ಉತ್ತರ ಕನ್ನಡ
From Wikipedia
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಉತ್ತರ ಕನ್ನಡವೂ ಒಂದು.ಗೋವಾ ರಾಜ್ಯ,ಬೆಳಗಾವಿ, ಧಾರವಾಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಪಶ್ಚಿಮಕ್ಕೆ ಅರಬ್ಬೀ ಸಮುದ್ರ ವಿದೆ. ಬಹುತೇಕ ಅರಣ್ಯಪ್ರದೇಶದಿಂದ ಕೂಡಿರುವ ಉತ್ತರ ಕನ್ನಡ ಜಿಲ್ಲೆ ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಸುಂದರ ಜಲಪಾತಗಳಿವೆ. ವಿಶ್ವ ವಿಖ್ಯಾತ ಜೋಗ ಜಲಪಾತ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿದೆ. ಕರ್ನಾಟಕದ ಪ್ರಖ್ಯಾತ ಜಾನಪದ ಕಲೆ "ಯಕ್ಷಗಾನ" ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ಹೆಸರು ಮಾಡಿದೆ. ಅದಲ್ಲದೇ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿ ಕರ್ನಾಟಕದ ದಾಂಡೀ ಎಂದು ಕರೆಸಿಕೊಳ್ಳೂವ ಅಂಕೋಲಾ ಕೂಡ ಈ ಜಿಲ್ಲೆಗೇ ಸೇರಿದೆ.
[ಬದಲಾಯಿಸಿ] ಪ್ರಮುಖ ಪ್ರೇಕ್ಷಣೀಯ ಸ್ಥಳಗಳು
- ಬನವಾಸಿ ಮಧುಕೇಶ್ವರ ದೇವಾಲಯ
- ಮಾಗೋಡು ಜಲಪಾತ
- ಉಂಚಳ್ಳಿ ಜಲಪಾತ
- ಯಾಣ
- ಮುರುಡೇಶ್ವರ ಸಮುದ್ರತೀರ, ದೇವಾಲಯ
- ಗೋಕರ್ಣ ಸಮುದ್ರತೀರ, ದೇವಾಲಯ
- ಕಾರವಾರ ಸಮುದ್ರತೀರ
- ದಾಂಡೇಲಿ ಅಭಯಾರಣ್ಯ
- ಶಿರಸಿ ಮಾರಿಕಾಂಬಾ ದೇವಾಲಯ
- ಅಪ್ಸರಕೊಂಡ
- ಇಡಗುಂಜಿ ಮಹಾ ಗಣಪತಿ ದೇವಾಲಯ
- ಸೋಂದಾ ಶ್ರೀ ವಾದಿರಾಜ ಬೃಂದಾವನ
[ಬದಲಾಯಿಸಿ] ಜಿಲ್ಲೆಯ ಪ್ರಮುಖ ವ್ಯಕ್ತಿಗಳು
- ಯಕ್ಷಗಾನ ಕಲಾವಿದರು: ಶಂಭು ಹೆಗಡೆ, ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ
- ಸಾಹಿತಿಗಳು: ದಿನಕರ ದೇಸಾಯಿ,ಗೌರೀಶ ಕಾಯ್ಕಿಣಿ
- ರಾಜಕಾರಣಿಗಳು: ಗಣೇಶ ಹೆಗಡೆ,ರಾಮಕೃಷ್ಣ ಹೆಗಡೆ,ಆರ್.ವಿ.ದೇಶಪಾಂಡೆ,ಅನಂತ ಕುಮಾರ ಹೆಗಡೆ,ವಿಶ್ವೇಶ್ವರ ಹೆಗಡೆ ಕಾಗೇರಿ.