ಸವಾಯಿ ಗಂಧರ್ವ

From Wikipedia

ಸವಾಯಿ ಗಂಧರ್ವ
ಸವಾಯಿ ಗಂಧರ್ವ

೨೦ನೆಯ ಶತಮಾನದಲ್ಲಿ ಅವಿಭಜಿತ ಧಾರವಾಡ ಜಿಲ್ಲೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ರತ್ನಪ್ರಾಯ ಸಂಗೀತಗಾರರಿಗೆ ಜನ್ಮ ನೀಡಿದ ಜಿಲ್ಲೆಯಾಗಿದೆ. ಇವರಲ್ಲಿ ಆರು ಸಂಗೀತಗಾರರಂತೂ ಅಖಿಲ ಭಾರತದಲ್ಲಿ ಸುಪ್ರಸಿದ್ಧರಾದವರು:


ಸವಾಯಿ ಗಂಧರ್ವರೆಂದು ಪ್ರಸಿದ್ಧರಾದ ರಾಮಭಾವು ಕುಂದಗೋಳಕರ ಇವರು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ೧೮೮೬ ರಲ್ಲಿ ಜನಿಸಿದರು. ಇವರ ತಂದೆ ಕುಂದಗೋಳದ ಜಮೀನದಾರರಾದ ನಾಡಗೀರರವರ ಜೋಯಿಸರಾಗಿದ್ದರು.

ಇವರ ಗುರು ಕಿರಾಣಾ ಘರಾಣೆಯ ಆದ್ಯ ಪ್ರವರ್ತಕರಾದ ಉಸ್ತಾದ ಅಬ್ದುಲ್ ಕರೀಮ್ ಖಾನ್. [1] . ಖಾನಸಾಹೇಬರು ಕುಂದಗೋಳಕ್ಕೆ, ತಮ್ಮ ಶಿಷ್ಯರಾದ ನಾನಾಸಾಹೇಬ ನಾಡಗೇರರಲ್ಲಿ ಆಗಾಗ್ಗೆ ಬರುತ್ತಿದ್ದರು. ಅಲ್ಲಿಯೆ ಅವರಿಗೆ ರಾಮಭಾವುರವರ ಪರಿಚಯವಾಗಿ ಅವರಿಗೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ದೀಕ್ಷೆ ಕೊಟ್ಟರು.

ಸಂಗೀತ ಶಿಕ್ಷಣದ ನಂತರ ರಾಮಭಾವು ಹೊಟ್ಟೆಪಾಡಿಗಾಗಿ ಮರಾಠಿ ನಾಟಕ ಕಂಪನಿ ಸೇರಿಕೊಂಡರು. ಆ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಸಂಗೀತ ಹಾಗು ನಾಟಕರಂಗದಲ್ಲಿ ಪ್ರಸಿದ್ಧರಾದ ಬಾಲಗಂಧರ್ವರಿಗಿಂತಲೂ ಸಂಗೀತ ಹಾಗು ಅಭಿನಯದಲ್ಲಿ ಇವರು ಒಂದೂಕಾಲು ಮಡಿ ಹೆಚ್ಚು ಎನ್ನುವ ಅರ್ಥದಲ್ಲಿ ರಾಮಭಾವು ಕುಂದಗೋಳಕರ ಅವರನ್ನು ಸವಾಯಿ ಗಂಧರ್ವ ಎಂದು ಕರೆಯಲಾಯಿತು.

ಆ ಕಾಲದಲ್ಲಿಯ ಗುರುಕುಲ ಪದ್ಧತಿಯಂತೆ ಸವಾಯಿ ಗಂಧರ್ವರು ತಮ್ಮ ಶಿಷ್ಯರಿಗೆ ಅತ್ಯಂತ ಕಠಿಣ ರೀತಿಯಲ್ಲಿ ತರಬೇತು ಕೊಟ್ಟರು. ನೀಲಕಂಠಬುವಾ ಗಾಡಗೋಳಿ, ವೆಂಕಟರಾವ ರಾಮದುರ್ಗ, ಫಿರೋಜ ದಸ್ತೂರ, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಇವರೆಲ್ಲ ಸವಾಯಿ ಗಂಧರ್ವರ ಗರಡಿಯಲ್ಲಿ ತಯಾರಾದವರು.

೧೯೪೨ರಲ್ಲಿ ಸವಾಯಿ ಗಂಧರ್ವರಿಗೆ ಪಾರ್ಶ್ವವಾಯುವಿನಿಂದ ತೊಂದರೆಯಾಯಿತು. ೧೯೪೬ರಿಂದ ೧೯೪೯ರವರೆಗೆ ಅವರು ತಮ್ಮ ಶಿಷ್ಯೆಯಾದ ಗಂಗೂಬಾಯಿ ಹಾನಗಲ್ ಇವರ ಮನೆಯಲ್ಲಿಯೆ ಉಳಿದುಕೊಂಡು ಚಿಕಿತ್ಸೆ ಪಡೆದರು.

ಸವಾಯಿ ಗಂಧರ್ವರು ೧೯೫೨ ಸಪ್ಟಂಬರ ೧೨ರಂದು ನಿಧನರಾದರು. ನಿಧನಾನಂತರ ಸವಾಯಿ ಗಂಧರ್ವರ ಪುಣ್ಯ ತಿಥಿಯನ್ನು ಅವರ ಶಿಷ್ಯರಾದ ನಾನಾಸಾಹೇಬ ನಾಡಗೇರರವರು ಕುಂದಗೋಳದಲ್ಲಿ ಹಾಗು ಭೀಮಸೇನ ಜೋಶಿಯವರು ಪುಣೆಯಲ್ಲಿ ಸಂಗೀತ ಸಮಾರಾಧನೆಯ ಮೂಲಕ ಆಚರಿಸತೊಡಗಿದರು.





ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.