ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.5 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ವಿಷ್ಣುವರ್ಧನ್ (ನಟ) 0 1270 1374830 1364118 2026-06-07T09:20:14Z Mallikarjunasj 11080 /* ಒಂದಿಷ್ಟು ಹೆಚ್ಚಿನ ಮಾಹಿತಿಗಳು */ 1374830 wikitext text/x-wiki {{Use British English|date=June 2013}} {{Infobox person | name = ವಿಷ್ಣುವರ್ಧನ್ | birth_name = ಸಂಪತ್ ಕುಮಾರ್ | image = Vishnuvardhan 2013 stamp of India.jpg | image_size = 250px | caption = 2013ರಲ್ಲಿ ಭಾರತ ಸರ್ಕಾರ ಹೊರತಂದ ವಿಷ್ಣುವರ್ಧನ್ ಅವರ ಅಂಚೆ ಚೀಟಿ | birth_date = {{Birth date|df=yes|1950|09|18}} | birth_place = [[ಮೈಸೂರು]] | death_date = {{Death date and age|df=yes|2009|12|30|1950|09|18}} | death_place = [[ಮೈಸೂರು]], [[ಭಾರತ]] | occupation = ನಟ, ಗಾಯಕ, ನಿರ್ಮಾಪಕ, ಕಥೆಗಾರ | years_active = 1972–2009 | nationality = [[ಭಾರತೀಯ]] | spouse = [[ಭಾರತಿ (ನಟಿ)|ಭಾರತಿ ವಿಷ್ಣುವರ್ಧನ್]] (1975) | relatives = ಅನಿರುಧ್ ''(ಅಳಿಯ)''<ref>{{cite web |url=https://www.lehren.com/news/regional/kannada/vishnuvardhan%E2%80%99s-son-law-recreating-%E2%80%98shasa-simha%E2%80%99-%E2%80%98raja-simha%E2%80%99-20170127 |title=Vishnuvardhan’s son-in-law recreating ‘Shasa Simha’ in ‘Raja Simha’ |publisher=lehren.com |access-date=18 ಜುಲೈ 2018 |archive-date=24 ಮೇ 2018 |archive-url=https://web.archive.org/web/20180524101337/https://www.lehren.com/news/regional/kannada/vishnuvardhan%E2%80%99s-son-law-recreating-%E2%80%98shasa-simha%E2%80%99-%E2%80%98raja-simha%E2%80%99-20170127 |url-status=dead }}</ref> }} '''ಡಾ. ವಿಷ್ಣುವರ್ಧನ್''' (ಜನನ: [[ಸೆಪ್ಟೆಂಬರ್ ೧೮]] [[೧೯೫೦]] | ಮರಣ :[[ಡಿಸೆಂಬರ್ ೩೦]] [[೨೦೦೯]]) [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಪ್ರಸಿದ್ಧ ನಟರಲ್ಲಿ ಒಬ್ಬರು.'''ಸಂಪತ್ ಕುಮಾರ್''' ಎಂಬುದು ಇವರ ಮೂಲ ಹೆಸರು. '''ಸಾಹಸಸಿಂಹ''' ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ [[ಭಾರತಿ]] ಅವರನ್ನು ಮದುವೆಯಾಗಿದ್ದರು.<ref>[http://movies.rediff.com/report/2009/dec/30/vishnuvardhan-to-be-cremated-today.htm Dr Vishnuvardhan to be cremated with state honours]</ref> ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ ==ಹುಟ್ಟು, ವಿದ್ಯಾಭ್ಯಾಸ, ಬಾಲ್ಯ== '''ಡಾ. ವಿಷ್ಣುವರ್ಧನ್''' ಅವರು ಹೆಚ್.ಎಲ್. ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಮಗನಾಗಿ [[ಮೈಸೂರು|ಮೈಸೂರಿನಲ್ಲಿ]] ಜನಿಸಿದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು [[ಮೈಸೂರು|ಮೈಸೂರಿನ]] ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು.ಇವರ ಪೂರ್ವಜರು ಮಂಡ್ಯ ಜಿಲ್ಲೆಯವರು. ೬ ಸಹೋದರ/ಸಹೋದರಿಯರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು [[ಮೈಸೂರು|ಮೈಸೂರಿನ]] ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು [[ಬೆಂಗಳೂರು|ಬೆಂಗಳೂರಿನ]] ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು [[ಬೆಂಗಳೂರು|ಬೆಂಗಳೂರಿನ]] ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದರು. ==ನಟನೆ/ಕಲಾಜೀವನ== [[Image:144x.jpg|thumb|ವಿಷ್ಣು ಅಭಿನಯದ "ಸಾಮ್ರಾಟ್" ಚಿತ್ರದ ಭಿತ್ತಿ ಪತ್ರ|alt=]] *'''ಶಿವಶರಣ ನಂಬೆಯಕ್ಕ''' ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ '''ಕೋಕಿಲವಾಣಿ''' ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. [[ಎಸ್. ಎಲ್. ಭೈರಪ್ಪ|ಎಸ್ ಎಲ್ ಭೈರಪ್ಪನವರ]] ಕಾದಂಬರಿಯಾಧಾರಿತ '''[[ವಂಶವೃಕ್ಷ]]'''. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು. *ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ [[೧೯೭೨]]ರಲ್ಲಿ ಬಿಡುಗಡೆಯಾದ [[ಪುಟ್ಟಣ್ಣ ಕಣಗಾಲ್]] ನಿರ್ದೇಶನದ [[ನಾಗರಹಾವು (ಚಲನಚಿತ್ರ ೧೯೭೨)|ನಾಗರಹಾವು]]. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ [[ನಾಗರಹಾವು (ಚಲನಚಿತ್ರ ೧೯೭೨)|ನಾಗರಹಾವು]] ಚಿತ್ರದೊಂದಿಗೆ '''ವಿಷ್ಣುವರ್ಧನ''' ಎಂಬ ನಟನ ಉದಯವಾಯಿತು. 29.12.1972 ರಂದು ತೆರೆಕಂಡ ಈ ಸಿನೆಮಾ, ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾದ ಚಿತ್ರ, ಆಗಿನ ಕಾಲಕ್ಕೇ 7 ಲಕ್ಶ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು. ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಷ್ಣು ನಟಿಸಿದ್ದ ‘[[ಸಾಹಸಸಿಂಹ]]’ ಸಿನೆಮಾ 25 ವಾರಗಳನ್ನು ಪೂರೈಸಿತು. ಇಲ್ಲಿಂದ ಮುಂದೆ ವಿಷ್ಣು '''ಸಾಹಸಸಿಂಹ''' ಎಂದು ಹೆಸರುವಾಸಿಯಾದರು.ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ 'ಸಾಹಸಸಿಂಹ' ಎಂಬ ಬಿರುದು ಬಂದಿತ್ತು. *ನಟನೆಯಲ್ಲದೇ, [[ಕಿಲಾಡಿ ಕಿಟ್ಟು]], [[ನಾಗ ಕಾಳ ಭೈರವ]], [[ಸಾಹಸಸಿಂಹ ]], [[ಜಿಮ್ಮಿಗಲ್ಲು]], [[ಖೈದಿ]] [[ಮೋಜುಗಾರ ಸೊಗಸುಗಾರ]], [[ವಿಷ್ಣುಸೇನಾ]] ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ *೧೯೮೦ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ [[ಶಂಕರ್‌ ನಾಗ್‌]] ನಿರ್ದೇಶನದ ಜನಪ್ರಿಯ ಧಾರಾವಾಹಿ [[ಮಾಲ್ಗುಡಿ ಡೇಸ್]] ಕಥೆಯೊಂದರಲ್ಲಿ (ರುಪೀಸ್‌ ಫಾರ್ಟಿ-ಫೈವ್ ಎ ಮಂತ್‌) ವಿಷ್ಣುವರ್ಧನ್‌ ನಟಿಸಿದ್ದರು.<ref>[http://chiloka.com/celebrity/vishnuvardhan ವಿಷ್ಣುವರ್ಧನ್]</ref> ==ಒಂದಿಷ್ಟು ಹೆಚ್ಚಿನ ಮಾಹಿತಿಗಳು== ಸಿನಿಮಾರಂಗಕ್ಕೆ ನಡೆದು ಬಂದ ಹಾದಿ: ವಿಷ್ಣು 1955ರಲ್ಲಿ "ಶಿವಶರಣ ನಂಬೆಯಕ್ಕ" ಎಂಬ ಸಿನೆಮಾದಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ "ಕೋಕಿಲವಾಣಿ" ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡರು. 1972 ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಇವರ ಮೊದಲ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂದು ಜನಪ್ರಿಯರಾಗಿದ್ದರು.1980 ರಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದ “ಮಾಲ್ಗುಡಿ ಡೇಸ್” ಎಂಬ ಕಿರುತೆರೆಯಲ್ಲಿ ನಟಿಸಿದರು. ನಟನೆಯಲ್ಲದೇ ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ, ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ. ಹೀಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಇಡೀ ಚಿತ್ರರಂಗದಲ್ಲಿಯೇ ಸುಪ್ರಸಿದ್ಧ ನಟರಾಗಿ ಹೊರಹೊಮ್ಮಿದ್ದರು. ಹೀಗೆ ಕೇವಲ ಕನ್ನಡ ಚಿತ್ರಗಳಲ್ಲಿ ನಟಿಸದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ವಿಷ್ಣು 30 ಡಿಸೆಂಬರ್ 2009 ರಲ್ಲಿ ವಿಧಿವಶರಾದರು. ಇವರಿಗೆ ಕೀರ್ತಿ ಮತ್ತು ಚಂದನಾ ಎಂಬ ಇಬ್ಬರು ಪುತ್ರಿಯರಿದ್ದಾರೆ. *ಕನ್ನಡ ಚಿತ್ರರಂಗದಲ್ಲೆ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಸುಮಾರು ೧೪ ಚಿತ್ರಗಳು) *ವಿಷ್ಣುವರ್ಧನ್-[[ಸುಹಾಸಿನಿ]], ವಿಷ್ಣುವರ್ಧನ್-[[ಮಾಧವಿ]] ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯೆಂದು ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ನಟಿ [[ಆರತಿ]] ಅವರಿಗೆ ಸಲ್ಲುತ್ತದೆ. *[[ಬನ್ನಂಜೆ ಗೋವಿಂದಾಚಾರ್ಯ]]ರು ಇವರ ಆದ್ಯಾತ್ಮಿಕ ಗುರುವಾಗಿದ್ದರು, [[ಸಂಖ್ಯಾಭವಿಷ್ಯಶಾಸ್ತ್ರ]]ವನ್ನು ನಂಬುತ್ತಿದ್ದ ಇವರು ತಮ್ಮ ಕಾರಿನ ನಂಬರಾಗಿ ಮತ್ತು ಮೊಬೈಲ್ ನ ಕೊನೆಯ ಸಂಖ್ಯೆಯಾಗಿ "೩೨೧" ಬಳಸುತ್ತಿದ್ದರು. *[[ಬೆಂಗಳೂರು ವಿಶ್ವವಿದ್ಯಾಲಯ|ಬೆಂಗಳೂರು ವಿಶ್ವವಿದ್ಯಾಲಯವು]] [[೨೦೦೫|೨೦೦೫ನೇ]] ವರ್ಷದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ. * ಇವರ ಸ್ಮರಣಾರ್ಥ ಭಾರತ ಸರ್ಕಾರ 2013ರಲ್ಲಿ ಅಂಚೆ ಚೀಟಿ ಹೊರತಂದಿದೆ. * ೨೦೨೫ ರಲ್ಲಿ ಕರ್ನಾಟಕ ಸರ್ಕಾರ ಇವರಿಗೆ “ಕರ್ನಾಟಕ ರತ್ನ” ಪ್ರಶಸ್ತಿ ಘೋಷಣೆ ಮಾಡಿದೆ. [[File:Saahasasimha vishnuvardhan bronze bust at ghaati subramanya temple square.jpg|thumb|saahasasimha vishnuvardhan bronze bust at ghaati subramanya temple square]] ==ಡಾ. ವಿಷ್ಣುವರ್ಧನ್ ಅಭಿನಯದ ಚಿತ್ರಗಳು == *'''ಕನ್ನಡ''' {| class="sortable" border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;" |- bgcolor="#CCCCCC" align="center" ! ವರ್ಷ!! ಸಂಖ್ಯೆ !! ಚಿತ್ರದ ಹೆಸರು !! ಪಾತ್ರದ ಹೆಸರು !! ನಾಯಕಿ(ಯರು) !! ಸೆನ್ಸಾರ್ ಪ್ರಮಾಣಪತ್ರ |- | rowspan="2"|೧೯೭೨ | ೧ | ''[[ವಂಶವೃಕ್ಷ]]'' | ಬಾಲ ನಟ | |- | ೨ | ''[[ನಾಗರಹಾವು (ಚಲನಚಿತ್ರ ೧೯೭೨)|ನಾಗರಹಾವು]]'' | ರಾಮಾಚಾರಿ |[[ಆರತಿ]], [[ಶುಭಾ]] |- | rowspan="3"|೧೯೭೩ | ೩ | ''[[ಸೀತೆಯಲ್ಲ ಸಾವಿತ್ರಿ]]'' | |[[ಜಯಲಕ್ಷ್ಮಿ]] |- | ೪ | ''[[ಮನೆ ಬೆಳಗಿದ ಸೊಸೆ]]'' | |[[ಭಾರತಿ]] |- | ೫ | ''[[ಗಂಧದ ಗುಡಿ]]'' | ಆನಂದ್ | |- | rowspan="3"|೧೯೭೪ | ೬ | ''[[ಬೂತಯ್ಯನ ಮಗ ಅಯ್ಯು]]'' | ಗುಳ್ಳ |[[ಭವಾನಿ]] |- | ೭ | ''[[ಪ್ರೊಫೆಸರ್ ಹುಚ್ಚುರಾಯ]]'' | |[[ಮಂಜುಳಾ]] |- | ೮ | ''[[ಅಣ್ಣ ಅತ್ತಿಗೆ]]'' | |[[ಭಾರತಿ]] |- | rowspan="6"|೧೯೭೫ | ೯ | ''[[ದೇವರಗುಡಿ]]'' | |[[ಭಾರತಿ]] |- | ೧೦ | ''[[ಕೂಡಿ ಬಾಳೋಣ]]'' | |[[ಭವಾನಿ]] |- | ೧೧ | ''[[ಕಳ್ಳ ಕುಳ್ಳ]]'' | ಮಹೇಶ |[[ಭವಾನಿ]] |- | ೧೨ | ''[[ಭಾಗ್ಯಜ್ಯೋತಿ]]'' | |[[ಭಾರತಿ]], [[ಶುಭಾ]] |- | ೧೩ | ''[[ನಾಗಕನ್ಯೆ]]'' | |[[ಭವಾನಿ]] |- | ೧೪ | ''[[ಒಂದೇ ರೂಪ ಎರಡು ಗುಣ]]'' | |[[ಭವಾನಿ]] |- | rowspan="4" | ೧೯೭೬ | ೧೫ | ''[[ದೇವರು ಕೊಟ್ಟ ವರ]]'' | |[[ಜಯಂತಿ]] |- | ೧೬ | ''[[ಹೊಸಿಲು ಮೆಟ್ಟಿದ ಹೆಣ್ಣು]]'' | |[[ಆರತಿ]] |- | ೧೭ | ''[[ಮಕ್ಕಳ ಭಾಗ್ಯ]]'' | |[[ಭಾರತಿ]] |- | ೧೮ | ''[[ಬಂಗಾರದ ಗುಡಿ]]'' | |[[ಮಂಜುಳಾ]] |- | rowspan="9" | ೧೯೭೭ | ೧೯ | ''[[ಬಯಸದೇ ಬಂದ ಭಾಗ್ಯ]]'' | |[[ಮಂಜುಳಾ]] |- | ೨೦ | ''[[ಸೊಸೆ ತಂದ ಸೌಭಾಗ್ಯ]]'' | |[[ಮಂಜುಳಾ]] |- | ೨೧ | ''[[ನಾಗರಹೊಳೆ (ಚಲನಚಿತ್ರ)]]'' | |[[ಭಾರತಿ]] |- | ೨೨ | ''[[ಚಿನ್ನಾ ನಿನ್ನ ಮುದ್ದಾಡುವೆ]]'' | |[[ಜಯಂತಿ]] |- | ೨೩ | ''[[ಸಹೋದರರ ಸವಾಲ್]]'' | |[[ಕವಿತಾ]] |- | ೨೪ | ''[[ಶ್ರೀಮಂತನ ಮಗಳು]]'' | |[[ಜಯಂತಿ]] |- | ೨೫ | ''[[ಶನಿ ಪ್ರಭಾವ]]'' | |[[ಭವಾನಿ]] |- | ೨೬ | ''[[ಕಿಟ್ಟು ಪುಟ್ಟು]]'' | ಕಿಟ್ಟು |[[ಮಂಜುಳಾ]] |- | ೨೭ | ''[[ಗಲಾಟೆ ಸಂಸಾರ]]'' | ಸುಬ್ರಮಣ್ಯ(ಸುಬ್ಬು) | [[ಮಂಜುಳಾ]] |- | rowspan="15" | ೧೯೭೮ | ೨೮ | ''[[ಹೊಂಬಿಸಿಲು]]'' | ಡಾ.ನಟರಾಜ್ |[[ಆರತಿ]] |- | ೨೯ | ''[[ಸಂದರ್ಭ]]'' | | [[ಭಾರತಿ]] |- | ೩೦ | ''[[ಕಿಲಾಡಿ ಕಿಟ್ಟು]]'' | ಕಿಟ್ಟು |[[ಕವಿತಾ]] |- | ೩೧ | ''[[ವಂಶಜ್ಯೋತಿ]]'' | |[[ಕಲ್ಪನಾ]], [[ಜಯಂತಿ]] |- | ೩೨ | ''[[ಮುಯ್ಯಿಗೆ ಮುಯ್ಯಿ]]'' | |[[ಆರತಿ]] |- | ೩೩ | ''[[ಸಿರಿತನಕ್ಕೆ ಸವಾಲ್]]'' | |[[ಮಂಜುಳಾ ವಿಜಯಕುಮಾರ್]] |- | ೩೪ | ''[[ಪ್ರತಿಮಾ (ಚಲನಚಿತ್ರ)]]'' | |[[ಭಾರತಿ]] |- | ೩೫ | ''[[ನನ್ನ ಪ್ರಾಯಶ್ಚಿತ್ತ]]'' | |[[ರೆಹನಾ ಸುಲ್ತಾನ್]] |- | ೩೬ | ''[[ಸ್ನೇಹ ಸೇಡು]]'' | |[[ಮಂಜುಳಾ]] |- | ೩೭ | ''[[ಕಿಲಾಡಿ ಜೋಡಿ]]'' | |[[ಲಕ್ಷ್ಮಿ (ಚಿತ್ರನಟಿ)|ಲಕ್ಷ್ಮಿ]] |- | ೩೮ | ''[[ವಸಂತ ಲಕ್ಷ್ಮಿ]]'' | |[[ಮಂಜುಳಾ]] |- | ೩೯ | ''[[ಅಮರನಾಥ್ (ಚಲನಚಿತ್ರ)]]'' | | |- | ೪೦ | ''[[ಭಲೇ ಹುಡುಗ]]'' | |[[ಮಂಜುಳಾ]] |- | ೪೧ | ''[[ಮಧುರ ಸಂಗಮ]]'' | ಕುಮಾರ ರಾಮ |[[ಭಾರತಿ]] |- | ೪೨ | ''[[ಸಿಂಗಾಪುರದಲ್ಲಿ ರಾಜಾಕುಳ್ಳ]]'' | ರಾಜಾ |[[ಮಂಜುಳಾ]] |- | rowspan="5" | ೧೯೭೯ | ೪೩ | ''[[ಅಸಾಧ್ಯ ಅಳಿಯ]]'' | |[[ಪದ್ಮಪ್ರಿಯ]] |- | ೪೪ | ''[[ವಿಜಯ್ ವಿಕ್ರಮ್]]'' | ವಿಜಯ್,ವಿಕ್ರಮ್ |[[ಜಯಂತಿ]], [[ದೀಪಾ]] |- | ೪೫ | ''[[ನಾನಿರುವುದೆ ನಿನಗಾಗಿ (ಚಲನಚಿತ್ರ)]]'' | |[[ಆರತಿ]] |- | ೪೬ | ''[[ಮಾನಿನಿ]]'' | |[[ಆರತಿ]] |- | ೪೭ | ''[[ನೆಂಟರೋ ಗಂಟು ಕಳ್ಳರೋ]]'' | |[[ಆರತಿ]] |- | rowspan="10" | ೧೯೮೦ | ೪೮ | ''[[ನನ್ನ ರೋಷ ನೂರು ವರುಷ]]'' | |[[ಪದ್ಮಪ್ರಿಯ]] |- | ೪೯ | ''[[ರಾಮ ಪರಶುರಾಮ]]'' | ರಾಮ |[[ಮಂಜುಳಾ]] |- | ೫೦ | ''[[ಕಾಳಿಂಗ (ಚಲನಚಿತ್ರ)]]'' | ಪ್ರಭಾಕರ, ಕಾಳಿಂಗ |[[ರತಿ ಅಗ್ನಿಹೋತ್ರಿ]], [[ಗೀತಾ]] |- | ೫೧ | ''[[ಡ್ರೈವರ್ ಹನುಮಂತು]]'' | ಸಂಗೀತದ ಗುರುಗಳು | |- | ೫೨ | ''[[ಹಂತಕನ ಸಂಚು]]'' | | [[ಆರತಿ]], [[ಜಯಮಾಲ]] |- | ೫೩ | ''[[ಮಕ್ಕಳ ಸೈನ್ಯ]]'' | |[[ಸುಮಿತ್ರಾ]] |- | ೫೪ | ''[[ಬಿಳಿಗಿರಿಯ ಬನದಲ್ಲಿ]]'' | | ಪಾರ್ವತಿ |- | ೫೫ | ''[[ಸಿಂಹಜೋಡಿ]]'' | |[[ಮಂಜುಳಾ]] |- | ೫೬ | ''[[ರಹಸ್ಯರಾತ್ರಿ]]'' | |[[ಭಾರತಿ]] |- | ೫೭ | ''[[ಬಂಗಾರದ ಜಿಂಕೆ]]'' | ಚಾರು |[[ಭಾರತಿ]], [[ಆರತಿ]] |- | rowspan="7" | ೧೯೮೧ | ೫೮ | ''[[ಮದುವೆ ಮಾಡು ತಮಾಷೆ ನೋಡು]]'' | ಗಣೇಶ |[[ಆರತಿ]] |- | ೫೯ | ''[[ಮನೆ ಮನೆ ಕಥೆ]]'' | ಸುಬ್ಬು |[[ಜಯಚಿತ್ರಾ]] |- | ೬೦ | ''[[ನಾಗ ಕಾಳ ಭೈರವ]]'' | |[[ಜಯಂತಿ]], [[ಜಯಮಾಲ]] |- | ೬೨ | ''[[ಗುರು ಶಿಷ್ಯರು]]'' | ರಾಜ ನಂದಿವರ್ಧನ |[[ಮಂಜುಳಾ]] |- | ೬೩ | ''[[ಸ್ನೇಹಿತರ ಸವಾಲ್]]'' | | [[ಮಂಜುಳಾ]] |- | ೬೪ | ''[[ಅವಳ ಹೆಜ್ಜೆ]]'' | |[[ಲಕ್ಷ್ಮಿ (ಚಿತ್ರನಟಿ)|ಲಕ್ಷ್ಮಿ]] |- | ೬೫ | ''[[ಪ್ರೀತಿಸಿ ನೋಡು]]'' | |[[ಆರತಿ]] |- | rowspan="8" | ೧೯೮೨ | ೬೬ | ''[[ಪೆದ್ದ ಗೆದ್ದ ]]'' | ಲಾಯರ್ |[[ಭಾರತಿ]] |- | ೬೭ | ''[[ಸಾಹಸ ಸಿಂಹ]]'' | |ಕಾಜಲ್ ಕಿರಣ್ |- | ೬೮ | ''[[ಕಾರ್ಮಿಕ ಕಳ್ಳನಲ್ಲ]]'' | |[[ಆರತಿ]] |- | ೬೯ | ''[[ಊರಿಗೆ ಉಪಕಾರಿ]]'' | ಶ್ರೀಕಾಂತ್ |[[ಪದ್ಮಪ್ರಿಯ]] |- | ೭೦ | ''[[ಜಿಮ್ಮಿಗಲ್ಲು]]'' | ಕೆರೆಏರಿ/ಜಿಮ್ಮಿ |[[ಶ್ರೀಪ್ರಿಯಾ]] |- | ೭೧ | ''[[ಸುವರ್ಣ ಸೇತುವೆ]]'' | |[[ಆರತಿ]] |- | ೭೨ | ''[[ಒಂದೇ ಗುರಿ]]'' | |[[ಮಾಧವಿ]] |- | ೭೩ | ''[[ಕಲ್ಲು ವೀಣೆ ನುಡಿಯಿತು]]'' | |[[ಜಯಂತಿ]], [[ಆರತಿ]], [[ಪದ್ಮಪ್ರಿಯ]] |- | rowspan="6" | ೧೯೮೩ | ೭೪ | ''[[ಮುತ್ತೈದೆ ಭಾಗ್ಯ]]'' | | |- | ೭೫ | ''[[ಗಂಧರ್ವ ಗಿರಿ]]'' | |[[ಆರತಿ]] |- | ೭೬ | ''[[ಸಿಡಿದೆದ್ದ ಸಹೋದರ]]'' | |[[ಆರತಿ]], [[ಜಯಮಾಲ]] |- | ೭೭ | ''[[ಗಂಡುಗಲಿ ರಾಮ]]'' | ರಾಮ, ಗಂಡುಗಲಿ, ಕುಮಾರ್ |[[ಮಾಧವಿ]] |- | ೭೮ | ''[[ಚಿನ್ನದಂತ ಮಗ]]'' | | [[ಮಾಧವಿ]] |- | ೭೯ | ''[[ಸಿಂಹ ಘರ್ಜನೆ]]'' | |[[ವಿಜಯಶಾಂತಿ]] |- | rowspan="8" | ೧೯೮೪ | ೮೦ | ''[[ಇಂದಿನ ರಾಮಾಯಣ]]'' | |[[ಗಾಯತ್ರಿ (ನಟಿ)|ಗಾಯತ್ರಿ]] |- | ೮೧ | ''[[ಪ್ರಚಂಡ ಕುಳ್ಳ]]'' | ಶಿವ |[[ಗೀತಾ]] |- | ೮೨ | ''[[ರುದ್ರನಾಗ]]'' | |[[ಮಾಧವಿ]] |- | ೮೩ | ''[[ಖೈದಿ]]'' | |[[ಆರತಿ]], [[ಮಾಧವಿ]] |- | ೮೪ | ''[[ಬೆಂಕಿ ಬಿರುಗಾಳಿ]]'' | |[[ಜಯಮಾಲ]] |- | ೮೫ | ''[[ಬಂಧನ]]'' | ಡಾ.ಹರೀಶ್ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]] |- | ೮೬ | ''[[ಹುಲಿ ಹೆಜ್ಜೆ]]'' | |[[ವಿಜಯಲಕ್ಷ್ಮಿ ಸಿಂಗ್]] |- | ೮೭ | ''[[ಚಾಣಕ್ಯ]]'' | |[[ಮಾಧವಿ]] |- | rowspan="9" | ೧೯೮೫ | ೮೮ | ''[[ಆರಾಧನೆ]]'' | |[[ಗೀತಾ]] |- | ೮೯ | ''[[ಕರ್ತವ್ಯ]]'' | |[[ಪವಿತ್ರಾ]] |- | ೯೦ | ''[[ಮಹಾಪುರುಷ]]'' | |[[ಗಾಯತ್ರಿ (ನಟಿ)|ಗಾಯತ್ರಿ]] |- | ೯೧ | ''[[ವೀರಾಧಿವೀರ]]'' | |[[ಗೀತಾ]] |- | ೯೨ | ''[[ನೀ ಬರೆದ ಕಾದಂಬರಿ]]'' | |[[ಭವ್ಯ]] |- | ೯೩ | ''[[ಮರೆಯದ ಮಾಣಿಕ್ಯ]]'' | |[[ಗೀತಾ]] |- | ೯೪ | ''[[ನನ್ನ ಪ್ರತಿಜ್ಞೆ]]'' | |[[ಚಂದನಾ]] |- | ೯೫ | ''[[ಜೀವನ ಚಕ್ರ]]'' | |[[ರಾಧಿಕಾ]] |- | ೯೬ | ''[[ನೀ ತಂದ ಕಾಣಿಕೆ]]'' | ರವಿ |[[ಜಯಸುಧಾ]] |- | rowspan="6" | ೧೯೮೬ | ೯೭ | ''[[ಕರ್ಣ (ಚಲನಚಿತ್ರ)]]'' | ಕರ್ಣ |[[ಸುಮಲತಾ]] |- | ೯೮ | ''[[ಕಥಾನಾಯಕ]]'' | ರಂಗ |[[ಸುಮಲತಾ]] |- | ೯೯ | ''[[ಈ ಜೀವ ನಿನಗಾಗಿ]]'' | ಚಂದ್ರು |[[ಊರ್ವಶಿ]] |- | ೧೦೦ | ''[[ಸತ್ಯಜ್ಯೋತಿ]]'' | |[[ಸುಮಲತಾ]], [[ಊರ್ವಶಿ]] |- | ೧೦೧ | ''[[ಕೃಷ್ಣ ನೀ ಬೇಗನೆ ಬಾರೋ]]'' | ಕೃಷ್ಣ |[[ಭವ್ಯ]], ಕಿಮ್ ಶರ್ಮ |- | ೧೦೨ | ''[[ಮಲಯ ಮಾರುತ]]'' | ವಿಶ್ವನಾಥ |[[ಮಾಧವಿ]], [[ಸರಿತಾ]] |- | rowspan="8" | ೧೯೮೭ | ೧೦೩ | ''[[ಪ್ರೇಮಲೋಕ]]'' | ಕಾಲೇಜ್ ಲೆಕ್ಚರರ್ | |- | ೧೦೪ | ''[[ಸೌಭಾಗ್ಯಲಕ್ಷ್ಮಿ|ಸೌಭಾಗ್ಯ ಲಕ್ಷ್ಮಿ]]'' | |[[ಲಕ್ಷ್ಮಿ (ಚಿತ್ರನಟಿ)|ಲಕ್ಷ್ಮಿ]], [[ರಾಧಾ]] |- | ೧೦೫ | ''[[ಕರುಣಾಮಯಿ]]'' | | [[ಭವ್ಯ]] |- | ೧೦೬ | ''[[ಜಯಸಿಂಹ]]'' | ಜಯಸಿಂಹ |[[ಮಹಾಲಕ್ಷ್ಮಿ (ನಟಿ)|ಮಹಾಲಕ್ಷ್ಮಿ]] |- | ೧೦೭ | ''[[ಆಸೆಯ ಬಲೆ]]'' | |[[ನಳಿನಿ]] |- | ೧೦೮ | ''[[ಜೀವನ ಜ್ಯೋತಿ]]'' | |[[ಅಂಬಿಕಾ (ಚಿತ್ರನಟಿ)|ಅಂಬಿಕಾ]], [[ನಳಿನಿ]] |- | ೧೦೯ | ''[[ಶುಭಮಿಲನ|ಶುಭ ಮಿಲನ]]'' | |[[ಅಂಬಿಕಾ (ಚಿತ್ರನಟಿ)|ಅಂಬಿಕಾ]] |- | ೧೧೦ | ''[[ಸತ್ಯಂ ಶಿವಂ ಸುಂದರಂ (ಚಲನಚಿತ್ರ)]]'' | |[[ಸುಮಿತ್ರಾ]], [[ರಾಧಿಕಾ]] |- | rowspan="13" | ೧೯೮೮ | ೧೧೧ | ''[[ಡಿಸೆಂಬರ್ ೩೧ (ಚಲನಚಿತ್ರ)]]'' | |[[ಊರ್ವಶಿ]] |- | ೧೧೨ | ''[[ಒಲವಿನ ಆಸರೆ]]'' | |[[ರೂಪಿಣಿ]] |- | ೧೧೩ | ''[[ನಮ್ಮೂರ ರಾಜ]]'' | |[[ಮಂಜುಳಾ ಶರ್ಮ]] |- | ೧೧೪ | ''[[ಜನನಾಯಕ]]'' | |[[ಭವ್ಯ]] |- | ೧೧೫ | ''[[ಸುಪ್ರಭಾತ (ಚಲನಚಿತ್ರ)]]'' | ವಿಜಯ್ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]] |- | ೧೧೬ | ''[[ಕೃಷ್ಣ ರುಕ್ಮಿಣಿ]]'' | ಕೃಷ್ಣ |[[ರಮ್ಯಾ ಕೃಷ್ಣ]] |- | ೧೧೭ | ''[[ಮಿಥಿಲೆಯ ಸೀತೆಯರು]]'' | |[[ಗೀತಾ]] |- | ೧೧೮ | ''[[ದಾದಾ]]'' | ದಾದಾ |[[ಗೀತಾ]], [[ಸುಪರ್ಣ]] |- | ೧೧೯ | ''[[ಒಂದಾಗಿ ಬಾಳು]]'' | |[[ಮಂಜುಳಾ ಶರ್ಮ]] |- | ೧೨೦ | ''[[ಹೃದಯಗೀತೆ]]'' | ಅಶೋಕ್ |[[ಭವ್ಯ]], [[ಖುಷ್ಬೂ]] |- | ೧೨೧ | ''[[ರುದ್ರ]]'' | ರುದ್ರ |[[ಖುಷ್ಬೂ]] |- | ೧೨೨ | ''[[ದೇವ]]'' | ದೇವ |[[ರೂಪಿಣಿ]] |- | ೧೨೩ | ''[[ಡಾಕ್ಟರ್ ಕೃಷ್ಣ]]'' | ಡಾ.ಕೃಷ್ಣ |[[ತಾರಾ]], [[ಸುಮನ್ ರಂಗನಾಥ್]] |- | rowspan="3" | ೧೯೯೦ | ೧೨೪ | ''[[ಶಿವಶಂಕರ್]]'' | ಶಿವು,ಶಂಕರ್ |[[ಶೋಭನಾ]] |- | ೧೨೫ | ''[[ಮುತ್ತಿನ ಹಾರ]]'' | ಅಚ್ಚಪ್ಪ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]] |- | ೧೨೬ | ''[[ಮತ್ತೆ ಹಾಡಿತು ಕೋಗಿಲೆ]]'' | |[[ಭವ್ಯ]], [[ರೂಪಿಣಿ]] |- | rowspan="4" | ೧೯೯೧ | ೧೨೭ | ''[[ಲಯನ್ ಜಗಪತಿರಾವ್]]'' | ಲಯನ್ ಜಗಪತಿರಾವ್, ಕುಮಾರ್ |[[ಲಕ್ಷ್ಮಿ (ಚಿತ್ರನಟಿ)|ಲಕ್ಷ್ಮಿ]], [[ಭವ್ಯ]] |- | ೧೨೮ | ''[[ನೀನು ನಕ್ಕರೆ ಹಾಲು ಸಕ್ಕರೆ]]'' | ಸುಬ್ಬು |[[ರೂಪಿಣಿ]], [[ರಜನಿ]], [[ವಿನಯಾ ಪ್ರಸಾದ್]], [[ಚಂದ್ರಿಕಾ]], [[ಅಂಜಲಿ]] |- | ೧೨೯ | ''[[ಜಗದೇಕ ವೀರ]]'' | |[[ತ್ರಿವೇಣಿ]] |- | ೧೩೦ | ''[[ಪೋಲಿಸ್ ಮತ್ತು ದಾದಾ]]'' | |[[ರೂಪಾ ಗಂಗೂಲಿ]], [[ಸಂಗೀತಾ ಬಿಜಲಾನಿ]] |- | rowspan="4" | ೧೯೯೨ | ೧೩೧ | ''[[ರಾಜಾಧಿರಾಜ]]'' | |[[ರೂಪಿಣಿ]] |- | ೧೩೨ | ''[[ರವಿವರ್ಮ]]'' | ರವಿವರ್ಮ |[[ಭವ್ಯಾ]], [[ರೂಪಿಣಿ]] |- | ೧೩೩ | ''[[ಹರಕೆಯ ಕುರಿ]]'' | |[[ಗೀತಾ]] |- | ೧೩೪ | ''[[ನನ್ನ ಶತ್ರು]]'' | |[[ರೇಖಾ]] |- | rowspan="7" | ೧೯೯೩ | ೧೩೫ | ''[[ಸಂಘರ್ಷ (ಚಲನಚಿತ್ರ)]]'' | ಮಹೇಶ್ |[[ಗೀತಾ]], [[ಶಿವರಂಜನಿ]] |- | ೧೩೬ | ''[[ವೈಶಾಖದ ದಿನಗಳು]]'' | ವಿಷ್ಣು |[[ಮೂನ್ ಮೂನ್ ಸೇನ್]], [[ವನಿತಾ ವಾಸು]] |- | ೧೩೭ | ''[[ನಾನೆಂದೂ ನಿಮ್ಮವನೆ]]'' | |[[ಶ್ರೀಶಾಂತಿ]] |- | ೧೩೮ | ''[[ರಾಯರು ಬಂದರು ಮಾವನ ಮನೆಗೆ]]'' | ವಿಷ್ಣು |[[ಡಾಲಿ ಮಿನ್ಹಾಸ್]], [[ಫರ್ಹೀನ್]] |- | ೧೩೯ | ''[[ವಿಷ್ಣು ವಿಜಯ]]'' | ವಿಷ್ಣು |[[ಅಶ್ವಿನಿ ಭಾವೆ]] |- | ೧೪೦ | ''[[ಮಣಿಕಂಠನ ಮಹಿಮೆ]]'' | ಅಯ್ಯಪ್ಪ |[[ತಾರಾ]] |- | ೧೪೧ | ''[[ನಿಷ್ಕರ್ಷ]]'' | ಅಜಯ್ |[[ಅಂಜನಾ]], ಸುಮನ್ ನಗರ್ ಕರ್ |- | rowspan="6" | ೧೯೯೪ | ೧೪೨ | ''[[ಟೈಂಬಾಂಬ್ (ಚಲನಚಿತ್ರ)]]'' | |[[ಶ್ರುತಿ]] |- | ೧೪೩ | ''[[ಕುಂತಿಪುತ್ರ]]'' | |ಸೋನಾಕ್ಷಿ |- | ೧೪೪ | ''[[ಸಾಮ್ರಾಟ್]]'' | |[[ಸೌಮ್ಯ ಕುಲಕರ್ಣಿ]] |- | ೧೪೫ | ''[[ಮಹಾ ಕ್ಷತ್ರಿಯ]]'' | |[[ಸುಧಾರಾಣಿ]], [[ಸೋನು ವಾಲಿಯಾ]] |- | ೧೪೬ | ''[[ಹಾಲುಂಡ ತವರು]]'' | ಸಿದ್ದಾರ್ಥ |[[ಸಿತಾರ]] |- | ೧೪೭ | ''[[ಕಿಲಾಡಿಗಳು]]'' | |[[ಸುವರ್ಣ ಮಾಥ್ಯೂಸ್]] |- | rowspan="8" | ೧೯೯೫ | ೧೪೮ | ''[[ಕೋಣ ಈದೈತೆ]]'' | ಅಡ್ವೋಕೇಟ್ ವಿಷ್ಣು |[[ವಿನಯಾ ಪ್ರಸಾದ್]] |- | ೧೪೯ | ''[[ಯಮ ಕಿಂಕರ]]'' | ಕಿಂಕರ |ಸೋನಾಕ್ಷಿ |- | ೧೫೦ | ''[[ಮೋಜುಗಾರ ಸೊಗಸುಗಾರ]]'' | ವಿಜಯ್ ಮತ್ತು ವಿನೋದ್ |[[ಶ್ರುತಿ]], ಸೋನಾಕ್ಷಿ |- | ೧೫೧ | ''[[ದೀರ್ಘ ಸುಮಂಗಲಿ]]'' | ಆದಿತ್ಯ |[[ಸಿತಾರ]] |- | ೧೫೨ | ''[[ಬಂಗಾರದ ಕಳಶ]]'' | |[[ಸಿತಾರ]], [[ಅಂಜನಾ]] |- | ೧೫೩ | ''[[ತುಂಬಿದ ಮನೆ]]'' | ರಾಮ |[[ವಿನಯಾ ಪ್ರಸಾದ್]] |- | ೧೫೪ | ''[[ಕರುಳಿನ ಕುಡಿ]]'' | |[[ಸಿತಾರ]] |- | ೧೫೫ | ''[[ಹಿಮಪಾತ]]'' | ಅರವಿಂದ್/ಗೌತಮ್ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]], [[ಜಯಪ್ರದಾ]] |- | rowspan="6" | ೧೯೯೬ | ೧೫೬ | ''[[ಅಪ್ಪಾಜಿ]]'' | |ಆಮನಿ |- | ೧೫೭ | ''[[ಹಲೋ ಡ್ಯಾಡಿ]]'' | |ಸೋನಾಕ್ಷಿ, ಸುರಭಿ | '''U ''' |- | ೧೫೮ | ''[[ಕರ್ನಾಟಕ ಸುಪುತ್ರ]]'' | |ಸೌಮ್ಯ ಕುಲಕರ್ಣಿ | '''U''' |- | ೧೫೯ | ''[[ಧಣಿ]]'' | ಗೋಪಿನಾಥ್ |ವಿನೀತಾ | '''U''' |- | ೧೬೦ | ''[[ಜೀವನದಿ]]'' | ಸಾಗರ್ |[[ಖುಷ್ಬೂ]] | '''U''' |- | ೧೬೧ | ''[[ಬಾಳಿನ ಜ್ಯೋತಿ]]'' | | | '''U''' |- | rowspan="5" | ೧೯೯೭ | ೧೬೨ | ''[[ಮಂಗಳ ಸೂತ್ರ (೧೯೯೭)]]'' | |[[ವಿನಯಾ ಪ್ರಸಾದ್]], [[ಪ್ರಿಯಾ ರಾಮನ್]] | '''U''' |- | ೧೬೩ | ''[[ಎಲ್ಲರಂಥಲ್ಲ ನನ್ನ ಗಂಡ]]'' | ಸೂರ್ಯ |[[ಪ್ರೇಮಾ]] | '''U''' |- | ೧೬೪ | ''[[ಶೃತಿ ಹಾಕಿದ ಹೆಜ್ಜೆ]]'' | ಡಾ.ಕುಮಾರ್ |[[ಶ್ರುತಿ]] | '''U''' |- | ೧೬೫ | ''[[ಜನನಿ ಜನ್ಮಭೂಮಿ]]'' | ಡಾ.ಯಶವಂತ್ | ಭಾರತಿ | '''U''' |- | ೧೬೬ | ''[[ಲಾಲಿ]]'' | ಕೃಷ್ಣಕುಮಾರ್ |ಮೋಹಿನಿ, ಶಾಂತಿಕೃಷ್ಣ | '''U''' |- | rowspan="4" | ೧೯೯೮ | ೧೬೭ | ''[[ನಿಶ್ಯಬ್ಧ]]'' | |ರೇವತಿ, ಮೋಹಿನಿ | '''U''' |- | ೧೬೮ | ''[[ಯಾರೇ ನೀನು ಚೆಲುವೆ]]'' | ಆಟೋ ಡ್ರೈವರ್ ವಿಷ್ಣು |ಸಂಗೀತಾ | '''U''' |- | ೧೬೯ | ''[[ಸಿಂಹದ ಗುರಿ]]'' | |[[ಚಾರುಲತಾ]] | '''U''' |- | ೧೭೦ | ''[[ಹೆಂಡ್ತಿಗೇಳ್ತೀನಿ]]'' | ಜಯರಾಮ್ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]] | '''U''' |- | rowspan="4" | ೧೯೯೯ | ೧೭೧ | ''[[ವೀರಪ್ಪನಾಯ್ಕ]]'' | ವೀರಪ್ಪನಾಯ್ಕ |[[ಶ್ರುತಿ]] | '''U''' |- | ೧೭೨ | ''[[ಹಬ್ಬ]]'' | ವಿಷ್ಣು |[[ಜಯಪ್ರದಾ]] | '''U''' |- | ೧೭೩ | ''[[ಸೂರ್ಯವಂಶ]]'' | ಸತ್ಯಮೂರ್ತಿ & ಕನಕ ಮೂರ್ತಿ |[[ಇಷಾ ಕೊಪ್ಪಿಕರ್]], [[ವಿಜಯಲಕ್ಷ್ಮಿ]] | '''U''' |- | ೧೭೪ | ''[[ಪ್ರೇಮೋತ್ಸವ]]'' | ಭರತ್ |[[ರೋಜಾ]], ದೇವಯಾನಿ | '''U''' |- | rowspan="4" | ೨೦೦೦ | ೧೭೫ | ''[[ದೀಪಾವಳಿ (ಚಲನಚಿತ್ರ)|ದೀಪಾವಳಿ]]'' | ರವೀಂದ್ರನಾಥ್ | ಚಾಂದಿನಿ | '''U''' |- | ೧೭೬ | ''[[ನನ್ ಹೆಂಡ್ತಿ ಚೆನಾಗಿದಾಳೆ]]'' | ಎ.ಸಿ.ಪಿ. ರಾಜೀವ್ ವಿಜಯ್ ರಾಘವ್ | | '''U''' |- | ೧೭೭ | ''[[ಸೂರಪ್ಪ]]'' | ಸೂರಪ್ಪ |[[ಶ್ರುತಿ]] | '''U''' |- | ೧೭೮ | ''[[ಯಜಮಾನ]]'' | ಶಂಕರ,ಗಣೇಶ |[[ಪ್ರೇಮಾ]], ಅರ್ಚನಾ | '''U''' |- | rowspan="2" | ೨೦೦೧ | ೧೭೯ | ''[[ದಿಗ್ಗಜರು]]'' | ದೊಡ್ಡ,ಚಿಕ್ಕಯ್ಯ |[[ಸಾಂಘವಿ]] | '''U''' |- | ೧೮೦ | ''[[ಕೋಟಿಗೊಬ್ಬ]]'' | ನಂಜುಂಡ |[[ಪ್ರಿಯಾಂಕ]] | '''U''' |- | rowspan="3" | ೨೦೦೨ | ೧೮೧ | ''[[ಪರ್ವ (ಚಲನಚಿತ್ರ)]]'' | ಸಾಗರ್ |[[ಪ್ರೇಮಾ]], [[ರೋಜಾ]] | '''U''' |- | ೧೮೨ | ''[[ಜಮೀನ್ದಾರ್ರು]]'' | ಬೆಟ್ಟಪ್ಪ,ಬಿಳಿಗಿರಿ |[[ಪ್ರೇಮಾ]], [[ರಾಶಿ]] | '''U''' |- | ೧೮೩ | ''[[ಸಿಂಹಾದ್ರಿಯ ಸಿಂಹ]]'' | |[[ಮೀನಾ]], [[ಭಾನುಪ್ರಿಯಾ]] | '''U''' |- | rowspan="2" | ೨೦೦೩ | ೧೮೪ | ''[[ರಾಜ ನರಸಿಂಹ]]'' | ರಾಜ ನರಸಿಂಹ |[[ರಮ್ಯ ಕೃಷ್ಣ]]. ರಾಶಿ | '''U''' |- | ೧೮೫ | ''[[ಹೃದಯವಂತ]]'' | ಶಿವಪ್ಪ |[[ನಗ್ಮಾ]] | '''U''' |- | rowspan="4" | ೨೦೦೪ | ೧೮೬ | ''[[ಕದಂಬ (ಚಲನಚಿತ್ರ)]]'' | ಮಧುಕೇಶ್ವರ ಕದಂಬ |[[ಭಾನುಪ್ರಿಯಾ]] | '''U''' |- | ೧೮೭ | ''[[ಆಪ್ತಮಿತ್ರ]]'' | ಡಾ.ವಿಜಯ್ |[[ಸೌಂದರ್ಯ]], [[ಪ್ರೇಮ]] | '''U/A''' |- | ೧೮೮ | ''[[ಸಾಹುಕಾರ]]'' | ಸಾವ್ಕಾರ್ರು-ರಾಜಾ ರವಿವರ್ಮ | | '''U''' |- | ೧೮೯ | ''[[ಜ್ಯೇಷ್ಠ]]'' | |ಅಶಿಮಾ ಬಲ್ಲಾ | '''U''' |- | rowspan="2" | ೨೦೦೫ | ೧೯೦ | ''[[ವರ್ಷ(ಚಲನಚಿತ್ರ)]]'' | ವರ್ಷ |ಮಾನ್ಯಾ | '''U''' |- | ೧೯೧ | ''[[ವಿಷ್ಣುಸೇನಾ]]'' | ಪ್ರೊ.ಜಯಸಿಂಹ |ಲಕ್ಷ್ಮಿ ಗೋಪಾಲಸ್ವಾಮಿ | '''U''' |- | rowspan="2" | ೨೦೦೬ | ೧೯೨ | ''[[ನೀನೆಲ್ಲೋ ನಾನಲ್ಲೆ]]'' | ವೀರು |ರಕ್ಷಿತಾ | '''U''' |- | ೧೯೩ | ''[[ಸಿರಿವಂತ]]'' | ನಾರಾಯಣಮೂರ್ತಿ |[[ಶ್ರುತಿ]] | '''U''' |- | rowspan="4" | ೨೦೦೭ | ೧೯೪ | ''[[ಏಕದಂತ]]'' | ವಿಜಯ್ (ಬಸ್ ಕಂಡಕ್ಟರ್) | ಪ್ರೇಮಾ | '''U''' |- | ೧೯೫ | ''[[ಕ್ಷಣ ಕ್ಷಣ]]'' | ಡಿ.ಸಿ.ಪಿ. ವಿಷ್ಣು |ಕಿರಣ್ ರಾಥೋಡ್ | '''U''' |- | ೧೯೬ | ''[[ಮಾತಾಡ್ ಮಾತಾಡು ಮಲ್ಲಿಗೆ]]'' | ಹೂವಯ್ಯ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]] | '''U''' |- | ೧೯೭ | [[ಈ ಬಂಧನ]] | ಹರೀಶ್ ರಾಜ್ |[[ಜಯಪ್ರದಾ]] | '''U''' |- | rowspan="2"|೨೦೦೯ | ೧೯೮ | ''[[ನಮ್ಮೆಜಮಾನ್ರು]]'' | ಶಶಾಂಕ್ |ಲಕ್ಷ್ಮಿ ಗೋಪಾಲಸ್ವಾಮಿ | '''U''' |- | ೧೯೯ | ''[[ಬಳ್ಳಾರಿ ನಾಗ]]'' | ನಾಗ ಮಾಣಿಕ್ಯ |ಮಾನಸಿ | '''U/A''' |- | rowspan="2"|೨೦೧೦ | ೨೦೦ | [[ಸ್ಕೂಲ್ ಮಾಸ್ಟರ್]] | ಜಗನ್ನಾಥ್ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]] | '''U/A''' |- | ೨೦೧ |[[ಆಪ್ತ ರಕ್ಷಕ]] | ಡಾ.ವಿಜಯ್ - ವಿಜಯ ರಾಜೇಂದ್ರ ಬಹದ್ದೂರ್ |ವಿಮಲಾ ರಾಮನ್ | '''U/A''' |} ===ಹಿಂದಿ=== {| border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;" |- bgcolor="#CCCCCC" align="center" ! ಸಂಖ್ಯೆ !! ಚಿತ್ರದ ಹೆಸರು |- | ೧ | ಏಕ್ ನಯಾ ಇತಿಹಾಸ್ |- | ೨ | ಇನ್ಸ್ ಪೆಕ್ಟರ್ ಧನುಷ್ |- | ೩ | ಖಾಖಿ ವರ್ಧಿ |- | ೪ | ಜಾಲೀಮ್ |- |} ===ತಮಿಳು=== {| border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;" |- bgcolor="#CCCCCC" align="center" ! ಸಂಖ್ಯೆ !! ಚಿತ್ರದ ಹೆಸರು |- | ೧ | ಮಳಲೈ ಪಟ್ಟಾಳಂ |- | ೨ | ವಿಡುದಲೈ |- | ೩ | ಅಲೈಗಳ್ |- | ೪ | ಗುರು ರಾಘವೇಂದ್ರರ್ |- | ೫ | ಮರುದ ನಾಯಗನ್ |- |೬ |ಈಟಿ |} ===ತೆಲುಗು=== {| border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;" |- bgcolor="#CCCCCC" align="center" ! ಸಂಖ್ಯೆ !! ಚಿತ್ರದ ಹೆಸರು |- | ೧ | ಸರ್ದಾರ್ ಧರ್ಮನ್ನ |- | ೨ | ಲಕ್ಷ್ಮಿ ನಿರ್ದೋಷಿ |- | ೩ | ಒಕ್ಕಡು ಚಾಲು |- |೪ |ಕಂಕಣಂ |- |} ===ಮಲಯಾಳಂ=== {| border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;" |- bgcolor="#CCCCCC" align="center" ! ಸಂಖ್ಯೆ !! ಚಿತ್ರದ ಹೆಸರು |- | ೧ | ಅಡಿಮೈ ಚಂಗಲ |- | ೨ | ಕೌರವರ್ |- | ೩ | ಈಟಿ |- |} ==ಹೊರಗಿನ ಕೊಂಡಿಗಳು== * [http://www.vishnuvardhan.com/ ವಿಷ್ಣುವರ್ಧನ್ ವೆಬ್ ಸೈಟ್]{{Dead link|date=ಜುಲೈ 2024 |bot=InternetArchiveBot |fix-attempted=yes }} * [http://www.chitraloka.com/profiles-of-kannada-film-actor-actress/47-kannada-film-actors-profile/1711-lion-of-kannada-film-industry.html ಚಿತ್ರಲೋಕದಲ್ಲಿ ವಿಷ್ಣುವರ್ಧನ್ ಬಗ್ಗೆ ಮಾಹಿತಿ] {{Webarchive|url=https://web.archive.org/web/20100106081357/http://www.chitraloka.com/profiles-of-kannada-film-actor-actress/47-kannada-film-actors-profile/1711-lion-of-kannada-film-industry.html |date=6 ಜನವರಿ 2010 }} * [http://bangaloreloka.com/2009/bangalore-city/latest-news-vishnuvardhan-died-best-kannada-actor-death-on-dec-30th.html ಕನ್ನಡದ ಮೇರು ನಟ ವಿಷ್ಣುವರ್ಧನ್ ಡಿಸೆಂಬರ್ ೩೦,೨೦೦೯ ರಂದು ದೈವಾಧೀನರಾದರು] {{Webarchive|url=https://web.archive.org/web/20100102054119/http://bangaloreloka.com/2009/bangalore-city/latest-news-vishnuvardhan-died-best-kannada-actor-death-on-dec-30th.html |date=2 ಜನವರಿ 2010 }} * [http://movies.rediff.com/report/2009/dec/30/girish-kasarvalli-pays-tribute-to-vishnuvardhan.htm ಗಿರೀಶ್ ಕಾಸರವಳ್ಳಿ ಅಂತಿಮ ನಮನ ] ==ಉಲ್ಲೇಖಗಳು== {{reflist}} {{ಕನ್ನಡ ಚಿತ್ರರಂಗದ ನಾಯಕರು}} {{Interwikineeded}} [[ವರ್ಗ:ಕನ್ನಡ ಚಿತ್ರರಂಗದ ನಟರು]] [[ವರ್ಗ:ಸಿನಿಮಾ ತಾರೆಗಳು]] [[ವರ್ಗ:ಕನ್ನಡ ಸಿನೆಮಾ]] 5vx1kf39b93anzus4kzozizk3fvt7zc ಜೂನ್ ೬ 0 7687 1374829 1348070 2026-06-07T07:32:13Z Mallikarjunasj 11080 1374829 wikitext text/x-wiki [[{{PAGENAME}}]] - [[ಜೂನ್]] [[ತಿಂಗಳು|ತಿಂಗಳ]] ಆರನೇ [[ದಿನ]]. [[ಗ್ರೆಗೋರಿಯನ್ ಕ್ಯಾಲೆಂಡರ್]] [[ವರ್ಷ]]ದಲ್ಲಿನ ೧೫೭ನೇ ದಿನ([[ಅಧಿಕ ವರ್ಷ|ಅಧಿಕ ವರ್ಷದಲ್ಲಿ]] ೧೫೮ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೪೪ ದಿನಗಳು ಉಳಿದಿರುತ್ತವೆ. {{ಜೂನ್ ತಿಂಗಳು}} ==ಪ್ರಮುಖ ಘಟನೆಗಳು== * ==ಜನನ== * [[೧೮೯೧]] - [[ಕನ್ನಡ|ಕನ್ನಡದ]] ಸಾಹಿತಿ, [[ಜ್ಞಾನಪೀಠ ಪ್ರಶಸ್ತಿ]] ಪುರಸ್ಕೃತ [[ಮಾಸ್ತಿ ವೆಂಕಟೇಶ ಅಯ್ಯಂಗಾರ್]]. * [[೧೯೨೪]] - [[ಕರ್ನಾಟಕ]]ದ ಮುಖ್ಯಮಂತ್ರಿಗಳಾಗಿದ್ದ [[ಎಸ್.ಆರ್.ಬೊಮ್ಮಾಯಿ]]. * [[೧೯೩೫]] - ಟಿಬೆಟಿಯನ್ನರ ಧರ್ಮಗುರು [[ದಲಾಯಿ ಲಾಮಾ]]. * [[೧೯೩೭]] - [[ಕನ್ನಡ]]ದ ಹಿರಿಯ ಸಾಹಿತಿ [[ನಾ.ಡಿಸೋಜಾ]]. * [[ಎಚ್_ನರಸಿಂಹಯ್ಯ|ಎಚ್ ನರಸಿಂಹಯ್ಯ]] ==ನಿಧನ== * [[೧೯೮೬]] - [[ಕನ್ನಡ|ಕನ್ನಡದ]] ಸಾಹಿತಿ, [[ಜ್ಞಾನಪೀಠ ಪ್ರಶಸ್ತಿ]] ಪುರಸ್ಕೃತ [[ಮಾಸ್ತಿ ವೆಂಕಟೇಶ ಅಯ್ಯಂಗಾರ್]]. * [[೧೯೮೨]] - [[ಕರ್ನಾಟಕ]]ದ ಮುಖ್ಯಮಂತ್ರಿಗಳಾಗಿದ್ದ [[ದೇವರಾಜ ಅರಸು]]. ==ರಜೆಗಳು/ಆಚರಣೆಗಳು== * ==ಖಗೋಳ ವಿಧ್ಯಮಾನಗಳು== * [[೨೦೧೨]] - ವಿಶ್ವದ ಅನೇಕ ಭಾಗಗಳಲ್ಲಿ ಶತಮಾನದ ಅಪರೂಪದ ಖಗೋಳ ವಿಧ್ಯಮಾನ [[ಶುಕ್ರ ಸಂಕ್ರಮ]]ವನ್ನು ವೀಕ್ಷಿಸಲಾಯಿತು. ==ಹೊರಗಿನ ಸಂಪರ್ಕಗಳು== *[http://www.tnl.net/when/today ಇತಿಹಾಸದಲ್ಲಿ ಈ ದಿನ] {{Webarchive|url=https://web.archive.org/web/20050805011822/http://www.tnl.net/when/today |date=2005-08-05 }} *[http://www.todayinsci.com/ ವಿಜ್ಞಾನ ಕ್ಷೇತ್ರದಲ್ಲಿ ಈ ದಿನ] *[[ದಿ ಹಿಸ್ಟರಿ ಚಾನೆಲ್ ]]: [http://www.historychannel.com/today/ ಇತಿಹಾಸದಲ್ಲಿ ಈ ದಿನ] *[http://www.on-this-day.com/ ಆನ್-ದಿಸ್-ಡೇ ತಾಣ] {{ತಿಂಗಳುಗಳು}} {{Unreferenced}} {{Interwikineeded}} [[ವರ್ಗ:ದಿನಗಳು]] [[ವರ್ಗ: ಜೂನ್]] 6bmiwqw663aulw8r0mgoytuf3k2470q ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಜೂನ್ 4 15617 1374828 1305811 2026-06-07T07:29:34Z Mallikarjunasj 11080 1374828 wikitext text/x-wiki <div style="float:right;margin-left:0.5em"> </div> [[ಚಿತ್ರ:Blue circle for diabetes.svg|thumb|ಮಧುಮೇಹದ ಯುನಿವರ್ಸಲ್ ನೀಲಿ ವಲಯ ಚಿಹ್ನೆ]] *[[ಜೂನ್ ೧]]: [[ವಿಶ್ವ ಹಾಲು ದಿನ]] *[[ಜೂನ್ ೩]]: [[ವಿಶ್ವ ಬೈಸಿಕಲ್ ದಿನ]] *[[ಜೂನ್ ೫]]: [[ವಿಶ್ವ ಪರಿಸರ ದಿನ]], [[ಕಬೀರ್]] ಜಯಂತಿ *[[ಜೂನ್ ೬]]: [[ಎಚ್_ನರಸಿಂಹಯ್ಯ]] ಜನ್ಮದಿನ [[ಡಿ_ದೇವರಾಜ_ಅರಸ್]] ಪುಣ್ಯ ತಿಥಿ *[[ಜೂನ್ ೭]]: ವಿಶ್ವ ಸಾಗರ ದಿನ, [[ಬಕ್ರೀದ್|ಬಕ್ರಿದ್ ಹಬ್ಬ]] *[[ಜೂನ್ ೧೨]]: ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನ. *[[ಜೂನ್ ೧೨]]: '''[[ಫಿಲಿಪ್ಪೀನ್ಸ್]]''' ದೇಶದ [[ಸ್ವಾತಂತ್ರ್ಯ ದಿನಾಚರಣೆ]]. *[[ಜೂನ್ ೧೫]]: [[ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ|ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ]] ಸ್ಥಾಪನೆಯ ವಾರ್ಷಿಕೋತ್ಸವ. *[[ಜೂನ್ ೧೮]]: [[ಗೋವಾ]] ವಿಮೋಚನೆ ದಿನ, ವಿಶ್ವ ತಂದೆಯರ ದಿನ *[[ಜೂನ್ ೨೦]]: ವಿಶ್ವ ನಿರಾಶ್ರಿತರ ದಿನ . *[[ಜೂನ್ ೨೧]]: [[ಅಂತರಾಷ್ಟ್ರೀಯ ಯೋಗ ದಿನಾಚರಣೆ|ಅಂತಾರಾಷ್ಟ್ರೀಯ ಯೋಗ ದಿನ]] , ವಿಶ್ವ ಸಂಗೀತ ದಿನ *[[ಜೂನ್ ೨೬]]: ವಿಶ್ವ ಮಾದಕ ವಸ್ತು ನಿರ್ಮೂಲನಾ ದಿನ, ತುರ್ತು ಪರಿಸ್ಥಿತಿ ವಿರೋಧಿ ದಿನ *[[ಜೂನ್ ೨೭]]: ವಿಶ್ವ [[ಮಧುಮೇಹ]] ದಿನ ''(ಚಿತ್ರಿತ)'' *[[ಜೂನ್ ೨೮]]: ಬಡತನ ದಿನ *[[ಜೂನ್ ೨೯]]: [[ರಾಷ್ಟ್ರೀಯ ಅಂಕಿಅಂಶ ದಿನ]] </div> <div align=right>{{ಸಂಪಾದಿಸಿ|ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಜೂನ್}}</div> s167gqr9t8bc7h9uaid9g9ao2nrpbn0 ಜಾರ್ಜ್ ಫರ್ನಾಂಡಿಸ್ 0 38556 1374819 1347636 2026-06-06T16:59:49Z Mahaveer Indra 34672 ಸಹಿ 1374819 wikitext text/x-wiki <!-- {{Under construction|notready=true}} {{WQA in progress}} --> {{Infobox Indian politician | name = ಜಾರ್ಜ್ ಫರ್ನಾಂಡೀಸ್ |image= George Fernandes (cropped).jpg | caption = | birth_date = ಜೂನ್ ೩, ೧೯೩೦ | date_date = ಜನವರಿ ೨೯, ೨೦೧೯ | nationality = ಭಾರತೀಯರು | birth_place = ಮಂಗಳೂರು | residence = ಬೆಂಗಳೂರು | office = ಕೇಂದ್ರ ರಕ್ಷಣಾ ಸಚಿವ | term_start = ೨೧ ಅಕ್ಟೋಬರ್ ೨೦೦೧ | term_end = ೨೨ ಮೇ ೨೦೦೪ | primeminister = [[ಅಟಲ್ ಬಿಹಾರಿ ವಾಜಪೇಯಿ]] | predecessor = ಜಸ್ವಂತ್ ಸಿಂಗ್ | successor = [[ಪ್ರಣಬ್ ಮುಖರ್ಜಿ]] | term_start1 = ೧೯ ಮಾರ್ಚ್ ೧೯೯೮ | term_end1 = ೧೬ ಮಾರ್ಚ್ ೨೦೦೧ | primeminister1 = [[ಅಟಲ್ ಬಿಹಾರಿ ವಾಜಪೇಯಿ]] | predecessor1 = [[ಮುಲಾಯಂ ಸಿಂಗ್ ಯಾದವ್]] | successor1 = ಜಸವಂತ್ ಸಿಂಗ್ | office2 = ಕೇಂದ್ರ ರೈಲ್ವೇ ಸಚಿವರು | term_start2 = ೨ ಡಿಸೆಂಬರ್ ೧೯೮೯ | term_end2 = ೧೦ ನವೆಂಬರ್ ೧೯೯೦ | primeminister2 = ವಿ. ಪಿ. ಸಿಂಗ್ | predecessor2 = ಮಾಧವ ರಾವ್ ಸಿಂಧಿಯಾ | successor2 = ಜ್ಞಾನೇಶ್ವರ ಮಿಶ್ರಾ | spouse = ಲೀಲಾ ಕಬೀರ್ | children = ಒಬ್ಬ ಪುತ್ರ | website = | signature = George Fernandes Autograph.svg }} '''ಜಾರ್ಜ್ ಫರ್ನಾಂಡೀಸ್''' ([[ಜೂನ್ ೩]], [[೧೯೩೦]] - ಜನವರಿ ೨೯, ೨೦೧೯) ಭಾರತದ ಕಾರ್ಮಿಕ ಮುಖಂಡ,<ref>https://www.vishwavani.news/george-fernandez-no-more/{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಸಮಾಜ ಸೇವಕ, ರಾಜಕಾರಣಿ,<ref>https://www.prajavani.net/stories/national/gaint-killer-george-farnandis-610754.html</ref> ಭಾರತ ಸರಕಾರದಲ್ಲಿ ಮಂತ್ರಿ ಹಾಗೂ ಪತ್ರಿಕೋದ್ಯೋಗಿ<ref>https://web.archive.org/web/20100812115404/http://www.parliamentofindia.nic.in/ls/lok13/biodata/13BI34.htm</ref> ಆಗಿದ್ದರು. ದಕ್ಷಿಣ ಭಾರತದಲ್ಲಿ ಜನಿಸಿ, ಉತ್ತರ ಭಾರತದಲ್ಲಿ ರಾಜಕೀಯ ಬದುಕು ಸವೆಸಿದ ಜಾರ್ಜ್, ನಿಜ ಅರ್ಥದಲ್ಲಿ ಭಾರತೀಯ ಎನ್ನಿಸಿಕೊಂಡ ನೇತಾರ. ==ಬಾಲ್ಯ== ಜಾರ್ಜ್ ಫರ್ನಾಂಡೀಸ್ ಜೂನ್ ೩, ೧೯೩೦ರಂದು ಮಂಗಳೂರಿನಲ್ಲಿ ಜಾನ್ ಜೋಸೆಫ್ ಫರ್ನಾಂಡಿಸ್ ಮತ್ತು ಅಲೀಸ್ ಮಾರ್ಥಾ ಫರ್ನಾಂಡಿಸ್ ದಂಪತಿಗಳ ಮೊದಲ ಮಗನಾಗಿ ಜನಿಸಿದರು.<ref>https://web.archive.org/web/20090628215852/http://www.daijiworld.com/chan/achievers_view.asp?a_id=24</ref> ಇಂಗ್ಲೆಂಡ್ ದೊರೆ ೫ ಜಾರ್ಜ್ ಅಭಿಮಾನಿಯಾಗಿದ್ದ ತಾಯಿ ಅಲೀಸ್, ದೊರೆ ಜಾರ್ಜ್ ಜನಿಸಿದ ಜೂನ್ ೩ನೆಯ ತಾರೀಖಿನಂದೇ ಹುಟ್ಟಿದ ಮಗನಿಗೆ, ದೊರೆಯ ನೆನಪಿನಲ್ಲಿ ಜಾರ್ಜ್ ಎಂದೇ ಹೆಸರಿಟ್ಟರು.<ref>https://www.ndtv.com/india-news/george-fernandes-death-10-reasons-why-george-fernandes-was-a-legendary-politician-1984772</ref> ಲಾರೆನ್ಸ್, ಮೈಕೆಲ್, ಪಾಲ್, ಅಲಾಯ್ಷಿಯಸ್ ಮತ್ತು ರಿಚರ್ಡ್, ಹೀಗೆ ೫ ಮಂದಿ ತಮ್ಮಂದಿರಿಗೆ ಅಣ್ಣನಾಗಿ ಬೆಳೆದ ಜಾರ್ಜ್, ಮಂಗಳೂರಿನ ಸೇಂಟ್ ಅಲಾಯ್ಷಿಯಸ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದಿದರು. ಮನೆಯವರ ಒತ್ತಾಯದಿಂದ ಪಾದ್ರಿ-ತರಬೇತಿ ಪಡೆಯಲು, ಜಾರ್ಜ್, ಬೆಂಗಳೂರಿನ ಸೇಂಟ್ ಪೀಟರ್ಸ್ ಸೆಮಿನರಿಗೆ ೧೯೪೬ರಲ್ಲಿ ದಾಖಲಾದರು. ೧೯೪೮ರ ಹೊತ್ತಿಗೆ ಸೆಮಿನರಿನಲ್ಲಿನ ಕಟು ವಾಸ್ತವ, ಯೋಚನಾವಿಧಾನದ ವ್ಯತ್ಯಯದಿಂದ ಕ್ರುದ್ಧರಾದ ಜಾರ್ಜ್, ಸೆಮಿನರಿಗೆ ಶರಣು ಹೇಳಿ ಹೊರನಡೆದರು. ಪುನಃ ತವರು ಮಂಗಳೂರಿನಲ್ಲಿ ಕೆಲಕಾಲ ಬದುಕು ಕಟ್ಟಲು ಪ್ರಯತ್ನಿಸಿ, ಕನಸಿನ ನಗರಿ ಮುಂಬೈಗೆ ತೆರಳಿದರು.<ref>https://books.google.com.bh/books?id=TiG-pS2v3N0C&pg=PA85#v=onepage&q&f=true</ref> ==ಕಾರ್ಮಿಕ ಸಂಘಟನೆಯಲ್ಲಿ== ೫೦ರ ದಶಕದಲ್ಲಿನ ಕಾರ್ಮಿಕರ ಬದುಕಿನ ಅಮಾನವೀಯ ಅಂಶಗಳನ್ನು ಹತ್ತಿರದಿಂದ ಕಂಡ ಜಾರ್ಜ್‍ರಲ್ಲಿ, ದಮನಿತರ ಪರ ದನಿ ಎತ್ತುವ ಪಸೆ ಮನೆಮಾಡಿತ್ತು. ಅಲ್ಲಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ದಿನಗಳಲ್ಲೇ ಮಂಗಳೂರಿನ ಸರಕು ಸಾಗಣೆ ಸಂಸ್ಥೆಗಳಲ್ಲಿ ಮತ್ತು ಹೋಟೆಲುಗಳಲ್ಲಿ ಕೆಲಸ ಮಾಡುತ್ತಿದ್ದ ಅಸಂಘಟಿತ ಶೋಷಿತ ಕಾರ್ಮಿಕರನ್ನು ಒಗ್ಗೂಡಿಸಿ ಅವರ ಪರವಾದ ಹೋರಾಟಗಳಿಗೆ ಧ್ವನಿಯಾದರು. ಮುಂದೆ ಮುಂಬಯಿಗೆ ಬಂದು ಕೆಲಸ ಹುಡುಕುತ್ತಾ ಹಲವಾರು ಬಾರಿ ರಸ್ತೆಗಳ ಬದಿಯಲ್ಲಿ ಮಲಗಿ ಬದುಕು ಸವೆಸಿದರು. <br> ನಂತರ ಪತ್ರಿಕೆಯೊಂದರಲ್ಲಿ ಪ್ರೂಫ್ ರೀಡರ್ ಆದರು. ಹಲವಾರು ಪತ್ರಿಕೆಗಳಲ್ಲಿ ಸಂಪಾದಕೀಯ ಬರೆದು,ರೈತರ ಮತ್ತು ಕಾರ್ಮಿಕರ ಧ್ವನಿಯಾದರು. ಮುಂದೆ ಪ್ಲಾಸಿಡ್ ಡಿ’ಮೆಲ್ಲೋ, ರಾಮ್ ಮನೋಹರ್ ಲೋಹಿಯಾ ಅವರ ಸಹಚರ್ಯೆಗೆ ಬಂದ ಜಾರ್ಜ್ ಫರ್ನಾಂಡೀಸ್, ಅವರುಗಳ ಕಾರ್ಯದಿಂದ ಪ್ರೇರಿತರಾಗಿ ಹೋಟೆಲ್ ಕಾರ್ಮಿಕರು ಮತ್ತು ಸಣ್ಣ ಸಣ್ಣ ಉದ್ಯಮಗಳಲ್ಲಿ ಕೂಲಿ ಮಾಡುತ್ತಿದ್ದ ಶೋಷಿತ ಕಾರ್ಮಿಕರ ಸಂಘಟನೆಗಾಗಿ ಕೆಲಸ ಮಾಡತೊಡಗಿದರು. ಹೀಗೆ ಐವತ್ತು-ಅರವತ್ತರ ದಶಕದಲ್ಲಿ ಅವರು ಮುಂಬಯಿನ ಪ್ರಭಾವಿ ಕಾರ್ಮಿಕ ನಾಯಕರಾಗಿದ್ದರು. ==ರಾಜಕೀಯ ಬದುಕು== ೧೯೬೧ರಿಂದ ೧೯೬೮ರ ಅವಧಿಯಲ್ಲಿ ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ನಿನ ಸದಸ್ಯರಾಗಿ ಸೇವೆ ಸಲ್ಲಿಸಿ, ಜನಪ್ರಿಯರಾದರು. ೧೯೬೭ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿ ಸದಾಶಿವ ಕಣೋಜಿ ಪಾಟೀಲ್ (ಎಸ್.ಕೆ. ಪಾಟೀಲ್) ಅಂತಹ ಜನಪ್ರಿಯ ಕಾಂಗ್ರೆಸ್ ನಾಯಕರನ್ನು ಭಾರೀ ಅಂತರದಿಂದ ಸೋಲಿಸಿದರು. ಕ್ರಮೇಣವಾಗಿ ಮುಂಬಯಿನಲ್ಲಿನ ಕಾರ್ಮಿಕ ಸಂಘಟನೆಗಳಲ್ಲಿ ಜಾರ್ಜ್ ಫರ್ನಾಂಡೀಸ್ ಅವರ ಪ್ರಭಾವ ಕಡಿಮೆಯಾಗತೊಡಗಿದರೂ ಅವರು ರೈಲ್ವೇ ಫೆಡರೆಶನ್ನಿನ ಅಧ್ಯಕ್ಷರಾಗಿ ಭಾರತಾದ್ಯಂತ ರೈಲ್ವೇ ಚಳುವಳಿಯನ್ನು ಸಂಘಟಿಸಿದರು. ಈ ಚಳುವಳಿಯಿಂದ ಇಡೀ ಭಾರತವೇ ಸ್ಥಬ್ಧವೆನಿಸಿತ್ತು. ==ಪತ್ರಕರ್ತರಾಗಿ ಮತ್ತು ಬರಹಗಾರರಾಗಿ== ಜಾರ್ಜ್ ಫರ್ನಾಂಡೀಸ್ ತಮ್ಮ ಓದಿನ ದಿನಗಳಿಂದಲೇ ಬರವಣಿಗೆಗೆ ತೊಡಗಿದ್ದರು. ೧೯೪೯ರಲ್ಲಿ ಅವರು ‘ಕೊಂಕಣಿ ಯುವಕ್’ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಅದೇ ಸಮಯದಲ್ಲಿ ಕನ್ನಡದಲ್ಲಿ ‘ರೈತವಾಣಿ’ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು. 2022 ರಲ್ಲಿ, ಕೆನಡಾ ಮೂಲದ ಸಂಶೋಧಕ ಕ್ರಿಸ್ ಇಮ್ಯಾನುಯೆಲ್ ಡಿಸೋಜಾ ಅವರು 'ಬಂಧ್ ಸಾಮ್ರಾಟ್ - ಟೇಲ್ಸ್ ಆಫ್ ಎಟರ್ನಲ್ ರೆಬೆಲ್' ಎಂಬ ಪುಸ್ತಕವನ್ನು ಪ್ರಕಟಿಸಿದರು, ಜಾರ್ಜ್ ಫೆರ್ನಾಂಡಿಸ್ ಅವರ ತವರು ಪಟ್ಟಣವಾದ ಮಂಗಳೂರಿನಲ್ಲಿ ಟ್ರೇಡ್ ಯೂನಿಯನ್ ಕಾರ್ಯಕರ್ತರಾಗಿ ಆರಂಭಿಕ ಹೋರಾಟಗಳು ಮತ್ತು ಮುಂಬೈನಲ್ಲಿ ಅವರ ಪ್ರಗತಿಯನ್ನು ಹೆಚ್ಚಾಗಿ ಕೇಂದ್ರೀಕರಿಸಿದರು<ref>https://www.newindianexpress.com/states/karnataka/2022/Aug/11/book-chronicling-george-fernandes-public-life-out-2486338.html</ref>. ೧೯೫೨-೫೩ರ ಅವಧಿಯಲ್ಲಿ ತನ್ನ ಕಾರ್ಯನಿಲ್ಲಿಸಿದ್ದ ‘Dockman’ ವಾರಪತ್ರಿಕೆಯನ್ನು ಪುನಃಚೇತನಗೊಳಿಸಿದರು. ಅವರು ರಚಿಸಿದ ವೈಚಾರಿಕ ಗ್ರಂಥಗಳೆಂದರೆ What Ails the Socialists (೧೯೭೨), The Kashmir Problem, Railway Strike of ೧೯೭೪, Dignity for All: Essays in Socialism and Democracy (೧೯೯೧), ಮತ್ತು ಅವರ ಆತ್ಮಚರಿತ್ರೆಯಾದ George Fernandes Speaks (೧೯೯೧). ಇದಲ್ಲದೆ ಅವರು ಇಂಗ್ಲಿಷ್ ಮಾಸಿಕ The Other Side ಪತ್ರಿಕೆಯ ಸಂಪಾದಕರೂ ಆಗಿದ್ದರು. ಹಿಂದಿಯಲ್ಲಿ ಮೂಡಿಬರುತ್ತಿದ್ದ ‘ಪ್ರತಿಪಕ್ಷ್’ ಪತ್ರಿಕೆಯ ಸಂಪಾದಕೀಯ ಮಂಡಲಿಯ ಅಧ್ಯಕ್ಷರಾಗಿದ್ದರು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿದ್ದರು. ಮಾನವ ಹಕ್ಕುಗಳ ಹೋರಾಟಗಾರರಾಗಿ Amnesty International, People's Union for Civil Liberties ಸಂಸ್ಥೆಗಳ ಸದಸ್ಯರಾಗಿದ್ದರು. ==ತುರ್ತುಪರಿಸ್ಥಿತಿ ವಿರುದ್ಧ== ಇಂದಿರಾಗಾಂಧಿ ಅವರ ಸರ್ವಾಧಿಕಾರತ್ವದ ವಿರುದ್ಧ ಭೂಗತರಾಗಿ ಬಂಡೆದ್ದವರು ಜಾರ್ಜ್ ಫರ್ನಾಂಡೀಸ್. ಅವರನ್ನು ಇಂದಿರಾಗಾಂಧಿ ಸರ್ಕಾರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಸಲು ವಾರಂಟ್ ಹೊರಡಿಸಿದಾಗ ತಪ್ಪಿಸಿಕೊಂಡು ಭೂಗತ ಚಟುವಟಿಕೆಗಳಿಗೆ ಮೊದಲು ಮಾಡಿದರು. ಜಾರ್ಜ್ ಕೈಗೆ ಸಿಗದಿದ್ದಾಗ ಪೋಲೀಸರು ಅವರ ಸಹೋದರ ಲಾರೆನ್ಸ್ ಫರ್ನಾಂಡೀಸ್ ಅವರನ್ನು ಬಂಧಿಸಿ ಚಿತ್ರಹಿಂಸೆಗೆ ಒಳಪಡಿಸಿದರು. ಅವರೊಡನೆ ಸಂಪರ್ಕ ಹೊಂದಿದ್ದರೆಂಬ ಕಾರಣದಿಂದ 'ಸಂಸ್ಕಾರ' ಚಿತ್ರದ ಖ್ಯಾತಿಯ ಸ್ನೇಹಲತಾರೆಡ್ಡಿ ಅವರಿಗೆ ಅನಾರೋಗ್ಯವಿದ್ಧಾಗಿಯೂ ಬಂಧಿಸಿ ತೊಂದರೆಗೊಳಪಡಿಸಿದರು. ಇತ್ತ ಜಾರ್ಜ್ ಫರ್ನಾಂಡೀಸ್ ಕೆಲವೊಂದು ಸರ್ಕಾರಿ ಶೌಚಾಲಯಗಳಲ್ಲಿ ಮತ್ತು ಇಂದಿರಾ ಗಾಂಧಿಯವರು ಭಾಷಣ ಮಾಡುತ್ತಿದ್ದ ಸ್ಥಳಗಳ ಸುತ್ತಮುತ್ತ ಸಾವು ನೋವುಗಳು ಸಂಭವಿಸದ ರೀತಿಯಲ್ಲಿ ಡೈನಮೈಟ್ ಸಿಡಿಸಿ ಗಾಬರಿ ಹುಟ್ಟಿಸುವುದರ ಮೂಲಕ ಇಂದಿರಾಗಾಂಧಿ ಅವರ ತುರ್ತುಪರಿಸ್ಥಿತಿಯನ್ನು ವಿರೋಧಿಸುವ ಯೋಜನೆಗಳನ್ನು ನೇಯ್ದಿದ್ದರು.<ref>{{Cite web |url=http://www.expressindia.com/ie/daily/20000626/ina26016.html |title=ಆರ್ಕೈವ್ ನಕಲು |access-date=2012-03-03 |archive-date=2012-10-10 |archive-url=https://web.archive.org/web/20121010223506/http://www.expressindia.com/ie/daily/20000626/ina26016.html |url-status=dead }}</ref> ಇಂದಿರಾ ಗಾಂಧಿ ಭಾಷಣ ಮಾಡಬೇಕಿದ್ದ ವಾರಣಾಸಿಯಲ್ಲಿ ವೇದಿಕೆಯನ್ನು ಕಾರ್ಯಕ್ರಮಕ್ಕೆ ನಾಲ್ಕು ಗಂಟೆಗಳ ಮುಂಚೆ ಸ್ಫೋಟಿಸುವ ಪ್ರಯತ್ನಗಳು ನಡೆದವು. ಇದು ಬರೋಡ ಡೈನಮೈಟ್ ಪ್ರಕರಣ ಎಂದು ಪ್ರಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಸೆರೆಸಿಕ್ಕ ಜಾರ್ಜ್ ಫರ್ನಾಂಡಿಸ್ ಅವರನ್ನು ಇಂದಿರಾಗಾಂಧಿ ಸರ್ಕಾರ ಖೈದಿಯಾಗಿ ಜೈಲಿನಲ್ಲಿರಿಸಿತು.<ref>{{Cite web |url=http://mintonsunday.livemint.com/news/george-fernandes-rebel-without-a-pause/2.3.3199867612.html |title=ಆರ್ಕೈವ್ ನಕಲು |access-date=2019-01-29 |archive-date=2015-09-26 |archive-url=https://web.archive.org/web/20150926163812/http://mintonsunday.livemint.com/news/george-fernandes-rebel-without-a-pause/2.3.3199867612.html |url-status=dead }}</ref> ==ಜನತಾ ಸರ್ಕಾರದಲ್ಲಿ ಕೇಂದ್ರ ಕೈಗಾರಿಕಾ ಮಂತ್ರಿ== ಮುಂದೆ ಚುನಾವಣೆಗಳು ಘೋಷಿತವಾದಾಗ ಜೈಲಿನಿಂದಲೇ ಚುನಾವಣಾ ನಾಮಪತ್ರ ಸಲ್ಲಿಸಿ ಒಮ್ಮೆ ಕೂಡಾ ಚುನಾವಣಾ ಪ್ರಚಾರ ಮಾಡುವ ಅವಕಾಶ ಸಿಗದಿದ್ದಾಗಿಯೂ ಪ್ರಚಂಡವಾದ ಜಯ ಸಾಧಿಸಿದರು. ಮುರಾರ್ಜಿ ದೇಸಾಯಿಯವರ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಗಳಾದ ಜಾರ್ಜ್ ಫರ್ನಾಂಡೀಸ್, ಬಹುರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಸಮರ ಸಾರಿದರು. ಭಾರತದ ಸಮಾಜವಾದಿ ಹಿನ್ನೆಲೆಯ ಕಾನೂನುಗಳನ್ನು ಪಾಲಿಸದ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಹಿಂದಿನ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದನ್ನು ವಿರೋಧಿಸುತ್ತಲೇ ಬಂದಿದ್ದ ಜಾರ್ಜ್, ತನಿಖೆ ಮತ್ತು <ref>https://www.bbc.com/news/world-asia-india-47039190</ref><br> ===ಐ.ಬಿ.ಎಂ=== ವಿಕ್ರಮ್ ಸಾರಾಭಾಯಿ ಸಮಿತಿ ನೀಡಿದ ವರದಿಯ ಅನ್ವಯ, ಐ.ಬಿ.ಎಂ ಸಂಸ್ಥೆ ಸರ್ಕಾರಿ ಇಲಾಖೆಗಳಿಗೆ ಹಳೆಯ ಕಂಪ್ಯೂಟರ್‍ಗಳನ್ನು ದುಬಾರಿ ಬೆಲೆಗೆ ಬಾಡಿಗೆಗೆ ನೀಡುತ್ತಿದೆ ಎಂಬುದನ್ನು ಕಂಡೂ ಹಿಡಿದ ಜಾರ್ಜ್, ಕಾನೂನು ಸಮರ ಶುರುವಿಟ್ಟರು. ವಿದೇಶಿ ವಿನಿಮಯದ ಕಾನೂನಿಗೆ ವಿರುದ್ದವಾಗಿ ನಡೆಯುತ್ತಿದೆ ಎಂದು ಆರೋಪಿಸಿದ ಕಾರಣ ೧೯೭೮ ಜೂನ್ ನಲ್ಲಿ ಐ.ಬಿ.ಎಂ ಭಾರತದಲ್ಲಿ ತನ್ನ ವಹಿವಾಟು ನಿಲ್ಲಿಸಿತು.<ref>https://www.businesstoday.in/current/corporate/ibm-india-george-fernandes-history-in-india/story/16367.html</ref> ೧೯೮೦ರಲ್ಲಿ ಜನತಾ ಸರ್ಕಾರ ಪತನವಾದ ನಂತರ ಐ.ಬಿ.ಎಂ ಮತ್ತೆ ಉಪಕರಣ ರಫ್ತು ಶುರುಮಾಡಿತು. ===ಕೋಕಾಕೋಲಾ=== ಕೋಕಾಕೋಲಾ ಕಂಪನಿಯ ವಿರುದ್ಧ ಕೂಡ ೧೯೭೪ರಲ್ಲಿ ಶುರುವಾದ ವಿದೇಶಿ ವಿನಿಮಯ ಉಲ್ಲಂಘನೆಯ ಆರೋಪದ ಬಗ್ಗೆ ಕಾನೂನು ಸಮರ ಸಾರಿದ ಜಾರ್ಜ್, ಕೋಕಾಕೋಲಾ ಕಂಪನಿ ಶೇ೪೦ರಷ್ಟು ಷೇರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇಡತಕ್ಕದ್ದು ಎಂಬ ಕಾನೂನಿನಂತೆ ನಡೆಯಲು ಸೂಚಿಸಿದರು. ಇದಕ್ಕೆ ಒಪ್ಪದ ಕೋಕಾಕೋಲಾ, ಭಾರತದಲ್ಲಿ ತನ್ನ ವ್ಯಾಪಾರವನ್ನು ನಿಲ್ಲಿಸಿತು.<ref>https://www.indiatoday.in/india/story/george-fernandes-coca-cola-india-1441600-2019-01-29</ref> ಸ್ವದೇಶಿ ತಯಾರಿಕೆಯ ೭೭ ಎಂಬ ಪೇಯವನ್ನು ಸರ್ಕಾರಿ ಸಂಸ್ಥೆ ಮಾಡರ್ನ್ ಫುಡ್ ಇಂಡಸ್ಟ್ರಿಯ ಅಡಿಯಲ್ಲಿ ಮಾರಾಟ ಮಾಡಲು ಯೋಜಿಸಿದ ಜಾರ್ಜ್ ನಡೆ ಫಲ ಕೊಡಲಿಲ್ಲ. ಥಮ್ಸ್ ಅಪ್ ಮುಂತಾದ ಪೇಯಗಳ ಎದುರು ನಷ್ಟ ಅನುಭವಿಸಿದ ೭೭, ೩ ವರ್ಷಗಳ ನಂತರ ಉತ್ಪಾದನೆ ನಿಲ್ಲಿಸಿತು.<ref>https://www.moneycontrol.com/news/business/did-george-fernandes-drive-coca-cola-out-from-india-in-the-70s-3447791.html</ref> ೧೯೯೩ರಲ್ಲಿ ಕೋಕಾಕೋಲಾ ಮತ್ತೆ ಭಾರತದಲ್ಲಿ ವ್ಯಾಪಾರ ಶುರು ಮಾಡಿತು. ===ಜನತಾ ಸರ್ಕಾರ ಪತನ=== ೧೯೭೮ರಲ್ಲಿ ಮಧು ಲಿಮಯೆ ಆರ್.ಎಸ್.ಎಸ್ ಸದಸ್ಯತ್ವ ಹೊಂದಿದ ಜನತಾ ಪರಿವಾರದ ಸದಸ್ಯರ ವಿರುದ್ಧ ಮಧು ಲಿಮಯೆ ಮಂಡಿಸಿದ ಅವಿಶ್ವಾಸ ಮಸೂದೆಯಲ್ಲಿ ಭಾರತೀಯ ಜನಸಂಘದ ನಿಲುವು ವಿರೋಧಿಸಿದ ಜಾರ್ಜ್, ಮೊರಾರ್ಜಿ ಸರ್ಕಾರ ಪತನವಾದಾಗ, ಜಾರ್ಜ ರಾಜೀನಾಮೆ ಇತ್ತರು. ಮೊರಾರ್ಜಿ ವಿರುದ್ಧ ವಾದ ಮಂಡಿಸಿದ ಜಾರ್ಜ್, ಚರಣ್ ಸಿಂಗ್‍ರಿಗೆ ಬೆಂಬಲವಿತ್ತು, ಟೀಕೆಗೆ ಒಳಗಾದರು.<ref>https://scroll.in/article/911260/why-george-fernandess-resignation-from-the-janata-government-made-him-better-at-building-coalitions</ref> ೧೯೮೦ರಲ್ಲಿ ಮುಜಫ್ಫರಪುರದಿಂದ ಸಂಸತ್ತಿಗೆ ಆಯ್ಕೆಯಾದ ಜಾರ್ಜ್, ೧೯೮೪ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣೆಗೆ ನಿಂತು, ಇಂದಿರಾಗಾಂಧಿ ಹತ್ಯೆಯ ಬೃಹತ್ ಅನುಕಂಪದ ಅಲೆಯ ಕಾರಣ ೪೦,೦೦೦ ಮತಗಳಿಂದ ಸೋತರು.<ref>https://www.thehindu.com/news/national/george-fernandes-obituary-1930-2019/article26120571.ece</ref> ==ಸಂಯುಕ್ತ ರಂಗ ಸರ್ಕಾರದ ರೈಲ್ವೇ ಮಂತ್ರಿ== ೧೯೮೯ರ ಚುನಾವಣೆಯಲ್ಲಿ ಮರಳಿ ಮುಜಫ್ಫರಪುರದಿಂದ ಸಂಸತ್ತಿಗೆ ಆಯ್ಕೆಯಾದ ಜಾರ್ಜ್ ರೈಲ್ವೇ ಮಂತ್ರಿಯಾದಾಗ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದಾ ಕೊಂಕಣ ರೈಲ್ವೇಗೆ ಅಸ್ತಿಭಾರ ಹಾಕಿದರು. ==ಕೊಂಕಣ ರೈಲ್ವೇ== ೩೦೦ ಕೋಟಿಗಳಿಗಿಂತ ಹೆಚ್ಚಿಲ್ಲದ ರೈಲ್ವೇ ಕಾಮಗಾರಿಯ ಸಮಯದಲ್ಲಿ, ೧೬೦೦ ಕೋಟಿ ವೆಚ್ಚದ ಕೊಂಕಣ ರೈಲ್ವೇ ಯೋಜನೆ, ಜಗತ್ತಿನಲ್ಲಿಯೇ ಅತಿ ಮಹತ್ವಾಕಾಂಕ್ಷಿಯಾದುದಾಗಿತ್ತು.ರೈಲ್ವೇ ಮಂಡಲಿಯ ಸದಸ್ಯರಾಗಿದ್ದ ಈ. ಶ್ರೀಧರನ್ ರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಜಾರ್ಜ್, ಹಿಂದೆಂದೂ ಕಂಡರಿಯದಂತಹ ನೀಲನಕ್ಷೆ ರಚಿಸಿದರು. ಸರ್ಕಾರಗಳು ಉರುಳಿದಾಗ, ಕಾಮಗಾರಿ ಕುಂಠಿತವಾಗುವುದನ್ನು ಅರಿತಿದ್ದ ಜಾರ್ಜ್, ಕೊಂಕಣ ರೈಲ್ವೇಗಾಗಿಯೇ ಬೇರೆ ನಿಗಮವನ್ನು ತೆರೆದು, ಅದಕ್ಕೆ ಶ್ರೀಧರನ್ ರನ್ನೇ ಮುಖ್ಯಸ್ಥರನ್ನಾಗಿಸಿದರು. ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಒಂದಾಗಿಸಿ, ಅರ್ಥ ಸಚಿವ ಮಧು ದಂಡವತೆ (ಮಹಾರಾಷ್ಟ್ರದವರು), ಕರ್ನಾಟಕದ ಕೊಂಕಣಿಗರಾದ ಖುದ್ದು ತಾವು ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ [[ರಾಮಕೃಷ್ಣ ಹೆಗಡೆ]] ಹೀಗೆ ಸಮಮನೋಬಲದ ಮಂದಿಯನ್ನು ಒಂದಾಗಿಸಿ, ಕೊಂಕಣ್ ರೈಲ್ವೆ ನಿಗಮವನ್ನು ರಚಿಸಿದರು. <br> <ref>https://scroll.in/article/801645/how-e-sreedharan-built-the-konkan-railway-in-a-flat-eight-years</ref> ಅಸ್ತಿತ್ವಕ್ಕೆ ಬಂತು. <br> ೭೬೦ ಕಿ.ಮೀ ಉದ್ದ, ೨೦೦೦ ಸೇತುವೆಗಳು ಹೀಗೆ ಹಲವು ಪ್ರಥಮಗಳಿಗೆ ಕೊಂಕಣ ರೈಲ್ವೆ ಸಾಕ್ಷಿಯಾಯಿತು.ಪನವೇಲ್ ನದಿಯ ಮೇಲೆ ಕುತುಬ್ ಮಿನಾರಿನಷ್ಟು ಉದ್ದದ ಸೇತುವೆಯನ್ನು ನಿರ್ಮಿಸಿದ ಹೆಮ್ಮೆಗೆ ಜಾರ್ಜ್ ಕಾರಣೀಭೂತರಾದರು. ೮ ವರ್ಷಗಳ ಯೋಜನೆಯನ್ನು ೭ ವರ್ಷಗಳಲ್ಲಿಯೇ ಮುಗಿಸಿದ ಹೆಮ್ಮೆ ಶ್ರೀಧರನ್ ರದ್ದು.<ref>https://kaipullai.com/2012/02/24/dr-elattuvalapil-sreedharan-the-bharat-ratna-no-one-talks-about/</ref> ಕೊಂಕಣ್ ರೈಲು ಯೋಜನೆಯಿಂದ ಮುಂಬೈ, ಮಂಗಳೂರು ಮತ್ತು ಕಾರವಾರ ಬಂದರುಗಳು ನೇರಸಂಪರ್ಕಕ್ಕೆ ಬಂದು, ವಾಣಿಜ್ಯ ವಹಿವಾಟು ಸುಗಮವಾಗಿ, ಭಾರತದ ಅರ್ಥವ್ಯವಸ್ಥೆಗೆ ಇಂಬಾಗಿದೆ.<ref>http://www.goodnewsindia.com/Pages/content/milestones/konkanRail.html</ref> ==೯೦ರ ದಶಕ== ವಿ.ಪಿ.ಸಿಂಗ್ ಸರ್ಕಾರ ರಾಮಮಂದಿರ ಗಲಭೆ ಮತ್ತು ನ್ಯಾ.ಬಿ.ಪಿ.ಮಂಡಲ್ ಸಮಿತಿಯ ಮೀಸಲಾತಿ ಮಸೂದೆಯ ಕಾರಣ ಉರುಳಿದಾಗ ಜಾರ್ಜ್, ವಿ.ಪಿ.ಸಿಂಗ್ ರೊಂದಿಗೆ ಜನತಾದಳದಲ್ಲಿ ಉಳಿದರು.೧೯೯೪ರವರೆಗೆ ಜನತಾದಳದಲ್ಲಿಯೇ ಉಳಿದ ಜಾರ್ಜ್, ತದ್ನಂತರ ಲಾಲೂ ಪ್ರಸಾದ್ ಯಾದವ್ ವಿರುದ್ಧ ತೊಡೆತಟ್ಟಿ, ೧೯೯೪ರಲ್ಲಿ ಜಾರ್ಜ್ ನಿತೀಶ್ ಕುಮಾರ್ ಜೊತೆಗೂಡಿ ಸಮತಾ ಪಕ್ಷ ರಚಿಸಿದರು. ಜೀವನ ಪೂರ್ತಿ ವಿರೋಧಿಸುತ್ತಿದ್ದ ಆರ್.ಎಸ್.ಎಸ್ ಮೂಲದ ಭಾರತೀಯ ಜನತಾ ಪಕ್ಷದ ಜೊತೆ ರಾಜಿ ಮಾಡಿಕೊಂಡ ಜಾರ್ಜ್, ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ, ಸಮಾಜವಾದಿ ಸಿದ್ಧಾಂತಕ್ಕೆ ತಿಲಾಂಜಲಿ ಇತ್ತರು ಎಂಬ ಟೀಕೆ ಎದುರಿಸಿದರು. ===ಸಮತಾ ಪಕ್ಷ=== ಲಾಲೂ ಪ್ರಸಾದ್ ಯಾದವ್ ಭ್ರಷ್ಟತೆಯ ಆರೋಪದಡಿ ಎಂದು ಮೇವು ಹಗರಣದಲ್ಲಿ ಸಿಲುಕಿಕೊಂಡದ್ದು ಮತ್ತು ಬಿಹಾರದಲ್ಲಿ ಜನತಾದಳದ ಹಲವು ಬಣಗಳು ಭಿನ್ನಮತದಲ್ಲಿ ತೊಡಗಿಕೊಂಡಾಗ, ಜಾರ್ಜ್ ಕ್ರುದ್ಧರಾಗಿ, ನಿತೀಶ್ ಕುಮಾರ್ ರೊಡನೆ ಸೇರಿ ಸಮತಾ ಪಕ್ಷವನ್ನು ಶುರು ಮಾಡಿದರು.<ref>https://timesofindia.indiatimes.com/india/had-george-fernandes-not-formed-samata-party-in-1994-i-would-not-have-got-opportunity-to-serve-people-in-bihar-nitish-kumar/articleshow/67904869.cms</ref> ಜಾರ್ಜ್ ರ ಒತ್ತಾಸೆಯ ಫಲವಾಗಿ ಎನ್.ಡಿ.ಎ ಸಂಪುಟ ಸೇರಿದ ನಿತೀಶ್, ತದ್ನಂತರ ಜಾರ್ಜ್‍ರಿಗೇ ಲೋಕಸಭೆಯ ಟಿಕೆಟ್ ನೀಡಲು ನಿರಾಕರಿಸಿದ್ದು ರಾಜಕೀಯದ ವಿರಸದ ಪರಮಾವಧಿ. ==ಮೊದಲ ಎನ್.ಡಿ.ಎ ಸರ್ಕಾರ== ಜಾರ್ಜ್ ೧೯೯೮ರ ವಾಜಪೇಯಿ ಸಂಪುಟದಲ್ಲಿ ರಕ್ಷಣಾ ಸಚಿವರಾದಾಗ, ಅಣ್ವಸ್ತ್ರ ಸಿಡಿಸಿದ ಭಾರತದ ಅಣು ನೀತಿಗೆ ಬಲ ನೀಡಿದರು. ===ಪೋಖ್ರಾನ್ ಅಣು ಸ್ಪೋಟ=== ೧೯೯೮ ಮೇ ೧೩ರಂದು ಭಾರತ ಪೋಖ್ರಾನ್ ನಲ್ಲಿ ಅಣು ಅಸ್ತ್ರಗಳನ್ನು ಪರೀಕ್ಷಿಸಿತು.ಜೀವಮಾನ್ ಪೂರಾ ಅಣ್ವಸ್ತ್ರಗಳ ಪ್ರಬಲ ಟೀಕಾಕಾರರಾಗಿದ್ದ ಜಾರ್ಜ್, ಭಾರತದ ರಕ್ಷಣಾ ಸಚಿವರಾಗಿ, ಅಣ್ವಸ್ತ್ರ ಪರೀಕ್ಷೆಯನ್ನು ಸಮರ್ಥನೆ ಮಾಡಿಕೊಳ್ಳಬೇಕಾಯಿತು.೪೫ ಕಿಲೋ ಟೋನ್ ಗಳಿಗಿಂತಲೂ ಕಡಿಮೆ ಉತ್ಪನ್ನ ಇದ್ದ ಈ<ref>https://www.outlookindia.com/newswire/story/nuclear-physicist-p-k-iyengar-dead/745130</ref> ಪರಮಾಣು ಸಿಡಿತಗಳನ್ನು ಏಷ್ಯಾದ ಯಾವುದೇ ಕಂಪನಮಾಪಕಗಳು ಗುರುತಿಸಲಿಲ್ಲ.<ref>https://www.thehindu.com/sci-tech/science/AEC-ex-chief-backs-Santhanam-on-Pokhran-II/article16883345.ece</ref><ref>http://pib.nic.in/newsite/PrintRelease.aspx?relid=52813</ref> ಅದ್ಯಾಗೂ ಜಾರ್ಜ್, ಭಾರತದ ಬದಲಾದ ಅಣ್ವಸ್ತ್ರ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡರು. === ಕಾರ್ಗಿಲ್ ಯುದ್ಧ === {{WQA in progress}} ಕಾರ್ಗಿಲ್ ಯುದ್ಧದ ಹೋರಾಟ ೧೯೯೯ ಏರ್ಪಟ್ಟಿತು.<ref>https://economictimes.indiatimes.com/news/defence/all-you-need-to-know-about-kargil-war/kargil-vijay-diwas/slideshow/59772216.cms</ref> ಪಾಕಿಸ್ತಾನ ಭಾರತದ ಸೇನಾನೆಲೆಗಳನ್ನು ಚಳಿಗಾಲದಲ್ಲಿ, ಅತಿಕ್ರಮವಾಗಿ ಆಕ್ರಮಿಸಿ, ಡ್ರಾಸ್, ಬಟಾಲಿಕ್, ಕಾರ್ಗಿಲ್ ಗಳನ್ನು ಭಾರತದ ನಿಯಂತ್ರಣದಿಂದ ತನ್ನ ಸುಪರ್ದಿಗೆ ತೆಗೆದುಕೊಂಡಿತು. ಪಾಕಿಸ್ತಾನವು, ತನ್ನ ಸೇನೆ ಅತಿಕ್ರಮಣ ಮಾಡಿಲ್ಲವೆಂದೂ, ತನಗೂ, ಈ ಅತಿಕ್ರಮಣಕ್ಕೂ ಸಂಬಂಧ ಇಲ್ಲವೆಂದೇ ವಾದಿಸಿತು. ಪಾಕ್ ಸೇನಾಪಡೆಯ ಯೋಧರ ಶವಗಳನ್ನು ಪಡೆಯಲೂ ಕೂಡಾ ನಿರಾಕರಿಸಿದ ಪಾಕಿಸ್ತಾನದ ವಿರುದ್ಧ, ಸಮರ ತೀವ್ರವಾಗುವ ಲಕ್ಷಣ ಕಂಡಾಗ ರಕ್ಷಣಾ ಸಚಿವರಾಗಿದ್ದ ಜಾರ್ಜ್, ಎರಡು ಪ್ರಮುಖ ನಿರ್ಣಯ ಕೈಗೊಂಡರು. # ಯಾವುದೇ ಕಾರಣಕ್ಕೂ, ಅಂತರ್ರಾಷ್ಟ್ರೀಯ ಗಡಿಯನ್ನು ದಾಟಿ, ಭಾರತದ ಪಡೆಗಳು ಪಾಕಿಸ್ತಾನದ ನೆಲದ ಮೇಲೆ ಹೋಗವು # ಸಂಪೂರ್ಣವಾಗಿ ಭಾರತದ ಸೇನಾನೆಲೆಗಳನ್ನು ಹಿಂಪಡೆವವರೆಗೆ, ಹಿಮ್ಮೆಟ್ಟೆವು ಗಡಿ ಉಲ್ಲಂಘನೆ ಮಾಡದ ಕಾರಣ ಜಾರ್ಜ್, ದೇಶದ ಹೊರಗಡೆ ಪ್ರಶಂಸೆಗೆ ಒಳಗಾದರೂ, ದೇಶದ ಒಳಗೆ ತೀವ್ರತಮ ಟೀಕೆಗೆ ಗುರಿಯಾದರು<ref>https://www.globalsecurity.org/military/world/war/kargil-99.htm</ref> ಭಾರತೀಯ ಸೇನೆಯು ಭಾರೀ ಸಾವು-ನೋವುಗಳ ಮಧ್ಯೆ ಮತ್ತು ಆಂತರಿಕ ಟೀಕೆಗಳನ್ನು ಎದುರಿಸತೊಡಗಿದಾಗ, ಜಾರ್ಜ್ ಖುದ್ದು ಸೇನೆಯ ಬೆಂಬಲಕ್ಕೆ ನಿಂತರು. ಈ ಮಧ್ಯೆ, ಭಾರತೀಯ ವಾಯುಸೇನೆಯನ್ನು ಬಳಸಲು ಪ್ರಧಾನಿ ವಾಜಪೇಯಿ ಹಿಂಜರಿದರೂ, ಜಾರ್ಜ್‍ರ ಒತ್ತಾಸೆಯ ಕಾರಣ ನಂತರ ಒಪ್ಪಿಗೆ ಇತ್ತರು,<ref>http://m.rediff.com/news/1999/may/28kash.htm</ref> ಭಾರತೀಯ ಸೇನೆ ಕಾರ್ಗಿಲ್ ಯುದ್ಧವೆಂದೇ ಖ್ಯಾತವಾದ, ಈ ಹೋರಾಟದಲ್ಲಿ ಪಾಕಿಸ್ತಾನವನ್ನು ಮಣಿಸಿತು. ಜುಲೈ ೩ ೧೯೯೯ರಂದು ಅಮೇರಿಕಾದ ಅಧ್ಯಕ್ಷ [[ಬಿಲ್ ಕ್ಲಿಂಟನ್]]ರ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ್ದ ಪ್ರಧಾನಿ ನವಾಜ಼್ ಶರೀಫ್, ಕಾರ್ಗಿಲ್ ದಾಳಿಯು ಪಾಕಿಸ್ತಾನದ ತಪ್ಪು ಎಂಬುದಾಗಿಯೂ, ತಮ್ಮ ಸೇನೆ ಹಿಮ್ಮೆಟ್ಟೆದುದನ್ನು ಒಪ್ಪಿಕೊಂಡು ಸಂಧಾನ ಒಪ್ಪಂದಕ್ಕೆ ಭಾರತದ ಪ್ರಧಾನಿ ವಾಜಪೇಯಿರೊಂದಿಗೆ ಸಹಿ ಹಾಕಿದರು. ===ಚೀನಾದೊಂದಿಗೆ ಸಂಬಂಧ=== ೧೯೯೮ರಲ್ಲಿ ಜಾರ್ಜ್, ಪತ್ರಿಕಾಗೋಷ್ಠಿಯೊಂದರಲ್ಲಿ ಚೀನಾ ಭಾರತದ ಮೊದಲ ಶತ್ರು ಎಂಬ ಹೇಳಿಕೆ ನೀಡಿದರು.<ref>https://www.indiatoday.in/magazine/cover-story/story/19980518-china-is-the-potential-threat-no.-1-says-george-fernandes-826430-1998-05-18</ref> ಜಾರ್ಜ್, ಯುದ್ಧದಾಹಿ ಎಂದೂ, ಚೀನಾದ ಜೊತೆಗಿನ ಸಂಬಂಧಕ್ಕೆ ಕಲ್ಲು ಹಾಕಿದರು ಎಂದು ಟೀಕೆಗೆ ಒಳಗಾದರು. ತಮ್ಮ ನಿಲುವಿನಿಂದ ಹಿಂದೆ ಸರಿಯದ ಜಾರ್ಜ್, ಚೀನಾ ದೇಶ ಭಾರತದ ವಿರುದ್ಧ ನಡೆಸುತ್ತಿರುವ ವ್ಯವಹಾರಗಳನ್ನು ಧೈರ್ಯದಿಂದ ಉದಾಹರಣೆಗಳ ಸಹಿತ ಎತ್ತಿಹಿಡಿದರು. ಪಾಕಿಸ್ತಾನಕ್ಕೆ ಅಣ್ವಸ್ತ್ರ ವಿತರಣೆ, ಮಲಕ್ಕಾ, ಶ್ರೀಲಂಕಾದ ಹಂಬಂಟೋಟಾ, ಪಾಕಿಸ್ತಾನದ ಗ್ವದಾರ್ ಹೀಗೆ ಭಾರತದ ಸುತ್ತ ನೌಕಾನೆಲೆಗಳನ್ನು ಸ್ಥಾಪಿಸಿ ಭಾರತವನ್ನು ಹಣಿಯುವ ತಂತ್ರ, ಹೀಗೆ ಜಾರ್ಜ್, ಭಾರತ-ಚೀನಾ ಸಂಬಂಧದ ಕಠಿಣ ಪರಿಸ್ಥಿತಿಯನ್ನು ವಿಶ್ವದ ಹಲವು ವೇದಿಕೆಗಳಲ್ಲಿ ವಿವರಿಸಿದರು. ಅವರನ್ನು ವಿಚಾರಣೆಗೆ ಗುಣಪಡಿಸಿದ ಆಯೋಗಗಳೆಲ್ಲವೂ ಅವರನ್ನು ನಿರ್ದೋಷಿಯೆಂದು ತೀರ್ಪು ನೀಡಿದವು.<ref>{{Cite web |url=http://ibnlive.in.com/news/fernandes-gets-clean-chit-in-kargil-coffin-scam/99725-3.html |title=ಆರ್ಕೈವ್ ನಕಲು |access-date=2012-03-03 |archive-date=2012-03-11 |archive-url=https://web.archive.org/web/20120311233249/http://ibnlive.in.com/news/fernandes-gets-clean-chit-in-kargil-coffin-scam/99725-3.html |url-status=dead }}</ref> ===ಹಗರಣಗಳ ಆರೋಪ ಮತ್ತು ದೋಷಮುಕ್ತಿ=== ಬಿಜೆಪಿ ಅಧ್ಯಕ್ಷ ಬಂಗಾರು ಲಕ್ಷಣ್, ರಕ್ಷಣಾ ಇಲಾಖೆಯ ಗುತ್ತಿಗೆ ಕೊಡಿಸುವುದಾಗಿ ಲಂಚ ಪಡೆದ ಟಿವಿ ವರದಿಯ ಫಲಶ್ರುತಿ ರಕ್ಷಣಾ ಸಚಿವ ಜಾರ್ಜ್‍ರಿಗೆ ತಗುಲಿತು. ವೈಯಕ್ತಿಕವಾಗಿ ಜಾರ್ಜ್‍ರ ಮೇಲೆ ಆರೋಪವಿಲ್ಲದೆಯೇ ಇದ್ದರೂ, ಘಟನೆ ನಡೆದುದು ಜಾರ್ಜರ ಸಹವರ್ತಿ ಜಯಾ ಜೇಟ್ಲಿರ ಮನೆಯಲ್ಲಿ ಆದ್ದರಿಂದ, ಜಾರ್ಜ್ ಕೂಡಾ ಹೊಣೆ ಹೊರುವಂತೆ ಆಯಿತು.<br> <ref>https://www.rediff.com/news/defsca02.htm</ref> ಕಾರ್ಗಿಲ್ ಯೋಧರಿಗೆ ಶವಪೆಟ್ಟಿಗೆಯನ್ನು ಅಮೇರಿಕದ ಕಂಪನಿಗಳಿಂದ ಬಹು ಹೆಚ್ಚಿನ ವೆಚ್ಚ ನೀಡಿ ಖರೀದಿ ಮಾಡಿದ ಆರೋಪ ಜಾರ್ಜ್ ಮೇಲೆ ಬಂದಿತು. ಆರೋಪ ಬಂದ ಕೂಡಲೆಯೇ, ನೈತಿಕ ಹೊಣೆ ಹೊತ್ತು ಜಾರ್ಜ್ ರಾಜೀನಾಮೆ ಇತ್ತರು. ತಮ್ಮ ಅಧಿಕಾರದ ಅವಧಿಗೂ ಮುನ್ನ ಖರೀದಿಗೆ ಒಪ್ಪಿಗೆ ನೀಡಲಾಗಿತ್ತು ಎಂಬ ಜಾರ್ಜ್‍ರ ಸಮರ್ಥನೆಯನ್ನು ಮಾನ್ಯ ಮಾಡದ ಸಿಎಜಿ ವರದಿಯನ್ನು ವಿರೋಧ ಪಕ್ಷಗಳು ಕೂಗಿ ಕೂಗಿ ಹೇಳಿ, ಜಾರ್ಜ್ ಭ್ರಷ್ಟರು ಎಂದು ಸಮರ ಸಾರಿದವು.ಉನ್ನತ ಮಟ್ಟದ ತನಿಖೆಯು ಜಾರ್ಜ್ ನಿರಪರಾಧಿ ಎಂದು ವರದಿ ನೀಡಿದ ನಂತರ, ಜಾರ್ಜ್ ಮತ್ತೆ ರಕ್ಷಣಾ ಸಚಿವರಾದರು. ಆದರೆ ವಿರೋಧ ಪಕ್ಷಗಳು, ಜಾರ್ಜ್ ಸದನದಲ್ಲಿ ಉತ್ತರ ನೀಡುವಾಗ, ಹೊರನಡೆವ, ರಕ್ಷಣಾ ಖಾತೆಯ ಬಗ್ಗೆ ಪ್ರಶ್ನೆಯನ್ನೇ ಕೇಳದೆ ಜಾರ್ಜ್‍ರನ್ನು ಇಕ್ಕಟ್ಟಿಗೆ ಸಿಲುಕಿಸಿ ಮುಜುಗರ ಉಂಟು ಮಾಡುವ ತಂತ್ರ ಅನುಸರಿಸಿದವು. ಜಾರ್ಜ್, ಈ ಎಲ್ಲಾ ಅವಮಾನಗಳನ್ನು ಸಹಿಸಿಯೂ, ತಮ್ಮ ಖಾತೆಯನ್ನು ನಿರ್ವಹಿಸಿದರು. ಜಾರ್ಜ್ ಹೋರಾಟದ ನಿಲುವನ್ನು ಎತ್ತಿ ಹಿಡಿಯುತ್ತಾ, ಸೈದ್ಧಾಂತಿಕ ಕಾರಣಗಳಿಗಾಗಿ ಎಲ್.ಟಿ.ಟಿ.ಇ, ನಾಗಾ ಬಂಡುಕೋರರು ಹೀಗೆ ಹಲವು ಬಣಗಳ ಪರ ನಿಂತುದು ವೈರುದ್ಧದ ವಿಷಯವಾಗಿತ್ತು.<ref>https://www.rediff.com/news/2000/dec/07spec.htm</ref> ತಮ್ಮ ಪಟ್ಟು ಸಡಲಿಸದ ಜಾರ್ಜ್, ಶ್ರೀಲಂಕಾ ಸೇರಿದಂತೆ ನೆರೆರಾಷ್ಟ್ರಗಳ ಕೆಂಗಣ್ಣಿಗೆ ಜೀವನಪೂರ್ತಿ ಗುರಿಯಾಗಿದ್ದರು. ===೨೦೦೪ ನಂತರ=== ಎನ್.ಡಿ.ಎ ಸರ್ಕಾರದ ಪತನದ ನಂತರ ಜಾರ್ಜ್, ಸಂಸದರಾಗಿ ಮುಂದುವರೆದರು. ೨೦೦೫ರಲ್ಲಿ ನಿತೀಶ್ ==ನಿಲುವುಗಳು== ಜೀವನದ ಆರಂಭದಿಂದಲೂ ಸಮಾಜವಾದಿಯಾದ ಜಾರ್ಜ್, ಕಮ್ಯೂನಿಸ್ಟ್ ತತ್ವಕ್ಕೆ ಹೊಂದಿಕೊಂಡು, ಕಾರ್ಮಿಕ ಮತ್ತು ಶೋಷಿತರ ಪರ ದನಿಯಾದರು. ಆರ್.ಎಸ್.ಎಸ್ ಮತ್ತು ಜನಸಂಘವನ್ನು ವಿರೋಧಿಸಿ, ನಂತರ ೧೯೭೭ರ ಮೊರಾರ್ಜಿ ಸಂಪುಟದಲ್ಲಿ, ಜನಸಂಘದ ಜೊತೆ ಹೊಂದಾಣಿಕೆ ಮಾಡಿಕೊಂಡರು. ತತ್ವ-ಸಿದ್ಧಾಂತಕ್ಕೆ ಬದ್ಧರಾಗಿ, ಮೊರಾರ್ಜಿ ಸರ್ಕಾರದ ಪತನದ ಪರ ನಿಣ್ತು ಜನಸಂಘದ ವಿರೋಧಿಯಾದ ಜಾರ್ಜ್, ೧೯೯೬ರ ಹೊತ್ತಿಗೆ ರಾಜಕೀಯ ಉಳಿವಿಗಾಗಿ, ಜನಸಂಘದ ಹೊಸ ಅವತಾರ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡರು.<ref>https://www.outlookindia.com/website/story/india-news-nitish-and-bjp-owe-a-lot-to-george-for-making-nda-such-a-formidable-force-in-bihar/324475</ref> ಬಹುರಾಷ್ಟ್ರೀಯ ಕಂಪನಿಗಳನ್ನು ಲಾಭಕೋರರು ಎಂದು ಟೀಕಿಸುತ್ತಿದ್ದ ಜಾರ್ಜ್, ೧೯೯೧ರ ಆರ್ಥಿಕ ಉದಾರೀಕರಣವನ್ನು ಕಟುವಾಗಿ ಟೀಕಿಸಿದ್ದರು. ಮಂಗಳೂರಿನಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರ ಕುರಿತಾದ ‘ಬಂಧ್ ಸಾಮ್ರಾಟ್- ಟೇಲ್ಸ್ ಆಫ್ ಎಟರ್ನಲ್ ರೆಬೆಲ್’<ref>https://www.amazon.in/-/hi/Chris-Emmanuel-Dsouza/dp/9356480818</ref> ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಭಾರತದ ಖ್ಯಾತ ವಿಚಾರವಾದಿ ಪ್ರೊ.[[ನರೇಂದ್ರ ನಾಯಕ್]] ಅವರು (ಜಾರ್ಜ್ ಫರ್ನಾಂಡಿಸ್ ಕುರಿತು)- “ನೀವು ಅವರನ್ನು ದ್ವೇಷಿಸಬಹುದು ಅಥವಾ ಪ್ರೀತಿಸಬಹುದು; ಆದರೆ ನೀವು ಜಾರ್ಜ್ರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ."ಎಂದು ಹೇಳಿದರು<ref>https://www.mangaloretoday.com/main/A-book-on-iconic-leader-George-Fernandes-titled-Bandh-Samrat-released/{{Dead link|date=ಮಾರ್ಚ್ 2024 |bot=InternetArchiveBot |fix-attempted=yes }}</ref>. ೧೯೯೬ರ ಹೊತ್ತಿಗೆ, ಅಧಿಕಾರ ಹಿಡಿವ ಸಲುವಾಗಿ, ಜಾರ್ಜ್ ಬಿಜೆಪಿಯ ನವ-ಉದಾರೀಕರಣದ ಭಾಗವಾಗಿ ಹೋದರು. ಜಾರ್ಜ್, ವಾಜಪೇಯಿ ಸಂಪುಟದ ರಕ್ಷಣೆಗಾಗಿ, ೧೯೯೮ರಲ್ಲಿ ಜಯಲಲಿತಾ ೧೯೯೯-೨೦೦೪ ಅವಧಿಯಲ್ಲಿ ಮೈತ್ರಿಯಲ್ಲಿ ಒಡಕು ಉಂಟಾದಾಗ ಬಾಳ್ ಠಾಕ್ರೆ, ಮಮತಾ ಬ್ಯಾನರ್ಜಿ, ಅಜಿತ್ ಸಿಂಗ್, ಹೀಗೆ ಹಲವು ಧುರೀಣರ ಕೂಡ ಮೈತ್ರಿಯ ಬೆಸುಗೆಯನ್ನು ಅಂಟು ಹಾಕಲು ಸಮರ್ಥವಾಗಿ ನಿಂತರು. ==ಅನಾರೋಗ್ಯ ಮತ್ತು ನಿಧನ== ಜಾರ್ಜ್ ಫರ್ನಾಂಡೀಸ್ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಜನವರಿ ೨೯, ೨೦೧೯ರಂದು ನಿಧನರಾದರು.<ref>[https://www.prajavani.net/stories/national/george-fernandes-death-610752.html ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ, ಪ್ರಜಾವಾಣಿ ವರದಿ]</ref> == ಉಲ್ಲೇಖಗಳು == {{Reflist}} ==ಹೆಚ್ಚಿನ ಓದಿಗೆ== {{Commons category|George Fernandes}} *[https://www.prajavani.net/stories/national/disguised-sikh-evade-arrest-610792.html ತುರ್ತು ಪರಿಸ್ಥಿತಿಯಲ್ಲಿ ಜಾರ್ಜ್‌; 29 ಜನವರಿ 2019] == ಉಲ್ಲೇಖಗಳು == <br> <br> {{Interwikineeded}} [[ವರ್ಗ:ಕೇಂದ್ರ ಮಂತ್ರಿಗಳು]] [[ವರ್ಗ:ಕಾರ್ಮಿಕ ಮುಖಂಡರು]] [[ವರ್ಗ:ರಾಜಕಾರಣಿಗಳು]] [[ವರ್ಗ:೧೯೩೦ ಜನನ]] [[ವರ್ಗ:೨೦೧೯ ನಿಧನ]] [[ವರ್ಗ:ಲೋಕಸಭೆ ಸದಸ್ಯರು]] [[ವರ್ಗ:ಸಮಾಜವಾದಿಗಳು]] [[ವರ್ಗ:ಕರ್ನಾಟಕ ರಾಜಕಾರಣಿಗಳು]] fleo757syrvgu66dqm12k1vjvu9eg2v ಅಜಯ್ ವರ್ಮಾ ಅಲ್ಲೂರಿ 0 142763 1374826 1334276 2026-06-06T19:26:49Z ~2026-33377-71 99880 /* ಕಾವ್ಯ */ 1374826 wikitext text/x-wiki {{Infobox writer <!-- for more information see [[:Template:Infobox writer/doc]] --> | name = ಅಜಯ್ ವರ್ಮಾ ಅಲ್ಲೂರಿ | image = | imagesize = 220px | caption = ಅಜಯ್ ವರ್ಮಾ ಅಲ್ಲೂರಿ, ಹೈದ್ರಾಬಾದಿನಲ್ಲಿ, ಜೂನ್ ೨೦೧೮ | pseudonym = | birth_date =<!--{{birth date|೧೯೯೬|೯|೦೭|}}-->07/09/1996 | birth_place = [[ಸಿಂಧನೂರು]], [[ರಾಯಚೂರು ಜಿಲ್ಲೆ]], [[ಕರ್ನಾಟಕ]] | occupation = ಕವಿ, ಕಥೆಗಾರ, ಅನುವಾದಕ | nationality = ಭಾರತೀಯ | subject = ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನ }} ಅಜಯ್ ವರ್ಮಾ ಅಲ್ಲೂರಿ ಕನ್ನಡದ ಹೊಸ ತಲೆಮಾರಿನ ಲೇಖಕ ಮತ್ತು ಅನುವಾದಕ. ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು. ಇವರ ಕವಿತೆಗಳು ಇಂಗ್ಲಿಷ್, ಹಿಂದಿ, ಒಡಿಯಾ, ಮಲಯಾಳಂ ಭಾಷೆಗಳಿಗೆ ಅನುವಾದಗೊಂಡಿವೆ. == ಬಾಲ್ಯ ಮತ್ತು ವಿದ್ಯಾಭ್ಯಾಸ == ಅಜಯ್ ವರ್ಮಾ ಅಲ್ಲೂರಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ 1996ರಲ್ಲಿ ಜನಿಸಿದ್ದಾರೆ. ಇವರ ತಂದೆ ಅಲ್ಲುರಿ ಕೊಂಡರಾಜು, ತಾಯಿ ರಾಣಿ. ಇವರ ಮನೆ ಮಾತು ತೆಲುಗು. ತಮ್ಮ ಶಾಲಾ ಮತ್ತು ಪದವಿ ಪೂರ್ಣ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿದ ಬಳಿಕ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದಿದ್ದಾರೆ. [[ಮೈಸೂರು ವಿಶ್ವವಿದ್ಯಾಲಯ]]ದಿಂದ ಎಂ.ಎಸ್ಸಿ (ಭೌತಶಾಸ್ತ್ರ) ಹಾಗೂ ಭಾಷಾಂತರದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿದ್ದಾರೆ. ಸದ್ಯ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು, ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ (ಇಂಗ್ಲಿಷ್) ಪದವಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. == ಕೃತಿಗಳು == === ಕಾವ್ಯ === * ''ಗಗನಸಿಂಧು''  - ಕಾವ್ಯ - 2015 === ಅನುವಾದ === * ''ಡಯಾನಾ ಮರ''  - ಅನುವಾದಿತ ಕಾವ್ಯ - 2018 * ''ಕಲಲ ಕನ್ನೀಟಿ ಪಾಟ'' - ಅನುವಾದಿತ ಕಾವ್ಯ- 2019 * ವಿ''ಮುಕ್ತೆ'' - ಅನುವಾದಿತ ಕಥೆಗಳು - 2019 * ''ನಾಲ್ಕನೇ'' ''ಎಕರೆ -'' ಅನುವಾದಿತ ನೀಳ್ಗತೆ ''-'' 2021 * ಆರ್ ಎಸ್ ಎಸ್: ಲೋತುಪಾತುಲು‌ - 2022 == ಪ್ರಶಸ್ತಿಗಳು == ಕಳೆದ ಎರಡು-ಮೂರು ವರ್ಷಗಳಿಂದ ಈಚೆಗೆ ಅನುವಾದ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೆಲುಗು ಲೇಖಕಿ ಓಲ್ಗಾ ಅವರ 'ವಿಮುಕ್ತೆ' ಕೃತಿಯ ಅನುವಾದಕ್ಕಾಗಿ ಕುವೆಂಪು ಭಾಷಾಭಾರತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ೨೦೨೦ನೇ ಸಾಲಿನ ಪ್ರಹ್ಲಾದ ಅಗಸನಕಟ್ಟೆ ಕಥಾ ಪ್ರಶಸ್ತಿಯನ್ನು ಪಡೆದಿದ್ದಾರೆ. == ಮೂಲಗಳು == https://www.bookbrahma.com/author/ajay-varma-alluri https://mylang.in/collections/vendors?q=%e0%b2%85%e0%b2%9c%e0%b2%af%e0%b3%8d+%e0%b2%b5%e0%b2%b0%e0%b3%8d%e0%b2%ae%e0%b2%be+%e0%b2%85%e0%b2%b2%e0%b3%8d%e0%b2%b2%e0%b3%82%e0%b2%b0%e0%b2%bf https://www.kuvempubhashabharathi.org/books/translators_single.php?transID=26{{Dead link|date=ಆಗಸ್ಟ್ 2023 |bot=InternetArchiveBot |fix-attempted=yes }} {{Unreferenced}} {{Interwikineeded}} [[ವರ್ಗ:ಕನ್ನಡ ಬರಹಗಾರರು]] 6dcw6e3kdtjgicdo08zpn60xy4xkog5 1374827 1374826 2026-06-06T19:34:48Z ~2026-33377-71 99880 /* ಪ್ರಶಸ್ತಿಗಳು */ 1374827 wikitext text/x-wiki {{Infobox writer <!-- for more information see [[:Template:Infobox writer/doc]] --> | name = ಅಜಯ್ ವರ್ಮಾ ಅಲ್ಲೂರಿ | image = | imagesize = 220px | caption = ಅಜಯ್ ವರ್ಮಾ ಅಲ್ಲೂರಿ, ಹೈದ್ರಾಬಾದಿನಲ್ಲಿ, ಜೂನ್ ೨೦೧೮ | pseudonym = | birth_date =<!--{{birth date|೧೯೯೬|೯|೦೭|}}-->07/09/1996 | birth_place = [[ಸಿಂಧನೂರು]], [[ರಾಯಚೂರು ಜಿಲ್ಲೆ]], [[ಕರ್ನಾಟಕ]] | occupation = ಕವಿ, ಕಥೆಗಾರ, ಅನುವಾದಕ | nationality = ಭಾರತೀಯ | subject = ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನ }} ಅಜಯ್ ವರ್ಮಾ ಅಲ್ಲೂರಿ ಕನ್ನಡದ ಹೊಸ ತಲೆಮಾರಿನ ಲೇಖಕ ಮತ್ತು ಅನುವಾದಕ. ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು. ಇವರ ಕವಿತೆಗಳು ಇಂಗ್ಲಿಷ್, ಹಿಂದಿ, ಒಡಿಯಾ, ಮಲಯಾಳಂ ಭಾಷೆಗಳಿಗೆ ಅನುವಾದಗೊಂಡಿವೆ. == ಬಾಲ್ಯ ಮತ್ತು ವಿದ್ಯಾಭ್ಯಾಸ == ಅಜಯ್ ವರ್ಮಾ ಅಲ್ಲೂರಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ 1996ರಲ್ಲಿ ಜನಿಸಿದ್ದಾರೆ. ಇವರ ತಂದೆ ಅಲ್ಲುರಿ ಕೊಂಡರಾಜು, ತಾಯಿ ರಾಣಿ. ಇವರ ಮನೆ ಮಾತು ತೆಲುಗು. ತಮ್ಮ ಶಾಲಾ ಮತ್ತು ಪದವಿ ಪೂರ್ಣ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿದ ಬಳಿಕ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದಿದ್ದಾರೆ. [[ಮೈಸೂರು ವಿಶ್ವವಿದ್ಯಾಲಯ]]ದಿಂದ ಎಂ.ಎಸ್ಸಿ (ಭೌತಶಾಸ್ತ್ರ) ಹಾಗೂ ಭಾಷಾಂತರದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿದ್ದಾರೆ. ಸದ್ಯ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು, ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ (ಇಂಗ್ಲಿಷ್) ಪದವಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. == ಕೃತಿಗಳು == === ಕಾವ್ಯ === * ''ಗಗನಸಿಂಧು''  - ಕಾವ್ಯ - 2015 === ಅನುವಾದ === * ''ಡಯಾನಾ ಮರ''  - ಅನುವಾದಿತ ಕಾವ್ಯ - 2018 * ''ಕಲಲ ಕನ್ನೀಟಿ ಪಾಟ'' - ಅನುವಾದಿತ ಕಾವ್ಯ- 2019 * ವಿ''ಮುಕ್ತೆ'' - ಅನುವಾದಿತ ಕಥೆಗಳು - 2019 * ''ನಾಲ್ಕನೇ'' ''ಎಕರೆ -'' ಅನುವಾದಿತ ನೀಳ್ಗತೆ ''-'' 2021 * ಆರ್ ಎಸ್ ಎಸ್: ಲೋತುಪಾತುಲು‌ - 2022 == ಪ್ರಶಸ್ತಿಗಳು == ಕಳೆದ ಎರಡು-ಮೂರು ವರ್ಷಗಳಿಂದ ಈಚೆಗೆ ಅನುವಾದ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೆಲುಗು ಲೇಖಕಿ ಓಲ್ಗಾ ಅವರ 'ವಿಮುಕ್ತೆ' ಕೃತಿಯ ಅನುವಾದಕ್ಕಾಗಿ 2019ರಲ್ಲಿ ಕರ್ನಾಟಕ ಸರ್ಕಾರದಿಂದ ಕುವೆಂಪು ಭಾಷಾಭಾರತಿ ಪ್ರಶಸ್ತಿಯನ್ನು ಪಡೆದಿದ್ದಾರೆ. 2020ರಲ್ಲಿ ಪ್ರಹ್ಲಾದ ಅಗಸನಕಟ್ಟೆ ಕಥಾ ಪ್ರಶಸ್ತಿಯನ್ನು ಪಡೆದಿದ್ದಾರೆ. == ಮೂಲಗಳು == https://www.bookbrahma.com/author/ajay-varma-alluri https://mylang.in/collections/vendors?q=%e0%b2%85%e0%b2%9c%e0%b2%af%e0%b3%8d+%e0%b2%b5%e0%b2%b0%e0%b3%8d%e0%b2%ae%e0%b2%be+%e0%b2%85%e0%b2%b2%e0%b3%8d%e0%b2%b2%e0%b3%82%e0%b2%b0%e0%b2%bf https://www.kuvempubhashabharathi.org/books/translators_single.php?transID=26{{Dead link|date=ಆಗಸ್ಟ್ 2023 |bot=InternetArchiveBot |fix-attempted=yes }} {{Unreferenced}} {{Interwikineeded}} [[ವರ್ಗ:ಕನ್ನಡ ಬರಹಗಾರರು]] 6ndj4kepylegvq7aishez7mzvgwvc8p ಸದಸ್ಯರ ಚರ್ಚೆಪುಟ:Yashwant e Nayaka 3 179306 1374818 2026-06-06T14:51:43Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1374818 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Yashwant e Nayaka}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೦:೨೧, ೬ ಜೂನ್ ೨೦೨೬ (IST) n6l21gfhypi5dq9hk5715w88ojgbzf5 ಆನೆನೆಗ್ಗಿಲು 0 179307 1374820 2026-06-06T17:23:22Z VASANTH S.N. 728 ಹೊಸ ಲೇಖನ 1374820 wikitext text/x-wiki {{Speciesbox | image = Pedalium murex MS6569.jpg | image_caption = ''Pedalium murex'' | status = | genus = Pedalium | parent_authority = [[David van Royen |D.Royen]]<ref name=POWO>{{cite POWO | title = ''Pedalium'' | id = 31851-1 | access-date = 11 November 2023}}</ref> | species = murex | authority = [[Carl Linnaeus|L.]] | synonyms = {{Plainlist | style = margin-left: 1em; text-indent: -1em; | '''Genus''': *''Cacatali'' <small>Adans.</small> *''Murex'' <small>L. ex Kuntze</small> '''Species''': *''Pedalium microcarpum'' <small>(Klotzsch) Decne.</small> *''Murex burmanni'' <small>Kuntze</small> *''Pedalium muricatum'' <small>Salisb.</small> *''Rogeria microcarpa'' <small>Klotzsch</small> }} | synonyms_ref = <ref name=POWO/> }} '''ಆನೆನೆಗ್ಗಿಲು''' ಒಂದು ಮೂಲಿಕೆ ಬಳ್ಳಿಸಸ್ಯ. ಇದರ ಸಸ್ಯಶಾಸ್ಟೀಯ ಹೆಸರು ಪೆಡಲಿಯಮ್ ಮ್ಯೂರೆಕ್ಸ್. ==ಸಸ್ಯಶಾಸ್ತ್ರೀಯ ವರ್ಗೀಕರಣ== ಇದು ಪೆಡಲಿಯಾಸಿಯೇ ಕುಟುಂಬದಲ್ಲಿ ಪೆಡಲಿಯಮ್ ಮ್ಯೂರೆಕ್ಸ್ ಎಂಬ ಒಂದು ಜಾತಿಯನ್ನು ಒಳಗೊಂಡಿರುವ ಸಸ್ಯದ ಒಂದು ಕುಲವಾಗಿದೆ. ==ಸ್ಥಳೀಯ ನಾಮಗಳು== ತಮಿಳು-ಆನೆನೆರುಂಚಿ,ಪೆರುನೆರುಂಚಿ ತೆಲುಗು-ಏನುಗಪಲ್ಲೇರು, ತುಳು-ಆನೆನೆಗ್ಗಿಲು, ಮಲಯಾಳಂ-ಕಾಕಮುಲ್ಲ, ಸಂಸ್ಕೃತ-ಗೋಖ್ರು.<ref>{{Cite web |title=ಆನೆನೆಗ್ಗಿಲು|url=https://dn710701.ca.archive.org/0/items/FiveHundredIndianPlants/FiveHundredIndianPlants.pdf }}</ref> ಇದನ್ನು ಲಾರ್ಜ್ ಕ್ಯಾಲ್ಟ್ರಾಪ್ ಅಥವಾ ಎಲಿಫೆಂಟ್ ಕ್ಯಾಲ್ಟ್ರಾಪ್ ಎಂದೂ ಕರೆಯುತ್ತಾರೆ. ==ಆವಾಸ== ಇದು ಉಷ್ಣವಲಯದ ಆಫ್ರಿಕಾ, ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಹರಡಿಕೊಂಡಿದೆ<ref name=POWO/>.ಭಾರತದಲ್ಲಿ ಕೊಂಕಣ, ಕರಾವಳಿಯಲ್ಲಿ ಕನ್ಯಾಕುಮಾರಿಯವರೆಗೆ<ref>{{Cite web |title=ಆನೆನೆಗ್ಗಿಲು|url=https://dn710701.ca.archive.org/0/items/FiveHundredIndianPlants/FiveHundredIndianPlants.pdf }}</ref>. ==ಲಕ್ಷಣಗಳು== ಇದು ಪ್ರಕಾಶಮಾನವಾದ ಹಳದಿ ಹೂವುಗಳು ಮತ್ತು ಚೂಪಾದ, ಮುಳ್ಳಿನ ಹಣ್ಣುಗಳನ್ನು ಹೊಂದಿರುವ ಗಟ್ಟಿಮುಟ್ಟಾದ ಸಸ್ಯವಾಗಿದೆ. == ವ್ಯುತ್ಪತ್ತಿ == ಈ ಕುಲದ ಹೆಸರು 'ಹಡಗಿನ ಚುಕ್ಕಾಣಿ' ಎಂಬರ್ಥವಿರುವ ಗ್ರೀಕ್ ಪದ ''ಪೆಡಲಿಯನ್'' ನಿಂದ ಬಂದಿದೆ . ==ಉಪಯೋಗಗಳು== ಆಯುರ್ವೇದದಲ್ಲಿ ಗೋಖ್ರು ಒಂದು ಪ್ರಮುಖ ಸಸ್ಯಸಾರ.ಮೂತ್ರಪಿಂಡಗಳನ್ನು ಬೆಂಬಲಿಸುವ ಮತ್ತು ಮೂತ್ರವರ್ಧಕ ಗುಣಲಕ್ಷಣಗಳಿಗಾಗಿ ಆಯುರ್ವೇದದಲ್ಲಿ ಗುರುತಿಸಲ್ಪಟ್ತಿದೆ. ಇದನ್ನು ಮೂತ್ರಕೋಶದ ಖಾಯಿಲೆಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ. ಇದನ್ನು ಸಾಂಪ್ರದಾಯಿಕವಾಗಿ ವಾಸ್ತಿಸೋಧನ (ಮೂತ್ರಕೋಶ-ಶುದ್ಧೀಕರಣ) ಏಜೆಂಟ್ ಆಗಿ ಬಳಸಲಾಗುತ್ತದೆ. ==ಬಾಹ್ಯ ಸಂಪರ್ಕಗಳು== * [https://archive.org/stream/pharmacographia03dymogoog#page/n49/mode/1up pharmacographia indica page 49] * [http://www.flowersofindia.net/catalog/slides/Bara%20Gokhru.html flowers of india बडा गोखरू] ==ಉಲ್ಲೇಖಗಳು== 3xm5ditp6xvxtkvda5yxhn6if9k7gqm 1374821 1374820 2026-06-06T17:26:08Z VASANTH S.N. 728 /* ಆವಾಸ */ 1374821 wikitext text/x-wiki {{Speciesbox | image = Pedalium murex MS6569.jpg | image_caption = ''Pedalium murex'' | status = | genus = Pedalium | parent_authority = [[David van Royen |D.Royen]]<ref name=POWO>{{cite POWO | title = ''Pedalium'' | id = 31851-1 | access-date = 11 November 2023}}</ref> | species = murex | authority = [[Carl Linnaeus|L.]] | synonyms = {{Plainlist | style = margin-left: 1em; text-indent: -1em; | '''Genus''': *''Cacatali'' <small>Adans.</small> *''Murex'' <small>L. ex Kuntze</small> '''Species''': *''Pedalium microcarpum'' <small>(Klotzsch) Decne.</small> *''Murex burmanni'' <small>Kuntze</small> *''Pedalium muricatum'' <small>Salisb.</small> *''Rogeria microcarpa'' <small>Klotzsch</small> }} | synonyms_ref = <ref name=POWO/> }} '''ಆನೆನೆಗ್ಗಿಲು''' ಒಂದು ಮೂಲಿಕೆ ಬಳ್ಳಿಸಸ್ಯ. ಇದರ ಸಸ್ಯಶಾಸ್ಟೀಯ ಹೆಸರು ಪೆಡಲಿಯಮ್ ಮ್ಯೂರೆಕ್ಸ್. ==ಸಸ್ಯಶಾಸ್ತ್ರೀಯ ವರ್ಗೀಕರಣ== ಇದು ಪೆಡಲಿಯಾಸಿಯೇ ಕುಟುಂಬದಲ್ಲಿ ಪೆಡಲಿಯಮ್ ಮ್ಯೂರೆಕ್ಸ್ ಎಂಬ ಒಂದು ಜಾತಿಯನ್ನು ಒಳಗೊಂಡಿರುವ ಸಸ್ಯದ ಒಂದು ಕುಲವಾಗಿದೆ. ==ಸ್ಥಳೀಯ ನಾಮಗಳು== ತಮಿಳು-ಆನೆನೆರುಂಚಿ,ಪೆರುನೆರುಂಚಿ ತೆಲುಗು-ಏನುಗಪಲ್ಲೇರು, ತುಳು-ಆನೆನೆಗ್ಗಿಲು, ಮಲಯಾಳಂ-ಕಾಕಮುಲ್ಲ, ಸಂಸ್ಕೃತ-ಗೋಖ್ರು.<ref>{{Cite web |title=ಆನೆನೆಗ್ಗಿಲು|url=https://dn710701.ca.archive.org/0/items/FiveHundredIndianPlants/FiveHundredIndianPlants.pdf }}</ref> ಇದನ್ನು ಲಾರ್ಜ್ ಕ್ಯಾಲ್ಟ್ರಾಪ್ ಅಥವಾ ಎಲಿಫೆಂಟ್ ಕ್ಯಾಲ್ಟ್ರಾಪ್ ಎಂದೂ ಕರೆಯುತ್ತಾರೆ. ==ಆವಾಸ== ಇದು [[ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು|ಉಷ್ಣವಲಯ]]ದ [[ಆಫ್ರಿಕಾ]], [[ಭಾರತೀಯ ಉಪಖಂಡ]] ಮತ್ತು [[ಆಗ್ನೇಯ ಏಷ್ಯಾ]]ದಲ್ಲಿ ಹರಡಿಕೊಂಡಿದೆ<ref name=POWO>{{cite POWO | title = ''Pedalium'' | id = 31851-1 | access-date = 11 November 2023}}</ref>.ಭಾರತದಲ್ಲಿ [[ಕೊಂಕಣ]], [[ಕರಾವಳಿ]]ಯಲ್ಲಿ [[ಕನ್ಯಾಕುಮಾರಿ]]ಯವರೆಗೆ<ref>{{Cite web |title=ಆನೆನೆಗ್ಗಿಲು|url=https://dn710701.ca.archive.org/0/items/FiveHundredIndianPlants/FiveHundredIndianPlants.pdf }}</ref>. ==ಲಕ್ಷಣಗಳು== ಇದು ಪ್ರಕಾಶಮಾನವಾದ ಹಳದಿ ಹೂವುಗಳು ಮತ್ತು ಚೂಪಾದ, ಮುಳ್ಳಿನ ಹಣ್ಣುಗಳನ್ನು ಹೊಂದಿರುವ ಗಟ್ಟಿಮುಟ್ಟಾದ ಸಸ್ಯವಾಗಿದೆ. == ವ್ಯುತ್ಪತ್ತಿ == ಈ ಕುಲದ ಹೆಸರು 'ಹಡಗಿನ ಚುಕ್ಕಾಣಿ' ಎಂಬರ್ಥವಿರುವ ಗ್ರೀಕ್ ಪದ ''ಪೆಡಲಿಯನ್'' ನಿಂದ ಬಂದಿದೆ . ==ಉಪಯೋಗಗಳು== ಆಯುರ್ವೇದದಲ್ಲಿ ಗೋಖ್ರು ಒಂದು ಪ್ರಮುಖ ಸಸ್ಯಸಾರ.ಮೂತ್ರಪಿಂಡಗಳನ್ನು ಬೆಂಬಲಿಸುವ ಮತ್ತು ಮೂತ್ರವರ್ಧಕ ಗುಣಲಕ್ಷಣಗಳಿಗಾಗಿ ಆಯುರ್ವೇದದಲ್ಲಿ ಗುರುತಿಸಲ್ಪಟ್ತಿದೆ. ಇದನ್ನು ಮೂತ್ರಕೋಶದ ಖಾಯಿಲೆಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ. ಇದನ್ನು ಸಾಂಪ್ರದಾಯಿಕವಾಗಿ ವಾಸ್ತಿಸೋಧನ (ಮೂತ್ರಕೋಶ-ಶುದ್ಧೀಕರಣ) ಏಜೆಂಟ್ ಆಗಿ ಬಳಸಲಾಗುತ್ತದೆ. ==ಬಾಹ್ಯ ಸಂಪರ್ಕಗಳು== * [https://archive.org/stream/pharmacographia03dymogoog#page/n49/mode/1up pharmacographia indica page 49] * [http://www.flowersofindia.net/catalog/slides/Bara%20Gokhru.html flowers of india बडा गोखरू] ==ಉಲ್ಲೇಖಗಳು== o20nue3qg6nkk8br9rxs8yli07835vo 1374822 1374821 2026-06-06T17:27:25Z VASANTH S.N. 728 /* ಉಪಯೋಗಗಳು */ 1374822 wikitext text/x-wiki {{Speciesbox | image = Pedalium murex MS6569.jpg | image_caption = ''Pedalium murex'' | status = | genus = Pedalium | parent_authority = [[David van Royen |D.Royen]]<ref name=POWO>{{cite POWO | title = ''Pedalium'' | id = 31851-1 | access-date = 11 November 2023}}</ref> | species = murex | authority = [[Carl Linnaeus|L.]] | synonyms = {{Plainlist | style = margin-left: 1em; text-indent: -1em; | '''Genus''': *''Cacatali'' <small>Adans.</small> *''Murex'' <small>L. ex Kuntze</small> '''Species''': *''Pedalium microcarpum'' <small>(Klotzsch) Decne.</small> *''Murex burmanni'' <small>Kuntze</small> *''Pedalium muricatum'' <small>Salisb.</small> *''Rogeria microcarpa'' <small>Klotzsch</small> }} | synonyms_ref = <ref name=POWO/> }} '''ಆನೆನೆಗ್ಗಿಲು''' ಒಂದು ಮೂಲಿಕೆ ಬಳ್ಳಿಸಸ್ಯ. ಇದರ ಸಸ್ಯಶಾಸ್ಟೀಯ ಹೆಸರು ಪೆಡಲಿಯಮ್ ಮ್ಯೂರೆಕ್ಸ್. ==ಸಸ್ಯಶಾಸ್ತ್ರೀಯ ವರ್ಗೀಕರಣ== ಇದು ಪೆಡಲಿಯಾಸಿಯೇ ಕುಟುಂಬದಲ್ಲಿ ಪೆಡಲಿಯಮ್ ಮ್ಯೂರೆಕ್ಸ್ ಎಂಬ ಒಂದು ಜಾತಿಯನ್ನು ಒಳಗೊಂಡಿರುವ ಸಸ್ಯದ ಒಂದು ಕುಲವಾಗಿದೆ. ==ಸ್ಥಳೀಯ ನಾಮಗಳು== ತಮಿಳು-ಆನೆನೆರುಂಚಿ,ಪೆರುನೆರುಂಚಿ ತೆಲುಗು-ಏನುಗಪಲ್ಲೇರು, ತುಳು-ಆನೆನೆಗ್ಗಿಲು, ಮಲಯಾಳಂ-ಕಾಕಮುಲ್ಲ, ಸಂಸ್ಕೃತ-ಗೋಖ್ರು.<ref>{{Cite web |title=ಆನೆನೆಗ್ಗಿಲು|url=https://dn710701.ca.archive.org/0/items/FiveHundredIndianPlants/FiveHundredIndianPlants.pdf }}</ref> ಇದನ್ನು ಲಾರ್ಜ್ ಕ್ಯಾಲ್ಟ್ರಾಪ್ ಅಥವಾ ಎಲಿಫೆಂಟ್ ಕ್ಯಾಲ್ಟ್ರಾಪ್ ಎಂದೂ ಕರೆಯುತ್ತಾರೆ. ==ಆವಾಸ== ಇದು [[ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು|ಉಷ್ಣವಲಯ]]ದ [[ಆಫ್ರಿಕಾ]], [[ಭಾರತೀಯ ಉಪಖಂಡ]] ಮತ್ತು [[ಆಗ್ನೇಯ ಏಷ್ಯಾ]]ದಲ್ಲಿ ಹರಡಿಕೊಂಡಿದೆ<ref name=POWO>{{cite POWO | title = ''Pedalium'' | id = 31851-1 | access-date = 11 November 2023}}</ref>.ಭಾರತದಲ್ಲಿ [[ಕೊಂಕಣ]], [[ಕರಾವಳಿ]]ಯಲ್ಲಿ [[ಕನ್ಯಾಕುಮಾರಿ]]ಯವರೆಗೆ<ref>{{Cite web |title=ಆನೆನೆಗ್ಗಿಲು|url=https://dn710701.ca.archive.org/0/items/FiveHundredIndianPlants/FiveHundredIndianPlants.pdf }}</ref>. ==ಲಕ್ಷಣಗಳು== ಇದು ಪ್ರಕಾಶಮಾನವಾದ ಹಳದಿ ಹೂವುಗಳು ಮತ್ತು ಚೂಪಾದ, ಮುಳ್ಳಿನ ಹಣ್ಣುಗಳನ್ನು ಹೊಂದಿರುವ ಗಟ್ಟಿಮುಟ್ಟಾದ ಸಸ್ಯವಾಗಿದೆ. == ವ್ಯುತ್ಪತ್ತಿ == ಈ ಕುಲದ ಹೆಸರು 'ಹಡಗಿನ ಚುಕ್ಕಾಣಿ' ಎಂಬರ್ಥವಿರುವ ಗ್ರೀಕ್ ಪದ ''ಪೆಡಲಿಯನ್'' ನಿಂದ ಬಂದಿದೆ . ==ಉಪಯೋಗಗಳು== [[ಆಯುರ್ವೇದ]]ದಲ್ಲಿ ಗೋಖ್ರು ಒಂದು ಪ್ರಮುಖ ಸಸ್ಯಸಾರ.[[ಮೂತ್ರಪಿಂಡ]]ಗಳನ್ನು ಬೆಂಬಲಿಸುವ ಮತ್ತು ಮೂತ್ರವರ್ಧಕ ಗುಣಲಕ್ಷಣಗಳಿಗಾಗಿ ಆಯುರ್ವೇದದಲ್ಲಿ ಗುರುತಿಸಲ್ಪಟ್ತಿದೆ. ಇದನ್ನು [[ಮೂತ್ರಕೋಶ]]ದ ಖಾಯಿಲೆಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ. ಇದನ್ನು ಸಾಂಪ್ರದಾಯಿಕವಾಗಿ ವಾಸ್ತಿಸೋಧನ (ಮೂತ್ರಕೋಶ-ಶುದ್ಧೀಕರಣ) ಏಜೆಂಟ್ ಆಗಿ ಬಳಸಲಾಗುತ್ತದೆ. ==ಬಾಹ್ಯ ಸಂಪರ್ಕಗಳು== * [https://archive.org/stream/pharmacographia03dymogoog#page/n49/mode/1up pharmacographia indica page 49] * [http://www.flowersofindia.net/catalog/slides/Bara%20Gokhru.html flowers of india बडा गोखरू] ==ಉಲ್ಲೇಖಗಳು== mauj71jv7f1npqufxjgm6t7mvrh8vcp 1374823 1374822 2026-06-06T17:27:51Z VASANTH S.N. 728 added [[Category:ಸಸ್ಯಗಳು]] using [[Help:Gadget-HotCat|HotCat]] 1374823 wikitext text/x-wiki {{Speciesbox | image = Pedalium murex MS6569.jpg | image_caption = ''Pedalium murex'' | status = | genus = Pedalium | parent_authority = [[David van Royen |D.Royen]]<ref name=POWO>{{cite POWO | title = ''Pedalium'' | id = 31851-1 | access-date = 11 November 2023}}</ref> | species = murex | authority = [[Carl Linnaeus|L.]] | synonyms = {{Plainlist | style = margin-left: 1em; text-indent: -1em; | '''Genus''': *''Cacatali'' <small>Adans.</small> *''Murex'' <small>L. ex Kuntze</small> '''Species''': *''Pedalium microcarpum'' <small>(Klotzsch) Decne.</small> *''Murex burmanni'' <small>Kuntze</small> *''Pedalium muricatum'' <small>Salisb.</small> *''Rogeria microcarpa'' <small>Klotzsch</small> }} | synonyms_ref = <ref name=POWO/> }} '''ಆನೆನೆಗ್ಗಿಲು''' ಒಂದು ಮೂಲಿಕೆ ಬಳ್ಳಿಸಸ್ಯ. ಇದರ ಸಸ್ಯಶಾಸ್ಟೀಯ ಹೆಸರು ಪೆಡಲಿಯಮ್ ಮ್ಯೂರೆಕ್ಸ್. ==ಸಸ್ಯಶಾಸ್ತ್ರೀಯ ವರ್ಗೀಕರಣ== ಇದು ಪೆಡಲಿಯಾಸಿಯೇ ಕುಟುಂಬದಲ್ಲಿ ಪೆಡಲಿಯಮ್ ಮ್ಯೂರೆಕ್ಸ್ ಎಂಬ ಒಂದು ಜಾತಿಯನ್ನು ಒಳಗೊಂಡಿರುವ ಸಸ್ಯದ ಒಂದು ಕುಲವಾಗಿದೆ. ==ಸ್ಥಳೀಯ ನಾಮಗಳು== ತಮಿಳು-ಆನೆನೆರುಂಚಿ,ಪೆರುನೆರುಂಚಿ ತೆಲುಗು-ಏನುಗಪಲ್ಲೇರು, ತುಳು-ಆನೆನೆಗ್ಗಿಲು, ಮಲಯಾಳಂ-ಕಾಕಮುಲ್ಲ, ಸಂಸ್ಕೃತ-ಗೋಖ್ರು.<ref>{{Cite web |title=ಆನೆನೆಗ್ಗಿಲು|url=https://dn710701.ca.archive.org/0/items/FiveHundredIndianPlants/FiveHundredIndianPlants.pdf }}</ref> ಇದನ್ನು ಲಾರ್ಜ್ ಕ್ಯಾಲ್ಟ್ರಾಪ್ ಅಥವಾ ಎಲಿಫೆಂಟ್ ಕ್ಯಾಲ್ಟ್ರಾಪ್ ಎಂದೂ ಕರೆಯುತ್ತಾರೆ. ==ಆವಾಸ== ಇದು [[ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು|ಉಷ್ಣವಲಯ]]ದ [[ಆಫ್ರಿಕಾ]], [[ಭಾರತೀಯ ಉಪಖಂಡ]] ಮತ್ತು [[ಆಗ್ನೇಯ ಏಷ್ಯಾ]]ದಲ್ಲಿ ಹರಡಿಕೊಂಡಿದೆ<ref name=POWO>{{cite POWO | title = ''Pedalium'' | id = 31851-1 | access-date = 11 November 2023}}</ref>.ಭಾರತದಲ್ಲಿ [[ಕೊಂಕಣ]], [[ಕರಾವಳಿ]]ಯಲ್ಲಿ [[ಕನ್ಯಾಕುಮಾರಿ]]ಯವರೆಗೆ<ref>{{Cite web |title=ಆನೆನೆಗ್ಗಿಲು|url=https://dn710701.ca.archive.org/0/items/FiveHundredIndianPlants/FiveHundredIndianPlants.pdf }}</ref>. ==ಲಕ್ಷಣಗಳು== ಇದು ಪ್ರಕಾಶಮಾನವಾದ ಹಳದಿ ಹೂವುಗಳು ಮತ್ತು ಚೂಪಾದ, ಮುಳ್ಳಿನ ಹಣ್ಣುಗಳನ್ನು ಹೊಂದಿರುವ ಗಟ್ಟಿಮುಟ್ಟಾದ ಸಸ್ಯವಾಗಿದೆ. == ವ್ಯುತ್ಪತ್ತಿ == ಈ ಕುಲದ ಹೆಸರು 'ಹಡಗಿನ ಚುಕ್ಕಾಣಿ' ಎಂಬರ್ಥವಿರುವ ಗ್ರೀಕ್ ಪದ ''ಪೆಡಲಿಯನ್'' ನಿಂದ ಬಂದಿದೆ . ==ಉಪಯೋಗಗಳು== [[ಆಯುರ್ವೇದ]]ದಲ್ಲಿ ಗೋಖ್ರು ಒಂದು ಪ್ರಮುಖ ಸಸ್ಯಸಾರ.[[ಮೂತ್ರಪಿಂಡ]]ಗಳನ್ನು ಬೆಂಬಲಿಸುವ ಮತ್ತು ಮೂತ್ರವರ್ಧಕ ಗುಣಲಕ್ಷಣಗಳಿಗಾಗಿ ಆಯುರ್ವೇದದಲ್ಲಿ ಗುರುತಿಸಲ್ಪಟ್ತಿದೆ. ಇದನ್ನು [[ಮೂತ್ರಕೋಶ]]ದ ಖಾಯಿಲೆಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ. ಇದನ್ನು ಸಾಂಪ್ರದಾಯಿಕವಾಗಿ ವಾಸ್ತಿಸೋಧನ (ಮೂತ್ರಕೋಶ-ಶುದ್ಧೀಕರಣ) ಏಜೆಂಟ್ ಆಗಿ ಬಳಸಲಾಗುತ್ತದೆ. ==ಬಾಹ್ಯ ಸಂಪರ್ಕಗಳು== * [https://archive.org/stream/pharmacographia03dymogoog#page/n49/mode/1up pharmacographia indica page 49] * [http://www.flowersofindia.net/catalog/slides/Bara%20Gokhru.html flowers of india बडा गोखरू] ==ಉಲ್ಲೇಖಗಳು== [[ವರ್ಗ:ಸಸ್ಯಗಳು]] 5mqq6di2904kh8lr92ny3fnw4c2t26m 1374824 1374823 2026-06-06T17:28:27Z VASANTH S.N. 728 added [[Category:ಔಷಧೀಯ ಸಸ್ಯಗಳು]] using [[Help:Gadget-HotCat|HotCat]] 1374824 wikitext text/x-wiki {{Speciesbox | image = Pedalium murex MS6569.jpg | image_caption = ''Pedalium murex'' | status = | genus = Pedalium | parent_authority = [[David van Royen |D.Royen]]<ref name=POWO>{{cite POWO | title = ''Pedalium'' | id = 31851-1 | access-date = 11 November 2023}}</ref> | species = murex | authority = [[Carl Linnaeus|L.]] | synonyms = {{Plainlist | style = margin-left: 1em; text-indent: -1em; | '''Genus''': *''Cacatali'' <small>Adans.</small> *''Murex'' <small>L. ex Kuntze</small> '''Species''': *''Pedalium microcarpum'' <small>(Klotzsch) Decne.</small> *''Murex burmanni'' <small>Kuntze</small> *''Pedalium muricatum'' <small>Salisb.</small> *''Rogeria microcarpa'' <small>Klotzsch</small> }} | synonyms_ref = <ref name=POWO/> }} '''ಆನೆನೆಗ್ಗಿಲು''' ಒಂದು ಮೂಲಿಕೆ ಬಳ್ಳಿಸಸ್ಯ. ಇದರ ಸಸ್ಯಶಾಸ್ಟೀಯ ಹೆಸರು ಪೆಡಲಿಯಮ್ ಮ್ಯೂರೆಕ್ಸ್. ==ಸಸ್ಯಶಾಸ್ತ್ರೀಯ ವರ್ಗೀಕರಣ== ಇದು ಪೆಡಲಿಯಾಸಿಯೇ ಕುಟುಂಬದಲ್ಲಿ ಪೆಡಲಿಯಮ್ ಮ್ಯೂರೆಕ್ಸ್ ಎಂಬ ಒಂದು ಜಾತಿಯನ್ನು ಒಳಗೊಂಡಿರುವ ಸಸ್ಯದ ಒಂದು ಕುಲವಾಗಿದೆ. ==ಸ್ಥಳೀಯ ನಾಮಗಳು== ತಮಿಳು-ಆನೆನೆರುಂಚಿ,ಪೆರುನೆರುಂಚಿ ತೆಲುಗು-ಏನುಗಪಲ್ಲೇರು, ತುಳು-ಆನೆನೆಗ್ಗಿಲು, ಮಲಯಾಳಂ-ಕಾಕಮುಲ್ಲ, ಸಂಸ್ಕೃತ-ಗೋಖ್ರು.<ref>{{Cite web |title=ಆನೆನೆಗ್ಗಿಲು|url=https://dn710701.ca.archive.org/0/items/FiveHundredIndianPlants/FiveHundredIndianPlants.pdf }}</ref> ಇದನ್ನು ಲಾರ್ಜ್ ಕ್ಯಾಲ್ಟ್ರಾಪ್ ಅಥವಾ ಎಲಿಫೆಂಟ್ ಕ್ಯಾಲ್ಟ್ರಾಪ್ ಎಂದೂ ಕರೆಯುತ್ತಾರೆ. ==ಆವಾಸ== ಇದು [[ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು|ಉಷ್ಣವಲಯ]]ದ [[ಆಫ್ರಿಕಾ]], [[ಭಾರತೀಯ ಉಪಖಂಡ]] ಮತ್ತು [[ಆಗ್ನೇಯ ಏಷ್ಯಾ]]ದಲ್ಲಿ ಹರಡಿಕೊಂಡಿದೆ<ref name=POWO>{{cite POWO | title = ''Pedalium'' | id = 31851-1 | access-date = 11 November 2023}}</ref>.ಭಾರತದಲ್ಲಿ [[ಕೊಂಕಣ]], [[ಕರಾವಳಿ]]ಯಲ್ಲಿ [[ಕನ್ಯಾಕುಮಾರಿ]]ಯವರೆಗೆ<ref>{{Cite web |title=ಆನೆನೆಗ್ಗಿಲು|url=https://dn710701.ca.archive.org/0/items/FiveHundredIndianPlants/FiveHundredIndianPlants.pdf }}</ref>. ==ಲಕ್ಷಣಗಳು== ಇದು ಪ್ರಕಾಶಮಾನವಾದ ಹಳದಿ ಹೂವುಗಳು ಮತ್ತು ಚೂಪಾದ, ಮುಳ್ಳಿನ ಹಣ್ಣುಗಳನ್ನು ಹೊಂದಿರುವ ಗಟ್ಟಿಮುಟ್ಟಾದ ಸಸ್ಯವಾಗಿದೆ. == ವ್ಯುತ್ಪತ್ತಿ == ಈ ಕುಲದ ಹೆಸರು 'ಹಡಗಿನ ಚುಕ್ಕಾಣಿ' ಎಂಬರ್ಥವಿರುವ ಗ್ರೀಕ್ ಪದ ''ಪೆಡಲಿಯನ್'' ನಿಂದ ಬಂದಿದೆ . ==ಉಪಯೋಗಗಳು== [[ಆಯುರ್ವೇದ]]ದಲ್ಲಿ ಗೋಖ್ರು ಒಂದು ಪ್ರಮುಖ ಸಸ್ಯಸಾರ.[[ಮೂತ್ರಪಿಂಡ]]ಗಳನ್ನು ಬೆಂಬಲಿಸುವ ಮತ್ತು ಮೂತ್ರವರ್ಧಕ ಗುಣಲಕ್ಷಣಗಳಿಗಾಗಿ ಆಯುರ್ವೇದದಲ್ಲಿ ಗುರುತಿಸಲ್ಪಟ್ತಿದೆ. ಇದನ್ನು [[ಮೂತ್ರಕೋಶ]]ದ ಖಾಯಿಲೆಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ. ಇದನ್ನು ಸಾಂಪ್ರದಾಯಿಕವಾಗಿ ವಾಸ್ತಿಸೋಧನ (ಮೂತ್ರಕೋಶ-ಶುದ್ಧೀಕರಣ) ಏಜೆಂಟ್ ಆಗಿ ಬಳಸಲಾಗುತ್ತದೆ. ==ಬಾಹ್ಯ ಸಂಪರ್ಕಗಳು== * [https://archive.org/stream/pharmacographia03dymogoog#page/n49/mode/1up pharmacographia indica page 49] * [http://www.flowersofindia.net/catalog/slides/Bara%20Gokhru.html flowers of india बडा गोखरू] ==ಉಲ್ಲೇಖಗಳು== [[ವರ್ಗ:ಸಸ್ಯಗಳು]] [[ವರ್ಗ:ಔಷಧೀಯ ಸಸ್ಯಗಳು]] izj9pc5sbdwzmwlz0fn4q269fk8cpj8 1374825 1374824 2026-06-06T17:31:39Z VASANTH S.N. 728 added [[Category:ಕರ್ನಾಟಕದ ಸಸ್ಯಗಳು]] using [[Help:Gadget-HotCat|HotCat]] 1374825 wikitext text/x-wiki {{Speciesbox | image = Pedalium murex MS6569.jpg | image_caption = ''Pedalium murex'' | status = | genus = Pedalium | parent_authority = [[David van Royen |D.Royen]]<ref name=POWO>{{cite POWO | title = ''Pedalium'' | id = 31851-1 | access-date = 11 November 2023}}</ref> | species = murex | authority = [[Carl Linnaeus|L.]] | synonyms = {{Plainlist | style = margin-left: 1em; text-indent: -1em; | '''Genus''': *''Cacatali'' <small>Adans.</small> *''Murex'' <small>L. ex Kuntze</small> '''Species''': *''Pedalium microcarpum'' <small>(Klotzsch) Decne.</small> *''Murex burmanni'' <small>Kuntze</small> *''Pedalium muricatum'' <small>Salisb.</small> *''Rogeria microcarpa'' <small>Klotzsch</small> }} | synonyms_ref = <ref name=POWO/> }} '''ಆನೆನೆಗ್ಗಿಲು''' ಒಂದು ಮೂಲಿಕೆ ಬಳ್ಳಿಸಸ್ಯ. ಇದರ ಸಸ್ಯಶಾಸ್ಟೀಯ ಹೆಸರು ಪೆಡಲಿಯಮ್ ಮ್ಯೂರೆಕ್ಸ್. ==ಸಸ್ಯಶಾಸ್ತ್ರೀಯ ವರ್ಗೀಕರಣ== ಇದು ಪೆಡಲಿಯಾಸಿಯೇ ಕುಟುಂಬದಲ್ಲಿ ಪೆಡಲಿಯಮ್ ಮ್ಯೂರೆಕ್ಸ್ ಎಂಬ ಒಂದು ಜಾತಿಯನ್ನು ಒಳಗೊಂಡಿರುವ ಸಸ್ಯದ ಒಂದು ಕುಲವಾಗಿದೆ. ==ಸ್ಥಳೀಯ ನಾಮಗಳು== ತಮಿಳು-ಆನೆನೆರುಂಚಿ,ಪೆರುನೆರುಂಚಿ ತೆಲುಗು-ಏನುಗಪಲ್ಲೇರು, ತುಳು-ಆನೆನೆಗ್ಗಿಲು, ಮಲಯಾಳಂ-ಕಾಕಮುಲ್ಲ, ಸಂಸ್ಕೃತ-ಗೋಖ್ರು.<ref>{{Cite web |title=ಆನೆನೆಗ್ಗಿಲು|url=https://dn710701.ca.archive.org/0/items/FiveHundredIndianPlants/FiveHundredIndianPlants.pdf }}</ref> ಇದನ್ನು ಲಾರ್ಜ್ ಕ್ಯಾಲ್ಟ್ರಾಪ್ ಅಥವಾ ಎಲಿಫೆಂಟ್ ಕ್ಯಾಲ್ಟ್ರಾಪ್ ಎಂದೂ ಕರೆಯುತ್ತಾರೆ. ==ಆವಾಸ== ಇದು [[ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು|ಉಷ್ಣವಲಯ]]ದ [[ಆಫ್ರಿಕಾ]], [[ಭಾರತೀಯ ಉಪಖಂಡ]] ಮತ್ತು [[ಆಗ್ನೇಯ ಏಷ್ಯಾ]]ದಲ್ಲಿ ಹರಡಿಕೊಂಡಿದೆ<ref name=POWO>{{cite POWO | title = ''Pedalium'' | id = 31851-1 | access-date = 11 November 2023}}</ref>.ಭಾರತದಲ್ಲಿ [[ಕೊಂಕಣ]], [[ಕರಾವಳಿ]]ಯಲ್ಲಿ [[ಕನ್ಯಾಕುಮಾರಿ]]ಯವರೆಗೆ<ref>{{Cite web |title=ಆನೆನೆಗ್ಗಿಲು|url=https://dn710701.ca.archive.org/0/items/FiveHundredIndianPlants/FiveHundredIndianPlants.pdf }}</ref>. ==ಲಕ್ಷಣಗಳು== ಇದು ಪ್ರಕಾಶಮಾನವಾದ ಹಳದಿ ಹೂವುಗಳು ಮತ್ತು ಚೂಪಾದ, ಮುಳ್ಳಿನ ಹಣ್ಣುಗಳನ್ನು ಹೊಂದಿರುವ ಗಟ್ಟಿಮುಟ್ಟಾದ ಸಸ್ಯವಾಗಿದೆ. == ವ್ಯುತ್ಪತ್ತಿ == ಈ ಕುಲದ ಹೆಸರು 'ಹಡಗಿನ ಚುಕ್ಕಾಣಿ' ಎಂಬರ್ಥವಿರುವ ಗ್ರೀಕ್ ಪದ ''ಪೆಡಲಿಯನ್'' ನಿಂದ ಬಂದಿದೆ . ==ಉಪಯೋಗಗಳು== [[ಆಯುರ್ವೇದ]]ದಲ್ಲಿ ಗೋಖ್ರು ಒಂದು ಪ್ರಮುಖ ಸಸ್ಯಸಾರ.[[ಮೂತ್ರಪಿಂಡ]]ಗಳನ್ನು ಬೆಂಬಲಿಸುವ ಮತ್ತು ಮೂತ್ರವರ್ಧಕ ಗುಣಲಕ್ಷಣಗಳಿಗಾಗಿ ಆಯುರ್ವೇದದಲ್ಲಿ ಗುರುತಿಸಲ್ಪಟ್ತಿದೆ. ಇದನ್ನು [[ಮೂತ್ರಕೋಶ]]ದ ಖಾಯಿಲೆಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ. ಇದನ್ನು ಸಾಂಪ್ರದಾಯಿಕವಾಗಿ ವಾಸ್ತಿಸೋಧನ (ಮೂತ್ರಕೋಶ-ಶುದ್ಧೀಕರಣ) ಏಜೆಂಟ್ ಆಗಿ ಬಳಸಲಾಗುತ್ತದೆ. ==ಬಾಹ್ಯ ಸಂಪರ್ಕಗಳು== * [https://archive.org/stream/pharmacographia03dymogoog#page/n49/mode/1up pharmacographia indica page 49] * [http://www.flowersofindia.net/catalog/slides/Bara%20Gokhru.html flowers of india बडा गोखरू] ==ಉಲ್ಲೇಖಗಳು== [[ವರ್ಗ:ಸಸ್ಯಗಳು]] [[ವರ್ಗ:ಔಷಧೀಯ ಸಸ್ಯಗಳು]] [[ವರ್ಗ:ಕರ್ನಾಟಕದ ಸಸ್ಯಗಳು]] fhsaie1ha78uaahfalypzn3079rasj1 ಸದಸ್ಯ:ಗಣೇಶ್ ಎಂ/ನನ್ನ ಪ್ರಯೋಗಪುಟ 2 179308 1374831 2026-06-07T11:05:20Z ಗಣೇಶ್ ಎಂ 88310 ಹೊಸ ಪುಟ: ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ... 1374831 wikitext text/x-wiki ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು ಎಲ್ಲರೂ ಕುಂಬಾರಿಕೆ ವ್ಯವಸಾಯ ಹಾಗೂ ಮನೆ ಕೆಲಸಗಳನ್ನು ಮಾಡುತ್ತಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಬರಬೇಕು ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂಬ ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂದು ಪ್ರತೀತಿ ಇದೆ ಈಗಲೂ ಕೂಡ ಕೋಟಿ ಮೌಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ ಈಗ ಕೂಡ ನಮ್ಮ ಕುಟುಂಬದ ಭಾಸ್ಕರ್ ಬಿಸಿ ರೋಡು ಇವರು ದೀಪೊತ್ಸವದ ದಿನ ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮರುಳ ಧೂಮಾವತಿ ಮಹಿಂದಾಯ ಬಂಟ ದೈವ ಹಾಗೂ ಮನೆಯೊಳಗೇನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು ಅವಿನ ಭಾವ ಸಂಬಂಧವಿದೆ ಪ್ರತಿ ವರ್ಷ ದೇವಸ್ಥಾನ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಯ ಮೊದಲು ಹಣತೆಗಳನ್ನು ಸಾಯಂಕಾಲದ ಮೊದಲು ದೇವಸ್ಥಾನಕ್ಕೆ ತಲುಪಿಸುವ ತುರತುರಿಯಲ್ಲಿದ್ದರೂ ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮಕ್ಕಳೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಮೊದಲು ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು ಕತ್ತಲಾಗುತ್ತದೆ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು ಇವರ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮುಲ್ಯ ಸಂಸಾರವನ್ನು ದೇವರ ಫಲಿಪೂಜೆಯಲ್ಲಿ ಕರೆದು ಅವರು ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಸುಖ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲೆ ಕುಟುಂಬ ಹೆಣ್ಣು ಸಂಸಾರವು ಕದ್ರಿಪಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ ಎಂಬ ಅಭಯವನ್ನು ಈ ಮಂಜುನಾಥ ಸ್ವಾಮಿಯ ಸಮಯದಲ್ಲಿ ನೀಡಿದ ಕಾರಣ ಅಂದಿನಿಂದ ಕದ್ರಿಪಂಜನ್ ಎಂಬ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 5 ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾಗಿ ಆಯಾ ಊರಿನ ಹೆಸರಿನೊಂದಿಗೆ ಬಂಜೆನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಕದ್ರಿ ಬಂಜೆಯನ್ನು ಸಂಸಾರವು ಅವಳಿಂದ ಮುಂದುವರಿತು. ಕೋಟಿ ಮೂಲ್ಯರು ಅಪರಿಮಿತ ದೈವ ಉತ್ತರ ಆಗಿ ಪ್ರಾಮಾಣಿಕರಾಗಿ ಜನ ಜನಾನುರಾಗಿ ಗಳಾಗಿದ್ದರು ಅದರ ಹತೀವ ಸೇರಿ ಕುಡಿಯುವಂತಹ ಚಟ ಅವರಲ್ಲಿ ಆವರಿಸಿಕೊಂಡಿತ್ತು ವಾತಾವರಣದ ವೈಭಕ್ತಿಯ ಪ್ರಕೃತಿ ವಿಕೋಪಗಳಿಂದ ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಚಿವಾತು ಇಲ್ಲದೆ ಶುರುಮಾಡಿದರು ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡವಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು ಸಾಲಕೊಟ್ಟ ಬಲಿಷ್ಠ ಸಮುದಾಯದ ಅಣ್ಣ ತೀರಿಸಲು ತಮ್ಮ ಮನೆ ಹಾಗೂ ದೇವಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಅವು ಎಲ್ಲಾ ಪರಿಕರಗಳನ್ನು ಆಸ್ತಿ ಪಡ್ಕೊಂಡವರು ಬಾರೆ ಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೌಲ್ಯ ಸಂತಾನದವರು ಬಾರವೆಲ್ ಪರಿಸರದಲ್ಲಿ ದನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರಲಿದರು ಕೊರತೆ ಎನ್ನುವ ದೈವ ಮಾತ್ರ ಕದ್ರಿ ಬಣ್ಣ ಕುಟುಂಬದ ಒಬ್ಬ ಹೆಣ್ಣು ಮಗಳ ಮನೆಯಲ್ಲಿ ಬಾಡಿಗೆ ಮನೆಯಲ್ಲಿ ಗುಡಿಸಲು ಇರಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇರುತ್ತಿತ್ತು ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಹೊರತಪ್ಪಿಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯ ಪೆ ನ್ನು ಮಗಳ ಕುಟುಂಬದೊಂದಿಗೆ ಇರುತ್ತಿತ್ತು ನಾಲ್ಕೈದು ತಲೆಮಾರುಗಳು ಕಳೆದಾಗ ಕೆಲವರು ತಿಥಿವಂತರಾದರು ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯ ಇಂದ ಜೀವನ ಸಾಗಿಸುತ್ತಿದ್ದರು ತಕ್ಕಮಟ್ಟಿಗೆ ಸಿದ್ಧಿವಂತರಾಗಿದ್ದ ಗಂಗು ಮೂಲ್ಯದಿಯವರ ಅಮ್ಮನ ಮನೆಯಲ್ಲಿ ಕೊರತೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗೂ ಮೂಲೆಜಿಯವರಿಗೆ ಮೂರು ಜನ ಅಕ್ಕಂದಿರು ಕೊನೆಯವರು ಗಂಗು ಮೂಲ್ಯೆದಿ. ಇವರ ಅಪ್ಪ ಗಂಗೂ ಮೂಲೆಯ ಅಕ್ಕಂದಿರನೆಲ್ಲ ಬೇರೆ ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತರಿಗೆ ಮದುವೆ ಮಾಡಿಕೊಟ್ಟರು ಆದರೆ ಕಿರಿಯ ಮಗಳಾದ ಗಂಗು ಮೂಲಿಜಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಯುವಕನಿಗೆ ಮದುವೆ ಮಾಡಿಕೊಡುತ್ತಾರೆ ಇರುವುದರಿಂದ ಈ ಕಿವಿ ಮಗಳೊಂದಿಗೆ ಉಳಿದುಕೊಳ್ಳುತ್ತದೆ ಇವರು ಭಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ರೂಡಿಸಲಿನಲ್ಲಿ ಇರುತ್ತಾರೆ ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು ಅವರಲ್ಲಿ ಹಿರಿಯ ಮಗಳು ವೆಂಕಮ್ಮ ರನ್ನು ಬಾಳ ಕಲ್ವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಟ್ಟರು ಎರಡನೇ ಮಗಳಾದ ಕೂಸಮ್ಮ ರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಟ್ಟರು ಹಾಗೂ ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿಕೊಟ್ಟರು. ಎರಡನೇ ಮಗಳಾದ ಕೂಸಮ್ಮ ರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಕೊರತೆಯನ್ನು ಆರಾಧಿಸಿಕೊಂಡು ಬರುವ ನಿಟ್ಟಿನಲ್ಲಿ ಬಾರೆಬೈಲಿನಲ್ಲಿ ಒಂದು ಬಾಡಿಗೆ ಮನೆಯಲ್ಲಿ ಗಂಡ ಹೆಂಡತಿ ತಮ್ಮ ಸಂಸಾರದೊಂದಿಗೆ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬಂದರು lkxbf9vq5li3vc5tmelbfcqu76fu2vh