ಕೆ.ವಿ.ಅಯ್ಯರ್

From Wikipedia

ಕೆ.ವಿ.ಅಯ್ಯರ್ ಇವರು ೧೮೯೮ರಲ್ಲಿ ಕೋಲಾರ ಜಿಲ್ಲೆಯ ದೇವರಾಯಸಮುದ್ರದಲ್ಲಿ ಜನಿಸಿದರು. ಇವರ ಓದು ಎಸ್.ಎಸ್.ಎಲ್.ಸಿ ವರೆಗೆ ಮಾತ್ರ.

ಕೆ.ವಿ.ಅಯ್ಯರರವರು ನವೋದಯದ ಮಹತ್ವದ ಸಾಹಿತಿಗಳು.ನಾಟಕದಲ್ಲಿ ಆಸಕ್ತಿ ಹೊಂದಿದ ಇವರು "ರವಿ ಕಲಾವಿದರು" ಎನ್ನುವ ಒಂದು ನಾಟಕ ಸಂಸ್ಥೆಯ ಅಧ್ಯಕ್ಷರಾಗಿದ್ದರು.ಅಲ್ಲದೆ ಅಂಗಸಾಧನೆಯಲ್ಲಿ ಸಹ ಇವರು ಆಸಕ್ತರು. ತಾವೇ ಒಂದು ವ್ಯಾಯಾಮ ಶಾಲೆಯನ್ನು ಸಹ ನಡೆಯಿಸುತ್ತಿದ್ದರು. ಟಿ.ಪಿ.ಕೈಲಾಸಂ ಈ ವ್ಯಾಯಾಮಶಾಲೆಗೆ ಬಂದು ಮಾರ್ಗದರ್ಶನ ನೀಡಿದ್ದಿದೆ.

ಕೆ.ವಿ.ಅಯ್ಯರ್ ಅವರ ಕೆಲವು ಕೃತಿಗಳು:

  • ಶಾಂತಲಾ (ಕಾದಂಬರಿ)
  • ರೂಪದರ್ಶಿ (ಕಾದಂಬರಿ)
  • ಸಮುದ್ಯತಾ (ಕಥೆಗಳು)
  • ದೆವ್ವದ ಮನೆ

ಅಂಗಸಾಧನೆಯ ಬಗೆಗೆ ನಾಲ್ಕು ಪುಸ್ತಕಗಳನ್ನು ಇಂಗ್ಲಿಷ್‍ನಲ್ಲಿ ರಚಿಸಿದ್ದ್ದಾರೆ.

ಕೆ.ವಿ.ಅಯ್ಯರ್ ೧೯೮೦‍ರಲ್ಲಿ ನಿಧನರಾದರು.