ಅನುಪಮಾ ನಿರಂಜನ
From Wikipedia
ಆನುಪಮಾ ಅವರ ಮೊದಲಿನ ಹೆಸರು ವೆಂಕಟಲಕ್ಷ್ಮಿ. ವೃತ್ತಿಯಲ್ಲಿ ವೈದ್ಯರಾಗಿದ್ದರು. ಕುಟುಂಬದವರ ವಿರೋಧವನ್ನು ಎದುರಿಸಿ, ಕನ್ನಡದ ಮತ್ತೊಬ್ಬ ಪ್ರಮುಖ ಸಾಹಿತಿ ನಿರಂಜನ ಅವರನ್ನು ಅಂತರ್ಜಾತೀಯ ವಿವಾಹವಾಗಿ ಸಮಾಜಕ್ಕೆ ಆದರ್ಶವಾಗಿದ್ದರು. ಇವರಿಗೆ, ಇಬ್ಬರು ಮಕ್ಕಳು - ತೇಜಸ್ವಿನಿ ನಿರಂಜನ ಮತ್ತು ಸೀಮಂತಿನಿ ನಿರಂಜನ. ಅನುಪಮಾ ನಿರಂಜನ ಅವರು ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದರೂ, ತಮ್ಮ ಜೀವಿತದ ಕೊನೆಯವರೆಗೆ ಸಾಹಿತ್ಯ ಸೇವೆಯನ್ನು ನಿಲ್ಲಿಸಿರಲಿಲ್ಲ.
ಪರಿವಿಡಿ |
[ಬದಲಾಯಿಸಿ] ಅನುಪಮಾ ನಿರಂಜನ ಕೃತಿಗಳು
ಅನೇಕ ,ಕತೆ,ಕಾದಂಬರಿಗಳು, ನಾಟಕ,ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ರಚಿಸಿದ್ದಾರೆ. ಅನುಪಮಾ ಅವರ ಋಣ ಕಾದಂಬರಿಯು ಋಣಮುಕ್ತಳು ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಇದನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು.
[ಬದಲಾಯಿಸಿ] ಕಾದಂಬರಿಗಳು
- ಅನಂತ ಗೀತ
- ಆಳ
- ದಿಟ್ಟೆ
- ಸಂಕೋಲೆಯೊಳಗಿಂದ
- ಶ್ವೇತಾಂಬರಿ
- ನೂಲು ನೇಯ್ದ ಚಿತ್ರ
- ಘೋಷ
- ಹಿಮದ ಹೂ
- ಸ್ನೇಹ ಪಲ್ಲವಿ
- ಹೃದಯವಲ್ಲಭ
- ಆಕಾಶಗಂಗೆ
- ಸಸ್ಯ ಶ್ಯಾಮಲಾ
- ಋಣ
- ಮೂಡಣ ಪಡುವಣ
- ಚಿತ್ತ ಮೋಹನ
- ಕಣಿವೆಗೆ ಬಂತು ಬೇಸಿಗೆ
- ಪರೀಕ್ಷೆ
- ನಟಿ
- ಮಾಧವಿ
- ಕೊಳಚೆ ಕೊಂಪೆಯ ದನಿಗಳು
- ಎಳೆ
- ಸೇವೆ
- ಮುಕ್ತಿಚಿತ್ರ
- ಮೂಲಮುಖಿ
[ಬದಲಾಯಿಸಿ] ಕಥಾ ಸಂಕಲನ
- ಕಣ್ಮಣಿ
- ರೂವಾರಿಯ ಲಕ್ಸ್ಮಿ
- ನೀರಿಗೆ ನೈದಿಲೆ ಶೃಂಗಾರ
- ಏಳುಸುತ್ತಿನ ಮಲ್ಲಿಗೆ
- ಹೃದಯ ಸಮುದ್ರ
- ಗಿರಿಧಾಮ
- ಒಡಲು
- ಪುಷ್ಪಕ
- ಒಂದು ಗಿಣಿಯ ಕಥೆ
[ಬದಲಾಯಿಸಿ] ವೈದ್ಯಕೀಯ
- ದಾಂಪತ್ಯ ದೀಪಿಕೆ
- ವಧುವಿಗೆ ಕಿವಿಮಾತು
- ಕೇಳು ಕಿಶೋರಿ
- ತಾಯಿ-ಮಗು
- ಸ್ತ್ರೀಸ್ವಾಸ್ಠ್ಯ ಸಂಹಿತೆ
- ಕೆಂಪಮ್ಮನ ಮಗು
- ಆರೋಗ್ಯಭಾಗ್ಯಕ್ಕೆ ವ್ಯಾಯಾಮ
- ಶುಭಕಾಮನೆ
- ಆಹಾರದಿಂದ ಆರೋಗ್ಯ
- ಕ್ಯಾನ್ಸರ್ ಜಗತ್ತು
- ಆರೋಗ್ಯ ದರ್ಶನ
- ಶಿಶುವೈದ್ಯ ದೀಪಿಕೆ
- ಒತ್ತಡದ ಬೇನೆಗಳು
[ಬದಲಾಯಿಸಿ] ಪ್ರವಾಸ ಕಥನ
- ಸ್ನೇಹ ಯಾತ್ರೆ
- ಅಂಗೈಯಲ್ಲಿ ಯುರೊ ಅಮೆರಿಕ
[ಬದಲಾಯಿಸಿ] ಆತ್ಮ ಕತೆ
- ನೆನಪು : ಸಿಹಿ-ಕಹಿ
- ಬರಹಗಾರ್ತಿಯ ಬದುಕು
[ಬದಲಾಯಿಸಿ] ನಾಟಕ
ಕಲ್ಲೋಲ