ಬಿ.ವೆಂಕಟಾಚಾರ್ಯ
From Wikipedia
ಬಿ.ವೆಂಕಟಾಚಾರ್ಯರು ೧೮೪೫ರಲ್ಲಿ ಕೊಳ್ಳೆಗಾಲದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಗರುಡಾಚಾರ್ಯರು. ವೆಂಕಟಾಚಾರ್ಯರು ತುಮಕೂರಿನ ಇಂಗ್ಲಿಷ್ ಶಾಲೆಯಲ್ಲಿ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳನ್ನು ಪೂರೈಸಿದ ಮೇಲೆ , ಗುಮಾಸ್ತರಾಗಿ ಸರಕಾರಿ ಸೇವೆ ಪ್ರಾರಂಭಿಸಿದರು. ತ್ವರಿತವಾಗಿ ಬಡ್ತಿ ಪಡೆಯುತ್ತ ಮುನ್ಸೀಫರಾಗಿ ನಿವೃತ್ತರಾದರು.
ವೆಂಕಟಾಚಾರ್ಯರು ಸ್ವಪ್ರಯತ್ನದಿಂದ ಬಂಗಾಲಿ ಕಲಿತು ಬಂಗಾಲಿ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದರು. ಈಶ್ವರಚಂದ್ರ ವಿದ್ಯಾಸಾಗರರು “ಭ್ರಾಂತಿವಿಲಾಸ”ವೆಂದು ಅನುವಾದಿಸಿದ ಶೇಕ್ಸ್ಪಿಯರನ “ಕಾಮೆಡಿ ಆಫ್ ಎರರ್ಸ್” ಇವರ ಮೊದಲ ಅನುವಾದ. ಇದು ಮದ್ರಾಸ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕವಾಯಿತು. ಆಬಳಿಕ ಈಶ್ವರಚಂದ್ರ ವಿದ್ಯಾಸಾಗರರ ಹಾಗು ಬಂಕಿಮಚಂದ್ರರ ಬಂಗಾಲಿ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದರು.
ಬಿ.ವೆಂಕಟಾಚಾರ್ಯರು ೧೯೧೪ ಜೂನ್ ೨೬ರಂದು ನಿಧನರಾದರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ೧೮೭೬
- ಭ್ರಾಂತಿವಿಲಾಸ
[ಬದಲಾಯಿಸಿ] ೧೮೮೨
- ಚಂದ್ರಶೇಖರ
- ರಜನಿ
- ಕೃಷ್ಣಕಾಂತನ ಉಯಿಲು
- ಆನಂದಮಠ
[ಬದಲಾಯಿಸಿ] ೧೮೮೪
- ರಾಜಸಿಂಹ
- ದೇವಿ ಚೌಧರಾಣಿ
- ಭಾರತ ಮಹಿಳೆ
- ಆರ್ಯಶಾಸ್ತ್ರ ಪ್ರದೀಪ
[ಬದಲಾಯಿಸಿ] ೧೮೮೫
- ಶಾಕುಂತಲ
- ಸೀತಾವನವಾಸ
- ದುರ್ಗೇಶನಂದಿನಿ
[ಬದಲಾಯಿಸಿ] ೧೮೮೭
- ಸೀತಾರಾಂ
[ಬದಲಾಯಿಸಿ] ೧೯೦೦
- ಕಪಾಲ ಕುಂಡಲ
- ಮೃಣಾಲಿನಿ
- ವಿಷವೃಕ್ಷ