ಮಾಧವ ಐತಾಳ
From Wikipedia
ವಿಜಯ ಕರ್ನಾಟಕದಲ್ಲಿ ಉಪ-ಸಂಪಾದಕರಾಗಿ ಕೆಲಸ ಮಾಡುತ್ತಿರುವ ಮಾಧವ ಐತಾಳ, ಕೆಮಿಕಲ್ ಇಂಜಿನಿಯರಿಂಗ್ ಪದವಿಧರ. ಇವರು ಪರಿಸರವಾದಿಯಾಗಿದ್ದಾರೆ ಮತ್ತು ಗ್ಯಾಟ್, ಜಾಗತೀಕರಣದ ಬಗ್ಗೆ ವಿಶೇಷ ಆಸಕ್ತ ಹೊಂದಿದ್ದಾರೆ. ವಿಜಯ ಕರ್ನಾಟಕದಲ್ಲಿ ಗ್ಯಾಟ್ ಮತ್ತು ಪೇಟೆಂಟ್ ಒಪ್ಪಂದಗಳಿಂದಾಗಿ ಭಾರತದ ರೈತರ ಮೇಲಾಗುವ ಪರಿಣಾಮಗಳನ್ನು ಕುರಿತು ಸುಧೀರ್ಘ ಲೇಖನ ಮಾಲೆಯನ್ನು ಇವರು ಬರೆದು, ಜನಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಈ ವಿಷಯದ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ.
ಪರಿಸರ ಸಂರಕ್ಷಣೆ ಚಳುವಳಿ - ಇತ್ತೀಚಿನ ತಡದಿ ಉಷ್ಣ ಸ್ಥಾವರ ವಿರೋಧಿ ಚಳುವಳಿ, ಇವರು ಸಕ್ರೀಯವಾಗಿ ಭಾಗವಹಿಸಿದ್ದಾರೆ. ಇವರ ಪತ್ನಿ ಪಾರ್ವತಿ, ನೇತ್ರವೈದ್ಯೆಯಾಗಿದ್ದಾರೆ.