ಚಿತ್ತಾರ
From Wikipedia
ಮುದ್ದು ಮಕ್ಕಳ ಪ್ರತಿಭೆಗಳ ಚಿತ್ತಾರ chitthara in zee kannada ಮುದ್ದಾಗಿರೋ ಮಕ್ಕಳು ಏನು ಮಾಡಿದ್ರೂ ಚೆನ್ನಾಗಿರುತ್ತೆ. ಇತ್ತೀಚೆಗೆ ಮಕ್ಕಳಂತೂ ಉತ್ತಮ ಪ್ರತಿಭೆಯನ್ನು ಹೊಂದಿರುವವರಾಗಿದ್ದಾರೆ.ಪ್ರೋತ್ಸಾಹ ಮತ್ತು ಸ್ವಲ್ಪ ತರಬೇತಿ ದೊರೆತರೆ ಸ್ರಜನಶೀಲ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಈ ಮಕ್ಕಳು ಮುಡಿಸಬಲ್ಲರು. ಉತ್ತಮ ಪ್ರತಿಭೆಯಿರುವವರಿಗೆ ಪ್ರಚಾರ ಪ್ರೋತ್ಸಾಹ ದೊರೆಯುತ್ತಿಲ್ಲ ಎಂಬುದು ಕೊರಗು. ತಕ್ಕಮಟ್ಟಿಗೆ ಕಿರುತೆರೆ ಈ ಕೊರತೆಯನ್ನು ತುಂಬುತ್ತಿದೆ.
ಕಿರುತೆರೆ ಇತ್ತೀಚೆಗೆ ರಿಯಾಲಿಟಿ ಶೋಗಳತ್ತ ಹೆಚ್ಚಿನ ಗಮನ ನೀಡುತ್ತದೆ. ಜೀ ಕನ್ನಡ ರಿಯಾಲಿಟಿ ಶೋ ನೀಡುವುದರಲ್ಲಿ ಸದಾ ಮುಂದು. ‘ಸರಿಗಮಪ’, ‘ಕುಣಿಯೋಣು ಬಾರಾ’ ಮುಂತಾದ ಪ್ರಸಿದ್ಧ ಕಾರ್ಯಕ್ರಮಗಳನ್ನು ನೀಡಿದೆ. ಈಗ ಮುದ್ದು ಮಕ್ಕಳ ಪ್ರತಿಭೆ ಹೊರಗೆಡಹುವ ಪ್ರಯತ್ನದ ಫಲವಾಗಿ ‘ಚಿತ್ತಾರ’ ಕಾರ್ಯಕ್ರಮ ಮುಡಿಬರುತ್ತಿದೆ. ಇಲ್ಲಿ ಸಂಗೀತ, ನ್ರತ್ಯ ಮತ್ತು ನಟನಾ ಕೌಶಲ್ಯವಿರುವ ಮಕ್ಕಳ ಪ್ರತಿಭೆ ಪ್ರಚಾರಕ್ಕೆ ಒಂದು ಅವಕಾಶವಿದೆ. ಕರ್ನಾಟಕದ ಎಲ್ಲೆಡೆಯಿಂದ ಈ ಕಾರ್ಯಕ್ರಮಕ್ಕೆ ಪ್ರತಿಭಾವಂತರನ್ನು ಆಹ್ವಾನಿಸಲಾಗಿದೆ.
ಈ ಸ್ಪರ್ಧೆಯ ಪ್ರಾರಂಭಿಕ ಹಂತದಲ್ಲಿ ೩೬೦ ಸ್ಪರ್ಧಿಗಳು ಭಾಗವಹಿಸುತ್ತಾರೆ. ಪ್ರತಿ ವಾರದ ಸ್ಪರ್ಧೆಯಲ್ಲಿ ೧) ಸಂಗೀತ, ೨) ನ್ರತ್ಯ, ೩) ಇತರೆ (ನಟನೆ, ಏಕಪಾತ್ರಾಭಿನಯ, ಜಾದು ಇತ್ಯಾದಿ) ಈ ಮುರು ವಿಭಾಗಗಳಿಂದ ಇಬ್ಬರಂತೆ ಆರು ಸ್ಪರ್ಧಿಗಳು ಭಾಗವಹಿಸುತ್ತಾರೆ. ಪ್ರತೀ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ೫ ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಪ್ರತೀ ಸ್ಪರ್ಧಿಗೆ ತಮ್ಮ ಪ್ರತಿಭೆ ತೋರ್ಪಡಿಕೆಗೆ ಮುರು ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
ಎರಡನೇ ಸುತ್ತಿಗೆ ೩೬೦ ಸ್ಪರ್ಧಿಗಳಲ್ಲಿ ೧೮೦ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಸುತ್ತಿನಲ್ಲಿ ಸ್ಪರ್ಧಿಗಳಿಗೆ ೮೦ ಸೆಕೆಂಡ್ ಕಾಲಾವಕಾಶ ನೀಡಲಾಗುತ್ತದೆ. ಕೊನೆಯ ಸುತ್ತಿಗೆ ೫೪ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುವುದು. ಅಂತಿಮ ಸುತ್ತಿನಲ್ಲಿ ಒಂದು ನಿಮಿಷ ಕಾಲಾವಕಾಶವನ್ನು ನೀಡಲಾಗುತ್ತದೆ. ಅಂತಿಮವಾಗಿ ಮುರು ವಿಭಾಗಗಳಿಂದ ಒಬ್ಬರನ್ನು ವಿಜೇತರೆಮ್ದು ಆಯ್ಕೆ ಮಾಡಲಾಗುವುದು. ನಿಮ್ಮ ನೆಚ್ಚಿನ ಪುಟಾಣಿಯನ್ನು ಆಯ್ಕೆ ಮಾಡಲು ನೀವು ಎಸ್ಸೆಮ್ಮೆಸ್ ಕಳುಹಿಸಬಹುದಾಗಿದೆ. ಸ್ಪರ್ಧೆಯ ಪ್ರತೀ ಹಂತದಲ್ಲ್ಲೂ ವೀಕ್ಷಕರಿಂದ ಎಸ್ಸೆಮ್ಮೆಸ್ ಆಹ್ವಾನಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
veena.dsouza@k2communications.in