ಬಿ.ಟಿ.ಲಲಿತಾ ನಾಯಕ್

From Wikipedia

ಲಲಿತಾ ಬಿ.ಟಿ.ನಾಯಕ - ಕನ್ನಡದ ಮಹಿಳಾ ಸಾಹಿತಿಗಳಲ್ಲಿ ಒಬ್ಬರು. ಚಿಕ್ಕಮಗಳೂರುಜಿಲ್ಲೆಯ, ಕಡೂರು ತಾಲೂಕಿನ ತಂಗಲಿ ತಾಂಡ್ಯಾ ಇವರ ಹುಟ್ಟಿದೂರು. ಕಡುಬಡತನದ ಬಾಲ್ಯ ಲಲಿತಾ ನಾಯಕ್ ಅವರದಾಗಿತ್ತೆಂದು, ಆವರ ಕೆಲವ ಬರಹಗಳಿಂದ ತಿಳಿದು ಬರುತ್ತದೆ. ಲಂಕೇಶ್ ಪತ್ರಿಕೆಯಲ್ಲಿ ಇವರ ಅನೇಕ ಲೇಖನ, ಕತೆ, ಕವನಗಳು ಪ್ರಕಟಗೊಂಡಿದ್ದವು. ಸಾಹಿತ್ಯದೊಂದಿಗೆ ರಾಜಕೀಯದಲ್ಲೂ ಮುಂದುವರೆದು, ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ, ಒಮ್ಮೆ ಸಚಿವೆ ಸ್ಥಾನವನ್ನೂ ಪಡೆದಿದ್ದರು.


ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಥಾಸಂಕಲನ

  • ಹಬ್ಬ ಮತ್ತು ಬಲಿ

[ಬದಲಾಯಿಸಿ] ಕಾದಂಬರಿ

  • ನೆಲೆ-ಬೆಲೆ
  • ಗತಿ

[ಬದಲಾಯಿಸಿ] ರೇಡಿಯೊ ನಾಟಕ ಸಂಕಲನ

  • ಚಂದ್ರ ಪರಾಭವ

[ಬದಲಾಯಿಸಿ] ಮಕ್ಕಳ ಸಾಹಿತ್ಯ

  • ಭಟ್ಟನ ಕನಸು

[ಬದಲಾಯಿಸಿ] ಕವನ ಸಂಕಲನ

  • ನಂರೂಪ್ಲಿ

[ಬದಲಾಯಿಸಿ] ಪುರಸ್ಕಾರ

ಇವರ ‘ನೆಲೆ-ಬೆಲೆ’ ಕಾದಂಬರಿಗೆ ೧೯೮೧ರಲ್ಲಿ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ ದೊರೆತಿದೆ.