ಶಂಕರ ಮೊಕಾಶಿ ಪುಣೇಕರ

From Wikipedia

ಶಂಕರ ಮೊಕಾಶಿ ಪುಣೇಕರರವರು ೧೯೨೮ರಲ್ಲಿ ತಾಯಿಯ ತವರುಮನೆ ಧಾರವಾಡದಲ್ಲಿ ಹುಟ್ಟಿದರು. ತಂದೆ ರಾವಜೀರಾವ ಮೊಕಾಶಿ; ಪಾರ್ವತಿಬಾಯಿ ಪುಣೇಕರ ಇವರಿಗೆ ದತ್ತಕ ಹೋದ ಮೇಲೆ ಶಂಕರ ಮೊಕಾಶಿಯವರು ಶಂಕರ ಮೊಕಾಶಿ ಪುಣೇಕರ ಆದರು.೧೯೪೪ರಲ್ಲಿ ಮ್ಯಾಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆ.ಇ.ಬೋರ್ಡಿನ ಆರ್ಟ್ಸ್ ಕಾಲೇಜು ಸೇರಿದರು. ೧೯೪೮ ರಲ್ಲಿ ಇವರ ವಿವಾಹವಾಯಿತು. ೧೯೪೯ ರಿಂದ ೧೯೫೧ ರವರೆಗೆ ವಿಜಾಪುರದ ಗವರ್ನಮೆಂಟ ಅಗ್ರಿಕಲ್ಚರಲ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು. ಅಲ್ಲಿಂದ ಕಾರವಾರಕ್ಕೆ ವರ್ಗಾವಣೆ. ಅಲ್ಲಿದ್ದಾಗಲೆ ಸಂಗೀತ ಶಿಕ್ಷಣ ಪ್ರಾರಂಭ. ಅಲ್ಲಿಯ ಕೆಲಸ ಹೋದ ಮೇಲೆ ಧಾರವಾಡದಲ್ಲಿ ‘ ಜಯ ಕರ್ನಾಟಕ’ ದ ಸಂಪಾದಕರಾದರು. ಮರುವರ್ಷ ಬೆಳಗಾವಿಯ ಆರ್.ಎಲ್.ಎಸ್. ಹೈಸ್ಕೂಲಿನಲ್ಲಿ ಶಿಕ್ಷಕರಾದರು. ಅಲ್ಲಿದ್ದಾಗಲೆ ಎಮ್.ಏ. ಪದವಿ ಪಡೆದು ಬೆಳಗಾವಿಯ ಆರ್.ಪಿ.ಡಿ. ಕಾಲೇಜಿನಲ್ಲಿ ಅಧ್ಯಾಪಕರಾದರು. ಆ ಬಳಿಕ ಮುಂಬಯಿಯ ಕಾಲೇಜಿನಲ್ಲಿ ಅಧ್ಯಾಪಕರಾಗಿ, ೧೯೫೬ರಲ್ಲಿ ತಮ್ಮ ಪಿ.ಎಚ್.ಡಿ. ಪದವಿ ಪಡೆದರು. ೧೯೬೫-೭೦ ರ ಮಧ್ಯದಲ್ಲಿ ‘ ಟೈಮ್ಸ್ ಆಫ್ ಇಂಡಿಯಾ’ ದವರ ಏಕೈಕ ಸಂಗೀತ ವಿಮರ್ಶಕರಾಗಿ ಮುಂಬಯಿಯಲ್ಲಿ ಜರಗುತ್ತಿದ್ದ ಅನೇಕ ಸಂಗೀತ ಕಚೇರಿಗಳ ವಿಮರ್ಶೆಯನ್ನು ನೀಡಿದರು. ೧೯೭೦ರಿಂದ ೧೯೮೦ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿದ್ದರು. ಈ ಸಮಯದಲ್ಲಿ ಮಲ್ಲಿಕಾರ್ಜುನ ಮನಸೂರರಲ್ಲಿ ಸಂಗೀತ ಶಿಷ್ಯತ್ವವನ್ನು ಮಾಡಿದರು.

ಶಂಕರ ಮೊಕಾಶಿ ಪುಣೇಕರ ಅವರ ಸಾಹಿತ್ಯ:

ಕನ್ನಡ ಕಾವ್ಯ ಸಂಕಲನಗಳು: ಗಾನಕೇಳಿ, ಮಾಯಿಯ ಮೂರು ಮುಖಗಳು

ಕನ್ನಡ ನಾಟಕ: ವಿಪರ್ಯಾಸ ವಿನೋದ

ಕನ್ನಡ ಕಾದಂಬರಿ: ಗಂಗವ್ವ ಮತ್ತು ಗಂಗಾಮಯಿ, ನಟ ನಾರಾಯಣಿ, ಅವಧೇಶ್ವರಿ

ಕನ್ನಡ ಕಥೆಗಳು: ಡೆರೆಕ್ ಡಿಸೋಜಾ ಮತ್ತು ಇತರ ಕತೆಗಳು, ಅಪೂರ್ಣ ವರ್ತಮಾನಕಾಲ

ವಿಮರ್ಶೆ: ಬೇಂದ್ರೆ ಕಾವ್ಯಮೀಮಾಂಸೆ, ಸಾಹಿತ್ಯ ಮತ್ತು ಅಭಿರುಚಿ, ಯುರೋಪಿಯನ್ ವಿಮರ್ಶೆಯ ಇತಿಹಾಸ

ಇಂಗ್ಲಿಷ್ ಕೃತಿಗಳು: The Captive(Poetry), The Cycle of Seasons(Translation), The later phase in the development of W.B.Yeats(Thesis), The Pretender(Poetry), An epistle to David McCutchion (Poetry), The indo-Anglican Creed, The Interpretations of the later poems of Yeats, V.K.Gokak (Monograph), Homing Bird (Jnanapith Laureates on Kuvempu), Theoretical and Practical Studies in Indo-English Literature, Avadhoota Geetha (Ed), Mohenjodaro Seals, Tent Pole, Parodigms, Harijan contribution to medieval Indian thought, Nana’s confession (novel), Chomsky-Skinner Experimental method, Ramayana Darshanam( Translation of Kuvempu’s Kannada Epic), B.Puttaswami (monograph)