ಡಾ. ಬಿ. ಎಸ್. ರಾಮಕೃಷ್ಣರಾವ್

From Wikipedia

ಪರಿವಿಡಿ

[ಬದಲಾಯಿಸಿ] ಡಾ. ಬಿ. ಎಸ್. ರಾಮಕೃಷ್ಣರಾವ್

ಅನನ್ಯ ಕರ್ತೃತ್ವಶಾಲಿ, ಸಂಸ್ಕೃತ ವಾಙ್ಮಯ ತಪಸ್ವಿ ಡಾ. ಬಿ. ಎಸ್. ಆರ್ ರವರಿಗೆ ಸಂಸ್ಕೃತ ಪ್ರಚಾರ, ಪ್ರಸಾರ ಬಹಳ ಪ್ರಿಯವಾಗಿತ್ತು. ಪತ್ರಿಕೋದ್ಯಮ, ಅನುವಾದ, ಅಧ್ಯಾಪನ, ಪುಸ್ತಕ ನಿರ್ಮಾಣಕಾರ್ಯ, ಸಂಸ್ಕೃತ ಮತ್ತು ಕನ್ನಡವೆಂದರೆ ಅವರಿಗೆ ಪ್ರಾಣ.


[ಬದಲಾಯಿಸಿ] ವಿದ್ಯಾಭ್ಯಾಸ ಮತ್ತು ವೃತ್ತಿಜೀವನ :

ಬಾಸೂರಿನ ನಿವಾಸಿಗಳಾದ ರಾಮಕೃಷ್ಣರಾಯರು, ತರೀಕೆರೆ,ಹಗೂ ಶಿವಮೊಗ್ಗದ ಸಹ್ಯಾದ್ರಿ ಕಾಲೇಜುಗಳಲ್ಲಿ ಪದವಿಯವರೆಗೆ ವ್ಯಾಸಂಗ ಮಾಡಿದರು. ಸಂಸ್ಕೃತದಲ್ಲಿ ಎಮ್. ಎ ; ಪದವಿಗಳನ್ನು ಬೆಂಗಳೂರಿನ ಸೆಂಟ್ರೆಲ್ ಕಾಲೇಜಿನಲ್ಲಿ ಓದಿ ಮುಗಿಸಿದರು. ಮುಂದೆ ಸಂಸ್ಕೃತದಲ್ಲಿ ಪಿ.ಎಚ್.ಡಿ, ಮತ್ತು ವಿದ್ವತ್ ಪರೀಕ್ಷೆಗಳನ್ನು ಪದೆದುಕೊಂಡರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮ, ಹಿಂದೀಭಾಷೆಯಲ್ಲಿ ರತ್ನ, ಕನ್ನಡದಲ್ಲಿ ಎಮ್. ಎ; ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ೨೦ ವರ್ಷಗಳಕಾಲ ಸೇವೆ ಸಲ್ಲಿಸಿದ್ದರು. ಅಲ್ಲಿಂದ ಮೆಕ್ಸಿಕೊ ದೇಶದಲ್ಲಿ ಭಾರತೀಯ ವಿದ್ಯಾಭವನದ ಶಾಖೆಯನ್ನು ಸ್ಥಾಪಿಸಲು ಹೊರಟರು. ಹೆಂಡತಿ ಎರಡು ಪುಟ್ಟ ಮಕ್ಕಳ ಸಂಸಾರ ರಾಜೀನಾಮೆ ಕೊಟ್ಟರು. ವಿದ್ಯಾಭವನದವತಿಯಿಂದ ಅಲ್ಲಿಗೇನೋ ಹೋದರು. ಆದರೆ, ಅಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕೃತಗಳನ್ನು ಪ್ರಚುತಪಡಿಸಲು ಸೂಕ್ತ ವಾತಾವರಣ ಇರಲಿಲ್ಲ. ಆದ್ದರಿಂದ ಮುಂಬೈನಗರಕ್ಕೆ ವಾಪಸ್ ಬಂದು ಅಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಎರಡು ವರ್ಷ ಕೆಲಸಮಾಡಿದರು. ಪುನಃ ಬೆಂಗಳೂರಿಗೆ ಬಂದವರೇ ಅಲ್ಲಿ ತಮ್ಮ ವೃತ್ತಿ ಜೀವನವನದ ಹೊಸ ಅಧ್ಯಾಯವನ್ನು ಆರಂಭಿಸಿದರು. ಒಟ್ಟು ಅವರು ಬರೆದ ಪುಸ್ತಕಗಳ ಸಂಖ್ಯೆ ೧೦೦ ಕ್ಕೂ ಹೆಚ್ಚು. ಅವುಗಳು, ಸಂಸ್ಕೃತ ಕನ್ನಡ ರಚನೆಗಳು, ಸಂಪಾದಿತ ಕೃತಿಗಳು, ಪಠ್ಯಪುಸ್ತಕಗಳು, ಸ್ಮೃತಿಗ್ರಂಥಗಳು, ಸಂಸ್ಕೃತ ನಿಯತಕಾಲಿಕೆಗಳು, ಕಾಲೇಜಿನ ಸ್ಮರಣ ಸಂಚಿಕೆಗಳು, ಸೇರಿವೆ.

ಎಳೆಯವಯಸ್ಸಿನಲ್ಲಿಯೇ ಭಾಷೆಗಳಗೀಳು ಹತ್ತಿಕೊಂಡಿತ್ತು. ಸಂಸ್ಕೃತ ಮತ್ತು ಕನ್ನಡದಮೇಲಿನ ಅಪಾರ ವ್ಯಾಮೋಹ. ಬಿ. ಎಸ್. ಆರ್ ಜೊತೆಗಾರರಾಗಿದ್ದ , ಮುಂಬೈನ, ವೀ. ಶಿವರಾಮಕೃಷ್ಣನ್, ಬಿ. ಎಸ್. ಆರ್ ರ ಕಾರ್ಯಶೈಲಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಸಂಸ್ಕೃತ ಕಲಿಯುವ ಯಾರೇ ಆಗಲಿ ಅವರ ಬಳಿಗೆ ಬಂದರೆ ಅವರಿಗೆ ಎಲ್ಲಾವಿಧದಲ್ಲೂ ನೆರವಾಗಿ ಸಹಾಯಮಾಡುತ್ತಿದ್ದರು.

ಮಧುಮೇಹ, ಯಕೃತ್ತಿನದೋಶ, ಬಹಳಸಮಯದಿಂದ ಅವರನ್ನು ಹಣ್ಣು-ಹಣ್ಣು ಮಾಡಿತ್ತು. ೬ ತಿಂಗಳು ತೀರ ನೆಲಹತ್ತಿ ಮಲಗಿದರು. ಕೊನೆಗೆ, ತಮ್ಮ ಜೀವಿತದ ೫೫ ನೇ ವರ್ಷದಲ್ಲಿ ಅಕಾಲಮರಣಕ್ಕೆ ತುತ್ತಾದರು. ವಿಶ್ವ ಸಂಸ್ಕೃತದಿನವನ್ನು ಪ್ರತಿಷ್ಠಾನದ ಕರ್ಣಾಟಕ ಶಾಖೆ, ಶ್ರಾವಣ ಪೂರ್ಣಿಮೆಯಂದು ಬಿ. ಎಸ್. ಆರ್ ರವರ ಹೆಸರಿನಲ್ಲಿ ಸಂಸ್ಕೃತ ವಿದ್ವಾಂಸರಿಗೆ ಪ್ರಶಸ್ತಿಯನ್ನು ನೀಡಲು ಸಂಕಲ್ಪಿಸಿದೆ. ಇದು ಬಿ. ಎಸ್. ಆರ್ ರವರ ಬಗ್ಗೆ ಅಭಿಮಾನಿಗಳು ಸಲ್ಲಿಸುವ ಕೃತಿ- ಗೌರವ.


[ಬದಲಾಯಿಸಿ] ಪಂಡಿತರಾಗಿ, ಭಾಷಾಭಿಮಾನಿಯಾಗಿ, ಸಂಪಾದಕರಾಗಿ ಮಾಡಿದ ಕೆಲಸಗಳು :

ಸಂವಿತ್, ಸಂಸ್ಕೃತ ತ್ರೈಮಾಸಿಕ, ವಿಶ್ವಭಾಷಾ, ವಿಪ್ರನುಡಿ, ಸಂಸ್ಕೃತವಾಣಿ, ಮುಂತಾದ ಪತ್ರಿಕೆಗಳು.


[ಬದಲಾಯಿಸಿ] ಅನೇಕ ಧ್ವನಿಸುರಳಿಗಳ ಬಿಡುಗಡೆಮಾಡಿದರು :

ಡಾ. ಎಚ್. ಕೆ. ರಂಗನಾಧರಜೊತೆಯಲ್ಲಿ ಅನೇಕ ಸಂಸ್ಕೃತ ಪ್ರಸಿದ್ಧಗೀತೆಗಳ, ಮುಕುಂದಮಾಲಾ, ಮುಂತಾದ ಸ್ತೋತ್ರಗಳ ಧ್ವನಿಸುರಳಿಗಳನ್ನು ಹೊರತಂದರು. ಉಪಯುಕ್ತ ಉಸ್ತಕಗಳನ್ನು ಅಚ್ಚುಹಾಕಿಸಿದರು.


[ಬದಲಾಯಿಸಿ] ಶೃಂಗೇರಿಯ ಮಠದ ಪತ್ರಿಕೆಗಳ ಸಂಪಾದನೆಯ ಕೆಲಸ :

ಶೃಂಗೇರಿ ಶ್ರೀಮಠದ, ಶಂಕರಕೃಪ, ಮತ್ತು, ಕಾಶಿನಗರದ ವಿಶ್ವಸಂಸ್ಕೃತ ಪ್ರತಿಷ್ಠಾನದ ವಿಶ್ವಭಾಷಾ ಪತ್ರಿಕೆಗಳ ಸಂಪಾದಕರಾಗಿ ತಮ್ಮ ತಮ್ಮ ಜೀವನದ ಕೊನೆಯವರೆಗೂ ನಡೆಸಿಕೊಂಡುಬಂದರು. ಶಂಕರಮಠದಲ್ಲಿ ಸುರಸರಸ್ವತಿ ಸಂಸ್ಕೃತ ಸಂಸ್ಥೆಯ ಮುಖ್ಯಸ್ಥರಾಗಿ ಸಂಸ್ಥೆಯು ನಡೆಸುತ್ತಿದ್ದ ಪರೀಕ್ಷೆಗಳಿಗಾಗಿ ಪಾಠಹೇಳುತ್ತಿದ್ದರು.


ಕೃಪೆ : ಡಾ. ಎಸ್. ಆರ್. ಲೀಲಾರವರ ಲೇಖನ.