ನಮ್ಮಪ್ಪಾಮ್ಮ
From Wikipedia
ನಮ್ಮಪ್ಪಾಮ್ಮ namm appa amma in zee kannada ಪ್ರತಿಯೊಬ್ಬರ ಬದುಕಿಗೆ ಪಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ. ಪಾಲಕರ ಅಗತ್ಯ ಪ್ರತಿಯೊಬ್ಬ ಮಕ್ಕಳಿಗೂ ಇದೆ. ಆದರೆ ಎಲ್ಲರಿಗೂ ಈ ಅವಕಾಶ ಇರುವುದಾ? ಸಿಗುವುದಾ? ಪಾಲಕರನ್ನು ಪಡೆದವರ ಅದ್ರಷ್ಟ ಪಡೆಯದವರ ಗೋಳಾಟ! ಬದುಕಿನಲ್ಲಿ ಅವರ ಹೋರಾಟ! ಇವುಗಳನ್ನು ಹೇಳಿಕೊಳ್ಳಲು ವೇದಿಕೆ ‘ನಮ್ಮಪ್ಪಾಮ್ಮ’ಚಿತ್ರ:Zeek.jpg
ತಮ್ಮ ವ್ಯಕ್ತಿತ್ವ, ಜೀವನ ಕಟ್ಟಿಕೊಳ್ಳಲು ತಮ್ಮ ಪಾಲಕರು ಮಾಡಿದ ತ್ಯಾಗ ಹಾಗೂ ಪಾಲಕರಿಲ್ಲದೇ ಬೆಳೆದ ಅನಾಥರು ಜೀವನದಲ್ಲಿ ಅನುಭವಿಸಿದ ಕಷ್ಟಗಳು, ಮಾರ್ಗದರ್ಶಕರಿಲ್ಲದೇ ಬದುಕು ಕಟ್ಟಿಕೊಂಡ ರೀತಿ, ಇವು ಜೀ ಕನ್ನಡದ ಹೊಸ ಕಾರ್ಯಕ್ರಮ ‘ನಮ್ಮಪ್ಪಾಮ್ಮ’ದಲ್ಲಿಯ ಮುಖ್ಯ ಅಂಶಗಳು. ‘ನಮ್ಮಪ್ಪಾಮ್ಮ’ ಕಿರುತೆರೆಯಲ್ಲೇ ಪ್ರಪ್ರಥಮವಾಗಿ ಮುಡಿಬರುತ್ತಿರುವ ವಿಶಿಷ್ಟ ಕಾರ್ಯಕ್ರಮವಾಗಿದೆ. ಅಪ್ಪ-ಅಮ್ಮ ಬದುಕಬಂಡಿಯನ್ನು ಸರಳವಾಗಿ ನಡೆಸಲು ಮಾರ್ಗದರ್ಶಕರು, ಏನೂ ಅರಿಯದ ಕಂದಮ್ಮಗಳಿಗೆ ಪ್ರಪಂಚದ ಅರಿವು ಮುಡಿಸುವ ಮಹಾತ್ಮರು. ಇದು ಪಾಲಕರು ಒಂದು ಮುಖವಾದರೆ ಹೆತ್ತ ಮಕ್ಕಳನ್ನು ಬೀದಿಯಲ್ಲಿ ಬಿಟ್ಟು ಅವರನ್ನು ಅನಾಥರಾಗಿಸುವವರು ಇನ್ನೊಂದೆಡೆ.
ತಮ್ಮ ಜೀವಿತಾವಧಿಯ ಬಹುಪಾಲನ್ನು ಮಕ್ಕಳ ಏಳ್ಗೆಗಾಗಿಯೇ ಮೀಸಲಿಡುವ ಅಥವ ಇಡದ ಅಪ್ಪ ಅಮ್ಮಂದಿರ ಬಗ್ಗೆ ಮಕ್ಕಳ ಮನತುಂಬಿದ ಮಾತುಕತೆಯೇ ‘ನಮ್ಮಪ್ಪಾಮ್ಮ’. ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ತಾರಾ ಈ ಮಕ್ಕಳ ಭಾವನೆಗಳಿಗೆ ಸ್ಪಂದಿಸಿ ಸಾಂತ್ವನದ ಮಾತಾಗುತ್ತಾರೆ. ಇವರ ಬದುಕಿಗೊಂದು ಶಹಬ್ಬಾಸ್ ಹೇಳುವ ವೇದಿಕೆ ಈ ಕಾರ್ಯಕ್ರಮವಾಗಿರುತ್ತದೆ.
ಕೇವಲ ಸಾಮಾನ್ಯ ಜನತೆ ಮಾತ್ರವಲ್ಲದೇ ಕರ್ನಾಟಕದ ಪ್ರಸಿದ್ದ ವ್ಯಕ್ತಿಗಳು ತಮ್ಮ ತಂದೆ ತಾಯಿಯರ ಬಗೆಗೆ ಹೇಳುವ ಅಭಿಪ್ರಾಯಗಳು ಈ ಕಾರ್ಯಕ್ರಮದಲ್ಲಿರುತ್ತವೆ. ಒಟ್ಟಾರೆ ತಂದೆ ತಾಯಿಗಳನ್ನು ಪಡೆದ ಅದ್ರಷ್ಟವಂತರ ಸಂತೋಷಕ್ಕೂ ಹಾಗೂ ಪಡೆಯದ ಅನಾಥರ ಮನತುಂಬಿದ ಮಾತಿಗೂ ಈ ಕಾರ್ಯಕ್ರಮ ವೇದಿಕೆ.
ನಮ್ಮಪ್ಪಾಮ್ಮ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೮.೦೦ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತದೆ.
''''ಕಲಾ ನಿರ್ದೇಶನ: ಪ್ರಕಾಶ್ ಶೆಟ್ಟಿ, ಕ್ರಷ್ಣ ರಾಯಚೂರು
ಕಲೆ: ಮಂಟಪ
'ಶೀರ್ಷಿಕೆ, ಸಾಹಿತ್ಯ ಮತ್ತು ಸಂಗೀತ: ವಿ. ಮನೋಹರ್'ಹಿನ್ನೆಲೆ ಗಾಯನ: ರಮೇಶ್ಚಂದ್ರ, ಶ್ರೀಪ್ರಿಯ
ಛಾಯಾ ನಿರ್ದೇಶನ: ಮಂಜು
'ಛಾಯಾಗ್ರಹಣ: ಗಿರಿಧರ ರಾವ್ ಶಿಂಧೆ, ದಯಾನಂದ್, ಸುರೇಶಾಚಾರ್
'ನೇರ ಸಂಕಲನ: ಮೋಹನ್ ರಾಜ್
ಸಂಕಲನ: ಸೂರ್ಯ ವಿಷುವಲ್ಸ್'
ವಸ್ತ್ರ ವಿನ್ಯಾಸ: ನಾಗರಾಜ್'
ಪ್ರಸಾದನ/ಕೇಶಾಲಂಕಾರ: ಮಮತಾ, ಸುರೇಂದ್ರ'
ಸಹನಿರ್ದೇಶನ: ಮಂಡ್ಯ ರವಿ, ಅಶ್ವಥ್ ನಾರಾಯಣ್ ಕೆ.ಪಿ.
'ನಿರ್ದೇಶನ: ಎಸ್.ಎಲ್.ಎನ್.ಸ್ವಾಮಿ'''''''
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
veena.dsouza@k2communicataions.in