ಸುಧಾ ಮೂರ್ತಿ

From Wikipedia

ಸುಧಾ ಮೂರ್ತಿಯವರು ೧೯೫೦ರಲ್ಲಿ ಕುಲಕರ್ಣಿ ಮನೆತನದಲ್ಲಿ ಜನಿಸಿದರು.

ಪರಿವಿಡಿ

[ಬದಲಾಯಿಸಿ] ಶಿಕ್ಷಣ

೧೯೬೬ರಲ್ಲಿ ಹುಬ್ಬಳ್ಳಿಯ ನ್ಯೂ ಎಜ್ಯುಕೇಶನ್ ಸೊಸಾಯಿಟಿಯ ಗರ್ಲ್ಸ್ ಇಂಗ್ಲಿಷ್ ಸ್ಕೂಲ್‍ನಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದರು.

೧೯೭೨ರಲ್ಲಿ ಹುಬ್ಬಳ್ಳಿಯ ಬಿ.ವಿ.ಬಿ.ಕಾಲೇಜ ಆಫ್ ಇಂಜನಿಯರಿಂಗ್‍ದಲ್ಲಿ ಇಲೆಕ್ಟ್ರಿಕಲ್ ಇಂಜನಿಯರಿಂಗ್ ದ ಎಲ್ಲ ಸೆಮೆಸ್ಟರುಗಳಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು.

೧೯೭೪ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯನ್ಸ್ ಸಂಸ್ಥೆಯಲ್ಲಿ ಕಾಂಪ್ಯೂಟರ್ ಸಾಯನ್ಸ್ ‍ದಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು.

[ಬದಲಾಯಿಸಿ] ವೃತ್ತಿ

ಸುಧಾ ಮೂರ್ತಿ (-ಆಗಿನ್ನೂ ಸುಧಾ ಕುಲಕರ್ಣಿ-)ಯವರು ಟೆಲ್ಕೊದ ಪುಣೆ, ಮುಂಬಯಿ ಹಾಗು ಜಮಶೇಟಪುರ ಶಾಖೆಗಳಲ್ಲಿ ಡೆವಲಪ್ಮೆಂಟ್ ಇಂಜನಿಯರ ಎಂದು ದುಡಿದಿದ್ದಾರೆ. ಟೆಲ್ಕೊಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಇಂಜನಿಯರ ಎನ್ನುವ ಹೆಗ್ಗಳಿಕೆ ಇವರದು.

ಆಬಳಿಕ ಇವರು ಪುಣೆಯ ವಾಲಚಂದ ಗ್ರೂಪ್ ಆಫ್ ಇಂಡಸ್ಟ್ರೀಜ್ದಲ್ಲಿ ಸೀನಿಯರ್ ಸಿಸ್ಟಮ್ಸ್ ಅನಲಿಸ್ಟ್ ಎಂದು ಕೆಲ ಕಾಲ ಸೇವೆ ಸಲ್ಲಿಸಿದರು.

೧೯೯೬ರಲ್ಲಿ ತಮ್ಮ ಪತಿ ಶ್ರೀ ನಾರಾಯಣ ಮೂರ್ತಿಯವರ ಜೊತೆಗೂಡಿ ಇನ್ಫೋಸಿಸ್ ಫೌಂಡೇಶನ್ ಪ್ರಾರಂಭಿಸಿದರು.

[ಬದಲಾಯಿಸಿ] ಸಾಹಿತ್ಯ

ಸುಧಾ ಮೂರ್ತಿಯವರು ೧೩ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೆಲವು ಕೃತಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್, Wise and otherwise, ಡಾಲರ್ ಸೊಸೆ, ಮಹಾಶ್ವೇತಾ, Sweet Hospitality ಮೊದಲಾದ ಕೃತಿಗಳು ಕನ್ನಡ ಹಾಗು ಇಂಗ್ಲಿಷ‍ದಲ್ಲಿ ಪ್ರಕಟವಾಗಿವೆ. ಸುಧಾ ಮೂರ್ತಿಯವರು ಎರಡು ಪ್ರವಾಸಕಥನಗಳನ್ನೂ ಬರೆದಿದ್ದಾರೆ.

[ಬದಲಾಯಿಸಿ] ಪುರಸ್ಕಾರ

ಸುಧಾ ಮೂರ್ತಿಯವರಿಗೆ ಚಿಕ್ಕಂದಿನಿಂದಲೂ ಪ್ರಶಸ್ತಿಗಳು ದೊರೆಯುತ್ತಲಿವೆ.

  • ಬಿ.ಇ.(ಇಲೆಕ್ಟ್ರಿಕಲ್ ಇಂಜನಿಯರಿಂಗ್) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಲಭಿಸಿದಾಗ ಕರ್ನಾಟಕದ ಮುಖ್ಯ ಮಂತ್ರಿಗಳಿಂದ ಬೆಳ್ಳಿಯ ಪದಕ ಲಭಿಸಿತ್ತು.
  • ಎಮ್.ಟೆಕ್. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ದೊರೆತಾಗ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಜನಿಯರ್ಸ್ ದಿಂದ ಬಂಗಾರದ ಪದಕ ದೊರೆತಿತ್ತು.
  • ಪಬ್ಲಿಕ್ ರಿಲೇಶನ್ಸ್ ಸೊಸಾಯಿಟಿ ಆಫ್ ಇಂಡಿಯಾದವರಿಂದ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.
  • ಸಮಾಜಸೇವೆಗಾಗಿ ಹುಬ್ಬಳ್ಳಿ ದಕ್ಷಿಣ ಭಾಗದ ರೋಟರಿ ಕ್ಲಬ್ನಿಂದ ಪುರಸ್ಕಾರ ದೊರೆತಿದೆ.
  • ೨೦೦೦ ನೆಯ ಸಾಲಿನ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಲಭಿಸಿದೆ.
  • ಸಮಾಜಸೇವೆಗಾಗಿ ೨೦೦೦ ಸಾಲಿನ “ಓಜಸ್ವಿನಿ” ಪ್ರಶಸ್ತಿ ದೊರೆತಿದೆ.
  • “ಮಿಲೆನಿಯಮ್ ಮಹಿಳಾ ಶಿರೋಮಣಿ’’ ಪ್ರಶಸ್ತಿ ಲಭಿಸಿದೆ.
  • “ಶಾಲೆ ಮಕ್ಕಳಿಗಾಗಿ ಕಂಪ್ಯೂಟರ್” ಈ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ ದೊರೆತಿದೆ.
  • ರೇಡಿಯೊ ಸಿಟಿ ಬೆಂಗಳೂರಿನಿಂದ ೨೦೦೨ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯೆಂದು “ವರ್ಷದ ಮಹಿಳೆ” ಪ್ರಶಸ್ತಿ ಲಭಿಸಿದೆ.
  • ಸಮಾಜ ಸೇವೆಗಾಗಿ, ಚೆನ್ನೈದ ಶ್ರೀ ರಾಜ-ಲಕ್ಷ್ಮಿ ಫೌಂಡೇಶನ್ ದವರು ೨೦೦೪ರ ರಾಜ-ಲಕ್ಷ್ಮಿ ಪ್ರಶಸ್ತಿಯನ್ನು ನೀಡಿದ್ದಾರೆ.
  • ಭಾರತ ಸರಕಾರ ೨೦೦೬ನೆಯ ಸಾಲಿನಲ್ಲಿ ಸುಧಾ ಮೂರ್ತಿಯವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ.