ತಾಳ್ಯದ ಆಂಜನೇಯಸ್ವಾಮಿ
From Wikipedia
ಪರಿವಿಡಿ |
[ಬದಲಾಯಿಸಿ] ತಾಳ್ಯದಲ್ಲಿ ಸೌಕರ್ಯಗಳು ತೀರ ಕಡಿಮೆ :
ತಾಳ್ಯ, ಚಿತ್ರದುರ್ಗ ಜಿಲ್ಲೆಯ ಇತರ ಹಳ್ಳಿಗಳಂತೆ, ಕುಡಿಯುವ ನೀರಿನವ್ಯವಸ್ಥೆಯೂ ಇಲ್ಲದ ಒಂದು ಅತ್ಯಂತ ಚಿಕ್ಕಹಳ್ಳಿ. ಇದು ಹನುಮಪ್ಪ ಅಥವಾ ಆಂಜನೇಯಸ್ವಾಮಿಯ ದೇವಸ್ಥಾನದಿಂದ ಜಿಲ್ಲೆಯಲ್ಲಿ ಪ್ರಸಿದ್ಧಿಯಾಗಿದೆ. ಈ ಹನುಮಪ್ಪನ ದೇವಸ್ಥಾನ ಚಿತ್ರದುರ್ಗದಿಂದ ಹೊಳಲ್ಕೆರೆಗೆ ಹೋಗುವ ಬಸ್ ಮಾರ್ಗದಲ್ಲಿದೆ. ಇದು ಶಿವಗಂಗೆ ಹಳ್ಳಿಯ ಹತ್ತಿರ ಇದೆ. ತಾಳ್ಯದ ಹನುಮಪ್ಪನ ತೇರು ಅತ್ಯಂತ ಪ್ರಸಿದ್ಧಿ.
ತಾಳ್ಯದ ತೇರು ಸಾಮಾನ್ಯವಾಗಿ ಎಪ್ರಿಲ್ ತಿಂಗಳಿನಲ್ಲಿ ಅಂದರೆ, ಬೆಂಗಳೂರಿನಲ್ಲಿ ಕರಗವಾಗುವ ಸಮಯದಲ್ಲಿ ನಡೆಯುತ್ತದೆ.
[ಬದಲಾಯಿಸಿ] ಹನುಮಪ್ಪನ ತೇರಿನ ವಿವರಗಳು :
ಮೊದಲನೆಯದಿನ ದಾಸಯ್ಯನು, ಸೀಗೆಮರದ ಮುಳ್ಳಿನಮೇಲೆ ನಡೆಯುವ ಪರಿಪಾಠವಿದೆ. ಆದಿನ ಅವನು ಬೆಳಿಗ್ಯೆ ನಸುಕಿನಲ್ಲಿಯೇ ಎದ್ದು ಸ್ನಾನಾದಿವಿಧಿಗಳನ್ನು ಮುಗಿಸಿ, ಪೂರ್ತಿದಿನ ಉಪವಾಸದಿಂದಲೂ, ನೇಮದಿಂದಲೂ ಶುಚಿಯಿಂದಲೂ ಹನುಮಪ್ಪನನ್ನು ಆರಾಧಿಸಬೇಕು. ತೇಜಿಕುಣಿತವೆಂಬ ಕುದುರೆ ಕುಣಿತವನ್ನು, ಆದಿನ ನೋಡಬಹುದು. ಆದಿನವೇ ಬ್ರಹ್ಮರಥೋತ್ಸವವನ್ನು ಅಲ್ಲಿನ ಬ್ರಾಹ್ಮಣ ಸಮಾಜದವರು ನಡೆಸಿಕೊಡುತ್ತಾರೆ.
[ಬದಲಾಯಿಸಿ] ಮಾರನೆಯದಿನ ಆ ಊರಿನ ಸಾರ್ವಜನಿಕ ರಥೋತ್ಸವ ಜರುಗುತ್ತದೆ. ಊರಿನ ಮುಖ್ಯಸ್ಥರ ಮನೆಯಲ್ಲಿ ಊಟ.
೩ ನೆಯ ದಿನ,ಸಾಮೂಹಿಕ ಉಪನಯನದ ಕಾರ್ಯಕ್ರಮ ನಡೆಯುತ್ತದೆ. ಆಂಜನೇಯ, ತಿಮ್ಮಪ್ಪ ಮುಂತಾದ ಉತ್ಸವಮೂರ್ತಿಗಳು ತಾಳ್ಯದ ಶ್ಯಾನುಭೋಗರ ಮನೆಯಲ್ಲಿ ಬೀಡುಬಿಡುತ್ತವೆ. ಪಾನಕ, ಕೋಸಂಬರಿಸೇವೆ ನಡೆಯುತ್ತದೆ. ರಾತ್ರಿಹೊತ್ತಿಗೆ ಪುನಃ ದೇವರುಗಳು ದೇವಸ್ಥಾನಕ್ಕೆ ವಾಪಸ್ ಹೋಗುತ್ತವೆ. ಅಭಿಷೇಕ, ಮತ್ತು ಹಲವಾರು ಸೇವೆಗಳು ದಿನವಿಡೀ ನಡೆಯುತ್ತವೆ. ತಾಳ್ಯದ ಹಳೆಯ ನಿವಾಸಿ, ಹೋಟೆಲ್ ಲಕ್ಷ್ಮಣರಾಯರ ಮನೆಯವರ ಸೇವೆ, ಮತ್ತು ಶ್ರೀ ಸೀತಾರಾಮರಾಯರ ಮನೆಯವರಿಂದ ಸಮಾರಾಧನೆ ಆ ದಿನದ ವಿಶೇಷಗಳು.ತಾಳ್ಯದಲ್ಲಿ ಪ್ರಾಥಮಿಕ,ಮತ್ತು ಪ್ರೌಢವಿದ್ಯಾಭ್ಯಾಸವನ್ನು ಜಾರಿಗೆ ತರುವಲ್ಲಿ ಈ ಕುಟುಂಬಗಳು ಅಪರಿಮಿತವಾಗಿ ಶ್ರಮಿಸಿವೆ.
[ಬದಲಾಯಿಸಿ] ಗ್ರಾಮದೇವತೆ, ಬಂಡೆಮ್ಮನವರ ಜಾತ್ರೆ :
ತಾಳ್ಯದ ಹನುಮಪ್ಪನ ತೇರಾದ ೧೫ ದಿನಗಳ ತರುವಾಯ, ಗ್ರಾಮದೇವತೆ,ಬಂಡೆಮ್ಮನವರ ಜಾತ್ರೆ ನಡೆಯುತ್ತದೆ. ಹೀಗೆ ಕುಡಿಯುವನೀರಿಗೆ ಅಭಾವವಾದಾಗ್ಯೂ ಭಕ್ತಾದಿಗಳ ಸಹಾಯದಿಂದ ಹನುಮಪ್ಪನ ತೇರು, ಮತ್ತು ಬಂಡೆಮ್ಮನ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ. ಲಾರಿಗಳಲ್ಲಿ ಕುಡಿಯುವನೀರಿನವ್ಯವಸ್ಥೆಯನ್ನು ಮಾಡಲಾಗುತ್ತದೆ. ಅಕ್ಕಪಕ್ಕದ ಗ್ರಾಮಸ್ಥರು, ಮತ್ತು ಊರಿನ ಹೊರಗಡೆಯಿಂದಲೂ ಭಕ್ತರ ಗುಂಪು ಇಲ್ಲಿಗೆ ಧಾವಿಸಿಬಂದು ಹನುಮಪ್ಪನ ಕೃಪೆಗೆ ಪಾತ್ರರಾಗುವುದನ್ನು ನಾವು ಗಮನಿಸಬಹುದು.