ಎಚ್. ಆರ್. ರಾಮಕೃಷ್ಣರಾಯರು

From Wikipedia

ಪರಿವಿಡಿ

[ಬದಲಾಯಿಸಿ] ಪ್ರೊ. ರಾಮಕೃಷ್ಣರಾಯರ ಜನನ, ಮತ್ತು ಬಾಲ್ಯ :

ಪ್ರೊ. ರಾಮಕೃಷ್ಣರಾಯರು, ಹೊಳಲ್ಕೆರೆ ಜಿಲ್ಲೆಯ ಚೀರನಹಳ್ಳಿ, ಮತ್ತು ಕುಡಿನೀರಕಟ್ಟೆ ಗ್ರಾಮಗಳ ಶ್ಯಾನುಭೋಗರಾಗಿದ್ದ, ಸುಂಕದ ವಂಶದ, ಶ್ರೀ. ಎಚ್. ವಿ. ರಂಗರಾಯರ ಪುತ್ರರು. ತಾಯಿ, ಮಹಾಸಾಧ್ವಿ ರಾಧಮ್ಮನವರು. ಜನನ ೩೦, ಮೇ, ೧೯೩೫ ರಲ್ಲಿ. ಸೆಕೆಂಡರಿ ಶಿಕ್ಷಣ, ಊರಿನಲ್ಲಿ ನಡೆಯಿತು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಟರ್ಮೀಡಿಯೇಟ್ ಪಾಸ್ ಮಾಡಿ, ಸೆಂಟ್ರಲ್ ಕಾಲೇಜಿನಲ್ಲಿ B.Sc; M.Sc; ಪದವಿಗಳನ್ನು ಪಡೆದರು. ನ್ಯಾಷನಲ್ ಕಾಲೇಜಿನಲ್ಲಿದ್ದಾಗ ಡಾ.ಎಚ್ .ಎನ್ ರವರ ವ್ಯಕ್ತಿತ್ವ, ಆದರ್ಶ, ಕಾರ್ಯಕ್ಷಮತೆ, ಮತ್ತು ಸಮರ್ಪಣಾಭಾವಗಳಿಂದ ಪ್ರಭಾವಿತರಾದರು. ಮುಂದೆ, ಸೆಂಟ್ರೆಲ್ ಕಾಲೇಜಿನಲ್ಲಿ ಪ್ರೊ. ರಾಜರತ್ನಂ, ಪ್ರೊ. ವೀ.ಸೀ , ಅವರ ಮೇಲೆ ಗಾಢವಾದ ಪರಿಣಾಮ ಬೀರಿದರು. ಪ್ರೊ. ರಾಜರತ್ನಂ ಅವರ ಮಾತಿನವಾಗ್ಝರಿ,ಸ್ಪಷ್ಟ ಉಚ್ಚಾರಣೆ, ಅವರಮೇಲೆ ಮೋಡಿಯೇ ಮಾಡಿತ್ತು.


[ಬದಲಾಯಿಸಿ] ಬೆಂಗಳೂರಿನ ಸೆಂಟ್ರೆಲ್ ಕಾಲೇಜ್ ನಲ್ಲಿ ಪ್ರೊ. ಜೀ.ಪಿ.ರಾಜರತ್ನಂ ಮತ್ತು ಪ್ರೊ.ವಿ.ಸಿ ಯವರ ಪ್ರಭಾವ ; ಸೆಂಟ್ರೆಲ್ ಕಾಲೇಜ್ , ಕರ್ನಾಟಕಸಂಘದಲ್ಲಿ ಕಾರ್ಯದರ್ಶಿಯಾಗಿ  :

ಸೆಂಟ್ರಲ್ ಕಾಲೇಜ್ ಕರ್ಣಾಟಕಸಂಘದ ಸೆಕ್ರೆಟರಿಯಾಗಿ, ಸರ್ವಸಮ್ಮತದಿಂದ ಆಯ್ಕೆಯಾದರು. ಆಗಿನಕಾಲದಲ್ಲಿ ಇದು ಬಹಳ ಗೌರವಯುತವಾದ ಸ್ಥಾನ. ಸೆಂಟ್ರಲ್ ಕಾಲೇಜಿನ ಸಾಂಸ್ಕೃತಿಕ ಪರಿಸರ, ರಾಮಕೃಷ್ಣರಾಯರಿಗೆ ಕನ್ನಡದ ಮೇಲಿನ ಆಸಕ್ತಿ ಪ್ರೀತಿಗಳ "ಮೊಳಕೆ ಒಡೆದ ತಾಣ" ವೆಂದು ರಾಯರು ಯಾವಾಗಲೂ ಸ್ಮರಿಸಿಕೊಳ್ಳುತ್ತಾರೆ.



[ಬದಲಾಯಿಸಿ] ಪದವಿಯನಂತರ , ಆಗತಾನೇ ಬೆಂಗಳೂರಿನಲ್ಲಿ ತಳಊರುತ್ತಿದ್ದ, ದಿ ಕ್ರೈಸ್ಟ್ ಕಾಲೇಜ್, ಹೊಸೂರು ರೋಡು, ಬೆಂಗಳೂರಿನಲ್ಲಿ ಪಾದಾರ್ಪಣೆ :

ವಿದ್ಯಾಭ್ಯಾಸದ ತರುವಾಯ ಅವರು ಪಾದಾರ್ಪಣೆ ಮಾಡಿದ್ದು, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ; ಉಪಾಧ್ಯಾಯರಾಗಿ ಸೇರಿದ ಅವರು ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳ ಮುಖ್ಯಸ್ಥರಾಗಿ, ಕೆಲಸಮಾಡಿ ಅತ್ಯಂತ ಪ್ರಭಾವೀ ವಿಜ್ಞಾನಶಿಕ್ಷಕರೆಂದು ಹೆಸರು ಪಡೆದರು. ಪ್ರೊ. ರಾಜು, ಪ್ರೊ. ರಾಘವೇಂದ್ರರಾಯರು ಮತ್ತು ಇತರರೊಡಗೂಡಿ, "ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ" ವನ್ನು ಹುಟ್ಟುಹಾಕುವಲ್ಲಿ ಮುಖ್ಯರಾದರು. ಇಂದಿಗೆ ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ, ೧೦೦ ಕ್ಕು ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಮಂಚೂಣಿಯಲ್ಲಿದೆ. ವಿಜ್ಞಾನವನ್ನು ಜನಪ್ರಿಯ ಮಾಡಲು ಅವರು ಪಟ್ಟ ಶ್ರಮ ಸ್ತುತ್ಯಾರ್ಹ !


[ಬದಲಾಯಿಸಿ] ವೃತ್ತಿಜೀವನ ಮತ್ತು ಅವರ ಪ್ರವೃತ್ತಿ, ಹಲವಾರು ವೈವಿಧ್ಯಮಯ ರಂಗಗಳಲ್ಲಿ  :

ಕಾಲೇಜ್ ನೌಕರಿಯಿಂದ ನಿವೃತ್ತರಾದ ಮೇಲೂ ವೈಜ್ಞಾನಿಕ ಪ್ರವೃತ್ತಿಯನ್ನು ಬೆಳೆಸಿಕೊಂಡೇ ಬಂದರು. ಬೆಂಗಳೂರಿನಿಂದ ಪ್ರಸಾರವಾದ AIR ನ ವಿಜ್ಞಾನ ಕಾರ್ಯಕ್ರಮದಲ್ಲಿ, ೧೫೦ ಕ್ಕೂ ಹೆಚ್ಚು ವೈಜ್ಞಾನಿಕಉಪನ್ಯಾಸಗಳನ್ನು ಕೊಟ್ಟಿದ್ದಾರೆ ! ಅವುಗಳೆಲ್ಲಾ ಮುಖ್ಯವಾಗಿ ಖಗೋಳಶಾಸ್ತ್ರ, ಮತ್ತು ನಕ್ಷತ್ರಗಳು, ಗ್ರಹಗಳಿಗೆ ಸಂಬಂಧಿಸಿದ್ದು. ಟೀ.ವಿ ಮತ್ತು ದೂರದರ್ಶನದಲ್ಲಿ ಹಿರಿಯ ವಿಜ್ಞಾನಿಗಳಾದ, ಡಾ. ರಾಜಾರಾಮಣ್ಣ, ಡಾ. ಸಿ.ಎನ್.ಆರ್ ರಾವ್, ಡಾ. ಯು. ಆರ್. ರಾವ್, ಡಾ. ಎಮ್. ಆರ್. ಶ್ರೀನಿವಾಸನ್, ಮುಂತಾದವರ ಜೊತೆ ಸಂವಾದವನ್ನು ಮಾಡಿ,ಕಾರ್ಯಕ್ರಮಗಳನ್ನು ಕೊಟ್ಟರು. 'ರಾಮನ್ ಶತಮಾನೋತ್ಸವ'ದ ವಿಶೇಷ ಸಮಾರಂಭದಲ್ಲಿ ದೆಹಲಿ ದೂರದರ್ಶನಕ್ಕೆ ಮಾಡಿದ "Raman,The natural Philosopher "ಎಂಬ 'ಸಾಕ್ಷಿ ಚಿತ್ರ' ಎಲ್ಲರ ಮನ್ನಣೆ ಪಡೆಯಿತು.


[ಬದಲಾಯಿಸಿ] ಅನೇಕ ಚಟುವಟಿಕೆಗಳಲ್ಲಿ ಆಸಕ್ತರು :

ಓದುವುದರ ಜೊತೆಗೆ ನೈಸರ್ಗಿಕ ಪ್ರದೇಶಗಳಿಗೆ 'ಚಾರಣ' ಮತ್ತು ಆಸಕ್ತ ವಿಶಯಗಳ ವಿಶೇಷ ಅಧ್ಯಯನಕ್ಕೆ ವಿದೇಶ ಪ್ರವಾಸ- ಇವು ರಾಯರ ಹವ್ಯಾಸಗಳು. ಉದಯಭಾನು ಸಂಸ್ಥೆಯಲ್ಲಿ ನಡೆಸಿದ ಉಚಿತ ಪದವಿ ಪೂರ್ವ ತರಗತಿಗಳಿಗೆ, ಭೌತ ಶಾಸ್ತ್ರದ ಗೌರವವ ಪ್ರಾಧ್ಯಾಪಕ”ರಾಗಿ ಸತತವಾಗಿ ೧೦ ವರ್ಷ ದುಡಿದಿದ್ದಾರೆ ಮತ್ತು ವಿದ್ಯಾರ್ಥಿಗಳ, ಪೊಷಕರ ಮೆಚ್ಚುಗೆ ಗಳಿಸಿದ್ದಾರೆ. ಈಗ ಅವರು ೭೨ ವರ್ಷದ ಹರೆಯ ಮೇಷ್ಟ್ರು ! ವೈಜ್ಞಾನಿಕ ಮನೊವೃತ್ತಿಯನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಂಡು ವಿಜ್ಞಾನದ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


[ಬದಲಾಯಿಸಿ] ಉದಯಭಾನು ಕಲಾಸಂಘದ ವತಿಯಿಂದ ಅವರಿಗೆ ಗೌರವಾರ್ಥವಾಗಿ ದೊರೆತ, " ಸಮಾಜಸೇವಾ ಪುರಸ್ಕಾರ " :

ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ, ರಾಮಕೃಷ್ಣ ಬಡಾವಣೆಯಲ್ಲಿರುವ, 'ಉದಯ ಭಾನು ಕಲಾಸಂಘ ' ನೋಂ. ಸಮಾಜಸೇವೆಯನ್ನು ನಿರಂತರವಾಗಿ ೪೦ ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಈ ಸಂಸ್ಥೆಯ ಈಗಿನ ಅಧ್ಯಕ್ಷರು, ಶ್ರೀ ಎನ್. ಆರ್. ಚಂದ್ರನ್ ಮತ್ತು ಸಂಸ್ಥಾಪಕ ಗೌ.ಕಾರ್ಯದರ್ಶಿಗಳು, ಎಂ.ನರಸಿಂಹರವರುಗಳು. ಬೆಂಗಳೂರು ನಗರದ ಸರ್ವತೊಮುಖ ಬೆಳವಣಿಗೆಯನ್ನು ದಾಖಲಿಸುವುದರ ಜೊತೆಗೆ, ನಗರದ ಸಾಂಸ್ಕೃತಿ ಸಾಹಿತ್ಯಗಳನ್ನು, ಸಮಾಜಸೇವೆಗಳನ್ನು ಗುರುತಿಸುವ, ಪ್ರೊತ್ಸಾಹಿಸುವ, ಗುರುತರ ಜವಾಬ್ದಾರಿಯನ್ನು ಸಂಘ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಅದರಲ್ಲಿ ಪ್ರಮುಖವಾದದ್ದು, ಭೌತಶಾಸ್ತ್ರದ ಪ್ರೊ. ಶ್ರೀ ರಾಮಕೃಷ್ಣರಾಯರನ್ನು "ಉದಯಭಾನು ವಿದ್ಯಾರತ್ನ" ರೆಂದು ಗುರುತಿಸಿ ಸನ್ಮಾನಿಸಿದ್ದು ! ವಿಜ್ಞಾನ ಕ್ಷೇತ್ರದ ಪ್ರಾಮಾಣಿಕ ಪರಿಚಾಲಕ, ಪ್ರಾಮಾಣಿಕ ಕಳಕಳಿಯ ಚಿಂತಕರೂ ಭೌತ ವಿಜ್ಞಾನದ ಪ್ರಾಧ್ಯಾಪಕರು ಆದ ಪ್ರೊ. ಶ್ರೀ ರಾಮಕೃಷ್ಣರಾಯರಿಗೆ 'ಉದಯ ಭಾನು ವಿದ್ಯಾರತ್ನ ಅಭಿನಂದನಾ ಪತ್ರ' ದಿಂದ ದಂಪತಿಗಳನ್ನು, ಅವರ 'ಅಮೃತೋತ್ಸವ ಸಮಾರಂಭ'ದಂದು ಗೌರವಿಸಿದ್ದು ನಿಜವಾಗಿಯೂ ಸ್ಮರಣೀಯವಾದ ಘಟನೆ !


[ಬದಲಾಯಿಸಿ] ಉದಯಭಾನು ಸಂಸ್ಥೆಮಾಡುತ್ತಿರುವ ಸಮಾಜಸೇವಾ ಚಟುವಟಿಕೆಗಳು :

’ಬೆಂಗಳೂರು ದರ್ಶನ'ದ ಎರಡು ಸಂಪುಟಗಳ ಪ್ರತಿಗಳನ್ನು ನೋಡಿದವರು ಇದರ ಪ್ರಕಾಶಕರು ಯಾರು ? ಎಂದು ಹುಬ್ಬೇರಿಸಿ ಕೇಳದಿದ್ದರೆ, ಅವರು ನಿಜವಾದ ಗುಣಗ್ರಾಹಿ ಓದುಗರಲ್ಲವೆನ್ನುವುದು ನಿಮಿಷಾರ್ಧದಲ್ಲಿ ತಿಳಿದುಹೋಗುತ್ತದೆ ! ಇದನ್ನು ಓದಿದವರಿಗೆ 'ವಿಶ್ವಕೋಶ'ವನ್ನು ಓದಿದ ಅನುಭವವಾಗುತ್ತದೆ. ಬೆಂಗಳೂರು ನಗರ ಬೆಳೆದ ಬಗೆಯನ್ನು, ಅದರ ಬಹುಮುಖ ಸಾಧನೆಗಳನ್ನು ಮತ್ತು ವಿವರಗಳನ್ನು ಅತ್ಯಂತ ಸಮರ್ಥವಾಗಿ ಖಚಿತವಾಗಿ ಅದ್ಭುತವಾಗಿ ದಾಖಲಿಸಿರುವುದೇ ಇದರ ವಿಶಿಷ್ಠತೆಗಳಲ್ಲೊಂದು !


ಇದರ ಪ್ರಧಾನ ಸಂಪಾದಕರು, ಹಿರಿಯಸಾಹಿತಿ, ಡಾ. ಶ್ರೀ ಎಲ್. ಎಸ್. ಶೇಷಗಿರಿರಾಯರು. ಅದರ ಪ್ರಕಾಶಕರು " ಉದಯಭಾನು ಕಲಾವಿದರ ಸಂಘ, ಬೆಂಗಳೂರು. ಇಷ್ಟೇ ಅಲ್ಲ. ಈ ಕಲಾಸಂಘದ ವ್ಯಾಪ್ತಿ, ಉದ್ದಗಲ, ಆಳಗಳನ್ನು ಬರೆಯಲು ಹಲವು ಪುಟಗಳೇ ಬೇಕಾಗುತ್ತವೆ. ಈ ಜನೋಪಕಾರಿ ಸಮಾಜಸೇವಾ ಮನೋಭಾವದ ಸಂಘ ಅಸ್ತಿತ್ವಕ್ಕೆ ಬಂದದ್ದು, ೧೨-೦೬-೧೯೬೫ ರಲ್ಲಿ. ಸಾರ್ವಜನಿಕಗಣೇಶೋತ್ಸವ, ಮತ್ತು ಅದರ ಜೊತೆಗೆ ಹೊಂದಿಕೊಂಡ ಉಚಿತ ವಾಚನಾಲಯವನ್ನು ಉದ್ಘಾಟಿಸಿದವರು ಶ್ರೀ. ದಾಶರಥಿ ದೀಕ್ಷಿತ್ ರವರು. ಆ ದಿನದ ಸಮಾರಂಭದ ಅಧ್ಯಕ್ಷರು ಶ್ರಿ. ನಾಡಿಗೇರ ಕೃಷ್ಣರಾಯರು. ಗಣೇಶೊತ್ಸವದಿಂದ ಪ್ರಾರಂಭವಾಗಿ ಕಳೆದ ೪ ದಶಕಗಳಿಂದ ಸಮಾಜದ ಸೇವೆಯೇ ಮೂಲ ಉದ್ದ್ಯೇಶವೆಂದು ಪರಿಗಣಿಸಿ, ಕಳಕಳಿಯಿಂದ ದುಡಿಯುತ್ತಿರುವ ಬೆಂಗಳೂರಿನ ಸಂಸ್ಥೆಗಳಲ್ಲಿ ಉದಯಭಾನು ಕಲಾಸಂಘವೂ ಒಂದು ! ಇದರ ವ್ಯಾಪ್ತಿ , ವಿದ್ಯಾಭಿವೃದ್ಧಿ, ವೈದ್ಯಕೀಯ- ನಾಗರಿಕ ಸಾಮಾಜಿಕ ನಗರ ಕಲ್ಯಾಣ, ಕ್ರೀಡೆಗಳಿಗೆ ಪ್ರೊತ್ಸಾಹ, ಪುಸ್ತಕ ಭಂಡಾರ, ಉಚಿತ ವಚನಾಲಯ, ಪರಿಸರ ಸಂರಕ್ಷಣೆ, ಸಾಂಸ್ಕೃತಿಕ ಭವನದ ನಿರ್ಮಾಣ ಕಾರ್ಯ, ಆರೊಗ್ಯ ಸೇವೆ, ಇತ್ಯಾದಿ.


ಪ್ರಮುಖವಾಗಿ ರಾಮಕೃಷ್ಣರಾಯರ ಒಡನಾಡಿಗಳು ಗಮನಿಸಿದ ಒಂದು ಮುಖ್ಯವಿಚಾರವೆಂದರೆ, ಅವರ ಕನ್ನಡ ಮತ್ತು ಆಂಗ್ಲಭಾಷೆಗಳಮೇಲಿರುವ, ಅದ್ಭುತ ಪ್ರಭುತ್ವ. ಯಾವ ವಿಷಯಗಳನ್ನಾದರೂ, ಅವುಗಳ ವಿವರಣೆಗಳನ್ನು ಅವರ ಬಾಯಿನಲ್ಲಿ ಕೇಳುವುದೇ ಒಂದು ದೊಡ್ಡ ಅನುಭವ ! ದಿನನಿತ್ಯದ ವಿಚಾರಳನ್ನು ವಿವರಿಸುವಾಗ ಕೂಡಾ, ತಮ್ಮ ಅದ್ಭುತ, ಮಾತಿನ ಮೋಡಿಯಲ್ಲಿ, ನಮ್ಮನ್ನು ಪುಳಕಿತಗೊಳಿಸುತ್ತಾರೆ. ಕನ್ನಡದ ಸೊಗಸನ್ನು, ಕನ್ನಡಭಾಷಾ ಸೊಗಡನ್ನು, ಅವರ ಬಾಯಿನಲ್ಲಿ ಕೇಳುವುದೇ ಒಂದು ಅಪೂರ್ವ ಅನುಭವ. ವಿಜ್ಞಾನದ ಪ್ರತಿಪದಗಳಿಗೂ ಕನ್ನಡದಲ್ಲಿ ಸೂಕ್ತ, ಸಮವಾದ ಅರ್ಥಕೊಡುವ ಪದಗಳನ್ನೂ, ವಾಕ್ಯಗಳನ್ನು, ರಚಿಸುವ ಜಾಣ್ಮೆಯನ್ನು ಅವರ ಮಾತು-ಕತೆಗಳಲ್ಲಿ ಥಟ್ಟನೆ ನಾವು ಗುರುತಿಸಬಹುದು. ಇವೆಲ್ಲಾ ಹೇಳುವಾಗ, ಅವರ ಶಿಷ್ಯರ ಕಣ್ಣುಗಳಲ್ಲಿ ಮಿಂಚುವ ಸತ್ಯ, ಧನ್ಯತಾಭಾವ, ನಮ್ಮೆಲ್ಲರನ್ನೂ ಮೂಕರನ್ನಾಗಿ ಮಾಡುತ್ತದೆ. ಇಂಗ್ಲೀಷ್ ಭಾಷೆಯೂ ಆಷ್ಟೆ ; ತಮ್ಮ ಮಾತೃಭಾಷೆಯಷ್ಟೇ ಲೀಲಾಜಾಲವಾಗಿ ಅವರ ಬಾಯಿನಿಂದ ಭೋರ್ಗರೆಯುತ್ತದೆ. ಕ್ಲಿಷ್ಟಪದಗಳಿಗೆ ಪರದಾಡುವ ನಮಗೆ, ಅವರ ಬಳಿ ಇದ್ದಷ್ಟು ಕಾಲ ಎಲ್ಲವೂ ಅತ್ಯಂತ ಸುಲಭವಾಗಿ ಕಾಣಿಸುತ್ತದೆ.


[ಬದಲಾಯಿಸಿ] ರಾಮಕೃಷ್ಣರಾಯರ ವೈವಾಹಿಕ ಜೀವನ :

ಶ್ರೀಮತಿ. ಲಲಿತಾರವರೊಡನೆ ೪/೧/೨ ದಶಕಗಳ ಕಾಲದ ವೈವಾಹಿಕ ಜೀವನದಲ್ಲಿ ರಾಯರ ೩ ಹೆಣ್ಣು ಮಕ್ಕಳು ಮದುವೆಯಾಗಿ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ. ಇಂದಿಗೂ ನಸುಕಿನಲ್ಲಿ ಎದ್ದು ಸದ್ದಿಲ್ಲದೆ 'ವಾಯುವಿಹಾರ' ಮಾಡಿ ಮತ್ತೆ ಕೃತಿ ಅಭ್ಯಾಸದಲ್ಲಿ ತೊಡಗುತ್ತಾರೆ.


[ಬದಲಾಯಿಸಿ] ರಾಮಕೃಷ್ಣರಾಯರಿಗೆ ಸಿಕ್ಕ ಸನ್ಮಾನಗಳು :

  • ಹವ್ಯಾಸಿ ಖಗೋಳ ಶಿಕ್ಷಕರ ಸಂಘ, ಶಿವಮೊಗ್ಗ. ಶಿವಮೊಗ್ಗ ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘ ಶಿವಮೊಗ್ಗ. ’ಜ್ಞಾನವಿಜ್ಞಾನ ಭೂಷಣ’, ಬಿರುದು ಕೊಟ್ಟು, ಗೌರವಿಸಿದ್ದಾರೆ.

ಬರೆದ ಪಠ್ಯಪುಸ್ತಕಗಳು, ಮತ್ತು ವಿಜ್ಞಾನವನ್ನು ಪ್ರಸಿದ್ಧಪಡಿಸಲು ವಿಶೇಷವಾಗಿ ರಚಿಸಿದ ಕೃತಿಗಳು :

  • ನಿಶ್ಯಬ್ದದೊಳಗಿನ ಶಬ್ದ,
  • ಶಕ್ತಿಗಾಥೆ,
  • ಪರಮಾಣು ಪ್ರಪಂಚ,
  • ಅದೃಷ್ಯ ಬೆಳಕು-ಎಕ್ಸ್ -ರೇ.ಮುಂತಾದವುಗಳು.

ರಾಮಕೃಷ್ಣರಾಯರು ಸಂಪಾದಿಸಿದ ಕೃತಿಗಳು  :

  • ಬೆಂಗಳೂರಿನ ಪಿ .ಯು ವಿಧ್ಯಾರ್ಥಿಗಳಿಗಾಗಿಯೇ ವಿಶೇಷವಾಗಿ ಬರೆದ "ಭೌತಶಾಸ್ತ್ರದ ಪಠ್ಯ ಪುಸ್ತಕಗಳು "ಬಹಳ ಹೆಸರುವಾಸಿಯಾಗಿವೆ.
  • 'The Quest'- A Biography of a Scientist, ಕೃತಿಯಲ್ಲದೆ,ಕೆಳಗೆ ನಮೂದಿಸಿದ ಪುಸ್ತಕಗಳನ್ನೂ ಬರೆದಿದ್ದಾರೆ.
  • ಅಂತರಿಕ್ಷ,
  • ಶುಕ್ರ,
  • ಸಂಕ್ರಮಣ,
  • ಒಲವಿನ ಶಿಲೆ-ಅಯಸ್ಕಾಂತ,
  • ನಂಬಿಕೆ- ಮೂಢನಂಬಿಕೆ,
  • ಕಲಾಂ ಮೇಷ್ಟ್ರು-[ಮಕ್ಕಳಿಗಾಗಿಯೇ ಬರೆದ ಸಚಿತ್ರ-ಪುಸ್ತಕ.]
  • 'ಕಾಸ್ ಮಾಸ್' ಮತ್ತು 'ನಮ್ಮ ವಿಶ್ವ' ಎಂಬ 'ಸಾಕ್ಷಿಚಿತ್ರ'ಗಳನ್ನು ಮಾಡಿದರು.
  • 'ನಿಮಗೆ ತಿಳಿದಿರಲಿ' ಎಂಬ ಧ್ವನಿ ಸುರಳಿ [CD] ಬಿಡುಗಡೆಮಾಡಿದರು.

ಅಮೆರಿಕ ದೇಶದ ಬಾನುಲಿ ಕೇಂದ್ರದಲ್ಲಿ ವಿಜ್ಞಾನದ ಬಗ್ಗೆ ಉಪನ್ಯಾಸ ನೀಡಿ, ಅಲ್ಲಿನ ಜನರಆಸಕ್ತಿಗಳಿಗೆ ಸ್ಪಂದಿಸಿದ್ದರು.