ಪಡುಕೋಣೆ ರಮಾನಂದ
From Wikipedia
ಪ.ರಮಾನಂದರು ೧೮೯೬ ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ಬ್ರಿಟಿಷ್ ಆಡಳಿತದ ಸರಕಾರಿ ಕಾಲೇಜುಗಳಲ್ಲಿ ಕೆಮಿಸ್ಟ್ರಿ ಅಧ್ಯಾಪಕರಾಗಿ ರಾಜಮಹೇಂದ್ರಿ, ತಲಚೇರಿ, ಮಂಗಳೂರು, ಪಾಲ್ಘಾಟ್ ಮತ್ತು ಮದ್ರಾಸ (ಈಗಿನ ಚೆನ್ನೈ)ಗಳಲ್ಲಿ ಸೇವೆ ಸಲ್ಲಿಸಿದರು. ನಿವೃತ್ತಿಯ ನಂತರ ಬಳ್ಳಾರಿ ಮತ್ತು ಮಂಗಳೂರುಗಳಲ್ಲಿ ಪ್ರಿನ್ಸಿಪಾಲ್ ಎಂದು ಸೇವೆ ಸಲ್ಲಿಸಿದರು.
೧೯೩೮ರಲ್ಲಿ ಪ್ರಕಟವಾದ " ಹುಚ್ಚು ಬೆಳದಿಂಗಳಿನ ಹೂಬಾಣಗಳು" ಪ.ರಮಾನಂದರ ಪ್ರಸಿದ್ಧ ಹಾಸ್ಯ ಸಂಕಲನ.
ಪ.ರಮಾನಂದರು ಕೊಂಕಣಿ ಹಾಗು ಇಂಗ್ಲೀಷ್ ಭಾಷೆಗಳಲ್ಲಿ ನಾಟಕಗಳನ್ನು ಬರೆದಿದ್ದಾರೆ.ಚೆಕಾವ್ ನ ಚೆರಿ ಹಣ್ಣಿನ ತೋಟ ಹಾಗು ರೆಮಾರ್ಕನ ಪಶ್ಚಿಮ ರಣರಂಗದಲ್ಲಿ ಎಲ್ಲವೂ ಶಾಂತ ಎಂಬ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಂಗಳೂರು ಹಾಗು ಪುತ್ತೂರುಗಳಲ್ಲಿ ರಂಗಭೂಮಿಯ ಬೆಳವಣಿಗೆಗೆ ಪಡುಕೋಣೆ ದಂಪತಿಗಳು, ರಮಾನಂದ ಹಾಗು ಸೀತಾದೇವಿ ಪಡುಕೋಣೆ, ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.
ಪಡುಕೋಣೆ ರಮಾನಂದರು ೧೯೮೩ ರಲ್ಲಿ ನಿಧನರಾದರು.