ವೈ.ಆರ್.ಸ್ವಾಮಿ
From Wikipedia
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಲ್ಲಿ ಒಬ್ಬರು ವೈ.ಆರ್.ಸ್ವಾಮಿ.
ಪರಿವಿಡಿ |
[ಬದಲಾಯಿಸಿ] ಜನನ,ಬಾಲ್ಯ
ಹುಟ್ಟಿದ್ದು ಕರ್ನಾಟಕದ ಚಿತ್ರದುರ್ಗದಲ್ಲಾದರೂ ಬೆಳೆದದ್ದು ನೆರೆಯ ಆಂಧ್ರಪ್ರದೇಶದ ಹೈದರಾಬಾದ್ನಲ್ಲಿ.ಮೊದಲ ತೆಲುಗು ವಾಕ್ಚಿತ್ರದ ನಿರ್ದೇಶಕ ಹೆಚ್.ಎಂ.ರೆಡ್ಡಿ ಇವರ ಸಾಕುತಂದೆ.
[ಬದಲಾಯಿಸಿ] ಬೆಳ್ಳಿತೆರೆಯ ನಂಟು
ಹೆಚ್.ಎಂ.ರೆಡ್ಡಿಯವರ ನಿರ್ದೇಶನದ ತೆಲುಗು ಚಿತ್ರ 'ಭಕ್ತ ಪ್ರಹ್ಲಾದ'ದಲ್ಲಿ ಪ್ರಹ್ಲಾದನ ಪಾತ್ರ ನಿರ್ವಹಿಸುವ ಮೂಲಕ ಸ್ವಾಮಿ ಬೆಳ್ಳಿತೆರೆಗೆ ಬಂದರು.ತಂದೆಯ ಸಹಾಯಕರಾಗಿ ದುಡಿದು,ಚಿತ್ರರಂಗದ ಅಪಾರ ಅನುಭವ ಗಳಿಸಿಕೊಂಡರು.ಸ್ನಾತಕೋತ್ತರ ಪದವಿ ಪಡೆದು,ಸರಕಾರದ ಉನ್ನತ ಹುದ್ದೆಯಲ್ಲಿದ್ದರು.ಆದರೆ ಚಿತ್ರರಂಗದ ಸೆಳೆತ,ಅವರನ್ನು ಆ ಹುದ್ದೆ ತ್ಯಜಿಸುವಂತೆ ಮಾಡಿತು.ಮೊದಮೊದಲು ತೆಲುಗು,ತಮಿಳು ಚಿತ್ರಗಳನ್ನು ನಿರ್ದೇಶಿಸುತ್ತಿದ್ದರು.ನಂತರ ತಮ್ಮ ಸ್ವಂತ ಲಾಂಛನ ರೋಹಿಣಿ ಫಿಲಂಸ್ ಮೂಲಕ ಕನ್ನಡ ಚಲನಚಿತ್ರ ರೇಣುಕಾ ಮಹಾತ್ಮೆ ನಿರ್ಮಿಸಿ,ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.ಸ್ವಾಮಿಯವರು ಒಟ್ಟಾರೆ ೩೮ ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.ಅವರ ಪ್ರತಿಯೊಂದು ಚಿತ್ರವೂ ವಿಶಿಷ್ಟವಾಗಿದೆ,ವಿಭಿನ್ನವಾಗಿದೆ.
[ಬದಲಾಯಿಸಿ] ಇವರ ನಿರ್ದೇಶನದ ಕೆಲವು ಕನ್ನಡ ಚಲನಚಿತ್ರಗಳು - ವಿಶೇಷತೆ
- ಭಕ್ತ ಕನಕದಾಸ - ಟ್ರಿಕ್ ಶಾಟ್ಗಳು ಹಾಗೂ ಸಂಗೀತ.
- ಸ್ವರ್ಣ ಗೌರಿ
- ಜೇನುಗೂಡು
- ದೇವರ ಮಕ್ಕಳು - ಮ.ನ.ಮೂರ್ತಿಯವರ ಮೀನಾ ಎಂಬ ಕಾದಂಬರಿ ಆಧಾರಿತ.
- ಸ್ವಯಂವರ - ಮ.ನ.ಮೂರ್ತಿಯವರ ಕಾದಂಬರಿ ಆಧಾರಿತ.
- ಮೂರೂವರೆ ವಜ್ರಗಳು - ಪೌರಾಣಿಕ ಚಿತ್ರ.
- ಸಿಪಾಯಿ ರಾಮು - ಇನ್ನು ಬರಲೆ ಯಮುನೆ ಎಂಬ ಕಾದಂಬರಿ ಆಧಾರಿತ ಚಿತ್ರ,ಚಂಬಲ್ ಕಣಿವೆಯ ಡಕಾಯಿತರನ್ನು ಕುರಿತದ್ದು.
- ಸವತಿಯ ನೆರಳು - ಆರ್ಯಾಂಬ ಪಟ್ಟಾಭಿಯವರ ಕಾದಂಬರಿ ಆಧಾರಿತ.
- ಮುರಿದ ಮನೆ
- ಕಠಾರಿವೀರ
- ಭಲೇ ರಾಜ
- ಭಲೇ ಹುಚ್ಚ
- ಬಿಡುಗಡೆ
- ಅಪೂರ್ವ ಸಂಗಮ - ಹಿಂದಿ ಚಿತ್ರವನ್ನು ಆಧರಿಸಿದ್ದು,ಅವರ ನಿರ್ದೇಶನದ ಕೊನೆಯ ಚಿತ್ರ.
[ಬದಲಾಯಿಸಿ] ಪ್ರಶಸ್ತಿ,ಗೌರವಗಳು
- ೧೯೯೦-೯೧ - ಜೀವಮಾನದ ಸಾಧನೆಗೆ ರಾಜ್ಯ ಸರ್ಕಾರದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ.
- ಭಕ್ತ ಕನಕದಾಸ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ.
ವೈ.ಆರ್.ಸ್ವಾಮಿಯವರು ೨೦೦೨ರಲ್ಲಿ ವಿಧಿವಶರಾದರು.