ಎ.ಎನ್.ಪ್ರಹ್ಲಾದ ರಾವ್

From Wikipedia

ಎ.ಎನ್.ಪ್ರಹ್ಲಾದ ರಾವ್‌ರವರು, ಕನ್ನಡದ ಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ೧೬೦೦೦ ಪದಬಂಧಗಳನ್ನು ರಚಿಸಿದ್ದಾರೆ. ಇವರ ಪದಬಂಧಗಳು ಕನ್ನದದ ಪ್ರಮುಖ ಪ್ರತ್ರಿಕೆಗಳು ಹಾಗು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.

[ಬದಲಾಯಿಸಿ] ಜೀವನ

ಜುಲೈ ೨೪,೧೯೫೩ರಂದು ಕೋಲಾರ ಜಿಲ್ಲೆಯ ಅಬ್ಬನಿಯಲ್ಲಿ ಜನಿಸಿದ ಇವರು ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ೧೯೭೫ರಲ್ಲಿ ಆರಂಭಿಸಿದರು. ಕರ್ನಾಟಕ ಸರ್ಕಾರದ ಮಾಹಿತಿ ಇಲಾಖೆಯಲ್ಲಿ ಕೆಲಸ ಮಾಡಿದರು. ೧೯೮೪ರಲ್ಲಿ ಪತ್ರಿಕೆಗಳಿಗೆ ಪದಬಂಧಗಳನ್ನು ರಚಿಸಲು ಆರಂಭಿಸಿದ ಇವರು, ಚಲನಚಿತ್ರ,ಕ್ರೀಡೆ,ಸಾಮಾನ್ಯ ಜ್ಞಾನ,ಪೌರಾಣಿಕ ಹಾಗು ವಿಜ್ಞಾನ ವಿಷಯಗಳಲ್ಲಿ ಪದಬಂಧಗಳನ್ನು ರಚಿಸಿದರು. ಇವರು ರಚಿಸಿದ ಪದಬಂಧಗಳು, ಕರ್ನಾಟಕದ ಪ್ರಮುಖ ಪತ್ರಿಕೆಗಳಾದ, ಪ್ರಜಾವಾಣಿ,ವಿಜಯ ಕರ್ನಾಟಕ,ಕನ್ನಡ ಪ್ರಭ,ಸಂಯುಕ್ತ ಕರ್ನಾಟಕ, ತರಂಗ, ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

[ಬದಲಾಯಿಸಿ] ಪುಸ್ತಕಗಳು

  • ಬಂಗಾರದ ಮನುಷ್ಯ (ಆತ್ಮಚರಿತ್ರೆ) - ಡಾ.ರಾಜ್‌ಕುಮಾರ ಅವರ ಆತ್ಮಚರಿತ್ರೆಯಾದ ಬಂಗಾರದ ಮನುಷ್ಯ (ಆತ್ಮಚರಿತ್ರೆ) ಪುಸ್ತಕವನ್ನು ಇವರು ರಚಿಸಿದ್ದಾರೆ. ಇದರಲ್ಲಿ ಡಾ.ರಾಜ್‌ಕುಮಾರ ಅಭಿನಯದ ೨೦೮ ಚಲನಚಿತ್ರಗಳ ಸಮಗ್ರ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ.