ರವಿ ಬೆಳಗೆರೆ
From Wikipedia
ರವಿ ಬೆಳಗೆರೆ ಹಾಯ್ ಬೆಂಗಳೂರ್ ಕನ್ನಡ ಪತ್ರಿಕೆಯ ಸಂಪಾದಕ, ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಮತ್ತು ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕ. ೨೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಹಲವಾರು ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕ. ಶ್ರೀಯುತರು ಕೆಲಕಾಲ ಕರ್ಮವೀರ ಮತ್ತು ಕಸ್ತೂರಿ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು.
[ಬದಲಾಯಿಸಿ] ಪ್ರಸಿದ್ದ ಕೃತಿಗಳು
- ಪಾಪಿಗಳ ಲೋಕದಲ್ಲಿ:ಬೆಂಗಳೂರು ಭೂಗತ ಜಗತ್ತಿನೊಂದಿಗೆ ಮುಖಾಮುಖಿ
- ಸರ್ಪ ಸಂಬಂಧ
- ಕಾರ್ಗಿಲ್ನಲ್ಲಿ ಹದಿನೇಳು ದಿನ
- ನೀ ಹ್ಯಿಂಗ ನೋಡಬ್ಯಾಡ ನನ್ನ
- ಖಾಸ್ ಬಾತ್ (ಸರಣಿ)
- ಲವ್ ಲವಿಕೆ (ಸರಣಿ)
- ಪಾವೆಂ ಹೇಳಿದ ಕಥೆ (ಕಧಾ ಸಂಕಲನ)
- ಹೇಳಿ ಹೋಗು ಕಾರಣ
- ಹಿಮಾಲಯನ್ ಬ್ಲಂಡರ್(ಅನುವಾದ)
- ಬ್ಲಾಕ್ ಫ್ರೈಡೇ (ಅನುವಾದ)
- ಗಾಂಧಿ ಮತ್ತು ಗೋಡ್ಸೆ (ಅನುವಾದ)
- ದಿ ಗಾಡ್ ಫಾದರ್ (ಅನುವಾದ)'
- ಹೆಂಗಸರ ಸಂಗದಲ್ಲಿ (ಅನುವಾದ)
- ಮಾಂಡೋವಿ (ಅನುವಾದ)
- ಮುಸ್ಲಿಂ
[ಬದಲಾಯಿಸಿ] ಪ್ರಶಸ್ತಿಗಳು
- ಶಿವರಾಮ ಕಾರಂತ ಪ್ರಶಸ್ತಿ (೨೦೦೪)
- ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ
[ಬದಲಾಯಿಸಿ] ಬಾಹ್ಯ ಸಂಪರ್ಕ ಕೊಂಡಿಗಳು
ವರ್ಗಗಳು: ಚುಟುಕು | ಸಾಹಿತಿಗಳು | ಲೇಖಕರು | ಪತ್ರಕರ್ತರು