ಜೆ.ಆರ್.ಡಿ.ಟಾಟಾ

From Wikipedia

ಜಹಾಂಗೀರ್ ರತನ್‍ಜಿ ದಾದಾಭಾಯಿ ಟಾಟಾ (ಜುಲೈ ೨೯, ೧೯೦೪ - ನವೆಂಬರ್ ೨೯, ೧೯೯೩)


ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಭಾರತೀಯ ವಾಯುಯಾನದ ಹರಿಕಾರರು. ಟಾಟಾರವರ ಉತ್ಪಾದನೆ,ಉಕ್ಕಿನಿಂದ ಪ್ರಾರಂಭಿಸಿ,ವಿದ್ಯುತ್ ಛಕ್ತಿ,ಮೊಟಾರ್ ಕಾರ್, ಮತ್ತು ಲಾರಿಗಳು, ಸಿಮೆಂಟ್, ರಸಾಯನಿಕ ವಸ್ತುಗಳು, ವಸ್ತ್ರೋದ್ಯಮ, ಪೇಪರ್, ಮಾಹಿತಿತಂತ್ರಜ್ಞಾನ,ದಿನನಿತ್ಯದ ಬಳಕೆಯ, ಉಪ್ಪು, ಸಾಬೂನ್, ಶ್ಯಾಂಪೂ, ಟೀ, ಕಾಫೀ,ಇತ್ಯಾದಿ, ಇತ್ಯಾದಿಗಳವರೆಗೆ ಇದೆ. ಇನ್ನೂ ಬೆಳೆಯುತ್ತಲೇ ಇದೆ.


ಜೆ ಆರ್ ಡಿ ಟಾಟಾ
ಜೆ ಆರ್ ಡಿ ಟಾಟಾ


ಜೆ.ಆರ್.ಡಿ. ಟಾಟಾ ಫ್ರಾನ್ಸ್ ನಲ್ಲಿ ಜನಿಸಿದರು. ಅವರ ತಂದೆ, ರತನ್ಜೀ ದಾದಾಭಾಯಿ ಟಾಟಾ ಭಾರತೀಯರು ಮತ್ತು ತಾಯಿ, ಸುಸಾನ್, ಫ್ರೆಂಚ್ ಹುಡುಗಿ. ಆರ್.ಡಿ ಯವರು ಆಕೆಯನ್ನು ’ಸೂನಿ,’ಎಂದು ಕರೆಯುತ್ತಿದ್ದರು. ಆರ್.ಡಿ ಯವರ ಮಕ್ಕಳು ಕ್ರಮವಾಗಿ,ಸಿಲ್ಲಾ, ಜಹಾಂಗೀರ್,ರೋಢಬೆ,ದರಾಬ್, ಮತ್ತು ಜಿಮ್ಮಿ. ಜಿಮ್ಮಿಯೊಬ್ಬನೇ ಬೊಂಬಾಯಿಯಲ್ಲಿ ಜನಿಸಿದ್ದು. ಉಳಿದವರೆಲ್ಲಾ ಪ್ರಾನ್ಸ್ ನಲ್ಲಿ ಹುಟ್ಟಿದರು. ಜೆಹಾಂಗೀರ್ ಎಂದರೆ, "ವಿಶ್ವವಿಜೇತ," ಎಂದರ್ಥ ! ಸ್ನೇಹಿತರೆಲ್ಲಾ ಮುಂದೆ ಅವರನ್ನು, ’ ಜೆ” ಎಂದೇ ಸಂಬೋಧಿಸುತ್ತಿದ್ದರು. ಭಾರತದ ಭಾರಿಉದ್ಯಮಗಳ ರುವಾರಿ ಜಮ್ ಸೆಟ್ ಜಿ ಟಾಟಾ, ರವರಿಗೆ ಇಬ್ಬರು ಮಕ್ಕಳು. ದೊರಾಬ್ ಟಾಟಾ, ಮತ್ತು ಎರಡನೆಯವರು, ರತನ್ ಟಾಟಾ. ಅವರು,ದೊರಾಬ್ ರವರನ್ನು ಮತ್ತು ಆರ್.ಡಿರವರನ್ನು ತಮ್ಮ ಕಂಪನಿ, "ಟಾಟಾ ಅಂಡ್ ಸನ್ಸ್" ಗೆ ಡೈರಕ್ಟರ್ ಆಗಿ ನೇಮಿಸಿಕೊಂಡಿದ್ದರು. ದೊರಾಬ್ ಟಾಟಾ, ಮತ್ತು ರತನ್ ಟಾಟಾ ತಮ್ಮ ಮಕ್ಕಳಾದರೂ, ಜೆ.ಎನ್.ಟಾಟಾರವರು ಆರ್.ಡಿಯವರಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು. ಏಕೆಂದರೆ ಆರ್.ಡಿ ತುಂಬಾ ವ್ಯವಹಾರಜ್ಞಾನ, ಹೊಂದಿದವರಾಗಿದ್ದರು. ಮೇಲಾಗಿ ಮೇಧಾವಿ, ಮತ್ತು ಉದ್ಯಮವನ್ನು ಪ್ರಗತಿಯತ್ತ ಒಯ್ಯುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡು ಪ್ರಗತಿಸಾಧಿಸುತ್ತಿದ್ದರು.


ಫ್ರಾನ್ಸ್ ನ ವಾಯುಯಾನದ ಹರಿಕಾರ ಲೂಯಿಸ್ ಬ್ಲೇರಿಯಟ್ ರಿಂದ ಸ್ಫೂರ್ತಿ ಪಡೆದ ಟಾಟಾ, ೧೯೨೯ ರಲ್ಲಿ ಭಾರತದ ಪ್ರಪ್ರಥಮ ಪೈಲಟ್ ಲೈಸೆನ್ಸ್ ಅನ್ನು ಪಡೆದರು. ನಂತರ ಭಾರತೀಯ ವಾಯುಯಾನದ ಪಿತಾಮಹ ಎನಿಸಿಕೊಂಡಿದ್ದಾರೆ. ೧೯೩೨ ರಲ್ಲಿ ಟಾಟಾ ಏರ್‍ಲೈನ್ಸ್ ಎಂಬ ಹೆಸರಿನಲ್ಲಿ ಭಾರತದ ಮೊದಲ ವಾಯುಸಂಚಾರ ಸಂಸ್ಥೆಯನ್ನೂ ತೆರೆದರು. ಇದೇ ಸಂಸ್ಥೆ ಮುಂದೆ ೧೯೪೬ ರಲ್ಲಿ ಏರ್ ಇಂಡಿಯಾ ಎಂಬ ಹೆಸರು ಪಡೆಯಿತು.

ಮುಂದೆ ಕೆಲ ದಶಕಗಳ ಕಾಲ ಟಾಟಾ ಗುಂಪಿನ ಸಂಸ್ಥೆಗಳನ್ನು ನಡೆಸಿದರು. ಇವರ ಸಂಸ್ಥೆಗಳು ಅನೇಕ ಕ್ಷೇತ್ರಗಳಲ್ಲಿ ಹರಡಿ ಮುಖ್ಯವಾಗಿ ಉಕ್ಕು, ಎಂಜಿನಿಯರಿಂಗ್ ಮತ್ತು ವಿದ್ಯುತ್ ಯಂತ್ರಗಳ ಕೈಗಾರಿಕೆಗಳು. ಮಾರುಕಟ್ಟೆಯಲ್ಲಿ ನೈತಿಕ ಮಾರ್ಗವನ್ನು ಅನುಸರಿಸಿಯೂ ಯಶಸ್ವಿಯಾದ ಉದ್ಯಮಿಯೆಂದು ಟಾಟಾ ಜನಪ್ರಿಯರಾಗಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಕ್ಷೇತ್ರಗಳಲ್ಲಿ ಅವರ ಕಾಣಿಕೆಗಳಿಗಾಗಿ ೧೯೯೨ ರಲ್ಲಿ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅವರು ನಿಧನರಾದಾಗ (೧೯೯೩), ಭಾರತೀಯ ಸಂಸತ್ತು ಶೋಕಾಚರಣೆಯ ಪ್ರಯುಕ್ತ ಮೂರು ದಿನಗಳ ಕಾಲ ಮುಚ್ಚಲ್ಪಟ್ಟಿತ್ತು.