ವಾಣಿವಿಲಾಸ ಸಾಗರ

From Wikipedia

'ವಾಣಿ ವಿಲಾಸ ಸಾಗರವು ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದು. ವೇದಾವತಿ ನದಿಗೆ ಅಡ್ಡಲಾಗಿ ಮಾರಿಕಣಿವೆ ಎಂಬಲ್ಲಿ ಕಟ್ಟಾಲಾಗಿರುವ ಈ ಅಣೇಕಟ್ಟು ಹಿರಿಯೂರಿನಿಂದ ಸುಮಾರು ೨೦ ಕಿ ಮೀ ದೂರದಲ್ಲಿದೆ. ಇದರ ಎತ್ತರ ೫೦ ಮೀ, ಉದ್ದ ೪೦೫ ಮೀಟರ್ ಗಳು. ೧೩೫ ಅಡಿಗಳವರೆಗೆ ನೀರನ್ನು ಸಂಗ್ರಹಿಸಬಹುದಾಗಿದೆ. ಹಿರಿಯೂರು ತಾಲ್ಲೂಕಿನ ಸುಮಾರು ೧/೩ ರಷ್ಟು(ಸುಮಾರು ೧೦,೦೦೦ ಹೆಕ್ಟೇರ್ ಪ್ರದೇಶ) ನೆಲಕ್ಕೆ ನೀರುಣಿಸುವುದಲ್ಲದೆ ಹಿರಿಯೂರು ಮತ್ತು ಚಿತ್ರದುರ್ಗ ನಗರಗಳಿಗೆ ಕುಡಿಯುವ ನೀರನ್ನೂ ಒದಗಿಸುತ್ತದೆ. ಸಿಮೆಂಟ್ ಉಪಯೋಗವಿಲ್ಲದೆ ಕೇವಲ ಗಾರೆಯಿಂದಲೇ ಇದನ್ನು ಕಟ್ಟಲಾಗಿದೆ. ಒಂದು ಬದಿಯಿಂದ ನೋಡಿದಾಗ ಭಾರತದ ಭೂಪಟವನ್ನು ನಾವು ಕಾಣಬಹುದಾಗಿದೆ.