ಉಷಾ ನವರತ್ನರಾಂ

From Wikipedia

ಕನ್ನಡದ ಜನಪ್ರಿಯ ಲೇಖಕಿ ಉಷಾ ೧೯೩೯ ನವೆಂಬರ ೨೩ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಶಾಂತಮ್ಮ; ತಂದೆ ಎಂ.ವಿ.ಸುಬ್ಬರಾವ.

ಪರಿವಿಡಿ

[ಬದಲಾಯಿಸಿ] ಕೌಟುಂಬಿಕ

ಉಷಾರವರ ಮದುವೆ ೧೯೬೯ ಫೆಬ್ರುವರಿ ೩ರಂದು ಖ್ಯಾತ ಸಾಹಿತಿ ನವರತ್ನ ರಾಮ್ ರವರ ಜೊತೆಗೆ ಜರುಗಿತು. ಇವರಿಗೆ ಮೂವರು ಮಕ್ಕಳು: ಆರತಿ, ಅಂಜಲಿ ಹಾಗು ಆಶ್ರಯಾ.

[ಬದಲಾಯಿಸಿ] ಕೃತಿಗಳು

ಉಷಾ ನವರತ್ನ ರಾಮ್ ಅವರ ಅನೇಕ ಕಾದಂಬರಿಗಳು ಸುಧಾ, ಪ್ರಜಾಮತ, ಕರ್ಮವೀರ, ತರಂಗ, ಮಂಗಳ ಮೊದಲಾದ ಕನ್ನಡದ ವಿವಿಧ ವಾರಪತ್ರಿಕೆಗಳಲ್ಲಿ ಹಾಗು ಮಲ್ಲಿಗೆ, ತುಷಾರ, ವನಿತಾ, ಪ್ರಿಯಾಂಕ, ರಾಗಸಂಗಮ, ಹಂಸರಾಗ ಮೊದಲಾದ ಮಾಸಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ.

[ಬದಲಾಯಿಸಿ] ಕಥಾಸಂಕಲನ

  • ಅಭಿನಯ
  • ಕತೆ ಹೇಳುವೆ
  • ಕೇಳು ನನ್ನ ಕಥೆಯಾ

[ಬದಲಾಯಿಸಿ] ಕಾದಂಬರಿ

  • ಅಭಿನಯ
  • ಇರುಳು ಕಂಡ ಬಾವಿ
  • ಉಪಕಾರ
  • ಉಯಿಲು
  • ಎಂದೆಂದಿಗೂ ನಿನ್ನವನೆ
  • ಎಲ್ಲಾದರು ಸುಖವಾಗಿರು
  • ಒಂದು ದಿನ ರಾತ್ರಿಯಲಿ
  • ಒಡಕು ದೋಣಿ
  • ಒಳಗೆ ಬಾ ಅತಿಥಿ
  • ಕರೆಗಂಟೆ
  • ಕರೆದರೆ ಬರೆಬಾರದೆ
  • ಕಿಚ್ಚು
  • ಕೃಷ್ಣಾ ನೀ ಬೇಗನೆ ಬಾರೊ
  • ಕ್ಷಮೆಯಿರಲಿ ತಂದೆ
  • ಗುಪ್ತಗಾಮಿನಿ (ಹೊರನೋಟ, ಹಂಸರಾಗ)
  • ಗೂಡು ಬಿಟ್ಟ ಹಕ್ಕಿ
  • ದಾರಿ ಯಾವುದಯ್ಯಾ?
  • ನನ್ನ ಮುದ್ದು ಮರಿ
  • ನಾನು ವೀಣೆ ನೀನೇ ತಂತಿ
  • ನಾಳೆಯು ಬರಲಿ
  • ನಿನ್ನೊಲುಮೆ ನನಗಿರಲಿ
  • ನೀ ಮುಡಿದಾ ಮಲ್ಲಿಗೆ
  • ನೀನೆ ಅನಾಥ ಬಂಧು
  • ನೆನ್ನೆ ನೆನ್ನೆಗೆ! ನಾಳೆ ನಾಳೆಗೆ!
  • ಪ್ರತೀಕಾರ
  • ಪ್ರೀತಿಸಿ ನೋಡು
  • ಬಂಧನ
  • ಬದುಕು ಬಂಗಾರ
  • ಬಯಕೆಯ ಬಲೆಯಲ್ಲಿ
  • ಬಿನ್ನಹಕೆ ಬಾಯಿಲ್ಲ
  • ಬಿರುಕು
  • ಮಕ್ಕಳಿರಲವ್ವ ಮನೆ ತುಂಬ
  • ಮತ್ತೆ ಮಡಿಲಿಗೆ
  • ಮನೆಯೇ ಬೃಂದಾವನ
  • ಮರೆವು
  • ಮೊದಲು ಮಾನವನಾಗು
  • ಯೌವನದ ಹೊನಲಲ್ಲಿ
  • ಸಮರ್ಪಣೆ
  • ಸ್ಫೋಟ
  • ಹಕ್ಕಿ ಹಾರುತಿದೆ
  • ಹೂವನ್ನು ಮುಡಿಬೇಕು
  • ಹೊಂಬಿಸಿಲು
  • ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
  • ಹ್ಯಾಪಿ ಬರ್ತಡೇ

[ಬದಲಾಯಿಸಿ] ಚಿತ್ರೀಕರಣ

ಉಷಾರವರ ಈ ಕಾದಂಬರಿಗಳು ಚಲನಚಿತ್ರಗಳಾಗಿ ಜನಪ್ರಿಯವಾಗಿವೆ:

[ಬದಲಾಯಿಸಿ] ಗೌರವ

  • ೧೯೮೨-೮೩ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯ ಪ್ರಶಸ್ತಿ
  • ೧೯೯೫ ಸಪ್ಟಂಬರ ೧೫ರಂದು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜನಿಯರಿಂಗ ಪ್ರತಿಷ್ಠಾನದಿಂದ ಸ್ ಎಂ.ವಿ.ನವರತ್ನ ಪ್ರಶಸ್ತಿ

[ಬದಲಾಯಿಸಿ] ನಿಧನ

ಉಷಾ ನವರತ್ನ ರಾಮ್ ೨೦೦೦ ಅಕ್ಟೋಬರ ೧ರಂದು ನಿಧನರಾದರು.