ಅವಧಿ
From Wikipedia
ಅವಧಿ http://avadhi.wordpress.com/
ಬ್ಲಾಗ್ ಚೆನ್ನಾಗಿದೆ -ಡಾ. ಯು ಆರ್ ಅನಂತಮೂರ್ತಿ
ಸಾಹಿತ್ಯ ಚರ್ಚೆ ಮತ್ತು ಮೌಲ್ಯಮಾಪನ, ಪುಸ್ತಕ ಅವಲೋಕನ, ಸಂವಾದ, ಸಂವೇದನೆ ಎಲ್ಲವೂ ಇಲ್ಲಿ ಮೇಳೈಸಿದೆ. ಇದೆಲ್ಲವನ್ನೂ ಅವರು ಉಚಿತವಾಗಿ ನೀಡುತ್ತಿದ್ದಾರೆ. ನಾವು-ನೀವು ಯಾಕೆ ಓದಬಾರದು... ಯಾಕೆ ಬೆನ್ನುತಟ್ಟಬಾರದು?
ಸಾಹಿತ್ಯಾಸಕ್ತಿ, ಜೀವನ ಪ್ರೀತಿ ಮತ್ತು ಸಮಕಾಲೀನ ಪ್ರಜ್ಞೆ ರೂಪಿಸುವಲ್ಲಿ ಹಿಂದೆ ಸಾಹಿತ್ಯ ಪತ್ರಿಕೆಗಳು ಶಕ್ತವಾಗಿದ್ದವು. ಹಿಂದೆ ಓದುಗರ ಸಂಖ್ಯೆ ಕಡಿಮೆಯಿತ್ತು. ಆದರೂ ಸಾಹಿತ್ಯದ ಮೌಲ್ಯಮಾಪನ, ಚರ್ಚೆ, ವಿಮರ್ಶೆ, ಸಂವಾದಗಳು ಚುರುಕಾಗಿದ್ದವು. ಸಾಹಿತ್ಯವಲಯ ಇಂದಿನಷ್ಟು ಕುಲಗೆಟ್ಟಿರಲಿಲ್ಲ. ಸಾಹಿತ್ಯದಲ್ಲಿ ಜಾತಿ, ಧರ್ಮ ಮತ್ತು ಸ್ವಾರ್ಥ ಹಿಸಾಸಕ್ತಿಗಳು ಬೆರೆತಿರಲಿಲ್ಲ.
ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸುತ್ತಿದ್ದ 'ಪ್ರಬುದ್ಧ ಕರ್ನಾಟಕ ', ಗೋಪಾಲ ಕೃಷ್ಣ ಅಡಿಗರ 'ಸಾಕ್ಷಿ 'ಮತ್ತಿತರ ಸಾಹಿತ್ಯ ಪತ್ರಿಕೆಗಳು ಅಂದು ಮಾಡಿದ ಕೆಲಸ ದೊಡ್ಡದು.
ಶೂದ್ರ ಶ್ರೀನಿವಾಸರ 'ಶೂದ್ರ ',ಯು.ಆರ್.ಅನಂತಮೂರ್ತಿ ಅವರ 'ರುಜುವಾತು ,ಕಿ.ರಂ.ನಾಗರಾಜ್ ಅವರ 'ಆ ಲೋಕ ', ಚಂದ್ರಶೇಖರ ಪಾಟೀಲರ 'ಸಂಕ್ರಮಣ ', ಇತ್ತೀಚಿಗಿನ 'ಸಂಕ್ರಮಣ ', ವಿವೇಕ್ ಶಾನಭಾಗ್ ರ 'ದೇಶಕಾಲ 'ಮತ್ತಿತರ ಸಾಹಿತ್ಯ ಪತ್ರಿಕೆಗಳು,ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ವಿವಿಧ ಘಟ್ಟಗಳನ್ನು ದಾಖಲಿಸುತ್ತಾ ಬಂದಿವೆ.ಲಾಭದ ಉದ್ದೇಶ ತೊರೆದು, ಈ ಪತ್ರಿಕೆಗಳು ಅಕ್ಷರ ಲೋಕ ಮತ್ತು ಓದುಗರನ್ನು ಬೆಸೆದಿವೆ. ಓದುಗರನ್ನು ಪ್ರಜ್ಞಾವಂತರನ್ನಾಗಿಸಿವೆ.
ಸಾಹಿತ್ಯ ಅಥವಾ ಸಂಸ್ಕೃತಿಯ ಚರ್ಚೆಗೆ ಪ ತ್ರಿಕೆಗಳು ಆಸಕ್ತಿ ಪ್ರದರ್ಶಿಸಿದರೂ ಕೂಡ, ಅದು ಪರಿಣಾಮಕಾರಿಯಾಗಿ ಸಾಧ್ಯವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಜನಹಿತ ತತ್ವವನ್ನು ಪಕ್ಕಕ್ಕಿಟ್ಟ ಪತ್ರಿಕೆಗಳು ಜನಪ್ರಿಯ ತತ್ವವನ್ನು ಒಪ್ಪಿವೆ. ಹೀಗಾಗಿ ಪತ್ರಿಕೆಗಳಿಂದ ನಾವು ಸಾಹಿತ್ಯಾಭ್ಯುದಯವನ್ನು ನಿರೀಕ್ಷಿಸುದು ತಪ್ಪು.ಕನ್ನಡದ ಜನಪ್ರಿಯ ಪತ್ರಿಕೆಯೊಂದು ಪ್ರಯೋಗದ ಹೆಸರಲ್ಲಿ ಕತೆ, ಕವನಗಳನ್ನು ಕೆಲ ತಿಂಗಳು ಪ್ರಕಟಿಸದೇ,ಸಾಹಿತ್ಯವಲಯವನ್ನು ಕಡೆಗಣಿಸಿದ ನಿದರ್ಶನವೂ ನಮ್ಮ ಮುಂದಿದೆ.
ನಾವು ಮೇಲೆ ಪ್ರಸ್ತಾಪಿಸಿದ ಎಲ್ಲಾ ಸಂಗತಿಗಳು, ಮುದ್ರಣ ಮಾಧ್ಯಮಕ್ಕೆ ಸಂಬಂಧಪಡುತ್ತವೆ.
ಈಗ ಕಾಲ ಬದಲಾಗಿದೆ. ಮೌಸ್ ನಲ್ಲಿ ಜಗತ್ತನ್ನು ಹಿಡಿದಿಡುವ ಕಾಲವಿದು. ಅಲ್ಲದೇ ಇಂದು ಓದುಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.ಅಂತರ್ಜಾಲ ಮಾಧ್ಯಮದಲ್ಲಿ ಬ್ಲಾಗ್ ಗಳು ಕವಲೊಡೆದ ಮೇಲೆ, ಹೊಸ ಭರವಸೆಯ ಬೆಳಕು ಕಾಣಿಸುತ್ತಿದೆ. ಲೆಕ್ಕಕ್ಕೆ ನೂರಾರು ಕನ್ನಡ ಬ್ಲಾಗ್ ಗಳಿದ್ದರೂ, ಗಂಭೀರ ಚಿಂತನೆ ಮತ್ತು ಗಟ್ಟಿ ಬರವಣಿಗೆಯ ಕೊರತೆಯನ್ನು ಗಮನಿಸಬಹುದು.
ಈ ನಿಟ್ಟಿನಲ್ಲಿ ಯೋಚಿಸುತ್ತಿದ್ದಾಗ ನಮ್ಮ ಗಮನ ಸೆಳೆದದ್ದು ;http://avadhi.wordpress.com/.
ಸದಭಿರುಚಿಯುಳ್ಳ ತಂಡದ ಸದಸ್ಯರು, ಈ ಬ್ಲಾಗ್ ನ ಪುಟಗಳಿಗೆ ಜೀವ ತುಂಬುತ್ತಿದೆ. ಸಾಹಿತ್ಯ ಚರ್ಚೆ, ಪುಸ್ತಕ ಅವಲೋಕನ, ಸಂವಾದ, ಸಂವೇದನೆ ಎಲ್ಲವೂ ಇಲ್ಲಿ ಮೇಳೈಸಿದೆ. ಇದೆಲ್ಲವನ್ನೂ ಅವರು ಉಚಿತವಾಗಿ ನೀಡುತ್ತಿದ್ದಾರೆ. ನಾವು-ನೀವು ಯಾಕೆ ಓದಬಾರದು. ಯಾಕೆ ಜೀವತುಂಬಬಾರದು? ಯಾಕೆ ಬೆನ್ನುತಟ್ಟಬಾರದು.avadhi.pusthaka@gmail.com