ಕನ್ನಡ ರಾಜ್ಯೋತ್ಸವ

From Wikipedia

ಕನ್ನಡ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೭ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಭಾರತದ ಭಾಷಾವಾರು ಪ್ರಾಂತ್ಯ ವಿಂಗಡಣೆ ನಡೆದಾಗ ಕನ್ನಡ ಭಾಷೆಯು ಆಡುಭಾಷೆಯಾಗಿ ಪ್ರಚಲಿವಾಗಿರುವ ಪ್ರದೇಶಗಳ ಗುಚ್ಛವನ್ನು ಕರ್ನಾಟಕ ರಾಜ್ಯವನ್ನಾಗಿ ನಿರ್ಮಿಸಲಾಯಿತು.

[ಬದಲಾಯಿಸಿ] ಇತಿಹಾಸ

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟೀಷರು, ತಮ್ಮ ಒಡೆದು ಆಳುವ ನೀತಿಯಿಂದಾಗಿ ಭಾರತವನ್ನು ನೂರಾರು ಸಂಸ್ಥಾನಗಳಾಗಿ ವಿಭಜಿಸಿದ್ದರು. ಭಾರತ ಸ್ವತಂತ್ರವಾದ ಮೇಲೆ ವಲ್ಲಭಭಾಯಿ ಪಟೇಲರು ಈ ಸಂಸ್ಥಾನಗಳನ್ನೂ, ಒಂದು ದೇಶ ಭಾರತವನ್ನಾಗಿ ಮಾಡಿದರು.

ಭಾಷಾವಾರು ವಿಂಗಡನೆ ಆಧಾರದ ಮೇಲೆ, ಭಾರತದ ವಿವಿಧ ರಾಜ್ಯಗಳ ರಚನೆ ಮಾಡಲಾಯಿತು. ಅದರಂತೆ ಮೈಸೂರು ಸಂಸ್ಥಾನಕ್ಕೆ ದಕ್ಷಿಣದಲ್ಲಿದ್ದ ಕೆಲವು ಕನ್ನಡಗಿರ ಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳನ್ನು ಸೇರಿಸಿ ಮೈಸೂರು ರಾಜ್ಯವೆಂದು ಹೇಳಲಾಯಿತು. ಈ ವಿಂಗಡನೆಯ ಸಮಯದಲ್ಲಿ ಅನ್ಯಾಯ ನೆಡೆದು, ಹಲವು ಕನ್ನಡಗಿರ ಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳನ್ನು ತಮಿಳುನಾಡು, ಆಂಧ್ರ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನೀಡಲಾಯಿತು. ೧೯೭೩ ರಲ್ಲಿ ಮೈಸೂರು ರಾಜ್ಯವನ್ನು 'ಕರ್ನಾಟಕ' ಎಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರ ಸರ್ಕಾರ ಮರುನಾಮಕರಣ ಮಾಡಿತು.


[ಬದಲಾಯಿಸಿ] ಆಚರಣೆ

ನವೆಂಬರ್
ರವಿ ಸೋಮ ಮಂಗಳ ಬುಧ ಗುರು ಶುಕ್ರ ಶನಿ
 
೧೦
೧೧ ೧೨ ೧೩ ೧೪ ೧೫ ೧೬ ೧೭
೧೮ ೧೯ ೨೦ ೨೧ ೨೨ ೨೩ ೨೪
೨೫ ೨೬ ೨೭ ೨೮ ೨೯ ೩೦
೨೦೦೭



ನವೆಂಬರ್ ೦೧ ರಂದು ಅಧಿಕೃತವಾಗಿ ಕನ್ನಡ ರಾಜ್ಯೋತ್ಸವವು ಆಚರಣೆಯಾದರೂ, ನವೆಂಬರ್ ತಿಂಗಳ ಪರ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ, ಈ ದಿನಗಳಲ್ಲಿ ಕನ್ನಡ ಬಾವುಟ ಎಲ್ಲೆಡೆಯೂ ರಾರಾಜಿಸುತ್ತದೆ. ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ.