನಲ್ಲಿ ಕೂಡುತ್ತಿದ್ದುದು,ಆಫಿಸು ಮುಗಿದ ನಂತರ
ಎಲ್ಲರನ್ನೂ ತಪ್ಪಿಸಿ ಇಬ್ಬರೇ ಒಟ್ಟಾಗಿ ಹೊರಡುತ್ತಿದ್ದುದು,ಮನೆಗೆ ತಡವಾಗಿ ಬಂದುದಕ್ಕಾಗಿ ಹೊಲಿಗೆ ಕ್ಲಾಸಿನ ನೆವ- ಎಲ್ಲದರ ಅರ್ಥ ಒಮ್ಮೆಲೇ ನೂರು ಬಣ್ಣಗಳಲ್ಲಿ ಹೊಳೆದಿತ್ತು ತನಗೆ ಆ ಕ್ಷಣದಲ್ಲಿ.
* * *
{{gap}}'ನಾ ನಿಮ್ಮ ಕಲಾನ ಖರೇನ ಪ್ರೀತಿ ಮಾಡ್ತೀನಿ ಶಂಕರಮಾಮ,ಅಕೀನ್ನ ಲಗ್ನಾ ಮಾಡಿಕೊಳ್ಳಿಕ್ಕೆ ತಯಾರಿದ್ದೀನಿ.ಜಾತಿ ಬ್ಯಾರೇ ಆದರೂ ನೀವು ದೊಡ್ಡ ಮನಸ್ಸಿನಿಂದ ಒಪ್ಪತೀರಿ ಅಂತ ಗೊತ್ತದ ನನಗ'-ಅಂದದ್ದ ಚಂದೂಲಾಲ.
{{gap}}'ನಾ ಚಂದೂಲಾಲನ್ನ ಬಿಟ್ಟು ಬದುಕಲಿಕ್ಕೇ ಶಕ್ಯ ಇಲ್ಲ'-ಅಂದಿದ್ದಳು ಕಲಾ.<noinclude><references/></noinclude>
2vv5dhj2zau2acjlkeeprfvxvmgtk0u
318069
318068
2026-05-08T09:53:56Z
Shreelatha.Halemane
7642
318069
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=ಕೊನೆಯ ದಾರಿ / ಮುಕ್ತಿ.|right= ೧೨೩}}
ನಿಮಗಂತೂ,ಒಂದಿಷ್ಟು ದವಾಖಾನೀರೆ ಹೊಗಿಬರಿ."
{{gap}}-ದವಾಖಾನೆಗೆಂದು ಹೊರಟಿದ್ದ ತಾನು.ಆದರೆ ಯಾಕೋ ದಾದರಿನಿಂದ ಹಾಗೇ ತಿರುಗಿ ಬರುವ ಮನಸ್ಸಾಗಿರಲಿಲ್ಲ.ಎತ್ತ ಕಡೆಗೋ ಚಿತ್ತ.ಎತ್ತ ಕಡೆಗೋ ಧ್ಯಾನ.ಹೋಗಿದ್ದು ಕೊನೆಗೆ ಜುಹು ಬೀಚಿಗೇ.
{{gap}}ಎಲ್ಲೋ ಏನೋ ತಪ್ಪಿದಂತೆನಿಸುತ್ತಿದೆ ತನ್ನ ಜೀವನದಲ್ಲಿ.ಈ ಸಂಸಾರದ ತಾಪತ್ರಯ, ಹೆಂಡತಿ, ಮಕ್ಕಳು, ಆಫೀಸು,ಕೆಲಸ,ಮುಂಬಯಿಯ ಯಾಂತ್ರಿಕತೆ-ಯಾರಿಗೂ ಬಿಟ್ಟಿದ್ದಲ್ಲ.ಇದರಲ್ಲಿ ಹೊಸದಾಗಿ ಕೆಡುಕನಿಸಿಕೊಳ್ಳುವಂಥದೇನೂ ಇಲ್ಲ.
ಆದರೂ ಯಾಕೋ ಒಂದು ನಮೂನೆ ಅತೃಪ್ತಿ, ಕಳವಳ.
{{gap}}ಸುಮ್ಮನೆ ಹೊರಟಿದ್ದವನನ್ನು ಹೊಡೆದೆಬ್ಬಿಸಿದಂತಾಗಿತ್ತು ಎದುರಿಗೆ ನೋಡಿದಾಗ-ಮಂದ ಬೆಳದಿಂಗಳಲ್ಲಿ ಹಿಂದಿನಿಂದ ಅಜಂತಯ ಶಿಲಾಬಾಲಕಿಯ ಹಾಗೆ ಕಾಣುತಿದ್ದ ಚಂದೂಲಾಲ.
{{gap}}ಹೊಟ್ಟೆಯಲ್ಲಿ ಚಿಟುಗು ಮುಳ್ಳು. ಹುಡುಗಿಯರನ್ನು ಮಳ್ಳು ಮಾಡುವ ಮಾತುಗಾರಿಕೆ,ಒಳ್ಳೆಯ ಕೆಲಸ,ಇನ್ನೂ ಮದುವೆಯಲ್ಲ,ಇನ್ನೇನು ಬೇಕು? ಚೈನೀ ಹೊಡೆಯುತ್ತಿದ್ದಾನೆ ಮಗ.....
{{gap}}ತನಗೆ ಶಾಕ್ ಆದದ್ದು ಆ ಹುಡುಗಿಯ ಗುರುತು ಸಿಕ್ಕಾಗ.ಗಾಳಿಯಲ್ಲಿ ತೇಲುತ್ತಿರುವಂತೆ ಅವನ ಭುಜಕ್ಕೆ ತಲೆಯಾನಿಸಿ ಹೊರಟಿದ್ದವಳು-ಕಲಾ,ತಮ್ಮ
ಕಲಾ....
{{gap}}ಆಫೀನಲ್ಲಿ ಅವರಿಬ್ಬರೂ ಪರಸ್ಪರರನ್ನು ನೋಡುತ್ತಿದ್ದ ಬಗೆ, ಇಪ್ಪತ್ತು ಸಲ ಅವಳನ್ನು ಒಳಗೆ ಕರೆ ಕಳಿಸುತ್ತಿದ್ದುದು,ಟೀ ತೆಗೆದುಕೊಳ್ಳುವ ಬಿಡುವಿನಲ್ಲಿ
ಅವರಿಬ್ಬರೂ ಒಂದೇ ಟೇಬಲ್ಲಿನಲ್ಲಿ ಕೂಡುತ್ತಿದ್ದುದು,ಆಫಿಸು ಮುಗಿದ ನಂತರ
ಎಲ್ಲರನ್ನೂ ತಪ್ಪಿಸಿ ಇಬ್ಬರೇ ಒಟ್ಟಾಗಿ ಹೊರಡುತ್ತಿದ್ದುದು,ಮನೆಗೆ ತಡವಾಗಿ ಬಂದುದಕ್ಕಾಗಿ ಹೊಲಿಗೆ ಕ್ಲಾಸಿನ ನೆವ- ಎಲ್ಲದರ ಅರ್ಥ ಒಮ್ಮೆಲೇ ನೂರು ಬಣ್ಣಗಳಲ್ಲಿ ಹೊಳೆದಿತ್ತು ತನಗೆ ಆ ಕ್ಷಣದಲ್ಲಿ
{{center|***}}
{{gap}}'ನಾ ನಿಮ್ಮ ಕಲಾನ ಖರೇನ ಪ್ರೀತಿ ಮಾಡ್ತೀನಿ ಶಂಕರಮಾಮ,ಅಕೀನ್ನ ಲಗ್ನಾ ಮಾಡಿಕೊಳ್ಳಿಕ್ಕೆ ತಯಾರಿದ್ದೀನಿ.ಜಾತಿ ಬ್ಯಾರೇ ಆದರೂ ನೀವು ದೊಡ್ಡ ಮನಸ್ಸಿನಿಂದ ಒಪ್ಪತೀರಿ ಅಂತ ಗೊತ್ತದ ನನಗ'-ಅಂದದ್ದ ಚಂದೂಲಾಲ.
{{gap}}'ನಾ ಚಂದೂಲಾಲನ್ನ ಬಿಟ್ಟು ಬದುಕಲಿಕ್ಕೇ ಶಕ್ಯ ಇಲ್ಲ'-ಅಂದಿದ್ದಳು ಕಲಾ.<noinclude><references/></noinclude>
m5bvzax439ghy9sj0p7dlsr3tzp57n0
ಪುಟ:ನಡೆದದ್ದೇ ದಾರಿ.pdf/೧೩೧
104
31272
318076
84128
2026-05-08T09:55:48Z
Shreelatha.Halemane
7642
/* Proofread */
318076
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=೧೨೪|right=ನಡೆದದ್ದೇ ದಾರಿ}}
-ತನ್ನ ಕೆಲಸ ನಿಜವಾಗಿಯೂ ಕಠಿಣವಾದುದಾಗಿತ್ತು.
{{gap}}ಆದರೆ ದೇವರು ದೋಡ್ಡವನು ನಿಜಕ್ಕೂ.
{{gap}}ಜನರಲ್ ಮ್ಯಾನೇಜರ್ ಸ್ವತಃ ತನ್ನನ್ನು ಕರೆಸಿ,ತಮ್ಮ ಮಗಳು ವಿಷಯ ಪ್ರಸ್ತಾಪಿಸಿದ್ದರು.ಚಂದೂಲಾಲನನ್ನು ಕೇಳಿ ನೋಡೆಂದು ಕೇಳಿಕೊಂಡಿದ್ದರು.'ನೀವು ಹಿರೇ ಮನುಷ್ಯಾರು.ನಿಮ್ಮ ಮಾತು ಕೇಳತಾನ ಆತ'-ಎಂದು ಉಬ್ಬಿಸಿದ್ದರು.
{{gap}}ಚಂದೂಲಾಲನಿಗೆ ಒಳ್ಲೆಯದಾಗುವಂತೆ ಮಾಡಬೇಕು.ಲಗ್ನದ ನಂತರ ಹಿಂದಿನದನ್ನು ಮರೆಯುವುದೇನೂ ತ್ರಾಸಾಗುವುದಿಲ್ಲ.ಅವನ ಲಗ್ನವಾದರೆ ಕಲಾನೂ ಅವನನ್ನು ಮರೆಯಬಹುದು.
{{gap}}ಅವರಿಬ್ಬರ ಮನಸ್ಸನ್ನು ಬದಲಿಸಬೇಕಾದುದು ತಾನು ಮಾಡಬೇಕಾದ ಕೆಲಸ ಈಗ.ಉದ್ದೇಶ ಒಳ್ಳೇದಿದ್ದಾಗ ದಾರಿ ಯಾವುದಾದರೇನು?ಒಂದಿಷ್ಟು ಸುಳ್ಳು-ಪಳ್ಳು ಹೇಳಬೇಕಾಗಿ ಬಂದರೂ ಅಡ್ಡಿಯಿಲ್ಲ.
{{gap}}ಕಲಾ ಅಂತೂ ತನ್ನನ್ನು ನಂಬುತ್ತಾಳೆ;ಚಂದೂಲಾಲ ಸ್ವಲ್ಪ ಹುಷಾರು ಪೈಕಿ ಮನುಷ್ಯ.ಆದರೂ ಅಡ್ಡಿಯಿಲ್ಲ.ತನಗೆ ಆವನ ದುಪ್ಪಟ್ಟು ಸರ್ವೀಸಾಗಿದೆ...
{{gap}}'ಚಂದೂಲಾಲನಂಥ ಬೇಜವಾಬ್ದಾರಿ ಮನುಷ್ಯನಿಂದ ನಿನಗ ಎಂದೂ ಸುಖ ಆಗೋದಿಲ್ಲಾ ಕಲಾ.ದಿನಾ ಸಂಜೀನ್ಯಾಗ ಫ಼ರಾಸ್ ರೋಡಿನ್ಯಾಗ ಕುಡಿದು ಬಿದ್ದಿರತಾನ ಆ ಮನುಷ್ಯ.'
{{gap}}ಕಲಾನಿಗೆ ಸಹಜವಾಗಿಯೇ ಶಾಕ್ ಆಗಿತ್ತು.'ಹೌದೇನ್ರೀ ಮಾಮಾ?ನನಗ ನಂಬಲಿಕ್ಕೆ ಆಗೋದಿಲ್ಲ...'
{{gap}}'ನಾ ಯಾಕ ನಿಂಗೆ ಸುಳ್ಳು ಹೇಳ್ಲೀ ಕಲಾ?ಹೂವಿನಾಂಗ ಬೆಳೆಸೀವಿ ನಿನ್ನ.ನನ್ನ ಸಂಕಟಾ ನಿನಗೇನು ಗೂತ್ತವ್ವಾ?'-ನಿಜವಾಗಿಯೂ ಕಳಕಳಿಯಿಂದ ಹೇಳಿದ್ದ ತಾನು.ಚಂದೂಲಾಲ ಪಾರ್ಟಿಗಳಲ್ಲಿ ಕುಡಿಯುತ್ತಿದ್ದುದೇನೂ ಸುಳ್ಲಿರಲಿಲ್ಲವಲ್ಲಾ!
{{gap}}'ಒಬ್ಬ ಛಲೋ ಹುಡುಗನ್ನ ನೋಡಿ ನಿನ್ನ ಲಗ್ನ ಮಾಡಿಕೊಟ್ಟು ನೀ ಸುಖದಿಂದ ಇರೋದು ನೋಡಿದಾಗ ನನಗೆ ಸಮಧಾನ.ನಿನ್ನ ಅಕ್ಕನಿಗೂ ಸಮಾಧಾನ.ಚಂದೂಲಾಲ ಪಾತರಗಿತ್ತಿ ಇದ್ದಾಂಗ.ನೀ ಸಣ್ಣಾಕಿ.ತಿಳಿವಳಿಕೆ ಇಲ್ಲ ದಾಕಿ.ಮೋಸ ಹೋಗಿ ದುಃಖ ಪಡಬಾರಧು ಅಂತ ಹೇಳಲಿಖ್ಹತ್ತೀನಿ.ನೀ ಕಣ್ಣೀರು ಹಾಕೋಹಾಂಗ ಆದರ ನಾವು ಹ್ಯಾಂಗ ಸಹಿಸೋಣವಾ?'
{{gap}}ಕಲಾನ ಧ್ವನಿ ಗದ್ಗದಿತವಾಯಿತು.'ಆಳಬ್ಯಾಡ್ರೀ ಮಾಮಾ,ನೀವು<noinclude><references/></noinclude>
g8m2a8c00fe2cszxm9of00dx2lbf18d
ಪುಟ:ನಡೆದದ್ದೇ ದಾರಿ.pdf/೧೧೫
104
31289
318052
208023
2026-05-08T09:26:53Z
Shreelatha.Halemane
7642
/* Validated */
318052
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೦೮|right=ನಡೆದದ್ದೇ ದಾರಿ}}
{{center|'''ನೆರಳು'''}}
{{gap}}"ಮಾಲತೀ...."</br>
{{gap}}"ಓ",</br>
{{gap}}"ಏ ಮಾಲತೀ...."</br>
{{gap}}"ಬಂದೇ ಸ್ವಲ್ಪ ತಡೀಯವ್ವಾ,ಹಾಲಿಟ್ಟೀನಿ ಸ್ಟೋ ಮ್ಯಾಲೆ."</br>
{{gap}}"ಏ ಮಾಲತೀ...."</br>
{{gap}}"ಬಂದೆ,ಒಂದು ಮಿನಿಟು."</br>
{{gap}}"ಏ ಮಾಲತೀ,ಒಂದಸವನ ಒದರಿಕೋಳ್ಲಿಕತ್ತೀನಿ,ನಿನಗೇನರೆ ಖಬರದ </br>
ಏನು? ಒಂದು ಮಿನಿಟು ಅಂತೀ,ಅಷ್ಟರಾಗ ನಾ ಸತ್ತರೂ ನಿನಗ ದರಕಾರ ಇಲ್ಲ,</br>
ನೀನೂ ನಿನ್ನ ಮಕ್ಕಳೂ ನಾ ಸಾಯೋ ಹಾದೀನೇ ಕಾಯ್ಲಿಕ್ಹತ್ತೀರಿ-ಈ ಮುದುಕಿ </br>
ಎಂದ ಪ್ರಾಣಾಬಿಟ್ಟೀತೋ ಅಂತ-"</br>
{{gap}}ಹಾಲು ಕಾಯದೇ ಇದ್ದರೂ ಸ್ಟವ್ ಆರಿಸಿ ಮಾಲತಿ ಅವಸರವಸರವಾಗಿ</br>
ತಾಯಿಯತ್ತ ನಡೆದಳು. "ಯಾಕ ಸುಮ್ನ ಆಭದ್ರ ಮಾತಾಡ್ತೀಯವಾ</br>
ಮುಂಜಾನೆದ್ದು ? ಇಲ್ಲದ್ದ ವಿಚಾರ ಮಾಡಿ ತ್ರಾಸು ಮಾಡಿಕೋಬ್ಯಾಡಾ ಅಂತ </br>
ಡಾಕ್ಟರು ಹೇಳಿಲ್ಲೇನು ?"</br>
{{gap}'ಆ ಡಾಕ್ಟರು ಸುಟ್ಟ ಬರ್ಲಿ. ಅವನಿಗೇನ ನನ್ನ ಜಡ್ಡು ಗುಣಾ ಮಾಡೂದು </br>
ಆಗೂದಿಲ್ಲ ಬಿಡು. ಮತ್ತ ನೀನೇ ಅವನಿಗೆ ಹೇಳಿಗೀಳೀಯೋ ಏನೂ ಲಗೂ</br>
ಸಾಯೋವಂತಾ ಔಷಧ ಕೊಟ್ಟ ಬಿಡೂ ಅಂತ."</br>
{{gap}}"ಹಿಂಗೆಲ್ಲಾ ಅನಬಾರದವ್ವಾ,ನನ್ನ ಯಾಕ ಕರದಿ ಹೇಳು ಲಗೂನ.ಇನ್ನೂ</br>
ಏನೂ ಕೆಲಸಾಗಿಲ್ಲ ನಂದು."</br>
{{gap}}"ನಿನ್ನ ಯಾಕ ಕರದೆ ?" -ಮುದುಕಿ ಕ್ಷಣ ಹೊತ್ತು ವಿಚಾರಿಸಿದಳು.ಅವಳ </br>
ಮುಖ ಹುಚ್ಚಾಪಚ್ಚಾ ಆಗಿತ್ತು.ನಂತರ ಹಿಂದೆ ನೋಡುತ್ತ ಒಮ್ಮೆಲೆ ಬೆಚ್ಚಿ ಬಿದ್ದು </br>
ಅವಳೆಂದಳು, "ನೋಡು ಮಾಲತೀ,ಈ ಖೋಲಿಯೊಳಗ ಯಾರರೆ ಬಂದಿದ್ರೇನು?"</br>
{{gap}}"ಇಲ್ಲ್ಯಾರು ಬರ್ತಾರವಾ ? ನೀ ಒಬ್ಬಾಕೀನೇ ಇದ್ದೀಯಲ್ಲ."</br>
{{gap}}"ನಿಮ್ಮಪ್ಪ ಸತ್ತಾಗಿನಿಂದ ನಾ ಒಬ್ಬಾಕೀನೇ ಇದ್ದೀನಿ ಅನ್ನೂದು ಗೊತ್ತದನs,</br><noinclude><references/></noinclude>
9ds0p9zavkdexvsaoz3ce83skhdcfwm
ಪುಟ:ನಡೆದದ್ದೇ ದಾರಿ.pdf/೧೨೯
104
31307
318064
84196
2026-05-08T09:48:42Z
Shreelatha.Halemane
7642
/* Proofread */
318064
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=೧೨೨|right=ನಡೆದದ್ದೇ ದಾರಿ}}
ಮಧ್ಯಾಹ್ನ. ತನ್ನ ಬ್ರೇನ್ ಅದ್ಭುತ. ಸಾಧ್ಯವಿಲ್ಲವೆಂದುಕೊಂಡಿದ್ದೆಲ್ಲಾ ಸಾಧ್ಯವಾಗಿರಲಿಲ್ಲವೇ ಅದರಿಂದಾಗಿ?.... ಕಲಾ ಮತ್ತು ಚಂದೂಲಾಲರ ಪ್ರಕರಣ ಹೀಗೆ ಸುರಳೀತವಾಗಿ ಕೊನೆಗೊಳ್ಳುವುದು ಸಾಧ್ಯವೆಂದು ಯಾರಿಗೆ ಅನಿಸಿತ್ತು? ಸ್ವತಃ ಚಂದೂಲಾಲನಿಗೇ ಈ ಭಾನಗಡಿಯಿಂದ ತಾನು ಮುಕ್ತನಾಗುವುದು ಅಸಾಧ್ಯವೆನಿಸಿತ್ತಮಧ್ಯಾಹ್ನ. ತನ್ನ ಬ್ರೇನ್ ಅದ್ಭುತ. ಸಾಧ್ಯವಿಲ್ಲವೆಂದುಕೊಂಡಿದ್ದೆಲ್ಲಾ ಸಾಧ್ಯವಾಗಿರಲಿಲ್ಲವೇ ಅದರಿಂದಾಗಿ?.... ಕಲಾ ಮತ್ತು ಚಂದೂಲಾಲರ ಪ್ರಕರಣ ಹೀಗೆ ಸುರಳೀತವಾಗಿ ಕೊನೆಗೊಳ್ಳುವುದು ಸಾಧ್ಯವೆಂದು ಯಾರಿಗೆ ಅನಿಸಿತ್ತು? ಸ್ವತಃ ಚಂದೂಲಾಲನಿಗೇ ಈ ಭಾನಗಡಿಯಿಂದ ತಾನು ಮುಕ್ತನಾಗುವುದು ಅಸಾಧ್ಯವೆನಿಸಿತ್ತಂತೆ. ಈಗ-
{{gap}}'ನಾ ಈಗ ಆ ಹುಚ್ಚಿನಿಂದ ಪೂರ್ಣ ಮುಕ್ತ ಆಗೀನಿ ಶಂಕರ ಮಾಮಾ, ನಾ ಈಗ ಖರೇನ ಆರಾಮ ಇದ್ದೀನಿ' ಅನ್ನುತ್ತಾನೆ.
{{gap}}ಒಂದು ರಿತಿಯಿಂದ ಚಂದೂಲಾಲನಿಗೆ ತಾನು ಒಳ್ಳೆಯದನ್ನೇ ಮಾಡಿದಂತಾಯಿತು. ಕಲಾನನ್ನು ಕಟ್ಟಿಕೊಂಡಿದ್ದರೆ ಇವನಿಗೇನು ಸಿಗುತ್ತಿತ್ತು? ಈಗ ಶ್ರೀಮಂತ ಮಾವ, ಗ್ರಾಜುಯೇಟ್ ಹೆಂಡತಿ, ಕಾರು, ವರದಕ್ಷಿಣೆ, ಪ್ರಮೋಶನ್ -ಎಲ್ಲ ಸಿಗುತ್ತದೆ. ಅವನ ಹಿತಕ್ಕಾಗಿ ತಾನು ಬಹಳ ಶ್ರಮಿಸಿದೆನೆಂದು ಅವನಿಗೆ ತನ್ನ ಬಗ್ಗೆ ಗೌರವ ಸಹಜವೆ.
{{gap}}ಚಂದೂಲಾಲನ ಹಿತದಂತೆ ಕಲಾನ ಹಿತವೂ ತನಗೆ ಬೇಕಾದದ್ದು. ಕಲಾ ತನ್ನ ಕಣ್ಣ ಮುಂದಿನ ಹುಡುಗಿ. ಅವಳ ಜೀವನವನ್ನು ದಾರಿಗೆ ಹುಚ್ಚುವುದು ತನ್ನ ಕರ್ತವ್ಯ. ತಂದೆಯಿಲ್ಲದ ಅವಳ ಪಾಲಿಗೇ ತಾನೇ ತಂದೆ ಅಲ್ಲವೆ? ಅವಳು ತಪ್ಪು ದಾರಿ ಹಿಡಿದಾಗ ಎಚ್ಚರಿಸದ್ದು ತಾನು ಮಾಡಲೇಬೇಕಾಗಿದ್ದ ಕೆಲಸ. ಬುದ್ಧಿಯಿಲ್ಲದ ಹುಡುಗಿ. ಅವಳನ್ನು ಹಾಗೇ ಬಿಟ್ಟಿದ್ದರೆ ಹಾಳಾಗಿಹೋಗುತ್ತಿದ್ದಳು. ತಾನು ಅವಳ ಸುಖಕ್ಕಾಗಿ ಶ್ರಮಿಸಿದ್ದೇನು ಸ್ವಲ್ಪವೆ? ಚಂದೂಲಾಲನ ಹುಚ್ಚು ಅವಳ ತಲೆಯಿಂದ ಇಳಿಯುವುದು ಸುಲಭವಾದ ವಿಷಯವಾಗಿರಲೇ ಇಲ್ಲ. ಎಂಥ ಹುಚ್ಚು ಅವರಿಬ್ಬರಿಗೂ!
{{gap}}ಅದೊಂದು ದಿನ ರವಿವಾರ ಸಂಜಿ ಬಹಳ ಬೇಸರವಾಗಿತ್ತು ತನಗೆ. 'ಜುಹು ಬೀಚಿಗೆ ಹೋಗಿಬರೋಣ ಬರ್ತೀಯೇನೆ?'ಎಂದು ಕೇಳಿದ್ದ ಹೆಂಡತಿಯನ್ನು. 'ಅಯ್ಯೋ, ನನಗಲ್ಲಿ ಸವುಡು ಸಿಗತದ್ರೀ? ಕೂಸಿಗೆ ಜ್ವರ ಬಂದಾವ. ಕೆಲಸದಾಕಿ ಬಂದೇ ಇಲ್ಲ ಇವತ್ತ. ಹಿರೇ ಹುಡುಗನ ಕಾಲು ಇನ್ನೂ ಪೂರಾ ನೆಟ್ಟಗಾಗಿಲ್ಲ. ಅಡಗೀ ಮಾಡಿ-'
{{gap}}ಅವಳ ರಗಳೆಯಿಂದ ತಲೆ ಚಿಟ್ಟೆಂದಿತ್ತು. ಕೊನೆಯ ಮಗುವಿನ ಅಳು. ಹಿರಿಯ ಹುಡುಗರ ಧಾಂಧಲೆ, ತೊಳೆಯಲಾರದೇ ಬಿದ್ದ ಪಾತ್ರೆಗಳು. ಎಲ್ಲವುಗಳ<noinclude><references/></noinclude>
oagu1hisrldhd6refkt9k1ajqtvqava
ಪುಟ:ನಡೆದದ್ದೇ ದಾರಿ.pdf/೧೦೧
104
31367
318047
201874
2026-05-08T09:23:28Z
Shreelatha.Halemane
7642
/* Validated */
318047
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|right=ನಡೆದದ್ದೇ ದಾರಿ|left=೯೪}}
ಅಂತಾರ ಅದಕ್ಕ." ದೊಡ್ಡ ವಿಮರ್ಶಕನ ಧಾಟಿಯಲ್ಲಿ ಹೇಳಿದ್ದ ಆತ.</br>
{{gap}}ಗಂಡನನ್ನು ಬಯಸಿಯ ವಿರೋಧಿಸಲಾಗದ ವಿಧೇಯ ಧರ್ಮಪತ್ನಿ</br> ಸರೋಜ ಅವನು ಹೊರಗೆ ಹೋದೊಡನೆ ತನ್ನೆಡೆ ಬಂದು ರಮಿಸುವ ಧ್ವನಿಯಲ್ಲಿ</br> ಅಂದಿದ್ದಳು, “ಇವರ ಸ್ವಭಾವನೇ ಹಾಂಗ ಸಹನಾ, ನೀಯೇನೂ ಮನಸಿಗೆ</br> ಹಚಿಗೊಬ್ಯಾಡ. ಆರಾಮ ಇರು, ನವೆಂಬರದಾಗಿನ ಆಲ್ ಇಂಡಿಯಾ ಆರ್ಟ್</br> ಎಕ್ಸಿಬಿಶನಿಗೆ ಒಂದು ಚಿತ್ರಾ ತಗೀಬೇಕಾಗೇದ ಅಂದೆಲ್ಲಾ, ಅದನ್ನ ಈ ಸೂಟಿಯೊಳಗೆ</br> ತಗದು ಮುಗಿಸಿಬಿಡು. ನಿನಗ ಈ ಸ್ಪೆಶಲ್ ರೂಮು ಕೊಟ್ಟಿರತೀನಿ, ಮತ್ತೇನು ಬೇಕೋ</br> ಹೇಳು, ಎಲ್ಲಾ ಅನುಕೂಲ ಮಾಡಿಕೊಡತೀನಿ. ಶಾಂತ ವಾತಾವರಣ ಬೇಕು ಅಂತಿದ್ದಿ;</br> ಇಲ್ಲಿ ಬೇಕಾದಷ್ಟು ಶಾಂತತಾ ಆದ. ಯಾರೂ ಡಿಸ್ಟರ್ಬ್ ಮಾಡವರಿಲ್ಲ."</br>
{{gap}}“ಥ್ಯಾಂಕ್ಸ್ ಸರೋಜ."</br>
{{gap}}-ಇದಕ್ಕೂ ಹೆಚ್ಚಿಗೆ ಏನು ಹೇಳಬಹುದಾಗಿತ್ತು ತಾನು ? ತನ್ನ ತಲೆ ತುಂಬ,</br> ಮನ ತುಂಬ ತುಂಬಿದ್ದ ವಿಚಾರ ಒಂದೇ - ಮುಂಬರುವ ಅಂತರ್ರಾಜ್ಯ ಮಟ್ಟದ</br> ಕಲಾ ಪ್ರದರ್ಶನಕ್ಕೆ ತಾನು ಕಳಿಸಬೇಕಾಗಿರುವ ಚಿತ್ರ: ತನ್ನ ಭವಿಷ್ಯವನ್ನೇ</br> ಬದಲಿಸಬಹುದಾದ ಕೃತಿ; ಮನಸ್ಸು ಕೊಟ್ಟು ಮಾಡಬೇಕಾಗಿರುವ ಕೆಲಸ, ಶಾಂತವಾದ</br> ಈ ಜಾಗದಲ್ಲಿ ಒಂದು ತಿಂಗಳು ಪ್ರಯತ್ನ ಮಾಡಿದರೆ ಯಶಸ್ವಿಯಾಗಿ</br> ಮುಗಿಸಬಹುದು. ಆದರೆ ಕಳೆದ ಎಂಟು ದಿನದಿಂದಲೂ ಸತತವಾಗಿ ಹತ್ತಿರುವ</br> ಮಳೆಯಿಂದಾಗಿ ಪೂರಾ ಬೇಸರವಾಗಿಹೋಗಿದೆ. ಕೆಲಸ ಸುರು ಮಾಡಲಿಕ್ಕೇ</br> ಮನಸ್ಸಾಗಲೊಲ್ಲದು. ಕಿಡಿಕಿಯ ಚೌಕಟ್ಟಿನಾಚೆ ಜಿಟಿ ಜಿಟಿ ಹನಿಯುವ ಮಳೆಯ ಕಡೆ</br> ಶೂನ್ಯವಾಗಿ ದೃಷ್ಟಿಸುತ್ತ ಕೂತು ಕೂತು ಸಾಕಾಯಿತು.</br>
{{gap}}“ಏನು ಸಹನಾ ಚಿತ್ರಾ ತಗೀತೀನಿ ಅಂದಾಕಿ ಇನ್ನೂ ಏನೂ ಸುರು ಮಾಡೇ</br> ಇಲ್ಲಲ್ಲಾ, ಸ್ಫೂರ್ತಿ-ಗೀರ್ತಿ ಬರಬೇಕೇನು ಅದಕ್ಕೂ ? ನಿನಗಿನ್ನ ಸ್ತೂರಿ ಕೊಡವರನ್ನ</br> ಎಲ್ಲೆ ಹುಡುಕಲೆವಾ ?" - ಕೆಲಸ ಮುಗಿಸಿ ಬಂದ ಸರೋಜ ನಗುತ್ತ ಕೇಳಿದಳು.</br>
{{gap}}ಏನು ಹೇಳಬೇಕು ಅವಳಿಗೆ ?</br> {{gap}}“ಹೀಂಗಾದರ ಅದು ಮುಗಿಯೋದು ಹ್ಯಾಂಗ ಸಹನಾ ?"</br>
{{gap}}“ನಾನರೆ ಏನು ಮಾಡಲಿ, ಸರೋಜ ? ಈ ಮಳೆಯ ಸಲುವಾಗಿ ನನಗ ಭಾಳ</br> ಬ್ಯಾಸರ ಬಂದದ, ಒಂದ ಸ್ವಲ್ಪರೆ ಬಿಸಲು ಬಿಂದ್ರ ಕೆಲಸಾ ಸುರೂ ಮಾಡ್ತೀನಿ.</br> ಮುಗಸದೇನು ತಡಾ ?"</br>
{{gap}}“ಅಲ್ಲs ಹುಚ್ಚಿ, ಮಳೆಗೂ ನಿನ್ನ ಚಿತ್ರಕ್ಕೂ ಏನು ಸಂಬಂಧ ? ಮಳೆ ಹೊರಗ</br> ಬರತಿರತದ. ನೀ ಒಳಗ ಕೂತು ಚಿತ್ರಾ ತಗೀಲಿಕ್ಕೆ ಏನಡ್ಡಿ ?"</br><noinclude><references/></noinclude>
862sv6sur64xmtyunehky072c4kim11
ಪುಟ:ನಡೆದದ್ದೇ ದಾರಿ.pdf/೨೯೯
104
31431
317954
250627
2026-05-07T16:01:50Z
Pragathi. BH
7585
/* Validated */
317954
proofread-page
text/x-wiki
<noinclude><pagequality level="4" user="Pragathi. BH" /></noinclude>
{{rh|left=೨೯೨|right= ನಡೆದದ್ದೇ ದಾರಿ}}
{{gap}}-ಒಮ್ಮೆಲೇ ಏಕವಚನದಲ್ಲಿ ಬದಲಾದ ಸಂಬೋಧನೆ, ಆ ಧ್ವನಿಯಲ್ಲಡಗಿದ
ಏಟು ತಿಂದು ಗಾಯಗೊಂಡಂತಹ ಉತ್ಕಂಠೆ - ಆತನನ್ನು ತಡೆದು ನಿಲ್ಲಿಸಿದವು. ಆತ
ನಿಂತು ತಿರುಗಿ ನೋಡಿದ.<br>
{{gap}}ಶೋಭಾ ನಿಂತಲ್ಲೇ ನಿಂತು ಆತನೆಡೆ ಕಾತರದಿಂದ ನೋಡುತ್ತಿದ್ದಳು. ಅವಳ
ಕಣ್ಣು ತುಂಬಿ ಬಂದಿದ್ದವು. ದ್ವನಿ, ಅವಳ ದೇಹವೂ ಸಹ, ನೋವಿನಿಂದ ಕಂಪಿಸುತ್ತಿತ್ತು.
ಈ ಆಘಾತವನ್ನು ತಾಳಲಾರೆನೆಂಬಂತೆ ಆಧಾರಕ್ಕಾಗಿ ಪಕ್ಕದಲ್ಲಿದ್ದ ತೆಂಗಿನ ಮರವನ್ನು
ಆಕೆ ಬಲಗೈ ಯಿಂದ ಆಧರಿಸಿ ಹಿಡಿದಿದ್ದಳು. ಅವಳ ಮೊಂಡಾದ ಎಡಗೈ ನಿರ್ಜೀವವಾಗಿ
ಜೋತು ಬಿದ್ದಿತ್ತು. ಒಂದೇ ನಿಮಿಷ ಆತ ಆಕೆಯನ್ನು ನೊಡುತ್ತಲಿದ್ದ. ಎರಡನೇ
ನಿಮಿಷದಲ್ಲಿ ಆತ ಆಕೆಯ ಕಡೆ ಒಡಿ ಬಂದು ಆಕೆಯ ಭುಜಗಳ ಸುತ್ತ ಕೈ ಹಾಕಿ
ಆಕೆಯನ್ನು ತನ್ನ ಎದೆಗೆ ಗಟ್ಟಿಯಾಗಿ ಒತ್ತಿಕೊಂಡು ಬಡಬಡುಸಿದ: "ನಾನು ನಿನ್ನನ್ನು
ಪ್ರೀತಿಸುತ್ತೇನೆ ಶೋಭಾ, ಬಹಳ-ಬಹಳ-ಬಹಳ ಪ್ರೀತಿಸುತ್ತೇನೆ. ನಿನ್ನ ಬಿಟ್ಟು
ಹೋಗುವುದಿಲ್ಲ. ನನ್ನನ್ನು ನಂಬು ಶೋಭಾ.."
{{gap}}ತೆಂಗಿನ ಮರ ಆಧರಿಸಿ ಹಿಡಿದಿದ್ದ ಶೋಭಾ ಅದನ್ನು ಬಿಟ್ಟು ಸತೀಶನ
ಎದೆಯಲ್ಲಿ ತಲೆಯಿಟ್ಟು ಆತನ ಮಾತುಗಳನ್ನು ಕೇಳುತ್ತಾ ಕಣ್ಣೀರು ಹರಿಸುತ್ತಾ
ಆನಂದಪಟ್ಟಳು.<br>
{{gap}}(ಆಂಗ್ಲ ಸಾಹಿತಿ ಎಚ್.ಇ.ಬೇಟ್ಸ್ ನ ವಿಚಾರಗಳಿಂದ ಪ್ರೇರಿತ)<br>
{{rh|right=(೧೯೮೮)}}<noinclude><references/></noinclude>
loztq97sxg1mkhgz35mtygktj59b4iz
ಪುಟ:ನಡೆದದ್ದೇ ದಾರಿ.pdf/೧೨೪
104
31480
318059
84875
2026-05-08T09:36:49Z
Shreelatha.Halemane
7642
/* Proofread */
318059
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=ಕೊನೆಯ ದಾರಿ/ನೆರಳು|right=೧೧೭}}
{{gap}}ಆದರೆ ಆವ್ವ...?
{{gap}}ರಾಜ ದಿನಾ ಸಂಜೆ ಹೋಗಿ ಆಜ್ಜಿಯನ್ನು ನೋಡಿಕೊoಡು
ಬರುತ್ತಿದ್ದ.'ಆಕಿ ಆರಾಮಿದಾಳ.ನೀ ಚಿoತೀ ಮಾಡಬ್ಯಾಡ
ಮಮ್ಮೀ'ಎoದು ಹೇಳುತ್ತಿದ್ದ.'ಆಕೀಗೇನು ಬೇಕಾದರೂ
ಒಯ್ದುಕೊಡು ರಾಜೂ'ಎನ್ನುತ್ತಿದ್ದಳು ಮಾಲತಿ.ಅವ್ವನಿಗೆ
ಪ್ರೀಯವಾದ ತಿನಿಸು ಕಳಿಸಿದಾಗ ಆಕೆ ಅದನ್ನು ತಿoದಿರಲಿಲ್ಲವೆoದು ಕೇಳಿ ರಾತ್ರೀಯಿಡೀ ಆತ್ತಿದ್ದಳು...
{{gap}}ಅoದು ಸಂಜೆ ಬoದ ರಾಜ ಹೇಳಿದ್ದ,"ಆಜ್ಜಿ ತನ್ನ
ಖೋಲಿಯೂಳಗೆ ತಲೆದಿoಬಿನ ಕೆಳಗೆ ಡೈರಿ ಇಟ್ಟಾಳoತ
ಮಮ್ಯೀ.ಅದನ್ನ ತoದುಕೊಡೂoತ ನಾಲ್ಕು ದಿವಸದಿoದ
ಹೇಳ್ಲಿಕ್ಹತ್ತಾಳ. ನನಗೆ ನೆನಪೇ ಆಗಿರಲಿಲ್ಲ."
{{gap}}ಅವನಿಗೇಕೆ ನೆನಪಾಗಬೇಕು.ಅವನ ಹಾಸ್ಟಿಲಿಗೆ ಹೋಗುತ್ತಿದ್ದುದೂ ಮಮ್ಮಿಯ ಸಲುವಾಗಿ.ಆಜ್ಜಿಯ ಬೇಕುಬೇಡಗಳೊಂದಿಗೆ ಅವನದೇನು ಸಂಬಂಧ ?-ತುಂಬ
ಕಸಿವಿಸಿಯಾಯಿತು ಮಾಲತಿಗೆ;'ನಾ ಈಗ ಸಧ್ಯಾ ಹುಡಿಕಿ
ಕೊಡ್ತೀನಿ ರಾಜೂ,ಈಗಿಂದೀಗ ಹೋಗಿ ಅದನ್ನು ಅವ್ವಗ
ಕೊಟ್ಟ ಬಾ.ಆಮ್ಯಾಲೆ ಚಹಾ ಕುಡದೀಯಂತ.ಏನು? ಶ್ಯಾಣ್ಯಾ ನನ್ನ ಮರಿ."
{{gap}}ಆವ್ವನ ರೂಮಿನ ತುಂಬ ಕತ್ತಲು.ತಡವರಿಸುತ್ತ ಒಳಬಂದಳು ಮಾಲತಿ.ತಲೆದಿಂಬಿನ ಕೆಳಗೆ ಹರಿದರೇಶಿಮೆ
ಸೀರೆಯ ತುಕಡಿಯಲ್ಲಿ ಸುತ್ತಿದ್ದ ಪುಟ್ಟ ಡೈರಿ.ನಡುವೆ ಸವೆದುಹೋಗಿದ್ದ ಪೆಸ್ಸಿಲಿನದೊಂದು ತುಣುಕು.ಏನು ಬರೆಯುತ್ತಿದ್ದಳು ಅವ್ವ ಈ ಡೈರಿಯಲ್ಲಿ?
{{gap}}ಕಣ್ಣು ಕಿರಿದುಗೊಳಿಸಿ ಮಾಲತಿ ಕೊನೆಯ ಪೇಜಿನಲ್ಲಿ ಗೀಟುಗಳು ಹಾಗೆ ಕಾಣುತ್ತಿದ್ದ ಪೆನ್ಸಿಲಿನ ಗುರುತುಗಳ ಮೇಲೆ ದೃಷ್ಟಿಯೋಡಿಸಿದಳು:
{{gap}}ಒಣಗಿದ ಗಿಡದ ಹಾಗೆ ಕಾಣುತ್ತಿದ್ದ ಒಂದು ಚಿತ್ರ,ಎಲೆ,
ಹೂ-ಎಲ್ಲ ಮಕ್ಕಳು ಬರೆದ ಹಾಗೆ.ಕೊನೆಯಲ್ಲಿ ಸೊಟ್ಟ ಆಕ್ಷರಗಳಲ್ಲಿ ಎರಡು ಸಾಲು;'ಸದಾಶಿವ,ನನ್ನ ಇಡೀ ಜೀವನ ನಿನ್ನ ಮರೀಲಿಕ್ಕೆ ಪ್ರಯತ್ನ ಮಾಡೋದ್ರಾಗ ವ್ಯರ್ಥ ಕಳೆದೆ.ನೀ ನನ್ನ ನೆರಳಾಗಿ ನನಗ ಬೆನ್ನುಹತ್ತಿರುವಿ.ನಿನ್ನ ನೆನಪಿನಿಂದ ನನಗ ಬಿಡುಗಡೀನೇ ಇಲ್ಲ.ಇಗಾ.ನಾನೂ ಬಂದೆ ತಡಿ,ಸದೂ...ಸದ್ಯಾ...
{{gap}}ಇನ್ನೇನು ಮಾಲತಿಯ ಕಣ್ಣೀರು ಮೇಲೆ ಉರುಳಬೇಕು.ಬಾಗಿಲಲ್ಲಿ ರಾಜನ ಹೆಜ್ಜೆಯ ಸದ್ದು.ತಟ್ಟನೆ ಕಣ್ಣೊರೆಸಿಕೊಂಡು ಎದ್ದು ನಿಂತಳು ಆಕೆ,"ಇದನ್ನ ತಗೋ
ರಾಜೂ,ಅವ್ವಗ ಕೊಟ್ಟ ಬಾ ಹೋಗು."<noinclude><references/></noinclude>
gwt14evnscfqjt1f2liwqsq8csshma7
ಪುಟ:ನಡೆದದ್ದೇ ದಾರಿ.pdf/೫೧೫
104
31648
318011
250655
2026-05-08T07:12:10Z
Pragathi. BH
7585
/* Validated */
318011
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೫೦೮|right= ನಡೆದದ್ದೇ ದಾರಿ}}
{{gap}}ಹದಿನಾರು ವರ್ಷಗಳಾದರೂ ಬೆಂಗಳೂರಿನಲ್ಲಿಯೇ, ಹಾಗೂ ಸಮೀಪದ<br>
ಊರುಗಳಲ್ಲಿ, ಪೋಸ್ಟ್ ದೊರಕಿಸಿಕೊಳ್ಳುವಲ್ಲಿ ಈ ವರೆಗೂ ಆಕೆ<br>
ಯಶಸ್ವಿಯಾಗಿದ್ದಳು. ಆದರೆ ಈ ಸಲ ಆಕೆ ಬೆಂಗಳೂರಿನಿಂದ ರಾಮನಗರಕ್ಕೆ<br>
ಬರಲೇಬೇಕಾಗಿತ್ತು. ಪ್ರಮೋಶನ್ ಬಂದಿದ್ದರಿಂದ ವರ್ಗಾವಣೆಯನ್ನು ನಿರಾಕರಿಸುವ<br>
ಹಾಗಿರಲಿಲ್ಲ. ಮಕ್ಕಳೂ ಈಗ ದೊಡ್ಡವರಾಗಿದ್ದರು. ಮನೆಯಲ್ಲಿ ಮನೋಹರನ<br>
ತಾಯಿ ಇದ್ದರು. ಹೀಗಾಗಿ ಕಳೆದ ಎಂಟು-ಹತ್ತು ತಿಂಗಳುಗಳಿಂದ ಆಕೆ ರಾಮನಗರದಲ್ಲಿ<br>
ಒಬ್ಬಳೇ ಇದ್ದಳು.<br>
{{gap}}ಈ ಮಧ್ಯೆ ವಾರಾಂತ್ಯದಲ್ಲಿ ಎರಡು ಸಲ ಮಾತ್ರ ಬೆಂಗಳೂರಿಗೆ ಹೋಗಿ<br>
ಬರಲು ಸಾಧ್ಯವಾಗಿತ್ತು. ಅವಸರದಿಂದ ಹೋಗುವುದು, ಗಂಡ-ಮಕ್ಕಳ ಮುಖವನ್ನೂ<br>
ಸರಿಯಾಗಿ ನೋಡುವುದಾಗಿರುತ್ತಿರಲಿಲ್ಲ, ಅಷ್ಟರಲ್ಲೇ ಮತ್ತೆ ಅವಸರದಿಂದ ಹೊರಟು<br>
ಬಂದುಬಿಡುವುದು. ಬಂದ ನಂತರ ಮನಸ್ಸಿಗೆ ಬಹಳ ಬೇಸರವಾಗುತ್ತಿತ್ತು.<br>
ಮನೋಹರನೇ ನಾಲ್ಕಾರು ಸಲ ಬಂದು ಇದ್ದು ಹೋಗಿದ್ದ. ಚಿಂತಿಸಬೇಡ,<br>
ಹೇಗಾದರೂ ಮೂರು ವರ್ಷ ಕಳೆಯಲಿ, ಮತ್ತೆ ಬೆಂಗಳೂರಿಗೇ ಟ್ರಾನ್ಸ್ಫರ್<br>
ಮಾಡಿಸಿಕೊಳ್ಳಲು ಪ್ರಯತ್ನಿಸೋಣ, ಅಂತ ಸಮಾಧಾನ ಮಾಡಿದ್ದ. ಆದರೆ<br>
ಸ್ವಭಾವತಃ ಕುಟುಂಬವತ್ಸಲೆಯೂ ಭಾವುಕಳೂ ಆಗಿದ್ದ ಯಶಸ್ವಿನಿಗೆ ಈ ಅಗಲಿಕೆಯ<br>
ಅನುಭವ ಬಹಳ ನೋವಿನದಾಗಿತ್ತು. ಇಡಿಯ ದಿನ ಕೋರ್ಟಿನ ಕಲಾಪಗಳಲ್ಲಿ<br>
ಸಮಯ ಹೇಗೋ ಕಳೆದುಹೋಗುತ್ತಿತ್ತು. ಸಂಜೆ ಕ್ವಾರ್ಟರ್ಸಿಗೆ ಮರಳಿದಾಗ ಮನೆಯ<br>
ನೆನಪಾಗಿ ಬಹಳ ಏಕಾಕಿಯೆನ್ನಿಸಿ ದುಃಖವಾಗುತ್ತಿತ್ತು. ಅಮ್ಮ-ಅಮ್ಮ ಅಂತ ಹಿಂದೆ-<br>
ಮುಂದೆ ಸುತ್ತಾಡುವ ಮಗಳು. ಸ್ಕೂಲು ಬಿಟ್ಟು ಬಂದೊಡನೆ ಆಕೆಯ ತೊಡೆಯ<br>
ಮೇಲೆ ತಲೆಯಿರಿಸಿ ಮಲಗುವ ಮಗ, ತಾಯಿಯಂತೆ ಆದರಿಸಿ ಉಪಚರಿಸುತ್ತಿದ್ದ ಅತ್ತೆ,<br>
ಮತ್ತು ರಾತ್ರಿಗಳಲ್ಲಿ ತನ್ನ ಬಿಸಿಯಪ್ಪುಗೆಯಲ್ಲಿ ಜಗತ್ತು ಮರೆಸುತ್ತಿದ್ದ ಗಂಡ -ಈ<br>
ಎಲ್ಲರಿಂದ ಇಷ್ಟು ದೂರವಾಗಿ ಒಬ್ಬಳೇ ಹೀಗೆ ಒದ್ದಾಡುತ್ತ ಯಾಕಿರಬೇಕು ? ಸಾಕಷ್ಟು<br>
ವರ್ಷ ದುಡಿದದ್ದಾಗಿದೆ. ಇನ್ನು ವ್ಹಾಲಂಟರಿ ರಿಟಾಯರ್ಮೆಂಟ್ ಏಕೆ<br>
ತಗೊಳ್ಳಬಾರದು ? ಮನಃಶಾಂತಿಯೇ ಇಲ್ಲದಿದ್ದರೆ ಈ ನೌಕರಿ, ಹಣ, ಅಂತಸ್ತು,<br>
ಕೀರ್ತಿಗಳಿಂದ ಏನು ಪ್ರಯೋಜನ ? -ಹೀಗೆ ಯೋಚಿಸಿ ಯಶಸ್ವಿನಿ<br>
ಹೈರಾಣಾಗುತ್ತಿದ್ದಳು.<br>
{{gap}}ಈಗ ಕೋರ್ಟಿಗೆ ಬೇಸಿಗೆ ಬಿಡುವು ಸುರುವಾಗಲಿತ್ತು. ಯಶಸ್ವಿನಿ ತುಂಬ<br>
ಆಸ್ಥೆ ಯಿಂದ ಗಂಡ-ಮಕ್ಕಳಿಗಾಗಿ ಹಲವಾರು ವಸ್ತುಗಳನ್ನು ಖರೀದಿಸಿದಳು. ಎಲ್ಲಾ<br>
ಸಾಮಾನು ನೀಟಾಗಿ ಪ್ಯಾಕ್ ಮಾಡಿದಳು. ದೀರ್ಘವಾದ ರಜೆ ಇದೆ, ನಾನು ಮನೆಗೆ<noinclude><references/></noinclude>
eqahv227pzkkzkle8wtrp5ergxkr4wb
318012
318011
2026-05-08T07:14:12Z
Pragathi. BH
7585
318012
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೫೦೮|right= ನಡೆದದ್ದೇ ದಾರಿ}}
{{gap}}ಹದಿನಾರು ವರ್ಷಗಳಾದರೂ ಬೆಂಗಳೂರಿನಲ್ಲಿಯೇ, ಹಾಗೂ ಸಮೀಪದ
ಊರುಗಳಲ್ಲಿ, ಪೋಸ್ಟ್ ದೊರಕಿಸಿಕೊಳ್ಳುವಲ್ಲಿ ಈ ವರೆಗೂ ಆಕೆ
ಯಶಸ್ವಿಯಾಗಿದ್ದಳು. ಆದರೆ ಈ ಸಲ ಆಕೆ ಬೆಂಗಳೂರಿನಿಂದ ರಾಮನಗರಕ್ಕೆ
ಬರಲೇಬೇಕಾಗಿತ್ತು. ಪ್ರಮೋಶನ್ ಬಂದಿದ್ದರಿಂದ ವರ್ಗಾವಣೆಯನ್ನು ನಿರಾಕರಿಸುವ
ಹಾಗಿರಲಿಲ್ಲ. ಮಕ್ಕಳೂ ಈಗ ದೊಡ್ಡವರಾಗಿದ್ದರು. ಮನೆಯಲ್ಲಿ ಮನೋಹರನ
ತಾಯಿ ಇದ್ದರು. ಹೀಗಾಗಿ ಕಳೆದ ಎಂಟು-ಹತ್ತು ತಿಂಗಳುಗಳಿಂದ ಆಕೆ ರಾಮನಗರದಲ್ಲಿ
ಒಬ್ಬಳೇ ಇದ್ದಳು.
{{gap}}ಈ ಮಧ್ಯೆ ವಾರಾಂತ್ಯದಲ್ಲಿ ಎರಡು ಸಲ ಮಾತ್ರ ಬೆಂಗಳೂರಿಗೆ ಹೋಗಿ
ಬರಲು ಸಾಧ್ಯವಾಗಿತ್ತು. ಅವಸರದಿಂದ ಹೋಗುವುದು, ಗಂಡ-ಮಕ್ಕಳ ಮುಖವನ್ನೂ
ಸರಿಯಾಗಿ ನೋಡುವುದಾಗಿರುತ್ತಿರಲಿಲ್ಲ, ಅಷ್ಟರಲ್ಲೇ ಮತ್ತೆ ಅವಸರದಿಂದ ಹೊರಟು
ಬಂದುಬಿಡುವುದು. ಬಂದ ನಂತರ ಮನಸ್ಸಿಗೆ ಬಹಳ ಬೇಸರವಾಗುತ್ತಿತ್ತು.
ಮನೋಹರನೇ ನಾಲ್ಕಾರು ಸಲ ಬಂದು ಇದ್ದು ಹೋಗಿದ್ದ. ಚಿಂತಿಸಬೇಡ,
ಹೇಗಾದರೂ ಮೂರು ವರ್ಷ ಕಳೆಯಲಿ, ಮತ್ತೆ ಬೆಂಗಳೂರಿಗೇ ಟ್ರಾನ್ಸ್ಫರ್
ಮಾಡಿಸಿಕೊಳ್ಳಲು ಪ್ರಯತ್ನಿಸೋಣ, ಅಂತ ಸಮಾಧಾನ ಮಾಡಿದ್ದ. ಆದರೆ
ಸ್ವಭಾವತಃ ಕುಟುಂಬವತ್ಸಲೆಯೂ ಭಾವುಕಳೂ ಆಗಿದ್ದ ಯಶಸ್ವಿನಿಗೆ ಈ ಅಗಲಿಕೆಯ
ಅನುಭವ ಬಹಳ ನೋವಿನದಾಗಿತ್ತು. ಇಡಿಯ ದಿನ ಕೋರ್ಟಿನ ಕಲಾಪಗಳಲ್ಲಿ
ಸಮಯ ಹೇಗೋ ಕಳೆದುಹೋಗುತ್ತಿತ್ತು. ಸಂಜೆ ಕ್ವಾರ್ಟರ್ಸಿಗೆ ಮರಳಿದಾಗ ಮನೆಯ
ನೆನಪಾಗಿ ಬಹಳ ಏಕಾಕಿಯೆನ್ನಿಸಿ ದುಃಖವಾಗುತ್ತಿತ್ತು. ಅಮ್ಮ-ಅಮ್ಮ ಅಂತ ಹಿಂದೆ-
ಮುಂದೆ ಸುತ್ತಾಡುವ ಮಗಳು. ಸ್ಕೂಲು ಬಿಟ್ಟು ಬಂದೊಡನೆ ಆಕೆಯ ತೊಡೆಯ
ಮೇಲೆ ತಲೆಯಿರಿಸಿ ಮಲಗುವ ಮಗ, ತಾಯಿಯಂತೆ ಆದರಿಸಿ ಉಪಚರಿಸುತ್ತಿದ್ದ ಅತ್ತೆ,
ಮತ್ತು ರಾತ್ರಿಗಳಲ್ಲಿ ತನ್ನ ಬಿಸಿಯಪ್ಪುಗೆಯಲ್ಲಿ ಜಗತ್ತು ಮರೆಸುತ್ತಿದ್ದ ಗಂಡ -ಈ
ಎಲ್ಲರಿಂದ ಇಷ್ಟು ದೂರವಾಗಿ ಒಬ್ಬಳೇ ಹೀಗೆ ಒದ್ದಾಡುತ್ತ ಯಾಕಿರಬೇಕು ? ಸಾಕಷ್ಟು
ವರ್ಷ ದುಡಿದದ್ದಾಗಿದೆ. ಇನ್ನು ವ್ಹಾಲಂಟರಿ ರಿಟಾಯರ್ಮೆಂಟ್ ಏಕೆ
ತಗೊಳ್ಳಬಾರದು ? ಮನಃಶಾಂತಿಯೇ ಇಲ್ಲದಿದ್ದರೆ ಈ ನೌಕರಿ, ಹಣ, ಅಂತಸ್ತು,
ಕೀರ್ತಿಗಳಿಂದ ಏನು ಪ್ರಯೋಜನ ? -ಹೀಗೆ ಯೋಚಿಸಿ ಯಶಸ್ವಿನಿ
ಹೈರಾಣಾಗುತ್ತಿದ್ದಳು.<br>
{{gap}}ಈಗ ಕೋರ್ಟಿಗೆ ಬೇಸಿಗೆ ಬಿಡುವು ಸುರುವಾಗಲಿತ್ತು. ಯಶಸ್ವಿನಿ ತುಂಬ
ಆಸ್ಥೆ ಯಿಂದ ಗಂಡ-ಮಕ್ಕಳಿಗಾಗಿ ಹಲವಾರು ವಸ್ತುಗಳನ್ನು ಖರೀದಿಸಿದಳು. ಎಲ್ಲಾ
ಸಾಮಾನು ನೀಟಾಗಿ ಪ್ಯಾಕ್ ಮಾಡಿದಳು. ದೀರ್ಘವಾದ ರಜೆ ಇದೆ, ನಾನು ಮನೆಗೆ<noinclude><references/></noinclude>
98jr8e5xh4yl9kxdjrce9znn7xxz6o7
ಪುಟ:ನಡೆದದ್ದೇ ದಾರಿ.pdf/೪೯೯
104
31650
318083
84904
2026-05-08T10:00:03Z
Shreelatha.Halemane
7642
/* Proofread */
318083
proofread-page
text/x-wiki
<noinclude><pagequality level="3" user="Shreelatha.Halemane" />{{rh|center=|left=೪೯೨|right=ನಡೆದದ್ದೇ ದಾರಿ}}</noinclude>ಆಜ್ಜಿ , ವಿಧವೆ ಸೋದರತ್ತೆ, ಅಜ್ಜಿಯ ಅತ್ತೆ ಹೀಗೆ ಮೂವರು ಮುವರು ಮುದುಕಿಯರು. ಹದಿನಾಲ್ಕು ವರ್ಷಕ್ಕೆ ಹುಡುಗಿಯ ಕೈ ಹಳಿದಿ ಮಾಡುವುದು ಸಂಪ್ರದಯ. ಹೆಚ್ಚು ಕಲಿತರೆ ಈ ಕಡೆ ಅವರ ಜಾತಿಯ ವರ ಸಿಗುವುದೇ ಇಲ್ಲ. ಹಿರಿಯ ಮಗಳದೇ ಮದವೆಯನ್ನು ಸರಿಯಾದ ಕಾಲಕ್ಕೆ ಮಾಡಿದಿದ್ದರೆ ತಂಗಿಯರ ಗತಿಯೇನು? ಎಲ್ಲ ರೀತಿಯಿಂದ ಯೋಚನೆ ಮಾಡಿ ಹಿರಿಯರ ನಿರ್ಧರಿಸಿದರೆ. ಮುಂಬಯಿಯಲ್ಲಿ ಪ್ರಸಿದ್ಧ ಬಿಜಿನೆಸ್ ಮನ್ ಆಗಿದ್ದವರ ಮಗ. ಮ್ಯಾಟ್ರಿಕ್ ಫ಼ೇಲಾಗಿದ್ದರೇನ್ಂತೆ, ಲಕ್ಷಾನುಗಟ್ಟಲೆ ಹಣ ಗಳಿಸುತ್ತಾನೆ. ಒಳ್ಳೆಯ ವರ , ಸೋನಿಯಾ ತಕರಾರು ಮಾಡುತ್ತಾಳೆ ಅಂತ ಗೋತ್ತಿತ್ತು. ಅವಳಿಗೆ ಹೇಳದೆಯೇ ಮದುವೆಯ ತಯಾರಿ ಮಾಡಿದರು. ನೆಂಟರ ಮನೆಗೆ ಹೋಗೋಣ ಅಂತ ಹೇಳಿ ಕರಕೊಂಡು ಹೋದರು. ಯಾರದೋ ಮದುವೆ ಅಂತ ಸುಳ್ಲು ಹೇಳಿದರು.ತನ್ನದೇ ಅಂತ ತಿಳಿದಾಗ ಪ್ರತಿಭಟಿಸಿದಳು,ಅತ್ತಳು, ಉಪವಾಸ ಕೂತಳು. ಕೂಡಿದ ಬಂಧುಗಳು ಬುದ್ಧಿ ಹೇಳಿದರು. ಅವಳ ಸ್ವಂತ ತಾಯಿ ನೀನು ಒಪ್ಪದಿದ್ದರೆ ವಿಷ ಕುಡಿದು ಸಾಯುತ್ತೇನೆಂದು ಬೆದರಿಕೆ ಹಾಕಿದಳು. ಸೋನಿಯಾಗೆದಿಕ್ಕೇ ತೋಚಲಿಲ್ಲ. ಮದುವೆ ನಡೆದೇ ಹೋಯಿತು. ಭಾರಿ ವೈಭವದ ಮದುವೆ.
{{gap}}ವೈಭವದ ಮದುವೆಯ ನಂತರ ಸಿಮ್ಲಾದಲ್ಲಿ ಒಂದು ತಿಂಗಳ ಹನಿಮೂನ್. ಅದಾದ ನಂತರ ಒಂದು ವಾರ ಇದ್ದು ಹೋಗಲು ಸೋನೆಯಾ ತವರಿಗೆ ಬಂದಿದ್ದಳು."ಹ್ಯಾಂಗಿದ್ದಾಳ ಸೋನೆಯಾ? ಏನಂತಾಳ?"- ಉಗುಳು ನುಂಗಿ ಕೇಳಿದೆ.
{{gap}}ಏನಂತಾಳಮ್ಮಾ ಪಾಪ , ಬರೇ ಅಳತಾಳ . ಸೊರಗಿ ಕಡ್ಡಿ ಅಗ್ಯಾಳ . ಮುಖದ ಮ್ಯಾಲ, ಕುತ್ತಿಗೀ ಮ್ತಾಲ ನೀಲಿ ನೀಲಿ ಕಲೆ . ಮೈತುಂಬ ಬಂಗಾರ, ಜರೀ ಸೀರೆ,ಕಾಲೊಳಗೂ ಒಜ್ಜಾ-ಒಜ್ಜಾ ಚೈನು. ಎದ್ದು ತಿರಗ್ಯಾಡಲಿಕ್ಕೂ ಶಕ್ತಿ ಇಲ್ಲ ಅಕೆಗೆ. ಘೂಂಘಟ ಹಾಕ್ಕೊಂಡು ಕೂತಬಿಟ್ಟಾಳ. ಮಾತಾಡಿದರ ಕಣ್ಣಾಗ ನೀರು ಬರ್ತವ ,"ಗೆಳತಿಯೊಂದಿಗೆ ತಾನೂ ಕಣ್ಣೀರು ಸುರಿಸಿ ಬಂದಿದ್ದ ಮಿಲಿಗೆ ನಿಜವಾಗಿ ಅಘಾತವಾಗಿತ್ತು.
{{gap}}ಸದಾ ನಗುತ್ತ ಜೋಕು ಮಾಡುತ್ತ ಕುಣಿಯುತ್ತಲೇ ಓಡಾಡುತ್ತಿದ್ದ ಸೋನಿಯಾಳ ಮುಖ ಕಣ್ಣಿದುರು ಬಂತು. ಛೆ,ಅನ್ಯಾಯ ಅಂದುಕೊಂಡೆ.
{{center|೩}}
{{gap}}ಮತ್ತೆ ಒಂದು ವರ್ಷಕಳೆದಿತ್ತು. ಮಿಲಿ ಎಸ್ ಎಸ್ ಎಲ್.ಸಿ.ಯಲ್ಲಿ ತುಂಬ ಚೆನ್ನಾಗಿ ಮಾಡಿದ್ದಳು. ರಿಝಲ್ಪ್ ಬಂದ ದಿನವೇ ಸೋನಿಯಾ ಊರಿಗೆ ಬಂದ ಸುದ್ದಿ<noinclude><references/></noinclude>
4xbc5oceveghl3h0ryb73wz40uqe77s
ಪುಟ:ನಡೆದದ್ದೇ ದಾರಿ.pdf/೫೦೮
104
31651
318003
250720
2026-05-08T07:00:19Z
Pragathi. BH
7585
/* Validated */
318003
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=ಇನ್ನಷ್ಟು ಕತೆಗಳು / ಸಮಾಧಾನ|right=೫೦೧}}
{{gap}}ನಾಲ್ಕು ದಿನ ರಜೆಯ ಮೇಲೆ ಹೋಗಿದ್ದಳು ಮಿಸೆಸ್ ವರ್ಮಾ.<br>
ಸ್ಟಾಫ್ ರೂಮಿನಲ್ಲಿ ನಿಶ್ಶಬ್ದತೆ. ಮೂವತ್ತಕ್ಕೂ ಮಿಕ್ಕಿ ಶಿಕ್ಚಕ-ಶಿಕ್ಬಕಿಯರಿದ್ದರೂ<br>
ವಿಶೇಷವಾಗಿ ಮಾತೇ ಇಲ್ಲ. ತನಗಾದರೂ ಏನಾಯಿತು ? ಯಾವಾಗಲೂ ಅರಳು<br>
ಹುರಿದಂತೆ ಮಾತಾಡುತ್ತ ನೂರು ಜನರ ಕುತೂಹಲ - ಆಸಕ್ತಿಗಳನ್ನು ತಾಸುಗಟ್ಟಲೆ<br>
ಹಿಡಿದಿಟ್ಟುಕೊಳ್ಳುತ್ತಿದ್ದೆನಲ್ಲ. ಈಗೇಕೆ ಮಾತೇ ಬರಲೊಲ್ಲವು ? ವರ್ಮಾ ಇಲ್ಲದ್ದಕ್ಕೆ<br>
ಒಂದು ರೀತಿ ಹಾಯೆನಿಸಿದರೂ, ಯಾವ ರೀತಿಯಿಂದಲೂ ಸೋತುಹೋದದ್ದನ್ನು<br>
ಗೆದ್ದುಕೊಳ್ಳಲಾಗುತ್ತಿಲ್ಲವಲ್ಲ. ಟೀಚರ್ಸೆಲ್ಲಾ ಮೌನವಾಗಿ ಕ್ಲಾಸಿಗೆ ಹೋಗಿ-ಬಂದು<br>
ಮಾಡುತ್ತಿದ್ದಾರೆ. ಎಲ್ಲರನ್ನೂ ಬಹುಶಃ ಇಲ್ಲದ ವರ್ಮಾನ ಭೂತ<br>
ಹಿಡಿದುಕೊಂಡಿದೆ... ತನ್ನ ಸಾಹಸ ಸಾಮರ್ಥ್ಯ ಪರೀಕ್ಬೆಯ ಕನಸುಗಳೆಲ್ಲಾ ಒಡೆದು<br>
ಹೋಗುತ್ತಿವೆ. ತನ್ನ ಇಷ್ಟು ವರ್ಷಗಳ ಆತ್ಮವಿಶ್ವಾಸ ಹನಿಹನಿಯಾಗಿ<br>
ಸೋರಿಹೋಗುತ್ತಿದೆ. ಈ ಊರಿನ ಹವಾಗುಣದಿಂದಲೋ ಏನೋ. ಒಂದು ರೀತಿಯ<br>
ಜಡತ್ವ ಬರುತ್ತಿದೆ - ಮಾನಸಿಕವಾಗಿ, ದೈಹಿಕವಾಗಿ.<br>
{{gap}}“ಏನು ರಜನೀ, ಬಂದಾಗ ಎಷ್ಟು ಹುರುಪಿನಿಂದಿದ್ದಿ. ಈಗ್ಯಾಕೋ ಸಪ್ಪಗೆ
ಕಾಣತೊಡಗಿರುವಿಯಲ್ಲ. ಗಂಡನ್ನ ಬಿಟ್ಟಿರೂದಾಗೂದಿಲ್ಲೇನು ?" -ಮಾವಶಿ
ಚೇಷ್ಟೆ ಮಾಡಿದ್ದಳು.<br>
{{gap}}“ಯಾಕೋ, ಒಂದು ನಮೂನೆ ಜಡ್ಡು ಬಂದ್ಹಾಂಗ ಆಗೇದ. ಇಲ್ಲೀ ಹೈಸ್ಕೂಲೇ
ಸೇರ್ಲಿಲ್ಲ ನನಗ."<br>
{{gap}}“ಅದ್ಯಾಕ ಸೇರ್ಲಿಲ್ಲ ? ಭಾಳ ಚಲೋ ರೆಪ್ಯುಟೇಶನ್ ಅದ ನಿಮ್ಮ ಹೈಸ್ಕೂಲಿಗೆ.
ಕ್ವಾಲಿಫಾಯ್ಡ್ ಟೀಚರು ಇದ್ದಾರ. ಪ್ರತೀ ವರ್ಷ ಪಬ್ಲಿಕ್ ಪರೀಕ್ಷಾದಾಗ ರ್ಯಾಂಕು
ತಪ್ಪಿದ್ದಲ್ಲ. ನಮ್ಮ ಹುಡುಗ್ರೆಲ್ಲಾ ಅಲ್ಲೇ ಕಲ್ತಾರ. ಆ ವರ್ಮಾ ಅಂತ ಬಾಯೀ
ಇದ್ದಾಳಲ್ಲ, ಉತ್ತರದಿಂದ ಬಂದಾಳ ನೋಡು ಎರಡು ವರ್ಷಾತು, ಆಕೆ<br>
ಬಂದಾಗಿನಿಂದಂತೂ ಎಲ್ಲಾ ಆ್ಯಕ್ಟಿವ್ದಿಟೀಜ್ನ್ಯಾಗೂ ನಿಮ್ಮ ಸ್ಕೂಲಿನದೇ ಮೇಲುಗೈ.
ಊರಾಗೆಲ್ಲಾ ನಿಮ್ಮ ಸ್ಕೂಲಿಂದೇ ಮಾತು. ಮತ್ತ ನೋಡಲಿಕ್ಕನೂ ಎಷ್ಟ ಛೆಂದ
ಇದ್ದಾಳಲ್ಲ ಆಕಿ ?..."<br>
{{rh|center=* * *}}
{{gap}}ಮಿಸೆಸ್ ವರ್ಮಾ ರಜೆ ಮುಗಿಸಿ ತಿರುಗಿ ಬಂದಾಗ ಸ್ಟಾಫ್ ರೂಮಿನಲ್ಲಿ ಹಬ್ಬದ
ವಾತಾವರಣ. ಯಾವ ಊರಿಗೆ ಹೋಗಿದ್ದಳೋ, ಯಾಕೆ ಹೋಗಿದ್ದಳೋ, ಏನು ಮಾಡಿ
ಬಂದಳೋ, ಯಾರಿಗೆ ಗೊತ್ತು ? ಯಾರಿಗೂ ಅದರ ಬಗ್ಗೆ ಕುತೂಹಲವಿದ್ದ ಹಾಗೆ
ಕಾಣಲಿಲ್ಲ. ಎಲ್ಲರೂ ಅವಳನ್ನು ಸುತ್ತುವರಿದು ಕೂತುಬಿಟ್ಟಿದ್ದರು.<noinclude><references/></noinclude>
29gkody1498yghhei0yx6lqccsh6lnh
318004
318003
2026-05-08T07:01:26Z
Pragathi. BH
7585
318004
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=ಇನ್ನಷ್ಟು ಕತೆಗಳು / ಸಮಾಧಾನ|right=೫೦೧}}
{{gap}}ನಾಲ್ಕು ದಿನ ರಜೆಯ ಮೇಲೆ ಹೋಗಿದ್ದಳು ಮಿಸೆಸ್ ವರ್ಮಾ.
ಸ್ಟಾಫ್ ರೂಮಿನಲ್ಲಿ ನಿಶ್ಶಬ್ದತೆ. ಮೂವತ್ತಕ್ಕೂ ಮಿಕ್ಕಿ ಶಿಕ್ಚಕ-ಶಿಕ್ಬಕಿಯರಿದ್ದರೂ
ವಿಶೇಷವಾಗಿ ಮಾತೇ ಇಲ್ಲ. ತನಗಾದರೂ ಏನಾಯಿತು ? ಯಾವಾಗಲೂ ಅರಳು
ಹುರಿದಂತೆ ಮಾತಾಡುತ್ತ ನೂರು ಜನರ ಕುತೂಹಲ - ಆಸಕ್ತಿಗಳನ್ನು ತಾಸುಗಟ್ಟಲೆ
ಹಿಡಿದಿಟ್ಟುಕೊಳ್ಳುತ್ತಿದ್ದೆನಲ್ಲ. ಈಗೇಕೆ ಮಾತೇ ಬರಲೊಲ್ಲವು ? ವರ್ಮಾ ಇಲ್ಲದ್ದಕ್ಕೆ
ಒಂದು ರೀತಿ ಹಾಯೆನಿಸಿದರೂ, ಯಾವ ರೀತಿಯಿಂದಲೂ ಸೋತುಹೋದದ್ದನ್ನು
ಗೆದ್ದುಕೊಳ್ಳಲಾಗುತ್ತಿಲ್ಲವಲ್ಲ. ಟೀಚರ್ಸೆಲ್ಲಾ ಮೌನವಾಗಿ ಕ್ಲಾಸಿಗೆ ಹೋಗಿ-ಬಂದು
ಮಾಡುತ್ತಿದ್ದಾರೆ. ಎಲ್ಲರನ್ನೂ ಬಹುಶಃ ಇಲ್ಲದ ವರ್ಮಾನ ಭೂತ
ಹಿಡಿದುಕೊಂಡಿದೆ... ತನ್ನ ಸಾಹಸ ಸಾಮರ್ಥ್ಯ ಪರೀಕ್ಬೆಯ ಕನಸುಗಳೆಲ್ಲಾ ಒಡೆದು
ಹೋಗುತ್ತಿವೆ. ತನ್ನ ಇಷ್ಟು ವರ್ಷಗಳ ಆತ್ಮವಿಶ್ವಾಸ ಹನಿಹನಿಯಾಗಿ
ಸೋರಿಹೋಗುತ್ತಿದೆ. ಈ ಊರಿನ ಹವಾಗುಣದಿಂದಲೋ ಏನೋ. ಒಂದು ರೀತಿಯ
ಜಡತ್ವ ಬರುತ್ತಿದೆ - ಮಾನಸಿಕವಾಗಿ, ದೈಹಿಕವಾಗಿ.
{{gap}}“ಏನು ರಜನೀ, ಬಂದಾಗ ಎಷ್ಟು ಹುರುಪಿನಿಂದಿದ್ದಿ. ಈಗ್ಯಾಕೋ ಸಪ್ಪಗೆ
ಕಾಣತೊಡಗಿರುವಿಯಲ್ಲ. ಗಂಡನ್ನ ಬಿಟ್ಟಿರೂದಾಗೂದಿಲ್ಲೇನು ?" -ಮಾವಶಿ
ಚೇಷ್ಟೆ ಮಾಡಿದ್ದಳು.<br>
{{gap}}“ಯಾಕೋ, ಒಂದು ನಮೂನೆ ಜಡ್ಡು ಬಂದ್ಹಾಂಗ ಆಗೇದ. ಇಲ್ಲೀ ಹೈಸ್ಕೂಲೇ
ಸೇರ್ಲಿಲ್ಲ ನನಗ."<br>
{{gap}}“ಅದ್ಯಾಕ ಸೇರ್ಲಿಲ್ಲ ? ಭಾಳ ಚಲೋ ರೆಪ್ಯುಟೇಶನ್ ಅದ ನಿಮ್ಮ ಹೈಸ್ಕೂಲಿಗೆ.
ಕ್ವಾಲಿಫಾಯ್ಡ್ ಟೀಚರು ಇದ್ದಾರ. ಪ್ರತೀ ವರ್ಷ ಪಬ್ಲಿಕ್ ಪರೀಕ್ಷಾದಾಗ ರ್ಯಾಂಕು
ತಪ್ಪಿದ್ದಲ್ಲ. ನಮ್ಮ ಹುಡುಗ್ರೆಲ್ಲಾ ಅಲ್ಲೇ ಕಲ್ತಾರ. ಆ ವರ್ಮಾ ಅಂತ ಬಾಯೀ
ಇದ್ದಾಳಲ್ಲ, ಉತ್ತರದಿಂದ ಬಂದಾಳ ನೋಡು ಎರಡು ವರ್ಷಾತು, ಆಕೆ<br>
ಬಂದಾಗಿನಿಂದಂತೂ ಎಲ್ಲಾ ಆ್ಯಕ್ಟಿವ್ದಿಟೀಜ್ನ್ಯಾಗೂ ನಿಮ್ಮ ಸ್ಕೂಲಿನದೇ ಮೇಲುಗೈ.
ಊರಾಗೆಲ್ಲಾ ನಿಮ್ಮ ಸ್ಕೂಲಿಂದೇ ಮಾತು. ಮತ್ತ ನೋಡಲಿಕ್ಕನೂ ಎಷ್ಟ ಛೆಂದ
ಇದ್ದಾಳಲ್ಲ ಆಕಿ ?..."<br>
{{rh|center=* * *}}
{{gap}}ಮಿಸೆಸ್ ವರ್ಮಾ ರಜೆ ಮುಗಿಸಿ ತಿರುಗಿ ಬಂದಾಗ ಸ್ಟಾಫ್ ರೂಮಿನಲ್ಲಿ ಹಬ್ಬದ
ವಾತಾವರಣ. ಯಾವ ಊರಿಗೆ ಹೋಗಿದ್ದಳೋ, ಯಾಕೆ ಹೋಗಿದ್ದಳೋ, ಏನು ಮಾಡಿ
ಬಂದಳೋ, ಯಾರಿಗೆ ಗೊತ್ತು ? ಯಾರಿಗೂ ಅದರ ಬಗ್ಗೆ ಕುತೂಹಲವಿದ್ದ ಹಾಗೆ
ಕಾಣಲಿಲ್ಲ. ಎಲ್ಲರೂ ಅವಳನ್ನು ಸುತ್ತುವರಿದು ಕೂತುಬಿಟ್ಟಿದ್ದರು.<noinclude><references/></noinclude>
daj1in1vghm69cdzzpkcw5bpvytibcw
ಪುಟ:ನಡೆದದ್ದೇ ದಾರಿ.pdf/೫೦೫
104
31654
317995
250669
2026-05-08T06:45:28Z
Pragathi. BH
7585
/* Validated */
317995
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೪೯೮|right= ನಡೆದದ್ದೇ ದಾರಿ}}
ಹುಡುಗರು-ಹುಡುಗಿಯರು ಪ್ರಶ್ನಾರ್ಥಕವಾಗಿ ಆಕೆಯನ್ನು ಕಣ್ಣರಳಿಸಿ ನೋಡಿದರು.
ವಿದ್ಯಾರ್ಥಿಗಳು ತನ್ನನ್ನು ನೋಡುವಾಗೆಲ್ಲ ಅವರ ಎಳೆಯ ಕಣ್ಣುಗಳಲ್ಲಿ<br>
ಸುವ್ಯಕ್ತವಾಗುವ ಮೆಚ್ಚು ಗೆಯ ಅಭ್ಯಾಸವಾಗಿದ್ದ ಅವಳಿಗೆನಿಸಿತು -ಈ ವಿದ್ಯಾರ್ಥಿಗಳ
ಮೆಚ್ಚುಗೆಯನ್ನ ಮೊದಲು ಗಳಿಸಬೇಕು. ಉಳಿದವರದು ಎಷ್ಟು ಹೊತ್ತಿನ ಕೆಲಸ...
{{gap}}“ನಾನು ರಜನಿ ನಾಯಕ್, ಇನ್ನು ಮೇಲೆ ನಾನು ನಿಮಗೆ ಸಾಮಾನ್ಯ ವಿಜ್ಞಾನ
ಹೇಳುತ್ತೇನೆ-"
{{gap}}“ಇನ್ನು ಮೇಲೆ ? ಅಂದರೆ ದಿನಾಲು ?” -ಮುಂದಿನ ಬೆಂಚಿನ ಹುಡುಗ ತಟ್ಟನೆ
ಕೇಳಿದ.
{{gap}}“ಹೌದು, ದಿನಾಲು" -ಆಕೆ ಆತ್ಮವಿಶ್ವಾಸದ ಮುಗುಳ್ನಗೆಯೊಂದಿಗೆ ಹೇಳಿದಳು.
ಕ್ಲಾಸಿನಲ್ಲಿ ಒಮ್ಮೆಲೆ ಹಲವಾರು ಅಸಮಾಧಾನದ ಧ್ವ ್ವನಿಗಳೆದ್ದವು : "ಯಾಕೆ ?
ವರ್ಮಾ ಮ್ಯಾಡಮ್ಗೆ ಏನಾಯಿತು ?"" “ಇಷ್ಟು ದಿನ ಅವರೇ ಬರುತ್ತಿದ್ದರಲ್ಲ,
ಈಗೇಕೆ-'. “ವರ್ಮಾ ಮ್ಯಾಡಂ ಯಾಕೆ ಬರೋದಿಲ್ಲ ?“. “ವರ್ಮಾ ಮ್ಯಾಡಂ-"<br>
{{gap}}-ಸಾಯತ್ಲೆನ್ಸ್ !" ಎಂದಾಕೆ ರೂಲುಕಟ್ಟಿಗೆಯಿಂದ ಟೇಬಲಿನ ಮೇಲೆ
ಮೂರು ನಾಲ್ಕು ಬಾರಿ ಕುಟ್ಟಿದಾಗಲೇ ಹುಡುಗರು ಸುಮ್ಮನಾದರು. ಆದರೂ ಅವರ
ಅತೃಪ್ತಿಯ ಗುಸುಗುಸು ನಿಲ್ಲಲೇ ಇಲ್ಲ.<br>
{{rh|center=* * *}}
{{gap}}ಆ ರಾತ್ರಿ; ರಜನಿ ಗಂಡನಿಗೆ ಪತ್ರ ಬರೆದಳು : “ನಾನು ಸುರಕ್ಷಿತ ಬಂದು
ಮುಟ್ಟಿದೆ. ಮಾವಶಿಯ ಮನೆ ಚೆನ್ನಾಗಿದೆ. ಇವತ್ತು ಡ್ಯೂಟಿಗೆ ರಿಪೋರ್ಟ್ ಮಾಡಿದೆ.
ಯಾಕೋ ಇಲ್ಲಿನ ಹೈಸ್ಕೂಲ್, ಪ್ರಿನ್ಸಿಪಾಲರು, ಟೀಚರು, ಹುಡುಗರು, ನನಗೆ ಅಷ್ಟು
ಹಿಡಿಸಲಿಲ್ಲ. ಮೊದಲ ದಿನವೆಂದು, ಅದೂ ನಿಮ್ಮನ್ನು ಬಿಟ್ಟು ಬಂದಿರುವೆನೆಂದು.
ಹೀಗನಿಸುತ್ತಿರಬಹುದು. ಕ್ರಮೇಣ ಎಲ್ಲ ಸರಿಹೋಗುವುದರಲ್ಲಿ ಸಂಶಯವಿಲ್ಲ."<br>
{{rh|center=* * *}}
{{center|೨}}
{{gap}}ಮರುದಿನ ಆಕೆ ಹೈಸ್ಕೂಲಿಗೆ ಹೋದಾಗ ಮೊದಲ ಗಂಟೆಯಾಗಿ ಪ್ರಾರ್ಥನೆ
ನಡೆದಿತ್ತು. ಎಲ್ಲರೂ ಸಾಲಾಗಿ ನಿಂತಿದ್ದರು. ಆಕೆಯೂ ಹಿಂದಿನ ಸಾಲಿಗೆ ಹೋಗಿ ಎಲ್ಲರ
ಬೆನ್ನುಗಳನ್ನು ಪರೀಕ್ಷಿಸುತ್ತ ನಿಂತಳು. ಆಕೆಯೆಂದೂ ಪ್ರಾರ್ಥನೆಯ ಹಾಡನ್ನು
ಹಾಡುತ್ತಿರಲಿಲ್ಲ. ಆಕೆಗೆ ಪ್ರಾರ್ಥನೆಯಲ್ಲಿ ನಂಬಿಕೆ ಇರಲಿಲ್ಲ. ಆದರೆ ಇಂದು
ಇದ್ದಕ್ಕಿದ್ದಂತೆ ಅವಳಿಗೆ ಪ್ರಾರ್ಥನೆಯ ಹಾಡು ಬಹಳ ಇಂಪಾಗಿ ಕೇಳಿಸಿತು. ಅವಳು<br><noinclude><references/></noinclude>
tlj0s0159500882a6bqbeya8wuexgij
ಪುಟ:ನಡೆದದ್ದೇ ದಾರಿ.pdf/೧೨೫
104
31682
318060
85091
2026-05-08T09:38:13Z
Shreelatha.Halemane
7642
/* Proofread */
318060
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=೧೧೮|right=ನಡೆದದ್ದೇ ದಾರಿ}}
{{center|'''ಮುಕ್ತಿ'''}}
{{gap}}ಪ್ಲ್ಯಾಟ್ ಫ಼ಾರ್ಮ್ ಮೇಲಿನ ಆ ಗದ್ದಲ,ಹೊರಗಡೆ ಆ ಗಿಡಗಳ ಕೆಳಗೆ ಸೇಂಗಾ ಮಾರುವ ಮುದುಕಿ,ಅಲ್ಲೇ ಸ್ವಲ್ಪ ಮುಂದೆ ರಸ್ತೆಯ ಬದುಗೆ ಎಂದಿನಿಂದಲೂ ತಳವೂರಿದ್ದ ಕುಷ್ಟ ರೋಗಿ ಭಿಕ್ಷುಕ-ಎಲ್ಲಾ ಎಂದಿನಂತೆಯೇ ಇದೆ.ಏನೂ ಬದಲಾವಣೆಯಿಲ್ಲ.ತಲೆಯ ಮೇಲೆ ಸುಡುವ ಬಿಸಿಲು,ಮೈತುಂಬ ಹರಿಯುವ ಬೆವರು,ಹೊತ್ತಾಗಿಹೋಯಿತಲ್ಲಾ ಎಂಬ ಧಾವತಿ-ಎಲ್ಲ ಎಂದಿನಂತೆಯೆ.ದೂರದಿಂದಲೇ ಕಾಣುವ ಆಫ಼ೀಸಿನ ಗೋಪುರದ ಗಡಿಯಾರ,ಗೇಟಿನಲ್ಲಿ ಬೀಡಿ ಸೇದುತ್ತ ನಿಂತಿರುವ ನರೆಗೂದಲಿನ ಪ್ಯೂನ್,ಎರಡೂ ಬದಿಗೂ ಇದ್ದ ಟೇಬಲುಗಳ ನಡುವಿನಿಂದ ಹಾಯ್ದ ಹೋಗುವಾಗ ಹಲವು 'ಗುಡ್ ಮಾರ್ನಿಂಗ್ ಶಂಕರ ಮಾಮ',ಆ ತನ್ನ ಹಳೆಯ ಕುರ್ಚಿ,ಬದಿಯ ಚೇಂಬರಿನ ಮುಚ್ಚಿದ ತೂಗಾಡುವ ಬಾಗಿಲಿಗೆ ನೇತುಬಿದ್ದ 'ಮಿ.ಚಂದೂಲಾಲ ಶಹ.ಅಸಿಸ್ಟಂಟ್ ಮ್ಯಾನೇಜರ್'-ಅದು ಸಹ ಎಂದಿನಂತೆಯೆ.ಆದರೂ ಇಂದು ಹೊಸ ಹುರುಪು ತನಗೆ.ಯಾಕೋ ಜೀವನ ಒಮ್ಮೆಲೆ ಹೊಸದಾಗಿ ಸುರುವಾದಂತೆ ಅನಿಸುತ್ತಿದೆ.ಹತ್ತು ವರ್ಷ ಸಣ್ಣವನಾದಂತೆ ಅನಿಸುತ್ತಿದೆ.ಎದುರಿನ ಟೇಬಲಿಗೆ ಕುಳಿತ ಸ್ಟೆನೋ ಮಿಸ್ ಪರ್ವತಿಯ ಬಣ್ಣ ಬಳಿದ ಮುಖ ನೋಡಿ ಶಿಳ್ಳು ಹಾಕಬೇಕೆನಿಸುತ್ತಿದೆ.ಇವತ್ತು ನಡುವಿನ ಬಿಡುವಿನಲ್ಲಿ ಎಲ್ಲರಿಗೂ ಸರ್ಪ್ರೈಜ್ ಟೀ ಕೊಟ್ಟುಬಿಡಬೇಕು ಅನಿಸುತ್ತಿದೆ.ಯಾಕೆ ಹೀಗೆ?
{{gap}}"ಗುಡ್ ಮೊರ್ನಿಂಗ್ ಶಂಕರ ಮಾಮಾ,ಯಾಕೋ ಭಾಳ ಖುಷಿ ಕಾಣಸ್ತೀರಲ್ಲ ಇವತ್ತು ? ಮತ್ತೇನು ಪ್ರಮೋಶನ್-ಗಿಮೋಶನ್ ಸಿಕ್ಕಿತೇನು ?" -ಮೂಲೆಯ ಟೇಬಲಿನ ಬೀಟಲು ಕೂದಲಿನ ಕ್ಲಾರ್ಕ್ ಗಿರಿಧರನ ಕೇಳಿದೆ.
{{gap}}ಕೋಟು ಕಳಚಿ ಕುರ್ಚಿಯ ಬೆನ್ನಿಗೆ ಹಾಕುತ್ತ ಹಿರೋನ ಸ್ಟ್ಯ್ ಲಿನಲ್ಲಿ ನಕ್ಕು ಉತ್ತರಿಸಿದ ಆತ, "ಛೇ, ಎಲ್ಲೀ ಪ್ರಮೋಶನ್ ? ಪ್ರಮೋಶನ್ ಸಿಕ್ಕೀತು ಅಂತ ಹಾದಿ
ಕಾಯೋದರಾಗ ರಿಟಾಯರ್ ಆಗಲಿಕ್ಕೆ ಬಂದೆ. ಹೆಡ್ ಕ್ಲಾರ್ಕ್ ಆಗೇ ಸಾಯಬೇಕು ಅಂತ
ಬರಧಾಂಗ ಕಾಣಸ್ತದ ಹಣೆಯೊಳಗ."
{{gap}}"ಆದ್ಯಾಕ್ರೀ ? ಆಸಿಸ್ಟಂಟ್ ಮ್ಯಾನೇಜರು ನಿಮ್ಮ ಬುಟ್ಟಿಯೊಳಗ ಇರೋತನಕಾ ನಿಮಗ್ಯಾಕ ಚಿಂತಿ ? ನಾಳೆ ಅವರು ಮ್ಯಾನೇಜರ್ ಆದಕೊದ್ಲೆ ಅವರ ಈಗಿನ ಜಾಗಕ್ಕೆ<noinclude><references/></noinclude>
9jzvz3gzilf6v0gxg8ygb872jwvbcny
ಪುಟ:ನಡೆದದ್ದೇ ದಾರಿ.pdf/೫೧೪
104
31685
318010
250640
2026-05-08T07:11:53Z
Pragathi. BH
7585
/* Validated */
318010
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ ?|right= ೫೦೭}}
ಆಸ್ತಿಯ ಹಕ್ಕು ಕೊಡಿಸಿದ್ದಾಳೆ. ಅವರನ್ನು ಪೀಡಿಸುವ ಗಂಡಂದಿರನ್ನು ಅತ್ತೆ-
ಮಾವಂದಿರನ್ನು ಶಿಕ್ಸಿಸಿದ್ದಾಳೆ, ಪೀಡಕ ಪತಿಗಳಿಂದ ವಿಚ್ಛೇದನ ಕೊಡಿಸಿದ್ದಾಳೆ.
ಅಪ್ರಾಪ್ತ ವಯಸ್ಸಿನ ಮಕ್ಕಳ ಪಾಲನೆಯ ಅಧಿಕಾರ ಕೊಡಿಸಿದ್ದಾಳೆ. ಒಟ್ಟು
ಮಹಿಳೆಯರ ಪಾಲಿನ ನ್ಯಾಯದೇವತೆಯೇ ಆಗಿದ್ದಾಳೆ.<br>
{{rh|center=೨}}
{{gap}}ರಾಮನಗರಕ್ಕೆ ಶ್ರೀಮತಿ ಯಶಸ್ವಿನಿ ದೇಸಾಯಿ ಸಿ. ಜೆ. ಎಮ್. ಎಂದು
ವರ್ಗವಾಗಿ ಬಂದಾಗಿನಿಂದ ಎಲ್ಲರೂ ಆಕೆಯ ಬಗ್ಗೆ ಪ್ರಶಂಸೆಯ
ಮಾತುಗಳನ್ನಾಡುತ್ತಿದ್ದಾರೆ. ಆಕೆಯನ್ನು ಕೌತುಕದಿಂದ ಆದರಿಸುತ್ತಿದ್ದಾರೆ.
ಕಾಲೇಜುಗಳಲ್ಲಿ, ಲಾಯನ್ಸ್-ರೋಟರಿ ಕ್ಲಬ್ಬುಗಳಲ್ಲಿ, ಸಾರ್ವಜನಿಕ, ಧಾರ್ಮಿಕ,
ರಾಜಕೀಯ ಸಂಘ-ಸಂಸ್ಥೆಗಳಲ್ಲಿ, ಎಲ್ಲಿಯೇ ಒಂದು ಮುಖ್ಯ ಸಮಾರಂಭ ನಡೆದರೂ
ಆಕೆಯೇ ಮುಖ್ಯ ಅತಿಥಿ. ಆಕೆಯೇ ಆಕರ್ಷಣೆಯ ಕೇಂದ್ರಬಿಂದು. ಎತ್ತರ ನಿಲುವಿನ,
ನಸುಗಪ್ಪು ಬಣ್ಣದ, ತೇಜಃಪುಂಜ ಕಣ್ಣುಗಳ, ಕಂಚಿನ ಕಂಠದ ಆಕೆ ವೇದಿಕೆಯ ಮೇಲೆ
ನಿಂತು ಮಾತಾಡುವುದನ್ನು ನೋಡುವುದೇ ಚೆಂದ, ಕೇಳುವುದೂ ಚೆಂದ.
{{gap}}ಆದರೆ ರಾಮನಗರದಲ್ಲಿ ಯಶಸ್ವಿನಿ ಸುಖಿಯಾಗಿಲ್ಲ. ಯಾಕೆಂದರೆ
ಮೊಟ್ಟಮೊದಲ ಬಾರಿಗೆ ಆಕೆ ತನ್ನ ಸಂಸಾರವನ್ನು ಬಿಟ್ಟು ದೂರದ ಊರಿಗೆ
ಬಂದಿದ್ದಾಳೆ. ಅನಿವಾರ್ಯವಾಗಿ ಇದ್ದಾಳೆ. ಮನೆಯ ನೆನಪು ಆಕೆಯನ್ನು ಸದಾ
ಕಾಡುತ್ತದೆ. ಯಶಸ್ವಿನಿ ಕಾನೂನು ಓದುತ್ತಿದ್ದಾಗ ತನ್ನ ಸಹಪಾಠಿಯಾಗಿದ್ದ
ಮನೋಹರ ದೇಸಾಯಿಯನ್ನು ಪ್ರೀತಿಸಿದಳು. ಆ ವಯಸ್ಸಿನ ಉಳಿದ ಹುಡುಗ-
ಹುಡುಗಿಯರ ಹಾಗೆ ಕ್ಯಾಂಪಸ್ಸಿನಲ್ಲಿದ್ದಾಗ ಪ್ರೀತಿಸಿ, ಓದು ಮುಗಿದ ನಂತರ
ಗುಡ್ಬಾಯ್ ಹೇಳಿ ಹೋಗುವ ಪ್ರೀತಿಯಾಗಿರಲಿಲ್ಲ ಅದು. ಸುಸಂಸ್ಕೃತನೂ,
ಸಭ್ಯನೂ, ತಿಳಿವಳಿಕೆಯುಳ್ಳವನೂ ಆಗಿದ್ದ ಮನೋಹರನನ್ನು ಆಕೆ ಎಲ್ಲ ರೀತಿಯಿಂದ
ಪರೀಕ್ಷಿಸಿ, ಮೆಚ್ಚಿ ಮದುವೆಯಾದಳು. ಮದುವೆಯ ನಂತರ ಇಬ್ಬರೂ ಜೊತೆಯಾಗಿ
ಬೆಂಗಳೂರಿನಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದರು. ಯಶಸ್ವಿನಿ ಐದಾರು ವರ್ಷಗಳಲ್ಲಿ
ಮ್ಯಾಜಿಸ್ಟ್ರೇಟ್ ಆಗಿ ಆಯ್ಕೆಯಾಗಿ ನೌಕರಿ ಸುರು ಮಾಡಿದಳು. ಮನೋಹರ ಮಾತ್ರ
ವಕೀಲನಾಗಿಯೇ ಮುಂದುವರೆದ. ಎರಡು ಮಕ್ಕಳು- ಮಗಳು ಕೀರ್ತಿ
ಇಂಜಿನಿಯರಿಂಗ್ ಎರಡನೆಯ ವರ್ಷದಲ್ಲಿದ್ದಳು. ಮಗ ಕಿರಣ ಇನ್ನೂ
ಹಾಯ್ಸ್ಕೂಲಿನಲ್ಲಿದ್ದ. ಮನೋಹರನ ತಾಯಿ ಗಟ್ಟಿಮುಟ್ಟಾಗಿದ್ದರು.
ಮನೆವಾರ್ತೆಯಲ್ಲಿ ತುಂಬ ಸಹಾಯ ಮಾಡುತ್ತಿದ್ದರು. ನೌಕರಿ ಮಾಡತೊಡಗಿ<br><noinclude><references/></noinclude>
kpcdjblnwvo2f3s6lo7wgyde7d7r7s0
ಪುಟ:ನಡೆದದ್ದೇ ದಾರಿ.pdf/೫೧೨
104
31688
318007
250563
2026-05-08T07:07:48Z
Pragathi. BH
7585
/* Validated */
318007
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಇನ್ನಷ್ಟು ಕತೆಗಳು / ಸಮಾಧಾನ|right= ೫೦೫}}
ಇದ್ದಾಳಲ್ಲ. ಈಕೆ ಎಂಥ ಹೆಂಗಸು ಬಿದ್ದ ಹೆಂಗಸು... ಛೀ ಛೀ...
***
{{gap}}ಆ ರಾತ್ರಿ ರಜನಿ ಗಂಡನಿಗೆ ಬರೆದಳು : “ನಾನೀಗ ಅಗದೀ ಆರಾಮ ಇದ್ದೀನ್ರೀ.<br>
ನೀವು ಏನೂ ಕಾಳಜಿ ಮಾಡಬಾರದು. ಹೊಸದಾಗಿ ಬಂದಾಗ ಏನೋ ಬೇಸರವೆನಿಸಿತ್ತು.<br>
ಈಗ ಅಗದೀ ಫ್ರೆಶ್ ಆಗಿರುವೆ. ಈ ಊರು, ಇಲ್ಲಿನ ಹವೆ, ಜನ, ನಮ್ಮ ಸ್ಕೂಲು<br>
-ಎಲ್ಲ ನನಗೆ ತುಂಬ ಹಿಡಿಸಿವೆ. ನನಗಿಲ್ಲಿ ಯಾವ ತರದ ಅನಾನುಕೂಲತೆಯೂ ಇಲ್ಲ.<br>
ಇಷ್ಟು ಒಳ್ಳೆಯ ನೌಕರಿ ಬಿಡುವ ವಿಚಾರ ಮಾಡುವುದೇ ಮೂರ್ಖತನ. ನಿಮ್ಮ<br>
ಟ್ರಾನ್ಸ್ಫರ್ ಆರ್ಡರ್ ಬೇಕಾದಾಗ ಬರಲಿ. ನೀವು ನಿಧಾನವಾಗಿ ಬರ್ರಿ. ನಾನು ತೀರ-<br>
ತೀರ ಆರಾಮಿದ್ದೇನೆ. ಏಕ್ದಂ ಖುಶ್ ಇದ್ದೇನೆ.<br>
{{gap}}ಅಂದಹಾಗೆ ನಿಮಗೆ ಮಿಸೆಸ್ ವರ್ಮಾ ಅನ್ನುವ ಕೆಟ್ಟ ಹೆಂಗಸಿನ ಬಗ್ಗೆ<br>
ಬರೆದಿದ್ದೆನಲ್ಲವೆ ? ಆಕೆ..."<br>
***<noinclude><references/></noinclude>
1uqak2dbqe9up71wfe0vax7w8u0fl78
318008
318007
2026-05-08T07:08:46Z
Pragathi. BH
7585
318008
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಇನ್ನಷ್ಟು ಕತೆಗಳು / ಸಮಾಧಾನ|right= ೫೦೫}}
ಇದ್ದಾಳಲ್ಲ. ಈಕೆ ಎಂಥ ಹೆಂಗಸು ಬಿದ್ದ ಹೆಂಗಸು... ಛೀ ಛೀ...
{{rh|center=* * *}}
{{gap}}ಆ ರಾತ್ರಿ ರಜನಿ ಗಂಡನಿಗೆ ಬರೆದಳು : “ನಾನೀಗ ಅಗದೀ ಆರಾಮ ಇದ್ದೀನ್ರೀ.
ನೀವು ಏನೂ ಕಾಳಜಿ ಮಾಡಬಾರದು. ಹೊಸದಾಗಿ ಬಂದಾಗ ಏನೋ ಬೇಸರವೆನಿಸಿತ್ತು.
ಈಗ ಅಗದೀ ಫ್ರೆಶ್ ಆಗಿರುವೆ. ಈ ಊರು, ಇಲ್ಲಿನ ಹವೆ, ಜನ, ನಮ್ಮ ಸ್ಕೂಲು
-ಎಲ್ಲ ನನಗೆ ತುಂಬ ಹಿಡಿಸಿವೆ. ನನಗಿಲ್ಲಿ ಯಾವ ತರದ ಅನಾನುಕೂಲತೆಯೂ ಇಲ್ಲ.
ಇಷ್ಟು ಒಳ್ಳೆಯ ನೌಕರಿ ಬಿಡುವ ವಿಚಾರ ಮಾಡುವುದೇ ಮೂರ್ಖತನ. ನಿಮ್ಮ
ಟ್ರಾನ್ಸ್ಫರ್ ಆರ್ಡರ್ ಬೇಕಾದಾಗ ಬರಲಿ. ನೀವು ನಿಧಾನವಾಗಿ ಬರ್ರಿ. ನಾನು ತೀರ-
ತೀರ ಆರಾಮಿದ್ದೇನೆ. ಏಕ್ದಂ ಖುಶ್ ಇದ್ದೇನೆ.<br>
{{gap}}ಅಂದಹಾಗೆ ನಿಮಗೆ ಮಿಸೆಸ್ ವರ್ಮಾ ಅನ್ನುವ ಕೆಟ್ಟ ಹೆಂಗಸಿನ ಬಗ್ಗೆ
ಬರೆದಿದ್ದೆನಲ್ಲವೆ ? ಆಕೆ..."<br>
{{rh|center=* * *}}<noinclude><references/></noinclude>
r0ue13w25kmf61hxkguth835720sk1a
ಪುಟ:ನಡೆದದ್ದೇ ದಾರಿ.pdf/೫೨೦
104
31700
318020
250467
2026-05-08T07:25:19Z
Pragathi. BH
7585
/* Validated */
318020
proofread-page
text/x-wiki
<noinclude><pagequality level="4" user="Pragathi. BH" /></noinclude>ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ ? ೫೧೩
ವರ್ಗವಾಗಿ ಹೋದಾಗಿನಿಂದಂತೂ ಬಹಳೇ ದೊಡ್ಡವನಾಗಿದ್ದಾನೆ. ಸದಾ ಟ್ಯೂಶನ್,
ಕ್ರಿಕೆಟ್, ಗೆಳೆಯರು ಅಂತ ಹೊರಗೇ ಇರುತ್ತಾನೆ. ಮನೆಯಲ್ಲಿದ್ದಾಗ ತಂದೆಯೊಂದಿಗೆ
ರಾಷ್ಟ್ರೀಯ-ಅಂತರ್ರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಮಾತಾಡುತ್ತಾನೆ. ಯಶಸ್ವಿನಿ
ಏನಾದರೂ ಹೇಳಬಂದರೆ, ನೋ ಮಮಾ, ಯೂ ಕಾಂಟ್ ಅಂಡರ್ಸ್ಟ್ಯಾಂಡ್ ದೀಜ್
ಥಿಂಗ್ಸ್ ಅನ್ನುತ್ತಾನೆ. ಅಜ್ಜೀ, ನೀನೇ ಹೋಳು ಹಾಕಿ ಹುಳಿ ಮಾಡು, ಅಂತ ಹೇಳುತ್ತಾನೆ.
ರಾತ್ರಿ ಯಶಸ್ವಿನಿ ಆತನ ಕೋಣೆಗೆ ಹೋಗಿ ಕೂತು ಎಲ್ಲ ಕಡೆ ಹರವಿದ ವಸ್ತುಗಳನ್ನು
ಸರಿಪಡಿಸಲು ತೊಡಗಿದರೆ, ಮಗನಿಗೆ ಮುದ್ದು ಮಾಡಲು ಹೋದರೆ, ನಿನಗೀಗ ರಜೆ
ಇದೆ, ಹೋಗಿ ವಿಶ್ರಾಂತಿ ತಗೋಬಾರದೆ, ಅನ್ನುತ್ತಾನೆ. ದೂರವಾಗುತ್ತಾನೆ. ಆದರೆ
ಗಂಭೀರವಾಗಿ, ಮಮಾ, ಯೂ ನೋ, ನಾನು ಕಂಪ್ಯೂಟರ್ ಇಂಜಿನೀಯರಿಂಗ್
ಮಾಡಬೇಕು ಅಂತ ನಿರ್ಧರಿಸಿದ್ದೇನೆ. ಇನ್ನೂ ಎರಡು ವರ್ಷ ಟೈಮಿದೆ, ಮೆರಿಟ್
ಸೀಟ್ ಸಿಗೋದು ಕಷ್ಟವೇ. ಪೇಮೆಂಟ್ ಸೀಟಿಗಾಗಿ ಹಣ ರೆಡಿ ಮಾಡಿಡು, ಈಗಲೇ
ಹೇಳಿದ್ದೇನೆ ನೋಡು, ಅಂತ ತುಂಬ ದೂರದೃಷ್ಟಿಯುಳ್ಳೆವನ ಹಾಗೆ ಮಾತಾಡುತ್ತಾನೆ.
{{gap}}ಎಂಟು ದಿನ, ಹದಿನೈದು ದಿನ, ಇಪ್ಪತ್ತು ದಿನ... ಯಶಸ್ವಿನಿಗೆ ನಿಜವಾಗಿ
ಆತಂಕವೆನಿಸತೊಡಗಿತು. ಎಂತಹ ವೆಲ್ನಿಟ್ ಕುಟುಂಬವಾಗಿತ್ತು ತನ್ನದು. ಮಕ್ಕಳು-
ಗಂಡ ತನಗೆ ಎಷ್ಟು ಹತ್ತಿರವಾಗಿದ್ದರು. ಯಾಕೆ ಹೀಗಾಯಿತು ?
{{gap}}-ಅಥವಾ ಅವರು ಹತ್ತಿರವಾಗಿದ್ದರೆಂಬುದು ತನ್ನದೇ ತಪ್ಪು
ತಿಳುವಳಿಕೆಯಾಗಿತ್ತೇ ?
{{gap}}ಇಲ್ಲ. ಅವರೆಲ್ಲರ ಪ್ರೀತಿಯನ್ನು ಹೀಗೆ ಕಳೆದುಕೊಳ್ಳುತ್ತ ಹೋಗಲು ತಾನು
ತಯಾರಿಲ್ಲ. ವ್ಹಾಲಂಟರಿ ರಿಟಾಯರ್ಮೆಂಟ್ ಬಗ್ಗೆ ತಾನೀಗ ಸೀರಿಯಸ್ಸಾಗಿ
ವಿಚಾರಿಸುವುದೊಳಿತು. ಪೆನ್ಶನ್ ಅಂತೂ ಸಿಕ್ಕೇ ಸಿಗುತ್ತದೆ. ತನ್ನ ಈ ಪುಟ್ಟ ಸಂಸಾರ
ಸುಖಿಯಾಗಿರಲು, ಕಂಫರ್ಟೆಬಲ್ ಆಗಿರಲು, ಈಗಾಗಲೇ ತಾನು ದುಡಿದು ಗಳಿಸಿದ್ದು
ಸಾಕು. ತಾನಿನ್ನು ಮತ್ತೆ ಮನೆ ಬಿಟ್ಟು ಹೋಗುವುದು ಬೇಡ. ಅತ್ತೆಗೂ ವಯಸ್ಸಾಗಿದೆ.
ತನ್ನ ಸಂಸಾರದ ಭಾರವನ್ನು ಅವರ ಮೇಲೆ ಹೊರಿಸುವುದು ಸರಿಯಲ್ಲ. ಕಣ್ಣಿನಿಂದ
ದೂರವಾದವರು ಮನಸ್ಸಿನಿಂದಲೂ ದೂರವಾಗುತ್ತಾರೆನ್ನುವುದರಲ್ಲಿ ತಥ್ಯವಿದ್ದರೂ
ಇದ್ದೀತು. ಇಲ್ಲ, ತನ್ನ ಜೀವಕ್ಕಿಂತ ಪ್ರಿಯರಾದ ಮನೋಹರ, ಕೀರ್ತಿ, ಕಿರಣರನ್ನು
ಬಿಟ್ಟು ಇನ್ನು ಎಲ್ಲಿಯೂ ಹೋಗಬಾರದು. ಇದೇ ಸರಿ ಅಂತ ಕಾಣುತ್ತದೆ.
ಮನೋಹರನಿಗೂ ಇದು ಸರಿಯೆನಿಸುವುದರಲ್ಲಿ ಸಂಶಯವಿಲ್ಲ. ಪರ್ಫೆಕ್ಟ್
ಅಂಡರ್ಸ್ಟ್ಯಾಂಡಿಂಗ್ ಇರುವ ಗಂಡ ಆತ.<noinclude><references/></noinclude>
rny5785htarjdbak5c9yvx4db0grh7v
318022
318020
2026-05-08T08:36:34Z
Pragathi. BH
7585
318022
proofread-page
text/x-wiki
<noinclude><pagequality level="4" user="Pragathi. BH" /></noinclude>ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ ? ೫೧೩
ವರ್ಗವಾಗಿ ಹೋದಾಗಿನಿಂದಂತೂ ಬಹಳೇ ದೊಡ್ಡವನಾಗಿದ್ದಾನೆ. ಸದಾ ಟ್ಯೂಶನ್,
ಕ್ರಿಕೆಟ್, ಗೆಳೆಯರು ಅಂತ ಹೊರಗೇ ಇರುತ್ತಾನೆ. ಮನೆಯಲ್ಲಿದ್ದಾಗ ತಂದೆಯೊಂದಿಗೆ
ರಾಷ್ಟ್ರೀಯ-ಅಂತರ್ರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಮಾತಾಡುತ್ತಾನೆ. ಯಶಸ್ವಿನಿ
ಏನಾದರೂ ಹೇಳಬಂದರೆ, ನೋ ಮಮಾ, ಯೂ ಕಾಂಟ್ ಅಂಡರ್ಸ್ಟ್ಯಾಂಡ್ ದೀಜ್
ಥಿಂಗ್ಸ್ ಅನ್ನುತ್ತಾನೆ. ಅಜ್ಜೀ, ನೀನೇ ಹೋಳು ಹಾಕಿ ಹುಳಿ ಮಾಡು, ಅಂತ ಹೇಳುತ್ತಾನೆ.
ರಾತ್ರಿ ಯಶಸ್ವಿನಿ ಆತನ ಕೋಣೆಗೆ ಹೋಗಿ ಕೂತು ಎಲ್ಲ ಕಡೆ ಹರವಿದ ವಸ್ತುಗಳನ್ನು
ಸರಿಪಡಿಸಲು ತೊಡಗಿದರೆ, ಮಗನಿಗೆ ಮುದ್ದು ಮಾಡಲು ಹೋದರೆ, ನಿನಗೀಗ ರಜೆ
ಇದೆ, ಹೋಗಿ ವಿಶ್ರಾಂತಿ ತಗೋಬಾರದೆ, ಅನ್ನುತ್ತಾನೆ. ದೂರವಾಗುತ್ತಾನೆ. ಆದರೆ
ಗಂಭೀರವಾಗಿ, ಮಮಾ, ಯೂ ನೋ, ನಾನು ಕಂಪ್ಯೂಟರ್ ಇಂಜಿನೀಯರಿಂಗ್
ಮಾಡಬೇಕು ಅಂತ ನಿರ್ಧರಿಸಿದ್ದೇನೆ. ಇನ್ನೂ ಎರಡು ವರ್ಷ ಟೈಮಿದೆ, ಮೆರಿಟ್
ಸೀಟ್ ಸಿಗೋದು ಕಷ್ಟವೇ. ಪೇಮೆಂಟ್ ಸೀಟಿಗಾಗಿ ಹಣ ರೆಡಿ ಮಾಡಿಡು, ಈಗಲೇ
ಹೇಳಿದ್ದೇನೆ ನೋಡು, ಅಂತ ತುಂಬ ದೂರದೃಷ್ಟಿಯುಳ್ಳೆವನ ಹಾಗೆ ಮಾತಾಡುತ್ತಾನೆ.<br />
{{gap}}ಎಂಟು ದಿನ, ಹದಿನೈದು ದಿನ, ಇಪ್ಪತ್ತು ದಿನ... ಯಶಸ್ವಿನಿಗೆ ನಿಜವಾಗಿ
ಆತಂಕವೆನಿಸತೊಡಗಿತು. ಎಂತಹ ವೆಲ್ನಿಟ್ ಕುಟುಂಬವಾಗಿತ್ತು ತನ್ನದು. ಮಕ್ಕಳು-
ಗಂಡ ತನಗೆ ಎಷ್ಟು ಹತ್ತಿರವಾಗಿದ್ದರು. ಯಾಕೆ ಹೀಗಾಯಿತು ?<br />
{{gap}}-ಅಥವಾ ಅವರು ಹತ್ತಿರವಾಗಿದ್ದರೆಂಬುದು ತನ್ನದೇ ತಪ್ಪು
ತಿಳುವಳಿಕೆಯಾಗಿತ್ತೇ ?
{{gap}}ಇಲ್ಲ. ಅವರೆಲ್ಲರ ಪ್ರೀತಿಯನ್ನು ಹೀಗೆ ಕಳೆದುಕೊಳ್ಳುತ್ತ ಹೋಗಲು ತಾನು
ತಯಾರಿಲ್ಲ. ವ್ಹಾಲಂಟರಿ ರಿಟಾಯರ್ಮೆಂಟ್ ಬಗ್ಗೆ ತಾನೀಗ ಸೀರಿಯಸ್ಸಾಗಿ
ವಿಚಾರಿಸುವುದೊಳಿತು. ಪೆನ್ಶನ್ ಅಂತೂ ಸಿಕ್ಕೇ ಸಿಗುತ್ತದೆ. ತನ್ನ ಈ ಪುಟ್ಟ ಸಂಸಾರ
ಸುಖಿಯಾಗಿರಲು, ಕಂಫರ್ಟೆಬಲ್ ಆಗಿರಲು, ಈಗಾಗಲೇ ತಾನು ದುಡಿದು ಗಳಿಸಿದ್ದು
ಸಾಕು. ತಾನಿನ್ನು ಮತ್ತೆ ಮನೆ ಬಿಟ್ಟು ಹೋಗುವುದು ಬೇಡ. ಅತ್ತೆಗೂ ವಯಸ್ಸಾಗಿದೆ.
ತನ್ನ ಸಂಸಾರದ ಭಾರವನ್ನು ಅವರ ಮೇಲೆ ಹೊರಿಸುವುದು ಸರಿಯಲ್ಲ. ಕಣ್ಣಿನಿಂದ
ದೂರವಾದವರು ಮನಸ್ಸಿನಿಂದಲೂ ದೂರವಾಗುತ್ತಾರೆನ್ನುವುದರಲ್ಲಿ ತಥ್ಯವಿದ್ದರೂ
ಇದ್ದೀತು. ಇಲ್ಲ, ತನ್ನ ಜೀವಕ್ಕಿಂತ ಪ್ರಿಯರಾದ ಮನೋಹರ, ಕೀರ್ತಿ, ಕಿರಣರನ್ನು
ಬಿಟ್ಟು ಇನ್ನು ಎಲ್ಲಿಯೂ ಹೋಗಬಾರದು. ಇದೇ ಸರಿ ಅಂತ ಕಾಣುತ್ತದೆ.
ಮನೋಹರನಿಗೂ ಇದು ಸರಿಯೆನಿಸುವುದರಲ್ಲಿ ಸಂಶಯವಿಲ್ಲ. ಪರ್ಫೆಕ್ಟ್
ಅಂಡರ್ಸ್ಟ್ಯಾಂಡಿಂಗ್ ಇರುವ ಗಂಡ ಆತ.<noinclude><references/></noinclude>
5lq1itpfgzrlmdul8j6wlx4plma76j5
318023
318022
2026-05-08T08:38:57Z
Pragathi. BH
7585
318023
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ?|right=೫೧೩}}</noinclude>
ವರ್ಗವಾಗಿ ಹೋದಾಗಿನಿಂದಂತೂ ಬಹಳೇ ದೊಡ್ಡವನಾಗಿದ್ದಾನೆ. ಸದಾ ಟ್ಯೂಶನ್,
ಕ್ರಿಕೆಟ್, ಗೆಳೆಯರು ಅಂತ ಹೊರಗೇ ಇರುತ್ತಾನೆ. ಮನೆಯಲ್ಲಿದ್ದಾಗ ತಂದೆಯೊಂದಿಗೆ
ರಾಷ್ಟ್ರೀಯ-ಅಂತರ್ರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಮಾತಾಡುತ್ತಾನೆ. ಯಶಸ್ವಿನಿ
ಏನಾದರೂ ಹೇಳಬಂದರೆ, ನೋ ಮಮಾ, ಯೂ ಕಾಂಟ್ ಅಂಡರ್ಸ್ಟ್ಯಾಂಡ್ ದೀಜ್
ಥಿಂಗ್ಸ್ ಅನ್ನುತ್ತಾನೆ. ಅಜ್ಜೀ, ನೀನೇ ಹೋಳು ಹಾಕಿ ಹುಳಿ ಮಾಡು, ಅಂತ ಹೇಳುತ್ತಾನೆ.
ರಾತ್ರಿ ಯಶಸ್ವಿನಿ ಆತನ ಕೋಣೆಗೆ ಹೋಗಿ ಕೂತು ಎಲ್ಲ ಕಡೆ ಹರವಿದ ವಸ್ತುಗಳನ್ನು
ಸರಿಪಡಿಸಲು ತೊಡಗಿದರೆ, ಮಗನಿಗೆ ಮುದ್ದು ಮಾಡಲು ಹೋದರೆ, ನಿನಗೀಗ ರಜೆ
ಇದೆ, ಹೋಗಿ ವಿಶ್ರಾಂತಿ ತಗೋಬಾರದೆ, ಅನ್ನುತ್ತಾನೆ. ದೂರವಾಗುತ್ತಾನೆ. ಆದರೆ
ಗಂಭೀರವಾಗಿ, ಮಮಾ, ಯೂ ನೋ, ನಾನು ಕಂಪ್ಯೂಟರ್ ಇಂಜಿನೀಯರಿಂಗ್
ಮಾಡಬೇಕು ಅಂತ ನಿರ್ಧರಿಸಿದ್ದೇನೆ. ಇನ್ನೂ ಎರಡು ವರ್ಷ ಟೈಮಿದೆ, ಮೆರಿಟ್
ಸೀಟ್ ಸಿಗೋದು ಕಷ್ಟವೇ. ಪೇಮೆಂಟ್ ಸೀಟಿಗಾಗಿ ಹಣ ರೆಡಿ ಮಾಡಿಡು, ಈಗಲೇ
ಹೇಳಿದ್ದೇನೆ ನೋಡು, ಅಂತ ತುಂಬ ದೂರದೃಷ್ಟಿಯುಳ್ಳೆವನ ಹಾಗೆ ಮಾತಾಡುತ್ತಾನೆ.<br />
{{gap}}ಎಂಟು ದಿನ, ಹದಿನೈದು ದಿನ, ಇಪ್ಪತ್ತು ದಿನ... ಯಶಸ್ವಿನಿಗೆ ನಿಜವಾಗಿ
ಆತಂಕವೆನಿಸತೊಡಗಿತು. ಎಂತಹ ವೆಲ್ನಿಟ್ ಕುಟುಂಬವಾಗಿತ್ತು ತನ್ನದು. ಮಕ್ಕಳು-
ಗಂಡ ತನಗೆ ಎಷ್ಟು ಹತ್ತಿರವಾಗಿದ್ದರು. ಯಾಕೆ ಹೀಗಾಯಿತು ?<br />
{{gap}}-ಅಥವಾ ಅವರು ಹತ್ತಿರವಾಗಿದ್ದರೆಂಬುದು ತನ್ನದೇ ತಪ್ಪು
ತಿಳುವಳಿಕೆಯಾಗಿತ್ತೇ ?
{{gap}}ಇಲ್ಲ. ಅವರೆಲ್ಲರ ಪ್ರೀತಿಯನ್ನು ಹೀಗೆ ಕಳೆದುಕೊಳ್ಳುತ್ತ ಹೋಗಲು ತಾನು
ತಯಾರಿಲ್ಲ. ವ್ಹಾಲಂಟರಿ ರಿಟಾಯರ್ಮೆಂಟ್ ಬಗ್ಗೆ ತಾನೀಗ ಸೀರಿಯಸ್ಸಾಗಿ
ವಿಚಾರಿಸುವುದೊಳಿತು. ಪೆನ್ಶನ್ ಅಂತೂ ಸಿಕ್ಕೇ ಸಿಗುತ್ತದೆ. ತನ್ನ ಈ ಪುಟ್ಟ ಸಂಸಾರ
ಸುಖಿಯಾಗಿರಲು, ಕಂಫರ್ಟೆಬಲ್ ಆಗಿರಲು, ಈಗಾಗಲೇ ತಾನು ದುಡಿದು ಗಳಿಸಿದ್ದು
ಸಾಕು. ತಾನಿನ್ನು ಮತ್ತೆ ಮನೆ ಬಿಟ್ಟು ಹೋಗುವುದು ಬೇಡ. ಅತ್ತೆಗೂ ವಯಸ್ಸಾಗಿದೆ.
ತನ್ನ ಸಂಸಾರದ ಭಾರವನ್ನು ಅವರ ಮೇಲೆ ಹೊರಿಸುವುದು ಸರಿಯಲ್ಲ. ಕಣ್ಣಿನಿಂದ
ದೂರವಾದವರು ಮನಸ್ಸಿನಿಂದಲೂ ದೂರವಾಗುತ್ತಾರೆನ್ನುವುದರಲ್ಲಿ ತಥ್ಯವಿದ್ದರೂ
ಇದ್ದೀತು. ಇಲ್ಲ, ತನ್ನ ಜೀವಕ್ಕಿಂತ ಪ್ರಿಯರಾದ ಮನೋಹರ, ಕೀರ್ತಿ, ಕಿರಣರನ್ನು
ಬಿಟ್ಟು ಇನ್ನು ಎಲ್ಲಿಯೂ ಹೋಗಬಾರದು. ಇದೇ ಸರಿ ಅಂತ ಕಾಣುತ್ತದೆ.
ಮನೋಹರನಿಗೂ ಇದು ಸರಿಯೆನಿಸುವುದರಲ್ಲಿ ಸಂಶಯವಿಲ್ಲ. ಪರ್ಫೆಕ್ಟ್
ಅಂಡರ್ಸ್ಟ್ಯಾಂಡಿಂಗ್ ಇರುವ ಗಂಡ ಆತ.<noinclude><references/></noinclude>
4sk4xif1wn0gezdakkghxvggd7temxv
ಪುಟ:ನಡೆದದ್ದೇ ದಾರಿ.pdf/೫೧೩
104
31704
318009
250581
2026-05-08T07:09:03Z
Pragathi. BH
7585
/* Validated */
318009
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೫೦೬|right=ನಡೆದದ್ದೇ ದಾರಿ}}
{{rh|center='''ಇಲ್ಲಿಂದ ಮುಂದೆಲ್ಲಿ?'''}}
{{rh|center=೧}}
ಆಕೆ ಶ್ರೀಮತಿ ಯಶಸ್ವಿನಿ ದೇಸಾಯಿ.
{{gap}}ರಾಮನಗರದ ಹೊಸ ಚೀಫ್ ಜ್ಯುಡೀಶಿಯಲ್ ಮನ್ಯಾಜಿಸ್ಟ್ರೇಟ್. ಬಹಳ<br>
ಸ್ಟ್ರಿಕ್ಟ್, ಬಹಳ ಸಿನ್ಸಿಯರ್, ಬಹಳ ದಿಟ್ಟೆಯಾದ ಹೆಣ್ಣು ಮಗಳು ; ಜಡ್ಜ್ ಅಂದರೆ<br>
ಹೀಗಿರಬೇಕು ; ಯಾವ ಕೇಸನ್ನೂ ಸುಮ್ಮಸುಮ್ಮನೆ ಪೆಂಡಿಂಗ್ ಇಡುವುದಿಲ್ಲ,<br>
ಅಡ್ಜರ್ನ್ ಮಾಡುವುದಿಲ್ಲ. ಯಾವ ವಕೀಲರಿಗೂ ನ್ಯಾಯದೊಂದಿಗೆ ಆಟವಾಡಲು<br>
ಬಿಡುವುದಿಲ್ಲ. ನ್ಯಾಯಾಲಯವೆಂದರೆ ನಿಜವಾಗಿ ನ್ಯಾಯದೇವತೆಯ ಮಂದಿರ<br>
ಅನಿಸುವಂತೆ ವಾತಾವರಣ ನಿರ್ಮಿಸಿದ್ದಾಳೆ ; ಆಕೆ ಇಲ್ಲಿಗೆ ಬಂದಾಗಿನಿಂದ ಅಪರಾಧಿಗಳ<br>
ಸೊಲ್ಲು ಬಹಳ ಮಟ್ಟಿಗೆ ಅಡಗಿದೆ ; ಜನರಿಗೆ ಕೋರ್ಟು-ಕಚೇರಿ ಬಗ್ಗೆ ಸಾಮಾನ್ಯವಾಗಿ<br>
ಇರುವ ಕೆಟ್ಟ ಭಾವನೆ ಗಣನೀಯವಾಗಿ ಕಡಿಮೆಯಾಗಿದೆ ; ಸತ್ಯ-ನ್ಯಾಯಗಳಲ್ಲಿ ನಂಬಿಕೆ<br>
ಬರತೊಡಗಿದೆ ; ಹೀಗಂತ ರಾಮನಗರದ ಜನ ಮಾತಾಡಿಕೊಳ್ಳುತ್ತಿದ್ದಾರೆ.<br>
{{gap}}ಶ್ರೀಮತಿ ಯಶಸ್ವಿನಿ ದೇಸಾಯಿ, ಸಿ. ಜೆ. ಎಮ್.<br>
{{gap}}ಆಕೆಯದು ಮೊದಲಿನಿಂದಲೂ ಯಶಸ್ಸಿನ ದಾರಿ. ಪ್ರತಿಭಾವಂತ<br>
ವಿದ್ಯಾರ್ಥಿನಿಯಾಗಿದ್ದ ಆಕೆ ಸ್ನಾತಕೋತ್ತರ ಪದವಿಯೊಂದಿಗೆ ಬಂಗಾರದ<br>
ಪದಕಗಳನ್ನು ಪಡೆದವಳು. ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಿ ನೇರವಾಗಿ ಮ್ಯಾಜಿಸ್ಟ್ರೇಟ್<br>
ಹುದ್ದೆಗೆ ಆಯ್ಕೆಯಾದವಳು. ಕಾಲೇಜು ದಿನಗಳಿಂದಲೂ ಮಹಿಳಾ ವಿಮೋಚನೆಯ<br>
ಸಲುವಾಗಿ ಹೋರಾಡುತ್ತ ಬಂದವಳು. ಸತತವಾಗಿ ಅನ್ಯಾಯ, ಶೋಷಣೆ, ದಬ್ಬಾಳಿಕೆಗೆ<br>
ಒಳಗಾಗುತ್ತಿರುವ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡಲೆಂದೇ ಕಾನೂನು ಓದಿ<br>
ನ್ಯಾಯಾಧೀಶಳಾದವಳು ; ತನ್ನ ಪರಿಮಿತಿಯಲ್ಲಿ ಬರುವ ಮಹಿಳೆಯರಿಗೆ<br>
ಸಂಬಂಧಿಸಿದ ಯಾವುದೇ ಕೇಸು ಇರಲ್ಲಿ ಸಂಬಂಧಿಸಿದ ವಕೀಲರಿಗಿಂತ ಹೆಚ್ಚಾಗಿ ಸ್ವತಃ<br>
ತಾನೇ ಕೇಸು ಅಭ್ಯಸಿಸಿ ಶೋಷಿತ ಮಹಿಳೆಗೆ ಪೂರ್ಣ ನ್ಯಾಯ ಸಿಗುವಂತೆ ತೀರ್ಪು<br>
ನೀಡುತ್ತಾಳೆ. ಆಕೆಯ ಕೋರ್ಟಿನಲ್ಲಿ ಯಾವ ವಕೀಲನೂ ಮಹಿಳಾ ಕಕ್ಷಿದಾರರ ವಿರುದ್ಧ<br>
ಕೇಸು ಹಿಡಿಯಲು ಸಾಮಾನ್ಯವಾಗಿ ಮುಂದೆ ಬರುವುದಿಲ್ಲ. ತನ್ನ ಸರ್ವ್ಹೀಸಿನ<br>
ಹದಿನಾರು ವರ್ಷಗಳಲ್ಲಿ ಆಕೆ ಸಾವಿರಾರು ವಂಚಿತ ಮಹಿಳೆಯರಿಗೆ ಅವರ ಪಾಲಿನ<br><noinclude><references/></noinclude>
lyu5sour6ji6mo1fbirne8d2zp7am7n
ಪುಟ:ನಡೆದದ್ದೇ ದಾರಿ.pdf/೫೦೪
104
31709
317975
85118
2026-05-08T04:02:28Z
Shreelatha.Halemane
7642
/* Proofread */
317975
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=ಇನ್ನಷ್ಟು ಕತೆಗಳು/ ಸಮಾಧಾನ|right=೪೯೭}}
ವೇಟ್ ಮಾಡ್ರಿ" -ಅಂತ ಕ್ಲಾರ್ಕ್ ತನ್ನ ಟೇಬಲಿನಿಂದ ತಲೆಯೆತ್ತದೇ ಹೇಳಿದಾಗ ಅವಳಿಗೆ ಸ್ವಲ್ಪ ನಿರಾಶೆಯಾಯಿತು. ಒಂದೇ ಕ್ಷಣ. ಇನ್ನು ಈ ಪ್ರಿನ್ಸಿಪಾಲರನ್ನು, ಇಡೀ ಹೈಸ್ಕೂಲನ್ನು, ಅದರ ಮೇಲಿನವರನ್ನು ಸಹ, ತನ್ನ ಕೂಡ ಮಾತಾಡಲು ವೇಟ್ ಮಾಡಹಚ್ಚಿದಾಗ ಈ ನರತಲೆಯ ಕ್ಲಾರ್ಕ್ನಿಗೆ ತನ್ನ ಕಿಮ್ಮತ್ತು ತಿಳಿಯುವುದೆಂದು ಆಕೆ ಸಮಾಧಾನ ಹೇಳಿಕೊಂಡಳು. ಐದು ನಿಮಿಷ, ಹತ್ತು ನಿಮಿಷ. ಅವಳ ಸಹನೆ ಮೀರುತ್ತ ಬಂತು. ಅವಳಿಗೆ ನೆನಪಿರುವ ಹಾಗೆ ಅವಳೆಂದೂ ಯಾರಿಗೂ ಕಾಯ್ದುದಿಲ್ಲ. ಇನ್ನು ಈ ಪ್ರಿನ್ಸಿಪಾಲನದೇನು ? ಇವಳ್ಯಾವಳು ವರ್ಮಾಬಾಯಿ ಇಷ್ಟೊತ್ತು ಮಾತಾಡುವವಳು ? ತಾನೊಮ್ಮೆ ಒಳಗೆ ಹೋದರೆ ಅವಳಲ್ಲಿಂದ ಹೊರಡಬೇಕಾಗುವುದು ಖಂಡಿತ ; ಹೋಗಿಯೇ ಬಿಟ್ಟರೇನು -ಅಂತ ಅವಳಂದುಕೊಳ್ಳುವಷ್ಟರಲ್ಲಿ ಅವಳ ಹೆಸರಿನ ಕಾರ್ಡನ್ನು ಪ್ರಿನ್ಸಿಪಾಲರ ಕಡೆ ಒಯ್ದಿದ್ದ ಪ್ಯೂನ್ ಹೊರಬಂದು ಅವಳಿಗೆ ಪ್ರಿನ್ಸಿಪಾಲರ ಸಂದೇಶವಿದ್ದ ಚೀಟಿ ಕೊಟ್ಟನು. ಆಫೀಸಿಗೆ ಹೋಗಿ ಜಾಯಿನಿಂಗ್ ರಿಪೋರ್ಟ್ ಕೊಡಲು ಅವರು ತಿಳಿಸಿದ್ದರು. ಅವಳಿಗೆ ಸಿಟ್ಟು ಬಂದಿತು. ಹೊಸದಾಗಿ ಬಂದಾಕೆಯ ಮುಖ ಸಹ ನೋಡದೆ ಹೀಗೆ ಹೇಳಿ ಕಳಿಸುವುದೆ ? ಅಂಥದೇನು ಏಕಾಂತ ನಡೆದಿದ್ದೀತು ಇವರದು ? ಪ್ರಿನ್ಸಿಪಾಲರ ರೂಮಿನ ತೂಗುಬಾಗಿಲ ಸಂದಿಯಿಂದ ಅವಳಿಗೆ ಕಂಡದ್ದು ವರ್ಮಾಬಾಯಿಯ ದೊಡ್ಡ ತುರುಬು, ಗುಲಾಬಿ ಜಾರ್ಜೆಟ್ ಸೀರೆ. ಹೋಗಲಿ,ರಿಪೋರ್ಟ್ ಮಾಡಿಕೊಳ್ಳುವುದು ಎಷ್ಟು ಹೊತ್ತಿನ ಕೆಲಸ, ಆ ಮೇಲೆ ನೋಡೋಣ ಒಂದು ಕೈ, ಅಂತ ಅವಳು ಆಫೀಸಿನ ಕಡೆ ನಡೆದಳು.
* * *
{{gap}}ಆಕೆ ಸ್ಟಾಫ್ ರೂಮಿಗೆ ಹೋದಾಗ ಒಂದೆಡೆ ಬಹಳಷ್ಟು ಶಿಕ್ಷಕರು-ಶಿಕ್ಷಕಿಯರು ಗುಂಪಾಗಿ ಕೂಡಿದ್ದು ಕಾಣಿಸಿತು.ಕೆಲವರು ನಿಂತು, ಕೆಲವರು ಕೂತು, ಕೆಲವರು ಅರ್ಧಮರ್ಧ ಕೂತಹಾಗೆ ಬಾಗಿ, ತುಂಬ ಆಸಕ್ತಿಯಿಂದ ತುಂಬ ಕುತೂಹಲದಿಂದ, ಕೌತುಕದಿಂದ ಕೇಳುತ್ತಿದ್ದರು. ಯಾರದು ಇಷ್ಟೊಂದು ಜನರ ಲಕ್ಷ್ಯವನ್ನು ಹಿಡಿದಿಟ್ಟುಕೊಂಡು ಮಾತಾಡುವುದೆಂದು ಅವಳು ಬಾಗಿ ನೋಡಿದರೆ- ಓಹ್, ದೊಡ್ಡ ತುರುಬು,ಗುಲಾಬಿ ಜಾರ್ಜೆಟ್ ಸೀರೆ,ವರ್ಮಾಭಾಯಿಯ ಹಿಂಭಾಗ. ತುಂಬ ಸ್ಟೈಲಿಶ್ ಆದ ಇಂಗ್ಲೀಷ್ನಲ್ಲಿ ಅದೇನೇನೋ ಹೇಳುತ್ತಿದ್ದಳು. ಎಲ್ಲರೂ ನಕ್ಕೇ ನಕ್ಕರು. ನಕ್ಕೇ ನಕ್ಕರು. ಹೊಸದಾಗಿ ಬಂದಾಕೆಯ ಕಡೆಗೆ ಅವರು ಯಾರೂ ತಿರುಗಿ ಸಹ ನೋಡಲಿಲ್ಲ.
* * *
{{gap}}ಒಂಬತ್ತನೆ ತರಗತಿಯ ಬಿ ಡಿವ್ಹಿಜನ್ನಿಗೆ ಆಕೆ ಹೋದಾಗ ತಟ್ಟನೆ ಎದ್ದು ನಿಂತ<noinclude><references/></noinclude>
d6tot2viatziyoffflre0d6gj28l19r
317994
317975
2026-05-08T06:42:24Z
Pragathi. BH
7585
/* Validated */
317994
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಇನ್ನಷ್ಟು ಕತೆಗಳು/ ಸಮಾಧಾನ|right=೪೯೭}}
ವೇಟ್ ಮಾಡ್ರಿ" -ಅಂತ ಕ್ಲಾರ್ಕ್ ತನ್ನ ಟೇಬಲಿನಿಂದ ತಲೆಯೆತ್ತದೇ ಹೇಳಿದಾಗ ಅವಳಿಗೆ ಸ್ವಲ್ಪ ನಿರಾಶೆಯಾಯಿತು. ಒಂದೇ ಕ್ಷಣ. ಇನ್ನು ಈ ಪ್ರಿನ್ಸಿಪಾಲರನ್ನು, ಇಡೀ ಹೈಸ್ಕೂಲನ್ನು, ಅದರ ಮೇಲಿನವರನ್ನು ಸಹ, ತನ್ನ ಕೂಡ ಮಾತಾಡಲು ವೇಟ್ ಮಾಡಹಚ್ಚಿದಾಗ ಈ ನರತಲೆಯ ಕ್ಲಾರ್ಕ್ನಿಗೆ ತನ್ನ ಕಿಮ್ಮತ್ತು ತಿಳಿಯುವುದೆಂದು ಆಕೆ ಸಮಾಧಾನ ಹೇಳಿಕೊಂಡಳು. ಐದು ನಿಮಿಷ, ಹತ್ತು ನಿಮಿಷ. ಅವಳ ಸಹನೆ ಮೀರುತ್ತ ಬಂತು. ಅವಳಿಗೆ ನೆನಪಿರುವ ಹಾಗೆ ಅವಳೆಂದೂ ಯಾರಿಗೂ ಕಾಯ್ದುದಿಲ್ಲ. ಇನ್ನು ಈ ಪ್ರಿನ್ಸಿಪಾಲನದೇನು ? ಇವಳ್ಯಾವಳು ವರ್ಮಾಬಾಯಿ ಇಷ್ಟೊತ್ತು ಮಾತಾಡುವವಳು ? ತಾನೊಮ್ಮೆ ಒಳಗೆ ಹೋದರೆ ಅವಳಲ್ಲಿಂದ ಹೊರಡಬೇಕಾಗುವುದು ಖಂಡಿತ ; ಹೋಗಿಯೇ ಬಿಟ್ಟರೇನು -ಅಂತ ಅವಳಂದುಕೊಳ್ಳುವಷ್ಟರಲ್ಲಿ ಅವಳ ಹೆಸರಿನ ಕಾರ್ಡನ್ನು ಪ್ರಿನ್ಸಿಪಾಲರ ಕಡೆ ಒಯ್ದಿದ್ದ ಪ್ಯೂನ್ ಹೊರಬಂದು ಅವಳಿಗೆ ಪ್ರಿನ್ಸಿಪಾಲರ ಸಂದೇಶವಿದ್ದ ಚೀಟಿ ಕೊಟ್ಟನು. ಆಫೀಸಿಗೆ ಹೋಗಿ ಜಾಯಿನಿಂಗ್ ರಿಪೋರ್ಟ್ ಕೊಡಲು ಅವರು ತಿಳಿಸಿದ್ದರು. ಅವಳಿಗೆ ಸಿಟ್ಟು ಬಂದಿತು. ಹೊಸದಾಗಿ ಬಂದಾಕೆಯ ಮುಖ ಸಹ ನೋಡದೆ ಹೀಗೆ ಹೇಳಿ ಕಳಿಸುವುದೆ ? ಅಂಥದೇನು ಏಕಾಂತ ನಡೆದಿದ್ದೀತು ಇವರದು ? ಪ್ರಿನ್ಸಿಪಾಲರ ರೂಮಿನ ತೂಗುಬಾಗಿಲ ಸಂದಿಯಿಂದ ಅವಳಿಗೆ ಕಂಡದ್ದು ವರ್ಮಾಬಾಯಿಯ ದೊಡ್ಡ ತುರುಬು, ಗುಲಾಬಿ ಜಾರ್ಜೆಟ್ ಸೀರೆ. ಹೋಗಲಿ,ರಿಪೋರ್ಟ್ ಮಾಡಿಕೊಳ್ಳುವುದು ಎಷ್ಟು ಹೊತ್ತಿನ ಕೆಲಸ, ಆ ಮೇಲೆ ನೋಡೋಣ ಒಂದು ಕೈ, ಅಂತ ಅವಳು ಆಫೀಸಿನ ಕಡೆ ನಡೆದಳು.
{{rh|center=* * *}}
{{gap}}ಆಕೆ ಸ್ಟಾಫ್ ರೂಮಿಗೆ ಹೋದಾಗ ಒಂದೆಡೆ ಬಹಳಷ್ಟು ಶಿಕ್ಷಕರು-ಶಿಕ್ಷಕಿಯರು ಗುಂಪಾಗಿ ಕೂಡಿದ್ದು ಕಾಣಿಸಿತು.ಕೆಲವರು ನಿಂತು, ಕೆಲವರು ಕೂತು, ಕೆಲವರು ಅರ್ಧಮರ್ಧ ಕೂತಹಾಗೆ ಬಾಗಿ, ತುಂಬ ಆಸಕ್ತಿಯಿಂದ ತುಂಬ ಕುತೂಹಲದಿಂದ, ಕೌತುಕದಿಂದ ಕೇಳುತ್ತಿದ್ದರು. ಯಾರದು ಇಷ್ಟೊಂದು ಜನರ ಲಕ್ಷ್ಯವನ್ನು ಹಿಡಿದಿಟ್ಟುಕೊಂಡು ಮಾತಾಡುವುದೆಂದು ಅವಳು ಬಾಗಿ ನೋಡಿದರೆ- ಓಹ್, ದೊಡ್ಡ ತುರುಬು,ಗುಲಾಬಿ ಜಾರ್ಜೆಟ್ ಸೀರೆ,ವರ್ಮಾಭಾಯಿಯ ಹಿಂಭಾಗ. ತುಂಬ ಸ್ಟೈಲಿಶ್ ಆದ ಇಂಗ್ಲೀಷ್ನಲ್ಲಿ ಅದೇನೇನೋ ಹೇಳುತ್ತಿದ್ದಳು. ಎಲ್ಲರೂ ನಕ್ಕೇ ನಕ್ಕರು. ನಕ್ಕೇ ನಕ್ಕರು. ಹೊಸದಾಗಿ ಬಂದಾಕೆಯ ಕಡೆಗೆ ಅವರು ಯಾರೂ ತಿರುಗಿ ಸಹ ನೋಡಲಿಲ್ಲ.
{{rh|center=* * *}}
{{gap}}ಒಂಬತ್ತನೆ ತರಗತಿಯ ಬಿ ಡಿವ್ಹಿಜನ್ನಿಗೆ ಆಕೆ ಹೋದಾಗ ತಟ್ಟನೆ ಎದ್ದು ನಿಂತ<noinclude><references/></noinclude>
cqkw6lk0s16uui1a1z31ewagcmi2iqi
ಪುಟ:ನಡೆದದ್ದೇ ದಾರಿ.pdf/೫೧೬
104
31716
318013
250550
2026-05-08T07:14:45Z
Pragathi. BH
7585
/* Validated */
318013
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಇನ್ನಷ್ಟು ಕತೆಗಳು/ಇಲ್ಲಿಂದ ಮುಂದೆಲ್ಲಿ?|right=೫೦೯}}
{{gap}}ಬರುತ್ತಿದ್ದೇನೆ, ನನಗೆ ಬಹಳ ಖುಶಿಯಾಗಿದೆ, ಎಂದು ಗಂಡನಿಗೆ ಪತ್ರ ಬರೆದಳು.
ಇಡಿಯ ರಜೆಯ ಅವಧಿಯಲ್ಲಿ ಗಂಡನಿಗೂ, ಮಕ್ಕಳಿಗೂ ಜೊತೆಯಾಗಿ ಇಷ್ಟು ದಿನ
ತಾನಿಲ್ಲದ ಕೊರತೆಯನ್ನು ತುಂಬಿ ಕೊಡುವೆನೆಂದು ಯೋಚಿಸಿ ಆನಂದಪಟ್ಟಳು. ಚಿಕ್ಕ
ಹುಡುಗಿಯಂತೆ ರೋಮಾಂಚನ ಅನುಭವಿಸಿದಳು.<br>
{{gap}}ಆದರೆ ಸ್ವಂತದ ಕಷ್ಟ-ಸುಖಗಳ ಬಗ್ಗೆ ಯೋಚಿಸುತ್ತ ಕರ್ತವ್ಯವನ್ನು<br>
ನಿರ್ಲಕ್ಷಿಸುವ ಅಧಿಕಾರಿಯಾಗಿರಲಿಲ್ಲ ಆಕೆ. ರಜೆ ಸುರುವಾಗುವ ಮೊದಲು ಯಾವ<br>
ಮಹತ್ವದ ಕೇಸೂ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ್ದು, ಪೆಂಡಿಂಗ್<br>
ಉಳಿಯದ ಹಾಗೆ ಕೆಲಸ ನಿರ್ವಹಿಸಿದಳು. ಬೇರೆ ಮ್ಯಾಜಿಸ್ಟ್ರೇಟರು ಬೇಕೆಂತಲೇ ಕೇಸು<br>
ಮುಂದೆ ಮುಂದೆ ಹಾಕುತ್ತಾರೆ. ಈ ಮೇಡಮ್ಮು ಎಷ್ಟು ಬೇಗ ಎಲ್ಲ ಇತ್ಯರ್ಥ<br>
ಮಾಡುತ್ತಾರೆ, ಅಂತ ಕೋರ್ಟಿನ ಒಳಗೂ ಹೊರಗೂ ಜನ ಮಾತಾಡಿದರು. ಹಾಗೆ<br>
ಆಕೆ ಬಹಳಷ್ಟು ವ್ಯಾಜ್ಯಗಳನ್ನು ಬಗೆಹರಿಸಿದಳು : ರೆವೆನ್ಯೂ ಡಿಪಾರ್ಟಮೆಂಟಿನಲ್ಲಿ<br>
ಮೊದಲ ದರ್ಜೆ ಗುಮಾಸ್ತನಾಗಿದ್ದ ಮಲ್ಲಪ್ಪ ಕುಡಿದು-ಕುಡಿದು ಹಣ ಹಾಳು<br>
ಮಾಡುತ್ತ, ಸಂಸಾರ ನಿರ್ಲಕ್ಷಿಸುತ್ತ ಇದ್ದ. ಆತನ ಪ್ರತಿ ತಿಂಗಳ ಸಂಬಳದಲ್ಲಿ<br>
ಅರ್ಧದಷ್ಟು ನೇರವಾಗಿ ಆತನ ಹೆಂಡತಿಗೆ ಸಿಗುವ ವ್ಯವಸ್ಥೆಯನ್ನು ಯಶಸ್ವಿನಿ<br>
ಮಾಡಿದಳು. ಹೆಂಡತಿ ಮತ್ತು ಮೂರು ಚಿಕ್ಕ ಮಕ್ಕಳಿದ್ದೂ ಮತ್ತೊಬ್ಬಳೊಂದಿಗೆ<br>
ಕೂಡಾವಳಿ ಮಾಡಿಕೊಂಡು ಮನೆತನದ ಆಸ್ತಿ-ಪಾಸ್ತಿ, ಬಂಗಾರ-ಹಣ ಎಲ್ಲವನ್ನೂ<br>
ಎರಡನೆಯವಳಿಗೇ ಕೊಡುವ ಹವಣಿಕೆಯಲ್ಲಿದ್ದ ಕಾಲೇಜು<br>
ಶಿವಮೂರ್ತಿಯಿಂದ ಆತನ ಹೆಂಡತಿಗೆ ಆಕೆ ಬಯಸಿದಂತೆ ವಿಚ್ಛೇದನೆ ಕೊಡಿಸಿ<br>
ಪಿತ್ರಾರ್ಜಿತ ಆಸ್ತಿಯ ಬಹುಪಾಲು ಆಕೆಗೂ, ಮಕ್ಕಳಿಗೂ ಸಿಗುವಂತೆ ತೀರ್ಪು ಇತ್ತಳು.<br>
ಹೊಸದಾಗಿ ಮದುವೆಯಾಗಿ ಕರೆತಂದ ವಧುವಿಗೆ ವರದಕ್ಷಿಣೆಗಾಗಿ ಕಿರುಕುಳ<br>
ನೀಡುತ್ತಿದ್ದ ಪಿ.ಡಬ್ಲ್ಯೂ.ಡಿ. ಯಲ್ಲಿ ಇಂಜಿನೀಯರ ಆಗಿದ್ದ ಮಹಾದೇವ ಶೆಟ್ಟಿಯನ್ನು<br>
ಕರೆಸಿ ಛೀಮಾರಿ ಹಾಕಿ ಹೆಂಡತಿಯನ್ನು ಸರಿಯಾಗಿ ಬಾಳಿಸಬೇಕೆಂದು ತಾಕೀತು ಮಾಡಿ,<br>
ದರೆ ನೌಕರಿ ಹೋದೀತೆಂದು ಎಚ್ಚರಿಕೆ ನೀಡಿ ಖುಲಾಸೆ ಮಾಡಿದಳು. ಅಣ್ಣ ಸತ್ತ<br>
ನಂತರ ಆತನ ವಿಧವೆ ಪತ್ನಿಯನ್ನು ಬೀದಿಪಾಲು ಮಾಡಿದ್ದ ಡಾ. ಮಧುಕರನಿಂದ<br>
ಆತನ ಅತ್ತಿಗೆಗೆ ಆಸ್ತಿಯ ಪಾಲು ಕೊಡಿಸಿ ಆಕೆಗೆ ಕಿರುಕುಳ ನೀಡಿದ್ದರಿಂದ ಆರು ತಿಂಗಳ<br>
ಸಾದಾಶಿಕ್ಷೆ ವಿಧಿಸಿ, ಆತ ಮತ್ತೆ ಸೊಲ್ಲೆತ್ತದಂತೆ ಮಾಡಿದಳು. ಉನ್ನತ ಬ್ಯಾಂಕ್<br>
ಅಧಿಕಾರಿಯಾಗಿದ್ದ ಅಪ್ಪಾಸಾಹೇಬ ಪಾಟೀಲ ಕಾರಣವಿಲ್ಲದೆ ತನ್ನ ಮೂರನೆಯ<br>
ಹೆಂಡತಿಗೆ ವಿಚ್ಛೇದನ ನೀಡಲು ಪ್ರಯತ್ನಿಸುತ್ತಿದ್ದುದನ್ನು ತಡೆದು ಇಬ್ಬರಿಗೂ ರಾಜಿ<br>
ಮಾಡಿಸಿದಳು. ಫ್ಯಾಕ್ಟರಿ ಮಾಲೀಕ ಸಾಂಬ್ರಾಣಿ ತನ್ನ ಕೈಕೆಳಗಿನ ನಾಲ್ಕನೆಯ ದರ್ಜೆ<br><noinclude><references/></noinclude>
3btx5hisumz3uw3rmfp8juazjlqbe14
318014
318013
2026-05-08T07:16:20Z
Pragathi. BH
7585
318014
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಇನ್ನಷ್ಟು ಕತೆಗಳು/ಇಲ್ಲಿಂದ ಮುಂದೆಲ್ಲಿ?|right=೫೦೯}}
{{gap}}ಬರುತ್ತಿದ್ದೇನೆ, ನನಗೆ ಬಹಳ ಖುಶಿಯಾಗಿದೆ, ಎಂದು ಗಂಡನಿಗೆ ಪತ್ರ ಬರೆದಳು.
ಇಡಿಯ ರಜೆಯ ಅವಧಿಯಲ್ಲಿ ಗಂಡನಿಗೂ, ಮಕ್ಕಳಿಗೂ ಜೊತೆಯಾಗಿ ಇಷ್ಟು ದಿನ
ತಾನಿಲ್ಲದ ಕೊರತೆಯನ್ನು ತುಂಬಿ ಕೊಡುವೆನೆಂದು ಯೋಚಿಸಿ ಆನಂದಪಟ್ಟಳು. ಚಿಕ್ಕ
ಹುಡುಗಿಯಂತೆ ರೋಮಾಂಚನ ಅನುಭವಿಸಿದಳು.<br>
{{gap}}ಆದರೆ ಸ್ವಂತದ ಕಷ್ಟ-ಸುಖಗಳ ಬಗ್ಗೆ ಯೋಚಿಸುತ್ತ ಕರ್ತವ್ಯವನ್ನು
ನಿರ್ಲಕ್ಷಿಸುವ ಅಧಿಕಾರಿಯಾಗಿರಲಿಲ್ಲ ಆಕೆ. ರಜೆ ಸುರುವಾಗುವ ಮೊದಲು ಯಾವ
ಮಹತ್ವದ ಕೇಸೂ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ್ದು, ಪೆಂಡಿಂಗ್
ಉಳಿಯದ ಹಾಗೆ ಕೆಲಸ ನಿರ್ವಹಿಸಿದಳು. ಬೇರೆ ಮ್ಯಾಜಿಸ್ಟ್ರೇಟರು ಬೇಕೆಂತಲೇ ಕೇಸು
ಮುಂದೆ ಮುಂದೆ ಹಾಕುತ್ತಾರೆ. ಈ ಮೇಡಮ್ಮು ಎಷ್ಟು ಬೇಗ ಎಲ್ಲ ಇತ್ಯರ್ಥ
ಮಾಡುತ್ತಾರೆ, ಅಂತ ಕೋರ್ಟಿನ ಒಳಗೂ ಹೊರಗೂ ಜನ ಮಾತಾಡಿದರು. ಹಾಗೆ
ಆಕೆ ಬಹಳಷ್ಟು ವ್ಯಾಜ್ಯಗಳನ್ನು ಬಗೆಹರಿಸಿದಳು : ರೆವೆನ್ಯೂ ಡಿಪಾರ್ಟಮೆಂಟಿನಲ್ಲಿ
ಮೊದಲ ದರ್ಜೆ ಗುಮಾಸ್ತನಾಗಿದ್ದ ಮಲ್ಲಪ್ಪ ಕುಡಿದು-ಕುಡಿದು ಹಣ ಹಾಳು
ಮಾಡುತ್ತ, ಸಂಸಾರ ನಿರ್ಲಕ್ಷಿಸುತ್ತ ಇದ್ದ. ಆತನ ಪ್ರತಿ ತಿಂಗಳ ಸಂಬಳದಲ್ಲಿ
ಅರ್ಧದಷ್ಟು ನೇರವಾಗಿ ಆತನ ಹೆಂಡತಿಗೆ ಸಿಗುವ ವ್ಯವಸ್ಥೆಯನ್ನು ಯಶಸ್ವಿನಿ
ಮಾಡಿದಳು. ಹೆಂಡತಿ ಮತ್ತು ಮೂರು ಚಿಕ್ಕ ಮಕ್ಕಳಿದ್ದೂ ಮತ್ತೊಬ್ಬಳೊಂದಿಗೆ
ಕೂಡಾವಳಿ ಮಾಡಿಕೊಂಡು ಮನೆತನದ ಆಸ್ತಿ-ಪಾಸ್ತಿ, ಬಂಗಾರ-ಹಣ ಎಲ್ಲವನ್ನೂ
ಎರಡನೆಯವಳಿಗೇ ಕೊಡುವ ಹವಣಿಕೆಯಲ್ಲಿದ್ದ ಕಾಲೇಜು
ಶಿವಮೂರ್ತಿಯಿಂದ ಆತನ ಹೆಂಡತಿಗೆ ಆಕೆ ಬಯಸಿದಂತೆ ವಿಚ್ಛೇದನೆ ಕೊಡಿಸಿ
ಪಿತ್ರಾರ್ಜಿತ ಆಸ್ತಿಯ ಬಹುಪಾಲು ಆಕೆಗೂ, ಮಕ್ಕಳಿಗೂ ಸಿಗುವಂತೆ ತೀರ್ಪು ಇತ್ತಳು.
ಹೊಸದಾಗಿ ಮದುವೆಯಾಗಿ ಕರೆತಂದ ವಧುವಿಗೆ ವರದಕ್ಷಿಣೆಗಾಗಿ ಕಿರುಕುಳ
ನೀಡುತ್ತಿದ್ದ ಪಿ.ಡಬ್ಲ್ಯೂ.ಡಿ. ಯಲ್ಲಿ ಇಂಜಿನೀಯರ ಆಗಿದ್ದ ಮಹಾದೇವ ಶೆಟ್ಟಿಯನ್ನು
ಕರೆಸಿ ಛೀಮಾರಿ ಹಾಕಿ ಹೆಂಡತಿಯನ್ನು ಸರಿಯಾಗಿ ಬಾಳಿಸಬೇಕೆಂದು ತಾಕೀತು ಮಾಡಿ,
ದರೆ ನೌಕರಿ ಹೋದೀತೆಂದು ಎಚ್ಚರಿಕೆ ನೀಡಿ ಖುಲಾಸೆ ಮಾಡಿದಳು. ಅಣ್ಣ ಸತ್ತ
ನಂತರ ಆತನ ವಿಧವೆ ಪತ್ನಿಯನ್ನು ಬೀದಿಪಾಲು ಮಾಡಿದ್ದ ಡಾ. ಮಧುಕರನಿಂದ
ಆತನ ಅತ್ತಿಗೆಗೆ ಆಸ್ತಿಯ ಪಾಲು ಕೊಡಿಸಿ ಆಕೆಗೆ ಕಿರುಕುಳ ನೀಡಿದ್ದರಿಂದ ಆರು ತಿಂಗಳ
ಸಾದಾಶಿಕ್ಷೆ ವಿಧಿಸಿ, ಆತ ಮತ್ತೆ ಸೊಲ್ಲೆತ್ತದಂತೆ ಮಾಡಿದಳು. ಉನ್ನತ ಬ್ಯಾಂಕ್
ಅಧಿಕಾರಿಯಾಗಿದ್ದ ಅಪ್ಪಾಸಾಹೇಬ ಪಾಟೀಲ ಕಾರಣವಿಲ್ಲದೆ ತನ್ನ ಮೂರನೆಯ
ಹೆಂಡತಿಗೆ ವಿಚ್ಛೇದನ ನೀಡಲು ಪ್ರಯತ್ನಿಸುತ್ತಿದ್ದುದನ್ನು ತಡೆದು ಇಬ್ಬರಿಗೂ ರಾಜಿ
ಮಾಡಿಸಿದಳು. ಫ್ಯಾಕ್ಟರಿ ಮಾಲೀಕ ಸಾಂಬ್ರಾಣಿ ತನ್ನ ಕೈಕೆಳಗಿನ ನಾಲ್ಕನೆಯ ದರ್ಜೆ<br><noinclude><references/></noinclude>
7cu9rs7nfhabyo85m9zn8rzxt8253y0
ಪುಟ:ನಡೆದದ್ದೇ ದಾರಿ.pdf/೫೦೯
104
31717
318005
250739
2026-05-08T07:04:01Z
Pragathi. BH
7585
/* Validated */
318005
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೫೦೨|right= ನಡೆದದ್ದೇ ದಾರಿ}}
{{gap}}“ಏನು ವರ್ಮಾ ಮ್ಯಾಡಮ್ ಪಿಂಕುಪಿಂಕಾಗಿ ಬಂದುಬಿಟ್ಟಿದ್ದೀರಿ, ಏನು
ಸಮಾಚಾರ ?"<br>
{{gap}}“ಬಂದಿರಾ ವರ್ಮಾ ಬಾಯಿಯವರೆ, ಈ ರಿಪೋರ್ಟ್ಸ್ಸ್ ಬರೆಯೋ ಕೆಲ್ಸ ಹಾಗೇ
ಉಳ್ಕೊಂಡಿದೆ. ನೀವು ಬಂದನಂತರವೇ ಫೈನಲೈಜ್ ಮಾಡೋದು ಅಂದ್ರು
ಪ್ರಿನ್ಸಿಪಾಲ್ರು. ಸ್ವಲ್ಪ ಗೈಡ್ ಮಾಡ್ರಿ.”<br>
{{gap}}“ಸ್ಟಾಫ್ ರೂಮೆಲ್ಲಾ ಜೀವ ಕಳಕೊಂಡ ಹಾಗಾಗಿತ್ತು ನೀವಿಲ್ಲದೇ. ಇಡೀ<br>
ಸ್ಕೂಲೇ ಪ್ಯಾರಲೈಜ್ ಆದಹಾಗಿತ್ತು."<br>
{{gap}}ಹೀಗೇ....<br>
{{gap}}ಅಂದು ಸ್ಕೂಲು ಬಿಟ್ಟು ರಜನಿ ಮನೆಗೆ ಹೊರಟಾಗ ಸ್ಕೂಲಿನ
ಕಾಂಪೌಂಡಿನಾಚೆ ನೀಲಿ ಮರ್ಸಿಡಿಸ್ ಕಾಯುತ್ತಿದ್ದುದು ಕಾಣಿಸಿತು.<br>
{{rh|center=* * *}}
{{gap}}ಅದೇ ತಿಂಗಳು ಇನ್ಸ್ಪೆಕ್ಕನ್ ಇತ್ತು. ಬರಲಿರುವ ಇನ್ಸ್ಪೆಕ್ಟರ್ರ ಹೆಸರು
ಕೇಳಿದಾಗ ರಜನಿಗೆ ಹಾಯೆನಿಸಿತು. ಅವಳಿಗೆ ಸಾಕಷ್ಟು ಪರಿಚಯವಿದ್ದ, ಅವಳಿಂದ
ಸಾಕಷ್ಟು ಪ್ರಭಾವಿತರಾಗಿದ್ದ ಇನ್ಸ್ಪೆಕ್ಟರ್. ಎರಡು ಮೂರು ಸಲ ಅವರ
ಭೆಟ್ಟಿಯಾಗಿತ್ತು. ರಜನಿಯ ಕ್ಲಾಸಿನ ಹುಡುಗರನ್ನು, ಅವಳ ಕಲಿಸುವಿಕೆಯ
ವಿಧಾನಗಳನ್ನು ಅವರು ಬಹಳ ಶಿಫಾರಸ್ಸು ಮಾಡಿದ್ದರು. ಬರಲಿ, ಈಗಲಾದರೂ
ತನ್ನ ಮಹತ್ವ ಉಳಿದವರಿಗೆ ಗೊತ್ತಾದೀತು. ಮತ್ತು ಯಾರಿಗೆ ಗೊತ್ತು, ಗಾಳಿ ಬೀಸುವ
ದಿಕ್ಕು ಬದಲಾದರೂ ಆದೀತು.<br>
{{gap}}ರಜನಿ ಆಸ್ಥೆಯಿಂದ ಇನ್ಸ್ಪೆಕ್ಟನ್ಗಾಗಿ ಕಾಯ್ದಳು. ತನ್ನ ತರಗತಿಯ
ಹುಡುಗರನ್ನು ಶ್ರಮವಹಿಸಿ ತಯಾರು ಮಾಡಿದಳು. ಕ್ಲಾಸ್ರೂಮನ್ನು ಸ್ವತಃ ನಿಂತು
ಬಗೆಬಗೆಯಾಗಿ ಶೃಂಗರಿಸಿದಳು. ಇನ್ಸ್ಪೆಕ್ಷನ್ ದಿನ ತನ್ನ ಮದುವೆಯ ರಿಸೆಪ್ಶನ್ಗೆ
ಕೊಂಡಿದ್ದ ಸೀರೆಯನ್ನುಟ್ಟಳು. ಆದರೆ ಕಾರಿನಿಂದಿಳಿಯುತ್ತಿದ್ದಂತೆ ಇನ್ಸ್ಪೆಕ್ಟರ್
ಸಾಹೇಬರು ರಜನಿಯನ್ನು ಹೋಗಲಿ, ಕೈಮುಗಿದು ಹಲ್ಕಿರಿಯುತ್ತ ನಿಂತಿದ್ದವ
ಪ್ರಿನ್ಸಿಪಾಲರನ್ನೂ ನೋಡದೆ ಸೀದಾ “ಹಲೋ, ಮಿಸೆಸ್ ವರ್ಮಾ" ಅಂತ ಅವಳ
ಕಡೆಗೇ ಹೆಜ್ಜೆ ಹಾಕಿ, ಕ್ಯಾಮರಾದೆದುರು ನಿಂತ ಹಾಗೆ ಸ್ವರ್ಗೀಯ ಸ್ಮಿತ ಬೀರುತ್ತಿದ್ದ
ಅವಳ ಕೈಕುಲುಕಿ, ಕೈಹಿಡಿದುಕೊಂಡೇ ಮೇಲೆ ನಡೆದರು.<br>
{{gap}}ಅವರು ಬಂದಿದ್ದು ಸ್ಕೂಲಿನ ಇನ್ಸ್ಪೆಕ್ಕನ್ಗೆಂದೇ ಆದರೂ ಹಾಗೆ
ಕ್ಲಾಸುಕ್ಲಾಸಿಗೆ ಹೋಗಿ ತನಿಖೆ ಮಾಡದೆ ಇಡೀ ದಿನ ವರ್ಮಾಳೊಂದಿಗೆ ಮಾತಾಡುತ್ತ
ಪ್ರಿನ್ಸಿಪಾಲರ ರೂಮಿನಲ್ಲೇ ಕಳೆದರು. ಸ್ಕೂಲಿನ ಬಗ್ಗೆ ಅವರು ಬಹಳ ಒಳ್ಳೆಯ<br><noinclude><references/></noinclude>
qjldvfynlnb9owf3hu73mm65qh7fuvj
ಪುಟ:ನಡೆದದ್ದೇ ದಾರಿ.pdf/೫೦೭
104
31735
318001
250702
2026-05-08T06:53:00Z
Pragathi. BH
7585
/* Validated */
318001
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೫೦೦|right= ನಡೆದದ್ದೇ ದಾರಿ}}
“ಮಿಸೆಸ್ ವರ್ಮಾ ಅವರ ಆಟ ವಂಡರ್ಫುಲ್ ಆಗಿತ್ತು."
“ವರ್ಮಾ ಮ್ಯಾಡಮ್ ಎಷ್ಟು ಎಫೀಶಿಯಂಟ್ ಇದ್ದಾರಲ್ಲ...”
“ಹಲೋ ವರ್ಮಾ ಮ್ಯಾಡಮ್, ಸ್ವಲ್ಪ ಇತ್ತ ಕಡೇನೂ ಬರ್ರೆಲ್ಲ...”
***
{{gap}}ಆ ರಾತ್ರಿ ರಜನಿ ಗಂಡನಿಗೆ ಬರೆದಳು : “ನನಗೆ ಬಹಳ ಬೇಸರವಾಗುತ್ತಿದೇರೀ.<br>
ಮನಸ್ಸಿಗೆ ಸ್ವಲ್ಪವೂ ಸಮಾಧಾನವಿಲ್ಲ. ನಮ್ಮ ಸ್ಕೂಲಿನ ಸುದ್ದಿ ಬರೆ ಎಂದು ಕೇಳಿದೀರಿ.<br>
ಹೇಳಿಕೊಳ್ಳುವಂಥ ಅ್ಯಕ್ಷಿವ್ದಿಟೀಜ್ ಇಲ್ಲಿ ಏನೂ ನಡೆಯುವುದಿಲ್ಲ. ಈ ಸ್ಕೂಲೇ ಅಷ್ಟು<br>
ಸರಿಯಾಗಿಲ್ಲ. ...ಅಂದಹಾಗೆ ಇಲ್ಲಿ ಮಿಸೆಸ್ ವರ್ಮಾ ಅಂತ ಒಬ್ಬ ಟೀಚರಿದ್ದಾಳೆ.<br>
ಅವಳಷ್ಟು ಕೆಟ್ಟ ಹೆಂಗಸನ್ನು ನಾನು ಎಂದೂ ಎಲ್ಲಿಯೂ ನೋಡಿಯೇ ಇಲ್ಲ....<br>
ನನಗೆಷ್ಟು ಬೇಸರವಾಗಿದೆ ಆಂದರೆ ನೀವು ಹೇಳಿದ ಹಾಗೆ ರಜೆ ತಗೊಂಡು ತಿರುಗಿ<br>
ಬಂದುಬಿಡಲೇ ಅಂತ ವಿಚಾರಿಸುತ್ತಿದ್ದೇನೆ. ಈ ಊರೂ ಛಲೋ ಇಲ್ಲ. ನಾವಿಬ್ಬರೂ<br>
ನಮ್ಮ ಟ್ರಾನ್ಸ್ಫರ್ ಕ್ಯಾನ್ಸಲ್ ಮಾಡಿಸಿಕೊಂಡು ಬೇರೆ ಊರಿಗೆ<br>
ಮಾಡಿಸಿಕೊಳ್ಳುವುದು ಆದೀತೆ ?..."<br>
***
{{rh|center=೩}}
{{gap}}ಅಂದು ಸ್ಕೂಲಿಗೆ ಲೇಟಾಯಿತೆಂದು ಅವಳು ಗಡಿಬಿಡಿಯಿಂದ ನಡೆದುಕೊಂಡು<br>
ಹೊರಟಾಗ ಇದ್ದಕ್ಕಿದ್ದಂತೆ ಮಳೆ ಸುರುವಾಯಿತು. ಕೊಡೆ ಏರಿಸಿಕೊಂಡು ಸೀರೆ<br>
ಹೊಲಸಾಗದಂತೆ ಎತ್ತಿ ಹಿಡಿದುಕೊಂಡು ಆಕೆ ಸ್ಕೂಲಿನ ಗೇಟಿನಲ್ಲಿ ಕಾಲಿಡುತ್ತಿರುವಂತೆ<br>
ಭರ್ರೆಂದು ಕಾರೊಂದು ಅವಳಿಗೆ ತೀರ ಸನಿಹದಲ್ಲೇ ಅವಳ ಸೀರೆಗೆ ರಾಡಿನೀರು<br>
ಸಿಡಿಸುತ್ತ,. ಹಾಯ್ದು ಹೋಗಿ ಸ್ಟಾಫ್ರೂಮಿನ ಎದುರಿಗೆ ನಿಂತಿತು. ಸುಂದರವಾದ<br>
ನೀಲಿಬಣ್ಣದ ಹೊಸ ಮರ್ಸಿಡಿಸ್. ಡ್ರೈವರ್ ಸೀಟಿನಲ್ಲಿ ಕೂತವನು<br>
ಆಜಾನುಬಾಹುವಾದ ಬೀಟಲು ಕೂದಲಿನ ಆಕರ್ಷಕ ವ್ಯಕ್ತಿ. ಕಾರು ನಿಲ್ಲಿಸಿದೊಡನೆ<br>
ತಟ್ಟನೆ ಇಳಿದುಬಂದು ಎದುರುಗಡೆಯ ಸೀಟಿನ ಮಗ್ಗುಲ ಬಾಗಿಲನ್ನು ಬಗ್ಗಿ ತೆರೆದು<br>
ಆತ ನಿಂತ ಭಂಗಿಯನ್ನೆ ನೋಡುತ್ತಿದ್ದ ರಜನಿಗೆ ಆಶ್ಚರ್ಯವಾದುದು ಕಾರಿನಿಂದ<br>
ಡೌಲಾಗಿ ಇಳಿಯುತ್ತಿದ್ದ ಮಿಸೆಸ್ ವರ್ಮಾನನ್ನು ಕಂಡಾಗ.<br>
ಯಾರಿರಬಹುದು ಆತ ? ಆಕೆಯ ಗಂಡ? ಆಗಿರಲಾರ. ಇಲ್ಲ, ಆಗಿರಲಿಕ್ಕೆ<br>
ಶಕ್ಯವೇ ಇಲ್ಲ....<br>
***<noinclude><references/></noinclude>
oz8eshhsqsyugqy58gufjyl1fjlduyw
318002
318001
2026-05-08T06:56:43Z
Pragathi. BH
7585
318002
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೫೦೦|right= ನಡೆದದ್ದೇ ದಾರಿ}}
{{gap}}“ಮಿಸೆಸ್ ವರ್ಮಾ ಅವರ ಆಟ ವಂಡರ್ಫುಲ್ ಆಗಿತ್ತು."<br />
{{gap}}“ವರ್ಮಾ ಮ್ಯಾಡಮ್ ಎಷ್ಟು ಎಫೀಶಿಯಂಟ್ ಇದ್ದಾರಲ್ಲ...”<br />
{{gap}}“ಹಲೋ ವರ್ಮಾ ಮ್ಯಾಡಮ್, ಸ್ವಲ್ಪ ಇತ್ತ ಕಡೇನೂ ಬರ್ರೆಲ್ಲ...”<br />
{{rh|center=* * *}}
{{gap}}ಆ ರಾತ್ರಿ ರಜನಿ ಗಂಡನಿಗೆ ಬರೆದಳು : “ನನಗೆ ಬಹಳ ಬೇಸರವಾಗುತ್ತಿದೇರೀ.
ಮನಸ್ಸಿಗೆ ಸ್ವಲ್ಪವೂ ಸಮಾಧಾನವಿಲ್ಲ. ನಮ್ಮ ಸ್ಕೂಲಿನ ಸುದ್ದಿ ಬರೆ ಎಂದು ಕೇಳಿದೀರಿ.
ಹೇಳಿಕೊಳ್ಳುವಂಥ ಅ್ಯಕ್ಷಿವ್ದಿಟೀಜ್ ಇಲ್ಲಿ ಏನೂ ನಡೆಯುವುದಿಲ್ಲ. ಈ ಸ್ಕೂಲೇ ಅಷ್ಟು
ಸರಿಯಾಗಿಲ್ಲ. ...ಅಂದಹಾಗೆ ಇಲ್ಲಿ ಮಿಸೆಸ್ ವರ್ಮಾ ಅಂತ ಒಬ್ಬ ಟೀಚರಿದ್ದಾಳೆ.
ಅವಳಷ್ಟು ಕೆಟ್ಟ ಹೆಂಗಸನ್ನು ನಾನು ಎಂದೂ ಎಲ್ಲಿಯೂ ನೋಡಿಯೇ ಇಲ್ಲ....
ನನಗೆಷ್ಟು ಬೇಸರವಾಗಿದೆ ಆಂದರೆ ನೀವು ಹೇಳಿದ ಹಾಗೆ ರಜೆ ತಗೊಂಡು ತಿರುಗಿ
ಬಂದುಬಿಡಲೇ ಅಂತ ವಿಚಾರಿಸುತ್ತಿದ್ದೇನೆ. ಈ ಊರೂ ಛಲೋ ಇಲ್ಲ. ನಾವಿಬ್ಬರೂ
ನಮ್ಮ ಟ್ರಾನ್ಸ್ಫರ್ ಕ್ಯಾನ್ಸಲ್ ಮಾಡಿಸಿಕೊಂಡು ಬೇರೆ ಊರಿಗೆ<br>
ಮಾಡಿಸಿಕೊಳ್ಳುವುದು ಆದೀತೆ ?..."<br>
{{rh|center=* * *}}
{{rh|center=೩}}
{{gap}}ಅಂದು ಸ್ಕೂಲಿಗೆ ಲೇಟಾಯಿತೆಂದು ಅವಳು ಗಡಿಬಿಡಿಯಿಂದ ನಡೆದುಕೊಂಡು
ಹೊರಟಾಗ ಇದ್ದಕ್ಕಿದ್ದಂತೆ ಮಳೆ ಸುರುವಾಯಿತು. ಕೊಡೆ ಏರಿಸಿಕೊಂಡು ಸೀರೆ
ಹೊಲಸಾಗದಂತೆ ಎತ್ತಿ ಹಿಡಿದುಕೊಂಡು ಆಕೆ ಸ್ಕೂಲಿನ ಗೇಟಿನಲ್ಲಿ ಕಾಲಿಡುತ್ತಿರುವಂತೆ
ಭರ್ರೆಂದು ಕಾರೊಂದು ಅವಳಿಗೆ ತೀರ ಸನಿಹದಲ್ಲೇ ಅವಳ ಸೀರೆಗೆ ರಾಡಿನೀರು
ಸಿಡಿಸುತ್ತ,. ಹಾಯ್ದು ಹೋಗಿ ಸ್ಟಾಫ್ರೂಮಿನ ಎದುರಿಗೆ ನಿಂತಿತು. ಸುಂದರವಾದ
ನೀಲಿಬಣ್ಣದ ಹೊಸ ಮರ್ಸಿಡಿಸ್. ಡ್ರೈವರ್ ಸೀಟಿನಲ್ಲಿ ಕೂತವನು
ಆಜಾನುಬಾಹುವಾದ ಬೀಟಲು ಕೂದಲಿನ ಆಕರ್ಷಕ ವ್ಯಕ್ತಿ. ಕಾರು ನಿಲ್ಲಿಸಿದೊಡನೆ
ತಟ್ಟನೆ ಇಳಿದುಬಂದು ಎದುರುಗಡೆಯ ಸೀಟಿನ ಮಗ್ಗುಲ ಬಾಗಿಲನ್ನು ಬಗ್ಗಿ ತೆರೆದು
ಆತ ನಿಂತ ಭಂಗಿಯನ್ನೆ ನೋಡುತ್ತಿದ್ದ ರಜನಿಗೆ ಆಶ್ಚರ್ಯವಾದುದು ಕಾರಿನಿಂದ
ಡೌಲಾಗಿ ಇಳಿಯುತ್ತಿದ್ದ ಮಿಸೆಸ್ ವರ್ಮಾನನ್ನು ಕಂಡಾಗ.<br>
ಯಾರಿರಬಹುದು ಆತ ? ಆಕೆಯ ಗಂಡ? ಆಗಿರಲಾರ. ಇಲ್ಲ, ಆಗಿರಲಿಕ್ಕೆ
ಶಕ್ಯವೇ ಇಲ್ಲ....<br>
{{rh|center=* * *}}<noinclude><references/></noinclude>
5oabta7za5migc5vpvn95pj8u2jjzwe
ಪುಟ:ನಡೆದದ್ದೇ ದಾರಿ.pdf/೫೦೬
104
31742
317996
250682
2026-05-08T06:48:08Z
Pragathi. BH
7585
/* Validated */
317996
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|lrft=ಇನ್ನಷ್ಟು ಕತೆಗಳು / ಸಮಾಧಾನ|right= ೪೯೯}}
{{gap}}ಲಕ್ಷ್ಯ ಕೊಟ್ಟು ಕೇಳಿದಳು. ಹೌದು ತೀರಾ ಎದುರಿನ ಸಾಲಿನಿಂದ ಬಹಳ ಇಂಪಾದ
ದನಿಯೊಂದು. ಪ್ರಾರ್ಥನೆಯ ಹಾಡಿನ ಒಂದೊಂದೇ ಸಾಲನ್ನು ಬಹಳ
ಭಾವಪೂರಿತವಾಗಿ ಹೇಳುತ್ತಿತ್ತು. ಉಳಿದವರು ಅನುಸರಿಸುತ್ತಿದ್ದರು. ಆಕೆ ಕಾಲೆತ್ತರಿಸಿ
ನೋಡಿದಳು- ಹಾಡುತ್ತಿರುವಾಕೆ ವರ್ಮಾಬಾಯಿ. ಇನ್ನೂ ಕಾಲೆತ್ತರಿಸಿ ನೋಡಿದಾಗ
ಆಕೆಗೆ ವರ್ಮಾಬಾಯಿಯ ಮುಖ ಮೊದಲ ಬಾರಿ ಪೂರಾ ಕಾಣಿಸಿತು. ಆಕೆಗೆ ಒಮ್ಮೆಲೆ
ಅಸ್ವಸ್ಥತೆಯೆನಿಸಿತು. ಈ ವರ್ಮಾಬಾಯಿಯ ಮುಖ ಇಷ್ಟು ಕೋಮಲವಾಗಿ,
ಸುಂದರವಾಗಿ, ಆಕರ್ಷಕವಾಗಿ ಇರಲು ಹೇಗೆ ಸಾಧ್ಯ ? ಬಹುಶಃ ದೂರದಿಂದ ಮಾತ್ರ
ಹೀಗೆ ಕಾಣುತ್ತಿರಬಹುದು. ಬಹುಶಃ ಅದು ಅತಿಯಾದ ಮೇಕಪ್ ಇರಬಹುದು.
ಬಹುಶಃ ಬಿಸಿಲಿನಲ್ಲಿ ನಡೆದುಬಂದುದರಿಂದ ತನಗೇ ಕಣ್ಣು ಸರಿಯಾಗಿ
ಕಾಣದಂತಾಗಿವೆಯೋ ಏನೋ. ಬಹುಶಃ...<br>
{{rh|center=* * *}}
{{gap}}“ಸರ್, ಇದು ನಾಳಿನ ಸ್ವಾತಂತ್ರ್ಯ ದಿನೋತ್ಸವದ ಪ್ರೋಗ್ರ್ಯಾಮಿನ ಡೀಟೇಲಾದ
ಪ್ಲ್ಯಾನು. ನಾನು ಮೊದಲು ಇದ್ದೆನಲ್ಲ. ಆ ಸ್ಕೂಲಿನಲ್ಲಿ ಎಲ್ಲಾ ಎಕ್ಸ್ಟ್ರಾಕರಿಕ್ಕುಲರ್
ಅ್ಯಕ್ಟಿವ್ಹಿಟೀಜ್ನ ಪ್ಲ್ಯಾನೂ ನಾನೇ ಮಾಡುತ್ತಿದ್ದೆ. ಎಲ್ಲ ಕಾಂಪಿಟೇಶನ್ಸ್ದಲ್ಲೂ ನನ್ನ
ಬ್ಯಾಚಗೇ ಫಸ್ಟ್ ಪ್ರೈಜ್ ಬರ್ತಿತ್ತು. ಇದು ನೋಡ್ರಿ ಸರಿಯಾಗಿದೆಯೆ ಅಂತ. ನೀವು
ಹೇಳಿದರೆ ಟೀ ಪಾರ್ಟಿಯ ವ್ಯವಸ್ಥೆಯನ್ನೂ ನಾನು ನೋಡಿಕೊಳ್ಳುತ್ತೇನೆ" -ತುಂಬ
ಸಿಂಗಾರಾಗಿ ಸ್ಕೂಲಿಗೆ ಬಂದಿದ್ದ ಆಕೆ ಬಂದೊಡನೆ ಪ್ರಿನ್ಸಿಪಾಲರನ್ನು ಅವರ
ರೂಮಿನಲ್ಲಿ ಕಂಡು ಮಾತನಾಡಿದಳು. ಆತ ಫೈಲಿನಲ್ಲಿ ಮುಖವಿಟ್ಟುಕೊಂಡೇ
ಹೇಳಿದರು. ""ನೀವು ಮಿಸೆಸ್ ವರ್ಮಾ ಅವರನ್ನು ಕನ್ಸಲ್ಟ್ ಮಾಡ್ರಿ. ಈ
ವಿಷಯಗಳಲ್ಲೆಲ್ಲ ಅವರು ಎಕ್ಸ್ಪರ್ಟ್. ಅವರು ಹ್ಞೂ ಅಂದರೆ ಮುಗಿಯಿತು."<br>
{{rh|center=* * *}}
{{gap}}ಸ್ವಾತಂತ್ರ್ಯ ದಿನೋತ್ಸವದಂದು ಹುಡುಗಿಯರಿಂದ ಸ್ವಾಗತಗೀತೆ ಹಾಡಿಸಿದ್ದು,<br>
ಆಶುಭಾಷಣ ಸ್ಪರ್ಧೆ- ವಿವಿಧ ಕ್ರೀಡಾಸ್ಪರ್ಧೆಗಳನ್ನು ನಿರ್ವಹಿಸಿದ್ದು, ಶಿಕ್ಬಕರ ಟೀ<br>
ಪಾರ್ಟಿಯಲ್ಲಿ ಓಡಾಡಿದ್ದು -ಎಲ್ಲ ಮಿಸೆಸ್ ವರ್ಮಾ. ಅವಳ ಮುಖದಲ್ಲಿ ಸದಾ<br>
ನಗೆ. ನಗುವ ಹೆಂಗಸಿನ ಬಗ್ಗೆ ಅದೇನೋ ಗಾದೆಯಿದೆಯಲ್ಲಾ -ರಜನಿ<br>
ನೆನಪಿಸಿಕೊಳ್ಳಲು ಹೆಣಗಿದಳು. ಸಾಲದ್ದಕ್ಕೆ ಶಿಕ್ಬಕರಿಗಾಗಿ ನಡೆದ ಬ್ಯಾಡ್ಮಿಂಟನ್<br>
ಮ್ಯಾಚಿನಲ್ಲಿ ರಜನಿಗೆ ಮಿಸೆಸ್ ವರ್ಮಾಳಿಂದ ಸೋಲು. ರಜನಿಯ ಬ್ಯಾಡ್ಮಿಂಟನ್<br>
ಜೀವನದಲ್ಲಿ ಪ್ರಾಯಶಃ ಮೊದಲ ಸೋಲು.<br>
{{gap}}“ಮಿಸೆಸ್ ವರ್ಮಾಗೆ ಈ ಸೀರೆ ಎಷ್ಟು ಒಪ್ಪುತ್ತದಲ್ರೀ ?"<br><noinclude><references/></noinclude>
r3djfhbayyike0h4go1h6mekf3kwt2z
317997
317996
2026-05-08T06:48:49Z
Pragathi. BH
7585
317997
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|lrft=ಇನ್ನಷ್ಟು ಕತೆಗಳು / ಸಮಾಧಾನ|right= ೪೯೯}}
{{gap}}ಲಕ್ಷ್ಯ ಕೊಟ್ಟು ಕೇಳಿದಳು. ಹೌದು ತೀರಾ ಎದುರಿನ ಸಾಲಿನಿಂದ ಬಹಳ ಇಂಪಾದ
ದನಿಯೊಂದು. ಪ್ರಾರ್ಥನೆಯ ಹಾಡಿನ ಒಂದೊಂದೇ ಸಾಲನ್ನು ಬಹಳ
ಭಾವಪೂರಿತವಾಗಿ ಹೇಳುತ್ತಿತ್ತು. ಉಳಿದವರು ಅನುಸರಿಸುತ್ತಿದ್ದರು. ಆಕೆ ಕಾಲೆತ್ತರಿಸಿ
ನೋಡಿದಳು- ಹಾಡುತ್ತಿರುವಾಕೆ ವರ್ಮಾಬಾಯಿ. ಇನ್ನೂ ಕಾಲೆತ್ತರಿಸಿ ನೋಡಿದಾಗ
ಆಕೆಗೆ ವರ್ಮಾಬಾಯಿಯ ಮುಖ ಮೊದಲ ಬಾರಿ ಪೂರಾ ಕಾಣಿಸಿತು. ಆಕೆಗೆ ಒಮ್ಮೆಲೆ
ಅಸ್ವಸ್ಥತೆಯೆನಿಸಿತು. ಈ ವರ್ಮಾಬಾಯಿಯ ಮುಖ ಇಷ್ಟು ಕೋಮಲವಾಗಿ,
ಸುಂದರವಾಗಿ, ಆಕರ್ಷಕವಾಗಿ ಇರಲು ಹೇಗೆ ಸಾಧ್ಯ ? ಬಹುಶಃ ದೂರದಿಂದ ಮಾತ್ರ
ಹೀಗೆ ಕಾಣುತ್ತಿರಬಹುದು. ಬಹುಶಃ ಅದು ಅತಿಯಾದ ಮೇಕಪ್ ಇರಬಹುದು.
ಬಹುಶಃ ಬಿಸಿಲಿನಲ್ಲಿ ನಡೆದುಬಂದುದರಿಂದ ತನಗೇ ಕಣ್ಣು ಸರಿಯಾಗಿ
ಕಾಣದಂತಾಗಿವೆಯೋ ಏನೋ. ಬಹುಶಃ...<br>
{{rh|center=* * *}}
{{gap}}“ಸರ್, ಇದು ನಾಳಿನ ಸ್ವಾತಂತ್ರ್ಯ ದಿನೋತ್ಸವದ ಪ್ರೋಗ್ರ್ಯಾಮಿನ ಡೀಟೇಲಾದ
ಪ್ಲ್ಯಾನು. ನಾನು ಮೊದಲು ಇದ್ದೆನಲ್ಲ. ಆ ಸ್ಕೂಲಿನಲ್ಲಿ ಎಲ್ಲಾ ಎಕ್ಸ್ಟ್ರಾಕರಿಕ್ಕುಲರ್
ಅ್ಯಕ್ಟಿವ್ಹಿಟೀಜ್ನ ಪ್ಲ್ಯಾನೂ ನಾನೇ ಮಾಡುತ್ತಿದ್ದೆ. ಎಲ್ಲ ಕಾಂಪಿಟೇಶನ್ಸ್ದಲ್ಲೂ ನನ್ನ
ಬ್ಯಾಚಗೇ ಫಸ್ಟ್ ಪ್ರೈಜ್ ಬರ್ತಿತ್ತು. ಇದು ನೋಡ್ರಿ ಸರಿಯಾಗಿದೆಯೆ ಅಂತ. ನೀವು
ಹೇಳಿದರೆ ಟೀ ಪಾರ್ಟಿಯ ವ್ಯವಸ್ಥೆಯನ್ನೂ ನಾನು ನೋಡಿಕೊಳ್ಳುತ್ತೇನೆ" -ತುಂಬ
ಸಿಂಗಾರಾಗಿ ಸ್ಕೂಲಿಗೆ ಬಂದಿದ್ದ ಆಕೆ ಬಂದೊಡನೆ ಪ್ರಿನ್ಸಿಪಾಲರನ್ನು ಅವರ
ರೂಮಿನಲ್ಲಿ ಕಂಡು ಮಾತನಾಡಿದಳು. ಆತ ಫೈಲಿನಲ್ಲಿ ಮುಖವಿಟ್ಟುಕೊಂಡೇ
ಹೇಳಿದರು. ""ನೀವು ಮಿಸೆಸ್ ವರ್ಮಾ ಅವರನ್ನು ಕನ್ಸಲ್ಟ್ ಮಾಡ್ರಿ. ಈ
ವಿಷಯಗಳಲ್ಲೆಲ್ಲ ಅವರು ಎಕ್ಸ್ಪರ್ಟ್. ಅವರು ಹ್ಞೂ ಅಂದರೆ ಮುಗಿಯಿತು."<br>
{{rh|center=* * *}}
{{gap}}ಸ್ವಾತಂತ್ರ್ಯ ದಿನೋತ್ಸವದಂದು ಹುಡುಗಿಯರಿಂದ ಸ್ವಾಗತಗೀತೆ ಹಾಡಿಸಿದ್ದು,
ಆಶುಭಾಷಣ ಸ್ಪರ್ಧೆ- ವಿವಿಧ ಕ್ರೀಡಾಸ್ಪರ್ಧೆಗಳನ್ನು ನಿರ್ವಹಿಸಿದ್ದು, ಶಿಕ್ಬಕರ ಟೀ
ಪಾರ್ಟಿಯಲ್ಲಿ ಓಡಾಡಿದ್ದು -ಎಲ್ಲ ಮಿಸೆಸ್ ವರ್ಮಾ. ಅವಳ ಮುಖದಲ್ಲಿ ಸದಾ
ನಗೆ. ನಗುವ ಹೆಂಗಸಿನ ಬಗ್ಗೆ ಅದೇನೋ ಗಾದೆಯಿದೆಯಲ್ಲಾ -ರಜನಿ
ನೆನಪಿಸಿಕೊಳ್ಳಲು ಹೆಣಗಿದಳು. ಸಾಲದ್ದಕ್ಕೆ ಶಿಕ್ಬಕರಿಗಾಗಿ ನಡೆದ ಬ್ಯಾಡ್ಮಿಂಟನ್
ಮ್ಯಾಚಿನಲ್ಲಿ ರಜನಿಗೆ ಮಿಸೆಸ್ ವರ್ಮಾಳಿಂದ ಸೋಲು. ರಜನಿಯ ಬ್ಯಾಡ್ಮಿಂಟನ್
ಜೀವನದಲ್ಲಿ ಪ್ರಾಯಶಃ ಮೊದಲ ಸೋಲು.<br>
{{gap}}“ಮಿಸೆಸ್ ವರ್ಮಾಗೆ ಈ ಸೀರೆ ಎಷ್ಟು ಒಪ್ಪುತ್ತದಲ್ರೀ ?"<noinclude><references/></noinclude>
8on1haaow6tuf83n8mw9epzeea365es
317998
317997
2026-05-08T06:50:35Z
Pragathi. BH
7585
317998
proofread-page
text/x-wiki
<noinclude><pagequality level="4" user="Pragathi. BH" />{{rh|left=ಇನ್ನಷ್ಟು ಕತೆಗಳು|ಸಮಾಧಾನ|right= ೪೯೯}}</noinclude>{{rh|lrft=ಇನ್ನಷ್ಟು ಕತೆಗಳು / ಸಮಾಧಾನ|right= ೪೯೯}}
{{gap}}ಲಕ್ಷ್ಯ ಕೊಟ್ಟು ಕೇಳಿದಳು. ಹೌದು ತೀರಾ ಎದುರಿನ ಸಾಲಿನಿಂದ ಬಹಳ ಇಂಪಾದ
ದನಿಯೊಂದು. ಪ್ರಾರ್ಥನೆಯ ಹಾಡಿನ ಒಂದೊಂದೇ ಸಾಲನ್ನು ಬಹಳ
ಭಾವಪೂರಿತವಾಗಿ ಹೇಳುತ್ತಿತ್ತು. ಉಳಿದವರು ಅನುಸರಿಸುತ್ತಿದ್ದರು. ಆಕೆ ಕಾಲೆತ್ತರಿಸಿ
ನೋಡಿದಳು- ಹಾಡುತ್ತಿರುವಾಕೆ ವರ್ಮಾಬಾಯಿ. ಇನ್ನೂ ಕಾಲೆತ್ತರಿಸಿ ನೋಡಿದಾಗ
ಆಕೆಗೆ ವರ್ಮಾಬಾಯಿಯ ಮುಖ ಮೊದಲ ಬಾರಿ ಪೂರಾ ಕಾಣಿಸಿತು. ಆಕೆಗೆ ಒಮ್ಮೆಲೆ
ಅಸ್ವಸ್ಥತೆಯೆನಿಸಿತು. ಈ ವರ್ಮಾಬಾಯಿಯ ಮುಖ ಇಷ್ಟು ಕೋಮಲವಾಗಿ,
ಸುಂದರವಾಗಿ, ಆಕರ್ಷಕವಾಗಿ ಇರಲು ಹೇಗೆ ಸಾಧ್ಯ ? ಬಹುಶಃ ದೂರದಿಂದ ಮಾತ್ರ
ಹೀಗೆ ಕಾಣುತ್ತಿರಬಹುದು. ಬಹುಶಃ ಅದು ಅತಿಯಾದ ಮೇಕಪ್ ಇರಬಹುದು.
ಬಹುಶಃ ಬಿಸಿಲಿನಲ್ಲಿ ನಡೆದುಬಂದುದರಿಂದ ತನಗೇ ಕಣ್ಣು ಸರಿಯಾಗಿ
ಕಾಣದಂತಾಗಿವೆಯೋ ಏನೋ. ಬಹುಶಃ...<br>
{{rh|center=* * *}}
{{gap}}“ಸರ್, ಇದು ನಾಳಿನ ಸ್ವಾತಂತ್ರ್ಯ ದಿನೋತ್ಸವದ ಪ್ರೋಗ್ರ್ಯಾಮಿನ ಡೀಟೇಲಾದ
ಪ್ಲ್ಯಾನು. ನಾನು ಮೊದಲು ಇದ್ದೆನಲ್ಲ. ಆ ಸ್ಕೂಲಿನಲ್ಲಿ ಎಲ್ಲಾ ಎಕ್ಸ್ಟ್ರಾಕರಿಕ್ಕುಲರ್
ಅ್ಯಕ್ಟಿವ್ಹಿಟೀಜ್ನ ಪ್ಲ್ಯಾನೂ ನಾನೇ ಮಾಡುತ್ತಿದ್ದೆ. ಎಲ್ಲ ಕಾಂಪಿಟೇಶನ್ಸ್ದಲ್ಲೂ ನನ್ನ
ಬ್ಯಾಚಗೇ ಫಸ್ಟ್ ಪ್ರೈಜ್ ಬರ್ತಿತ್ತು. ಇದು ನೋಡ್ರಿ ಸರಿಯಾಗಿದೆಯೆ ಅಂತ. ನೀವು
ಹೇಳಿದರೆ ಟೀ ಪಾರ್ಟಿಯ ವ್ಯವಸ್ಥೆಯನ್ನೂ ನಾನು ನೋಡಿಕೊಳ್ಳುತ್ತೇನೆ" -ತುಂಬ
ಸಿಂಗಾರಾಗಿ ಸ್ಕೂಲಿಗೆ ಬಂದಿದ್ದ ಆಕೆ ಬಂದೊಡನೆ ಪ್ರಿನ್ಸಿಪಾಲರನ್ನು ಅವರ
ರೂಮಿನಲ್ಲಿ ಕಂಡು ಮಾತನಾಡಿದಳು. ಆತ ಫೈಲಿನಲ್ಲಿ ಮುಖವಿಟ್ಟುಕೊಂಡೇ
ಹೇಳಿದರು. ""ನೀವು ಮಿಸೆಸ್ ವರ್ಮಾ ಅವರನ್ನು ಕನ್ಸಲ್ಟ್ ಮಾಡ್ರಿ. ಈ
ವಿಷಯಗಳಲ್ಲೆಲ್ಲ ಅವರು ಎಕ್ಸ್ಪರ್ಟ್. ಅವರು ಹ್ಞೂ ಅಂದರೆ ಮುಗಿಯಿತು."<br>
{{rh|center=* * *}}
{{gap}}ಸ್ವಾತಂತ್ರ್ಯ ದಿನೋತ್ಸವದಂದು ಹುಡುಗಿಯರಿಂದ ಸ್ವಾಗತಗೀತೆ ಹಾಡಿಸಿದ್ದು,
ಆಶುಭಾಷಣ ಸ್ಪರ್ಧೆ- ವಿವಿಧ ಕ್ರೀಡಾಸ್ಪರ್ಧೆಗಳನ್ನು ನಿರ್ವಹಿಸಿದ್ದು, ಶಿಕ್ಬಕರ ಟೀ
ಪಾರ್ಟಿಯಲ್ಲಿ ಓಡಾಡಿದ್ದು -ಎಲ್ಲ ಮಿಸೆಸ್ ವರ್ಮಾ. ಅವಳ ಮುಖದಲ್ಲಿ ಸದಾ
ನಗೆ. ನಗುವ ಹೆಂಗಸಿನ ಬಗ್ಗೆ ಅದೇನೋ ಗಾದೆಯಿದೆಯಲ್ಲಾ -ರಜನಿ
ನೆನಪಿಸಿಕೊಳ್ಳಲು ಹೆಣಗಿದಳು. ಸಾಲದ್ದಕ್ಕೆ ಶಿಕ್ಬಕರಿಗಾಗಿ ನಡೆದ ಬ್ಯಾಡ್ಮಿಂಟನ್
ಮ್ಯಾಚಿನಲ್ಲಿ ರಜನಿಗೆ ಮಿಸೆಸ್ ವರ್ಮಾಳಿಂದ ಸೋಲು. ರಜನಿಯ ಬ್ಯಾಡ್ಮಿಂಟನ್
ಜೀವನದಲ್ಲಿ ಪ್ರಾಯಶಃ ಮೊದಲ ಸೋಲು.<br>
{{gap}}“ಮಿಸೆಸ್ ವರ್ಮಾಗೆ ಈ ಸೀರೆ ಎಷ್ಟು ಒಪ್ಪುತ್ತದಲ್ರೀ ?"<noinclude><references/></noinclude>
hcq4squ9d9br0hdhq6guqosq2qrtn7a
317999
317998
2026-05-08T06:52:02Z
Pragathi. BH
7585
317999
proofread-page
text/x-wiki
<noinclude><pagequality level="4" user="Pragathi. BH" />
{{rh|center=|left=ಇನ್ನಷ್ಟು ಕತೆಗಳು|ಸಮಾಧಾನ|right=೪೯೯}}</noinclude>
{{gap}}ಲಕ್ಷ್ಯ ಕೊಟ್ಟು ಕೇಳಿದಳು. ಹೌದು ತೀರಾ ಎದುರಿನ ಸಾಲಿನಿಂದ ಬಹಳ ಇಂಪಾದ
ದನಿಯೊಂದು. ಪ್ರಾರ್ಥನೆಯ ಹಾಡಿನ ಒಂದೊಂದೇ ಸಾಲನ್ನು ಬಹಳ
ಭಾವಪೂರಿತವಾಗಿ ಹೇಳುತ್ತಿತ್ತು. ಉಳಿದವರು ಅನುಸರಿಸುತ್ತಿದ್ದರು. ಆಕೆ ಕಾಲೆತ್ತರಿಸಿ
ನೋಡಿದಳು- ಹಾಡುತ್ತಿರುವಾಕೆ ವರ್ಮಾಬಾಯಿ. ಇನ್ನೂ ಕಾಲೆತ್ತರಿಸಿ ನೋಡಿದಾಗ
ಆಕೆಗೆ ವರ್ಮಾಬಾಯಿಯ ಮುಖ ಮೊದಲ ಬಾರಿ ಪೂರಾ ಕಾಣಿಸಿತು. ಆಕೆಗೆ ಒಮ್ಮೆಲೆ
ಅಸ್ವಸ್ಥತೆಯೆನಿಸಿತು. ಈ ವರ್ಮಾಬಾಯಿಯ ಮುಖ ಇಷ್ಟು ಕೋಮಲವಾಗಿ,
ಸುಂದರವಾಗಿ, ಆಕರ್ಷಕವಾಗಿ ಇರಲು ಹೇಗೆ ಸಾಧ್ಯ ? ಬಹುಶಃ ದೂರದಿಂದ ಮಾತ್ರ
ಹೀಗೆ ಕಾಣುತ್ತಿರಬಹುದು. ಬಹುಶಃ ಅದು ಅತಿಯಾದ ಮೇಕಪ್ ಇರಬಹುದು.
ಬಹುಶಃ ಬಿಸಿಲಿನಲ್ಲಿ ನಡೆದುಬಂದುದರಿಂದ ತನಗೇ ಕಣ್ಣು ಸರಿಯಾಗಿ
ಕಾಣದಂತಾಗಿವೆಯೋ ಏನೋ. ಬಹುಶಃ...<br>
{{rh|center=* * *}}
{{gap}}“ಸರ್, ಇದು ನಾಳಿನ ಸ್ವಾತಂತ್ರ್ಯ ದಿನೋತ್ಸವದ ಪ್ರೋಗ್ರ್ಯಾಮಿನ ಡೀಟೇಲಾದ
ಪ್ಲ್ಯಾನು. ನಾನು ಮೊದಲು ಇದ್ದೆನಲ್ಲ. ಆ ಸ್ಕೂಲಿನಲ್ಲಿ ಎಲ್ಲಾ ಎಕ್ಸ್ಟ್ರಾಕರಿಕ್ಕುಲರ್
ಅ್ಯಕ್ಟಿವ್ಹಿಟೀಜ್ನ ಪ್ಲ್ಯಾನೂ ನಾನೇ ಮಾಡುತ್ತಿದ್ದೆ. ಎಲ್ಲ ಕಾಂಪಿಟೇಶನ್ಸ್ದಲ್ಲೂ ನನ್ನ
ಬ್ಯಾಚಗೇ ಫಸ್ಟ್ ಪ್ರೈಜ್ ಬರ್ತಿತ್ತು. ಇದು ನೋಡ್ರಿ ಸರಿಯಾಗಿದೆಯೆ ಅಂತ. ನೀವು
ಹೇಳಿದರೆ ಟೀ ಪಾರ್ಟಿಯ ವ್ಯವಸ್ಥೆಯನ್ನೂ ನಾನು ನೋಡಿಕೊಳ್ಳುತ್ತೇನೆ" -ತುಂಬ
ಸಿಂಗಾರಾಗಿ ಸ್ಕೂಲಿಗೆ ಬಂದಿದ್ದ ಆಕೆ ಬಂದೊಡನೆ ಪ್ರಿನ್ಸಿಪಾಲರನ್ನು ಅವರ
ರೂಮಿನಲ್ಲಿ ಕಂಡು ಮಾತನಾಡಿದಳು. ಆತ ಫೈಲಿನಲ್ಲಿ ಮುಖವಿಟ್ಟುಕೊಂಡೇ
ಹೇಳಿದರು. ""ನೀವು ಮಿಸೆಸ್ ವರ್ಮಾ ಅವರನ್ನು ಕನ್ಸಲ್ಟ್ ಮಾಡ್ರಿ. ಈ
ವಿಷಯಗಳಲ್ಲೆಲ್ಲ ಅವರು ಎಕ್ಸ್ಪರ್ಟ್. ಅವರು ಹ್ಞೂ ಅಂದರೆ ಮುಗಿಯಿತು."<br>
{{rh|center=* * *}}
{{gap}}ಸ್ವಾತಂತ್ರ್ಯ ದಿನೋತ್ಸವದಂದು ಹುಡುಗಿಯರಿಂದ ಸ್ವಾಗತಗೀತೆ ಹಾಡಿಸಿದ್ದು,
ಆಶುಭಾಷಣ ಸ್ಪರ್ಧೆ- ವಿವಿಧ ಕ್ರೀಡಾಸ್ಪರ್ಧೆಗಳನ್ನು ನಿರ್ವಹಿಸಿದ್ದು, ಶಿಕ್ಬಕರ ಟೀ
ಪಾರ್ಟಿಯಲ್ಲಿ ಓಡಾಡಿದ್ದು -ಎಲ್ಲ ಮಿಸೆಸ್ ವರ್ಮಾ. ಅವಳ ಮುಖದಲ್ಲಿ ಸದಾ
ನಗೆ. ನಗುವ ಹೆಂಗಸಿನ ಬಗ್ಗೆ ಅದೇನೋ ಗಾದೆಯಿದೆಯಲ್ಲಾ -ರಜನಿ
ನೆನಪಿಸಿಕೊಳ್ಳಲು ಹೆಣಗಿದಳು. ಸಾಲದ್ದಕ್ಕೆ ಶಿಕ್ಬಕರಿಗಾಗಿ ನಡೆದ ಬ್ಯಾಡ್ಮಿಂಟನ್
ಮ್ಯಾಚಿನಲ್ಲಿ ರಜನಿಗೆ ಮಿಸೆಸ್ ವರ್ಮಾಳಿಂದ ಸೋಲು. ರಜನಿಯ ಬ್ಯಾಡ್ಮಿಂಟನ್
ಜೀವನದಲ್ಲಿ ಪ್ರಾಯಶಃ ಮೊದಲ ಸೋಲು.<br>
{{gap}}“ಮಿಸೆಸ್ ವರ್ಮಾಗೆ ಈ ಸೀರೆ ಎಷ್ಟು ಒಪ್ಪುತ್ತದಲ್ರೀ ?"<noinclude><references/></noinclude>
45xlppn4obi9d0tmt5w2291t15q2j6t
318000
317999
2026-05-08T06:52:49Z
Pragathi. BH
7585
318000
proofread-page
text/x-wiki
<noinclude><pagequality level="4" user="Pragathi. BH" />
{{rh|center=|left=ಇನ್ನಷ್ಟು ಕತೆಗಳು/ ಸಮಾಧಾನ|right=೪೯೯}}</noinclude>
{{gap}}ಲಕ್ಷ್ಯ ಕೊಟ್ಟು ಕೇಳಿದಳು. ಹೌದು ತೀರಾ ಎದುರಿನ ಸಾಲಿನಿಂದ ಬಹಳ ಇಂಪಾದ
ದನಿಯೊಂದು. ಪ್ರಾರ್ಥನೆಯ ಹಾಡಿನ ಒಂದೊಂದೇ ಸಾಲನ್ನು ಬಹಳ
ಭಾವಪೂರಿತವಾಗಿ ಹೇಳುತ್ತಿತ್ತು. ಉಳಿದವರು ಅನುಸರಿಸುತ್ತಿದ್ದರು. ಆಕೆ ಕಾಲೆತ್ತರಿಸಿ
ನೋಡಿದಳು- ಹಾಡುತ್ತಿರುವಾಕೆ ವರ್ಮಾಬಾಯಿ. ಇನ್ನೂ ಕಾಲೆತ್ತರಿಸಿ ನೋಡಿದಾಗ
ಆಕೆಗೆ ವರ್ಮಾಬಾಯಿಯ ಮುಖ ಮೊದಲ ಬಾರಿ ಪೂರಾ ಕಾಣಿಸಿತು. ಆಕೆಗೆ ಒಮ್ಮೆಲೆ
ಅಸ್ವಸ್ಥತೆಯೆನಿಸಿತು. ಈ ವರ್ಮಾಬಾಯಿಯ ಮುಖ ಇಷ್ಟು ಕೋಮಲವಾಗಿ,
ಸುಂದರವಾಗಿ, ಆಕರ್ಷಕವಾಗಿ ಇರಲು ಹೇಗೆ ಸಾಧ್ಯ ? ಬಹುಶಃ ದೂರದಿಂದ ಮಾತ್ರ
ಹೀಗೆ ಕಾಣುತ್ತಿರಬಹುದು. ಬಹುಶಃ ಅದು ಅತಿಯಾದ ಮೇಕಪ್ ಇರಬಹುದು.
ಬಹುಶಃ ಬಿಸಿಲಿನಲ್ಲಿ ನಡೆದುಬಂದುದರಿಂದ ತನಗೇ ಕಣ್ಣು ಸರಿಯಾಗಿ
ಕಾಣದಂತಾಗಿವೆಯೋ ಏನೋ. ಬಹುಶಃ...<br>
{{rh|center=* * *}}
{{gap}}“ಸರ್, ಇದು ನಾಳಿನ ಸ್ವಾತಂತ್ರ್ಯ ದಿನೋತ್ಸವದ ಪ್ರೋಗ್ರ್ಯಾಮಿನ ಡೀಟೇಲಾದ
ಪ್ಲ್ಯಾನು. ನಾನು ಮೊದಲು ಇದ್ದೆನಲ್ಲ. ಆ ಸ್ಕೂಲಿನಲ್ಲಿ ಎಲ್ಲಾ ಎಕ್ಸ್ಟ್ರಾಕರಿಕ್ಕುಲರ್
ಅ್ಯಕ್ಟಿವ್ಹಿಟೀಜ್ನ ಪ್ಲ್ಯಾನೂ ನಾನೇ ಮಾಡುತ್ತಿದ್ದೆ. ಎಲ್ಲ ಕಾಂಪಿಟೇಶನ್ಸ್ದಲ್ಲೂ ನನ್ನ
ಬ್ಯಾಚಗೇ ಫಸ್ಟ್ ಪ್ರೈಜ್ ಬರ್ತಿತ್ತು. ಇದು ನೋಡ್ರಿ ಸರಿಯಾಗಿದೆಯೆ ಅಂತ. ನೀವು
ಹೇಳಿದರೆ ಟೀ ಪಾರ್ಟಿಯ ವ್ಯವಸ್ಥೆಯನ್ನೂ ನಾನು ನೋಡಿಕೊಳ್ಳುತ್ತೇನೆ" -ತುಂಬ
ಸಿಂಗಾರಾಗಿ ಸ್ಕೂಲಿಗೆ ಬಂದಿದ್ದ ಆಕೆ ಬಂದೊಡನೆ ಪ್ರಿನ್ಸಿಪಾಲರನ್ನು ಅವರ
ರೂಮಿನಲ್ಲಿ ಕಂಡು ಮಾತನಾಡಿದಳು. ಆತ ಫೈಲಿನಲ್ಲಿ ಮುಖವಿಟ್ಟುಕೊಂಡೇ
ಹೇಳಿದರು. ""ನೀವು ಮಿಸೆಸ್ ವರ್ಮಾ ಅವರನ್ನು ಕನ್ಸಲ್ಟ್ ಮಾಡ್ರಿ. ಈ
ವಿಷಯಗಳಲ್ಲೆಲ್ಲ ಅವರು ಎಕ್ಸ್ಪರ್ಟ್. ಅವರು ಹ್ಞೂ ಅಂದರೆ ಮುಗಿಯಿತು."<br>
{{rh|center=* * *}}
{{gap}}ಸ್ವಾತಂತ್ರ್ಯ ದಿನೋತ್ಸವದಂದು ಹುಡುಗಿಯರಿಂದ ಸ್ವಾಗತಗೀತೆ ಹಾಡಿಸಿದ್ದು,
ಆಶುಭಾಷಣ ಸ್ಪರ್ಧೆ- ವಿವಿಧ ಕ್ರೀಡಾಸ್ಪರ್ಧೆಗಳನ್ನು ನಿರ್ವಹಿಸಿದ್ದು, ಶಿಕ್ಬಕರ ಟೀ
ಪಾರ್ಟಿಯಲ್ಲಿ ಓಡಾಡಿದ್ದು -ಎಲ್ಲ ಮಿಸೆಸ್ ವರ್ಮಾ. ಅವಳ ಮುಖದಲ್ಲಿ ಸದಾ
ನಗೆ. ನಗುವ ಹೆಂಗಸಿನ ಬಗ್ಗೆ ಅದೇನೋ ಗಾದೆಯಿದೆಯಲ್ಲಾ -ರಜನಿ
ನೆನಪಿಸಿಕೊಳ್ಳಲು ಹೆಣಗಿದಳು. ಸಾಲದ್ದಕ್ಕೆ ಶಿಕ್ಬಕರಿಗಾಗಿ ನಡೆದ ಬ್ಯಾಡ್ಮಿಂಟನ್
ಮ್ಯಾಚಿನಲ್ಲಿ ರಜನಿಗೆ ಮಿಸೆಸ್ ವರ್ಮಾಳಿಂದ ಸೋಲು. ರಜನಿಯ ಬ್ಯಾಡ್ಮಿಂಟನ್
ಜೀವನದಲ್ಲಿ ಪ್ರಾಯಶಃ ಮೊದಲ ಸೋಲು.<br>
{{gap}}“ಮಿಸೆಸ್ ವರ್ಮಾಗೆ ಈ ಸೀರೆ ಎಷ್ಟು ಒಪ್ಪುತ್ತದಲ್ರೀ ?"<noinclude><references/></noinclude>
n41v5zsxy34ir59nigq5rftcyu0zdjf
ಪುಟ:ನಡೆದದ್ದೇ ದಾರಿ.pdf/೫೨೧
104
31794
318024
250456
2026-05-08T08:39:22Z
Pragathi. BH
7585
/* Validated */
318024
proofread-page
text/x-wiki
<noinclude><pagequality level="4" user="Pragathi. BH" /></noinclude>೫೧೪ ನಡೆದದ್ದೇ ದಾರಿ
೫
ಏನಂದೆ ಯಶೂ, ನಿನಗೆ ತಲೆ ಕೆಟ್ಟಿದೆಯೇ ? ರಿಟಾಯರ್ಮೆಂಟ್
ತಗೊಳ್ಳುತ್ತೀಯಾ ? ಆರ್ ಯೂ ಜೋಕಿಂಗ್ ? ಇಂತಹ ಒಳ್ಳೇ ಕೆಲಸ, ಎಷ್ಟು
ಮರ್ಯಾದೆ, ಎಂತಹ ಅಂತಸ್ತು, ಏನೆಲ್ಲಾ ಸೌಲಭ್ಯಗಳು. ನಿನ್ನ ನೌಕರಿ
ರಾಮನಗರದಲ್ಲಿದ್ದರೂ ನಿನ್ನ ಕಡೆ ಕೇಸು ಇದ್ದವರು ಬೆಂಗಳೂರಿನ ಈ ನಮ್ಮ ಮನೆಗೆ
ಏನೆಲ್ಲ ಸಾಮಾನು ತಂದುಕೊಡುತ್ತಾರೆ. ಅಲ್ಲ, ಸಿಟ್ಟಾಗಬೇಡ, ಅವರು ಪ್ರೀತಿಯಿಂದ
ಕೊಟ್ಟದ್ದು ನಾವು ತಗೊಂಡರೇನು ತಪ್ಪು ? ಬೇಡವೆ ? ಸರಿ, ಆಗಲಿ, ಇನ್ನು ಮುಂದೆ
ತಗೊಳ್ಳುವುದಿಲ್ಲ. ಆದರೆ ರಿಟಾಯರ್ಮೆಂಟ್ ತಗೊಳ್ಳೋ ವಿಚಾರ ಮಾತ್ರ
ಮೂರ್ಖತನದ್ದು. ಅದು ಸಾಧ್ಯವಿಲ್ಲ.
{{gap}}ಅಲ್ಲ ಯಶೂ, ಸ್ವಲ್ಪ ವಿಚಾರ ಮಾಡು. ನೀನು ಇಲ್ಲಿದ್ದಾಗ ಸೈಟು ಅಲಾಟ್
ಆಗಿತ್ತಲ್ಲ, ಅಲ್ಲಿ ಮನೆ ಕಟ್ಟಿಸಲು ಹೌಸಿಂಗ್ ಲೋನ್ಗೆ ಅರ್ಜಿ ಹಾಕಿದ್ದೇನೆ. ನಿನ್ನ
ಹೆಸರಿನಲ್ಲೇ ಬೇಗ ಸಿಗುತ್ತದೆ ಅಂತ. ಈಗ ಸ್ಯಾಂಕ್ಶನ್ ಆಗಿದೆ. ಹತ್ತು ಲಕ್ಡ. ಮನೆ
ಕಟ್ಟಿಸಬೇಕು. ಸಾಲವನ್ನೂ ತೀರಿಸಬೇಕಲ್ಲ. ನೀನೇ ನೋಡುತ್ತಿದ್ದೀ, ನಮ್ಮ ಕಾರು
ಹಳೆಯದಾಗಿದೆ. ಹೊಸ ಮಾಡೆಲ್ ಇಂಡಿಕಾ ಬೇಕು ಅಂದಳು ಕೀರ್ತಿ, ಬೇಡ ಟಾಟಾ
ಎಸ್ಟೀಮ್ ಇರಲಿ ಅಂದ ಕಿರಣ. ಆಗಲಿ, ಕಿರಣ ನಿನ್ನ ಪ್ರೀತಿಯ ಮಗನಲ್ಲವೇ,
ಅವನಿಷ್ಟದಂತೆಯೇ ಆಗಲಿ, ಅಂತ ಎಸ್ಟೀಮ ಬುಕ್ ಮಾಡಿದ್ದೇನೆ. ಮುಂದಿನ ವಾರವೇ
ಬರುತ್ತದೆ. ಹಾ, ನಿನ್ನ ರಜೆ ಇನ್ನೂ ಮುಗಿದಿರುವುದಿಲ್ಲ. ಹೊಸ ಕಾರು ನಿನ್ನಿಂದಲೇ
ಓಪನಿಂಗ್ ಆಗಬೇಕಲ್ಲ.
{{gap}}ಮತ್ತೆ ನಿನಗೆ ಗೊತ್ತೇ ಇದೆ. ತಂಗಿಯ ಲಗ್ನಕ್ಕೆ ಮಾಡಿದ ಸಾಲ ಇನ್ನೂ ಇದೆ.
ಈಗೇನೋ ಆಕೆ ಹೆರಿಗೆಗೆ ಬರುತ್ತಾಳೆ ಅನ್ನುತ್ತಿದ್ದಳು ಅಮ್ಮ. ಆಕೆಯ ಮಗುವಿಗೂ
ಬಂಗಾರ-ಸಿಂಗಾರ ಅಂತ ಕೊಡಬೇಕಲ್ಲ. ನಮ್ಮ ಪ್ರೆಸ್ಟೀಜ್ ಪ್ರಶ್ನೆ.
{{gap}}ನೀನು ಇಮೋಶನಲ್ ಆಗಬೇಡ ಯಶೂ, ಪ್ರ್ಯಾಕ್ಟಿಕಲ್ ಆಗಿ ವಿಚಾರ ಮಾಡು.
ಮನೆ ಬಿಟ್ಟು ಸ್ವಲ್ಪ ದೂರ ಇದ್ದದ್ದಕ್ಕೆ ಇಷ್ಟು ಬೇಜಾರು ಮಾಡಿಕೊಂಡರೆ ಹೇಗೆ ?
ದೂರವಾದರೂ ಎಂತಹ ದೂರ ? ಒಂದು ದಿನದ ಪ್ರವಾಸ. ನೀನು ಬಾ ಅಂದ ಕೂಡಲೆ
ನಾನು ಹಾರಿ ಬರುವೆ ನಿನ್ನ ಹತ್ತಿರ. ಎಷ್ಟೋ ಹೆಣ್ಣುಮಕ್ಕಳು ಈಗ ವರ್ಷಾನುಗಟ್ಟಲೆ
ಪರದೇಶಗಳಿಗೂ ಹೋಗುತ್ತಾರೆ. ನೌಕರಿಗಾಗಿ ನಾಲ್ಕಾರು ವರ್ಷ ನೀನು ಮನೆ ಬಿಟ್ಟು
ಪರಊರಿಗೆ ಹೋದರೇನಂತೆ ? ನೀನಂತೂ ಬಹಳ ಸೋಶಿಯಲ್ ಇದ್ದೀಯಾ.
ಹೋದಲ್ಲೆಲ್ಲ ನಿನಗೆ ಫ್ರೆಂಡ್ಸ್ ಆಗುತ್ತಾರೆ, ಆ-ಈ ಕಾರ್ಯಕ್ರಮ ಅಂತ ಇರುತ್ತವೆ.
ಹೇಗೋ ಟೈಮು ಕಳೆಯುತ್ತದೆ. ನೀನು ಹೇಗಾದರೂ ಅಡ್ಜಸ್ಟ್ ಮಾಡಿಕೊಳ್ಳಲು
ಕಲಿತುಕೋ.<noinclude><references/></noinclude>
ii8hsx2ieyiityzfmry0gov10fgxejh
318086
318024
2026-05-08T10:02:19Z
Pragathi. BH
7585
318086
proofread-page
text/x-wiki
<noinclude><pagequality level="4" user="Pragathi. BH" />{{rh|center=|left=೫೧೪|right=ನಡೆದದ್ದೇ ದಾರಿ}}</noinclude>
{{center|೫}}
ಏನಂದೆ ಯಶೂ, ನಿನಗೆ ತಲೆ ಕೆಟ್ಟಿದೆಯೇ ? ರಿಟಾಯರ್ಮೆಂಟ್
ತಗೊಳ್ಳುತ್ತೀಯಾ ? ಆರ್ ಯೂ ಜೋಕಿಂಗ್ ? ಇಂತಹ ಒಳ್ಳೇ ಕೆಲಸ, ಎಷ್ಟು
ಮರ್ಯಾದೆ, ಎಂತಹ ಅಂತಸ್ತು, ಏನೆಲ್ಲಾ ಸೌಲಭ್ಯಗಳು. ನಿನ್ನ ನೌಕರಿ
ರಾಮನಗರದಲ್ಲಿದ್ದರೂ ನಿನ್ನ ಕಡೆ ಕೇಸು ಇದ್ದವರು ಬೆಂಗಳೂರಿನ ಈ ನಮ್ಮ ಮನೆಗೆ
ಏನೆಲ್ಲ ಸಾಮಾನು ತಂದುಕೊಡುತ್ತಾರೆ. ಅಲ್ಲ, ಸಿಟ್ಟಾಗಬೇಡ, ಅವರು ಪ್ರೀತಿಯಿಂದ
ಕೊಟ್ಟದ್ದು ನಾವು ತಗೊಂಡರೇನು ತಪ್ಪು ? ಬೇಡವೆ ? ಸರಿ, ಆಗಲಿ, ಇನ್ನು ಮುಂದೆ
ತಗೊಳ್ಳುವುದಿಲ್ಲ. ಆದರೆ ರಿಟಾಯರ್ಮೆಂಟ್ ತಗೊಳ್ಳೋ ವಿಚಾರ ಮಾತ್ರ
ಮೂರ್ಖತನದ್ದು. ಅದು ಸಾಧ್ಯವಿಲ್ಲ.
{{gap}}ಅಲ್ಲ ಯಶೂ, ಸ್ವಲ್ಪ ವಿಚಾರ ಮಾಡು. ನೀನು ಇಲ್ಲಿದ್ದಾಗ ಸೈಟು ಅಲಾಟ್
ಆಗಿತ್ತಲ್ಲ, ಅಲ್ಲಿ ಮನೆ ಕಟ್ಟಿಸಲು ಹೌಸಿಂಗ್ ಲೋನ್ಗೆ ಅರ್ಜಿ ಹಾಕಿದ್ದೇನೆ. ನಿನ್ನ
ಹೆಸರಿನಲ್ಲೇ ಬೇಗ ಸಿಗುತ್ತದೆ ಅಂತ. ಈಗ ಸ್ಯಾಂಕ್ಶನ್ ಆಗಿದೆ. ಹತ್ತು ಲಕ್ಡ. ಮನೆ
ಕಟ್ಟಿಸಬೇಕು. ಸಾಲವನ್ನೂ ತೀರಿಸಬೇಕಲ್ಲ. ನೀನೇ ನೋಡುತ್ತಿದ್ದೀ, ನಮ್ಮ ಕಾರು
ಹಳೆಯದಾಗಿದೆ. ಹೊಸ ಮಾಡೆಲ್ ಇಂಡಿಕಾ ಬೇಕು ಅಂದಳು ಕೀರ್ತಿ, ಬೇಡ ಟಾಟಾ
ಎಸ್ಟೀಮ್ ಇರಲಿ ಅಂದ ಕಿರಣ. ಆಗಲಿ, ಕಿರಣ ನಿನ್ನ ಪ್ರೀತಿಯ ಮಗನಲ್ಲವೇ,
ಅವನಿಷ್ಟದಂತೆಯೇ ಆಗಲಿ, ಅಂತ ಎಸ್ಟೀಮ ಬುಕ್ ಮಾಡಿದ್ದೇನೆ. ಮುಂದಿನ ವಾರವೇ
ಬರುತ್ತದೆ. ಹಾ, ನಿನ್ನ ರಜೆ ಇನ್ನೂ ಮುಗಿದಿರುವುದಿಲ್ಲ. ಹೊಸ ಕಾರು ನಿನ್ನಿಂದಲೇ
ಓಪನಿಂಗ್ ಆಗಬೇಕಲ್ಲ.
{{gap}}ಮತ್ತೆ ನಿನಗೆ ಗೊತ್ತೇ ಇದೆ. ತಂಗಿಯ ಲಗ್ನಕ್ಕೆ ಮಾಡಿದ ಸಾಲ ಇನ್ನೂ ಇದೆ.
ಈಗೇನೋ ಆಕೆ ಹೆರಿಗೆಗೆ ಬರುತ್ತಾಳೆ ಅನ್ನುತ್ತಿದ್ದಳು ಅಮ್ಮ. ಆಕೆಯ ಮಗುವಿಗೂ
ಬಂಗಾರ-ಸಿಂಗಾರ ಅಂತ ಕೊಡಬೇಕಲ್ಲ. ನಮ್ಮ ಪ್ರೆಸ್ಟೀಜ್ ಪ್ರಶ್ನೆ.<br />
{{gap}}ನೀನು ಇಮೋಶನಲ್ ಆಗಬೇಡ ಯಶೂ, ಪ್ರ್ಯಾಕ್ಟಿಕಲ್ ಆಗಿ ವಿಚಾರ ಮಾಡು.
ಮನೆ ಬಿಟ್ಟು ಸ್ವಲ್ಪ ದೂರ ಇದ್ದದ್ದಕ್ಕೆ ಇಷ್ಟು ಬೇಜಾರು ಮಾಡಿಕೊಂಡರೆ ಹೇಗೆ ?
ದೂರವಾದರೂ ಎಂತಹ ದೂರ ? ಒಂದು ದಿನದ ಪ್ರವಾಸ. ನೀನು ಬಾ ಅಂದ ಕೂಡಲೆ
ನಾನು ಹಾರಿ ಬರುವೆ ನಿನ್ನ ಹತ್ತಿರ. ಎಷ್ಟೋ ಹೆಣ್ಣುಮಕ್ಕಳು ಈಗ ವರ್ಷಾನುಗಟ್ಟಲೆ
ಪರದೇಶಗಳಿಗೂ ಹೋಗುತ್ತಾರೆ. ನೌಕರಿಗಾಗಿ ನಾಲ್ಕಾರು ವರ್ಷ ನೀನು ಮನೆ ಬಿಟ್ಟು
ಪರಊರಿಗೆ ಹೋದರೇನಂತೆ ? ನೀನಂತೂ ಬಹಳ ಸೋಶಿಯಲ್ ಇದ್ದೀಯಾ.
ಹೋದಲ್ಲೆಲ್ಲ ನಿನಗೆ ಫ್ರೆಂಡ್ಸ್ ಆಗುತ್ತಾರೆ, ಆ-ಈ ಕಾರ್ಯಕ್ರಮ ಅಂತ ಇರುತ್ತವೆ.
ಹೇಗೋ ಟೈಮು ಕಳೆಯುತ್ತದೆ. ನೀನು ಹೇಗಾದರೂ ಅಡ್ಜಸ್ಟ್ ಮಾಡಿಕೊಳ್ಳಲು
ಕಲಿತುಕೋ.<noinclude><references/></noinclude>
kh636burxc3poixslupfkbpgpfxymnq
ಪುಟ:ನಡೆದದ್ದೇ ದಾರಿ.pdf/೫೨೩
104
31799
318087
250435
2026-05-08T10:03:04Z
Pragathi. BH
7585
/* Validated */
318087
proofread-page
text/x-wiki
<noinclude><pagequality level="4" user="Pragathi. BH" /></noinclude>೫೧೬ ನಡೆದದ್ದೇ ದಾರಿ
'''ಒಂದು ಗಿಡ, ಒಂದು ಬಾವಿ'''
{{gap}}ನಿನಗೆ ನೆನಪಿದೆಯೆ, ಐವತ್ತು ವರ್ಷಗಳ ಹಿಂದೆ ಈ ದೇಶಕ್ಕೆ ಸ್ವಾತಂತ್ರ್ಯ ಬಂದ
ದಿನ? ಊರಲ್ಲಿನ ಪಟಾಕಿ ಸುಡುವ ಸಂಭ್ರಮ, ಸಿಹಿ ಹಂಚುವ ಹುರುಪು, ಪರಸ್ಪರ
ಅಭಿನಂದಿಸಿಕೊಳ್ಳುವ ಆನಂದ, ಆ ಎಲ್ಲ ಗದ್ದಲ ಇಲ್ಲಿಯ ವರೆಗೂ ಕೇಳಿ ಬರುತ್ತಿತ್ತು.
ನಾನು ಕಿವಿ ನಿಮಿರಿಸಿ ಕೇಳಿ ಸಂತೋಷ ಪಡುತ್ತಾ ಇದ್ದೆ. ಕೆಲ ದಿನಗಳ ಹಿಂದೆಯಷ್ಟೆ
ಊರಲ್ಲಿ ಸ್ವಾತಂತ್ರ್ಯಕ್ಕಾಗಿ ಚಳುವಳಿ ನಡೆದಿತ್ತು. ನಾಯಕರು ಬರುತ್ತಿದ್ದರು. ಭಾಷಣ
ಮಾಡುತ್ತಿದ್ದರು. ಕಡಪಾ ಮೈದಾನದಲ್ಲಿ ಮಾಡಿದ ಭಾಷಣಗಳು ಧ್ವನಿ ವರ್ಧಕದ
ಮೂಲಕ ಊರಾಚೆಯ ಈ ಪ್ರದೇಶದ ವರೆಗೂ ಕೇಳಿ ಬಂದು, ನನ್ನ ಕಲ್ಲುಗಳಲ್ಲೂ
ಸ್ಫೂರ್ತಿ ಉಕ್ಕಿಸುತ್ತಿದ್ದಪು. ರಾಷ್ಟ್ರಪಿತ ಈ ಊರಿಗೆ ಭೇಟಿ ನೀಡಿದ ನೆನಪಿಗಾಗಿಯೇ
ಊರಿನಿಂದ ದೂರವಿರುವ ಈ ಪ್ರದೇಶದ ಜನರಿಗೆ ಅನುಕೂಲವಾಗಲೆಂದು ನನ್ನನ್ನು
ನಿಯಮಿಸಿದರು. ನನ್ನ ಸುತ್ತೆಲ್ಲ ಹಸಿರು. ಅಲ್ಲೊಂದು ಇಲ್ಲೊಂದು ಕೆಂಪು ಹಂಚಿನ
ಮನೆಗಳು. ನಡುವೆ ಕೆಂಪು ಮಣ್ಣಿನ ಕಾಲುದಾರಿ. ಇಂಥ ನಾಲ್ಕು ತೆಳುವಾದ ದಾರಿಗಳು
ನನ್ನೆದುರೇ ಕೂಡುತ್ತಿದ್ದವು. ಈ ಕೂಟದ ಆಚೆ ಬದಿಗೆ ನಿನ್ನನ್ನು ತಂದು ನೆಟ್ಟರು, ಅಂದು
ನಮ್ಮ ದೇಶ ಸ್ವತಂತ್ರವಾದ ದಿನ. ನೀನು ಪುಟ್ಟದಾಗಿ, ಮಾಟವಾಗಿ ಗೇಣುದ್ದ ಮಾತ್ರ
ಇದ್ದೆ. ಎಷ್ಟು ನಾಜೂಕಾಗಿದ್ದೆ. ಈಚೆ ಬದಿಯಿಂದ ನಾನು ನಿನ್ನನ್ನು ನೋಡುತ್ತಲೇ
ಇದ್ದೆ. ನೀನೋ ಎರಡು ದಿನ ತಗ್ಗಿಸಿದ ತಲೆಯನ್ನು ಎತ್ತಿರಲೇ ಇಲ್ಲ. ನಿನ್ನನ್ನು
ಮಾತಾಡಿಸಲು ನಾನೆಷ್ಟೋ ಬಾರಿ ಪ್ರಯತ್ನಿಸಿದೆ. ಕೂಗಿ ಕರೆದೆ. ಸಿಳ್ಳು ಹಾಕಿದೆ.
ಊಹ್ಞೂ. ನಂತರ ಆ ರಾತ್ರಿ ಮಳೆ ಸುರಿಯಿತು. ಅಬ್ಬ, ಐವತ್ತು ವರ್ಷಗಳ ಹಿಂದಿನ
ಧಾರವಾಡದ ಮಳೆ ಹೇಗಿರುತ್ತಿತ್ತೆಂದು ನಿನಗೆ ನೆನಪಿರಬೇಕು. ನೆಲವನ್ನೂ,
ನೆಲದಾಳವನ್ನೂ ಮನವನ್ನೂ ಮನದಾಳವನ್ನೂ ತೋಯಿಸಿ ತಂಪುಗೊಳಿಸುತ್ತಿದ್ದ
ಜೀವದಾಯಿನಿಯಾಗಿದ್ದ ಚೈತನ್ಯದಾಯಿನಿಯಾಗಿದ್ದ ಮಳೆ. ನನ್ನ ಮೈ-ಮನಸ್ಸು
ಅಕ್ಷರಶಃ ತುಂಬಿಬಂದವು. ಮುಂಜಾನೆ ನಸುಕಿನಲ್ಲೆದ್ದು ನೋಡಿದೆ, ಮೊದಲ ಬಾರಿಗೆ
ನೀನು ತಲೆಯೆತ್ತಿ ನಗುತ್ತ ನಿಂತಿದ್ದೆ. ನನಗೆಷ್ಟು ಖುಶಿಯಾಯಿತು ಗೊತ್ತೆ ?
{{gap}}ಹಾಗೆ ಸುರುವಾಗಿದ್ದ ನಮ್ಮಿಬ್ಬರ ಗೆಳೆತನದ ಪ್ರಾರಂಭದ ಆ ದಿನಗಳು ಬಹಳ<noinclude><references/></noinclude>
o5eo5m74wxcjiz2gtpsjc7myoarl08z
318091
318087
2026-05-08T10:18:33Z
Pragathi. BH
7585
318091
proofread-page
text/x-wiki
<noinclude><pagequality level="4" user="Pragathi. BH" />{{rh|center=|left=೫೧೬|right=ನಡೆದದ್ದೇ ದಾರಿ}}</noinclude>
{{center|'''ಒಂದು ಗಿಡ, ಒಂದು ಬಾವಿ'''}}
{{gap}}ನಿನಗೆ ನೆನಪಿದೆಯೆ, ಐವತ್ತು ವರ್ಷಗಳ ಹಿಂದೆ ಈ ದೇಶಕ್ಕೆ ಸ್ವಾತಂತ್ರ್ಯ ಬಂದ
ದಿನ? ಊರಲ್ಲಿನ ಪಟಾಕಿ ಸುಡುವ ಸಂಭ್ರಮ, ಸಿಹಿ ಹಂಚುವ ಹುರುಪು, ಪರಸ್ಪರ
ಅಭಿನಂದಿಸಿಕೊಳ್ಳುವ ಆನಂದ, ಆ ಎಲ್ಲ ಗದ್ದಲ ಇಲ್ಲಿಯ ವರೆಗೂ ಕೇಳಿ ಬರುತ್ತಿತ್ತು.
ನಾನು ಕಿವಿ ನಿಮಿರಿಸಿ ಕೇಳಿ ಸಂತೋಷ ಪಡುತ್ತಾ ಇದ್ದೆ. ಕೆಲ ದಿನಗಳ ಹಿಂದೆಯಷ್ಟೆ
ಊರಲ್ಲಿ ಸ್ವಾತಂತ್ರ್ಯಕ್ಕಾಗಿ ಚಳುವಳಿ ನಡೆದಿತ್ತು. ನಾಯಕರು ಬರುತ್ತಿದ್ದರು. ಭಾಷಣ
ಮಾಡುತ್ತಿದ್ದರು. ಕಡಪಾ ಮೈದಾನದಲ್ಲಿ ಮಾಡಿದ ಭಾಷಣಗಳು ಧ್ವನಿ ವರ್ಧಕದ
ಮೂಲಕ ಊರಾಚೆಯ ಈ ಪ್ರದೇಶದ ವರೆಗೂ ಕೇಳಿ ಬಂದು, ನನ್ನ ಕಲ್ಲುಗಳಲ್ಲೂ
ಸ್ಫೂರ್ತಿ ಉಕ್ಕಿಸುತ್ತಿದ್ದಪು. ರಾಷ್ಟ್ರಪಿತ ಈ ಊರಿಗೆ ಭೇಟಿ ನೀಡಿದ ನೆನಪಿಗಾಗಿಯೇ
ಊರಿನಿಂದ ದೂರವಿರುವ ಈ ಪ್ರದೇಶದ ಜನರಿಗೆ ಅನುಕೂಲವಾಗಲೆಂದು ನನ್ನನ್ನು
ನಿಯಮಿಸಿದರು. ನನ್ನ ಸುತ್ತೆಲ್ಲ ಹಸಿರು. ಅಲ್ಲೊಂದು ಇಲ್ಲೊಂದು ಕೆಂಪು ಹಂಚಿನ
ಮನೆಗಳು. ನಡುವೆ ಕೆಂಪು ಮಣ್ಣಿನ ಕಾಲುದಾರಿ. ಇಂಥ ನಾಲ್ಕು ತೆಳುವಾದ ದಾರಿಗಳು
ನನ್ನೆದುರೇ ಕೂಡುತ್ತಿದ್ದವು. ಈ ಕೂಟದ ಆಚೆ ಬದಿಗೆ ನಿನ್ನನ್ನು ತಂದು ನೆಟ್ಟರು, ಅಂದು
ನಮ್ಮ ದೇಶ ಸ್ವತಂತ್ರವಾದ ದಿನ. ನೀನು ಪುಟ್ಟದಾಗಿ, ಮಾಟವಾಗಿ ಗೇಣುದ್ದ ಮಾತ್ರ
ಇದ್ದೆ. ಎಷ್ಟು ನಾಜೂಕಾಗಿದ್ದೆ. ಈಚೆ ಬದಿಯಿಂದ ನಾನು ನಿನ್ನನ್ನು ನೋಡುತ್ತಲೇ
ಇದ್ದೆ. ನೀನೋ ಎರಡು ದಿನ ತಗ್ಗಿಸಿದ ತಲೆಯನ್ನು ಎತ್ತಿರಲೇ ಇಲ್ಲ. ನಿನ್ನನ್ನು
ಮಾತಾಡಿಸಲು ನಾನೆಷ್ಟೋ ಬಾರಿ ಪ್ರಯತ್ನಿಸಿದೆ. ಕೂಗಿ ಕರೆದೆ. ಸಿಳ್ಳು ಹಾಕಿದೆ.
ಊಹ್ಞೂ. ನಂತರ ಆ ರಾತ್ರಿ ಮಳೆ ಸುರಿಯಿತು. ಅಬ್ಬ, ಐವತ್ತು ವರ್ಷಗಳ ಹಿಂದಿನ
ಧಾರವಾಡದ ಮಳೆ ಹೇಗಿರುತ್ತಿತ್ತೆಂದು ನಿನಗೆ ನೆನಪಿರಬೇಕು. ನೆಲವನ್ನೂ,
ನೆಲದಾಳವನ್ನೂ ಮನವನ್ನೂ ಮನದಾಳವನ್ನೂ ತೋಯಿಸಿ ತಂಪುಗೊಳಿಸುತ್ತಿದ್ದ
ಜೀವದಾಯಿನಿಯಾಗಿದ್ದ ಚೈತನ್ಯದಾಯಿನಿಯಾಗಿದ್ದ ಮಳೆ. ನನ್ನ ಮೈ-ಮನಸ್ಸು
ಅಕ್ಷರಶಃ ತುಂಬಿಬಂದವು. ಮುಂಜಾನೆ ನಸುಕಿನಲ್ಲೆದ್ದು ನೋಡಿದೆ, ಮೊದಲ ಬಾರಿಗೆ
ನೀನು ತಲೆಯೆತ್ತಿ ನಗುತ್ತ ನಿಂತಿದ್ದೆ. ನನಗೆಷ್ಟು ಖುಶಿಯಾಯಿತು ಗೊತ್ತೆ ?
{{gap}}ಹಾಗೆ ಸುರುವಾಗಿದ್ದ ನಮ್ಮಿಬ್ಬರ ಗೆಳೆತನದ ಪ್ರಾರಂಭದ ಆ ದಿನಗಳು ಬಹಳ<noinclude><references/></noinclude>
kjedvrmezb97ikbx1nc6xcje4s89mp2
ಪುಟ:ನಡೆದದ್ದೇ ದಾರಿ.pdf/೫೧೦
104
31899
318006
274784
2026-05-08T07:07:24Z
Pragathi. BH
7585
/* Validated */
318006
proofread-page
text/x-wiki
<noinclude><pagequality level="4" user="Pragathi. BH" />{{rh|center=|left= ಇನ್ನಷ್ಟು ಕತೆಗಳು/ಸಮಾಧಾನ|right= ೫೦೩}}</noinclude>ರಿಪೋರ್ಟ್ ಬರೆದರೆಂದೂ ಎಲ್ಲ ವರ್ಮಾ ಮ್ಯಾಡಮ್ನ ಪ್ರಭಾವವೆಂದೂ ಸ್ಟಾಫ್ರೂಮಿನಲ್ಲಿ ಗುಜುಗುಜು. ಸಂಜೆ ಸ್ಕೂಲು ಬಿಡುವ ಹೋತ್ತಿಗೆ ವರ್ಮಾಳನ್ನು ಕರೆದೊಯ್ಯಲು ಬಂದ ನೀಲಿ ಮರ್ಸಿಡಿಸ್ನಲ್ಲೇ ಇನ್ಸ್ಪೆಕ್ಟರೂ ಭರ್ರ್....</br>
{{rh|center=* * *}}
{{gap}}ಆ ರಾತ್ರಿ ರಜನಿ ಗಂಡನಿಗೆ ಬರೆದಳು:"ನನಗಿನ್ನು ಇಲ್ಲಿ ಇರಲು ಆಗುವುದಿಲ್ಲ.ಇಲ್ಲಿ ಬಂದಾಗಿನಿಂದ ನನಗೆ ಮೈಯಲ್ಲಿ ಒಂದು ದಿನವೂ ನೆಟ್ಟಗಿಲ್ಲ.ಸದಾ ತಲೆನೋವು, ಸುಸ್ತು,ಬೇಸರ.ನಮ್ಮ ಸ್ಕೂಲಿನ ಜನ ಬಹಳ ಇಮ್ಮೋರಲ್ ಆಗಿದ್ದಾರೆ.ಸ್ಕೂಲಿಗೆ ಸ್ವಲ್ಪವೂ ಒಳ್ಳೆಯ ಹೆಸರಲ್ಲಿ.ನಾನು ಮುಂದಿನ ವಾರದಿಂದ ರಜೆ ಹಾಕುತ್ತೇನೆ.ನಿಮ್ಮ ಆರ್ಡರ್ ಬರುವುದು ಇನ್ನೂ ಎಷ್ಟು ದಿನವೋ ಏನೋ.ನಾನು ಬಂದುಬಿಡುತ್ತೇನೆ. ನನಗೇಕೋ ನೌಕರಿಯೇ ಬೇಸರವಾಗಿದೆ.ನಿಮ್ಮ ಬಹಳ ದಿನಗಳ ಇಚ್ಛೆಯಂತೆ ಇನ್ನು ನಾನು ನೌಕರಿಗೆ ರಾಜೀನಾಮೆ ಕೊಟ್ಟುಬಿಟ್ಟು ಮನೆ ನೋಡಿಕೊಂಡಿರುತ್ತೇನೆ.ಒಟ್ಟು ನನ್ನ ಮನಸ್ಸಿನ ಸ್ವಾಸ್ಥ್ಯವೇ ತಪ್ಪಿಹೋಗಿದೇರೀ.ಎಂದೂ ಹೀಗಾಗಿರಲಿಲ್ಲ...."</br>
{{rh|center=* * *}}
{{center|೪}}
{{gap}}ನಾಲ್ಕು ದಿನಗಳ ನಂತರ ಒಮ್ಮೆ ಅದೇ ಬೇಸರದಲ್ಲೇ ರಜನಿ ಹುಡುಗರ ಟ್ಯುಟೋರಿಯಲ್ಸ್ ತಿದ್ದುತ್ತ ಸ್ಟಾಫ್ ರೂಮಿನಲ್ಲಿ ಕೂತಿದ್ದಳು.ಎದುರಿಗೇ ಪೇಪರೋದುತ್ತ ಕೂತಿದ್ದ ಮಿಸೆಸ್ ವರ್ಮಾಳ ಕಡೆ ಬೇಕೆಂದೇ ನೋಡದೆ,ಆಚೆಯ ಟೇಬಲಿಗೆ ಕೂತಿದ್ದ ಅಲಮೇಲಮ್ಮ ಮ್ಯಾಡಂ ಜೊತೆ ಮಾತಾಡುತ್ತ ಕೆಲಸ ನಡೆಸಿದ್ದಳು.ಅವಳಿಗೇಕೋ ಇತ್ತೀಚೆ ವರ್ಮಾ ಉಸಿರಾಡಿಸಿದ ಗಾಳಿಯೇ ಉಸಿರುಗಟ್ಟಿಸುತ್ತಿತ್ತು.</br>
{{gap}}"ಬಾಯೀ ಸಾಬ,ರಾವ್ಸಹೇಬ್ರ ಫೋನು ಬಂದೈತೆ."ಪ್ಯೂನ್ನ ಧ್ವನಿ ಕೇಳಿ ಮೂವರು ಒಮ್ಮೆಲೆ ತಲೆಯೆತ್ತಿ ನೋಡಿದರು.ಯಾರಿಗೆ ಫೋನು ಅಂತ ರಜನಿ ಕೇಳಬೇಕೆಂದುಕೊಳ್ಳುವಷ್ಟರಲ್ಲಿ ವರ್ಮಾ ತಟ್ಟನೆ ಎದ್ದು ಓಡುತ್ತಲೆ ಆತನನ್ನು ಹಿಂದೆ ಹಾಕಿ ಹೊರಗೆ ಹೋದಳು.</br>
{{gap}}ಒಂದು ಕ್ಷಣದ ಮೌನದ ನಂತರ ತಡೆಯದೆ ರಜನಿ ಕೇಳಿದಳು,"ಅಲ್ರೀ ಅಲಮೇಲಮ್ಮ,ಈ ರಾವ್ ಸಾಹೇಬ ಯಾರು?"ಓದುತ್ತಿದ್ದ ಪುಸ್ತಕವನ್ನು ಮೂಚ್ಚಿಟ್ಟುಬಿಟ್ಟು ರಾಗವಾಗಿ ಅಕಳಿಸತ್ತ ಅಲಮೇಲಮ್ಮ ಹೇಳಿದಳು:"ಅದೇ ವರ್ಮಾ ಬಾಯಿನ್ನ ದಿನಾ ಕಾರ್ನಲ್ಲಿ ಕಳಿಸಲು,ಕರಕೊಂಡು ಹೋಗಲು ಬರ್ತಾರಲ್ಲ. ಆ ಉದ್ದನೆಯ ಹ್ಯಾಂಡ್ಸಮ್ ಮನುಷ್ಯ,ನೀವು ನೋಡಿಲ್ಲವೇ?"<noinclude><references/></noinclude>
7x9ebuem0ofrddlh2wq12egjevt7bis
ಪುಟ:ನಡೆದದ್ದೇ ದಾರಿ.pdf/೪೯೬
104
31905
318088
85515
2026-05-08T10:04:08Z
Shreelatha.Halemane
7642
/* Proofread */
318088
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=|right=೪೮೯}}
{{center|'''ಸೋನಿಯಾ'''}}
{{gap}}"A little boy is a little boy, but a little girl is a little
mother."
{{gap}}ನಿಜವಾಗಿಯೂ ಹೌದೆ?
{{center|೧}}
{{gap}}ಸಂಜೆ ಐದೂವರೆಯ ಸಮಯ.ಕಾಲೇಜಿನಿಂದ ಆಗಲೇ ಬಂದಿದ್ದ ನಾನು ಸ್ಕೂಲಿಂದ ಬರಲಿರುವ ಮಕ್ಕಳಿಗಾಗಿ ತಿಂಡಿ
ಮಾಡುವ ಕೆಲಸ್ದ್ದಲ್ಲಿದ್ದೆ.ಹೊರಗೆ ಸ್ಕೂಲಿನ ರಿಕ್ಶಾದ ಹಾರ್ನ್ ದೊಂಸದಿಗೆ ಮಕ್ಕಳ ಗಲಾಟೆ ಕೇಳಿಸಿತು.ಬೂಟುಗಳ ಟಪ್ ಟಪ್,ಬ್ಯಗುಗಳ ಧಪ್ ಧಪ್,ಜೊತೆಗೆ"ಅಮ್ಮಾ ಇವತ್ತು ಸ್ಕೂಲಿನಾಗ ಏನಾತು ಗೊತ್ತೇನು?"
{{gap}}"ಏನಾತು ಚಿನ್ನ?"
{{gap}}ದಿನವೂ ಸ್ಕೂಲಿನೊಂದ ಬರುತ್ತಿದಂತೆಯೇ ತುಂಬ ಉದ್ವೇಗ,ಉತ್ಸಾಹ ಅವಸರದಿಂದ ವರದಿಯೊಪ್ಪಿಉಬುದು ನನ್ನ ಮಗಳು ಮಿಲಿಯ ರೂಡಿ.ಕೆಲಸ ಮಾಡುತ್ತಲೆ ಅವಳಿಗೆ ಕಿವಿಗೊಟ್ಟು,ನಡು ನಡುವೆ ಒಂದೊಂದು ಮಾತಾಡುವುದು ನನ್ನ ಪರಿಪಾಟ.
{{gap}}"ಇವತ್ತು ಕನ್ನಡ ಪಿರಿಯಡ್ ಇದ್ದಾಗ ಸೋನಿಯಾ ಬೋರ್ಡಿನ ಮ್ಯಾಲ ಟೀಚರ್ ಚಿತ್ರ ತಗೆದು ನ್ಯೂಜ್ ರೀಡರ್ ಅಂತ ಬರೆದಿದ್ದಳು.ಟೀಚರ್ ಬಂದು ನೋಡಿ ಸಿಟ್ಟಾಗಿ ಎಲ್ಲರನ್ನು ಸ್ಟ್ಯಂದಡಪ್ ಆನ್ ದ್ ಬೆಂಚ್ ಮಾಡಿಸಿದ್ರು"
{{gap}}ಅವರ ಕಾನ್ವೆಂಟಿಅಲ್ಲಿ ಕಲಿಸುವ ಒಬ್ಬ ಮೇಡಮ್ ಬರೀ ಸುದ್ದಿ ಓದಿದಂತೆ ಪುಸ್ತಕ ಓದಿ ಎದ್ದು ಹೊರಟುಹೋಗುವುದು ನನಗೆ ಗೊತಿತ್ತು.ಆಕೆಯ ಬಾಬ್ ಕಟ್,ಎದ್ದು ಲಿಪ್ಸ್ಟಿಕ್,ಚಿತ್ರ ವಿವಿತ್ರ ಅಲಂಕಾರ ನೆನೆಪಾಗಿ ನಗು ಬಂದಿತು.
{{gap}}"ಅದರ್ ಸ್ಕೂಲು ಮ್ಯಾಲ ಆ ಚಿತ್ರಾ ತಗದದ್ದು ಸೋನಿಯಾನೆ ಅಂತ ಗೊತ್ತಾಗಿ ಆಕೆಗೆ ಒಂದು ತಾಸು ನೀಲ್ ಡೂನ್ ಪನಿಶ್ ಮೆಂಟ್ ಕೊಟ್ರು"<noinclude><references/></noinclude>
o8mtvbis2tlepvgtux3mkoqi3a3hkuq
ಪುಟ:ನಡೆದದ್ದೇ ದಾರಿ.pdf/೧೧೯
104
32055
318054
215818
2026-05-08T09:28:10Z
Shreelatha.Halemane
7642
/* Validated */
318054
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೧೨|right=ನಡೆದದ್ದೇ ದಾರಿ}}
ರಾಜ, ಬೀನಾ ಯಾರಾದರೂ ಕೇಳಿಸಿಕೊಂಡರೇನೋ ಎಂದು. ಯಾರೂ ಇಲ್ಲದ್ದು</br> ಕಂಡು ಸಮಾಧಾನವಾಗಿತ್ತು ಅವಳಿಗೆ. ಅಳುತ್ತಿದ್ದ ಅವ್ವನನ್ನು ರಮಿಸುವ</br> ಮನಸ್ಸಿದ್ದರೂ ಇನ್ನೂ ಅಲ್ಲೇ ಕುಳಿತಿದ್ದರೆ ಏನೇನು ಕೇಳಬೇಕಾಗುವುದೋ ಎಂಬ</br> ಭಯದಿಂದ ಮಾಲತಿ ಎದ್ದು ಬಂದಿದ್ದಳು.</br>
{{gap}}ಹೌದು, ಅವ್ವ ಶೆಟ್ಟರ ಸದಾಶಿವರಾಯನನ್ನು ಚಿಕ್ಕಂದಿನಲ್ಲಿ ಪ್ರೀತಿಸಿದ್ದು ತನಗೆ</br> ಗೊತ್ತಿದ್ದ ವಿಷಯವೇ. ಆ ಬಗ್ಗೆ ಅವ್ವ ತನ್ನೊಂದಿಗೆ ಮಾತ್ರ ಮನಬಿಚ್ಚಿ</br> ಮಾತಾಡಿದ್ದಳು. ಬಹುಶಃ ಅಪ್ಪನಿಗೂ ಈ ವಿಷಯ ಪೂರಾ ಗೊತ್ತಿರಲಾರದು. ಅಕ್ಕನ</br> ಮಗಳೆಂದು ಅವ್ವನನ್ನು ಮದುವೆಯಾಗಿದ್ದ ಅಪ್ಪ. ಅವರಿಬ್ಬರ ದಾಂಪತ್ಯದಲ್ಲಿ</br> ತೊಡಕುಗಳೇನೂ ಇರಲಿಲ್ಲ. ಒಬ್ಬಳೇ ಮಗಳಾದ ತನ್ನನ್ನು ಅವರಿಬ್ಬರೂ ಬಹಳ</br> ಪ್ರೀತಿಯಿಂದ ಬೆಳೆಸಿದ್ದರು. ಮದುವೆ ಮಾಡಿದ್ದರು. ಪೆನ್ ಶನ್ ಆಗುವ ಹೊತ್ತಿಗೆ</br> ಅವ್ವ ಗಲ್ಸ್೯ ಸ್ಕೂಲಿನ್ ಹೆಡ್ ಮಿಸ್ಟ್ರೆಸ್ ಆಗಿದ್ದಳು. ಅವಳಿಗೆ ಎಲ್ಲರೂ- ಸ್ವತಃ ಏ.ಓ.</br> ಸಾಹೇಬರೂ ಅಂಜುತ್ತಿದ್ದರು. ಅಂಥ ದಪ೯ದ ಹೆಂಗಸು ತ್ನ್ನ ಅವ್ವ. ಮನೆಯಲ್ಲಿಯೂ</br> ಹಾಗೇ. ಎಲ್ಲ ಅವಳು ಹೇಳಿದ ಹಾಗೇ ನಡೆಯುತ್ತಿತ್ತು. ವಿಧಿಯನ್ನೇ ತನ್ನ ಮನಬಂದ</br> ಹಾಗೆ ತಿರುಗಿಸಿ ನಡೆಯಿಸುವ ಶಕ್ತಿಯುಳ್ಳ ಹೆಣ್ಣು ಆಕೆ. ಗಂಡ-ಮಗಳು-ಅಳಿಯ-</br>ಮೊಮ್ಮಕ್ಕಾಳು ಎಲ್ಲರ ಮಧ್ಯೆ ನಗುತ್ತ ತುಂಬು ಜೀವನ ಸಾಗಿಸಿದ್ದಾಕೆ... ಅಂಥವಳಿಗೆ</br> ಈಚೀಚೆ ಹೀಗೆ ಆಗಿದೆ.</br>
{{gap}}'ನಿಮ್ಮವ್ವಗ ದೆವ್ವ ಬಡಿದಿರಬೇಕ್ರೀ ಮಾಲತೀಬಾಯಿ, ಗುಡೀ ಮುಂದಿನ</br> ಗಂಗಪ್ಪ ಶಾಸ್ತ್ರೀ ಕಡೆ ಕರಕೊಂಡು ಹೋಗ್ರಿ' - ಎಂದು ನೆರೆಮನೆಯಾಕೆ ಹೇಳಿದಾಗ</br> ವಿಪರೀತ ಸಿಟ್ಟು ಬಂದಿತ್ತು ತನಗೆ. ದೆವ್ವವಂತೆ ! ಛೆ, ತನಗಂತೂ ಅಂಥದರಲ್ಲೆಲ್ಲ</br> ನಂಬಿಕೆಯಿಲ್ಲ. ಅಂತೂ ಒಟ್ಟು ಅವ್ವ ಪಡುವ ತ್ರಾಸನ್ನು ಈಗೀಗ ನೋಡಲಾಗುತ್ತಿಲ್ಲ</br> ತನಗೆ. ಅವ್ವ ಇಷ್ಟು ವಷ೯ಗಳ ಆಯುಷ್ಯದಲ್ಲೆಲ್ಲಾ ತೋರಿಸಿದ್ದ ದಪ೯,</br> ಗಂಡನೊಂದಿಗಿದ್ದಾಗ ಜಗತ್ತಿನಲ್ಲಿ ತನ್ನಷ್ಟು ಸುಖಿಗಳೇ ಇಲ್ಲವೆಂಬ ಧಾಟಿಯಲ್ಲಿ</br> ನಗುತ್ತಿದ್ದ ಬಗ್ಗೆ ಮಗಳ ಬಗೆಗಿನ ಅವಳ ಉತ್ಸಾಹ, ಮಾಲತಿ ಗ್ರ್ಯಾಜುಯೇಟ್ ಆದಾಗ</br> ಸ್ಕೂಲಿನ ಮಾಸ್ತರಿಣಿಯರಿಗೆಲ್ಲ ಅವ್ವ ಪಾಟಿ೯ ಕೊಟ್ಟದ್ದು, ವಿಜೃಂಭಣೆಯೊಂದಿಗೆ</br> ಎಂಜಿನಿಯರನೊಬ್ಬನೊಂದಿಗೆ ಮಾಲತಿಯ ಮದುವೆ ಮಾಡಿದ್ದು, ನಂತರ</br> ಮೊಮ್ಮಕ್ಕಳೊಂದಿಗೆ ಅವ್ವ ತಾನೂ ಮಗುವಾಗಿ ಕುಣಿದದ್ದು - ಎಲ್ಲವೂ ಅವ್ವನ</br> ಸಹಜ ಪ್ರವೃತ್ತಿಯಾಗಿರದೆ ಅವಳೊಳಗಿನ ಯಾವುದೋ ಅಸಹಜವಾದ ಏನೋ</br> ಒಂದನ್ನು ಹತ್ತಿಕ್ಕಿಡುವ ಪ್ರಯತ್ನವಾಗಿತ್ತೇ - ಎಂದನಿಸುವದು ತನಗೆ ಈಗಿಗ</br> ಒಮ್ಮೊಮ್ಮೆ.</br><noinclude><references/></noinclude>
oslq6zwx9ryrkmioernzma42vjhdxc6
ಪುಟ:ನಡೆದದ್ದೇ ದಾರಿ.pdf/೪೮೪
104
32076
318057
86033
2026-05-08T09:32:12Z
Shreelatha.Halemane
7642
/* Proofread */
318057
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=ಇನ್ನಷ್ಟು ಕತೆಗಳು /ದೆವ್ವ|right=೪೭೭}}
{{gap}}ನಗು ಬಂದಿತು ಆತನಿಗೆ. ನಗು ತುಟಿಯಂಚಿನಲ್ಲಿ ಮೂಡುವುದಕ್ಕೂ ಕಣ್ಣು
ಮಿಸ್ ಗೊಖಲೆಯ ಕಡೆ ತಿರುಗುವುದಕ್ಕೂ ಸಮನಾಯಿತು. ಒಂದು ಕ್ಷಣ
ಕಕ್ಕಾಬಿಕ್ಕಿಯಾದರೂ ಮರುಕ್ಷಣ ಸಾವರಿಸಿಕೊಂಡು ನಗೆಯರಳಿಸಿದ ಅವಳ
ಚಾಣಾಕ್ಷತೆಯ ಬಗ್ಗೆ ಮೆಚ್ಚಿಗೆಯೆನಿಸಿತು.
{{gap}}ಏ ಮುದುಕಾ, ಯಾಕೆ ಹೀಗೆ ಸಿಕ್ಕಾಪಟ್ಟೆ ಮಾತಾದುತ್ತಿದ್ದೀ ? ಕ್ಲಾಸಿನಲ್ಲಿ
ನಿರ್ಭಗ್ಯಾ ಹುಡುಗರಿಗೆ ಸುಳ್ಳುಒಳ್ಳು ಸೇರಿಸಿ ಲೆಕ್ಚರು ಕುಟ್ಟಿ ಅಭ್ಯಾಸ ನಿನಗೆ. ನಾನು
ಯಾವ ಕಲೆಯ ಸೇವೆಗೂ ಹೊರಟಿಲ್ಲವೋ. ನನಗೊಂದು ದೆವ್ವ ಬೆನ್ನು ಹತ್ತಿದೆ.
ಅದರಿಂದ ತಪ್ಪಿಸಿಕೋಳ್ಳಬೇಕಾಗಿದೆ ನನಗೆ. ನನ್ನಿಂದ ನನಗೆ ದೂರ ಹೋಗಲು
ಸಾಧ್ಯವೇನೋ ನೋಡಲು ಹೊರಟಿದ್ದೇನೆ... ಓಡಿ ಹೂರಟಿದ್ದೇನೆ...
{{gap}}ಪ್ಯಾರಿಸ್ಸಿನಲ್ಲಿ ತನ್ನ ಸ್ಕೂಟರ್ ಮೇಲೆ ದಿನಾ ಹೊಸ-ಹೊಸ ಹುಡುಗಿಯರನ್ನು
ಕರೆದೆಊಯ್ಯು ಕನಸು ಕಾಣುತ್ತಿದ್ದಾಗ ಕಾತರದ ದನಿಯಲ್ಲಿ ಅವನ ಹೆಂಡತಿ
ಕೇಳಿದ್ದಳು ಒಂದು ರಾತ್ರಿ. "ನೀವು ಲಗೊ ಬರಬೇಕು, ನೀಎಲ್ಲದನಾಹ್ಯಾಂಗ ಇರ್ಲಿ ?""
ಕಾಣುತ್ತಿದ್ದ ಕನಸಿನಿಂದ ಹೊರಬರದೆಯೆ. ಅವಳು ಮುಂದೆ ಮಾತಾಡಂತ ಅವಳ
ಬಾಯಿಯ ಮೇಲೆ ತುಟಿಯೂರಿ ಪಿಸುಗುಟ್ಟಿದ್ದ ತಾನು. ""ನಾ ಎಲ್ಲಿದ್ರೂ ನನ್ನೆ
ಮನಸ್ಪು ಇಲ್ಲೇ ಇರ್ತದ." ಅವಳಿಗೆ ಸಮಾಧಾನವಾಗಲು ಅಷ್ಟು ಸಾಕಾಗಿತ್ತು
{{gap}}'ದೇವರು ಇವರಿಗೆ ದೀಫ್ರಾಯುಷ್ಯ ಕೊಡಲಿ.'
{{gap}}ಬೇಡವೋ ಮುದುಕಾ, ನಾನು ಕಂಡ ಬದುಕು ನನಗೆ ಸಾವಿನ ಬಗ್ಗೆ ಅಗಾಧ
ಪ್ರೀತಿ ಹುಟ್ಟಿಸಿದೆ...
{{gap}}ಮುದುಕ ಪ್ರಿನ್ಸಿಪಾಲರ ಭಾಷಣ ಮುಗಿಯಿತೆಂದು ಸಮಾಧಾನದ ನಿಟ್ಟುಸಿರು
ಬಿಡುವಾಗ ಮತ್ತೊಬ್ಬ ಬಂದು ನಿ೦ತ. ಕನ್ನಡ ಲೆಕ್ಚರರ್ ಅ೦ದರು ಯಾರೋ-ಸರಿ.
ಇನ್ನಿವನು ತಾನು ಕಲಿತ ವಿಮಶ್ರೆಯ ತೆತ್ವಗಳನ್ನೂ. ನಾಟಕಗಳನ್ನೂ ಕುರಿತು
ಉಪನ್ಯಾಸ ಮಾಡುವನೋ ಎಂದು ಕಸಿವಿಸಿಯಾಯಿತು ಆತನಿಗೆ. ಪಕ್ಕಕ್ಕೆ ತಿರುಗಿ
ನೋಡಿದ. ಹೆಂಡತಿ ಬಿಟ್ಟ ಕಣ್ಣುಗಳಿಂದ ಭಾಷಣಕಾರನನ್ನೆ ನೋಡುತ್ತಿದ್ದುದನ್ನು
ಖಚಿತಪಡಿಸಿಕೋಂಡು ಮಿಸ್ ಗೋಖಲೆಯ ಕಡೆ ಹೊರಳಿದ. ಆಕೆ ಅವನನ್ನೇ
ನೋಡುತ್ತಿದ್ದವಳು ಈ ಸಲ ಬೆಚ್ಚದೆ ನಿಧಾ೯ರದ ನಗೆ ಬೀರಿದಳು.
{{gap}}'ಇವರ ಭಾಷೆಯ ವೈಶಿಷ್ಟಯವೆಂದರೆ ಸೊಜೆಯ ಮೊನೆಯಂತಹ ವ್ಯಂಗ್ಯ ;
ಹರಿತವಾದ ಬಾಣದೆಂತೆ ಇವರ ಟೀಕೆ ; ಬಾರುಕೋಲಿನಿಂದ ಹೊಡೆದೆಬ್ಬಿಸಿದಂತೆ ಇವರ
ಮಾತು...' ಆ ಮಹಾಶಯನ ಉಪಮೆಗಳ ಪಟ್ಟ ಮುಗಿಯುವಂತೆಯೇ ಕಾಣಲಿಲ್ಲ.
{{gap}}ವ್ಯಂಗ್ಯ-ಟೀಕೆ... "ನಿನ್ನೆ ನೋವನ್ನು ಮರೆಯಲು ಇತರರನ್ನು ನೋಯಿಸಿ<noinclude><references/></noinclude>
on7nvcrvj1s8m9aexmos81i9o5cj878
ಪುಟ:ನಡೆದದ್ದೇ ದಾರಿ.pdf/೧೧೬
104
32216
318053
208039
2026-05-08T09:27:42Z
Shreelatha.Halemane
7642
/* Validated */
318053
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಕೊನೆಯ ದಾರಿ/ನೆರಳು|right=೧೦೯}}
ಆದರ ನೋಡು ನನ್ನ ಹಿಂದ ಏನೋ-ಯಾರೋ ಇದ್ಧಾಂಗ ಅನಿಸ್ತು.
{{gap}}"ಹಿಂದೇನಿರರ್ತದ ? ನೆರಳು ಇದ್ದೀತು."</br>
{{gap}}"ಹಾಂಗಂತೀಯಾ?ಆದರ ಕತ್ತಲಿದ್ದಾಗನೂ ನೆರಳು ಹ್ಯಾಂಗ ಕಾಣಸ್ತದ?"</br>ಅವ್ವಾ, ಅದೆಲ್ಲಾ ನಿನ್ನ ಭ್ರಮಾ.ಇಷ್ಟಕ್ಕ ನನ್ನ ಕರದೇನು? ನಾ ಇನ್ನೂ </br>ಅಡಗೀ ಮಾಡಬೇಕು. ಹುಡುಗ್ರು ಕಾಲೇಜಿಗೆ ಹೋಗೋ ಹೊತ್ತಾತು." </br>
{{gap}}"ನಿನಗ ನಿನ್ನ ಗಂಡಾ-ನಿನ್ನ ಮಕ್ಕಳು ಇವರದ ಚಿಂತಿ.ಮುದುಕಿ ತಾಯಿ </br>ಹೆದರಿಕೊಂಡು ಪ್ರಾಣಾ ಬಿಟ್ರೂ ಅಡ್ಡಿಯಿಲ್ಲ. ಹೋಗು ಹೋಗು.ಮುಪ್ಪು ಬರೂ</br> ತನಕ ಮನಷ್ಯಾ ಬದಕಿರಬಾರದವಾ ಮಾಲತೀ,ಅದರ ಸಾವು ನನ್ನ ಕೈಯ್ಯಾಗಿನ</br> ಮಾತ..... ಹಿಂದಕೊಮ್ಮೆ ನಾ ಸಾಯಬೇಕಂತ ಮನಸು ಮಾಡಿದ್ದೆ.ಆಗ ಸತ್ತಿದ್ರ ಈ</br> ಜಂಜಾಟ ತಪ್ತಿತ್ತು. ಆವಾಗ ಏನಾತು ಗೋತ್ತದ ಏನು ನಿನಗ-" </br>
{{gap}}ಮಗಳು ಆಗಲೇ ಅಡಿಗೆ ಮನೆ ಸೇರಿದ್ದು ನೋಡಿ ಮುದುಕಿಗೆ ಮತ್ತಷ್ಟು</br> ಹೆಚ್ಚಾಯಿತು . ಅವಳ ವಟವಟ ಮತ್ತೂ ಜೋರಾಯಿತು.</br>
{{gap}}ಅವ್ವ ಸಿಟ್ಟಾದದ್ದು ಮಾಲತಿಗೆ ಗೊತ್ತಿದೆ. ಆದರೆ ಹಾಗೆಂದು ಅವಳು ಅವ್ವನ</br> ಮುಂದೇ ಕೂತಿರಲು ಪುರುಸೊತ್ತಿಲ್ಲ. ಇನ್ನೊಂದು ಗಂಟೆಗೆಲ್ಲಾ ಇವರು ಆಫೀಸಿಗೆ</br> ಹೋಗುವ ಗಲಾಟೆ ; ಅಮ್ಮಾ, ಇನ್ನೂ ಆಗಿಲ್ಲವೇ?
ಎಂದು ಕುಣಿಯುವ ಮಗ</br> ರಾಜ ; 'ನಾನು ಹೊರಟೆ ಕಾಲೇಜಿಗೆ ಎಂದು ಊಟ ಮಾಡದೆಯೇ ಹೊರಟು ಬಿಡುವ</br> ಮಗಳು ಬೀನಾ. ಅವಳಿಗಂತೂ ಸ್ವಲ್ಪವೂ ವಿವೇಕವಿಲ್ಲ. ಮದುವೆಯಾಗಿದ್ದರೆ </br>ಅತ್ತೆಮನೆಯಲ್ಲಿ ಬಾಳಬೇಕಾಗಿದ್ದ ಹುಡುಗಿ. ಸಣ್ಣ ಮಗುವಿನಂತಾಡುತ್ತಾಳೆ. </br>ಅಜ್ಜಿಯೊಂದಿಗಂತೂ ಮಕ್ಕಳಿಗೆ ಒಂದು ಕ್ಷಣ ಬಗೆಹರಿಯುವುದಿಲ್ಲ. ಇವರೆಲ್ಲರನ್ನು</br> ಸಮಾಧಾನ ಮಾಡುವ ಹೊತ್ತಿಗೆ ಜೀವ ಬೇಸರವಾಗುತ್ತದೆ.</br>
{{gap}}"ಏ ಮಾಲತೀ " </br>
{{gap}}ಮುದುಕಿಯ ಕರೆಗೆ ಓಗೊಡುವ ಮನಸ್ಸಾಗಲಿಲ್ಲ ಮಾಲತಿಗೆ . ಅವ್ವನ ಹಿಂದಿನ </br> ಕಥೆ ಕೇಳುವ ಇಚ್ಛೆಯೂ ಇಲ್ಲ, ಕೇಳುತ್ತ ಕೂಡಲು ಸಮಯವೂ ಇಲ್ಲ , ಕೇಳಿದ್ದೇ ಕತೆ.</br> ಸಾವಿರ ಸಲ ಹೇಳಿದನ್ನೇ ಹೇಳುತ್ತ ಕೂಡುತ್ತಾಳೆ ಅವ್ವ . ಕೇಳುವವರು ನಿರುತ್ಸಾಹ </br>ತೋರಿಸಿದರೆ ವಿಪರೀತ ಸಿಟ್ಟು ಬರುತ್ತದೆ ಆಕೆಗೆ. ಅದೇ ಕತೆ-ನಲವತ್ತು ವರ್ಷಗಳ</br> ಹಿಂದೆ ಆಕೆ ಹೆಂಗಸರ್ಯಾರೂ ಕಲಿಯದ ಕಾಲದಲ್ಲಿ ಕಲಿತು ಶಾಲೆಯಲ್ಲಿ </br>ಮಾಸ್ತರಿಣಿಯಾದ ಸಾಹಸದ ಕತೆ ;ಬಹಳ ದಿನ ಮದುವೆಯನ್ನು ನಿರಾಕರಿಸಿ ನಂತರ</br> ಸೋದರಮಾವನನ್ನು ಮದುವೆಯಾದ ಕತೆ; ಮೊದಲ ಹೆರಿಗೆ ಬಹಳ ಕಷ್ಟವಾಗಿ</br>ಮಾಲತಿ ಹುಟ್ಟಿದ ಕತೆ ; ಮತ್ತು -<noinclude><references/></noinclude>
ccdgoq5e56bczi8osikrd1a2y4z1wjn
ಪುಟ:VISHAALAAKSHI - Niranjana.pdf/೧೫
104
37851
317939
100010
2026-05-07T14:27:32Z
Shreelatha.Halemane
7642
/* Proofread */
317939
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೧೩}}
ದ್ದರು, ದುಡಿದು ಬಳಲಿ ಹಣ್ಣಾಗಿಯೇ ಉದುರಿದ್ದ ಜೀವ. ಆದರೆ, ಆ ಅಂತ್ಯ ಅನಿವಾರ್ಯ ಎನ್ನುವುದು ಯಾವ ಸಮಾಧಾನ ? ವಿಶಾಲಾಕ್ಷಿಯ ಅಣ್ಣ ಬಹಳ ಗೋಳಾಡಿದ್ದ:
{{gap}}'ನಾನು ಪಾಪಿ! ಅಪ್ಪಯ್ಯನನ್ನು ನೋಡೋ ಭಾಗ್ಯ ನನಗಿಲ್ಲದೇಹೋಯ್ತು!'
{{gap}}ಅಂತಹ ಅನಾಥ ಸುಸಾರವೇನೂ ಅಲ್ಲ. ತಂದೆ ಇಳಿಸಿದ್ದ ವಿಮೆ-ಐದು ಸಾವಿರದ್ದು-ಬಂದಿತ್ತು, ತಮ್ಮಂದಿರಿಬ್ಬರ ವಿದ್ಯಾಭ್ಯಾಸವಾದರೆ ಆಯಿತಿನ್ನು.
{{gap}}ಆದರೂ ತಾಯಿ ರೋದಿಸಿದ್ದರು
{{gap}}'ನಾವು ನಿರ್ಗತಿಕರಾದೆವಲ್ಲಾ!'
{{gap}}[ಅವರ ದೃಷ್ಟಿಯಲ್ಲಿ ಘೋರತರವಾಗಿತ್ತು ಸಮಸ್ಯೆ, ಮಕ್ಕಳಿಗೆ ಎಲ್ಲಿಂದ ಬರಬೇಕು ಅದರ ಕಲ್ಪನೆ ?].
{{gap}}ತಂಗಿಯೆಂದು ತಾತ್ಸಾರಮಾಡದೆ, ಆಕೆ ತನ್ನ ಅಕ್ಕನೇ ಎನ್ನುವಂತೆ, ರಂಗರಾಜ ಕೇಳಿದ್ದ:
{{gap}}ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಂದ್ರಿಡ್ತೀನಿ, ಆಗದಾ ವಿಶಾಲಿ ?'
{{gap}}ಬೆಂಗಳೂರಿನಿಂದ ಬಂದು ಒಂದೆರಡು ಘಂಟೆಹೊತ್ತು ಇದ್ದು ಹೋದ ಅವರ ಚಿಕ್ಕಪ್ಪ ಇತ್ತುದೂ ಅಂತಹದೇ ಸಲಹೆಯನ್ನು,
{{gap}}'ರಾಜಿನಾಮೆ ಕೊಟ್ಟು ಬಂದ್ವಿಡು, ಇಲ್ಲೇ ಏನಾದರೂ ಕೆಲಸ ಸಿಗ ಬಹುದು, ನಾನೂ ನೋಡ್ತೀನಿ.'
{{gap}}ಅವರೂ ನೋಡುವ' ವಿಷಯದಲ್ಲಿ ನಾಗಮ್ಮನಿಗೇನೂ ನಂಬಿಕೆ ಇರಲಿಲ್ಲ. ತನ್ನ ಮೈದುನನನ್ನು ಚೆನ್ನಾಗಿಯೇ ಅರಿತಿದ್ದಳು ಆಕೆ. ಆದರೂ ಹೆಣ್ಣುಜೀವ ಹೇಳಿತ್ತು:
{{gap}}ಅದೇ ಸರಿ, ರಾಜೂ.
{{gap}}'ಒಪ್ಪದೇ ಇದ್ದವಳು ವಿಶಾಲಿ ಒಬ್ಬಳೇ..
{{gap}}ಖಂಡಿತ ಕೂಡದು, ಇಲ್ಲಿ ನಾನಿಲ್ವೆ ? ಮನೆಯ ಜವಾಬ್ದಾರಿ ನನಗಿರಲಿ.'
{{gap}}“ಹುಚ್ಚು ಮಾತು, ಹುಚ್ಚು ಮಾತು!” ಎಂದಿದ್ದರು ನಾಗಮ್ಮ,
{{gap}}[ಒಳಗಿನ ದುಗುಡವನ್ನು ಮಕ್ಕಳೆದುರು ತೋಡಿಕೊಳ್ಳಲಾರದೆ ಅವರು ನೀರವವಾಗಿ ಅತ್ತಿದ್ದರು, ವಿಧಿಯನ್ನು ಹಳಿದಿದ್ದರು.]<noinclude></noinclude>
9u9dehqu0af5nhxobk4nhkzbfz5w8ct
317940
317939
2026-05-07T14:28:14Z
Shreelatha.Halemane
7642
317940
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೧೩}}
ದ್ದರು, ದುಡಿದು ಬಳಲಿ ಹಣ್ಣಾಗಿಯೇ ಉದುರಿದ್ದ ಜೀವ. ಆದರೆ, ಆ ಅಂತ್ಯ ಅನಿವಾರ್ಯ ಎನ್ನುವುದು ಯಾವ ಸಮಾಧಾನ ? ವಿಶಾಲಾಕ್ಷಿಯ ಅಣ್ಣ ಬಹಳ ಗೋಳಾಡಿದ್ದ:
{{gap}}'ನಾನು ಪಾಪಿ! ಅಪ್ಪಯ್ಯನನ್ನು ನೋಡೋ ಭಾಗ್ಯ ನನಗಿಲ್ಲದೇಹೋಯ್ತು!'
{{gap}}ಅಂತಹ ಅನಾಥ ಸುಸಾರವೇನೂ ಅಲ್ಲ. ತಂದೆ ಇಳಿಸಿದ್ದ ವಿಮೆ-ಐದು ಸಾವಿರದ್ದು-ಬಂದಿತ್ತು, ತಮ್ಮಂದಿರಿಬ್ಬರ ವಿದ್ಯಾಭ್ಯಾಸವಾದರೆ ಆಯಿತಿನ್ನು.
{{gap}}ಆದರೂ ತಾಯಿ ರೋದಿಸಿದ್ದರು
{{gap}}'ನಾವು ನಿರ್ಗತಿಕರಾದೆವಲ್ಲಾ!'
{{gap}}[ಅವರ ದೃಷ್ಟಿಯಲ್ಲಿ ಘೋರತರವಾಗಿತ್ತು ಸಮಸ್ಯೆ, ಮಕ್ಕಳಿಗೆ ಎಲ್ಲಿಂದ ಬರಬೇಕು ಅದರ ಕಲ್ಪನೆ ?].
{{gap}}ತಂಗಿಯೆಂದು ತಾತ್ಸಾರಮಾಡದೆ, ಆಕೆ ತನ್ನ ಅಕ್ಕನೇ ಎನ್ನುವಂತೆ, ರಂಗರಾಜ ಕೇಳಿದ್ದ:
{{gap}}ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಂದ್ರಿಡ್ತೀನಿ, ಆಗದಾ ವಿಶಾಲಿ ?'
{{gap}}ಬೆಂಗಳೂರಿನಿಂದ ಬಂದು ಒಂದೆರಡು ಘಂಟೆಹೊತ್ತು ಇದ್ದು ಹೋದ ಅವರ ಚಿಕ್ಕಪ್ಪ ಇತ್ತುದೂ ಅಂತಹದೇ ಸಲಹೆಯನ್ನು,
{{gap}}'ರಾಜಿನಾಮೆ ಕೊಟ್ಟು ಬಂದ್ವಿಡು, ಇಲ್ಲೇ ಏನಾದರೂ ಕೆಲಸ ಸಿಗ ಬಹುದು, ನಾನೂ ನೋಡ್ತೀನಿ.'
{{gap}}ಅವರೂ ನೋಡುವ' ವಿಷಯದಲ್ಲಿ ನಾಗಮ್ಮನಿಗೇನೂ ನಂಬಿಕೆ ಇರಲಿಲ್ಲ. ತನ್ನ ಮೈದುನನನ್ನು ಚೆನ್ನಾಗಿಯೇ ಅರಿತಿದ್ದಳು ಆಕೆ. ಆದರೂ ಹೆಣ್ಣುಜೀವ ಹೇಳಿತ್ತು:
{{gap}}ಅದೇ ಸರಿ, ರಾಜೂ.
{{gap}}'ಒಪ್ಪದೇ ಇದ್ದವಳು ವಿಶಾಲಿ ಒಬ್ಬಳೇ..
{{gap}}ಖಂಡಿತ ಕೂಡದು, ಇಲ್ಲಿ ನಾನಿಲ್ವೆ ? ಮನೆಯ ಜವಾಬ್ದಾರಿ ನನಗಿರಲಿ.'
{{gap}}“ಹುಚ್ಚು ಮಾತು, ಹುಚ್ಚು ಮಾತು!” ಎಂದಿದ್ದರು ನಾಗಮ್ಮ,
{{gap}}[ಒಳಗಿನ ದುಗುಡವನ್ನು ಮಕ್ಕಳೆದುರು ತೋಡಿಕೊಳ್ಳಲಾರದೆ ಅವರು ನೀರವವಾಗಿ ಅತ್ತಿದ್ದರು, ವಿಧಿಯನ್ನು ಹಳಿದಿದ್ದರು.]<noinclude></noinclude>
ss65vjhd89kur5s5vmhx9mwycv17ht2
ಪುಟ:VISHAALAAKSHI - Niranjana.pdf/೧೬
104
37852
317938
100011
2026-05-07T14:23:17Z
Shreelatha.Halemane
7642
/* Proofread */
317938
proofread-page
text/x-wiki
<noinclude><pagequality level="3" user="Shreelatha.Halemane" /></noinclude>
{{rh|center=ವಿಶಾಲಾಕ್ಷಿ |left=೧೪|right=}}
{{gap}}ರಜಾ ಮುಗಿಯುತ್ತ ಬಂದಂತೆ ವಿಶಾಲಿಗೆ ಜಯವಾಯಿತು, ಆದ ಇತ್ಯರ್ಥ, 'ರಾಜಿನಾಮೆ ಈಗಲೇ ಬೇಡ' ಎಂದು.
{{gap}}ಹೊರಟುನಿಂತಾಗ ರಂಗರಾಜ, ಮುಗುಳುನಗಲು ಯತ್ನಿಸುತ್ತ, ಅಂದಿದ್ದ; -
{{gap}}“ನಮ್ಮ ಅಪ್ಪ ಅಮ್ಮನಿಗೆ ಎಲ್ಲೋ ಲೆಕ್ಕ ತಪ್ಪಿರಬೇಕು ವಿಶಾಲಿ, ಈ ಮನೇಲಿ ದೊಡೋಳು ನೀನೇ !?.
{{gap}}ಫಳಕ್ಕನೆ ನೀರು ಚಿಮ್ಮಿತ್ತು ವಿಶಾಲಾಕ್ಷಿಯ ಕಣ್ಣುಗಳಲ್ಲಿ...
{{gap}}ಮತ್ತೆ ತಾಯಿಯ ಸ್ವರ ಕೇಳಿಸಿತು:
{{gap}}“ತಟ್ಟೆ ಇಡಲೇನೇ ?”
{{gap}}“ಬಂದೆ ಅಮ್ಮಾ''
{{gap}}ಮೇಜಿನ ಮೇಲೆ 'ಪ್ರಬುದ್ಧ ಕರ್ಣಾಟಕ'ದ ಸಂಚಿಕೆಯನ್ನೂ ಲೇಖನದ ಪ್ರತಿಗಳನ್ನೂ ಎದುರಿಗೆ ಇರಿಸಿಕೊಂಡು, ಹಳೆಯ ನೆನಪುಗಳೆಡೆಗೆ ಮನಸ್ಸನ್ನು ಅಲೆಯಲು ಬಿಟ್ಟು, ಕುಳಿತೇ ಇದ್ದಳು ಆಕೆ, ತಾಯಿ ಪುನಃ ಕರೆದೊಡನೆಯೇ ಗಡಬಡಿಸಿ ಎದ್ದು, ಅಡುಗೆಯ ಮನೆಗೆ ನಡೆದಳು.
{{gap}}ಅಡುಗೆಯ ಮನೆಯಲ್ಲೇ ಊಟ, ದೇವರ ಬಿಡಾರವೂ ಅಲ್ಲೇ ಮೂಲೆಯಲ್ಲಿ ಇಪ್ಪತ್ತೈದು ವರ್ಷಗಳಿಗೂ ಹಿಂದೆ, ರಂಗರಾಜ ಒಂದು ವರ್ಷದ ಕೂಸಾಗಿದ್ದಾಗ [ವಿಶಾಲಿ ಹೊಟ್ಟೆಯಲ್ಲಿದ್ದಾಗ, ಆ ಮನೆಯನ್ನು ನಾಗಮ್ಮನ. ಯಜಮಾನರು ಹಿಡಿದಿದ್ದರು, `ಹನ್ನೊಂದು ರೂಪಾಯಿ ಆಗಿನ ಬಾಡಿಗೆ ಮುಂದೆ ಹದಿಮೂರಾಗಿತ್ತು, ಹತ್ತೊಂಭತ್ತಕ್ಕೇರಿತು. ಇಪ್ಪತ್ತಮೂರಕ್ಕೆ ಬಂದು ನಿಂತಿತ್ತು. ಈಗ ಅಂತಹ ಮನೆ ಮೂವತ್ತೈದಕ್ಕೂ ಸಿಗುತ್ತಿರಲಿಲ್ಲ. " [ಬೆಂಗಳೂರಿನಲ್ಲಾದರೆ ಎಪ್ಪತ್ತು ಎಂಭತ್ತು ಹೇಳಿದರೂ ಹೇಳಿದರೇ... ಹೀಗಾಗಿ, ವಿಶಾಲಾಕ್ಷಿಯ ತಂದೆ ತೀರಿಕೊಂಡ ಬಳಿಕ ಮನೆ ಬದಲಾಯಿಸಬೇಕೆಂಬ ಮಾತು ಬಂದಿತ್ತಾದರೂ ಅಲ್ಲಿಗೇ ನಿಂತುಹೋಗಿತ್ತು, ತೂಗಿಸಿಕೊಂಡು ಹೋಗ ಬೇಕಾದ ಸಂಸಾರ, ಬಾಡಿಗೆಗಾಗಿ ಹೆಚ್ಚು ಹಣ ಸುರಿಯುವುದು, ದುಂದು ವೆಚ್ಚವಾಗಿಯೇ ನಾಗಮ್ಮನಿಗೆ ಕಂಡಿತು.” ಶೋಕಪೀಡಿತೆಯಾದ ಆರಂಭದ ದಿನಗಳಲ್ಲಿ, ಆ ಮನೆಯಲ್ಲಿ, ಹೆಜ್ಜೆ ಹೆಜ್ಜೆಗೂ 'ಅವರ' ನೆನಪೇ ಆಯಿತು ನಿಜ. ಆದರೂ ಪ್ರಯತ್ನಪೂರ್ವಕವಾಗಿ, ಇತರ ವಿಷಯಗಳ ಕಡೆಗೇ ಮನಸ್ಸು ಹರಿಸಿ, ನಾಗಮ್ಮ ಚೇತರಿಸಿಕೊಂಡಿದ್ದರು.<noinclude></noinclude>
2u65lxcxa02obk5oexwjrfhi76l61ca
ಪುಟ:VISHAALAAKSHI - Niranjana.pdf/೧೭
104
37853
317937
100012
2026-05-07T14:20:33Z
Shreelatha.Halemane
7642
/* Proofread */
317937
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ |left=|right=೧೫}}
“ಉಪ್ಪು ಹೆಚ್ಚಾಗಿದೆಯೇನೆ ಸಾರಿಗೆ ?”
“ಇಲ್ಲಮ್ಮ, ಸರಿಯಾಗಿದೆ.”
“ಇನ್ನೊಂದು ಸೌಟು ಬಡಿಸ್ತೇನು ?”
“ಬೇಡ, ಸಾಕು.”
{{gap}}ಬಹಳ ವರ್ಷಗಳಿಂದ ಬಳಕೆಯಾಗಿದ ಪದಗಳು_ಬೇಡ, ಸಾಕು.” ಮನೆಯಲ್ಲಿರುವವಳು ತಾನೊಬ್ಬಳೇ ಎನ್ನುವ ಹಾಗೆ ಎಂದೂ ತಿಂದುಂಡವಳಲ್ಲ ವಿಶಾಲಿ, ಊಟಕ್ಕೆ ಕುಳಿತರೂ ಅಷ್ಟೆ, ತಿಂಡಿ ಕೈಗೆತ್ತಿಕೊಂಡರೂ ಅಷ್ಟೆ, ತಮ್ಮ ದಿರ ನೆನಪಾಗುತ್ತಿತ್ತು ಅವಳಿಗೆ ....ಚಂದ್ರ, 'ಸ್ಪೆಶಲ್ ಕ್ಲಾಸಿ'ದೆಯೆಂದು ಬೇಗನೆ ಮನೆ ಬಿಟ್ಟು ಕಾಲೇಜಿಗೆ ಹೋಗಿದ್ದ. ಸೈಕಲಿನ ಮೇಲೆ ಸಿಂದು ಯಾವ ಘಳಿಗೆಯಲ್ಲಾದರೂ ಬಂದನೇ, ಜಯನಿಗಾದರೋ ಹೈ ನ್ಯೂ ಲು ಹತ್ತಿರ. ಮಧ್ಯಂತರದ ಬಿಡುವೇ ಸಾಕಾಗುತ್ತಿತ್ತು ಊಟದ ಶಾಸ್ತ್ರ ಮುಗಿಸಿಹೋಗಲು.
{{gap}}ಉಣ್ಣುತ್ರ ವಿಶಾಲಾಕ್ಷಿ ಯೋಚಿಸಿದಳು: ಇನ್ನೂ ಎರಡು ಮೂರು ಘಂಟೆ ಗಳ ಕಾಲ ಇಲ್ಲಿಯೇ ಕುಳಿತು ಮಾಡಬೇಕಾದುದೇನು ತಾನು ? ವಿಶ್ವವಿದ್ಯಾ ನಿಲಯದ ಜವಾನ ಸಂತಸದ ಹೇರನ್ನೇ ಇಳಿಸಿಹೋಗಿದ್ದ, ಹ ತ್ತು ಜ ನ ಕೈ ತಾನೀಗ ಅದನ್ನು ಹಂಚಬೇಕು, ಗಿರಿಜಾಬಾಯಿ--ಅವರು ಸಿಗುವುದು ಐದು ಘಂಟೆಯ ಅನಂತರವೇ, ನರ್ಮದೆಯನ್ನು ನೋಡಿ ಬಹಳ ದಿನಗಳಾದುವು. ಮೊದಲು ಅಲ್ಲಿಗೆ ಹೋಗಿ, ಬಳಿಕ ತರಗತಿಗೆ ಬರಬಹುದು, ಊಟದ ಹೊತ್ತು ನಿಜ, ಆದರೂ ನರ್ಮುದೆಗೇನೂ ತೊಂದರೆಯಾಗದು, ಮಗುವನ್ನು ಆಡಿಸುವುದರ ಹೊರತು ಬೇರೇನು ಕೆಲಸವಿದೆ ಅವಳಿಗೆ ? ಡಾಕ್ಟರ್ ಶ್ರೀಕಾಂತ ಮನೆಗೆ ಬಂದೊಡನೆಯೇ ತಾನು ಹೊರಬಿದ್ದ ರಾಯಿತು, ಮತ್ತೂ ಸಮಯವಿತ್ತೆಂದರೆ ಲೈಬ್ರೆರಿಗೆ ಹೋಗಬಹುದು....
“ಮಜ್ಜಿಗೆಗೆ ಅನ್ನ ?”
“ಹಂ?” “ಅನ್ನ ಇಡಲೇನೇ ಸ್ವಲ್ಪ ?”
“ಹೂಂ, ಸ್ವಲ್ಪ-ಸ್ವಲ್ಪ ಸಾಕು.”
“ನಿಧಾನವಾಗಿ ಊಟಮಾಡೇ, ಅದೇನು ಅವಸರ-ಅಂತ.”
“ಏನಿಲ್ಲವಮ್ಮ,”<noinclude></noinclude>
4dzxve44u02p9o5g8gmkpzoodu1ye00
ಪುಟ:VISHAALAAKSHI - Niranjana.pdf/೧೮
104
37854
317936
100013
2026-05-07T14:18:30Z
Shreelatha.Halemane
7642
/* Proofread */
317936
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ವಿಶಾಲಾಕ್ಷಿ - |left=೧೬ |right=}}
{{gap}}ಊಟ ಮುಗಿಸಿ ಕೊಠಡಿಗೆ ಮರಳಿದ ವಿಶಾಲಾಕ್ಷಿ, ಮೇಜಿನ ಮೇಲಿದ್ದ 'ಪ್ರಬುದ್ಧ ಕರ್ಣಾಟಕ'ದ ಸಂಚಿಕೆಯನ್ನೂ ಲೇಖನದ ಪ್ರತಿಗಳನ್ನೂ ಮುದ್ದಿಸುವ ನೋಟದಿಂದ ಪುನಃ ಪುನಃ ನೋಡಿದಳು. ಬಿಳಿಯದೊಂದನ್ನು ಕೈಗೆತ್ತಿಕೊಂಡು ಹಾಳೆ ಮಗುಚಿದಳು, “ತಿದ್ದಿರಬಹುದು, ತಿದ್ದಿರಲೇಬೇಕು' ಎಂಬ ಶಂಕೆ [ಅಲ್ಲೊಂದು ಇಲ್ಲೊಂದು ಪದದ ಓರೆಕೋರೆಯನ್ನು ಒಪ್ಪಗೊಳಿಸಿದ್ದರು ಸಂಪಾದಕರು, ವಿಶಾಲಿಯ ಗಮನಕ್ಕೆ ಅದು ಬೀಳಲಿಲ್ಲ.] ತಾನು ಬರೆದಿದ್ದ ಹಾಗೆಯೇ ಅಚ್ಚಾಗಿತ್ತು. ಅದನ್ನಾಗಲೇ ಹಲವಾರು ಜನ ಓದಿರಬಹುದು, ಏನು ಹೇಳು ವರೊ? ಏನು ಹೇಳುವರೋ ? ಕುವೆಂಪು ಕೃತಿಯೂ ಇತ್ತು ಮೊದಲ ಪುಟದಲ್ಲೇ, ತಾನು ಬರೆದುದು ಅವರ ಕಣ್ಣಿಗೂ ಬೀಳಬಹುದು....
{{gap}}ಹೊರಡುವ ಸಿದ್ಧತೆಗೆಂದು, ಸಡಿಲವಾಗಿದ್ದ ಹೆರಳನ್ನು ವಿಶಾಲಾಕ್ಷಿ ಬಿಚ್ಚಿದಳು ಕನ್ನಡಕವನ್ನು ತೆಗೆದು ಮೇಜಿನ ಮೇಲಿರಿಸಿ, ಗೋಡೆಯಲ್ಲಿ ತೂಗ ಹಾಕಿದ್ದ ಕನ್ನಡಿಗೆ ಸವಿಾಪವಾಗಿ ನಿಂತಳು ತುಟಿಗಳ ಮೇಲೆ ಲಾಸ್ಯವಾಡುತಿದ್ದ ಮಂದಹಾಸ ಲೇಖಿಕೆ ವಿಶಾಲಾಕ್ಷಿ ತಾನು ಯೌವನದ ಒತ್ತಡಕ್ಕೆ ಹಿಂದೇಟು ಹೊಡೆಯುತ್ತಿದ್ದ ಮುಖದ ಮೇಲಿನ ಸಿಡುಬಿನ ಕಲೆಗಳು, ಲಜ್ಜಿತವಾಗಿ ತಮ್ಮ ಒಡತಿಯನ್ನು ಕಂಡುವು. ಬಾಲ್ಯದಿಂದಲೆ ಒಡನಾಡಿಗಳಾಗಿ ಬಂದಿದ್ದುವು, ಆ ಕಲೆಗಳು ಮತ್ತು ಕನ್ನಡಕ, ಮೈಗೂಡಿ ಹೋಗಿ ಈಗ ಆನಿ ಭಾಜ್ಯವೆನಿಸಿದ್ದ ಅಂಶಗಳು ....ಜಡೆಯೊ ? ತುರುಬೊ? ಹೃದಯ ನಲಿಯು ಶಿದ್ಧ-ಸುಖದ ಹಕ್ಕಿ- ಉಲಿಯುತ್ತಿದ್ದ ಈ ದಿ ನ ಮುಡಿಕಟ್ಟಬೇಕೆನಿಸಿತು. ಚೋಟುದ್ದ ಕೂದಲಲ್ಲ ತನ್ನದು, ಸಾಕಷ್ಟು ನೀಳವಾದದ್ದು, ಚೌರಿಯ ನೆರವಿಲ್ಲ. ದೆಯೇ ಹಿರಿದಾಗಿ ಕಾಣುವ ಗಂಟು ....ಎಣ್ಣೆಗಪ್ಪು ಮೈ, ಇದ್ದಿಲನ್ನೂ ನಾಚಿ ಸುವ ಮೈಬಣ್ಣದ ಮಹಿಳೆಯರಿರುವಾಗ, ಇದೇ ಬಿಳುಪು.ಯಾವಾಗಲೂ
ಹೋಲಿಸಿನೋಡಬೇಕಾದುದು ತಮಗಿ೦ತ ಉತ್ತಮರೊಡನಲ್ಲ, ತಮ್ಮಷ್ಟು ಭಾಗ್ಯವಂತರೂ ಅಲ್ಲದವರೊಡನೆ ....ಪೌಡರಿನ ತೆಳು ಲೇಪನ ಕಂಡೂ ಕಾಣಿಸ ದಷ್ಟು ... ಸೀರೆಗಳಿದ್ದುವು ಈಗ, ಆರಿಸಿ ಉಟ್ಟುಕೊಳ್ಳುವಷ್ಟು, ಈಗಲೂ ಸರಳ ವಾಗಿರುವುದೇ ಇಷ್ಟ ವಿಶಾಲಾಕಿಗೆ...'ಬೇಸರ' ಎಂದೊಡನೆ ಮೂಗುಮುರಿಯ ಬೇಕೆಂದೇನೂ ಅವಳಿಗೆ ಅನಿಸುತ್ತಿರಲಿಲ್ಲ. ಒಂದು ರೀತಿಯಲ್ಲಿ ಅದು ಇಷ್ಟ ಕೂಡಾ. ಆದರೂ ಬಿಳಿ ಅರಿವೆಯ 'ಬಾಡಿ'ಯೇ ಸಾಕೆನಿಸುತ್ತಿತ್ತು, ಅಭ್ಯಾಸವನ್ನು ಬದಲಿ. ಸುವುದು ಸುಲಭವಾಗಿರಲಿಲ್ಲ...<noinclude></noinclude>
b9dtvcueayt7999pxhpqtlv9i3suxwu
ಪುಟ:VISHAALAAKSHI - Niranjana.pdf/೧೯
104
37855
317941
100014
2026-05-07T14:33:56Z
Shreelatha.Halemane
7642
/* Proofread */
317941
proofread-page
text/x-wiki
<noinclude><pagequality level="3" user="Shreelatha.Halemane" /></noinclude>
{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೧೭}}
{{gap}}ವಿಶಾಲಾಕ್ಷಿ, 'ಪ್ರಬುದ್ಧ ಕರ್ಣಾಟಕ'ದ ಸಂಚಿಕೆಯನ್ನೂ ಲೇಖನದ ಮೂರು ಪ್ರತಿಗಳನ್ನೂ ತೆಗೆದು ಒತ್ತಟ್ಟಿಗೆ ಇರಿಸಿದಳು. ತರಗತಿಯಲ್ಲಿ ಟಿಪ್ಪಣಿ ಬರೆದುಕೊಳ್ಳಲು ಹಾಳೆಗಳು ಕೆಲವು, ಪೆನ್ನು, ಒಯ್ಯುವುದು ಹೇಗೆ ? ಶೋಕಿ ಚೀಲವಿತ್ತು. ಬಳಸುತ್ತಿದ್ದುದು ಕಡಮೆ, ಆದರೆ ಅದರೊಳಗೆ ಇವೆಲ್ಲ ಹಿಡಿಸಲಾರವು, ಪೆನ್ನು ಹಾಳೆಗಳನ್ನಷ್ಟೆ ಹೊರಗಿರಿಸಿ, ಅವನ್ನು ಯಾವುದಾದರೂ ಪೇಪರಿನೊಳಗೆ ಭದ್ರವಾಗಿ ಸುತ್ತಿ ದಾರ ಬಿಗಿಯುವುದೇ ಸರಿ. ಅದರೊಳಗೇನಿದೆ ಎಂಬುದು ಸಹಾಧ್ಯಾಯಿಗಳಿಗೆ ಗೊತ್ತಾಗಬಾರದು....
{{gap}}“ಮಾರ್ಕೆಟ್ಟಿನಿಂದ ಏನಾದರೂ ತರಬೇಕೇನಮ್ಮ?”
{{gap}}ಸಾಮಾನು ಯಾವುದಾದರೂ ತೀರಿದೆಯೇ ಎಂದು ನಾಗಮ್ಮ ಒಂದು ಕ್ಷಣ ಯೋಚಿಸಿದರು, ಒಂದೂ ಹೊಳೆಯಲಿಲ್ಲ.
{{gap}}“ನೆನಪಾಗೋಲ್ವಲ್ಲೇ....?
{{gap}}“ಹೋಗಲಿಬಿಡು, ಚಂದ್ರನಿಗೆ ಹೇಳಿ ಭಾನುವಾರ ತರಿಸಿದರಾಯ್ತು.”
{{gap}}“ತರಕಾರಿ ಮುಗಿದಿದೆ.”
{{gap}}“ಅಲ್ಲಿಂದಲೇ ತರಲೋ ? ಅಥವಾ ಬೆಳಗ್ಗೆ ಮಾಡ್ಕೊಂಡು ಬಂದಾಗ?
{{gap}}“ಸಾಕು, ಸಾಕು, ಇಲ್ಲೇ ಕೊಂಡರಾಯ್ತು, ಮುಗಿದಿದೆ ಅಂತ ಹೇಳ್ಳೆ,
ಅಷ್ಟೆ.”
{{gap}}ಮಗಳು ಚಿಲ್ಲರೆ ದುಡ್ಡೆಣಿಸಿ, ಹೊರಬೀಳಲು ಅಣಿಯಾಗಿ, ಚಪ್ಪಲಿ ಮೆಟ್ಟಿ ಕೊಳ್ಳುತ್ತಿದ್ದಂತೆ, ನಾಗಮ್ಮ ಕೇಳಿದರು
{{gap}}“ಎಷ್ಟು ಹೊತ್ತಿಗೆ ಬರ್ತೀಯಾ ?” “ಗಿರಿಜಾಬಾಯಿಯನ್ನು ನೋಡಿ, ಹಾಗೇ ಮಾತಾಡಿಸ್ಕೊಂಡು...”
{{gap}}“ಆದಷ್ಟು ಬೇಗೈ ಬಂದ್ವಿಡು.”
{{gap}}“ಹೂನಮ್ಮ”.
{{gap}}ಎಲ್ಲ ವಿವರಗಳೂ ಯಾಕೆ ಎಂದು, ನರ್ಮದೆಯನ್ನು ಕಾಣಹೋಗುವ ವಿಷಯ ವಿಶಾಲಾಕ್ಷಿ ತಾಯಿಗೆ ಹೇಳಲಿಲ್ಲ. ಹೊಸ್ತಿಲು ದಾಟಿ ಹೊರಬೀಳುತ್ತ ಅವಳೆಂದಳು ;
{{gap}}“ಬರ್ತೀನಿ.”
{{gap}}ಸ್ಲೇಟು ಪುಸ್ತಕಗಳನ್ನು ಚೀಲದಲ್ಲಿ ತುಂಬಿ, ಎಳೆಯರ ಶಾಲೆಗೆ ಲಂಗತೊಟ್ಟು<noinclude></noinclude>
3ygh64qrsplqmuxw20k0qxwjhf3fkv5
ಪುಟ:VISHAALAAKSHI - Niranjana.pdf/೨೦
104
37856
317942
100015
2026-05-07T14:36:04Z
Shreelatha.Halemane
7642
/* Proofread */
317942
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ವಿಶಾಲಾಕ್ಷಿ |left=೧೮|right=}}ವಿಶಾಲಾಕ್ಷಿ
ವಿಶಾಲಿ ಹೋಗತೊಡಗಿದಾಗಿನಿಂದಲೂ ಹಾಗೆಯೇ, ಬಾಗಿಲಲ್ಲಿ ನಿಂತು ಕೂಗಿ ಹೇಳಬೇಕು ತಾಯಿಗೆ--ಬಡ್ತೀನಿ' ಎಂದು.
{{gap}}ಅಭ್ಯಾಸಬಲದಿಂದ ನಾಗಮ್ಮ ಅಂದರು :
{{gap}}“ಹೂಂ.”
{{gap}}ಹಿಂದೆಯಾಗಿದ್ದರೆ ಎಚ್ಚರಿಕೆಯ ಮಾತುಗಳೂ ಇರುತ್ತಿದ್ದುವು : 'ಬೀದಿ ಬದೀಲೇ ಹೋಗು, ಮೋಟಾರು ಬಂದೀತು ಹುಷಾರಿ!” ಈಗ ಹಾಗೆ ಹೇಳುವ ಅಗತ್ಯವಿರಲಿಲ್ಲ; ಎಳೆಯ ಮಗುವೇನೂ ಅಲ್ಲ ಅವರ ಮಗಳು.
{{gap}}ತರಗತಿಗಳಿಗೆಂದು ಹೊರಟಿದ್ದ ವಿದ್ಯಾರ್ಥಿಗಳ ಹಿಂಡು ರಸ್ತೆಯಲ್ಲಿತ್ತು, ಕಾಲ್ನಡಿಗೆಯವರು, ಸೈಕಲ್ ಸವಾರರು ..ಹಿಂದೆ ಅಂತಹ ವಿದ್ಯಾರ್ಥಿಗಳು ತನ್ನೆಡೆಗೆ ನೋಡಿದಾಗ ಭಯಗೊಳ್ಳುತ್ತಿದ್ದಳು ವಿಶಾಲಿ, ಈಗ ಆ ಬಗೆಯ ಅನುಭವವಾಗುತ್ತಿರಲಿಲ್ಲ. ಅವರೆಲ್ಲರಿಗಿಂತ ಹಿರಿಯಳು ಆಕೆ.ಹಿರಿಯಳು. ವಯಸ್ಸಲ್ಲ, ತಾನು ಅಧ್ಯಾಪಿಕೆಯಾಗಿದ್ದುದಲ್ಲ, ಕೈಯಲ್ಲಿದ್ದ ಕಟ್ಟು ಸಾರುತ್ತಿತ್ತು ತನ್ನ ಹಿರಿತನ'ವನ್ನು,
{{gap}}ಗಂಭೀರವಾದ ಮೆಲುನಡೆಯಿಂದ ಬೀದಿಯ ಅಂಚಿನಲ್ಲಿ ವಿಶಾಲಾಕ್ಷಿ ನಡೆದಳು.
{{gap}}ನಡೆದುಹೋಗುತ್ತಿದ್ದ ಮ ಗ ಳ ನ್ನು ತುಂಬುನೋಟದಿಂದ ನಾಗಮ್ಮ ನೋಡಿದರು.<noinclude></noinclude>
kop4aarfzutvycq3scsjfsldo9hgmrv
ಪುಟ:ನನ್ನ ಸಂಸಾರ.djvu/೧೮
104
57301
317943
159435
2026-05-07T14:41:15Z
Shreelatha.Halemane
7642
/* Proofread */
317943
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಕಾದಂಬರಿ ಸಂಗ್ರಹ|left=10|right=}}10
ವರನ್ನು ಪ್ಲೇಗು ತಗಲಿದ ಹುಡುಗಿಯೊಡನೆ ಬಲವಂತವಾಗಿ ಊರು ಬಿಟ್ಟು ಹೊರಡಿಸಿ ಬಿಟ್ಟರು. ಅವರು ಧೈರ್ಯವನ್ನು ಹೊಂದಿ ಕ್ಷೀರಪುರಕ್ಕೆ ಮೂರು ಮೈಲಿ ದೂರದಲ್ಲಿದ್ದ ನಾಗಪುರಕ್ಕೆ ತಮ್ಮನೆಂಟರೊಬ್ಬರ ಮನೆಗೆ ಹೋಗೋಣವೆಂದುಹೊರಟರು. ನಾಗಪುರಕ್ಕೂಬಂದದ್ದಾಯಿತು, ಇವರು ಅಲ್ಲಿಗೆ ಹೋದುದು ಮಹಾನವಮಿಯ ದಿನ ಮಧ್ಯಾಹ್ನ ನಾಲ್ಕು ಘಂಟೆ ಸಮಯ, ಇವರು ಬಂದ ವಿಷಯವನ್ನು ಎಷ್ಟೋ ಗುಟ್ಟಿನಲ್ಲಿಟ್ಟಿರಬೇಕೆಂದು ಮಾಡಿ ಕೊಂಡಿದ್ದಾಗ್ಯೂ ಸಾಯಂಕಾಲ ೮ ಘಂಟೆಯೊಳಗಾಗಿ ಊರಿಗೆಲ್ಲವೂ ಈ ಸುದ್ದಿ ತಿಳಿದೇ ಹೋಯಿತು. ಮೊದಲು ವಿನಾಯಕ ಶಾಸ್ತ್ರಿಗಳು ಇಳಿದು ಕೊಳ್ಳಕ್ಕೆ ತಕ್ಕ ಸ್ಥಳವೇ ದೊರೆಯಲಿಲ್ಲ, ಹೇಗೋ ಕಷ್ಟಪಟ್ಟು ಸಾಯಂಕಾಲ ಏಳುಗಂಟೆ ಹೊತ್ತಿಗೆ ಬಂಧುವೊಬ್ಬನ ಮನೆಯ ಬೀದಿ ಬಾಗಲಲ್ಲಿ ರೋಗಿಯನ್ನು ಮಲಗಿ ಸಿಕೊಂಡು ತಾವೂ ಕತಕೊಂಡರು. ೯ ಘಂಟೆ ಹೊತ್ತಿಗೆ ಇಳಿದಿದ್ದ ಮನೆ ಬಾಗ ಲಿಗೆ ದೊಣ್ಣೆಗಳನ್ನು ಹಿಡಿದುಕೊಂಡು ಒಂದು ಭಯಂಕರವಾದ ಮನುಷ್ಯರ ಗುಂಪು ಬಂದಿತು. ಅವರಲ್ಲಿ ಒಬ್ಬೊಬ್ಬರು ಒಂದೊಂದುರೀತಿ ಗಳಯುವುದಕ್ಕಾರಂಭಿಸಿದರು. ಹತ್ತು ಘಂಟಿಯೊಗಾಗಿ ಈ ಊರನ್ನು ಒಟ್ಟು ರೋಗಿಯನ್ನು ಹೊರಕ್ಕೆ ತೆಗೆದುಕೊಂಡು ಹೋದರೆ ಸು, ಇಲ್ಲವಾದರೆ ಬಹಳ ಅನರ್ಥವಾಗುವುದೆಂದು ಗುಂಪಿಗೆ ಗುಂಪೇ ಕೂಗ ತೊಡಗಿತು, ಎನಾಯಕ ಶಾಸ್ತ್ರಿಗಳ ಮನೆಯವರ ಮನಸ್ಸು ಈಗ ಹೇಗಿದೆಯೆಂಬುದು ಅನುಭವದವಿನಹ ಗೊತ್ತಾಗಲಾರದಾದ್ದರಿಂದ ಅದನ್ನು ಹೇಳುವುದಿಲ್ಲ. ಅಂತು ವಿನಾಯಕ ಶಾಸ್ತ್ರಿಗಳು ಆ ಊರ ಬಳ್ಳ ದೊರರಲೇಬೇಕಾಯಿತು, ಅವರ ಕಷ್ಟ ಜಗದೀಶ್ವರನೊ ಬಬಲ್ಲ, ಅವರಿಗೆ ಏನೂ ತೋರದೆ ಹಣೆಯಲ್ಲಿ ಒರದಂತಾಗಲೆಂದು ಯೋಚಿಸಿ ಸ್ವಸ್ಥ ಇವಾದ ಹರಪ್ರರಕ್ಕೆ ಪ್ರಯಾಣ ಮಾಡಲು ನಿಷ್ಕ ರ್ಮಿಸಿದರು, ರಾತ್ರಿ ಹನ್ನೆರಡು ಗಂಟೆ ಹೊತ್ತಿಗೆ ವಿನಾಯಕ ಶಾಸ್ತ್ರಿಗಳು ಎರಡು ಬಂಡಿಗಳನ್ನು ಹೊಡಿಸಿಕೊಂಡು ಬಂದು ಅದ ರಲ್ಲೊಂದರಲ್ಲಿ ರೋಗಿಯನ್ನೂ ಸವಿಾಪದಲ್ಲಿ ತಮ್ಮ ತಾಯಿಯನ್ನೂ ಕುಳ್ಳಿರಿಸಿ ಇನ್ನೊಂದರಲ್ಲಿ ಕಡಮೆಯ ರರೆಲ್ಲರೂ ಕು ಳು ಪ್ರಯಾಣ ಮಾಡಿದರು.
{{gap}}ಗಾಡಿಯು ಮೆಲ್ಲ ಮೆಲ್ಲನೆ ಹೋಗುತ್ತಿತ್ತು, ರೋಗಿಯ ಸಂಕಟವೂ ಆರ್ತ ನಾದವೂ ಕ್ಷಣೇಕ್ಷಣೇ ಹೆಚ್ಚುತ್ತಿತ್ತು, ಈ ಭಯಂಕರ ಘಟನೆಯನ್ನು ನೋಡಿದವರ ಎದೆಯು ಒಡೆದು ಹೋಗುವಂತಿತ್ತು. ನಾಗಪುರಕ್ಕೂ ಹರಪುರಕ್ಕೂ ಹತ್ತು ಮೈಲು ದೂರ, ವಿಜಯದಶಮಿಯದಿತ ಬೆಳಗಿನಝಾವ ನಾಲ್ಕು ಗಂಟೆ ಸಮಯದಲ್ಲಿ ಈ ಪ್ರಯಾ ಣಿಕರ ಬಂಡಿಗಳು ನಾಗಪುರ ಹರಪುರಗಳ ಮಧ್ಯ ದಾರಿಯಲ್ಲಿರುವ ಒಂದು ಕೆರೆಯ ಏರಿಯ ಮೇಲೆ ಬರುತ್ತಿದ್ದಾಗ ಲಕ್ಷ್ಮೀ ದೇವಿಯು ಈ ಭೂಲೋಕವನ್ನು ಬಿಟ್ಟು<noinclude></noinclude>
c6owoexxr1ct82skt8qxe05mvtctzc1
ಪುಟ:ಕುರುಕ್ಷೇತ್ರ ಗ್ರಂಥ.djvu/೫೪
104
72378
317944
143772
2026-05-07T14:42:35Z
Shreelatha.Halemane
7642
/* Proofread */
317944
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಕುರುಬನ ಕರಾಮತಿ|left=|right=೪೭}}
.
ದಲ್ಲಿ ತೊಡಗಿದ್ದರಿಂದ ಅವನ ಗಸಿಯು ಬಂದುಬಿದ್ದು, ಹೋಳಕರನು ಶಾನ ಛಾವಣಿ ಯಮೆಲೆ ಸಪ್ಪಳಿಲ್ಲದೆ ನಿರ್ಬಾಧವಾಗಿ ಸಾಗಿಹೋಗಲಿಕ್ಕೆ ಅನುಕೂಲವಾಯಿತು. ಆತಾ ಯಿಖಾನನು ಯುದ್ಧದಲ್ಲಿ ತೊಡಗಿದ ಸುದ್ದಿಯನ್ನು, ಆ ಬಾನನ ಜನರು ಶಹನಿಗೆ ತಿಳ ಸಿದರು; ಆದರೆ ಶಹಾನು ಅದಕ್ಕೆ ಅಷ್ಟು ಮಹತ್ವ ಕೊಡಲಿಲ್ಲ. ಈಮೊದಲೆಅತಾಯಿಖಾನನು ಅಕಸ್ಮಾತ್ತಾಗಿ ಗೋವಿಂದಪಂತಬುಂದಲೆಯನ್ನು ಕೊಂದ ಸಿಟ್ಟಿನಿಂದ ಮರಾಟರು ಅವನ ಸೇಡು ತೀರಿಸಿಕೊಳ್ಳಲಿಕ್ಕೆ ಬಂದಿರಬಹುದೆಂದು ಆತನು ತಿಳಿದು, ಖಾನನ ಸಹಾಯಕ್ಕೆ ತನ್ನ ವಾಸಸೈನ್ಯವನ್ನೂ, ಸುಜಾಲದೌಲನ ಮೊಗಲರಾವುತರನ್ನೂ ಕಳಿಸಿ, ತನ್ನ ಬಳಿಯಲ್ಲಿ ಅಫಗಾಣಕಾಲಾಳನ್ನೂ, ಹಾಫೀಜರಹಮಂತಖಾನನ ರೊಹಿಲೆಜನರನ್ನೂ ಇಟ್ಟುಕೊಂಡನು. ಇದಕ್ಕಾ ಹೆಚ್ಚಿನ ವ್ಯವಸ್ಬಿಯನ್ನೇನು ಮಾಡುವ ಕಾರಣವಿಲ್ಲೆಂದು ಶಹಾನು ತಿಳಿದು ಸ್ವಸ್ಥವಾಗಿದ್ದನು. ಆತನ ಈ ತಪ್ಪು ತಿಳುವಳಿಕೆಯ ಲಾಭವು ಮಲ್ಲಾ ರರಾಯನಿಗಾಯಿತು. ಆ ರಣವೀರನು ನಿರ್ವಾಧವಾಗಿ ಮುಂದಕ್ಕೆ ಸಾಗಿ ದನು, ಉತ್ತರಹಿಂದುಸ್ಥಾನದಲ್ಲಿ ಚಳಿಗಾಲದೊಳಗೆ ಮಂಜು ಬಹು ದಟ್ಟವಾಗಿ ಬೀಳುತ್ತದೆ. ಅದರಂತೆ ಈಗ ಮಂಜು ಬಿದ್ದದರಿಂದ, ದಾಣಿಗಳಿಗೆ ಜೋಳಕರನ ಜನರು ಬರುವದು ಕಾಣಲಿಲ್ಲ.
{{gap}}ಶಹಾನು ಜಾತ್ಯಾ ಒಳ್ಳೇ ಜಾಣನು, ಧೂರ್ತನು; ಆದರೆ ಯುದ್ಧ ಮಾಡಿ ನರೆ ಹಾಯ್ದಿದ್ದ ಮಲ್ಲಾರರಾಯನು ಯುಕ್ತಿಯಿಂದ ಆತನನ್ನು ಚನ್ನಾಗಿ ಮೋಸಗೊಳಿಸಿ ದನು. ಒಂದು ದಿನ್ನೆಯಮೇಲೆ ಶಹಾನ ಕೆಂಪು ಡೇರೆಯನ್ನು ಹೊಡೆದಿದ್ದರು. ಅದರ ಸುತ್ತು ತುಬಾಕಿಯವರ ಜಾಗರೂಕವಾದ ಕಾವಲು ಇತ್ತು. ಮಲ್ಲಾರರಾಯನ ಜನರು ತೀರಹತ್ತರ ಹೊಗಲು, ಆ ಕಾವಲುಗಾರರಿಗೆ ಅವರ ಸುಳವು ಹತ್ತಿ, ಕಡಲೆ ಅವರು ತುಬಾಕಿಗಳನ್ನು ಹಾರಿಸಿದರು. ಅದಕ್ಕೆ ಮರಾಟರಿಂದಲೂ ಪ್ರತ್ಯುತ್ತರವು ದೊರೆಯಿತು. ಮರಾಟರು “ಹರ ಹರ ಮಹಾದೇವ” ಎಂದು ಗರ್ಜಿಸುತ್ತ ಕೈಗೆ ಸಿಕ್ಕವರನ್ನು ತುಂಡರಿಸುತ್ತ ಮುಂದಕ್ಕೆ ಸಾಗಿದರು. ಅವರ ಸೈನ್ಯದೊಂದು ಗುಂಪು ಶಹಾನ ಛಾವಣಿಯ ದ್ವಾರದೊಳಗಿಂದ ಸಾಗಿಹೊಗಿ ಡೇರೆಯ ಮುಂದಿನ ಓಣಿಯನ್ನು ಸೇರಿತು. ಮತ್ತೊಂದು ಗುಂಪು ಬೇರೊಂದು ನಿಟ್ಟಿನಿಂದ ಡೇರೆಯಿದ್ದ ದಿನ್ನೆಯನ್ನು ಏರಿ ಹೋಗಹತ್ತಿತು. ಹೀಗೆ ಸೂರ್ಯೋದಯವಾಗುತ್ತಿರಲು, ಮಲ್ಲಾರರಾಯನು ತನ್ನ ಪ್ರತಿಜ್ಞೆಯಂತೆ ದುರಾಣಿಯ ಶಹನ ಡೇರೆಗೆ ಮುತ್ತಿಗೆ ಹಾಕಿದನು. ಈ ಪ್ರಸಂಗ ದಲ್ಲಿ ದುರಾಣಿ ಅಹಮ್ಮದಶಹನು ತನ್ನ ಡೇರೆಯಲ್ಲಿ ಇದ್ದರೆ, ಹೋಳಕರನ ಪ್ರತಿಜ್ಞೆಯು ಪೂರ್ಣವಾಗಿ, ಶಹಾನು ಹೋಳಕರನ ಸೆರೆಯಾಳಾಗಬಹುದಾಗಿತ್ತು; ಆದರೆ ಗುರಿಯ ಸ್ವಲ್ಪದರಲ್ಲಿ ತಪ್ಪಿದಂತಾಯಿತು! ಅಂದು ಶಹಾನು ಸುದೈವದಿಂದ ಬೇರೆ ಡೇರೆಯಲ್ಲಿ ಮಲಗಿಕೊಂಡದ್ದರಿಂದ ಪಾರಾದನು. ದೇವರು ಕಾಯುವಾಗ ಯಾರು ಏನು ಮಾಡು ವರು? ಹೀಗೆ ಹೋಳಕರನು ಡೇರೆಯನ್ನು ಮುತ್ತಿದಾಗ, ಅತ್ತ ಸಮಶೇರಬತಾ ದರ, ವಿಚಾರಕರ ಇವರು ದುರಾಣಿಯ ಛಾವಣಿಯೊಳಗಿನ ಜನರನ್ನು ತುಂಡರಿಸ<noinclude></noinclude>
kyziecgvbyq3yvpussu1dvqpyqfzru4
ಪುಟ:ಕುರುಕ್ಷೇತ್ರ ಗ್ರಂಥ.djvu/೫೫
104
72379
317945
143773
2026-05-07T14:43:33Z
Shreelatha.Halemane
7642
/* Proofread */
317945
proofread-page
text/x-wiki
<noinclude><pagequality level="3" user="Shreelatha.Halemane" /></noinclude>
{{rh|center=ಕುರುಕ್ಷೇತ್ರ !|left=೪೮|right=}}
ಹತ್ತಿದರು; ಅ ಮಹದಾಜಿ ಸಿಂದೆಯು ಅತಾಯಿಖಾನನ ಮೈಯನು ಚನ್ನಾಗಿ ನುಗು ಮಾಡಿದ್ದನು. ಹೀಗೆ ಮರಾಟರು ಎಲ್ಲ ಕಡೆಯಿಂದಲೂ ಸಿರಿಬಂದು ಅನರ್ಥ ಮಾಡತೊಡಗಿರುವದನ್ನು ನೋಡಿ ಶಹಾನು ದುಗು ಬಡಿದನು. ಅಂಥ ಅಲೌಕಿಕ ಬುದ್ದಿಶಾಲಿಯ, ಹಾಗು ಕೈ ಕೂತ ರಣಸಿರನ ಬುದ್ಧಿಯೂ, ಆಗ ಮಸಣಿ ಸಿ ಹೋಯಿತು! ತಾನು ಏಳುವದರೊಳಗೆ ಮರಾಟರು ತನ್ನ ಸೀರೆಯ ಮುತ್ತಿದರಲ್ಲ, ಎಂದು ಆತನು ಆಶ್ಚರ್ಯದಿಂದ ಬೆರಳು ಕಚ್ಚಿದನು. ತಾನು ನಿನ್ನೆ ತನ್ನ ಡೇರೆಯಲ್ಲಿ ಮಲಗದೆ ಇದ್ದದ್ದೊಂದು ಅಲ್ಲಾನ ಕೃಪೆಯೆಂದು ಆತನ ತಿಳಿದನು.
{{gap}}ಈ ಪ್ರಸಂಗದಲ್ಲಿ ಮರಾಟರು ಪ್ರಕಟಿಸಿದ ಪರಾಕ್ರಮವು ಆರ್ಯಕರವಾ ಗಿತ್ತು. ಅವರ ಆವೇಶದ ಹೊಡೆತಕ್ಕೆ ದುರಾಣಿಯ ಪಾಳಯವು ತತ್ತರಿಸಿತು; ದುರಾ ಣಿಯು ದುಗುಬಡಿದನು. ಏನುಮಾಡಬೇಕೆಂಬದು ಆತನಿಗೆ ತೋಚದಾಯಿತು. (ಮಲಾರ ಆಯಾ! ಮುಲ್ಯಾರಆಯಾ” ಎಂಬ ಭಯಸೂಚಕ ಧನಿಯು ಛಾವಣಿಯ ತುಂಬ ಹಬ್ಬಿತು. ಪೆಂಡಾರಿಗಳು ತಮ್ಮ ಲೂಟಿಯ ಕಾಯಕವನ್ನು ಬಿಡಿಸಿದರು. ಲೂಟ ಯೊಡನೆ ಜನಸಂಹಾರದ ಕಾರ್ಯವನ್ನೂ ಸಾಗಿಸಿದರು. ಆಗ ಅಬ್ ಕಾ ಕನಾ! ಅರೆ ಅಲ್ಲಾ! ಬಡಾಗಹಜಬಹುವಾ! ತೋಬಾ! ತೋಬಾ!” ಎಂಬ ಧ್ವನಿಯಿಂದ ದಿಕ್ಕು ಗಳು ತುಂಬಿದವು. ಕೆಲವು ಹೊತ್ತಿನಮೇಲೆ ಬರ್ಚಿಯ ಯುದವು ನಿಂತು ಖದ್ಯದ ಯುದ್ಧಕ್ಕೆ ಆರಂಭವಾಯಿತು. ಆ ಘೋರವಾದ ಕಾದಾಟದಲ್ಲಿ ಹೋಳಕರ-ಗಾಯಕ ವಾಡ-ವಿಂಚೂರಕರರವರ ಹಲವುಜನ ವೀರರು ರಣಭೂಮಿಯಲ್ಲಿ ಬಿದ್ದರು. ಆಮೇಲೆ ಆ ಮೂವರು ವೀರರೂ ಸೈನ್ಯದೊಡನೆ ಜಲಪ್ರವಾಹದಂತೆ ದುರಾಣಿಯ ಸೈನ್ಯದಮೇಲೆ ಹರಿದುಹೋದರು, ಉಭಯದಳದ ವೀರರ ಖಡ್ಗಳ ಹೊಡತದ “ಸಪ್ ಸಸ್” ಎಂಬ ಸಪ್ಪಳವು ಎಲ್ಲ ಕಡೆಯಲ್ಲಿ ಕೇಳಹತ್ತಿತು. ರಣಕೊಂಬು, ರಣಭೇರಿ ಮೊದಲಾದ ಹಣ ವಾದ್ಯಗಳು ಭೋರ್ಗರೆಯಹತ್ತಿದವು. ಮರಾಟರ ಆ ಮೂವರು ವೀರರಿಗೂ ರಣಮದ ವೇರಿ, ಅವರು ಎದುರಾದವರನ್ನು ತುಂಡರಿಸುತ್ತ ಸಾಗಿದರು. ಸ್ವತ: ಮಲ್ಯಾರರಾ ಯನು ಎಲ್ಲರಿಗಿಂತ ಮುಂದೆ ಹೋಗಿ ಶಹನ ಡೇರೆಯ ಮುಂದಿನ ಹಸಿರು ನಿಶಾನೆಯನ್ನು ಹೊಡೆದು ಕೆಡವಿ, ಅದರ ಸ್ಥಳದಲ್ಲಿ ತನ್ನ ಟೊಂಕಕ್ಕೆ ಸುತ್ತಿದ್ದ ಕಂದಿಯಬಣ್ಣದ ಸೆಲ್ಲೆಯ ನಿಶಾನವಾಡಿ ನಿಲ್ಲಿಸಿದನು! ಈ ನಿಶಾನೆಯನ್ನು ನೋಡಿದಕೂಡಲೆ ಮರಾಟಾ ವೀರರು “ಹರಹರ ಮಹಾದೇವ” ಎಂದು ಗರ್ಜಿಸಿ ಒತ್ತರದಿಂದ ಮುಂದಕ್ಕೆ ಸಾಗಿ ಹೋದರು. ಆಗ ಸುಜೆಉದ್ರಲನು ಬಾದಶಹನ ಬಳಿಯಲ್ಲಿ ಕುಳಿತಿದ್ದನು. ಆತನನ್ನು ಕುರಿತು ಬಾದಶಹನು(ಮರಾಠಾಸರದಾರರು ಭಯಂಕರ ಸಾಹಸಮಾಡಿದರು! ಮರಾ ಟಿರು ಹೆಸರಾದ ವೀರರಿರುವರು. ಇಂಥ ಪರಾಕ್ರಮಿಗಳಿರುವರೆಂಬದು ನನಗೆ ಗೊತ್ತಿ ದಿಲ್ಲ. ಇವರೊಡನೆ ಒಡಂಬಡಿಕೆ ಮಾಡಿಕೊಳ್ಳುವದು ನೆಟ್ಟಗೆ! ಹಾಗೆ ಮಾಡುವದರಲ್ಲಿಯೇ ಜಾಣತನವಿರುತ್ತದೆ. ಅನ್ನದ ದುಷ್ಮಾಳಬಿದ್ದಿದ್ದರೂ, ಈ ಸೈತಾನರು ಯಥಾಸ್ಥಿತ ವಾಗಿ ತಮ್ಮ ರಣಕಾರ್ಯವನ್ನು ಸಾಗಿಸುತ್ತಿರುವರಲ್ಲ! ಶಾಬಾಸ! ಇವರ ಬಲವು ಅಧಿಕ<noinclude></noinclude>
q0re3sm5bykhajfzha10xpdz2htmk77
ಪುಟ:ನನ್ನ ನಲ್ಲ.pdf/೧೭
104
75414
317924
284525
2026-05-07T13:40:01Z
Shreelatha.Halemane
7642
/* Proofread */
317924
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Right|xvii}}
ಅಗಾಧವಾದ ಆತ್ಮದೃಷ್ಟಿಗೆ ಸಾಕ್ಷಿಯೆನ್ನಬಹುದು.
{{gap}}“ಮಧುರಗೀತವೆಂಬ ಸ್ನೇಹಸೂಕ್ತವನ್ನು ಅಮರವಾಗಿ ಹಾಡಿದರು. ಇಂಗ್ಲೀಷಿನ
ಸಂಪರ್ಕವಿಲ್ಲದ ಅವರು ಕೇವಲ ಆಧ್ಯಾತ್ಮಿಕ ಪಿಪಾಸೆಯಿಂದ ಪ್ರೇರಿತರಾಗಿ
ಪದವೀಧರರಿಗಿಂತ ಹೆಚ್ಚಾಗಿ ಆಂಗ್ಲಸಾಹಿತ್ಯವನ್ನು ಅಭ್ಯಾಸ ಮಾಡಿದರು. ಸಾಹಿತ್ಯಕ್ಕೆ
ವಿಶಿಷ್ಟ ಸೇವೆಸಲ್ಲಿಸುವ ಗುಂಪೊಂದನ್ನು ನಿರ್ಮಿಸಿದರು."
{{gap}}''ಸಾಹಸ, ತಾಳ್ಮೆ, ಪರಿಶ್ರಮ, ಅದ್ಭುತ ಅನುಭವ, ಸತ್ಯಪ್ರಮಾಣಗಳನ್ನು
ಕುರಿತ ನಿಷ್ಠೆ ಇವು ಲೌಕಿಕ ವಿಷಯಗಳ ಸಂಶೋಧನೆಗೂ ಆವಶ್ಯಕವಾಗಿರುವಾಗ,
ಪಾರಮಾರ್ಥಿಕ ಸಂಶೋಧನೆಗೆ ತೊಡಗಿದ ಮಧುರಚೆನ್ನರು ಇವುಗಳನ್ನೆಲ್ಲ
ಅಳವಡಿಸಿಕೊಂಡು ಸ್ವತಃ ತಮ್ಮ ಬಾಳನ್ನೇ ಪ್ರಯೋಗಕ್ಕೆ ಒಡ್ಡಿ ಆತ್ಮಸಂಶೋಧನೆ
ನಡೆಸಿದ ಅಪೂರ್ವ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ಬಾಳಿನಿಂದ, ವ್ಯಾಸಂಗದಿಂದ,
ಸಾಧನೆಯಿಂದ ನಮ್ಮ ನಾಡಿನಲ್ಲಿ ಹೊರಹೊಮ್ಮಿಸಿದ ಬೆಳಕು ನಮ್ಮ ನಾಡಿನ
ಇಂದಿನ ವೈಭವವಾಗಿದೆ."
{{gap}}'ಅವರು ಮಧುರಚನ್ನರಾಗಿ 'ನನ್ನನಲ್ಲನನ್ನು ಕಂಡ ಆ ಅನುಭಾವದ
ಮುಂಬೆಳಗಿಗೆ ತೃಪ್ತಿಗೊಳ್ಳದ ಪರಾಪ್ರಕೃತಿಯ ಪ್ರೇಮಕ್ಕಾಗಿ ಹಂಬಲಿಸಿ 'ದೇವತಾ
ಪೃಥಿವಿ' ಕವನವನ್ನು ಹಾಡಿದ್ದಾರೆ. ಅವರ ಕವಿತೆಗಳಲ್ಲಿ ಶಿರೋರತ್ನವೆಂದರೆ ಅದೇ
ಆಗಿದೆ. ಅದೇ ಅವರ ಜೀವನದ ಉತ್ತರ.
ಮೊಲೆಹಾಲ ರುಚಿಗೊಂಡು ಮನದ್ದಾಲ ಬಯಸೇನ
ಗುಟುಗುಟುಕಿಗೊಮ್ಮೆ ಮಿಕಿ ಮಿಕಿ ಏಳಮ್ಮಾ।
ಹಸಿವೀಗಿ ಮೊಲೆಯುಂಡೆ ಕಸಿವಿಸಿಗೇನುಳ್ಳೆ
ಹಾಲೊಲ್ಲೆ ಸಾಕು ಬಿಗಿದಪ್ಪು ಏಳವಾ
ಮೊಲೆಹಾಲು ಸಾಕಮ್ಮಾ ಸವಿಲಾಲಿ ಬೇಕಮ್ಮಾ
ಮುದ್ದಾಡಿ ರಮಿಸಿ ಮೈದಡವು ಏಳವಾ
{{gap}}ಕವಿಯ ತನುವನ್ನು ನಿಸಿದಿಗೆಗಲ್ಲು ಮಾಡಿರದಿದ್ದರೆ ಮನವನ್ನು ಮಾಸತಿ
ಕಲ್ಲು ಮಾಡಿರದಿದ್ದರೆ ಸಾಧನೆಯೊಂದು ವೀರಗಲ್ಲು ಆಗಿ ನಿಲ್ಲುತ್ತಿರಲಿಲ್ಲ. ಕಾವ್ಯರ್ಷಿಯ
ಪ್ರಕೃತಿಯ ಅಣುರಚನೆಯೇ ಬೇರೆಯಾಗಿತ್ತು. ಅವರು ಹುಟ್ಟಾ ಕಮಲ. ಕೆಸರಲ್ಲಿ
ಹುಟ್ಟಿದರೂ ಕಿತ್ತುಕೊಂಡು ಮೇಲೆದ್ದು ಮುಗಿಲಿಗೆ ಮುಖಮಾಡಿ ನಿಲ್ಲುವದನ್ನು
ಅದಕ್ಕೆ ಯರೂ ಕಲಿಸಲಾರರು. ಕವಿಯ ಮಾತಿನಲ್ಲಿಯೇ ಆ ಪ್ರಶೋತ್ತರಗಳು
ಕಂಗೊಳಿಸುತ್ತವೆ.
ಏಳು, ಕಮಲವೆ ನಿನ್ನ
ಯಾವ ಕರ್ಮದಿ ಬಂದು<noinclude></noinclude>
5v9g9i03evv1gzd1fitruc7m2chrwz5
ಪುಟ:ನನ್ನ ನಲ್ಲ.pdf/೯೧
104
75488
317925
284659
2026-05-07T13:44:39Z
Shreelatha.Halemane
7642
/* Proofread */
317925
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=೬೮|right=ನನ್ನನಲ್ಲ}}
'''೧೮. ರೋಹಿಣಿ'''
{{gap}}ಬಾರೇ ಗೆಳತಿ
{{gap}}{{gap}}ಒಳಗೇ ಕುಳಿತಿ
{{gap}}{{gap}}{{gap}}ಅಟ್ಟಾ ಏರಿ
{{gap}}{{gap}}ಮೇಲೆ ನಿಂತಿ
{{gap}}{{gap}}ಕದಾಗಿದಾ ನೂಕಿಕೊಂಡು
{{gap}}{{gap}}{{gap}}ಚಿಲಕಾಗಿಲಾ ಹಾಕಿಕೊಂಡು
{{gap}}{{gap}}{{gap}}ಅಲ್ಲೇ ಕುಳಿತಿ
{{gap}}{{gap}}{{gap}}{{gap}}{{gap}}{{gap}}ಬಾರೇ ಗೆಳತಿ ೧
{{gap}}ಬಾರೇ ಜಾಣಿ
{{gap}}ಮಿಂಚಿನ ರಾಣಿ
{{gap}}{{gap}}ಅಪ್ಸರ ನಾರಿ
{{gap}}{{gap}}{{gap}}ಮೈ ಜರತಾರಿ
{{gap}}{{gap}}ಥಾಟಮಾಟ ಮಾಡಿಕೋತ
{{gap}}{{gap}}{{gap}}ಆಟಪಾಟ ಆಡಿಕೋತ
{{gap}}{{gap}}ಅಲ್ಲೇ ಕುಳಿತಿ
{{gap}}{{gap}}ಬಾರೇ ಗೆಳತಿ ೨
{{gap}}ಮುಗಿಲಾಗ್ ಹೊಳೆದಿ
{{gap}}ಮೇಲೆ ಇಳಿದಿ
{{gap}}ಒಳಗೇ ಉಳಿದಿ
{{gap}}{{gap}}ಬಾರೇ ಗೆಳತಿ
{{gap}}{{gap}}ಅಲ್ಲೇ ಸುಳಿದಿ
{{gap}}{{gap}}ಏನೋ ಎಂತೋ ನೋಡಿಕೋತ
{{gap}}ತರನಾ ತರಲಾ ಹಾಡಿಕೋತ
{{gap}}ಅಲ್ಲೇ ಕುಳಿತಿ
{{gap}}ಬಾರೇ ಗೆಳತಿ ೩
ด<noinclude>{{gap}}</noinclude>
ndz4kkl3xdt9aqgki3eirl2n4kqj462
ಪುಟ:ನಡೆದದ್ದೇ ದಾರಿ.pdf/೫೦
104
76903
318031
251875
2026-05-08T09:04:00Z
Shreelatha.Halemane
7642
/* Validated */
318031
proofread-page
text/x-wiki
<noinclude><pagequality level="4" user="Shreelatha.Halemane" />{{rh|left=ಮುಳ್ಳುಗಳು / ಪ್ರಶ್ನೆ|right=೪೩}}</noinclude>ಬೆಳಗಾಗುತ್ತದೋ ಆಗಲಿ-ಎನ್ನಿಸಿತು.
{{gap}}ಮೂರು ಗಂಟೆ.... ತಮ್ಮಿಬ್ಬರ ಪರಿಚಯವಾದ ಹೊಸದರಲ್ಲಿ ಹೇಳಿದ್ದ No. IV, "ಶಶೀ, ನನಗೆ ನಿನ್ನ ಯೋಚನೆಯಲ್ಲಿ ನಿದ್ರೆಯೇ ಬರುವದಿಲ್ಲ. ದಿನಾ ಮೂರು ಗಂಟೆಗೇ ಎಚ್ಚರವಾಗಿಬಿಡುತ್ತದೆ. ನಾನು ನಿನ್ನ ಬಗ್ಗೆ ಯೋಚಿಸದೇ ಇದ್ದ ಕ್ಷಣವೂ ಇಲ್ಲ.’ ಇರಬೇಕು, ಆಗ ಅವನಿಗೆ ಹಾಗನಿಸುತ್ತಿದ್ದಿರಬೇಕು. ಆದರೆ ತಾನೇಕೆ ಅದಕ್ಕಾಗಿ ರಾತ್ರಿ ಮೂರು ಗಂಟೆಗೆ ಕಣ್ಣು ಬಿಟ್ಟುಕೊಂಡು ಹೀಗೆ ಕುದಿಯಬೇಕು? ತನ್ನ ಬಗ್ಗೆ ಸದಾ ಯೋಚಿಸುವೆನೆಂದು ಹೇಳಿದವನು ಇವನೇ ಮೊದಲನೆಯವನೇನಲ್ಲವಲ್ಲ! ತನ್ನ ನೆನಪಿನಲ್ಲಿ ಈಗ ದೂರದ ಕಿರುನೆರಳಾಗಿ ಮಾತ್ರ ಉಳಿದ No. 1. No. II ಇತ್ಯಾದಿ ಅಸಂಖ್ಯರೆಲ್ಲ ಹೀಗೆ ಹೇಳಿದ್ದರು. ಬಿಳಿ ಬೆಡ್ಶೀಟ್ನ ಮೇಲೆ ಬಂದ ತಗಣಿಯನ್ನು, ಕಲೆಗಳು ಬೆಡ್ ಶೀಟಿನ ಮೇಲೆ ಉಳಿದಾವೆಂದು ಸಹ ಚಿಂತಿಸದೆ, ಅಲ್ಲೇ ಒರೆದು ಬಿಡುವ ಹಾಗೆ ಅವರನ್ನೆಲ್ಲ ಒರೆದು ಬಿಡಲಿಲ್ಲವೆ? ಆದರೆ ಈ No. IV ಬರಿಯ ತಗಣಿಯಲ್ಲ. ಹಾಗಾದರೆ ಇವನೇನು ಚೇಳೆ? ಹಾವೆ?
{{gap}}-ಮತ್ತೆ ಪ್ರಶ್ನೆ. ಇವನ ಬಗೆಗಿನ ವಿಚಾರಗಳಿಗೆ ಅನಿವಾರ್ಯವಾದ ಕೊನೆಯ ಹಂತವೆಂದರೆ ಒಂದು ಪ್ರಶ್ನಾರ್ಥಕ ಚಿಹ್ನೆ. ಉತ್ತರ ಹುಡುಕಲು ಪ್ರಯತ್ನ ಮಾಡಿದಂತೆಲ್ಲಾ ಪ್ರಶ್ನೆ ದೊಡ್ಡದು- ದೊಡ್ಡದಾಗುತ್ತ ನಡೆಯುತ್ತಿದೆ. ಸುಮ್ಮನೆ ಸ್ವಸ್ಥ ಮಲಗುವುದು ಒಳ್ಳೆಯದು.
{{gap}}.............
{{gap}}ಸ್ವಸ್ಥ ಮಲಗುವುದೆ? ಇನ್ನೆಲ್ಲಿಯ ಸ್ವಸ್ಥ ಇಷ್ಟೆಲ್ಲಾ ಆದ ನಂತರ?
{{gap}}ಏನೆಲ್ಲ ಆಗಿ ಹೋಯಿತು ಇಷ್ಟು ಸ್ವಲ್ಪ ಅವಧಿಯಲ್ಲಿ! ಬೇಡ — ಬೇಡವೆಂದರೂ ಶಶಿಯ ಕಣ್ಣುಗಳು ಆಕಸ್ಮಾತ್ತಾಗಿ ತುಂಬಿಬಂದವು ಆ ನೆನಪಿನಿಂದ. ತನ್ನ ಸಾಹಿತ್ಯದಂತೆಯೇ ತಾನೂ ಪ್ರಾಮಾಣಿಕನೆಂದು, ಬಿಚ್ಚುಮನಸ್ಸಿನವನೆಂದು, ಇದ್ದುದನ್ನು ಇದ್ದಂತೆ ಹೇಳುವವನೆಂದು, ಒಣ ಜಂಭ ಈ No. IVನಿಗೆ, ಈ ಜಂಭದಲ್ಲಿ -ಮೌಡ್ಯದಲ್ಲಿ ಆತನಿಗೆ ತನ್ನ ಭಾವನೆಗಳ ಪೊಳ್ಳು, ತನ್ನ ವ್ಯಕ್ತಿತ್ವದ ಶೂನ್ಯ ಗಮನಕ್ಕೆ ಬರುವುದೇ ಇಲ್ಲ. ಈತನ ನವ್ಯತೆಗೆ-ಸಾಹಿತ್ಯಕ್ಕೆ ಬೆಂಕಿ ಹಚ್ಚಬೇಕು..... ಎಂಥ ಹುಚ್ಚು ಧೈರ್ಯ ಆತನಿಗೆ! ಈ ಅನುಭವದಲ್ಲಿ ಹಿಂದೊಮ್ಮೆ ಮಣ್ಣು ಮುಕ್ಕಿದ್ದನ್ನು ಆಗಾಗ ಮರೆತುಬಿಟ್ಟು ಮತ್ತೆ ಅಂಥದೇ ಅನುಭವಗಳ ಜಾಲದಲ್ಲಿ ಸಿಕ್ಕುಬೀಳುವ, ಒದ್ದಾಡುವ ಬಯಕೆ. ಇಲ್ಲವಾದರೆ ಆತನ ಸಾಹಿತ್ಯಕ್ಕೆ ವಾಸ್ತವಿಕತೆ, ವೈವಿಧ್ಯತೆ ಎಲ್ಲಿಂದ ಬರಬೇಕು? 'ಶಶಿ, ಎಲ್ಲಾ ಬಿಟ್ಟು ದೂರ ಹೋಗೋಣ ಬಾ, ಇಷ್ಟು ದಿನ ನಾವಿಬ್ಬರೂ ಪರಸ್ಪರರಿಗಾಗಿ ಹುಡುಕಾಡುತ್ತಿದ್ದೆವು.<noinclude><references/></noinclude>
stjcbbaek1l1h7x2aymlejxanuz4uii
ಪುಟ:ನಡೆದದ್ದೇ ದಾರಿ.pdf/೫೧
104
76904
318032
251876
2026-05-08T09:05:08Z
Shreelatha.Halemane
7642
/* Validated */
318032
proofread-page
text/x-wiki
<noinclude><pagequality level="4" user="Shreelatha.Halemane" />{{rh|left=೪೪|right=ನಡೆದದ್ದೇ ದಾರಿ}}</noinclude>ತಡವಾಗಿ ಏಕಾಗಲೊಲ್ಲದು, ನಮ್ಮ ಭೆಟ್ಟಿಯಾಗಿದೆ. ಎಲ್ಲವನ್ನೂ -ಎಲ್ಲರನ್ನೂ ತೊರೆದು ದೂರವಾಗಿ ನಮ್ಮ ಕನಸಿಗೆ ಬಣ್ಣ ತುಂಬೋಣ ಬಾ' ಎಂದಿದ್ದ: (ಈಗ ಮಜಾ ಅನಿಸುತ್ತಿದೆ.) 'ನಿನಗೆ ನನ್ನೊಂದಿಗೆ ಬರುವ ಧೈರ್ಯವಿಲ್ಲ. ನೀನು ಹೇಡಿ, ಆದರ್ಶಗಳ ಲಕ್ಷ್ಮಣರೇಖೆಯನ್ನು ದಾಟಿ ಬರಲಾಗದ ದುರ್ಬಲಳು' ಎಂದು ತನ್ನನ್ನೇ ಆಕ್ಷೇಪಿಸಿದ್ದ: ತನಗಾಗ ಸಿಟ್ಟು ಬಂದರೂ ಸುಮ್ಮನೇಕಿದ್ದೆ? ಬಹುಶಃ ಆತನ ಆಕ್ಷೇಪಣೆಯಲ್ಲಿ ಸತ್ಯಾಂಶವಿತ್ತೆಂದೆ? ಆದರೆ ಆತನ ಹುಚ್ಚಿಗೆ ತಾನೂ ಸಾಥ ಕೊಡಲಾರದುದಕ್ಕೆ ತನ್ನಲ್ಲಿ ಧೈರ್ಯವಿಲ್ಲದ್ದೊಂದು ಮಹತ್ವದ ಕಾರಣವಲ್ಲ. ಇನ್ನೊಂದು ಮುಖ್ಯ ಕಾರಣವಿತ್ತು ಆದಕ್ಕೆ. ಅದಾವುದೆಂಬುದು ನಿನ್ನೆ ಸಂಜೆ ಸ್ಪಷ್ಟವಾಯಿತು- ಈ ತಲೆತಿರುಕನಲ್ಲಿ ತನಗೆಂದೂ ಪೂರ್ಣ ವಿಶ್ವಾಸ ಹುಟ್ಟಲಿಲ್ಲ. ಅವನ ತಲೆಗೇರಿದ ಅಮಲು ಇಳಿದುಬಿಟ್ಟ ನಂತರ ತನ್ನ ಜೊತೆ ದೂರ ಬಂದವಳನ್ನು ಮತ್ತೆ ತನ್ನಿಂದ ದೂರ ನೂಕಿಬಿಡುವ ಪ್ರವೃತ್ತಿ ಆತನದು.
{{gap}}ನನಗೆ ಗೊತ್ತಿತ್ತೋ No. IV! ನಿನ್ನ ಕನಸು, ಅದಕ್ಕೆ ಬಣ್ಣ ತುಂಬುವ ಬಯಕೆ, ಎಲ್ಲ ಬಿಟ್ಟು ಹೋಗುವ ಧೈರ್ಯ- ಇವುಗಳ ಅರ್ಥ ನನಗೆ ಆಗಲೇ ಗೊತ್ತಿತ್ತು ಎಂದೆ. ಒಬ್ಬನೇ ಇದ್ದು ಬೇಸರವಾದಾಗ ಸ್ವಲ್ಪ ದಿನಗಳ ಮಟ್ಟಿಗೆ ಜೊತೆ ಬೇಕಾಗಿತ್ತು ನಿನಗೆ — ಅಪ್ಪಿ ಮುದ್ದಿಡಲು, ರಕ್ತ-ಮಾಂಸ ತುಂಬಿದ ಜೀವಂತ ಗೋಂಬೆ. ಅಷ್ಟೇ ಅಲ್ಲವೆ?
{{gap}}ಈಗ ನಿನ್ನ ಅವಶ್ಯಕತೆ ಪೂರೈಸಿದೆ. ಈಗ ನನ್ನ ನೆನಪು ನಿನ್ನ ಸುಟ್ಟು ಕರಕಾದ ಹೃದಯದ ಒಂದು ಮೂಲೆಯಲ್ಲಿ ತುಕ್ಕು ಹಿಡಿದ ಕಬ್ಬಿಣದ ತುಣುಕಿನಂತೆ ಬಿದ್ದು ಕೊಂಡಿದೆ. ಈಗ ಇದನ್ನೆಲ್ಲ ವಸ್ತುನಿಷ್ಟವಾಗಿ, ವಿಮರ್ಶಕನ ದೃಷ್ಟಿಯಿಂದ ನೋಡಬಹುದಾದ ಶಕ್ತಿ ನಿನಗೆ ಬಂದಿದೆ — ಹೀಗೇ ಹೌದಲ್ಲವೆ ನೀನನ್ನುವುದು? ಸುಟ್ಟಿತು ನಿನ್ನ ವಸ್ತುನಿಷ್ಠತೆ. ನನಗನಿಸುವದು-ಈ ವಸ್ತುನಿಷ್ಠತೆ ನಿನ್ನ ಸಾಹಿತ್ಯದಲ್ಲಿ ಮಾತ್ರ ಕಾಣಸಿಗುವ ಒಂದು ಬರಿಯ ಭ್ರಮೆ. ನಮ್ಮ ಹೃದಯದ ಭಾವನೆಗಳ ತೀವ್ರತೆಯ ಬಿಸಿಗೆ ಈ ಭ್ರಮೆ ಕರಗಿಹೋಗುವುದು. ಕನಸಿನಲ್ಲಿ ಕಂಡ ದುರಂತ ಸಿನೆಮಾದ ಹಾಗಿರುವ ಆ ನೆನಪುಗಳನ್ನು ಹೇಗೆ ವಸ್ತುನಿಷ್ಠವಾಗಿ ನೋಡುವುದು? — ಅಂದಿನ ದಿನಗಳಲ್ಲಿ ನಾವಿಬ್ಬರು ಕತ್ತಲಲ್ಲಿ ತಿರುಗಿದ್ದು, ಮಳೆಯಲ್ಲಿ ತೋಯಿಸಿಕೊಂಡದ್ದು, ಒಬ್ಬರನ್ನೊಬ್ಬರು ನೋಡುತ್ತ ಗಂಟೆಗಟ್ಟಲೆ ಮೌನವಾಗಿ ಕಳೆದದ್ದು, ಒಬ್ಬರೊಬ್ಬರ ಎದೆಯಲ್ಲಿ ಮುಖ ಹುದುಗಿಸಿ ಕಣ್ಣು ಮುಚ್ಚಿ ಜಗತ್ತನ್ನೆ ಮರೆತದ್ದು (ಮರೆತಿರುವವೆಂದು ತಿಳಿದದ್ದು?) — ಎಲ್ಲಾ ಎಲ್ಲಾ ಎಂದಾದರೂ ಈ ವಸ್ತುನಿಷ್ಠತೆಯ ಬಂಧನಕ್ಕೆ ಒಳಗಾಗುವದು ಸಾಧ್ಯವೆ? ನನ್ನಿಂದ ನನ್ನ<noinclude><references/></noinclude>
k63fo1xg9ja5xzlfzklzx7p3atwgvaz
ಪುಟ:ನಡೆದದ್ದೇ ದಾರಿ.pdf/೪೯೭
104
76914
318085
169464
2026-05-08T10:01:21Z
Shreelatha.Halemane
7642
/* Proofread */
318085
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=೪೯೦|right=ನಡೆದದ್ದೇ ದಾರಿ}}
{{gap}}“ಮಿಲಿ, ಖರೇ ಹೇಳು, ಸೋನಿಯಾ ಚಿತ್ರಾ ತಗಿಯೋವಾಗ ನೀ ಏನು ಮಾಡತಾ ಇದ್ದಿ ?"
{{gap}}“ಅಮ್ಮಾ, ನಾ ಕೈಕಾಲು ಮುಖ ತೊಳಕೊಂಡು ಬನಿ ಹ್ಯಾ" ಅಂತ ಹೇಳಿ ಮಿಲಿ ಕಾಲು ಕಿತ್ತಳು. ನನ್ನ ಪ್ರಶ್ನೆಯ ಉತ್ತರ ನನಗೆ ಗೊತ್ತಾಗಿ ಬಿಟ್ಟಿತು.
{{gap}}ಮಿಲಿಯ ಆಪ್ತ ಗೆಳತಿ ಸೋನಿಯಾ. ತುಂಬ ತುಂಟಿ. ಓದಿನಲ್ಲಿ ಜಾಣೆ ಕೂಡ. ಬೋರ್ಡಿನ ಮೇಲೆ ಟೀಚರರ ಚಿತ್ರ ತೆಗೆಯುವುದು, ಆಯಾ ಟೀಚರರಿಗೆ ಹೊಂದುವಂಥ ಟೀಕೆ-ಟಿಪ್ಪಣಿ ಬರೆಯುವುದು, ಹಾಜರಿ ತೆಗೆದುಕೊಳ್ಳುವಾಗ ಪ್ರಾಕ್ಸಿ ಹೇಳುವುದು, ಟೀಚರನ್ನೇ ತಬ್ಬಿಬ್ಬು ಮಾಡುವಂಥ ಪ್ರಶ್ನೆ ಕೇಳುವುದು, ಕ್ಲಾಸಿನಲ್ಲಿ ಬೋರಾದರೆ ಟೇಪ್ ರಿಕಾರ್ಡರಿನಲ್ಲಿ ಕ್ಯಾಸೆಟ್ ಹಾಕಿ ಕೇಳುವುದು, ಹಿಂದಿನ ಬೆಂಚಿನಲ್ಲಿ ಕೂತು ಕಳ್ಳ ದನಿಯಲ್ಲಿ ಜೋಕ್ಸ್ ಹೇಳುತ್ತ ತಾನು ಗಂಭೀರವಾಗಿ ಕೂತು ಜೊತೆಯವರನ್ನು ನಗಿಸಿ ಅವರು ಬೈಯಿಸಿಕೊಳ್ಳುವಂತೆ ಮಾಡುವುದು – ಇವೆಲ್ಲ ಸೋನಿಯಾಳ ಪ್ರೀತಿಯ ಹವ್ಯಾಸಗಳು.
{{gap}}ಈ ಹುಡುಗಿಯರಷ್ಟೇ ಅಲ್ಲ, ಹುಡುಗರಿಗೂ ಸೋನಿಯಾನೇ ಲೀಡರ್. ಆಕೆಯೇ ಯಾವಾಗಲೂ ಕ್ಲಾಸಿನ ಮಾನಿಟರ್, ತನ್ನ ವಿರುದ್ಧ ಸೊಲ್ಲೆತ್ತುವ ಗಂಡು ಹುಡುಗರ ಹೆಸರುಗಳನ್ನು ಬ್ಲಾಕ್ ಲಿಸ್ಟಿನಲ್ಲಿ ಸೇರಿಸಿ ಟೀಚರಿಂದ ಶಿಕ್ಷೆ ವಿಧಿಸುವುದೆಂದರೆ ಅವಳಿಗೆ ಬಹಳ ಇಷ್ಟ, ಎತ್ತರವಾಗಿ ಕಟ್ಟು ಮಸ್ತಾಗಿದ್ದ ಆಕೆ ಹಲವಾರು ಬಾರಿ ಕ್ಲಾಸಿನಲ್ಲಿ ಫೈಟಿಂಗ್ ಮಾಡಿ ಹುಡುಗರನ್ನು ಸೋಲಿಸಿದ್ದೂ ಉಂಟು.
{{gap}}ಕ್ರೀಡಾಕೂಟಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಸಭೆಮೆರವಣಿಗೆಗಳಲ್ಲಿ, ಸೋನಿಯಾ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದಳು. ಪರೀಕ್ಷೆಗಳಲ್ಲೂ ಅಷ್ಟೇ, ಮೊದಲ ಬ್ಯಾಂಕು ತಪ್ಪಿದರೆ ಎರಡು ಅಥವಾ ಮೂರನೆಯ ಲ್ಯಾಂಕು ಅವಳಿಗೆ ಸಿಕ್ಕೇ ಸಿಗುತ್ತಿತ್ತು. ಒಮ್ಮೆ ಮಿಲಿಯ ಕ್ಲಾಸಿನವರು ಕಾರವಾರಕ್ಕೆ ಟ್ರಿಪ್ ಹೋದಾಗ ಕಾಲುಜಾರಿ ನೀರಲ್ಲಿ ಮುಳುಗಿ ಹೋಗತೊಡಗಿದ್ದ ಕ್ಲಾಸ್ ಟೀಚರನ್ನು ಸೋನಿಯಾ ಈಜಿಕೊಂಡು ಹೋಗಿ ದಡಕ್ಕೆ ಎಳೆದು ತಂದಳು.
{{gap}}ಈ ಘಟನೆಯ ನಂತರವಂತೂ ಸೋನಿಯಾಳ ವೀರಗಾಥೆಗಳು ಹೊಸ ಬಣ್ಣವನ್ನೇ ಪಡೆದುಕೊಂಡವು. ಹುಟ್ಟಿನಿಂದ ರಜಪೂತಳಾದ ಆಕೆಯನ್ನು ಎಲ್ಲರೂ ಸ್ಟಂಟ್ ಕ್ಲೀನ್ ಎಂದೇ ಕರೆಯತೊಡಗಿದ್ದರು.
{{gap}}ಮಿಲಿಗಂತೂ ಸೋನಿಯಾ ಬಗ್ಗೆ ವಿಪರೀತ ಅಭಿಮಾನ, ನನಗೂ ಅಷ್ಟೆ.<noinclude><references/></noinclude>
nz0mz5ua1lpc22jwsda970fn0qxeqbf
ಪುಟ:ನಡೆದದ್ದೇ ದಾರಿ.pdf/೫೧೭
104
76915
318015
250527
2026-05-08T07:16:36Z
Pragathi. BH
7585
/* Validated */
318015
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೫೧೦|right=ನಡೆದದ್ದೇ ದಾರಿ}}
ಮಹಿಳಾ ಉದ್ಯೋಗಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದುದನ್ನು<br>
ಸಾಬೀತುಪಡಿಸಿ ಆತನಿಗೆ ದಂಡವನ್ನೂ ಆಕೆಗೆ ಪರಿಹಾರವನ್ನು ವಿಧಿಸಿದ್ದಳು.<br>
{{gap}}ಹೀಗೆ ರಜೆಯ ಮೊದಲು ಎಲ್ಲ ಕೇಸುಗಳನ್ನೂ ಯಶಸ್ವಿನಿ ತೃಪ್ತಿಕರವಾಗಿ<br>
ಇತ್ಯರ್ಥ ಮಾಡಿ ಸಮಾಧಾನದಿಂದ ಬೆಂಗಳೂರಿನ ಬಸ್ಸು ಏರಿ ಕೂತಳು.<br>
೩
{{gap}}ಬಸ್ಸು ಹೊರಟಾಗ ಮಾತ್ರ ಆಕೆ ಕೇಸುಗಳನ್ನೂ ವಕೀಲರ ವಾದ-<br>
ಪ್ರತಿವಾದಗಳನ್ನೂ ಸಂಪೂರ್ಣವಾಗಿ ಮರೆತಳು. ಆಕೆಯ ಕಣ್ಣ ತುಂಬ. ಮನಸ್ಸುತುಂಬ<br>
ಮನೆ, ತನ್ನ ಮನೆ, ಗಂಡ, ಮಕ್ಕಳು ತುಂಬಿದರು. ಇಂಜಿನೀಯರಿಂಗ್ ಓದುತ್ತಿದ್ದ.<br>
ಇನ್ನೂ ತಾಯಿಯ ಕಡೆಯಿಂದಲೇ ಜಡೆ ಹಾಕಿಸಿಕೊಳ್ಳುತ್ತಿದ್ದ ಮಗಳು, ಪಾಪ, ಏನು<br>
ಮಾಡುತ್ತಿದ್ದಾಳೋ, ರಾತ್ರಿಯ ಹೊತ್ತಿನಲ್ಲಿ ವಿದ್ಯುತ್ ಹೋಗಿ ದೀಪಗಳು ಆರಿದರೆ<br>
ಓಡಿ ಬಂದು ತಾಯಿಯ ಮಗ್ಗುಲಲ್ಲಿ ಮಲಗುವ ಮಗ. ಪಾಪ, ಹೇಗೆ ಈ ಕಷ್ಟಗಳನ್ನು<br>
ಎದುರಿಸುತ್ತಿದ್ದಾನೋ, ಮುಖ್ಯವಾಗಿ ಗಂಡ ಮನೋಹರ, ಅದೆಷ್ಟೋ ವರ್ಷಗಳಿಂದ<br>
ಹಗಲಿರುಳೂ ಜೊತೆಯಾಗಿದ್ದ ಹೆಂಡತಿಯನ್ನು ಅಗಲಿ ಎಷ್ಟು ಒದ್ದಾಡುತ್ತಿದ್ದಾನೋ.<br>
ನೆನೆಯುತ್ತಿದ್ದಂತೆ ಯಶಸ್ವಿನಿಗೆ ಕಣ್ಣುತುಂಬಿ ಬಂದವು. ಈ ರಜೆಯ ಪ್ರತಿಯೊಂದು<br>
ಕೃಣವನ್ನೂ ಆಕೆ ತನ್ನವರಿಗಾಗಿ ಮೀಸಲಿಡುವಳು. ಸಾಧ್ಯವಾದರೆ ರಜೆಯನ್ನು<br>
ವಿಸ್ತರಿಸುವಳು. ಇನ್ನೂ ಒಂದಿಷ್ಟು ಯೋಚಿಸಿದರೆ ನೌಕರಿಗೇ ರಾಜೀನಾಮೆ<br>
ಕೊಡಬೇಕು ಅನ್ನಿಸುತ್ತದಲ್ಲ. ಆ ಬಗೆಗೂ ಮನೋಹರನೊಂದಿಗೆ ಈ ಸಲ<br>
ಸಮಾಲೋಚಿಸಬೇಕು. ಸಂಸಾರದ ಸುಖ ಮತ್ತು ಶಾಂತಿಗಿಂತ ಯಾವುದೂ<br>
ಹೆಚ್ಚಿನದಲ್ಲವಲ್ಲ.<br>
೪
{{gap}}ಇಷ್ಟು ದಿನಗಳ ನಂತರ ಯಶಸ್ವಿನಿ ಮನೆಗೆ ಬಂದಿದ್ದಳು. ಅವಳನ್ನು<br>
ಎದುರುಗೊಳ್ಳಲು ಯಾರೂ ಬಸ್ಸ್ಟ್ಯಾಂಡಿಗೆ ಬಂದಿರಲಿಲ್ಲ. ಮನೆಯಲ್ಲೂ ಅತ್ತೆ<br>
ಒಬ್ಬರೇ ಇದ್ದರು. ಮಗಳು ಕಾಲೇಜಿನ ಸಹಪಾಠಿಗಳೊಂದಿಗೆ ಪಿಕ್ನಿಕ್ಗೆ ಹೋಗಿದ್ದಳು.<br>
ರವಿವಾರವಾದುದರಿಂದ ಮಗ ಕ್ರಿಕೆಟ್ ಆಡಲು ಹೋಗಿದ್ದ. ಸಂಜೆಯಾಗಿತ್ತೆಂದು<br>
ಮನೋಹರ ಕ್ಲಬ್ಬಿಗೆ ಹೋಗಿದ್ದ.<br>
{{gap}}ಒಂದು ಕ್ಚಣ ಮನಸ್ಸಿಗೆ ಪಿಚ್ಚೆನ್ನಿಸಿದರೂ ಆಕೆ ಸಾವರಿಸಿಕೊಂಡಳು. ಕೈಕಾಲು<br>
ಮುಖ ತೊಳೆದು, ಅತ್ತೆ ಕೊಟ್ಟ ಚಹಾ ಕುಡಿದಳು. ನೀನು ಹೇಗಿದ್ದೀ, ಕೆಲಸ ಹೇಗೆ<br>
ನಡೆದಿದೆ. ಆರೋಗ್ಯವೇ ಅಂತ ಏನೂ ಕೇಳದೆ ಅತ್ತೆ ಈಚೆಗೆ ಮದುವೆಯಾದ ತನ್ನ<br>
ಮಗಳು ಅಂದರೆ ಮನೋಹರನ ತಂಗಿಯ ಸಂಭ್ರಮವನ್ನೇ ವರ್ಣಿಸುತ್ತ ಕೂತಾಗ<br><noinclude><references/></noinclude>
izekqku50kn9hq5p3djnads3wpl5uaq
318017
318015
2026-05-08T07:21:28Z
Pragathi. BH
7585
318017
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೫೧೦|right=ನಡೆದದ್ದೇ ದಾರಿ}}
ಮಹಿಳಾ ಉದ್ಯೋಗಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದುದನ್ನು<br>
ಸಾಬೀತುಪಡಿಸಿ ಆತನಿಗೆ ದಂಡವನ್ನೂ ಆಕೆಗೆ ಪರಿಹಾರವನ್ನು ವಿಧಿಸಿದ್ದಳು.<br>
{{gap}}ಹೀಗೆ ರಜೆಯ ಮೊದಲು ಎಲ್ಲ ಕೇಸುಗಳನ್ನೂ ಯಶಸ್ವಿನಿ ತೃಪ್ತಿಕರವಾಗಿ
ಇತ್ಯರ್ಥ ಮಾಡಿ ಸಮಾಧಾನದಿಂದ ಬೆಂಗಳೂರಿನ ಬಸ್ಸು ಏರಿ ಕೂತಳು.<br>
{{center|೩}}
{{gap}}ಬಸ್ಸು ಹೊರಟಾಗ ಮಾತ್ರ ಆಕೆ ಕೇಸುಗಳನ್ನೂ ವಕೀಲರ ವಾದ-
ಪ್ರತಿವಾದಗಳನ್ನೂ ಸಂಪೂರ್ಣವಾಗಿ ಮರೆತಳು. ಆಕೆಯ ಕಣ್ಣ ತುಂಬ. ಮನಸ್ಸುತುಂಬ
ಮನೆ, ತನ್ನ ಮನೆ, ಗಂಡ, ಮಕ್ಕಳು ತುಂಬಿದರು. ಇಂಜಿನೀಯರಿಂಗ್ ಓದುತ್ತಿದ್ದ.
ಇನ್ನೂ ತಾಯಿಯ ಕಡೆಯಿಂದಲೇ ಜಡೆ ಹಾಕಿಸಿಕೊಳ್ಳುತ್ತಿದ್ದ ಮಗಳು, ಪಾಪ, ಏನು
ಮಾಡುತ್ತಿದ್ದಾಳೋ, ರಾತ್ರಿಯ ಹೊತ್ತಿನಲ್ಲಿ ವಿದ್ಯುತ್ ಹೋಗಿ ದೀಪಗಳು ಆರಿದರೆ
ಓಡಿ ಬಂದು ತಾಯಿಯ ಮಗ್ಗುಲಲ್ಲಿ ಮಲಗುವ ಮಗ. ಪಾಪ, ಹೇಗೆ ಈ ಕಷ್ಟಗಳನ್ನು
ಎದುರಿಸುತ್ತಿದ್ದಾನೋ, ಮುಖ್ಯವಾಗಿ ಗಂಡ ಮನೋಹರ, ಅದೆಷ್ಟೋ ವರ್ಷಗಳಿಂದ
ಹಗಲಿರುಳೂ ಜೊತೆಯಾಗಿದ್ದ ಹೆಂಡತಿಯನ್ನು ಅಗಲಿ ಎಷ್ಟು ಒದ್ದಾಡುತ್ತಿದ್ದಾನೋ.
ನೆನೆಯುತ್ತಿದ್ದಂತೆ ಯಶಸ್ವಿನಿಗೆ ಕಣ್ಣುತುಂಬಿ ಬಂದವು. ಈ ರಜೆಯ ಪ್ರತಿಯೊಂದು
ಕೃಣವನ್ನೂ ಆಕೆ ತನ್ನವರಿಗಾಗಿ ಮೀಸಲಿಡುವಳು. ಸಾಧ್ಯವಾದರೆ ರಜೆಯನ್ನು
ವಿಸ್ತರಿಸುವಳು. ಇನ್ನೂ ಒಂದಿಷ್ಟು ಯೋಚಿಸಿದರೆ ನೌಕರಿಗೇ ರಾಜೀನಾಮೆ
ಕೊಡಬೇಕು ಅನ್ನಿಸುತ್ತದಲ್ಲ. ಆ ಬಗೆಗೂ ಮನೋಹರನೊಂದಿಗೆ ಈ ಸಲ
ಸಮಾಲೋಚಿಸಬೇಕು. ಸಂಸಾರದ ಸುಖ ಮತ್ತು ಶಾಂತಿಗಿಂತ ಯಾವುದೂ
ಹೆಚ್ಚಿನದಲ್ಲವಲ್ಲ.<br>
{{center|೪}}
{{gap}}ಇಷ್ಟು ದಿನಗಳ ನಂತರ ಯಶಸ್ವಿನಿ ಮನೆಗೆ ಬಂದಿದ್ದಳು. ಅವಳನ್ನು
ಎದುರುಗೊಳ್ಳಲು ಯಾರೂ ಬಸ್ಸ್ಟ್ಯಾಂಡಿಗೆ ಬಂದಿರಲಿಲ್ಲ. ಮನೆಯಲ್ಲೂ ಅತ್ತೆ
ಒಬ್ಬರೇ ಇದ್ದರು. ಮಗಳು ಕಾಲೇಜಿನ ಸಹಪಾಠಿಗಳೊಂದಿಗೆ ಪಿಕ್ನಿಕ್ಗೆ ಹೋಗಿದ್ದಳು.
ರವಿವಾರವಾದುದರಿಂದ ಮಗ ಕ್ರಿಕೆಟ್ ಆಡಲು ಹೋಗಿದ್ದ. ಸಂಜೆಯಾಗಿತ್ತೆಂದು
ಮನೋಹರ ಕ್ಲಬ್ಬಿಗೆ ಹೋಗಿದ್ದ.<br>
{{gap}}ಒಂದು ಕ್ಚಣ ಮನಸ್ಸಿಗೆ ಪಿಚ್ಚೆನ್ನಿಸಿದರೂ ಆಕೆ ಸಾವರಿಸಿಕೊಂಡಳು. ಕೈಕಾಲು
ಮುಖ ತೊಳೆದು, ಅತ್ತೆ ಕೊಟ್ಟ ಚಹಾ ಕುಡಿದಳು. ನೀನು ಹೇಗಿದ್ದೀ, ಕೆಲಸ ಹೇಗೆ
ನಡೆದಿದೆ. ಆರೋಗ್ಯವೇ ಅಂತ ಏನೂ ಕೇಳದೆ ಅತ್ತೆ ಈಚೆಗೆ ಮದುವೆಯಾದ ತನ್ನ
ಮಗಳು ಅಂದರೆ ಮನೋಹರನ ತಂಗಿಯ ಸಂಭ್ರಮವನ್ನೇ ವರ್ಣಿಸುತ್ತ ಕೂತಾಗ<br><noinclude><references/></noinclude>
hm0oxu0yiertgt029jqh1met7kqz5cm
ಪುಟ:ನಡೆದದ್ದೇ ದಾರಿ.pdf/೫೧೮
104
76916
318016
250507
2026-05-08T07:16:48Z
Pragathi. BH
7585
/* Validated */
318016
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ|right=೫೧೧}}
ಯಶಸ್ವಿನಿ ಎದ್ದು ಮಲಗುವ ಕೋಣೆಗೆ ಹೋಗಿ ಅಡ್ಡಾ ದಳು. ಆಕೆಯ ಕಣ್ಣುಗಳು<br>
ಕೂಡಲೇ ಮುಚ್ಚಿಕೊಂಡವು.<br>
{{gap}}ರಾತ್ರಿ ಅದೆಷ್ಟೋ ಹೊತ್ತಿನಲ್ಲಿ ಅತ್ತೆ ಆಕೆಯನ್ನು ಎಬ್ಬಿಸಿದರು. "ಏಳಮ್ಮಾ.<br>
ಊಟ ಮಾಡು, ಮಕ್ಕಳು ಊಟ ಮಾಡಿ ಮಲಗಿಬಿಟ್ಟರು. ಮನು ಬರೋದು ಬಹಳ<br>
ತಡವಾದೀತು, ಇಂದು ರವಿವಾರವಲ್ಲವೆ, ಅವನಿಗೂ ಇದೊಂದೇ ದಿನ ಸಿಗೋದು.<br>
ನೀನು ಉಂಡು ಮುಗಿಸಿ ವಿಶ್ರಾಂತಿ ತಗೋ. ಕೀರ್ತಿ ಪಿಕ್ನಿಕ್ನಿಂದ ದಣಿದು ಬಂದು,<br>
ಊಟ ಮಾಡಿ ಮಲಗಿಯೇ ಬಿಟ್ಟಳು. ಕಿರಣ ಪಾಪ, ಆಡುವಾಗ ಕಾಲು ಉಳುಕಿತಂತೆ,<br>
ಎಣ್ಣೆ ಹಚ್ಚಿ ತಿಕ್ಕಿದ್ದೇನೆ, ಸಾಕಾಗಿದೆ ಅಂತ ಮಲಗಿದ್ದಾನೆ. ನೀನು ಏಳಮ್ಮಾ...."<br>
{{gap}}ಎಲ್ಲೋ ಏನೋ ತಪ್ಪುತ್ತಿದೆ ಅನಿಸಿತು ಯಶಸ್ವಿನಿಗೆ. ಆಕೆ ಎದ್ದು ಮುಖ<br>
ತೊಳೆದು, ಮಲಗಿದ್ದ ಮಕ್ಕಳಿಬ್ಬರನ್ನೂ ಕಣ್ಣುತುಂಬ ನೋಡಿ, ಅವರ ಹಣೆಗಳನ್ನು<br>
ಮೃದುವಾಗಿ ಮುದ್ದಿಸಿ, ಊಟ ಮಾಡಿ, ಮತ್ತೆ ಮಲಗಿದಳು. ನಾಳೆಯಿಂದ<br>
ನಿಧಾನವಾಗಿ ಎಲ್ಲವನ್ನೂ ಕೈಗೆ ತೆಗೆದುಕೊಳ್ಳೋಣವೆಂದು ಯೋಚಿಸಿ<br>
ಸಮಾಧಾನಪಟ್ಟುಕೊಂಡಳು. ಮಧ್ಯ ರಾತ್ರಿ ದಾಟಿದ ನಂತರ ಮನೆಗೆ ಬಂದು, ತಾಯಿ<br>
ಬಡಿಸಿದ ಊಟ ಮಡಾಡಿ ಹಾಸಿಗೆಗೆ ಬಂದು ಮಾತೇ ಆಡದೆ ಬಿಗಿದಪ್ಟಿದ<br>
ಮನೋಹರನಿಗೆ, ನಿದ್ದೆ ಕೆಟ್ಟಿದ್ದಕ್ಕೆ ಸಿಟ್ಟು ಬಂದರೂ ಹೇಳದೆ, ಸಹಕಾರ ನೀಡಿದಳು.<br>
{{gap}}ಮರುದಿನ ಮುಂಜಾನೆ ಯಶಸ್ವಿನಿ ಎಲ್ಲರಿಗಿಂತ ಮುಂಚಿತವಾಗಿ ಎದ್ದಳು.<br>
ಬೇಗನೆ ಕಾಲೇಜಿಗೆ ಹೋಗಲಿರುವ ಮಗಳಿಗಾಗಿ ಅವಳಿಗಿಷ್ಟವಾದ ಮಸಾಲೆ ಉಪ್ಪಿಟ್ಟು<br>
ಮಾಡಿದಳು. ತಿನ್ನುತ್ತ ಕೂತ ಮಗಳನ್ನೆ ನೋಡುತ್ತ ನಿಂತಳು. ಅಮ್ಮಾ, ಇವತ್ತಿನ ತಿಂಡಿ<br>
ಎಕ್ಸಲೆಂಟ್ ಆಗಿದೆ. ಎಷ್ಟೋ ದಿನ ಆಗಿತ್ತು ಇಂಥ ಉಪ್ಪಿಟ್ಟು ತಿಂದು, ಯು ಆರ್<br>
ಗ್ರೇಟ್ ಮಮಾ, ಅಂತ ಕೀರ್ತಿ ಆನ್ನುತ್ತಾಳೆಂದು ನಿರೀಕ್ಷಿಸಿದಳು.<br>
{{gap}}ಇಲ್ಲ. ಬದಲಿಗೆ, ಏನು ಮಮಾ, ಉಪ್ಪಿಟ್ಟು ಮಾಡಿದ್ದೀ, ಈಗೆಲ್ಲ ಇದನ್ನು<br>
ಯಾರೂ ಇಷ್ಟಪಡೋದಿಲ್ಲ. ನೂಡಲ್ಸ್ ಮಾಡಲು ಹೇಳಿದ್ದೆ ನಾನು ಅಜ್ಜಿಗೆ-<br>
ಅಂದಳು. ಮಗಳು ದೊಡ್ಡವಳಾಗಿದ್ದಾಳೆ. ಅವಳ ಇಷ್ಟಾನಿಷ್ಟಗಳೂ ಬದಲಾಗಿವೆ.<br>
ತಾನೇ ಹೊಂದಿಕೊಳ್ಳಬೇಕು.<br>
{{gap}}ಸ್ಕೂಲಿಗೆ ಹೊರಟ ಮಗ ಕಿರಣ ಎಷ್ಟು ಎತ್ತರವಾಗಿದ್ದಾನೆ. ಎಷ್ಟು ಸ್ಮಾರ್ಟ್<br>
ಆಗಿದ್ದಾನೆ. ತಾನು ಮೊದಲ ಸಲ ನೋಡಿದಾಗ ಮನೋಹರನೂ ಹೀಗೆಯೇ ಇದ್ದ.<br>
ಪ್ರೀತಿಯಿಂದ ಯಶಸ್ವಿನಿ ಮಗನ ಮುಖವನ್ನು ಬೊಗಸೆಯಲ್ಲಿ ಹಿಡಿದು ಹಣೆಗೊಂದು<br>
ಮುತ್ತನ್ನಿತ್ತಳು. ಆತ ಕೊಸರಿಕೊಂಡು ಥೂ, ಬಿಡು ಮಮಾ, ನನ್ನ ಹೇರ್ ಸ್ಟಾಯಿಲ್<br>
ಕೆಡಿಸಿಬಿಟ್ಟಿ ಅಂತ ಓಡಿ ಹೋದ.<noinclude><references/></noinclude>
eqihtixlnnbgcwncjkikqg8c6rbhl4q
318018
318016
2026-05-08T07:24:41Z
Pragathi. BH
7585
318018
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ|right=೫೧೧}}
ಯಶಸ್ವಿನಿ ಎದ್ದು ಮಲಗುವ ಕೋಣೆಗೆ ಹೋಗಿ ಅಡ್ಡಾ ದಳು. ಆಕೆಯ ಕಣ್ಣುಗಳು
ಕೂಡಲೇ ಮುಚ್ಚಿಕೊಂಡವು.<br>
{{gap}}ರಾತ್ರಿ ಅದೆಷ್ಟೋ ಹೊತ್ತಿನಲ್ಲಿ ಅತ್ತೆ ಆಕೆಯನ್ನು ಎಬ್ಬಿಸಿದರು. "ಏಳಮ್ಮಾ.
ಊಟ ಮಾಡು, ಮಕ್ಕಳು ಊಟ ಮಾಡಿ ಮಲಗಿಬಿಟ್ಟರು. ಮನು ಬರೋದು ಬಹಳ
ತಡವಾದೀತು, ಇಂದು ರವಿವಾರವಲ್ಲವೆ, ಅವನಿಗೂ ಇದೊಂದೇ ದಿನ ಸಿಗೋದು.
ನೀನು ಉಂಡು ಮುಗಿಸಿ ವಿಶ್ರಾಂತಿ ತಗೋ. ಕೀರ್ತಿ ಪಿಕ್ನಿಕ್ನಿಂದ ದಣಿದು ಬಂದು,
ಊಟ ಮಾಡಿ ಮಲಗಿಯೇ ಬಿಟ್ಟಳು. ಕಿರಣ ಪಾಪ, ಆಡುವಾಗ ಕಾಲು ಉಳುಕಿತಂತೆ,
ಎಣ್ಣೆ ಹಚ್ಚಿ ತಿಕ್ಕಿದ್ದೇನೆ, ಸಾಕಾಗಿದೆ ಅಂತ ಮಲಗಿದ್ದಾನೆ. ನೀನು ಏಳಮ್ಮಾ...."
{{gap}}ಎಲ್ಲೋ ಏನೋ ತಪ್ಪುತ್ತಿದೆ ಅನಿಸಿತು ಯಶಸ್ವಿನಿಗೆ. ಆಕೆ ಎದ್ದು ಮುಖ
ತೊಳೆದು, ಮಲಗಿದ್ದ ಮಕ್ಕಳಿಬ್ಬರನ್ನೂ ಕಣ್ಣುತುಂಬ ನೋಡಿ, ಅವರ ಹಣೆಗಳನ್ನು
ಮೃದುವಾಗಿ ಮುದ್ದಿಸಿ, ಊಟ ಮಾಡಿ, ಮತ್ತೆ ಮಲಗಿದಳು. ನಾಳೆಯಿಂದ
ನಿಧಾನವಾಗಿ ಎಲ್ಲವನ್ನೂ ಕೈಗೆ ತೆಗೆದುಕೊಳ್ಳೋಣವೆಂದು ಯೋಚಿಸಿ
ಸಮಾಧಾನಪಟ್ಟುಕೊಂಡಳು. ಮಧ್ಯ ರಾತ್ರಿ ದಾಟಿದ ನಂತರ ಮನೆಗೆ ಬಂದು, ತಾಯಿ
ಬಡಿಸಿದ ಊಟ ಮಡಾಡಿ ಹಾಸಿಗೆಗೆ ಬಂದು ಮಾತೇ ಆಡದೆ ಬಿಗಿದಪ್ಟಿದ
ಮನೋಹರನಿಗೆ, ನಿದ್ದೆ ಕೆಟ್ಟಿದ್ದಕ್ಕೆ ಸಿಟ್ಟು ಬಂದರೂ ಹೇಳದೆ, ಸಹಕಾರ ನೀಡಿದಳು.<br>
{{gap}}ಮರುದಿನ ಮುಂಜಾನೆ ಯಶಸ್ವಿನಿ ಎಲ್ಲರಿಗಿಂತ ಮುಂಚಿತವಾಗಿ ಎದ್ದಳು.
ಬೇಗನೆ ಕಾಲೇಜಿಗೆ ಹೋಗಲಿರುವ ಮಗಳಿಗಾಗಿ ಅವಳಿಗಿಷ್ಟವಾದ ಮಸಾಲೆ ಉಪ್ಪಿಟ್ಟು
ಮಾಡಿದಳು. ತಿನ್ನುತ್ತ ಕೂತ ಮಗಳನ್ನೆ ನೋಡುತ್ತ ನಿಂತಳು. ಅಮ್ಮಾ, ಇವತ್ತಿನ ತಿಂಡಿ
ಎಕ್ಸಲೆಂಟ್ ಆಗಿದೆ. ಎಷ್ಟೋ ದಿನ ಆಗಿತ್ತು ಇಂಥ ಉಪ್ಪಿಟ್ಟು ತಿಂದು, ಯು ಆರ್
ಗ್ರೇಟ್ ಮಮಾ, ಅಂತ ಕೀರ್ತಿ ಆನ್ನುತ್ತಾಳೆಂದು ನಿರೀಕ್ಷಿಸಿದಳು.<br>
{{gap}}ಇಲ್ಲ. ಬದಲಿಗೆ, ಏನು ಮಮಾ, ಉಪ್ಪಿಟ್ಟು ಮಾಡಿದ್ದೀ, ಈಗೆಲ್ಲ ಇದನ್ನು
ಯಾರೂ ಇಷ್ಟಪಡೋದಿಲ್ಲ. ನೂಡಲ್ಸ್ ಮಾಡಲು ಹೇಳಿದ್ದೆ ನಾನು ಅಜ್ಜಿಗೆ-
ಅಂದಳು. ಮಗಳು ದೊಡ್ಡವಳಾಗಿದ್ದಾಳೆ. ಅವಳ ಇಷ್ಟಾನಿಷ್ಟಗಳೂ ಬದಲಾಗಿವೆ.
ತಾನೇ ಹೊಂದಿಕೊಳ್ಳಬೇಕು.<br>
{{gap}}ಸ್ಕೂಲಿಗೆ ಹೊರಟ ಮಗ ಕಿರಣ ಎಷ್ಟು ಎತ್ತರವಾಗಿದ್ದಾನೆ. ಎಷ್ಟು ಸ್ಮಾರ್ಟ್
ಆಗಿದ್ದಾನೆ. ತಾನು ಮೊದಲ ಸಲ ನೋಡಿದಾಗ ಮನೋಹರನೂ ಹೀಗೆಯೇ ಇದ್ದ.
ಪ್ರೀತಿಯಿಂದ ಯಶಸ್ವಿನಿ ಮಗನ ಮುಖವನ್ನು ಬೊಗಸೆಯಲ್ಲಿ ಹಿಡಿದು ಹಣೆಗೊಂದು
ಮುತ್ತನ್ನಿತ್ತಳು. ಆತ ಕೊಸರಿಕೊಂಡು ಥೂ, ಬಿಡು ಮಮಾ, ನನ್ನ ಹೇರ್ ಸ್ಟಾಯಿಲ್
ಕೆಡಿಸಿಬಿಟ್ಟಿ ಅಂತ ಓಡಿ ಹೋದ.<noinclude><references/></noinclude>
p7ighj0s8n303fl50bqj9s2ezmzephf
318071
318018
2026-05-08T09:54:10Z
Pragathi. BH
7585
318071
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೫೧೧|right=ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ}}
ಯಶಸ್ವಿನಿ ಎದ್ದು ಮಲಗುವ ಕೋಣೆಗೆ ಹೋಗಿ ಅಡ್ಡಾ ದಳು. ಆಕೆಯ ಕಣ್ಣುಗಳು
ಕೂಡಲೇ ಮುಚ್ಚಿಕೊಂಡವು.<br>
{{gap}}ರಾತ್ರಿ ಅದೆಷ್ಟೋ ಹೊತ್ತಿನಲ್ಲಿ ಅತ್ತೆ ಆಕೆಯನ್ನು ಎಬ್ಬಿಸಿದರು. "ಏಳಮ್ಮಾ.
ಊಟ ಮಾಡು, ಮಕ್ಕಳು ಊಟ ಮಾಡಿ ಮಲಗಿಬಿಟ್ಟರು. ಮನು ಬರೋದು ಬಹಳ
ತಡವಾದೀತು, ಇಂದು ರವಿವಾರವಲ್ಲವೆ, ಅವನಿಗೂ ಇದೊಂದೇ ದಿನ ಸಿಗೋದು.
ನೀನು ಉಂಡು ಮುಗಿಸಿ ವಿಶ್ರಾಂತಿ ತಗೋ. ಕೀರ್ತಿ ಪಿಕ್ನಿಕ್ನಿಂದ ದಣಿದು ಬಂದು,
ಊಟ ಮಾಡಿ ಮಲಗಿಯೇ ಬಿಟ್ಟಳು. ಕಿರಣ ಪಾಪ, ಆಡುವಾಗ ಕಾಲು ಉಳುಕಿತಂತೆ,
ಎಣ್ಣೆ ಹಚ್ಚಿ ತಿಕ್ಕಿದ್ದೇನೆ, ಸಾಕಾಗಿದೆ ಅಂತ ಮಲಗಿದ್ದಾನೆ. ನೀನು ಏಳಮ್ಮಾ...."
{{gap}}ಎಲ್ಲೋ ಏನೋ ತಪ್ಪುತ್ತಿದೆ ಅನಿಸಿತು ಯಶಸ್ವಿನಿಗೆ. ಆಕೆ ಎದ್ದು ಮುಖ
ತೊಳೆದು, ಮಲಗಿದ್ದ ಮಕ್ಕಳಿಬ್ಬರನ್ನೂ ಕಣ್ಣುತುಂಬ ನೋಡಿ, ಅವರ ಹಣೆಗಳನ್ನು
ಮೃದುವಾಗಿ ಮುದ್ದಿಸಿ, ಊಟ ಮಾಡಿ, ಮತ್ತೆ ಮಲಗಿದಳು. ನಾಳೆಯಿಂದ
ನಿಧಾನವಾಗಿ ಎಲ್ಲವನ್ನೂ ಕೈಗೆ ತೆಗೆದುಕೊಳ್ಳೋಣವೆಂದು ಯೋಚಿಸಿ
ಸಮಾಧಾನಪಟ್ಟುಕೊಂಡಳು. ಮಧ್ಯ ರಾತ್ರಿ ದಾಟಿದ ನಂತರ ಮನೆಗೆ ಬಂದು, ತಾಯಿ
ಬಡಿಸಿದ ಊಟ ಮಡಾಡಿ ಹಾಸಿಗೆಗೆ ಬಂದು ಮಾತೇ ಆಡದೆ ಬಿಗಿದಪ್ಟಿದ
ಮನೋಹರನಿಗೆ, ನಿದ್ದೆ ಕೆಟ್ಟಿದ್ದಕ್ಕೆ ಸಿಟ್ಟು ಬಂದರೂ ಹೇಳದೆ, ಸಹಕಾರ ನೀಡಿದಳು.<br>
{{gap}}ಮರುದಿನ ಮುಂಜಾನೆ ಯಶಸ್ವಿನಿ ಎಲ್ಲರಿಗಿಂತ ಮುಂಚಿತವಾಗಿ ಎದ್ದಳು.
ಬೇಗನೆ ಕಾಲೇಜಿಗೆ ಹೋಗಲಿರುವ ಮಗಳಿಗಾಗಿ ಅವಳಿಗಿಷ್ಟವಾದ ಮಸಾಲೆ ಉಪ್ಪಿಟ್ಟು
ಮಾಡಿದಳು. ತಿನ್ನುತ್ತ ಕೂತ ಮಗಳನ್ನೆ ನೋಡುತ್ತ ನಿಂತಳು. ಅಮ್ಮಾ, ಇವತ್ತಿನ ತಿಂಡಿ
ಎಕ್ಸಲೆಂಟ್ ಆಗಿದೆ. ಎಷ್ಟೋ ದಿನ ಆಗಿತ್ತು ಇಂಥ ಉಪ್ಪಿಟ್ಟು ತಿಂದು, ಯು ಆರ್
ಗ್ರೇಟ್ ಮಮಾ, ಅಂತ ಕೀರ್ತಿ ಆನ್ನುತ್ತಾಳೆಂದು ನಿರೀಕ್ಷಿಸಿದಳು.<br>
{{gap}}ಇಲ್ಲ. ಬದಲಿಗೆ, ಏನು ಮಮಾ, ಉಪ್ಪಿಟ್ಟು ಮಾಡಿದ್ದೀ, ಈಗೆಲ್ಲ ಇದನ್ನು
ಯಾರೂ ಇಷ್ಟಪಡೋದಿಲ್ಲ. ನೂಡಲ್ಸ್ ಮಾಡಲು ಹೇಳಿದ್ದೆ ನಾನು ಅಜ್ಜಿಗೆ-
ಅಂದಳು. ಮಗಳು ದೊಡ್ಡವಳಾಗಿದ್ದಾಳೆ. ಅವಳ ಇಷ್ಟಾನಿಷ್ಟಗಳೂ ಬದಲಾಗಿವೆ.
ತಾನೇ ಹೊಂದಿಕೊಳ್ಳಬೇಕು.<br>
{{gap}}ಸ್ಕೂಲಿಗೆ ಹೊರಟ ಮಗ ಕಿರಣ ಎಷ್ಟು ಎತ್ತರವಾಗಿದ್ದಾನೆ. ಎಷ್ಟು ಸ್ಮಾರ್ಟ್
ಆಗಿದ್ದಾನೆ. ತಾನು ಮೊದಲ ಸಲ ನೋಡಿದಾಗ ಮನೋಹರನೂ ಹೀಗೆಯೇ ಇದ್ದ.
ಪ್ರೀತಿಯಿಂದ ಯಶಸ್ವಿನಿ ಮಗನ ಮುಖವನ್ನು ಬೊಗಸೆಯಲ್ಲಿ ಹಿಡಿದು ಹಣೆಗೊಂದು
ಮುತ್ತನ್ನಿತ್ತಳು. ಆತ ಕೊಸರಿಕೊಂಡು ಥೂ, ಬಿಡು ಮಮಾ, ನನ್ನ ಹೇರ್ ಸ್ಟಾಯಿಲ್
ಕೆಡಿಸಿಬಿಟ್ಟಿ ಅಂತ ಓಡಿ ಹೋದ.<noinclude><references/></noinclude>
33vijs969dejydumju9onax7vc835w0
ಪುಟ:ನಡೆದದ್ದೇ ದಾರಿ.pdf/೫೧೯
104
76917
318019
250485
2026-05-08T07:25:01Z
Pragathi. BH
7585
/* Validated */
318019
proofread-page
text/x-wiki
<noinclude><pagequality level="4" user="Pragathi. BH" /></noinclude>೫೧೨ ನಡೆದದ್ದೇ ದಾರಿ
{{gap}}ಅಡಿಗೆಮನೆಗೆ ಬಂದು ಅತ್ತೆ, ಇಂದಿನಿಂದ ನಿಮಗೆ ರೆಸ್ಟ್, ನಾನು ಇರುವ<br>
ವರೆಗೂ ಅಡಿಗೆಮನೆ ಚಾರ್ಜು ನನ್ನದೇ, ಅಂತ ಹೇಳಿ ಸೆರಗು ಸಿಕ್ಕಿಸಿ ಕೆಲಸ ಸುರು<br>
ಮಾಡಿದಳು. ನಿನ್ನೆಯೇ ಬಂದಿದ್ದೀ, ನೀನೇ ರೆಸ್ಟ್ ತಗೋ, ನಾನೆಲ್ಲ ನೋಡಿಕೊಳ್ತೀನಿ,<br>
ಅಂತ ಅತ್ತೆ ಅಂದರು. ಒತ್ತಾಯಿಸಿದರೂ ಅವರು ಅಡಿಗೆಮನೆಯಿಂದ ಆಚೆಗೆ<br>
ಹೋಗದಿದ್ದಾಗ ಯಶಸ್ವಿನಿ ನಗುತ್ತಲೇ ಬಲವಂತವಾಗಿ ಅವರನ್ನು ಕೈಹಿಡಿದು ಎಳೆದು<br>
ತಂದು ಹಾಲ್ನಲ್ಲಿ ಸೋಫಾದ ಮೇಲೆ ಕೂಡ್ರಿಸಿದಳು. ಆಗ ಬಿಟ್ಟುಬಿಟ್ಟು ಅತ್ತೆ<br>
ಮಾತಾಡಿದರು. ಮನೂ ಊಟದ ಬಗ್ಗೆ ಬಹಳ ಪರ್ಟಿಕ್ಯುಲರ್ ಇದ್ದಾನೆ. ಇಂತಹ<br>
ಪದಾರ್ಥ ಹೀಗೆಯೇ ಆಗಬೇಕೆಂದು ಅವನ ಹಟ, ಹೆಚ್ಚು -ಕಡಿಮೆ ಆದರೆ ಊಟ<br>
ಬಿಟ್ಟೇಳುತ್ತಾನೆ. ಇತ್ಯಾದಿ. ಇತ್ಯಾದಿ. ಬಹಿರಂಗವಾಗಿ ಯಶಸ್ವಿನಿ ಏನೂ ಹೇಳಲಿಲ್ಲ.<br>
ಮನಸ್ಸಿನಲ್ಲಿ ಮಾತ್ರ ಅಂದುಕೊಂಡಳು, ಎಲಾ ಮುದುಕಿ, ಏಳೆಂಟು ತಿಂಗಳು ನಾನು<br>
ದೂರವಾಗಿದ್ದ ಮಾತ್ರಕ್ಕೆ ನನ್ನ ಗಂಡನಿಗೇ ಪರಕೀಯಳಾಗುವೆನೆ ? ನನ್ನ ಕೈಯಡಿಗೆಗಿಂತ<br>
ಹೆಚ್ಚು ಪ್ರಿಯವಾದುದು ಅವನಿಗೇನಿದ್ದೀತು ? ಆಗಲಿ, ನೋಡಿಯೇ ಬಿಡೋಣ.<br>
{{gap}}ಆದರೆ ಮಧ್ಯಾಹ್ನ ಊಟಕ್ಕೆ ಕೂತಾಗ ಮನೋಹರ ತುತ್ತಿಗೊಮ್ಮೆ ಛೇ, ಏನಿದು<br>
ಪಲ್ಯ ಇಷ್ಟು ಖಾರ, ಸಾರಿಗೆ ನೀರು ಜಾಸ್ತಿ. ಚಟ್ನಿಗೆ ಒಂಥರಾ ಟೇಸ್ಟ್ ಇದೆ. ಅಂತೆಲ್ಲ<br>
ಮುಖ ಸಿಂಡರಿಸಿದಾಗ ಆಕೆಗೆ ನಿಜವಾಗಿ ಚಿಂತೆಯಾಯಿತು. ಇವತ್ತು ನಿನ್ನ ಹೆಂಡತಿ<br>
ಅಡಿಗೆ ಮಾಡಿದ್ದು ಮಾರಾಯಾ, ಅಂತ ಅತ್ತೆ ನಕ್ಕು ಹೇಳಿದಾಗ ಆತ ಒಮ್ಮೆಲೆ<br>
ಸುಮ್ಮನಾಗಿದ್ದ.<br>
{{gap}}ಯಶಸ್ವಿನಿ ಮನೆಗೆ ಬಂದು ಒಂದು ವಾರ ಕಳೆದಿತ್ತು. ಯಾವುದೂ<br>
ಬದಲಾಗಿರಲಿಲ್ಲ. ಮಗಳು ತನ್ನದೇ ಜಗತ್ತಿನಲ್ಲಿದ್ದಳು. ಅಜ್ಜೀ, ಹಸಿವೆಯಾಗಿದೆ,<br>
ಅಜ್ಜೀ ಟೀ ಕೊಡು, ಅಜ್ಜೀ ಜಡೆ ಹಾಕು ಬಾ. ಅಜ್ಜೀ ಟಿಫಿನ್ ಬಾಕ್ಸ್ ರೆಡಿ ಆಯಿತೇ,<br>
ಅಂತ ಹತ್ತು ಸಲ ಅಜ್ಜಿಯನ್ನೇ ಕೂಗುತ್ತಿದ್ದಳು. ಒಂದೆರಡು ಸಲ ಮಾತ್ರ<br>
ಯಶಸ್ವಿನಿಯ ಬಳಿ ಬಂದು ಅಮ್ಮಾ. ಸೌಥ್ ಇಂಡಿಯಾ ಇಂಡಸ್ಟ್ರಿ ಯಲ್ ಟೂರ್ಗೆ<br>
ಹೋಗಬೇಕು, ಐದು ಸಾವಿರ ಆಗುತ್ತದೆ, ಮೇಲೆ ಶಾಪಿಂಗ್ಗೆ ಒಂದೈದು ಸಾವಿರ,<br>
ಒಟ್ಟು ಹತ್ತು ಸಾವಿರಕ್ಕೆ ಚೆಕ್ ಕೊಟ್ಟು ಬಿಡ್ತೀಯಾ, ಅಂತ ಕೇಳಿ ಇಸಗೊಂಡಿದ್ದಳು.<br>
ಗ್ಯಾದರಿಂಗ್ ಇದೆ, ಹೊಸ ಡ್ರೆಸ್ ತಗೋ ಬೇಕು. ಒಂದಿಷ್ಟು ದುಡ್ಡು ಕೊಟ್ಟಿರು<br>
ಮಮಾ, ಅಂದಿದ್ದಳು.<br>
{{gap}}ಯಶಸ್ವಿನಿಗೆ ಕಿರಣನ ಮೇಲೆ ವಿಶೇಷ ಪ್ರೀತಿ. ಗಂಡು ಮಗ ಆಂತ ಅಲ್ಲ, ಆತ<br>
ಚಿಕ್ಕಮಗುವಾಗಿದ್ದಾಗಿನಿಂದಲೂ ಸದಾ ಅಮ್ಮನಿಗೆ ಅಂಟಿಕೊಂಡೇ<br>
ಇರುತ್ತಿದ್ದುದರಿಂದಾಗಿ ಇರಬೇಕು. ಈಗ ದೊಡ್ಡವನಾಗಿದ್ದಾನೆ. ತಾನು ರಾಮನಗರಕ್ಕೆ<br><noinclude><references/></noinclude>
cocbkka7ioim1f4smd1eein1p008i9k
318021
318019
2026-05-08T07:27:26Z
Pragathi. BH
7585
318021
proofread-page
text/x-wiki
<noinclude><pagequality level="4" user="Pragathi. BH" /></noinclude>೫೧೨ ನಡೆದದ್ದೇ ದಾರಿ
{{gap}}ಅಡಿಗೆಮನೆಗೆ ಬಂದು ಅತ್ತೆ, ಇಂದಿನಿಂದ ನಿಮಗೆ ರೆಸ್ಟ್, ನಾನು ಇರುವ
ವರೆಗೂ ಅಡಿಗೆಮನೆ ಚಾರ್ಜು ನನ್ನದೇ, ಅಂತ ಹೇಳಿ ಸೆರಗು ಸಿಕ್ಕಿಸಿ ಕೆಲಸ ಸುರು
ಮಾಡಿದಳು. ನಿನ್ನೆಯೇ ಬಂದಿದ್ದೀ, ನೀನೇ ರೆಸ್ಟ್ ತಗೋ, ನಾನೆಲ್ಲ ನೋಡಿಕೊಳ್ತೀನಿ,
ಅಂತ ಅತ್ತೆ ಅಂದರು. ಒತ್ತಾಯಿಸಿದರೂ ಅವರು ಅಡಿಗೆಮನೆಯಿಂದ ಆಚೆಗೆ
ಹೋಗದಿದ್ದಾಗ ಯಶಸ್ವಿನಿ ನಗುತ್ತಲೇ ಬಲವಂತವಾಗಿ ಅವರನ್ನು ಕೈಹಿಡಿದು ಎಳೆದು
ತಂದು ಹಾಲ್ನಲ್ಲಿ ಸೋಫಾದ ಮೇಲೆ ಕೂಡ್ರಿಸಿದಳು. ಆಗ ಬಿಟ್ಟುಬಿಟ್ಟು ಅತ್ತೆ
ಮಾತಾಡಿದರು. ಮನೂ ಊಟದ ಬಗ್ಗೆ ಬಹಳ ಪರ್ಟಿಕ್ಯುಲರ್ ಇದ್ದಾನೆ. ಇಂತಹ
ಪದಾರ್ಥ ಹೀಗೆಯೇ ಆಗಬೇಕೆಂದು ಅವನ ಹಟ, ಹೆಚ್ಚು -ಕಡಿಮೆ ಆದರೆ ಊಟ
ಬಿಟ್ಟೇಳುತ್ತಾನೆ. ಇತ್ಯಾದಿ. ಇತ್ಯಾದಿ. ಬಹಿರಂಗವಾಗಿ ಯಶಸ್ವಿನಿ ಏನೂ ಹೇಳಲಿಲ್ಲ.
ಮನಸ್ಸಿನಲ್ಲಿ ಮಾತ್ರ ಅಂದುಕೊಂಡಳು, ಎಲಾ ಮುದುಕಿ, ಏಳೆಂಟು ತಿಂಗಳು ನಾನು
ದೂರವಾಗಿದ್ದ ಮಾತ್ರಕ್ಕೆ ನನ್ನ ಗಂಡನಿಗೇ ಪರಕೀಯಳಾಗುವೆನೆ ? ನನ್ನ ಕೈಯಡಿಗೆಗಿಂತ
ಹೆಚ್ಚು ಪ್ರಿಯವಾದುದು ಅವನಿಗೇನಿದ್ದೀತು ? ಆಗಲಿ, ನೋಡಿಯೇ ಬಿಡೋಣ.<br>
{{gap}}ಆದರೆ ಮಧ್ಯಾಹ್ನ ಊಟಕ್ಕೆ ಕೂತಾಗ ಮನೋಹರ ತುತ್ತಿಗೊಮ್ಮೆ ಛೇ, ಏನಿದು
ಪಲ್ಯ ಇಷ್ಟು ಖಾರ, ಸಾರಿಗೆ ನೀರು ಜಾಸ್ತಿ. ಚಟ್ನಿಗೆ ಒಂಥರಾ ಟೇಸ್ಟ್ ಇದೆ. ಅಂತೆಲ್ಲ
ಮುಖ ಸಿಂಡರಿಸಿದಾಗ ಆಕೆಗೆ ನಿಜವಾಗಿ ಚಿಂತೆಯಾಯಿತು. ಇವತ್ತು ನಿನ್ನ ಹೆಂಡತಿ
ಅಡಿಗೆ ಮಾಡಿದ್ದು ಮಾರಾಯಾ, ಅಂತ ಅತ್ತೆ ನಕ್ಕು ಹೇಳಿದಾಗ ಆತ ಒಮ್ಮೆಲೆ
ಸುಮ್ಮನಾಗಿದ್ದ.<br>
{{gap}}ಯಶಸ್ವಿನಿ ಮನೆಗೆ ಬಂದು ಒಂದು ವಾರ ಕಳೆದಿತ್ತು. ಯಾವುದೂ
ಬದಲಾಗಿರಲಿಲ್ಲ. ಮಗಳು ತನ್ನದೇ ಜಗತ್ತಿನಲ್ಲಿದ್ದಳು. ಅಜ್ಜೀ, ಹಸಿವೆಯಾಗಿದೆ,
ಅಜ್ಜೀ ಟೀ ಕೊಡು, ಅಜ್ಜೀ ಜಡೆ ಹಾಕು ಬಾ. ಅಜ್ಜೀ ಟಿಫಿನ್ ಬಾಕ್ಸ್ ರೆಡಿ ಆಯಿತೇ,
ಅಂತ ಹತ್ತು ಸಲ ಅಜ್ಜಿಯನ್ನೇ ಕೂಗುತ್ತಿದ್ದಳು. ಒಂದೆರಡು ಸಲ ಮಾತ್ರ
ಯಶಸ್ವಿನಿಯ ಬಳಿ ಬಂದು ಅಮ್ಮಾ. ಸೌಥ್ ಇಂಡಿಯಾ ಇಂಡಸ್ಟ್ರಿ ಯಲ್ ಟೂರ್ಗೆ
ಹೋಗಬೇಕು, ಐದು ಸಾವಿರ ಆಗುತ್ತದೆ, ಮೇಲೆ ಶಾಪಿಂಗ್ಗೆ ಒಂದೈದು ಸಾವಿರ,
ಒಟ್ಟು ಹತ್ತು ಸಾವಿರಕ್ಕೆ ಚೆಕ್ ಕೊಟ್ಟು ಬಿಡ್ತೀಯಾ, ಅಂತ ಕೇಳಿ ಇಸಗೊಂಡಿದ್ದಳು.
ಗ್ಯಾದರಿಂಗ್ ಇದೆ, ಹೊಸ ಡ್ರೆಸ್ ತಗೋ ಬೇಕು. ಒಂದಿಷ್ಟು ದುಡ್ಡು ಕೊಟ್ಟಿರು
ಮಮಾ, ಅಂದಿದ್ದಳು.<br>
{{gap}}ಯಶಸ್ವಿನಿಗೆ ಕಿರಣನ ಮೇಲೆ ವಿಶೇಷ ಪ್ರೀತಿ. ಗಂಡು ಮಗ ಆಂತ ಅಲ್ಲ, ಆತ
ಚಿಕ್ಕಮಗುವಾಗಿದ್ದಾಗಿನಿಂದಲೂ ಸದಾ ಅಮ್ಮನಿಗೆ ಅಂಟಿಕೊಂಡೇ
ಇರುತ್ತಿದ್ದುದರಿಂದಾಗಿ ಇರಬೇಕು. ಈಗ ದೊಡ್ಡವನಾಗಿದ್ದಾನೆ. ತಾನು ರಾಮನಗರಕ್ಕೆ<br><noinclude><references/></noinclude>
1gkm7ywkoz3exkl38ysy3d136gh1i0q
318074
318021
2026-05-08T09:55:24Z
Pragathi. BH
7585
318074
proofread-page
text/x-wiki
<noinclude><pagequality level="4" user="Pragathi. BH" />{{rh|center=|left=೫೧೨|right=ನಡೆದದ್ದೇ ದಾರಿ}}</noinclude>
{{gap}}ಅಡಿಗೆಮನೆಗೆ ಬಂದು ಅತ್ತೆ, ಇಂದಿನಿಂದ ನಿಮಗೆ ರೆಸ್ಟ್, ನಾನು ಇರುವ
ವರೆಗೂ ಅಡಿಗೆಮನೆ ಚಾರ್ಜು ನನ್ನದೇ, ಅಂತ ಹೇಳಿ ಸೆರಗು ಸಿಕ್ಕಿಸಿ ಕೆಲಸ ಸುರು
ಮಾಡಿದಳು. ನಿನ್ನೆಯೇ ಬಂದಿದ್ದೀ, ನೀನೇ ರೆಸ್ಟ್ ತಗೋ, ನಾನೆಲ್ಲ ನೋಡಿಕೊಳ್ತೀನಿ,
ಅಂತ ಅತ್ತೆ ಅಂದರು. ಒತ್ತಾಯಿಸಿದರೂ ಅವರು ಅಡಿಗೆಮನೆಯಿಂದ ಆಚೆಗೆ
ಹೋಗದಿದ್ದಾಗ ಯಶಸ್ವಿನಿ ನಗುತ್ತಲೇ ಬಲವಂತವಾಗಿ ಅವರನ್ನು ಕೈಹಿಡಿದು ಎಳೆದು
ತಂದು ಹಾಲ್ನಲ್ಲಿ ಸೋಫಾದ ಮೇಲೆ ಕೂಡ್ರಿಸಿದಳು. ಆಗ ಬಿಟ್ಟುಬಿಟ್ಟು ಅತ್ತೆ
ಮಾತಾಡಿದರು. ಮನೂ ಊಟದ ಬಗ್ಗೆ ಬಹಳ ಪರ್ಟಿಕ್ಯುಲರ್ ಇದ್ದಾನೆ. ಇಂತಹ
ಪದಾರ್ಥ ಹೀಗೆಯೇ ಆಗಬೇಕೆಂದು ಅವನ ಹಟ, ಹೆಚ್ಚು -ಕಡಿಮೆ ಆದರೆ ಊಟ
ಬಿಟ್ಟೇಳುತ್ತಾನೆ. ಇತ್ಯಾದಿ. ಇತ್ಯಾದಿ. ಬಹಿರಂಗವಾಗಿ ಯಶಸ್ವಿನಿ ಏನೂ ಹೇಳಲಿಲ್ಲ.
ಮನಸ್ಸಿನಲ್ಲಿ ಮಾತ್ರ ಅಂದುಕೊಂಡಳು, ಎಲಾ ಮುದುಕಿ, ಏಳೆಂಟು ತಿಂಗಳು ನಾನು
ದೂರವಾಗಿದ್ದ ಮಾತ್ರಕ್ಕೆ ನನ್ನ ಗಂಡನಿಗೇ ಪರಕೀಯಳಾಗುವೆನೆ ? ನನ್ನ ಕೈಯಡಿಗೆಗಿಂತ
ಹೆಚ್ಚು ಪ್ರಿಯವಾದುದು ಅವನಿಗೇನಿದ್ದೀತು ? ಆಗಲಿ, ನೋಡಿಯೇ ಬಿಡೋಣ.<br>
{{gap}}ಆದರೆ ಮಧ್ಯಾಹ್ನ ಊಟಕ್ಕೆ ಕೂತಾಗ ಮನೋಹರ ತುತ್ತಿಗೊಮ್ಮೆ ಛೇ, ಏನಿದು
ಪಲ್ಯ ಇಷ್ಟು ಖಾರ, ಸಾರಿಗೆ ನೀರು ಜಾಸ್ತಿ. ಚಟ್ನಿಗೆ ಒಂಥರಾ ಟೇಸ್ಟ್ ಇದೆ. ಅಂತೆಲ್ಲ
ಮುಖ ಸಿಂಡರಿಸಿದಾಗ ಆಕೆಗೆ ನಿಜವಾಗಿ ಚಿಂತೆಯಾಯಿತು. ಇವತ್ತು ನಿನ್ನ ಹೆಂಡತಿ
ಅಡಿಗೆ ಮಾಡಿದ್ದು ಮಾರಾಯಾ, ಅಂತ ಅತ್ತೆ ನಕ್ಕು ಹೇಳಿದಾಗ ಆತ ಒಮ್ಮೆಲೆ
ಸುಮ್ಮನಾಗಿದ್ದ.<br>
{{gap}}ಯಶಸ್ವಿನಿ ಮನೆಗೆ ಬಂದು ಒಂದು ವಾರ ಕಳೆದಿತ್ತು. ಯಾವುದೂ
ಬದಲಾಗಿರಲಿಲ್ಲ. ಮಗಳು ತನ್ನದೇ ಜಗತ್ತಿನಲ್ಲಿದ್ದಳು. ಅಜ್ಜೀ, ಹಸಿವೆಯಾಗಿದೆ,
ಅಜ್ಜೀ ಟೀ ಕೊಡು, ಅಜ್ಜೀ ಜಡೆ ಹಾಕು ಬಾ. ಅಜ್ಜೀ ಟಿಫಿನ್ ಬಾಕ್ಸ್ ರೆಡಿ ಆಯಿತೇ,
ಅಂತ ಹತ್ತು ಸಲ ಅಜ್ಜಿಯನ್ನೇ ಕೂಗುತ್ತಿದ್ದಳು. ಒಂದೆರಡು ಸಲ ಮಾತ್ರ
ಯಶಸ್ವಿನಿಯ ಬಳಿ ಬಂದು ಅಮ್ಮಾ. ಸೌಥ್ ಇಂಡಿಯಾ ಇಂಡಸ್ಟ್ರಿ ಯಲ್ ಟೂರ್ಗೆ
ಹೋಗಬೇಕು, ಐದು ಸಾವಿರ ಆಗುತ್ತದೆ, ಮೇಲೆ ಶಾಪಿಂಗ್ಗೆ ಒಂದೈದು ಸಾವಿರ,
ಒಟ್ಟು ಹತ್ತು ಸಾವಿರಕ್ಕೆ ಚೆಕ್ ಕೊಟ್ಟು ಬಿಡ್ತೀಯಾ, ಅಂತ ಕೇಳಿ ಇಸಗೊಂಡಿದ್ದಳು.
ಗ್ಯಾದರಿಂಗ್ ಇದೆ, ಹೊಸ ಡ್ರೆಸ್ ತಗೋ ಬೇಕು. ಒಂದಿಷ್ಟು ದುಡ್ಡು ಕೊಟ್ಟಿರು
ಮಮಾ, ಅಂದಿದ್ದಳು.<br>
{{gap}}ಯಶಸ್ವಿನಿಗೆ ಕಿರಣನ ಮೇಲೆ ವಿಶೇಷ ಪ್ರೀತಿ. ಗಂಡು ಮಗ ಆಂತ ಅಲ್ಲ, ಆತ
ಚಿಕ್ಕಮಗುವಾಗಿದ್ದಾಗಿನಿಂದಲೂ ಸದಾ ಅಮ್ಮನಿಗೆ ಅಂಟಿಕೊಂಡೇ
ಇರುತ್ತಿದ್ದುದರಿಂದಾಗಿ ಇರಬೇಕು. ಈಗ ದೊಡ್ಡವನಾಗಿದ್ದಾನೆ. ತಾನು ರಾಮನಗರಕ್ಕೆ<br><noinclude><references/></noinclude>
d29muasiteu399lep6mlulqcd2o9t9x
ಪುಟ:ನಡೆದದ್ದೇ ದಾರಿ.pdf/೫೨೨
104
76918
318025
250443
2026-05-08T08:39:34Z
Pragathi. BH
7585
/* Validated */
318025
proofread-page
text/x-wiki
<noinclude><pagequality level="4" user="Pragathi. BH" /></noinclude>ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ ? ೫೧೫
ರಿಟಾಯರ್ಮೆಂಟ್ ಈಜ್ ಇಂಪಾಸಿಬಲ್. ಆ ವಿಚಾರ ಮರೆತುಬಿಡು.
- ಮನೋಹರ ಸ್ಪಷ್ಟವಾಗಿ ಹೇಳಿದ.
೬
ಇನ್ನೂ ಒಂದು ವಾರ ರಜೆ ಇದೆಯಲ್ಲಮ್ಮಾ, ಅದೇಕೆ ಇಷ್ಟು ಬೇಗ ತಿರುಗಿ
ಹೊರಟಿದ್ದೀ, ರಜೆ ಮುಗಿಯುವ ವರೆಗೆ ಇದ್ದರಾಗಿತ್ತು, ಅಂದರು ಯಶಸ್ವಿನಿಯ ಅತ್ತೆ.
{{gap}}ಇಲ್ಲ, ಕೆಲಸಗಳಿವೆ. ಕೋರ್ಟು ಸುರುವಾಗುವ ಮೊದಲೇ ಮಾಡಬೇಕಾದ
ಕೆಲಸವಿದೆ. ಮತ್ತೆ ದೀಪಾವಳಿಗೆ ಬರುತ್ತೇನೆ ಅಂತ ಹೇಳಿ ಯಶಸ್ವಿನಿ ರಾಮನಗರದ
ಬಸ್ಸು ಹತ್ತಿದಳು.
{{gap}}ಸೋತವರಂತೆ ಬಸ್ಸು ನಿಧಾನವಾಗಿ ಹೊರಟಿತು.
***<noinclude><references/></noinclude>
a69htb2wnwz322dsb0t7w2zy8ngnorz
318026
318025
2026-05-08T08:41:28Z
Pragathi. BH
7585
318026
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ ?|right=೫೧೫}}</noinclude>
ರಿಟಾಯರ್ಮೆಂಟ್ ಈಜ್ ಇಂಪಾಸಿಬಲ್. ಆ ವಿಚಾರ ಮರೆತುಬಿಡು.
- ಮನೋಹರ ಸ್ಪಷ್ಟವಾಗಿ ಹೇಳಿದ.
{{center|೬}}
{{gap}}ಇನ್ನೂ ಒಂದು ವಾರ ರಜೆ ಇದೆಯಲ್ಲಮ್ಮಾ, ಅದೇಕೆ ಇಷ್ಟು ಬೇಗ ತಿರುಗಿ
ಹೊರಟಿದ್ದೀ, ರಜೆ ಮುಗಿಯುವ ವರೆಗೆ ಇದ್ದರಾಗಿತ್ತು, ಅಂದರು ಯಶಸ್ವಿನಿಯ ಅತ್ತೆ.<br />
{{gap}}ಇಲ್ಲ, ಕೆಲಸಗಳಿವೆ. ಕೋರ್ಟು ಸುರುವಾಗುವ ಮೊದಲೇ ಮಾಡಬೇಕಾದ
ಕೆಲಸವಿದೆ. ಮತ್ತೆ ದೀಪಾವಳಿಗೆ ಬರುತ್ತೇನೆ ಅಂತ ಹೇಳಿ ಯಶಸ್ವಿನಿ ರಾಮನಗರದ
ಬಸ್ಸು ಹತ್ತಿದಳು.
{{gap}}ಸೋತವರಂತೆ ಬಸ್ಸು ನಿಧಾನವಾಗಿ ಹೊರಟಿತು.
***<noinclude><references/></noinclude>
gurklbu50ehorm4ti0sjad67jlc1nvv
318027
318026
2026-05-08T08:42:18Z
Pragathi. BH
7585
318027
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ ?|right=೫೧೫}}</noinclude>
ರಿಟಾಯರ್ಮೆಂಟ್ ಈಜ್ ಇಂಪಾಸಿಬಲ್. ಆ ವಿಚಾರ ಮರೆತುಬಿಡು.
- ಮನೋಹರ ಸ್ಪಷ್ಟವಾಗಿ ಹೇಳಿದ.
{{center|೬}}
{{gap}}ಇನ್ನೂ ಒಂದು ವಾರ ರಜೆ ಇದೆಯಲ್ಲಮ್ಮಾ, ಅದೇಕೆ ಇಷ್ಟು ಬೇಗ ತಿರುಗಿ
ಹೊರಟಿದ್ದೀ, ರಜೆ ಮುಗಿಯುವ ವರೆಗೆ ಇದ್ದರಾಗಿತ್ತು, ಅಂದರು ಯಶಸ್ವಿನಿಯ ಅತ್ತೆ.<br />
{{gap}}ಇಲ್ಲ, ಕೆಲಸಗಳಿವೆ. ಕೋರ್ಟು ಸುರುವಾಗುವ ಮೊದಲೇ ಮಾಡಬೇಕಾದ
ಕೆಲಸವಿದೆ. ಮತ್ತೆ ದೀಪಾವಳಿಗೆ ಬರುತ್ತೇನೆ ಅಂತ ಹೇಳಿ ಯಶಸ್ವಿನಿ ರಾಮನಗರದ
ಬಸ್ಸು ಹತ್ತಿದಳು.<br />
{{gap}}ಸೋತವರಂತೆ ಬಸ್ಸು ನಿಧಾನವಾಗಿ ಹೊರಟಿತು.
***<noinclude><references/></noinclude>
r9a9yiackzm67qw93xf95wlqon3zbnd
ಪುಟ:ನಡೆದದ್ದೇ ದಾರಿ.pdf/೧೩೨
104
76973
318081
169523
2026-05-08T09:58:36Z
Shreelatha.Halemane
7642
/* Proofread */
318081
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=ಕೊನೆಯ ದಾರಿ /ಮುಕ್ತಿ|right=೧೨೫}}
ಯಾವಾಗಲೂ ನನಗ ಛಲೋದನ್ನೇ ಹೇಳತೀರಿ ಅಂತ ಗೊತ್ತದ. ನಾ ನೀವು ಹೇಳಿದಾಂಗ ಕೇಳತೀನಿ. ಅವರನ್ನ ಮರೆಯೋ ಪ್ರಯತ್ನ ಮಾಡ್ತೀನಿ.'
{{gap}}ಇನ್ನು ಚಂದ್ರಲಾಲನ ಸರದಿ.
{{gap}}ಚಂದೂಲಾಲ ಎಂಥವನಾದರೇನು, ಅವನಿಗೂ ಒಳ್ಳೆಯದಾಗಬೇಕೆಂಬುದೇ ತನ್ನ ಉದ್ದೇಶ. ಅವನೂ ಸುಖವಾಗಿರಲೆಂದೇ ತನ್ನ ಇಚ್ಛೆ.
{{gap}}'ನಾ ಹಿಂಗ ಹೇಳತೀನಂತ ತಪ್ಪು ತಿಳಕೋಬ್ಯಾಡ್ರಿ ಸರ್, ನೀವು ನನ್ನ ತಮ್ಮನ ಸರಿ, ನಿಮ್ಮ ಮುಂದಿನ ಜೀವನ ಸುಖೀ ಆಗಲೀ ಅಂತ ಇಷ್ಟೆಲ್ಲಾ ಹೇಳಿದೆ.'
{{gap}}`ಕಲಾ ಮೊದಲಿನಿಂದಲೂ ಹೀಂಗ ಅಂತೀರ ಶಂಕರ ಮಾವಾ ? ಆಕಿ ಛಲೋ ಹುಡುಗಿ ಅಂತ ತಿಳಿದಿದ್ದೆ ನಾ ಆಕೀ ಕ್ಯಾರೆಕ್ಟರ್ ಸ್ವಲ್ಪ ಲೂಜ್ ಅಂತ ನೀವು ಹೇಳಿದ್ದು ನಂಬಲಿಕ್ಕೇ ಆಗೂದಿಲ್ಲ. ಬ್ಯಾರೆ ಯಾರು ಹೇಳಿದ್ರೂ ನಾ ನಂಬಲಿಕ್ಕಿಲ್ಲ. ಆಕೀ ಮ್ಯಾಲೆ ಭಾಳ ಜನರದು ಮರ್ಜಿ ಅಂತ ಎಷ್ಟು frank ಆಗಿ ಹೇಳಿದೀರಲ್ಲಾ ಅಂತೀನಿ. ನಿಮ್ಮ ಜಾಗಾದಾಗ ಬ್ಯಾರೇ ಯಾರಿದ್ರೂ ಹೀಂಗ ಹೇಳೋ ಧೈರ್ಯ ಮಾಡತಿದ್ದಿಲ್ಲ.
{{gap}}'ನನಗೂ ಅದನ್ನ ಹೇಳಲಿಕ್ಕೆ ಕೆಟ್ಟನಸತದ ಸರ್. ಆದರ ನಮ್ಮ ಜವಾಬ್ದಾ ರಿಕಿಂತಾ ನಿಮ್ಮ ಹಿತ ಮುಖ್ಯ ನನಗ.'
{{gap}}'ಶಂಕರ ಮಾವಾ, ನೀವು ಎಷ್ಟು ನಿಸ್ವಾರ್ಥಿ ಇದ್ದೀರಿ ! ನನ್ನ ಹಿತದ ಸಲುವಾಗಿ ಎಷ್ಟು ಕಾಳಜಿ ಮಾಡತೀರಿ !
'
{{gap}}........ - ತಾನು ಸುಮ್ಮನೆ ಇದ್ದಾಗ ನಕ್ಕು ಕಣ್ಣು ಮಿಟುಕಿಸಿ ಕೇಳಿದ್ದ ಚಂದೂಲಾಲ. 'ಕಲಾನ ಮ್ಯಾಲೆ ನಿಮ್ಮದೂ ಮರ್ಜಿ ಆದ ಏನು ಮತ್ತ ?'
{{gap}}ಲುಜ್ಞಾ ಇದ್ದಾನೆ ಈ ಅಸಿ. ಮ್ಯಾನೇಜರ್, ಬಾಯಿಗೆ ಬಂದದ್ದು ಮಾತಾಡುತ್ತಾನೆ.
{{gap}}ಮೌನವೇ ಇವನಿಗೆ ಸರಿಯಾದ ಉತ್ತರ. ಬೇಕಾದದ್ದು ತಿಳಿಯಲಿ.
{{gap}}ಏನೂ ತಿಳಿದನೋ. 'ಹಹ್ಹಹ್ಮಜ್ಞಾ' ಎಂದು ಗಹಗಹಿಸಿ 'ಬೆಸ್ಟ್ ಲಕ್ ಶಂಕರ ಮಾಮಾ" ಅಂದ ಚಂದೂಲಾಲ.
{{gap}}ಎರಡು ಕ್ಷಣ ಬಿಟ್ಟು ತಾನಂದಿದ್ದ, 'ನಿಮ್ಮ ಸಲುವಾಗಿ ಬೇಕಾದ್ದು ಮಾಡ್ಲಿಕ್ಕೆ ತಯಾರಿದ್ದೀನಿ ನಾ.'
{{gap}}ತಾನಂದದ್ದರಲ್ಲಿ ಅಪ್ರಾಮಾಣಿಕತೆಯ ನೆರಳೂ ಇರಲಿಲ್ಲ.
{{gap}}ಸಂಜೆ ಆಫೀಸಿನಿಂದ ತಿರುಗಿ ಮನೆಗೆ ಹೋದಾಗ ಕೋಣೆಯಲ್ಲಿ ಕಲಾ ಡಬ್ಬು<noinclude><references/></noinclude>
nuw9caigxipuhivomawxxy698u9ynt8
ಪುಟ:ನಡೆದದ್ದೇ ದಾರಿ.pdf/೧೨೮
104
76974
318063
169524
2026-05-08T09:47:04Z
Shreelatha.Halemane
7642
/* Proofread */
318063
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=ಕೊನೆಯ ದಾರಿ/ ಮುಕ್ತಿ|right=೧೨೧}}
ಹೆಂಡತಿಯೂ ಬಹಳ ಪ್ರೀತಿಯಿಂದ ನೋಡಿಕೊಂಡೆವು - ಸ್ವಂತದ ಮಗಳ ಹಾಗೆ. ಅವಳಿಗೆ ಮ್ಯಾಟ್ರಿಕ್ ಪರ್ಯಂತ ಶಿಕ್ಷಣ, ಟೈಪಿಂಗ್ ಕ್ಲಾಸಿನ ಫೀಜು, ನಂತರ ಅಸಿ. ಮ್ಯಾನೇಜರ್ಗೆ ಹೇಳಿ ತಮ್ಮ ಆಫೀಸಿನಲ್ಲೇ ಟೈಪಿಸ್ಟ್ ಕೆಲಸ- ಈ ಎಲ್ಲ ಮಾಡಿದ್ದು ತಾನೇ ಅಲ್ಲವೇ ?
{{gap}}“ಹಿಂಗ್ಯಾಕ ನೋಡ್ತೀರಿ ಮಾವಾ ? ಎಂದೂ ನೋಡಿಲ್ಲೇನು ನನ್ನ " -ನಕ್ಕು ಕೇಳಿದ್ದಳು ಕಲಾ.
{{gap}}ಈ ಹುಡುಗಿ ಆಫೀಸು ಸೇರಿದಾಗಿನಿಂದ ಆಫೀಸಿನವರೆಲ್ಲಾ ತನ್ನ ಹೆಸರಿಗೆ "ಮಾಮಾ" ಸೇರಿಸಿಯೇ ಕೂಗತೊಡಗಿದ್ದಾರೆ. ತನಗೇನೋ 'ಶಂಕರರಾವ್" ಎಂದು ಕರೆಸಿಕೊಳ್ಳಲು ಹೆಚ್ಚು ಇಷ್ಟ. 'ಶಂಕರ ಮಾವಾ' ತನ್ನ ನಿವೃತ್ತಿಯನ್ನು ನೆನಪಿಸುತ್ತದೆ. ಆದರೆ ಹೇಳುವುದು ಯಾರಿಗೆ ?
{{gap}}“ಭಾಳ ಸ್ಮಾರ್ಟ್ ಕಾಣಿಸೀ ಕಲಾ ಇವತ್ತ."
{{gap}}ಕಲಾನ ಕೆನ್ನೆಗಳು ಕೆಂಪೇರಲಿಲ್ಲ. "ದಿನಾ ಹೇಳತೀರಿ ಈ ಮಾತು ಇಪ್ಪತ್ತು ವರ್ಷದಿಂದ, ಇದರಾಗ ಹೊಸದೇನು ಬಂತು ?"
{{gap}}ಹೊಸದೇನೂ ಇಲ್ಲ ನಿಜ. ಆದರೆ ಆ ಚಂದ್ರಲಾಲ ದಿನಾ ಇವಳಿಗೆ ಹೇಳುವುದರಲ್ಲಾದರೂ ಏನು ಹೊಸದಿರುತ್ತದೆ ? ಅವನು ಬರೇ ಇವಳ ಕಡೆ ನೋಡಿದರೆ ಸಾಕು, ನಾಚಿ ಕೆಂಪಗೆ ಗುಲಾಬಿಯಾಗುತ್ತಾಳೆ. ಇರಲಿ, ನೋಡೋಣ.
{{gap}}“ಅಂದ್ಧಾಂಗ ನಿನಗೆ ಗೊತ್ತದ ಏನು ಕಲಾ ? ನಮ್ಮ ಆಸಿ ಮ್ಯಾನೇಜರ್ದು ಎಂಗೇಜ್ಮೆಂಟ್ ಆತಲ್ಲ ?"
{{gap}}- ಕಣ್ಣ ಕೊನೆಯಿಂದ ದೃಷ್ಟಿಸಿದ್ದ ಆತ ಪರಿಣಾಮವನ್ನು, ತನಗೆ ಏನೂ ಆಗಿಲ್ಲ ವೆಂದು ತೋರಿಸಿಕೊಳ್ಳಲು ಅವಳು ಮಾಡಿದ ಶತಪ್ರಯತ್ನ ಮೀರಿ ನಡುಗಿತ್ತು ಅವಳ ಧ್ವನಿ ; ಕಣ್ಣ ಬೆಳಕು ಒಮ್ಮೆಲೇ ಜೀವ ಕಳೆದುಕೊಂಡಿತ್ತು : “ಹಿಂಗೇನು ? ಛಲೋ ಆತು.*
{{gap}}-ನಂತರ ಹೆಚ್ಚು ಮಾತನಾಡದೇ ಸರನೆ ಹೊರಳಿ ತನ್ನ ರೂಮು ಸೇರಿದ್ದಳು ಕಲಾ, ಅವಳ ಕಣ್ಣಂಚಿನಲ್ಲಿ ಒಂದು ಕ್ಷಣ ಮಿಂಚಿದ್ದು ನೀರೇ ಅಲ್ಲದೆ ಇನ್ನೇನು ?
{{gap}}-ಅಲ್ಲಿಗೆ ಪೂರ್ಣವಾಗಿ ತನ್ನ ಗೆಲುವು ?
{{gap}}"ವಾಹ್, ಎಷ್ಟ ಛಂದ ಪ್ಲಾನ್ ಮಾಡೀರಿ ಈ ಹೊಸಾ ಬಟ್ಟೆಟ್ಟಿನದು ! ಬಾಸ್ ಏಕ್ದಂ ಖುಶ್ ಆಗೋದರಾಗ ಸಂಶಯ ಇಲ್ಲ ಶಂಕರ ಮಾವಾ. ನಿಮ್ಮದು ಅದ್ಭುತ ಬ್ರೇನ್ರೆಪಾ."
{{gap}}- ಸಹೋದ್ಯೋಗಿಗಳೆಲ್ಲ ಸೇರಿ ತನ್ನ ಕೆಲಸದ ಸ್ತುತಿ ಮಾಡಿದ್ದರು<noinclude><references/></noinclude>
0fiqrttfs84lx953h4yctnw1smj3bha
ಪುಟ:ನಡೆದದ್ದೇ ದಾರಿ.pdf/೧೨೬
104
76975
318061
169525
2026-05-08T09:40:59Z
Shreelatha.Halemane
7642
/* Proofread */
318061
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=ಕೊನೆಯ ದಾರಿ/ ಮುಕ್ತಿ|right=೧೧೯}}
ನೀವೇ''
{{gap}}ಗಿರಿಧರನ ಭವಿಷ್ಯವಾಣಿ ತನ್ನೊಳಗಿನ ಭವ್ಯ ಕನಸಿನೊಂದಿಗೆ ತಾಳ ಹಾಕಿ ಕುಣಿಯುತ್ತಿದೆ. ಅದರಲ್ಲಿ ಏನೂ ಅತಿಶಯೋಕ್ತಿಯಿಲ್ಲ. ಚಂದೂಲಾಲನ ಮೇಲೆ ತನ್ನ ಇಂಪ್ರೆಶನ್ ಒಳ್ಳೆಯದಿರುವ ತನಕ ತಾನು ನಿರಾಶನಾಗಲು ಕಾರಣವೇ ಇಲ್ಲ. ಕನಸುಗಳೆಲ್ಲ ಸಿದ್ದಿಸುವ ಕಾಲವೂ ಈಗ ಬರುತ್ತಿದೆ.
{{gap}}“ನಮ್ಮನ್ನ ಮಾತ್ರ ಮರೀಬ್ಯಾಡ್ರಪಾ. ಭರ್ಜರಿ ಪಾರ್ಟಿ ಕೊಡಬೇಕು ಮತ್ತ,
{{gap}}“ಓ ಯೆಸ್, ಓ ಯೆಸ್" – ಅನ್ನುತ್ತ ಕುರ್ಚಿಯಲ್ಲಿ ಕೂತ ಆತ, ಮೈಯೆಲ್ಲ ಬಲೂನಿನಂತೆ ಹಗುರ-ಹಗುರ. ಕಣ್ಣ ತುಂಬ ಎಂಥದೋ ತೃಪ್ತಿಯ ಅಮಲು. ಇಂದು ಮುಂಜಾನೆಯಿಂದಲೂ ಹೀಗೆ.
{{gap}}“ಇವತ್ತ ನಿಮ್ಮ ಕಲಾ ಯಾಕ ಬಂದಿಲೀ ಶಂಕರ ಮಾವಾ ?" -ಹಾಳಾದವಳು ಮಿಸ್ ಪರ್ವತಿ ಕನಸಿನ ಎತ್ತರದಿಂದ ಒಮ್ಮೆಲೆ ಕೆಳಗೆ ತಳ್ಳುತ್ತಾಳೆ ತನ್ನನ್ನು.
{{gap}}“ಆ ? ಏನಂದ್ರಿ ? ಕಲಾ ? ಆಕೀಗೆ ಮೈಯಾಗ ನೆಟ್ಟಗಿಲ್ಲ. ಎಂಟು ದಿವಸ ಸಿಕ್ ಲೀವ್ ತಗೊಂಡಾಳ ಇವತ್ತಿನಿಂದ
{{gap}}ಒಂದು ಕ್ಷಣ ಎಲ್ಲಾ ಕಡೆ ನಿಃಶಬ್ದ . ಯಾರು ಯಾರೋ ಕಣ್ಣು ಮಿಟುಕಿಸಿರಬೇಕು. ಆಸಿ. ಮ್ಯಾನೇಜರ್ನ ಚೇಂಬರಿನ ಕಡೆ ದೃಷ್ಟಿ ಹಾಯಿಸಿರಬೇಕು, ಕಲಾನ ಖಾಲಿ ಟೇಬಲಿನ ಕಡೆಗೂ ನೋಡಿರಬೇಕು-ಶಂಕರನಾಮಾಗೆ ಎಲ್ಲ ಗೊತ್ತಾಗುತ್ತಿದೆ. ಆದರೆ ಯಾಕೋ ಗಂಟಲೊಣಗಿದಂತೆನಿಸುತ್ತಿರುವುದರಿಂದ ಮಾತಾಡುವುದು ಆಗುತ್ತಿಲ್ಲ.
{{gap}}ಸ್ವಲ್ಪ ಹೊತ್ತು ಟೈಪ್ರೈಟರುಗಳ ಕಟ್ ಕಟ್, ಫೈಲುಗಳ ಸರ್ ಸರ್ ಬಿಟ್ಟರೆ ಬೇರಾವ ಸಪ್ಪಳವೂ ಇಲ್ಲ.
{{gap}}- `ಸಲಾಮ್ ಸರ್' -ಹೊರಗಡೆಯಿಂದ ಕೇಳಿಬಂದ ಪ್ಯೂನ್ನ ಗೊಗ್ಗರು ದನಿ. ಒಳಗಿದ್ದವರಿಗೆ ಎಚ್ಚರಿಕೆ. ಅಸಿ. ಮ್ಯಾನೇಜರ್ ಬಂದರು ಎಂದು.
{{gap}}'ಗುಡ್ ಮಾರ್ನಿಂಗು'ಗಳಿಗೆ ನಸುಬಾಗಿ ಉತ್ತರಿಸುತ್ತ ಖಟ್ ಖಟ್ ಬೂಟಿನ ಸಪ್ಪಳ ಮಾಡುತ್ತ ತೂಗಾಡುವ ಬಾಗಿಲಲ್ಲಿ ತೂರಿದ ಚಂದ್ರಲಾಲನ ಬೆನ್ನು ಮರೆಯಾದೊಡನೆ ಪಿಸುದನಿಯಲ್ಲಿ ಕೇಳಿದಳು ಮಿಸ್ ಪಕ್ವತಿ, “ಬಾಸ್ನ ಮಗಳ ಜೋಡೀ ಇವರ ಎಂಗೇಜ್ಮೆಂಟ್ ಆತಂತಿ ಶಂಕರಮಾಮಾ ?"
{{gap}}ತಿರುಗಿ ಹುರುಪೇರಿತು ಶಂಕರ ಮಾವಾನಿಗೆ “ಹೌದು ಹೌದು, ನಾನೇ ಅದಕ್ಕೆ ಮೀಡಿಯೇಟರ್ ಆಗಿದ್ದೆ."
{{gap}}“ಅದಕ್ಕೆ ಇವರು ನಿಮ್ಮ ಮ್ಯಾಲೆ ಇಷ್ಟು ಖುಶ್ ಇದ್ದಾರ ಕಾಣಸ್ತದ."
{{gap}}“ಹಹ್ನ, ಇರದ ಏನು ? ಎಷ್ಟ ತ್ರಾಸ ತಗೊಂಡೀನಿ ಆದರ ಸಲುವಾಗಿ ಗೊತ್ತದ<noinclude><references/></noinclude>
jezv8bjtksk9xudy8bamp1qtwnttd9a
ಪುಟ:ಅರಮನೆ.pdf/೪೬
104
77132
317926
169841
2026-05-07T14:04:07Z
Shreelatha.Halemane
7642
/* Proofread */
317926
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=ಅರಮನೆ|right=೧೫}}
ಕೂಗುತಲಿತ್ತು.. ತಾಯ್ತನದ ಹಂಬಲದ ಯಮ್ಮೆ ಮಣಕಗಳು ತಮ್ಮ ತಮ್ಮ ಬಂಧನ ಹರಕೊಂಡು ಜಿಕ್ಕೋತ ಅದರ ಸನೀಕ ಬರುತ್ತಿದ್ದವು. ಬರಲಿಲ್ಲಾಂದರ ಅದೇ ಹಾದಿಯಿಲ್ಲದ ಕಡೇಕ ಹಾದಿ ಮಾಡಿಕೊಂಡು ಅವುಗಳಿದ್ದಲ್ಲಿಗೆ ತಾನೊಡುತಲಿತ್ತು. ಆಗ ಅದರ ಪಾದಾಘಾತಕ್ಕೆ ಹಾಳಾಗುತ್ತಿದ್ದುದು ವಂದಾ... ಯರಡಾ........ ವಂದು ಜೋಳದ ಹೊಲ ವುಳುದೀತಾ? ಎಂದು ಮಲ್ಲಿಗೆ ಅಂಟಿನ ತೋಟ ವುಳುದೀತಾ.. ವಂದು ಹಿತ್ತಲು ವುಳುದೀತಾ? ಯದುರಿಗೆ ಬಂದೋರ ಸೊಂಟವುಳುದೀತಾ? ಹಾನಿಗೀಡಾದ ವಬ್ಬರಲ್ಲಾ ವಬ್ಬರು 'ಅವ್ವಾ.. ತಾಯೀ.. ನೀನು ಸಾಕ್ಕೊಂಡಿರೋದು ಊಾಣನೋ ಅತುವಾ ಬಿರುಗಾಳಿಯೋ..” ಯಂದು ಅಳುತ ಅಬ್ಬರಿಸುತ್ತ ಬಂದು ಅದರ ಸಾಕು ತಾಯಿಯಾದ ಜಗಲೂರೆವ್ವಗೆ ದೂರು ನೀಡುತಲಿದ್ದುದು ಮಾಮೂಲು ಸಂಗತಿಯಾಗಿತ್ತು. ಮೇಲು ಮಾತಿಗೆ ನೀವೇ ಅದಕ ವದ್ದು ಬುದ್ದಿ ಕಲುಸಿರಿ.. ದೊಡ್ಡಿಗೆ ಕೂಡಿ ಹಾಕಿರಿ” ಯಂದನ್ನುತ್ತಿದ್ದಳು. ಪಟ್ಟಣದ ಯಾರೊಬ್ಬರಿಗೂ ಅಂಥ ಧಯರಾಗಲೀ, ತಾಕತ್ತಾಗಲೀ ಯಿಲ್ಲವೇಯಿಲ್ಲಯಂಬುದು ತನಗೆ ಗೊತ್ತಿಲ್ಲದಿರಲಿಲ್ಲ. ಬಸುರು ಬೇಕು, ಆದರ ಹೆಸರು ಬ್ಯಾಡಾಂದರ ಹೆಂಗ? ವಂದಾನೊಂದು ಕಾಲದಲ್ಲಿ ಮಿಂಚೇರಿ ಪಟ್ಟಣವನ್ನಾಳಿದ ಸೂರನಾಯಕನೇ ಕೋಣದ ರೂಪದಲ್ಲಿರುವನೆಂದೇ ತಾನು ಭಾವಿಸಿದ್ದಳು. ತನ್ನ ಗಾಂಧಾರಿ ಗರುಭದೊಳಗೆ ಜನಿಸಬೇಕಿದ್ದ ನೂರೊಂದು ಮಂದಿ ಕವುರವರೇ ಕೋಣದ ರೂಪದಲ್ಲಿರುವರೆಂದು ತಾನು ಭಾವಿಸಿದ್ದಳು. ಜೀವಾತುಮ, ಪರಮಾತುಮರ ಸಂಬಂಧ ಯಾವ ರೀತಿಯದೋ ಅಂಥಾದ್ದೇ ಸಂಬಂಧ ತಮ್ಮಿಬ್ಬರದೆಂದು ತಾನು ಭಾವಿಸಿದ್ದಳು. ಆದ್ದರಿಂದ ಯಾರು ಯೇನೇ ಹೇಳಲಿ, ತಾನು ಮಾಗ್ರಸೂರನ ಮ್ಯಾಲ ಬ್ಯಾಸರ ಮಾಡಿಕೊಳ್ಳುತ್ತಿರಲಿಲ್ಲ.. ಮಗಾ ಯಂಬ ಸಬುದದ ಹೊರತು ಯಿನ್ನೊಂದು ಮಾತು ಆಕೆಯ ಬಾಯಿ ಯಿಂದ ವುದುರುತ್ತಿರಲಿಲ್ಲ.. ಯಿದ್ಯಾವ ಸೀಮೆ ತಾಯಿ? ಯಿದ್ಯಾವ ಸೀಮೆ ಮಗ? ವಬ್ಬರಿಂದಿನ್ನೊಬ್ಬರನ್ನು ಅಗಲಿಸಿ ಪರಸ್ಪರ ಜೀವ ನಷ್ಟಾ ಮಾಡಬೇಕೆಂಬ ಯತ್ನ ಪ್ರಯತ್ನಗಳು ಪಟ್ಟಣದೊಳಗ ಕಾಲ ಧರುಮಕ್ಕನುಸಾರವಾಗಿ ನಡೆಯದೇ ಯಿರಲಿಲ್ಲ. ಆದರವು ಹಾಂಗ ನಡದು ಹೀಂಗ ಠುಸ್ಸಂದವು.. ವಟ್ಟಿನಲ್ಲಿ ಜಗಲೂರವ್ವ 'ಸೂರಾ ಸೂರಾ ಅಂದಕಂತಲೇ ಯಚ್ಚರಾಗುತ್ತಿದ್ದಳು.. ಸೂರಾ... ಸೂರಾss ಅಂದಕಂತಲೇ ಮಕ್ಕಂತಿದ್ದಳು.. ಹಾಗಿತ್ತು ಅವರಿಬ್ಬರ ಸಂಬಂಧವು ಸಿವಸಂಕರ ಮಾದೇವಾss....<noinclude><references/></noinclude>
9ulmbndwvlrd8kqnjqqm49ibwcix05i
ಪುಟ:ಅರಮನೆ.pdf/೪೭
104
77133
317927
169842
2026-05-07T14:05:04Z
Shreelatha.Halemane
7642
/* Proofread */
317927
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=೧೬|right=ಅರಮನೆ}}
{{gap}}ಮತ್ತೊಂದು ಬಾರಿ “ಹೋಯ್ ಸೂರಾ.. ಯಲ್ಲದೀ ಮಗ್ನೆ?” ಯಂದು ಕೂಗಿದಳು. ಆಕೆಯ ಆ ಕೂಗು ಯೇಟೊಂದು ಸಕ್ತಿವುತವಾಗಿ ಯಿತ್ತೆಂದರೆ ಸೂರಪರಮಾತುಮನು ವಂಚಣ ಮಂಕಾದನು. ಯೇಕೆ ಹಿಂಗಾ ಕೂಗಿದರೆಲ್ಲಿ ಯವ್ವನ ಯಂಬ ಪದ ಮೂನವಾಗ್ತದೋ ಯಂದು ಸಬುಧ ಭಾವಿಸಿತದು. ಗಾಳಿಯ ತುಂಡೊಂದು ಆಕೆಯ ಕೂಗನ್ನು ಮುದ್ರೆಯುಂಗು ರೋಪಾದಿಯಲ್ಲಿ ತನ್ನಂಗಯ್ಯೋಳಗಿಟು ಕೊಂಡು ಸುಯ್ಯಂತ ಹೋಗಿ ಅನತಿ ದೂರದಲ್ಲಿ ಗೋಪಿಕಾ ಸ್ತ್ರೀಯಂಥ ಮಣಕವೊಂದನ್ನು ತನ್ನ ಮುಂದ ತರುಬಿಟ್ಟುಕೊಂಡು ಸಿರಿಕುಷ್ಣ ಪರಮಾತಮನಂತೆ ರಾಸಲೀಲಾಯಿನೋದದಲ್ಲಿ ನಿರತನಾಗಿದ್ದ ಸೂರ ಮಾಶಯನ ಕದ್ದ ಕುಂಡಲದೊಳಗುದುರಿಸಿತು. ಅದು ಮಸ್ತಕಕ್ಕೇರಿದೊಡನೆ ಜಂಘಾಬಲ ವುಡುಗಿದಂಗಾಗಿ ಆತಂಕಕ್ಕೀಡಾದ ಪ್ರಿಯತಮೆಗೆ ಮಾತುಕರೆಯನ್ನು ಅಲಕ್ಷಿಸುವಂತಿಲ್ಲ.. ಪ್ರಿಯೆ.. ಹೋಗಿ ಯೇನೆಂದು ಕೇಳಿ ಅನುಮತಿ ಪಡೆದು ಬರುವೆನು.. ಅಲ್ಪಕಾಲದ ಯಿರಹವನ್ನು ಸಹಿಸಿಕೋ” ಯಂದು ಹೇಳಿ ಸಮಾಧಾನಪಡಿಸಿ ಶರವೇಗದಲ್ಲಿ ಕ್ರಮಿಸಿ ತನ್ನ ತೀರರೂಪಳನ್ನು ಸೇರಿತು. ಅದನ್ನು ನೋಡಿದೊಡನೆ ಆಕೆಗಾದ ಸಂತೋಷ ಅಷ್ಟಿಷ್ಟಲ್ಲ. ಅದರ ಮೂತಿಗೆ ಹುಸಿಪಟ್ಟನ್ನು ಹಾಕುತ್ತ “ನನ್ ಬಿಟ್ಟು ಯಲ್ಲೋಗಿದ್ಯೋ ನೀನು. ಯೇಟು ಬಾರಿ ಕೂಗಬೇಕೆಲೋ ನಿನ್ನ.. ಯೇಟೊತ್ ಯಾವಾಕೀನ ಅಡ್ಡಾಕೊಂಡಿದ್ದೆಲೋ... ನಿಂಗೇನು ಹೇಳೋರು ಕೇಳೋರು ಯಾರೂ ಯಿಲ್ಲಂದ್ಯಂಡೀಯಾ ಹೆಂಗೆ?” ಯಂದು ವಂದೇ ವುಸುರಿಗೆ ತರಾಟೆ ತೆಗೆದುಕೊಂಡಳು. ಆವಾಗಿದ್ದು ಅದು ಆಕೆಯ ಮುಖಮೂತಿ ಮುಂಗಯ್ಯ ನೆಕ್ಕಾಡುತ ತನ್ನ ವಯ್ಯ ಮನೆ ಭಾಷೆಯಲ್ಲಿ ಯೆನೇನೋ ಸಬೂಬು ಹೇಳಿತು. ಅದು ಆಕೆಗೆ ಅರವಾಗದೆಯಿರಲಿಲ್ಲ. ''ಸಿಕಣಪ್ಪಾ.. ನಾನಿನ್ನು ಕೂಳು ಕುಚ್ಚಿಡೋದಂತ್ತಪ್ಪಾ.. ಮಸ್ತು ವದಕನ ಬದುಕನ ಅದಾವ ಮನ್ಯಾಗ.. ನಾನೋಯ್ತಿನಿ.. ನೀನ್ಯಾವಾಗಾರ ಬಂದುಕಾ' ಯಂದು ಹೇಳಲು ಅದು ವಯ್ಯ ವಯ್ಯನೆ ಹಾಡುತ ಠಣ ಠಣ್ಣ ಜಿಕ್ಕೋತ ಜಿಕ್ಕೋತ ಸಂತೋಷದಿಂದ ಮೋಡಿ ಹೋಯಿತು. ಮಿನ್ನೇನದು ಮರೆಯಾಗಲಿದೆ ಅಂಬುವಾಗ “ವುಮಾರಿ ಕಣ ಮಗಾ.. ಕಾಲ ಸುಮಾರಾಗಯ್ತಿ' ಯಂದು ಮರೆತಿದ್ದ ಮಾತನ್ನು ಕೂಗಿ ಹೇಳದೆಯಿರಲಿಲ್ಲ ಜಗಲೂರೆವ್ವ....
{{gap}}ಸಮಾಧಾನದ ವುಸುರು ಬಿಟ್ಟು ಸುತ್ತನ್ನಾಕಡೆ ಕಣ್ಣಾಡಿಸಿ ಸುತ್ತಮುತ್ತ ನೋಟ ಮಾತ್ರದಿಂದ ಅಗೋಚರ ಬೇಲಿ ರಚನೆ ಮಾಡಿದಳು. ಮುದ್ಯೋನು ಮನೀಗೆ ಬಂದಾನೋ, ಯಿಲ್ಲಾ ಅರಮನ್ಯಾಗಯಿದಾನೋ? ವುಂಡೋ, ಯಲ್ಲಾ<noinclude><references/></noinclude>
175iwww228rvxk81nh74ylmbxgu21d8
ಪುಟ:ಅರಮನೆ.pdf/೪೮
104
77134
317928
169843
2026-05-07T14:06:13Z
Shreelatha.Halemane
7642
/* Proofread */
317928
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=ಅರಮನೆ|right=೧೭}}
ವುಪಾಸ ಅದಾನೋ ಯಂದನಕಂತ ಅನುವಾದ ಹುಲ್ಲಿನ ಹೊರೆಯನ್ನು ಸರಂತ ಯತ್ತಿ ತಲಿಮ್ಯಾಲ ಯಿಟುಕೊಂಡು, ಯಿನ್ನೊಂದು ಕಮ್ಮೊಳಗೆ ಘನುವಾದ ಕುಡುಗೋಲನ್ನು ಹಿಡಕೊಂಡು ಮರ ಕಡೇಕಿದ್ದ ಹಾದಿಯ ಮ್ಯಾಲ ದೊಪ್ಪೆಂದು ಹೆಜ್ಜೆಯಿಟೇಟಿಗೆ ಮೂರೊಳಗೆ ಮೊರಮನ ಖಡುಗದ ತುದಿಮಾಲಿದ್ದ ಗಜನಿಂಬೆ ಹಣ್ಣು ಬಿದ್ದು ವುರುಳಿಕೋತ ವುರುಳಿಕೋತ ಯಸನೋಪಾಸನೆ ಯಲ್ಲಿ ನಿರತನಾಗಿದ್ದ ಪೂಜಾರಿ ಜೆಟ್ಟಿಂಗಪ್ಪನ ಮುಂದೆ ನಿಂತಿತು. ಆಕೆ ಯಿನ್ನೊಂದು ಹೆಜ್ಜೆಯನ್ನು ದೊಪ್ಪೆಂದು ಯಿಡಲು ಮದ್ಯಾಣದ ಸುಖ ಬಿಸಿಲಿಗೆ ತಮ್ಮ ಫಳಫಳನೆ ಹೊಳೆಯುತಲಿದ್ದ ಮಯ್ಯ ಚೆಲ್ಲಿ ಮಲಿಕ್ಕಂಡಿದ್ದ ಸರುಪಗಳು ಹೆದರಿ ತಮ ತಮ್ಮ ಬಿಲಪಲ ಸೇರಿಕೊಂಡವು. ಆಕೆ ಮತ್ತೊಂದು ಹೆಜ್ಜೆಯನ್ನು ದೊಪ್ಪೆಂದು ಯಿಡಲು ಅಮರಾವತಿ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರುವ ಭವುಮ, ಸುಪ್ರತೀಕ ಯಂಬುವ ಅಷ್ಟದಿಗ್ಗಜರು ತಮ್ಮ ತಮ್ಮ ವಾಸಾಸ್ಥಾನಗಳಿಂದ ಹೊರಬಂದು ಪ್ಲಾ.. ಹಾ.. ಜಗಲೂರವ್ವ ಯಂಬ ನರಮಾನ್ನವಳೇ ಯಂದು ನೋಡುತ ವುದ್ದರಿಸಿದರು. ಆಕೆಯ ಅಗ್ನಿ ಸದ್ರುಶ ನೋಟ ತಗುಲಿದರೆಲ್ಲಿ ತಮ ತಮ್ಮ ರೆಕ್ಕೆ ಪುಕ್ಕಗಳು ಪುರುಪುರನ ವುರಿದು ಹೋಗುವಮೋ ಯಂದು ಹೆದರಿದ ಬಾನಾಡಿಗಳು ತಾವಿದ್ದ ಜಾಗಗಳಲ್ಲಿಯೇ ಗಪ್ ಚುಪ್ ಅಂತ ಅವಿತಿಟ್ಟುಕೊಂಡವು. ವಟ್ಟಿನಲ್ಲಿ ಕಪ್ಪತ್ರಾಯ ಗುಡ್ಡವೇ ಸ್ತ್ರೀಯೋಲ್ವಳ ರೂಪಧಾರಣ ಮಾಡಿ ನಡೆಯುತ್ತಿರುವುದೋ ಯಂಬ ಭ್ರಮೆಯನ್ನು ಸಚರಾಚರಕ್ಕುಂಟು ಮಾಡುತಲಿದ್ದ ಜಗಲೂರೆವ್ವನ ಭವ್ಯಾಕ್ರುತಿಯನ್ನು ಯೇಟು ಹೊಗಳಿದರೂ ಕಡಿಮೆಯೇ ಸಿವಸಂಕರ ಮಾದೇವಾss
{{gap}}ಅನಾದಿಕಾಲದಿಂದ ರಾಜಮಾರಾಜರಿಂದಲೂ, ಸಾಮಂತ, ಮಾಂಡಲೀಕ ಪಾಳೆಗಾರರಿಂದಲೂ ಯಲ್ಲಾಪ್ರಕೊರಚರಟ್ಟಿಕಳ್ಳಕಾಕರಿಂದಲೂ ಪೂಜೆ ಪುನಸ್ಕಾರ ಮಾಡಿಸಿಕೊಂಡಿರುವಂಥಾ.. ವುಡೇಗೊಳ್ಳ ಮಲೆಯೊಳಗೆ ನೆಲೆಗೊಂಡಿರುವಂಥಾ.. ಜಗಲೂರಜ್ಞನ ವರಪ್ರಸಾದ ಸಂಜಾತೆಯಾದ ಜಗಲೂರೆವ್ವ ಯಂಥಾಕಿ ಯಂದರೆ ಸಾವಿರ ನಾಲಗೆಗಳ ತಾಕತ್ತನ್ನು ತನ್ನೊಂದೆ ನಾಲಿಗೆ ವಾಲ ಯಿಟುಕೊಂಡಿರುವಾಕಿ, ಬಯ್ದಳ ಫಳಾರದಂಗಡಿಯನ್ನು ತನ್ನ ಗಂಟಲೊಳಗೆ ಯಿಟ್ಟುಕೊಂಡಿರವಾಕಿ, ಭಯದ ಸುಗ್ಗಿ ವಕ್ಕಲಾಡುವಲ್ಲಿ ನಿಷ್ಣಾತೆಯಂದು ಹೆಸರಾಗಿರುವಾಕಿ, ಯಿವೆಲ್ಲಕ್ಕಿಂತ ಮಿಗಿಲಾಗಿ ಅಂತಃಕರಣದ ಕೊಪ್ಪರಿಗೆಯನ್ನು ತನ್ನ ರುದಯದಲ್ಲಿ ಯಿಟ್ಟುಕೊಂಡಿರುವಾಕಿ.. ಯಿಂಥ ಜಗಲೂರವ ವಂದೊಂದೆ ಹೆಜ್ಜೆಯನ್ನಿಕ್ಕುತ್ತ.. ಭೂಮಾಯಿ ಯನ್ನು ಪುಳಕಗೊಳಿಸುತ್ತ.. ವಬ್ಬೊಬ್ಬರ<noinclude><references/></noinclude>
070gfpg08kxebax34hmqklmyre3a5w3
ಪುಟ:ಅರಮನೆ.pdf/೪೯
104
77135
317929
169844
2026-05-07T14:07:05Z
Shreelatha.Halemane
7642
/* Proofread */
317929
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=೧೮|right=ಅರಮನೆ}}
ಸುಖದುಕ್ಕಗಳನು ಯಿಚಾರಿಸುತ್ತ ಥಳಗೇರಿಯನ್ನು ಪ್ರವೇಶ ಮಾಡಿ ತಮ್ಮ ಮನೆಯಂಗಳದಲ್ಲಿ ತಲೆಮ್ಯಾಲಿದ್ದ ಹುಲ್ಲಿನ ಹೊರೆಯನ್ನು ದೊಪ್ಪಂತ ಯತಿ ಹಾಕಿದೇಟಿಗೆ ಅಜುಬಾಜುಕಿದ್ದ ಮನೆಗಳ ಮಾಡಿನಿಂದ ತಪತಪಾಂತ ಮಣ್ಣು ಸುರಿಯಿತು. ತಮ್ಮ ತಮ್ಮ ಮನೆಗಳಿಂದ ಹೊರ ಬಂದು ಜನ ಆಕೆಯ ದರುಸನ ಪಡಕೊಂಡರು. ಆಕೆಯ ಕಯ್ಲಿದ್ದ ಕುಡುಗೋಲು ಬಿಸಿಲನ್ನು ಪ್ರತಿಫಲಿಸಿದೇಟಿಗೆ ಅರಮನೆಯ ವುಪ್ಪರಿಗೆ ವಂಟಿಗಣ್ಣನ್ನು ಮುಚ್ಚಿಕೊಂಡಿತು....
{{gap}}ವಳಗಡೀಕಿರೋ ತನ್ನ ಗಂಡ ಹೊರೀಕೆ ಬರಲೀ ಅಂತ ವಂದು ನಿಡುಸುಯ್ದಳು. ಕೆಮ್ಮಿ ಕ್ಯಾಕರಿಸಿದಳು. ಯೇನು ಮಾಡುತ್ತಿದ್ದಾನೀ ಮುದೇ... ಯಂದು ಗೊಣಗಿದಳು. ವಂದೊಂದೆ ಹೆಜ್ಜೆಯನಿಕ್ಕುತ ವಳಗಡೀಕೆ ಹೋಗಿ ನೋಡುತ್ತಾಳೆ.. ವ೦ದು ಪುರುಷಾಕುತಿಂರು ಮುಂಡಕ್ಕೆ ವಂದು ದೋತರವನ್ನುಟ್ಟುಕೊಂಡು, ತಲೆಮ್ಯಾಲ ಎಂದು ಮುಂಡಾಸು ಬಿಕ್ಕೊಂಡು, ಹಣೆಮಾಲ ರೂಪಾಯಗಲದೋಟು ಕುಂಕುಮದ ಬೊಟ್ಟಿಟ್ಟುಕೊಂಡು ಬಾಯಿಂದ ಯೇನೋ ವಟಗುಟ್ಟುತ ಕರಿಗಂಬಳಿ ಗದ್ದುಗೆ ಮ್ಯಾಲ ವಟ್ಟೆ ಮದಲಿಂಗನಂಗ ಕೂಕಂಡಿರೋದು ಕಾಣಿಸಿತು. ಯಾರಿದ್ದೀತೀತ ಅಂತ ಸನೀಕ ಹೋಗಿ ನೋಡುತ್ತಾಳೆ. ತನ್ನ ಗಂಡ.. ನಗು ಬಂತು.. ನಕ್ಕರಲ್ಲಿ ಅನ್ಯಾಯವಾಗುವುದೋ ಯಂದು ಹಿಂದೇಟು ಹಾಕುತ " ಯ್, ವಳ್ಳಿ ಮದ್ದಿಂಗನಗೆ ಅಲಂಕಾರ ಮಾಡ್ಕೊಂಡು ಕೂಕಂಡಿದ್ದೀಯಲ್ಲಾ.. ವಂದು ಗಾವಾದ ಪಿಳ್ಳೇನ ತಗದು ನಾನೇ ನಿಂತಿದ್ದು ಲಗುನ ಮಾಡಲೇನು?” ಯಂದು ಚಾಸ್ಪಿ ಮಾಡಿದಳು. ಅದಕ್ಕಾತನ ಬಾಯಿಯಿಂದ ದುಸುರಾ ಮಾತು ಹೊಂಡಲಿಲ್ಲ. ಬಗಬಗ್ಗಿ ನೋಡಿ "ಯಾಕ ಮಾರೀನ ವಂಥರಾ ದಿಮ್ಮಗ ಮಾಡಕಂಡಿಯಲ್ಲಾ?” ಅಂದಳು. ಅದಕೂ ಆತನ ಬಾಯಿಯಿಂದ ಮಾತು ವುದುರಲಿಲ್ಲ.. ಕುಂತ್ತಾ.. ಯೇಟೊತ್ತು ಕುಂತಗಂಡಿದ್ದೀಯೋ ಕುಂತಗಂಡಿರು.. ಕುಂಡಿ ಸುಟ್ಟ ಮಾಲ ನೀನೇ ಯದ್ದೇಳುತೀ... ಯಂದು ತನ್ನ ಪಾಡಿಗೆ ತಾನು ಮನೆಯ ದಗದ ವದಕನಕ್ಕೆ ತೊಡಗಿದಳು. ವಟವಟ ಅನಕಂತ ಕಸ ಮುಸುರಿ ಮಾಡಿದಳು, ಮುದ್ದೆ ತಿರುವಿಟ್ಟು ಯಿಂಡಿ ಅರೆದಿಟ್ಟು “ಯ್ಯೋಯ್... ವುಣುವಂತಿ, ಕಯ್ಯಕಾಲು ಮಾರೀನ ತೊಳಕಂಡು ಬಾ” ಅಂದಳು. ಅದಕ್ಕೂ ಆ ಸರೀರ ಮಿಸುಕಾಡಲಿಲ್ಲ.. ವಡಲು ಸುಟ್ಟಮ್ಯಾಲ ನೀನೇ ವುಂಬುತಿ ಯಂದು ವಟಗುಟ್ಟುತ್ತ ತಾನೊಂದೆರಡು ತುತ್ತು ಗಂಟಲಿಗೆ ನೂಕಿ ವಂದೂವರೆ ತಂಬುಗೆ ನೀರು ಸೊಂಡಿ "ಯಾಕಿಂಗ ಕುಂತಗುಡಿರ ಬೌದೀತ? ನಾನೋಗೋ ಹೊತ್ತಿನಾಗ ಬೇಷಿದ್ದ.. ಬರೋ<noinclude><references/></noinclude>
a0svwebja79qriu3rexxpnnuerm4lzk
ಪುಟ:ಅರಮನೆ.pdf/೫೧
104
77136
317931
169845
2026-05-07T14:08:31Z
Shreelatha.Halemane
7642
/* Proofread */
317931
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=೨೦|right=ಅರಮನೆ}}
ನನ ಗಂಡ ಯಾಕೋ ಮಾತಾಡುವಲ್ಲ.. ಯಂದಾಕೆ ಕೂಗಲು ಅವರೊಂದೆ ಅಲ್ಲದೆ ಅನೇಕರು ತಮ್ಮ ತಮ್ಮ ಮೂಲೆಗಳಿಂದ ಬಂದರು. ಯೋನಾಗೇತವ್ವಾ.. ಯೋನು ಬುಟ್ಟಯ್ಯವ್ವಾ.. ಅನಕಂತ ಬಂದು ಮೋಬಯ್ಯನನ್ನು ನೋಡಿ ಯಿಸುಮಿತಗೊಂಡರು. ಅಲಲಲಾ ಯಂದನಕಂತ ತಮ್ಮ ತಮ್ಮ ಮೂಗುಗಳ ಮ್ಯಾಲ ಬೊಟ್ಟಿಟ್ಟುಕೊಂಡರು.. “ಯೇನು ಡವುಲಪಾss ಯೇನು ಡವುಲ, ಮಡಿದೋತರ ವುಟ್ಟವನಲ್ಲಾ ಯೇನು ಡವುಲಪ್ಪಾss ಯೇನು ಡವಲು.. ತಲೆ ಮ್ಯಾಲ ರುಮಾಲ ಬಿಗಿದವನಲ್ಲಾ.. ಯೇನು ಡವುಲಪ್ಪಾss ಯೇನು ಡವುಲು.. ಹಣೆಮಾಲ ರೂಪಾಯಿಯೋಟಗಲ ಕುಂಕುಮ ಬೊಟ್ಟಿಟ್ಟುಕೊಂಡವನಲ್ಲಾ.. ಯೇನು ಡವುಲಪ್ಪಾss ಯೇನು ಡವುಲು.. ಯಾಕಪ್ಪಾ ತಂದೆ? ಯದರಿಕೆ ಬರೋ ಹಂಗ ಕುಂತಗಂಡೀ, ನೆಲ ಯೇನಾರ ಹಿಡಕಂಡಯ್ಯಾ.. ಕುಂಡಿಗೇನಾರ ಗೆದ್ದಲು ಹತ್ತಯ್ಯಾ..ಯೇನು ಥಳಗೇರಿ ಮ್ಯಾಲ ಮುನುಸಾss ಯಿಲ್ಲಾ ಕಚ್ಚಿ ಹಿಡಿದ ಹೆಂಡತಿ ಮ್ಯಾಲ ಮುನುಸಾ... ನೀನಿಂಗ ಕುಂತಗಂಡಿರೋದು ನಮಗ ಪಾಡು ಕಾಣುವಲ್ಲದು..ನೀನು ಹಿಂಗ ಮಾತಾಡದಿರೋದು ನಮಗ ಪಾಡು ಕಾಣುವಲ್ಲದು” ಯಂದು ಅನಕಂತ ಆತನ ಸುತ್ತಮುತ್ತ ಅಷ್ಟದಿಕ್ಕುಪಾಲಕರಂಗ, ಪಂಚ ಪರಮೇಸೂರರಂಗ ನೆರೆದು ಕಣ್ಕಣ್ ಬಿಟ್ಟರು. ಬಾಯಿ ಬಾಯಿ ಬಿಟ್ಟರು. ಆತನ ಸರೀರವನ್ನು ಮುಟು ಮುಟ್ಟಲಕಂತ ಹಿಂದಕ ಮುಂದಕ ಜರುಗಾಡಿದರು. ಕೊನೀಕಿದ್ದು ಅವರೆಲ್ಲ “ಯಪ್ಪಾ ಜಗಲೂರೆವ್ವ..ಯೀತನ ಮಯ್ಯಾಗ ಹೊಕ್ಕೊಂಡಿರೋದು ದೆವ್ವಾನೋ, ದೇವರೋ.. ಅಲ್ಲಾಗಲೊಲ್ಲದು ಕಣವ್ವಾ...ಯಂದು ಹೇಳುತ ಹಿಂದ ಹಿಂದಕ ಜರುಗಲು ಆ ಸಾದ್ವಿಗೆ ದುಕ್ಕ ವುಮ್ಮಳಿಸಿ ಬಂತು. ಯೀ ನರ ಜಲುಮ ನೀರಮ್ಯಾಗಳ ಗುಳ್ಳೆಯಿದ್ದಂಗೆ.. ನಾಳೆ ಹೋಗೋದು ಯವತ್ತೆ ಹೋಗಲಿ ಯಂದು ದ್ರುಢ ನಿಶ್ಚಯ ಮಾಡಿದ ಆಕೆಯು ಯರಡು ಸೂಟ ಮುಂದಕ ಜರುಗಿ “ಅಲಲಲಾ... ತಲೆಯಿದ್ದಾಗಲೆ ಮೊಣಕಾಲ ಚಿಪ್ಪಿಗೆ ಪಟ್ಟಾನ ಕಟಬುಟ್ಟು ಕುಂತಗಂಡೀಯಲ್ಲಾ.. ವಂದುss ಪ್ಲಾ.. ಅನುವಲ್ಲೆಲ್ಲಾ.. ವಂದುಹೂಂ ಅನುವಲ್ಲೆಲ್ಲಾ.. ನಾನಿಂಗ ಹೋಗಿ ಹಂಗ ಬರೋ ಹೊತ್ತೆ ನೀನು ನಿನ್ನ ಸರೀರಾನ ಹಾದೀಲಿ ಹೋಗೋ ದೆವ್ವಕ್ಕೆ ಮಾಡ್ಕೊಂಡೀಯಾ, ಬೀದೀಲಿ ಹೋಗೋ ಮಾರಮ್ಮಗ ಮಾರಿಕೊಂಡೀಯಾ” ಯಂದು ಯದೆ ಯದೆ ಬಡುಕೊಳ್ಳುತ ಅಬ್ಬರಿಸಿದಳು...
{{gap}}ಆಗ ಸರೀರವು ಅವುದೋ ಅಲ್ಲವೋ ಎಂಬಂತೆ ಮಿಸುಕಾಡಲಿಕ್ಕ ಸುರುವು ಮಾಡಿತು. ಕನ್ನೊಳ್ಳಿಸಿ ಸುತ್ತಮುತ್ತ ನೋಡಿತು....<noinclude><references/></noinclude>
5mp9tgrw7s4ztg6ayga483nf95nueo5
ಪುಟ:ಅರಮನೆ.pdf/೫೨
104
77137
317932
169846
2026-05-07T14:11:03Z
Shreelatha.Halemane
7642
/* Proofread */
317932
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=ಅರಮನೆ|right=೨೧}}
{{gap}}“ಯಲಮ್ ನರಮಾನ್ನವರುಗಳಾss.. ಮುಟ್ಟಿ ನನ್ನ ಮಯ್ಲಿಗಿ ಮಾಡಬ್ಯಾಡೂರಿ, ಮಾತಾಡಿ ನನ ಕಿವಿಗಳನ ಮಯ್ಲಿಗೆ ಮಾಡಬ್ಯಾಡ್ರಿ” ಯಂದದು ಅನ್ನಲು ಅವರೆಲ್ಲ ಗಪಚುಪ್ಪಾದರು. ಅವರ ಪಯ್ಕೆ ಹಿರೀಕನಿದ್ದ ಗೊಡ್ಡಯ್ಯನು “ಮಯ್ಲಿಗಿ ಆಗುವಂಥಾದ್ದೇನುಂಟು ನಿನ ಮಮ್ಮೊಳಗ” ಅಂತ ಕೇಳಲದು “ನನ್ನೊಳಗೆ ಆದಿಸಗುತಿ ವಸ್ತಿ ಮಾಡುವಳೆ. ಹರಕತ್ತು ಮಾಡಿ ತೊಂದರೆ ಕೊಡಬ್ಯಾಡೂರಿ” ಅಂದಿತು. ಆಗಿದ್ದು ಯಿನ್ನೊಬ್ಬ ಹಿರೀಕನಾದ ಯರಬೋರಯ್ಯನು “ತಮ್ಮಾ ಮೋಬಯ್ಯಾ.. ಯೇನಾಡ್ಲಿಕತ್ತಿಯಪ್ಪಾ”ಯಂದು ಕೇಳಲದು “ನಾನು ಮೋಬಯ್ಯನಲ್ಲಾ.. ಆತನ ಸರೀರ ಮಾತಾಡ್ತಿರೋದು..” ಅಂದಿತು. ಅದಾಡಿದ ಮಾತು ಕೇಳಿ ಯಲ್ಲಾರು ಸರೀರ ನೋಡಲಕ ಮೋಬಯ್ಯನದು.. ಆದರಾತನಲ್ಲ ಮಾತಾಡ್ತಿರೋದು ಅಂದರೇನಯ್ಯ? ಯಂದನಕಂತ ಪರಸ್ಪರ ಮಿಕಿ ನೋಡಿಕೊಂಡರು....
{{gap}}ವಂಚಣ ಮೂರ್ಛೆ ಹೋಗಿದ್ದ ಜಗಲೂರೆವ್ವ ಮರುಚಣ ಚೇತರಿಸಿಕೊಂಡು.. ಯಿದು ನನಗಂಡನ ಸರೀರ.. ನಾನು ಜ್ಞಾಪಾನ ಜತುನ ಮಾಡಿರೋ ಸರೀರ.. ಯಿದು ನನ ಗಂಡನದಲ್ಲ ಅಂದರ ಯೇನರ್ತ..? ಯಂದನಕಂತ ಮುಲುಮುಟ್ಟಲಕ ಹೋಗಲು ಅದು ಹಿಂದ ಹಿಂದಕ ಜರುಗಿ “ಖಬಲ್ದಾರ್.. ಮುಟ್ಟೇಯಾ ಜ್ವಾಕೆ. ನಿನ್ನ ಗಂಡ ನನ್ನೊಳಗೆ ಅದಾನಂದರ ಅದಾನ, ಯಲ್ಲಾಂದರ ಯಿಲ್ಲ.. ವಂದುಕಾಲಕ ನೀನವಗ ಹೆಣೆಯಿದ್ದಿರಬೌದು.. ಆದರ ಲೀಗಲ್ಲ. ನಿನಗೂ ಅವಗೂ ಯಿದ್ದ ರಿಣ ತೀರಯ್ತಿ.. ಮರು ಮಾತಾಡದೆ ಯಿಲ್ಲಿಂದ ಹೊಂಟೋಗಿ ಬಿಡು.” ಯಂದು ಗದ್ದರಿಸಿತು.. ತನ್ನೊಂದೊಂದು ಮಾತುಗಳಿಂದ ಆಕೆಯನ್ನು ದೂರ ತಳ್ಳಿತು.. ಆಕೆ ಬೀಳೋದು, ಪುಟದಿದ್ದು ಬರೋದು ಮಾಡಿದಳು.....
{{gap}}ನಿಟಾರನೆ ನೆಲಮುಗುಲಿಗೇಕಾಗಿ ನಿಂತುಕೊಂಡ ಆಕೆಯು.. ಅಲಲಲಾS ಯಾವ ಅವ್ವ ಯೇನು ಕಥೀSS... ನಾನಿಲ್ಲದ ಯ್ಯಾಳ್ಯಾಗ ಅದೆಂಗ ತೂರಿಕೊಂಡ್ಡು ನನಗಂಡನ ಮಯ್ಯೋಳಗ, ನನ್ನೆಂಡ್ತಿ ಬರಲಿ ತಡಿ ಅಂತ ನನ ಗಂಡ ಆಕೇನ ತರುಬಬೌದಿತ್ತಲ್ಲಾ ಯಂದು ಮುಂತಾಗಿ ಅರುಭಟಿಸುತ್ತಿರಲು ಆ ಸರೀರವು “ನಾನೇ ನಿನ ಗಂಡನ್ನ ಹೊರ ಹಾಕಿ ತಾಯಿಗೆ ಆಶ್ರಯ ಕೊಟೀನಿ... ನೀನು ಬಯ್ದು ರವುರವ ನರಕಕ್ಕೆ ಹೋಗಬ್ಯಾಡ.. ನನ್ನ ಪಾದಪೂಜೆ ಮಾಡಿ ಸಾಂಬವಿಗೆ ಸರಣಾಗು.. ತಿಳಿತಾ” ಯಂದಿತು....
{{gap}}ಅದಕಿದ್ದು ಆಕೆಯು.. “ನೀನ್ಯಾವಾಕಿಯೇ ಆಗಿರು.. ಆದರೆ ನೀನು ನನ<noinclude><references/></noinclude>
80z9u20ttbxu4dsyvms6u9vsobseogg
ಪುಟ:ಅರಮನೆ.pdf/೫೩
104
77138
317933
169847
2026-05-07T14:12:54Z
Shreelatha.Halemane
7642
/* Proofread */
317933
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=೨೨|right=ಅರಮನೆ}}
ಗಂಡನ ಸರೀರದೊಳಗೆ ತೂರಂಡಿರೋದು ಘನಘೋರ ಅಪರಾಧ.. ನಿನಗೆ ನಾನು ಸರಣೋಗುವುದೆಂದರೇನು? ನೀನೆಂಗ ನನ ಗಂಡನ ಸರೀರದಿಂದ ಹೊರ ಹೋಗೋದಿಲ್ಲೋ ನಾನು ನೋಡ್ತೀನಿ” ಯಂದು ಗುಡು ಗುಡುಗಿದಳು.. ಸರೀರವು ತನ್ನ ನೋಟ ಮಾತ್ರದಿಂದ ಆಕೆಯನ್ನು ಮನೆಯಿಂದ ಹೊರತಳ್ಳಿತೆಂಬಲ್ಲಿಗೆ...
{{gap}}ಅತ್ತ ಕಡಪಾ ಯಂಬ ಪಟ್ಟಣದೊಳಗೆ ಥಾಮಸು ಮನೋ ಸಾಹೇಬನು ನೀನು ನಿನ್ನ ಕುಟುಂಬ ಸಲುವಲು ಮುನ್ನೂರೆಕರೆ ಯಿಟ್ಟುಕೋ ಯಂದು ಚಿನ್ನೋಬುಳ ರೆಡ್ಡಿಗೂ, ನೀನು ನಿನ್ನ ಕುಟುಂಬ ಸಲುವಲು ಮುನ್ನೂರಕೆರೆ ಯಿಟ್ಟುಕೋ ಯಂದು ವುಯಾವುಲ ಕೇಸುವರೆಡ್ಡಿಗೂ ಹೇಳಿ ನಿಗದಿ ಪಡಿಸುತ್ತಿರುವಾಗ್ಗೆ...
{{gap}}ಪೆದ ತಿಮ್ಮಾರೆಡ್ಡಿ ಮತ್ತಾತನ ಸಂಗಡಿಗರು ನರಸಿಮ್ಯಸ್ವಾಮಿಗೆ ಪೂಜೆ ಸಲ್ಲಿಸಿ ರಣಯೀಳ್ಯ ಪಡೆಯಲಕೆಂದು ಕದಿರಿಯತ್ತ ಪ್ರಯಾಣ ಬೆಳೆಸಿರುವಾಗ್ಗೆ....
{{gap}}ಅತ್ತ ಜರುಮಲಿ, ಮೂರಂಚಲ್ಲಿ ನುರಿತ ಬೇಟೆಗಾರರೂ, ನಿಷ್ಣಾತ ಗೂಢಾಚಾರರೂ ಆದಂಥ ಗುತ್ತಪ್ಪ, ವತ್ತೆಪ್ಪರೆಂಬ ಅವಳಿ ಸೋದರರು ನಿಚ್ಚಾಪುರದ ಕಡೆ ಹೊಂಟಿದ್ದ ಪಾರಿವಾಳವನ್ನು ಬಾಣ ಗುರಿಯಿಟ್ಟು ಕೆಡವಿ ಅದರ ಕಾಲ ವುಂಗುಟಕಿದ್ದ ಪತ್ತರವನ್ನು ಬಿಚ್ಚಿ ಅಕ್ಕರಗಳನ್ನು ನೋಡಿ ತಿಕಮಕರಾಗಿರುವಾಗ್ಗೆ....
{{gap}}ಅತ್ತ ಜೊನ್ನಗಿರಿಂರು ರಾಜ ಕದಿರೆ ಪ್ಪ ನಾಯಕನೆದುರು ಹಾಜರುಪಡಿಸಲೆಂದು ಮದ್ದಿ ಕೇರಿ ಸಂತ್ರಸ್ತರನ್ನು ಸಕರು ದರಗುಟ್ಟಿಯಳದೊಯ್ಯುತ್ತಿರುವಾಗ್ಗೆ.. ಯಿತ್ತ ಕುದುರೆಡವು ಪಟ್ಟಣದಲ್ಲಿ ರಾಜಮಾತೆ ಭಯೋಮಾಂಬೆಯು ಪಿಕದಾನಿ ಹಿಡಿಯೋ ಮೋಬಯ್ಯನನ್ನು ನೀನು ಕರೆದುಕೊಂಡು ಬಾ, ನೀನು ಕರೆದುಕೊಂಡು ಬಾ ಯಂದು ವುಂಡುವುಪವಾಸಿ ಬಳಸಿ ಬೆಮ್ರಚಾರಿಗಳಂತಾಗಿದ್ದ ವಂದಿಬ್ಬರು ಸಮ್ಮಿಕರನ್ನು ಥಳಗೇರಿಗೆ ಕಳುವಿ ಬಂದನೋ ಬಾರನೋ ಯಂಬ ನಿರೀಕ್ಷೆಯಲ್ಲಿರುವಾಗ್ಗೆ.. ರಾಜಕುಮಾರ ಕಾಟಯ್ಯ ನಾಯಕನು ತನ್ನ ಗುದದ ಬೊಕ್ಕೆ ಯಿಲಾಜು ಮಾಡಿಕೊಳ್ಳುವ ಸಲುವಾಗಿ ತಾನು ಪಗಡೆಯಾಟ ದಲ್ಲಿ ಗೆದ್ದದ್ದಂಥಾ ಮಾಯಾವಿ ಪಂಚಲೋಹದ ಗಿಂಡಿಯೊಳಗೆ ನೀರು ತುಂಬಿಕೊಂಡು ಹೊರಕಡೀಕಂತ ಕಡುದಮ್ಮನ ಹಳ್ಳದ ಸಾಲಿನ ಕಡೇಕ ಗುಟ್ಟಾಗಿ ಹೋಗುತ್ತಿರುವಾಗ್ಗೆ ಸಿವ ಸಂಕರ<noinclude><references/></noinclude>
dng9ow6oz2e6xwwul9wxvc4s5cqvybt
ಪುಟ:ಅರಮನೆ.pdf/೫೪
104
77139
317934
169848
2026-05-07T14:13:47Z
Shreelatha.Halemane
7642
/* Proofread */
317934
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=ಅರಮನೆ|right=೨೩}}
ಮಾದೇವಾ$$
{{gap}}ಗುಡಿಹಿ೦ದಲ ಮೂಳೆ ಮೋಬಯ್ಯನ ಸರೀರದೊಳಗೆ ಸಾಂಬವಿ ವಸ್ತಿ ಮಾಡಿರುವಳೆಂಬ ವರಮಾನವನ್ನು ತನ್ನ ಮಯ್ಯ ಪದರೊಳಗೆ ತುಂಬಿಕೊಂಡು ಗಾಳಿ ಯಿತ್ತಲಿಂದ ಅತ್ತ ಸುಳುದಾಡುತ ಹೋತು, ಕಾಗೆ, ಗುಬ್ಲಿಯೇ ಮೊದಲಾದ ನಿರುಪದ್ರವಿ ಪಕ್ಷಿಗಳು ಆ ವರಮಾನದ ಮೂಟೆಯನ್ನು ತಮ್ಮ ತಮ್ಮ ಹೆಗಲ ಮ್ಯಾಲ ಹೇರಿಕೊಂಡು ಯಿತ್ತಲಿಂದ ಅತ್ತ ಹಾರುತ್ತ ಹೋದವು. ಯೀ ಪರಮಾನ್ನ ಸದ್ರುಸ ಸುದ್ದಿಯನ್ನು ಮಂದಿ ತಮ ಬಾಯಿಯಿಂದ ಖಿನ್ನೊಬ್ಬರ ಕಿವಿಗೆ ಬಡಬಡಿಸತೊಡಿಗದರು. ಬಾಯಿ ಕಿವಿಗಳುಳ್ಳ ಮಂದಿ ಪಯ್ಲಿ ಕೆಲವರು ಮುಖ ಮಾರುನ ಮಾಡಿಕೊಳ್ಳೋದ ಬಿಟ್ಟು, ಯಿಸಲ್ಟನ ಕಾರೈವುಗಳನ್ನು ಆರಂಬರಕ್ಕೆ ಬಿಟ್ಟು ಕೂಸು ಕಂದಮ್ಮ ಗಳನ್ನು ತಮ್ಮ ತಮ್ಮ ಯದೆಗವುಚಿಕೊಂಡು, ಅಂಗಿ, ಪಂಚೆ, ಕುಬುಸಗಳಿಗೆ ಗುಂಡಿ ಹಾಕಿ ಕೊಳ್ಳುತ, ಚಲ್ದಾಣಗಳಿಗೆ ಲಾಡಿ ಬಿಗಿದು ಸರಗಂಟು ಹಾಕುತ, ಬಾಯೊಳಗೆ ಬಾನದುಂಡೆಯನ್ನು ನಮಲೋದು ಮರೆಯುತ, ಕಯ್ಯ ತಿರುಮತ, ಕಾಲು ಬೀಸಿ ಬೀಸಿ ಹಾಕೂತ ಹಾಕೂತ ಥಳಗೇರಿಯ ಗುಡಿ ಹಿ೦ದಲ ಮನೆಗೆ ಯಡತಾಕಿ ಮನೆಮುಂದಲ ಪಳುಗಟ್ಟೆ ಮ್ಯಾಲ ಮಟ್ಟಸವಾಗಿ ಕೂಕಂಡಿದ್ದ ಮೋಬಯ್ಯನನ್ನು ಯಿಸುಮಯದಿಂದ ನೋಡಿ “ಹಾಯ್ ಸಿವನೇ ಸಿವಸಂಕರ ಮಾದೇವಾss” ಯಂದುದ್ಧಾರ ತೆಗೆಯೂತ ತಮ್ಮ ತಮ್ಮ ಮನೆಗಳಿಗೆ ವಾಪಾಸಾಗ ಲಾರಂಭಿಸಿದರು. ವಜ್ರಾಲ ಸೋಲಪ್ಪ ಪುಂಗಿ ಪುಲ್ಲಪ್ಪ, ಮುತ್ತೇರಿ ಮಲ್ಲವ್ವ ಬೋರಯ್ಯರೆ ಮೊದಲಾದ ಹಿರೀಕರು ಗುಡ್ಡದ ಹಿಂದು ಮುಂದುಲ ಗಂಡು ಕಲ್ಲುಗಳಂಗೆ ನೆರೆದು ಮೂಗಿನಿಂದಲೂ ಕಣ್ಣೀರು ಸುರಿಸುತಲಿದ್ದ ಜಗಲೂರೆವ್ವಗೆ ಪರಿಪರಿಯಿಂದ ಸಮಾಧಾನ ಹೇಳುತಲಿದ್ದರು. ಆಜುಡಲವ್ವ ಗಾದೀರಮ್ಮ, ವುಲಿಗೆವ್ವ ಯಲ್ಲಮ್ಮ ಯಲ್ಲಮ್ಮ ಅಲ್ಲೆಮ್ಮರೇ ಮೊದಲಾದ ನಿತ್ಯ ಸುಮಂಗಲೇರು ಅವ್ವನ ಸಾಲಂಕ್ರುತ ಹಡಲಿಗೆಯನ್ನು ತಮ್ಮ ತಮ್ಮ ತಲೆ ಮ್ಯಾಲ ಹೊತ್ತು ಕೊಂಡಲ್ಲಿಗೆ ಬಂದು ಚವುಡಿಕೆಗಳನ್ನು ಮೀಟುತ್ತ “ಸಾಂಬವಿಯ ಮಗನಾದನೇ ನಮಮೋಬ ಜಗದಂಬೆ ಸಿಸುವಾದನೇ” ಯಂದು ಹಾಡೂತ ಪಾಡೂತ ಕುಣಿಯ ತೊಡಗಿದರು. ಥಳಗೇಲ್ಯಾತಿ ಥಳಗೇರಿ ಕಡೇಲಿಂದ ಕಳವಳ, ತಡಸಲ, ಬಳುವಳ, ಕಡುವಲರೆಂಬ ಹೊಲೇರ ಪಡುವಲಯ್ಯನ ಮಕ್ಕಳು ಸುಯ್ಯಂತ ಬಂದು ತಮ್ಮ ತಮ್ಮ ಹಲಗೆ ತಪ್ಪಡಿಗಳ ಮ್ಯಾಲ ಕೋಲಾಡಿಸಲಾರಂಭಿಸಿದರು. ಮುದ್ದ, ಸುದ್ದ, ಗುದ್ದರೆಂಬ ಸಿದ್ದನ ಮಕ್ಕಳಲ್ಲಿಗೆ ಸುಯ್ಯಂತ ಬಂದು 'ಕೂಂಯ್.. ಕುಕುಕೂಂಯ್ss' ಯಂದು<noinclude><references/></noinclude>
lm64q3ah5ic13s7k6swwk8l89u9kupw
ಪುಟ:ಅರಮನೆ.pdf/೫೫
104
77140
317935
169849
2026-05-07T14:14:30Z
Shreelatha.Halemane
7642
/* Proofread */
317935
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=೨೪|right=ಅರಮನೆ}}
ಕಹಳೆ ಮೊದತೊಡಗಿದರು. ನೋಡು ನೋಡುತ್ತಿದ್ದಂತೆ ಗವುಳೇರ ಮೋಣಿ ಕಡೇಲಿಂದ ಪೆಟಿಗೆಪ್ಪ ತಾಳಪ್ಪ, ದಿಮುಡೆಪ್ಪ ಗಂಟೆಪ್ಪ, ತಪಡೆಪ್ಪ ಮೊದಲಾದ ಶ್ರೀದೇವಿ ಭಜನಾಮಂಡಳಿ ಯವರು ನಮ್ಮವ್ವ ತಾಯಿ ಜಗದಂಬಾ, ಜಗದಂಬಾ ಯಂದು ಯೇರಿಕೆ ದನಿಯಲ್ಲಿ ಭಜನಾ ಮಾಡುತ್ತ ಬಂದರು. ಅರೆಗಳಿಗೆ ವಳಗ ಯೀಯಲ್ಲ ಗಲಾಟೆ ಗದ್ದಲ ಗವುಜಗದಿಂದಾಗಿ ವಬ್ಬರ ಮಾತು ಯಿನ್ನೊಬ್ಬರಿಗೆ ಕೇಳಿಸದಂಗಾತು. ಜಗಲೂರ ವ್ವ “ನನ್ನ ಗ೦ಡನ ಸರೀರವನ್ನು ಆಕ್ಕರಮಿಸಿಕೊಂಡಾಕೆ ಯಾವಾಗೇ ಆಗಿಲ್ಲ. ಅವು ರಂಡ್ಯಾಗ್ಲಿ”ಯಂದು ಮುಂತಾಗಿ ಯೇರಿಕೆ ದನಿಯಲ್ಲಿ ಆವಾಜು ಹಾಕದಿದ್ದಲ್ಲಿ ಗುಂಪು ಸಂತೆಯಾಗದೆ ಯಿರುತ್ತಿರಲಿಲ್ಲ, ಸಂತ ಜಾತುರೆಯಾಗದೆ ಯಿರುತ್ತಿರಲಿಲ್ಲ. ಅನುವು ಆಪತ್ತಿನಲ್ಲಿ ತಾವಾಗೋರು ಯಂಬ ಕಾರಣಕ್ಕೆ ಅಲ್ಲಿ ವುಳುಕೊಂಡಿದ್ದ ಮಂದಿ ಪಯ್ಕೆ ಹಿರೀಕನಾದ ಗೊಡ್ಡಯ್ಯನು “ಯಸನ ಯಂಬ ಬೆಂಕಿಗೆ ಮಯ್ಯ ಕಾಸ ಬ್ಯಾಡಪ್ಪಾ.. ಯಾವಾಗ ನಿನ್ನ ಗಂಡ ನಿಸೂರು ಯಿದ್ದನವ್ವಾ ಮಗಳೆ.. ಅಯ್ದಗೇಡಿಯಂಗ ಆಡುತ್ತಿದ್ದನಲ್ಲಾ.. ಅದರಂಗ ಅವರ ಅವ್ವ ಯಂಬ ಅಯ್ದು ಬಡಕೊಂಡಿರಬೌದು.. ಅದು ಯವತ್ತಲ್ಲ ನಾಳೆ ಬುಟ್ಟೋಯ್ತದೆ.. ನಿನ ಗಂಡ ನಿನಗೆ ದಕ್ಕೇ ದಕ್ಕುತಾನ.. ಗುಡ್ಡದಂಥಾ ಮನುಶೋಳಾದ ನೀನು ಅನ್ವೇಗ ಬ್ಯಾಡ ತಾಯಿ ಅಳೋಗಬ್ಯಾಡಾss” ಯಂದು ಮುಂತಾಗಿ ಬುದ್ದಿ ಹೇಳುತ್ತಾ ಹೇಳುತಾ ಮನ್ಯಾಗೆ ಬದುಕಯ್ಕೆ. ವದಕನಯೆ ಯಂದನಕಂತ ಕುಂಡಿ ಅಡಿಯಿದ್ದ ವಲ್ಲಿಯನ್ನು ಕೊಡವಿ ಹೆಗಲ ಮ್ಯಾಲ ಹಾಕ್ಕೊಂಡು ಅಲ್ಲಿಂದ ಹೊತಾ ಹೋದನು...
{{gap}}ಯಷ್ಟೋ ಹೊತ್ತಿನವರೆಗೆ ವುರಿಸುತ್ತಾ ಅಸ್ತವಾಗುತಾಯಿದ್ದ ಮಂದಿ ಕ್ರಮೇಣ ಕರುಗುತಾ ಬಂತು. ಯನ್ನು ವುಳುಕೊಂಡಿದ್ದವೆಂದರೆ ವುಪಾಸನಾ ರೊತಾರೂಢವಾಗಿದ್ದ ಮೂರಾಕು ನಾಯಿಗಳು, ಅಯಿದಾರು ಮಂದಿ ಅವ್ವನ ಸತ್ಯುಳ್ಳ ಸರಣಾರು, ತನ್ನವ್ವ ಮಾಡುತಲಿದ್ದ ದುಕ್ಕದ ರೇಶಿಮೆ ನೂಲಿನ ಗುಂಟ ನಡೆದು ಬಂದು ಸೂರ ಆಟು ದೂರದಲಿ ನಿಂತು ಸಕಲೋಂದು ಯಿದ್ಯಾಮಾನವನ್ನು ಗಮನಿಸುತಯಿತ್ತು. ಅದು ತನ್ನವ್ವನ ಕಣ್ಣಳಗೂ ನೀರಿದೆಯಲ್ಲಾ ಯಂದು ಅಚ್ಚಯ್ಯ ಭರಿತ ದುಕ್ಕವನ್ನನುಭೋಸುತಲಿತ್ತು ಮಂದಿ ಮುಕ್ಕಾಲು ವೀಸಿ ಕರುಗುವುದನೇ ಯದುರು ನೋಡುತ ನಿಂತಿದ್ದ ಅದು ಬಲು ಚೂಚುಮವಾಗಿ ವಂದೊಂದೆ ಹೆಜ್ಜೆಯನಿಕ್ಕುತ ಹಿಂದೇಸಿಂದ ಅಂಜುತ, ಅಳುಕುತ ಬಂದು ತನ್ನ ಮಾತ್ರುಸೊರೂಪಿಣಿಯ ವದನದ ಮಾನವತೆಯನ್ನು<noinclude><references/></noinclude>
a4wkyahqufgqlfexysfmmmn7u9z85fy
ಪುಟ:ವೈಶಾಖ.pdf/೨೧೬
104
82145
317946
192392
2026-05-07T14:46:30Z
Shreelatha.Halemane
7642
/* Proofread */
317946
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=|left=೨೦೦|right=ವೈಶಾಖ}}
ಬಾಯಾಡಲೆಂದು ಹತ್ತಿರದ ಹಂಬಿನಿಂದ ನಾಲ್ಕಾರು ವೀಳೆಯದೆಲೆಗಳನ್ನು ಬಿಡಿಸಿಕೊಂಡರು.
{{gap}}ಅಡಿಕೆ ಸಸಿಗಳಿಗೆಲ್ಲ ಒಬ್ಬರೆ ನೀರುಣಿಸಿ ಕೃಷ್ಣಶಾಸ್ತ್ರಿಗಳು ದೇಹಬಾಧೆಯನ್ನು ತೀರಿಸಿ, ಹಲ್ಲು ತಿಕ್ಕಿ ಮುಖಮಾರ್ಜನಮಾಡಿ ಹರಬಿಯಿಂದ ಕೊಳದ ನೀರನ್ನು ಎತ್ತಿ ಎತ್ತಿ ತಲೆಯ ಮೇಲೆ ಸುರವುಕೊಂಡರು. ಆತ್ಮಹತ್ಯೆಯ ಯೋಚನೆ ಸುಳಿಯಿತು. ಕೊಳಕ್ಕೆ ಬೀಳಲು ಹವಣಿಸಿದರು. ತಟ್ಟನೆ ಸರಸಿಯ ನೆನಪು ಆಯಿತು. ಆ ಕಂದನನ್ನು ತಬ್ಬಲಿ ಮಾಡಿ ಹೋಗುವುದೆ? ಎಂಬ ಚಿಂತೆ ಕವಿದು, ಹಾಗೆಯೇ ಮೆಟ್ಟಲಿನ ಕಲ್ಲಿನ ಮೇಲೆ ಒರಗಿದರು. ಬ್ರಹ್ಮಪಿಶಾಚಿ ಯಾಗುವೆನೆಂಬ ಭಯವೂ ಸುಳಿಯದಿರಲಿಲ್ಲ.
{{gap}}ತೋಟದೊಳಗೆ ಲಕ್ಕ ಶಾಸ್ತಿಗಳನ್ನು ಸಮೀಪಿಸಿದವನೆ,
{{gap}}“ಯಾಕೆ ಸೋಮಿ, ಇಂಗೆ ಕುಂತುಬುಟಿ?- ಮದ್ದಿನ್ನ ಆಗ್ಲೆ ದಾಟೋಗದೆ?” ಎಂದು ಕೇಳಿದವನು, “ಕೇಸವಯ್ಯಾರ ತಟಕೋಗಿದ್ದೆ” ಎಂದು ವಿವರಿಸಿ, “ಅಡಿಕೆ ಸೊಸಿಗಳೆ ನೀರ ಆಕ್ಲಾ?” ಕೇಳಿದ.
{{gap}}ಬೋಡ್ಡ ಒಂದು ಹಳ್ಳಿಕುಂಚವನ್ನು ಅಟ್ಟಿಸಿಕೊಂಡು ಓಡಿತು. ಇನ್ನೇನು ಸಿಕ್ಕಿತು. ಎನ್ನುವುದರಲ್ಲಿ ಅದು ಒಂದು ಅಡಿಕೆ ಮರವನ್ನು ಹತ್ತಿಬಿಟ್ಟಿತು. ಕೈತಪ್ಪಿದ ಬೇಟೆಯಿಂದ ನಿರಾಶೆಗೊಂಡ ಬೊಡ್ಡ ಅಡಿಕೆ ಮರದ ಕೆಳಗಡೆ ನಗರುತ್ತ ನಿಂತು ಮೇಲೆ ಹೋಗಿ ಮರೆಯಾದ ಹಳ್ಳಿಕುಂಚನನ್ನೇ ತನ್ನ ದೃಷ್ಟಿಯಲ್ಲಿ ಅರಸುತ್ತಿತ್ತು.
{{gap}}ಶಾಸ್ತ್ರಿಗಳು ತನ್ನ ಮಾತಿಗೆ ಉತ್ತರ ಕೊಡದಿರಲು, ಆ್ಯಕ ಮತ್ತೊಮ್ಮೆ ಅವರನ್ನು ಸಮೀಪಿಸಿ ಕೇಳಿದ:
{{gap}}“ಸೋಸಿಗಳೆ ನೀರ ಆಕ್ಲಾ, ಅಯ್ಯಾರೆ?”
{{gap}}“ಬೇಡ. ಎಲ್ಲಕ್ಕೂ ನಾನೇ ಹಾಕಿದ್ದೀನಿ” ಎನ್ನುತ್ತ ನಿಧಾನವಾಗಿ ಎದ್ದು, ಮಣ್ಣಿನಲ್ಲಿ ಹೊರಳಾಡಿದ್ದರಿಂದ ಮೈಲಿಗೆಯಾಯಿತೆಂದು ಇನ್ನೊಮ್ಮೆ ತಲೆಯಿಂದ ನೀರು ಸುರುವಿಕೊಂಡು, ಒದ್ದೆ ಪಂಚೆಯಲ್ಲಿ ಶಾಸ್ತ್ರಿಗಳು ಮನೆಯ ಕಡೆ ಹೊರಟರು. ಮೈ ಮೇಲೆ ಹೊದಿಯುವ ವಸ್ತ್ರಗಳನ್ನು ನೀರಿಗೆ ಅದ್ದಿ ಹಿಂಡಿ, ಅದನ್ನು ಮಡಿಕೆ ಮಾಡಿ ತಲೆಯ ಮೇಲೆ ಇಟ್ಟಿದ್ದರು. ಕೈಯಲ್ಲಿ ಮಡಿನೀರು ತುಂಬಿದ ತಾಮ್ರದ ಚೆಂಬು,
{{gap}}ಬೊಡ್ಡನೊಡನೆ ಲಕ್ಕನೂ ಅವರನ್ನು ಹಿಂಬಾಲಿಸಿದ. ಶಾಸ್ತಿಗಳ ಮಾತು ಯಾವತ್ತೂ ಮಿತ. ಇದು ಲಕ್ಕನಿಗೂ ತಿಳಿದ ವಿಷಯವೆ. ಹಾಗಿದ್ದೂ ಒಮ್ಮೊಮ್ಮೆ ತನ್ನೊಡನೆ ಯಾವ ವಿಚಾರವನ್ನಾದರೂ ಎತ್ತಿ ಮಾತಾಡಿಸಿ ತಾನು ಮಾತಾಡುವಂತೆ<noinclude></noinclude>
bo0t3vw98e9rm3qesaqj8mjq0w9hegr
ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು
4
101285
317967
317834
2026-05-08T03:23:21Z
A826
6806
317967
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 34277<br><small>ದತ್ತಾಂಶ ಪಡೆದ ಸಮಯ: 2026-05-08 03:22:07 UTC / 2026-05-08 08:52:07 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 8251 (8526) || 0 || 0 || 7961 || 100 (200) || 173 (519) || 8569 || '''8526'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 6113 (7903) || 0 || 0 || 4727 || 718 (1436) || 599 (1797) || 6460 || '''7903'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 2893 (3554) || 0 || 0 || 1997 || 298 (596) || 197 (591) || 3385 || '''3554'''
|-
| 4 || [[Special:Contributions/Sharanya K H|Sharanya K H]] || 0 || 0 || 3051 (3077) || 0 || 0 || 3032 || 18 (36) || 4 (12) || 3090 || '''3077'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 517 (1231) || 0 || 0 || 70 || 63 (126) || 379 (1137) || 632 || '''1231'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 184 (230) || 24 || 0 || 3 || 2 (4) || 27 (81) || 10960 || '''252'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 10 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 11 || [[Special:Contributions/Vikashegde|Vikashegde]] || 0 || 0 || 27 (48) || 0 || 0 || 0 || 11 (22) || 8 (24) || 32 || '''48'''
|-
| 12 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 13 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 14 || [[Special:Contributions/Hariprasad Shetty10|Hariprasad Shetty10]] || 0 || 0 || 10 (18) || 0 || 0 || 0 || 0 (0) || 5 (15) || 46 || '''18'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
mhqw42tmkzkbcctb21arxfb0b7ot36m
ಪುಟ:ನಿತ್ಯ ನೇಮಾವಲಿ.pdf/೮೦
104
101900
317916
284273
2026-05-07T13:17:35Z
Shreelatha.Halemane
7642
/* Proofread */
317916
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}}
ತನು ಮನ ಧನವು ತನ್ನದಲ್ಲ!
ನನವೀನ ಬಾಯಿಗೆ ನೆಚ್ಚಿಕಿಲ್ಲ!!
ಘನ ಗುರುವಿನ ಪಾದವ ಪಿಡಿನೀ
ಅನುಮಾನವ್ಯಾತಕೋ ಮಾಡೋ ಸ್ಮರಣೀ ||೧||
ಆಗ ಈಗ ಯಾವಾಗ ಸ್ಥಿರವಿಲ್ಲ!
ಸಾಗಿ ಮಾಗಿ ಪೋಗುದು ಗಳಿಗೆಲ್ಲ||
ಭೋಗ ಭಾಗ್ಯದ ಭ್ರಮೆಯನು ಕಳೆ ನೀ
ಯೋಗಿಯಾಗಿ ಮಾಡೋ ನೀ ಮನರಂಜನೀ||೨||
ಜಾತಿಗೋತ್ರನೀತಿಗೆ ತಿಳಿಯಲಿಲ್ಲ.
ಮಾತುಮಾತಿನೊಳಗೆ ಹೋಯಿತಲ್ಲ!!
ಸತ್ಯಬೋಧ ಗುರುವಿನ ಪಾದವ ಪಿಡಿ ನೀ
ಸತ್ಯ ಚಿದಾನಂದನ ಮಾಡೋ ಸ್ಮರಣೀ ||೩||
{{center|೩}}
ಪರಮಹಂಸ ಪ್ರಕಾಶಗೇ ಮಂಗಲ
ಪರಂಜ್ಯೋತಿ ಪರಬ್ರಹ್ಮಗೇ ಮಂಗಲ ||ಪಲ್ಲ||
ನಿತ್ಯ ನಿರಂಜನ ನಿರ್ವಿಕಾರಗೇ ಮಂಗಲ
ಸತ್ಯಸಾಧುರ ಸಹಕಾರಗೇ ಮಂಗಲ
{{center|೭೯}}<noinclude></noinclude>
nmu4h1mcwgnydic4e6fvfbhcc8g9n2x
317917
317916
2026-05-07T13:18:01Z
Shreelatha.Halemane
7642
317917
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}}
ತನು ಮನ ಧನವು ತನ್ನದಲ್ಲ!
ನನವೀನ ಬಾಯಿಗೆ ನೆಚ್ಚಿಕಿಲ್ಲ!!
ಘನ ಗುರುವಿನ ಪಾದವ ಪಿಡಿನೀ
ಅನುಮಾನವ್ಯಾತಕೋ ಮಾಡೋ ಸ್ಮರಣೀ ||೧||
ಆಗ ಈಗ ಯಾವಾಗ ಸ್ಥಿರವಿಲ್ಲ!
ಸಾಗಿ ಮಾಗಿ ಪೋಗುದು ಗಳಿಗೆಲ್ಲ||
ಭೋಗ ಭಾಗ್ಯದ ಭ್ರಮೆಯನು ಕಳೆ ನೀ
ಯೋಗಿಯಾಗಿ ಮಾಡೋ ನೀ ಮನರಂಜನೀ||೨||
ಜಾತಿಗೋತ್ರನೀತಿಗೆ ತಿಳಿಯಲಿಲ್ಲ.
ಮಾತುಮಾತಿನೊಳಗೆ ಹೋಯಿತಲ್ಲ!!
ಸತ್ಯಬೋಧ ಗುರುವಿನ ಪಾದವ ಪಿಡಿ ನೀ
ಸತ್ಯ ಚಿದಾನಂದನ ಮಾಡೋ ಸ್ಮರಣೀ ||೩||
{{center|೩}}
ಪರಮಹಂಸ ಪ್ರಕಾಶಗೇ ಮಂಗಲ
ಪರಂಜ್ಯೋತಿ ಪರಬ್ರಹ್ಮಗೇ ಮಂಗಲ ||ಪಲ್ಲ||
ನಿತ್ಯ ನಿರಂಜನ ನಿರ್ವಿಕಾರಗೇ ಮಂಗಲ
ಸತ್ಯಸಾಧುರ ಸಹಕಾರಗೇ ಮಂಗಲ
{{center|೭೯}}<noinclude></noinclude>
0xrrcsr0x6p7pcwzaucix1vnxzy4mf9
ಪುಟ:ನಿತ್ಯ ನೇಮಾವಲಿ.pdf/೮೧
104
101902
317918
284275
2026-05-07T13:20:50Z
Shreelatha.Halemane
7642
/* Proofread */
317918
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}}
ಮಿಥ್ಯಾಮಾಯಾ ಆಳಿದಾತಗೇ ಮಂಗಲ|
ಮುಕ್ತಿ ಕೊಡುವಂಥ ಕರ್ತಾಗೇ ಮಂಗಲ||೧||
ಭೇದಾಭೇದ ಅಳಿದಾತಗೇ ಮಂಗಲ|
ಭೇದವೇ ನಿಲುಕದ ಅಗಣಿತಗೇ ಮಂಗಲ।।
ಮೇದಿನಿಯೊಳಗೇ ಜಗಭರಿತಗ ಮಂಗಲ
ವಾದಿಜನರ ಸಂಹರ್ತಾಗೇ ಮಂಗಲ||೨||
ಇಂದುಧರ ವಿಶ್ವನಾಥಗೆ ಮಂಗಲ
ಬಂದು ಲೋಕಾಪುರದಲ್ಲಿ ನಿಂತಾತಗೇ ಮಂಗಲ।।
ತಂದೆ ತ್ರಿಮಲ್ಲ ಅನಂತಗೆ ಮಂಗಲ
ಕಂದ ಜ್ಞಾನದೇವರ ದಾತಾಗೇ ಮಂಗಲ ||೩||
{{center|೪}}
ಶ್ರೀಗುರುನಾಥ ಛಂದನನಾಥ
ನಿರ್ಗುಣರೂಪ ಸದೋದಿತಶಾಂತ
ಶ್ರೀಗುರುಸಹಜಾನಂದಮಹೇಶ
ನಿರ್ಮಳನಿಶ್ಯಳಶುದ್ಧಪರೇಶ।।
ಬೋಧಿತಬೋಧಪರಂಪರಬೋಧ
ಸಚ್ಚಿತ್ತುಖಲಿತವಿಚಾರ! -
ಜ್ಞಾನೇಶ್ವರಗುರುಸರ್ವಭರಿತ
{{center|೮೦}}<noinclude></noinclude>
hpozq8j2gikudpm9pt4w20a5unnrrq1
ಪುಟ:ನಿತ್ಯ ನೇಮಾವಲಿ.pdf/೮೨
104
101903
317919
284276
2026-05-07T13:23:41Z
Shreelatha.Halemane
7642
/* Proofread */
317919
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೧)}}
ತಾರಯ ತಾರಯ ಮಹಾಗುರುನಾಥll
ಪ್ರೇಮಳನಿಚ್ಚಳನಿರಾಮಯರೂಪ
ನಿರ್ಮಲ ತಾರಕಪೂರ್ಣ ಪ್ರತಾಪ||
'''ಭಾವಾರ್ಥ''': ಶ್ರೀ ಗುರುನಾಥನೇ, ನಾದಬ್ರಹ್ಮನೇ, ನಿರ್ಗುಣರೂಪ ಸದೋದಿತ
ಶಾಂತರೂಪನೇ, ಶ್ರೀಗುರುಸಹಜಾನಂದಮಹೇಶನೇ, ನಿರ್ಮಲ, ನಿಶ್ಚಲ,
ಶುದ್ಧ ಪರಮಾತ್ಮನೇ, ಪರಂಪರಬೋಧ ಉಪದೇಶವನ್ನು ಬೋಧಿಸಿದವನೇ,ಅವ್ವತವಿಚಾರವನ್ನೂ ಸಚ್ಚಿತ್ಸುಖಕೊಡುವಜ್ಞಾನೇಶ್ವರಗುರುವಿನ
ಸರ್ವ ಉಪದೇಶವನ್ನೂ ಬೋಧಿಸಿದವನೇ, ಪ್ರೇಮಮಯನಿಶ್ಚಲರಾಮಯ
ರೂಪನೇ, ನನ್ನನ್ನು ಉದ್ದರಿಸೆಂದು ಮತ್ತೆಮತ್ತೆ ಕೇಳಿಕೊಳ್ಳುತ್ತಾನೆ.
{{center|೫}}
ಕಾಯೇನ ವಾಚಾ ಮನಸೇಂದ್ರಿಯೈರ್ವಾ|
ಬುದ್ಧಾತ್ಮನಾ ವಾ ಪ್ರಕೃತಿಸ್ವಭಾವಾತ್ ||
ಕರೋಮಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ।।
ಅಚ್ಯುತಂ ಕೇಶವಂ ರಾಮನಾರಾಯಣಂ
ಕೃಷ್ಣದಾಮೋದರಂ ವಾಸುದೇವ ಭಜೇ।
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ
ಜಾನಕೀನಾಯಕಂ ರಾಮಚಂದ್ರ ಭಜೇ।।
{{center|೮೧}}<noinclude></noinclude>
df6u3590k7e95jmcwzubwrfko4jpp3l
ಪುಟ:ನಿತ್ಯ ನೇಮಾವಲಿ.pdf/೮೩
104
101905
317920
284278
2026-05-07T13:26:15Z
Shreelatha.Halemane
7642
/* Proofread */
317920
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}}
'''ಭಾವಾರ್ಥ''': ದೇಹದಿಂದಾಗಲಿ, ಮನಸ್ಸಿನಿಂದಾಗಲಿ, ಮಾತಿನಿಂದಾಗಲಿ,
ಬುದ್ಧಿಯಿಂದಾಗಲಿ, ಇಂದ್ರಿಯಗಳಿಂದಾಗಲಿ, ಪ್ರಕೃತಿಗನುಗುಣವಾಗಿರುವ
ಸಹಜ ಸ್ವಭಾವದಿಂದಾಗಲಿ, ಯಾವ ಕರ್ಮಗಳನ್ನು ಮಾಡುವನೋ
ಅವೆಲ್ಲವುಗಳನ್ನು ಸರ್ವಶ್ರೇಷ್ಠನಾದ ನಾರಾಯಣನಿಗೆ ಅರ್ಪಿಸುತ್ತೇನೆ. ಅಚ್ಯುತ,
ಕೇಶವ, ರಾಮನಾರಾಯಣ, ಕೃಷ್ಣದಾಮೋದರ ವಾಸುದೇವರನ್ನೂ, ಶ್ರೀಧರ
ಮಾಧವ, ಗೋಪಿಕಾವಲ್ಲಭ, ಜಾನಕೀನಾಯಕ ' ರಾಮಚಂದ್ರನನ್ನೂ
ಭಜಿಸುತ್ತೇನೆ.
{{center|೬}}
ಹರಿನಾರಾಯಣ ದುರಿತ ನಿವಾರಣ
ಪರಮಾನಂದ ಸದಾಶಿವ ಶಂಕರ||
ಭಕ್ತಜನಪ್ರಿಯ ಪಂಕಜಲೋಚನ
ನಾರಾಯಣ ತವ ದಾಸೋಹಂ!!
ಹರಿನಾರಾಯಣ ಗುರುನಾರಾಯಣ
ಘಡಿ ಘಡಿ ಜವೇ ಕರಿ ಪಾರಾಯಣ
(ಹೀಗೆ ಮೂರು ಸಲ)
'''ಭಾವಾರ್ಥ''': ಹರಿನಾರಾಯಣನೇ ದುರಿತಗಳನ್ನು ನಾಶಮಾಡುವವನೇ,
ಪರಮಾನಂದ ಮೂರ್ತಿಯನಿಸಿದ ಶಿವಶಂಕರನೇ, ಭಕ್ತಜನ ಪ್ರಿಯನೇ,
{{center|೮೨}}<noinclude></noinclude>
e72nq16aqwe7qm9he01u62vu612qhmv
ಪುಟ:ನಿತ್ಯ ನೇಮಾವಲಿ.pdf/೮೪
104
101906
317921
284279
2026-05-07T13:31:57Z
Shreelatha.Halemane
7642
/* Proofread */
317921
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೨)}}
ಕಮಲಲೋಚನನೇ, ನಾರಾಯಣನೇ, ನಾನು ನಿನ್ನ ದಾಸನು; ಹೆಜ್ಜೆ ಹೆಜ್ಜೆಗೂ
ಬಾಯಿಯಿಂದ “ಹರಿನಾರಾಯಣ, ಗುರುನಾರಾಯಣ' ಎಂದು
ಪಾರಾಯಣ ಮಾಡುತ್ತೇನೆ..
{{center|'''ಮಧ್ಯಾಹ್ನದ ಭಜನೆ (ಭಾಗ-೨)'''}}
{{center|'''ಪ್ರದಕ್ಷಿಣೆ'''}}
ಧನ್ಯ ಹೋ ಪ್ರದಕ್ಷಿಣಾ ಸದ್ಗುರು ರಾಯಾಚಿ|
ಧನ್ಯ ಧನ್ಯ ಹೋ ಪ್ರದಕ್ಷಿಣಾ ಶ್ರೀಗುರುರಾಯಾಚೀ।
ಝಾಲೀ ತ್ವರಾ ಸುರವರಾ, ವಿಮಾನ ಉತರಾಯಾಚೀ || ದೃಂ ||
ಪದೋಪದೀ ಘಡಲ್ಯಾ ಅಪಾರ ಪುಣ್ಯಾಚ್ಯಾ ರಾಶಿ|
ಸಕಳಹೀ ತೀರ್ಥ ಫಡಲಿ ಆಮ್ಹಾ ಆದಿಕರುನಿ ಕಾಶೀ ||೧||
ಕೋಟಿ ಬ್ರಹ್ಮಹತ್ಯಾ ಹರತೀ ಕರಿತಾ ದಂಡವತ
ಲೋಟಾಂಗಣ ಘಾಲಿತಾ ಮೋಕ್ಷ ಲೋಳೇ ಪಾಯಾತ||೨||
ಮೃದಂಗ ಟಾಳ ಘೋಳ ಭಕ್ತ ಭಾವಾರ್ಥೇ ಗಾತೀ।
ನಾಮಸಂಕೀರ್ತನೀ ನಿತ್ಯಾನಂದೇ ನಾಚತೀ ||೩||
ಗುರುಭಜನಾಚಾ ಮಹಿಮಾ ನ ಕಳೆ ನಿಗಮಾ ಆಗಮಾಸೀ
ಅನುಭವ ಜೇ ಜಾಣತೀ ಈ ಗುರುಪದಿಚೇ ಅಭಿಲಾಷೀ || ೪ ||
{{center|೮೩}}<noinclude></noinclude>
plqyg597zvv0284g4z12u3y7zhvxcdn
ಪುಟ:ನಿತ್ಯ ನೇಮಾವಲಿ.pdf/೮೫
104
101907
317922
284280
2026-05-07T13:33:40Z
Shreelatha.Halemane
7642
/* Proofread */
317922
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}}
ಪ್ರದಕ್ಷಿಣಾ ಕರೂನಿ ದೇಹ ಭಾವೇ ವಾಹಿಲಾ
ಶ್ರೀರಂಗಾತ್ಮದ ವಿಠಲ ಪುಢೇ ಉಭಾ ರಾಹಿಲಾ ||೫||
'''ಭಾವಾರ್ಥ''': ಸದ್ಗುರುವಿಗೆ ಪ್ರದಕ್ಷಿಣೆಯನ್ನು ಹಾಕಿ ಧನ್ಯರಾದವು. ಇಂಥ
ಧನ್ಯತೆಯನ್ನು ಪಡೆಯಲಿಕ್ಕೆ ದೇವತೆಗಳೂ ವಿಮಾನದಿಂದ ಇಳಿದುಬರಲು
ಆತುರರಾಗಿರುತ್ತಾರೆ. ಈ ಪ್ರದಕ್ಷಿಣೆಯಲ್ಲಿ ಹೆಜ್ಜೆಹೆಜ್ಜೆಗೂ ಅಪಾರ
ಪುಣ್ಯದರಾಶಿಯು ಲಭಿಸಿತು. ಕಾಶಿಯಿಂದ ಮೊದಲು ಮಾಡಿ ಎಲ್ಲ ಕ್ಷೇತ್ರಗಳ
ತೀರ್ಥಯಾತ್ರೆಯಾದಂತಾಯಿತು. ಸಾಷ್ಟಾಂಗನಮಸ್ಕಾರ ಮಾಡುವುದರಿಂದ
ಕೋಟಿಬ್ರಹ್ಮಹತ್ಯೆಯ ಪಾಪವೂ ಕಳೆದುಹೋಗುತ್ತದೆ. ಉರುಳುಸೇವೆ
ಮಾಡುವವರ ಕಾಲಿನಡಿಯಲ್ಲಿಯೇ ಮೋಕ್ಷ ಹೊರಳಾಡುತ್ತದೆ. ಭಕ್ತರು
ತಾಳಮೃದಂಗಗಳ ಮೇಳದೊಂದಿಗೆ ಭಕ್ತಿಯಿಂದ ಹಾಡುತ್ತಾರೆ.
ನಾಮಸಂಕೀರ್ತನೆಮಾಡಿ ನಿತ್ಯವೂ ಆನಂದದಿಂದ ಕುಣಿಯುತ್ತಾರೆ.
ಗುರುಭಜನೆಯ ಮಹಿಮೆಯನ್ನು ಆಗಮನಿಗಮಗಳೂ ಅರಿಯವು.
ಸಾಕ್ಷಾತ್ಕಾರದ ಅನುಭವಪಡೆದು ಅನುಭವವೇನೆಂಬುದನ್ನು ಅರಿತವರು
ಗುರುಚರಣಸಾನಿಧ್ಯವನ್ನು ಬಯಸುತ್ತಾರೆ. ಭಕ್ತಿಭಾವದಿಂದ ಪ್ರದಕ್ಷಿಣೆಹಾಕಿ
ತಮ್ಮ ದೇಹವನ್ನು ಸಮರ್ಪಿಸಿದಾಗ ಶ್ರೀರಂಗಾತ್ಮಜ ವಿಠಲನು ಎದುರಿಗೆ
ಬಂದುನಿಂತನು. (ಪ್ರದಕ್ಷಿಣೆಯಲ್ಲಿ ಪಂಢರಪುರದ ಯಾತ್ರೆಯಾಗುತ್ತದೆ.
ದೇಹವೇ ಫಂಡರಪುರ; ಆತ್ಮನೇ ವಿಠಲ).
{{center|೮೪}}<noinclude></noinclude>
4zdpbmvdvub6ljlf97v17c0gwwbboex
ಪುಟ:ನಿತ್ಯ ನೇಮಾವಲಿ.pdf/೮೬
104
101909
317923
284282
2026-05-07T13:37:31Z
Shreelatha.Halemane
7642
/* Proofread */
317923
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಮಧ್ಯಾಹ್ನದ ಭಜನೆ (ಭಾಗ-೨)}}
ಅಲಕ್ಷ ಲಕ್ಷುನಿ ಪಾಹೇ ನಿಜವಸ್ತು| ಪರಾತ್ಪರ ಚಿನ್ಮಯ ಬ್ರಹ್ಮರೂಪ ತೇಜ
ಪ್ರತ್ಯಕ್ಷ ಆಹೇ।। ಗುರುಪದ ವಂದುನಿ ಆಧಿ ಪಾಹಿ ತೂ| ಹೃದಯಾಂತರಿ
ಶೋಧುನಿ ಮನಾತ ಧೂರ್ತ ಕರೀ ಬೋಧುನೀ| ಕಾಮಕ್ರೋಧ ಮದಮತ್ಸರ
ಅಂಗೀ। ದಂಭಾಹಂಕಾರ ಜಿರವುನೀ ದೈತಕಲ್ಪನಾ ಮಾರ ತ್ಯಾಗುನೀ|
ಏಕಾಗ್ರಮನ ಸ್ವಸ್ಥ ಕರೋನೀ| ಬೈಸ ಪದ್ಮಾಸನೀ ಮುದ್ರಾ ಲಾವ
ಆತ್ಮಭಾಷಣೇ || ದೃಷ್ಟಿ ಆತ ದೃಷ್ಟಿ ಸುರಂಗ |ಕರೂನಿಯಾ ಸಮದೃಷ್ಟಿ
ಮಗ|| ನಾನಾ ತರೇಚೇ ರಂಗ ಸುರಂಗ ರಕ್ತ ಶ್ವೇತವತ ಆದೇ ಪುಢ
ನೀಲವರ್ಣ ತೇಜ ಜಾಣಾವೇ || ೧ || ನೀಲವರ್ಣ ಈ ಬಿಂಬಾಕಾಶೀ|
ಚೈತನ್ಯಾಚೀ ಮೂಸ ತ್ಯಾಮಧ್ಯೆ ವಸ್ತು ಜಡಲೀ ಅಸೇ|| ತ್ರಿಕುಟ ಭೇದುನೀ
ಉಲಟ ಜಾತಾ |ಮೀನ ಮಾರ್ಗ ಧಸ ರೂಪ ಅರೂಪ ಹೂವೂನೀ
ಪ್ರವೇಶ|| ಉನ್ಮನವೂನಿಯಾ ಬ್ರಹ್ಮರುದ್ಧಿ| ಸಮಾಧಿ ಲಾವು ಬಸ್
ತೇಥ ಕಾಳ ಕದಾ ನಾ ಧಸೇ।| ಸಿದ್ಧ ಪುರುಷ ತೋ ಯೋಗ ಸಾಧುನೀತಿ|
ತಾಪಾ ಸವಿತೋ ಕರೂನ ಹರಣ| ಆಪುಲಾ ಆಪಣ ರಾಹೇ ನಿಮಗ್ನ|
ತ್ಯಾಲಾಚಿ ಪ್ರಾಪ್ತಿ ಹೋಯ ಚರಾಚರ ಅವಚಿ ಬ್ರಹ್ಮ ಆಹೇ || ೨ ||
ಸದ್ಗುರುಕೃಪಾ ಜಖಮ ಜಿನ್ಹಾರೀ |ಜ್ಯಾಲಾ ಘಾವ ಲಾಗೇಲ ತೋಚಿ
ಘಾಯಾಳಗತಿ ಘುಮತೋ।। ಬೀಜಮಂತ್ರ ಹಾ ಜಪ ಗಾಯತ್ರಿ||
ಅಪ್ರಹರ ಯೋಜಿತೋ ಸಾಧನ ಘಡಿ ಪಳ ಘಡಿ ಸಾಧಿತೋ||
{{center|೮೫}}<noinclude></noinclude>
nt2pi9mo1odc6w9fy9mva2gdknt5hdv
ಚರ್ಚೆಪುಟ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವಾಮಿ, ಬಿ ಜಿ ಎಲ್
1
119828
317914
2026-05-07T13:09:05Z
~2026-27793-28
8538
/* Chapter explanation */ ಹೊಸ ವಿಭಾಗ
317914
wikitext
text/x-wiki
== Chapter explanation ==
chap [[ವಿಶೇಷ:Contributions/~2026-27793-28|~2026-27793-28]] ([[ಸದಸ್ಯರ ಚರ್ಚೆಪುಟ:~2026-27793-28|talk]]) ೧೮:೩೯, ೭ ಮೇ ೨೦೨೬ (IST)
bhy7fe8xebh4ysztcal6jeunlyej4rh