ಕನ್ನಡ ಸಾಹಿತ್ಯ ಪರಿಷತ್ತು
From Wikipedia
![]() |
|
---|---|
ವಿಳಾಸ: | ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು - ೫೬೦೦೧೮ |
ಫೋನ್: | +೯೧ ೦೮೦ ೨೬೬೧೨೯೯೧ (+91 080 26612991) |
ಈಗಿನ ಅಧ್ಯಕ್ಷರು: | ಚಂದ್ರಶೇಖರ ಪಾಟೀಲ |
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಈ ಹಿಂದೆ ಸಾಧ್ಯವಾಗಿಸಿದೆ.
ಈ ಸಂಸ್ಥೆಯ ಈಗಿನ ಅಧ್ಯಕ್ಷರಾಗಿ ಸಾಹಿತಿ ಚಂದ್ರಶೇಖರ ಪಾಟೀಲರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಹಿಂದಿನ ಅಧ್ಯಕ್ಷರು
ಸೂ: (ಮಾಹಿತಿ ಸೇರಿಸಿ)
[ಬದಲಾಯಿಸಿ] ಕನ್ನಡ ಸಾಹಿತ್ಯ ಸಮ್ಮೇಳನಗಳು
- ಕನ್ನಡ ಸಾಹಿತ್ಯ ಸಮ್ಮೇಳನ ಪುಟ ನೋಡಿ.
[ಬದಲಾಯಿಸಿ] ಪರೀಕ್ಷೆಗಳು
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಕೆಲವು ಪರೀಕ್ಷೆಗಳನ್ನ ನಡೆಸುತ್ತದೆ. ಕನ್ನಡ ಓದಬಯಸುವ ಕನ್ನಡಿಗರಿಗೆ ಕನ್ನಡ 'ಕಾವ', 'ಜಾಣ' ಮುಂತಾದ ಪರೀಕ್ಷೆಗಳನ್ನು ಪ್ರತಿ ವರ್ಷ ನಡೆಸುತ್ತದೆ.