ಜಿ.ಎಸ್.ಆಮೂರ

From Wikipedia

ಜಿ.ಎಸ್. ಆಮೂರ -ಧಾರವಾಡದಲ್ಲಿ ನೆಲೆಸಿರುವ ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಇವರ "ಭುವನದ ಭಾಗ್ಯ" ಎಂಬ ಕೃತಿಗೆ ೧೯೯೬ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

ಶ್ರೀ ಗುರುರಾಜ ಶ್ಯಾಮಾಚಾರ ಆಮೂರರವರು ೧೯೨೫ಮೇ ೮ರಂದು ತಮ್ಮ ತಾಯಿಯ ತವರುಮನೆಯಾದ, ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಶಿರಹಟ್ಟಿ ತಾಲೂಕಿನ ಸೂರಣಗಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಇವರು ಸೂರಣಗಿ ಹಾಗು ಹಾವೇರಿಯಲ್ಲಿ ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಸಿ, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಏ(ಗೌರವ) ಪದವಿ ಪಡೆದರು. ಆ ಬಳಿಕ ಕುಮಟಾಹಾಗು ಗದಗ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ೧೬ ವರ್ಷ ಸೇವೆ ಸಲ್ಲಿಸಿದರು.

ಅಧ್ಯಾಪಕರಾಗಿದ್ದಾಗಲೆ‘ ಕಾಮಿಡಿಯ ಪರಿಕಲ್ಪನೆ’ ಮಹಾಪ್ರಬಂಧ ಬರೆದು ಪಿ.ಎಚ್.ಡಿ. ಪಡೆದರು. ಆಮೂರರವರು ಕನ್ನಡದ ಖ್ಯಾತ ಸಾಹಿತ್ಯವಿಮರ್ಶಕರಲ್ಲೊಬ್ಬರು.

[ಬದಲಾಯಿಸಿ] ಸಾಹಿತ್ಯ ಕೃತಿಗಳು

  • ಕೊರಳು-ಕೊಳಲು
  • ಮಹಾಕವಿ ಮಿಲ್ಟನ್
  • ಕೃತಿಪರೀಕ್ಷೆ
  • ಅ.ನ.ಕೃಷ್ಣರಾಯ
  • ಭುವನದ ಭಾಗ್ಯ
  • ವ್ಯವಸಾಯ
  • ಅರ್ಥಲೋಕ
  • ಕನ್ನಡ ಕಥನ ಸಾಹಿತ್ಯ
  • ಕಾದಂಬರಿ
  • ಸಾತ್ವಿಕ ಪಥ
  • ಕಾದಂಬರಿ ಸ್ವರೂಪ
  • ದ.ರಾ.ಬೇಂದ್ರೆ
  • ಅಮೃತವಾಹಿನಿ
  • ಶಾಂತಿನಾಥ ದೇಸಾಯಿ
  • ಬೇಂದ್ರೆ ಕಾವ್ಯದ ಪ್ರತಿಮಾಲೋಕ
  • ಕಥನ ಶಾಸ್ತ್ರ
  • ಸೀಮೊಲ್ಲಂಘನ
  • ಕನ್ನಡ ಕಥನಸಾಹಿತ್ಯ
  • ಸಣ್ಣಕತೆ
  • ಆಧುನಿಕ ಕನ್ನಡ ಸಾಹಿತ್ಯದ ವಿರಾಟಪುರುಷ
  • Adya Rangachar
  • A Critical spectrum
  • Images and Impressions
  • A.N.Krishnarao
  • The Concept of Comedy
  • Poetics of T.S.Eliot
  • Essays on modern Kannada literature

[ಬದಲಾಯಿಸಿ] ಪ್ರಶಸ್ತಿಗಳು

  • ಭುವನದ ಭಾಗ್ಯ’ ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೬)
  • ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೯)
  • ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಮುಂತಾದ ಎಂಟು ಪುರಸ್ಕಾರಗಳು
  • ಪಂಪ ಪ್ರಶಸ್ತಿ