ಘಟ

From Wikipedia

ಘಟ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಬಳಸುವ ಒಂದು ತಾಳವಾದ್ಯ. ಅನಾದಿ ಕಾಲದಿಂದಲೂ ಜಾನಪದ ವಾದ್ಯವಾಗಿ ಬಳಕೆಯಲ್ಲಿದೆ. ಇದನ್ನು ಈಗ ಕರ್ನಾಟಕ ಸಂಗೀತದ ಕಛೇರಿಗಳಲ್ಲಿ ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.ಇದನ್ನು ವಿಶೇಷ ಗುಣವುಳ್ಳ ಮಣ್ಣನ್ನು ಆಯ್ದು ಹಲವು ತಿಂಗಳ ಕಾಲ ಕೊಳೆ ಹಾಕಿ ನಂತರ ಕಬ್ಬಿಣದ ಪುಡಿಯೊಡನೆ ಕಲಸಿ ಬೇಯಿಸಿ ತಯಾರಿಸುತ್ತಾರೆ.ಎರಡು ಅಂಗೈ ಮತ್ತು ಬೆರಳುಗಳಿಂದ ಈ ವಾದ್ಯವನ್ನು ನುಡಿಸುತ್ತಾರೆ. ಇದು ಮೃದಂಗ ಹಾಗೂ ಖಂಜೀರದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಚೆನ್ನೈಯ ರಾಮಚಂದ್ರನ್, ಬೆಂಗಳೂರಿನ ಮಂಜುನಾಥ್ ಮುಂತಾದವರು ಖ್ಯಾತ ವಿದ್ವಾಂಸರು.

ತಾಳವಾದ್ಯಗಳು