ಪಾರ್ವತಿ ಜಿ.ಐತಾಳ

From Wikipedia

ಪಾರ್ವತಿ ಗಂಗಾಧರ ಐತಾಳ ಇವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎನ್ನುವ ಹಳ್ಳಿಯಲ್ಲಿ ೧೯೫೭ ಜುಲೈ ೨೩ರಂದು ಜನಿಸಿದರು. ೧೯೮೧ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು

[ಬದಲಾಯಿಸಿ] ವೃತ್ತಿ

ಮಂಗಳೂರು ಜಿಲ್ಲೆಯ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಏಳು ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ದುಡಿದ ಪಾರ್ವತಿಯವರು, ಶ್ರೀ ಗಂಗಾಧರ ಐತಾಳರೊಡನೆ ಮದುವೆಯಾದ ಬಳಿಕ ೧೯೮೮ರಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿಗೆ ಬಂದು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

[ಬದಲಾಯಿಸಿ] ಸಾಹಿತ್ಯ

ಶ್ರೀಮತಿ ಪಾರ್ವತಿ ಗಂಗಾಧರ ಐತಾಳರು ಅನೇಕ ಸಣ್ಣ ಕಥೆ, ಕವನ, ನಾಟಕ ಬರೆದಿರುವರಾದರೂ, ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ.

ಇವರ ಅನುವಾದಿತ ಕೃತಿಗಳು:

  • ದುರ್ಬೀಜ (ಮಲೆಯಾಳಂ ಮೂಲ ಕಾದಂಬರಿ : ಎಂ.ಟಿ.ವಾಸುದೇವನ್ ನಾಯರ್)
  • ಮಂಜು (ಮಲೆಯಾಳಂ ಮೂಲ ಕಾದಂಬರಿ : ಎಂ.ಟಿ.ವಾಸುದೇವನ್ ನಾಯರ್)
  • ಯುಗಾಂತ ಮತ್ತು ಇತರ ಕತೆಗಳು (ಸಣ್ಣ ಕತೆಗಳು ,ಮಲೆಯಾಳಂ ಮೂಲ  : ಎಂ.ಟಿ.ವಾಸುದೇವನ್ ನಾಯರ್)
  • ಬದುಕಲು ಮರೆತ ಸ್ತ್ರೀ (ಮಲೆಯಾಳಂ ಮೂಲ  : ವೆಟ್ಟೂರು ರಾಮನ್ ನಾಯರ್)
  • ಮಲಯಾಳದ ೧೦ ಕಥೆಗಾರ್ತಿಯರು (ಮಲೆಯಾಳಂ ಮೂಲ  : ಡಾ|ಶ್ರೀದೇವಿ ಕೆ.ನಾಯರ್)



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.