ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ)
From Wikipedia
ರಾವಬಹಾದ್ದೂರ ಎಂಬ ಹೆಸರಿನಲ್ಲಿ ಅನೇಕ ಕತೆ ಹಾಗು ಕಾದಂಬರಿಗಳನ್ನು ಬರೆದ ಶ್ರೀ ರಾಮಚಂದ್ರ ಕುಲಕರ್ಣಿಯವರು ೧೯೧೦ ಸಪ್ಟಂಬರ೨೪ರಂದು ವಿಜಾಪುರ ಜಿಲ್ಲೆಯ ಜಮಖಂಡಿತಾಲೂಕಿನ ಹಿರೆಪಡಸಲಗಿಯಲ್ಲಿ ಜನಿಸಿದರು. ಇವರ ತಾಯಿ ಸುಭದ್ರಾಬಾಯಿ ; ತಂದೆ ಭೀಮರಾವ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಓದಿ, ೧೯೩೫ರಲ್ಲಿ ಬಿ.ಎ.ಪದವಿ ಗಳಿಸಿದರು. ಅನೇಕ ವರ್ಷ ಜಯಂತಿ ಮಾಸಪತ್ರಿಕೆಯನ್ನು ನಡೆಯಿಸಿದರು.ಕೆಲ ಕಾಲ ಖಾಸಗಿ ಬ್ಯಾಂಕುಗಳಲ್ಲಿ ಕೆಲಸ ಮಾಡಿದರು.ಸ್ವಾತಂತ್ರ್ಯ ಹೋರಾಟಗಾರ ಕೌಜಲಗಿ ಹನುಮಂತರಾಯರ ಪ್ರೇರಣೆಯಿಂದ ಚರಕಾ ಸಂಘ ಸೇರಿದರು. ೧೯೩೮ರಿಂದ ೧೯೪೬ರವರೆಗೆ ಚರಕಾ ಸಂಘದ ವ್ಯವಸ್ಥಾಪಕರಾಗಿದ್ದರು.ತನ್ನಂತರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಂಪಾದಕೀಯ ವಿಭಾಗಕ್ಕೆ ಸೇರಿಕೊಂಡರು. ಕರ್ನಾಟಕ ರಾಜ್ಯ ಪುನಾರಚನೆಯ ಮೊದಲು, ಆಗಿನ ಮುಂಬಯಿ ಪ್ರಾಂತದ ಮುಖ್ಯ ಮಂತ್ರಿಗಳಾಗಿದ್ದ ಮೊರಾರಜಿ ದೇಸಾಯಿ ಇವರ ವಿರುದ್ಧ ಇವರು ಬರೆದ ಖಾರವಾದ ಲೇಖನಗಳಿಂದಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಸರಕಾರೀ ಜಾಹೀರಾತುಗಳನ್ನು ನಿಲ್ಲಿಸಲಾಗಿತ್ತು. ಆದರೆ ಚುನಾವಣಾ ಪ್ರಚಾರ ಸಮಯದಲ್ಲಿ ತನ್ನ ತಪ್ಪಿನ ಅರಿವಾದ ಮೊರಾರಜಿಯವರು ಜಾಹೀರಾತುಗಳನ್ನು ಪುನರಾರಂಭಿಸಿದರು. ಬಂಗ್ಲಾದೇಶ [1] ಉದಯವಾದ ಹೊಸತರಲ್ಲಿ ರಾವಬಹಾದ್ದೂರರು ಸಂಯುಕ್ತ ಕರ್ನಾಟಕದ ಪ್ರತಿನಿಧಿಯಾಗಿ ಅಲ್ಲಿಗೆ ತೆರಳಿ “ನಾನು ಕಂಡ ಬಂಗ್ಲಾದೇಶ” ಎನ್ನುವ ಪುಸ್ತಕ ಬರೆದರು.
ಇವರ ಕೃತಿಗಳು:
- ಗ್ರಾಮಾಯಣ
- ಅಸುರಾಯಣ
- ಬಿತ್ತಿ ಬೆಳೆದವರು
- ಗೌಡರ ಕೋಣ
- ಸಾಮ್ಯವಾದ
- ಇತಿಹಾಸ ಭೂತ
- ವೃಂದಾವನ
- ಧೂಮಕೇತು
- ಬಾಳು ಬಂಗಾರ
- ಮುತ್ತು ಕಟ್ಟಿದಳು
- ಕಾಂಚನ ಮೃಗ
- ಮರೆಯದ ನೆನಪುಗಳು
ಗ್ರಾಮಾಯಣ ಕಾದಂಬರಿಯು ಕನ್ನಡದ ಹತ್ತು ಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಈ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿರುವದಲ್ಲದೆ ಭಾರತದ ಎಲ್ಲ ಭಾಷೆಗಳಿಗೆ ಅನುವಾದವಾಗಿದೆ.
"ಬಿತ್ತಿ ಬೆಳೆದವರು" ಹಾಗು "ಗೌಡರ ಕೋಣ" ಈ ಕಾದಂಬರಿಗಳು ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಗಳಿಸಿವೆ.