ಶ್ಯಾಮ್ ಬೆನಗಲ್

From Wikipedia

ಭಾರತೀಯ ಚಲನಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ ಶ್ಯಾಮ್ ಬೆನಗಲ್‌ ೨೦೦೭ರ ಪ್ರತಿಷ್ಠಿತ ’ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.ಬೆನಗಲ್ ಕುಟುಂಬ ಮೂಲತಃ ಕರ್ನಾಟಕದ ಕರಾವಳಿಯ ಪ್ರಸಿದ್ಧ ಬೆನಗಲ್‌ನಲ್ಲಿ ನೆಲೆಸಿದ್ದರು.ಅಲ್ಲಿಂದ ವಲಸೆ ಹೋಗಿದ್ದ ಸಿಕಂದರಾಬಾದಿನ ಅಲವಾಲಾದಲ್ಲಿ, ಶ್ಯಾಮ್ ಬೆನಗಲ್ ಡಿಸೆಂಬರ್ ೧೪,೧೯೩೪ ರಂದು ಜನಿಸಿದರು.

ಪರಿವಿಡಿ

[ಬದಲಾಯಿಸಿ] ವಿದ್ಯಾಭ್ಯಾಸ

ಶ್ಯಾಮ್ ಬೆನಗಲ್ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು.ನಂತರ ಪುಣೆಯ ಎಫ್‌ಟಿಟಿಐನಲ್ಲಿ ಡಿಪ್ಲೊಮಾ ಪಡೆದರು.ತಮ್ಮ ೧೨ನೆಯ ವಯಸ್ಸಿನಿಂದಲೇ ತಂದೆಯ ಕ್ಯಾಮರಾ ಹಿಡಿದು ನಿರ್ದೇಶಕನಾಗುವ ಕನಸು ಕಂಡರು.

[ಬದಲಾಯಿಸಿ] ವೃತ್ತಿ ಜೀವನ

೧೯೬೦ರಿಂದ ೧೯೬೬ರವರೆಗೆ ಮುಂಬಯಿಯ ಲಿಂಟಾಸ್ ಏಜೆನ್ಸಿಯಲ್ಲಿ ಜಾಹೀರಾತು ಕಾಪಿರೈಟರ್ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದರು.ಬಾಬಾ ಸಾಹೇಬ್ ಫೆಲೋಶಿಪ್ ಪಡೆದು,ಅಮೆರಿಕದಲ್ಲಿ ಕೆಲಸ ಮಾಡಿದರು.ಚಲನಚಿತ್ರ ನಿರ್ದೇಶನಕ್ಕೆ ಇಳಿಯುವ ಮುನ್ನ ಸಾಕ್ಷ್ಯಚಿತ್ರಗಳನ್ನು ತೆಗೆದು,ಪಳಗಿದ್ದರು.ಸುಮಾರು ೧೫೦೦ ಜಾಹೀರಾತು ಹಾಗೂ ೪೫ ಸಾಕ್ಷ್ಯಚಿತ್ರಗಳನ್ನು ತೆಗೆದಿದ್ದಾರೆ.

[ಬದಲಾಯಿಸಿ] ಚಿತ್ರ ನಿರ್ದೇಶಕನಾಗಿ

ಕಲಾತ್ಮಕ ಹಾಗೂ ಕಮರ್ಷಿಯಲ್ ಎರಡರ ಸಮ್ಮಿಶ್ರಣದಲ್ಲಿ ಇವರ ಚಿತ್ರಗಳು ರೂಪುಗೊಂಡಿವೆ.ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನದೊಂದಿಗೆ,ಬದಲಾವಣೆಯ ತುಡಿತವೂ ಇವರ ಚಿತ್ರಗಳಲ್ಲಿ ಎದ್ದು ಕಾಣುತ್ತವೆ.ಸುಮಾರು ೨೧ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.ಇವರ ಕೆಲವು ಪ್ರಸಿದ್ಧ ಹಿಂದಿ ಚಿತ್ರಗಳು : ಅಂಕುರ್ ,ಕಲಿಯುಗ್ ,ಮಂಥನ್ .೧೯೮೬ರಲ್ಲಿ ಭಾರತೀಯ ರೈಲ್ವೆಗೆ ಯಾತ್ರಾ ಎಂಬ ಧಾರಾವಾಹಿ ನಿರ್ದೇಶಿಸಿದರು.೧೯೮೮ರಲ್ಲಿ ಜವಾಹರಲಾಲ್ ನೆಹರು ಅವರ "ಡಿಸ್ಕವರಿ ಆಫ್ ಇಂಡಿಯಾ" ಆಧರಿಸಿದ "ಭಾರತ್ ಏಕ್ ಖೋಜ್" ಎಂಬ ಧಾರಾವಾಹಿಯನ್ನು ನಿರ್ದೇಶಿಸಿದರು.

[ಬದಲಾಯಿಸಿ] ಪ್ರಶಸ್ತಿಗಳು

  • ೧೯೭೬ - ಪದ್ಮಶ್ರೀ ಪ್ರಶಸ್ತಿ.
  • ೧೯೭೮ - ಜುನೂನ್ ಚಿತ್ರಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ.
  • ೧೯೮೦ - ಕಲಿಯುಗ್ ಚಿತ್ರಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ.
  • ೧೯೯೧ - ಪದ್ಮಭೂಷಣ ಪ್ರಶಸ್ತಿ.
  • ೨೦೦೪ - ಇಂದಿರಾ ಗಾಂಧಿ ಪ್ರಶಸ್ತಿ.
  • ೨೦೦೭ - ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ.