ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.9 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಸದಸ್ಯರ ಚರ್ಚೆಪುಟ:DreamRimmer 3 95183 325137 251640 2026-07-07T05:04:46Z A09 7218 A09 [[ಸದಸ್ಯರ ಚರ್ಚೆಪುಟ:DreamRimmer]] ಪುಟವನ್ನು [[ಸದಸ್ಯರ ಚರ್ಚೆಪುಟ:MX]] ಕ್ಕೆ ಸರಿಸಿದ್ದಾರೆ: Automatically moved page while renaming the user "[[Special:CentralAuth/DreamRimmer|DreamRimmer]]" to "[[Special:CentralAuth/MX|MX]]" 251640 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=DreamRimmer}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೩:೪೮, ೧೯ ಏಪ್ರಿಲ್ ೨೦೨೩ (IST) tg5qlo870ah1e6u3u23golyzm560ht9 325141 325137 2026-07-07T10:41:57Z Neriah 6230 Neriah moved page [[ಸದಸ್ಯರ ಚರ್ಚೆಪುಟ:MX]] to [[ಸದಸ್ಯರ ಚರ್ಚೆಪುಟ:DreamRimmer]] over a redirect without leaving a redirect: Automatically moved page while renaming the user "[[Special:CentralAuth/MX|MX]]" to "[[Special:CentralAuth/DreamRimmer|DreamRimmer]]" 251640 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=DreamRimmer}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೩:೪೮, ೧೯ ಏಪ್ರಿಲ್ ೨೦೨೩ (IST) tg5qlo870ah1e6u3u23golyzm560ht9 ಪುಟ:ಚಂದ್ರನಾಥ.pdf/೨೭ 104 120978 325136 2026-07-06T15:55:23Z Reema Jalihal 7674 /* Proofread */ 325136 proofread-page text/x-wiki <noinclude><pagequality level="3" user="Reema Jalihal" /></noinclude>{{center|ಚಂದ್ರನಾಥ}} {{rh|right=೨೩}} ಸರಯೂಗೆ ಸ್ವಲ್ಪ ನಾಚಿಕೆಯಾಯಿತು. "ನನ್ನನ್ನು ಕಂಡರೆ ಅವರಿಗೆ ತುಂಬಾ ಕನಿಕರ” ಎಂದಳು. "ಅಲ್ಲ, ಕನಿಕರದ ಮಾತು ಕೇಳುವುದಿಲ್ಲ ನಾನು. ನಾನು ಕೇಳುವುದು ನಿನ್ನನ್ನು ಬಹಳವಾಗಿ ಪ್ರೀತಿಸುತ್ತಾರೊ ಇಲ್ಲವೊ ಎಂದು.” ಸರಯೂ ನಕ್ಕುಬಿಟ್ಟಳು. ಆ ಮೇಲೆ “ನನ್ನನ್ನು ಎಷ್ಟು ಪ್ರೀತಿಸುತ್ತಾರೆಂಬುದು ನನಗೆ ಹೇಗೆ ಗೊತ್ತಾಗಬೇಕು ? ” ಎಂದಳು. “ನಿಜವಾಗಿಯೂ ನಿನಗೆ ಗೊತ್ತಿಲ್ಲವೆ ?" "ಇಲ್ಲ." ನಿಜವಾಗಿಯೂ ಸರಯೂಗೆ ಇದು ಗೊತ್ತಿರಲಿಲ್ಲ. ಹರಿಬಾಲೆ ಈಗ ವಿಚಾರದ ತೊಡಕಿನಲ್ಲಿ ಸಿಕ್ಕಳು. ಅವಳು ತಲೆಯಲ್ಲಾಡಿಸಿ ಎಂದಳು- “ಪತಿ ತನ್ನನ್ನು ಎಷ್ಟು ಪ್ರೀತಿಸುವರೆಂಬುದನ್ನು ಹೆಂಡತಿ ಅರಿಯಳೆ ! ಸರಿ, ನನಗೆ ಏಕೊ ಅನುಮಾನವೆನಿಸುವುದು ಇಲ್ಲಿಯೆ.” ಆಗ ಹರಿಬಾಲೆಯ ಮುಖವನ್ನು ನೋಡಿದರೆ ಅವಳ ಅಂತಃಕರಣದಲ್ಲಿ ಯಾವುದೊ ಒಂದು ಸಂಶಯವು ಮನೆಮಾಡಿದೆಯೆಂದು ಎನಿಸುತ್ತಿದ್ದಿತು. ಈ ಮಾತು ಸರಯೂನಿಗೂ ಹೊಳೆಯಿತು. ಅವಳೂ ಸಂಶಯ ಗ್ರಸ್ತಳಾಗಿ "ಅಂಜಿಕೆ ಯಾತರದು ?'" ಎಂದು ಕೇಳಿದಳು. “ಮತ್ತೆಂದಾದರೂ ಹೇಳುತ್ತೇನೆ.” ಸ್ವಲ್ಪ ಹೊತ್ತಿನ ಮೇಲೆ ಸರಯೂನ ಗದ್ದವನ್ನು ಹಿಡಿದು ಹರಿಬಾಲೆ ಕೋಮಲ ಸ್ವರದಿಂದ ಮಾತಾಡಿದಳು- “ಏನು ಸಖೀ, ಇಷ್ಟು ರೂಪ, ಇಷ್ಟು ಗುಣ ಇಷ್ಟು ಬುದ್ದಿ ಇಟ್ಟುಕೊಂಡು ಇಷ್ಟು ದಿನ ಏನು ಉದ್ದು ಹುರಿಯುತ್ತಿದ್ದೆಯಾ ?" ಸರಯೂ ನಕ್ಕುಬಿಟ್ಟಳು. ಈ ಸಂಗತಿ ಯಾರಿಗೂ ತಿಳಿದಿರಲಿಲ್ಲವಾದರೂ ಹರಿದಯಾಲರ ಸಂದೇಹದಲ್ಲಿ ಮಾತ್ರ ಅದು ಅಡಗಿದ್ದಿತು. ನೋಡಲಿಕ್ಕೆ ಸಭ್ಯ ಗೃಹಸ್ಥನಂತೆ<noinclude></noinclude> 6z1ru662w88nbej7djn4j2dvye0f2zf ಪುಟ:ಚಂದ್ರನಾಥ.pdf/೨೮ 104 120980 325139 2026-07-07T07:51:24Z Reema Jalihal 7674 /* Proofread */ 325139 proofread-page text/x-wiki <noinclude><pagequality level="3" user="Reema Jalihal" /></noinclude>{{center|ಚಂದ್ರನಾಥ}} {{rh|left=೨೪}} ಕಂಡರೂ ಹರಕು ಹರಕಾದ ಬಟ್ಟೆಗಳನ್ನು ಧರಿಸಿದ ಒಬ್ಬ ಮನುಷ್ಯ ಅಡುಮಾಡುವ ಬಾಹ್ಮಣಿ — ಸುಲೋಚನೆಯ — ಬಳಿಗೆ ಬಂದು ಎರಡು ಮೂರ ದಿನಗಳಿಂದ ಮಾತುಕತೆಯಾಡಿ ಹೋಗುತ್ತಿದ್ದಾನೆ. ಇದನ್ನು ಹರಿದಯಾಲರು ಅರಿಯರೆಂದು ಸುಲೋಚನೆ ತಿಳಿದುಕೊಂಡಿದ್ದಳು. ಆದರೆ ಆಕೆಯ ತಿಳುವಳಿಕೆ ತಪ್ಪಾಗಿದ್ದಿತು. ಹರಿದಯಾಲರಿಗೆ ಈ ಸಂಗತಿ ಗೊತ್ತಾದ್ದಿತು. ಇಂದು ಮಧ್ಯಾನ್ಹ ಹರಿದಯಾಲರು ಮತ್ತು ಅವರ ಚಿಕ್ಕಪ್ಪ ಕೈಲಾಸಬಾಬು ಇಬ್ಬರೂ ಮನೆಯಲ್ಲಿ ಚದುರಂಗ ಆಡುತ್ತ ಕುಳಿತಿದ್ದರು. ಇಷ್ಟರಲ್ಲಿ ಅಂಗಳದಲ್ಲಿ ಗಲಾಟೆಯಾಗುತ್ತಿರುವ ಧ್ವನಿ ಕೇಳಿಬಂತು. ಯಾರೋ ದೀನರಾಗಿ ಕೋಮಲ ಸ್ವರದಲ್ಲಿ ಭಿಕ್ಷೆ ಬೇಡುವಂತೆಯೂ ಇನ್ನೊಬ್ಬರು ಕರ್ಕಶ ದನಿಯಿಂದ ಕಠೋರ ನುಡಿಗಳನ್ನಾಡಿ ತಿರಸ್ಕರಿಸುವಂತೆಯೂ ಬೆದರಿಸುತ್ತಿರುವಂತೆಯೂ ಕೇಳಿಸಿತು. ಅವರಲ್ಲಿ ಒಬ್ಬರು ಹೆಂಗಸು, ಇನ್ನೊಬ್ಬರು ಗಂಡಸು “ಚಿಕ್ಕಪ್ಪ, ಇದೇನು ಗದ್ದಲ ಅಂಗಳದಲ್ಲಿ ! ” ಎಂದರು ಹರಿದಯಾಲರು. ಕೈಲಾಸಬಾಬು "ನೋಡು ಎಚ್ಚರ, ಸೋತುಬಿಟ್ಟಿಯಾ” ಎಂದರು ಸ್ವಲ್ಪ ಹೊತ್ತು ಏನೂ ಕೇಳಿಸಲಿಲ್ಲ. ಮತ್ತೆ ಕ್ಷಣಕಾಲದ ನಂತರ ದನಿಯು ಕೇಳಲಾರಂಭಿಸಿತು. ಹರಿದಯಾಲರು ಎದ್ದುನಿಂತು “ಸ್ವಲ್ಪ ತಡೆಯಿರಿ, ನೋಡಿಬರುತ್ತೇನೆ” ಎಂದರು. ಕೈಲಾಸಬಾಬುಗಳು ಅವರ ದೋತರದ ಚುಂಗು ಹಿಡಿದು "ನೋಡಿರಿ, ನಿಮ್ಮ ಆಟ ಸೋಲಿನ ಕಡೆಗೆ ಸಾಗಿದೆ” ಎಂದರು. ಹರಿದಯಾದರು ಪುನಃ ಕುಳಿತುಕೊಂಡರು. ಆದರೆ ಸದ್ದು ನಿಲ್ಲಲೆ ಇಲ್ಲ. ನಿರುಪಾಯರಾಗಿ ಹರಿದಯಾಲರು ಮತ್ತೆ ಎದ್ದು ನಿಂತರು. ಅಂಗಳಕ್ಕೆ ಹೋಗಿ ನೋಡಿದರು. ಸುಲೋಚನೆ ಯಾವನೋ ಒಬ್ಬನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿದ್ದಾಳೆ. ಅವನು ಒಂದೆ ಸಮನೆ ಕೂಗಿ ಕೂಗಿ “ನಾನು ಹೇಳಿದಂತೆ ಕೇಳು. ಇಲ್ಲದೆ ಹೋದರೆ ನೋಡು, ನಾನು ಆಡಿದಂತೆ ಮಾಡಿ ತೋರಿಸುತ್ತೇನೆ" ಎನ್ನುತ್ತಿದ್ದಾನೆ. ಅವಳು ಅಳುತ್ತ ಅಳುತ್ತ “ನನ್ನನ್ನು ಕ್ಷಮಿಸಿರಿ. ಒಂದು ಸಲವೇನೊ<noinclude></noinclude> 5td938qwqf6fv81jk6g13cdtds10rmv ಪುಟ:ಚಂದ್ರನಾಥ.pdf/೨೯ 104 120981 325140 2026-07-07T08:05:40Z Reema Jalihal 7674 /* Proofread */ 325140 proofread-page text/x-wiki <noinclude><pagequality level="3" user="Reema Jalihal" /></noinclude>{{center|ಚಂದ್ರನಾಥ}} {{rh|right=೨೫}} ನನ್ನ ಸರಸ್ವವನ್ನು ಹಾಳುಮಾಡಿ ಬಿಟ್ಟಿದ್ದೀರಿ. ಈಗ ಉಳಿದ ಅಲ್ಪ ಸ್ವಲ್ಪವನ್ನೂ ಸೂರೆಗೊಳ್ಳಬೇಡಿರಿ” ಎನ್ನುತ್ತಿದ್ದಾಳೆ. ಆ ವ್ಯಕ್ತಿ "ನಿನ್ನ ಮಗಳು ಇಷ್ಟು ದೊಡ್ಡ ಮನೆಯವರ ಕೈ ಹಿಡಿದಿದ್ದಾಳೆ, ನೀನು ೨೦೦೦ ರೂಪಾಯಿ ಕೊಡಲಾರೆಯಾ? ರೂಪಾಯಿ ಕೊಟ್ಟ ಕೂಡಲೆ ಇಲ್ಲಿಂದ ಹೊರಟು ಹೋಗುತ್ತೇನೆ'' ಎಂದು ಹೇಳುತ್ತಿದ್ದಾನೆ. “ನೀವು ಹೆಂಡ ಕುಡಿಯುತ್ತೀರಿ. ನಿಮ್ಮ ನಡತೆ ಚೆನ್ನಾಗಿಲ್ಲ. ಎರಡು ಸಾವಿರ ರೂಪಾಯಿ ನಿಮ್ಮ ಕೈಯಲ್ಲಿ ಎಷ್ಟು ದಿನ ನಿಂತಾವು ? ಮುಗಿದೊಡನೆ ಮತ್ತೆ ಬರುತ್ತೀರಿ, ಮತ್ತೆ ಕೇಳುತ್ತೀರಿ. ಏನು ಮಾಡಿದರೂ ನಾನು ರೂಪಾಯಿ ಕೊಡಲಾರೆ.” “ಇಗೊ, ಹೆಂಡ ಕುಡಿಯುವುದನ್ನು ಬಿಟ್ಟುಬಿಟ್ಟೆ. ವ್ಯಾಪಾರ ಮಾಡುತೇನೆ; ಇನ್ನೆಂದೂ ನಿನ್ನ ಬಳಿ ರೂಪಾಯಿ ಕೇಳಲಿಕ್ಕೆ ಬರುವುದಿಲ್ಲ.” ಸುಲೋಚನೆ ಉತ್ತರವೀಯಲಿಲ್ಲ. ಭೂಮಿಯ ಮೇಲೆ ತಲೆಯನ್ನಪ್ಪಳಿಸಿ ಕರಜೋಡಿಸಿ ಎಂದಳು — "ನನ್ನ ಮೇಲೆ ಅಷ್ಟು ದಯೆ ತೋರಿಸಿರಿ. ರೂಪಾಯಿಗಳಿಗಾಗಿ ನಾನು ಸರಯೂನನ್ನು ಕೇಳಲಾರೆ. ಆ ಕೆಲಸ ನನ್ನಿಂದಾಗದು." ಹರಿದಯಾಲರು ಹತ್ತಿರ ಬಂದು ನಿಂತುದನ್ನು ಅವರಿಬ್ಬರಲ್ಲಿ ಒಬ್ಬರೂ ನೋಡಿರಲಿಲ್ಲ. ಆದುದರಿಂದಲೇ ಉಚ್ಚ ಸ್ವರದಲ್ಲಿ ಮಾತು ಕತೆಗಳು ನಡೆದಿದ್ದವು. ಹರಿದಯಾಲರು ದೃಷ್ಟಿಗೆ ಬೀಳುತ್ತಲೆ ಇಬ್ಬರೂ ಬೆಚ್ಚಿಬಿದ್ದರು. ಹರಿದಯಾಲರು ಆ ಹೊಸ ಅಪರಿಚಿತ ವ್ಯಕ್ತಿಯ ಬಳಿಗೆ ಹೋಗಿ “ನೀನು ಯಾರ ಅಪ್ಪಣೆಯಿಂದ ಈ ಮನೆಯಲ್ಲಿ ಕಾಲಿಟ್ಟೆ ? ” ಎಂದು ಕೇಳಿದರು. ಆ ಮನುಷ್ಯ ಸ್ವಲ್ಪ ಹೊತ್ತು ಬೆಪ್ಪನಾದ. ಇದು ವರೆಗೆ ತಾನು ಮಾಡಿಡುದು ಕಟ್ಟಳೆಯ ದೃಷ್ಟಿಯಿಂದ ತಪ್ಪೆಂದು ತಿಳುವಳಿಕೆಯಾದ ಮೇಲೆ ಅಲ್ಲಿಂದ ಕಂಬಿ ಕೀಳತೊಡಗಿದ. ಆದರೆ ಕೂಡಲೆ ಹರಿದಯಾಲರು ಅವನ ಕೈಹಿಡಿದು ಕೂಗಿ ಕೇಳಿದರು — “ಹೇಳು, ಯಾರ ಅಪ್ಪಣೆಯಿಂದ ಒಳಕ್ಕೆ ಬಂದೆ ?” ಓಡಿಹೋಗಲು ಉಪಾಯವಿಲ್ಲವಾದುದರಿಂದ ಸಾಹಸಮಾಡಿ ನುಡಿದ — “ಸುಲೋಚನೆಯ ಕಡೆಗೆ ಬಂದಿದ್ದೆ.”<noinclude></noinclude> mrp0d2bb4wy7bykz349a91zwerh8r9b