ಶ್ಯಾಮಸುಂದರ ಬಿದರಕುಂದಿ

From Wikipedia

ಶ್ಯಾಮಸುಂದರ ಬಿದರಕುಂದಿ ಇವರು ೧೯೪೭ ಮೇ ೧೮ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಇವರ ತಾಯಿ ತುಂಗಾಬಾಯಿ;ತಂದೆ ಗುರುರಾವ.

ಪರಿವಿಡಿ

[ಬದಲಾಯಿಸಿ] ಶಿಕ್ಷಣ

ಶ್ಯಾಮಸುಂದರ ಬಿದರಕುಂದಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ೧೯೭೦ರಲ್ಲಿ ಕನ್ನಡ ವಿಷಯದಲ್ಲಿ ಎಂ.ಎ. ಪದವಿ ಪಡೆದರು. “ನವ್ಯ ಕಾದಂಬರಿ ಮಾರ್ಗ:೧೯೬೦-೧೯೮೦” ಈ ವಿಷಯದ ಮೇಲೆ ಬರೆದ ಮಹಾಪ್ರಬಂಧಕ್ಕಾಗಿ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಪ್ರದಾನಿಸಿತು.

[ಬದಲಾಯಿಸಿ] ವೃತ್ತಿ

ಶ್ಯಾಮಸುಂದರ ಬಿದರಕುಂದಿಯವರು ೧೯೭೦ರಿಂದ ೧೯೭೨ರವರೆಗೆ ಹುಬ್ಬಳ್ಳಿಯ ನೆಹರೂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ೧೯೭೨ರಿಂದ ೨೦೦೫ರವರೆಗೆ ಗದಗದಲ್ಲಿರುವ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಿವೃತ್ತಿಯ ನಂತರ ಈಗ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಅಲ್ಲದೆ “ಬೇಂದ್ರೆ ರಾಷ್ಟ್ರೀಯ ಟ್ರಸ್ಟ”ನ ಸಕ್ರಿಯ ಸದಸ್ಯರಾಗಿದ್ದಾರೆ.

[ಬದಲಾಯಿಸಿ] ಸಾಹಿತ್ಯ

ಶ್ಯಾಮಸುಂದರ ಬಿದರಕುಂದಿಯವರು ಸೃಜನಶೀಲ ಸಾಹಿತಿಯಾಗಿರುವಂತೆಯೇ ವಿಚಕ್ಷಕ ವಿಮರ್ಶಕರೂ ಆಗಿದ್ದಾರೆ. ಅವರ ಸಾಹಿತ್ಯ ಕೃತಿಗಳು ಇಂತಿವೆ:

[ಬದಲಾಯಿಸಿ] ಕಾವ್ಯ

೧. ಅಜ್ಜಗಾವಲು

೨. ಅಲ್ಲಮ, ಪ್ರಭುವಾದ

೩. ಬರುವದೇನುಂಟೊಮ್ಮೆ

[ಬದಲಾಯಿಸಿ] ವಿಮರ್ಶೆ

೧. ಕೃತಿನೋಟ

೨. ಅಚ್ಚುಕಟ್ಟು

[ಬದಲಾಯಿಸಿ] ಇತರ

೧. ಗರುಡ ಶ್ರೀಪಾದರಾವ: ಪರಿಚಯ

೨. ಸ್ವಾತಂತ್ರ್ಯದ ಸವಿನೀರು

೩. ಸ್ವಾತಂತ್ರ್ಯ ಚಳುವಳಿ ಮತ್ತು ಕನ್ನಡ ರಂಗಭೂಮಿ

೪. ಗದುಗಿನ ಭಾರತ: ಕುಮಾರವ್ಯಾಸ (ಸಂಪಾದನೆ)

೫. ನವಲೂರಿನ ಕವಿ ಶಿವೇಶ್ವರ ದೊಡಮನಿ (ಸಂಪಾದನೆ)

೬. ಗಂಧಕೊರಡು (ಸಂಪಾದನೆ)

[ಬದಲಾಯಿಸಿ] ಸಾರ್ವಜನಿಕ

ಶ್ಯಾಮಸುಂದರ ಬಿದರಕುಂದಿಯವರು ಸಾಹಿತ್ಯದಲ್ಲಿ ಮಾತ್ರವಲ್ಲ, ಸಾರ್ವಜನಿಕ ಚಟುವಟಿಕೆಗಳಲ್ಲೂ ಸಹ ತುಂಬಾ ಆಸಕ್ತಿಯಿಂದ ಭಾಗವಹಿಸುವವರು. ೧೯೭೫ರಿಂದ ೧೯೮೫ರವರೆಗೆ ಹತ್ತು ವರ್ಷಗಳ ಕಾಲ ಇವರು ನ್ಯಾಶನಲ್ ಸರ್ವೀಸ್ ಸ್ಕೀಮಿನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, ೧೯೭೭ರಿಂದ ೧೯೮೩ರ ವರೆಗೆ ಗ್ರಾಮೀಣ ಪರಿಸರದಲ್ಲಿ ಸೇವಾ ಶಿಬಿರಗಳ ನಿರ್ವಹಣೆಯನ್ನು ಮಾಡಿದ್ದಾರೆ. ೧೯೭೬ರಿಂದ ೨೦೦೧ರವರೆಗೆ ಗದಗ ಪಟ್ಟಣದಲ್ಲಿಯ ಚಿಂತನವೇದಿಕೆ ಹಾಗು ಸಾಹಿತ್ಯ ಕಲಾವೇದಿಕೆಗಳ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.

[ಬದಲಾಯಿಸಿ] ಕೌಟುಂಬಿಕ

ಶ್ರೀಮತಿ ಶೋಭಾ ಇವರು ಶ್ಯಾಮಸುಂದರ ಬಿದರಕುಂದಿಯವರ ಅರ್ಧಾಂಗಿ. ಇವರಿಗೆ ಮೂರು ಜನ ಮಕ್ಕಳು: ವಿನ್ಯಾಸ, ಮಯೂರ ಹಾಗು ಚಂದ್ರಿಕಾ.

[ಬದಲಾಯಿಸಿ] ಗೌರವ

ಶ್ಯಾಮಸುಂದರ ಬಿದರಕುಂದಿಯವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದಾರೆ.