ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ
From Wikipedia
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ೧೯೩೬ ಅಕ್ಟೋಬರ ೨೯ ರಂದು ಶಿವಮೊಗ್ಗೆಯಲ್ಲಿ ಹುಟ್ಟಿದರು. ಇವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ತನ್ನಂತರ ಕಾಲೇಜಿನಲ್ಲಿ ಅಧ್ಯಾಪಕರಾದರು.೧೯೯೦ ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆದರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ ಸಂಕಲನ
- ವೃತ್ತ
- ಸುಳಿ
- ನಿನ್ನೆಗೆ ನನ್ನ ಮಾತು
- ದೀಪಿಕಾ
- ಬಾರೊ ವಸಂತ
- ಚಿತ್ರಕೂಟ
- ಹೊಳೆಸಾಲಿನ ಮರ
[ಬದಲಾಯಿಸಿ] ಅನುವಾದ
- ಸುನೀತ (ಶೇಕ್ಸಪಿಯರನ ಐವತ್ತು ಸಾನೆಟ್ಟುಗಳು)
- ಚಿನ್ನದ ಹಕ್ಕಿ ( ಯೇಟ್ಸ ಕವಿಯ ಐವತ್ತು ಕವನಗಳು)
[ಬದಲಾಯಿಸಿ] ಶಿಶು ಸಾಹಿತ್ಯ
- ಜಗನ್ನಾಥ ವಿಜಯ
- ಮುದ್ರಾಮಂಜೂಷ
[ಬದಲಾಯಿಸಿ] ವಿಮರ್ಶೆ
- ಹೊರಳು ದಾರಿಯಲ್ಲಿ ಕಾವ್ಯ
- ವಿವೇಚನ
- ಕಾವ್ಯಶೋಧನ(ವಿಭಿನ್ನ ಲೇಖಕರ ವಿಮರ್ಶಾ ಲೇಖನಗಳು)
[ಬದಲಾಯಿಸಿ] ಸಂಪಾದನೆ
- ಶಿಶುನಾಳ ಶರೀಫರ ಕವಿತೆಗಳು
[ಬದಲಾಯಿಸಿ] ಪುರಸ್ಕಾರ
- "ಹೊರಳು ದಾರಿಯಲ್ಲಿ ಕಾವ್ಯ" ಈ ವಿಮರ್ಶಾಗ್ರಂಥಕ್ಕೆ ೧೯೭೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಲಕ್ಷ್ಮೀನಾರಾಯಣ ಭಟ್ಟರು ರಚಿಸಿದ ಗೀತೆಗಳು ಸುಗಮಸಂಗೀತದ ಗಾಯಕರಿಗೆ ತುಂಬ ಪ್ರಿಯವಾದವು. ಶಿವಮೊಗ್ಗ ಸುಬ್ಬಣ್ಣ ,ಮೈಸೂರು ಅನಂತಸ್ವಾಮಿ, ಅಶ್ವತ್ಥ ಮೊದಲಾದ ಗಾಯಕರು ಇವರ ಗೀತೆಗಳನ್ನು ಹಾಡಿದ್ದಾರೆ.
ವರ್ಗಗಳು: ಕನ್ನಡ ಸಾಹಿತ್ಯ | ಸಾಹಿತಿಗಳು | ಕವಿಗಳು | ೧೯೩೬ ಜನನ