ಎಂ. ಮರಿಯಪ್ಪ ಭಟ್ಟ

From Wikipedia

ಎಂ. ಮರಿಯಪ್ಪ ಭಟ್ಟರುದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕಬಕ ಗ್ರಾಮದಲ್ಲಿ೧೯೦೬ರಲ್ಲಿ ಜನಿಸಿದರು. ಬಹುಭಾಷಾ ವಿದ್ವಾಂಸರಾದ ಅವರು ದ್ರಾವಿಡ ಭಾಷೆಗಳನ್ನು ತುಲನಾತ್ಮಕ ಅಧ್ಯಯನ ಮಾಡುವದರೊಂದಿಗೆ ನಿಘಂಟು ರಚನೆಯಲ್ಲಿ ಅನುಪಮ ಸೇವೆ ಗೈದಿದ್ದಾರೆ. ಮದ್ರಾಸು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ದುಡಿದವರು. ತುಳು-ಇಂಗ್ಲಿಷ್ ನಿಘಂಟು, ಅಭಿನವಮಂಗರಾಜನ ನಿಘಂಟು, ಜಾತಕತಿಲಕಂ, ಛಂದಸ್ಸಾರ ಮೊದಲಾದ ಕೃತಿಗಳ ಕರ್ತೃವಾಗಿ ಪ್ರಸಿದ್ಧರಾದವರು. ಕರ್ನಾಟಕ ಸರ್ಕಾರದ ಪುರಸ್ಕಾರ, ಸಾಹಿತ್ಯ ಅಕಾಡೆಮಿ ಪ್ರಸಸ್ತಿ ಅವರಿಗೆ ಲಭಿಸಿದೆ.

[ಬದಲಾಯಿಸಿ] ಸಾಹಿತ್ಯ ಕೃತಿಗಳು

  • ಕನ್ನಡ ಸಂಸ್ಕೃತಿ (ಪ್ರಬಂಧ ಸಂಕಲನ)
  • ತುಳು-ಇಂಗ್ಲಿಷ್ ನಿಘಂಟು
  • ಅಭಿನವಮಂಗರಾಜನ ನಿಘಂಟು
  • ಜಾತಕತಿಲಕಂ
  • ಛಂದಸ್ಸಾರ