ಎಸ್.ವಿ.ರಂಗಣ್ಣ

From Wikipedia

ಎಸ್.ವಿ.ರಂಗಣ್ಣನವರು ೧೮೯೮ ಡಿಸೆಂಬರ ೨೪ ರಂದು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ಹುಟ್ಟಿದರು. ತಂದೆ ವೆಂಕಟಸುಬ್ಬಯ್ಯ, ತಾಯಿ ವೆಂಕಟಲಕ್ಷ್ಮಮ್ಮ.೧೯೨೧ರಲ್ಲಿ ಎಮ್.ಏ.ಪದವಿ ಪಡೆದ ರಂಗಣ್ಣನವರು ಅಗಲೆ ಅಲ್ಲಿ ಅಧ್ಯಾಪಕರಾಗಿದ್ದರು. ೧೯೫೪ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು.

ರಂಗಣ್ಣನವರು ತಮ್ಮ ವಿಮರ್ಶಾಕೃತಿಗಳಿಗಾಗಿ ಹೆಸರಾದವರು.

[ಬದಲಾಯಿಸಿ] ಕನ್ನಡ ಕೃತಿಗಳು

  • ಕುಮಾರವ್ಯಾಸ
  • ಶೈಲಿ
  • ಹೊನ್ನಶೂಲ
  • ಪಾಶ್ಚಾತ್ಯ ಗಂಭೀರ ನಾಟಕಗಳು
  • ರಂಗಬಿನ್ನಪ
  • ಕವಿಕಥಾಮೃತ
  • ಕೋಲ್ ಕೋಲ್ ಕೂಡಿ ಬರಲಿ
  • ಕುಮಾರವ್ಯಾಸ ವಾಣಿ
  • ವಿಡಂಬನೆ
  • ಹಾಸ್ಯ

[ಬದಲಾಯಿಸಿ] ಇಂಗ್ಲಿಷ್ ಕೃತಿಗಳು

  • ಬಿ.ಎಂ.ಶ್ರೀಕಂಠಯ್ಯ
  • ಓಲ್ಡ ಟೇಲ್ಸ್ ರಿಟೋಲ್ಡ
  • ಆನ್ ದಿ ಸೆಲ್ಫ್

[ಬದಲಾಯಿಸಿ] ಪುರಸ್ಕಾರ

ರಂಗಬಿನ್ನಪ’ ಕೃತಿಗೆ ೧೯೬೫ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ.

ರಂಗಣ್ಣನವರು ೧೯೭೬ ರಲ್ಲಿ ಶಿವಮೊಗ್ಗಾದಲ್ಲಿ ಜರುಗಿದ ೪೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಎಸ್.ವಿ.ರಂಗಣ್ಣನವರು ೧೯೮೭ರಲ್ಲಿ ನಿಧನರಾದರು.
















ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.