ರಂ.ಶಾ.
From Wikipedia
ರಂ.ಶಾ ಎಂಬ ಹೆಸರಿನಲ್ಲಿ ಸಾಹಿತ್ಯ ರಚಿಸಿರುವ ರಂಗನಾಥ ಶಾಮಾಚಾರ್ಯ ಲೋಕಾಪುರ ಹುಟ್ಟಿದ್ದು 13 ಜುಲೈ 1932ರಂದು ಇಂದಿನ ಬಾಗಲಕೋಟೆ ಜಿಲ್ಲೆಯ ಹುನ್ನೂರ ಎಂಬ ಗ್ರಾಮದಲ್ಲಿ. ಮೂಲ ಶಿಕ್ಷಣ ಬೆಳಗಾವಿಯಲ್ಲಿ ಮುಗಿಸಿ, ಕೊಲ್ಹಾಪುರದ ರಾಜಾರಾಮ ಕಾಲೇಜಿನಿಂದ ಬಿ.ಎಸ್.ಸಿ ಪದವಿ ಗಳಿಸಿದರು. ನಂತರ ಮಹಾರಾಷ್ಟ್ರದ ಅಕೌಂಟೆಂಟ್ ಜನರಲ್ ಆಫೀಸಿನಲ್ಲಿ ಉದ್ಯೋಗ ಹಿಡಿದರು.
[ಬದಲಾಯಿಸಿ] ಸಾಹಿತ್ಯ ಕೃತಿಗಳು
ಕಾದಂಬರಿ
- ಸಾವಿತ್ರಿ (1969) - ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ; 1976ರಲ್ಲಿ ಬಿ.ಎಸ್. ರಂಗಾ ನಿರ್ದೇಶನದಲ್ಲಿ ಚಲನಚಿತ್ರವಾಯಿತು
- ತಾಯಿಸಾಹೇಬ (1972) ಈ ಕಾದಂಬರಿ ಆಧಾರಿತ ಚಿತ್ರ ಸ್ವರ್ಣ ಕಮಲ ಪ್ರಶಸ್ತಿ ಗಳಿಸಿತು (1994). ಉತ್ಕೃಷ್ಟ ಕತೆಗಾಗಿ ರಾಜ್ಯ ಪ್ರಶಸ್ತಿ
- ನೂರು ತಲೆ ಹತ್ತು ಕಾಲು (1980)
ನಾಟಕ
- ಸಂಕಾನಟ್ಟಿ ಚಂದ್ರಿ (1994) - ಆರ್ಯಭಟ ಪ್ರಶಸ್ತಿ
- ನೆಳಲಿಯ ಪ್ರಸಂಗ (1999) - ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ
ಅನುವಾದ
ಜ್ಞಾನೇಶ್ವರೀ (2003) - ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ