ವಿ. ಎಮ್. ಇನಾಮದಾರ
From Wikipedia
ವೆಂಕಟೇಶ ಮಧ್ವರಾವ ಇನಾಮದಾರ ಇವರು ೧೯೧೩ ಅಕ್ಟೋಬರ ೧ರಂದು ಬೆಳಗಾವಿ ಜಿಲ್ಲೆಯ ಹುದಲಿಯಲ್ಲಿ ಜನಿಸಿದರು.
ಎಂ.ಎ. ಪದವಿ ಪಡೆದ ಬಳಿಕ ಕೆಲ ಕಾಲ ನ್ಯಾಯಾಲಯದಲ್ಲಿ ಕೆಲಸ ಮಾಡಿ, ಪ್ರಾಧ್ಯಾಪಕ ವೃತ್ತಿ ಕೈಗೊಂಡರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿಗಳು
- ಕನಸಿನ ಮನೆ
- ಕಟ್ಟಿದ ಮನೆ
- ಮಂಜು ಮುಸುಕಿದ ದಾರಿ
- ಮುಗಿಯದ ಕಥೆ
- ಈ ಪರಿಯ ಸೊಬಗು
- ವಿಷ ಬೆಳಸು
- ಮೂರಾಬಟ್ಟೆ
- ಶಾಪ
- ನವಿಲು ನೌಕೆ
- ಬಿಡುಗಡೆ
[ಬದಲಾಯಿಸಿ] ಅನುವಾದ
- ಎರಡು ಧ್ರುವ (ಮೂಲ ಮರಾಠಿ: ವ್ಹಿ.ಎಸ್. ಖಾಂಡೇಕರ)
- ಯಯಾತಿ (ಮೂಲ ಮರಾಠಿ: ವ್ಹಿ.ಎಸ್.ಖಾಂಡೇಕರ)
('ಯಯಾತಿ'ಕಾದಂಬರಿಗಾಗಿ ವ್ಹಿ.ಎಸ್.ಖಾಂಡೇಕರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.)
[ಬದಲಾಯಿಸಿ] ಇತರ
- ಪಾಶ್ಚಾತ್ಯ ಕಾವ್ಯಮೀಮಾಂಸೆ
- ಕಾಳಿದಾಸನ ಕಥಾ ನಾಟಕಗಳು
[ಬದಲಾಯಿಸಿ] ಪುರಸ್ಕಾರ
೧೯೭೭ರಲ್ಲಿ ವಿ.ಎಂ.ಇನಾಮದಾರರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ನೀಡಲಾಯಿತು.
[ಬದಲಾಯಿಸಿ] ನಿಧನ
ವಿ.ಎಂ.ಇನಾಮದಾರರು ೧೯೮೬ ಜನೆವರಿ ೨೬ರಂದು ನಿಧನರಾದರು.
[ಬದಲಾಯಿಸಿ] ಇನಾಮದಾರ ಪ್ರಶಸ್ತಿ
ಇನಾಮದಾರರ ನಿಧನದ ನಂತರ ಸಾಹಿತ್ಯಕ್ಷೇತ್ರದಲ್ಲಿ "ವಿ.ಎಂ.ಇನಾಮದಾರ ಪ್ರಶಸ್ತಿ"ಯನ್ನು ವಾರ್ಷಿಕವಾಗಿ ನೀಡಲಾಗಿತ್ತಿದೆ.
[ಬದಲಾಯಿಸಿ] ಚಲನಚಿತ್ರ
ಇವರ "ಶಾಪ" ಕಾದಂಬರಿಯನ್ನು ಆಧರಿಸಿ "ಮುಕ್ತಿ" ಎನ್ನುವ ಚಲನಚಿತ್ರವನ್ನು ತೆಗೆಯಲಾಗಿತ್ತು. ಈ ಚಲನಚಿತ್ರದಲ್ಲಿ ಕಲ್ಪನಾ ಇವರು ನಾಯಕಿಯಾಗಿದ್ದರು.