ಅಶ್ವತ್ಥ

From Wikipedia

ಜನನ : ಜೂನ್ ೧೮,೧೯೧೨
ಮರಣ: ಜನವರಿ ೧೬,೧೯೯೪

ಅಶ್ವತ್ಥ
ಅಶ್ವತ್ಥ

ಅಶ್ವತ್ಥ ಅವರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವೋದಯ ಸಾಹಿತ್ಯದ ಪ್ರಮುಖ ಲೇಖಕರು. ಅನೇಕ ಕತೆ,ಕಾದಂಬರಿ, ಪ್ರಬಂಧಗಳನ್ನು ರಚಿಸಿದ್ದಾರೆ. ಚಲನಚಿತ್ರ ಲೋಕದಲ್ಲೂ ಇವರ ಕಾದಂಬರಿಗಳು ಜನಪ್ರಿಯವಾಗಿವೆ. ಮುನಿಯನ ಮಾದರಿ,ರಂಗನಾಯಕಿ,ಮರ್ಯಾದೆ ಮಹಲು ಕಾದಂಬರಿಗಳು ಚಲನಚಿತ್ರಗಳಾಗಿವೆ.

ಪರಿವಿಡಿ

[ಬದಲಾಯಿಸಿ] ಜೀವನ

ಅಶ್ವತ್ಥ ಅವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಸೋಮಯ್ಯ ಮತ್ತು ತಾಯಿ ಲಕ್ಷ್ಮಮ್ಮ. ಎಂಜಿನಿಯರಿಂಗ್ ಪದವೀಧರರಾದ ಅಶ್ವತ್ಥ ಅವರು ಕೆಲಕಾಲ ಲೋಕೋಪಯೋಗಿ ಇಲಾಖೆಯಲ್ಲಿ ಗುತ್ತಿಗೆ ಕೆಲಸ ನಿರ್ವಹಿಸಿದರು. ಸಿಮ್ಲಾದಲ್ಲಿ ಮಿಲಿಟರಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಗಾಂಧಿಯವರಿಂದ ಪ್ರಭಾವಿತರಾಗಿ ಸ್ವಾತಂತ್ಯ ಚಳುವಳಿಯಲ್ಲಿ ಪಾಲುಗೊಂಡು, ಉದ್ಯೋಗಕ್ಕೆ ರಾಜಿನಾಮೆ ನೀಡಿದರು. ನಂತರ ಮದನ ಮೋಹನ ಮಾಳವೀಯ ಆವರಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಅಧ್ಯಾಪಕರಾಗಿ ಬಂದ ಆಹ್ವಾನವನ್ನು ಸ್ವೀಕರಿಸಿದರು. ಎಂಟು ವರ್ಷ ಸೇವಾವಧಿ ಬಾಕಿ ಇರುವಾಗಲೇ ಸ್ವಯಂ ನಿವೃತ್ತಿ ಪಡೆದುಕೊಂಡರು.


[ಬದಲಾಯಿಸಿ] ಕೃತಿಗಳು

ಮಾಸ್ತಿಯವರ ಜೀವನ ಪತ್ರಿಕೆಯಲ್ಲಿ ಇವರ ಹಲವಾರು ಕಥೆಗಳು ಪ್ರಕಟಗೊಂಡಿದ್ದವು.


[ಬದಲಾಯಿಸಿ] ಕಾದಂಬರಿಗಳು

[ಬದಲಾಯಿಸಿ] ಕಥಾ ಸಂಕಲನಗಳು

  • ದೂರದ ಕಾಶಿಯಲ್ಲಿ
  • ಬಾಳೆ ಹೊಳೆ
  • ಅಗ್ನಿ ಸಾಕ್ಷಿ
  • ಜಯಂತಿ
  • ನೋವು-ನಲಿವು

[ಬದಲಾಯಿಸಿ] ಪ್ರಬಂಧ ಸಂಕಲನ

  • ಮೂಗಿನ ಮೇಲೆ
  • ಇಂದಿನ ಪತ್ರಿಕೆ ನೋಡಿದ್ದೀರಾ?
  • ಬನ್ನಿ ನನ್ನ ಉಪವನಕೆ
  • ನವ್ಯವಾಗಿ
  • ಬಡ ಮುತ್ತೈದೆ ಹಾರ್ಮೋನಿಯಂ
  • ಕ್ರಿಕೆಟ್ ಓದೋಣ
  • ಸಮಿತಿಮಯ ಜಗತ್
  • ರೋಗಿಷ್ಟರು

[ಬದಲಾಯಿಸಿ] ಖಂಡ ಕಾವ್ಯ

  • ಮಹಾಯುದ್ಧ

[ಬದಲಾಯಿಸಿ] ನಾಟಕಗಳು

ಹದಿನೆಂಟು ನಾಟಕಗಳನ್ನು ರಚಿಸಿದ್ದಾರೆ.

[ಬದಲಾಯಿಸಿ] ಇತರ ವಿಷಯಗಳು

ಅಶ್ವತ್ಥ ಅವರದು ಸರಳ ಬದುಕು, ನಂಬಿದ ತತ್ವಗಳಿಗೆ ಬದ್ಧವಾದ ಬದುಕು. ತಾವು ಗಳಿಸಿದ್ದನ್ನೆಲ್ಲ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಹೋದ ತ್ಯಾಗ ಮನೋಭಾವ. ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಂದ ಸದಾ ದೂರವಿದ್ದರೆಂಬುದು ಇವರನ್ನು ಬಲ್ಲವರ ಅಭಿಪ್ರಾಯವಾಗಿದೆ.