ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.9 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:ಹಗಲಿರಳು.pdf/೧೧ 104 120977 325135 2026-07-03T11:48:17Z Viveka BG 8559 /* Proofread */ 325135 proofread-page text/x-wiki <noinclude><pagequality level="3" user="Viveka BG" /></noinclude> ಕನ್ನಡ ಕೋಗಿಲೆ , ಎಪ್ರಿಲ್-1918. ------------------------------------------------------ ವರಿಯಲಿಕ್ಕಿರುವ ಚಿಕ್ಕವರಿಗೆ, ಲೋಕವ್ಯವಹಾರಗಳನ್ನು, ಕೈಗನ್ನಡಿಯಾಗುವಂತೆ, ತಿಳಿಸುವುದೆಂದರೆ, ಹೀಗೆಯೆ. ಆದರೆ, ಆಬೆಳಕುಳಕುಗಳ ಹುಟ್ಟು, ಯಾರಿಂದ?-ನೋಡೋಣ ಅವುಗಳು ತರತರವಾಗಿನೆ. ಅದರಿಂದ, ಅವುಗಳ ತಾಯಿಮನೆಯೂ, ಒಂದಲ್ಲ, ಎರಡಲ್ಲ ಹತ್ತಲ್ಲ, ಹಲವು ಎಂದು ಕೆಲವರು ಹೇಳಬಹುದು. ಅದು ಸರಿಯಲ್ಲ. ಸೊರ್ಯ ಚoದ್ರ ಅಗ್ನಿ ಮೊದಲಾದ, ಹೆಲವು ತೇಜೋರಾಶಿಗಳು, ಅಲ್ಪಸ್ವಲ್ಪ ತಾರ ತಮ್ಯವುಳ್ಳ ಮಕ್ಕಳಂತೆ, ಒಂದೆ ತಾಯಿಯ ಮಕ್ಕಳು. ಆ ತಾಯಿಯೆ, ಯೋಗಿಗಳು ಸೇವಿಸುವ ಬ್ರಹ್ಮವಿದ್ಯೆ ಅವಳ ನಾಡೆ 'ಆನಂದಸಾಮ್ರಾಜ್ಯವು. ಹಲವರು ಆ ವಿದ್ಯೆಯನ್ನೂ ಅದರ ಅಂಗಗಳಾದ ಕಳಾಶಾಸ್ತ್ರಗಳನ್ನೂ ಅಭ್ಯಾಸಮಾಡಿ, ತಿಳಿದು ಕೊಳ್ಳುತ್ತಾರೆ. ಆದರೇನು? ಅವರ ಮನಸ್ಸು ನೆಲೆಗೊಳ್ಳದಿರುವುದರಿಂದ, ಹದ ವಾಗದ ಹಿಟ್ಟು, ಕಜ್ಚಾಯಕ್ಕೆ ಬಾರದೆ, ಅರುಚಿಗೂ, ಆಜೀರ್ಣಕ್ಯೂ, ಆಮೂಲಕ, ರೋಗಕ್ಕೂ ಕಾರಣವಾಗುವಂತೆ, ಲೋಕಕಂಟಿಕರೆ ಆಗುತ್ತಾರೆ. ಅದಿರಲಿ, ಆ ಅನಂದಸಾಮ್ರಾಜ್ಯದಲ್ಲಿ ಆರ್ಯ (ಸೊರ್ಯ)ನೆ ದೊರೆ. ಉಳಿ ದವರೆಲ್ಲರೊ ಅವನ ಕಿರಿಯರು. ಆರ್ಯನು ಇದಿರುಬಂದೊಡನೆ, ಎಲ್ಲರೂ ಕೈಮುಗಿದು ವಿಧೇಯತೆಯನ್ನು ಪ್ರಕಟಿಸುತ್ತಾರೆ.ಆದರೆ , ಆ ಒಳಗಿನವರು, ಅವನಲ್ಲಿ ಹೊಟ್ಟೆಕಿಚ್ಚುಪಡುತ್ತಿದ್ದಾರೆ, ಅಲ್ಲವೆ, ಅವನು ಉದ್ಧತಾನಾಗಿ ಕಂಡವರ ತಲೆ ಯಲ್ಲಿ ಪಾದವಿಡುವುದಾದರೆ, ಅದು ಅಪಾಯಕರವೆ. ಇರಲಿ ಒಳಗೊಳಗಿನ ಎಣಿಕೆ ಗಳನ್ನು ಹೊರಹೊರಗಿಂದ ಕಂಡುಹಿಡಿಯುವುದೆಂದರೆ ಬಹಳ ಬಾರಿ ನಿಪ್ಪಲನೆ ಅಗುವುದು. ಅಯಾ ಅಭಿಪ್ರಾಯಗಳನ್ನು ಅವರವರ ಕೆಲಸಗಳಿಂದಲೆ ಅಲ್ಲಿಂದಲ್ಲಿಗೆ ಅಚ್ಚುಕಟ್ಟಾಗಿ ಗೊತ್ತುಹಚ್ಚುಬೇಕು. ಅನುಮಾನಕ್ಕಿಂತಲೂ ಪ್ರತ್ಯಕ್ಷ್ಯವೆ ಉತ್ತಮವಲ್ಲವೆ? ಇನ್ನು "ಕತ್ತಲೆಯೆಂದರೇನು? ಎಂಬುದೊಂದು ಪ್ರಶ್ನವಿದೆ. ಅದಕ್ಕೆ, ಹಿರಿ ಮರ ಹೇಳಿಕೆ ಹೀಗೆ ಕತ್ತಲೆಯೆಂಬುದೊಂದು, ಬೇರೆ ಪದಾರ್ಥವಲ್ಲ. ಬೆಳಕಿಲ್ಲದುದೇ ಅದು. ಅದನ್ನು "ತೇಜಸ್ಸಿನ ಆಭಾವ'ವೆಂದು ಕರೆಯುತ್ತಾರೆ. ಪ್ರಬಲವಾದ, ಯಾವುದಾದರೊಂದು ತೇಜಸ್ಸು ಬಯಲಿಗೆ ಬಂದೊಡನೆ, ಅದು ಮಾಯವಾಗುವುದೆ, ಇದಕ್ಕೆ ಸಾಕ್ಷಿ,ಮಾಯಾದೇವಿಯೆಂದರೆ, , ಹೇಗೆ ಅಜ್ಞಾನ ಸ್ವರೂಪವೊ, ಹಾಗೆಯೆ ಇದೂ ಆದರ ರೂಪಾಂತರವು. ---------------------------------------------------------1.ಕೈ -ಹಸ್ತ,ಪ್ರಕಾಶ. 2.ಪಾದ- ಚಾರಣ,ಕಿರಣ.<noinclude></noinclude> f2x8d24r7fulajdra7ufuyvmj8mk75m