ನೀಲಂ ಸಂಜೀವರೆಡ್ಡಿ

From Wikipedia

ಭಾರತದ ಆರನೇ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ೧೯೧೩ ಮೇ ೧೯ ರಂದು ಜನಿಸಿದರು.೧೯೨೯ರಲ್ಲಿ ಮಹಾತ್ಮ ಗಾಂಧಿಯವರು ಅನಂತಪುರಂಗೆ ಭೇಟಿ ನೀಡಿದಾಗ ಸಂಜೀವರೆಡ್ಡಿಯವರು ಅವರ ವಿಚಾರಧಾರೆಯಿಂದ ಬಹುವಾಗಿ ಪ್ರಭಾವಿತರಾದರು.ವಿದೇಶಿ ವಸ್ತ್ರಗಳನ್ನು ತ್ಯಜಿಸಿ,ಖಾದಿ ಧರಿಸಲಾರಂಭಿಸಿದರು.ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು.

[ಬದಲಾಯಿಸಿ] ರಾಜಕೀಯದ ಹಾದಿ

೧೯೪೬ರಲ್ಲಿ ಮದ್ರಾಸ್ ವಿಧಾನಸಭೆಗೆ ಆಯ್ಕೆಯಾದರು.ಅನಂತರ ಕಾಂಗ್ರೆಸ್‌ಪಕ್ಷದ ರಾಜ್ಯಾಧ್ಯಕ್ಷರಾಗಿ ೧೯೫೨ರಲ್ಲಿ ರಾಜ್ಯಸಭೆ ಸದಸ್ಯರಾದರು.೧೯೫೬ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದರು.೧೯೬೭ರಲ್ಲಿ ಲೋಕಸಭೆಯ ಸಭಾಪತಿಯಾದರು.೧೯೭೫ರಲ್ಲಿ ಅಂದಿನ ಜನತಾಪಕ್ಷದ ನಾಯಕ ಜಯಪ್ರಕಾಶ್ ನಾರಾಯಣ್ ಜೊತೆ ಸೇರಿ,ನಂದ್ಯಾಲ್ ಕ್ಷೇತ್ರದಿಂದ ಸ್ಪರ್ಧಿಸಿ,ಲೋಕಸಭೆಗೆ ಆಯ್ಕೆಯಾದರು.೧೯೭೭ರ ಜುಲೈನಿಂದ ೧೯೮೨ರವರೆಗೆ ೫ ವರ್ಷಗಳ ಕಾಲ ಭಾರತದ ರಾಷ್ಟ್ರಪತಿಗಳಾಗಿದ್ದರು.೧೯೯೬ಜೂನ್ ೧ ರಂದು ಬೆಂಗಳೂರಿನಲ್ಲಿ ನಿಧನರಾದರು.