ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.13
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಮೀಡಿಯವಿಕಿ:Sitenotice
8
847
1378204
1377510
2026-08-02T17:08:03Z
A826
72368
/* */
1378204
wikitext
text/x-wiki
{| style="margin-left: auto; margin-right: auto; border: dashed 1px blue; text-align: center; background-color: #E0FFFF; font-size: 85%; color: black; border-radius: 10px; padding: 12px; width: 90%; box-shadow: 3px 3px 10px rgba(0,0,0,0.2), inset 1px 1px 2px rgba(255,255,255,0.8), inset -1px -1px 2px rgba(0,0,0,0.05); font-family: 'Segoe UI', 'Noto Sans Kannada', sans-serif;"
|-
| '''''ಲೇಖನದ ಶೀರ್ಷಿಕೆ ಕನ್ನಡದಲ್ಲೇ ಇರತಕ್ಕದ್ದು.''''' <br />
'''ಯಂತ್ರಾನುವಾದದ ಮೂಲಕ ಲೇಖನ ಸೇರಿಸುವವರು ಲೇಖನವನ್ನು ಚೆನ್ನಾಗಿ ಓದಿ ವಾಕ್ಯಗಳನ್ನು ಸರಿಪಡಿಸಬೇಕಾಗಿ ವಿನಂತಿ.'''
----
ಕನ್ನಡ ಲಿಪ್ಯಂತರ ಸಹಾಯಕ್ಕೆ [[ಸಹಾಯ:ಲಿಪ್ಯಂತರ]] ಪುಟ ನೋಡಿ.
|}
{| style="margin-left: auto; margin-right: auto; border: dashed 1px blue; text-align: center; font-size: 80%; border-radius: 10px; font-family: 'Segoe UI', 'Noto Sans Kannada', sans-serif;"align-items: center; width: 90%; "
|-
| [[File:Kerala Houseboat Scene.svg|120px|link=meta:Kerala_Culture_Month_2026|alt=]]
|
[[meta:WikiConference India 2026|೨೦೨೬ರ ಭಾರತೀಯ ವಿಕಿ ಸಮ್ಮೇಳನದ]] ಭಾಗವಾಗಿ ಕನ್ನಡ ವಿಕಿಪೀಡಿಯದಲ್ಲಿ
'''''ಜುಲೈ ೧೫''''' ರಿಂದ '''''ಆಗಸ್ಟ್ ೧೫''''' ವರೆಗು ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಉಪಕಾರಿಯಾಗುವ ಉದ್ಧೇಶದಿಂದ ಕನ್ನಡದಲ್ಲಿ ಕೇರಳ ಪ್ರವಾಸೋದ್ಯಮ, ಆಹಾರ, ಕಲೆ, ಸಂಸ್ಕೃತಿ ಕುರಿತು ಮಾಹಿತಿ ಹೆಚ್ಚಿಸಲು '''[[meta:Kerala_Culture_Month_2026|ಕೇರಳ ಸಂಸ್ಕೃತಿ ಮಾಸ ೨೦೨೬]]''' ಆಯೋಜಿಸಲಾಗಿದೆ.
[https://kn.wikipedia.org/wiki/ವಿಕಿಪೀಡಿಯ:ಕೇರಳ_ಸಂಸ್ಕೃತಿ_ತಿಂಗಳು_2026 '''ಭಾಗವಹಿಸಲು/ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ''']
|}
1vcmpdf5keo3lkkzk48uc4u1r9vlgur
1378219
1378204
2026-08-02T19:51:11Z
A826
72368
1378219
wikitext
text/x-wiki
<templatestyles src="NoticeStyles.css" />
<div class="notice-mobile-toggle">
'''▼ Mobile users: Click "show" below to view site notices'''
</div>
{| role="presentation" class="wikitable mw-collapsible mw-collapsed" style="width: 90%; margin-left: auto; margin-right: auto; border: none; background: transparent;"
|-
{| class="notice-first"
|-
| '''''ಲೇಖನದ ಶೀರ್ಷಿಕೆ ಕನ್ನಡದಲ್ಲೇ ಇರತಕ್ಕದ್ದು.''''' <br />
'''ಯಂತ್ರಾನುವಾದದ ಮೂಲಕ ಲೇಖನ ಸೇರಿಸುವವರು ಲೇಖನವನ್ನು ಚೆನ್ನಾಗಿ ಓದಿ ವಾಕ್ಯಗಳನ್ನು ಸರಿಪಡಿಸಬೇಕಾಗಿ ವಿನಂತಿ.'''
----
ಕನ್ನಡ ಲಿಪ್ಯಂತರ ಸಹಾಯಕ್ಕೆ [[ಸಹಾಯ:ಲಿಪ್ಯಂತರ]] ಪುಟ ನೋಡಿ.
|}
{| class="notice-second" style="color:white;"
|-
| [[File:Kerala Houseboat Scene.svg|120px|link=meta:Kerala_Culture_Month_2026|class=skin-invert]]
|
[[meta:WikiConference India 2026|೨೦೨೬ರ ಭಾರತೀಯ ವಿಕಿ ಸಮ್ಮೇಳನದ]] ಭಾಗವಾಗಿ ಕನ್ನಡ ವಿಕಿಪೀಡಿಯದಲ್ಲಿ
'''''ಜುಲೈ ೧೫''''' ರಿಂದ '''''ಆಗಸ್ಟ್ ೧೫''''' ವರೆಗು ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಉಪಕಾರಿಯಾಗುವ ಉದ್ಧೇಶದಿಂದ ಕನ್ನಡದಲ್ಲಿ ಕೇರಳ ಪ್ರವಾಸೋದ್ಯಮ, ಆಹಾರ, ಕಲೆ, ಸಂಸ್ಕೃತಿ ಕುರಿತು ಮಾಹಿತಿ ಹೆಚ್ಚಿಸಲು '''[[meta:Kerala_Culture_Month_2026|ಕೇರಳ ಸಂಸ್ಕೃತಿ ಮಾಸ ೨೦೨೬]]''' ಆಯೋಜಿಸಲಾಗಿದೆ.
<br />
[https://kn.wikipedia.org/wiki/ವಿಕಿಪೀಡಿಯ:ಕೇರಳ_ಸಂಸ್ಕೃತಿ_ತಿಂಗಳು_2026 '''ಭಾಗವಹಿಸಲು/ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ''']
|}
|}
avblhwldc8bokfim7eg50jqvg33b1qe
1378220
1378219
2026-08-02T20:00:40Z
A826
72368
/* */
1378220
wikitext
text/x-wiki
{| role="presentation" class="mw-collapsible" style="width: 90%; margin-left: auto; margin-right: auto; border: dashed 1px blue; text-align: center; background-color: #E0FFFF; font-size: 85%; color: black; border-radius: 10px; padding: 12px; box-shadow: 3px 3px 10px rgba(0,0,0,0.2), inset 1px 1px 2px rgba(255,255,255,0.8), inset -1px -1px 2px rgba(0,0,0,0.05); font-family: 'Segoe UI', 'Noto Sans Kannada', sans-serif;"
! colspan="2" | ▼ ಮರೆಮಾಚಲು ಇಲ್ಲಿ ಕ್ಲಿಕ್ ಮಾಡಿ
|-
|
'''''ಲೇಖನದ ಶೀರ್ಷಿಕೆ ಕನ್ನಡದಲ್ಲೇ ಇರತಕ್ಕದ್ದು.''''' <br />
'''ಯಂತ್ರಾನುವಾದದ ಮೂಲಕ ಲೇಖನ ಸೇರಿಸುವವರು ಲೇಖನವನ್ನು ಚೆನ್ನಾಗಿ ಓದಿ ವಾಕ್ಯಗಳನ್ನು ಸರಿಪಡಿಸಬೇಕಾಗಿ ವಿನಂತಿ.'''
----
ಕನ್ನಡ ಲಿಪ್ಯಂತರ ಸಹಾಯಕ್ಕೆ [[ಸಹಾಯ:ಲಿಪ್ಯಂತರ]] ಪುಟ ನೋಡಿ.
|}
{| role="presentation" class="mw-collapsible mw-collapsed" style="width: 90%; margin-left: auto; margin-right: auto; border: dashed 1px blue; text-align: center; font-size: 80%; border-radius: 10px; font-family: 'Segoe UI', 'Noto Sans Kannada', sans-serif; align-items: center;"
! colspan="2" | ಅಡಗಿಸುವ ಸಂದೇಶ ನೋಡಲು ಇಲ್ಲಿ ಕ್ಲಿಕ್ ಮಾಡಿ
|-
|
[[File:Kerala Houseboat Scene.svg|120px|link=meta:Kerala_Culture_Month_2026|alt=]]
|
[[meta:WikiConference India 2026|೨೦೨೬ರ ಭಾರತೀಯ ವಿಕಿ ಸಮ್ಮೇಳನದ]] ಭಾಗವಾಗಿ ಕನ್ನಡ ವಿಕಿಪೀಡಿಯದಲ್ಲಿ
'''''ಜುಲೈ ೧೫''''' ರಿಂದ '''''ಆಗಸ್ಟ್ ೧೫''''' ವರೆಗು ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಉಪಕಾರಿಯಾಗುವ ಉದ್ಧೇಶದಿಂದ ಕನ್ನಡದಲ್ಲಿ ಕೇರಳ ಪ್ರವಾಸೋದ್ಯಮ, ಆಹಾರ, ಕಲೆ, ಸಂಸ್ಕೃತಿ ಕುರಿತು ಮಾಹಿತಿ ಹೆಚ್ಚಿಸಲು '''[[meta:Kerala_Culture_Month_2026|ಕೇರಳ ಸಂಸ್ಕೃತಿ ಮಾಸ ೨೦೨೬]]''' ಆಯೋಜಿಸಲಾಗಿದೆ.
<br />
[https://kn.wikipedia.org/wiki/ವಿಕಿಪೀಡಿಯ:ಕೇರಳ_ಸಂಸ್ಕೃತಿ_ತಿಂಗಳು_2026 '''ಭಾಗವಹಿಸಲು/ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ''']
|}
o3f2341btv62bs4bu6guu0etx6bqtmb
1378221
1378220
2026-08-02T20:01:10Z
A826
72368
Restored revision 1378204 by [[Special:Contributions/A826|A826]] ([[User talk:A826|talk]])(TwinkleGlobal)
1378221
wikitext
text/x-wiki
{| style="margin-left: auto; margin-right: auto; border: dashed 1px blue; text-align: center; background-color: #E0FFFF; font-size: 85%; color: black; border-radius: 10px; padding: 12px; width: 90%; box-shadow: 3px 3px 10px rgba(0,0,0,0.2), inset 1px 1px 2px rgba(255,255,255,0.8), inset -1px -1px 2px rgba(0,0,0,0.05); font-family: 'Segoe UI', 'Noto Sans Kannada', sans-serif;"
|-
| '''''ಲೇಖನದ ಶೀರ್ಷಿಕೆ ಕನ್ನಡದಲ್ಲೇ ಇರತಕ್ಕದ್ದು.''''' <br />
'''ಯಂತ್ರಾನುವಾದದ ಮೂಲಕ ಲೇಖನ ಸೇರಿಸುವವರು ಲೇಖನವನ್ನು ಚೆನ್ನಾಗಿ ಓದಿ ವಾಕ್ಯಗಳನ್ನು ಸರಿಪಡಿಸಬೇಕಾಗಿ ವಿನಂತಿ.'''
----
ಕನ್ನಡ ಲಿಪ್ಯಂತರ ಸಹಾಯಕ್ಕೆ [[ಸಹಾಯ:ಲಿಪ್ಯಂತರ]] ಪುಟ ನೋಡಿ.
|}
{| style="margin-left: auto; margin-right: auto; border: dashed 1px blue; text-align: center; font-size: 80%; border-radius: 10px; font-family: 'Segoe UI', 'Noto Sans Kannada', sans-serif;"align-items: center; width: 90%; "
|-
| [[File:Kerala Houseboat Scene.svg|120px|link=meta:Kerala_Culture_Month_2026|alt=]]
|
[[meta:WikiConference India 2026|೨೦೨೬ರ ಭಾರತೀಯ ವಿಕಿ ಸಮ್ಮೇಳನದ]] ಭಾಗವಾಗಿ ಕನ್ನಡ ವಿಕಿಪೀಡಿಯದಲ್ಲಿ
'''''ಜುಲೈ ೧೫''''' ರಿಂದ '''''ಆಗಸ್ಟ್ ೧೫''''' ವರೆಗು ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಉಪಕಾರಿಯಾಗುವ ಉದ್ಧೇಶದಿಂದ ಕನ್ನಡದಲ್ಲಿ ಕೇರಳ ಪ್ರವಾಸೋದ್ಯಮ, ಆಹಾರ, ಕಲೆ, ಸಂಸ್ಕೃತಿ ಕುರಿತು ಮಾಹಿತಿ ಹೆಚ್ಚಿಸಲು '''[[meta:Kerala_Culture_Month_2026|ಕೇರಳ ಸಂಸ್ಕೃತಿ ಮಾಸ ೨೦೨೬]]''' ಆಯೋಜಿಸಲಾಗಿದೆ.
[https://kn.wikipedia.org/wiki/ವಿಕಿಪೀಡಿಯ:ಕೇರಳ_ಸಂಸ್ಕೃತಿ_ತಿಂಗಳು_2026 '''ಭಾಗವಹಿಸಲು/ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ''']
|}
1vcmpdf5keo3lkkzk48uc4u1r9vlgur
ಆಂಧ್ರ ಪ್ರದೇಶ
0
1383
1378134
1375228
2026-08-02T13:15:55Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378134
wikitext
text/x-wiki
{{Infobox Indian Jurisdiction
|type = state
|state_name = ಆಂಧ್ರ ಪ್ರದೇಶ
|native_name = ಆಂಧ್ರ ಪ್ರದೇಶ
|other_name = ಆಂಧ್ರ ಪ್ರದೇಶ
|abbreviation = IN-AP
|capital = [[Hyderabad, Andhra Pradesh|Hyderabad]]
|Industrial capital = [[Visakhapatnam, Andhra Pradesh|Visakhapatnam]]
|latd = 17.366 |longd = 78.476
|largest_city = [[Hyderabad, Andhra Pradesh|Hyderabad]]
|major_cities = [[Vishakhapatnam]], [[Vijayawada]], [[Guntur]], [[Kurnool]], [[Tirumala - Tirupati|Tirupati]]
|official_languages = [[ತೆಲುಗು|Telugu]], [[ಉರ್ದೂ|ಉರ್ದು]]
|languages speak = [[Telugu language|Telugu]], [[ಆಂಗ್ಲ|English]], [[Hindi language|Hindi]], [[Urdu]]
|legislature_type = Bicameral
|legislature_strength = 175
|leader_title_1 = [[Governors of Andhra Pradesh|Governor]]
|leader_name_1 = [[ಎಕ್ಕಡು ಶ್ರೀನಿವಾಸನ್ ಲಕ್ಷ್ಮೀನರಸಿಂಹನ್]]
|leader_title_2 = [[Chief Ministers of Andhra Pradesh|Chief Minister]]
|leader_name_2 =
|established_date = [[ನವೆಂಬರ್ ೧]], [[೧೯೫೬]]
|area_total = 160205
|area_rank = 8th
|area_magnitude = 11
|climate = Aw, BSh
|population_year = 2002
|population_total = 76210007
|population_rank = 5th
|population_density = 277
|districts = 23
|website = www.ap.gov.in
|seal = Andhraseal.png
}}
'''ಆಂಧ್ರ ಪ್ರದೇಶ ''' ({{lang-te|ఆంధ్ర ప్రదేశ్}}) ({{audio|Andhra.ogg|pronunciation}}, [[ಭಾಷಾಂತರ]]: '''ಆಂಧ್ರದ ಪ್ರಾಂತ್ಯ''', ಸಂಕ್ಷಿಪ್ತವಾಗಿ '''ಎ.ಪಿ. ''' ಎಂದು ಕರೆಯಲ್ಪಡುವ ರಾಜ್ಯವಾಗಿದ್ದು ಇದು[[ಭಾರತ|ಭಾರತದ]] ಆಗ್ನೇಯ ಕರಾವಳಿ ಭಾಗದಲ್ಲಿದೆ. ಭಾರತದಲ್ಲಿ ಇದು ವಿಸ್ತೀರ್ಣದ ಆಧಾರದಲ್ಲಿ ಭಾರತದ ರಾಜ್ಯಗಳ ವಿಸ್ತೀರ್ಣದಲ್ಲಿ ಎಂಟನೇ ಅತಿದೊಡ್ಡ ರಾಜ್ಯವಾಗಿದೆ ಮತ್ತು ಜನಸಂಖ್ಯೆಯ ಆಧಾರದಲ್ಲಿ ಭಾರತದ ರಾಜ್ಯಗಳ ಜನಸಂಖ್ಯೆಯಲ್ಲಿ ಹತ್ತನೇ ಅತಿ ದೊಡ್ಡ [[ರಾಜ್ಯ]]ವಾಗಿದೆ. ಪ್ರಸ್ತುತ ರಾಜಧಾನಿ ಮತ್ತು [[ಹೈದರಾಬಾದ್, ತೆಲಂಗಾಣ|ಹೈದರಾಬಾದ್]]. ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿ ಎಂದು ಗುರುತಿಸಲಾಗಿದೆ. ದೇಶದ ಎಲ್ಲ ರಾಜ್ಯಗಳ ಪೈಕಿ ಆಂಧ್ರ ಪ್ರದೇಶವು ಎರಡನೇ ಅತಿ ಉದ್ದದ ಕರಾವಳಿ (೯೭೨ km)ಪ್ರದೇಶವನ್ನು ಹೊಂದಿದೆ. [[ಗುಜರಾತ್|ಗುಜರಾತ್]] ರಾಜ್ಯವು ಅತಿ ಉದ್ದದ ಕರಾವಳಿ (೧೬೦೦ km)ಯನ್ನು ಹೊಂದಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.<ref>{{cite web |url=http://www.aponline.gov.in/quick%20links/apfactfile/apfactmain.html |title=:: Citizen Help |publisher=APOnline |date=1956-11-01 |accessdate=2009-03-03 |archive-date=2014-03-21 |archive-url=https://web.archive.org/web/20140321052152/http://www.aponline.gov.in/quick%20links/apfactfile/apfactmain.html |url-status=dead }}</ref>
ಆಂಧ್ರ ಪ್ರದೇಶವು ೧೨°೪೧' ಮತ್ತು ೨೨°N ಅಕ್ಷಾಂಶ ಹಾಗೂ ೭೭° ಮತ್ತು ೮೪°೪೦'E ರೇಖಾಂಶಗಳ ನಡುವೆ ಇದೆ. ಇದು ಉತ್ತರದಲ್ಲಿ ಮಹಾರಾಷ್ಟ್ರ, ಛತ್ತಿಸ್ಗಡ ಮತ್ತು ಒಡಿಶಾ ರಾಜ್ಯಗಳು, ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣಕ್ಕೆ ತಮಿಳುನಾಡು ಹಾಗೂ ಪಶ್ಚಿಮಕ್ಕೆ ಕರ್ನಾಟಕ ರಾಜ್ಯವನ್ನು ತನ್ನ ಗಡಿಯನ್ನಾಗಿ ಹೊಂದಿದೆ. ಆಂಧ್ರ ಪ್ರದೇಶವು ಐತಿಹಾಸಿಕವಾಗಿ "''ಭಾರತದ ಅನ್ನದ ಪಾತ್ರೆ'' " ಎಂದು ಕರೆಯಲ್ಪಟ್ಟಿದೆ. ಏಕೆಂದರೆ, ೭೭%ಗೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ.
ಇದರ <ref>{{Cite web |url=http://www.irri.org/science/ricestat/data/may2008/WRS2008-Table07.pdf |title=ಆರ್ಕೈವ್ ನಕಲು |access-date=2009-12-16 |archive-date=2009-03-26 |archive-url=https://web.archive.org/web/20090326142818/http://www.irri.org/science/ricestat/data/may2008/WRS2008-Table07.pdf |url-status=dead }}</ref> ಎರಡು ಪ್ರಮುಖ ನದಿಗಳಾದ [[ಗೋದಾವರಿ]] ಮತ್ತು [[ಕೃಷ್ಣಾ ನದಿ|ಕೃಷ್ಣಾ]] ರಾಜ್ಯದ ಉದ್ದಗಲಕ್ಕೂ ಹರಿಯುತ್ತವೆ. [[ಪುದುಚೇರಿ|ಪುದುಚೆರಿ]] (ಪಾಂಡಿಚೆರಿ) ರಾಜ್ಯದ ಯಾಣಮ್ ಜಿಲ್ಲೆಯ ಪರಾವೃತ ಪ್ರದೇಶವು (೧೨ sq mi (೩೦ km²)) ರಾಜ್ಯದ ಈಶಾನ್ಯ ಭಾಗದಲ್ಲಿನ ಗೋದಾವರಿ ನದಿ ಮುಖಜ ಭೂಮಿ ಪ್ರದೇಶದಲ್ಲಿದೆ.
ರಾಜ್ಯವನ್ನು ಒಳಗೊಂಡ ಪ್ರದೇಶವನ್ನು ಐತಿಹಾಸಿಕವಾಗಿ ''ಆಂಧ್ರಾಪಥ'', ''ಆಂಧ್ರದೇಸ'', ''ಆಂಧ್ರಾವನಿ '' ಮತ್ತು ''ಆಂಧ್ರ ವಿಷಯ'' ಎಂದು ಕರೆಯಲಾಗುತ್ತಿತ್ತು.<ref>S. S.ರಾಮಚಂದ್ರ ಮೂರ್ತಿಯವರು ಬರೆದಿರುವ ಎ ಸ್ಟಡಿ ಆಫ್ ತೆಲುಗು ಪ್ಲೇಸ್-ನೇಮ್ಸ್, P. ೧೦</ref> ಆಂಧ್ರ ಪ್ರದೇಶವು ೧೯೫೬ರ ನವೆಂಬರ್ ೧ರಂದು ಆಂಧ್ರ ರಾಜ್ಯದಿಂದ ರಚನೆಯಾಯಿತು.
{| class="wikitable sortable " border="1" cellspacing="1" style="float:right;width:260px;margin:0 0 1em 1em;background:#f4f5f6;border:1px #c6c7c8 solid;font-size:90%"
|-
| colspan="2" bgcolor="#C2D6E5" align="center"|'''ಆಂಧ್ರ ಪ್ರದೇಶದ ರಾಜ್ಯ ಚಿಹ್ನೆಗಳು'''
|-
| '''ರಾಜ್ಯ ಭಾಷೆ'''
| [[ತೆಲುಗು]]
|-
| '''ರಾಜ್ಯ ಚಿನ್ಹೆ'''
| ಪೂರ್ಣಕುಂಭಂ
|-
|'''ರಾಜ್ಯ ಗೀತೆ'''
| "''ಮಾ ತೆಲುಗುತಲ್ಲಿಕಿ ಮಲ್ಲೆಪೂದಂಡ''"
|-
|
'''ರಾಜ್ಯ ಪ್ರಾಣಿ'''
| ಕೃಷ್ಣ ಮೃಗ
|-
|
'''ರಾಜ್ಯ ಪಕ್ಷಿ'''
| ಉರುಳು ಹಕ್ಕಿ
|-
|
'''ರಾಜ್ಯ ವೃಕ್ಷ'''
| [[ಬೇವು]]
|-
|
'''ರಾಜ್ಯ ಕ್ರೀಡ'''
| [[ಕಬಡ್ಡಿ]]
|-
|
'''ರಾಜ್ಯ ನೃತ್ಯ'''
| [[ಕೂಚಿಪೂಡಿ]]
|-
| '''ರಾಜ್ಯ ಪುಷ್ಪ'''
| ಜಲ ನೈದಿಲೆ
|}
== ಇತಿಹಾಸ ==
ಐತರೇಯ [[ಬ್ರಾಹ್ಮಣ]] (B.C.೮೦೦) ಹಾಗೂ [[ಮಹಾಭಾರತ|ಮಹಾಭಾರತದಂತಹ]] ಸಂಸ್ಕೃತ ಮಹಾಕಾವ್ಯಗಳಲ್ಲಿ [[ಆಂಧ್ರ ಸಾಮಾಜ್ಯ|ಆಂಧ್ರ ಸಾಮ್ರಾಜ್ಯ]] ವೊಂದರ ಬಗ್ಗೆ ಉಲ್ಲೇಖಿಸಲಾಗಿದೆ.
<ref>{{cite web|url=http://www.aponline.gov.in/quick%20links/hist-cult/history.html |title=History and Culture-History |publisher=APonline |date= |accessdate=2009-03-03}}</ref>"ಆಂಧ್ರ" ಜನಾಂಗದ ಬಗೆಗೆ ಭರತನ ನಾಟ್ಯಶಾಸ್ತ್ರದಲ್ಲೂ (B.C ೧ನೇ ಶತಮಾನ) ಉಲ್ಲೇಖವಾಗಿದೆ.
<ref>Antiquity of Andhra race: http://teluguuniversity.ac.in/Language/prachina_telugu_note.html {{Webarchive|url=https://web.archive.org/web/20100223014753/http://teluguuniversity.ac.in/Language/prachina_telugu_note.html |date=2010-02-23 }}</ref> ಭಟ್ಟಿಪ್ರೊಲುವಿನಲ್ಲಿ ಪತ್ತೆಯಾದ ಶಾಸನಗಳಲ್ಲಿ [[ತೆಲುಗು]] ಭಾಷೆಯ ಮೂಲ ಪತ್ತೆಯಾಗಿದೆ.<ref>Antiquity of Telugu: http://www.hindu.com/2007/12/20/stories/2007122054820600.htm {{Webarchive|url=https://web.archive.org/web/20091221070032/http://www.hindu.com/2007/12/20/stories/2007122054820600.htm |date=2009-12-21 }}</ref>
ಚಂದ್ರಗುಪ್ತ ಮೌರ್ಯ(B.C.೩೨೨–೨೯೭)ನ ಆಸ್ಥಾನಕ್ಕೆ ಭೇಟಿ ನೀಡಿದ್ದ ಮೆಗಾಸ್ತನೀಸ್ನು, ಕೋಟೆಗಳಿಂದ ಸುತ್ತುವರಿಯಲ್ಪಟ್ಟಿರುವ ೩ ಪಟ್ಟಣಗಳು, ೧೦೦,೦೦೦ ಪದಾತಿ ದಳ, ೨೦೦ ಅಶ್ವದಳ ಮತ್ತು ೧,೦೦೦ ಆನೆಗಳನ್ನು ಒಳಗೊಂಡ ಸೈನ್ಯವನ್ನು ಆಂಧ್ರ ದೇಶವು ಹೊಂದಿತ್ತು ಎಂದು ಉಲ್ಲೇಖಿಸಿದ್ದಾನೆ.
ಆ ಸಮಯದಲ್ಲಿ ಆಂಧ್ರರು ತಮ್ಮ ಸಾಮ್ರಾಜ್ಯವನ್ನು ಗೋದಾವರಿ ನದಿಬಯಲಿನಲ್ಲಿ ನಿರ್ಮಿಸಿದರು ಎಂದು ಬೌದ್ಧ ಗ್ರಂಥಗಳು ಹೇಳುತ್ತವೆ. ಆಂಧ್ರರು ತನ್ನ ಸಾಮಂತರಾಗಿದ್ದರು ಎಂದು ಅಶೋಕನು ತನ್ನ ೧೩ನೇ ಶಿಲಾ ಶಾಸನದಲ್ಲಿ ಉಲ್ಲೇಖಿಸಿದ್ದಾನೆ.<ref>http://www.aponline.gov.in/quick links/hist-cult/history.html</ref>
ಶಾಸನಾಧಾರಗಳು ತೋರಿಸುವಂತೆ ಆಂಧ್ರದ ಕರಾವಳಿಯಲ್ಲಿ ಆರಂಭಿಕ ಸಾಮ್ರಾಜ್ಯವೊಂದಿದ್ದು, ಅದನ್ನು ಕುಬೇರಕ<ref>{{Cite web |url=http://www.asiarooms.com/travel-guide/india/hyderabad/excursions-from-hyderabad/bhattiprolu.html |title=ಆರ್ಕೈವ್ ನಕಲು |access-date=2009-12-16 |archive-date=2008-01-13 |archive-url=https://web.archive.org/web/20080113215940/http://www.asiarooms.com/travel-guide/india/hyderabad/excursions-from-hyderabad/bhattiprolu.html |url-status=dead }}</ref> ನು ಆಳುತ್ತಿದ್ದನು ಮತ್ತು ಪ್ರತಿಪಾಲಪುರವು([[ಭಟ್ಟಿಪ್ರೊಲು]]) ಅವನ ರಾಜಧಾನಿಯಾಗಿತ್ತು. ಬಹುಶಃ ಇದು [[ಭಾರತ|ಭಾರತದಲ್ಲಿನ]] ಅತ್ಯಂತ ಪ್ರಾಚೀನವಾದ ಪ್ರಸಿದ್ಧ ಸಾಮ್ಯಾಜ್ಯವಾಗಿರಬಹುದು.<ref>{{Cite web |url=http://www.indialine.com/travel/andhrapradesh/about-andhrapradesh.html |title=ಆರ್ಕೈವ್ ನಕಲು |access-date=2009-12-16 |archive-date=2019-03-02 |archive-url=https://web.archive.org/web/20190302024817/http://www.indialine.com/travel/andhrapradesh/about-andhrapradesh.html |url-status=dead }}</ref> ಅದೇ ಸಮಯದ ಆಸುಪಾಸಿನಲ್ಲಿ ಧಾನ್ಯಕಟಕಮ್/ಧರಣಿಕೋಟ(ಈಗಿನ ಅಮರಾವತಿ) ಒಂದು ಮುಖ್ಯವಾದ ಸ್ಥಳವಾಗಿತ್ತು ಎಂದು ಕಾಣುತ್ತದೆ. ಈ ಸ್ಥಳಕ್ಕೆ [[ಗೌತಮ ಬುದ್ಧ|ಗೌತಮ ಬುದ್ಧರು]] ಭೇಟಿ ನೀಡಿದ್ದರು. ಪ್ರಾಚೀನ ಟಿಬೆಟ್ ವಿದ್ವಾಂಸ ತಾರಾನಾಥರ ಪ್ರಕಾರ: "ತನಗೆ ಜ್ಞಾನೋದಯವಾದ ನಂತರದ ವರ್ಷದ [[ಚೈತ್ರ ಮಾಸ|ಚೈತ್ರ]] ಮಾಸದ ಹುಣ್ಣಿಮೆಯ ದಿನದಂದು, ಧಾನ್ಯಕಟಕದ ಮಹಾನ್ ಸ್ತೂಪದಲ್ಲಿ ಬುದ್ಧನು 'ಭವ್ಯವಾದ ಚಾಂದ್ರ ಸೌಧಗಳ' ([[ಕಾಲಚಕ್ರ]]) [[ಮಂಡಲ|ಮಂಡಲವನ್ನು]] ಹೊರಹೊಮ್ಮಿಸಿದನು." <ref>ಜರ್ಮನ್ ಸ್ಕಾಲರ್ಸ್ ಆನ್ ಇಂಡಿಯಾ, Vol. I. PP. ೧೩೬-೧೪೦ದಲ್ಲಿ ಹೆಲ್ಮಟ್ ಹಾಫ್ಮನ್ ಬರೆದಿರುವ, "ಬುದ್ಧಾಸ್ ಪ್ರೀಚಿಂಗ್ ಆಫ್ ದಿ ಕಾಲಚಕ್ರ [[ತಂತ್ರ]] ಅಟ್ ದಿ ಸ್ತೂಪ ಆಫ್ ಧಾನ್ಯಕಟಕ" (ವಾರಣಾಸಿ, ೧೯೭೩)</ref><ref>Taranatha; http://www.kalacakra.org/history/khistor2.htm</ref>
[[ಡೇವಿಡ್ ರಿಕಾರ್ಡೋ|thumb|left|ವಾರಂಗಲ್ನಲ್ಲಿರುವ ಕಾಕತೀಯರ ಶಿಲ್ಪಕಲೆ]]
BCE ೧೪ನೇ ಶತಮಾನದಲ್ಲಿ [[ಮೌರ್ಯ ಸಾಮ್ರಾಜ್ಯ|ಮೌರ್ಯರು]] ತಮ್ಮ ಆಳ್ವಿಕೆಯನ್ನು ಅಂಧ್ರದವರೆಗೂ ವಿಸ್ತರಿಸಿದರು. [[ಮೌರ್ಯ ಸಾಮ್ರಾಜ್ಯ|ಮೌರ್ಯ ಸಾಮ್ರಾಜ್ಯದ]] ಪತನಾನಂತರ ಆಂಧ್ರದ [[ಶಾತವಾಹನ|ಶಾತವಾಹನರು]] BCE ೩ನೇ ಶತಮಾನದಲ್ಲಿ ಸ್ವತಂತ್ರರಾದರು. ಶಾತವಾಹನರು CE ೨೨೦ರಲ್ಲಿ ಅವನತಿ ಹೊಂದಿದ ನಂತರ [[ಇಕ್ಷ್ವಾಕು ಮನೆತನ]], [[ಪಲ್ಲವ|ಪಲ್ಲವರು]], [[ಆಂಧ್ರ ಗೋತ್ರಿಕ|ಆನಂದ ಗೋತ್ರಿಕರು]], [[ವಿಷ್ಣುಕುಂದಿನ|ವಿಷ್ಣುಕುಂದಿನರು]], [[ಪೂರ್ವದ ಚಾಲುಕ್ಯರು|ಪೂರ್ವದ ಚಾಲುಕ್ಯ]]ರು ಮತ್ತು [[ಚೋಳ|ಚೋಳರು]] ತೆಲುಗು ನಾಡನ್ನು ಆಳಿದರು. CE ೫ನೇ ಶತಮಾನದಲ್ಲಿ ರೇನಾಟಿ ಚೋಳರು(ಕಡಪ ಪ್ರದೇಶ) ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ [[ತೆಲುಗು]] ಭಾಷೆಯ ಶಾಸನಾಧಾರಗಳು <ref>ಇಂಡಿಯನ್ ಎಪಿಗ್ರಫಿ, ಆರ್.ಸಾಲೋಮನ್, ಆಕ್ಸ್ಫರ್ರ್ಡ್ ಯೂನಿವರ್ಸಿಟಿ ಪ್ರೆಸ್, ೧೯೯೮
ISBN ೦-೧೯-೫೦೯೯೮೪-೨, p. ೧೦೬</ref> ದೊರೆತವು. ಈ ಅವಧಿಯಲ್ಲಿ ಪ್ರಾಕೃತ ಮತ್ತು [[ಸಂಸ್ಕೃತ]] ಭಾಷೆಗಳ ಪ್ರಾಬಲ್ಯವನ್ನು ತಗ್ಗಿಸಿ ತೆಲುಗು ಭಾಷೆಯು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿತು.<ref>ಎಪಿಗ್ರಾಫಿಕ ಇಂಡಿಕ, ೨೭: ೨೨೦-೨೨೮</ref> ವಿನುಕೊಂಡವನ್ನು [[ರಾಜಧಾನಿ|ರಾಜಧಾನಿಯಾಗಿ]] ಮಾಡಿಕೊಂಡು ಆಳ್ವಿಕೆ ನಡೆಸಿದ ವಿಷ್ಣುಕುಂದಿನ ರಾಜರಿಂದ ತೆಲುಗು ಅಧಿಕೃತ ಭಾಷೆಯಾಯಿತು. ವಿಷ್ಣುಕುಂದಿನರು ಅವನತಿ ಹೊಂದಿದ ನಂತರ, ಪೂರ್ವದ ಚಾಲುಕ್ಯರು ವೆಂಗಿಯಲ್ಲಿನ ತಮ್ಮ ರಾಜಧಾನಿಯಿಂದ ಸುದೀರ್ಘ ಕಾಲದವರೆಗೆ ಆಳ್ವಿಕೆ ನಡೆಸಿದರು.ಇವರು CE ೧ನೇ ಶತಮಾನದದ ಆರಂಭದಲ್ಲಿ [[ಶಾತವಾಹನ|ಶಾತವಾಹನರು]] ಮತ್ತು ನಂತರದ ದಿನಗಳಲ್ಲಿ ಇಕ್ಷ್ವಾಕು ಮನೆತನಗಳ ಅಡಿಯಲ್ಲಿ [[ಚಾಲುಕ್ಯ|ಚಾಲುಕ್ಯರು]], ಸಾಮಂತರು ಮತ್ತು ಸೇನಾನಾಯಕರಾಗಿದ್ದರು ಎಂದು ಉಲ್ಲೇಖವಾಗಿದೆ. ಚಾಲುಕ್ಯ ದೊರೆಯಾದ ರಾಜರಾಜ ನರೇಂದ್ರನು ರಾಜಮುಂಡ್ರಿಯನ್ನು CE ೧೦೨೨ರ ಆಸುಪಾಸಿನಲ್ಲಿ ಆಳಿದನು.
[[ಪಲ್ನಾಡು]] ಯದ್ಧದಿಂದಾಗಿ ಪೂರ್ವದ [[ಚಾಲುಕ್ಯ|ಚಾಲುಕ್ಯರ]] ಶಕ್ತಿಯು ದುರ್ಬಲಗೊಂಡಿತು ಮತ್ತು ಇದರ ಪರಿಣಾಮವಾಗಿ CE ೧೨ ಮತ್ತು ೧೩ನೇ ಶತಮಾನದಲ್ಲಿ [[ಕಾಕತೀಯ|ಕಾಕತೀಯಸಾಮ್ರಾಜ್ಯವು]] ಪ್ರವರ್ಧಮಾನಕ್ಕೆ ಬಂದಿತು. ವಾರಂಗಲ್ ಸಮೀಪದ ಸಣ್ಣ ಪ್ರದೇಶವನ್ನು ಆಳುತ್ತಿದ್ದ ರಾಷ್ಟ್ರಕೂಟರಿಗೆ ಕಾಕತೀಯರು ಮೊದಲ ಊಳಿಗಮಾನ್ಯ ಸಾಮಂತರಾಗಿದ್ದರು.
ಕಾಕತೀಯರಿಂದ ಎಲ್ಲ ತೆಲುಗು ಪ್ರದೇಶಗಳು ಒಂದುಗೂಡಿದವು. CE ೧೩೨೩ರಲ್ಲಿ, ದೆಹಲಿಯ [[ಸುಲ್ತಾನ್|ಸುಲ್ತಾನ]]ನಾದ ಘಿಯಾಜುದ್ದೀನ್ [[ತುಘಲಕ್|ತುಘಲಕ್ನು]] ತೆಲುಗು ದೇಶವನ್ನು ಗೆಲ್ಲಲು ಮತ್ತು ವಾರಂಗಲ್ನ್ನು ವಶಪಡಿಸಿಕೊಳ್ಳಲು ಉಲುಘ್ ಖಾನ್ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳಿಸಿದನು.[[ಪ್ರತಾಪರುದ್ರ|ಪ್ರತಾಪರುದ್ರರಾಜನನ್ನು]] ಯುದ್ಧಖೈದಿಯಾಗಿ ಕರೆದೊಯ್ಯಲಾಯಿತು. CE ೧೩೨೬ರಲ್ಲಿ [[ದೆಹಲಿ ಸುಲ್ತಾನರು|ದೆಹಲಿ ಸುಲ್ತಾನ]]ರಿಂದ ವಾರಂಗಲ್ನ್ನು ಪುನಃ ವಶಪಡಿಸಿಕೊಂಡ [[ಮುಸುನೂರಿ ನಾಯಕರು|ಮುಸುನೂರಿ ನಾಯಕ]]ರು, ಮುಂದಿನ ೫೦ ವರ್ಷಗಳವರೆಗೆ ಆಳ್ವಿಕೆ ನಡೆಸಿದನು. ಅವರ ಈ ವಿಜಯದ ಪ್ರೇರಣೆಯಿಂದ ಆಂಧ್ರ ಪ್ರದೇಶ ಮತ್ತು [[ಭಾರತ|ಭಾರತದ]] ಇತಿಹಾಸದಲ್ಲಿನ ಮಹಾನ್ ಚಕ್ರಾಧಿಪತ್ಯಗಳಲ್ಲಿ ಒಂದಾದ [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯವು]] ಸ್ಥಾಪನೆಯಾಯಿತು. ವಾರಂಗಲ್ನ ಕಾಕತೀಯರ ಖಜಾನೆ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ [[ಹರಿಹರ]] ಮತ್ತು [[ಬುಕ್ಕ|ಬುಕ್ಕರು]] ಈ ಸಾಮ್ರಾಜ್ಯದ ಸಂಸ್ಥಾಪಕರು.<ref>ರಾಬರ್ಟ್ ಸೆವೆಲ್ರವರ, ಎ ಫರ್ಗಾಟನ್ ಎಂಪೈರ್ (ವಿಜಯನಗರ): ಎ ಕಾಂಟ್ರಿಬ್ಯೂಷನ್ ಟು ದಿ ಹಿಸ್ಟ್ರಿ ಆಫ್ ಇಂಡಿಯಾ, ಚಾಪ್ಟರ್ ೨ http://www.gutenberg.org/dirs/etext೦೨/fevch೧೦.txt{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಅಲ್ಲಾವುದ್ದೀನ್ [[ಹಸನ್ ಗಂಗು]] ಎಂಬುವವನು [[ದೆಹಲಿ ಸುಲ್ತಾನರು|ದೆಹಲಿ ಸುಲ್ತಾನ]]ರ ವಿರುದ್ಧ ದಂಗೆಯೆದ್ದು, CE ೧೩೪೭ನೇ ಇಸವಿಯಲ್ಲಿ ಬಹಮನಿ ಸಾಮ್ರಾಜ್ಯ ಎಂಬ ಸ್ವತಂತ್ರ ಮುಸ್ಲಿಂ ರಾಜ್ಯವನ್ನು [[ದಕ್ಷಿಣ ಭಾರತ|ದಕ್ಷಿಣ ಭಾರತದಲ್ಲಿ]] ಸ್ಥಾಪನೆ ಮಾಡಿದನು. [[ಖುತುಬ್ ಷಾಹಿ|ಕುತುಬ್ ಷಾಹಿ]] ಮನೆತನವು, ೧೬ನೇ ಶತಮಾನದ ಆರಂಭದಿಂದ ೧೭ನೇ ಶತಮಾನದ ಅಂತ್ಯದವರೆಗೆ, ಅಂದರೆ ಸುಮಾರು ಇನ್ನೂರು ವರ್ಷಗಳ ಕಾಲ ಆಂಧ್ರ ದೇಶದ ಮೇಲೆ ಪ್ರಭುತ್ವ ಸಾಧಿಸಿತ್ತು.
[[ಚಿತ್ರ:Charminar-Pride of Hyderabad.jpg|thumb|left|ಹೈದರಾಬಾದ್ನಲ್ಲಿನ ಚಾರ್ಮಿನಾರ್]]
[[ವಸಾಹತು ಭಾರತ|ವಸಾಹತು ಭಾರತದಲ್ಲಿ]] [[ಉತ್ತರದ ಸರ್ಕಾರ್ಗಳು]] ಬ್ರಿಟಿಷ್ ಆಳ್ವಿಕೆಯ [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ಪ್ರಾಂತ್ಯ]]ದ ಭಾಗವಾದರು. ಅಂತಿಮವಾಗಿ ಈ ಪ್ರದೇಶವು [[ಕರಾವಳಿ ಆಂಧ್ರ]] ಪ್ರಾಂತ್ಯವಾಗಿ ಹೊರಹೊಮ್ಮಿತು. ನಂತರ [[ನಿಜಾಮ್|ನಿಜಾಮ]]ನು ಐದು ಪ್ರದೇಶಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು. ಮುಂದೆ ಈ ಪ್ರದೇಶಗಳೇ [[ರಾಯಲಸೀಮ|ರಾಯಲಸೀಮಾ]] ಪ್ರಾಂತ್ಯವಾಗಿ ಹೊರಹೊಮ್ಮಿತು.ಸ್ಥಳೀಯ ಸ್ವಯಮಾಧಿಪತ್ಯಕ್ಕೆ ಪ್ರತಿಯಾಗಿ ಬ್ರಿಟಿಷ್ ಆಡಳಿತವನ್ನು ಒಪ್ಪಿಕೊಂಡ ನಿಜಾಮರು, [[ಹೈದರಾಬಾದ್ ಸಂಸ್ಥಾನ|ಹೈದರಾಬಾದ್]]ನ [[ರಾಜೋಚಿತ ರಾಜ್ಯ|ರಾಜೋಚಿತ ರಾಜ್ಯವಾಗಿ]] ಒಳನಾಡು ಪ್ರಾಂತ್ಯಗಳ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಂಡರು. ಈ ಮಧ್ಯೆ, ಗೋದಾವರಿ ನದೀ ಮುಖಜ ಭೂಮಿಯಲ್ಲಿ ಯಾಣಮ್ (ಯಾಣೋನ್)ನ್ನು [[ಫ್ರಾನ್ಸ್|ಫ್ರೆಂಚರು]] ಆಕ್ರಮಿಸಿಕೊಂಡರು ಹಾಗೂ ಅದನ್ನು ೧೯೫೪ರವರೆಗೂ (ಬ್ರಿಟಷ್ ನಿಯಂತ್ರಣದ ಅವಧಿಗಳನ್ನು ಹೊರತುಪಡಿಸಿ) ತಮ್ಮ ಹಿಡಿತದಲ್ಲಿಟ್ಟುಕೊಂಡರು.
೧೯೪೭ರಲ್ಲಿ ಯುನೈಟೆಡ್ ಕಿಂಗ್ಡಂನಿಂದ ಭಾರತವು ಸ್ವತಂತ್ರಗೊಂಡಿತು. ಹೈದರಾಬಾದ್ನ ಮುಸ್ಲಿಂ ನಿಜಾಮನು ಭಾರತದಿಂದ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬಯಸಿದನು. ಆದರೆ, ಆ ಪ್ರಾಂತ್ಯದ ಜನರು ಭಾರತದ ಒಕ್ಕೂಟಕ್ಕೆ ಸೇರಲು ಚಳವಳಿಯನ್ನು ಆರಂಭಿಸಿದರು. ೫ ದಿನಗಳ ಕಾಲ ನಡೆದ [[ಪೋಲೋ ಕಾರ್ಯಾಚರಣೆ|ಪೋಲೋ ಕಾರ್ಯಾಚರಣೆಗೆ]] [[ಹೈದರಾಬಾದ್ ರಾಜ್ಯ|ಹೈದರಾಬಾದ್]] ರಾಜ್ಯದ ಜನತೆಯ ಅಪೂರ್ವ ಬೆಂಬಲ ದೊರೆತಿದ್ದರಿಂದಾಗಿ, ೧೯೪೮ರಲ್ಲಿ ಹೈದರಾಬಾದ್ ರಾಜ್ಯವು ಬಲವಂತವಾಗಿ ಭಾರತ ಗಣರಾಜ್ಯದ ಒಂದು ಭಾಗವಾಗಬೇಕಾಯಿತು.
[[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ರಾಜ್ಯದ]] ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಉಪವಾಸ ಆರಂಭಿಸಿದ ''ಅಮರಜೀವಿ'' [[ಪೊಟ್ಟಿ ಶ್ರೀರಾಮುಲು]] ಉಪವಾಸದಿಂದಲೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹುಯಿಲು ಮತ್ತು ನಾಗರಿಕ ಕ್ಷೋಭೆಗೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಅಧಿಕೃತವಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್ ೧ರಂದು ಆಂಧ್ರಕ್ಕೆ ರಾಜ್ಯದ ಸ್ಥಾನಮಾನವು ದಕ್ಕಿ, [[ಕರ್ನೂಲು|ಕರ್ನೂಲ್]] ಅದರ ರಾಜಧಾನಿಯಾಯಿತು.
೧೯೫೬ರ ನವೆಂಬರ್ ೧ರಂದು ಆಂಧ್ರರಾಜ್ಯವು ಹೈದರಾಬಾದ್ ರಾಜ್ಯದ [[ತೆಲಂಗಾಣ]] ಪ್ರಾಂತ್ಯದಲ್ಲಿ ವಿಲೀನವಾಗುವ ಮೂಲಕ ಆಂಧ್ರ ಪ್ರದೇಶ ರಾಜ್ಯದ ರಚನೆಯಾಯಿತು. [[ಹೈದರಾಬಾದ್, ತೆಲಂಗಾಣ|ಹೈದರಾಬಾದ್]] ರಾಜ್ಯದ ಹಿಂದಿನ ರಾಜಧಾನಿಯಾಗಿದ್ದ ಹೈದರಾಬಾದ್ನ್ನು ಆಂಧ್ರ ಪ್ರದೇಶ ಎಂಬ ಹೊಸ ರಾಜ್ಯದ ರಾಜಧಾನಿಯಾಗಿ ಮಾಡಲಾಯಿತು. ೧೯೫೪ರಲ್ಲಿ [[ಫ್ರಾನ್ಸ್|ಫ್ರೆಂಚರಿಂದ]] ಯಾಣಮ್ ಬಿಡುಗಡೆ ಹೊಂದಿತು. ಆದರೆ ಜಿಲ್ಲೆಯ ಪ್ರತ್ಯೇಕ ಮತ್ತು ವಿಶಿಷ್ಟ ಅನನ್ಯತೆಯನ್ನು ಉಳಿಸಬೇಕು ಎಂಬುದು ಬಿಡುಗಡೆಯ ಒಪ್ಪಂದದ ಷರತ್ತಾಗಿತ್ತು. ಇದು ದಕ್ಷಿಣ ಭಾರತದ ಇತರ ಪರಾವೃತ ಪ್ರದೇಶಗಳಿಗೂ ಅನ್ವಯಿಸಿ, ಇಂದಿನ [[ಪುದುಚೇರಿ|ಪುದುಚೆರಿ]] ರಾಜ್ಯದ ರಚನೆಯಾಯಿತು.
== ಭೂಗೋಳ ಮತ್ತು ಹವಾಮಾನ ==
ಆಂಧ್ರ ಪ್ರದೇಶದ ಹವಾಮಾನವು ಸಾಮಾನ್ಯವಾಗಿ ಬಿಸಿ ಮತ್ತು ತೇವಾಂಶದಿಂದ ಕೂಡಿರುತ್ತದೆ. ನೈರುತ್ಯ ಮಳೆ ಮಾರುತಗಳು ರಾಜ್ಯದ ಹವಾಮಾನವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದರೆ ಆಂಧ್ರ ಪ್ರದೇಶದಲ್ಲಿನ ಚಳಿಗಾಲವು ಹಿತಕರವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿಯೇ ರಾಜ್ಯವು ತನ್ನ ಬಹುತೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಆಂಧ್ರ ಪ್ರದೇಶದಲ್ಲಿ ಬೇಸಿಗೆ ಕಾಲವು ಮಾರ್ಚ್ನಿಂದ ಜೂನ್ವರೆಗೂ ಇರುತ್ತದೆ. ಈ ತಿಂಗಳುಗಳ ಅವಧಿಯಲ್ಲಿ ಪಾದರಸದ ಮಟ್ಟವು ತುಂಬಾ ಉನ್ನತವಾಗಿರುತ್ತದೆ. ಕರಾವಳಿ ಪ್ರದೇಶದಲ್ಲಿನ ಬೇಸಿಗೆ ತಾಪಮಾನವು ಸಾಮಾನ್ಯವಾಗಿ ರಾಜ್ಯದ ಉಳಿದ ಭಾಗಗಳಿಗಿಂತ ಹೆಚ್ಚಿರುತ್ತದೆ. ಬೇಸಿಗೆಯಲ್ಲಿ, ತಾಪಮಾನವು ಸಾಮಾನ್ಯವಾಗಿ ೨೦ °C ಮತ್ತು ೪೦ °C ನ ನಡುವಣ ಇರುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಬೇಸಿಗೆಯ ದಿನವೊಂದರಲ್ಲಿ ತಾಪಮಾನವು ೪೫ ಡಿಗ್ರಿಗಳಷ್ಟು ಮಟ್ಟವನ್ನು ಮುಟ್ಟಿರುತ್ತದೆ.
ಜುಲೈನಿಂದ ಸೆಪ್ಟೆಂಬರ್ ನಡುವಿನ ಅವಧಿಯು ಆಂಧ್ರ ಪ್ರದೇಶದಲ್ಲಿ ಸಮೃಧ್ಧ ಮಳೆಯಾಗುವ ಕಾಲ. ಹಾಗಾಗಿ ಈ ತಿಂಗಳುಗಳ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಆಂಧ್ರ ಪ್ರದೇಶದಲ್ಲಿ ಬೀಳುವ ಒಟ್ಟು ಮಳೆಯ ಮೂರನೇ ಒಂದು ಭಾಗವನ್ನು ಈಶಾನ್ಯ ಮಳೆ ಮಾರುತಗಳು ಹೊತ್ತು ತರುತ್ತವೆ. ಕೆಲವು ವೇಳೆ ಅಕ್ಟೋಬರ್ ತಿಂಗಳ ಆಸುಪಾಸಿನಲ್ಲಿ ಚಳಿಗಾಲವು ರಾಜ್ಯವನ್ನು ಪ್ರವೇಶಿಸುತ್ತದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಆಂಧ್ರ ಪ್ರದೇಶದಲ್ಲಿ ಚಳಿಗಾಲವಿರುತ್ತದೆ. ರಾಜ್ಯವು ಗಣನೀಯ ಪ್ರಮಾಣದ ಉದ್ದದ ಕರಾವಳಿ ಪ್ರದೇಶವನ್ನು ಹೊಂದಿರುವುದರಿಂದ ಇಲ್ಲಿ ಚಳಿಗಾಲದಲ್ಲಿ ಹೆಚ್ಚಿನ ಚಳಿ ಇರುವುದಿಲ್ಲ.ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು ಸಾಮಾನ್ಯಾಗಿ ೧೩ °Cನಿಂದ ೩೦ °Cವರೆಗೆ ಇರುತ್ತದೆ.
ಬೇಸಿಗೆಯ ತಿಂಗಳುಗಳಲ್ಲಿ ಆಂಧ್ರಕ್ಕೆ ನೀವು ಪ್ರವಾಸ ಹೊರಡುವುದಾದಲ್ಲಿ ಬೇಸಿಗೆಯ ಉಡುಪುಗಳೊಂದಿಗೆ ಸಿದ್ಧರಿರುವುದು ಅಗತ್ಯವಾಗಿರುತ್ತದೆ. ಬೇಸಿಗೆಯ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳುವಲ್ಲಿ ಹತ್ತಿ ಉಡುಪುಗಳು ಸೂಕ್ತವಾಗಿರುತ್ತವೆ.
ವರ್ಷದ ಪ್ರಮುಖ ಭಾಗದ ಅವಧಿಯಲ್ಲಿ ಆಂಧ್ರ ಪ್ರದೇಶದ ಹವಾಮಾನ ಅಷ್ಟೇನೂ ಹಿತಕರವಾಗಿರುವುದಿಲ್ಲ. ಆದ್ದರಿಂದ ರಾಜ್ಯಕ್ಕೆ ಭೇಟಿ ನೀಡಲು ಅಕ್ಟೋಬರ್ನಿಂದ ಫೆಬ್ರವರಿಯ ನಡುವಿನ ಅವಧಿಯು ಪ್ರಶಸ್ತ ಕಾಲವೆಂದು ಹೇಳಬಹುದು.
== ವಿಭಾಗಗಳು ==
[[ಚಿತ್ರ:Andhra Pradesh districts map.svg|thumb|right|200px|ಆಂಧ್ರ ಪ್ರದೇಶದ ಜಿಲ್ಲೆಗಳ ನಕ್ಷೆ]]
ಆಂಧ್ರ ಪ್ರದೇಶವನ್ನು [[ಕರಾವಳಿ ಆಂಧ್ರ]], [[ರಾಯಲಸೀಮ|ರಾಯಲಸೀಮಾ]] ಮತ್ತು [[ತೆಲಂಗಾಣ]] ಎಂದು ಮೂರು ವಿಭಾಗಗಳಾಗಿ ವಿಭಾಗಿಸಬಹುದು.<ref>{{Cite web |url=http://www.blonnet.com/2007/05/17/stories/2007051704252100.htm |title=ನಾಲ್ಕು ಪ್ರಾದೇಶಿಕ ಯೋಜನಾ ಮಂಡಳಿಗಳಿಗೆ AP ಸಂಪುಟವು ಅನುಮೋದಿಸುತ್ತದೆ |access-date=2009-12-16 |archive-date=2008-05-10 |archive-url=https://web.archive.org/web/20080510040333/http://www.blonnet.com/2007/05/17/stories/2007051704252100.htm |url-status=dead }}</ref>
ಆಂಧ್ರ ಪ್ರದೇಶ ೨೩ ಜಿಲ್ಲೆಗಳನ್ನು ಹೊಂದಿದ್ದು ಅವು ಈ ರೀತಿ ಇವೆ: [[ಅದಿಲಾಬಾದ್ ಜಿಲ್ಲೆ|ಅದಿಲಾಬಾದ್]], [[ಅನಂತಪುರ್ ಜಿಲ್ಲೆ|ಅನಂತಪುರ್]], [[ಚಿತ್ತೂರ್ ಜಿಲ್ಲೆ|ಚಿತ್ತೂರ್]], [[ಕಡಪ ಜಿಲ್ಲೆ|ಕಡಪ]], [[ಪೂರ್ವ ಗೋದಾವರಿ ಜಿಲ್ಲೆ|ಪೂರ್ವ ಗೋದಾವರಿ]], [[ಪಶ್ಚಿಮ ಗೋದಾವರಿ ಜಿಲ್ಲೆ|ಪಶ್ಚಿಮ ಗೋದಾವರಿ]], [[ಗುಂಟೂರು ಜಿಲ್ಲೆ|ಗುಂಟೂರ್]], [[ಹೈದರಾಬಾದ್, ತೆಲಂಗಾಣ|ಹೈದರಾಬಾದ್]], [[ಕರೀಂನಗರ ಜಿಲ್ಲೆ|ಕರೀಂನಗರ]], [[ಖಮ್ಮಮ್ ಜಿಲ್ಲೆ|ಖಮ್ಮಮ್]], [[ಕೃಷ್ಣ ಜಿಲ್ಲೆ|ಕೃಷ್ಣ]], [[ಕರ್ನೂಲ್ ಜಿಲ್ಲೆ|ಕರ್ನೂಲ್]], [[ಮಹಬೂಬ್ನಗರ ಜಿಲ್ಲೆ|ಮೆಹಬೂಬ್ ನಗರ]], [[ಮೇಡಕ್ ಜಿಲ್ಲೆ|ಮೇಡಕ್]], [[ನಲ್ಗೊಂಡ ಜಿಲ್ಲೆ|ನಲ್ಗೊಂಡ]], [[ನೆಲ್ಲೂರ್ ಜಿಲ್ಲೆ|ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರ್]], [[ನಿಜಾಮಬಾದ್ ಜಿಲ್ಲೆ|ನಿಜಾಮಬಾದ್]], [[ಪ್ರಕಾಶಮ್ ಜಿಲ್ಲೆ|ಪ್ರಕಾಶಮ್]], [[ರಂಗಾ ರೆಡ್ಡಿ ಜಿಲ್ಲೆ|ರಂಗಾರೆಡ್ಡಿ]], [[ಶ್ರೀಕಾಕುಲಂ ಜಿಲ್ಲೆ|ಶ್ರೀಕಾಕುಲಂ]], [[ವಿಶಾಖಪಟ್ಟಂ ಜಿಲ್ಲೆ|ವಿಶಾಖಪಟ್ಟಣಂ]], [[ವಿಜಿಯನಗರಂ ಜಿಲ್ಲೆ|ವಿಜಯನಗರಂ]] ಮತ್ತು [[ವಾರಂಗಲ್ ಜಿಲ್ಲೆ|ವಾರಂಗಲ್]].
ಪ್ರತಿ ಜಿಲ್ಲೆಯನ್ನೂ ವಿವಿಧ [[ತೆಹ್ಸಿಲ್|ಮಂಡಲ]]ಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಮಂಡಲವೂ ಕೆಲವು ಹಳ್ಳಿಗಳ ಒಂದು ಗುಂಪಾಗಿದೆ.[[ಹೈದರಾಬಾದ್, ತೆಲಂಗಾಣ|ಹೈದರಾಬಾದ್]] ಇದರ ರಾಜಧಾನಿಯಾಗಿದ್ದು, ಇದಕ್ಕೆ ಪಕ್ಕದಲ್ಲಿರುವ ಅವಳಿ ನಗರವಾದ [[ಸಿಕಂದರಾಬಾದ್|ಸಿಕಂದರಾಬಾದ್ನ]] ಒಡಗೂಡಿ ರಾಜ್ಯದಲ್ಲೇ ಅತ್ಯಂತ ದೊಡ್ಡ ನಗರವಾಗಿದೆ. [[ವಿಶಾಖಪಟ್ನಂ|ವಿಶಾಖಪಟ್ಟಣ]]ವು ಆಂಧ್ರ ಪ್ರದೇಶದ ಪ್ರಮುಖ ರೇವು ಪಟ್ಟಣವಾಗಿದ್ದು ಇದು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದೆ ಹಾಗೂ [[ಭಾರತೀಯ ನೌಕಾಪಡೆ]]ಯ ಪೂರ್ವ ನೌಕಾದಳಕ್ಕೆ ನೆಲೆಯಾಗಿದೆ. [[ವಿಜಯವಾಡ]] ವು ತನ್ನ ಭೌಗೋಳಿಕ ನೆಲೆಯಿಂದಾಗಿ ಹಾಗೂ ಪ್ರಮುಖ ರೈಲು ಮತ್ತು ರಸ್ತೆ ಮಾರ್ಗಗಳಿಗೆ ಸಮೀಪವಿರುವುದರಿಂದಾಗಿ ಪ್ರಮುಖ ವ್ಯಾಪಾರಿ ತಾಣವಾಗಿದೆ; ಅಲ್ಲದೆ ರಾಜ್ಯದ ಮೂರನೇ ಅತಿದೊಡ್ಡ ನಗರವಾಗಿದೆ. ರಾಜ್ಯದ ಇತರೆ ಮುಖ್ಯ ನಗರ ಮತ್ತು ಪಟ್ಟಣಗಳೆಂದರೆ: [[ಕಾಕಿನಾಡ]], [[ವರಂಗಲ್|ವಾರಂಗಲ್]], [[ಗುಂಟೂರು|ಗುಂಟೂರ್]], [[ತಿರುಪತಿ]], [[ರಾಜಮುಂಡ್ರಿ]], [[ನೆಲ್ಲೂರು|ನೆಲ್ಲೂರ್]], [[ಒಂಗೊಲ್|ಓಂಗೊಲ್]], [[ಕರ್ನೂಲು|ಕರ್ನೂಲ್]], [[ಅನಂತಪುರ|ಅನಂತಪುರ್]], [[ಕರೀಂನಗರ|ಕರೀಂನಗರ]], [[ನಿಜಾಮಾಬಾದ್]] ಮತ್ತು [[ಎಲೂರು|ಏಲೂರು]].
==ಸೀಮಾಂಧ್ರಕ್ಕೆ ಹೊಸ ರಾಜಧಾನಿ==
[[Image:Telengana.PNG|thumb|ಆಂಧ್ರ ಪ್ರದೇಶ ರಾಜ್ಯದಲ್ಲಿ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ]]
೨ Dec, ೨೦೧೬
[[File:Andhra Pradeah Capital Region.jpg|left|thumb|ಆಂಧ್ರಪ್ರದೇಶದ ರಾಜಧಾನಿ ಪ್ರದೇಶ '''ಅಮರಾವತಿ''' ತೋರಿಸುವ ನಕ್ಷೆ, ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ಮಧ್ಯದಲ್ಲಿದೆ-ಬಣ್ಣದಗೆರೆ ಕೃಷ್ಣಾನದಿ]]
*ದಿ. ಜೂನ್ ೨, ೨೦೧೪, ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).<ref name="ref2">(ವಿಜಯ ಕರ್ನಾಟಕ ದಿ. ಜೂನ್ 2, 2014)</ref>
*ಮೂಲ ಆಂದ್ರಪ್ರದೇಶ ಇಬ್ಭಾಗವಾಗಿ ತೆಲಂಗಾಣ ಆಂಧ್ರ ಎಂದುಎರಡು ರಾಜ್ಯಗಳಾದಾಗ ಹೈದರಾಭಾದು ತೆಲಂಗಾಣಾಕ್ಕೆ ರಾಧಾನಿಯಾಯಿತು. ಆಂಧ್ರವು ಅಮರಾವತಿ ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು.
*ಅಮರಾವತಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು.<ref name="ref1" />
== ಸಾಲಾರ್ ಜಂಗ್ ವಸ್ತು ಸಂಗ್ರಹಾಲಯ ==
ಹೈದರಾಬಾದ್ ಜಿಲ್ಲೆಯ ಈ ವಸ್ತುಸಂಗ್ರಹಾಲಯವನ್ನು [[ಮೂರನೆಯ ಸಾಲಾರ್ ಜಂಗರು]] (ಮೀರ್ ಯೂಸಿಫ್ ಆಲಿಖಾನ್) ಒಬ್ಬರೇ ಸಂಗ್ರಹಿಸಿರುತ್ತಾರೆ. ವಿಶ್ಬದಲ್ಲಿ ವ್ಯಕ್ತಿಯೊಬ್ಬನೇ ಸಂಗ್ರಹಿಸಿದ ವಸ್ತುಗಳ ಅತಿದೊಡ್ಡ ಸಂಗ್ರಹವೆಂದು ಪ್ರಸಿದ್ಧಿಪಡೆದಿದೆ. ಇಲ್ಲಿನ ವಿಶೇಷ ವಸ್ತುಗಳ ಚಿಕ್ಕ ಪಟ್ಟಿ ಹೀಗಿದೆ. ಪರ್ಷಿಯಾದ ರತ್ನಗಂಬಳಿಗಳು, ಮೊಗಲ್ ಕಾಲದ ಸೂಕ್ಷ್ಮಚಿತ್ರಗಳು,ಚೀನಾದೇಶದ ಪಿಂಗಾಣಿ ಹೂಜಿಗಳು, ಜಪಾನಿನ ಅರಗಿನ ವಸ್ತುಗಳು, ಯೂರೋಪಿನ ಪ್ರಖ್ಯಾತ ಅಮೃತಶಿಲೆಯ ಮೂರ್ತಿಗಳು, (ಇವುಗಳಲ್ಲಿ ಅತ್ಯಂತ ಹೆಸರಾದ,'[[ಮುಸುಕಿನ ರೆಬೆಕ್ಕಾ]],'(ಮಾರ್ಗರೆಟ್ ಮತ್ತು, ಮೆಫಿಸ್ಟೋಫೆಲೆಸ್)ಜೆಡ್ ಕಲ್ಲಿನಿಂದ ಮಾಡಿದ ಕಠಾರಿಗಳು,(ಜೆಹಾಂಗೀರ್, ಶೆಹಜಹಾನ್ ಮತ್ತು ಔರಂಗ್ ಜೇಬ್ ರ ಕಠಾರಿಗಳು)ಮತ್ತು ಇತರ ಆಕರ್ಷಕ ವಸ್ತುಗಳಿವೆ.
== ಜನಸಂಖ್ಯಾ ವಿವರ ==
{| class="wikitable sortable " border="1" style="float:left"
|-
|
| ತೆಲುಗು
| ಇತರೆ ಭಾಷೆಗಳು
| ಒಟ್ಟು
|-
| ಹಿಂದು
| align="right"|೮೨%
| align="right"| ೨%
| align="right"| '''೮೪%'''
|-
| ಮುಸ್ಲಿಂ
| align="right"|೧%
| align="right"| ೮%{{fn|1}}
| align="right"| '''೯%'''
|-
| ಕ್ರೈಸ್ತ
| align="right"| ೪%
| align="right"|೧%
| align="right"| '''೫%'''
|-
| ಇತರೆ ಧರ್ಮೀಯರು
| align="right"| ೦.೫%
| align="right"| ೦.೫%
| align="right"| '''೧%'''
|-
|
'''ಒಟ್ಟು'''
| align="right"| '''೮೮.೫%'''
| align="right"| '''೧೧.೫%'''
| align="right"| '''೧೦೦%'''
|-
| colspan=೪
| {{fnb|1}} ಮುಖ್ಯವಾಗಿ ಉರ್ದು<br />
|}
{{IndiaCensusPop
| title= Population Trend
| 1961= 35983000
| 1971= 43503000
| 1981= 53550000
| 1991= 66508000
| 2001= 75727000
| estimate=
| est year=
| est ref=
| footnote=Source:Census of India<ref name="POPULATION CHARACTERISTICS - ANDHRA PRADESH">{{cite web|url=http://budget.ap.gov.in/tab1_1.htm|title=POPULATION CHARACTERISTICS — ANDHRA PRADESH|work=Census of India|publisher=budget.ap.gov.in|accessdate=2008-06-04|archive-date=2008-12-08|archive-url=https://web.archive.org/web/20081208103506/http://budget.ap.gov.in/tab1_1.htm|url-status=dead}}</ref>
|state=
}}
[[ತೆಲುಗು]] ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಸುಮಾರು ೮೮.೫% ಜನರು ತೆಲುಗು ಮಾತನಾಡುತ್ತಾರೆ.
ತೆಲುಗು ಭಾಷೆ ಅತಿ ಹೆಚ್ಚು ಜನರು ಮಾತನಾಡುವ ಭಾರತದ ಮೂರನೇ ಭಾಷೆ.<ref>{{cite web |url= http://www.censusindia.gov.in/Census_Data_2001/Census_Data_Online/Language/Statement6.htm |title= Comparative Ranking of Scheduled Languages in Descending Order of Speakers' Strength - 1971, 1981, 1991 and 2001 |accessdate=10 November 2008 |last= |first= |coauthors= |year= 2001 |work= |publisher= Office of the Registrar General & Census Commissioner, India}}</ref> ರಾಜ್ಯದಲ್ಲಿನ ಪ್ರಮುಖ ಅಲ್ಪಸಂಖ್ಯಾತ ಭಾಷಿಕ ಸಮುದಾಯಗಳಲ್ಲಿ [[ಉರ್ದೂ|ಉರ್ದು]] (೮.೬೩%), [[ಹಿಂದಿ]] (೦.೬೩%) ಮತ್ತು [[ತಮಿಳು]] (೧.೦೧%) ಮಾತನಾಡುವವರು ಸೇರಿದ್ದಾರೆ.<ref>{{cite web |url= http://www.censusindia.gov.in/Census_Data_2001/Census_Data_Online/Language/Statement3.htm |title= Distribution of 10,000 Persons by Language — India, States and Union Territories - 2001 |accessdate=10 November 2008 |last= |first= |coauthors= |year= 2001 |work= |publisher= Office of the Registrar General & Census Commissioner, India}}</ref> ಭಾರತ ಸರ್ಕಾರವು ೨೦೦೮ರ ನವೆಂಬರ್ ೧ರಂದು ತೆಲುಗು ಭಾಷೆಗೆ ಶಾಸ್ತ್ರೀಯ ಮತ್ತು ಪ್ರಾಚೀನ ಭಾಷೆ ಎಂಬ ಸ್ಥಾನಮಾನ ನೀಡಿದೆ.<ref>{{cite web |url= http://timesofindia.indiatimes.com/India/Telugu_Kannada_get_classical_tag/articleshow/3660666.cms |title= Telugu, Kannada get classical tag |accessdate=10 November 2008 |last= |first= |coauthors= |date= [[2008-11-01]] |work= [[ಟೈಮ್ಸ್ ಆಫ್ ಇಂಡಿಯ]] |publisher=}}</ref>
ಆಂಧ್ರ ಪ್ರದೇಶದಲ್ಲಿ ೧%ಗಿಂತ ಕಡಿಮೆ ಜನರಿಂದ ಮಾತನಾಡಲ್ಪಡುವ ಇತರೆ ಭಾಷೆಗಳೆಂದರೆ, [[ಕನ್ನಡ]] (೦.೯೪%), [[ಮರಾಠಿ]] (೦.೮೪%), [[ಒಡಿಯಾ|ಒರಿಯಾ]] (೦.೪೨%), [[ಗೊಂಡಿ ಭಾಷೆ|ಗೊಂಡಿ]] (೦.೨೧%) ಮತ್ತು [[ಮಲಯಾಳಂ]] (೦.೧%). ೦.೧%ಗಿಂತ ಕಡಿಮೆ ಪ್ರಮಾಣದ ರಾಜ್ಯ ನಿವಾಸಿಗಳಿಂದ ಆಡಲ್ಪಡುತ್ತಿರುವ ಭಾಷೆಗಳಲ್ಲಿ [[ಗುಜರಾತಿ ಭಾಷೆ|ಗುಜರಾತಿ]] (೦.೦೯%), [[ಸಾವರ]] (೦.೦೯%), [[ಕೋಯ ಭಾಷೆ|ಕೋಯ]] (೦.೦೮%), ಜಟಪು (೦.೦೪%), [[ಪಂಜಾಬಿ ಭಾಷೆ|ಪಂಜಾಬಿ]] (೦.೦೪%), [[ಕೊಲಾಮಿ|ಕೊಳಮಿ]] (೦.೦೩%), ಕೊಂಡ (೦.೦೩%), [[ಗಡಬ ಭಾಷೆ|ಗಡಬ]] (೦.೦೨%), [[ಸಿಂಧಿ ಭಾಷೆ|ಸಿಂಧಿ]] (೦.೦೨%), [[ನೇಪಾಳಿ ಭಾಷೆ|ಗೋರ್ಖಾಲಿ/ನೇಪಾಳಿ]] (೦.೦೧%) ಮತ್ತು [[ಖೊಂಡ್]]/ಕೊಂಧ್(೦.೦೧%) ಸೇರಿವೆ.
ಆಂಧ್ರ ಪ್ರದೇಶದ ಪ್ರಧಾನ ಜನಾಂಗವೆಂದರೆ [[ತೆಲುಗು ಜನ]]; ಇವರು [[ಆರ್ಯರು]] ಮತ್ತು [[ದ್ರಾವಿಡ|ದ್ರಾವಿಡರ]] ಸಮ್ಮಿಶ್ರ ಜನಾಂಗಕ್ಕೆ ಪ್ರಮುಖವಾಗಿ ಸೇರುತ್ತಾರೆ.
== ಆರ್ಥಿಕ ವ್ಯವಸ್ಥೆ ==
[[ಕೃಷಿ|ಕೃಷಿಯು]], ರಾಜ್ಯದ ಆರ್ಥಿಕತೆಗೆ ಪ್ರಮುಖ ಆದಾಯದ ಮೂಲವಾಗಿದೆ. ಭಾರತದ ನಾಲ್ಕು ಪ್ರಮುಖ ನದಿಗಳಾದ [[ಗೋದಾವರಿ]], [[ಕೃಷ್ಣಾ ನದಿ|ಕೃಷ್ಣ]], [[ಪೆನ್ನಾರ್ ನದಿ|ಪೆನ್ನಾ]] ಮತ್ತು [[ತುಂಗಭದ್ರ ನದಿ|ತುಂಗಭದ್ರ]] ರಾಜ್ಯದ ಮೂಲಕ ಹರಿಯುತ್ತಿದ್ದು, ಕೃಷಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿವೆ.[[ಅಕ್ಕಿ]], [[ಕಬ್ಬು]], [[ಹತ್ತಿ]], [[ಮೆಣಸಿನಕಾಯಿ]] (ಮೆಣಸಿನ ಹಣ್ಣು), [[ಮಾವು]] ಮತ್ತು [[ಹೊಗೆಸೊಪ್ಪು]] ಇಲ್ಲಿನ ಪ್ರಾದೇಶಿಕ ಬೆಳೆಗಳು. ಇತ್ತೀಚೆಗೆ, [[ಸಸ್ಯಜನ್ಯ ಕೊಬ್ಬುಗಳು ಮತ್ತು ಎಣ್ಣೆಗಳು|ಸಸ್ಯಜನ್ಯ ತೈಲ]]ದ ಉತ್ಪಾದನೆಗೆ ಬಳಕೆಯಾಗುವ [[ಸೂರ್ಯಕಾಂತಿ]] ಮತ್ತು [[ಕಡಲೇಕಾಯಿ|ಕಡಲೆಕಾಯಿಯಂತಹ]] ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ.ವಿಶ್ವದ ಅತಿ ಎತ್ತರದ ಕಲ್ಲಿನ ಜಲಾಶಯ ಎನಿಸಿರುವ [[ನಾಗಾರ್ಜುನ ಸಾಗರ ಜಲಾಶಯ]], [[ಗೋದಾವರಿ ನದೀಮುಖಜಭೂಮಿಯ ನೀರಾವರಿ ಯೋಜನೆಗಳು|ಗೋದಾವರಿ ನದಿ ಜಲಾನಯನ ನೀರಾವರಿ ಯೋಜನೆ]]ಗಳನ್ನು ಒಳಗೊಂಡಂತೆ ಹಲವು ಅಂತರರಾಜ್ಯ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ.<ref>{{cite web|url=http://agri.ap.nic.in|title=Agriculture dept. of Andhra Pradesh|access-date=2021-08-09|archive-date=2011-07-09|archive-url=https://web.archive.org/web/20110709142554/http://agri.ap.nic.in/|url-status=dead}}</ref><ref name="dfljos">{{cite web|url=http://www.apind.gov.in/indussectors.html|title=Key Sectors of Andhra Pradesh|access-date=2009-12-16|archive-date=2009-02-21|archive-url=https://web.archive.org/web/20090221073936/http://apind.gov.in/indussectors.html|url-status=dead}}</ref>
[[ಚಿತ್ರ:Hitec city.jpg|thumb|left|ರಾಜ್ಯದ ರಾಜಧಾನಿ ಮತ್ತು ರಾಜ್ಯದಲ್ಲಿನ ಅತಿ ದೊಡ್ಡ ನಗರವಾದ ಹೈದರಬಾದ್ನಲ್ಲಿನ ಸೈಬರ್ಗೋಪುರಗಳು]]
[[ಮಾಹಿತಿ ತಂತ್ರಜ್ಞಾನ]] ಮತ್ತು [[ಜೈವಿಕತಂತ್ರಜ್ಞಾನ|ಜೈವಿಕ ತಂತ್ರಜ್ಞಾನ]] ಕ್ಷೇತ್ರಗಳ ಮೇಲೂ ರಾಜ್ಯವು ಹೆಚ್ಚಿನ ಗಮನ ಹರಿಸಲು ಪ್ರಾರಂಭಿಸಿದೆ. ೨೦೦೪–೨೦೦೫ರ ಅವಧಿಯಲ್ಲಿ, ಹೆಚ್ಚಿನ IT ರಫ್ಟು ಮಾಡುತ್ತಿದ್ದ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶವು ಐದನೇ ಸ್ಥಾನದಲ್ಲಿತ್ತು. ೨೦೦೪-೨೦೦೫ರ ಅವಧಿಯಲ್ಲಿ ರಾಜ್ಯದ IT ರಫ್ತು ಮೌಲ್ಯವು ೮೨,೭೦೦ ದಶಲಕ್ಷ ರೂ.ಗಳಷ್ಟು (೧,೮೦೦ ದಶಲಕ್ಷ $)ಇತ್ತು.<ref>http://finance.indiainfo.com/news/೨೦೦೫/೦೫/೧೧/೧೧೦೫it-exports.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> IT ಕ್ಷೇತ್ರವು ಪ್ರತಿ ವರ್ಷವೂ ೫೨.೩% ದರದಲ್ಲಿ ವಿಸ್ತರಿಸುತ್ತಿದೆ. ೨೦೦೬–೨೦೦೭ರಲ್ಲಿ ೧೯೦,೦೦೦ ದಶಲಕ್ಷ ರೂ.ಗಳಿಗೆ (೪.೫ ದಶಲಕ್ಷ $) ಮುಟ್ಟಿದ IT ರಫ್ತು, ದೇಶದ ಒಟ್ಟು IT ರಫ್ತಿಗೆ ಶೇ ೧೪ರಷ್ಟು ಕೊಡುಗೆ ನೀಡಿ, ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು.<ref>{{Cite web |url=http://www.pppinindia.com/business-opportunities-andhra-pradesh.asp |title=ಆರ್ಕೈವ್ ನಕಲು |access-date=2009-12-16 |archive-date=2009-08-30 |archive-url=https://web.archive.org/web/20090830194512/http://www.pppinindia.com/business-opportunities-andhra-pradesh.asp |url-status=dead }}</ref> ರಾಜ್ಯದ ಸೇವಾ ವಲಯವು ೪೩%ನಷ್ಟು ಆದಾಯವನ್ನು ರಾಜ್ಯದ ಒಟ್ಟು ದೇಶೀಯ ಉತ್ಪನ್ನ(GSDP)ಕ್ಕೆ ಈಗಾಗಲೇ ನೀಡುತ್ತಿದ್ದು, ೨೦%ರಷ್ಟು ಉದ್ಹೋಗಿಗಳನ್ನು ತನ್ನಲ್ಲಿ ತೊಡಗಿಸಿಕೊಂಡಿದೆ.<ref name="dfljos"/> ರಾಜ್ಯದ ರಾಜಧಾನಿಯಾದ ಹೈದರಾಬಾದ್, ದೇಶದ ಬೃಹತ್ ಮೂಲ ಔಷಧವಸ್ತು ತಯಾರಕ ರಾಜಧಾನಿ ಎಂದು ಪರಿಗಣಿತವಾಗಿದ್ದು, ದೇಶದ ೧೦ ಅಗ್ರಗಣ್ಯ ಔಷಧೀಯ ಕಂಪನಿಗಳಲ್ಲಿ ೫೦%ನಷ್ಟು ಕಂಪನಿಗಳು ರಾಜ್ಯದ ಮೂಲವನ್ನು ಹೊಂದಿವೆ. ಮೂಲಭೂತ ಸೌಕರ್ಯ ಕ್ಷೇತ್ರದಲ್ಲೂ ರಾಜ್ಯವು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದ್ದು, ರಾಜ್ಯದ ಹಲವು ಕಂಪನಿಗಳು ಅಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮುಂಚೂಣಿಯಲ್ಲಿವೆ.
ಆಂಧ್ರ ಪ್ರದೇಶವು ಖನಿಜಗಳಿಂದ ಸಂಪದ್ಭರಿತವಾಗಿರುವ ರಾಜ್ಯವಾಗಿದ್ದು, ಖನಿಜ ಸಂಪತ್ತಿಗೆ ಸಂಬಂಧಿಸಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ದೇಶದ [[ಸುಣ್ಣ|ಸುಣ್ಣದ ಕಲ್ಲು]]ಸಂಗ್ರಹಗಳ ಸುಮಾರು ಮೂರನೇ ಒಂದರಷ್ಟು ಭಾಗವನ್ನು ರಾಜ್ಯವು ಹೊಂದಿದ್ದು, ಆ ಪ್ರಮಾಣವು ಸುಮಾರು ೩೦ ಬಿಲಿಯನ್ ಟನ್ಗಳಷ್ಟಿದೆ ಎಂದು ಅಂದಾಜಿಸಲಾಗಿದೆ. [[ಕೃಷ್ಣ ಗೋದಾವರಿ ಮುಖಜಭೂಮಿ|ಕೃಷ್ಣ ಗೋದಾವರಿ ಜಲಾನಯನ ಪ್ರದೇಶ]]ವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಂಪತ್ತಿನ ಬೃಹತ್ ಸಂಗ್ರಹವನ್ನು ಹೊಂದಿದೆ. ರಾಜ್ಯದಲ್ಲಿ ಬೃಹತ್ ಪ್ರಮಾಣದ ಕಲ್ಲಿದ್ದಲು ಸಂಗ್ರಹವೂ ಇದೆ.<ref name="dfljos"/>
[[ಅಳವಡಿಸಲ್ಪಟ್ಟ ವಿದ್ಯುತ್ ಸಾಮರ್ಥ್ಯದ ಆಧಾರದ ಮೇಲೆ ಭಾರತದ ರಾಜ್ಯಗಳು|ಜಲ ವಿದ್ಯುತ್ ಉತ್ಪಾದನೆ]]ಯಲ್ಲಿ ಇಡೀ ದೇಶದಲ್ಲೇ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಒಟ್ಟು ದೇಶೀಯ ಉತ್ಪಾದನೆಯಲ್ಲಿ ೧೧%ಕ್ಕೂ ಹೆಚ್ಚಿನ ಜಲವಿದ್ಯುತ್ ರಾಜ್ಯದಲ್ಲೇ ಉತ್ಪಾದನೆಯಾಗುತ್ತದೆ.
೨೦೦೫ರ ಅವಧಿಯಲ್ಲಿನ ಆಂಧ್ರ ಪ್ರದೇಶದ GSDPಯು ಪ್ರಚಲಿತ ಬೆಲೆಗಳಲ್ಲಿ ೬೨ ಶತಕೋಟಿ $ನಷ್ಟಿತ್ತು ಎಂದು ಅಂದಾಜಿಸಲಾಗಿತ್ತು. ಇದು ಆಂಧ್ರ ಪ್ರದೇಶದ GSDPಯ ಪ್ರವೃತ್ತಿಯನ್ನು ತೋರಿಸುವ ಕೋಷ್ಟಕವಾಗಿದೆ. ಇದನ್ನು ''ಅಂಕಿ ಅಂಶಗಳು ಮತ್ತು ಯೋಜನಾ ಜಾರಿಯ ಸಚಿವಾಲಯ'' ವು ಮಾರುಕಟ್ಟೆ ಬೆಲೆಯನ್ನು ಆಧರಿಸಿ ಅಂದಾಜಿಸಿದ್ದು, ಅಂಕಿಗಳನ್ನು ಭಾರತದ ದಶಲಕ್ಷ ರೂಪಾಯಿಗಳಲ್ಲಿ ತೋರಿಸಲಾಗಿದೆ.ಆದ್ದರಿಂದ, ಒಟ್ಟಾರೆ GSDPಯ ಹೋಲಿಕೆಯಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ<ref>{{Cite web |url=http://mospi.nic.in/6_gsdp_cur_9394ser.htm |title=ಆರ್ಕೈವ್ ನಕಲು |access-date=2009-12-16 |archive-date=2016-03-03 |archive-url=https://web.archive.org/web/20160303231836/http://mospi.nic.in/6_gsdp_cur_9394ser.htm |url-status=dead }}</ref> ಮತ್ತು ಒಟ್ಟು GSDPಯ ತಲಾದಾಯದಲ್ಲೂ ಭಾರತದ ಪ್ರಮುಖ ರಾಜ್ಯಗಳ ಪೈಕಿ ಇದು ನಾಲ್ಕನೇ ಸ್ಥಾನವನ್ನು ಪಡೆದಿದೆ. ಮತ್ತೊಂದು ಅಳತೆಗೋಲಿನ ಪ್ರಕಾರ, ರಾಜ್ಯದ ಒಟ್ಟು ದೇಶೀಯ ಉತ್ಪನ್ನದ ವಿಚಾರದಲ್ಲಿ ಭಾರತೀಯ ಒಕ್ಕೂಟದ ಎಲ್ಲ ರಾಜ್ಯಗಳ ಪೈಕಿ ಒಟ್ಟು ರಾಜ್ಯವು ಮೂರನೇ ಸ್ಥಾನದಲ್ಲಿದೆ.<ref>http://en.wikipedia.org/wiki/Comparison_between_Indian_states_and_countries_by_GDP_(PPP)</ref>
{| class="wikitable sortable " border="1"
|-
!ವರ್ಷ
!
ರಾಜ್ಯ GDP (Rs.MM)
|-
| ೧೯೮೦
| align="right"| ೮೧,೯೧೦
|-
| ೧೯೮೫
| align="right"| ೧೫೨,೬೬೦
|-
| ೧೯೯೦
| align="right"| ೩೩೩,೩೬೦
|-
| ೧೯೯೫
| align="right"| ೭೯೮,೫೪೦
|-
| ೨೦೦೦
| align="right"| ೧,೪೦೧,೧೯೦
|-
| ೨೦೦೭
| align="right"| ೨,೨೯೪,೬೧೦
|}
== ಸರ್ಕಾರ ಮತ್ತು ರಾಜಕೀಯ ==
ಆಂಧ್ರ ಪ್ರದೇಶ [[ವಿಧಾನಸಭಾ|ವಿಧಾನಸಭೆ]]ಯು ೨೯೪ ಸದಸ್ಯ ಸ್ಥಾನಗಳನ್ನು ಹೊಂದಿದೆ.[[ಭಾರತದ ಸಂಸತ್ತು|ಭಾರತದ ಸಂಸತ್]]ನಲ್ಲಿ ರಾಜ್ಯವು ೬೦ ಜನ ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಮೇಲ್ಮನೆಯಾದ [[ರಾಜ್ಯಸಭೆ]]ಯಲ್ಲಿ ೧೮ ಮಂದಿಯಿದ್ದರೆ, ಕೆಳಮನೆಯಾದ [[ಲೋಕಸಭೆ|ಲೋಕಸಭೆಯಲ್ಲಿ]] ೪೨ ಮಂದಿ ಸದಸ್ಯರಿದ್ದಾರೆ.<ref>{{cite web|url=http://www.apassemblylive.com/|title=Andhra Pradesh Legislative Assembly|access-date=2009-12-16|archive-date=2005-04-01|archive-url=https://web.archive.org/web/20050401032522/http://www.apassemblylive.com/|url-status=dead}}</ref><ref>{{cite web|url=http://164.100.24.209/newls/membershomepage.aspx|title=Parliament of India|access-date=2009-12-16|archive-date=2008-12-10|archive-url=https://web.archive.org/web/20081210055350/http://164.100.24.209/newls/membershomepage.aspx|url-status=dead}}</ref>
೧೯೮೨ರವರೆಗೂ ಆಂಧ್ರ ಪ್ರದೇಶವು ಭಾರತ ರಾಷ್ಟ್ರೀಯ ಕಾಂಗ್ರಸ್(INC) ನೇತೃತ್ವದ ಸರಣಿ ಸರ್ಕಾರಗಳನ್ನೇ ಹೊಂದಿತ್ತು. [[ಕಾಸು ಬ್ರಹ್ಮಾನಂದ ರೆಡ್ಡಿ]] ಯವರು ಅತಿ ಹೆಚ್ಚು ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಾಖಲೆಯನ್ನು ಹೊಂದಿದ್ದರು. ಇದನ್ನು [[N.T.ರಾಮ ರಾವ್|ಎನ್.ಟಿ.ರಾಮ ರಾವ್]]ರವರು ೧೯೮೩ರಲ್ಲಿ ಮುರಿದರು. [[P.V. ಪಿ.ವಿ.ನರಸಿಂಹರಾವ್|ಪಿ.ವಿ.ನರಸಿಂಹ ರಾವ್]]ರವರೂ ಸಹ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ನಂತರ ೧೯೯೧ರಲ್ಲಿ ಇವರು ಭಾರತದ ಪ್ರಧಾನಿಯೂ ಆದರು. ರಾಜ್ಯದ ಗಮನಾರ್ಹ ಮುಖ್ಯಮಂತ್ರಿಗಳ ಪೈಕಿ [[ತಂಗುತೂರಿ ಪ್ರಕಾಶಂ|ತಂಗುತೂರಿ ಪ್ರಕಾಶಮ್]], ಆಂಧ್ರ ರಾಜ್ಯದ ಮುಖ್ಯಮಂತ್ರಿ (CM) (ಪ್ರಸ್ತುತ ಆಂಧ್ರ ಪ್ರದೇಶದ ಮೊದಲ ಮಖ್ಯಮಂತ್ರಿ ನೀಲಂ ಸಂಜೀವ ರೆಡ್ಡಿ) ಸೇರಿದ್ದಾರೆ. ಉಳಿದ ಇತರರಲ್ಲಿ [[ಕಾಸು ಬ್ರಹ್ಮಾನಂದ ರೆಡ್ಡಿ]], [[ಮರ್ರಿ ಚೆನ್ನಾ ರೆಡ್ಡಿ]], [[ಜಲಗಂ ವೆಂಗಲ್ ರೆಡ್ಡಿ|ಜಲಗಂ ವೆಂಗಲ್ ರಾವ್]], [[ನೆದುರುಮಲ್ಲಿ ಜನಾರ್ಧನ ರೆಡ್ಡಿ]], [[ನಾದೇಂಡ್ಲ ಭಾಸ್ಕರ ರಾವ್]], [[ಕೋಟ್ಲ ವಿಜಯಭಾಸ್ಕರ ರೆಡ್ಡಿ|ಕೋಟ್ಲ ವಿಜಯ ಭಾಸ್ಕರ ರೆಡ್ಡಿ]], [[N.T. ರಾಮ ರಾವ್|ಎನ್.ಟಿ.ರಾಮ ರಾವ್]], [[ನಾರಾ ಚಂದ್ರಬಾಬು ನಾಯ್ಡು]] ಮತ್ತು [[Y.S. ರಾಜಶೇಖರ ರೆಡ್ಡಿ|ವೈ.ಎಸ್.ರಾಜಶೇಖರ ರೆಡ್ಡಿ]]ಯವರುಗಳು ಸೇರಿದ್ದಾರೆ.
[[ಡೇವಿಡ್ ರಿಕಾರ್ಡೋ|thumb|250px|right|ಹೈದರಾಬಾದ್ನಲ್ಲಿರುವ ಉಚ್ಚ ನ್ಯಾಯಾಲಯ ರಾಜ್ಯದ ಪ್ರಮುಖ ನ್ಯಾಯಿಕ ಸಂಸ್ಥೆ]]
೧೯೮೩ರಲ್ಲಿ [[ತೆಲುಗು ದೇಶಂ ಪಕ್ಷ|ತೆಲುಗು ದೇಶಮ್ ಪಕ್ಷ]]ವು (TDP) ರಾಜ್ಯದ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿತು ಮತ್ತು [[N.T. ರಾಮ ರಾವ್|ಎನ್.ಟಿ.ರಾಮ ರಾವ್]]ರವರು (NTR) ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಇದರೊಂದಿಗೆ ಆಂಧ್ರ ಪ್ರದೇಶದ ರಾಜಕೀಯಕ್ಕೆ ಅಸಾಧಾರಣವಾದ ಎರಡನೇ ರಾಜಕೀಯ ಪಕ್ಷವೊಂದರ ಪರಿಚಯವಾದಂತಾಗಿ, ಆಂಧ್ರ ಪ್ರದೇಶದ ರಾಜಕೀಯದಲ್ಲಿದ್ದ ಏಕಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡಿತು. ಕೆಲವು ತಿಂಗಳುಗಳ ನಂತರ, NTRರವರು ವೈದ್ಯಕೀಯ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ ಸಮಯದಲ್ಲಿ ನಾದೇಂಡ್ಲ ಭಾಸ್ಕರ್ ರಾವ್ರವರು ಮುಖ್ಯಮಂತ್ರಿಯ ಅಧಿಕಾರದ ಗದ್ದುಗೆಯನ್ನು ಆಕ್ರಮಿಸಿದರು. ಹಿಂತಿರುಗಿ ಬಂದ ನಂತರ, ವಿಧಾನಸಭೆಯನ್ನು ವಿಸರ್ಜಿಸಲು ಮತ್ತು ಹೊಸದಾಗಿ ಚುನಾವಣೆಯನ್ನು ಘೋಷಿಸಿಸಲು ರಾಜ್ಯದ ಆಗಿನ ರಾಜ್ಯಪಾಲರನ್ನು ಒಪ್ಪಿಸುವಲ್ಲಿ NTRರವರು ಯಶಸ್ವಿಯಾರು. ಇದರಿಂದ ಮತ್ತೆ ನಡೆದ ಚುನಾವಣೆಯಲ್ಲಿ TDPಯು ಅತ್ಯಧಿಕ ಬಹುಮತದೊಂದಿಗೆ ಗೆಲುವು ಸಾಧಿಸಿತು.
೧೯೮೯ರ ಸಾರ್ವಜನಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ INC, Dr. ಮರ್ರಿ ಚೆನ್ನಾ ರೆಡ್ಡಿಯವರ ನೇತ್ಥತ್ವದಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಇದರೊಂದಿಗೆ NTRರವರ ೭ ವರ್ಷಗಳ ಆಳ್ವಿಕೆಯು ಅಂತ್ಯಗೊಂಡಿತು. ಮರ್ರಿ ಚೆನ್ನಾ ರೆಡ್ಡಿಯವರ ನಂತರ ಎನ್. ಜನಾರ್ಧನ್ ರೆಡ್ಡಿ ಅಧಿಕಾರಕ್ಕೆ ಬಂದರು. ಕೋಟ್ಲ ವಿಜಯ ಭಾಸ್ಕರ್ ರೆಡ್ಡಿಯವರು ತಾವು ಅಧಿಕಾರಕ್ಕೆ ಬರುವ ಮೂಲಕ ಇವರನ್ನು ಬದಲಿಸಿದರು.
೧೯೯೪ರಲ್ಲಿ ಮತ್ತೆ TDPಗೆ ಜನಾದೇಶವನ್ನು ನೀಡಿದ ಆಂಧ್ರ ಪ್ರದೇಶವು, NTRರವರು ಮತ್ತೆ ಮುಖ್ಯಮಂತ್ರಿಯಾಗುವುದನ್ನು ಕಂಡಿತು. ಆದರೆ NTRರವರ ಅಳಿಯನಾಗಿದ್ದ ಚಂದ್ರಬಾಬು ನಾಯ್ಡುರವರು ರಾಜಕೀಯ ಕ್ಷಿಪ್ತಕ್ರಾಂತಿಯೊಂದರಲ್ಲಿ ಅವರ ಬೆನ್ನಿಗೆ ಚೂರಿ ಹಾಕುವ ಮೂಲಕ ಅಧಿಕಾರವನ್ನು ಕಿತ್ತುಕೊಂಡರು. ಈ ನಂಬಿಕೆ ದ್ರೋಹವನ್ನು ಅರಗಿಸಿಕೊಳ್ಳಲಾಗದ NTRರವರು ಕೆಲವು ಕಾಲದ ನಂತರ ಹೃದಯಾಘಾತದಿಂದ ಮರಣ ಹೊಂದಿದರು. ೧೯೯೯ರಲ್ಲಿ TDPಯು ಚುನಾವಣೆಯಲ್ಲಿ ಗೆದ್ದಿತು. ಮುಂದಿನ ಚುನಾವಣೆಯಲ್ಲಿ INC ನೇತೃತ್ವದ ರಾಜಶೇಖರ ರೆಡ್ಡಿಯವರ ಶಕ್ತಿಶಾಲಿ ಮುಂಚೂಣಿಯನ್ನು ಹೊಂದಿದ್ದ ಮೈತ್ರಿಕೂಟದ ಎದುರು ೨೦೦೪ರ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋಲನ್ನನುಭವಿಸಿದರು.
೨೦೦೮ರಲ್ಲಿ ಚಲನಚಿತ್ರ ತಾರೆ [[ಚಿರಂಜೀವಿ|ಜಿರಂಜೀವಿ]]ಯವರಿಂದ [[ಪ್ರಜಾ ರಾಜ್ಯ ಪಕ್ಷಂ|ಪ್ರಜಾ ರಾಜ್ಯಂ ಪಕ್ಷ]](PRP) ಸ್ಥಾಪಿತವಾಯಿತು. ಇದು ೨೦೦೯ರ ಚುನಾವಣೆಯಲ್ಲಿ ತ್ರಿಕೋನ ಹೋರಾಟವನ್ನು ಹುಟ್ಟುಹಾಕಿತು. ಅತಿಯಾದ ನಿರೀಕ್ಷೆ ಮತ್ತು ಮಾಧ್ಯಮದ ಭಾರೀ ಪ್ರಚಾರದ ನಡುವೆಯೂ ಇದು ಆಂಧ್ರ ರಾಜಕೀಯದಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ವಿಫಲವಾಯಿತು. ಹೀಗಾಗಿ ೧೮ ಸ್ಥಾನಗಳನ್ನಷ್ಟೆ ಗೆಲ್ಲುವುದಕ್ಕೆ ಸಾಧ್ಯವಾಯಿತು.ಒಂದೇ ಆಶಾಕಿರಣವೆಂದರೆ ಒಟ್ಟು ಮತಗಳಲ್ಲಿ ಶೇ ೩೬ರಷ್ಟು ಮತ ಪಡೆದ ಕಾಂಗ್ರೆಸ್ ಮತ್ತು ಶೇ ೨೫ರಷ್ಟು ಗಳಿಸಿದ ತೆಲುಗು ದೇಶಮ್ ಪಕ್ಷಗಳಿಗೆ ಪ್ರತಿಯಾಗಿ, ಇದು ಶೇ ೧೭ರಷ್ಟು ಮತವನ್ನು ಗಳಿಸುವಲ್ಲಿ ಸಫಲವಾಯಿತು.
ಪ್ರಜಾ ರಾಜ್ಯಂ ಪಕ್ಷ ಮತ್ತು TDP, TRS, CPI ಮತ್ತು CPM ಪಕ್ಷಗಳ ಬೃಹತ್ ಮೈತ್ರಿಕೂಟವನ್ನು ಹಿಮ್ಮೆಟ್ಟಿಸುವುದರೊಂದಿಗೆ ವೈ.ಎಸ್.ರಾಜಶೇಖರ ರೆಡ್ಡಿ ಮತ್ತೆ ಮುಖ್ಯಮಂತ್ರಿಯಾದರು. YSR ರೆಡ್ಡಿಯವರು APಯ ಇತಿಹಾಸದಲ್ಲಿ, ಒಂದು ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ೫ ವರ್ಷಗಳನ್ನು ಸಂಪೂರ್ಣಗೊಳಿಸಿದ ಮೊದಲ ಮುಖ್ಯಮಂತ್ರಿಯಾದರು.
== ಸಂಸ್ಕೃತಿ ==
=== ಸಾಂಸ್ಕೃತಿಕ ಸಂಸ್ಥೆಗಳು ===
ಆಂಧ್ರ ಪ್ರದೇಶವು ಹಲವು ವಸ್ತುಸಂಗ್ರಹಾಲಯಗಳನ್ನು ಹೊಂದಿದೆ. ಅವುಗಳೆಂದರೆ, ಗುಂಟೂರು ನಗರದ ಬಳಿ ಇರುವ [[ಅಮರಾವತಿ|ಅಮರಾವತಿಯಲ್ಲಿನ]] [http://asi.nic.in/asi_museums_amravati.asp ಪುರಾತತ್ವ ವಸ್ತುಸಂಗ್ರಹಾಲಯ], ಇದು ಸುತ್ತಮುತ್ತಲ ಪ್ರಾಚೀನ ಸ್ಥಳಗಳ ಅವಶೇಷಗಳನ್ನು ಹೊಂದಿದೆ; ಹೈದರಾಬಾದ್ನಲ್ಲಿರುವ [[ಸಾಲಾರ್ ಜಂಗ್ ವಸ್ತುಸಂಗ್ರಹಾಲಯ]], ಇದು ಶಿಲ್ಪಗಳು, ವರ್ಣಚಿತ್ರಗಳು ಮತ್ತು ಧಾರ್ಮಿಕ ಕರಕುಶಲ ವಸ್ತುಗಳೂ ಸೇರಿದಂತೆ ವೈವಿಧ್ಯಮಯ ಸಂಗ್ರಹವನ್ನು ಹೊಂದಿದೆ; [[ವಿಶಾಖಪಟ್ಟಣಂ|ವಿಶಾಖಪಟ್ಟಣಂನಲ್ಲಿರುವ]] ವಿಶಾಖ ವಸ್ತುಸಂಗ್ರಹಾಲಯ, ಇದು ನವೀಕರಣಗೊಂಡ ಡಚ್ ಬಂಗಲೆಯಲ್ಲಿದ್ದು [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ಪ್ರಾಂತ್ಯದ]]ಯ ಸ್ವಾತಂತ್ರ್ಯಪೂರ್ವ ಇತಿಹಾಸವನ್ನು ಪ್ರದರ್ಶಿಸುತ್ತದೆ.<ref>{{cite web|url=http://www.vizagcityonline.com/visakha_museum/ |title=VizagCityOnline.com — Visakha Museum |publisher=Vizagcityonline.com |date= |accessdate=2008-11-29}}</ref>[[ವಿಜಯವಾಡ|ವಿಜಯವಾಡದಲ್ಲಿರುವ]] ವಿಕ್ಟೋರಿಯಾ ಜುಬಿಲಿ ವಸ್ತುಸಂಗ್ರಹಾಲಯವು ಪ್ರಾಚೀನ ಶಿಲ್ಪಗಳು, ವರ್ಣಚಿತ್ರಗಳು, ಮೂರ್ತಿಗಳು, ಶಸ್ತ್ರಾಸ್ತ್ರಗಳು, ಮೊನಚಾದ ಆಯುಧಗಳು ಮತ್ತು ಶಾಸನಗಳನ್ನು ಹೊಂದಿದೆ.<ref>ವಿಕ್ಟೋರಿಯಾ ಜ್ಯುಬಿಲಿ ವಸ್ತು ಸಂಗ್ರಹಾಲಯ: http://www.indiatourism.com/andhra-pradesh-museums/victoria-jubilee-museum.html</ref>
=== ಆಹಾರ ಪದ್ಧತಿ ===
{{Main|Andhra cuisine}}
[[ಚಿತ್ರ:India food.jpg|thumb|left|ಇತರೆ ಭಾರತೀಯ ಆಹಾರಗಳೊಂದಿಗೆ ಬಡಿಸುವ ಹೈದರಾಬಾದಿ ಬಿರಿಯಾನಿ]]
ಆಂಧ್ರ ಪ್ರದೇಶದ ಆಹಾರ ಅಥವಾ ಅಡಿಗೆ ಪದ್ದತಿಯು [[ಭಾರತೀಯ ಆಹಾರ ಪದ್ಧತಿ|ಭಾರತದ ಆಹಾರ ಪದ್ಧತಿ]]ಗಳಲ್ಲೇ ಅತ್ಯಂತ ಮಸಾಲೆಪೂರಿತ ಆಹಾರ ಪದ್ಧತಿಯಾಗಿದೆ.{{Citation needed|date=February 2009}} ಭೌಗೋಳಿಕ ಪ್ರದೇಶ, ಜಾತಿ, ಸಂಪ್ರದಾಯ ಮುಂತಾದ ಅಂಶಗಳನ್ನು ಆಧರಿಸಿ ಆಂಧ್ರದ ಆಹಾರ ಪದ್ಧತಿಯಲ್ಲಿ ಹಲವು ವೈವಿಧ್ಯಗಳು ರೂಪುಗೊಂಡಿವೆ. [[ಭಾರತೀಯ ಉಪ್ಪಿನಕಾಯಿ|ಉಪ್ಪಿನಕಾಯಿ]]ಗಳು ಮತ್ತು [[ತೆಲುಗು]] ಭಾಷೆಯಲ್ಲಿ ''ಪಚ್ಚಡಿ '' ಎಂದು ಕರೆಯಲ್ಪಡುವ [[ಚಟ್ನಿ|ಚಟ್ನಿಗಳು]] ವಿಶೇಷವಾಗಿ ಆಂಧ್ರ ಪ್ರದೇಶದ ಜನಪ್ರಿಯ ಖಾದ್ಯಗಳು. ಚಟ್ಟಿ ಮತ್ತು ಉಪ್ಪಿನಕಾಯಿಗಳಲ್ಲಿರುವ ವೈವಿಧ್ಯಗಳು ರಾಜ್ಯಕ್ಕೆ ಅನನ್ಯತೆಯನ್ನು ತಂದುಕೊಟ್ಟಿವೆ.[[ಟೊಮೇಟೊ|ಟೊಮ್ಯಾಟೊ]], [[ಬದನೆ|ಬದನೆಕಾಯಿ]](ನೆಲಗುಳ್ಳ), [[ದಾಸವಾಳ ಜಾತಿಯ (ಗಿಡ)|ದಾಸವಾಳ ಜಾತಿಯ]](ಗೊಂಗೂರ) ತರಕಾರಿಗಳೂ ಸೇರಿದಂತೆ ಹೆಚ್ಚೂ ಕಡಿಮೆ ಪ್ರತಿಯೊಂದು ತರಕಾರಿಗಳಿಂದ ಚಟ್ನಿಗಳನ್ನು ತಯಾರಿಸಲಾಗುತ್ತದೆ.''[[ಆವಕಾಯ]]'' ಎಂದು ಕರೆಯಲ್ಪಡುವ ಮಾವಿನ ಉಪ್ಪಿನಕಾಯಿಯು, ಬಹುಶಃ ಆಂಧ್ರ ಪ್ರದೇಶದ ಉಪ್ಪಿನಕಾಯಿಗಳಲ್ಲೇ ಅತ್ಯಂತ ಜನಪ್ರಿಯ ಉಪ್ಪಿನಕಾಯಿ ಎನ್ನಬಹುದು.
[[ಅಕ್ಕಿ|ಅಕ್ಕಿಯು]] ಇಲ್ಲಿನ [[ಮುಖ್ಯ ಆಹಾರ|ಪ್ರಮುಖ ಆಹಾರ]]ವಾಗಿದ್ದು, ವಿವಿಧ ಬಗೆಯಲ್ಲಿ ಇದನ್ನು ಬಳಸಲಾಗುತ್ತದೆ. ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿಕೊಂಡು ಯಾವುದಾದರೊಂದು ರೀತಿಯ [[ಮೇಲೋಗರ|ಮೇಲೋಗರದ]] ಜೊತೆ ಸೇವಿಸಲಾಗುತ್ತದೆ; ಇಲ್ಲವೇ, [[ಕಲಸಿದ ಹಿಟ್ಟು (ಅಡಿಗೆಯ)|ಕಲಸಿದ ಹಿಟ್ಟು]] ಮಾಡಿಕೊಂಡು [[ತೆಳುವಾದ ಬಟ್ಟೆ|ತೆಳುವಾದ ಬಟ್ಟೆಯಂತೆ]] ಕಾಣುವ ಅಟ್ಟು (ಕಲಸಿದ ಹಿಟ್ಟು ಮತ್ತು ಹೆಸರುಕಾಳಿನ ಮಿಶ್ರಣದಿಂದ ತಯಾರಿಸುವ [[ಹೆಸರು ಕಾಳು ದೋಸೆ|ಪೆಸರಟ್ಟು]] ಎಂಬ ತಿಂಡಿ)ಅಥವಾ [[ದೋಸೆ]] ಎಂಬ ತಿಂಡಿಯನ್ನು ತಯಾರಿಸಲು ಬಳಸಲಾಗುವುದು.
[[ಮಾಂಸ]], [[ತರಕಾರಿ|ತರಕಾರಿಗಳು]], [[ಸೊಪ್ಪು ತರಕಾರಿ|ಸೊಪ್ಪು]]ಗಳೊಂದಿಗೆ ವಿವಿಧ ಸಾಂಬಾರ ಪದಾರ್ಥಗಳನ್ನು ([[ಮಸಾಲೆ]]) ಸೇರಿಸಿ ವೈವಿಧ್ಯಮಯ ರುಚಿಕಟ್ಟಾದ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ.
೧೪ನೇ ಶತಮಾನದಲ್ಲಿ [[ತೆಲಂಗಾಣ]] ಪ್ರದೇಶವನ್ನು ಪ್ರವೇಶಿಸಿದ್ದ ಮುಸ್ಲಿಮರ ಆಹಾರ ಪದ್ಧತಿಯಿಂದ ಹೈದರಾಬಾದಿ ಆಹಾರ ಪದ್ಧತಿಯು ಪ್ರಭಾವಿತಗೊಂಡಿದೆ.
ಬಹುತೇಕ ಆಹಾರ ವೈವಿಧ್ಯಗಳು ಮಾಂಸ ಸಂಬಂಧಿಯಾಗಿರುತ್ತವೆ.
ವಿಲಕ್ಷಣ ರೀತಿಯ ಮಸಾಲೆ ಪದಾರ್ಥಗಳು ಹಾಗೂ ''[[ತುಪ್ಪ]]'' ವನ್ನು (ಶೋಧಿಸಿದ ಬೆಣ್ಣೆ) ಧಾರಾಳವಾಗಿ ಬಳಸುವುದರಿಂದ ಈ ಆಹಾರಗಳು ರುಚಿಕರ ಮತ್ತು ಪರಿಮಳಯುಕ್ತವಾಗಿರುತ್ತವೆ. ಕುರಿ, ಕೋಳಿ ಮತ್ತು ಮೀನಿನ ಮಾಂಸಗಳು ಮಾಂಸಾಹಾರಿ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಬಳಕೆಯಾಗುತ್ತವೆ. ಹೈದರಾಬಾದಿ ಆಹಾರಗಳಲ್ಲಿ [[ಬಿರ್ಯಾನಿ|ಬಿರಿಯಾನಿಯು]] ಬಹುಶಃ ಅತ್ಯಂತ ವಿಶಿಷ್ಟ ಮತ್ತು ಜನಪ್ರಿಯ ಆಹಾರ ಎಂದು ಹೇಳಬಹುದು.
=== ನೃತ್ಯ ===
[[ಚಿತ್ರ:Kuchi pudi dancers.jpg|thumb|right|150px|ಆಂಧ್ರ ಪ್ರದೇಶದ ಸಾಂಪ್ರದಾಯಿಕ ನೃತ್ಯವಾದ ಕೂಚಿಪುಡಿ]]
ಆಂಧ್ರ ಪ್ರದೇಶದಲ್ಲಿ ಚಾಲ್ತಿಯಲ್ಲಿರುನ ನೃತ್ಯ ಪ್ರಕಾರಗಳ ಬಗೆಗೆ ಬರೆದ ಮೊದಲ ವ್ಯಕ್ತಿ ಜಯಪ ಸೇನಾನಿ ([[ಜಯಪ ನಾಯುಡು]]).<ref>''ನೃತ್ಯ ರತ್ನಾವಳಿ'' (http://www.telugupeople.com/discussion/article.asp?id=೧೧೧ {{Webarchive|url=https://web.archive.org/web/20110914085001/http://www.telugupeople.com/discussion/article.asp?id=%E0%B3%A7%E0%B3%A7%E0%B3%A7 |date=2011-09-14 }}</ref> ದೇಸಿ ಮತ್ತು ಮಾರ್ಗಿ ಪ್ರಕಾರದ ನೃತ್ಯಗಳೆರಡೂ ಇವರ 'ನೃತ್ಯ ರತ್ನಾವಳಿ' ಎಂಬ ಸಂಸ್ಕೃತ ಪ್ರಕರಣ ಗ್ರಂಥದಲ್ಲಿ ಸೇರ್ಪಡೆಗೊಂಡಿವೆ.
ಇದು ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಪೆರಾನಿ, ಪ್ರೇಂಖನ, ಶುದ್ಧ ನರ್ತನ, ಕಾರ್ಕರಿ, ರಾಸಕ, ದಂಡ ರಾಸಕ, ಶಿವ ಪ್ರಿಯ, ಕಂದುಕ ನರ್ತನ, ಭಂದಿಕಾ ನೃತ್ಯಂ, ಕರಣ ನೃತ್ಯಂ, ಚಿಂದು, ಗೊಂಡಾಲಿ, ಕೋಲಾಟಂ ಮುಂತಾದ ಜಾನಪದ ನೃತ್ಯ ಪ್ರಕಾರಗಳು ಇಲ್ಲಿ ವಿವರಿಸಲ್ಪಟ್ಟಿವೆ. ಮಾರ್ಗ ಮತ್ತು ದೇಸಿ, ತಾಂಡವ ಮತ್ತು ಲಾಸ್ಯ, ನಾಟ್ಯ ಹಾಗೂ ನೃತ್ಯವೆಂಬ ಪ್ರಕಾರಗಳ ನಡುವಿರುವ ವ್ಯತ್ಯಾಸಗಳ ಕುರಿತಾದ ವಿಚಾರಗಳನ್ನು ಮೊದಲ ಅಧ್ಯಾಯದಲ್ಲಿ ಲೇಖಕನು ಚರ್ಚಿಸುತ್ತಾನೆ. ಆಂಗಿಕಾಭಿನಯ, ಕಾರಿಗಳು, ಸ್ಥಾನಕಗಳು, ಮತ್ತು ಮಂಡಲಗಳ ಕುರಿತು ೨ ಮತ್ತು ೩ನೇ ಅಧ್ಯಾಯಗಳಲ್ಲಿ ವಿವರಿಸುತ್ತಾನೆ. ೪ನೇ ಅಧ್ಯಾಯದಲ್ಲಿ ಕರಣಗಳು, ಅಂಗಾಹಾರಗಳು ಮತ್ತು ರೇಚಕಗಳು ವಿವರಿಸಲ್ಪಟ್ಟಿವೆ. ಮುಂದಿನ ಅಧ್ಯಾಯಗಳಲ್ಲಿ ಅವನು ದೇಸಿ ನೃತ್ಯ ಪ್ರಕಾರಗಳ ಕುರಿತು ವಿವರಿಸಿದ್ದಾನೆ. ಕೊನೆಯ ಅಧ್ಯಾಯದಲ್ಲಿ ಕಲೆ ಮತ್ತು ನೃತ್ಯಾಭ್ಯಾಸದ ಕುರಿತು ಆತ ವಿವರಿಸುತ್ತಾನೆ.
ಆಂಧ್ರ ಪ್ರದೇಶದಲ್ಲಿ ಶಾಸ್ತ್ರೀಯ ನೃತ್ಯವು ಪುರುಷರು ಮತ್ತು ಮಹಿಳೆಯರಿಬ್ಬರಿಂದಲೂ ಅಭಿನಯಿಸಲ್ಪಡುತ್ತದೆ. ಆದರೂ ಮಹಿಳೆಯರು ಇದನ್ನು ಕಲಿಯಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. [[ಕೂಚಿಪೂಡಿ|ಕೂಚಿಪುಡಿಯು]] ರಾಜ್ಯದ ಅತ್ಯಂತ ಪರಿಚಿತ ಶಾಸ್ತ್ರೀಯ [[ಆಂಧ್ರ ಪ್ರದೇಶದ ನೃತ್ಯಪ್ರಕಾರಗಳು|ನೃತ್ಯ ಪ್ರಕಾರ]]ವಾಗಿದೆ.ರಾಜ್ಯದ ಇತಿಹಾಸದ ಆದ್ಯಂತವಾಗಿ ಅಸ್ಥಿತ್ವದಲ್ಲಿರುವ ಹಲವು ನೃತ್ಯ ಪ್ರಕಾರಗಳೆಂದರೆ, ಚೆಂಚು ಭಾಗೋತಂ, [[ಕೂಚಿಪೂಡಿ|ಕೂಚಿಪುಡಿ]], [[ಭಾಮಕಲಾಪಂ|ಭಾಮಕಲಾಪಮ್]], [[ಬುರ್ರ ಕಥಾ|ಬುರ್ರಕಥಾ]], [[ವೀರನಾಟ್ಯಂ]], [[ಬುಟ್ಟ ಬೊಮ್ಮಲು|ಬುಟ್ಟು ಬೊಮ್ಮಲು]], [[ದಪ್ಪು]], [[ತಪ್ಪೀಟ ಗುಲ್ಲು|ತಪ್ಪೆಟ ಗುಲ್ಲು]], [[ಲಂಬಾಡಿ]], ಬೊನಾಲು, [[ಧಿಂಸ]], [[ಕೋಲಾಟಂ]] ಮತ್ತು ಚಿಂಡು.
== ಹಬ್ಬಗಳು ==
* ಜನವರಿಯಲ್ಲಿ [[ಮಕರ ಸಂಕ್ರಾಂತಿ|ಸಂಕ್ರಾಂತಿ]].
* ಫೆಬ್ರವರಿ/ಮಾರ್ಚ್ನಲ್ಲಿ [[ಮಹಾ ಶಿವರಾತ್ರಿ|ಮಹಾಶಿವರಾತ್ರಿ]].
*
ಮಾರ್ಚ್ನಲ್ಲಿ
[[ಹೋಳಿ]]
* ಮಾರ್ಚ್/ಏಪ್ರಿಲ್ನಲ್ಲಿ [[ಯುಗಾದಿ|ಉಗಾದಿ]] ಅಥವಾ ತೆಲುಗು ಹೊಸವರ್ಷ
* ಉಗಾದಿ ಹಬ್ಬದ ೯ ದಿನಗಳ ನಂತರ ಮಾರ್ಚ್/ಏಪ್ರಿಲ್ನಲ್ಲಿ [[ಶ್ರೀ ರಾಮ ನವಮಿ|ಶ್ರೀರಾಮನವಮಿ]] ಆಚರಿಸಲ್ಪಡುತ್ತದೆ.
* ಆಗಷ್ಟ್ನಲ್ಲಿ [[ವರಮಹಾಲಕ್ಷ್ಮಿ ವ್ರತ|ವರಲಕ್ಷ್ಮಿ ವ್ರತಮ್]]
*
ಆಗಷ್ಟ್ನಲ್ಲಿ [[ರಾಖಿ ಪೂರ್ಣಿಮಾ|ರಾಖಿ ಪೂರ್ಣಿಮ]]
*
ಆಗಷ್ಟ್ನಲ್ಲಿ [[ಗಣೇಶ ಚತುರ್ಥಿ|ವಿನಾಯಕ ಚೌತಿ]]
*
ಸೆಪ್ಟೆಂಬರ್/ಅಕ್ಟೋಬರ್ನಲ್ಲಿ [[ವಿಜಯ ದಶಮಿ|ದಸರಾ]]
* ಆಶ್ವಯುಜ ಮಾಸದ ಶುಕ್ಲಪಕ್ಷದಲ್ಲಿನ ೩ನೇ ದಿನವಾದ [[ಅಟ್ಲ ತಡ್ಡೆ]] (ಗ್ರಿಗರಿ ಪಂಚಾಂಗದಲ್ಲಿ ಸೆಪ್ಟೆಂಬರ್/ಅಕ್ಟೋಬರ್ ತಿಂಗಳಲ್ಲಿ ಬರುತ್ತದೆ)
* [[ವಿಜಯ ದಶಮಿ|ದಸರಾ]] ಹಬ್ಬದ ೨೦ ದಿನಗಳ ನಂತರ ಅಕ್ಟೋಬರ್/ನವೆಂಬರ್ನಲ್ಲಿ ಬರುವ [[ದೀಪಾವಳಿ]].
* [[ಈದ್-ಉಲ್-ಫಿತರ್|ಈದ್-ಉಲ್-ಫಿತರ್]], [[ಬಕ್ರೀದ್|ಬಕ್ರೀದ್]], [[ಮೊಹರ್ರಂ|ಮೊಹರಂ]].
* [[ಶ್ರಾವಣ ಮಾಸ|ಶ್ರಾವಣಂನಲ್ಲಿ]] [[ಬೊನಾಲು|ಬೋನಾಲು]]
([[ತೆಲಂಗಾಣ]] ಪ್ರದೇಶದಲ್ಲಿ ಆಚರಿಸಲ್ಪಡುತ್ತದೆ.)
* [[ತೆಲಂಗಾಣ]] ಪ್ರಾಂತ್ಯದಲ್ಲಿ [[ವಿಜಯ ದಶಮಿ|ದಸರಾ]] ಹಬ್ಬದ [[ನವರಾತ್ರಿ|ದುರ್ಗಾಷ್ಟಮಿ ಸಮಯದಲ್ಲಿ ನವರಾತ್ರಿ ಎಂದು ಕರೆಯಲ್ಪಡುವ]], ೯ ದಿನಗಳವರೆಗೆ ಆಚರಿಸಲ್ಪಡುವ [[ಬಥುಕಮ್ಮ]] ಹಬ್ಬ.
* [[ನವ್ರೂಜ್|ನವ್ರೂಜ್]]
* [[ಕ್ರಿಸ್ಮಸ್|ಕ್ರಿಸ್ಮಸ್]]
== ಸಾಹಿತ್ಯ ==
[[ನನ್ನಯ್ಯ]], [[ತಿಕ್ಕನ]] ಮತ್ತು [[ಯೆರ್ರಾಪ್ರಗದ|ಯರ್ರಾಪ್ರಗದ]] ಎಂಬ ಕವಿತ್ರಯರು ಶ್ರೇಷ್ಠ ಮಹಾಕಾವ್ಯ ''[[ಮಹಾಭಾರತ]]'' ವನ್ನು ತೆಲುಗು ಭಾಷೆಗೆ ಅನುವಾದಿಸಿದರು. ಬಮ್ಮೆರ [[ಪೋತನ]] ಎಂಬ ಮತ್ತೋರ್ವ ಕವಿಯು ''ಶ್ರೀಮದ್ ಆಂಧ್ರ ಮಹಾ ಭಾಗವತಮು'' ಎಂಬ ಅತ್ಯುತ್ಕೃಷ್ಟ ಕೃತಿಯನ್ನು ರಚಿಸಿದ್ದು, ಇದು ವೇದವ್ಯಾಸರು [[ಸಂಸ್ಕೃತ|ಸಂಸ್ಕೃತದಲ್ಲಿ]] ಬರೆದ ''ಶ್ರೀ ಭಾಗವತಮ್'' ನ ತೆಲುಗು ಭಾಷಾಂತರವಾಗಿದೆ. ನನ್ನಯ್ಯನನ್ನು ''ಆದಿಕವಿ'' ಎಂದು ಕರೆಯಲಾಗಿದ್ದು, ರಾಜಮಹೇಂದ್ರವರಂ([[ರಾಜಮಂಡ್ರಿ]])ಯಿಂದ ಆಳ್ವಿಕೆ ನಡೆಸುತ್ತಿದ್ದ ರಾಜರಾಜನರೇಂದ್ರನು ಇವನ ಆಶ್ರಯದಾತನಾಗಿದ್ದನು. [[ವಿಜಯನಗರ|ವಿಜಯನಗರದ]] ಚಕ್ರವರ್ತಿ [[ಶ್ರೀಕೃಷ್ಣದೇವರಾಯ|ಕೃಷ್ಣದೇವರಾಯ]]ನು [[ಅಮುಕ್ತಮಾಲ್ಯದ]] ಎಂಬ ಕೃತಿಯನ್ನು ಬರೆದನು. [[ಕಡಪ]] ಪ್ರದೇಶದವನಾದ ತೆಲುಗು ಕವಿ [[ವೇಮನ|ವೇಮನಕೂಡಾ]] ತನ್ನ ತಾತ್ವಿಕ ಪದ್ಯಗಳಿಂದ ಪರಿಚಿತನಾಗಿದ್ದಾನೆ. [[ಕಂದುಕೂರಿ ವೀರೇಶಲಿಂಗಮ್|ಕಂದುಕೂರಿ ವೀರೇಶಲಿಂಗಮ್ರವರ]] ನಂತರದ ತೆಲುಗು ಸಾಹಿತ್ಯವನ್ನು ಆಧುನಿಕ ಸಾಹಿತ್ಯ ಎಂದು ಕರೆಯಲಾಗುತ್ತದೆ. ''ಗದ್ಯ ಟಿಕ್ಕಣ'' ಎಂದೇ ಹೆಸರಾದ ಸತ್ಯವತಿ ಚರಿತಂರವರು ''ಸತ್ಯವತಿ ಚರಿತಂ'' ಎಂಬ ತೆಲುಗು ಭಾಷೆಯ ಸಾಮಾಜಿಕ ಕಾದಂಬರಿಯನ್ನು ಬರೆದಿದ್ದಾರೆ. ಇತರೆ ಆಧುನಿಕ ಬರಹಗಾರರಲ್ಲಿ, [[ಜ್ಞಾನಪೀಠ ಪ್ರಶಸ್ತಿ|ಜ್ಷಾನಪೀಠ ಪ್ರಶಸ್ತಿ]] ವಿಜೇತರುಗಳಾದ [[ವಿಶ್ವನಾಥ ಸತ್ಯನಾರಾಯಣ|ಶ್ರೀ ವಿಶ್ವನಾಥ ಸತ್ಯನಾರಾಯಣ]] ಮತ್ತು [[ಸಿ. ನಾರಾಯಣ ರೆಡ್ಡಿ|ಡಾ.ಸಿ. ನಾರಾಯಣ ರೆಡ್ಡಿ]]ಯವರುಗಳು ಸೇರಿದ್ದಾರೆ. ಆಂಧ್ರ ಪ್ರದೇಶದ ಸ್ಥಳೀಕ ಮತ್ತು ಕ್ರಾಂತಿಕಾರಿ ಕವಿ [[ಶ್ರೀ ಶ್ರೀ ರವಿ ಶಂಕರ್|ಶ್ರೀ ಶ್ರೀಯವರು]] ತೆಲುಗು ಸಾಹಿತ್ಯಕ್ಕೆ ಹೊಸ ರೂಪದ ಅಭಿವ್ಯಕ್ತಿವಾದವನ್ನು ಪರಿಚಯಿಸಿದರು.
ಶ್ರೀ ಪುಟ್ಟಪರ್ತಿ ನಾರಾಯಣಚಾರ್ಯುಲುರವರು ಕೂಡ ತೆಲುಗು ಸಾಹಿತ್ಯದ ವಿದ್ವಾಂಸ ಕವಿಗಳಲ್ಲಿ ಒಬ್ಬರು. ಇವರು ವಿಶ್ವನಾಥ ಸತ್ಯನಾರಾಯಣರ ಸಮಕಾಲೀನರಾಗಿದ್ದರು. ಶ್ರೀ ಪುಟ್ಟಪರ್ತಿ ನಾರಾಯಣಾಚಾರ್ಯಲುರವರು ದ್ವಿಪದಿ ಕಾವ್ಯವಾಗಿ ''ಶಿವತಾಂಡವಂ'', ''ಪಾಂಡುರಂಗ ಮಹಾತ್ಯಂ'', ಎಂಬ ಜನಪ್ರಿಯ ಪುಸ್ತಕಗಳನ್ನು ಬರೆದರು.{{Clarifyme|date=December 2008}}
[[ಶ್ರೀರಂಗಂ ಶ್ರೀನಿವಾಸರಾವ್]], [[ಗುರ್ರಂ ಜಾಷುವಾ|ಗುರ್ರಂ ಜಷುವಾ]], [[ಚಿನ್ನಯ ಸೂರಿ]], [[ವಿಶ್ವನಾಥ ಸತ್ಯನಾರಾಯಣ]] ಮತ್ತು [[ವಡ್ಡೇರ ಚಂಡಿದಾಸ್|ವದ್ದೇರ ಚಂಡಿದಾಸ್]] ಮುಂತಾದವರು ಆಂಧ್ರ ಪ್ರದೇಶದ ಇತರೆ ಜನಪ್ರಿಯ ಲೇಖಕರಾಗಿದ್ದಾರೆ.
=== ಚಲನಚಿತ್ರಗಳು ===
{{Main|Telugu Cinema}}
ಆಂಧ್ರ ಪ್ರದೇಶ ಸುಮಾರು ೨೭೦೦ ಚಲನಚಿತ್ರ ಮಂದಿರಗಳನ್ನು ಹೊಂದಿದ್ದು, ಭಾರತದಲ್ಲೇ ಅತಿ ಹೆಚ್ಚು ಚಲನಚಿತ್ರ ಮಂದಿರಗಳನ್ನು ಹೊಂದಿರುವ ರಾಜ್ಯವಾಗಿದೆ.{{Citation needed|date=February 2007}} ರಾಜ್ಯವು ವರ್ಷವೊಂದಕ್ಕೆ ಸುಮಾರು ೨೦೦{{Citation needed|date=February 2007}} ಚಲನಚಿತ್ರಗಳನ್ನು ತಯಾರಿಸುತ್ತದೆ. ಭಾರತದಲ್ಲಿರುವ ಡಾಲ್ಬಿ ಡಿಜಿಟಲ್ ಥಿಯೇಟರ್ಗಳ ಪೈಕಿ ಸುಮಾರು ೪೦% (೯೩೦ರ ಪೈಕಿ ೩೩೦)ರಷ್ಟನ್ನು ಇದು ಹೊಂದಿದೆ.<ref>{{cite web|url=http://www.dtsonline.com/digitalcinema/find/index.php |title=DTS | Home |publisher=Dtsonline.com |date= |accessdate=2008-11-29}}</ref> ಈಗ ಇದು ಬೃಹತ್ ೩D ಪರದೆಯನ್ನೊಳಗೊಂಡ ಐಮ್ಯಾಕ್ಸ್ ಥಿಯೇಟರ್ ಒಂದನ್ನು ಹಾಗೂ ೩-೫ ಮಲ್ಟಿಪ್ಲೆಕ್ಸ್ಗಳನ್ನೂ ಹೊಂದಿದೆ. ಟಾಲಿವುಡ್ (ತೆಲುಗು ಚಿತ್ರರಂಗ) ಭಾರತದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ತಯಾರಿಸುತ್ತದೆ.
NTR ರವರು ಟಾಲಿವುಡ್ನ ದಂತಕತೆಯಾಗಿದ್ದಾರೆ.ಇವರು ತಮ್ಮ ಪಕ್ಷ ಸ್ಥಾಪಿಸಿದ ೯ ತಿಂಗಳಲ್ಲೇ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದರು. ಇದೊಂದು ವಿಶ್ವದಾಖಲೆ ಮತ್ತು ಈವರೆಗೆ ಯಾರೂ ಈ ಸಾಧನೆ ಮಾಡಿಲ್ಲ.
=== ಸಂಗೀತ ===
{{Main|Music of Andhra Pradesh}}
ರಾಜ್ಯವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. [[ಕರ್ನಾಟಕ ಸಂಗೀತದ ತ್ರಿಮೂರ್ತಿಗಳು]] ಎಂದೇ ಹೆಸರಾಗಿರುವ [[ತ್ಯಾಗರಾಜ|ತ್ಯಾಗರಾಜರು]], [[ಅನ್ನಮಾಚಾರ್ಯ|ಅನ್ನಮಾಚಾರ್ಯರು]], ಕ್ಷೇತ್ರಯ್ಯನವರೂ ಸೇರಿದಂತೆ ಭದ್ರಾಚಲ [[ರಾಮದಾಸು|ರಾಮದಾಸುರವರಂತಹ]] [[ಕರ್ನಾಟಕ ಸಂಗೀತ|ಕರ್ನಾಟಕ ಸಂಗೀತದ]] ಅನೇಕ ಪ್ರಸಿದ್ಧರು ತೆಲುಗು ಪರಂಪರೆಗೆ ಸೇರಿದವರು.
ಮಹಾನ್ ಮ್ಯಾಂಡೋಲಿನ್ ವಾದಕ [[ಮ್ಯಾಂಡೊಲಿನ್ ಶ್ರೀನಿವಾಸ್|ಮ್ಯಾಂಡೋಲಿನ್ ಶ್ರೀನಿವಾಸ್]] ಕೂಡ ಆಂಧ್ರ ಪ್ರದೇಶದವರು.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಹಾಡುಗಳೂ ಬಹಳ ಜನಪ್ರಿಯವಾಗಿವೆ.ಕರ್ನಾಟಕ ಸಂಗೀತದಲ್ಲಿ ಮತ್ತಷ್ಟು ರಾಗಗಳನ್ನು ಸೃಷ್ಟಿಸಿದ, ಕರ್ನಾಟಕ ಸಂಗೀತದ ಮಹಾನ್ ಗಾಯಕರಾದ ಶ್ರೀ [[ಮಂಗಳಂಪಲ್ಲಿ ಬಾಲಮುರಳಿಕೃಷ್ಣ]] ರವರು ಕೂಡ ತೆಲುಗು ಪರಂಪರೆಗೆ ಸೇರಿದವರು.
=== ಧರ್ಮ ===
ಎಲ್ಲ ಜಾತಿಗಳ [[ಹಿಂದೂ ಸಂತರು]] ಆಂಧ್ರ ಪ್ರದೇಶದಲ್ಲಿ ನೆಲೆ ಕಂಡಿದ್ದಾರೆ. ಸಂತ ಯೋಗಿ [[ಶ್ರೀ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿ|ಶ್ರೀ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿಯವರು]] ಹಿಂದುಳಿದ ವರ್ಗಕ್ಕೆ ಸೇರಿದ ಓರ್ವ ಪ್ರಮುಖ ವ್ಯಕ್ತಿಯಾಗಿದ್ದು, ವಿಶ್ವಬ್ರಾಹ್ಮಣ (ಅಕ್ಕಸಾಲಿಗ) ಜಾತಿಯಲ್ಲಿ ಜನಿಸಿದ್ದರೂ ಸಹ, ಬ್ರಾಹ್ಮಣ, [[ದಲಿತ#ಹಿಂದು ದಲಿತರು (ಹರಿಜನರು)|ಹರಿಜನ]] ಮತ್ತು ಮುಸ್ಲಿಂ ಅನುಯಾಯಿಗಳನ್ನು ಹೊಂದಿದ್ದರು.<ref>{{cite web |url=http://www.mihira.com/wisdommasters/veerabrahmam.htm |title=Sri Potuluri Veera Brahmendra Swami |publisher=Mihira.com |date= |accessdate=2008-11-29 |archive-date=2008-11-20 |archive-url=https://web.archive.org/web/20081120050546/http://www.mihira.com/wisdommasters/veerabrahmam.htm |url-status=dead }}</ref> ಬೆಸ್ತರಾಗಿದ್ದ ರಘು ಕೂಡ ಶೂದ್ರರಾಗಿದ್ದರು.<ref>{{cite web|url=http://www.telugubhakti.com/telugupages/Monthly/Bhaktas/content1.htm |title=Stories of Bhaktas — Fisherman Raghu |publisher=Telugubhakti.com |date= |accessdate=2008-11-29}}</ref> ಸಂತ ಕಕ್ಕಯ್ಯ ಚೂರ(ಚಮ್ಮಾರ) [[ದಲಿತ#ಹಿಂದು ದಲಿತರು (ಹರಿಜನರು)|ಹರಿಜನ]] ಸಂತರಾಗಿದ್ದರು.
ಆಧುನಿಕ ಕಾಲದ ಹಲವಾರು ಪ್ರಮುಖ ಹಿಂದೂ ಸಂತರು ಆಂಧ್ರ ಪ್ರದೇಶದಿಂದ ಬಂದಿದ್ದಾರೆ. ಅವರೆಂದರೆ, [[ದ್ವೈತಾದ್ವೈತ]] ತತ್ವವನ್ನು ಸ್ಥಾಪಿಸಿದ [[ನಿಂಬರ್ಕ]], [[ಭಾರತದ ಸ್ವಾತಂತ್ರ್ಯ ಚಳುವಳಿ|ಭಾರತ ಸ್ವಾತಂತ್ರ್ಯ]]ದ ಪ್ರತಿಪಾದನೆ ಮಾಡಿದ ತಾಯಿ ಮೀರಾ, ದೈವಾರಾಧನೆಯಲ್ಲಿ ಧಾರ್ಮಿಕ ಐಕ್ಯತೆಯನ್ನು ಪ್ರತಿಪಾದಿಸಿದ [[ಶ್ರೀ ಸತ್ಯ ಸಾಯಿ ಬಾಬ|ಶ್ರೀ ಸತ್ಯ ಸಾಯಿ ಬಾಬಾ]], ಸ್ವಾಮಿ ಸುಂದರ ಚೈತನ್ಯಾನಂದಜೀ ಮತ್ತು ಅರಬಿಂದೋ ಮಿಷನ್.
== ತೀರ್ಥಯಾತ್ರಾ ಮತ್ತು ಧಾರ್ಮಿಕ ಸ್ಥಳಗಳು ==
[[ಡೇವಿಡ್ ರಿಕಾರ್ಡೋ|thumb|right|250px|ತಿರುಮಲ ವೆಂಕಟೇಶ್ವರ ದೇವಸ್ಥಾನ, ತಿರುಪತಿಯಲ್ಲಿರುವ ಅತಿ ಮುಖ್ಯವಾದ ಯಾತ್ರಾಸ್ಥಳ]]
ಭಾರತದಾದ್ಯಂತ ಇರುವ ಹಿಂದೂಗಳಿಗೆ [[ತಿರುಮಲ-ತಿರುಪತಿ|ತಿರುಪತಿ ಅಥವಾ ತಿರುಮಲ]] ಒಂದು ಬಹು ಮುಖ್ಯ ಯಾತ್ರಾಸ್ಥಳವಾಗಿದೆ. ಇದು ಇಡೀ ಜಗತ್ತಿನಲ್ಲಿನ (ಯಾವುದೇ ಧಾರ್ಮಿಕ ನಂಬುಗೆಗೆ ಸೇರಿದವುಗಳ ಪೈಕಿ) ಅತಿ ಶ್ರೀಮಂತ ಯಾತ್ರಾನಗರವಾಗಿದೆ. ಇದರ ಮುಖ್ಯ ದೇವಸ್ಥಾನವು [[ವೆಂಕಟೇಶ್ವರ|ವೆಂಕಟೇಶ್ವರದೇವರಿಗೆ]] ಸಮರ್ಪಣೆಯಾಗಿದೆ. ತಿರುಪತಿಯು [[ಚಿತ್ತೂರ್|ಚಿತ್ತೂರ್]] ಜಿಲ್ಲೆಯಲ್ಲಿದೆ. [[ಸತ್ಯನಾರಾಯಣ ಸ್ವಾಮಿ]] ದೇವಸ್ಥಾನ ಪೂರ್ವ ಗೋದಾವರಿ ಜಿಲ್ಲೆಯ ಅಣ್ಣಾವರಂನಲ್ಲಿರುವ ಪ್ರಸಿದ್ಧ ದೇವಸ್ಥಾನ.
[[ಸಿಂಹಾಚಲಂ]] ಮತ್ತೊಂದು ಜನಪ್ರಿಯ ಯಾತ್ರಾ ಸ್ಥಳವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಸಿಂಹಾಚಲಂ ಯಾತ್ರಾಸ್ಥಳವು, [[ಪ್ರಹ್ಲಾದ|ಪ್ರಹ್ಲಾದನನ್ನು]] ಅವನ ದುಷ್ಠ ತಂದೆ [[ಹಿರಣ್ಯಕಶಿಪು|ಹಿರಣ್ಯಕಶಿಪುವಿನಿಂದ]] ರಕ್ಷಿಸಿದ ಸಂರಕ್ಷಕ ದೇವರಾದ [[ನರಸಿಂಹ|ನರಸಿಂಹನ]] ನೆಲೆಬೀಡಾಗಿತ್ತು ಎಂದು ಪುರಾಣದಲ್ಲಿ ಹೇಳಲಾಗಿದೆ. [[ವಿಜಯವಾಡ]] ನಗರದಲ್ಲಿರುವ [[ಕನಕದುರ್ಗ ದೇವಸ್ಥಾನ|ಕನಕ ದುರ್ಗ ದೇವಸ್ಥಾನ]] ಆಂಧ್ರ ಪ್ರದೇಶದ ಜನಪ್ರಿಯ ದೇವಸ್ಥಾನಗಳಲ್ಲೊಂದು. [[ಶ್ರೀ ಕಾಳಹಸ್ತಿ]] ಯು ಬಹಳ ಮುಖ್ಯವಾದ ಪ್ರಾಚೀನ ಶಿವನ ದೇವಸ್ಥಾನಗಳಲ್ಲಿ ಒಂದಾಗಿದ್ದು, [[ಚಿತ್ತೂರ್|ಚಿತ್ತೂರ್]] ಜಿಲ್ಲೆಯಲ್ಲಿನ [[ಸ್ವರ್ಣಮುಖಿ]] ನದಿಯ ದಡದಲ್ಲಿದೆ.
ಸಿಂಹಾಚಲಂ ಕ್ಷೇತ್ರವು ಪರ್ವತದ ಮೇಲಿರುವ ಪುಣ್ಯಕ್ಷೇತ್ರವಾಗಿದ್ದು ವಿಶಾಖಪಟ್ಟಣಂನಿಂದ ೧೬ ಕಿ.ಮೀ.ನಷ್ಟು ದೂರದಲ್ಲಿದೆ ಹಾಗೂ ನಗರದ ಉತ್ತರ ದಿಕ್ಕಿನಲ್ಲಿರುವ ಬೆಟ್ಟದ ಮತ್ತೊಂದು ಭಾಗದಲ್ಲಿದೆ. ಇದು ಅತಿ ಮನೋಹರ ಶಿಲ್ಪಕಲೆಯನ್ನು ಒಳಗೊಂಡ ಆಂಧ್ರ ಪ್ರದೇಶದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು, ದಟ್ಟವಾದ ಅರಣ್ಯದಿಂದ ಆವೃತವಾಗಿರುವ ಬೆಟ್ಟಗಳ ಮಧ್ಯದಲ್ಲಿ ಸ್ಥಾಪಿತಗೊಂಡಿದೆ. ಅತ್ಯಂತ ಸುಂದರವಾಗಿ ಕೆತ್ತಲಾಗಿರುವ ೧೬ ಕಂಬಗಳ ನಾಟ್ಯ ಮಂಟಪ ಮತ್ತು ೯೬ ಕಂಬಗಳ ಕಲ್ಯಾಣ ಮಂಟಪಗಳು ದೇವಸ್ಥಾನದ ಉತ್ಕೃಷ್ಠ ವಾಸ್ತುಶೈಲಿಗೆ ಸಾಕ್ಷಿಯಾಗಿವೆ. ತನ್ನ ಸ್ಥಾನವನ್ನು ಅಲಂಕರಿಸಿರುವ ದೈವವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಗೆ ಚಂದನದ ದಪ್ಪ ಲೇಪನವನ್ನು ಮಾಡಲಾಗಿದೆ. ಇದು, [[ವಿಷ್ಣು|ವಿಷ್ಣುವಿನ]] ಅವತಾರಗಳಲ್ಲೊಂದಾದ [[ನರಸಿಂಹ ಸ್ವಾಮಿ|ನರಸಿಂಹ ಸ್ವಾಮಿಗೆ]] ಸಮರ್ಪಿಸಲಾದ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು, [[ಚೋಳ|ಚೋಳರ]] ದೊರೆಯಾದ ಕುಲೋತ್ತುಂಗ ೧೧ ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿದ. ಒಡಿಶಾದ ಗಜಪತಿ ದೊರೆಗಳ ಮೇಲೆ ವಿಜಯಿಯಾಗಿ ಹೊರಹೊಮ್ಮಿದ ನೆನಪಿಗಾಗಿ [[ಕೃಷ್ಣದೇವರಾಯ|ಶ್ರೀ ಕೃಷ್ಣ ದೇವರಾಯ]]ನು ಸ್ಥಾಪಿಸಿದ ವಿಜಯ ಸ್ಢಂಭ ಇಲ್ಲಿದೆ. ಈ ದೇವಸ್ಥಾನದಲ್ಲಿ ಪ್ರಾಚೀನ [[ತೆಲುಗು]] ಶಾಸನಗಳನ್ನು ಕಾಣಬಹುದು. ಈ ದೇವಾಲಯವು ಭಾರತದಲ್ಲಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೊಂದು.ಇದು ದ್ರಾವಿಡ (ದಕ್ಷಿಣ ಭಾರತದ) ವಾಸ್ತುಶೈಲಿಯನ್ನು ಹೊಂದಿದೆ.ನೆರೆಹಾವಳಿ, ಚಂಡಮಾರುತ, ಭೂಕಂಪ ಮತ್ತು ಸುನಾಮಿಯಂತಹ ನೈಸರ್ಗಿಕ ವಿಕೋಪಗಳಿಂದ ವೈಜಾಗ್ನ್ನು ಈ ಸ್ವಾಮಿಯು ರಕ್ಷಿಸುತ್ತಿದ್ದಾನೆ ಎಂಬ ಜನಪ್ರಿಯ ನಂಬಿಕೆಯು ಇಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಇಲ್ಲಿಯವರೆಗೂ ನೈಸರ್ಗಿಕ ವಿಕೋಪಗಳಿಂದ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲ. ಪತಿ-ಪತ್ನಿಯಾಗ ಬಯಸುವ ಜೋಡಿಗಳು ಮದುವೆಗೆ ಮುಂಚೆ ಈ ದೇವಸ್ಥಾನಕ್ಕೆ ಹೋಗುವುದು ಒಂದು ವಾಡಿಕೆಯಾಗಿದೆ. ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂದಣಿಯಿರುವ ಕೂಡಿರುವ ದೇವಸ್ಥಾನಗಳಲ್ಲಿ ಈ ದೇವಸ್ಥಾನವೂ ಒಂದು.
[[ಚಿತ್ರ:Hussain Sagar lake, Hyderabad.jpg|thumb|250px|right|ಹುಸೇನ್ ಸಾಗರ್ ಸರೋವರದ ಮೇಲಿನ ಬುದ್ಧನ ವಿಗ್ರಹ]]
[[ಶ್ರೀ ಶೈಲಂ]], ಆಂಧ್ರ ಪ್ರದೇಶದ ಮತ್ತೊಂದು ಮಹತ್ವದ ದೇವಾಲಯವಾಗಿದ್ದು, ಇದೂ ಕೂಡ ರಾಷ್ಟ್ರಮಟ್ಟದ ಪ್ರಾಮುಖ್ಯತೆಯನ್ನು ಪಡೆದಿದೆ. ಇದು [[ಶಿವ]] ದೇವರಿಗೆ ಸಮರ್ಪಿಸಲ್ಪಟ್ಟಿರುವ ದೇವಾಲಯವಾಗಿದೆ. ವಿವಿಧ [[ಜ್ಯೋತಿರ್ಲಿಂಗಂ|ಜ್ಯೋತಿರ್ಲಿಂಗ]]ಗಳಿರುವ ಹಲವು ಸ್ಥಳಗಳ ಪೈಕಿ ಇದೂ ಒಂದಾಗಿದೆ. ''[[ಸ್ಜಂದ ಪುರಾಣ|ಸ್ಕಂದ ಪುರಾಣ]]'' ದಲ್ಲಿ "ಶ್ರೀ ಶೈಲ ಕಾಂಡಂ' ಎಂಬ ಅಧ್ಯಾಯವಿದ್ದು ಅದು ಸಂಪೂರ್ಣವಾಗಿ ಈ ಸ್ಥಳಕ್ಕೇ ಸಂಬಂಧಿಸಿದ್ದಾಗಿದೆ. ಈ ಅಧ್ಯಾಯದಲ್ಲಿ ಈ ಸ್ಥಳದ ಪ್ರಾಚೀನ ಮೂಲದ ಬಗ್ಗೆ ಉಲ್ಲೇಖವಿದೆ. ಕಳೆದ ಸಹಸ್ರಮಾನದ ತಮಿಳು ಸಂತರು ಈ ದೇವಾಲಯದ ಕುರಿತು ಹಾಡಿ ಹೊಗಳಿರುವುದರಿಂದಲೂ ಇದರ ಪ್ರಾಚೀನತೆಯು ದೃಢಪಟ್ಟಿದೆ.[[ಆದಿ ಶಂಕರ|ಆದಿ ಶಂಕರರು]] ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಮತ್ತು ಆ ಸಮಯದಲ್ಲಿಯೇ ತಮ್ಮ "''[[ಶಿವಾನಂದ ಲಹರಿ]]'' "ಯನ್ನು ರಚಿಸಿದರು ಎಂದು ಹೇಳಲಾಗಿದೆ. ಶಿವನ ಪವಿತ್ರ ಬಸವನಾಗಿರುವ ವೃಷಭನು, ಶಿವ ಮತ್ತು [[ಪಾರ್ವತಿ|ಪಾರ್ವತಿಯರು]] ತನ್ನ ಎದುರು ಮಲ್ಲಿಕಾರ್ಜುನ ಮತ್ತು ಭ್ರಮರಾಂಬರ ರೂಪದಲ್ಲಿ ಕಾಣಿಸಿಕೊಳ್ಳುವವರೆಗೂ [[ಮಹಾಕಾಳಿ]] ದೇವಸ್ಥಾನದಲ್ಲಿ ತಪಸ್ಸು ಮಾಡಿದ್ದ ಎಂಬುದೊಂದು ನಂಬಿಕೆಯಿದೆ. ಈ ದೇವಸ್ಥಾನವು ೧೨ ಪವಿತ್ರ [[ಜ್ಯೋತಿರ್ಲಿಂಗಗಳು|ಜ್ಯೋತಿರ್ಲಿಂಗ]]ಗಳಲ್ಲಿ ಒಂದಾಗಿದೆ. [[ರಾಮ|ಶ್ರೀರಾಮ ಸ್ವಾಮಿ]]ಯು ಸ್ವತಃ ಇಲ್ಲಿ ಸಹಸ್ರಲಿಂಗಗಳನ್ನು ಪ್ರತಿಷ್ಠಾಪಿಸಿದ; ಜೊತೆಗೆ ಪಾಂಡವರು ಪಂಚಪಾಂಡವ ಲಿಂಗಗಳನ್ನು ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಶ್ರೀ ಶೈಲಂ ಕ್ಷೇತ್ರವು [[ಕರ್ನೂಲ್]] ಜಿಲ್ಲೆಯಲ್ಲಿದೆ.
[[ಚಿತ್ರ:vb211.jpg|thumb|left|250px|ಸಿಂಹಾಚಲಂ ದೇವಸ್ತಾನದಲ್ಲಿನ ಮಂಪಟ]]
[[ಭದ್ರಾಚಲಂ]] ಕ್ಷೇತ್ರವು, ಶ್ರೀರಾಮನ ದೇವಸ್ಥಾನ ಮತ್ತು [[ಗೋದಾವರಿ]] ನದಿಗಾಗಿ ಹೆಸರುವಾಸಿಯಾಗಿದೆ. ಶ್ರೀರಾಮನನ್ನು ಕುರಿತು ಅವನ ಪರಮ ಭಕ್ತನಾದ ರಾಮದಾಸು(ಮೂಲದಲ್ಲಿ-[[ಕಂಚೆರ್ಲ ಗೋಪಣ್ಣ|ಕಂಚೇರ್ಲ ಗೋಪಣ್ಣ]]) ತನ್ನ ಭಕ್ತಿಗೀತೆಗಳನ್ನು ಬರೆದದ್ದು ಇದೇ ಸ್ಥಳದಲ್ಲಿ. [[ತ್ರೇತಾಯುಗ|ತ್ರೇತಾಯುಗದಲ್ಲಿ]] ಶ್ರೀರಾಮನು ಇದೇ ಗೋದಾವರಿ ನದಿಯ ದಡದಲ್ಲಿ ಕೆಲವು ವರ್ಷಗಳ ಕಾಲ ತಂಗಿದ್ದನು ಎಂಬ ನಂಬಿಕೆಯಿದೆ. ಭದ್ರ ಎಂಬ ಒಂದು ಪರ್ವತವು ಸುದೀರ್ಘವಾದ ತಪಸ್ಸಿನ ನಂತರ, ತನ್ನ ಮೇಲೆಯೇ ಚಿರಕಾಲ ನೆಲೆಸುವಂತೆ ಶ್ರೀರಾಮನನ್ನು ಕೋರಿತು ಎಂಬುದಾಗಿ ಒಂದು ದಂತಕಥೆಯಿದೆ. [[ರಾಮ ದೇವರು|ಶ್ರೀರಾಮ]] ನು ಪತ್ನಿ [[ಸೀತೆ]] ಮತ್ತು ಸಹೋದರ [[ಲಕ್ಷ್ಮಣ|ಲಕ್ಷ್ಮಣರೊಡಗೂಡಿ]] ಭದ್ರಗಿರಿಯಲ್ಲಿಯೇ ನೆಲೆಸುವುದಾಗಿ ಹೇಳಿದನು ಎಂದು ಪ್ರತೀತಿಯಿದೆ. ಭದ್ರಾಚಲಂ ಕ್ಷೇತ್ರವು [[ಖಮ್ಮಮ್ ಜಿಲ್ಲೆ|ಖಮ್ಮಮ್ ಜಿಲ್ಲೆ]]ಯಲ್ಲಿದೆ. ೧೭ನೇ ಶತಮಾನದಲ್ಲಿ ತಾನಿಶನ ಆಳ್ವಿಕೆಯ ಕಾಲದಲ್ಲಿ ಗೋಪಣ್ಣನು ಜನರಿಂದ ದೇಣಿಗೆ ಸಂಗ್ರಹಿಸಿ ರಾಮನಿಗಾಗಿ ಈ ದೇವಸ್ಥಾನವನ್ನು ನಿರ್ಮಿಸಿದನು. ಅವನು ರಾಮ-ಸೀತಾರ ಕಲ್ಯಾಣವನ್ನು ಆಚರಿಸಲು ಆರಂಭಿಸಿದನು. ಆಗಿನಿಂದ ಪ್ರತಿವರ್ಷ [[ಶ್ರೀ ರಾಮ ನವಮಿ|ಶ್ರೀರಾಮ ನವಮಿ]]ಯನ್ನು ಆಚರಿಸಲಾಗುತ್ತಿದೆ. ಭದ್ರಾಚಲಂನಲ್ಲಿ ನಡೆಯುವ ಈ ಆಚರಣೆಗೆ ಆಂಧ್ರ ಪ್ರದೇಶ ಸರ್ಕಾರವು ಪ್ರತಿ ವರ್ಷವೂ ಮುತ್ತುಗಳನ್ನು ಕಳಿಸುತ್ತದೆ.
[[ಬಸರ್-ಸರಸ್ವತಿ ದೇವಸ್ಥಾನ|ಬಸರ್-ಸರಸ್ವತಿ ದೇವಸ್ಥಾನವು]], ವಿದ್ಯಾದೇವತೆ ಸರಸ್ವತಿಯ ಮತ್ತೊಂದು ಪ್ರಸಿದ್ಧ ಸ್ಥಳ. ಬಸರಾ ಕ್ಷೇತ್ರವು [[ಅದಿಲಾಬಾದ್]] ಜಿಲ್ಲೆಯಲ್ಲಿದೆ. [[ಯಾಗಂಟಿ ಗುಹೆಗಳು]] ಕೂಡ ಆಂಧ್ರ ಪ್ರದೇಶದ ಮತ್ತೊಂದು ಬಹುಮುಖ್ಯ ಯಾತ್ರಾ ಸ್ಥಳವಾಗಿದೆ. ಮಹಾನಂದಿಯನ್ನು ಹೊರತುಪಡಿಸಿ ಕರ್ನೂಲ್ ಜಿಲ್ಲೆಯು ಮತ್ತೊಂದು ಯಾತ್ರಾ ಕೇಂದ್ರವಾಗಿದ್ದು ಹಸಿರಿನಿಂದ ಕೂಡಿದೆ.ಪ್ರಸಿದ್ಧ [[ಹಿಂದೂ ಧರ್ಮ|ಹಿಂದೂ]] [[ಬಿರ್ಲಾ ಮಂದಿರ್, ಹೈದರಾಬಾದ್|ಬಿರ್ಲಾ ಮಂದಿರ]], ಮತ್ತು [[ರಾಮಪ್ಪ ದೇವಸ್ಥಾನ]], [[ಇಸ್ಲಾಂ ಧರ್ಮ|ಮುಸ್ಲಿಂರ]] [[ಮೆಕ್ಕ ಮಸೀದಿ|ಮೆಕ್ಕಾ ಮಸೀದಿ]] ಮತ್ತು [[ಚಾರ್ಮಿನಾರ್]], ಜೊತೆಗೆ [[ಹುಸೇನ್ ಸಾಗರ್|ಹುಸೇನ್ ಸಾಗರ್ ಜಲಾಶಯ]]ದ ಮೇಲಿರುವ [[ಗೌತಮ ಬುದ್ಧ|ಬುದ್ಧ]]ನ ಪ್ರತಿಮೆ ಮುಂತಾದುವುಗಳು ಆಂಧ್ರ ಪ್ರದೇಶದ ಮನಮೋಹಕ ಧಾರ್ಮಿಕ ಸ್ಮಾರಕಗಳಾಗಿವೆ.
[[ಚಿತ್ರ:Ramappa1.jpg|thumb|right|250px|ರಾಮಪ್ಪ ದೇವಸ್ಥಾನ]]
ಕನಕದುರ್ಗ ದೇವಸ್ಥಾನವು ಭಾರತದ ಆಂಧ್ರ ಪ್ರದೇಶದಲ್ಲಿನ ಮತ್ತೊಂದು ಪ್ರಖ್ಯಾತ ದೇವಸ್ಥಾನವಾಗಿದೆ.ಕೃಷ್ಣಾ ನದಿಯ ದಂಡೆಯ ಮೇಲಿರುವ ವಿಜಯವಾಡ ನಗರದ ಇಂದ್ರಕೀಲಾದ್ರಿ ಪರ್ವತದ ಮೇಲೆ ಈ ದೇವಸ್ಥಾನ ಸ್ಥಾಪಿತವಾಗಿದೆ. ಹಚ್ಚಹಸಿರಿನಿಂದ ಆವೃತವಾಗಿರುವ ಈಗಿನ ವಿಜಯವಾಡ ಹಿಂದೆ ಕಲ್ಲುಬಂಡೆಗಳ ಪ್ರಾಂತ್ಯವಾಗಿದ್ದು, ದಿಣ್ಣೆಗಳಿಂದ ತುಂಬಿಕೊಂಡಿದ್ದರಿಂದಾಗಿ ಕೃಷ್ಣಾ ನದಿಯ ಹರಿವಿಗೆ ತಡೆಯೊಡ್ಡುತ್ತಿತ್ತು ಎಂದು ದಂತಕಥೆಯೊಂದು ಹೇಳುತ್ತದೆ. ಹೀಗಾಗಿ ಆ ಭೂಮಿಯು ವಾಸ ಮಾಡುವುದಕ್ಕಾಗಲೀ ವ್ಯವಸಾಯಕ್ಕಾಗಲೀ ಯೋಗ್ಯವಾಗಿರಲಿಲ್ಲ. ಶಿವನನ್ನು ಪ್ರಾರ್ಥಿಸಿದಾಗ, ಅವನ ಆಜ್ಞಾಪನೆಯ ಮೇರೆಗೆ ಪರ್ವತಗಳು ಕೃಷ್ಣಾ ನದಿ ಹರಿಯಲು ದಾರಿ ಮಾಡಿಕೊಟ್ಟವು.
ಅದು ಆದದ್ದೇ ತಡ!ಕೃಷ್ಣಾ ನದಿಯು ಬೆಟ್ಟದಲ್ಲಿ ಶಿವನು ಕೊರೆದ ಸುರಂಗಗಳ ಅಥವಾ "ಬೆಜ್ಜಮ್" ಮೂಲಕ ಯಾವುದೇ ಅಡೆತಡೆಯಿಲ್ಲದೆ ರಭಸದಿಂದ ಹರಿಯಲು ಪ್ರಾರಂಭಿಸಿತು. ಹೀಗೆ ಆ ಸ್ಥಳ ಬೆಜವಾಡ ಎಂಬ ಹೆಸರು ಪಡೆಯಿತು.
ಹಲವು ಪುರಾಣಗಳಲ್ಲೊಂದು ಈ ಸ್ಥಳದೊಂದಿಗೆ ಸಂಬಂಧ ಹೊಂದಿದೆ. ಅದೆಂದರೆ, ಶಿವನಿಂದ ವರ ಪಡೆಯಲು ಅರ್ಜುನ ಶಿವವನ್ನು ಕುರಿತು ಇಂದ್ರಕೀಲ ಪರ್ವತದ ಮೇಲೆ ಕುಳಿತು ತಪಸ್ಸು ಮಾಡಿದನು. ನಂತರ ಅರ್ಜುನ ಶಿವನಿಂದ ವರ ಪಡೆದು ವಿಜಯಿಯಾದನು. ಈ ನಗರಕ್ಕೆ "ವಿಜಯವಾಡ" ಎಂದು ಹೆಸರು ಬರಲು ಇದೇ ಕಾರಣವಾಯಿತು. ಅಸುರಾಧಿಪತಿ ಮಹಿಷಾಸುರನನ್ನು ಸಂಹರಿಸಿದ [[ಕನಕದುರ್ಗ]] ದೇವತೆಯ ವಿಜಯೋತ್ಸವದ ಕುರಿತು ಮತ್ತೊಂದು ಜನಪ್ರಿಯ ದಂತಕಥೆಯಿದೆ. ಒಂದಾನೊಂದು ಕಾಲದಲ್ಲಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನತೆಗೆ ರಾಕ್ಷಸರ ಕಾಟವು ಅತಿಯಾಗಿ ಸಹಿಸಲು ಅಸಾಧ್ಯವಾಗಿತ್ತು. ಆಗ ಇಂದ್ರಕೀಲ ಋಷಿಯು ಉಗ್ರವಾಗಿ ತಪಸ್ಸು ಮಾಡಿದನು. ಅದನ್ನು ಮೆಚ್ಚಿ ದೇವತೆಯು ಪ್ರತ್ಯಕ್ಷಳಾದಾಗ, ತನ್ನ ತಲೆಯ ಮೇಲೆ ಆಕೆಯು ನೆಲೆಸಿ ದುರುಳ ರಾಕ್ಷಸರಿಂದ ರಕ್ಷಣೆ ಒದಗಿಸಬೇಕೆಂದು ಋಷಿಯು ಪ್ರಾರ್ಥಿಸಿದನು. ಋಷಿಯ ಕೋರಿಕೆಯ ಮೇರೆಗೆ, ರಾಕ್ಷಸರನ್ನು ಸಂಹರಿಸಿದ ದುರ್ಗಾ ದೇವತೆಯು ಇಂದ್ರಕೀಲದಲ್ಲಿ ಶಾಶ್ವತವಾಗಿ ನೆಲೆಸಿದಳು.
ತದನಂತರ, ಅವಳು ರಾಕ್ಷಸದೊರೆ ಮಹಿಷಾಸುರರನ್ನು ಸಂಹರಿಸಿ ವಿಜಯವಾಡದ ಜನರನ್ನು ರಾಕ್ಷಸರ ದುಷ್ಟ ಹಿಡಿತದಿಂದ ರಕ್ಷಿಸಿದಳು. [[ನವರಾತ್ರಿ]] ಎಂದು ಕರೆಯುವ [[ದಸರ|ದಸರಾ]] ಹಬ್ಬದ ಸಮಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅವುಗಳಲ್ಲಿ ಅತ್ಯಂತ ಮಹತ್ವವಾದವುಗಳೆಂದರೆ, ಸರಸ್ವತಿ ಪೂಜೆ ಮತ್ತು ತೆಪ್ಪೋತ್ಸವ. ದುರ್ಗಾ ದೇವತೆಗಾಗಿ ದಸರಾ ಹಬ್ಬವನ್ನು ಇಲ್ಲಿ ಪ್ರತಿವರ್ಷವೂ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳು ಈ ವರ್ಣಮಯ ಆಚರಣೆಯಲ್ಲಿ ಭಾಗವಹಿಸಿ ನಂತರ [[ಕೃಷ್ಣಾ ನದಿ|ಕೃಷ್ಣಾ ನದಿಯಲ್ಲಿ]] ಮಿಂದು ಪುನೀತರಾಗುತ್ತಾರೆ.
== ಇತರೆ ಸಾಂಸ್ಕೃತಿಕ ವಿಚಾರಗಳು ==
[[ಬಾಪು (ಕಲಾವಿದ)|ಬಾಪೂರವರ]] ಚಿತ್ರಕಲೆ, [[ನಂದೂರಿ ಸುಬ್ಬರಾವ್]] ಅವರ ''ಯೆಂಕಿ ಪಾಟಲು'',(ಯೆಂಕಿ ಎಂದು ಕರೆಯಲ್ಪಡುವ ಅಗಸಗಿತ್ತಿಯ/ಅವಳ ಕುರಿತಾದ ಹಾಡುಗಳು), ತುಂಟ ಬುಡುಗು,([[ಮುಲ್ಲಪುಡಿ|ಮುಲ್ಲಪುಡಿಯವರಿಂದ]] ರಚನೆಯಾದ ಪಾತ್ರ), [[ಅನ್ನಮಾಚಾರ್ಯ|ಅನ್ನಮಯ್ಯನ]] ಹಾಡುಗಳು, [[ಆವಕಾಯ|ಅವಕಾಯ]] (ವಿಭಿನ್ನವಾದ ಒಂದು ಬಗೆಯ ಮಾವಿನ ಉಪ್ಪಿನ ಕಾಯಿ, ಇದರಲ್ಲಿ ಮಾವಿನ ಓಟೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿರುತ್ತದೆ), [[ಗೊಂಗೂರ|ಗೊಂಗುರ]] (ದಾಸವಾಳದ ಜಾತಿಯ ಗಿಡದಿಂದ ಮಾಡಲಾದ [[ಚಟ್ನಿ]]), ''ಅಟ್ಲ ತಡ್ಡಿ'' (ಹದಿಹರೆಯದ ಹುಡುಗಿಯರಿಗೆಂದೇ ಆಚರಿಸಲಾಗುವ ವಿಶೇಷವಾದ ಋತುಕಾಲಿಕ ಹಬ್ಬ.) ಗೋದಾವರಿ ನದಿಯ ದಂಡೆಗಳು, ''ದೂಡು ಬಸವಣ್ಣ'' (ಸುಗ್ಗಿಯ ಹಬ್ಬವಾದ ಸಂಕ್ರಾಂತಿಯ ಸಮಯದಲ್ಲಿ ಸಾಂಪ್ರದಾಯಿಕ ಬಸವನನ್ನು ಸಿಂಗರಿಸಿ ಮನೆ ಮನೆಗೆ ಕರೆದೊಯ್ದು ಪ್ರದರ್ಶಿಸುವ ಒಂದು ಆಚರಣೆ) ಮುಂತಾದ ಹಬ್ಬ-ಆಚರಣೆಗಳು ತೆಲುಗು [[ಮಕರ ಸಂಕ್ರಾಂತಿ|ಸಂಸ್ಕೃತಿ]]ಯನ್ನು ಶ್ರೀಮಂತಗೊಳಿಸಿವೆ. ಮೆದು ಕಲ್ಲುಗಳಲ್ಲಿ [[ಧಾರ್ಮಿಕ ದೃಷ್ಟಿಕೋನ|ವಿಗ್ರಹ]]ಗಳನ್ನು ಕೆತ್ತುವುದಕ್ಕೆ ಸಂಬಂಧಿಸಿದ ಶಿಲ್ಪಕಲಾ ಕುಶಲತೆಗಾಗಿ [[ದುರ್ಗಿ|ದುರ್ಗಿಯ]] ಹಳ್ಳಿಯು ಹೆಸರುವಾಸಿಯಾಗಿದೆ. ಈ ಮೆದುಕಲ್ಲುಗಳು ಕೆಟ್ಟ ಹವಾಗುಣಕ್ಕೆ ಗುರಿಯಾಗುವ ಸಂಭವವಿರುತ್ತವೆಯಾದ್ದರಿಂದ ಅವುಗಳನ್ನು ನೆರಳಿನಟ್ಟು ಪ್ರದರ್ಶಿಸುವುದು ಅಗತ್ಯವಾಗಿರುತ್ತದೆ. 'ಕಲಂಕಾರಿ' ಅತ್ಯಂತ ಪ್ರಾಚೀನ ಕಲಾಪ್ರಕಾರವಾಗಿದ್ದು, ಇದರ ಇತಿಹಾಸ ಹರಪ್ಪ ನಾಗರಿಕತೆಯವರೆಗೂ ಹೋಗುತ್ತದೆ. ಗೊಂಬೆ ತಯಾರಿಕೆಗೂ ಆಂಧ್ರ ಹೆಸರುವಾಸಿಯಾಗಿದೆ. ಗೊಂಬೆಗಳನ್ನು ಮರ, ಮಣ್ಣು, ಒಣ ಹುಲ್ಲು, ಮತ್ತು ಹಗುರವಾದ ಮಿಶ್ರಲೋಹಗಳಿಂದ ತಯಾರಿಸಲಾಗುತ್ತದೆ. ತಿರುಪತಿಯು ಮಂಜತ್ತಿಮರದ ಕೆತ್ತನೆಗಳಿಗೆ ಹೆಸರವಾಸಿಯಾಗಿದೆ. ಸಮೃದ್ಧವಾದ ಬಣ್ಣಗಳನ್ನು ಹೊಂದಿರುವ ಮಣ್ಣಿನ ಗೊಂಬೆಗಳಿಗೆ ಕೊಂಡಪಲ್ಲಿ ಹೆಸರುವಾಸಿಯಾಗಿದೆ. ವಿಶಾಖಪಟ್ಟಣದಲ್ಲಿ ನೆಲೆಗೊಂಡಿರುವ ಈಟಿಕೊಪ್ಪವು ಗೊಂಬೆಗಳಿಗೆ ಹೆಸರುವಾಸಿಯಾಗಿದೆ. ನಿರ್ಮಲ್ ಚಿತ್ರಕಲೆಯು ಅಭಿವ್ಯಕ್ತಿಗೆ ಒತ್ತುಕೊಡುವ ಪ್ರಕಾರವಾಗಿದ್ದು ಅವುಗಳನ್ನು ಸಾಮಾನ್ಯವಾಗಿ ಕಪ್ಪು ಹಿನ್ನೆಲೆಯುಳ್ಳ ಮಾಧ್ಯಮದ ಮೇಲೆ ಚಿತ್ರಿಸಲಾಗುತ್ತದೆ. ಕಥಾ ನಿರೂಪಣಾ ಪ್ರಕಾರಕ್ಕೆ ಆಂಧ್ರದಲ್ಲಿ ತನ್ನದೇ ಆದ ಒಂದು ಸ್ಥಾನವಿದೆ. 'ಯಕ್ಷಗಾನಂ', 'ಬುರ್ರ ಕಥಾ' (ಸಾಮಾನ್ಯವಾಗಿ ಮೂರು ಜನರಿಂದ ಮಾಡುವಂಥಾದ್ದಾಗಿದ್ದು, ಕಥೆಯನ್ನು ಹೇಳಲು ಮೂರು ವಿಭಿನ್ನ ಸಂಗೀತ ವಾದ್ಯಗಳನ್ನು ಬಳಸಿಕೊಳ್ಳಲಾಗುತ್ತದೆ), 'ಜಂಗಮ ಕಥಾಲು', 'ಹರಿ ಕಥಾಲು', 'ಚೆಕ್ಕ ಭಜನ', 'ಉರುಮುಲ ನಾಟ್ಯಂ'(ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಆಚರಿಸಲಾಗುವ ನೃತ್ಯವಾಗಿದ್ದು, ಭಾರೀ ಸಂಗೀತದ ಲಯಕ್ಕೆ ನೃತ್ಯಗಾರರ ತಂಡವು ವೃತ್ತಾಕಾರದಲ್ಲಿ ಕುಣಿಯುತ್ತದೆ), 'ಘಟ ನಾಟ್ಯಂ'(ಒಬ್ಬರ ತಲೆಯ ಮೇಲೆ ಮಣ್ಣಿಯ ಮಡಕೆಯನ್ನು ಇಟ್ಟು ಕುಣಿಯುವ ಪ್ರದರ್ಶನ ಕಲೆ) ಇವೆಲ್ಲವೂ ಪ್ರಖ್ಯಾತ ವಿಶಾಖಾ ಉತ್ಸವದಲ್ಲಿ ಆಚರಿಸಲಾಗುವ ಜಾನಪದ ನೃತ್ಯ ಪ್ರಕಾರಗಳಾಗಿದ್ದು, ಆಂಧ್ರ ಪ್ರದೇಶದ ಪಲುಮಾಂಬ ಜಾತ್ರೆಗೇ ಅನನ್ಯತೆಯನ್ನು ತಂದುಕೊಟ್ಟಿವೆ.
== ಶಿಕ್ಷಣ ==
[[ಚಿತ್ರ:Ind school of business.jpg|thumb|350px|right|ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್]]
ಆಂಧ್ರ ಪ್ರದೇಶದಲ್ಲಿ ೨೦ಕ್ಕೂ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸೇವೆ ನೀಡುತ್ತಿವೆ. ಬಹುತೇಕ ಎಲ್ಲಾ ಕಲಾ ಕೋರ್ಸುಗಳು, ಮಾನವ ಶಾಸ್ತ್ರಗಳು, ವಿಜ್ಞಾನ, ಎಂಜಿನಿಯರಿಂಗ್, ಕಾನೂನು, ಔಷಧ ವೈದ್ಯಶಾಸ್ತ್ರ, ವ್ಯವಹಾರ ಮತ್ತು ಪಶುವೈದ್ಯ ವಿಜ್ಞಾನ ಮುಂತಾದ ವಿಷಯಗಳಲ್ಲಿ ಇವು ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿವೆ.ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲೂ ಅತ್ಯಾಧುನಿಕ ಸಂಶೋಧನೆಗಳು ನಡೆಯುತ್ತಿವೆ.
ಆಂಧ್ರ ಪ್ರದೇಶದಲ್ಲಿ ೧೩೩೦ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳು; ೧೦೦೦ [[ಮಾಸ್ಟರ್ ಆಫರ್ ಬಿಸಿನೆಸ್ ಅಡ್ಮಿನಿಷ್ಟ್ರೇಷನ್|MBA]] ಮತ್ತು [[ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್|MCA]] ಕಾಲೇಜುಗಳು; ೫೦೦ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ೫೩ ವೈದ್ಯಕೀಯ ಕಾಲೇಜುಗಳಿವೆ. ಉನ್ನತ ಶಿಕ್ಷಣದಲ್ಲಿ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ ೧೯:೧ರಷ್ಟು ಇದೆ. ೨೦೦೧ರ ಜನಗಣತಿಯ ಪ್ರಕಾರ ಆಂಧ್ರ ಪ್ರದೇಶವು ಒಟ್ಟಾರೆಯಾಗಿ ೬೦.೫%ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ. ಇದರಲ್ಲಿ ಪುರುಷ ಸಾಕ್ಷರತಾ ಪ್ರಮಾಣವು ೭೦.೩%ರಷ್ಟು ಇದ್ದರೆ ಮಹಿಳಾ ಸಾಕ್ಷರತಾ ಪ್ರಮಾಣವು ೫೦.೪%ರಷ್ಟು ಮಾತ್ರ ಇದ್ದು, ಅದೇ ಕಳವಳಕ್ಕೆ ಕಾರಣವಾಗಿದೆ.
ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ರಾಜ್ಯವು ಇತ್ತೀಚೆಗೆ ದಾಪುಗಾಲಿಟ್ಟಿದೆ. ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಹೈದರಾಬಾದ್ನಲ್ಲಿರುವ [[BITS ಪಿಲಾನಿ]] ಆವರಣ) ಮತ್ತು [[IIT ಹೈದರಾಬಾದ್|IIT ಹೈದರಾಬಾದ್ನಂತಹ]] ಸಂಸ್ಥೆಗಳಿಗೆ ಆಂಧ್ರ ಪ್ರದೇಶವು ತವರು ಮನೆಯಾಗಿದೆ.
[[IIIT ಹೈದರಾಬಾದ್|ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ, ಹೈದರಾಬಾದ್ (IIIT-H)]], [[ಹೈದರಾಬಾದ್ ವಿಶ್ವವಿದ್ಯಾಲಯ]](ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ), ಮತ್ತು [[ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್|ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್]] (ISB), ಇವು ತಮ್ಮ ಗುಣಮಟ್ಟದ ಶಿಕ್ಷಣದಿಂದಾಗಿ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿವೆ. ದಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT) ಮತ್ತು ದಿ ಇನ್ಸ್ಟಿಟ್ಯೂಟ್ ಆಫ್ ಹೊಟೇಲ್ ಮ್ಯಾನೇಜ್ಮೆಂಟ್, ಕೇಟರಿಂಗ್ ಟೆಕ್ನಾಲಜಿ ಅಂಡ್ ಅಪ್ಲೈಡ್ ನ್ಯೂಟ್ರಿಷನ್ ಇವೂ ಕೂಡ ಹೈದರಾಬಾದ್ನಲ್ಲಿವೆ. ಪ್ರತಿಷ್ಠಿತ [[ಒಸ್ಮಾನಿಯಾ ವಿಶ್ವವಿದ್ಯಾಲಯ]] ಕೂಡ ಇರುವುದು ಹೈದರಾಬಾದ್ನಲ್ಲೇ.
ಆಂಧ್ರ ಪ್ರದೇಶ ಸರ್ಕಾರವು ಮೊದಲ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಹೆಗ್ಗಳಿಕೆಯನ್ನು ಹೊಂದಿದ್ದು, ತನ್ಮೂಲಕ ಇದು ಹಲವು ಸಮಿತಿಗಳ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸಿದಂತಾಗಿದೆ. ಈ ರೀತಿಯಲ್ಲಿ, ಆಂಧ್ರ ಪ್ರದೇಶ ವಿಧಾನಸಭೆಯ ಕಾಯಿದೆ ಸಂಖ್ಯೆ ೬ರ ಪ್ರಕಾರ "ಆಂಧ್ರ ಪ್ರದೇಶ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ"ವನ್ನು ಸ್ಥಾಪಿಸಲಾಯಿತು ಹಾಗೂ ದಿನಾಂಕ: ೯-೪-೧೯೮೬ರಂದು ಆಂಧ್ರ ಪ್ರದೇಶದ ಆಗಿನ ಮುಖ್ಯಮಂತ್ರಿ ದಿವಂಗತ ಎನ್.ಟಿ.ರಾಮ ರಾವ್ ಇದನ್ನು ಉದ್ಘಾಟಿಸಿದರು. ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವಿಜಯವಾಡದಲ್ಲಿ ದಿನಾಂಕ: ೦೧-೧೧-೧೯೮೬ರಿಂದ ಕಾರ್ಯಾರಂಭ ಮಾಡಿತು. ಇದರ ಸಂಸ್ಥಾಪಕರಾದ ಶ್ರೀ ಎನ್.ಟಿ.ರಾಮ ರಾವ್ರವರ ನಿಧನಾ ನಂತರ, ೧೯೯೮ರ ಅವಲೋಕಿಸುವ ಕಾಯಿದೆ ಸಂಖ್ಯೆ ೪ರ ಅನುಸಾರ, ದಿನಾಂಕ: ೨.೨.೯೮ರಂದು ಅನ್ವಯವಾಗುವಂತೆ, ಅವರ ಸ್ಮರಣೆಗಾಗಿ 'NTR ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ', ಆಂದ್ರ ಪ್ರದೇಶ ಎಂದು ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡಲಾಯಿತು.
== ವೃತ್ತ ಪತ್ರಿಕೆಗಳು ==
ಆಂಧ್ರ ಪ್ರದೇಶವು ತೆಲುಗು ಭಾಷೆಯ ಹಲವು ವೃತ್ತ ಪತ್ರಿಕೆಗಳನ್ನು ಹೊಂದಿದೆ. ''[[ಈನಾಡು]]'', ''[[ಆಂಧ್ರ ಜ್ಯೋತಿ]]'', ''[[ಸಾಕ್ಷಿ]]'', ''[[ಪ್ರಜಾಶಕ್ತಿ]]'', ''[[ವಾರ್ತಾ]]'', ''[[ಆಂಧ್ರಭೂಮಿ|ಆಂಧ್ರ ಭೂಮಿ]]'', ''[[ವಿಶಾಲಾಂಧ್ರ]]'','' [[ಸೂರ್ಯಾ]]'', ಮತ್ತು ''[[ಆಂಧ್ರ ಪ್ರಭ]]'', ಇವು ರಾಜ್ಯದಲ್ಲಿನ ಪ್ರಮುಖ ತೆಲುಗು ಭಾಷಾ ವೃತ್ತಪತ್ರಿಕೆಗಳು.
ಆಂಧ್ರ ಪ್ರದೇಶದ ಉರ್ದು ಭಾಷಾ ವೃತ್ತಪತ್ರಿಕೆಗಳೆಂದರೆ, ''[[ಸಿಯಾಸತ್ ಡೈಲಿ]]'', ''[[ಮುನ್ಸಿಫ್ ಡೈಲಿ]]'', ''[[ರೆಹ್ನುಮಾ-ಇ-ಡೆಕ್ಕನ್]]'', ''[[ಇತಿಮದ್ ಉರ್ದು ಡೈಲಿ]]'', ''[[ಆವಾಂ]]'' ಮತ್ತು ''[[ದಿ ಮಿಲಾಪ್ ಡೈಲಿ|ಮಿಲಾಪ್ ಡೈಲಿ]]''
ಆಂಧ್ರ ಪ್ರದೇಶದಲ್ಲಿ ಇಂಗ್ಷೀಷ್ ಭಾಷೆಯ ಹಲವು ಪತ್ರಿಕೆಗಳೂ ಪ್ರಕಟವಾಗುತ್ತಿದ್ದು ಅವು ಇಂತಿವೆ, ''[[ಡೆಕ್ಕನ್ ಕ್ರಾನಿಕಲ್]], '' ''[[ದಿ ಹಿಂದು]]'', ''[[ದಿ ಟೈಮ್ಸ್ ಆಫ್ ಇಂಡಿಯಾ|ದಿ ಟೈಮ್ಸ್ ಆಫ್ ಇಂಡಿಯಾ]]'', ''[[ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್|ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್]]'', ''[[ದಿ ಎಕನಾಮಿಕ್ ಟೈಮ್ಸ್]]'', ''[[ಬಿಸಿನೆಸ್ ಲೈನ್|ದಿ ಬಿಸಿನೆಸ್ ಲೈನ್]] ''
ಹಿಂದಿ ಭಾಷೆಯ ಹಲವಾರು ವೃತ್ತಪತ್ರಿಕೆಗಳಿಗೂ ಆಂಧ್ರ ಪ್ರದೇಶ ತವರು ಮನೆಯಾಗಿದೆ. ಅವುಗಳೆಂದರೆ, ''[[ಸ್ವತಂತ್ರ ವಾರ್ತಾ]]'', ''[[ವಿಶಾಖಪಟ್ಟಣಂ]] ನಿಜಾಮಾಬಾದ್'', ಮತ್ತು [[ಹೈದರಾಬಾದ್|ಹೈದರಾಬಾದ್ನಿಂದ]] ಪ್ರಕಟವಾಗುವ ಅತ್ಯಂತ ಹಳೆಯ [[ಹಿಂದಿ ವೃತ್ತಪತ್ರಿಕೆ|ಹಿಂದಿ ಪತ್ರಿಕೆ]]ಗಳಲ್ಲಿ ಒಂದಾದ ''[[ಹಿಂದಿ ಮಿಲಾಪ್]]''.
== ಪ್ರವಾಸೋದ್ಯಮ ==
[[ಚಿತ್ರ:Araku-valley.gif|thumb|right|ಅರಕು ಕಣಿವೆ]]
[[ಚಿತ್ರ:vb125.jpg|thumb|right|ಬೊರ್ರ ಗುಹೆಗಳು (ಇಳಿಬಿದ್ದಿರುವ ನೀರ್ಗೋಲುಳು ಮತ್ತು ನೆಲದಿಂದ ಮೇಲೆದ್ದಿರುವ ನೀರ್ಗೋಲುಗಳು )]]
[[ಚಿತ್ರ:Cave entrance.jpg|thumb|right|ಬೆಲಂ ಗುಹೆಗಳು]]
ಆಂಧ್ರ ಪ್ರದೇಶವನ್ನು ಇಲ್ಲಿನ ಪ್ರವಾಸೋದ್ಯಮ ಇಲಾಖೆಯು "''ಭಾರತದ [[ಕೋಹಿನೂರ್|ಕೊಹಿನೂರ್]]'' " ಎಂದು ಬಿಂಬಿಸಿದೆ.
ಆಂಧ್ರ ಪ್ರದೇಶವು ಹಲವು ಧಾರ್ಮಿಕ ಯಾತ್ರಾ ಕೇಂದ್ರಗಳ ತವರೂರಾಗಿದೆ. [[ವೆಂಕಟೇಶ್ವರ ಸ್ವಾಮಿ|ವೆಂಕಟೇಶ್ವರ ಸ್ವಾಮಿಯ]] ನೆಲೆಬೀಡಾದ [[ತಿರುಮಲ ವೆಂಕಟೇಶ್ವರ ದೇವಸ್ಥಾನ|ತಿರುಪತಿ]]ಯು ಪ್ರಪಂಚದಲ್ಲಿನ ಯಾತ್ರಾಕೇಂದ್ರಗಳ ಪೈಕಿ (ಯಾವುದೇ ಧರ್ಮದ) ಅತಿ ಹೆಚ್ಚು ಜನ ಯಾತ್ರಾರ್ಥಿಗಳು ಭೇಟಿ ಕೊಡುವ ಸ್ಥಳವಾಗಿದೆ. [[ನಲ್ಲಮಲ ಬೆಟ್ಟಗಳು|ನಲ್ಲಮಲ ಬೆಟ್ಟ]]ದಲ್ಲಿ ಸೇರಿಕೊಂಡಿರುವ {{Citation needed|date=December 2008}}[[ಶ್ರಿ ಶೈಲಂ|ಶ್ರೀ ಶೈಲಂ]] ಕ್ಷೇತ್ರವು ''ಶ್ರೀ ಮಲ್ಲಿಕಾರ್ಜುನ'' ನ ನೆಲೆಬೀಡಾಗಿದ್ದು, ಭಾರತದಲ್ಲಿನ ಹನ್ನೆರಡು ''[[ಜ್ಯೋತಿರ್ಲಿಂಗಂ|ಜ್ಯೋತಿರ್ಲಿಂಗ]]'' ಗಳಲ್ಲಿ ಒಂದಾಗಿದೆ. ಯಾದಗಿರಿಗುಟ್ಟವು ವಿಷ್ಣುವಿನ ಮತ್ತೊಂದು ಅವತಾರವಾಗಿರುವ ಶ್ರೀ ಲಕ್ಷ್ಮೀ ನರಸಿಂಹನ ಆವಾಸಸ್ಥಾನವಾಗಿರುವಂತೆಯೇ, ಅಮರಾವತಿಯ ಶಿವನ ದೇವಾಲಯವು ಪಂಚಾರಾಮಮ್ಗಳಲ್ಲಿ (ಐದು ದೇವಾಲಯಗಳಲ್ಲಿ) ಒಂದಾಗಿದೆ. ವಾರಂಗಲ್ನಲ್ಲಿನ ಸಾವಿರ ಕಂಬಗಳ ದೇವಸ್ಥಾನ ಮತ್ತು ರಾಮಪ್ಪ ದೇವಸ್ಥಾನಗಳು ತಮ್ಮ ದೇವಾಲಯದಲ್ಲಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿವೆ. ಅಮರಾವತಿ, ನಾಗಾರ್ಜುನ ಕೊಂಡ, ಭಟ್ಟಿಪ್ರೊಲು, ಘಂಟಸಾಲ, ನೆಲಕೊಂಡಪಲ್ಲಿ, ಧೂಲಿಕಟ್ಟ, ಬಾವಿಕೊಂಡ, [[ಥೊಟ್ಲಕೊಂಡ]], ಶಾಲಿಹುಂಡಂ, ಪವುರಾಲಕೊಂಡ, ಶಂಕರಂ, ಫಣಿಗಿರಿ ಮತ್ತು ಕೋಲನ್ಪಾಕ ಇವೇ ಮೊದಲಾದ ಸ್ಥಳಗಳಲ್ಲಿ ರಾಜ್ಯವು ಅಸಂಖ್ಯಾತ ಬೌದ್ಧ ಕೇಂದ್ರಗಳನ್ನು ಹೊಂದಿದೆ.
[[ಬಾದಾಮಿ ಚಾಲುಕ್ಯರು|ಬಾದಾಮಿ ಚಾಲುಕ್ಯ]]ರು ([[ಬಾದಾಮಿ|ಬಾದಾಮಿಯು]] [[ಕರ್ನಾಟಕ|ಕರ್ನಾಟಕದಲ್ಲಿದೆ]].) ೬ನೇ ಶತಮಾನದಲ್ಲಿ ನಿರ್ಮಿಸಿರುವ '''ಆಲಂಪುರ್ ಭ್ರಮಾ ದೇವಸ್ಥಾನಗಳು ''' <ref>{{cite web
|url=http://www.templenet.com/encandh1.html
|title=The Templenet Encyclopedia — Temples of Andhra Pradesh
|publisher=
|accessdate=2009-02-26
}}</ref>[[ಚಾಲುಕ್ಯ|ಚಾಲುಕ್ಯರ]] ಕಲೆ ಮತ್ತು ಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆಯಾಗಿವೆ. [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯವು]] ಅಸಂಖ್ಯಾತ ಸ್ಮಾರಕಗಳು, [[ಶ್ರೀಶೈಲಂ]] ದೇವಸ್ಥಾನ ಮತ್ತು [[ಲೇಪಾಕ್ಷಿ]] ದೇವಸ್ಥಾನಗಳನ್ನು ನಿರ್ಮಿಸಿತು.
[[ವಿಶಾಖಪಟ್ಟಣಂ|ವಿಶಾಖಪಟ್ಟಣಂನಲ್ಲಿರುವ]] ಗೋಲ್ಡನ್ ಬೀಚ್, ಬೊರ್ರದಲ್ಲಿನ ಒಂದು ದಶಲಕ್ಷ ವರ್ಷಗಳಷ್ಟು ಹಳೆಯದಾದ ಸುಣ್ಣದ ಕಲ್ಲಿನ ಗುಹೆಗಳು, ಚಿತ್ರಸದೃಶ [[ಅರಕು ಕಣಿವೆ]], ಹಾರ್ಸ್ಲೆ ಬೆಟ್ಟಗಳ ಗಿರಿಧಾಮಗಳು, ''ಪಾಪಿ ಕೊಂಡಾಲು'' ವಿನಲ್ಲಿ ಕಿರಿದಾದ ಕಮರಿಯೊಂದರ ಮೂಲಕ ಹರಿಯುವ ಗೋದಾವರಿ ನದಿ, ಕುಂತಲ, ಎಟ್ಟಿಪೊತಾಲದಲ್ಲಿರುವ ಜಲಪಾತಗಳು ಮತ್ತು [[ತಲಕೊಂಡ|ತಲಕೋಣ]]ದಲ್ಲಿರುವ ಸಮೃದ್ಧ ಜೀವ-ವೈವಿಧ್ಯ ಇವೇ ಮೊದಲಾದವುಗಳು ರಾಜ್ಯದ ಕೆಲವೊಂದು ಪ್ರಾಕೃತಿಕ ಆಕರ್ಷಣೆಗಳಾಗಿವೆ. ವಿಶಾಖಪಟ್ಟಣಂನಲ್ಲಿನ ಸಮದ್ರತೀರಕ್ಕೆ ಸನಿಹದಲ್ಲಿ ಕೈಲಾಸಗಿರಿಯಿದೆ. ಕೈಲಾಸಗಿರಿಯ ಪರ್ವತದ ತುದಿಯಲ್ಲಿ ಒಂದು ಉದ್ಯಾನವನವಿದೆ. ವಿಶಾಖಪಟ್ಟಣಂ ಹಲವು ಪ್ರವಾಸೀ ಆಕರ್ಷಣೆಯ ತಾಣಗಳ ತವರು. ಅವುಗಳೆಂದರೆ, INS ಕರಶೂರ ಜಲಾಂತರ್ಗಾಮಿ ವಸ್ತುಸಂಗ್ರಹಾಲಯ, (ಈ ತೆರನಾದ ವಸ್ತುಸಂಗ್ರಹಾಲಯ ಭಾರತದಲ್ಲೇ ಏಕೈಕ), ಭಾರತದಲ್ಲಿನ ಅತಿ ಉದ್ದದ ಕಡಲತೀರದ ರಸ್ತೆಯನ್ನು ಹೊಂದಿರುವ ಯರಾಡ ಬೀಚ್, ಅರಕು ಕಣಿವೆ, VUDA ಉದ್ಯಾನವನ ಮತ್ತು ಇಂದಿರಾಗಾಂಧಿ ಮೃಗಾಲಯ ಇವೇ ಮೊದಲಾದವುಗಳು.
[[ಡೇವಿಡ್ ರಿಕಾರ್ಡೋ|thumb|left|ಬೊರ್ರ ಗುಹೆಗಳು]]
[[ಚಿತ್ರ:RishikondaBeachmain.jpg|thumb|left|ರಿಷಿಕೊಂಡ ಬೀಚ್]]
[[ಬೊರ್ರ ಗುಹೆಗಳು]] ಭಾರತದಲ್ಲಿನ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮೀಪದ ಪೂರ್ವ ಘಟ್ಟಗಳ ಅನಂತಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿವೆ. ಇವು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು ೮೦೦ ರಿಂದ ೧೩೦೦ ಮೀಟರ್ಗಳಷ್ಟು ಎತ್ತರದಲ್ಲಿದ್ದು, ದಶಲಕ್ಷ ವರ್ಷಗಳಷ್ಟು ಹಳೆಯದಾದ, ಗುಹೆಯ ಚಾವಣಿಯಿಂದ ಇಳಿಬಿದ್ದಿರುವ ನೀರ್ಗೋಲು ಹಾಗೂ ಗುಹೆಯ ನೆಲದಲ್ಲಿ ಎದ್ದು ನಿಂತಿರುವ ನೀರ್ಗೋಲುಗಳ ವ್ಯೂಹಕ್ಕೆ ಹೆಸರುವಾಸಿಯಾಗಿವೆ. ಬ್ರಿಟಿಷ್ ಭೂವಿಜ್ಞಾನಿಯಾದ ವಿಲಿಯಂ ಕಿಂಗ್ ಜಾರ್ಜ್, ೧೮೦೭ರಲ್ಲಿ ಈ ಗುಹೆಗಳನ್ನು ಪತ್ತೆಹಚ್ಚಿದನು. ಗುಹೆಯ ಒಳಭಾಗದಲ್ಲಿ ಕಂಡುಬರುವ ರಚನೆಯು ಮನುಷ್ಯನ ಮೆದುಳಿನಂತೆ ಕಾಣುತ್ತದೆ. ಸ್ಥಳೀಯ ಭಾಷೆಯಾದ ತೆಲುಗಿನಲ್ಲಿ ಮೆದುಳಿಗೆ ''ಬುರ್ರ'' ಎಂಬ ಹೆಸರಿದೆ. ಹೀಗಾಗಿ ಈ ಗುಹೆಗಳಿಗೆ ಆ ಹೆಸರು ಬಂದಿದೆ. ಇದೇ ರೀತಿಯಲ್ಲಿ, ದಶಲಕ್ಷ ವರ್ಷಗಳಷ್ಟು ಹಿಂದೆಯೇ ಈ ಪ್ರದೇಶದಲ್ಲಿನ ಸುಣ್ಣದ ಕಲ್ಲಿನ ನಿಕ್ಷೇಪಗಳು ಚಿತ್ರಾವತಿ ನದಿಯಿಂದ ಸವಕಳಿಗೆ ಒಳಗಾಗಿದ್ದರಿಂದಾಗಿ ಬೆಲಂ ಗುಹೆಗಳು ರೂಪುಗೊಂಡವು. ಸುಣ್ಣದ ಕಲ್ಲು ಮತ್ತು ನೀರಿನ ನಡುವಿನ ರಾಸಾಯನಿಕ ಕ್ರಿಯೆಯಿಂದ ರೂಪುಗೊಂಡ ದುರ್ಬಲ ಆಮ್ಲೀಯ ಅಂತರ್ಜಲ ಅಥವಾ ಕಾರ್ಬಾನಿಕ್ ಆಮ್ಲದ ಕ್ರಿಯೆಯಿಂದಾಗಿ ಈ ಸುಣ್ಣದ ಕಲ್ಲಿನ ಗುಹೆಗಳು ರೂಪುಗೊಂಡವು.
[[ಬೆಲಂ ಗುಹೆಗಳು]] ಭಾರತದ ಉಪ-ಖಂಡದಲ್ಲಿನ ಎರಡನೇ ಅತಿದೊಡ್ಡ ಗುಹಾ ವ್ಯವಸ್ಥೆಯಾಗಿವೆ. ಗುಹೆ ಎಂಬುದಕ್ಕೆ ಸಂಸ್ಕೃತದಲ್ಲಿ ''ಬಿಲಂ '' ಎಂಬ ಹೆಸರಿದ್ದು, ಇದರಿಂದಲೇ ಬೆಲಂ ಗುಹೆಗಳು ತಮ್ಮ ಹೆಸರನ್ನು ಪಡೆದಿವೆ.
ತೆಲುಗಿನಲ್ಲಿ ಈ ಗುಹೆಗಳಿಗೆ ''ಬೆಲಂ ಗುಹಾಲು'' ಎಂಬ ಹೆಸರಿದೆ. ಬೆಲಂ ಗುಹೆಗಳು ೩೨೨೯ ಮೀಟರ್ನಷ್ಟು ಉದ್ದವಿದ್ದು, ಇದರಿಂದಾಗಿ ಅವು ಭಾರತದ ಉಪಖಂಡದಲ್ಲಿನ ಎರಡನೇ ಅತಿದೊಡ್ಡ ನೈಸರ್ಗಿಕ ಗುಹೆಗಳಾಗಿವೆ. ಉದ್ದನೆಯ ನಡುವಣಂಕಗಳು, ವಿಶಾಲವಾದ ಕೋಣೆಗಳು, ಸಿಹಿನೀರಿನ ಓಣಿಗಳು ಮತ್ತು ಕೊಳಾಯಿಗಳನ್ನು ಬೆಲಂ ಗುಹೆಗಳು ಹೊಂದಿವೆ. ಗುಹೆಯ ಆಳವಾದ ಸ್ಥಳವು{{convert|120|ft|m}} ಪ್ರವೇಶದ್ವಾರದಿಂದ ಇದ್ದು, ಅದನ್ನು ''ಪಾತಾಳಗಂಗಾ'' ಎಂದು ಕರೆಯಲಾಗುತ್ತದೆ.
೧,೨೬೫ ಮೀಟರ್ನಷ್ಟು ಎತ್ತರದಲ್ಲಿರುವ [[ಹಾರ್ಸ್ಲೆ ಬೆಟ್ಟಗಳು]], ಆಂಧ್ರ ಪ್ರದೇಶದಲ್ಲಿನ ಪ್ರಸಿದ್ಧ ಬೇಸಿಗೆ ಗಿರಿಧಾಮವಾಗಿದ್ದು, ಬೆಂಗಳೂರಿನಿಂದ ಸುಮಾರು ೧೬೦ ಕಿ.ಮೀ. ಮತ್ತು ತಿರುಪತಿಯಿಂದ ಸುಮಾರು ೧೪೪ ಕಿ.ಮೀ.ನಷ್ಟು ದೂರದಲ್ಲಿದೆ.ಇದರ ಸಮೀಪದಲ್ಲಿಯೇ ಮದನಪಲ್ಲಿ ಪಟ್ಟಣವಿದೆ. ಪ್ರಮುಖವಾದ ಪ್ರವಾಸೀ ಆಕರ್ಷಣೆಯ ತಾಣಗಳಲ್ಲಿ ಮಲ್ಲಮ್ಮ ದೇವಸ್ಥಾನ ಮತ್ತು ರಿಷಿ ವ್ಯಾಲಿ ಸ್ಕೂಲ್ ಸೇರಿವೆ. ೮೭ ಕಿ.ಮಿ. ದೂರ ಇರುವ ಕೌಂಡಿನ್ಯ ವನ್ಯಜೀವಿ ಅಭಯಾರಣ್ಯಕ್ಕೆ ಹಾರ್ಸ್ಲೆ ಬೆಟ್ಟಗಳು ನಿರ್ಗಮನಾ ತಾಣವಾಗಿದೆ.
[[ಚಾರ್ಮಿನಾರ್]], [[ಗೊಲ್ಕೊಂಡ ಸುಲ್ತಾನರು|ಗೋಲ್ಕೊಂಡ ಕೋಟೆ]], [[ಚಂದ್ರಗಿರಿ|ಚಂದ್ರಗಿರಿ ಕೋಟೆ]], [[ಚೌಮಹಲ್ಲ ಅರಮನೆ]], ಮತ್ತು [[ಫಲಕ್ನುಮ ಅರಮನೆ]] ಮುಂತಾದವುಗಳು ರಾಜ್ಯದಲ್ಲಿರುವ ಕೆಲವೊಂದು ಸ್ಮಾರಕಗಳು.
[[ಕೃಷ್ಣ ಜಿಲ್ಲೆ|ಕೃಷ್ಣ ಜಿಲ್ಲೆಯಲ್ಲಿರುವ]] [[ವಿಜಯವಾಡ|ವಿಜಯವಾಡದಲ್ಲಿನ]] [[ಕನಕ ದುರ್ಗ ದೇವಸ್ಥಾನ]], ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ದ್ವಾರಕಾತಿರುಮಲದಲ್ಲಿನ [[ವೆಂಕಟೇಶ್ವರ ದೇವಸ್ಥಾನ]] (ಇದಕ್ಕೆ ಚಿನ್ನ ತಿರುಪತಿ ಎಂದೂ ಹೆಸರಿದೆ), ಶ್ರೀಕಾಕುಲಂ ಜಿಲ್ಲೆಯಲ್ಲಿರುವ [[ಅರಸವೆಲ್ಲಿಯಲ್ಲಿನ ಸೂರ್ಯ ದೇವಸ್ಥಾನ]]- ಇವು ಕೂಡಾ ಆಂಧ್ರ ಪ್ರದೇಶದಲ್ಲಿ ನೋಡಬಹುದಾದ ಮತ್ತಷ್ಟು ಸ್ಥಳಗಳು. ಅಣ್ಣಾವರಂ ಸತ್ಯನಾರಾಯಣ ಸ್ವಾಮಿ ದೇವಾಲಯವು ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ.
== ಸಾರಿಗೆ ==
[[ಚಿತ್ರ:Map AP dist NH roads.png|thumb|left|ಆಂಧ್ರ ಪ್ರದೇಶದ ಪ್ರಮುಖ ರಸ್ತೆ ಸಂಪರ್ಕಗಳು]]
[[ಚಿತ್ರ:Vizag seaport.jpg|thumb|right|ವಿಶಾಖಪಟ್ಟಣಂ ಕಡಲ ಬಂದರು]]
[[ಚಿತ್ರ:Secunderabad Junction railway station in 2007.jpg|thumb|right|ಸಿಕಂದರಾಬಾದ್ ರೈಲ್ವೇ ನಿಲ್ದಾಣ, ದಕ್ಷಿಣ ಕೇಂದ್ರೀಯ ರೈಲ್ವೆಯ ಕೇಂದ್ರ ಕಾರ್ಯಾಲಯ]]
ರಾಜ್ಯವು ಒಟ್ಟು ೧,೪೬,೯೪೪ ಕಿ.ಮೀ.ನಷ್ಟು ರಸ್ತೆಯನ್ನು ನಿರ್ವಹಿಸುತ್ತಿದ್ದು, ಅದರಲ್ಲಿ ೪೨,೫೧೧ ಕಿ.ಮೀ. ನಷ್ಟು ರಾಜ್ಯ ಹೆದ್ದಾರಿಗಳು, ೨,೯೪೯ ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ೧,೦೧,೪೮೪ ಕಿ.ಮೀ.ನಷ್ಟು ಜಿಲ್ಲಾ ರಸ್ತೆಗಳು ಸೇರಿವೆ. ಆಂಧ್ರ ಪ್ರದೇಶದಲ್ಲಿನ ವಾಹನಗಳ ಬೆಳವಣಿಗೆಯ ಪ್ರಮಾಣವು ೧೬%ರಷ್ಟಿದ್ದು ಇದು ದೇಶದಲ್ಲೇ ಅತಿ ಹೆಚ್ಚು.<ref>{{cite web |url=http://www.aponline.gov.in/Quick%20links/apfactfile/naturaladvantages.html#Airways |title=AP Fact File-Natural Advantages |publisher=APonline |date= |accessdate=2009-03-03 |archive-date=2009-04-03 |archive-url=https://web.archive.org/web/20090403042513/http://www.aponline.gov.in/Quick%20links/apfactfile/naturaladvantages.html#Airways |url-status=dead }}</ref>
ಆಂಧ್ರ ಪ್ರದೇಶದ ಸರ್ಕಾರದ ಒಡೆತನದ [[ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ|ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು]] (APSRTC), ರಾಜ್ಯದ ಪ್ರಮುಖ ಸಾರ್ವಜನಿಕ ಸಾರಿಗೆ ನಿಗಮವಾಗಿದ್ದು, ಎಲ್ಲ ನಗರಗಳು ಮತ್ತು ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಅತಿ ಹೆಚ್ಚಿನ ವಾಹನಗಳನ್ನು ಹೊಂದಿರುವ ಮತ್ತು ಪ್ರತಿದಿನವೂ ಅತಿ ಉದ್ದದ ಪ್ರದೇಶದವರೆಗೆ ಸಾಗಿಸುವ/ಹೆಚ್ಚಿನ ಪ್ರಯಾಣಿಕರನ್ನು ಕೊಂಡೊಯ್ಯುವ ಮೂಲಕ APSRTCಯು ವಿಶ್ವ ದಾಖಲೆಗಳ ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಹೊರತುಪಡಿಸಿ, ಸಾವಿರಾರು ಖಾಸಗಿ ನಿರ್ವಾಹಕರೂ ಕೂಡ ಬಸ್ಸುಗಳನ್ನು ಓಡಿಸುವ ಮೂಲಕ ರಾಜ್ಯದ ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುತ್ತಾರೆ. ಕಾರು, ಮೋಟಾರು ಅಳವಡಿತ ಸ್ಕೂಟರ್ ಮತ್ತು ಬೈಸಿಕಲ್ಗಳಂತಹ ಖಾಸಗಿ ವಾಹನಗಳು, ನಗರ ಮತ್ತು ಅವಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿನ ಸ್ಥಳೀಯ ಸಾರಿಗೆಯಲ್ಲಿ ಗಣನೀಯ ಪಾಲನ್ನು ಹೊಂದಿವೆ.
ರಾಜ್ಯದಲ್ಲಿ ಐದು ವಿಮಾನ ನಿಲ್ದಾಣಗಳಿವೆ. ಅವುಗಳೆಂದರೆ: [[ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಹೈದರಾಬಾದ್]] (ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)(ರಾಜ್ಯದ ಅತ್ಯಂತ ದೊಡ್ಡ ವಿಮಾನ ನಿಲ್ದಾಣ), [[ವಿಶಾಖಪಟ್ಟಣಂ]], [[ವಿಜಯವಾಡ]], [[ರಾಜಮುಂಡ್ರಿ]] ಮತ್ತು [[ತಿರುಮಲ-ತಿರುಪತಿ|ತಿರುಪತಿ]].ಇನ್ನೂ ಆರು ನಗರಗಳಲ್ಲಿ ವಿಮಾನನಿಲ್ದಾಣಗಳನ್ನು ಆರಂಭಿಸಲು ಸರ್ಕಾರವು ಯೋಜನೆಯನ್ನು ಹಾಕಿಕೊಂಡಿದೆ. ಅವುಗಳೆಂದರೆ, [[ನೆಲ್ಲೂರು|ನೆಲ್ಲೂರ್]], [[ವಾರಂಗಲ್]], [[ಕಡಪ]], [[ತಡೇಪಲ್ಲಿಗುಡೆಂ|ತಡೆಪಲ್ಲಿಗುಡೆಂ]] [[ರಾಮಗುಂಡಂ]] ಮತ್ತು [[ಒಂಗೊಲ್|ಒಂಗೊಲ್]]
ಆಂಧ್ರ ಪ್ರದೇಶವು [[ವಿಶಾಖಪಟ್ಟಣಂ]] ಮತ್ತು [[ಕಾಕಿನಾಡ|ಕಾಕಿನಾಡದಲ್ಲಿ]] ಭಾರತದ ಎರಡು ಪ್ರಮುಖ ಬಂದರುಗಳನ್ನು ಹೊಂದಿದೆ ಹಾಗೂ [[ಮಚಲೀಪಟ್ಟಣಂ|ಮಚಲೀಪಟ್ಣಂ]], [[ನಿಜಾಮ್ಪಟ್ಟಣಂ|ನಿಜಾಮ್ಪಟ್ಣಂ]]([[ಗುಂಟೂರ್|ಗುಂಟೂರ್]]) ಮತ್ತು [[ಕೃಷ್ಣಪಟ್ಟಣಂ|ಕೃಷ್ಣಪಟ್ಣಂ]]ಗಳಲ್ಲಿ ಮೂರು ಸಣ್ಣ ಬಂದರುಗಳನ್ನು ಹೊಂದಿದೆ. ವಿಶಾಖಪಟ್ಟಣಂ ಬಳಿ ಇರುವ [[ಗಂಗಾವರಂ|ಗಂಗಾವರಂನಲ್ಲಿ]] ಮತ್ತೊಂದು ಖಾಸಗಿ ಬಂದರನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಆಳಸಮುದ್ರದ ಬಂದರು ೨೦೦,೦೦೦-೨೫೦,೦೦೦ DWT ವರೆಗಿನ ಸಾಮರ್ಥ್ಯದ ಹಡಗುಗಳು ತಂಗಲು ಅವಕಾಶ ಮಾಡಿಕೊಡುವುದರಿಂದ ಬೃಹತ್ ಹಡಗುಗಳು ಭಾರತೀಯ ಕಡಲತೀರದೊಳಗೆ ಪ್ರವೇಶಿಸಲು ಅನುವಾಗುತ್ತದೆ.
== ಆಂಧ್ರ ರಾಜಕೀಯ ಮತ್ತು ಆಡಳಿತ ==
*೨೦೦೯ ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾರಾಜಯಂ ಪಾರ್ಟಿ, ಟಿಡಿಪಿ, ಟಿಆರ್.ಎಸ್. ಸಿಪಿಎಮ್ ಪಕ್ಷಗಳನ್ನು ಸೋಲಿಸಿ ನಂತರ ೨ ನೇ ಬಾರಿಗೆ ವೈ.ಎಸ್.ರಾಜಶೇಖರ ರೆಡ್ಡಿಯವರು ಆಂಧ್ರದ ಮುಖ್ಯಮಂತ್ರಿಯಾದರು. ಅವರು ೨-೯-೨೦೦೯ ರಂದು ಹೆಲಿಕ್ಯಾಪರ್ ಅವಘಡದಲ್ಲಿ ಸಾವನ್ನಪ್ಪಿದರು. ಹಿರಿಯ ರಾಜಕಾರಣಿ ಹಾಗೂ ನಣಕಸಿನ ಮಂತ್ರಿಯಾಗಿದ್ದ ಕೊನಿಜೇತಿ ರೋಸಚಿi ನವರು ೩-೯-೨೦೦೯ ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ವಯಸ್ಸಾದಕಾರಣ ಕೆಲಸದ ವತ್ತಡ ಹೆಚ್ಚಾಗಿದೆಯೆಂದು ೨೪-೧೧-೨೦೧೦ ರಲ್ಲಿ ರಾಜೀನಾಮೆ ಸಲ್ಲಿಸಿದರು. ನಲ್ಲೇರಿ ಕಿರಣ ಕುಮಾರ ರೆಡ್ಡಿ ಯವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು
== ಆಂಧ್ರ ಪ್ರದೇಶದ ರಾಜಕೀಯ==
{| style="font-size:95%; border:1px solid black; text-align:left; vertical-align:top; background-color:#F4F9FF" cellspacing="0" cellpadding="3" width="100%"
|- bgcolor=#99ccff style="text-align:center"
| width="20%" | '''ರಾಜ್ಯ''' /ಲೋಕ ಸಭೆ ಸ್ಥಾನ
| width="25%" | '''ಹೆಸರು'''
| width="15%" | '''ಅಧಿಕಾರ ಸ್ವೀಕರಿಸಿದ ದಿನಾಂಕ'''
| width="28%"| '''ಪಕ್ಷ ವಿವರ''' -ವಿಧಾನ ಸಭೆ
| width="2%" | '''FMR''' (ಒಟ್ಟು ವಿಧಾನ ಸಭೆ ಸದಸ್ಯರು )
|-
| bgcolor="#C1E0FF" | ಆಂಧ್ರ ಪ್ರದೇಶ<br />(೪೨)ಕಾಂ.೩೩(೩೮.೯೫)/ಬಿಜೆಪಿ ೦/ಟಿಡಿಪಿ ೬(೨೪.೯೩);ಟಿಆರ್.ಎಸ್.೨;ಐಎ.ಎಂ೧
|೧.'''[[ವೈ. ಎಸ್. ರಾಜಶೇಖರ ರೆಡ್ಡಿ]]'''
೨.ಕೊನಿಜೇಟಿ ರೋಸಯ್ಯ ;
೩.ಕಿರಣಕುಮಾರ ರೆಡ್ಡಿ; (ಕಾಂಗ್ರೆಸ್)
|೨೦೦೪/ಮೇ-೨೦೦೯; ೩-೯-೦೨೦೦೯ ; ೨೪-೧೧-೨೦೧೦
|ಕಾಂ~೧೫೬/೩೬.೫೬%;(-೨% -೨೯); ತೆ.ದೇ.ಪಾ.(ಟಿಡಿಪಿ) ೯೨/೨೮.೧೨(೪೫); ತೆ.ರಾ.ಸ ೧೦(-೧೬) ; ಪಿಆರ್.ಪಿ..೧೮ (+೧೮);ಇತರೆ:೧೪
| ಒಟ್ಟು ೨೯೪
|-
|}
===[[ತೆಲಂಗಾಣ]] ಉದಯ===
[[ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪]][[ಸೀಮಾಂಧ್ರ]]
*ದಿ. ಜೂನ್ 2, 2014, ರಂದು ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).<ref>ದಿ. ಜೂನ್ 2, 2014, 11.10AM IST (ವಿಜಯ ಕರ್ನಾಟಕ)</ref>
ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್ ಅಧಿಕಾರ ಸ್ವೀಕರಿಸಿದರು. 294 ಸದಸ್ಯರಿದ್ದ ಆಂಧ್ರ ವಿಧಾನಸಭೆಯಲ್ಲಿ ವಿಭಜಕನೆಯ ನಂತರ 175 ಶಾಸಕರಿದ್ದಾರೆ. ತೆಲಂಗಾಣದಲ್ಲಿ 119 ಶಾಸಕರಿದ್ದಾರೆ. ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ.
===೨೦೧೪ ರ ಜೂನ್ ನಂತರದ ಆಂಧ್ರ ಅಥವಾ ಸೀಮಾಂಧ್ರ===
====ಸೀಮಾಂಧ್ರಕ್ಕೆ ಹೊಸ ರಾಜಧಾನಿ====
[[Image:Telengana.PNG|thumb|ಆಂಧ್ರ ಪ್ರದೇಶರಾಜ್ಯದಲ್ಲಿ ಪ್ರತ್ಯೇಕಗೊಂಡ [[ತೆಲಂಗಾಣ]] ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ; ಹಳದಿ ಬಣ್ಣದಲ್ಲಿರುವುದು ಹೊಸದಾಗಿ ಉದಯವಾದ ಆಂಧ್ರ ಪ್ರದೇಶ]]
2 Dec, 2016
[[File:Andhra Pradeah Capital Region.jpg|left|thumb|ಆಂಧ್ರ ಪ್ರದೇಶದ ರಾಜಧಾನಿ ಪ್ರದೇಶ '''ಅಮರಾವತಿ''' ತೋರಿಸುವ ನಕ್ಷೆ, ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ಮಧ್ಯದಲ್ಲಿದೆ-ಬಣ್ಣದಗೆರೆ ಕೃಷ್ಣಾನದಿ]]
*ದಿ. ಜೂನ್ 2, 2014, ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).<ref name="ref2" />
*ಮೂಲ ಆಂಧ್ರ ಪ್ರದೇಶ ಇಬ್ಭಾಗವಾಗಿ [[ತೆಲಂಗಾಣ]] ಆಂಧ್ರ ಎಂದುಎರಡು ರಾಜ್ಯಗಳಾದಾಗ [[ಹೈದರಾಭಾದು]] ತೆಲಂಗಾಣಕ್ಕೆ ರಾಜಧಾನಿಯಾಯಿತು. ಹೊಸ ಆಂಧ್ರವು '''ಅಮರಾವತಿ''' ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು.
*ಅಮರಾವತಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು.<ref name="ref1">[http://www.prajavani.net/news/article/2016/12/02/456084.html ಅಮರಾವತಿಗೆ ಆಡಳಿತ ಸ್ಥಳಾಂತರ]</ref>
===ಆಂಧ್ರ ಪ್ರದೇಶ ಚುನಾವಣೆ -2014===
*[[೨೦೧೯ರ ಆಂಧ್ರ ಪ್ರದೇಶ ಚುನಾವಣೆ]]
*[[:en:2019 Andhra Pradesh Legislative Assembly election|2019 Andhra Pradesh Legislative Assembly election]]
* ಆಂಧ್ರ ಪ್ರದೇಶ ಸರ್ಕಾರ (ಹೊಸ ಆಂಧ್ರ )
* ಶ್ರೀ ನಾರಾ ಚಂದ್ರಬಾಬು ನಾಯಿಡು -ಮಾನ್ಯ ಮುಖ್ಯ ಮಂತ್ರಿ
{| class="wikitable sortable "
|-
! ಪಕ್ಷ !! ಸದಸ್ಯರು
|-
| ಟಿಡಿಪಿ (ತೆಲಗು ದೇಶಂ ಪಾರ್ಟಿ) || 101
|-
|ವೈಎಸ್ಆರ್ ಪಾರ್ಟಿ(ವೈಎಸ್ಆರ್ ಕಾಂಗ್ರೆಸ್ ಪಾರ್ಟಿ) || 66
|-
| ಬಿಜೆಪಿ (ಭಾರತೀಯ ಜನತಾ ಪಾರ್ಟಿ) ||4
|-
|ಎನ್ ಪಿ.(ನವೋದಯ ಪಾರ್ಟಿ) || 1
|-
|ಪಕ್ಷೇತರ ||1
|-
|ಖಾಲಿ ||2
|-
!ಓಟ್ಟು !!175
|}
===೨೦೧೯ ರ ಚುನಾವಣೆ ಮತ್ತು ಹೊಸ ಸರ್ಕಾರ===
:[[2019 ರ ವಿಧಾನಸಭಾ ಚುನಾವಣೆಗಳು]]
*2019 ರ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಯಾವುದೇ ಮೈತ್ರಿ ಮಾಡದೆ ಏಕಾಂಗಿಯಾಗಿ ಸ್ಪರ್ಧಿಸಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಈ ಮೊದಲು ಐಎನ್ಸಿ ಮತ್ತು ವೈ.ಎಸ್.ಆರ್ ನೇತೃತ್ವದ ಕಾಂಗ್ರೆಸ್ ಪಾರ್ಟಿ ಎಂದು ವೀಭಜತವಾಗಿತ್ತು ವೈ.ಎಸ್.ಆರ್. ಕಾಂಗ್ರೆಸ್ ಜಗನ್ಮೋಹನ್ ರೆಡ್ಡಿ ನೇತ್ರತ್ವದಲ್ಲಿ ಸ್ಪರ್ಧಿಸಿತು. ಪವನ್ ಕಲ್ಯಾಣ್ ನೇತೃತ್ವದ ಜೆಎಸ್ಪಿ ಸಹ ಸಿಪಿಐ, ಸಿಪಿಐ (ಎಂ) ಮತ್ತು ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತು. 2019 ರ ಚುನಾವಣೆಯಲ್ಲಿ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆದ್ದರೆ, ವೈಎಸ್ಆರ್ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು 151 ಸ್ಥಾನಗಳನ್ನು ಗಳಿಸಿತು. ಇದರ ನಾಯಕ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರು 2019 ರ ಮೇ 30 ರಂದು ಆಂಧ್ರಪ್ರದೇಶದ ಮುಂದಿನ ಮುಖ್ಯಮಂತ್ರಿಯಾದರು.<ref>{{Cite web |url=https://www.loksabhaelections.in/Andhra-Pradesh |title=Andhra Pradesh Legislative Assembly Election 2019 Website |access-date=2019-06-19 |archive-date=2019-05-27 |archive-url=https://web.archive.org/web/20190527040708/https://www.loksabhaelections.in/Andhra-Pradesh |url-status=dead }}</ref>
== ಇದನ್ನೂ ನೋಡಿರಿ ==
*[[ತೆಲಂಗಾಣ]]
*[[ಭಾರತದ ಮುಖ್ಯಮಂತ್ರಿಗಳು]]
*[[೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ]]
* [[ಆಂಧ್ರ ಪ್ರದೇಶದಿಂದ ಬಂದಿರುವ ಪ್ರಮುಖರ ಪಟ್ಟಿ]]
* [[ಭಾರತದ ಇತಿಹಾಸ]]
* [[ಭಾರತದ ಮಧ್ಯಕಾಲೀನ ಸಾಮ್ರಾಜ್ಯಗಳು]]
*[[ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ]]
* [[ಆಂಧ್ರ ರಾಜ್ಯ]]
* [[ಬ್ರೂಸ್ ಎಲಿಯಟ್ ಟೇಪರ್|ಬ್ರೂಸ್ ಎಲಿಯಟ್ ಟೇಪರ್ರವರು]] ಬರೆದಿರುವ [[:ರೈವಲ್ರಿ ಅಂಡ್ ಟ್ರಿಬ್ಯೂಟ್: ಸೊಸೈಟಿ ಅಂಡ್ ರಿಚುಯಲ್ ಇನ್ ಎ ತೆಲುಗು ವಿಲೇಜ್ ಇನ್ ಸೌತ್ ಇಂಡಿಯಾ|ಸೊಸೈಟಿ ಅಂಡ್ ರಿಚುಯಲ್ ಇನ್ ಎ ತೆಲುಗು ವಿಲೇಜ್ ಇನ್ ಸೌತ್ ಇಂಡಿಯಾ]] ರೈವಲ್ರಿ ಅಂಡ್ ಟ್ರಿಬ್ಯೂಟ್: ಸೊಸೈಟಿ ಅಂಡ್ ರಿಚುಯಲ್ ಇನ್ ಎ ತೆಲುಗು ವಿಲ್ಲೇಜ್ ಇನ್ ಸೌತ್ ಇಂಡಿಯಾ{/0.
* [[ಯಾಣಂ (ಭಾರತ)|ಯಾಣಂ]]
* [[ಗುಂಟೂರ್ ವಿಭಾಗ|ಗುಂಟೂರ್ ವಿಭಾಗ]]
*https://en.wikipedia.org/wiki/State_Assembly_elections_in_India,_2009
*ಚರ್ಚೆಗೆ/ ಸಲೆಹೆ ಕೊಡಲು ಮೇಲೆ ಎಡಗಡೆ ಚರ್ಚೆಗೆ ಹೋಗಿ ಬದಲಾಯಿಸಿ -ಗೆ ಕ್ಲಿಕ್ ಮಾಡಿ ಸಲಹೆ ಟೈಪು ಮಾಡಿ; ಅಗತ್ಯವಾದರೆ ಬಲಗಡೆ ಬರುವ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ
== ಟಿಪ್ಪಣಿಗಳು ==
{{reflist}}
== ಹೊರಗಿನ ಕೊಂಡಿಗಳು ==
{{commonscat}}
* [http://www.aponline.gov.in/ ಆಂಧ್ರ ಪ್ರದೇಶ ಸರ್ಕಾರದ ಅಧಿಕೃತ ವೆಬ್ಸೈಟ್ ]
* [http://www.aptourism.in/ ಆಂಧ್ರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆ] {{Webarchive|url=https://web.archive.org/web/20110512192155/http://aptourism.in/ |date=2011-05-12 }}
* {{ODP|Regional/Asia/India/Andhra_Pradesh/}}
* [http://www.ap.nic.in/ NIC ವೆಬ್ಸೈಟ್ನಲ್ಲಿನ ಆಂಧ್ರ ಪ್ರದೇಶದ ಪೋರ್ಟಲ್] {{Webarchive|url=https://web.archive.org/web/20110511100851/http://www.ap.nic.in/ |date=2011-05-11 }}
* [http://www.apstatepolice.org/ ಆಂಧ್ರ ಪ್ರದೇಶ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ ]
{{Major Cities of Andhra Pradesh}}
{{States and territories of India}}
[[:pnb:آندھراپردیش|pnb:آندھراپردیش]]
==ವರ್ಗ==
{{Interwikineeded}}
[[ವರ್ಗ:ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು]]
[[ವರ್ಗ:ಆಂಧ್ರ ಪ್ರದೇಶ]]
[[ವರ್ಗ:1956ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರಾಂತ್ಯಗಳು]]
[[ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
2gleq8ekiggzt6qcmdbdg3l8xqq29ep
ಕೇರಳ
0
2078
1378287
1343341
2026-08-03T08:19:39Z
A826
72368
[[ಕೇರಳಂ]] ಪುಟಕ್ಕೆ ಪುನರ್ನಿರ್ದೇಶನ
1378287
wikitext
text/x-wiki
#REDIRECT [[ಕೇರಳಂ]]
{{Infobox ಭಾರತದ ರಾಜ್ಯ|
state_name=ಕೇರಳ |
image_map=India_Kerala_locator_map.svg |
capital=[[ತಿರುವನಂತಪುರಮ್|ತಿರುವನಂತಪುರಂ]] |
latd =8.48 |longd=76.95|
largest_city=[[ತಿರುವನಂತಪುರಮ್|ತಿರುವನಂತಪುರಂ]]|
abbreviation=IN-KL |
official_languages=[[ಮಲಯಾಳಂ]]|
legislature_type=Unicameral |
legislature_strength= 141|
governor_name=ರಾಜೇಂದ್ರ ಅರ್ಲೇಕರ್|
ಮುಖ್ಯ ಕಾರ್ಯದರ್ಶಿ= ಎಸ್.ಎಮ್ ವಿಜಯಾನಂದ್ ಐಎಎಸ್|
ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಕೆಳಗೆ ಐಪಿಎಸ್|
ಶಾಸಕಾಂಗ ಏಕಸಭೆಯ (141 ಸ್ಥಾನಗಳು) |
chief_minister=ಪಿಣರಾಯಿ ವಿಜಯನ್ (ಸಿಪಿಐ (ಎಂ))|
established_date=[[ನವೆಂಬರ್ ೧]],[[೧೯೫೬]] |
area= 38,863|
area_magnitude=11 |
area_rank=21st |
population_year= 2001|
population=31,838,619 |
population_rank=12th |
population_density=819 |
districts=14 |
website=www.kerala.gov.in |
seal=[[ಚಿತ್ರ:KeralaSeal.jpg|150px|center]]|
footnotes = |
}}
[[File:Kerala-map-kn.png|thumb|ಕೇರಳ]]
'''ಕೇರಳ''' ([[ಮಲಯಾಳಂ]]:കേരളം) - ನೈರುತ್ಯ ಭಾರತದ ಕರಾವಳಿಯಲ್ಲಿರುವ ಒಂದು ರಾಜ್ಯ. ಇದು ಪೂರ್ವ ಮತ್ತು ಈಶಾನ್ಯಗಳಲ್ಲಿ [[ತಮಿಳುನಾಡು]] ಮತ್ತು [[ಕರ್ನಾಟಕ|ಕರ್ನಾಟಕಗಳಿಂದಲೂ]], ಪಶ್ಚಿಮದಲ್ಲಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದಿಂದಲೂ]] ಸುತ್ತುವರಿಯಲ್ಪಟ್ಟಿದೆ. ಇದು ಭಾಷಾ ಸಾಂಸೃತಿಕ ಪ್ರದೇಶವೆಂದು ಕರೆಯಲ್ಪಡುವ ದಕ್ಷಿಣ ಭಾರತದ ರಾಜ್ಯಗಲ್ಲಿ ಒಂದು. [[ಮಲಯಾಳಂ]] ಇಲ್ಲಿನ ಪ್ರಧಾನ ಆಡುಭಾಷೆ. ವಿಸ್ತೀರ್ಣದಲ್ಲಿ ೨೧ನೇ ಸ್ಥಾನವನ್ನು ಪಡೆದಿರುವ ಕೇರಳವು ಜನಸಂಖ್ಯೆಯಲ್ಲಿ ೧೨ನೇ ಸ್ಥಾನವನ್ನು ಪಡೆದಿದೆ.
ಮಲಯಾಳಂ ಭಾಷೆ ಮಾತನಾಡುವ ಜನರು ವಾಸಿಸುವ (ನಾಗರ ಕೊವಿಲ್, [[ಕನ್ಯಾಕುಮಾರಿ]] ತಾಲೂಕುಗಳನ್ನು ಹೊರತುಪಡಿಸಿ ) ತಿರುವಿದಾಕೂಂರು, ಕೊಚ್ಚಿ, ಮಲಬಾರ್, ದಕ್ಷಿಣ ಕನ್ನಡ ಜಿಲ್ಲೆಯಾದ [[ಕಾಸರಗೋಡು]] ತಾಲೂಕು ಎಂಬೀ ಪ್ರದೇಶಗಳನ್ನು ಸೇರಿಸಿ ೧೯೫೬ರಲ್ಲಿ ಭಾಷಾವಾರು ಪ್ರಾಂತ್ಯವಾಗಿ ಕೇರಳಂ ರಾಜ್ಯ ರಚನೆಯಾಯಿತು.
==ಸರ್ಕಾರ ==
*ರಾಜ್ಯಪಾಲರ ನೇಮಕ
*ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ [[ಪಳನಿಸ್ವಾಮಿ ಸದಾಶಿವಂ]] ಅವರನ್ನು ಕೇರಳ ರಾಜ್ಯಪಾಲರನ್ನಾಗಿ ನೇಮಿಸಿದೆ. ಅವರು ದಿ. ೫-೯-೨೦೧೪/5-9-2014ರಂದು ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು.(ವಾರದ ಹಿಂದೆ ಕಾಂಗ್ರೆಸ್ ನಾಯಕಿ ದಿಲ್ಲಿ ಮಾಜಿ ಸಿಎಂ [[ಶೀಲಾ ದೀಕ್ಷಿತ್]] ಅವರು ಕೇರಳ ರಾಜ್ಯಪಾಲ ಹುದ್ದೆಗೆ ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ಭವನ ಅಂಗೀಕರಿಸಿದೆ. ಇವರಿಂದ ತೆರವಾದ ಈ ಸ್ಥಾನಕ್ಕೆ ಸದಾಶಿವಂ ಅವರ ನೇಮಕವಾಗಿದೆ. ಇವರು ಕಳೆದ ಏಪ್ರಿಲ್ನಲ್ಲಿ ಸಿಜೆಐ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.)<ref>(ಸುದ್ದಿ : ವಿಜಯವಾಣಿ-೪-೯-೨೦೧೪/4-9-2014)</ref>
*ಕೇರಳ ವಿಧಾನಸಭೆಯ ಅವಧಿ ಮೇ ೩೧, ೨೦೧೬ ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆ,೧೬ ಮೇ ೨೦೧೬ ರಂದು ನಡೆಯಲಿದೆ.<ref>ಭಾರತದ ಚುನಾವಣಾ ಆಯೋಗ</ref>
====೨೦೧೬ ಎಡರಂಗ ಅಧಿಕಾರಕ್ಕೆ====
*ಕೇರಳದ ೧೨ನೇ ಮುಖ್ಯಮಂತ್ರಿಯಾಗಿ ಬಹುಮತ ಪಡೆದ ಎಡರಂಗದ ನಾಯಕ, ಪಿಣರಾಯಿ ವಿಜಯನ್ ಅವರು ೨೦೧೬ ಮೇ ೨೪ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು. ವಿಜಯನ್ ಅವರ ಜತೆಗೆ ೧೯ ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ಸಂಜೆ ೪ ಗಂಟೆಗೆ ನಡೆದ ಸಮಾರಂಭದಲ್ಲಿ ಕೇರಳದ ರಾಜ್ಯಪಾಲ ಪಿ. ಸದಾಶಿವಂ ಅವರು ಪ್ರಮಾಣ ವಚನ ಬೋಧಿಸಿದರು.
*೧೮ ಸಚಿವರು: ಪಿಣರಾಯಿ ತಮ್ಮ ಸಂಪುಟದಲ್ಲಿ ೧೩ ಮಂದಿ ಹೊಸಬರು ಸೇರಿದಂತೆ ೧೮ ಸಚಿವರಿಗೆ ಸ್ಥಾನ ನೀಡಿದ್ದಾರೆ. ಸಿಪಿಎಂನ ೧೧, ಸಿಪಿಐನ ನಾಲ್ಕು, ಕಾಂಗ್ರೆಸ್ (ಸೆಕ್ಯುಲರ್), ಜೆಡಿಎಸ್ ಮತ್ತು ಎನ್ಸಿಪಿಯ ತಲಾ ಒಬ್ಬರು ಇದರಲ್ಲಿ ಸೇರಿದ್ದಾರೆ. ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ದೊರೆತಿದೆ.
*ಸಿಪಿಎಂ ನೇತೃತ್ವದ ಎಲ್ಡಿಎಫ್ ಕೇರಳ ವಿಧಾನಸಭಾ ಚುನಾವಣೆಯಲ್ಲಿ ೧೪೦ ಸ್ಥಾನಗಳಲ್ಲಿ ೯೧ ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿದೆ.<ref>ಕೇರಳದಲ್ಲಿ ಪಿಣರಾಯಿ ಯುಗ Thu, 26th May, ೨೦೧೬ ಪ್ರಜಾವಾಣಿ</ref>
==ಇವುಗಳನ್ನೂ ನೋಡಿ==
*[[ಕೇರಳದ ಇತಿಹಾಸ]]
*[[ಪದ್ಮನಾಭಸ್ವಾಮಿ ದೇವಸ್ಥಾನ]]
*[[ಕೇರಳದ ಜಿಲ್ಲೆಗಳು]]
==ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
*[[ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ]]
*[[ಭಾರತದ ಚುನಾವಣೆಗಳು 2016]]
{{commons category|Kerala}}
{{ದಕ್ಷಿಣ ಭಾರತ}}
{{ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು}}
{{Interwikineeded}}
[[ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
9tyavdfmu0aivrtrs1u1n7bkjfw2jlp
ಆನೇಕಲ್
0
5941
1378137
1336732
2026-08-02T13:51:29Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378137
wikitext
text/x-wiki
{{Infobox ಊರು
| name = ಅನೇಕಲ್
| native_name =
| native_name_lang = ಕನ್ನಡ
| other_name =
| nickname =
| settlement_type = ತಾಲ್ಲೂಕು ಕೇಂದ್ರ
| image_skyline =
| image_alt =
| image_caption =
| pushpin_map = India Karnataka
| pushpin_label_position = right
| pushpin_map_alt =
| pushpin_map_caption = Location in Karnataka, India
| latd = 12.7
| latm =
| lats =
| latNS = N
| longd = 77.7
| longm =
| longs =
| longEW = E
| coordinates_display = inline
| subdivision_type = ದೇಶ
| subdivision_name = {{flag|ಭಾರತ}}
| subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| subdivision_name1 = [[ಕರ್ನಾಟಕ]]
| subdivision_type2 = [[ಭಾರತದ ಜಿಲ್ಲೆಗಳು|ಜಿಲ್ಲೆ]]
| subdivision_name2 = [[ಬೆಂಗಳೂರು ನಗರ ಜಿಲ್ಲೆ]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Member of the Legislative Assembly (India)|MLA]]
| leader_name = ಬಿ.ಶಿವಣ್ಣ
| unit_pref = Metric
| area_footnotes = ಕನ್ನಡ
| area_rank =
| area_total_km2 =
| elevation_footnotes =
| elevation_m = 915
| population_total = 33160
| population_as_of = ೨೦೧೧
| population_rank =
| population_density_km2 = auto
| population_demonym =
| population_footnotes =
| demographics_type1 = [[ಭಾಷೆಗಳು ಕನ್ನಡ]]
| demographics1_title1 = ಅಧಿಕೃತ
| demographics1_info1 = ಕನ್ನಡ
| timezone1 = [[ಭಾರತದ ನಿರ್ದಿಷ್ಟ ಕಾಲಮಾನ|IST]]
| utc_offset1 = +5:30
| postal_code_type = [[Postal Index Number|PIN]]
| postal_code = 562106
| area_code_type = ದೂರವಾಣಿ ಕೋಡ್
| area_code = 91-80
| registration_plate = KA 59
| website =
| footnotes =
}}
'''ಆನೇಕಲ್''' [[ಬೆಂಗಳೂರು ನಗರ ಜಿಲ್ಲೆ|ಬೆಂಗಳೂರು ನಗರ ಜಿಲ್ಲೆಯ]] ತಾಲೂಕುಗಳಲ್ಲೊಂದು. ಆನೇಕಲ್ ಒಂದು ಪ್ರಮುಖ ಪಟ್ಟಣ ಹಾಗು ತಾಲ್ಲೂಕು ಕೇಂದ್ರ. ಬೆಂಗಳೂರಿನಿಂದ ೩೫ ಕಿ.ಮೀ. ದೂರದಲ್ಲಿರುವ ಆನೇಕಲ್, [[ತಮಿಳುನಾಡು]] ಗಡಿಯಿಂದ ಕೇವಲ ೫ ಕಿ.ಮೀ.ದೂರದಲ್ಲಿದೆ. ರೇಷ್ಮೆ ವಸ್ತ್ರ ತಯಾರಿಕೆ ಹೆಸರುವಾಸಿಯಾಗಿರುವ ಆನೇಕಲ್ ತಾಲ್ಲೂಕಿನಲ್ಲಿ ಅನೇಕ ಐತಿಹಾಸಿಕ ಹಾಗು ನೈಸರ್ಗಿಕ ತಾಣಗಳಿವೆ.
ಗಡಿನಾಡು ಪ್ರದೇಶದಲ್ಲಿದ್ದರೂ ತಾಲೂಕಿನಲ್ಲಿ ಕನ್ನಡಿಗರು ಬಹುಸಂಖ್ಯಾತರಗಿದ್ದಾರೆ. ಆನೇಕಲ್ಲನ್ನು [[ಕರ್ನಾಟಕ]]ದ [[ರಾಗಿ]]ಯ ಕಣಜವೆಂದು ಕರೆಯಲಾಗುತ್ತದೆ. ಆನೇಕಲ್ ತಾಲೂಕು 530 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ.
==ಮೇಲ್ಮೈ ಲಕ್ಷಣ==
ಕರ್ನಾಟಕ ರಾಜ್ಯದಲ್ಲಿನ ಬೆಂಗಳೂರು ಜಿಲ್ಲೆಯ ಈಶಾನ್ಯದಲ್ಲಿರುವ ಈ ಪಟ್ಟಣದಲ್ಲಿ ಎರಡು ಕಣಿವೆಗಳಿವೆ. ಪಶ್ಚಿಮದ ಭಾಗ ಬೆಟ್ಟಗುಡ್ಡಗಳಿಂದಲೂ ಕಾಡಿನಿಂದಲೂ ತುಂಬಿದೆ. ಇದು ನದಿಯ ಜಲಾನಯನ ಕಣಿವೆಗೆ ಸೇರಿದ್ದು. ಪೂರ್ವದ ಕಣಿವೆ ಪೊನ್ಯೈಯಾರ್ ನದಿಯ ಜಲಾನಯನ ಭೂಮಿಗೆ ಸೇರಿದೆ.
==ಜನಸಂಖ್ಯೆ==
ಈ ತಾಲ್ಲೂಕಿನ ಜನಸಂಖ್ಯೆ 2,98,961 ಹಾಗೂ ಪಟ್ಟಣದ ಜನಸಂಖ್ಯೆ 33,160.
==ಭೌಗೋಳಿಕ==
ಬೆಂಗಳೂರು ನಗರದ ಆಗ್ನೇಯಕ್ಕೆ 36 ಕಿ.ಮೀ.ಗಳ ದೂರದಲ್ಲಿ {{Coord|12.7|N|77.7|E|}}.<ref>{{Cite web |url=http://www.fallingrain.com/world/IN/19/Anekal.html |title=Falling Rain Genomics, Inc - Anekal |access-date=2016-04-20 |archive-date=2016-03-03 |archive-url=https://web.archive.org/web/20160303213948/http://www.fallingrain.com/world/IN/19/Anekal.html |url-status=dead }}</ref> ಅಕ್ಷಾಂಶ,ರೇಖಾಂಶಗಳು ಸಂಧಿಸುವ ಭಾಗದಲ್ಲಿ ತಾಲ್ಲೂಕಿನ ಕೇಂದ್ರವಾದ ಆನೇಕಲ್ ಪಟ್ಟಣವಿದೆ.ಇದು ಸಮುದ್ರ ಮಟ್ಟದಿಂದ ಸರಾಸರಿ 915 metres (3001 feet)ಎತ್ತರದಲ್ಲಿದೆ. ಆನೇಕಲ್ ಪದದ ಅರ್ಥದ ಪ್ರಕಾರ ಆನೆಯಕಲ್ಲು ಅಥವಾ ಅಣಿಕಲ್ಲು ಎಂಬ ವ್ಯಾಖ್ಯಾನ ದೊರಕುತ್ತದೆ. ಆದರೆ ಇದಕ್ಕೆ ಸಂಬಂಧಪಟ್ಟ ಯಾವುದೇ ಕಥೆಯೂ ದೊರಕುವುದಿಲ್ಲ.
==ಇತಿಹಾಸ==
ಇಲ್ಲಿ ಕೋಟೆ ಮತ್ತು ಕೆರೆಯನ್ನು 17ನೆಯ ಶತಮಾನದ ಪ್ರಾರಂಭದಲ್ಲಿ ಸಲಗತ್ತೂರ್ ವಂಶದ ಮುಖ್ಯಸ್ಥ ಕಟ್ಟಿಸಿದನೆಂದು ಪ್ರತೀತಿಯಿದೆ. ಒಂದು ಶತಮಾನ ಕಳೆದ ಅನಂತರ ಇದು ಮೈಸೂರಿಗೆ ಸೇರಿದುದಲ್ಲದೆ 1760ರಲ್ಲಿ [[ಹೈದರಾಲಿ|ಹೈದರನ]] ಕೈವಶವಾಯಿತು. 1400ರಲ್ಲಿ ಇಲ್ಲಿನ ವಾಸಸ್ಥರು ಕ್ರೈಸ್ತ ದೇವಾಲಯವನ್ನು ಕಟ್ಟಿದರೆಂದು ತಿಳಿದುಬರುತ್ತದೆ. ಪೌರಸಭೆ 1870ರಲ್ಲಿ ಪ್ರಾರಂಭವಾಯಿತು. ಇತ್ತೀಚಿನ ಜನಜಾಗೃತಿಯ ಚಟುವಟಿಕೆಗಳಿಂದ ಪಟ್ಟಣ ಅನೇಕ ಕಾರ್ಯಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವುದಲ್ಲದೆ ತಾಲ್ಲೂಕಿನ ಅಭಿವೃದ್ಧಿಗೂ ಸಹಾಯಕವಾಗಿದೆ.
== ಪ್ರೇಕ್ಷಣೀಯ ಸ್ಥಳಗಳು ==
* [[ಬನ್ನೇರುಘಟ್ಟ]] : ಬನ್ನೇರುಘಟ್ಟ ಬೆಂಗಳೂರು ಹಾಗು ಆನೇಕಲ್ ನಡುವೆ ಎರಡೂ ಸ್ಥಳಗಳಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ಬನ್ನೇರುಘಟ್ಟದಲ್ಲಿ ಒಂದು ಸುಂದರ ರಾಷ್ಟೀಯ ಉದ್ಯಾನವವಿದೆ.
* [[ವಿದ್ಯುನ್ಮಾನ ನಗರ]] (Electronics City) : ಮಾಹಿತಿ ತಂತ್ರಜ್ಞಾನ ಹಾಗು ವಿದ್ಯುನ್ಮಾನ ಸಂಸ್ಥೆಗಳ ಕಚೇರಿಗಳಿರುವ ವಿದ್ಯುನ್ಮಾನ ನಗರ (Electronics City)ಆನೇಕಲ್ ನಿಂದ ೨೦ ಕಿ.ಮೀ ದೂರದಲ್ಲಿದೆ.
* [[ಮುತ್ಯಾಲಮಡುವು]] : ಆನೇಕಲ್ ನಿಂದ ೫ ಕಿ.ಮೀ ದೂರದಲ್ಲಿರುವ ಮುತ್ಯಾಲಮಡುವಿನಲ್ಲಿ ಸುಂದರ ಜಲಪಾತವಿದೆ ಹಾಗು ಇದು ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ.
* ಕಂಬದ ಗಣಪತಿ ದೇವಾಲಯ
[[ಚಿತ್ರ:ಆನೇಕಲ್ ಕಂಬದ ಗಣಪತಿ.jpg|thumb|right|ಇತಿಹಾಸ ಪ್ರಸಿದ್ಧ ಕಂಬದ ಗಣಪತಿ]]
* ಶ್ರೀ ತಿಮ್ಮರಾಯಸ್ವಾಮಿ ದೇವಾಲಯ ಇದೆ.
* ಶ್ರೀ ಚನ್ನಕೇಶವ ದೇವಾಲಯ ಇದೆ.
* ಶಂಕರ ಮಠ : ಇಲ್ಲಿನ ಅಮೃತ ಶಿಲೆಯ ಶ್ರೀ ಶಂಕರಾಚಾರ್ಯ ಹಾಗು ಶ್ರೀ ಶಾರದಾ ದೇವಿಯ ವಿಗ್ರಹಗಳು ಐತಿಹಾಸಿಕ ಮಹತ್ವ ಪಡೆದಿದೆ.
* ಶ್ರೀ ಆಂಜಿನೇಯ ದೇವಾಲಯ ಹೊಸುರು ಬಾಗಿಲು.
* ಈ ತಾಲೂಕಿನ ನಾರಾಯಣಘಟ್ಟ ಗ್ರಾಮದಲ್ಲಿ ಚೋಳರ ಕಾಲದ ಶ್ರೀರಾಮ ದೇವಾಲಯವನ್ನು ಕಾಣಬಹುದಾಗಿದೆ.
* ಈ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಶ್ರೀ ಮದ್ದೂರಮ್ಮ ದೇವಿಯ ಪ್ರಸಿದ್ದ ಜಾತ್ರೆ ನಡೆಯುತ್ತದೆ.
* ಈ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಶ್ರೀ ಚನ್ನರಾಯ ಸ್ವಾಮಿ ದೇವಸ್ಥಾನ ವಿಷ್ಣು ದೇವರ ಬೃಂದಾವನ ದಶಾವತಾರದೊಂದಿಗೆ ಸುಮಾರು 850 ವರ್ಷಗಳ ಹಳೆಯ ದೇವಾಲಯ.
* ಹಾರಗದ್ದೆ ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯವು ಪುರಾತನ ಕಾಲದ ದೇವಾಲಯವಾಗಿದೆ
==ಉಲ್ಲೇಖಗಳು==
{{reflist}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆನೇಕಲ್}}
{{Refimprove}}
{{Interwikineeded}}
[[ವರ್ಗ:ಬೆಂಗಳೂರು ನಗರ ಜಿಲ್ಲೆಯ ತಾಲೂಕುಗಳು]]
{{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}}
tjzvg3w4og0eidqdmygy8e6qn91cvqu
ನಿಗೂಢ ರಹಸ್ಯ (ಚಲನಚಿತ್ರ)
0
9337
1378225
1351886
2026-08-03T00:24:36Z
~2026-42671-93
100893
/* */
1378225
wikitext
text/x-wiki
{{Infobox ಚಲನಚಿತ್ರ
|ಚಿತ್ರದ ಹೆಸರು = ನಿಗೂಢ ರಹಸ್ಯ
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೯೦ ಕನ್ನಡಚಿತ್ರಗಳು|೧೯೯೦]]
|ಚಿತ್ರ ನಿರ್ಮಾಣ ಸಂಸ್ಥೆ = ಜೆ.ಆರ್.ಕೆ.ವಿಷನ್ಸ್
|ನಾಯಕ(ರು) = [[ಶಂಕರನಾಗ್]]
|ನಾಯಕಿ(ಯರು) = [[ಗೀತಾ (ನಟಿ)|ಗೀತಾ]]
|ಪೋಷಕ ನಟರು = [[ವನಿತಾವಾಸು]], [[ತಾರ]], [[ದೊಡ್ಡಣ್ಣ]], [[ಮೈಸೂರು ಲೋಕೇಶ್]],[[ಸದಾಶಿವ ಬ್ರಹ್ಮಾವರ]]
|ಸಂಗೀತ ನಿರ್ದೇಶನ = [[ಹಂಸಲೇಖ]]
|ಕಥೆ =
|ಚಿತ್ರಕಥೆ =
|ಸಂಭಾಷಣೆ =
|ಚಿತ್ರಗೀತೆ ರಚನೆ =
|ಹಿನ್ನೆಲೆ ಗಾಯನ =
|ಛಾಯಾಗ್ರಹಣ = ಮನೋಹರ್
|ನೃತ್ಯ =
|ಸಾಹಸ =
|ಸಂಕಲನ =
|ನಿರ್ದೇಶನ = [[ಪೇರಾಲ]]
|ನಿರ್ಮಾಪಕರು = [[ಜಗದೀಶ್ ಮಲ್ನಾಡ್]]
|ಬಿಡುಗಡೆ ದಿನಾಂಕ =
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ =
}}
'''''ನಿಗೂಢ ರಹಸ್ಯ''''' - ಇದು 1990ರ ಕನ್ನಡ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಇದನ್ನು ಪೇರಾಲ ಅವರು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ [[ಶಂಕರ್ ನಾಗ್]], [[ಗೀತಾ (ನಟಿ)| ಗೀತಾ ]], [[ವನಿತಾ ವಾಸು]] ಮತ್ತು [[ತಾರಾ]] ಪ್ರಮುಖ ಪಾತ್ರಗಳಲ್ಲಿದ್ದರು. ಚಿತ್ರಕ್ಕೆ ಸಂಗೀತವನ್ನು [[ಹಂಸಲೇಖ]] ಒದಗಿಸಿದರು. ಈ ಚಿತ್ರವು ಶಂಕರ್ ನಾಗ್ ಅವರ ಮರಣದ ನಂತರ ಬಿಡುಗಡೆ ಆಯಿತು. ಅವರ ಸೋದರ ಅನಂತ್ ನಾಗ್ ಅವರು ಶಂಕರ್ ನಾಗ್ ಅವರ ಪಾತ್ರಕ್ಕೆ ಧ್ವನಿ ನೀಡಿದರು.
==ಚಿತ್ರಕಥೆ==
ಇಂಜಿನಿಯರ್ ಮೋಹನನು ಒಂದು ದೊಡ್ಡ ಕಟ್ಟಡ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಾನೆ. ಆದರೆ ಅವನು ಇರಬೇಕಾಗಿ ಬರುವ ಸ್ಥಳವು ನಿಗೂಢವಾಗಿ ಪರಿಣಮಿಸುತ್ತದೆ. ಅಲ್ಲಿ ಕೆಲವು ವಿಶೇಷ ದಿನಗಳಲ್ಲಿ ಯಾರಾದರೂ ಒಬ್ಬರು ಸುದೀರ್ಘ ವಿದ್ಯುತ್ ನಿಲುಗಡೆಯ ಸಂದರ್ಭದಲ್ಲಿ ಕಾಣೆಯಾಗುತ್ತಿರುತ್ತಾರೆ ಮತ್ತು ಕೆಲ ದಿನಗಳ ನಂತರ ಊರ ಹೊರಗಡೆ ಅವರ ಶವವು ಸಿಗುತ್ತಿರುತ್ತದೆ. ಅಷ್ಟೇ ಅಲ್ಲದೆ ಒಂದು ದೆವ್ವ,ಒಂದು ದೆವ್ವದ ಮನೆ, ಕಾಣೆಯಾಗುವ ಜನರ ಗುಂಪು, ಮತ್ತು ಒಬ್ಬ ಶಕ್ತಿಶಾಲಿ ದೈತ್ಯ ಇವೆಲ್ಲ ಇವನಿಗೆ ಎದುರಾಗುತ್ತವೆ. ಚಲನಚಿತ್ರದ ಉಳಿದ ಭಾಗವು ಮೋಹನನು ಸತ್ಯವನ್ನು ಹೀಗೆ ಬಯಲಿಗೆಳೆಯುತ್ತಾನೆ ಎಂಬುದನ್ನು ತೋರಿಸುತ್ತದೆ.
==ಪಾತ್ರವರ್ಗ==
{{div col|colwidth=22em}}
*[[ಶಂಕರ್ ನಾಗ್]] ಮೋಹನ್ ಪಾತ್ರದಲ್ಲಿ (ಧ್ವನಿ ನೀಡಿದ್ದು [[ಅನಂತನಾಗ್]])
*[[ ಗೀತಾ (ನಟಿ)|ಗೀತಾ]] ದೀಪಾ ಮತ್ತು ರೂಪಾ ಆಗಿ ದ್ವಿಪಾತ್ರದಲ್ಲಿ
*[[ವನಿತಾ ವಾಸು]] ರೋಹಿಣಿ ಪಾತ್ರದಲ್ಲಿ
*[[ತಾರಾ]]
*[[ದೊಡ್ಡಣ್ಣ]]
*[[ ಸುಧೀರ್]]
*[[ಕೆ ಎಸ್ ಅಶ್ವಥ್|ಕೆ.ಎಸ್. ಅಶ್ವಥ್]]
*[[ಸದಾಶಿವ ಬ್ರಹ್ಮಾವರ್]]
*[[ ರಮೇಶ್ ಭಟ್]]
*[[ ಮೈಸೂರು ಲೋಕೇಶ್]]
*[[ ಸಿಹಿ ಕಹಿ ಚಂದ್ರು]]
*[[ ಉಮಾಶ್ರೀ]]
* ಕಾಮಿನಿ ಧರನ್
*[[ ಲೋಹಿತಾಶ್ವ]]
* ರತ್ನಾಕರ್
*[[ ಶೃಂಗಾರ ನಾಗರಾಜ್]]
* ಲಲಿತಾ
*[[ ಸೀಮಾ]]
* ಕಲಾ
* ಬೇಬಿ ರಶ್ಮಿ
* ಬೇಬಿ ಲಕ್ಷ್ಮಿ
*ಹಾಸ್ಟೆಲ್ ಸಂಜು
* ರಾಮಮೂರ್ತಿ
* ಶ್ರೀಶೈಲನ್
*ರಾಮಚಂದ್ರ
* ಶ್ರೀಮತಿ ರಾಮಚಂದ್ರ
*ಚಿಕ್ಕಣ್ಣ
*ರಮೇಶ್ ಪಂಡಿತ್
{{div col end}}
==ಹಿನ್ನೆಲೆ ಸಂಗೀತ==
{| class="wikitable" style="font-size:95%;"
! ಸಮಸಂಖ್ಯೆ !! ಹಾಡು !! ಹಾಡುಗಾರರು
|-
| 1 || "ಮದನ ಮೋಹನ" || [[ಎಸ್. ಜಾನಕಿ]]
|-
| 2 || " ತಿಳಿಯ ನೀರ" || [[ಕೆ.ಜೆ.ಜೇಸುದಾಸ್]], [[ಮಂಜುಳಾ ಗುರುರಾಜ್]]
|-
| 3 || "ಮಾನಸ ರಾಗವಿದು" || ಎಸ್ ಜಾನಕಿ
|-
| 4 || "ಏನಪ್ಪಾ ಯಜಮಾನ" || ಹಂಸಲೇಖ
|-
| 5 || "ಲಾಲಿ ಜೋ" || ಕೆ.ಜೆ.ಜೇಸುದಾಸ್, ಎಸ್ ಜಾನಕಿ
|-
|}
{{Unreferenced}}
{{Interwikineeded}}
[[ವರ್ಗ:ವರ್ಷ-೧೯೯೦ ಕನ್ನಡಚಿತ್ರಗಳು]]
bef19xl1yqnvek5w8kxcse8u83y8bq3
ಅರಸೀಕೆರೆ
0
11945
1378127
1335421
2026-08-02T12:02:29Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378127
wikitext
text/x-wiki
{{Infobox ಭಾರತದ ಭೂಪಟ |
native_name=ಅರಸೀಕೆರೆ |
skyline=Arsikere railway junction.jpg|
skyline_caption= ಅರಸೀಕೆರೆ ರೈಲ್ವೆ ಜಂಕ್ಷನ್ |
latd = 13.30|longd=76.25|
state_name=ಕರ್ನಾಟಕ |
district=[[ಹಾಸನ]] |
leader_title= |
leader_name= |
altitude=೮೦೬ |
population_as_of = ೨೦೦೧|
population_total =೪೫,೧೬೬|
population_density = ೫,೬೦೦ |
area_magnitude= |
area_total= |
area_telephone= ೦೮೧೭೯|
postal_code=೫೭೩ ೨೦೧|
vehicle_code_range=ಕೆಎ-೧೩|
footnotes = |
}}
{{Infobox ಊರು
| name = Arsikere
| native_name = ಅರಸೀಕೆರೆ
| native_name_lang = ಕನ್ನಡ
| other_name = Arasikere
| nickname =
| settlement_type = town
| image_alt =
| image_caption = Arsikere railway junction
| pushpin_map = India Karnataka
| pushpin_label_position = right
| pushpin_map_alt =
| pushpin_map_caption = Location in Karnataka, India
| latd = 13
| latm = 18
| lats = 50
| latNS = N
| longd = 76
| longm = 15
| longs = 22
| longEW = E
| coordinates_display = inline,title
| subdivision_type = Country
| subdivision_name = {{flag|India}}
| subdivision_type1 = State
| subdivision_name1 = Karnataka
| subdivision_type2 = District
| subdivision_name2 = [[Hassan District]]
| established_title = <!-- Established -->
| unit_pref = Metric
| area_total_km2 = 8
| elevation_footnotes =
| elevation_m = 806
| population_total = 45,166
| population_as_of 2013 = 45,166<ref>[http://www.arasikeretown.gov.in Home | ಅರಸೀಕೆರೆ ಪುರಸಭೆ] {{Webarchive|url=https://web.archive.org/web/20130314113604/http://www.arasikeretown.gov.in/ |date=2013-03-14 }}. Arasikeretown.gov.in (10 May 2013).</ref>
| population_rank =
| population_density_km2 = auto
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 573,103
| area_code_type = Telephone code
| area_code = 91 8174
| registration_plate = KA-13
| website = {{URL|www.arasikeretown.gov.in}}
| footnotes =
}}
[[File:Malekallu Tirupathi-balaji, Arsikere.jpg|thumb|ಮಾಲೆಕಲ್ಲು ತಿರುಪತಿ-ಬಾಲಾಜಿ]]
[[File:Jenukallu siddeshwara Betta (hill) Arsikere.jpg|thumb|ಜೇನುಕಲ್ಲು ಸಿದ್ಧೇಶ್ವರ ಬೆಟ್ಟ]]
[[File:Kattameshvara and Chandramoulishvara Temple, Shivalaya, Arsikere.jpg|thumb|ಕಟ್ಟಮೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನ, ಶಿವಾಲಯ]]
'''ಅರಸೀಕೆರೆ''' [[ಹಾಸನ]] ಜಿಲ್ಲೆಯ ಒಂದು [[ತಾಲೂಕು]] ಕೇಂದ್ರ. [[ತೆಂಗಿನಕಾಯಿ]] ಬೆಳೆಗೆ ಹಾಗು ಮಾರಾಟಕ್ಕೆ ಇದೊಂದು ಪ್ರಮುಖ ಕೇಂದ್ರ. ಹೊಯ್ಸಳರ ಕಾಲದ ಅರಸಿ ಎಂಬ ರಾಣಿಯೋರ್ವಳು ಈ ಊರಿನಲ್ಲಿ ಕೆರೆಯೊಂದನ್ನು ನಿರ್ಮಿಸಿದ ಕಾರಣಕ್ಕೆ ಈ ಹೆಸರು ಬಂದಿದೆ.<ref>{{Cite web |url=http://www.fallingrain.com/world/IN/19/Arsikere.html |title=ಆರ್ಕೈವ್ ನಕಲು |access-date=2020-01-11 |archive-date=2020-01-11 |archive-url=https://web.archive.org/web/20200111043243/http://www.fallingrain.com/world/IN/19/Arsikere.html |url-status=dead }}</ref> ಅರಸಿಯೆಂದರೆ ಕನ್ನಡದಲ್ಲಿ ರಾಣಿ ಎಂದರ್ಥ. ಆದ್ದರಿಂದ, ಇದು 'ಅರಸಿಯಾ + ಕೆರೆ' ಅಂದರೆ "ರಾಣಿಯ ಕೊಳ". ಅರಸೀಕೆರೆಯನ್ನು 'ಉದ್ಭವ ಸರ್ವಜ್ಞ ವಿಜಯ' ಮತ್ತು 'ಬಲ್ಲಾಳಪುರ' ಎಂದು ವಿವಿಧ ಸಮಯಗಳಲ್ಲಿ ಕರೆಯಲಾಗುತ್ತಿತ್ತು.
== ಪ್ರಮುಖ ಸ್ಥಳಗಳು==
ಈ ತಾಲ್ಲೂಕಿನಲ್ಲಿರುವ ಪ್ರಮುಖ ಸ್ಥಳಗಳೆಂದರೆ-ಹೊಯ್ಸಳರ ಕಾಲದ ಶಿವಾಲಯ, ಯಾದಾಪುರದ ಶ್ರಿ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿ ಬೆಟ್ಟ,ಮಲ್ಲೇಶ್ವರ ಬೆಟ್ಟ,ಮಾಲೆಕಲ್ಲು ತಿರುಪತಿ,ಲಕ್ಷ್ಮೀಪುರದ ಗಣಪತಿ ದೇವಾಲಯದ ಮಹಾಗಣಪತಿ, ಬೆಟ್ಟದ ಸಿದ್ದೇಶ್ವರಸ್ವಾಮಿ ದೇವಸ್ಥಾನ ನಾಗವೇದಿ ಹಾಗೂ ಮಾಡಾಳು ಶ್ರೀ ಗೌರಮ್ಮನವರು ಹಾಗೂ ಗರುಡನಗಿರಿ ಏಳು ಸುತ್ತಿನ ಕೋಟೆ ಮತ್ತು ಕರಡಿ ಅವಾಸ ಸ್ಥಾನ ಗರುಡನಗಿರಿ, ಹರಳಕಟ್ಟ-ಕ್ಯಾತನಹಳ್ಳಿ ಸಿರಿಗೆರೆ ಶಾಖಾ ಶ್ರೀಹೊಸಮಠ.
[[ಚಿತ್ರ:Arsikere_1.jpg|thumb|none|alt=ಶಿವಾಲಯ.|ಶಿವಾಲಯ.]]
==ಊರಿನ ಪರಿಚಯ==
ಈ ತಾಲ್ಲೂಕನ್ನು [[ಕಡೂರು]], [[ಚಿಕ್ಕನಾಯಕನಹಳ್ಳಿ]], [[ತಿಪಟೂರು]], [[ಚನ್ನರಾಯಪಟ್ಟಣ]], [[ಹಾಸನ]], [[ಬೇಲೂರು]] ಮತ್ತು [[ಚಿಕ್ಕಮಗಳೂರು]] ತಾಲ್ಲೂಕುಗಳು ಸುತ್ತವರಿದಿವೆ. ಕಸಬ, ಕಣಕಟ್ಟೆ, [[ಬಾಣಾವರ]], ಜಾವಗಲ್, [[ಗಂಡಸಿ]] ಹೋಬಳಿಗಳಿವೆ. ಒಟ್ಟು ೩೭೦ ಗ್ರಾಮಗಳೂ ಅರಸೀಕೆರೆ ಮತ್ತು ಬಾಣಾವರ ಪಟ್ಟಣಗಳೂ ಇವೆ. ತಾಲ್ಲೂಕಿನ ವಿಸ್ತೀರ್ಣ ೧೨೭೮ಚ.ಕಿಮೀ. ಜನಸಂಖ್ಯೆ ೩,೦೩,೦೦೦. ಮೊದಲು ಹಾರ್ನಹಳ್ಳಿ ತಾಲ್ಲೂಕ್ಕಾಗಿದ್ದು ೧೮೮೨ರಲ್ಲಿ ಅರಸೀಕೆರೆ ತಾಲ್ಲೂಕಾಯಿತು.<ref>https://web.archive.org/web/20130314113604/http://www.arasikeretown.gov.in/</ref>
==ಮೇಲ್ಮೈ ಲಕ್ಷಣ==
ಇದು ಬೆಟ್ಟಗುಡ್ಡಗಳ ಪ್ರದೇಶ. ಹಿರೇಕಲ್ಲುಬೆಟ್ಟ ಎಂಬುದು ಎತ್ತರವಾದ ಬೆಟ್ಟಗಳಲ್ಲೊಂದು. ಈ<nowiki> </nowiki>ತಾಲ್ಲೂಕಿನ ದಕ್ಷಿಣಭಾಗದಲ್ಲಿ ಸಾಧಾರಣವಾದ ಅನೇಕ ಕುರುಚಲು ಕಾಡುಗಳೂ ಹುಲ್ಲು ಬೆಳೆಯುವ ಪ್ರದೇಶಗಳೂ ಇವೆ. ಇಲ್ಲೆಲ್ಲ ಸಾಧಾರಣ ಫಲವತ್ತಾದ, ಗಡುಸಾದ ಕೆಂಪು ಮತ್ತು ಬೂದು ಬಣ್ಣದ ಮಣ್ಣಿದೆ. ಭೂಮಿ ದಕ್ಷಿಣದಿಂದ ಉತ್ತರದ ಕಡೆಗೆ ಇಳಿಜಾರಾಗಿದೆ.
==ಹವಾಮಾನ==
ಮಳೆ ಕಡಿಮೆ, ವಾರ್ಷಿಕ ಸರಾಸರಿ ೬೭೧ ಮಿಮೀ.
==ಬೇಸಾಯ ಮತ್ತು ವಾಣಿಜ್ಯ==
[[ರಾಗಿ]], [[ತೆಂಗು]], [[ಮೆಣಸಿನಕಾಯಿ]], ಎಣ್ಣೆಕಾಳುಗಳು, [[ಜೋಳ]] ಮುಖ್ಯ ಬೆಳೆಗಳು. ಕೆರೆಗಳಿಂದ ೧೭೭೦, ಬಾವಿಗಳಿಂದ ೮೨೦ ಮತ್ತು ಕೊಳವೆ ಬಾವಿಗಳಿಂದ ೨೮೦೦ಹೆ.ಗಳ ಜಮೀನು ನೀರಾವರಿಗೆ ಒಳಪಟ್ಟಿದೆ. ದಕ್ಷಿಣಕ್ಕೆ [[ಅಮೃತಮಹಲ್]] ಕಾವಲುಗಳು ಅನೇಕವಿದ್ದು ಇಲ್ಲಿ <nowiki> </nowiki>ಒಳ್ಳೆಯ ದನಕರುಗಳನ್ನು ಸಾಕುತ್ತಾರೆ. [[ಕುರಿ]] ಸಾಕಣೆಯೂ ಹೆಚ್ಚು.
==ಪ್ರವಾಸ ತಾಣ==
ಬಾಣಾವರ, ಗರುಡನಗಿರಿ, ಹಾರನಹಳ್ಳಿ, ಹುಲ್ಲೆಕೆರೆ ಮತ್ತು ಜಾವಗಲ್ಲು ಹಿರೆಕಲ್ಲುಸಿದ್ದೇಶ್ವರಬೆಟ್ಟ,ಬಿಳಿಕಲ್ಲು ಲಕ್ಷ್ಮಿರಂಗನಾಥ ಕ್ಷೇತ್ರ,ಜೇನುಕಲ್ಲು ಸಿದ್ದೇಶ್ವರಬೆಟ್ಟ, ಆದಿಹಳ್ಳಿ ಬಾರೆ ವಿರೂಪಾಕ್ಷಲಿಂಗ ಕ್ಷೇತ್ರ ಈ ತಾಲ್ಲೂಕಿನ ಇತರ ಪ್ರಸಿದ್ಧ ಸ್ಥಳಗಳು (ಆಯಾ ಲೇಖನಗಳನ್ನು ನೋಡಿ). ಅರಕೆರೆ ಎಂಬ ಗ್ರಾಮದಲ್ಲಿ ಚನ್ನಕೇಶವ ಮತ್ತು ರಾಮೇಶ್ವರ ದೇವಾಲಯಗಳಿವೆ. ಇಲ್ಲಿ [[ಗಂಗ]]ದೊರೆ ಎರೆಯಪ್ಪನ ಕಾಲಕ್ಕೆ ಸಂಬಂಧಿಸಿದ [[ಶಾಸನ]]ವಿರುವ ಒಂದು ದೊಡ್ಡ ವೀರಗಲ್ಲಿದೆ. ಕಂಚಿನಕೋವಿ ಮರತಿ ಎಂಬುದು ಅರಸೀಕೆರೆ ಪಟ್ಟಣಕ್ಕೆ ೪ಕಿಮೀ ದೂರದಲ್ಲಿರುವ ಒಂದು ಸಣ್ಣ ಬೆಟ್ಟ. ಇಲ್ಲಿ ದೇವಾಲಯಗಳ ಅವಶೇಷಗಳಿವೆ.ಹಿಂದೆ ಇಲ್ಲೊಂದು ಊರಿದ್ದಿರಬಹುದೆಂದು ಹೇಳುತ್ತಾರೆ. ಮಾಲೆಕಲ್ಲುತಿರುಪತಿ ಅರಸೀಕೆರೆಗೆ<nowiki> </nowiki>೩ಕಿಮೀ ದೂರದಲ್ಲಿರುವ ಒಂದು ಯಾತ್ರಾಸ್ಥಳ. ಇಲ್ಲಿನ ಹಿರೇಕಲ್ಲು ಬೆಟ್ಟದ ಮೇಲಿರುವ ವೆಂಕಟರಮಣಸ್ವಾಮಿ ಮತ್ತು ಬೆಟ್ಟದ ಬುಡದಲ್ಲಿರುವ ಗೋವಿಂದರಾಜಸ್ವಾಮಿ ದೇವಾಲಯಗಳು ಪ್ರಸಿದ್ಧವಾದವು.ಮಾವತ್ತನ ಹಳ್ಳಿಯಲ್ಲಿ ಹೊಯ್ಸಳ ಶೈಲಿಯ ಮಹಾಲಿಂಗೇಶ್ವರ ದೇವಾಲಯವಿದೆ. ಅಗ್ಗುಂದದಲ್ಲಿ ಶಿಥಿಲವಾದ ಎರಡು ಹೊಯ್ಸಳ ದೇವಾಲಯಗಳಿವೆ. ಅರಸೀಕೆರೆಗೆ ಉತ್ತರದಲ್ಲಿ ೧೧ ಕಿಮೀ ದೂರದಲ್ಲಿರುವ ನಾಗಪುರಿ ಕೋಟೆಯಲ್ಲಿ [[ಹೈದರ್ ಅಲಿ]] ಕಟ್ಟಿದ ಕೋಟೆಯ ಅವಶೇಷವಿದೆ,ಈ ಕೋಟೆಯನ್ನು ಬಾಣಾವರದ ಬ್ರಾಹ್ಮಣರನ್ನು ಪುರದಿಂದ ನಾಗಪುರಿಗೆ ಓಡಿಸಿ ಅಲ್ಲಿರಲು ಅವರಿಗೆ ವ್ಯವಸ್ಥೆ ಮಾಡಿದ್ದ,ಅರಸೀಕೆರೆಗೆ ೨೮ಕಿಮೀ ದೂರದಲ್ಲಿ ತಿಮ್ಮನಹಳ್ಳಿಯ ಹತ್ತಿರ ವೇದಾವತಿ ನದಿಗೆ ಹಿರೆಕಟ್ಟೆವಡ್ಡು ಎನ್ನುವ ಕಟ್ಟೆ ಕಟ್ಟಲಾಗಿದೆ.
==ತಾಲೂಕು ಕೇಂದ್ರ==
ತಾಲ್ಲೂಕಿನ ಕೇಂದ್ರ ಅರಸೀಕೆರೆಯ ಜನಸಂಖ್ಯೆ ೪೫,೧೬೦. ಮೈಸೂರು ಮತ್ತು ಬೆಂಗಳೂರು ಕಡೆಗಳಿಂದ ಅರಸೀಕೆರೆಗೂ ಮುಂದಕ್ಕೂ ರೈಲು ಮಾರ್ಗಗಳಿವೆ. ಇದೊಂದು ವ್ಯಾಪಾರ ಕೇಂದ್ರ. ಪ್ರತಿ ಶುಕ್ರವಾರ ಇಲ್ಲಿ ನಡೆಯುವ ದೊಡ್ಡ ಸಂತೆ [[ತೆಂಗಿನಕಾಯಿ]] ಮತ್ತು [[ಕೊಬ್ಬರಿ]]
ವ್ಯಾಪಾರಕ್ಕೆ ಪ್ರಸಿದ್ಧವಾಗಿದೆ. ೧೮೮೨ ರಷ್ಟು ಹಿಂದೆಯೇ ಅಸ್ತಿತ್ವಕ್ಕೆ ಬಂದ ಇಲ್ಲಿನ ಪುರಸಭೆ ಹಳೆಯ ಪುರಸಭೆಗಳಲ್ಲೊಂದು. ಈ ಊರಿಗೆ ಸಮೀಪವಾಗಿ ಕಸ್ತೂರಬಾ ಗ್ರಾಮವೆಂಬ ಒಂದು ಮಾದರಿ ಗ್ರಾಮ ಸ್ಥಾಪಿತವಾಗಿದೆ. ಇದನ್ನು ಶ್ರೀಮತಿ ಯಶೋಧರಾ ದಾಸಪ್ಪ ಅವರು ಸ್ಥಾಪಿಸಿದರು.
==ಇತಿಹಾಸ==
ಈ ಊರು ಹೊಯ್ಸಳರ ಆರಂಭಕಾಲದಲ್ಲಿಯೆ ಹುಟ್ಟುಕೊಂಡಿತು. ೧೧ ನೆಯ ಶತಮಾನದ ಕಡೆಯಲ್ಲಿ ಎರೆಯಂಗನ ಪಟ್ಟದರಸಿ ಮಹಾದೇವಿ ಕೆರೆಯನ್ನು ಕಟ್ಟಿಸಿದಂತೆ ಒಂದು ಶಾಸನದಿಂದ ತಿಳಿದುಬರುವುದರಿಂದ ಈ ಅರಸಿಯ ಹೆಸರಿನಿಂದಲೇ ಅರಸೀಕೆರೆ ಎಂಬ ಹೆಸರು ಈ ಊರಿಗೆ
ಬಂದಿರಬಹುದು. ಮುಂದೆ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಈ ಊರು ಅಭ್ಯುದಯುದ ಪರಾಕಾಷ್ಠೆಯನ್ನು<nowiki> </nowiki>ಕಂಡಿತು.
ಬಲ್ಲಾಳನ ಪೆರಿಯರಸಿ ಉಮಾದೇವಿಯ ತವರಾಗಿದ್ದ ಈ ಊರು ಅವನ ಕಾಲದಲ್ಲಿ [[ಹೊಯ್ಸಳ]] ರಾಜ್ಯದ ‘ಭಂಡಾರವಾಡ’ವಾಯಿತು. ಇದಕ್ಕೆ ಜಯಗೊಂಡ ಬಲ್ಲಾಳಪುರ, ವೀರವಿಜಯ ಬಲ್ಲಾಳಪುರ ಎಂಬ<nowiki> </nowiki>ಹೆಸರುಗಳೂ ಇದ್ದು ಶಾಸನಗಳಲ್ಲಿ ರಾಜಧಾನಿ ಅರಸಿಯಕೆರೆ ಎನ್ನಿಸಿಕೊಂಡಿದೆ.
ವೇದವಿದರಾದ ವಿಪ್ರರು, ವೀರರಾದ ಕಾಯ್ವಾಳುಗಳು, ಆಢ್ಯರಾದ ಪರದರು, ಅಲಕಾಧೀಶ ಕುಬೇರರನ್ನೂ<nowiki> </nowiki>ಧಿಕ್ಕರಿಸುವ ವಾಣಿಜ್ಯರು, ಅಚಲವಾಕ್ಯರಾದ ಜನ, ವಿನೂತಾಕಾರ ರಾದ ಕಾಂತಾಜನ, ಇಳೆಗೆ ಮಂಡನಪ್ರಾಯವಾದ ದೇವಾಗಾರ ಸಂದೋಹ, ಸಾಗರತೀರದಂತೆ ಶೋಭಿಸುವ ತುಂಬುಕೆರೆಗಳು, ಫಲಭರಿತ ವನಗಳು, ಪುಷ್ಪಭರಿತ ತೋಟಗಳು, ಸುರ ವೃಕ್ಷದಂತಿರುವ ಮಾವು, ಸುರಲತೆಯಂತಿರುವ ತಾಂಬೂಲ, ತೆಂಗು, ಕೌಂಗುಗಳು, ಗಂಧಶಾಲೀ ಪರಿಮಳಗಳಿಂದ ಕೂಡಿ ಉದ್ಯತ್ ಪ್ರಜಾಪೂರಿತವಾದ ಈ ನಗರಿಯು ಸುತ್ತಲೂ ಬಳಸಿದ್ದ ಕೋಟೆಯಿಂದ ಉರ್ವೀಮಂಡನವಾಯಿತೆಂದು ಇಲ್ಲಿನ ಹಲವಾರು ಶಾಸನಗಳನ್ನು ರಚಿಸಿರುವ ದೇವಪಾರ್ಯ, ತ್ರಿವಿಕ್ರಮಪಂಡಿತ, ಶಾಂತಿನಾಥ ಮೊದಲಾದ ಕವಿಗಳು ಹಾಡಿ ಹೊಗಳಿದ್ದಾರೆ.
ಪ್ರಸನ್ನ ಚೆನ್ನ ಕೇಶವ, ನಖರ ಜಿನಾಲಯ, ಸಹಸ್ರಕೂಟ ಚೈತ್ಯಾಲಯ, ಕೊಯ್ಲಾಳೇಶ್ವರ ಜಗತೇಶ್ವರ, ಮೇಳೇಶ್ವರ, ಬ್ರಹ್ಮ, ಕತ್ತಮೇಶ್ವರ, ಬಲ್ಲೇಶ್ವರ, ಅರೆಯಶಂಕರದೇವ ಮುಂತಾದ ಹಲವು ಗುಡಿಗೋಪುರಗಳನ್ನು ಅನೇಕ ರಾಜ್ಯಾಧಿಕಾರಿಗಳು ಹಾಗೂ ವಣಿಕ್ ಮತ್ತು ವೃತ್ತಿ ಶ್ರೇಣಿಗಳು, ಸರಸ್ವತಿ ಗಣದಾಸಿ ಕೇತೋಜ, ಪುಲಿಗೆಯ ಏಚೋಜ, ಸಿಂಗೋಜ ಮುಂತಾದ ಬಿರುದ<nowiki> </nowiki>ರೂವಾರಿಗಳನ್ನು ನಿಯೋಜಿಸಿ ಕಟ್ಟಿಸಿದರೆಂದು ಹೊಯ್ಸಳ ಶಾಸನ ಗಳಿಂದ ತಿಳಿಯುತ್ತದೆ.
ವಿದ್ಯೆಗೆ, ಕಲೆಗೆ ಐಶ್ವರ್ಯಕ್ಕೆ ಹೆಸರಾಗಿದ್ದ ಈ ಊರು ತೆಂಕಣ ಅಯ್ಯಾವೊಳೆ ಯಾಯಿತು. ಅಭಿನವ ದ್ವಾರಾವತಿಯಾಯಿತು. ಇಲ್ಲಿನ ಧರ್ಮಪ್ರತಿಪಾಲಕ ಶಕ್ತಿಯನ್ನು ಕೇಳಿದ ಕಳಚೂರ್ಯರ ಸಚಿವ ರೇಚರಸ ಬಲ್ಲಾಳನನ್ನಾಶ್ರಯಿಸಿ ಸಹಸ್ರಕೂಟ ಚೈತ್ಯಾಲಯಕ್ಕೆ ಸಹಸ್ರಕೂಟ ಜಿನಬಿಂಬವನ್ನು ಮಾಡಿಸಿಕೊಟ್ಟ.ಆದರೆ ಇಷ್ಟು ಉನ್ನತಿಗೇರಿದ ಈ ಊರು ಹೊಯ್ಸಳ ರಾಜ್ಯದ ಅವನತಿಯೊಂದಿಗೆ ಇಳಿಮುಖವಾಯಿತು.<nowiki> </nowiki>
ಮುಂದೆ ಕ್ರಮವಾಗಿ [[ಚನ್ನಪಟ್ಟಣ]]ದ ಜಗದೇವರಾಯ, [[ತರೀಕೆರೆ]]ಯ ತಿಮ್ಮಪ್ಪನಾಯಕ, ಇಕ್ಕೇರಿಯ ಶಿವಪ್ಪನಾಯಕ ಇವರ ಅಧೀನದಲ್ಲಿ ಒಂದು ಸಾಮಾನ್ಯ ಊರಾಗಿದ್ದು ಕಡೆಯಲ್ಲಿ ಮೈಸೂರರಸರಿಗೆ ಸೇರಿತು. ಆದರೆ ಮರಾಠಿಗರ ದಾಳಿಗೆ ಬೆದರಿ ಕಪ್ಪ ತೆತ್ತು ಸಾಕಾಗಿದ್ದ ಮೈಸೂರು ಕಪ್ಪದ ಹೊರೆ ತೀರುವವರೆಗೆ ಒತ್ತೆ ಇಟ್ಟ ಮೈಸೂರು ರಾಜ್ಯದ ಭಾಗಗಳಲ್ಲಿ ಈ ಊರು ಸೇರಿತು. ಆಗ ಇದು ಸುಲಿಗೆಗೊಳಗಾಗಿ ಹಾಳುಹಳ್ಳಿಯಾಗಿ ದಾರಿಹೋಕರನ್ನು ಸುಲಿಯುವ ದರೋಡೆಕಾರರಿಗೆ ಆಶ್ರಯಸ್ಥಾನವಾಯಿತು. ೧೯ ನೆಯ ಶತಮಾನದ ಕೊನೆಯಲ್ಲಿ ಬೆಂಗಳೂರು- ಪುಣೆ ರೈಲುಮಾರ್ಗ ಹಾಕಿದಮೇಲೆ ಈ ಊರು ಪುನಃ ಬೆಳೆಯಲಾರಂಭಿಸಿತು.
== ದೇವಾಲಯಗಳು ==
== '''ಸಿದ್ದೇಶ್ವರ ಸ್ವಾಮಿ ದೇವಾಲಯಯ''' ==
== ಸಿದ್ದೇಶ್ವರ ಸ್ವಾಮಿ ದೇವಾಲಯವು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಸುತ್ತಲು ಸದಾ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ದಟ್ಟವಾದ ಹರಣ್ಯದ ಮೇಲ್ಭಾಗದಲ್ಲಿ ದೊಡ್ಡ ಬಂಡೆಯ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯವು ಸುಮಾರು ಸಾವಿರಾರು ವರ್ಷಗಳ ಹಿಂದೆ ನಿರ್ಮಿತವಾದ ದೇವಾಲಯವಾಗಿದೆ.ಇಲ್ಲಿಯ ಜನರು ಹೇಳುವ ಪ್ರಕಾರ ಈ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಿತವಾದ ದೇವಾಲಯವು ಎಂದು ತಿಳಿದಿದೆ. ಕಾಡಿನ ಮಧ್ಯದಲ್ಲಿ ಇರುವ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತಾದಿಗಳು ಕಾಲ್ನಡಿಗೆಯ ಮೂಲಕ ಸಂಚರಿಸುತ್ತಾರೆ. ==
== ಈ ದೇವಾಲಯಕ್ಕೆ ಪ್ರವೇಶಿಸಬೇಕೆಂದರೆ ಅರಣ್ಯದ ತುತ್ತತುದಿಯಲ್ಲಿರುವ ಕಡಿದಾದ ದೊಡ್ಡ ಕಲ್ಲುಬಂಡೆಯನ್ನು ಹತ್ತಿ ಈ ದೇವಾಲಯಕ್ಕೆ ಪ್ರವೇಶಿಸಬೇಕಾಗುತ್ತದೆ. ಒಂದು ಅಚ್ಚರಿಯ ಸಂಗತಿ ಏನೆಂದರೆ ಈ ಹಿಂದೆ ಈ ದೇವಸ್ಥಾನಕ್ಕೆ ಮೆಟ್ಟಿಲುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ತುಂಬಾ ಜನರು ಮರಣ ಹೊಂದಿದ್ದಾರೆ. ಆದ್ದರಿಂದ ಮೆಟ್ಟಿಲುಗಳನ್ನು ನಿರ್ಮಿಸುವ ಸಾಹಸಕ್ಕೆ ಯಾರು ಸಹ ಆಗುವುದಿಲ್ಲ. ಬೆಟ್ಟದ ಮೇಲಿನ ಈ ದೇವಸ್ಥಾನದಲ್ಲಿ ಪಕ್ಕದಲ್ಲಿ ನಿಂತು ಸುತ್ತಲೂ ನೋಡಿದರೆ ತಂಪಾದ ಗಾಳಿ ಜೋರಾಗಿ ಬೀಸುತ್ತದೆ ನೋಡುಗರಿಗೆ ಸ್ವರ್ಗದಂತೆ ಭಾಸವಾಗುತ್ತದೆ. ಇಲ್ಲಿನ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರತಿ ವರ್ಷ ಕೊನೆ ಶ್ರಾವಣದಿಂದ ಸುತ್ತಮುತ್ತಲಿನ ಭಕ್ತಾದಿಗಳು ದೇವರ ದರ್ಶನವನ್ನು ಪಡೆದು ಪ್ರತಿಯೊಬ್ಬರು ಸಹ 101 ರೀತಿಯಲ್ಲಿ ಪೂಜೆಯನ್ನು ಸಮರ್ಪಿಸುತ್ತಾರೆ ಇನ್ನು ಕೆಲವರು ಪ್ರಸಾದವನ್ನು ಆ ಬೆಟ್ಟದ ಮೇಲೆ ತಯಾರಿಸಿ ದೇವರಿಗೆ ನೈವೇದ್ಯವನ್ನು ಸಮರ್ಪಿಸುತ್ತಾರೆ. ಲಿಂಗದಹಳ್ಳಿ ಗ್ರಾಮದ ಪಕ್ಕದಲ್ಲಿರುವ ಬೆಟ್ಟದ ಮೇಲಿನ ಸಿದ್ದೇಶ್ವರ ಸ್ವಾಮಿ ಇಲ್ಲಿಯ ಭಕ್ತಾದಿಗಳನ್ನು ಸದಾ ಕಾಲ ಅರಸಿ ಸಲಹುತ್ತಾನೆ. ==
[[ಹೊಯ್ಸಳ]]ರ ಕಾಲದಲ್ಲಿ ನಿರ್ಮಿತವಾದ ದೇವಾಲಯಗಳು ಈಗ ಬಹುಮಟ್ಟಿಗೆ ನಾಶವಾಗಿವೆ. ಆದರೆ ಬಹುಶಃ ಎರಡನೆಯ ಬಲ್ಲಾಳ ಕಟ್ಟಿಸಿರಬಹುದಾದ [[ಈಶ್ವರ]]ದೇವಾಲಯ ಉಳಿದಿದೆ. ಪುಟ್ಟಪುಟ್ಟ ಗರ್ಭಗೃಹ<nowiki> </nowiki>ಸುಕನಾಸಿ, ನವರಂಗ, ಮುಖಮಂಟಪಗಳು, ನಕ್ಷತ್ರಾ ಕಾರದಲ್ಲಿ ವೈವಿಧ್ಯಮಯವಾಗಿ ಸುಂದರವಾಗಿರುವ<nowiki> </nowiki>ಹೊರವಿನ್ಯಾಸ, ಅದೇ ವಿನ್ಯಾಸದಲ್ಲಿಯೇ ನೀಳವಾಗಿ ಗರ್ಭಗೃಹದ ಮೇಲೆದ್ದಿರುವ ಲಾವಣ್ಯಮಯವಾದ <nowiki> </nowiki>ಗೋಪುರ, ಹೊರಗೂ ಒಳಗೂ ಯಾವ ಭಾಗವನ್ನೂ ಬಿಡದಂತೆ ಚಾತುರ್ಯದಿಂದ ಕಡೆದು ತುಂಬಿಸಿದ್ದರೂ ಅತಿಯಾಯಿತು ಎನ್ನಿಸಿದ ಶಿಲ್ಪಜಾಣ್ಮೆಯಿಂದ ಕೂಡಿರುವ ಈ ದೇವಾಲಯದ ಹೊರಗೋಡೆಯ ಮೇಲೆ ಒಂದು ಸಾಲು ಮಾತ್ರ ಮೂರ್ತಿಶಿಲ್ಪವಿದೆ.
ಹಲವಾರು ಮೂಲೆಗಳುಳ್ಳ ನಕ್ಷತ್ರಾಕಾರದ ಮುಖಮಂಟಪಕ್ಕೆ ದೊಡ್ಡದಾದ ಒಂದೇ ಭುವನೇಶ್ವರಿಯಿದ್ದು ಅಪರೂಪವಾದ ರೀತಿಯಲ್ಲಿದೆ. ನವರಂಗದ ಒಳಗೋಡೆಯ ಕಲಾತ್ಮಕವಾದ ಗೂಡುಗಳು, ಸುಂದರವಾಗಿ ಲಲಿತವಾಗಿ ಕಡೆದಿರುವ ಕಂಬಗಳು, ಕುಸುರಿ ಕೆಲಸದ ಪರಾಕಾಷ್ಟೆಯನ್ನು ಮುಟ್ಟಿರುವ ಗರ್ಭಗೃಹದ ಬಾಗಿಲು ಎಲ್ಲವೂ ಆಕರ್ಷಕವಾಗಿವೆ.<ref>https://www.onefivenine.com/india/Places/Taluk/Hassan/Arsikere/Temple</ref>
== ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಜಾವಗಲ್ ==
೧೩ ನೇ ಶತಮಾನದ ಹೊಯ್ಸಳ ವಾಸ್ತುಶೈಲಿಯ ಮಧ್ಯದಲ್ಲಿ ಜಾವಗಲ್ ನಲ್ಲಿ ಲಕ್ಷ್ಮೀನರಸಿಂಹ ದೇವಸ್ಥಾನ (ಜಾವಗಲ್ ಎಂದು ಕೂಡ ಕರೆಯಲ್ಪಡುತ್ತದೆ) ಒಂದು ಉದಾಹರಣೆಯಾಗಿದೆ. ಜಾವಗಲ್ ಹಾಸನ ನಗರದಿಂದ ಸುಮಾರು ೫೦ ಕಿ.ಮೀ ಮತ್ತು ಕರ್ನಾಟಕ ರಾಜ್ಯದ ಹಳೆಬೀಡುದಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ಹೊಯ್ಸಳ ಸಾಮ್ರಾಜ್ಯದ ಹಿಂದಿನ ರಾಜಧಾನಿಯಾಗಿ ಹಳೇಬೀಡು ಐತಿಹಾಸಿಕವಾಗಿ ಮಹತ್ವದ್ದಾಗಿದೆ. ೧೨೫೦ ರಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜ ವೀರಾ ಸೋಮೇಶ್ವರರಿಂದ ನಿರ್ಮಿಸಲ್ಪಟ್ಟ ಈ ದೇವಾಲಯವು ನರಸಿಂಹ (ಹಿಂದೂ ದೇವತೆ ವಿಷ್ಣುವಿನ ಒಂದು ರೂಪ) ಆಗಿದೆ. ಭಾರತದ ಪುರಾತತ್ವ ಸರ್ವೇಕ್ಷಣೆಯ ಕರ್ನಾಟಕ ರಾಜ್ಯ ವಿಭಾಗದ ಅಡಿಯಲ್ಲಿ ಈ ದೇವಾಲಯವು ರಕ್ಷಿತ ಸ್ಮಾರಕವಾಗಿದೆ.<ref>{{Cite web |url=http://templesofkarnataka.com/navigation/details.php?id=21 |title=ಆರ್ಕೈವ್ ನಕಲು |access-date=2020-01-11 |archive-date=2020-01-30 |archive-url=https://web.archive.org/web/20200130082103/http://templesofkarnataka.com/navigation/details.php?id=21 |url-status=dead }}</ref>
== ದೇವಾಲಯದ ಯೋಜನೆ ==
ದೇವಾಲಯದ ಯೋಜನೆ ಸರಳ ಮತ್ತು ಸಾಮಾನ್ಯವಾಗಿ ಇತರ ಹೊಯ್ಸಳ ದೇವಾಲಯಗಳಲ್ಲಿ ಕಂಡುಬರುತ್ತದೆ. ಮಧ್ಯದ ದೇವಾಲಯವು ಕೇವಲ ಒಂದು ಸೂಪರ್ಸ್ಟ್ರಕ್ಚರ್ (ಗೋಪುರ ಅಥವಾ ''ಶಿಖರಾ'' ) ಮತ್ತು ''ಸುಖಾನಾಸಿ'' ( ಗೋಡೆಯ ಮೇಲೆ ಮೂಗು ಅಥವಾ [[ಗೋಪುರ]]) ಮಾತ್ರ ಮೂರು ಟ್ರೈಕುಟಾ (ಮೂರು ಶ್ರೈನ್), ಆದರೆ ಮೂರು ಸಮಾನ ಗಾತ್ರದ ದೇವಾಲಯಗಳು ಎಲ್ಲಾ ಚದರ ಯೋಜನೆಯಲ್ಲಿ ಮತ್ತು ಒಂದು ಸಾಮಾನ್ಯ ಮುಚ್ಚಿದ ಸಭಾಂಗಣ ( ''ಮಂಟಪ'' ) ಮೂಲಕ ಸಂಪರ್ಕ ಕಲ್ಪಿಸಲಾಗಿದೆ.ಪಾರ್ಶ್ವದ ದೇವಾಲಯಗಳನ್ನು ನೇರವಾಗಿ ಸಭಾಂಗಣಕ್ಕೆ ಜೋಡಿಸಲಾಗುತ್ತದೆ, ಆದರೆ ಮಧ್ಯದ ದೇವಾಲಯವು ಪವಿತ್ರವನ್ನು (ಸೆಲ್ಲಾ) ಹಾಲ್ಗೆ ಜೋಡಿಸುವ ಒಂದು ಕವಚವನ್ನು ಹೊಂದಿದೆ. ಪಕ್ಕದ ಪುಣ್ಯಕ್ಷೇತ್ರಗಳು ಅವುಗಳ ಮೇಲೆ ಯಾವುದೇ ಗೋಪುರವನ್ನು ಹೊಂದಿಲ್ಲ ಮತ್ತು ನೇರವಾಗಿ ಒಂದು ಗೋಡೆ ಇಲ್ಲದೆ ಹಾಲ್ಗೆ ಸಂಪರ್ಕ ಕಲ್ಪಿಸಲ್ಪಟ್ಟಿರುವುದರಿಂದ ಮತ್ತು ಪ್ರೊಜೆಕ್ಷನ್ನಂತಹ ಅದರ ಅನುಗುಣವಾದ ಗೋಪುರವು ಹೊರಗಿನಿಂದ ಎಲ್ಲಾ ದೇವಾಲಯಗಳಂತೆ ಕಂಡುಬರುವುದಿಲ್ಲ. ಬದಲಿಗೆ, ಅವು ಹಾಲ್ ಗೋಡೆಗಳಲ್ಲಿ ಹೀರಲ್ಪಡುತ್ತವೆ. ಪುಣ್ಯಕ್ಷೇತ್ರಗಳ ಕೆಳಗಿನ ಭಾಗವು (ಛಾವಣಿಯ ಕೆಳಗೆ) ಪ್ರತಿ ಬದಿಯ ಐದು ಪ್ರಕ್ಷೇಪಣಗಳನ್ನು ಹೊಂದಿದ್ದು, ಈ ಪ್ರಕ್ಷೇಪಣಗಳು ಕೇಂದ್ರ ಭಾಗದಲ್ಲಿ ಮೂರು ಬದಿಗಳಲ್ಲಿ ಗೋಚರಿಸುತ್ತವೆ.
ಈ ದೇವಾಲಯವು ವೇದಿಕೆಯಲ್ಲಿದೆ ( ''ಜಗತಿ'' ). ಇದು ಅನೇಕ ಹೊಯ್ಸಳ ದೇವಾಲಯಗಳಿಗೆ ಸಾಮಾನ್ಯವಾಗಿದೆ. ವೇದಿಕೆಯು ಅದರ ದೃಷ್ಟಿಗೋಚರ ಆಕರ್ಷಣೆಯ ಜೊತೆಗೆ ದೇವಸ್ಥಾನದ ಸುತ್ತಲೂ ಸುತ್ತುವರಿದ ( ''ಪ್ರದಕ್ಷಿಣಾಪಥ'' ) ಮಾರ್ಗವನ್ನು ಭಕ್ತರಿಗೆ ಒದಗಿಸುತ್ತದೆ. ದೇವಾಲಯದ ರೂಪರೇಖೆಯನ್ನು ಇದು ನಿಕಟವಾಗಿ ಅನುಸರಿಸುತ್ತದೆ, ಇದು ಉತ್ತಮವಾದ ನೋಟವನ್ನು ನೀಡುತ್ತದೆ. ಕೇಂದ್ರ ಮಂದಿರ ಮತ್ತು ಗೋಡೆಗಳ ಮೇಲಿರುವ ಗೋಪುರವು ಅಖಂಡ ಮತ್ತು ಅಲಂಕಾರಿಕವಾಗಿದೆ. ಹೊಯ್ಸಳ ದೇವಸ್ಥಾನದಲ್ಲಿನ ಇತರ ಮಾನದಂಡಗಳು ಗೋಪುರದ ಮೇಲಿರುವ ದೊಡ್ಡ ಗುಮ್ಮಟ ಛಾವಣಿಯಾಗಿದ್ದು, ಇದು ಹೊಯ್ಸಳ ದೇವಾಲಯದ ದೊಡ್ಡ ಶಿಲ್ಪಕಲೆಯಾಗಿದೆ (ಇದನ್ನು "ಹೆಲ್ಮೆಟ್" ಅಥವಾ ''ಅಮಲಕ ಎಂದು ಕರೆಯಲಾಗುತ್ತದೆ'')
== ಅಲಂಕಾರ ಮತ್ತು ಶಿಲ್ಪಗಳು ==
ಭಕ್ತರು ಕಟ್ಟಮೇಶ್ವರ ಮತ್ತು ಚಂದ್ರಮೌಳೀಶ್ವರ ಎಂದೂ ಕರೆಯಲ್ಪಡುವ ಕಲಮೇಶ್ವರ ದೇವಸ್ಥಾನ (ಈಶ್ವರ) ಹೊಯ್ಸಳ ಶೈಲಿಯ [[ವಾಸ್ತುಶಿಲ್ಪ]]ದ ಸ್ಮಾರಕವಾಗಿದೆ. ಇದು ಪೂರ್ವಕ್ಕೆ ಮುಖ ಮಾಡಿದೆ.
ಸಹಸ್ರಕೂಟ ಜಿನಾಲಯವು ಕ್ರಿ.ಶ ೧೨೨೦ ರಿಂದ ಹೊಯ್ಸಳ ಕಟ್ಟಡವನ್ನು ಹೊಂದಿದೆ ಮತ್ತು ಇದನ್ನು ವೀರ ಬಲ್ಲಾಲ II ರ ಮಂತ್ರಿಯಾಗಿದ್ದ ವಾಸುದೈಕಾ ಬಂಧವ ರೇಚರಸ ನಿರ್ಮಿಸಿದ್ದಾರೆ.
ಮಾಲೆಕಲ್ ತಿರುಪತಿ ಬೆಟ್ಟವನ್ನು ಚಿಕ್ಕ ತಿರುಪತಿ ಎಂದೂ ಕರೆಯುತ್ತಾರೆ, ಇದು ಅರಸೀಕೆರೆ ಯಂದ ಮೂರು ಕಿಲೋಮೀಟರ್ ದೂರದಲ್ಲಿದೆ ಮತ್ತು ಎರಡು ದೇವಾಲಯಗಳನ್ನು ಹೊಂದಿದೆ: (ವೆಂಕಟರಮಣ ಮತ್ತು ಗೋವಿಂದರಾಜ), ಇವುಗಳನ್ನು ಆಗಾಗ್ಗೆ ಯಾತ್ರಿಕರು ಭೇಟಿ ನೀಡುತ್ತಾರೆ. ಮಾಲೆಕಲ್ ತಿರುಪತಿ ಬೆಟ್ಟದಲ್ಲಿ ೧೩೦೦ ಮೆಟ್ಟಿಲುಗಳು ಮತ್ತು ನಿಂತಿರುವ ವೆಂಕಟೇಶ್ವರ ವಿಗ್ರಹವಿದೆ.
ಸಾಯಿನಾಥ ಮತ್ತು ಗಣಪತಿ ದೇವಾಲಯಗಳು ಆಧುನಿಕ ವಿನ್ಯಾಸ ಮತ್ತು ನಿರ್ಮಾಣದಿಂದ ಕೂಡಿದೆ.ಅರಸೀಕೆರೆ ಸ್ವಾಭಾವಿಕವಾಗಿ ನಿರ್ಮಿಸಲಾದ ಆನೆ ಕಲ್ಲಿಗೆ ನೆಲೆಯಾಗಿದೆ, ಇದು ಶ್ರೀ ಸುಬ್ರಹ್ಮಣ್ಯ ಆನೆ ಬೆಟ್ಟದ ಪಟ್ಟಣದ ಹೃದಯಭಾಗದಲ್ಲಿದೆ.
===ಶ್ರಿ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿ===
ಈ ಪುಣ್ಯ ಕ್ಷೇತ್ರವು ಅರಸೀಕೆರೆಯಿಂದ ಸುಮಾರು ೮ ಕಿಲೋಮಿಟರ್ ದೂರದಲ್ಲಿರುವ ಯಾದಾಪುರ ಎಂಬ ಗ್ರಾಮದಲ್ಲಿದೆ. ಇಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಸಾವಿರಾರು ಭಕ್ತಾಧಿಗಳು ರಾಜ್ಯದ ವಿವಿಧ ಸ್ಠಳಗಳಿಂದ ಆಗಿಮಿಸಿ ಭಕ್ತಿಯಿಂದ [[ಬೆಟ್ಟ]]ವನ್ನು ಹತ್ತಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಇಲ್ಲಿ ಪ್ರತಿದಿನ ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಇರುತ್ತದೆ.
=== ಶ್ರೀಮಹಾಗಣಪತಿ ದೇವಾಲಯ,ಲಕ್ಷ್ಮೀಪುರ===
ಬಸ್ ನಿಲ್ದಾಣದಿಂದ ಸುಮಾರು 50 ಹೆಜ್ಜೆ ದೂರದಲ್ಲಿ ಈ ದೇವಾಲಯವು ನಿರ್ಮಾಣವಾಗಿದೆ ಇಲ್ಲಿನ ಬಲಮುರಿಗಣಪತಿ
ಬಹಳ ಪ್ರಸಿದ್ಧಿ. ಈ ದೇವರು ಅನೇಕ ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡಿರುವುದರಿಂದ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.
=== ಮಾಲೆಕಲ್ಲು ತಿರುಪತಿ ===
ಈ ಕ್ಷೇತ್ರವು ಅರಸೀಕೆರೆಯಿಂದ ೨ ಕಿಲೋಮೀಟರ್ ದೂರದಲ್ಲಿದೆ. ಇದು ಚಿಕ್ಕ ತಿರುಪತಿ ಎಂದೆ ಪ್ರಸಿದ್ಧವಾಗಿದೆ. ಸಾವಿರಾರು ಮೆಟ್ಟಿಲುಗಳಿರುವ ದೊಡ್ಡ ಬೆಟ್ಟ ದ ಮೇಲೆ ವೆಂಕಟೇಶ್ವವರ ಸ್ವಾಮಿ ಮತ್ತು ತಾಯಿ ಲಕ್ಷ್ಮೀ ದೇವಿಯವರ ದೇವಾಲಯವಿದ್ದು ೨೦೦ ವರ್ಷಗಳ ಇತಿಹಾಸ ಇದೆ ಹಾಗೂ ಕೆಳಗಡೆಯು ಸವಿಸ್ತಾರವಾದ ವೆಂಕಟೇಶ್ವರಸ್ವಾಮಿ ದೇವಸ್ಠಾನವಿದೆ. ಪ್ರತಿ ವರ್ಷ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗುತ್ತದೆ ಮತ್ತು ಇಲ್ಲಿ ಎಂದೂ ಬತ್ತದಂಥ ಹೊಂಡ ಇದೆ.<ref>https://www.karnataka.com/hassan/arsikere-amargiri-malekal-tirupati-temple/</ref>
==ಉಲ್ಲೇಖಗಳು==
<references/>
{{ಹಾಸನ ತಾಲ್ಲೂಕುಗಳು}}
{{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}}
{{Interwikineeded}}
ajoh4ysapf7qpy195asiqe5kq3625pr
ಉತ್ತರಾಖಂಡ
0
13430
1378198
1338247
2026-08-02T16:25:18Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378198
wikitext
text/x-wiki
{{Infobox ಭಾರತದ ರಾಜ್ಯ|
state_name=ಉತ್ತರಾಖಂಡ <u> उत्तराखण्ड </u><br> उत्तराखंडराज्यम् |image_map=India_Uttaranchal_locator_map.svg |
capital=[[ದೆಹರಾದೂನ್|ಡೆಹ್ರಾಡೂನ್]] |
latd = 30.05|longd=79.31|
largest_city=[[ದೆಹರಾದೂನ್|ಡೆಹ್ರಾಡೂನ್]]|
abbreviation=IN-UL |
official_languages=[[ಹಿಂದಿ]],
[[ಸಂಸ್ಕೃತ]]|
legislature_type=ಏಕಸದನ |
legislature_strength=71 |
governor_name=[[ಸುದರ್ಶನ್ ಅಗರ್ವಾಲ್]] |
chief_minister=[[ಬಿ.ಸಿ.ಖಂಡೂರಿ]] |
established_date=[[ನವೆಂಬರ್ ೯, ೨೦೦೦]] |
area=53,566|
area_magnitude=10 |
area_rank=18ನೆಯದು |
population_year=2001 |
population=8479562|
population_rank=19ನೆಯದು |
population_density=290.98 |
districts=13 |
website=ua.nic.in|
seal=[[ಚಿತ್ರ:Seal of Uttarakhand.svg|75px|center]] |
footnotes = | = <sup>†</sup> Dehradun is the provisional capital of the state. The new capital has not yet been chosen.<br /><sup>‡</sup> 70 (elected) + 1 (nominated [[Anglo-Indian]])
}}
'''ಉತ್ತರಾಖಂಡ''' ([[ಹಿಂದಿ|ಹಿಂದಿಯಲ್ಲಿ]]: उत्तराखण्ड ಅಥವಾ उत्तराखंड),([[ಸಂಸ್ಕೃತ|ಸಂಸ್ಕೃತದಲ್ಲಿ]]: उत्तराखण्डराज्यं ಅಥವಾ उत्तराखंडराज्यम्)( ಮೊದಲಿನ ಹೆಸರು ಉತ್ತರಾಂಚಲ ) [[ರಾಜ್ಯ|ರಾಜ್ಯವನ್ನು]] [[ಭಾರತ]] [[ಗಣರಾಜ್ಯ|ಗಣರಾಜ್ಯದ]] ೨೭ನೆಯ ರಾಜ್ಯವನ್ನಾಗಿ ೨೦೦೦ರ ನವೆಂಬರ್ ೯ ರಂದು ರಚಿಸಲಾಯಿತು. [[ಉತ್ತರ ಪ್ರದೇಶ|ಉತ್ತರಪ್ರದೇಶ]] ರಾಜ್ಯದ [[ಹಿಮಾಲಯ|ಹಿಮಾಲಯಪರ್ವತ]] ಪ್ರಾಂತ್ಯವನ್ನು ಬೇರಾಗಿಸಿ ಉತ್ತರಾಖಂಡ ರಾಜ್ಯವನ್ನು ಅಸ್ತಿತ್ವಕ್ಕೆ ತರಲಾಗಿದೆ. ರಾಜ್ಯದ ಉತ್ತರಕ್ಕೆ [[ಟಿಬೆಟ್]], ಪೂರ್ವಕ್ಕೆ [[ನೇಪಾಳ|ನೇಪಾಲ]], ದಕ್ಷಿಣ ಹಾಗೂ ಪಶ್ಚಿಮಕ್ಕೆ [[ಉತ್ತರ ಪ್ರದೇಶ|ಉತ್ತರಪ್ರದೇಶ]] ರಾಜ್ಯ ಇವೆ. ರಾಜ್ಯದ ಹೆಸರನ್ನು ೨೦೦೭ರ ಜನವರಿಯಲ್ಲಿ ಉತ್ತರಾಂಚಲದಿಂದ ಉತ್ತರಾಖಂಡವೆಂದು ಬದಲಿಸಲಾಯಿತು. ರಾಜ್ಯದ ನೂತನ ರಾಜಧಾನಿಯು ಅಸ್ತಿತ್ವಕ್ಕೆ ಬರುವವರೆಗೆ [[ಡೆಹ್ರಾಡೂನ್]] ನಗರವು [[ರಾಜಧಾನಿ|ರಾಜಧಾನಿಯ]] ಸ್ಥಾನದಲ್ಲಿದೆ. ರಾಜ್ಯದ ಸರಿಸುಮಾರು ಮಧ್ಯಭಾಗದಲ್ಲಿರುವ [[ಗೈರ್ಸನ್]] ಪಟ್ಟಣವನ್ನು ಹೊಸ ರಾಜಧಾನಿಯನ್ನಾಗಿ ರೂಪಿಸುವ ಅಭಿಪ್ರಾಯಗಳಿವೆ. ತಾತ್ಕಾಲಿಕ ರಾಜಧಾನಿಯಾಗಿರುವ ಡೆಹ್ರಾಡೂನ್ ನಾಡಿನ ಅತಿ ದೊಡ್ಡ ನಗರ ಮತ್ತು ಮುಖ್ಯ [[ರೈಲು ನಿಲ್ದಾಣ|ರೈಲು ನಿಲ್ದಾಣವಾಗಿರುವುದಲ್ಲದೆ]] [[ವಾಯು ಸಂಪರ್ಕ|ವಾಯು ಸಂಪರ್ಕವನ್ನು]] ಸಹ ಹೊಂದಿದೆ. ರಾಜ್ಯದ [[ಉಚ್ಚ ನ್ಯಾಯಾಲಯ|ಉಚ್ಚ ನ್ಯಾಯಾಲಯವು]] [[ನೈನಿತಾಲ್]] ನಗರದಲ್ಲಿದೆ. ರಾಜ್ಯವು [[ಗಢ್ವಾಲ್]] ಮತ್ತು [[ಕುಮಾವ್]] ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ. ರಾಜ್ಯದ ಜಿಲ್ಲೆಗಳ ಸಂಖ್ಯೆ ೧೩. ಗಢ್ವಾಲ್ ವಿಭಾಗದಲ್ಲಿ [[ಚಮೋಲಿ]], [[ದೆಹರಾದೂನ್|ಡೆಹ್ರಾಡೂನ್]], [[ಹರಿದ್ವಾರ]], [[ಪೌಡಿ ಗಢ್ವಾಲ್]], [[ರುದ್ರಪ್ರಯಾಗ]], [[ಟಿಹ್ರಿ ಗಢ್ವಾಲ್]] ಮತ್ತು [[ಉತ್ತರಕಾಶಿ]] [[ಜಿಲ್ಲೆ|ಜಿಲ್ಲೆಗಳಿವೆ]]. ಕುಮಾವ್ ವಿಭಾಗದಲ್ಲಿ [[ಅಲ್ಮೋರಾ]], [[ಬಾಗೇಶ್ವರ್]], [[ನೈನಿ ತಾಲ್]], [[ಪಿಥೋರಾಗಢ್]],[[ಚಂಪಾವತ್]] ಮತ್ತು [[ಉಧಮ್ ಸಿಂಘ್ ನಗರ]] ಜಿಲ್ಲೆಗಳಿವೆ. ರಾಜ್ಯದ ಆಡಳಿತ ಭಾಷೆ ಹಿಂದಿ.
ಈಚೆಗೆ ರಾಜ್ಯ ಸರಕಾರವು ತೀವ್ರಗತಿಯಲ್ಲಿ ಬೆಳೆಯುತ್ತಿರುವ [[ಪ್ರವಾಸೋದ್ಯಮ|ಪ್ರವಾಸೋದ್ಯಮದ]] ಲಾಭ ಪಡೆದುಕೊಳ್ಳುವತ್ತ ಕ್ರಮ ಕೈಗೊಂಡಿದೆ. ಇದಲ್ಲದೆ ಉನ್ನತ ತಂತ್ರಜ್ಞಾನದ ಉದ್ದಿಮೆಗಳನ್ನು ಆಕರ್ಷಿಸುವ ದಿಸೆಯಲ್ಲಿ ಪ್ರಯತ್ನಗಳು ಸಾಗಿವೆ. ವಿವಾಸ್ಪದ ಟಿಹ್ರಿ ಯೂ ಸೇರಿದಂತೆ ಹಲವು [[ಬೃಹತ್ ಆಣೆಕಟ್ಟು|ಬೃಹತ್ ಆಣೆಕಟ್ಟುಗಳ]] ನಿರ್ಮಾಣ ಸಾಗಿದೆ. ಪರಿಸರ ಕುರಿತ [[ಜನಹೋರಾಟ|ಜನಹೋರಾಟಗಳಲ್ಲಿ]] ಬಲು ಖ್ಯಾತಿ ಗಳಿಸಿದ [[ಚಿಪ್ಕೋ ಚಳುವಳಿ|ಚಿಪ್ಕೋ ಚಳುವಳಿಯ]] ( ಅಪ್ಪಿಕೋ ಚಳುವಳಿ ) ಉಗಮ ಉತ್ತರಾಖಂಡ ರಾಜ್ಯದಲ್ಲಾಯಿತು.
ಉತ್ತರಾಖಂಡದ ವಿಸ್ತೀರ್ಣ ೫೧,೧೨೫ ಚ.ಕಿ.ಮೀ. ಮತ್ತು ಜನಸಂಖ್ಯೆ ಸುಮಾರು ೮೫ ಲಕ್ಷ. ಡೆಹ್ರಾಡೂನ್,ಹರಿದ್ವಾರ ಮತ್ತು ನೈನಿತಾಲ್ ಗಳು ರಾಜ್ಯದ ಮುಖ್ಯ ನಗರಗಳು. ರಾಜ್ಯದ ೯೨.೫೭% ಪ್ರದೇಶ ಪರ್ವತ ಪ್ರಾಂತ್ಯ. ೬೩% ಭಾಗ ಅರಣ್ಯ ಪ್ರದೇಶ.
ಉತ್ತರಾಖಂಡದ ಮುಖ್ಯ ಪರ್ವತಶಿಖರಗಳು : [[ನಂದಾದೇವಿ]] (೭೮೧೬ಮೀ), [[ಬದರಿನಾಥ್]](೭೧೪೦), [[ಚೌಖಂಬಾ]](೭೧೩೮) ಮತ್ತು [[ತ್ರಿಶೂಲ]](೭೧೨೦) ಶಿಖರಗಳು.
[[ಪ್ರವಾಸೋದ್ಯಮ]],[[ಜಲವಿದ್ಯುತ್]],[[ಹೈನುಗಾರಿಕೆ]],[[ಕೃಷಿ]],[[ತೋಟಗಾರಿಕೆ]],[[ಪುಷ್ಪೋದ್ಯಮ|ಪುಷ್ಪೋದ್ಯಮಗಳು]] ನಾಡಿನ ಪ್ರಮುಖ [[ಆರ್ಥಿಕ ಚಟುವಟಿಕೆ|ಆರ್ಥಿಕ ಚಟುವಟಿಕೆಗಳು]].
== ಇತಿಹಾಸ ==
ಉತ್ತರಾಖಂಡವೆಂಬುದು ಪ್ರಾಚೀನಕಾಲದಿಂದಲೂ ಈ ಪರ್ವತಪ್ರಾಂತ್ಯದ ಹೆಸರಾಗಿದೆ. ಪ್ರಾಚೀನ ಹಿಂದೂ ಗ್ರಂಥಗಳಲ್ಲಿ ಕೇದಾರಖಂಡ ಮತ್ತು ಮಾನಸಖಂಡಗಳನ್ನು ಒಟ್ಟಾಗಿ ಉತ್ತರಾಖಂಡವೆಂದು ಉಲ್ಲೇಖಿಸಲಾಗಿದೆ. ಉನ್ನತ ಪರ್ವತಗಳು,ಕಣಿವೆಗಳು,ಅನೇಕ ನದಿಗಳು ಮತ್ತು ಹಲವು ಪವಿತ್ರ ಕ್ಷೇತ್ರಗಳನ್ನು ಹೊಂದಿರುವ ನಾಡಾಗಿರುವ ಈ ಪ್ರದೇಶವನ್ನು ದೇವಭೂಮಿ ಎಂದು ಸಹ ಕರೆಯುವರು.ಕೋಲ್ ಎಂಬ ಜನಾಂಗದವರು ಇಲ್ಲಿನ ಮೂಲನಿವಾಸಿಗಳು. ನಂತರ ವೇದಕಾಲದಲ್ಲಿ ಆರ್ಯಸಂತತಿಯ ರಾವತ್ ಬುಡಕಟ್ಟಿನವರು ಇಲ್ಲಿ ನೆಲೆಯಾದರು. ಆ ಕಾಲದಲ್ಲಿ ಈ ಪ್ರಾಂತ್ಯವು ಋಷಿಗಳಿಗೆ ಮತ್ತು ಸಾಧುಗಳಿಗೆ ಮೆಚ್ಚಿನ ತಾಣವಾಗಿತ್ತು. ವ್ಯಾಸಮಹರ್ಷಿಗಳು ಇಲ್ಲಿಯೇ ಮಹಾಭಾರತ ಕಾವ್ಯವನ್ನು ರಚಿಸಿದರೆಂದುನಂಬಲಾಗಿದೆ.ಪಾಂಡವರ ಸ್ವರ್ಗಾರೋಹಣ ಯಾತ್ರೆಯು ಈ ಪ್ರದೇಶದ ಮೂಲಕವೇ ಸಾಗಿತೆಂಬುದು ಇನ್ನೊಂದು ನಂಬಿಕೆ.ಸಾಮ್ರಾಟ ಅಶೋಕ ಚಕ್ರವರ್ತಿಯ ಕಾಲದಲ್ಲಿ ಬೌದ್ಧ ಧರ್ಮದ ಪ್ರಭಾವಕ್ಕೊಳಗಾಗಿದ್ದ ಈ ಪ್ರಾಂತ್ಯವು ಆದಿ ಶಂಕರಾಚಾರ್ಯರ ಕಾಲದಲ್ಲಿ ಮತ್ತೆ ವೈದಿಕ ಧರ್ಮದ ತೆಕ್ಕೆಗೆ ಮರಳಿತು. ಈ ಸಮಯದ ನಂತರ ದೊಡ್ಡ ಪ್ರಮಾಣದಲ್ಲಿ ಮೈದಾನ ಪ್ರದೇಶದ ಜನರು ಇಲ್ಲಿಗೆ [[ವಲಸೆ]] ಬರಲಾರಂಭಿಸಿದರು.
ಮಧ್ಯಕಾಲದಲ್ಲಿ ಗಢ್ವಾಲ್ ಮತ್ತು ಕುಮಾವ್ ಸಂಸ್ಥಾನಗಳು ಉತ್ತರಾಖಂಡದಲ್ಲಿ ಅಸ್ತಿತ್ವದಲ್ಲಿದುವು. ಕುಮಾವ್ ನಲ್ಲಿ [[ಚಂದ್ ವಂಶದ ಅರಸರು]] ಹಾಗೂ ಗಢ್ವಾಲ್ ನಲ್ಲಿ [[ಪರ್ಮಾರ್ ವಂಶದ ಅರಸರು]] ರಾಜ್ಯಭಾರ ನಡೆಸುತ್ತಿದ್ದರು. ಪಕ್ಕದ ನೇಪಾಲದ [[ಗೂರ್ಖಾ ಅರಸರು]] ೧೭೯೧ರಲ್ಲಿ ಕುಮಾವ್ ರಾಜವನ್ನು ಮತ್ತು ೧೮೦೩ರಲ್ಲಿ ಗಢ್ವಾಲ್ ರಾಜ್ಯವನ್ನು ವಶಪಡಿಸಿಕೊಂಡರು. ೧೮೧೬ರಲ್ಲಿ ಆಂಗ್ಲರೊಡನೆ ನಡೆಸಿದ ಯುದ್ಧದಲ್ಲಿ ಗೂರ್ಖಾ ಅರಸರು ಪರಾಜಯ ಹೊಂದಿದ ಮೇಲೆ ಗಢ್ವಾಲ್ ನ ಪಶ್ಚಿಮ ಭಾಗವು ಟಿಹ್ರಿಯಲ್ಲಿ ಸ್ವತಂತ್ರ ಸಂಸ್ಥಾನವಾದರೆ ಪೂರ್ವದ ಗಢ್ವಾಲ್ ಮತ್ತು ಕುಮಾವ್ ಭಾಗಗಳು [[ಬ್ರಿಟಿಷ|ಬ್ರಿಟಿಷರ]] ನೇರ ಆಡಳಿತಕ್ಕೆ ಒಳಪಟ್ಟವು.
ಭಾರತವು ಸ್ವತಂತ್ರವಾದ ನಂತರ ಟಿಹ್ರಿ ಸಂಸ್ಥಾನವನ್ನು ಉತ್ತರಪ್ರದೇಶ ರಾಜ್ಯದಲ್ಲಿ ವಿಲೀನಗೊಳಿಸಲಾಯಿತು. ಇದರಲ್ಲಿ ಅಂದು ಗಢ್ವಾಲ್ ಮತ್ತು ಕುಮಾವ್ ವಿಭಾಗಗಳಿದ್ದುವು. ೯೦ರ ದಶಕದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ತೀವ್ರಗೊಂಡು ೧೯೯೮ರಲ್ಲಿ ಈ ಪ್ರಾಂತ್ಯವನ್ನು ಉತ್ತರಪ್ರದೇಶ ರಾಜ್ಯದಿಂದ ಪ್ರತ್ಯೇಕಿಸಿ ಉತ್ತರಾಂಚಲ ಎಂಬ ಹೆಸರಿನ ಹೊಸ ರಾಜ್ಯವನ್ನಾಗಿ ಅಸ್ತಿತ್ವಕ್ಕೆ ತರಲಾಯಿತು. ಬಹುಸಂಖ್ಯಾಕ ಜನತೆಯ ಅಭಿಪ್ರಾಯಕ್ಕೆ ಮಣಿದು ರಾಜ್ಯದ ಹೆಸರನ್ನು ಡಿಸೆಂಬರ್ ೨೦೦೬ರಲ್ಲಿ [[ಮಸೂದೆ|ಮಸೂದೆಯೊಂದರ]] ಮೂಲಕ [[ಭಾರತದ ಸಂಸತ್ತು]] ಉತ್ತರಾಖಂಡವೆಂಬುದಾಗಿ ಮಾರ್ಪಡಿಸಿತು.
== ರಾಜ್ಯದ ಜನಸಮುದಾಯ ==
ಉತ್ತರಾಖಂಡದ ಜನಸಮುದಾಯವು ಸಾಮಾನ್ಯವಾಗಿ ತಮ್ಮ ಮೂಲಸ್ಥಳಕ್ಕೆ ಅನುಗುಣವಾಗಿ [[ಗಢ್ವಾಲಿ]] ಅಥವಾ [[ಕುಮಾವಿ]] ಎಂಬುದಾಗಿ ಕರೆಯಲ್ಪಡುತ್ತಾರೆ. ಒಟ್ಟಾಗಿ ಎಲ್ಲರನ್ನೂ [[ಪಹಾಡಿ]] ಎಂದೂ ಕರೆಯಲಾಗುತ್ತದೆ. ಹಿಮಾಲಯದ ತಪ್ಪಲಲ್ಲಿರುವ [[ತೇರಾಯ್]] ಪ್ರದೇಶದಲ್ಲಿ [[ಪಂಜಾಬಿ|ಪಂಜಾಬಿನಿಂದ]] ಬಂದ ವಲಸಿಗರೇ ಹೆಚ್ಚು. ಇವರಲ್ಲದೇ [[ನೇಪಾಲಿ|ನೇಪಾಲಿಗಳು]], [[ಟಿಬೆ44ಟಿಯನ್ನರು]], [[ಗುಜ್ಜರ್]] ಗಳು ಸಹ ಇಲ್ಲಿ ನೆಲೆಯಾಗಿರುವರು. ನಾಡಿನ ಬಹುಸಂಖ್ಯಾಕರು [[ರಜಪೂತ|ರಜಪೂತರು]].
== ಪ್ರಾಕೃತಿಕ ಮೇಲ್ಮೈ ==
ಉತ್ತರಾಖಂಡವು ಅದ್ಭುತ ಪ್ರಕೃತಿಸೌಂದರ್ಯದ ನಾಡು. ರಾಜ್ಯದ ಉತ್ತರಭಾಗದ ಬಹುತೇಕ ಪ್ರದೇಶವು [[ಹಿಮಾಲಯಪರ್ವತ]] ಶ್ರೇಣಿಯ ಒಂದು ಅಂಗ. ಈ ಭಾಗದಲ್ಲಿ ಹಲವು ಉನ್ನತ ಶಿಖರಗಳು ಮತ್ತು [[ಹಿಮನದಿ|ಹಿಮನದಿಗಳು]] ಇವೆ. ಹಿಮಾಲಯದ ತಪ್ಪಲು ಪ್ರದೇಶವು ಒಂದೊಮ್ಮೆ ಬಲು ದಟ್ಟ ಅರಣ್ಯಪ್ರದೇಶವಾಗಿತ್ತು. ಇಂದು [[ಮರಮಟ್ಟುಗಳ ಉದ್ಯಮ|ಮರಮಟ್ಟುಗಳ ಉದ್ಯಮವು]] ಈ ಅರಣ್ಯಗಳಿಗೆ ದೊಡ್ಡ ಕಂಟಕವಾಗಿದೆ. ಆರಣ್ಯಗಳನ್ನು ಮತ್ತೆ ಅಭಿವೃದ್ಧಿಪಡಿಸುವ ಈಚಿನ ಯತ್ನಗಳಿಂದಾಗಿ ಈ ಭಾಗದಲ್ಲಿ ಮತ್ತೆ ಕಾಡು ಕಾಣತೊಡಗಿದೆ. [[ಹಿಮಾಲಯದ ಪರಿಸರವ್ಯವಸ್ಥೆ|ಹಿಮಾಲಯದ ಪರಿಸರವ್ಯವಸ್ಥೆಯು]] ಹಲವು ಬಗೆಯ ವನ್ಯಜೀವಿಗಳಿಗೆ ಆಶ್ರಯವೊದಗಿಸಿದೆ. ಇವುಗಳಲ್ಲಿ [[ಭಾರಲ್]], [[ಹಿಮಚಿರತೆ]], [[ಚಿರತೆ]] ಮತ್ತು [[ಹುಲಿ|ಹುಲಿಗಳು]] ಮುಖ್ಯವಾದವು. ಅನೇಕ ಬಗೆಯ ಅತಿ ಅಪರೂಪದ ಸಸ್ಯಗಳು ಮತ್ತು [[ಮೂಲಿಕೆ|ಮೂಲಿಕೆಗಳು]] ಇಲ್ಲಿನ ಪರಿಸರದಲ್ಲಿ ಕಾಣಸಿಗುವುವು. ಭಾರತದ ಎರಡು ಮಹಾನದಿಗಳಾದ [[ಗಂಗಾ]] ಮತ್ತು [[ಯಮುನಾ]] ಉತ್ತರಾಖಂಡದ ಹಿಮನದಿಗಳಿಂದ ಉಗಮಿಸುವುವು.
ಹಿಮಾಲಯಪರ್ವತಶ್ರೇಣಿಯ ದಕ್ಷಿಣ ಇಳಿಜಾರಿನಲ್ಲಿ ಉತ್ತರಾಖಂಡವು ಇದೆ. ಇಲ್ಲಿನ [[ಹವಾಮಾನ]] ಮತ್ತು ಸಸ್ಯರಾಜಿಯು ಸ್ಥಳದ ಎತ್ತರಕ್ಕೆ ಅನುಗುಣವಾಗಿ ಭಾರೀ ಬದಲಾವಣೆ ಹೊಂದುತ್ತವೆ. ಅತಿ ಎತ್ತರದ ಪ್ರದೇಶದಲ್ಲಿ ಹಿಮನದಿಗಳು ಇದ್ದರೆ ತಪ್ಪಲಿನಲ್ಲಿ [[ಉಷ್ಣವಲಯದ ಕಾಡು]] ಕಂಡುಬರುತ್ತದೆ. ಅತ್ಯುನ್ನತ ಪ್ರದೇಶಗಳು [[ಹಿಮ]] ಮತ್ತು ಬರಿದಾದ ಕಲ್ಲುಬಂಡೆಗಳಿಂದ ತುಂಬಿದೆ. [[ತೇರಾಯ್]] ಮತ್ತು [[ಗಂಗಾಬಯಲು|ಗಂಗಾಬಯಲಿನ]] ಮೇಲ್ಭಾಗಗಳಲ್ಲಿ [[ಸವಾನ್ನಾ ಹುಲ್ಲುಗಾವಲು]] ಮತ್ತು [[ಎಲೆ ದುರಿಸುವ ಕಾಡು|ಎಲೆ ದುರಿಸುವ ಕಾಡುಗಳು]] ವ್ಯಾಪಿಸಿವೆ.
ನೈನಿತಾಲ್ ಜಿಲ್ಲೆಯ ರಾಮನಗರದಲ್ಲಿ [[ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ]], ಚಮೋಲಿ ಜಿಲ್ಲೆಯಲ್ಲಿ [[ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ]] ಮತ್ತು [[ನಂದಾದೇವಿ ರಾಷ್ಟ್ರೀಯ ಉದ್ಯಾನ]], ಉತ್ತರಕಾಶಿ ಜಿಲ್ಲೆಯಲ್ಲಿ [[ಗೋವಿಂದ್ ಪಶು ರಾಷ್ಟ್ರೀಯ ಉದ್ಯಾನ]] ಮತ್ತು [[ಗಂಗೋತ್ರಿ ರಾಷ್ಟ್ರೀಯ ಉದ್ಯಾನ]] ಹಾಗೂ ಹರಿದ್ವಾರ ಜಿಲ್ಲೆಯಲ್ಲಿ [[ರಾಜಾಜಿ ರಾಷ್ಟ್ರೀಯ ಉದ್ಯಾನ|ರಾಜಾಜಿ ರಾಷ್ಟ್ರೀಯ ಉದ್ಯಾನಗಳು]] ಇವೆ.
== ಪ್ರವಾಸೋದ್ಯಮ ==
[[ಪ್ರವಾಸೋದ್ಯಮ|ಪ್ರವಾಸೋದ್ಯಮವು]] ಉತ್ತರಾಖಂಡದ ಪ್ರಮುಖ [[ಆದಾಯಮೂಲ|ಆದಾಯಮೂಲವಾಗಿದೆ]]. ರಾಜ್ಯವು ವರ್ಷದ ಎಲ್ಲ ಕಾಲದಲ್ಲಿಯೂ [[ತೀರ್ಥಯಾತ್ರೆ]] ಕೈಗೊಳ್ಳುವವರು ಯಾ ಇತರ ಪ್ರವಾಸಿಗರು, [[ಪರ್ವತಾರೋಹಿ|ಪರ್ವತಾರೋಹಿಗಳು]] ಮತ್ತು [[ಚಾರಣಿಗ|ಚಾರಣಿಗರಿಂದ]] ತುಂಬಿರುತ್ತದೆ. ನೈನಿತಾಲ್, [[ಮಸ್ಸೂರಿ]], ಅಲ್ಮೋರಾ ಮತ್ತು [[ರಾಣಿಖೇತ್]] ಗಳು ರಾಜ್ಯದ ಪ್ರಮುಖ [[ಗಿರಿಧಾಮ|ಗಿರಿಧಾಮಗಳು]]. [[ಹೇಮಕುಂಡ|ಹೇಮಕುಂಡದ]] ಬಳಿಯ ಪುಷ್ಪಕಣಿವೆ ಮತ್ತು ನಂದಾದೇವಿ ರಾಷ್ಟ್ರೀಯ ಉದ್ಯಾನಗಳು [[ವಿಶ್ವ ಪರಂಪರೆಯ ತಾಣ|ವಿಶ್ವ ಪರಂಪರೆಯ ತಾಣಗಳಾಗಿದ್ದು]] ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತವೆ.
== ಧಾರ್ಮಿಕ ಕ್ಷೇತ್ರಗಳು ==
[[ಹಿಂದೂ ಧರ್ಮ|ಹಿಂದೂಧರ್ಮೀಯರು]] ಅತಿ ಪವಿತ್ರವೆಂದು ಪರಿಗಣಿಸುವ ಕ್ಷೇತ್ರಗಳಲ್ಲಿ ಹಲವು ಉತ್ತರಾಖಂಡದಲ್ಲಿ ಇವೆ. [[ಗಂಗೋತ್ರಿ]], [[ಯಮುನೋತ್ರಿ]], [[ಕೇದಾರನಾಥ]] ಮತ್ತು [[ಬದರಿನಾಥ]] ಕ್ಶೇತ್ರಗಳು ಒಟ್ಟಾಗಿ [[ಚತುರ್ಧಾಮ|ಚಾರ್ ಧಾಮ್]] ಎಂದು ಕರೆಯಲ್ಪಡುತ್ತವೆ. [[ಹರಿದ್ವಾರ]] ಮತ್ತು [[ರಿಷಿಕೇಶ|ರಿಷಿಕೇಶಗಳು]] ಸಹ ಅತಿ ಪಾವನ ಕ್ಷೇತ್ರಗಳೆಂದು ಹೆಸರಾಗಿವೆ. [[ಹೇಮಕುಂಡ್ ಸಾಹಿಬ್]] ಕ್ಷೇತ್ರವು [[ಸಿಖ್ ಧರ್ಮ|ಸಿಖ್ ಧರ್ಮೀಯರಿಗೆ]] ಅತಿ ಪ್ರಮುಖ ಪುಣ್ಯಸ್ಥಾನವಾಗಿದೆ. [[ಟಿಬೆಟಿಯನ್ ಬೌದ್ಧಧರ್ಮ|ಟಿಬೆಟಿಯನ್ ಬೌದ್ಧಧರ್ಮವು]] ಸಹ ಉತ್ತರಾಖಂಡದಲ್ಲಿ ತಕ್ಕಮಟ್ಟಿಗೆ ಆಚರಣೆಯಲ್ಲಿದೆ. ಜಗತ್ತಿನಲ್ಲಿಯೇ ಅತಿ ಎತ್ತರದ್ದೆಂದು ಹೇಳಲಾಗುವ [[ಬುದ್ಧಸ್ತೂಪ|ಬುದ್ಧಸ್ತೂಪವನ್ನೊಳಗೊಂಡಿರುವ]] [[ಮಿಂಡ್ರೋಲಿಂಗ್ ಬುದ್ಧವಿಹಾರ|ಮಿಂಡ್ರೋಲಿಂಗ್ ಬುದ್ಧವಿಹಾರವನ್ನು]] ಈಚೆಗೆ [[ಜೀರ್ಣೋದ್ಧಾರ]] ಮಾಡಲಾಯಿತು.
== ರಾಜಕೀಯ ==
*[[ಉತ್ತರಾಖಂಡದಲ್ಲಿ ಚುನಾವಣೆಗಳು]]
೨೦೦೯ ರಲ್ಲಿ ಲೋಕ ಸಭೆಗೂ ೨೦೧೭ರಲ್ಲಿ ವಿಧಾನ ಸಭೆಗೂ ಚುನಾವಣೆಗಳು ನೆಡೆದವು ಅದರ ಫಲಿತಾಂಶ :
*ಉತ್ತರಾಖಂಡ
*ಮುಖ್ಯ ಮಂತ್ರಿ : ಬಿ. ಸಿ. ಖಂಡೂರಿ 12-03-2007 ರಿಂದ ಭಾರತೀಯ ಜನತಾ ಪಕ್ಷ
*೨೦೦೭ ಚುನಾವಣೆ
*ಉತ್ತರಾಖಂಡ (೭೦)
* ಕಾಂಗ್ರೆಸ್ ------೨೧,
* ಬಿಜೆಪಿ --------೩೪;
* ಬಿಎಸ್ ಪಿ ------೦೮
* ಯು.ಕೆ.ಕೆ ----- ೦೩ ;
* ಪಕ್ಷೇತರ / ಇತರೆ ---೦೩.
* ಒಟ್ಟು ---------೭೦
*[[ಉತ್ತರಾಖಂಡ ವಿಧಾನ ಸಬೆ ಚುನಾವಣೆ]] (ಎಣಿಕೆ 6-3-2012 )
*ದಿನಾಂಕ ೧೩-೩-೨೦೧೨ ರಿಂದ ಮುಖ್ಯ ಮಂತ್ರಿ : '''ವಿಜಯ ಬಹುಗುಣ -ಕಾಂಗ್ರೆಸ್'''
**ಉತ್ತರಾಖಂಡ ೩೧-೨೦೧೪ ವಿಜಯ ಬಹುಗುಣ ರಾಜೀನಾಮೆ ; ೧-೨-೨೦೧೪ ಹರೀಶ್ ರಾವುತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ. (ಹೈಕಮ್ಯಾಂಡ್ ನಿರ್ಧಾರ)
==ಉತ್ತರಾಖಂಡ ಚುನಾವಣೆ ೨೦೧೨==
*(೩೦-೧-೨೦೧೨)- ಮಾರ್ಚಿ
UTTARAKHAND STATE ASSEMBLY
{| class="wikitable sortable sortable"
|-
! ಸ್ಥಾನ !! ಪಾರ್ಟಿ(ಉತ್ತರಾಖಂಡ-2012) !! ನಿಂತ ಸ್ಥಾನ !! ಗೆಲವು!! % ಓಟು/2012 !! % ಓಟು 2007
|-
| 1 || ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)|| 70 || 32 || 33.79 || 33.79
|-
| 3|| ಬಹುಜನ ಸಮಾಜ ಪಾರ್ಟಿ (BSP)|| 70 || 3 || 12.1 9 || 19
|-
| 4 || ಪಕ್ಷೇತರ|| -- || 3 || 12.34 || --
|-
| 5 || ಉತ್ತರಖಂಡಕ್ರಾಂತಿ ದಳUKD(P) || 44 || 1|| 1.93 || 3.18
|-
| 2 || ಭಾರತೀಯ ಜನತಾದಳ (BJP)|| 70 || 31 || 33.13|| 33.13
|-
| || - ಒಟ್ಟು - || Total 70 || -- || --|| --
|}
'''ಲೋಕ ಸಭೆ''' ೨೦೦೯
*ಕಾಂಗ್ರೆಸ್ ------೫, (43.14% )
*ಬಿಜೆಪಿ --------೦;( 33.80%)
*ಬಿಎಸ್ ಪಿ ----- ೦(15.24%)
*ಒಟ್ಟು --------೫
ಲೋಕ ಸಭೆ ೨೦೧೪
ಬಿಜೆಪಿ.......೫
ಒಟ್ಟು....೫
== ವಿಧಾನಸಭೆ ಉಪಚುನಾವಣೆ ೨೪-೭-೨೦೧೪ ==
*(ಉತ್ತರಾಂಚಲ ಮರುಚುನಾವಣೆ: ಕಾಂಗ್ರೆಸ್ ಸ್ವೀಪ್ಏಜೆನ್ಸೀಸ್ | Jul 25, 2014, 04.18PM)
*ಧಾರ್ಚೂಲಾ ಕ್ಷೇತ್ರದಲ್ಲಿ ಸಿಎಂ ರಾವತ್ 20 ಸಾವಿರ ಮತಗಳಿಂದ ಗೆದ್ದರೆ, ದೊಯ್ವಾಲದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಹಿರಾಸಿಂಗ್ ಬಿಸ್ತ್(6 ಸಾವಿರ) ಹಾಗೂ ಸೋಮೇಶ್ವರ ಮೀಸಲು ಕ್ಷೇತ್ರದಲ್ಲಿ ರೇಖಾ ಆರ್ಯ(9 ಸಾವಿರ) ಮತಗಳಿಂದ ಗೆಲುವು ದಾಖಲಿಸಿದ್ದಾರೆ ಎಂದು ಉತ್ತರಾಖಂಡ್ ನ ಮುಖ್ಯ ಚುನಾವಣಾ ಅಧಿಕಾರಿ ರಾಧಾ ರಾತುರಿ ಹೇಳಿದ್ಧಾರೆ.
*ಧಾರ್ಚೂಲಾ ಕ್ಷೇತ್ರದಲ್ಲಿ ರಾವತ್ಗೆ 31214 ಮತಗಳು ಬಂದಿದ್ದರೆ ಪ್ರತಿಸ್ಪರ್ಧಿ ಬಿಜೆಪಿಯ ಬಿ.ಡಿ.ಜೋಷಿಗೆ ಸಿಕ್ಕಿದ್ದು 10610 ಮತಗಳು ಮಾತ್ರ. ಅದೇ ವೇಳೆ ದೊಯ್ವಾಲದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಹಿರಾಸಿಂಗ್ ಬಿಸ್ತ್ಗೆ 35980 ಹಾಗೂ ಪ್ರತಿಸ್ಪರ್ಧಿ ಬಿಜೆಪಿಯ ತ್ರಿವೇಂದ್ರಸಿಂಗ್ ರಾವತ್ಗೆ 29465 ಮತಗಳು ಬಂದಿವೆ. ಸೋಮೇಶ್ವರ ಮೀಸಲು ಕ್ಷೇತ್ರದಲ್ಲಿ ರೇಖಾ ಆರ್ಯಗೆ 22996 ಹಾಗೂ ಎದುರಾಳಿ ಬಿಜೆಪಿಯ ಮೋಹನ್ರಾಮ್ ಆರ್ಯಗೆ 13091 ಮತಗಳು ಸಿಕ್ಕಿವೆ ಎಂದು ರಾಧಾ ರಾತುರಿ ಹೇಳಿದರು.
*70 ಸದಸ್ಯರಿರುವ ವಿದಾನ ಸಭೆಯಲ್ಲಿ ಕಾಂಗ್ರೆಸ್ ತನ್ನ ಬಲವನ್ನು 32ರಿಂದ 35(+1=36?)ಕ್ಕೇರಿಸಿಕೊಂಡಿದೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯನ್ನು 30ರಿಂದ 28ಕ್ಕೆ ಕುಗ್ಗಿಸಿದೆ
==ಇತ್ತೀಚನ ಬೆಳವಣಿಗೆ ೨೬-೩-೨೦೧೬==
*20-3-2016 ಕಾಂಗ್ರೆಸ್'ನ 9 ಶಾಸಕರು ಬಂಡಾಯವೆದ್ದು ಬಿಜೆಪಿ ಬೆಂಬಲಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಮಾ.28ರ ಒಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸಿಎಂ ಹರೀಶ್ ರಾವತ್ಗೆ ರಾಜ್ಯಪಾಲ ಕೆ.ಕೆ.ಪಾಲ್ ಸೂಚಿಸಿದ್ದಾರೆ. ಅಟಾರ್ನಿ ಜನರಲ್ ಉಮಾಕಾಂತ್ ಉನಿಯಾಲ್ ಮತ್ತು ಬಂಡಾಯ ಸಚಿವ ಹರಕ್ ಸಿಂಗ್ ರಾವತ್ರನ್ನು ಸಿಎಂ ವಜಾಗೊಳಿಸಿದ್ದಾರೆ.<ref>{{Cite web |url=http://m.dailyhunt.in/news/india/kannada/vijayavani-epaper-vijvani/patanadatta-uttaraakhanda-kaangres-sarkaara-newsid-51070176 |title=ಆರ್ಕೈವ್ ನಕಲು |access-date=2016-03-27 |archive-date=2025-01-17 |archive-url=https://web.archive.org/web/20250117234605/http://m.dailyhunt.in/news/india/kannada/vijayavani-epaper-vijvani/patanadatta-uttaraakhanda-kaangres-sarkaara-newsid-51070176 |url-status=dead }}</ref>
*27-3-2016 ಮುಖ್ಯಮಂತ್ರಿ ಹರೀಶ್ ರಾವತ್ ಅವರು ಸೋಮವಾರ ವಿಶ್ವಾಸಮತ ಯಾಚಿಸುವುದಕ್ಕೂ ಮುನ್ನ ವಿಧಾನಸಭಾ ಸ್ಪೀಕರ್ ಗೋವಿಂದ್ ಸಿಂಗ್ ಕುಂಜ್ವಾಲ್ ಅವರು ಒಂಬತ್ತು ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರು. ರಾಜ್ಯಪಾಲ ಕೆ.ಕೆ.ಪಾಲ್ ಅವರು ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ವರದಿ ಸಲ್ಲಿಸಿದ ಆಧಾರದಲ್ಲಿ ಕೇಂದ್ರ ಸಂಪುಟ ಸಭೆ ಸೇರಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಚರ್ಚೆ ನಡೆಸಿದೆ.<ref>http://www.hindustantimes.com/india/uttarakhand-crisis-rawat-condemns-modi-govt-sec-144-imposed-in-doon/story-w6u8ssLFOvtYLbmp0FCcjO.html</ref>
=== ದಿ.೨೬-೩-೨೦೧೬ರ ಸದಸ್ಯರ ಬಲಾಬಲ ===
{| class="wikitable sortable "
|-
|colspan=5 style="background:#eee;"| <center>30-12-2012 ರ ವಿಧಾನ ಸಭೆ ಚುನಾವಣೆ= ಒಟ್ಟು ಸ್ಥಾನಗಳು 70 -</center>
|-
!ಕ್ರ.ಸಂ.||ಪಕ್ಷದ ಹೆಸರು ||ಸದಸ್ಯಬಲ|| ನಾಯಕ
|-
|01.||ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC || 36 || ಹರೀಶ್ ರಾವತ್
|-
|02.||ಭಾರತೀಯ ಜನತಾ ಪಕ್ಷ (ಬಿಜೆಪಿ|| 28 || ಅಜಯ್ ಭಟ್
|-
|03.||ಬಹುಜನ ಸಮಾಜ ಪಕ್ಷ (ಬಿಎಸ್ಪಿ) 02 || 02 || ಹರಿ ದಾಸ್
|-
|೦4||ಉತ್ತರಾಖಂಡ್ ಕ್ರಾಂತಿ ದಳ (ಪಿ)(UKD (ಪಿ)|| 01 || ಪ್ರೀತಮ್ ಸಿಂಗ್ ಪನ್ವಾರ್
|-
|೦5.|| ಪಕ್ಷೇತರರು || 03 || -
|-
!೦6.|| ಒಟ್ಟು ||70||
|-bgcolor="Yellow"
|07||ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC ||36||36-9ಬಂಡಾಯ=27+3+2+1(ಇತರೆ) =33
|}
*ಉತ್ತರಾಖಂಡ್ ರಾಜ್ಯದ ಅಸ್ಥಿರತೆ ಬಗ್ಗೆ ರಾಜ್ಯಪಾಲ ಕೆಕೆ ಪಾಲ್ ಅವರ ವರದಿಗಳನ್ನು ಅನುಸರಿಸಿ, 2016 ಮಾರ್ಚ್ 27,ಭಾನುವಾರ ದಿಂದ ಜಾರಿಗೆ ಬರುವಂತೆ ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿದೆ.<ref>http://www.hindustantimes.com/india/president-s-rule-imposed-in-uttarakhand-amid-political-crisis-cong-fumes/story-ksKOtAvVsbuqrWBBMfSiTP.html</ref>
*(ಚುನಾವನೆ ಕಮಿಶನ್-ವದಿ ವಿಜಯ ಕರ್ನಾಟಕ-೨೫-೭-೨೦೧೪)<ref>ಚುನಾವನೆ ಕಮಿಶನ್-ವದಿ ವಿಜಯ ಕರ್ನಾಟಕ-೨೫-೭-೨೦೧೪</ref>
===ಹಿಮನದಿ ಸ್ಪೋಟ===
*ಉತ್ತರಾಖಂಡ ರಾಜ್ಯದ ಚಿಮೋಲಿ ಜಿಲ್ಲೆಯಲ್ಲಿ, ೭-೨-೨೦೨೧ ಭಾನುವಾರ ಸಂಭವಿಸಿದ ಹಿಮಸ್ಫೋಟದಿಂದ ಪ್ರವಾಹ ಉಂಟಾಗಿ ಎರಡು ಜಲವಿದ್ಯುತ್ ಸ್ಥಾವರಗಳು ಹಾಗೂ ಹಳ್ಳಿಗಳು ಹಾಳಾಗಿವೆ. ಸುಮಾರ ೩೨ ಜನ ಕಾರ್ಮಿಕರು ಸತ್ತಿದ್ದು ಅವರನ್ನು ಸುರಂಗದಿಂದ ಹೊರತೆಗೆಯಲಾಗಿದೆ, ಇನ್ನೂ ಸುಮಾರು ೧೪೦- ೧೭೦ಜನ ಕಾರ್ಮಿಕರು ಕಾಣೆಯಾಗಿದ್ದಾರೆ.
*ಫೋಟೋ ಗ್ಯಾಲರಿ.[https://www.kannadaprabha.com/photogallery/nation/2021/feb/07/uttarakhand-glacier-burst-photo-1998--14.html ಉತ್ತರಾಖಂಡದಲ್ಲಿ ಹಿಮ ಪ್ರವಾಹಕ್ಕೆ ಡ್ಯಾಂ ನೆಲಸಮ, ಪ್ರವಾಹದ ಭೀಕರ ಚಿತ್ರಗಳು!-Published: 07th February 2021] {{Webarchive|url=https://web.archive.org/web/20210513010956/https://www.kannadaprabha.com/photogallery/nation/2021/feb/07/uttarakhand-glacier-burst-photo-1998--14.html |date=2021-05-13 }}<ref>{{Cite web |url=https://www.kannadaprabha.com/photogallery/nation/2021/feb/07/uttarakhand-glacier-burst-photo-1998--14.html |title=೭-೨-೨೦೨೧ ಭಾನುವಾರ ಸಂಭವಿಸಿದ ಹಿಮಸ್ಫೋಟದಿಂದ ಪ್ರವಾಹ ಉಂಟಾಗಿ ಎರಡು ಜಲವಿದ್ಯುತ್ ಸ್ಥಾವರಗಳು ಹಾಗೂ ಹಳ್ಳಿಗಳು ಹಾಳಾಗಿವೆ. |access-date=2021-02-11 |archive-date=2021-05-13 |archive-url=https://web.archive.org/web/20210513010956/https://www.kannadaprabha.com/photogallery/nation/2021/feb/07/uttarakhand-glacier-burst-photo-1998--14.html |url-status=dead }}</ref>
*[https://www.kannadaprabha.com/specials/2021/feb/08/explained-how-glaciers-can-burst-and-send-floods-downstream-439204.html ಹಿಮನದಿಗಳು ಸ್ಫೋಟಗೊಂಡು ಹೇಗೆ ಪ್ರವಾಹ ಉಂಟುಮಾಡುತ್ತವೆ! Last Updated: 08th February 2021] {{Webarchive|url=https://web.archive.org/web/20210210025518/https://www.kannadaprabha.com/specials/2021/feb/08/explained-how-glaciers-can-burst-and-send-floods-downstream-439204.html |date=2021-02-10 }}
== ಉಲ್ಲೇಖಗಳು ==
{{Reflist}}
== ನೋಡಿ ==
[[ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯]]
*[[ಉತ್ತರಾಖಂಡದಲ್ಲಿ ಚುನಾವಣೆಗಳು]]
{{ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು}}
== ಉಲ್ಲೇಖಗಳು ==
{{Interwikineeded}}
[[ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
g3o157unh85a371yg1lo4oxcxhrob2j
ಎರ್ಬಿಯಮ್
0
15081
1378208
1339285
2026-08-02T18:22:19Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378208
wikitext
text/x-wiki
{{ಮೂಲಧಾತು/ಎರ್ಬಿಯಮ್}}
'''ಎರ್ಬಿಯಮ್''' ಒಂದು [[ವಿರಳ ಭಸ್ಮ]] [[ಮೂಲಧಾತು]].ಇದನ್ನು [[ಸ್ವೀಡನ್]] ನ [[ಕಾರ್ಲ್ ಮೊಸನ್ಡರ್]] [[೧೮೪೩]]ರಲ್ಲಿ ಕಂಡುಹಿಡಿದರು.ಇದು ಬಹುತೇಕ ಇದು ಇದರದೇ ವರ್ಗದ ಇತರ ಮೂಲಧಾತುಗಳಾದ [[ಯುರೋಪಿಯಮ್]] ಹಾಗೂ [[ಗಾಡೋಲಿಯಮ್]] ನ ಜತೆಯಲ್ಲಿ ದೊರೆಯುತ್ತದೆ.ಇದು ಬಣ್ಣದ ಗಾಜಿನ ತಯಾರಿಕೆಯಲ್ಲಿ,[[ಆಭರಣ]] ತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗವಾಗುತ್ತಿದೆ.
==ಇತಿಹಾಸ==
ಲೋಹವಸ್ತುವಾಗಿರುವ ಇದನ್ನು 1843ರಲ್ಲಿ ಸ್ವೀಡನ್ನಿನ ರಸಾಯನವಿಜ್ಞಾನಿ [[ಕಾರ್ಲ್ ಗುಸ್ಟಾವ್ ಮೊಸಾಂಡರ್]] (1797-1858) ಕಂಡುಕೊಂಡ<ref>{{cite journal|author=Mosander, C. G. |date=1843|url=https://books.google.com/books?id=CJEOAAAAIAAJ&pg=PA241|title=On the new metals, Lanthanium and Didymium, which are associated with Cerium; and on Erbium and Terbium, new metals associated with Yttria|journal=Philosophical Magazine|volume= 23|issue=152| pages =241–254|doi=10.1080/14786444308644728}} Note: The first part of this article, which does NOT concern erbium, is a translation of: C. G. Mosander (1842) [https://books.google.com/books?id=XK4tAAAAcAAJ&pg=387 "Något om Cer och Lanthan"] [Some (news) about cerium and lanthanum], ''[[Scandinavian Scientist Conference|Förhandlingar vid de Skandinaviske naturforskarnes tredje möte (Stockholm)]]'' [Transactions of the Third Scandinavian Scientist Conference (Stockholm)], vol. 3, pp. 387–398.</ref>. ಶುದ್ಧರೂಪದ ಯೆಟ್ರಿಯದ (ಯೆಟ್ರಿಯಂ ಆಕ್ಸೈಡ್ ಙ2ಔ3) ಪರೀಕ್ಷೆಯನ್ನು ನಡೆಸುತ್ತಿದ್ದಾಗ ಮತ್ತೆರಡು ವಸ್ತುಗಳ ಆಕ್ಸೈಡುಗಳಿರುವುದು ಕಂಡುಬಂತು. ಒಂದನ್ನು ಎರ್ಬಿಯಮ್ ಎಂದೂ ಮತ್ತೊಂದನ್ನು ಟೆರ್ಬಿಯಮ್ ಎಂದೂ ಕರೆದ.
==ಗಮನಾರ್ಹ ಗುಣಲಕ್ಷಣಗಳು==
ತ್ರಿವೇಲೆಂಟ್ ಲೋಹ ಎರ್ಬಿಯಂನ ಶುದ್ಧ ರೂಪವು ಮೆತುವಾದ ಮತ್ತು ಮೃದುವಾಗಿರುತ್ತದೆ. ಆದರೂ, ಇದು ಗಾಳಿಯಲ್ಲಿ ಸ್ಥಿರವಾಗಿರುತ್ತದೆ. ಇದು ಇತರ ಅಪರೂಪದ ಭೂಮಿಯ ಲೋಹಗಳಂತೆ ವೇಗವಾಗಿ ಆಕ್ಸಿಡೀಕರಣಗೊಳ್ಳುವುದಿಲ್ಲ . ಇದರ ಲವಣಗಳು ಗುಲಾಬಿ ಬಣ್ಣದಲ್ಲಿರುತ್ತವೆ. ಇದರ ಸೆಸ್ಕ್ವಿಯಾಕ್ಸೈಡ್ ಅನ್ನು ಎರ್ಬಿಯಾ ಎಂದು ಕರೆಯಲಾಗುತ್ತದೆ .
==ಉಪಯೋಗಗಳು==
* ಎರ್ಬಿಯಂ ದಿನನಿತ್ಯದ ಬಳಕೆಗಳಲ್ಲಿ ವೈವಿಧ್ಯಮಯವಾಗಿದೆ. ಇದನ್ನು ಸಾಮಾನ್ಯವಾಗಿ ಕ್ಯಾಮೆರಾಗಳಲ್ಲಿ ಫಿಲ್ಟರ್ ಆಗಿ ಬಳಸಲಾಗುತ್ತದೆ. ಇತರ ಉಪಯೋಗಗಳು:
* ಪರಮಾಣು ತಂತ್ರಜ್ಞಾನದಲ್ಲಿ, ನ್ಯೂಟ್ರಾನ್ಗಳನ್ನು ಹೀರಿಕೊಳ್ಳಲು ಮಾಡರೇಟರ್ ಅನ್ನು ಬಳಸಲಾಗುತ್ತದೆ .
* ಫೈಬರ್-ಆಪ್ಟಿಕ್ ಲೇಸರ್ ಆಂಪ್ಲಿಫೈಯರ್ಗಳನ್ನು ಡೋಪಿಂಗ್ ಮಾಡಲು ಇದನ್ನು ಡೋಪಂಟ್ ಆಗಿ ಬಳಸಲಾಗುತ್ತದೆ.
* [[ವನಾಡಿಯಮ್|ವನಾಡಿಯಮ್ನೊಂದಿಗೆ]] ಮಿಶ್ರಲೋಹ ಮಾಡಿದಾಗ , ಅದು ಅದರ ಗಡಸುತನವನ್ನು ಕಡಿಮೆ ಮಾಡುತ್ತದೆ ಮತ್ತು ಅದರ ರಚನೆಯನ್ನು ಹೆಚ್ಚಿಸುತ್ತದೆ.
* ಎರ್ಬಿಯಮ್ ಆಕ್ಸೈಡ್ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಇದನ್ನು ಕೆಲವೊಮ್ಮೆ ಗಾಜು ಮತ್ತು ಪಿಂಗಾಣಿ ಬಣ್ಣ ಬಳಿಯಲು ಬಳಸಲಾಗುತ್ತದೆ. ಅಂತಹ ಕನ್ನಡಕಗಳನ್ನು ಸನ್ ಗ್ಲಾಸ್ ಮತ್ತು ಅಗ್ಗದ ಆಭರಣಗಳಲ್ಲಿ ಬಳಸಲಾಗುತ್ತದೆ.
==ಉಲ್ಲೇಖಗಳು==
{{reflist}}
==ಬಾಹ್ಯ ಸಂಪರ್ಕಗಳು==
{{Commons|Erbium}}
{{wiktionary|erbium}}
* [http://www.webelements.com/webelements/elements/text/Er/index.html WebElements.com – Erbium] {{Webarchive|url=https://web.archive.org/web/20080402035416/http://www.webelements.com/webelements/elements/text/Er/index.html |date=2008-04-02 }} (also used as a reference)
* [http://education.jlab.org/itselemental/ele068.html It's Elemental – Erbium] {{Webarchive|url=https://web.archive.org/web/20110303030916/http://education.jlab.org/itselemental/ele068.html |date=2011-03-03 }}
{{ಆವರ್ತ ಕೋಷ್ಟಕ}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎರ್ಬಿಯಮ್}}
{{Refimprove}}
{{Interwikineeded}}
[[ವರ್ಗ:ಮೂಲಧಾತುಗಳು]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
lxyd0gnnwp9ntxfm4lpbrkqlfl7m9ni
ಕಾರ್ಲ್ ಗುಸ್ತಾವ್ ಮೊಸೆಂಡರ್
0
16303
1378224
1342142
2026-08-03T00:07:01Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1378224
wikitext
text/x-wiki
[[Image:Mosander Carl Gustav bw.jpg|thumb|right|ಕಾರ್ಲ್ ಗುಸ್ತಾವ್ ಮೊಸೆಂಡರ್]]{{Infobox scientist|name=Carl Gustaf Mosander|image=Mosander Carl Gustav bw.jpg|image_size=220px|caption=Carl Gustaf Mosander|birth_date={{birth date|df=yes|1797|9|10}}|birth_place=[[Kalmar]]|death_date={{death date and age|df=yes|1858|10|15|1797|9|10}}|death_place=[[Lovö]], [[Stockholm County]]|residence=|citizenship=|nationality=Swedish|ethnicity=|field=[[chemistry]]|work_institutions=[[Karolinska Institute]]|alma_mater=Karolinska Institute|doctoral_advisor=|doctoral_students=|known_for=[[lanthanum]]<br/>[[erbium]]<br/>[[terbium]]|author_=|author_abbrev_zoo=|influences=|influenced=|prizes=|religion=|footnotes=|signature=}}
'''ಕಾರ್ಲ್ ಗುಸ್ತಾವ್ ಮೊಸೆಂಡರ್'''(10 ಸೆಪ್ಟಂಬರ್ 1797 – 15 ಒಕ್ಟೋಬರ್ 1858)[[ಸ್ವೀಡನ್]]ನ ವಿಜ್ಞಾನಿ. ಇವರು [[ಲ್ಯಾಂಥಾನಮ್]],[[ಎರ್ಬಿಯಮ್ ]]ಹಾಗೂ [[ಟೆರ್ಬಿಯಮ್]] ಎಂಬ[[ ಮೂಲಧಾತು]]ಗಳನ್ನು ಕಂಡುಹಿಡಿದರು.
== ಬಾಲ್ಯ ಮತ್ತು ವಿದ್ಯಾಭ್ಯಾಸ ==
ಕಲ್ಮಾರ್ನಲ್ಲಿ ಜನಿಸಿದ ಮೊಸಾಂಡರ್, 1809 ರಲ್ಲಿ ತನ್ನ ತಾಯಿಯೊಂದಿಗೆ ಸ್ಟಾಕ್ಹೋಮ್ಗೆ ತೆರಳುವವರೆಗೂ ಅಲ್ಲೇ ಶಾಲೆಗೆ ಹೋದರು. ಸ್ಟಾಕ್ಹೋಮ್ನಲ್ಲಿ, ಅವರು ಉಗ್ಲಾನ್ ಔಷಧಾಲಯದಲ್ಲಿ ಅಪ್ರೆಂಟಿಸ್ ಆದರು. ಅವರು 1817 ರಲ್ಲಿ ತಮ್ಮ ಔಷಧಾಲಯ ಪರೀಕ್ಷೆಯನ್ನು ತೆಗೆದುಕೊಂಡರಾದರೂ ವೈದ್ಯಕೀಯದಲ್ಲಿ ಆಸಕ್ತಿ ಹೊಂದಿದ್ದರು. ಇದಕ್ಕಾಗಿ ಅವರು 1820 ರಲ್ಲಿ ಕರೋಲಿನ್ಸ್ಕಾ ಸಂಸ್ಥೆಯನ್ನು ಸೇರಿದರು. ಅವರು 1825 ರಲ್ಲಿ ತಮ್ಮ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು. <ref name="Evans">{{cite book|author-first=Levi |author-last=Tansjö|chapter=Carl Gustaf Mosander and His Research on Rare Earths |editor-last1=Evans |editor-first1=C. H. |title=Episodes from the History of the Rare Earth Elements |date=December 6, 2012 |publisher=Springer Science & Business Media |pages=38–55 |url=https://books.google.com/books?id=EFzuCAAAQBAJ&q=Mosander|isbn=9789400902879}}</ref>ಅವರು ಜಾನ್ಸ್ ಜಾಕೋಬ್ ಬೆರ್ಜೆಲಿಯಸ್ ಅವರ ಪ್ರಯೋಗಾಲಯದಲ್ಲಿ ಕೆಲಸ ಮಾಡಿದರು ಮತ್ತು ಸಹ ವಿದ್ಯಾರ್ಥಿ ಫ್ರೆಡ್ರಿಕ್ ವೊಹ್ಲರ್ ಅವರ ಆಪ್ತ ಸ್ನೇಹಿತರಾದರು.<ref name="Evans"/>{{rp|38}}
==ವೃತ್ತಿ ಜೀವನ==
1832 ರಲ್ಲಿ ಜಾನ್ಸ್ ಜಾಕೋಬ್ ಬೆರ್ಜೆಲಿಯಸ್ ತಮ್ಮ ವಿದ್ಯಾರ್ಥಿ ಮೊಸಾಂಡರ್ ಪರವಾಗಿ ನಿವೃತ್ತರಾದರು, ಅವರು ಕರೋಲಿನ್ಸ್ಕಾ ಸಂಸ್ಥೆಯಲ್ಲಿ ರಸಾಯನಶಾಸ್ತ್ರ ಮತ್ತು ಔಷಧಾಲಯದ ಪ್ರಾಧ್ಯಾಪಕರಾಗಿ ಉತ್ತರಾಧಿಕಾರಿಯಾದರು.<ref name="Evans"/>{{rp|38}} 1845 ರಿಂದ ಮೊಸಾಂಡರ್ ಔಷಧೀಯ ಸಂಸ್ಥೆಯಲ್ಲಿ ಪ್ರಾಧ್ಯಾಪಕರು ಮತ್ತು ಇನ್ಸ್ಪೆಕ್ಟರ್ ಆಗಿದ್ದರು.<ref name="Evans"/>{{rp|38}} ಮೊಸಾಂಡರ್ 1819 ರಲ್ಲಿ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಸ್ಥಾಪಿಸಿದ ಸ್ವೀಡಿಷ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ <ref name="Fontani">{{cite book |last1=Fontani |first1=Marco |last2=Costa |first2=Mariagrazia |last3=Orna |first3=Mary Virginia |title=The lost elements : the periodic table's shadow side |date=2014 |publisher=Oxford University Press |isbn=9780199383344 |pages=119–120 |url=https://books.google.com/books?id=Ck9jBAAAQBAJ&pg=PA172}}</ref> ನ ಖನಿಜ ಸಂಗ್ರಹಗಳ ಸಹಾಯಕ ಕ್ಯಟದ್ದರು. <ref>{{cite booast1=Dahlgren|first1=Erik Wilhelm|title=Kungl. Svenska Vetenskapsakademien : Personförteckningar 1739–1915|date=1915|publisher=Kungl. Svenska Vetenskapsakademien|location=Uppsala|page=16}}</ref><ref name="Ihde">{{cite book |last1=Ihde |first1=Aaron J. |title=The Development of Modern Chemistry |date=1970 |publisher=Harper and Row/Dover |location=New York |page=375 |edition=Dover reprint of the 1970 3rd printing by Harper and Row |url=https://books.google.com/books?id=89BIAwAAQBAJ&pg=PA375|isbn=9780486642352 }}</ref>
ಮೊಸಾಂಡರ್ 1838 ರಲ್ಲಿ ಲ್ಯಾಂಥನಮ್ ಅನ್ನು ಕಂಡುಹಿಡಿದನು. ಇದು ಸ್ವೀಡನ್ನ ಬಾಸ್ಟ್ನೇಸ್ನಿಂದ ಬಂದ ಸೆರೈಟ್-(Ce) ನಿಂದ ಬಂದಿತು, ಆ ಸಮಯದಲ್ಲಿ ಅದು "ಸೀರಿಯಮ್" ನ ಏಕೈಕ ಹೇರಳವಾದ ಮೂಲವಾಗಿತ್ತು, ಇದನ್ನು ಬರ್ಜೆಲಿಯಸ್ ಮತ್ತು ರುಸಿಂಗರ್ ಮತ್ತು ಸ್ವತಂತ್ರವಾಗಿ ಕ್ಲಾಪ್ರೋತ್ 1803 ರಲ್ಲಿ ಕಂಡುಹಿಡಿದ್ದರು. ಆ ಸಮಯದಲ್ಲಿ, ಖನಿಜ ಯ್ಟರ್ಬೈಟ್ನ (ನಂತರ ಗ್ಯಾಡೋಲಿನೈಟ್ ಎಂದು ಹೆಸರಿಸಲಾಯಿತು) ಎರಡು ತಿಳಿದಿರುವ ಘಟಕಗಳಲ್ಲಿ ಒಂದು ಸಿರಿಯಾ ಎಂಬ ಬಿಳಿ ಆಕ್ಸೈಡ್ ಆಗಿತ್ತು. ಮೊಸಾಂಡರ್ ಸಿರಿಯಾವನ್ನು ಬಿಸಿ ಮಾಡುವ ಮೂಲಕ ಮತ್ತು ಪರಿಣಾಮವಾಗಿ ಸಿಕ್ಕ ಲವಣವನ್ನು ದುರ್ಬಲ ನೈಟ್ರಿಕ್ ಆಮ್ಲದೊಂದಿಗೆ ಸಂಸ್ಕರಿಸುವ ಮೂಲಕ ಭಾಗಶಃ ಪ್ರತ್ಯೇಕಿಸಿದರು. <ref name="Jha">{{cite book |last1=Jha |first1=A.R. |url=https://books.google.com/books?id=rR_cBQAAQBAJ&pg=PA3 |title=Rare Earth Materials: Properties and Applications |date=June 17, 2014 |publisher=CRC Press |isbn=9781466564039}}</ref><ref name="Enghag">{{citation |last=Enghag |first=Per |title=Encyclopedia of the elements |pages=444–454 |year=2004 |url=https://books.google.com/books?id=fUmTX8yKU4gC |publisher=John Wiley and Sons |isbn=978-3-527-30666-4}}</ref><ref name="Thornton">{{cite journal|last1=Thornton|first1=Brett F.|last2=Burdette|first2=Shawn C.|title=The neodymium neologism|journal=Nature Chemistry|date=24 January 2017|volume=9|issue=2|pages=194|doi=10.1038/nchem.2722|pmid=28282053|bibcode=2017NatCh...9..194T|doi-access=free}}</ref>ತನ್ನ ಆವಿಷ್ಕಾರ ಸೀರಿಯಮ್ನ ಒಂದು ಅಂಶವಲ್ಲ ಎಂದು ತೋರಿಸುವ ಮೂಲಕ ತನ್ನ ಮಾರ್ಗದರ್ಶಕ ಬೆರ್ಜೆಲಿಯಸ್ಗೆ ಮುಜುಗರ ಉಂಟಾಗುವ ಭಯದಿಂದ ಮತ್ತು ಅವನು ಸ್ವತಃ ಸೀರಿಯಮ್ ಅನ್ನು ಅದರ ಎಲ್ಲಾ ಘಟಕಗಳನ್ನು ಪ್ರತ್ಯೇಕಿಸಿದ್ದಾನೆ ಎಂದು ಅವನಿಗೇ ಖಚಿತವಿಲ್ಲದ ಕಾರಣ, ಅವರು ತನ್ನ ಫಲಿತಾಂಶಗಳನ್ನು ವರದಿ ಮಾಡಲು ಹಿಂಜರಿಯುತ್ತಿದ್ದರು. ಈ ಹೊಸ ಆವಿಷ್ಕಾರವನ್ನು "ಮರೆಮಾಡಲಾಗಿದೆ" ಎಂಬುದಕ್ಕಾಗಿ ಬೆರ್ಜೆಲಿಯಸ್ ಅಂತಿಮವಾಗಿ ಮೂಲಧಾತುವಿಗೆ "ಲ್ಯಾಂಥನ್" ಎಂಬ ಹೆಸರನ್ನು ಸೂಚಿಸಿದರು.<ref name="Burdette">{{cite journal|last1=Thornton|first1=Brett F.|last2=Burdette|first2=Shawn C.|title=Seekers of the lost lanthanum|journal=Nature Chemistry|date=24 January 2019|volume=11|issue=2|pages=188|doi=10.1038/s41557-018-0208-3|pmid=30679779|bibcode=2019NatCh..11..188T|doi-access=free}}</ref>
1840 ರ ಹೊತ್ತಿಗೆ, ಮೊಸಾಂಡರ್ ಸೀರಿಯಮ್ ಆಕ್ಸೈಡ್ ಅನ್ನು ಹಳದಿ ಸೀರಿಯಮ್ ಆಕ್ಸೈಡ್, ಬಿಳಿ ಲ್ಯಾಂಥನಮ್ ಆಕ್ಸೈಡ್ ಮತ್ತು ಗುಲಾಬಿ ಬಣ್ಣದ ಮೂರನೇ ಘಟಕವಾಗಿ ಬೇರ್ಪಡಿಸಿದರು, ಇದನ್ನು ಅವರು "ಡೈಡೈಮಿಯಮ್" ಅಂದರೆ "ಅವಳಿ" ಎಂದು ಕರೆದರು. <ref name="Burdette2" /><ref name="Thornton2" />ಡಿಡಿಮಿಯಮ್ ಅನ್ನು ಹಲವು ವರ್ಷಗಳ ಕಾಲ ಒಂದು ಅಂಶವಾಗಿ ಸ್ವೀಕರಿಸಲಾಯಿತು. [[ಡಿಮಿಟ್ರಿ ಮೆಂಡಲೀವ್]] ಅವರ ಆವರ್ತಕ ವ್ಯವಸ್ಥೆಯಲ್ಲಿ 95 ನೇ ಸಂಖ್ಯೆಯಾಗಿ, ಡಿ ಚಿಹ್ನೆಯೊಂದಿಗೆ ಕಾಣಿಸಿಕೊಂಡಿತು. 1874 ರಲ್ಲಿ, [[ಪರ್ ಟಿಯೋಡರ್ ಕ್ಲೀವ್]] [[ಡಿಡಿಮಿಯಂ]] ಕನಿಷ್ಠ ಎರಡು ಅಂಶಗಳನ್ನು ಹೊಂದಿದೆ ಎಂದು ಭವಿಷ್ಯ ನುಡಿದರು.<ref name="Helmenstine">{{cite web |last1=Helmenstine |first1=Anne Marie |date=November 1, 2018 |title=Didymium Facts and Uses What You Need to Know About Didymium |url=https://www.thoughtco.com/didymium-facts-and-uses-4050416 |accessdate=13 December 2019 |website=Thought Co.}}</ref> 1879 ರಲ್ಲಿ, ಲೆಕಾಕ್ ಡಿ ಬೋಯಿಸ್ಬೌಡ್ರನ್ ಸಮರಿಯಮ್ ಅನ್ನು ಪ್ರತ್ಯೇಕಿಸಿದರು,<ref name="Helmenstine2" />ಆದರೆ 1885 ರಲ್ಲಿ ಕಾರ್ಲ್ ಔರ್ ವಾನ್ ವೆಲ್ಸ್ಬಾಚ್ ಉಳಿದ ಎರಡು ಅಂಶಗಳನ್ನು ಪುನರಾವರ್ತಿತ ಭಾಗಶಃ ಸ್ಫಟಿಕೀಕರಣಗಳ ಮೂಲಕ ಬೇರ್ಪಡಿಸಿದರು. ವೆಲ್ಸ್ಬಾಚ್ ಅವುಗಳನ್ನು ಪ್ರಾಸಿಯೋಡಿಡೈಮಿಯಮ್ (ಹಸಿರು ಡಿಡೈಮಿಯಮ್) ಮತ್ತು ನಿಯೋಡಿಡೈಮಿಯಮ್ (ಹೊಸ ಡಿಡೈಮಿಯಮ್) ಎಂದು ಹೆಸರಿಸಿದರು. ಅವುಗಳನ್ನು ಪ್ರಾಸಿಯೋಡೈಮಿಯಮ್ ಮತ್ತು ನಿಯೋಡೈಮಿಯಮ್ ಎಂದು ಕರೆಯಲಾಯಿತು.<ref name="Thornton3" />
1843 ರಲ್ಲಿ ಮೊಸಾಂಡರ್ [[ಯಟ್ರಿಯಾ]]ದ ಘಟಕಗಳಾಗಿ ಟೆರ್ಬಿಯಂ ಮತ್ತು ಎರ್ಬಿಯಂ ಅನ್ನು ಕಂಡುಹಿಡಿದನು.<ref name="Evans2" /><ref name="Weeks">{{cite book |last1=Weeks |first1=Mary Elvira |url=https://archive.org/details/discoveryoftheel002045mbp |title=The discovery of the elements |date=1956 |publisher=Journal of Chemical Education |edition=6th |location=Easton, PA}}</ref>{{rp|701}}<ref name="XVI">{{cite journal|author=Weeks, Mary Elvira|authorlink=Mary Elvira Weeks|title=The discovery of the elements: XVI. The rare earth elements|journal=Journal of Chemical Education|year=1932|volume=9|issue=10|pages=1751–1773|doi=10.1021/ed009p1751|bibcode=1932JChEd...9.1751W}}</ref><ref name="James">{{cite book |last1=Marshall |first1=James L. |title=Science history : a traveler's guide |last2=Marshall |first2=Virginia R. |date=October 31, 2014 |publisher=ACS Symposium Series |isbn=9780841230200 |volume=1179 |pages=209–257 |chapter=Northern Scandinavia: An Elemental Treasure Trove |doi=10.1021/bk-2014-1179.ch011}}</ref><ref name="Beginnings">{{cite journal|last1=Marshall|first1=James L. Marshall|last2=Marshall|first2=Virginia R. Marshall|title=Rediscovery of the elements: The Rare Earths–The Beginnings|journal=The Hexagon|date=2015|pages=41–45|url=http://www.chem.unt.edu/~jimm/REDISCOVERY%207-09-2018/Hexagon%20Articles/rare%20earths%20I.pdf|accessdate=30 December 2019|archive-date=15 ಮೇ 2024|archive-url=https://web.archive.org/web/20240515061949/http://www.chem.unt.edu/~jimm/REDISCOVERY%207-09-2018/Hexagon%20Articles/rare%20earths%20I.pdf|url-status=dead}}</ref><ref name="Virginia">{{cite journal|last1=Marshall|first1=James L. Marshall|last2=Marshall|first2=Virginia R. Marshall|title=Rediscovery of the elements: The Rare Earths–The Confusing Years|journal=The Hexagon|date=2015|pages=72–77|url=http://www.chem.unt.edu/~jimm/REDISCOVERY%207-09-2018/Hexagon%20Articles/rare%20earths%20II.pdf|accessdate=30 December 2019|archive-date=15 ಮೇ 2024|archive-url=https://web.archive.org/web/20240515061951/http://www.chem.unt.edu/~jimm/REDISCOVERY%207-09-2018/Hexagon%20Articles/rare%20earths%20II.pdf|url-status=dead}}</ref> <ref name="Piguet">{{cite journal|last1=Piguet|first1=Claude|title=Extricating erbium|journal=Nature Chemistry|date=21 March 2014|volume=6|issue=4|pages=370|doi=10.1038/nchem.1908|pmid=24651207|bibcode=2014NatCh...6..370P|doi-access=free}}</ref>ಆದರೂ, ಈ ಆವಿಷ್ಕಾರವು ತೀವ್ರವಾಗಿ ವಿವಾದಕ್ಕೊಳಗಾಯಿತು. ಸ್ಪೆಕ್ಟ್ರೋಸ್ಕೋಪಿಸ್ಟ್ ನಿಲ್ಸ್ ಜೋಹಾನ್ ಬರ್ಲಿನ್ ಎರಡು ಅಂಶಗಳು ಅಸ್ತಿತ್ವದಲ್ಲಿವೆ ಎಂದು ನಿರಾಕರಿಸಿದರು, "ಎರ್ಬಿಯಾ" ಅಸ್ತಿತ್ವವನ್ನು ದೃಢೀಕರಿಸಲು ವಿಫಲರಾದರು ಮತ್ತು ಅದರ ಹೆಸರನ್ನು "ಟೆರ್ಬಿಯಾ" ಗೆ ಅನ್ವಯಿಸಬೇಕೆಂದು ಸೂಚಿಸಿದರು. 1864 ರಲ್ಲಿ, ಮಾರ್ಕ್ ಡೆಲಾಫಾಂಟೈನ್ ಯಟ್ರಿಯಮ್, ಟೆರ್ಬಿಯಂ ಮತ್ತು ಎರ್ಬಿಯಂ ಪ್ರತ್ಯೇಕ ಅಂಶಗಳು ಎಂದು ನಿರ್ಣಾಯಕವಾಗಿ ಸಾಬೀತುಪಡಿಸಲು ಆಪ್ಟಿಕಲ್ ಸ್ಪೆಕ್ಟ್ರೋಸ್ಕೋಪಿಯನ್ನು ಬಳಸಿದರು.[<ref name="Friend">{{cite book |last1=Friend |first1=John Newton |url=https://books.google.com/books?id=CwxDAAAAIAAJ&pg=PA223 |title=A Text-book of Inorganic Chemistry |date=1917 |publisher=Griffin & Company |isbn=9781130017649 |volume=4 |pages=221–223}}</ref>ಆದರೂ, ವಿಪರ್ಯಾಸವೆಂದರೆ, ಹೆಸರುಗಳ ನಡುವೆ ಪರಿಚಯಿಸಲಾದ ಗೊಂದಲ ಮುಂದುವರೆಯಿತು. ಮೊಸಾಂಡರ್ನ ಪ್ರಸ್ತಾವಿತ ಹೆಸರುಗಳನ್ನು ಬದಲಾಯಿಸಲಾಯಿತು, ಇದು ಮೂಲತಃ ಪ್ರಸ್ತಾಪಿಸಿದಂತೆ ವಿರುದ್ಧ ದಿಕ್ಕಿನಲ್ಲಿ ಬದಲಾಗಿ ಅಮೆಥಿಸ್ಟ್ ಸಂಯುಕ್ತಕ್ಕೆ "ಎರ್ಬಿಯಮ್" ಆಕ್ಸೈಡ್ ಮತ್ತು ಹಳದಿ ವಸ್ತುವಿಗೆ "ಟೆರ್ಬಿಯಮ್" ಆಕ್ಸೈಡ್ ಎಂಬ ಹೆಸರನ್ನು ನೀಡಿತು.<ref name="Krishnamurthy">{{cite book |last1=Krishnamurthy |first1=Nagaiyar |url=https://books.google.com/books?id=F0Bte_XhzoAC&pg=PA5 |title=Extractive metallurgy of rare earths |date=December 16, 2015 |publisher=CRC Press |isbn=9781466576346 |edition=2nd |pages=5–7}}</ref><ref name="Piguet2" /><ref name="Friend2" />
1833 ರಲ್ಲಿ ಮೊಸಾಂಡರ್ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ನ ಸದಸ್ಯರಾಗಿ ಆಯ್ಕೆಯಾದರು.
== ಉಲ್ಲೇಖಗಳು ==
{{Interwikineeded}}
[[ವರ್ಗ:ವಿಜ್ಞಾನಿಗಳು]]
[[ವರ್ಗ:ರಸಾಯನಶಾಸ್ತ್ರ]]
ryrqxd8klreui6z2hica6yt3t21o30t
ಗುಲಾಬಿ
0
21390
1378227
1377881
2026-08-03T01:47:16Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378227
wikitext
text/x-wiki
{{redirectshere|Polyantha|the [[orchid]] [[subgenus]]|Polyantha (orchid)}}
{{redirectshere|Red rose|the tea company|Red Rose Tea}}
{{Taxobox
| name = Rose
| image = Rosa bracteata 4.jpg
| image_width = 250px
| image_caption = ''Rosa bracteata''
| regnum = Plantae
| divisio = [[Flowering plant|Magnoliophyta]]
| classis = [[Magnoliopsida]]
| ordo = [[Rosales]]
| familia = [[Rosaceae]]
| subfamilia = [[Rosoideae]]
| genus = '''''Rosa'''''
| genus_authority = [[Carolus Linnaeus|L.]]
| subdivision_ranks = Species
| subdivision =
Between 100 and 150, [[List of Rosa species|see list]]
}}
'''ಗುಲಾಬಿ''' ಯು [[ರೋಸೇಸಿ]] ವಂಶದೊಳಗೆ ಬರುವ '''''ರೋಸಾ'' ''' [[ಕುಲ]]ದ ಒಂದು [[ದೀರ್ಘಕಾಲಿಕ ಸಸ್ಯ|ದೀರ್ಘಕಾಲಿಕ]], ಹೂವಿನ [[ಕುರುಚಲು ಗಿಡ|ಪೊದೆಸಸ್ಯ]] ಅಥವಾ ಬಳ್ಳಿಯಾಗಿದ್ದು, ಅದು 100ಕ್ಕೂ ಹೆಚ್ಚಿನ ಜಾತಿಗಳನ್ನು ಒಳಗೊಂಡಿದೆ ಹಾಗೂ ವೈವಿಧ್ಯಮಯ ಬಣ್ಣಗಳಲ್ಲಿ ದೊರೆಯುತ್ತದೆ. ನೆಟ್ಟಗೆ ನಿಲ್ಲುವ ಪೊದೆಸಸ್ಯಗಳು ಮತ್ತು ಯಾವುದಾದರೂ ಆಸರೆಯ ಮೇಲೇರುವ ಅಥವಾ ಹಬ್ಬುವ ಸಸ್ಯಗಳನ್ನು ಮತ್ತು ಈ ಜಾತಿಯು ಒಳಗೊಂಡಿದ್ದು, ಕಾಂಡಗಳ ಮೇಲೆ ಅಲ್ಲಲ್ಲಿ ಚೂಪಾದ [[ಮುಳ್ಳುಗಂತಿಗಳು]] (ಸಣ್ಣ ಮುಳ್ಳುಗಳು) ಇರುತ್ತವೆ.
ಇವುಗಳಲ್ಲಿ ಬಹುತೇಕ ಸಸ್ಯಗಳು ಏಷ್ಯಾಕ್ಕೆ ಸೇರಿದ್ದರೆ, ಅಲ್ಪ ಸಂಖ್ಯೆಯ ಜಾತಿಗಳು ಯುರೋಪ್, ಉತ್ತರ ಅಮೆರಿಕಾ ಮತ್ತು ವಾಯವ್ಯ ಆಫ್ರಿಕಾದ ಮೂಲದವಾಗಿವೆ. ವೈವಿಧ್ಯಮಯ ಜಾತಿಯ ಗುಲಾಬಿ ಹೂಗಳ ಸೌಂದರ್ಯ ಹಾಗೂ ಪರಿಮಳದ ಕಾರಣದಿಂದಾಗಿ ಮೂಲಸಸ್ಯಗಳು, [[ತಳಿ]]ಗಳು ಹಾಗೂ [[ಮಿಶ್ರ ತಳಿ (ಜೀವಶಾಸ್ತ್ರ)|ಮಿಶ್ರತಳಿ]]ಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ.<ref>http://www.britannica.com/EBchecked/topic/509710/rose</ref>
ಎಲೆಗಳು ಕಾಂಡದ ಎರಡೂ ಪಕ್ಕದಲ್ಲಿ ಪರ್ಯಾಯವಾಗಿ ಜೋಡಿಸಲ್ಪಟ್ಟಿದ್ದು, [[ಗರಿಯಂಥ|ಗರಿಯಂತೆ ಸಂಯುಕ್ತವಾಗಿರುವ]] ಈ ಎಲೆಗಳ ಬಿಡಿ ಎಲೆಗಳು ಅಥವಾ ಪರ್ಣಕಗಳು ಅಂಡಾಕಾರದಲ್ಲಿದ್ದು, ಅವುಗಳ ಅಂಚುಗಳು ಚೂಪಾಗಿರುತ್ತದೆ. ಈ ಗಿಡದ ಮೆದು ತಿರುಳಿನಂತಹ, ತಿನ್ನಲು ಯೋಗ್ಯವಾದ ಹಣ್ಣನ್ನು [[ಗುಲಾಬಿ ಹಣ್ಣು]] ಎಂದು ಕರೆಯಲಾಗುತ್ತದೆ. ಗುಲಾಬಿ ಗಿಡಗಳ ಗಾತ್ರದಲ್ಲಿ ವೈವಿಧ್ಯತೆ ಕಂಡುಬರುತ್ತದೆ. ಕುಬ್ಜಾಕಾರದ, ಚಿಕಣಿ ಗಾತ್ರದ ಗುಲಾಬಿಗಳಿಂದ ಮೊದಲ್ಗೊಂಡು 20 ಮೀಟರ್ಗಳಷ್ಟು ಎತ್ತರದವರೆಗೂ ಹಬ್ಬಬಲ್ಲ ಏರುಬಳ್ಳಿಯವರೆಗೂ ಈ ಗಿಡಗಳ ಗಾತ್ರ-ವೈವಿಧ್ಯತೆಯಿದೆ. ವಿಶ್ವಾದ್ಯಂತದ ವಿವಿಧ ಭಾಗಗಳಿಂದ ಬರುವ ಗುಲಾಬಿ ಜಾತಿಗಳು ಸುಲಭವಾಗಿ ಸಂಕರೀಕೃತಗೊಂಡು, ಉದ್ಯಾನದ ವೈವಿಧ್ಯಮಯ ಗುಲಾಬಿಗಳಾಗಿ ಹೊರಹೊಮ್ಮಿವೆ.
''ರೋಸ್'' ಎಂಬ ಹೆಸರು ಫ್ರೆಂಚ್ ಮೂಲದಿಂದ ಬಂದಿದೆ. ಲ್ಯಾಟಿನ್ ಹೆಸರಾದ ''ರೋಸಾ'' ದಿಂದ ತನ್ನ ಹೆಸರನ್ನು ರೋಸ್ ಗಳಿಸಿಕೊಂಡಿದ್ದು, ಇದನ್ನು ಕೂಡಾ ಗ್ರೀಕ್ನ ''ರೋಡಿಯನ್'' ನಿಂದ (''ವ್ರೋಡಿಯನ್'' ಎಂಬ [[ಈಯಲಿಕ್ ಗ್ರೀಕ್|ಉಪಭಾಷೆ]]ಯಿಂದ), [[ಹಳೆಯ ಪರ್ಷಿಯಾ ಭಾಷೆ|ಹಳೆಯ ಪರ್ಷಿಯನ್]] ''ವುರ್ಡಿ'' "ಹೂವು" ಎಂಬುದರಿಂದ, [[ಆಸ್ಕನ್|ಆಸ್ಕನ್]] ಭಾಷೆಯಿಂದ ಎರವಲು ಪಡೆದಿದೆ. (ಹೋಲಿಕೆ: [[ಅವೆಸ್ತನ್ ಭಾಷೆ|ಅವೆಸ್ಟ್]]. ''ವಾರ್ದಾ'', [[ಸೊಗ್ದಿಯಾ ಭಾಷೆ|ಸೊಗ್ಡಿಯನ್]] ''ವಾರ್ದ್'', [[ಪಾರ್ಥಿಯಾ ಭಾಷೆ|ಪರ್ಥಿಯನ್]] ''ವಾರ್'' ).<ref>{{Cite web |url=http://www.rose-bushes.com/about/ |title=ಆರ್ಕೈವ್ ನಕಲು |access-date=2009-10-29 |archive-date=2008-08-21 |archive-url=https://web.archive.org/web/20080821182056/http://www.rose-bushes.com/about/ |url-status=dead }}</ref><ref>{{Cite web |url=http://www.iranica.com/articles/v11f1/v11f1033.html |title=ಆರ್ಕೈವ್ ನಕಲು |access-date=2009-10-29 |archive-date=2008-09-18 |archive-url=https://web.archive.org/web/20080918060538/http://www.iranica.com/articles/v11f1/v11f1033.html |url-status=dead }}</ref>
ಗುಲಾಬಿ ಹೂವುಗಳನ್ನು ಆವಿಯ ಪ್ರಕ್ರಿಯೆಗೆ ಒಳಪಡಿಸಿ ಸಂಗ್ರಹಿಸಲಾಗುವ ಸಾರತೈಲವಾದ [[ಗುಲಾಬಿಯ ಅತ್ತರ್|ಗುಲಾಬಿಯ ಅತ್ತರ್]] ಶತಶತಮಾನಗಳಿಂದಲೂ ಸುಗಂಧದ್ರವ್ಯಗಳಲ್ಲಿ ಬಳಸಲ್ಪಡುತ್ತಿದೆ. ಗುಲಾಬಿ ತೈಲದಿಂದ ತಯಾರಿಸಲ್ಪಡುವ [[ಪನ್ನೀರು|ಗುಲಾಬಿ ನೀರು]] ಅಥವಾ ಪನ್ನೀರನ್ನು ಏಷ್ಯಾದ ಮತ್ತು ಮಧ್ಯಪ್ರಾಚ್ಯ ದೇಶಗಳ ಆಹಾರ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಬಹು ಸಾಮಾನ್ಯವಾಗಿ ಗುಲಾಬಿಯ ದಳಗಳ ಸಾರದಿಂದ ತಯಾರಿಸಲ್ಪಡುವ [[ಪನ್ನೀರು|ಗುಲಾಬಿ ಷರಬತ್]]ಗೆ ಫ್ರೆಂಚರು ಪ್ರಸಿದ್ಧಿ ಪಡೆದಿದ್ದಾರೆ. ಸಂಯುಕ್ತ ಸಂಸ್ಥಾನಗಳಲ್ಲಿ ಸದರಿ ಫ್ರೆಂಚ್ ಗುಲಾಬಿ ಷರಬತ್ ಅಥವಾ ಪಾಕವನ್ನು ಗುಲಾಬಿ [[ದೋಸೆ]]ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಗುಲಾಬಿ ಹಣ್ಣುಗಳನ್ನು ಕೆಲವೊಮ್ಮೆ [[ಮುರಬ್ಬ]], [[ಜೆಲ್ಲಿ (ಸಂರಕ್ಷಿಸಿದ ಹಣ್ಣು)|ಜೆಲ್ಲಿ]] ಮತ್ತು [[ಹಣ್ಣಿನ ಮುರಬ್ಬ]] ಇವೇ ಮೊದಲಾದವುಗಳನ್ನು ತಯಾರಿಸಲು ಅಥವಾ ಚಹಾದೊಂದಿಗೆ ಕುದಿಸಲು ಬಳಸುತ್ತಾರೆ. ಗುಲಾಬಿ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ [[C ಜೀವಸತ್ವ]]ದ ಅಂಶವನ್ನು ಹೊಂದಿರುವುದೇ ಇದಕ್ಕೆ ಮೂಲಕಾರಣ. ಅಷ್ಟೇ ಅಲ್ಲ, ಅವುಗಳ ರಸವನ್ನು ಹಿಂಡಿ ಮತ್ತು ಶೋಧಿಸಿ, ಗುಲಾಬಿ ಹಣ್ಣುಗಳ ಪಾಕ ಅಥವಾ ಷರಬತ್ನ್ನು ತಯಾರಿಸುತ್ತಾರೆ. [[ಗುಲಾಬಿ ಹಣ್ಣು ಬೀಜದ ಎಣ್ಣೆ|ಗುಲಾಬಿ ಹಣ್ಣುಗಳ ಬೀಜದ ಎಣ್ಣೆ]]ಯನ್ನು ತಯಾರಿಸಲೂ ಸಹ ಗುಲಾಬಿ ಹಣ್ಣುಗಳನ್ನು ಬಳಸಲಾಗುತ್ತದೆ. ಈ ತೈಲವನ್ನು ತ್ವಚಾ ಸಂರಕ್ಷಕ ಉತ್ಪನ್ನಗಳು ಹಾಗೂ ಕೆಲವೊಂದು ಪ್ರಸಾದನ ಉತ್ಪನ್ನಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.
== ಸಸ್ಯಶಾಸ್ತ್ರ ==
[[ಚಿತ್ರ:Closeup of a pink rose in full bloom..JPG|thumb|225px|ಸಂಪೂರ್ಣವಾಗಿ ಅರಳಿರುವ ಗುಲಾಬಿ ಹೂವಿನ ನಿಕಟಚಿತ್ರ]]
[[ಚಿತ್ರ:Rosa_rubiginosa_hips.jpg|thumb|left|upright|180px|ರೋಸಾ ಕೆನೈನಾ ಕಾಯಿಗಳು]]
ಬಹುತೇಕ ಜಾತಿಯ ಗುಲಾಬಿ ಸಸ್ಯದ [[ಎಲೆ|ಎಲೆಗಳು]] 5-15 ಸೆಂಟಿಮೀಟರುಗಳಷ್ಟು ಉದ್ದವಿದ್ದು, [[ಗರಿಯಂಥ|ಗರಿಯಂತಹ ಸ್ವರೂಪ]]ವನ್ನು ಹೊಂದಿರುವುದರೊಂದಿಗೆ (3ರಿಂದ)5-9(ರಿಂದ13)ರಷ್ಟು ಪರ್ಣಕಗಳು ಅಥವಾ ಕಿರು ಎಲೆಗಳನ್ನು ಮತ್ತು ಬುಡದ ಕಾವಿನೆಲೆಗಳನ್ನು ಒಳಗೊಂಡಿರುತ್ತವೆ. ಬಹುತೇಕ ಗುಲಾಬಿ ಸಸ್ಯಗಳು [[ವರ್ಷಕ್ಕೊಮ್ಮೆ ಎಲೆ ಉದುರುವ|ಪತನಶೀಲ]] (ಕಾಲಕಾಲಕ್ಕೆ ಎಲೆ ಉದುರುವ) ಗುಣವನ್ನು ಹೊಂದಿದ್ದರೂ ಸಹ, ಕೆಲವೊಂದು ಜಾತಿಗಳು (ಅದರಲ್ಲೂ ಆಗ್ನೇಯ [[ಏಷ್ಯಾ]]ದಲ್ಲಿರುವ ಜಾತಿಗಳು) [[ನಿತ್ಯ ಹರಿದ್ವರ್ಣ]]ವಾಗಿರುತ್ತವೆ ಅಥವಾ ಅದಕ್ಕೆ ಸಮೀಪದಲ್ಲಿರುತ್ತವೆ.
ಬಹುತೇಕ ಜಾತಿಯ ಗುಲಾಬಿಗಳ [[ಹೂವು]]ಗಳು ಐದು ದಳಗಳನ್ನು ಹೊಂದಿದ್ದರೂ, ''[[ರೋಸಾ ಸೆರೀಷಿಯಾ]]'' ಜಾತಿಗೆ ಸೇರಿದ ಗುಲಾಬಿಯ ಹೂಗಳು ಸಾಮಾನ್ಯವಾಗಿ ಕೇವಲ ನಾಲ್ಕು ದಳಗಳನ್ನು ಹೊಂದಿರುತ್ತವೆ. ಪ್ರತಿಯೊಂದು ದಳವೂ ಎರಡು ಸ್ಪಷ್ಟವಾದ ಹಾಲೆಗಳಾಗಿ ವಿಭಜಿಸಲ್ಪಟ್ಟಿದ್ದು, ಸಾಮಾನ್ಯವಾಗಿ ಅದು ಬಿಳಿ ಅಥವಾ ನೆಸುಗೆಂಪು ಬಣ್ಣದಲ್ಲಿರುತ್ತದೆ. ಕೆಲವೊಂದು ಜಾತಿಗಳಲ್ಲಿ ಅದು ಹಳದಿ ಅಥವಾ ಕೆಂಪು ಬಣ್ಣದಲ್ಲೂ ಇರುತ್ತದೆ. ದಳಗಳ ಅಡಿಯಲ್ಲಿ ಪುಷ್ಪಪಾತ್ರೆಯ ಐದು ದಳಗಳಿರುತ್ತವೆ (ಅಥವಾ ''ರೋಸಾ ಸೆರೀಷಿಯಾ'' ಜಾತಿಯ ಕೆಲವೊಂದು ಸಸ್ಯಗಳಲ್ಲಿ ನಾಲ್ಕು ಇರುತ್ತವೆ). ಮೇಲಿನಿಂದ ನೋಡಿದಾಗ ಅವು ದೃಷ್ಟಿಗೆ ಗೋಚರವಾಗುವಷ್ಟು ಉದ್ದವಾಗಿರಬಹುದು ಮತ್ತು ದುಂಡಗಿನ ದಳಗಳ ಪರ್ಯಾಯ ಸ್ಥಳಗಳಲ್ಲಿ ಹಸಿರು ಬಿಂದುಗಳಂತೆ ಅವು ಕಾಣಿಸಬಹುದು. ಅಂಡಾಶಯವು ಪುಷ್ಪಪಾತ್ರೆಯ ಕೆಳಭಾಗದಲ್ಲಿದ್ದು, ಹೂವಿನ ದಳಗಳು ಹಾಗೂ ಪುಷ್ಪಪಾತ್ರೆಯ ದಳಗಳ ಅಡಿಯಿಂದ ಹೊರಹೊಮ್ಮುವಂತಿರುತ್ತದೆ.
ಗುಲಾಬಿಯ [[ಹಣ್ಣು#ಗೊಂಚಲು ಹಣ್ಣು|ಗೊಂಚಲು ಹಣ್ಣು]] ಒಂದು ಗುಂಡಗಿನ ಸ್ವರೂಪದಲ್ಲಿದ್ದು, ಅದಕ್ಕೆ [[ಗುಲಾಬಿ ಹಣ್ಣು]] ಎಂದೇ ಕರೆಯಲಾಗುತ್ತದೆ. ತೆರೆದ-ಮುಖದ ಹೂವುಗಳನ್ನು ವಿಕಸಿಸುವ ಗುಲಾಬಿ ಜಾತಿಗಳು [[ಪರಾಗಸ್ಪರ್ಶ|ಪರಾಗಸ್ಪರ್ಶ ಮಾಡುವ]] [[ಜೇನುನೊಣ]]ಗಳು ಮತ್ತು ಇತರ [[ಕೀಟ]]ಗಳಿಂದ ಆಕರ್ಷಿಸಲ್ಪಡುತ್ತವೆ. ಹೀಗಾಗಿ ಹಣ್ಣುಗಳನ್ನು ಉತ್ಪಾದಿಸುವಲ್ಲಿ ಇವು ಹೆಚ್ಚು ಸೂಕ್ತವಾಗಿ ಕಂಡುಬರುತ್ತವೆ. ಅನೇಕ ಸ್ವದೇಶಿ ತಳಿಗಳು ತುಂಬಾ ಬಿಗಿಯಾದ ದಳಗಳ ಜೋಡಣೆಯನ್ನು ಹೊಂದಿರುತ್ತವೆಯಾದ್ದರಿಂದ, ಪರಾಗಸ್ಪರ್ಶ ಪ್ರಕ್ರಿಯೆಗೆ ಅವು ಅವಕಾಶವನ್ನು ಕಲ್ಪಿಸುವುದಿಲ್ಲ. ಬಹುತೇಕ ಗುಲಾಬಿ ಜಾತಿಗಳ ಗುಲಾಬಿ ಹಣ್ಣುಗಳು ಕೆಂಪಗಿದ್ದರೂ ಸಹ, ಕೆಲವೊಂದು ಜಾತಿಗಳು (ಉದಾ: ''[[ರೋಸಾ ಪಿಂಪಿನೆಲ್ಲಿಫೋಲಿಯಾ]]'' ) ಗಾಢ ನೇರಳೆಯಿಂದ ಕಪ್ಪಗಿನವರೆಗಿನ ಬಣ್ಣದ ಹಣ್ಣುಗಳನ್ನು ಹೊಂದಿರುತ್ತವೆ.
ಪ್ರತಿ ಹಣ್ಣೂ ಸಹ [[ಹೈಪ್ಯಾಂಥಿಯಮ್]] ಎಂಬ, ಮೆದುತಿರುಳಿನ ಹೊರಪದರವನ್ನು ಒಳಗೊಂಡಿರುತ್ತದೆ. ಸೂಕ್ಷ್ಮವಾಗಿದ್ದರೂ ಬಾಗದ ರೋಮಗಳಿರುವ ಮಾತೃಕೆಯಲ್ಲಿ ಅಳವಡಿಸಿದಂತಿರುವ 5 ರಿಂದ 160 "ಬೀಜಗಳನ್ನು" (ತಾಂತ್ರಿಕವಾಗಿ ಹೇಳುವುದಾದರೆ [[ಬಿರಿಯದ ಹಣ್ಣು]]ಗಳು ಎಂದು ಕರೆಯಲ್ಪಡುವ ಏಕ-ಬೀಜದ ಒಣಹಣ್ಣುಗಳನ್ನು) ಹೈಪ್ಯಾಂಥಿಯಮ್ ಹೊಂದಿರುತ್ತದೆ. ಕೆಲವೊಂದು ಜಾತಿಗಳ, ಅದರಲ್ಲೂ [[ನಾಯಿ ಗುಲಾಬಿ]] (''ರೋಸಾ ಕೆನೈನಾ'' ) ಮತ್ತು [[ರೂಗೋಸಾ ಗುಲಾಬಿ]] (''ರೋಸಾ ರೂಗೋಸಾ'' ) ಜಾತಿಗಳ ಗುಲಾಬಿ ಹಣ್ಣುಗಳು [[C ಜೀವಸತ್ವ]]ದಿಂದ ಸಮೃದ್ಧವಾಗಿದ್ದು, ಬೇರಾವುದೇ ಸಸ್ಯಕ್ಕೆ ಹೋಲಿಸಿದಾಗ ಅತಿ ಸಮೃದ್ಧವಾದ C ಜೀವಸತ್ವದ ಮೂಲಗಳೆನಿಸಿವೆ. ದಳಗಳು ಮೇಣದಂತಹ ಹೊರಪೊರೆಯನ್ನು ಹೊಂದಿದ್ದು, ಅದು ಒಂದು ಎಲೆಯಂತೆ ಕೆಲಸ ಮಾಡುತ್ತದೆ. [[ಹಾಡುಹಕ್ಕಿ (ಹಕ್ಕಿ)|ಹಾಡುಹಕ್ಕಿಗಳು]] ಮತ್ತು [[ಅರಗುರೆಕ್ಕೆ ಹಕ್ಕಿ]]ಗಳಂತಹ ಹಣ್ಣು-ತಿನ್ನುವ [[ಹಕ್ಕಿ]]ಗಳಿಂದ ಈ ಗುಲಾಬಿ ಹಣ್ಣುಗಳು ತಿನ್ನಲ್ಪಟ್ಟು, ನಂತರ ಅವುಗಳ ಹಿಕ್ಕೆಗಳ ಮೂಲಕ ಹಣ್ಣಿನ ಬೀಜಗಳು ಎಲ್ಲೆಡೆ ಪ್ರಸಾರವಾಗುತ್ತವೆ. ಕೆಲವೊಂದು ಹಕ್ಕಿಗಳು, ನಿರ್ದಿಷ್ಟವಾಗಿ ಹೇಳುವುದಾದರೆ [[ಹಾಡುವ ಹಕ್ಕಿ|ಫಿಂಚ್]] ಎಂದು ಕರೆಯಲ್ಪಡುವ ಹಾಡುಹಕ್ಕಿಗಳೂ ಸಹ ಈ ಬೀಜಗಳನ್ನು ತಿನ್ನುತ್ತವೆ.
[[ಚಿತ್ರ:Rose Prickles.jpg|thumb|125px|ಗುಲಾಬಿ ಮುಳ್ಳುಗಳು]]
ಗುಲಾಬಿಯ ಕಾಂಡವೊಂದರಾದ್ಯಂತ ಕಂಡುಬರುವ ಚೂಪಾದ ರಚನೆಗಳನ್ನು ಸಾಮಾನ್ಯವಾಗಿ "ಮುಳ್ಳುಗಳು" ಎಂದು ಕರೆಯಲಾಗುತ್ತದೆ. ಆದರೆ ಅವು ವಾಸ್ತವವಾಗಿ ಹೊರತೊಗಟೆಯ (ಕಾಂಡದ ಅಂಗಾಂಶದ ಹೊರಭಾಗದ ಪದರ) ಹೊರಬೆಳವಣಿಗೆಗಳಾಗಿದ್ದು ಅವನ್ನು ಮುಳ್ಳುಗಂತಿಗಳು ಎನ್ನಲಾಗುತ್ತದೆ. ನಿಜವಾದ ಮುಳ್ಳುಗಳು, ಉದಾಹರಣೆಗೆ ''[[ಸಿಟ್ರಸ್]]'' ಅಥವಾ ''[[ಪೈರಕ್ಯಾಂಟ|ಪೈರಕ್ಯಾಂಟಾ]]'' ದಂತಹ ಜಾತಿಗಳು ಹೊರಹೊಮ್ಮಿಸುವ ಮುಳ್ಳುಗಳು, ರೂಪಾಂತರಗೊಂಡ ಕಾಂಡಗಳಾಗಿದ್ದು, ಅವು ಯಾವಾಗಲೂ ಒಂದು ಗೆಣ್ಣಿನ ಭಾಗದಲ್ಲಿ ಹುಟ್ಟುತ್ತವೆ. ಸ್ವತಃ ಇಂತಹ ಮುಳ್ಳಿನ ಉದ್ದದಾದ್ಯಂತ ಗೆಣ್ಣುಗಳು ಮತ್ತು ಅಂತರಗೆಣ್ಣುಗಳು ಇರುತ್ತವೆ.
ಗುಲಾಬಿಯ ಮುಳ್ಳುಗಂತಿಗಳು ವಿಶಿಷ್ಟವಾದ ಕುಡುಗೋಲಿನಾಕಾರದ ಕೊಕ್ಕೆಗಳನ್ನು ಹೊಂದಿದ್ದು, ಗುಲಾಬಿಯು ಬೆಳೆಯುವಾಗ ಮತ್ತೊಂದು ಸಸ್ಯ ಅಥವಾ ಮರವನ್ನು ಅವಲಂಬಿಸುವಲ್ಲಿ ಅವು ನೆರವಾಗುತ್ತವೆ. ''ರೋಸಾ ರೂಗೋಸಾ'' ಮತ್ತು ''R. ಪಿಂಪಿನೆಲ್ಲಿಫೋಲಿಯಾ'' ದಂತಹ ಕೆಲವೊಂದು ಜಾತಿಗಳು ದಟ್ಟವಾಗಿ ಜೋಡಣೆಗೊಂಡ ನೇರವಾದ ಮುಳ್ಳುಗಳನ್ನು ಹೊಂದಿರುತ್ತವೆ. ಪ್ರಾಯಶಃ ಇದು ಪ್ರಾಣಿಗಳು ತನ್ನನ್ನು ತಿನ್ನದಿರಲೆಂದು ಗಿಡಗಳು ಮಾಡಿಕೊಂಡ ಒಂದು ರೂಪಾಂತರವಿರಬಹುದು ಅಥವಾ ಪ್ರಾಯಶಃ ಗಾಳಿಯಲ್ಲಿ ತೂರಿಬರುವ [[ಮರಳು|ಮರಳು ಕಣ]]ವನ್ನು ಹಿಡಿದಿಟ್ಟುಕೊಳ್ಳಲು ಮಾಡಿಕೊಂಡ ರೂಪಾಂತರವೂ ಇರಬಹುದು. ಹೀಗೆ ಮಾಡುವುದರಿಂದ ಮಣ್ಣಿನ [[ಸವಕಳಿ]]ಯ ಪ್ರಮಾಣವನ್ನು ಕಡಿಮೆಗೊಳಿಸಿ, ತಮ್ಮ [[ಬೇರು]]ಗಳನ್ನು ರಕ್ಷಿಸಿಕೊಳ್ಳುವ ವ್ಯವಸ್ಥೆಯೂ ಇದಾಗಿರಬಹುದು (ಈ ಎರಡೂ ಜಾತಿಗಳೂ [[ಕಡಲತೀರ|ಕಡಲತೀರ ಪ್ರದೇಶ]]ಗಳ [[ಮರಳು ದಿನ್ನೆ|ಮರುಳುದಿಣ್ಣೆ]]ಗಳಲ್ಲಿ ಸ್ವಾಭಾವಿಕವಾಗಿಯೇ ಬೆಳೆಯುತ್ತವೆ). ಮುಳ್ಳುಗಂತಿಗಳು ಇಷ್ಟು ಪ್ರಮಾಣದಲ್ಲಿದ್ದರೂ ಸಹ [[ಜಿಂಕೆ]]ಗಳು ಗುಲಾಬಿಗಳನ್ನು ಆಗಿಂದಾಗ್ಗೆ ತಿನ್ನುತ್ತಲೇ ಇರುತ್ತವೆ. ಕೆಲವೊಂದು ಜಾತಿಗಳ ಗುಲಾಬಿಗಳಲ್ಲಿ ಕೇವಲ ನೆಪಮಾತ್ರದ ಮುಳ್ಳುಗಂತಿಗಳಿದ್ದು, ಅವು ಯಾವುದೇ ಚೂಪಾದ ತುದಿಯನ್ನು ಹೊಂದಿರುವುದಿಲ್ಲ.
[[ಚಿತ್ರ:Roseleaves3800px.JPG|thumb|200px|ಗುಲಾಬಿ ಚಿಗುರೆಲೆಗಳು]].
=== ಜಾತಿಗಳು ===
{{further|[[List of Rosa species]]}}
[[ಚಿತ್ರ:Rosa-multiflora01.jpg|thumb|right|ರೋಸಾ ಮಲ್ಟಿಫ್ಲೋರಾ]]
ಗುಲಾಬಿಯ ಕೆಲವೊಂದು ಪ್ರಾತಿನಿಧಿಕ ಜಾತಿಗಳು ಹೀಗಿವೆ:
* ''[[ರೋಸಾ ಬ್ಯಾಂಕ್ಸಿಯೆ]]'' : ಲೇಡಿ ಬ್ಯಾಂಕ್ಸ್ ಗುಲಾಬಿ
* ''[[ರೋಸಾ ಕ್ಯಾಲಿಫೋರ್ನಿಕಾ]]'' : ಕ್ಯಾಲಿಫೋರ್ನಿಯಾ ಗುಲಾಬಿ
* ''[[ರೋಸಾ ಕೆನೈನಾ]]'' : ನಾಯಿ ಗುಲಾಬಿ, ಕಾಡುಗುಲಾಬಿ ಪೊದೆ
* ''[[ರೋಸಾ ಕರೋಲಿನಾ]]'' : ಗೋಮಾಳ ಗುಲಾಬಿ
* ''[[ರೋಸಾ ಚೈನೆನ್ಸಿಸ್]]'' : ಚೈನಾ ಗುಲಾಬಿ
* ''[[ರೋಸಾ ಡ್ಯುಮಾಲಿಸ್]]'' : ಮಾಸಲುಬೂದಿ ನಾಯಿ ಗುಲಾಬಿ
* ''[[ರೋಸಾ ಎಗ್ಲಾಂಟೇರಿಯಾ]]'' : ಸುವಾಸಿತ ಕಾಡುಗುಲಾಬಿ ಅಥವಾ ಸುವಾಸಿತ ಎಲೆಗಳ ಗುಲಾಬಿ
* ''[[ರೋಸಾ ಫೀಟಿಡಾ]]'' : ಆಸ್ಟ್ರೇಲಿಯನ್ ಹಳದಿ ಅಥವಾ ಆಸ್ಟ್ರೇಲಿಯನ್ ಕಾಡುಗುಲಾಬಿ
* ''[[ರೋಸಾ ಗ್ಯಾಲಿಕಾ]]'' : ಗ್ಯಾಲಿಕ್ ಗುಲಾಬಿ, ಫ್ರೆಂಚ್ ಗುಲಾಬಿ
* ''[[ರೋಸಾ ಜೈಗ್ಯಾಂಟಿಯಾ]]'' (ಸಮಾನ. ''R. ಎಕ್ಸ್ ಓಟೊರೇಟಾ ಜೈಗ್ಯಾಂಟಿಯಾ'' )
* ''[[ರೋಸಾ ಗ್ಲೌಕಾ]]'' (ಸಮಾನ. ''R.ರುಬ್ರಿಫೋಲಿಯಾ'' ): ಕೆಂಪುಎಲೆ ಗುಲಾಬಿ
* ''[[ರೋಸಾ ಲೇವಿಗೇಟಾ]]'' (ಸಮಾನ. ''R. ಸಿನೈಕಾ'' ): ಚೆರಕೀ ಗುಲಾಬಿ, ಕೆಮೆಲಿಯಾ ಗುಲಾಬಿ, ಮರ್ದನ್ ಗುಲಾಬಿ
* ''[[ರೋಸಾ ಮಜಾಲಿಸ್]]'' : ದಾಲ್ಚಿನ್ನಿ ಬಣ್ಣದ ಗುಲಾಬಿ
* ''[[ರೋಸಾ ಮೈನ್ಯೂಟಿಫೋಲಿಯಾ]]'' : ಬಾಜಾ ಗುಲಾಬಿ
* ''[[ರೋಸಾ ಮೊಸ್ಚಾಟಾ]]'' : ಕಸ್ತೂರಿ ಗುಲಾಬಿ
* ''[[ರೋಸಾ ಮಲ್ಟಿಫ್ಲೋರಾ]]'' : ಬಹುಪುಷ್ಪೀಯ ಗುಲಾಬಿ
* ''[[ರೋಸಾ ಪಿಂಪಿನೆಲ್ಲಿಫೋಲಿಯಾ]]'' : ಸ್ಕಾಚ್ ಗುಲಾಬಿ
* ''[[ರೋಸಾ ರೂಬಿಗಿನೋಸಾ]]'' (ಸಮಾನ. ''R. ಎಗ್ಲಾಂಟೇರಿಯಾ'' ): ಸುವಾಸಿತ ಎಲೆಗಳ ಗುಲಾಬಿ, ಸುವಾಸಿತ ಕಾಡುಗುಲಾಬಿ
* ''[[ರೋಸಾ ರೂಗೋಸಾ]]'' : ರೂಗೋಸಾ ಗುಲಾಬಿ, ಜಪಾನಿಯರ ಗುಲಾಬಿ
* ''[[ರೋಸಾ ವರ್ಜೀನಿಯಾನಾ]]'' (ಸಮಾನ. ''R. ಲುಸಿಡಾ'' ): ವರ್ಜೀನಿಯಾ ಗುಲಾಬಿ
== ಪಿಡುಗುಗಳು ಮತ್ತು ರೋಗಗಳು ==
{{Main|Pests and diseases of roses|List of rose diseases}}
ಗುಲಾಬಿಗಳು ಹಲವಾರು [[ರೋಗ]]ಗಳಿಗೆ ತುತ್ತಾಗುತ್ತವೆ. ಅವುಗಳೆಂದರೆ, [[ಗುಲಾಬಿ ಬೂಸ್ಟು]] (''ಫ್ರಾಗ್ಮಿಡಿಯಂ ಮ್ಯೂಕ್ರೋನೇಟಂ'' ), [[ಕಪ್ಪು ಚುಕ್ಕೆ (ರೋಗ)|ಗುಲಾಬಿ ಕಪ್ಪುಚುಕ್ಕೆ]] ಮತ್ತು [[ಸೂಕ್ಷ್ಮ ಶಿಲೀಂಧ್ರ]]. ಗುಲಾಬಿ ಗಿಡದ ಮೇಲೆ ಶಿಲೀಂಧ್ರ ರೋಗದ ಒಂದು ಸೋಂಕು ಕಾಣಿಸಿಕೊಂಡಾಗ ಅದನ್ನು ವಾಸಿಮಾಡಲು ಪ್ರಯತ್ನಿಸುವುದಕ್ಕಿಂತ, [[ಶಿಲೀಂಧ್ರನಾಶಕ]] ಸಿಂಪಡಣೆಯಂತಹ ಮುಂಜಾಗ್ರತಾ ಕ್ರಮವನ್ನು ಅನುಸರಿಸುವುದರಿಂದ, ಗುಲಾಬಿಯಲ್ಲಿ ಕಂಡುಬರುವ ಶಿಲೀಂಧ್ರ ರೋಗಗಳನ್ನು ಅತ್ಯುತ್ತಮವಾಗಿ ನಿವಾರಿಸಬಹುದು. ಒಂದು ವೇಳೆ ರೋಗವು ತಗುಲಿರುವುದು ಗೋಚರಿಸುವಂತಿದ್ದರೆ, ಅದರ ವಾಸ್ತವಿಕ ಸೋಂಕನ್ನು ಹಿಮ್ಮೆಟ್ಟಿಸಲಾಗದಿದ್ದರೂ, ಗುಲಾಬಿ ಸಸ್ಯದ ಸಮರುವಿಕೆ (ಕತ್ತರಿಸುವಿಕೆ) ಹಾಗೂ ಶಿಲೀಂಧ್ರನಾಶಕಗಳ ಬಳಕೆಯಿಂದ ರೋಗದ ಹರಡುವಿಕೆಯನ್ನು ತಗ್ಗಿಸಬಹುದು. ಇತರ ಸಸ್ಯಗಳಿಗೆ ಹೋಲಿಸಿದರೆ ಗುಲಾಬಿಯ ಕೆಲವೊಂದು ಪ್ರಕಾರಗಳು ಶಿಲೀಂಧ್ರ ರೋಗಗಳಿಗೆ ತುತ್ತಾಗುವುದು ಗಣನೀಯವಾಗಿ ಕಡಿಮೆ ಎಂದು ಹೇಳಬಹುದು.
ಗುಲಾಬಿಗೆ ಮಾರಕವಾಗಿರುವ ಪ್ರಮುಖವಾದ ಕೀಟದ ಪಿಡುಗೆಂದರೆ [[ಎಲೆಕೊರಕ]] (ಹಸಿರುಹೇನು). ಇದು ಗಿಡದ ರಸವನ್ನೆಲ್ಲಾ ಹೀರಿ ಅದನ್ನು ದುರ್ಬಲಗೊಳಿಸುತ್ತದೆ. ([[ಕಾಕ್ಸಿನೆಲ್ಲಿಡೇ|ಕೆಂಗಂದು ಜೀರುಂಡೆ]]ಗಳು ಎಲೆಕೊರಕಗಳನ್ನು ಬೇಟೆಯಾಡಿ ತಿನ್ನುವುದರಿಂದ, ಗುಲಾಬಿ ಉದ್ಯಾನಗಳಲ್ಲಿ ಅವುಗಳ ಇರುವಿಕೆಗೆ ಒತ್ತಾಸೆ ನೀಡಬೇಕು). ಗುಲಾಬಿಯ ಕೀಟನಾಶಕಗಳ ಸಿಂಪಡಣೆಯನ್ನು ಕೆಲವೊಮ್ಮೆ ಶಿಫಾರಸು ಮಾಡಲಾಗುತ್ತದೆಯಾದರೂ, ಅದರಿಂದಾಗಿ ಕೆಲವೊಂದು ಪ್ರಯೋಜನಕರ ಕೀಟಗಳೂ ಸಹ ಹಾನಿಗೊಳಗಾಗಬಹುದು. ಅದ್ದರಿಂದ ನಷ್ಟದ ಪ್ರಮಾಣವನ್ನು ತಗ್ಗಿಸುವ ದೃಷ್ಟಿಯಿಂದ ಸಿಂಪಡಣೆಯ ಕಾರ್ಯವನ್ನು ಎಚ್ಚರದಿಂದ ನಡೆಸಬೇಕು.
[[ಲೆಪಿಡೋಪ್ಟೆರಾ]] ([[ಚಿಟ್ಟೆ]] ಮತ್ತು [[ದೀಪದ ಹುಳು]]) ಜಾತಿಯ ಕೆಲವೊಂದು [[ಮರಿಹುಳು]]ಗಳು (ಬಾಲದ ಮರಿಗಳು) ಗುಲಾಬಿಗಳನ್ನು ಆಹಾರ ಸಸ್ಯವಾಗಿಯೂ ಬಳಸುತ್ತವೆ; [[ಗುಲಾಬಿಗಳನ್ನು ತಿನ್ನುವ ಲೆಪಿಡೋಪ್ಟೆರಾ ಕೀಟಗಳ ಪಟ್ಟಿ|ಗುಲಾಬಿಗಳನ್ನು ತಿನ್ನುವ ಲೆಪಿಡೋಪ್ಟೆರಾ ಜಾತಿಯ ಮರಿಹುಳುಗಳ ಪಟ್ಟಿ]]ಯನ್ನು ನೋಡಿ.
== ಬಳಕೆಗಳು ==
ಗುಲಾಬಿಗಳು ತಮ್ಮಲ್ಲಿನ ಹೂವುಗಳಿಗಾಗಿ ಪ್ರಸಿದ್ಧಿ ಪಡೆದಿವೆ. ಹೂಬಿಡುವ ಪೊದೆಸಸ್ಯಗಳಾಗಿರುವ ಗುಲಾಬಿಗಳು ಜನಪ್ರಿಯ, [[ಉದ್ಯಾನ]]ದ ಪೊದೆಸಸ್ಯಗಳಾಗಿವೆ. ಅತಿ ಜನಪ್ರಿಯವಾಗಿರುವ ಮತ್ತು ಸಾಮಾನ್ಯವಾಗಿ ಮಾರಾಟವಾಗುವ [[ಹೂ ಬೆಳೆಗಾರ|ಹೂ ಬೆಳೆಗಾರರ]] ಹೂವುಗಳಲ್ಲಿ ಅವು ಒಂದಾಗಿರುವುದರಿಂದ, [[ಕತ್ತರಿಸಿದ ಹೂವುಗಳು|ಕತ್ತರಿಸಿದ ಹೂವು]]ಗಳಂತೆಯೂ ಅವುಗಳನ್ನು ಬೆಳೆಯಲಾಗುತ್ತದೆ. ಕೆಲವು ಗುಲಾಬಿಗಳನ್ನು ಅವುಗಳ ಸುವಾಸಿತ ಎಲೆ ಗೊಂಚಲುಗಳಿಗಾಗಿಯೇ ಬೆಳೆಸಲಾಗುತ್ತದೆ. ಅವುಗಳೆಂದರೆ, [[ರೋಸಾ ರೂಬಿಗಿನೋಸಾ]], ಅಲಂಕಾರಿಕ ಮುಳ್ಳುಗಳು, [[ರೋಸಾ ಸೆರೀಷಿಯಾ]] ಅಥವಾ ಅವುಗಳ ಅಲಂಕಾರಿಕ ಹಣ್ಣು [[ರೋಸಾ ಮೊಯೆಸೈ]].
[[ಸುಗಂಧ ದ್ರವ್ಯ]]ಗಳ ಉದ್ಯಮದಲ್ಲಿ ಗುಲಾಬಿಗಳಿಗೆ ಹೆಚ್ಚಿನ ಮೌಲ್ಯವಿದೆ. [[ಗುಲಾಬಿಗಳ ಅತ್ತರ್]]ನ್ನು ಗುಲಾಬಿಯ ಹೂವುಗಳಿಂದ ಭಟ್ಟಿ ಇಳಿಸಿ ತೆಗೆಯಲಾಗುತ್ತದೆ. ಕೆಲವೊಂದು ಜಾತಿಗಳ ಹಣ್ಣಾದ [[ಗುಲಾಬಿ ಹಣ್ಣು]] C ಜೀವಸತ್ವದ ಒಂದು ಕಿರುಮೂಲವಾಗಿ ಬಳಸಲ್ಪಡುತ್ತದೆ. ಗುಲಾಬಿಗಳನ್ನು ಬೇಲಿಯ ಸ್ವರೂಪದಲ್ಲಿಯೂ ಮತ್ತು ಆಟದ ರಕ್ಷಣೆಯ ಕಾರಣಗಳಿಗೂ ಬೆಳೆಸಬಹುದು.
== ಕೃಷಿ ==
[[ಚಿತ್ರ:Rose-picking in Bulgaria 1870ies.jpg|thumb|upright|1870ರ ದಶಕದಲ್ಲಿನ, ಬಲ್ಗೇರಿಯಾದ ಕಝನ್ಲಕ್ ಪಟ್ಟಣದ ಸಮೀಪವಿರುವ ರೋಸ್ ವ್ಯಾಲಿಯಲ್ಲಿನ ಗುಲಾಬಿ-ಕುಯಿಲು; ಆಸ್ಟ್ರೋ-ಹಂಗರಿಯಾದ ಪ್ರವಾಸಿಗ ಎಫ್.ಕನಿಟ್ಜ್ ಮಾಡಿರುವ ನಕಾಶೆ ಕೆತ್ತನೆ.]]
[[ಕಸಿ ಮಾಡುವಿಕೆ]]ಯಿಂದ ಅಥವಾ ಕತ್ತರಿಸಿದ ಕಾಂಡಗಳನ್ನು ನೆಡುವ ವಿಧಾನದಿಂದ [[ತೋಟಗಾರಿಕೆ]] ಗುಲಾಬಿಗಳ ಮಾದರಿ ರೂಪಗಳನ್ನು ಹುಟ್ಟಿಸಬಹುದು. [[ತಳಿ]]ಗಳನ್ನು ಅವುಗಳ ಹೂವುಗಳಿಗಾಗಿ ಆಯ್ಕೆಮಾಡಲಾಗುತ್ತದೆ. ದೃಢತೆಯನ್ನು ಒದಗಿಸುವ [[ಮೂಲಕಾಂಡ]]ವೊಂದರ ಮೇಲೆ ಅವುಗಳನ್ನು ಕಸಿಮಾಡಬಹುದು ಅಥವಾ (ಹಳೆಯ ಉದ್ಯಾನ ಗುಲಾಬಿಗಳಂತೆ) ತಮ್ಮದೇ ಬೇರುಗಳನ್ನು ಬೆಳೆಸಿಕೊಳ್ಳಲೂ ಬಿಡಬಹುದು. ಬೆಳವಣಿಗೆಯ ಋತುವಿನ ಅವಧಿಯಲ್ಲಿ ಗುಲಾಬಿಗಳಿಗೆ ದಿನವೊಂದಕ್ಕೆ 5 ಗಂಟೆಗಳಷ್ಟು ಅವಧಿಯವರೆಗೆ ನೇರ ಬಿಸಿಲಿನ ಅಗತ್ಯವಿರುತ್ತದೆ. ಹೂ ಬಿಡುವಿಕೆ ಪ್ರಾರಂಭವಾದ ನಂತರ ಇಬ್ಬನಿಗೆ ಒಡ್ಡಿಕೊಂಡಾಗ, ಗುಲಾಬಿಗಳು ಚಳಿಗಾಲದಲ್ಲಿ ಜಡಸ್ಥಿತಿಯ ಹಂತಕ್ಕೆ ಪ್ರವೇಶಿಸುತ್ತವೆ.
ಗುಲಾಬಿಯ ಸಾವಿರಾರು [[ತಳಿ]]ಗಳು ಹಾಗೂ [[ಮಿಶ್ರ ತಳಿ (ಜೀವಶಾಸ್ತ್ರ)|ಮಿಶ್ರತಳಿ]]ಗಳನ್ನು ಹುಟ್ಟುಹಾಕಿ, ಉದ್ಯಾನದ ಬಳಕೆಗಾಗಿ ಆಯ್ಕೆಮಾಡಲಾಗಿದ್ದು, ಅವುಗಳಲ್ಲಿ ಬಹುಪಾಲು ತಳಿಗಳು [[ಜೋಡಿ-ಪುಷ್ಪಗಳ]] ತಳಿಗಳಾಗಿರುವುದೇ ಅಲ್ಲದೇ ಅವುಗಳ ಬಹುತೇಕ ಅಥವಾ ಎಲ್ಲಾ [[ಕೇಸರ]]ಗಳೂ ಹೆಚ್ಚುವರಿ [[ಪುಷ್ಪದಳ|ದಳ]]ಗಳಾಗಿ ಹಠಾತ್ ಬದಲಾವಣೆಗೆ ಒಳಗಾಗಿರುತ್ತವೆ.
19ನೇ ಶತಮಾನದ ಅರಂಭದಲ್ಲಿ ಫ್ರಾನ್ಸ್ನ [[ಜೋಸೆಫೀನ್ ಬ್ಯೂಹರ್ನಾಯ್ಸ್|ಜೋಸೆಫೀನ್ ಸಾಮ್ರಾಜ್ಞಿ]]ಯು [[ಮ್ಯಾಲ್ಮೇಷನ್]]ನಲ್ಲಿನ ತನ್ನ ಗುಲಾಬಿ ಉದ್ಯಾನಗಳಲ್ಲಿ ಗುಲಾಬಿ ತಳಿಗಳ ಬೆಳೆಸುವಿಕೆಯ ಪ್ರಕ್ರಿಯೆಯನ್ನು ಪ್ರೋತ್ಸಾಹಿಸಿದಳು. 1840ರಷ್ಟು ಹಿಂದೆಯೇ, ಒಂದು ಸಾವಿರಕ್ಕೂ ಮೀರಿದ ಸಂಖ್ಯೆಯ ಗುಲಾಬಿಯ ವೈವಿಧ್ಯಮಯ ತಳಿಗಳು, ಪ್ರಕಾರಗಳು ಹಾಗೂ ಜಾತಿಗಳ ಒಂದು ಸಂಗ್ರಹಾಗಾರವು ಅಸ್ತಿತ್ವಕ್ಕೆ ಬಂತು. ಇಂಗ್ಲೆಂಡ್ನಲ್ಲಿರುವ, ಆರಂಭಿಕ ವಿಕ್ಟೋರಿಯನ್ ಯುಗದ ಒಂದು ಉದ್ಯಾನದ ಸಮಾಧಿ ಮತ್ತು ಸಸ್ಯಾಲಯವಾದ [[ಅಬ್ನೆ ಪಾರ್ಕ್ ಸಮಾಧಿ]]ಗಾಗಿ [[ಲಾಡಿಜಸ್|ಲಾಡಿಜಸ್ ನರ್ಸರಿ]]ಯ ವತಿಯಿಂದ ಒಂದು ಗುಲಾಬಿ ತೋಟವನ್ನು ಹುಟ್ಟುಹಾಕಿದಾಗ ಇದು ಕಾರ್ಯಸಾಧ್ಯವಾಯಿತು.
ಗುಲಾಬಿ ಹೂವಿನ ಗಾತ್ರ ಮತ್ತು ಬಣ್ಣಕ್ಕೆ ಸಾರ್ವತ್ರಿಕವಾಗಿ ಒತ್ತುನೀಡಿದ ಇಪ್ಪತ್ತನೇ ಶತಮಾನದ ಗುಲಾಬಿ ತಳಿ ಉತ್ಪಾದಕರು, ದೊಡ್ಡ ಗಾತ್ರದ, ಆಕರ್ಷಕವಾಗಿರುವ, ಸ್ವಲ್ಪವೇ ಅಥವಾ ಸುವಾಸನೆಯೇ ಇರದ ಹೂವುಗಳನ್ನು ಉತ್ಪಾದಿಸಿದರು. ವಿಪರ್ಯಾಸವೆಂಬಂತೆ, ಅನೇಕ ಕಾಡು ಗುಲಾಬಿಗಳು ಹಾಗೂ "ಹಳೆಯ-ಶೈಲಿಯ" ಗುಲಾಬಿಗಳು ತೀವ್ರವಾದ ಸಿಹಿ ಪರಿಮಳವನ್ನು ಹೊಂದಿರುತ್ತವೆ.
[[ಸಮಶೀತೋಷ್ಣ ಹವಾಗುಣ]]ದಲ್ಲಿ ಗುಲಾಬಿಗಳು ಹುಲುಸಾಗಿ ಬೆಳೆಯುತ್ತವೆ.ಏಷ್ಯಾದ ಜಾತಿಗಳನ್ನು ಆಧರಿಸಿರುವ ಗುಲಾಬಿ ತಳಿಗಳು ತಮ್ಮದೇ ಮೂಲ [[ಉಪ-ಉಷ್ಣ|ಉಪ-ಉಷ್ಣವಲಯ]]ದ ಪರಿಸರಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಕೆಲವೊಂದು ಜಾತಿಗಳು ಹಾಗೂ ತಳಿಗಳು [[ಉಷ್ಣವಲಯ]]ದ ಹವಾಮಾನದಲ್ಲಿ, ಅದರಲ್ಲೂ ವಿಶೇಷವಾಗಿ, ಸೂಕ್ತವಾದ [[ಮೂಲಕಾಂಡ]]ಗಳಿಗೆ ಅವುಗಳನ್ನು [[ಕಸಿ ಮಾಡುವಿಕೆ|ಕಸಿಮಾಡಿದಾಗ]], ಹುಲುಸಾಗಿ ಬೆಳೆಯುತ್ತವೆ. ಉದ್ಯಾನ ಗುಲಾಬಿಗಳನ್ನು ವರ್ಗೀಕರಿಸಲು ಯಾವುದೇ ಏಕ ವರ್ಗೀಕರಣ ವ್ಯವಸ್ಥೆಯಿಲ್ಲ. ಆದಾಗ್ಯೂ, ಒಟ್ಟಾರೆಯಾಗಿ ಗುಲಾಬಿಗಳನ್ನು ಮೂರು ಪ್ರಮುಖ ಗುಂಪುಗಳಲ್ಲಿ ಒಂದರಲ್ಲಿ ಇರಿಸಲಾಗಿದೆ:
=== ಕಾಡು ಗುಲಾಬಿಗಳು ===
ಮೇಲೆ ಪಟ್ಟಿ ಮಾಡಲಾದ ಜಾತಿಗಳು ಹಾಗೂ ಅವುಗಳ ಕೆಲವೊಂದು ಮಿಶ್ರತಳಿಗಳು ಕಾಡು ಗುಲಾಬಿಗಳಲ್ಲಿ ಸೇರಿವೆ.
=== ಹಳೆಯ ಉದ್ಯಾನ ಗುಲಾಬಿಗಳು ===
ಹಳೆಯ ಉದ್ಯಾನ ಗುಲಾಬಿಗಳಲ್ಲಿ ಬಹುಪಾಲನ್ನು ಈ ಕೆಳಕಂಡ ಗುಂಪುಗಳಲ್ಲಿ ಒಂದರೊಳಗೆ ವರ್ಗೀಕರಿಸಲಾಗಿದೆ:
ಸಾರ್ವತ್ರಿಕವಾಗಿ ಹೇಳುವುದಾದರೆ, [[ಯುರೋಪ್|ಯುರೋಪ್]] ಮೂಲದ ಅಥವಾ [[ಮೆಡಿಟರೇನಿಯನ್|ಮೆಡಿಟರೇನಿಯನ್]] ಮೂಲದ ಹಳೆಯ ಉದ್ಯಾನ ಗುಲಾಬಿಗಳು ಒಂದು ಸಲ ಹೂಬಿಡುವ ಕಾಡಿನ ಪೊದೆಸಸ್ಯಗಳಾಗಿದ್ದು ಗಮನಾರ್ಹ ಪ್ರಮಾಣದ ಪರಿಮಳವನ್ನು ಹೊಂದಿರುವ, ಮುಖ್ಯವಾಗಿ ಬಿಳಿ, ನಸುಗೆಂಪು ಮತ್ತು ಕೆಂಪು ಛಾಯೆಗಳ ಜೋಡಿ-ಪುಷ್ಪಿ ಹೂವುಗಳನ್ನು ಅರಳಿಸುತ್ತವೆ. ಈ ಪೊದೆಸಸ್ಯಗಳ ಕಿರು ಎಲೆಗಳು ಅಥವಾ ಪರ್ಣಕಗಳು ಹೆಚ್ಚಿನ ರೀತಿಯಲ್ಲಿ ರೋಗ-ನಿರೋಧಕ ಶಕ್ತಿಯನ್ನು ಹೊಂದಿದ್ದು, ಎರಡು-ವರ್ಷ-ಹಳೆಯದಾದ ಬಿದಿರುಗಳ ಮೇಲೆ ಅವು ಸಾಮಾನ್ಯವಾಗಿ ಹೂ ಬಿಡುತ್ತವೆ.
[[ಚಿತ್ರ:Rosa alba semi-plena img 2175.jpg|thumb|left|130px|'ಆಲ್ಬಾ ಸೆಮಿಪ್ಲೆನಾ', ಒಂದು ಆಲ್ಬಾ ಗುಲಾಬಿ]]
==== ಆಲ್ಬಾ ====
"ಬಿಳಿ ಗುಲಾಬಿಗಳು" ಅಕ್ಷರಶಃ ''R. ಅರ್ವೆನ್ಸಿಸ್'' ಮತ್ತು ಸನಿಹದ ಸಹವರ್ತಿಯಾದ ''R. ಆಲ್ಬಾ'' ದಿಂದ ಹುಟ್ಟಿಕೊಂಡಿವೆ. ಪ್ರಾಯಶಃ, [[ಪ್ರಾಚೀನ ರೋಮ್|ರೋಮನ್ನರು]] [[ಗ್ರೇಟ್ ಬ್ರಿಟನ್|ಗ್ರೇಟ್ ಬ್ರಿಟನ್]]ಗೆ ತಂದ ಹಳೆಯ ಉದ್ಯಾನ ಗುಲಾಬಿಗಳಲ್ಲಿ ಈ ಕೆಲವೂ ಸೇರಿವೆ. ಈ ಪೊದೆಸಸ್ಯಗಳು ವರ್ಷಕ್ಕೊಮ್ಮೆ ವಸಂತ ಋತುವಿನಲ್ಲಿ ಹೂಬಿಡುತ್ತವೆ. ಹೂವುಗಳು ಬಿಳಿ ಅಥವಾ ಪೇಲವವಾದ ನಸುಗೆಂಪು ಬಣ್ಣದಲ್ಲಿರುತ್ತವೆ.
ಈ ಪೊದೆಸಸ್ಯಗಳು ಆಗಿಂದಾಗ್ಗೆ ಬೂದು-ಹಸಿರಿನ ಎಲೆಗೊಂಚಲನ್ನು ಹೊಂದಿರುವುದೇ ಅಲ್ಲದೇ, ಬೆಳೆಯುವಾಗ ಹಬ್ಬುವಿಕೆಯ ಸ್ವಭಾವವನ್ನು ಹೊರಹೊಮ್ಮಿಸುತ್ತವೆ. ಉದಾಹರಣೆಗಳು: 'ಆಲ್ಬಾ ಸೆಮಿಪ್ಲೀನಾ', '[[ಯಾರ್ಕ್ನ ಬಿಳಿ ಗುಲಾಬಿ]] '.
[[ಚಿತ್ರ:Rosa 'Charles de Mills'2.jpg|thumb|right|130px|1790ರ ಮುಂಚಿನ ಗ್ಯಾಲಿಕಾ ಗುಲಾಬಿ 'ಚಾರ್ಲ್ಸ್ ಡಿ ಮಿಲ್ಸ್,']]
==== ಗ್ಯಾಲಿಕಾ ====
[[ಗ್ಯಾಲಿಕ್ ಗುಲಾಬಿ|ಗ್ಯಾಲಿಕಾ]] ಅಥವಾ ಪ್ರಾವಿನ್ಸ್ ಗುಲಾಬಿಗಳು ಅತ್ಯಂತ ಹಳೆಯ ವರ್ಗಕ್ಕೆ ಸೇರಿವೆ. ಕೇಂದ್ರೀಯ ಮತ್ತು ದಕ್ಷಿಣ [[ಯುರೋಪ್]]ನ ಮೂಲದಿಂದ ಬಂದಿರುವ ''R. ಗ್ಯಾಲಿಕಾ'' ದಿಂದ ಅವುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಔಷಧ ವ್ಯಾಪಾರಿಯ ಗುಲಾಬಿ ಎಂದು ಕರೆಯಲ್ಪಡುವ ''R. ಗ್ಯಾಲಿಕಾ ಅಫಿಷಿನೇಲಿಸ್'' ಪ್ರಕಾರವನ್ನು ಮಧ್ಯಯುಗದಲ್ಲಿ ಕ್ರೈಸ್ತ ಸನ್ಯಾಸಿಗಳ ಸಸ್ಯ ಸಂಗ್ರಹಾಲಯದಲ್ಲಿ ಬೆಳೆಸಲಾಗುತ್ತಿತ್ತು. ಈ ಗುಲಾಬಿಯೇ [[ಲ್ಯಾಂಕಾಸ್ಟರ್ನ ಕೆಂಪು ಗುಲಾಬಿ]] ಎಂಬುದಾಗಿ ಇಂಗ್ಲಿಷ್ ಇತಿಹಾಸದಲ್ಲಿ ಪ್ರಸಿದ್ಧಿ ಪಡೆಯಿತು.ಅಪರೂಪವಾಗಿ 4 ಅಡಿಗಳಿಗಿಂತಲೂ ಹೆಚ್ಚು ಎತ್ತರವಿರುವ ಕುಬ್ಜ ಪೊದೆಸಸ್ಯಗಳ ಮೇಲೆ, ಬೇಸಿಗೆ ಕಾಲದಲ್ಲಿ ಗ್ಯಾಲಿಕಾಗಳು ಹೂಬಿಡುತ್ತವೆ. ಒಂದು-ಸಲ ಹೂಬಿಡುವ ಬಹುತೇಕ ಇತರ ಹಳೆಯ ಉದ್ಯಾನ ಗುಲಾಬಿಗಳಂತಿರದ ಗ್ಯಾಲಿಕಾ ವರ್ಗವು, ಕೆಂಪು, ಕೆಂಗಂದು ಮತ್ತು ಗಾಢವಾದ ನೇರಳೆಯಂತಿರುವ ಕಡುಗೆಂಪಿನ ಛಾಯೆಗಳನ್ನು ಒಳಗೊಂಡಿದೆ.ಉದಾಹರಣೆಗಳು: 'ಕಾರ್ಡಿನಲ್ ಡಿ ರಿಚೆಲ್ಯೂ', 'ಚಾರ್ಲ್ಸ್ ಡಿ ಮಿಲ್ಸ್', 'ರೋಸಾ ಮುಂಡಿ' (''R. ಗ್ಯಾಲಿಕಾ ವರ್ಸಿಕಲರ್'' ). <br />
[[ಚಿತ್ರ:Rosa 'Quatre Saisons'.jpg|thumb|left|120px|'ಶರತ್ಕಾಲದ ದಮಾಸ್ಕ್'('ಕ್ವಾಟ್ರೇ ಸೈಸನ್ಸ್')]]
==== ದಮಾಸ್ಕ್ ====
ಪ್ರಾಚೀನ ಕಾಲದಲ್ಲಿನ (''[[ರೋಸಾ ಮೊಸ್ಚಾಟಾ]]'' x ''[[ರೋಸಾ ಗ್ಯಾಲಿಕಾ]]'' ) x ''[[ರೋಸಾ ಫೆಡ್ಷೆಂಕೋನಾ]]'' ಪ್ರಭೇದಗಳ ನಡುವಣ ನೈಸರ್ಗಿಕ ಮಿಶ್ರತಳಿಯಿಂದ ಇದು ಉದ್ಭವಿಸಿದೆ.<ref>ಐವಾಟ H, ಕೇಟೋ T, ಓನೋ S, "ಟ್ರೈಪೇರೆಂಟಲ್ ಆರಿಜಿನ್ ಆಫ್ ದಮಾಸ್ಕ್ ರೋಸಸ್," ''ಜೀನ್'' 259: 53–59 (2000)</ref> 1254ಕ್ಕೂ ನೂರಾರು ವರ್ಷಗಳ ಹಿಂದೆಯೇ, ಯುರೋಪ್ನಲ್ಲಿ ಕಡೇ ಪಕ್ಷ ಒಂದು [[ರೋಸಾ ದಮಾಸೀನಾ|ದಮಾಸ್ಕ್]] ಗುಲಾಬಿಯ ಅಸ್ತಿತ್ವವಿತ್ತು ಎಂಬುದಕ್ಕೆ ಪ್ರಾಚೀನ ರೋಮನ್ನರ ಹಸಿ ಭಿತ್ತಿಚಿತ್ರಗಳಲ್ಲಿ ಸಾಕ್ಷಿಯಿದೆಯಾದರೂ, 1254 ಮತ್ತು 1276ರ ನಡುವೆ [[ಇರಾನ್|ಪರ್ಷಿಯಾ]]ದಿಂದ ಯುರೋಪ್ಗೆ ದಮಾಸ್ಕ್ ಗುಲಾಬಿಗಳನ್ನು ತಂದ ಕೀರ್ತಿ ರಾಬರ್ಟ್ ಡಿ ಬ್ರೈಗೆ ಸಲ್ಲುತ್ತದೆ. ಬೇಸಿಗೆಯ ದಮಾಸ್ಕ್ಗಳು ಬೇಸಿಗೆಯಲ್ಲಿ ಒಮ್ಮೆ ಅರಳುತ್ತವೆ.ಶರತ್ಕಾಲದ ಅಥವಾ ಎಲ್ಲಾ ಋತುಗಳ ದಮಾಸ್ಕ್ಗಳು ನಂತರ ಮತ್ತೊಮ್ಮೆ ಅರಳುತ್ತವೆ ಮತ್ತು ಅವು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಕಾಲಗಳಲ್ಲಿ ಹೂಬಿಡುವ ಏಕೈಕ ಹಳೆಯ ಯುರೋಪಿಯನ್ ಗುಲಾಬಿಗಳಾಗಿವೆ.ಅವ್ಯವಸ್ಥಿತವಾಗಿ ಹಬ್ಬುವ ಬೆಳವಣಿಗೆ ಸ್ವಭಾವ ಮತ್ತು ತೀಕ್ಷ್ಣವಾದ ಮುಳ್ಳುಗಳನ್ನು ಒಳಗೊಳ್ಳುವ ದೃಷ್ಟಿಯಿಂದ, ಉದ್ದವಾದ ಮತ್ತು ತೆಳ್ಳನೆಯ ಕಾಂಡವನ್ನು ಹೊಂದಲು ಈ ಪೊದೆಸಸ್ಯಗಳು ಬಯಸುತ್ತವೆ. ಹೂವುಗಳು ಗ್ಯಾಲಿಕಾ ಪ್ರಕಾರಗಳಿಗಿಂತ ಹೆಚ್ಚು ಸಡಿಲವಾಗಿರುವ ದಳ ರಚನೆಯನ್ನು ಹೊಂದಿದ್ದು, ತೀಕ್ಷ್ಣವಾದ, ಕಟುವಾಸನೆಯ ಪರಿಮಳವನ್ನು ಹೊಂದಿರುತ್ತವೆ. ಉದಾಹರಣೆಗಳು: '[[ಇಸ್ಪಹಾನ್ (ಗುಲಾಬಿ)|ಇಸ್ಪಹಾನ್]]', 'ಮ್ಯಾಡಮ್ ಹಾರ್ಡಿ'.
==== ಸೆಂಟಿಫೋಲಿಯಾ ಅಥವಾ ಪ್ರಾವೆನ್ಸ್ ====
[[ರೋಸಾ ಸೆಂಟಿಫೋಲಿಯಾ|ಸೆಂಟಿಫೋಲಿಯಾ]] ಗುಲಾಬಿಗಳು ಹದಿನೇಳನೇ ಶತಮಾನದಲ್ಲಿ [[ನೆದರ್ಲೆಂಡ್ಸ್|ನೆದರ್ಲೆಂಡ್ಸ್]]ನಲ್ಲಿ ಮೈದಳೆದವು. ಅವುಗಳು ಹೊಂದಿರುವ "ಒಂದು ನೂರು ದಳಗಳು" ಅವುಗಳಿಗೆ ನೀಡಲಾಗಿರುವ ಹೆಸರಿಗೆ ಮೂಲಕಾರಣ. ಈ ಗುಲಾಬಿಗಳ ಆಕಾರವು ಗೋಳಾಕಾರದಲ್ಲಿರುವುದರಿಂದ ಅವುಗಳನ್ನು "ಕೋಸು" (ಕ್ಯಾಬೇಜ್) ಗುಲಾಬಿಗಳು ಎಂದೂ ಕರೆಯಲಾಗುತ್ತದೆ. ದಮಾಸ್ಕ್ ಗುಲಾಬಿಗಳನ್ನು ಆಲ್ಬಾ ಗುಲಾಬಿಗಳೊಂದಿಗೆ ಸಂಕರಿಸಿದ ಪರಿಣಾಮವಾಗಿ ಮೈದಳೆದಿರುವ ಸೆಂಟಿಫೋಲಿಯಾ ಗುಲಾಬಿಗಳೆಲ್ಲವೂ ಒಮ್ಮೆ ಮಾತ್ರ ಹೂಬಿಡುತ್ತವೆ. ವಿವಿಧ ಗಾತ್ರಗಳು ಹಾಗೂ ಸ್ವರೂಪಗಳ ರೂಪಾಂತರಗಳನ್ನು ಉತ್ಪತ್ತಿ ಮಾಡುವೆಡೆಗಿನ ಅವುಗಳ ಒಲವಿನಿಂದಾಗಿ ಈ ವರ್ಗವು ಗಮನ ಸೆಳೆದಿದ್ದು, ಪಾಚಿ ಗುಲಾಬಿಗಳು ಹಾಗೂ ಪ್ರಪ್ರಥಮ ಚಿಕಣಿ ಗುಲಾಬಿಗಳಲ್ಲಿ ಕೆಲವೊಂದನ್ನು ಈ ವರ್ಗವು ಒಳಗೊಂಡಿದೆ (ಕೆಳಗೆ ನೋಡಿ). ಉದಾಹರಣೆಗಳು: 'ಸೆಂಟಿಫೋಲಿಯಾ', 'ಪಾಲ್ ರಿಕೌಲ್ಟ್'.
==== ಪಾಚಿ ====
ಮೂಲತಃ ಸೆಂಟಿಫೋಲಿಯಾ ವರ್ಗಕ್ಕೆ ಸೇರಿರುವ ಗುಲಾಬಿಗಳ (ಅಥವಾ ಕೆಲವೊಮ್ಮೆ ದಮಾಸ್ಕ್ ಗುಲಾಬಿಗಳ) ರೂಪಾಂತರಗಳಾಗಿರುವ ಪಾಚಿ ಗುಲಾಬಿಗಳು, [[ಸಸ್ಯ ಕಾಂಡ|ಕಾಂಡಗಳು]] ಹಾಗೂ [[ಪುಷ್ಪಪಾತ್ರದ ದಳ|ಪುಷ್ಪಪಾತ್ರೆಯ ದಳ]]ಗಳ ಮೇಲೆ ಒಂದು ಪಾಚಿಯುಕ್ತ ಗಂತಿ ಅಥವಾ ಬುಗುಟೆಯನ್ನು ಹೊಂದಿದ್ದು, ಈ ಗಂತಿಯನ್ನು ಉಜ್ಜಿದಾಗ ಒಂದು ಕಾಡಿನ ವಾತಾವರಣದ ಅಥವಾ ಗುಗ್ಗುಳದಂತಹ ಆಹ್ಲಾದಕರ ಪರಿಮಳವು ಹೊರಹೊಮ್ಮುತ್ತದೆ. ಈ ಒಂದು ಅನನ್ಯ ಲಕ್ಷಣದಿಂದಾಗಿಯೇ ಪಾಚಿ ಗುಲಾಬಿಗಳನ್ನು ಬೆಳೆಸಲಾಗುತ್ತದೆ. ಆದರೆ, ಹೊಸ ಗುಲಾಬಿ ವರ್ಗೀಕರಣಗಳ ಅಭಿವೃದ್ಧಿಯೆಡೆಗೆ ಒಂದು ಗುಂಪಾಗಿ ಅವು ಯಾವುದೇ ಕೊಡುಗೆಯನ್ನು ನೀಡಿಲ್ಲ ಎನ್ನಬಹುದು. ಸೆಂಟಿಫೋಲಿಯಾದ ಹಿನ್ನೆಲೆಯನ್ನು ಹೊಂದಿರುವ ಪಾಚಿ ಗುಲಾಬಿಗಳು ಒಮ್ಮೆ ಮಾತ್ರ ಹೂಬಿಡುವ ಗುಣ ಹೊಂದಿರುತ್ತವೆ. ಕೆಲವೊಂದು ಪಾಚಿ ಗುಲಾಬಿಗಳು ಮತ್ತೆ ಮತ್ತೆ ಹೂಬಿಡುವ ಗುಣವನ್ನು ಪ್ರದರ್ಶಿಸುವ ಮೂಲಕ, ತಮ್ಮಲ್ಲಿನ ಶರತ್ಕಾಲದ ದಮಾಸ್ಕ್ ಗುಲಾಬಿಗಳ ಗುಣ-ಪ್ರಮಾಣವನ್ನು ಸೂಚಿಸುತ್ತವೆ. ಉದಾಹರಣೆ: 'ಸಾಮಾನ್ಯ ಪಾಚಿ' (ಸೆಂಟಿಫೋಲಿಯಾ-ಪಾಚಿ), 'ಆಲ್ಫ್ರೆಡ್ ಡಿ ದಾಲ್ಮಾಸ್' (ಶರತ್ಕಾಲದ ದಮಾಸ್ಕ್ ಪಾಚಿ).
==== ಪೋರ್ಟ್ಲೆಂಡ್ ====
ಚೈನಾ ಗುಲಾಬಿಗಳು ಹಾಗೂ ಯುರೋಪ್ನ ಗುಲಾಬಿಗಳ ನಡುವಿನ ಸಂಕರೀಕರಣದಿಂದಾಗಿ ಮೈದಳೆದ ಮೊದಲ ಗುಂಪೇ ಪೋರ್ಟ್ಲೆಂಡ್ ಗುಲಾಬಿಗಳು ಎಂದು ಬಹಳ ಕಾಲದಿಂದ ಭಾವಿಸಲಾಗಿತ್ತು. ಆದರೆ, ಲಯೋನ್ಸ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಕೈಗೊಳ್ಳಲಾದ DNA ವಿಶ್ಲೇಷಣೆಯು ಇದನ್ನು ಅಲ್ಲಗಳೆದಿದೆ. ಮೂಲ ಪೋರ್ಟ್ಲೆಂಡ್ ಗುಲಾಬಿಗಳು ಚೈನಾ ಗುಲಾಬಿಗಳ ವಂಶಾವಳಿಯನ್ನು ಹೊಂದಿಲ್ಲ; ಆದರೆ ಶರತ್ಕಾಲದ ದಮಾಸ್ಕ್/ಗ್ಯಾಲಿಕಾ ಗುಲಾಬಿಗಳ ವಂಶ ಪರಂಪರೆಯನ್ನು ಇವು ಪ್ರತಿನಿಧಿಸುತ್ತವೆ ಎಂದು ಸದರಿ ವಿಶ್ಲೇಷಣೆಯು ನಿರೂಪಿಸಿದೆ.<ref>{{Cite web |url=http://www.rosarosam.com/story/story_HP00.html |title=ಆರ್ಕೈವ್ ನಕಲು |access-date=2009-10-29 |archive-date=2008-07-05 |archive-url=https://web.archive.org/web/20080705205338/http://www.rosarosam.com/story/story_HP00.html |url-status=dead }}</ref>
1775ರ ಸುಮಾರಿಗೆ ''R. ಪೀಸ್ತಾನಾ'' ಅಥವಾ 'ಸ್ಕಾರ್ಲೆಟ್ ಫೋರ್ ಸೀಸನ್ಸ್' ಎಂಬ ಹೆಸರಿನಿಂದ ಜನಜನಿತವಾಗಿದ್ದ ಗುಲಾಬಿಯೊಂದನ್ನು (ಈಗ ಅವು ಕೇವಲ 'ಪೋರ್ಟ್ಲೆಂಡ್ ಗುಲಾಬಿ' ಎಂದೇ ಪ್ರಸಿದ್ಧ) [[ಇಟಲಿ]]ಯಿಂದ ಸ್ವೀಕರಿಸಿದ [[ಪೋರ್ಟ್ಲೆಂಡ್ನ ದಳಪತಿ|ಪೋರ್ಟ್ಲೆಂಡ್ನ ಡ್ಯೂಕ್ನ ಹೆಂಡತಿ]]ಯ (ಡಚೆಸ್ ಆಫ್ ಪೋರ್ಟ್ಲೆಂಡ್) ಹೆಸರನ್ನೇ ಈ ಗುಲಾಬಿಗಳಿಗೆ ಇಡಲಾಗಿದೆ. ಆ ಒಂದು ಗುಲಾಬಿಯಿಂದಲೇ ಪೋರ್ಟ್ಲೆಂಡ್ ಗುಲಾಬಿಗಳ ಸಂಪೂರ್ಣ ವರ್ಗವನ್ನು ಅಲ್ಲಿಂದ ಅಭಿವೃದ್ಧಿಪಡಿಸಲಾಯಿತು. ಮಿಶ್ರವರ್ಣದ ಯುರೋಪ್-ಶೈಲಿಯ ಹೂವುಗಳನ್ನು ಒಳಗೊಂಡ, ಮತ್ತೆ ಮತ್ತೆ ಹೂಬಿಡುವ ಗುಲಾಬಿಗಳ ಮೊದಲ ವರ್ಗಕ್ಕೆ ಸೇರಿರುವ ಈ ಸಸ್ಯಗಳು, ಪುಟ್ಟದಾಗಿರುವ ಮತ್ತು ಪೊದೆಸಸ್ಯದಂತೆ ಇರುವ ಗುಣವನ್ನು ವ್ಯಕ್ತಪಡಿಸುವುದರ ಜೊತೆಗೆ, ಅವುಗಳ ಹೂಗಳ ತೊಟ್ಟುಗಳೂ ಸಹ ಅದಕ್ಕೆ ತಕ್ಕಂತೆಯೇ ಪುಟ್ಟದಾಗಿರುತ್ತವೆ. ಉದಾಹರಣೆ: 'ಜೇಮ್ಸ್ ವೀಚ್', 'ರೋಸ್ ಡಿ ರೆಶ್ಚ್', 'ಕೋಮ್ಟ್ ಡಿ ಚೇಂಬೌರ್ಡ್'.
==== ಚೈನಾ ====
[[ಚಿತ್ರ:Rosa 'Old Blush'.jpg|thumb|'ಪಾರ್ಸನ್ಸ್ ಪಿಂಕ್ ಚೈನಾ' ಅಥವಾ 'ಓಲ್ಡ್ ಬುಷ್', "ಸ್ಟಡ್ ಚೈನಾ ಗುಲಾಬಿಗಳಲ್ಲಿ" ಒಂದು]]
''[[ರೋಸಾ ಚೈನೆನ್ಸಿಸ್]]'' ನ್ನು ಆಧರಿಸಿರುವ ಚೈನಾ ಗುಲಾಬಿಗಳನ್ನು ಸಾವಿರಾರು ವರ್ಷಗಳಿಂದಲೂ ಪೂರ್ವ ಏಷ್ಯಾದಲ್ಲಿ ಬೆಳೆಯಲಾಗುತ್ತಿತ್ತು. 1700ರ ದಶಕದ ಅಂತ್ಯಭಾಗದಲ್ಲಿ ಅವು ಅಂತಿಮವಾಗಿ ಪಶ್ಚಿಮ ಯುರೋಪ್ನ್ನು ತಲುಪಿದವು. ಇಂದಿನ ಮಿಶ್ರತಳಿ ಗುಲಾಬಿಗಳ ಪೈಕಿ ಅನೇಕವುಗಳಿಗೆ ಅವು ಮೂಲಸಸ್ಯಗಳಾಗಿರುವುದಲ್ಲದೇ,<ref>{{Cite web |url=http://www.nichegardens.com/catalog/item.php?id=1842 |title=ರೋಸಾ ಚೈನೆನ್ಸಿಸ್ |access-date=2009-10-29 |archive-date=2014-04-07 |archive-url=https://web.archive.org/web/20140407100436/http://www.nichegardens.com/catalog/item.php?id=1842 |url-status=dead }}</ref> ಹೂವಿನ ಸ್ವರೂಪಕ್ಕೆ ಒಂದು ಬದಲಾವಣೆಯನ್ನೂ ತಂದಿವೆ ಎಂದು ಹೇಳಬಹುದು.<ref name="Chrose">[http://www.rosegathering.com/china.html ಚೈನಾ ಗುಲಾಬಿಗಳು. ]{{Dead link|date=ಜುಲೈ 2026 |bot=InternetArchiveBot |fix-attempted=yes }}[http://www.rosegathering.com/china.html ಗುಲಾಬಿ ಕೊಯ್ಯುವಿಕೆ]{{Dead link|date=ಜುಲೈ 2026 |bot=InternetArchiveBot |fix-attempted=yes }}</ref>
ಮೇಲೆ ನಮೂದಿಸಲಾದ ಯುರೋಪ್ನ ಗುಲಾಬಿ ವರ್ಗಗಳೊಂದಿಗೆ ಹೋಲಿಸಿದಾಗ, ಸಣ್ಣ ರೆಂಬೆಗಳ ಹಾಗೂ ಶೀತಕ್ಕೆ ಹೆಚ್ಚು ಸಂವೇದಿಯಾಗಿರುವ ಪೊದೆಸಸ್ಯಗಳ ಮೇಲಿನ ಕಡಿಮೆ ಪರಿಮಳದ, ಚಿಕ್ಕದಾದ ಹೂಗಳನ್ನು ಚೈನಾದ ಗುಲಾಬಿಗಳು ಹೊಂದಿದ್ದವು. ಇಷ್ಟಾಗಿಯೂ, ಬೇಸಿಗೆಯಾದ್ಯಂತ ಮತ್ತು ಶರತ್ಕಾಲದ ಅಂತ್ಯದವರೆಗೆ ಹೂಬಿಡುತ್ತಲೇ ಇರುವ ವಿಸ್ಮಯಕಾರಕ ಸಾಮರ್ಥ್ಯವನ್ನು ಅವು ಹೊರಹೊಮ್ಮಿಸಿದವು. ತನ್ಮೂಲಕ ಅವುಗಳ ಐರೋಪ್ಯ ಸಹವರ್ತಿಗಳಿಗಿಂತ ಬೇರೆಯದೇ ಆದ ಗುಣವನ್ನು ಪ್ರದರ್ಶಿಸಿದವು ಎಂದು ಹೇಳಬಹುದು. ಇದರಿಂದಾಗಿ, 1800ರ ದಶಕದ ಆರಂಭದಲ್ಲಿ ಸಂಕರೀಕರಣದ ಅಥವಾ ಮಿಶ್ರತಳಿ ಹುಟ್ಟುಹಾಕುವ ಉದ್ದೇಶಗಳಿಗಾಗಿ ಇವುಗಳನ್ನೇ ಹೆಚ್ಚು ಹೆಚ್ಚು ಬಯಸುವ ಪರಿಸ್ಥಿತಿ ನಿರ್ಮಾಣವಾಯಿತು.
ಯುರೋಪ್ನ ಗುಲಾಬಿಗಳು ಅರಳಿಕೊಂಡ ನಂತರ ಮಸುಕಾಗುವ ಸ್ವಭಾವವನ್ನು ಹೊಂದಿದ್ದವು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಕಾಲಾನಂತರದಲ್ಲಿ "ಬಿಸಿಲುಗಂದು" ಪ್ರಕ್ರಿಯೆಗೆ ಈಡಾಗುವ ಅಥವಾ ಕಪ್ಪಾಗುವ ಕಡೆಗೆ ಒಲವು ತೋರಿದ್ದರಿಂದಲೂ ಚೈನಾ ಗುಲಾಬಿಗಳ ಹೂವುಗಳು ಗಮನಾರ್ಹವಾಗಿದ್ದವು.<ref name="Chrose"/> ಪ್ರದರ್ಶನ ಭಾಗ್ಯವನ್ನು ಕಾಣುತ್ತಿರುವ ಇಂದಿನ ಗುಲಾಬಿಗಳು ತಮ್ಮ ಸ್ವರೂಪವನ್ನು ಚೈನಾ ಗುಲಾಬಿಗಳ ವಂಶವಾಹಿಗಳಿಂದ ಪಡೆದಿವೆ ಮತ್ತು ಅರಳುವ ಸಮಯದಲ್ಲಿ ಬಿಚ್ಚಿ ಹರಡಿಕೊಳ್ಳುವ ತೆಳುವಾದ ಮೊಗ್ಗುಗಳನ್ನೂ ಸಹ ಚೈನಾ ಗುಲಾಬಿಗಳು ತಂದಿವೆ ಎನ್ನಬಹುದು.<ref name="Chrose"/>
[[ಗ್ರಹಾಂ ಸ್ಟುವರ್ಟ್ ಥಾಮಸ್|ಗ್ರಹಾಂ ಸ್ಟುವರ್ಟ್ ಥಾಮಸ್]] ಪ್ರಕಾರ, ಚೈನಾ ಗುಲಾಬಿಗಳ ವರ್ಗದ ಮೇಲೆಯೇ ಆಧುನಿಕ ಗುಲಾಬಿಗಳು ನಿರ್ಮಾಣಗೊಂಡಿವೆ.<ref name="Chrose"/>
ಹದಿನೆಂಟನೇ ಶತಮಾನದ ಅಂತ್ಯದಲ್ಲಿ ಮತ್ತು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ನಾಲ್ಕು "ಸ್ಟಡ್ ಚೈನಾ" ಗುಲಾಬಿಗಳನ್ನು (1792ರಲ್ಲಿ ಬಂದ 'ಸ್ಲೇಟರ್ಸ್ ಕ್ರಿಮ್ಸನ್ ಚೈನಾ', 1793ರಲ್ಲಿ ಬಂದ 'ಪಾರ್ಸನ್ಸ್ ಪಿಂಕ್ ಚೈನಾ', 1809ರಲ್ಲಿ ಬಂದ 'ಹ್ಯೂಮ್ಸ್ ಬ್ಲಷ್ ಟೀ-ಸೆಂಟೆಡ್ ಚೈನಾ' ಮತ್ತು 1824ರಲ್ಲಿ ಬಂದ 'ಪಾರ್ಕ್ಸ್ ಯೆಲ್ಲೋ ಟೀ-ಸೆಂಟೆಡ್ ಚೈನಾ') [[ಯುರೋಪ್]]ಗೆ ತರಲಾಯಿತು ಎಂಬುದು ಒಂದು ಪರಂಪರಾನುಗತ ಅಭಿಪ್ರಾಯವಾಗಿದೆ. ವಾಸ್ತವವಾಗಿ ಈ ಸಂಖ್ಯೆ ಇನ್ನೂ ಹೆಚ್ಚಿದ್ದು, ಚಹಾ ಗುಲಾಬಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಕಡೇಪಕ್ಷ ಐದು ಚೈನಾ ಗುಲಾಬಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.<ref>{{Cite web |url=http://www.rdrop.com/~paul/dickerson_Ch.html |title=ಆರ್ಕೈವ್ ನಕಲು |access-date=2009-10-29 |archive-date=2009-08-20 |archive-url=https://web.archive.org/web/20090820085616/http://www.rdrop.com/~paul/dickerson_Ch.html |url-status=dead }}</ref> ಇದರಿಂದಾಗಿ ಮತ್ತೆ ಮತ್ತೆ ಹೂಬಿಡುವ ಹಳೆಯ ಉದ್ಯಾನ ಗುಲಾಬಿಗಳ ಮತ್ತು ನಂತರದಲ್ಲಿ ಆಧುನಿಕ ಉದ್ಯಾನದ ಗುಲಾಬಿಗಳ ಮೊದಲ ವರ್ಗಗಳ ಸೃಷ್ಟಿಯಾಯಿತು. ಉದಾಹರಣೆಗಳು: 'ಓಲ್ಡ್ ಬ್ರಷ್ ಚೈನಾ', 'ಮ್ಯುಟಾಬಿಲಿಸ್' (ಚಿಟ್ಟೆ ಗುಲಾಬಿ).
[[ಚಿತ್ರ:MrsDCross.JPG|thumb|left|150px|ಚಹಾ ಗುಲಾಬಿ 'ಶ್ರೀಮತಿ ಡ್ಯುಡ್ಲೆ ಕ್ರಾಸ್' (ಪಾಲ್ 1907)]]
==== ಚಹಾ ====
ಮೂಲ "ಚಹಾ-ಪರಿಮಳದ ಚೈನಾದ ಗುಲಾಬಿಗಳು" (''ರೋಸಾ x ಓಡೊರೇಟಾ'' ) ಪೂರ್ವದೇಶಗಳ ತಳಿಗಳಾಗಿದ್ದು, [[ರೋಸಾ ಚೈನೆನ್ಸಿಸ್|''R. ಚೈನೆನ್ಸಿಸ್'']] ಮತ್ತು ತಿಳಿ-ಹಳದಿ ಹೂವುಗಳನ್ನು ಹೊಂದಿರುವ ಏಷ್ಯಾದ ಒಂದು ಬೃಹತ್, ಹಬ್ಬುವ ಗುಲಾಬಿ ಜಾತಿಯಾದ [[ರೋಸಾ ಜೈಗ್ಯಾಂಟಿಯಾ|''R. ಜೈಗ್ಯಾಂಟಿಯಾ'']] ನಡುವಿನ ಸಂಕರಣದ ಫಲವಾಗಿ ರೂಪುಗೊಂಡ ಮಿಶ್ರತಳಿಗಳನ್ನು ಪ್ರತಿನಿಧಿಸುತ್ತವೆ ಎಂದು ನಂಬಲಾಗಿತ್ತು.
1800ರ ದಶಕದ ಆರಂಭದಲ್ಲಿ ಅವುಗಳ ಪರಿಚಯವಾಗುತ್ತಿದ್ದಂತೆಯೇ, ವಿಶೇಷವಾಗಿ ಫ್ರಾನ್ಸ್ನಲ್ಲಿನ ತಳಿಗಾರರು ಅವುಗಳೊಂದಿಗಿನ ಕೆಲಸದಲ್ಲಿ ತೊಡಗಿಸಿಕೊಂಡು, ಮೊದಲು ಚೈನಾದ ಗುಲಾಬಿಗಳೊಂದಿಗೆ, ನಂತರ ಬರ್ಬನ್ಗಳು ಹಾಗೂ ನಾಯ್ಸೆಟ್ಗಳೊಂದಿಗೆ ಅವುಗಳನ್ನು ಸಂಕರೀಕರಿಸಿದರು. ಚಹಾ ಗುಲಾಬಿಗಳು ಪದೇ ಪದೇ ಹೂಬಿಡುವ ಗುಲಾಬಿಗಳಾಗಿದ್ದು, ಚೈನೀಸ್ ಕಪ್ಪು ಚಹಾವನ್ನು ನೆನಪಿಗೆ ತರುವ ಪರಿಮಳವನ್ನು ಹೊಂದಿರುವುದರಿಂದ (ಎಲ್ಲ ಸಮಯಗಳಲ್ಲೂ ಇದು ವಾಸ್ತವಿಕ ಸಂಗತಿಯಲ್ಲದಿದ್ದರೂ ಸಹ) ಆ ಹೆಸರನ್ನು ಪಡೆದುಕೊಂಡಿವೆ. ಚಹಾ ಗುಲಾಬಿಗಳ ಬಣ್ಣಗಳ ಶ್ರೇಣಿಯಲ್ಲಿ ಬಿಳಿ, ನಸುಗೆಂಪು ಮತ್ತು (ಈ ಸಮಯದ ನವೀನತೆಯಾದ) ಹಳದಿಯಿಂದ ಕಿತ್ತಳೆಯ ಎಳೆಗೆಂಪು ಬಣ್ಣದವರೆಗಿನ ಬಣ್ಣದ ಛಾಯೆಗಳು ಸೇರಿಕೊಂಡಿವೆ. ಅನೇಕ ತಳಿಗಳ ಒಂದೊಂದು ಹೂವುಗಳೂ ಅರೆ-ಲೋಲಕದಂತಿದ್ದು, ಕೃಶವಾಗಿರುವ ಹೂತೊಟ್ಟುಗಳ ಕಾರಣದಿಂದಾಗಿ ತೂಗಾಡುತ್ತಿರುತ್ತವೆ. "ವಿಶಿಷ್ಟವಾದ" ಚಹಾ ಗುಲಾಬಿಯೊಂದರಲ್ಲಿ, ಮೊನಚಾಗಿರುವ ಮೊಗ್ಗುಗಳು ಉನ್ನತ-ಮಧ್ಯಭಾಗದ ಹೂವುಗಳನ್ನು ಹೊಮ್ಮಿಸುತ್ತವೆ. ಈ ಹೂವುಗಳು ಸುರುಳಿಯಾಕಾರದಲ್ಲಿ ಬಿಚ್ಚಿ ಹರಡಿಕೊಳ್ಳುತ್ತವೆ ಮತ್ತು ದಳಗಳು ಅಂಚಿನ ಭಾಗದಲ್ಲಿ ಹಿಂದಕ್ಕೆ ಸುತ್ತಿಕೊಳ್ಳುತ್ತವೆ. ಇದರಿಂದಾಗಿ ದಳವು ಚೂಪಾದ ತುದಿಯನ್ನು ಹೊಂದಿರುವಂತೆ ಕಾಣುತ್ತದೆ. ಹೀಗಾಗಿ ಚಹಾ ಗುಲಾಬಿಗಳು ಇಂದಿನ "ಶಿಷ್ಟ" ಹೂಬೆಳೆಗಾರರ ಗುಲಾಬಿ ಸ್ವರೂಪದ ಸೃಷ್ಟಿಕರ್ತರಾಗಿವೆ. ಗುಲಾಬಿ ಇತಿಹಾಸಕಾರರಾದ ಬ್ರೆಂಟ್ ಡಿಕರ್ಸನ್ ಪ್ರಕಾರ, ಚಹಾ ಗುಲಾಬಿಯ ವರ್ಗೀಕರಣವು ಸಸ್ಯಶಾಸ್ತ್ರಕ್ಕೆ ಋಣಿಯಾಗಿರುವಂತೆಯೇ ಮಾರಾಟಗಾರಿಕೆಗೂ ಋಣಿಯಾಗಿದೆ. ಏಕೆಂದರೆ, 19ನೇ ಶತಮಾನದ ಸಸ್ಯತೋಟದ ಮಾರಾಟಗಾರರು ತಮ್ಮ ಏಷ್ಯಾ-ಆಧರಿತ ತಳಿಗಳಲ್ಲಿ ಬಯಸಿದ ಚಹಾ ಹೂವಿನ ಸ್ವರೂಪ ಕಂಡುಬಂದರೆ, ಆ ತಳಿಗೆ "ಚಹಾ ಗುಲಾಬಿಗಳು" ಎಂಬುದಾಗಿಯೂ, ಒಂದು ವೇಳೆ ಕಾಣಬರದಿದ್ದರೆ "ಚೈನಾ ಗುಲಾಬಿಗಳು" ಎಂಬುದಾಗಿಯೂ ಹಣೆಪಟ್ಟಿ ಕಟ್ಟುತ್ತಿದ್ದರು.<ref>{{Cite web |url=http://www.rdrop.com/~paul/chinas/index.html |title=ಆರ್ಕೈವ್ ನಕಲು |access-date=2009-10-29 |archive-date=2009-12-02 |archive-url=https://web.archive.org/web/20091202172438/http://www.rdrop.com/~paul/chinas/index.html |url-status=dead }}</ref> ಚೈನಾ ಗುಲಾಬಿಗಳಂತೆ ಚಹಾ ಗುಲಾಬಿಗಳೂ ಸಹ ಶೀತದ ಹವಾಗುಣವನ್ನು ಸಹಿಸುವುದಿಲ್ಲ. ಉದಾಹರಣೆಗಳು: 'ಲೇಡಿ ಹಿಲ್ಲಿಂಗ್ಡನ್', 'ಮೆಮಾನ್ ಕೊಶೆಟ್'.
[[ಚಿತ್ರ:Rosa 'Climbing Souvenir de la Malmaison'.JPG|thumb|125px|right|ಬರ್ಬನ್ ಗುಲಾಬಿ 'ಕ್ಲೈಂಬಿಂಗ್ ಸಾವನಿರ್ ಡಿ ಲಾ ಮ್ಯಾಲ್ಮೇಷನ್',(ಬೆಲ್ಯೂಝ್ 1843/ಬೆನೆಟ್ 1893)]]
==== ಬರ್ಬನ್ ====
ಹಿಂದೂ ಮಹಾಸಾಗರದಲ್ಲಿನ ಮಡಗಾಸ್ಕರ್ ತೀರಪ್ರದೇಶದ ಆಚೆಗಿರುವ ಲಿಟ್ಲ್ ಡಿ ಬರ್ಬನ್ನಲ್ಲಿ (ಈಗ ಅದನ್ನು [[ರಿಯೂನಿಯನ್|ರೀಯೂನಿಯನ್]] ಎಂದು ಕರೆಯಲಾಗುತ್ತದೆ) ಬರ್ಬನ್ಗಳು ಸೃಷ್ಟಿಯಾದವು. ಪ್ರಾಯಶಃ ಅವು, ಶರತ್ಕಾಲದ ದಮಾಸ್ಕ್ ಹಾಗೂ 'ಹಳೆಯ ನಸುಗೆಂಪು' ಬಣ್ಣದ ಚೈನಾ ಗುಲಾಬಿಗಳ ನಡುವಿನ ಸಂಕರೀಕರಣದ ಫಲವಾಗಿ ರೂಪುಗೊಂಡಿರಬಹುದಾಗಿದೆ. ಈ ಎರಡೂ ಬಗೆಗಳನ್ನೂ ಸದರಿ ದ್ವೀಪದಲ್ಲಿ ಬೇಲಿಯ ಸಾಮಗ್ರಿಗಳಾಗಿ ಸಾಧಾರಣವಾಗಿ ಬಳಸಲಾಗುತ್ತಿತ್ತು. ಬಲವಾಗಿ ಬೆಳೆದಿರುವ, ಆಗಾಗ ಅರೆಯಾಗಿ-ಹಬ್ಬುವ ಪೊದೆಸಸ್ಯಗಳ ಮೇಲೆ ಅವು ಮತ್ತೆ ಮತ್ತೆ ಹೂಬಿಡುವ ಸ್ವಭಾವ ಹೊಂದಿದ್ದು, ಅವುಗಳ ಎಲೆಗೊಂಚಲುಗಳು ಹೊಳಪಿನಿಂದ ಕೂಡಿದ್ದರೆ, ಜಲ್ಲೆಗಳು ನೇರಳೆ ಛಾಯೆಯಲ್ಲಿರುತ್ತವೆ. 1823ರಲ್ಲಿ ಅವು [[ಫ್ರಾನ್ಸ್|ಫ್ರಾನ್ಸ್]]ನಲ್ಲಿ ಮೊದಲಿಗೆ ಪರಿಚಯಿಸಲ್ಪಟ್ಟವು. ಉದಾಹರಣೆಗಳು: 'ಲೂಯಿಸ್ ಒಡಿಯರ್', 'ಮೇಡಂ. ಪಿಯರೆ ಓಗರ್', 'ಝೆಫಿರೈನ್ ಡ್ರೌಹಿನ್'.
[[ಚಿತ್ರ:Rosa 'Desprez a fleurs jaunes'.jpg|thumb|115px|left|ನಾಯ್ಸೆಟ್ ಗುಲಾಬಿ 'ಡೆಸ್ಪ್ರೆಝ್ ಎ ಫ್ಲ್ಯೂರ್ಸ್ ಜೌನ್ಸ್' (ಡೆಸ್ಪ್ರೆಝ್ 1830)]]
==== ನಾಯ್ಸೆಟ್ ====
ದಕ್ಷಿಣ ಕರೊಲಿನಾದ ಜಾನ್ ಚಾಂಪ್ನೀಸ್ ಎಂಬ ಭತ್ತದ ಬೆಳೆಗಾರನೊಬ್ಬನಿಂದ ಬಿತ್ತಲ್ಪಟ್ಟ ಒಂದು ಮಿಶ್ರತಳಿಯ ಮೊಳಕೆ ಸಸಿಯಾಗಿ ಮೊಟ್ಟಮೊದಲ ನಾಯ್ಸೆಟ್ ಗುಲಾಬಿಯು ಮೈದಳೆಯಿತು. 'ಪಾರ್ಸನ್ಸ್ ಪಿಂಕ್' ಎಂಬ ಚೈನಾ ಗುಲಾಬಿ ಹಾಗೂ ಶರತ್ಕಾಲದಲ್ಲಿ ಹೂಬಿಡುವ ಕಸ್ತೂರಿ ಗುಲಾಬಿ (''ರೋಸಾ ಮೊಸ್ಚಾಟಾ'' ) ಇದರ ಸೃಷ್ಟಿಕರ್ತರಾಗಿದ್ದವು. ಇದರ ಸಂಕರೀಕರಣದ ಫಲವಾಗಿ, ವಸಂತ ಕಾಲದಿಂದ ಶರತ್ಕಾಲದವರೆಗೆ ಚಿಕ್ಕ ಚಿಕ್ಕ ನಸುಗೆಂಪು ಬಣ್ಣದ ಹೂವುಗಳನ್ನು ಒಳಗೊಂಡ ಬೃಹತ್ ಗೊಂಚಲುಗಳನ್ನು ಬಿಡುವ, ಬಲವಾಗಿ ಬೆಳೆದು ಹಬ್ಬುವ ಗುಲಾಬಿಯು ಮೈದಳೆಯಿತು. ತನ್ನ ('ಚಾಂಪ್ನೀಸ್ ಪಿಂಕ್ ಕ್ಲಸ್ಟರ್' ಎಂಬ ಹೆಸರಿನ) ಗುಲಾಬಿಯ ಮೊಳಕೆ ಸಸಿಗಳನ್ನು ಫಿಲಿಪ್ ನಾಯ್ಸೆಟ್ ಎಂಬ ತನ್ನ ತೋಟಗಾರಿಕಾ ಸ್ನೇಹಿತನಿಗೆ ಚಾಂಪ್ನೀಸ್ ಕಳಿಸಿದ. ಇದಕ್ಕೆ ಪ್ರತಿಯಾಗಿ ಆ ಸ್ನೇಹಿತ [[ಪ್ಯಾರಿಸ್]]ನಲ್ಲಿನ ತನ್ನ ಸೋದರ ಲೂಯಿಸ್ಗೆ ಗಿಡಗಳನ್ನು ಕಳಿಸಿದ. ಆಗ, 1817ರಲ್ಲಿ ಲೂಯಿಸ್ 'ಬ್ಲಷ್ ನಾಯ್ಸೆಟ್'ನ್ನು ಪರಿಚಯಿಸಿದ. ಮೊಟ್ಟಮೊದಲ ನಾಯ್ಸೆಟ್ಗಳು ಚಿಕ್ಕ-ಹೂವುಗಳನ್ನು ಹೊಂದಿದ್ದು, ಚಳಿಯನ್ನು ಸಮರ್ಥವಾಗಿ ತಡೆದುಕೊಳ್ಳಬಲ್ಲ ಏರುಬಳ್ಳಿಗಳಾಗಿದ್ದವು. ಆದರೆ ನಂತರದಲ್ಲಿ ಚಹಾ ಗುಲಾಬಿಯ ವಂಶವಾಹಿಗಳನ್ನು ಬೆರಕೆ ಮಾಡಿದ ಕಾರಣದಿಂದಾಗಿ, ಚಹಾ-ನಾಯ್ಸೆಟ್ ಉಪವರ್ಗವೊಂದು ಸೃಷ್ಟಿಯಾಯಿತು. ಈ ವರ್ಗದ ಸಸ್ಯಗಳಲ್ಲಿ ದೊಡ್ಡದಾದ ಹೂವುಗಳು, ಸಣ್ಣದಾದ ಗೊಂಚಲುಗಳು ಮತ್ತು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಚಳಿ ಸಹಿಷ್ಣುತೆಯು ಕಂಡುಬಂತು.ಉದಾಹರಣೆಗಳು: 'ಬ್ಲಷ್ ನಾಯ್ಸೆಟ್', 'ಮೇಡಮ್.ಆಲ್ಫ್ರೆಡ್ ಕ್ಯಾರೈರೆ' (ನಾಯ್ಸೆಟ್), 'ಮರಿಕಲ್ ನೀಲ್' (ಚಹಾ-ನಾಯ್ಸೆಟ್).(ನಾಯ್ಸೆಟ್ ಗುಲಾಬಿಗಳ ಕುರಿತಾದ [[:ಡಿ:ನಾಯ್ಸೆಟ್-ರೋಸ್|ಜರ್ಮನ್]] ಲೇಖನಗಳನ್ನು ನೋಡಿ).
==== ಸಾರ್ವಕಾಲಿಕ ಮಿಶ್ರತಳಿ ====
[[ಚಿತ್ರ:Rosa 'La Reine'.jpg|thumb|150px|right|ಸಾರ್ವಕಾಲಿಕ ಮಿಶ್ರತಳಿ ಗುಲಾಬಿ 'ಲಾ ರೀನ್' (ಲಾಫೆ 1844)]]
ಸಾರ್ವಕಾಲಿಕ ಮಿಶ್ರತಳಿ (''ಹೈಬ್ರೈಡ್ಸ್ ರೆಮೊಂಟ್ಯಾಂಟ್ಸ್'' ನ್ನು 'ಮತ್ತೆ ಅರಳುವ ಮಿಶ್ರತಳಿಗಳು' ಎಂದು ತಪ್ಪಾಗಿ ಭಾಷಾಂತರಿಸಲ್ಪಟ್ಟದ್ದು) ಎಂದು ಕರೆಯಲ್ಪಡುವ, ಗುಲಾಬಿಗಳ ಪ್ರಭಾವೀ ವರ್ಗವೊಂದು [[ವಿಕ್ಟೋರಿಯಾ ಯುಗ]]ದ ಇಂಗ್ಲೆಂಡ್ನಲ್ಲಿ 1838ರಲ್ಲಿ ಹೊರಹೊಮ್ಮಿತು. ವರ್ಷದಲ್ಲಿ ಒಂದಕ್ಕಿಂತ ಹೆಚ್ಚುಬಾರಿ ಹೂಬಿಡುವ ಏಷ್ಯಾದ ಗುಲಾಬಿಗಳನ್ನು ಹಳೆಯ ಯುರೋಪಿನ ವಂಶ ಪರಂಪರೆಗಳ ಗುಲಾಬಿಗಳೊಂದಿಗೆ ಯಶಸ್ವಿಯಾಗಿ ವಿಲೀನಗೊಳಿಸಿದ ಫಲವಾಗಿ ರೂಪುಗೊಂಡ ಮೊಟ್ಟಮೊದಲ ಗುಲಾಬಿಗಳಾಗಿದ್ದವು ಅವು.ಮರು-ಅರಳುವಿಕೆಯು ಒಂದು ಗೌಣ ಅಥವಾ ಪ್ರಭಾವಿಯಲ್ಲದ ಸ್ವಭಾವವಾಗಿರುವುದರಿಂದ, ಏಷ್ಯಾ/ಯುರೋಪ್ನ ಮಿಶ್ರತಳಿಗಳ (ಚೈನಾ ಗುಲಾಬಿಗಳ ಮಿಶ್ರತಳಿ, ಬರ್ಬನ್ ಗುಲಾಬಿಗಳ ಮಿಶ್ರತಳಿ, ನಾಯ್ಸೆಟ್ ಗುಲಾಬಿಗಳ ಮಿಶ್ರತಳಿ) ಮೊದಲ ಪೀಳಿಗೆಯು ಹತೋಟಿಗೆ ಸಿಗದೆ ಅಥವಾ ತಮ್ಮ ಪಟ್ಟುಬಿಡದೆ ಒಂದು ಸಲ ಮಾತ್ರವೇ ಹೂಬಿಡುವ ಸ್ವಭಾವವನ್ನು ಹೊಂದಿದ್ದವು. ಆದರೆ ಈ ಗುಲಾಬಿಗಳನ್ನು ಸ್ವತಃ ಅವುಗಳೊಂದಿಗೆ ಅಥವಾ ಚೈನಾ ಗುಲಾಬಿಗಳೊಂದಿಗೆ ಅಥವಾ ಚಹಾ ಗುಲಾಬಿಗಳೊಂದಿಗೆ ಮರು-ಸಂಕರಿಸಿದಾಗ, ಅವುಗಳ ಕೆಲವೊಂದು ಸಂತತಿಯು ಒಂದಕ್ಕಿಂತ ಹೆಚ್ಚು ಬಾರಿ ಹೂಬಿಡುವುದು ಕಂಡುಬಂತು.ಹೀಗಾಗಿ, ಸಾರ್ವಕಾಲಿಕ ಮಿಶ್ರತಳಿಗಳು ಒಂದು ರೀತಿಯ ಕಲಬೆರಕೆಯ ಸ್ವರೂಪವನ್ನು ಹೊಂದಿದ್ದವು. ಹೆಚ್ಚು ವ್ಯಾಪ್ತಿಯ ಬರ್ಬನ್ ಗುಲಾಬಿಗಳಿಂದ ಮೊದಲ್ಗೊಂಡು, ಚೈನಾ, ಚಹಾ, ದಮಾಸ್ಕ್, ಗ್ಯಾಲಿಕ್ ಗುಲಾಬಿಗಳ ಕಲಬೆರಕೆಯೊಂದಿಗೆ ಮತ್ತು ಕಡಿಮೆ ವ್ಯಾಪ್ತಿಯ ನಾಯ್ಸೆಟ್, ಆಲ್ಬಾ ಮತ್ತು ಕಡೆಗೆ ಸೆಂಟಿಫೋಲಿಯಾ ಗುಲಾಬಿಗಳನ್ನು ಸೇರಿಸಿಕೊಂಡು ರೂಪಿಸಿದ ಒಂದು ಅಡಕುಚೀಲದ ವರ್ಗವಾಗಿ ಅದು ರೂಪುಗೊಂಡಿತ್ತು.<ref>{{Cite web |url=http://www.rdrop.com/~paul/dickerson_HP.html |title=ಆರ್ಕೈವ್ ನಕಲು |access-date=2009-10-29 |archive-date=2010-01-23 |archive-url=https://web.archive.org/web/20100123152612/http://www.rdrop.com/~paul/dickerson_HP.html |url-status=dead }}</ref> ಆ ಸಮಯದಲ್ಲಿ, ಉತ್ತರ ಯುರೋಪ್ನ ಅತ್ಯಂತ ಜನಪ್ರಿಯ, ಉದ್ಯಾನದ ಮತ್ತು ಹೂತೋಟಗಾರರ ಗುಲಾಬಿಗಳಾಗಿ ಅವು ರೂಪುಗೊಂಡವು. ಏಕೆಂದರೆ, ನವಿರಾದ ಚಹಾ ಗುಲಾಬಿಗಳು ಶೀತದ ಹವಾಮಾನದಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ ಮತ್ತು ಸಾರ್ವಕಾಲಿಕ ಮಿಶ್ರತಳಿಗಳ ಅತಿ ದೊಡ್ಡದಾದ ಹೂವುಗಳು ಸ್ಪರ್ಧಾತ್ಮಕ ಪ್ರದರ್ಶನಗಳೆಂಬ ಹೊಸ ವಿದ್ಯಮಾನಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತಿದ್ದುದರಿಂದ ಈ ಪರಿಸ್ಥಿತಿ ಕಂಡುಬಂತು.ಸದರಿ ಹೆಸರಿನಲ್ಲಿರುವ "ಸಾರ್ವಕಾಲಿಕ" ಎಂಬ ಪದವೇ ಮತ್ತೆ ಮತ್ತೆ ಹೂಬಿಡುವುದರ ಕುರಿತು ಸುಳಿವುಗಳನ್ನು ನೀಡುತ್ತದೆ. ಆದರೆ ಈ ವರ್ಗದ ಅನೇಕ ಬಗೆಗಳ ಮತ್ತೆ ಮತ್ತೆ ಹೂಬಿಡುವ ಸ್ವಭಾವವು ದುರ್ಬಲವಾಗಿತ್ತು. ಅಂದರೆ, ವಸಂತಕಾಲದಲ್ಲಿ ಮಿತಿಮೀರಿ ಹೂಬಿಡುವುದು, ಇದಾದ ನಂತರ ಬೇಸಿಗೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದಂತೆ ಹೂಬಿಡುವುದು ಅಥವಾ ಮುಂದಿನ ವಸಂತಕಾಲದವರೆಗೆ ಹೂವನ್ನೇ ಬಿಡದಿರುವುದು ಇವೇ ಮೊದಲಾದವು ಈ ವರ್ಗದ ಸ್ವಭಾವವಾಗಿತ್ತು. ಸೀಮಿತವಾಗಿದ್ದ ಬಣ್ಣದ ವರ್ಣವ್ಯಾಪ್ತಿಯ (ಬಿಳಿ, ನಸುಗೆಂಪು, ಕೆಂಪು) ಕಾರಣದಿಂದ ಮತ್ತು ವಿಶ್ವಾಸಾರ್ಹವಾದ ಪುನರಾವರ್ತಿತ-ಹೂಬಿಡುವಿಕೆಯು ಇಲ್ಲವಾದ್ದರಿಂದ, ಸಾರ್ವಕಾಲಿಕ ಮಿಶ್ರತಳಿಗಳು ಕೊನೆಗೆ ತಮ್ಮದೇ ಸ್ವಂತದ ಕುಲಕ್ಕೆ ಸೇರಿದ ಮಿಶ್ರತಳಿ ಚಹಾ ಗುಲಾಬಿಗಳಿಂದ ನಿಸ್ತೇಜಗೊಳಿಸಲ್ಪಟ್ಟವು.ಉದಾಹರಣೆಗಳು: 'ಫರ್ಡಿನೆಂಡ್ ಪಿಚರ್ಡ್', 'ರಿನೈನ್ ಡೆಸ್ ವಯೋಲೆಟ್ಸ್', 'ಪಾಲ್ ನೆಯ್ರಾನ್'.
==== ಕಸ್ತೂರಿ ಮಿಶ್ರತಳಿ ====
[[ಚಿತ್ರ:HMMoonlight.JPG|thumb|right|ಮಿಶ್ರ ತಳಿ ಕಸ್ತೂರಿ ಗುಲಾಬಿ 'ಮೂನ್ಲೈಟ್' (ಪೆಂಬರ್ಟನ್ 1913)]]
20ನೇ ಶತಮಾನದ ಮೊದಲ ದಶಕಗಳಲ್ಲಿ, ಕಸ್ತೂರಿ ಮಿಶ್ರತಳಿಯ ಗುಂಪನ್ನು ಮೊಟ್ಟಮೊದಲು ರೆ. [[ಜೋಸೆಫ್ ಪೆಂಬರ್ಟನ್]] ಎಂಬ ಓರ್ವ ಬ್ರಿಟಿಷ್ ಗುಲಾಬಿ ತೋಟಗಾರ ಅಭಿವೃದ್ಧಿಪಡಿಸಿದರು. 1896ರಲ್ಲಿ ಪೀಟರ್ ಲ್ಯಾಂಬರ್ಟ್ ಎಂಬುವವರು ಕೈಗೊಂಡಿದ್ದ 'ಅಗ್ಲೈಯಾ' ಎಂಬ ಬೆರಕೆ-ತಳಿಯನ್ನು ಇದು ಆಧರಿಸಿತ್ತು. ಈ ಗುಲಾಬಿಯ ಮೊಳಕೆ ಸಸಿಯಾದ 'ಟ್ರೈಯರ್'ನ್ನು ಈ ವರ್ಗದ ಅಡಿಪಾಯ ಎಂದು ಪರಿಗಣಿಸಲಾಗಿದೆ.ಕೆಲವೊಂದು ಸೃಷ್ಟಿಕರ್ತ ಅಥವಾ ಮೂಲ ಸಸ್ಯಗಳು ಅಜ್ಞಾತವಾಗಿರುವುದರಿಂದಾಗಿ, ಈ ವರ್ಗದ ತಳಿಶಾಸ್ತ್ರವು ಒಂದು ರೀತಿಯಲ್ಲಿ ಅಸ್ಪಷ್ಟವಾಗಿದೆ.ಆದರೂ ಸಹ, ''ರೋಸ್ ಮಲ್ಟಿಫ್ಲೋರಾ'' ವು ಒಂದು ಸೃಷ್ಟಿಕರ್ತ ಸಸ್ಯವಾಗಿ ಗುರುತಿಸಲ್ಪಟ್ಟಿದ್ದು, ''R. ಮೊಸ್ಚಾಟಾ'' (ಕಸ್ತೂರಿ ಗುಲಾಬಿ) ಪ್ರಕಾರವು ಆ ಹೆಸರು ಸೂಚಿಸುವ ಪ್ರಮಾಣಕ್ಕಿಂತ ಕಡಿಮೆ ಪ್ರಾಧಾನ್ಯತೆ ಹೊಂದಿದೆ ಎಂದು ಪರಿಗಣಿಸಲಾಗಿದ್ದರೂ ಕೂಡಾ ಇದರ ಪರಂಪರೆಯಲ್ಲೇ ಸೇರಿಕೊಂಡಿದೆ. ಕಸ್ತೂರಿ ಮಿಶ್ರತಳಿಗಳು ರೋಗ-ನಿರೋಧಕತೆಯುಳ್ಳ, ವರ್ಷದಲ್ಲಿ ಒಂದಕ್ಕಿಂತ ಹೆಚ್ಚುಬಾರಿ ಹೂಬಿಡುವ ಮತ್ತು ಗೊಂಚಲಿನಲ್ಲಿ ಹೂಬಿಡುವ ತಳಿಗಳಾಗಿದ್ದು, ಅವುಗಳ ಗುಣವಿಶೇಷವಾದ ಪ್ರಬಲ "ಕಸ್ತೂರಿ" ಪರಿಮಳವನ್ನು ಹೊಂದಿರುತ್ತವೆ.<ref>{{cite web|url=http://www.rosegathering.com/hybridmusks.html|title=Hybrid Musks|author=Filiberti, Daphne|access-date=2009-10-29|archive-date=2009-08-15|archive-url=https://web.archive.org/web/20090815032318/http://www.rosegathering.com/hybridmusks.html|url-status=dead}}</ref><ref>{{cite web|url=http://rdrop.com/~paul/musks/index.html|title=Hybrid Musks|author=Bardon, Paul|access-date=2009-10-29|archive-date=2009-09-25|archive-url=https://web.archive.org/web/20090925054403/http://www.rdrop.com/~paul/musks/index.html|url-status=dead}}</ref>'ಬಫ್ ಬ್ಯೂಟಿ' ಮತ್ತು 'ಪೆನೆಲೋಪ್' ಇದರ ಉದಾಹರಣೆಗಳಲ್ಲಿ ಸೇರಿವೆ.
==== ಬರ್ಮುಡಾದ "ನಿಗೂಢ" ಗುಲಾಬಿಗಳು ====
ಹಲವಾರು ಡಜನ್ಗಳಷ್ಟು "ಗೋಚರಿತ" ಗುಲಾಬಿಗಳ ಒಂದು ಗುಂಪನ್ನು [[ಬರ್ಮುಡಾ]]ದಲ್ಲಿ ಕಡೇಪಕ್ಷ ಒಂದು ಶತಮಾನದಿಂದ ಬೆಳೆಯಲಾಗುತ್ತಿದೆ.ಉಷ್ಣವಲಯ ಮತ್ತು ಅರೆ-ಉಷ್ಣವಲಯದ ಪ್ರಾಂತ್ಯಗಳಲ್ಲಿ ಗುಲಾಬಿಗಳನ್ನು ಬೆಳೆಯುತ್ತಿರುವವರಿಗೆ ಇವು ಗಣನೀಯ ಮೌಲ್ಯ ಮತ್ತು ಪ್ರಯೋಜನವನ್ನು ತಂದುಕೊಟ್ಟಿವೆ. ಏಕೆಂದರೆ, ಹೆಚ್ಚು ಉಷ್ಣಾಂಶವಿರುವ, ಆರ್ದ್ರತೆಯ ಪ್ರದೇಶಗಳಲ್ಲಿನ ಗುಲಾಬಿ ಕೃಷಿಗೆ ಅನಿಷ್ಟದಂತೆ ಬಂದೆರಗಿ, ಬಿಸಿ ಮತ್ತು ಆರ್ದ್ರತೆಯ ಹವಾಮಾನಗಳೆರಡರಲ್ಲೂ ಬೆಳೆಯಬಲ್ಲ [[ನೆಮಟೋಡ್|ನೆಮಟೋಡ್ ವರ್ಗದ ಹುಳುಗಳು]] ಒಡ್ಡುವ ಹಾನಿ ಮತ್ತು [[ಕಪ್ಪು ಚುಕ್ಕೆ|ಶಿಲೀಂಧ್ರ ರೋಗ]]ಗಳೆರಡಕ್ಕೂ ಈ ಗುಲಾಬಿಗಳು ಹೆಚ್ಚು ಪ್ರತಿರೋಧಕತೆಯನ್ನು ಒಡ್ಡುತ್ತವೆ. ಈ ಗುಲಾಬಿಗಳಲ್ಲಿ ಬಹುತೇಕವಾದವು ಭರವಸೆದಾಯಕವಾದ ಹಳೆಯ ಉದ್ಯಾನ ಗುಲಾಬಿ ತಳಿಗಳಾಗಿರುವುದರಿಂದಲೇ ಕೃಷಿ ಚಟುವಟಿಕೆ ಅಥವಾ ನಂತರದಲ್ಲಿನ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿನ ಬಳಕೆಯಿಂದ ಅವುಗಳನ್ನು ಹೊರಗಿಟ್ಟಿಲ್ಲ.ಅವುಗಳ "ಸೂಕ್ತ" ಚರಿತ್ರಾರ್ಹ ಹೆಸರುಗಳು ಕಳೆದುಹೋಗಿರುವುದರಿಂದ ಅವು "ನಿಗೂಢ ಗುಲಾಬಿಗಳು" ಎಂದೇ ಕರೆಯಲ್ಪಟ್ಟಿವೆ. ಪರಂಪರಾನುಗತವಾಗಿ ಬಂದಿರುವ ನಂಬಿಕೆಯು ಸೂಚಿಸುವ ಅಥವಾ ನಿದೇಶಿಸುವ ಪ್ರಕಾರ, ಅವು ಮರು-ಆವಿಷ್ಕರಿಸಲ್ಪಟ್ಟ ಉದ್ಯಾನದ ಮಾಲೀಕನ ಹೆಸರನ್ನೇ ಅವುಗಳಿಗೂ ಇಡಲಾಗಿದೆ.
==== ರೂಗೋಸಾ ಮಿಶ್ರತಳಿ ====
[[ಚಿತ್ರ:Rosa 'Blanc Double de Coubert'.jpg|thumb|left|ರೂಗೋಸಾ ಗುಲಾಬಿ 'ಬ್ಲಾಂಕ್ ಡಬಲ್ ಡಿ ಕೌಬರ್ಟ್' (ಕೊಚೆಟ್ 1893)]]
R.ರೂಗೋಸಾ ಜಾತಿಯಿಂದ ಹುಟ್ಟಿರುವ, ಬಲವಾಗಿ ಬೆಳೆದ ಈ ಗುಲಾಬಿಗಳು ಅತೀವ ಪ್ರಮಾಣದ ಸಹಿಷ್ಣುತೆಯೊಂದಿಗೆ ಅದ್ಭುತವಾದ ರೋಗ-ನಿರೋಧಕತೆಯನ್ನು ಹೊಂದಿವೆ.ಈ ಪ್ರಕಾರದ ಬಹುತೇಕ ಗುಲಾಬಿಗಳು ಅತೀವವಾದ ಸುವಾಸನೆಯನ್ನು ಹೊಂದಿದ್ದು, ಪುನರಾವರ್ತಿತ ಹೂವುಗಳನ್ನು ಬಿಡುವ ಸಸ್ಯಗಳಾಗಿವೆ ಮತ್ತು ಅತಿರೇಕವಿಲ್ಲದ ಬಹುದಳಗಳ ಹೂವುಗಳನ್ನು ಹೊಂದಿರುತ್ತವೆ. ಸುಕ್ಕುಗಟ್ಟಿದ ಎಲೆಗಳನ್ನು ಹೊಂದಿರುವುದು ರೂಗೋಸಾ ಮಿಶ್ರತಳಿಯ ಗುಲಾಬಿಯೊಂದರ ನಿರ್ದಿಷ್ಟ ಗುಣಲಕ್ಷಣವಾಗಿದೆ. ಆದರೆ ಕೆಲವೊಂದು ಮಿಶ್ರತಳಿಗಳಲ್ಲಿ ಈ ಗುಣವು ಕಾಣಬರುವುದಿಲ್ಲ.ಈ ಗುಲಾಬಿಗಳು ಆಗಿಂದಾಗ್ಗೆ ಗುಲಾಬಿ ಹಣ್ಣುಗಳನ್ನು ಬಿಡುತ್ತವೆ.ಇದರ ಉದಾಹರಣೆಗಳಲ್ಲಿ 'ಹನ್ಸಾ' ಮತ್ತು 'ರೊಸೇರಯೇ ಡಿ ಐ 'ಹೇ' ಸೇರಿವೆ.
==== ಇತರೆ ====
ಗುಲಾಬಿಗಳಲ್ಲಿ (ಸ್ಕಾಟ್ಸ್, ಸ್ವೀಟ್ ಬ್ರೈಯರ್ನಂತಹ) ಕೆಲವೊಂದು ಚಿಕ್ಕ ವರ್ಗಗಳೂ ಮತ್ತು ಹಳೆಯ ಗುಲಾಬಿಗಳ (ಐರ್ಶೈರ್, ಕ್ಲೈಂಬಿಂಗ್ ಚೈನಾ, ಲೆವಿಗೇಟಾ, ಸೆಂಪರ್ವಿರೆನ್ಸ್, ಬೌರ್ಸಾಲ್ಟ್, ಕ್ಲೈಂಬಿಂಗ್ ಟೀ, ಮತ್ತು ಕ್ಲೈಂಬಿಂಗ್ ಬರ್ಬನ್ ಸೇರಿದಂತೆ) ಕೆಲವೊಂದು ಏರುಬಳ್ಳಿಯ ವರ್ಗಗಳೂ ಇವೆ.ಏರುಬಳ್ಳಿ ಮತ್ತು ಪೊದೆಸಸ್ಯದ ಸ್ವರೂಪಗಳೆರಡನ್ನೂ ಹೊಂದಿರುವ ವರ್ಗಗಳನ್ನು ಒಮ್ಮೊಮ್ಮೆ ಒಟ್ಟಿಗೆ ಸೇರಿಸಲಾಗಿದೆ.
=== ಆಧುನಿಕ ಉದ್ಯಾನ ಗುಲಾಬಿಗಳು ===
[[ಚಿತ್ರ:Rose at University of the Pacific.JPG|thumb|right|ಪೆಸಿಫಿಕ್ ವಿಶ್ವವಿದ್ಯಾಲಯದಲ್ಲಿನ (ಸಂಯುಕ್ತ ಸಂಸ್ಥಾನಗಳು) ಒಂದು ಆಧುನಿಕ ಉದ್ಯಾನ ಗುಲಾಬಿ.]]
ಅನೇಕ ಆಧುನಿಕ ಗುಲಾಬಿಗಳು ತಮ್ಮ ವಂಶ ಪರಂಪರೆಯಲ್ಲಿ ಹಳೆಯ ಉದ್ಯಾನ ಗುಲಾಬಿಗಳನ್ನು ಹೊಂದಿರುವುದರಿಂದ ಮತ್ತು ಅವುಗಳ ಸ್ವರೂಪವು ಬಹಳಷ್ಟು ಬದಲಾಗುತ್ತಾ ಹೋಗುವುದರಿಂದ, ಆಧುನಿಕ ಗುಲಾಬಿಗಳ ವರ್ಗೀಕರಣವು ಕೊಂಚ ಗೊಂದಲಮಯವಾಗಿ ಕಾಣಿಸಬಹುದು. ಗುಲಾಬಿಗಳ ಬೆಳವಣಿಗೆ ಹಾಗೂ ಹೂಬಿಡುವ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಣಗಳನ್ನು ಕೈಗೊಳ್ಳಬಹುದು. ಉದಾಹರಣೆಗೆ, "ದೊಡ್ಡ-ಹೂವುಗಳ ಪೊದೆಸಸ್ಯ", "ಮತ್ತೆ ಮತ್ತೆ ಹೂಬಿಡುವ, ದೊಡ್ಡ-ಹೂವುಗಳ ಪೊದೆಸಸ್ಯ", "ಗೊಂಚಲು-ಹೂವುಗಳ", "ಹಬ್ಬುವ, ಮತ್ತೆ ಮತ್ತೆ ಹೂಬಿಡುವ" ಅಥವಾ "ವ್ಯಾಪಿಸಿರುವ ಪದೇ ಪದೇ ಹೂಬಿಡದ" ಗುಲಾಬಿಗಳು ಎಂಬುದು ಈ ಗುಣಲಕ್ಷಣಗಳ ಪಟ್ಟಿಗೆ ಸೇರಿತ್ತವೆ.
ಆಧುನಿಕ ಉದ್ಯಾನ ಗುಲಾಬಿಗಳ ಅತಿ ಗಮನಾರ್ಹ ಮತ್ತು ಜನಪ್ರಿಯ ವರ್ಗೀಕರಣಗಳಲ್ಲಿ ಈ ಕೆಳಗಿನವು ಸೇರಿಕೊಂಡಿವೆ:
==== ಮಿಶ್ರತಳಿ ಚಹಾ ====
[[ಚಿತ್ರ:Memorium Hybrid Tea 3.jpg|thumb|left|180px|ಒಂದು 'ಮೆಮೋರಿಯಂ' ಮಿಶ್ರ ತಳಿ ಚಹಾ ಗುಲಾಬಿ (ವಾನ್ ಅಬ್ರಾಮ್ಸ್ 1962)]]
1800ರ ದಶಕದ ಅಂತ್ಯದಲ್ಲಿ ಚಹಾ ಗುಲಾಬಿಗಳೊಂದಿಗೆ ಸಾರ್ವಕಾಲಿಕ ಮಿಶ್ರತಳಿಗಳನ್ನು ಸಂಕರೀಕರಿಸುವ ಮೂಲಕ, ಆಧುನಿಕ ಗುಲಾಬಿಗಳ ಇತಿಹಾಸವನ್ನಾವರಿಸಿರುವ ಅಚ್ಚುಮೆಚ್ಚಿನ ಗುಲಾಬಿಯಾಗಿರುವ [[ಮಿಶ್ರ ತಳಿ ಚಹಾ|ಮಿಶ್ರತಳಿ ಚಹಾ ಗುಲಾಬಿಗಳು]] ಪ್ರಾರಂಭದಲ್ಲಿ ಸೃಷ್ಟಿಸಲ್ಪಟ್ಟವು. 1867ರಲ್ಲಿ ಸೃಷ್ಟಿಸಲ್ಪಟ್ಟ [[ರೋಸಾ 'ಲಾ ಫ್ರಾನ್ಸ್'|'ಲಾ ಫ್ರಾನ್ಸ್']] ವರ್ಗವು ಗುಲಾಬಿಗಳ ಒಂದು ಹೊಸ ವರ್ಗದ ಮೊಟ್ಟಮೊದಲ ಸೂಚನೆ ಎಂದು ವಿಶ್ವಾದ್ಯಂತ ಅಂಗೀಕರಿಸಲ್ಪಟ್ಟಿದೆ. ಮಿಶ್ರತಳಿ ಚಹಾ ಗುಲಾಬಿಗಳು ತಮ್ಮ ಎರಡೂ ಮೂಲಸಸ್ಯಗಳ ನಡುವಿನ ಮಧ್ಯದ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಅಂದರೆ, ಅವು ಚಹಾ ಗುಲಾಬಿಗಳಿಗಿಂತ ಹೆಚ್ಚು ಸಹಿಷ್ಣುಗಳಾಗಿರುತ್ತವೆ, ಆದರೆ ಸಾರ್ವಕಾಲಿಕ ಮಿಶ್ರತಳಿಗಳಿಗಿಂತ ಕಡಿಮೆ ಸಹಿಷ್ಣುಗಳಾಗಿರುತ್ತವೆ. ಅಷ್ಟೇ ಅಲ್ಲ, ಅವು ಸಾರ್ವಕಾಲಿಕ ಮಿಶ್ರತಳಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯಾವಾಗಲೂ ಹೂಬಿಡುತ್ತಿರುತ್ತವೆ, ಆದರೆ ಈ ಪ್ರಮಾಣ ಚಹಾ ಗುಲಾಬಿಗಳಿಗಿಂತ ಕಡಿಮೆಯಿರುತ್ತದೆ.
ದೊಡ್ಡದಾದ, ಉನ್ನತ-ಮಧ್ಯಭಾಗದ ಮೊಗ್ಗುಗಳೊಂದಿಗೆ ಹೂವುಗಳು ಚೆನ್ನಾಗಿ-ರೂಪುಗೊಂಡಿದ್ದು, ಹೂಬಿಡುವ ಪ್ರತಿಯೊಂದು ಕಾಂಡದ ತುದಿಯಲ್ಲೂ ಒಂದು ಸುಂದರವಾದ ಹೂವು ವಿಶಿಷ್ಟವಾಗಿ ಸ್ಥಿತವಾಗಿರುತ್ತದೆ. ಬಿಗಿಯಾಗಿ ನೆಟ್ಟಗೆ ನಿಲ್ಲುವ ಈ ಪೊದೆಸಸ್ಯಗಳು ವಿರಳವಾಗಿ ಜೋಡಿಸಲ್ಪಟ್ಟ ಎಲೆಗಳನ್ನು ಹೊಂದಿದ್ದು, ಅದನ್ನೇ ಈಗ ಭೂದೃಶ್ಯದ ತೋಟಗಾರಿಕೆಯಲ್ಲಿ ಒಂದು ಬಾಧ್ಯತೆಯನ್ನಾಗಿ ಕಾಣಲಾಗುತ್ತದೆ. ಮಿಶ್ರತಳಿ ಚಹಾ ಗುಲಾಬಿಗಳು 20ನೇ ಶತಮಾನದ ಉದ್ಯಾನ ಗುಲಾಬಿಗಳ ಅತ್ಯಂತ ಜನಪ್ರಿಯವಾದ ಏಕೈಕ ವರ್ಗವಾಗಿ ರೂಪುಗೊಂಡಿದ್ದವು. ಇಂದು, ಇತರ ಅನೇಕ ಗುಲಾಬಿ ವರ್ಗಗಳಿಗಿಂತ ಈ ವರ್ಗವು ಹೆಚ್ಚಿನ ಪ್ರಮಾಣದಲ್ಲಿ ಉನ್ನತ ನಿರ್ವಹಣೆಯನ್ನು ಅಥವಾ ಪೋಷಣೆಯನ್ನು ಬಯಸುತ್ತವೆ ಎಂಬ ಅವುಗಳ ಖ್ಯಾತಿಯೇ ಅದಕ್ಕೆ ಮುಳುವಾಗಿದೆ. ಹೀಗಾಗಿ, ತೋಟಗಾರರ ವಲಯದಲ್ಲಿ ಮಿಶ್ರತಳಿ ಚಹಾ ಗುಲಾಬಿಯ ಜನಪ್ರಿಯತೆಯು ಕುಸಿದಿದ್ದು, ಭೂದೃಶ್ಯ ತೋಟಗಾರರೂ ಸಹ ಕಡಿಮೆ-ಪೋಷಣೆ ಅಥವಾ ನಿರ್ವಹಣೆಯ "ಭೂದೃಶ್ಯ ತೋಟಗಾರಿಕಾ" ಗುಲಾಬಿಗಳ ಕಡೆಗೇ ಒಲವು ತೋರಿಸುತ್ತಿದ್ದಾರೆ. ಆದಾಗ್ಯೂ, ಮಿಶ್ರತಳಿ ಚಹಾ ಗುಲಾಬಿಯು ಪುಷ್ಪೋದ್ಯಮದ ಶಿಷ್ಟ ಗುಲಾಬಿಯಾಗಿ ಉಳಿದುಕೊಂಡಿದ್ದು, ಔಪಚಾರಿಕ ಸನ್ನಿವೇಶಗಳಲ್ಲಿನ ಸಣ್ಣಪುಟ್ಟ ಉದ್ಯಾನಗಳಲ್ಲಿ ಈಗಲೂ ಅದೇ ಮಾನ್ಯತೆ ಪಡೆದಿದೆ.
ಉದಾಹರಣೆಗಳು: '[[ಪೀಸ್ (ಗುಲಾಬಿ)|ಪೀಸ್]]' (ಹಳದಿ), '[[ರೋಸಾ 'ಮಿಸ್ಟರ್ ಲಿಂಕನ್'|ಮಿಸ್ಟರ್ ಲಿಂಕನ್]] (ಕೆಂಪು), 'ಡಬಲ್ ಡಿಲೈಟ್' (ದ್ವಿ-ವರ್ಣ ಕೆನೆ ಮತ್ತು ಕೆಂಪು).
==== ಪರ್ನೇಷಿಯಾನ ====
[[ಚಿತ್ರ:Rosa 'Soleil d'or2'.jpg|thumb|135px|ಪರ್ನೇಷಿಯಾನ ಗುಲಾಬಿ 'ಸೊಲೈಲ್ ದಿ ಓರ್', ಅದರ ವರ್ಗದಲ್ಲೇ ಮೊದಲನೆಯದು (ಪರ್ನೆಟ್ 1900)]]
ಆಸ್ಟ್ರಿಯಾದ ಹಳೆಯ ಸುವಾಸಿತ ಕಾಡುಗುಲಾಬಿಯಿಂದ (''ರೋಸಾ ಫೀಟಿಡಾ'' ) ಪಡೆದ ವಂಶವಾಹಿಗಳನ್ನು, 1990ರಲ್ಲಿ ತಾನು ಪರಿಚಯಿಸಿದ 'ಸೊಲೀಲ್ ಡಿ ಒರ್'ನೊಂದಿಗೆ ಸೇರಿಸಲು ಫ್ರೆಂಚ್ ತಳಿಗಾರ [[ಜೋಸೆಫ್ ಪೆರ್ನೆಟ್-ಡಚರ್]] ಮೊಟ್ಟಮೊಡಲ ಬಾರಿಗೆ ಗುಲಾಬಿಗಳ ಮೊದಲ ವರ್ಗವನ್ನು ಹುಟ್ಟುಹಾಕಿದ.
ಇದರಿಂದಾಗಿ ಗುಲಾಬಿಗಳಿಗೆ ಸಂಪೂರ್ಣ ಹೊಸತಾದ ವರ್ಣಶ್ರೇಣಿಯೇ ದಕ್ಕಿದಂತಾಯಿತು. ದಟ್ಟ ಹಳದಿ, ಕಿತ್ತಳೆಯ ಎಳೆಗೆಂಪು ಬಣ್ಣ, ತಾಮ್ರ, ಕಿತ್ತಳೆ, ಅಪ್ಪಟ ಕಡುಗೆಂಪು ಬಣ್ಣ, ಹಳದಿ ದ್ವಿವರ್ಣಗಳು, ಲ್ಯಾವೆಂಡರ್, ಬೂದು ಮತ್ತು ಕೊನೆಗೆ ಕಂದು ಬಣ್ಣದ ಛಾಯೆಗಳೂ ಸಹ ಈಗ ಸಾಧ್ಯವಾದವು. ಮೂಲತಃ ಒಂದು ಪ್ರತ್ಯೇಕ ವರ್ಗವಾಗಿ ಪರಿಗಣಿಸಲ್ಪಟ್ಟಿದ್ದ ಪರ್ನೇಷಿಯಾನಗಳು ಅಥವಾ ಫೀಟಿಡಾ ಮಿಶ್ರತಳಿಗಳು, 1930ರಲ್ಲಿ ಮಿಶ್ರತಳಿ ಚಹಾಗಳಲ್ಲಿ ಅಧಿಕೃತವಾಗಿ ವಿಲೀನಗೊಂಡವು. 20ನೇ ಶತಮಾನದಲ್ಲಿ ಕಂಡುಬಂದ ಸ್ಕೈರಾಕೆಟ್ ಮಿಶ್ರತಳಿ ಚಹಾ ಗುಲಾಬಿಯ ಜನಪ್ರಿಯತೆಗೆ ಈ ಹೊಸ ವರ್ಣಶ್ರೇಣಿಯು ಹೆಚ್ಚಿನ ಕಾಣಿಕೆಯನ್ನೇ ನೀಡಿದರೂ, ಈ ಬಣ್ಣಗಳು ದುಬಾರಿ ಬೆಲೆಯನ್ನೇ ತೆರಬೇಕಾಗಿ ಬಂತು. ಏಕೆಂದರೆ, ರೋಗದ ಪ್ರಭಾವಕ್ಕೆ ಈಡಾಗುವ, ಪರಿಮಳವಿಲ್ಲದ ಹೂಗಳನ್ನು ಬಿಡುವ ಮತ್ತು ಸಮರುವಿಕೆಯನ್ನು ಸಹಿಸದಿರುವ ಗುಣಲಕ್ಷಣಗಳನ್ನು ತನ್ನ ವಂಶಸ್ಥರಿಗೆ ''ರೋಸಾ ಫೀಟಿಡಾ'' ತಳಿಯು ವರ್ಗಾಯಿಸಿತು.
==== ಪಾಲಿಯಾಂಥಾ ====
ಈ ಪದವನ್ನು ಗ್ರೀಕ್ ಭಾಷೆಯ "ಪಾಲಿ" (ಅನೇಕ) ಮತ್ತು "ಆಂಥಸ್" (ಹೂವು) ಎಂಬ ಪದಗಳಿಂದ ಪಡೆಯಲಾಗಿದ್ದು, "ಅನೇಕ-ಹೂವುಗಳ" ಗುಲಾಬಿಗಳು ಎಂಬುದು ಇದರ ಅಕ್ಷರಶಃ ಅರ್ಥವಾಗಿದೆ. ಪೂರ್ವ ಏಷ್ಯಾದ (''ರೋಸಾ ಚೈನೆನ್ಸಿಸ್'' ಮತ್ತು ''R. ಮಲ್ಟಿಫ್ಲೋರಾ'' ) ಜಾತಿಗಳ ನಡುವೆ ಸಂಕರೀಕರಣ ನಡೆಸಿದಾಗ ಮೂಲತಃ ಮೈದಳೆದ ಪಾಲಿಯಾಂಥಾಗಳು, ಮಿಶ್ರತಳಿ ಚಹಾಗಳ ಜೊತೆಜೊತೆಗೇ 1800ರ ದಶಕದ ಅಂತ್ಯಭಾಗದಲ್ಲಿ ಫ್ರಾನ್ಸ್ನಲ್ಲಿ ಮೊದಲು ಕಾಣಿಸಿಕೊಂಡವು.
ಮೋಟುಗಾತ್ರದ ಗಿಡಗಳಂತಿದ್ದ ಅವುಗಳಲ್ಲಿ ಕೆಲವು ಒತ್ತೊತ್ತಾಗಿದ್ದರೆ, ಮತ್ತೆ ಕೆಲವು ಹರಡಿಕೊಳ್ಳುವ ಸ್ವಭಾವವನ್ನು ಹೊಂದಿದ್ದು ದೊಡ್ಡದಾದ ಹೂಗೊಂಚಲಿನಲ್ಲಿರುವ ಚಿಕ್ಕ ಚಿಕ್ಕ (ಸರಾಸರಿ 1" ವ್ಯಾಸವನ್ನು ಹೊಂದಿರುವ), ಬಿಳಿ, ನಸುಗೆಂಪು ಹಾಗೂ ಕೆಂಪು ಬಣ್ಣಗಳ ಹೂಗಳನ್ನು ಹೊಮ್ಮಿಸಿದ್ದವು. ಅವು ಹೊಂದಿದ್ದ ಸಮೃದ್ಧಿಯಾಗಿರುವ ಹೂವುಗಳೇ ಅವುಗಳು ಪಡೆದ ಕೀರ್ತಿಗೆ ಸಮರ್ಥನೆಯಾಗಿದ್ದವು. ಆರೋಗ್ಯಕರ ಪಾಲಿಯಾಂಥಾ ಪೊದೆಸಸ್ಯವು ವಸಂತಕಾಲದಿಂದ ಶರತ್ಕಾಲದವರೆಗೂ ಅಕ್ಷರಶಃ ಹೂವುಗಳಿಂದಲೇ ಆವರಿಸಲ್ಪಟ್ಟಿದ್ದು, ಸನಿಹದ ಭೂದೃಶ್ಯದಲ್ಲಿ ವರ್ಣದ ಒಂದು ಅಮೋಘ ಪರಿಣಾಮವನ್ನೇ ಸೃಷ್ಟಿಸುತ್ತದೆ.
ಪಾಲಿಯಾಂಥಾ ಗುಲಾಬಿಗಳನ್ನು ಈಗಲೂ ಕಡಿಮೆ-ನಿರ್ವಹಣೆ ಅಥವಾ ಪೋಷಣೆಯ, ರೋಗ-ನಿರೋಧಕತೆಯುಳ್ಳ ಉದ್ಯಾನ ಗುಲಾಬಿಗಳಾಗಿ ಪರಿಗಣಿಸಲಾಗಿದ್ದು ಈ ಕಾರಣದಿಂದಲೇ ಅವು ಜನಪ್ರಿಯತೆಯನ್ನು ಕಾಯ್ದುಕೊಂಡಿವೆ.
ಉದಾಹರಣೆಗಳು: "ಸೆಸಿಲಿ ಬ್ರನ್ನೆರ್", "ದಿ ಫೇರಿ", "ರೆಡ್ ಫೇರಿ","ಪಿಂಕ್ ಫೇರಿ".
==== ಫ್ಲೋರಿಬಂಡ ====
[[ಚಿತ್ರ:Rosa sp.61.jpg|thumb|right|ರೋಸಾ 'ಬೊರುಸ್ಸಿಯಾ', ಒಂದು ಆಧುನಿಕ ಪುಷ್ಪಗಚ್ಛಿ ಗುಲಾಬಿ]]
ಮಿಶ್ರತಳಿ ಚಹಾಗಳೊಂದಿಗೆ ಪಾಲಿಯಾಂಥಾಗಳನ್ನು ಸಂಕರಿಸುವುದರಲ್ಲಿನ ಮೌಲ್ಯವನ್ನು ಗುಲಾಬಿ ತಳಿಗಾರರು ಬೇಗನೇ ಕಂಡುಕೊಂಡರು. ಏಕೆಂದರೆ ಈ ಪದ್ಧತಿಯಿಂದಾಗಿ ಪಾಲಿಯಾಂಥಾದ ಸಮೃದ್ಧಿ ಹಾಗೂ ಮಿಶ್ರತಳಿ ಚಹಾ ಗುಲಾಬಿಯ ಹೂವುಗಳ ಸೌಂದರ್ಯ ಮತ್ತು ವರ್ಣಶ್ರೇಣಿಯನ್ನೊಳಗೊಂಡ ಗುಲಾಬಿಗಳನ್ನು ಸೃಷ್ಟಿಸಲು ಸಾಧ್ಯವಾಯಿತು. 1909ರಲ್ಲಿ, ಪಾಲಿಯಾಂಥಾ/ಮಿಶ್ರತಳಿ ಚಹಾಗಳ ಮೊಟ್ಟಮೊದಲ ಸಂಕರಿತ ರೂಪವಾದ 'ಗ್ರಸ್ ಆನ್ ಆಚೆನ್' ಸೃಷ್ಟಿಸಲ್ಪಟ್ಟಿತು. ಇದು ತನ್ನೆರಡೂ ಮೂಲಸಸ್ಯಗಳ ನಡುವಿನ, ಮಧ್ಯಮಾರ್ಗದ ಗುಣಲಕ್ಷಣಗಳನ್ನು ಹೊಂದಿತ್ತು.
ದೊಡ್ಡದಾದ, ಅತಿ ಸುಂದರಾಕೃತಿಯ ಹೂವುಗಳು ಹಾಗೂ ಮಿಶ್ರತಳಿ-ಚಹಾ ಗುಲಾಬಿಯಂತಹ ಬೆಳವಣಿಗೆಯನ್ನು ಹೊಂದಿರುವುದರಿಂದಾಗಿ, ಪಾಲಿಯಾಂಥಾಗಳು ಹಾಗೂ ಮಿಶ್ರತಳಿ ಚಹಾಗಳಂತಹ ಗುಲಾಬಿಗಳಿಂದ ಈ ಹೊಸ ಗುಲಾಬಿಗಳು ಪ್ರತ್ಯೇಕವಾಗಬೇಕಾಗಿ ಬಂತು. ಹೀಗಾಗಿ, ಲ್ಯಾಟಿನ್ ಭಾಷೆಯಲ್ಲಿ "ಅನೇಕ-ಹೂಬಿಡುವ" ಎಂಬ ಅರ್ಥವನ್ನು ನೀಡುವ [[ರೋಸಾ ಫ್ಲೋರಿಬಂಡ|ಫ್ಲೋರಿಬಂಡ]] ಎಂಬ ಹೊಸತೊಂದು ವರ್ಗವೇ ಸೃಷ್ಟಿಯಾಯಿತು.
ವಿಶಿಷ್ಟ ಮಾದರಿಯ ಫ್ಲೋರಿಬಂಡ ಗುಲಾಬಿಗಳು ಬಳುಕಾಡದ ಪೊದೆಸಸ್ಯಗಳನ್ನು ಒಳಗೊಂಡಿದ್ದು, ಸಾಧಾರಣ ಮಟ್ಟದ ಮಿಶ್ರತಳಿ ಚಹಾಗಿಂತ ಚಿಕ್ಕದಾಗಿ ಮತ್ತು ಪೊದೆಪೊದೆಯಾಗಿ ಬೆಳೆಯುತ್ತದೆ. ಆದರೆ, ಇದು ಸಾಧಾರಣ ಮಟ್ಟದ ಪಾಲಿಯಾಂಥಾಗಿಂತ ಕಡಿಮೆ ಒತ್ತೊತ್ತಾಗಿ ಹಾಗೂ ಒಡ್ಡೊಡ್ಡಾಗಿ ಹರಡಿಕೊಂಡಿರುತ್ತದೆ. ಹೂವುಗಳು ಮಿಶ್ರತಳಿ ಚಹಾಗಳಿಗಿಂತ ಚಿಕ್ಕದಾಗಿದ್ದರೂ, ದೊಡ್ಡದಾದ ಗೊಂಚಲುಗಳಲ್ಲಿ ಸೇರಿಕೊಂಡಿರುತ್ತವೆ. ಹೀಗಾಗಿ ಹೂವಿನ ಅತ್ಯುತ್ತಮವಾದ ಪ್ರಭಾವ ಅಥವಾ ವಾತಾವರಣವನ್ನು ಅವು ಹೂತೋಟದಲ್ಲಿ ಹೊರಹೊಮ್ಮಿಸುತ್ತವೆ. ಎಲ್ಲಾ ಮಿಶ್ರತಳಿ ಚಹಾ ವರ್ಣಗಳಲ್ಲಿ ಕಾಣಿಸಿಕೊಳ್ಳುವ ಫ್ಲೋರಿಬಂಡಗಳು ಮಿಶ್ರತಳಿ ಚಹಾ ಆಕಾರದ ಶಿಷ್ಟ ಹೂವುಗಳನ್ನು ಹೊಮ್ಮಿಸುತ್ತವೆ. ಕೆಲವೊಮ್ಮೆ ಗೊಂಚಲಿನಲ್ಲಿ-ಹೂಬಿಡುವ ತಮ್ಮ ಸ್ವಭಾವದಿಂದಾಗಿ ಅವು ಮಿಶ್ರತಳಿ ಚಹಾಗಳಿಂದಲೂ ಪ್ರತ್ಯೇಕವಾಗಿ ನಿಲ್ಲುತ್ತವೆ. ಇಂದು, ಸಾರ್ವಜನಿಕ [[ಉದ್ಯಾನವನ]]ಗಳು ಹಾಗೂ ಅದೇ ಬಗೆಯ ಜಾಗಗಳಲ್ಲಿನ ಬೃಹತ್ ನೆಡುವಿಕೆ ಕಾರ್ಯಕ್ರಮಗಳಲ್ಲಿ ಅವುಗಳನ್ನು ಈಗಲೂ ಬಳಸಲಾಗುತ್ತಿದೆ.
ಉದಾಹರಣೆಗಳು: 'ಡೈಂಟಿ ಮೆಯ್ಡ್', 'ಐಸ್ಬರ್ಗ್', 'ಟಸ್ಕನ್ ಸನ್'.
==== ಗ್ರ್ಯಾಂಡಿಫ್ಲೋರ ====
[[ಗ್ರ್ಯಾಂಡಿಫ್ಲೋರ]]ಗಳು ("ದೊಡ್ಡ-ಹೂವುಗಳ" ಎಂಬುದಕ್ಕಿರುವ ಲ್ಯಾಟಿನ್ ಹೆಸರು) 1900ರ ದಶಕದ ಮಧ್ಯಭಾಗದಲ್ಲಿ ಸೃಷ್ಟಿಸಲ್ಪಟ್ಟ ಗುಲಾಬಿಗಳ ವರ್ಗವಾಗಿದ್ದವು. ಮಿಶ್ರತಳಿ ಚಹಾ ಗುಲಾಬಿಗಳು ಮತ್ತು ಫ್ಲೋರಿಬಂಡಾಗಳ ನಡುವಿನ ಹಿಮ್ಮಿಶ್ರ-ಸಂಕರೀಕರಣಗಳನ್ನು ಸೂಚಿಸಲು, ಅದರಲ್ಲೂ ನಿರ್ದಿಷ್ಟವಾಗಿ 1954ರಲ್ಲಿ ಪರಿಚಯಗೊಂಡ 'ಕ್ವೀನ್ ಎಲಿಜಬೆತ್' ಗುಲಾಬಿಯಂತಹ, ಎರಡರಲ್ಲಿ ಯಾವ ಪಂಗಡಕ್ಕೂ ಸೇರದವುಗಳನ್ನು ಸೂಚಿಸಲು ಗ್ರ್ಯಾಂಡಿಫ್ಲೋರ ವರ್ಗವನ್ನು ಸೃಷ್ಟಿಸಲಾಯಿತು.<ref>http://www.gardenmob.com/blog1/2006/07/13/the-great-roses-queen-elizabeth/ The Great Roses: Queen Elizabeth</ref>
ಮಿಶ್ರತಳಿ ಚಹಾ ಗುಲಾಬಿಗಳು ಅಥವಾ ಫ್ಲೋರಿಬಂಡಗಳಿಗಿಂತಲೂ ಗ್ರ್ಯಾಂಡಿಫ್ಲೋರ ಪೊದೆಸಸ್ಯಗಳು ವಿಶಿಷ್ಟವಾಗಿ ದೊಡ್ಡದಾಗಿದ್ದು, ಫ್ಲೋರಿಬಂಡ ತಳಿಯೊಂದರಂತೆ ಮೂರರಿಂದ ಐದರಷ್ಟು ಚಿಕ್ಕ ಗೊಂಚಲುಗಳಲ್ಲಿ ಬಿಟ್ಟಿರುವ, ಮಿಶ್ರತಳಿ ಚಹಾ-ಶೈಲಿಯ ಹೂಗಳನ್ನು ಒಳಗೊಂಡಿರುತ್ತವೆ. 1950ರಿಂದ 1980ರ ದಶಕದವರೆಗೆ ಗ್ರ್ಯಾಂಡಿಫ್ಲೋರಗಳು ಒಂದಷ್ಟು ಜನಪ್ರಿಯತೆಯನ್ನು ಕಂಡವಾದರೂ, ಇಂದು ಅವು ಮಿಶ್ರತಳಿ ಚಹಾ ಗುಲಾಬಿಗಳು ಅಥವಾ ಫ್ಲೋರಿಬಂಡಗಳಷ್ಟೇನೂ ಜನಪ್ರಿಯವಾಗಿಲ್ಲ.
ಉದಾಹರಣೆಗಳು: 'ಕ್ವೀನ್ ಎಲಿಜಬೆತ್', 'ಕೊಮಾಂಚೆ', 'ಮಾಂಟೆಝುಮಾ'.
==== ಚಿಕಣಿ ಗಾತ್ರದ ತಳಿಗಳು ====
[[ಚಿತ್ರ:"Meillandine" Rose in clay pot.jpg|thumb|upright|ಟೆರಾಕೋಟಾ ಹೂಕುಂಡದಲ್ಲಿರುವ ಮೀಲ್ಯಾಂಡೈನ್ (ಒಂದು ಚಿಕಣಿ ಗಾತ್ರದ ಗುಲಾಬಿ)]]
ಗ್ಯಾಲಿಕಾಗಳು, ಸೆಂಟಿಫೋಲಿಯಾಗಳು ಇವೇ ಮೊದಲಾದ ಹಳೆಯ ಉದ್ಯಾನ ಗುಲಾಬಿಗಳ ಎಲ್ಲಾ ವರ್ಗಗಳೂ ಅನುಗುಣವಾದ ಚಿಕಣಿ ಗಾತ್ರದ ತಳಿಗಳನ್ನು ಹೊಂದಿದ್ದವು. ತಮ್ಮ ವರ್ಗದ ದೊಡ್ಡ ತಳಿಗಳಂತೆಯೇ ಈ ಚಿಕಣಿ ಗಾತ್ರದ ತಳಿಗಳೂ ಸಹ ಒಮ್ಮೆ ಮಾತ್ರ ಹೂಬಿಡುತ್ತಿದ್ದವು. ಪ್ರಮಾಣಬದ್ಧ-ಗಾತ್ರದ ಪ್ರಭೇದಗಳಲ್ಲಿ ನಡೆಯುವಂತೆಯೇ, ಚಿಕಣಿ ಗಾತ್ರದ ಹಳೆಯ ಉದ್ಯಾನ ಗುಲಾಬಿಗಳನ್ನು ಮತ್ತೆ ಮತ್ತೆ ಹೂಬಿಡುವ ಏಷ್ಯಾದ ಜಾತಿಗಳೊಂದಿಗೆ ಸಂಕರೀಕರಿಸಿದ ಫಲವಾಗಿ ಯಾವಾಗಲೂ ಹೂಬಿಡುತ್ತಿರುವ ಚಿಕಣಿ ಗಾತ್ರದ ಗುಲಾಬಿಗಳು ಮೈದಳೆದವು.ಇಂದು, ಸಣ್ಣ ಪುಟ್ಟ ರೆಂಬೆಗಳುಳ್ಳ, ಮತ್ತೆ ಮತ್ತೆ ಹೂಬಿಡುವ ಪೊದೆಸಸ್ಯಗಳಿಂದ ಚಿಕಣಿ ಗಾತ್ರದ ಗುಲಾಬಿಗಳು ಪ್ರತಿನಿಧಿಸಲ್ಪಟ್ಟಿವೆ. ಈ ಪೊದೆಸಸ್ಯಗಳು 6" ರಿಂದ 36"ವರೆಗೆ ಉದ್ದವಾಗಿದ್ದು, ಬಹುತೇಕ ಪ್ರಕಾರಗಳು 12"–24"ನಷ್ಟು ಎತ್ತರದ ಶ್ರೇಣಿಯಲ್ಲಿ ಬರುತ್ತವೆ. ಮಿಶ್ರತಳಿ ಚಹಾ ಗುಲಾಬಿಯ ಎಲ್ಲಾ ಬಣ್ಣಗಳಲ್ಲೂ ಹೂವುಗಳು ಅರಳುತ್ತವೆ. ಅನೇಕ ಪ್ರಭೇದಗಳು ಉನ್ನತ-ಮಧ್ಯಭಾಗದ ಮಿಶ್ರತಳಿ ಚಹಾ ಹೂವಿನ ಶಿಷ್ಟ ಆಕಾರವನ್ನೂ ಅನುಸರಿಸುತ್ತವೆ.
ಪುಷ್ಪೋದ್ಯಮವು ಚಿಕಣಿ ಗಾತ್ರದ ಹೂವುಗಳನ್ನು ಮನೆಯ ಗಿಡಗಳ ಸ್ವರೂಪದಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತದೆ ಮತ್ತು ಮಾರಾಟ ಮಾಡುತ್ತದೆ. ಆದರೆ, ಈ ಸಸ್ಯಗಳು ಬಹುತೇಕವಾಗಿ ಉಷ್ಣವಲಯದ ಪ್ರದೇಶಗಳಿಗೆ ಸೇರಿದ ಹೊರಾಂಗಣ ಪೊದೆಸಸ್ಯಗಳ ಕುಲದಲ್ಲಿ ಹುಟ್ಟಿವೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳುವುದು ಮುಖ್ಯ. ಹೀಗಾಗಿ, ಬಹುತೇಕ ಚಿಕಣಿ ಗಾತ್ರದ ಗುಲಾಬಿ ಪ್ರಭೇದಗಳು ಬದುಕುಳಿಯಲು ಶೀತಲ ಜಡಸ್ಥಿತಿಯ ವರ್ಷಾವಧಿಯು ಅಗತ್ಯವಾಗಿರುತ್ತದೆ. (ಉದಾಹರಣೆಗಳು: ''ಪೆಟೈಟ್ ಡಿ ಹಾಲೆಂಡೆ'' (ಚಿಕಣಿ ಗಾತ್ರದ ಸೆಂಟಿಫೋಲಿಯಾ, ಒಮ್ಮೆ ಹೂಬಿಡುವುದು), ''ಕಪ್ಕೇಕ್'' (ಆಧುನಿಕ ಚಿಕಣಿ ಗಾತ್ರದ ಪ್ರಭೇದ, ಮತ್ತೆ ಮತ್ತೆ ಹೂಬಿಡುವುದು).)
==== ಏರುವ ಮತ್ತು ಹಬ್ಬುವ ಪ್ರಭೇದಗಳು ====
[[ಚಿತ್ರ:Rose zepherine drouhin img 1838.jpg|thumb|left|ರೋಸಾ 'ಝೆಫಿರೈನ್ ಡ್ರೌಹಿನ್', ಒಂದು ಏರುಬಳ್ಳಿಯ ಬರ್ಬನ್ ಗುಲಾಬಿ (ಬಿಝೊಟ್ 1868)]]
ಚಿಕಣಿ ಗಾತ್ರದ ಗುಲಾಬಿಗಳಲ್ಲಿ ಕಂಡುಬರುವಂತೆ,ಮೇಲೆ ತಿಳಿಸಿದ ಗುಲಾಬಿಗಳ ಹಳೆಯ ಮತ್ತು ಆಧುನಿಕವಾಗಿರುವ ಎಲ್ಲಾ ವರ್ಗಗಳೂ "ಏರುವ" ನಮೂನೆಗಳನ್ನು ಹೊಂದಿದ್ದು, ಸದರಿ ಪೊದೆಸಸ್ಯಗಳ ಜಲ್ಲೆಗಳು ಎಂದಿನ ("ಪೊದೆ") ನಮೂನೆಗಳಿಗಿಂತ ಹೆಚ್ಚು ಉದ್ದವಾಗಿ ಬೆಳೆಯುವುದೇ ಅಲ್ಲದೆ ಹೆಚ್ಚು ಬಾಗುವಿಕೆಯ ಸ್ವಭಾವವನ್ನು ಹೊಂದಿರುತ್ತವೆ.
ಹಳೆಯ ಉದ್ಯಾನಗುಲಾಬಿಗಳಲ್ಲಿ, ಇದು ಕೇವಲ ಅನೇಕ ತಳಿಗಳು ಹಾಗೂ ಪ್ರಭೇದಗಳು ತೋರುವ ಸ್ವಾಭಾವಿಕ ಬೆಳವಣಿಗೆಯ ಸ್ವಭಾವವಾಗಿದೆ. ಆದರೂ, ಅನೇಕ ಆಧುನಿಕ ಗುಲಾಬಿಗಳಲ್ಲಿ, ಅನೈಚ್ಛಿಕ ಅಥವಾ ತನ್ನಷ್ಟಕ್ಕೆ ತಾನೇ ಆಗುವ ರೂಪಾಂತರಗಳ ಪರಿಣಾಮವಾಗಿ, ಏರುವ ಪ್ರಭೇದದ ಗುಲಾಬಿಗಳು ಮೈದಳೆಯುತ್ತವೆ.
ಉದಾಹರಣೆಗೆ, 'ಕ್ಲೈಂಬಿಂಗ್ ಪೀಸ್' ಎಂಬ ಪ್ರಭೇದವು ಒಂದು "ಏರುವ ಮಿಶ್ರತಳಿ ಚಹಾ ಗುಲಾಬಿಯಾಗಿ" ಆಗಿ ಸೂಚಿಸಲ್ಪಟ್ಟಿದೆ. ಏಕೆಂದರೆ, ಅದರ ಕಾಂಡಗಳ ಉದ್ದವಾಗಿರುವ ಮತ್ತು ಬಾಗುವಿಕೆಯ ಸ್ವಭಾವವನ್ನು ಅಂದರೆ, "ಏರುವಿಕೆಯ ಲಕ್ಷಣವನ್ನು" ಹೊರತುಪಡಿಸಿದರೆ, ತಳಿವಿಜ್ಞಾನದ ಪ್ರಕಾರ ಈ ಪ್ರಭೇದವು 'ಪೀಸ್' ಮಿಶ್ರತಳಿಯ ಚಹಾ ಗುಲಾಬಿಯ ಎಂದಿನ ಸಾಮಾನ್ಯ ನಮೂನೆಯ ತದ್ರೂಪಿಯಾಗಿದೆ.
ಏರುವ ನಮೂನೆಯ ಬಹುತೇಕ ಗುಲಾಬಿಗಳು ಸುಮಾರು 8'–20'ನಷ್ಟು ಎತ್ತರಕ್ಕೆ ಬೆಳೆಯುವುದಲ್ಲದೇ, ಮತ್ತೆ ಮತ್ತೆ ಹೂಬಿಡುವ ಗುಣವನ್ನು ಪ್ರದರ್ಶಿಸುತ್ತವೆ. ಹಬ್ಬುವ ನಮೂನೆಯ ಗುಲಾಬಿಗಳು ತಾಂತ್ರಿಕವಾಗಿ ಬೇರೆಯದೇ ವರ್ಗಕ್ಕೆ ಸೇರಿದ್ದರೂ, ಏರುವ ನಮೂನೆಯ ಗುಲಾಬಿಗಳೊಂದಿಗೆ ಆಗಾಗ ಒಟ್ಟಿಗೆ ಸೇರಿಸಲ್ಪಡುತ್ತವೆ. ಅವು ಕೂಡಾ ಉದ್ದವಾದ, ಬಾಗುವ ಜಲ್ಲೆಗಳನ್ನು ಪ್ರದರ್ಶಿಸಿದರೂ, ನಿಜವಾದ ಏರುವ ನಮೂನೆಗಳಿಂದ ಎರಡು ಬಗೆಗಳಲ್ಲಿ ಪ್ರತ್ಯೇಕಿಸಲ್ಪಡುತ್ತವೆ. ಅವುಗಳೆಂದರೆ, ದೊಡ್ಡದಾಗಿರುವ ಒಟ್ಟಾರೆ ಗಾತ್ರ (20'–30'ಯಷ್ಟು ಎತ್ತರವಾಗಿರುವುದು ಸಾಮಾನ್ಯವಾಗಿದೆ) ಮತ್ತು ಒಂದು ಸಲ ಮಾತ್ರ ಹೂಬಿಡುವ ಸ್ವಭಾವ. ಏರುವ ನಮೂನೆಯ ಗುಲಾಬಿಗಳು ಹಾಗೂ ಹಬ್ಬುವ ನಮೂನೆಯ ಗುಲಾಬಿಗಳೆರಡೂ [[ಐವಿ ಬಳ್ಳಿ|ಐವಿ]], [[ಕ್ಲೆಮ್ಯಾಟಿಸ್]] ಅಥವಾ [[ವಿಸ್ಟೇರಿಯಾ]]ಗಳಂತೆ ನಿಜವಾದ ಬಳ್ಳಿಗಳಲ್ಲ. ಆಧಾರಗಳಿಗೆ ತಾವೇ ಸ್ವತಃ ಅಂಟಿಕೊಂಡು ಬೆಳೆಯುವ ಸಾಮರ್ಥ್ಯವು ಅವಕ್ಕಿರುವುದಿಲ್ಲ. ಆದ್ದರಿಂದ [[ಬಳ್ಳಿ ಚಪ್ಪರಗಳು]] ಹಾಗೂ ಲತಾ ಮಂಟಪಗಳ ಮೇಲೆ ಅವು ಹಬ್ಬಲು ಯಾರಾದರೊಬ್ಬರು ಹಬ್ಬಿಸಿ ಕಟ್ಟಬೇಕಾಗಾಗುತ್ತದೆ.
ಉದಾಹರಣೆಗಳು: 'ಬ್ಲೇಝ್' (ಮತ್ತೆ ಮತ್ತೆ ಹೂಬಿಡುವ ಏರುವ ಪ್ರಭೇದ), 'ಅಮೆರಿಕನ್ ಪಿಲ್ಲರ್' (ಒಮ್ಮೆ ಮಾತ್ರ ಹೂಬಿಡುವ ಹಬ್ಬುವ ಪ್ರಭೇದ).
==== ಇಂಗ್ಲಿಷ್ / ಡೇವಿಡ್ ಆಸ್ಟಿನ್ ====
ಗುಲಾಬಿಗಳ ಒಂದು ಪ್ರತ್ಯೇಕ ವರ್ಗ ಎಂಬುದಾಗಿ ಯಾವುದೇ ಅಧಿಕೃತ ಗುಲಾಬಿ ಪ್ರಾಧಿಕಾರದಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿಲ್ಲವಾದರೂ, ಗ್ರಾಹಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಇಂಗ್ಲಿಷ್ (ಇದಕ್ಕೆ ಡೇವಿಡ್ ಆಸ್ಟಿನ್ ಎಂದೂ ಹೆಸರಿದೆ) ಗುಲಾಬಿಗಳಿಗೆ ಈ ರೀತಿಯ ಮೀಸಲು ಸ್ಥಾನವೊಂದನ್ನು ನೀಡುತ್ತಲೇ ಬಂದಿದ್ದಾರೆ.1960ರ ದಶಕದಲ್ಲಿ, [[ಇಂಗ್ಲೆಂಡ್|ಇಂಗ್ಲೆಂಡ್]]ನ [[ಶ್ರಾಪ್ಷೈರ್]]ನ [[ಡೇವಿಡ್ ಆಸ್ಟಿನ್]] ಇದರ ಕುರಿತಾದ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಿದ. ಹಳೆಯ ಉದ್ಯಾನ ಗುಲಾಬಿಗಳನ್ನು ಆಧುನಿಕ ಮಿಶ್ರತಳಿ ಚಹಾ ಗುಲಾಬಿಗಳು ಹಾಗೂ ಫ್ಲೋರಿಬಂಡಗಳ ಜೊತೆ ಸಂಕರೀಕರಿಸುವ ಮೂಲಕ, ಹಳೆಯ ಉದ್ಯಾನ ಗುಲಾಬಿಗಳಲ್ಲಿನ ಆಸಕ್ತಿಯನ್ನು ಪುನರುದ್ದೀಪಿಸಲು ಅವನು ಬಯಸಿದ್ದ.
ಶಿಷ್ಟ ಸ್ವರೂಪದ ''ಗ್ಯಾಲಿಕಾ'', ''ಆಲ್ಬಾ'' ಮತ್ತು "ದಮಾಸ್ಕ್" ಗುಲಾಬಿಗಳ ಪ್ರೇರಕ ನಮೂನೆಗಳಾಗಿರುವ, ಹಳೆಯ-ಮಾದರಿಯ ಆಕಾರಗಳು ಹಾಗೂ ಪರಿಮಳಗಳೊಂದಿಗಿನ, ಆದರೆ ಮತ್ತೆ ಮತ್ತೆ ಹೂಬಿಡುವ ಗುಣಲಕ್ಷಣಗಳು ಹಾಗೂ ದೊಡ್ಡದಾದ ಆಧುನಿಕ ವರ್ಣಶ್ರೇಣಿಯೊಂದಿಗಿನ ಆಧುನಿಕ ಮಾದರಿಯ ಹೂವುಗಳನ್ನು ಒಳಗೊಂಡಿರುವ ಗುಲಾಬಿಗಳ ಹೊಸ ಗುಂಪೊಂದನ್ನು ಸೃಷ್ಟಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. "ಇಂಗ್ಲಿಷ್" ಗುಲಾಬಿಗಳ ಪಂಗಡವನ್ನು ಸೃಷ್ಟಿಸುವ ತನ್ನ ಧ್ಯೇಯದಲ್ಲಿ ಆಸ್ಟಿನ್ ಬಹುತೇಕ ಯಶಸ್ವಿಯಾದ. ಈಗ ಈ ಗುಲಾಬಿಗಳು ನೂರಾರು ಸಂಖ್ಯೆಯ ಪ್ರಭೇದಗಳನ್ನು ಹೊಂದಿದ್ದು, ತೋಟಗಾರಿಕೆಯಲ್ಲಿ ತೊಡಗುವ ಸಾರ್ವಜನಿಕರಿಂದ ಅವುಗಳಿಗೆ ಬೆಚ್ಚನೆಯ ಸ್ವಾಗತ ಸಿಕ್ಕಿರುವುದೇ ಅಲ್ಲದೇ, ಗ್ರಾಹಕರಿಗೂ ಸಹ ಅವು ವ್ಯಾಪಕವಾಗಿ ದೊರೆಯುತ್ತವೆ. ಹೊಸ ಹೊಸ ಪ್ರಭೇದಗಳು ನಿಯಮಿತವಾಗಿ ಬಿಡುಗಡೆಯಾಗುತ್ತಿರುವುದರೊಂದಿಗೆ, ಡೇವಿಡ್ ಆಸ್ಟಿನ್ ಗುಲಾಬಿಗಳು ಚುರುಕಾದ ಬೆಳವಣಿಗೆಯನ್ನು ಕಂಡಿವೆ.ಶಿಷ್ಟ ಸ್ವರೂಪದ ಹಳೆಯ ಉದ್ಯಾನ ಗುಲಾಬಿಗಳ ವಿಶಿಷ್ಟ ಚಳಿ-ಸಹಿಷ್ಣುತೆ ಮತ್ತು ರೋಗ-ನಿರೋಧಕತೆಯು ಈ ಪ್ರಕ್ರಿಯೆಯಲ್ಲಿ ಅತ್ಯಂತ ಹೆಚ್ಚಿನ ರೀತಿಯಲ್ಲಿ ಸಮನ್ವಯತೆಯನ್ನು ಸಾಧಿಸಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. ಆಧುನಿಕ ಮಿಶ್ರತಳಿ ಚಹಾ ಗುಲಾಬಿಗಳು ಹಾಗೂ ಫ್ಲೋರಿಬಂಡಗಳಿಗೆ ಬಂದೆರಗುವ ಕೆಲವೊಂದು ರೋಗದ ಸಮಸ್ಯೆಗಳಿಗೆ ಇಂಗ್ಲಿಷ್ ಗುಲಾಬಿಗಳು ಈಡಾಗುತ್ತವೆ ಮತ್ತು USDA 5ನೇ ವಲಯದ ಉತ್ತರಲ್ಲಿರುವ ಕೆಲವೊಂದು ಗುಲಾಬಿಗಳು ಸಹಿಷ್ಣುಗಳಲ್ಲ.
ಉದಾಹರಣೆಗಳು: 'ಮೇರಿ ರೋಸ್,' 'ಗ್ರಹಾಂ ಥಾಮಸ್', 'ತಮೋರಾ'.
==== ಕೆನಡಾದ ಸಹಿಷ್ಣು ಗುಲಾಬಿಗಳು ====
ಕೆನಡಾದಲ್ಲಿನ ಚಳಿಗಾಲದ ತೀವ್ರಸ್ವರೂಪದ ಹವಾಮಾನ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಲಾಬಿಗಳನ್ನು ಅಭಿವೃದ್ಧಿಪಡಿಸಲಾಯಿತು. ಮ್ಯಾನಿಟೋಬಾದ ಮಾರ್ಡೆನ್ನಲ್ಲಿನ ಮಾರ್ಡೆನ್ ಸಂಶೋಧನಾ ಕೇಂದ್ರದಲ್ಲಿ ಮತ್ತು ಒಟ್ಟಾವಾದಲ್ಲಿನ ಪ್ರಾಯೋಗಿಕ ತೋಟದಲ್ಲಿ (ಮತ್ತು ನಂತರ ಎಲ್' ಅಸಂಪ್ಷನ್ ಕ್ಯೂಬೆಕ್ನಲ್ಲಿ) ಈ ಗುಲಾಬಿಗಳನ್ನು ಕೆನಡಾದ ಕೃಷಿ ಇಲಾಖೆಯು ಅಭಿವೃದ್ಧಿಪಡಿಸಿತು. ಈ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಪಾರ್ಕ್ಲೆಂಡ್ ಸರಣಿ ಮತ್ತು ಎಕ್ಸ್ಪ್ಲೋರರ್ ಸರಣಿ ಎಂದು ಕರೆಯಲಾಗುತ್ತದೆ. ಈ ಕಾರ್ಯಕ್ರಮಗಳು ಈಗ ಸ್ಥಗಿತಗೊಂಡಿವೆಯಾದರೂ, ಉಳಿದಿರುವ ಸಸ್ಯಗಳ ದಾಸ್ತಾನನ್ನು ಕೆನಡಾದ ಕಲಾವಿದರ ಶ್ರೇಣಿಯ ಮೂಲಕ ಖಾಸಗಿ ತಳಿಗಾರರು ಸ್ವಾಧೀನಕ್ಕೆ ತೆಗದುಕೊಂಡಿದ್ದಾರೆ. ಬಹುತೇಕವಾಗಿ ಕೆನಡಾದ ಸ್ಥಳೀಯ ಜಾತಿಗಳು ಮತ್ತು ಹೆಚ್ಚು ನವಿರಾದ ಗುಲಾಬಿಗಳ ಮಿಶ್ರತಳಿಯಿಂದ ಪಡೆಯಲಾಗಿರುವ ಈ ಸಸ್ಯಗಳು ಶೀತದ ಹವಾಮಾನಕ್ಕೆ ಅತೀವವಾದ ಸಹಿಷ್ಣುತೆಯನ್ನು ತೋರಿಸುವುದಲ್ಲದೇ ಕೆಲವೊಂದು ಸಸ್ಯಗಳು -45Cವರೆಗೂ ಚಳಿಯನ್ನು ತಡೆದುಕೊಳ್ಳುತ್ತವೆ. ಉದಾಹರಣೆಗಳಲ್ಲಿ 'ಮಾರ್ಡೆನ್ ಬೆಲ್ಲೆ', 'ವಿನ್ನಿಪೆಗ್ ಪಾರ್ಕ್ಸ್' ಮತ್ತು 'ಕಥ್ಬೆರ್ಟ್ ಗ್ರಾಂಟ್' ಇವೇ ಮೊದಲಾದವುಗಳು ಸೇರಿವೆ.
ಕೆನಡಾದ ಇತರ ಗಮನಾರ್ಹ ತಳಿಗಾರರಲ್ಲಿ ಜಾರ್ಜಸ್ ಬಗ್ನೆಟ್ ಮತ್ತು ರಾಬರ್ಟ್ ಎರ್ಸ್ಕೈನ್ ಸೇರಿದ್ದಾರೆ.
=== ಭೂದೃಶ್ಯ ಗುಲಾಬಿಗಳು ===
[[ಚಿತ್ರ:Rose3800ppx2.jpg|thumb|right|200px|ಪೊದೆಸಸ್ಯ ಗುಲಾಬಿಯೊಂದರ ಒಂದು ಉದಾಹರಣೆ.]]
ಇವು ಗುಲಾಬಿಯ ಆಧುನಿಕ ವರ್ಗವಾಗಿದ್ದು, ಮುಖ್ಯವಾಗಿ ಸಾಮೂಹಿಕ ಆಹ್ಲಾದದಾಯಕತೆಯನ್ನು ಬಿಂಬಿಸಲು ಇವನ್ನು ಬೆಳೆಸಲಾಗುತ್ತದೆ. ಒಟ್ಟು ಸಂಗ್ರಹರೂಪವಾಗಿ ಅವುಗಳನ್ನು ಪೊದೆಸಸ್ಯ ಗುಲಾಬಿಗಳೆಂದು ಕರೆಯಲಾಗುತ್ತದೆ.20ನೇ ಶತಮಾನದ ಅಂತ್ಯಭಾಗದಲ್ಲಿ, ಸಾಂಪ್ರದಾಯಿಕ ಮಿಶ್ರತಳಿ ಚಹಾ ಮತ್ತು ಫ್ಲೋರಿಬಂಡ ಗುಲಾಬಿ ಪ್ರಭೇದಗಳು, ತೋಟಗಾರರು ಮತ್ತು ಭೂದೃಶ್ಯ ತೋಟಗಾರರ ಪ್ರೋತ್ಸಾಹವನ್ನು ಕಳೆದುಕೊಳ್ಳಬೇಕಾಗಿ ಬಂತು. ಈ ಪ್ರಭೇದಗಳು ಆಗಾಗ ತೊಂದರೆಗೆ ಒಳಗಾಗುತ್ತಿದ್ದುದು ಹಾಗೂ ಅಸಂಖ್ಯಾತ ಕ್ರಿಮಿಕೀಟಗಳು ಮತ್ತು ರೋಗದ ಸಮಸ್ಯೆಗಳಿಗೆ ಈ ಸಸ್ಯಗಳು ತೀವ್ರವಾಗಿ ಈಡಾಗುತ್ತಿದ್ದುದು ಇದಕ್ಕೆ ಕಾರಣವಾಗಿತ್ತು.
ಹೀಗಾಗಿ, "ಭೂದೃಶ್ಯದ" ಗುಲಾಬಿಗಳು ಎಂದು ಕರೆಯಲ್ಪಡುವ ಗುಲಾಬಿಗಳು ಗ್ರಾಹಕರ ಬಯಕೆಯನ್ನು ತಣಿಸುವ ಉದ್ದೇಶದಿಂದಲೇ ಅಭಿವೃದ್ಧಿಗೊಂಡವು. ಉದ್ಯಾನ ಗುಲಾಬಿಯೊಂದಕ್ಕೆ ಇರಬೇಕಾದ ಬಣ್ಣ, ಸ್ವರೂಪ ಮತ್ತು ಪರಿಮಳ ಇವೇ ಮೊದಲಾದ ಅಂಶಗಳೇ ಅಲ್ಲದೇ, ಕಡಿಮೆ ಪೋಷಣೆ-ನಿರ್ವಹಣೆ ಮತ್ತು ಸುಲಭವಾಗಿ ಆರೈಕೆ ಮಾಡಬಹುದಾದ ಅಂಶಗಳೆಲ್ಲವನ್ನೂ ಅವು ಒಳಗೊಂಡಿರುವುದು ಇದಕ್ಕೆ ಕಾರಣ.
ಬಹುತೇಕ ಭೂದೃಶ್ಯ ಗುಲಾಬಿಗಳು ಈ ಕೆಳಕಂಡ ಗುಣಲಕ್ಷಣಗಳನ್ನು ಹೊಂದಿವೆ:
* ಉತ್ತಮ ರೋಗ ನಿರೋಧಕತೆ
* ಕಡಿಮೆ ಪ್ರಮಾಣದಲ್ಲಿರುವ ಬೆಳೆಯುವ ಸ್ವಭಾವ, ಸಾಮಾನ್ಯವಾಗಿ 60 ಸೆಂಮೀ (24 ಇಂಚು)ಗಿಂತ ಕೆಳಗಿರುತ್ತದೆ
* ಮತ್ತೆ ಮತ್ತೆ ಹೂಬಿಡುತ್ತದೆ
* ರೋಗ ಮತ್ತು ಕೀಟ ನಿರೋಧಕತೆ
* ಚೂಷಕಗಳಂತೆ ಮತ್ತೊಂದು ಆಧಾರವನ್ನು ಅವಲಂಬಿಸದೇ, ಸ್ವತಃ ತಮ್ಮದೇ ಬೇರಿನ ಮೇಲೆ ಬೆಳೆಯುತ್ತವೆ.
ಹೊಸ ಭೂದೃಶ್ಯ ಗುಲಾಬಿಗಳ ಪ್ರಭೇದಗಳ ತಳಿ-ಬೆಳೆಸುವಿಕೆಯಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಪಕ್ಷಕಾರರೆಂದರೆ: ವೆರ್ನರ್ ನೋಕ್ (ಜರ್ಮನಿ), ಮೆಡಿಲ್ಯಾಂಡ್ ರೋಸಸ್ (ಫ್ರಾನ್ಸ್), ಬೂಟ್ ಅಂಡ್ ಕಂ. (ನೆದರ್ಲೆಂಡ್ಸ್), ಮತ್ತು ವಿಲಿಯಂ ರ್ಯಾಡ್ಲರ್ (USA).
ಕಾರ್ಪೆಟ್ ಗುಲಾಬಿಗಳೆಂದೇ ಖ್ಯಾತವಾಗಿರುವ ಫ್ಲವರ್ ಕಾರ್ಪೆಟ್ ಗುಲಾಬಿಗಳು, ಭೂದೃಶ್ಯ ಗುಲಾಬಿಗಳ ಗುಂಪಿನ ಸಂಪೂರ್ಣ ಶ್ರೇಣಿಯನ್ನೇ ಬದಲಿಸಿವೆ.
1990ರಲ್ಲಿ ವೆರ್ನರ್ ನೋಕ್ನಿಂದ ಮೊಟ್ಟಮೊದಲ ಬಾರಿಗೆ ಈ ಗುಲಾಬಿಗಳು ಪರಿಚಿತಗೊಂಡಾಗ, ವಿಶ್ವದಲ್ಲಿನ ಅತ್ಯಂತ ಕಠಿಣತಮ ಪರೀಕ್ಷೆಗಳಲ್ಲಿ ಒಂದಾದ, ಜರ್ಮನಿಯಲ್ಲಿನ ಆಲ್ ಡ್ಯೂಷ್ಲೆಂಡ್ ರೋಸ್ ಟೆಸ್ಟರ್ಸ್ ಸಂಸ್ಥೆಯಿಂದ ನೀಡಲ್ಪಟ್ಟ ಅತ್ಯುನ್ನತ ಪ್ರಶಸ್ತಿಯನ್ನು ಪಡೆದುಕೊಂಡವು.ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ 43 ಪ್ರಭೇದಗಳ ಪೈಕಿ, ಮತ್ತು ಎಲ್ಲಾ ಪರೀಕ್ಷೆಗಳ ಸರಾಸರಿಯ ಪೈಕಿ, ರೋಗಕ್ಕೆ ಪ್ರತಿರೋಧಕತೆಯನ್ನು ಒಡ್ಡುವುದಕ್ಕೆ ಸಂಬಂಧಿಸಿದಂತೆ ಇದು ಸುಮಾರು 200 ಬಾರಿ ತೀರ್ಮಾನಿಸಲ್ಪಟ್ಟಿದೆ. ಇದು ಸದರಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಏಕೈಕ ಪ್ರಭೇದವಾಗಿರುವುದಷ್ಟೇ ಅಲ್ಲದೇ, ಆ ಸಮಯದಲ್ಲಿ ಗುಲಾಬಿಯೊಂದಕ್ಕೆ ನೀಡಲಾದ ಅತ್ಯಂತ ಹೆಚ್ಚಿನ ಅಂಕಗಳನ್ನು, ಅಂದರೆ 100ರ ಪೈಕಿ 85.5 ಅಂಕಗಳನ್ನು ಪಡೆದುಕೊಂಡಿದೆ. ರೋಗ ನಿರೋಧಕತೆಗೆ ಸಂಬಂಧಿಸಿ 20 ಅಂಕಗಳ ಪೈಕಿ 18.3 ಅಂಕಗಳನ್ನು ಪಡೆದುಕೊಂಡಿದೆ.
ಈ ಗುಲಾಬಿಗಳು ಜಾಗತಿಕವಾಗಿ ಲಭ್ಯವಿದ್ದು, ಇದುವರೆಗೂ ಹುಟ್ಟುಹಾಕಲಾದ ಭೂದೃಶ್ಯ ಗುಲಾಬಿ ಗುಂಪುಗಳ ಪೈಕಿ ಅತ್ಯುತ್ತಮವೆನಿಸಿಕೊಂಡಿವೆ.
=== ಕಾರ್ಪೆಟ್ ಗುಲಾಬಿಗಳು ===
ಮತ್ತೊಮ್ಮೆ, ಡೇವಿಡ್ ಆಸ್ಟಿನ್ನಂತೆಯೇ ಈ ಗುಲಾಬಿಗಳನ್ನೂ ಯಾವುದೇ ಅಧಿಕೃತ ಗುಲಾಬಿ ಪ್ರಾಧಿಕಾರವು ಗುಲಾಬಿಗಳ ಒಂದು ಪ್ರತ್ಯೇಕ ವರ್ಗವಾಗಿ ಅಧಿಕೃತವಾಗಿ ಗುರುತಿಸದಿರಬಹುದು. ಆದರೆ ಕಾರ್ಪೆಟ್ ಗುಲಾಬಿಗಳು ('''ಫ್ಲವರ್ ಕಾರ್ಪೆಟ್''' ಎಂದೂ ಅವು ಹೆಸರಾಗಿವೆ) ಗ್ರಾಹಕರು, ಭೂದೃಶ್ಯ ತೋಟಗಾರರು ಹಾಗೂ ಪುಷ್ಪೋದ್ಯಮದಿಂದ ಗುರುತಿಸಲ್ಪಟ್ಟಿವೆ.
ವೆರ್ನರ್ ನೋಕ್ (ಜರ್ಮನಿ) ರೋಗ ನಿರೋಧಕ ಗುಲಾಬಿಗಳಿಗೆ ಸಂಬಂಧಿಸಿದ ತನ್ನ ತಳಿಸೃಷ್ಟಿ ಕಾರ್ಯವನ್ನು 1965ರಲ್ಲಿ ಪ್ರಾರಂಭಿಸಿದ.ಗುಲಾಬಿಗಳ ಕುರಿತು ಅತೀವವಾದ ಉತ್ಕಟತೆಯನ್ನು ಆತ ಹೊಂದಿದ್ದರೂ, ಎಲ್ಲಾ ಬಗೆಯ ರೋಗಗಳನ್ನು ಒಳಗೊಂಡಿರುವ ಗುಲಾಬಿಗಳು ದೀರ್ಘಕಾಲದವರೆಗೆ ತೋಟಗಾರರ ಮೆಚ್ಚುಗೆಯನ್ನು ಗಳಿಸುತ್ತವೆ ಎಂಬುದನ್ನು ನಂಬಲು ಆತ ಸಿದ್ಧನಿರಲಿಲ್ಲ.
1989ರಲ್ಲಿ ಫ್ಲವರ್ ಕಾರ್ಪೆಟ್ ಪಿಂಕ್ ಎಂಬ ತನ್ನ ಮೊದಲ ಫ್ಲವರ್ ಕಾರ್ಪೆಟ್ ಗುಲಾಬಿಯನ್ನು ಆತ ಪರಿಚಯಿಸಿದ.ಸಾಟಿಯಿಲ್ಲದ ರೋಗ ಸಹಿಷ್ಣುತೆಯ ಜೊತೆಗೆ, ಹೆಚ್ಚೂ ಕಮ್ಮಿ ಯಾವುದೇ ಗುಲಾಬಿಯೂ ತೋರ್ಪಡಿಸದ, ಸುದೀರ್ಘ ಅವಧಿಯವರೆಗೆ (ಹವಾಮಾನವನ್ನು ಆಧರಿಸಿ 5 ರಿಂದ 9 ತಿಂಗಳವರೆಗೆ) ಹೂಬಿಡುವ ಸ್ವಭಾವವನ್ನು ಈ ಗುಲಾಬಿಯು ಹೊಂದಿತ್ತು. ಯಾವುದೇ ಅಲಂಕಾರಿಕ ಉದ್ದೇಶದ ಸಮರುವಿಕೆ (ಕತ್ತರಿಸುವಿಕೆ) ಅಗತ್ಯವೂ ಇದಕ್ಕಿರಲಿಲ್ಲ; ಕೇವಲ ಉದ್ದಹಿಡಿಯ ಕತ್ತರಿಗಳು, ಹೆರೆಗತ್ತರಿಗಳನ್ನು ಬಳಸಿಕೊಂಡು ಅಥವಾ ಟ್ರಾಕ್ಟರ್ ನೀಳಕೊಯ್ತದ (1/3 ಭಾಗದಷ್ಟು ಅಥವಾ ಮಣ್ಣಿನ ಮಟ್ಟದವರೆಗೆ ಕತ್ತರಿಸಿದರೂ ಬಾಧಕವಿಲ್ಲ) ವಿಧಾನದಲ್ಲಿ ಈ ಗುಲಾಬಿಗಳನ್ನು ಕತ್ತರಿಸಬಹುದಿತ್ತು. ಅಷ್ಟೇ ಅಲ್ಲ, ಇವೆಲ್ಲವನ್ನೂ ಸೊಗಸಾದ, ಹುಲುಸಾಗಿರುವ ಉಜ್ವಲ ಹಸಿರಿನ ಎಲೆಗೊಂಚಲಿನ ಮೇಲೆ ಮಾಡಬಹುದಿತ್ತು.
ನಿರಂತರವಾದ ಅಭಿವೃದ್ಧಿ ಮತ್ತು ಸದೃಢವಾದ ತಳಿಸೃಷ್ಟಿ ಕಾರ್ಯಕ್ರಮವೊಂದರಿಂದಾಗಿ ಬಿಳಿ, ಆಪಲ್ಬ್ಲಾಸಂ, ಕೆಂಪು, ಹಳದಿ, ಹೊಂಬಣ್ಣ ಮತ್ತು ಹವಳದ ಬಣ್ಣವೇ ಮೊದಲಾದ ವಿವಿಧ ವರ್ಣಗಳ ಫ್ಲವರ್ ಕಾರ್ಪೆಟ್ ಗುಲಾಬಿಗಳು ಲಭ್ಯವಾದವು. ಈ ಅವಧಿಯಲ್ಲಿ ಅವನ ಮಗ ರೀನ್ಹಾರ್ಡ್ ನೋಕ್ನ ನಾಯಕತ್ವದಡಿಯಲ್ಲಿ ತಳಿಸೃಷ್ಟಿ ಕಾರ್ಯವು ಮುಂದುವರಿಯಿತು. 2007ರಲ್ಲಿ ಕಂಡುಬಂದ ಮುಂದಿನ ತಳಿಸೃಷ್ಟಿಯಲ್ಲಿ ಫ್ಲವರ್ ಕಾರ್ಪೆಟ್ ಪಿಂಕ್ ಸುಪ್ರೀಮ್, ಕೇಸರಿ-ಕಡುಗೆಂಪು ಮತ್ತು ಕಿತ್ತಲೆ ಹಳದಿ ಬಣ್ಣದೊಂದಿಗಿನ ಆತನ ಹೊಸ ಪೀಳಿಗೆಯ ತಳಿಗಳು ಪರಿಚಯಗೊಂಡವು. ಮೇಲೆ ಹೆಸರಿಸಲಾದ ಎಲ್ಲ ವಿಶಿಷ್ಟ ಲಕ್ಷಣಗಳ ಜೊತೆಗೆ, 42Cವರೆಗಿನ ಬಿಸಿಯಾದ ಹವಾಮಾನದ ಸನ್ನಿವೇಶಗಳಲ್ಲೂ ಈ ಗುಲಾಬಿಗಳು ನಿರಾಳವಾಗಿರುತ್ತವೆ.
== ಸಮರುವಿಕೆ ==
[[ಚಿತ್ರ:Rose3800ppx.jpg|thumb|right|250px|ಈ ಗುಲಾಬಿ ಪೊದೆಯನ್ನು ಸದ್ಯದ ಸ್ವರೂಪಕ್ಕೆ ಕತ್ತರಿಸಲಾಗಿದೆ]]
ಗುಲಾಬಿಯ [[ಸಮರುವಿಕೆ]]ಯು ಒಂದು ತೋಟಗಾರಿಕಾ ಕಲಾಸ್ವರೂಪ ಎಂದು ಕೆಲವೊಮ್ಮೆ ಗುರುತಿಸಲಾಗಿದೆ. ಯಾವ ಬಗೆಯ ಗುಲಾಬಿಯನ್ನು ಸಮರಬೇಕು, ಸಮರುವ ಹಿಂದಿರುವ ಕಾರಣವೇನು ಮತ್ತು ಸಮರುವಿಕೆಗಾಗಿ ಆಯ್ದುಕೊಂಡ ಸಮಯವು ವರ್ಷದ ಯಾವ ಕಾಲದಲ್ಲಿ ಬರುತ್ತದೆ ಎಂಬುದನ್ನು ಈ ಪ್ರಕ್ರಿಯೆಯು ಹೆಚ್ಚಾಗಿ ಅವಲಂಬಿಸಿರುತ್ತದೆ.
ಕಟ್ಟುನಿಟ್ಟಾಗಿ ಐರೋಪ್ಯ ವಂಶಪರಂಪರೆಯಿಂದ ಬಂದ ಬಹುತೇಕ ಹಳೆಯ ಉದ್ಯಾನ ಗುಲಾಬಿಗಳು (ಆಲ್ಬಾಗಳು, ದಮಾಸ್ಕ್ಗಳು, ಗ್ಯಾಲಿಕಾಗಳು ಇತ್ಯಾದಿ) ವರ್ಷಕ್ಕೊಮ್ಮೆ ಹೂಬಿಡುವ ಪೊದೆಸಸ್ಯಗಳಾಗಿದ್ದು, ವಸಂತಋತುವಿನ ಅಂತ್ಯದಲ್ಲಿ ಅಥವಾ ಬೇಸಿಗೆಯ ಆರಂಭದಲ್ಲಿ ಎರಡು-ವರ್ಷ-ಹಳೆಯ (ಅಥವಾ ಹಳೆಯದಾದ) ಜಲ್ಲೆಗಳ ಮೇಲೆ ಇವುಗಳ ಹೂವುಗಳು ಅರಳುತ್ತವೆ. ಇಂಥಾ ಸನ್ನಿವೇಶದಲ್ಲಿ ಅವುಗಳ ಸಮರುವಿಕೆಯ ಅಗತ್ಯತೆಗಳು ತೀರಾ ಕನಿಷ್ಟವಾಗಿರುತ್ತವೆ ಮತ್ತು ಅವನ್ನೇ ಹೋಲುವ [[ಲೈಲ್ಯಾಕ್]] ಅಥವಾ [[ಫಾರ್ಸಿತಿಯಾ]]ನಂತಹ ಯಾವುದೇ ಪೊದೆಸಸ್ಯಗಳಿಗೆ ಹೋಲಿಸಿದಾಗ ಈ ಅಗತ್ಯತೆಗಳು ಒಟ್ಟಾರೆಯಾಗಿ ಅದೇ ರೀತಿಯಲ್ಲಿರುತ್ತವೆ. ಸಾರ್ವತ್ರಿಕವಾಗಿ ಹೇಳುವುದಾದರೆ, ಹೊಸ ಹೊಸ ಜಲ್ಲೆಗಳಿಗೆ ಅವಕಾಶ ಕಲ್ಪಿಸಲು ಕೇವಲ ಹಳತಾದ, ಬಡಕಲಾಗಿರುವ ಜಲ್ಲೆಗಳನ್ನಷ್ಟೇ ಸಮರಿಹಾಕಬೇಕು.ಒಂದು ವರ್ಷ ಹಳೆಯದಾದ ಜಲ್ಲೆಗಳನ್ನು ಎಂದಿಗೂ ಸಮರಿಹಾಕಬಾರದು. ಏಕೆಂದರೆ ಹಾಗೆ ಮಾಡುವುದರಿಂದ ಮುಂದಿನ ವರ್ಷದ ಹೂವಿನ ಮೊಗ್ಗುಗಳು ತೊಡೆದುಹಾಕಲ್ಪಡುತ್ತವೆ. ಸಸ್ಯದ ಒಟ್ಟಾರೆ ಎತ್ತರ ಅಥವಾ ಅಗಲವನ್ನು ಕಡಿಮೆ ಮಾಡುವ ದೃಷ್ಟಿಯಿಂದ, ಹೂವುಗಳು ಮುಸುಕಾದ ನಂತರ ತಕ್ಷಣವೇ ಆ ಪೊದೆಸಸ್ಯಗಳನ್ನು ಹಗುರವಾಗಿ ಸಮರಿಹಾಕಬಹುದು. ಸಾರ್ವತ್ರಿಕವಾಗಿ ಹೇಳುವುದಾದರೆ, ಆಧುನಿಕ ಮಿಶ್ರತಳಿಗಳಿಗೆ ಹೋಲಿಸಿದಾಗ ಹಳೆಯ ಉದ್ಯಾನ ಗುಲಾಬಿಗಳ ಸಮರುವಿಕೆಯ ಅಗತ್ಯತೆಗಳು ತುಂಬಾ ಕಡಿಮೆ ಪ್ರಯಾಸಕರವಾಗಿದೆ ಮತ್ತು ವ್ಯವಸ್ಥಿತವಾಗಿದೆ ಎಂದು ಹೇಳಬಹುದು.
ಮಿಶ್ರತಳಿ ಚಹಾ ಗುಲಾಬಿಗಳು, ಫ್ಲೋರಿಬಂಡಗಳು, ಗ್ರ್ಯಾಂಡಿಫ್ಲೋರಗಳು, ಆಧುನಿಕ ಚಿಕಣಿ ಗಾತ್ರದ ಗುಲಾಬಿಗಳು ಹಾಗೂ ಇಂಗ್ಲಿಷ್ ಗುಲಾಬಿಗಳನ್ನು ಒಳಗೊಂಡಂತೆ, ಆಧುನಿಕ ಮಿಶ್ರತಳಿಗಳು ಒಂದು ಸಂಕೀರ್ಣ ಆನುವಂಶಿಕ ಹಿನ್ನೆಲೆಯನ್ನು ಹೊಂದಿದ್ದು, ಅದು ಹೆಚ್ಚೂಕಮ್ಮಿ ಯಾವಾಗಲೂ ಚೈನಾ ಗುಲಾಬಿಗಳನ್ನು (''R. ಚೈನೆನ್ಸಿಸ್'' ) ಒಳಗೊಳ್ಳುತ್ತದೆ.
ಚೈನಾ ಗುಲಾಬಿಗಳು ಆರ್ದ್ರತೆಯನ್ನುಳ್ಳ ಉಪ-ಉಷ್ಣವಲಯದ ಪ್ರಾಂತ್ಯಗಳಿಂದ ಬಂದ ನಿತ್ಯಬೆಳೆಯುವ, ನಿತ್ಯಹೂಬಿಡುವ ಗುಲಾಬಿಗಳಾಗಿದ್ದು, ಬೆಳೆಯುವ ಋತುವಿನ ಅವಧಿಯಲ್ಲಿ ಉತ್ಪತ್ತಿಯಾಗುತ್ತಿದ್ದ ಯಾವುದೇ ಹೊಸ ಸಸ್ಯಕ ಬೆಳೆಯ ಮೇಲೆ ಒಂದೇ ಸಮನೆ ಹೂಬಿಡುತ್ತಿದ್ದವು. ಅವುಗಳ ಆಧುನಿಕ ಮಿಶ್ರತಳಿ ಸಂತತಿಗಳು ಅದೇ ಸ್ವರೂಪದ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಹಳೆಯ ಉದ್ಯಾನ ಗುಲಾಬಿಗಳಂತಿರದ ಆಧುನಿಕ ಮಿಶ್ರತಳಿಗಳು, ಬೆಳವಣಿಗೆಯ ಋತುವಿನ ಅವಧಿಯಲ್ಲಿ ಹುಟ್ಟಿಕೊಳ್ಳುವ ಯಾವುದೇ ಹೊಸ ಜಲ್ಲೆಗಳ ಮೇಲೆ ಒಂದೇ ಸಮನೆ (ಹಿಮದಿಂದ ನಿಲ್ಲಿಸಲ್ಪಡುವವರೆಗೂ) ಹೂಬಿಡುತ್ತವೆ. ಆದ್ದರಿಂದ, ಹೂಬಿಡುವ ಸಾಮರ್ಥ್ಯವೆಲ್ಲಾ ಮುಗಿದುಹೋಗಿರುವ ಯಾವುದೇ ಕಾಂಡವನ್ನು ಸಮರಿಹಾಕುವುದು ಅವುಗಳಿಗೆ ಅತ್ಯಗತ್ಯವಾಗಿರುತ್ತದೆ. ಹೊಸ ಬೆಳವಣಿಗೆಯನ್ನು ಹುಟ್ಟಿಸುವ ಕಡೆಗೆ ಹಾಗೂ ತನ್ಮೂಲಕ ಹೊಸ ಹೂವುಗಳ ಅರಳುವಿಕೆಯ ಕಡೆಗೆ ಸಸ್ಯದ ಶಕ್ತಿಯನ್ನು ತಿರುಗಿಸಲು ಈ ಕ್ರಮ ಅಗತ್ಯವಾಗಿರುತ್ತದೆ.
ಇದಕ್ಕೆ ಹೆಚ್ಚುವರಿಯಾಗಿ, ಶೀತದ ಚಳಿಯ ಹವಾಮಾನದಲ್ಲಿ ನೆಡಲ್ಪಟ್ಟ ಆಧುನಿಕ ಮಿಶ್ರತಳಿಗಳಿಗೆ ಹೆಚ್ಚೂಕಮ್ಮಿ ಸಾರ್ವತ್ರಿಕವಾಗಿ, ವಸಂತಋತುವಿನ ಆರಂಭದಲ್ಲಿ ಒಂದು "ಗಡುಸಾದ" ವಾರ್ಷಿಕ ಸಮರುವಿಕೆಯ (ಇದರಿಂದಾಗಿ ಎಲ್ಲಾ ಜಲ್ಲೆಗಳ ಎತ್ತರವೂ 8"–12"ರಷ್ಟಕ್ಕೆ ಇಳಿಯುತ್ತದೆ) ಅಗತ್ಯವಿರುತ್ತದೆ. ಅವುಗಳ ಸಂಕೀರ್ಣ ಚೈನಾ ಗುಲಾಬಿಯ ಹಿನ್ನೆಲೆಯ ಕಾರಣದಿಂದಾಗಿ, ಆಧುನಿಕ ಮಿಶ್ರತಳಿಗಳು ಐರೋಪ್ಯ ಹಳೆಯ ಉದ್ಯಾನ ಗುಲಾಬಿಗಳಷ್ಟು ಶೀತಸಹಿಷ್ಣುಗಳಲ್ಲ. ಜೊತೆಗೆ, ಚಳಿಗಾಲದ ಕಡಿಮೆ ಉಷ್ಣತೆಗಳು ಒಡ್ಡಲ್ಪಟ್ಟ ಜಲ್ಲೆಗಳನ್ನು ಒಮ್ಮೊಮ್ಮೆ ಇಂಗಿಸುತ್ತವೆ ಅಥವಾ ಸಾಯಿಸುತ್ತವೆ. ವಸಂತಋತುವಿನಲ್ಲಿ ಅವುಗಳನ್ನು ಸಮರಿಹಾಕದೇ ಹಾಗೇ ಬಿಟ್ಟರೆ, ಹಾನಿಗೊಳಗಾದ ಈ ಜಲ್ಲೆಗಳು ಸದರಿ ಪೊದೆಸಸ್ಯದ ಬೇರಿನ ಭಾಗದವರೆಗೂ ಇಂಗುತ್ತಾ ಅಥವಾ ಸಾಯುತ್ತಾ ಹೋಗಿ, ಕೊನೆಗೆ ದುರ್ಬಲವಾದ, ರೂಪ ಕಳೆದುಕೊಂಡ ಸಸ್ಯದ ರೂಪದಲ್ಲಿ ತೋರುತ್ತವೆ.
ಮಿಶ್ರತಳಿ ಚಹಾ ಗುಲಾಬಿಗಳು, ಫ್ಲೋರಿಬಂಡಗಳು ಇತ್ಯಾದಿಗಳ ವಾರ್ಷಿಕ "ಗಡುಸಾದ" ಸಮರುವಿಕೆಯನ್ನು ಸಾಮಾನ್ಯವಾಗಿ ವಸಂತಋತುವಿನ ಆರಂಭದಲ್ಲಿ ಮಾಡಬೇಕು. ಬಹುತೇಕ ತೋಟಗಾರರು ಅಥವಾ ಮಾಲಿಗಳು ಈ ಸಮರುವಿಕೆಯನ್ನು ಫಾರ್ಸಿತಿಯಾ ಪೊದೆಸಸ್ಯಗಳು ಹೂಬಿಡುವ ಸಮಯದಲ್ಲಿಯೇ ಮಾಡುತ್ತಾರೆ. ಒಂದು ಸಸ್ಯಕ ಮೊಗ್ಗಿಗಿಂತ ಮೇಲಿರುವ ಭಾಗದಲ್ಲಿ ಜಲ್ಲೆಗಳನ್ನು ಕತ್ತರಿಸಬೇಕು (ಜಲ್ಲೆಯೊಂದರ ಮೇಲೆ ಹಿಂದೊಮ್ಮೆ ಎಲೆಯೊಂದು ಬೆಳೆದಿದ್ದರ ಗುರುತನ್ನು ಆಧರಿಸಿ ಈ ಬಿಂದುವನ್ನು ಗುರುತಿಸಬಹುದು).
ಹಳೆಯ ಉದ್ಯಾನ ಗುಲಾಬಿಗಳು ಹಾಗೂ ಆಧುನಿಕ ತಳಿಗಳೆರಡರಲ್ಲೂ ಯಾವುದೇ ದುರ್ಬಲ, ಹಾನಿಗೊಳಗಾದ ಅಥವಾ ರೋಗಗ್ರಸ್ತ ಭಾಗವನ್ನು ಸಂಪೂರ್ಣವಾಗಿ ಸಮರಿಹಾಕಬೇಕು. ಅದು ವರ್ಷದ ಯಾವುದೇ ಕಾಲವಾಗಿದ್ದರೂ ಅದನ್ನು ಹಾಗೆಯೇ ಬಿಡಬಾರದು. ಯಾವುದೇ ಗುಲಾಬಿಯ ಯಾವುದೇ ಸಮರುವಿಕೆಯನ್ನು ಕೂಡಾ ಇದೇ ರೀತಿ ಮಾಡಬಹುದು. ಸಸ್ಯಕ ಮೊಗ್ಗೊಂದರ ಮೇಲ್ಭಾಗದಲ್ಲಿ ಸುಮಾರು ನಲವತ್ತು ಡಿಗ್ರಿ ಕೋನದಲ್ಲಿ ಕತ್ತರಿಸುವಿಕೆಯನ್ನು ಮಾಡಬೇಕು. ಇದರಿಂದಾಗಿ ಸಮರುವಿಕೆಗೆ ಒಳಗಾದ ಕಾಂಡವು ಅತಿ ಶೀಘ್ರವಾಗಿ ಹೊಸ ಊತಕವನ್ನು ಬೆಳೆಸಿಕೊಳ್ಳಲು ಹಾಗೂ ಕತ್ತರಿಸಿದ ಭಾಗದ ಮೇಲೆ ತೇವಾಂಶವು ಸಂಗ್ರಹವಾಗುವುದನ್ನು ತಗ್ಗಿಸಲೂ ಸಹ ಇದು ಸಹಾಯಕವಾಗುತ್ತದೆ. ಇಲ್ಲದಿದ್ದರೆ ಅದು ರೋಗದ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಗುಲಾಬಿಯ ಎಲ್ಲಾ ಸಾರ್ವತ್ರಿಕೆ ಸಮರುವಿಕೆಗಾಗಿ (ಅಣಿ ಮಾಡುವಿಕೆಗೆ ಹೂವುಗಳನ್ನು ಕತ್ತರಿಸುವುದೂ ಸೇರಿದಂತೆ), ಚೂಪಾದ ಸಮರುಗತ್ತರಿ ಅಥವಾ ಕಸಿಗತ್ತರಿಗಳನ್ನು (ಕೈಯಲ್ಲಿ ಹಿಡಿಯುವ, ಕುಡುಗೋಲು-ಅಲಗುಳ್ಳ ಕಸಿಗತ್ತರಿಗಳನ್ನು) ಬಳಸಬೇಕು. 1/2" ಅಥವಾ ಅದಕ್ಕಿಂತ ಕಡಿಮೆ ವ್ಯಾಸದ ಯಾವುದೇ ಬೆಳೆತವನ್ನು ಕತ್ತರಿಸಲು ಇವನ್ನು ಬಳಸಬಹುದು. 1/2"ಗಿಂತ ಹೆಚ್ಚಿನ ದಪ್ಪವನ್ನು ಹೊಂದಿರುವ ಜಲ್ಲೆಗಳಿಗಾಗಿ ಮರದ ಗಣೆಯ ಕತ್ತರಿಗಳು ಅಥವಾ ಒಂದು ಸಣ್ಣ ಕೈಗರಗಸವನ್ನು ಸಾಮಾನ್ಯವಾಗಿ ಹೆಚ್ಚು ಪರಿಣಾಮಕಾರಿಯಾಗಿವೆ. ಏಕೆಂದರೆ, ಇಂಥಾ ಸನ್ನಿವೇಶಗಳಲ್ಲಿ ಸಮರುಗತ್ತರಿಗಳು ಹಾನಿಗೊಳಗಾಗಬಹುದು ಅಥವಾ ಮುರಿಯಬಹುದು.
=== ಒಣಗಿದ ಹೂವನ್ನು ತೆಗೆಯುವಿಕೆ ===
ಗುಲಾಬಿ ಪೊದೆಸಸ್ಯಗಳು ಹೂಬಿಡುವ ಋತುವಿನ ಅವಧಿಯಲ್ಲಿ, ಆಕರ್ಷಣೆ ಕಳೆದುಕೊಂಡ, ಮಸುಕಾದ, ಸುರುಟಿಕೊಂಡಿರುವ ಅಥವಾ ಬಣ್ಣವನ್ನು ಕಳೆದುಕೊಂಡಿರುವ ಅವುಗಳ ಯಾವುದೇ ಹೂವುಗಳನ್ನು ಕೈಯಿಂದ ತೆಗೆದುಹಾಕುವ ಸರಳ ಅಭ್ಯಾಸವನ್ನು "ಒಣಗಿದ ಹೂವನ್ನು ತೆಗೆಯುವಿಕೆ" ಎನ್ನುತ್ತಾರೆ. ಹಣ್ಣಿನ ಉತ್ಪಾದನೆಗಿಂತ ಮಿಗಿಲಾಗಿ, ಸಸ್ಯವು ತನ್ನ ಶಕ್ತಿ ಮತ್ತು ಸಂಪನ್ಮೂಲಗಳನ್ನು ಹೊಸ ಕವಲುಗಳು ಹಾಗೂ ಹೂವುಗಳ ಕಡೆಗೆ ಕೇಂದ್ರೀಕರಿಸಲು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಅಭ್ಯಾಸವನ್ನು ಕೈಗೊಳ್ಳಲಾಗುತ್ತದೆ. ಒಂದು ವೇಳೆ ಕಳೆಗುಂದಿದ ಹೂವುಗಳು ಅಸಹ್ಯಕರವಾಗಿ ಕಾಣುತ್ತಿದ್ದರೆ ಸೌಂದರ್ಯಾರಾಧನೆಯ ಉದ್ದೇಶಗಳಿಗಾಗಿಯೂ ಒಣಗಿದ ಹೂವನ್ನು ತೆಗೆಯಬಹುದು. ಈ ಪ್ರಕ್ರಿಯೆಗೆ ಗುಲಾಬಿಗಳು ವಿಶೇಷವಾಗಿ ಸ್ಪಂದಿಸುತ್ತವೆ. ಒಣಗಿದ ಹೂವುಗಳನ್ನು ತೆಗೆಯುವಾಗ, ಕೇವಲ ಹೂವಿನ ತಳವನ್ನು ಮಾತ್ರವೇ ಅಲ್ಲದೇ, ಮೊದಲ 5-ಪರ್ಣಕಗಳ ಎಲೆಯ ಕೆಳಗಿನ ಕಾಂಡದವರೆಗೆ ತೆಗೆಯಬೇಕು. ಇದರಿಂದಾಗಿ ಮುಂದಿನ ಕವಲೊಡೆಯುವಿಕೆ ಹಾಗೂ ಹೂವಿನ ಉತ್ಪಾದನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.
ಒಣಗಿದ ಹೂವನ್ನು ತೆಗೆಯುವ ಅಭ್ಯಾಸದಿಂದಾಗಿ ಗುಲಾಬಿಗಳ ವಿವಿಧ ಪ್ರಭೇದಗಳ ಮೇಲೆ ಬಗೆಬಗೆಯ ಪರಿಣಾಮಗಳುಂಟಾಗುತ್ತವೆ. ಹಳೆಯ ಉದ್ಯಾನ ಗುಲಾಬಿಗಳಿರಲಿ ಅಥವಾ ಹೆಚ್ಚು ಆಧುನಿಕವಾದ ಮಿಶ್ರತಳಿ ಪ್ರಭೇದಗಳಿರಲಿ, ನಿರಂತರ ಹೂಬಿಡುವ ಪ್ರಭೇದಗಳಲ್ಲಿ ಒಣಗಿದ ಹೂವನ್ನು ತೆಗೆಯುವುದರಿಂದ ಸದರಿ ಗುಲಾಬಿ ಸಸ್ಯವು ಹೊಸ ಕವಲುಗಳು, ಎಲೆಗಳು ಮತ್ತು ಹೂವುಗಳನ್ನು ನಿರಂತರವಾಗಿ ರೂಪಿಸುತ್ತಲೇ ಹೋಗುತ್ತದೆ. "ಒಮ್ಮೆ ಮಾತ್ರವೇ ಹೂಬಿಡುವ" (ಅವು ಪ್ರತಿ ಋತುವಿನಲ್ಲೂ ಒಮ್ಮೆ ಮಾತ್ರವೇ ಹೂಬಿಡುತ್ತವೆ) ಪ್ರಭೇದಗಳಲ್ಲಿ ಮುಂದಿನ ಹೂಬಿಡುವ ಋತುವು ಬರುವವರೆಗೂ ಹೊಸ ಹೂವುಗಳು ಕಾಣಿಸಿಕೊಳ್ಳುವುದಿಲ್ಲವಾದರೂ, ಒಣಗಿದ ಹೂವನ್ನು ತೆಗೆಯುವ ಕ್ರಮದಿಂದಾಗಿ ಸಸ್ಯವು ಹೊಸ ಹಸಿರು ಬೆಳವಣಿಗೆಯನ್ನು ರೂಪಿಸುವ ಪರಿಣಾಮವನ್ನು ಕಾಣಬಹುದು.
ಬಹುತೇಕ ಗುಲಾಬಿ ತೋಟಗಾರರು ಅಥವಾ ಮಾಲಿಗಳು ತಮ್ಮ ಗುಲಾಬಿ ಸಸ್ಯಗಳನ್ನು ಬಲಿಷ್ಠವಾಗಿ, ನವಚೈತನ್ಯದೊಂದಿಗೆ ಮತ್ತು ಉತ್ಪಾದನಾಶೀಲವಾಗಿ ಇರಿಸಿಕೊಳ್ಳಲು ಒಣಗಿದ ಹೂವನ್ನು ತೆಗೆಯುವ ಅಭ್ಯಾಸವನ್ನು ಬಳಸುತ್ತಾರೆ. ಇದು ಗುಲಾಬಿ ಸಸ್ಯಗಳ ಬೆಳವಣಿಗೆಯನ್ನು ಚುರುಕಾಗಿಸುತ್ತದೆ. ಆದರೆ, ಉತ್ತಮವಾದ ಗುಲಾಬಿ ಹಣ್ಣುಗಳನ್ನು ಉತ್ಪತ್ತಿಮಾಡುವ ರೋಸಾ ಗ್ಲೌಕಾ ಅಥವಾ ರೋಸಾ ಮೊಯೆಸೈಯಂತಹ ಜಾತಿಗುಲಾಬಿಗಳನ್ನು ಒಣಗಿದ ಹೂವು ತೆಗೆಯುವ ಪ್ರಕ್ರಿಯೆಗೆ ಒಳಪಡಿಸಬಾರದು.
== ಇತಿಹಾಸ ==
ತನ್ನ ಸೌಂದರ್ಯದಿಂದಾಗಿ ಯಾವಾಗಲೂ ಉತ್ತಮ ಮೌಲ್ಯವನ್ನು ಗಳಿಸಿಕೊಂಡೇ ಬಂದಿರುವ ಗುಲಾಬಿಯು, ಸಂಕೇತಗಳ ಸುದೀರ್ಘ ಇತಿಹಾಸವನ್ನೇ ಹೊಂದಿದೆ.ಪ್ರಾಚೀನ ಕಾಲದ [[ಗ್ರೀಕರು]] ಮತ್ತು [[ಪ್ರಾಚೀನ ರೋಮ್|ರೋಮನ್ನರು]] ಗುಲಾಬಿಯನ್ನು ಅಫ್ರೋಡೈಟ್ ಮತ್ತು ವೀನಸ್ ಎಂದು ಉಲ್ಲೇಖಿಸಲ್ಪಡುವ ತಂತಮ್ಮ ಪ್ರೇಮದೇವತೆಯರೊಂದಿಗೆ ಗುರುತಿಸಿದ್ದಾರೆ.
[[ರೋಮ್|ರೋಮ್]]ನಲ್ಲಿ, ರಹಸ್ಯವಾದ ಅಥವಾ ಗೋಪ್ಯವಾದ ವಿಷಯಗಳ ಚರ್ಚೆಯು ನಡೆಯುತ್ತಿದ್ದ ಕೋಣೆಯ ಬಾಗಿಲ ಮೇಲೆ ಕಾಡುಗುಲಾಬಿಯೊಂದನ್ನು ಇರಿಸಲಾಗುತ್ತಿತ್ತು. ''[[ಸಬ್ ರೋಸಾ]]'' ಅಥವಾ "ಗುಲಾಬಿಯ ಕೆಳಗೆ" ಎಂಬ ಪದಗುಚ್ಛವು ರಹಸ್ಯವನ್ನು ಕಾಪಾಡುವುದು ಎಂಬ ಅರ್ಥವನ್ನು ನೀಡುತ್ತದೆ. ಇದು ಸದರಿ ಪ್ರಾಚೀನ ರೋಮನ್ನರ ಪರಿಪಾಠದಿಂದ ಮೈದಳೆದಿದೆ.
ಹಿಂದಿನ ಕಾಲದ [[ಕ್ರೈಸ್ತ ಧರ್ಮ|ಕ್ರಿಶ್ಚಿಯನ್ನರು]] ಗುಲಾಬಿಯ ಐದು ದಳಗಳನ್ನು [[ಕ್ರಿಸ್ತ]]ನಿಗಾದ ಐದು ಗಾಯಗಳೊಂದಿಗೆ ಸಮೀಕರಿಸಿದ್ದಾರೆ ಅಥವಾ ಗುರುತಿಸಿಕೊಂಡಿದ್ದಾರೆ.
ಈ ವ್ಯಾಖ್ಯಾನವಿದ್ದಾಗ್ಯೂ, ಅವರ ನಾಯಕರುಗಳು ಇದನ್ನು ಪರಿಗ್ರಹಿಸಲು ಹಿಂದುಮುಂದು ನೋಡಿದರು. ಏಕೆಂದರೆ, ಇದು ರೋಮನ್ನರ ದೌರ್ಜನ್ಯಗಳು ಹಾಗೂ ಅನಾಗರಿಕ ಮತಾಚರಣೆಯೊಂದಿಗೆ ಸಂಬಂಧ ಹೊಂದಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಅಂತಿಮವಾಗಿ ಕೆಂಪು ಗುಲಾಬಿಯನ್ನು [[ಕ್ರೈಸ್ತ ಧರ್ಮ|ಕ್ರಿಶ್ಚಿಯನ್]] ಹುತಾತ್ಮರುಗಳ ರಕ್ತದ ಒಂದು ಸಂಕೇತವಾಗಿ ಸ್ವೀಕರಿಸಲಾಯಿತು. ಕಾಲಕ್ರಮೇಣ ಗುಲಾಬಿಗಳು ವರ್ಜಿನ್ ಮೇರಿಯೊಂದಿಗೂ (ಯೇಸು ಕ್ರಿಸ್ತನ ತಾಯಿಯಾದ ಮೇರಿ ಕನ್ಯೆ) ಗುರುತಿಸಲ್ಪಟ್ಟವು.
[[ಚೀನಾ|ಚೈನಾ]]ದಿಂದ ಬಂದ ಸಾರ್ವಕಾಲಿಕವಾಗಿ ಅರಳುವ ಗುಲಾಬಿಗಳು 1800ರ ದಶಕದಲ್ಲಿ [[ಯುರೋಪ್]]ನಲ್ಲಿ ಪರಿಚಯವಾಗುವುದರೊಂದಿಗೆ, ಗುಲಾಬಿ ಸಂಸ್ಕೃತಿಯು ತನ್ನದೇ ಆದ ನೆಲೆಯನ್ನು ಕಂಡುಕೊಂಡಿತು. ಪ್ರಸ್ತುತ ಗುಲಾಬಿಗಳ ಸಾವಿರಾರು ಪ್ರಭೇದಗಳು ಲಭ್ಯವಿದ್ದು, ಹೂವಿನ ಆಕಾರ, ಗಾತ್ರ, ಪರಿಮಳ ಮತ್ತು ಮುಳ್ಳುಗಂತಿಗಳು ಇಲ್ಲದಿರುವಿಕೆಯ ಗುಣಲಕ್ಷಣಗಳಿಗಾಗಿ ಅವುಗಳನ್ನು ಅಭಿವೃದ್ಧಿಪಡಿಸಲಾಗಿದೆ.
[[ಚಿತ್ರ:roses renoir.JPG|upright|thumb|150px|ಹೂಕುಂಡವೊಂದರಲ್ಲಿನ ಗುಲಾಬಿಗಳು, ರೆನೋಯ್ರ್ ರಚಿಸಿರುವ ಕೋಸು ಗುಲಾಬಿಯ ವರ್ಣಚಿತ್ರ]]
== ಕಲೆ ==
[[ಕಲಾವಿದ]]ರು ಗುಲಾಬಿಯನ್ನು ಆಗಿಂದಾಗ್ಗೆ ಅಭಿವ್ಯಕ್ತಗೊಳಿಸಿದ್ದಾರೆ. ಲಕ್ಸೆಂಬರ್ಗ್ನಲ್ಲಿ ಹುಟ್ಟಿದ [[ಬೆಲ್ಜಿಯಂ|ಬೆಲ್ಜಿಯಾದ]] ಕಲಾವಿದನಾದ [[ಪಿಯರೆ-ಜೋಸೆಫ್ ರೆಡೌಟೆ]]ಯು ಗುಲಾಬಿಗಳ ಒಂದಷ್ಟು ಅತಿವಿಸ್ತೃತ ವರ್ಣಚಿತ್ರಗಳನ್ನು ರಚಿಸಿದ್ದಾನೆ. [[ಹೆನ್ರಿ ಫ್ಯಾಂಟಿನ್-ಲೆಟೌರ್]] ಕೂಡಾ ಸ್ಥಿರ ಜೀವಗಳನ್ನು ಯಥೇಚ್ಛವಾಗಿ ಚಿತ್ರಿಸಿರುವ ಓರ್ವ ವರ್ಣಚಿತ್ರಕಾರನಾಗಿದ್ದು, ಗುಲಾಬಿಗಳನ್ನು ಒಳಗೊಂಡಂತೆ ನಿರ್ದಿಷ್ಟವಾಗಿ ಹೂವುಗಳನ್ನು ಚಿತ್ರಿಸಿದ್ದಾನೆ. 'ಫ್ಯಾಂಟಿನ್-ಲೆಟೌರ್' ಗುಲಾಬಿಗೆ ಈ ಕಲಾವಿದನ ಹೆಸರನ್ನೇ ಇಡಲಾಗಿದೆ.
[[ಕ್ಲೌಡೆ ಮೊನೆಟ್]], [[ಪಾಲ್ ಸಿಝೇನ್]] ಮತ್ತು [[ಪಿಯರೆ-ಅಗಸ್ಟೆ ರೆನೊಯರ್]] ಇವರೇ ಮೊದಲಾದವರನ್ನು ಒಳಗೊಂಡಂತೆ ಇತರ ಚಿತ್ರಪ್ರಭಾವ ನಿರೂಪಣಾವಾದಿಗಳು ತಮ್ಮ ಇತರ ಕಲಾಕೃತಿಗಳ ಪಟ್ಟಿಯಲ್ಲಿ ಗುಲಾಬಿಗಳ ವರ್ಣಚಿತ್ರಗಳನ್ನೂ ಹೊಂದಿದ್ದಾರೆ.
== ಜನಪ್ರಿಯ ಸಂಸ್ಕೃತಿ ==
{{see|Rose (symbolism)}}
[[ಚಿತ್ರ:Red Roses.jpg|thumb|right|ಕೆಂಪು ಗುಲಾಬಿಗಳು]]
[[ಚಿತ್ರ:Santjordi.jpg|thumb|ಕೆಟಲೋನಿಯಾದಲ್ಲಿ ಸಂತ ಜಾರ್ಜ್ರ ದಿನದಂದು ಗುಲಾಬಿ ಹೂಗಳನ್ನು ಮಾರುತ್ತಿರುವುದು]]
ಗುಲಾಬಿಗಳು ಅನಾದಿಕಾಲದಿಂದಲೂ [[ಪ್ರೇಮ]] ಮತ್ತು [[ಸುಂದರ|ಸೌಂದರ್ಯ]]ದ ಸಂಕೇತಗಳಾಗಿವೆ. [[ಐಸಿಸ್ ದೇವತೆ|ಐಸಿಸ್]] ಮತ್ತು [[ಗ್ರೀಕರ ಪ್ರೇಮದೇವತೆ|ಅಫ್ರೋಡೈಟ್]] ದೇವತೆಗಳೂ ಸೇರಿದಂತೆ [[ದೇವತೆ]]ಗಳಿಗೆ ಗುಲಾಬಿಯು ಪವಿತ್ರವಾದ ಹೂವಾಗಿತ್ತು ಮತ್ತು [[ಮೇರಿ ಕನ್ಯೆ|ವರ್ಜಿನ್ ಮೇರಿ]]ಯ ಒಂದು ಸಂಕೇತಯಾಗಿಯೂ ಇದನ್ನು ಬಳಸಲಾಗುತ್ತದೆ. ನಾನಾ ಬಗೆಯ ಭಾಷೆಗಳಲ್ಲಿ ([[ರೋಮನ್ಸ್ ಭಾಷೆ|ಪ್ರಣಯದ ಭಾಷೆಗಳು]], [[ಗ್ರೀಕ್ ಭಾಷೆ|ಗ್ರೀಕ್]] ಮತ್ತು [[ಪೋಲಿಷ್ ಭಾಷೆ|ಪೋಲಿಷ್]]ನಂಥ ಭಾಷೆಗಳಲ್ಲಿ) 'ಗುಲಾಬಿ' ಎಂದರೆ ನಸುಗೆಂಪು ಅಥವಾ ಕೆಂಪು ಎಂದೇ ಅರ್ಥ.
ಗುಲಾಬಿಯು [[ಇಂಗ್ಲೆಂಡ್|ಇಂಗ್ಲೆಂಡ್]] ಹಾಗೂ ಸಂಯುಕ್ತ ಸಂಸ್ಥಾನಗಳ<ref name="National Flower of the United States">{{Cite web|url=http://frwebgate.access.gpo.gov/cgi-bin/getdoc.cgi?dbname=browse_usc&docid=Cite:+36USC303|title=National Flower of the United States|accessdate=2008-02-04}}</ref> [[ಹೂವಿನ ಲಾಂಛನ|ರಾಷ್ಟ್ರೀಯ ಪುಷ್ಪ]]ವಾಗಿರುವುದರ ಜೊತೆಗೆ [[ಇಂಗ್ಲೆಂಡ್ ರಗ್ಬಿ|ಇಂಗ್ಲೆಂಡ್ ರಗ್ಬಿ]] ಹಾಗೂ [[ರಗ್ಬಿ ಫುಟ್ಬಾಲ್ ಒಕ್ಕೂಟ|ರಗ್ಬಿ ಫುಟ್ಬಾಲ್ ಯೂನಿಯನ್]]ನ ಚಿಹ್ನೆಯೂ ಆಗಿದೆ.
ಇದು [[ಇಂಗ್ಲೆಂಡ್]]ನಲ್ಲಿನ [[ಯಾರ್ಕ್ಷೈರ್]] ಮತ್ತು [[ಲ್ಯಾಂಕಾಷೈರ್]] ಪ್ರಾಂತ್ಯಗಳ ಪ್ರಾಂತೀಯ ಪುಷ್ಪವೂ (ಕ್ರಮವಾಗಿ ಬಿಳಿ ಗುಲಾಬಿ ಮತ್ತು ಕೆಂಪು ಗುಲಾಬಿ) ಆಗಿದೆ. ಅದೇ ರೀತಿಯಲ್ಲಿ [[ಕೆನಡ|ಕೆನಡಾ]]ದಲ್ಲಿನ [[ಆಲ್ಬರ್ಟಾ]] (ಕಾಡುಗುಲಾಬಿ) ಮತ್ತು [[ಪಾಕಿಸ್ತಾನ]]ದಲ್ಲಿನ [[ಇಸ್ಲಾಮಾಬಾದ್ ರಾಜಧಾನಿ ಪ್ರದೇಶ]]ಗಳಿಗೂ ಇದು ಪ್ರಾಂತೀಯ ಪುಷ್ಪವಾಗಿದೆ. USನ ನಾಲ್ಕು ಸಂಸ್ಥಾನಗಳಿಗೆ ಇದು ಸಂಸ್ಥಾನಿಕ ಪುಷ್ಪವಾಗಿದೆ. ಅವುಗಳ ವಿವರ ಹೀಗಿದೆ: [[ಐಯೋವಾ]] ಮತ್ತು [[ಉತ್ತರ ಡಕೋಟಾ]] ([[ರೋಸಾ ಆರ್ಕನ್ಸಾನಾ|''R. ಆರ್ಕನ್ಸಾನಾ'']]), [[ಜಾರ್ಜಿಯಾ (U.S. ಸಂಸ್ಥಾನ)|ಜಾರ್ಜಿಯಾ]] (''[[ರೋಸಾ ಲೇವಿಗೇಟಾ|R. ಲೇವಿಗೇಟಾ]]'' ), ಮತ್ತು [[ನ್ಯೂಯಾರ್ಕ್]]<ref name="State flower of New York">{{Cite web|url=http://www.netstate.com/states/symb/flowers/ny_rose.htm|title=New York State Flower|accessdate=2007-10-01}}{{Dead link|date=ಜುಲೈ 2026 |bot=InternetArchiveBot |fix-attempted=yes }}</ref> (ಸಾರ್ವತ್ರಿಕವಾಗಿ ''[[ರೋಸಾ]]'' ).
[[ಪೋರ್ಟ್ಲೆಂಟ್, ಒರೆಗಾಂವ್|ಒರೆಗಾಂವ್ನ ಪೋರ್ಟ್ಲೆಂಡ್]] ತಾನು ಹೊಂದಿರುವ ಅಡ್ಡಹೆಸರು ಅಥವಾ ಉಪನಾಮಗಳಲ್ಲಿ "ಗುಲಾಬಿಗಳ ನಗರ" ಎಂಬುದನ್ನು ಪರಿಗಣಿಸಿದ್ದು, ವಾರ್ಷಿಕ ಗುಲಾಬಿ ಉತ್ಸವವನ್ನು ಅದು ಆಯೋಜಿಸುತ್ತದೆ.
ಐದು ಅಥವಾ ಹತ್ತು ವಿಭಾಗಗಳನ್ನು (ಗುಲಾಬಿಯ ಐದು ದಳಗಳು ಹಾಗೂ ಪುಷ್ಪಪಾತ್ರೆಯ ಐದು ದಳಗಳನ್ನು ಇದು ಪ್ರತಿನಿಧಿಸುತ್ತದೆ) ಅಥವಾ ಅದರ ಗುಣಕಗಳಷ್ಟು ವಿಭಾಗಗಳನ್ನು ಒಳಗೊಂಡಿರುವ [[ಗುಲಾಬಿ ಕಿಟಕಿಗಳು|ದುಂಡಗಿನ ಕಿಟಕಿಗಳ]] (ಚಕ್ರದ ಕಡ್ಡಿಗಳಂಥ) ವಿನ್ಯಾಸಕ್ಕಾಗಿ ಗುಲಾಬಿಗಳನ್ನು ಆಗಾಗ ಆಧಾರವಾಗಿ ಪರಿಗಣಿಸಲಾಗುತ್ತದೆ. ಆದಾಗ್ಯೂ, ಬಹುತೇಕ ಗೋಥಿಕ್ ಶೈಲಿಯ ದುಂಡಗಿನ ಕಿಟಕಿಗಳು ಮತ್ತಷ್ಟು ವಿವರಗಳಿಂದ ಕೂಡಿದ್ದು, ಮೂಲತಃ ಚಕ್ರ ಮತ್ತು ಇತರ ಸಂಕೇತಗಳನ್ನು ಪ್ರಾಯಶಃ ಆಧರಿಸಿದ್ದವು.
ಕೆಂಪು ಗುಲಾಬಿಯೊಂದು (ಕೈನಲ್ಲಿ ಹಿಡಿದುಕೊಂಡಿರುವ ಶೈಲಿಯಲ್ಲಿರುವುದು) [[ಸಮಾಜವಾದ]] ಅಥವಾ [[ಸಾಮಾಜಿಕ ಪ್ರಜಾಸತ್ತೆ]]ಯ ಸಂಕೇತವಾಗಿದೆ: [[ಲೇಬರ್ ಪಕ್ಷ (UK)|ಬ್ರಿಟಿಷ್]], [[ಐರಿಷ್ ಲೇಬರ್ ಪಕ್ಷ|ಐರಿಷ್]], ಫ್ರೆಂಚ್, [[ಸ್ಪ್ಯಾನಿಷ್ ಸೋಷಲಿಸ್ಟ್ ವರ್ಕರ್ಸ್ ಪಾರ್ಟಿ|ಸ್ಪ್ಯಾನಿಷ್]], ಪೋರ್ಚುಗೀಸ್, ನಾರ್ವೆ ದೇಶ, ಡ್ಯಾನಿಷ್, ಸ್ವೀಡಿಷ್, ಫಿನ್ನಿಷ್, ಬ್ರೆಝಿಲಿಯನ್, [[Pvda|ಡಚ್]] ಮತ್ತು ಇತರ ಐರೋಪ್ಯ ಕಾರ್ಮಿಕ, ಸಮಾಜವಾದಿ ಅಥವಾ ಸಾಮಾಜಿಕ ಪ್ರಜಾಸತ್ತೆಯ [[ರಾಜಕೀಯ ಪಕ್ಷ|ಪಕ್ಷಗಳು]] ಗುಲಾಬಿಯನ್ನು ತಮ್ಮ ಚಿಹ್ನೆಯನ್ನಾಗಿ ಬಳಸುತ್ತವೆ. 1968ರ ಮೇ ತಿಂಗಳಲ್ಲಿ [[ಪ್ಯಾರಿಸ್|ಪ್ಯಾರಿಸ್]]ನಲ್ಲಿ ನಡೆದ ಬೀದಿಬದಿಯ ಪ್ರತಿಭಟನೆಯಲ್ಲಿ, ಪ್ರತಿಭಟನಕಾರರು ಬಿಲ್ಲೆಯಂತೆ (ಬ್ಯಾಡ್ಜ್ನಂತೆ) ಧರಿಸಲು ಕೆಂಪು ಗುಲಾಬಿಯನ್ನು ಬಳಸಿದಂದಿನಿಂದ ಇದು ಮೈದಳೆಯಿತು.
IIನೇ ಜಾಗತಿಕ ಸಮರದ ಅವಧಿಯಲ್ಲಿ [[ಬಿಳಿ ಗುಲಾಬಿ]]ಯು ಜರ್ಮನಿಯಲ್ಲಿ ಅಹಿಂಸಾತ್ಮಕ ಪ್ರತಿಭಟನಾ ಗುಂಪಾಗಿತ್ತು. ಕೆಂಪುಗುಲಾಬಿಗಳ [[ಪುಷ್ಪಗುಚ್ಛ|ಗುಚ್ಛ]]ವನ್ನು ಪ್ರೇಮವನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ. ಅನೇಕ ದೇಶಗಳಲ್ಲಿ [[ಪ್ರೇಮಿಗಳ ದಿನ]]ದ ಕೊಡುಗೆಯಾಗಿ ಇದನ್ನು ಬಳಸಲಾಗುತ್ತದೆ.
[[ಕೆಟಲೋನಿಯಾ]]ದಲ್ಲಿ [[ಸಂತ ಜಾರ್ಜ್ರ ದಿನ]]ದಂದು ಜನಗಳ ನಡುವೆ, ಅದರಲ್ಲೂ ವಿಶೇಷವಾಗಿ ಪ್ರೇಮಿಗಳ ನಡುವೆ ಗಾಢಕೆಂಪಿನ ಗುಲಾಬಿಗಳು ಕೊಡುಗೆಗಳ ರೂಪದಲ್ಲಿ ವಿನಿಮಯವಾಗುತ್ತವೆ. ಯುರೋಪ್ನ [[ಕಪ್ಪು ಮೇರಿಕನ್ಯೆ]]ಯರಲ್ಲಿ (ಬ್ಲ್ಯಾಕ್ ಮಡೋನ್ನಾ) ಒಬ್ಬಳಾದ [[ಮಾಂಟ್ಸೆರ್ರಾಟ್ ಪವಿತ್ರಕನ್ಯೆ]]ಗೆ ಅರ್ಪಿಸಲಾಗುವ [[ವಿರೋಲೈ]] ಎಂಬ [[ಸ್ತುತಿಗೀತೆ]]ಯು, ''"ರೋಸಾ ದಿ' ಏಬ್ರಿಲ್, ಮೊರೆನಾ ಡಿ ಲಾ ಸೆರ್ರಾ..."'' ಎಂಬ ಪದಗಳಿಂದ ಪ್ರಾರಂಭವಾಗುತ್ತದೆ
(ಏಪ್ರಿಲ್ ಗುಲಾಬಿಯೇ, ಪರ್ವತಶ್ರೇಣಿಯ ನಸುಗಪ್ಪು ಮಹಿಳೆಯೇ...). ಆದ್ದರಿಂದ ಈ [[ಮೇರಿ ಕನ್ಯೆ|ಪವಿತ್ರಕನ್ಯೆ]]ಯು ಕೆಲವೊಮ್ಮೆ "ರೋಸಾ ದಿ' ಏಬ್ರಿಲ್" ಎಂದೂ ಕರೆಯಲ್ಪಡುತ್ತಾಳೆ.
ಈ ರೀತಿಯಲ್ಲಿ ಕೆಂಪು ಗುಲಾಬಿಯು ಕೆಟಲೋನಿಯಾದ ಒಂದು ಅನಧಿಕೃತ ಚಿಹ್ನೆಯಾಗಿ ಅಥವಾ ಸಂಕೇತವಾಗಿ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟಿದೆ.<ref>[http://www.escolania.cat/index.php?md=articles&id=367&lg=1 ಎಸ್ಕೊಲೋನಿಯಾ ಡಿ ಮಾಂಟ್ಸೆರಾಟ್ - ಎಲ್ ವಿರೊಲಾಯ್]</ref>
=== ಉಲ್ಲೇಖಗಳು ===
* ''ವಾಟ್ ಈಸ್ ಇನ್ ಎ ನೇಮ್? '' ''ದಟ್ ವಿಚ್ ವಿ ಕಾಲ್ ಎ ರೋಸ್/ಬೈ ಎನಿ ಅದರ್ ನೇಮ್ ವುಡ್ ಸ್ಮೆಲ್ ಆಸ್ ಸ್ವೀಟ್.'' — [[ವಿಲಿಯಮ್ ಶೇಕ್ಸ್ಪಿಯರ್|ವಿಲಿಯಮ್ ಷೇಕ್ಸ್ಪಿಯರ್]], [[ರೋಮಿಯೋ ಅಂಡ್ ಜೂಲಿಯೆಟ್]] ಭಾಗ II, ದೃಶ್ಯ ii
* ''ಗ್ಯಾದರ್ ಯೆ ರೋಸ್ಬಡ್ಸ್ ವೈಲ್ ಯೆ ಮೆ,/ಓಲ್ಡ್ ಟೈಮ್ ಈಸ್ ಸ್ಟಿಲ್ ಎ-ಫ್ಲೈಯಿಂಗ್'' — [[ರಾಬರ್ಟ್ ಹೆರ್ರಿಕ್]], [[ಟು ದಿ ವರ್ಜಿನ್ಸ್, ಟು ಮೇಕ್ ಮಚ್ ಆಫ್ ಟೈಮ್]]
* ''ಓ, ಮೈ ಲವ್ ಈಸ್ ಲೈಕ್ ಎ ರೆಡ್, ರೆಡ್ ರೋಸ್/ ದಟ್ಸ್ ನ್ಯೂಲಿ ಸ್ಪ್ರಂಗ್ ಇನ್ ಜೂನ್'' — [[ರಾಬರ್ಟ್ ಬರ್ನ್ಸ್]], [[ಎ ರೆಡ್, ರೆಡ್ ರೋಸ್]]
* ''ಇನ್ಫರ್ಮೇಷನ್ ಅಪಿಯರ್ಸ್ ಟು ಸ್ಟ್ಯೂ ಔಟ್ ಆಫ್ ಮಿ ನ್ಯಾಚರಲಿ, ಲೈಕ್ ದಿ ಪ್ರೆಷಸ್[[ಗುಲಾಬಿ ತೈಲ|ಆಟರ್ ಆಫ್ ರೋಸಸ್]] ಔಟ್ ಆಫ್ ದಿ ಆಟರ್.'' [[ಮಾರ್ಕ್ ಟ್ವೈನ್]], ರಫಿಂಗ್ ಇಟ್
* ''ಹಾರ್ಟ್ಸ್ ಸ್ಟಾರ್ವ್ ಆಸ್ ವೆಲ್ ಆಸ್ ಬಾಡೀಸ್; ಗಿವ್ ಅಸ್ ಬ್ರೆಡ್, ಬಟ್ ಗಿವ್ ಅಸ್ ರೋಸಸ್.'' — [[ಜೇಮ್ಸ್ ಓಪ್ಪನ್ಹೇಮ್]], "[[ಬ್ರೆಡ್ ಅಂಡ್ ರೋಸಸ್]]"
* ''[[ರೋಸ್ ಈಸ್ ಎ ರೋಸ್ ಈಸ್ ಎ ರೋಸ್ ಈಸ್ ಎ ರೋಸ್]]'' — [[ಜೆರ್ಟ್ರೂಡ್ ಸ್ಟೇನ್|ಜೆರ್ಟ್ರೂಡ್ ಸ್ಟೇನ್]], ''ಸೇಕ್ರೆಡ್ ಎಮಿಲಿ'' (1913), ''ಜಿಯಾಗ್ರಫಿ ಅಂಡ್ ಪ್ಲೇಸ್'' ಕೃತಿಯಲ್ಲಿ ಸೇರಿಕೊಂಡಿರುವ ಒಂದು ಪದ್ಯ.
* ''ದಿ ಆಪ್ಟಿಮಿಸ್ಟ್ ಸೀಸ್ ದಿ ರೋಸ್ ಅಂಡ್ ನಾಟ್ ಇಟ್ಸ್ ಥಾರ್ನ್ಸ್; ದಿ ಪೆಸಿಮಿಸ್ಟ್ ಸ್ಟೇರ್ಸ್ ಅಟ್ ದಿ ಥಾರ್ನ್ಸ್, ಅವ್ಲಿವಿಯಸ್ ಟು ದಿ ರೋಸಸ್'' - [[ಖಲೀಲ್ ಗಿಬ್ರಾನ್]]
== ಸುಗಂಧದ್ರವ್ಯ ==
{{main|Rose oil}}
ಗುಲಾಬಿಯ ಸುಗಂಧದ್ರವ್ಯವನ್ನು [[ಗುಲಾಬಿಗಳ ಅತ್ತರ್]]ನಿಂದ ಅಥವಾ ಗುಲಾಬಿ ತೈಲದಿಂದ ತಯಾರಿಸಲಾಗುತ್ತದೆ. ಬಾಷ್ಪಶೀಲ [[ಸಾರತೈಲ]]ಗಳ ಮಿಶ್ರಣವಾಗಿರುವ ಇದನ್ನು ಗುಲಾಬಿಗಳ ಜಜ್ಜಿದ ದಳಗಳನ್ನು ಹಬೆಯ ಭಟ್ಟಿ ಇಳಿಸುವಿಕೆಯ ವಿಧಾನದ ಸಹಾಯದಿಂದ ಪಡೆಯಲಾಗುತ್ತದೆ.
[[ಇರಾನ್|ಪರ್ಷಿಯಾ]]ದಲ್ಲಿ (ಸ್ವತಃ ಗುಲಾಬಿ ಎಂಬ ಪದವೇ ಪರ್ಷಿಯಾದ ಮೂಲದಿಂದ ಬಂದಿದೆ) ಹುಟ್ಟಿಕೊಂಡ ಈ ಕಲಾಕೌಶಲವು ನಂತರ [[ಅರೇಬಿಯಾ]] ಮತ್ತು [[ಭಾರತ]]ಗಳ ಮೂಲಕ ಹಬ್ಬಿತು. ಆದರೆ ಇಂದಿನ ದಿನಗಳಲ್ಲಿ ಈ ಸುಗಂಧದ್ರವ್ಯದ ಉತ್ಪಾದನೆಯ ಸುಮಾರು 70% ರಿಂದ 80%ರಷ್ಟು ಪಾಲು [[ಬಲ್ಗೇರಿಯಾ]]ದಲ್ಲಿನ [[ಕಝನ್ಲಕ್|ಕಝನ್ಲಕ್]] ಸಮೀಪವಿರುವ [[ರೋಸ್ ವ್ಯಾಲಿ, ಬಲ್ಗೇರಿಯಾ|ರೋಸ್ ವ್ಯಾಲಿ]]ಯಲ್ಲಿಯೇ ಆಗುತ್ತದೆ. ಕೆಲವೊಂದು ಭಾಗವು [[ಇರಾನ್]]ನಲ್ಲಿನ [[ಕಮ್ಸಾರ್|ಕಮ್ಸಾರ್]]ನಲ್ಲಿ ಹಾಗೂ [[ಜರ್ಮನಿ]]ಯಲ್ಲಿ ಉತ್ಪಾದಿಸಲ್ಪಡುತ್ತದೆ.{{Fact|date=July 2007}}
ಕಮ್ಸಾರ್ನಿಂದ ಬರುವ ಇರಾನಿನ [[ಪನ್ನೀರು|ಪನ್ನೀರಿನಿಂದ]] [[ಮೆಕ್ಕಾ]]ದಲ್ಲಿನ [[ಕಾಬ|ಕಾಬಾ]]ವನ್ನು ಪ್ರತಿವರ್ಷವೂ ತೊಳೆಯಲಾಗುತ್ತದೆ. ಬಲ್ಗೇರಿಯಾ, ಇರಾನ್ ಮತ್ತು ಜರ್ಮನಿಗಳಲ್ಲಿ ದಮಾಸ್ಕ್ ಗುಲಾಬಿಗಳನ್ನು (''ರೋಸಾ ದಮಾಸೀನಾ'' 'ಟ್ರೈಗಿಂಟಿಪೆಟಲಾ') ಬಳಸಲಾಗುತ್ತದೆ. ಫ್ರೆಂಚ್ ಗುಲಾಬಿ ತೈಲದ ಉದ್ಯಮದಲ್ಲಿ ''ರೋಸಾ ಸೆಂಟಿಫೋಲಿಯಾ'' ಬಳಕೆಯಾಗುತ್ತದೆ.
ನಸು ಹಳದಿ ಅಥವಾ ಹಳದಿ-ಬೂದು ಬಣ್ಣದಲ್ಲಿರುವ ತೈಲವನ್ನು ಕೆಲವೊಮ್ಮೆ 'ಗುಲಾಬಿಯ ಪರಿಶುದ್ಧ' ತೈಲ ಎಂದು ಕರೆಯಲಾಗುತ್ತದೆ. ಗುಲಾಬಿ ತೈಲವನ್ನು ಅದರ ದುರ್ಬಲರೂಪಗಳಿಂದ ಅಥವಾ ಸಾರಹೀನ ರೂಪಗಳಿಂದ ಪ್ರತ್ಯೇಕಿಸಲು ಹೀಗೆ ಕರೆಯಲಾಗುತ್ತದೆ. ಹೂವುಗಳ ತೂಕದ ಸುಮಾರು ಮೂರು ಸಾವಿರದನೇ ಒಂದು ಭಾಗ ಅಥವಾ ಆರು ಸಾವಿರದನೇ ಒಂದು ಭಾಗದಷ್ಟು ತೂಕದ ತೈಲವನ್ನು ಸಾರತೆಗೆಯಲಾಗುತ್ತದೆ. ಉದಾಹರಣೆಗೆ, ಒಂದು ಗ್ರಾಂನಷ್ಟು ಗುಲಾಬಿ ತೈಲವನ್ನು ಉತ್ಪಾದಿಸಲು ಸುಮಾರು ಎರಡು ಸಾವಿರ ಹೂವುಗಳು ಬೇಕಾಗುತ್ತವೆ.
ಗುಲಾಬಿಗಳ ಅತ್ತರಿನ ಪ್ರಮುಖ ಘಟಕಾಂಶಗಳೆಂದರೆ, ಸುವಾಸಿತ [[ಮದ್ಯಸಾರ]]ಗಳಾದ [[ಜಿರಾನಿಯೋಲ್]] ಹಾಗೂ l-[[ಸಿಟ್ರೊನೆಲ್ಲೋಲ್|ಸಿಟ್ರೋನೆಲ್ಲೋಲ್]], ಮತ್ತು ವಾಸನೆಯಿಲ್ಲದ ಒಂದು [[ಕಲ್ಲೆಣ್ಣೆ ಮೇಣ]]ವಾಗಿರುವ ಗುಲಾಬಿ ಕರ್ಪೂರ. β-[[ದಮಾಸೀನೋನ್|ದಮಾಸೀನೋನ್]] ಕೂಡಾ ಪರಿಮಳಕ್ಕೆ ಗಣನೀಯ ಪ್ರಮಾಣದ ಕೊಡುಗೆಯನ್ನು ನೀಡುತ್ತದೆ.
[[ಚಿತ್ರ:Geraniol structure.png|thumb|center|ಜಿರಾನಿಯೋಲ್ (C10H18O)]]
== ಗಮನಾರ್ಹ ಗುಲಾಬಿ ಬೆಳೆಗಾರರು ==
{{globalize}}
=== ಅಮೆರಿಕಾದ ಗುಲಾಬಿ ರಾಜಧಾನಿ ===
[[ಟೈಲರ್, ಟೆಕ್ಸಾಸ್|ಟೆಕ್ಸಾಸ್ನಲ್ಲಿನ ಟೈಲರ್]] ಪ್ರದೇಶವು ಗುಲಾಬಿ-ಬೆಳೆಯುವ ಉದ್ಯಮದಲ್ಲಿ ಬೃಹತ್ತಾದ ಪಾತ್ರವನ್ನು ವಹಿಸುವುದರಿಂದ ಅದಕ್ಕೆ "[[ಅಮೆರಿಕಾದ ಗುಲಾಬಿ ರಾಜಧಾನಿ]]" ಎಂಬ ಅಡ್ಡಹೆಸರು ಅಥವಾ ಉಪನಾಮವನ್ನು ಇಡಲಾಗಿದೆ. ರಾಷ್ಟ್ರದ ಅತಿದೊಡ್ಡ ಪುರಸಭಾ ಗುಲಾಬಿ ಉದ್ಯಾನವನ್ನು ಒಳಗೊಂಡಿರುವುದಕ್ಕೆ ಹೆಮ್ಮೆಪಡುವ ಈ ಪ್ರದೇಶವು, ಪ್ರತಿವರ್ಷದ ಅಕ್ಟೋಬರ್ ತಿಂಗಳಲ್ಲಿ ಆಯೋಜಿಸುವ [[ಟೆಕ್ಸಾಸ್ ಗುಲಾಬಿ ಮೇಳ]]ದಲ್ಲಿ ಸಾವಿರಾರು ವೀಕ್ಷಕರು ಪಾಲ್ಗೊಳ್ಳುತ್ತಾರೆ.
=== ವ್ಯಕ್ತಿಗಳು ===
ಈ ವಲಯಕ್ಕೆ ನಿರ್ದಿಷ್ಟವಾದ ಕೊಡುಗೆಗಳನ್ನು ನೀಡಿರುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ಗುಲಾಬಿ ಬೆಳೆಗಾರರು ಖ್ಯಾತರಾಗಿದ್ದಾರೆ. ಅವರುಗಳೆಂದರೆ:
* [[ಡೇವಿಡ್ ಆಸ್ಟಿನ್]] ("ಇಂಗ್ಲಿಷ್" ಗುಲಾಬಿಗಳು)
* [[ಜೋಸೆಫೀನ್ ಡಿ ಬ್ಯೂಹರ್ನಾಯ್ಸ್]]
* ಐಯೋವಾ ಸ್ಟೇಟ್ ಯೂನಿವರ್ಸಿಟಿಯಲ್ಲಿ 1948ರಿಂದ 1985ರವರೆಗೆ ತೋಟಗಾರಿಕಾ ಪ್ರೊಫೆಸರ್ ಆಗಿದ್ದ [[ಗ್ರಿಫಿತ್ ಬಕ್]]ರವರು ಗುಲಾಬಿಯ ಸುಮಾರು 90 ವೈವಿಧ್ಯಮಯ ಬಗೆಗಳನ್ನು ಸಂಕರೀಕರಿಸಿದ್ದು, ಅವುಗಳಲ್ಲಿ ಆಪಲ್ ಜಾಕ್, ಫೋಕ್ಸಿಂಗರ್ ಮತ್ತು ಪ್ರೈರೀ ಪ್ರಿನ್ಸಸ್ ತಳಿಗಳೂ ಸೇರಿವೆ.<ref>ಮ್ಯಾಗಿ ಓಸ್ಟರ್, ''ದಿ ರೋಸ್ ಬುಕ್'', ರೊಡೇಲ್ ಪ್ರೆಸ್, 1994, p. 22</ref> ರೋಗ ಪ್ರತಿರೋಧಕತೆ ಮತ್ತು ಚಳಿಯ ಸಹಿಷ್ಣುತೆಗಾಗಿ ಬಕ್ ಗುಲಾಬಿಗಳು ಪ್ರಸಿದ್ಧಿ ಪಡೆದಿವೆ.
* [[ಕೊನಾರ್ಡ್-ಪೈಲ್ ಕೊ.]] (ಸ್ಟಾರ್ ಗುಲಾಬಿಗಳು)
* [[ಜೂಲ್ಸ್ ಗ್ರೆವೇರಿಯಕ್ಸ್]]
* [[ಮೀಲ್ಯಾಂಡ್|ಮೀಲ್ಯಾಂಡ್ ಕುಟುಂಬ]]
* [[ಜೀನ್ ಪೆರ್ನೆಟ್, ಪೆರೆ|ಜೀನ್ ಪರ್ನೆಟ್, ಪೆರೆ]]
* [[ಜೋಸೆಫ್ ಪೆರ್ನೆಟ್-ಡಚರ್|ಜೋಸೆಫ್ ಪರ್ನೆಟ್-ಡಚರ್]]
* [[ಸುಝುಕಿ ಸೀಝೊ|ಸುಝುಕಿ ಸೀಜೊ]]
* [[ರೋಸೆನ್ ಟ್ಯಾಂಟೌ|ಮಥಿಯಾಸ್ ಟ್ಯಾಂಟೌ]] (ಫ್ಲೋರಿಬಂಡ ಗುಲಾಬಿ)
== ಚಿತ್ರಸಂಪುಟ ==
<gallery>
Image:Blooms of a yellow rose.jpg|'ಲೊವೆಲ್ ಥಾಮಸ್' ಪ್ರಭೇದದ ಒಂದು ಹಳದಿ ಗುಲಾಬಿ
Image:DdeBrabant.JPG|ಚಹಾ ಗುಲಾಬಿ 'ಡಚೆಸ್ಸೆ ಡಿ ಬ್ರಬ್ಯಾಂಟ್' (ಬರ್ನೆಡೆ 1857)
Image:Pink rose albury botanical gardens.jpg|ರೋಸಾ 'ಕಾಜುನ್ ಸನ್ರೈಸ್', ಒಂದು ಆಧುನಿಕ ಮಿಶ್ರತಳಿಯ ಚಹಾ ಗುಲಾಬಿ (ಎಡ್ವರ್ಡ್ಸ್ 2000)
Image:Red_rose_00090.JPG|ಒಂದು ಗೆಂಪು ಗುಲಾಬಿ
Image:Rosa alba2.jpg|'ಮೇಡನ್ಸ್ ಬ್ಲಷ್', ಒಂದು ಆಲ್ಬಾ ಗುಲಾಬಿ
Image:Pink.rose.hrushikesh.3030.jpg|ಮಹಾರಾಷ್ಟ್ರದಲ್ಲಿರುವ ನಸುಗೆಂಪು ಗುಲಾಬಿ ಹೂವು
</gallery>
== ಆಕರಗಳು ==
{{reflist}}
== ಇದನ್ನೂ ನೋಡಿರಿ ==
* [[ಜನರ ಹೆಸರನ್ನು ಇಟ್ಟುಕೊಂಡಿರುವ ಗುಲಾಬಿಗಳ ಪಟ್ಟಿ|ಜನರ ಹೆಸರನ್ನು ಇಡಲ್ಪಟ್ಟ ಗುಲಾಬಿಗಳ ಪಟ್ಟಿ]]
* [[ರೋಸ್ (ಹೆಸರು)|ಗುಲಾಬಿಯ ಹೆಸರನ್ನು ಇಟ್ಟುಕೊಂಡ ಜನರ ಪಟ್ಟಿ]]
* [[ಪ್ರಸಿದ್ಧ ವ್ಯಕ್ತಿಗಳ ಹೆಸರಿಡಲಾಗಿರುವ ಗುಲಾಬಿ ತಳಿಗಳು|ಪ್ರಸಿದ್ಧ ವ್ಯಕ್ತಿಗಳ ಹೆಸರಿಟ್ಟಿರುವ ಗುಲಾಬಿ ಬೆಳೆಗಾರ]]ರ ಆಖೈರು ಪಟ್ಟಿ
* {{Category|Rose_cultivars}}
* [[ಗುಲಾಬಿ (ಬಣ್ಣ)]]
* [[ಕಾಮನಬಿಲ್ಲು ಗುಲಾಬಿ]]
== ಹೊರಗಿನ ಕೊಂಡಿಗಳು ==
{{commonscat}}
{{wikispecies-inline|Rosa}}
* {{Wikisource1911Enc Citation|rose}}
* [http://picasaweb.google.co.in/alewis2388/VangniNursery?feat=directlink/ ಗುಲಾಬಿಯ ಕೆಲವೊಂದು ಚಿತ್ರಗಳು] {{Webarchive|url=https://web.archive.org/web/20100524000523/http://picasaweb.google.co.in/alewis2388/VangniNursery?feat=directlink%2F |date=2010-05-24 }}
* [http://www.flowermeaning.info/ ಗುಲಾಬಿಗಳ ಅರ್ಥ] {{Webarchive|url=https://web.archive.org/web/20090913060209/http://www.flowermeaning.info/ |date=2009-09-13 }}
{{Interwikineeded}}
[[ವರ್ಗ:ಕ್ಯಾಟಲನ್ ಚಿಹ್ನೆಗಳು]]
[[ವರ್ಗ:ಔಷಧೀಯ ಸಸ್ಯಗಳು]]
[[ವರ್ಗ:ಸಂಯುಕ್ತ ಸಂಸ್ಥಾನಗಳ ರಾಷ್ಟ್ರೀಯ ಚಿಹ್ನೆಗಳು]]
[[ವರ್ಗ:ಗುಲಾಬಿಗಳು]]
[[ವರ್ಗ:ರೋಸಾಯ್ಡಿಯೇ]]
[[ವರ್ಗ:ಸಸ್ಯಗಳು]]
[[ವರ್ಗ:ಹೂವುಗಳು]]
m8v485hp8xywn5bf1vtuo83qoch94ny
ಐಫೋನ್
0
22393
1378211
1373505
2026-08-02T19:31:08Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378211
wikitext
text/x-wiki
{{Infobox Information appliance
|name=iPhone
|image=[[ಚಿತ್ರ:Smartphone.png|300px|iPhone]]
|caption=The iPhone 15 is the most recent of [[List of iPhone and iPod Touch models|generations]] of the iPhone.
|manufacturer=[[Apple Inc.]]
|type=[[Bar (form)|Candybar]] [[smartphone]]
|releasedate='''Original:''' June 29, 2007<ref name=Original_release>{{cite news|url=http://www.mp3newswire.net/stories/7002/iphone-line.html|title=Steve iPhone: Hundreds Come, Lines Orderly|publisher=[[MP3 Newswire]]|date=June 29, 2007|accessdate=2008-06-06|archive-date=2016-04-08|archive-url=https://web.archive.org/web/20160408093309/http://www.mp3newswire.net/stories/7002/iPhone-line.html|url-status=dead}}</ref><br />'''3G:''' July 11, 2008<ref name="tuaw">{{cite web|url=http://www.tuaw.com/2008/06/09/iphone-3g-announced/|title=iPhone 3G announced — The Unofficial Apple Weblog (TUAW)|accessdate=2008-06-10|date=June 9, 2008|author=Robert PalmerFiled|archive-date=2015-01-31|archive-url=https://web.archive.org/web/20150131132526/http://www.tuaw.com/2008/06/09/iphone-3g-announced/|url-status=dead}}</ref><br />'''3GS:''' June 19, 2009<ref name=3G_S_PR/>
|unitssold=21.17 million {{as of|2009|04|22|alt=(as of [[Fiscal year#United States|Q2]] 2009)}}<ref name=2009_Q2_PR/>
|os=[[iPhone OS]]<br />[[iPhone OS version history|3.1.2 (build 7D11)]], released October 8, 2009
|power='''Original:''' 3.7 [[Volt|V]] 1400 m[[Ampere-hour|Ah]]<br />'''3G:''' 3.7 V 1150 mAh<br />'''3GS:''' 3.7 V 1219 mAh<ref name="3GS teardown">{{cite web|url=http://www.ifixit.com/Teardown/iPhone-3G-S/817/2|title=iPhone 3GS Teardown|date=2009-06-19|publisher=iFixit.com|pages=2|accessdate=2009-06-19}}</ref><br />Internal rechargeable non-removable [[lithium-ion polymer battery]]<ref name=battery_specs>{{cite web|url=http://www.ipodbatteryfaq.com/ipodbatteryandpower.html|title=iPod and iPhone Battery and Power Specifications|publisher=iPodBatteryFAQ.com|accessdate=2009-05-12|archive-date=2009-02-07|archive-url=https://web.archive.org/web/20090207054030/http://www.ipodbatteryfaq.com/ipodbatteryandpower.html|url-status=dead}}</ref>
|cpu='''Original & 3G:''' [[Samsung]] [[32-bit]] [[Reduced instruction set computer|RISC]] [[ARM architecture|ARM]] 1176JZ(F)-S v1.0<ref name="Processor">{{cite web|url=http://toucharcade.com/2008/07/07/under-the-hood-the-iphones-gaming-mettle/|title=Under the Hood: The iPhone’s Gaming Mettle|last=Patterson|first=Blake|date=2008-07-07|publisher=touchArcade|accessdate=2009-03-20}}</ref><br />620 M[[Hertz|Hz]] [[underclocking|underclocked]] to 412 MHz<ref>{{cite web|url=http://www.roughlydrafted.com/2008/03/20/iphone-20-sdk-video-games-to-rival-nintendo-ds-sony-psp/|title=iPhone 2.0 SDK: Video Games to Rival Nintendo DS, Sony PSP|last=Dilger|first=Daniel Eran|date=2008-03-20|publisher=RoughlyDrafted Magazine|accessdate=2009-05-12|archive-date=2012-06-06|archive-url=https://www.webcitation.org/68DybFwlU?url=http://www.roughlydrafted.com/2008/03/20/iphone-20-sdk-video-games-to-rival-nintendo-ds-sony-psp/|url-status=dead}}</ref><br />[[PowerVR]] [[PowerVR#MBX|MBX]] Lite 3D [[Graphics processing unit|GPU]]<ref name="GPU">{{cite web|url=http://www.eetimes.com/news/semi/showArticle.jhtml?articleID=200900740|title=Update: U.K. graphics specialist confirms iPhone design win|publisher=[[EE Times]]|access-date=2010-01-28|archive-date=2012-06-06|archive-url=https://www.webcitation.org/68DyboxOh?url=http://eetimes.com/electronics-news/4188648/IPhone-code-trail-points-to-MBX-graphics-core|url-status=dead}}</ref>
<br />'''3GS:''' Samsung S5PC100 ARM Cortex-A8<ref name="3G_S_Processor">{{cite web|url=http://www.anandtech.com/gadgets/showdoc.aspx?i=3579&p=2|title=The iPhone 3GS Hardware Exposed & Analyzed|last=Shimpi|first=Anand|date=2009-06-10|publisher=AnandTech|accessdate=2009-06-10|archive-date=2010-03-08|archive-url=https://web.archive.org/web/20100308085851/http://www.anandtech.com/gadgets/showdoc.aspx?i=3579&p=2|url-status=dead}}</ref><br />833 MHz underclocked to 600 MHz<br />PowerVR [[PowerVR#Series5 (SGX)|SGX]] GPU<ref name="3G_S_Processor2">{{cite web|url=https://www.wired.com/gadgetlab/2009/06/iphone-teardown-reveals-underclocked-833mhz-cpu/|title=IPhone Teardown Reveals Underclocked 833MHz CPU|last=Sorrel|first=Charlie|date=2009-06-19|publisher=[[Wired (magazine)|Wired]]|accessdate=2009-11-20}}</ref>
|storage=[[Flash memory]]<br />'''Original:''' 4, 8, & 16 [[gigabyte|GB]]<br />'''3G:''' 8 & 16 GB<br />'''3GS:''' 16 & 32 GB
|memory='''Original & 3G:''' 128 [[megabyte|MB]] [[eDRAM]]<ref name="DRAM">{{cite web|url=http://www.semiconductor.com/resources/reports_database/view_device.asp?sinumber=18016|title=Apple (Samsung S5L8900) applications processor with eDRAM|publisher=Semiconductor Insights|accessdate=2009-05-12|archive-date=2009-02-07|archive-url=https://web.archive.org/web/20090207204820/http://semiconductor.com/resources/reports_database/view_device.asp?sinumber=18016|url-status=dead}}</ref><br />'''3GS:''' 256 MB eDRAM<ref name="3G_S_Processor"/>
|display=320 × 480 [[pixel|px]], {{convert|3.5|in|mm|0|abbr=on}}, 2:3 [[aspect ratio (image)|aspect ratio]], 18-bit (262,144-color) [[liquid crystal display|LCD]] with 163 [[pixels per inch]] (ppi)
|audio=Two [[loudspeaker|speakers]], [[TRS connector#Aircraft headsets|TRRS headphone jack]], 20 Hz to 20 kHz [[frequency response]] (internal, headset), [[microphone]]
|input=[[Multi-touch]] [[touchscreen]] display, [[#Audio|headset controls]], proximity and [[low-key lighting|ambient light]] sensors, 3-axis [[accelerometer]]<ref name="High Technology">{{cite web|url=http://www.apple.com/iphone/iphone-3g-s/high-technology.html|title=Apple - iPhone - Learn about high-tech features like Multi-Touch.|publisher=Apple|accessdate=2009-06-10}}</ref><br />'''3GS also includes:''' digital [[compass]]<ref name=Compass/>
|camera='''Original & 3G:''' 2.0 [[pixel#Megapixel|megapixels]] with [[geotagging]]<br />'''3GS:''' 3.0 megapixels with [[camcorder|video]] ([[Video Graphics Array|VGA]] at 30 [[frame rate|fps]]), geotagging, and automatic [[focus (optics)|focus]], [[color balance|white balance]], & [[exposure (photography)|exposure]]
|connectivity=[[Wi-Fi]] ([[802.11b/g]]), [[Bluetooth#Bluetooth 2.0|Bluetooth 2.0+EDR]] ('''3GS:''' [[Bluetooth#Bluetooth 2.1|2.1]]), [[Universal Serial Bus|USB 2.0]]/[[Dock connector]]<br />[[Quad band]] [[GSM]] [[GSM frequency ranges|850 900 1800 1900]] MHz [[General Packet Radio Service|GPRS]]/[[Enhanced Data Rates for GSM Evolution|EDGE]]<ref name="Original_tech_specs">{{cite web|url=http://www.apple.com/iphone/specs.html|archiveurl=https://web.archive.org/web/20070714051039/http://www.apple.com/iphone/specs.html|archivedate=2007-07-14|title=Apple — iPhone — Tech Specs|date=July 14, 2007|publisher=Apple and the [[Internet Archive#Wayback Machine|Wayback machine]]|accessdate=2009-01-19}}</ref><br />'''3G also includes:''' [[Assisted GPS|A-GPS]]; [[Tri band]] [[Universal Mobile Telecommunications System|UMTS]]/[[High-Speed Downlink Packet Access|HSDPA]] [[UMTS frequency bands|850, 1900, 2100]] MHz<ref name=3G_tech_specs /><br />'''3GS also supports:''' 7.2 [[Megabit|Mbps]] [[High-Speed Downlink Packet Access|HSDPA]]
|service=[[iTunes Store]], [[App Store]], [[MobileMe]]
|dimensions='''Original:'''<br />{{convert|115|mm|in|abbr=on}} ''(h)''<br />{{convert|61|mm|in|abbr=on}} ''(w)''<br />{{convert|11.6|mm|in|abbr=on}} ''(d)''<br />'''3G & 3GS:'''<br />{{convert|115.5|mm|in|abbr=on}} ''(h)''<br />{{convert|62.1|mm|in|abbr=on}} ''(w)''<br />{{convert|12.3|mm|in|abbr=on}} ''(d)''
|weight='''Original & 3GS:''' {{convert|135|g|oz|abbr=on}}<br />'''3G:''' {{convert|133|g|oz|abbr=on}}
|related=[[iPod Touch]] ([[List of iPhone and iPod Touch models|Comparison]])
}}
'''ಐಫೋನ್''' ಎಂಬುದು [[ಇಂಟರ್ನೆಟ್]] ಮತ್ತು [[ಮಲ್ಟಿಮೀಡಿಯಾ]] ವ್ಯವಸ್ಥೆಯುಳ್ಳ [[ಸ್ಮಾರ್ಟ್ಫೋನ್]]ಗಳ ಶ್ರೇಣಿ. [[ಆಪೆಲ್ ಇಂಕ್.]] ಸಂಸ್ಥೆಯು ಈ ಐಫೋನ್ಗಳನ್ನು ವಿನ್ಯಾಸಗೊಳಿಸಿ ಮಾರಾಟ ಮಾಡುತ್ತದೆ. ಐಫೋನ್ [[ಪಠ್ಯ ಸಂದೇಶ]] ಮತ್ತು [[ವೀಕ್ಷಿಸಬಹುದಾದ ಧ್ವನಿ ಸಂದೇಶ]] ಸೌಲಭ್ಯ ಹೊಂದಿರುವ ಒಂದು [[ಕ್ಯಾಮೆರಾ ಫೋನ್]], [[ಒಯ್ಯಬಹುದಾದ ಮೀಡಿಯಾ ಪ್ಲೇಯರ್]] (ಇದು ವೀಡಿಯೊ [[ಐಪಾಡ್]]ಗೆ ಸಮವೆನಿಸಿದೆ) ಹೊಂದಿದೆ. [[ಇ-ಮೇಲ್]], [[ಇಂಟರ್ನೆಟ್ ವೀಕ್ಷಣ]] ಮತ್ತು [[ವೈ-ಫೈ]] ಸಂಪರ್ಕವುಳ್ಳ [[ಇಂಟರ್ನೆಟ್]] ಜಾಲದ ವ್ಯವಸ್ಥೆ ಸಹ ಐಫೋನ್ ಹೊಂದಿದೆ. ಜೊತೆಗೆ, ಈ ಫೋನ್ ಭೌತಿಕ ಕೀಲಿಮಣೆಯ ಬದಲಿಗೆ [[ಮಲ್ಟಿ-ಟಚ್]] ಪರದೆಯು ಕಾರ್ಯಶೀಲಿಕ [[ಕೀಲಿಮಣೆ]] ಸೌಲಭ್ಯ ನೀಡುತ್ತದೆ.
ಮೊದಲ ತಲೆಮಾರಿನ ಫೋನ್ [[EDGE]] ಹೊಂದಿರುವ ಕ್ವಾಡ್-ಬ್ಯಾಂಡ್ [[GSM]] ಆಗಿತ್ತು; ಎರಡನೆಯ ತಲೆಮಾರಿನ ಫೋನ್ 3.6 Mbps [[HSDPA]] ಹೊಂದಿರುವ [[UMTS]] ಹೊಂದಿತ್ತು; ಮೂರನೆಯ ತಲೆಮಾರಿನದು 7.2 Mbpsರಷ್ಟು HSDPA ಇಳಿಸಿ(ಪಡೆದು)ಕೊಳ್ಳಲು ನೆರವಾಗುತ್ತದೆ. ಆದರೆ ಆಪೆಲ್ [[HSPA]] ಪ್ರೊಟೊಕೊಲ್ ಅಳವಡಿಸಿರದ ಕಾರಣ ಅಪ್ಲೋಡ್ ಸಾಮರ್ಥ್ಯ 384 Kbpsಗೆ ಸೀಮಿತಗೊಳಿಸುತ್ತದೆ.<ref name="Macworld 3GS HSPA upload">{{cite web|url=http://www.macworld.co.uk/mac/news/index.cfm?newsid=26559|title=iPhone 3GS upload limited to 384 Kbps upstream|date=2009-06-09|publisher=Macworld.co.uk|accessdate=2009-07-31|archive-date=2009-07-13|archive-url=https://web.archive.org/web/20090713185423/http://www.macworld.co.uk/mac/news/index.cfm?newsid=26559|url-status=dead}}</ref>
ಹಲವು ತಿಂಗಳ ಕಾಲ [[ವದಂತಿ ಮತ್ತು ಊಹಾಪೋಹ]] ಗಳ ನಂತರ 2007ರ ಜನವರಿ 9ರಂದು <ref>{{cite news|url=http://www.macworld.com/article/54769/2007/01/iphone.html|title=Apple unveils iPhone|date=2007-01-09|accessdate=2008-04-06|author=Honan, Mathew|publisher=[[Macworld]]|archive-date=2008-04-15|archive-url=https://web.archive.org/web/20080415223141/http://www.macworld.com/article/54769/2007/01/iphone.html|url-status=dead}}</ref> ಆಪೆಲ್ ಐಫೋನ್ ಗಳ ಬಿಡುಗಡೆಯನ್ನು ಘೋಷಿಸಿತು.<ref>{{cite web|author=Dolan, Brian|title=Timeline of Apple "iPhone" Rumors (1999–Present)|url=http://www.fiercewireless.com/story/timeline-apple-iphone-rumors-1999-present|accessdate=2008-02-17}}</ref> ತಕ್ಕುದಾಗಿ ಪ್ರತಿಕಿಯಿಸುವ ಮಾರುಕಟ್ಟೆ ಹೆಸರುಳ್ಳ(ಮಾರ್ಕೆಟ್ ಬ್ರಾಂಡ್) ಮೊದಲ ಬಾರಿಗೆ ಐಫೋನ್ನ್ನು 2007ರ ಜೂನ್ 29ರಂದು [[ಅಮೆರಿಕಾ ಸಂಯುಕ್ತ ಸಂಸ್ಥಾನ]]ದಲ್ಲಿ ಪರಿಚಯಿಸಲಾಯಿತು. ಇದರ ನಂತರ [[ಯುರೋಪ್]]ನ ಮಾರುಕಟ್ಟೆಗೆ ಪರಿಚಯಿಸಲಾಯಿತು. ಇಸವಿ 2007ರಲ್ಲಿ ವರ್ಷದ ಆವಿಷ್ಕಾರ ಎಂದು ''[[ಟೈಮ್]]'' ಪತ್ರಿಕೆಯು ಐಫೋನ್ನ್ನು ಬಣ್ಣಿಸಿತು.<ref>{{cite news|author=Grossman, Lev|title=Invention Of the Year: The iPhone|url=http://www.time.com/time/business/article/0,8599,1678581,00.html|date=2007-10-31|accessdate=2008-06-06|archive-date=2008-06-15|archive-url=https://web.archive.org/web/20080615155450/http://www.time.com/time/business/article/0%2C8599%2C1678581%2C00.html|url-status=dead}}</ref> 2008ರ ಜುಲೈ 11ರಂದು ಬಿಡುಗಡೆಯಾದ '''ಐಫೋನ್ 3G''' ಹೆಚ್ಚಿನ [[3G]] ಮಾಹಿತಿ ಮತ್ತು ನೆರವಿನ [[GPS]] ಒಟ್ಟಾರ್ಥ ನೀಡುತ್ತದೆ.<ref name="3G_PR" /> 2009ರ ಮಾರ್ಚ್ 17ರಂದು, ಐಫೋನ್ (ಹಾಗೂ [[ಐಪಾಡ್ ಟಚ್]])ಗಾಗಿ, [[ಐಫೋನ್ OS]]ನ 3.0 ಆವೃತ್ತಿಯನ್ನು ಆಪೆಲ್ ಘೋಷಿಸಿತು. ಇದನ್ನು 2009ರ ಜೂನ್ 17ರಂದು ಬಿಡುಗಡೆಗೊಳಿಸಿತು.<ref>{{cite news|url=http://www.nbcsandiego.com/around_town/shopping/Apple-to-Announce-Version-3-of-iPhone-OS.html|publisher=[[NBC]] [[San Diego]]|work=Around Town|title=Apple Shows Off New iPhone 3.0|author=Weber, Scott|date=2009-03-17|accessdate=2009-03-20}}</ref> 2009ರ ಜೂನ್ 8ರಂದು '''ಐಫೋನ್ 3GS''' ಘೋಷಿತವಾಯಿತು. ಇದು ತನ್ನ [[ಕ್ರಿಯಾಶೀಲತೆ]]ಯಲ್ಲಿ ಸುಧಾರಣೆ ತೋರಿಸಿತು. ಹೆಚ್ಚಿನ [[ರಿಸೊಲ್ಯೂಷನ್]] ಹಾಗೂ ವೀಡಿಯೊ ಕ್ಷಮತೆ ಹಾಗೂ [[ಧ್ವನಿ ನಿಯಂತ್ರಣ]] ಗುಣಲಕ್ಷಣಗಳನ್ನು ಹೊಂದಿದೆ.<ref>{{cite web|url=http://www.apple.com/iphone/compare-iphones/|title=Compare iPhone 3GS and iPhone 3G|publisher=[[Apple Inc.]]|date=August 18, 2009}}</ref> 2009ರ ಜೂನ್ 19ರಂದು U.S., ಕೆನಡಾ ಹಾಗೂ ಯುರೋಪ್ನ ಆರು ದೇಶಗಳಲ್ಲಿ ಬಿಡುಗಡೆಯಾಯಿತು.<ref name="3G_S_PR">{{cite news|url=http://www.apple.com/pr/library/2009/06/08iphone.html|title=Apple Announces the New iPhone 3GS—The Fastest, Most Powerful iPhone Yet|date=2009-06-08|accessdate=2009-06-08}}</ref> ಆಸ್ಟ್ರೇಲಿಯಾ ಮತ್ತು ಜಪಾನ್ಗಳಲ್ಲಿ ಜೂನ್ 26ರಂದು ಬಿಡುಗಡೆಯಾಯಿತು.<ref name="3GS Aus">{{cite news|last=Dudley-Nicholson|first=Jennifer|url=http://www.news.com.au/technology/story/0,28348,25608752-5014239,00.html|title=Apple unveils iPhone 3GS, says 'S' stands for speed|date=2009-06-09|accessdate=2009-06-11|archiveurl=https://web.archive.org/web/20090611184239/http://www.news.com.au/technology/story/0,28348,25608752-5014239,00.html|archivedate=2009-06-11}}</ref> ಜುಲೈ ಮತ್ತು ಆಗಸ್ಟ್ 2009ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಪಡೆಯಿತು.
== ಇತಿಹಾಸ ಮತ್ತು ಲಭ್ಯತೆ ==
[[ಚಿತ್ರ:Iphone sales worldwide.svg|thumb|left|ವಿಶ್ವಾದ್ಯಂತ ತ್ರೈಮಾಸಿಕ ಐಫೋನ್ ಮಾರಾಟಗಳು.ಮಾರಾಟ ಪ್ರಮಾಣವು ದಶಲಕ್ಷಗಳಲ್ಲಿವೆ. Q1 ರಜಾ ಋತುವಾಗಿದೆ.]]
[[ಚಿತ್ರ:iPhone 3G Availability.svg|thumb|left|ವಿಶ್ವಾದ್ಯಂತ ಐಫೋನ್ ಲಭ್ಯತೆ:]]
ಆಪೆಲ್ ಇಂಜಿನಿಯರ್ಗಳು ಟಚ್ಸ್ಕ್ರೀನ್ಗಳನ್ನು ಪರಿಶೀಲಿಸಬೇಕೆಂದು ಸಂಸ್ಥೆಯ [[CEO]] [[ಸ್ಟೀವ್ ಜಾಬ್ಸ್]] ಅವರ ಸೂಚನೆಯ ಮೇರೆಗೆ ಐಪಾಡ್ನ ಅಭಿವೃದ್ಧಿ ಆರಂಭಗೊಂಡಿತು.<ref name="keynoteMacworld">{{cite news|last=Cohen|first=Peter|url=http://www.macworld.com/news/2007/01/09/liveupdate/index.php|title=Macworld Expo Keynote Live Update|publisher=[[Macworld]]|date=January 9, 2007|accessdate=2007-02-01|archive-date=2007-01-27|archive-url=https://web.archive.org/web/20070127110536/http://www.macworld.com/news/2007/01/09/liveupdate/index.php|url-status=dead}}</ref>
[[AT&T ಮೊಬಿಲಿಟಿ]](ಅಂದು ಸಿಂಗ್ಯುಲರ್ ವಯರ್ಲೆಸ್) ಸಂಸ್ಥೆಯೊಂದಿಗೆ ರಹಸ್ಯ ಹಾಗೂ ಅಭೂತಪೂರ್ವ ಸಹಯೋಗದೊಂದಿಗೆ ಆಪೆಲ್ ಈ ಉಪಕರಣ ಸಿದ್ದಗೊಳಿಸಿತು. ಇದು ಮೂವತ್ತು ತಿಂಗಳು ನಡೆದು US$150 ದಶಲಕ್ಷದಷ್ಟು ಅಭಿವೃದ್ಧಿ ವೆಚ್ಚವಾಗಿತ್ತು. [[ಮೊಟೊರೊಲಾ ROKR E1]] ಅಭಿವೃದ್ಧಿ ಪಡಿಸಿದ 'ಡಿಸೈನ್ ಬೈ ಕಮಿಟಿ' ಯತ್ನವನ್ನು ಆಪೆಲ್ ನಿರಾಕರಿಸಿತು. ಏಕೆಂದರೆ, [[ಮೊಟೊರೊಲಾ]]ದೊಂದಿಗಿನ ಈ ಸಹಯೋಗವು ವೈಫಲ್ಯ ಕಂಡಿತ್ತು. ಇದರ ಬದಲಿಗೆ, ಆಪೆಲ್ ತಮ್ಮ ಸಂಸ್ಥೆಯಲ್ಲಿಯೇ ಐಫೋನ್ನ ಯಂತ್ರಾಂಶ-ತಂತ್ರಾಂಶಗಳನ್ನು ಅಭಿವೃದ್ಧಿಗೊಳಿಸಲು ಸಿಂಗ್ಯುಲರ್ ಆಪೆಲ್ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿತ್ತು.<ref name="CNN secrets">{{cite web|url=http://money.cnn.com/2007/01/10/commentary/lewis_fortune_iphone.fortune/index.htm|title=How Apple kept its iPhone secrets|last=Lewis|first=Peter|date=January 12, 2007|publisher=[[CNN|CNN Money]]|accessdate=2009-01-11|archive-date=2008-12-10|archive-url=https://web.archive.org/web/20081210110636/http://money.cnn.com/2007/01/10/commentary/lewis_fortune_iphone.fortune/index.htm|url-status=dead}}</ref><ref>{{cite news|last=Vogelstein|first=Fred|title=The Untold Story: How the iPhone Blew Up the Wireless Industry|url=https://www.wired.com/gadgets/wireless/magazine/16-02/ff_iphone|work=[[Wired News]]|publisher=[[Condé Nast Publications]]|date=January 9, 2008|accessdate=2008-01-10}}</ref>
2007ರ ಜನವರಿ 9ರಂದು [[ಪ್ರಸ್ತಾವಿಕ ಭಾಷಣ]] ದೊಂದಿಗೆ ಸ್ಟೀವ್ ಜಾಬ್ಸ್ ಐಫೋನ್ನ್ನು ಅನಾವರಣಗೊಳಿಸಿದರು. ಆಪೆಲ್ ಕಾರ್ಯನಿರ್ವಹಣಾ ಅನುಮತಿಗಾಗಿ [[FCC]]ಯಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಈ ಆರ್ಜಿಗಳು ಸಾರ್ವಜನಿಕರಿಗೆ ಲಭ್ಯವಾಗಿದ್ದವು. ಇದರ ಕಾರಣ, ಐಫೋನ್ ಮಂಜೂರಾತಿ ಪಡೆಯುವ ಕೆಲ ತಿಂಗಳ ಮುಂಚೆಯೇ ಈ ಘೋಷಣೆಯಾಗಿತ್ತು. 2007 ಜೂನ್ 29ರಂದು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸ್ಥಳೀಯ ಸಮಯ ಸಂಜೆ 6 ಗಂಟೆಗೆ ಮಾರಾಟಕ್ಕೆ ಸಿದ್ದವಾಯಿತು. ಅದನ್ನು ಕೊಳ್ಳಲು ರಾಷ್ಟ್ರಾದ್ಯಂತ ನೂರಾರು ಜನ ಗ್ರಾಹಕರು ಐಫೋನ್ ಅಂಗಡಿಗಳ ಮುಂದೆ ಸರದಿಯಲ್ಲಿದ್ದರು.<ref name="Original_release" /><ref name="AppleQ32007">{{cite web|url=http://images.apple.com/pr/pdf/q307data_sum.pdf|title=Apple Inc. Q3 2007 Unaudited Summary Data|accessdate=2008-06-06|date=July 25, 2007|format=PDF|publisher=[[Apple Inc.]]|quote=Consists of iPhones and Apple-branded and third-party iPhone accessories.}}</ref> ಮೂಲತಃ ಐಫೋನ್ ಉಗಮವು [[UK]], [[ಫ್ರಾನ್ಸ್]] ಮತ್ತು [[ಜರ್ಮನಿ]] ದೇಶಗಳಲ್ಲಿ ನವೆಂಬರ್ 2007ರಲ್ಲಿ, ಹಾಗೂ [[ಐರ್ಲೆಂಡ್]] ಮತ್ತು [[ಆಸ್ಟ್ರೇಲಿಯಾ]]ಗಳಲ್ಲಿ 2008ರ ವಸಂತ ಋತುವಿನಲ್ಲಿ ಆರಂಭ ಕಂಡಿತು.
ಐಫೋನ್ 3Gಯನ್ನು ಆಪೆಲ್ 2008ರ ಜುಲೈ 11ರಂದು ಮೊದಲ ಬಾರಿಗೆ ಅನ್ನುವಂತೆ ಇವು ಆರು ದೇಶಗಳೂ ಸೇರಿ ಒಟ್ಟು ಇಪ್ಪತ್ತೆರಡು ದೇಶಗಳಲ್ಲಿ ಬಿಡುಗಡೆಗೊಳಿಸಿತು.<ref name="iPhone 3G launch countries">{{cite web|url=http://ipod.about.com/od/iphone3g/a/iphone_3g_rel.htm|title=Initial iPhone 3G Country Availability List|last=Costello|first=Sam|publisher=about.com|accessdate=2009-01-11|archive-date=2012-06-05|archive-url=https://web.archive.org/web/20120605024205/http://ipod.about.com/od/iphone3g/a/iphone_3g_rel.htm|url-status=dead}}</ref> ಆಗಿನಿಂದಲೂ, ಆಪೆಲ್ ಐಫೋನ್ 3Gಯನ್ನು ಸುಮಾರು ಎಂಭತ್ತು ದೇಶ-ಪ್ರಾಂತ್ಯಗಳಲ್ಲಿ ಬಿಡುಗಡೆಗೊಳಿಸಿದೆ.<ref name="3G_countries">{{cite web|url=http://www.apple.com/iphone/countries/|title=iPhone 3G Coming to countries everywhere|publisher=[[Apple Inc.]]|accessdate=2009-04-12}}</ref> 2009ರ ಜೂನ್ 8ರಂದು ಆಪೆಲ್ ಐಫೋನ್ 3GS ಮಾದರಿಗೆ ಚಾಲನೆ ನೀಡಿತು. ನಂತರ, ಇದನ್ನು ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಬಿಡುಗಡೆಗೊಳಿಸಲು ಯೋಜಿಸಿತ್ತು. ಮೊದಲಿಗೆ U.S., ಕೆನಡಾ ಮತ್ತು ಯುರೋಪ್ನ ಪ್ರಮುಖ ದೇಶಗಳಲ್ಲಿ ಜೂನ್ 19ರಂದು ಬಿಡುಗಡೆಗೊಳಿಸಲು ಆಲೋಚಿಸಲಾಗಿತ್ತು.<ref name="3G_S_PR" /> ಐಪೋನ್ನ ಬೆಲೆಯ ಬಗ್ಗೆ ಹಲವು ಸಂಭಾವ್ಯ ಬಳಕೆದಾರರು ಅತೃಪ್ತಿ ವ್ಯಕ್ತಪಡಿಸಿದ್ದಾರೆ; ಇವರಲ್ಲಿ 40%ರಷ್ಟು 100,000 [[USD]]ಗಿಂತಲೂ ಹೆಚ್ಚು ಆದಾಯಯುಳ್ಳವರಾಗಿದ್ದಾರೆ.<ref name="Nielsen demographics" /> ವಿಸ್ತೃತ ಮಾರುಕಟ್ಟೆ ಒದಗಿಸುವ ಯತ್ನದಲ್ಲಿ ಆಪೆಲ್ 8 GB ಐಫೋನ್ 3Gಯನ್ನು ಕಡಿಮೆ ಬೆಲೆಯಲ್ಲಿ ಉಳಿಸಿಕೊಂಡಿದೆ. ಕಳೆದ ಕೆಲ ವರ್ಷಗಳಿಂದ ಬೆಲೆ ಇಳಿಕೆಯ ಯತ್ನಗಳಲ್ಲಿ ಇದು ಇತ್ತೀಚಿನದ್ದಾಗಿದೆ. ಇದೀಗ, ಮೂಲತಃ 8 GB ಐಫೋನ್ ಆರಂಭಿಕ ಬೆಲೆಯ ಆರನೆಯ ಒಂದು ಭಾಗದ ದರಕ್ಕೆ ಮಾರಾಟವಾಗುತ್ತಿದೆ. U.S.ನಲ್ಲಿ ಅದರ ಬೆಲೆ $599ರಿಂದ ಇಳಿಯುತ್ತಾ ಬಂದು ಈಗ $99 ಆಗಿದೆ. ಇದಕ್ಕೆ ಎರಡು ವರ್ಷಗಳ ಕರಾರು ಒಪ್ಪಂದ ಮತ್ತು [[SIM ಲಾಕ್]]ವ್ಯವಸ್ಥೆ ಕೂಡ ಇದೆ.
ಐದು ತ್ರೈಮಾಸಿಕ ಅವಧಿಗಳಿಂದಲೂ ಆಪೆಲ್ 6.1 ದಶಲಕ್ಷ ಐಫೋನ್ಗಳನ್ನು ಮಾರಾಟ ಮಾಡಿದೆ.<ref name="2009_Q1_PR">{{cite web|url=http://www.apple.com/pr/library/2009/01/21results.html|title=Apple Reports First Quarter Results|publisher=Apple|date=2009-01-21}}</ref> ಮಾರ್ಚ್ 2009ಕ್ಕೆ ಅಂತ್ಯಗೊಂಡ 2009ರ [[ಅರ್ಥಿಕ ವರ್ಷ]]ದ ಎರಡನೆಯ ತ್ರೈಮಾಸಿಕ ವಹಿವಾಟಿನಲ್ಲಿ 3.8 ದಶಲಕ್ಷ ಐಫೋನ್ 3G ಯುನಿಟ್ಗಳನ್ನು ಮಾರಾಟ ಮಾಡಿತು. 3G ಮತ್ತು 3GS ಎರಡೂ ಸೇರಿ ಇದುವರೆಗೂ 12.6 ದಶಲಕ್ಷ ಐಫೋನ್ಗಳು ಮಾರಾಟವಾಗಿವೆ. ಒಟ್ಟು ಸೇರಿ 33.75 ದಶಲಕ್ಷ ಐಫೋನ್ಗಳು ಮಾರಾಟಕಂಡಿವೆ. (Q4 2009).<ref name="2009_Q2_PR">{{cite web|url=http://www.apple.com/pr/library/2009/04/22results.html|title=Apple Reports Second Quarter Results|publisher=Apple|date=2009-04-22}} ಹೆಚ್ಚಿನ ಮಾರಾಟ ವಿವರಗಳಿಗಾಗಿ [[:File:iPhone sales per quarter.svg#Data and references|ತ್ರೈಮಾಸಿಕ ಮಾರಾಟಗಳ ಪಟ್ಟಿ]]ಯನ್ನು ನೋಡಿ.</ref> 2008ರ ನಾಲ್ಕನೆಯ ತ್ರೈಮಾಸಿಕದ ವ್ಯವಹಾರ [[RIM]]ನ ಮಾರಾಟವನ್ನೂ ಮೀರಿಸಿತು. ಆದಾಯದ ಪ್ರಕಾರ, [[ನೊಕಿಯಾ]] ಮತ್ತು [[ಸ್ಯಾಮ್ಸಂಗ್]] ನಂತರ, ಮೂರನೆಯ ಅತಿ ಹೆಚ್ಚು ಮೊಬೈಲ್ ಉತ್ಪಾದಕನಾಗಿ ಆಪೆಲ್ ಕೆಲ ಕಾಲ ತನ್ನ ಸಾಮರ್ಥ್ಯ ತೋರಿತು.<ref>{{cite web|url=http://www.appleinsider.com/articles/08/10/21/apple_iphone_3g_sales_surpass_rims_blackberry.html|title=Apple iPhone 3G sales surpass RIM's Blackberry|publisher=[[AppleInsider]]|date=October 21, 2008}}</ref> U.S. ಒಂದರಲ್ಲೇ ಸುಮಾರು 6.4 ದಶಲಕ್ಷ ಐಫೋನ್ಗಳು ಸಕ್ರಿಯವಾಗಿವೆ.<ref name="Nielsen demographics" /> ಆಪೆಲ್ನ ಆದಾಯದಲ್ಲಿ ಐಫೋನ್ಗಳ ಮಾರಾಟದ್ದೇ ಗಮನಾರ್ಹ ಪಾಲು. ಈ ಆದಾಯದಲ್ಲಿ ಕೆಲವು [[ಮುಂದುವರೆದ]]ಭವಿಷತ್ತಿನಲ್ಲಿ ಎನ್ನಲಾದ ಆದಾಯವಾಗಿದೆ.<ref name="2009_Q2_PR" />
[[ಡೇವಿಡ್ ಪೋಗ್]] <ref name="NYT Pogue">{{cite news|url=https://www.nytimes.com/2007/06/27/technology/circuits/27pogue.html?|title=The iPhone Matches Most of Its Hype |last=Pogue|first=David|date=2007-06-27|publisher=New York Times|accessdate=2009-06-27}}</ref> ಮತ್ತು [[ವಾಲ್ಟರ್ ಮೊಸ್ಬರ್ಗ್]] ಸೇರಿದಂತೆ, ಐಫೋನ್ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿದೆ.<ref name="Mossberg 3G">{{cite web|url=http://ptech.allthingsd.com/20080708/newer-faster-cheaper-iphone-3g/?mod=ATD_search|title=Newer, Faster, Cheaper iPhone 3G|last=Mossberg|first=Walter|date=2008-07-08|publisher=All Things Digital|accessdate=2009-06-27}}</ref><ref name="Mossberg 3GS">{{cite web|url=http://ptech.allthingsd.com/20090617/new-iphone-is-better-model-or-just-get-os-30/?mod=ATD_search|title=New iPhone Is Better Model–Or Just Get OS 3.0|last=Mossberg|first=Walter|date=2009-06-17|publisher=All Things Digital|accessdate=2009-06-27}}</ref>
ಎಲ್ಲಾ ವಯಸ್ಸಿನವರೂ ಐಫೋನ್ನತ್ತ ಆಕರ್ಷಿತರಾಗಿದ್ದಾರೆ.<ref name="Nielsen demographics" />
== ಯಂತ್ರ ಸಾಧನ (ಯಾಂತ್ರಿಕ ಉಪಕರಣ) ==
[[ಚಿತ್ರ:iphonesensors.jpg|thumb|150px|left|ಮೊದಲ ತಲೆಮಾರಿನ ಐಫೋನ್ನಲ್ಲಿರುವ ಸಾಮೀಪ್ಯ ಹಾಗೂ ಪರಿವೇಷ್ಟಕ ಬೆಳಕಿನ ಸಂವೇಧಕಗಳ ನೋಟ.]][[ಚಿತ್ರ:iPhone & iPhone 3G.jpg|thumb|right|ಅಲ್ಯುಮಿನಿಯಮ್ ಹಾಗೂ ಪ್ಲ್ಯಾಸ್ಟಿಕ್ ಬಳಸಿ ತಯಾರಿಸಲಾದ ಮೂಲತಃ ಐಫೋನ್ನ ಹಿಂಬದಿಯ ನೋಟ (ಎಡ), ಹಾಗೂ ಇಡಿಯಾಗಿ ದೃಢ ಪ್ಲ್ಯಾಸ್ಟಿಕ್ ವಸ್ತು ಬಳಸಿ ತಯಾರಿಸಲಾದ ಐಫೋನ್ 3G.<ref name="iPhone back">[62]</ref>]][[ಚಿತ್ರ:iphone3gsensors.jpg|thumb|150px|left|ಐಫೋನ್ 3Gಯ (ತೋರಿಸಲಾದ) ಸಾಮೀಪ್ಯ ಹಾಗೂ ಪರಿವೇಷ್ಟಕ ಬೆಳಕಿನ ಸಂವೇದಕಗಳು ಐಫೋನ್ 3GSನಲ್ಲಿರುವಂತೆ ತದ್ರೂಪವಾಗಿದೆ.]][[ಚಿತ್ರ:IPhone 3G and 3G S backs.jpg|thumb|ಐಫೋನ್ 3Gಯ ಹಿಂಬದಿ (ಎಡ) 3GSನಂತೆ ತದ್ರೂಪದ್ದಾಗಿದೆ. 3GSನಲ್ಲಿರುವ ಹೊಳಪಿನ ಬೆಳ್ಳಿ ಅಕ್ಷರಗಳು ಮಾತ್ರ ವ್ಯತ್ಯಾಸದ ಅಂಶವಾಗಿದೆ. 3Gಯ ನರೆಬಣ್ಣದ ಅಕ್ಷರಗಳ ಸ್ಥಾನದಲ್ಲಿ ಇದು ಬೆಳ್ಳಿಯ ಆಪೆಲ್ ಲೊಗೊವನ್ನು ಹೊಂದುತ್ತದೆ.]]
=== ಭಿತ್ತಿ ಮತ್ತು ಆಂತರಿಕ ಅಂಶ (ಪರದೆ ಮತ್ತು ಇನ್ಪುಟ್ ) ===
ಐಫೋನ್ನ [[ಟಚ್ಸ್ಕ್ರೀನ್]] [[ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ]] ಆಗಿದೆ. ಇದು 6.3 px/mm ಲೆಕ್ಕದಲ್ಲಿ 320 #480 px ಆಗಿರುತ್ತದೆ. 160 160 [[ppi]], [[HVGA]] ಲಕ್ಷಣಗಳನ್ನು ಹೊಂದಿವೆ. ಗೀಚುಗಳನ್ನು ತಡೆಗಟ್ಟಬಹುದಾದ ಗಾಜನ್ನು ಹೊಂದಿದೆ. ಇದು 18-ಬಿಟ್ ರಂಗ ಸಂಯೋಜನೆಯನ್ನು ಬಳಸುತ್ತದೆ (ಇದು 262,144 ಬಣ್ಣಗಳನ್ನು ನೀಡಬಲ್ಲದು).
[[ಸಂಚಯನಕ್ಕೆ ಸಂಬಂಧಿಸಿದ ಟಚ್ಸ್ಕ್ರೀನ್]] ಬೆರಳುಗಳಿಗೆ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ, [[ಮಲ್ಟಿ ಟಚ್]] ಸಂವೇದನೆಗಾಗಿ ಹಲವು ಬೆರಳುಗಳನ್ನು ಬಳಸಬಹುದಾಗಿದೆ.
ಐಫೋನ್ನ ಸ್ಪರ್ಶ ಮತ್ತು ಸಂಜ್ಞೆಯ ಲಕ್ಷಣಗಳು ಮೂಲತಃ [[ಫಿಂಗರ್ವರ್ಕ್ಸ್]] ಸಂಸ್ಥೆಯು ವಿನ್ಯಾಸ ಮಾಡಿದ ತಂತ್ರಜ್ಞಾನ ಆಧರಿಸಿವೆ.<ref>{{Citation|title=iGesture Game Mode Guide|last=Fingerworks, Inc.|date=2003|publisher=www.fingerworks.com|url=http://rwservices.no-ip.info:81/pens/biblio05.html#Fingerworks03|access-date=2009-04-30}}</ref> ಕೈಚೀಲಗಳು ಮತ್ತು ಮೊನಚಾದ ರೆಕಾರ್ಡರಗಳು ಬಹಳಷ್ಟು ಅಗತ್ಯ ವಿದ್ಯುತ್ ಸಂಚಲನವನ್ನು ನಿಯಂತ್ರಿಸುತ್ತವೆ.1/}<ref name="pogueFAQ">{{cite web|authorlink=David Pogue|last=Pogue|first=David|url=http://pogue.blogs.nytimes.com/2007/01/11/the-ultimate-iphone-frequently-asked-questions/|title=The Ultimate iPhone Frequently Asked Questions|publisher=New York Times|date=January 11, 2007|accessdate=2008-06-06}}</ref><ref name="pogueFAQ2">{{cite web|authorlink=David Pogue|last=Pogue|first=David|url=http://pogue.blogs.nytimes.com/2007/01/13/ultimate-iphone-faqs-list-part-2/|title=Ultimate iPhone FAQs list, Part 2|publisher=New York Times|date=January 13, 2007|accessdate=2008-06-06}}</ref><ref>{{cite web|url=http://electronics.howstuffworks.com/iphone2.htm|title=How the iPhone's touchscreen Works|publisher=[[How Stuff Works]]|accessdate=2008-06-06}}</ref> ಐಫೋನ್ 3GS ಬೆರಳುಗಳ ಸ್ಪರ್ಶದಿಂದಾಗುವ ಧೂಳು ಮತ್ತು ಎಣ್ಣೆಜಿಡ್ಡನ್ನು ತಡೆಗಟ್ಟಬಲ್ಲ ಒಂದು [[ಒಲಿಯೊಫೊಬಿಕ್]] ಲೇಪನ ಹೊಂದಿದೆ.<ref>{{cite web|first=Eric |last=Slivka |url=http://www.macrumors.com/2009/06/10/more-wwdc-tidbits-iphone-3g-s-oleophobic-screen-find-my-iphone-live/ |title=More WWDC Tidbits: iPhone 3G S Oleophobic Screen, "Find My iPhone" Live |publisher=Mac Rumors |date=2009-06-10 |accessdate=2009-07-03}}</ref>
ಮೂರು ಯುಕ್ತ ಆದೇಶಗಳಿಗೆ ಪರದೆಯು ಪ್ರತಿಕ್ರಿಯೆ ನೀಡುತ್ತದೆ.
ಕರೆಯ ಸಮಯದಲ್ಲಿ ಐಫೋನ್ನ್ನು ಮುಖದ ಬಳಿ ತಂದಾಗ [[ಸಾಮೀಪ್ಯ ಸಂವೇದಕ]]ವು ಪರದೆ ಮತ್ತು ಟಚ್ಸ್ಕ್ರೀನ್ನ್ನು ನಿಷ್ಕ್ರಿಯಗೊಳಿಸುತ್ತದೆ. ಬ್ಯಾಟರಿ ಶಕ್ತಿಯನ್ನು ಉಳಿಸಲು ಮತ್ತು ಬಳಕೆದಾರರ ಮುಖ ಅಥವಾ ಕಿವಿಗೆ ತಗುಲಿದಾಗ ಅಪ್ಪಿತಪ್ಪಿ ಟಚ್ಸ್ಕ್ರೀನ್ಗೆ ಮಾಹಿತಿ ಹೋಗುವುದನ್ನು ತಡೆಗಟ್ಟಲು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಪರದೆಯ ಸುತ್ತಲಿನ ಬೆಳಕಿನ ಸಂವೇದಕವು ಬೆಳಕಿನ ಪ್ರಖರವನ್ನು ಹೊಂದಿಸಿಕೊಳ್ಳುತ್ತದೆ. ಈ ರೀತಿಯಾಗಿ ವಿದ್ಯುತ್ಕೋಶದಲ್ಲಿನ(ಬ್ಯಾಟರಿ) ಶಕ್ತಿಯ ಉಳಿತಾಯವಾಗುತ್ತದೆ. 3-ಅಕ್ಷೀಯ [[ಅಕ್ಸೆಲೆರೊಮೀಟರ್]] ಫೋನ್ನ ಸ್ಥಿತಿ ಗುರುತಿಸಿ ಅದಕ್ಕನುಗುಣವಾಗಿ ಪರದೆಯನ್ನು ಹೊಂದಿಸುತ್ತದೆ. ಇದರಿಂದ ಬಳಕೆದಾರರು [[ಪೊರ್ಟ್ರೇಟ್ (ಪ್ರತಿಕ್ರತಿ ಮತ್ತು ಭೂಚಿತ್ರಣ)ಮತ್ತು ಲ್ಯಾಂಡ್ಸ್ಕೇಪ್]] ನಡುವೆ ಬದಲಿಸಿ ಸುಲಭದ ತಿಳಿವಳಿಕೆಗೆ ಅವಕಾಶ ಕಲ್ಪಿಸುತ್ತದೆ.<ref>{{cite news|last=Johnson|first=R. Collin|url=http://www.eetimes.com/showArticle.jhtml?articleID=200900669|title=There's more to MEMS than meets the iPhone|publisher=[[EE Times]]|date=July 9, 2007|accessdate=2008-06-06|archive-date=2007-09-29|archive-url=https://web.archive.org/web/20070929095647/http://www.eetimes.com/showArticle.jhtml?articleID=200900669|url-status=dead}}</ref> ಛಾಯಾಚಿತ್ರ ಮತ್ತು ಜಾಲತಾಣಗಳ ಹುಡುಕಾಟ, ವೀಕ್ಷಣ, ಸಂಗೀತ ನುಡಿಸುವುದು - ಇವು ನೇರ ಅಥವಾ ಎಡ-ಬಲ ಅಗಲ ಪರದೆಯ ಸ್ಥಿತಿ ಗಮನಿಸಿ ಹೊಂದಿಕೆಯಾಗಬಲ್ಲವು.<ref>{{cite web |url=http://www.apple.com/ipodtouch/guidedtour/tour/medium.html|title=iPod touch — A Guided Tour|publisher=[[Apple Inc.]]|accessdate=2008-09-23}}</ref> 3.0 ಅಪ್ಡೇಟ್ (ಪರಿಷ್ಕರಣೆ) ಇ-ಮೇಲ್ನಂತಹ ಇನ್ನಷ್ಟು ಅನುಕೂಲಗಳಿಗೆ ಲ್ಯಾಂಡ್ಸ್ಕೇಪ್ ತನ್ನ ನೆರವನ್ನು ಸೇರಿಸಿತು. ಜೊತೆಗೆ ಫೋನ್ನ್ನು ಕ್ಷಿಪ್ರ ಮತ್ತು ಸುಲಭ ಬದಲಾಯಿಸುವದನ್ನು ಸಹ ಒಂದು ರೀತಿಯ ಇನ್ಪುಟ್ ಎಂದಾಯಿತು.<ref name="3.0 official" /><ref name="3.0 Macworld" /> ಕ್ರೀಡಾ ಬಳಕೆಗೆ [[ತೃತೀಯ ಬಲದ ಅಳವಡಿಕೆ]] ಗಳನ್ನು ನಿಯಂತ್ರಿಸಲು ಅಕ್ಸೆಲೆರೊಮೀಟರ್ ಬಳಸಬಹುದು.
ಜನವರಿ 2008ರಲ್ಲಿ ಅಳವಡಿಕೆಯಾದ ತಂತ್ರಾಂಶ ಅಪ್ಡೇಟ್<ref name="Update 1.1.3" />
[[GPS]] ಯಂತ್ರಾಂಶವಿಲ್ಲದ ಮೊದಲ ತಲೆಮಾರಿನ ಐಫೋನ್ಗಳೂ ಸಹ ಮೊಬೈಲ್ ಗೋಪುರಗಳು ಮತ್ತು ವೈ-ಫೈ ಜಾಲ [[ಟ್ರೈಲ್ಯಾಟರೇಷನ್]]<ref>{{cite web|url=http://www.howardforums.com/printthread.php?t=1383413&|title=Memo: iPhone does not use triangulation|last=XFF [[List of Latin phrases: E|et al.]]|date=2008-06-13|publisher=HowardForums|accessdate=2009-06-01}}</ref> ಗಳ ಬಳಸುವಂತೆ ಅವಕಾಶ ಕಲ್ಪಿಸಿಕೊಟ್ಟಿತು. ಐಫೋನ್ 3G ಮತ್ತು ಐಫೋನ್ 3GS [[A-GPS]] ವ್ಯವಸ್ಥೆಯನ್ನು ಬಳಸುತ್ತದೆ. ಐಫೋನ್ 3GS [[ಡಿಜಿಟಲ್ ಕಾಂಪಾಸ್]] ಸಹ ಹೊಂದಿದೆ.<ref name="Compass" />
ಐಫೋನ್ನ ಬದಿಗಳಲ್ಲಿ ಮೂರು ಸ್ವಿಚ್ಗಳಿವೆ. ವೇಕ್/ಸ್ಲೀಪ್, ವಾಲ್ಯೂಮ್ ಹಿಗ್ಗಿಸು/ಕುಗ್ಗಿಸು, ರಿಂಗರ್ ಆನ್/ಆಫ್. ಮೂಲತಃ ಐಫೋನ್ನಲ್ಲಿ ಇವು ಪ್ಲ್ಯಾಸ್ಟಿಕ್ನಿಂದ ನಿರ್ಮಿತವಾಗಿರುತ್ತವೆ. ನಂತರದ ಮಾದರಿಗಳಲ್ಲಿ ಅವುಗಳಿಗೆ ಲೋಹ ಬಳಸಲಾಗಿದೆ. ಪರದೆಯ ಕೆಳಗಿರುವ ಏಕೈಕ 'ಹೋಮ್' ಯಂತ್ರಾಂಶದ ಕೀ ಒತ್ತಿದಾದ ಮುಖ್ಯ ವಿಷಯ ಪಟ್ಟಿಯನ್ನು ಪ್ರದರ್ಶಿಸುತ್ತದೆ. ಟಚ್ಸ್ಕ್ರೀನ್ [[ಬಳಕೆದಾರ ಇಂಟರ್ಫೇಸ್]]ನ ಉಳಿದ ಅಂಶಗಳನ್ನು ತೋರಿಸುತ್ತದೆ.
ಮೂಲತಃ ಐಫೋನ್ನ ಹಿಂಬದಿಯು ಕಪ್ಪು ಬಣ್ಣದ ಪ್ಲ್ಯಾಸ್ಟಿಕ್ ಮಿಶ್ರಿತ ಅಲ್ಯುಮಿನಿಯಮ್ ಬಳಸಿ ನಿರ್ಮಿತವಾಗಿತ್ತು. ಐಫೋನ್ನ 3G ಮತ್ತು 3GSನ ಹಿಂಬದಿಯು ಸಂಪೂರ್ಣ ಪ್ಲ್ಯಾಸ್ಟಿಕ್ನದ್ದಾಗಿದೆ. ಇದರಿಂದಾಗಿ GSM ಸಂಕೇತದ ಪ್ರಖರತೆಯನ್ನು ಹೆಚ್ಚಿಸಬಹುದು.<ref>{{cite web|url=http://news.cnet.com/8301-13579_3-10012420-37.html?tag=mncol;title|title=Apple, AT&T mum on iPhone 3G issues|publisher=[[CNET Networks]]|accessdate=2008-09-23}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಐಫೋನ್ 3G ಕಪ್ಪು ಬಣ್ಣದಲ್ಲಿ ಲಭ್ಯವಿದೆ. 8 GB ಮೆಮೊರಿ ಹೊಂದಿದೆ.ಸದ್ಯ ಚಾಲ್ತಿಯಲ್ಲಿಲ್ಲದ 16 GB ಮಾದರಿಯು ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಲಭ್ಯವಿತ್ತು. ಮಾಹಿತಿ ಶೇಖರಣಾ ಸಾಮರ್ಥ್ಯ ಏನೇ ಇರಲಿ, ಐಫೋನ್ 3GS ಎರಡೂ ಬಣ್ಣಗಳಲ್ಲಿ ಲಭ್ಯವಿದೆ.
=== (ಆಡಿಯೊ ಮತ್ತು ಔಟ್ಪುಟ್) ಶ್ರವಣಸಾಮರ್ಥ್ಯ ಹೊರಹೊಮ್ಮಿಸುವುದು ===
[[File:IPhone-bottom.jpg|thumb|ಐಫೋನ್ನ ಅಡಿಯಲ್ಲಿರುವ ಡಾಕ್ ಕನೆಕ್ಟರ್ನ್ನು ಎರಡು ಸ್ಪೀಕರ್ಗಳಲ್ಲಿ ಒಂದು (ಎಡ) ಮತ್ತು ಧ್ವನಿಗ್ರಾಹಕ (ಬಲ) ಸುತ್ತುವರೆದಿರುವುದು. ಹೆಡ್ಸೆಟ್ಒಂದನ್ನು ಐಫೋನ್ಗೆ ಸೇರಿಸಿದಾಗ, ಧ್ವನಿಯು ಹೆಡ್ಸೆಟ್ ಮೂಲಕ ಕೇಳಿಬರುತ್ತದೆ.]]
ಪರದೆಯ ಮೇಲೆ ಇಯರ್ಪೀಸ್ ರೂಪದಲ್ಲಿ ಒಂದು [[ಲೌಡ್ಸ್ಪೀಕರ್]] ಉಂಟು, ಇನ್ನೊಂದು ಸ್ಪೀಕರ್ ಫೋನ್ನ ತಳದಲ್ಲಿ ಎಡಪಕ್ಕದಲ್ಲಿದೆ. ಬಲಪಕ್ಕದಲ್ಲಿ [[ಮೈಕ್ರೊಫೋನ್]] ಇದೆ. ಧ್ವನಿ ನಿಯಂತ್ರಣವು ಫೋನ್ನ ಎಡಭಾಗ ಹಾಗೂ ಐಪಾಡ್ ಅಳವಡಿಕೆ ಸ್ಲೈಡರ್ ರೂಪದಲ್ಲಿದೆ. ಎರಡೂ ಸ್ಪೀಕರ್ಗಳನ್ನು [[ಹ್ಯಾಂಡ್ಸ್ಫ್ರೀ]] ಕಾರ್ಯಗಳಿಗೆ ಮತ್ತು ಮೀಡಿಯಾ ಪ್ಲೇಬ್ಯಾಕ್ ಉದ್ದೇಶಕ್ಕಾಗಿ ಬಳಸಲಾಗುತ್ತದೆ.
ಹೆಡ್ಫೋನ್ಗಳಿಗಾಗಿ ಇರುವ 3.5 mm [[TRRS ಕನೆಕ್ಟರ್]] ಫೋನ್ನ ಮೇಲಬದಿಯ ಎಡಮೂಲೆಯಲ್ಲಿದೆ.<ref name="TRRS">{{cite web|url=http://encyclopedia2.thefreedictionary.com/Tip+and+ring|title=tip and ring|work=Computer Desktop Encyclopedia|publisher=The Computer Language Company Inc.|accessdate=2009-03-15}}</ref> ಮೂಲತಃ ಐಫೋನ್ನಲ್ಲಿರುವ ಹೆಡ್ಫೋನ್ ಸಾಕೆಟ್ ಕವಚದ ಒಳಗಿದೆ. ಹಾಗಾಗಿ ಇದು ಅಡ್ಯಾಪ್ಟರ್ ಇಲ್ಲದ ಹಲವು ಹೆಡ್ಸೆಟ್ಗಳೊಂದಿಗೆ ಹೊಂದಿಕೊಳ್ಳಲಾರದು ಮತ್ತು ಕೆಲಸವನ್ನೂ ಮಾಡದು.<ref name="Original Cnet review" /><ref>{{cite web|url=http://blogs.zdnet.com/Apple/?p=828|title=That damned recessed iPhone headphone jack|publisher=[[ZDNet]]|accessdate=2008-06-06|archive-date=2009-06-29|archive-url=https://web.archive.org/web/20090629052413/http://blogs.zdnet.com/Apple/?p=828|url-status=dead}}</ref> ಫ್ಲಷ್-ಮೌಂಟೆಡ್ ಹೆಡ್ಫೋನ್ ಸಾಕೆಟ್ ಜೊಡಣೆ ಹೊಂದಿರುವ ಐಫೋನ್ 3G ಈ ಸಮಸ್ಯೆಯನ್ನು ಪರಿಹರಿಸುತ್ತದೆ.
ಸಾಮಾನ್ಯ ಹೆಡ್ಫೋನ್ ಗಳೊಂದಿಗೆ ಐಫೋನ್ ಹೊಂದಿಕೊಳ್ಳಬಹುದಾದರೆ, ಆಪೆಲ್ ಹೆಚ್ಚುವರೆ ಕಾರ್ಯಕ್ಷಮತೆ ಹೊಂದಿರುವ ಹೆಡ್ಸೆಟ್ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತದೆ. ಸಂಗೀತ ಆಲಿಸಲು ಅಥವಾ ನಿಲ್ಲಿಸಲು, ಹಾಡುಗಳ ಪಟ್ಟಿಯಲ್ಲಿರುವ ಹಾಡನ್ನು ಬೇಕಾದ ಹಾಗೆ ಬದಲಿಸಲು, ಹಾಗೂ ಐಫೋನ್ ಮುಟ್ಟದೆಯೇ ಕರೆಗಳನ್ನು ಸ್ವೀಕರಿಸಲು/ಅಂತ್ಯಗೊಳಿಸಲು ಮೈಕ್ರೊಫೋನ್ ಬಳಿಯಿರುವ ಬಹುಉದ್ದೇಶಿತ ಬಟನ್ ಬಳಸಬಹುದು. ಐಫೋನ್ಗಾಗಿ ವಿಶಿಷ್ಟವಾಗಿ ವಿನ್ಯಾಸಗೊಳಿಸಿದ ಕೆಲವೇ ಕೆಲವು ತೃತೀಯ ಶ್ರೇಣಿಯ ಹೆಡ್ಸೆಟ್ಗಳು ಮೈಕ್ರೊಫೋನ್ ಮತ್ತು ನಿಯಂತ್ರಣಾ ಕೀಲಿಮಣಿ ಹೊಂದಿರುತ್ತವೆ.<ref name="Review: iPhone headsets">{{cite web|url=http://www.macworld.com/article/133445/2008/05/iphoneheadsets.html|title=Review: iPhone headsets|last=Frakes|first=Dan|date=May 14, 2008|publisher=Macworld|accessdate=2009-01-10}}</ref> ಧ್ವನಿ ನಿಯಂತ್ರಣಗಳುಳ್ಳ ಹೆಡ್ಸೆಟ್ಗಳನ್ನು ಆಪೆಲ್ ಮಾರಾಟ ಮಾಡುತ್ತದೆ. ಆದರೆ ಅವು ಕೇವಲ ಐಫೋನ್ 3GSನೊಂದಿಗೆ ಮಾತ್ರ ಹೊಂದಿಕೊಳ್ಳುತ್ತದೆ.<ref name="Earbuds with volume">{{cite web|url=http://store.apple.com/us/product/MB770G/A?fnode=MTY1NDA0Ng&mco=MjE0NDgxMg|title=Apple Earphones with Remote and Mic|publisher=Apple Store|accessdate=2009-05-19}}</ref>
[[HSP]] [[ಪ್ರೊಫೈಲ್]] ಅಗತ್ಯವಿರುವ ನಿಸ್ತಂತು ಇಯರ್ಪೀಸ್ಗಳು ಮತ್ತು ಹೆಡ್ಫೋನ್ಗಳಿಗೆ ಅಂತರ್ನಿರ್ಮಿತ [[ಬ್ಲೂಟೂತ್ 2.x+EDR]] ಸಹಕಾರ ನೀಡುತ್ತದೆ. [[A2DP]]ಗೆ ನೆರವು ನೀಡುವ ಯಂತ್ರಾಂಶಗಳಿಗೆ 3.0 ಅಪ್ಡೇಟ್ನಲ್ಲಿ [[ಸ್ಟೀರಿಯೊ ಆಡಿಯೊ]] ವನ್ನು ಸೇರಿಸಲಾಯಿತು.<ref name="3.0 official"/> ಅನುಮೋದನೆಯಾಗದ ತೃತೀಯ ವರ್ಗದ ತಂತ್ರಾಂಶಗಳು ಲಭ್ಯವಿದ್ದರೂ, ಐಫೋನ್ ಅಧಿಕೃತವಾಗಿ [[OBEX]] [[ಫೈಲ್ ಟ್ರಾನ್ಸ್ಫರ್]] [[ಪ್ರೊಟೊಕಾಲ್]] ಬೆಂಬಲಿಸುವುದಿಲ್ಲ.<ref>{{cite web|url=https://arstechnica.com/apple/news/2009/01/ibluetooth-team-achieves-obex-file-transfer.ars|title=iBluetooth team achieves OBEX file transfer|last=Sadun|first=Erica|date=2009-01-26|publisher=Ars Technica|accessdate=2009-05-12}}</ref> ಇಂತಹ ಪ್ರೊಫೈಲ್ಗಳ ಕೊರತೆಯಿಂದಾಗಿ ಚಿತ್ರಗಳು, ಸಂಗೀತ, ವೀಡಿಯೊಗಳಂತಹ ಮಲ್ಟಿಮೀಡಿಯಾ ಕಡತಗಳನ್ನು ಐಫೋನ್ ಬಳಕೆದಾರರು ಇತರೆ ಬ್ಲೂಟೂತ್ ಯುಳ್ಳ ಸಕ್ರಿಯ ಮೊಬೈಲ್ ಫೋನ್ಗಳೊಂದಿಗೆ ವಿನಿಮಯ ಮಾಡಿಕೊಳ್ಳುವುದನ್ನು ತಡೆಗಟ್ಟುತ್ತದೆ.
[[576i]] ಮತ್ತು ಸ್ಟೀರಿಯೊ ಆಡಿಯೊ ವರೆಗಿನ ಕಾಂಪೊಸಿಟ್ ಅಥವಾ ಕಾಂಪೊನೆಂಟ್ ವೀಡಿಯೊಗಳನ್ನು ಡಾಕ್ ಕನೆಕ್ಟರ್ಗಳಿಂದ ಔಟ್ಪುಟ್ ಮಾಡಬಹುದಾಗಿದೆ. ಇದಕ್ಕೆ ಆಪೆಲ್ ಮಾರಾಟ ಮಾಡುವ ಡಾಕ್ ಕನೆಕ್ಟರ್ ಮೂಲಕ ಔಟ್ಪುಟ್ ಮಾಡಬಹುದು.<ref>{{cite web|url=http://store.apple.com/1-800-MY-APPLE/WebObjects/AppleStore?spart=MB128LL%2FA|title=Apple Component AV Cable|publisher=[[Apple Inc.]]|work=[[Apple Store (online)|Apple Online Store]]|access-date=2010-01-28|archive-date=2008-12-31|archive-url=https://web.archive.org/web/20081231025407/http://store.apple.com/1-800-MY-APPLE/WebObjects/AppleStore?spart=MB128LL%2FA|url-status=dead}}</ref> ಇದೇ ರೀತಿಯ ಫೋನ್ ಗಳಿಗಿಂತಲೂ ಭಿನ್ನವಾಗಿ, 3.0 ತಂತ್ರಾಂಶದ ಅಪ್ಡೇಟ್ ಲಭ್ಯವಾಗುವವರೆಗೂ, ಐಫೋನ್ [[ಧ್ವನಿ ಮುದ್ರಣ]]ಕ್ಕೆ ಅವಕಾಶ ನೀಡುತ್ತಿರಲಿಲ್ಲ.<ref name="3.0 official"/>
=== ವಿದ್ಯುತ್ಕೋಶ(ವಿದ್ತ್ಯುತ್ ಸಂಚಯನದ ವಸ್ತು) ===
[[File:IPhone 3G S sides.jpg|thumb|ಐಫೋನ್ 3GSನ ಮೇಲ್ಭಾಗ ಮತ್ತು ಪಕ್ಕಭಾಗಗಳು ಐಫೋನ್ 3Gಯಂತೆಯೇ ಇವೆ. ಮೂಲತಃ ಮಾದರಿಯಲ್ಲಿ ಸ್ವಿಚ್ಗಳು ಕಪ್ಪು ಬಣ್ಣದ ಪ್ಲ್ಯಾಸ್ಟಿಕ್ ವಸ್ತುವಿನದ್ದಾಗಿದ್ದವು.ಎಡದಿಂದ ಬಲಕ್ಕೆ, ಪಕ್ಕದಲ್ಲಿ: ಆನ್/ಆಫ್ ಸ್ವಿಚ್, SIM ಕಾರ್ಡ್ಗಾಗಿ ಜಾಗ, ಹೆಡ್ಫೋನ್ ಜ್ಯಾಕ್, ನಿಃಶಬ್ದ ಸ್ವಿಚ್, ಧ್ವನಿ ನಿಯಂತ್ರಣಗಳು. ಮೇಲ್ಭಾಗ: ಸ್ಪೀಕರ್, ಪರದೆ.]]
ಐಫೋನ್ನಲ್ಲಿ ಆಂತರಿಕ ಪುನರ್ ಭರ್ತಿ ಮಾಡುವ ವಿದ್ಯುತ್ಕೋಶವಿದೆ. ಇತರೆ ಮೊಬೈಲ್ ಫೋನ್ಗಳಿಗಿಂತಲೂ ಭಿನ್ನವಾಗಿ, ಐಪಾಡ್ನಂತೆ, ಈ ವಿದ್ಯುತ್ಕೋಶವನ್ನು ವಿಧವಿಧವಾಗಿ ಬದಲಾಯಿಸಲಾಗದು.<ref name="Original Cnet review">{{cite web|url=http://reviews.cnet.com/smartphones/apple-iphone-8gb-at/4505-6452_7-32309245.html|title=Apple iPhone - 8GB (AT&T)|last=German|first=Kent|coauthors=Donald Bell|date=June 29, 2007|publisher=Cnet review|pages=1 and 2|accessdate=2009-01-10|archive-date=2009-01-01|archive-url=https://web.archive.org/web/20090101013627/http://reviews.cnet.com/smartphones/apple-iphone-8gb-at/4505-6452_7-32309245.html|url-status=dead}}</ref><ref name="Mobile Burn review">{{cite web|url=http://www.mobileburn.com/review.jsp?Id=3526|title=Review: Apple iPhone, In-Depth|last=Oryl|first=Michael|date=July 3, 2007|publisher=Mobile Burn|accessdate=2009-01-10}}</ref> [[ಐಪಾಡ್ ಚಾರ್ಜ್ ಮಾಡುವ ರೀತಿ]]ಯಂತೆಯೇ, ಕಂಪ್ಯೂಟರ್ಗೆ USB ತಂತಿಯ ಮೂಲಕ ಸಂಪರ್ಕವೇರ್ಪಡಿಸಿ ಐಫೋನ್ ಚಾರ್ಜ್ ಮಾಡಬಹುದಾಗಿದೆ. ಪರ್ಯಾಯವಾಗಿ, 'USB ಟು AC ಅಡ್ಯಾಪ್ಟರ್' (ಅಥವಾ 'ವಾಲ್ ಚಾರ್ಜರ್,' ಸಹಿತ) ತಂತಿಗೆ ಸೇರಿಸಿ ಅಥವಾ ನೇರವಾಗಿ [[AC ಔಟ್ಲೆಟ್ (ವಿದ್ಯುನ್ನೆಲೆ)]]ಯಿಂದ ಸಂಪರ್ಕವೇರ್ಪಡಿಸಿ ಚಾರ್ಜ್ ಮಾಡಬಹುದಾಗಿದೆ. ಹಲವು ತೃತೀಯ ವರ್ಗದ ಉಪಕರಣೆಯ ಅಂಶಗಳಲ್ಲಿ(ಸ್ಟೀರಿಯೊಗಳು, ಕಾರ್ ಚಾರ್ಜರ್, ಸೌರ ಚಾರ್ಜರ್ಗಳು) ಸಹ ಲಭ್ಯ.<ref>{{Citation|title=Hit the Road, Mac: iPod Power Aid|newspaper=Mac<nowiki>|</nowiki>Life|pages=32–33|year=2009|date=June 2009|issue=29}}</ref>
ವಿದ್ಯುತ್ಕೋಶದ ಜೀವಿತಾವಧಿಯನ್ನು ನಿರ್ಣಯಿಸಲು ಆಪೆಲ್ ನಿರ್ಮಾಣ-ಪೂರ್ವ (ವಿದ್ಯುತ್ಕೋಶ) ಉತ್ಪನ್ನಗಳ ಮೇಲೆ ಪರೀಕ್ಷೆ-ಪ್ರಯೋಗಳನ್ನು ನಡೆಸುತ್ತದೆ. ವಿದ್ಯುತ್ಕೋಶದ ಅವಧಿಯನ್ನು 'ವಿದ್ಯುತ್ಕೋಶವು 400 ಬಾರಿ ಚಾರ್ಜ್ ಮತ್ತು ಡಿಸ್ಚಾರ್ಜ್ ಆದ ನಂತರ ತನ್ನ ಆವರ್ತನೀಯ ಸಾಮರ್ಥ್ಯದ 80%ರಷ್ಟನ್ನು ಉಳಿಸಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ'<ref>{{cite web|url=http://www.apple.com/batteries/iphone.html|title=Batteries—iPhone|publisher=[[Apple Inc.]]|accessdate=2008-06-06}}</ref> ಎಂದು ಆಪೆಲ್ನ ಜಾಲತಾಣದ ಮಾಹಿತಿಯಲ್ಲಿ ತಿಳಿಸಲಾಗಿದೆ. ಇದನ್ನು ಐಪಾಡ್ ವಿದ್ಯುತ್ಕೋಶದ ವಿನ್ಯಾಸಕ್ಕೆ ಹೋಲಿಸಬಹುದು. ಮೂಲತಃ ಐಪೋನ್ನ ವಿದ್ಯುತ್ಕೋಶವು ಏಳು ಗಂಟೆಗಳ ವೀಡಿಯೊ ವೀಕ್ಷಣೆ, ಆರು ಗಂಟೆಗಳ ಇಂಟರ್ನೆಟ್ ವೀಕ್ಷಣೆ, ಎಂಟು ಗಂಟೆಗಳ ಸಂವಾದ ಅವಧಿ (ಟಾಕ್ ಟೈಮ್), 24 ಗಂಟೆಗಳ ಸಂಗೀತ ಅಥವಾ 250 ಗಂಟೆಗಳ ವರೆಗಿನ 'ಸನ್ನದ್ಧ' ಸ್ಥಿತಿಯಲ್ಲಿರಲು ಸಮರ್ಥವಾಗಿದೆ.<ref name="jun18PressRelease" /> ಐಫೋನ್ 3Gಯ ವಿದ್ಯುತ್ಕೋಶವು ಏಳು ಗಂಟೆಗಳ ವೀಡಿಯೊ, ಆರು ಗಂಟೆಗಳ ಕಾಲ ವೈ-ಫೈ ಮೂಲಕ ಇಂಟರ್ನೆಟ್ ವೀಕ್ಷಣೆ (ಅಥವಾ 3Gಯಲ್ಲಿ ಐದು), ಹತ್ತು ಗಂಟೆಗಳ 2G ಸಂವಾದ ಅವಧಿ (ಅಥವಾ 3Gಯಲ್ಲಿ ಐದು), ಅಥವಾ 300 ಗಂಟೆಗಳ ಕಾಲ ಸನ್ನದ್ಧ ಸ್ಥಿತಿಯಲ್ಲಿರಲು ಸಮರ್ಥವಾಗಿದೆ.<ref name="3G_tech_specs">{{cite web|url=http://www.apple.com/iphone/specs-3g.html|title=Apple — iPhone — Technical Specifications|publisher=[[Apple Inc.]]|accessdate=2009-06-10}}</ref> 3GS ಹತ್ತು ಗಂಟೆಗಳ ವರೆಗೂ ವೀಡಿಯೊ, ವೈ-ಫೈ ಮೂಲಕ ಒಂಬತ್ತು ಗಂಟೆಗಳ ಇಂಟರ್ನೆಟ್ ವೀಕ್ಷಣೆ (ಅಥವಾ 3Gಯಲ್ಲಿ ಐದು ಗಂಟೆಗಳು), ಹನ್ನೆರಡು ಗಂಟೆಗಳ 2G ಸಂವಾದ (ಅಥವಾ 3Gಯಲ್ಲಿ ಐದು ಗಂಟೆಗಳು), 30 ಗಂಟೆಗಳ ಸಂಗೀತ, ಅಥವಾ 300 ಗಂಟೆಗಳ ಸನ್ನದ್ಧ ಸ್ಥಿತಿಯಲ್ಲಿರಲು ಸಮರ್ಥವಾಗಿದೆ ಎಂದು ಆಪೆಲ್ ಹೇಳಿಕೊಂಡಿದೆ.<ref name="3G_S_tech_specs">{{cite web|url=http://www.apple.com/iphone/specs.html|title=Apple — iPhone — Technical Specifications|publisher=[[Apple Inc.]]|accessdate=2009-06-10}}</ref>
ಹಲವು ತಂತ್ರಜ್ಞಾನ ಪರಿಣತ ಪತ್ರಕರ್ತರಿಂದ ಬ್ಯಾಟರಿಯ ಜೀವಾವಧಿಯ ಬಗ್ಗೆ ಟೀಕೆಗಳು ಬಂದಿದ್ದು ಕೂಡಾ ಪರಾಮರ್ಶೆಯ ವಿಚಾರವಾಗಿದೆ.<ref>{{cite web|url=https://arstechnica.com/apple/reviews/2008/07/iphone3g-review.ars/6|title=The Second Coming: Ars goes in-depth with the iPhone 3G|publisher=Ars Technica|author=Cheng, Jacqui|coauthors=Chartier, David; Ecker, Clint|date=2008-07-14|accessdate=2009-06-23}}</ref><ref>{{cite web|url=http://gizmodo.com/5024412/iphone-3g-review|title=iPhone 3G Review|author=Lam, Brian|publisher=Gizmodo|date=2008-07-11|2009-06-23}}</ref><ref>{{cite web|url=http://www.washingtonpost.com/wp-dyn/content/article/2008/07/09/AR2008070900177.html|title=First iPhone 3G Reviews: Mossberg: Battery 'Significant Problem'; Pogue: Limited 3G, Good Audio|author=Kramer, Staci D.|publisher=MocoNews|work=The Washington Post|date=2008-07-09|accessdate=2009-06-23}}</ref><ref>{{cite web|url=http://ptech.allthingsd.com/20080708/newer-faster-cheaper-iphone-3g|title=Newer, Faster, Cheaper iPhone 3G|author=Mossberg, Walter S.|publisher=The Wall Street Journal|date=2008-07-08|accessdate=2009-06-23}}</ref> ಈ ವಿಚಾರವನ್ನು [[ಜೆ. ಡಿ. ಪಾವರ್ ಅಂಡ್ ಅಸೊಷಿಯೆಟ್ಸ್]] ಗ್ರಾಹಕರ ಬೇಡಿಕೆಯ ಕುರಿತಾದ ಸಮೀಕ್ಷೆಯು ಹೊರಗೆಡಹಿದೆ. ಇದರಂತೆ ಐಫೋನ್ 3Gಯ ವಿದ್ಯುತ್ಕೋಶ ವಿಚಾರದಲ್ಲಿ ಅತ್ಯಂತ ಕಡಿಮೆ ಅಂಕಗಳನ್ನು ನೀಡಿತ್ತು: 5 ಅಂಕಗಳಲ್ಲಿ 2.<ref name="JD_Power">{{cite web|url=http://www.jdpower.com/corporate/news/releases/pressrelease.aspx?id=2008240|title=2008 Business Wireless Smartphone Customer Satisfaction Study|date=2008-11-06|publisher=[[J. D. Power and Associates]]|accessdate=2009-06-10|archive-date=2009-05-28|archive-url=https://web.archive.org/web/20090528180840/http://www.jdpower.com/corporate/news/releases/pressrelease.aspx?ID=2008240|url-status=dead}}</ref><ref>{{cite web|url=http://news.cnet.com/8301-13579_3-10084250-37.html|title=Apple's iPhone wins J.D. Power award|last=Krazit|first=Tom|date=2008-11-06|publisher=CNET|accessdate=2009-06-10|archive-date=2009-08-06|archive-url=https://web.archive.org/web/20090806210347/http://news.cnet.com/8301-13579_3-10084250-37.html|url-status=dead}}</ref>
[[ಖಾತರಿಯ (ವಾರಂಟಿ) ಅವಧಿ]]ಯಲ್ಲಿ ವಿದ್ಯುತ್ಕೋಶವು ಅಸಮರ್ಪಕವಾಗಿ ಕೆಲಸ ಮಾಡಿದರೆ ಅಥವಾ ಅವಧಿಗೂ ಮುಂಚೆ ನಿಷ್ಕ್ರಿಯವಾದರೆ, ಫೋನ್ನ್ನು ಆಪೆಲ್ ಸಂಸ್ಥೆಗೆ ಹಿಂದಿರುಗಿಸಿ ಉಚಿತವಾಗಿ ಬದಲಾಯಿಸಲು ಅವಕಾಶವಿದೆ.<ref>{{cite web|url=http://www.apple.com/support/iphone/service/faq/|title=iPhone Service Frequently Asked Questions|publisher=[[Apple Inc.]]|accessdate=2008-06-06}}</ref> ಖರೀದಿಯ ಅವಧಿಯಿಂದ ವಾರಂಟಿಯು ಒಂದು ವರ್ಷದ ಕಾಲ ಸಿಂಧುವಾಗಿರುತ್ತದೆ. [[ಆಪೆಲ್ಕೇರ್]]ನೊಂದಿಗಿನ ಸೇವಾಸೌಲಭ್ಯಕ್ಕಾಗಿ ಇದನ್ನು ಎರಡು ವರ್ಷಗಳ ವರೆಗೆ ಇದನ್ನು ವಿಸ್ತರಿಸಲಾಗಿದೆ. ದಿ ಫೌಂಡೇಷನ್ ಫಾರ್ ಟ್ಯಾಕ್ಸ್ಪೇಯರ್ ಅಂಡ್ ಕನ್ಸ್ಯುಮರ್ ರೈಟ್ಸ್ ಎಂಬ [[ಗ್ರಾಹಕರ ಕಾನೂನು ಹಕ್ಕುಗಳ ಒಕ್ಕೂಟ]]ವು, ವಿದ್ಯುತ್ಕೋಶ(ಬ್ಯಾಟರಿ) ಬದಲಾಯಿಸಲು ಗ್ರಾಹಕರು ತೆರಬೇಕಾದ ಶುಲ್ಕದ ಬಗ್ಗೆ ಆಪೆಲ್ ಮತ್ತು AT&T ಸಂಸ್ಥೆಗಳಿಗೆ ತಕರಾರೊಂದನ್ನು ರವಾನಿಸಿದೆ.<ref name="LeeEllen">{{cite news|last=Lee|first=Ellen|url=http://www.sfgate.com/cgi-bin/article.cgi?file=/c/a/2007/07/11/BUG34QU3921.DTL&type=tech|title=Will a Cheaper iPhone click before Christmas?|publisher=San Francisco Chronicle|date=July 11, 2007|accessdate=2008-06-06|archive-date=2008-06-12|archive-url=https://web.archive.org/web/20080612160048/http://www.sfgate.com/cgi-bin/article.cgi?file=/c/a/2007/07/11/BUG34QU3921.DTL&type=tech|url-status=dead}}</ref> ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವ ವರೆಗೂ ವಿದ್ಯುತ್ಕೋಶದ ಬದಲಾಯಿಸುವಿಕೆ ಮತ್ತು ಬೆಲೆಯ ಬಗ್ಗೆ ಕೊಳ್ಳುಗರಿಗೆ ತಿಳಿಯಪಡಿಸದಿದ್ದರೂ,<ref name="LeeEllen" /><ref>{{cite news|last=Wong|first=May|url=http://www.washingtonpost.com/wp-dyn/content/article/2007/07/08/AR2007070800562_pf.html|title=Apple Issues Battery Program for IPhone|publisher=Washington Post|date=2007-07-08|accessdate=2007-07-08}}</ref> ಆಪೆಲ್ ಮತ್ತು ತೃತೀಯ ವರ್ಗದವರು ಐಪ್ಯಾಡ್ ಗೆ ಬ್ಯಾಟರಿ ಬದಲಾಯಿಸುವ ಪ್ರಕ್ರಿಯೆಗೆ ಇದು ಸಮನಾಗಿದೆ ಎಂದು ಪರಿಗಣಿಸಲಾಗಿದೆ.
ಜುಲೈ 2007ರಿಂದಲೂ, ತೃತೀಯ ಪಕ್ಷದ ಅಥವಾ ಹೊರಗಿನವರಿಗೆ ಒದಗಿಸುವ ವಿದ್ಯುತ್ಕೋಶ ಬದಲಾವಣಾ ಕಿಟ್ಗಳು ಸುಲಭ ಬೆಲೆಗೆ ಲಭ್ಯ.<ref>{{cite web|url=http://www.engadget.com/2007/07/31/iphones-first-sketchy-battery-replacement-kit-appears/|title=iPhone's first sketchy battery replacement kit appears|publisher=[[Engadget]]|date=July 31, 2007}}</ref> ಇದು ಆಪೆಲ್ನ ವಿದ್ಯುತ್ಕೋಶ ಬದಲಾವಣಾ ಯೋಜನಾ ಕಿಟ್ಗಳಿಗಿಂತಲೂ ಅಗ್ಗ. ಸಾಮಾನ್ಯವಾಗಿ ಈ ಕಿಟ್ ಸಣ್ಣ ಸ್ಕ್ರೂಡ್ರೈವರ್ ಮತ್ತು ಒಂದು ಸೂಚನಾ ಕೈಪಿಡಿ ಒಳಗೊಂಡಿರುತ್ತವೆ. ಆದರೆ, ಹೊಸ ಐಪಾಡ್ ಮಾದರಿಗಳಂತೆಯೇ, ಮೂಲತಃ ಐಫೋನ್ನಲ್ಲಿ ವಿದ್ಯುತ್ಕೋಶ [[ಬೆಸೆ-ಜೋಡಿಸ]]ಯಲಾಗಿದೆ. ಹಾಗಾಗಿ, ಹೊಸದನ್ನು ಅಳವಡಿಸಲು ಕಬ್ಬಿಣ ಲೋಹದ [[ಬೆಸುಗೆ ಉಪಕರಣ]]ದ ಅಗತ್ಯವಿದೆ. ಐಫೋನ್ 3Gಗಾಗಿ ವಿಭಿನ್ನ ವಿದ್ಯುತ್ಕೋಶ ಬಳಸಲಾಗುತ್ತದೆ. ಸುಲಭವಾಗಿ ಬದಲಾಯಿಸಬಲ್ಲ ಒಂದು ಜೋಡಣಾ ವ್ಯವಸ್ಥೆ ಇದಕ್ಕಿದೆ. ಆದರೂ ಸಹ, ಆಪೆಲ್ ಹೊರತುಪಡಿಸಿ ಬೇರೊಂದಕ್ಕೆ ಬದಲಾಯಿಸಿದಲ್ಲಿ ವಾರಂಟಿ ಅಸಿಂಧುವಾಗುವುದು.<ref name="3G quasi-replaceable battery">{{cite web|url=http://gizmodo.com/5023983/the-iphone-3g-battery-is-quasi+replaceable|title=The iPhone 3G Battery Is Quasi-Replaceable|last=Wilson|first=Mark|date=July 10, 2008|publisher=Gizmodo|accessdate=2009-01-10|archive-date=2009-01-29|archive-url=https://web.archive.org/web/20090129230612/http://gizmodo.com/5023983/the-iphone-3g-battery-is-quasi+replaceable|url-status=dead}}</ref>
=== ಕ್ಯಾಮೆರಾ(ಛಾಯಾಚಿತ್ರಣ ಮಾಧ್ಯಮ) ===
ಐಫೋನ್ ಮತ್ತು ಐಫೋನ್ 3G ಮಾದರಿಗಳಲ್ಲಿ ಅಂತರ್ನಿರ್ಮಿತ ಫಿಕ್ಸೆಡ್-ಫೊಕಸ್ (ಸ್ಥಿರತೆಯ) 2.0 [[ಮೆಗಾಪಿಕ್ಸೆಲ್]] [[ಕ್ಯಾಮೆರಾ]] ಅಳವಡಿಸಲಾಗಿದೆ. [[ಸ್ಥಿರ ಡಿಜಿಟಲ್ ಛಾಯಾಚಿತ್ರ]]ಗಳನ್ನು ಹಿಡಿಯಲು ಇದು ಉಪಯುಕ್ತವಾಗಿದೆ. ಇದರಲ್ಲಿ ದೃಷ್ಟಿಯ ಅಥವಾ ದೃಶ್ಯ ಸಂಯೋಜನೆಯ ವ್ಯವಸ್ಥೆಯಾಗಲೀ, ಫ್ಲ್ಯಾಷ್ ಅಥವಾ ಆಟೊಫೊಕಸ್ ವ್ಯವಸ್ಥೆಯಿಲ್ಲ. ಇಲ್ಲಿ ವೀಡಿಯೋ ಮುದ್ರಣ ಇರುವದಿಲ್ಲ. ಆದರೂ, [[ಆಪಲ್ ನ ಆಡಳಿತದ ನಿಯಮಮೀರಿ(ಕಾನೂನು ಬಾಹಿರ) ಐಪ್ಯಾಡ್ ಬಳಕೆಯಲ್ಲಿ]] ಗ್ರಾಹಕರಿಗೆ ಈ ತರಹದ ಕೆಲವು ಅವಕಾಶಗಳಿವೆ. ಐಫೋನ್ OSನ(ಎಡಭಾಗದ ಕೀಲಿಮಣೆ)ಯುಳ್ಳ ವರ್ಷನ್ 2.0ರಲ್ಲಿ, ಛಾಯಾಚಿತ್ರಗಳಲ್ಲಿ [[ಸ್ಥಳ ಮಾಹಿತಿ ಸೇರಿಸಲು]] ಅವಕಾಶ ನೀಡಿತು. ಇದರಿಂದಾಗಿ [[ಜಿಯೊಕೊಡೆಡ್ ಛಾಯಾಚಿತ್ರ]]ಗಳನ್ನು ತೆದುಕೊಳ್ಳಬಹುದು.
ಐಫೋನ್ 3GSನಲ್ಲಿ [[ಆಮ್ನಿವಿಷನ್]] ತಯಾರಿಸಿದ 3.2 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಇದರಲ್ಲಿ ಆಟೊಪೊಕಸ್, ಆಟೊ ವೈಟ್ ಬ್ಯಾಲೆನ್ಸ್ ಮತ್ತು ಆಟೊ ಮ್ಯಾಕ್ರೊ (10 ಸೆ.ಮೀ. ವರೆಗೆ) ವ್ಯವಸ್ಥೆಗಳಿವೆ.<ref>{{cite web|url=https://arstechnica.com/apple/news/2009/12/apple-may-bump-camera-in-next-gen-iphone-to-5-megapixels.ars|title=Apple may bump camera in next-gen iPhone to 5 megapixels|date=2009-12-23|first=Chris|last=Foresman|publisher=[[Ars Technica]]|accessdate=2009-12-23}}</ref> ಇದು ಪ್ರತಿ ಸೆಕೆಂಡ್ಗೆ 30 ಫ್ರೇಮ್ಗಳ ವೇಗದಲ್ಲಿ [[VGA]] ವೀಡಿಯೊ<ref>{{cite web|url=http://www.apple.com/iphone/iphone-3g-s/video-recording.html|title=Apple - iPhone - Record, edit, and shoot video.|date=2009-06-08|publisher=Apple|accessdate=2009-06-08}}</ref><ref>{{cite web|url=http://www.apple.com/iphone/iphone-3g-s/photos.html|title=Apple - iPhone - Take photos with a 3-megapixel camera.|date=2009-06-08|publisher=Apple|accessdate=2009-06-08}}</ref> ಚಿತ್ರೀಕರಿಸುತ್ತದೆ. ಆದರೂ, ಆಧುನಿಕ [[CCD]] ಆಧಾರಿತ ವೀಡಿಯೊ ಕ್ಯಾಮೆರಾಗಳಿಗೆ ಹೋಲಿಸಿದಲ್ಲಿ ಅದು [[ರೊಲಿಂಗ್ ಷಟರ್ಸ್]] ತರಹದ ಪ್ರಭಾವ ತೋರಿಸುತ್ತದೆ.{{Citation needed|date=December 2009}} ನಂತರ ವೀಡಿಯೊವನ್ನು ಉಪಕರಣದಲ್ಲೇ [[ಕ್ರಾಪ್]] ಮಾಡಿ ನೇರವಾಗಿ [[ಯುಟ್ಯೂಬ್]], [[ಮೊಬೈಲ್ಮಿ]] ಅಥವಾ ಇತರೆ ಜಾಲತಾಣಗಳಿಗೆ ನೇರವಾಗಿ ಅಪ್ಲೋಡ್ ಮಾಡಬಹುದು.
=== ಶೇಖರಣೆ ಮತ್ತು SIM ===
ಆರಂಭದಲ್ಲಿ, 4 GB ಅಥವಾ 8 GB ಆಂತರಿಕ ಶೇಖರಣಾ ಸಾಮರ್ಥ್ಯದ ಆಯ್ಕೆಯೊಂದಿಗೆ ಐಫೋನ್ ಬಿಡುಗಡೆಯಾಗಿತ್ತು. 2007ರ ಸೆಪ್ಟೆಂಬರ್ 5ರಂದು ಆಪೆಲ್ 4 GB ಮಾದರಿಗಳ ಉತ್ಪಾದನೆ ನಿಲ್ಲಿಸಿತು.<ref>{{cite web|url=http://www.iphoneatlas.com/2007/09/05/apple-kills-4gb-iphone-cuts-8gb-price-to-399/|title=Apple kills 4 GB iPhone, cuts 8 GB price to $399 - iPhone Atlas|date=September 5, 2007|publisher=iPhone Atlas|access-date=ಜನವರಿ 28, 2010|archive-date=ಸೆಪ್ಟೆಂಬರ್ 5, 2012|archive-url=https://archive.is/20120905050935/http://www.iphoneatlas.com/2007/09/05/apple-kills-4gb-iphone-cuts-8gb-price-to-399/|url-status=dead}}</ref> 2008ರ ಫೆಬ್ರವರಿ 5ರಂದು ಆಪೆಲ್ 16 GB ಮಾದರಿಯನ್ನು ತನ್ನ ಇತರ ಉತ್ಪಾದನೆಯೊಂದಿಗೆ ಇದನ್ನು ಹೆಚ್ಚುವರಿಯಾಗಿ ಪರಿಚಯಿಸಿತು.<ref>{{cite news|http://www.macworld.com/article/131959/2008/02/iphoneipodtouch.html|publisher=[[Macworld]]|title=Apple offers 16GB iPhone, 32GB iPod touch|date=February 6, 2008}}</ref> ಐಫೋನ್ 3G ಮಾದರಿಯು 16 GBಯಲ್ಲಿ ಲಭ್ಯವಿತ್ತು. 8 GB ಮಾದರಿಯು ಇಂದಿಗೂ ಲಭ್ಯವಿದೆ. ಐಫೋನ್ 3GS ಮಾದರಿಯು 16 GB ಮತ್ತು 32 GB ವೈವಿಧ್ಯದಲ್ಲಿ ಲಭ್ಯವಿದೆ.
ಎಲ್ಲಾ ಮಾಹಿತಿ ಆಂತರಿಕ ಫ್ಲ್ಯಾಷ್ ಡ್ರೈವ್ನಲ್ಲಿ ಶೇಖರಣೆಯಾಗಿರುತ್ತದೆ. ಮೆಮೊರಿ ಕಾರ್ಡ್ ಸ್ಲಾಟ್,ಅಥವಾ SIM ಕಾರ್ಡ್ ಮೂಲಕ ವಿಸ್ತೃರಿತ ಶೇಖರಣೆಯನ್ನು ಐಫೋನ್ ಸಮರ್ಥಿಸುವುದಿಲ್ಲ.
[[ಚಿತ್ರ:IPhone 3G box contents.jpg|thumb|ಐಫೋನ್ 3Gಯೊಂದಿಗೆ ಸೇರಿಸಲಾದ ವಸ್ತುಗಳು. ಎಡದಿಂದ ಬಲಕ್ಕೆ: ಪೆಟ್ಟಿಗೆಯ ಮೇಲ್ಭಾಗ; ಐಫೋನ್ 3G, ಬಟ್ಟೆಯೊಂದಿಗಿನ ಪ್ಯಾಕೇಜ್, ತಾಂತ್ರಿಕ ಕೈಪಿಡಿ (ಕಿರುಹೊತ್ತಿಗೆ), SIM ಹೊರತೆಗೆಯುವ ಸಲಕರಣೆ; ಹೆಡ್ಫೋನ್ಗಳು,USB ತಂತಿ ಮತ್ತು ವಿದ್ಯುತ್ ಚಾರ್ಜರ್.]]
ಉಪಕರಣದ ಮೇಲ್ಭಾಗದಲ್ಲಿರುವ ಸ್ಲಾಟ್ನಲ್ಲಿ ಅಳವಡಿಸಲಾದ ಟ್ರೇನಲ್ಲಿ [[SIM ಕಾರ್ಡ್]]ನ್ನು ಕೂಡಿಸಲಾಗಿದೆ. [[ಕಾಗದದ ಕ್ಲಿಪ್]] ಅಥವಾ SIM ತೆಗೆಯುವ ಸಲಕರಣೆಯ (ಐಫೋನ್ 3G ಮತ್ತು 3GSನೊಂದಿಗಿರುವ ಒಂದು ಸರಳ ಲೋಹ ಸಲಕರಣೆ) ಮೂಲಕ SIM ಟ್ರೇಯನ್ನು ಹೊರತೆಗೆಯಬಹುದು.<ref>{{cite web|url=http://support.apple.com/kb/HT1438|title=Removing SIM card|publisher=Apple|date=2008-07-10|accessdate=2009-06-11}}</ref><ref>{{cite news|last=Diaz|first=Jesus|title=iPhone 3G's New SIM Ejector Tool Makes It Instant Must-Buy|language=[[ಆಂಗ್ಲ|English]]|publisher=[[Gawker Media]]|work=[[Gizmodo]]|date=June 9, 2008|url=http://gizmodo.com/5014767/iphone-3gs-new-sim-ejector-tool-makes-it-instant-must+buy|accessdate=2008-06-24|archive-date=2008-06-18|archive-url=https://web.archive.org/web/20080618031423/http://gizmodo.com/5014767/iphone-3gs-new-sim-ejector-tool-makes-it-instant-must+buy|url-status=dead}}</ref>
ಬಹಳಷ್ಟು ದೇಶಗಳಲ್ಲಿ, ಐಫೋನ್ನ್ನು [[SIM ಲಾಕ್]]ನೊಂದಿಗೆ ಮಾರಾಟ ಮಾಡಲಾಗುತ್ತವೆ. ಇತರೆ ಮೊಬೈಲ್ ಗಳಲ್ಲಿ ಇದರ ಬಳಕೆ ತಡೆಗಟ್ಟುವುದು ಇಲ್ಲಿರುವ ಉದ್ದೇಶ.<ref name="Carrier unlocking list" />
=== ತೇವ ಸಂವೇದಕಗಳು (ಆರ್ದ್ರತೆಗೆ ಸ್ಪಂದಿಸುವ ಸೂಕ್ಷ್ಮ ಸಂವೇದಕಗಳು) ===
ಹಲವು ಆಧುನಿಕ ವಿದ್ಯುನ್ಮಾನ ಉಪಕರಣಗಳಂತೆ, ಐಫೋನ್ನಲ್ಲಿಯೂ ಸಹ ತೇವ ಸಂವೇದಕಗಳಿವೆ. ಇದರ ಮೂಲಕ ಉಪಕರಣ [[ನೀರಿನಿಂದ ಹಾನಿ]]ಯಾಗಿದೆಯೇ ಅಥವಾ ಏರುಪೇರಾಗಿದೆಯೇ ಎಂಬುದನ್ನು ತಿಳಿಸುತ್ತದೆ. ಐಫೋನ್ನಲ್ಲಿರುವ ಸಂವೇದಕಗಳಲ್ಲಿ, ಹೆಡ್ಫೋನ್ [[ಜ್ಯಾಕ್]]ನಲ್ಲಿರುವ ಸಣ್ಣ ಬಿಲ್ಲೆ ಹಾಗೂ [[ಡಾಕ್ ಕನೆಕ್ಟರ್]] ಬಳಿಯಿರುವ ಒಂದು ಭಾಗವು ಸೇರಿದೆ.<ref>{{cite web|author=Charlie Sorrel|title=IPhone Water Sensor Revealed|publisher=[[Wired (magazine)|Wired]]|date=October 16, 2007|url=https://www.wired.com/gadgetlab/2007/10/iphone-water-se/|accessdate=November 5, 2009}}</ref> ಉಪಕರಣವು ವಾರಂಟಿಯಡಿ ದುರಸ್ತಿಗೆ ಅಥವಾ ಬದಲಾವಣೆಗೆ ಯೋಗ್ಯವೇ ಎಂಬುದನ್ನು ನಿರ್ಣಯಿಸಲು ಆಪೆಲ್ ಉದ್ಯೋಗಿಗಳು ಈ ಸಂವೇದಕಗಳನ್ನು ಬಳಸುತ್ತಾರೆ. ಉಪಕರಣವು ತೇವವನ್ನು ಹೀರಿಕೊಂಡಿದೆ ಎಂಬುದನ್ನು ಸಂವೇದಕಗಳು ತಿಳಿಸಿದಲ್ಲಿ, ಉಪಕರಣವು ವಾರಂಟಿ ವ್ಯಾಪ್ತಿಯೊಳಗೆ ಬರುವುದಿಲ್ಲ
ಎಂಬನಿರ್ಣಯಕ್ಕೆಬರಬಹುದು.
ಆದರೂ, ತೇವ ಸಂವೇದಕಗಳು ಸಾಮಾನ್ಯ ಬಳಕೆಯ ಮೂಲಕ'ಟ್ರಿಪ್' ಆಗಬಹುದು. ವ್ಯಾಯಾಮದ ಸಮಯದಲ್ಲಿ ಐಫೋನ್ ಬಳಸಲಾಗಿದ್ದಲ್ಲಿ, ಆ ಸಮಯದಲ್ಲುಂಟಾಗುವ [[ಬೆವರು]] ಸಂವೇದಕಗಳನ್ನು ತೇವಗೊಳಿಸಿ ಅದಕ್ಕೆ ಹಾನಿ ಸಂಭವಿಸಬಹುದು.<ref>{{cite web|author=David Martin|title=Sweaty workouts killing iPhones?|publisher=[[Cnet]]|date=April 8, 2009|url=http://reviews.cnet.com/8301-19512_7-10214153-233.html|accessdate=November 5, 2009|archive-date=ಅಕ್ಟೋಬರ್ 28, 2009|archive-url=https://web.archive.org/web/20091028002902/http://reviews.cnet.com/8301-19512_7-10214153-233.html|url-status=dead}}</ref> ವಿವಿಧ ಉತ್ಪಾದಕರ ಹಲವು ಇತರೆ [[ಮೊಬೈಲ್ ದೂರವಾಣಿ]]ಗಳಲ್ಲಿಯೂ ಸಹ, ತೇವ ಸಂವೇದಕಗಳು ಸುರಕ್ಷಿತ ಸ್ಥಳದಲ್ಲಿರುತ್ತವೆ, ಉದಾಹರಣೆಗೆ [[ವಿದ್ಯುತ್ಕೋಶ]]ದ ಕವಚದ ಹಿಂದೆ ಅಥವಾ ವಿದ್ಯುತ್ಕೋಶದಡಿಗಳಲ್ಲಿ ಸಂವೇದಕಗಳಿರುತ್ತವೆ. ಆದರೆ ಐಫೋನ್ನಲ್ಲಿರುವ ಸಂವೇದಕಗಳು ಪರಿಸರಕ್ಕೆ ನೇರಸಂಪರ್ಕ ಹೊಂದಿರುತ್ತವೆ. ಸ್ನಾನಗೃಹದಲ್ಲಿನ [[ಹಬೆ]] ಹಾಗೂ ಅತ್ಯಲ್ಪಮಟ್ಟದ [[ಪರಿಸರೀಯ ತೇವ]]ವೂ ಸಹ ಸಂವೇದಕಗಳ ಮೇಲೆ ಪ್ರಭಾವ ಬೀರಬಹುದು. ಈ ಕಾರಣಕ್ಕಾಗಿ ಸಂವೇದಕಗಳ ಅಳವಡಿಸಿದ ತಾಣಗಳ ಬಗ್ಗೆ ವ್ಯಾಪಕ ಟೀಕೆಯೆದ್ದಿದೆ.<ref>{{cite news|author=Lisa Respers|title=Moisture, cold irritate some smart phone users|publisher=[[CNN]]|date=April 14, 2009|url=http://edition.cnn.com/2009/TECH/04/14/smart.phones.buggy/index.html|accessdate=November 5, 2009}}</ref>
=== ಒಳಗೊಂಡಿರುವ ಅಂಶಗಳು ===
ಎಲ್ಲಾ ಐಫೋನ್ ಮಾದರಿಗಳಲ್ಲಿಯೂ ಲಿಖಿತ ದಾಖಲೆ ಸಂಗ್ರಹದ ಕೈಪಿಡಿ, [[ಡಾಕ್ ಕನೆಕ್ಟರ್]] ಹಾಗೂ [[USB]] ತಂತಿ ಸೇರಿ ಹಲವಾರು ಅಂಶಗಳಿರುತ್ತವೆ. ಮೊದಲ ಬಾರಿಗೆ ಉತ್ಪಾದನೆಯಾದ 3G ಐಫೋನ್ಗಳೊಂದಿಗೆ ಸ್ವಚ್ಛಗೊಳಿಸಲು ಬೇಕಾಗುವ ಬಟ್ಟೆಯನ್ನೂ ನೀಡಲಾಗುತ್ತಿತ್ತು. ಮೂಲತಃ ಐಫೋನ್ನಲ್ಲಿ ಸ್ಟೀರಿಯೊ ಹೆಡ್ಸೆಟ್ ([[ಇಯರ್ಬಡ್ಸ್]] ಮತ್ತು [[ಮೈಕ್ರೊಫೋನ್]] ಸಹಿತ), ಹಾಗೂ, ಚಾರ್ಜ್ ಮತ್ತು ಉಪಕರಣದ ಹೊಂದಾಣಿಕೆಯ ಸಮಯದಲ್ಲಿ ಐಫೋನ್ ನೇರವಾಗಿ ಹಿಡಿದಿಡಲು ಒಂದು ಪ್ಲ್ಯಾಸ್ಟಿಕ್ ಕವಚ ಇತ್ತು. ಐಫೋನ್ 3G ಮಾದರಿಯಲ್ಲಿ ಇದೇ ರೀತಿಯ ಹೆಡ್ಸೆಟ್, ಜೊತೆಗೆ ಒಂದು SIM ಹೊರತೆಗೆಯುವ ಸಲಕರಣೆಯೂ ಇದೆ (ಮೂಲ ಮಾದರಿಯಲ್ಲಿ [[ಕಾಗದದ ಕ್ಲಿಪ್]] ಅಗತ್ಯವಿದೆ). ಐಫೋನ್ 3GSನಲ್ಲಿ SIM ಹೊರತೆಗೆಯುವ ಸಲಕರಣೆ ಮತ್ತು ಪುನರ್ವಿನ್ಯಾಸದ ಹೆಡ್ಸೆಟ್ (ಧ್ವನಿ ನಿಯಂತ್ರಣಾ ಬಟನ್ಗಳ ಸಹಿತ) ಇವೆ.<ref name="Earbuds with volume" /> ಐಫೋನ್ 3G ಮತ್ತು 3GS ಮಾದರಿಗಳು ಒಂದೇ ಡಾಕ್(ಜೋಡಣೆ)ನೊಂದಿಗೆ ಹೊಂದಿಕೊಳ್ಳುವಂತಿವೆ. ಅವನ್ನು ಮೂಲ ಮಾದರಿಯ ಡಾಕ್ನ ಬದಲಿಗೆ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತವೆ.<ref>{{cite web|url=http://store.apple.com/us/product/MB484G/A?fnode=MTY1NDAzOQ&mco=MjE0NjMxOA|title=Apple iPhone 3G Dock|publisher=Apple Store|accessdate=2009-06-14}}</ref> ಎಲ್ಲಾ ಆವೃತ್ತಿಗಳಲ್ಲಿಯೂ USB ಪಾವರ್ ಅಡ್ಯಾಪ್ಟರ್ ಅಥವಾ 'ವಾಲ್ ಚಾರ್ಜರ್' ಉಂಟು. ಇದರಿಂದ ಐಫೋನ್ನ್ನು [[AC ಔಟ್ಲೆಟ್]]ನಿಂದ ಚಾರ್ಜ್ ಮಾಡಲು ಅವಕಾಶವಿದೆ. [[ಉತ್ತರ ಅಮೆರಿಕಾ]], [[ಜಪಾನ್]], [[ಕೊಲಂಬಿಯಾ]], [[ಇಕ್ವೆಡಾರ್]], ಅಥವಾ [[ಪೆರು]] ದೇಶಗಳಲ್ಲಿ ಮಾರಾಟವಾಗುವ ಐಫೋನ್ 3G ಮತ್ತು ಐಫೋನ್ 3GS ಮಾದರಿಗಳಲ್ಲಿ ಅಲ್ಟ್ರಾಕಾಂಪ್ಯಾಕ್ಟ್ USB ಪಾವರ್ ಅಡ್ಯಾಪ್ಟರ್ ಉಂಟು.
== ಕಂಪ್ಯೂಟರ್ ತಂತ್ರಾಂಶ ==
ಐಫೋನ್ (ಹಾಗೂ [[ಐಪಾಡ್ ಟಚ್]]) [[ಐಫೋನ್ OS]] ಎಂಬ [[ಕಾರ್ಯಾನುಕೂಲ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್)]]ವನ್ನು ಹೊಂದಿದೆ. [[ಮ್ಯಾಕ್ OS X]]ನಲ್ಲಿರುವ [[ಡಾರ್ವಿನ್/0} ಆಪರೇಟಿಂಗ್ ಸಿಸ್ಟಮ್ ನ ಅಗ್ರ ಪಂಕ್ತಿಯ ಒಂದು ವಿಭಿನ್ನತೆಯನ್ನು ಐಫೋನ್ OS ಆಧರಿಸಿದೆ. ಜೊತೆಗೆ, ಮ್ಯಾಕ್ OS X v10.5 ಲೆಪರ್ಡ್ನ ತಂತ್ರಾಂಶದ ಭಾಗ 'ಕೋರ್ ಆನಿಮೇಷನ್|ಡಾರ್ವಿನ್/0} ಆಪರೇಟಿಂಗ್ ಸಿಸ್ಟಮ್ ನ ಅಗ್ರ ಪಂಕ್ತಿಯ ಒಂದು ವಿಭಿನ್ನತೆಯನ್ನು ಐಫೋನ್ OS ಆಧರಿಸಿದೆ. ಜೊತೆಗೆ, [[ಮ್ಯಾಕ್ OS X v10.5]] ಲೆಪರ್ಡ್ನ ತಂತ್ರಾಂಶದ ಭಾಗ '[[ಕೋರ್ ಆನಿಮೇಷನ್]]]]'ನ್ನೂ ಸಹ ಹೊಂದಿದೆ. [[ಪಾವರ್VR]] ಯಂತ್ರಾಂಶದೊಂದಿಗೆ (ಹಾಗೂ ಐಫೋನ್ 3GSನಲ್ಲಿ [[ಒಪನ್GL ES]] 2.0),<ref name="3G_S_PR" />, ಇದು ಇಂಟರ್ಫೇಸ್ನ [[ಮೋಷನ್ ಗ್ರ್ಯಾಫಿಕ್ಸ್]]ಗೆ (ಚಲಿಸುವ ರೇಖಾಚಿತ್ರಗಳು) ಕಾರಣವಾಗಿದೆ. ಉಪಕರಣದ ಒಟ್ಟು ಶೇಖರಣಾ ಸಾಮರ್ಥ್ಯ (4 to 32 GB) ಮತ್ತು ಆಪರೇಟಿಂಗ್ ಸಿಸ್ಟಮ್ ನ ಅರ್ಧ [[GB]]ಗಿಂತಲೂ ಕಡಿಮೆ ಜಾಗವನ್ನು ಆಕ್ರಮಿಸಿಕೊಂಡಿದೆ.<ref name="VersatileFlash">{{cite web|last=Haslam|first=Karen|url=http://www.macworld.co.uk/ipod-itunes/news/index.cfm?newsid=16927|title=Macworld Expo: Optimised OS X sits on 'versatile' flash|publisher=[[Macworld]]|date=January 12, 2007|accessdate=2008-06-06}}</ref>
ಒಟ್ಟಿಗೆ ಜೋಡಿಸಲಾದ, ಆಪೆಲ್ ಹಾಗೂ ತೃತೀಯ ಶ್ರೇಣಿಯ ಅಭಿವೃದ್ಧಿಗಾರರು ಬಿಡುಗಡೆಮಾಡುವ ಭವಿಷ್ಯತ್ ಅಳವಡಿಕೆಗಳನ್ನು ಬೆಂಬಲಿಸಲು ಇದು ಸಮರ್ಥವಾಗಿದೆ. ತಂತ್ರಾಂಶ ಅಳವಡಿಕೆಗಳನ್ನು ಮ್ಯಾಕ್ OS Xನಿಂದ ನೇರವಾಗಿ ನಕಲು ಮಾಡಲಾಗದು. ಬದಲಿಗೆ ಅವನ್ನು ಬರೆದು ಐಫೋನ್ OSಗೆ ವಿಶೇಷವಾಗಿ ಸಂಯೋಜಿಸಬಹುದಾಗಿದೆ.
ಐಪಾಡ್ನಂತೆ, ಐಫೋನ್ನ್ನು [[ಐಟ್ಯೂನ್ಸ್]] ಮೂಲಕ ನಿಭಾಹಿಸಲಾಗುತ್ತದೆ. ಐಫೋನ್ OSನ ಮುಂಚಿನ ಆವೃತ್ತಿಗಳಿಗೆ [[ವರ್ಷನ್ 7.3 ಅಥವಾ ಆನಂತರದ ಆವಿಷ್ಕಾರಗಳಿಗೆ]] ಅಗತ್ಯವಿತ್ತು. ಇದು ಮ್ಯಾಕ್ OS X ಆವೃತ್ತಿ 10.4.10 ಟೈಗರ್ ಅಥವಾ ಕಾಲ ಕಳೆದಂತೆ, ಹಾಗೂ 32-ಬಿಟ್ ಅಥವಾ 64-ಬಿಟ್ [[ವಿಂಡೋಸ್ XP]] ಅಥವಾ [[ವಿಸ್ಟಾ]]ದೊಂದಿಗೆ ಹೊಂದಿಕೆಯಾಗಬಲ್ಲದು.<ref>{{cite web|url=http://docs.info.apple.com/article.html?artnum=305703|title=iPhone: Minimum system requirements|publisher=[[Apple Inc.]]|accessdate=2007-07-13|archive-date=2007-09-03|archive-url=https://web.archive.org/web/20070903231507/http://docs.info.apple.com/article.html?artnum=305703|url-status=dead}}</ref> ಐಟ್ಯೂನ್ಸ್ 7.6ನ ಬಿಡುಗಡೆಯೊಂದಿಗೆ XP ಮತ್ತು ವಿಸ್ಟಾದ 64-ಬಿಟ್ ಅವೃತ್ತಿಗಳನ್ನು ಸೇರಿಸಲು ವ್ಯಾಪ್ತಿ ವಿಸ್ತರಿಸಲಾಯಿತು.<ref>{{cite web|title="Apple's iTunes 7.6 plays nice with 64 bit Vista"|url=http://www.engadget.com/2008/01/15/apples-itunes-7-6-plays-nice-with-64-bit-vista/|publisher=[[Engadget]]|date=January 15, 2008|accessdate=2008-01-22}}</ref> 64-ಬಿಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ಗಳ ಮುಂಚಿನ ಆವೃತ್ತಿಗಳಿಗಾಗಿ 'ಪರ್ಯಾಯ ಮಾರ್ಗವೂ'ಸಹ ಲಭಿಸಿದೆ.<ref>{{cite web|url=http://www.planetamd64.com/index.php?showtopic=35132&st=0&p=327771&#entry327771|title=iTunes is now 64-bit|publisher=PlanetAMD64|access-date=2010-01-28|archive-date=2008-04-12|archive-url=https://web.archive.org/web/20080412033719/http://www.planetamd64.com/index.php?showtopic=35132&st=0&p=327771&#entry327771|url-status=dead}}</ref> ಐಟ್ಯೂನ್ಸ್ ಮೂಲಕ ಆಪೆಲ್ ಐಫೋನ್ OSಗೆ ಉಚಿತ ಅಪ್ಡೇಟ್ಗಳನ್ನು ನೀಡುತ್ತದೆ ಹೊಸ ಮಾದರಿಗಳಲ್ಲಿ ಪ್ರಮುಖ ಅಪ್ಡೇಟ್ಗಳುಂಟು.<ref>{{cite web|url=http://www.macworldcanada.ca/news/feature/to-upgrade-or-not-the-iphone-3g-s-dilemma/130d25f1c0a8000600b4bb6582434a58/pg001.htm|title=To Upgrade or Not: the iPhone 3G S Dilemma|publisher=Macworld Canada|date=June 24, 2009|accessdate=2009-06-27|archive-date=2009-06-26|archive-url=https://web.archive.org/web/20090626094545/http://www.macworldcanada.ca/news/feature/to-upgrade-or-not-the-iphone-3g-s-dilemma/130d25f1c0a8000600b4bb6582434a58/pg001.htm|url-status=dead}}</ref>
ಇಂತಹ ಅಪ್ಡೇಟ್ಗಳಿಗೆ ಐಟ್ಯೂನ್ಸ್ನ ಹೊಸ ಆವೃತ್ತಿಗಳ ಅಗತ್ಯವಿದೆ. ಉದಾಹರಣೆಗೆ, 3.0 ಅಪ್ಡೇಟ್ಗಳಿಗೆ ಐಟ್ಯೂನ್ಸ್ 8.2ರ ಅಗತ್ಯವಿದೆ.<ref name="3G_S_PR" /> ಆದರೆ ಐಟ್ಯೂನ್ಸ್ಗಾಗಿ ಯಂತ್ರಾಂಶ ಅಗತ್ಯಗಳು ಹಿಂದಿನಂತೆಯೇ ಉಳಿದಿವೆ. ಅಪ್ಡೇಟ್ಗಳಲ್ಲಿ ಸುರಕ್ಷಾ ತುಣುಕು ಮತ್ತು ಹೊಸ ಕಾರ್ಯಲಕ್ಷಣಗಳನ್ನು ಒಳಗೊಂಡಿವೆ.<ref>{{cite news|laste=Kharif|first=Olga|url=http://www.businessweek.com/the_thread/techbeat/archives/2007/07/coming_soon_iph.html|title=Coming Soon: iPhone Software Updates|publisher=[[BusinessWeek]]|date=July 10, 2007|accessdate=2008-06-06}}</ref>
ಉದಾಹರಣೆಗೆ, ಅಪ್ಡೇಟ್ ಲಭಿಸುವ ತನಕ, ಐಫೋನ್ 3G ಬಳಕೆದಾರರು ಮೊದಮೊದಲು ಕರೆಗಳಲ್ಲಿನ ಅಸ್ಪಷ್ಟತೆಯ ಸಮಸ್ಯೆ ಎದುರಿಸುತ್ತಿದ್ದರು.<ref name="2.1">{{cite web|url=http://www.macworld.com/article/135515/2008/09/iphone21.html|title=Apple releases iPhone 2.1 update|last=Cohen|first=Peter|date=2008-09-12|publisher=Macworld|accessdate=2009-06-10}}</ref><ref>{{cite web|url=http://www.macblogz.com/2008/08/12/iphone-3g-connection-issues-caused-by-immature-chipset/|title=iPhone 3G Connection Issues Caused by Immature Infineon Chipset?|last=Aviv|date=August 12, 2008|publisher=MacBlogz|accessdate=2008-12-17|archive-date=2008-09-08|archive-url=https://web.archive.org/web/20080908131836/http://www.macblogz.com/2008/08/12/iphone-3g-connection-issues-caused-by-immature-chipset/|url-status=dead}}</ref>
=== ಅಂತರಸಂಪರ್ಕದ ಮುಖಾಮುಖಿ ಸಾಧನ (ಇಂಟರ್ಫೇಸ್) ===
[[ಇಂಟರ್ಫೇಸ್]] ಮುಖಪುಟವನ್ನಾಧರಿಸಿದೆ. ಇದು ಲಭ್ಯ ಅಳವಡಿಕೆಗಳ ಚಿತ್ರ-ರೂಪದ ಪಟ್ಟಿಯೊಂದನ್ನು ಹೊಂದಿದೆ. ಐಫೋನ್ ಕಾರ್ಯಚಟುವಟಿಕೆಗಳು ಸಾಮಾನ್ಯವಾಗಿ ಒಂದು ಸಮಯಕ್ಕೆ ಒಂದೇ ಆಗಿರುತ್ತದೆ. ಆದರೂ, ಕರೆ ಮಾಡುತ್ತಿರುವಾಗ ಅಥವಾ ಸಂಗೀತವನ್ನಾಲಿಸುವಾಗ ಹಲವು ಸೌಲಭ್ಯಗಳನ್ನು ಪಡೆಯುವ ಸಾಧ್ಯತೆ ಇಲ್ಲಿದೆ. ಪರದೆಯ ಕೆಳಗಿರುವ ಯಂತ್ರಾಂಶದ ಕೀಲಿಮಣಿ ಒತ್ತಿ ಮುಖಪರದೆಯನ್ನು ಯಾವಾಗಾದರೂ ವೀಕ್ಷಿಸಬಹುದಾಗಿದೆ. ಈ ಸಂದರ್ಭದಲ್ಲಿ ಕಾರ್ಯೋಮುಖ ವಿನ್ಯಾಸಗಳನ್ನು ಆವರಣಗೊಳಿಸುತ್ತದೆ.<ref name="home screen">{{cite web|url=http://www.apple.com/iphone/features/homescreen.html|title=Apple — iPhone — Features — Home screen|year=2008|publisher=[[Apple Inc.]]|accessdate=2008-12-13}}</ref> ಯಥಾಸ್ಥಿತಿಯಲ್ಲಿ, ಮುಖಪರದೆಯು ಕೆಳಕಂಡ ಶೀರ್ಷಿಕೆಗಳನ್ನು ಹೊಂದಿವೆ: ಸಂದೇಶಗಳು ([[SMS]] ಮತ್ತು [[MMS]] ಸಂದೇಶ ರವಾನೆ), ಕ್ಯಾಲೆಂಡರ್, ಫೋಟೋಗಳು, ಕ್ಯಾಮೆರಾ, [[ಯುಟ್ಯೂಬ್]], ಸ್ಟಾಕ್ಗಳೂ, ನಕ್ಷೆಗಳು ([[ಗೂಗಲ್ ಮ್ಯಾಪ್ಸ್]]), ಹವಾಮಾನ, ಧ್ವನಿ ಮೆಮೊಗಳು, ಟಿಪ್ಪಣಿಗಳು, ಗಡಿಯಾರ, ಗಣಕ, ಸಂಯೋಜನೆಗಳು, [[ಐಟ್ಯೂನ್ಸ್ (ಮಳಿಗೆ)]], [[ಆಪ್ ಸ್ಟೋರ್]] ಹಾಗೂ (ಐಫೋನ್ 3GS ಮಾತ್ರ) [[ದಿಕ್ಸೂಚಿ]].
ಪರದೆಯ ಅಡಿಯಲ್ಲಿ [[ದೂರವಾಣಿ]], [[ವಿ-ಅಂಚೆ]], [[ಸಫಾರಿ]] (ಇಂಟರ್ನೆಟ್) ಮತ್ತು ಐಪಾಡ್ ([[ಮಲ್ಟಿಮೀಡಿಯಾ]]) ಐಫೋನ್ನ ಮುಖ್ಯ ಉದ್ದೇಶಗಳನ್ನು ಚಿತ್ರಿಸುತ್ತವೆ.<ref>{{cite web|url=http://docs.info.apple.com/article.html?artnum=306003|title=iPhone Applications|publisher=[[Apple Inc.]]|date=July 11, 2007|accessdate=2007-11-04|archive-date=2008-03-11|archive-url=https://web.archive.org/web/20080311142319/http://docs.info.apple.com/article.html?artnum=306003|url-status=dead}}</ref>
2008ರ ಜನವರಿ 15ರಂದು ಆಪೆಲ್ ತಂತ್ರಾಂಶ ಅಪ್ಡೇಟ್ 1.1.3 ಆವೃತ್ತಿ ಬಿಡುಗಡೆಗೊಳಿಸಿತು. ಇದರಂತೆ ಬಳಕೆದಾರರು 'ವೆಬ್ ಕ್ಲಿಪ್ಸ್' (ಸಫಾರಿಯಲ್ಲಿ ಬಳಕೆದಾರರು ನಿಗದಿಪಡಿಸಬಹುದಾದ ಪುಟವನ್ನು ತೆರೆಯುವ ಅನ್ವಯಿಕೆಗಳನ್ನು ಹೋಲುವ ಮುಖಪುಟ ಐಕನ್ಗಳು) ರಚಿಸಲು ಅವಕಾಶ ನೀಡಿತು. ಅಪ್ಡೇಟ್ ನಂತರ, ಐಫೋನ್ ಬಳಕೆದಾರರು ಒಂಬತ್ತು ಇತರೆ ಐಕನ್ಗಳನ್ನು ಕೂಡಿಸಿ ಪುನಃ ಜೋಡಿಸಬಹುದು. ಒಂದು ಬಾರಿ ಅಡ್ಡಲಾಗಿ ಉಜ್ಜಿದರೆ ಆ ಮುಖಭಾಗದ ಪರದೆಗಯನ್ನು ಸಂದರ್ಶಿಸಬಹುದಾಗಿದೆ.<ref name="Update 1.1.3">{{cite web|url=http://www.apple.com/pr/library/2008/01/15iphone.html|title=Apple Enhances Revolutionary iPhone with Software Update|date=January 15, 2008|publisher=Apple|accessdate=2008-12-13}}</ref>
ಪ್ರತಿಯೊಂದು ಮುಖಪುಟದಲ್ಲಿ ಅದೇ ರೀತಿಯ ಡಾಕ್(ಜೋಡನೆಯಿಂದ)ನಿಂದ ಐಕನ್ಗಳನ್ನು ಸೇರಿಸಬಹುದು ಅಥವಾ ತೆಗೆಯಬಹುದು. ಪ್ರತಿಯೊಂದು ಮುಖಪುಟವೂ ಗರಿಷ್ಠ ಹದಿನಾರು ಐಕನ್ಗಳನ್ನು ತೋರಿಸಬಹುದು. ಡಾಕ್ ಗರಿಷ್ಠ ನಾಲ್ಕು ಐಕನ್ಗಳಿಗೆ ಅವಕಾಶ ಕಲ್ಪಿಸಬಹುದು. ಬಳಕೆದಾರರು ಯಾವುದೇ ಸಮಯದಲ್ಲಿ ವೆಬ್ ಕ್ಲಿಪ್ಸ್ ಮತ್ತು ತೃತೀಯ ವರ್ಗದ ಅಳವಡಿಕೆಗಳನ್ನು ತೆಗೆಯಬಹುದು. ಐಟ್ಯೂನ್ಸ್ನಿಂದ ಕೇವಲ ನಿರ್ದಿಷ್ಟ ಅನ್ವಯಿಕೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು. ಆಪೆಲ್ನ ಯಥಾಸ್ಥಿತಿ ಅನ್ವಯಿಕೆಗಳನ್ನು ತೆಗೆಯುವಂತಿಲ್ಲ. 3.0 ಅಪ್ಡೇಟ್ ಮೂಲಕ ವಿಶಾಲಮಟ್ಟದ'ಹುಡುಕು' ವ್ಯವಸ್ಥೆಯನ್ನು ಮೊದಲ ಮುಖಪುಟದ ಎಡಭಾಗದಲ್ಲಿ ಸೇರಿಸಲಾಗಿದೆ. ಇದಕ್ಕೆ [[ಸ್ಪಾಟ್ಲೈಟ್]] ಎನ್ನಲಾಗಿದೆ.<ref name="3.0 official"/>
ಬಹುಶಃ ಎಲ್ಲಾ ಇನ್ಪುಟ್ನ್ನೂ ಟಚ್ಸ್ಕ್ರೀನ್ ಮೂಲಕ ನೀಡಲಾಗಿದೆ. [[ಮಲ್ಟಿ-ಟಚ್]] ಮೂಲಕ ನೀಡಲಾದ ಜಟಿಲ ಸೂಚನೆಗಳನ್ನು ಅರ್ಥೈಸಿಕೊಳ್ಳುತ್ತದೆ. ಬೆರಳ ಸ್ಪರ್ಶ ಮತ್ತು ಉಜ್ಜುವುದರ ಮೂಲಕ ಪರದೆಯ ಮೇಲಿರುವ ವಿಷಯವನ್ನು ಮೇಲೆ-ಕೆಳಗೆ ಬದಲಾಯಿಸಲು ಐಫೋನ್ನ [[ಪರಸ್ಪರ ಕ್ರಿಯಾ ತಂತ್ರ]]ವು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಉದಾಹರಣೆಗೆ, ಎರಡು ಬೆರಳುಗಳನ್ನು ಪರದೆಯ ಮೇಲಿಟ್ಟು ಅಗಲಿಸುವುದರ ಮೂಲಕ ಜಾಲ ಪುಟಗಳು ಮತ್ತು ಛಾಯಾಚಿತ್ರಗಳನ್ನು ಹಿಗ್ಗಿಸಿ, ಹತ್ತಿರ ತರುವುದರ ಮೂಲಕ ಕುಗ್ಗಿಸಬಹುದು. ಈ ಕ್ರಿಯೆಗೆ 'ಪಿಂಚಿಂಗ್' ಎನ್ನಲಾಗಿದೆ. ಬೆರಳನ್ನು ಪರದೆಯ ಮೇಲೆ ಕೆಳಗಿಂದ ಮೇಲಕ್ಕೆ ತರುವುದರಿಂದ ಉದ್ದನೆಯ ಪಟ್ಟಿ ಅಥವಾ ಮೆನುವಿನ ಸುರುಳಿ ಕಾಣಬಹುದು; ಹಿಂದಕ್ಕೆ ಹೋಗಲು ಬೆರಳನ್ನು ಮೇಲಿಂದ ಕೆಳಗೆ ಹಾಯಿಸಬಹುದಾಗಿದೆ. ಚಕ್ರದ ಮೇಲ್ಮೈಗೆ ಅಂಟಿಕೊಂಡಿರುವ ಚಿತ್ರಗಳಂತೆ ಪಟ್ಟಿಯು ಚಲಿಸುತ್ತದೆ. [[ಘರ್ಷಣೆ]]ಗೊಳಗಾದಂತೆ ನಿಧಾನಗತಿಯಲ್ಲಿ ಚಲಿಸುತ್ತದೆ. ಈ ರೀತಿಯಲ್ಲಿ, ಇಂಟರ್ಫೇಸ್ ನೈಜ ವಸ್ತುವೊಂದರ ಭೌತವಿಜ್ಞಾನವನ್ನು ಅನುಕರಿಸುತ್ತದೆ. ಇತರೆ [[ಬಳಕೆದಾರ-ಕೇಂದ್ರೀಕೃತ]] [[ಪರಸ್ಪರ ಕಾರ್ಯ ನಡೆಸುವ]] ಸಂದರ್ಭಗಳಲ್ಲಿ, ಅಡ್ಡಲಾಗಿ ಬರುವ ಉಪ-ಆಯ್ಕೆ (ಸಬ್-ಸೆಲೆಕ್ಷನ್), ಉದ್ದಕ್ಕೆ ಹಾಯುವ ಕೀಲಿಮಣೆ ಮತ್ತು ಗುರುತಿನ (ಬುಕ್ಮಾರ್ಕ್) ಮೆನು, ಹಾಗೂ, ಸಂಯೋಜನೆಗಳನ್ನು ಇನ್ನೊಂದೆಡೆ ಹೊಂದಿಸುವ ಅವಕಾಶ ನೀಡುವ ವಿಡ್ಗೆಟ್ಗಳು ಸೇರಿವೆ. ಅಗತ್ಯವಿದ್ದಾಗೆಲ್ಲ ಮೆನು ಪಂಕ್ತಿಗಳು ಪರದೆಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಕಾಣಸಿಗುತ್ತವೆ. ಅವುಗಳ ಆಯ್ಕೆಯು ಪ್ರೊಗ್ರಾಮ್ನ್ನು ಅವಲಂಬಿಸುತ್ತವೆ. ಆದರೆ ಅವು ಸ್ಥಿರ ಶೈಲಿಯನ್ನು ಅನುಸರಿಸುತ್ತವೆ. ಮೆನು ಶ್ರೇಣಿ ವ್ಯವಸ್ಥೆಗಳಲ್ಲಿ, ಪರದೆಯ ಮೇಲಿನ ಎಡ ಮೂಲೆಯಲ್ಲಿರುವ 'ಹಿಂದೆ (ಬ್ಯಾಕ್)' ಬಟನ್ ಫೊಲ್ಡರಿನ ಹೆಸರನ್ನು ತೋರಿಸುತ್ತದೆ.
=== ದೂರವಾಣಿ ===
[[ಚಿತ್ರ:iPhone Calling.png|thumb|ಕರೆ ಮಾಡುವ ಸಮಯದಲ್ಲಿ ಐಫೋನ್ ಹಲವು ಆಯ್ಕೆಗಳನ್ನು ಮುಂದಿಡುತ್ತದೆ.ಮುಖಕ್ಕೆ ಬಹಳ ಸನಿಹದಲ್ಲಿಟ್ಟುಕೊಂಡಾಗ ಪರದೆಯು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತದೆ.]]
ಆಡಿಯೊ [[ಕಾನ್ಫೆರೆನ್ಸಿಂಗ್]], ಕರೆಯನ್ನು ಕೆಲಕ್ಷಣ ಹಿಡಿದಿಟ್ಟುಕೊಳ್ಳುವುದು, ಕರೆ ಒಳಬರ ಮಾಡಿಕೊಳ್ಳುವಿಕೆ, [[ಕರೆಯುವವರ ID]] ಮತ್ತು ಇತರೆ ಸೆಲ್ಯುಲರ್ ಜಾಲ-ಸಂಬಂಧಿತ ಲಕ್ಷಣಗಳೊಂದಿಗೆ ಐಫೋನ್ ಕ್ರಿಯೆಗಳ ಸಮಗ್ರತೆಗೆ ಐಫೋನ್ ಅವಕಾಶ ನೀಡುತ್ತದೆ. ಉದಾಹರಣೆಗೆ, ಕರೆಯೊಂದು ಒಳಗೆ ಬಂದಾಗ ಹಾಡೊಂದು ಕೇಳಿಸಿಕೊಳ್ಳುತ್ತಿದ್ದರೆ, ಹಾಡಿನ ಧ್ವನಿ ನಿಧಾನವಾಗಿ ನಿಂತುಹೋಗುತ್ತದೆ, ಕರೆಯು ಅಂತ್ಯಗೊಂಡಾಗ ಹಾಡಿನ ಧ್ವನಿಯು ನಿಧಾನವಾಗಿ ಮೊದಲಿನ ಮಟ್ಟಕ್ಕೆ ಏರುತ್ತದೆ. ಐಫೋನ್ನ್ನು ಮುಖದ ಬಳಿ ತಂದಾಗ, ಸಾಮೀಪ್ಯ ಸಂವೇದಕವು ಪರದೆ ಹಾಗೂ ಸ್ಪರ್ಶ ಸಂವೇದನಾ ಸರ್ಕ್ಯುಟನ್ನು ಮುಚ್ಚಿಹಾಕುತ್ತದೆ. ವಿದ್ಯುತ್ಕೋಶದಲ್ಲಿನ ಶಕ್ತಿಯನ್ನು ಉಳಿಸಲು ಹಾಗೂ ಆಕಸ್ಮಿಕ ಸ್ಪರ್ಶ ತಡೆಗಟ್ಟಲು ಸಾಮೀಪ್ಯ ಸಂವೇದಕವು ಈ ರೀತಿ ವರ್ತಿಸುತ್ತದೆ. ಈ ಐಫೋನ್ [[ವೀಡಿಯೊ ಕರೆ]] ಅಥವಾ [[ವೀಡಿಯೊಕಾನ್ಫೆರೆನ್ಸಿಂಗ್]] ಗೆ ನೆರವಾಗುವದಿಲ್ಲ. ಏಕೆಂದರೆ ಪರದೆ ಮತ್ತು ಕ್ಯಾಮೆರಾ ಉಪಕರಣದ ಎದುರು-ಬದುರಿನ ಬದಿಗಳಲ್ಲಿವೆ.<ref>{{cite web|url=http://www.engadget.com/2007/08/13/mirror-based-video-conferencing-developed-for-iphone/|title=Mirror-based video conferencing developed for iPhone|first=Donald|last=Melanson|publisher=[[Engadget]]|date=2007-09-13|accessdate=2009-12-20}}</ref> ತೃತೀಯ ಪಕ್ಷ(ಬಾಹ್ಯ) ಅನ್ವಯಿಕೆಗಳ ಮೂಲಕ ಕೇವಲ [[ಧ್ವನಿ ಡಯಲಿಂಗ್]] ಕ್ರಿಯೆಯನ್ನು ಮಾತ್ರ ಮೊದಲ ಎರಡು ಮಾದರಿಗಳು ಸಮರ್ಥಿಸುತ್ತವೆ.<ref>{{cite web|url=http://www.macworld.com/article/137421/2008/12/voicedialers.html|title=Review: iPhone voice dialers|last=Tessler|first=Franklin|date=2008-12-12|publisher=Macworld|accessdate=2009-05-09}}</ref> ಕೇವಲ ಐಫೋನ್ 3GSನಲ್ಲಿ ಲಭ್ಯವಿರುವ ಧ್ವನಿ ನಿಯಂತ್ರಣವು, ಸಂಪರ್ಕಗಳ ಹೆಸರು ಅಥವಾ ಸಂಖ್ಯೆಯನ್ನು ತಿಳಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ತಿಳಿಸಲಾದ ಈ ಸಂಪರ್ಕದ ಸಂಖ್ಯೆಯನ್ನು ಐಫೋನ್ ಡಯಲ್ ಮಾಡುತ್ತದೆ.<ref name="Voice_Control">{{cite web|url=http://www.apple.com/iphone/iphone-3g-s/voice-control.html|title=iPhone: Make calls and play music using voice control|date=2009-06-10|publisher=Apple|accessdate=2009-06-10}}</ref>
ಕೆಲವು ದೇಶಗಳಲ್ಲಿ ಐಫೋನ್ [[ವಿಷುಯಲ್ ವಾಯ್ಸ್ ಮೇಲ್]] <ref name="VV_abroad">{{cite web|url=http://www.ilounge.com/index.php/news/comments/iphone-3g-carriers-apple-vary-on-visual-voicemail/|title=iPhone 3G carriers, Apple vary on Visual Voicemail|last=Starrett|first=Charles|date=2008-06-11|publisher=[[iLounge]]|accessdate=2009-05-24|archive-date=2009-06-13|archive-url=https://web.archive.org/web/20090613074505/http://www.ilounge.com/index.php/news/comments/iphone-3g-carriers-apple-vary-on-visual-voicemail|url-status=dead}}</ref> ಲಕ್ಷಣವನ್ನೊಳಗೊಂಡಿರುತ್ತದೆ. ಇದರಂತೆ, ಬಳಕೆದಾರರು ಸದ್ಯದ ವಾಯ್ಸ್ಮೇಲ್ ಸಂದೇಶಗಳ ಪಟ್ಟಿಯನ್ನು ನೋಡಬಹುದು. ಹಾಗಾಗಿ ಅವರು ಕರೆ ನೀಡಿದವರ ವಾಯ್ಸ್ಮೇಲ್ಗೆ ಹೋಗುವ ಅಗತ್ಯವಿರುವುದಿಲ್ಲ. ಇತರೆ ಬಹಳಷ್ಟು ವ್ಯವಸ್ಥೆಗಳಿಗಿಂತ ಭಿನ್ನವಾಗಿ, ಪರದೆಯಲ್ಲಿರುವ ಒಳಬಂದ ಸಂದೇಶ ಪಟ್ಟಿಗಳಲ್ಲಿ ಸಂದೇಶವೊಂದನ್ನು (ಕಾಲಾನುಕ್ರಮಕ್ಕೆ ಅಂಟಿಕೊಳ್ಳದೆ) ಆಯ್ಕೆ ಮಾಡಿ, ಆಲಿಸಿ, ಅಳಿಸಬಹುದಾಗಿದೆ.
2007ರ ಸೆಪ್ಟೆಂಬರ್ 5ರಂದು ಸಂಗೀತ [[ರಿಂಗ್ಟೋನ್]] ಕಾರ್ಯಕ್ಷಮತೆಯನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪರಿಚಯಿಸಲಾಯಿತು. ಅತ್ಯಲ್ಪ ಹೆಚ್ಚುವರಿ ಶುಲ್ಕ ಪಾವತಿಸಿ ಐಟ್ಯೂನ್ಸ್ ಸ್ಟೋರ್ನಿಂದ ಹಾಡುಗಳನ್ನು ಖರೀದಿಸಿ ಬಳಕೆದಾರರು ತಮ್ಮ ಇಚ್ಛೆಯಂತೆ ರಿಂಗ್ಟೋನ್ಗಳನ್ನು ರಚಿಸಿಕೊಳ್ಳಬಹುದು. ಹಾಡಿನ ಯಾವುದೇ ಭಾಗವನ್ನು ಆಧರಿಸಿ ರಿಂಗ್ಟೋನ್ಗಳು 3ರಿಂದ 30 ಸೆಕೆಂಡ್ಗಳ ಅವಧಿಯದ್ದಾಗಿರಬಹುದು. ಜೊತೆಗೆ, ಅದರ ಧ್ವನಿಯು ನಿಧಾನಕ್ಕೆ ಇಳಿಯಬಹುದು ಅಥವಾ ಏರಬಹುದು; ಪುನರಾವರ್ತಿಸಿದಾಗ ಅರ್ಧ ಸೆಕೆಂಡಿನಿಂದ ಐದು ಸೆಕೆಂಡುಗಳ ವರೆಗೆ ತಡೆಯಬಹುದು, ಅಥವಾ [[ಸತತವಾಗಿ ಪುನರಾವರ್ತಿಸ]]ಬಹುದು. ಎಲ್ಲಾ ರೀತಿಯ 'ಗಿರಾಕಿಯ ಇಚ್ಛೆಯಂತೆ ವಿನ್ಯಾಸ'ಗಳನ್ನು ಐಟ್ಯೂನ್ಸ್ನಲ್ಲಿ ಮಾಡಬಹುದಾಗಿದೆ. ಅಥವಾ, ಪರ್ಯಾಯವಾಗಿ, ಆಪೆಲ್ನ [[ಗ್ಯಾರಿಜ್ಬ್ಯಾಂಡ್]] ('ಗರಾಜ್ಬ್ಯಾಂಡ್?') ಆವೃತ್ತಿ 4.1.1 ಅಥವಾ ನಂತರದ ತಂತ್ರಾಂಶ ಬಳಸಿ ಮಾಡಬಹುದಾಗಿದೆ (ಈ ತಂತ್ರಾಂಶವು ಕೇವಲ [[ಮ್ಯಾಕ್ OS X]])<ref name="GarageBand1">{{cite web|url=http://docs.info.apple.com/article.html?artnum=307108|title=How to create custom ringtones in GarageBand 4.1.1|publisher=[[Apple Inc.]]|accessdate=2007-12-15|archive-date=2007-12-15|archive-url=https://web.archive.org/web/20071215060626/http://docs.info.apple.com/article.html?artnum=307108|url-status=dead}}</ref> ಅಥವಾ ತೃತೀಯ ಪಕ್ಷದ ಅನ್ವಯಿಕೆಗಳಲ್ಲಿ ಮಾತ್ರ ಲಭ್ಯ<ref name="third party ringtones">{{cite news|last=Gilbertson|first=Scott|title=How to Make Custom IPhone Ringtones Without Paying Apple $2|url=https://www.wired.com/software/coolapps/news/2007/09/ringtone_hacks|work=[[Wired magazine]]|publisher=[[Condé Nast Publications]]|date=September 12, 2007|accessdate=2008-03-08}}</ref>).
=== ಮಲ್ಟಿಮೀಡಿಯಾ ===
ಸಂಗೀತದ ಸಂಕಲನದ ವಿನ್ಯಾಸವು ಐಪಾಡ್ನ್ನು ಅಥವಾ ಸದ್ಯದ [[ಸಿಂಬಿಯನ್]] [[S60]] ಹೋಲುತ್ತದೆ. [[ಹಾಡು]]ಗಳು, [[ಗಾಯನ ಕಲಾವಿದ]]ರು, [[ಆಲ್ಬಮ್]]ಗಳು, [[ವೀಡಿಯೊ]]ಗಳು, [[ಪ್ಲೇಲಿಸ್ಟ್]]ಗಳು (ನುಡಿಸಬೇಕಾದ ಹಾಡುಗಳ ನಿರ್ದಿಷ್ಟ ಪಟ್ಟಿ), [[ಗಾಯನ ಶೈಲಿ]]ಗಳು, [[ಸಂಗೀತ ಸಂಯೋಜಕ]]ರು, [[ಪಾಡ್ಕ್ಯಾಸ್ಟ್]]ಗಳು, [[ಆಡಿಯೊಹೊತ್ತಿಗೆ]]ಗಳು ಮತ್ತು [[ಸಂಗ್ರಹಣ]]ಗಳ ಪ್ರಕಾರವಾಗಿ ತನ್ನ ಮೀಡಿಯಾ ಸಂಕಲನವನ್ನು ಐಫೋನ್ ವಿಂಗಡಿಸಬಹುದು.
ಪ್ಲೇಲಿಸ್ಟ್ಗಳನ್ನು ಹೊರತುಪಡಿಸಿ, ಆಯ್ಕೆಗಳನ್ನು ಯಾವಾಗಲೂ ವರ್ಣಮಾಲೆಯ ಅನುಕ್ರಮದಲ್ಲಿ ದಾಖಲಿಸಲಾಗುವುದು. ಏಕೆಂದರೆ ಪ್ಲೇಲಿಸ್ಟ್ಗಳು [[ಐಟ್ಯೂನ್ಸ್]]ನಿಂದ ತಮ್ಮ ಅನುಕ್ರಮಣಿಕೆ ಉಳಿಸಿಕೊಳ್ಳುತ್ತವೆ. ಬಳಕೆದಾರರು ತಮ್ಮ ಆಯ್ಕೆ ಸ್ಪರ್ಶಕ್ಕೆ ಸಾಕಷ್ಟು ಸ್ಥಳಾವಕಾಶಕ್ಕೆ ಐಫೋನ್ ದೊಡ್ಡ ಗಾತ್ರದ ಫಾಂಟ್ಗಳನ್ನು ಬಳಸುತ್ತದೆ. [[ಕವರ್ ಫ್ಲೊ]] ನೋಡಲು ಬಳಕೆದಾರರು ತಮ್ಮ ಐಫೋನ್ಗಳನ್ನು ಅಡ್ಡಲಾಗಿ ತಿರುಗಿಸಿ [[ಲ್ಯಾಂಡ್ಸ್ಕೇಪ್ ರೀತಿ]]ಗೆ ತರಬಹುದು. ಐಟ್ಯೂನ್ಸ್ನಂತೆಯೇ, ಈ ಲಕ್ಷಣವು ವಿವಿಧ ಆಲ್ಬಮ್ ಕವಚಗಳನ್ನು ಸುರುಳಿ ಛಾಯಾಚಿತ್ರ ಸಂಕಲನ ರೂಪದಲ್ಲಿ ತೋರಿಸುತ್ತದೆ. ಪರದೆಯ ಮೇಲೆ ಬೆರಳು ಹಾಯಿಸಿ ಸುರುಳಿ ದೃಶ್ಯ ಪಡೆಯಬಹುದಾಗಿದೆ. ಪರ್ಯಾಯವಾಗಿ, ಹಾಡುಗಳ ನಿಲ್ಲಿಸಲು, ನುಡಿಸಲು, ಮುಂದೂಡಲು ಅಥವಾ ಪುನಾವತಿಸಲು ಹೆಡ್ಸೆಟ್ ನಿಯಂತ್ರಣ ಬಳಸಬಹುದಾಗಿದೆ. ಐಫೋನ್ 3GSನಲ್ಲಿ, ಅದರೊಂದಿಗೆ ನೀಡಲಾದ ಆಪೆಲ್ ಇಯರ್ಫೋನ್ಗಳನ್ನು ಬಳಸಿ, ಧ್ವನಿ ನಿಯಂತ್ರಣವನ್ನು ಬದಲಾಯಿಸಬಹುದು. ಧ್ವನಿ ನಿಯಂತ್ರಣಾ ಲಕ್ಷಣವನ್ನು ಬಳಸಿ ಹಾಡನ್ನು ಗುರುತಿಸಿ, ಹಾಡುಗಳ ಪಟ್ಟಿಯಲ್ಲಿರುವ ಹಾಡುಗಳನ್ನು ನುಡಿಸಲು, ಅಥವಾ, ವಿಶಿಷ್ಟ ಗಾಯನ ಕಲಾವಿದರ ಪ್ರಕಾರ ವಿಂಗಡಿಸಿ ನುಡಿಸಲು, ಅಥವಾ [[ಜೀನಿಯಸ್ ಪ್ಲೇಲಿಸ್ಟ್]] ರಚಿಸಲು ಅವಕಾಶವಿದೆ.<ref name="Voice_Control" />
[[ಚಿತ್ರ:iPhone Image Viewer.jpg|thumb|ಛಾಯಾಚಿತ್ರಗಳನ್ನು ತೋರಿಸುವ ಅನ್ವಯಿಕೆಯು ಪೊರ್ಟ್ರೇಟ್ ಮತ್ತು ಲ್ಯಾಂಡ್ಸ್ಕೇಪ್ ರೀತಿಗಳೆರಡನ್ನೂ ಬೆಂಬಲಿಸುತ್ತದೆ.]]
[[ಮಧ್ಯದಲ್ಲಿ ಅಂತರವಿಲ್ಲದೆ ನಿರಂತರತೆಯ]] ನ್ನು ಐಫೋನ್ ಬೆಂಬಲಿಸುತ್ತದೆ.<ref>{{cite web|url=http://support.apple.com/kb/HT1797|title=What is Gapless Playback?|accessdate=2008-05-13|publisher=[[Apple Inc.]]}}</ref> 2005ರಲ್ಲಿ ಪರಿಚಯಿಸಲಾದ [[ಐದನೆಯ ತಲೆಮಾರಿನ ಐಪಾಡ್]]ಗಳಂತೆ, ಐಫೋನ್ಗಳು [[ಡಿಜಿಟಲ್ ವೀಡಿಯೊ]]ಗಳನ್ನು ಪ್ರದರ್ಶಿಸಬಹುದು. ಅಗಲ ಪರದೆಯಲ್ಲಿ [[TV ಕಾರ್ಯಕ್ರಮ]]ಗಳು ಮತ್ತು [[ಚಲನಚಿತ್ರ]]ಗಳನ್ನು ವೀಕ್ಷಿಸಲು ಅವಕಾಶ ನೀಡುತ್ತದೆ. ಅಗಲ ಪರದೆ ಹಾಗೂ [[ಪೂರ್ಣಪರದೆ]]ಗಳ ನಡುವೆ ವೀಡಿಯೊ ಪ್ರದರ್ಶನ ಬದಲಿಸಿಕೊಳ್ಳಲು ಡಬಲ್-ಟ್ಯಾಪಿಂಗ್ ಮಾಡಬಹುದು.
[[ಐಟ್ಯೂನ್ಸ್ ಸ್ಟೋರ್]]ನಿಂದ ಹಾಡುಗಳನ್ನು ಐಫೋನ್ಗೆ ನೇರವಾಗಿ ಡೌನ್ಲೋಡ್ ಮಾಡಲು ಐಫೋನ್ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಈ ಲಕ್ಷಣಕ್ಕೆ ಮೂಲತಃ ವೈ-ಫೈ ಜಾಲದ ಅಗತ್ಯವಿತ್ತು. ಆದರೆ ಇಂದು, ವೈ-ಫೈ ಅಲಭ್ಯವಾಗಿದ್ದಲ್ಲಿ, ಅದು ಸೆಲ್ಯುಲರ್ ಮಾಹಿತಿ ಜಾಲವನ್ನು ಬಳಸಬಹುದು.<ref>{{cite web|url=http://daringfireball.net/linked/2007/september#thu-27-wifi|title=The Reason It’s Called the Wi-Fi Music Store|date=September 30, 2007|accessdate=2008-01-06|first=John|last=Gruber|publisher=[[Daring Fireball]]|authorlink=John Gruber|work=Linked List}}</ref>
ಬಳಕೆದಾರರು [[ಕ್ಯಾಮೆರಾ]]ದೊಂದಿಗೆ ತೆರೆದ ಫೋಟೊಗಳನ್ನು ಅಪ್ಲೋಡ್ ಮಾಡಲು, ವೀಕ್ಷಿಸಲು ಹಾಗೂ ಇ-ಮೇಲ್ ಮಾಡುವ ತಂತ್ರಾಂಶವನ್ನು ಐಫೋನ್ ಒಳಗೊಂಡಿದೆ. ಸಫಾರಿಯಂತೆಯೇ, ಬಳಕೆದಾರರು ಬೆರಳುಗಳನ್ನು ಬಳಸುವ ಮೂಲಕ ಫೋಟೊಗಳನ್ನು ಹಿಗ್ಗಿಸಬಹುದು ಅಥವಾ ಕುಗ್ಗಿಸಬಹುದಾಗಿದೆ. ಐಫೋನ್ನ ಕ್ಯಾಮೆರಾದೊಂದಿಗೆ ತೆಗೆದುಕೊಂಡ ಛಾಯಾಚಿತ್ರಗಳನ್ನು ಕ್ಯಾಮೆರಾ ಸುರುಳಿಯ ರೂಪದಲ್ಲಿ ನೋಡಲು ಕ್ಯಾಮೆರಾ ಅನ್ವಯಿಕೆಯು ಅವಕಾಶ ನೀಡುತ್ತದೆ. ಈ ಛಾಯಾಚಿತ್ರಗಳು ಫೊಟೊಸ್ ಅನ್ವಯಿಕೆಯಲ್ಲಿಯೂ ಸಹ ಲಭ್ಯವಿವೆ. ಇದರೊಂದಿಗೆ ಐಫೋಟೊ ಅಥವಾ ಮ್ಯಾಕ್ನಲ್ಲಿರುವ [[ಐಫೋಟೊ]] ಅಥವಾ [[ಅಪೆರ್ಚೂರ್]] ಅಥವಾ ವಿಂಡೋಸ್ ಬೆಂಬಲಿಸುವ [[ಫೊಟೊಷಾಪ್]] ಮೂಲಕ ರವಾನಿಸಲಾಧ ಚಿತ್ರಗಳು ಸಹ ಲಭ್ಯವಿವೆ.
=== ಇಂಟರ್ನೆಟ್ ಜೋಡಣೆ ಅಥವಾ ಕೊಂಡಿ ===
[[ಚಿತ್ರ:Wikipedia Main Page on iPhone.png|thumb|240px|ಐಫೋನ್ ಸಫಾರಿಯಲ್ಲಿ ವಿಕಿಪೀಡಿಯಾದ ಮುಖಪುಟವು ಲ್ಯಾಂಡ್ಸ್ಕೇಪ್ ರೀತಿಯಲ್ಲಿ ತೋರಿಸುತ್ತಿರುವುದು.]]
ಐಫೋನ್ ಸ್ಥಳೀಯ ವಿಸ್ತೀರ್ಣದ [[ವೈ-ಫೈ]] ಅಥವಾ ವಿಶಾಲ ವಿಸ್ತೀರ್ಣದ [[GSM]] ಅಥವಾ [[EDGE]] ಜಾಲಕ್ಕೆ (ಇವೆರಡೂ ಎರಡನೆಯ ತಲೆಮಾರಿನ ([[2G]]) ನಿಸ್ತಂತು ಮಾಹಿತಿ ಪ್ರಮಾಣಗಳು) ಸಂಪರ್ಕವೇರ್ಪಡಿಸಿಕೊಂಡಾಗ [[ಇಂಟರ್ನೆಟ್]] ಲಭ್ಯವಾಗುತ್ತದೆ. ಐಫೋನ್ 3G ಮೂರನೆಯ ತಲೆಮಾರಿನ [[UMTS]] ಮತ್ತು [[HSDPA]] 3.6,<ref>{{cite web|url=http://www.gearlog.com/2008/07/apples_joswiak_iphone_3g_runs.php|title=Apple's Joswiak: iPhone 3G Runs Fast HSDPA 3.6, Not Slower 1.8|publisher=Gearlog|accessdate=2008-10-12|archive-date=2008-10-04|archive-url=https://web.archive.org/web/20081004215201/http://www.gearlog.com/2008/07/apples_joswiak_iphone_3g_runs.php|url-status=dead}}</ref> ಗೆ ಬೆಂಬಲ ನೀಡುತ್ತದೆ, ಆದರೆ [[HSUPA]] ಜಾಲಕ್ಕೆ ಅಲ್ಲ. ಕೇವಲ ಐಫೋನ್ 3GS HSDPA 7.2ಗೆ ಬೆಂಬಲ ನೀಡುತ್ತದೆ.<ref name="Macworld_3G_S">{{cite web|url=http://www.macworld.com/article/141031/2009/06/iphone3gs.html?lsrc=top_1|title=iPhone 3GS offers speed boost, video capture|last=Michaels|first=Philip|coauthors=Jason Snell|date=2009-06-08|publisher=Macworld|accessdate=2009-06-08}}</ref> AT&T ಜುಲೈ 2004ರಲ್ಲಿ [[3G]]ಯನ್ನು ಪರಿಚಯಿಸಿತು.<ref name="3G rollout">{{cite web|url=http://www.engadget.com/2004/07/20/at-t-wireless-introduces-3g-wireless/|title=AT&T Wireless introduces 3G wireless|last=Rojas|first=Peter|date=July 20, 2004|publisher=[[Engadget]]|accessdate=2008-12-17}}</ref> ಆದರೆ, USನಲ್ಲಿ ಸಾಕಷ್ಟು ವ್ಯಾಪಕ ಬಳಕೆಯಲ್ಲಿ ಬಂದಿಲ್ಲ; ಅಲ್ಲದೇ ಚಿಪ್ಸೆಟ್ಗಳು ಐಫೋನ್ನಲ್ಲಿ ಅಳವಡಿಸುವಷ್ಟು ದಕ್ಷ ರೀತಿಯಲ್ಲಿ ಶಕ್ತಿಯನ್ನು ಬಳಸುತ್ತಿಲ್ಲ ಎಂದು [[ಸ್ಟೀವ್ ಜಾಬ್ಸ್]]ರಿಗೆ 2007ರ ಅವಧಿಗೆ ಅಂದರೆ ತಡವಾಗಿ ಜ್ಞಾನೋದಯವಾಯಿತು.<ref name="pogueFAQ" /><ref>{{cite web|url=http://www.macnn.com/articles/07/09/18/jobs.uk.cell.carrier.qa/|title=Jobs: battery life issues delaying 3G iPhone|publisher=MacNN|accessdate=2008-06-06}}</ref> ವಿಶ್ವವಿದ್ಯಾನಿಲಯ ಮತ್ತು ಕಾರ್ಪೊರೇಟ್ ವೈ-ಫೈ ಜಾಲಗಳು ಸಾಮಾನ್ಯವಾಗಿ ಬಳಸುವ ದೃಢೀಕರಣ ವ್ಯವಸ್ಥೆ [[802.1X]]ಗಾಗಿ ಬೆಂಬಲವನ್ನು 2.0 ಆವೃತ್ತಿಯ ಅಪ್ಡೇಟ್ನಲ್ಲಿ ಸೇರಿಸಲಾಯಿತು.<ref name="802.1x">{{cite web|url=http://www.apple.com/au/iphone/enterprise/|title=Apple — iPhone — Enterprise|publisher=[[Apple Inc.]]|accessdate=2008-06-11}}</ref>
ಯಥಾಸ್ಥಿತಿಯಲ್ಲಿ, ಹೊಸದಾಗಿ ಗುರುತಿಸಲಾದ ವೈ-ಫೈ ಜಾಲಗಳನ್ನು ಸೇರಲು ಐಫೋನ್ ಕೋರುತ್ತದೆ. ಅಗತ್ಯವಾದಾಗ ಪಾಸ್ವರ್ಡ್ ನೀಡಲು ಸೂಚಿಸುತ್ತದೆ. ಪರ್ಯಾಯವಾಗಿ, ಸೀಮಿತ ವೈ-ಫೈ ಜಾಲಕ್ಕೆ ಅದು ಕೈಬೆರಳಿಂದ ಸೇರಿಸಬಹುದು.<ref>{{cite web|url=http://docs.info.apple.com/article.html?artnum=306249|title=iPhone: About Connections Settings|publisher=[[Apple Inc.]]|accessdate=2007-11-04|archive-date=2007-10-19|archive-url=https://web.archive.org/web/20071019015540/http://docs.info.apple.com/article.html?artnum=306249|url-status=dead}}</ref> ಐಫೋನ್ ಸ್ವಯಂಚಾಲಿತವಾಗಿ ನಿಶ್ಚಿತ ಜಾಲವನ್ನು ಆಯ್ಕೆ ಮಾಡುತ್ತದೆ. ಲಭ್ಯತೆ ಮೇರೆಗೆ EDGE ಬದಲಿಗೆ ವೈ-ಫೈ ಜಾಲಕ್ಕೆ ಸಂಪರ್ಕವೇರ್ಪಡಿಸುತ್ತದೆ.<ref>{{cite web|url=http://docs.info.apple.com/article.html?artnum=305711|title=iPhone: Connecting to the Internet with EDGE or Wi-Fi|publisher=[[Apple Inc.]]|accessdate=2007-11-04|archive-date=2007-10-11|archive-url=https://web.archive.org/web/20071011042909/http://docs.info.apple.com/article.html?artnum=305711|url-status=dead}}</ref> ಇದೇ ರೀತಿ, ಐಫೋನ್ 3G ಮತ್ತು 3GS ಮಾದರಿಗಳು 2Gಯ ಬದಲು 3G ಗೆ, ಅಥವಾ ಇವೆರಡರ ಬದಲಿಗೆ ವೈ-ಫೈ ಪರ್ಯಾಯ ಆಯ್ಕೆ ಮಾಡಿಕೊಳ್ಳುತ್ತದೆ.<ref name="3GSpeeds">{{cite web|url=http://www.apple.com/iphone/features/wireless.html|title=Apple -iPhone — Features - 3G |year=2008|publisher=[[Apple Inc.]]|accessdate=2008-12-14}}</ref> ಐಫೋನ್ 3G ಮತ್ತು 3GSನಲ್ಲಿರುವ ವೈ-ಫೈ, [[ಬ್ಲೂಟೂತ್]] ಮತ್ತು 3Gಯನ್ನು ಒಂದೊಂದಾಗಿ ನಿಷ್ಕ್ರಿಯಗೊಳಿಸಬಹುದಾಗಿದೆ. ಏರ್ಪ್ಲೇನ್ ರೀತಿಯು ಇತರೆ ಐಚ್ಛಿಕ ಸಂಯೋಜನೆಗಳನ್ನು ಮೀರಿಸಿ, ಒಂದೇ ಹೊತ್ತಿಗೆ ಎಲ್ಲಾ ನಿಸ್ತಂತು ಸಂಪರ್ಕಗಳನ್ನು ಕಡಿತಗೊಳಿಸುತ್ತದೆ.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಐಫೋನ್ನ 3G ಗರಿಷ್ಠ ಡೌನ್ಲೋಡ್ ದರ 1.4 [[Mbps]]ರಷ್ಟಿದೆ.<ref>{{cite web|url=http://www.att.com/gen/press-room?pid=4800&cdvn=news&newsarticleid=25791|title=AT&T to Offer Next-Generation iPhone on Its High-Performance 3G Network|date=2008-06-09|publisher=AT&T|accessdate=2009-06-09}}</ref> ಇನ್ನೂ ಹೆಚ್ಚಿಗೆ, ಸೆಲ್ಯುಲರ್ ಜಾಲಗಳಲ್ಲಿ ಡೌನ್ಲೋಡ್ ಆದ ಕಡತಗಳು 10 MBಗಿಂತಲೂ ಚಿಕ್ಕದಾಗಿರಬೇಕು. ಇ-ಮೇಲ್ ಲಗತ್ತುಗಳು ಅಥವಾ ಪಾಡ್ಕ್ಯಾಸ್ಟ್ಗಳನ್ನು ವೈ-ಫೈ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕು, ಏಕೆಂದರೆ ಈ ಜಾಲದಲ್ಲಿ ಕಡತದ ಗಾತ್ರ ಮಿತಿಯಿರುವುದಿಲ್ಲ. ವೈ-ಫೈ ಅಲಭ್ಯವಾಗಿರುವಾಗ, ಸಫಾರಿಯಲ್ಲಿ ನೇರವಾಗಿ ಕಡತಗಳನ್ನು ತೆರೆಯುವುದು ಒಂದು [[ಸಮಸ್ಯಾ ಪರಿಹಾರ]] ಯತ್ನವಾಗಿದೆ.<ref name="iPhone: Beat 10MB 3G download limit">{{cite web|url=http://reviews.cnet.co.uk/natelanxon/0,139102300,49300138,00.htm|title=iPhone: Beat 10MB 3G download limit|access-date=2010-01-28|archive-date=2010-02-16|archive-url=https://web.archive.org/web/20100216173216/http://reviews.cnet.co.uk/natelanxon/0,139102300,49300138,00.htm|url-status=dead}}</ref>
[[ಸಫಾರಿ]] ಐಫೋನ್ನ [[ಜಾಲ ವೀಕ್ಷಣಾ ಸಾಧನ]]ವಾಗಿದೆ. ಮ್ಯಾಕ್ ಮತ್ತು ವಿಂಡೋಸ್ನಂತೆಯೇ ಪುಟಗಳನ್ನು ತೆರೆದಿಡುತ್ತದೆ. ಜಾಲ ಪುಟಗಳನ್ನು ಪೊರ್ಟ್ರೇಟ್ ಅಥವಾ ಲ್ಯಾಂಡ್ಸ್ಕೇಪ್ ರೀತಿಯಲ್ಲಿ ವೀಕ್ಷಿಸಬಹುದಾಗಿದೆ. ಪರದೆಯ ಮೇಲೆ ಬೆರಳುಗಳನ್ನು ಹಾಯಿಸುವುದರಿಂದ ಪುಟಗಳನ್ನು ಹಿಗ್ಗಿಸಬಹುದು ಅಥವಾ ಕುಗ್ಗಿಸಬಹುದು; ಬೆರಳಿಂದ ಎರಡು ಬಾರಿ ಸ್ಪರ್ಶಿಸುವುದರ ಮೂಲಕ ಪಠ್ಯ-ಚಿತ್ರಗಳನ್ನು ಹಿಗ್ಗಿಸಬಹುದಾಗಿದೆ.<ref>{{cite web|url=http://docs.info.apple.com/article.html?artnum=305899|title=iPhone: Zooming In to See a Page More Easily|publisher=[[Apple Inc.]]|accessdate=2007-11-04|archive-date=2007-12-25|archive-url=https://web.archive.org/web/20071225113959/http://docs.info.apple.com/article.html?artnum=305899|url-status=dead}}</ref><ref>{{cite web|url=http://solution.allthingsd.com/20070626/the-iphone-is-breakthrough-handheld-computer/|title=The iPhone Is a Breakthrough Handheld Computer|author=Mossberg and Boehret|quote=The iPhone is the first smart phone we’ve tested with a real, computer-grade Web browser, a version of Apple’s Safari. It displays entire Web pages, in their real layouts, and allows you to zoom in quickly by either tapping or pinching with your finger.|date=June 26, 2007}}</ref> ಐಫೋನ್ [[ಫ್ಲ್ಯಾಷ್]] ಆಗಲೀ [[ಜಾವಾ]] ಆಗಲೀ ಬೆಂಬಲಿಸುವುದಿಲ್ಲ.<ref>{{cite web|url=http://www.ericklein.com/2008/03/btw-i-love-apple.html|title=BTW, I love Apple!|date=March 9, 2008|accessdate=2008-05-07}}</ref> ಇದರ ಫಲವಾಗಿ, [[UKಯ ಜಾಹೀರಾತು ಗುಣಮಟ್ಟಗಳ ಪ್ರಾಧಿಕಾರ (ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ) ತನ್ನ ನ್ಯಾಯನಿರ್ಣಯದಲ್ಲಿ, "ಐಫೋನ್ 'ಇಂಟರ್ನೆಟ್ನ ಎಲ್ಲಾ ಭಾಗಗಳ'ನ್ನು ವೀಕ್ಷಿಸಬಲ್ಲದು ಎಂದು ಹೇಳಿಕೊಳ್ಳುವುದು 'ಮಿಥ್ಯ ಜಾಹೀರಾತು' ಎಂದು ಪರಿಗಣಿಸಲಾಗಿದೆ. ಈ ಜಾಹೀರಾತನ್ನು ಕೂಡಲೇ ಹಿಂತೆಗೆದುಕೊಳ್ಳತಕ್ಕದ್ದು" ಎಂದು ತಿಳಿಸಿತು.|UKಯ ಜಾಹೀರಾತು ಗುಣಮಟ್ಟಗಳ ಪ್ರಾಧಿಕಾರ (ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ) ತನ್ನ ನ್ಯಾಯನಿರ್ಣಯದಲ್ಲಿ, "ಐಫೋನ್ 'ಇಂಟರ್ನೆಟ್ನ ಎಲ್ಲಾ ಭಾಗಗಳ'ನ್ನು ವೀಕ್ಷಿಸಬಲ್ಲದು ಎಂದು ಹೇಳಿಕೊಳ್ಳುವುದು '[[ಮಿಥ್ಯ ಜಾಹೀರಾತು]]' ಎಂದು ಪರಿಗಣಿಸಲಾಗಿದೆ. ಈ ಜಾಹೀರಾತನ್ನು ಕೂಡಲೇ ಹಿಂತೆಗೆದುಕೊಳ್ಳತಕ್ಕದ್ದು" ಎಂದು ತಿಳಿಸಿತು.<ref name="asaiphoneban">{{cite web|url=http://www.asa.org.uk/asa/adjudications/Public/TF_ADJ_44891.htm|title=ASA Adjudications: Apple (UK) Ltd|date=2008-08-27|accessdate=2009-03-10|archive-date=2009-04-20|archive-url=https://web.archive.org/web/20090420040228/http://www.asa.org.uk/asa/adjudications/Public/TF_ADJ_44891.htm|url-status=dead}}</ref>]] ಐಫೋನ್ [[SVG]], [[CSS]], [[HTML]] [[ಕ್ಯಾನ್ವಸ್]] ಮತ್ತು [[ಬ್ಯಾನ್ಜೊ]]ಗಳಿಗೆ ಬೆಂಬಲ ನೀಡುತ್ತದೆ.<ref name="iPhone Atlas OS 2.0">{{cite web|url=http://reviews.cnet.com/8301-19512_7-10115415-233.html?tag=mncol;title|title=iPhone OS 2.0 will include Bonjour, full-screen Safari mode, more|last=Wilson|first=Ben|date=March 8, 2008|publisher=iPhone Atlas|accessdate=2009-01-09}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref name="riactant">{{cite web|url=http://riactant.wordpress.com/2007/08/27/apple-iphone-tech-talk-debriefing-part-2-vector-graphics-and-animation/|title=Apple iPhone Tech Talk Debriefing — Part 2 (Vector graphics and animation)|last=riactant|date=August 27, 2007|publisher=The General Theory of RIAtivity|accessdate=2009-01-09|archiveurl=https://web.archive.org/web/20071108221705/http://riactant.wordpress.com/2007/08/27/apple-iphone-tech-talk-debriefing-part-2-vector-graphics-and-animation/|archivedate=2007-11-08|url-status=dead}}</ref>
ನಕ್ಷೆಗಳ ಅನ್ವಯಿಕೆಯು [[ಗೂಗಲ್ ಮ್ಯಾಪ್ಸ್]]ನ್ನು ನಕ್ಷೆ, ಉಪಗ್ರಹ ಅಥವಾ ಸಮ್ಮಿಶ್ರ ರೂಪದಲ್ಲಿ ವೀಕ್ಷಿಸಬಹುದು. ಎರಡು ಸ್ಥಳಗಳ ನಡುವೆ ಮಾರ್ಗಸೂಚಿಗಳನ್ನು ರಚಿಸುವುದಲ್ಲದೆ, ಐಚ್ಛಿಕತೆ ಮೇರೆಗೆ ನಿಗದಿತ [[ಸಂಚಾರ]] ಕುರಿತು ಮಾಹಿತಿ ನೀಡಬಲ್ಲದು. ಐಫೋನ್ ಬಿಡುಗಡೆಗೊಳಿಸುವ ಸಮಯದಲ್ಲಿ, ಸನಿಹದ [[ಸ್ಟಾರ್ಬಕ್ಸ್]] ಸ್ಥಳಗಳನ್ನು ಹುಡುಕಿ, ನಂತರ ಬೆರಳಿನಿಂದ ಒಂದು ಸಣ್ಣ ಸ್ಪರ್ಶದ ಮೂಲಕ ಯಾರಿಗೋ [[ಆಕಸ್ಮಿಕ ತಪ್ಪಿನಿಂದಾಗಿ ಕರೆ]] ನೀಡುವುದರ ಮೂಲಕ ಸ್ಟೀವ್ ಜಾಬ್ಸ್ ಈ ಗುಣಲಕ್ಷಣ ಪ್ರದರ್ಶಿಸಿದರು.<ref name="keynoteMacworld" /><ref name="keynoteEngadget">{{cite web|last=Block|first=Ryan|url=http://www.engadget.com/2007/01/09/live-from-macworld-2007-steve-jobs-keynote/|title=Live from Macworld 2007: Steve Jobs keynote|publisher=[[Engadget]]|date=January 9, 2007|accessdate=2008-06-06}}</ref>
ಪಾದಚಾರಿ ಮಾರ್ಗದರ್ಶನ, ಸಾರ್ವಜನಿಕ ಸಾರಿಗೆ ಮತ್ತು [[ಬೀದಿ ನೋಟ]] ಗುಣಲಕ್ಷಣಗಳನ್ನು ವರ್ಷನ್ 2.2 ತಂತ್ರಾಂಶ ಅಪ್ಡೇಟ್ನಲ್ಲಿ ನೀಡಲಾಯಿತು. ಆದರೆ ಇದರಲ್ಲಿ ಧ್ವನಿ-ಮಾರ್ಗದರ್ಶನದ ಸಂಚಾರ ನಿರ್ದೇಶನವಿರಲಿಲ್ಲ.<ref name="2.2" /> ಐಫೋನ್ 3GS ನಕ್ಷೆಯನ್ನು ತನ್ನ ಡಿಜಿಟಲ್ ದಿಕ್ಸೂಚಿಗೆ ಹೊಂದಿಕೊಳ್ಳುವಂತೆ ಪ್ರತಿಷ್ಟಾಪಿಸಬಹುದು.<ref name="Compass">{{cite web|url=http://www.apple.com/iphone/iphone-3g-s/maps-compass.html|title=Apple - iPhone - Get directions with GPS maps and a new compass.|date=2009-06-08|publisher=Apple|accessdate=2009-06-08}}</ref> ಐಫೋನ್ನಲ್ಲಿ [[ಯುಟ್ಯೂಬ್]] ವೀಡಿಯೊಗಳನ್ನು ವೀಕ್ಷಿಸಲು ಆಪೆಲ್ ಪ್ರತ್ಯೇಕ ಅನ್ವಯಿಕೆಯ ವಿನ್ಯಾಸ-ಅಭಿವೃದ್ಧಿ ಪಡಿಸಿತು. ಈ ಅನ್ವಯಿಕೆಯು [[H.264]] ಕೊಡೆಕ್ ಬಳಸಿ ಎನ್ಕೋಡ್ ಮಾಡಿ ವೀಡಿಯೋಗಳನ್ನು ಪ್ರದರ್ಶಿಸುತ್ತದೆ.
ಸಾದಾ[[ಹವಾಗುಣ]] ಮತ್ತು [[ಸ್ಟಾಕ್]] (ಷೇರು ಮಾಹಿತಿ)ತುಣುಕಗಳನ್ನು ತಿಳಿಸುವ ಅನ್ವಯಿಕೆಗಳೂ ಸಹ ಇಂಟರ್ನೆಟ್ನಿಂದ ಮಾಹಿತಿ ಪಡೆಯಬಹುದು.
ಐಫೋನ್ ಬಳಕೆದಾರರು ಇಂಟರ್ನೆಟ್ನ್ನು ಆಗಾಗ್ಗೆ ಮತ್ತು ವಿವಿಧೆಡೆ ವೀಕ್ಷಿಸುವರು. [[ಗೂಗಲ್]]ನ ಪ್ರಕಾರ, ಇತರೆ ಅನ್ಯ ಮೊಬೈಲ್ ದೂರವಾಣಿಗಳಿಗಿಂತಲೂ ಐಫೋನ್ 50 ಪಟ್ಟು ಹೆಚ್ಚು ಹುಡುಕು, ವಿಷಯ ಪಠ್ಯಕ್ರಮದ ಅವಕಾಶಗಳನ್ನು ಸೃಷ್ಟಿಸುತ್ತದೆ.<ref name="GoogleSearches">{{cite web|last=Lane|first=Slash|url=http://www.appleinsider.com/articles/08/02/14/google_iphone_usage_shocks_search_giant.html|title=Google iPhone usage shocks search giant|publisher=[[AppleInsider]]|date=February 14, 2008|accessdate=2008-02-18}}</ref> [[ಡಾಯಿಚ್ ಟೆಲೆಕಾಮ್]] [[CEO]] ರೆನೆ ಒಬರ್ಮನ್ ಹೇಳುವಂತೆ, 'ಐಫೋನ್ ಗ್ರಾಹಕರೊಬ್ಬರ ಸರಾಸರಿ ಇಂಟರ್ನೆಟ್ ಬಳಕೆಯು 100 [[ಮೆಗಾಬೈಟ್]]ಗಳಿಗಿಂತಲೂ ಹೆಚ್ಚಾಗಿವೆ.
ಇದು ಸಾಮಾನ್ಯ ಕರಾರು-ಆಧಾರಿತ ಗ್ರಾಹಕರ ಬಳಕೆಗಿಂತಲೂ 30 ಪಟ್ಟು ಹೆಚ್ಚು.'<ref name="iPhoneDataBoom">{{cite web|url=http://www.unstrung.com/document.asp?doc_id=144563&f_src=unstrung_gnews|title=iPhone Data Booms at T-Mobile|publisher=Unstrung|date=January 30, 2008|accessdate=2008-02-18|archive-date=2008-02-07|archive-url=https://web.archive.org/web/20080207070137/http://www.unstrung.com/document.asp?doc_id=144563&f_src=unstrung_gnews|url-status=dead}}</ref> ಐಫೋನ್ ಬಳಕೆದಾರರಲ್ಲಿ 98%ರಷ್ಟು ಮಾಹಿತಿ ಸೇವೆಗಳಿಗಾಗಿ ಮತ್ತು 88%ರಷ್ಟು ಇಂಟರ್ನೆಟ್ ಬಳಸುತ್ತಾರೆಂದು [[ನೀಲ್ಸೆನ್]] ಪತ್ತೆಹಚ್ಚಿದೆ.<ref name="Nielsen demographics">{{cite web|url=http://blog.nielsen.com/nielsenwire/online_mobile/iphone-users-watch-more-video-and-are-older-than-you-think/|title=iPhone Users Watch More Video… and are Older than You Think|date=2009-106-10|publisher=The [[Nielsen Company]]|accessdate=2009-06-27|archive-date=2009-06-14|archive-url=https://web.archive.org/web/20090614082958/http://blog.nielsen.com/nielsenwire/online_mobile/iphone-users-watch-more-video-and-are-older-than-you-think|url-status=dead}}</ref>
=== ಪಠ್ಯಾಂಶ (ಪಠ್ಯ ಇನ್ಪುಟ್) ===
[[ಚಿತ್ರ:iPhone keyboard unblured.jpg|thumb|ಮೂಲತಃ ಐಫೋನ್ನ ಟಚ್ಸ್ಕ್ರೀನ್ನಲ್ಲಿರುವ ವರ್ಚುಯಲ್ ಕೀಬೋರ್ಡ್.]]
ಪಠ್ಯ ನಮೂದಿಸಲು ಐಫೋನ್ ಒಂದು [[ಕಾರ್ಯಶೀಲ ಕೀಲಿಮಣೆ]]ಯನ್ನು ಟಚ್ಸ್ಕ್ರೀನ್ ಮೇಲೆ ಮೂಡಿಸುತ್ತದೆ. ಇದು ಸ್ವಯಂಚಾಲಿತ [[ಪದ ಪರಿಶೀಲನೆ]] ಹಾಗೂ ತಿದ್ದುವ ಸಾಧನ, [[ಮೂಡಬಹುದಾದ ಪದವನ್ನು ಮುಂಬರುವ]] ಕ್ಷಮತೆ ಮತ್ತು ಹೊಸ ಪದಗಳನ್ನು ಸೇರಿಸಿಕೊಳ್ಳುವ ಕ್ರಿಯಾಶೀಲ ನಿಘಂಟನ್ನು ಹೊಂದಿದೆ. ಬಳಕೆದಾರರು ಯಾವ ಪದವನ್ನು ಬೆರಳಚ್ಚು ಮಾಡುತ್ತಿದ್ದಾರೆಂದು ಮನಗಂಡು ಕೀಲಿಮಣೆಯು ಅದನ್ನು ಸಂಪೂರ್ಣಗೊಳಿಸುತ್ತದೆ. ಅಪ್ಪಿತಪ್ಪಿ ಅಥವಾ ಆಕಸ್ಮಿಕ ಪಕ್ಕದ ಕೀಲಿಯನ್ನೊತ್ತಿ ಮೂಡಬಹುದಾದ ಅಕ್ಷರ ದೋಷಗಳನ್ನೂ ಸಹ ಸರಿಪಡಿಸಬಲ್ಲದು.<ref name="hasAKeyboard">{{cite news|authorlink=John Markoff|last=Markoff|first=John|url=https://www.nytimes.com/2007/06/13/technology/13phone.ready.html|title=That iPhone Has a Keyboard, but It’s Not Mechanical|publisher=New York Times|date=June 13, 2007|accessdate=2008-06-06}}</ref>
[[ಲ್ಯಾಂಡ್ಸ್ಕೇಪ್ ರೀತಿ]]ಯಲ್ಲಿದ್ದಾಗ ಕೀಲಿಮಣೆಗಳು ತುಸು ದೊಡ್ಡದಾಗಿದ್ದು ಸ್ವಲ್ಪ ಅಂತರದಲ್ಲಿರುತ್ತವೆ. ಕೆಲವೇ ಅನ್ವಯಿಕೆಗಳು ಇದಕ್ಕೆ ಬೆಂಬಲ ನೀಡುತ್ತವೆ. ಪಠ್ಯದ ವಿಭಾಗವನ್ನು ಒಂದೆರಡು ಕ್ಷಣ ಒತ್ತಿಹಿಡಿದಲ್ಲಿ, [[ಸ್ಪಷ್ಟ ಮಸೂರ]] ಗೋಚರಿಸುವಂತೆ ಮಾಡುತ್ತದೆ. ಇದನ್ನು ಬಳಸಿ [[ಕರ್ಸರ್]]ನ್ನು ಸದ್ಯಕ್ಕಿರುವ ಪಠ್ಯದ ಮಧ್ಯದಲ್ಲಿಟ್ಟು ಬೇಕಾದೆಡೆಗೆ ಚಲಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. [[ಚೀನೀ]] ಭಾಷಾ ಅಕ್ಷರಗಳ ಗುರುತಿಸುವಿಕೆ ಸೇರಿದಂತೆ, ವರ್ಚುಯಲ್(ಕಾರ್ಯಶೀಲಿಕ) ಕೀಲಿಮಣೆಯು 21 ಭಾಷೆಗಳನ್ನು ಒಂದುಗೂಡಿಸುವ ಸಾಮರ್ಥ್ಯ ಹೊಂದಿದೆ.<ref name="Keyboard">{{cite web|url=http://www.apple.com/iphone/features/keyboard.html|title=Apple — iPhone — Features — Keyboard|publisher=[[Apple Inc.]]|accessdate=2008-12-15}}</ref>.
ಪಠ್ಯವನ್ನು [[ಬೇರ್ಪಡಿಸುವುದು, ನಕಲು ಮಾಡುವುದು ಅಥವಾ ಅಂಟಿಸುವ]] ಕಾರ್ಯಗಳಿಗೆ 3.0 ಅಪ್ಡೇಟ್ ಬೆಂಬಲ ತಂದಿತು.<ref name="3.0 official"/>
=== ಇ-ಮೇಲ್ ಮತ್ತು ಪಠ್ಯ ಸಂದೇಶಗಳು ===
ಐಫೋನ್ [[ಇ-ಮೇಲ್]] ವ್ಯವಸ್ಥೆ ಸಹ ಹೊಂದಿದೆ. ಇದು [[HTML ಇ-ಮೇಲ್]]ನ್ನು ಬೆಂಬಲಿಸುತ್ತದೆ. ಇದರಿಂದಾಗಿ ಬಳಕೆದಾರರು ಇ-ಮೇಲ್ ಸಂದೇಶದಲ್ಲಿ ಫೋಟೊಗಳನ್ನು ಲಗತ್ತಿಸಬಹುದು. ಐಫೋನ್ ಮೂಲಕ ಪಠ್ಯ ಸಂದೇಶಕ್ಕೆ ಲಗತ್ತಿಸಿದ [[PDF]], [[ವರ್ಡ್]], [[ಎಕ್ಸೆಲ್]], ಮತ್ತು [[ಪವರ್ಪಾಯಿಂಟ್]] ಕಡತಗಳನ್ನು ಸಹ ವೀಕ್ಷಿಸಬಹುದು.<ref name="3G_tech_specs" />
ಆಪೆಲ್ನ [[ಮೊಬೈಲ್ಮಿ]] ಪ್ಲ್ಯಾಟ್ಫಾರ್ಮ್ [[ಪುಷ್ ಇ-ಮೇಲ್]] ಸೌಲಭ್ಯ ನೀಡುತ್ತದೆ. ಜನಪ್ರಿಯ [[ಬ್ಲ್ಯಾಕ್ಬೆರಿ]] ಇ-ಮೇಲ್ ಸಾಧನದಂತೆಯೇ ಇದೂ ಸಹ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ವಾರ್ಷಿಕ ಚಂದಾ ಹಣ ನೀಡಿದಲ್ಲಿ ಈ ಸೌಲಭ್ಯ ದಕ್ಕುತ್ತದೆ. [[ಯಾಹೂ!]] ಐಫೋನ್ಗಾಗಿ ಉಚಿತ ಪುಷ್-ಮೇಲ್ ಸೇವೆ ಒದಗಿಸುತ್ತದೆ. [[ಮೈಕ್ರೊಸಾಫ್ಟ್ ಎಕ್ಸ್ಚೇಂಜ್]]<ref>{{cite web|url=http://www.apple.com/iphone/enterprise/|title=Apple - iPhone - Enterprise|publisher=Apple|accessdate=2009-05-16}}</ref> ಮತ್ತು [[ಕೀರಿಯೊ ಮೇಲ್ಸರ್ವರ್]] ಸೇರಿದಂತೆ [[IMAP]] ([[ಪುಷ್-IMAP]] ಅಲ್ಲ) ಹಾಗೂ [[POP3]] ಗುಣಮಟ್ಟಗಳನ್ನು ಸಹ ಬೆಂಬಲಿಸಲಾಗುತ್ತದೆ.<ref>{{cite web|first=Anthony|last=Frausto-Robledo|url=http://www.architosh.com/news/2007-07/2007a0724_an-kerioiphone.html|title=Analysis: Kerio MailServer delivers email to Apple iPhone|date=July 24, 2007|accessdate=2008-06-06}}</ref>
ಐಫೋನ್ ಪರ್ಮ್ವೇರ್ನ ಮೊದಲ ಆವೃತ್ತಿಗಳಲ್ಲಿ, ಎಕ್ಸ್ಚೇಂಜ್ ಸರ್ವರ್ನಲ್ಲಿ IMAP ತೆರೆಯುವುದರ ಮೂಲಕ ಈಡೇರಿಸಬಹುದು. ಆಪೆಲ್ [[ಮೈಕ್ರೊಸಾಫ್ಟ್ ಆಕ್ಟಿವ್ಸಿಂಕ್]]ಗೂ ಪರವಾನಿಗೆ ನೀಡಿದೆ. ಇದರ ಫಲವಾಗಿ, ಐಫೋನ್ 2.0 ಫರ್ಮ್ವೇರ್ ಬಿಡುಗಡೆಯೊಂದಿಗೆ ಈಗ ಪುಷ್ ಇ-ಮೇಲ್ ಸೇರಿ ಪ್ಲ್ಯಾಟ್ಫಾರ್ಮ್ನ್ನು ಬೆಂಬಲಿಸುತ್ತದೆ.<ref>{{cite news|url=http://blogs.barrons.com/techtraderdaily/2008/03/06/apple-iphone-sdk-event/|title=iPhone to support Exchange|date=March 6, 2008|publisher=[[Barron's Magazine|Barron's]]|work=TechTraderDaily}}</ref><ref name="releasedate" /> ಆಪೆಲ್ನ ತನ್ನದೇ ಆದ [[ಮೇಲ್]] ವ್ಯವಸ್ಥೆ, [[ಮೈಕ್ರೊಸಾಫ್ಟ್ ಔಟ್ಲುಕ್]], ಹಾಗೂ [[ಮೈಕ್ರೊಸಾಫ್ಟ್ ಎಂಟೂರೇಜ್]] ಇಂದ ಸಂಯೋಜನೆಗಳನ್ನು ಒಯ್ದು, ಐಫೋನ್ನಲ್ಲಿನ ಸಂಯೋಜನೆಗಳನ್ನು ಏಲಕಾಲಕ್ಕೆ ಹೊಂದಿಸುತ್ತದೆ. ಅಥವಾ ಪರ್ಯಾಯವಾಗಿ ಉಪಕರಣದಲ್ಲೇ ಕೈಯಿಂದಲೇ ಸಂಯೋಜಿಸಬಹುದಾಗಿದೆ.
ಸರಿಯಾದ ಸಂಯೋಜನೆಗಳೊಂದಿಗೆ, ಇ-ಮೇಲ್ ವ್ಯವಸ್ಥೆಯ ಯಾವುದೇ IMAP ಅಥವಾ POP3 ಖಾತೆಯನ್ನು ವೀಕ್ಷಿಸಬಹುದು.<ref>{{cite web|url=http://www.apple.com/iphone/features/mail.html|title=iPhone—Features—Mail|publisher=[[Apple Inc.]]|accessdate=2009-05-16}}</ref>
ಪಠ್ಯ ಸಂದೇಶಗಳನ್ನು ಕಾಲಾನುಕ್ರಮವಾಗಿ ಮೇಲ್ಬಾಕ್ಸ್ ವಿನ್ಯಾಸದಲ್ಲಿ ಪ್ರಸ್ತುತಗೊಳಿಸಲಾಗುವುದು. ಇದು ಚಿರಪರಿಚಿತ [[ಮೇಲ್]]ನಂತೆ, ಸ್ವೀಕೃತಿದಾರರಿಂದ ಉತ್ತರ ಸಹಿತ ಇ-ಮೇಲ್ಗಳನ್ನು ಒಟ್ಟಿಗೆ ಸೇರಿಸುತ್ತದೆ. ಪಠ್ಯ ಸಂದೇಶಗಳನ್ನು ಪ್ರತಿ ಸ್ವೀಕೃತಿದಾರರ ಹೆಸರಿನಡಿ 'ವಾಕ್ಗುಳ್ಳೆ'ಗಳಲ್ಲಿ ಪ್ರದರ್ಶಿಸಲಾಗುವುದು ([[ಐಚ್ಯಾಟ್]]ನಂತೆ). ಸದ್ಯಕ್ಕೆ ಐಫೋನ್ನಲ್ಲಿ ಇ-ಮೇಲ್ ಸಂದೇಶ ಫಾರ್ವರ್ಡ್, ಕರಡುಗಳು, ಆಂತರಿಕ ಕ್ಯಾಮೆರಾದಿಂದ-ಇ-ಮೇಲ್ ಚಿತ್ರ ರವಾನೆಗಾಗಿ ಅಂತರ್ನಿರ್ಮಿತ ವ್ಯವಸ್ಥೆ ಇದೆ. 1.1.3 ತಂತ್ರಾಂಶ ಅಪ್ಡೇಟ್ನಲ್ಲಿ ಬಹು-ಸ್ವೀಕೃತಿದಾರರಿಗಾಗಿ [[SMS]] ಸೌಲಭ್ಯವನ್ನು ಹೊಸದಾಗಿ ಸೇರಿಸಲಾಯಿತು.<ref name="1.1.3">{{cite web|url=http://www.macworld.com/article/131616/2008/01/iphone_update.html|title=First Look: iPhone 1.1.3|last=Moren|first=Dan|date=2008-01-16|publisher=Macworld|accessdate=2009-06-10}}</ref> 3.0 ಅಪ್ಡೇಟ್ನಲ್ಲಿ [[MMS]] ಸಾಮರ್ಥ್ಯವನ್ನೂ ಸೇರಿಸಲಾಗಿತ್ತು. ಆದರೆ, ಮೂಲತಃ ಐಫೋನ್ನಲ್ಲಿ<ref name="3.0 official">{{cite web|url=http://www.apple.com/iphone/preview-iphone-os/|title=The most advanced mobile OS. Now even more advanced.|date=2009-03-17|work=Scott Forstall's presentation ([[QuickTime]] video)|publisher=Apple|accessdate=2009-04-01}}</ref><ref name="3.0 Macworld">{{cite web|url=http://www.macworld.com/article/139438/2009/03/iphone30user.html|title=Cut and paste, MMS highlight iPhone 3.0 improvements|last=Cohen|first=Peter|date=2009-03-17|publisher=Macworld|accessdate=2009-04-01}}</ref> ಹಾಗೂ U.S.ನಲ್ಲಿ 2009ರ ಸೆಪ್ಟೆಂಬರ್ 25ರಿಂದ ಮಾತ್ರ ಈ ವ್ಯವಸ್ಥೆ ನಿಗದಿಗೊಳಿಸಲಾಯಿತು.<ref name="AT&T_MMS_tethering">{{cite web|url=http://www.macworld.com/article/141070/att_tethering_mms.html|title=AT&T tight-lipped on MMS, tethering|last=Mies|first=Ginny|date=2009-06-09|publisher=Macworld|accessdate=2009-06-10|archive-date=2009-06-12|archive-url=https://web.archive.org/web/20090612202643/http://www.macworld.com/article/141070/att_tethering_mms.html|url-status=dead}}</ref><ref name="ComputerATT">{{cite news|url=http://www.computerworld.com/s/article/9138475/AT_T_slates_iPhone_MMS_launch_for_Friday?taxonomyId=78|title=AT&T slates iPhone MMS launch for Friday|date=2009-09-24|publisher=ComputerWorld|accessdate=2009-09-25|archive-date=2014-08-11|archive-url=https://web.archive.org/web/20140811020225/http://www.computerworld.com/s/article/9138475/AT_T_slates_iPhone_MMS_launch_for_Friday?taxonomyId=78|url-status=dead}}</ref>
=== ತೃತೀಯ ಪಕ್ಷ ಅನ್ವಯಿಕೆಗಳು(ಬಾಹ್ಯ ಅಳವಡಿಕೆಗಳು) ===
:''ಇದನ್ನೂ ನೋಡಿ: [[ಐಫೋನ್ SDK]] ಮತ್ತು [[ಅಪ್. ಸ್ಟೋರ್]]''
2007ರ ಜೂನ್ 11ರಂದು [[WWDC 2007]]ರಲ್ಲಿ ಕಾರ್ಯಕ್ರಮವೊಂದು ನಡೆಯಿತು. ಇದರಲ್ಲಿ ಆಪೆಲ್ ಪ್ರಕಟಿಸಿದ್ದು ಹೀಗೆ: "ಐಫೋನ್ [[ತೃತೀಯ ಪಕ್ಷ]]ದ ಅನ್ವಯಿಕೆಗಳನ್ನು ಬೆಂಬಲಿಸುತ್ತದೆ. ಇವು [[ಅಜ್ಯಾಕ್ಸ್]]ನಲ್ಲಿ ಬರೆದು ನಿರ್ಮಿಸಿದ 'ಜಾಲ ಅನ್ವಯಿಕೆ'ಗಳಾಗಿದ್ದು, ಐಫೋನ್ ಇಂಟರ್ಫೇಸ್ನ್ನು ಹೋಲುತ್ತದೆ."<ref name="Web apps">{{cite web|url=http://www.apple.com/pr/library/2007/06/11iphone.html|title=iPhone to Support Third-Party Web 2.0 Applications|date=June 11, 2007|publisher=[[Apple Inc.]]|accessdate=2008-12-15}}</ref> 2007ರ ಅಕ್ಟೋಬರ್ 17ರಂದು ಸ್ಟೀವ್ ಜಾಬ್ಸ್ ಆಪೆಲ್ನ 'ಹಾಟ್ ನ್ಯೂಸ್' [[ವೆಬ್ಲಾಗ್]]ನಲ್ಲಿ ಒಂದು ಬಹಿರಂಗ ಪತ್ರ ಪ್ರಕಟಿಸಿದರು. '2008ರ ಫೆಬ್ರವರಿ ತಿಂಗಳಲ್ಲಿ [[ಸಾಫ್ಟ್ವೇರ್ ಡೆವೆಲಪ್ಮೆಂಟ್ ಕಿಟ್]] (SDK) ತೃತೀಯ ಪಕ್ಷದ ಸಾಫ್ಟ್ವೇರ್ ವಿನ್ಯಾಸಕಾರರಿಗೆ ಲಭ್ಯವಾಗುವುದು' ಎಂದು ಅವರು ಅದರಲ್ಲಿ ತಿಳಿಸಿದರು. 2008ರ ಮಾರ್ಚ್ 6ರಂದು, ಆಪೆಲ್ ಟೌನ್ ಹಾಲ್ನಲ್ಲಿ ಐಫೋನ್ SDKಯನ್ನು ಅಧಿಕೃತವಾಗಿ ಘೋಷಿಸಲಾಯಿತು.<ref>{{cite web|url=http://www.engadget.com/2008/03/06/live-from-apples-iphone-press-conference/|title=Live from Apple's iPhone SDK press conference|publisher=[[Engadget]]|date=March 6, 2008}}</ref> ಐಫೋನ್ ಮತ್ತು ಐಪಾಡ್ ಟಚ್ಗಾಗಿ ಸ್ಥಳೀಯ ವಿನಿಯೋಗಳನ್ನು ವಿನ್ಯಾಸ-ಅಭಿವೃದ್ಧಿ ಮಾಡಲು ತಂತ್ರಾಂಶ ರಚನಾಕಾರರಿಗೆ ಅವಕಾಶ ನೀಡುತ್ತದೆ. ಜೊತೆಗೆ 'ಐಫೋನ್ ಸಿಮ್ಯುಲೇಟರ್'ನಲ್ಲಿ ಈ ಸ್ಥಳೀಯ ಅನ್ವಯಿಕೆಗಳನ್ನು ಪರೀಕ್ಷಿಸಲು ಸಹ ಅವಕಾಶ ನೀಡುತ್ತದೆ. ಆದರೂ, [[ಆಪೆಲ್ ಡೆವೆಲಪರ್ ಕನೆಕ್ಷನ್]]ಗೆ ಸದಸ್ಯತ್ವ ಶುಲ್ಕ ಪಾವತಿಸಿದ ನಂತರವೇ ಉಪಕರಣಗಳಲ್ಲಿ ಈ ಅನ್ವಯಿಕೆಗಳನ್ನು ಪ್ರತಿಷ್ಟಾಪಿಸಲು ಸಾಧ್ಯ. [[ಆಪ್ ಸ್ಟೋರ್]] ಮೂಲಕ ವಿತರಿಸಲಾಗುವ ತಮ್ಮ ಅನ್ವಯಿಕೆಗಳಿಗೆ ಬೆಲೆ ನಿರ್ಧರಿಸಲು ತಂತ್ರಾಂಶಗಾರರಿಗೆ ಸ್ವಾತಂತ್ರ್ಯವಿದೆ. ಇದಕ್ಕಾಗಿ ಅವರಿಗೆ 70%ರಷ್ಟು ಪಾಲು ಲಭಿಸುತ್ತದೆ.<ref>{{cite news |first=Michelle |last=Quinn |title=Apple will open App Store in bid to boost iPhone sales |url=http://www.latimes.com/business/la-fi-iphone10-2008jul10,0,3798678.story |work=[[Los Angeles Times]] |date=July 10, 2008 |accessdate=2008-07-10}}</ref>
ಅನ್ವಯಿಕೆಯನ್ನು ಉಚಿತವಾಗಿ ಬಿಡುಗಡೆಗೊಳಿಸಲು ತೃತೀಯ ಪಕ್ಷದ ತಂತ್ರಾಂಶ ವಿನ್ಯಾಸಕರು ಇಚ್ಛಿಸಬಹುದು. ಅವರು ಬಿಡುಗಡೆ ಮತ್ತು ವಿತರಣೆಗಾಗಿ ಯಾವುದೇ ಶುಲ್ಕ ಪಾವತಿಸುವುದಿಲ್ಲ. ಕೇವಲ ಸದಸ್ಯತ್ವ ಶುಲ್ಕ ಮಾತ್ರ ಪಾವತಿಸುವರಷ್ಟೆ. SDKಯನ್ನು ಕೂಡಲೇ ಲಭ್ಯಗೊಳಿಸಲಾಯಯಿತು. ಆದರೆ ಫರ್ಮ್ವೇರ್ ಅಪ್ಡೇಟ್ ಲಭಿಸುವವರೆಗೂ ಅನ್ವಯಿಕೆಗಳ ಬಿಡುಗಡೆಯನ್ನು ಸ್ಥಗಿತಗೊಳಿಸಬೇಕಾಯಿತು. ಫರ್ಮ್ವೇರ್ ಅಪ್ಡೇಟ್ನ್ನು 2008ರ ಜುಲೈ 11ರಂದು ಬಿಡುಗಡೆಗೊಳಿಸಲಾಯಿತು.<ref name="releasedate">{{cite web|url=http://www.apple.com/pr/library/2008/06/09iphone.html|title=Apple Introduces the New iPhone 3G|quote=iPhone 2.0 software will be available on July 11 as a free software update via iTunes 7.7 or later for all iPhone customers|work=[[Apple Inc.]]|date=June 9, 2008}}</ref>
ಐಫೋನ್ ಬಳಕೆದಾರರಿಗೆ ಅಪ್ಡೇಟ್ ಉಚಿತವಾಗಿತ್ತು. ಆದರೆ ಐಫೋನ್ OSನ 1.x ಆವೃತ್ತಿ ಹೊಂದಿರುವ ಐಪಾಡ್ ಟಚ್ ಉಪಕರಣದ ಬಳಕೆದಾರರಿಗೆ ಉಚಿತವಾಗಿರಲಿಲ್ಲ. ಏಕೆಂದರೆ, $10 ಶುಲ್ಕ ಪಾವತಿಸಿದ ನಂತರವೇ ಐಫೋನ್ OSನ ಪ್ರಚಲಿತ ಆವೃತ್ತಿಗೆ ಅಪ್ಡೇಟ್ ಮಾಡಲು ಅವಕಾಶವಿರುತ್ತದೆ.<ref>{{cite web|url=http://www.macworld.com/article/134502/2008/07/ipodtouch.html|title=Is the iPod touch 2.0 update worth $10?|last=Breen|first=Christopher|date=2008-07-15|publisher=[[Macworld]]|accessdate=2009-05-16}}</ref>
ತಂತ್ರಾಂಶ ನಿರ್ಮಾಕರೊಬ್ಬರು ಅಳವಡಿಕೆಯನ್ನು ಆಪ್ ಸ್ಟೋರ್ಗೆ ಕಳುಹಿಸಿದ ನಂತರ ಅದರ ವಿತರಣೆ ಮೇಲೆ ಆಪೆಲ್ನ ಸಂಪೂರ್ಣ, ನಿಶ್ಚಿತ ನಿಯಂತ್ರಣವಿರುತ್ತದೆ. ಉದಾಹರಣೆಗೆ, ಆನುಚಿತ ಅಳವಡಿಕೆಯ ವಿತರಣೆಯನ್ನು ಆಪೆಲ್ ಸ್ಥಗಿತಗೊಳಿಸಬಹುದು. [[US$1000 ಮೌಲ್ಯದ ಮಾದರಿ]]ಯೊಂದು ಅದರ ಬಳಕೆದಾರರ ಸಿರಿವಂತಿಕೆ ಪ್ರದರ್ಶಿಸಲೆಂದೇ ನಿರ್ಮಾಣವಾಗಿತ್ತು. ಇದರ ವಿತರಣೆಯನ್ನು ಕೊನೆಗೆ ಆಪೆಲ್ ಸ್ಥಗಿತಗೊಳಿಸಿತು.<ref name="wsj_article">{{cite web|url=http://wsj.com/article/SB121842341491928977.html| title=IPhone Software Sales Take Off: Apple's Jobs |accessdate=2008-09-03 |archiveurl=http://justamp.blogspot.com/2008/08/iphone-software-sales-take-off-apples.html|archivedate=2008-08-11}}</ref> ಐಫೋನ್ ಕ್ರಿಯಾಸೌಲಭ್ಯ ಸಕ್ರಿಯಗೊಳಿಸಬಲ್ಲ ತೃತೀಯ ಪಕ್ಷದ ಅನ್ವಯಿಕೆಗಳನ್ನು ನಿಷೇಧಿಸಿದ್ದಕ್ಕೆ ಆಪೆಲ್ ತೀವ್ರ ಟೀಕೆ ಎದುರಿಸುತ್ತಿದೆ. ಏಕೆಂದರೆ ಐಫೋನ್ ಇಂತಹ ಕ್ರಿಯಾ-ಸೌಕರ್ಯ ಹೊಂದುವುದು ಆಪೆಲ್ ಸಂಸ್ಥೆಗೆ ಇಷ್ಟವಿರಲಿಲ್ಲ. 2008ರಲ್ಲಿ, ಆಪೆಲ್ [[ಪಾಡ್ಕ್ಯಾಸ್ಟರ್]]ನ್ನು ತಿರಸ್ಕರಿಸಿತು. ಏಕೆಂದರೆ, ಪಾಡ್ಕ್ಯಾಸ್ಟ್ಗಳನ್ನು ನೇರವಾಗಿ ಐಫೋನ್ಗೆ ಡೌನ್ಲೋಡ್ ಮಾಡಿಕೊಳ್ಳುವುದು, ಐಟ್ಯೂನ್ಸ್ನ ಕ್ರಿಯಾ-ಸೌಲಭ್ಯವನ್ನು ನಕಲು ಮಾಡಿದಂತೆ ಎಂಬುದು ಕಾರಣವಾಗಿತ್ತು.<ref>{{cite web|url=http://www.macworld.com/article/135527/2008/09/appstore.html|date=2008-09-12|title=Podcasting app rejected from App Store|publisher=Macworld|accessdate=2009-01-23}}</ref>
ಈ ರೀತಿಯ ಕ್ಷಮತೆ ಹೊಂದಿರುವ ಸಾಫ್ಟ್ವೇರ್ ಅಪ್ಟೇಟ್ನ್ನು ಆಪೆಲ್ ಬಿಡುಗಡೆಗೊಳಿಸಿತು.<ref name="2.2">{{cite web|url=http://www.macworld.com/article/137023/2008/11/iphone_22.html|title=Apple releases iPhone 2.2 update|last=Snell|first=Jason|date=2008-11-21|publisher=Macworld|accessdate=2009-06-10|archive-date=2009-06-22|archive-url=https://web.archive.org/web/20090622084518/http://www.macworld.com/article/137023/2008/11/iphone_22.html|url-status=dead}}</ref>
ನೆಟ್ಷೇರ್ ಇನ್ನೊಂದು ಬೇಡದ ಅಳವಡಿಕೆಯಾಗಿತ್ತು. ಇದರಂತೆ, ಕಂಪ್ಯೂಟರ್ಗೆ ಮಾಹಿತಿ ಸೇರಿಸಲು, ಸೆಲ್ಯುಲರ್ ಜಾಲ ಬಳಸಿ, ಗ್ರಾಹಕರು ತಮ್ಮ ಐಫೋನ್ಗಳನ್ನು ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ಗಳೊಂದಿಗೆ ಸಂಪರ್ಕವೇರ್ಪಡಿಸಬಹುದು.<ref name="Banned apps">{{cite web|url=http://blogs.pcworld.com/staffblog/archives/007748.html|title=Apple App Store Ban: Android, Here's Your Chance|last=Raphael|first=JR|date=September 15, 2008|publisher=[[PC World (magazine)|PC World]]|accessdate=2008-12-13|archive-date=2008-12-07|archive-url=https://web.archive.org/web/20081207035309/http://blogs.pcworld.com/staffblog/archives/007748.html|url-status=dead}}</ref>
SDK ಬಿಡುಗಡೆಯಾಗುವ ಮುಂಚೆ, 'ಸಫಾರಿ' ಮೂಲಕ ನಡೆಯುವ 'ವೆಬ್ ಆಪ್ಸ್'ನ್ನು ವಿನ್ಯಾಸ ಮಾಡಲು ತೃತೀಯ ಪಕ್ಷ(ಬಾಹ್ಯ)ದವರಿಗೆ ಅನುಮತಿ ನೀಡಲಾಗಿತ್ತು.<ref>{{cite web|url=http://www.apple.com/webapps/whatarewebapps.html|title=Apple - Web apps|publisher=Apple|accessdate=2009-05-16}}</ref> ರುಜುಮಾಡದ ಸ್ಥಳೀಯ ಅನ್ವಯಿಕೆಗಳೂ ಸಹ ಲಭ್ಯವಿವೆ.<ref>{{cite news|last=Healey|first=Jon|title=Hacking the iPhone|publisher=[[Los Angeles Times]]|date=August 6, 2007|url=http://www.latimes.com/news/opinion/la-oew-healey6aug06,0,3456267.story|accessdate=2008-06-06}}</ref> ಆಪ್ ಸ್ಟೋರ್ ಹೊರತುಪಡಿಸಿ ಇನ್ನೆಲ್ಲೋ ಖರೀದಿಸಿದ ಸ್ಥಳೀಯ ಅನ್ವಯಿಕೆಗಳನ್ನು ಸ್ಥಾಪಿಸುವ ಸಾಮರ್ಥ್ಯವನ್ನು ಆಪೆಲ್ ಬೆಂಬಲಿಸುವುದಿಲ್ಲ. ಇಂತಹ ಮೂಲ ಅಳವಡಿಕೆಗಳನ್ನು ಯಾವುದೇ ತಂತ್ರಾಂಶ ಅಪ್ಡೇಟ್ ಮೂಲಕ ಛಿದ್ರಗೊಳಿಸಬಹುದು. ಆದರೆ, SIM ಅನ್ಲಾಕಿಂಗ್ ಮಾಡಬಲ್ಲ ತಂತ್ರಾಂಶವನ್ನು ಹೊರತುಪಡಿಸಿ, ಇನ್ಯಾವುದೇ ಸ್ಥಳೀಯ ತಂತ್ರಾಂಶ ಹೊಡೆದು ಹಾಕುವ ತಂತ್ರಾಂಶ ಅಪ್ಡೇಟ್ನ್ನು ವಿನ್ಯಾಸ ಮಾಡುವುದಿಲ್ಲ ಎಂದು ಆಪೆಲ್ ಸ್ಪಷ್ಟಪಡಿಸಿದೆ.<ref>{{cite web|url=http://www.gearlog.com/2007/09/apples_joswiak_we_dont_hate_ip.php|title=Apple's Joswiak: We Don't Hate iPhone Coders|date=September 2007|publisher=gearlog.com|access-date=2010-01-28|archive-date=2007-09-14|archive-url=https://web.archive.org/web/20070914203243/http://www.gearlog.com/2007/09/apples_joswiak_we_dont_hate_ip.php|url-status=dead}}</ref>
=== ಸುಲಭ ಸಾಧ್ಯತೆ ಅಥವಾ ಕೈಗಟುಕುವಂತಹದು ===
ದೃಷ್ಟಿ ತೊಂದರೆಯಿರುವವರಿಗೆ ಐಫೋನ್ ಪಠ್ಯದೃಶ್ಯ ಹಿಗ್ಗಿಸಬಹುದು.<ref name="access vision">{{cite web|url=http://www.apple.com/accessibility/iphone/vision.html|title=Apple — Accessibility — iPhone — Vision|publisher=Apple|accessdate=2008-12-15}}</ref> ಜೊತೆಗೆ, ಶ್ರವ್ಯ ಮಾಂದ್ಯತೆಯುಳ್ಳವರಿಗೆ [[ಶ್ರವ್ಯದ ಕಾರಣಗಳಿಗಾಗಿ]] ಮತ್ತು ಬಾಹ್ಯ [[TTY]] ಉಪಕರಣಗಳನ್ನು ಸಹ ಸೇರಿಸಿಕೊಳ್ಳಬಹುದು.<ref name="access hearing">{{cite web|url=http://www.apple.com/accessibility/iphone/hearing.html|title=Apple — Accessibility — iPhone — Hearing|publisher=Apple|accessdate=2008-12-15}}</ref> ಐಫೋನ್ 3GS ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಬಿಳಿಯ ಅಕ್ಷರಗಳನ್ನು ವೀಕ್ಷಿಸುವ ವ್ಯವಸ್ಥೆ, [[ವಾಯ್ಸ್ಒವರ್]] ([[ಪರದೆಯ ವಿವರ]]), ದೃಷ್ಟಿದೋಸ ತೊಂದರೆಯುಳ್ಳವರಿಗೆ ಪರದೆ ಪ್ರದರ್ಶನವನ್ನು ಹಿಗ್ಗಿಸುವುದು, ಹಾಗೂ, [[ಸೀಮಿತ ಶ್ರವಣ]]ವುಳ್ಳವರಿಗಾಗಿ ಒಂದೇ ಕಿವಿಯ ಮೊನೊ ಆಡಿಯೊ ವ್ಯವಸ್ಥೆಯನ್ನು ಹೊಂದಿದೆ.<ref>{{cite web|url=http://www.apple.com/iphone/iphone-3g-s/accessibility.html|title=Apple - iPhone - Accessibility|date=2009-06-08|publisher=Apple|accessdate=2009-06-08}}</ref> US ನಿಯಮ '[[ಸೆಕ್ಷನ್ 508]]'ನೊಂದಿಗೆ ಹೊಂದಿಕೊಳ್ಳುವಂತೆ ಸೂಚನೆ ನೀಡುವ ಸ್ವಯಂಪ್ರೇರಿತ ಉತ್ಪನ್ನ ಪ್ರವೇಶದ ಟೆಂಪ್ಲೇಟ್ಗಳನ್ನು ಆಪೆಲ್ ನಿಯತ್ತಾಗಿ ಪ್ರಕಟಿಸುತ್ತದೆ.<ref>{{cite web|url=http://www.apple.com/accessibility/resources/|title=Apple - Voluntary Product Accessibility Templates|date=2009-07-18|publisher=Apple|accessdate=2009-07-18}}</ref>
== ಬೌದ್ಧಿಕ ಒಡೆತನ ==
ಐಫೋನ್ ರಚಿಸುವ ತಂತ್ರಜ್ಞಾನಕ್ಕೆ ಸಂಬಂಧಿಸಿ ಸುಮಾರು 200ಕ್ಕೂ ಹೆಚ್ಚು [[ಪೆಟೆಂಟ್ (ಹಕ್ಕು ಸ್ವಾಮ್ಯ)]]ಗಳನ್ನು ಆಪೆಲ್ ದಾಖಲಿಸಿದೆ.<ref>{{cite news|last=Ishimaru|first=Heather|url=http://abclocal.go.com/kgo/story?section=news/business&id=4920783|title=Apple Options Not An Issue At Macworld|publisher=[[KGO-TV|abc7news.com]]|date=January 9, 2007|accessdate=2007-01-11|archive-date=2009-02-06|archive-url=https://web.archive.org/web/20090206203752/http://abclocal.go.com/kgo/story?section=news%2Fbusiness&id=4920783|url-status=dead}}</ref><ref>{{cite web|url=http://www.apple.com/iphone/features/index.html#technology|publisher=[[Apple Inc.]]|title=iPhone — Features — High Technology|accessdate=2008-06-06}}</ref>
[[LG ಪ್ರಾಡಾ]]ದಿಂದ ಐಫೋನ್ನ ವಿನ್ಯಾಸವನ್ನು ನಕಲು ಮಾಡಲಾಗಿದೆಯೆಂದು [[LG ಇಲೆಕ್ಟ್ರಾನಿಕ್ಸ್]] ಹೇಳಿಕೊಂಡಿದೆ. 'ಪ್ರಸ್ತುತ ವಿನ್ಯಾಸವನ್ನು ತಮ್ಮದಾಗಿಸಿಕೊಂಡು, iF ಡಿಸೈನ್ ಅವಾರ್ಡ್ ಸ್ಪರ್ಧೆಯಲ್ಲಿ 2006ರ ಸೆಪ್ಟೆಂಬರ್ನಲ್ಲಿ ಪ್ರಶಸ್ತಿ ಗೆದ್ದಾಗ, ಪ್ರಾಡಾ ಫೋನನ್ನು ಆಪೆಲ್ ನಕಲು ಮಾಡಿದೆ ಎಂದು ನಾವು ಪರಿಗಣಿಸಿದ್ದೇವೆ' ಎಂದು LG ಮೊಬೈಲ್ ದೂರವಾಣಿಯ R&D ಕೇಂದ್ರದ ಮುಖ್ಯಸ್ಥ ವೂ-ಯಂಗ್ ಕ್ವಾಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<ref name="am">{{cite news|url=http://www.applematters.com/article/the-iphone-lawsuits/|title=The iPhone Lawsuits|publisher=Apple Matters|first=Aaron|last=Wright|date=February 20, 2007|accessdate=2007-06-25}}</ref>
1993ರ ಸೆಪ್ಟೆಂಬರ್ 3ರಂದು, [[ಇನ್ಫೊಗಿಯರ್]] ಸಂಸ್ಥೆಯು "I PHONE" ಕುರಿತು U.S. [[ಟ್ರೇಡ್ಮಾರ್ಕ್]] ಗೆ ಅರ್ಜಿ ಸಲ್ಲಿಸಿತು. 1996ರ ಮಾರ್ಚ್ 20ರಂದು 'ಐಫೋನ್' ಟ್ರೇಡ್ಮಾರ್ಕ್ಗಾಗಿ ಅರ್ಜಿ ಸಲ್ಲಿಸಿತು.<ref name="CiscoSuesAppleOver">{{cite news|last=Berlind|first=David|url=http://blogs.zdnet.com/Berlind/?p=284|title=On the eve of a new phone, Apple appears to want in on Cisco’s “iPhone” trademark|date=January 7, 2007|accessdate=2009-01-10|archive-date=2007-02-10|archive-url=https://web.archive.org/web/20070210041453/http://blogs.zdnet.com/Berlind/?p=284|url-status=dead}}</ref> 'I Phone'ನ್ನು 1998ರ ಮಾರ್ಚ್ ತಿಂಗಳಲ್ಲಿ ನೋಂದಾಯಿಸಲಾಯಿತು.<ref name="IPhoneReg96" /> 'ಐಫೋನ್'ನ್ನು 1999ರಲ್ಲಿ ದಾಖಲಿಸಲಾಯಿತು.<ref name="CiscoSuesAppleOver" />
ಅಂದಿನಿಂದಲೂ I PHONE ಟ್ರೇಡ್ಮಾರ್ಕನ್ನು ತ್ಯಜಿಸಲಾಗಿದೆ.<ref name="IPhoneReg96" />
'ಸಮಗ್ರ ದೂರವಾಣಿ, ಮಾಹಿತಿ ಸಂವಹನಗಳು ಮತ್ತು ವೈಯಕ್ತಿಕ ಕಂಪ್ಯೂಟರ್ ಕಾರ್ಯವನ್ನು ಒದಗಿಸುವ ಕಂಪ್ಯೂಟರ್ ಯಂತ್ರಾಂಶ ಮತ್ತು ತಂತ್ರಾಂಶ ಹೊಂದಿರುವ ಸಂವಹನಾ ಸಾಧನಗಳು' - ಇವು ಇನ್ಫೊಗಿಯರ್ ಸಂಸ್ಥೆಯ ಟ್ರೇಡ್ಮಾರ್ಕ್ಗಳ ವ್ಯಾಪ್ತಿಯಲ್ಲಿರುತ್ತವೆ (1993 ದಾಖಲಾತಿ).<ref name="IPhoneReg96" /> 'ಸಮಗ್ರ ದೂರವಾಣಿ, ಮಾಹಿತಿ ಸಂವಹನಗಳ ಜೊತೆಗೆ ಕಂಪ್ಯೂಟರ್-ಚಾಲಿತ ಜಾಗತಿಕ ಮಾಹಿತಿ ಜಾಲಕ್ಕಾಗಿ ಕಂಪ್ಯೂಟರ್ ಯಂತ್ರಾಂಶ ಮತ್ತು ತಂತ್ರಾಂಶ' (1996 ದಾಖಲಾತಿ)<ref>{{cite web|url=http://tarr.uspto.gov/servlet/tarr?regser=serial&entry=75076573|title=Trademark Applications and Registrations Retrieval, serial number 75076573 (IPHONE)|publisher=[[United States Patent and Trademark Office]]|date=July 31, 2006|accessdate=2008-06-06}}</ref> 1998ರಲ್ಲಿ ಐಫೋನ್ ಎಂಬ ಹೆಸರಿನಡಿ ಸಮಗ್ರ[[ವೆಬ್ ಬ್ರೌಸರ್]] ಹೊಂದಿರುವ ದೂರವಾಣಿಯನ್ನು ಇನ್ಫೊಗಿಯರ್ ಬಿಡುಗಡೆಗೊಳಿಸಿತು.<ref name="InfoGearUpgradesPhone">{{cite news|last=Needle|first=David|url=http://www.cnn.com/TECH/computing/9906/10/iphone.idg/index.html|title=InfoGear upgrades phone of the future|publisher=CNN|date=June 10, 1999|accessdate=2007-01-27}}</ref>
2000ರಲ್ಲಿ, ಇನ್ಫೊಗಿಯರ್ iphones.com ಜಾಲತಾಣ ಹೆಸರಿನ ಮಾಲಿಕರ ವಿರುದ್ಧ ಅತಿಕ್ರಮದ ದಾವೆ ಹೂಡಿ ಗೆದ್ದಿತು.<ref name="InfogearTechnologyV">{{cite web|url=http://www.arb-forum.com/domains/decisions/94369.htm|title=InfoGear Technology Corporation v iPhones|publisher=National Arbitration Forum|date=April 13, 2000|accessdate=2008-06-06}}</ref> ಜೂನ್ 2000ರಲ್ಲಿ, [[ಸಿಸ್ಕೊ ಸಿಸ್ಟಮ್ಸ್]] ಐಫೋನ್ ಟ್ರೇಡ್ಮಾರ್ಕ್ ಸಹಿತ ಇನ್ಫೊಗಿಯರ್ನ್ನು ತನ್ನದಾಗಿಸಿಕೊಂಡಿತು.<ref name="CiscoFacesiPhone">{{cite news|last=Kawamoto|first=Dawn|url=http://news.zdnet.com/2100-9595_22-6153865.html|title=Cisco faces iPhone trademark challenge in Canada|publisher=[[ZDNet]]|date=January 26, 2007|accessdate=2008-06-06|archive-date=2008-04-24|archive-url=https://web.archive.org/web/20080424032521/http://news.zdnet.com/2100-9595_22-6153865.html|url-status=dead}}</ref> 2006ರ ಡಿಸೆಂಬರ್ 18ರಂದು ಸಿಸ್ಕೊ ಐಫೋನ್ ಹೆಸರಿನಡಿ ಮರುಹೆಸರಿಸಲಾದ [[ವಾಯ್ಸ್ ಒವರ್ IP]] (VoIP) ದೂರವಾಣಿ ಉಪಕರಣಗಳ ಶ್ರೇಣಿಯನ್ನು ಬಿಡುಗಡೆಗೊಳಿಸಿತು.<ref>{{cite news|last=Smith|first=Tony|url=http://www.theregister.co.uk/2006/12/18/linksys_launches_iphone/|title=iPhone launched... but not by Apple|publisher=The Register|date=December 18, 2006|accessdate=2008-06-06}}</ref>
2002ರ ಅಕ್ಟೋಬರ್ ತಿಂಗಳಲ್ಲಿ, ಆಪೆಲ್ ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, [[ಸಿಂಗಪುರ]] ಮತ್ತು [[ಯುರೋಪ್ ಒಕ್ಕೂಟ]]ಗಳಲ್ಲಿ ಐಫೋನ್ ಟ್ರೇಡ್ಮಾರ್ಕ್ಗಾಗಿ ಅರ್ಜಿ ಸಲ್ಲಿಸಿತು. 2004ರ ಅಕ್ಟೋಬರ್ನಲ್ಲಿ ಕೆನಡಾ ಹಾಗೂ 2006ರ ಸೆಪ್ಟೆಂಬರ್ ತಿಂಗಳಲ್ಲಿ [[ನ್ಯೂಜೀಲೆಂಡ್]] ದೇಶಗಳಲ್ಲಿ ಅರ್ಜಿ ಸಲ್ಲಿಸಲಾಯಿತು. 2006ರ ಅಕ್ಟೋಬರ್ ತಿಂಗಳಲ್ಲಿ ಕೇವಲ ಸಿಂಗಪುರ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಸಲ್ಲಿಸಿದ ಅರ್ಜಿಗಳನ್ನು ಮಂಜೂರು ಮಾಡಲಾಗಿತ್ತು. 2006ರ ಸೆಪ್ಟೆಂಬರ್ ತಿಂಗಳಲ್ಲಿ [[ಟ್ರಿನಿಡ್ಯಾಡ್ ಮತ್ತು ಟೊಬೆಗೊ]] ನಂತರ 'ಒಷಿಯನ್ ಟೆಲಿಕಾಮ್ ಸರ್ವೀಸಸ್ ಸಂಸ್ಥೆಯು ಅಮೆರಿಕಾ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ಡಮ್ ಮತ್ತು [[ಹಾಂಗ್ ಕಾಂಗ್]]ನಲ್ಲಿ 'ಐಫೋನ್' ಟ್ರೇಡ್ಮಾರ್ಕ್ಗಾಗಿ ಅರ್ಜಿ ಸಲ್ಲಿಸಿತು.<ref>{{cite web|url=http://www.ipo.gov.uk/tm/t-find/t-find-number?detailsrequested=C&trademark=E5341301|title=Case details for Community Trade Mark E5341301|publisher=[[UK Intellectual Property Office]]|accessdate=2008-06-06}}</ref> ಒಷಿಯನ್ ಟೆಲಿಕಾಮ್ ಟ್ರೇಡ್ಮಾರ್ಕ್ ಅರ್ಜಿಗಳು ಆಪೆಲ್ ಸಂಸ್ಥೆಯ ನ್ಯೂಜೀಲೆಂಡ್ ಅರ್ಜಿಯಲ್ಲಿ ಬಳಸಿದ ಶಬ್ದ-ಸ್ವರೂಪ ಹೊಂದಿದ್ದ ಕಾರಣ, ಆಪೆಲ್ನ ಪರವಾಗಿ ಒಷಿಯನ್ ಟೆಲಿಕಾಮ್ ಟ್ರೇಡ್ಮಾರ್ಕ್ ಅರ್ಜಿಗಳನ್ನು ಸಲ್ಲಿಸುತ್ತಿದೆಯೆಂದು ಊಹಿಸಲಾಗಿದೆ.<ref>{{cite web|url=http://10layers.com/2006/10/apple-filing-for-iphone-trademarks-worldwide/|title=Apple filing for iPhone trademarks worldwide|publisher=10layers.com|date=October 17, 2006|accessdate=2007-01-28|archive-date=2007-01-13|archive-url=https://web.archive.org/web/20070113014820/http://10layers.com/2006/10/apple-filing-for-iphone-trademarks-worldwide/|url-status=dead}}</ref> ಆಗಸ್ಟ್ 2005ರಲ್ಲಿ [[ಕಾಮ್ವೇವ್]] ಕಂಪೆನಿಯು ಕೆನಡಾದಲ್ಲಿ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿತು. ಮೂರು ತಿಂಗಳ ನಂತರ, ಕಾಮ್ವೇವ್ ಸ್ವತಃ ಟ್ರೇಡ್ಮಾರ್ಕ್ಗಾಗಿ ಅರ್ಜಿಯಲ್ಲಿ ಕೋರಿತು. ಕಾಮ್ವೇವ್ ಎಂಬ ಕಂಪೆನಿಯು 2004ರಿಂದಲೂ ಐಫೋನ್ ಎಂಬ VoIP ಉಪಕರಣಗಳನ್ನು ಮಾರಾಟ ಮಾಡುತ್ತಿದೆ.<ref name="CiscoFacesiPhone" />
ಆಪೆಲ್ ಐಫೋನ್ ಎಂಬ ಉತ್ಪಾದನೆಯನ್ನು ಜೂನ್ 2007ರಲ್ಲಿ ಮಾರಾಟ ಮಾಡಲಿದೆ ಎಂದು ಸ್ಟೀವ್ ಜಾಬ್ಸ್ 2007ರ ಜನವರಿ 9ರಂದು ತಿಳಿಸಿದರು. ಶೀಘ್ರದಲ್ಲಿಯೇ, ವಹಿವಾಟಿನ ಟ್ರೇಡ್ಮಾರ್ಕ್ ಪರವಾನಗೆ ಕುರಿತು ಆಪೆಲ್ನೊಂದಿಗೆ ಚರ್ಚಿಸುತ್ತಿದ್ದೇವೆ ಎಂದು ಸಿಸ್ಕೊ ಹೇಳಿತು. ಹಿಂದಿನ ದಿನ ಸಲ್ಲಿಸಿದ ಅಂತಿಮ ದಾಖಲೆ ಪತ್ರಗಳಲ್ಲಿರುವಂತೆ ಆಪೆಲ್ ಸಮ್ಮತಿಸುವುದೆಂದು ಸಿಸ್ಕೊ ನಿರೀಕ್ಷೆಯಲ್ಲಿತ್ತು.<ref name="AppleHelloiPhone">{{cite news|authorlink=Owen Thomas (journalist)|last=Thomas|first=Owen|url=http://money.cnn.com/2007/01/09/technology/apple_jobs/index.htm|title=Apple: Hello, iPhone|publisher=[[CNN|CNN Money]]|date=January 9, 2007|accessdate=2007-01-27|archive-date=2007-01-27|archive-url=https://web.archive.org/web/20070127044959/http://money.cnn.com/2007/01/09/technology/apple_jobs/index.htm|url-status=dead}}</ref> ಐಫೋನ್ ಟ್ರೇಡ್ಮಾರ್ಕ್ ಅತಿಕ್ರಮದ ಕುರಿತು ಆಪೆಲ್ ವಿರುದ್ಧ ಕಾನೂನು ಸಮರ ಹೂಡಲಾಗಿದೆಯೆಂದು ಸಿಸ್ಕೊ 2007ರ ಜನವರಿ 10ರಂದು ಘೋಷಿಸಿತು. ಮೊಕದ್ದಮೆಯಲ್ಲಿ ಆಪೆಲ್ ಐಫೋನ್ ಹೆಸರನ್ನು ಬಳಸಿಕೊಳ್ಳಬಾರದೆಂಬ ನಿಷೇಧ ಹೇರಲಾಗಿತ್ತು.<ref name="CiscoTrademark">{{cite press release|url=http://newsroom.cisco.com/dlls/2007/corp_011007.html|title=Cisco Sues Apple for Trademark Infringement|publisher=[[Cisco Systems]]|date=January 10, 2007|accessdate=2008-06-06}}</ref> ಇನ್ನಷ್ಟೂ ಇತ್ತೀಚೆಗೆ, ಈ ಟ್ರೇಡ್ಮಾರ್ಕ್ ಮೊಕದ್ದಮೆಯು 'ಸಣ್ಣ ಘರ್ಷಣೆ'ಯಷ್ಟೆ, ಅದು ಹಣದ ಬದಲಾಗಿ ಅಂತರ-ನಿರ್ವಹಣೆಯ ಕುರಿತಾಗಿತ್ತು ಎಂದು ಸಿಸ್ಕೊ ಹೇಳಿಕೊಂಡಿತು.<ref>{{cite news|url=http://news.cnet.com/2100-1047_3-6153339.html|title=Report: Cisco CEO calls iPhone suit 'minor skirmish'|publisher=[[News.com]]|author=[[Reuters]]|date=January 25, 2007|accessdate=2008-06-06}}</ref>
ಉಭಯ ಸಂಸ್ಥೆಗಳು ಮಾತುಕತೆ ನಡೆಸುವ ಸಮಯದಲ್ಲಿ ಅವು ಮೊಕದ್ದಮೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸುವುದಾಗಿ ಆಪೆಲ್ ಮತ್ತು ಸಿಸ್ಕೊ 2007ರ ಫೆಬ್ರವರಿ 2ರಂದು ಹೇಳಿಕೆ ನೀಡಿದವು.<ref>{{cite news|url=http://seattletimes.nwsource.com/html/businesstechnology/2003552200_iphone02.html|title=Cisco, Apple decide to talk over iPhone|first=May|last=Wong|agency=Associated Press|publisher=Seattle Times|date=February 2, 2007|accessdate=2008-06-06}}</ref> ನಂತರ 2007ರ ಫೆಬ್ರವರಿ 20ರಂದು ಒಪ್ಪಂದ ಮಾಡಿಕೊಂಡಿದ್ದೇವೆಂದು ಎರಡೂ ಸಂಸ್ಥೆಗಳು ಪ್ರಕಟಿಸಿದವು. ತಮ್ಮ ಭದ್ರತೆ, ಗ್ರಾಹಕ ಮತ್ತು ವಹಿವಾಟಿನ ಸಂಪರ್ಕದ ಉತ್ಪನ್ನಗಳ ನಡುವೆ ಅಂತರ-ನಿರ್ವಹಣೆ ಪರಿಶೋಧನೆಯ ವಿನಿಮಯವಾಗಿ, 'ಐಫೋನ್' ಹೆಸರನ್ನು<ref>{{cite news|url=http://online.wsj.com/article/SB117211001262715655.html|title=Apple, Cisco Reach Accord Over iPhone|first=Nick|last=Wingfield|publisher=Wall Street Journal|format=fee required|date=February 22, 2007|accessdate=2008-06-06}}</ref> ಬಳಸಲು ಎರಡೂ ಸಂಸ್ಥೆಗಳಿಗೆ ಅವಕಾಶವಿದೆ.<ref>{{cite news|url=http://www.apple.com/pr/library/2007/02/21iphone.html|title=Cisco and Apple Reach Agreement on iPhone Trademark|publisher=[[Apple Inc.]]|date=February 21, 2007|accessdate=2008-04-01}}</ref>
ಹಲವು ಪ್ರಮುಖ ಅಧುನಿಕ ತದ್ರೂಪಿಗಳಿಗೆ ಐಫೋನ್ ಸ್ಫೂರ್ತಿಯಾಗಿದೆ.<ref>{{cite web|url=http://blogs.consumerreports.org/electronics/2008/04/send-in-the-icl.html|title=Send in the iClones|last=Gikas|first=Mike|date=2008-04-08|publisher=[[Consumer Reports]]|accessdate=2009-06-10|archive-date=2009-06-09|archive-url=https://web.archive.org/web/20090609115114/http://blogs.consumerreports.org/electronics/2008/04/send-in-the-icl.html|url-status=dead}}</ref> ಆಪೆಲ್ನ ಜನಪ್ರಿಯತೆ ಹೆಚ್ಚಿಸುವ ಜೊತೆಗೆ, ಗ್ರಾಹಕರು ತಮ್ಮ ಐಫೋನ್ಗಳನ್ನು ಶೀಘ್ರದಲ್ಲಿಯೇ ಉತ್ತಮಗೊಳಿಸಲು ಪ್ರೇರೇಪಿಸಿತು.<ref name="cad">{{cite news|url=http://www.prweb.com/pdfdownload/1349134/pr.pdf|title=Cashing In on the Outdated iPhone|publisher=[[Vocus]]|work=[[PRWeb]]|date=2008-09-01|last=Perepelkin|first=Plato|format=PDF|accessdate=2009-04-08}}{{Dead link|date=ಫೆಬ್ರವರಿ 2026 |bot=InternetArchiveBot |fix-attempted=yes }}</ref>
ಅಕ್ಟೋಬರ್ 22, 2009ರಲ್ಲಿ [[ನೊಕಿಯಾ]] ಆಪೆಲ್ ವಿರುದ್ಧ ಮೊಕದ್ದಮೆ ಹೂಡಿತು. ಕಾರಣ ಆಪೆಲ್ನಿಂದ ತನ್ನ GSM, UMTS ಮತ್ತು WLAN ಗಳಿಂದ ಪೆಟೆಂಟ್ (ಹಕ್ಕು ಸ್ವಾಮ್ಯ) (ಹಕ್ಕು ಸ್ವಾಮ್ಯ)ಗಳ ಉಲ್ಲಂಘನೆ. ಕೆಲವು ವರದಿಯ ಮೂಲಗಳ ಪ್ರಕಾರ, ಐಫೋನ್ನ ಆರಂಭಿಕ ಬಿಡುಗಡೆಯಿಂದ ಆಪೆಲ್ ನೊಕಿಯಾದ ಪೆಟೆಂಟ್ (ಹಕ್ಕು ಸ್ವಾಮ್ಯ) (ಹಕ್ಕು ಸ್ವಾಮ್ಯ)ಗಳಲ್ಲಿನ ಹತ್ತನ್ನು ಉಲ್ಲಂಘಿಸಲಾಗುತ್ತಿದೆ ಎನ್ನಲಾಗಿದೆ.<ref name="nokia-lawsuit">{{Cite web|url=http://www.nokia.com/press/press-releases/showpressrelease?newsid=1349562|title=Nokia sues Apple in Delaware District Court for infringement of Nokia GSM, UMTS and WLAN patents|publisher=Nokia|date=2009-10-22|accessdate=2009-10-24}}</ref>
== ಪರಿಮಿತಿಗಳು ==
[[ಚಿತ್ರ:iPhone unlock v3.png|thumb|ಅನ್ಲಾಕ್ ಆಗಿರುವ ಐಫೋನ್ ಫರ್ಮ್ವೇರ್ ಆವೃತ್ತಿ 3.0. ಕ್ರಮಸಂಖ್ಯೆಯು ಸ್ವ-ಸೆನ್ಸಾರ್ ಆಗಿದೆ.]]
ಐಫೋನ್ನ ಕೆಲವು ಪ್ರಮುಖ ಕಾರ್ಯಅಂಶಗಳನ್ನು ಆಪೆಲ್ ತನ್ನ ಬಿಗಿ ಹಿಡಿತದಲ್ಲಿರಿಸಿಕೊಂಡಿದೆ. [[ಹ್ಯಾಕರ್]] ಸಮುದಾಯವು ಹಲವು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದೆ. ಇದರಿಂದಾಗಿ ಉಪಕರಣದ ವಾರಂಟಿ ಶೂನ್ಯವಾಗುವ ಅಪಾಯವಿದೆ. ಹ್ಯಾಕರ್ಗಳ ಈ ಕೃತ್ಯಗಳನ್ನು ಅಪೆಲ್ ಕಟುವಾಗಿ ಖಂಡಿಸಿದೆ.<ref>{{cite web|url=http://www.iphonealley.com/news/do-iphone-hacks-void-your-warranty|title=Do iPhone Hacks Void Your Warranty?|last=Johnston|first=Michael|date=2007-10-20|publisher=iPhone Alley|accessdate=2009-05-14|archive-date=2010-06-07|archive-url=https://web.archive.org/web/20100607043644/http://www.iphonealley.com/news/do-iphone-hacks-void-your-warranty|url-status=dead}}</ref> ಬಹಳಷ್ಟು ಕಾರ್ಯಲಕ್ಷಣಗಳು ಲಭ್ಯವಾಗುವ ಮುನ್ನ ಎಲ್ಲಾ ಐಫೋನ್ಗಳು (ಮೊಬೈಲ್ ಸೇವಾ ಸಂಸ್ಥೆಯು ನೀಡಿರುವ [[ದೂರವಾಣಿ ಸಂಖ್ಯೆ]]ಹೊಂದುವ ಮೂಲಕ) ಸಕ್ರಿಯವಾಗಿರಬೇಕು. "ಕಾನೂನುಬಾಹಿರ"ಅಥವಾ ಸೀಮಾತೀತ ಬಳಕೆದಾರರು ಆಪ್ ಸ್ಟೋರ್ನಲ್ಲಿ ಅಲಭ್ಯ ಅಳವಡಿಕೆಗಳ ಸ್ಥಾಪಿಸಲು ಅಥವಾ ಮೂಲಭೂತ ಕ್ರಿಯೆ-ಸೌಲಭ್ಯ ಬದಲಿಸಲು ಅವಕಾಶ ನೀಡುತ್ತದೆ. SIM ಅನ್ಲಾಕ್ ಮಾಡುವುದರಿಂದ ಬಳಕೆದಾರರು ತಮ್ಮ ಐಫೋನ್ನ್ನು ಅನ್ಯ ಮೊಬೈಲ್ ಸೇವಾ ಜಾಲಕ್ಕೆ ಒಯ್ಯಲು ಅನುಮತಿ ನೀಡುತ್ತದೆ.<ref>{{cite web|url=http://www.macworld.com/article/132675/2008/03/iphone_sdk_jailbreak.html|title=iPhone hackers look to an uncertain future|last=Moren|first=Dan|date=2008-05-28|publisher=Macworld|accessdate=2009-05-25}}</ref>
=== ಸಕ್ರಿಯಗೊಳಿಸುವಿಕೆ(ಚುರುಕುಗೊಳಿಸುವುದು,ಉತ್ತೇಜಿಸುವುದು) ===
ಸಾಮಾನ್ಯವಾಗಿ, ಅಧಿಕೃತ ಮೊಬೈಲ್ ಸೇವಾ ಸಂಸ್ಥೆಯೊಂದಿಗೆ ದೂರವಾಣಿಯ ರೂಪದಲ್ಲಿ ಸಕ್ರಿಯವಾಗದಿದ್ದಲ್ಲಿ, ಐಫೋನ್ ತನ್ನ ಮೀಡಿಯಾ ಪ್ಲೇಯರ್ ಹಾಗೂ ಜಾಲ ಕಾರ್ಯರೂಪಗಳತ್ತ ಪ್ರವೇಶ ನೀಡುವುದಿಲ್ಲ. ತಾನು ಈ ಷರತ್ತನ್ನು ಮೀರಿ, ಗ್ರಾಹಕರ-ಇಚ್ಚೆ-ಮೇರೆಗೆ ಮಾಡಲಾದ ತಂತ್ರಾಂಶಗಳು ಮತ್ತು ಐಟ್ಯೂನ್ಸ್ ದ್ವಿಮಾನ (ಬೈನರಿ) ಬದಲಾವಣೆಯ ಜೋಡಣೆ ಮೂಲಕ, ಐಫೋನ್ನ ಇತರೆ ಕಾರ್ಯಲಕ್ಷಣಗಳನ್ನು ಅನ್ಲಾಕ್ ಮಾಡಿದ್ದೇನೆಂದು [[ಜಾನ್ ಲೆಕ್ ಜೊಹಾನ್ಸೆನ್]] 2007ರ ಜುಲೈ 3ರಂದು ತಮ್ಮ ಬ್ಲಾಗ್ನಲ್ಲಿ ಹೇಳಿಕೊಂಡಿದ್ದರು. ಇತರರು ಬಳಸಲೆಂದು ಅವರು ತಂತ್ರಾಂಶ ಹಾಗೂ ಆಫ್ಸೆಟ್ಗಳನ್ನು ಪ್ರಕಟಿಸಿದರು.<ref>{{cite news|url=http://nanocr.eu/2007/07/03/iphone-without-att/|title=iPhone Independence Day|publisher=nanocr.eu|first=Jon Lech|last=Johansen|authorlink=Jon Lech Johansen|date=July 3, 2007|accessdate=2008-06-06}}</ref>
ಮೂಲ ಮಾದರಿಗಿಂತಲೂ ಭಿನ್ನವಾಗಿ, ಹಲವು ದೇಶಗಳಲ್ಲಿ ಐಫೋನ್ 3Gಯನ್ನು ಸ್ಟೋರ್ ಮೂಲಕವೇ ಸಕ್ರಿಯಗೊಳಿಸಬೇಕಾಗುವುದು.<ref>{{cite news|url=http://www.maclife.com/article/iphone_3g_in_store_activation_only|title=iPhone 3G — In-Store Activation Only|publisher=[[MacLife]]|first=Roberto|last=Baldwin|date=June 9, 2008|accessdate=2008-06-13|archive-date=2022-03-19|archive-url=https://web.archive.org/web/20220319013736/http://mos.futureplc.com/Mac_life_landing_page.html|url-status=dead}}</ref> ಇದರಿಂದಾಗಿ ಐಫೋನ್ 3Gಯನ್ನು ಹ್ಯಾಕ್ ಮಾಡಲು ಇನ್ನಷ್ಟು ಕಷ್ಟವಾಗುವುದು, ಆದರೆ ಅಸಾಧ್ಯವಲ್ಲ. ಸಂಗ್ರಹಾರಅಥವಾ ತಯಾರಾದ ಉಗ್ರಾಣದಿಂದಲೇ ಸಕ್ರಿಯಗೊಳಿಸುವ ಅಗತ್ಯ, ಹಾಗೂ, ಮೊದಲ ತಲೆಮಾರಿನ ಐಫೋನ್ ಮತ್ತು [[ಐಪಾಡ್ ಟಚ್]] ಬಳಕೆದಾರರು ಅಗಾಧ ಸಂಖ್ಯೆಯಲ್ಲಿ ಐಫೋನ್ OS 2.0ಗೆ ಉತ್ತಮಗೊಳಿಸುವ ಯತ್ನದಿಂದಾಗಿ ವಿಶ್ವಾದ್ಯಂತ ಆಪೆಲ್ [[ಸರ್ವರ್]]ಗಳು 2008ರ ಜುಲೈ 11ರಂದು ಅಪಾರ ಕಾರ್ಯದ ಹೊರೆಗೆ ಒಳಗಾದವು. ಇದೇ ದಿನ, ಐಫೋನ್ 3G ಹಾಗೂ ಐಫೋನ್ OS 2.0 ಅಪ್ಡೇಟ್ಗಳು ಹಾಗೂ [[ಮೊಬೈಲ್ಮಿ]] ಬಿಡುಗಡೆಯಾಗಿದ್ದವು. ಅಪ್ಡೇಟ್ನ ನಂತರ,ಇವುಗಳನ್ನು ದೃಢೀಕರಿಸಲು ಆಪೆಲ್ನ ಸರ್ವರ್ಗಳೊಂದಿಗೆ ಉಪಕರಣಗಳ ಸಂಪರ್ಕವೇರ್ಪಡಿಸಬೇಕಾಯಿತು. ಹಾಗಾಗಿ ಹಲವು ಉಪಕರಣಗಳು ತಾತ್ಕಾಲಿಕ ನಿಷ್ಕ್ರಿಯವಾದವು.<ref>{{cite news|url=https://www.nytimes.com/2008/07/12/business/12iphone.html?_r=1&ref=technology&oref=slogin|title=iPhone Users Plagued by Software Problems.|publisher=New York Times|first=John|last=Markoff|date=July 12, 2008|accessdate=2008-07-13}}</ref> ಇದನ್ನು ತಪ್ಪಿಸಲು, ಐಫೋನ್ 3GS ಬಿಡುಗಡೆಗೆ ಮುಂಚೆ ಆಪೆಲ್ 3.0 ತಂತ್ರಾಂಶವನ್ನು ಹೊರತಂದಿತು.
ಯುನೈಟೆಡ್ ಕಿಂಗ್ಡಮ್ನಲ್ಲಿ [[O2]] ಜಾಲದಲ್ಲಿರುವ ಬಳಕೆದಾರರು ಮುಂಚಿನ ಮಾದರಿಯಂತೆ, ಆನ್ಲೈನ್ ಮೂಲಕ ದೂರವಾಣಿ ಖರೀದಿಸಿ [[ಐಟ್ಯೂನ್ಸ್]] ಮೂಲಕ ಸಕ್ರಿಯಗೊಳಿಸಬಹುದು. ಅಗತ್ಯವಿಲ್ಲದಿದ್ದಾಗಿಯೂ, ಮಾರಾಟಗಾರರು ಸಾಮಾನ್ಯವಾಗಿ ಕೊಳ್ಳುಗರ ಅನುಕೂಲದ ಮೇರೆಗೆ ಸಕ್ರಿಯಗೊಳಿಸುವಿಕೆಯನ್ನು ಮಾಡಿಕೊಡುತ್ತಾರೆ. USನಲ್ಲಿ ಆಪೆಲ್ ಕಡ್ಡಾಯವಾಗಿ ಸ್ಟೋರ್ನಲ್ಲಿಯೇ ಸಕ್ರಿಯಗೊಳಿಸುವ ಷರತ್ತನ್ನು ಹಿಂದೆಗೆದುಕೊಂಡು, ಐಫೋನ್ 3G ಹಾಗೂ (ಲಭ್ಯವಿದ್ದಲ್ಲಿ) iPhone 3GS ಎರಡಕ್ಕೂ ಉಚಿತ ಸಾಗಾಟ ವ್ಯವಸ್ಥೆ ಒದಗಿಸಲು ಮುಂದಾಗಿದೆ. [[ಬೆಸ್ಟ್ ಬಾಯ್]] ಮತ್ತು [[ವಾಲ್-ಮಾರ್ಟ್]] ಮಳಿಗೆಗಳು ಸಹ ಐಫೋನ್ನ್ನು ಮಾರಾಟ ಮಾಡುತ್ತವೆ.<ref name="Buy iPhone">{{cite web|url=http://www.apple.com/iphone/buy/|title=Apple - iPhone - Buy iPhone 3G|publisher=Apple|accessdate=2009-06-14}}</ref>
=== ತೃತೀಯ ಪಕ್ಷದ ಅನ್ವಯಿಕೆಗಳು ("ಹೊರಗಿನವರಿಂದ ನಿಯಮ ಬಾಹಿರ ಬಳಕೆ") ===
ಕೇವಲ ಆಪೆಲ್ನಿಂದ ಮಂಜೂರಾದ [[ಗೂಢಲಿಪಿಯ ರುಜುವಾತು]] ಹೊಂದಿರುವ ತಂತ್ರಾಂಶಗಳನ್ನು ಮಾತ್ರ ಬಳಸುವಂತೆ ಐಫೋನ್ನ ಕಾರ್ಯಾಚರಣಾ ವ್ಯವಸ್ಥೆಯನ್ನು ವಿನ್ಯಾಸ ಮಾಡಲಾಗಿದೆ. ಐಫೋನ್ನ್ನು "[[ನಿಯಮಬಾಹಿರ ಬಳಕೆ]]" ಮಾಡುವ ಮೂಲಕ ಈ ನಿರ್ಬಂಧದಿಂದ ಪಾರಾಗಬಹುದು.<ref>{{cite web|url=http://news.cnet.com/8301-13579_3-9806428-37.htm|title=iPhone jailbreak for the masses released|last=Krazit|first=Tom|date=2007-10-19|publisher=CNET news|accessdate=2009-05-14}}</ref> ಇದರ ಅರ್ಥ, ಐಫೋನ್ನ [[ಫರ್ಮ್ವೇರ್]]ನ್ನು ಅಲ್ಪಮಟ್ಟಿಗೆ ಪರಿವರ್ತಿತ ಆವೃತ್ತಿಯೊಂದಿಗೆ ಬದಲಾಯಿಸುವುದು. ಇದರಿಂದಾಗಿ ರುಜು ತಪಾಸಣೆ ಅಥವಾ ಪರೀಕ್ಷೆಯನ್ನು ತಪ್ಪಿಸಬಹುದು.
ಈ ರೀತಿ ಮಾಡುವುದು ಆಪೆಲ್ನ [[ತಾಂತ್ರಿಕ ರಕ್ಷಣಾ ಕ್ರಮಗಳ]] ಸೀಮಾ ವಲಯ ದಾಟಿ ಹೋಗುವುದೆಂದು ಪರಿಗಣಿಸಲಾಗುವುದು.<ref>{{cite web|url=https://www.wired.com/politics/onlinerights/commentary/circuitcourt/2007/08/circuitcourt_0829|title=Legal or Not, IPhone Hacks Might Spur Revolution|last=Granick|first=Jennifer|date=2007-08-28|publisher=Wired|accessdate=2009-05-14|archiveurl=https://archive.today/20120530045655/http://www.wired.com/politics/onlinerights/commentary/circuitcourt/2007/08/circuitcourt_0829|archivedate=2012-05-30|url-status=live}}</ref>
ಈ ರೀತಿಯ ಹ್ಯಾಕಿಂಗ್ಗೆ DMCA ವಿನಾಯಿತಿಗಾಗಿ [[ಅಮೆರಿಕಾ ಸಂಯುಕ್ತ ಸಂಸ್ಥಾನ ಕೃತಿಸ್ವಾಮ್ಯ ಆಯೋಗ]]ದಲ್ಲಿ ಒತ್ತಡ ಹೇರುತ್ತಿದ್ದ [[EFF]] ಗೆ ಪ್ರತಿಯಾಗಿ ಆಪೆಲ್ ಹೇಳಿಕೆ ಸಲ್ಲಿಸಿತು. ಅದರಂತೆ, ಐಫೋನ್ನ ನಿಯಮಬಾಹಿರ ಕೃತ್ಯದಲ್ಲಿ ಸಿಸ್ಟಮ್ ತಂತ್ರಾಂಶ ತಿದ್ದುವುದರಿಂದ ಇದು ಕೃತಿಸ್ವಾಮ್ಯದ ಉಲ್ಲಂಘನೆಯಾಗುವುದು ಎಂದು ತಿಳಿಸಿತು.
ನಿಯಮ ಬಾಹಿರ ಐಫೋನ್ಗಳು ಐಫೋನ್ [[ವರ್ಮ್]](ಸೋಂಕು)ಗಳಿಗೆ ಈಡಾಗುವ ಸಾಧ್ಯತೆಗಳಿವೆ. ಆಷ್ಲೇ ಟೌನ್ಸ್ ಎಂಬ [[ಆಸ್ಟ್ರೇಲಿಯಾ]]ದ [[ತಾಂತ್ರಿಕ ವಿದ್ಯಾಲಯ]]ದ 21 ವರ್ಷದ ವಿದ್ಯಾರ್ಥಿ ಇದನ್ನು ಸೃಷ್ಟಿಸಿದ್ದನು. ಭದ್ರತೆಯ ವಿಷಯದ ಜಾಗೃತಿಗೆ ತಾನು ಈ ವೈರಸ್ನ್ನು ಸೃಷ್ಟಿಸಿದೆನೆಂದು ಆಷ್ಲೇ ಆಸ್ಟ್ರೇಲಿಯನ್ ಮಾಧ್ಯಮಕ್ಕೆ ತಿಳಿಸಿದನು.<ref>[http://www.abc.net.au/news/stories/2009/11/09/2737673.htm ತಾನು ಮೊದಲ ಐಫೋನ್ ವೈರಸ್ ಸೃಷ್ಟಿಸಿದಳೆಂದು ಒಪ್ಪಿಕೊಂಡ ಆಸ್ಟ್ರೇಲಿಯನ್ ವ್ಯಕ್ತಿ], ಬ್ರಿಜಿಡ್ ಆಂಡರ್ಸೆನ್, [[ABC ಆನ್ಲೈನ್]], 2009-11-09, ಪ್ರವೇಶಿಸಿದ ದಿನಾಂಕ 2009-11-10</ref><ref>{{cite web | url=http://www.computerworld.com/s/article/9140560/Jailbreaking_puts_iPhone_owners_at_risk_says_researcher?taxonomyId=15 | title=Jailbreaking puts iPhone owners at risk, says researcher | access-date=2010-01-28 | archive-date=2011-05-16 | archive-url=https://web.archive.org/web/20110516101021/http://www.computerworld.com/s/article/9140560/Jailbreaking_puts_iPhone_owners_at_risk_says_researcher?taxonomyId=15 | url-status=dead }}</ref> ಕಂಪೆನಿಯ ನಿಯಮಗಳ ಉಲ್ಲಂಘಿಸಿ ಉಪಕರಣಗಳ [[SSH]]ನಲ್ಲಿರುವ ಯಥಾಸ್ಥಿತಿಯ ಪಾಸ್ವರ್ಡ್ನ್ನು ಈ ವೈರಸ್ ಶೋಷಣೆಗೆ ಅವಕಾಶ ನೀಡುತ್ತದೆ. ಬಳಕೆದಾರರ ಉಪಕರಣಗಳನ್ನು '[[ಸೋಂಕಿತ]]'ಗೊಳಿಸುತ್ತದೆ.
=== SIM ಅನ್ಲಾಕ್ ಮಾಡುವುದು ===
[[ಚಿತ್ರ:iPhone SIM Slot.jpg|thumb|right|SIM ಅಳವಡಿಕೆಯು ಸ್ವಲ್ಪ ಈಚೆ ಬಂದಂತೆ ತೋರಿಸಲಾದ ಸಾಚಾ ಐಫೋನ್.]]
ಮಾರಾಟವಾಗುವ ಐಫೋನ್ಗಳಲ್ಲಿ ಬಹಳಷ್ಟು [[SIM ಲಾಕ್]]{{Citation needed|date=August 2009}}ನ್ನು ಹೊಂದಿರುತ್ತವೆ. ಇದರಿಂದಾಗಿ, ಅನ್ಯ ಮೊಬೈಲ್ ಸೇವಾ ಸಂಸ್ಥೆಗಳತ್ತ ವಲಸೆ ಹೋಗದಂತೆ ನಿರ್ಬಂಧಗಳನ್ನು ಹೇರಲಾಗುತ್ತದೆ. ಕಡಿಮೆ ಬೆಲೆಗೆ ದೊರೆಯುವ GSM ಫೋನ್ಗಳೊಂದಿಗೂ ಸಹ ಇದೇ ಪದ್ಧತಿ ಅನುಸರಿಸಲಾಗುತ್ತದೆ. ಹಲವು GSM ಫೋನ್ಗಳಿಗಿಂತಲೂ ಭಿನ್ನವಾಗಿ, ಕೋಡ್ ನಮೂದಿಸುವುದರ ಮೂಲಕ ಐಫೋನ್ನ್ನು ಅಧಿಕೃತವಾಗಿ ಅನ್ಲಾಕ್ ಮಾಡಲು ಸಾಧ್ಯವಿಲ್ಲ. [[IMEI]] ಪ್ರಕಾರ ಐಫೋನ್ನ ಲಾಕ್/ಅನ್ಲಾಕ್ ಸ್ಥಿತಿಯನ್ನು ಆಪೆಲ್ನ ಸರ್ವರ್ಗಳಲ್ಲಿ ಕಾದಿರಿಸಲಾಗಿರುತ್ತದೆ. ಐಫೋನ್ ಸಕ್ರಿಯಗೊಳಿಸಿದಾಗ ಲಾಕ್/ಅನ್ಲಾಕ್ ಸ್ಥಿತಿ ಸೆಟ್ ಮಾಡಲಾಗುತ್ತದೆ.
ಆರಂಭದಲ್ಲಿ ಕೇವಲ SIM ಲಾಕ್ನೊಂದಿಗೆ ಐಫೋನ್ನ್ನು AT&T ಜಾಲದಲ್ಲಿ ಮಾರಾಟವಾದಾಗ, ಹಲವು ಹ್ಯಾಕರ್ಗಳು ವಿಶಿಷ್ಟ ಜಾಲದಿಂದ ಐಫೋನ್ನ್ನು '[[ಅನ್ಲಾಕ್]]' ಮಾಡಲು ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನಿಸಿವೆ.<ref>{{cite web|url=http://www.macworld.com/article/60045/iphone_sim_unlocking.html?loomia_ow=t0:s0:a38:g26:r1:c0.001557:b21009213|title=Unlocking an iPhone|last=Farivar|first=Cyrus|date=2007-11-14|publisher=Macworld|accessdate=2009-05-25|archive-date=2009-06-18|archive-url=https://web.archive.org/web/20090618041336/http://www.macworld.com/article/60045/iphone_sim_unlocking.html?loomia_ow=t0:s0:a38:g26:r1:c0.001557:b21009213|url-status=dead}}</ref> ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕೇವಲ AT&T ಅಧಿಕೃತ ಐಫೋನ್ ಜಾಲ ನಿರ್ವಾಹಕವಾಗಿದೆ. ಆದರೂ ಸಹ, ಅನ್ಲಾಕ್ ಮಾಡಿದ ನಂತರ ಐಫೋನ್ಗಳನ್ನು ಅನಧಿಕೃತ ಜಾಲವಾಹಕದೊಂದಿಗೆ ಬಳಸಬಹುದು.<ref name="bw">{{cite news|url=http://www.businessweek.com/technology/content/sep2008/tc2008091_106953.htm?chan=top+news_top+news+index_news+++analysis|title=What's Hot: Used Apple iPhones: After the iPhone 3G launch, consumers want the original, hackable iPhone, and vendors are springing up to sell them—for a premium|last=Kharif|first=Olga|publisher=[[BusinessWeek]]|date=2008-09-02|accessdate=2009-03-17}}</ref>
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮಾರಾಟವಾದ ಐಫೋನ್ಗಳ ಪೈಕಿ 25%ಕ್ಕಿಂತಲೂ ಹೆಚ್ಚಿನವು AT&Tಯೊಂದಿಗೆ ನೋಂದಾಯಿತವಾಗಿರಲಿಲ್ಲ. ಅವುಗಳನ್ನು ಬಹುಶಃ ದೇಶದಾಚೆ ಒಯ್ದು ಅನ್ಲಾಕ್ ಮಾಡಿಸಲಾಗಿದೆಯೆಂದು ಆಪೆಲ್ ಊಹಿಸಿದೆ. ಐಫೋನ್ 3G ವಿಶ್ವಾದ್ಯಂತ ಬಿಡುಗಡೆಯಾಗುವ ಮುಂಚೆ ಇದರದು ಬಹಳ ಲಾಭದಾಯಕ ಮಾರುಕಟ್ಟೆಯಾಗಿತ್ತು.<ref>{{cite news|url=http://news.bbc.co.uk/1/hi/business/7214873.stm|publisher=BBC News|date=January 28, 2008|title=Quarter of US iPhones 'unlocked'}}</ref> U.S.ನಲ್ಲಿ ಐಫೋನ್ಗಳನ್ನು ಅನ್ಲಾಕ್ ಮಾಡಲು, ಸಂಭಾವ್ಯ ಬಳಕೆದಾರರು ತಮ್ಮ ಮೊಬೈಲ್ ಸೇವಾ ಜಾಲ ವಾಹಕವನ್ನು ಬದಲಿಸಲು ಇಚ್ಛಿಸುವರು; ಅಥವಾ AT&T ವಿಧಿಸುವ ಮಾಸಿಕ ಶುಲ್ಕವು ಬಹಳ ದುಬಾರಿಯೆಂದು ಪರಿಗಣಿಸುವುದು ಈ ಬದಲಾವಣೆ ಮಾಡಿಕೊಳ್ಳಲು ಕಾರಣವಾಗಿವೆ.<ref name="NPD demographics">{{cite web|url=http://www.npd.com/press/releases/press_090622.html|title=iPhone 3G Price Decrease Addresses Key Reason Consumers Exhibit Purchase Resistance|date=2009-06-22|publisher=[[NPD Group]]|accessdate=2009-06-27|archive-date=2009-06-26|archive-url=https://web.archive.org/web/20090626074446/http://www.npd.com/press/releases/press_090622.html|url-status=dead}}</ref>
2007ರ ನವೆಂಬರ್ 21ರಂದು, ಜರ್ಮನಿಯ [[T-ಮೊಬೈಲ್]] ಸಂಸ್ಥೆಯು ಐಫೋನ್ನ್ನು T-ಮೊಬೈಲ್ ಕರಾರಿಲ್ಲದೇ ಮಾರುವುದೆಂದು ಹೇಳಿಕೆ ನೀಡಿತು. ತಮ್ಮ ಪ್ರತಿಸ್ಪರ್ಧಿ [[ವೊಡಾಫೋನ್]] T-ಮೊಬೈಲ್ ವಿರುದ್ಧ ನಿರ್ಭಂದ ಹಾಕಿಸಿದ್ದು T-ಮೊಬೈಲ್ನ ಈ ನಿರ್ಧಾರಕ್ಕೆ ಕಾರಣವಾಯಿತು.<ref>{{cite news|url=http://www.reuters.com/article/technologyNews/idUSWEB918820071121|title=T-mobile to sell Iphone without contract|publisher=Reuters|date=November 21, 2007|accessdate=2008-06-06}}</ref> 2007ರ ಡಿಸೆಂಬರ್ 4ರಂದು ಜರ್ಮನ್ ನ್ಯಾಯಾಲಯವು ಈ ನಿರ್ಭಂದ ತೆರವುಗೊಳಿಸಿ, ಐಫೋನ್ನ್ನು SIM ಲಾಕ್ ಸಹಿತ ಮಾರಾಟ ಮಾಡಲು T-ಮೊಬೈಲ್ಗೆ ಅದರದೇ ಆದ ಪ್ರತ್ಯೇಕ ಹಕ್ಕುಗಳನ್ನು ನೀಡಿತು.<ref>{{cite news|url=http://news.cnet.com/T-Mobile-Germany-stops-selling-unlocked-iPhones/2100-1039_3-6221306.html?tag=nefd.top|title=T-Mobile Germany stops selling unlocked iPhones|publisher=[[CNET]]|date=December 4, 2007|accessdate=2008-06-06}}</ref> ಇದಕ್ಕೂ ಹೆಚ್ಚಾಗಿ, ಕರಾರು ಅಂತ್ಯಗೊಂಡ ನಂತರ,ಕಂಪೆನಿ T-ಮೊಬೈಲ್ ಗ್ರಾಹಕರ ಐಫೋನ್ನ್ನು ಅನ್ಲಾಕ್ ಮಾಡಲು ಸಹಕರಿಸುವುದು.<ref>{{cite news|url=http://www.betanews.com/article/Hamburg_court_relocks_iPhone_in_Germany/1196796105|title=Hamburg court re-locks iPhone in Germany|date=December 4, 2007|accessdate=2008-06-06}}</ref>
[[ಕರಾರು]] ಗಳ ಗಡಿ ಆಚೆ ಇದ್ದರೂ ಸಹ, ಐಫೋನ್ನ್ನು ಅನ್ಲಾಕ್ ಮಾಡಲು ಸುತರಾಂ ಸಾಧ್ಯವಿಲ್ಲ ಎಂದು AT&T ಹೇಳಿದೆ.<ref name="bw" /><ref>{{cite web|url= http://www.wireless.att.com/answer-center/main.jsp?t=solutionTab&ft=searchTab&ps=solutionPanels&locale=en_US&_dyncharset=UTF-8&solutionId=61097&isSrch=Yes|title= Answer Center: What is the unlock code for my iPhone?|publisher= AT&T|accessdate= 2009-05-13|archive-date= 2009-06-15|archive-url= https://web.archive.org/web/20090615215349/http://www.wireless.att.com/answer-center/main.jsp?t=solutionTab&ft=searchTab&ps=solutionPanels&locale=en_US&_dyncharset=UTF-8&solutionId=61097&isSrch=Yes|url-status= dead}}</ref> 2009ರ ಮಾರ್ಚ್ 26ರಂದು, AT&T ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕರಾರು ಒಪ್ಪಂದಗಳಿಲ್ಲದೆ ಐಫೋನ್ನ್ನು ಮಾರಾಟ ಮಾಡಲಾರಂಭಿಸಿತು. ಆದರೂ SIM ಅವರ ಜಾಲಕ್ಕೇ ಮಾತ್ರ ಲಾಕ್ ಸ್ಥಿತಿಯಲ್ಲಿರುತ್ತದೆ.<ref>{{cite web|url=http://news.cnet.com/8301-13579_3-10200602-37.html|title=AT&T: No-contract iPhones coming next week|last=Krazit|first=Tom|date=2009-13-19|publisher=CNET News|accessdate=2009-05-14|archive-date=2009-07-29|archive-url=https://web.archive.org/web/20090729033537/http://news.cnet.com/8301-13579_3-10200602-37.html|url-status=dead}}</ref> ಇಂತಹ ಐಫೋನ್ ಉಪಕರಣಗಳು ಕರಾರುಬದ್ಧ ಐಫೋನ್ಗಳ ಎರಡರಷ್ಟು ದುಬಾರಿ ಬೆಲೆಯದ್ದಾಗಿರುತ್ತವೆ, ಏಕೆಂದರೆ ಆಪೆಲ್ ಮತ್ತು AT&T ಸಂಭವನೀಯ ಆದಾಯ ಕಳೆದುಕೊಳ್ಳುವವು.<ref>{{cite news|url=http://www.pcretailmag.com/news/29052/Orange-to-sell-iPhone-SIM-free-for-749|title=Orange to sell iPhone SIM-free for €749|date=November 29, 2007|accessdate=2008-01-06|publisher=PC Retail Magazine|archive-date=2008-01-17|archive-url=https://web.archive.org/web/20080117165605/http://www.pcretailmag.com/news/29052/Orange-to-sell-iPhone-SIM-free-for-749|url-status=dead}}</ref> 2009ರ ಜುಲೈ 17ರಂದು, ಕರಾರುಒಪ್ಪಂದಗಳಿಲ್ಲದೆ ಐಫೋನ್ಗಳನ್ನು ಮಾರುವುದಿಲ್ಲವೆಂದು AT&T ಹೇಳಿಕೆ ನೀಡಿತು.{{Citation needed|date=September 2009}} ಹಾಂಗ್ಕಾಂಗ್, ಇಟಲಿ, ನ್ಯೂಜೀಲೆಂಡ್ ಮತ್ತು ರಷ್ಯಾ ಸೇರಿದಂತೆ ಇತರೆ ದೇಶಗಳಲ್ಲಿ ಮಾರಾಟಗಾರರು ಐಫೋನ್ಗಳನ್ನು ಯಾವುದೇ ಮೊಬೈಲ್ ಸೇವಾ ಸಾಗಾಟದ ಬದ್ಧವಾಗಿರದೆಯೇ ಮಾರಾಟ ಮಾಡುತ್ತಾರೆ.<ref name="Carrier unlocking list">{{cite web|url=http://support.apple.com/kb/HT1937|title=About activating iPhone 3G with a wireless carrier|date=December 13, 2008|publisher=[[Apple Inc.]]|accessdate=2008-12-14}}</ref> ಆಸ್ಟ್ರೇಲಿಯಾದಲ್ಲಿ ಆಪೆಲ್ ನೇರವಾಗಿ ಅನ್ಲಾಕ್ ಆಗಿರುವ ಐಫೋನ್ಗಳನ್ನು ನೇರವಾಗಿ ಮಾರಾಟ ಮಾಡುತ್ತವೆ. ಜೊತೆಗೆ, ಆಸ್ಟ್ರೇಲಿಯಾದ ನಾಲ್ಕು ಪ್ರಮುಖ ಮೊಬೈಲ್ ಸೇವೆಗಳಾದ [[ತ್ರೀ]], [[ಆಪ್ಟಸ್]], [[ಟೆಲ್ಸ್ಟ್ರಾ]] ಮತ್ತು [[ವೊಡಾಫೋನ್]] ಲಾಕ್ ಆಗಿರುವ ಐಫೋನ್ಗಳನ್ನು ಮಾರಾಟ ಮಾಡುತ್ತವೆ. ಆದರೆ ಅವುಗಳನ್ನು ಕೋರಿಕೆಯ ಮೇರೆಗೆ ಅನ್ಲಾಕ್ ಮಾಡಿಕೊಡುತ್ತವೆ.<ref name="Carrier unlocking list" /><ref name="Apple Store Australia">http://store.apple.com/au/browse/home/shop_iphone/family/iphone?mco=MTE2OTU{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
2009ರ ನವೆಂಬರ್ 10ರಿಂದಲೂ, O2 UK ಗ್ರಾಹಕರಿಗಾಗಿ ಕಾನೂನುಬದ್ಧವಾಗಿ ಫೋನ್ ಅನ್ಲಾಕ್ ಮಾಡುವ ವ್ಯವಸ್ಥೆ ಮಾಡಿದೆ.<ref name="O2 iPhone unlocking form">http://shop.o2.co.uk/update/unlockmyiphone.html{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref>
== ಇದನ್ನೂ ಗಮನಿಸಿ ==
* [[ಐಫೋನ್ ಮಾದರಿಗಳು]]
* [[ಐಫೋನ್ OS]]
** [[ಐಫೋನ್ OS ಆವೃತ್ತಿ ಇತಿಹಾಸ]]
* [[ಐಫೋನ್ನ ಇತಿಹಾಸ]]
* [[ನ್ಯೂಟನ್]]
* [[ಐಪಾಡ್]]
** [[ಐಪಾಡ್ ಟಚ್]]
== ಆಕರಗಳು ==
{{reflist|colwidth=30em}}
== ಬಾಹ್ಯ ಕೊಂಡಿಗಳು ==
* [http://www.apple.com/iphone/ ಆಪೆಲ್ನ ಐಫೋನ್ ಜಾಲತಾಣ]
* [http://support.apple.com/specs/#iphone ತಾಂತ್ರಿಕ ವೈಶಿಷ್ಟ್ಯತೆಗಳು (ಎಲ್ಲಾ ಮಾದರಿಗಳು)]
* {{dmoz|Computers/Systems/Handhelds/Smartphones/iPhone|iPhone}}
* [http://www.thestandard.com/news/2009/01/01/steve-jobs-greatest-macworld-video-hits-1998-2008?page=0%2C10 ಮ್ಯಾಕ್ವರ್ಲ್ಡ್ 2007 ಸಮಾರಂಭದಲ್ಲಿ ಜಾಬ್ಸ್ ಐಫೋನ್ ಬಿಡುಗಡೆಗೊಳಿಸುತ್ತಿರುವ ವೀಡಿಯೊ.] {{Webarchive|url=https://web.archive.org/web/20090803064342/http://www.thestandard.com/news/2009/01/01/steve-jobs-greatest-macworld-video-hits-1998-2008?page=0%2C10 |date=2009-08-03 }}
{{Apple}}
{{DEFAULTSORT:Iphone}}
{{Interwikineeded}}
[[ವರ್ಗ:1991 ಪೀಠಿಕೆಗಳು]]
[[ವರ್ಗ:ಆಪೆಲ್ ಇಂಕ್. ಮೊಬೈಲ್ ದೂರವಾಣಿಗಳು]]
[[ವರ್ಗ:ಆಪೆಲ್ ಪರ್ಸನಲ್ ಡಿಜಿಟಲ್ ಅಸಿಸ್ಟಂಟ್ಸ್]]
[[ವರ್ಗ:ಕ್ಲೌಡ್ ಕ್ಲಯಂಟ್ಸ್]]
[[ವರ್ಗ:ಡಿಜಿಟಲ್ ಆಡಿಯೊ ಪ್ಲೇಯರ್]]
[[ವರ್ಗ:ಐಫೋನ್]]
[[ವರ್ಗ:ಐಫೋನ್ OS]]
[[ವರ್ಗ:ಐಪಾಡ್]]
[[ವರ್ಗ:ಐಟ್ಯೂನ್ಸ್]]
rvg536rkscdp7msv48tggs2bre5ub44
ಇಂದೋರ್
0
22622
1378149
1375246
2026-08-02T15:39:20Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378149
wikitext
text/x-wiki
{{About|'''Indore''' city|other uses|Indore (disambiguation)}}
{{Article issues|article=January 2010|cleanup=August 2009|advert=September 2009|trivia=September 2009|date=January 2010}}
{{Infobox Indian Jurisdiction
|native_name = Indore <br> इंदौर / इंदूर
|other_name =
The City of The Holkars
[[File:Indore Rajwada.jpg|thumb|Rajbada Palace - The Lightning Palace of Holkar Dynasty in the city of Indore]]
|locator_position = right
|latd = 22.42|longd = 75.54
|state_name = [[Madhya Pradesh]]
|district = [[Indore District|Indore]]
|leader_title = Member of Parliament
|leader_name = Mrs. Sumitra Mahajan (BJP)
|Languages = [[Hindi]],[[Marathi]] [[Malwi]]
|altitude = ೫೫೩
|population_as_of = ೨೦೦೯
|population_total = ೧,೯೧೬,೯೧೮
|population_total_cite =<ref name=censusofindia>[http://censusindia.gov.in/towns/mp_towns.pdf Indore Population]. Census of India. Retrieved ೧೬ August ೨೦೦೯.</ref>
|population_density = ೯೭೧೮
|population_metro = ೧೯೧೧೫೧೩
|population_metro_as_of = ೨೦೦೯
|population_metro_cite =<ref>[https://web.archive.org/web/20120119224644/http://www.world-gazetteer.com/wg.php?x=&men=gpro&lng=en&des=wg&geo=-104&srt=pnan&col=adhoq&msz=1500&pt=c&va=&geo=405817586] World Gazetteer. Retrieved ೨೧ September ೨೦೦೯</ref>
|area_magnitude =
|area_total = ೨೩೯೮
|area_telephone = ೦೭೩
|postal_code = ೪೫೨೦xx, ೪೫೨೧xx, ೪೫೩xxx
|vehicle_code_range = MP-೦೯
|website = www.indore.nic.in
|footnotes =
}}
'''ಇಂದೋರ್''' ([[ಹಿಂದಿ]]: [[:hi:इंदौर|इंदौर/]],[[ಮರಾಠಿ ]]:[[इंदूर]] {{audio|Indore.ogg|pronunciation}} ಉರ್ದು:اندر)ವು [[ಭಾರತದ ರಾಜ್ಯ|ಭಾರತದ ರಾಜ್ಯವಾದ]] [[ಮಧ್ಯಪ್ರದೇಶ|ಮಧ್ಯಪ್ರದೇಶದ]] ಎರಡನೇ ದೊಡ್ಡ ನಗರ ಮತ್ತು ವಾಣಿಜ್ಯ ರಾಜಧಾನಿಯಾಗಿದೆ. ಇದು ಹೋಳ್ಕರರ ನಗರ ಎಂದು ಪ್ರಸಿದ್ಧವಾಗಿದೆ. ಈ ನಗರವನ್ನು ಭಾರತದ ವೀರ ರಾಣಿ [[ಅಹಲ್ಯಾಬಾಯಿ ಹೋಳ್ಕರ]] ನಿರ್ಮಿಸಿದಳು. ಹಿಂದೆ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದ ಇಂದೋರ್, [[ಪಿತಾಂಪುರ್]], [[ಮೊವ್]], [[ದೇವಸ್]] ಮತ್ತು [[ಧಾರ್|ಧಾರ್ ನಂತಹ]] ಉಪನಗರಗಳೊಂದಿಗೆ ಸುದೃಡ ಕೈಗಾರಿಕಾ ಪ್ರದೇಶವಾಗಿ ಬೆಳೆದಿದೆ. ಉದಾರೀಕರಣದ ಸಂದರ್ಭದಲ್ಲಿ ಇಂದೋರ್ ಖಾಸಗಿಕರಣದ ಆರಂಭಿಕ ಕ್ರಾಂತಿಯ ಮುಂಚೂಣಿಯಲ್ಲಿತ್ತು. ದೇಶದ ಮೊದಲ ಖಾಸಗಿ ದೂರವಾಣಿ ಜಾಲ ಸೇರಿದಂತೆ ಹಲವು ನೂತನ ಕೈಗಾರಿಕೆಗಳ ಉಗಮ ಸ್ಥಾನ ಇದಾಗಿತ್ತು. ಅಂತಹ ಕೈಗಾರಿಕಾ ಭರದ ಚಟುವಟಿಕೆಯ ನಡುವೆಯೂ, ನಗರವು ತನ್ನ ಹಿಂದಿನ ವೈಭವಗಳೊಂದಿಗೆ ಸಂಬಂಧ ಉಳಿಸಿಕೊಂಡಿದೆ. ಇಂದೋರ್ ಜನರ ಜೀವನ ಶೈಲಿಯು ಮುಂಬಯಿ ಜನರ ಜೀವನ ಶೈಲಿಯನ್ನು ಹೋಲುವುದರಿಂದ ಇದನ್ನು 'ಮಿನಿ ಮುಂಬಯಿ' ಎಂದು ಕರೆಯುತ್ತಾರೆ.<ref>{{cite news|url=http://ibnlive.in.com/news/mp-elections-citizens-of-bhopal-want-an-indore/78832-3.html|title=MP elections: Citizens of Bhopal want an Indore|date=2009-11-23|publisher=[[CNN IBN]]|accessdate=೨೦೦೯-೦೯-೧೩|archive-date=2009-07-31|archive-url=https://web.archive.org/web/20090731012715/http://ibnlive.in.com/news/mp-elections-citizens-of-bhopal-want-an-indore/78832-3.html|url-status=dead}}</ref>
==ಶಬ್ದವುತ್ಪತ್ತಿ ಶಾಸ್ತ್ರ==
ಇಂದೋರ್ ಹೆಸರಿನ ಉಗಮ ಮತ್ತು [[ಶಬ್ದವುತ್ಪತ್ತಿಯ]] ಬಗ್ಗೆ ಹಲವು ಸಿದ್ಧಾಂತಗಳು ವಿವರಿಸುತ್ತದೆ. ಹಿಂದೆ ಇಂದೋರನ್ನು ವಿವಿಧ ಹೆಸರುಗಳಲ್ಲಿ ಕರೆಯುತ್ತಿದ್ದರು.ಈ ನಗರದಲ್ಲಿ [[ಇಂದ್ರೇಶ್ವರ ದೇವಸ್ಥಾನ|ಇಂದ್ರೇಶ್ವರ ದೇವಸ್ಥಾನವಿರುವುದರಿಂದ]] ಇದನ್ನು '''ಇಂದ್ರೇಶ್ವರ''' ಎಂದು ಮೊದಲು ಕರೆದಿರಬಹುದು. ಇದಕ್ಕೂ ಮೊದಲು ಈ ನಗರವನ್ನು '''ಅಹಲ್ಯಾನಗರಿ''' (ರಾಣಿ [[ಅಹಲ್ಯಾಬಾಯಿ ಹೋಳ್ಕರ|ಅಹಲ್ಯಾಬಾಯಿ ಹೋಳ್ಕರರ]] ನಗರ) ಎಂದು ಕರೆಯುತ್ತಿದ್ದರು.
* ೧೬೦೭ರಿಂದ ೧೭೯೪ವರೆಗೆ [[ಅಹಲ್ಯಾನಗರಿ]]
* ೧೮೦೦ರಿಂದ ೧೯೫೦ವರೆಗೆ [[ಇಂಧುರ್]]
* ೧೯೫೮ರಿಂದ ಇಲ್ಲಿಯವರೆಗೆ ಇಂದೋರ್
೧೭೪೧ರಲ್ಲಿ ವೆದ್ ಮನುಜ್ ಕಟ್ಟಿದ ''ಇಂದ್ರೇಶ್ವರ'' ದೇವಸ್ಥಾನದಿಂದ ಈಗಿನ ''ಇಂದೋರ್'' ಎಂಬ ಹೆಸರು ಹುಟ್ಟಿಕೊಂಡಿದೆ.<ref name="kinder">{{cite web|url=http://timesofindia.indiatimes.com/articleshow/828162.cms|work=Online Edition of The Times of India, dated 2006-12-18|title=Now, Indore to become Indur|accessdate=2009-09-21}}</ref>
==ಇತಿಹಾಸ==
ಇಂದೋರಿನ ಸ್ಥಾಪಕರ ಪೂರ್ವಿಕರು [[ರಾಜಪೂತನ|ರಾಜಪೂತನದ]] ಗಡಿಯಲ್ಲಿರುವ [[ನರ್ಮದಾ]] ನದಿಯ ದಡದಲ್ಲಿ ಹರಡಿಕೊಂಡಿರುವ ಪ್ರದೇಶದಲ್ಲಿ [[ಜಮೀನುದಾರರಾಗಿದ್ದರು]]. [[ಮೊಘಲ್|ಮೊಘಲರ]] ಕಾಲದಲ್ಲಿ ಈ ಕುಟುಂಬಗಳ ಮೂಲಸ್ಥಾಪಕರು ''ಚೌಧರಿ'' ಎಂಬ ಗೌರವ ಪದವಿ ಪಡೆದುಕೊಂಡರು. ಹೀಗಾಗಿ ಅವರಿಗೆ ಭೂಮಿಯ ಮೇಲೆ ಹಕ್ಕು ಸಾಧಿಸಲು ಸಾಧ್ಯವಾಯಿತು. ಕಳೆದ ೧೮ನೇ ಶತಮಾನದಲ್ಲಿ [[ಮಾಲ್ವಾ]] ಮನೆತನದ ಅಧಿಕಾರವು ಪೆಷ್ವಾ ವಂಶಕ್ಕೆ ಬಂದಿತು. ನಂತರ ಚೌಧರಿಗಳು ತಾವು ಬಳಸುವ ಆಡುಭಾಷೆಯಿಂದಾಗಿ "ಮಂಡ್ಲೊಯಿ"ಗಳಾದರು ([[ಮಂಡಲ|ಮಂಡಲಗಳಿಂದ]] ಜನ್ಮ ಪಡೆದ). ಕ್ರಮೇಣ ಕುಟುಂಬದ ಆಧಾರದ ಮೇಲೆ [[ಹೋಳ್ಕರರ]] ''ರಾವ್ ರಾಜಾ'' ಎಂಬ ಆಸ್ಥಾನ ಗೌರವ ಪಡೆದರು.<ref>ಮೇಜರ್ ಜನರಲ್ ಸರ್ ಜಾನ್ ಮಾಲ್ಕೊಲ್ಮ್, ''ಸೆಂಟ್ರಲ್ ಇಂಡಿಯಾ, ಭಾಗ I'', ಪುಟಗಳು ೬೮-೭೦</ref> ಹೋಳ್ಕರರು ಮತ್ತೆ ಅಧಿಕಾರಕ್ಕೆ ಬಂದ ನಂತರವೂ ಕುಟುಂಬ ತನ್ನ ಆನೆ, ''ನಿಶಾನ್'' (ಲಾಂಛನ), ''ಡಂಕಾ'' ಮತ್ತು ''ಗಾದಿ''(ಗದ್ದುಗೆ)ಯನ್ನು ಹೊಂದುವ ರಾಜಾಧಿಕಾರ ಉಳಿಸಿಕೊಂಡಿತು. ಅಲ್ಲದೇ ಹೋಳ್ಕರ ರಾಜರಿಗಿಂತ ಮೊದಲು ದಸರಾ ಪೂಜೆ (''ಶಾಮಿ ಪೂಜನ್'' )(ಶಮಿ ಅಥವಾ ಬನ್ನಿ ಪೂಜೆ) ಮಾಡುವ ಅಧಿಕಾರವನ್ನು ಸಹ ಉಳಿಸಿಕೊಂಡಿತು.
ಮೊಘಲ್ ಆಳ್ವಿಕೆಯಲ್ಲಿ, ಈ ಕುಟುಂಬವು ಅತ್ಯಂತ ಹೆಚ್ಚಿನ ಅಧಿಕಾರ ಅನುಭವಿಸಿತು. ಅಲ್ಲದೇ ಈ ಕುಟುಂಬಕ್ಕೆ; ರಾಜರಾಗಿದ್ದ [[ಔರಂಗಜೇಬ್]], [[ಅಲಮ್ಗಿರ್]], ಮತ್ತು [[ಫಾರುಕ್ಷಾಯರ್]] ಸಮರ್ಥನೀಯ [[ಸನದ್|ಸನದ್ಗಳನ್ನು]] ನೀಡುತ್ತಿದ್ದರು. ಇದು ಈ ಕುಟುಂಬದ 'ಜಾಗಿರ್' ಹಕ್ಕುಗಳನ್ನು ಖಚಿತಪಡಿಸುತ್ತಿತ್ತು. ರಾವ್ ನಂದಲಾಲ್ ಚೌಧರಿ ಜಮೀನ್ದಾರ್ರು ದೆಹಲಿಯ ರಾಜನ ಆಸ್ಥಾನಕ್ಕೆ ಭೇಟಿ ನೀಡಿದಾಗ, ಅವರಿಗೆ ರಾಜನ ಆಸ್ಥಾನದಲ್ಲಿ ಎರಡು ಆಭರಣಖಚಿತ ಖಡ್ಗಗಳು (ಈಗ ಕುಟುಂಬದ ಹೆಸರಿನಲ್ಲಿ ರಾಯಲ್ ಬ್ರಿಟಿಷ್ ವಸ್ತುಸಂಗ್ರಹಾಲಯ ಪ್ರದರ್ಶಿಸಲಾಗುತ್ತಿದೆ) ಮತ್ತು ಸಮರ್ಥನೀಯ ಸನದ್ಗಳನ್ನು ನೀಡುವುದರೊಂದಿಗೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಜೈಪುರದ ರಾಜಾ ಸವೈ ಜೈ ಸಿಂಗ್ ರಾವ್ ನಂದಲಾಲ್ ಚೌಧರಿ ಜಮೀನ್ದಾರ್ರ ಗೆಳೆಯನಾಗಿದ್ದು, ಆತ ಭಾರತದ ಎಲ್ಲಾ ದರ್ಬಾರ್ಗಳಲ್ಲಿ ವಿಶೇಷ ಸ್ಥಾನಮಾನ ಒದಗಿಸುವ "ಚಿನ್ನದ ಲಂಗರ್" ಅನ್ನು ಕೊಡುಗೆಯಾಗಿ ನೀಡಿದನು. ಪೆಷ್ವೆಗಳು ಮತ್ತು ಹೋಳ್ಕರರ ವಂಶಸ್ಥರ ಆಳ್ವಿಕೆಯಿಂದಾಗಿ ಈ ಪ್ರದೇಶದಲ್ಲಿ ಮಾಲ್ವಾದ ಈ ಕುಟುಂಬದ ಬಗೆಗಿನ ಗೌರವಾರ್ಹತೆ ಮತ್ತು ಅದರ ಪ್ರಭಾವ ಹೆಚ್ಚಾಗಿತ್ತು.
ಇಂದೋರ್ನ ಸ್ಥಾಪಕ [[ರಾವ್ ನಂದಲಾಲ್ ಚೌಧರಿ]] ಪ್ರಮುಖ ಜಮೀನುದಾರನಾಗಿದ್ದು, ೨೦೦೦ ಸೈನಿಕರ ಸೈನ್ಯಪಡೆ ಹೊಂದಿದ್ದನು. ೧೭೧೩ರಲ್ಲಿ ಇವರನ್ನು ನಿಜಾಮ್ ಡೆಕ್ಕನ್ ಪ್ರಸ್ಥಭೂಮಿ ಪ್ರದೇಶದ ನಿಯಂತ್ರಕರಾಗಿ ನೇಮಿಸಿದನು. ಇದು ಮರಾಠರ ಮತ್ತು ಮೊಘಲ್ರ ನಡುವಿನ ಸಂಘರ್ಷವನ್ನು ಇನ್ನಷ್ಟು ಹೆಚ್ಚಿಸಿತು.
ಸರಸ್ವತಿ ನದಿ ದಡದ ಹತ್ತಿರವಿರುವ [[ಇಂದ್ರೇಶ್ವರ]] ದೇವಸ್ಥಾನಕ್ಕೆ ಭೇಟಿ ನೀಡಿದಾಗ, [[ನಂದ್ಲಾಲ್ಸಿಂಗ್]] ಎಲ್ಲಾ ಕಡೆಯಿಂದಲೂ ನದಿಯಿಂದ ಸುತ್ತುವರಿದ ಇದು ಅತ್ಯಂತ ಸುರಕ್ಷಿತ ಸ್ಥಳವೆಂದು ನಿರ್ಧರಿಸಿದನು. ಮೊಘಲ್ರ ಕಿರುಕುಳದಿಂದ ತನ್ನ ಜನರನ್ನು ರಕ್ಷಿಸಲು, ಆ ಪ್ರದೇಶಕ್ಕೆ ತನ್ನ ಜನರನ್ನು ಸ್ಥಳಾಂತರಿಸಿ, ಸುತ್ತಲೂ ಶ್ರೀ ಸಂಸ್ಥಾನ್ ಬಡಾ ರವಾಲ ಎಂಬ ಕೋಟೆ ಕಟ್ಟಿದನು. ಆ ನಗರಕ್ಕೆ ಇಂದ್ರಪುರ (ಇಂದ್ರೇಶ್ವರ ದೇವರ ಹೆಸರಾದ) ಎಂದು ಹೆಸರಿಟ್ಟನು. ಅದು ಕ್ರಮೇಣವಾಗಿ ಇಂದೋರ್ ಆಯಿತು.
ಕ್ರಿ.ಶ ೧೭೩೩ರಲ್ಲಿ [[ಬಾಜಿ ರಾವ್ ಪೆಷ್ವಾ]] ಮಾಲ್ವಾಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡನು. ಅವನ ನಿಬಂಧನೆಗಳನ್ನು ಸರಿಯಾಗಿ ಪೂರೈಸಲು, ಸಹಿ ಹಾಕಿದ ನಾಲ್ವರಲ್ಲಿ [[ಮಲ್ಹಾರ್ ರಾವ್ ಹೋಳ್ಕರ|ಮಲ್ಹಾರ್ ರಾವ್ ಹೋಳ್ಕರನು]] ಒಬ್ಬ.<ref>ಮೇಜರ್ ಜನರಲ್ ಸರ್ ಜಾನ್ ಮಾಲ್ಕೊಲ್ಮ್, ''ಮೆಮೊರಿಸ್ ಆಫ್ ಸೆಂಟ್ರಲ್ ಇಂಡಿಯಾ, ಸಂ. I.'' ಪುಟಗಳು ೯೪-೯೫</ref> ಪೆಷ್ವೆಗಳ ವಿಜಯದ ನಂತರ, ಅವರು ಮಲ್ಹಾರ್ ರಾವ್ ಹೋಳ್ಕರನನ್ನು “ಸುಭೆದಾರ್” ಆಗಿ ನೇಮಕಮಾಡಿದರು. ಇದರಿಂದಾಗಿ ಮಾಲ್ವಾದಲ್ಲಿ ಹೋಳ್ಕರರು ಅಧಿಕಾರಕ್ಕೆ ಬಂದರು.<ref name="malcolm-memoirs">ಮೇಜರ್ ಜನರಲ್ ಸರ್ ಜಾನ್ ಮಾಲ್ಕೊಲ್ಮ್, ''ಮೆಮೊರಿಸ್ ಆಫ್ ಮಾಲ್ವಾ'' (೧೯೧೨)</ref><ref>ಪ್ಯಾಟ್ರಿಕ್ ಗೆಡ್ಡಸ್, ''ಎ ರಿಪೋರ್ಟ್ ಟು ದಿ ದರ್ಬಾರ್ ಆಫ್ ಇಂದೋರ್ ನ ಭಾಗ ೧'' ಇಂದೋರ್:ಹಿಸ್ಟೊರಿಕ್ ಡೆವಲಪ್ಮೆಂಟ್" (೧೯೧೮)ನಲ್ಲಿ '' "ಸಿಟಿ ಡೆವಲಪ್ಮೆಂಟ್".''</ref><ref>ಸುಖ ಸಂಪತ್ತಿ ರಾಯ್ ಭಂಡಾರಿ, ಹಿಸ್ಟರಿ ಆಫ್ ಇಂಡಿಯನ್ ಸ್ಟೇಟ್ಸ್, '' ರಾಜ್ಯ ಮಂಡಲ್ ಬುಕ್ ಪಬ್ಲಿಷಿಂಗ್ ಹೌಸ್ (೧೯೨೭)''</ref><ref>"ಮಾಲ್ವಾ ಇನ್ ಟ್ರಾನ್ಸಿಷನ್ ಎ ಸೆಂಚುರಿ ಆಫ್ ಅನಾರ್ಕಿ", ದಿ ಪಸ್ಟ್ ಫೇಸ್ ೧೬೯೮-೧೭೬೫ ಬೈ ರಘುಬಿರ್ ಸಿಂಗ್ ಆಫ್ ಸಿತಮೌ. ವರ್ಷ ೧೯೩೬.</ref><ref>"ದಿ ಇಂದೋರ್ ಸ್ಟೇಟ್ ಗೆಜಿಟಿಯರ್". ಸಂಪುಟ ೧-ಮಹಾರಾಜ ಹೋಳ್ಕರರ ಸರಕಾರದ ಅಧಿಕಾರದಡಿಯಲ್ಲಿ ಮುದ್ರಿಸಲಾಗಿದೆ. ಸುಪರಿಂಟೆಂಡೆಂಟ್ ಹೋಳ್ಕರ ಸರಕಾರಿ ಮುದ್ರಣಾಲಯ, ಇಂದೋರ್ ೧೯೩೧.</ref><ref>ಮೇಜರ್ ಜನರಲ್ ಸರ್ ಜಾನ್ ಮಾಲ್ಕೊಲ್ಮ್ರವರು ಬರೆದ "ಮೆಮೊರಿಸ್ ಆಫ್ ಸೆಂಟ್ರಲ್ ಇಂಡಿಯಾ", ಸಂಪುಟ I. ವರ್ಷ ೧೮೨೩.</ref><ref>"ಇಂದೋರ್ ಹೋಳ್ಕರ ಸ್ಟೇಟ್ ಗೆಜಿಟಿಯರ್". ಸಂ.೨೩, ೧೮೭೫.</ref><ref>"ಮಾಲ್ವಾ ಸಾಹಿತ್ಯ". ೫ನೇ ವರ್ಷದ ಸಂಚಿಕೆ ಸಂ.೧. ವರ್ಷ ೧೮೫೫.ಇಂದೋರ್</ref><ref>ಸರ್ದಾರ್ M.V.ಕೈಬ್ರವರ "ದಿ ಮಂಡ್ಲಿಕ್ ಪೇಪರ್ಸ್ ಆಂಡ್ ದಿ ಫ್ಯಾಮಿಲಿ". ೧೯೪೬.</ref>
ಹಾಗಾಗಿ, [[ಹೋಳ್ಕರ]] ರಾಜವಂಶ ಪಾರಂಪರೆಯ ಪ್ರಾಂತ್ಯವಾಗಿದ್ದ ಇಂದೋರ್ನ್ನು [[ಮರಾಠಾ]] [[ಮಹಾರಾಜ|ಮಹಾರಾಜರು]] ಆಳಿದರು. ಸುಮಾರು ೧೭೨೪ರಲ್ಲಿ ಈ ವಂಶದ ಸ್ಥಾಪಕ [[ಮಲ್ಹಾರ್ ರಾವ್ ಹೋಳ್ಕರ|ಮಲ್ಹಾರ್ ರಾವ್ ಹೋಳ್ಕರನಿಗೆ]] (೧೬೯೪-೧೭೬೬) ಮಾಲ್ವಾ ಮರಾಠಾ ಸೇನೆಯ ನಿಯಂತ್ರಣವನ್ನ ನೀಡಲಾಯಿತು. ಅಲ್ಲದೇ ೧೭೩೩ರಲ್ಲಿ ಆ ಪ್ರದೇಶದ ಮರಾಠಾ ಪ್ರಾಂತಾಧಿಕಾರಿಯಂತೆ ಕಾರ್ಯನಿರ್ವಹಿಸಲು ನೇಮಿಸಲಾಯಿತು. ಅವನ ಅಧಿಕಾರದ ಕೊನೆಯಲ್ಲಿ, ಹೋಳ್ಕರ ರಾಜ್ಯಯು ''ಸ್ವತಂತ್ರ ನಿರ್ವಹಣೆಯ'' ರಾಜ್ಯವಾಗಿತ್ತು. ಹಕ್ಕು ಇರಲಿ ಇಲ್ಲದಿರಲಿ ಅಧಿಕಾರ ಚಲಾಯಿಸುವ ಸ್ವಯಂ ರಾಜ್ಯವೆನಿಸಿತ್ತು ಈ ಹೋಳ್ಕರ್ ಸಂಸ್ಥಾನ. ಮಲ್ಹಾರ್ ರಾವ್ ಹೋಳ್ಕರ ನಂತರ ಆತನ ಪುತ್ರಿ [[ಅಹಲ್ಯಾಬಾಯಿ ಹೋಳ್ಕರ]] ೧೭೬೭ಯಿಂದ ೧೭೯೫ವರೆಗೆ ರಾಜ್ಯವನ್ನು ಆಳಿದಳು. ಆಕೆಯ ಆಡಳಿತದ ಸಾಮ್ರಾಜ್ಯವು [[ಮಹೇಶ್ವರ|ಮಹೇಶ್ವರದಲ್ಲಿರುವ]] ಅರಮನೆ ಕೋಟೆಯಿಂದ [[ನರ್ಮದಾ ನದಿ|ನರ್ಮದಾ ನದಿಯ]] ಪಕ್ಕದಲ್ಲಿರುವ ದಕ್ಷಿಣ ಭಾಗದವರೆಗಿನ ವಿಸ್ತರಿಸಿತ್ತು. ಭಾರತದಾದ್ಯಂತ [[ಹಿಂದೂ]] ದೇವಸ್ಥಾನಗಳ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ಅಹಲ್ಯಾಬಾಯಿ ಹೋಳ್ಕರ ವಾಸ್ತುಕಲಾ ಪೋಷಕಳಾಗಿದ್ದಳು. ೧೮೧೮ರಲ್ಲಿ [[ಮೂರನೇ ಆಂಗ್ಲೊ-ಮರಾಠಾ ಯುದ್ಧ|ಮೂರನೇ ಆಂಗ್ಲೊ-ಮರಾಠಾ ಯುದ್ಧದಲ್ಲಿ]] [[ಬ್ರಿಟಿಷ್]] ವಿರುದ್ಧ ಹೋಳ್ಕರರು ಸೋತರು. ಅವರ ರಾಜಧಾನಿಯು [[ಬ್ರಿಟಿಷ್ ರಾಜ್]] ನ ಒಂದು ಭಾಗವಾಯಿತು. [[ಮಹಿದ್ಪುರ್ ಕಾಳಗ|ಮಹಿದ್ಪುರ್ ಕಾಳಗದಲ್ಲಿ]] ಸೋತಿದ್ದರಿಂದ, [[ಮಂದ್ಸೌರ್]] ಒಪ್ಪಂದಕ್ಕೆ ಹೋಳ್ಕರರು ಸಹಿ ಹಾಕಬೇಕಾಯಿತು. ಅದರಂತೆ [[ಮೊವ್|ಮೊವ್ನ]] [[ಸೇನಾವಸತಿ]] ಪ್ರದೇಶವನ್ನು ಬ್ರಿಟಿಷ್ರಿಗೆ ಹಸ್ತಾಂತರಿಸಬೇಕಾಯಿತು. ಹೋಳ್ಕರ ರಾಜ್ಯದ ರಾಜಧಾನಿಯನ್ನು ಮಹೇಶ್ವರದಿಂದ ಇಂದೋರ್ಗೆ ವರ್ಗಾಯಿಸುವಂತೆ ಒಪ್ಪಂದದಲ್ಲಿ ತಿಳಿಸಲಾಗಿತ್ತು.
೨೦ನೇ ಶತಮಾನದ ಪ್ರಾರಂಭದ ವೇಳೆ, ಭಾರತದಲ್ಲಿ ಸೆಣಬಿನ ಗಿರಣಿ ಸ್ಥಾಪಿಸಿದ ಮೊದಲ ಭಾರತೀಯನಾದ [[ಸೇಥ್ ಹುಕುಂಚಂದ್]] ಜೈನ್ರ ಮನೆ ಇಂದೋರ್ನಲ್ಲಿತ್ತು. ಅವರನ್ನು ಭಾರತೀಯ ಉದ್ಯಮದ ಮೂಲಪ್ರವರ್ತಕರು ಎಂದು ಪರಿಗಣಿಸಲಾಗಿದ್ದು, ಅವರು ಇಂದೋರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಸಂಸ್ಥೆ ಮತ್ತು ಉದ್ಯಮಗಳನ್ನು ಸ್ಥಾಪಿಸಿದರು.
೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, ನೆರೆಹೊರೆಯ ಹಲವು ರಾಜ್ಯಗಳೊಂದಿಗೆ ಇಂದೋರ್ ಭಾರತೀಯ [[ರಾಜ್ಯ|ರಾಜ್ಯವಾದ]] [[ಮಧ್ಯ ಭಾರತ್|ಮಧ್ಯ ಭಾರತ್ದ]] ಒಂದು ಭಾಗವಾಯಿತು. ಇಂದೋರ್ನ್ನು ಹೊಸದಾಗಿ ರಚನೆಗೊಂಡ ರಾಜ್ಯದ ಬೇಸಿಗೆ ರಾಜಧಾನಿಯಾಗಿ ಪರಿವರ್ತಿಸಲಾಯಿತು. ಕಳೆದ ೧೯೫೬ರ ನವೆಂಬರ್ ೧ರಂದು ಮಧ್ಯ ಭಾರತದ ರಾಜ್ಯವಾದ ಮಧ್ಯಪ್ರದೇಶದೊಂದಿಗೆ ವಿಲೀನಗೊಂಡು, [[ಭೋಪಾಲ್|ಭೋಪಾಲ್ನ್ನು]] ಅದರ ರಾಜಧಾನಿಯಾಗಿ ಮಾಡಲಾಯಿತು.
ನಗರ ಅರಮನೆಯಲ್ಲಿ ಮಾಲ್ವಾ ಪ್ರದೇಶದ ಆಡಳಿತ ವಹಿಸಿಕೊಂಡಿದ್ದ ಹೋಳ್ಕರರು ನೋಡಿಕೊಳ್ಳುತ್ತಿದ್ದರು (೧೭೨೮ರ ಮೇ ೨೬ರಿಂದ ೧೯೪೮ರ ಏಪ್ರಿಲ್ ೨೦ರವರೆಗೆ). ಕಳೆದ ೧೯೮೪ರ ಗಲಭೆಯಲ್ಲಿ ರಾಜ್ಬಡಾ(ವಾಡಾ) ವನ್ನು ಸುಟ್ಟುಹಾಕಲಾಯಿತು. ಇದಾದ ನಂತರ ಅದನ್ನು ಉದ್ಯಾನವಾಗಿ ಮಾಡಲಾಯಿತು. ೨೦೦೬ರಲ್ಲಿ ಇಂದೋರ್ನ ಸದ್ಯ ಇರುವ ಮಹಾರಾಣಿ H.H. ಉಷಾದೇವಿ ಹೋಳ್ಕರ ವಾಡಾವನ್ನು ಹಿಂದಿನ ಭವ್ಯತೆಯೊಂದಿಗೆ ಪುನರ್ನಿರ್ಮಿಸಲು ನಿರ್ಧರಿಸಿದರು. ಈ ಸವಾಲಿನ ಯೋಜನೆಯ ವಿನ್ಯಾಸಕ್ಕಾಗಿ H.H. ಉಷಾದೇವಿ ಹೋಳ್ಕರರು, ವಾಸ್ತುವಿನ್ಯಾಸಕರಾದ ಹಿಮಾಂಶು ದುಡ್ವಾಕರ್ ಮತ್ತು ಶ್ರೇಯಾ ಭಾರ್ಗವರನ್ನು ಆಮಂತ್ರಿಸಿದರು. ಅದೂ ಅಲ್ಲದೇ ೨೦೦೭ರಲ್ಲಿ ರಾಜ್ವಾಡಾದ ಪುನರ್ನಿರ್ಮಾಣ ಕಾರ್ಯಪೂರ್ಣಗೊಂಡು, ಇತಿಹಾಸದಲ್ಲಿ ಮತ್ತೆ ಸ್ಥಾನಪಡೆದುಕೊಂಡಿತು. ಸುಮಾರು ೨೫೦ ವರ್ಷಗಳ ಹಿಂದೆ ರಾಜ್ವಾಡ ನಿರ್ಮಿಸಲು ಬಳಸಿದ ಶೈಲಿ, ವಸ್ತುಗಳು ಮತ್ತು ವಿಧಾನವನ್ನು, ಅದರ ಪುನರ್ನಿರ್ಮಾಣ ಕಾರ್ಯದಲ್ಲಿ ಕರಾರುವಕ್ಕಾಗಿ ಬಳಸಿಕೊಳ್ಳಲಾಗಿದೆ. ಹೀಗೆ ಇದು ಭಾರತದಲ್ಲಿ ಪುನರ್ನಿರ್ಮಿಸಿದ ಏಕೈಕ ಐತಿಹಾಸಿಕ ಕಟ್ಟಡವಾಗಿದೆ.
{{See also|Malwa}}
== ಭೌಗೋಳಿಕತೆ ==
ಇಂದೋರ್ ಭಾರತದ ಮಧ್ಯ ಭಾಗದಲ್ಲಿರುವ ಮಧ್ಯಪ್ರದೇಶ ರಾಜ್ಯದ ಪಶ್ಚಿಮ ಭಾಗದಲ್ಲಿದೆ. ಇಂದೋರ್ ಸರಾಸರಿ ೧ ಮೀಟರ್ನಷ್ಟು ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿದೆ. ಇದರ ದಕ್ಷಿಣದಲ್ಲಿ ಯಾದ್ರಿ ಶ್ರೇಣಿಯೊಂದಿಗೆ, ಎತ್ತರದ ಸಮಾನಂತರ ಮೇಲ್ಮೈ ಭೂಮಿಯನ್ನು ಹೊಂದಿದೆ. ಇಂದೋರ್ ಒಂದು ಕಡೆಯಲ್ಲಿ ದೇವಸ್ನಿಂದ ಇನ್ನೊಂದು ಕಡೆಯಲ್ಲಿ ಮೊವ್ವರೆಗೆ, ಒಟ್ಟು ೬೫ ಕಿಮೀನಷ್ಟು ಗರಿಷ್ಠ ವಿಸ್ತಾರದ ಹರವು ಹೊಂದಿದೆ.
==ಹವಾಗುಣ==
{{climate chart
|Indore
|9|26|9
|11|29|1
|16|34|2
|21|38|2
|24|39|9
|24|35|134
|22|30|284
|21|28|287
|20|29|211
|17|32|36
|13|29|20
|10|26|9
|source=[http://www.mausam.gov.in/WEBIMD/ClimatologicalAction.do?function=getStationDetails&actionParam=1¶m=2&station=Indore IMD]
|float=right
|clear=none
}}
ಇಂದೋರ್ [[ಉಷ್ಣವಲಯದ ತೇವ ಮತ್ತು ಒಣ ಹವಾಮಾನ]] ಮತ್ತು [[ತೇವವಾದ ಉಪೋಷ್ಣವಲಯದ ಹವಾಮಾನ|ತೇವವಾದ ಉಪೋಷ್ಣವಲಯದ ಹವಾಮಾನದ]] ನಡುವಿನ ಸಾಮಾನ್ಯ ಹವಾಗುಣ ಹೊಂದಿದೆ. ಇಂದೋರ್ನಲ್ಲಿ ಬೇಸಿಗೆ,ಮಳೆಗಾಲ ಮತ್ತು ಚಳಿಗಾಲ ಹೀಗೆ ಮೂರು ವಿಭಿನ್ನ ಪ್ರಮುಖ ಸಾಮಾನ್ಯ ಕಾಲಮಾನಗಳಿವೆ. ಮಾರ್ಚ್ನ ಮಧ್ಯ ಭಾಗದಲ್ಲಿ ಬೇಸಿಗೆ ಪ್ರಾರಂಭವಾಗುವುದು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಿಪರೀತ ಬಿಸಿಲಿನ ಹವಾಮಾನವಿರುತ್ತದೆ. ೧೯೯೪ರಲ್ಲಿ ೪೮ °Cಯಷ್ಟು ಅತಿ ಹೆಚ್ಚಿನ ಪ್ರಮಾಣದ ಉಷ್ಣತೆ ದಾಖಲಾಗಿದೆ. ಸರಾಸರಿ ಬೇಸಿಗೆ ಉಷ್ಣತೆಯು ೪೨-೪೪.cರಷ್ಟು (೧೦೦.೪ °F) ಇರುವುದು. ಆದರೆ ತೇವಾಂಶ ಬಹಳ ಕಡಿಮೆ ಇರುವುದು. ಇಂದೋರ್ ಮಾಲ್ವಾ ಪ್ರಸ್ಥಭೂಮಿಯ ದಕ್ಷಿಣ ತುದಿಯಲ್ಲಿರುವುದರಿಂದ, ಸಂಜೆ ತಂಗಾಳಿ ([[ಶಬ್-ಈ-ಮಾಲ್ವಾ]] ಎಂದು ಕರೆಯುವ) ಬೀಸಿ, ರಾತ್ರಿಯ ವೇಳೆ ವಾತಾವರಣ ತಣ್ಣಗಾಗುವಂತೆ ಮಾಡುವುದು. ಜೂನ್ನ ಕೊನೆಯ ಭಾಗದಲ್ಲಿ ಮಳೆಗಾಲವು ಪ್ರಾರಂಭವಾಗುವುದು. ಆ ಸಮಯದಲ್ಲಿ ಸರಾಸರಿ ಉಷ್ಣತೆಯು {{convert|26|°C|°F|abbr=on}}ರಷ್ಟಿರುತ್ತದೆ. ಆಗ ಎಡಬಿಡದೆ ಧಾರಾಕಾರ ಮಳೆ ಸುರಿಯುವ, ಹೆಚ್ಚಿನ ಪ್ರಮಾಣದ ತೇವಾಂಶವಿರುತ್ತದೆ. ಇಲ್ಲಿ ೩೬ ಇಂಚುಗಳಷ್ಟು ಸರಾಸರಿ ಮಳೆಯಾಗುತ್ತದೆ. ನವೆಂಬರ್ನ ಮಧ್ಯಭಾಗದಲ್ಲಿ ಚಳಿಗಾಲ ಪ್ರಾರಂಭವಾಗುವುದು. ಆ ಸಮಯದಲ್ಲಿ ಒಣ ಹವೆಯಿದ್ದು, ಹವಾಮಾನವು ಹಿತಕರ ಮತ್ತು ಬಿಸಿಲಿನಿಂದ ಕೂಡಿರುತ್ತದೆ. ಸರಾಸರಿ ಉಷ್ಣತೆಯು {{convert|4|-|15|C|F}}, ಅದರೆ ಕೆಲವು ರಾತ್ರಿಗಳಲ್ಲಿ ಹಿಮ ಬೀಳುವುದು. ಬೇಸಿಗೆಯಲ್ಲಿ ಕೆಲವೊಮ್ಮೆ ಅತಿ ಹೆಚ್ಚಿನ ಉಷ್ಣತೆ {{convert|48|-|50|C|F}}ರಷ್ಟಿದ್ದು, ಚಳಿಗಾಲದಲ್ಲಿ ಕಡಿಮೆಯೆಂದರೆ {{convert|2|°C|°F|abbr=on}}ರಷ್ಟಿರುವುದು.
ಇಂದೋರ್ನಲ್ಲಿ [[ಆಗ್ನೇಯ ಮಾರುತ|ಆಗ್ನೇಯ ಮಾರುತದಿಂದಾಗಿ]] ಜುಲೈ-ಸಪ್ಟೆಂಬರ್ನಲ್ಲಿ {{convert|35|to|38|in|mm|abbr=off}}ರಷ್ಟು ಮಧ್ಯಮ ಪ್ರಮಾಣದ ಮಳೆಯಾಗುವುದು.<ref>{{Cite web |url=http://www.fallingrain.com/world/IN/35/Indore.html |title=ಮಳೆ ಬೀಳುವ ಪ್ರಮಾಣದ ನಕ್ಷೆ - ಎಲಿವೇಷನ್ = 545ಮೀ |access-date=2010-02-23 |archive-date=2009-10-09 |archive-url=https://web.archive.org/web/20091009095436/http://www.fallingrain.com/world/IN/35/Indore.html |url-status=dead }}</ref>
==ಸಾರಿಗೆ==
ನಗರವು ರೈಲು, ರಸ್ತೆ ಸಾರಿಗೆ ಮತ್ತು ವಾಯುಯಾನ ಸೇವೆಗಳ ಮೂಲಕ ಸಂಪರ್ಕಿಸಲ್ಪಟ್ಟಿದೆ. ಇಂದೋರ್ ಬಹು ಕಾಲದಿಂದಲೂ ರೈಲು ಮತ್ತು ರಸ್ತೆ ಸಾರಿಗೆ ವ್ಯವಸ್ಥೆಯ ಸುಸಜ್ಜಿತ ತಾಣವಾಗಿದೆ.
ಸರ್ವಾಟೆ ಬಸ್ ನಿಲ್ದಾಣ, ಗಂಗ್ವಾಲ ಬಸ್ ನಿಲ್ದಾಣ, ನವ್ಲಕಾ ಬಸ್ ನಿಲ್ದಾಣ ಮತ್ತು ಜಿನ್ಸಿ ಬಸ್ ನಿಲ್ದಾಣದಂತಹ ಪ್ರಮುಖ ನಿಲ್ದಾಣಗಳನ್ನು ಹೊಂದಿದೆ.
=== ರೈಲುಮಾರ್ಗ ===
[[File:Indore Junction BG.jpg|thumb|ಇಂದೋರ್ ಪ್ರಮುಖ ರೈಲ್ವೆ ನಿಲ್ದಾಣ]]
ನಗರ ರೈಲ್ವೆ ವಿಭಾಗವು [[ರತ್ಲಾಮ್ ವಿಭಾಗ|ರತ್ಲಾಮ್ ವಿಭಾಗದ]] [[ಪಶ್ಚಿಮ ರೈಲ್ವೇಸ್|ಪಶ್ಚಿಮ ರೈಲ್ವೇಸ್ನ]] ವ್ಯಾಪ್ತಿಗೆ ಬರುವುದು. ಇಂದೋರ್ ಪ್ರಮುಖವಾಗಿ [[ಇಂದೋರ್ ಜಂಕ್ಷನ್ BG]] ಅನ್ನು ಹೊಂದಿದ್ದು, ದೇಶದ ಉಳಿದ ಭಾಗಗಳಿಗೆ ಸಂಪರ್ಕಿಸುವ ಬ್ರಾಡ್ ಗೇಜ್ ಮಾರ್ಗದಲ್ಲಿ ಕೊನೆಯ ನಿಲ್ದಾಣಗಳನ್ನು ಹೊಂದಿದೆ. ಉತ್ತರ ಇಂದೋರ್ಗೆ ರೈಲ್ವೆ ಸಂಪರ್ಕ ಉತ್ತಮಗೊಳಿಸಲು ಇಂದೋರ್ ಜಂಕ್ಷನ್ BG ಅನ್ನು ಈ ಮೊದಲೇ ನಿರ್ಮಿಸಿದ್ದರು. ಕಳೆದ ೨೦೦೯ರ ರೈಲ್ವೆ ಮುಂಗಡಪತ್ರದಲ್ಲಿ ಭಾರತದ ಇತರ ೩೦೦ ನಿಲ್ದಾಣಗಳೊಂದಿಗೆ ಇಂದೋರ್ನ ಪ್ರಮುಖ ರೈಲ್ವೆ ನಿಲ್ದಾಣವನ್ನು ಆಧುನಿಕ ರೈಲ್ವೆ ನಿಲ್ದಾಣವಾಗಿ ಪರಿವರ್ತಿಸಲು ಪಟ್ಟಿ ಮಾಡಲಾಗಿದೆ.
ಇಂದೋರ್, ಮೀಟರ್ ಗೇಜ್ ಮತ್ತು ಬ್ರಾಡ್ ಗೇಜ್ ರೈಲ್ವೇಸ್ ಹೀಗೆ ಎರಡೂ ತೆರನಾದ ಸಂಪರ್ಕ ಹೊಂದಿರುವ ಭಾರತದ ಹಲವು ನಗರಗಳಲ್ಲಿ ಒಂದಾಗಿದೆ. ಇಂದೋರ್ನಿಂದ ದೇಶದ ಹೆಚ್ಚಿನ ಭಾಗಗಳಿಗೆ ನಿರಂತರ ರೈಲು ಸೇವೆಗಳಿವೆ. ಹತ್ತಿರದ [[ರಾತ್ಲಾಮ್ ಜಂಕ್ಷನ್]], [[ಉಜ್ಜಯಿನಿ ಜಂಕ್ಷನ್]], [[ಖಂಡ್ವಾ]], ಮತ್ತು [[ಭೋಪಾಲ್ ಜಂಕ್ಷನ್]] ನಿಲ್ದಾಣಗಳಿಂದಲೂ ಸಹ ರೈಲುಗಳ ಸೌಲಭ್ಯ ದೊರೆಯುತ್ತವೆ. ಈ ಸ್ಥಳಗಳನ್ನು ರೈಲು ಅಥವಾ ರಸ್ತೆಯ ಮೂಲಕ ೨-೫ ಗಂಟೆಗಳಲ್ಲಿ ತಲುಪಬಹುದು.
ಇಂದೋರ್ನ [[ರಾತ್ಲಾಮ್]] ಮತ್ತು [[ಅಕೋಲಾ]] ನಡುವಿನ ಮಾರ್ಗವು ಭಾರತದ ಅತಿ ಉದ್ದದ ಮೀಟರ್ ಗೇಜ್ ಮಾರ್ಗವಾಗಿದೆ. ಈ ಮೀಟರ್ ಗೇಜ್ ವಲಯವನ್ನು ಭಾರತೀಯ ರೈಲ್ವೇಸ್,ಉದ್ದೇಶಿತ ಯುನಿಗೇಜು ನಿರ್ಮಾಣ ಯೋಜನೆಯಡಿ ಪ್ರಮಾಣಿತ ಬ್ರಾಡ್ ಗೇಜ್ ಆಗಿ ಪರಿವರ್ತಿಸಲು ಯೋಜನೆ ರೂಪಿಸಿದೆ.
===ರಸ್ತೆ ಮಾರ್ಗಗಳು===
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಮೂಲಕ ಇಂದೋರ್ ಭಾರತದ ಇತರ ಭಾಗಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಇಂದೋರ್ನ್ನು ಹಾದು ಹೋಗುವ ಕೆಲವು ಪ್ರಮುಖ ಹೆದ್ದಾರಿಗಳಿದ್ದು, ಇದು ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸುತ್ತವೆ. ಈ ನಗರದ ಮೂಲಕ ಹಾದು ಹೋಗುವ ಪ್ರಮುಖ ಹೆದ್ದಾರಿಗಳೆಂದರೆ:
* [[ರಾಷ್ಟ್ರೀಯ ಹೆದ್ದಾರಿ ಸಂ. 3]] (NH೩ - ಆಗ್ರಾ ಬಾಂಬೆ)
* [[ರಾಷ್ಟ್ರೀಯ ಹೆದ್ದಾರಿ ಸಂ. 59]] (NH ೫೯ - ಇಂದೋರ್ ಅಹಮದಾಬಾದ್)
* [[ರಾಷ್ಟ್ರೀಯ ಹೆದ್ದಾರಿ ಸಂ. 59A]] (ಇಂದೋರ್ - [[ಬೆಟುಲ್]])
* ರಾಜ್ಯ ಹೆದ್ದಾರಿ ಸಂ. ೧೭ (ಭೋಪಾಲ್ಗೆ ಸಂಪರ್ಕಿಸುವ)
* ರಾಜ್ಯ ಹೆದ್ದಾರಿ ಸಂ. ೨೭ (ಇಂದೋರ್ಯಿಂದ ಖಂಡ್ವಾಗೆ)
* ರಾಜ್ಯ ಹೆದ್ದಾರಿ ಸಂ. ೩೪ (ಇಂದೋರ್ಯಿಂದ ಜಾನ್ಸಿಗೆ)
ಇಂದೋರ್ನ್ನು ಭಾರತದ ಕೇಂದ್ರ ಮತ್ತು ಪಶ್ಚಿಮ ಭಾಗದ ಪ್ರಮುಖ ನಗರಗಳಿಗೆ ಸಂಪರ್ಕಿಸಲು ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನ್ ಸರಕಾರಿ ಸಂಸ್ಥೆಗಳು ಸೇರಿದಂತೆ ಖಾಸಗಿ ನಿರ್ವಾಹಕರು ದಿನಂಪ್ರತಿ ಬಸ್ ಸೇವೆಯನ್ನು ಒದಗಿಸುತ್ತಿದ್ದಾರೆ.
==== ಸ್ಥಳೀಯ ಸಾರಿಗೆ ====
ನಗರದ ಸ್ಥಳೀಯ ಸಾರಿಗೆ ಸೌಲಭ್ಯಕ್ಕಾಗಿ, ನಿತ್ಯಪ್ರಯಾಣಿಸುವವರಿಗೆ ಬಸ್ ಗಳಲ್ಲಿ ಗರಿಷ್ಠ '''೮''' ಆಯ್ಕೆಗಳಿದ್ದು, ಆಟೋ-ರಿಕ್ಷಾ, ಟ್ಯಾಕ್ಸಿ ಮತ್ತು ವ್ಯಾನ್ಗಳ ಸೌಲಭ್ಯವನ್ನೂ ಹೊಂದಿದೆ.
ಖಾಸಗಿ ನಿರ್ವಾಹಕರು ನಗರ(ಸಿಟಿ) ಬಸ್, ಮ್ಯಾಜಿಕ್, ವ್ಯಾನ್, ಆಟೋ ರಿಕ್ಷಾ, ನಗರ ಸೇವಾ ಬಸ್, ಮೆಟ್ರೊ ಟ್ಯಾಕ್ಸಿ, ಸ್ಟಾರ್ ಕ್ಯಾಬ್ ಸರ್ವಿಸ್ ಮತ್ತಿತರ ಸ್ಥಳೀಯ ನಗರ ಸಂಚಾರಿ ಬಸ್ ಗಳನ್ನು ನಡೆಸುತ್ತಿದ್ದಾರೆ.
ಕಳೆದ ೨೦೦೪ರಲ್ಲಿ ಇಂದೋರ್ನ I.C.T.S.C.L ಹೊಸದಾಗಿ ಬಸ್ ಸೇವೆ ಪ್ರಾರಂಭಿಸಿತು. ಸಿಟಿ ಬಸ್ ಎಂಬ ಹೆಸರಿನ ಬಸ್ ಗಳು ಇಂದು ೧೩೦ ಬಸ್ ನಿಲ್ದಾಣಗಳು ೩೦ ಮಾರ್ಗಗಳಲ್ಲಿ ಸೇವೆ ಒದಗಿಸುತ್ತಿದೆ. ಈ ನೂತನ ಸೇವೆಯಲ್ಲಿ ೧೨೫ ಜನರಲ್ ಲೋ ಫ್ಲೋರ್, ೧೨೦ ನ್ಯೂ ಸೆಮಿ-ಲೋ ಫ್ಲೋರ್ ಮತ್ತು ೫೦ AC ವಿಶೇಷ ನಗರ ಸಾರಿಗೆ ಬಸ್ ಗಳು ಕಾರ್ಯನಿರತವಾಗಿವೆ. ಈ ಸೇವೆಗಳು ತಮ್ಮ ಮಾರ್ಗಕ್ಕೆ ಸಂಬಂಧಿಸಿದಂತೆ ಬಣ್ಣದ ಕೋಡ್ ಅನ್ನು ಹೊಂದಿರುತ್ತವೆ.
ಇವುಗಳಲ್ಲಿ ಕೆಲವು ಬಸ್ ಗಳು ಅಗತ್ಯ ಸಮಯದಲ್ಲಿ ಬಸ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಬಳಸುವ GPS ಮತ್ತು IVR (ಸುಮಾರು ೨೦೦) ಆಧುನೀಕೃತ ಸೇವೆಗಳನ್ನು ಒಳಗೊಂಡಿವೆ. ಬಸ್ ಗಳಿಗೆ ಸಂಬಂಧಿಸಿದ ಮಾಹಿತಿಯು ಬಸ್ ನಿಲ್ದಾಣಗಳಲ್ಲಿ ಸ್ಥಾಪಿಸಿದ LED ಪರದೆಗಳ ಮೇಲೆ ಪ್ರದರ್ಶಿಸಲ್ಪಡುವುದು.
ನಗರದಲ್ಲಿ ಮೆಟ್ರೊ ಟ್ಯಾಕ್ಸಿ ಮತ್ತು ಸ್ಟಾರ್ ಟ್ಯಾಕ್ಸಿ ಎಂಬ ಎರಡು ಕಂಪನಿಗಳು ಸಾರಿಗೆ ಸೇವೆಯನ್ನು ಒದಗಿಸುತ್ತಿವೆ.
{|
|
| [[File:Metro Taxi Indore.jpg|thumb|178px|ಇಂದೋರ್ನಲ್ಲಿ ಮೆಟ್ರೊ ಟ್ಯಾಕ್ಸಿ]]
|}
=== ವಿಮಾನ ನಿಲ್ದಾಣ ===
[[File:IndoreAirportArrivals.JPG|thumb|right|150px|ದೇವಿ ಅಹಲ್ಯಾಬಾಯಿ ಹೋಳ್ಕರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ]]ಇಂದೋರ್ದಲ್ಲಿ '''[[ದೇವಿ ಅಹಲ್ಯಾಬಾಯಿ ಹೋಳ್ಕರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ]]''' ವು ವಾಯುಯಾನ ಸೌಲಭ್ಯ ಒದಗಿಸುವುದು. ಇಂದೋರ್ ವಿಮಾನ ನಿಲ್ದಾಣವು ನಗರದ ಕೇಂದ್ರ ಭಾಗದಿಂದ ಸುಮಾರು ೫ ಕಿಮೀ ದೂರದಲ್ಲಿದೆ. ಅದು ಪ್ರಸ್ತುತ ಇಲ್ಲಿನ ದೇಶಿಯ ಸೇವೆಗಳನ್ನು ನಿರ್ಬಂಧಿಸಿದೆ. ಈ ಅಂತರರಾಷ್ಟ್ರೀಯ ನಿಲ್ದಾಣವು ಈಗ ನಿರ್ಮಾಣದ ಹಂತದಲ್ಲಿದ್ದು, ನಿಯಂತ್ರಣ ಕೊಠಡಿ, ಗೋಪುರ ಮತ್ತು ಕಟ್ಟಡದ ಕಾಮಗಾರಿ ೨೦೧೦ರ ಫೆಬ್ರವರಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
==ಜನಸಾಂದ್ರತೆ ಸಂಖ್ಯೆ==
೨೦೦೧ರಲ್ಲಿ ಇಂದೋರ್ನ ಒಟ್ಟು ಜನಸಂಖ್ಯೆ ೧, ೫೧೬, ೯೧೮ರಷ್ಟಿದೆ.<ref name="indore1">[http://www.indore.nic.in/statistics.htm ಸ್ಟ್ಯಾಟಿಕ್ಸ್ ಆಫ್ ಇಂದೋರ್] {{Webarchive|url=https://web.archive.org/web/20120513061141/http://indore.nic.in/statistics.htm |date=2012-05-13 }}. ಇಂದೋರ್ನ ಜಿಲ್ಲಾ ಆಡಳಿತ. ೧೬ ಆಗಷ್ಟ್ ೨೦೦೯ರಂದು ಪರಿಷ್ಕರಿಸಲಾಗಿದೆ.</ref> ಒಟ್ಟು ಜನಸಂಖ್ಯೆಯಲ್ಲಿ ೫೩% ಪುರುಷರು ಮತ್ತು ೪೭% ಮಹಿಳೆಯರಿದ್ದಾರೆ. ೨೦೦೧ ಜನಗಣತಿಯ ಪ್ರಕಾರ, ಇಂದೋರ್ ಸರಾಸರಿ ಸಾಕ್ಷರತೆ ಪ್ರಮಾಣವು ೭೫%ರಷ್ಟು ಆಗಿದ್ದು, ಇದು ೫೯.೫%ರಷ್ಟಿರುವ ರಾಷ್ಟ್ರೀಯ ಸರಾಸರಿ ಸಾಕ್ಷರತೆ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತೆ ಪ್ರಮಾಣವು ೭೫%ರಷ್ಟಿದ್ದು, ಮಹಿಳೆಯರದ್ದು ೬೪%ರಷ್ಟಿತ್ತು. ಇತ್ತೀಚಿನ, ಅಂದರೆ ೨೦೦೯ರ ಅಂಕಿಅಂಶಗಳ ಪ್ರಕಾರ ಸರಾಸರಿ ಸಾಕ್ಷರತೆ ದರವು ೮೯%ರಷ್ಟಿದೆ. ಅದರಲ್ಲಿ ಪುರುಷರ ಸಾಕ್ಷರತೆ ದರವು ೯೫% ಮತ್ತು ಮಹಿಳೆಯರದ್ದು ೮೪%ರಷ್ಟಿದೆ<ref name="indore1" />. ಜನಸಂಖ್ಯೆಯ ೧೮%ದಷ್ಟು ೬ ವರ್ಷಗಳ ಒಳಗಿನವರಾಗಿದ್ದಾರೆ. ೨೦೦೧ರ ಜನಗಣತಿ ಪ್ರಕಾರ ಜನಸಂಖ್ಯೆಯ ಸರಾಸರಿ ವಾರ್ಷಿಕ ಏರಿಕೆ ದರವು ಸುಮಾರು ೨.೮೫%ರಷ್ಟಿದೆ. ಇಂದೋರ್ನಲ್ಲಿ [[ಹಿಂದಿ|ಹಿಂದಿಯು]] ಪ್ರಮುಖ ಮಾತನಾಡುವ ಭಾಷೆಯಾಗಿದೆ. ಇಂದೋರ್ನಲ್ಲಿ ಮರಾಠರು (ಹೋಳ್ಕರರು) ಆಳ್ವಿಕೆ ನಡೆಸಿದ್ದರಿಂದ, ಹೆಚ್ಚಿನವರು [[ಮರಾಠಿ|ಮರಾಠಿಯನ್ನು]] ಮಾತನಾಡುವರಲ್ಲದೇ ಅದನ್ನು ಅರ್ಥ ಮಾಡಿಕೊಳ್ಳಬಲ್ಲರು. [[ಮಾಲ್ವಿ|ಮಾಲ್ವಿಯು]] ಇಂದೋರ್ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಮಾತನಾಡುವ ಸ್ಥಳೀಯ ಆಡುಭಾಷೆಯಾಗಿದೆ.
==ಆರ್ಥಿಕತೆ==
ಇತರ ದೊಡ್ಡ ನಗರಗಳಲ್ಲಿರುವಂತೆ, ಇಂದೋರ್ ಸಹ ಹಲವು ಶಾಪಿಂಗ್ ಮಾಲ್, ಮೂವೀ ಸಿನೆಮಾಸ್, ರೆಸ್ಟಾರೆಂಟ್ ಮತ್ತು ಹೋಟೆಲ್ಗಳನ್ನು ಹೊಂದಿದೆ. ದೀಪಾವಳಿ ಮತ್ತು ಹೊಸ ವರ್ಷದ ಸಂದರ್ಭದಲ್ಲಿನ ವಿಶೇಷ ಹೆಚ್ಚಳ ಹೊರತುಪಡಿಸಿ, ಉಳಿದೆಲ್ಲಾ ಸಮಯದಲ್ಲಿ ವ್ಯಾಪಾರ-ವಹಿವಾಟು ಸಮಾನವಾಗಿರುವುದು. ಬಟ್ಟೆ, ಔಷಧ ಮತ್ತು ಶೈಕ್ಷಣಿಕ ಸೇವಾ ಸೌಲಭ್ಯಗಳು ಇಂದೋರ್ನ ಪ್ರಮುಖ ವ್ಯಾಪಾರೀ ಸರಕುಗಳೆನ್ನಬಹುದು. ಇಂದೋರ್ನ ಕೈಗಾರಿಕಾ ಪ್ರದೇಶಗಳಾದ ಪಿತಾಂಪುರ್, ಸನ್ವೆರ್, ಮೊವ್ನಲ್ಲಿ ಸುಮಾರು ೨೦೦೦ಕ್ಕೂ ಹೆಚ್ಚಿನ ಕಾರ್ಖಾನೆಗಳನ್ನು ನಗರದಲ್ಲಿ ಒಳಗೊಂಡಿದೆ{{Citation needed|date=August 2009}}. ಪಿತಾಂಪುರ್ ನಗರವು ಭಾರತದ ಡೆಟ್ರಾಯ್ಟ್ ಎಂದು ಪ್ರಸಿದ್ಧವಾಗಿದೆ.<ref>{{cite news|url=http://www.expressindia.com/news/fe/daily/19980104/00455324.html|title=Pithampur small enterprises tell a tale of untapped potential|last=Tiwary|first=Santosh|date=1998 -04-01|publisher=[[Indian Express]]|accessdate=೨೦೦೯-೦೯-೦೧|archive-date=2012-01-21|archive-url=https://web.archive.org/web/20120121062439/http://www.expressindia.com/news/fe/daily/19980104/00455324.html|url-status=dead}}</ref><ref>{{cite news|url=http://www.business-standard.com/india/storypage.php?autono=153051|title=Pithampur units face bleak future|last=Trivedi |first=Shashikant |date=2004-07-09|publisher=[[Business Standard]]|accessdate=೨೦೦೯-೦೯-೦೧}}</ref>(ಡೆಟ್ರಾಯ್ಟ್ ಯುನೈಟೆಡ್ ಸ್ಟೇಟ್ಸ್ ನ ಡೆಟ್ರೊಯಿಟ್ ನದಿ ತೀರದ ಸರೋವರಗಳ ಬಂದರು ತಾಣ)
==ಶಿಕ್ಷಣ==
{{Main|Education in Indore}}
[[File:Daly College, Indore.jpg|thumb|ಡಾಲಿ ಕಾಲೇಜ್, ಇಂದೋರ್]]
ಇಂದೋರ್ ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದ್ದು, ಮಧ್ಯ ಭಾರತದ ಶೈಕ್ಷಣಿಕ ಕೇಂದ್ರಸ್ಥಾನವಾಗಿ ಕಾರ್ಯನಿರ್ವಹಿಸುತ್ತಿದೆ. ಇಂದೋರ್ನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ವ್ಯವಸ್ಥೆಯು ಅತ್ಯುತ್ತಮವಾಗಿದೆ. ಇಂದೋರ್ನಲ್ಲಿರುವ ಹೆಚ್ಚಿನ ಶಾಲೆಗಳು [[ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಷನ್]] (CBSE) ಮಂಡಳಿ ಹಾಗೆಯೇ [[ICSE]] ಮಂಡಳಿ ಅಥವಾ [[NIOS]] ಮಂಡಳಿಯ ಸದಸ್ಯತ್ವ ಹೊಂದಿರುತ್ತವೆ.
ಇಂದೋರ್ ಉನ್ನತ ಶಿಕ್ಷಣಕ್ಕಾಗಿ ವಿಧ್ಯಾರ್ಥಿಗಳನ್ನು ತಯಾರಿಗೊಳಿಸುವ ಕೇಂದ್ರವಾಗಿ ಬೆಳೆದಿದೆ.
[[ಇಂದೋರ್ ವಿಶ್ವವಿದ್ಯಾಲಯ|ಇಂದೋರ್ ವಿಶ್ವವಿದ್ಯಾಲಯವಾಗಿದ್ದ]] ಈಗಿನ ದೇವಿ ಅಹಲ್ಯಾ ವಿಶ್ವವಿದ್ಯಾಲಯವು (DAVV) ಇಂದೋರ್ನ ಪ್ರಮುಖ ಮತ್ತು ಹಳೆಯ ವಿಶ್ವವಿದ್ಯಾಲಯವಾಗಿದೆ.
ಇಂದೋರ್ [[ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಮ್ಯಾನೇಜ್ಮೆಂಟ್ ಇಂದೋರ್]] ಮತ್ತು [[ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಟೆಕ್ನಾಲಜಿ ಇಂದೋರ್]] ಎರಡನ್ನು ಹೊಂದಿರುವ ಭಾರತದ ಏಕೈಕ ನಗರವಾಗಿದೆ.
==ಮಾಧ್ಯಮ==
ಇಂದೋರ್ನಲ್ಲಿರುವ ಸ್ಥಳೀಯ ಮಾಧ್ಯಮವು ಪ್ರಬಲವಾಗಿದ್ದು, ಅಭ್ಯುದಯ ಕಾಣುತ್ತಿವೆ. ಇಂದೋರ್ ಬಹಳ ಸಮಯದಿಂದ ರಾಜ್ಯದ ಪತ್ರಿಕೋದ್ಯಮದ ವೇದಿಕೆಯಾಗಿದೆ. ಇಂದೋರ್ನಲ್ಲಿ ರಂಗಮಂದಿರ, ದಿನಪತ್ರಿಕೆ, ನಿಯತಕಾಲಿಕೆಗಳು, ಮತ್ತು ಸ್ಥಳೀಯ ರೇಡಿಯೊ ಮತ್ತು ದೂರದರ್ಶನ ಕೇಂದ್ರಗಳಿವೆ.
===ಕಲೆ ಮತ್ತು ರಂಗಮಂದಿರ===
ನಗರದ [[ರವೀಂದ್ರ ನಾಟ್ಯ ಗೃಹ|ರವೀಂದ್ರ ನಾಟ್ಯ ಗೃಹವು]] ಕಲಾ ಪ್ರದರ್ಶನಕ್ಕೆ ಪ್ರಮುಖ, ಹೆಸರುವಾಸಿ ರಂಗಮಂದಿರವಾಗಿದೆ. ಜಗತ್ತಿನ ಹಲವಾರು ಕಲಾವಿದರು ನಿರಂತರವಾಗಿ ಇಲ್ಲಿ ಕಾರ್ಯಕ್ರಮ ನೀಡುತ್ತಿರುತ್ತಾರೆ. ಅಭಿವ್ಯಕ್ತಿ ಸೆಂಟರ್ ಆಫ್ ಫೈನ್ ಆರ್ಟ್ಸ್ ಆಂಡ್ ಪರ್ಫಾರ್ಮಿಂಗ್ ಆರ್ಟ್ಸ್, [[ಡಿಯೊಲಲಿಕರ್ ಕಲಾ ವಿಥಿಕಾ|ಡಿಯೊಲಲಿಕರ್ ಕಲಾ ವಿಥಿಕಾವು]](ವೇದಿಕೆ) ಸಹ ಅಂತಹ ಕಲೆ ಮತ್ತು ರಂಗಮಂದಿರದ ಕೇಂದ್ರವಾಗಿದೆ.<ref>{{cite web|url=http://www.shiksha.com/getListingDetail/2296/institute/college-Abhivyakti-Centre-Of-Fine-Arts-Performing-Arts-Bhopal-India/|title=Abhivyakti,|access-date=2010-02-23|archive-date=2009-05-26|archive-url=https://web.archive.org/web/20090526084416/http://www.shiksha.com/getListingDetail/2296/institute/college-Abhivyakti-Centre-Of-Fine-Arts-Performing-Arts-Bhopal-India|url-status=dead}}</ref>
===ವಿದ್ಯುನ್ಮಾನ ಮಾಧ್ಯಮ===
ರೇಡಿಯೋ ಉದ್ಯಮ ಕೂಡ ಹಲವಾರು ಖಾಸಗಿ ಮತ್ತು ಸರ್ಕಾರಿ ಒಡೆತನದ ಎಫ್ಎಂ ಚಾನೆಲ್ಗಳ ಪ್ರವೇಶದಿಂದಾಗಿ ವಿಸ್ತಾರಗೊಂಡಿದೆ. ನಗರದಲ್ಲಿ ಪ್ರಸಾರವಾಗುತ್ತಿರುವ ಎಫ್ಎಂ ರೇಡಿಯೋ ಚಾನೆಲ್ಗಳಲ್ಲಿ ಎಐಆರ್, ವಿವಿಧ್ ಭಾರತಿ, ಎಫ್ಎಂ (೧೦೨.೮ MHz), ಏರ್ ರೈನ್ ಬೋ ಎಫ್ಎಂ (೧೦೧.೯ MHz), ರೇಡಿಯೋ ಮಿರ್ಚಿ ಎಫ್ಎಂ (೯೮.೩ MHz), ರೇಡಿಯೋ ಸಿಟಿ ಎಫ್ಎಂ (೯೧.೧ MHz), ಬಿಗ್ ಎಫ್ಎಂ (೯೨.೭ MHz), ರೆಡ್ ಎಫ್ಎಂ(೯೩.೫ MHz) ಮತ್ತು ಏರ್ ಜ್ಞಾನ ವಾಣಿ (೧೦೭.೬ MHz) ಪ್ರಮುಖವಾದವು. ರಾಜ್ಯ ಒಡೆತನದ [[ದೂರದರ್ಶನ|ದೂರದರ್ಶನವು]] ಎರಡು ಪ್ರಾದೇಶಿಕ ಚ್ಯಾನೆಲ್ಗಳನ್ನು ಪ್ರಸಾರ ಮಾಡುವುದು. ಇದಲ್ಲದೆ ಕೆಲವು ಸ್ಥಳೀಯ ಪ್ರಸಾರ ಕೇಂದ್ರಗಳು ಅಸ್ತಿತ್ವದಲ್ಲಿವೆ.
===ಮುದ್ರಣ ಮಾಧ್ಯಮ===
ಸುಮಾರು ೧೯ ಹಿಂದಿ ದಿನಪತ್ರಿಕೆಗಳು, ಎರಡು ಇಂಗ್ಲೀಷ್ ದಿನಪತ್ರಿಕೆಗಳು, ೨೬ ವಾರ ಪತ್ರಿಕೆಗಳು ಮತ್ತು ಮಾಸಿಕಗಳು, ೩ ತ್ರೈಮಾಸಿಕಗಳು, ೧ ಪಾಕ್ಷಿಕ ನಿಯತಕಾಲಿಕೆ ಮತ್ತು ಒಂದು ವಾರ್ಷಿಕ ಪತ್ರಿಕೆ ಇಂದೋರ್ನಿಂದ ಪ್ರಕಟಗೊಳ್ಳುವವು.<ref>ಇಂಡಿಯನ್ ಜರ್ನಲ್ ಆಪ್ ಸೈಯನ್ಸ್ ಕಮ್ಯುನಿಕೇಶನ್ (ಸಂಪುಟ ೨/ ಸಂಖ್ಯೆ ೧/ ಜನವರಿ – ಜೂನ್ ೨೦೦೩) http://www.iscos.org/vol೩/rp೧.htm {{Webarchive|url=https://web.archive.org/web/20250220003244/http://www.iscos.org/vol%E0%B3%A9/rp%E0%B3%A7.htm |date=2025-02-20 }}</ref>
''[[ನಯಿ ದುನಿಯಾ]]'', ''[[ದೈನಿಕ್ ಭಾಸ್ಕರ್]]'', ''[[ದೈನಿಕ್ ಜಾಗರಣ್]]'', ''[[ಪತ್ರಿಕಾ]]'', ''[[ಅಗ್ನಿಬಾನ್]]'', ಮತ್ತು ''[[ಪ್ರಭಾತ್ಕಿರಣ್]]'' ಇತ್ಯಾದಿ ಇಂದೋರ್ನಲ್ಲಿ ಪ್ರಕಟಗೊಳ್ಳುವ ಪ್ರಮುಖ ಹಿಂದಿ ದಿನಪತ್ರಿಕೆಗಳಾಗಿವೆ. ''[[ದಿ ಟೈಮ್ಸ್ ಆಫ್ ಇಂಡಿಯಾ]]'', ''[[ಹಿಂದುಸ್ತಾನ್ ಟೈಮ್ಸ್]]'', ''[[ದಿ ಹಿಂದೂ]]'', ''[[ಫ್ರೀ ಪ್ರೆಸ್]]'', ''[[ಬ್ಯುಸಿನೆಸ್ ಸ್ಟ್ಯಾಂಡರ್ಡ್]]'' ಮತ್ತು ''[[ದಿ ಇಕನಾಮಿಕ್ಸ್ ಟೈಮ್ಸ್]]'' ಪ್ರಮುಖ ಇಂಗ್ಲೀಷ್ ಪತ್ರಿಕೆಗಳಾಗಿವೆ.
===ಸಂಪರ್ಕ-ಸಂವಹನ ಸೇವೆಗಳು===
ಇಂದೋರ್ ದೊಡ್ಡ ಪ್ರಮಾಣದ ಆಪ್ಟಿಕಲ್ ಫೈಬರ್ ಜಾಲದಿಂದ ಆವರಿಸಲ್ಪಟ್ಚಿದೆ. ನಗರದಲ್ಲಿರುವ ಮೂರು [[ಸ್ಥಿರ ದೂರವಾಣಿ ಲೈನು|ಸ್ಥಿರ ದೂರವಾಣಿ ಲೈನುಗಳ]] ಸಂಪರ್ಕ ನಿರ್ವಾಹಕರು: [[BSNL]], [[ರಿಲಯನ್ಸ್]] ಮತ್ತು [[ಏರ್ಟೆಲ್]]. ನಗರದಲ್ಲಿ ಒಟ್ಟು ಆರು [[ಮೊಬೈಲ್ ಪೋನ್]] ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ [[BSNL]], [[ರಿಲಯನ್ಸ್]], [[ವೊಡಾಫೋನ್]], [[ಐಡಿಯಾ]], [[ಏರ್ಟೆಲ್]], [[ಟಾಟಾ ಡೊಕೊಮೊ]] ಕಂಪನಿಗಳು [[GSM]] ಸೇವೆಯನ್ನು ಒದಗಿಸುತ್ತಿದ್ದು; [[BSNL]], [[ವರ್ಜಿನ್ ಮೊಬೈಲ್]], [[ಟಾಟಾ ಇಂಡಿಕಾಮ್]] ಮತ್ತು [[ರಿಲಯನ್ಸ್]] ಗಳು [[CDMA]] ಸೇವೆಯನ್ನು ಒದಗಿಸುತ್ತಿವೆ.
==ಕ್ರೀಡೆ==
[[File:Indore Stadium.jpg|thumb|ಇಂದೋರ್ನ ಉಷಾ ರಾಜೆ ಕ್ರೀಡಾಂಗಣ]]
ಇಂದೋರ್ ನೆಹರು ಕ್ರೀಡಾಂಗಣ ಮತ್ತು ಉಷಾ ರಾಜೆ ಕ್ರಿಕೆಟ್ ಕ್ರೀಡಾಂಗಣ ಎಂದು ಎರಡು ಕ್ರಿಕೆಟ್ ಕ್ರೀಡಾಂಗಣಗಳನ್ನು ಹೊಂದಿದೆ. ಅಲ್ಲಿ ಹುಲ್ಲುಹಾಸಿನ ಟೆನ್ನಿಸ್ ಮತ್ತು ಟೇಬಲ್ ಟೆನ್ನಿಸ್ಗಾಗಿ ಹಲವು ಸ್ಪೋರ್ಟ್ಸ್ ಕ್ಲಬ್ಗಳಿವೆ. ಇಂದೋರ್ ಹಲವು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಸಂಘಟಿಸಿದೆ. ಉಷಾ ರಾಜೆ ಕ್ರೀಡಾಂಗಣವು ಮಧ್ಯಪ್ರದೇಶದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಇದು ಸುಮಾರು ೪೫,೦೦೦ ಪ್ರೇಕ್ಷಕರು ಕುಳಿತುಕೊಳ್ಳುವ ಆಸನದ ಸಾಮರ್ಥ್ಯ ಹೊಂದಿದೆ. ಇಲ್ಲಿ ಹಲವು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಹಗಲು-ರಾತ್ರಿ ಕ್ರಿಕೆಟ್ ಪಂದ್ಯಗಳು ನಡೆದಿವೆ. ಉಷಾ ರಾಜೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಎರಡು [[ಅಂತರರಾಷ್ಟ್ರೀಯ ಏಕದಿನ]] ಪಂದ್ಯಗಳು ನಡೆದಿವೆ.
ಇಂದೋರ್ ಬಾಸ್ಕೆಟ್ಬಾಲ್ ಆಟಕ್ಕೆ ಪ್ರಖ್ಯಾತವಾಗಿದೆ. ಕಳೆದ ೩-೪ ದಶಕಗಳಿಂದ ಈ ಆಟವು ಜನಪ್ರಿಯವಾಗುತ್ತಿದೆ. ಇದು ಭಾರತದ ಮೊದಲ ರಾಷ್ಟ್ರೀಯ ಬಾಸ್ಕೆಟ್ಬಾಲ್ ಅಕಾಡಮಿಯನ್ನು ಹೊಂದಿದ್ದು, ವಿಶ್ವ ದರ್ಜೆಯ ಒಳಾಂಗಣ ಬಾಸ್ಕೆಟ್ಬಾಲ್ ಕ್ರೀಡಾಂಗಣ ಇಲ್ಲಿದೆ. ಇಂದೋರ್ ಹಲವು ರಾಷ್ಟ್ರೀಯ ಬಾಸ್ಕೆಟ್ಬಾಲ್ ಚ್ಯಾಂಪಿಯನ್ಶಿಪ್ಗಳನ್ನು ಯಶಸ್ವಿಯಾಗಿ ಸಂಘಟಿಸಿದೆ.
[[C. K. ನಾಯ್ಡು]], [[ಜೇಮ್ಶೇಡ್ ನಸರ್ವಾಂಜಿ ಭಾಯ]], [[ಮುಸ್ತಾಕ್ ಅಲಿ]], [[ಹಿರಲಾಲ್ ಗಾಯಕ್ವಾಡ್]], [[ನರೇಂದ್ರ ಹಿರ್ವಾನಿ]], [[ಅಮೇ ಖುರೇಷಿಯಾ]] ಮತ್ತು [[ಸಂಜಯ್ ಜಗ್ದಾಲೆ]] ಸೇರಿದಂತೆ ಹಲವು ಗಮನಾರ್ಹ ಕ್ರಿಕೆಟಿಗರು ಇಂದೋರ್ನಿಂದ ಬಂದಿದ್ದಾರೆ. ದಿವಂಗತ ಡಾ. ಶರ್ಮಾ (ಬಾಸ್ಕೆಟ್ಬಾಲ್) ಮತ್ತು ಮಾನಸ್ ಮಿಶ್ರಾ (ಪವರ್ಲಿಫ್ಟಿಂಗ್), ಕಿಶನ್ ಚಂದ್, [[ಶಂಕರ್ ಲಕ್ಷ್ಮಣ]] ಮತ್ತು ಸಲೀಮ್ ಶೆರ್ವಾನಿಯವರು (ಹಾಕಿ) ಇಂದೋರ್ನ ಇತರ ಖ್ಯಾತ ಕ್ರೀಡಾಪಟುಗಳಾಗಿದ್ದಾರೆ.
==ಸಂಸ್ಕೃತಿ==
ಇಂದೋರ್ ವಿವಿಧ-ವಿಭಿನ್ನ ಸಂಸ್ಕೃತಿಗಳಿಂದ ಕೂಡಿದ ನಗರವಾಗಿದೆ. ಇಂದೋರ್ ನಗರವು ಹಲವು ವರ್ಷಗಳಿಂದ ಎಲ್ಲಾ ಜಾತಿ, ಮತ ಮತ್ತು ಧರ್ಮ, ವರ್ಣದ ಜನರನ್ನು ಸ್ವಾಗತಿಸುತ್ತಿದೆ ಮಧ್ಯಪ್ರದೇಶದ ಹೃದಯ ಭಾಗದಲ್ಲಿರುವ ಇಂದೋರ್ಗೆ ದೇಶದ ಮೂಲೆ ಮೂಲೆಗಳಿಂದ ಜನರು ವಲಸೆಬಂದು, ತಮ್ಮ ಜೀವನೋಪಾಯ, ಶಿಕ್ಷಣಕ್ಕಾಗಿ ಅಥವಾ ಇಲ್ಲಿನ ಪ್ರಶಾಂತ ಸಂಸ್ಕೃತಿಯ ಪರಿಸರದಿಂದಾಗಿ, ಇಲ್ಲಿಯೇ ನೆಲೆಯೂರಿದ್ದಾರೆ. ಇಲ್ಲಿರುವ ಜನರು ಜಾತಿ ಅಥವಾ ಪ್ರದೇಶ ಮತ್ತು ಧರ್ಮದ ಭೇದವಿಲ್ಲದೆ ಎಲ್ಲರೊಂದಿಗೆ ಬೆರೆತು, ಸುಖದ ಜೀವನ ನಡೆಸುತ್ತಿದ್ದಾರೆ.
[[File:Gurdwara AB Road Indore.jpg|thumb|ಗರುಡವಾಡ LIG ವೃತ್ತ]]
===ಆಹಾರ===
ಇಂದೋರ್ನ ಪಾಕಶಾಸ್ತ್ರ ಪದ್ಧತಿಯು ಹೆಸರುವಾಸಿಯಾಗಿದ್ದು, ನಮ್ಕೀನ್ಗಳು,(ಉಪ್ಪು ಕರಿದ ತಿಂಡಿಗಳು) ಪೋಹಾ ಮತ್ತು ಜಲೆಬಿ, ಚಾಟ್ಸ್ (ಉಪಹಾರಗಳು), ಕಚೊರಿಗಳು ಮತ್ತು ಸಮೋಸಾಗಳ ಬಗೆಬಗೆಯ ತಿನಿಸುಗಳಿಗೆ ಪ್ರಸಿದ್ಧವಾಗಿದೆ. ಅಲ್ಲಿನ ವಿವಿಧ ರೆಸ್ಟಾರೆಂಟ್ಗಳಲ್ಲಿ ವಿವಿಧ ಪ್ರಕಾರದ ಅಡುಗೆ ಪದ್ಧತಿಗಳ ತಿನಿಸುಗಳು ದೊರೆಯುವವು. ಅಲ್ಲದೇ ಇಂದೋರ್ ಮತ್ತು ಮಾಲ್ವಾ ಪ್ರದೇಶದ ರುಚಿ ತಿನಿಸುಗಳಾದ ದಾಲ್-ಬಫ್ಲಾ, ನಿಹಾರಿ ಗೋಷ್ಟ್ ಮತ್ತು ಬಫಾ-ಗೋಷ್ಟ್ನಂತಹ ನವೀನ ತಿನಿಸುಗಳು ಮಾತ್ರವಲ್ಲದೆ ಬೆಂಗಾಲಿ, ಮುಸ್ಲಿಮ್, ರಾಜಸ್ಥಾನಿ ಮಾದರಿಯ ಲಘು ಮತ್ತು ಸಿಹಿತಿನಿಸುಗಳು ದೊರೆಯುವುದು.
[[ದೈನಿಕ್ ಭಾಸ್ಕರ್]] ಸಂಘಟಿಸಿದ ಸುಮಾರು ೩೦,೦೦೦ ಜನರನ್ನೊಳಗೊಂಡ ಅತಿ ದೊಡ್ಡ ಚಹಾ ಕೂಟದ ದಾಖಲೆಯನ್ನು ಇಂದೋರ್ ಹೊಂದಿದೆ.<ref>{{cite news|url=http://sify.com/news/fullstory.php?id=14610077|title=A record tea party at Indore|date=2008-02-25|publisher=[[Sify]]|accessdate=೨೦೦೯-೦೯-೧೩}}</ref>
===ಪ್ರಮುಖ ಹಬ್ಬಗಳು===
ಎಲ್ಲಾ ರಾಷ್ಟ್ರೀಯ ಹಬ್ಬಗಳಲ್ಲದೆ ಹೋಳಿ, ಬೈಸಾಕಿ, ರಕ್ಷಾಬಂಧನ, ನವರಾತ್ರಿ, ದಸರಾ, [[ಗಣೇಶೋತ್ಸವ]], [[ದೀಪಾವಳಿ]], [[ರಮ್ಜಾನ್]], [[ಗುಡಿ ಪಾಡ್ವಾ]], [[ಭೌಬೀಜ್]], [[ಈದ್]] ನಂತಹ ಎಲ್ಲಾ ಹಬ್ಬಗಳು; ನಾಗರಪಂಚಮಿ, ಅಹಲ್ಯಾ ಉತ್ಸವವನ್ನು ಅದೇ ಸಂಭ್ರಮದೊಂದಿಗೆ ಆಚರಿಸುವರು.
==ಸರಕಾರ ಮತ್ತು ರಾಜಕಾರಣ==
ಒಟ್ಟು ಸಂಸತ್ ಸ್ಥಾನಗಳ ಸಂಖ್ಯೆ: ೧
* [[ಸಂಸತ್ ಸದಸ್ಯೆ ]]: [[ಸುಮಿತ್ರಾ ಮಹಾಜನ್]]
* '''ನಗರದ ಮಹಾಪೌರ:''' ಕೃಷ್ಣ ಮುರಾರಿ ಮೊಘೆ
* [[ಶಾಸಕ]]: ಅಶ್ವಿನ್ ಜೋಷಿ, ಸುದರ್ಶನ ಗುಪ್ತ, ರಮೇಶ್ ಮೆಂಡೊಲಾ, ಮಾಲಿನಿ ಗೌಡ್, ಮಹೇಂದ್ರ ಹರ್ಡಿಯಾ, ಜೀತು ಜೀರಾಟಿ.
*''' ಪ್ರಧಾನ ಪೋಲಿಸ್ ವರಿಷ್ಟ ಇನ್ಸ್ಪೆಕ್ಟರ್ ಜನರಲ್(ಇಂದೋರ್ ವಲಯ):''' ಸಂಜಯ ರಾಣಾ IPS
*''' DIG/SSP ಇಂದೋರ್:''' D. ಶ್ರೀನಿವಾಸ್ ರಾವ್ IPS
* '''ಜಿಲ್ಲಾಧಿಕಾರಿ:''' ರಾಕೇಶ್ ಶ್ರೀವಾತ್ಸವ್ - IAS ಐಎಎಸ್
*'''ಪೋಲಿಸ್ ವ್ಯವಸ್ಥಾಪಕ (ಪೂರ್ವ ಇಂದೋರ್):''' ಮಕ್ರಂದ್ ದೆವುಸ್ಕರ್- IPS
*'''ಪೋಲಿಸ್ ವ್ಯವಸ್ಥಾಪಕ (ಪಶ್ಚಿಮ ಇಂದೋರ್):''' D. ಶ್ರೀನಿವಾಸ ವರ್ಮ IPS
*'''ಇಂದೋರ್ ಅಭಿವೃದ್ಧಿ ಪ್ರಾಧಿಕಾರ (I.D.A) ಅಧ್ಯಕ್ಷರು:''' ಮಧು ವರ್ಮ
==ಪ್ರಸಿದ್ಧ ಸ್ಥಳಗಳು==
* '''ರಾಜ್ವಾಡಾ ''' - ಹೋಳ್ಕರ ಕಾಲದಲ್ಲಿ ಕಟ್ಟಿದ ಏಳು ಅಂತಸ್ತಿನ ಅರಮನೆ. ವಾಸ್ತುವಿನ್ಯಾಸಕರಾದ ಹಿಮಾಂಶು ದುಡ್ವಾಕರ್ ಮತ್ತು ಶ್ರೇಯಾ ಭಾರ್ಗವರವರು ಇತ್ತೀಚೆಗೆ ಪ್ರಮುಖ ವಾಡಾವನ್ನು (ರಾಜನ ನಿವಾಸ) ಅದರ ಮೂಲ ವೈಭವದ ಮಾದರಿಯಲ್ಲಿಯೇ ಪುನರ್ ನಿರ್ಮಿಸಿದರು. ಇದಕ್ಕೆ ಮಹಾರಾಣಿ ಉಷಾದೇವಿ ಹೋಳ್ಕರ ಆರ್ಥಿಕ ನೆರವು ನೀಡಿದರು.
* '''ಲಾಲ್ ಬಾಗ್ ಅರಮನೆ''' - ವಿಶಾಲವಾದ ಸುಂದರ ಅರಮನೆಯು{{convert|200|acre|km2}} ಈ ಜಾಗೆಯಲ್ಲಿ ವಿಸ್ತರಿಸಿದೆ. ಈಗ ಇದು ವಸ್ತುಸಂಗ್ರಹಾಲಯವಾಗಿದೆ. ಅಲ್ಲದೇ ಇಲ್ಲಿ ಹೋಳ್ಕರ ಕಾಲದ ಹಸ್ತಕಲಾಕೃತಿಗಳನ್ನು ಕಾಣಬಹುದಾಗಿದೆ.
* '''ಸೀತಾಲಮಾತಾ ಜಲಪಾತ''' - ಇದು ಮನ್ಪುರ ಹತ್ತಿರದ ಸುಂದರ ಸ್ಥಳವಾಗಿದೆ ಮತ್ತು ಇಂದೋರ್ನಿಂದ {{convert|65|km|0|abbr=on}}ನಷ್ಟು ದೂರವಿದೆ. AB ರಸ್ತೆಯಿಂದ ಸುಮಾರು {{convert|5|km|0|abbr=on}}ನಷ್ಟು ಕ್ರಮಿಸಬೇಕಾಗುತ್ತದೆ.
* '''[[ಕ್ರಿಸ್ಟಲ್ ದೇವಸ್ಥಾನ]]''' - ಇದು ಶತಮಾನದ ಹಿಂದೆ [[ಸೇಟ್ ಹುಕುಂಚಂದ್]] ನಿರ್ಮಿಸಿದ [[ದಿಗಂಬರ್ ಜೈನ್]] ದೇವಸ್ಥಾನವಾಗಿದೆ. ಇದು ಅತ್ಯಂತ ಸುಂದರವಾದ ಗಾಜಿನ ಕುಸರಿಕಲೆಯಿಂದ ಕೂಡಿದೆ.
* '''ಕೃಷ್ಣಾಪುರ ಛಾತ್ರಿ ''' - ಇದು ಹೆಚ್ಚು ಮಾಲಿನ್ಯದ ಖಾನ್ ನದಿಯ ದಡದಲ್ಲಿದೆ. ಇದು ರಾಜ್ವಾಡಾದಿಂದ ಸ್ವಲ್ಪ ದೂರದಲ್ಲಿದೆ.
* '''ದೇವ್ಲಾಲಿಕರ್ ಕಲಾ ವಿಥಿಕಾ''' - ಇದು ಪ್ರಸಿದ್ಧ ಕಲಾಮಂದಿರವಾಗಿದೆ. ಇದಕ್ಕೆ ಅವಿಸ್ಮರ್ಣೀಯ ಚಿತ್ರಕಾರ ವಿಷ್ಣು ದೇವ್ಲಾಲಿಕರ್ ಹೆಸರನ್ನು ಇಡಲಾಗಿದೆ.
* '''[[ಪಾಟಲ್ ಪಾನಿ]]''' - ಮೊವ್ ಸಮೀಪವಿರುವ ಸುಂದರ ಜಲಪಾತ. ಪಾಟಲ್ ಪಾನಿಯಲ್ಲಿ ಚಿಕ್ಕ ರೈಲ್ವೆ ನಿಲ್ದಾಣವಿದೆ - ಖಂಡ್ವಾ ಕಡೆಗೆ ಮೀಟರ್-ಗೇಜು ಪಟ್ಟಿಯಲ್ಲಿ ಪ್ರಯಾಣಿಸುವಾಗ ಮೊವ್ ನಂತರ ಸಿಗುವ ಮೊದಲ ರೈಲ್ವೆ ನಿಲ್ದಾಣ.
* '''ಜನಪಾಯೊ ದೇವಸ್ಥಾನ''' - ಇದು ಮೊವ್ದಿಂದ {{convert|16|km|0|abbr=on}}ರಷ್ಟು ದೂರದಲ್ಲಿ [[ರಾಷ್ಟ್ರೀಯ ಹೆದ್ದಾರಿ 3 (ಭಾರತ)]] ರಸ್ತೆಯ ಪಕ್ಕದಲ್ಲಿದೆ. ದೇವಸ್ಥಾನವು ಕುಟಿ ಎಂಬ ಗ್ರಾಮದ ಬೆಟ್ಟದ ತುದಿಯಲ್ಲಿದೆ. ಪುರಾಣಗಳ ಪ್ರಕಾರ, ಇದು ಜಮದಗ್ನಿ ಋಷಿ ನೆಲೆಸಿರುವ ಸ್ಥಳವಾಗಿದ್ದು, ಪರುಶುರಾಮನ ತಂದೆಯಾದ ಈತ ಇಲ್ಲಿ ಆಶ್ರಮ ಕಟ್ಟಿದ್ದಾನೆ ಎಂದು ಹೇಳಲಾಗಿದೆ. ದೀಪಾವಳಿಯ ನಂತರದ ಮೊದಲ ಪೂರ್ಣಿಮೆಯಾದ ಕಾರ್ತಿಕ ದಿನದಂದು ಇಲ್ಲಿ ನಡೆಯುವ ಮೇಳಾ (ಜಾತ್ರೆ) ಪ್ರಸಿದ್ಧವಾಗಿದೆ.
* '''[[ಬಡಾ ಗಣಪತಿ ದೇವಸ್ಥಾನ]]'''
* '''[[ಖಜ್ರಾನಾದ ಗಣೇಶ ದೇವಸ್ಥಾನ]]''' - ಗಣೇಶನ ದೇವಸ್ಥಾನ
* '''[[ರಣಜಿತ್ ಹನುಮಾನ್ ದೇವಸ್ಥಾನ]]'''
* '''[[ಅನ್ನಪೂರ್ಣ ದೇವಸ್ಥಾನ]]''' - ಇದು ಅತ್ಯಂತ ಸುಂದರ ಹಿಂದೂ ದೇವಸ್ಥಾನವಾಗಿದ್ದು, ಪ್ರಧಾನ ದೇವತೆ ಅನ್ನಪೂರ್ಣ ಇಲ್ಲಿದ್ದಾಳೆ. ಈ ದೇವಸ್ಥಾನವು ನಗರದ ಪಶ್ಚಿಮ ಭಾಗದಲ್ಲಿದೆ.
* '''ಕಜ್ಲಿಗಡ್''' - ಖಂಡ್ವಾ ರಸ್ತೆಯಲ್ಲಿ ಖಂಡ್ವಾ ಕಡೆಗೆ ಸುಮಾರು {{convert|20|km|0|abbr=on}}ರಷ್ಟು ದೂರದಲ್ಲಿದೆ. ಇದು ಪುರಾತನ ಹಾಳುಬಿದ್ದ ಚಿಕ್ಕ ಕೋಟೆಯಾಗಿದ್ದು, ಇದರ ಬಳಿ ಸುಂದರ ಕಣಿವೆ ಮತ್ತು ಚಿಕ್ಕ ಜಲಪಾತ ಇದೆ. ಈ ಸ್ಥಳಕ್ಕೆ ಮಳೆಗಾಲ ಮತ್ತು ಅದರ ನಂತರದ ಸಮಯದಲ್ಲಿ ಭೇಟಿ ನೀಡುವುದು ಉತ್ತಮ. ಒಂದು ದಿನದ ವಿಹಾರಕ್ಕೆ ಈ ಸ್ಥಳವು ಸೂಕ್ತವಾಗಿದ್ದರೂ ಸಹ, ಇಂದೋರ್ನಲ್ಲಿರುವ ಹಲವರಿಗೆ ಇದರ ಬಗ್ಗೆ ತಿಳಿದಿಲ್ಲ.{{Citation needed|date=January 2010}}
* '''[[ತಿಂಚಾ ಜಲಪಾತಗಳು]]''' - ಇದು ಕಜ್ಲಿಗಡ್ನ ಹತ್ತಿರದಲ್ಲಿದೆ. ಇದು ಸಿಮ್ರೊಲ್ ಹತ್ತಿರದ ಸುಂದರ ಜಲಪಾತವಾಗಿದೆ. ಇದು ಉಸಿರು ಬಿಗಿಹಿಡಿಯುವಂತಹ ಮತ್ತು ನಿಬ್ಬೆರಗಾಗಿಸುವ ಸೌಂದರ್ಯ ಹೊಂದಿದ್ದು, ಮಳೆಗಾಲ ಮತ್ತು ನಂತರದ ಸಮಯದಲ್ಲಿ ನೋಡಲೇ ಬೇಕಾದ ಸ್ಥಳವಾಗಿದೆ.
* '''ಪ್ರಾಣಿ ಸಂಗ್ರಹಾಲಯ''' - ಇಂದೋರ್ನಲ್ಲಿರುವ ಪ್ರಾಣಿಸಂಗ್ರಹಾಲಯವು ಪ್ರಾಣಿಗಳ ಅನನ್ಯ ಸಾಕಾಣಿಕೆ, ರಕ್ಷಣೆಗೆ ಮತ್ತು ವಿವಿಧ ಪ್ರಾಣಿಗಳಿಗೆ ಪ್ರಖ್ಯಾತವಾಗಿದೆ.
* '''ಟ್ರೇಜರ್ ಐಲ್ಯಾಂಡ್''' - ಇದು ಮಧ್ಯಪ್ರದೇಶದ ಮೊದಲ ಶಾಪಿಂಗ್ ಮಾಲ್ ಆಗಿದೆ. ಇದು ಬಹುಮಹಡಿ ಭವ್ಯ ಕಟ್ಟಡ ಹೊಂದಿದ್ದು, ಇದರಲ್ಲಿ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬ್ರ್ಯಾಂಡ್ಗಳ ಮಳಿಗೆ ಮತ್ತು ಶೋರೂಮ್ಗಳನ್ನು ಹೊಂದಿದೆ. ಅಲ್ಲದೆ ಹಲವು ಉಪಾಹಾರ ಗೃಹಗಳು, ಬಾರ್ ಮತ್ತು ಮಲ್ಟೀಪ್ಲೆಕ್ಸ್ ಅನ್ನು (PVR ಸಿನಿಮಾಸ್) ಹೊಂದಿದೆ.
'''"ಸೆಂಟ್ರಲ್ ಮಾಲ್"''' '''Bold text'''- ಇದು RNT ಮಾರ್ಗದಲ್ಲಿರುವ ಅತ್ಯಂತ ದೊಡ್ಡ ಭವ್ಯ ಮಾರಾಟದ (Retail) ಕೇಂದ್ರಸ್ಥಾನವಾಗಿದೆ. ಅಲ್ಲದೆ ಇದು INOX ಮಲ್ಟೀಪ್ಲೆಕ್ಸ್, ಪಬ್, ಮಕ್ಕಳಿಗಾಗಿ ವಿನೋದ ಮತ್ತು ಆಟದ ವಲಯ, ವಿಶಾಲ ವಾಹನನಿಲುಗಡೆ ಸ್ಥಳ ಮತ್ತು ಎಲ್ಲಾ ಅಂತರರಾಷ್ಟ್ರೀಯ ಬ್ರ್ಯಾಂಡ್ ಮಳಿಗೆಗಳನ್ನು ಹೊಂದಿದೆ.''' ''
==ಕೆಲ ತುಣುಕುಗಳು==
* ಇಂದೋರ್ನಲ್ಲಿರುವ ಲಾಲ್ಬಾಗ್ ಅರಮನೆ ದ್ವಾರವು [[ಲಂಡನ್|ಲಂಡನ್ನಲ್ಲಿರುವ]] [[ಬಂಕಿಂಗ್ಹ್ಯಾಮ್ ಅರಮನೆ|ಬಂಕಿಂಗ್ಹ್ಯಾಮ್ ಅರಮನೆಯ]] ದ್ವಾರಗಳ ಪ್ರತಿಕೃತಿಯಾಗಿದೆ. ಅದನ್ನು [[ಇಂಗ್ಲೆಂಡ್|ಇಂಗ್ಲೆಂಡ್ನಲ್ಲಿ]] ಸಿದ್ದಪಡಿಸಿ, ನಂತರ ಇಂದೋರ್ಗೆ ತರಲಾಯಿತು.
* ಇಂದೋರ್ನಲ್ಲಿ "ವಿಜಯ್ ಬಲ್ಲಾ" ಎನ್ನುವ ಕಾಂಕ್ರಿಟ್ನಿಂದ ನಿರ್ಮಿಸಿದ ದೊಡ್ಡ [[ಕ್ರಿಕೆಟ್]] ಬ್ಯಾಟ್ ಇದ್ದು, ಅದರಲ್ಲಿ ೧೯೭೧ರಲ್ಲಿ ನಡೆದ ಕ್ರಿಕೆಟ್ ಸರಣಿಯಲ್ಲಿ ಗ್ಯಾರಿ ಸೋಬರ್ಸ್' ನಾಯಕತ್ವದ ವೆಸ್ಟ್ ಇಂಡೀಸ್ ತಂಡದ ವಿರುದ್ದ ಗೆದ್ದ ಭಾರತ ತಂಡದ ಆಟಗಾರರ ಹೆಸರನ್ನು ಬರೆಯಲಾಗಿದೆ.
* ಬಡಾ ಗಣಪತಿಪ್ರದೇಶದಲ್ಲಿರುವ {{convert|40|ft|m}} ದೊಡ್ಡ ಮೂರ್ತಿಯು ವಿಶ್ವದ ಅತಿ ದೊಡ್ಡ [[ಗಣೇಶ|ಗಣೇಶನ]] ವಿಗ್ರಹವಾಗಿದೆ.
* [[ರಾಜಾ ರಾಮಣ್ಣ ಸೆಂಟರ್ ಫಾರ್ ಅಡ್ವಾನ್ಸ್ಡ್ ಟೆಕ್ನಾಲಜಿ]] (ಮೊದಲು CAT ಎಂದು ಹೆಸರಾಗಿದ್ದ) ಸಂಸ್ಥೆಯು ಭಾರತ ಸರಕಾರದ ಅಣುಶಕ್ತಿ ಇಲಾಖೆಯಡಿಯಲ್ಲಿ ಕೆಲಸಮಾಡುವ [[ಲೇಸರ್]] ಮತ್ತು [[ವೇಗವರ್ಧಕ]] ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸುವ ಭಾರತದ ಪ್ರಮುಖ ಸಂಶೋಧನಾ ಕೇಂದ್ರವಾಗಿದೆ.
* ಪ್ರಖ್ಯಾತ [[ರೇಡಿಯೊ ಮಿರ್ಚಿ]] ೯೮.೩ (ನಂತರ ೯೮.೪) FM ಮೊದಲ ಬಾರಿಗೆ ಇಂದೋರ್ನಲ್ಲಿ ಪ್ರಾರಂಭವಾಗಿ, ನಂತರ ಭಾರತದ ೪ ಮೆಟ್ರೊ ನಗರಗಳು ಸೇರಿದಂತೆ ಉಳಿದ ಹತ್ತು ನಗರಗಳಿಗೆ ವ್ಯಾಪಿಸಿತು.
* ೧೯೯೦ ದಶಕದ ಪ್ರಾರಂಭದವರೆಗೂ, ಇಂದೋರ್ನಲ್ಲಿ ಬಾಲಿವುಡ್ ಚಲನಚಿತ್ರಗಳು ಗುರುವಾರ ಬಿಡುಗಡೆಯಾಗುತ್ತಿದ್ದರೆ, ದೇಶದ ಉಳಿದ ಭಾಗಗಳಲ್ಲಿ ಶುಕ್ರವಾರ ಬಿಡುಗಡೆಯಾಗುತ್ತಿದ್ದವು.
* ಏರ್ಟೆಲ್ ಕಂಪನಿಯು ಟಚ್ಟೆಲ್ ಎಂಬ ಹೆಸರಿನ ಖಾಸಗಿ ಸ್ಥಿರ ದೂರವಾಣಿ ಸೇವೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಇಂದೋರ್ನಲ್ಲಿ ಬಿಡುಗಡೆ ಮಾಡಿತು.
* ಬಾಂಬೆ ನಂತರ, ಇಂದೋರ್ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಹತ್ತಿ ಗಿರಣಿಗಳನ್ನು ಹೊಂದಿದೆ. ಹಾಗಾಗಿ ಇದನ್ನು ಮಿನಿ-ಬಾಂಬೆ ಎಂದು ಕರೆಯುತ್ತಾರೆ.
* ೨೦೦೭ರಲ್ಲಿ ವಾಸ್ತುವಿನ್ಯಾಸಕರಾದ ಹಿಮಾಂಶು ದುಡ್ವಾಕರ್ ಮತ್ತು ಶ್ರೇಯಾ ಭಾರ್ಗವರವರು ೨೫೦ ವರ್ಷಗಳ ಹಿಂದೆ ಇಂದೋರ್ನ ರಾಜ್ವಾಡ ನಿರ್ಮಿಸಲು ಬಳಸಿದ ಶೈಲಿ, ವಸ್ತುಗಳು ಮತ್ತು ವಿಧಾನವನ್ನು, ಅದರ ಪುನರ್ನಿರ್ಮಾಣ ಕಾರ್ಯದಲ್ಲಿ ಕರಾರುವಕ್ಕಾಗಿ ಬಳಸಿಕೊಳ್ಳಲಾಗಿದೆ. ಹೀಗೆ ಇದು ಭಾರತದಲ್ಲಿ ಪುನರ್ನಿರ್ಮಿಸಿದ ಏಕೈಕ ಐತಿಹಾಸಿಕ ಕಟ್ಟಡವಾಗಿದೆ.
* [[IIM]] ಮತ್ತು [[IIT]] ಎರಡನ್ನು ಹೊಂದಿರು ಭಾರತದ ಏಕಮಾತ್ರ ನಗರ
* ಇಂದೋರ್ನ್ನು "ಮಿನಿ ಬಾಂಬೆ" ಎಂದು ಕರೆಯುತ್ತಾರೆ
== ಚಿತ್ರಸಂಪುಟ ==
<gallery>
File:Indore Rajwada.jpg|ಇಂದೋರ್ನ ರಾಜ್ವಾಡ ಅರಮನೆ
File:Krishnapura Chhatri.jpg|ಕೃಷ್ಣಾಪುರ ಛತ್ರಿ
File:Sculptures on Krishnapura Chhatri.JPG|ಕೃಷ್ಣಾಪುರ ಛತ್ರಿಯಲ್ಲಿ ಶಿಲ್ಪಾಕೃತಿಗಳು
File:Krishnapura Chhatri from inside.JPG|ಕೃಷ್ಣಾಪುರ ಛತ್ರಿಯ ಒಳನೋಟ
File:Carvings at Krishnapura Chhatri.JPG|ಕೃಷ್ಣಾಪುರ ಛತ್ರಿ ಅಲಂಕಾರಿಕ ಕೆತ್ತನೆಗಳು
File:Carved Pillars of Krishnapura Chhatri.JPG|ಕೃಷ್ಣಾಪುರ ಛತ್ರಿಯಲ್ಲಿರುವ ಕಲಾಕೃತಿಗಳಿಂದ ಕೂಡಿದ ಕಂಬಗಳು
File:Intricate Sculptures on Krishnapura Chhatri.JPG|ಕೃಷ್ಣಾಪುರ ಛತ್ರಿಯಲ್ಲಿರುವ ಜಟಿಲವಾದ ಶಿಲ್ಪಾಕೃತಿಗಳು
File:Bada Ganpati Indore.jpg|ಬಡಾ ಗಣಪತಿ-ಅತಿ ದೊಡ್ಡ ಗಣೇಶನ ವಿಗ್ರಹ
File:Indore Cricket Bat.JPG|ವಿಜಯ್ ಬಲ್ಲಾ
File:Treasure islandindore.jpg|ಮಧ್ಯಪ್ರದೇಶದಲ್ಲಿ ಮೊದಲ ಟ್ರಿಸರಿ ಐಲ್ಯಾಂಡ್ ಮಾಲ್
</gallery>
== ಇವನ್ನೂ ಗಮನಿಸಿ ==
* [[ಬರ್ಹಾನ್ಪುರ್]]
* [[ಓಂಕಾರೇಶ್ವರ]]
* [[ಮಾಂಡು]]
* [[ಮಹೇಶ್ವರ]]
* [[ಮೊವ್]]
* [[ದೇವಸ್]]
* [[ಉಜ್ಜಯಿನಿ]]
* [[ಕ್ಷಿಪ್ರ]]
* [[ರಾವು]]
* [[ರಂಗ್ವಾಸ]]
* [[ಮನ್ಪುರ್, ಇಂದೋರ್]]
== ಆಕರಗಳು ==
{{More footnotes|date=September 2009}}
{{Reflist|2}}
http://timesofindia.indiatimes.com/home/sunday-toi/all-that-matters/Indore-The-sleepy-town-that-woke-up-to-New-India/articleshow/5331851.cms
== ಹೊರಗಿನ ಕೊಂಡಿಗಳು ==
* [http://www.indore.nic.in ಭಾರತದ ಸರಕಾರದ ಮಾಹಿತಿ ವೆಬ್ಸೈಟ್ನಲ್ಲಿ ನಗರದ ಪೋರ್ಟಲ್] {{Webarchive|url=https://web.archive.org/web/20190724145904/http://www.indore.nic.in/ |date=2019-07-24 }}
* [http://www.imcindore.org/ ಇಂದೋರ್ ಪುರಸಭೆ ವೆಬ್ಸೈಟ್] {{Webarchive|url=https://web.archive.org/web/20180509060652/http://imcindore.org/ |date=2018-05-09 }}
* {{wikivoyage|Indore}}
* [http://www.indorepolice.org/ ಇಂದೋರ್ ಪೋಲಿಸ್ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20180827083259/http://www.indorepolice.org/ |date=2018-08-27 }}
* [http://indiamapsite.com/madhya_pradesh/indore/ ಇಂದೋರ್ನ ಉಪಗ್ರಹ ನಕ್ಷೆ]
* [http://www.indore360.com/community ಇಂದೋರ್ ಸಮುದಾಯ] {{Webarchive|url=https://web.archive.org/web/20091116022406/http://www.indore360.com/community/ |date=2009-11-16 }} ದೊಂದಿಗೆ [http://www.indore360.com ಇಂದೋರ್360: ಇಂದೋರ್ ನಗರ ಪೋರ್ಟಲ್]
<br>
{{Million-plus cities in India}}
{{Interwikineeded}}
[[ವರ್ಗ:ಮಧ್ಯ ಪ್ರದೇಶದ ನಗರ ಮತ್ತು ಪಟ್ಟಣಗಳು]]
[[ವರ್ಗ:ಮಾಲ್ವಾದಲ್ಲಿರುವ ನಗರಗಳು]]
[[ವರ್ಗ:ಇಂದೋರ್]]
[[ವರ್ಗ:ಮಾಲ್ವಾ]]
[[ವರ್ಗ:ಮಧ್ಯ ಪ್ರದೇಶ]]
[[ವರ್ಗ:ಭಾರತದ ಪಟ್ಟಣಗಳು]]
d28tg7gezkkvuce6ivlok9a895dpu85
ಟೆಂಪ್ಲೇಟು:Infobox settlement
10
23149
1378244
1302384
2026-08-02T18:47:07Z
en>Zackmann08
0
and another one missed.
1378244
wikitext
text/x-wiki
<includeonly>{{main other|{{#invoke:Settlement short description|main}}|}}{{Infobox
| child = {{yesno|{{{embed|}}}}}
| templatestyles = Infobox settlement/styles.css
| bodyclass = ib-settlement vcard
<!--** names, type, and transliterations ** -->
| above = <div class="fn org">{{if empty|{{{name|}}}|{{{official_name|}}}|{{PAGENAMEBASE}}}}</div>
{{#if:{{{native_name|}}}|<div class="nickname ib-settlement-native" {{#if:{{{native_name_lang|}}}|lang="{{{native_name_lang}}}"}}>{{{native_name}}}</div>}}{{#if:{{{other_name|}}}|<div class="nickname ib-settlement-other-name">{{{other_name}}}</div>}}
| subheader = {{#if:{{{settlement_type|}}}{{{type|}}}|<div class="category">{{if empty|{{{settlement_type|}}}|{{{type}}}}}</div>}}
| rowclass1 = mergedtoprow ib-settlement-official
| data1 = {{#if:{{{name|}}}|{{{official_name|}}}}}
<!-- ***Transliteration language 1*** -->
| rowclass2 = mergedtoprow
| header2 = {{#if:{{{translit_lang1|}}}|{{{translit_lang1}}} transcription(s)}}
| rowclass3 = {{#if:{{{translit_lang1_type1|}}}|mergedrow|mergedbottomrow}}
| label3 = • {{{translit_lang1_type}}}
| data3 = {{#if:{{{translit_lang1|}}}|{{#if:{{{translit_lang1_type|}}}|{{{translit_lang1_info|}}}}}}}
| rowclass4 = {{#if:{{{translit_lang1_type2|}}}|mergedrow|mergedbottomrow}}
| label4 = • {{{translit_lang1_type1}}}
| data4 = {{#if:{{{translit_lang1|}}}|{{#if:{{{translit_lang1_type1|}}}|{{{translit_lang1_info1|}}}}}}}
| rowclass5 = {{#if:{{{translit_lang1_type3|}}}|mergedrow|mergedbottomrow}}
| label5 = • {{{translit_lang1_type2}}}
| data5 = {{#if:{{{translit_lang1|}}}|{{#if:{{{translit_lang1_type2|}}}|{{{translit_lang1_info2|}}}}}}}
| rowclass6 = {{#if:{{{translit_lang1_type4|}}}|mergedrow|mergedbottomrow}}
| label6 = • {{{translit_lang1_type3}}}
| data6 = {{#if:{{{translit_lang1|}}}|{{#if:{{{translit_lang1_type3|}}}|{{{translit_lang1_info3|}}}}}}}
| rowclass7 = {{#if:{{{translit_lang1_type5|}}}|mergedrow|mergedbottomrow}}
| label7 = • {{{translit_lang1_type4}}}
| data7 = {{#if:{{{translit_lang1|}}}|{{#if:{{{translit_lang1_type4|}}}|{{{translit_lang1_info4|}}}}}}}
| rowclass8 = {{#if:{{{translit_lang1_type6|}}}|mergedrow|mergedbottomrow}}
| label8 = • {{{translit_lang1_type5}}}
| data8 = {{#if:{{{translit_lang1|}}}|{{#if:{{{translit_lang1_type5|}}}|{{{translit_lang1_info5|}}}}}}}
| rowclass9 = mergedbottomrow
| label9 = • {{{translit_lang1_type6}}}
| data9 = {{#if:{{{translit_lang1|}}}|{{#if:{{{translit_lang1_type6|}}}|{{{translit_lang1_info6|}}}}}}}
<!-- ***Transliteration language 2*** -->
| rowclass10 = mergedtoprow
| header10 = {{#if:{{{translit_lang2|}}}|{{{translit_lang2}}} transcription(s)}}
| rowclass11 = {{#if:{{{translit_lang2_type1|}}}|mergedrow|mergedbottomrow}}
| label11 = • {{{translit_lang2_type}}}
| data11 = {{#if:{{{translit_lang2|}}}|{{#if:{{{translit_lang2_type|}}}|{{{translit_lang2_info|}}}}}}}
| rowclass12 = {{#if:{{{translit_lang2_type2|}}}|mergedrow|mergedbottomrow}}
| label12 = • {{{translit_lang2_type1}}}
| data12 = {{#if:{{{translit_lang2|}}}|{{#if:{{{translit_lang2_type1|}}}|{{{translit_lang2_info1|}}}}}}}
| rowclass13 = {{#if:{{{translit_lang2_type3|}}}|mergedrow|mergedbottomrow}}
| label13 = • {{{translit_lang2_type2}}}
| data13 = {{#if:{{{translit_lang2|}}}|{{#if:{{{translit_lang2_type2|}}}|{{{translit_lang2_info2|}}}}}}}
| rowclass14 = {{#if:{{{translit_lang2_type4|}}}|mergedrow|mergedbottomrow}}
| label14 = • {{{translit_lang2_type3}}}
| data14 = {{#if:{{{translit_lang2|}}}|{{#if:{{{translit_lang2_type3|}}}|{{{translit_lang2_info3|}}}}}}}
| rowclass15 = {{#if:{{{translit_lang2_type5|}}}|mergedrow|mergedbottomrow}}
| label15 = • {{{translit_lang2_type4}}}
| data15 = {{#if:{{{translit_lang2|}}}|{{#if:{{{translit_lang2_type4|}}}|{{{translit_lang2_info4|}}}}}}}
| rowclass16 = {{#if:{{{translit_lang2_type6|}}}|mergedrow|mergedbottomrow}}
| label16 = • {{{translit_lang2_type5}}}
| data16 = {{#if:{{{translit_lang2|}}}|{{#if:{{{translit_lang2_type5|}}}|{{{translit_lang2_info5|}}}}}}}
| rowclass17 = mergedbottomrow
| label17 = • {{{translit_lang2_type6}}}
| data17 = {{#if:{{{translit_lang2|}}}|{{#if:{{{translit_lang2_type6|}}}|{{{translit_lang2_info6|}}}}}}}
<!-- end ** names, type, and transliterations ** -->
<!-- ***Skyline Image*** -->
| rowclass18 = mergedtoprow
| data18 = {{#if:{{{image_skyline|}}}{{{image|}}}|<!--
-->{{#invoke:InfoboxImage|InfoboxImage<!--
-->|image={{if empty|{{{image_skyline|}}}|{{{image|}}}}}<!--
-->|size={{if empty|{{{image_size|}}}|{{{imagesize|}}}}}|sizedefault=250px|upright={{{image_upright|}}}<!--
-->|alt={{if empty|{{{image_alt|}}}|{{{alt|}}}}}<!--
-->|title={{if empty|{{{image_caption|}}}|{{{caption|}}}|{{{image_alt|}}}|{{{alt|}}}}}}}<!--
-->{{#if:{{{image_caption|}}}{{{caption|}}}|<div class="ib-settlement-caption">{{if empty|{{{image_caption|}}}|{{{caption|}}}}}</div>}} }}
<!-- ***Flag, Seal, Shield and Coat of arms*** -->
| rowclass19 = mergedtoprow
| class19 = maptable
| data19 = {{#if:{{{image_flag|}}}{{{image_seal|}}}{{{image_shield|}}}{{{image_blank_emblem|}}}{{both|{{{pushpin_map_narrow|}}}|{{{pushpin_map|}}}}}
|{{Infobox settlement/columns
| 1 = {{#if:{{{image_flag|}}}|{{#invoke:InfoboxImage|InfoboxImage|image={{{image_flag}}}|size={{{flag_size|}}}|sizedefault={{#if:{{both|{{{pushpin_map_narrow|}}}|{{{pushpin_map|}}}}}|125px|100x100px}}|border={{yesno |{{{flag_border|}}}|yes=yes|blank=yes}}|alt={{{flag_alt|}}}|title=Flag of {{if empty|{{{name|}}}|{{{official_name|}}}|{{PAGENAMEBASE}}}}}}<div class="ib-settlement-caption-link">{{Infobox settlement/link|type=Flag|link={{{flag_link|}}}|name={{{official_name}}}}}</div>}}
| 2 = {{#if:{{{image_seal|}}}|{{#invoke:InfoboxImage|InfoboxImage|image={{{image_seal|}}}|size={{{seal_size|}}}|sizedefault={{#if:{{both|{{{pushpin_map_narrow|}}}|{{{pushpin_map|}}}}}|85px|100x100px}}|alt={{{seal_alt|}}}|title=Official seal of {{if empty|{{{name|}}}|{{{official_name|}}}|{{PAGENAMEBASE}}}}|class={{{seal_class|}}}}}<div class="ib-settlement-caption-link">{{Infobox settlement/link|type={{if empty|{{{seal_type|}}}|Seal}}|link={{{seal_link|}}}|name={{{official_name}}}}}</div>}}
| 3 = {{#if:{{{image_shield|}}}|{{#invoke:InfoboxImage|InfoboxImage|image={{{image_shield|}}}||size={{{shield_size|}}}|sizedefault={{#if:{{both|{{{pushpin_map_narrow|}}}|{{{pushpin_map|}}}}}|85px|100x100px}}|alt={{{shield_alt|}}}|title=Coat of arms of {{if empty|{{{name|}}}|{{{official_name|}}}|{{PAGENAMEBASE}}}}}}<div class="ib-settlement-caption-link">{{Infobox settlement/link|type=Coat of arms|link={{{shield_link|}}}|name={{{official_name}}}}}</div>}}
| 4 = {{#if:{{{image_blank_emblem|}}}|{{#invoke:InfoboxImage|InfoboxImage|image={{{image_blank_emblem|}}}|size={{{blank_emblem_size|}}}|sizedefault={{#if:{{both|{{{pushpin_map_narrow|}}}|{{{pushpin_map|}}}}}|85px|100x100px}}|upright={{{blank_emblem_upright|}}}|alt={{{blank_emblem_alt|}}}|title=Official logo of {{if empty|{{{name|}}}|{{{official_name|}}}|{{PAGENAMEBASE}}}}}}<div class="ib-settlement-caption-link">{{Infobox settlement/link|type={{#if:{{{blank_emblem_type|}}}|{{{blank_emblem_type}}}}}|link={{{blank_emblem_link|}}}|name={{{official_name}}}}}</div>}}
| 5 = {{#if:{{{image_map|}}}|{{#invoke:InfoboxImage|InfoboxImage|image={{{image_map}}}|size={{if empty|{{{mapsize|}}}|{{{map_size|}}}}}|sizedefault=100x100px|alt={{{map_alt|}}}|title={{{map_caption|Location of {{if empty|{{{name|}}}|{{{official_name|}}}|{{PAGENAMEBASE}}}}}}}}}{{#if:{{{map_caption|}}}|<div class="ib-settlement-caption-link">{{{map_caption}}}</div>}}}}
| 0 = {{#if:{{{pushpin_map_narrow|}}}|{{#invoke:Location map|infobox_pushpin_map
| pushpin_alt = {{{pushpin_map_alt|}}}
| pushpin_caption = {{{pushpin_map_caption|}}}
| pushpin_label = {{if empty|{{{name|}}}|{{{official_name|}}}}}
| default_width = 250 <!-- Shouldn't this be set to 150 and the if empty below removed? -->
| pushpin_map_size = {{if empty|{{{pushpin_mapsize|}}}|150}}
}}}}
}}
}}
<!-- ***Etymology*** -->
| rowclass20 = mergedtoprow
| data20 = {{#if:{{{etymology|}}}|Etymology: {{{etymology}}} }}
<!-- ***Nickname*** -->
| rowclass21 = {{#if:{{{etymology|}}}|mergedrow|mergedtoprow}}
| data21 = {{#if:{{{nickname|}}}{{{nicknames|}}}|<!--
-->{{Pluralize from text|parse_links=1|{{if empty|{{{nickname|}}}|{{{nicknames|}}}{{force plural}}}}|<!--
-->link={{{nickname_link|}}}|singular=Nickname|likely=Nickname(s)|plural=Nicknames}}: <!--
--><div class="ib-settlement-nickname nickname">{{if empty|{{{nickname|}}}|{{{nicknames|}}}}}</div><!--
-->{{Main other|{{Pluralize from text|parse_links=1|{{{nickname|}}}|<!--
-->likely=[[Category:Pages using infobox settlement with possible nickname list]]}}}}}}
<!-- ***Motto*** -->
| rowclass22 = {{#if:{{{etymology|}}}{{{nickname|}}}{{{nicknames|}}}|mergedrow|mergedtoprow}}
| data22 = {{#if:{{{motto|}}}{{{mottoes|}}}|<!--
-->{{Pluralize from text|{{if empty|{{{motto|}}}|{{{mottoes|}}}{{force plural}}}}|<!--
-->link={{{motto_link|}}}|singular=Motto|likely=Motto(s)|plural=Mottoes}}: <!--
--><div class="ib-settlement-nickname nickname">{{if empty|{{{motto|}}}|{{{mottoes|}}}}}</div><!--
-->{{Main other|{{Pluralize from text|{{{motto|}}}|<!--
-->likely=[[Category:Pages using infobox settlement with possible motto list]]}}}}}}
<!-- ***Anthem*** -->
| rowclass23 = {{#if:{{{etymology|}}}{{{nickname|}}}{{{nicknames|}}}{{{motto|}}}{{{mottoes|}}}|mergedrow|mergedtoprow}}
| data23 = {{#if:{{{anthem|}}}|{{#if:{{{anthem_link|}}}|[[{{{anthem_link|}}}|Anthem:]]|Anthem:}} {{{anthem}}}}}
<!-- ***Map*** -->
| rowclass24 = mergedtoprow
| data24 = {{#if:{{both|{{{pushpin_map_narrow|}}}|{{{pushpin_map|}}}}}||{{#if:{{{image_map|}}}
|{{#invoke:InfoboxImage|InfoboxImage|image={{{image_map}}}|size={{if empty|{{{mapsize|}}}|{{{map_size|}}}}}|sizedefault=250px|upright={{{image_upright|}}}|alt={{{map_alt|}}}|title={{{map_caption|Location of {{if empty|{{{name|}}}|{{{official_name|}}}|{{PAGENAMEBASE}}}}}}}}}{{#if:{{{map_caption|}}}|<div class="ib-settlement-caption">{{{map_caption}}}</div>}}
}}}}
| rowclass25 = mergedrow
| data25 = {{#if:{{{image_map1|}}}|{{#invoke:InfoboxImage|InfoboxImage|image={{{image_map1}}}|size={{if empty|{{{mapsize1|}}}|{{{map_size1|}}}}}|sizedefault=250px|upright={{{image_upright|}}}|alt={{{map_alt1|}}}|title={{{map_caption1|Location of {{if empty|{{{name|}}}|{{{official_name|}}}|{{PAGENAMEBASE}}}}}}}}}{{#if:{{{map_caption1|}}}|<div class="ib-settlement-caption">{{{map_caption1}}}</div>}} }}
| data26 = {{#invoke:Infobox mapframe
| autoWithCaption
| onByDefault = {{#if:{{{pushpin_map|}}}{{{image_map|}}}{{{image_map1|}}}|no|yes}}
| mapframe-frame-width = 250
| mapframe-stroke-width = 2
| mapframe-length_km = {{{length_km|}}}
| mapframe-length_mi = {{{length_mi|}}}
| mapframe-width_km = {{{width_km|}}}
| mapframe-width_mi = {{{width_mi|}}}
| mapframe-area_km2 = {{{area_total_km2|}}}
| mapframe-area_ha = {{{area_total_ha|}}}
| mapframe-area_acre = {{{area_total_acre|}}}
| mapframe-area_sq_mi = {{{area_total_sq_mi|}}}
| mapframe-type = city
| mapframe-population = {{if empty|{{{population_metro|}}}|{{{population_total|}}}}}
| mapframe-marker = town
| mapframe-wikidata = yes
| mapframe-caption = Interactive map of {{if empty|{{{name|}}}|{{{official_name|}}}|{{PAGENAMEBASE}}}}
}}
<!-- ***Pushpin Map*** -->
| rowclass28 = mergedtoprow
| data28 = {{#if:{{{pushpin_map_narrow|}}}|| {{#invoke:Location map|infobox_pushpin_map
| default_width = 250
| pushpin_alt = {{{pushpin_map_alt|}}}
| pushpin_caption = {{{pushpin_map_caption|}}}
| pushpin_label = {{if empty|{{{name|}}}|{{{official_name|}}}}}
| pushpin_map_size = {{{pushpin_mapsize|}}}
}}
}}
<!-- ***Coordinates*** -->
| data29 = {{#if:{{{coordinates|}}}|{{#if:{{#invoke:string|match|s={{{coordinates|}}}|pattern=geo-inline-hidden|ignore_errors=true|plain=true}}|<!-- Nothing to display -->
|Coordinates{{#if:{{{coor_pinpoint|}}}{{{coor_type|}}}| ({{if empty|{{{coor_pinpoint|}}}|{{{coor_type|}}}}})}}: {{#invoke:ISO 3166|geocoordinsert|nocat=true|1={{{coordinates|}}}|country={{{subdivision_name|}}}|subdivision1={{{subdivision_name1|}}}|subdivision2={{{subdivision_name2|}}}|subdivision3={{{subdivision_name3|}}}|type=city{{#if:{{{population_total|}}}|{{#iferror:{{#expr:{{formatnum:{{{population_total}}}|R}}+1}}||({{formatnum:{{replace|{{{population_total}}}|,|}}|R}})}}}} }}{{{coordinates_footnotes|}}} }}}}
| rowclass30 = {{#if:{{{image_map|}}}{{{image_map1|}}}{{{pushpin_map|}}}|mergedbottomrow|mergedrow}}
| label30 = {{if empty|{{{grid_name|}}}|Grid position}}
| data30 = {{{grid_position|}}}
<!-- ***Subdivisions*** -->
| rowclass31 = mergedtoprow
| label31 = {{{subdivision_type}}}
| data31 = {{#if:{{{subdivision_type|}}}|{{{subdivision_name|}}} }}
| rowclass32 = mergedrow
| label32 = {{{subdivision_type1}}}
| data32 = {{#if:{{{subdivision_type1|}}}|{{{subdivision_name1|}}} }}
| rowclass33 = mergedrow
| label33 = {{{subdivision_type2}}}
| data33 = {{#if:{{{subdivision_type2|}}}|{{{subdivision_name2|}}} }}
| rowclass34 = mergedrow
| label34 = {{{subdivision_type3}}}
| data34 = {{#if:{{{subdivision_type3|}}}|{{{subdivision_name3|}}} }}
| rowclass35 = mergedrow
| label35 = {{{subdivision_type4}}}
| data35 = {{#if:{{{subdivision_type4|}}}|{{{subdivision_name4|}}} }}
| rowclass36 = mergedrow
| label36 = {{{subdivision_type5}}}
| data36 = {{#if:{{{subdivision_type5|}}}|{{{subdivision_name5|}}} }}
| rowclass37 = mergedrow
| label37 = {{{subdivision_type6}}}
| data37 = {{#if:{{{subdivision_type6|}}}|{{{subdivision_name6|}}} }}
<!--***Established*** -->
| rowclass38 = mergedtoprow
| label38 = {{if empty|{{{established_title|}}}|Established}}
| data38 = {{{established_date|}}}
| rowclass39 = mergedrow
| label39 = {{{established_title1}}}
| data39 = {{#if:{{{established_title1|}}}|{{{established_date1|}}} }}
| rowclass40 = mergedrow
| label40 = {{{established_title2}}}
| data40 = {{#if:{{{established_title2|}}}|{{{established_date2|}}} }}
| rowclass41 = mergedrow
| label41 = {{{established_title3}}}
| data41 = {{#if:{{{established_title3|}}}|{{{established_date3|}}} }}
| rowclass42 = mergedrow
| label42 = {{{established_title4}}}
| data42 = {{#if:{{{established_title4|}}}|{{{established_date4|}}} }}
| rowclass43 = mergedrow
| label43 = {{{established_title5}}}
| data43 = {{#if:{{{established_title5|}}}|{{{established_date5|}}} }}
| rowclass44 = mergedrow
| label44 = {{{established_title6}}}
| data44 = {{#if:{{{established_title6|}}}|{{{established_date6|}}} }}
| rowclass45 = mergedrow
| label45 = {{{established_title7}}}
| data45 = {{#if:{{{established_title7|}}}|{{{established_date7|}}} }}
| rowclass46 = mergedrow
| label46 = {{{extinct_title}}}
| data46 = {{#if:{{{extinct_title|}}}|{{{extinct_date|}}} }}
| rowclass47 = mergedrow
| label47 = Founded by
| data47 = {{{founder|}}}
| rowclass48 = mergedrow
| label48 = [[Namesake|Named after]]
| data48 = {{{named_for|}}}
<!-- ***Seat of government and subdivisions within the settlement*** -->
| rowclass49 = mergedtoprow
| label49 = {{if empty|{{{seat_type|}}}|Seat}}
| data49 = {{{seat|}}}
| rowclass50 = mergedrow
| label50 = {{if empty|{{{seat1_type|}}}|Former seat}}
| data50 = {{{seat1|}}}
| rowclass51 = mergedrow
| label51 = {{if empty|{{{seat2_type|}}}|Former seat}}
| data51 = {{{seat2|}}}
| rowclass52 = {{#if:{{{seat|}}}{{{seat1|}}}{{{seat2|}}}|mergedrow|mergedtoprow}}
| label52 = {{if empty|{{{parts_type|}}}|Boroughs}}
| data52 = {{#if:{{{parts|}}}{{{p1|}}}
|{{#ifeq:{{{parts_style|}}}|para
|<b>{{{parts|}}}{{#if:{{both|{{{parts|}}}|{{{p1|}}}}}|: |}}</b>{{comma separated entries|{{{p1|}}}|{{{p2|}}}|{{{p3|}}}|{{{p4|}}}|{{{p5|}}}|{{{p6|}}}|{{{p7|}}}|{{{p8|}}}|{{{p9|}}}|{{{p10|}}}|{{{p11|}}}|{{{p12|}}}|{{{p13|}}}|{{{p14|}}}|{{{p15|}}}|{{{p16|}}}|{{{p17|}}}|{{{p18|}}}|{{{p19|}}}|{{{p20|}}}|{{{p21|}}}|{{{p22|}}}|{{{p23|}}}|{{{p24|}}}|{{{p25|}}}|{{{p26|}}}|{{{p27|}}}|{{{p28|}}}|{{{p29|}}}|{{{p30|}}}|{{{p31|}}}|{{{p32|}}}|{{{p33|}}}|{{{p34|}}}|{{{p35|}}}|{{{p36|}}}|{{{p37|}}}|{{{p38|}}}|{{{p39|}}}|{{{p40|}}}|{{{p41|}}}|{{{p42|}}}|{{{p43|}}}|{{{p44|}}}|{{{p45|}}}|{{{p46|}}}|{{{p47|}}}|{{{p48|}}}|{{{p49|}}}|{{{p50|}}}}}
|{{#if:{{{p1|}}}|{{Collapsible list|title={{{parts|}}}|expand={{#switch:{{{parts_style|}}}|coll=|list=y|{{#if:{{{p6|}}}||y}}}}|1={{{p1|}}}|2={{{p2|}}}|3={{{p3|}}}|4={{{p4|}}}|5={{{p5|}}}|6={{{p6|}}}|7={{{p7|}}}|8={{{p8|}}}|9={{{p9|}}}|10={{{p10|}}}|11={{{p11|}}}|12={{{p12|}}}|13={{{p13|}}}|14={{{p14|}}}|15={{{p15|}}}|16={{{p16|}}}|17={{{p17|}}}|18={{{p18|}}}|19={{{p19|}}}|20={{{p20|}}}|21={{{p21|}}}|22={{{p22|}}}|23={{{p23|}}}|24={{{p24|}}}|25={{{p25|}}}|26={{{p26|}}}|27={{{p27|}}}|28={{{p28|}}}|29={{{p29|}}}|30={{{p30|}}}|31={{{p31|}}}|32={{{p32|}}}|33={{{p33|}}}|34={{{p34|}}}|35={{{p35|}}}|36={{{p36|}}}|37={{{p37|}}}|38={{{p38|}}}|39={{{p39|}}}|40={{{p40|}}}|41={{{p41|}}}|42={{{p42|}}}|43={{{p43|}}}|44={{{p44|}}}|45={{{p45|}}}|46={{{p46|}}}|47={{{p47|}}}|48={{{p48|}}}|49={{{p49|}}}|50={{{p50|}}}}}
|{{{parts}}}
}}
}} }}
<!-- ***Government type and Leader*** -->
| rowclass53 = mergedtoprow
| header53 = {{#if:{{{government_type|}}}{{{governing_body|}}}{{{leader_name|}}}{{{leader_name1|}}}{{{leader_name2|}}}{{{leader_name3|}}}{{{leader_name4|}}}|Government<div class="ib-settlement-fn">{{{government_footnotes|}}}</div>}}
<!-- ***Government*** -->
| rowclass54 = mergedrow
| label54 = • Type
| data54 = {{{government_type|}}}
| rowclass55 = mergedrow
| label55 = • Body
| class55 = agent
| data55 = {{{governing_body|}}}
| rowclass56 = mergedrow
| label56 = • {{{leader_title}}}
| data56 = {{#if:{{{leader_title|}}}|{{{leader_name|}}} {{#if:{{{leader_party|}}}|({{Polparty|{{{subdivision_name}}}|{{{leader_party}}}}})}}}}
| rowclass57 = mergedrow
| label57 = • {{{leader_title1}}}
| data57 = {{#if:{{{leader_title1|}}}|{{{leader_name1|}}}}}
| rowclass58 = mergedrow
| label58 = • {{{leader_title2}}}
| data58 = {{#if:{{{leader_title2|}}}|{{{leader_name2|}}}}}
| rowclass59 = mergedrow
| label59 = • {{{leader_title3}}}
| data59 = {{#if:{{{leader_title3|}}}|{{{leader_name3|}}}}}
| rowclass60 = mergedrow
| label60 = • {{{leader_title4}}}
| data60 = {{#if:{{{leader_title4|}}}|{{{leader_name4|}}}}}
| rowclass61 = mergedrow
| label61 = • {{{leader_title5}}}
| data61 = {{#if:{{{leader_title5|}}}|{{{leader_name5|}}}}}
| rowclass62 = mergedrow
| label62 = {{{government_blank1_title}}}
| data62 = {{#if:{{{government_blank1|}}}|{{{government_blank1|}}}}}
| rowclass63 = mergedrow
| label63 = {{{government_blank2_title}}}
| data63 = {{#if:{{{government_blank2|}}}|{{{government_blank2|}}}}}
| rowclass64 = mergedrow
| label64 = {{{government_blank3_title}}}
| data64 = {{#if:{{{government_blank3|}}}|{{{government_blank3|}}}}}
| rowclass65 = mergedrow
| label65 = {{{government_blank4_title}}}
| data65 = {{#if:{{{government_blank4|}}}|{{{government_blank4|}}}}}
| rowclass66 = mergedrow
| label66 = {{{government_blank5_title}}}
| data66 = {{#if:{{{government_blank5|}}}|{{{government_blank5|}}}}}
| rowclass67 = mergedrow
| label67 = {{{government_blank6_title}}}
| data67 = {{#if:{{{government_blank6|}}}|{{{government_blank6|}}}}}
<!-- ***Geographical characteristics*** -->
<!-- ***Area*** -->
| rowclass68 = mergedtoprow
| header68 = {{#if:{{{area_total_km2|}}}{{{area_total_ha|}}}{{{area_total_acre|}}}{{{area_total_sq_mi|}}}{{{area_total_dunam|}}}{{{area_land_km2|}}}{{{area_land_ha|}}}{{{area_land_acre|}}}{{{area_land_sq_mi|}}}{{{area_water_km2|}}}{{{area_water_ha|}}}{{{area_water_acre|}}}{{{area_water_sq_mi|}}}{{{area_urban_km2|}}}{{{area_urban_ha|}}}{{{area_urban_acre|}}}{{{area_urban_sq_mi|}}}{{{area_rural_sq_mi|}}}{{{area_rural_ha|}}}{{{area_rural_acre|}}}{{{area_rural_km2|}}}{{{area_metro_km2|}}}{{{area_metro_ha|}}}{{{area_metro_acre|}}}{{{area_blank1_km2|}}}{{{area_blank1_ha|}}}{{{area_blank1_acre|}}}{{{area_metro_sq_mi|}}}{{{area_blank1_sq_mi|}}}
|{{#if:{{both|{{#ifeq:{{{total_type}}}| |1}}|{{{area_total_km2|}}}{{{area_total_ha|}}}{{{area_total_acre|}}}{{{area_total_sq_mi|}}}{{{area_total_dunam|}}}}}
|<!-- displayed below -->
|Area<div class="ib-settlement-fn">{{{area_footnotes|}}}</div>
}}
}}
| rowclass69 = {{#if:{{both|{{#ifeq:{{{total_type}}}| |1}}|{{{area_total_km2|}}}{{{area_total_ha|}}}{{{area_total_acre|}}}{{{area_total_sq_mi|}}}{{{area_total_dunam|}}}}}|mergedtoprow|mergedrow}}
| label69 = <div style="white-space:nowrap;">{{#if:{{both|{{#ifeq:{{{total_type}}}| |1}}|{{{area_total_km2|}}}{{{area_total_ha|}}}{{{area_total_acre|}}}{{{area_total_sq_mi|}}}{{{area_total_dunam|}}}}}
|Area<div class="ib-settlement-fn">{{{area_footnotes|}}}</div>
| • {{#if:{{{total_type|}}}|{{{total_type}}}|{{#if:{{{area_metro_km2|}}}{{{area_metro_sq_mi|}}}{{{area_urban_km2|}}}{{{area_urban_sq_mi|}}}{{{area_rural_km2|}}}{{{area_rural_sq_mi|}}}{{{population_metro|}}}{{{population_urban|}}}{{{population_rural|}}}|{{#if:{{{settlement_type|}}}{{{type|}}}|{{if empty|{{{settlement_type|}}}|{{{type}}}}}|City}}|Total}}}}
}}</div>
| data69 = {{#if:{{{area_total_km2|}}}{{{area_total_ha|}}}{{{area_total_acre|}}}{{{area_total_sq_mi|}}}{{{area_total_dunam|}}}
|{{infobox_settlement/areadisp
|km2 ={{{area_total_km2|}}}
|ha ={{{area_total_ha|}}}
|acre ={{{area_total_acre|}}}
|sqmi ={{{area_total_sq_mi|}}}
|dunam={{{area_total_dunam|}}}
|link ={{#switch:{{{dunam_link|}}}||on|total=on}}
|pref ={{{unit_pref|}}}
|name ={{{subdivision_name}}}
}}}}
| rowclass70 = mergedrow
| label70 = • Land
| data70 = {{#if:{{{area_land_km2|}}}{{{area_land_ha|}}}{{{area_land_acre|}}}{{{area_land_sq_mi|}}}{{{area_land_dunam|}}}
|{{infobox_settlement/areadisp
|km2 ={{{area_land_km2|}}}
|ha ={{{area_land_ha|}}}
|acre ={{{area_land_acre|}}}
|sqmi ={{{area_land_sq_mi|}}}
|dunam={{{area_land_dunam|}}}
|link ={{#ifeq:{{{dunam_link|}}}|land|on}}
|pref ={{{unit_pref|}}}
|name ={{{subdivision_name}}}
}}}}
| rowclass71 = mergedrow
| label71 = • Water
| data71 = {{#if:{{{area_water_km2|}}}{{{area_water_ha|}}}{{{area_water_acre|}}}{{{area_water_sq_mi|}}}{{{area_water_dunam|}}}
|{{infobox_settlement/areadisp
|km2 ={{{area_water_km2|}}}
|ha ={{{area_water_ha|}}}
|acre ={{{area_water_acre|}}}
|sqmi ={{{area_water_sq_mi|}}}
|dunam={{{area_water_dunam|}}}
|link ={{#ifeq:{{{dunam_link|}}}|water|on}}
|pref ={{{unit_pref|}}}
|name ={{{subdivision_name}}}
}} {{#if:{{{area_water_percent|}}}| {{{area_water_percent}}}{{#ifeq:%|{{#invoke:string|sub|{{{area_water_percent|}}}|-1}}||%}}}}}}
| rowclass72 = mergedrow
| label72 = • [[Urban area|Urban]]<div class="ib-settlement-fn">{{{area_urban_footnotes|}}}</div>
| data72 = {{#if:{{{area_urban_km2|}}}{{{area_urban_ha|}}}{{{area_urban_acre|}}}{{{area_urban_sq_mi|}}}{{{area_urban_dunam|}}}
|{{infobox_settlement/areadisp
|km2 ={{{area_urban_km2|}}}
|ha ={{{area_urban_ha|}}}
|acre ={{{area_urban_acre|}}}
|sqmi ={{{area_urban_sq_mi|}}}
|dunam={{{area_urban_dunam|}}}
|link ={{#ifeq:{{{dunam_link|}}}|urban|on}}
|pref ={{{unit_pref|}}}
|name ={{{subdivision_name}}}
}}}}
| rowclass73 = mergedrow
| label73 = • Rural<div class="ib-settlement-fn">{{{area_rural_footnotes|}}}</div>
| data73 = {{#if:{{{area_rural_km2|}}}{{{area_rural_ha|}}}{{{area_rural_acre|}}}{{{area_rural_sq_mi|}}}{{{area_rural_dunam|}}}
|{{infobox_settlement/areadisp
|km2 ={{{area_rural_km2|}}}
|ha ={{{area_rural_ha|}}}
|acre ={{{area_rural_acre|}}}
|sqmi ={{{area_rural_sq_mi|}}}
|dunam={{{area_rural_dunam|}}}
|link ={{#ifeq:{{{dunam_link|}}}|rural|on}}
|pref ={{{unit_pref|}}}
|name ={{{subdivision_name}}}
}}}}
| rowclass74 = mergedrow
| label74 = • Metro<div class="ib-settlement-fn">{{{area_metro_footnotes|}}}</div>
| data74 = {{#if:{{{area_metro_km2|}}}{{{area_metro_ha|}}}{{{area_metro_acre|}}}{{{area_metro_sq_mi|}}}{{{area_metro_dunam|}}}
|{{infobox_settlement/areadisp
|km2 ={{{area_metro_km2|}}}
|ha ={{{area_metro_ha|}}}
|acre ={{{area_metro_acre|}}}
|sqmi ={{{area_metro_sq_mi|}}}
|dunam={{{area_metro_dunam|}}}
|link ={{#ifeq:{{{dunam_link|}}}|metro|on}}
|pref ={{{unit_pref|}}}
|name ={{{subdivision_name}}}
}}}}
<!-- ***Area rank*** -->
| rowclass75 = mergedrow
| label75 = • Rank
| data75 = {{{area_rank|}}}
| rowclass76 = mergedrow
| label76 = • {{{area_blank1_title}}}
| data76 = {{#if:{{{area_blank1_km2|}}}{{{area_blank1_ha|}}}{{{area_blank1_acre|}}}{{{area_blank1_sq_mi|}}}{{{area_blank1_dunam|}}}
|{{infobox_settlement/areadisp
|km2 ={{{area_blank1_km2|}}}
|ha ={{{area_blank1_ha|}}}
|acre ={{{area_blank1_acre|}}}
|sqmi ={{{area_blank1_sq_mi|}}}
|dunam={{{area_blank1_dunam|}}}
|link ={{#ifeq:{{{dunam_link|}}}|blank1|on}}
|pref ={{{unit_pref|}}}
|name ={{{subdivision_name}}}
}}}}
| rowclass77 = mergedrow
| label77 = • {{{area_blank2_title}}}
| data77 = {{#if:{{{area_blank2_km2|}}}{{{area_blank2_ha|}}}{{{area_blank2_acre|}}}{{{area_blank2_sq_mi|}}}{{{area_blank2_dunam|}}}
|{{infobox_settlement/areadisp
|km2 ={{{area_blank2_km2|}}}
|ha ={{{area_blank2_ha|}}}
|acre ={{{area_blank2_acre|}}}
|sqmi ={{{area_blank2_sq_mi|}}}
|dunam={{{area_blank2_dunam|}}}
|link ={{#ifeq:{{{dunam_link|}}}|blank2|on}}
|pref ={{{unit_pref|}}}
|name ={{{subdivision_name}}}
}}}}
| rowclass78 = mergedrow
| label78 =
| data78 = {{{area_note|}}}
<!-- ***Dimensions*** -->
| rowclass79 = mergedtoprow
| header79 = {{#if:{{{length_km|}}}{{{length_mi|}}}{{{width_km|}}}{{{width_mi|}}}|Dimensions<div class="ib-settlement-fn">{{{dimensions_footnotes|}}}</div>}}
| rowclass80 = mergedrow
| label80 = • Length
| data80 = {{#if:{{{length_km|}}}{{{length_mi|}}}
| {{infobox_settlement/lengthdisp
|km ={{{length_km|}}}
|mi ={{{length_mi|}}}
|pref={{{unit_pref|}}}
|name={{{subdivision_name}}}
}} }}
| rowclass81 = mergedrow
| label81 = • Width
| data81 = {{#if:{{{width_km|}}}{{{width_mi|}}}
|{{infobox_settlement/lengthdisp
|km ={{{width_km|}}}
|mi ={{{width_mi|}}}
|pref={{{unit_pref|}}}
|name={{{subdivision_name}}}
}} }}
<!-- ***Elevation*** -->
| rowclass82 = mergedtoprow
| label82 = {{#if:{{{elevation_link|}}}|[[{{{elevation_link|}}}|Elevation]]|Elevation}}<div class="ib-settlement-fn">{{{elevation_footnotes|}}}{{#if:{{{elevation_point|}}}| ({{{elevation_point}}})}}</div>
| data82 = {{#if:{{{elevation_m|}}}{{{elevation_ft|}}}
|{{infobox_settlement/lengthdisp
|m ={{{elevation_m|}}}
|ft ={{{elevation_ft|}}}
|pref={{{unit_pref|}}}
|name={{{subdivision_name}}}
}} }}
| rowclass83 = {{#if:{{{elevation_m|}}}{{{elevation_ft|}}}|mergedrow|mergedtoprow}}
| label83 = Highest elevation<div class="ib-settlement-fn">{{{elevation_max_footnotes|}}}{{#if:{{{elevation_max_point|}}}| ({{{elevation_max_point}}})}}</div>
| data83 = {{#if:{{{elevation_max_m|}}}{{{elevation_max_ft|}}}
|{{infobox_settlement/lengthdisp
|m ={{{elevation_max_m|}}}
|ft ={{{elevation_max_ft|}}}
|pref={{{unit_pref|}}}
|name={{{subdivision_name}}}
}} }}
<!-- ***Elevation max rank*** -->
| rowclass84 = mergedrow
| label84 = • Rank
| data84 = {{#if:{{{elevation_max_m|}}}{{{elevation_max_ft|}}}| {{{elevation_max_rank|}}} }}
| rowclass85 = {{#if:{{{elevation_min_rank|}}}|mergedrow|mergedbottomrow}}
| label85 = Lowest elevation<div class="ib-settlement-fn">{{{elevation_min_footnotes|}}}{{#if:{{{elevation_min_point|}}}| ({{{elevation_min_point}}})}}</div>
| data85 = {{#if:{{{elevation_min_m|}}}{{{elevation_min_ft|}}}
|{{infobox_settlement/lengthdisp
|m ={{{elevation_min_m|}}}
|ft ={{{elevation_min_ft|}}}
|pref={{{unit_pref|}}}
|name={{{subdivision_name}}}
}} }}
<!-- ***Elevation min rank*** -->
| rowclass86 = mergedrow
| label86 = • Rank
| data86 = {{#if:{{{elevation_min_m|}}}{{{elevation_min_ft|}}}|{{{elevation_min_rank|}}}}}
<!-- ***Population*** -->
| rowclass87 = mergedtoprow
| label87 = Population<div class="ib-settlement-fn">{{#if:{{{population_as_of|}}}|{{nbsp}}({{{population_as_of}}})}}{{{population_footnotes|}}}</div>
| data87 = {{fix comma category|{{#ifeq:{{{total_type}}}|
| {{#if:{{{population_total|}}}
| {{formatnum:{{replace|{{{population_total}}}|,|}}}}
}}
}}
}}
| rowclass88 = mergedtoprow
| header88 ={{#ifeq:{{{total_type}}}|
|
|{{#if:{{{population_total|}}}{{{population_urban|}}}{{{population_rural|}}}{{{population_metro|}}}{{{population_blank1|}}}{{{population_blank2|}}}{{{population_est|}}}
|Population<div class="ib-settlement-fn">{{#if:{{{population_as_of|}}}|{{nbsp}}({{{population_as_of}}})}}{{{population_footnotes|}}}</div>
}}
}}
| rowclass89 = mergedrow
| label89 = <div style="white-space:nowrap;"> • {{#if:{{{total_type|}}}|{{{total_type}}}|{{#if:{{{population_metro|}}}{{{population_urban|}}}{{{population_rural|}}}{{{area_metro_km2|}}}{{{area_metro_sq_mi|}}}{{{area_urban_km2|}}}{{{area_urban_sq_mi|}}}{{{area_rural_km2|}}}{{{area_rural_sq_mi|}}}|{{#if:{{{settlement_type|}}}{{{type|}}}|{{if empty|{{{settlement_type|}}}|{{{type}}}}}|City}}|Total}}}}</div>
| data89 = {{#ifeq:{{{total_type}}}|
|
|{{#if:{{{population_total|}}}
| {{fix comma category|{{formatnum:{{replace|{{{population_total}}}|,|}}}}}}
}}
}}
| rowclass90 = mergedrow
| label90 = <div style="white-space:nowrap;"> • Estimate {{#if:{{{pop_est_as_of|}}}|<div class="ib-settlement-fn">({{{pop_est_as_of}}}){{{pop_est_footnotes|}}}</div>}}</div>
| data90 = {{#if:{{{population_est|}}}|{{fix comma category|{{formatnum:{{replace|{{{population_est}}}|,|}}}}}} }}
<!-- ***Population rank*** -->
| rowclass91 = mergedrow
| label91 = • Rank
| data91 = {{{population_rank|}}}
| rowclass92 = mergedrow
| label92 = • Density
| data92 = {{#if:{{{population_density_km2|}}}{{{population_density_sq_mi|}}}{{{population_total|}}}
|{{infobox_settlement/densdisp
|/km2 ={{{population_density_km2|}}}
|/sqmi={{{population_density_sq_mi|}}}
|pop ={{{population_total|}}}
|dunam={{if empty|{{{area_land_dunam|}}}|{{{area_total_dunam|}}}}}
|ha ={{if empty|{{{area_land_ha|}}}|{{{area_total_ha|}}}}}
|km2 ={{if empty|{{{area_land_km2|}}}|{{{area_total_km2|}}}}}
|acre ={{if empty|{{{area_land_acre|}}}|{{{area_total_acre|}}}}}
|sqmi ={{if empty|{{{area_land_sq_mi|}}}|{{{area_total_sq_mi|}}}}}
|pref ={{{unit_pref|}}}
|name ={{{subdivision_name}}}
}}}}
<!-- ***Population density rank*** -->
| rowclass93 = mergedrow
| label93 = • Rank
| data93 = {{{population_density_rank|}}}
| rowclass94 = mergedrow
| label94 = • [[Urban area|Urban]]<div class="ib-settlement-fn">{{{population_urban_footnotes|}}}</div>
| data94 = {{#if:{{{population_urban|}}}| {{fix comma category|{{formatnum:{{replace|{{{population_urban}}}|,|}}}}}} }}
| rowclass95 = mergedrow
| label95 = • Urban density
| data95 = {{#if:{{{population_density_urban_km2|}}}{{{population_density_urban_sq_mi|}}}{{{population_urban|}}}
|{{infobox_settlement/densdisp
|/km2 ={{{population_density_urban_km2|}}}
|/sqmi={{{population_density_urban_sq_mi|}}}
|pop ={{{population_urban|}}}
|ha ={{{area_urban_ha|}}}
|km2 ={{{area_urban_km2|}}}
|acre ={{{area_urban_acre|}}}
|sqmi ={{{area_urban_sq_mi|}}}
|dunam={{{area_urban_dunam|}}}
|pref ={{{unit_pref|}}}
|name ={{{subdivision_name}}}
}}}}
| rowclass96 = mergedrow
| label96 = • [[Rural area|Rural]]<div class="ib-settlement-fn">{{{population_rural_footnotes|}}}</div>
| data96 = {{#if:{{{population_rural|}}}|{{fix comma category|{{formatnum:{{replace|{{{population_rural}}}|,|}}}}}}}}
| rowclass97 = mergedrow
| label97 = • Rural density
| data97 = {{#if:{{{population_density_rural_km2|}}}{{{population_density_rural_sq_mi|}}}{{{population_rural|}}}
|{{infobox_settlement/densdisp
|/km2 ={{{population_density_rural_km2|}}}
|/sqmi={{{population_density_rural_sq_mi|}}}
|pop ={{{population_rural|}}}
|ha ={{{area_rural_ha|}}}
|km2 ={{{area_rural_km2|}}}
|acre ={{{area_rural_acre|}}}
|sqmi ={{{area_rural_sq_mi|}}}
|dunam={{{area_rural_dunam|}}}
|pref ={{{unit_pref|}}}
|name ={{{subdivision_name}}}
}}}}
| rowclass98 = mergedrow
| label98 = • [[Metropolitan area|Metro]]<div class="ib-settlement-fn">{{{population_metro_footnotes|}}}</div>
| data98 = {{#if:{{{population_metro|}}}| {{fix comma category|{{formatnum:{{replace|{{{population_metro}}}|,|}}}}}} }}
| rowclass99 = mergedrow
| label99 = • Metro density
| data99 = {{#if:{{{population_density_metro_km2|}}}{{{population_density_metro_sq_mi|}}}{{{population_metro|}}}
|{{infobox_settlement/densdisp
|/km2 ={{{population_density_metro_km2|}}}
|/sqmi={{{population_density_metro_sq_mi|}}}
|pop ={{{population_metro|}}}
|ha ={{{area_metro_ha|}}}
|km2 ={{{area_metro_km2|}}}
|acre ={{{area_metro_acre|}}}
|sqmi ={{{area_metro_sq_mi|}}}
|dunam={{{area_metro_dunam|}}}
|pref ={{{unit_pref|}}}
|name ={{{subdivision_name}}}
}}}}
| rowclass100 = mergedrow
| label100 = • {{{population_blank1_title|}}}<div class="ib-settlement-fn">{{{population_blank1_footnotes|}}}</div>
| data100 = {{#if:{{{population_blank1|}}}|{{fix comma category|{{formatnum:{{replace|{{{population_blank1}}}|,|}}}}}}}}
| rowclass101 = mergedrow
| label101 = • {{#if:{{{population_blank1_title|}}}|{{{population_blank1_title}}} density|Density}}
| data101 = {{#if:{{{population_density_blank1_km2|}}}{{{population_density_blank1_sq_mi|}}}{{{population_blank1|}}}
|{{infobox_settlement/densdisp
|/km2 ={{{population_density_blank1_km2|}}}
|/sqmi={{{population_density_blank1_sq_mi|}}}
|pop ={{{population_blank1|}}}
|ha ={{{area_blank1_ha|}}}
|km2 ={{{area_blank1_km2|}}}
|acre ={{{area_blank1_acre|}}}
|sqmi ={{{area_blank1_sq_mi|}}}
|dunam={{{area_blank1_dunam|}}}
|pref ={{{unit_pref|}}}
|name ={{{subdivision_name}}}
}}}}
| rowclass102 = mergedrow
| label102 = • {{{population_blank2_title|}}}<div class="ib-settlement-fn">{{{population_blank2_footnotes|}}}</div>
| data102 = {{#if:{{{population_blank2|}}}|{{fix comma category|{{formatnum:{{replace|{{{population_blank2}}}|,|}}}}}}}}
| rowclass103 = mergedrow
| label103 = • {{#if:{{{population_blank2_title|}}}|{{{population_blank2_title}}} density|Density}}
| data103 = {{#if:{{{population_density_blank2_km2|}}}{{{population_density_blank2_sq_mi|}}}{{{population_blank2|}}}
|{{infobox_settlement/densdisp
|/km2 ={{{population_density_blank2_km2|}}}
|/sqmi={{{population_density_blank2_sq_mi|}}}
|pop ={{{population_blank2|}}}
|ha ={{{area_blank2_ha|}}}
|km2 ={{{area_blank2_km2|}}}
|acre ={{{area_blank2_acre|}}}
|sqmi ={{{area_blank2_sq_mi|}}}
|dunam={{{area_blank2_dunam|}}}
|pref ={{{unit_pref|}}}
|name ={{{subdivision_name}}}
}}}}
| rowclass104 = mergedrow
| label104 =
| data104 = {{{population_note|}}}
| rowclass105 = mergedtoprow
| label105 = {{Pluralize from text|{{if empty|{{{population_demonym|}}}|{{{population_demonyms|}}}{{force plural}}}}|<!--
-->link=Demonym|singular=Demonym|likely=Demonym(s)|plural=Demonyms}}
| data105 = {{if empty|{{{population_demonym|}}}|{{{population_demonyms|}}}}}{{Main other|{{Pluralize from text|{{{population_demonym|}}}|likely=[[Category:Pages using infobox settlement with possible demonym list]]}}}}
<!-- ***Demographics 1*** -->
| rowclass106 = mergedtoprow
| header106 = {{#if:{{{demographics_type1|}}}
|{{{demographics_type1}}}<div class="ib-settlement-fn">{{{demographics1_footnotes|}}}</div>}}
| rowclass107 = mergedrow
| label107 = • {{{demographics1_title1}}}
| data107 = {{#if:{{{demographics_type1|}}}
|{{#if:{{{demographics1_title1|}}}|{{{demographics1_info1|}}}}}}}
| rowclass108 = mergedrow
| label108 = • {{{demographics1_title2}}}
| data108 = {{#if:{{{demographics_type1|}}}
|{{#if:{{{demographics1_title2|}}}|{{{demographics1_info2|}}}}}}}
| rowclass109 = mergedrow
| label109 = • {{{demographics1_title3}}}
| data109 = {{#if:{{{demographics_type1|}}}
|{{#if:{{{demographics1_title3|}}}|{{{demographics1_info3|}}}}}}}
| rowclass110 = mergedrow
| label110 = • {{{demographics1_title4}}}
| data110 = {{#if:{{{demographics_type1|}}}
|{{#if:{{{demographics1_title4|}}}|{{{demographics1_info4|}}}}}}}
| rowclass111 = mergedrow
| label111 = • {{{demographics1_title5}}}
| data111 = {{#if:{{{demographics_type1|}}}
|{{#if:{{{demographics1_title5|}}}|{{{demographics1_info5|}}}}}}}
| rowclass112 = mergedrow
| label112 = • {{{demographics1_title6}}}
| data112 = {{#if:{{{demographics_type1|}}}
|{{#if:{{{demographics1_title6|}}}|{{{demographics1_info6|}}}}}}}
| rowclass113 = mergedrow
| label113 = • {{{demographics1_title7}}}
| data113 = {{#if:{{{demographics_type1|}}}
|{{#if:{{{demographics1_title7|}}}|{{{demographics1_info7|}}}}}}}
| rowclass114 = mergedrow
| label114 = • {{{demographics1_title8}}}
| data114 = {{#if:{{{demographics_type1|}}}
|{{#if:{{{demographics1_title8|}}}|{{{demographics1_info8|}}}}}}}
| rowclass115 = mergedrow
| label115 = • {{{demographics1_title9}}}
| data115 = {{#if:{{{demographics_type1|}}}
|{{#if:{{{demographics1_title9|}}}|{{{demographics1_info9|}}}}}}}
| rowclass116 = mergedrow
| label116 = • {{{demographics1_title10}}}
| data116 = {{#if:{{{demographics_type1|}}}
|{{#if:{{{demographics1_title10|}}}|{{{demographics1_info10|}}}}}}}
<!-- ***Demographics 2*** -->
| rowclass117 = mergedtoprow
| header117 = {{#if:{{{demographics_type2|}}}
|{{{demographics_type2}}}<div class="ib-settlement-fn">{{{demographics2_footnotes|}}}</div>}}
| rowclass118 = mergedrow
| label118 = • {{{demographics2_title1}}}
| data118 = {{#if:{{{demographics_type2|}}}
|{{#if:{{{demographics2_title1|}}}|{{{demographics2_info1|}}}}}}}
| rowclass119 = mergedrow
| label119 = • {{{demographics2_title2}}}
| data119 = {{#if:{{{demographics_type2|}}}
|{{#if:{{{demographics2_title2|}}}|{{{demographics2_info2|}}}}}}}
| rowclass120 = mergedrow
| label120 = • {{{demographics2_title3}}}
| data120 = {{#if:{{{demographics_type2|}}}
|{{#if:{{{demographics2_title3|}}}|{{{demographics2_info3|}}}}}}}
| rowclass121 = mergedrow
| label121 = • {{{demographics2_title4}}}
| data121 = {{#if:{{{demographics_type2|}}}
|{{#if:{{{demographics2_title4|}}}|{{{demographics2_info4|}}}}}}}
| rowclass122 = mergedrow
| label122 = • {{{demographics2_title5}}}
| data122 = {{#if:{{{demographics_type2|}}}
|{{#if:{{{demographics2_title5|}}}|{{{demographics2_info5|}}}}}}}
| rowclass123 = mergedrow
| label123 = • {{{demographics2_title6}}}
| data123 = {{#if:{{{demographics_type2|}}}
|{{#if:{{{demographics2_title6|}}}|{{{demographics2_info6|}}}}}}}
| rowclass124 = mergedrow
| label124 = • {{{demographics2_title7}}}
| data124 = {{#if:{{{demographics_type2|}}}
|{{#if:{{{demographics2_title7|}}}|{{{demographics2_info7|}}}}}}}
| rowclass125 = mergedrow
| label125 = • {{{demographics2_title8}}}
| data125 = {{#if:{{{demographics_type2|}}}
|{{#if:{{{demographics2_title8|}}}|{{{demographics2_info8|}}}}}}}
| rowclass126 = mergedrow
| label126 = • {{{demographics2_title9}}}
| data126 = {{#if:{{{demographics_type2|}}}
|{{#if:{{{demographics2_title9|}}}|{{{demographics2_info9|}}}}}}}
| rowclass127 = mergedrow
| label127 = • {{{demographics2_title10}}}
| data127 = {{#if:{{{demographics_type2|}}}
|{{#if:{{{demographics2_title10|}}}|{{{demographics2_info10|}}}}}}}
<!-- ***Time Zones*** -->
| rowclass128 = mergedtoprow
| header128 = {{#if:{{{timezone1_location|}}}{{{time_zone1_location|}}}|{{#if:{{{timezone2|}}}{{{time_zone2|}}}|[[{{if empty|{{{timezone_link|}}}|{{{time_zone_link|}}}|Time zone}}|Time zone]]s|[[{{if empty|{{{timezone_link|}}}|{{{time_zone_link|}}}|Time zone}}|Time zone]]}}|}}
| rowclass129 = {{#if:{{{timezone1_location|}}}{{{time_zone1_location|}}}|mergedrow|mergedtoprow}}
| label129 = {{#if:{{{timezone1_location|}}}{{{time_zone1_location|}}}|{{{timezone1_location}}}{{{time_zone1_location|}}}|{{#if:{{{timezone2_location|}}}{{{time_zone2_location|}}}|{{{timezone2_location}}}{{{time_zone2_location|}}}|{{#if:{{{timezone2|}}}{{{time_zone2|}}}|[[{{if empty|{{{timezone_link|}}}|{{{time_zone_link|}}}|Time zone}}|Time zone]]s|[[{{if empty|{{{timezone_link|}}}|{{{time_zone_link|}}}|Time zone}}|Time zone]]}}}}}}
| data129 = {{#if:{{{utc_offset1|}}}{{{utc_offset|}}}
|[[UTC{{if empty|{{{utc_offset1|}}}|{{{utc_offset}}}}}]] {{#if:{{{timezone1|}}}{{{time_zone1|}}}{{{timezone|}}}{{{time_zone|}}}|({{if empty|{{{timezone1|}}}|{{{time_zone1|}}}|{{{timezone|}}}|{{{time_zone|}}}}})}}
|{{if empty|{{{timezone1|}}}|{{{time_zone1|}}}|{{{timezone|}}}|{{{time_zone|}}}}}
}}
| rowclass130 = mergedrow
| label130 = <span class="nowrap"> • Summer ([[Daylight saving time|DST]])</span>
| data130 = {{#if:{{{utc_offset1_DST|}}}{{{utc_offset_DST|}}}
|[[UTC{{if empty|{{{utc_offset1_DST|}}}|{{{utc_offset_DST|}}}}}]] {{#if:{{{timezone1_DST|}}}{{{time_zone1_DST|}}}{{{timezone_DST|}}}{{{time_zone_DST|}}}{{{time_zone_DST|}}}|({{if empty|{{{timezone1_DST|}}}|{{{time_zone1_DST|}}}|{{{time_zone1_DST|}}}|{{{timezone_DST|}}}{{{time_zone_DST|}}}|{{{time_zone_DST|}}}}})}}
|{{if empty|{{{timezone1_DST|}}}|{{{time_zone1_DST|}}}|{{{time_zone1_DST|}}}|{{{timezone_DST|}}}|{{{time_zone_DST|}}}|{{{time_zone_DST|}}}}}
}}
| rowclass131 = mergedrow
| label131 = {{if empty|{{{timezone2_location|}}}|{{{time_zone2_location|}}}|<nowiki />}}
| data131 = {{#if:{{{timezone1|}}}{{{time_zone1|}}}{{{timezone|}}}{{{time_zone|}}}{{{utc_offset1|}}}{{{utc_offset|}}}
|{{#if:{{{utc_offset2|}}}
|[[UTC{{{utc_offset2|}}}]] {{#if:{{{timezone2|}}}{{{time_zone2|}}}|({{{timezone2}}}{{{time_zone2|}}})}}
|{{{timezone2|}}}{{{time_zone2|}}}
}}
}}
| rowclass132 = mergedrow
| label132 = <span class="nowrap"> • Summer ([[Daylight saving time|DST]])</span>
| data132 = {{#if:{{{utc_offset2_DST|}}}|[[UTC{{{utc_offset2_DST|}}}]] {{#if:{{{timezone2_DST|}}}{{{time_zone2_DST|}}}{{{time_zone2_DST|}}}|({{{timezone2_DST|}}}{{{time_zone2_DST|}}}{{{time_zone2_DST|}}})}}
|{{{timezone2_DST|}}}{{{time_zone2_DST|}}}{{{time_zone2_DST|}}}
}}
| rowclass133 = mergedrow
| label133 = {{if empty|{{{timezone3_location|}}}|{{{time_zone3_location|}}}|<nowiki />}}
| data133 = {{#if:{{{timezone1|}}}{{{time_zone1|}}}{{{timezone|}}}{{{time_zone|}}}{{{utc_offset1|}}}{{{utc_offset|}}}
|{{#if:{{{utc_offset3|}}}
|[[UTC{{{utc_offset3|}}}]] {{#if:{{{timezone3|}}}{{{time_zone3|}}}|({{{timezone3}}}{{{time_zone3|}}})}}
|{{{timezone3|}}}{{{time_zone3|}}}
}}
}}
| rowclass134 = mergedrow
| label134 = <span class="nowrap"> • Summer ([[Daylight saving time|DST]])</span>
| data134 = {{#if:{{{utc_offset3_DST|}}}|[[UTC{{{utc_offset3_DST|}}}]] {{#if:{{{timezone3_DST|}}}{{{time_zone3_DST|}}}{{{time_zone3_DST|}}}|({{{timezone3_DST|}}}{{{time_zone3_DST|}}}{{{time_zone3_DST|}}})}}
|{{{timezone3_DST|}}}{{{time_zone3_DST|}}}{{{time_zone3_DST|}}}
}}
| rowclass135 = mergedrow
| label135 = {{if empty|{{{timezone4_location|}}}|{{{time_zone4_location|}}}|<nowiki />}}
| data135 = {{#if:{{{timezone1|}}}{{{time_zone1|}}}{{{timezone|}}}{{{time_zone|}}}{{{utc_offset1|}}}{{{utc_offset|}}}
|{{#if:{{{utc_offset4|}}}
|[[UTC{{{utc_offset4|}}}]] {{#if:{{{timezone4|}}}{{{time_zone4|}}}|({{{timezone4}}}{{{time_zone4|}}})}}
|{{{timezone4|}}}{{{time_zone4|}}}
}}
}}
| rowclass136 = mergedrow
| label136 = <span class="nowrap"> • Summer ([[Daylight saving time|DST]])</span>
| data136 = {{#if:{{{utc_offset4_DST|}}}|[[UTC{{{utc_offset4_DST|}}}]] {{#if:{{{timezone4_DST|}}}{{{time_zone4_DST|}}}{{{time_zone4_DST|}}}|({{{timezone4_DST|}}}{{{time_zone4_DST|}}}{{{time_zone4_DST|}}})}}
|{{{timezone4_DST|}}}{{{time_zone4_DST|}}}{{{time_zone4_DST|}}}
}}
| rowclass137 = mergedrow
| label137 = {{if empty|{{{timezone5_location|}}}|{{{time_zone5_location|}}}|<nowiki />}}
| data137 = {{#if:{{{timezone1|}}}{{{time_zone1|}}}{{{timezone|}}}{{{time_zone|}}}{{{utc_offset1|}}}{{{utc_offset|}}}
|{{#if:{{{utc_offset5|}}}
|[[UTC{{{utc_offset5|}}}]] {{#if:{{{timezone5|}}}{{{time_zone5|}}}|({{{timezone5}}}{{{time_zone5|}}})}}
|{{{timezone5|}}}{{{time_zone5|}}}
}}
}}
| rowclass138 = mergedrow
| label138 = <span class="nowrap"> • Summer ([[Daylight saving time|DST]])</span>
| data138 = {{#if:{{{utc_offset5_DST|}}}|[[UTC{{{utc_offset5_DST|}}}]] {{#if:{{{timezone5_DST|}}}{{{time_zone5_DST|}}}{{{time_zone5_DST|}}}|({{{timezone5_DST|}}}{{{time_zone5_DST|}}}{{{time_zone5_DST|}}})}}
|{{{timezone5_DST|}}}{{{time_zone5_DST|}}}{{{time_zone5_DST|}}}
}}
<!-- ***Postal Code(s)*** -->
| rowclass139 = mergedtoprow
| label139 = {{if empty|{{{postal_code_type|}}}|{{Pluralize from text|any_comma=1|parse_links=1|{{{postal_code|}}}|link=Postal code|singular=Postal code|plural=Postal codes}}}}
| class139 = adr
| data139 = {{#if:{{{postal_code|}}}|<div class="postal-code">{{{postal_code}}}</div>}}
| rowclass140 = {{#if:{{{postal_code|}}}|mergedbottomrow|mergedtoprow}}
| label140 = {{if empty|{{{postal2_code_type|}}}|{{Pluralize from text|any_comma=1|parse_links=1|{{{postal2_code|}}}|link=Postal code|singular=Postal code|plural=Postal codes}}}}
| class140 = adr
| data140 = {{#if:{{{postal2_code|}}}|<div class="postal-code">{{{postal2_code}}}</div>}}
<!-- ***Area Code(s)*** -->
| rowclass141 = {{#if:{{{postal_code|}}}{{{postal2_code|}}}|mergedrow|mergedtoprow}}
| label141 = {{if empty|{{{area_code_type|}}}|{{Pluralize from text|any_comma=1|parse_links=1|{{if empty|{{{area_code|}}}|{{{area_codes|}}}{{force plural}}}}|<!--
-->link=Telephone numbering plan|singular=Area code|likely=Area code(s)|plural=Area codes}}}}
| data141 = {{if empty|{{{area_code|}}}|{{{area_codes|}}}}}{{#if:{{{area_code_type|}}}||{{Main other|{{Pluralize from text|any_comma=1|parse_links=1|{{{area_code|}}}|||[[Category:Pages using infobox settlement with possible area code list]]}}}}}}
<!-- Geocode-->
| rowclass142 = {{#if:{{{postal_code|}}}{{{postal2_code|}}}{{{area_code|}}}|mergedrow|mergedtoprow}}
| label142 = [[Geocode]]
| class142 = nickname
| data142 = {{{geocode|}}}
<!-- ISO Code-->
| rowclass143 = {{#if:{{{postal_code|}}}{{{postal2_code|}}}{{{area_code|}}}{{{geocode|}}}|mergedrow|mergedtoprow}}
| label143 = [[ISO 3166|ISO 3166 code]]
| class143 = nickname
| data143 = {{{iso_code|}}}
<!-- Vehicle registration plate-->
| rowclass144 = {{#if:{{{postal_code|}}}{{{postal2_code|}}}{{{area_code|}}}{{{geocode|}}}{{{iso_code|}}}|mergedrow|mergedtoprow}}
| label144 = {{if empty|{{{registration_plate_type|}}}|[[Vehicle registration plate|Vehicle registration]]}}
| data144 = {{{registration_plate|}}}
<!-- Other codes -->
| rowclass145 = {{#if:{{{postal_code|}}}{{{postal2_code|}}}{{{area_code|}}}{{{geocode|}}}{{{iso_code|}}}{{{registration_plate|}}}|mergedrow|mergedtoprow}}
| label145 = {{{code1_name|}}}
| class145 = nickname
| data145 = {{#if:{{{code1_name|}}}|{{{code1_info|}}}}}
| rowclass146 = {{#if:{{{postal_code|}}}{{{postal2_code|}}}{{{area_code|}}}{{{geocode|}}}{{{iso_code|}}}{{{registration_plate|}}}{{{code1_name|}}}|mergedrow|mergedtoprow}}
| label146 = {{{code2_name|}}}
| class146 = nickname
| data146 = {{#if:{{{code2_name|}}}|{{{code2_info|}}}}}
<!-- ***Blank Fields (two sections)*** -->
| rowclass147 = mergedtoprow
| label147 = {{if empty|{{{blank_name_sec1|}}}|{{{blank_name|}}}|{{{custom_label_sec1|}}}}}
| data147 = {{#if:{{{blank_name_sec1|}}}{{{blank_name|}}}{{{custom_label_sec1|}}}|{{if empty|{{{blank_info_sec1|}}}|{{{blank_info|}}}|{{{custom_data_sec1|}}}}}}}
| rowclass148 = mergedrow
| label148 = {{if empty|{{{blank1_name_sec1|}}}|{{{blank1_name|}}}|{{{custom_label1_sec1|}}}}}
| data148 = {{#if:{{{blank1_name_sec1|}}}{{{blank1_name|}}}{{{custom_label1_sec1|}}}|{{if empty|{{{blank1_info_sec1|}}}|{{{blank1_info|}}}|{{{custom_data1_sec1|}}}}}}}
| rowclass149 = mergedrow
| label149 = {{if empty|{{{blank2_name_sec1|}}}|{{{blank2_name|}}}|{{{custom_label2_sec1|}}}}}
| data149 = {{#if:{{{blank2_name_sec1|}}}{{{blank2_name|}}}{{{custom_label2_sec1|}}}|{{if empty|{{{blank2_info_sec1|}}}|{{{blank2_info|}}}|{{{custom_data2_sec1|}}}}}}}
| rowclass150 = mergedrow
| label150 = {{if empty|{{{blank3_name_sec1|}}}|{{{blank3_name|}}}|{{{custom_label3_sec1|}}}}}
| data150 = {{#if:{{{blank3_name_sec1|}}}{{{blank3_name|}}}{{{custom_label3_sec1|}}}|{{if empty|{{{blank3_info_sec1|}}}|{{{blank3_info|}}}|{{{custom_data3_sec1|}}}}}}}
| rowclass151 = mergedrow
| label151 = {{if empty|{{{blank4_name_sec1|}}}|{{{blank4_name|}}}|{{{custom_label4_sec1|}}}}}
| data151 = {{#if:{{{blank4_name_sec1|}}}{{{blank4_name|}}}{{{custom_label4_sec1|}}}|{{if empty|{{{blank4_info_sec1|}}}|{{{blank4_info|}}}|{{{custom_data4_sec1|}}}}}}}
| rowclass152 = mergedrow
| label152 = {{if empty|{{{blank5_name_sec1|}}}|{{{blank5_name|}}}|{{{custom_label5_sec1|}}}}}
| data152 = {{#if:{{{blank5_name_sec1|}}}{{{blank5_name|}}}{{{custom_label5_sec1|}}}|{{if empty|{{{blank5_info_sec1|}}}|{{{blank5_info|}}}|{{{custom_data5_sec1|}}}}}}}
| rowclass153 = mergedrow
| label153 = {{if empty|{{{blank6_name_sec1|}}}|{{{blank6_name|}}}|{{{custom_label6_sec1|}}}}}
| data153 = {{#if:{{{blank6_name_sec1|}}}{{{blank6_name|}}}{{{custom_label6_sec1|}}}|{{if empty|{{{blank6_info_sec1|}}}|{{{blank6_info|}}}|{{{custom_data6_sec1|}}}}}}}
| rowclass154 = mergedrow
| label154 = {{if empty|{{{blank7_name_sec1|}}}|{{{blank7_name|}}}|{{{custom_label7_sec1|}}}}}
| data154 = {{#if:{{{blank7_name_sec1|}}}{{{blank7_name|}}}{{{custom_label7_sec1|}}}|{{if empty|{{{blank7_info_sec1|}}}|{{{blank7_info|}}}|{{{custom_data7_sec1|}}}}}}}
| rowclass155 = mergedtoprow
| label155 = {{if empty|{{{blank_name_sec2}}}|{{{custom_label_sec2|}}}}}
| data155 = {{#if:{{{blank_name_sec2|}}}{{{custom_label_sec2|}}}|{{if empty|{{{blank_info_sec2|}}}|{{{custom_data_sec2|}}}}}}}
| rowclass156 = mergedrow
| label156 = {{if empty|{{{blank1_name_sec2}}}|{{{custom_label1_sec2|}}}}}
| data156 = {{#if:{{{blank1_name_sec2|}}}{{{custom_label1_sec2|}}}|{{if empty|{{{blank1_info_sec2|}}}|{{{custom_data1_sec2|}}}}}}}
| rowclass157 = mergedrow
| label157 = {{if empty|{{{blank2_name_sec2}}}|{{{custom_label2_sec2|}}}}}
| data157 = {{#if:{{{blank2_name_sec2|}}}{{{custom_label2_sec2|}}}|{{if empty|{{{blank2_info_sec2|}}}|{{{custom_data2_sec2|}}}}}}}
| rowclass158 = mergedrow
| label158 = {{if empty|{{{blank3_name_sec2}}}|{{{custom_label3_sec2|}}}}}
| data158 = {{#if:{{{blank3_name_sec2|}}}{{{custom_label3_sec2|}}}|{{if empty|{{{blank3_info_sec2|}}}|{{{custom_data3_sec2|}}}}}}}
| rowclass159 = mergedrow
| label159 = {{if empty|{{{blank4_name_sec2}}}|{{{custom_label4_sec2|}}}}}
| data159 = {{#if:{{{blank4_name_sec2|}}}{{{custom_label4_sec2|}}}|{{if empty|{{{blank4_info_sec2|}}}|{{{custom_data4_sec2|}}}}}}}
| rowclass160 = mergedrow
| label160 = {{if empty|{{{blank5_name_sec2}}}|{{{custom_label5_sec2|}}}}}
| data160 = {{#if:{{{blank5_name_sec2|}}}{{{custom_label5_sec2|}}}|{{if empty|{{{blank5_info_sec2|}}}|{{{custom_data5_sec2|}}}}}}}
| rowclass161 = mergedrow
| label161 = {{if empty|{{{blank6_name_sec2}}}|{{{custom_label6_sec2|}}}}}
| data161 = {{#if:{{{blank6_name_sec2|}}}{{{custom_label6_sec2|}}}|{{if empty|{{{blank6_info_sec2|}}}|{{{custom_data6_sec2|}}}}}}}
| rowclass162 = mergedrow
| label162 = {{if empty|{{{blank7_name_sec2}}}|{{{custom_label7_sec2|}}}}}
| data162 = {{#if:{{{blank7_name_sec2|}}}{{{custom_label7_sec2|}}}|{{if empty|{{{blank7_info_sec2|}}}|{{{custom_data7_sec2|}}}}}}}
<!-- ***Website*** -->
| rowclass163 = mergedtoprow
| label163 = Website
| data163 = {{#if:{{{website|}}}|{{{website}}}}}
| class164 = maptable
| data164 = {{#if:{{{module|}}}|{{{module}}}}}
<!-- ***Footnotes*** -->
| belowrowclass = mergedtoprow
| below = {{{footnotes|}}}
}}<!-- Check for unknowns
-->{{#invoke:Check for unknown parameters|check|unknown={{main other|[[Category:Pages using {{if empty|{{lcfirst:{{{template_name|}}}}}|infobox settlement}} with unknown parameters|_VALUE_{{PAGENAME}}]]}}|preview = Page using [[Template:{{if empty|{{ucfirst:{{{template_name|}}}}}|Infobox settlement}}]] with unknown parameter "_VALUE_"|ignoreblank=y|mapframe_args=y
| alt | anthem | anthem_link | area_blank1_acre | area_blank1_dunam | area_blank1_ha | area_blank1_km2 | area_blank1_sq_mi | area_blank1_title | area_blank2_acre | area_blank2_dunam | area_blank2_ha | area_blank2_km2 | area_blank2_sq_mi | area_blank2_title | area_code | area_code_type | area_codes | area_footnotes | area_land_acre | area_land_dunam | area_land_ha | area_land_km2 | area_land_sq_mi | area_metro_acre | area_metro_dunam | area_metro_footnotes | area_metro_ha | area_metro_km2 | area_metro_sq_mi | area_note | area_rank | area_rural_acre | area_rural_dunam | area_rural_footnotes | area_rural_ha | area_rural_km2 | area_rural_sq_mi | area_total_acre | area_total_dunam | area_total_ha | area_total_km2 | area_total_sq_mi | area_urban_acre | area_urban_dunam | area_urban_footnotes | area_urban_ha | area_urban_km2 | area_urban_sq_mi | area_water_acre | area_water_dunam | area_water_ha | area_water_km2 | area_water_percent | area_water_sq_mi
| blank_emblem_alt | blank_emblem_link | blank_emblem_size | blank_emblem_type | blank_emblem_upright
| blank_info | blank_info_sec1 | blank_info_sec2 | blank_name | blank_name_sec1 | blank_name_sec2 | blank1_info | blank1_info_sec1 | blank1_info_sec2 | blank1_name | blank1_name_sec1 | blank1_name_sec2 | blank2_info | blank2_info_sec1 | blank2_info_sec2 | blank2_name | blank2_name_sec1 | blank2_name_sec2 | blank3_info | blank3_info_sec1 | blank3_info_sec2 | blank3_name | blank3_name_sec1 | blank3_name_sec2 | blank4_info | blank4_info_sec1 | blank4_info_sec2 | blank4_name | blank4_name_sec1 | blank4_name_sec2 | blank5_info | blank5_info_sec1 | blank5_info_sec2 | blank5_name | blank5_name_sec1 | blank5_name_sec2 | blank6_info | blank6_info_sec1 | blank6_info_sec2 | blank6_name | blank6_name_sec1 | blank6_name_sec2 | blank7_info | blank7_info_sec1 | blank7_info_sec2 | blank7_name | blank7_name_sec1 | blank7_name_sec2 | caption | code1_info | code1_name | code2_info | code2_name | coor_pinpoint | coor_type | coordinates | coordinates_footnotes | demographics_type1 | demographics_type2 | demographics1_footnotes | demographics1_info1 | demographics1_info10 | demographics1_info2 | demographics1_info3 | demographics1_info4 | demographics1_info5 | demographics1_info6 | demographics1_info7 | demographics1_info8 | demographics1_info9 | demographics1_title1 | demographics1_title10 | demographics1_title2 | demographics1_title3 | demographics1_title4 | demographics1_title5 | demographics1_title6 | demographics1_title7 | demographics1_title8 | demographics1_title9 | demographics2_footnotes | demographics2_info1 | demographics2_info10 | demographics2_info2 | demographics2_info3 | demographics2_info4 | demographics2_info5 | demographics2_info6 | demographics2_info7 | demographics2_info8 | demographics2_info9 | demographics2_title1 | demographics2_title10 | demographics2_title2 | demographics2_title3 | demographics2_title4 | demographics2_title5 | demographics2_title6 | demographics2_title7 | demographics2_title8 | demographics2_title9 | dimensions_footnotes | dunam_link | elevation_footnotes | elevation_ft | elevation_link | elevation_m | elevation_max_footnotes | elevation_max_ft | elevation_max_m | elevation_max_point | elevation_max_rank | elevation_min_footnotes | elevation_min_ft | elevation_min_m | elevation_min_point | elevation_min_rank | elevation_point | embed | established_date | established_date1 | established_date2 | established_date3 | established_date4 | established_date5 | established_date6 | established_date7 | established_title | established_title1 | established_title2 | established_title3 | established_title4 | established_title5 | established_title6 | established_title7 | etymology | extinct_date | extinct_title | flag_alt | flag_border | flag_link | flag_size | footnotes | founder | geocode | governing_body | government_footnotes | government_type | government_blank1_title | government_blank1 | government_blank2_title | government_blank2 | government_blank2_title | government_blank3 | government_blank3_title | government_blank3 | government_blank4_title | government_blank4 | government_blank5_title | government_blank5 | government_blank6_title | government_blank6 | grid_name | grid_position
| image_alt | image_blank_emblem | image_caption | image_flag | image_map | image_map1 | image_seal | image_shield | image_size | image_skyline | imagesize | image_upright
| iso_code | leader_name | leader_name1 | leader_name2 | leader_name3 | leader_name4 | leader_name5 | leader_party | leader_title | leader_title1 | leader_title2 | leader_title3 | leader_title4 | leader_title5 | length_km | length_mi | map_alt | map_alt1 | map_caption | map_caption1 | mapsize | mapsize1 | module | motto | motto_link | mottoes | name | named_for | native_name | native_name_lang | nickname | nickname_link | nicknames | official_name | other_name | p1 | p10 | p11 | p12 | p13 | p14 | p15 | p16 | p17 | p18 | p19 | p2 | p20 | p21 | p22 | p23 | p24 | p25 | p26 | p27 | p28 | p29 | p3 | p30 | p31 | p32 | p33 | p34 | p35 | p36 | p37 | p38 | p39 | p4 | p40 | p41 | p42 | p43 | p44 | p45 | p46 | p47 | p48 | p49 | p5 | p50 | p6 | p7 | p8 | p9 | parts | parts_style | parts_type | pop_est_as_of | pop_est_footnotes | population_as_of | population_blank1 | population_blank1_footnotes | population_blank1_title | population_blank2 | population_blank2_footnotes | population_blank2_title | population_demonym | population_demonyms | population_density_blank1_km2 | population_density_blank1_sq_mi | population_density_blank2_km2 | population_density_blank2_sq_mi | population_density_km2 | population_density_metro_km2 | population_density_metro_sq_mi | population_density_rank | population_density_rural_km2 | population_density_rural_sq_mi | population_density_sq_mi | population_density_urban_km2 | population_density_urban_sq_mi | population_est | population_footnotes | population_metro | population_metro_footnotes | population_note | population_rank | population_rural | population_rural_footnotes | population_total | population_urban | population_urban_footnotes | postal_code | postal_code_type | postal2_code | postal2_code_type | pushpin_image | pushpin_label | pushpin_label_position | pushpin_map | pushpin_map_alt | pushpin_map_caption | pushpin_map_caption_notsmall | pushpin_map_narrow | pushpin_mapsize | pushpin_outside | pushpin_overlay | pushpin_relief | registration_plate | registration_plate_type | seal_alt | seal_class | seal_link | seal_size | seal_type | seat | seat_type | seat1 | seat1_type | seat2 | seat2_type | settlement_type | shield_alt | shield_link | shield_size | short_description <!--used by Module:Settlement short description-->| subdivision_name | subdivision_name1 | subdivision_name2 | subdivision_name3 | subdivision_name4 | subdivision_name5 | subdivision_name6 | subdivision_type | subdivision_type1 | subdivision_type2 | subdivision_type3 | subdivision_type4 | subdivision_type5 | subdivision_type6 | template_name | timezone | timezone_DST | timezone_link | timezone1 | timezone1_DST | timezone1_location | timezone2 | timezone2_DST | timezone2_location | timezone3 | timezone3_DST | timezone3_location | timezone4 | timezone4_DST | timezone4_location | timezone5 | timezone5_DST | timezone5_location | total_type | translit_lang1 | translit_lang1_info | translit_lang1_info1 | translit_lang1_info2 | translit_lang1_info3 | translit_lang1_info4 | translit_lang1_info5 | translit_lang1_info6 | translit_lang1_type | translit_lang1_type1 | translit_lang1_type2 | translit_lang1_type3 | translit_lang1_type4 | translit_lang1_type5 | translit_lang1_type6 | translit_lang2 | translit_lang2_info | translit_lang2_info1 | translit_lang2_info2 | translit_lang2_info3 | translit_lang2_info4 | translit_lang2_info5 | translit_lang2_info6 | translit_lang2_type | translit_lang2_type1 | translit_lang2_type2 | translit_lang2_type3 | translit_lang2_type4 | translit_lang2_type5 | translit_lang2_type6 | type | unit_pref | utc_offset | utc_offset_DST | utc_offset1 | utc_offset1_DST | utc_offset2 | utc_offset2_DST | utc_offset3 | utc_offset3_DST | utc_offset4 | utc_offset4_DST | utc_offset5 | utc_offset5_DST | website | width_km | width_mi <!--
NEW PARAMETERS AS PART OF REFACTOR - Will be integrated in alphebetical order once refactor is completed
-->| pushpin_map_args=y | map_size | map_size1 | image | custom_label_sec1 | custom_label_sec1 | custom_data_sec1 | custom_label1_sec1 | custom_label1_sec1 | custom_data1_sec1 | custom_label2_sec1 | custom_label2_sec1 | custom_data2_sec1 | custom_label3_sec1 | custom_label3_sec1 | custom_data3_sec1 | custom_label4_sec1 | custom_label4_sec1 | custom_data4_sec1 | custom_label5_sec1 | custom_label5_sec1 | custom_data5_sec1 | custom_label6_sec1 | custom_label6_sec1 | custom_data6_sec1 | custom_label7_sec1 | custom_label7_sec1 | custom_data7_sec1 | custom_label_sec2 | custom_label_sec2 | custom_data_sec2 | custom_label1_sec2 | custom_label1_sec2 | custom_data1_sec2 | custom_label2_sec2 | custom_label2_sec2 | custom_data2_sec2 | custom_label3_sec2 | custom_label3_sec2 | custom_data3_sec2 | custom_label4_sec2 | custom_label4_sec2 | custom_data4_sec2 | custom_label5_sec2 | custom_label5_sec2 | custom_data5_sec2 | custom_label6_sec2 | custom_label6_sec2 | custom_data6_sec2 | custom_label7_sec2 | custom_label7_sec2 | custom_data7_sec2 | time_zone | time_zone1_location | time_zone2 | time_zone_link | time_zone_link | time_zone1_location | time_zone1_location | time_zone1_location | time_zone2_location | time_zone2_location | time_zone2 | time_zone_link | time_zone_link | time_zone1 | time_zone1 | time_zone1 | time_zone1_DST | time_zone_DST | time_zone_DST | time_zone1_DST | time_zone1_DST | time_zone_DST | time_zone_DST | time_zone1_DST | time_zone1_DST | time_zone_DST | time_zone_DST | time_zone2_location | time_zone1 | time_zone2 | time_zone2 | time_zone2 | time_zone2_DST | time_zone2_DST | time_zone2_DST | time_zone2_DST | time_zone2_DST | time_zone2_DST | time_zone3_location | time_zone1 | time_zone3 | time_zone3 | time_zone3 | time_zone3_DST | time_zone3_DST | time_zone3_DST | time_zone3_DST | time_zone3_DST | time_zone3_DST | time_zone4_location | time_zone1 | time_zone4 | time_zone4 | time_zone4 | time_zone4_DST | time_zone4_DST | time_zone4_DST | time_zone4_DST | time_zone4_DST | time_zone4_DST | time_zone5_location | time_zone1 | time_zone5 | time_zone5 | time_zone5 | time_zone5_DST | time_zone5_DST | time_zone5_DST | time_zone5_DST | time_zone5_DST | time_zone5_DST |
}}<!--
-->{{#invoke:Check for conflicting parameters|check
| template = [[Template:{{if empty|{{ucfirst:{{{template_name|}}}}}|Infobox settlement}}]]
| cat = {{main other|Category:Pages using {{if empty|{{lcfirst:{{{template_name|}}}}}|infobox settlement}} with conflicting parameters}}
| settlement_type; type
| image_size; imagesize
| image_alt; alt
| image_caption; caption
| nickname; nicknames
| motto; mottoes
| coor_pinpoint; coor_type
| population_demonym; population_demonyms
| utc_offset1; utc_offset
| timezone1; timezone
| utc_offset1_DST; utc_offset_DST
| timezone1_DST; timezone_DST
| area_code; area_codes
| blank_name_sec1; blank_name
| blank_info_sec1; blank_info
| blank1_name_sec1; blank1_name
| blank1_info_sec1; blank1_info
| blank2_name_sec1; blank2_name
| blank2_info_sec1; blank2_info
| blank3_name_sec1; blank3_name
| blank3_info_sec1; blank3_info
| blank4_name_sec1; blank4_name
| blank4_info_sec1; blank4_info
| blank5_name_sec1; blank5_name
| blank5_info_sec1; blank5_info
| blank6_name_sec1; blank6_name
| blank6_info_sec1; blank6_info
| blank7_name_sec1; blank7_name
| blank7_info_sec1; blank7_info
}}<!-- Wikidata
-->{{#if:{{{coordinates_wikidata|}}}{{{wikidata|}}}
|[[Category:Pages using infobox settlement with the wikidata parameter]]
}}{{main other|<!-- Missing country
-->{{#if:{{{subdivision_name|}}}||[[Category:Pages using infobox settlement with missing country]]}}<!-- No map
-->{{#if:{{{pushpin_map|}}}{{{image_map|}}}{{{image_map1|}}}||[[Category:Pages using infobox settlement with no map]]}}<!-- Image_map1 without image_map
-->{{#if:{{{image_map1|}}}|{{#if:{{{image_map|}}}||[[Category:Pages using infobox settlement with image_map1 but not image_map]]}}}}<!-- No coordinates
-->{{#if:{{{coordinates|}}}||[[Category:Pages using infobox settlement with no coordinates]]}}<!--
-->{{#if:{{{embed|}}}|[[Category:Pages using infobox settlement with embed]]}}
}}<!-- Gathering information on over-use of maps
-->{{#ifexpr:{{#invoke:ParameterCount|main|mapframe|image_map|image_map1|pushpin_map}} >2 |{{main other| [[Category:Pages using infobox settlement with potentially too many maps]]}}}}</includeonly>{{#invoke:Check for deprecated parameters|check
| _category = {{main other|[[Category:Pages using infobox settlement with deprecated parameters|_VALUE_]]}}
| _remove = pushpin_map_caption_notsmall; pushpin_outside; pushpin_overlay; pushpin_image
| settlement_type = type
| image_skyline = image
| imagesize = image_size
| image_alt = alt
| image_caption = caption
| mapsize = map_size
| mapsize1 = map_size1
| pushpin_map_alt = pushpin_alt
| pushpin_map_caption = pushpin_caption
| pushpin_mapsize = pushpin_map_size
| _regexp1 = blank(%d*)_name = custom_label%1_sec1
| _regexp2 = blank(%d*)_info = custom_data%1_sec1
| _regexp3 = blank(%d*)_name_sec(%d) = custom_label%1_sec%2
| _regexp4 = blank(%d*)_info_sec(%d) = custom_data%1_sec%2
| timezone = time_zone
| timezone_DST = time_zone_DST
| timezone_link = time_zone_link
| _regexp5 = timezone(%d) = time_zone%1
| _regexp6 = timezone(%d)_DST = time_zone%1_DST
| _regexp7 = timezone(%d)_location = time_zone%1_location
}}<noinclude>
{{documentation}}
<!--Please add this template's categories to the /doc subpage, not here - thanks!-->
</noinclude>
ca538lw34yyj1ycgo543lpbn2u7vjjh
1378245
1378244
2026-08-03T07:17:08Z
A826
72368
೧ revisions imported from [[:en:Template:Infobox_settlement]]
1378244
wikitext
text/x-wiki
<includeonly>{{main other|{{#invoke:Settlement short description|main}}|}}{{Infobox
| child = {{yesno|{{{embed|}}}}}
| templatestyles = Infobox settlement/styles.css
| bodyclass = ib-settlement vcard
<!--** names, type, and transliterations ** -->
| above = <div class="fn org">{{if empty|{{{name|}}}|{{{official_name|}}}|{{PAGENAMEBASE}}}}</div>
{{#if:{{{native_name|}}}|<div class="nickname ib-settlement-native" {{#if:{{{native_name_lang|}}}|lang="{{{native_name_lang}}}"}}>{{{native_name}}}</div>}}{{#if:{{{other_name|}}}|<div class="nickname ib-settlement-other-name">{{{other_name}}}</div>}}
| subheader = {{#if:{{{settlement_type|}}}{{{type|}}}|<div class="category">{{if empty|{{{settlement_type|}}}|{{{type}}}}}</div>}}
| rowclass1 = mergedtoprow ib-settlement-official
| data1 = {{#if:{{{name|}}}|{{{official_name|}}}}}
<!-- ***Transliteration language 1*** -->
| rowclass2 = mergedtoprow
| header2 = {{#if:{{{translit_lang1|}}}|{{{translit_lang1}}} transcription(s)}}
| rowclass3 = {{#if:{{{translit_lang1_type1|}}}|mergedrow|mergedbottomrow}}
| label3 = • {{{translit_lang1_type}}}
| data3 = {{#if:{{{translit_lang1|}}}|{{#if:{{{translit_lang1_type|}}}|{{{translit_lang1_info|}}}}}}}
| rowclass4 = {{#if:{{{translit_lang1_type2|}}}|mergedrow|mergedbottomrow}}
| label4 = • {{{translit_lang1_type1}}}
| data4 = {{#if:{{{translit_lang1|}}}|{{#if:{{{translit_lang1_type1|}}}|{{{translit_lang1_info1|}}}}}}}
| rowclass5 = {{#if:{{{translit_lang1_type3|}}}|mergedrow|mergedbottomrow}}
| label5 = • {{{translit_lang1_type2}}}
| data5 = {{#if:{{{translit_lang1|}}}|{{#if:{{{translit_lang1_type2|}}}|{{{translit_lang1_info2|}}}}}}}
| rowclass6 = {{#if:{{{translit_lang1_type4|}}}|mergedrow|mergedbottomrow}}
| label6 = • {{{translit_lang1_type3}}}
| data6 = {{#if:{{{translit_lang1|}}}|{{#if:{{{translit_lang1_type3|}}}|{{{translit_lang1_info3|}}}}}}}
| rowclass7 = {{#if:{{{translit_lang1_type5|}}}|mergedrow|mergedbottomrow}}
| label7 = • {{{translit_lang1_type4}}}
| data7 = {{#if:{{{translit_lang1|}}}|{{#if:{{{translit_lang1_type4|}}}|{{{translit_lang1_info4|}}}}}}}
| rowclass8 = {{#if:{{{translit_lang1_type6|}}}|mergedrow|mergedbottomrow}}
| label8 = • {{{translit_lang1_type5}}}
| data8 = {{#if:{{{translit_lang1|}}}|{{#if:{{{translit_lang1_type5|}}}|{{{translit_lang1_info5|}}}}}}}
| rowclass9 = mergedbottomrow
| label9 = • {{{translit_lang1_type6}}}
| data9 = {{#if:{{{translit_lang1|}}}|{{#if:{{{translit_lang1_type6|}}}|{{{translit_lang1_info6|}}}}}}}
<!-- ***Transliteration language 2*** -->
| rowclass10 = mergedtoprow
| header10 = {{#if:{{{translit_lang2|}}}|{{{translit_lang2}}} transcription(s)}}
| rowclass11 = {{#if:{{{translit_lang2_type1|}}}|mergedrow|mergedbottomrow}}
| label11 = • {{{translit_lang2_type}}}
| data11 = {{#if:{{{translit_lang2|}}}|{{#if:{{{translit_lang2_type|}}}|{{{translit_lang2_info|}}}}}}}
| rowclass12 = {{#if:{{{translit_lang2_type2|}}}|mergedrow|mergedbottomrow}}
| label12 = • {{{translit_lang2_type1}}}
| data12 = {{#if:{{{translit_lang2|}}}|{{#if:{{{translit_lang2_type1|}}}|{{{translit_lang2_info1|}}}}}}}
| rowclass13 = {{#if:{{{translit_lang2_type3|}}}|mergedrow|mergedbottomrow}}
| label13 = • {{{translit_lang2_type2}}}
| data13 = {{#if:{{{translit_lang2|}}}|{{#if:{{{translit_lang2_type2|}}}|{{{translit_lang2_info2|}}}}}}}
| rowclass14 = {{#if:{{{translit_lang2_type4|}}}|mergedrow|mergedbottomrow}}
| label14 = • {{{translit_lang2_type3}}}
| data14 = {{#if:{{{translit_lang2|}}}|{{#if:{{{translit_lang2_type3|}}}|{{{translit_lang2_info3|}}}}}}}
| rowclass15 = {{#if:{{{translit_lang2_type5|}}}|mergedrow|mergedbottomrow}}
| label15 = • {{{translit_lang2_type4}}}
| data15 = {{#if:{{{translit_lang2|}}}|{{#if:{{{translit_lang2_type4|}}}|{{{translit_lang2_info4|}}}}}}}
| rowclass16 = {{#if:{{{translit_lang2_type6|}}}|mergedrow|mergedbottomrow}}
| label16 = • {{{translit_lang2_type5}}}
| data16 = {{#if:{{{translit_lang2|}}}|{{#if:{{{translit_lang2_type5|}}}|{{{translit_lang2_info5|}}}}}}}
| rowclass17 = mergedbottomrow
| label17 = • {{{translit_lang2_type6}}}
| data17 = {{#if:{{{translit_lang2|}}}|{{#if:{{{translit_lang2_type6|}}}|{{{translit_lang2_info6|}}}}}}}
<!-- end ** names, type, and transliterations ** -->
<!-- ***Skyline Image*** -->
| rowclass18 = mergedtoprow
| data18 = {{#if:{{{image_skyline|}}}{{{image|}}}|<!--
-->{{#invoke:InfoboxImage|InfoboxImage<!--
-->|image={{if empty|{{{image_skyline|}}}|{{{image|}}}}}<!--
-->|size={{if empty|{{{image_size|}}}|{{{imagesize|}}}}}|sizedefault=250px|upright={{{image_upright|}}}<!--
-->|alt={{if empty|{{{image_alt|}}}|{{{alt|}}}}}<!--
-->|title={{if empty|{{{image_caption|}}}|{{{caption|}}}|{{{image_alt|}}}|{{{alt|}}}}}}}<!--
-->{{#if:{{{image_caption|}}}{{{caption|}}}|<div class="ib-settlement-caption">{{if empty|{{{image_caption|}}}|{{{caption|}}}}}</div>}} }}
<!-- ***Flag, Seal, Shield and Coat of arms*** -->
| rowclass19 = mergedtoprow
| class19 = maptable
| data19 = {{#if:{{{image_flag|}}}{{{image_seal|}}}{{{image_shield|}}}{{{image_blank_emblem|}}}{{both|{{{pushpin_map_narrow|}}}|{{{pushpin_map|}}}}}
|{{Infobox settlement/columns
| 1 = {{#if:{{{image_flag|}}}|{{#invoke:InfoboxImage|InfoboxImage|image={{{image_flag}}}|size={{{flag_size|}}}|sizedefault={{#if:{{both|{{{pushpin_map_narrow|}}}|{{{pushpin_map|}}}}}|125px|100x100px}}|border={{yesno |{{{flag_border|}}}|yes=yes|blank=yes}}|alt={{{flag_alt|}}}|title=Flag of {{if empty|{{{name|}}}|{{{official_name|}}}|{{PAGENAMEBASE}}}}}}<div class="ib-settlement-caption-link">{{Infobox settlement/link|type=Flag|link={{{flag_link|}}}|name={{{official_name}}}}}</div>}}
| 2 = {{#if:{{{image_seal|}}}|{{#invoke:InfoboxImage|InfoboxImage|image={{{image_seal|}}}|size={{{seal_size|}}}|sizedefault={{#if:{{both|{{{pushpin_map_narrow|}}}|{{{pushpin_map|}}}}}|85px|100x100px}}|alt={{{seal_alt|}}}|title=Official seal of {{if empty|{{{name|}}}|{{{official_name|}}}|{{PAGENAMEBASE}}}}|class={{{seal_class|}}}}}<div class="ib-settlement-caption-link">{{Infobox settlement/link|type={{if empty|{{{seal_type|}}}|Seal}}|link={{{seal_link|}}}|name={{{official_name}}}}}</div>}}
| 3 = {{#if:{{{image_shield|}}}|{{#invoke:InfoboxImage|InfoboxImage|image={{{image_shield|}}}||size={{{shield_size|}}}|sizedefault={{#if:{{both|{{{pushpin_map_narrow|}}}|{{{pushpin_map|}}}}}|85px|100x100px}}|alt={{{shield_alt|}}}|title=Coat of arms of {{if empty|{{{name|}}}|{{{official_name|}}}|{{PAGENAMEBASE}}}}}}<div class="ib-settlement-caption-link">{{Infobox settlement/link|type=Coat of arms|link={{{shield_link|}}}|name={{{official_name}}}}}</div>}}
| 4 = {{#if:{{{image_blank_emblem|}}}|{{#invoke:InfoboxImage|InfoboxImage|image={{{image_blank_emblem|}}}|size={{{blank_emblem_size|}}}|sizedefault={{#if:{{both|{{{pushpin_map_narrow|}}}|{{{pushpin_map|}}}}}|85px|100x100px}}|upright={{{blank_emblem_upright|}}}|alt={{{blank_emblem_alt|}}}|title=Official logo of {{if empty|{{{name|}}}|{{{official_name|}}}|{{PAGENAMEBASE}}}}}}<div class="ib-settlement-caption-link">{{Infobox settlement/link|type={{#if:{{{blank_emblem_type|}}}|{{{blank_emblem_type}}}}}|link={{{blank_emblem_link|}}}|name={{{official_name}}}}}</div>}}
| 5 = {{#if:{{{image_map|}}}|{{#invoke:InfoboxImage|InfoboxImage|image={{{image_map}}}|size={{if empty|{{{mapsize|}}}|{{{map_size|}}}}}|sizedefault=100x100px|alt={{{map_alt|}}}|title={{{map_caption|Location of {{if empty|{{{name|}}}|{{{official_name|}}}|{{PAGENAMEBASE}}}}}}}}}{{#if:{{{map_caption|}}}|<div class="ib-settlement-caption-link">{{{map_caption}}}</div>}}}}
| 0 = {{#if:{{{pushpin_map_narrow|}}}|{{#invoke:Location map|infobox_pushpin_map
| pushpin_alt = {{{pushpin_map_alt|}}}
| pushpin_caption = {{{pushpin_map_caption|}}}
| pushpin_label = {{if empty|{{{name|}}}|{{{official_name|}}}}}
| default_width = 250 <!-- Shouldn't this be set to 150 and the if empty below removed? -->
| pushpin_map_size = {{if empty|{{{pushpin_mapsize|}}}|150}}
}}}}
}}
}}
<!-- ***Etymology*** -->
| rowclass20 = mergedtoprow
| data20 = {{#if:{{{etymology|}}}|Etymology: {{{etymology}}} }}
<!-- ***Nickname*** -->
| rowclass21 = {{#if:{{{etymology|}}}|mergedrow|mergedtoprow}}
| data21 = {{#if:{{{nickname|}}}{{{nicknames|}}}|<!--
-->{{Pluralize from text|parse_links=1|{{if empty|{{{nickname|}}}|{{{nicknames|}}}{{force plural}}}}|<!--
-->link={{{nickname_link|}}}|singular=Nickname|likely=Nickname(s)|plural=Nicknames}}: <!--
--><div class="ib-settlement-nickname nickname">{{if empty|{{{nickname|}}}|{{{nicknames|}}}}}</div><!--
-->{{Main other|{{Pluralize from text|parse_links=1|{{{nickname|}}}|<!--
-->likely=[[Category:Pages using infobox settlement with possible nickname list]]}}}}}}
<!-- ***Motto*** -->
| rowclass22 = {{#if:{{{etymology|}}}{{{nickname|}}}{{{nicknames|}}}|mergedrow|mergedtoprow}}
| data22 = {{#if:{{{motto|}}}{{{mottoes|}}}|<!--
-->{{Pluralize from text|{{if empty|{{{motto|}}}|{{{mottoes|}}}{{force plural}}}}|<!--
-->link={{{motto_link|}}}|singular=Motto|likely=Motto(s)|plural=Mottoes}}: <!--
--><div class="ib-settlement-nickname nickname">{{if empty|{{{motto|}}}|{{{mottoes|}}}}}</div><!--
-->{{Main other|{{Pluralize from text|{{{motto|}}}|<!--
-->likely=[[Category:Pages using infobox settlement with possible motto list]]}}}}}}
<!-- ***Anthem*** -->
| rowclass23 = {{#if:{{{etymology|}}}{{{nickname|}}}{{{nicknames|}}}{{{motto|}}}{{{mottoes|}}}|mergedrow|mergedtoprow}}
| data23 = {{#if:{{{anthem|}}}|{{#if:{{{anthem_link|}}}|[[{{{anthem_link|}}}|Anthem:]]|Anthem:}} {{{anthem}}}}}
<!-- ***Map*** -->
| rowclass24 = mergedtoprow
| data24 = {{#if:{{both|{{{pushpin_map_narrow|}}}|{{{pushpin_map|}}}}}||{{#if:{{{image_map|}}}
|{{#invoke:InfoboxImage|InfoboxImage|image={{{image_map}}}|size={{if empty|{{{mapsize|}}}|{{{map_size|}}}}}|sizedefault=250px|upright={{{image_upright|}}}|alt={{{map_alt|}}}|title={{{map_caption|Location of {{if empty|{{{name|}}}|{{{official_name|}}}|{{PAGENAMEBASE}}}}}}}}}{{#if:{{{map_caption|}}}|<div class="ib-settlement-caption">{{{map_caption}}}</div>}}
}}}}
| rowclass25 = mergedrow
| data25 = {{#if:{{{image_map1|}}}|{{#invoke:InfoboxImage|InfoboxImage|image={{{image_map1}}}|size={{if empty|{{{mapsize1|}}}|{{{map_size1|}}}}}|sizedefault=250px|upright={{{image_upright|}}}|alt={{{map_alt1|}}}|title={{{map_caption1|Location of {{if empty|{{{name|}}}|{{{official_name|}}}|{{PAGENAMEBASE}}}}}}}}}{{#if:{{{map_caption1|}}}|<div class="ib-settlement-caption">{{{map_caption1}}}</div>}} }}
| data26 = {{#invoke:Infobox mapframe
| autoWithCaption
| onByDefault = {{#if:{{{pushpin_map|}}}{{{image_map|}}}{{{image_map1|}}}|no|yes}}
| mapframe-frame-width = 250
| mapframe-stroke-width = 2
| mapframe-length_km = {{{length_km|}}}
| mapframe-length_mi = {{{length_mi|}}}
| mapframe-width_km = {{{width_km|}}}
| mapframe-width_mi = {{{width_mi|}}}
| mapframe-area_km2 = {{{area_total_km2|}}}
| mapframe-area_ha = {{{area_total_ha|}}}
| mapframe-area_acre = {{{area_total_acre|}}}
| mapframe-area_sq_mi = {{{area_total_sq_mi|}}}
| mapframe-type = city
| mapframe-population = {{if empty|{{{population_metro|}}}|{{{population_total|}}}}}
| mapframe-marker = town
| mapframe-wikidata = yes
| mapframe-caption = Interactive map of {{if empty|{{{name|}}}|{{{official_name|}}}|{{PAGENAMEBASE}}}}
}}
<!-- ***Pushpin Map*** -->
| rowclass28 = mergedtoprow
| data28 = {{#if:{{{pushpin_map_narrow|}}}|| {{#invoke:Location map|infobox_pushpin_map
| default_width = 250
| pushpin_alt = {{{pushpin_map_alt|}}}
| pushpin_caption = {{{pushpin_map_caption|}}}
| pushpin_label = {{if empty|{{{name|}}}|{{{official_name|}}}}}
| pushpin_map_size = {{{pushpin_mapsize|}}}
}}
}}
<!-- ***Coordinates*** -->
| data29 = {{#if:{{{coordinates|}}}|{{#if:{{#invoke:string|match|s={{{coordinates|}}}|pattern=geo-inline-hidden|ignore_errors=true|plain=true}}|<!-- Nothing to display -->
|Coordinates{{#if:{{{coor_pinpoint|}}}{{{coor_type|}}}| ({{if empty|{{{coor_pinpoint|}}}|{{{coor_type|}}}}})}}: {{#invoke:ISO 3166|geocoordinsert|nocat=true|1={{{coordinates|}}}|country={{{subdivision_name|}}}|subdivision1={{{subdivision_name1|}}}|subdivision2={{{subdivision_name2|}}}|subdivision3={{{subdivision_name3|}}}|type=city{{#if:{{{population_total|}}}|{{#iferror:{{#expr:{{formatnum:{{{population_total}}}|R}}+1}}||({{formatnum:{{replace|{{{population_total}}}|,|}}|R}})}}}} }}{{{coordinates_footnotes|}}} }}}}
| rowclass30 = {{#if:{{{image_map|}}}{{{image_map1|}}}{{{pushpin_map|}}}|mergedbottomrow|mergedrow}}
| label30 = {{if empty|{{{grid_name|}}}|Grid position}}
| data30 = {{{grid_position|}}}
<!-- ***Subdivisions*** -->
| rowclass31 = mergedtoprow
| label31 = {{{subdivision_type}}}
| data31 = {{#if:{{{subdivision_type|}}}|{{{subdivision_name|}}} }}
| rowclass32 = mergedrow
| label32 = {{{subdivision_type1}}}
| data32 = {{#if:{{{subdivision_type1|}}}|{{{subdivision_name1|}}} }}
| rowclass33 = mergedrow
| label33 = {{{subdivision_type2}}}
| data33 = {{#if:{{{subdivision_type2|}}}|{{{subdivision_name2|}}} }}
| rowclass34 = mergedrow
| label34 = {{{subdivision_type3}}}
| data34 = {{#if:{{{subdivision_type3|}}}|{{{subdivision_name3|}}} }}
| rowclass35 = mergedrow
| label35 = {{{subdivision_type4}}}
| data35 = {{#if:{{{subdivision_type4|}}}|{{{subdivision_name4|}}} }}
| rowclass36 = mergedrow
| label36 = {{{subdivision_type5}}}
| data36 = {{#if:{{{subdivision_type5|}}}|{{{subdivision_name5|}}} }}
| rowclass37 = mergedrow
| label37 = {{{subdivision_type6}}}
| data37 = {{#if:{{{subdivision_type6|}}}|{{{subdivision_name6|}}} }}
<!--***Established*** -->
| rowclass38 = mergedtoprow
| label38 = {{if empty|{{{established_title|}}}|Established}}
| data38 = {{{established_date|}}}
| rowclass39 = mergedrow
| label39 = {{{established_title1}}}
| data39 = {{#if:{{{established_title1|}}}|{{{established_date1|}}} }}
| rowclass40 = mergedrow
| label40 = {{{established_title2}}}
| data40 = {{#if:{{{established_title2|}}}|{{{established_date2|}}} }}
| rowclass41 = mergedrow
| label41 = {{{established_title3}}}
| data41 = {{#if:{{{established_title3|}}}|{{{established_date3|}}} }}
| rowclass42 = mergedrow
| label42 = {{{established_title4}}}
| data42 = {{#if:{{{established_title4|}}}|{{{established_date4|}}} }}
| rowclass43 = mergedrow
| label43 = {{{established_title5}}}
| data43 = {{#if:{{{established_title5|}}}|{{{established_date5|}}} }}
| rowclass44 = mergedrow
| label44 = {{{established_title6}}}
| data44 = {{#if:{{{established_title6|}}}|{{{established_date6|}}} }}
| rowclass45 = mergedrow
| label45 = {{{established_title7}}}
| data45 = {{#if:{{{established_title7|}}}|{{{established_date7|}}} }}
| rowclass46 = mergedrow
| label46 = {{{extinct_title}}}
| data46 = {{#if:{{{extinct_title|}}}|{{{extinct_date|}}} }}
| rowclass47 = mergedrow
| label47 = Founded by
| data47 = {{{founder|}}}
| rowclass48 = mergedrow
| label48 = [[Namesake|Named after]]
| data48 = {{{named_for|}}}
<!-- ***Seat of government and subdivisions within the settlement*** -->
| rowclass49 = mergedtoprow
| label49 = {{if empty|{{{seat_type|}}}|Seat}}
| data49 = {{{seat|}}}
| rowclass50 = mergedrow
| label50 = {{if empty|{{{seat1_type|}}}|Former seat}}
| data50 = {{{seat1|}}}
| rowclass51 = mergedrow
| label51 = {{if empty|{{{seat2_type|}}}|Former seat}}
| data51 = {{{seat2|}}}
| rowclass52 = {{#if:{{{seat|}}}{{{seat1|}}}{{{seat2|}}}|mergedrow|mergedtoprow}}
| label52 = {{if empty|{{{parts_type|}}}|Boroughs}}
| data52 = {{#if:{{{parts|}}}{{{p1|}}}
|{{#ifeq:{{{parts_style|}}}|para
|<b>{{{parts|}}}{{#if:{{both|{{{parts|}}}|{{{p1|}}}}}|: |}}</b>{{comma separated entries|{{{p1|}}}|{{{p2|}}}|{{{p3|}}}|{{{p4|}}}|{{{p5|}}}|{{{p6|}}}|{{{p7|}}}|{{{p8|}}}|{{{p9|}}}|{{{p10|}}}|{{{p11|}}}|{{{p12|}}}|{{{p13|}}}|{{{p14|}}}|{{{p15|}}}|{{{p16|}}}|{{{p17|}}}|{{{p18|}}}|{{{p19|}}}|{{{p20|}}}|{{{p21|}}}|{{{p22|}}}|{{{p23|}}}|{{{p24|}}}|{{{p25|}}}|{{{p26|}}}|{{{p27|}}}|{{{p28|}}}|{{{p29|}}}|{{{p30|}}}|{{{p31|}}}|{{{p32|}}}|{{{p33|}}}|{{{p34|}}}|{{{p35|}}}|{{{p36|}}}|{{{p37|}}}|{{{p38|}}}|{{{p39|}}}|{{{p40|}}}|{{{p41|}}}|{{{p42|}}}|{{{p43|}}}|{{{p44|}}}|{{{p45|}}}|{{{p46|}}}|{{{p47|}}}|{{{p48|}}}|{{{p49|}}}|{{{p50|}}}}}
|{{#if:{{{p1|}}}|{{Collapsible list|title={{{parts|}}}|expand={{#switch:{{{parts_style|}}}|coll=|list=y|{{#if:{{{p6|}}}||y}}}}|1={{{p1|}}}|2={{{p2|}}}|3={{{p3|}}}|4={{{p4|}}}|5={{{p5|}}}|6={{{p6|}}}|7={{{p7|}}}|8={{{p8|}}}|9={{{p9|}}}|10={{{p10|}}}|11={{{p11|}}}|12={{{p12|}}}|13={{{p13|}}}|14={{{p14|}}}|15={{{p15|}}}|16={{{p16|}}}|17={{{p17|}}}|18={{{p18|}}}|19={{{p19|}}}|20={{{p20|}}}|21={{{p21|}}}|22={{{p22|}}}|23={{{p23|}}}|24={{{p24|}}}|25={{{p25|}}}|26={{{p26|}}}|27={{{p27|}}}|28={{{p28|}}}|29={{{p29|}}}|30={{{p30|}}}|31={{{p31|}}}|32={{{p32|}}}|33={{{p33|}}}|34={{{p34|}}}|35={{{p35|}}}|36={{{p36|}}}|37={{{p37|}}}|38={{{p38|}}}|39={{{p39|}}}|40={{{p40|}}}|41={{{p41|}}}|42={{{p42|}}}|43={{{p43|}}}|44={{{p44|}}}|45={{{p45|}}}|46={{{p46|}}}|47={{{p47|}}}|48={{{p48|}}}|49={{{p49|}}}|50={{{p50|}}}}}
|{{{parts}}}
}}
}} }}
<!-- ***Government type and Leader*** -->
| rowclass53 = mergedtoprow
| header53 = {{#if:{{{government_type|}}}{{{governing_body|}}}{{{leader_name|}}}{{{leader_name1|}}}{{{leader_name2|}}}{{{leader_name3|}}}{{{leader_name4|}}}|Government<div class="ib-settlement-fn">{{{government_footnotes|}}}</div>}}
<!-- ***Government*** -->
| rowclass54 = mergedrow
| label54 = • Type
| data54 = {{{government_type|}}}
| rowclass55 = mergedrow
| label55 = • Body
| class55 = agent
| data55 = {{{governing_body|}}}
| rowclass56 = mergedrow
| label56 = • {{{leader_title}}}
| data56 = {{#if:{{{leader_title|}}}|{{{leader_name|}}} {{#if:{{{leader_party|}}}|({{Polparty|{{{subdivision_name}}}|{{{leader_party}}}}})}}}}
| rowclass57 = mergedrow
| label57 = • {{{leader_title1}}}
| data57 = {{#if:{{{leader_title1|}}}|{{{leader_name1|}}}}}
| rowclass58 = mergedrow
| label58 = • {{{leader_title2}}}
| data58 = {{#if:{{{leader_title2|}}}|{{{leader_name2|}}}}}
| rowclass59 = mergedrow
| label59 = • {{{leader_title3}}}
| data59 = {{#if:{{{leader_title3|}}}|{{{leader_name3|}}}}}
| rowclass60 = mergedrow
| label60 = • {{{leader_title4}}}
| data60 = {{#if:{{{leader_title4|}}}|{{{leader_name4|}}}}}
| rowclass61 = mergedrow
| label61 = • {{{leader_title5}}}
| data61 = {{#if:{{{leader_title5|}}}|{{{leader_name5|}}}}}
| rowclass62 = mergedrow
| label62 = {{{government_blank1_title}}}
| data62 = {{#if:{{{government_blank1|}}}|{{{government_blank1|}}}}}
| rowclass63 = mergedrow
| label63 = {{{government_blank2_title}}}
| data63 = {{#if:{{{government_blank2|}}}|{{{government_blank2|}}}}}
| rowclass64 = mergedrow
| label64 = {{{government_blank3_title}}}
| data64 = {{#if:{{{government_blank3|}}}|{{{government_blank3|}}}}}
| rowclass65 = mergedrow
| label65 = {{{government_blank4_title}}}
| data65 = {{#if:{{{government_blank4|}}}|{{{government_blank4|}}}}}
| rowclass66 = mergedrow
| label66 = {{{government_blank5_title}}}
| data66 = {{#if:{{{government_blank5|}}}|{{{government_blank5|}}}}}
| rowclass67 = mergedrow
| label67 = {{{government_blank6_title}}}
| data67 = {{#if:{{{government_blank6|}}}|{{{government_blank6|}}}}}
<!-- ***Geographical characteristics*** -->
<!-- ***Area*** -->
| rowclass68 = mergedtoprow
| header68 = {{#if:{{{area_total_km2|}}}{{{area_total_ha|}}}{{{area_total_acre|}}}{{{area_total_sq_mi|}}}{{{area_total_dunam|}}}{{{area_land_km2|}}}{{{area_land_ha|}}}{{{area_land_acre|}}}{{{area_land_sq_mi|}}}{{{area_water_km2|}}}{{{area_water_ha|}}}{{{area_water_acre|}}}{{{area_water_sq_mi|}}}{{{area_urban_km2|}}}{{{area_urban_ha|}}}{{{area_urban_acre|}}}{{{area_urban_sq_mi|}}}{{{area_rural_sq_mi|}}}{{{area_rural_ha|}}}{{{area_rural_acre|}}}{{{area_rural_km2|}}}{{{area_metro_km2|}}}{{{area_metro_ha|}}}{{{area_metro_acre|}}}{{{area_blank1_km2|}}}{{{area_blank1_ha|}}}{{{area_blank1_acre|}}}{{{area_metro_sq_mi|}}}{{{area_blank1_sq_mi|}}}
|{{#if:{{both|{{#ifeq:{{{total_type}}}| |1}}|{{{area_total_km2|}}}{{{area_total_ha|}}}{{{area_total_acre|}}}{{{area_total_sq_mi|}}}{{{area_total_dunam|}}}}}
|<!-- displayed below -->
|Area<div class="ib-settlement-fn">{{{area_footnotes|}}}</div>
}}
}}
| rowclass69 = {{#if:{{both|{{#ifeq:{{{total_type}}}| |1}}|{{{area_total_km2|}}}{{{area_total_ha|}}}{{{area_total_acre|}}}{{{area_total_sq_mi|}}}{{{area_total_dunam|}}}}}|mergedtoprow|mergedrow}}
| label69 = <div style="white-space:nowrap;">{{#if:{{both|{{#ifeq:{{{total_type}}}| |1}}|{{{area_total_km2|}}}{{{area_total_ha|}}}{{{area_total_acre|}}}{{{area_total_sq_mi|}}}{{{area_total_dunam|}}}}}
|Area<div class="ib-settlement-fn">{{{area_footnotes|}}}</div>
| • {{#if:{{{total_type|}}}|{{{total_type}}}|{{#if:{{{area_metro_km2|}}}{{{area_metro_sq_mi|}}}{{{area_urban_km2|}}}{{{area_urban_sq_mi|}}}{{{area_rural_km2|}}}{{{area_rural_sq_mi|}}}{{{population_metro|}}}{{{population_urban|}}}{{{population_rural|}}}|{{#if:{{{settlement_type|}}}{{{type|}}}|{{if empty|{{{settlement_type|}}}|{{{type}}}}}|City}}|Total}}}}
}}</div>
| data69 = {{#if:{{{area_total_km2|}}}{{{area_total_ha|}}}{{{area_total_acre|}}}{{{area_total_sq_mi|}}}{{{area_total_dunam|}}}
|{{infobox_settlement/areadisp
|km2 ={{{area_total_km2|}}}
|ha ={{{area_total_ha|}}}
|acre ={{{area_total_acre|}}}
|sqmi ={{{area_total_sq_mi|}}}
|dunam={{{area_total_dunam|}}}
|link ={{#switch:{{{dunam_link|}}}||on|total=on}}
|pref ={{{unit_pref|}}}
|name ={{{subdivision_name}}}
}}}}
| rowclass70 = mergedrow
| label70 = • Land
| data70 = {{#if:{{{area_land_km2|}}}{{{area_land_ha|}}}{{{area_land_acre|}}}{{{area_land_sq_mi|}}}{{{area_land_dunam|}}}
|{{infobox_settlement/areadisp
|km2 ={{{area_land_km2|}}}
|ha ={{{area_land_ha|}}}
|acre ={{{area_land_acre|}}}
|sqmi ={{{area_land_sq_mi|}}}
|dunam={{{area_land_dunam|}}}
|link ={{#ifeq:{{{dunam_link|}}}|land|on}}
|pref ={{{unit_pref|}}}
|name ={{{subdivision_name}}}
}}}}
| rowclass71 = mergedrow
| label71 = • Water
| data71 = {{#if:{{{area_water_km2|}}}{{{area_water_ha|}}}{{{area_water_acre|}}}{{{area_water_sq_mi|}}}{{{area_water_dunam|}}}
|{{infobox_settlement/areadisp
|km2 ={{{area_water_km2|}}}
|ha ={{{area_water_ha|}}}
|acre ={{{area_water_acre|}}}
|sqmi ={{{area_water_sq_mi|}}}
|dunam={{{area_water_dunam|}}}
|link ={{#ifeq:{{{dunam_link|}}}|water|on}}
|pref ={{{unit_pref|}}}
|name ={{{subdivision_name}}}
}} {{#if:{{{area_water_percent|}}}| {{{area_water_percent}}}{{#ifeq:%|{{#invoke:string|sub|{{{area_water_percent|}}}|-1}}||%}}}}}}
| rowclass72 = mergedrow
| label72 = • [[Urban area|Urban]]<div class="ib-settlement-fn">{{{area_urban_footnotes|}}}</div>
| data72 = {{#if:{{{area_urban_km2|}}}{{{area_urban_ha|}}}{{{area_urban_acre|}}}{{{area_urban_sq_mi|}}}{{{area_urban_dunam|}}}
|{{infobox_settlement/areadisp
|km2 ={{{area_urban_km2|}}}
|ha ={{{area_urban_ha|}}}
|acre ={{{area_urban_acre|}}}
|sqmi ={{{area_urban_sq_mi|}}}
|dunam={{{area_urban_dunam|}}}
|link ={{#ifeq:{{{dunam_link|}}}|urban|on}}
|pref ={{{unit_pref|}}}
|name ={{{subdivision_name}}}
}}}}
| rowclass73 = mergedrow
| label73 = • Rural<div class="ib-settlement-fn">{{{area_rural_footnotes|}}}</div>
| data73 = {{#if:{{{area_rural_km2|}}}{{{area_rural_ha|}}}{{{area_rural_acre|}}}{{{area_rural_sq_mi|}}}{{{area_rural_dunam|}}}
|{{infobox_settlement/areadisp
|km2 ={{{area_rural_km2|}}}
|ha ={{{area_rural_ha|}}}
|acre ={{{area_rural_acre|}}}
|sqmi ={{{area_rural_sq_mi|}}}
|dunam={{{area_rural_dunam|}}}
|link ={{#ifeq:{{{dunam_link|}}}|rural|on}}
|pref ={{{unit_pref|}}}
|name ={{{subdivision_name}}}
}}}}
| rowclass74 = mergedrow
| label74 = • Metro<div class="ib-settlement-fn">{{{area_metro_footnotes|}}}</div>
| data74 = {{#if:{{{area_metro_km2|}}}{{{area_metro_ha|}}}{{{area_metro_acre|}}}{{{area_metro_sq_mi|}}}{{{area_metro_dunam|}}}
|{{infobox_settlement/areadisp
|km2 ={{{area_metro_km2|}}}
|ha ={{{area_metro_ha|}}}
|acre ={{{area_metro_acre|}}}
|sqmi ={{{area_metro_sq_mi|}}}
|dunam={{{area_metro_dunam|}}}
|link ={{#ifeq:{{{dunam_link|}}}|metro|on}}
|pref ={{{unit_pref|}}}
|name ={{{subdivision_name}}}
}}}}
<!-- ***Area rank*** -->
| rowclass75 = mergedrow
| label75 = • Rank
| data75 = {{{area_rank|}}}
| rowclass76 = mergedrow
| label76 = • {{{area_blank1_title}}}
| data76 = {{#if:{{{area_blank1_km2|}}}{{{area_blank1_ha|}}}{{{area_blank1_acre|}}}{{{area_blank1_sq_mi|}}}{{{area_blank1_dunam|}}}
|{{infobox_settlement/areadisp
|km2 ={{{area_blank1_km2|}}}
|ha ={{{area_blank1_ha|}}}
|acre ={{{area_blank1_acre|}}}
|sqmi ={{{area_blank1_sq_mi|}}}
|dunam={{{area_blank1_dunam|}}}
|link ={{#ifeq:{{{dunam_link|}}}|blank1|on}}
|pref ={{{unit_pref|}}}
|name ={{{subdivision_name}}}
}}}}
| rowclass77 = mergedrow
| label77 = • {{{area_blank2_title}}}
| data77 = {{#if:{{{area_blank2_km2|}}}{{{area_blank2_ha|}}}{{{area_blank2_acre|}}}{{{area_blank2_sq_mi|}}}{{{area_blank2_dunam|}}}
|{{infobox_settlement/areadisp
|km2 ={{{area_blank2_km2|}}}
|ha ={{{area_blank2_ha|}}}
|acre ={{{area_blank2_acre|}}}
|sqmi ={{{area_blank2_sq_mi|}}}
|dunam={{{area_blank2_dunam|}}}
|link ={{#ifeq:{{{dunam_link|}}}|blank2|on}}
|pref ={{{unit_pref|}}}
|name ={{{subdivision_name}}}
}}}}
| rowclass78 = mergedrow
| label78 =
| data78 = {{{area_note|}}}
<!-- ***Dimensions*** -->
| rowclass79 = mergedtoprow
| header79 = {{#if:{{{length_km|}}}{{{length_mi|}}}{{{width_km|}}}{{{width_mi|}}}|Dimensions<div class="ib-settlement-fn">{{{dimensions_footnotes|}}}</div>}}
| rowclass80 = mergedrow
| label80 = • Length
| data80 = {{#if:{{{length_km|}}}{{{length_mi|}}}
| {{infobox_settlement/lengthdisp
|km ={{{length_km|}}}
|mi ={{{length_mi|}}}
|pref={{{unit_pref|}}}
|name={{{subdivision_name}}}
}} }}
| rowclass81 = mergedrow
| label81 = • Width
| data81 = {{#if:{{{width_km|}}}{{{width_mi|}}}
|{{infobox_settlement/lengthdisp
|km ={{{width_km|}}}
|mi ={{{width_mi|}}}
|pref={{{unit_pref|}}}
|name={{{subdivision_name}}}
}} }}
<!-- ***Elevation*** -->
| rowclass82 = mergedtoprow
| label82 = {{#if:{{{elevation_link|}}}|[[{{{elevation_link|}}}|Elevation]]|Elevation}}<div class="ib-settlement-fn">{{{elevation_footnotes|}}}{{#if:{{{elevation_point|}}}| ({{{elevation_point}}})}}</div>
| data82 = {{#if:{{{elevation_m|}}}{{{elevation_ft|}}}
|{{infobox_settlement/lengthdisp
|m ={{{elevation_m|}}}
|ft ={{{elevation_ft|}}}
|pref={{{unit_pref|}}}
|name={{{subdivision_name}}}
}} }}
| rowclass83 = {{#if:{{{elevation_m|}}}{{{elevation_ft|}}}|mergedrow|mergedtoprow}}
| label83 = Highest elevation<div class="ib-settlement-fn">{{{elevation_max_footnotes|}}}{{#if:{{{elevation_max_point|}}}| ({{{elevation_max_point}}})}}</div>
| data83 = {{#if:{{{elevation_max_m|}}}{{{elevation_max_ft|}}}
|{{infobox_settlement/lengthdisp
|m ={{{elevation_max_m|}}}
|ft ={{{elevation_max_ft|}}}
|pref={{{unit_pref|}}}
|name={{{subdivision_name}}}
}} }}
<!-- ***Elevation max rank*** -->
| rowclass84 = mergedrow
| label84 = • Rank
| data84 = {{#if:{{{elevation_max_m|}}}{{{elevation_max_ft|}}}| {{{elevation_max_rank|}}} }}
| rowclass85 = {{#if:{{{elevation_min_rank|}}}|mergedrow|mergedbottomrow}}
| label85 = Lowest elevation<div class="ib-settlement-fn">{{{elevation_min_footnotes|}}}{{#if:{{{elevation_min_point|}}}| ({{{elevation_min_point}}})}}</div>
| data85 = {{#if:{{{elevation_min_m|}}}{{{elevation_min_ft|}}}
|{{infobox_settlement/lengthdisp
|m ={{{elevation_min_m|}}}
|ft ={{{elevation_min_ft|}}}
|pref={{{unit_pref|}}}
|name={{{subdivision_name}}}
}} }}
<!-- ***Elevation min rank*** -->
| rowclass86 = mergedrow
| label86 = • Rank
| data86 = {{#if:{{{elevation_min_m|}}}{{{elevation_min_ft|}}}|{{{elevation_min_rank|}}}}}
<!-- ***Population*** -->
| rowclass87 = mergedtoprow
| label87 = Population<div class="ib-settlement-fn">{{#if:{{{population_as_of|}}}|{{nbsp}}({{{population_as_of}}})}}{{{population_footnotes|}}}</div>
| data87 = {{fix comma category|{{#ifeq:{{{total_type}}}|
| {{#if:{{{population_total|}}}
| {{formatnum:{{replace|{{{population_total}}}|,|}}}}
}}
}}
}}
| rowclass88 = mergedtoprow
| header88 ={{#ifeq:{{{total_type}}}|
|
|{{#if:{{{population_total|}}}{{{population_urban|}}}{{{population_rural|}}}{{{population_metro|}}}{{{population_blank1|}}}{{{population_blank2|}}}{{{population_est|}}}
|Population<div class="ib-settlement-fn">{{#if:{{{population_as_of|}}}|{{nbsp}}({{{population_as_of}}})}}{{{population_footnotes|}}}</div>
}}
}}
| rowclass89 = mergedrow
| label89 = <div style="white-space:nowrap;"> • {{#if:{{{total_type|}}}|{{{total_type}}}|{{#if:{{{population_metro|}}}{{{population_urban|}}}{{{population_rural|}}}{{{area_metro_km2|}}}{{{area_metro_sq_mi|}}}{{{area_urban_km2|}}}{{{area_urban_sq_mi|}}}{{{area_rural_km2|}}}{{{area_rural_sq_mi|}}}|{{#if:{{{settlement_type|}}}{{{type|}}}|{{if empty|{{{settlement_type|}}}|{{{type}}}}}|City}}|Total}}}}</div>
| data89 = {{#ifeq:{{{total_type}}}|
|
|{{#if:{{{population_total|}}}
| {{fix comma category|{{formatnum:{{replace|{{{population_total}}}|,|}}}}}}
}}
}}
| rowclass90 = mergedrow
| label90 = <div style="white-space:nowrap;"> • Estimate {{#if:{{{pop_est_as_of|}}}|<div class="ib-settlement-fn">({{{pop_est_as_of}}}){{{pop_est_footnotes|}}}</div>}}</div>
| data90 = {{#if:{{{population_est|}}}|{{fix comma category|{{formatnum:{{replace|{{{population_est}}}|,|}}}}}} }}
<!-- ***Population rank*** -->
| rowclass91 = mergedrow
| label91 = • Rank
| data91 = {{{population_rank|}}}
| rowclass92 = mergedrow
| label92 = • Density
| data92 = {{#if:{{{population_density_km2|}}}{{{population_density_sq_mi|}}}{{{population_total|}}}
|{{infobox_settlement/densdisp
|/km2 ={{{population_density_km2|}}}
|/sqmi={{{population_density_sq_mi|}}}
|pop ={{{population_total|}}}
|dunam={{if empty|{{{area_land_dunam|}}}|{{{area_total_dunam|}}}}}
|ha ={{if empty|{{{area_land_ha|}}}|{{{area_total_ha|}}}}}
|km2 ={{if empty|{{{area_land_km2|}}}|{{{area_total_km2|}}}}}
|acre ={{if empty|{{{area_land_acre|}}}|{{{area_total_acre|}}}}}
|sqmi ={{if empty|{{{area_land_sq_mi|}}}|{{{area_total_sq_mi|}}}}}
|pref ={{{unit_pref|}}}
|name ={{{subdivision_name}}}
}}}}
<!-- ***Population density rank*** -->
| rowclass93 = mergedrow
| label93 = • Rank
| data93 = {{{population_density_rank|}}}
| rowclass94 = mergedrow
| label94 = • [[Urban area|Urban]]<div class="ib-settlement-fn">{{{population_urban_footnotes|}}}</div>
| data94 = {{#if:{{{population_urban|}}}| {{fix comma category|{{formatnum:{{replace|{{{population_urban}}}|,|}}}}}} }}
| rowclass95 = mergedrow
| label95 = • Urban density
| data95 = {{#if:{{{population_density_urban_km2|}}}{{{population_density_urban_sq_mi|}}}{{{population_urban|}}}
|{{infobox_settlement/densdisp
|/km2 ={{{population_density_urban_km2|}}}
|/sqmi={{{population_density_urban_sq_mi|}}}
|pop ={{{population_urban|}}}
|ha ={{{area_urban_ha|}}}
|km2 ={{{area_urban_km2|}}}
|acre ={{{area_urban_acre|}}}
|sqmi ={{{area_urban_sq_mi|}}}
|dunam={{{area_urban_dunam|}}}
|pref ={{{unit_pref|}}}
|name ={{{subdivision_name}}}
}}}}
| rowclass96 = mergedrow
| label96 = • [[Rural area|Rural]]<div class="ib-settlement-fn">{{{population_rural_footnotes|}}}</div>
| data96 = {{#if:{{{population_rural|}}}|{{fix comma category|{{formatnum:{{replace|{{{population_rural}}}|,|}}}}}}}}
| rowclass97 = mergedrow
| label97 = • Rural density
| data97 = {{#if:{{{population_density_rural_km2|}}}{{{population_density_rural_sq_mi|}}}{{{population_rural|}}}
|{{infobox_settlement/densdisp
|/km2 ={{{population_density_rural_km2|}}}
|/sqmi={{{population_density_rural_sq_mi|}}}
|pop ={{{population_rural|}}}
|ha ={{{area_rural_ha|}}}
|km2 ={{{area_rural_km2|}}}
|acre ={{{area_rural_acre|}}}
|sqmi ={{{area_rural_sq_mi|}}}
|dunam={{{area_rural_dunam|}}}
|pref ={{{unit_pref|}}}
|name ={{{subdivision_name}}}
}}}}
| rowclass98 = mergedrow
| label98 = • [[Metropolitan area|Metro]]<div class="ib-settlement-fn">{{{population_metro_footnotes|}}}</div>
| data98 = {{#if:{{{population_metro|}}}| {{fix comma category|{{formatnum:{{replace|{{{population_metro}}}|,|}}}}}} }}
| rowclass99 = mergedrow
| label99 = • Metro density
| data99 = {{#if:{{{population_density_metro_km2|}}}{{{population_density_metro_sq_mi|}}}{{{population_metro|}}}
|{{infobox_settlement/densdisp
|/km2 ={{{population_density_metro_km2|}}}
|/sqmi={{{population_density_metro_sq_mi|}}}
|pop ={{{population_metro|}}}
|ha ={{{area_metro_ha|}}}
|km2 ={{{area_metro_km2|}}}
|acre ={{{area_metro_acre|}}}
|sqmi ={{{area_metro_sq_mi|}}}
|dunam={{{area_metro_dunam|}}}
|pref ={{{unit_pref|}}}
|name ={{{subdivision_name}}}
}}}}
| rowclass100 = mergedrow
| label100 = • {{{population_blank1_title|}}}<div class="ib-settlement-fn">{{{population_blank1_footnotes|}}}</div>
| data100 = {{#if:{{{population_blank1|}}}|{{fix comma category|{{formatnum:{{replace|{{{population_blank1}}}|,|}}}}}}}}
| rowclass101 = mergedrow
| label101 = • {{#if:{{{population_blank1_title|}}}|{{{population_blank1_title}}} density|Density}}
| data101 = {{#if:{{{population_density_blank1_km2|}}}{{{population_density_blank1_sq_mi|}}}{{{population_blank1|}}}
|{{infobox_settlement/densdisp
|/km2 ={{{population_density_blank1_km2|}}}
|/sqmi={{{population_density_blank1_sq_mi|}}}
|pop ={{{population_blank1|}}}
|ha ={{{area_blank1_ha|}}}
|km2 ={{{area_blank1_km2|}}}
|acre ={{{area_blank1_acre|}}}
|sqmi ={{{area_blank1_sq_mi|}}}
|dunam={{{area_blank1_dunam|}}}
|pref ={{{unit_pref|}}}
|name ={{{subdivision_name}}}
}}}}
| rowclass102 = mergedrow
| label102 = • {{{population_blank2_title|}}}<div class="ib-settlement-fn">{{{population_blank2_footnotes|}}}</div>
| data102 = {{#if:{{{population_blank2|}}}|{{fix comma category|{{formatnum:{{replace|{{{population_blank2}}}|,|}}}}}}}}
| rowclass103 = mergedrow
| label103 = • {{#if:{{{population_blank2_title|}}}|{{{population_blank2_title}}} density|Density}}
| data103 = {{#if:{{{population_density_blank2_km2|}}}{{{population_density_blank2_sq_mi|}}}{{{population_blank2|}}}
|{{infobox_settlement/densdisp
|/km2 ={{{population_density_blank2_km2|}}}
|/sqmi={{{population_density_blank2_sq_mi|}}}
|pop ={{{population_blank2|}}}
|ha ={{{area_blank2_ha|}}}
|km2 ={{{area_blank2_km2|}}}
|acre ={{{area_blank2_acre|}}}
|sqmi ={{{area_blank2_sq_mi|}}}
|dunam={{{area_blank2_dunam|}}}
|pref ={{{unit_pref|}}}
|name ={{{subdivision_name}}}
}}}}
| rowclass104 = mergedrow
| label104 =
| data104 = {{{population_note|}}}
| rowclass105 = mergedtoprow
| label105 = {{Pluralize from text|{{if empty|{{{population_demonym|}}}|{{{population_demonyms|}}}{{force plural}}}}|<!--
-->link=Demonym|singular=Demonym|likely=Demonym(s)|plural=Demonyms}}
| data105 = {{if empty|{{{population_demonym|}}}|{{{population_demonyms|}}}}}{{Main other|{{Pluralize from text|{{{population_demonym|}}}|likely=[[Category:Pages using infobox settlement with possible demonym list]]}}}}
<!-- ***Demographics 1*** -->
| rowclass106 = mergedtoprow
| header106 = {{#if:{{{demographics_type1|}}}
|{{{demographics_type1}}}<div class="ib-settlement-fn">{{{demographics1_footnotes|}}}</div>}}
| rowclass107 = mergedrow
| label107 = • {{{demographics1_title1}}}
| data107 = {{#if:{{{demographics_type1|}}}
|{{#if:{{{demographics1_title1|}}}|{{{demographics1_info1|}}}}}}}
| rowclass108 = mergedrow
| label108 = • {{{demographics1_title2}}}
| data108 = {{#if:{{{demographics_type1|}}}
|{{#if:{{{demographics1_title2|}}}|{{{demographics1_info2|}}}}}}}
| rowclass109 = mergedrow
| label109 = • {{{demographics1_title3}}}
| data109 = {{#if:{{{demographics_type1|}}}
|{{#if:{{{demographics1_title3|}}}|{{{demographics1_info3|}}}}}}}
| rowclass110 = mergedrow
| label110 = • {{{demographics1_title4}}}
| data110 = {{#if:{{{demographics_type1|}}}
|{{#if:{{{demographics1_title4|}}}|{{{demographics1_info4|}}}}}}}
| rowclass111 = mergedrow
| label111 = • {{{demographics1_title5}}}
| data111 = {{#if:{{{demographics_type1|}}}
|{{#if:{{{demographics1_title5|}}}|{{{demographics1_info5|}}}}}}}
| rowclass112 = mergedrow
| label112 = • {{{demographics1_title6}}}
| data112 = {{#if:{{{demographics_type1|}}}
|{{#if:{{{demographics1_title6|}}}|{{{demographics1_info6|}}}}}}}
| rowclass113 = mergedrow
| label113 = • {{{demographics1_title7}}}
| data113 = {{#if:{{{demographics_type1|}}}
|{{#if:{{{demographics1_title7|}}}|{{{demographics1_info7|}}}}}}}
| rowclass114 = mergedrow
| label114 = • {{{demographics1_title8}}}
| data114 = {{#if:{{{demographics_type1|}}}
|{{#if:{{{demographics1_title8|}}}|{{{demographics1_info8|}}}}}}}
| rowclass115 = mergedrow
| label115 = • {{{demographics1_title9}}}
| data115 = {{#if:{{{demographics_type1|}}}
|{{#if:{{{demographics1_title9|}}}|{{{demographics1_info9|}}}}}}}
| rowclass116 = mergedrow
| label116 = • {{{demographics1_title10}}}
| data116 = {{#if:{{{demographics_type1|}}}
|{{#if:{{{demographics1_title10|}}}|{{{demographics1_info10|}}}}}}}
<!-- ***Demographics 2*** -->
| rowclass117 = mergedtoprow
| header117 = {{#if:{{{demographics_type2|}}}
|{{{demographics_type2}}}<div class="ib-settlement-fn">{{{demographics2_footnotes|}}}</div>}}
| rowclass118 = mergedrow
| label118 = • {{{demographics2_title1}}}
| data118 = {{#if:{{{demographics_type2|}}}
|{{#if:{{{demographics2_title1|}}}|{{{demographics2_info1|}}}}}}}
| rowclass119 = mergedrow
| label119 = • {{{demographics2_title2}}}
| data119 = {{#if:{{{demographics_type2|}}}
|{{#if:{{{demographics2_title2|}}}|{{{demographics2_info2|}}}}}}}
| rowclass120 = mergedrow
| label120 = • {{{demographics2_title3}}}
| data120 = {{#if:{{{demographics_type2|}}}
|{{#if:{{{demographics2_title3|}}}|{{{demographics2_info3|}}}}}}}
| rowclass121 = mergedrow
| label121 = • {{{demographics2_title4}}}
| data121 = {{#if:{{{demographics_type2|}}}
|{{#if:{{{demographics2_title4|}}}|{{{demographics2_info4|}}}}}}}
| rowclass122 = mergedrow
| label122 = • {{{demographics2_title5}}}
| data122 = {{#if:{{{demographics_type2|}}}
|{{#if:{{{demographics2_title5|}}}|{{{demographics2_info5|}}}}}}}
| rowclass123 = mergedrow
| label123 = • {{{demographics2_title6}}}
| data123 = {{#if:{{{demographics_type2|}}}
|{{#if:{{{demographics2_title6|}}}|{{{demographics2_info6|}}}}}}}
| rowclass124 = mergedrow
| label124 = • {{{demographics2_title7}}}
| data124 = {{#if:{{{demographics_type2|}}}
|{{#if:{{{demographics2_title7|}}}|{{{demographics2_info7|}}}}}}}
| rowclass125 = mergedrow
| label125 = • {{{demographics2_title8}}}
| data125 = {{#if:{{{demographics_type2|}}}
|{{#if:{{{demographics2_title8|}}}|{{{demographics2_info8|}}}}}}}
| rowclass126 = mergedrow
| label126 = • {{{demographics2_title9}}}
| data126 = {{#if:{{{demographics_type2|}}}
|{{#if:{{{demographics2_title9|}}}|{{{demographics2_info9|}}}}}}}
| rowclass127 = mergedrow
| label127 = • {{{demographics2_title10}}}
| data127 = {{#if:{{{demographics_type2|}}}
|{{#if:{{{demographics2_title10|}}}|{{{demographics2_info10|}}}}}}}
<!-- ***Time Zones*** -->
| rowclass128 = mergedtoprow
| header128 = {{#if:{{{timezone1_location|}}}{{{time_zone1_location|}}}|{{#if:{{{timezone2|}}}{{{time_zone2|}}}|[[{{if empty|{{{timezone_link|}}}|{{{time_zone_link|}}}|Time zone}}|Time zone]]s|[[{{if empty|{{{timezone_link|}}}|{{{time_zone_link|}}}|Time zone}}|Time zone]]}}|}}
| rowclass129 = {{#if:{{{timezone1_location|}}}{{{time_zone1_location|}}}|mergedrow|mergedtoprow}}
| label129 = {{#if:{{{timezone1_location|}}}{{{time_zone1_location|}}}|{{{timezone1_location}}}{{{time_zone1_location|}}}|{{#if:{{{timezone2_location|}}}{{{time_zone2_location|}}}|{{{timezone2_location}}}{{{time_zone2_location|}}}|{{#if:{{{timezone2|}}}{{{time_zone2|}}}|[[{{if empty|{{{timezone_link|}}}|{{{time_zone_link|}}}|Time zone}}|Time zone]]s|[[{{if empty|{{{timezone_link|}}}|{{{time_zone_link|}}}|Time zone}}|Time zone]]}}}}}}
| data129 = {{#if:{{{utc_offset1|}}}{{{utc_offset|}}}
|[[UTC{{if empty|{{{utc_offset1|}}}|{{{utc_offset}}}}}]] {{#if:{{{timezone1|}}}{{{time_zone1|}}}{{{timezone|}}}{{{time_zone|}}}|({{if empty|{{{timezone1|}}}|{{{time_zone1|}}}|{{{timezone|}}}|{{{time_zone|}}}}})}}
|{{if empty|{{{timezone1|}}}|{{{time_zone1|}}}|{{{timezone|}}}|{{{time_zone|}}}}}
}}
| rowclass130 = mergedrow
| label130 = <span class="nowrap"> • Summer ([[Daylight saving time|DST]])</span>
| data130 = {{#if:{{{utc_offset1_DST|}}}{{{utc_offset_DST|}}}
|[[UTC{{if empty|{{{utc_offset1_DST|}}}|{{{utc_offset_DST|}}}}}]] {{#if:{{{timezone1_DST|}}}{{{time_zone1_DST|}}}{{{timezone_DST|}}}{{{time_zone_DST|}}}{{{time_zone_DST|}}}|({{if empty|{{{timezone1_DST|}}}|{{{time_zone1_DST|}}}|{{{time_zone1_DST|}}}|{{{timezone_DST|}}}{{{time_zone_DST|}}}|{{{time_zone_DST|}}}}})}}
|{{if empty|{{{timezone1_DST|}}}|{{{time_zone1_DST|}}}|{{{time_zone1_DST|}}}|{{{timezone_DST|}}}|{{{time_zone_DST|}}}|{{{time_zone_DST|}}}}}
}}
| rowclass131 = mergedrow
| label131 = {{if empty|{{{timezone2_location|}}}|{{{time_zone2_location|}}}|<nowiki />}}
| data131 = {{#if:{{{timezone1|}}}{{{time_zone1|}}}{{{timezone|}}}{{{time_zone|}}}{{{utc_offset1|}}}{{{utc_offset|}}}
|{{#if:{{{utc_offset2|}}}
|[[UTC{{{utc_offset2|}}}]] {{#if:{{{timezone2|}}}{{{time_zone2|}}}|({{{timezone2}}}{{{time_zone2|}}})}}
|{{{timezone2|}}}{{{time_zone2|}}}
}}
}}
| rowclass132 = mergedrow
| label132 = <span class="nowrap"> • Summer ([[Daylight saving time|DST]])</span>
| data132 = {{#if:{{{utc_offset2_DST|}}}|[[UTC{{{utc_offset2_DST|}}}]] {{#if:{{{timezone2_DST|}}}{{{time_zone2_DST|}}}{{{time_zone2_DST|}}}|({{{timezone2_DST|}}}{{{time_zone2_DST|}}}{{{time_zone2_DST|}}})}}
|{{{timezone2_DST|}}}{{{time_zone2_DST|}}}{{{time_zone2_DST|}}}
}}
| rowclass133 = mergedrow
| label133 = {{if empty|{{{timezone3_location|}}}|{{{time_zone3_location|}}}|<nowiki />}}
| data133 = {{#if:{{{timezone1|}}}{{{time_zone1|}}}{{{timezone|}}}{{{time_zone|}}}{{{utc_offset1|}}}{{{utc_offset|}}}
|{{#if:{{{utc_offset3|}}}
|[[UTC{{{utc_offset3|}}}]] {{#if:{{{timezone3|}}}{{{time_zone3|}}}|({{{timezone3}}}{{{time_zone3|}}})}}
|{{{timezone3|}}}{{{time_zone3|}}}
}}
}}
| rowclass134 = mergedrow
| label134 = <span class="nowrap"> • Summer ([[Daylight saving time|DST]])</span>
| data134 = {{#if:{{{utc_offset3_DST|}}}|[[UTC{{{utc_offset3_DST|}}}]] {{#if:{{{timezone3_DST|}}}{{{time_zone3_DST|}}}{{{time_zone3_DST|}}}|({{{timezone3_DST|}}}{{{time_zone3_DST|}}}{{{time_zone3_DST|}}})}}
|{{{timezone3_DST|}}}{{{time_zone3_DST|}}}{{{time_zone3_DST|}}}
}}
| rowclass135 = mergedrow
| label135 = {{if empty|{{{timezone4_location|}}}|{{{time_zone4_location|}}}|<nowiki />}}
| data135 = {{#if:{{{timezone1|}}}{{{time_zone1|}}}{{{timezone|}}}{{{time_zone|}}}{{{utc_offset1|}}}{{{utc_offset|}}}
|{{#if:{{{utc_offset4|}}}
|[[UTC{{{utc_offset4|}}}]] {{#if:{{{timezone4|}}}{{{time_zone4|}}}|({{{timezone4}}}{{{time_zone4|}}})}}
|{{{timezone4|}}}{{{time_zone4|}}}
}}
}}
| rowclass136 = mergedrow
| label136 = <span class="nowrap"> • Summer ([[Daylight saving time|DST]])</span>
| data136 = {{#if:{{{utc_offset4_DST|}}}|[[UTC{{{utc_offset4_DST|}}}]] {{#if:{{{timezone4_DST|}}}{{{time_zone4_DST|}}}{{{time_zone4_DST|}}}|({{{timezone4_DST|}}}{{{time_zone4_DST|}}}{{{time_zone4_DST|}}})}}
|{{{timezone4_DST|}}}{{{time_zone4_DST|}}}{{{time_zone4_DST|}}}
}}
| rowclass137 = mergedrow
| label137 = {{if empty|{{{timezone5_location|}}}|{{{time_zone5_location|}}}|<nowiki />}}
| data137 = {{#if:{{{timezone1|}}}{{{time_zone1|}}}{{{timezone|}}}{{{time_zone|}}}{{{utc_offset1|}}}{{{utc_offset|}}}
|{{#if:{{{utc_offset5|}}}
|[[UTC{{{utc_offset5|}}}]] {{#if:{{{timezone5|}}}{{{time_zone5|}}}|({{{timezone5}}}{{{time_zone5|}}})}}
|{{{timezone5|}}}{{{time_zone5|}}}
}}
}}
| rowclass138 = mergedrow
| label138 = <span class="nowrap"> • Summer ([[Daylight saving time|DST]])</span>
| data138 = {{#if:{{{utc_offset5_DST|}}}|[[UTC{{{utc_offset5_DST|}}}]] {{#if:{{{timezone5_DST|}}}{{{time_zone5_DST|}}}{{{time_zone5_DST|}}}|({{{timezone5_DST|}}}{{{time_zone5_DST|}}}{{{time_zone5_DST|}}})}}
|{{{timezone5_DST|}}}{{{time_zone5_DST|}}}{{{time_zone5_DST|}}}
}}
<!-- ***Postal Code(s)*** -->
| rowclass139 = mergedtoprow
| label139 = {{if empty|{{{postal_code_type|}}}|{{Pluralize from text|any_comma=1|parse_links=1|{{{postal_code|}}}|link=Postal code|singular=Postal code|plural=Postal codes}}}}
| class139 = adr
| data139 = {{#if:{{{postal_code|}}}|<div class="postal-code">{{{postal_code}}}</div>}}
| rowclass140 = {{#if:{{{postal_code|}}}|mergedbottomrow|mergedtoprow}}
| label140 = {{if empty|{{{postal2_code_type|}}}|{{Pluralize from text|any_comma=1|parse_links=1|{{{postal2_code|}}}|link=Postal code|singular=Postal code|plural=Postal codes}}}}
| class140 = adr
| data140 = {{#if:{{{postal2_code|}}}|<div class="postal-code">{{{postal2_code}}}</div>}}
<!-- ***Area Code(s)*** -->
| rowclass141 = {{#if:{{{postal_code|}}}{{{postal2_code|}}}|mergedrow|mergedtoprow}}
| label141 = {{if empty|{{{area_code_type|}}}|{{Pluralize from text|any_comma=1|parse_links=1|{{if empty|{{{area_code|}}}|{{{area_codes|}}}{{force plural}}}}|<!--
-->link=Telephone numbering plan|singular=Area code|likely=Area code(s)|plural=Area codes}}}}
| data141 = {{if empty|{{{area_code|}}}|{{{area_codes|}}}}}{{#if:{{{area_code_type|}}}||{{Main other|{{Pluralize from text|any_comma=1|parse_links=1|{{{area_code|}}}|||[[Category:Pages using infobox settlement with possible area code list]]}}}}}}
<!-- Geocode-->
| rowclass142 = {{#if:{{{postal_code|}}}{{{postal2_code|}}}{{{area_code|}}}|mergedrow|mergedtoprow}}
| label142 = [[Geocode]]
| class142 = nickname
| data142 = {{{geocode|}}}
<!-- ISO Code-->
| rowclass143 = {{#if:{{{postal_code|}}}{{{postal2_code|}}}{{{area_code|}}}{{{geocode|}}}|mergedrow|mergedtoprow}}
| label143 = [[ISO 3166|ISO 3166 code]]
| class143 = nickname
| data143 = {{{iso_code|}}}
<!-- Vehicle registration plate-->
| rowclass144 = {{#if:{{{postal_code|}}}{{{postal2_code|}}}{{{area_code|}}}{{{geocode|}}}{{{iso_code|}}}|mergedrow|mergedtoprow}}
| label144 = {{if empty|{{{registration_plate_type|}}}|[[Vehicle registration plate|Vehicle registration]]}}
| data144 = {{{registration_plate|}}}
<!-- Other codes -->
| rowclass145 = {{#if:{{{postal_code|}}}{{{postal2_code|}}}{{{area_code|}}}{{{geocode|}}}{{{iso_code|}}}{{{registration_plate|}}}|mergedrow|mergedtoprow}}
| label145 = {{{code1_name|}}}
| class145 = nickname
| data145 = {{#if:{{{code1_name|}}}|{{{code1_info|}}}}}
| rowclass146 = {{#if:{{{postal_code|}}}{{{postal2_code|}}}{{{area_code|}}}{{{geocode|}}}{{{iso_code|}}}{{{registration_plate|}}}{{{code1_name|}}}|mergedrow|mergedtoprow}}
| label146 = {{{code2_name|}}}
| class146 = nickname
| data146 = {{#if:{{{code2_name|}}}|{{{code2_info|}}}}}
<!-- ***Blank Fields (two sections)*** -->
| rowclass147 = mergedtoprow
| label147 = {{if empty|{{{blank_name_sec1|}}}|{{{blank_name|}}}|{{{custom_label_sec1|}}}}}
| data147 = {{#if:{{{blank_name_sec1|}}}{{{blank_name|}}}{{{custom_label_sec1|}}}|{{if empty|{{{blank_info_sec1|}}}|{{{blank_info|}}}|{{{custom_data_sec1|}}}}}}}
| rowclass148 = mergedrow
| label148 = {{if empty|{{{blank1_name_sec1|}}}|{{{blank1_name|}}}|{{{custom_label1_sec1|}}}}}
| data148 = {{#if:{{{blank1_name_sec1|}}}{{{blank1_name|}}}{{{custom_label1_sec1|}}}|{{if empty|{{{blank1_info_sec1|}}}|{{{blank1_info|}}}|{{{custom_data1_sec1|}}}}}}}
| rowclass149 = mergedrow
| label149 = {{if empty|{{{blank2_name_sec1|}}}|{{{blank2_name|}}}|{{{custom_label2_sec1|}}}}}
| data149 = {{#if:{{{blank2_name_sec1|}}}{{{blank2_name|}}}{{{custom_label2_sec1|}}}|{{if empty|{{{blank2_info_sec1|}}}|{{{blank2_info|}}}|{{{custom_data2_sec1|}}}}}}}
| rowclass150 = mergedrow
| label150 = {{if empty|{{{blank3_name_sec1|}}}|{{{blank3_name|}}}|{{{custom_label3_sec1|}}}}}
| data150 = {{#if:{{{blank3_name_sec1|}}}{{{blank3_name|}}}{{{custom_label3_sec1|}}}|{{if empty|{{{blank3_info_sec1|}}}|{{{blank3_info|}}}|{{{custom_data3_sec1|}}}}}}}
| rowclass151 = mergedrow
| label151 = {{if empty|{{{blank4_name_sec1|}}}|{{{blank4_name|}}}|{{{custom_label4_sec1|}}}}}
| data151 = {{#if:{{{blank4_name_sec1|}}}{{{blank4_name|}}}{{{custom_label4_sec1|}}}|{{if empty|{{{blank4_info_sec1|}}}|{{{blank4_info|}}}|{{{custom_data4_sec1|}}}}}}}
| rowclass152 = mergedrow
| label152 = {{if empty|{{{blank5_name_sec1|}}}|{{{blank5_name|}}}|{{{custom_label5_sec1|}}}}}
| data152 = {{#if:{{{blank5_name_sec1|}}}{{{blank5_name|}}}{{{custom_label5_sec1|}}}|{{if empty|{{{blank5_info_sec1|}}}|{{{blank5_info|}}}|{{{custom_data5_sec1|}}}}}}}
| rowclass153 = mergedrow
| label153 = {{if empty|{{{blank6_name_sec1|}}}|{{{blank6_name|}}}|{{{custom_label6_sec1|}}}}}
| data153 = {{#if:{{{blank6_name_sec1|}}}{{{blank6_name|}}}{{{custom_label6_sec1|}}}|{{if empty|{{{blank6_info_sec1|}}}|{{{blank6_info|}}}|{{{custom_data6_sec1|}}}}}}}
| rowclass154 = mergedrow
| label154 = {{if empty|{{{blank7_name_sec1|}}}|{{{blank7_name|}}}|{{{custom_label7_sec1|}}}}}
| data154 = {{#if:{{{blank7_name_sec1|}}}{{{blank7_name|}}}{{{custom_label7_sec1|}}}|{{if empty|{{{blank7_info_sec1|}}}|{{{blank7_info|}}}|{{{custom_data7_sec1|}}}}}}}
| rowclass155 = mergedtoprow
| label155 = {{if empty|{{{blank_name_sec2}}}|{{{custom_label_sec2|}}}}}
| data155 = {{#if:{{{blank_name_sec2|}}}{{{custom_label_sec2|}}}|{{if empty|{{{blank_info_sec2|}}}|{{{custom_data_sec2|}}}}}}}
| rowclass156 = mergedrow
| label156 = {{if empty|{{{blank1_name_sec2}}}|{{{custom_label1_sec2|}}}}}
| data156 = {{#if:{{{blank1_name_sec2|}}}{{{custom_label1_sec2|}}}|{{if empty|{{{blank1_info_sec2|}}}|{{{custom_data1_sec2|}}}}}}}
| rowclass157 = mergedrow
| label157 = {{if empty|{{{blank2_name_sec2}}}|{{{custom_label2_sec2|}}}}}
| data157 = {{#if:{{{blank2_name_sec2|}}}{{{custom_label2_sec2|}}}|{{if empty|{{{blank2_info_sec2|}}}|{{{custom_data2_sec2|}}}}}}}
| rowclass158 = mergedrow
| label158 = {{if empty|{{{blank3_name_sec2}}}|{{{custom_label3_sec2|}}}}}
| data158 = {{#if:{{{blank3_name_sec2|}}}{{{custom_label3_sec2|}}}|{{if empty|{{{blank3_info_sec2|}}}|{{{custom_data3_sec2|}}}}}}}
| rowclass159 = mergedrow
| label159 = {{if empty|{{{blank4_name_sec2}}}|{{{custom_label4_sec2|}}}}}
| data159 = {{#if:{{{blank4_name_sec2|}}}{{{custom_label4_sec2|}}}|{{if empty|{{{blank4_info_sec2|}}}|{{{custom_data4_sec2|}}}}}}}
| rowclass160 = mergedrow
| label160 = {{if empty|{{{blank5_name_sec2}}}|{{{custom_label5_sec2|}}}}}
| data160 = {{#if:{{{blank5_name_sec2|}}}{{{custom_label5_sec2|}}}|{{if empty|{{{blank5_info_sec2|}}}|{{{custom_data5_sec2|}}}}}}}
| rowclass161 = mergedrow
| label161 = {{if empty|{{{blank6_name_sec2}}}|{{{custom_label6_sec2|}}}}}
| data161 = {{#if:{{{blank6_name_sec2|}}}{{{custom_label6_sec2|}}}|{{if empty|{{{blank6_info_sec2|}}}|{{{custom_data6_sec2|}}}}}}}
| rowclass162 = mergedrow
| label162 = {{if empty|{{{blank7_name_sec2}}}|{{{custom_label7_sec2|}}}}}
| data162 = {{#if:{{{blank7_name_sec2|}}}{{{custom_label7_sec2|}}}|{{if empty|{{{blank7_info_sec2|}}}|{{{custom_data7_sec2|}}}}}}}
<!-- ***Website*** -->
| rowclass163 = mergedtoprow
| label163 = Website
| data163 = {{#if:{{{website|}}}|{{{website}}}}}
| class164 = maptable
| data164 = {{#if:{{{module|}}}|{{{module}}}}}
<!-- ***Footnotes*** -->
| belowrowclass = mergedtoprow
| below = {{{footnotes|}}}
}}<!-- Check for unknowns
-->{{#invoke:Check for unknown parameters|check|unknown={{main other|[[Category:Pages using {{if empty|{{lcfirst:{{{template_name|}}}}}|infobox settlement}} with unknown parameters|_VALUE_{{PAGENAME}}]]}}|preview = Page using [[Template:{{if empty|{{ucfirst:{{{template_name|}}}}}|Infobox settlement}}]] with unknown parameter "_VALUE_"|ignoreblank=y|mapframe_args=y
| alt | anthem | anthem_link | area_blank1_acre | area_blank1_dunam | area_blank1_ha | area_blank1_km2 | area_blank1_sq_mi | area_blank1_title | area_blank2_acre | area_blank2_dunam | area_blank2_ha | area_blank2_km2 | area_blank2_sq_mi | area_blank2_title | area_code | area_code_type | area_codes | area_footnotes | area_land_acre | area_land_dunam | area_land_ha | area_land_km2 | area_land_sq_mi | area_metro_acre | area_metro_dunam | area_metro_footnotes | area_metro_ha | area_metro_km2 | area_metro_sq_mi | area_note | area_rank | area_rural_acre | area_rural_dunam | area_rural_footnotes | area_rural_ha | area_rural_km2 | area_rural_sq_mi | area_total_acre | area_total_dunam | area_total_ha | area_total_km2 | area_total_sq_mi | area_urban_acre | area_urban_dunam | area_urban_footnotes | area_urban_ha | area_urban_km2 | area_urban_sq_mi | area_water_acre | area_water_dunam | area_water_ha | area_water_km2 | area_water_percent | area_water_sq_mi
| blank_emblem_alt | blank_emblem_link | blank_emblem_size | blank_emblem_type | blank_emblem_upright
| blank_info | blank_info_sec1 | blank_info_sec2 | blank_name | blank_name_sec1 | blank_name_sec2 | blank1_info | blank1_info_sec1 | blank1_info_sec2 | blank1_name | blank1_name_sec1 | blank1_name_sec2 | blank2_info | blank2_info_sec1 | blank2_info_sec2 | blank2_name | blank2_name_sec1 | blank2_name_sec2 | blank3_info | blank3_info_sec1 | blank3_info_sec2 | blank3_name | blank3_name_sec1 | blank3_name_sec2 | blank4_info | blank4_info_sec1 | blank4_info_sec2 | blank4_name | blank4_name_sec1 | blank4_name_sec2 | blank5_info | blank5_info_sec1 | blank5_info_sec2 | blank5_name | blank5_name_sec1 | blank5_name_sec2 | blank6_info | blank6_info_sec1 | blank6_info_sec2 | blank6_name | blank6_name_sec1 | blank6_name_sec2 | blank7_info | blank7_info_sec1 | blank7_info_sec2 | blank7_name | blank7_name_sec1 | blank7_name_sec2 | caption | code1_info | code1_name | code2_info | code2_name | coor_pinpoint | coor_type | coordinates | coordinates_footnotes | demographics_type1 | demographics_type2 | demographics1_footnotes | demographics1_info1 | demographics1_info10 | demographics1_info2 | demographics1_info3 | demographics1_info4 | demographics1_info5 | demographics1_info6 | demographics1_info7 | demographics1_info8 | demographics1_info9 | demographics1_title1 | demographics1_title10 | demographics1_title2 | demographics1_title3 | demographics1_title4 | demographics1_title5 | demographics1_title6 | demographics1_title7 | demographics1_title8 | demographics1_title9 | demographics2_footnotes | demographics2_info1 | demographics2_info10 | demographics2_info2 | demographics2_info3 | demographics2_info4 | demographics2_info5 | demographics2_info6 | demographics2_info7 | demographics2_info8 | demographics2_info9 | demographics2_title1 | demographics2_title10 | demographics2_title2 | demographics2_title3 | demographics2_title4 | demographics2_title5 | demographics2_title6 | demographics2_title7 | demographics2_title8 | demographics2_title9 | dimensions_footnotes | dunam_link | elevation_footnotes | elevation_ft | elevation_link | elevation_m | elevation_max_footnotes | elevation_max_ft | elevation_max_m | elevation_max_point | elevation_max_rank | elevation_min_footnotes | elevation_min_ft | elevation_min_m | elevation_min_point | elevation_min_rank | elevation_point | embed | established_date | established_date1 | established_date2 | established_date3 | established_date4 | established_date5 | established_date6 | established_date7 | established_title | established_title1 | established_title2 | established_title3 | established_title4 | established_title5 | established_title6 | established_title7 | etymology | extinct_date | extinct_title | flag_alt | flag_border | flag_link | flag_size | footnotes | founder | geocode | governing_body | government_footnotes | government_type | government_blank1_title | government_blank1 | government_blank2_title | government_blank2 | government_blank2_title | government_blank3 | government_blank3_title | government_blank3 | government_blank4_title | government_blank4 | government_blank5_title | government_blank5 | government_blank6_title | government_blank6 | grid_name | grid_position
| image_alt | image_blank_emblem | image_caption | image_flag | image_map | image_map1 | image_seal | image_shield | image_size | image_skyline | imagesize | image_upright
| iso_code | leader_name | leader_name1 | leader_name2 | leader_name3 | leader_name4 | leader_name5 | leader_party | leader_title | leader_title1 | leader_title2 | leader_title3 | leader_title4 | leader_title5 | length_km | length_mi | map_alt | map_alt1 | map_caption | map_caption1 | mapsize | mapsize1 | module | motto | motto_link | mottoes | name | named_for | native_name | native_name_lang | nickname | nickname_link | nicknames | official_name | other_name | p1 | p10 | p11 | p12 | p13 | p14 | p15 | p16 | p17 | p18 | p19 | p2 | p20 | p21 | p22 | p23 | p24 | p25 | p26 | p27 | p28 | p29 | p3 | p30 | p31 | p32 | p33 | p34 | p35 | p36 | p37 | p38 | p39 | p4 | p40 | p41 | p42 | p43 | p44 | p45 | p46 | p47 | p48 | p49 | p5 | p50 | p6 | p7 | p8 | p9 | parts | parts_style | parts_type | pop_est_as_of | pop_est_footnotes | population_as_of | population_blank1 | population_blank1_footnotes | population_blank1_title | population_blank2 | population_blank2_footnotes | population_blank2_title | population_demonym | population_demonyms | population_density_blank1_km2 | population_density_blank1_sq_mi | population_density_blank2_km2 | population_density_blank2_sq_mi | population_density_km2 | population_density_metro_km2 | population_density_metro_sq_mi | population_density_rank | population_density_rural_km2 | population_density_rural_sq_mi | population_density_sq_mi | population_density_urban_km2 | population_density_urban_sq_mi | population_est | population_footnotes | population_metro | population_metro_footnotes | population_note | population_rank | population_rural | population_rural_footnotes | population_total | population_urban | population_urban_footnotes | postal_code | postal_code_type | postal2_code | postal2_code_type | pushpin_image | pushpin_label | pushpin_label_position | pushpin_map | pushpin_map_alt | pushpin_map_caption | pushpin_map_caption_notsmall | pushpin_map_narrow | pushpin_mapsize | pushpin_outside | pushpin_overlay | pushpin_relief | registration_plate | registration_plate_type | seal_alt | seal_class | seal_link | seal_size | seal_type | seat | seat_type | seat1 | seat1_type | seat2 | seat2_type | settlement_type | shield_alt | shield_link | shield_size | short_description <!--used by Module:Settlement short description-->| subdivision_name | subdivision_name1 | subdivision_name2 | subdivision_name3 | subdivision_name4 | subdivision_name5 | subdivision_name6 | subdivision_type | subdivision_type1 | subdivision_type2 | subdivision_type3 | subdivision_type4 | subdivision_type5 | subdivision_type6 | template_name | timezone | timezone_DST | timezone_link | timezone1 | timezone1_DST | timezone1_location | timezone2 | timezone2_DST | timezone2_location | timezone3 | timezone3_DST | timezone3_location | timezone4 | timezone4_DST | timezone4_location | timezone5 | timezone5_DST | timezone5_location | total_type | translit_lang1 | translit_lang1_info | translit_lang1_info1 | translit_lang1_info2 | translit_lang1_info3 | translit_lang1_info4 | translit_lang1_info5 | translit_lang1_info6 | translit_lang1_type | translit_lang1_type1 | translit_lang1_type2 | translit_lang1_type3 | translit_lang1_type4 | translit_lang1_type5 | translit_lang1_type6 | translit_lang2 | translit_lang2_info | translit_lang2_info1 | translit_lang2_info2 | translit_lang2_info3 | translit_lang2_info4 | translit_lang2_info5 | translit_lang2_info6 | translit_lang2_type | translit_lang2_type1 | translit_lang2_type2 | translit_lang2_type3 | translit_lang2_type4 | translit_lang2_type5 | translit_lang2_type6 | type | unit_pref | utc_offset | utc_offset_DST | utc_offset1 | utc_offset1_DST | utc_offset2 | utc_offset2_DST | utc_offset3 | utc_offset3_DST | utc_offset4 | utc_offset4_DST | utc_offset5 | utc_offset5_DST | website | width_km | width_mi <!--
NEW PARAMETERS AS PART OF REFACTOR - Will be integrated in alphebetical order once refactor is completed
-->| pushpin_map_args=y | map_size | map_size1 | image | custom_label_sec1 | custom_label_sec1 | custom_data_sec1 | custom_label1_sec1 | custom_label1_sec1 | custom_data1_sec1 | custom_label2_sec1 | custom_label2_sec1 | custom_data2_sec1 | custom_label3_sec1 | custom_label3_sec1 | custom_data3_sec1 | custom_label4_sec1 | custom_label4_sec1 | custom_data4_sec1 | custom_label5_sec1 | custom_label5_sec1 | custom_data5_sec1 | custom_label6_sec1 | custom_label6_sec1 | custom_data6_sec1 | custom_label7_sec1 | custom_label7_sec1 | custom_data7_sec1 | custom_label_sec2 | custom_label_sec2 | custom_data_sec2 | custom_label1_sec2 | custom_label1_sec2 | custom_data1_sec2 | custom_label2_sec2 | custom_label2_sec2 | custom_data2_sec2 | custom_label3_sec2 | custom_label3_sec2 | custom_data3_sec2 | custom_label4_sec2 | custom_label4_sec2 | custom_data4_sec2 | custom_label5_sec2 | custom_label5_sec2 | custom_data5_sec2 | custom_label6_sec2 | custom_label6_sec2 | custom_data6_sec2 | custom_label7_sec2 | custom_label7_sec2 | custom_data7_sec2 | time_zone | time_zone1_location | time_zone2 | time_zone_link | time_zone_link | time_zone1_location | time_zone1_location | time_zone1_location | time_zone2_location | time_zone2_location | time_zone2 | time_zone_link | time_zone_link | time_zone1 | time_zone1 | time_zone1 | time_zone1_DST | time_zone_DST | time_zone_DST | time_zone1_DST | time_zone1_DST | time_zone_DST | time_zone_DST | time_zone1_DST | time_zone1_DST | time_zone_DST | time_zone_DST | time_zone2_location | time_zone1 | time_zone2 | time_zone2 | time_zone2 | time_zone2_DST | time_zone2_DST | time_zone2_DST | time_zone2_DST | time_zone2_DST | time_zone2_DST | time_zone3_location | time_zone1 | time_zone3 | time_zone3 | time_zone3 | time_zone3_DST | time_zone3_DST | time_zone3_DST | time_zone3_DST | time_zone3_DST | time_zone3_DST | time_zone4_location | time_zone1 | time_zone4 | time_zone4 | time_zone4 | time_zone4_DST | time_zone4_DST | time_zone4_DST | time_zone4_DST | time_zone4_DST | time_zone4_DST | time_zone5_location | time_zone1 | time_zone5 | time_zone5 | time_zone5 | time_zone5_DST | time_zone5_DST | time_zone5_DST | time_zone5_DST | time_zone5_DST | time_zone5_DST |
}}<!--
-->{{#invoke:Check for conflicting parameters|check
| template = [[Template:{{if empty|{{ucfirst:{{{template_name|}}}}}|Infobox settlement}}]]
| cat = {{main other|Category:Pages using {{if empty|{{lcfirst:{{{template_name|}}}}}|infobox settlement}} with conflicting parameters}}
| settlement_type; type
| image_size; imagesize
| image_alt; alt
| image_caption; caption
| nickname; nicknames
| motto; mottoes
| coor_pinpoint; coor_type
| population_demonym; population_demonyms
| utc_offset1; utc_offset
| timezone1; timezone
| utc_offset1_DST; utc_offset_DST
| timezone1_DST; timezone_DST
| area_code; area_codes
| blank_name_sec1; blank_name
| blank_info_sec1; blank_info
| blank1_name_sec1; blank1_name
| blank1_info_sec1; blank1_info
| blank2_name_sec1; blank2_name
| blank2_info_sec1; blank2_info
| blank3_name_sec1; blank3_name
| blank3_info_sec1; blank3_info
| blank4_name_sec1; blank4_name
| blank4_info_sec1; blank4_info
| blank5_name_sec1; blank5_name
| blank5_info_sec1; blank5_info
| blank6_name_sec1; blank6_name
| blank6_info_sec1; blank6_info
| blank7_name_sec1; blank7_name
| blank7_info_sec1; blank7_info
}}<!-- Wikidata
-->{{#if:{{{coordinates_wikidata|}}}{{{wikidata|}}}
|[[Category:Pages using infobox settlement with the wikidata parameter]]
}}{{main other|<!-- Missing country
-->{{#if:{{{subdivision_name|}}}||[[Category:Pages using infobox settlement with missing country]]}}<!-- No map
-->{{#if:{{{pushpin_map|}}}{{{image_map|}}}{{{image_map1|}}}||[[Category:Pages using infobox settlement with no map]]}}<!-- Image_map1 without image_map
-->{{#if:{{{image_map1|}}}|{{#if:{{{image_map|}}}||[[Category:Pages using infobox settlement with image_map1 but not image_map]]}}}}<!-- No coordinates
-->{{#if:{{{coordinates|}}}||[[Category:Pages using infobox settlement with no coordinates]]}}<!--
-->{{#if:{{{embed|}}}|[[Category:Pages using infobox settlement with embed]]}}
}}<!-- Gathering information on over-use of maps
-->{{#ifexpr:{{#invoke:ParameterCount|main|mapframe|image_map|image_map1|pushpin_map}} >2 |{{main other| [[Category:Pages using infobox settlement with potentially too many maps]]}}}}</includeonly>{{#invoke:Check for deprecated parameters|check
| _category = {{main other|[[Category:Pages using infobox settlement with deprecated parameters|_VALUE_]]}}
| _remove = pushpin_map_caption_notsmall; pushpin_outside; pushpin_overlay; pushpin_image
| settlement_type = type
| image_skyline = image
| imagesize = image_size
| image_alt = alt
| image_caption = caption
| mapsize = map_size
| mapsize1 = map_size1
| pushpin_map_alt = pushpin_alt
| pushpin_map_caption = pushpin_caption
| pushpin_mapsize = pushpin_map_size
| _regexp1 = blank(%d*)_name = custom_label%1_sec1
| _regexp2 = blank(%d*)_info = custom_data%1_sec1
| _regexp3 = blank(%d*)_name_sec(%d) = custom_label%1_sec%2
| _regexp4 = blank(%d*)_info_sec(%d) = custom_data%1_sec%2
| timezone = time_zone
| timezone_DST = time_zone_DST
| timezone_link = time_zone_link
| _regexp5 = timezone(%d) = time_zone%1
| _regexp6 = timezone(%d)_DST = time_zone%1_DST
| _regexp7 = timezone(%d)_location = time_zone%1_location
}}<noinclude>
{{documentation}}
<!--Please add this template's categories to the /doc subpage, not here - thanks!-->
</noinclude>
ca538lw34yyj1ycgo543lpbn2u7vjjh
ಎಲ್ಲೆನ್ ಡಿಜೆನೆರೆಸ್
0
23541
1378209
1339383
2026-08-02T18:33:38Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378209
wikitext
text/x-wiki
{{Infobox Comedian
| name = Ellen DeGeneres
| image = Ellen DeGeneres-2009.jpg
| imagesize = 220px
| caption = Ellen DeGeneres (2009)
| birth_name = Ellen Lee DeGeneres
| birth_date = {{birth date and age|1958|1|26}}
| birth_place = [[Metairie, Louisiana]], U.S.
| active = 1981 – present
| medium = [[Stand-up comedy]], [[television]], [[film]]
| nationality = American
| spouse = [[Portia de Rossi]] (2008–present)
| emmyawards = '''[[Primetime Emmy Award for Outstanding Writing in a Comedy Series|Outstanding Writing in a Comedy Series]]'''<br />1997 ''[[Ellen (TV series)|Ellen]]'' <br /> '''Outstanding Talk Show'''<br />2004 ''[[The Ellen DeGeneres Show]]''<br />2005 ''The Ellen DeGeneres Show''<br />2006 ''The Ellen DeGeneres Show''<br />2007 ''The Ellen DeGeneres Show'' <br /> '''Outstanding Special Class Writing'''<br />2005 ''The Ellen DeGeneres Show''<br />2006 ''The Ellen DeGeneres Show''<br />2007 ''The Ellen DeGeneres Show'' <br /> '''Outstanding Talk Show Host'''<br />2005 ''The Ellen DeGeneres Show''<br />2006 ''The Ellen DeGeneres Show''<br />2007 ''The Ellen DeGeneres Show''<br />2008 ''The Ellen DeGeneres Show''
| americancomedyawards = '''Funniest Female Stand-Up Comic'''<br />1991 <br /> '''Funniest Female Performer in a TV Special'''<br />1994 ''46th Primetime Emmy Awards''<br />2000 ''Ellen DeGeneres: The Beginning''
| awards = '''[[Saturn Award for Best Supporting Actress (film)]]'''<br />2003 ''[[Finding Nemo]]''
}}
'''ಎಲ್ಲೆನ್ ಲೀ ಡಿಜೆನೆರೆಸ್''' ({{pron-en|dɨˈdʒɛnərəs}}; ಜನಿಸಿದ್ದು ಜನವರಿ 26, 1958) ಅಮೇರಿಕಾದ [[ಸ್ಟಾಂಡ್-ಅಪ್ ಕಮೇಡಿಯನ್]], [[ದೂರದರ್ಶನದ ಅತಿಥೇಯಳು]] ಮತ್ತು [[ಅಭಿನೇತ್ರಿ]]. [[ಸಿಂಡಿಕೇಟೆಡ್]] ಸಂದರ್ಶನ ಕಾರ್ಯಕ್ರಮವಾದ ''[[ದಿ ಎಲ್ಲೆನ್ ಡಿಜೆನೆರೆಸ್ ಶೋ]]'' ಅನ್ನು ನಡೆಸಿಕೊಡುತ್ತಾಳೆ, ಮತ್ತು ಇದರ [[ಒಂಬತ್ತನೇ ಕಾಲ]]ದಲ್ಲಿ ಶೋಗೆ ಸೇರ್ಪಡೆಯಾದ ''[[ಅಮೇರಿಕನ್ ಐಡಲ್]]'' ಗೆ ತೀರ್ಪುಗಾರಳಾಗಿಯೂ ಕಾರ್ಯ ನಿರ್ವಹಿಸಿದಳು.
[[ಅಕಾಡಮಿ ಅವಾರ್ಡ್ಸ್]] ಮತ್ತು [[ಪ್ರೈಮ್ ಟೈಮ್ ಎಮ್ಮೀಸ್]] ಎರಡೂ ಕಾರ್ಯಕ್ರಮವನ್ನು ನಡೆಸಿಕೊಟ್ಟಳು. ಅಭಿನೇತ್ರಿಯಾಗಿ ''[[ಮಿ. ವ್ರಾಂಗ್]]'' ನಲ್ಲಿ ಕಾಣಿಸಿಕೊಂಡಳು ಹಾಗೆಯೇ ''[[EDtv]]'' ಮತ್ತು ''[[ದಿ ಲವ್ ಲೆಟರ್]]'' ನಲ್ಲಿಯೂ ನಟಿಸಿದಳು, ಮತ್ತು [[ಡಿಸ್ನೀ-ಪಿಕ್ಸಾರ್]] ನ [[ಅನಿಮೇಟೆಡ್]] ಚಿತ್ರವಾದ ''[[ಫೈಂಡಿಂಗ್ ನೆಮೋ]]'' ದಲ್ಲಿ ಡೋರಿಗೆ ಕಂಠದಾನ ಮಾಡಿರುತ್ತಾಳೆ. ಎರಡು ದೂರದರ್ಶನ ಕಾರ್ಯಕ್ರಮ ಸಿಟ್ಕಾಂ (ಸಂದರ್ಭಕ್ಕೆ ತಕ್ಕಂತೆ ಹಾಸ್ಯ)ದಲ್ಲಿ ''[[ಎಲ್ಲೆನ್]]'' ಅನ್ನು 1994 ರಿಂದ 1998ರವರೆಗೂ ಮತ್ತು ''[[ದಿ ಎಲ್ಲೆನ್ ಶೋ]]'' ಅನ್ನು 2001ರಿಂದ 2002ರವರೆಗೂ ನಟಿಸಿ ನಡೆಸಿಕೊಟ್ಟಳು. 1997ರಲ್ಲಿ, ''ಎಲ್ಲೆನ್'' ನ ನಾಲ್ಕನೇಯ ಕಾಲದಲ್ಲಿ ಅವಳು ಸಾರ್ವಜನಿಕವಾಗಿ [[ಸಲಿಂಗಕಾಮಿ]] ಆಗಿ [[ಆಚೆ ಬಂದು]] ''[[ದಿ ಒಪ್ರಾ ವಿನ್ಫ್ರೇ ಶೋ]]'' ದಲ್ಲಿ ಕಾಣಿಸಿಕೊಂಡಳು. ಅತಿ ಶೀಘ್ರದಲ್ಲೇ, [[ಎಲ್ಲೆನ್ ಮಾರ್ಗನ್]] ಎಂಬ ಅವಳ ಪಾತ್ರ ವಿನ್ಫ್ರೇ ಬರೆಯುವ ಚಿಕಿತ್ಸಕ ನಾಟಕವಾಯಿತು ಮತ್ತು ಈ ಸರಣಿಯೂ ನಾನಾ ವಿಧದ [[LGBT]] ವಿಷಯಗಳನ್ನು ಪರಿಶೋಧಿಸಿತು ಹಾಗೆಯೇ ನಿವೇದನಾ ಪ್ರಕ್ರಿಯೆಗಳನ್ನೂ ಚರ್ಚಿಸಿತು. ಎಲ್ಲೆನ್ ಹನ್ನೆರಡು [[ಎಮ್ಮಿ]] ಪ್ರಶಸ್ತಿಗಳನ್ನು ಗೆದ್ದಿರುತ್ತಾಳೆ ಮತ್ತು ಇನ್ನೂ ಅನೇಕ ಪ್ರಶಸ್ತಿಗಳನ್ನು ಅವಳ ಕಾರ್ಯಗಳಿಗೆ ಹಾಗೂ ಧರ್ಮಾರ್ಥದ ಶ್ರಮಕ್ಕೆ ಪಡೆದಿರುತ್ತಾಳೆ.
== ಆರಂಭಿಕ ಜೀವನ ಹಾಗೂ ಶಿಕ್ಷಣ ==
ಡಿಜೆನೆರೆಸ್ ಬೆಳೆದದ್ದು [[ಮೆಟೈರೀ, ಲ್ಯೂಸಿಯಾನಾ]]ದಲ್ಲಿ, ಈಕೆ ವಾಕ್ ವೈದ್ಯೆ [[ಬೆಟ್ಟಿ ಜೇನ್ ಡಿಜೆನೆರೆಸ್]] (ನೀ ಪೆಫ್ಹರ್), ಮತ್ತು ವಿಮಾ ಏಜೆಂಟ್ ಎಲ್ಲೀಯೆಟ್ ಡಿಜೆನೆರೆಸ್ನ ಪುತ್ರಿ.<ref>[http://www.filmreference.com/film/61/Ellen-DeGeneres.html ಎಲ್ಲೆನ್ ಡಿಜೆನೆರೆಸ್ ಬೈಯೋಗ್ರಾಫಿ (1958-)]</ref><ref name="bookref1">{{cite book|last=DeGeneres|first=Betty|authorlink=|coauthors=|title=Love, Ellen: A Mother/Daughter Journey|publisher=HarperCollins Publishers|date=2000|location=|pages=22, 27|month=|url=|id=ISBN 0-688-17688-7}}</ref> ದಿಜೆನೆರೆಸ್ಗೆ [[ವ್ಯಾನ್ಸ್ ಡಿಜೆನೆರೆಸ್]] ಎಂಬ ಒಬ್ಬ ಸಹೋದರನಿದ್ದಾನೆ, ಈತ ಸಂಗೀತಗಾರ ಹಾಗೂ ನಿರ್ಮಾಪಕ. ಡಿಜೆನೆರೆಸ್ ಫ್ರೆಂಚ್, ಇಂಗ್ಲೀಷ್, ಜರ್ಮನ್ ಮತ್ತು ಐರಿಶ್ ವಂಶದವಳು. ಡಿಜೆನೆರೆಸ್ ಒಬ್ಬ [[ಕ್ರಸ್ತ ವಿಜ್ಞಾನಿ]]ಯಾಗಿ ಹದಿಮೂರು ವಯಸ್ಸಿನವರೆಗೂ ಬೆಳೆದಳು. ಡಿಜೆನೆರೆಸಳ ಜನ್ಮದಾತರು 1973ರಲ್ಲಿ ವಿಚ್ಛೇದನ ಬಯಸಿದರು ಮಾರನೆಯ ವರ್ಷ ಅವರಿಗೆ ಅದು ಲಭ್ಯವಾಯಿತು. ಸ್ವಲ್ಪ ದಿನಗಳಲ್ಲೇ ಬೆಟ್ಟಿ ಜೇನ್, ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ರಾಯ್ ಗ್ರೂಸ್ಸೆಂಡಾರ್ಫ್ ಅನ್ನು ಪುನ: ಮದುವೆಯಾದಳು. ಬೆಟ್ಟಿ ಜೇನ್ಸ್ ಮತ್ತು ಡಿಜೆನೆರೆಸ್ ಗ್ರೂಸೆಂಡಾರ್ಫ್ ಜೊತೆ [[ನ್ಯೂ ಆರ್ಲೇಯನ್ಸ್]] ಕ್ಷೇತ್ರದಿಂದ [[ಟೆಕ್ಸಾಸ್ನ, ಅಟ್ಲಾಂಟಾ]]ಗೆ ಹೋದರು. ವ್ಯಾನ್ಸ್ ಮಾತ್ರ ತನಗೆ ಜನುಮ ನೀಡಿದ ತಂದೆಯ ಬಳಿ ಉಳಿದುಕೊಂಡ.
1976ರಲ್ಲಿ ಡಿಜೆನೆರೆಸ್ ಅಟ್ಲಾಂಟಾ ಹೈ ಸ್ಕೂಲ್ನಿಂದ ಪದವಿ ಪಡೆದಳು, ಅವಳು ತನ್ನ ಹೈಸ್ಕೂಲನ್ನು ಲ್ಯೂಸೀಯಾನಾದ ಮೆಟೈರೀಯ [[ಗ್ರೇಸ್ ಕಿಂಗ್ ಹೈ ಸ್ಕೂಲ್]] ನಲ್ಲಿ ಕಳೆದಳು. ಲ್ಯೂಸಿಯಾನಾಗೆ ಮರಳಿ ಬಂದು [[ಯುನಿವರ್ಸಿಟಿ ಆಫ್ ನ್ಯೂ ಆರ್ಲೀಯನ್ಸ್]] ಗೆ ಸೇರಿ ಅಲ್ಲಿ [[ಸಂವಹನ ಅಧ್ಯಯನ]]ವನ್ನು [[ಮೇಜರ್]] ವಿಷಯವನ್ನಾಗಿ ಆಯ್ದುಕೊಂಡಳು. ಒಂದು ಸೆಮಿಸ್ಟರ್ ನಂತರ ತನ್ನ ಕಸಿನ್ ಲಾರಾ ಗಿಲ್ಲೆನ್ ಜೊತೆ ಕಾನೂನು ಕಚೇರಿಯಲ್ಲಿ ಕ್ಲರ್ಕ್ ಕೆಲಸಕ್ಕೆ ಸೇರಿಕೊಂಡಳು. ಲೇಕ್ಸೈಡ್ ಶಾಪಿಂಗ್ ಸೆಂಟರ್ ಬಳಿ ಇರುವ [[ಮೆರ್ರಿ-ಗೋ-ಅರೌಂಡ್]] ಎಂಬ ಧಾರಾವಾಹಿ ಮಳಿಗೆಗಳೊಂದರಲ್ಲಿ ಉಡುಪು ಮಾರಾಟಗಾರಳಾಗಿಯೂ ನೌಕರಿ ಮಾಡಿದಳು. ಇತರ ನೌಕರಿಯ ಅನುಭವಗಳೆಂದರೆ [[TGI ಫ್ರೈಡೇಸ್]] ನಲ್ಲಿ ಮತ್ತು ಇನ್ನೊಂದು ರೆಸ್ಟಾರೆಂಟ್ನಲ್ಲಿ ಪರಿಚಾರಿಕೆಯಾಗಿ, ಮನೆ ಪೇಂಟರ್ ಆಗಿ, ಪಥಿಕ ಗೃಹದ ಯಜಮಾನಿಯಾಗಿ ಮತ್ತು ಪಾನಾವಳಿಯ ಮಾಣಿಯಾಗಿ ಕಾರ್ಯನಿರ್ವಹಿಸಿರುತ್ತಾಳೆ. ತನ್ನ ಹಾಸ್ಯದ ಕಾರ್ಯಕ್ರಮಗಳಲ್ಲಿ ಅವುಗಳ ಅನುಭವಗಳನ್ನು ಹೇಳಿಕೊಳ್ಳುತ್ತಿರುತ್ತಾಳೆ.
ಮೇ 6ನೇ ತಾರೀಖು, 2010ರಲ್ಲಿ, [[ಲಿಸಾ ಕುಡ್ರೋವ್]] ಎಲ್ಲೆನಳ [[ಶೋ]]ಗೆ ಬಂದು ಎಲ್ಲೆನಳ ಕುಲದವರ ಬಗ್ಗೆ ಹೇಳಿದಳು, ಅದರಲ್ಲಿ ಆಶ್ಚರ್ಯದ ಸಂಗತಿಯೆಂದರೆ [[ಮಡೊನ್ನಾ]] ಎಲ್ಲೆನಳ 11ನೇಯ ಕಸಿನ್ ಆಗಿರುತ್ತಾಳೆ.
== ವೃತ್ತಿ ಜೀವನ ==
==== ಪ್ರೇಕ್ಷಕರ ಎದುರು ನಿಂತು ಹೇಳುವ ಹಾಸ್ಯ, ಸ್ಟಾಂಡ್-ಅಪ್ ಕಾಮಿಡಿ ====
ಡಿಜೆನೆರೆಸ್ ಪ್ರೇಕ್ಷಕರ ಎದುರು ನಿಂತು ಹೇಳುವ ಹಾಸ್ಯ ಕಾರ್ಯಕ್ರಮವನ್ನು ಸಣ್ಣ ಕ್ಲಬ್ಬುಗಳಲ್ಲಿ ಮತ್ತು ಕಾಫೀಹೌಸ್ಗಳಲ್ಲಿ ಮಾಡುತ್ತಿದ್ದಳು. 1981ರಷ್ಟು ಹೊತ್ತಿಗೆ ಎಲ್ಲೆನ್ ನ್ಯೂ ಆರ್ಲೀಯನ್ಸ್ನ ಕ್ಲೈಡ್ಸ್ ಕಾಮಿಡಿ ಕ್ಲಬ್ನಲ್ಲಿ [[ಕಾರ್ಯಕ್ರಮ ನಿರ್ವಾಹಕಳು]] ಆಗಿದ್ದಳು. ಈ ಸಂದರ್ಭಗಳಲ್ಲಿ [[ವುಡ್ದಿ ಅಲ್ಲೆನ್]] ಮತ್ತು [[ಸ್ಟೀವ್ ಮಾರ್ಟಿನ್]] ತನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳೆಂದು ಆಗಾಗ ಹೇಳಿಕೊಂಡಿದ್ದಾಳೆ.<ref name="comedycouch.com">{{Cite web |url=http://www.comedycouch.com/interviews/edegeneres.htm |title=ಆರ್ಕೈವ್ ನಕಲು |access-date=2010-06-03 |archive-date=2009-05-17 |archive-url=https://web.archive.org/web/20090517065716/http://comedycouch.com/interviews/edegeneres.htm |url-status=dead }}</ref> ಆರಂಭದ 1980ರಿಂದೀಚೆಗೆ ದೇಶಾದ್ಯಂತ ಪ್ರವಾಸವನ್ನು ಕೈಗೊಳ್ಳಲು ಪ್ರಾರಂಭಿಸಿದಳು, 1982ರಲ್ಲಿ [[ಶೋಟೈಂ]]ಗಳ ''ಅಮೇರಿಕಾದಲ್ಲೇ ಅತ್ಯಂತ ಹಾಸ್ಯವ್ಯಕ್ತಿ'' ಎಂದು ಗುರುತಿಸಿಕೊಂಡಳು.<ref name="ellen.warnerbros.com">{{Cite web |url=http://ellen.warnerbros.com/about/bio.php |title=ಆರ್ಕೈವ್ ನಕಲು |access-date=2010-06-03 |archive-date=2010-03-06 |archive-url=https://web.archive.org/web/20100306134621/http://ellen.warnerbros.com/about/bio.php |url-status=dead }}</ref> 1986ರಲ್ಲಿ ಮೊದಲ ಬಾರಿಗೆ ''ಟುನೈಟ್ ಶೋ'' ಕಾರ್ಯಕ್ರಮದಲ್ಲಿ [[ಜಾನಿ ಕರ್ಸನ್]] ಜೊತೆ ಕಾಣಿಸಿಕೊಂಡಳು, ಈ ಜಾನಿ ಕರ್ಸನ್ ಎಲ್ಲೆನಳನ್ನು [[ಬಾಬ್ ನ್ಯೂಹಾರ್ಟ್]] ಗೆ ಹೋಲಿಸಿದ್ದನು.<ref name="comedycouch.com"/> ಈ ಕಾರ್ಯಕ್ರಮದ ತರುವಾಯ ಕರ್ಸನ್ ಎಲ್ಲೆನಳನ್ನು ಪರದೆಯ ಮೇಲೆ ಹರಟೆಗೆ ಆಹ್ವಾನಿಸಿದನು, ಚರಿತ್ರೆಯಲ್ಲೇ ಈ ಗೌರವಕ್ಕೆ ಪಾತ್ರಳಾದ ಮೊದಲ ಕಾಮಿಡೀಯನ್ ಮಹಿಳೆ ಎಲ್ಲೆನ್ ಎಂದಾಯಿತು.<ref name="ellen.warnerbros.com"/>
==== ಆರಂಭದ ಸ್ಕ್ರೀನ್ ಕಾರ್ಯ ====
1980ರ ಕೊನೆಯಲ್ಲಿ ಮತ್ತು 1990ರ ಆರಂಭದಲ್ಲಿ ದೂರದರ್ಶನ ಮತ್ತು ಚಿತ್ರಕಾರ್ಯಗಳೆಂದರೆ ''[[ಓಪನ್ ಹೌಸ್]]'' ನ ದೂರದರ್ಶನ ಕಾರ್ಯ ಮತ್ತು ''[[ಕೋನ್ಹೆಡ್ಸ್]]'' ನ ಚಿತ್ರದ ಕಾರ್ಯ.
==== ''ಎಲ್ಲೆನ್'' (ಸಿಟ್ಕಾಂ, 1994–1998) ====
[[ಚಿತ್ರ:Ellen DeGeneres 2.jpg|thumb|ಆಟ್ ದಿ ಗವರ್ನಸ್ ಬಾಲ್ ಆಫ್ಟರ್ ೪೬ ಆನ್ಯೂಲ್ ಎಮ್ಮೀ ಅವಾರ್ಡ್ಸ್ ಟೆಲಿಕ್ಯಾಸ್ಟ್, ಸೆಪ್ಟೆಂಬರ್. 1994]]
1994-1998ರವರೆಗಿನ [[ಸಿಟ್ಕಾಂ]] ''[[ಎಲ್ಲೆನ್]]'' ನಲ್ಲಿ ಮೊದಲ ಅವಧಿಯಲ್ಲಿ ನಡೆದದ್ದನ್ನು ''ದೀಸ್ ಫ್ರೆಂಡ್ಸ್ ಆಫ್ ಮೈನ್'' ಎಂದು ಕರೆಯಲಾಯಿತು ಇದರಲ್ಲಿ ಡಿಜೆನೆರೆಸಳ ಕಾಮಿಡಿ ವಸ್ತುಗಳೇ ಅಡಿಪಾಯವಾಗಿದ್ದವು. [[ABC]] ಶೋ ತನ್ನ ಮೊದಲ ಪ್ರದರ್ಶನಗಳಲ್ಲಿ ಡಿಜೆನೆರೆಸಳ [[ಅಬ್ಸರ್ವೇಷನಲ್ ಹ್ಯೂಮರ್]] ಶೈಲಿಯ ಚಮತ್ಕಾರವು ಜನಪ್ರಿಯವಾಯಿತು; ಇದನ್ನು "ಮಹಿಳಾ" ''[[ಸೀನ್ಫೆಳ್ಡ್]]'' ಎಂದು ಉಲ್ಲೇಖಿಸಲಾಯಿತು."<ref>{{cite web|url=http://www.glbthistorymonth.com/glbthistorymonth/bio.cfm?LeaderID=3|title=GLBT History Month - Ellen DeGeneres|accessdate=2006-11-28|archive-date=2006-11-26|archive-url=https://web.archive.org/web/20061126174025/http://www.glbthistorymonth.com/glbthistorymonth/bio.cfm?LeaderID=3|url-status=dead}}</ref>
1997ರ ಫೆಬ್ರವರಿಯಲ್ಲಿ ಡಿಜೆನೆರೆಸ್ ತನ್ನ ಸಲಿಂಗಕಾಮವನ್ನು ''[[ದಿ ಒಪ್ರಾಹ್ ವಿನ್ಫ್ರೇ ಶೋ]]'' ನಲ್ಲಿ ಸಾರ್ವಜನಿಕವಾಗಿ ಹೇಳಿದಾಗ ''ಎಲ್ಲೆನ್'' ಕಾರ್ಯಕ್ರಮವು ಜನಪ್ರಿಯತೆಯಲ್ಲಿ ಉತ್ತುಂಗವನ್ನು ತಲುಪಿತು. ಬಳಿಕ ಸಿಟ್ಕಾಂನ ಅವಳ ಪಾತ್ರ ಏಪ್ರಿಲ್ನಲ್ಲಿ [[ವೈದ್ಯ]] ನಿಗಾಗಿ [[ಗೂಡಿನಿಂದ]] [[ಆಚೆ ಬಂದಿತು]] ಮತ್ತು ಇದು [[ಓಪ್ರಾ ವಿನ್ಫ್ರೇ]]ಯ ನಾಟಕವಾಗಿದ್ದು ಇದರಲ್ಲಿ ಎಲ್ಲೆನ್ [[ಸಲಿಂಗಕಾಮಿ]] ಎಂಬ ವಿಷಯ ಹೊರಬಿತ್ತು.<ref name="something">{{cite web | author=Caryn James | title=A Message That's Diminished by the Buildup | work=The New York Times | date=1997-04-13 | url=http://query.nytimes.com/gst/fullpage.html?res=9901E5DC173CF930A25757C0A961958260&sec=&spon=&pagewanted=all | accessdate=2008-03-14}}</ref> [[ಆಚೆ ಬರುವ]] ಪ್ರಸಂಗಕ್ಕೆ "[[ದಿ ಪಪ್ಪಿ ಎಪಿಸೋಡ್]]" ಎಂದು ಶೀರ್ಷಿಕೆ ಕೊಡಲಾಯಿತು ಮತ್ತು ಇದು ಶೋಗಳಲ್ಲೇ ಅತ್ಯಂತ ಅಧಿಕ ಜನ ವೀಕ್ಷಿಸುವ ಶೋ ಎಂದು ಶ್ರೇಣೀಕರಿಸಲಾಯಿತು, ಆದರೆ ಆನಂತರ ಬಂದ ಯಾವುದೇ ಎಪಿಸೋಡ್ಗಳು ಇಷ್ಟೊಂದು ಜನಪ್ರಿಯವಾಗದೆ ವೀಕ್ಷಕರ [[ರೇಟಿಂಗ್]] ಕ್ರಮೇಣ ಕ್ಷೀಣಿಸುತ್ತಾ ಹೋಯಿತು ಕೊನೆಗೆ ’ಶೋ’ ಅನ್ನೇ ನಿಲ್ಲಿಸಲಾಯಿತು. ಡಿಜೆನೆರೆಸ್ ಕೊನೆಗೆ ತನ್ನ ಸ್ಟಾಂಡ್-ಅಪ್ ಕಾಮಿಡಿಗೇ ಹಿಂದಿರುಗಿದಳು ಮತ್ತು ಯಶಸ್ವೀ [[ಟಾಕ್ ಶೋ]] ನಿರೂಪಕಿಯಾದಳು.
==== ''ಎಲ್ಲೆನ್ಸ್ ಎನರ್ಜಿ ಅಡ್ವೆಂಚ್ಯೂರ್'' ====
ಡಿಜೆನೆರೆಸ್, ''[[ಎಲ್ಲೆನ್ಸ್ನ ಎನರ್ಜಿ ಅಡ್ವೆಂಚ್ಯೂರ್]]'' ಎಂಬ ಚಿತ್ರ ಮಾಲಿಕೆಗಳಲ್ಲಿ ನಟಿಸಿದಳು, ಇವು [[ಯುನಿವರ್ಸ್ ಆಫ್ ಎನರ್ಜಿ]]ಯ ಆಕರ್ಷಣೆ ಭಾಗ ಮತ್ತು [[ವಾಲ್ಟ್ ಡಿಸ್ನೀಯ್ ವರ್ಲ್ಡ್]]'ನ [[ಎಪ್ಕಾಟ್]] ನ ಪೆವಿಲ್ಲೀಯನ್. ಈ ಚಿತ್ರದಲ್ಲಿ [[ಬಿಲ್ ನಯ್]], [[ಅಲೆಕ್ಸ್ ಟ್ರೆಬೆಕ್]], [[ಮೈಖೇಲ್ ರಿಚರ್ಡ್ಸ್]] ಮತ್ತು [[ಜ್ಯಾಮೀ ಲೀ ಕರ್ಟಿಸ್]] ನಟಿಸಿರುತ್ತಾರೆ. ಈ ಶೋನಲ್ಲಿ ಡಿಜೆನೆರೆಸ್ ನಿದ್ದೆ ಹೋಗುತ್ತಾ ಕೊನೆಗೆ ಎನರ್ಜಿಯಲ್ಲಿ ಇರುವುದು ಗೊತ್ತಾಗುತ್ತದೆ, ಇದು ''[[ಜೀಯೋಪಾರ್ಡಿ!]]'' ಯ ವಸ್ತುವನ್ನು ಒಳಗೊಂಡಿರುವಂತಹುದು, ಡಿಜೆನೆರೆಸ್ ತನ್ನ ಹಳೆಯ ಸ್ಪರ್ಧಿಯ ವಿರುದ್ಧ ನಟಿಸಿರುವುದಾಗಿದೆ, ಇದನ್ನು ನಿರೂಪಿಸಿರುವುದು ಕರ್ಟಿಸ್ ಮತ್ತು [[ಆಲ್ಬರ್ಟ್ ಏಯ್ನ್ಸ್ಟೈನ್]]. ನಂತರದ ಚಿತ್ರದಲ್ಲಿ ಎನರ್ಜಿಯ ಬಗ್ಗೆ ಅಧ್ಯಯನದ ನೋಟ ಬೀರುವ ಡಿಜೆನೆರೆಸ್ ಜೊತೆಗೆ ನಯ್ ಎಂಬ ಮತ್ತೊಬ್ಬ ನಿರೂಪಕರೂ ಇದ್ದರು. ಸೆಪ್ಟೆಂಬರ್ 15, 1996ರಲ್ಲಿ ''ಎಲ್ಲೆನ್ಸ್ ಎನರ್ಜಿ ಕ್ರೈಸಿಸ್'' ಎಂದು ರೈಡ್ ಮೊದಲ ಪ್ರಾರಂಭ ಆಯಿತು ಆದರೆ ಹೆಚ್ಚು ಧನಾತ್ಮಕವಾಗಿ ಅದರ ಹೆಸರನ್ನು ಕೇಳಿಸಲು ಅದನ್ನು ಎಲ್ಲೆನ್ಸ್ ಎನರ್ಜಿ ಅಡ್ವೆಂಚ್ಯೂರ್ ಎಂದು ಮರುನಾಮಕರಣ ಮಾಡಲಾಯಿತು''.''
==== ''ದಿ ಎಲ್ಲೆನ್ ಶೋ'' ====
ಡಿಜೆನೆರಸ್ ದೂರದರ್ಶನದ ಮಾಲಿಕೆಗೆ 2001ರಲ್ಲಿ ಹೊಸ [[CBS]] ಸಿಟ್ಕಾಂ ''[[ದಿ ಎಲ್ಲೆನ್ ಶೋ]]'' ನೊಂದಿಗೆ ಹಿಂದಿರುಗಿದಳು. ಅವಳ ಪಾತ್ರ ಸಲಿಂಗಕಾಮಿಯ ಪಾತ್ರವಾದರೂ ಅದೇ ’ಶೋ’ನ ಕೇಂದ್ರ ವಸ್ತುವಾಗಿರಲಿಲ್ಲ.
==== 2001ರ ಎಮ್ಮೀ ಪ್ರಶಸ್ತಿಗಳು ====
ನವೆಂಬರ್ 4, 2001ರಂದು ದೂರದರ್ಶನ ಪ್ರಸಾರದ [[ಎಮ್ಮೀ ಅವಾರ್ಡ್ಸ್]] ಕಾರ್ಯಕ್ರಮವನ್ನು ನಿರೂಪಿಸಿದಾಗ ಡಿಜೆನೆರೆಸ್ಗೆ ವ್ಯಾಪಕವಾದ ಎಕ್ಸ್ಪೋಷರ್ ದೊರಕಿತು. ತಾಂತ್ರಿಕ ಕಾರಣಗಳಿಗೆ ಮತ್ತು [[ಸೆಪ್ಟೆಂಬರ್ 11, 2001 ದಾಳಿಗೆ]] ಕಾರ್ಯಕ್ರಮವನ್ನು ಎರಡು ಸಾರಿ ಮುಂದೂಡಿದ ಮೇಲೆ ಮತ್ತು ಅದನ್ನು ಆ ದು:ಖದ ಸಂದರ್ಭದಲ್ಲಿ ನೆರೆವೇರಿಸಬೇಕಾದರೆ ಅದೂ ಅಸಂವೇದಿಯಾಗುವ ಸಂದರ್ಭದಲ್ಲಿ ಆ ಕಾರ್ಯಕ್ರಮವನ್ನು ಹೆಚ್ಚಿನ ವಿಷಣ್ಣ ಧ್ವನಿಯಿಂದ ಮಾಡಬೇಕಾಗಿತ್ತು, ಭಾಗವಹಿಸುವವರಿಗೆ ತಾತ್ಕಾಲಿಕವಾಗಿಯಾದರೂ ಆ ದು:ಖ ಮರೆಯುವಂತಿರಬೇಕಾಗಿತ್ತು. ಡಿಜೆನೆರೆಸ್ ಅಂತೂ ಆ ಕಾರ್ಯಕ್ರಮವನ್ನು ನಿರೂಪಿಸಿದ ರೀತಿಗೆ ಅನೇಕ ಬಾರಿ ಸಭಾ ಜನರು ಎದ್ದು ನಿಂತು ಗೌರವ ತೋರಿದರು : "ಬಣ್ಣದ ಉಡುಪನ್ನು ತೊಟ್ಟ, [[ಜ್ಯೂ]]ಗಳು ಸುತ್ತುವರೆದಿರುವ ಸಲಿಂಗಕಾಮಿ ಹೆಣ್ಣನ್ನು ನೋಡುವುದಕ್ಕಿಂತ [[ತಾಲೀಬಾನ್]] ಅನ್ನು ಯಾರು ಹೊರದಬ್ಬುತ್ತಾರೆ" ಎಂಬ ಒಂದು ಸಾಲು ಅಂತೂ ಜನರನ್ನು ಕರಗಿಸಿತು.
ಆಗಸ್ಟ್ 2005ರಲ್ಲಿ, ಡಿಜೆನೆರೆಸ್ [[2005ರ ಪ್ರೈಮ್ ಟೈಮ್ ಎಮ್ಮೀ ಅವಾರ್ಡ್ಸ್]] ಕಾರ್ಯಕ್ರಮವನ್ನು ಸೆಪ್ಟೆಂಬರ್ 18, 2005ರಂದು ನಡೆಸಿಕೊಟ್ಟಳು. ಇದು ನಡೆದದ್ದು [[ಕಟ್ರೀನಾ ಚಂಡಮಾರುತ]] ಬೀಸಿದ ಮೂರು ವಾರಗಳ ನಂತರ, ಹೀಗಾಗಿ ರಾಷ್ಟ್ರೀಯ ದುರಂತದ ನಂತರ ನಡೆದ ಕಾರ್ಯಕ್ರಮಗಳಲ್ಲಿ ಎಲ್ಲೆನ್ ನಡೆಸಿಕೊಟ್ಟ ಎರಡನೆಯ ಕಾರ್ಯಕ್ರಮ ಇದು. 1996 ಮತ್ತು 1997ರ [[ಗ್ರಾಮಿ ಅವಾರ್ಡ್ಸ್]] ಕಾರ್ಯಕ್ರಮವನ್ನೂ ನಡೆಸಿಕೊಟ್ಟಳು.
==== ಕಂಠದಾನ ====
[[ಕಡಿಮೆ-ಅವಧಿಯ]], [[ಸ್ಮೃತಿ ಲಯ]]ದ ಮೀನು, ಡೋರಿಗೆ ಡಿಜೆನೆರೆಸ್ ಕಂಠದಾನ ಮಾಡಿದಳು, 2003ರ ಬೇಸಿಗೆಯ ಹಿಟ್ ಚಿತ್ರ, ಅನಿಮೇಟೆಡ್ [[ಡಿಸ್ನೀ]]/[[ಪಿಕ್ಸಾರ್]] ಚಿತ್ರ ''[[ಫೈಂಡಿಂಗ್ ನೆಮೋ]]''. ಈ ಚಿತ್ರದ ನಿರ್ದೇಶಕ [[ಆಂಡ್ರೀವ್ ಸ್ಟಾಂಟನ್]] ಎಲ್ಲೆನಳ ಆಯ್ಕೆಯನ್ನು ಸಮರ್ಥಿಸುತ್ತ ಎಲ್ಲೆನ್ ಅವಳ ಕಾರ್ಯಕ್ರಮದಲ್ಲೊಮ್ಮೆ ಒಂದು ವಾಕ್ಯ ಮುಗಿವ ಮೊದಲೇ ಐದು ಬಾರಿ ವಸ್ತುವನ್ನು ಬದಲಿಸಿದಳು ಎಂದನು.<ref>[[ಆಂಡ್ರಿವ್ ಸ್ಟಾಂಟನ್]] ಸ್ಟೇಟ್ಸ್ ದಿಸ್ ಆನ್ ದಿ ''ಫೈಂಡಿಂಗ್ ನೇಮೋ'' DVD ರನ್ನಿಂಗ್ ಕಾಮೆಂಟರಿ.</ref> ಡೋರಿಯ ಪಾತ್ರಕ್ಕೆ ತಾನು ನೀಡಿದ ಕಂಠದಾನಕ್ಕೆ ಎಲ್ಲೆನ್, ಅಕಾಡೆಮಿ ಆಫ್ ಸೈನ್ಸ್ ಫಿಕ್ಷನ್, ಫ್ಯಾಂಟಸಿ ಮತ್ತು ಹಾರರ್ ಫಿಲ್ಮ್ನ "ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್" ಎಂದು [[ದಿ ಸ್ಯಾಟರ್ನ್ ಅವಾರ್ಡ್]] ಗೆದ್ದುಕೊಂಡಳು"; [[ನಿಕೆಲೋಡೀಯನ್]] [[ಕಿಡ್ಸ್ ಚಾಯ್ಸ್ ಅವಾರ್ಡ್ಸ್]] ನವರಿಂದ "ಫೇವರೈಟ್ ವಾಯ್ಸ್ ಫ್ರಮ್ ಆನ್ ಅನಿಮೇಟೆಡ್ ಮೂವೀ" ಪ್ರಶಸ್ತಿಯನ್ನು ಪಡೆದಳು; ಇಂಟರ್ನ್ಯಾಷನಲ್ ಅನಿಮೇಟೆಡ್ ಫಿಲ್ಮ್ ಅಸೋಸಿಯೇಷನ್ ಅವರು "ಔಟ್ ಸ್ಟಾಂಡಿಂಗ್ ವಾಯ್ಸ್ ಆಕ್ಟಿಂಗ್" ಎಂದು [[ಅನ್ನೀ ಅವಾರ್ಡ್]] ಕೊಟ್ಟಿತು. "ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್" ವರ್ಗದಲ್ಲಿ ಎಲ್ಲೆನಳನ್ನು [[ಚಿಕಾಗೋ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್]] ಗೆ ನಾಮಕರಣ ಮಾಡಿತು. ಎಲ್ಲೆನಳು ಶ್ವಾನದ ಧ್ವನಿಯನ್ನು [[ಎಡ್ಡೀ ಮರ್ಫಿ]] ಯ ಚಿತ್ರ ''[[ಡಾ. ಡೋಲಿಟ್ಟಲ್]]'' ಗೆ ಪೀಠಿಕೆಯಾಗಿ ಕೊಟ್ಟಳು.
==== ''ದಿ ಎಲ್ಲೆನ್ ಡಿಜೆನೆರೆಸ್ ಶೋ'' ====
ಸೆಪ್ಟೆಂಬರ್ 2003ರಲ್ಲಿ ಡಿಜೆನೆರೆಸ್, ''[[ದಿ ಎಲ್ಲೆನ್ ಡಿಜೆನೆರೆಸ್ ಶೋ]]'' ಎಂಬ ದೂರದರ್ಶನ ಟಾಕ್ ಶೋ ಒಂದನ್ನು ಆರಂಭಿಸಿದಳು. ಅನೇಕ [[ಪ್ರಖ್ಯಾತ]]ರು-ನಡೆಸುವ ಟಾಕ್ ಶೋಗಳು ಈ ಅವಧಿಯಲ್ಲಿ ಮೂಡಿದವು, ಅವುಗಳಲ್ಲಿ [[ಶಾರೋನ್ ಓಸಬರ್ನ್]] ಮತ್ತು [[ರೀಟಾ ರೂಡ್ನರ್]] ಕಾರ್ಯಕ್ರಮಗಳಲ್ಲಿ ಕೆಲವು, ಆದರೂ ಎಲ್ಲೆನಳ ಕಾರ್ಯಕ್ರಮಕ್ಕೆ [[ನೀಲ್ಸೆನ್ ರೇಟಿಂಗ್ಸ್]] ದೃಢವಾಗಿ ಬೆಳೆಯಿತು ಮತ್ತು ವ್ಯಾಪಕ ವಿಮರ್ಶಾ ಪ್ರಶಂಸೆಯೂ ದೊರೆಯಿತು. ಮೊದಲ ಕಾಲಕ್ಕೇ ಇದಕ್ಕೆ 11 [[ಡೇಟೈಂ ಎಮ್ಮೀ ಅವಾರ್ಡ್ಸ್]] ಗೆ ನಾಮಕರಣವಾಯಿತು, ನಾಲ್ಕಕ್ಕೆ ಪ್ರಶಸ್ತಿ ದೊರಕಿತು ಅವುದರಲ್ಲಿ ಬೆಸ್ಟ್ ಟಾಕ್ ಶೋ ಕೂಡ ಒಂದು. ಈ ಶೋ 25 [[ಎಮ್ಮೀ ಅವಾರ್ಡ್ಸ್]] ಅನ್ನು ಅದರ ಪ್ರಸಾರದ ಮೊದಲ ಮೂರು ಅವಧಿಯಲ್ಲಿ ಪಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಜಾಹೀರಾತಿನ ಬಿಡುವಿನ ವೇಳೆಯಲ್ಲಿ ಪ್ರೇಕ್ಷಕರ ನಡುವೆ ಹಾಡುವುದು ಕುಣಿಯುವುದು ಡಿಜೆನೆರೆಸಳ ಒಂದು ಹವ್ಯಾಸ. ಆಗಾಗೆ ಬಹುಮಾನಗಳನ್ನು, ಟ್ರಿಪ್ಗಳ ಕೂಪನನ್ನು ತನ್ನ ಪ್ರಾಯೋಜಿತರಿಂದ ಪಡೆದು ತನ್ನ ಕಾರ್ಯಕ್ರಮಕ್ಕೆ ಬರುವ ಸ್ಟುಡಿಯೋ ಪ್ರೇಕ್ಷಕರಿಗೆ ಕೊಡುತ್ತಾಳೆ.
ಡಿಜೆನೆರೆಸ್ ತನ್ನ ಕಲಿಕೆಯ ಅವಧಿಯ ಸ್ನೇಹಿತರನ್ನು ವರ್ಷಂಪ್ರತಿ ಸೇರುತ್ತಿದ್ದು ಅದರ ಮುವತ್ತು ವರ್ಷದ ವಾರ್ಷಿಕೋತ್ಸವಕ್ಕೆ ಅವರನ್ನೆಲ್ಲಾ ಫೆಬ್ರವರಿ 2006ರಲ್ಲಿ ಕ್ಯಾಲಿಫೋರ್ನಿಯಾಗೆ ಪ್ಲೇನಿನಲ್ಲಿ ತನ್ನ ಕಾರ್ಯಕ್ರಮಕ್ಕೆ ಹಾಜರಿರಲು ಕರೆಸಿಕೊಂಡಳು. ತಾನು ಓದಿದ ಅಟ್ಲಾಂಟ ಹೈ ಸ್ಕೂಲ್ಗೆ ಒಂದು ಹೊಸ ಎಲೆಕ್ಟ್ರಾನಿಕ್ [[LED]] ಮಾರ್ಕೀ ಸೈನ್ ಅನ್ನು ಉಡುಗೊರೆಯಾಗಿ ನೀಡಿದಳು.
ಮೇ 2006ರಲ್ಲಿ ಡಿಜೆನೆರೆಸ್ ನ್ಯೂ ಆರ್ಲೀಯನ್ಸ್ನಲ್ಲಿ ಆರಂಭವಾದ [[ಟುಲೇನ್ ಯುನಿವರ್ಸಿಟಿ]] ಯಲ್ಲಿ ಆಶ್ಚರ್ಯ ಭೇಟಿ ಕೊಟ್ಟಳು. ಜೋಲಂಗಿ ತೊಟ್ಟು ಮತ್ತು ತುಪ್ಪುಳಿನಿಂದ ಕೂಡಿದ ಚಪ್ಪಲಿ ಹಾಕಿಕೊಂಡು ವೇದಿಕೆಗೆ [[ಜಾರ್ಜ್ ಹೆಚ್.ಡಬ್ಲ್ಯೂ. ಬುಷ್]] ಮತ್ತು [[ಬಿಲ್ ಕ್ಲಿಂಟನ್]] ಅವರುಗಳನ್ನು ಅನುಸರಿಸಿದಳು ಡಿಜೆನೆರೆಸ್. "ಅವರು ಎಲ್ಲರೂ ನೀಳುಡುಪು ಧರಿಸಿರುತ್ತಾರೆ ಎಂದು ಹೇಳಿದರು" ಎಂದಳು.
ಮಾರ್ಚ್ 2007ರಲ್ಲಿ ಶೋ ಯೂನಿವರ್ಸಲ್ ಸ್ಟುಡಿಯೋಸ್ ಆರ್ಲ್ಯಾಂಡೊದಿಂದ ಒಂದು ವಾರ ಪ್ರಸಾರವಾಯಿತು. ಆ ವಾರದ ಅತಿಥಿಗಳಲ್ಲಿ [[ಜೆನ್ನೀಫರ್ ಲೋಪೆಜ್]] ಮತ್ತು [[ಲಿನಿರ್ಡ್ ಸ್ಕಿನಿರ್ಡ್]] ಸೇರಿರುತ್ತಾರೆ ಮತ್ತು ಸ್ಕಿಟ್ಸ್ ಅಂದರೆ ಹಗೂರ ವಿಡಂಬನೆಯಲ್ಲಿ ಡಿಜೆನೆರೆಸ್ ಹುಲ್ಕ್ ರೋಲ್ಲರ್ ಕೋಸ್ಟರ್ ರೈಡ್ ಮತ್ತು ಜಾವ್ಸ್ ಬೋಟ್ ರೈಡ್ ಮಾಡುವುದು ಇರುತ್ತದೆ.
ಮೇ 2007ರಲ್ಲಿ ಡಿಜೆನೆರಸಳನ್ನು [[ಬೆಡ್ ರೆಸ್ಟ್]] ಗೆ ಸಲಹೆ ಮಾಡಲಾಯಿತು ಕಾರಣ ಅವಳ ಬೆನ್ನಿನಲ್ಲಿ ಲಿಗಾಮೆಂಟ್ ಅಂದರೆ ಮೂಳೆನಾರು ಹರಿದಿತ್ತು. ಆದರೂ ಆಸ್ಪತ್ರೆಯ ಹಾಸಿಗೆಯ ಮೇಲಿಂದಲ್ಲೇ ಕಾರ್ಯಕ್ರಮವನ್ನು ನಡೆಸಿಕೊಟ್ಟಳು, "ಶೋ ನಡೆಯಲೇಬೇಕು ಅವರು ಹೇಳಿದಂತೆ" ಎಂದಳಂತೆ. ಕಾರ್ಯಕ್ರಮದ ಅತಿಥಿಗಳೂ ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲಿಯೇ ಆಸೀನರಾಗಿದ್ದರು.
ಮೇ 1, 2009ರಂದು ಡಿಜೆನೆರೆಸ್ ತನ್ನ 1000ದ ಎಪಿಸೋಡಿನ ಕಾರ್ಯಕ್ರಮವನ್ನು ಪ್ರಖ್ಯಾತರ ನಡುವೆ ನಡೆಸಿಕೊಟ್ಟಳು, ಆ ಕಾರ್ಯಕ್ರಮಕ್ಕೆ ಆಗಮಿಸಿದ ಅನೇಕ ಪ್ರಸಿದ್ಧರಲ್ಲಿ [[ಓಪ್ರಾಹ್]], [[ಜಸ್ಟಿನ್ ಟಿಂಬರ್ಲೇಕ್]], ಮತ್ತು [[ಪ್ಯಾರಿಸ್ ಹಿಲ್ಟನ್]] ಇದ್ದರು.
==== 79ನೇ ಅಕಾಡೆಮಿ ಅವಾರ್ಡ್ಸ್ ====
[[ಚಿತ್ರ:EllenDeGeneres1997Emmies.jpg|right|thumb|ಎಲ್ಲೆನ್ ಡಿಜೆನೆರೆಸ್ ಆಟ್ ದಿ ಎಮ್ಮೀ ಅವಾರ್ಡ್ಸ್, 1997]]
ಫೆಬ್ರವರಿ 25, 2007ರಂದು ನಡೆಯುವ [[79ನೇ ಅಕಾಡೆಮಿ ಅವಾರ್ಡ್ಸ್]] ಕಾರ್ಯಕ್ರಮವನ್ನು ನಿರೂಪಿಸಲು ಸೆಪ್ಟೆಂಬರ್ 7, 2006ರಂದು ಡಿಜೆನೆರೆಸ್ ಆಯ್ಕೆಯಾದಳು.<ref>{{cite web | url=http://www.oscars.org/press/pressreleases/2006/06.09.07.html | title=Ellen DeGeneres to Host 79th Academy Awards Presentation | publisher=[[Academy of Motion Picture Arts and Sciences]] | date=2006-09-07 | accessdate=2006-09-08}}</ref> ಇದರಿಂದಾಗಿ ಸಲಿಂಗಕಾಮಿಯೊಬ್ಬರು ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆಸಿಕೊಟ್ಟಂತಾಯಿತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಿಜೆನೆರೆಸ್ ಹೇಳುತ್ತಾಳೆ, "ಎಂಥ ಸುಂದರವಾದ ರಾತ್ರಿ ಇವತ್ತು, ಎಂಥ ವಿವಿಧತೆ ಈ ಕೋಣೆಯಲ್ಲಿ, ನಕಾರಾತ್ಮಕ ವಿಷಯಗಳಾದ ಜನರ ಪೀಳಿಗೆಯ ಪ್ರಶ್ನೆ, ಧರ್ಮ ಮತ್ತು ಲೈಂಗಿಕ ನೆಲೆಗಳ ಬಗ್ಗೆ ಚರ್ಚೆ ಮುಂತಾದವೇ ಇದ್ದ ವರ್ಷದಲ್ಲಿ!". ಆಮೇಲೆ ನಾನಿದನ್ನು ಹೇಳಲೇಬೇಕು : ಕಪ್ಪು ಜನರು, ಜೀವ್ಸ್ ಮತ್ತು ಸಲಿಂಗಕಾಮಿಗಳು ಇಲ್ಲದೇ ಇದಿದ್ದರೆ, ಆ ಬಗ್ಗೆ ಯೋಚನೆ ಮಾಡಿದರೆ, ಅಸ್ಕರ್ಗಳು ಇರುತ್ತಿರಲಿಲ್ಲ ಅಥವಾ ಅಸ್ಕರ್ ಹೆಸರಿನಿಂದ ಯಾರೂ ಇರುತ್ತಿರಲಿಲ್ಲ," ಎಂದಳು.<ref>{{cite news | author=The Associated Press | title=Alan Arkin Wins Best Supporting Actor | url=http://newsmax.com/archives/articles/2007/2/25/213026.shtml | work=NewsMax | date=2007-02-26 | accessdate=2008-03-27}}</ref> ಡಿಜೆನೆರೆಸ್ ಕಾರ್ಯಕ್ರಮ ನಡೆಸುವ ಪರಿಯನ್ನು ವಿಮರ್ಶಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಅದರಲ್ಲಿ ಒಬ್ಬರು "ಡಿಜೆನೆರೆಸ್ ಮೆರೆದಳು, ಅವಳು ತಾನು ಅಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡವರನ್ನಷ್ಟೇ ರಂಜಿಸುವುದಷ್ಟೇ ಅಲ್ಲಾ ಅಲ್ಲಿ ನೆರೆದಿರುವ ಪ್ರೇಕ್ಷಕರಿಗು ಕಚಗುಳಿ ಇಡುವ ಕಾರ್ಯ ಮಾಡುತ್ತಾಳೆ." ಹೇಳುತ್ತಾರೆ.<ref>{{cite news | author=Susan Young | title=Ellen Probably Most Exciting Thing About 79th Oscars | url=http://www.insidebayarea.com/ci_5306943 | archiveurl=https://web.archive.org/web/20070228134329/http://www.insidebayarea.com/ci_5306943 | work=InsideBayArea | date=2007-02-26 | archivedate=2007-02-28 | accessdate=2008-03-29}}</ref> ವಾಸ್ತವಾಗಿ, [[ರೆಗಿಸ್ ಫಿಲ್ಬಿನ್]] ಸಂದರ್ಶನವೊಂದರಲ್ಲಿ ಹೇಳಿದ್ದು "ಒಂದೇ ಒಂದು ದೂರೆಂದರೆ ಅಲ್ಲಿ ಸಾಕಷ್ಟು ಎಲ್ಲೆನ್ ಇರಲಿಲ್ಲ" ಎಂದು.
ಡಿಜೆನೆರೆಸಳನ್ನು ಅಕಾಡೆಮಿ ಅವಾರ್ಡ್ಸ್ ಬ್ರಾಡ್ಕಾಸ್ಟ್ ನಿರೂಪಣೆಗಾಗಿ [[ಎಮ್ಮೀ ಅವಾರ್ಡ್]] ಗೆ ನಾಮಕರಣ ಮಾಡಲಾಗಿತ್ತು.<ref>{{cite web | author=Bob Sassone | title=The Emmys: More thoughts and theories | url=http://podcasts.tvsquad.com/2007/07/19/the-emmys-more-thoughts-and-theories | work=TV Squad | date=2007-07-19 | accessdate=2008-05-19 | archive-date=2008-10-02 | archive-url=https://web.archive.org/web/20081002020931/http://podcasts.tvsquad.com/2007/07/19/the-emmys-more-thoughts-and-theories/ | url-status=dead }}</ref>
==== 2007ರಲ್ಲಿ ಗಿಳ್ಡ್ ಲೇಖಕರ ಸಂಪು ====
ಬಹುತೇಖ ಕಲಾವಿದರು ಬರಹಗಾರರಾಗಿರುವಂತೆ ಡಿಜೆನೆರೆಸ್ ಕೂಡ [[ಅಮೇರಿಕನ್ ಫೆಡರೇಷನ್ ಆಫ್ ಟೆಲಿವಿಷನ್ ಆಂಡ್ ರೇಡಿಯೋ ಆರ್ಟಿಸ್ಟ್ಸ್]] (AFTRA) ಮತ್ತು [[ವ್ರೈಟರ್ಸ್ ಗಿಳ್ಡ್ ಆಫ್ ಅಮೇರಿಕಾ]] (WGA) ಗಳ ಸದಸ್ಯಳು. ಡಿಜೆನೆರೆಸ್ ಬಾಯಿಮಾತಿಗೆ [[2007 WGA ಸ್ಟ್ರೈಕ್]] ಅನ್ನು ಬೆಂಬಲಿಸಿದರೂ ಅದು ಸಂಪು ಆರಂಭವಾದೊಡನೆ ಪಿಕೆಟಿಂಗ್ ಹಂತ ದಾಟುತ್ತಿದ್ದಂತೆಯೇ ಅದಕ್ಕೆ ತಾನು ಬೆಂಬಲವನ್ನು ಕೊಡಲಿಲ್ಲ.<ref>{{cite news | author=Neal Justin | title=Television: Tears, strike aside, Ellen shows go on | work=Minneapolis St. Paul Star Tribune | url=http://www.startribune.com/entertainment/tv/11828236.html | date=2007-11-16 | accessdate=2007-12-16 | archive-date=2007-12-21 | archive-url=https://web.archive.org/web/20071221064005/http://www.startribune.com/entertainment/tv/11828236.html | url-status=dead }}</ref><ref>{{cite news | author=World Entertainment News Network | title=DeGeneres Under Fire for Crossing Picket Line | url=http://www.sfgate.com/cgi-bin/blogs/sfgate/detail | work=The San Francisco Chronicle | date=2007-11-09 | accessdate=2007-12-16|archiveurl=https://web.archive.org/web/20050812021059/http://www.sfgate.com/cgi-bin/blogs/sfgate/detail|archivedate=2005-08-12}}</ref> ಅವಳ ಪ್ರತಿನಿಧಿಗಳು ಅವಳು ಸ್ಪರ್ಧಾತ್ಮಕ ನವೆಂಬರಿನ [[ಸ್ವೀಪ್ಸ್]] ಅವಧಿಯ ಇತರ ಕೂಟದ ಶೋಗಳ ಜೊತೆ ಸ್ಪರ್ಧಿಸುತ್ತಿರುವುದಾಗಿ ಹೇಳಿದರು ಆದುದರಿಂದ ಅವಳು ತನ್ನ ಕರಾರನ್ನು ಮುರಿಯುವುದಕ್ಕಾಗಲಿ ಅಥವಾ ತನಗಿರುವ ಪ್ರಸಾರದ ನಿಗದಿತ ಸಮಯವನ್ನಾಗಲಿ ಕಳೆದುಕೊಳ್ಳಲು ಆಗದು. ಸಂಪು ಹೂಡಿರುವವರ ಜೊತೆ ತಾನು ಇರುವುದಾಗಿ ತೋರಿಸಿಕೊಳ್ಳಲು ಸಂಪಿನ ಅವಧಿಯಲ್ಲಿ ಡಿಜೆನೆರೆಸ್ ತನ್ನ [[ಏಕಾಲಾಪ]]ವನ್ನು ಬಿಟ್ಟು ಬಿಟ್ಟಳು, WGA ಬರಹಗಾರರು ಮಾಡಿದಂಥ ನಮೂನೆಯಲ್ಲಿ.<ref>{{cite news | author=Seth Abramovitch | url=http://defamer.com/hollywood/hollywood-strikewatch/ellen-degeneres-speaks-only-in-exotic-birdcalls-as-a-gesture-of-writer-solidarity-321145.php | title=Ellen DeGeneres Speaks Only In Exotic Birdcalls As A Gesture Of Writer Solidarity | work=Defamer | publisher=Gawker Media | date=2007-11-09 | accessdate=2007-12-02 | archive-date=2012-10-06 | archive-url=https://archive.today/20121006192753/http://gawker.com/321145/ellen-degeneres-speaks-only-in-exotic-birdcalls-as-a-gesture-of-writer-solidarity | url-status=dead }}</ref> WGA ಇದನ್ನು ಖಂಡಿಸಿದರೆ AFTRA ಸಮರ್ಥಿಸಿತು.<ref>{{cite news | url=http://www.deadlinehollywooddaily.com/wga-east-says-ellen-not-welcome-in-ny/ | title=WGAE States Ellen "Not Welcome In NY" | work=Deadline Hollywood Daily | first=Nikki | last=Finke | date=2007-11-09 | accessdate=2007-12-02 | archive-date=2007-12-12 | archive-url=https://web.archive.org/web/20071212093833/http://www.deadlinehollywooddaily.com/wga-east-says-ellen-not-welcome-in-ny/ | url-status=dead }}</ref><ref>{{cite news |url=http://www.deadlinehollywooddaily.com/advisory-i-have-ellens-response/ |title=URGENT! AFTRA Defends Ellen; Rep Says She "Has Done Nothing" To Violate WGA |accessdate=2007-12-02 |publisher=Deadline Hollywood Daily |first=Nikki |last=Finke |date=2007-11-09 |authorlink=Nikki Finke |archive-date=2007-12-13 |archive-url=https://web.archive.org/web/20071213065009/http://www.deadlinehollywooddaily.com/advisory-i-have-ellens-response/ |url-status=dead }}</ref><ref>{{cite news |url=http://www.deadlinehollywooddaily.com/wgae-replies-to-aftra-about-ellen-degeneres |title=WGAE Replies To AFTRA About Ellen Mess |accessdate=2007-12-02 |work=Deadline Hollywood Daily |first=Nikki |last=Finke |date=2007-11-10 |authorlink=Nikki Finke |archive-date=2007-11-20 |archive-url=https://web.archive.org/web/20071120210019/http://www.deadlinehollywooddaily.com/wgae-replies-to-aftra-about-ellen-degeneres/ |url-status=dead }}</ref>
==== ವಾಣಿಜ್ಯ ವಕ್ತಾರಳು ====
2004ರ ನವೆಂಬರಿನಲ್ಲಿ [[ಅಮೇರಿಕನ್ ಎಕ್ಸ್ಪ್ರೆಸ್]] ನ ಜಾಹೀರಾತು ಅಭಿಯಾನದಲ್ಲಿ ಹಾಡುತ್ತಾ-ಕುಣಿದು ಕಾಣಿಸಿಕೊಂಡಳು. ತೀರಾ ಇತ್ತೀಚಿನ ಅವಳ ಅಮೇರಿಕನ್ ಎಕ್ಸ್ಪ್ರೆಸ್ ಜಾಹೀರಾತೆಂದರೆ, ಅದು ಎರಡು ನಿಮಿಷದ ಕಪ್ಪು-ಬಿಳುಪು ಕಾರ್ಯಕ್ರಮವಾಗಿದ್ದು ಅಲ್ಲಿ ಪ್ರಾಣಿಗಳ ಜೊತೆ ಕೆಲಸ ಮಾಡುತ್ತಾಳೆ, ಇದರ ಪ್ರಥಮ ಪ್ರದರ್ಶನವಾಗಿದ್ದು ನವೆಂಬರ್ 2006ರಲ್ಲಿ ಮತ್ತು ಇದನ್ನು ಸೃಷ್ಟಿಸಿದ್ದು [[ಒಗಿಲ್ವಿ ಮತ್ತು ಮ್ಯಾಥೆರ್]] ನವರು. 2007ರಲ್ಲಿ ಈ ಜಾಹೀರಾತು [[ಎಮ್ಮೀ ಅವಾರ್ಡ್]] ಗೆದ್ದುಕೊಂಡಿತು.
ಡಿಜೆನೆರೆಸ್ ಸೆಪ್ಟೆಂಬರ್ 2008ರಲ್ಲಿ ಕವರ್ ಗರ್ಲ್ ಕಾಸ್ಮೆಟಿಕ್ಸ್ ಜೊತೆ ಕಾರ್ಯನಿರ್ವಹಿಸಿದಳು ಇದಕ್ಕಾಗಿ ಅವಳನ್ನು ಟೀಕಿಸಲಾಯಿತು, ಕಾರಣ ಕವರ್ ಗರ್ಲ್ ಕಾಸ್ಮೆಟಿಕ್ಸ್ ತಯಾರಿಸುವ ಪ್ರಾಕ್ಟರ್ ಆಂಡ್ ಗ್ಯಾಂಬಲ್ ತಮ್ಮ ಉತ್ಪನ್ನಗಳಿಗೆ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸುವುದರಿಂದ, ಡಿಜೆನೆರೆಸಳ ಪ್ರಾಣಿ-ದಯಾ ಗುಣವು ಇದಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಟೀಕಾಕಾರರ ಅಭಿಮತವಾಗಿತ್ತು.<ref>{{Cite web |url=http://www.ecorazzi.com/2008/09/30/ellen-degeneres-fights-animal-cruelty-but-plugs-covergirl/ |title=ಆರ್ಕೈವ್ ನಕಲು |access-date=2010-06-03 |archive-date=2009-02-21 |archive-url=https://web.archive.org/web/20090221073344/http://www.ecorazzi.com/2008/09/30/ellen-degeneres-fights-animal-cruelty-but-plugs-covergirl/ |url-status=dead }}</ref>. ಜನವರಿ 2009ರಿಂದ ಪ್ರಾರಂಭವಾಗುವ ನ್ಯೂ ಕವರ್ ಗರ್ಲ್ ಜಾಹೀರಾತಿಗೆ ಡಿಜೆನೆರೆಸ್ ಮುಖವೇ ಗುರಿಯಾಗಿರುತ್ತದೆ. ಸೌಂದರ್ಯ ಅಭಿಯಾನದಲ್ಲಿ ಡಿಜೆನೆರೆಸಳದೇ ಮೊದಲನೇಯದಾಗಿರುತ್ತದೆ.<ref>[http://www.covergirl.com/ellen/ ''ಈಜಿ, ಬ್ರೀಜಿ, ಬ್ಯೂಟಿಫುಲ್ ಎಲ್ಲೆನ್: ಇಟ್ಸ್ ಅಫಿಷಿಯಲ್! '' ] {{Webarchive|url=https://web.archive.org/web/20080918220642/http://www.covergirl.com/ellen/ |date=2008-09-18 }}[http://www.covergirl.com/ellen/ ''ಎಲ್ಲೆನ್ ಡಿಜೆನೆರೆಸ್ ಇಸ್ ನೌ ಎ ಕವರ್ ಗರ್ಲ್!'' ] {{Webarchive|url=https://web.archive.org/web/20080918220642/http://www.covergirl.com/ellen/ |date=2008-09-18 }} ಕವರ್ ಗರ್ಲ್ ವೆಬ್ ಸೈಟ್, ಅಸೆಸ್ಸಡ್ 16 ಸೆಪ್ಟೆಂಬರ್ 2008.</ref>
==== ''ಅಮೆರಿಕನ್ ಐಡಲ್'' ====
ಸೆಪ್ಟೆಂಬರ್ 9 2009ರಲ್ಲಿ ''[[ಅಮೇರಿಕನ್ ಐಡಲ್]]'' ನ [[ನೈನ್ಥ್ ಸೀಸನ್]] ಗೆ ತೀರ್ಪುಗಾರಳಾಗಿ [[ಪೌಲಾ ಅಬ್ದುಲ್]] ಗೆ ಬದಲಾಗಿ ಡಿಜೆನೆರೆಸ್ ಅನ್ನು ಆಯ್ಕೆ ಮಾಡಿರುವುದಾಗಿ ಖಾತ್ರಿಯಾಯಿತು. ಡಿಜೆನೆರೆಸಳ ಪಾತ್ರ ಪ್ರಾರಂಭವಾಗುವುದು ಭಾಗವಹಿಸುವ ಸ್ಪರ್ಧಿಗಳ ದರ್ಶನ ಪರೀಕ್ಷೆ ಮುಗಿದ ನಂತರವೇ.<ref>{{Cite web |url=http://www.americanidol.com/news/view/pid/1841 |title=ಎಲ್ಲೆನ್ ಡಿಜೆನೆರೆಸ್ ಜಾಯ್ನ್ಸ್ ಅಮೇರಿಕನ್ ಐಡಲ್ ಆಸ್ ಫೋರ್ಥ್ ಜಡ್ಜ್ |access-date=2010-06-03 |archive-date=2010-03-09 |archive-url=https://web.archive.org/web/20100309084752/http://www.americanidol.com/news/view/pid/1841/ |url-status=dead }}</ref><ref name="Cheno">{{Cite web |url=http://tvwatch.people.com/2009/08/27/american-idols-next-guest-judge-revealed/ |title=ಅಮೇರಿಕನ್ ಐಡಲ್ಸ್ ನೆಕ್ಸ್ಟ್ ಗೆಸ್ಟ್ ಜಡ್ಜ್ ರಿವೀಳ್ಡ್ |access-date=2010-06-03 |archive-date=2009-10-31 |archive-url=https://web.archive.org/web/20091031202357/http://tvwatch.people.com/2009/08/27/american-idols-next-guest-judge-revealed/ |url-status=dead }}</ref> ಡಿಜೆನೆರೆಸಳು ಐದು ಕಾಲಾವಧಿಗಾಗಿ ತೀರ್ಪುಗಾರಳಾಗುವ ಒಪ್ಪಂದಕ್ಕೆ ಸಹಿ ಹಾಕಿದಳು.<ref>[http://latimesblogs.latimes.com/showtracker/2009/09/american-idol-ellen-degeneres-steps-in-as-new-judge-replacing-paula-abdul.html 'ಅಮೇರಿಕನ್ ಐಡಲ್': ಎಲ್ಲೆನ್ ಡಿಜೆನೆರೆಸ್ ಟು ರೀಪ್ಲೇಸ್ ಪೌಲಾ ಅಬ್ದುಲ್ ಆಸ್ ಜಡ್ಜ್]</ref> ಫೆಬ್ರವರಿ 9, 2010ರಂದು ಅಮೇರಿಕನ್ ಐಡಲ್ನ ಮೊದಲ ಶೋ ಪ್ರಾರಂಭವಾಯಿತು.
== ವೈಯಕ್ತಿಕ ಬದುಕು ==
ಡಿಜೆನೆರೆಸ್ (1997–2000) ಮಾಜಿ ''[[ಮತ್ತೊಂದು ವಿಶ್ವದ]]'' ಅಭಿನೇತ್ರಿ [[ಆನ್ನಿ ಹೆಚೆ]] ಜೊತೆ ಸಂಬಂದ್ಧವಿತ್ತು ಆನಂತರ ಆನ್ನಿ ಹೆಚೆ ಕ್ಯಾಮರಾಮನ್ ಕೋಲೀಯ್ ಲ್ಯಾಫೂನ್ ಜೊತೆ ಮದುವೆಯಾದಳು.<ref>{{cite news |url=http://archives.cnn.com/2001/SHOWBIZ/News/09/04/anne.heche/index.html |title=Heche: My father sexually abused me |work=CNN Entertainment |date=September 5, 2001 |access-date=ಜೂನ್ 3, 2010 |archive-date=ಏಪ್ರಿಲ್ 3, 2013 |archive-url=https://web.archive.org/web/20130403193723/http://archives.cnn.com/2001/SHOWBIZ/News/09/04/anne.heche/index.html |url-status=dead }}</ref> 2001 ರಿಂದ 2004ರವರೆಗೂ, ಡಿಜೆನೆರೆಸ್ ಮತ್ತು ಅಭಿನೇತ್ರಿ/ನಿರ್ದೇಶಕಳು/ಛಾಯಾಚಿತ್ರಕಾರಳು ಆದ [[ಅಲೆಕ್ಸಾಂಡ್ರ ಹೆಡಿಸನ್]] ಜೊತೆ ಸಂಬಂದ್ಧವಿತ್ತು. ಅವರಿಬ್ಬರು ಬೇರೆಯಾಗುವುದಾಗಿ ಮಾಧ್ಯಮಕ್ಕೆ ಘೋಷಿಸಿದ ಮೇಲೆ ಅವರ ಫೋಟೋ ''[[ದಿ ಅಡ್ವೋಕೇಟ್]]'' ನ ಮುಖಪುಟದಲ್ಲಿ ಕಾಣಿಸಿಕೊಂಡಿತು.<ref>{{cite news | last = Lo | first = Malinda | title = Ellen and Alex Break Up | work = [[AfterEllen.com]] | date = 2004-12-14 | url = http://www.afterellen.com/archive/ellen/People/122004/ellenbreakup.html | accessdate = 2008-06-15 | archiveurl = https://archive.is/20120526011808/http://www.afterellen.com/archive/ellen/People/122004/ellenbreakup.html | archivedate = 2012-05-26 | url-status = live }}</ref>
2004ರಿಂದೀಚೆ, ಡಿಜೆನೆರೆಸ್ ಮಾಜಿ ''[[ಅಲ್ಲೀ ಮ್ಯಾಕ್ಬೀಯಲ್]]'' ಮತ್ತು ''[[ಅರೆಸ್ಟೆಡ್ ಡೆವಲಪ್ಮೆಂಟ್]]'' ನ ತಾರೆ [[ಪೋರ್ಟಿಯಾ ಡಿ ರೋಸ್ಸಿ]] ಜೊತೆ ಸಂಬಂದ್ಧವಿತ್ತು. ಏಕಲಿಂಗದ ಮದುವೆಯನ್ನು ಕ್ಯಾಲಿಫೋರ್ನಿಯಾ [[ನಿಷೇಧ]] ಮಾಡಿ [[ರದ್ದುಗೊಳಿಸಿ]]ದ ಮೇಲೆ, ಮೇ 2008ರಲ್ಲಿ ಡಿಜೆನೆರೆಸ್ ತನ್ನ ಮತ್ತು ಡಿ ರೋಸ್ಸಿಯು ನಿಶ್ಚಿತಾರ್ಥವಾಗಿರುವುದಾಗಿ ಘೋಶಿಸಿದಳು,<ref>{{cite news | author=Alonso Duralde | title=Ellen and Portia to Tie the Knot | url=http://www.advocate.com/news_detail_ektid54487.asp | work=The Advocate | date=2008-05-17 | accessdate=2008-05-19}}</ref><ref>{{cite video | people=Ellen DeGeneres | title=DeGeneres, de Rossi Engaged | url=http://www.tv.yahoo.com/the-ellen-degeneres-show/show/35584/videos/7848875 | medium=Video | format=.SWF | location=Los Angeles | publisher=''The Ellen DeGeneres Show'' | time=00:00:00 to 00:01:15 (inclusive) | date=2008-05-19 | accessdate=2008-05-19 | archive-date=2008-05-18 | archive-url=https://web.archive.org/web/20080518204431/http://tv.yahoo.com/the-ellen-degeneres-show/show/35584/videos/7848875 | url-status=dead }}</ref> ಹಾಗೂ ಡಿ ರೋಸ್ಸಿಗೆ ಮೂರು ಕ್ಯಾರೆಟಿನ ನಸುಗೆಂಪಿನ [[ಡೈಮಂಡ್]] ಉಂಗುರವನ್ನು ಉಡುಗೊರೆಯಾಗಿ ಕೊಟ್ಟಳು.<ref name="Television presenter Ellen DeGener"/> ಅವರಿಬ್ಬರ ತಾಯಂದಿರೊಳಗೊಂಡಂತೆ ಹತ್ತೊಂಬತ್ತು ಜನರ ಸಮುಖದಲ್ಲಿ ಆಗಸ್ಟ್ 16, 2008ರಂದು ತಮ್ಮ ಮನೆಯಲ್ಲಿ ಮದುವೆಯಾದರು.<ref name="Television presenter Ellen DeGener">[http://www.telegraph.co.uk/news/newstopics/celebritynews/2580530/Television-presenter-Ellen-DeGeneres-marries-lesbian-lover-Portia-de-Rossi.html ''ಟೆಲಿವಿಷನ್ ಪ್ರೆಸೆಂಟರ್ ಎಲ್ಲೆನ್ ಡಿಜೆನೆರೆಸ್ ಮ್ಯಾರೀಸ್ ಲೆಸ್ಬೀಯನ್ ಲವರ್ ಪೋರ್ಟಿಯಾ ಡಿ ರೊಸ್ಸಿ: TV ಪ್ರೆಸೆಂಟರ್ ಎಲ್ಲೆನ್ ಡಿಜೆನೆರೆಸ್ ಹ್ಯಾಸ್ ಟೈಡ್ ಕ್ನಾಟ್ ವಿಥ್ ಲೆಸ್ಬೀಯನ್ ಲವರ್ ಪೋರ್ಟಿಯಾ ಡೀ ರೊಸ್ಸಿ'' ] {{Webarchive|url=https://web.archive.org/web/20100626123638/http://www.telegraph.co.uk/news/newstopics/celebritynews/2580530/Television-presenter-Ellen-DeGeneres-marries-lesbian-lover-Portia-de-Rossi.html |date=2010-06-26 }} ಬೈ ಅನಿತಾ ಸಿಂಗ್, 18 ಆಗಸ್ಟ್ 2008. UK ಟೆಲಿಗ್ರಾಫ್</ref>
[[ಪ್ರೊಪೊಸಿಷನ್ 8]]ರ ಅನ್ವಯ ಅವರ ಮದುವೆಗೆ ಕಾನೂನು ಸಮ್ಮತಿ ಸಿಗುವುದು ಅನುಮಾನವಾಗಿತ್ತು ಆದರೆ ಸುಪ್ರೀಂ ಕೋರ್ಟ್, ಮದುವೆ ನವೆಂಬರ್ 4, 2008ರೊಳಗೆ ನಡೆದಿರುವುದರಿಂದ ಅದನ್ನು ಊರ್ಜಿತಗೊಳಿಸಿತು.<ref name="ca-sos-results">{{cite web
| title = Election Night Results - CA Secretary of State
| publisher = California Secretary of State
| date = November 5, 2008
| url = http://vote.sos.ca.gov/props/index.html
| accessdate = 2008-11-05
| archive-date = 2018-07-14
| archive-url = https://web.archive.org/web/20180714050725/https://vote.sos.ca.gov/props/index.html
| url-status = dead
}}</ref><ref>{{cite news |url=https://news.yahoo.com/s/ap/20081013/ap_on_re_us/gay_marriage_wedding_rush/print |title=Gay couples rush to wed ahead of Calif. election |publisher=Associated Press |date=2008-10-13 |accessdate=2008-11-01 |author=Lisa Leff |archive-date=2020-03-09 |archive-url=https://web.archive.org/web/20200309183615/https://news.yahoo.com/s/ap/20081013/ap_on_re_us/gay_marriage_wedding_rush/print |url-status=dead }}</ref>
ಅವರಿಬ್ಬರು [[ಬೆವೆರ್ಲಿ ಹಿಲ್ಸ್]] ನಲ್ಲಿ ಮೂರು ನಾಯಿ ಹಾಗು ನಾಲ್ಕು ಬೆಕ್ಕುಗಳ ಜೊತೆ ವಾಸಿಸುತ್ತಾರೆ ಮತ್ತು ಅವರಿಬ್ಬರೂ [[ಸಸ್ಯಾಹಾರಿ]]ಗಳು.<ref>{{cite news |title=Ellen’s Big Gay Wedding |first=Ramin |last=Setoodeh |work=Newsweek |date=September 6, 2008 |url=http://www.newsweek.com/id/157556}}</ref>
ಡಿಜೆನೆರೆಸಳ ತಾಯಿ [[ಬೆಟ್ಟಿ ಡಿಜೆನೆರೆಸ್]] ತನ್ನ ಪುಸ್ತಕ ''ಲವ್,ಎಲ್ಲೆನ್'' ನಲ್ಲಿ ವಿವರಿಸುವಂತೆ ಅವಳಿಗೆ ತನ್ನ ಮಗಳು ಸಲಿಂಗಕಾಮಿ ಎಂದು ಗೊತ್ತಾದೊಡನೆ ದಿಗ್ಭ್ರಮೆಯಾಯಿತಂತೆ, ಆದರೆ ಆನಂತರ ಅವಳೇ ಎಲ್ಲೆನಳ ಬಲವಾದ ಬೆಂಬಲಿಗಳಾದಳಂತೆ, ಮತ್ತು ಸಲಿಂಗಕಾಮಿಗಳ ತಂದೆ-ತಾಯಿಯರ ಸಂಘಕ್ಕೆ ಹಾಗೂ ಗೇಯ್ಸ್ ([[PFLAG]])ಗೆ ಸಕ್ರಿಯ ಸದಸ್ಯಳಾದಳಂತೆ, ಮತ್ತೆ [[ಮಾನವ ಹಕ್ಕುಗಳ ಅಭಿಯಾನ]]ದ [[ಕಮಿಂಗ್ ಔಟ್]] ಪ್ರಾಜೆಕ್ಟ್ಗೆ ವಕ್ತಾರಳೂ ಆದಳಂತೆ.
2007ರಲ್ಲಿ, ''[[ಫೋರ್ಬ್ಸ್]]'' ಡಿಜೆನೆರೆಸಳ ಒಟ್ಟು ಆಸ್ತಿ [[US$]]65 ದಶಲಕ್ಷವೆಂದು ಅಂದಾಜಿಸಿದೆ.<ref>{{cite news | author=Lea Goldman and Kiri Blakeley | title=20 Richest Women in Entertainment | url=http://www.forbes.com/2007/01/17/richest-women-entertainment-tech-media-cz_lg_richwomen07_0118womenstars_lander.html | work=Forbes | date=2007-01-18 | accessdate=2008-05-19}}</ref>
== ಚಲನಚಿತ್ರಗಳ ಪಟ್ಟಿ ==
{| class="wikitable sortable " style="font-size:95%"
|- align="center"
! style="background:#B0C4DE"| ವರ್ಷ
! style="background:#B0C4DE"| ಚಲನಚಿತ್ರ
! style="background:#B0C4DE"| ಪಾತ್ರ
! style="background:#B0C4DE"| ಟಿಪ್ಪಣಿಗಳು
|-
| 1990
| ''ಆರ್ಡಸ್ ಮೂನ್''
| ಸ್ವಂತ ಪಾತ್ರ
| [[ಕಿರುಚಿತ್ರ]]
|-
| 1991
| ''ವೈಸ್ಕ್ರಾಕ್ಸ್''
| ಸ್ವಂತ ಪಾತ್ರ
| [[ಸಾಕ್ಷ್ಯಚಿತ್ರ]]
|-
| 1993
| ''[[ಕೋನ್ಹೆಡ್ಸ್]]''
| ಕೋಚ್
|-
| 1994
| ''ಟ್ರೆವರ್''
| ಸ್ವಂತ ಪಾತ್ರ
| ಕಿರುಚಿತ್ರ
|-
| rowspan="2"|1996
| ''ಎಲ್ಲೆನಳ ಎನರ್ಜಿ ಅಡ್ವೆಂಚ್ಯೂರ್''
| ಸ್ವಂತ ಪಾತ್ರ
| ಕಿರುಚಿತ್ರ
|-
| ''[[ಮಿ. ವ್ರಾಂಗ್]]''
| ಮಾಥಾ ಆಲ್ಸ್ಟನ್
|-
| rowspan="2"|1998
| ''[[ಗುಡ್ಬೈ ಲವರ್]]''
| Sgt. ರೀಟಾ ಪೊಂಪಾನೋ
|-
| ''[[ಡಾ. ಡೋಲಿಟ್ಟಲ್]]''
| ಪ್ರೊಲಾಗ್ ಡಾಗ್
| [[ಧ್ವನಿ]]
|-
| rowspan="2"|1999
| ''[[EDtv]]''
| ಸಿಂಥಿಯಾ
|-
| ''[[ದಿ ಲವ್ಲೆಟ್ಟರ್]]''
| ಜ್ಯಾನೆಟ್ ಹಾಲ್
|-
| rowspan="2"|2003
| ''[[ಪಾಲಿ ಶೋರ್ ಇಸ್ ಡೆಡ್]]''
| ಸ್ವಂತ ಪಾತ್ರ
|-
| ''[[ಫೈಂಡಿಂಗ್ ನೆಮೋ]]''
| ಡೋರಿ
| ಧ್ವನಿ
|-
| 2004
| ''ಮೈ ಶಾರ್ಟ್ ಫಿಲಂ''
| ಸ್ವಂತ ಪಾತ್ರ
| ಕಿರುಚಿತ್ರ
|}
=== ದೂರದರ್ಶನ ===
{| class="wikitable sortable " style="font-size:95%"
|- align="center"
! style="background:#B0C4DE"| ವರ್ಷ
! style="background:#B0C4DE"| ಚಲನಚಿತ್ರ
! style="background:#B0C4DE"| ಪಾತ್ರ
! style="background:#B0C4DE"| ಟಿಪ್ಪಣಿಗಳು
|-
| 1988
| ''ವುಮೆನ್ ಆಫ್ ದಿ ನೈಟ್''
| ಸ್ವಂತ ಪಾತ್ರ
| [[ಕಾಮಿಡಿ ಸ್ಪೆಷಲ್]]
|-
| 1989
| ''[[ಓಪೆನ್ ಹೌಸ್]]''
| ಮಾರ್ಗೋ ವ್ಯಾಣ್ ಮೀಟ್
| ಧಾರಾವಾಹಿ: "ದಿ ಬ್ಯಾಡ್ ಸೀಡ್" <br /> ಧಾರಾವಾಹಿ"ಲೆಟ್ಸ್ ಗೆಟ್ ಫಿಸಿಕಲ್ಸ್"
|-
| 1992
| ''[[ಲಾರೀ ಹಿಲ್]]''
| ನ್ಯಾನ್ಸಿ ಮ್ಯಾಕ್ಇನ್ಟೈರ್
| ಧಾರಾವಾಹಿ: "ಪೈಲಟ್" <br /> ಧಾರಾವಾಹಿ: "ದಿ ಹಾರ್ಟ್ ಥಿಂಗ್" <br /> ಧಾರಾವಾಹಿ: "ವಾಲ್ಟರ್ ಆಂಡ್ ಬಿವೆರ್ಲಿ"
|-
| 1994–1998
| ''[[ಎಲ್ಲೆನ್]]''
| [[ಎಲ್ಲೆನ್ ಮಾರ್ಗನ್]]
| [[109 ಧಾರಾವಾಹಿಗಳು]]
|-
| 1995
| ''[[ರೊಸೇನ್ನೆ]]''
| ಡಾ. ವೈಟ್ಮ್ಯಾನ್ ಧಾರಾವಾಹಿ: "[[ದಿ ಬ್ಲೇಮಿಂಗ್ ಆಫ್ ದಿ ಶ್ರೂ]]"
|-
| 1998
| ''[[ಮ್ಯಾಡ್ ಅಬೌಟ್ ಯೂ]]''
| ನ್ಯಾನ್ಸಿ ಬ್ಲೂಮ್
| ಧಾರಾವಾಹಿ: "[[ದಿ ಫಿನಾಲೆ]]"
|-
| 2000
| ''[[ಇಫ್ ದೀಸ್ ವಾಲ್ಸ್ ಕುಡ್ ಟಾಕ್ 2]]''
| ಕಲ್
| [[ಸೆಗ್ಮಂಟ್]]: "2000"''''
|-
| 2001
| ''[[ಆನ್ ದಿ ಎಡ್ಜ್]]''
| ಆಪರೇಟರ್
| ಸೆಗ್ಮಂಟ್: "ರೀಚಿಂಗ್ ನಾರ್ಮಲ್"
|-
| 2001–2002
| ''[[ದಿ ಎಲ್ಲೆನ್ ಶೋ]]''
| ಎಲ್ಲೆನ್ ರಿಚ್ಮಂಡ್
| [[18 ಧಾರಾವಾಹಿಗಳು]]
|-
| rowspan="2"|2003
| ''[[Ellen DeGeneres: Here and Now]]''
| ಸ್ವಂತ ಪಾತ್ರ
| ಕಾಮಿಡಿ ಸ್ಪೆಷಲ್
|-
| ''[[MADtv]]''
| ಸ್ವಂತ ಪಾತ್ರ
| ಧಾರಾವಾಹಿ: "[[9.3]]"
|-
| 2003–ಇಲ್ಲಿಯವರೆಗೆ
| ''[[ದಿ ಎಲ್ಲೆನ್ ಡಿಜೆನೆರೆಸ್ ಶೋ]]''
| ಸ್ವಂತ ಪಾತ್ರ
| TV ಕಾರ್ಯಕ್ರಮಗಳು
|-
| rowspan="2"|2004
| ''[[ಇ!]] '' ''[[ಟ್ರೂ ಹಾಲಿವುಡ್ ಸ್ಟೋರಿ]]''
| ಸ್ವಂತ ಪಾತ್ರ
|-
| ''[[ಸಿಕ್ಸ್ ಫೀಟ್ ಅಂಡರ್]]''
| ಸ್ವಂತ ಪಾತ್ರ
| ಧಾರಾವಾಹಿ: "[[ಪ್ಯಾರಾಲೆಲ್ ಪ್ಲೇ]]"
|-
| rowspan="4"|2007
| ''[[ಎಲ್ಲೆನ್ಸ್ ರೀಯಲಿ ಬಿಗ್ ಶೋ]]''
| ಸ್ವಂತ ಪಾತ್ರ
|-
| ''[[ಸೆಸೇಮ್ ಸ್ಟ್ರೀಟ್]]''
| ಸ್ವಂತ ಪಾತ್ರ
| ಧಾರಾವಾಹಿ: "ದಿ ಟುಟು ಸ್ಪೆಲ್" ''(ಅನ್ಕ್ರೆಡಿಟೆಡ್)''
|-
| ''ಫೋರ್ಬ್ಸ್ 20 ರಿಚೆಸ್ಟ್ ವುಮೆನ್ ಇನ್ಎಂಟರ್ಟೈನ್ ಮೆಂಟ್''
| ಸ್ವಂತ ಪಾತ್ರ
|-
| ''[[ದಿ ಬ್ಯಾಚಿಲ್ಲೋರೆಟ್]]''
| ಸ್ವಂತ ಪಾತ್ರ
|-
| 2007–2008
| ''[[ಅಮೆರಿಕನ್ ಐಡಲ್]]''
| ಸ್ವಂತ ಪಾತ್ರ
| ಧಾರಾವಾಹಿ: "[[ಐಡಲ್ ಗಿವ್ಸ್ ಬ್ಯಾಕ್ 2007]]" <br /> "[[ಐಡಲ್ ಗಿವ್ಸ್ ಬ್ಯಾಕ್ 2008]]
|-
| 2008
| ''ಎಲ್ಲೆನ್ಸ್ ಈವನ್ ಬಿಗ್ಗರ್ ರೀಯಲಿ ಬಿಗ್ ಶೋ''
| ಸ್ವಂತ ಪಾತ್ರ
| ಕಾಮಿಡಿ ಸ್ಪೆಷಲ್
|-
| rowspan="2"|2009
| ''ಎಲ್ಲೆನ್ಸ್ ಬಿಗರ್ ಲಾಂಗರ್ & ವೈಡರ್ ಶೋ''
| ಸ್ವಂತ ಪಾತ್ರ
| ಕಾಮಿಡಿ ಸ್ಪೆಷಲ್
|-
| ''[[ಸೋ ಯೂ ಥಿಂಕ್ ಯೂ ಕ್ಯಾನ್ ಡ್ಯಾನ್ಸ್]]''
| ಗೆಸ್ಟ್ ಜಡ್ಜ್
| ''[[ವಾರ 7; ಜುಲೈ 22, 2009]]''
|-
| 2006–ಇಲ್ಲಿಯವರೆಗೆ
| ''[[ಅಮೆರಿಕನ್ ಐಡಲ್]]''
| ತೀರ್ಪುಗಾರ್ತಿ
| ಸ್ಟಾರ್ಟಿಂಗ್ ವಿಥ್ ರೀಸನ್ 9.
|-
| 2010
| ''[[ದಿ ಸಿಮ್ಸನ್ಸ್]]''
| ಸ್ವಂತ ಪಾತ್ರ
| ಧಾರಾವಾಹಿ: "ಜಡ್ಜ್ ಮಿ ಟೆಂಡರ್"
|}
=== ಧ್ವನಿಮುದ್ರಿಕೆ ಪಟ್ಟಿ ===
{| class="wikitable sortable " style="font-size:95%"
|- align="center"
! style="background:#B0C4DE"| ವರ್ಷ
! style="background:#B0C4DE"| ಚಲನಚಿತ್ರ
! style="background:#B0C4DE"| ಪಾತ್ರ
! style="background:#B0C4DE"| ಟಿಪ್ಪಣಿಗಳು
|-
| 1996
| [[Ellen Degeneres: Taste This]]
| [[ಸ್ಟಾಂಡ್ ಅಪ್ ಕಾಮಿಡಿ]]
| [[ಲೈವ್ CD]]
|-
|}
== ಪ್ರಶಸ್ತಿಗಳು ==
;[[ಡೆ ಟೈಮ್ ಎಮ್ಮೀ ಅವಾರ್ಡ್ಸ್]]
* ಔಟ್ಸ್ಟಾಂಡಿಂಗ್ ಟಾಕ್ ಶೋ, ''[[ದಿ ಎಲ್ಲೆನ್ ಡಿಜೆನೆರೆಸ್ ಶೋ]]'' – 2004, 2005, 2006, 2007
* ಔಟ್ಸ್ಟಾಂಡಿಂಗ್ ಟಾಕ್ ಶೋ ಹೋಸ್ಟ್, ''ದಿ ಎಲ್ಲೆನ್ ಡಿಜೆನೆರೆಸ್ ಶೋ'' – 2005, 2006, 2007, 2008
* ಔಟ್ಸ್ಟಾಂಡಿಂಗ್ ಸ್ಪೆಷಲ್ ಕ್ಲಾಸ್ ರೈಟಿಂಗ್, ''ದಿ ಎಲ್ಲೆನ್ ಡಿಜೆನೆರೆಸ್ ಶೋ'' – 2005, 2006, 2007
;[[ಎಮ್ಮೀ ಅವಾರ್ಡ್ಸ್]]
* ಔಟ್ಸ್ಟಾಂಡಿಂಗ್ ರೈಟಿಂಗ್ ಇನ್ ಎ ಕಾಮಿಡಿ ಸೀರೀಸ್, [[ಎಲ್ಲೆನ್: "ದಿ ಪಪ್ಪಿ ಎಪಿಸೋಡ್"|''ಎಲ್ಲೆನ್:'' "ದಿ ಪಪ್ಪಿ ಎಪಿಸೋಡ್"]] – 1997
;ಪೀಪಲ್ಸ್ ಚಾಯ್ಸ್ ಪ್ರಶಸ್ತಿಗಳು
* ಫೇವರೈಟ್ ಫನ್ನಿ ಫೀಮೇಲ್ ಸ್ಟಾರ್ – 2005, 2006, 2007, 2008
* ಫೇವರೈಟ್ ಟಾಕ್ ಶೋ ಹೋಸ್ಟ್ – 2005, 2006, 2007, 2008, 2009, 2010
* ಫೇವರೈಟ್ ಯೆಸ್ ಐ ಚೂಸ್ ಥಿಸ್ ಸ್ಟಾರ್ – 2008
;ಕಿಡ್ಸ್ ಚಾಯ್ಸ್ ಪ್ರಶಸ್ತಿಗಳು
* ಫೇವರೈಟ್ ವಾಯ್ಸ್ ಫ್ರಮ್ ಆಣ್ ಅನಿಮೇಟೆಡ್ ಮೂವೀ - 2004
== ಗ್ರಂಥಸೂಚಿ ==
* {{cite book | last=DeGeneres | first=Ellen | title=My Point...And I Do Have One | location=New York | publisher=Bantam Books | year=1995 | isbn=0553099558}}
* {{cite book | last=DeGeneres | first=Ellen | title=The Funny Thing Is... | location=New York | publisher=Simon & Schuster | year=2003 | isbn=0743247612}}
== ಆಕರಗಳು ==
{{Reflist|2}}
== ಬಾಹ್ಯ ಕೊಂಡಿಗಳು ==
{{wikiquote}}
{{Wikinewspar2|Portia de Rossi talks about Ellen DeGeneres, sexuality|Award show producers try Emmy Idol}}
{{commonscat|Ellen DeGeneres}}
*[http://ellen.warnerbros.com/ ದಿ ಎಲ್ಲೆನ್ಸ್ ಡಿಜೆನೆರೆಸ್ ಶೋಸ್ ಅಫೀಷಿಯಲ್ ವೆಬ್ಸೈಟ್] {{Webarchive|url=https://web.archive.org/web/20120906000047/http://ellen.warnerbros.com/ |date=2012-09-06 }}
*[http://telepicturesblog.warnerbros.com/ellenshow/ ಎಲ್ಲೆನ್ ಡಿಜೆನೆರೆಸ್ ಬ್ಲಾಗ್]
*{{imdb|0001122}}
*{{people.com}}
*{{tv.com person|20796}}
*[http://www.Ellen-DeGeneres.com ಎಲ್ಲೆನ್ ಡಿಜೆನೆರೆಸ್ ಕಮ್ಯೂನಿಟಿ ಫೋರಂ] {{Webarchive|url=https://web.archive.org/web/20080201143329/http://www.ellen-degeneres.com/ |date=2008-02-01 }}
*[http://www.pub.umich.edu/daily/1999/apr/04-09-99/news/news5.html ದಿಜೆನೆರೆಸ್ ಟಾಕ್ಸ್ ಅಬೌಟ್ ಕಮಿಂಗ್ ಔಟ್ ಎಕ್ಸ್ಪೀರೀಯನ್ಸ್ ] {{Webarchive|url=https://web.archive.org/web/20000201140416/http://www.pub.umich.edu/daily/1999/apr/04-09-99/news/news5.html |date=2000-02-01 }},[[ಯುನಿವರ್ಸಿಟಿ ಆಫ್ ಮಿಚಿಗನ್]]ನಲ್ಲಿ ಕಾಣಿಸಿಕೊಂಡ ಡಿಜೆನೆರೆಸ್ ಬಗ್ಗೆ ಏಪ್ರಿಲ್ 1999ರಲ್ಲಿ ಪ್ರಕಟವಾದ ಲೇಖನ.
*[http://a1135.g.akamai.net/f/1135/18227/1h/cchannel.download.akamai.com/18227/podcast/PHOENIX-AZ/KZZP-FM/ELLEN_DEGENERES_ON_JOHNJAY_AND_RICH.mp3?CPROG=PCAST&MARKET=PHOENIX-AZ&NG_FORMAT=chrrhythmic&SITE_ID=1096&STATION_ID=KZZP-FM&PCAST_AUTHOR=Johnjay_and_Rich&PCAST_CAT=Arts_%26_Entertainment&PCAST_TITLE=Johnjay_and_Rich_at_Their_Best ಡಿಜೆನೆರೆಸ್ ಆಣ್ ದಿ ಜಾನ್ಜೇ ಆಂಡ್ ರಿಚ್ ರೇಡಿಯೋ ಶೋ ಹೆಲ್ಪಿಂಗ್ ಎ ಮದರ್ ಇನ್ ನೀಡ್ ಟು ವಿನ್ ಎ ಕಾರ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
{{sequence|
prev=[[Garry Shandling]] <br /> [[56th Primetime Emmy Awards|56th Awards]]|
next=[[Conan O'Brien]] <br /> [[58th Primetime Emmy Awards|58th Awards]]|
list=[[Primetime Emmy Award|Primetime Emmys]] host<br />[[57th Primetime Emmy Awards|57th Awards]]
}}
{{American Idol}}
{{Oscars hosts 2001-2020}}
{{EmmyAward ComedyWriting 1976-2000}}
{{Persondata
|NAME= DeGeneres, Ellen
|ALTERNATIVE NAMES= DeGeneres, Ellen Lee
|SHORT DESCRIPTION=American stand-up comedian, television host and actress
|DATE OF BIRTH= January 26, 1958
|PLACE OF BIRTH= [[Metairie, Louisiana]]
|DATE OF DEATH=
|PLACE OF DEATH=
}}
{{DEFAULTSORT:Degeneres, Ellen}}
{{Interwikineeded}}
[[ವರ್ಗ:೧೯೫೮ ಜನನ]]
[[ವರ್ಗ:ಈಗಿರುವ ಜನರು]]
[[ವರ್ಗ:ಲ್ಯೂಸಿಯಾನಾದ ನಟರು]]
[[ವರ್ಗ:ಅಮೆರಿಕಾದ ಚಲನಚಿತ್ರ ನಟರು]]
[[ವರ್ಗ:ಅಮೆರಿಕಾದ ಜನೋಪಕಾರಿಗಳು]]
[[ವರ್ಗ:ಅಮೆರಿಕಾದ ನಿಂತಾಡುವ ಹಾಸ್ಯನಟರು]]
[[ವರ್ಗ:ಅಮೆರಿಕಾದ ದೂರದರ್ಶನ ನಟರು]]
[[ವರ್ಗ:ಅಮೇರಿಕನ್ ಟೆಲಿವಿಷನ್ ಟಾಕ್ ಶೋ ಹೋಸ್ಟ್ಸ್]]
[[ವರ್ಗ:ಅಮೆರಿಕಾದ ಸಸ್ಯಹಾರಿಗಳು]]
[[ವರ್ಗ:ಡೇಟೈಮ್ ಎಮ್ಮೀ ಅವಾರ್ಡ್ ವಿನ್ನರ್ಸ್]]
[[ವರ್ಗ:ಎಮಿ ಪ್ರಶಸ್ತಿ ವಿಜೇತರು]]
[[ವರ್ಗ:ಸಲಿಂಗಕಾಮಿ ನಟರು]]
[[ವರ್ಗ:LGBT ಕಾಮೇಡಿಯನ್ಸ್]]
[[ವರ್ಗ:LGBT ಜನರು ಯುನೈಟೆಡ್ ಸ್ಟೇಟ್ಸ್ನಿಂದ]]
[[ವರ್ಗ:LGBT ದೂರದರ್ಶನ ಪ್ರಸಿದ್ಧ ವ್ಯಕ್ತಿಗಳು]]
[[ವರ್ಗ:ಲೂಯಿಸಿಯಾನಾದ ನ್ಯೂ ಆರ್ಲಿಯನ್ಸ್ನ ಜನರು]]
[[ವರ್ಗ:ಸಾಟರ್ನ್ ಪ್ರಶಸ್ತಿ ವಿಜೇತರು]]
[[ವರ್ಗ:ಯುನಿವರ್ಸಿಟಿ ಆಫ್ ನ್ಯೂ ಆರ್ಲೀಯನ್ಸ್ ಅಲ್ಯೂಮ್ನಿ]]
[[ವರ್ಗ:ವುಮೆನ್ ಕಾಮಿಡೀಯನ್ಸ್]]
[[ವರ್ಗ:LGBT ರೈಟ್ಸ್ ಆಕ್ಟಿವಿಸ್ಟ್ಸ್ ಫ್ರಮ್ ದಿ ಯುನೈಟೆಡ್ ಸ್ಟೇಟ್ಸ್]]
[[ವರ್ಗ:ರೀಯಾಲಿಟಿ ಟೆಲಿವಿಷನ್ ಜಡ್ಜಸ್]]
[[ವರ್ಗ:ಹಾಲಿವುಡ್ ಚಲನಚಿತ್ರ ಕಲಾವಿದರು]]
0c1o7utluqn88zfgu09nx0a7q6dmdqy
ಅಳ್ವಾರ್
0
24547
1378130
1335907
2026-08-02T12:36:24Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378130
wikitext
text/x-wiki
{{Infobox Indian Jurisdiction
|native_name=Alwar
|image_map=WikiprojectIndiacities_alwar.jpg
|latd = 27.34
|longd=76.38
|state_name=Rajasthan
|district= [[Alwar District|Alwar]]
|leader_title=
|leader_name=
|altitude=
|population_as_of = 2005
|population_total =
|population_density =
|area_magnitude=
|area_total=
|area_telephone= +0144
|postal_code= 3010 01
|vehicle_code_range= RJ-02
|footnotes =
}}
'''ಅಳ್ವಾರ್''' ({{lang-raj|अलवर शहर}}), [[ಭಾರತ|ಭಾರತದ]] [[ರಾಜಸ್ಥಾನ]] ರಾಜ್ಯದಲ್ಲಿರುವ ಅಳ್ವಾರ್ ಜಿಲ್ಲೆಯ ನಗರ ಪ್ರದೇಶ ಮತ್ತು ಆಡಳಿತಾತ್ಮಕ ಪ್ರಧಾನ ಕೇಂದ್ರಸ್ಥಾನವಾಗಿದೆ. ಇದು ನ್ಯಾಶನಲ್ ಕ್ಯಾಪಿಟಲ್ ರೀಜನ್ (ರಾಷ್ಟ್ರೀಯ ಅಗ್ರಗಣ್ಯ ರಾಜಧಾನಿ ಪ್ರದೇಶ) (NCR) ನ ಭಾಗವಾಗಿದೆ. ಇದು [[ದೆಹಲಿ|ದೆಹಲಿಯ]] ದಕ್ಷಿಣಕ್ಕೆ 160 ಕಿ.ಮೀ. ವರೆಗೂ ಮತ್ತು [[ರಾಜಸ್ಥಾನ]]ದ [[ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು|ರಾಜಧಾನಿ]]ಯಾದ ಜೈಪುರದ ಉತ್ತರಕ್ಕೆ 150 ಕಿ.ಮೀ. ನವರೆಗೂ ಹಬ್ಬಿದೆ.
ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತದಲ್ಲಿನ ಅಳ್ವಾರ್ ಹಿಂದೆ '''ಅಳ್ವಾರ್''' ಅಥವಾ '''ಉಳ್ವಾರ್''' ಎಂಬ ಸ್ಥಳೀಯ ರಾಜ್ಯದ ರಾಜಧಾನಿಯಾಗಿತ್ತು. ಭಾರತದಲ್ಲಿ ಎಂದಿಗೂ ದಾಖಲಿಸಲ್ಪಡದ 50.6 °C (123.1 °F) ನಷ್ಟು ಅತ್ಯಂತ ಗರಿಷ್ಠ ತಾಪಮಾನ ಅಳ್ವಾರ್ ನಲ್ಲಿ 1956 ರ ಮೇ 10 ರಂದು ದಾಖಲಾಗಿದೆ.<ref name="IMD">[http://www.igu.in/9-3/3usde.pdf ಎಕ್ಸ್ ಟ್ರೀಮ್ ವೆದರ್ ಇವೆಂಟ್ಸ್ ] {{Webarchive|url=https://web.archive.org/web/20160304231319/http://www.igu.in/9-3/3usde.pdf |date=2016-03-04 }} ಇಂಡಿಯಾ ಮೆಟ್ರಲಾಜಿಕಲ್ ಡಿಪಾರ್ಟ್ ಮೆಂಟ್</ref>
==ಇತಿಹಾಸ==
"ಅಳ್ವಾರ್" ಅನ್ನು ಹಿಂದೆ "ಉಳ್ವಾರ್" ಎಂದು ಕರೆಯಲಾಗುತ್ತಿತ್ತು. ಈ ಹೆಸರಿನಿಂದಾಗಿ ಇದು ವರ್ಣಾನುಕ್ರಮದ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಆದ್ದರಿಂದ ಇದನ್ನು ಮೊದಲಿನ ಸ್ಥಾನಕ್ಕೆ ತರಲು ರಾಜ "ಅಳ್ವಾರ್" ಎಂದು ಮರುನಾಮಕರಣ ಮಾಡಿದ. 11 A.D.ಯ ವರೆಗೆ ಈ ಪ್ರದೇಶವನ್ನು ಪ್ರಬಲಶಾಲಿ ಬರ್ ಗುಜಾರ್ ಕುಲದ ಮುಖ್ಯಸ್ಥ ಆಳಿದನು.<ref>ಭಾರತದ ಇಂಪಿರಿಯಲ್ ಗ್ಯಾಸಿಟಿಯರ್ ನ ಪ್ರಕಾರ v.23, p.419</ref> ಮುಸಲ್ಮಾನರ ಆಳ್ವಿಕೆಯ ಸಂದರ್ಭದಲ್ಲಿ ಮುಸ್ಲಿಂ ಚಕ್ರವರ್ತಿಗಳಲ್ಲಿ ಒಬ್ಬ, ಅಳ್ವಾರ್ ನ ಬರ್ ಗುಜಾರ್ ರಾಜನಾಗಿದ್ದ, ಈಶ್ವರ್ ದಾಸ್ ನ ಪುತ್ರಿಯನ್ನು ಮದುವೆಯಾಗಲು ಬಯಸಿದ. ಅವನ ಆಜ್ಞೆಯನ್ನು ಪಾಲಿಸಲು ನಿರಾಕರಿಸಿದ್ದಕ್ಕಾಗಿ ಕೈಗೆ ಸಿಕ್ಕ ಬರ್ ಗುಜಾರ್ ಠಾಕೂರರನ್ನು ಹತ್ಯೆ ಮಾಡಲಾಯಿತು. ಆದರೆ ಕೆಲವರು ತಪ್ಪಿಸಿಕೊಂಡರು, ಅವರುಗಳಲ್ಲಿ ಮುಖ್ಯನಾದವನು ರಾಜಾ ದಾಲ್ಕು ರಾಂ. ಈತ ವಂಶದ ಮುಖ್ಯಸ್ಥನಾಗಿದ್ದು, ಪಲಾಯನ ಮಾಡಿ; ನಂತರ ರಜಪೂತರ ಸಿಕಾರ್ವಾರ್ ಎಂಬ ಪಂಗಡವನ್ನು ಹುಟ್ಟುಹಾಕಿದನು.
[[File:Alwar.JPG|left|thumb|250px|ಅಳ್ವಾರ್ ಅದರ ಕಣ್ಣಿಗೆ ಕಟ್ಟುವಂತಹ ನೈಸರ್ಗಿಕ ದೃಶ್ಯಗಳಿಂದಾಗಿ ಜನಪ್ರಿಯವಾಗಿದೆ.]]
ಹೇಮುವನ್ನು ಸಾಮ್ರಾಟ ಹೇಮಚಂದ್ರ ವಿಕ್ರಮಾದಿತ್ಯ ಎಂಬ ಹೆಸರಿನಿಂದಲೂ ಕೂಡ ಕರೆಯಲಾಗುತ್ತಿತ್ತು. ಈತ ಭಾರತದ ಹಿಂದೂ ಚಕ್ರವರ್ತಿಯಾಗಿದ್ದು, ಈ ಜಿಲ್ಲೆಯ 'ಮಚೆರಿ ದೆವತ್' ಎಂಬ ಹಳ್ಳಿಯಲ್ಲಿ 1501 ರಲ್ಲಿ ಜನಿಸಿದನು. ಅವನ ತಂದೆಯಾದ ರಾಯ್ ಪುರಾಣ್ ದಾಸ್ ಬ್ರಾಹ್ಮಣ ಪುರೋಹಿತರಾಗಿದ್ದರು. ಇಸ್ಲಾಂಧರ್ಮಕ್ಕೆ ಮತಾಂತರಗೊಳ್ಳಬೇಕೆಂಬ ಅಕ್ಬರನ ಒತ್ತಾಯವನ್ನು ನಿರಾಕರಿಸಿದ್ದಕ್ಕಾಗಿ ಮೆಚರಿ ಊರಿನಲ್ಲೇ 1556 ರಲ್ಲಿ ಶಿರಚ್ಛೇದನ ಮಾಡಿ ಅವರನ್ನು ಕೊಲ್ಲಲಾಯಿತು. ಆಗ ಅವರು 85 ವರ್ಷದವರಾಗಿದ್ದರು. ಹೇಮು 1553-56 ರ ಸಂದರ್ಭದಲ್ಲಿ ಆಫ್ಘಾನ್ ನ ಬಂಡಾಯಗಾರರ ವಿರುದ್ಧ ನಡೆದ 22 ಯುದ್ಧದಲ್ಲಿ ಜಯಗಳಿಸಿದನು. [[ಪಂಜಾಬ್]] ನಿಂದ ಬೆಂಗಾಲ್ ನ ವರೆಗೆ ತನ್ನ ಸಾಮ್ರಾಜ್ಯವನ್ನು ಹರಡುವ ಮೂಲಕ ಇಡೀ ಉತ್ತರ ಭಾರತವನ್ನು ಆಕ್ರಮಿಸಿಕೊಂಡನು. ಅಲ್ಲದೇ [[ಆಗ್ರಾ]] ಮತ್ತು [[ದೆಹಲಿ]] ಯಲ್ಲಿ ಅಕ್ಬರನ ಸೈನ್ಯವನ್ನು ಸೋಲಿಸುವ ಮೂಲಕ 1556 ರ ಅಕ್ಟೋಬರ್ 7 ರಂದು [[ದೆಹಲಿ]]ಯ ಸಿಂಹಾಸನವನ್ನೇರಿದನು. ಹೇಮುವಿನ ರಾಜ್ಯಾಭಿಷೇಕವನ್ನು (ಪಟ್ಟಾಭಿಷೇಕವನ್ನು) ದೆಹಲಿಯ ಪುರಾನಾ ಕಿಲಾ ಹಳೆಯ ಕೋಟೆಯಲ್ಲಿ ನೆರವೇರಿಸಲಾಯಿತು. ಹೇಮು ವಿಕ್ರಮಾದಿತ್ಯ, ಇಸ್ಲಾಂ ಧರ್ಮದ ದಾಳಿಕೋರರು ಮತ್ತು ರಾಜರುಗಳನ್ನು ಒಳಗೊಂಡಂತೆ 350 ವರ್ಷಗಳವರೆಗೆ ವಿದೇಶಿಯರ ಆಳ್ವಿಕೆಯ ನಂತರ ಉತ್ತರ ಭಾರತದಲ್ಲಿ 'ಹಿಂದೂ ರಾಜ್' ಅನ್ನು ಸ್ಥಾಪಿಸಿದನು. ಇವನು ಎರಡನೇ ಪಾಣಿಪತ್ ಯುದ್ಧದಲ್ಲಿ ಮೊಗಲರ ವಿರುದ್ಧ ಹೋರಾಡುತ್ತ ಪ್ರಾಣ ಬಿಟ್ಟನು.
ಪ್ರತಾಪ್ ಸಿಂಗ್ ಎಂಬ ರಾಜ ಅಳ್ವಾರ್ ನ ಮಹರಾಜರ ಆಳ್ವಿಕೆಗೆ ಒಳಪಟ್ಟ ರಾಜ್ಯವನ್ನು ಸ್ಥಾಪಿಸಿದನು. ಇವನು 18 ನೇ ಶತಮಾನದ ಉತ್ತರಾರ್ಧದಲ್ಲಿದ್ದ ಕಚವಾ ವಂಶಕ್ಕೆ ಸೇರಿದ ರಜಪೂತನಾಗಿದ್ದಾನೆ. ಈತನ ದತ್ತು ಪುತ್ರ ಭಕ್ತಾವರ್ ಸಿಂಗ್ ಮರಾಠಿಗರ ವಿರುದ್ಧದ ಕಾರ್ಯಾಚರಣೆಯಲ್ಲಿ ಬ್ರಿಟಿಷರಿಗೆ ಸಹಾಯಮಾಡಿದ. ಆಳ್ವಾರ್, ಲಾಸ್ವಾರಿ(1803) ಯುದ್ಧದ ನಂತರ, ಬ್ರಿಟಿಷ ಈಸ್ಟ್ ಇಂಡಿಯಾ ಕಂಪೆನಿ ಯ ಜೊತೆಯಲ್ಲಿ 'ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಒಪ್ಪಂದಕ್ಕೆ' ಸಹಿಹಾಕಿದ, ರಾಜಪೂತ ರಾಜ್ಯಗಳಲ್ಲಿ ಮೊದಲನೇಯ ರಾಜ್ಯವಾಗಿದೆ<ref>{{Cite web |url=http://alwar.nic.in/hist.htm |title=ಆರ್ಕೈವ್ ನಕಲು |access-date=2010-09-03 |archive-date=2012-02-05 |archive-url=https://web.archive.org/web/20120205191449/http://alwar.nic.in/hist.htm |url-status=dead }}</ref>. ಕೆಲವು ವರ್ಷಗಳ ನಂತರ, ಭಕ್ತಾವರ್ ಸಿಂಗ್ ಪಕ್ಕದ ಜೈಪುರ ರಾಜ್ಯದ ಮೇಲೆ ಯುದ್ಧಸನ್ನದ್ಧನಾಗಿ ಅನಿರೀಕ್ಷಿತ ದಾಳಿ ನಡೆಸುವ ಸಾಹಸ ಮಾಡಿದನು. ಇದು ಕಚವಾ ವಂಶದ ಹಿರಿಯ ರಾಜ್ಯವಾಗಿದ್ದು, ಅವನ ಪೂರ್ವಿಕರ ಹಿಂದಿನ ಅಧಿಪತಿಯಾಗಿತ್ತು. ಭಕ್ತಾವರ್ ಸಿಂಗ್ ನನ್ನು ಸೋಲಿಸಲಾಯಿತು; HEIC ಅವನ ಜೊತೆಯಲ್ಲಿ ಹೊಸ ಒಪ್ಪಂದವನ್ನು ಮಾಡಿಕೊಂಡಿತು. ಈ ಒಪ್ಪಂದದ ಪ್ರಕಾರ ಅವನು ಬ್ರಿಟಿಷರ ಅನುಮತಿ ಇಲ್ಲದೆಯೇ ಇತರ ರಾಜ್ಯಗಳ ರಾಜಕೀಯದಲ್ಲಿ ಮಧ್ಯಪ್ರವೇಶಿಸುವುದನ್ನು ನಿಷೇಧಿಸಲಾಯಿತು. 1857 ರ ಸಿಪಾಯಿ ದಂಗೆಯ ಸಂದರ್ಭದಲ್ಲಿ ರಾವ್ ರಾಜಾ ಬಾನೇ ಸಿಂಗ್, [[ಆಗ್ರಾ]] ದಲ್ಲಿ ಬ್ರಿಟಿಷರ ರಕ್ಷಣೆಗಾಗಿ ಮುಸ್ಲಿಂರು ಮತ್ತು ರಜಪೂತರನ್ನು ಒಳಗೊಂಡಿರುವ ಸೈನ್ಯವನ್ನು ಕಳುಹಿಸಿಕೊಟ್ಟನು. ಮುಸ್ಲಿಮರು ಓಡಿಹೋದರು; ಇನ್ನುಳಿದವರು ಬಂಡಾಯಗಾರರಿಂದ ಸೋಲನ್ನು ಅನುಭವಿಸಿದರು. ರೆವಾರಿಯ ರಾವ್ ತುಲಾ ರಾಮ್ ಜೊತೆಯಲ್ಲಿ 1857 ರಲ್ಲಿ ಹೋರಾಡಿದ ಪ್ರಾಣ್ ಸುಕ್ ಯಾದವ್, ಸತ್ತ ಸೈನಿಕರ ಸಂಬಂಧಿಕರೊಡನೆ ಅಳ್ವಾರ್ ಜಿಲ್ಲೆಯ ನಿಹಾಲ್ ಪುರ,ಬೆಹರೂರ್ ತೆಹಸಿಲ್ ನಲ್ಲಿ ನೆಲೆಯೂರಿದನು. ಬಾನ್ಸುರ್ ತೆಹಸಿಲ್ ನ ಕಿಶೋರ್ ಪುರ ಹಳ್ಳಿಯನ್ನು ಗುರ್ಜರ್ ಸಮುದಾಯದ ಭಾತಿ ವಂಶದವರು ಆಳುತ್ತಿದ್ದರು.
ಇಸವಿ 1947 ರಲ್ಲಿ ಭಾರತ ಸ್ವಾಂತತ್ರ್ಯ ಪಡೆದ ನಂತರ ಅಳ್ವಾರ್ ಭಾರತ ಸರ್ಕಾರದ ಆಳ್ವಿಕೆಗೆ ಒಳಪಟ್ಟಿತು. 1948 ರ ಮಾರ್ಚ್ 18 ರಂದು ಮತ್ಸ್ಯ ಒಕ್ಕೂಟದ ಮೂಲಕ ಈ ರಾಜ್ಯವನ್ನು ರಾಜರ ಆಳ್ವಿಕೆಗೆ ಒಳಪಟ್ಟಿದ ಪಕ್ಕದ ಮೂರು ರಾಜ್ಯ(ಭಾರತ್ ಪುರ, ದೋಲ್ ಪುರಕರೌಲಿ)ಗಳೊಡನೆ ಸೇರಿಸಲಾಯಿತು. ಈ ಒಕ್ಕೂಟವನ್ನು ಮುಂದೆ ಭಾರತದ ಒಕ್ಕೂಟದಲ್ಲಿ ಸೇರಿಸಲಾಯಿತು. 1949 ರ ಮೇ 15 ರಂದು, ಪ್ರಸ್ತುತದಲ್ಲಿರುವ [[ರಾಜಸ್ಥಾನ]] ಎಂಬ ಭಾರತದ ರಾಜ್ಯದ ಮೂಲಕ ಇದನ್ನು ಇತರ ಕೆಲವೊಂದು ರಾಜರ ಆಳ್ವಿಕೆಗೆ ಒಳಪಟ್ಟ ರಾಜ್ಯಗಳೊಡನೆ ಹಾಗು ಅಜ್ಮೀರ್ ನ ಪ್ರದೇಶಗಳೊಡನೆ ಸೇರಿಸಲಾಯಿತು.
ಸ್ವತಂತ್ರ ಬಂದ ನಂತರ ಅಳ್ವಾರ್ ನ ಹಳ್ಳಿಗಳಿಗೆ ಶಿಕ್ಷಣ ಸೌಲಭ್ಯ ತರುವ ಕಾರ್ಯದಲ್ಲಿ ಜೈ ದಯಾಲ್ ಯಾದವ್ ಮತ್ತು ಮತ್ಸ್ಯ ಒಕ್ಕೂಟದ ಪ್ರಧಾನ ಮಂತ್ರಿಯಾಗಿದ್ದ ಶೋಭ ರಾಮ್ ಕುಮಾವತ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ರಾಕೇಶ್ ಖಂಡೆಲ್ ವಾಲ್ ಸ್ಟಾರ್ ಅಗ್ರಿವೇರ್ ಹೌಸಿಂಗ್ ಅಂಡ್ ಕಲ್ಯಾಟರಲ್ ಮ್ಯಾನೆಜ್ ಮೆಂಟ್ Ltd. ನ ಕಾರ್ಯಾಚರಣೆಯ ನಿರ್ವಾಹಕರಾಗಿದ್ದರು.
[[File:Neemrana Fortress, Alwar district.jpg|thumb|right|250px|ನೀಮ್ರಾನ]]
===ಅಳ್ವಾರ್ ರಾಜ್ಯದ ಅರಸರು===
* ಪ್ರತಾಪ್ ಸಿಂಗ್ ಪ್ರಭಾಕರ್ ಬಹದ್ದೂರ್ (1775–1791) ಅಳ್ವಾರ್ ನ ರಾವ್ ರಾಜ
* ಭಕ್ತಾವರ್ ಸಿಂಗ್ ಪ್ರಭಾಕರ್ ಬಹದ್ದೂರ್ (1791–1815) ಅಳ್ವಾರ್ ನ ರಾವ್ ರಾಜ
* ಬಾನೇ ಸಿಂಗ್ ಪ್ರಭಾಕರ್ ಬಹದ್ದೂರ್ (1815–1857) ಅಳ್ವಾರ್ ನ ಮಹಾರಾವ್ ರಾಜ
* ಶಿಯೋದನ್ ಸಿಂಗ್ ಪ್ರಭಾಕರ್ ಬಹದ್ದೂರ್ (1857–1874) ಅಳ್ವಾರ್ ನ ಮಹಾರಾವ್ ರಾಜಾ
* ಮಂಗಳ್ ಸಿಂಗ್ ಪ್ರಭಾಕರ್ ಬಹದ್ದೂರ್ (1874–1892) ಅಳ್ವಾರ್ ನ ಮಹರಾಜ
* ಜೈ ಸಿಂಗ್ ಪ್ರಭಾಕರ್ ಬಹದ್ದೂರ್ (1892–1937) ಅಳ್ವಾರ್ ನ ಮಹರಾಜ
* ತೇಜ್ ಸಿಂಗ್ ಪ್ರಭಾಕರ್ ಬಹದ್ದೂರ್ (1937–1971) ಅಳ್ವಾರ್ ನ ಮಹರಾಜ (1971–2009 ರಿಂದ ನಾಮಕಾವಾಸ್ತೆಯ ಮಹರಾಜ)
* ಜಿತೇಂದ್ರ ಪ್ರತಾಪ್ ಸಿಂಗ್ ಪ್ರಭಾಕರ್ ಬಹದ್ದೂರ್, ಅಳ್ವಾರ್ ನ ಮಹರಾಜ (2009-ರಿಂದ ನಾಮಕಾವಾಸ್ತೆಯ ಮಹರಾಜ)
==ಭೌಗೋಳಿಕ ಕ್ಷೇತ್ರ/ಭೂಗೋಳ==
ಅಳ್ವಾರ್ {{coord|27.57|N|76.6|E|}} ನಲ್ಲಿದೆ.<ref>{{Cite web |url=http://www.fallingrain.com/world/IN/24/Alwar.html |title=ಫಾಲಿಂಗ್ ರೇನ್ ಜಿನೋಮಿಕ್ಸ್, Inc - ಅಳ್ವಾರ್ |access-date=2010-09-03 |archive-date=2012-11-02 |archive-url=https://web.archive.org/web/20121102233258/http://www.fallingrain.com/world/IN/24/Alwar.html |url-status=dead }}</ref> ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ 271 ಮೀಟರ್ ಗಳಷ್ಟು (889 ಅಡಿ) ಎತ್ತರದಲ್ಲಿದೆ.
==ಜನಸಂಖ್ಯೆಯ ಅಂಕಿ-ಅಂಶದ ವಿವರ==
{{As of|2001}} ಭಾರತದ ಅಂಕಿಅಂಶ,<ref>{{GR|India}}</ref> ದ ಪ್ರಕಾರ ಅಳ್ವಾರ್ 160,245 ನಷ್ಟು ಜನಸಂಖ್ಯೆಯನ್ನು ಹೊಂದಿದೆ. ಈ ಜನಸಂಖ್ಯೆಯಲ್ಲಿ ಪುರುಷರು 52% ಮತ್ತು ಮಹಿಳೆಯರು 48% ನಷ್ಟಿದ್ದಾರೆ. ಅಳ್ವಾರ್ ಸರಾಸರಿ 73% ದಷ್ಟು ಸಾಕ್ಷರತಾ ಪ್ರಮಾಣ ಹೊಂದಿದೆ. ಇದು ರಾಷ್ಟ್ರೀಯ ಸಾಕ್ಷರತಾ ಪ್ರಮಾಣ 59.5% ಗಿಂತ ಹೆಚ್ಚಿದೆ; ಪುರುಷರು 59% ಮತ್ತು ಮಹಿಳೆಯರು 41% ನಷ್ಟಿದ್ದಾರೆ. ಜನಸಂಖ್ಯೆಯಲ್ಲಿ 13% ದಷ್ಟು 6 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.
== ಜನಾಂಗೀಯತೆ ==
ಅಳ್ವಾರ್ ರ ನಿವಾಸಿಗಳು ಅನೇಕ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರಲ್ಲಿ ಬಹುಪಾಲು ನಿವಾಸಿಗಳು ಯಾದವ ಸಮುದಾಯಕ್ಕೆ ಸೇರಿದ್ದು, ಉಳಿದವರು ಮಿಯೋ, ಗುಜ್ಜರ್, ಬ್ರಾಹ್ಮಣ, ಸೈನಿ ಮತ್ತು ದಲಿತ್ ಎಂಬ ಸಮುದಾಯಕ್ಕೆ ಸೇರಿದ್ದಾರೆ.
==ಸ್ಥಳೀಯ ಆಕರ್ಷಣೆಗಳು ==
[[File:Rail station outside, Alwar.jpg|thumb|right|150px|ಅಳ್ವಾರ್ ರೈಲ್ವೆ ನಿಲ್ದಾಣದ ಹೊರಗೆ]]
[[File:Alwar rail station.jpg|thumb|right|150px|ಅಳ್ವಾರ್ ಜಂಕ್ಷನ್]]
ಅಳ್ವಾರ್ ಅನೇಕ ಆಸಕ್ತಿದಾಯಕ ಮತ್ತು ಐತಿಹಾಸಿಕ ಸ್ಮಾರಕಗಳನ್ನು ಒಳಗೊಂಡಿದೆ. ನಗರವು ಸುಂದರವಾದ ಸರೋವರವನ್ನು ಮತ್ತು ಕಣ್ಣಿಗೆ ಕಟ್ಟಿದಂತಿರುವ ಆಕರ್ಷಕವಾದ ಕಣಿವೆಯನ್ನು ಹೊಂದಿದೆ. (ಸಾರಿಸ್ಕ ಮೀಸಲು ಸಂರಕ್ಷಿತ ಹುಲಿಧಾಮ)ಸಾರಿಸ್ಕ ಟೈಗರ್ ರಿಸರ್ವ್ ರಾಷ್ಟ್ರೀಯ ಪಾರ್ಕ್, (ಉದ್ಯಾನ) ಅಳ್ವಾರ್ ನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಅರಾವಳಿ ಬೆಟ್ಟಗಳಲ್ಲಿವೆ. ಪ್ರಾಜೆಕ್ಟ್ ಟೈಗರ್ (ಸಂರಕ್ಷಿತ)ರಿಸರ್ವ್ ಅಭಯಾರಣ್ಯ, ವಿರಳವಾದ ಪಕ್ಷಿ ಮತ್ತು ಸಸ್ಯಗಳನ್ನು ಒಳಗೊಂಡಂತೆ ಇತರ ಜೀವಿ ಸಂಕುಲಕ್ಕೂ ಆಶ್ರಯ ನೀಡಿದೆ. ಸೈನಿಕರ ಶಾಶ್ವತ ಬೀಡಾದ ಇಟರಾನ ಪ್ರದೇಶವು ಅಳ್ವಾರ್ ನ ಹೊರವಲಯದಲ್ಲಿ.
===ಮಂತ್ರಮುಗ್ಧಗೊಳಿಸುವ ರಾಣಿ ===
ಈ ಹೆಸರಿನಿಂದ ಕಾರ್ಯನಿರ್ವಹಿಸುತ್ತಿರುವ ಪ್ರಪಂಚದಲ್ಲೇ ಅತ್ಯಂತ ಪ್ರಾಚೀನ ಉಗಿ ಎಂಜಿನ್ ಇದಾಗಿದೆ. ಈ ಉಗಿ ಎಂಜಿನ್ ಅನ್ನು 1855 ರಲ್ಲಿ ನಿರ್ಮಿಸಲಾಯಿತು. ಅಲ್ಲದೇ ಬ್ರಿಟಿಷರ ಪಾಲುದಾರಿಕೆಯಲ್ಲಿ ಭಾರತೀಯ ಪೂರ್ವ ರೈಲ್ವೆ ಇದನ್ನು ವಶಪಡಿಸಿಕೊಂಡಿತು. ಈಗ ಈ ರೈಲು ದೆಹಲಿಯಿಂದ ಹೊರಟು ರಾಜಸ್ಥಾನದಲ್ಲಿ ಅಳ್ವಾರ್ ಅನ್ನು ತಲುಪುವ ಅತ್ಯತ್ತಮ ಸಾರಿಗೆ ವ್ಯವಸ್ಥೆಯಾಗಿದೆ.
== ವೀಕ್ಷಣಾ ಸ್ಥಳಗಳು ==
[[File:Sariska Palace.jpg|thumb|right|200px|ಸಾರಿಸ್ಕ ಹುಲಿಗಳ ಅಭಯರಣ್ಯದಲ್ಲಿ ಸಾರಿಸ್ಕ ಅರಮನೆಯ ಚಿತ್ರ<ref>[11]</ref> ]]
[[File:Siliserh Lake Alwar Rajasthan India 2009 Sep.JPG|thumb|right|200px|ಸಿಲಿಸರ್ ಸರೋವರವು, ಅರಾವಳಿ ಬೆಟ್ಟಗಳಿಂದ ಸುತ್ತುವರೆಯಲ್ಪಟ್ಟಿರುವ ಅದ್ಭುತವಾದ ಪ್ರವಾಸಿ ಸ್ಥಳವಾಗಿದೆ.]]
*ಅಳ್ವಾರ್ ಕೋಟೆ (ಬಾಲಾ ಕಿಲಾ)
*ಸಾರಿಸ್ಕಾ ಹುಲಿಗಳ ಅಭಯಾರಣ್ಯ
*ಹಲ್ದಿಯ ಭವನ್ - ಸುಮಾರು 250 ವರ್ಷಗಳಷ್ಟು ಹಳೆಯ ಹವೇಲಿ
*ಸಿಲಿಸರ್ ಸರೋವರ
*ಜೈಸಮಂದ ಸರೋವರ
*ಪಾಂಡುಪಾಲ್ ಹನುಮಾನ್ ದೇವಾಲಯ
*ನಗರ ಸ್ಥಳ
*ಸರ್ಕಾರಿ ವಸ್ತು ಸಂಗ್ರಹಾಲಯ
*ಮೂಸಿ ಮಹಾರಾಣಿ ಛತ್ರಿ (ಚಾಮರ)
*ಪುರ್ಜನ್ ವಿಹಾರ್
*ಫತೇ ಜಂಗ್ ನ ಗೋರಿ
*ನೆಹರು ಉದ್ಯಾನವನ
*ಹೋಪ್ ಸರ್ಕಸ್
*ಮೋತಿ ದೋಂಗ್ರಿ ಪಾರ್ಕ್
*ಭರ್ಥಾರಿ
*ನಲ್ದೇಶ್ವರ್
*ನೀಲಕಂಠ
*ನಾರಾಯಣಿ ಮಾತಾ
*ಕರಣಿ ಮಾತಾ
*ಅದಾ ಪಾದ
*ಅಂಧೇರಿ
*ತಾಳವೃಕ್ಷ
*ಸಾಗರ್
*ಅಜಬ್ ಗಢ್
*ಭಂಗಢ್
*ಮಾನಸ ದೇವಿ ಮಂದಿರ
*ಗರ್ವಾಜಿ
*ಲಾಲ್ ದಿಗ್ಗಿ
*ಕೃಷ್ಣ-ಕುಂದ
*ಸಾರಿಸ್ಕಾ ಅರಮನೆ
* ಸೂರ್ಯ ನಗರ
==ಪ್ರವಾಸಿ ಸ್ಥಳಗಳು ==
*ವಿಜಯ ಮಂದಿರ ಅರಮನೆ (10 ಕಿ.ಮೀ.)
*ಜೈಸಮಂದ ಸರೋವರ (6 ಕಿ.ಮೀ.)
*ಸಿಲಿಸರ್ ಸರೋವರ ಮತ್ತು ಅರಮನೆ (13 ಕಿ.ಮೀ.)
*ವಿರಾಟನಗರ್ (66 ಕಿ.ಮೀ.)
*ಸಾರಿಸ್ಕ (42 ಕಿ.ಮೀ.)
* ಸಾರಿಸ್ಕ ಅರಮನೆ [http://www.thesariskapalace.in ] {{Webarchive|url=https://web.archive.org/web/20100911054806/http://www.thesariskapalace.in/ |date=2010-09-11 }} (21 ಕಿ.ಮೀ.)
*ಹೋಪ್ ಸರ್ಕಸ್ (ಹಳೆ ನಗರದ ಮಧ್ಯ ಅರಮನೆ)
*ಪಾಂಡು ಪೌಲ್ (70 ಕಿ.ಮೀ.)
*ಅಜಬ್ ಗಢ್ ಮತ್ತು ಭಂಗಢ್ (80 ಕಿ.ಮೀ.)
*ಪ್ರತಾಪಗಢ್ (55 ಕಿ.ಮೀ.)
*ಮಾನಸ ಮಾತಾ ದೇವಾಲಯ ಹಮೀರ್ ಪುರ (ಬನ್ಸುರ್) (35 ಕಿ.ಮೀ.)
*ಗೇಟರ್(ಅಲಿಗೇಟರ್) ಹೋಲ್ [http://sariskasafari.com/sariska-tiger-reserve.html ] {{Webarchive|url=https://web.archive.org/web/20100621092528/http://sariskasafari.com/sariska-tiger-reserve.html |date=2010-06-21 }} (13 ಕಿ.ಮೀ.)
* ಗಾರ್ ಹಿ ಮಾಮುರ್ (ಮಾಮುದ್ ಧಮ್, ಮಾಂಡವ್ ರಿಷೀಸ್ ತಪೋಶತ್ಲಿ, ಕರ್ಮ ಬೈಸ್ ಕರ್ಮಶತಲಿ (ಮಾಮುದ್ ಧಮ್ ಮಹತ್ಯಮ್ Pt. ಪ್ರಭು ಧಯಾಳ್ ಜೋಶಿಯವರು ಬರೆದಿದ್ದಾರೆ))
==ಉಲ್ಲೇಖಗಳು==
{{reflist}}
==ಬಾಹ್ಯ ಕೊಂಡಿಗಳು==
{{commonscat}}
* {{official|http://www.alwar.nic.in}}
* [http://www.4dw.net/royalark/India/alwar.htm ಬ್ರೀಫ್ ಹಿಸ್ಟ್ರಿ ಆಫ್ ಪ್ರಿನ್ಸ್ಲಿ ಆಳ್ವಾರ್ ]
* [http://alwar.nic.in/hist.htm ಹಿಸ್ಟ್ರಿ ಆಫ್ ಡಿಸ್ಟ್ರಿಕ್ಟ್ ಅಳ್ವಾರ್] {{Webarchive|url=https://web.archive.org/web/20120205191449/http://alwar.nic.in/hist.htm |date=2012-02-05 }}
* [http://www.ChiefaCoins.com/Database/Countries/Alwar.htm ಬ್ರೀಫ್ ಹಿಸ್ಟ್ರಿ ಅಂಡ್ ಕಾಯಿನ್ಸ್ ಆಫ್ ಪ್ರಿನ್ಸ್ಲಿ ಸ್ಟೇಟ್ ] {{Webarchive|url=https://web.archive.org/web/20101022002027/http://www.chiefacoins.com/Database/Countries/Alwar.htm |date=2010-10-22 }}
* [http://www.bharatonline.com/rajasthan/cities/alwar/index.html ಅಳ್ವಾರ್ ಇನ್ ಫಾರ್ಮೇಷನ್]
* [https://archive.org/details/gazetteerofulwur00powliala ಗ್ಯಾಸಿಟಿಯರ್ ಆಫ್ ಉಳ್ವುರ್ ]
* [http://sariskasafari.com/about-alwar-and-sariska-national-park.html ಅಳ್ವಾರ್ ಅಂಡ್ ಸಾರಿಸ್ಕ ನ್ಯಾಷನಲ್ ಪಾರ್ಕ್ ] {{Webarchive|url=https://web.archive.org/web/20100127110658/http://www.sariskasafari.com/about-alwar-and-sariska-national-park.html |date=2010-01-27 }}
* [http://www.flickr.com/photos/knowledge-must/sets/72157623962840454/ ಕಲೆಕ್ಷನ್ ಆಫ್ ಪೋಟೋಸ್ ಫ್ರಮ್ ಅಳ್ವಾರ್]
{{Alwar district}}
{{Interwikineeded}}
[[ವರ್ಗ:ಅಳ್ವಾರ್]]
[[ವರ್ಗ:ಅಳ್ವಾರ್ ಜಿಲ್ಲೆಯಲ್ಲಿರುವ ನಗರಗಳು ಮತ್ತು ಪಟ್ಟಣಗಳು]]
[[ವರ್ಗ:ರಾಜಸ್ಥಾನದಲ್ಲಿರುವ ರೈಲ್ವೆ ನಿಲ್ದಾಣಗಳು]]
[[ವರ್ಗ:ರಾಜಸ್ಥಾನದ ನಗರಗಳು]]
[[ವರ್ಗ:ಭಾರತದ ಪಟ್ಟಣಗಳು]]
[[fr:Âlwâr]]
rxmsxrlc4r9ns3qismucuixdkr2g9e1
ಜೂಲಿಯನ್ ಅಸ್ಸಾಂಜೆ
0
26872
1378229
1375428
2026-08-03T03:26:57Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378229
wikitext
text/x-wiki
{{Infobox person
| name = ಜೂಲಿಯನ್ ಅಸ್ಸಾಂಜ್
| image = Julian Assange (Norway, March 2010).jpg
| image_size = 230px<!--needs 230 otherwise photo is narrowed and distorted -->
| caption =೨೦೧೦ರಲ್ಲಿ ಅಸ್ಸಂಜ್
| birth_date = {{Birth date and age|1971|7|3|df=yes}}<ref>{{cite web | url = http://www.magnetictimes.com.au/article-3554.html | date = 7 August 2010 | title = Julian Assange's mother recalls Magnetic | publisher = Magnetic Times | location = Australia | access-date = 29 ಡಿಸೆಂಬರ್ 2010 | archive-date = 30 ನವೆಂಬರ್ 2010 | archive-url = https://web.archive.org/web/20101130071416/http://www.magnetictimes.com.au/article-3554.html | url-status = dead }}</ref><ref name="khatchadourian" /><ref>{{Cite document | url = http://www.interpol.int/public/data/wanted/notices/data/2010/86/2010_52486.asp | archiveurl = https://www.webcitation.org/5unSsyDzh?url=http://www.interpol.int/public/data/wanted/notices/data/2010/86/2010_52486.asp | archivedate = 7 ಡಿಸೆಂಬರ್ 2010 | title = ASSANGE, Julian Paul | date = 30 November 2010 | publisher = Interpol | postscript =. | access-date = 29 ಡಿಸೆಂಬರ್ 2010 | url-status = live }}</ref>
| birth_place = [[Townsville, Queensland]], Australia
| alma_mater = [[ಮೆಲ್ಬೋರ್ನ್ ವಿಶ್ವವಿದ್ಯಾಲಯ]]
| occupation = [[ವಿಕಿಲೀಕ್ಸ್]]ನ ಮುಖ್ಯ ಸಂಪಾದಕ
| awards = [[Index on Censorship#Freedom of Expression Awards|Economist Freedom of Expression Award]] (2008)<br />[[Amnesty International UK Media Awards|Amnesty International UK Media Award]] (2009)<br />[[Sam Adams Award]] (2010)
| death_date = <!-- {{Death date and age|df=yes|YYYY|MM|DD|YYYY|MM|DD}} (death date then birth date) -->
| death_place =
| nationality = ಆಸ್ಟ್ರೇಲಿಯನ್
| other_names =
| known_for = [[ವಿಕಿಲೀಕ್ಸ್]]
| residence =
| religion =
| spouse =
| domestic_partner =
| parents =
| children = Son
| criminal charge =
| criminal penalty =
| criminal status =
}}
'''ಜೂಲಿಯನ್ ಪಾಲ್ ಅಸ್ಸಾಂಜೆ''' ({{IPAc-en|icon|ə|ˈ|s|ɑː|n|ʒ}} {{respell|ə-<small>SAHNZH</small>}}; ಜನನ 1971 ರ ಜುಲೈ 3) ಯು ಆಸ್ಟ್ರೇಲಿಯದ ಪತ್ರಕರ್ತ,<ref name="tcij" /><ref name="amnestyint">{{cite web | url = http://amnesty.org.uk/news_details.asp?NewsID=18227 | title = Amnesty announces Media Awards 2009 winners | publisher = [[Amnesty International]] | date = 2 June 2009 | accessdate = 3 December 2010 | archiveurl = https://archive.is/20120530055214/http://amnesty.org.uk/news_details.asp?NewsID=18227 | archivedate = 30 ಮೇ 2012 | url-status = live }}</ref><ref name="massie">{{cite web | author = Alex Massie | url = http://www.spectator.co.uk/alexmassie/6437594/yes-julian-assange-is-a-journalist.thtml | title = Yes, Julian Assange Is A Journalist | publisher = The Spectator | date = 2 November 2010 | accessdate = 3 December 2010 | archive-date = 9 ಡಿಸೆಂಬರ್ 2010 | archive-url = https://web.archive.org/web/20101209084558/http://www.spectator.co.uk/alexmassie/6437594/yes-julian-assange-is-a-journalist.thtml | url-status = dead }}</ref> ಪ್ರಕಾಶಕ,<ref name="Forbes" /><ref name="harrell" /> ಮತ್ತು ಅಂತರಜಾಲ ಕ್ರಾಂತಿಕಾರಿಯಾಗಿದ್ದಾರೆ. ಇವರು ಸುದ್ದಿ ಸೋರಿಕೆಗಳ ಮಾಹಿತಿ ಒದಗಿಸುವ ವೆಬ್ಸೈಟ್ ಆದ ವಿಕಿಲೀಕ್ಸ್ನ ಮುಖ್ಯ ಸಂಪಾದಕ ಮತ್ತು ವಕ್ತಾರರಾಗಿದ್ದಾರೆ. ಇವರು ತಮ್ಮ ಹರೆಯದಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಹ್ಯಾಕರ್ ಆಗಿ ಕಾರ್ಯನಿರ್ವಹಿಸಿದ್ದರು.<ref name="timesonline" /> ಇವರು ಹಲವಾರು ರಾಷ್ಟ್ರಗಳಲ್ಲಿ ನೆಲೆಸಿದರು ಮತ್ತು ಮಾಧ್ಯಮದ ಸ್ವಾತಂತ್ರ್ಯ, ಸೆನ್ಸಾರ್ ವ್ಯವಸ್ಥೆ ಮತ್ತು ತನಿಖಾ ಪತ್ರಿಕೋದ್ಯಮದ ಬಗ್ಗೆ ಮಾತನಾಡಲು ಆಗೊಮ್ಮೆ ಈಗೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಅಸ್ಸಾಂಜ್ ಅವರು 2006 ರಲ್ಲಿ ವಿಕಿಲೀಕ್ಸ್ ವೆಬ್ಸೈಟ್ ಅನ್ನು ಹುಟ್ಟುಹಾಕಿದರು ಮತ್ತು ಅದರ ಸಲಹಾ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು [[ಕೀನ್ಯಾ]]ದಲ್ಲಿನ ಕಾನೂನುರಹಿತ ಸಾವುಗಳು, ಆಫ್ರಿಕಾದಲ್ಲಿ ವಿಷಪೂರಿತ ತ್ಯಾಜ್ಯಪದಾರ್ಥಗಳ ರಾಶಿ ಹಾಕುವಿಕೆ, ವೈಜ್ಞಾನಿಕ ಧರ್ಮ ವ್ಯವಸ್ಥೆಯ ಚರ್ಚ್ ಕೈಪಿಡಿಗಳು, ಗ್ವಾಂಟನಾಮೋ ಬೇ ಕಾರ್ಯವಿಧಾನಗಳು, ಮತ್ತು ಕೌಪ್ಥಿಂಗ್ ಮತ್ತು ಜೂಲಿಯಸ್ ಬೇರ್ನಂತಹ ಬ್ಯಾಂಕ್ಗಳ ಬಗ್ಗೆ ವಿಷಯ ವಸ್ತುಗಳನ್ನು ಪ್ರಕಟಿಸಿದ್ದಾರೆ.<ref name="autogenerated1">{{cite web | url = http://www.smh.com.au/opinion/politics/leaks-pour-forth-from-the-wiki-well-of-information-20100408-ruxn.html | title = WikiLeak And Apache Attack In Iraq — Julian Assange | publisher = [[The Sydney Morning Herald]] | date = 9 April 2010 | accessdate = 3 December 2010}}</ref> 2010 ರಲ್ಲಿ, ಇವರು ಅಫಘಾನಿಸ್ತಾನ ಮತ್ತು ಇರಾಕ್ನಲ್ಲಿನ ಯುದ್ಧಗಳಲ್ಲಿ ಅಮೇರಿಕದ ಪಾಲ್ಗೊಳ್ಳುವಿಕೆಯ ಕುರಿತ ಸಮಗ್ರ ವಿವರಗಳನ್ನು ಪ್ರಕಟಿಸಿದರು. 2010 ರ ನವೆಂಬರ್ 28 ರಂದು, ವಿಕಿಲೀಕ್ಸ್ ಮತ್ತು ಅದರ ಐದು ಮಾಧ್ಯಮ ಸಹಭಾಗಿಗಳು ರಹಸ್ಯ ಯುಎಸ್ ರಾಜತಾಂತ್ರಿಕ ವರದಿಗಳನ್ನು ಪ್ರಕಟಿಸಲು ಪ್ರಾರಂಭಿಸಿತು.<ref>{{cite web | url = https://www.theguardian.com/world/blog/2010/dec/03/wikileaks-julian-assange-online | title = WikiLeaks cables: Live Q&A with Julian Assange | publisher = The Guardian | date = 3 December 2010 | accessdate = 3 December 2010}}</ref> ಅಸ್ಸಾಂಜೆ ಅವರ ರಾಜತಾಂತ್ರಿಕ ವರದಿಗಳ ಬಿಡುಗಡೆಯು "ದುಡುಕಿನ ಮತ್ತು ಅಪಾಯಕಾರಿಯಾಗಿರುವ" ಎಂಬುದಾಗಿ [[ಶ್ವೇತ ಭವನ|ವೈಟ್ ಹೌಸ್]] ಹೇಳಿತು.<ref>{{cite web | url = http://www.haaretz.com/news/international/russia-official-wikileaks-founder-should-get-nobel-prize-1.329555 | title = Russia official: WikiLeaks founder should get Nobel Prize | publisher = Haaretz | date = 8 December 2010 |archiveurl=https://web.archive.org/web/20101210162810/http://www.haaretz.com/news/international/russia-official-wikileaks-founder-should-get-nobel-prize-1.329555|archivedate=10 December 2010}}</ref>
ವಿಕಿಲೀಕ್ಸ್ನೊಂದಿಗಿನ ತಮ್ಮ ಕಾರ್ಯಕ್ಕಾಗಿ, ಅಸ್ಸಾಂಜ್ ಅವರು ಅಸಂಖ್ಯಾತ ಪ್ರಶಸ್ತಿಗಳು ಮತ್ತು ನಾಮಕರಣಗಳನ್ನು ಗಳಿಸಿದ್ದು, ಇವುಗಳಲ್ಲಿ [[ಕೀನ್ಯಾ]]ದಲ್ಲಿನ ಕಾನೂನು ರಹಿತ ಸಾವುಗಳ ಬಗ್ಗೆ ವಿಷಯವಸ್ತುವನ್ನು ಪ್ರಕಟಿಸಿದ್ದಕ್ಕಾಗಿ 2009 ರ ಆಮ್ನೆಸ್ಟಿ ಅಂತರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ ಮತ್ತು ''ಟೈಮ್'' ಪತ್ರಿಕೆಯ 2010 ರ ವರ್ಷದ ವ್ಯಕ್ತಿಗಾಗಿ ಓದುಗರ ಆಯ್ಕೆಯ ಪ್ರಶಸ್ತಿಗಳು ಸೇರಿವೆ.<ref name="RC2010POTY" />
ಅಸ್ಸಾಂಜೆ ಅವರನ್ನು ಪ್ರಸ್ತುತ ಲೈಂಗಿಕ ಆರೋಪಗಳಿಗೆ ಸಂಬಂಧಿಸಿದಂತೆ [[ಸ್ವೀಡನ್]]ನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಅವರನ್ನು 2010 ರ ಡಿಸೆಂಬರ್ 7 ರಂದು ಇಂಗ್ಲೆಂಡ್ನ [[ಲಂಡನ್]]ನಲ್ಲಿ ಬಂಧಿಸಲಾಗಿತ್ತು.<ref name="bbc1207">{{cite news | url = http://www.bbc.co.uk/news/uk-11937110 | title = Wikileaks founder Julian Assange arrested in London | publisher = BBC | date = 7 December 2010 | accessdate = 7 December 2010}}</ref> ಇವರು ಪ್ರಸ್ತುತ ಇಂಗ್ಲೆಂಡಿನಲ್ಲಿ ಜಾಮೀನನ್ನು ಪಡೆದು ಗೃಹ ಬಂಧನದಲ್ಲಿದ್ದು ಹಸ್ತಾಂತರದ ಕುರಿತ ವಿಚಾರಣೆಯು ಬಾಕಿ ಉಳಿದಿದೆ.<ref>{{cite web|url=http://www.bbc.co.uk/news/uk-12014199 |title=Wikileaks founder Julian Assange freed on bail |publisher=Bbc.co.uk |date= |accessdate=2010-12-19}}</ref><ref>{{cite web|url=http://www.bbc.co.uk/news/uk-england-12023933 |title=Julian Assange's bail host had 'no hesitation' |publisher=Bbc.co.uk |date= |accessdate=2010-12-19}}</ref> ಇವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಲ್ಲದೇ ಅವುಗಳು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ತಿಳಿಸಿದರು.<ref>{{cite web|url=http://www.abc.net.au/am/content/2010/s3095541.htm |title=Assange free on bail|publisher=Abc.net.au |date= 2010-12-17 |accessdate=2010-12-19}}</ref><ref>{{cite web|url=http://www.cbsnews.com/8301-503543_162-20026102-503543.html|title=Sex Crime Allegations Against Assange Detailed|publisher=CBS News|date=2010-12-14|accessdate=2010-12-19|archiveurl=https://web.archive.org/web/20101221073952/http://www.cbsnews.com/8301-503543_162-20026102-503543.html|archivedate=21 ಡಿಸೆಂಬರ್ 2010|url-status=dead}}</ref> ಅಸ್ಸಾಂಜೆ ಅವರ ಜಾಮೀನಿನ ವಿಚಾರಣೆಯ ಕಾರಣದಿಂದ ಇಂಗ್ಲೆಂಡ್ ಮತ್ತು ವೇಲ್ಸ್ನ ಮುಖ್ಯ ನ್ಯಾಯಾಧೀಶರು ನ್ಯಾಯಾಲಯದ ಕಲಾಪಗಳ ಸಂದರ್ಭದಲ್ಲಿ ನೇರ ವಿದ್ಯುನ್ಮಾನ ವರದಿಗಾರಿಕೆಯ ಬಳಕೆಗೆ ಅನುಮತಿಯನ್ನು ನೀಡಿ ಆದೇಶ ಹೊರಡಿಸಿದರು.<ref>{{cite news|url=http://www.bbc.co.uk/news/uk-12038088|title=Lord Chief Justice allows Twitter in court|date=2010-12-20|accessdate=2010-12-20|work=BBC News Online}}</ref>
== ಆರಂಭಿಕ ಜೀವನ ==
[[ಚಿತ್ರ:Julian Assange in 2008.jpg|thumb]]
ಅಸ್ಸಾಂಜೆ ಅವರು ಕ್ವಿನ್ಸ್ಲ್ಯಾಂಡ್ನ ಟೌನ್ಸ್ವಿಲ್ಲೆನಲ್ಲಿ ಜನ್ಮ ತಾಳಿದರು, ಮತ್ತು ತಮ್ಮ ಬಾಲ್ಯದ ಬಹುಪಾಲು ಅವಧಿಯನ್ನು ಮ್ಯಾಗ್ನೆಟಿಕ್ ಐಲ್ಯಾಂಡ್ನಲ್ಲಿ ಕಳೆದರು.<ref>{{cite web | url = http://www.couriermail.com.au/news/queensland/wikileaks-founder-julian-assange-a-born-and-bred-queenslander/story-e6freoof-1225898281283 | title = Courier Mail newspaper: Wikileaks founder Julian Assange a born and bred Queenslander | publisher = Couriermail.com.au | date = 29 July 2010 | accessdate = 4 December 2010 | archive-date = 18 ಏಪ್ರಿಲ್ 2012 | archive-url = https://web.archive.org/web/20120418180126/http://www.couriermail.com.au/news/queensland/wikileaks-founder-julian-assange-a-born-and-bred-queenslander/story-e6freoof-1225898281283 | url-status = dead }}</ref>
ಇವರು ಒಂದು ವರ್ಷ ವಯಸ್ಸಿನವರಿದ್ದಾಗ, ಇವರ ತಾಯಿಯವರಾದ ಕ್ರಿಸ್ಟಿನ್ ಅವರು ನಾಟಕ ನಿರ್ದೇಶಕ ಬ್ರೆಟ್ ಅಸ್ಸಾಂಜೆ ಅವರನ್ನು ಮದುವೆಯಾದರು ಮತ್ತು ಈ ಮೂಲಕ ಅಸ್ಸಾಂಜೆ ಎಂಬ ಹೆಸರು ಇವರಿಗೆ ತಳುಕು ಹಾಕಿಕೊಂಡಿತು.<ref name="khatchadourian" /><ref name="7news/CNN">{{cite news | title =The secret life of Julian Assange |url=http://www.cnn.com/2010/WORLD/asiapcf/12/09/assange.profile/ |publisher=CNN| date =2 December 2010 |accessdate=2 December 2010}}</ref> ಬ್ರೆಟ್ ಮತ್ತು ಕ್ರಿಸ್ಟಿನ್ ಅಸ್ಸಾಂಜೆ ಅವರು ವಿಹಾರ ನಾಟಕ ಕಂಪನಿಯನ್ನು ನಡೆಸುತ್ತಿದ್ದರು. ಇವರ ಮಲತಾಯಿಯವರು ಮತ್ತು ಜೂಲಿಯನ್ ಅವರ ಮೊದಲ "ನೈಜ ತಂದೆ"ಯವರು, ಜೂಲಿಯನ್ ಅವರನ್ನು "ಅತೀ ಚತುರ ಮಗು" ಜೊತೆಗೆ "ಸರಿ ಮತ್ತು ತಪ್ಪುಗಳ ಸೂಕ್ಷ್ಮಮತಿಯ ಜ್ಞಾನವುಳ್ಳವನೆಂದು" ವರ್ಣಿಸಿದ್ದಾರೆ. "ಅವನು ಯಾವಾಗಲು ದುರ್ಬಲ ವ್ಯಕ್ತಿಗಳ ಪರವಾಗಿ ಎದ್ದು ನಿಲ್ಲುತ್ತಿದ್ದನು.... ಇತರ ಜನರ ಮೇಲೆ ಆಕ್ರಮಣ ಮಾಡುವ ಜನರ ಬಗ್ಗೆ ಅವನು ಯಾವಾಗಲೂ ಭಾರಿ ಕೋಪಗೊಳ್ಳುತ್ತಿದ್ದನು" ಎಂದು ಸಹ ಅವರು ವರ್ಣಿಸಿದ್ದಾರೆ.<ref name="7news/CNN" />
1979 ರಲ್ಲಿ, ಅವರ ತಾಯಿಯವರು ಮರು ಮದುವೆಯಾದರು; ಅವರ ಹೊಸ ಪತಿಯು ಸಂಗೀತಕಾರರಾಗಿದ್ದು, ಆನಿ ಹ್ಯಾಮಿಲ್ಟನ್-ಬೈರ್ನ್ ಅವರ ನೇತೃತ್ವದ ನ್ಯೂ ಏಜ್ ಸಮೂಹಕ್ಕೆ ಸೇರಿದ್ದರು. ದಂಪತಿಗಳಿಗೆ ಓರ್ವ ಮಗನಿದ್ದನು, ಆದರೆ ದಂಪತಿಗಳು 1982 ರಲ್ಲಿ ಬೇರ್ಪಡೆಯಾದರು ಮತ್ತು ಅಸ್ಸಾಂಜೆಯವರ ಮಲ-ಸಹೋದರನ ಪೋಷಣೆಗಾಗಿ ಹೋರಾಟಕ್ಕಿಳಿದರು. ನಂತರ ಇವರ ತಾಯಿಯವರು ಎರಡೂ ಮಕ್ಕಳನ್ನು ಮುಂದಿನ ಐದು ವರ್ಷಗಳವರೆಗೆ ರಹಸ್ಯವಾಗಿ ಪೋಷಣೆ ಮಾಡಿದರು. ಅಸ್ಸಾಂಜೆ ಅವರು ತಮ್ಮ ಬಾಲ್ಯಾವಸ್ಥೆಯಲ್ಲಿ ಹಲವಾರು ಶಾಲೆಗಳಲ್ಲಿ ಓದಿದರು ಮತ್ತು ಕೆಲವೊಮ್ಮೆ ಮನೆ ಪಾಠವನ್ನೂ ತೆಗೆದುಕೊಂಡರು.<ref name="khatchadourian" />
=== ಹ್ಯಾಕಿಂಗ್ ===
1987 ರಲ್ಲಿ, ಅವರಿಗೆ 16 ವರ್ಷ ತುಂಬಿದ ಬಳಿಕ, ಅಸ್ಸಾಂಜೆ ಅವರು "ಮೆಂಡಾಕ್ಸ್" (ಹೊರೇಸ್ ಪದದಿಂದ ಉದ್ಭವಿಸಿದೆ: "ಸ್ಪ್ಲೆಂಡೈಡ್ ಮೆಂಡಾಕ್ಸ್ ", ಅಥವಾ "ಔದಾರ್ಯವಾಗಿ ಸುಳ್ಳಿನ ") ಹೆಸರಿನಡಿಯಲ್ಲಿ ಹ್ಯಾಕಿಂಗ್ ಅನ್ನು ಪ್ರಾರಂಭಿಸಿದರು.<ref name="khatchadourian" /> ಅವರು ಮತ್ತು ಇತರ ಇಬ್ಬರು ಹ್ಯಾಕರ್ಗಳು ಒಗ್ಗೂಡಿ ಸಮೂಹವೊಂದನ್ನು ರಚಿಸಿದರು ಮತ್ತು ಅದಕ್ಕೆ ಇಂಟರ್ನ್ಯಾಷನಲ್ ಸಬ್ವರ್ಸೀವ್ಸ್ ಎಂದು ಹೆಸರಿಟ್ಟರು. ಅಸ್ಸಾಂಜೆ ಅವರು ಉಪಸಂಸ್ಕೃತಿಯ ಮೊಟ್ಟಮೊದಲಿನ ನಿಯಮಗಳನ್ನು ಬರೆದರು: "ನೀವು ಸ್ವಾಧೀನಕ್ಕೆ ತೆಗೆದುಕೊಳ್ಳುವ ಕಂಪ್ಯೂಟರ್ ಸಿಸ್ಟಮ್ಗಳನ್ನು ಹಾನಿಗೊಳಿಸಬೇಡಿ (ಅವುಗಳನ್ನು ಕ್ರಾಶ್ ಮಾಡುವುದನ್ನು ಒಳಗೊಡು); ಆ ಸಿಸ್ಟಮ್ಗಳಲ್ಲಿನ ಮಾಹಿತಿಯನ್ನು ಬದಲಾಯಿಸಬೇಡಿ (ನಿಮ್ಮ ಟ್ರ್ಯಾಕ್ಗಳನ್ನು ಬಚ್ಚಿಡುವ ಲಾಗ್ಗಳನ್ನು ಮಾರ್ಪಡಿಸುವುದನ್ನು ಹೊರತುಪಡಿಸಿ); ಮತ್ತು ಮಾಹಿತಿಯನ್ನು ಹಂಚಿಕೊಳ್ಳಬೇಡಿ".<ref name="khatchadourian" />
ಹ್ಯಾಕಿಂಗ್ಗೆ ಪ್ರತಿಕ್ರಿಯೆಯಾಗಿ, ಆಸ್ಟ್ರೇಲಿಯಾದ ಫೆಡರಲ್ ಪೊಲೀಸ್ನವರು 1991 ರಲ್ಲಿ ಇವರ ಮೆಲ್ಬೋರ್ನ್ನಲ್ಲಿನ ಮನೆಗೆ ದಾಳಿ ಮಾಡಿದರು.<ref name="theaustralian" /> ಇವರು ಆಸ್ಟ್ರೇಲಿಯ ವಿಶ್ವವಿದ್ಯಾನಿಲಯ, ಕೆನಡಾದ ಟೆಲಿಕಮ್ಯೂನಿಕೇಶನ್ ಕಂಪನಿಯಾದ ನಾರ್ಟೆಲ್,<ref name="khatchadourian" /> ಮತ್ತು ಇತರ ಸಂಸ್ಥೆಗಳಿಗೆ ಸೇರಿದ ಕಂಪ್ಯೂಟರುಗಳನ್ನು ಮೋಡೆಮ್ ಮುಖಾಂತರ ಪ್ರವೇಶಿಸಿದ್ದರೆಂದು ಹೇಳಲಾಗಿತ್ತು.<ref name="aolnews" /> 1992 ರಲ್ಲಿ, ಅವರು ಹ್ಯಾಕಿಂಗ್ನ 24 ಪ್ರಕರಣಗಳಲ್ಲಿ ಕ್ಷಮಾಪಣೆಯನ್ನು ಕೋರಿದರು ಮತ್ತು ಇವರಿಗೆ AU$2100 ದಂಡವನ್ನು ವಿಧಿಸಿ ಇವರ ಉತ್ತಮ ನಡತೆಯ ಆಧಾರದ ಮೇಲೆ ಬಾಂಡ್ ಆಧಾರದಲ್ಲಿ ಬಿಡುಗಡೆ ಮಾಡಲಾಯಿತು.<ref name="khatchadourian" /><ref name="smh1" /> ಪ್ರಾಸಿಕ್ಯೂಟರ್ ಅವರು "ಈ ವಿವಿಧ ಕಂಪ್ಯೂಟರುಗಳ ಮುಖಾಂತರ ಪ್ರವೇಶಿಸುವುದರ ಮೂಲಕ ಬುದ್ಧಿವಂತ ಅನ್ವೇಷಣ ಪ್ರವೃತ್ತಿ ಮತ್ತು ಆನಂದದ ಹೊರತು ಯಾವುದೇ ಪುರಾವೆಗಳು ಇಲ್ಲ" ಎಂದು ಹೇಳಿದರು.<ref name="khatchadourian" />
ಅಸ್ಸಾಂಜೆಯವರು ಆನಂತರ ಪ್ರತಿಕ್ರಿಯಿಸುತ್ತಾ "ಅದು ನಿಜವಾಗಿಯೂ ಸ್ವಲ್ಪ ಮಟ್ಟಿಗೆ ಕಿರಿಕಿರಿ ಉಂಟು ಮಾಡಿದೆ. ಏಕೆಂದರೆ ನಾನು ಅದರ ಬಗ್ಗೆ ಪುಸ್ತಕವೊಂದನ್ನು ಬರೆದಿದ್ದೆ [ಹ್ಯಾಕರ್ ಆಗಿ], ಅದರ ಬಗ್ಗೆ ದಾಖಲಾತಿಗಳಿವೆ, ಆ ಬಗ್ಗೆ ಜನರು ತುಂಬಾ ಮಾತನಾಡುತ್ತಾರೆ. ಅವರು ಕತ್ತರಿಸಿ ಅಂಟಿಸಬಹುದು. ಆದರೆ ಅದು 20 ವರ್ಷಗಳ ಹಿಂದೆ ಆಗಿತ್ತು. ಆದರೆ ಆಧುನಿಕ ಜಗತ್ತಿನ ಲೇಖನಗಳು ನನ್ನನ್ನು ಕಂಪ್ಯೂಟರ್ ಹ್ಯಾಕರ್ ಎಂದು ಕರೆಯುವುದು ಅತೀ ಕಿರಿಕಿರಿಯನ್ನು ಉಂಟುಮಾಡುತ್ತದೆ. ಅದರ ಬಗ್ಗೆ ನನಗೇನು ನಾಚಿಕೆಯಿಲ್ಲ, ನಾನು ಅದರ ಬಗ್ಗೆ ಹೆಮ್ಮೆ ಪಡುತ್ತೇನೆ. ಆದರೆ ನಾನು ಇದೀಗ ಕಂಪ್ಯೂಟರ್ ಹ್ಯಾಕರ್ ಆಗಿದ್ದೇನೆಂದು ಸೂಚಿಸುವ ಕಾರಣವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅದಕ್ಕೆ ನಿರ್ದಿಷ್ಟ ಕಾರಣಗಳಿವೆ."<ref name="Forbes" />
=== ಮಗುವಿನ ಪೋಷಣೆ ಹಕ್ಕಿನ ಸಮಸ್ಯೆಗಳು ===
1989 ರಲ್ಲಿ, ಅಸ್ಸಾಂಜೆ ಅವರು ತಮ್ಮ ಸ್ನೇಹಿತೆಯೊಡನೆ ಜೀವಿಸಲು ಪ್ರಾರಂಭಿಸಿದರು ಮತ್ತು ಅವರು ಡ್ಯಾನಿಯೆಲ್ ಎಂಬ ಮಗನನ್ನು ಪಡೆದರು.<ref>{{cite web| author = Nick Johns-Wickberg | url = http://www.crikey.com.au/2010/09/17/daniel-assange-i-never-thought-wikileaks-would-succeed/ | title = Daniel Assange: I never thought WikiLeaks would succeed | publisher = Crikey | date = | accessdate = 8 December 2010 }}</ref> ಅವರು ಬೇರ್ಪಡೆಯಾದ ನಂತರ, ಅವರು ದೀರ್ಘಾವಧಿಯ ಮಗುವಿನ ಪೋಷಣೆಯ ಕುರಿತಾದ ಹೋರಾಟಕ್ಕಿಳಿದರು, ಮತ್ತು 1999 ರವರೆಗೆ ಪೋಷಣೆಯ ಒಪ್ಪಂದದ ಬಗ್ಗೆ ಒಪ್ಪಿಕೊಳ್ಳಲಿಲ್ಲ.<ref name="khatchadourian" /><ref name="newyorker">{{cite web | url = http://www.dailymail.co.uk/news/article-1297917/Is-Wikileaks-boss-Julian-Assange-force-good-chaos.html | title = Paranoid, anarchic... is WikiLeaks boss a force for good or chaos? | date = 27 July 2010 | accessdate = 27 October 2010 | publisher = [[Daily Mail]] | first = Edward Heathcoat | last = Amory}}</ref> ಈ ಸಂಪೂರ್ಣ ಪ್ರಕ್ರಿಯೆಯು ಅಸ್ಸಾಂಜೆ ಮತ್ತು ಅವರ ತಾಯಿಯವರು ಪೇರೆಂಟ್ ಎನ್ಕ್ವೈರಿ ಇನ್ಟೂ ಚೈಲ್ಡ್ ಪ್ರೊಟೆಕ್ಷನ್ ಎಂಬ ಕ್ರಿಯಾಶೀಲ ಸಮೂಹವನ್ನು ನಿರ್ಮಾಣ ಮಾಡಲು ಪ್ರೇರೇಪಣೆ ನೀಡಿತು ಮತ್ತು ಅದು ಆಸ್ಟ್ರೇಲಿಯದಲ್ಲಿ ಮಗುವಿನ ಪೋಷಣೆಯ ಹಕ್ಕಿಗೆ ಸಂಬಂಧಿಸಿದ ಗುರುತಿಸಲಾಗದ ಕಾನೂನು ದಾಖಲೆಗಳನ್ನು ಹೊಂದುವಂತಹ "ಕೇಂದ್ರೀಯ ದತ್ತಾಂಶಕೇಂದ್ರ" ವನ್ನು ರಚಿಸುವ ಬಗ್ಗೆ ಕೇಂದ್ರೀಕೃತವಾಗಿತ್ತು.<ref name="newyorker" />
== ಕಂಪ್ಯೂಟರ್ ಪ್ರೋಗ್ರಾಮಿಂಗ್ ಮತ್ತು ವಿಶ್ವವಿದ್ಯಾನಿಲಯ ಅಧ್ಯಯನಗಳು ==
1993 ರಲ್ಲಿ, ಅಸ್ಸಾಂಜೆಯವರು ಆಸ್ಟ್ರೇಲಿಯದಲ್ಲಿ ಸಬರ್ಬಿಯಾ ಪಬ್ಲಿಕ್ ಅಸೆಸ್ ನೆಟ್ವೆರ್ಕ್ ಎಂಬ ಮೊದಲ ಸಾರ್ವಜನಿಕ [[ಅಂತರಜಾಲ ಸೇವಾ ಸಂಸ್ಥೆಗಳು|ಇಂಟರ್ನೆಟ್ ಸೇವಾ ನೀಡುಗರ]] ಪ್ರಾರಂಭದಲ್ಲಿ ಒಳಗೊಂಡಿದ್ದರು.<ref name="Forbes" /><ref>{{cite web | url = http://suburbia.org.au | title = Suburbia Public Access Network | publisher = Suburbia.org.au | date = | accessdate = 4 December 2010}}</ref> 1994 ರಲ್ಲಿ ಪ್ರಾರಂಭಗೊಂಡು, ಅಸ್ಸಾಂಜೆಯವರು ಮೆಲ್ಬೋರ್ನ್ನಲ್ಲಿ ಉಚಿತ ಸಾಫ್ಟ್ವೇರ್ನ ಪ್ರೋಗ್ರಾಮರ್ ಮತ್ತು ಡೆವಲಪರ್ ಆಗಿ ನೆಲೆಸಿದರು.<ref name="smh1" /> 1995 ರಲ್ಲಿ, ಅಸ್ಸಾಂಜೆಯವರು ಮೊದಲ ಮುಕ್ತ ಮತ್ತು [[ಮುಕ್ತ ತಂತ್ರಾಂಶ|ಓಪನ್ ಸೋರ್ಸ್]] ಪೋರ್ಟ್ ಸ್ಕ್ಯಾನರ್ ಅನ್ನು ಬರೆದರು.<ref name="seclists" /><ref name="strobe" /> ಅವರು 1996 ರಲ್ಲಿ ಪೋಸ್ಟ್ಗ್ರೇಎಸ್ಕ್ಯೂಎಲ್ ಯೋಜನೆಗೆ ಹಲವು ಪ್ಯಾಚಸ್ಗಳನ್ನು ಕೊಡುಗೆಯಾಗಿ ನೀಡಿದರು.<ref name="pgsql" /><ref>{{cite web|url=http://git.postgresql.org/gitweb?p=postgresql.git;a=search;h=HEAD;s=Julian+Assange;st=author |title=PostgreSQL commits |publisher=Git.postgresql.org |date=|accessdate=16 December 2010}}</ref> ಅವರು ''[[Underground: Tales of Hacking, Madness and Obsession on the Electronic Frontier]]'' (1997) ಪುಸ್ತಕವನ್ನು ಬರೆಯಲು ಸಹಾಯ ಮಾಡಿದರು, ಇದು ಅವರನ್ನು ಸಂಶೋಧಕರು ಎಂದು ಹೊಗಳುವುದಲ್ಲದೇ ಮತ್ತು ಇಂಟರ್ನ್ಯಾಷನಲ್ ಸಬ್ವರ್ಸೀಸ್ನೊಂದಿಗೆ ಇವರ ಇತಿಹಾಸವನ್ನು ವರದಿ ಮಾಡುತ್ತದೆ.<ref>{{cite news|url=http://www.wired.co.uk/magazine/archive/2009/10/start/exposed-wikileaks-secrets?page=all|title=Exposed: Wikileaks' secrets|author=Annabel Symington|publisher=Wired Magazine|date=1 September 2009|accessdate=7 December 2010|archive-date=14 ಸೆಪ್ಟೆಂಬರ್ 2015|archive-url=https://web.archive.org/web/20150914225127/http://www.wired.co.uk/magazine/archive/2009/10/start/exposed-wikileaks-secrets?page=all|url-status=dead}}</ref><ref name="suelette" /> 1997 ರಿಂದ ಪ್ರಾರಂಭಗೊಂಡು, ಇವರು ರಬ್ಬರ್ಹೌಸ್ ಡಿನೈಯೇಬಲ್ ಎನ್ಕ್ರಿಪ್ಶನ್ ಸಿಸ್ಟಮ್, [[ಲಿನಕ್ಸ್|ಲೈನಕ್ಸ್]] ಗಾಗಿ ವಿನ್ಯಾಸ ಮಾಡಲ್ಪಟ್ಟ ಹಲವು ಸಾಫ್ಟ್ವೇರ್ ಪ್ಯಾಕೇಜ್ಗಳಾಗಿ ಮಾಡಿದಂತಹ ಕ್ರಿಪ್ಟೋಗ್ರಾಫಿಕ್ ಕಲ್ಪನೆಯನ್ನು ಸಹ-ಅನ್ವೇಷಿಸಿದರು, ಇದನ್ನು ರಬ್ಬರ್-ಹೌಸ್ ಕ್ರಿಪ್ಟೋನಾಲಿಸಿಸ್ ವಿರುದ್ಧ ನ್ಯಾಯಸಮ್ಮತವಾದ ನಿರಾಕರಿಸುವಿಕೆಯನ್ನು ಒದಗಿಸಲು ವಿನ್ಯಾಸ ಮಾಡಲಾಗಿತ್ತು;<ref name="singel" /> ಅವರು ಮೂಲಭೂತವಾಗಿ ಸಿಸ್ಟಮ್ ಅನ್ನು ಕ್ಷೇತ್ರದಲ್ಲಿ ಸೂಕ್ಷ್ಮ ದತ್ತಾಂಶಗಳನ್ನು ರಕ್ಷಿಸಲು ಅಗತ್ಯವಾಗಿದ್ದ ಮಾನವ ಹಕ್ಕುಗಳ ಕಾರ್ಯಕರ್ತರಿಗೆ ಸಾಧನವಾಗಿ ಬಳಸಲು ಉದ್ದೇಶಿಸಿದ್ದರು."<ref name="rubberhose" /> ಇವರು ರಚಿಸಿದ ಅಥವಾ ಸಹ-ರಚಿಸಿದ ಇತರ ಮುಕ್ತ ಸಾಫ್ಟ್ವೇರ್ಗಳಲ್ಲಿ ಯೂಸ್ನೆಟ್ ಕ್ಯಾಶಿಂಗ್ ಸಾಫ್ಟ್ವೇರ್ ಎನ್ಎನ್ಟಿಪಿಕ್ಯಾಷ್ <ref name="nntpcache" /> ಮತ್ತು [[ಅಂತರಜಾಲ ಹುಡುಕಾಟ ಯಂತ್ರ|ವೆಬ್-ಆಧಾರಿತ ಹುಡುಕಾಟ ಇಂಜಿನ್]]ಗಾಗಿ ಕಮಾಂಡ್-ಲೈನ್ ಇಂಟರ್ಫೇಸ್ ಆದ ಸರ್ಫ್ರಾ ಒಳಗೊಂಡಿದೆ. 1999 ರಲ್ಲಿ, ಅಸ್ಸಾಂಜೆಯವರು leaks.org ಎಂಬ ಡೊಮೇನ್ ಅನ್ನು ನೋಂದಾಯಿಸಿದರು; "ಆದರೆ", ಅವರು ಹೇಳಿದಂತೆ, "ಆಗ ಅದರೊಂದಿಗೆ ನಾನು ಏನನ್ನೂ ಮಾಡಲಿಲ್ಲ."<ref name="theage1" />
ಅಸ್ಸಾಂಜೆಯವರು ವಿವಿಧ ಸಮಯಗಳಲ್ಲಿ ಆರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ್ದರೆಂದು ವರದಿಯಾಗಿತ್ತು.<ref name="pdf" /> 2003 ರಿಂದ 2006 ರವರೆಗೆ, ಅವರು ಮೆಲ್ಬೋರ್ನ್ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಅಧ್ಯಯನ ಮಾಡಿದರು. ಅವರು ತತ್ವಶಾಸ್ತ್ರ ಮತ್ತು ನರವಿಜ್ಞಾನವನ್ನು ಸಹ ಅಧ್ಯಯನ ಮಾಡಿದರು.<ref name="pdf" /> ಅವರು ಎಂದಿಗೂ ಪದವಿಯನ್ನು ಪಡೆಯಲಿಲ್ಲ ಮತ್ತು ಅವರ ಹೆಚ್ಚಿನ ಗಣಿತ ಕೋರ್ಸುಗಳಲ್ಲಿ ಕನಿಷ್ಠ ಉತ್ತೀರ್ಣ ದರ್ಜೆಗಳನ್ನು ಪಡೆದರು.<ref name="khatchadourian" /><ref>{{cite news | first=John | last=Rosenthal | coauthors= | title=Mythbusted: Professor says WikiLeaks founder was ‘no star’ mathematician' | date=12 December 2010 | publisher= | url =http://dailycaller.com/2010/12/12/mythbusted-professor-says-wikileaks-founder-was-no-star-mathematician/ | work =[[The Daily Caller]] | pages = | accessdate = 12 December 2010 | language = }}</ref> ಅವರ ವೈಯಕ್ತಿಕ ವೆಬ್ ಪುಟದಲ್ಲಿ, 2005 ರಲ್ಲಿ ಆಸ್ಟ್ರೇಲಿಯದ ರಾಷ್ಟ್ರೀಯ ಭೌತಶಾಸ್ತ್ರ ಸ್ಪರ್ಧೆಯಲ್ಲಿ ತಮ್ಮ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದಾಗಿ ಅವರು ವಿವರಿಸಿಕೊಂಡಿದ್ದಾರೆ.<ref name="khatchadourian" /><ref name="cream" />
== ವಿಕಿಲೀಕ್ಸ್. ==
{{Main|WikiLeaks}}
2006 ರಲ್ಲಿ ವಿಕಿಲೀಕ್ಸ್ ಅನ್ನು ಸ್ಥಾಪಿಸಲಾಯಿತು.<ref name="khatchadourian" /><ref name="smh2" /> ಆ ವರ್ಷ, ಅಸ್ಸಾಂಜೆಯವರು ತತ್ವಶಾಸ್ತ್ರವನ್ನು ದೂರವಿಟ್ಟು ವಿಕಿಲೀಕ್ಸ್ನ ಹೆಜ್ಜೆ ಹಿಡಿದು ಎರಡು ಪ್ರಬಂಧಗಳನ್ನು ಬರೆದರು: "ಆಳ್ವಿಕೆಯ ವಿಧಾನದ ನಡವಳಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಲು ನಾವು ಸ್ಪಷ್ಟವಾಗಿ ಮತ್ತು ಧೈರ್ಯದಿಂದ ಯೋಚಿಸಬೇಕು, ನಾನು ಏನನ್ನೂ ಕಲಿಯದಿದ್ದರೆ, ಆಳ್ವಿಕೆಯನ್ನು ಬದಲಾಯಿಸಲು ಬಯಸುವುದಿಲ್ಲ ಎಂದರ್ಥ. ನಮಗಿಂತ ಮೊದಲು ಆದು ಹೋದವರಿಗಿಂತ ಹೆಚ್ಚನ್ನು ನಾವು ಯೋಚಿಸಬೇಕು ಮತ್ತು ನಮ್ಮ ಪೂರ್ವಜರು ಮಾಡಲಾಗದ ವಿಧಾನದಲ್ಲಿ ಕಾರ್ಯನಿರ್ವಹಿಸಲು ನಮ್ಮೊಂದಿಗೆ ಹುರಿದುಂಬಿಸುವ ತಾಂತ್ರಿಕ ಬದಲಾವಣೆಗಳನ್ನು ಅನ್ವೇಷಿಸಬೇಕು."<ref name="Whelan">{{cite web | url = http://www.dailymail.co.uk/news/article-1299311/FBI-question-WikiLeaks-mother-Welsh-home-Agent-interrogate-distressed-woman-search-sons-bedroom.html|title = FBI question WikiLeaks mother at Welsh home: Agents interrogate 'distressed' woman, then search her son's bedroom | author = Andy Whelan and Sharon Churcher | date = 1 August 2010 | accessdate = 1 December 2010}}</ref><ref>{{cite web | url = http://iq.org/conspiracies.pdf | title = State and Terrorist Conspiracies | first = Julian | last = Assange | date = 10 November 2006 | accessdate = 1 December 2010 | archive-date = 29 ಆಗಸ್ಟ್ 2007 | archive-url = https://web.archive.org/web/20070829163014/http://iq.org/conspiracies.pdf | url-status = dead }}</ref><ref>{{cite web | url = http://iq.org/conspiracies.pdf | title = Conspiracy as Governance | first = Julian | last = Assange | date = 3 December 2006 | accessdate = 1 December 2010 | archive-date = 29 ಜನವರಿ 2007 | archive-url = https://web.archive.org/web/20070129125831/http://iq.org/conspiracies.pdf | url-status = bot: unknown }}</ref> ಅವರ ಬ್ಲಾಗ್ನಲ್ಲಿ ಅವರು ಬರೆಯುತ್ತಾ," ಸಂಸ್ಥೆಯು ಹೆಚ್ಚು ರಹಸ್ಯಶೀಲ ಅಥವಾ ಅನ್ಯಾಯವಾದಷ್ಟು, ಹೆಚ್ಚು ಸೋರಿಕೆಗಳು ಅದ ನಾಯಕತ್ವದಲ್ಲಿ ಮತ್ತು ಯೋಜನಾ ಕೂಟದಲ್ಲಿ ಭಯ ಮತ್ತು ಬುದ್ಧಿವಿಕಲ್ಪವನ್ನು ಪ್ರೇರೇಪಿಸುತ್ತದೆ.... ಅನ್ಯಾಯದ ವ್ಯವಸ್ಥೆಯಿಂದ, ಅವರ ಸ್ವಭಾವವು ವಿರೋಧಿಗಳನ್ನು ಪ್ರೇರೇಪಿಸುತ್ತದೆ, ಮತ್ತು ಹಲವು ಸ್ಥಳಗಳಲ್ಲಿ ಕೆಲವೇ ಪ್ರಮಾಣದ ಮೇಲುಗೈಯನ್ನು ಹೊಂದಿರುತ್ತದೆ, ಸಾಮೂಹಿಕವಾದ ಸೋರಿಕೆಯು ಹೆಚ್ಚು ಮುಕ್ತ ಪ್ರಕಾರದ ಆಡಳಿತದದೊಂದಿಗೆ ಅವರನ್ನು ಬದಲಾಯಿಸಲು ಬಯಸುವವರಿಗೆ ಹೆಚ್ಚು ತೀವ್ರವಾಗಿ ಗುರಿಯಾಗಿರಿಸುತ್ತದೆ."<ref name="Whelan" /><ref>{{cite web | url = http://iq.org | title = The non linear effects of leaks on unjust systems of governance | date = 31 December 2006 | archiveurl = https://web.archive.org/web/20071020051936/http://iq.org/ | archivedate = 2 October 2007}}</ref>
ಅಸ್ಸಾಂಜೆಯವರು ವಿಕಿಲೀಕ್ಸ್ನ ಒಂಬತ್ತು-ಸದಸ್ಯರ ಸಲಹಾಕಾರ ಮಂಡಳಿಯಲ್ಲಿದ್ದಾರೆ <ref name="advisory" /> ಮತ್ತು ಅದರ ಪರವಾಗಿ ಹೆಚ್ಚು ಪ್ರಮುಖವಾದ ಮಾಧ್ಯಮ ವಕ್ತಾರರಾಗಿದ್ದಾರೆ. ಸುದ್ದಿಪತ್ರಿಕೆಗಳು ಅವರನ್ನು ವಿಕಿಲೀಕ್ಸ್ನ "ನಿರ್ದೇಶಕರು"<ref name="mcgreal" /> ಅಥವಾ "ಸ್ಥಾಪಕ"<ref name="theaustralian" /> ರೆಂದು ವರ್ಣಿಸಿದರೆ, ಅಸ್ಸಾಂಜೆಯವರು ಹೇಳಿದಂತೆ "ನಾನು ಸ್ವತಃ ಸ್ಥಾಪಕನೆಂದು ಕರೆದುಕೊಳ್ಳುವುದಿಲ್ಲ";<ref name="leakonomy" /> ಅವರನ್ನು ಸ್ವತಃ ವಿಕಿಲೀಕ್ಸ್ನ ಮುಖ್ಯ ಸಂಪಾದಕರೆಂದು ಅವರು ಕರೆದುಕೊಳ್ಳುವುದಿಲ್ಲ ಮತ್ತು ಸೈಟ್ಗೆ ಸಲ್ಲಿಸುವ ದಾಖಲೆಗಳ ಪ್ರಮಾಣೀಕರಿಸುವ ಪ್ರಕ್ರಿಯೆಯಲ್ಲಿ ತಾನು ಅಂತಿಮ ನಿರ್ಧಾರವನ್ನು ಹೊಂದಿರುವುದಾಗಿ ಅವರು ಹೇಳಿದರು.<ref name="motherjones" /> ಸೈಟ್ಗೆ ಕಾರ್ಯನಿರ್ವಹಿಸುವ ಇತರರಂತೆ, ಅಸ್ಸಾಂಜೆಯವರು ವೇತನ ತೆಗೆದುಕೊಳ್ಳದ ಕಾರ್ಯಕರ್ತರಾಗಿದ್ದಾರೆ.<ref name="leakonomy" /><ref>[http://www.wikileaks.org/wiki/WikiLeaks:Advisory_Board#Julian_Assange.2C_investigative_journalist.2C_programmer_and_activist ವಿಕಿಲೀಕ್ಸ್:ಸಲಹಾ ಮಂಡಳಿ – ಜೂಲಿಯನ್ ಅಸ್ಸಾಂಜೆ, ತನಿಖಾ ಪತ್ರಕರ್ತರು, ಪ್ರೋಗ್ರಾಮರ್ ಮತ್ತು ಕ್ರಾಂತಿಕಾರಿ] {{Webarchive|url=https://web.archive.org/web/20100912101437/http://www.wikileaks.org/wiki/WikiLeaks:Advisory_Board#Julian_Assange.2C_investigative_journalist.2C_programmer_and_activist |date=12 ಸೆಪ್ಟೆಂಬರ್ 2010 }} (ವಿಕಿಲೀಕ್ಸ್ ಮುಖಪುಟದಲ್ಲಿ ಸಂಕ್ಷಿಪ್ತ ಜೀವನಚರಿತ್ರೆ)</ref><ref>[http://www.time.com/time/world/article/0,8599,2006496,00.html ಹರ್ರೆಲ್, ಎಬೆನ್, (26 ಜುಲೈ 2010) ''2-ಮಿನಿ. ಬಯೋ ವಿಕಿಲೀಕ್ಸ್ ಫೌಂಡರ್ ಜೂಲಿಯನ್ ಅಸ್ಸಾಂಜೆ'' 26 ಜುಲೈ 2010] {{Webarchive|url=https://web.archive.org/web/20130825145220/http://www.time.com/time/world/article/0,8599,2006496,00.html |date=25 ಆಗಸ್ಟ್ 2013 }} ''ಟೈಮ್''.</ref><ref>[http://www.democracynow.org/2010/6/17/wikileaks_whistleblowers ಇರಾಕ್ ಹತ್ಯೆಗಳನ್ನು ತೋರಿಸುತ್ತಿರುವ ವಿಡಿಯೋದ ಶಂಕಿತ ಬಹಿರಂಗಗೊಳಿಸಿದ ವಿಕಿಲೀಕ್ಸ್ ಸ್ಥಾಪಕನಿಗೆ ಹುಡುಕಾಟ ವದಂತಿ] – ''ಡೆಮೋಕ್ರಸಿ ನೌ!'' ನಿಂದ ವೀಡಿಯೋ ವರದಿ</ref><ref>{{cite web | author = Adheesha Sarkar | url = http://www.telegraphindia.com/1100810/jsp/opinion/story_12789816.jsp | title = The People'S Spy | publisher = Telegraphindia.com | date = 10 August 2010 | accessdate = 22 August 2010}}</ref> ವಿಶ್ವದ ಉಳಿದ ಮಾಧ್ಯಮಗಳೆಲ್ಲವನ್ನೂ ಸೇರಿಸುದುದಕ್ಕಿಂತ ಹೆಚ್ಚು ವಿಸ್ತಾರವಾದ ದಾಖಲೆಗಳನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆಯೆಂದು ಅಸ್ಸಾಂಜೆ ಹೇಳುತ್ತಾರೆ: "ನಾವು ಎಷ್ಟು ಯಶಸ್ವಿಯೆಂದು ಹೇಳುವ ಮಾರ್ಗವು ಅದು ಅಲ್ಲ- ಬದಲಿಗೆ, ನೀವು ಉಳಿದ ಮಾಧ್ಯಮದ ಪ್ರಚಂಡವಾದ ಸ್ಥಿತಿ ಎಂದು ತೋರಿಸುತ್ತದೆ. ಒಟ್ವಿಗೆ ವಿಶ್ವದ ಎಲ್ಲಾ ಮಾಧ್ಯಮಗಳಿಗಿಂತಲೂ ಆ ಹಂತದಲ್ಲಿ ಹೆಚ್ಚು ಗೋಪ್ಯವಾದ ಮಾಹಿತಿಯನ್ನು ಐದು ಜನರ ತಂಡವು ಸಾರ್ವಜನಿಕರಿಗೆ ಬಿಡುಗಡೆ ಮಾಡಲು ಹೇಗೆ ಸಾಧ್ಯವಾಯಿತು? ಅದು ನಾಚಿಕೆಗೇಡು."<ref name="smh2" /> ಅಸ್ಸಾಂಜೆಯವರು ಪತ್ರಿಕೋದ್ಯಮಕ್ಕೆ "ಪಾರದರ್ಶಕ" ಮತ್ತು "ವೈಜ್ಞಾನಿಕ" ತೊಡಗುವಿಕೆಯನ್ನು ಸಮರ್ಥಿಸುತ್ತಾ ಹೇಳುತ್ತಾರೆ "ನೀವು ಪೂರ್ಣವಾದ ಪ್ರಾಯೋಗಿಕ ದತ್ತಾಂಶ ಮತ್ತು ಫಲಿತಾಂಶಗಳಿಲ್ಲದೇ ಭೌತಶಾಸ್ತ್ರದ ಬಗ್ಗೆ ಲೇಖನವನ್ನು ಪ್ರಕಟಿಸಲಾಗುವುದಿಲ್ಲ; ಇದು ಪತ್ರಿಕೋದ್ಯಮದಲ್ಲಿ ಮಾನದಂಡವಾಗಿರಬೇಕು."<ref name="journalism_2010" /><ref>{{cite web | url = http://www.csmonitor.com/USA/Military/2010/0726/Julian-Assange-the-hacker-who-created-WikiLeaks | title = Julian Assange: the hacker who created WikiLeaks | publisher = Csmonitor.com | date = | accessdate = 22 August 2010}}</ref> 2006 ರಲ್ಲಿ ಇವರನ್ನು " ಆಸ್ಟ್ರೇಲಿಯದ ಅತೀ ಹೆಚ್ಚಿನ ಅಪಕೀರ್ತಿಯ ಮಾಜಿ ಕಂಪ್ಯೂಟರ್ ಹ್ಯಾಕರ್" ಎಂಬುದಾಗಿ ''ಕೌಂಟರ್ಪಂಚ್'' ಕರೆಯಿತು."<ref name="wankworm">ಜೂಲಿಯನ್ ಅಸ್ಸಾಂಜೆ: [http://www.counterpunch.org/assange11252006.html ದಿ ಆಂಟಿ-ನ್ಯೂಕ್ಲಿಯರ್ ವ್ಯಾಂಕ್ ವರ್ಮ್. ] {{Webarchive|url=https://web.archive.org/web/20080419071903/http://www.counterpunch.org/assange11252006.html |date=19 ಏಪ್ರಿಲ್ 2008 }}[http://www.counterpunch.org/assange11252006.html ದಿ ಕ್ಯೂರಿಯಸ್ ಓರಿಜಿನ್ ಆಫ್ ಪೊಲಿಟಿಕಲ್ ಹ್ಯಾಕ್ಟಿವಿಸಂ] {{Webarchive|url=https://web.archive.org/web/20080419071903/http://www.counterpunch.org/assange11252006.html |date=19 ಏಪ್ರಿಲ್ 2008 }} ಕೌಂಟರ್ಪಂಚ್, 25 ನವೆಂಬರ್/ 26 2006</ref> ''ದಿ ಏಜ್'' ಪತ್ರಿಕೆಯು ಇವರನ್ನು "ಜಗತ್ತಿನಲ್ಲಿನ ಅತೀ ಹೆಚ್ಚಿನ ಕುತಂತ್ರದ ವ್ಯಕ್ತಿ" ಮತ್ತು "ಇಂಟರ್ನೆಟ್ನ ಸ್ವಾತಂತ್ರ್ಯ ಹೋರಾಟಗಾರ" ಎಂಬುದಾಗಿ ಕರೆಯಿತು."<ref name="theage1" /> ಅಸ್ಸಾಂಜೆಯವರು ಸ್ವತಃ ತಮ್ಮನ್ನು "ಅತ್ಯಂತ ತಿರಸ್ಕೃತರಾದ ವ್ಯಕ್ತಿ" ಎಂದು ಕರೆದುಕೊಂಡರು"<ref name="theage1" /> ಹದಿಹರೆಯದವನಾಗಿ ಅವರು " ಆಸ್ಟ್ರೇಲಿಯದ ಅತೀ ಪ್ರಖ್ಯಾತ ನೀತಿವಂತ ಕಂಪ್ಯೂಟರ್ ಹ್ಯಾಕರ್" ಆಗಿದ್ದರು ಎಂಬುದಾಗಿ ''ಪರ್ಸನರಲ್ ಡೆಮೋಕ್ರಾಟಿಕ್ ಫಾರಮ್'' ಹೇಳಿತು."<ref name="pdf" /> ಅವರನ್ನು ಬಹುವಾಗಿ ಸ್ವಯಂ-ಕಲಿಕೆಯ ವ್ಯಕ್ತಿಯಾಗಿ ಮತ್ತು ವಿಜ್ಞಾನ ಹಾಗೂ ಗಣಿತದಲ್ಲಿ ವ್ಯಾಪಕವಾಗಿ ಜ್ಞಾನವನ್ನು ಹೊಂದಿರುವ ವ್ಯಕ್ತಿಯಾಗಿ <ref name="smh1" /> ಮತ್ತು ಬುದ್ಧಿಶಕ್ತಿಯ ಹೋರಾಟದಲ್ಲಿ ಯಶಸ್ವಿಯಾದ ವ್ಯಕ್ತಿಯಾಗಿ ವಿವರಿಸಲಾಗಿದೆ.<ref>[https://www.theguardian.com/media/2010/aug/01/julian-assange-wikileaks-afghanistan ಜೂಲಿಯನ್ ಅಸಾಂಜೆ, ಮೋಂಕ್ ಆಫ್ ದಿ ಆನ್ಲೈನ್ ಏಜ್ ಹೂ ಥ್ರೈವ್ಸ್ ಆನ್ ಇಂಟೆಲೆಕ್ಚುಯಲ್ ಬ್ಯಾಟಲ್] 1 ಆಗಸ್ಟ್ 2010</ref>
ಕೀನ್ಯಾದಲ್ಲಿನ ಕಾನೂನುಬಾಹಿರ ಕೊಲೆಗಳನ್ನು ದಾಖಲಿಸಿದ ವಿಷಯವಸ್ತು, ಆಫ್ರಿಕಾ ತೀರದಲ್ಲಿ ತ್ಯಾಜ್ಯ ಪದಾರ್ಥಗಳನ್ನು ರಾಶಿ ಹಾಕುವುದರ ಕುರಿತ ವರದಿ, ಸೈಂಟೋಲಜಿ ಚರ್ಚ್ನ ಕೈಪಿಡಿಗಳು, ಗ್ವಾಂಟನಾಮೋ ಬೇ ಕಾರ್ಯವಿಧಾನಗಳು, 2007 ನೇ ಜುಲೈ 12ರ ಬಾಗ್ಧಾದ್ ಮೇಲಿನ ವಾಯುದಾಳಿಯ ವೀಡಿಯೋ ಮತ್ತು ಕೌಂಪ್ತಿಂಗ್ ಮತ್ತು ಜೂಲಿಯಸ್ ಬೇರ್ನಂತಹ ದೊಡ್ಡ್ ಬ್ಯಾಂಕುಗಳನ್ನು ಒಳಗೊಂಡ ವಿಷಯವಸ್ತುಗಳ ದಾಖಲೆಗಳ ಪ್ರಕಟಣೆಯಲ್ಲಿ ವಿಕಿಲೀಕ್ಸ್ ಒಳಗೊಂಡಿತ್ತು.<ref name="autogenerated1" />
ವಿಕಿಲೀಕ್ಸ್ನ ಸಿದ್ಧಾಂತ ಮತ್ತು ಉದ್ದೇಶದ ಬಗ್ಗೆ 2010 ರ ಓಸ್ಲೋ ಫ್ರೀಡಂ ಫೋರಮ್ನಲ್ಲಿ ಕೇಳಿದಾಗ, ಅಸ್ಸಾಂಜೆಯವರು ಈ ರೀತಿ ಹೇಳಿದರು:<ref>{{cite web
| last = Lysglimt
| first = Hans
| authorlink = Hans Lysglimt
| title = Transcript of interview with Julian Assange (2010-4-26)
| work = Oslo Freedom Forum
| publisher = Farmann Magazine
| date = 9 December 2010
| url = http://www.farmann.no/?p=1627
| accessdate = 14 December 2010
| archive-date = 27 ಆಗಸ್ಟ್ 2011
| archive-url = https://web.archive.org/web/20110827101252/http://www.farmann.no/?p=1627
| url-status = dead
}}</ref>
<blockquote>
ಕೇವಲ ನಾಗರೀಕತೆಯನ್ನು ಹೊಂದುವುದು ನಮ್ಮ ಗುರಿಯಾಗಿದೆ. ಇದು ಸ್ವಲ್ಪ ಮಟ್ಟಿಗಿನ ವೈಯಕ್ತಿಕ ಸ್ಪೂರ್ತಿಯ ಗುರಿಯಾಗಿದೆ. ಮತ್ತು ಪಾರದರ್ಶಕತೆಯೇ ಸಂದೇಶವಾಗಿದೆ. ಸಂದೇಶವನ್ನು ಗುರಿಯೊಂದಿಗೆ ಗೊಂದಲಕ್ಕೀಡುಮಾಡದಿರುವುದು ಪ್ರಮುಖವಾಗಿದೆ. ಅದೇನೇ ಇದ್ದರೂ, ಅದು ಅತ್ಯುತ್ತಮ ಸಂದೇಶವೆಂದು ನಾವು ನಂಬುತ್ತೇವೆ. ಪಾರದರ್ಶಕತೆಯೊಂದಿಗೆ ನ್ಯಾಯವನ್ನು ಪಡೆಯುವುದು. ಇದು ಅದನ್ನು ಮಾಡುವ ಉತ್ತಮ ಮಾರ್ಗವಾಗಿದೆ, ಅದು ಅತೀ ಹೆಚ್ಚು ತಪ್ಪುಗಳನ್ನು ಮಾಡದಿರುವ ಉತ್ತಮ ಮಾರ್ಗವೂ ಆಗಿದೆ. ನಾವು ರಾಜಕೀಯವನ್ನು ಮೀರಿದ ಸಿದ್ದಾಂತವನ್ನು ಹೊಂದಿದ್ದೇವೆ, ಇದು ಬಲ ಮತ್ತು ಎಡವಲ್ಲ, ಇದು ಅರ್ಥಮಾಡಿಕೊಳ್ಳುವಿಕೆಯ ಬಗ್ಗೆಯಾಗಿದೆ. ನೀವು ಯಾವುದೇ ಸಲಹೆಯನ್ನು ನೀಡುವ ಮೊದಲು, ವಿಶ್ವದೊಂದಿಗೆ ಹೇಗೆ ವ್ಯವಹರಿಸುವುದು, ಜನರನ್ನು ಹೇಗೆ ನಾಗರೀಕತೆಯಲ್ಲಿ ತರುವುದು. ಜನರಲ್ಲಿ ಹೇಗೆ ಪ್ರಭಾವವನ್ನು ಪಡೆದುಕೊಳ್ಳುವುದು ಎಂಬ ಬಗ್ಗೆ ಯಾವುದೇ ಕಾರ್ಯಕ್ರಮಗಳಿವೆಯೇ. ನೀವು ಯಾವುದೇ ಯೋಜನೆಯನ್ನು ಹೊಂದುವ ಮೊದಲು, ನಿಜವಾಗಿ ಏನು ನಡೆಯುತ್ತಿದೆ ಎಂದು ನೀವು ಅರ್ಥೈಸಿಕೊಳ್ಳಬೇಕು.... ಆದ್ದರಿಂದ ತಪ್ಪು ತಿಳುವಳಿಕೆಯಿಂದ ಹೊರಬರುವ ಯಾವುದೇ ಯೋಜನೆ ಅಥವಾ ಶಿಫಾರಸು, ಯಾವುದೇ ರಾಜಕೀಯ ಸಿದ್ಧಾಂತಗಳು ಸ್ವತಃ ತಪ್ಪು ತಿಳುವಳಿಕೆಯೇ ಆಗಿರುತ್ತದೆ. ಆದ್ದರಿಂದ, ನಾವು ಹೇಳುವುದೇನೆಂದರೆ ಸ್ವಲ್ಪ ಮಟ್ಟಿಗೆ ಎಲ್ಲಾ ರಾಜಕೀಯ ಸಿದ್ಧಾಂತಗಳು ಪ್ರಸ್ತುತ ದೀವಾಳಿಯಾಗಿದೆ. ಏಕೆಂದರೆ ವಿಶ್ವಕ್ಕೆ ತಿಳಿಸಲು ಅವರು ಯಾವುದೇ ಮೂಲ ವಸ್ತುವನ್ನು ಹೊಂದಿಲ್ಲ. ನಿಜವಾಗಿ ಏನು ನಡೆಯುತ್ತಿದೆಯೆಂದು ಅರ್ಥೈಸಿಕೊಳ್ಳಲು ಮೂಲ ವಸ್ತುವು ಬೇಕಿದೆ.
</blockquote>
=== ಸಾರ್ವಜನಿಕ ಹಾಜರಿಗಳು ===
[[File:Julian Assange 20091117 Copenhagen 1 cropped to shoulders.jpg|thumb|ಅಸ್ಸಾಂಜೆಯವರು ಕೋಪನ್ಹೇಗನ್ನಲ್ಲಿ, 2009]]
ವಿಕಿಲೀಕ್ಸ್ನೊಳಗೆ ಹೆಚ್ಚಿನ ಅಧಿಕಾರವನ್ನು ಮತ್ತು ಸಂಪಾದಕೀಯ ನಿಯಂತ್ರಣವನ್ನು ಸಾಧಿಸುವುದರ ಜೊತೆಗೆ ಅಸ್ಸಾಂಜೆಯವರು ಅದರ ಸಾರ್ವಜನಿಕ ಮುಖವಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ಕೋಪನ್ಹೇಗನ್ನಲ್ಲಿ ನಡೆದ ನ್ಯೂ ಮೀಡಿಯಾ ಡೇಸ್ 09, ಯುಸಿ ಬರ್ಕಲೀ ಪತ್ರಿಕೋದ್ಯಮ ಪದವಿ ಶಾಲೆಯಲ್ಲಿ ನಡೆದ ತನಿಖಾ ವರದಿಯಲ್ಲಿನ 2010 ಲೋಗನ್ ಸಿಂಪೋಸಿಯಮ್,<ref name="fora.tv" /> ಮತ್ತು ಹ್ಯಾಕರ್ ಸಮ್ಮೇಳನಗಳಲ್ಲಿ ಪ್ರಮುಖವಾಗಿ 25 ಮತ್ತು 26 ನೇಯ ಚಾವೋಸ್ ಕಮ್ಯೂನಿಕೇಶನ್ ಕಾಂಗ್ರೆಸ್ನಂತಹ ಮಾಧ್ಯಮ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ.<ref name="events.ccc.de" /> 2010 ರ ವರ್ಷದ ಮೊದಲನೆಯ ಭಾಗದಲ್ಲಿ ಅವರು ವಿಕಿಲೀಕ್ಸ್ ಬಹಿರಂಗಗೊಳಿಸಿದ ಬಾಗ್ದಾದ್ ವಾಯುದಾಳಿಯ ವೀಡಿಯೋದ ಬಗ್ಗೆ ಚರ್ಚಿಸಲು ಅಲ್ ಜಜೀರಾ ಇಂಗ್ಲೀಷ್, ಎಮ್ಎಸ್ಎನ್ಬಿಸಿ, ಡಮೋಕ್ರಸಿ ನೌ!, ಆರ್ಟಿ, ಮತ್ತು ''ದಿ ಕೋಲ್ಬರ್ಟ್ ರಿಪೋರ್ಟ್'' ನಲ್ಲಿ ಕಾಣಿಸಿಕೊಂಡಿದ್ದರು. ಜೂನ್ 3 ರಂದು ಅವರುಡೇನಿಯಲ್ ಎಲ್ಸ್ಬರ್ಗ್ ಅವರೊಂದಿಗೆ ಸಮಾಲೋಚನೆಯಲ್ಲಿ ಪರ್ಸಲನ್ ಡೆಮೋಕ್ರಸಿ ಫಾರಂ ನಲ್ಲಿ ವೀಡಿಯೋ ಕಾನ್ಫೆರನ್ಸ್ನಲ್ಲಿ ಕಾಣಿಸಿಕೊಂಡಿದ್ದರು.<ref name="personal" /><ref name="cjr" /> ಎಲ್ಸ್ಬರ್ಗ್ ಅವರು ಎಮ್ಎಸ್ಎನ್ಬಿಸಿಗೆ ಹೇಳಿದಂತೆ "ಯುಎಸ್ನಲ್ಲಿ ವೈಯಕ್ತಿಕವಾಗಿ ಕಾಣಿಸಿಕೊಳ್ಳದಿರಲು ಅವರು [ಅಸ್ಸಾಂಜೆ] ಬಳಸಿದ ವಿವರಣೆಯು ಏನೆಂದರೆ "ಈ ರಾಷ್ಟ್ರಕ್ಕೆ ಬರಲು ಅವರಿಗೆ ಸುರಕ್ಷಿತವಾಗಿಲ್ಲ".<ref name="ellsbergmsnbc" /> ಜೂನ್ 11 ರಂದು ಅವರು ಲಾಸ್ ವೆಗಾಸ್ನಲ್ಲಿನ ತನಿಖಾ ವರದಿಗಾರರು ಮತ್ತು ಸಂಪಾದಕರು ಸಮ್ಮೇಳನದಲ್ಲಿನ ಶೋಕೇಸ್ ಪ್ಯಾನೆಲ್ನಲ್ಲಿ ಭಾಗವಹಿಸಬೇಕಾಗಿತ್ತು,<ref name="nicar" /> ಆದರೆ ಅವರು ಹಲವು ದಿನಗಳ ಮೊದಲೇ ಭಾಗವಹಿಸುವುದನ್ನು ರದ್ದು ಮಾಡಿದ್ದರು ಎಂದು ವರದಿಗಳು ಹೇಳುತ್ತವೆ.<ref name="poulsen" /> ಪೆಂಟಾಗನ್ ಅಧಿಕಾರಿಗಳು ಅವರ ಇರುವಿಕೆಯ ಕುರಿತಂತೆ ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು 2010 ರ ಜೂನ್ 10 ರಂದು ವರದಿ ಮಾಡಲಾಯಿತು.<ref name="pentagonhunt" /><ref name="tdbmanhunt" /> ಇದರ ಆಧಾರದಲ್ಲಿ, ಯು.ಎಸ್. ಅಧಿಕಾರಿಗಳು ಅಸ್ಸಾಂಜೆ ಅವರನ್ನು ಬಂಧಿಸಲು ಬಯಸಿದ್ದಾರೆ ಎಂದು ವರದಿಗಳಿದ್ದವು.<ref name="taylor" /> ಬ್ರೇಡ್ಲಿ ಮ್ಯಾನಿಂಗ್ನ ಬಂಧನ ಮತ್ತು ಅಸ್ಸಾಂಜೆಯವರು ಏನನ್ನು ಪ್ರಕಟಿಸುತ್ತಾರೆ ಎಂಬ ಬಗ್ಗೆ ಯುಎಸ್ ಅಧಿಕಾರಿಗಳ ಸಂದೇಹವು "ಅವರ ಯೋಗಕ್ಷೇಮ, ದೈಹಿಕ ಜೀವನವನ್ನು ಸ್ವಲ್ಪ ಮಟ್ಟಿಗೆ ಇದೀಗ ಅಪಾಯಕ್ಕೆ ತಂದೊಡ್ಡಿದೆ" ಎಂದು ಎನ್ಸ್ಬರ್ಗ್ ಹೇಳಿದರು.<ref name="ellsbergmsnbc" /> ''ದಿ ಅಟ್ಲಾಂಟಿಕ್'' ನಲ್ಲಿ, ಮಾರ್ಕ್ ಅಂಬಿಂಡರ್ ಅವರು ಎಲ್ಸ್ಬರ್ಗ್ ಅವರ ಕಾಳಜಿಯನ್ನು "ಅಸಂಬದ್ಧ"ವೆಂದು ಕರೆದಿದ್ದಲ್ಲದೇ "ಅಸ್ಸಾಂಜೆಯವರು ಜೈಲಿಗೆ ಹೋಗಲು ಒಂದು ಹೆಜ್ಜೆ ಹಿಂದಿದ್ದಾರೆ ಮತ್ತು ಕೆಲವು ಮಟ್ಟದವರೆಗೆ ಅವರ ಕಾರ್ಯಕ್ಕೆ ಕಳಂಕ ತರುತ್ತಿದ್ದಾರೆ" ಎಂದು ಹೇಳಿದರು.<ref name="ambinder" /> ಸಲೂನ್.ಕಾಮ್ನಲ್ಲಿ ಗ್ಲೆನ್ ಗ್ರೀನ್ವಾಲ್ಡ್ ಅವರು, ಅಸ್ಸಾಂಜೆಯವರಿಗಾಗಿ "ಶೋಧ"ವು ನಡೆಯುತ್ತಿದೆ ಎಂಬ "ದಿಗಿಲಿನ ಮಾಧ್ಯಮ ವರದಿಗಳನ್ನು" ಪ್ರಶ್ನಿಸಿದ್ದಲ್ಲದೇ ಅವುಗಳು ಕೇವಲ "ಅನಾಮಧೇಯ ಸರ್ಕಾರಿ ಅಧಿಕಾರಿಗಳ" ಪ್ರತಿಕ್ರಿಯೆಗಳ ಮೇಲೆ ಆಧಾರವಾಗಿದೆ ಮತ್ತು ಸಂಭಾವ್ಯ ಮಾಹಿತಿ ನೀಡುವವರನ್ನು ಅನುಕರಿಸುವ ಮೂಲಕ ಯು.ಎಸ್. ಸರ್ಕಾರದಿಂದ ಕಾರ್ಯಾಚರಣೆಗೂ ನೆರವಾಗಬಹುದು ಎಂದು ವಾದಿಸಿದರು.<ref name="Greenwald2010-06-18" />
2010 ರ ಜೂನ್ 21 ರಂದು, ಬೆಲ್ಜಿಯಂನ [[ಬ್ರಸೆಲ್ಸ್|ಬ್ರಸ್ಸೆಲ್ಸ್]]ನಲ್ಲಿ ವಿಚಾರಣೆಯೊಂದರಲ್ಲಿ ಭಾಗವಹಿಸುವ ಮೂಲಕ ಸರಿಸುಮಾರು ತಿಂಗಳಿನಲ್ಲಿ ಮೊದಲು ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.<ref name="telegraph" /> ಅವರು ಇಂಟರ್ನೆಟ್ ಸೆನ್ಸಾರ್ಶಿಪ್ ಅನ್ನು ಚರ್ಚಿಸಿದ ಸಮಿತಿಯ ಸದಸ್ಯರಾಗಿದ್ದರು ಮತ್ತು ಆಸ್ಟ್ರೇಲಿಯದಂತಹ ರಾಷ್ಟ್ರಗಳಲ್ಲಿ ಇತ್ತೀಚಿನ ಶೋಧನೆ ಮಾಡಿದ ಕುರಿತಂತೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದರು. ಹಾಗೆಯೇ ಅವರು ವೃತ್ತಪತ್ರಿಕೆಗಳು ನಿರ್ದಿಷ್ಟ ವಿಷಯಗಳ ಬಗ್ಗೆ ಮಾಹಿತಿಯನ್ನು ಪ್ರಕಟಣೆ ಮಾಡದಂತೆ ತಡೆಯುವ ರಹಸ್ಯ ವಾಕ್ ಸ್ವಾತಂತ್ರದ ಆದೇಶ ಬಗ್ಗೆ ಮಾತನಾಡಿದರು ಮತ್ತು ಅವುಗಳನ್ನು ವಂಚಿಸುತ್ತಿರುವ ವಿಷಯವನ್ನೂ ಬಹಿರಂಗಗೊಳಿಸಿದರು. ''ದಿ ಗಾರ್ಡಿಯನ್'' ಅನ್ನು ಒಳಗೊಂಡ ಉದಾಹರಣೆಯನ್ನು ಬಳಸಿ, ಅವರು ಸುದ್ದಿಪತ್ರಿಕೆಗಳು ಸಂಪೂರ್ಣ ಲೇಖನಗಳನ್ನು ತೆಗೆದುಹಾಕುವ ಮೂಲಕ ಅವುಗಳ ಆನ್ಲೈನ್ ಆರ್ಕೈವ್ಗಳನ್ನು ಕೆಲವೊಮ್ಮೆ ಹೇಗೆ ಮಾರ್ಪಡಿಸುತ್ತವೆ ಎಂಬುದನ್ನು ವಿವರಿಸಿದರು.<ref name="alde" /><ref name="guardian" /> ''ದಿ ಗಾರ್ಡಿಯನ್'' ಗೆ ಅವರು ತಿಳಿಸುತ್ತಾ ನನ್ನ ಸುರಕ್ಷತೆಯ ಬಗ್ಗೆ ನಾನು ಹೆದರುವುದಿಲ್ಲ ಆದರೆ ಅದು ಖಾಯಂ ಎಚ್ಚರಿಕೆಯಾಗಿದೆ ಮತ್ತು ಅಮೇರಿಕಕ್ಕೆ ಪ್ರಯಾಣ ಮಾಡುವುದನ್ನು ತಪ್ಪಿಸುತ್ತೇನೆ ಎನ್ನುತ್ತಾ, "[ಯು.ಎಸ್.] ಸಾರ್ವಜನಿಕ ಹೇಳಿಕೆಗಳೆಲ್ಲವೂ ವಿವೇಚನಾಯುತವಾಗಿದೆ". ಆದರೆ ಖಾಸಗಿಯಾಗಿ ಹೇಳಿದ ಕೆಲವು ಹೇಳಿಕೆಗಳು ಸ್ವಲ್ಪ ಮಟ್ಟಿಗೆ ಪ್ರಶ್ನಾರ್ಹವಾಗಿದೆ" ಎಂದು ಹೇಳಿದರು. ಅವರು ಹೇಳುತ್ತಾ "ರಾಜಕೀಯವಾಗಿ ಕಾರ್ಯನಿರ್ವಹಿಸಲು ಅವರಿಗೆ ಅದು ದೊಡ್ಡ ತಪ್ಪಾಗಿದೆ ನಾನು ಸಂಪೂರ್ಣ ಸುರಕ್ಷಿತವಾಗಿದ್ದೇನೆಂದು ಭಾವಿಸುತ್ತೇನೆ ಆದರೆ ಈ ಕಾಲಾವಧಿಯಲ್ಲಿ ಅಮೇರಿಕಕ್ಕೆ ಪ್ರಯಾಣಿಸದಂತೆ ನನ್ನ ವಕೀಲರು ಸಲಹೆ ನೀಡಿದ್ದಾರೆ".<ref name="telegraph" />
ಜುಲೈ 17 ರಂದು ನ್ಯೂಯಾರ್ಕ್ ನಗರದಲ್ಲಿ ನಡೆದ 2010 ಹ್ಯಾಕರ್ಸ್ ಆನ್ ಪ್ಲಾನೆಟ್ ಅರ್ಥ್ (ಹೆಚ್ಓಪಿಇ) ಸಮ್ಮೇಳನದಲ್ಲಿ ವಿಕಿಲೀಕ್ಸ್ನ ಪರವಾಗಿ ಅಸ್ಸಾಂಜೆ ಅವರ ಬದಲಿಗೆ ಜಾಕೊಬ್ ಆಪಲ್ಬಮ್ ಅವರು ಮಾತನಾಡಿದರು, ಸಮ್ಮೇಳನದಲ್ಲಿ ಫೆಡರಲ್ ಏಜೆಂಟ್ಗಳ ಉಪಸ್ಥಿತಿಯು ಇದಕ್ಕೆ ಕಾರಣವಾಗಿತ್ತು.<ref name="repair" /><ref>{{cite web | last = McCullagh | first = Declan | url = http://news.cnet.com/8301-1009_3-20010861-83.html | title = Feds look for Wikileaks founder at NYC hacker event | publisher = News.cnet.com | date = 16 July 2010 | accessdate = 21 August 2010 | archive-date = 27 ಆಗಸ್ಟ್ 2011 | archive-url = https://web.archive.org/web/20110827013027/http://news.cnet.com/8301-1009_3-20010861-83.html | url-status = dead }}</ref> ವಿಕಿಲೀಕ್ಸ್ನ ಸಲ್ಲಿಕೆ ವ್ಯವಸ್ಥೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡ ಬಳಿಕ ಮತ್ತೆ ಕಾರ್ಯನಿರತವಾಗಿದೆ ಎಂದು ಅವರು ಘೋಷಿಸಿದರು.<ref name="repair" /><ref>[https://docs.google.com/document/pub?id=1ebTGiyaQQ2HSCOpqsD8GD7x_7IBqkeYZ4jfEJ_rYeFQ Jacob Appelbaum, ವಿಕಿಲೀಕ್ಸ್ ಪ್ರಧಾನ ವಿಷಯ: 2010 ಭೂಜಗತ್ತಿನ ಹ್ಯಾಕರ್ಗಳ ಸಮ್ಮೇಳನ, ನ್ಯೂಯಾರ್ಕ್ ನಗರ], 17 ಜುಲೈ 2010</ref> ಅಸ್ಸಾಂಜೆಯವರು ಆಕ್ಸ್ಫರ್ಡ್ನಲ್ಲಿ 2010 ರ ಜುಲೈ 19 ರಂದು ನಡೆದ ಟಿಇಡಿ ಸಮ್ಮೇಳನದಲ್ಲಿ ಅನಿರೀಕ್ಷಿತ ಭಾಷಣಕಾರರಾಗಿದ್ದರು ಮತ್ತು ವಿಕಿಲೀಕ್ಸ್ ಇದೀಗ ಮತ್ತೊಮ್ಮೆ ಸಲ್ಲಿಕೆಗಳನ್ನು ಸ್ವೀಕರಿಸುತ್ತಿದೆ ಎಂದು ದೃಢಪಡಿಸಿದರು.<ref>{{cite web | url = http://blog.ted.com/2010/07/surprise_speake.php | title = Surprise speaker at TEDGlobal: Julian Assange in Session 12 | publisher = Blog.ted.com | date = | accessdate = 21 August 2010 | archive-date = 19 ಜುಲೈ 2010 | archive-url = https://web.archive.org/web/20100719101851/http://blog.ted.com/2010/07/surprise_speake.php | url-status = dead }}</ref><ref name="ted_2010" /><ref name="geekosystem_2010" /> 26 ನೇ ಜುಲೈರಂದು, ಅಫ್ಘಾನ್ ಯುದ್ಧ ಡೈರಿಯು ಬಿಡುಗಡೆಯ ಬಳಿಕ ಅಸ್ಸಾಂಜೆಯವರು ಫ್ರಂಟ್ಲೈನ್ ಕ್ಲಬ್ನಲ್ಲಿ ಸುದ್ದಿ ಗೋಷ್ಠಿಗೆ ಹಾಜರಾದರು.<ref name="ustream_2010" />
=== ಯುಎಸ್ ರಾಜತಾಂತ್ರಿಕ ವರದಿಗಳ ಬಿಡುಗಡೆ ===
{{Main|United States diplomatic cables leak}}
2010 ರ ನವೆಂಬರ್ 28 ರಂದು, ವಿಕಿಲೀಕ್ಸ್ ತನ್ನ ಬಳಿ ಇದ್ದು ಸುಮಾರು 251,000 ಅಮೇರಿಕದ ರಾಜತಾಂತ್ರಿಕ ವರದಿಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿತು, ಅದರಲ್ಲಿ ಶೇಕಡಾ 53 ಕ್ಕೂ ಹೆಚ್ಚು ರಹಸ್ವಯ ರ್ಗೀಕರಿಸದ ಎಂದು ಪಟ್ಟಿ ಮಾಡಲಾಗಿತ್ತು, ಶೇಕಡಾ 40 ವರದಿಗಳು "ಗೋಪ್ಯ"ವಾಗಿದ್ದವು ಮತ್ತು ಶೇಕಡಾ ಆರಕ್ಕೂ ಹೆಚ್ಚು "ರಹಸ್ಯ"ವೆಂದು ವರ್ಗೀಕರಿಸಲಾಗಿತ್ತು. ಮಾರನೇ ದಿನ, ಆಸ್ಟ್ರೇಲಿಯದ ಅಟಾರ್ನಿ ಜನರಲ್ ಆದ ರಾಬರ್ಟ್ ಮ್ಯಾಕ್ಕ್ಲೆಲಾಂಡ್ ಅವರು ಅಸ್ಸಾಂಜೆಯವರ ಚಟುವಟಿಕೆಗಳು ಮತ್ತು ವಿಕಿಲೀಕ್ಗಳನ್ನು ತನಿಖೆ ಮಾಡುವುದಾಗಿ ಪತ್ರಿಕೆಗಳಿಗೆ ತಿಳಿಸಿದರು.<ref>{{cite web | url = http://english.aljazeera.net/news/asia-pacific/2010/11/2010112961154954144.html | title = Australia opens WikiLeaks inquiry | publisher = Al Jazeera English | date = | accessdate = 1 December 2010}}</ref> ಅವರು ಹೇಳುತ್ತಾ " ಆಸ್ಟ್ರೇಲಿಯದ ದೃಷ್ಟಿಯಿಂದ, ಈ ಮಾಹಿತಿಯ ಬಿಡುಗಡೆಯ ಮೂಲಕ ಸಂಭಾವ್ಯವಾಗಿ ಸಾಕಷ್ಟು ಕ್ರಿಮಿನಲ್ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ನಾವು ಭಾವಿಸುತ್ತೇನೆ. ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್ ಅವರು ಆ ಬಗ್ಗೆ ಗಮನ ಹರಿಸುತ್ತಿದ್ದಾರೆ" ಎಂದು ಹೇಳಿದರು.<ref>{{cite web | url = http://www.attorneygeneral.gov.au/www/ministers/mcclelland.nsf/Page/Transcripts_2010_FourthQuarter_29November2010-DoorstoponleakingofUSclassifieddocumentsbyWikiLeaks | title = Doorstop on leaking of US classified documents by Wikileaks | publisher = Attorney-General for Australia | date = 29 November 2010 | accessdate = 1 December 2010 | archive-date = 6 ಅಕ್ಟೋಬರ್ 2011 | archive-url = https://web.archive.org/web/20111006010131/http://www.attorneygeneral.gov.au/www/ministers/mcclelland.nsf/Page/Transcripts_2010_FourthQuarter_29November2010-DoorstoponleakingofUSclassifieddocumentsbyWikiLeaks | url-status = dead }}</ref> ಆಸ್ಟ್ರೇಲಿಯದ ಅಧಿಕಾರಿಗಳು ಅಸ್ಸಾಂಜೆಯವರ ಪಾಸ್ಪೋರ್ಟ್ ಅನ್ನು ರದ್ದು ಮಾಡುವ ಸಾಧ್ಯತೆಯನ್ನು ಮ್ಯಾಕ್ಕ್ಲೆಲಾಂಡ್ ಅವರು ತಳ್ಳಿ ಹಾಕಲಿಲ್ಲ, ಮತ್ತು ಆರೋಪಗಳಿಗೆ ಒಳಗಾದರೆ ಅಸ್ಸಾಂಜೆಯವರು ಆಸ್ಟ್ರೇಲಿಯಕ್ಕೆ ಹಿಂತಿರುಗಬೇಕೆಂದು ಎಚ್ಚರಿಕೆ ನೀಡಿದರು.<ref>{{cite web | url = http://www.monstersandcritics.com/news/asiapacific/news/article_1602108.php/Australia-warns-WikiLeaks-Assange-of-charges-if-he-returns | title = Australia warns Assange of possible charges if he returns to Australia | publisher = Monstersandcritics.com | date = 17 November 2010 | accessdate = 1 December 2010 | archiveurl = https://web.archive.org/web/20101202041632/http://www.monstersandcritics.com/news/asiapacific/news/article_1602108.php/Australia-warns-WikiLeaks-Assange-of-charges-if-he-returns | archivedate = 2 ಡಿಸೆಂಬರ್ 2010 | url-status = dead }}</ref> 2010 ರ ಡಿಸೆಂಬರ್ 11 ರವರೆಗೆ ಕೇವಲ 1295 ವರದಿಗಳು ಅಥವಾ ಒಟ್ಟಾರೆಯಾಗಿ ಶೇಕಡಾ 1 ರಲ್ಲಿ ಅರ್ಧ ಭಾಗದಷ್ಟನ್ನು ಬಿಡುಗಡೆ ಮಾಡಲಾಯಿತು.<ref>[https://web.archive.org/web/20101205013631/http://213.251.145.96/cablegate.html "ಸೀಕ್ರೆಟ್ ಯುಎಸ್ ಎಂಬಾಸ್ಸಿ ಕೇಬಲ್ಸ್"], ವಿಕಿಲೀಕ್ಸ್. 2010 ಡಿಸೆಂಬರ್ 11ರಂದು ಮರುಪಡೆಯಲಾಗಿದೆ</ref><ref name="Greenwald2010-12-10" />
ಸೋರಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ತನಿಖೆಯನ್ನು ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ ಪ್ರಾರಂಭಿಸಿದೆ. ಹಲವು ಕಾನೂನುಗಳ ಅಡಿಯಲ್ಲಿ ಅಸ್ಸಾಂಜೆ ಅವರ ವಿರುದ್ಧ ಯುಎಸ್ ಪ್ರಾಸಿಕ್ಯೂಟರ್ಗಳು ಆರೋಪಗಳನ್ನು ಪರಿಗಣಿಸುತ್ತಿದ್ದಾರೆ, ಆದರೆ ಯಾವುದೇ ಕಾನೂನು ಜರುಗಿಸುವಿಕೆಯ ಕಷ್ಟಕರವಾಗಿದೆ.<ref>{{cite news|last=Savage|first=Charlie|title=U.S. Prosecutors Study WikiLeaks Prosecution|url=https://www.nytimes.com/2010/12/08/world/08leak.html?partner=rss&emc=rss|accessdate=9 December 2010|newspaper=[[ದ ನ್ಯೂ ಯಾರ್ಕ್ ಟೈಮ್ಸ್]]|date=7 December 2010}}</ref>
ಪೆಂಟಗಾನ್ ಪೇಪರ್ಸ್ನ ಮಾಹಿತಿ ನೀಡುಗರಾದ ಡೇನಿಯಲ್ ಎಲ್ಸ್ಬರ್ಗ್ ಅವರು ಹೇಳುತ್ತಾ ಅಸ್ಸಾಂಜೆಯವರು "ನಮ್ಮ [ಅಮೇರಿಕದ] ಪ್ರಜಾತಂತ್ರ ವ್ಯವಸ್ಥೆಯಲ್ಲಿ ವರ್ತಿಸುತ್ತಿದ್ದಾರೆ ಮತ್ತು ಈ ರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಕಾನೂನುಗಳಾಗಿಲ್ಲದ ನಿಖರವಾಗಿ ರಹಸ್ಯ ನಿಯಂತ್ರಣಗಳನ್ನು ಪ್ರಶ್ನಿಸುವ ಮೂಲಕ ನಮ್ಮ ಆಡಳಿತದ ಕಾನೂನಿಗೆ ವರ್ತಿಸುತ್ತಿದ್ದಾರೆ, ". ಯುಎಸ್ಗೆ ರಾಷ್ಟ್ರೀಯ ಸುರಕ್ಷತೆಯ ಪರಿಗಣನೆಯ ಸಮಸ್ಯೆಗೆ ಸಂಬಂಧಿಸಿದಂತೆ, ಎಲ್ಸ್ಬರ್ಗ್ ಅವರು "ಹಲವು ವಿಧಗಳಲ್ಲಿ ಅವರು ನಿಜವಾಗಿಯೂ ಅತೀ ಸ್ಪರ್ಧಾತ್ಮಕ ವ್ಯಕ್ತಿಯಾಗಿದ್ದಾರೆ" ಎಂದು ಹೇಳಿದರು. ಈ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲು ಅರ್ಹತೆ ಹೊಂದಿದ್ದವು ಎಂದು ಅವರ ಒಲವಾಗಿದೆ ಎಂದು ನಾನು ಭಾವಿಸುತ್ತೇನೆ. ನಾವು ವಾದಿಸಲಾಗದ ಅತೀ ಚಿಕ್ಕ ಭಾಗದ ಬಗ್ಗೆ ವಾದಿಸುತ್ತಿದ್ದೇವೆ. ಯಾರೊಬ್ಬರ ರಾಷ್ಟ್ರೀಯ ಸುರಕ್ಷತೆಗೆ ಹಾನಿ ಮಾಡುವ ಯಾವುದನ್ನೂ ಅವರು ಇನ್ನೂ ಹೊರತಂದಿಲ್ಲ" ಎಂದು ಹೇಳಿದರು.<ref name="ellsbergdanger">
{{cite web | url = http://www.thedailybeast.com/blogs-and-stories/2010-06-11/daniel-ellsberg-wikileaks-julian-assange-in-danger | title = Daniel Ellsberg: Wikileaks' Julian Assange "in Danger" | work = [[The Daily Beast]] | first = Samuel P. | last = Jacobs | date = 11 June 2010 | accessdate = 5 July 2010}}
</ref> ವಿಶ್ವದಾದ್ಯಂತದ ಯುಸ್ ರಾಯಭಾರಿಗಳಿಗೆ "ಬೇಹುಗಾರಿಕೆಯ ನಡವಳಿಕೆಯಲ್ಲಿ ತೊಡಗಿಸಿಕೊಳ್ಳಲು" ಆದೇಶಿಸಲಾಗಿತ್ತು ಎಂಬುದನ್ನು ಸೋರಿಕೆಯಾದ ವರದಿಗಳು ತೋರಿಸಿವೆ ಅಲ್ಲದೇ ಅವುಗಳು "ಯುಎಸ್ ಸರ್ಕಾರಗಳಲ್ಲಿ ಕಾನೂನು ನಿಯಮಾವಳಿಗಳ ನ್ಯೂನ್ಯತೆಗೆ ಹಂತಹಂತವಾಗಿನ ಬದಲಾವಣೆಗಳು ಮತ್ತು ಅದನ್ನು ಬಹಿರಂಗಗೊಳಿಸಲೇಬೇಕು ಮತ್ತು ನಾವು ಅದನ್ನು ಮಾಡುತ್ತಿದ್ದೇವೆ" ಎಂದು ಅಸ್ಸಾಂಜೆಯವರು ಲಂಡನ್ ವರದಿಗಾರರಿಗೆ ತಿಳಿಸಿದರು.<ref name="ReutersBail">{{cite web| title=UK court upholds bail for WikiLeaks' Assange| url=http://ca.reuters.com/article/topNews/idCAL3E6N80HH20101216| publisher=[[Thomson Reuters]]| date=16 December 2010| accessdate=16 December 2010| archive-date=12 ಆಗಸ್ಟ್ 2011| archive-url=https://web.archive.org/web/20110812143150/http://ca.reuters.com/article/topNews/idCAL3E6N80HH20101216| url-status=dead}}</ref>
=== ಪ್ರಕಾಶಕರಾಗಿ ಪಾತ್ರ ===
"ಮಾನವ ಹಕ್ಕುಗಳ ಪತ್ರಿಕೋದ್ಯಮದಲ್ಲಿ ಉತ್ಕೃಷ್ಟತೆಯನ್ನು ಗುರುತಿಸುವ" ಉದ್ದೇಶವನ್ನು ಹೊಂದಿರುವ ಆಮ್ನೆಸ್ಟಿ ಇಂಟರ್ನ್ಯಾಷನಲ್,<ref name="amnestyint" /> ನಿಂದ ಅಸ್ಸಾಂಜೆಯವರು 2009 ಮಾಧ್ಯಮ ಪ್ರಶಸ್ತಿಯನ್ನು ಸ್ವೀಕರಿಸಿದರು<ref>{{cite web | url = https://www.amnesty.org.uk/content.asp?CategoryID=10058 | title = AIUK: Media Awards | publisher = Amnesty.org.uk | accessdate = 4 December 2010}}</ref> ಮತ್ತು ಅವರನ್ನು ತನಿಖಾ ಪತ್ರಿಕೋದ್ಯಮದ ಕೇಂದ್ರದವರು ಪತ್ರಿಕೋದ್ಯಮಿ ಎಂದು ಮಾನ್ಯ ಮಾಡಲಾಯಿತು
.<ref name="tcij">{{cite web | url = http://www.tcij.org/about-2/teachers-and-speakers/julian-assange | title = Julian Assange | publisher = [[Centre for investigative journalism]] | accessdate = 3 December 2010 | archive-date = 21 ಏಪ್ರಿಲ್ 2012 | archive-url = https://web.archive.org/web/20120421030036/http://www.tcij.org/about-2/teachers-and-speakers/julian-assange | url-status = dead }}</ref> 2010 ರ ಡಿಸೆಂಬರ್ನಲ್ಲಿ, ಯುಸ್ ಸ್ಟೇಟ್ ಡಿಪಾರ್ಟ್ಮೆಂಟ್ನ ವಕ್ತಾರರಾದ ಫಿಲಿಫ್ ಜೆ. ಕ್ರೌಲಿಯವರು ಅಸ್ಸಾಂಜೆಯವರು ಪತ್ರಿಕೋದ್ಯಮಿ ಎನ್ನುವ ವಿವರಣೆಗೆ ವಿರೋಧಿಸಿದರು,<ref>[http://www.indianexpress.com/news/wikileaks-founder-julian-assange-anarchist-not-journalist/719895/ ವಿಕಿಲೀಕ್ಸ್ ಫೌಂಡರ್ ಜೂಲಿಯನ್ ಅಸ್ಸಾಂಜೆ 'ಅನಾರ್ಕಿಸ್ಟ್', ನಾಟ್ ಜರ್ನಲಿಸ್ಟ್], ದಿ ಇಂಡಿಯನ್ ಎಕ್ಸ್ಪ್ರೆಸ್, 3 ಡಿಸೆಂಬರ್ 2010.</ref> ಮತ್ತು ವಿಕಿಲೀಕ್ಸ್ ಅನ್ನು ಮಾಧ್ಯಮ ಸಂಸ್ಥೆಯೆಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಗುರುತಿಸುವುದಿಲ್ಲ ಎಂದು ಹೇಳಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ, ಕ್ರೌಲಿಯವರು; " ಅವರು ಪತ್ರಿಕೋದ್ಯಮಿಯಲ್ಲ, ಅವರು ಕ್ರಾಂತಿಕಾರಿ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.<ref>ಫಿಲಿಫ್ ಜೆ. ಕ್ರೌಲಿ, ಸಹಾಯಕ ಕಾರ್ಯದರ್ಶಿ, [http://www.state.gov/r/pa/prs/dpb/2010/12/152291.htm 2 ಡಿಸೆಂಬರ್ 2010 ಡೈಲಿ ಪ್ರೆಸ್ ಬ್ರೀಫಿಂಗ್], ವಾಷಿಂಗ್ಟನ್, ಡಿಸಿ</ref> ''ದಿ ಸ್ಪೆಕ್ಟೇಟರ್'' ನಲ್ಲಿ ಅಲೆಕ್ಸ್ ಮ್ಯಾಸ್ಸಿಯವರು "ಹೌದು, ಜೂಲಿಯನ್ ಅಸ್ಸಾಂಜೆಯವರು ಪತ್ರಿಕೋದ್ಯಮಿ" ಎಂಬ ಲೇಖನವನ್ನು ಬರೆದರು, ಆದರೆ "ಪತ್ರಿಕಾ ವರದಿಗಾರ" ಎಂದು ಅಸ್ಸಾಂಜೆಯವರನ್ನು ಅತ್ಯುತ್ತಮವಾಗಿ ವಿವರಿಸಬಹುದು ಎಂದು ಒಪ್ಪಿಕೊಂಡರು.<ref name="massie" /> ಅಸ್ಸಾಂಜೆಯವರು ತಾವು ವಾಸ್ತವಿಕ ಸುದ್ದಿಸಂಗತಿಗಳನ್ನು 25 ನೇ ವರ್ಷದಿಂದಲೇ ಪ್ರಕಟಿಸುತ್ತಿರುವುದಾಗಿ ಹೇಳುತ್ತಾ ತಾವು ಪತ್ರಿಕೋದ್ಯಮಿಯೇ ಅಥವಾ ಅಲ್ಲವೇ ಎಂದು ಚರ್ಚಿಸುವುದು ಅಗತ್ಯವಿಲ್ಲ ಎಂದರು. ತಮ್ಮ ಪಾತ್ರವು "ಮೂಲಭೂತವಾಗಿ ಇತರ ಪತ್ರಿಕೋದ್ಯಮಿಗಳನ್ನು ಸಂಯೋಜಿಸುವ ಮತ್ತು ನಿರ್ದೇಶಿಸುವ ಪ್ರಕಾಶಕರು ಮತ್ತು ಮುಖ್ಯ ಸಂಪಾದಕರದ್ದು" ಎಂದು ಅವರು ಹೇಳಿದರು.<ref>{{cite news | url = https://www.theguardian.com/world/blog/2010/dec/03/julian-assange-wikileaks | title = Julian Assange answers your questions | publisher = The Guardian | author = Julian Assange | date = 3 December 2010 | accessdate = 3 December 2010}}</ref>
== ತನಿಖೆಗಳು ==
=== ಯುನೈಟೆಡ್ ಸ್ಟೇಟ್ಸ್ನಲ್ಲಿ ಬೇಹುಗಾರಿಕೆ ತನಿಖೆ ===
ಜಂಟಿ ಕಾನೂನು ಇಲಾಖೆ-ಪೆಂಟಾಗಾನ್ ತಂಡದ ತನಿಖಾದಾರರು ಬೇಹುಗಾರಿಕೆ ಕಾಯಿದೆಯ ಅಡಿಯಲ್ಲಿ ಅಸ್ಸಾಂಜೆಯವರ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆಗಳನ್ನು ಅನ್ವೇಷಿಸುತ್ತಿವೆ ಎಂದು ಪ್ರಕಟಿತ ವರದಿಗಳು ಸೂಚಿಸಿವೆ.ಯುಎಸ್ ಸರ್ಕಾರವು ಅಸ್ಸಾಂಜೆಯವರನ್ನು ಶಿಕ್ಷೆಗೆ ಒಳಪಡಿಸುತ್ತದೆಂಬ ಸಂಭವದ ಕುರಿತಂತೆ ಅಟಾರ್ನಿ ಜನರ್ ಎರಿಕ್ ಹೋಲ್ಡರ್ ಅವರು ಪ್ರತಿಕ್ರಯಿಸುತ್ತಾ "ಇದು ಕತ್ತಿನ ಅಲಗು ಸದ್ದು ಮಾಡಿದಂತಲ್ಲ" ಎಂದು ಹೇಳಿದರು.<ref>{{cite web| author = David Samuels | url = https://www.theatlantic.com/international/archive/2010/12/the-shameful-attacks-on-julian-assange/67440/ | publisher = The Atlantic | title = The Shameful Attacks on Julian Assange | date = 3 December 2010 | accessdate = 10 December 2010 }}</ref>
ಸೋರಿಕೆಯ ವಿಷಯವಸ್ತುಗಳ ಮುಂದಿನ ಬಿಡುಗಡೆಗಳನ್ನು ನಿಲ್ಲಿಸುವ ಮಾರ್ಗಗಳನ್ನು ಯು.ಎಸ್ ಪರಿಶೀಲಿಸುತ್ತಿದೆ ಎಂದು ಯು.ಎಸ್. ಉಪಾಧ್ಯಕ್ಷರಾದ ಜೋಸೆಫ್ "ಜಾಯ್" ಬಿಡೆನ್ಅವರು ಪತ್ರಿಕೆಗಳಿಗೆ ತಿಳಿಸಿದರು.<ref>{{cite news| url=http://www.washingtonpost.com/wp-dyn/content/article/2010/12/19/AR2010121901359.html| title=Biden: US trying to stop WikiLeaks disclosures| publisher=The Washington Post| date=December 19, 2010}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಅಸ್ಸಾಂಜೆಯವರು ಯಾವುದೇ ಕಾನೂನುಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬ ಪ್ರಶ್ನೆಗೆ ಅವರು "ಒಂದು ವೇಳೆ ಅವರು ಈ ರಹಸ್ಯ ವರ್ಗದ ದಾಖಲೆಗಳನ್ನು ಯುಎಸ್ ಸೈನ್ಯದ ಸದಸ್ಯನೊಬ್ಬನಿಂದ ಪಡೆಯಲು ಸಂಚು ಮಾಡಿದ್ದರೆ ಅದು ಮೂಲಭೂತವಾಗಿ ನಿಮ್ಮ ಬಳಿಗೆ ಯಾರಾದರೂ ಬಂದು... ನೀವು ಪತ್ರಕರ್ತರಾಗಿದ್ದೀರಿ, ರಹಸ್ಯ ವರ್ಗದ ದಾಖಲೆಗಳನ್ನು ಇಲ್ಲಿವೆ ನೋಡಿ ಎಂಬುದಾಗಿ ನೀಡುವುದಕ್ಕಿಂತ ವಿಭಿನ್ನವಾಗಿರುತ್ತದೆ."<ref>{{cite news| url=https://www.theguardian.com/media/2010/dec/19/assange-high-tech-terrorist-biden| author=Ewen MacAskill| title=Julian Assange like a hi-tech terrorist, says Joe Biden| publisher=The Guardian| date=December 19, 2010}}</ref>
ಈಗಿನ ಮತ್ತು ಮಾಜಿ ಯುಎಸ್ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡು ಹಲವು ಟಿಪ್ಪಣಿಗಾರರು ಅಸ್ಸಾಂಜೆಯವರ ವಿರುದ್ಧ ಭಯೋತ್ಪಾದನೆಯ ಆರೋಪವನ್ನು ಮಾಡಿದರು. ಸೆನೇಟ್ನ ಅಲ್ಪಸಂಖ್ಯಾತ ನಾಯಕರಾದ ಮಿಚ್ ಮ್ಯಾಕ್ಕೆನೆಲ್ ಅವರು ಅಸ್ಸಾಂಜೆಯವರನ್ನು "ಆಧುನಿಕ ಭಯೋತ್ಪಾದಕ" ಎಂಬುದಾಗಿ ಕರೆದರು.<ref>{{cite news| url=http://www.msnbc.msn.com/id/40517039/ns/politics/40516927| author=Tom Curry| title=McConnell optimistic on deals with Obama| publisher=msnbc.com| date=December 5, 2010| access-date=29 ಡಿಸೆಂಬರ್ 2010| archive-date=17 ಏಪ್ರಿಲ್ 2011| archive-url=https://web.archive.org/web/20110417181953/http://www.msnbc.msn.com/id/40517039/ns/politics/40516927| url-status=dead}}</ref> ಮಾಜಿ ಯುಎಸ್ ಸಂಸತ್ತಿನ ಸಭಾಧ್ಯಕ್ಷರಾದ ನ್ಯೂಟ್ ಗಿಂಗ್ರಿಚ್ ಅವರು "ಜನರು ಸಾಯಲು ಕಾರಣವಾಗುವ ಮಾಹಿತಿ ಭಯೋತ್ಪಾದನೆಯು ಭಯೋತ್ಪಾದನೆಯೇ ಆಗಿದೆ, ಮತ್ತು ಜೂಲಿಯನ್ ಅಸ್ಸಾಂಜೆಯವರು ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ. ಅವರನ್ನು ವೈರಿ ಯೋಧನಾಗಿ ಪರಿಗಣಿಸಬೇಕು" ಎಂಬುದಾಗಿ ಹೇಳಿದ್ದರೆಂದು ವರದಿಯಾಯಿತು.<ref>{{cite web| url=http://thehill.com/blogs/blog-briefing-room/news/132037-gingrich-blames-obama-on-wikileaks-labels-assange-a-terrorist | author = Shane D'Aprile| title=Gingrich: Leaks show Obama administration 'shallow,' 'amateurish'| publisher=The Hill| date=December 5, 2010}}</ref> ಮಾಧ್ಯಮದೊಳಗಡೆಯೇ, ''ವಾಷಿಂಗ್ಟನ್ ಟೈಮ್ಸ್'' ನ ಜೆಫ್ರಿ ಟಿ. ಕುಹ್ನರ್ ಅವರು ಸಂಪಾದಕೀಯದಲ್ಲಿ ಅಸ್ಸಾಂಜೆಯವರನ್ನು "ಇತರ ಹೆಸರಾಂತ ಭಯೋತ್ಪಾದಕರನ್ನು ಪರಿಗಣಿಸಿದ ರೀತಿಯಲ್ಲಿಯೇ ಅಸ್ಸಾಂಜೆಯವರನ್ನೂ ಪರಿಗಣಿಸಬೇಕು" ಎಂದು ಹೇಳಿದರು;<ref>{{cite web| url=http://dcist.com/2010/12/washington_times_editiorial_actuall.php| title=Washington Times Editorial Suggests Killing Julian Assange| publisher=dcist| accessdate=December 13, 2010| archive-date=9 ನವೆಂಬರ್ 2011| archive-url=https://web.archive.org/web/20111109013639/http://dcist.com/2010/12/washington_times_editiorial_actuall.php| url-status=dead}}</ref><ref>{{cite news| url=http://www.washingtontimes.com/news/2010/dec/2/assassinate-assange/?page=2 | author = Jeffrey T. Kuhner| title=KUHNER: Assassinate Assange| publisher=The Washington Times| date=December 2, 2010}}</ref> ಫಾಕ್ಸ್ ನ್ಯೂಸ್ನ ರಾಷ್ಟ್ರೀಯ ಸುರಕ್ಷತಾ ವಿಮರ್ಶಕ ಮತ್ತು ನಿರ್ವಾಹಕರಾದ"ಕೆ.ಟಿ." ಮ್ಯಾಕ್ಫರ್ಲಾಂಡ್ ಅವರು ಅಸ್ಸಾಂಜೆಯವರನ್ನು ಭಯೋತ್ಪಾದಕರೆಂದು ಕರೆದು, ವಿಕಿಲೀಕ್ಸ್ ಎನ್ನುವುದು "ಒಂದು ಭಯೋತ್ಪಾದಕ ಸಂಘಟನೆ" ಯಾಗಿದ್ದು ಸೋರಿಕೆಯನ್ನು ಮಾಡಿದ ಕುರಿತಂತೆ ಅವರು ತಪ್ಪಿತಸ್ಥರೆಂದು ಸಾಬೀತಾದರೆ ಬ್ರಾಡ್ಲಿ ಮ್ಯಾನಿಂಗ್ ರ ಮರಣದಂಡನೆಗೆ ಒತ್ತಾಯಿಸಿದರು; ಮತ್ತು [[ರಿಚರ್ಡ್ ನಿಕ್ಸನ್|ನಿಕ್ಸನ್]]ನ ಮಾಜಿ ಸಹಾಯಕ ಮತ್ತು ರೇಡಿಯೋ ನಿರ್ವಾಹಕರಾದ ಜಿ. ಗೋರ್ಡೋನ್ ಲಿಡ್ಡಿ ಅವರು ಅಸ್ಸಾಂಜೆಯವರ ಹೆಸರನ್ನು ಮೊಕದ್ದಮೆಯ ವಿಚಾರಣೆಯಿಲ್ಲದೇ ಹತ್ಯೆ ಮಾಡಬಹುದಾದ ಭಯೋತ್ಪಾದಕರ "ಕೊಲ್ಲುವವರ ಪಟ್ಟಿ"ಗೆ ಸೇರಿಸಬೇಕೆಂದು ಸೂಚಿಸಿದ್ದಾರೆಂದು ವರದಿಯಾಯಿತು.
ಕೆನಡಾದ ಪ್ರಧಾನಿಯವರಾದ ಸ್ಟೀಫನ್ ಹಾರ್ಪರ್ ಅವರ ಮಾಜಿ ಪ್ರಚಾರ ವ್ಯವಸ್ಥಾಪಕರಾದ ಟಾಮ್ ಫ್ಲಾನಗನ್ ಅವರು ಜೂಲಿಯನ್ ಅಸ್ಸಾಂಜೆ ಅವರನ್ನು ಹತ್ಯೆ ಮಾಡಬೇಕೆಂದು 2010 ರ ನವೆಂಬರ್ನಲ್ಲಿ ಪ್ರತಿಕ್ರಿಯಿಸಿದ್ದರು. ಫ್ಲಾನಗನ್ ಅವರ ವಿರುದ್ಧ ದೂರನ್ನು ದಾಖಲಿಸಲಾಗಿತ್ತು, ಆ ದೂರಿನಲ್ಲಿ ಫ್ಲಾನಗನ್ ಅವರನ್ನು "ಕೆನಡಾದ ಕ್ರಿಮಿನಲ್ ಕೋಡ್ಗೆ ವಿರುದ್ಧವಾಗಿ ಜೂಲಿಯನ್ ಅಸ್ಸಾಂಜೆ ಅವರ ಹತ್ಯೆಯ ಹವಣಿಕೆಯನ್ನು ಮಾಡಿದರು ಮತ್ತು/ಅಥವಾ ಪ್ರಚೋದಿಸಿದರು" ಎಂದು ವಿವರಿಸಲಾಗಿತ್ತು, ಅವರು ಈ ಟಿಪ್ಪಣಿಯನ್ನು ಸಿಬಿಸಿ ಕಾರ್ಯಕ್ರಮವಾದ ಪವರ್ ಎಂಡ್ ಪೊಲಿಟಿಕ್ಸ್ನಲ್ಲಿ ಮಾಡಿದ್ದರು.<ref>{{cite web| last = Barber| first = Mike| authorlink = Mike Barber| title = Heat's on Flanagan for 'inciting murder' of WikiLeaks founder; PM's ex-adviser subject of formal police complaint| publisher = Ottawa Citizen| date = 2010-12-06| url = http://www.ottawacitizen.com/news/Heat+Flanagan+inciting+murder+WikiLeaks+founder/3932545/story.html| accessdate = 2010-12-09| archive-date = 9 ಡಿಸೆಂಬರ್ 2010| archive-url = https://web.archive.org/web/20101209165306/http://www.ottawacitizen.com/news/Heat+Flanagan+inciting+murder+WikiLeaks+founder/3932545/story.html| url-status = dead}}</ref> ಫ್ಲಾನಗನ್ ಅವರು ಕಾರ್ಯಕ್ರಮದ ಸಂದರ್ಭದಲ್ಲಿ ಮಾಡಿದ ಟಿಪ್ಪಣಿಗಳಿಗೆ ಕ್ಷಮೆಯಾಚಿಸಿದರು ಮತ್ತು ಅವರ ಉದ್ದೇಶವು ಎಂದಿಗೂ "ಅಸ್ಸಾಂಜೆಯವರ ಹತ್ಯೆಯನ್ನು ಸಮರ್ಥಿಸುವುದಾಗಲೀ ಅಥವಾ ಸೂಚಿಸುವುದಾಗಲಿ ಆಗಿರಲಿಲ್ಲ" ಎಂದು ಹೇಳಿದರು.<ref>{{cite web |url=http://oncampus.macleans.ca/education/2010/12/04/let-flanagans-remarks-die/ |title=Let Flanagan’s remarks die – - Macleans OnCampus |publisher=Oncampus.macleans.ca |date=2010-12-04 |accessdate=2010-12-16 |archive-date=8 ಡಿಸೆಂಬರ್ 2010 |archive-url=https://web.archive.org/web/20101208015908/http://oncampus.macleans.ca/education/2010/12/04/let-flanagans-remarks-die/ |url-status=dead }}</ref>
ಯುಎಸ್ ಸಿಬ್ಬಂದಿಗಳ ಜಂಟಿ ಮುಖ್ಯಸ್ಥರಾದ ಮೈಕ್ ಮುಲ್ಲೆನ್ ಅವರು "ಅಸ್ಸಾಂಜೆಯವರು ಅವರು ಭಾವಿಸುವ ಮತ್ತು ಅವರ ಮೂಲಗಳು ಮಾಡುತ್ತಿರುವ ಉತ್ತಮ ವಿಷಯಗಳ ಬಗ್ಗೆ ಅವರಿಗೆ ಇಷ್ಟವಾಗುವ ಯಾವುದನ್ನಾದರೂ ಹೇಳಬಹುದು, ಆದರೆ ಸತ್ಯಸಂಗತಿಯೆಂದರೆ, ಕೆಲವು ಯುವ ಸೈನಿಕರ ಅಥವಾ ಅಫ್ಘಾನ್ ಕುಟುಂಬದ ರಕ್ತವನ್ನು ಅವರು ಈಗಾಗಲೇ ಅವರ ಕೈಗಳಲ್ಲಿ ಹೊಂದಿರಬಹುದು." ಈ ರೀತಿ ಸಂಭವಿಸಿರುವುದನ್ನು ಅಸ್ಸಾಂಜೆಯವರು ನಿರಾಕರಿಸುತ್ತಾ "...ಪ್ರತಿ ನಿತ್ಯ ಹತ್ಯೆಯನ್ನು ಆದೇಶಿಸಿದ [ರಾಬರ್ಟ್] ಗೇಟ್ಸ್ ಮತ್ತು ಮುಲ್ಲೆನ್ ಅವರು ನಮ್ಮ ಕೈಗಳಲ್ಲಿ ನಾವು ರಕ್ತವನ್ನು ಹೊಂದಿದ್ದೇವೆಯೇ ಎಂಬ ಊಹಾತ್ಮಕ ಅರ್ಥೈಸುವಿಕೆಯತ್ತ ತೋರಿಸಲು ಜನರನ್ನು ಕರೆತರಲು ಪ್ರಯತ್ನಿಸುವುದು ನಿಜವಾಗಿಯೂ ವಿಲಕ್ಷಣವಾಗಿದೆ. ಈ ಇಬ್ಬರು ವ್ಯಕ್ತಿಗಳು ಚರ್ಚಾಸ್ಪದವಾಗಿ ಆ ಯುದ್ಧಗಳ ರಕ್ತದಲ್ಲಿ ದಾಟಿ ಹೋಗಿದ್ದಾರೆ" ಎಂದು ಹೇಳಿದರು."<ref>{{cite news| url=http://www.democracynow.org/2010/8/3/julian_assange_responds_to_increasing_us | author = Amy Goodman| title=Julian Assange Responds to Increasing US Government Attacks on WikiLeaks| publisher=Democracy Now| date=August 3, 2010}}</ref>
=== ಸ್ವೀಡಿಷ್ ಲೈಂಗಿಕ ಆರೋಪಗಳು ===
2010 ರ ಆಗಸ್ಟ್ 20 ರಂದು, 26 ಮತ್ತು 31 ವರ್ಷದ ಇಬ್ಬರು ಮಹಿಳೆಯರೊಂದಿಗೆ <ref>{{cite web| author = TNN | url = http://timesofindia.indiatimes.com/world/us/Sex-accusers-boasted-about-their-conquest-of-WikiLeaks-founder-Julian-Assange/articleshow/7068149.cms | title = Sex accusers boasted about their 'conquest' of WikiLeaks founder Julian Assange | publisher = The Times of India | work = Timesofindia.indiatimes.com | date = 21 August 2010 | accessdate = 10 December 2010 }}</ref> ಒಂದನ್ನು ಎಂಕೋಪಿಂಗ್ ಮತ್ತೊಂದನ್ನು ಸ್ಟಾಕ್ಹೋಮ್ ನಲ್ಲಿ ಮಾಡಿದ ಲೈಂಗಿಕ ಸಂಪರ್ಕಕ್ಕೆ ಸಂಬಂಧಿಸಿದಂತೆ ಅಸ್ಸಾಂಜೆಯವರ ವಿರುದ್ಧ ತನಿಖೆಯೊಂದನ್ನು ಸ್ವೀಡಿಶ್ ಪೊಲೀಸರು ಪ್ರಾರಂಭಿಸಿದರು.<ref>{{cite news | url = http://www.washingtonpost.com/wp-dyn/content/article/2010/09/08/AR2010090803240.html | title = WikiLeaks stalled by Swedish inquiry into allegations of rape by founder Assange | work = [[The Washington Post]] | date = 9 September 2010 | accessdate = 9 September 2010 | first = Edward | last = Cody}}</ref><ref>{{cite news | url = http://www.aklagare.se/In-English/ | title = Swedish inquiry reopen investigations into allegations of sexual misconduct by founder Assange on third level of appeal | work = Anklagermyndigheten | date = 10 September 2010 | accessdate = 10 September 2010 | archive-date = 17 ಡಿಸೆಂಬರ್ 2010 | archive-url = https://web.archive.org/web/20101217230139/http://www.aklagare.se/In-English/ | url-status = dead }}</ref> ಅಸ್ಸಾಂಜೆ ಮತ್ತು ಕೆಲವು ಮಾಧ್ಯಮ ಪ್ರತಿನಿಧಿಗಳು ಹೇಳುವಂತೆ ವಿವಾದವು ಸಹಮತದ ಆದರೆ ರಕ್ಷಿತವಲ್ಲದ ಲೈಂಗಿಕ ಸಂಪರ್ಕದ ಘಟನೆಯಿಂದ ಹುಟ್ಟಿತು<ref name="audec04">{{cite web | url = http://www.smh.com.au/world/timing-of-sex-case-sparks-claims-of-political-influence-20101203-18jv3.html | title = Timing of sex case sparks claims of political influence | author = Dylan Welch | publisher = The Sydney Morning Herald | date = 3 December 2010 | accessdate = 3 December 2010}}</ref><ref name="apdec02">{{cite news | url = http://www.physorg.com/news/2010-12-assange-legal-options-narrow.html | title = The noose tightens around WikiLeaks' Assange | author = Raphael Satter and Malin Rising |agency=Associated Press | date = 2 November 2010 | accessdate = 3 December 2010}}</ref> ಮತ್ತು ಅಸ್ಸಾಂಜೆ ಅವರ ಮೇಲಿನ ಆರೋಪಗಳು ವಿಕಿಲೀಕ್ಸ್ನ ವೈರಿಗಳು ಸಂಚು ಹೂಡಿದ "ನಟನೆ"ಯಾಗಿತ್ತು.<ref name="swissasylum">{{cite news | url = http://news.smh.com.au/breaking-news-technology/wikileaks-founder-may-seek-swiss-asylum-interview-20101105-17gbx.html | title = Wikileaks founder may seek Swiss asylum: interview | date = 5 November 2010 | newspaper = The Sydney Morning Herald | accessdate = 28 November 2010}}</ref> ಗಂಟೆಗಳ ಒಳಗೆ, ಸ್ಟಾಕ್ಹೋಮ್ನ ಮುಖ್ಯ ಪ್ರಾಸೆಕ್ಯೂಟರ್ ಆದ ಎವಾ ಫಿನ್ ಅವರು ಪ್ರಕರಣವನ್ನು ವಿಮರ್ಶಿಸಿದರು ಮತ್ತು ಅತ್ಯಾಚಾರದ ಸಾಕಷ್ಟು ಪುರಾವೆಯು ಇಲ್ಲವೆಂದು ತಿಳಿಸುತ್ತಾ ಅತ್ಯಾಚಾರದ ತನಿಖೆಯನ್ನು ಕೈಬಿಟ್ಟರು, ಆದರೆ ಲೈಂಗಿಕ ಹಿಂಸೆಯ ತನಿಖೆಯನ್ನು ಮುಂದುವರಿಸಿದರು <ref>{{cite web|url=http://www.bbc.co.uk/news/world-europe-11049316|title=Swedish rape warrant for Wikileaks' Assange cancelle|publisher=BBC}}</ref>, ಮತ್ತು ಆಗಸ್ಟ್ 30 ರಂದು ಸ್ಟಾಕ್ಹೋಮ್ ಪೊಲೀಸರು ಈ ಬಗ್ಗೆ ಅಸ್ಸಾಂಜೆಯವರನ್ನು ತನಿಖೆಗೆ ಒಳಪಡಿಸಿದರು.<ref>{{cite news | url = https://www.theguardian.com/media/2010/aug/31/wikileaks-julian-assange-questioned | title = WikiLeaks founder Julian Assange questioned by police | newspaper = The Guardian | date = 31 August 2010}}</ref> ಅಸ್ಸಾಂಜೆಯವರು ಆರೋಪಗಳನ್ನು ನಿರಾಕರಿಸಿದರು ತಾವು ಇಬ್ಬರು ಮಹಿಳೆಯರೊಂದಿಗೆ ಸಹಮತದ ಲೈಂಗಿಕ ಸಂಪರ್ಕವನ್ನು ಮಾಡಿದ್ದೇನೆಂದು ಹಾಗೂ ಇದು ತಮ್ಮ ತೇಜೋವಧೆಯ ಮತ್ತು ಹೆಸರಿಗೆ ಮಸಿ ಬಳಿಯುವ ಪ್ರಯತ್ನವೆಂದು ತಮ್ಮ ಬೆಂಬಲಿಗರೊಂದಿಗೆ ಹೇಳಿದರು.<ref>{{cite news | last = Davies | first = Caroline | url = https://www.theguardian.com/media/2010/aug/22/wikileaks-julian-assange-denies-rape-allegations | title = WikiLeaks founder Julian Assange denies rape allegations | newspaper = [[The Guardian]] | date = 22 August 2010}}</ref><ref name="GuardCharges">{{cite web | author = David Leigh, Luke Harding, Afua Hirsch and Ewen MacAskill | url = https://www.theguardian.com/media/2010/nov/30/interpol-wanted-notice-julian-assange | title = WikiLeaks: Interpol issues wanted notice for Julian Assange | publisher = The Guardian | date = | accessdate = 1 December 2010}}</ref>
ಎರಡು ಮಹಿಳೆಯರ ಪರವಾಗಿ ಪ್ರತನಿಧಿಸುತ್ತಿರುವ ಸ್ವೀಡಿಶ್ ವಕೀಲ ಮತ್ತು ಲಿಂಗ ಸಮಾನತೆಗಾಗಿನ ಎಸ್ಎಪಿ ವಕ್ತಾರರಾದ ಕ್ಲೇಸ್ ಬೋರ್ಗ್ಸ್ಟ್ರೋಮ್ ಅವರು ಅತ್ಯಾಚಾರದ ತನಿಖೆಯನ್ನು ಕೈಬಿಟ್ಟ ನಿರ್ಧಾರದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಿದರು, ಈ ಮೂಲಕ ಪಬ್ಲಿಕ್ ಪಾಸೆಕ್ಯೂಷನ್ ಸ್ವೀಡಿಶ್ ಡೈರೆಕ್ಟರ್ ಆದ ಮೇರಿಯಾನ್ ಎನ್ವೈ ಅವರು ಅತ್ಯಾಚಾರದ ತನಿಖೆಯನ್ನು ಮರು ಪ್ರಾರಂಭಿಸಿದರು ಮತ್ತು ಲೈಂಗಿಕ ಹಿಂಸೆಯ ವಿಚಾರಣೆಯನ್ನು ಸೆಪ್ಟೆಂಬರ್ 1 ಕ್ಕೆ ಮುಂದೂಡಿದರು.<ref>{{cite news | url = https://www.theguardian.com/media/2010/sep/01/sweden-julian-assange-rape-investigation | title = Sweden reopens investigation into rape claim against Julian Assange | newspaper = The Guardian | date = 10 September 2010}}</ref> ಸ್ವೀಡಿಶ್ ತನಿಖಾದಾರರು ಅಸ್ಸಾಂಜೆಯವರೊಂದಿಗೆ ಮಾತನಾಡುವ ಮುನ್ನ ಆರೋಪದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಇಬ್ಬರು ಮಹಿಳೆಯರನ್ನು ಮರು ಸಂದರ್ಶಿಸಿದರು, ಆದರೆ ಯುಕೆ ನ್ಯಾಯಾಲಯದಲ್ಲಿನ ಹೇಳಿಕೆಯ ಪ್ರಕಾರ ಅಸ್ಸಾಂಜೆಯವರು ಸೆಪ್ಟೆಂಬರ್ 27 ರಂದು ಸ್ವೀಡನ್ ಅನ್ನು ತ್ಯಜಿಸಿದರು ಮತ್ತು ಕ್ಲೇಸ್ ಬೋರ್ಗ್ಸ್ಟ್ರೋಮ್ ಅವರ ಪ್ರಕಾರವಾಗಿ ವಿಚಾರಣೆಗಾಗಿ ಅಕ್ಟೋಬರ್ನಲ್ಲಿ ಸ್ಟಾಕ್ಹೋಮ್ಗೆ ಮರಳಲು ನಿರಾಕರಿಸಿದರು.
ಅಸ್ಸಾಂಜೆಯವರ ಲಂಡನ್ ಮೂಲಕ ವಕೀಲರಾದ ಮಾರ್ಕ್ ಸ್ಟೆಫೆನ್ಸ್ ಅವರು, ಅಸ್ಸಾಂಜೆಯವರು ಸ್ಟಾಕ್ಹೋಮ್ನಲ್ಲಿ ತಿಂಗಳಿಗಿಂತ ಹೆಚ್ಚು ಕಾಲ ಇದ್ದು ಪ್ರಾಸೆಕ್ಯೂಷನ್ ಅನ್ನು ಸಂಪರ್ಕಿಸಲು ಮತ್ತೆ ಮತ್ತೆ ಪ್ರಯತ್ನಗಳನ್ನು ಮಾಡಿದರು, ಬಳಿಕೆ ದೇಶವನ್ನು ಬಿಟ್ಟು ಹೊರಹೋಗಲು ಅಸ್ಸಾಂಜೆಯವರು ಅನುಮತಿಯನ್ನು ಪಡೆದರು ಮತ್ತು ಸಂದರ್ಶನವು ಅಗತ್ಯವಿಲ್ಲವೆಂದು ಸ್ವೀಡಿಶ್ ಪ್ರಾಸೆಕ್ಯೂಶನ್ ಹೇಳಿತು ಎಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು.<ref>http://www.theregister.co.uk/2010/11/18/assange_detain_sweden/</ref>
ನವೆಂಬರ್ 18 ರಂದು, ಅಸ್ಸಾಂಜೆಯವರನ್ನು ಬಂಧನಕ್ಕೆ ಆದೇಶ ಹೊರಡಿಸಿದರು ಮತ್ತು ಅವರ ಬಂಧನಕ್ಕಾಗಿ ಸ್ವೀಡಿಶ್ ನ್ಯಾಯಾಲಯದಿಂದ ಆದೇಶವನ್ನು ಪಡೆದುಕೊಳ್ಳಲಾಯಿತು.<ref>{{cite news | url = http://online.wsj.com/article/SB10001424052748704862604576029872580177468.html?KEYWORDS=borgstr%25C3%25B6m | title = New Details Reveal More About Problems Assange Faces | newspapers = The Wall Street Journal | date = 19 December, 2010}}</ref><ref name="msnbc1811">{{cite web | url = http://www.msnbc.msn.com/id/40250098/ns/world_news-europe/ | title = Sweden to issue int'l warrant for Assange | author = Karl Ritter, Malin Rising | publisher = Msnbc.com | date = 18 November 2010 | accessdate = 4 December 2010 | archive-date = 4 ಡಿಸೆಂಬರ್ 2010 | archive-url = https://web.archive.org/web/20101204061249/http://www.msnbc.msn.com/id/40250098/ns/world_news-europe/ | url-status = dead }}</ref><ref name="appeal lost">[http://www.bbc.co.uk/news/world-europe-11831519 ವಿಕಿಲೀಕ್ಸ್ ಅಸ್ಸಾಂಜೇಸ್ ಡಿಟೆನ್ಕ್ಷನ್ ಆರ್ಡರ್ ಅಪ್ಹೆಲ್ಡ್ ಬೈ ಸ್ವೀಡನ್]. ಬಿಬಿಸಿ</ref><ref>{{cite web | url = http://www.smh.com.au/technology/technology-news/wikileaks-to-drop-another-bombshell-20101122-1849y.html | title = WikiLeaks to drop another bombshell | publisher = The Sydney Morning Herald | date = 23 November 2010 | accessdate = 1 December 2010}}</ref> ನವೆಂಬರ್ 20 ರಂದು, ಸ್ವೀಡನ್ನ ಕ್ರಿಮಿನಲ್ ಪೊಲೀಸರು ಯುರೋಪಿಯನ್ ಅರೆಸ್ಟ್ ವಾರೆಂಟ್ (ಇಎಡಬ್ಲೂ)<ref name="FT">{{cite web | url = http://www.ft.com/cms/s/0/b5852504-f592-11df-99d6-00144feab49a.html#axzz165xMmp9x | title = Warrant for WikiLeaks founder condemned | publisher = Ft.com | date = 22 November 2010 | accessdate = 29 November 2010}}</ref><ref name="lateline">{{cite web | url = http://www.abc.net.au/lateline/content/2010/s3071847.htm | title = Assange hits back at rape allegations | publisher = Australian Broadcasting Corporation}}</ref> ಅನ್ನು ಹೊರಡಿಸಿದರು ಮತ್ತು 2010 ರ ನವೆಂಬರ್ 30 ರಂದು ಅಸ್ಸಾಂಜೆಯವರ ವಿರುದ್ಧ ರೆಡ್ ನೋಟೀಸ್ ಅನ್ನು ಇಂಟರ್ಪೋಲ್ ಹೊರಡಿಸಿತು.<ref name="bbc">{{cite web | url = http://www.bbc.co.uk/news/world-europe-11880965 | title = Wikileaks' Assange appeals over Sweden arrest warrant | publisher = BBC News | date = 1 December 2010 | accessdate = 1 December 2010}}</ref><ref>{{cite web | author = Interpol | url = http://www.interpol.int/Public/ICPO/PressReleases/PR2010/News20100513.asp | title = Enhancing global status of INTERPOL Red Notices focus of high level meeting | publisher = Interpol.int | date = 14 May 2010 | accessdate = 1 December 2010 | archive-date = 29 ಜೂನ್ 2011 | archive-url = https://web.archive.org/web/20110629193232/http://www.interpol.int/Public/ICPO/PressReleases/PR2010/News20100513.asp | url-status = dead }}</ref> ಅಸ್ಸಾಂಜೆಯವರು ಸ್ವೀಡನ್ ಹೊರಗೆ "ಪ್ರಾಸೆಕ್ಯೂಟರ್ ಅವರ ಪ್ರಶ್ನೆಗಳಿಗೆ ಉತ್ತರಿಸಲು ಸ್ವಯಂಪ್ರೇರಿತವಾಗಿ ಒಪ್ಪಿದ್ದಾರೆ ಎಂಬ ಚರ್ಚಾಸ್ಪದ ಸಂಗತಿಯ ನಂತರವೂ ಸ್ವೀಡಿಷ್ ಅಧಿಕಾರಿಗಳು ರೆಡ್ ನೋಟೀಸ್ ಅನ್ನು ಹೊರಡಿಸಿರುವುದು ಅತೀ ಅಕ್ರಮವಾಗಿದೆ ಮತ್ತು ಅಸಾಮಾನ್ಯವಾಗಿದೆ ಎಂದು <ref>{{cite web | first = Mark | last = Townsend | url = https://www.theguardian.com/media/2010/dec/01/police-seek-julian-assange-rape-claims | title = British police seek Julian Assange over rape claims | publisher = Guardian | date = 1 December 2010 | accessdate = 3 December 2010}}</ref> ಹಾಗೂ ಸ್ವೀಡೀಷರು ಅವರನ್ನು ಯುನೈಟೆಡ್ ಸ್ಟೇಟ್ಸ್ಗೆ ಹಸ್ತಾಂತರಿಸಲು ಕಾರಣವಾಗುವ ಸಂಭಾವ್ಯತೆಯಿಂದ ಅಸ್ಸಾಂಜೆಯವರು ಹಸ್ತಾಂತರದ ಪ್ರಯತ್ನಗಳ ವಿರುದ್ಧ<ref>{{cite news | url = http://www.bbc.co.uk/news/world-europe-11921080 | title = Wikileaks' Julian Assange to fight Swedish allegations | publisher = BBC | date = 5 December 2010 | accessdate = 5 December 2010}}</ref> ಹೋರಾಡುವರು ಎಂದು ಅಸ್ಸಾಂಜೆ ಪರವಾದ ವಕೀಲರೊಬ್ಬರು ತಿಳಿಸಿದರು.<ref>{{cite news | url = https://www.theguardian.com/media/2010/dec/05/julian-assange-lawyers-being-watched | title = Julian Assange's lawyers say they are being watched | author = Sam Jones and agencies | publisher = The Guardian | date = 5 December 2010 | accessdate = 5 December 2010}}</ref> ಯುಕೆನಲ್ಲಿ ಇಎಡಬ್ಲೂ ಅನ್ನು ಸ್ವೀಕರಿಸಿದಾಗ, ಕಾಗದಪತ್ರದಲ್ಲಿ ದೋಷವೊಂದನ್ನು ಪತ್ತೆಹಚ್ಚಲಾಯಿತು, ಮತ್ತು 2010 ರ ಡಿಸೆಂಬರ್ 3 ರಂದು ಮತ್ತೊಂದು ಇಎಡಬ್ಲೂ ಅನ್ನು ಸ್ವೀಡನ್ ನೀಡಿತು.
2010 ರ ಡಿಸೆಂಬರ್ 6 ರಂದು, ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ಅಸ್ಸಾಂಜೆಯವರ ಯುಕೆ ವಕೀಲರಿಗೆ ಎಸ್ಎಸಿಎ ಅವರು ಮಾನ್ಯವಾದ ಇಎಡಬ್ಲೂ ಅನ್ನು ಸ್ವೀಕರಿಸಲಾಗಿದೆಯೆಂದು ಮತ್ತು ಯುಕೆ ಅಧಿಕಾರಿಗಳಿಂದ ಪ್ರಮಾಣೀಕರಿಸಲಾಗಿದೆಯೆಂದು ತಿಳಿಸಲಾಯಿತು.<ref>{{cite news|url=http://www.independent.co.uk/news/uk/crime/arrest-warrant-on-assange-to-be-served-today-2153031.html |title=Arrest warrant on Assange to be served today |publisher=The Independent |date=2010-12-07 |accessdate=2010-12-19}}</ref> ಅಸ್ಸಾಂಜೆಯವರು ಮರುದಿನ ಸ್ವತಃ ಮೆಟ್ರೋಪಾಲಿಟನ್ ಪೊಲೀಸರೆದುರು ಹಾಜರಾದರು ಮತ್ತು ಅವರನ್ನು ಪೊಲೀಸರ ವಶಕ್ಕೆ ತೆಗೆದುಕೊಳ್ಳಲಾಯಿತು. ಅವರು ಸ್ವೀಡಿಶ್ ಪೆನಾಲ್ ಕೋಡ್ನ ಅಡಿಯಲ್ಲಿ ಮುಂದಿನ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆಗೆ ಬೇಕಾಗಿದ್ದರು: ಕಡಿಮೆ ದರ್ಜೆಯವರ ಅತ್ಯಾಚಾರ (ಸಿಹೆಚ್ 6:1-3), ಅಹಿತವನ್ನುಂಟುಮಾಡಹುದಾದ ರೀತಿಯಲ್ಲಿ ವ್ಯಕ್ತಿಯ ಲೈಂಗಿಕ ದುರ್ಬಳಕೆ ಅಥವಾ ವ್ಯಕ್ತಿಯ ಲೈಂಗಿಕ ಐಕ್ಯತೆಯನ್ನು ಉಲ್ಲಂಘಿಸುವುದು (ಸಿಹೆಚ್ 6:10-2) ಮತ್ತು ನ್ಯಾಯಸಮ್ಮತವಲ್ಲದ ಬಲಾತ್ಕಾರ (Ch 4:4-1), ಇವುಗಳಲ್ಲಿ ಅಧ್ಯಾಯ 6 ರ ನಿಬಂಧನೆಗಳು ಲೈಂಗಿಕ ಅಪರಾಧಗಳೊಂದಿಗೆ ವ್ಯವಹರಿಸಿದರೆ, ಅಧ್ಯಾಯ 4 ಸ್ವಾತಂತ್ರ ಮತ್ತು ಶಾಂತಿಯ ವಿರುದ್ಧದ ಅಪರಾಧದೊಂದಿಗೆ ವ್ಯವಹರಿಸುತ್ತದೆ.<ref>{{cite web|author=Esther Addley |url=https://www.theguardian.com/media/2010/dec/17/julian-assange-q-and-a |title=Q&A: Julian Assange allegations | Media |publisher=The Guardian |date= |accessdate=2010-12-19}}</ref><ref>{{cite web |url=http://www.aklagare.se/In-English/ |title=Statement from Director of Prosecution, Ms. Marianne Ny - In English |publisher=www.aklagare.se |date=2006-05-05 |accessdate=2010-12-19 |archive-date=17 ಡಿಸೆಂಬರ್ 2010 |archive-url=https://web.archive.org/web/20101217230139/http://www.aklagare.se/In-English/ |url-status=dead }}</ref><ref>{{Cite web |url=http://www.aklagare.se/PageFiles/346/Chapter%206.pdf |title=ಆರ್ಕೈವ್ ನಕಲು |access-date=29 ಡಿಸೆಂಬರ್ 2010 |archive-date=29 ಸೆಪ್ಟೆಂಬರ್ 2011 |archive-url=https://web.archive.org/web/20110929014034/http://www.aklagare.se/PageFiles/346/Chapter%206.pdf |url-status=dead }}</ref> ಆ ದಿನದ ಅಂತ್ಯದಲ್ಲಿ, ಅಸ್ಸಾಂಜೆಯವರಿಗೆ ಜಾಮೀನನ್ನು ನಿರಾಕರಿಸಲಾಯಿತು ಮತ್ತು ರಿಮಾಂಡ್ ಆಧಾರದಲ್ಲಿ ಕಸ್ಟಡಿಯಲ್ಲಿ ಇರಿಸಲಾಯಿತು.<ref>{{cite web| last = Vinograd| first = Cassandra| last2 = Satter| first2 = Raphael G.| title = Judge Denies WikiLeaks Founder Julian Assange Bail| newspaper = The Associated Press| date = 7 December 2010| url = https://news.yahoo.com/s/ap/20101207/ap_on_hi_te/wikileaks| accessdate = 7 December 2010| archiveurl = https://web.archive.org/web/20101208053605/http://news.yahoo.com/s/ap/20101207/ap_on_hi_te/wikileaks| archivedate = 8 ಡಿಸೆಂಬರ್ 2010| url-status = live}}</ref> ಡಿಸೆಂಬರ್ 14 ರಂದು ಅಸ್ಸಾಂಜೆಯವರಿಗೆ £240,000 ಗ್ಯಾರಂಟಿ ಮತ್ತು ಪಾಸ್ಪೋರ್ಟ್ ವಶಕ್ಕೆ ಒಪ್ಪಿಸುವ ಷರತ್ತುಗಳೊಂದಿಗೆ ಜಾಮೀನನ್ನು ನೀಡಲಾಯಿತು, ಆದರೆ ಯುಕೆಯ ಕ್ರೌಸ್ ಪಾಸೆಕ್ಯೂಶನ್ ಸರ್ವೀಸ್ ಅವರ ಜಾಮೀನು ನಿರ್ಧಾರದ ಅಪೀಲಿನ ಕಾರಣದಿಂದ ಕಸ್ಟಡಿಯಲ್ಲೇ ಉಳಿಯಬೇಕಾಯಿತು.<ref>{{cite web |url=http://www.thinq.co.uk/2010/12/16/assange-granted-bail-uk-high-court-appeal/ |title=Assange granted bail in UK High Court appeal |publisher=Thinq.co.uk |date= |accessdate=2010-12-19 |archive-date=1 ಜನವರಿ 2011 |archive-url=https://web.archive.org/web/20110101183813/http://www.thinq.co.uk/2010/12/16/assange-granted-bail-uk-high-court-appeal/ |url-status=dead }}</ref><ref>{{cite web|url=http://www.bbc.co.uk/news/uk-11989216 |title=Wikileaks founder Assange bailed, but release delayed |publisher=BBC |date=8 December 2010 |accessdate=16 December 2010}}</ref><ref>{{cite web|url=https://www.theguardian.com/media/2010/dec/15/julian-assange-bail-decision-uk |title=Julian Assange bail decision made by UK authorities, not Sweden |publisher=Guardian |date=15 December 2010 |accessdate=17 December 2010}}</ref> ಡಿಸೆಂಬರ್ 16 ರಂದು ಮೇಲ್ಮನವಿಯನ್ನು ವಜಾಗೊಳಿಸಲಾಯಿತು ಮತ್ತು ಅಸ್ಸಾಂಜೆಯವರಿಗೆ ಜಾಮೀನುl ನೀಡಿ ಅವರನ್ನು ಎಲ್ಲಿಂಗ್ಹ್ಯಾಮ್ ಹಾಲ್, ನೋರ್ಫೋಕ್ನಲ್ಲಿ ಗೃಹ ಬಂಧನದಲ್ಲಿ ಇರಿಸಲಾಯಿತು. ಬಿಡುಗಡೆಯ ನಂತರ ನೆರೆದಿದ್ದ ಛಾಯಾಚಿತ್ರಕಾರರನ್ನು ಉದ್ದೇಶಿಸಿ ಅಸ್ಸಾಂಜೆಯವರು "ಲಂಡನ್ನಲ್ಲಿ ಮತ್ತೆ ಶುದ್ಧ ಗಾಳಿಯನ್ನು ಸೇವಿಸಲು ಆನಂದವೆನಿಸುತ್ತಿದೆ" ಮತ್ತು "ನನ್ನ ಕಾರ್ಯವನ್ನು ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ನಿರಪರಾಧಿತನದ ಪರವಾಗಿ ಹೋರಾಡುವುದನ್ನು ಮುಂದುವರಿಸಲು ನಾನು ಆಶಿಸುತ್ತೇನೆ" ಎಂದು ಹೇಳಿದರು.<ref name="ReutersBail" /> ಅಸ್ಸಾಂಜೆಯವರು ಬಿಬಿಸಿಯೊಂದಿಗೆ ಮಾತನಾಡುತ್ತಾ, "ಇದು ಅತೀ ಯಶಸ್ವಿಯಾದ ಹೆಸರು ಕೆಡಿಸುವ ಮತ್ತು ತಪ್ಪಾದ ಪ್ರಯತ್ನವಾಗಿತ್ತು" ಎಂದು ನುಡಿದರು.<ref>{{cite news| url=http://www.vancouversun.com/news/WikiLeaks+Julian+Assange+says+victim+smear+campaign/3992455/story.html| author=Avril Ormsby| title=WikiLeaks' Julian Assange says he is victim of smear campaign| publisher=The Vancouver Sun| date=December 17, 2010| access-date=29 ಡಿಸೆಂಬರ್ 2010| archive-date=29 ಡಿಸೆಂಬರ್ 2010| archive-url=https://web.archive.org/web/20101229081317/http://www.vancouversun.com/news/WikiLeaks+Julian+Assange+says+victim+smear+campaign/3992455/story.html| url-status=dead}}</ref>
ಅಸ್ಸಾಂಜೆಯವರ ಕಾನೂನು ಸಲಹಾಗಾರರಲ್ಲಿ ಕಾನೂನು ಕಲಾಪಗಳನ್ನು ಪ್ರದರ್ಶನ ಮೊಕದ್ದಮೆಗೆ ಹೋಲಿಸಿದ ಮಾರ್ಕ್ ಸ್ಟೆಫೆನ್ಸ್,<ref>{{cite web |url=http://www.rte.ie/news/2010/1214/wikileaks.html |title=Sweden challenges Julian Assange bail decision - RTÉ News |publisher=Rte.ie |date= |accessdate=16 December 2010 |archiveurl=https://web.archive.org/web/20101216020158/http://www.rte.ie/news/2010/1214/wikileaks.html |archivedate=16 ಡಿಸೆಂಬರ್ 2010 |url-status=dead }}</ref> ಜೆಫ್ರಿ ರಾಬರ್ಟ್ಸನ್,<ref>{{cite web|url=http://www.theage.com.au/world/geoffrey-robertson-to-defend-assange-20101207-18oc6.html |title=Geoffrey Robertson to defend Assange |publisher=Theage.com.au |date=8 December 2010 |accessdate=16 December 2010}}</ref> ಹೆಲೆನಾ ಕೆನಡಿ<ref>{{cite web|author=|url=http://www.theaustralian.com.au/national-affairs/possible-indictment-for-espionage/story-fn59niix-1225972957124 |title=Possible indictment for espionage |publisher=The Australian |date= |accessdate=2010-12-19}}</ref> ಮತ್ತು ಜೆನ್ನಿಫರ್ ರಾಬಿನ್ಸನ್<ref>{{cite web |author= |url=http://uk.news.yahoo.com/18/20101210/tuk-assange-moved-to-prison-s-segregatio-86ac183.html |title=Assange moved to prison's segregation unit |publisher=Associated Free Press |date= |accessdate=16 December 2010 |archive-date=14 ಡಿಸೆಂಬರ್ 2010 |archive-url=https://web.archive.org/web/20101214101746/http://uk.news.yahoo.com/18/20101210/tuk-assange-moved-to-prison-s-segregatio-86ac183.html |url-status=dead }}</ref> ಸೇರಿದ್ದು ಇವರೆಲ್ಲರೂ ಇಂಗ್ಲೆಂಡಿನವರಾಗಿದ್ದು, ಇವರೊಂದಿಗೆ ಸ್ವೀಡನ್ನ ಬೋರ್ನ್ ಹರ್ಟಿಗ್ ಸಹ ಸೇರಿದ್ದರು. ಅಸ್ಸಾಂಜೆಯವರ ವಿರುದ್ದದ ಆರೋಪಗಳು ರಹಸ್ಯವಾಗಿ ಪೂರ್ವಯೋಜಿತವಾಗಿವೆ ಮತ್ತು ಅಸ್ಸಾಂಜೆಯವರನ್ನು ಅಮೇರಿಕಕ್ಕೆ ಹಸ್ತಾಂತರಿಸುವ ಕುರಿತಂತೆ ಸ್ವೀಡನ್ ಮತ್ತು ಅಮೇರಿಕದ ನಡುವೆ ವರದಿಗಳು ಮತ್ತು ಚರ್ಚೆಗಳು ನಡೆಯುತ್ತಿವೆ ಎಂದು ನಾನು ತಿಳಿದಿದ್ದೇನೆ ಎಂದು ಸ್ಟೀಫನ್ಸ್ ಅವರು ಸಿಬಿಸಿ ನ್ಯೂಸ್ಗೆ ತಿಳಿಸಿದರು.<ref>{{cite news| url=http://www.cbsnews.com/8301-503543_162-20025111-503543.html| author=Tucker Reals| title=Assange Lawyer: Rape Allegations a "Stitch Up"| publisher=CBS News| date=December 9, 2010| archiveurl=https://web.archive.org/web/20101229213809/http://www.cbsnews.com/8301-503543_162-20025111-503543.html| archivedate=29 ಡಿಸೆಂಬರ್ 2010| access-date=29 ಡಿಸೆಂಬರ್ 2010| url-status=dead}}</ref> ಡಿಸೆಂಬರ್ 14 ರಂದು ಬಿಡುಗಡೆ ಮಾಡಿದ ಸಾರ್ವಜನಿಕ ಹೇಳಿಕೆಯಲ್ಲಿ ಸ್ವೀಡಿಶನ್ ಪ್ರಾಸೆಕ್ಯೂಟರ್ ಆದ ಮೇರಿಯೇನ್ ಎನ್ವೈ ಅವರು, ಸ್ವೀಡಿಶ್ ಯುರೋಪಿಯನ್ ಅರೆಸ್ಟ್ ವಾರಂಟ್ ಕಾಯಿದೆಯ ನಿಬಂಧನೆಗಳ ಪ್ರಕಾರ ಅಸ್ಸಾಂಜೆಯವರು ಸ್ವೀಡನ್ ಕಸ್ಟಡಿಯಲ್ಲೇ ಒಂದು ವೇಳೆ ಇರಬೇಕಾದರೆ ಅವರನ್ನು ಅಮೇರಿಕಕ್ಕೆ ಕಳುಹಿಸಲು ಸ್ವೀಡನ್ಗೆ ಬ್ರಿಟನ್ ಒಪ್ಪಬೇಕಾಗುತ್ತದೆ ಎಂದು ಹೇಳಿದರು.<ref>{{cite web|last=Mackey |first=Robert |url=http://thelede.blogs.nytimes.com/2010/12/14/swedish-prosecutor-raises-possible-extradition-of-wikileaks-founder-to-u-s/ |title=Swedish Prosecutor Raises Possible Extradition of WikiLeaks Founder to U.S. |publisher=Thelede.blogs.nytimes.com |date=2010-12-14 |accessdate=2010-12-19}}</ref><ref>{{cite web |author=By DAVID STRINGER Associated Press |url=http://www.denverpost.com/frontpage/ci_16854426?source=rss#ixzz18aFBEzWn |title=Sweden appeals UK granting bail for Julian Assange |publisher=The Denver Post |date= |accessdate=2010-12-19 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
ಪೂರ್ಣ ಹಸ್ತಾಂತರದ ವಿಚಾರಣೆಯು 2011 ರ ಜನವರಿ 11 ಕ್ಕೆ ನಿಗದಿಯಾಗಿದೆ.
== ಬೆಂಬಲ ಮತ್ತು ಪ್ರೋತ್ಸಾಹ ==
ಯುನೈಟೆಡ್ ಕಿಂಗ್ಡಮ್ನಲ್ಲಿ 2010 ರ ಅಸ್ಸಾಂಜೆಯವರ ಬಂಧನದ ತರುವಾಯು ಬ್ರೆಜಿಲ್ನ ಅಧ್ಯಕ್ಷರಾದ ಲೂಯಿಜ್ ಇನಾಸಿಯೋ ಲುಲಾ ಡಾ ಸಿಲ್ವಾ ಅವರು ಅಸ್ಸಾಂಜೆಯವರಿಗೆ "ಬೆಂಬಲ"ವನ್ನು ವ್ಯಕ್ತಪಡಿಸಿದರು.<ref>{{cite web |url=http://news.smh.com.au/breaking-news-world/putin-leads-backlash-over-wikileaks-boss-detention-20101209-18rgi.html |title=Putin leads backlash over WikiLeaks boss detention |date=9 December 2010 |accessdate=9 December 2010 | first=Maria |last=Antonova |work=Sydney Morning Herald |publisher=Sydney Moring Herald}}</ref><ref>{{cite web |url=https://www.youtube.com/watch?v=7xAY7KkcUYk |title=President Lula Shows Support for Wikileaks (video available) |date=9 December 2010}}</ref> ಅವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅಸ್ಸಾಂಜೆಯವರ ಬಂಧನವನ್ನು "ಅಭಿವ್ಯಕ್ತಿಯ ಸ್ವಾತಂತ್ರ್ಯದ ಮೇಲಿನ ಆಕ್ರಮಣ" ಎಂದು ಟೀಕಿಸಿದರು.<ref>{{cite web |url=http://www.bbc.co.uk/news/world-latin-america-11966193 |title=Wikileaks: Brazil President Lula backs Julian Assange |date=10 December 2010 |accessdate=10 December 2010 | first= |last= |work=BBC News }}</ref> ರಷ್ಯಾದ ಪ್ರಧಾನ ಮಂತ್ರಿಯವರಾದ, [[ವ್ಲಾಡಿಮಿರ್ ಪುಟಿನ್|ವ್ಲಾದಿಮಿರ್ ಪುಟಿನ್]] ಅವರು ಅಸ್ಸಾಂಜೆಯವರ ಬಂಧನವನ್ನು "ಪ್ರಜಾತಂತ್ರ ವಿರೋಧಿ" ಎಂದು ಬಣ್ಣಿಸಿದರು.<ref name="ABC2">[http://www.abc.net.au/unleashed/42368.html ಆಸ್ಸೀ ಅಸ್ಸಾಂಜೆ: ಹ್ಯಾಸ್ ಗಿಲ್ಲಾರ್ಡ್ ಗೋಟ್ ದಿ ಗಟ್ಸ್?] ಎಬಿಸಿ ಆನ್ಲೈನ್ ಡಿಸೆಂಬರ್ 17, 2010</ref>
ರಷ್ಯಾದ ಅಧ್ಯಕ್ಷರಾದ [[ಡ್ಮಿಟ್ರಿ ಮೆಡ್ವೆಡೇವ್|ದಿಮಿತ್ರಿ ಮೆಡ್ವೆಡೆವ್]] ಅವರ ಕಚೇರಿಯ ಮೂಲಗಳ ಪ್ರಕಾರ ಮೆಡ್ವೆಡೆವ್ ಅವರು "ಸಾರ್ವಜನಿಕ ಮತ್ತು ಇತರ ಸರ್ಕಾರೇತರ ಸಂಸ್ಥೆಗಳು ಅವರಿಗೆ ಹೇಗೆ ಸಹಾಯ ಮಾಡಬೇಕೆಂಬ ಬಗ್ಗೆ ಯೋಚಿಸಬೇಕು" ಎಂದು ಹೇಳಿದರು.<ref>{{cite web |url=https://www.theguardian.com/media/2010/dec/09/julian-assange-nobel-peace-prize |title=Julian Assange should be awarded Nobel peace prize, suggests Russia |date=9 December 2010 |accessdate=9 December 2010 | first=Luke |last=Harding |location=London |work=The Guardian }}</ref>
ಡಿಸೆಂಬರ್ 2010 ರಲ್ಲಿ, ವಿಶ್ವಸಂಸ್ಥೆಯ ಅಭಿಪ್ರಾಯ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯದ ವಿಶೇಷ ಕಾರ್ಯಕಲಾಪ ವರದಿಗಾರರಾದ ಫ್ರಾಂಕ್ ಲಾರೂಯಿ ಅವರು "ಯಾವುದೇ ಮಾಹಿತಿಯ ಸೋರಿಕೆಯಾಗಿದ್ದಲ್ಲಿ ಈ ಮಾಹಿತಿಯನ್ನು ಸೋರಿಕೆ ಮಾಡಿದ ವ್ಯಕ್ತಿಗೆ ಶಿಕ್ಷೆಯಾಗಬೇಕೇ ಹೊರತು ಅದನ್ನು ಪ್ರಕಟಿಸಿದ ಮಾಧ್ಯಮಕ್ಕಲ್ಲ, ಇದನ್ನು ಪರಿಗಣಿಸಿ ಅಸ್ಸಾಂಜೆ ಅಥವಾ ವಿಕಿಲೀಕ್ಸ್ನ ಸಿಬ್ಬಂದಿಯವರು ಅವರು ಪ್ರಸಾರ ಮಾಡಿದ ಯಾವುದೇ ಮಾಹಿತಿಗೆ ಕಾನೂನು ಹೊಣೆಗೆ ಗುರಿಯಾಗಬಾರದು. ಮತ್ತು ಈ ರೀತಿಯಲ್ಲಿ ಪಾರದರ್ಶಕತೆಯು ಕಾರ್ಯನಿರ್ವಹಿಸುತ್ತದೆ ಮತ್ತು ಭ್ರಷ್ಟಾಚಾರವನ್ನು ಹಲವು ಸಂದರ್ಭಗಳಲ್ಲಿ ಎದುರಿಸಲಾಗಿದೆ" ಎಂದು ಹೇಳಿದರು.<ref>{{cite web |url=http://www.abc.net.au/worldtoday/content/2010/s3089025.htm |title=UN rapporteur says Assange shouldn't be prosecuted |date=9 December 2010 |accessdate=9 December 2010 |author=Eleanor Hall |work=abc.net.au |publisher=[[ABC Online]]}}</ref>
2010 ರ ಡಿಸೆಂಬರ್ 11 ರಂದು, ಅಸ್ಸಾಂಜೆಯವರ ಬಂಧನವನ್ನು ವಿರೋಧಿಸಿ ನೂರಕ್ಕಿಂತ ಹೆಚ್ಚು ಜನರು ಮ್ಯಾಡ್ರಿಡ್ನಲ್ಲಿನ ಬ್ರಿಟಿಷ್ ರಾಯಭಾರ ಕಚೇರಿಯ ಎದುರು ಪ್ರತಿಭಟನೆ ಮಾಡಿದರು.<ref>{{cite web |last=Associated |first=The |url=http://ca.news.yahoo.com/pro-wikileaks-demos-planned-spain-latin-america.html |title=Pro-WikiLeaks demonstrations held in Spain; planned for elsewhere in Europe, Latin America - Yahoo! News |publisher=Ca.news.yahoo.com |date= |accessdate=16 December 2010 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
===ಆಸ್ಟ್ರೇಲಿಯಾ===
[[File:Sydney Wikileaks 2010-Dec-10.JPG|thumb|ಸಿಡ್ನಿ ಟೌನ್ ಹಾಲ್ ಎದುರಿನಲ್ಲಿ ಅಸ್ಸಾಂಜೆಯವರಿಗೆ ಬೆಂಬಲ ಸೂಚಿಸಿ ಪ್ರದರ್ಶನ, 10 ಡಿಸೆಂಬರ್ 2010.]]
ಪ್ರಧಾನ ಮಂತ್ರಿಯವರಾದ ಜೂಲಿಯಾ ಗಿಲಾರ್ಡ್ ಅವರು ಸೋರಿಕೆಯನ್ನು "ಒಂದು ಕಾನೂನುಬಾಹಿರ ಕೃತ್ಯ" ವೆಂದು ಕರೆದು ಅಸ್ಸಾಂಜೆಯವರ ಪಾಸ್ಪೋರ್ಟ್ ಅನ್ನು ರದ್ದುಗೊಳಿಸಲಾಗಬಹುದು ಎಂದು ಸೂಚನೆ ನೀಡಿದ ಬಳಿಕ ಅಸ್ಸಾಂಜೆಯವರನ್ನು ಬೆಂಬಲಿಸಲು ವಿಫಲರಾಗಿದ್ದಕ್ಕೆ ಗಿಲಾರ್ಡ್ ಅವರು ತಮ್ಮ ಪಕ್ಷದ ಸದಸ್ಯರಿಂದಲೇ ಭಾರಿ ಟೀಕೆಗೆ ಒಳಗಾದರು. ಅಸ್ಸಾಂಜೆಯವರು ಹೇಗೆ ಆಸ್ಟ್ರೇಲಿಯದ ಕಾನೂನನ್ನು ಮುರಿದರು ಎಂದು ಅಟಾರ್ನಿ ಜನರಲ್ ಆದ ರಾಬರ್ಟ್ ಮ್ಯಾಕ್ಕ್ಲೆಲ್ಲಾಂಡ್ ಅವರು ವಿವರಿಸಲು ಸಾಧ್ಯವಾಗದೇ ಇರುವುದರೊಂದಿಗೆ ನೂರಾರು ವಕೀಲರು, ಅಧ್ಯಾಪಕರು ಮತ್ತು ಪತ್ರಕರ್ತರು ಅಸ್ಸಾಂಜೆಯವರ ಬೆಂಬಲಕ್ಕೆ ಬಂದರು. ವಿರೋಧಿ ಕಾನೂನು ವ್ಯವಹಾರಗಳ ವಕ್ತಾರ, ಸೆನೇಟರ್, ಕ್ವೀನ್ಸ್ ಕೌನ್ಸಿಲ್ ಆದ ಜಾರ್ಜ್ ಬ್ರಾಂಡಿಸ್ ಅವರು ಗಿಲ್ಲಾರ್ಡ್ ಅವರ ಭಾಷೆಯು "ಸೂಕ್ಷ್ಮತೆಯಿಲ್ಲದ್ದು" ಎನ್ನುವುದರ ಜೊತೆಗೆ "ನನ್ನ ಪ್ರಕಾರ ಅವರು (ಅಸ್ಸಾಂಜೆ) ಯಾವುದೇ ಆಸ್ಟ್ರೇಲಿಯದ ಕಾನೂನನ್ನು ಮುರಿದಿಲ್ಲ ಅಥವಾ ಯಾವುದೇ ಅಮೇರಿಕದ ಕಾನೂನನ್ನು ಮುರಿದಂತೆಯೂ ಕಂಡುಬರುತ್ತಿಲ್ಲ" ಎಂದು ಹೇಳಿದರು ಅಸ್ಸಾಂಜೆಯವರನ್ನು ಬೆಂಬಲಿಸುವ ವಿದೇಶಾಂಗ ಸಚಿವರಾದ ಕೆವಿನ್ ರುಡ್ ಅವರು ಅಸ್ಸಾಂಜೆಯವರ ಪಾಸ್ಪೋರ್ಟ್ ಅನ್ನು ರದ್ದುಗೊಳಿಸುವ ಯಾವುದೇ ನಿರ್ಧಾರವು ನನ್ನದೇ ಹೊರತು ಗಿಲ್ಲಾರ್ಡ್ಸ್ ಅವರದ್ದಲ್ಲ ಎಂದರು. 15 ವರ್ಷಗಳ ಹಿಂದೆ ಹ್ಯಾಕಿಂಗ್ ಪ್ರಕರಣವೊಂದರಲ್ಲಿ ಅಸ್ಸಾಂಜೆ ಪರವಾಗಿ ವಾದಿಸಿದ ಕ್ವೀನ್ಸ್ ಕೌನ್ಸಿಲ್ ಆದ ಪೀಟರ್ ಫ್ಯಾರಿಸ್ ಅವರು, ಶಂಕಿತ ಲೈಂಗಿಕ ಆರೋಪದಲ್ಲಿ ಅಸ್ಸಾಂಜೆಯವರ ಹಸ್ತಾಂತರವನ್ನು ಕೋರುತ್ತಿರುವ ಸ್ವೀಡಿಶ್ ಅಧಿಕಾರಿಗಳ ಉದ್ದೇಶವು ಶಂಕೆ ತರಿಸುತ್ತಿದೆ, "ಅವರು (ಸ್ವೀಡನ್) ಏಕೆ ಅದನ್ನು ಮುಂದುವರಿಸುತ್ತಿದ್ದಾರೆ ಎಂದು ನೀವೇ ಹೇಳಬೇಕು? ಒಂದು ವೇಳೆ ಅದು ಬಿಲ್ ಬ್ಲಾಗ್ಸ್ ಆಗಿದ್ದರೆ, ಅವರು ತೊಂದರೆಗೆ ಒಳಗಾಗುತ್ತಿರಲಿಲ್ಲ ಎಂಬುದು ಸ್ಪಷ್ಟವಾಗಿದೆ" ಎಂದು ಅವರು ಹೇಳಿದರು. ವಿರೋಧದ ಪತ್ರಕ್ಕೆ ಪ್ರತಿಕ್ರಿಯೆಗಾಗಿ ಸ್ವೀಡಿಶ್ ರಾಯಭಾರ ಕಚೇರಿಯು ಬಿಡುಗಡೆ ಮಾಡಿದ "ಪೂರ್ವಯೋಜಿತ ಮತ್ತು ಮನವರಿಕೆ ಮಾಡಿಕೊಡದ ಪ್ರತಿಕ್ರಿಯೆ"ಯ ನಂತರದಲ್ಲಿ, "ಆರೋಪವನ್ನು ಹೂಡಿದ, ತನಿಖೆ ಮಾಡಿದ, ಮತ್ತು ಕೈಬಿಟ್ಟ ರೀತಿಯನ್ನೇ ಪ್ರಶ್ನಿಸುವಂತೆ ಮತ್ತೊಬ್ಬ ಪ್ರಾಸೆಕ್ಯೂಟರ್ ಮತ್ತೆ ವಿಚಾರಣೆಗೆ ಒಳಪಡಿಸಿದರು" ಎಂಬ ಸಂದೇಶವನ್ನು ಗಿಲ್ಲಾರ್ಡ್ ಅವರನ್ನೇ ಕಳುಹಿಸಬೇಕಾಯಿತು.<ref name="ABC2" /><ref>[http://www.theaustralian.com.au/in-depth/wikileaks/gillard-left-to-face-backlash/story-fn775xjq-1225967930434 ಜೂಲಿಯಾ ಗಿಲ್ಲಾರ್ಡ್ ಟು ಫೇಸ್ ಜೂಲಿಯನ್ ಅಸ್ಸಾಂಜೆ ಬ್ಯಾಕ್ಲ್ಯಾಷ್] ದಿ ಆಸ್ಟ್ರೇಲಿಯನ್ ಡಿಸೆಂಬರ್ 9, 2010</ref><ref>[http://www.heraldsun.com.au/news/breaking-news/julia-gillard-fails-to-name-law-broken-by-wikileaks-or-julian-assange/story-e6frf7jx-1225966858960 ಜೂಲಿಯಾ ಗಿಲ್ಲಾರ್ಡ್ ಫೇಲ್ಸ್ ಟು ನೇಮ್ ಲಾ ಬ್ರೋಕನ್ ವೈ ವಿಕಿಲೀಕ್ಸ್ ಆರ್ ಜೂಲಿಯನ್ ಅಸ್ಸಾಂಜೆ] ಹೆರಾಲ್ಡ್ ಸನ್ ಡಿಸೆಂಬರ್ 7, 2010</ref><ref name="Revolt">[http://www.theaustralian.com.au/in-depth/wikileaks/julia-gillards-left-flank-revolts-over-julian-assange/story-fn775xjq-1225969233504 ಜೂಲಿಯಾ ಗಿಲ್ಲಾರ್ಡ್ಸ್ ಲೆಫ್ಟ್ ಫ್ಲಾಂಕ್ ರಿವೋಲ್ಟ್ಸ್ ಓವರ್ ಜೂಲಿಯನ್ ಅಸ್ಸಾಂಜೆ] ದಿ ಆಸ್ಟ್ರೇಲಿಯನ್ ಡಿಸೆಂಬರ್ 11, 2010</ref><ref>[https://web.archive.org/web/20101215010701/http://www.news.com.au/features/wikileaks/party-revolt-at-pms-wiki-stance/story-fn79cf6x-1225970594165 ಪಾರ್ಟಿ ರಿವೋಲ್ಟ್ ಗ್ರೋವಿಂಗ್ ಓವರ್ ಪ್ರೈ ಮಿನಿಸ್ಟರ್ ಜೂಲಿಯಾ ಗಿಲ್ಲಾರ್ಡ್ಸ್ ವಿಕಿಲೀಕ್ಸ್ ಸ್ಟಾನ್ಸ್] ದಿ ನ್ಯೂಸ್ ಡಿಸೆಂಬರ್ 14, 2010</ref>
2010 ರ ಡಿಸೆಂಬರ್ 10 ರಂದು ಸುಮಾರು ಐದು ನೂರು ಜನರು ಸಿಡ್ನಿ ಟೌನ್ ಹಾಲ್ ಹೊರಭಾಗದಲ್ಲಿ ಮತ್ತು ಸುಮಾರು ಮೂರು ನೂರು ಜನರು ಬ್ರಿಸ್ಟೇನ್ <ref>{{cite web |url=http://www.sbs.com.au/news/article/1438371/WikiLeaks-supporters-rally-for-Assange |title=''WikiLeaks supporters rally for Assange'', 10 December 2010 |publisher=SBS |date= |accessdate=16 December 2010 |archive-date=18 ಡಿಸೆಂಬರ್ 2010 |archive-url=https://web.archive.org/web/20101218132501/http://www.sbs.com.au/news/article/1438371/WikiLeaks-supporters-rally-for-Assange |url-status=dead }}</ref> ನಲ್ಲಿ ಒಂದುಗೂಡಿದರು, ಅಲ್ಲಿ ಅಸ್ಸಾಂಜೆಯವರ ವಕೀಲ ರಾಬ್ ಸ್ಟೇರಿ ಅವರು ಜೂಲಿಯಾ ಗಿಲ್ಲಾರ್ಡ್ ಅವರ ನಿರ್ಧಾರವನ್ನು ಟೀಕಿಸಿದ್ದೇ ಅಲ್ಲದೇ ಆಸ್ಟ್ರೇಲಿಯದ ಸರ್ಕಾರವು ಅಮೇರಿಕದ "ಕೈಗೊಂಬೆ" ಯಾಗಿದೆ ಎಂದು ಜಮಾಯಿಸಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. ಅಸ್ಸಾಂಜೆಯವರಿಗೆ ಬೆಂಬಲವನ್ನು ವ್ಯಕ್ತಪಡಿಸಿ ದಿ ನ್ಯೂಯಾರ್ಕ್ ಟೈಮ್ಸ್ ಮತ್ತು ದಿ ವಾಷಿಂಗ್ಟನ್ ಟೈಮ್ಸ್ ನಲ್ಲಿ ಪೂರ್ಣ ಪುಟದ ಜಾಹೀರಾತನ್ನು ಪ್ರಕಟಿಸಿದ್ದ ಗೆಟಪ್! ಪ್ರಚಾರ ಮಾಡಿದ್ದ ಅರ್ಜಿಯು 50,000 ಕ್ಕೂ ಹೆಚ್ಚು ಸಹಿಗಳನ್ನು ಪಡೆಯಿತು.<ref name="Revolt" />
=== ಪ್ರಶಸ್ತಿಗಳು ===
ಅಸ್ಸಾಂಜೆಯವರು [[ಕೀನ್ಯಾ]]ದಲ್ಲಿನ ಕಾನೂನುಬಾಹಿರ ಹತ್ಯೆಗಳನ್ನು ತನಿಖೆಯೊಂದಿಗೆ ಬಯಲು ಮಾಡಿದ್ದಕ್ಕಾಗಿ ನೀಡಿದ ಆಮ್ನೆಸ್ಟಿ ಅಂತರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ (ನ್ಯೂ ಮೀಡಿಯಾ)ದ ವಿಜೇತರಾಗಿದ್ದರು, ''ದಿ ಕ್ರೈ ಆಫ್ ಬ್ಲಡ್ – ಅಧಿಕ ನ್ಯಾಯಿಕ ಹತ್ಯೆಗಳು ಮತ್ತು ಕಣ್ಮರೆಗಳು''.<ref name="mars" /> ಪ್ರಶಸ್ತಿಯನ್ನು ಸ್ವೀಕರಿಸಿದ ಅಸ್ಸಾಂಜೆಯವರು: "ಕೀನ್ಯಾದ ನಾಗರಿಕ ಸಮಾಜಕ ಧೈರ್ಯ ಮತ್ತು ಸಾಮರ್ಥ್ಯದ ಪ್ರತಿಬಿಂಬದ ಕಾರಣದಿಂದಲೇ ಈ ಅನ್ಯಾಯವನ್ನು ದಾಖಲು ಮಾಡಲಾಯಿತು. ಈ ಹತ್ಯೆಗಳನ್ನು ಜಗತ್ತಿಗೆ ಬಯಲು ಮಾಡಿ ತೋರಿಸುವಲ್ಲಿ ಆಸ್ಕರ್ ಫೌಂಡೇಶನ್, ಕೆಎನ್ಹೆಚ್ಸಿಆರ್, ಮಾರ್ಸ್ ಸಮೂಹ ಕೀನ್ಯಾದಂತಹ ಸಂಸ್ಥೆಗಳು ಮತ್ತು ಇತರರ ಮೂಲಭೂತ ಬೆಂಬವು ನಮಗೆ ಅಗತ್ಯವಾಗಿದ್ದಿತು." ಎಂದು ಹೇಳಿದರು.<ref name="marsblog" /> ಅವರು 2008 ''ಎಕನಾಮಿಸ್ಟ್'' ಇಂಡೆಕ್ಸ್ ಆನ್ ಸೆನ್ಸಾರ್ಶಿಪ್ ಪ್ರಶಸ್ತಿಯನ್ನೂ ಸಹ ಜಯಿಸಿದರು.<ref name="tcij" />
ಬುದ್ಧಿಶಕ್ತಿಯಲ್ಲಿ ಐಕ್ಯತೆಗಾಗಿ ಸ್ಯಾಮ್ ಆಡಮ್ಸ್ ಅಸೋಸಿಯೇಟ್ಸ್ ಅವರು ನೀಡುವ 2010 ರ ಸ್ಯಾಮ್ ಆಡಮ್ಸ್ ಪ್ರಶಸ್ತಿಯನ್ನೂ ಸಹ ಅಸ್ಸಾಂಜೆಯವರು ಪಡೆದುಕೊಂಡರು.<ref>{{cite web | url = http://www.craigmurray.org.uk/archives/2010/08/julian_assange.html | title = Julian Assange wins Sam Adams Award for Integrity | first = Craig | last = Murray | date = 19 August 2010 | accessdate = 3 November 2010}}</ref><ref>{{cite web | url = http://cspan.org/Watch/Media/2010/10/23/HP/A/39838/WikiLeaks+Press+Conference+on+Release+of+Military+Documents.aspx | title = WikiLeaks Press Conference on Release of Military Documents | publisher = cspan.org | accessdate = 3 November 2010 | archive-date = 1 ಜೂನ್ 2020 | archive-url = https://web.archive.org/web/20200601221636/http://cspan.org/Watch/Media/2010/10/23/HP/A/39838/WikiLeaks+Press+Conference+on+Release+of+Military+Documents.aspx/ | url-status = dead }} ಈ ಸಮ್ಮೇಳನವನ್ನು cspan.org ನಲ್ಲಿ ವಿಕಿಲೀಕ್ಸ್ಗಾಗಿ ಹುಡುಕುವ ಮೂಲಕ ವೀಕ್ಷಿಸಬಹುದು</ref> 2010 ರ ಸೆಪ್ಟೆಂಬರ್ನಲ್ಲಿ, ಬ್ರಿಟಿಷ್ ನಿಯತಕಾಲಿತ ''ನ್ಯೂ ಸ್ಟೇಟ್ಸ್ಮ್ಯಾನ್'' ಅವರ "2010ರ ವಿಶ್ವದ 50 ಹೆಚ್ಚಿನ ಪ್ರಭಾವಶಾಲಿ ವ್ಯಕ್ತಿಗಳಲ್ಲಿ" ಅಸ್ಸಾಂಜೆಯವರು 23 ನೇಯವರಾಗಿ ಮತ ಚಲಾಯಿಸಲ್ಪಟ್ಟರು.<ref name="htanna">{{cite web | title = Julian Assange – 50 People Who Matter 2010 | url = http://www.newstatesman.com/digital/2010/09/pilger-wikileaks-assange | accessdate = 1 October 2010 | archive-date = 30 ಸೆಪ್ಟೆಂಬರ್ 2010 | archive-url = https://web.archive.org/web/20100930152119/http://www.newstatesman.com/digital/2010/09/pilger-wikileaks-assange | url-status = dead }}</ref> ಅದರ ನವೆಂಬರ್/ಡಿಸೆಂಬರ್ ಸಂಚಿಕೆಯಲ್ಲಿ, ಉಟ್ನೆ ರೀಡರ್ ನಿಯತಕಾಲಿಕವು ಅಸ್ಸಾಂಜೆಯವರನ್ನು "ನಿಮ್ಮ ವಿಶ್ವವನ್ನು ಬದಲಾಯಿಸುತ್ತಿರುವ 25 ದೂರದೃಷ್ಟಿಯುಳ್ಳವರಲ್ಲಿ" ಒಬ್ಬರಾಗಿ ಹೆಸರಿಸಿತು.<ref name="utne">{{cite web | title = Julian Assange: The Sunshine Kid | url = http://www.utne.com/Politics/Utne-Reader-Visionaries-Julian-Assange-WikiLeaks.aspx | accessdate = 19 October 2010}}</ref> 2010 ರ ಡಿಸೆಂಬರ್ನಲ್ಲಿ, ''ಟೈಮ್'' ನಿಯತಕಾಲಿಕದ 2010 ರ ವರ್ಷದ ವ್ಯಕ್ತಿ ವಿಭಾಗದಲ್ಲಿ ಓದುಗರ ಆಯ್ಕೆಯೆಂದು <ref name="RC2010POTY">{{cite web| title=Julian Assange: Readers' Choice for TIME's Person of the Year 2010| url=http://newsfeed.time.com/2010/12/13/julian-assange-readers-choice-for-times-person-of-the-year-2010/| publisher=[[Time Inc.]]| last=Freidman| first=Megan| date=13 December 2010| accessdate=15 December 2010| archive-date=24 ಮೇ 2019| archive-url=https://web.archive.org/web/20190524132802/http://newsfeed.time.com/2010/12/13/julian-assange-readers-choice-for-times-person-of-the-year-2010/| url-status=dead}}</ref> ಹಾಗೂ 2010 ರ ವರ್ಷದ ವ್ಯಕ್ತಿಯ ಪ್ರಶಸ್ತಿಯಲ್ಲಿ ರನ್ನರ್ ಅಪ್ ಆಗಿ ಹೆಸರಿಸಲಾಯಿತು.<ref>{{cite news| title=Runners-up: Julian Assange| url=http://www.time.com/time/specials/packages/article/0,28804,2036683_2037118_2037146,00.html| publisher=[[Time Inc.]]| last=Gellman| first=Barton| date=15 December 2010| accessdate=15 December 2010| archive-date=17 ಡಿಸೆಂಬರ್ 2010| archive-url=https://web.archive.org/web/20101217160031/http://www.time.com/time/specials/packages/article/0,28804,2036683_2037118_2037146,00.html| url-status=dead}}</ref>
== ವಾಸಸ್ಥಾನ ==
ಆಸ್ಟ್ರೇಲಿಯದ ನಾಗರಿಕರಾಗಿದ್ದರೂ, ಅಸ್ಸಾಂಜೆಯವರು ಖಾಯಂ ವಿಳಾಸವನ್ನು ಹೊಂದಿಲ್ಲದವರಾಗಿ ನಿರೂಪಿತರಾಗಿದ್ದಾರೆ.<ref name="harrell">{{cite news | last = Harrell | first = Eben | url = http://www.time.com/time/world/article/0,8599,2006789,00.html | title = Defending the Leaks: Q&A with WikiLeaks' Julian Assange | publisher = TIME | date = 27 July 2010 | accessdate = 1 December 2010 | archive-date = 11 ಡಿಸೆಂಬರ್ 2010 | archive-url = https://web.archive.org/web/20101211042137/http://www.time.com/time/world/article/0,8599,2006789,00.html | url-status = dead }}</ref> ತಾವು ಸದಾ ಚಲಿಸುತ್ತಲೇ ಇರುವುದಾಗಿ ಅಸ್ಸಾಂಜೆಯವರು ಹೇಳಿದ್ದರು. ಅವರು ಕೆಲವು ಸಮಯಗಳವರೆಗೆ ಆಸ್ಟ್ರೇಲಿಯ, ಕೀನ್ಯಾ ಮತ್ತು [[ಟಾಂಜಾನಿಯ|ತಾಂಜೇನಿಯ]]ದಲ್ಲಿ ನೆಲೆಸಿದ್ದರು ಮತ್ತು 2010 ರ ಮಾರ್ಚ್ 30 ರಿಂದ ಐಸ್ಲ್ಯಾಂಡ್ನಲ್ಲಿ ಬಾಡಿಗೆ ಮನೆಯಲ್ಲಿದ್ದರು, ಅಲ್ಲಿಂದಲೇ ಅವರ ಮತ್ತು ಬಿರ್ಗಿಟ್ಟಾ ಜೋನ್ಸ್ಡೋಟ್ಟಿರ್ ಅವರನ್ನು ಒಳಗೊಂಡು ಇತರ ಕಾರ್ಯಕರ್ತರು 'ಕೊಲ್ಲಾಟೆರಲ್ ಮರ್ಡರ್' ವೀಡಿಯೋ ಕುರಿತಂತೆ ಕಾರ್ಯನಿರ್ವಹಿಸಿದರು.<ref name="khatchadourian" />
2010 ರ ಬಹುಭಾಗವನ್ನು, ಅಸ್ಸಾಂಜೆಯವರು ಯುನೈಟೆಡ್ ಕಿಂಗ್ಡಮ್, ಐಸ್ಲ್ಯಾಂಡ್, ಸ್ವೀಡನ್ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳಿಗೆ ಭೇಟಿ ನೀಡುತ್ತಾ ಕಾಲ ಕಳೆದರು. 2010 ರ ನವೆಂಬರ್ 4 ರಂದು, ತಾವು ತಟಸ್ಥ ರಾಷ್ಟ್ರವಾದ [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲೆಂಡ್]]ನಲ್ಲಿ ರಾಜಕೀಯ ಆಶ್ರಯವನ್ನು ಪಡೆಯಲು ಮತ್ತು ವಿಕಿಲೀಕ್ಸ್ ಫೌಂಡೇಶನ್ ಕಾರ್ಯಾಚರಣೆಯನ್ನು ಇಲ್ಲಿಗೆ ಬದಲಾಯಿಸಲು ಗಂಭೀರವಾಗಿ ಚಿಂತಿಸುತ್ತಿರುವುದಾಗಿ ಅಸ್ಸಾಂಜೆಯವರು ಸ್ವಿಸ್ ಪಬ್ಲಿಕ್ ಟೆಲಿವಿಷನ್ ಟಿಎಸ್ಆರ್ಗೆ ತಿಳಿಸಿದರು.<ref>{{cite news | url = http://www.reuters.com/article/idUSTRE6A369920101104 | title = WikiLeaks founder says may seek Swiss asylum | publisher = Reuters | date = 4 November 2010}}</ref> ಸ್ವಿಟ್ಜರ್ಲ್ಯಾಂಡ್ನ ಅಮೇರಿಕದ ರಾಯಭಾರಿಯಾದ ಡೊನಾಲ್ಡ್ ಎಸ್ ಬೇಯರ್ ಅವರು ಅಸ್ಸಾಂಜೆಯವರಿಗೆ ರಾಜಕೀಯ ಆಶ್ರಯವನ್ನು ನೀಡುವ ಬಗ್ಗೆ ಸ್ವಿಸ್ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು 2010 ರ ಡಿಸೆಂಬರ್ನಲ್ಲಿ ವರದಿಯಾಯಿತು.<ref>{{cite web |url=http://www.sonntagonline.ch/index.php?show=news&id=1364 |title=Sonntag online |publisher=Sonntagonline.ch |date= |accessdate=2010-12-19 |archive-date=31 ಆಗಸ್ಟ್ 2011 |archive-url=https://web.archive.org/web/20110831005656/http://www.sonntagonline.ch/index.php?show=news&id=1364 |url-status=dead }}</ref>
2010 ರ ನವೆಂಬರ್ ಕೊನೆಭಾಗದಲ್ಲಿ [[ಎಕ್ವಡಾರ್|ಈಕ್ವೆಡಾರ್]]ನ ವಿದೇಶೀ ಉಪ ಮಂತ್ರಿಯವರಾದ ಕಿಂಟ್ಟೋ ಲ್ಯೂಕಾಸ್ ಅವರು "ಯಾವುದೇ ಷರತ್ತುಗಳಿಲ್ಲ... ಆದ್ದರಿಂದ ಅವರು ಮುಕ್ತವಾಗಿ ಅವರು ಹೊಂದಿರುವ ಮಾಹಿತಿಗಳನ್ನು ಮತ್ತು ದಾಖಲಾತಿಗಳನ್ನು ಕೇವಲ ಇಂಟರ್ನೆಟ್ ಮಾತ್ರವಲ್ಲದೇ ವಿವಿಧ ಸಾರ್ವಜನಿಕ ವೇದಿಕೆಗಳಲ್ಲಿ ಪ್ರಸ್ತುತಪಡಿಸಬಹುದು" ಎಂದು ಹೇಳಿ ಅಸ್ಸಾಂಜೆಯವರಿಗೆ ನಾಗರೀಕತ್ವವನ್ನು ನೀಡುವ ಪ್ರಸ್ತಾಪ ಮಾಡಿದರು.<ref>{{cite web | author = AFP 30 November 2010 | url = http://www.ottawacitizen.com/news/Ecuador+offers+WikiLeak+founder+Assange+residency+questions+asked/3902251/story.html | title = ''Ottawa Citizen'' online report of Ecuador offer of asylum to Assange | publisher = Ottawacitizen.com | date = 4 November 2010 | accessdate = 1 December 2010 | archive-date = 30 ನವೆಂಬರ್ 2010 | archive-url = https://web.archive.org/web/20101130035816/http://www.ottawacitizen.com/news/Ecuador+offers+WikiLeak+founder+Assange+residency+questions+asked/3902251/story.html | url-status = dead }}</ref> ಅಸ್ಸಾಂಜೆಯವರೊಂದಿಗೆ ಮಾತುಕತೆಯನ್ನು ಪ್ರಾರಂಭಿಸುವ ಮೂಲಕ ಈಕ್ವಡಾರ್ಗೆ ಲಾಭ ಸಿಗಬಹುದು ಎಂದು ಅವರು ನಂಬಿದ್ದರು.<ref>{{cite web | last = Horn | first = Leslie | url = http://www.pcmag.com/article2/0,2817,2373617,00.asp | title = WikiLeaks' Assange Offered Residency in Ecuador | publisher = Pcmag.com | date = 1 January 1970 | accessdate = 1 December 2010}}</ref> ನಾಗರೀಕತ್ವದ ಅರ್ಜಿಯನ್ನು "ಕಾನೂನು ಮತ್ತು ರಾಜತಾಂತ್ರಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಬೇಕಾಗಿದೆ" ಎಂದು 30 ನೇ ನವೆಂಬರ್ರಂದು ವಿದೇಶಿ ಮಂತ್ರಿಗಳಾದ ರಿಕಾರ್ಡೋ ಪ್ಯಾಟಿನೋ ಅವರು ಹೇಳಿಕೆ ನೀಡಿದರು.<ref>{{cite web | author = | url = http://www.washingtonpost.com/wp-dyn/content/article/2010/11/30/AR2010113003727.html | title = Ecuador alters refuge offer to WikiLeaks founder | publisher = The Washington Post | date = | accessdate = 1 December 2010}}{{dead link|date=December 2010}}</ref> ಕೆಲವು ಗಂಟೆಗಳ ನಂತರ, ಅಧ್ಯಕ್ಷರಾದ ರಫೇಲ್ ಕೊರ್ರಿಯಾ ಅವರು ವಿಕಿಲೀಕ್ಸ್ "ಯುನೈಟೆಡ್ ಸ್ಟೇಟ್ಸ್ನ ಕಾನೂನನ್ನು ಮುರಿಯುವ ಮತ್ತು ಈ ಪ್ರಕಾರದ ಮಾಹಿತಿಯನ್ನು ಸೋರಿಕೆ ಮಾಡುವ ಮೂಲಕ ತಪ್ಪನ್ನು ಉಂಟು ಮಾಡಿದೆ... ಯಾವುದೇ ಅಧಿಕೃತ ಆಹ್ವಾನವನ್ನು [ಎಂದಿಗೂ] ಮಾಡಿಲ್ಲ" ಎಂದು ಹೇಳಿಕೆ ನೀಡಿದರು.<ref name="CBSNews">{{cite web | author = | url = http://www.cbsnews.com/stories/2010/11/30/ap/latinamerica/main7104741.shtml | title = Ecuador President Says No Offer To WikiLeaks Chief | publisher = Cbsnews.com | date = | accessdate = 1 December 2010 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref name="refusal">{{cite web | last = Bronstein | first = Hugh | url = http://www.reuters.com/article/idUSTRE6AT66820101201 | title = Ecuador backs off offer to WikiLeaks' Assange | publisher = Reuters.com | date = | accessdate = 1 December 2010}}</ref> ಲ್ಯೂಕಾಸ್ ಅವರ ಅಭಿಪ್ರಾಯವು "ಸ್ವಂತದ್ದು" ಎಂದು ಕೊರ್ರಿಯಾ ಅವರು ಹೇಳಿದ್ದಲ್ಲದೇ, ಸಂಭಾವ್ಯ ಕವಲುಗಳ ಬಗ್ಗೆ ತನಿಖೆಯನ್ನು ಕೈಗೊಳ್ಳುವುದಾಗಿ ಹಾಗೂ ವರದಿಗಳ ಬಿಡುಗಡೆಯಿಂದ ಈಕ್ವೆಡಾರ್ಗೆ ಹಾನಿಯುಂಟಾಗುವುದೆಂದು ತಿಳಿಸಿದರು.<ref name="refusal" />
2010 ರ ಡಿಸೆಂಬರ್ 7 ರಂದು ಸಿಟಿ ಆಫ್ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ವಿಚಾರಣೆಯಲ್ಲಿ, ಅಸ್ಸಾಂಜೆಯವರು ಅಂಚೆ ಕಚೇರಿ ಪೆಟ್ಟಿಗೆಯೊಂದನ್ನು ತಮ್ಮ ವಿಳಾಸವಾಗಿ ಗುರುತಿಸಿದರು. ಈ ಮಾಹಿತಿಯು ಸ್ವೀಕಾರ್ಹವಲ್ಲ ಎಂದು ನ್ಯಾಯಾಧೀಶರು ತಿಳಸಿದಾಗ, ಅಸ್ಸಾಂಜೆಯವರು ಕಾಗದದ ಹಾಳೆಯೊಂದರಲ್ಲಿ "ಪಾರ್ಕ್ವಿಲ್ಲೆ, ವಿಕ್ಟೋರಿಯಾ, ಆಸ್ಟ್ರೇಲಿಯ" ಎಂದು ಬರೆದು ಸಲ್ಲಿಸಿದರು. ಇವರ ವಿಳಾಸದ ಕೊರತೆ ಮತ್ತು ಅಲೆಮಾರಿ ಜೀವನಶೈಲಿಯು ಜಾಮೀನನ್ನು ನಿರಾಕರಿಸಲು ಕಾರಣಗಳೆಂದು ನ್ಯಾಯಾಧೀಶರು ವಿವರಣೆ ನೀಡಿದರು.<ref name="CNN-20101207-jailed">{{cite news|last=Maestro|first=Laura Perez|coauthors=Shubert, Atika|url=http://www.cnn.com/2010/WORLD/europe/12/07/uk.wikileaks.investigation/|title=WikiLeaks' Assange jailed while court decides on extradition|publisher=CNN|date=7 December 2010|accessdate=7 December 2010}}</ref> ಹಸ್ತಾಂತರದ ಪ್ರಕ್ರಿಯೆಯ ಸಂದರ್ಭದಲ್ಲಿ ಪತ್ರಕರ್ತರಾದ ವಾಗನ್ ಸ್ಮಿತ್ ಅವರು ತಮ್ಮ ನೋರ್ಫೋಕ್ ಮ್ಯಾನ್ಶನ್, ಎಲ್ಲಿಂಗ್ಹ್ಯಾಮ್ ಹಾಲ್ ವಿಳಾಸವನ್ನು ಅಸ್ಸಾಂಜೆಯವರಿಗೆ ನೀಡಲು ಒಪ್ಪಿದ ಕಾರಣದಿಂದಾಗಿ ಅಂತಿಮವಾಗಿ ಅಸ್ಸಾಂಜೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.<ref name="Norman">ನೋರ್ಮನ್, ಜೋಶುವಾ. "[https://web.archive.org/web/20121103040933/http://www.cbsnews.com/8301-503543_162-20025866-503543.html ಜಸ್ಟ್ ವೆರ್ ಈಸ್ ವಿಕಿಲೀಕ್ಸ್ ಫೌಂಡರ್ ಜೂಲಿಯನ್ ಅಸ್ಸಾಂಜೇಸ್ "ಮ್ಯಾನ್ಶನ್ ಅರೆಸ್ಟ್"?] ಸಿಬಿಸಿ ನ್ಯೂಸ್, 16 ಡಿಸೆಂಬರ್ 2010</ref> "ಅತಿಕ್ರಮ ಪ್ರವೇಶ ಮಾಡದ ಹೊರತು ಹತ್ತಿರ ಬರಲು ತೀರಾ ಕಷ್ಟಕರವಾಗಿರುವುದರಿಂದ "ಅಸ್ಸಾಂಜೆಯವರಿಗೆ ಬೃಹತ್ ಎಸ್ಟೇಟ್ ಸ್ವಲ್ಪ ಪ್ರಮಾಣದಷ್ಟು ಗೋಪ್ಯತೆಯನ್ನು ನೀಡುತ್ತದೆ ಎಂದು ಸ್ಮಿತ್ ಹೇಳಿದರು.<ref name="ReutersBail" />
== ಉಲ್ಲೇಖಗಳು ==
{{Reflist
| colwidth = 30em
| refs =
<ref name="repair">
{{cite news | first = Ryan | last = Singel | title = Wikileaks Reopens for Leakers | url = https://www.wired.com/threatlevel/2010/07/wikileaks_repair | date = 19 July 2010 | newspaper = [[Wired (magazine)|Wired]] | accessdate = 21 August 2010
}}
</ref>
<ref name="geekosystem_2010">{{cite web | url = http://www.geekosystem.com/wikileaks-julian-assange-ted | title = Julian Assange – TED Talk – Wikileaks | publisher = Geekosystem | date = 19 July 2010 | accessdate = 21 August 2010 | archive-date = 25 ಜುಲೈ 2010 | archive-url = https://web.archive.org/web/20100725065054/http://www.geekosystem.com/wikileaks-julian-assange-ted/ | url-status = dead }}</ref>
<ref name="ted_2010">{{cite web | url = http://www.ted.com/talks/julian_assange_why_the_world_needs_wikileaks.html | title = Julian Assange: Why the world needs WikiLeaks | publisher = Ted.com | date = | accessdate = 21 August 2010 | archive-date = 27 ಆಗಸ್ಟ್ 2011 | archive-url = https://web.archive.org/web/20110827013033/http://www.ted.com/talks/julian_assange_why_the_world_needs_wikileaks.html | url-status = dead }}</ref>
<ref name="ustream_2010">{{cite web | url = http://www.ustream.tv/recorded/8525593 | title = Frontline Club 07/26/10 04:31 am | publisher = Ustream.tv | date = 26 July 2010 | accessdate = 21 August 2010 | archive-date = 6 ಜನವರಿ 2014 | archive-url = https://web.archive.org/web/20140106040549/http://www.ustream.tv/recorded/8525593 | url-status = dead }}</ref>
<ref name="journalism_2010">{{cite web | url = http://blogs.journalism.co.uk/editors/2010/07/12/a-real-free-press-for-the-first-time-in-history-wikileaks-editor-speaks-out-in-london | title = 'A real free press for the first time in history': WikiLeaks editor speaks out in London | publisher = Blogs.journalism.co.uk | date = 12 July 2010 | accessdate = 21 August 2010 | archive-date = 6 ಅಕ್ಟೋಬರ್ 2011 | archive-url = https://web.archive.org/web/20111006014714/http://blogs.journalism.co.uk/editors/2010/07/12/a-real-free-press-for-the-first-time-in-history-wikileaks-editor-speaks-out-in-london/ | url-status = dead }}</ref>
<ref name="advisory">{{cite web | title = WikiLeaks:Advisory Board | url = http://wikileaks.org/wiki/WikiLeaks:Advisory_Board | publisher = Wikileaks | accessdate = 16 June 2010 | archive-date = 17 ಜೂನ್ 2010 | archive-url = https://web.archive.org/web/20100617033041/http://www.wikileaks.org/wiki/WikiLeaks:Advisory_Board | url-status = dead }}</ref>
<ref name="alde">{{cite web | url = http://www.alde.eu/en/details/?no_cache=1&tx_ttnews%5Btt_news%5D=23424&cHash=137ca875fb | title = Hearing: (Self) Censorship New Challenges for Freedom of Expression in Europe | accessdate = 2 June 2010 | publisher = [[Alliance of Liberals and Democrats for Europe]] | archive-date = 15 ಜೂನ್ 2010 | archive-url = https://web.archive.org/web/20100615154647/http://www.alde.eu/en/details/?no_cache=1&tx_ttnews%5Btt_news%5D=23424&cHash=137ca875fb | url-status = dead }}</ref>
<ref name="ambinder">
{{cite web | first = Marc | last = Ambinder | url = https://www.theatlantic.com/politics/archive/2010/06/does-julian-assange-have-reason-to-fear-the-us-government/58297 | title = Does Julian Assange Have Reason to Fear the U.S. Government? | work = [[The Atlantic]]
}}
</ref>
<ref name="amnesty">{{cite news | url = http://www.computerworld.com/s/article/9140006/Wikileaks_leader_talks_of_courage_and_wrestling_pigs?taxonomyId=16 | title = Wikileaks leader talks of courage and wrestling pigs | first = Dan | last = Nystedt | date = 27 October 2009 | work = [[Computerworld]] | publisher = International Data Group | agency = [[IDG]] News Service | accessdate = 7 December 2010 | archive-date = 22 ಡಿಸೆಂಬರ್ 2010 | archive-url = https://web.archive.org/web/20101222025321/http://www.computerworld.com/s/article/9140006/Wikileaks_leader_talks_of_courage_and_wrestling_pigs?taxonomyId=16 | url-status = dead }}</ref>
<ref name="aolnews">{{cite news | first = Sharon | last = Weinberger | title = Who Is Behind WikiLeaks? | url = http://www.aolnews.com/nation/article/besides-julian-assange-who-is-behind-WikiLeaks/19430055 | date = 7 April 2010 | newspaper = [[ಎಒಎಲ್|AOL]] | accessdate = 16 June 2010 | archive-date = 15 ಮಾರ್ಚ್ 2019 | archive-url = https://web.archive.org/web/20190315233940/http://www.aolnews.com/nation/article/besides-julian-assange-who-is-behind-WikiLeaks/19430055 | url-status = dead }}</ref>
<ref name="cjr">
{{cite web | url = http://www.cjr.org/campaign_desk/ellsberg_and_assange.php | title = Ellsberg and Assange | first = Clint | last = Hendler | work = [[Columbia Journalism Review]] | date = 3 June 2010 | accessdate = 5 July 2010
}}
</ref>
<ref name="cream">
{{cite web | first = Julian | last = Assange | title = The cream of Australian Physics | publisher = IQ.ORG | date = 12 July 2006 | url = http://iq.org/#ThecreamofAustralianPhysics | archiveurl = https://web.archive.org/web/20071020051936/http://iq.org/#ThecreamofAustralianPhysics | archivedate = 20 October 2007
}}
</ref>
<ref name="ellsbergmsnbc">{{cite web | url = http://fdlaction.firedoglake.com/2010/06/11/transcript-daniel-ellsberg-says-he-fears-us-might-assasinate-wikileaks-founder | first = Jane | last = Hamsher | title = Transcript: Daniel Ellsberg Says He Fears US Might Assassinate Wikileaks Founder | publisher = [[Firedoglake]] | date = 11 June 2010 | accessdate = 5 July 2010 | archive-date = 14 ಜೂನ್ 2010 | archive-url = https://web.archive.org/web/20100614064102/http://fdlaction.firedoglake.com/2010/06/11/transcript-daniel-ellsberg-says-he-fears-us-might-assasinate-wikileaks-founder | url-status = dead }}</ref>
<ref name="events.ccc.de">
{{cite web | url = http://events.ccc.de/congress/2008/Fahrplan/events/2916.en.html | title = 25C3: Wikileaks | publisher = Events.ccc.de | date = | accessdate = 5 July 2010
}}
</ref>
<ref name="fora.tv">[http://fora.tv/2010/04/18/Logan_Symposium_The_New_Initiatives Video of Julian Assange on the panel at the 2010 Logan Symposium] {{Webarchive|url=https://web.archive.org/web/20101217213046/http://fora.tv/2010/04/18/Logan_Symposium_The_New_Initiatives |date=17 ಡಿಸೆಂಬರ್ 2010 }}, 18 April 2010</ref>
<ref name="Greenwald2010-06-18">{{cite news | url = http://www.salon.com/news/opinion/glenn_greenwald/2010/06/18/wikileaks/ | title = The strange and consequential case of Bradley Manning, Adrian Lamo and WikiLeaks | last = Greenwald | first = Glenn | date = 18 June 2010 | publisher = Salon Media Group (Salon.com) | accessdate = 16 December 2010 | quote = On 10 June, former New York Times reporter Philip Shenon, writing in ''[[The Daily Beast]]'', gave voice to anonymous "American officials" to announce that "Pentagon investigators" were trying "to determine the whereabouts of the Australian-born founder of the secretive website Wikileaks [Julian Assange] for fear that he may be about to publish a huge cache of classified State Department cables that, if made public, could do serious damage to national security." Some news outlets used that report to declare that there was a "Pentagon manhunt" underway for Assange – as though he's some sort of dangerous fugitive. | archive-date = 16 ಡಿಸೆಂಬರ್ 2010 | archive-url = https://web.archive.org/web/20101216140305/http://www.salon.com/news/opinion/glenn_greenwald/2010/06/18/wikileaks | url-status = dead }}</ref>
<ref name="Greenwald2010-12-10">{{cite web | url = http://www.salon.com/news/opinion/glenn_greenwald/2010/12/10/wikileaks_media/ | title = The media's authoritarianism and WikiLeaks | date = 10 December 2010 | last = Greenwald | first = Glenn | publisher = Salon Media Group (Salon.com) | accessdate = 16 December 2010 | archive-date = 15 ಡಿಸೆಂಬರ್ 2010 | archive-url = https://web.archive.org/web/20101215204214/http://www.salon.com/news/opinion/glenn_greenwald/2010/12/10/wikileaks_media | url-status = dead }}</ref>
<ref name="guardian">
{{cite news | first = Ian | last = Traynor | title = WikiLeaks founder Julian Assange breaks cover but will avoid America | newspaper = The Guardian | date = 21 June 2010 | url = https://www.theguardian.com/media/2010/jun/21/wikileaks-founder-julian-assange-breaks-cover | accessdate = 21 June 2010
}}
</ref>
<ref name="khatchadourian">
{{cite news | title = No Secrets: Julian Assange's Mission for Total Transparency | url = http://www.newyorker.com/reporting/2010/06/07/100607fa_fact_khatchadourian?currentPage=all | first = Raffi | last = Khatchadourian | newspaper = [[The New Yorker]] | date = 7 June 2010 | accessdate = 16 June 2010
}}
</ref>
<ref name="leakonomy">Interview with Julian Assange, spokesperson of WikiLeaks: [http://stefanmey.wordpress.com/2010/01/04/leak-o-nomy-the-economy-of-WikiLeaks ''Leak-o-nomy: The Economy of WikiLeaks''] {{Webarchive|url=https://web.archive.org/web/20100524131035/http://stefanmey.wordpress.com/2010/01/04/leak-o-nomy-the-economy-of-WikiLeaks |date=24 ಮೇ 2010 }}</ref>
<ref name="mars">[http://www.marsgroupkenya.org/pdfs/2009/03/KNCHR_crimes-against-humanity-extra-judicial-killings-by-kenya-police-exposed.pdf Report on Extra-Judicial Killings and Disappearances] {{Webarchive|url=https://web.archive.org/web/20101214060055/http://www.marsgroupkenya.org/pdfs/2009/03/KNCHR_crimes-against-humanity-extra-judicial-killings-by-kenya-police-exposed.pdf |date=14 ಡಿಸೆಂಬರ್ 2010 }} 1 March 2009</ref>
<ref name="marsblog">[http://blog.marsgroupkenya.org/?p=870 "WikiLeaks wins Amnesty International 2009 Media Award for exposing Extra judicial killings in Kenya".] {{Webarchive|url=https://web.archive.org/web/20171107113936/http://blog.marsgroupkenya.org/?p=870 |date=7 ನವೆಂಬರ್ 2017 }}. Retrieved 15 April 2010.</ref>
<ref name="mediadays">{{cite web | url = http://newmediadays.dk/julian-assange | title = The Subtle Roar of Online Whistle-Blowing | date = 19 November 2009 | publisher = New Media Days | accessdate = 8 April 2010 | archive-date = 10 ಏಪ್ರಿಲ್ 2010 | archive-url = https://web.archive.org/web/20100410132452/http://newmediadays.dk/julian-assange | url-status = dead }}</ref>
<ref name="motherjones">
{{cite news | title = Inside WikiLeaks' Leak Factory | url = http://motherjones.com/politics/2010/04/wikileaks-julian-assange-iraq-video?page=1 | first = David | last = Kushner | date = 6 April 2010 | newspaper = [[Mother Jones (magazine)|Mother Jones]] | accessdate = 16 June 2010
}}
</ref>
<ref name="mcgreal">
{{cite news | first = Chris | last = McGreal | title = Wikileaks reveals video showing US air crew shooting down Iraqi civilians | url = https://www.theguardian.com/world/2010/apr/05/wikileaks-us-army-iraq-attack | newspaper = The Guardian | date = 5 April 2010 | accessdate = 16 June 2010
}}
</ref>
<ref name="nicar">{{cite web | url = http://data.nicar.org/conference/lasvegas10/showcase | title = Showcase Panels | publisher = data.nicar.org | date = | accessdate = 5 July 2010 | archive-date = 29 ಜೂನ್ 2010 | archive-url = https://web.archive.org/web/20100629024355/http://data.nicar.org/conference/lasvegas10/showcase | url-status = dead }}</ref>
<ref name="nntpcache">{{cite web | title=NNTPCache: Authors | url=http://iq.org/~proff/nntpcache.org | accessdate=16 June 2010 | archive-date=23 ನವೆಂಬರ್ 2010 | archive-url=https://web.archive.org/web/20101123054222/http://iq.org/~proff/nntpcache.org/ | url-status=dead }}</ref>
<ref name="pentagonhunt">
{{cite web | url = https://www.theguardian.com/media/2010/jun/11/wikileaks-founder-assange-pentagon-manning | title = Pentagon hunts WikiLeaks founder Julian Assange in bid to gag website|Media|The Guardian | last = McGreal | first = Chris | date = 11 June 2010 | work = The Guardian|location=London | accessdate = 18 June 2010
}}
</ref>
<ref name="personal">{{cite web | url = http://personaldemocracy.com/technology-politics-social-media-conference-personal-democracy-forum-new-york-0 | title = PdF Conference 2010 | June 3–4 | New York City | Personal Democracy Forum | publisher = Personaldemocracy.com | date = | accessdate = 5 July 2010 | archive-date = 8 ಜುಲೈ 2010 | archive-url = https://web.archive.org/web/20100708065934/http://personaldemocracy.com/technology-politics-social-media-conference-personal-democracy-forum-new-york-0 | url-status = dead }}</ref>
<ref name="pdf">{{cite web | title = PdF Conference 2010: Speakers | url = http://personaldemocracy.com/pdf-conference-2010-june-3-5-new-york-city-speakers#assange | publisher = [[Personal Democracy Forum]] | accessdate = 16 June 2010 | archive-date = 27 ಮೇ 2012 | archive-url = https://archive.today/20120527042208/http://personaldemocracy.com/pdf-conference-2010-june-3-5-new-york-city-speakers%23assange#assange | url-status = dead }}</ref>
<ref name="poulsen">
{{cite news | first1 = Kevin | last1 = Poulsen | first2 = Kim | last2 = Zetter | title = Wikileaks Commissions Lawyers to Defend Alleged Army Source | url = https://www.wired.com/threatlevel/2010/06/wikileaks-to-lamo | date = 11 June 2010 | newspaper = [[Wired (magazine)|Wired]] | accessdate = 16 June 2010
}}
</ref>
<ref name="rubberhose">{{cite web | first = Suelette | last = Dreyfus | title = The Idiot Savants' Guide to Rubberhose | url = http://iq.org/~proff/rubberhose.org/current/src/doc/maruguide/t1.html | accessdate = 16 June 2010 | archive-date = 13 ಆಗಸ್ಟ್ 2010 | archive-url = https://web.archive.org/web/20100813032734/http://iq.org/~proff/rubberhose.org/current/src/doc/maruguide/t1.html | url-status = dead }}</ref>
<ref name="seclists">Assange stated, "In this limited application strobe is said to be faster and more flexible than ISS2.1 (an expensive, but verbose security checker by Christopher Klaus) or PingWare (also commercial, and even more expensive)." See [http://seclists.org/bugtraq/1995/Mar/65 Strobe v1.01: Super Optimised TCP port surveyor]</ref>
<ref name="singel">
{{cite news | first = Ryan | last = Singel | title = Immune to Critics, Secret-Spilling Wikileaks Plans to Save Journalism... and the World | url = https://www.wired.com/politics/onlinerights/news/2008/07/wikileaks?currentPage=all | date = 3 July 2008 | newspaper = [[Wired (magazine)|Wired]] | accessdate = 16 June 2010
}}
</ref>
<ref name="smh1">
{{cite news | first = Bernard | last = Lagan | title = International man of mystery | url = http://www.smh.com.au/technology/technology-news/international-man-of-mystery-20100409-ryvf.html | date = 10 April 2010 | newspaper = The Sydney Morning Herald | accessdate = 16 June 2010
}}
</ref>
<ref name="smh2">
{{cite news | title = The secret life of Wikileaks founder Julian Assange | url = http://www.smh.com.au/technology/technology-news/the-secret-life-of-wikileaks-founder-julian-assange-20100521-w1um.html | date = 22 May 2010 | newspaper = The Sydney Morning Herald | accessdate = 16 June 2010
}}
</ref>
<ref name="strobe">
{{cite web | title = strobe-1.06: A super optimised TCP port surveyor | url = http://hpux.connect.org.uk/hppd/hpux/Networking/Admin/strobe-1.06 | publisher = The Porting And Archive Centre for HP-UX | accessdate = 16 June 2010
}}
</ref>
<ref name="suelette">
{{Cite book | title = [[Underground (Suelette Dreyfus book)|Underground: Tales of Hacking, Madness and Obsession on the Electronic Frontier]] | first = Suelette | last = Dreyfus | year = 1997 | isbn = 1-86330-595-5
}}
</ref>
<ref name="taylor">
{{cite news | first = Jerome | last = Taylor | title = Pentagon rushes to block release of classified files on Wikileaks | url = http://www.independent.co.uk/news/world/americas/pentagon-rushes-to-block-release-of-classified-files-on-wikileaks-1998313.html | newspaper = [[The Independent]] | date = 12 June 2010 | accessdate = 16 June 2010
}}
</ref>
<ref name="tdbmanhunt">
{{cite web | url = http://www.thedailybeast.com/blogs-and-stories/2010-06-10/wikileaks-founder-julian-assange-hunted-by-pentagon-over-massive-leak | title = Wikileaks Founder Julian Assange Hunted by Pentagon Over Massive Leak | last = Shenon | first = Philip | date = 10 June 2010<!-- 10:03 pm--> | work = Pentagon Manhunt | publisher = The Daily Beast | accessdate = 18 June 2010
}}
</ref>
<ref name="telegraph">
{{cite web | url = http://www.telegraph.co.uk/technology/news/7845420/Wikileaks-founder-Julian-Assange-emerges-from-hiding.html | title = Wikileaks founder Julian Assange emerges from hiding | publisher = The Daily Telegraph | date = 22 June 2010 | accessdate = 5 July 2010
}}
</ref>
<ref name="theage1">
{{cite news | first = Nikki | last = Barrowclough | title = Keeper of secrets | url = http://www.theage.com.au/national/keeper-of-secrets-20100521-w230.html | newspaper = [[The Age]] | date = 22 May 2010 | accessdate = 16 June 2010
}}
</ref>
<ref name="theaustralian">
{{cite news | title = Rudd Government blacklist hacker monitors police | url = http://www.theaustralian.com.au/news/rudd-government-blacklist-hacker-monitors-police/story-e6frg8yx-1225718288350 | first = Richard | last = Guilliatt | newspaper = [[The Australian]] | date = 30 May 2009 | accessdate = 16 June 2010}} [lead-in to a longer article in that day's ''The Weekend Australian Magazine'']</ref>
<ref name="timesonline">{{cite news | title = Profile: Julian Assange, the man behind Wikileaks | url = http://technology.timesonline.co.uk/tol/news/tech_and_web/the_web/article7094231.ece | work = The Sunday Times | location = UK | date = 11 April 2010 | accessdate = 29 June 2010 | archive-date = 6 ಸೆಪ್ಟೆಂಬರ್ 2010 | archive-url = https://web.archive.org/web/20100906200853/http://technology.timesonline.co.uk/tol/news/tech_and_web/the_web/article7094231.ece | url-status = dead }}</ref>
<ref name="wankworm">Julian Assange: [http://www.counterpunch.org/assange11252006.html The Anti-Nuclear WANK Worm. The Curious Origins of Political Hacktivism] [[CounterPunch]], 25/26 November 2006</ref>
<ref name="pgsql">
{{cite web | url = http://www.postgresql.org/community/contributors | title = PostgreSQL contributors | publisher = Postgresql.org | date = | accessdate = 29 November 2010
}}
</ref>
<ref name="Forbes">
{{cite web | last = Greenberg | first = Andy | url = http://blogs.forbes.com/andygreenberg/2010/11/29/an-interview-with-wikileaks-julian-assange/6/ | title = An Interview With WikiLeaks’ Julian Assange — Andy Greenberg – The Firewall | publisher = blogs.forbes.com | date = | accessdate = 16 December 2010
}}
</ref>
}}
== ಬಾಹ್ಯ ಕೊಂಡಿಗಳು ==
{{Portal box|Australia|Internet|Biography}}
{{Wikiquote|Julian Assange}}
{{Commons category|Julian Assange}}
*[http://english.aljazeera.net/category/person/julian-assange ಪೂರ್ಣ ಚಿತ್ರಣ] ''ಅಲ್ಜಜೀರಾ'' ದಲ್ಲಿ
*[http://www.bbc.co.uk/news/world-11047811 ವ್ಯಕ್ತಿವಿವರ: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸ್ಸಾಂಜೆ] ''ಬಿಬಿಸಿ ನ್ಯೂಸ್'' ನಲ್ಲಿ
*[https://www.theguardian.com/media/julian-assange ಪೂರ್ಣ ಚಿತ್ರಣ] ''ದಿ ಗಾರ್ಡಿಯನ್'' ನಲ್ಲಿ
*[http://www.reuters.com/article/idUSTRE6BB1LG20101213 ವಿಶೇಷ ವರದಿ] ''ರಾಯಟರ್ಸ್'' ನಲ್ಲಿ
*[http://www.sbs.com.au/dateline/story/watch/id/600572/n/The-Whistleblower ಎಸ್ಬಿಸಿ ಡೇಟ್ಲೈನ್ನಲ್ಲಿ ವೀಡಿಯೋ ವ್ಯಕ್ತಿವಿವರ ವೀಕ್ಷಿಸಿ] {{Webarchive|url=https://web.archive.org/web/20110103052140/http://www.sbs.com.au/dateline/story/watch/id/600572/n/The-Whistleblower |date=3 ಜನವರಿ 2011 }}
*[http://www.life.com/image/first/in-gallery/53291/julian-assange-hero-or-villain ಜೂಲಿಯನ್ ಅಸ್ಸಾಂಜೆ: ನಾಯಕ ಅಥವಾ ಖಳನಾಯಕ?] {{Webarchive|url=https://web.archive.org/web/20101216174148/http://www.life.com/image/first/in-gallery/53291/julian-assange-hero-or-villain |date=16 ಡಿಸೆಂಬರ್ 2010 }} – ''ಲೈಫ್ ಮ್ಯಾಗಜೈನ್'' ನಿಂದ ಸ್ಲೈಡ್ ಶೋ
*{{cite news |url=http://www.stuff.co.nz/technology/digital-living/524296 |title= Meet the Aussie behind Wikileaks |publisher=[[Fairfax New Zealand]] |date=8 July 2008}}
*{{cite web | url = https://www.youtube.com/watch?v=7QEdAykXxoM | title = WikiLeaks editor on Apache combat video: No excuse for US killing civilians |date = April 2010| publisher = RussiaToday}}
*[https://web.archive.org/web/*/http://iq.org/ Archived versions] ಜೂಲಿಯನ್ ಅಸ್ಸಾಂಜೆಯವರ ವೆಬ್ ಸೈಟ್ iq.org ನಲ್ಲಿನ ಮುಖಪುಟದಲ್ಲಿ (ಇಂಟರ್ನೆಟ್ ಆರ್ಕೈವ್ನಲ್ಲಿ)
*[http://www.ted.com/speakers/julian_assange.html ಜೂಲಿಯನ್ ಅಸ್ಸಾಂಜೆ: ಜಗತ್ತಿಗೆ ವಿಕಿಲೀಕ್ಸ್ ಏಕೆ ಬೇಕು] [http://www.ted.com/ ted.com] ನಲ್ಲಿ ವೀಡಿಯೋ
{{WikiLeaks}}
{{Persondata
| NAME = Assange, Julian
| ALTERNATIVE NAMES = Assange, Julian Paul
| SHORT DESCRIPTION = Australian journalist, programmer and Internet activist
| DATE OF BIRTH = 3 July 1971
| PLACE OF BIRTH = [[Townsville]], Queensland, Australia
| DATE OF DEATH =
| PLACE OF DEATH =
}}
{{DEFAULTSORT:Assange, Julian}}
{{Interwikineeded}}
[[ವರ್ಗ:1971 ರಲ್ಲಿ ಜನಿಸಿದವರು]]
[[ವರ್ಗ:ಆಸ್ಟ್ರೇಲಿಯದ ಕ್ರಾಂತಿಕಾರಿಗಳು]]
[[ವರ್ಗ:ಆಸ್ಟ್ರೇಲಿಯದ ಕಂಪ್ಯೂಟರ್ ಪ್ರೋಗ್ರಾಮರ್ಗಳು]]
[[ವರ್ಗ:ಆಸ್ಟ್ರೇಲಿಯದ ಇಂಟರ್ನೆಟ್ ಹೆಸರಾಂತ ವ್ಯಕ್ತಿಗಳು]]
[[ವರ್ಗ:ಆಸ್ಟ್ರೇಲಿಯದ ಪತ್ರಕರ್ತರು]]
[[ವರ್ಗ:ಆಸ್ಟ್ರೇಲಿಯದ ಸುದ್ದಿ ಮಾಹಿತಿ ನೀಡುವವರು]]
[[ವರ್ಗ:ಇಂಟರ್ನೆಟ್ ಕ್ರಾಂತಿಕಾರರು]]
[[ವರ್ಗ:ಜೀವಿಸಿರುವ ವ್ಯಕ್ತಿಗಳು]]
[[ವರ್ಗ:ಕ್ವೀನ್ಸ್ಲ್ಯಾಂಡ್ನ ಟೌನ್ಸ್ವಿಲ್ಲೆಯ ಜನರು]]
[[ವರ್ಗ:ಮೆಲ್ಬೋರ್ನ್ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳು]]
[[ವರ್ಗ:ವಿಕಿಲೀಕ್ಸ್.]]
[[ವರ್ಗ:ಪತ್ರಕರ್ತರು]]
rkdq3qzmlu8i1gujzjokse44cmth7fy
ಆಶಾ ಭೋಸ್ಲೆ
0
27039
1378145
1371879
2026-08-02T15:06:21Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378145
wikitext
text/x-wiki
{{Infobox person
| honorific_suffix =
| image = Ashaji.jpg
| image_size =
| alt =
| caption = ಆಶಾ ಭೋಸ್ಲೆ ೨೦೧೫ರಲ್ಲಿ
| birth_name = ಆಶಲತಾ ದೀನನಾಥ ಮಂಗೇಶ್ಕರ್
| birth_date = {{Birth date|1933|09|08|df=y}}
| birth_place = ಗೋರ್, ಸಾಂಗ್ಲಿ ರಾಜ್ಯ, ಸ್ವಾತಂತ್ರ್ಯಪೂರ್ವ ಭಾರತ
| death_date = {{Death date and age|2026|04|12|1933|09|08|df=y}}
| death_place = [[ಮುಂಬಯಿ]], [[ಮಹಾರಾಷ್ಟ್ರ]]
| occupation = {{flatlist|
* [[ಹಿನ್ನೆಲೆ ಗಾಯಕಿ]]
* ಉದ್ಯಮಿ
* ನಟಿ
* ದೂರದರ್ಶನ ಕಲಾವಿದೆ
}}
| years_active = ೧೯೪೩–೨೦೨೬
| mother =
| father = ದೀನನಾಥ ಮಂಗೇಶ್ಕರ್
| spouse = ಗಣಪತ್ ರಾವ್ ಭೋಸ್ಲೆ<br>(ವಿವಾಹ-೧೯೪೯; ಮೃತ ೧೯೬೬)<br>ಆರ್. ಡಿ. ಬರ್ಮನ್<br>(ವಿವಾಹ-೧೯೮೦; ಮೃತ-೧೯೯೦)<br>
| children = ೩
| family =
| relatives =
| works =
| awards =
| honours = [[ದಾದಾಸಾಹೇಬ್ ಫಾಲ್ಕೆ ಪುರಸ್ಕಾರ]] (೨೦೦೦)<br/> [[ಪದ್ಮ ವಿಭೂಷಣ]] (೨೦೦೮)<br/> [[ಬಂಗ ಭೂಷಣ]] (೨೦೧೮)<ref>{{cite web|url=https://www.jagonews24.com/international/news/428839|title='বঙ্গবিভূষণ' পুরস্কার পেলেন আশা ভোঁসলে, সমরেশ, প্রসেনজিৎ|date=22 May 2018|access-date=26 September 2022|archive-url=https://web.archive.org/web/20240202143434/https://www.jagonews24.com/international/news/428839|archive-date=2 February 2024|website=jagonews24.com|language=bn|trans-title=Banga Bibhushan for Asha Bhosle, Samaresh, Prasenjit and others}}</ref><br/> ಮಹಾರಾಷ್ಟ್ರ ಭೂಷಣ (೨೦೧೧)
| module = {{Infobox musical artist|embed=yes
| background = solo_singer
| genre = {{flatlist|
* [[ಚಲನಚಿತ್ರ ಗಾಯಕಿ]]
* [[ಖವ್ವಾಲಿ]]<ref name="auto"/>
* [[ಘಝಲ್]]s<ref>{{Cite web|url=https://gaana.com/album/the-golden-collection-memorable-ghazals-and-geets-asha-bhosle|title=Asha Bhosle Songs: The Golden Collection – Memorable Ghazals And Geets – Asha Bhosle MP3 Urdu Songs by Asha Bhosle|access-date=9 February 2022|website=Gaana}}</ref>
* [[ಜಾನಪದ]]
* [[ಭಜನೆ]]s<ref>{{Cite web|url=https://www.saregama.com/artist/asha-bhosle_816/bhajan_33722/songs|title=Asha Bhosle Bhajan songs – Download Bhajan MP3 Song of Asha Bhosle|website=Saregama.com|access-date=9 February 2022}}</ref>
* [[ಪಾಪ್ ಸಂಗೀತ]]<ref>{{Cite web|url=https://mumbaimirror.indiatimes.com/entertainment/bollywood/happy-birthday-asha-bhosle-some-lesser-known-facts-about-the-queen-of-indie-pop/articleshow/77986495.cms|title=Happy Birthday Asha Bhosle: Some lesser-known facts about the Queen of Indie Pop – Mumbai Mirror|website=Mumbaimirror.indiatimes.com|access-date=9 February 2022}}</ref>
* [[ಶಾಸ್ತ್ರೀಯ]]<ref name="auto">{{Cite web|url=https://www.rediff.com/movies/special/85-unforgettable-asha-bhosle-songs/20180907.htm|title = 85 UNFORGETTABLE Asha Bhosle songs|website=Rediff.com}}</ref>
* [[ಗುರ್ಬನಿ]]<ref>"Gurbani Shabad By Asha Bhonsale Music Playlist: Best Gurbani Shabad By Asha Bhonsale MP3 Songs on Gaana.com" https://gaana.com/playlist/amp/dr-joginder-singh-chhabra-gurbani-shabad-by-asha-bhonsale.html {{Webarchive|url=https://web.archive.org/web/20240703212720/https://gaana.com/playlist/amp/dr-joginder-singh-chhabra-gurbani-shabad-by-asha-bhonsale.html |date=2024-07-03 }}</ref>
* [[ನಝ್ರುಲ್ ಗೀತಿ]]<ref>"Nazrul Geeti Songs Download: Nazrul Geeti MP3 Bengali Songs Online Free on Gaana.com" https://gaana.com/album/amp/nazrul-geeti-vol2.html {{Webarchive|url=https://web.archive.org/web/20241007094009/https://gaana.com/album/amp/nazrul-geeti-vol2.html |date=2024-10-07 }}</ref>
* [[ರವೀಂದ್ರ ಸಂಗೀತ]]<ref>{{Cite web|url=https://gaana.com/playlist/anupam-28-asha-bhosle-rabindra-sangeet|title=Playlist ASHA BHOSLE RABINDRA SANGEET on Gaana.com|website=Gaana|access-date=9 February 2022}}</ref>
}}
}}
}}
'''ಆಶಾ ಭೋಸ್ಲೆ''' <ref>ಆಶಾ ಭೋಂಸ್ಲೆಯವರನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ ಆಶಾ, ಆಶಾ ಬೋಸ್ಲೆ, ಆಶಾ ಭೋನ್ಸಲೆ, ಆಶಾ ಭೋಸ್ಲೆ, ಆಶಾ ಭೋಸ್ಲೇ (ಹೆಚ್ಚಿನ ವಿವರಗಳಿಗಾಗಿ ಅವರ [http://www.imdb.com/name/nm0080427/ ಐಎಂಡಿಬಿ ಎಂಟ್ರಿ] ನೋಡಿ). ಆವರನ್ನು ಯಾವಾಗಲೂ ಆಶಾಜಿ ಎಂದು ಕರೆಯಲಾಗುತ್ತದೆ — [[ಹಿಂದಿ]]ಯಲ್ಲಿ ''ಜಿ'' ಸೇರಿಸುವುದು ಅವರಿಗೆ ನೀಡುವ ಗೌರವವನ್ನು ಸೂಚಿಸುತ್ತದೆ.</ref> (೮ ಸೆಪ್ಟೆಂಬರ್ ೧೯೩೩ - ೧೨ ಏಪ್ರಿಲ್ ೨೦೨೬) ಒಬ್ಬ ಭಾರತೀಯ ಗಾಯಕಿ. ಅವರು ಭಾರತದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಅತ್ಯುನ್ನತ ಮನ್ನಣೆಯನ್ನು ಪಡೆದ ಹಿಂದಿ [[ಹಿನ್ನೆಲೆ ಗಾಯನ|ಹಿನ್ನೆಲೆ ಗಾಯಕರಲ್ಲಿ]] ಒಬ್ಬರು, ಅಲ್ಲದೆ ಅವರು ಅತ್ಯಂತ ವ್ಯಾಪಕ ಸಂಗೀತ ಸಂಗ್ರಹವನ್ನು ಹೊಂದಿದ್ದಾರೆ.<ref name="britannica">{{cite book|author=Gulzar; Nihalani, Govind; Chatterji, Saibal|title=Encyclopaedia of Hindi Cinema|year=2003|publisher=Popular Prakashan|isbn=8179910660|pages=532–533}}</ref><ref name="monopolity">{{cite web|title=Only the best preferred|url=http://www.hindu.com/2001/05/18/stories/09180701.htm|date=18 May 2001|author=Gangadhar, v.|publisher=''[[ದಿ ಹಿಂದೂ]]''|accessdate=2009-07-22|archive-date=2003-08-23|archive-url=https://web.archive.org/web/20030823024402/http://www.hindu.com/2001/05/18/stories/09180701.htm|url-status=dead}}</ref><ref>{{cite book|title=The Garland Encyclopedia of World Music|year=2000|author=Arnold, Alison|publisher=Taylor & Francis|isbn=0824049462|pages=420–421}}</ref> ಅವರ ವೃತ್ತಿಜೀವನ ೧೯೪೩ರಲ್ಲಿ ಆರಂಭವಾಯಿತು ಮತ್ತು ಅದು ಆರು ದಶಕಗಳವರೆಗೂ ಮುಂದುವರೆಯಿತು. ಅವರು ಸುಮಾರು ೧೦೦೦ ಬಾಲಿವುಡ್ ಚಿತ್ರಗಳಿಗೆ ಹಿನ್ನೆಲೆ ಗಾಯನವನ್ನು ನೀಡಿದ್ದಾರೆ, ಮತ್ತ್ತು ಇತರ ಚಟುವಟಿಕೆಗಳಾಗಿ ಅವರು ಅನೇಕ ಖಾಸಗಿ ಆಲ್ಬಂಗಳ ಧ್ವನಿಮುದ್ರಣವನ್ನೂ ಮಾಡಿದ್ದಾರೆ ಮತ್ತು ಭಾರತ ಮತ್ತು ಹೊರದೇಶಗಳಲ್ಲಿ ಬಹುಸಂಖ್ಯೆಯ ಗಾನಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.<ref>
{{cite web
| url=http://www.imdb.com/name/nm0080427/
| title=IMDB entry
| publisher=IMDB
| accessdate=2009-03-28
}}</ref><ref>{{cite web|title=An evergreen voice|date=September 26, 2003|publisher=''[[ದಿ ಹಿಂದೂ]]''|accessdate=2010-08-12|url=http://www.hindu.com/fr/2003/09/26/stories/2003092602000700.htm|archive-date=2003-10-02|archive-url=https://web.archive.org/web/20031002012621/http://www.hindu.com/fr/2003/09/26/stories/2003092602000700.htm|url-status=dead}}</ref> ಭೋಂಸ್ಲೆ ಅವರು ಹಿನ್ನೆಲೆ ಗಾಯಕಿ [[ಲತಾ ಮಂಗೇಶ್ಕರ್|ಲತಾ ಮಂಗೇಶ್ಕರ್]]ರ ಸಹೋದರಿ.
ಅವರ ಧ್ವನಿಗಾಗಿ ಪ್ರಸಿದ್ಧಿಯಾಗಿದ್ದರು ಮತ್ತು ಆಗಾಗ್ಗೆ ಅವರ ಸರ್ವತೋಮುಖ ಶಕ್ತಿಗಾಗಿ ಮನ್ನಣೆಗೊಳಗಾಗುತ್ತಿದ್ದರು,<ref name="britannica" /><ref>{{cite web|title=Chords & Notes|url=http://www.hindu.com/mp/2008/06/07/stories/2008060752910500.htm|author=V.L|publisher=''[[ದಿ ಹಿಂದೂ]]''|date=June 7, 2008|accessdate=2010-08-11|archive-date=2012-11-07|archive-url=https://web.archive.org/web/20121107231200/http://www.hindu.com/mp/2008/06/07/stories/2008060752910500.htm|url-status=dead}}</ref><ref>ವಿಶ್ವ ಸಂಗೀತ: ಲ್ಯಾಟಿನ್ ಅಂಡ್ ನಾರ್ತ್ ಅಮೇರಿಕಾ, ಕೆರೆಬಿಯನ್, ಇಂಡಿಯಾ, ಏಷಿಯಾ ಅಂಡ್ ಪೆಸಿಫಿಕ್; ಸಿಮನ್ ಬ್ರಾಟನ್, ಮಾರ್ಕ್ ಎಲಿಂಗ್ಟನ್, ರಿಚರ್ಡ್ ಟ್ರಿಲೋ ಅವರು ರಚಿಸಿದ್ದು; ರಫ್ ಗೈಡ್ಸ್, ೨೦೦೦</ref> ಭೋಂಸ್ಲೆರ ಗಾಯನಗಳಲ್ಲಿ ಚಲನಚಿತ್ರ ಸಂಗೀತ, ಪಾಪ್, ಘಝಲ್ಗಳು, [[ಭಜನೆ|ಭಜನ]]ಗಳು, ಸಾಂಪ್ರದಾಯಕ ಭಾರತೀಯ ಶಾಸ್ತ್ರೀಯ ಸಂಗೀತ, ಜಾನಪದ ಹಾಡುಗಳು, ಕವ್ವಾಲಿಗಳು, ರಬೀಂದ್ರ ಸಂಗೀತಗಳು ಮತ್ತು ನಝ್ರುಲ್ ಗೀತೆಗಳು ಸೇರಿವೆ. ಅಸ್ಸಾಮೀ, [[ಹಿಂದಿ]], [[ಉರ್ದೂ|ಉರ್ದು]], [[ತೆಲುಗು]], [[ಕನ್ನಡ]], [[ಮರಾಠಿ]], [[ಬಂಗಾಳಿ|ಬೆಂಗಾಲಿ]], ಗುಜರಾತಿ, [[ಪಂಜಾಬಿ]], [[ತಮಿಳು]], [[ಆಂಗ್ಲ|ಇಂಗ್ಲಿಷ್]], [[ರಷ್ಯಾದ ಭಾಷೆ|ರಷ್ಯನ್]], ಛೆಕ್, ನೇಪಾಳಿ, ಮಲೈ ಮತ್ತು [[ಮಲಯಾಳಂ]] ಸೇರಿ ಅವರು ಸುಮಾರು ೧೮ ಭಾಷೆಗಳಲ್ಲಿ ಹಾಡಿದ್ದಾರೆ.<ref name="who'swho">ದಿ ಇಂಟರ್ನ್ಯಾಷನಲ್ ವ್ಹೂಸ್ ವ್ಹು. ೨೦೦೪. ಯೂರೋಪಾ ಪಬ್ಲಿಕೇಶನ್ಸ್. ರೌಟ್ಲೆಜ್.</ref>
೨೦೦೬ರಲ್ಲಿ, ಆಶಾ ಭೋಂಸ್ಲೆ ತಾವು ಸುಮಾರು ೧೨,೦೦೦ ಹಾಡುಗಳನ್ನು ಹಾಡಿದ್ದಾಗಿ ಹೇಳಿಕೆಯನ್ನು ನೀಡಿದ್ದರು,<ref>({{cite web
| author=Jyothi Venkatesh
| url=http://www.vashi2panvel.com/Navi-Mumbai-News/item/196/catid/26
| title=Asha Bhosle: Sa Re Ga Ma…
| publisher=Vashi2Panvel.com
| accessdate=2006-05-03
| quote=I would like to state humbly that I am the only singer who has sung the maximum number of songs — 12,000. If you sing one song a day, you can humanly sing 365 songs a year and 3650 songs in ten years. In around 60 years of my career I could sing 12,000 songs because there were times I had sung even four songs a day.
| archive-date=2012-08-01
| archive-url=https://www.webcitation.org/69avilP1h?url=http://www.vashi2panvel.com/Navi-Mumbai-News/index.php?arr=item%2F196%2Fcatid%2F26
| url-status=dead
}}</ref> ಅನೇಕ ಇತರ ಮೂಲಗಳು ಸಹ ಇದೇ ಸಂಖ್ಯೆಯನ್ನೇ ಪುನರಾವರ್ತಿಸಿದವು.<ref name="who'swho" /><ref>{{cite web
|url=http://specials.rediff.com/movies/2006/aug/23sld7.htm
|title=How fair were they to Mohammed Rafi?: Page 7
|author=Raju Bharatan
|publisher=[[Rediff.com]]
|date=2006-08-23
|accessdate=2007-04-28
|quote = Asha Bhosle it is, in fact, who occupies pride of place --- she is all set to complete 13,000 songs. And that must rate as the highest in Indian cinema -- Guinness or no Guinness.
}}</ref> ಪ್ರಪಂಚದ ಉನ್ನತ ದಾಖಲೆಗಳನ್ನು ಪ್ರಮಾಣಿಸುವ, ಅಂತರರಾಷ್ಟ್ರೀಯ ಸಂಸ್ಥೆಯಾದ ವರ್ಲ್ಡ್ ರೆಕಾರ್ಡ್ಸ್ ಅಕಾಡೆಮಿಯು, ಸೆಪ್ಟೆಂಬರ್ ೨೦೦೯ರಲ್ಲಿ ಭೋಂಸ್ಲೆಯವರನ್ನು ಪ್ರಪಂಚದಲ್ಲೇ "ಅತ್ಯಂತ ಹೆಚ್ಚಿನ ಹಾಡುಗಳನ್ನು ರೆಕಾರ್ಡಿಂಗ್ ಮಾಡಿದ ಕಲಾವಿದೆ" ಎಂದು ಗುರುತಿಸಿದೆ.<ref>{{cite web
| url = http://www.worldrecordsacademy.org/entertainment/most_recorded_artist-world_record_set_by_Asha_Bhonsle_90336.htm
| title = Most Recorded Artist-world record set by Asha Bhonsle
| accessdate = 4 January 2010
| date = 3 September 2009
| archive-date = 15 ಮೇ 2012
| archive-url = https://web.archive.org/web/20120515235133/http://www.worldrecordsacademy.org/entertainment/most_recorded_artist-world_record_set_by_Asha_Bhonsle_90336.htm
| url-status = dead
}}</ref>
==ಜೀವನ ಚರಿತ್ರೆ==
ಆಶಾ ಭೋಂಸ್ಲೆಯವರು ಬಾಂಬೆ ಪ್ರಾಂತ್ಯದ (ಈಗಿನ [[ಮಹಾರಾಷ್ಟ್ರ]]ದಲ್ಲಿದೆ), ಸಾಂಗ್ಲಿಯಲ್ಲಿನ ಗೋರ್ ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ, ಮಾಸ್ಟರ್ ದೀನಾನಾಥ್ ಮಂಗೇಶ್ಕರ್ ಎಂಬ ಸಂಗೀತ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯವರು ರಂಗಭೂಮಿಯ ಕಲಾವಿದರು ಮತ್ತು ಶಾಸ್ತ್ರೀಯ ಗಾಯಕರಾಗಿದ್ದರು. ಅವರು ಒಂಬತ್ತು ವರ್ಷ ವಯಸ್ಸಿನವರಾಗಿದ್ದಾಗ ಅವರ ತಂದೆಯವರು ಮರಣ ಹೊಂದಿದರು.
ಅವರ ಕುಟುಂಬವು [[ಪುಣೆ|ಪೂನಾ]] ದಿಂದ [[ಕೊಲ್ಲಾಪುರ|ಕೊಲ್ಹಾಪೂರ್]]ಗೆ ಮತ್ತು ಅಲ್ಲಿಂದ [[ಮುಂಬಯಿ]]ಗೆ ತೆರಳಿತು. ಅವರು ಮತ್ತು ಅವರ ಸಹೋದರಿ [[ಲತಾ ಮಂಗೇಶ್ಕರ್]] ತಮ್ಮ ಕುಟುಂಬದ ನೆರವಿಗಾಗಿ ಹಾಡುವುದನ್ನು ಮತ್ತು ಚಲನಚಿತ್ರಗಳಲ್ಲಿ ನಟಿಸುವುದನ್ನು ಪ್ರಾರಂಭಿಸಿದ್ದರು. ಅವರು ''ಮಝಾ ಬಲ್'' (೧೯೪೩) ಎಂಬ ಮರಾಠಿ ಚಿತ್ರಕ್ಕಾಗಿ ತಮ್ಮ ಮೊದಲ ಚಲನಚಿತ್ರ ಗೀತೆ ''ಚಲಾ ಚಲಾ ನವ್ ಬಲಾ'' ವನ್ನು ಹಾಡಿದರು. ಈ ಚಿತ್ರಕ್ಕಾಗಿ ಸಂಗೀತ ರಚನೆಯನ್ನು ದತ್ತ ದವ್ಜೇಕರ್ರವರು ಮಾಡಿದ್ದರು. ಹಂಸ್ರಾಜ್ ಬೆಲ್ಹ್ರ ''ಚುನಾರಿಯಾ'' (೧೯೪೮) ಚಿತ್ರಕ್ಕಾಗಿ ''ಸಾವನ್ ಆಯಾ'' ಗೀತೆಯನ್ನು ಹಾಡುವುದರ ಮೂಲಕ ಅವರು ಹಿಂದಿ ಚಲನಚಿತ್ರಗೀತೆಗಳನ್ನು ಹಾಡಲು ಪ್ರಾರಂಭಿಸಿದ್ದರು.<ref name="rediff_70">{{cite web
|url=http://ia.rediff.com/movies/2003/sep/05ms1.htm
|title=Asha, 70 years, 70 landmarks
|date=2003-09-08
|accessdate=2006-11-11
}}</ref> ಅವರ ಮೊದಲ ಹಿಂದಿ ಸೋಲೋ ಹಾಡನ್ನು ''ರಾತ್ ಕಿ ರಾಣಿ'' (೧೯೪೯) ಚಿತ್ರಕ್ಕಾಗಿ ಹಾಡಿದರು.
ಅವರ ೧೬ನೆಯ ವಯಸ್ಸಿನಲ್ಲಿ, ಅವರು ೩೧-ವರ್ಷ-ವಯಸ್ಸಿನ ಗಣಪತ್ರಾವ್ ಭೋಂಸ್ಲೆ ಜೊತೆ ಓಡಿ ಹೋಗಿ ಅವರ ಕುಟುಂಬಕ್ಕೆ ವಿರುದ್ಧವಾಗಿ ಮದುವೆಯಾದರು. ಗಣಪತ್ರಾವ್, ಸಹೋದರಿ ಲತಾರ ವೈಯಕ್ತಿಕ ಕಾರ್ಯದರ್ಶಿಯಾಗಿದ್ದರು. ಮದುವೆಯು ವಿಫಲವಾಯಿತು. ಅವರ ಪತಿ ಮತ್ತು ಅತ್ತೆ-ಮಾವಂದಿರಿಂದ ಅವರನ್ನು ಕೀಳಾಗಿ ಕಾಣಲಾಗಿತ್ತು. ಮದುವೆಯಾದ ಕೆಲವು ವರ್ಷಗಳ ನಂತರ, ಭೋಂಸ್ಲೆರವರು (ಸುಮಾರು ೧೯೬೦ರಲ್ಲಿ) ಸಂಶಯ ಸ್ವಭಾವದ ಗಣಪತ್ರಾವ್ರವರಿಂದ ಹೊರಹಾಕಲ್ಪಟ್ಟರು<ref>{{cite web|url=http://www.harmonyindia.org/hportal/VirtualPageView.jsp?page_id=950|title=Only Asha: Asha Bhosle|access-date=2011-01-10|archive-date=2010-12-15|archive-url=https://web.archive.org/web/20101215113312/http://harmonyindia.org/hportal/VirtualPageView.jsp?page_id=950|url-status=dead}}</ref> ಮತ್ತು ಅವರು ತಮ್ಮ ಎರಡು ಮಕ್ಕಳೊಂದಿಗೆ ಹಾಗು ಮೂರನೆಯ ಮಗು, ಆನಂದ್ನನ್ನು ಹೊಟ್ಟೆಯಲ್ಲಿ ಹೊತ್ತು ತವರುಮನೆಗೆ ಹೋದರು. ಅವರು ಹಣ ಸಂಪಾಧನೆ ಮಾಡಲು ಚಲನಚಿತ್ರಗಳಲ್ಲಿ ಹಾಡುವುದನ್ನು ಮುಂದುವರೆಸಿದರು.
ಆ ಸಮಯದಲ್ಲಿ, ಗೀತಾ ದತ್, ಶಂಷಾದ್ ಬೇಗಮ್ ಮತ್ತು [[ಲತಾ ಮಂಗೇಶ್ಕರ್]] (ಅವರ ಸಹೋದರಿ)ರಂತಹ ಪ್ರಖ್ಯಾತ ಹಿನ್ನೆಲೆ ಗಾಯಕಿಯರು "ನಾಯಕಿನಟಿ" ಪಾತ್ರಗಳಿಗೆ ಮತ್ತು ದೊಡ್ಡ ಮಟ್ಟದ ಚಿತ್ರಗಳಿಗೆ ಗುತ್ತಿಗೆಯನ್ನು ಮಾಡಿಕೊಂಡು ಹಾಡುತ್ತಿದ್ದರು, ಆಗ ಅವರು ತಗೆದುಕೊಳ್ಳದೆ ಬಿಟ್ಟ ಚಿತ್ರಗಳಿಗೆ ಹಾಡುವ ಅವಕಾಶವನ್ನು ಆಶಾ ಭೋಂಸ್ಲೆ ಪಡೆಯುತ್ತಿದ್ದರು: ಅವರು ಬ್ಯಾಡ್ ಗರ್ಲ್ಸ್ ಮತ್ತು ವ್ಯಾಂಪ್ಸ್ಗಳಿಗೆ ಹಾಡುತ್ತಿದ್ದರು, ಅಥವಾ ಎರಡನೇ ದರ್ಜೆಯ ಚಲನಚಿತ್ರಗಳಲ್ಲಿ ಹಾಡುತ್ತಿದ್ದರು. ೧೯೫೦ರ ದಶಕದಲ್ಲಿ, ಅವರು ಬಾಲಿವುಡ್ನಲ್ಲಿನ ಇತರ ಎಲ್ಲಾ ಹಿನ್ನೆಲೆ ಗಾಯಕರಿಗಿಂತಲೂ ಹೆಚ್ಚಿನ ಹಾಡುಗಳನ್ನು ಹಾಡಿದ್ದರು (ಲತಾರನ್ನು ಪರಿಗಣಿಸದೆ), ಇವುಗಳಲ್ಲಿ ಬಹುತೇಕ ಕಡಿಮೆ ಬಂಡವಾಳದ ಬಿ ಅಥವಾ ಸಿ-ದರ್ಜೆಯ ಚಿತ್ರಗಳೇ ಒಳಗೊಂಡಿವೆ. ಅವರ ಆರಂಭಿಕ ಹಾಡುಗಳಿಗೆ ಸಂಗೀತ ರಚನೆಯನ್ನು ಎ ಆರ್ ಖುರೇಶಿ, ಸಜ್ಜದ್ ಹುಸೇನ್ ಮತ್ತು ಗುಲಾಮ್ ಮಹಮದ್ರವರಿಂದ ಮಾಡಲಾಗಿತ್ತು, ಇವುಗಳಲ್ಲಿ ಬಹುತೇಕವು ಉತ್ತಮ ಸಾಧನೆಯನ್ನು ಮಾಡುವಲ್ಲಿ ವಿಫಲವಾದವು.<ref name="rediff_70" /> ಸಜದ್ ಹುಸ್ಸೇನ್ ಸಂಗೀತ ರಚನೆಯನ್ನು ಮಾಡಿದ, ದಿಲೀಪ್ ಕುಮಾರ್-ಅಭಿನಯಿಸಿದ ''ಸಂಗದಿಲ್'' (೧೯೫೨) ಚಿತ್ರದಲ್ಲಿ ಹಾಡುವದರೊಂದಿಗೆ ಅವರಿಗೆ ಸಮರ್ಥನೀಯ ಮನ್ನಣೆಯು ದೊರೆಯಿತು. ಪರಿಣಾಮವಾಗಿ, ಚಿತ್ರ ನಿರ್ದೇಶಕ ಬಿಮಲ್ ರಾಯ್ ಭೋಂಸ್ಲೆರವರಿಗೆ ''ಪರಿಣೀತ'' (೧೯೫೩) ಚಿತ್ರದಲ್ಲಿ ಹಾಡುವ ಅವಕಾಶವನ್ನು ನೀಡಿದ್ದರು. ಅವರು ''ಬೂಟ್ ಪಾಲಿಷ್'' (೧೯೫೪) ಚಿತ್ರಕ್ಕಾಗಿ ಮೊಹಮದ್ ರಫಿರ ಜೊತೆಯಲ್ಲಿ ''ನನ್ನೆ ಮುನ್ನೆ ಬಚ್ಚೆ'' ಗೀತೆಯನ್ನು ಹಾಡುವ ಒಪ್ಪಂದವನ್ನು ರಾಜ್ ಕಪೂರ್ ಮಾಡಿಕೊಂಡಿದ್ದರು, ಇದು ಅತ್ಯಂತ ಜನಾಧರಣೆಯನ್ನು ಗಳಿಸಿತ್ತು.
[[ಓಂಕಾರ ಪ್ರಸಾದ್ ನಯ್ಯರ್|ಒ. ಪಿ. ನಾಯರ್]] ಸಿ.ಐ.ಡಿ. (೧೯೫೬) ಚಿತ್ರದಲ್ಲಿ ಹಾಡುವ ಅವಕಾಶ ನೀಡುವುದರ ಮೂಲಕ ಆಶಾ ಭೋಂಸ್ಲೆಯ ಜೀವನದಲ್ಲಿ ಮಹತ್ತರವಾದ ತಿರುವನ್ನು ನೀಡಿದ್ದರು. ಅವರು ತಮ್ಮ ಮೊದಲ ಸಾಧನೆಯನ್ನು ಗಳಿಸಿದ್ದು ಬಿ. ಆರ್. ಚೋಪ್ರರವರ, ತಾವೇ ಸಂಗೀತ ರಚನೆಯನ್ನು ಮಾಡಿದ ನಯಾ ದೌರ್ (೧೯೫೭) ಚಿತ್ರದಲ್ಲಿ. ರಫಿ ರವರ ಜೊತೆಗಿನ, [[ಸಾಹಿರ್ ಲುಧಿಯಾನ್ವಿ|ಸಹಿರ್ ಲುಧಿಯಾನ್ವಿ]]ರವರಿಂದ ಬರೆಯಲಾದ, ''ಮಾಂಗ್ ಕೆ ಸಾತ್ ತುಮ್ಹಾರ'', ''ಸಾತಿ ಹಾತ್ ಬಡಾನಾ'' ಮತ್ತು ''ಉಡೆನ್ ಜಬ್ ಜಬ್ ಝುಲ್ಫೇನ್ ತೆರಿ'' ಗಳಂತಹ ಜೋಡಿ ಹಾಡುಗಳು ಅವರಿಗೆ ಮನ್ನಣೆಯನ್ನು ಗಳಿಸಿ ಕೊಟ್ಟವು. ಅವರು ಖ್ಯಾತ ನಟರಿಗೆ ಗೀತೆಗಳನ್ನು ಹಾಡುವ ಅವಕಾಶವನ್ನು ಪಡೆದದ್ದು ಇದೇ ಮೊದಲ ಬಾರಿಯಾಗಿತ್ತು. ನಯಾ ದೌರ್ ಚಿತ್ರದ ನಿರ್ಮಾಪಕ ಬಿ ಆರ್ ಚೋಪ್ರ, ಅವರ ಪ್ರತಿಭೆಯನ್ನು ಗುರುತಿಸಿ ತಮ್ಮ ಮುಂದಿನ ಅನೇಕ ಚಿತ್ರಗಳಿಗೆ ಹಾಡುವ ಒಪ್ಪಂದವನ್ನು ಅವರೊಂದಿಗೆ ಮಾಡಿಕೊಂಡಿದ್ದರು, ಇವುಗಳಲ್ಲಿ ''ವಕ್ತ್'' ಮತ್ತು ''ಗುಮ್ರಾಹ್'', ಹಮ್ರಾಝ್, ''ಆದ್ಮಿ ಔರ್ ಇನ್ಸಾನ್'', ''ಡೂಂಡ್'' ಮುಂತಾದವುಗಳು ಸೇರಿವೆ. ಭೋಂಸ್ಲೆ ಜೊತೆಗಿನ ನಯ್ಯರ್ರ ಸಹಭಾಗಿತ್ವವು ಸಹ ಅನೇಕ ಜನಪ್ರಿಯ ಹಾಡುಗಳನ್ನು ನಿರ್ಮಿಸಿದೆ. ಕ್ರಮೇಣವಾಗಿ, ಅವರು ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡರು ಮತ್ತು ಸಚಿನ್ ದೇವ್ ಬರ್ಮನ್ ಮತ್ತು ರವಿ ಯಂತಹ ಸ್ವರ ಸಂಯೋಜಕರ ಪ್ರೋತ್ಸಾಹವನ್ನು ಸಹ ಗಳಿಸಿದ್ದರು. ಭೋಂಸ್ಲೆ ಮತ್ತು ನಯ್ಯರ್ ೧೯೭೦ರ ದಶಕದಲ್ಲಿ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ದೂರವಾದರು.
೧೯೬೬ರಲ್ಲಿ, ಸಂಗೀತ ನಿರ್ದೇಶಕ ಆರ್ ಡಿ ಬರ್ಮನ್ರ ಮೊದಲ ಸಾಧನೆಯನ್ನು ಕಂಡ ಚಿತ್ರ, ''ತೀಸ್ರಿ ಮಂಝಿಲ್'' ನಲ್ಲಿನ ಆಶಾರ ಸಾಧನೆಯು ಜನಪ್ರಿಯತೆಯನ್ನು ಪಡೆಯಿತು. ಆಶಾ ಮೊದಲ ಭಾರಿಗೆ ''ಆಜಾ ಆಜಾ'' ಹಾಡಿನ ರಾಗವನ್ನು ಕೇಳಿದಾಗ, ಪಾಶ್ಚಿಮಾತ್ಯ ನೃತ್ಯದ ಎಣಿಕೆಯನ್ನು ಹಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು ಭಾವಿಸಿ ಅವರು ಅದನ್ನು ಬಿಟ್ಟುಬಿಟ್ಟಿದ್ದರು. ಆರ್ ಡಿ ಬರ್ಮನ್ ಸಂಗೀತವನ್ನು ಬದಲಿಸುವ ಪ್ರಸ್ತಾಪನೆಯನ್ನು ಮಾಡಿದ್ದರು. ಅವರಿಗೆ ಸ್ವಲ್ಪ ಮಟ್ಟಿಗೆ ಮನಸ್ಸಿಗೆ ನೋವಾಗಿತ್ತು, ಮತ್ತು ಅವರು ಆ ಹಾಡನ್ನು ಹಾಡುವುದು ಒಂದು ಸವಾಲಾಗಿ ಪರಿಗಣಿಸಿ ಕೈಗೆತ್ತಿಕೊಂಡರು. ೧೦ ದಿನಗಳ ಸತತ ಅಭ್ಯಾಸದ ನಂತರ, ಅವರು ಹಾಡನ್ನು ಅಂತಿಮವಾಗಿ ಹಾಡಿದಾಗ, ಅದರಿಂದ ಪ್ರಭಾವಗೊಂಡ ಆರ್ ಡಿ ಬರ್ಮನ್ ಅವರು ೧೦೦-ರೂಪಾಯಿಗಳ ನೋಟನ್ನು ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ''ಆಜಾ ಆಜಾ'' ಮತ್ತು ಚಲನಚಿತ್ರದ ಇತರ ಹಾಡುಗಳು, ''ಓ ಹಸೀನಾ ಝುಲ್ಫೋನ್ವಾಲಿ'' ಮತ್ತು ''ಓ ಮೇರ ಸೋನಾ ರೆ'' (ಎಲ್ಲಾ ಮೂರು ಬಾಲಿವುಡ್ನ ಮತ್ತೊಂದು ಪ್ರಸಿದ್ಧ ಗಾಯಕ, ರಫಿ ಅವರೊಂದಿಗಿನ ಜೋಡಿ ಹಾಡುಗಳು), ಆ ದಿನದ ಅಬ್ಬರದ ಹಾಡಾಯಿತು. ಚಲನಚಿತ್ರ ನಟ, ಶಮ್ಮಿ ಕಪೂರ್, ಒಂದು ಸಲ ಹೇಳಿದ್ದರು - "ಒಂದು ವೇಳೆ ನನಗಾಗಿ ಹಾಡಲು ಮಹಮದ್ ರಫಿ ಇಲ್ಲದಿದ್ದರೆ, ಈ ಕೆಲಸ ಮಾಡಲು ಆಶಾ ಭೋಂಸ್ಲೆರನ್ನು ಆರಿಸಿಕೊಳ್ಳುತ್ತಿದ್ದೆ". ಆರ್ ಡಿ ಬರ್ಮನ್ ಸಹಭಾಗಿತ್ವದೊಂದಿಗಿನ ಆಶಾರ ಸಹಭಾಗಿತ್ವವು ೧೯೭೦ರ ದಶಕದಲ್ಲಿ ಅನೇಕ ಜನಪ್ರಿಯ ಹಾಡುಗಳ ನಿರ್ಮಾಣವನ್ನು ಮಾಡಿತು ಮತ್ತು ಇದು ಮುಂದೆ ಮದುವೆಗೆ ಕಾರಣವಾಯಿತು. ೧೯೬೦ರ ಮತ್ತು ೧೯೭೦ರ ದಶಕಗಳಲ್ಲಿ, ಇವರು ಬಾಲಿವುಡ್ನ ಅತ್ಯಂತ ಪ್ರಸಿದ್ಧ ನರ್ತಕಿ, ಹೆಲೆನ್ ಹಾಡುಗಳಿಗೆ ಧ್ವನಿಯಾದರು. ಅವರ ಧ್ವನಿ ಮುದ್ರಣ ಕಾರ್ಯಕ್ರಮಗಳಿಗೆ ಹೆಲೆನ್ ಹಾಜರಾದರೆ ಆದ್ದರಿಂದ ಅವರು ಹಾಡನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅದಕ್ಕೆ ತಕ್ಕಂತೆ ನೃತ್ಯದ ಹಂತಗಳನ್ನು ಯೋಜಿಸಬಹುದು ಎಂದು ಹೇಳಲಾಗಿತ್ತು.<ref>{{cite web|title=Asha Unplugged over the years|url=http://movies.indiatimes.com/articleshow/msid-3457219,prtpage-1.cms|date=September 8, 2008|author=Malani, Gaurav|publisher=[[Indiatimes]]|accessdate=2009-07-22|archive-date=2008-09-12|archive-url=https://web.archive.org/web/20080912143433/http://movies.indiatimes.com/articleshow/msid-3457219,prtpage-1.cms|url-status=dead}}</ref> ಆಶಾ ಭೋಂಸ್ಲೆ-ಹೆಲೆನ್ರ ಕೆಲವು ಪ್ರಸಿದ್ಧ ಹಾಡುಗಳು ''ಪಿಯಾ ತೂ ಅಬ್ ತೊ ಆಜಾ'' (''ಕಾರವಾನ್'' ), '' ಓ ಹಸೀನಾ ಝುಲ್ಫೋನ್ ವಾಲಿ'' (''ತೀಸ್ರಿ ಮಂಝಿಲ್'' ), ಮತ್ತು ''ಏ ಮೇರಾ ದಿಲ್'' (''ಡಾನ್'' ).
೧೯೮೦ರ ದಶಕದ ವೇಳೆಗೆ, ಆಶಾ ಭೋಂಸ್ಲೆ "ಕ್ಯಾಬರೆ ಗಾಯಕಿ" ಮತ್ತು "ಪಾಪ್ ಕ್ರೂನರ್" ಎಂದು ಸ್ಥಿರವಾದ ಗುರುತ್ವವನ್ನು ಪಡೆದರು. ರೇಖಾ-ನಟಿಸಿದ ''ಉಮ್ರಾವೊ ಜಾನ್'' ಚಿತ್ರದಲ್ಲಿ, ''ದಿಲ್ ಚೀಝ್ ಕ್ಯಾ ಹೈ'', ''ಇನ್ ಆಂಕೋ ಕಿ ಮಸ್ತಿ ಕೆ'', ''ಎ ಕ್ಯಾ ಜಗಾ ಹೈ ದೋಸ್ತೊ'' ಮತ್ತು ''ಜುಸ್ತ್ಜು ಜಿಸ್ಕಿ ಥಿ'' ಗಳಂತಹ ಘಝಲ್ಗಳನ್ನು ಹಾಡುವುದರ ಮೂಲಕ ಅವರು ತನ್ನ ಬಹುಮುಖ ಸಾಮರ್ಥ್ಯವನ್ನು ದೃಢಪಡಿಸಿದ್ದಾರೆ. ಸಂಗೀತ ನಿರ್ದೇಶಕ ಖಯ್ಯಾಮ್, ಆಶಾರ ಹಾಡುವ ಫಿಚ್ನ್ನು ಅರ್ಧ ನೋಟ್ (ಸ್ವರಚಿಹ್ನೆ)ನಷ್ಟು ಕಡಿಮೆಮಾಡಿದ್ದಾರೆ. ಆಶಾ ತಾನು ಅಷ್ಟು ವಿಭಿನ್ನವಾಗಿ ಹಾಡಬೆಲ್ಲೆನಾ ಎಂದು ತಾನೇ ಆಶ್ಚರ್ಯಚಕಿತಳಾದಳು. ಘಝಲ್ಗಳು ಅವಳಿಗೆ ತನ್ನ ವೃತ್ತಿ ಜೀವನದ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿವೆ. ಕೆಲವು ವರ್ಷಗಳ ನಂತರ, ''ಇಜಾಝತ್'' (೧೯೮೭) ಚಿತ್ರದ ''ಮೇರಾ ಕುಚ್ ಸಮಾನ್'' ಹಾಡಿಗಾಗಿ ಅವರು ಮತ್ತೊಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು.
೧೯೯೫ರಲ್ಲಿ, ೬೨-ವರ್ಷ-ವಯಸ್ಸಿನ ಆಶಾ ಭೋಂಸ್ಲೆ ''ರಂಗೀಲಾ'' ಚಿತ್ರದಲ್ಲಿ ಕಿರಿಯ ನಟಿ [[ಊರ್ಮಿಳಾ ಮಾತೋಂಡ್ಕರ್]] ಅವರಿಗೆ ಹಿನ್ನೆಲೆ ಗಾಯನವನ್ನು ನೀಡಿದ್ದರು. ಅವಳಿಂದ ಹಾಡಲ್ಪಟ್ಟ ''ತನ್ಹಾ ತನ್ಹಾ'' ಮತ್ತು ''ರಂಗೀಲಾ ರೇ'' ಗಳಂತಹ ಧ್ವನಿವಾಹಿನಿ ವಿಶೇಷಗುಣಲಕ್ಷಣ ಹಾಡುಗಳಿಗೆ, ಸಂಗೀತ ರಚನೆಯನ್ನು ಸಂಗೀತ ನಿರ್ದೇಶಕರಾದ ಎ. ಆರ್. ರೆಹಮಾನ್ರವರಿಂದ ನೀಡಲಾಗಿದ್ದು, ಅವರು ಅವಳೊಂದಿಗೆ ಇನ್ನೂ ಅನೇಕ ಹಾಡುಗಳ ರಚನೆಯನ್ನು ಮಾಡಿದ್ದಾರೆ.
ತಡವಾಗಿ ೨೦೦೫ರಲ್ಲಿ, ೭೨-ವರ್ಷ-ವಯಸ್ಸಿನ ಆಶಾ ಭೋಂಸ್ಲೆ [[ತಮಿಳು]] ಚಿತ್ರ ''ಚಂದ್ರಮುಖಿ'' ಗಾಗಿ ಹಾಡಿದ ಹಾಡುಗಳು ಮತ್ತು [[ಸಲ್ಮಾನ್ ಖಾನ್|ಸಲ್ಮಾನ್ ಖಾನ್]]-ಅಭಿನಯಿಸಿದ ''[[Lucky: No Time for Love|ಲಕ್ಕಿ]]'' ಚಿತ್ರಕ್ಕಾಗಿ ಹಾಡಿದ ಪಾಪ್ ಗಾಯನಗಳು ಅತ್ಯಂತ ಹೆಚ್ಚಿನ ಮಾರಾಟವನ್ನು ಕಂಡ ದ್ವನಿಮುದ್ರಣಗಳಾಗಿದ್ದವು. ಭೋಂಸ್ಲೆರವರಿಂದ ಹಾಡಾಲ್ಪಟ್ಟ ಇತರ ಕೆಲವು ತಮಿಳು ಹಾಡುಗಳೆಂದರೆ ''ಓಹ್! '' ''ಬಟರ್ಪ್ಲೈ'', ''ಸೆಪ್ಟೆಂಬರ್ ಮಾಧಮ್'' ಮತ್ತು ''ವೆನ್ನಿಲಾ ವೆನ್ನಿಲಾ''.
ಅಕ್ಟೋಬರ್ ೨೦೦೪ರಲ್ಲಿ, ೧೯೬೬-೨೦೦೩ರಲ್ಲಿ ಬಿಡುಗಡೆಯಾದ ಆಲ್ಬಂಗಳಿಗೆ ಮತ್ತು ಬಾಲಿವುಡ್ ಚಿತ್ರಗಳಿಗೆ ಭೋಂಸ್ಲೆರವರಿಂದ ಹಾಡಲ್ಪಟ್ಟ ಹಾಡುಗಳ ಸಂಕಲನ ಆಲ್ಬಂ ''ದಿ ವೆರೀ ಬೆಸ್ಟ್ ಆಫ್ ಆಶಾ ಭೋಂಸ್ಲೆ, ದಿ ಕ್ವೀನ್ ಆಫ್ ಬಾಲಿವುಡ್'' ನ ದ್ವನಿಮುದ್ರಣವನ್ನು ಮಾಡಲಾಯಿತು.
==ಸಂಗೀತ ನಿರ್ದೇಶಕರೊಂದಿಗಿನ ಸಹಭಾಗಿತ್ವ==
;ಒ.ಪಿ. ನಯ್ಯರ್
ಆಶಾ ಭೋಂಸ್ಲೆ ರವರೊಂದಿಗಿನ ಸಂಗೀತ ನಿರ್ದೇಶಕ [[ಓಂಕಾರ ಪ್ರಸಾದ್ ನಯ್ಯರ್|ಒ. ಪಿ. ನಯ್ಯರ್]]ರ ಒಡನಾಟವು [[ಬಾಲಿವುಡ್]] ವಿದ್ವತ್ತಿನ ಭಾಗವಾಗಿದೆ. ಅವರು ಒಬ್ಬ ಸ್ವರ ಸಂಯೋಜಕರಾಗಿದ್ದು ಆಶಾ ರವರಿಗೆ ತಮ್ಮದೇ ಆದ ವಿಶಿಷ್ಟ ಗುರುತನ್ನು ನೀಡಿದವರಲ್ಲಿ ಮೊದಲಿಗರಾಗಿದ್ದರು. ಅನೇಕ ಜನರು ಇವರಿಬ್ಬರ ನಡುವಿನ ಪ್ರಣಯ ಸಂಬಂಧದ ಬಗ್ಗೆ ಅನೇಕ ಊಹಾಪೋಹಗಳನ್ನು ಹೊರಡಿಸಿದ್ದರು.
ನಯ್ಯರ್ ಆಶಾರನ್ನು ಮೊದಲ ಭಾರಿಗೆ ಭೇಟಿಯಾಗಿದ್ದು ೧೯೫೨ರಲ್ಲಿನ, ''ಚಮ್ ಚಮಾ ಚಮ್'' ಹಾಡಿನ ಸಂಗೀತ ಮುದ್ರಣದ ಸಮಯದಲ್ಲಿ.<ref name="ref_O_P_Nayyar">{{cite web
| url=http://music.indya.com/features/index.html
| title=Asha Bhosle was the best person I ever met, An interview with O.P. Nayyar
| publisher=Indya.com
| accessdate=2005-11-11
| archive-date=2005-03-05
| archive-url=https://web.archive.org/web/20050305192530/http://music.indya.com/features/index.html
| url-status=dead
}}</ref> ಮೊದಲ ಭಾರಿಗೆ ಅವರು ಅವಳನ್ನು ''ಮಾಂಗು'' (೧೯೫೪) ಚಿತ್ರಕ್ಕಾಗಿ ಕರೆದಿದ್ದರು, ಮತ್ತು ನಂತರ ''ಸಿಐಡಿ'' (೧೯೫೬) ಚಿತ್ರದ ಮೂಲಕ ಅವರ ವೃತ್ತಿಜೀವನಕ್ಕೆ ಒಂದು ಹೊಸಾ ತಿರುವನ್ನು ನೀಡಿದ್ದರು. ಅದಾಗ್ಯೂ, ಇದು ''ನಯಾ ದೌರ್'' (೧೯೫೭) ಚಿತ್ರದ ಸಾಧನೆಯಾಗಿತ್ತು, ಅದು ಈ ಜೋಡಿಯನ್ನು ಬಹಳ ಜನಪ್ರಿಯಗೊಳಿಸಿತ್ತು. ೧೯೫೯ರ ನಂತರ, ಅವರು ಭಾವನಾತ್ಮಕವಾಗಿ ಮತ್ತು ವೃತ್ತಿಪರವಾಗಿ ನಯ್ಯರ್ಜೊತೆ ತಮ್ಮನ್ನು ತೊಡಗಿಸಿಕೊಂಡರು.
ಒ.ಪಿ. ನಯ್ಯರ್ ಮತ್ತು ಆಶಾ ಭೋಂಸ್ಲೆಯವರ ಜೋಡಿಯು ತಂಗಾಳಿಯಂತಹ ಹಾಗೂ ಮಧುರವಾದ ಹಾಡುಗಳಿಂದ ನೆನಪಿನಲ್ಲಿ ಉಳಿಯುವಂತಹದ್ದಾಗಿದೆ
ಅದಕ್ಕೆ ಉತ್ತಮ ಉದಾಹರಣೆಗಳು ಎಂದರೆ ''ಆಯಿಯೇ ಮೆಹರಬಾನ್'' ಇದರಲ್ಲಿ [[ಮಧುಬಾಲಾ]] ಅವರು ಅಭಿನಯಿಸಿದ್ದಾರೆ (''ಹೌರಾ ಬ್ರಿಡ್ಜ್'', ೧೯೫೮) ಹಾಗೂ ಮಮ್ತಾಝ್ ಅವರು ಅಭಿನಯಿಸಿರುವ ''ಯೇ ಹೈ ರೇಷ್ಮಿ ಝುಲ್ಫೋಂ ಕಾ ಅಂಧೇರಾ'' (''ಮೇರೆ ಸನಂ'',೧೯೬೫).
''ನಯಾ ದೌರ್'' (೧೯೫೭), ''ತುಮ್ಸಾ ನಹೀ ದೇಖಾ'' (೧೯೫೭), ''ಹೌರಾ ಬ್ರಿಡ್ಜ್'' (೧೯೫೮), ''ಏಕ್ ಮುಸಾಫಿರ್ ಏಕ್ ಹಸೀನಾ'' (೧೯೬೨), ''ಕಾಶ್ಮೀರ್ ಕಿ ಕಲಿ'' (೧೯೬೪), ಮುಂತಾದವುಗಳಂತಹ ಉತ್ತಮ ಚಿತ್ರಗಳಲ್ಲಿ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅವುಗಳಲ್ಲಿ ಕೆಲವು ಜನಪ್ರಿಯ ಹಾಡುಗಳೆಂದರೆ ''ಆವೋ ಹುಝೂರ್ ತುಮ್ಕೊ'' (''ಕಿಸ್ಮತ್'' ), ''ಜಾಯಿಯೇ ಆಪ್ ಕಹಾ'' (''ಮೇರೇ ಸನಮ್'' ) ಮುಂತಾದವು. ಒ.ಪಿ. ನಯ್ಯರ್ ಅವರು ತಮ್ಮ ಜನಪ್ರಿಯ ಜೋಡಿಗೀತೆಗಳಲ್ಲಿ ಆಶಾ ಭೋಂಸ್ಲೆ-ಮೊಹಮ್ಮದ್ ರಫಿಯವರಿಂದ ಹಾಡಿಸುತ್ತಿದ್ದರು. ಅದರಲ್ಲಿ ಕೆಲವು ಹೀಗಿವೆ ''ಉಡೇ ಜಬ್ ಜಬ್ ಝುಲ್ಫೇ ತೇರಿ'' (''ನಯಾ ದೌರ್'' ). ''ಮೈ ಪ್ಯಾರ್ ಕಾ ರಹೀ ಹ್ಞೂ'' (''ಎಕ್ ಮುಸಾಫಿರ್ ಎಕ್ ಹಸೀನಾ'' ), ''ದೀವಾನಾ ಹುವಾ ಬಾದಲ್'', ''ಇಶಾರೋ ಹಿ ಇಶಾರೋ ಮೆ'' (''ಕಶ್ಮೀರ್ ಕಿ ಕಲಿ'' ) ಇತ್ಯಾದಿ.
ಆಶಾ ''ಪ್ರಾಣ್ ಜಾಯೇ ಪರ್ ವಚನ್ ನಾ ಜಾಯೆ'' (೧೯೭೪) ಚಿತ್ರದಲ್ಲಿ ಒ.ಪಿ.ನಯ್ಯರ್ರವರೊಂದಿಗಿನ ತಮ್ಮ ಕೊನೆಯ ಹಾಡಿನ ಮುದ್ರಣವನ್ನು ಮಾಡಿದ್ದರು. ಒಂಟಿಯಾಗಿ ಹಾಡಿದ್ದ ''ಚೈನ್ ಸೆ'' ಹಾಡು ಅನೇಕ ಪ್ರಶಸ್ತಿಗಳನ್ನು ಪಡೆಯಿತು, ಆದರೆ ಇದನ್ನು ಯಾವುದೇ ಚಿತ್ರದಲ್ಲಿ ಸೇರಿಸಿಲ್ಲ.
ಅವರು ಆಗಸ್ಟ್ ೫, ೧೯೭೨ರಂದು ಬೇರೆಯಾದರು. ಅವರು ಯಾವ ಕಾರಣಕ್ಕೆ ಬೇರೆಯಾದರು ಎಂದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಅವರು ಬೇರೆಯಾಗಿದ್ದಕ್ಕೆ ಕಾರಣವನ್ನು ಕೇಳಿದಾಗ, ಒ ಪಿ ನಯ್ಯರ್ ಒಂದು ಸಲ ಹೇಳಿದ್ದು, "ನನಗೆ ಜ್ಯೋತಿಷ್ಯ ಚೆನ್ನಾಗಿ ಗೊತ್ತು. ನಾನು ಒಂದು ದಿನ ಅವಳಿಂದ ದೂರ ಸರಿಯಬೇಕೆಂದು ನನಗೆ ಗೊತ್ತಿತ್ತು. ಯಾವುದೋ ಒಂದು ಘಟನೆ ಸಹ ನಡೆಯಿತು, ಅದು ನನ್ನನ್ನು ನೋಯಿಸಿತು, ಆದ್ದರಿಂದ ನಾನು ಅವಳಿಂದ ದೂರವಾದೆ."<ref name="ref_O_P_Nayyar" /> ಅದಾಗ್ಯೂ, ಅವರು ಇದನ್ನು ಸಹ ಹೇಳಿದ್ದರು "...ಈಗ ನನಗೆ ಎಪ್ಪತ್ತಾರು ವರ್ಷ ವಯಸ್ಸು, ನನ್ನ ಜೀವನದಲ್ಲಿ ಅತ್ಯಂತ ಮುಖ್ಯವಾದ ವ್ಯಕ್ತಿ ಎಂದರೆ ಅದು ಆಶಾ ಭೋಂಸ್ಲೆ ಎಂದು ನಾನು ಹೇಳಬಲ್ಲೆ. ನಾನು ಇಲ್ಲಿಯವರಿಗೂ ಬೇಟಿಯಾದವರಲ್ಲಿ ಅವಳೇ ಅತ್ಯುತ್ತಮ ವ್ಯಕ್ತಿ."
ಆಶಾ ಭೋಂಸ್ಲೆ ಮತ್ತು ಒ.ಪಿ.ನಯ್ಯರ್ರ ಅಗಲಿಕೆಯು ಕಹಿಯಿಂದ ಕೂಡಿತ್ತು, ಮತ್ತು ಬಹುಶಃ ಆದ್ದರಿಂದಲೇ ಅವರು ನಯ್ಯರ್ರ ಬಾಕಿಯನ್ನು ನೀಡಲು ಹಿಂಜರಿದಿರಬಹುದು. [[ದಿ ಟೈಮ್ಸ್ ಆಫ್ ಇಂಡಿಯಾ|ದಿ ಟೈಮ್ಸ್ ಆಫ್ ಇಂಡಿಯಾ]]ದೊಂದಿಗಿನ ಒಂದು ಸಂದರ್ಶನದಲ್ಲಿ ಒ.ಪಿ.ನಯ್ಯರ್ರನ್ನು ಕುರಿತು ಮಾತನಾಡುವಾಗ, ಅವರು ಒಂದು ಸಲ ಹೇಳಿದ್ದು - "ಯಾವುದೇ ಸ್ವರ ಸಂಯೋಜಕರು ನನಗೆ ಕೆಲಸ ಕೊಟ್ಟಿದ್ದರೂ, ಆ ಸಮಯದಲ್ಲಿ ನನ್ನ ಧ್ವನಿ ಅವರ ಸಂಗೀತಕ್ಕೆ ಹೊಂದುತ್ತಿದ್ದುದೇ ಅದಕ್ಕೆ ಕಾರಣ. ನನಗೆ ಅವರ ಹಾಡುಗಳಿಗೆ ಹಾಡುವ ಅವಕಾಶವನ್ನು ನೀಡುವುದರ ಮೂಲಕ ಯಾವ ''ಒಬ್ಬ'' ಸಂಗೀತಗಾರನೂ ನನಗೆ ಯಾವುದೇ ರೀತಿ ಉಪಕಾರ ಮಾಡಿಲ್ಲ."<ref name="Times_Life_Jul_2005">{{cite news
| author = Jitesh Pillaai
| title = Notes to Myself (An interview with Asha Bhosle)
| url = http://epaperdaily.timesofindia.com/Repository/ml.asp?Ref=VE9JTS8yMDA1LzA3LzMxI0FyMDQzMDA=&Mode=HTML&Locale=english-skin-custom
| work = Times Life, [[ದಿ ಟೈಮ್ಸ್ ಆಫ್ ಇಂಡಿಯಾ]], [[ಮುಂಬೈ]]
| publisher = The Times Group
| page = 43
| date = 2005-07-31
| accessdate = 2007-09-08
| archive-date = 2008-02-16
| archive-url = https://web.archive.org/web/20080216231736/http://epaperdaily.timesofindia.com/Repository/ml.asp?Ref=VE9JTS8yMDA1LzA3LzMxI0FyMDQzMDA%3D&Mode=HTML&Locale=english-skin-custom
| url-status = dead
}}</ref> ಅವರು ತನ್ನ ವೃತ್ತಿ ಜೀವನದಲ್ಲಿ ಮಹತ್ತರವಾದ ತಿರುವನ್ನು ನೀಡಿದ್ದ ಹೆಗ್ಗಳಿಕೆಯನ್ನು ''ನಯಾ ದೌರ್'' ಚಿತ್ರದ ನಿರ್ಮಾಪಕರಾದ ಬಿ. ಆರ್. ಚೋಪ್ರಾಗೆ ನೀಡಿದ್ದರು.
;ಖಯ್ಯಮ್
ಭೋಂಸ್ಲೆರ ಪ್ರತಿಭೆಯನ್ನು ಆರಂಭದಲ್ಲೇ ಗುರುತಿಸಿದ ಮತ್ತೊಬ್ಬ ಸಂಗೀತ ನಿರ್ದೇಶಕ ಖಯ್ಯಮ್ರವರು. ಅವರು ಅವರ ಮೊದಲ ಚಿತ್ರ ''ಬಿವಿ'' (೧೯೪೮) ಯಿಂದಲೇ ಆಶಾ ಭೋಂಸ್ಲೆ ಜೊತೆ ಕಾರ್ಯನಿರ್ವಹಿಸಲು ಆರಂಭಿಸಿದ್ದರು. ೧೯೫೦ರ ದಶಕದಲ್ಲಿ ಖಯ್ಯಮ್ ಅವಳಿಗೆ ಕೆಲವು ಉತ್ತಮ ಚಿತ್ರಗಳಿಗೆ ಕೆಲಸಮಾಡುವ ಅವಕಾಶವನ್ನು ನೀಡಿದ್ದರು, ಅವುಗಳಲ್ಲಿ ''ದರ್ದ್'' ಮತ್ತು ''ಫಿರ್ ಸುಬಹ ಹೋಗಿ'' ಸೇರಿವೆ. ಈ ಜೋಡಿಯನ್ನು ಮುಖ್ಯವಾಗಿ ''ಉಮ್ರಾವೊ ಜಾನ್'' ಹಾಡುಗಳಿಂದಾಗಿ ನೆನೆಯಲಾಗುತ್ತಿತ್ತು
;ರವಿ
ಸ್ವರ ಸಂಯೋಜಕ ರವಿ ಆಶಾರನ್ನು ತನ್ನ ಅಚ್ಚುಮೆಚ್ಚಿನ ಗಾಯಕರಲ್ಲಿ ಒಬ್ಬರನ್ನಾಗಿ ಪರಿಗಣಿಸಿದ್ದರು. ಆಶಾ ಅವರ ಮೊದಲ ಚಿತ್ರ ''ವಚನ್'' (೧೯೫೫)ಗಾಗಿ ಹಾಡಿದ್ದರು. ''ಚಂದಮಾಮ ದೂರ್ ಕೆ'' ಚಿತ್ರದ, ಮಧುರವಾದ ಲುಲಬಾಯ್, ಒಂದೇ ರಾತ್ರಿಯಲ್ಲಿ ಭಾರತದ ಯೌವ್ವನ ತಾಯಂದಿರ ಅತೀಮೆಚ್ಚುಗೆಯ ಹಾಡಾಯಿತು. ಅವಳಿಗೆ ''ಘರಾನ'', ''ಗ್ರೀಹಸ್ತಿ'', ''ಕಾಜಲ್'' ಮತ್ತು ''ಫೂಲ್ ಔರ್ ಪತ್ತರ್'' ಚಿತ್ರಗಳಿಗಾಗಿ [[ಭಜನೆ]]ಗಳನ್ನು ಹಾಡುವ ಅವಕಾಶವನ್ನು ರವಿ ನೀಡಿದ್ದರು, ಆ ಸಮಯದಲ್ಲಿ ಬಹುತೇಕ ಸ್ವರ ಸಂಯೋಜಕರು ತಾವು ವ್ಯಾಂಪ್ಸ್ನಲ್ಲಿ ಅಥವಾ ಸಹ ನಟಿಯಂದಿರೊಂದಿಗೆ ಬಿ-ದರ್ಜೆಯ ಹಾಡುಗಳನ್ನು ಚಿತ್ರೀಕರಿಸುವಾಗ ಮಾತ್ರ ಅವಳನ್ನು ನೆನೆಸಿಕೊಳ್ಳುತ್ತಿದ್ದರು. ರವಿ ಮತ್ತು ಆಶಾ ಭೋಂಸ್ಲೆ ಅನೇಕ ವಿಭಿನ್ನ ಹಾಡುಗಳ ಧ್ವನಿ ಮುದ್ರಣವನ್ನು ಮಾಡಿದ್ದಾರೆ, ಅವುಗಳಲ್ಲಿ ಕಿಶೋರ್ ಕುಮಾರ್ ಜೊತೆಗಿನ ಜನಪ್ರಿಯ ಹಾಸ್ಯ ಜೋಡಿಹಾಡು - ''ಸಿ ಎ ಟಿ...'' ''ಕ್ಯಾಟ ಮಾನೆ ಬಿಲ್ಲಿ'' (''ದಿಲ್ಲಿ ಕಾ ಥಗ್'' ) ಸೇರಿದೆ. ''ತೊರಾ ಮನ್ ದರ್ಪನ್'' (''ಕಾಜಲ್'' ) [[ಭಜನೆ]]ಯನ್ನು ಆಶಾ ಭೋಂಸ್ಲೆರ ಅತ್ಯುತ್ತಮ ಗಾಯನಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.
ಇವರು ಆಶಾ ಅವರ ಜೊತೆಗೆ ಹಲವಾರು ಜನಪ್ರಿಯ ಚಲನಚಿತ್ರಗಳನ್ನು ಕೂಡಾ ಧ್ವನಿಮುದ್ರಣ ಮಾಡಿದ್ದಾರೆ ಅವೆಂದರೆ ''ವಖ್ತ್'', ''ಚೌದವೀ ಕಾ ಚಾಂದ್'', ''ಗುಮ್ರಾಹ್'', ''ಬಹು ಬೇಟಿ'', ''ಚೈನಾ ಟೌನ್'', ''ಆದ್ಮೀ ಔರ್ ಇನ್ಸಾನ್'', ''ಡೂಂಡ್'', ''ಹಮ್ರಾಝ್'', ಹಾಗೂ ''ಕಾಜಲ್''. ''ಚೌದವೀ ಕಾ ಚಾಂದ್'' ಗಾಗಿ ರವಿಯವರು ಗೀತಾ ದತ್ ([[ಗುರುದತ್ ಪಡುಕೋಣೆ|ಗುರು ದತ್]]ರ ಪತ್ನಿ ) ಅವರನ್ನು ಹಾಡಲು ಕೇಳಿಕೊಂಡಿದ್ದರು. ಆಕೆಯು ಹಾಡದಿದ್ದಾಗ, ಗುರುದತ್ ಅವರು ಆಶಾ ಭೋಂಸ್ಲೆಯವರಿಂದ ಹಾಡಿಸಲು ಸೂಚಿಸಿದ್ದರು.<ref name="rediff_70" />
;ಸಚಿನ್ ದೇವ್ ಬರ್ಮನ್
ಬಾಲಿವುಡ್ನ ಪ್ರಖ್ಯಾತ ಸಂಗೀತಕಾರರಲ್ಲೊಬ್ಬರಾದ, ಸಚಿನ್ ದೇವ್ ಬರ್ಮನ್ ಹಾಗೂ ಅವರಿಗೆ ಇಷ್ಟವಾದ ಗಾಯಕಿ, [[ಲತಾ ಮಂಗೇಶ್ಕರ್]] ಅವರ ಜೊತೆ ೧೯೫೭ ರಿಂದ ೧೯೬೨ರ ಸಮಯದವರೆಗೆ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿತ್ತು.<ref name="encyclopaedia_of_hindi_cinema">{{cite book
| last = Khubchandani
| first = Lata
| editor = [[Gulzar (lyricist)|Gulzar]], [[Govind Nihalani]], Saibal Chatterjee
| title = Encyclopaedia of Hindi Cinema
| year = 2003
| publisher = Popular Prakashan
| isbn = 8179910660
| pages = 486–487
}}</ref> ಆ ಸಮಯದಲ್ಲಿ ಎಸ್ ಡಿ ಬರ್ಮನ್ ಅವರು ಉತ್ತಮ ಗಾಯಕಿಯಾಗಿದ್ದ ಆಶಾ ಭೋಂಸ್ಲೆಯವರಿಂದ ಹಾಡುಗಳನ್ನು ಹಾಡಿಸಿದರು. ಆಕೆ ಮತ್ತು ಎಸ್ ಡಿ ಬರ್ಮನ್ ಅವರ ಜೋಡಿಯು ಕೆಲವು ಉತ್ತಮ ಚಿತ್ರಗಳಿಗೆ ಸಂಗೀತ ನೀಡಿತು ಅವೆಂದರೆ ''ಕಾಲಾ ಪಾನಿ'', ''ಕಾಲಾ ಬಝಾರ್'', ''ಇನ್ಸಾನ್ ಜಾಗ್ ಉಠಾ'', ''ಲಾಜವಂತಿ'', ''ಸುಜಾತಾ'' ಹಾಗೂ ''ತೀನ್ ದೇವಿಯಾ'' (೧೯೬೫). ಅವರು ೧೯೬೨ರ ನಂತರವೂ ಹಲವಾರು ಹಾಡುಗಳನ್ನು ಧ್ವನಿಮುದ್ರಣ ಮಾಡಿದರು. ಇದರಲ್ಲಿ ಬಹಳಷ್ಟು ಜನಪ್ರಿಯವಾಗಿರುವ ಜೋಡಿಹಾಡುಗಳಲ್ಲಿ ಆಶಾ ಭೋಂಸ್ಲೆಯವರು ಮೊಹಮ್ಮದ್ ರಫಿ ಮತ್ತು ಕಿಶೋರ್ ಕುಮಾರ್ ಅವರ ಜೊತೆಯಲ್ಲಿ ಹಾಡಿದ್ದಾರೆ. ಬಿಮಲ್ ರಾಯ್ ಅವರ ಬಂದಿನಿ(೧೯೬೩) ಚಿತ್ರದ ಹಾಡು ''ಅಬ್ ಕೆ ಬರಸ್'' ಅವರನ್ನು ಪ್ರಮುಖ ಹಾಡುಗಾರ್ತಿಯನ್ನಾಗಿ ಮಾಡಿತು. ತನುಜಾ ಅವರು ಅಭಿನಯಿಸಿದ ಜಿವೆಲ್ ಥೀಫ್ (೧೯೬೭) ಚಿತ್ರದ ಹಾಡು ''ರಾತ್ ಅಕೇಲಿ ಹೈ'' ಬಹಳಷ್ಟು ಜನಪ್ರಿಯತೆ ಗಳಿಸಿತು.
;ರಾಹುಲ್ ದೇವ್ ಬರ್ಮನ್ (ಪಂಚಮ್)
ಆಶಾ ಮೊದಲು ರಾಹುಲ್ ದೇವ್ ಬರ್ಮನ್ (ಎ.ಕೆ.ಎ. "ಪಂಚಮ್") ಅವರನ್ನು ಭೇಟಿಯಾದದ್ದು ಆಕೆ ಎರಡು ಮಕ್ಕಳ ತಾಯಿಯಾಗಿದ್ದಾಗ ಹಾಗೂ ಆತ ೧೦ನೆಯ ತರಗತಿ ಓದುವುದನ್ನು ಬಿಟ್ಟು ಸಂಗೀತದ ದಾರಿ ಹಿಡಿದಾಗ. ಅವರ ಜೋಡಿಯು ಮೊದಲು ''ತೀಸ್ರಿ ಮಂಝಿಲ್'' (೧೯೬೬)ನಲ್ಲಿ ಗುರುತಿಸಲ್ಪಟ್ಟಿತು. ಅವರ ಜೋಡಿಯು ವೈವಿದ್ಯಮಯ ಹಾಡುಗಳನ್ನು ಧ್ವನಿಮುದ್ರಣ ಮಾಡಿತು - ಕ್ಯಾಬರೆಗಳು, ರಾಕ್, ಡಿಸ್ಕೊ, ಘಝಲ್ಗಳು, ಭಾರತೀಯ ಶಾಸ್ತ್ರೀಯ ಸಂಗೀತ ಇನ್ನೂ ಹಲವಾರು.
೧೯೭೦ರ, ಆಶಾ ಭೋಂಸ್ಲೆ ಹಾಗೂ ಪಂಚಮ್ ಅವರ ಯುವ, ಪಾಶ್ಚಿಮಾತ್ಯ ಹಾಡುಗಳು ಬಾಲಿವುಡ್ನಲ್ಲಿ ಹೊಸ ಅಲೆ ಮೂಡಿಸಿದವು - ಒರಟಾದ ಕ್ಯಾಬರೆ ''ಪಿಯಾ ತೂ ಅಬ್ ತೊ ಆಜಾ'' (ಹೆಲೆನ್ ಅಭಿನಯದ ''ಕಾರವಾನ್'', ೧೯೭೧), ನಿಯಂತ್ರಣವಿಲ್ಲದ ''ದಮ್ ಮಾರೊ ದಮ್'' ('' ಹರೆ ರಾಮಾ ಹರೆ ಕೃಷ್ಣಾ'', ೧೯೭೧), ಶೃಂಗಾರಮಯ ''ದುನಿಯಾ ಮೇ'' (''ಅಪ್ನಾ ದೇಶ್'', ೧೯೭೨), ಪ್ರಣಯ ಪೂರಿತ ''ಚುರಾ ಲಿಯಾ ಹೈ ತುಮ್ನೇ'' (''ಯಾದೋಂ ಕಿ ಬಾರಾತ್'', ೧೯೭೩). ಪಂಚಮ್ ಅವರು ಆಶಾ ಭೋಂಸ್ಲೆ ಹಾಗೂ ಕಿಶೋರ್ ಕುಮಾರ್ ಜೋಡಿಯ ಹಲವಾರು ಗೀತೆಗಳನ್ನು ಧ್ವನಿ ಮುದ್ರಣ ಮಾಡಿದ್ದಾರೆ ಅವುಗಳಲ್ಲಿ ಕೆಲವು - ''ಜಾನೆ ಜಾನ್, ಡೂಂಡ್ತಾ ಫಿರ್ ರಹಾ'' (''ಜವಾನಿ ದಿವಾನಿ'' ), ''ಭಲಿ ಭಲಿ ಸಿ ಎಕ್ ಸೂರತ್'' (''ಬುಡ್ಡಾ ಮಿಲ್ ಗಯಾ'' ) ಮುಂತಾದವುಗಳು.
೧೯೮೦ರ ದಶಕದಲ್ಲಿ, ಪಂಚಮ್ ಹಾಗೂ ಆಶಾ ಭೋಂಸ್ಲೆಯವರು ಕೆಲ ಚಿತ್ರಗಳಿಗೆ ಸಂಗೀತ ನೀಡಿದರು ಅವೆಂದರೆ ''ಇಜಾಝತ್'' (೧೯೮೭)- ''ಮೇರಾ ಕುಚ್ ಸಾಮಾನ್'', ''ಖಾಲಿ ಹಾತ್ ಶಾಮ್ ಆಯಿ ಹೈ'', ''ಕತ್ರಾ ಕತ್ರಾ''. ಅವರು ಜನಪ್ರಿಯ ಜೋಡಿ ಗೀತೆ ''ಓ ಮರಿಯಾ'' (''ಸಾಗರ್'' ) ಕೂಡಾ ಧ್ವನಿಮುದ್ರಣ ಮಾಡಿದರು. ಆರ್.ಡಿ.ಬರ್ಮನ್ ಸಂಗೀತ ನೀಡಿದ ಗುಲ್ಜಾರ್ ಅವರ ''ಇಜಾಝತ್'' ಚಿತ್ರದ ಹಾಡು ''ಮೇರಾ ಕುಚ್ ಸಾಮಾನ್'' ಗೆ ಅತ್ಯುತ್ತಮ ಗಾಯಕಿಯಾಗಿ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟಿತು.
ಆಶಾ ಅವರು ಆರ್.ಡಿ.ಬರ್ಮನ್ ಅವರನ್ನು "ಬಬ್ಸ್" ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಆಕೆಯು ೧೯೮೦ರಲ್ಲಿ ಅವರನ್ನು ವಿವಾಹವಾದರು. ಬರ್ಮನ್ ಅವರ ನಿಧನದವರೆಗೆ ಅವರ ಜೋಡಿ ಒಂದಾಗಿತ್ತು.
ಆರ್ಡಿ ಬರ್ಮನ್ ಅವರು ಆಶಾ ಅವರನ್ನು ಕೆಲವು ಜನಪ್ರಿಯ ಬಂಗಾಳಿ ಹಾಡುಗಳನ್ನು ಹಾಡುವಂತೆ ಮಾಡಿದರು, ಅವೆಂದರೆ ''ಮೊಹುಯೇ ಜೊಮೆಛೆ ಆಜ್ ಮೌ ಗೊ'',''ಚೋಕೆ ಚೋಕೆ ಕೊತಾ ಬೋಲೊ'' ''ಚೊಕೆ ನಾಮೆ ಬ್ರಿಶ್ತಿ'' (''ಜಾನೆ ಕ್ಯಾ ಬಾತ್ ಹೈ'' ನ ಬಂಗಾಳಿ ಭಾಷಾಂತರ), ''ಬಾಂಶಿ ಸುನೆ ಕಿ ಗೋರೆ ಥಕಾ ಜಾಯೆ'',''ಸೊಂಧ್ಯಾ ಬೆಲೇ ತುಮಿ ಆಮಿ'',''ಆಜ್ ಗುನ್ಗುನ್ ಗುನ್ ಗುಂಜೆ ಅಮರ್'' (''ಪ್ಯಾರ್ ದೀವಾನಾ ಹೋತಾ ಹೈ'' ನ ಬೆಂಗಾಳಿ ಭಾಷಾಂತರ), ಮುಂತಾದವುಗಳು.
;ಇಳಯರಾಜ
ದಕ್ಷಿಣ ಭಾರತೀಯ ಚಲನಚಿತ್ರರಂಗದ ಧೀಮಂತ ಸಂಗೀತಕಾರ [[ಇಳಯರಾಜಾ|ಇಳಯರಾಜ]] ಅವರೊಂದಿಗೆ ೧೯೮೦ರ ದಶಕದಲ್ಲಿ ಮೊದಲಿಗೆ ''ಮೂಂಡ್ರು ಪಿರೈ'' ಚಿತ್ರದ ಹಾಡುಗಳನ್ನು ಹಾಡಿದರು (೧೯೮೨) (ಅಥವಾ ''ಸದ್ಮಾ'', ಇದರ ಹಿಂದಿ ರೀಮೇಕ್ ಚಿತ್ರ ೧೯೮೩). ಅವರ ಜೋಡಿಯು ೧೯೮೦ರ ದಶಕದ ಕೊನೆಯರ್ಧದಲ್ಲಿ ಹಾಗೂ ೧೯೯೦ರ ದಶಕದ ಮೊದಲ ಭಾಗದಲ್ಲಿ ಮುಂದುವರೆಯಿತು. ಈ ಸಮಯದ ಗಮನೀಯ ಹಾಡುಗಳೆಂದರೆ ''ಶೆನ್ಬಾಗಮೇ'' (''ಎಂಗ ಊರು ಪಾಟುಕ್ಕಾರನ್'', ೧೯೮೭, ತಮಿಳು). ೨೦೦೦ರಲ್ಲಿ, ಆಶಾ ಅವರು ಇಳಯರಾಜರ [[ಕಮಲ್ ಹಾಸನ್]] ಅಭಿನಯದ ರಾಜಕೀಯ ಚಿತ್ರ ''ಹೇ ರಾಂ'' ನ ಶೀರ್ಷಿಕೆ ಹಾಡನ್ನು ಹಾಡಿದರು. ''ಜನ್ಮೋಂ ಕಿ ಜ್ವಾಲಾ'' (ಅಥವಾ ಅಪರ್ಣಾದ ವಿಷಯ)ದಲ್ಲಿ ''ಗಝಲ್'' ಹಾಡುಗಾರ ಹರಿಹರನ್ರೊಂದಿಗೆ ಹಾಡಿದರು.
;ಎ. ಆರ್. ರೆಹಮಾನ್
ಎ. ಆರ್. ರಹಮಾನ್ ಅವರು ಆಶಾ ಭೋಂಸ್ಲೆಯವರಿಗೆ ಪುನಃ ಹಾಡುವಂತೆ ''ರಂಗೀಲಾ'' (೧೯೯೪) ಚಿತ್ರದಲ್ಲಿ ಅವಕಾಶವನ್ನು ನೀಡಿದರು. ಚಿತ್ರದ ಹಾಡುಗಳಾದ ''ತನ್ಹಾ ತನ್ಹಾ'' ಹಾಗೂ ''ರಂಗೀಲಾ ರೆ'' ಹಾಡುಗಳು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವು. ಆಕೆ ಹಾಗೂ ರೆಹಮಾನರ ಜೋಡಿಯು ಹಲವು ಉತ್ತಮ ಹಾಡುಗಳಲ್ಲಿ ಕೆಲಸ ಮಾಡಿದ್ದಾರೆ ಅವೆಂದರೆ ''ಮುಝೆ ರಂಗ್ ದೇ'' (''ತಕ್ಷಕ್'' ), ''ರಾಧಾ ಕೈಸೆ ನ ಜಲೆ'' (''ಲಗಾನ್'', ಉದಿತ್ ನಾರಾಯಣ್ ಜೊತೆ ಹಾಡಿರುವುದು), ''ಕಹೀ ಆಗ್ ಲಗೇ'' (''ತಾಲ್'' ), ''O ಭವರೆ'' (''ದೌಡ್'', duet with [[ಕೆ.ಜೆ.ಯೇಸುದಾಸ್|ಕೆ. ಜೆ. ಯೇಸುದಾಸ್]]), ''ವೆನಿಲ್ಲಾ ವೆನಿಲ್ಲಾ'' (''ಇರುವರ್'',೧೯೯೯), ''ದುವಾನ್ ದುವಾನ್'' (''ಮೀನಾಕ್ಷಿ'',೨೦೦೪).<ref name="rediff_70" />
;ಜಯದೇವ್
ಎಸ್ ಡಿ ಬರ್ಮನ್ರ ಸಹಾಯಕ ಜಯದೇವ್ ಸ್ವತಂತ್ರವಾಗಿ ಸ್ವರ ಸಂಯೋಜನೆಯನ್ನು ಮಾಡುವುದನ್ನು ಪ್ರಾರಂಭಿಸಿದಾಗ, ಅವರು ತಮ್ಮ ಕೆಲವು ಹಾಡುಗಳನ್ನು ಹಾಡಲು ಆಶಾರವರಿಗೆ ನೀಡಿದ್ದರು. ಅವರಿಬ್ಬರು ''ಹಮ್ ದೋನೊ'' (೧೯೬೧), ''ಮುಜೆ ಜೀನೆ ದೊ'' (೧೯೬೩), ''ದೊ ಬೂಂದ್ ಪಾನಿ'' (೧೯೭೧) ಮತ್ತು ಇತರ ಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದರು. ೧೯೭೧ರಲ್ಲಿ, ಈ ಜೋಡಿಯು ಚಿತ್ರಗೀತೆಗಳಲ್ಲದ ಭಕ್ತಿಹಾಡುಗಳ ಎಲ್ಪಿ ಮತ್ತು ''ಯನ್ ಅನ್ಫರ್ಗೆಟೇಬಲ್ ಟ್ರೀಟ್'' ಹೆಸರಿನ ಘಝಲ್ಗಳನ್ನು ಬಿದುಗಡೆಮಾಡಿದೆ. ಆಶಾ ಜಯದೇವ್ರನ್ನು ತಾನು ವೈಯಕ್ತಿಕವಾಗಿ ಮಾತು ವೃತ್ತಿಪರವಾಗಿ ಕಷ್ಟದಲ್ಲಿದ್ದಾಗ ತನಗೆ ನೆರವಾದ ಒಳ್ಳೆಯ ಸ್ನೇಹಿತ ಎಂದು ಪರಿಗಣಿಸಿದ್ದಾಳೆ. ೧೯೮೭ರಲ್ಲಿ ಜಯದೇವ್ ಮರಣಹೊಂದಿದ ನಂತರ, ಜಯದೇವ್ ತನಗಾಗಿ ಸ್ವರ ಸಂಯೋಜನೆ ಮಾಡಿದ್ದ ಹೆಚ್ಚು ಜನಪ್ರಿಯಗೊಳ್ಳದ ಹಾಡುಗಳ ಸಂಕಲನ ಆಲ್ಬಂನ್ನು ಅವರು ''ಸುರಾಂಜಲಿ'' ಹೆಸರಿನಲ್ಲಿ ಬಿಡುಗಡೆಮಾಡಿದ್ದರು.
;ಶಂಕರ್ ಜೈಕಿಶನ್
ಶಂಕರ್ ಜೈಕಿಶನ್ ಕೇವಲ ಸ್ವಲ್ಪ ಸಮಯ ಮಾತ್ರ ಆಶಾ ಜೊತೆ ಕೆಲಸಮಾಡಿದ್ದರು. ಅದಾಗ್ಯೂ, ಈ ಜೋಡಿಯು ''ಪರ್ದೆ ಮೆ ರೆಹ್ನೆ ದೊ'' (''ಶಿಕಾರ್'', ೧೯೬೮) ಸೇರಿ ಕೆಲವು ಜನಪ್ರಿಯ ಹಾಡುಗಳ ನಿರ್ಮಾಣವನ್ನು ಮಾಡಿತು. ಈ ಹಾಡಿಗಾಗಿ ಆಶಾ ಅವಳ ಎರಡನೆಯ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಳು. ಆಶಾ ಶಂಕರ್ ಜೈಕಿಶನ್ಗಾಗಿ ''ಝಿಂದಗಿ ಏಕ್ ಸಪಾರ್ ಹೈ ಸುಹಾನ'' (''ಅಂದಝ್'' ) ಎಂಬ ಹಾಡನ್ನು ಸಹ ಹಾಡಿದ್ದರು, ಇದರಲ್ಲಿ ಅವರು ತಮ್ಮ ವಿಶಿಷ್ಟ ಶೈಲಿಯ ಹಾಡುಗಳಿಂದ ಅತ್ಯಂತ ಜನಪ್ರಿಯಗೊಂಡ ಕಿಶೋರ್ ಕುಮಾರ್ ಧ್ವನಿಯ ಶೈಲಿಯಲ್ಲಿ ಹಾಡಲು ಪ್ರಯತ್ನಿಸಿದ್ದರು. ರಾಜ್ ಕಪೂರ್ ಲತಾ ಮಂಗೇಶ್ಕರ್ರ ಸಂಪರ್ಕದಲ್ಲಿ ಇಲ್ಲದಿದ್ದಾಗ, ಶಂಕರ್-ಜೈಕಿಶನ್ರವರಿಂದ ಸ್ವರ ಸಂಯೋಜನೆಯನ್ನು ಮಾಡಲಾದ ಮೆರಾ ನಾಮ್ ಜೋಕರ್ (೧೯೭೦) ಚಿತ್ರದ ಹಾಡುಗಳನ್ನು ಹಾಡುವ ಅವಕಾಶ ಆಶಾಗೆ ದೊರೆಯಿತು.
;ಅನು ಮಲಿಕ್
ಸ್ವರ ಸಂಯೋಜಕ ಅನು ಮಲಿಕ್ ಆಶಾ ಜೊತೆಯಲ್ಲಿ ತನ್ನ ಮೊದಲನೆಯ ಚಿತ್ರ ''ಸೋನಿ ಮಹಿವಾಲ್'' (೧೯೮೪)ನ ಹಾಡುಗಳನ್ನು ಸೇರಿ ಅನೇಕ ಜನಪ್ರಿಯ ಹಾಡುಗಳ ಧ್ವನಿಮುದ್ರಣವನ್ನು ಮಾಡಿದ್ದಾರೆ. ಅವರ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ''ಪಿಲ್ಹಾಲ್'' (''ಪಿಲ್ಹಾಲ್'' ), ''ಕಿತಾಬೆ ಬಹುತ್ ಸಿ'' (''ಬಾಝಿಗರ್'' ) ಇತ್ಯಾದಿ ಸೇರಿವೆ. ಆಶಾರಿಂದ ಹಾಡಲಾದ್ ಅನು ಮಲಿಕ್ರ ''ಜಬ್ ದಿಲ್ ಮಿಲೆ'' (''ಯಾದ್ಇನ್'' ) ನಾಲ್ಕು ಸಾಲುಗಳು ಸುಖ್ವಿಂದರ್ ಸಿಂಗ್, ಉದಿತ್ ನಾರಾಯಣ ಮತ್ತು ಸುನಿಧಿ ಚೌಹಾನ್ರ ದ್ವನಿಗಳಲ್ಲಿ ಅತ್ಯುತ್ತಮವಾಗಿ ಉಳಿಯಿತು. ಆಶಾ ೧೯೫೦ರ ಮತ್ತು ೧೯೬೦ರ ದಶಕಗಳಲ್ಲಿ ಮಲಿಕ್ರ ತಂದೆ ಸರ್ದಾರ್ ಮಲಿಕ್ರ ಹಾಡುಗಳಿಗೂ ಸಹ ಹಾಡಿದ್ದರು, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ''ಸರಂಗ'' (೧೯೬೦) ಚಿತ್ರಕ್ಕೆ ಹಾಡಿದ್ದು.
;ಇತರೆ ಸಂಗೀತಕಾರರು
ಮದನ್ ಮೋಹನ್ ಆಶಾ ಜೊತೆಯಲ್ಲಿ ಅನೇಕ ಹಾಡುಗಳ ದ್ವನಿಮುದ್ರಣವನ್ನು ಮಾಡಿದ್ದಾರೆ, ಅವುಗಳಲ್ಲಿ ಪ್ರಸಿದ್ಧ ಜಾನಪದಗೀತೆಯಾದ ''ಮೆರ ಸಾಯ'' (೧೯೬೬)ದ ''ಝುಂಕಾ ಗಿರಾ ರೆ'' ಸಹ ಸೇರಿದೆ. ''ಚೋಟಿ ಸಿ ಬಾತ್'' (೧೯೭೫) ಚಿತ್ರದಲ್ಲಿ, ''ಜಾನೆಮನ್ ಜಾನೆಮನ್'' ಹಾಡನ್ನು ಆಶಾ [[ಕೆ.ಜೆ.ಯೇಸುದಾಸ್|ಎ. ಜೆ. ಯೇಸುದಾಸ್]] ಜೊತೆಯಲ್ಲಿ ಸಲಿಲ್ ಚೌದರಿಗಾಗಿ ಹಾಡಿದ್ದರು. ಸಲಿಲ್ರ ೧೯೫೬ರ ಚಿತ್ರ ''ಜಾಗ್ತೆ ರಹೊ'' ಸಹ ಆಶಾರಿಂದ ಧ್ವನಿಮುದ್ರಣ ಮಾಡಲಾದ ಹಾಡನ್ನು ಹೊಂದಿದೆ, ಅದೇ ''ಥಂಡಿ ಥಂಡಿ ಸಾವನ್ ಕಿ ಫುಹಾರ್''. ಆಶಾರ ಮತ್ತೊಬ್ಬ ಬೆಂಬಲಿಗರು ಯುವ ಸ್ವರ ಸಂಯೋಜಕ ಸಂದೀಪ್ ಚೌತ, ಇವರು ಅವಳಿಗೆ ''ಕಂಬಕ್ತ್ ಇಷ್ಕ್'' (ಸೋನು ನಿಗಮ್ಜೊತೆಗಿನ ಜೋಡಿಹಾಡು) (''ಪ್ಯಾರ್ ತುನೆ ಕ್ಯಾ ಕಿಯಾ'', ೨೦೦೧) ಹಾಡುವ ಅವಕಾಶವನ್ನು ನೀಡಿದ್ದರು. ಈ ಹಾಡು ಭಾರತೀಯ ಯುವಪೀಳಿಗೆಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿತ್ತು.
ಆಶಾರವರು ಲಕ್ಷ್ಮಿಕಾಂತ್-ಪ್ಯಾರೆಲಾಲ್, ನೌಷದ್, ರವೀಂದ್ರ ಜೈನ್, ಎನ್ ದತ್ತ, ಹೇಮಂತ್ ಕುಮಾರ್ಗಳಂತಹ ಅನೇಕ ಲತಾ-ಪ್ರೋತ್ಸಾಕರೊಂದಿಗೆ ಸಹ ಕೆಲಸಮಾಡಿದ್ದಾರೆ. ಒಂದು ಸಲ ಆಶಾ ಮತ್ತು ಲತಾರ ನಡುವಿನ ವ್ಯತ್ಯಾಸವನ್ನು ಸೂಚಿಸುವಂತೆ ನೌಷದ್ರನ್ನು ಕೇಳಿದಾಗ, "ಲತಾರಲ್ಲಿ ಇರುವ ಯಾವುದೋ ಒಂದು ಆಶಾರಲ್ಲಿ ಇಲ್ಲ, ಅದು ಕೇವಲ ಲತಾರಲ್ಲಿ ಮಾತ್ರ ಇದೆ" ಎಂದು ಅವರು ಹೇಳಿದ್ದರು. "ಬಹುಶಃ ಆ ಸಮಯದಲ್ಲಿ ಆಶಾರ ಗಾಯನವನ್ನು ನಾನು ಸರಿಯಾಗಿ ಆಲಿಸಿರಲಿಲ್ಲ, ಆದ್ದರಿಂದಲೇ ಆ ರೀತಿ ಹೇಳಿದ್ದೆ" ಎಂದು ನಂತರ ಒಂದು ಸಂದರ್ಶನದಲ್ಲಿ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು.<ref name="Girija">{{cite web
| url=http://www.musicalnirvana.com/ghazal/asha_articles.html
| title=Articles on Asha Bhosle — A voice for all seasons: Taken from Girija Rajendran's article for the Hindu
| accessdate=2006-05-03
| archive-date=2006-11-16
| archive-url=https://web.archive.org/web/20061116131006/http://www.musicalnirvana.com/ghazal/asha_articles.html
| url-status=dead
}}</ref> ನೌಷದ್, ನಂತರ ಅವರ ಜೀವನದಲ್ಲಿ, ಸಹ ತಾನು ಆಶಾ ಭೋಂಸ್ಲೆಗೆ ಪಕ್ಷಪಾತ ತೋರಿಸಿದ್ದೆ ಎಂದು ಪಶ್ಚಾತ್ತಾಪಪಟ್ಟಿದ್ದರು. ಜತಿನ್ ಲಲಿತ್, ಬಪ್ಪಿ ಲಹಿರಿ, ಕಲ್ಯಾಣ್ಜಿ ಆನಂದ್ಜಿ, ಉಷಾ ಖನ್ನ, ಚಿತ್ರಗುಪ್ತ್, ಮತ್ತು ರೋಷನ್ರಂತಹ ಪ್ರಖ್ಯಾತ ಬಾಲಿವುಡ್ ಸ್ವರ ಸಂಯೋಜಕರೊಂದಿಗೆ ಸಹ ಆಶಾ ಕೆಲಸಮಾಡಿದ್ದರು.
==ಬಾಲಿವುಡ್ಯೇತರ ಸಂಗೀತ==
===ಖಾಸಗಿ ಆಲ್ಬಂಗಳು===
ಗೀತಕಾರ, ಗುಲ್ಝಾರ್, ಸಂಗೀತ ನಿರ್ದೇಶಕ, ಆರ್.ಡಿ. ಬರ್ಮನ್ ಮತ್ತು ಆಶಾ ಭೋಂಸ್ಲೆ, ಮೂರುಜನ ಸೇರಿ, ೧೯೮೭ರಲ್ಲಿ ''ದಿಲ್ ಪಡೋಸಿ ಹೈ'' ಹೆಸರಿನ ಜೋಡಿ ಆಲ್ಬಂನ ರಚನೆಯನ್ನು ಆರಂಭಿಸಿದ್ದರು, ಇದು ಸೆಪ್ಟೆಂಬರ್ ೮, ೧೯೮೭, ಆಶಾ ಭೋಂಸ್ಲೆರ ಜನ್ಮದಿನದಂದು ಬಿಡುಗಡೆಯಾಗಿತ್ತು.<ref>[https://www.youtube.com/watch?v=uwTBsElMeuw ''ದಿಲ್ ಪಡೋಸಿ ಹೈ'', ಬಿಡುಗಡೆ]</ref> ೧೯೯೫ರಲ್ಲಿ, ಆಶಾ ಮೈಹರ್ ''ಘರಾನ'' (ಭಾರತೀಯ ಶಾಸ್ತ್ರೀಯ ಸಂಗೀತದ ಶೈಲಿಯ ಶಾಲೆ) ಒಳಗೇ ಇದ್ದ ಶಾಸ್ತ್ರೀಯ ಸಂಗೀತ ಭಂಡಾರವನ್ನು ಕಲಿಯಲು [[ಹಿಂದುಸ್ತಾನಿ ಸಂಗೀತ|ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ]]ದ ಹೆಸರಾಂತ ಗಾಯಕ [[ಅಲಿ ಅಕ್ಬರ್ ಖಾನ್|ಅಲಿ ಅಕ್ಬರ್ ಖಾನ್]]ರವರೊಂದಿಗೆ ''ಗಥ ಬಂಧನ'' (ದಾರ-ಕಟ್ಟುವ) ಧರ್ಮಾಚರಣೆಗೆ ಒಳಗಾಗಿದ್ದರು, ಇದನ್ನು ಖಾನ್ ಅವರಿಗೆ ಅವರ ತಂದೆ [[ಅಲ್ಲಾವುದ್ದೀನ್ ಖಾನ್|ಅಲ್ಲಾವುದ್ದಿನ್ ಖಾನ್]] ([[ಪಂಡಿತ್ ರವಿಶಂಕರ್|ರವಿ ಶಂಕರ್]]ರ ಗುರುಗಳು) ಇವರಿಂದ ಹಸ್ತಾಂತರಿಸಲಾಗಿತ್ತು. ನಂತರ, ಆಶಾ ಮತ್ತು ಉಸ್ತದ್ ಅಲಿ ಆಕ್ಬರ್ ಖಾನ್ ಇಬ್ಬರು ಸೇರಿ [[ಕ್ಯಾಲಿಫೊರ್ನಿಯ|ಕಾಲಿಫೋರ್ನಿಯಾ]]ದಲ್ಲಿ ''ಲೆಗಸಿ'' ಹೆಸರಿನ ಖಾಸಗಿ ಆಲ್ಬಂಗಾಗಿ ಹನ್ನೊಂದು ಸ್ಥಿರ ಸಂಯೋಜನೆಗಳ (ಅಥವಾ ''ಬಂದಿಷ್'' ಗಳ) ಧ್ವನಿ ಮುದ್ರಣವನ್ನು ಮಾಡಿದ್ದರು, ನಂತರ ಈ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.
೧೯೯೦ರ ದಶಕದಲ್ಲಿ, ಆಶಾರವರು ಆರ್ ಡಿ ಬರ್ಮನ್ರ ಮರುಮಿಶ್ರಿತ ಹಾಡುಗಳೊಂದಿಗೆ ಪ್ರಯೋಗಗಳನ್ನು ಮಾಡಿದ್ದರು. ಹಳೇ ಮಧುರ ಗೀತೆಗಳನ್ನು ಬೇಕಾದ ರೀತಿಯಲ್ಲಿ ತಿದ್ದುಪಡಿಮಾಡಿ ಬದಲಾಯಿಸಿದ್ದಕ್ಕಾಗಿ ಆಶಾ ಅನೇಕರಿಂದ ನಿಂದನೆಗೊಳಗಾಗಿದ್ದರು, ಇವರಲ್ಲಿ ಖಯ್ಯಮ್ ಸಹ ಒಬ್ಬರಾಗಿದ್ದರು. ಅದಾಗ್ಯೂ, ''ರಾಹುಲ್ ಆಂಡ್ ಐ'' ಗಳಂತಹ ಆಲ್ಬಂಗಳು ತಕ್ಕ ಮಟ್ಟಿಗೆ ಜನಪ್ರಿಯಗೊಂಡಿದ್ದವು. ೧೯೯೭ರಲ್ಲಿ, ಆಶಾ ''ಜಾನಮ್ ಸಂಜಾ ಕರೋ'' ಎಂಬ ಖಾಸಗಿ ಹಿಂದಿ ಪಾಪ್ ಆಲ್ಬಂನ್ನು ಲೆಸ್ಲೀ ಲೆವೀಸ್ ಜೊತೆಯಲ್ಲಿ ಮಾಡಿದ್ದಾರೆ. ಈ ಆಲ್ಬಂ ಅತೀ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿತ್ತು ಮತ್ತು ಅವರಿಗೆ ಅನೇಕ ಪ್ರಶಸ್ತಿಗಳನ್ನು ತಂದು ಕೊಟ್ಟಿತ್ತು, ಇವುಗಳಲ್ಲಿ ೧೯೯೭ರ ಎಮ್ಟಿವಿ ಪ್ರಶಸ್ತಿ ಸಹ ಒಳಗೊಂಡಿದೆ.
ಒಂದು ಸಲ ನಿರ್ದೇಶಕರಾದ ಬಿ ಅರ್ ಇಶಾರರವರು ತಮ್ಮ ಒಂದು ಚಿತ್ರಕ್ಕೆ ಸ್ವರ ಸಂಯೋಜನೆಯನ್ನು ನೀಡುವಂತೆ ಆಶಾ ಭೋಂಸ್ಲೆರನ್ನು ಕೇಳಿದ್ದರು, ಆದರೆ ಅವರು ಅದನ್ನು ಸವಿನಯವಾಗಿ ನಿರಾಕರಿಸಿದರು. ೨೦೦೨ರಲ್ಲಿ, ಅವರು ''ಆಪ್ ಕಿ ಆಶಾ'' ಆಲ್ಬಂದೊಂದಿಗೆ ಸ್ವರ ಸಂಯೋಜಕರಾಗಿ ಬದಲಾದರು, ಇದು ಒಂದು ಎಂಟು-ಹಾಡುಗಳ ಸ್ವರಮಿಲನ ಮತ್ತು ಚಲನಚಿತ್ರ ಆಲ್ಬಂ ಆಗಿತ್ತು. ಇದಕ್ಕೆ ಸಾಹಿತ್ಯವನ್ನು ಬರೆದವರು ಮಜ್ರೂಹ್ ಸುಲ್ತಾನ್ಪುರಿ (ಇದು ಅವರ ಕೊನೆಯ ಸಾಹಿತ್ಯ) ಮತ್ತು ಸ್ವರ ಸಂಯೋಜನೆಯನ್ನು ಸ್ವತಃ ಆಶಾರವರೇ ಮಾಡಿದ್ದರು. ಈ ಆಲ್ಬಂನ್ನು ಮೇ ೨೧, ೨೦೦೧ರಂದು ಮುಂಬಯಿನಲ್ಲಿ ಲಾವಿಶ್ ಔತಣದ ಸಮಯದಲ್ಲಿ [[ಸಚಿನ್ ತೆಂಡೂಲ್ಕರ್|ಸಚಿನ್ ಟೆಂಡುಲ್ಕರ್]]ರವರಿಂದ ಬಿಡುಗಡೆಮಾಡಲಾಗಿತ್ತು. ಆಲ್ಬಂ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು.
ಆಶಾ ಪಾಕಿಸ್ತಾನದ ಗಾಯಕ ಅದ್ನನ್ ಸಮಿ ೧೦ ವರ್ಷದ ವಯಸ್ಸಿನವರಿರುವಾಗಲೇ ಅವರ ಪ್ರತಿಭೆಯನ್ನು ಗುರುತಿಸಿದ್ದರು. ಅದು [[ಲಂಡನ್|ಲಂಡನ್ನಲ್ಲಿ]], ಆರ್ ಡಿ ಬರ್ಮನ್ರವರೊಂದಿಗೆ ಕಾರ್ಯಕ್ರಮವನ್ನು ನೀಡುತ್ತಿರುವ ಸಮಯವಾಗಿತ್ತು. ಆಗ ಸಂಗೀತದಲ್ಲಿ ಅವನ ಆಶಕ್ತಿಯನ್ನು ಗಂಭೀರವಾಗಿ ತೊಡಗಿಸಿಕೊಳ್ಳುವಂತೆ ಹೇಳಿದ್ದವರೇ ಆಶಾ. ಅದ್ನನ್ ಬೆಳೆದು ದೊಡ್ಡವನಾಗಿ ವೃತ್ತಪರ ಸಂಗೀತಗಾರನಾದಾಗ, ಅವನ ಅತ್ಯುತ್ತಮ-ಮಾರಾಟ ಕಂಡ ಆಲ್ಬಂ ''ಕಭೀ ತೊ ನಝರ್ ಮಿಲಾವೊ'' ಗಾಗಿ ಆಶಾ ಅವನೊಂದಿಗೆ ಶೀರ್ಷಿಕೆ ಜೋಡಿ ಹಾಡನ್ನು ಹಾಡಿದ್ದರು. ಮತ್ತೆ ಅವರಿಬ್ಬರು ''ಬರ್ಸೆ ಬದಲ್'' ಆಲ್ಬಂನಲ್ಲಿ ಸಹ ಹಾಡಿದ್ದರು. ಈ ಆಲ್ಬಂ, ಭಾರತೀಯ ಶಾಸ್ತ್ರೀಯ ಸಂಗೀತ ಆಧಾರದ ಎಂಟು ಹಾಡುಗಳನ್ನು ಒಳಗೊಂಡಿದೆ. ''ವೊಮದ್ ಟಾಕಿಂಗ್ ಬುಕ್ ವಾಲ್ಯೂಮ್ ಫೋರ್'' ಮುದ್ರಣಕ್ಕಾಗಿ ಅವರು ''ಯನ್ ನಾ ತಿ'' ಹಾಡಿನ ನೆರವನ್ನು ನೀಡಿದ್ದರು: ಇದು ವೊಮದ್ ಮುದ್ರಣದಲ್ಲಿ ''ಏಷಿಯಾ ೧ಗೆ ನೀಡಿದ್ದ ಒಂದು ಪರಿಚಯವಾಗಿತ್ತು''.
ಆಶಾ ''ಮೆರಜ್-ಇ-ಘಝಲ್'', ''ಆಬ್ಶರ್-ಇ-ಘಝಲ್'' ಮತ್ತು ''ಕಾಶಿಷ್'' ಗಳಂತಹ ಅನೇಕ ಅಲ್ಬಂಗಳಿಗೆ ಘಝಲ್ಗಳನ್ನು ಹಾಡಿದ್ದಾರೆ. ೨೦೦೫ರಲ್ಲಿ, ಆಶಾ ತನ್ನ ಸ್ವಂತ ಹೆಸರಿನ ಆಲ್ಬಂನ (''ಆಶಾ'' ) ಬಿಡುಗಡೆಯನ್ನು ಮಾಡಿದ್ದರು, ಇದು ನಾಲ್ಕು ಹೆಸರಾಂತ ಘಝಲ್ ಹಾಡುಗಾರರಿಗೆ ನೀಡಿದ್ದ ಸ್ಲಾಘನೆಯಾಗಿತ್ತು - ಮೆಹದಿ ಹಸನ್, ಘುಲಮ್ ಅಲಿ, ಪರಿದಾ ಖನುಮ್ ಮತ್ತು ಜಗ್ಜಿತ್ ಸಿಂಗ್. ಈ ಆಲ್ಬಂ ಪರಿದಾ ಕುಮಾರ್ರ ''ಆಜ್ ಜಾನೆ ಕಿ ಝಿದ್ ನಾ ಕರೊ'', ಘುಲಮ್ ಅಲಿರ ''ಚುಪ್ಕೆ ಚುಪ್ಕೆ'', ''ಆವಾರ್ಗಿ'' ಮತ್ತು ''ದಿಲ್ ಮೆ ಏಕ್ ಲಹರ್'', ಜಗ್ಜಿತ್ ಸಿಂಗ್ರ ''ಆಹಿಸ್ತ ಆಹಿಸ್ತ'' ಮತ್ತು ಮೆಹದಿ ಹಸನ್ರ ''ರಂಜಿಶ್ ಹಿ ಸಹಿ'' ''ರಫ್ತ ರಫ್ತ'' ಮತ್ತು ''ಮುಜೆ ತುಮ್ ನಝರ್ ಸೆ'' ಗಳಂತಹ ಅವರ ಅಚ್ಚುಮೆಚ್ಚಿನ ಎಂಟು ಘಝಲ್ಗಳನ್ನು ಒಳಗೊಂಡಿದೆ. ಸಂಗೀತಗಾರ ಪಂಡಿತ್ ಸೋಮೇಶ್ ಮಾಥುರ್ ಈ ಶಾಸ್ತ್ರೀಯ ಘಝಲ್ಗಳನ್ನು ಆಧುನಿಕ ಧ್ವನಿಗಳ ಮೂಲಕ ಮರುರಚಿಸಿದ್ದಾರೆ. ಈ ಆಲ್ಬಂನ್ನು, ಆಶಾರ ಪ್ರಕಾರ, ಸಾಂಪ್ರದಾಯಿಕ ತಬಲ ಮತ್ತು ಸಾರಂಗಿ ಧ್ವನಿಗಳಿಂದ "ದೂರವಾಗಿದ್ದ" ಯುವ ಪೀಳಿಗೆಗಾಗಿ ಮಾಡಲಾಗಿತ್ತು.
ಆಶಾರ ಹಾಡುಗಳ ಬಹುಸಂಖ್ಯಾತ ಸಂಕಲನಗಳು ಸಹ ಬಿಡುಗಡೆಯಾಗಿದ್ದವು. ಅವರ ೬೦ನೆಯ ಹುಟ್ಟುಹಬ್ಬದ ಸ್ಮಾರಕೋತ್ಸವಕ್ಕಾಗಿ, ೧೯೯೩ರಲ್ಲಿ ಇಎಮ್ಐ ಇಂಡಿಯಾ ಮೂರು ಕ್ಯಾಸೆಟ್ಗಳನ್ನು ಬಿಡುಗಡೆಮಾಡಿತ್ತು: ''ಬಲಾ ಮೆ ಬೈರಾಗನ್ ಹೂಂಗಿ'' (ಭಕ್ತಿಗೀತೆಗಳು), ''ದಿ ಗೋಲ್ಡನ್ ಕಲೆಕ್ಷನ್: ಮೆಮೋರೇಬಲ್ ಘಝಲ್ಸ್'' (ಘುಲಾಮ್ ಅಲಿ, ಆರ್ ಡಿ ಬರ್ಮನ್ ಮತ್ತು ನಾಝರ್ ಹುಸ್ಸೇನ್ಗಳಂತಹ ಸ್ವರ ಸಂಯೋಜಕರಿಂದ ಸಂಯೋಜಿಸಲಾದ ಚಿತ್ರೇತರ ಘಝಲ್ಗಳು), ಮತ್ತು ''ದಿ ಗೋಲ್ಡನ್ ಕಲೆಕ್ಷನ್: ದಿ ಎವೆರ್ ವರ್ಸಾಟೈಲ್ ಆಶಾ ಭೋಂಸ್ಲೆ'' (೪೪ ಜನಪ್ರಿಯ ಚಲನಚಿತ್ರಗೀತೆಗಳು).
೨೦೦೬ರಲ್ಲಿ, ಅವರು ''ಆಶಾ ಆಂಡ್ ಫ್ರೆಂಡ್ಸ್'' ಹೆಸರಿನ ಆಲ್ಬಂನ ಧ್ವನಿ ಮುದ್ರಣವನ್ನು ಮಾಡಿದ್ದರು, ಇದರಲ್ಲಿ ಅವರು, ಪ್ರಸಿದ್ಧ ಚಲನಚಿತ್ರ ನಟರೊಂದಿಗೆ ಜೋಡಿ ಹಾಡುಗಳನ್ನು ಹಾಡಿದ್ದರು, ಅವರೆಂದರೆ ಸಂಜಯ್ ದತ್ ಮತ್ತು [[ಊರ್ಮಿಳಾ ಮಾತೋಂಡ್ಕರ್]] ಮತ್ತು ಪ್ರಸಿದ್ಧ ಕ್ರಿಕೆಟಿಗ [[ಬ್ರೆಟ್ ಲೀ|ಬ್ರೆತ್ ಲೀ]] ಯೊಂದಿಗೆ ಅವರು ಯು ಆರ್ ದಿ ಒನ್ ಫರ್ ಮಿ (''ಹಾನ್ ಮೆ ತುಮ್ಹಾರಾ ಹೂ'' )ಹಾಡಿದ್ದರು. ಈ ಎಲ್ಲಾ ಹಾಡುಗಳ ಸ್ವರ ಸಂಯೋಜನೆಯನ್ನು ಮಾಡಿದ್ದವರು ಶಮೀರ್ ತಂಡೊನ್ ಮತ್ತು ಇದರ ಚಲನಚಿತ್ರ ಚಿತ್ರೀಕರಣವನ್ನು ನಿರ್ದೇಶಕರಾಗಿ ಬದಲಾದ ಪತ್ರಿಕೋದ್ಯಮಿ ಎಸ್ ರಾಮಚಂದ್ರನ್ನಿಂದ ಮಾಡಲಾಯಿತು.
===ಗಾನಗೋಷ್ಠಿಗಳು ಮತ್ತು ವಿದೇಶಿ ಕಲಾವಿದರೊಂದಿಗಿನ ಸಹಭಾಗಿತ್ವಗಳು===
೧೯೮೦ರ ಮತ್ತು ೧೯೯೦ರ ದಶಕಗಳಲ್ಲಿ, ಆಶಾ ವಿಶ್ವ-ಪ್ರವಾಸವನ್ನು ಕೈಗೊಂಡು, [[ಕೆನಡಾ|ಕೆನಡ]], ದುಬೈ, [[ಯುನೈಟೆಡ್ ಕಿಂಗ್ಡಮ್|ಯುಕೆ]], [[ಅಮೇರಿಕ ಸಂಯುಕ್ತ ಸಂಸ್ಥಾನ|ಯು.ಎಸ್.]] ಮತ್ತು ಅನೇಕ ಇತರ ದೇಶಗಳಲ್ಲಿ ಗಾನಗೋಷ್ಠಿಗಳನ್ನು ಮಾಡಿದ್ದರು. ೧೯೮೯ರಲ್ಲಿ, ಪ್ರಪಂಚ ಪ್ರವಾಸದ ಸಮಯದಲ್ಲಿ, ಅವರು ೨೦ ದಿನಗಳಲ್ಲಿ ಯುಎಸ್ನ ೧೩ ನಗರಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದರು. ಇದಾದ ತಕ್ಷಣ, ಅವರು ಈಗಾಗಲೇ ಮಾರಾಟಗೊಂಡ ಅನುಸೂಚಿತ ಗಾನಗೋಷ್ಠಿಯನ್ನು [[ಸ್ವೀಡನ್|ಸ್ವೆಡನ್]]ನ, ಸ್ಟೋಖೋಲ್ಮ್ನಲ್ಲಿ ಹೊಂದಿದ್ದರು. ಒತ್ತಡದ ಕಾರ್ಯಕ್ರಮಗಳಿಂದ, ಆಶಾ [[ಜ್ವರ]], [[ಕೆಮ್ಮು]] ಮತ್ತು ಸುಸ್ತಿನ ಜೊತೆಗೆ ಅತಿಯಾದ ದೊಡ್ಡ ಕರುಳಿನ ತೊಂದರೆಗೆ ಒಳಗಾಗಿದ್ದರು. ಸ್ಟೋಖೋಲ್ಮ್ನಲ್ಲಿ, ಗಾನಗೋಷ್ಠಿ-ಪೂರ್ವ ಬಿಕ್ಕಟ್ಟುಗಳ ಸಮಾವೇಶವನ್ನು ಕರೆಯಲಾಗಿತ್ತು, ಇದಕ್ಕೆ ಆಶಾರ ಮಗ (ಮತ್ತು ಕಾರ್ಯ ನಿರ್ವಾಹಕ) ಆನಂದ್ ಮತ್ತು ಗಾನಗೋಷ್ಠಿಯನ್ನು ನಡೆಸುವ ಪ್ರವರ್ತಕರು ಹಾಜರಾಗಿದ್ದರು. ವಾದ್ಯವೃಂದ ಅನೇಕ ಇನ್ಸ್ಟ್ರುಮೆಂಟಲ್ ಟ್ರ್ಯಾಕ್ಗಳನ್ನು ನುಡಿಸುವುದು, ಸುರೇಶ್ ವಾದ್ಕರ್ರಂತಹ ಸಂಗಡಿಗ ಗಾಯಕ ಹೆಚ್ಚುವರಿ ಜವಾಬ್ದಾರಿಯನ್ನು ತೆಗೆದುಕೊಳ್ಳುವರು, ಮತ್ತು ಆಶಾ ಸ್ವಲ್ಪ ಸಮಯಕ್ಕೆ ಮಾತ್ರ ಕಾಣಿಸುಕೊಳ್ಳುವರು ಎಂಬುದಾಗಿ ನಿರ್ಧರಿಸಲಾಗಿತ್ತು. ಆದರೆ ಆಶಾ ಈ ಎಲ್ಲಾ ಸೂಚನೆಗಳನ್ನು ತಿರಸ್ಕರಿಸಿದ್ದರು, ಮತ್ತು ಗಾನಗೋಷ್ಠಿಯಲ್ಲಿ ತನ್ನ ಸರಿ ಇಲ್ಲದ ಧ್ವನಿಯಿಂದಲೇ ಕಷ್ಟಪಟ್ಟು ಹಾಡಿದ್ದರು. ಅವರ ಆರು ಬಾಲಿವುಡ್ ಹಾಡುಗಳ ಮೊದಲ ಸೆಟ್ ಪ್ರೇಕ್ಷಕರಿಂದ ಯಾವುದೇ ಪ್ರತಿಕ್ರಿಯೆಯನ್ನು ಪಡೆದುಕೊಂಡಿಲ್ಲ, ಇದು ಬಹುಶಃ ಭಾರತೀಯ ಮತ್ತು [[ಪಾಕಿಸ್ತಾನ|ಪಾಕಿಸ್ತಾನಿ]] ಒಲಸಿಗರನ್ನು ಕುರಿತದ್ದಾಗಿತ್ತು. ಎರಡನೆಯ ಸೆಟ್ ಹಾಡುಗಳನ್ನು ಹಾಡಲು ಪ್ರಾರಂಭಿಸುವ ಮೊದಲು, ಪ್ರೇಕ್ಷಕ ಗುಂಪಿನಲ್ಲಿನ ಒಬ್ಬ ಅಭಿಮಾನಿ ಅವರನ್ನು ಒಂದು [[ಮರಾಠಿ]] ಹಾಡನ್ನು ಹಾಡುವಂತೆ ಕೋರಿದ್ದರು. ಆಶಾ ಇದಕ್ಕೆ ಸಮ್ಮತಿಸಿ ''ನಾಚ್-ನಾಚುನಿ ಆತಿ ಮಿ ದಮಾಲೆ'' ("ಈ ಕೊನೆಯಿಲ್ಲದ ನೃತ್ಯದಿಂದ ನಾನು ತುಂಬಾ ಬಳಲಿದ್ದೇನೆ") ಎಂಬ ಹಾಡನ್ನು ಹಾಡಿದ್ದರು. ಹಾಡು ಮುಗಿದಾಗ, ಸಭಾಂಗಣ ಚಪ್ಪಾಳೆಗಳೊಂದಿಗೆ ಸ್ಫೋಟಿಸಿತ್ತು ಮತ್ತು ಪುನರಾವರ್ತಿಸುವಂತೆ ಕೋರುವ ಉದ್ಗಾರಗಳು ಪ್ರಾಂಭವಾಗಿದ್ದವು. ಗಾನಗೋಷ್ಠಿಯ ನಂತರ, ಈ ಅತಿಯಾದ ದಣಿವಿನಿಂದ ಚೇತರಿಸಿಕೊಳ್ಳಲು ಆಶಾ ಒಂದು ತಿಂಗಳ ಕಾಲ ಹಾಸಿಗೆಯಲ್ಲಿದ್ದರು. ಅಕ್ಟೋಬರ್ ೨೦೦೨ರಲ್ಲಿ, "ಹೆಲ್ಪ್ ದಿ ಏಜ್ಡ್ (ವೃದ್ದರಿಗೆ ಸಹಾಯಮಾಡಿ)" ಕಾರ್ಯಕ್ರಮದಿಂದ ಭಾರತದಲ್ಲಿನ ವೃದ್ದರಿಗಾಗಿ ದೇಣಿಗೆಯನ್ನು ಸಂಗ್ರಹಿಸಲು ಅವರು [[ಲಂಡನ್|ಲಂಡನ್]]ನಲ್ಲಿ ಸುದೇಶ್ ಭೋಂಸ್ಲೆ ಮತ್ತು ಸಹೋದರರೊಂದಿಗೆ ಗಾನಗೋಷ್ಠಿಯನ್ನು ಮಾಡಿದ್ದರು. ೨೦೦೭ರಲ್ಲಿ ಅವರು "ದಿ ಇನ್ಕ್ರೆಡಿಬಲ್" ಹೆಸರಿನ ಪ್ರವಾಸದಲ್ಲಿ, ಯುಎಸ್ಎ, ಕೆನಡ, ಮತ್ತು ವೆಸ್ಟ್ ಇಂಡೀಸ್ಗಳ ಪ್ರವಾಸವನ್ನು ಮಾಡಿದ್ದರು. ಈ ಪ್ರವಾಸದಲ್ಲಿ, ಗಾಯಕರಾದ ಸೋನು ನಿಗಮ್, ಕುನಲ್ ಗಂಜಾವಾಲ ಮತ್ತು ಕೈಲಾಶ್ ಖೆರ್ ಸಹ ಅವರಜೊತೆಯಲ್ಲಿದ್ದರು. ಮೂಲತಃ ೧೨ ಗಾನಗೋಷ್ಠಿಗಳಿಗೆ ಮಾತ್ರ ನಿಶ್ಚಿತಗೊಳಿಸಲಾಗಿತ್ತು, ಆದರೆ ಈ ಪ್ರವಾಸ ೨೦ಕ್ಕೂ ಅಧಿಕ ಗಾನಗೋಷ್ಠಿಗಳನ್ನು ಮಾಡಿತ್ತು.
೧೯೮೦ರ ದಶಕದ ಮಧ್ಯದಲ್ಲಿ, ಆಶಾ ಬೋಯ್ ಜಾರ್ಜ್ (''ಬೊವ್ ಡೌನ್ ಮಿಸ್ಟೆರ್'' ) ಮತ್ತು ಸ್ಟೆಫೆನ್ ಲಾಸ್ಕೊಂಬೆ ಜೊತೆಗೆ ಹಾಡಿದ್ದರು. ೧೯೯೭ರಲ್ಲಿ, ಅವರ ೬೪ನೆಯ ವಯಸ್ಸಿನಲ್ಲಿ ಅವರು ಪ್ರೀತಿ ಹಾಡನ್ನು ಬೋಯ್ ಬ್ಯಾಂಡ್ ಕೋಡ್ ರೆಡ್ ಜೊತೆಯಲ್ಲಿ ಹಾಡಿದ್ದರು. ಮಿಶೆಲ್ ಸ್ಟಿಪ್ ಜೊತೆಗೆ ಅವರು ''ದಿ ವೇ ಯು ಡ್ರೀಮ್'' (ಒನ್ ಜಯಂಟ್ ಲೀಪ್, [http://www.1giantleap.tv/ ]) ಹಾಡಿನ ಧ್ವನಿಮುದ್ರಣವನ್ನು ಸಹ ಮಾಡಿದ್ದರು, ಇದನ್ನು ''ಬುಲ್ಲೆಟ್ಫ್ರೂಪ್ ಮಾಂಕ್'' ಎಂಬ ಆಂಗ್ಲ ಚಲನಚಿತ್ರದಲ್ಲಿ ಉಪಯೋಗಿಸಲಾಗಿತ್ತು. ಈ ಹಾಡು ಬಿಡುಗಡೆಯಾಗಿದ್ದು ಸಹ ಸ್ವಹೆಸರಿನ ಆಲ್ಬಂ ೨೦೦೨ನ ೧ ಜಯಂಟ್ ಲೀಪ್ನಲ್ಲಿಯೇ.
೧೯೯೭ರಲ್ಲಿ, [[ಯುನೈಟೆಡ್ ಕಿಂಗ್ಡಮ್|ಬ್ರಿಟೀಷ್]] ಬ್ಯಾಂಡ್ ಕಾರ್ನರ್ ಶಾಪ್ ತಮ್ಮ ''ಬ್ರಿಂಫುಲ್ ಆಫ್ ಆಶಾ'' ಎನ್ನುವ ಹಾಡಿನೊಂದಿಗೆ ಆಶಾರವರನ್ನು ಪ್ರಶಂಸಿಸಿತ್ತು, ಇದು ಒಂದು ಅಂತರ್ರಾಷ್ಟ್ರೀಯ ಮಟ್ಟಡ ಜನಪ್ರಿಯ ಗೀತೆಯಾಗಿದ್ದು, ನಂತರ ಇದನ್ನು ಫ್ಯಾಟ್ಬಾಯ್ ಸ್ಲಿಮ್ನಿಂದ ರೀಮಿಕ್ಸ್ ಮಾಡಲಾಗಿತ್ತು. ೨೦೦೧ರಲ್ಲಿ, ನೆಲ್ಲಿ ಪರ್ಟಾಡೊರ "ಐ ಯಾಮ್ ಲೈಕ್ ಎ ಬರ್ಡ್" ಸಿಡಿಯು ಡಿಜಿಟಲ್ ಕಟ್ಅಪ್ ಲಾಂಜ್ ನಿಂದ ರಚಿಸಲಾದ "ನೆಲ್ಲಿ ವಿಎಸ್. ಆಶಾ ರೀಮಿಕ್ಸ್"ನ್ನು ಒಳಗೊಂಡಿದೆ.
೨೦೦೩ರಲ್ಲಿ, ಬ್ರಿಟೀಷ್ ಒಪೆರಾ ಪಾಪ್ ಗಾಯಕಿ ಸಾರಾ ಬ್ರೈಟ್ಮ್ಯಾನ್ ಅವರ ಆಲ್ಬಂ ''ಹಾರೆಮ್'' ನಲ್ಲಿ ಅವರ "ದಿಲ್ ಚೀಝ್ ಕ್ಯಾ ಹೈ" ಗಾಯನವನ್ನು ಮಾದರಿಯಾಗಿ ನೀಡಿದ್ದರು. ಇದನ್ನು ಅವರ "ಯು ಟೇಕ್ ಮೈ ಬ್ರೀತ್ ಅವೇ" ಹಾಡಿಗೆ ಮುನ್ನುಡಿಯಾಗಿ ಉಪಯೋಗಿಸಲಾಗಿತ್ತು.
೨೦೦೫ರಲ್ಲಿ, ಅಮೆರಿಕಾದ ಸ್ಟ್ರಿಂಗ್ ಕ್ವಾರ್ಟೆಟ್ ಕ್ರೋನೋಸ್ ಕ್ವಾರ್ಟೆಟ್, ಆರ್ ಡಿ ಬರ್ಮನ್ ಸಂಕಲನಗಳ ಮರು ಧ್ವನಿ ಮುದ್ರಣವನ್ನು ಮಾಡಿತ್ತು, ಅವುಗಳೆಂದರೆ ''ಚುರಾ ಲಿಯಾ'', ''ಪಿಯಾ ತು'', ''ಮೇರಾ ಕುಚ್ ಸಾಮಾನ್'' ಇತ್ಯಾದಿ ಮತ್ತು ಇವುಗಳನ್ನು ಹಾಡುವ ಅವಕಾಶವನ್ನು ಆಶಾರವರಿಗೆ ನೀಡಲಾಗಿತ್ತು. ಅವರ ವಯಸ್ಸನ್ನೂ ಲೆಕ್ಕಿಸದೆ (ಅವರು ೭೦ನ್ನು ದಾಟಿದ್ದರು), ಅವರು ದಿನಕ್ಕೆ ಮೂರರಿಂದ ನಾಲ್ಕು ಹಾಡುಗಳ ಧ್ವನಿ ಮುದ್ರಣ ಮಾಡುವುದರ ಮೂಲಕ, ಕ್ವಾರ್ಟೆಟ್ ಸದಸ್ಯರನ್ನು ಆಶ್ಚರ್ಯಗೊಳಿಸಿದ್ದರು. ಆಗಸ್ಟ್ ೨೩, ೨೦೦೫ರಂದು, ''ಯು ಹ್ಯಾವ್ ಸ್ಟೋಲೆನ್ ಮೈ ಹಾರ್ಟ್ - ಸಾಂಗ್ಸ್ ಫ್ರಮ್ ಆರ್ ಡಿ ಬರ್ಮನ್’ಸ್ [[ಬಾಲಿವುಡ್|ಬಾಲಿವುಡ್]]'' ಯುಎಸ್ನಲ್ಲಿ ಬಿಡುಗಡೆಯಾಗಿತ್ತು, ಈ ಆಲ್ಬಂ "ಉತ್ತಮ ಸಮಕಾಲೀನ ಪ್ರಪಂಚ ಸಂಗೀತ ಆಲ್ಬಂ"ಗಳ ಶ್ರೇಣಿಯಲ್ಲಿ ೨೦೦೬ರ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಮುಂಚೆ, ೧೯೯೦ರ ದಶಕದಲ್ಲಿ, ಕ್ರೋನೋಸ್ ಕ್ವಾರ್ಟೆಟ್ನ ಡೇವಿಡ್ ಹರಿಂಗ್ಟನ್ರನ್ನು ಒಬ್ಬ ಸ್ನೇಹಿತ ''ಆಜ್ ಕಿ ರಾತ್'' ಹಾಡಿನೊಂದಿಗೆ ಪರಿಚಯಿಸಿದ್ದರು. ಹರಿಂಗ್ಟನ್ ತನ್ನ ಗಾಯನದಿಂದ ವಶೀಕರಿಸಿದ್ದರು, ಮತ್ತು ಹಾಡನ್ನು ''ಕ್ರೋನೋಸ್ ಕರಾವನ್'' ಆಲ್ಬಂನಲ್ಲಿ ಸೇರಿಸಲಾಗಿತ್ತು.
ಹಾಗು ೨೦೦೫ರಲ್ಲಿ, ದಿ ಬ್ಲ್ಯಾಕ್ ಐಡ್ ಫೀಸ್ ತಮ್ಮ ಜನಪ್ರಿಯ "ಡೋಂಟ್ ಪಂಕ್ ವಿತ್ ಮೈ ಹಾರ್ಟ್"ನಲ್ಲಿ ಅವರ "ಏ ನೌಜವಾನ್ ಸಬ್ ಕುಚ್ ಯಹಾ" (''ಅಪರಾದ್'', ೧೯೭೨) ಮತ್ತು "ಹೇ ಮೇರಾ ದಿಲ್ ಪ್ಯಾರ್ ಕಾ ದಿವಾನ" (''ಡಾನ್'', ೧೯೭೮) ಹಾಡುಗಳ ನಮೂನೆಯನ್ನು ಹೊಂದಿದ್ದರು. ೨೦೦೬ರ ಕೊನೆಯಲ್ಲಿ, ಆಶಾ ಆಸ್ಟ್ರೇಲಿಯಾದ ಟೆಸ್ಟ್ ಕ್ರಿಕೆಟ್ ಸ್ಟಾರ್, [[ಬ್ರೆಟ್ ಲೀ|ಬ್ರೆತ್ ಲೀ]]ರ ಜೊತೆ ಕಾರ್ಯನಿರ್ವಹಿಸಿದ್ದರು. ಏಕ ವ್ಯಕ್ತಿ ಪ್ರದರ್ಶನ, ಯು ಆರ್ ದಿ ಫರ್ ಮಿ ಚಾರ್ಟ್ಸ್ನಲ್ಲಿ ೪ನೇ ಸ್ಥಾನದ ಪ್ರಥಮ ಪ್ರವೇಶವನ್ನು ಮಾಡಿ ನಂತರ ಎತ್ತರದ ೨ನೆಯ ಸ್ಥಾನವನ್ನು ತಲುಪಿತ್ತು.
೨೦೦೬ರಲ್ಲಿ ಆಶಾ [[ಪಾಕಿಸ್ತಾನ|ಪಾಕಿಸ್ತಾನಿ]] ಚಿತ್ರ ''ಮೆ ಏಕ್ ದಿನ್ ಲೌಟ್ ಕೇ ಆವೂಂಗಾ'' ಧ್ವನಿಸುರುಳಿಗಾಗಿ, ಪಾಕಿಸ್ತಾನದ ಪಾಪ್ ಗಾಯಕ ಜಾವೆದ್ ಅಹಮದ್ ಜೊತೆಯಲ್ಲಿ ''ದಿಲ್ ಕೆ ತಾರ್ ಬಜೆ'' ಹಾಡಿನ ಧ್ವನಿ ಮುದ್ರಣವನ್ನು ಮಾಡಿದ್ದರು. ಈ ಹಾಡನ್ನು ಚಲನಚಿತ್ರ ಪ್ರಚಾರ ಅಭಿಯಾನದ ಭಾಗವಾಗಿ ಪ್ರಸಾರಮಾಡಲಾಗಿತ್ತು ಮತ್ತು ಇದು ಟಾಪ್ ಮ್ಯೂಸಿಕ್ ಚಾರ್ಟ್ಸ್ನ ವೈಶಿಷ್ಟ್ಯತೆಯೊಂದಿಗೆ ಅತ್ಯಂತ ಜನಪ್ರಿಯಗೊಂಡಿತ್ತು.
==ಕನ್ನಡದೊಂದಿಗಿನ ನಂಟು==
ಆಶಾ ಕನ್ನಡದಲ್ಲಿ ಮೊದಲು ಹಾಡಿದ ಹಾಡು ''"ಯಾಕೋ ಏನೋ ಸೆರಗು.."'' ಎಂಬ, 1967ರ ''[[ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ]]'' ಚಿತ್ರದ್ದು. ಈ ಚಿತ್ರದ ಸಂಗೀತ ನಿರ್ದೇಶಕರಾದ ಲಕ್ಷ್ಮಣ್ ಬರ್ಲೇಕರ್ ಅವರು ಇದೇ ಚಿತ್ರದಲ್ಲಿ ಲತಾ, ಉಷಾ ಮಂಗೇಶ್ಕರ್ ಅವರಿಂದಲೂ ಹಾಡಿಸಿದ್ದರು.
[[ವೈಜಯಂತಿಮಾಲಾ]] ಅವರ ಮೊದಲ ಕನ್ನಡ ಚಿತ್ರವಾಗಿದ್ದ ''"ಆಶಾ ನಿರಾಶಾ"'' ಚಿತ್ರದಲ್ಲೂ ಆಶಾ ಹಾಡಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರ ಬಿಡುಗೆಡೆಯಾಗಲಿಲ್ಲ<ref>{{Cite web|url=https://bangaloremirror.indiatimes.com/entertainment/south-masala/for-the-record/articleshow/21929922.cms|title=ಆಶಾ ಕನ್ನಡ ಹಾಡುಗಳು|publisher=Bangalore Mirror.com}}</ref>
ಇದಾದ ಬಳಿಕ ''[[ದೂರದ ಬೆಟ್ಟ]]'' ಚಿತ್ರದಲ್ಲಿ [[ಜಿ.ಕೆ.ವೆಂಕಟೇಶ್]] ಅವರ ಸ್ವರಸಂಯೋಜನೆಯಲ್ಲಿ ''"ಸವಾಲು ಹಾಕಿ ಸೋಲಿಸಿ ಎಲ್ಲರ.."'' ಎಂಬ ಹಾಡನ್ನು ಹಾಡಿದ್ದಾರೆ.
ಅದಾದ ಮೇಲೆ ಆಶಾ ಮತ್ತೆ ಹಾಡಿದ್ದು 2010ರ ''ಮತ್ತೆ ಮುಂಗಾರು'' ಚಿತ್ರದ ''"ಹೇಳದೆ ಕಾರಣ ಹೋದೆಯಾ"'' ಎಂಬ, ದುಃಖ ತುಂಬಿದ ಹಾಡು.
==ವೈಯಕ್ತಿಕ ಜೀವನ==
ಆಶಾರ ಮನೆಯು ದಕ್ಷಿಣ [[ಮುಂಬಯಿ]] ಪ್ರದೇಶದಲ್ಲಿನ ಪೆದ್ದರ್ ರಸ್ತೆರಲ್ಲಿನ ಪ್ರಭುಕುಂಜ್ ಅಪಾರ್ಟ್ಮೆಂಟ್ನಲ್ಲಿದೆ. ಅವರು ಮೂವರು ಮಕ್ಕಳನ್ನು ಮತ್ತು ಐದು ಜನ ಮಮ್ಮೊಕ್ಕಳನ್ನು ಹೊಂದಿದ್ದಾರೆ. ಹೇಮಂತ್ ಭೋಂಸ್ಲೆ ಅವರ ಹಿರಿಯ ಮಗ(ಹೇಮಂತ್ ಕುಮಾರ್ ಎಂದು ಹೆಸರಿಡಲಾಗಿದೆ), ಅವರು ತಮ್ಮ ಆರಂಭದ ಬಹುತೇಕ ವರ್ಷಗಳನ್ನು ವಿಮಾನ ಚಾಲಕನಾಗಿಯೇ ಕಳಿದಿದ್ದರು ಮತ್ತು ಸಂಗೀತ ನಿರ್ದೇಶಕನಾಗಿ ಸ್ವಲ್ಪ ಮಟ್ಟಿನ ವೃತ್ತಿ ಜೀವನವನ್ನು ಪಡೆಯಲು ಆ ಹುದ್ದೆಯನ್ನು ತೊರೆದಿದ್ದರು. ಹೇಮಂತ್ಗಿಂತಲೂ ಚಿಕ್ಕವಳಾದ ಆಶಾರ ಮಗಳು ವರ್ಷ, ''ದಿ ಸಂಡೇ ಅಬ್ಸೆರ್ವೆರ್'' ಮತ್ತು ''ರೆಡಿಫ್'' ಗಾಗಿ ಲೆಖಕಿಯಾಗಿ ಕಾರ್ಯನಿರ್ವಹಿಸಿದ್ದರು. ಕಿರಿಯ ಮಗ ಆನಂದ್ ಭೋಂಸ್ಲೆ, ಅವರು ವ್ಯವಹಾರ ಮತ್ತು ಚಲನಚಿತ್ರ ನಿರ್ದೇಶನವನ್ನು ಅಭ್ಯಾಸಿಸಿದ್ದರು. ಅವರು ಆಶಾರ ವೃತ್ತಿ ಜೀವನದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೊಮ್ಮಗ, ಚೈತನ್ಯ (ಚಿಂಟು) ಭೋಂಸ್ಲೆ (ಹೇಮಂತ್ ಅವರ ಮಗ) ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾನೆ, ಯಶಸ್ವೀ ಬಾಯ್ ಬ್ಯಾಂಡ್, "ಬ್ಯಾಂಡ್ ಆಫ್ ಬಾಯ್ಸ್"ನ ಸದಸ್ಯನಾಗಿದ್ದಾನೆ. ಅವರ ಸಹೋದರಿಯರಾದ [[ಲತಾ ಮಂಗೇಶ್ಕರ್|ಲತಾ]] ಹಾಗೂ ಉಶಾ ಮಂಗೇಶ್ಕರ್ ಹಿನ್ನೆಲೆ ಸಂಗೀತಕಾರರಾಗಿದ್ದಾರೆ. ಇನ್ನೊಬ್ಬ ಸಹೋದರಿ ಮೀನಾ ಮಂಗೇಶ್ಕರ್ ಹಾಗೂ ಸಹೋದರ ಹೃದಯನಾಥ ಮಂಗೇಶ್ಕರ್ ಅವರು ಸಂಗೀತ ನಿರ್ದೇಶಕರಾಗಿದ್ದಾರೆ.
ಆಶಾ ಅವರು ಒಳ್ಳೆಯ ಪಾಕಶಾಸ್ತ್ರಜ್ಞೆಯಾಗಿದ್ದರು ಹಾಗೂ ತಮ್ಮ ಪ್ರೀತಿಯ ಗಂಡನಿಗಾಗಿ ತಾವೇ ಅಡುಗೆ ಮಾಡುತ್ತಿದ್ದರು. ಬಾಲಿವುಡ್ನ ಪ್ರಮುಖರು ಸದಾ ಆಕೆಯ ಬಳಿ ''ಕಡಾಯಿ ಘೋಸ್ಟ್'' ಹಾಗೂ ''ಬಿರಿಯಾನಿ'' ಗಾಗಿ ಬೇಡಿಕೆ ಇಡುತ್ತಿದ್ದರು. ಕೇಳಿದವರನ್ನು ಹೆಚ್ಚಾಗಿ ನಿರಾಶೆ ಮಾಡುತ್ತಿರಲಿಲ್ಲ, ಅವರು ತಯಾರಿಸುವ ''ಪಾಯಾ ಕರಿ'', ''[[ಗೋವ|ಗೋವಾ]]ದ ಫಿಶ್ ಕರಿ'' ಹಾಗೂ ''[[ತೊವ್ವೆ|ದಾಲ್]]'' ಗಳು ಬಾಲಿವುಡ್ನ ಕಪೂರ್ ಕುಟುಂಬದಲ್ಲಿ ಜನಪ್ರಿಯವಾಗಿದ್ದವು. ಒಂದು ಬಾರಿ ''ಟೈಮ್ಸ್ ಆಫ್ ಇಂಡಿಯಾ'' ದ ಒಂದು ಸಂದರ್ಶನದಲ್ಲಿ, ಅವರು ಸಂಗೀತಗಾರ್ತಿಯ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳದೆ ಇದ್ದರೆ, ಬೇರೆ ಏನನ್ನು ಆಯ್ಕೆ ಮಾಡುತ್ತಿದ್ದರೆಂದು ಕೇಳಲಾಗಿತ್ತು, ಅದಕ್ಕೆ ಆಕೆಯ ಉತ್ತರ " ನಾನು ಅಡುಗೆಯವಳಾಗುತ್ತಿದ್ದೆ. ನಾಲ್ಕು ಮನೆಗಳಲ್ಲಿ ಅಡುಗೆ ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದೆ.
ಆಶಾ ಅವರು ಯಶಸ್ವೀ ಹೋಟೆಲ್ ಉದ್ಯಮಿಯಾಗಿದ್ದಾರೆ ಹಾಗೂ ಆಶಾಸ್ ಎಂಬ ಹೆಸರಿನ ಹೋಟೆಲುಗಳನ್ನು ದುಬೈ ಹಾಗೂ [[ಕುವೈತ್|ಕುವೈತ್]]ಗಳಲ್ಲಿ ನಡೆಸುತ್ತಿದ್ದಾರೆ. ಆಶಾಸ್ನಲ್ಲಿ ಸಾಂಪ್ರದಾಯಿಕ ವಾಯುವ್ಯ ಭಾರತೀಯ ಅಡುಗೆಗಳು ದೊರೆಯುತ್ತವೆ. ಆಶಾಸ್ ಹೋಟೆಲ್ ದುಬೈನ ವಫಿ ಸಿಟಿ ಡೆವಲಪ್ಮೆಂಟ್ನಲ್ಲಿ ಇದೆ, ಹಾಗೂ [[ಕುವೈತ್|ಕುವೈತ್]]ನ ಮೂರು ಹೋಟೆಲ್ಗಳು ದಿ ಅವೆನ್ಯೂಸ್ ಮಾಲ್, ಮರೀನಾ ಮಾಲ್ ಹಾಗೂ ಸ್ಪೂನ್ಸ್ ಕಾಂಪ್ಲೆಕ್ಸ್ನಲ್ಲಿ ಮೂರನೆಯ ಹೋಟೆಲ್ ಪ್ರಾರಂಭವಾಗಿದೆ. ಅವರ ಇತರೆ ಹೋಟೆಲ್ಲುಗಳು [[ಅಬು ಧಾಬಿ]]ಯ ಖಾಲ್ದಿಯಾ ಮಾಲ್ನಲ್ಲಿ, ದೋಹಾದ ವಿಲೇಜಿಯೊ ಹಾಗೂ ಬೆಹ್ರೇನ್ನ ಸಿಟಿ ಸೆಂಟರ್ ಮಾಲ್ನಲ್ಲಿ ಇವೆ, ಮುಂಬರುವ ದಿನಗಳಲ್ಲಿ ದುಬೈನ ಮಾಲ್ ಎಮಿರೇಟ್ಸ್ ಹಾಗೂ ಈಜಿಪ್ಟ್ನ ಕೈರೊದಲ್ಲಿ ಪ್ರಾರಂಭಿಸುವ ಯೋಜನೆ ಇದೆ. ಆಶಾ ಭೋಸ್ಲೆಯವರು ಈ ವ್ಯವಹಾರದಲ್ಲಿ ೨೦% ಪಾಲನ್ನು ಹೊಂದಿದ್ದಾರೆ. ಆಶಾ ಅವರು ದಿನನಿತ್ಯದ ವ್ಯವಹಾರಗಳನ್ನು ನೋಡಿಕೊಳ್ಳುವುದಿಲ್ಲ, ಹೋಟೆಲ್ಲುಗಳ ನಿರ್ವಹಣೆಯು ವಫಿ ಗ್ರೂಪ್ನಿಂದ ನಡೆಸಲ್ಪಡುತ್ತಿದೆ. ಅವರು ಅಡುಗೆ ಕೋಣೆಯ ಹಾಗೂ ಅಲಂಕಾರಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ವೈಯಕ್ತಿಕವಾಗಿ ಅವರೇ ಆರು ತಿಂಗಳ ಕಾಲ ಛೆಫ್ ತರಬೇತಿಯನ್ನು ಪಡೆದಿದ್ದಾರೆ. ಡಿಸೆಂಬರ್ ೨೦೦೪ರ ಮೆನು ಮ್ಯಾಗಝೀನ್ ವರದಿಯ ಪ್ರಕಾರ,<ref>{{cite web
| url=http://www.menumagazine.co.uk/archive/dec04/asha_bhosle.html
| title=Yet Another 'First' National Chain Planned
| publisher=Menu magazine
| accessdate=2005-11-11
|archiveurl = https://web.archive.org/web/20051023164800/http://www.menumagazine.co.uk/archive/dec04/asha_bhosle.html <!-- Bot retrieved archive --> |archivedate = 2005-10-23}}</ref> ಹ್ಯಾರಿ ರಾಮ್ಸ್ದೆನ್ನ (ಮೀನು ಹಾಗೂ ಚಿಪ್ಸ್ಗಳ ಶ್ರೇಣಿ)ಯ ಮಾಜಿ ಮುಖ್ಯಸ್ಥ ರಷೆಲ್ ಸ್ಕಾಟ್ ಅವರು ಮುಂಬರುವ ಐದು ವರ್ಷಗಳಲ್ಲಿ ಯುಕೆಯಲ್ಲಿ ಆಶಾಸ್ ಬ್ರ್ಯಾಂಡ್ನ ೪೦ ಹೋಟೆಲುಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದಾರೆ.
ಆಶಾಸ್ನ ಶ್ರೇಣಿಯ, ಆಶಾತಾಯಿ ಯುಕೆಯ ಬರ್ಮಿಂಗ್ಹ್ಯಾಮ್ನಲ್ಲಿ ಹೊಸ ಹೋಟೆಲ್ಲನ್ನು ಇತ್ತೀಚೆಗೆ ಪ್ರಾರಂಭಿಸಲಾಯಿತು.
ಆಶಾ ಅವರು ಇಷ್ಟಪಡುವ ಫ್ಯಾಷನ್ ಎಂದರೆ ಹೊಳೆಯುವ ಕಸೂತಿ ಹೊಂದಿರುವ ಬಿಳಿ ಸೀರೆ, ಮುತ್ತು ಹಾಗೂ [[ವಜ್ರ]]ಗಳನ್ನು ಹೊಂದಿರುವ ಕುತ್ತಿಗೆ ಆಭರಣಗಳು. ಕ್ರೋನೊಸ್ ಕ್ವಾರ್ಟೆಟ್ನ ಹ್ಯಾರಿಂಗ್ಟನ್ ಅವರು "ಮೊದಲ ಬಾರಿಗೆ ನಾನು ಆಶಾ''ಜಿ'' ಯವರನ್ನು ಭೇಟಿ ಮಾಡಿದಾಗ ಅವರು ಸುಂದರವಾದ [[ಸೀರೆ]]ಯನ್ನು ಉಟ್ಟು ವಜ್ರಾಭರಣ ದರಿಸಿದ್ದರು, ಹಾಗೂ ರಾಣಿಯ ಹಾಗೆ ಕಾಣಿಸುತ್ತಿದ್ದರು. ಹಾಗೇ ನಾನು ಕೆಳಗೆ ನೋಡಿದಾಗ ಕಾಲಿನಲ್ಲಿ ಟೆನ್ನಿಸ್ ಶೂಗಳನ್ನು ಧರಿಸಿದ್ದರು! ನಾನು ಈ ಹೆಂಗಸನ್ನು ಇಷ್ಟಪಡುವೆನೆಂದು ಕೊಂಡೆ." ಎಂದು ಹೇಳಿದ್ದರು
ಆಶಾ ಅವರು ಒಳ್ಳೆಯ ಅಣಕು ಕಲಾವಿದರು ಕೂಡಾ ಆಗಿದ್ದಾರೆ. ಏಪ್ರಿಲ್ ೨೨, ೨೦೦೪ರಲ್ಲಿ ದುಬೈನ ವಿಶ್ವ ವಾಣಿಜ್ಯ ಕಟ್ಟಡದಲ್ಲಿ ನಡೆದ ಒಂದು ಸಮಾರಂಭದಲ್ಲಿ, ಅವರು ''ಕಭಿ ತೊ ನಝರ್ ಮಿಲಾವೊ'' ಹಾಡಿನಲ್ಲಿ ನೂರ್ ಜಹಾನ್, ಲತಾ ಮಂಗೇಶ್ಕರ್ ಹಾಗೂ ಗುಲಾಮ್ ಅಲಿಯವರ ಧ್ವನಿಗಳನ್ನು ಅಣಕ ಮಾಡಿ ಹಾಡಿದರು.
ಇತ್ತೀಚಿನ ದಿನಗಳಲ್ಲಿ, ಅವರ ಹಾಡುಗಾರಿಕೆ ಮತ್ತು ಹೋಟೆಲ್ಲಿನ ನಡುವೆ ತಮ್ಮ ಜೀವನ ಚರಿತ್ರೆಯ ವಿಷಯದಲ್ಲೂ ಆಕೆ ಕಾರ್ಯನಿರ್ವಹಿಸುತ್ತಿದ್ದಾರೆ.
===ಲತಾ ಮಂಗೇಶ್ಕರ್ ಅವರೊಂದಿಗೆ ಸ್ಪರ್ಧೆ===
ಆಶಾರ ಒಡಹುಟ್ಟಿದ ಸ್ಪರ್ಧಿ ಸಹೋದರಿ [[ಲತಾ ಮಂಗೇಶ್ಕರ್]] ಅವರು ಈ ಸ್ಪರ್ಧೆಯ ಬಗ್ಗೆ ಹೇಳುವುದೆಲ್ಲಾ ಬರೀ ಕಥೆಗಳು ಎಂದು ಯಾವಾಗಲೂ ಒತ್ತಿ ಹೇಳುತ್ತಿರುತ್ತಾರೆ.<ref name="Times_Life_Jul_2005" /> ಚಿಕ್ಕ ಮಕ್ಕಳಿರುವ ಹಾಗೇ ಅವರು ಬಹಳ ಆತ್ಮೀಯರು. ಲತಾ ಅವರು ಆಶಾ ಅವರನ್ನು ಮಗುವಿನ ಹಾಗೆ ಎತ್ತಿಕೊಳ್ಳುತ್ತಿದ್ದರು. ಅವರಿಬ್ಬರೂ ಚಿಕ್ಕವರಿರುವಾಗ ಬಿಟ್ಟಿರುತ್ತಿರಲಿಲ್ಲ, ಲತಾ ಶಾಲೆಗೆ ಹೋಗುವಾಗ ಆಶಾರನ್ನು ಜೊತೆಗೇ ಕರೆದು ಕೊಂಡು ಹೋಗುತ್ತಿದ್ದರು, ಶಿಕ್ಷಕಿಯು ಒಂದೇ ಶುಲ್ಕದಲ್ಲಿ ಇಬ್ಬರು ಶಾಲೆಗೆ ಬರಲು ಸಾಧ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಲತಾ ಅವರು ಆಶಾರನ್ನು ಬಿಟ್ಟು ಶಾಲೆಗೆ ಬರಲು ಇಷ್ಟವಿಲ್ಲದೆ ಓದನ್ನೇ ಬಿಟ್ಟುಬಿಟ್ಟರು.<ref name="ref_Kavita_Chhibber">
{{cite web
| author=Chhibber, Kavita
| url=http://www.kavitachhibber.com/asha_bhosle.html
| title=Kavita Chhibber's interview with Asha Bhosle
| accessdate=2006-05-03
|archiveurl = https://web.archive.org/web/20051227124536/http://www.kavitachhibber.com/asha_bhosle.html <!-- Bot retrieved archive --> |archivedate = 2005-12-27}}</ref>
ಆಶಾ ಅವರು ತಮ್ಮ ಪ್ರೇಮಿಯ ಜೊತೆ ಪಲಾಯನ ಮಾಡಿ, ತಮ್ಮ ಮೇಲೆ ಸಂಸಾರದ ಹೊರೆ ಹೊರಿಸಿ ತಾವೊಬ್ಬರೇ ಸಂಸಾರಕ್ಕಾಗಿ ಹಾಡುವಂತೆ ಮಾಡಿದುದನ್ನು ಬೇಜವಾಬ್ದಾರಿಯುತ ವರ್ತನೆ ಎಂದು ಆಶಾ ಅಂದು ಕೊಂಡರು. ಇದು ಇಬ್ಬರನ್ನು ಚಿಂತೆಗೀಡುಮಾಡಿತು. ಆಶಾ ಅವರು ಒಂದು ಸಂದರ್ಶನದಲ್ಲಿ ತಾವೇ ಒಪ್ಪಿಕೊಂಡಿದ್ದಾರೆ<ref name="ref_Kavita_Chhibber" /> — "ನನ್ನದು ಪ್ರೇಮ ವಿವಾಹ ಹಾಗೂ ಲತಾ ''ದೀದಿ'' (ಅಕ್ಕ) ಬಹಳಷ್ಟು ದಿನ ನನ್ನ ಜೊತೆ ಮಾತನಾಡಲಿಲ್ಲ. ನಮ್ಮ ಒಪ್ಪಂದವನ್ನು ಆಕೆ ಒಪ್ಪಿಕೊಳ್ಳಲಿಲ್ಲ." ಆ ಸಮಯದಲ್ಲಿ ಅವರ ಸಂಬಂಧವು ಬಹಳಷ್ಟು ವ್ಯತಿರಿಕ್ತವಾಗಿದ್ದು, ಬಹಳ ಸಮಯದವರೆಗೆ ಅವರಿಬ್ಬರ ನಡುವೆ ಮಾತುಕತೆ ಇರಲಿಲ್ಲ.
ಚಿತ್ರರಂಗದಲ್ಲಿ ಕೆಲಸ ಮಾಡುವ ಮೊದಲ ದಿನಗಳಲ್ಲಿ ತನ್ನ ಅಕ್ಕನಿಗೆ ತಡೆಯಾಗುವಂತೆ ಆಶಾ ಅವರು ನಡೆದುಕೊಳ್ಳುತ್ತಿದ್ದರು. ಕೆಲವರು ಹೇಳುವಂತೆ ಆಶಾ ಹಾಗೂ [[ಓಂಕಾರ ಪ್ರಸಾದ್ ನಯ್ಯರ್|ಒ. ಪಿ. ನಯ್ಯರ್]] ಅವರ ಸಂಬಂಧವನ್ನು ಹಿಯಾಳಿಸಿ ಆಶಾ ಅವರು ಮಾತನಾಡಿದ್ದರಂತೆ. ಈ ಇಬ್ಬರು ಸಹೋದರಿಯರ ಭಿನ್ನಾಭಿಪ್ರಾಯಗಳ ಮಧ್ಯೆ ಒ ಪಿ ನಯ್ಯರ್ ಅವರು ಎಂದಿಗೂ ಲತಾ ಅವರೊಂದಿಗೆ ಕೆಲಸ ಮಾಡದಂತೆ ನಿರ್ಧರಿಸಿದರು. ಒ.ಪಿ. ನಯ್ಯರ್ ಅವರು ಒಮ್ಮೆ ಹೀಗೆ ಹೇಳಿದ್ದಾರೆ — "ಆಶಾ ಹಾಗೂ ಲತಾ ಮುಂಬಯಿನ ಪೆಡ್ಡರ್ ರಸ್ತೆಯ ಎದುರು ಬದುರು ಮನೆಗಳಲ್ಲಿ ವಾಸಿಸುತ್ತಿದ್ದು, ಒಬ್ಬಳೇ ಮನೆಕೆಲಸದವಳನ್ನು ಹೊಂದಿದ್ದಾರೆ. ಮನೆ ಕೆಲಸದಾಕೆಯು ಅಕ್ಕ ಲತಾ ಅವರು ಏನೋ ಆಶ್ಚರ್ಯಕರವಾಗಿರುವ ಒಂದು ಹಾಡನ್ನು ಧ್ವನಿಮುದ್ರಿಸಿ ತಂಗಿಯನ್ನು ಕೆಳಮಟ್ಟಕ್ಕೆ ತರುತ್ತಿದ್ದಾರೆಂದು ಆಶಾ ಅವರ ಬಳಿ ಹೇಳಿದ್ದಾಳೆ. ಆ ರೀತಿಯಲ್ಲಿ ಲತಾ ಭಯವು ತಂಗಿಯನ್ನು ಕಾಡುತ್ತಿತ್ತು, ಆಕೆಯ ಸ್ವತಃ ಧ್ವನಿ ಹಾಗೂ ವಿಶೇಷತೆಯನ್ನು ಎತ್ತಿಹಿಡಿದು ಪ್ರೋತ್ಸಾಹಿಸುವಲ್ಲಿ ನನಗೆ ತಿಂಗಳುಗಳೇ ಬೇಕಾದವು."<ref name="Girija" /> ಆಶಾ ಅವರೇ ಹೇಳುವಂತೆ ಲತಾಗಿಂತ ಭಿನ್ನವಾಗಿ ಹಾಡುವುದನ್ನು ಕಲಿಯಲು, ತಮ್ಮದೇ ಶೈಲಿಯಲ್ಲಿ ಛಾಪು ಮೂಡಿಸಲು ವರ್ಷಗಟ್ಟಲೆ ಕೆಲಸ ಮಾಡಿದ್ದಾರೆ, ತನ್ನದೇ ನೆಲೆಯನ್ನು ಕಂಡುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.<ref name="ref_Kavita_Chhibber" />
ಆಶಾ ಹಾಗೂ ಲತಾ ಅವರು ಹಲವಾರು ಹಾಡುಗಳನ್ನು ಒಟ್ಟಿಗೆ ಹಾಡಿದ್ದಾರೆ. ಅವರು ಒಟ್ಟಿಗೆ ಮೊದಲಬಾರಿಗೆ ಹಾಡಿದ್ದು ''ದಾಮನ್'' (೧೯೫೧) ಚಿತ್ರದಲ್ಲಿ.<ref name="Girija" /> ಇಬ್ಬರೂ ಹಾಡಿರುವ ಇನ್ನೂ ಕೆಲವು ಹಾಡುಗಳೆಂದರೆ ''ಮಾನ್ ಭಾವನ್ ಕೆ ಘರ್ ಆಯೆ'' (''ಚೋರಿ ಚೋರಿ'', ೧೯೫೬), ''ಸಖಿ ರಿ ಸನ್ ಬೋಲೆ ಪಪಿಹಾ ಉಸ್ ಪಾರ್'' (''ಮಿಸ್ ಮೇರಿ'', ೧೯೫೭), ''ಓ ಚಾಂದ್ ಜಹಾನ್ ವೋ ಜಾಯೆ'' (''ಶಾರದಾ'', ೧೯೫೭), ''ಮೇರೆ ಮೆಹಬೂಬ್ ಮೈ ಕ್ಯಾ ನಹಿ'' (''ಮೇರೆ ಮೆಹಬೂಬ್'', ೧೯೬೩), ''ಐ ಕಾಶ್ ಕಿಸಿ ದೀವಾನೆ ಕೊ'' (''ಆಯೆ ದಿನ್ ಬಾಹರ್ ಕೆ'', ೧೯೬೬), ''ಮೈ ಚಲೀ ಮೈ ಚಲೀ'' (''ಪಡೋಸನ್'', ೧೯೬೮), ''ಛಾಪ್ ತಿಲಕ್ ಸಬ್'' (''ಮೈ ತುಲ್ಸೀ ತೆರೆ ಆಂಗನ್ ಮೆ'', ೧೯೭೮), ಹಾಗೂ ''ಮಾ ಕ್ಯೂಂ ಬೆಹಕಾ'' (''ಉತ್ಸವ್'', ೧೯೮೪). ಹಾಡುವಾಗ ಆಶಾ ಅವರು ತಮ್ಮ ಎಡಗೈಯಲ್ಲಿ ಪುಸ್ತಕವನ್ನು ಹಿಡಿದು ಹಾಡುತ್ತಿದ್ದರೆ ಲತಾ ಅವರು ತಮ್ಮ ಬಲಗೈಯಲ್ಲಿ ಪುಸ್ತಕವನ್ನು ಹಿಡಿದಿರುತ್ತಿದ್ದರು. ಇದರರ್ಥ ಲತಾ ಅವರು ಯಾವಾಗಲೂ ಆಶಾ ಅವರ ಮುಖ ನೋಡದೆ ಒಬ್ಬರಿಗೊಬ್ಬರು ದೂರವೇ ಇರುವುದನ್ನು ನಿರೀಕ್ಷಿಸುತ್ತಿದ್ದರು.<ref name="ref_Kavita_Chhibber" />
''ಸಾಝ್'' ಚಲನಚಿತ್ರದಲ್ಲಿ ಲತಾ ಮತ್ತು ಆಶಾರ ಸ್ಪರ್ಧೆಯನ್ನು ತೋರಿಸಲಾಗಿದೆ.<ref>ಅರ್ಚನಾ ಮಸಿಹ್. [http://im.rediff.com/entertai/may/15saaz.htm ವುಮೆನ್ ಆಫ್ ಸಬ್ಸ್ಟ್ಯಾನ್ಸ್]</ref> ಚಲನಚಿತ್ರದ ಬಗ್ಗೆ ಆಶಾ ಹೀಗೆ ಹೇಳಿದ್ದಾರೆ — "ಎರಡು ಹೆಂಗಸರ ಉದ್ದ ಜಡೆಗಳೊಂದಿಗೆ, ಕೆಲವು ಘಟನೆಗಳನ್ನು ಹಾಗೂ ಅವನ್ನು ೩ ಘಂಟೆಗಳವರೆಗೆ ಎಳೆದು ಚಿತ್ರೀಕರಿಸುವುದು ಸಮಯವನ್ನು ಹಾಳು ಮಾಡಿದ ಹಾಗೆ."<ref name="ref_Kavita_Chhibber" /> ಇತ್ತೀಚೆಗಿನ ಕೆಲವು ವರ್ಷಗಳಲ್ಲಿ, ಆಶಾ ಹಾಗೂ ಲತಾ ಸಾರ್ವಜನಿಕ ಸಮಾರಂಭಗಳಲ್ಲಿ ಒಟ್ಟೊಟ್ಟಿಗೆ ಸಂತೋಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ''[[ದಿ ಟೈಮ್ಸ್ ಆಫ್ ಇಂಡಿಯಾ|ದಿ ಟೈಮ್ಸ್ ಆಫ್ ಇಂಡಿಯಾ]]'' ದೊಂದಿಗಿನ ಒಂದು ಸಂದರ್ಶನದಲ್ಲಿ, ಆಶಾ ಹೀಗೆ ಹೇಳಿದ್ದಾರೆ - "ನನಗೆ ನೆನಪಿದೆ ಚಲನಚಿತ್ರರಂಗದ ಹಲವರು ಅವರ ನಿಷ್ಠೆಯನ್ನು ತೋರಿಸಿಕೊಳ್ಳಲು ಅಕ್ಕನೊಂದಿಗೆ ಹೆಚ್ಚು ಮಾತನಾಡಿ ನನ್ನನ್ನು ದೂರ ಇಡುತ್ತಿದ್ದರು. ನಂತರದಲ್ಲಿ, ದೀದಿ (ಅಕ್ಕ) ಮತ್ತು ನಾನು ಆ ವಿಷಯವಾಗಿ ನಗುತ್ತಿದ್ದೆವು!"
==ಪ್ರಶಸ್ತಿಗಳು==
;ಫಿಲ್ಮ್ಫೇರ್ ಪ್ರಶಸ್ತಿಗಳು
ಆಶಾ ಭೋಂಸ್ಲೆಯವರು ೧೮ ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದು ಅದರಲ್ಲಿ ಏಳು ಬಾರಿ ಪ್ರಶಸ್ತಿ ಗಳಿಸಿದ್ದಾರೆ.<ref name="Awards to Asha">[http://www.asha-bhonsle.com/awards/ ಆಶಾ ಭೋಂಸ್ಲೆ ಪ್ರಶಸ್ತಿಗಳು] {{Webarchive|url=https://web.archive.org/web/20160106123803/http://www.asha-bhonsle.com/awards |date=2016-01-06 }}. Asha-Bhosle.com. ಅಕ್ಟೋಬರ್ ೧೮, ೨೦೦೭ರಲ್ಲಿ ಮರುಸಂಪಾದಿಸಲಾಗಿದೆ.</ref> ಅವರು ತಮ್ಮ ಮೊದಲ ಎರಡು ಪ್ರಶಸ್ತಿಗಳನ್ನು ೧೯೬೭ ಹಾಗೂ ೧೯೬೮ರಲ್ಲಿ ಪಡೆದುಕೊಂಡರು, ಆಗಿನ್ನೂ [[ಲತಾ ಮಂಗೇಶ್ಕರ್]] ಅವರು ಪ್ರಶಸ್ತಿಗಳನ್ನು ಸ್ವೀಕರಿಸುತ್ತಿದ್ದರು (೧೯೬೯ರ ನಂತರ ಮಂಗೇಶ್ಕರ್ ಅವರು ಹೊಸ ಪ್ರತಿಭೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಅವರ ಹೆಸರನ್ನು ನಾಮನಿರ್ದೇಶಿತಗೊಳ್ಳದಂತೆ ಮನವಿ ಮಾಡಿಕೊಂಡರು). ೧೯೭೯ರಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ, ಭೋಂಸ್ಲೆಯವರು ತಮ್ಮ ಅಕ್ಕನೊಂದಿಗೆ ಸ್ಪರ್ಧಿಸಿದರು ಹಾಗೂ ಆಕೆಯ ಹೆಸರನ್ನು ನಾಮನಿರ್ದೇಶನಕ್ಕೆ ಸೂಚಿಸಬಾರದೆಂದು ವಿನಂತಿಸಿಕೊಂಡರು. ಆದಾಗ್ಯೂ, ಭೋಂಸ್ಲೆಯವರು ಇಲ್ಲಿಯವರೆಗೆ ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ, ಅಲ್ಕಾ ಯಾಗ್ನಿಕ್ ಅವರ ಸ್ಪರ್ಧಿಯಾಗಿದ್ದಾರೆ. ನಂತರದಲ್ಲಿ ಅವರಿಗೆ ೧೯೯೬ರಲ್ಲಿ ''ರಂಗೀಲಾ'' ಚಿತ್ರಕ್ಕಾಗಿ ''ವಿಶೇಷ ಪ್ರಶಸ್ತಿ'' ಲಭಿಸಿತು, ಹಾಗೂ ೨೦೦೧ರಲ್ಲಿ ಜೀವಮಾನದ ಸಾಧನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಲಭಿಸಿತು. ಅವರು ಗಳಿಸಿದ ಫಿಲ್ಮ್ಫೇರ್ ಪ್ರಶಸ್ತಿಗಳು ಕೆಳಕಂಡಂತಿವೆ:
ಫಿಲ್ಮ್ಫೇರ್ನ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ:
*೧೯೬೮: "ಗರೀಬೋಂ ಕಿ ಸುನೋ" (''ದಸ್ ಲಾಕ್'', ೧೯೬೬)
*೧೯೬೯: "ಪರ್ದೇ ಮೇ ರೆಹನೆ ದೋ" (''ಶಿಕಾರ್'', ೧೯೬೮)
*೧೯೭೨: "ಪಿಯಾ ತೂ ಅಬ್ ತೊ ಆಜಾ" (''ಕಾರವಾನ್'', ೧೯೭೧)
*೧೯೭೩: "ದಮ್ ಮಾರೊ ದಮ್" (''ಹರೇ ರಾಮ ಹರೇ ಕೃಷ್ಣಾ'', ೧೯೭೨)
*೧೯೭೪: "ಹೋನೆ ಲಗೀ ಹೈ ರಾತ್" (''ನೈನಾ'', ೧೯೭೩)
*೧೯೭೫: "ಚೈನ್ ಸೆ ಹಮ್ಕೋ ಕಭೀ" (''ಪ್ರಾಣ್ ಜಾಯೇ ಪರ್ ವಚನ್ ನಾ ಜಾಯೆ'', ೧೯೭೪)
*೧೯೭೯: "ಯೇ ಮೇರಾ ದಿಲ್" (''ಡಾನ್'', ೧೯೭೮)
ಇತರೇ ಪ್ರಶಸ್ತಿಗಳು
*೧೯೯೬ - ವಿಶೇಷ ಪ್ರಶಸ್ತಿ (''ರಂಗೀಲಾ'', ೧೯೯೫)
*೨೦೦೮ - ಫಿಲಂಫೇರ್ ಲೈಫ್ಟೈಮ್ ಅಚೀವ್ಮೆಂಟ್ ಅವಾರ್ಡ್
;ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
ಆಶಾ ಅವರು ಎರಡು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ:
*೧೯೮೧: ''ದಿಲ್ ಚೀಝ್ ಕ್ಯಾ ಹೈ'' (''ಉಮ್ರಾವೊ ಜಾನ್'' )
*೧೯೮೬: ''ಮೇರಾ ಕುಚ್ ಸಮಾನ್'' (''ಇಜಾಝತ್'' )
;ಇತರೇ ಪ್ರಶಸ್ತಿಗಳು
ಆಶಾ ಅವರು ಇನ್ನೂ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ ಅವುಗಳಲ್ಲಿ ಕೆಲವು ಹೀಗಿವೆ:
*೧೯೮೭: ನೈಟಿಂಗೇಲ್ ಆಫ್ ಏಷಿಯಾ ಪ್ರಶಸ್ತಿ ([[ಭಾರತ|ಇಂಡೋ]]–[[ಪಾಕಿಸ್ತಾನ|ಪಾಕ್]] ಅಸೋಸಿಯೇಶನ್, [[ಯುನೈಟೆಡ್ ಕಿಂಗ್ಡಮ್|ಯುಕೆ]]) ಅವರಿಂದ.<ref name="Awards to Asha" />
*೧೯೮೯: ಲತಾ ಮಂಗೇಶ್ಕರ್ ಪ್ರಶಸ್ತಿ ([[ಮಧ್ಯ ಪ್ರದೇಶ]] ಸರ್ಕಾರ).<ref name="Awards to Asha" />
*೧೯೯೭: ಸ್ಕ್ರೀನ್ ವೀಡಿಯೋಕಾನ್ ಪ್ರಶಸ್ತಿ (''ಜಾನಂ ಸಮ್ಜಾ ಕರೋ'' ಆಲ್ಬಂಗಾಗಿ).<ref name="Awards to Asha" />
*೧೯೯೭: ಎಂಟಿವಿ ಪ್ರಶಸ್ತಿ (''ಜಾನಂ ಸಮ್ಜಾ ಕರೊ'' ಆಲ್ಬಂಗಾಗಿ).<ref name="Awards to Asha" />
*೧೯೯೭: ಚಾನಲ್ ವಿ ಪ್ರಶಸ್ತಿ (''ಜಾನಂ ಸಮ್ಜಾ ಕರೋ'' ಆಲ್ಬಂಗಾಗಿ).<ref name="Awards to Asha" />
*೧೯೯೮: ದಯಾವತಿ ಮೋದಿ ಪ್ರಶಸ್ತಿ.<ref>[http://portal.unesco.org/ci/photos/showphoto.php/photo/3770 ಅಬ್ದುಲ್ ವಹೀದ್ ಖಾನ್ ಅವರು ದಯಾವತಿ ಮೋದಿ ಪ್ರಶಸ್ತಿ ಸ್ವೀಕರಿಸಿದರು]. portal.unesco.org. ನವೆಂಬರ್ ೧೭, ೨೦೦೬. ಅಕ್ಟೋಬರ್ ೧೮, ೨೦೦೭ರಲ್ಲಿ ಮರುಸಂಪಾದಿಸಲಾಗಿದೆ.</ref>
*೧೯೯೯: ಲತಾ ಮಂಗೇಶ್ಕರ್ ಪ್ರಶಸ್ತಿ ([[ಮಹಾರಾಷ್ಟ್ರ]] ಸರ್ಕಾರ)
*೨೦೦೦: ಸಿಂಗರ್ ಆಫ್ ದಿ ಮಿಲೆನಿಯಂ (ದುಬೈ).
*೨೦೦೦: ಝೀ ಗೋಲ್ಡ್ ಬಾಲಿವುಡ್ ಅವಾರ್ಡ್ (''ತಕ್ಷಕ್'' ಚಿತ್ರದ''ಮುಝೆ ರಂಗ್ ದೆ'' ಹಾಡಿಗಾಗಿ).
*೨೦೦೧: ಎಂಟಿವಿ ಪ್ರಶಸ್ತಿ ( ''ಕಂಬಕ್ತ್ ಇಷ್ಕ್'' ಚಿತ್ರಕ್ಕಾಗಿ).
*೨೦೦೨: ಬಿಬಿಸಿ ಲೈಫ್ ಟೈಮ್ ಅಚೀವ್ಮೆಂಟ್ ಪ್ರಶಸ್ತಿ (ಯುಕೆಯ ಪ್ರಧಾನ ಮಂತ್ರಿ ಟೋನಿ ಬ್ಲೇರ್ ಅವರಿಂದ ಸ್ವೀಕರಿಸಿದ್ದು).
*೨೦೦೨: ಝೀ ಸಿನೆ ಅವಾರ್ಡ್ ಫಾರ್ ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ - ಗಾಯಕಿ (''ಲಗಾನ್'' ಚಿತ್ರದ ''ರಾಧಾ ಕೈಸೆ ನ ಜಲೆ'' ಹಾಡಿಗಾಗಿ).
*೨೦೦೨: ಝೀ ಸಿನಿ ಸ್ಪೆಷಲ್ ಅವಾರ್ಡ್ ಫಾರ್ ಹಾಲ್ ಆಫ್ ಫೇಮ್.
*೨೦೦೨: ಸ್ಕ್ರೀನ್ ವೀಡಿಯೋಕಾನ್ ಪ್ರಶಸ್ತಿ (''ಲಗಾನ್'' ಚಿತ್ರದ ''ರಾಧಾ ಕೈಸೇ ನ ಜಲೆ'' ಹಾಡಿಗಾಗಿ).
*೨೦೦೨: ಸ್ಯಾನ್ಸೂಯಿ ಮೂವೀ ಪ್ರಶಸ್ತಿ (''ಲಗಾನ್'' ಚಿತ್ರದ ''ರಾಧಾ ಕೈಸೆ ನ ಜಲೆ'' ಹಾಡಿಗಾಗಿ).
*೨೦೦೩: ಭಾರತೀಯ ಚಲನಚಿತ್ರಕ್ಕೆ ನೀಡಿರುವ ಅದ್ಭುತ ಕೊಡುಗೆಗಾಗಿ ಸ್ವರಾಲಯ ಯೇಸುದಾಸ್ ಪ್ರಶಸ್ತಿ.<ref name="Awards to Asha" />
*೨೦೦೪:ಫೆಡರೇಶನ್ ಆಫ್ ಇಂಡಿಯನ್ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯಿಂದ ''ಲಿವಿಂಗ್ ಲಿಜೆಂಡ್ ಪ್ರಶಸ್ತಿ''.<ref>ಭಯಾನಿ, ವಿರಾಲ್. [http://www.redhotcurry.com/entertainment/bollywood/march_2004/living_legends.htm ಬಚ್ಚನ್, ಹೇಮಾ ಅವರನ್ನು ಬದುಕಿರುವ ದಂತಕಥೆಗಳೆಂದು ಗೌರವಿಸಲಾಯಿತು] {{Webarchive|url=https://web.archive.org/web/20110928192435/http://www.redhotcurry.com/entertainment/bollywood/march_2004/living_legends.htm |date=2011-09-28 }}. redhotcurry.com. ಮಾರ್ಚ್ ೧೬, ೨೦೦೪ ಅಕ್ಟೋಬರ್ ೧೮, ೨೦೦೭ರಲ್ಲಿ ಮರುಸಂಪಾದಿಸಲಾಗಿದೆ.</ref>
*೨೦೦೫: ಎಂಟಿವಿ ಇಮ್ಮೀಸ್, ''ಆಜ್ ಜಾನೆ ಕಿ ಜಿದ್ ನಾ ಕರೋ'' ಗಾಗಿ ಅತ್ಯುತ್ತಮ ಪಾಪ್ ಗಾಯಕಿ.<ref>[http://www.mtvindia.com/immies/05/index.html 2005 ವಿಜೇತರು] {{Webarchive|url=https://web.archive.org/web/20070905233629/http://www.mtvindia.com/immies/05/index.html |date=2007-09-05 }}. ಎಂಟಿವಿ ಇಂಡಿಯಾ. ಅಕ್ಟೋಬರ್ ೧೮, ೨೦೦೭ರಲ್ಲಿ ಮರುಸಂಪಾದಿಸಲಾಗಿದೆ.</ref>
*೨೦೦೫: ಸಂಗೀತದ ಅತ್ಯಂತ ಸೊಗಸುಗಾರ ಜನರು.<ref>[http://www.mtvindia.com/styleawards2006/stylehistory.php ಇತಿಹಾಸ: ಮೋಸ್ಟ್ ಸ್ಟೈಲಿಶ್ ಪೀಪಲ್ ಇನ್ ಮ್ಯೂಸಿಕ್] {{Webarchive|url=https://web.archive.org/web/20080216132909/http://www.mtvindia.com/styleawards2006/stylehistory.php |date=2008-02-16 }}. ಎಂಟಿವಿ ಇಂಡಿಯಾ. ಅಕ್ಟೋಬರ್ ೧೮, ೨೦೦೭ರಲ್ಲಿ ಮರುಸಂಪಾದಿಸಲಾಗಿದೆ.</ref>
;ಗೌರವಗಳು ಹಾಗೂ ಮನ್ನಣೆಗಳು
* ೧೯೯೭ರಲ್ಲಿ, ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಜೊತೆ ''ಲಿಗೆಸಿ'' ಆಲ್ಬಂನಲ್ಲಿ ಹಾಡಿದ್ದಕ್ಕಾಗಿ ಆಶಾ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು, ಈ ಪುರಸ್ಕಾರಕ್ಕೆ ಪಾತ್ರರಾದ ಭಾರತ ದೇಶದ ಮೊದಲ ಗಾಯಕರಾದರು.
* ಅವರು ಹದಿನೇಳನೆಯ [[ಮಹಾರಾಷ್ಟ್ರ]] ರಾಜ್ಯ ಪ್ರಶಸ್ತಿ ಗಳಿಸಿದರು.
* ಭಾರತೀಯ ಚಲನಚಿತ್ರ ರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಳಿಗಾಗಿ ಅವರು ೨೦೦೦ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗಳಿಸಿದರು.<ref name="Awards to Asha" />
* ಅಮರಾವತಿ ಹಾಗೂ ಜಲಗಾಂವ್ ವಿಶ್ವವಿದ್ಯಾನಿಲಯಗಳಿಂದ ಸಾಹಿತ್ಯದಲ್ಲಿ ಗೌರವ ಡಾಕ್ಟರೇಟ್ಗಳನ್ನು ಪಡೆದುಕೊಂಡರು.
* ಕಲೆಯಲ್ಲಿ ಅತಿ ಹೆಚ್ಚಿನ ಸಾಧನೆಗಾಗಿ ಅವರು ''ದಿ ಫ್ರಿಡೀ ಮರ್ಕ್ಯುರಿ ಪ್ರಶಸ್ತಿ'' ಪಡೆದುಕೊಂಡರು.
* ಬರ್ಮಿಂಗ್ಹ್ಯಾಂ ಫಿಲ್ಮ್ ಫೆಸ್ಟಿವಲ್ ನವೆಂಬರ್ ೨೦೦೨ರಲ್ಲಿ ಅವರಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
* ಅವರು [[ಭಾರತ ಸರ್ಕಾರ]]ದಿಂದ [[ಪದ್ಮ ವಿಭೂಷಣ]] ಗೌರವವನ್ನು ಸ್ವೀಕರಿಸಿದರು.[http://www.hindustantimes.com/storypage/storypage.aspx?id=2ceefc34-8f58-47ab-b358-ee7a5630f4a7&MatchID1=4628&TeamID1=1&TeamID2=6&MatchType1=1&SeriesID1=1165&MatchID2=4621&TeamID3=3&TeamID4=4&MatchType2=2&SeriesID2=1164&PrimaryID=4628&Headline=Tendulkar%2c+Tata%2c+Mittal+get+top+civilian+honour ] {{Webarchive|url=https://web.archive.org/web/20081221222707/http://www.hindustantimes.com/storypage/storypage.aspx?id=2ceefc34-8f58-47ab-b358-ee7a5630f4a7&MatchID1=4628&TeamID1=1&TeamID2=6&MatchType1=1&SeriesID1=1165&MatchID2=4621&TeamID3=3&TeamID4=4&MatchType2=2&SeriesID2=1164&PrimaryID=4628&Headline=Tendulkar%2C+Tata%2C+Mittal+get+top+civilian+honour |date=2008-12-21 }}
* ಕಳೆದ ೫೦ ವರ್ಷಗಳಲ್ಲಿ ಸಿಎನ್ಎನ್ನ ೨೦ ಉತ್ತಮ ಗಾಯಕರಲ್ಲಿ ಒಬ್ಬರಾಗಿದ್ದಾರೆ. [http://www.indianexpress.com/news/asha-bhosle-on-top-20-music-icons-list/657007/ ][http://www.indianexpress.com/news/asha-bhosle-on-top-20-music-icons-list/657007/ ] [http://www.hindustantimes.com/Asha-Bhosle-among-top-20-music-icons/H1-Article1-583088.aspx ] {{Webarchive|url=https://web.archive.org/web/20110514005535/http://www.hindustantimes.com/Asha-Bhosle-among-top-20-music-icons/H1-Article1-583088.aspx |date=2011-05-14 }}
==ಅಡಿಟಿಪ್ಪಣಿಗಳು ಹಾಗೂ ಉಲ್ಲೇಖಗಳು==
{{Reflist|1}}
==ಹೆಚ್ಚಿನ ಓದಿಗಾಗಿ==
* {{cite book
| last = Cakrabarti
| first = Atanu
| title = Āśā Bhom̐śale, jībana o gāna
| publisher = Madela Publishing House
| location = [[ಕೊಲ್ಕತ್ತ]]
| year = 1999
| oclc = 42764343
| isbn = 978-8176160407
| language = Bengali
}}
* {{cite book
| last = Ciṭakārā
| first = Mukeśa
| title = Āśā Bhoṃsale : gāne, kôrḍsa, aura svaralipi
| publisher = Music Books
| location = [[Delhi]]
| year = 2006
| oclc = 71351425
| isbn = 978-8189511005
| language = Hindi
}}
==ಬಾಹ್ಯ ಕೊಂಡಿಗಳು==
* {{imdb name | id=0080427}}
* [http://www.npr.org/templates/story/story.php?storyId=124110521 ಆಶಾ ಭೋಂಸ್ಲೆ: ದಿ ವಾಯ್ಸ್ ಆಫ್ ಬಾಲಿವುಡ್ ಅಂಡ್ ಮೋರ್] - ''ಎನ್ಪಿಆರ್'' ನ ಧ್ವನಿ ವರದಿ
{{ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು}}
{{Authority control}}
{{Persondata
|NAME = Bhosle, Asha
|ALTERNATIVE NAMES = Asha Bhonsle; Asha Bhonsale; Asha Bhosale
|SHORT DESCRIPTION = Indian singer
|DATE OF BIRTH = September 8, 1933
|PLACE OF BIRTH = [[Satara]], [[Bombay Presidency]], [[British India]]
|DATE OF DEATH =
|PLACE OF DEATH =
}}
{{DEFAULTSORT:Bhosle, Asha}}
{{Interwikineeded}}
[[ವರ್ಗ:೧೯೩೩ ಜನನ]]
[[ವರ್ಗ:ಬೆಂಗಾಳಿ-ಭಾಷೆಯ ಗಾಯಕರು]]
[[ವರ್ಗ:ಬಾಲಿವುಡ್ ಹಿನ್ನೆಲೆ ಗಾಯಕರು]]
[[ವರ್ಗ:ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಇಂಗ್ಲಿಷ್-ಭಾಷೆಯ ಗಾಯಕರು]]
[[ವರ್ಗ:ಮಹಿಳಾ ಗಿಟಾರ್ ವಾದಕರು]]
[[ವರ್ಗ:ಗುಜರಾತಿ-ಭಾಷೆಯ ಗಾಯಕರು]]
[[ವರ್ಗ:ಹಿಂದಿ-ಭಾಷೆಯ ಗಾಯಕರು]]
[[ವರ್ಗ:ಭಾರತೀಯ ಮಹಿಳಾ ಗಾಯಕಿಯರು]]
[[ವರ್ಗ:ಭಾರತದ ಚಲನಚಿತ್ರ ಗಾಯಕರು]]
[[ವರ್ಗ:ಭಾರತೀಯ ಗಿಟಾರ್ ವಾದಕರು]]
[[ವರ್ಗ:ಕಾಲಿವುಡ್ ಹಿನ್ನೆಲೆ ಗಾಯಕರು]]
[[ವರ್ಗ:ಮರಾಠಿ-ಭಾಷೆಯ ಗಾಯಕರು]]
[[ವರ್ಗ:ಮರಾಠಿ ಹಿನ್ನೆಲೆ ಗಾಯಕರು]]
[[ವರ್ಗ:ನೇಪಾಳಿ-ಭಾಷೆಯ ಗಾಯಕರು]]
[[ವರ್ಗ:ಮಹಾರಾಷ್ಟ್ರದ ಜನರು]]
[[ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ರಷಿಯನ್-ಭಾಷೆಯ ಗಾಯಕರು]]
[[ವರ್ಗ:ತಮಿಳು-ಭಾಷೆಯ ಗಾಯಕರು]]
[[ವರ್ಗ:ಹಿನ್ನೆಲೆ ಗಾಯಕಿಯರು]]
[[ವರ್ಗ:೨೦೨೬ ನಿಧನ]]
j3bw8skg6481b8cb4xmvmqo8t38aatw
ಡುನೆಡಿನ್
0
28019
1378234
1376336
2026-08-03T04:16:36Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378234
wikitext
text/x-wiki
{{Prose|date=November 2010}}
{{Infobox settlement
<!--See Template:Infobox Settlement for additional fields that may be available-->
<!--See the Table at Infobox Settlement for all fields and descriptions of usage-->
<!-- Basic info ---------------->
| name = Dunedin<!-- at least one of the first two fields must be filled in -->
| official_name =
| other_name =
| native_name = <small>''[[Māori language|Māori]]'': Ōtepoti</small>
| native_name_lang = mi
| nickname = Edinburgh of the South<ref>{{Cite web |url=http://www.dunedinnz.com/Portals/dunedinnz/Files/Story%20Angles/Historical%20Info/Scotish%20Story%20Angles%20Copy.pdf |title=ಆರ್ಕೈವ್ ನಕಲು |access-date=2011-02-28 |archive-date=2008-10-16 |archive-url=https://web.archive.org/web/20081016043729/http://www.dunedinnz.com/Portals/dunedinnz/Files/Story%20Angles/Historical%20Info/Scotish%20Story%20Angles%20Copy.pdf |url-status=dead }}</ref><br>Dunners (colloquial)<ref name="NZHerald10569715">{{cite web|url=http://www.nzherald.co.nz/sport/news/article.cfm?c_id=4&objectid=10569715|title=Supersport's Good Week / Bad Week: An unhappy spectator|date=1 May 2009|publisher=The New Zealand Herald|accessdate=2009-09-18|archive-date=2012-04-06|archive-url=https://web.archive.org/web/20120406102339/http://www.nzherald.co.nz/sport/news/article.cfm?c_id=4&objectid=10569715|url-status=dead}}</ref>
| settlement_type = [[New Zealand urban area|Metropolitan Area]] <!-- e.g. Town, Village, City, etc.-->
| total_type = Territorial <!-- to set a non-standard label for total area and population rows -->
| motto =
<!-- images and maps ----------->
| image_skyline = Dunedin Panorama2.jpg
| imagesize = 300px
| image_caption =
| image_flag =
| flag_size =
| image_seal =
| seal_size =
| image_shield = Dunedin coat of arms.jpg
| shield_size =
| image_blank_emblem = Dunedin CC logo.jpg
| blank_emblem_type =
| blank_emblem_size = 150px
| image_map =
| mapsize =
| map_caption = Location of Dunedin
| image_map1 =
| mapsize1 =
| map_caption1 =
| image_dot_map =
| dot_mapsize =
| dot_map_caption =
| dot_x =
| dot_y =
| pushpin_map = New Zealand<!-- the name of a location map as per http://en.wikipedia.org/wiki/Template:Location_map -->
| pushpin_label_position = <!-- the position of the pushpin label: left, right, top, bottom, none -->
| pushpin_map_caption =
| pushpin_mapsize =
<!-- Location ------------------>
| coordinates_region = NZ
| subdivision_type = [[List of countries|Country]]
| subdivision_name = {{NZ}}
| subdivision_type1 = [[List of regions in New Zealand|Region]]
| subdivision_name1 = [[Otago]]
| subdivision_type2 = [[Territorial authority]]
| subdivision_name2 = Dunedin City
<!-- Smaller parts (e.g. boroughs of a city) and seat of government -->
| seat_type = Electorates
| seat = Dunedin North <br /> Dunedin South
| parts_type =
| parts_style = <!-- =list (for list), coll (for collapsed list), para (for paragraph format)
Default is list if up to 5 items, coll if more than 5-->
| parts = <!-- parts text, or header for parts list -->
| p1 =
| p2 =
| p3 =
| p4 =
| p5 =
| p6 =
| p7 = <!-- etc. up to p50: for separate parts to be listed-->
<!-- Politics ----------------->
| government_footnotes = <ref name=mayor>{{cite web|url=http://www.dunedin.govt.nz/your-council/councillors/mayor-peter-chin|title=Mayor Peter Chin|publisher=Dunedin City Council|accessdate=2008-09-06|archive-date=2008-10-14|archive-url=https://archive.is/20081014134203/http://www.dunedin.govt.nz/your-council/councillors/mayor-peter-chin|url-status=dead}}</ref>
| government_type =
| leader_title = [[Mayor of Dunedin|Mayor]]
| leader_name = [[Dave Cull]]
| leader_title1 = Deputy Mayor
| leader_name1 = Chris Staynes
| established_title = Settled by Māori
| established_date = [[circa|c.]] 1300<ref name=
"settled">{{cite web| url=http://www.teara.govt.nz/en/when-was-new-zealand-first-settled/1 |title=When was New Zealand first settled? – The date debate |publisher=Te Ara Encyclopedia of New Zealand |last=Irwin |first=Geoff |coauthors=Walrond, Carl |date=2009-03-04 |accessdate=2010-02-14}}</ref>
| established_title1 = Settled by Europeans
| established_date1 = 1848
| established_title2 = Incorporated<ref>{{Cite web |url=http://www.cityofdunedin.com/city/?page=archives_townbrd1 |title=Dunedin Town Board<!-- Bot generated title --> |access-date=2011-02-28 |archive-date=2005-12-05 |archive-url=https://web.archive.org/web/20051205234340/http://www.cityofdunedin.com/city/?page=archives_townbrd1 |url-status=dead }}</ref>
| established_date2 = 1855
| named_for = ''Dùn Èideann'' – [[Scottish Gaelic]] name for [[Edinburgh]]
<!-- Area --------------------->
| area_magnitude =
| unit_pref = <!--Enter: Imperial, to display imperial before metric-->
| area_footnotes =
| area_total_km2 = 3314<!--Region--> <!-- ALL fields with measurements are subject to automatic unit conversion-->
| area_land_km2 = <!--See table @ Template:Infobox Settlement for details on unit conversion-->
| area_water_km2 =
| area_urban_km2 = 255
| area_water_percent =
| area_blank1_title =
| area_blank1_km2 =
| area_blank1_sq_mi =
<!-- Elevation -------------------------->
| elevation_footnotes = <!--for references: use tags-->
| elevation_m =
| elevation_ft =
| elevation_max_m =
| elevation_max_ft =
| elevation_min_m =
| elevation_min_ft =
<!-- Population ----------------------->
| population_as_of = {{NZ population data|||y}}
| population_footnotes = {{NZ population data||||y}}
| population_note =
| population_total = {{formatnum:{{NZ population data|Dunedin City|y}}|R}}
| population_urban = {{formatnum:{{NZ population data||y}}|R}}
| population_density_km2 = auto
| population_density_urban_km2 = auto
| population_demonym = Dunedinite
<!-- General information --------------->
| timezone = [[Time in New Zealand|NZST]]
| utc_offset = +12
| timezone_DST = NZDT
| utc_offset_DST = +13
| coor_type =
| latd = 45
| latm = 52
| lats =
| latNS = S
| longd = 170
| longm = 30
| longs =
| longEW = E
<!-- Area/postal codes & others -------->
| postal_code_type = Postcode <!-- enter ZIP code, Postcode, Post code, Postal code... -->
| postal_code = 9010, 9011, 9012, 9013, 9014, 9016, 9018, 9022, 9023
| area_code = 03
| website = [http://www.dunedin.govt.nz/ www.Dunedin.govt.nz]
| footnotes =
| blank_name =
| blank_info =
}}
'''ಡ್ಯುನೆಡಿನ್/ಡ್ಯೂನ್ಡಿನ್ ನಗರ''' ವು{{IPA-en|dəˈniːdɨn||En-nz-Dunedin.ogg}} ({{lang-mi|'''Ōtepoti'''}}) [[ನ್ಯೂ ಜೀಲ್ಯಾಂಡ್|ನ್ಯೂಝಿಲೆಂಡ್]]ನ ದಕ್ಷಿಣ ದ್ವೀಪಭಾಗ/ಸೌತ್ ಐಲೆಂಡ್/ಐಲ್ಯಾಂಡ್ದಲ್ಲಿರುವ ಎರಡನೇ ಬೃಹತ್ ಮಹಾನಗರವಾಗಿದ್ದು, ಒಟಾಗೋ ಪ್ರದೇಶದ ಪ್ರಮುಖ ಮಹಾನಗರವಾಗಿದೆ. ಐತಿಹಾಸಿಕ, ಸಾಂಸ್ಕೃತಿಕ, ಮತ್ತು ಭೌಗೋಳಿಕ ಕಾರಣಗಳಿಂದಾಗಿ ನ್ಯೂಝಿಲೆಂಡ್ನ ನಾಲ್ಕು ಮುಖ್ಯ ಕೇಂದ್ರ ನಗರಪ್ರದೇಶಗಳಲ್ಲಿ ಒಂದಾಗಿ ಇದನ್ನು ಪರಿಗಣಿಸಲಾಗುತ್ತದೆ.<ref>ಆಕ್ಲೆಂಡ್, ವೆಲ್ಲಿಂಗ್ಟನ್, ಕ್ರೈಸ್ಟ್ಚರ್ಚ್ ಮತ್ತು ಡ್ಯುನೆಡಿನ್/ಡ್ಯೂನ್ಡಿನ್ ನಗರಗಳನ್ನು ನಾಲ್ಕು ಪ್ರಧಾನ ನಗರಕೇಂದ್ರಗಳೆಂದು ವಿಷದೀಕರಿಸುವುದು ರಾಷ್ಟ್ರವನ್ನು ಕ್ರಮಬದ್ಧವಾಗಿ ಭೌಗೋಳಿಕವಾಗಿ ಎರಡೂ ಪ್ರಧಾನ ದ್ವೀಪಗಳ ಉತ್ತರಾರ್ಧ ಹಾಗೂ ದಕ್ಷಿಣಾರ್ಧ ಭಾಗಗಳೆಂದು ವಿಭಜಿಸುತ್ತದೆ. ಹಾಗಾಗಿ ಈ ನಗರ ಕೇಂದ್ರಗಳನ್ನು ವೈವಿಧ್ಯಮಯ ಹಲವಾರು ಕ್ಷೇತ್ರಗಳಿಗೆ ಸಂಬಂಧಪಟ್ಟ ಹಾಗೆ [http://www.teara.govt.nz/en/city-history-and-people/3?setlang=mi ನ್ಯೂಝಿಲೆಂಡ್ನ ವಿಶ್ವಕೋಶ] ದಿಂದ [http://www.niwa.co.nz/our-science/climate/publications/all/cs/monthly/mclimsum_03_09 ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು], [http://www.dunedin.nz.com/ ಪ್ರವಾಸೋದ್ಯಮ] ದಿಂದ ಹಿಡಿದು [http://www.plunket.org.nz/about-us/our-history/ ರಾಷ್ಟ್ರವ್ಯಾಪಿ ಸಂಘಟನೆಗಳು] {{Webarchive|url=https://web.archive.org/web/20081014121113/http://www.plunket.org.nz/about-us/our-history |date=2008-10-14 }} ಮತ್ತು [http://www.police.govt.nz/service/yes/history.html ಸರ್ಕಾರಿ ಇಲಾಖೆಗಳು] ಹಾಗೂ [http://www.undertheradar.co.nz/utr/article/UAID/3/Flying-Nun-History-1980-1995.utr ಮನೋರಂಜನಾ ಉದ್ಯಮ] ದಿಂದ [http://www.odt.co.nz/entertainment/music/33827/dunedin-jazz-stalwart-full-swing ವೃತ್ತ/ಸುದ್ದಿಪತ್ರಿಕೆ ವರದಿ] {{Webarchive|url=https://web.archive.org/web/20121017052310/http://www.odt.co.nz/entertainment/music/33827/dunedin-jazz-stalwart-full-swing |date=2012-10-17 }} ಗಳವರೆಗೆ ವರ್ಣಿಸಲಾಗಿದೆ.</ref> ಡ್ಯುನೆಡಿನ್/ಡ್ಯೂನ್ಡಿನ್ ನಗರವು ಆಕ್ಲೆಂಡ್ ಪೌರಸಮಿತಿಯ ರಚನೆಯ ಉದ್ದೇಶದಿಂದ ನವೆಂಬರ್ 2010ರಲ್ಲಿ ಆಕ್ಲೆಂಡ್ನಿಂದ ಸ್ವಾಧೀನಪಡಿಸಿಕೊಳ್ಳುವವರೆಗೆ ಪ್ರಾದೇಶಿಕ ಭೂಮಿಯ ವಿಸ್ತೀರ್ಣದ ಅನುಸಾರವಾಗಿ ಬೃಹತ್ ಮಹಾನಗರವಾಗಿತ್ತು. ಡ್ಯುನೆಡಿನ್/ಡ್ಯೂನ್ಡಿನ್ ನಗರವು ನ್ಯೂಝಿಲೆಂಡ್ನಲ್ಲಿಯೇ ಜನಸಂಖ್ಯೆಯ ಅನುಸಾರವಾಗಿ ಸರಿಸುಮಾರು 1900ನೇ ಇಸವಿಯವರೆಗೆ ಅತ್ಯಂತ ದೊಡ್ಡ ನಗರವಾಗಿತ್ತು.
ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರ ಪ್ರದೇಶವು ಒಟಾಗೋದ ಕೇಂದ್ರೀಯ ಪೂರ್ವ ಕರಾವಳಿಯಲ್ಲಿದ್ದು, ಒಟಾಗೋ ಬಂದರಿನ ಮುಂಭಾಗವನ್ನು ಸುತ್ತುವರೆದಿದೆ. ಬಂದರು ಹಾಗೂ ಡ್ಯುನೆಡಿನ್/ಡ್ಯೂನ್ಡಿನ್ ನಗರವನ್ನು ಸುತ್ತುವರೆದ ಗುಡ್ಡಗಳು ನಂದಿಹೋದ ಜ್ವಾಲಾಮುಖಿಯೊಂದರ ಅವಶೇಷಗಳಾಗಿವೆ. ಮಹಾನಗರದ ಉಪನಗರ/ಬಡಾವಣೆಗಳು ಸುತ್ತುವರೆದ ಕಣಿವೆಗಳು ಹಾಗೂ ಗುಡ್ಡಗಳಲ್ಲಿ ಒಟಾಗೋ ಪರ್ಯಾಯ ದ್ವೀಪ/ದ್ವೀಪಕಲ್ಪದ ಭೂಕಂಠ/ಭೂಸಂಧಿಯ ಮೇಲೆ ಹಾಗೂ, ಒಟಾಗೋ ಬಂದರುಪ್ರದೇಶದ ತೀರ ಹಾಗೂ [[ಪೆಸಿಫಿಕ್ ಮಹಾಸಾಗರ|ಪೆಸಿಫಿಕ್/ಶಾಂತ ಮಹಾಸಾಗರ]]ದ ಮೇಲಿನ ಪ್ರದೇಶಗಳಿಗೆ ವಿಸ್ತರಿಸಿವೆ.
ಮಹಾನಗರದ ಅತ್ಯಂತ ದೊಡ್ಡ ಉದ್ಯಮವೆಂದರೆ ವಿಶ್ವವಿದ್ಯಾಲಯಗಳ ಶಿಕ್ಷಣವಾಗಿದೆ – ಡ್ಯುನೆಡಿನ್/ಡ್ಯೂನ್ಡಿನ್ ನಗರವು ನ್ಯೂಝಿಲೆಂಡ್'ನ ಪ್ರಪ್ರಥಮ ವಿಶ್ವವಿದ್ಯಾಲಯವಾದ (1869) ಒಟಾಗೋ ವಿಶ್ವವಿದ್ಯಾಲಯ ಹಾಗೂ ಒಟಾಗೋ ಪಾಲಿಟೆಕ್ನಿಕ್ಗಳಿಗೆ ನೆಲೆಯಾಗಿದೆ. ಇಲ್ಲಿನ ಜನಸಂಖ್ಯೆಯ ಬಹುದೊಡ್ಡ ಪಾಲು ವಿದ್ಯಾರ್ಥಿಗಳದ್ದಾಗಿದೆ : 2006ರ ಜನಗಣತಿಯ ಪ್ರಕಾರ ನ್ಯೂಝಿಲೆಂಡ್ನ ಒಟ್ಟಾರೆ ಸರಾಸರಿ ಪ್ರತಿಶತ 14.2ಕ್ಕೆ ಹೋಲಿಸಿದರೆ ಮಹಾನಗರದ ಜನಸಂಖ್ಯೆಯ ಪ್ರತಿಶತ 21.6ರಷ್ಟು ಜನರು 15ರಿಂದ 24 ವರ್ಷಗಳ ವಯೋಮಾನದವರಾಗಿದ್ದರು.<ref name="population" />
== ಇತಿಹಾಸ ==
{{Main|History of Dunedin}}
=== ಮಾವೊರಿ ವಸಾಹತುಗಳು/ನೆಲೆಸುವಿಕೆ ===
ಪುರಾತತ್ವಶಾಸ್ತ್ರೀಯ ಪುರಾವೆಗಳು ನ್ಯೂಝಿಲೆಂಡ್ನಲ್ಲಿನ ಪ್ರಥಮ ಮಾನವ (ಮಾವೊರಿ) ವಾಸ್ತವ್ಯ ಹೂಡುವಿಕೆಯು AD 1250–1300ರ,<ref name=
"settled" /> ನಡುವೆ ಸಂಭವಿಸಿದ್ದು ಜನಸಮೂಹವು ಆಗ್ನೇಯ ಕರಾವಳಿಯುದ್ದಕ್ಕೂ ಕೇಂದ್ರೀಕೃತಗೊಂಡಿದ್ದರು ಎಂದು ತೋರಿಸುತ್ತವೆ.<ref>{{harv|Hamel|2001}}; {{harv|Anderson|Allingham|Smith|1996}}; {{harv|Anderson|1998}}</ref> ಒಟಾಗೋ ಹೆಡ್ಸ್ ಭೂಚಾಚುವಿನ ಬಳಿಯಲ್ಲಿರುವ ಕೈಕೈ'ನ ಸಮುದ್ರ ತೀರದಲ್ಲಿರುವ ಪ್ರಾಕ್ತನ ನಿವೇಶನವು, ಸರಿಸುಮಾರು ಆ ಕಾಲಾವಧಿಯದ್ದೇ ಎಂದು ಕಾಲನಿರ್ದೇಶ ಮಾಡಲಾಗಿದೆ.<ref>{{harv|Anderson|1983}}</ref> ಅನೇಕ ಪ್ರಾಚೀನ (ಮೋವಾ ಹಕ್ಕಿಗಳ ಬೇಟೆಗಾರರು) ನಿವೇಶನಗಳು ಈಗಿನ ಡ್ಯುನೆಡಿನ್/ಡ್ಯೂನ್ಡಿನ್ ನಗರವಿರುವ ಪ್ರದೇಶದಲ್ಲಿದ್ದು ಅವುಗಳಲ್ಲಿ ಅನೇಕವು ವಿಶಾಲವಾಗಿವೆಯಲ್ಲದೇ ಶಾಶ್ವತ ನಿವಾಸಗಳಾಗಿ ಅದರಲ್ಲೂ ನಿರ್ದಿಷ್ಟವಾಗಿ 14ನೆಯ ಶತಮಾನದಲ್ಲಿ ಬಳಕೆಯಲ್ಲಿದ್ದವು.<ref>{{harv|Anderson|Allingham|Smith|1996}} & {{harv|Hamel|2001}}</ref> ತದನಂತರ ಜನಸಮೂಹವು ಕಡಿಮೆಯಾಗುತ್ತಾ ನಡೆದರೂ ಗಮನಾರ್ಹವಾಗಿ ಸುಮಾರು 1650ರ ಕಾಲದ ಅವಧಿಯ ಪುಕೆ/ಫ್ಯೂಕೆಕುರಾ (ತಯಾರೊವಾ ಭೂಶಿರ)ದಂತಹಾ ಹಲವು ಮಯೋರಿ ಹಳ್ಳಿಗಳು, ಕೋಟೆಯಿಂದ ರಕ್ಷಣೆಯನ್ನು ಪಡೆವ ವಸಾಹತುಗಳನ್ನು ಕಟ್ಟುವಂತಹಾ ಚಟುವಟಿಕೆಗಳು ನಡೆಯುತ್ತಿದ್ದ ಪ್ರಾಚೀನ ಸಂಸ್ಕೃತಿಯು ವಿಕಸನವಾಗುತ್ತಿದ್ದ ಹಾಗೆಯೇ ಮತ್ತೆ ವಿಸ್ತರಿಸತೊಡಗಿತು.<ref>{{harv|Anderson|1998}}</ref> ಈಗಿನ ಪ್ರಧಾನ ಡ್ಯುನೆಡಿನ್/ಡ್ಯೂನ್ಡಿನ್ ನಗರವಿರುವ (ಒ/ವೊಟೆಪೊಟಿ) ಪ್ರದೇಶದಲ್ಲಿ ಇದ್ದ ಪ್ರಾಚೀನ ನೆಲೆಯೊಂದು ಸುಮಾರು 1785ರಷ್ಟು ತಡವಾಗಿಯೇ ವಾಸಸ್ಥಾನವಾಗಿ ಬಳಕೆಯಾದರೂ 1826ರ ಹೊತ್ತಿಗೆ ಇದನ್ನು ತ್ಯಜಿಸಲಾಗಿತ್ತು.<ref>ಟರ್ಟನ್, ಹ್ಯಾನ್ಸನ್ "ಇಂಟ್ರೊಡಕ್ಟರಿ " {{harv|Bathgate|1890}}ದಲ್ಲಿ; {{harv|Entwisle|2005}}</ref>
ಮಾವೊರಿ ಪರಂಪರೆಯ ಐತಿಹ್ಯವು ಈ ಪ್ರದೇಶದಲ್ಲಿ ವಾಸಿಸಿದ್ದ ಕಹುಯಿ ಟಿಪುವಾ ಎಂಬ ಜನರ ಬಗ್ಗೆ ಮೊದಲಿಗೆ ಪ್ರಸ್ತಾಪಿಸುತ್ತದೆ, ನಂತರದ ಟೆ ರಪುವಾಯ್ ಜನಾಂಗವು ಭಾಗಶಃ ದಂತಕಥೆಯೆಂಬಂತಹಾ ಆದರೆ ಐತಿಹಾಸಿಕವೆನ್ನುವಂತೆ ಪರಿಗಣಿತವಾಗುವ ಜನಾಂಗ. ಮುಂದೆ ಹಾಗೆ ಬಂದವರೆಂದರೆ ವೈತಹಾಗಳು, ಅವರ ನಂತರ 16ನೆಯ ಶತಮಾನದ ಕೊನೆಯಲ್ಲಿ ಕಟಿ ಮಾಮೋಗಳು ಹಾಗೂ ನಂತರ (ಆಧುನಿಕ ಮಾನಕ ಮಾವೊರಿಯಲ್ಲಿ ''ಎನ್ಗೈ ತಹು'' ) 17ನೆಯ ಶತಮಾನದ ಮಧ್ಯದಲ್ಲಿ ಕೈ ತಹು ಜನಾಂಗದವರು ಬಂದರು.<ref name="autogenerated2">{{harv|McLintock|1949}}</ref> ಈ ತರಹದ ವಲಸೆ ಹೋಗುವಿಕೆಯ ಅಲೆಗಳನ್ನು ಐರೋಪ್ಯ ಕಥನಗಳಲ್ಲಿ 'ಆಕ್ರಮಣಗಳೆಂದು' ಬಿಂಬಿಸಲಾಗಿದೆಯಾದರೂ ಆಧುನಿಕ ಪಂಡಿತಗಣವು ಅದರ ಬಗ್ಗೆ ಅನುಮಾನಗಳನ್ನೆತ್ತಿದೆ. ಈ ವಲಸೆಗಳು ಬಹುಶಃ ಯುರೋಪಿನಲ್ಲಿ ನಡೆದ ವಲಸೆಗಳಂತಹವೇ ಆದರೆ ಪ್ರಾಸಂಗಿಕವಾಗಿ ರಕ್ತಪಾತಗಳಿಗೆ ಕಾರಣವಾಗಿರಬಹುದಷ್ಟೇ.<ref>{{harv|Anderson|1983}} & {{harv|Anderson|1998}}</ref>
ಜಾನ್ ಬೌಲ್ಟ್ಬೀ ಎಂಬ ಓರ್ವ ಸೀಲ್ ಮೀನುಗಾರ 1820ರ ದಶಕದಲ್ಲಿ 'ಕೈಕಾ ಒಟಾರ್ಗೋ' ನೆಲೆಗಳು (ಒಟಾಗೋ ಬಂದರು ಸಮೀಪದ ಹಾಗೂ ಸುತ್ತಮುತ್ತಲಿನ ನೆಲೆಗಳು) ಅತ್ಯಂತ ಹಳೆಯದಾದವು ಹಾಗೂ ದಕ್ಷಿಣ ಭಾಗದಲ್ಲೇ ಅತಿ ದೊಡ್ಡವು ಎಂಬುದನ್ನು ದಾಖಲಿಸಿದ್ದ.<ref>ಬೌಲ್ಟ್ಬೀ, J {{harv|Begg|Begg|1979}}ದಲ್ಲಿ</ref>
=== ಐರೋಪ್ಯ ವಸಾಹತುಗಳು/ನೆಲೆಗಳು ===
ಈಗ ಡ್ಯುನೆಡಿನ್/ಡ್ಯೂನ್ಡಿನ್ ನಗರದ ತೀರವೆಂದು ಕರೆಯಲ್ಪಡುತ್ತಿರುವ ಸ್ಥಳಕ್ಕೆ ಫೆಬ್ರವರಿ 25, 1770ರಿಂದ ಮಾರ್ಚ್ 5, 1770ರ ನಡುವಿನ ಅವಧಿಯಲ್ಲಿ ಬಂದು ನಿಂತ ಲೆಫ್ಟಿನೆಂಟ್/ಸೇನಾಧಿಕಾರಿ ಜೇಮ್ಸ್ ಕುಕ್ ಒಟಾಗೋ ಪರ್ಯಾಯ ದ್ವೀಪ/ದ್ವೀಪಕಲ್ಪ ಹಾಗೂ ಸ್ಯಾಡಲ್ ಬೆಟ್ಟಗಳನ್ನು ಸಾಂಡರ್ಸ್ ಭೂಶಿರವೆಂದು ಕರೆದನು. ಆತನು ಆ ಪ್ರದೇಶದ ವ್ಯಾಪ್ತಿಯಲ್ಲಿ ಪೆಂಗ್ವಿನ್ಗಳು ಹಾಗೂ ಸೀಲ್ ಮೀನುಗಳು ಸಿಗುತ್ತವೆಂದು ವರದಿ ಮಾಡಿದ ನಂತರ 19ನೆಯ ಶತಮಾನದ ಆರಂಭದಿಂದಲೇ ಇಲ್ಲಿಗೆ ಸೀಲ್ ಮೀನುಗಾರರು ಭೇಟಿ ನೀಡಲಾರಂಭಿಸಿದರು.<ref>ಕುಕ್, ಜೇಮ್ಸ್ {{harv|Beaglehole (ed)|1955–67}}ದಲ್ಲಿ</ref> 1810–1823ವರೆಗಿನ ಸೀಲ್ ಮೀನುಗಾರಿಕೆಯ ಆರಂಭಿಕ ವರ್ಷಗಳಲ್ಲಿ ಸೀಲ್ ಮೀನುಗಾರರು ಹಾಗೂ ಸ್ಥಳೀಯ ಮಾವೊರಿಗಳ ನಡುವೆ ಹಗೆತನವು ಕಂಡುಬಂದಿತ್ತು, "ಸೀಲ್ ಮೀನುಗಾರರ' ಸಮರ"ವು ಒಟಾಗೋ ಬಂದರಿನಲ್ಲಿ ನಡೆದ ಒಂದು ಘಟನೆಯಿಂದ ಸ್ಫೋಟವಾದ/ಪ್ರೇರಿತವಾದದ್ದಾಗಿತ್ತು, ಆದರೆ ವಿಲಿಯಂ ಟಕರ್ ಎಂಬಾತ 1815ರಲ್ಲಿ ಈ ಪ್ರದೇಶದಲ್ಲಿ ನೆಲೆಯೂರಿದ ಪ್ರಥಮ ಐರೋಪ್ಯ ವ್ಯಕ್ತಿ ಎಂದೆನಿಸಿಕೊಂಡನು.<ref>{{harv|Entwisle|2005}}</ref> ಐರೋಪ್ಯರ ಕಾಯಂ ವಾಸಿಸುವಿಕೆಯು ವೆಲ್ಲರ್ ಸಹೋದರರು ಒಟಾಗೋದ, ಒಟಾಗೋ ಬಂದರಿನ ಮೇಲಿರುವ ಆಧುನಿಕ ಒಟಾಕೌ ಎಂಬಲ್ಲಿ ತಿಮಿಂಗಿಲ ಬೇಟೆಗೆ ಸೂಕ್ತ ತಾಣವನ್ನು ಕಂಡುಕೊಂಡ 1831ನೇ ಇಸವಿಯಿಂದ ಆರಂಭವಾಗುತ್ತದೆ. ಸಾಂಕ್ರಾಮಿಕ ರೋಗಗಳು ಮಾವೊರಿ ಜನಸಂಖ್ಯೆಯನ್ನು ವಿಪರೀತವಾಗಿ ಕಡಿಮೆ ಮಾಡಿದವು. 1830ರ ದಶಕದ ಕೊನೆಯ ಹೊತ್ತಿಗೆ, ಈ ಬಂದರು ಒಂದು ಅಂತರರಾಷ್ಟ್ರೀಯ ತಿಮಿಂಗಿಲ ಬೇಟೆಯ ರೇವುಪಟ್ಟಣವೆಂದೆನಿಸಿಕೊಂಡಿತ್ತು. 1840ರಲ್ಲಿ ಜಾನ್ನಿ ಜೋನ್ಸ್ ಎಂಬಾತನು, ದಕ್ಷಿಣ ದ್ವೀಪಭಾಗದ/ಸೌತ್ ಐಲೆಂಡ್ನ ಪ್ರಪ್ರಥಮ ಕೃಷಿನೆಲೆಯನ್ನು ಹಾಗೂ ಧರ್ಮಪ್ರಚಾರಕ ಕೇಂದ್ರವನ್ನು ವೈಕೌಐಟಿ/ತಿಯಲ್ಲಿ ಸ್ಥಾಪಿಸಿದನು.<ref>{{harv|Entwisle|1998}}</ref>
ಮುಕ್ತ ಚರ್ಚ್/ಇಗರ್ಜಿ ನೆಲೆಗೆ ಸ್ಥಳವನ್ನು ಕಂಡುಕೊಳ್ಳಲು ಹೊರಟಿದ್ದ ಥಾಮಸ್ ವಿಂಗ್ ಎಂಬುವವನು ಕಪ್ತಾನನಾಗಿದ್ದ ಹಾಗೂ ತನ್ನ ಪತ್ನಿ ಲೂಸಿ ಮತ್ತು ನ್ಯೂಝಿಲೆಂಡ್ ಕಂಪೆನಿಯ ಪ್ರತಿನಿಧಿಯಾಗಿದ್ದ ಫ್ರೆಡೆರಿಕ್ ಟಕೆಟ್ಟ್ ಎಂಬಾತರು ಸೇರಿದ್ದ ಇತರರನ್ನು ತುಂಬಿಕೊಂಡಿದ್ದ ''ಡೆಬೋರಾಹ್'' ಎಂಬ ಹಡಗು ದಕ್ಷಿಣದೆಡೆಗೆ 1844ರಲ್ಲಿ ಬಂದಿತು.<ref>{{cite web|url=http://www.dnzb.govt.nz/DNZB/alt_essayBody.asp?essayID=1W33|title=Wing, Thomas 1810–1888|publisher=[[Dictionary of New Zealand Biography]]|accessdate=2009-03-17|first=T. B.|last=Byrne|archive-date=2021-10-18|archive-url=https://web.archive.org/web/20211018041505/https://teara.govt.nz/en/biographies/1w33/wing-thomas|url-status=dead}}</ref> ದಕ್ಷಿಣ ದ್ವೀಪಭಾಗ/ಸೌತ್ ಐಲೆಂಡ್ನ ಪೂರ್ವ ಕರಾವಳಿಯ ಸುತ್ತಮುತ್ತಲಿನ ಹಲವು ಪ್ರದೇಶಗಳನ್ನು ಪರಿಶೀಲಿಸಿದ ನಂತರ ಡ್ಯುನೆಡಿನ್/ಡ್ಯೂನ್ಡಿನ್ ಎಂದು ನಂತರ ಕರೆಯಲಾದ ಪ್ರದೇಶವನ್ನು ಟಕೆಟ್ಟ್ ಆಯ್ಕೆ ಮಾಡಿದನು.<ref>{{cite web|url=http://www.dnzb.govt.nz/DNZB/alt_essayBody.asp?essayID=1T108|title=Tuckett, Frederick 1807? – 1876|publisher=[[Dictionary of New Zealand Biography]]|accessdate=2009-03-17|first=Ross|last=Somerville|archive-date=2021-10-18|archive-url=https://web.archive.org/web/20211018041448/https://teara.govt.nz/en/biographies/1t108/tuckett-frederick|url-status=dead}}</ref>
1848ರಲ್ಲಿ ಸ್ಕಾಟ್ಲೆಂಡ್ನ ಮುಕ್ತ ಚರ್ಚ್/ಕ್ರೈಸ್ತಸಂಘದ ಲೇ ಅಸೋಸಿಯೇಷನ್/ದೀಕ್ಷೆ ಪಡೆಯದವರ ಸಂಘವು ಡ್ಯುನೆಡಿನ್/ಡ್ಯೂನ್ಡಿನ್ ನಗರವನ್ನು ಒಟಾಗೋ ಬಂದರುವಿನ ಭೂಚಾಚುವಿನಲ್ಲಿ ತನ್ನ ವಿಶೇಷ ವಸಾಹತು ನೆಲೆಯ ಪ್ರಧಾನ ಪಟ್ಟಣವನ್ನಾಗಿ ಸ್ಥಾಪಿಸಿತು. [[ಸ್ಕಾಟ್ಲಂಡ್|ಸ್ಕಾಟ್ಲೆಂಡ್]]ನ ರಾಜಧಾನಿಯಾದ ಎಡಿನ್ಬರ್ಗ್ನ ''ಡುನ್ ಐಡೆಯಾನ್ನ್'' ಎಂಬ ಸ್ಕಾಟಿಷ್ ಗೇಲಿಕ್ ರೂಪದಿಂದ ಈ ಹೆಸರು ವ್ಯುತ್ಪತ್ತಿಯಾಗಿತ್ತು.<ref name="autogenerated2" /> ಈ ನಗರದ ಸಮೀಕ್ಷಕ/ಮೋಜಣಿದಾರನಾಗಿದ್ದ ಚಾರ್ಲ್ಸ್ ಕೆಟಲ್ ಎಂಬಾತ ಎಡಿನ್ಬರ್ಗ್ನ ಗುಣಲಕ್ಷಣಗಳನ್ನು ಅನುಸರಿಸಲು ಆದೇಶವಿತ್ತಾಗ, ಕಣ್ಸೆಳೆಯುವ 'ರಮ್ಯ/ರೊಮ್ಯಾಂಟಿಕ್' ವಿನ್ಯಾಸವನ್ನು ಸಾದರಪಡಿಸಿದನು.<ref>{{harv|Hocken|1898}}</ref> ಇದರ ಪರಿಣಾಮವಾಗಿ ಕಟ್ಟಡ ನಿರ್ಮಾಣಕಾರರು ಸವಾಲುಗಳಿಂದ ಕೂಡಿದ ಭೂಪ್ರದೇಶದಲ್ಲಿ ಆತನ ಸ್ಥೂಲ ಕಲ್ಪನೆಯ ಕಟ್ಟೋಣಗಳನ್ನು ಕಟ್ಟುವಾಗ ಹೆಣಗಿದರು ಹಾಗೂ ಕೆಲವೊಮ್ಮೆ ಕಲ್ಪನೆಯನ್ನು ವಾಸ್ತವವಾಗಿಸುವಲ್ಲಿ ವಿಫಲರೂ ಆಗಿದ್ದರಿಂದ ಭವ್ಯವಾದ ಹಾಗೂ ವೈಚಿತ್ರ್ಯ ತುಂಬಿದ ಬೀದಿಗಳನ್ನು ಕಾಣಬಹುದಾಗಿತ್ತು. ಕ್ಯಾಪ್ಟನ್ ವಿಲಿಯಂ ಕಾರ್ಗಿಲ್ ಎಂಬ ನೆಪೋಲಿಯನ್ ವಿರುದ್ಧ ಸಮರದಲ್ಲಿ ಅನುಭವಿಯಾಗಿದ್ದ ವ್ಯಕ್ತಿ ಇಲ್ಲಿನ ಲೌಕಿಕ ನಾಯಕನಾಗಿದ್ದ. ಕವಿ ರಾಬರ್ಟ್ ಬರ್ನ್ಸ್ರ ಸೋದರಳಿಯ/ಸಹೋದರ/ರಿಯ ಪುತ್ರರಾಗಿದ್ದ ರೆವರೆಂಡ್ ಥಾಮಸ್ ಬರ್ನ್ಸ್ರು, ಅಲ್ಲಿನ ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದರು.
=== ಸುವರ್ಣ ಬೇಟೆಯ ಯುಗ ===
ಡ್ಯುನೆಡಿನ್/ಡ್ಯೂನ್ಡಿನ್ ನಗರವು 1852ರಲ್ಲಿ ವೈಟಾಕಿಯ ದಕ್ಷಿಣದಿಂದ ಇಡಿಯ ನ್ಯೂಝಿಲೆಂಡ್ಅನ್ನು ಒಳಗೊಂಡ ಒಟಾಗೋ ಪ್ರಾಂತ್ಯದ ರಾಜಧಾನಿಯಾಯಿತು. 1861ರಲ್ಲಿ ನೈಋತ್ಯ ದಿಕ್ಕಿನಲ್ಲಿದ್ದ ಗೇಬ್ರಿಯಲ್ ಕಣಿವೆಯಲ್ಲಿ ಚಿನ್ನವು ಪತ್ತೆಯಾದುದು, ಜನಸಮೂಹದ ತ್ವರಿತ ಒಳಪ್ರವಾಹಕ್ಕೆ ಕಾರಣವಾಯಿತಲ್ಲದೇ ಡ್ಯುನೆಡಿನ್/ಡ್ಯೂನ್ಡಿನ್ ನಗರವು 1865ರಲ್ಲಿ ನ್ಯೂಝಿಲೆಂಡ್'ನ ಜನಸಂಖ್ಯಾ ಬೆಳವಣಿಗೆಯ ದರದ ಅನುಸಾರವಾಗಿ ಪ್ರಥಮ ಸ್ಥಾನವನ್ನು ಪಡೆದ ನಗರವೆನಿಸಿಕೊಂಡಿತು. ಹಾಗೆ ಹೊಸದಾಗಿ ಅಲ್ಲಿಗೆ ಬಂದವರಲ್ಲಿ ಅನೇಕ ಐರಿಷ್ ಜನರು ಹಾಗೂ ಇಟಾಲಿಯನ್ನರು, ಫ್ರೆಂಚರು, ಜರ್ಮನ್ನರು, ಯಹೂದಿಗಳು ಹಾಗೂ ಚೀನೀಯರು ಸೇರಿದ್ದರು.<ref>{{harv|McLintock|1949}}; {{harv|McDonald|1965}}</ref> ಡ್ಯುನೆಡಿನ್/ಡ್ಯೂನ್ಡಿನ್ ಸದರನ್/ದಕ್ಷಿಣದ ಸಿಮೆಟ್ರಿ/ರುದ್ರಭೂಮಿಯನ್ನು 1858ರಲ್ಲಿ ಸ್ಥಾಪಿಸಲಾದರೆ, ಡ್ಯುನೆಡಿನ್/ಡ್ಯೂನ್ಡಿನ್ ಉತ್ತರದ/ನಾರ್ಥರ್ನ್ ಸಿಮೆಟ್ರಿ/ರುದ್ರಭೂಮಿಯನ್ನು 1872ರಲ್ಲಿ ಸ್ಥಾಪಿಸಲಾಗಿತ್ತು.<ref>{{cite web|last=Betteridge|first=Chris|title=Landscapes of Memory – breathing new life into old cemeteries|url=http://www.historic.org.nz/aboutus/OtagoBranch/gfx/Lawson%20Lecture%202004.pdf|date=28 July 2004|page=2|work=NZ Historic Places Trust|format=PDF|accessdate=2008-05-14| archiveurl = https://web.archive.org/web/20071215152838/http://www.historic.org.nz/aboutus/OtagoBranch/gfx/Lawson+Lecture+2004.pdf| archivedate = December 15, 2007}}</ref>
[[File:Dunedin Railway Station Full Exterior.jpg|right|thumb|250px|1906ರಲ್ಲಿ ನಿರ್ಮಿಸಲಾದ ಡ್ಯುನೆಡಿನ್/ಡ್ಯೂನ್ಡಿನ್ ರೈಲು ನಿಲ್ದಾಣ.]]
[[File:New Zealand-Dunedin-Railway Station-Panorama.png|right|thumb|250px|360° ಪನೋರಮಾ ಚಿತ್ರಾವಳಿ: ರೈಲುನಿಲ್ದಾಣದ ಒಳಗಿನ ದೃಶ್ಯಾವಳಿ.]]
ಡ್ಯುನೆಡಿನ್/ಡ್ಯೂನ್ಡಿನ್ ನಗರ ಹಾಗೂ ಆ ಪ್ರಾಂತ್ಯವು ಕೈಗಾರಿಕೀಕರಣಗೊಂಡಿತು ಹಾಗೂ ಸಂಘಟಿತವಾಯಿತು ಪ್ರಧಾನ ದಕ್ಷಿಣ ಹೆದ್ದಾರಿಯು/ಮೇನ್ ಸೌತ್ ಲೈನ್ ಮಹಾನಗರವನ್ನು 1878ರಲ್ಲಿ ಕ್ರೈಸ್ಟ್ಚರ್ಚ್ನೊಂದಿಗೆ ಹಾಗೂ 1879ರಲ್ಲಿ ಇನ್ವರ್ಕಾರ್ಗಿಲ್ನೊಂದಿಗೆ ಸಂಪರ್ಕಿಸಿತು. ನ್ಯೂಝಿಲೆಂಡ್ನಲ್ಲಿಯೇ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾದ ಒಟಾಗೋ ವಿಶ್ವವಿದ್ಯಾಲಯವನ್ನು ಡ್ಯುನೆಡಿನ್/ಡ್ಯೂನ್ಡಿನ್ ನಗರದಲ್ಲಿ 1869ರಲ್ಲಿ ಸ್ಥಾಪಿಸಲಾಯಿತು.<ref>{{harv|Morrell|1969}}</ref> ಒಟಾಗೋ ಬಾಲಕಿಯರ ಪ್ರೌಢಶಾಲೆಯನ್ನು 1871ರಲ್ಲಿ ಸ್ಥಾಪಿಸಲಾಯಿತು. 1881ರಿಂದ 1957ರ ಅವಧಿಯ ನಡುವೆ, ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರವು ಕಂಬಿ ಟ್ರ್ಯಾಮ್/ಕೇಬಲ್ ಟ್ರ್ಯಾಮ್ಗಳಿಗೆ ನೆಲೆಯಾಗಿತ್ತು, ಇದು ವಿಶ್ವದಲ್ಲೇ ಅಂತಹ ಮೊದಲನೇ ಹಾಗೂ ಕೊನೆಯದಾದ ವ್ಯವಸ್ಥೆಯಾಗಿತ್ತು. 1880ರ ದಶಕದ ಆದಿಯಲ್ಲಿ ಶೈತ್ಯೀಕರಿಸಿದ ಮಾಂಸದ ಉದ್ಯಮವನ್ನು ಆರಂಭಿಸಿ 1882ರಲ್ಲಿ ಚಾಲ್ಮರ್ಸ್ ರೇವುಪಟ್ಟಣದಿಂದ ಪ್ರಪ್ರಥಮವಾಗಿ ಅದರ ಸರಕು ಅಲ್ಲಿಂದ ಹೊರಟಾಗ, ನಂತರದ ಬೃಹತ್ ರಾಷ್ಟ್ರೀಯ ಉದ್ಯಮವು ಆರಂಭವನ್ನು ಕಂಡಿತು.<ref>{{harv|McLintock|1951}}</ref>
ಹತ್ತು ವರ್ಷಗಳ ಕಾಲ ಸುವರ್ಣ ಬೇಟೆಯು ನಡೆದ ನಂತರ ಆರ್ಥಿಕತೆಯು ನಿಧಾನಗೊಂಡರೂ ಜ್ಯೂಲಿಯಸ್ ವೊಗೆಲ್'ನ ವಲಸೆ ಮತ್ತು ಅಭಿವೃದ್ಧಿ ಯೋಜನೆಯು 1880ರ ದಶಕದಲ್ಲಿ ಮತ್ತೆ ಆರ್ಥಿಕ ಹಿಂಜರಿತವು ತಟ್ಟುವ ಮುನ್ನ ಇನ್ನೂ ಸಾವಿರಾರು ಜನರನ್ನು ತನ್ನೆಡೆಗೆ, ಅದರಲ್ಲೂ ವಿಶೇಷವಾಗಿ ಡ್ಯುನೆಡಿನ್/ಡ್ಯೂನ್ಡಿನ್ ನಗರ ಮತ್ತು ಒಟಾಗೋಗಳೆಡೆಗೆ ಕರೆತಂದಿತ್ತು. ಈ ತರಹದ ಉಚ್ಛ್ರಾಯದ ಮೊದಲ ಬಾರಿಯ ಅವಧಿಯಲ್ಲಿ, ನ್ಯೂಝಿಲೆಂಡ್'ನ ಪ್ರಥಮ ದೈನಂದಿನ ವಾರ್ತಾ/ವೃತ್ತಪತ್ರಿಕೆ, ಕಲಾ ಶಾಲೆ, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಾರ್ವಜನಿಕ ಕಲಾ ಪ್ರದರ್ಶನ ಮಂದಿರಗಳು ಸೇರಿದಂತೆ ಅನೇಕ ಸಂಸ್ಥೆಗಳು ಹಾಗೂ ಉದ್ಯಮಗಳನ್ನು ಸ್ಥಾಪಿಸಲಾಯಿತು, ಡ್ಯುನೆಡಿನ್/ಡ್ಯೂನ್ಡಿನ್ ಸಾರ್ವಜನಿಕ ಕಲಾ ಪ್ರದರ್ಶನ ಮಂದಿರವು ಅಂತಹವುಗಳಲ್ಲಿ ಒಂದಾಗಿತ್ತು.<ref>{{harv|McLintock|1949}}; {{harv|McDonald|1965}}; {{harv|Entwisle|1984}}</ref> ಹಲವು ಮಜಬೂತಾದ ಹಾಗೂ ಅಲಂಕಾರಿಕ ಕಟ್ಟಡಗಳನ್ನು ಸಾದರಪಡಿಸುವಂತಹಾ ಅಸಾಧಾರಣ ವಾಸ್ತುಶಿಲ್ಪೀಯ ಕಟ್ಟೋಣಗಳ ಸುರಿಮಳೆ ಕೂಡಾ ಆಯಿತು. R.A. ಲಾಸನ್'ರ ಒಟಾಗೋದ ಪ್ರಥಮ ಚರ್ಚ್/ಇಗರ್ಜಿ ಮತ್ತು ನಾಕ್ಸ್ ಇಗರ್ಜಿ/ಚರ್ಚ್ಗಳು ಇದಕ್ಕೆ ಗಮನಾರ್ಹವಾದ ಉದಾಹರಣೆಗಳಾಗಿದ್ದು, ಅದೇ ರೀತಿ ಕಟ್ಟೋಣಗಳನ್ನು ಮ್ಯಾಕ್ಸ್ವೆಲ್ ಬರಿ/ಬ್ಯುರಿ ಹಾಗೂ F.W. ಪೆಟ್ರೆ/ಪೀಟರ್ರವರು ಕೂಡಾ ನಿರ್ಮಿಸಿದ್ದರು. W. M. ಹಾಡ್ಜ್ಕಿನ್ಸ್ರ ನಾಯಕತ್ವದಡಿಯಲ್ಲಿ ಇತರೆ ದೃಶ್ಯಕಲೆಗಳೂ ಕೂಡಾ ಪ್ರವರ್ಧಮಾನಕ್ಕೆ ಬಂದವು.<ref>{{harv|Entwisle|1984}}</ref> ಮಹಾನಗರದ ವಿಶಾಲದೃಶ್ಯ ಹಾಗೂ ಪ್ರವರ್ಧಮಾನವಾಗುತ್ತಿರುವ ನಗರಪ್ರದೇಶಗಳನ್ನು ಉಜ್ವಲವಾಗಿ ಚಿತ್ರಕಾರರಾದ 1821–1888ರ ಅವಧಿಯ ಜಾರ್ಜ್ O'ಬ್ರಿಯೆನ್ರು ವರ್ಣಮಯವಾಗಿ ಚಿತ್ರಿಸಿದ್ದರು.<ref>{{harv|Collins|Entwisle|1986}}</ref> 1890ರ ದಶಕದ ಮಧ್ಯದಿಂದ ಆರ್ಥಿಕತೆಯು ಪುನರುಜ್ಜೀವನಗೊಂಡಿತು. ಒಟಾಗೋ ಸೆಟ್ಲರ್ಸ್ ಮ್ಯೂಸಿಯಮ್/ವಸ್ತು ಸಂಗ್ರಹಾಲಯ ಹಾಗೂ ಹಾಕೆನ್ ಕಲೆಕ್ಷನ್ಸ್ ವಸ್ತು ಸಂಗ್ರಹಾಲಯಗಳಂತಹಾ ಸಂಸ್ಥೆಗಳು ನ್ಯೂಝಿಲೆಂಡ್ನಲ್ಲಿಯೇ ಆ ತರಹದ ಪ್ರಪ್ರಥಮ ಸಂಸ್ಥೆಗಳನ್ನು ಆಗ ಸ್ಥಾಪಿಸಲಾಯಿತು. ಮತ್ತಷ್ಟು ರೈಲು ನಿಲ್ದಾಣ ಹಾಗೂ ಓಲ್ವೆಸ್ಟನ್ನಂತಹಾ ಗಮನಾರ್ಹವಾದಂತಹಾ ಕಟ್ಟಡಗಳನ್ನು ಆಗ ನಿರ್ಮಿಸಲಾಯಿತು. G.P. ನೇರ್ಲಿಯವರು ಪ್ರತಿನಿಧಿಸುತ್ತಿದ್ದ ದೃಶ್ಯಕಲೆಯಲ್ಲಿನ ನವ ಶಕ್ತಿಯು ಫ್ರಾನ್ಸಿಸ್/ಫ್ರಾನ್ಸಸ್ ಹಾಡ್ಜ್ಕಿನ್ಸ್ರ ವೃತ್ತಿ ಜೀವನದಲ್ಲಿ ಪರಾಕಾಷ್ಠೆ ತಲುಪಿತು.<ref>{{harv|McCormick|1954}}; {{harv|Entwisle|1984}}; {{harv|Entwisle|Dunn|Collins|1988}}; {{harv|Dunn|2005}}</ref>
=== ಆಧುನಿಕ ಯುಗದ ಆದಿಭಾಗ ===
[[File:Historic Dunedin Botanic Gardens.jpg|thumb|300px|ಸಸ್ಯೋದ್ಯಾನಗಳ ಐತಿಹಾಸಿಕ ಪನೋರಮಾ ಚಿತ್ರಾವಳಿ]]
1900ನೇ ಇಸವಿಯ ವೇಳೆಗೆ, ಡ್ಯುನೆಡಿನ್/ಡ್ಯೂನ್ಡಿನ್ ನಗರವು ರಾಷ್ಟ್ರದ ಅತ್ಯಂತ ದೊಡ್ಡ ಮಹಾನಗರವಾಗಿ ಉಳಿದಿರಲಿಲ್ಲ. ಇಲ್ಲಿನ ಪ್ರಾಬಲ್ಯ ಹಾಗೂ ಚಟುವಟಿಕೆಗಳು ಉತ್ತರದ ಇತರೆ ಕೇಂದ್ರ ನಗರಗಳಿಗೆ ಸ್ಥಳಾಂತರಗೊಂಡಿತು ("ಉತ್ತರದೆಡೆಗೆ ಪಥಚ್ಯುತಿ/ಸರಿತ"), ಇದೇ ಪ್ರವೃತ್ತಿಯು ತರುವಾಯದ ಶತಮಾನದಲ್ಲಿಯೂ ಬಹುಮಟ್ಟಿಗೆ ಮುಂದುವರೆಯಿತು. ಹೀಗೆ ಆದಾಗ್ಯೂ, ವಿಶ್ವವಿದ್ಯಾಲಯ ಕ್ಷೇತ್ರವು ವಿಸ್ತರಿಸುವುದನ್ನು ಮುಂದುವರೆಸಿತಲ್ಲದೇ ವಿದ್ಯಾರ್ಥಿ ವಸತಿಗೃಹವನ್ನು ಸ್ಥಾಪಿಸಲಾಯಿತು. ಇದೇ ವೇಳೆಗೆ, ಅದರ ತೀರ ಹಳೆಯ ಕಟ್ಟಡಗಳ ವಯಸ್ಸಾಗುವಿಕೆ/ದುರ್ಬಲಗೊಳ್ಳುವಿಕೆಗಳು E.H. ಮೆಕ್ಕಾರ್ಮಿಕ್ರಂತಹಾ ಲೇಖಕರು ಅದರ ವಾಯುಮಂಡಲದ/ವಾತಾವರಣದ ಸೊಬಗಿನ ಬಗ್ಗೆ ಒತ್ತಿ ಹೇಳುತ್ತಿದ್ದುದೂ ಸೇರಿದಂತೆ ಡ್ಯುನೆಡಿನ್/ಡ್ಯೂನ್ಡಿನ್ ನಗರವು ಪರಿಪಕ್ವಗೊಳ್ಳು/ಮಾಗುತ್ತಿರುವುದನ್ನು ಜನರು ಗಮನಿಸಲು ಆರಂಭಿಸಿದರು.<ref>{{harv|McCormick|1959}}</ref> 1930ರ ದಶಕದಲ್ಲಿ ಹಾಗೂ 1940ರ ದಶಕದ ಆದಿಯಲ್ಲಿ M.T. (ಟಾಸ್) ವೂಲ್ಲಾಸ್ಟನ್, ಡೋರಿಸ್ ಲಸ್ಕ್, ಆನ್ನೆ ಹ್ಯಾಂಬ್ಲೆಟ್, ಕಾಲಿನ್ ಮೆಕ್ಕಾಹನ್ ಮತ್ತು ಪ್ಯಾಟ್ರಿಕ್ ಹೇಮನ್ರವರುಗಳಂತಹಾ ಹೊಸ ತಲೆಮಾರಿನ ಕಲಾಕಾರರು ಮತ್ತೊಮ್ಮೆ ರಾಷ್ಟ್ರದ ಅತ್ಯುತ್ತಮ ಪ್ರತಿಭೆಗಳನ್ನು ಪ್ರತಿನಿಧಿಸಿದರು. ದ್ವಿತೀಯ ವಿಶ್ವ ಸಮರದ ಪರಿಣಾಮವಾಗಿ ಈ ಚಿತ್ರಕಾರರೆಲ್ಲರೂ ಚೆದುರಿಹೋದರು ಆದರೆ ಅದಕ್ಕೆ ಮುಂಚೆ ಮೆಕ್ಕಾಹನ್, ಜೇಮ್ಸ್ K. ಬ್ಯಾಕ್ಸ್ಟರ್ ಎಂಬ ಯುವ ಹುರುಪಿನ ಕವಿಯೊಬ್ಬನನ್ನು ನಗರ ಕೇಂದ್ರಭಾಗದಲ್ಲಿದ್ದ ಕಲಾಗಾರ/ಸ್ಟುಡಿಯೋದಲ್ಲಿ ಭೇಟಿಯಾಗಿದ್ದನು.
ಹತ್ತು ಹಲವು ಬೃಹತ್ ಕಂಪೆನಿಗಳನ್ನು ಡ್ಯುನೆಡಿನ್/ಡ್ಯೂನ್ಡಿನ್ ನಗರದಲ್ಲಿ ಸ್ಥಾಪಿಸಲಾಯಿತು, ಅವುಗಳಲ್ಲಿ ಅನೇಕವು ರಾಷ್ಟ್ರದಲ್ಲಿಯೇ ಮುಂದಾಳು ಸಂಸ್ಥೆಗಳಾದವು. ಅವುಗಳಲ್ಲಿ ಇತ್ತೀಚಿನದು ಸರ್ ಜೇಮ್ಸ್ ಫ್ಲೆಚರ್ರು 20ನೆಯ ಶತಮಾನದ ಆದಿಯಲ್ಲಿ ಸ್ಥಾಪಿಸಿದ್ದ ಫ್ಲೆಚರ್ ಕನ್ಸ್ಟ್ರಕ್ಷನ್ಸ್ ಎಂಬುದಾಗಿದೆ. 1879ರಲ್ಲಿ ಸ್ಥಾಪಿಸಲಾಗಿದ್ದ ಸ್ಟ್ಯಾಫರ್ಡ್ ಬೀದಿ/ರಸ್ತೆಯಲ್ಲಿ ಕೆಂಪ್ಥಾರ್ನ್/ರ್ನೆ ಪ್ರಾಸ್ಸರ್ ಕಂಪೆನಿಯು ಸುಮಾರು 100 ವರ್ಷಗಳಿಗೂ ಹೆಚ್ಚಿನ ಕಾಲದಿಂದ ರಾಷ್ಟ್ರದಲ್ಲೇ ಬೃಹತ್ತಾದ ರಾಸಾಯನಿಕ ಗೊಬ್ಬರ ಮತ್ತು ಔಷಧೀಯ ವಸ್ತುಗಳ ತಯಾರಿಕಾ ಸಂಸ್ಥೆಯಾಗಿತ್ತು. G. ಮೆಥ್ವೆನ್ ಎಂಬ ಒಂದು ದಕ್ಷಿಣ ಡ್ಯುನೆಡಿನ್/ಡ್ಯೂನ್ಡಿನ್ ಮೂಲದ ಲೋಹಗೆಲಸದ ಹಾಗೂ ನಲ್ಲಿ ತಯಾರಿಕಾ ಸಂಸ್ಥೆಯೊಂದು, ಮುಂಚೂಣಿ ಸಂಸ್ಥೆಯಾಗಿತ್ತು ಹಾಗೆಯೇ H. E. ಷಾಕ್ಲಾಕ್ ಎಂಬುದು ಒಂದು ಕಬ್ಬಿಣದ ಎರಕಕೆಲಸದ ಹಾಗೂ ಸಲಕರಣೆ ತಯಾರಿಕಾ ಸಂಸ್ಥೆಯಾಗಿದ್ದು ನಂತರ ಆಕ್ಲೆಂಡ್ನ ಸಂಸ್ಥೆ ಫಿಷರ್ ಅಂಡ್ ಪೇಕೆಲ್ ಅದನ್ನು ಸ್ವಾಧೀನಪಡಿಸಿಕೊಂಡಿತು. ಮೊಸ್ಜಿಯೆಲ್ ವೂಲ್ಲೆನ್ಸ್ ಎಂಬುದು ಮತ್ತೊಂದು ವಿಕ್ಟೋರಿಯಾ ಕಾಲದ ಡ್ಯುನೆಡಿನ್/ಡ್ಯೂನ್ಡಿನ್ ನಗರದ ಪ್ರತಿಷ್ಠಾನವಾಗಿದೆ. ಹಾಲ್ಲೆನ್ಸ್ಟೇಯ್ನ್ಸ್ ಎಂಬ ಪುರುಷರವಸ್ತ್ರ ತಯಾರಿಕಾ ಸಂಸ್ಥೆಯು ಮನೆಮಾತಾಗಿತ್ತು ಹಾಗೂ ಅದೊಂದು ರಾಷ್ಟ್ರೀಯ ಚಿಲ್ಲರೆ ಮಾರಾಟದ ಅಂಗಡಿಗಳ ಸರಣಿಯನ್ನೂ ಹೊಂದಿದ್ದರೆ, DIC ಮತ್ತು ಆರ್ಥರ್ ಬಾರ್ನೆಟ್ಟ್ ಎಂಬುವವು ವಿವಿಧ ಸರಕಿನ ಮಾರಾಟಮಳಿಗೆಗಳ ಸರಣಿಯಾಗಿದ್ದವು, ಇವುಗಳಲ್ಲಿ ಮೊದಲನೆಯದು ರಾಷ್ಟ್ರವ್ಯಾಪಿ ಸಂಸ್ಥೆಯಾಗಿತ್ತು. ಕೌಲ್ಸ್ಲ್, ಸೋಮರ್ವಿಲ್ಲೆ ವಿಲ್ಕೀ ಎಂಬ – ನಂತರ ವ್ಹಿಟ್ಕೌಲ್ಸ್ ಸಮೂಹದ ಭಾಗವಾಗಿ ಮಾರ್ಪಟ್ಟ ಸಂಸ್ಥೆಯು 19ನೆಯ ಶತಮಾನದಲ್ಲಿ ಡ್ಯುನೆಡಿನ್/ಡ್ಯೂನ್ಡಿನ್ ನಗರದಲ್ಲಿ ತನ್ನ ಮೂಲವನ್ನು ಹೊಂದಿತ್ತು. ಈ ನಗರದಲ್ಲಿ ನ್ಯಾಷನಲ್ ಮಾರ್ಟ್ಗೇಜ್ ಅಂಡ್ ಏಜೆನ್ಸಿ ಕಂಪೆನಿ, ರೈಟ್ ಸ್ಟೀಫನ್ಸನ್ಸ್ ಲಿಮಿಟೆಡ್, ಯೂನಿಯನ್ ಸ್ಟೀಮ್ಷಿಪ್ ಕಂಪೆನಿ ಹಾಗೂ ನ್ಯಾಷನಲ್ ಇನ್ಷ್ಯೂರೆನ್ಸ್ ಕಂಪೆನಿ ಮತ್ತು ಸ್ಟ್ಯಾಂಡರ್ಡ್ ಇನ್ಷ್ಯೂರೆನ್ಸ್ ಕಂಪೆನಿಗಳಿದ್ದು, ಇವೂ ಸೇರಿದಂತೆ ಇನ್ನೂ ಅನೇಕವುಗಳು ಮಾತ್ರವಲ್ಲದೇ 20ನೆಯ ಶತಮಾನದವರೆಗೂ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದವು.
=== ಸಮರಾನಂತರದ ಬೆಳವಣಿಗೆಗಳು ===
[[File:Dunedinbotgardens.jpg|right|thumb|225px|ದ ಡ್ಯುನೆಡಿನ್/ಡ್ಯೂನ್ಡಿನ್ ಬಾಟನಿಕ್ ಗಾರ್ಡನ್/ಸಸ್ಯೋದ್ಯಾನ]]
[[File:Baldwin Street.jpg|right|thumb|150px|ಬಾಲ್ಡ್ವಿನ್ ರಸ್ತೆ]]
[[ಎರಡನೇ ಮಹಾಯುದ್ಧ|ವಿಶ್ವ ಸಮರ II]]ರ ನಂತರ, 'ಪ್ರಮುಖ ಕೇಂದ್ರ ನಗರಗಳ ಪಟ್ಟಿಯಲ್ಲಿ' ನಾಲ್ಕನೇ ಸ್ಥಾನಕ್ಕಿಳಿದರೂ ಡ್ಯುನೆಡಿನ್/ಡ್ಯೂನ್ಡಿನ್ ನಗರವು ಉಚ್ಛ್ರಾಯದ ಸ್ಥಿತಿ ಹಾಗೂ ಜನಸಂಖ್ಯೆಯ ಬೆಳವಣಿಗೆಗಳೆರಡೂ ಸುಧಾರಿಸಿದವು. ವಿಕ್ಟೋರಿಯಾ ಕಾಲದ ವ್ಯವಸ್ಥೆಯ ವಿರುದ್ಧ ಪ್ರತಿಕ್ರಿಯೆ ನೀಡುವ ತಲೆಮಾರೊಂದು ಆ ಮಾದರಿಯ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ಕೈಗೊಂಡಿತ್ತು, ಇದರಲ್ಲಿ ಅನೇಕ ಕಟ್ಟಡಗಳು ನಾಶವಾದವು, ಅವುಗಳಲ್ಲಿ ಗಮನಾರ್ಹವಾದುದೆಂದರೆ 1969ರಲ್ಲಿ ನೆಲಸಮಗೊಳಿಸಲಾದ ವಿಲಿಯಂ ಮೇಸನ್ರ [[ಸ್ಟಾಕ್ ಎಕ್ಸ್ಚೇಂಜ್|ಸ್ಟಾಕ್/ಷೇರುವಿನಿಮಯ ಕೇಂದ್ರ]]ದ ಕಟ್ಟಡ. (ಡ್ಯುನೆಡಿನ್/ಡ್ಯೂನ್ಡಿನ್ ಸ್ಟಾಕ್/ಷೇರುವಿನಿಮಯ ಕೇಂದ್ರದ ಕಟ್ಟಡ) ವಿಶ್ವವಿದ್ಯಾಲಯವು ವಿಸ್ತರಣೆಯಾಗುವುದನ್ನು ಮುಂದುವರೆಸಿದರೂ, ಮಹಾನಗರದ ಜನಸಂಖ್ಯೆಯ ಏರಿಕೆಯು ನಿಧಾನವಾಗುತ್ತಾ ಬಂದು ನಂತರ 1976ರಿಂದ 1981ರವರೆಗೆ ಕಡಿಮೆಯಾಗುತ್ತಾ ಹೋಯಿತು. ಅದೇನೇ ಇದ್ದರೂ, ಈ ಅವಧಿಯು ಸಾಂಸ್ಕೃತಿಕವಾಗಿ ಅನುರಣಿಸುವ ಅವಧಿಯಾಗಿದ್ದು ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಖಾಸಗಿಯವರು ದತ್ತಿಕೊಟ್ಟ ಕಲಾ ಫೆಲೋಶಿಪ್ಗಳನ್ನು ನೀಡುತ್ತಿದ್ದು ಜೇಮ್ಸ್ K ಬ್ಯಾಕ್ಸ್ಟರ್, ರಾಲ್ಫ್ ಹೊಟೆರೆ, ಜ್ಯಾನೆಟ್ ಫ್ರೇಮ್, ಮತ್ತು ಹೋನ್ ಟುವ್ಹಾರೆಯಂತಹಾ ಪ್ರತಿಭಾಶಾಲಿಗಳನ್ನು ಮಹಾನಗರದೆಡೆಗೆ ಕರೆತಂದಿತ್ತು.
1980ರ ದಶಕದ ಅವಧಿಯಲ್ಲಿ ದ ಚಿಲ್ಸ್, ದ ಕ್ಲೀನ್, ದ ವರ್ಲೇಯ್ನ್ಸ್, ಮತ್ತು ಸ್ಟ್ರೇಯ್ಟ್ಜ್ಯಾಕೆಟ್ ಫಿಟ್ಸ್ಗಳಂತಹಾ ಅನೇಕ ನಾಟಕಾಂಕಗಳ ಪ್ರದರ್ಶನದೊಂದಿಗೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮನ್ನಣೆಗಳು ದೊರಕುವಂತೆ ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರದ ಜನಪ್ರಿಯ ಸಂಗೀತ ರಂಗವು ವಿಕಸಿಸಿತು. "ದ ಡ್ಯುನೆಡಿನ್/ಡ್ಯೂನ್ಡಿನ್ ಸೌಂಡ್" ಎಂಬ ಪಾರಿಭಾಷಿಕ ಪದವನ್ನು 1960ರ ದಶಕದಿಂದ - ಪ್ರೇರೇಪಣೆಯನ್ನು ಪಡೆದ, ಆ ಕಾಲಘಟ್ಟದಲ್ಲಿ ಪ್ರವರ್ಧಮಾನಕ್ಕೆ ಬಂದ ಗಿಟಾರ್-ಪ್ರಾಧಾನ್ಯದ ಸಂಗೀತವನ್ನು ವರ್ಣಿಸಲು ಟಂಕಿಸಲಾಯಿತು.<ref>ರಾಯ್ ಷೂಕರ್ [https://books.google.com/books?id=PRavFA8l2FQC&pg=PA210&dq=The+Dunedin+Sound%22+1960s+music&hl=en&ei=EuxSTK6IL46WsQaQ0Yi4AQ&sa=X&oi=book_result&ct=result&resnum=1&ved=0CDIQ6AEwAA#v=onepage&q=The%20Dunedin%20Sound%22%201960s%20music&f=false ಅಂಡರ್ಸ್ಟ್ಯಾಂಡಿಂಗ್ ಪಾಪ್ಯುಲರ್ ಮ್ಯೂಸಿಕ್] ರೂಟ್ಲೆಡ್ಜ್, 2001</ref> ಬ್ಯಾಂಡ್ಗಳು ಹಾಗೂ ಸಂಗೀತಗಾರರು ಈಗಲೂ ಹಲವು ಶೈಲಿಗಳಲ್ಲಿ ಹಾಡುವಿಕೆ, ನುಡಿಸುವಿಕೆ ಮತ್ತು ಧ್ವನಿಮುದ್ರಣಗಳನ್ನು ಮಾಡುವುದನ್ನು ಮುಂದುವರೆಸಿದ್ದಾರೆ.
1990ರ ವೇಳೆಗೆ, ಜನಸಂಖ್ಯೆಯ ಕುಸಿತವು ಒಂದು ಸ್ಥಿರ ಮಟ್ಟಕ್ಕೆ ಬಂದಿತು ಹಾಗೂ ಪ್ರಧಾನ ಬೀದಿ/ರಸ್ತೆಗಳನ್ನು ವಿಕ್ಟೋರಿಯನ್ ಶೈಲಿಯಲ್ಲಿ<ref name="heritage buildings">{{Cite web |url=http://www.cityofdunedin.com/city/?page=feat_heritagehousing |title=ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರದ ಪೌರಸಮಿತಿಯ ಜಾಲಪುಟ |access-date=2011-02-28 |archive-date=2002-01-31 |archive-url=https://web.archive.org/web/20020131173317/http://www.cityofdunedin.com/city/?page=feat_heritagehousing |url-status=dead }}</ref> ನವೀಕರಿಸಿಕೊಂಡು ಹಾಗೂ ಆಕ್ಟಾಗನ್ನಲ್ಲಿನ R.A. ಲಾಸನ್'ರ ಮುನಿಸಿಪಲ್ ಚೇಂಬರ್ಸ್/ಪೌರಸಮಿತಿಯ ಸಭಾಭವನವನ್ನು (ಡ್ಯುನೆಡಿನ್/ಡ್ಯೂನ್ಡಿನ್ ಪುರಭವನ) ಉತ್ತಮರೀತಿಯಲ್ಲಿ ಪುನರುಜ್ಜೀವಗೊಳಿಸುವ ಮೂಲಕ ತನ್ನನ್ನು 'ಪಾರಂಪರಿಕ ಮಹಾನಗರ'ವೆಂದು ಡ್ಯುನೆಡಿನ್/ಡ್ಯೂನ್ಡಿನ್ ನಗರವು ತನ್ನನ್ನು ಮರು-ನಿರ್ಮಿಸಿಕೊಂಡಿತು. ಮಹಾನಗರವು ವಿಶ್ವವಿದ್ಯಾಲಯ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಉತ್ಕೃಷ್ಟ ಶಿಕ್ಷಣ ಕೇಂದ್ರವೆಂದು ಮನ್ನಣೆಯನ್ನು ಕೂಡಾ ಗಳಿಸಿಕೊಂಡಿತು. ವಿಶ್ವವಿದ್ಯಾಲಯಗಳ ಹಾಗೂ ಪಾಲಿಟೆಕ್ನಿಕ್ಗಳ ಬೆಳವಣಿಗೆಯು ತ್ವರಿತಗೊಳ್ಳತೊಡಗಿತು. ಡ್ಯುನೆಡಿನ್/ಡ್ಯೂನ್ಡಿನ್ ನಗರವು ಕಲಾ ಪ್ರದರ್ಶನ ಶಾಲೆ, ರೈಲು ನಿಲ್ದಾಣ ಹಾಗೂ ಒಟಾಗೋ ಸೆಟ್ಲರ್ಸ್ ಮ್ಯೂಸಿಯಂ/ವಸ್ತುಸಂಗ್ರಹಾಲಯಗಳ ಮರು ಅಭಿವೃದ್ಧಿಪಡಿಸುವಿಕೆ ಕಾರ್ಯಗಳನ್ನು ಕೈಗೊಂಡು ತನ್ನನ್ನು ನವೀಕರಿಸಿಕೊಳ್ಳುವುದನ್ನು ಮುಂದುವರೆಸಿತು.
ಮಹಾನಗರವು {{NZ population data|Dunedin City|y|y||(|)}}ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ನ್ಯೂಝಿಲೆಂಡ್ನ ಏಳನೇ ಬೃಹತ್ ಮಹಾನಗರ ಪ್ರದೇಶವಾಗಿದೆ.
ಮಹಾನಗರವು ಶಿಲ್ಪವಿಜ್ಞಾನ, ತಂತ್ರಾಂಶ ಶಿಲ್ಪವಿಜ್ಞಾನ, [[ಜೈವಿಕತಂತ್ರಜ್ಞಾನ|ಜೈವಿಕ ತಂತ್ರಜ್ಞಾನ]] ಮತ್ತು ವಸ್ತ್ರಶೈಲಿ/ಫ್ಯಾಷನ್ ಉದ್ಯಮಗಳೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಥಾಪಿತ ಕೈಗಾರಿಕೆಗಳನ್ನು ಹೊಂದಿದೆ. ಒಟಾಗೋ ಬಂದರು ಪ್ರದೇಶದಲ್ಲಿರುವ ಚಾಲ್ಮರ್ಸ್ ರೇವುಪಟ್ಟಣವು ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರಕ್ಕೆ ಆಳವಿರುವ-ಸಮುದ್ರನೀರಿನ ಸೌಲಭ್ಯಗಳನ್ನು ಒದಗಿಸುತ್ತದೆ. ಪ್ರಧಾನ ದಕ್ಷಿಣ ಹೆದ್ದಾರಿ/ಮೇನ್ ಸೌತ್ ಲೈನ್ನಿಂದ ಅಪಸರಣಗೊಳ್ಳುವ ಶಾಖಾ ರೈಲು ಮಾರ್ಗವಾದ ಚಾಲ್ಮರ್ಸ್ ರೇವುಪಟ್ಟಣ ಶಾಖೆ/ಬ್ರಾಂಚ್ ನಗರಕ್ಕೆ ಸೇವೆ ನೀಡುತ್ತದಲ್ಲದೇ, ಇದು ಕ್ರೈಸ್ಟ್ಚರ್ಚ್ನಿಂದ ಡ್ಯುನೆಡಿನ್/ಡ್ಯೂನ್ಡಿನ್ ನಗರದ ಮೂಲಕ ಇನ್ವರ್ಕಾರ್ಗಿಲ್ಗೆ ಪಯಣಿಸುತ್ತದೆ.
ಮಹಾನಗರದ ಸುವರ್ಣ-ಬೇಟೆಯ ವೈಭವದ ಪರಂಪರೆಯ ಮಹಾನಗರದೃಶ್ಯವು ವಿಕ್ಟೋರಿಯನ್ ಮತ್ತು ಎಡ್ವರ್ಡಿಯನ್ ವಾಸ್ತುಕಲೆಗಳ ಅಮೂಲ್ಯ ರತ್ನಗಳೊಂದಿಗೆ ಝಗಮಗಿಸುತ್ತಿರುತ್ತದೆ. ಫಸ್ಟ್ ಚರ್ಚ್ ಇಗರ್ಜಿ, ಒಟಾಗೋ ಬಾಲಕರ ಪ್ರೌಢಶಾಲೆ ಮತ್ತು ಲಾರ್ನಾಚ್ ದುರ್ಗ/ಕ್ಯಾಸಲ್ಗಳು ಸೇರಿದಂತೆ ಅನೇಕ ಕಟ್ಟಡಗಳನ್ನು ನ್ಯೂಝಿಲೆಂಡ್ನ ಶ್ರೇಷ್ಠ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದ R A ಲಾಸನ್ರಿಂದ ವಿನ್ಯಾಸಗೊಳಿಸಲ್ಪಟ್ಟವು. ಇತರೆ ಪ್ರಮುಖ ಕಟ್ಟಡಗಳಲ್ಲಿ ಓಲ್ವೆಸ್ಟನ್ ಮತ್ತು ಡ್ಯುನೆಡಿನ್/ಡ್ಯೂನ್ಡಿನ್ ರೈಲು ನಿಲ್ದಾಣಗಳು ಸೇರಿವೆ. ಇತರೆ ಅಸಾಮಾನ್ಯ ಅಥವಾ ಸ್ಮರಣೀಯ ಕಟ್ಟಡಗಳು ಅಥವಾ ಕಟ್ಟೋಣಗಳಲ್ಲಿ ವಿಶ್ವದಲ್ಲೇ ಅತ್ಯಂತ ಕಡಿದಾದ ಬಾಲ್ಡ್ವಿನ್ ಬೀದಿ/ರಸ್ತೆ ; ಕ್ಯಾಪ್ಟನ್ ಕುಕ್ ಪ್ರವಾಸಿಗೃಹ ; ಕ್ಯಾಡ್ಬರಿ ಚಾಕೋಲೇಟ್ ಕಾರ್ಖಾನೆ (ಕ್ಯಾಡ್ಬರಿ ವರ್ಲ್ಡ್); ಹಾಗೂ ಸ್ಥಳೀಯ ಸ್ಪೇಟ್ರ ಬಟ್ಟಿಕೇಂದ್ರಗಳು ಸೇರಿವೆ.
ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರವು ಪರಿಸರ ಪ್ರವಾಸೋದ್ಯಮ ಕೇಂದ್ರವೂ ಆಗಿದೆ. ವಿಶ್ವದ ಏಕೈಕ ಪ್ರಧಾನಭೂಮಿಯಲ್ಲಿರುವ ರಾಯಲ್ ಆಲ್ಬಟ್ರಾಸ್ ವಾಸಸ್ಥಳ ಮತ್ತು ಹಲವು ಪೆಂಗ್ವಿನ್ ಹಾಗೂ ಸೀಲ್ ಮೀನುಗಳ ವಾಸಸ್ಥಾನಗಳು ಒಟಾಗೋ ಪರ್ಯಾಯ ದ್ವೀಪ/ದ್ವೀಪಕಲ್ಪದ ಮೇಲಿರುವ ಮಹಾನಗರದ ಸರಹದ್ದಿನ ಒಳಗೆ ಇವೆ. ನಗರದ ದಕ್ಷಿಣಕ್ಕೆ, ವೈಹೊಲಾ ಸರೋವರದ ಪಶ್ಚಿಮ ಬದಿಯಲ್ಲಿ ಸಿಂಕ್ಲೇರ್ ಜೌಗುಭೂಮಿಗಳಿವೆ.
ವರ್ಧಿಸುತ್ತಿರುವ ವಿಶ್ವವಿದ್ಯಾಲಯ ಶಿಕ್ಷಣದ ವಿದ್ಯಾರ್ಥಿಗಳ ಜನಸಮೂಹವು ಉತ್ಸಾಹದಿಂದ ಕೂಡಿದ ಹಿಂದೆಯೇ ತಿಳಿಸಲಾಗಿರುವ ಸಂಗೀತ ರಂಗವನ್ನು ಮತ್ತು ತೀರ ಇತ್ತೀಚೆಗೆ ಉಗಮಿಸುತ್ತಿರುವ ನಾಜೂಕು ವಸ್ತುಗಳ ಅಂಗಡಿ/ಬೊಟಿಕ್ ಫ್ಯಾಷನ್/ವಸ್ತ್ರಶೈಲಿ ಉದ್ಯಮಗಳ ಯುವ ಸಂಸ್ಕೃತಿಯ (ವಿದ್ಯಾರ್ಥಿಗಳಲ್ಲದವರು 'ಸ್ಕಾರ್ಫಿಗಳು' ಎಂದು ವಿದ್ಯಾರ್ಥಿಗಳನ್ನು ಕರೆಯುತ್ತಾರೆ) ಮೂಡುವಿಕೆಗೆ ಕಾರಣವಾಗಿದೆ.<ref name="thread">[http://www.thread.co.nz/article/723?PHPSESSID=ee693624acdeb386541e37a5104a8c62 ಥ್ರೆಡ್ ಫ್ಯಾಷನ್ಗೆ ಸಂಬಂಧಿಸಿದ ನಿಯತಕಾಲಿಕೆಯ ಲೇಖನ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref name="Fashionherald">{{
cite news
| first = Cathrin | last = Schaer
| title = Rain fails to dampen Dunedin's fashion parade
| date = 2008-03-03
| url= http://www.nzherald.co.nz/category/story.cfm?c_id=151&objectid=10495751
| newspaper = New Zealand Herald
| publisher = APN Holdings}}</ref> ಒಂದು ಪ್ರಬಲ ದೃಶ್ಯ ಕಲೆ ಸಮುದಾಯವು ಕೂಡಾ ಡ್ಯುನೆಡಿನ್/ಡ್ಯೂನ್ಡಿನ್ ನಗರ ಹಾಗೂ ಅದನ್ನು ಸುತ್ತುವರೆದ ಪ್ರದೇಶಗಳಲ್ಲಿ ಗಮನಾರ್ಹವಾಗಿ ಚಾಲ್ಮರ್ಸ್ ರೇವುಪಟ್ಟಣ ಮತ್ತು ಒಟಾಗೋ ಬಂದರಿನ ಕರಾವಳಿಯ ಅಂಚನ್ನು ಆವರಿಸಿರುವ ಇತರೆ ನೆಲೆಗಳು, ಹಾಗೂ ವೈಟಾಟಿಯಂತಹಾ ಸಮುದಾಯಗಳಲ್ಲಿ ಅಸ್ತಿತ್ವದಲ್ಲಿವೆ.
[[File:St Clair Beach, Dunedin Otago New Zealand.JPG|225px|thumb|right|St ಕ್ಲೇರ್ ಬೀಚ್/ಸಮುದ್ರ ತೀರ, ಡ್ಯುನೆಡಿನ್/ಡ್ಯೂನ್ಡಿನ್.]]
ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರದಲ್ಲಿ ಕ್ರೀಡೆಗೆ ಪ್ರೋತ್ಸಾಹವನ್ನು ಕ್ಯಾರಿಸ್ಬ್ರೂಕ್ನ ಹೊನಲುಬೆಳಕಿನ ರಗ್ಬಿ ಹಾಗೂ [[ಕ್ರಿಕೆಟ್|ಕ್ರಿಕೆಟ್]] ಆಟಗಳಾಡುವ ಕ್ರೀಡಾಂಗಣ, ನವೀನ ಕ್ಯಾಲೆಡೊನಿಯನ್ ಗ್ರೌಂಡ್ಸಾಕ್ಕರ್/ನೆಲ ಕಾಲ್ಚೆಂಡಾಟ ಹಾಗೂ ಲೋಗನ್ ಪಾರ್ಕ್/ಉದ್ಯಾನದಲ್ಲಿ ವಿಶ್ವವಿದ್ಯಾಲಯದ ಬಳಿ ಇರುವ ಅಥ್ಲೆಟಿಕ್ಸ್ ಕ್ರೀಡಾಂಗಣ, ಬೃಹತ್ತಾದ ಎಡ್ಗರ್ ಸೆಂಟರ್ ಒಳಾಂಗಣ ಕ್ರೀಡಾ ಕೇಂದ್ರ, ವಿಶ್ವವಿದ್ಯಾಲಯ ಅಂಡಾಕೃತಿಯ/ಓವಲ್ ಕ್ರಿಕೆಟ್ ಮೈದಾನ, ಡ್ಯುನೆಡಿನ್/ಡ್ಯೂನ್ಡಿನ್ ಐಸ್/ಹಿಮ ಕ್ರೀಡಾಂಗಣ, ಮತ್ತು ಅನೇಕ ಗಾಲ್ಫ್ ಕೋರ್ಸ್ಗಳು ಹಾಗೂ ಉದ್ಯಾನಗಳ ಸೌಲಭ್ಯಗಳ ಮೂಲಕ ನೀಡಲಾಗಿದೆ. ಫೋರ್ಬರಿ ಪಾರ್ಕ್ ಕುದುರೆರೇಸಿನ ಮೈದಾನಗಳು ಮಹಾನಗರದ ದಕ್ಷಿಣದಲ್ಲಿದ್ದು ಇನ್ನೂ ಅನೇಕವು ಕೆಲವೇ ಕಿಲೋಮೀಟರ್ಗಳ ಆಸುಪಾಸಿನಲ್ಲಿ ಕೂಡಾ ಇವೆ. St ಕ್ಲೇರ್ ಸಮುದ್ರತೀರವು ಒಂದು ಜನಪ್ರಿಯ ಕಡಲಲೆ ಸವಾರಿ ತಾಣವಾಗಿದ್ದು ಅಲ್ಲಿನ ಬಂದರು ನೆಲಸುತ್ತು ರೇವು ಹಾಯಿಹಲಗೆಯ ಮೇಲೆ ಹಾಗೂ ತುದಿಹಾಯಿಪಟಗಳ ಮೇಲೆ ಜಲಸವಾರಿ ಮಾಡುವವರಲ್ಲಿ ಜನಪ್ರಿಯವಾಗಿದೆ. ಡ್ಯುನೆಡಿನ್/ಡ್ಯೂನ್ಡಿನ್ ನಗರವು ನಾಲ್ಕು ಸಾರ್ವಜನಿಕ ಈಜುಕೊಳಗಳನ್ನು ಹೊಂದಿದೆ: ಅವುಗಳೆಂದರೆ ಮೊವಾನಾ ಈಜುಕೊಳ, ಚಾಲ್ಮರ್ಸ್ ರೇವುಪಟ್ಟಣ ಈಜುಕೊಳ, ಮೊಸ್ಜಿಯೆಲ್ ಮತ್ತು St ಕ್ಲೇರ್ ಉಪ್ಪುನೀರಿನ ಈಜುಕೊಳ.
== ಭೌಗೋಳಿಕತೆ ==
[[File:Dunedin Otago Peninsula Harbour.jpg|thumb|right|225px|ಒಟಾಗೋ ಬಂದರುವಿನ ಕೊನೆಯಲ್ಲಿ ಒಟಾಗೋ ಪರ್ಯಾಯ ದ್ವೀಪ/ದ್ವೀಪಕಲ್ಪದ ಭೂಕಂಠದ ಸಮೀಪದಲ್ಲಿ ಡ್ಯುನೆಡಿನ್/ಡ್ಯೂನ್ಡಿನ್ (ಎಡಗಡೆ ಕೆಳಭಾಗದಲ್ಲಿನ ಪ್ರದೇಶ) ನಗರವು ಇದೆ.]]
ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರವು {{convert|3314.8|km2|sqmi|1}}ರಷ್ಟು ವಿಸ್ತೀರ್ಣದ ಭೂಪ್ರದೇಶವನ್ನು ಆವರಿಸಿದ್ದು ರ್ಹೋಡ್ ದ್ವೀಪ/ಐಲೆಂಡ್ವೆಂಬ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕದ]] ರಾಜ್ಯ ಅಥವಾ, ಕೇಂಬ್ರಿಡ್ಜ್ಷೈರ್ ಆಂಗ್ಲ ಕೌಂಟಿಗಳಿಗಿಂತ ತೀರ ಸ್ವಲ್ಪ ಸಣ್ಣದಾಗಿದ್ದರೆ, ಕಾರ್ನ್ವಾಲ್ಗಿಂತ ಸ್ವಲ್ಪ ಸಣ್ಣಗಿದೆ.
1 ನವೆಂಬರ್ 2010ರಂದು {{convert|5600|km2|abbr=on}} ಆಕ್ಲೆಂಡ್ ಪೌರಸಮಿತಿಯ ರಚನೆಯಾಗುವುದಕ್ಕಿಂತ ಮುಂಚೆ ಈ ನಗರವು ಭೂವಿಸ್ತೀರ್ಣದ ಅನುಸಾರ [[ನ್ಯೂ ಜೀಲ್ಯಾಂಡ್|ನ್ಯೂಝಿಲೆಂಡ್]]ನಲ್ಲಿಯೇ ಅತ್ಯಂತ ದೊಡ್ಡ ಮಹಾನಗರವಾಗಿತ್ತು. ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರದ ಪೌರಸಮಿತಿಯ ಸರಹದ್ದನ್ನು 1989ರಿಂದ ಪಶ್ಚಿಮದಲ್ಲಿ ಮಿಡಲ್ಮಾರ್ಚ್ನವರೆಗೆ, ಉತ್ತರದಲ್ಲಿ ವೈಕೌಐಟಿ/ತಿವರೆಗೆ, ಪೂರ್ವದಲ್ಲಿ [[ಪೆಸಿಫಿಕ್ ಮಹಾಸಾಗರ|ಪೆಸಿಫಿಕ್/ಶಾಂತ ಮಹಾಸಾಗರ]]ದವರೆಗೆ ಮತ್ತು ಆಗ್ನೇಯ ದಿಕ್ಕಿನಲ್ಲಿ, ವೈಪೊರಿ/ತೈಯೆರಿ ನದಿಯವರೆಗೆ ಹಾಗೂ ನೈಋತ್ಯ ದಿಕ್ಕಿನಲ್ಲಿ ಹೆನ್ಲೆ ಪಟ್ಟಣದವರೆಗೆ ವಿಸ್ತರಿಸಲಾಗಿದೆ.
ಡ್ಯುನೆಡಿನ್/ಡ್ಯೂನ್ಡಿನ್ ನಗರವು [[ಲಂಡನ್|ಲಂಡನ್]]ನಿಂದ {{convert|19100|km|mi|-1|abbr=on}}ಗಳಷ್ಟು ದೂರವಿದ್ದು, ಅಲ್ಲಿಂದ ವಿಶ್ವದಲ್ಲಿಯೇ ಅತಿ ದೂರದಲ್ಲಿರುವ ಮಹಾನಗರವಾಗಿದೆ (ಇನ್ವರ್ಕಾರ್ಗಿಲ್ಗಿಂತ {{convert|90|km|mi|0|abbr=on}}ರಷ್ಟು ಹೆಚ್ಚು ದೂರ, ಹಾಗೂ ಕ್ರೈಸ್ಟ್ಚರ್ಚ್ಗಿಂತ {{convert|100|km|mi|-0|abbr=on}}ರಷ್ಟು ಹೆಚ್ಚು ದೂರ), ಹಾಗೂ [[ಬರ್ಲಿನ್|ಬರ್ಲಿನ್]]ನಿಂದ {{convert|18200|km|mi|-1|abbr=on}}ಗಳಷ್ಟು ದೂರವಿದೆ. ಇದರ ನೇರಾಚಿನ ಸ್ಥಳಗಳು ಬಿಸ್ಕೆ ಕೊಲ್ಲಿಯಲ್ಲಿರುವ [[ಸ್ಪೇನ್|ಸ್ಪ್ಯಾನಿಷ್]] ಮಹಾನಗರವಾದ A ಕೊರುನಾದ ಸ್ವಲ್ಪ {{convert|300|km|mi|-1|abbr=on}}ರಷ್ಟು ಉತ್ತರ ದಿಕ್ಕಿಗಿವೆ.
===ಮಹಾನಗರದ ಒಳಭಾಗದ ವಿವರ===
ಮಹಾನಗರದ ಹೃದಯ ಭಾಗವು ಒಟಾಗೋ ಬಂದರಿನ ಶಿರೋಭಾಗ/ಭೂಚಾಚುವಿನ ಪಶ್ಚಿಮ ದಿಕ್ಕಿನಲ್ಲಿರುವ ಸಾಪೇಕ್ಷವಾಗಿ ಚಪ್ಪಟೆ ಭೂಭಾಗದ ಮೇಲಿದೆ. ಇಲ್ಲಿಯೇ ದ ಆಕ್ಟಾಗನ್ ಇದೆ – ಒಂದು ಕಾಲದಲ್ಲಿ ಇದು ನದೀಕಣಿವೆಯಾಗಿತ್ತು, ಈಗಿರುವ ಪೇಟೆವಲಯವನ್ನು ನಿರ್ಮಿಸಲು ಹತ್ತೊಂಬತ್ತನೆಯ ಶತಮಾನದ ಮಧ್ಯದಲ್ಲಿ ಇದನ್ನು ಭರ್ತಿಮಾಡಲಾಗಿತ್ತು. ಮಹಾನಗರದಲ್ಲಿನ ಆರಂಭಿಕ ವಾಸಿಸುವಿಕೆಯು ದಕ್ಷಿಣದಲ್ಲಿ ಗಂಟೆ ಗುಡ್ಡ/ಬೆಲ್ ಹಿಲ್ದ ಮತ್ತೊಂದು ಬದಿಯಲ್ಲಿ ಸಂಭವಿಸಿತ್ತು, ಅಲ್ಲಿದ್ದ ದೊಡ್ಡದೊಂದು ಬಹಿರ್ಗತ ಶಿಲಾಸ್ತರವನ್ನು ವಸಾಹತುವಿನ ಎರಡು ಭಾಗಗಳ ನಡುವೆ ಸರಾಗವಾದ ಓಡಾಟಕ್ಕಾಗಿ ಮೊಟಕುಗೊಳಿಸಬೇಕಾಗಿತ್ತು. ಮಹಾನಗರದ ಕೇಂದ್ರ ಪ್ರದೇಶವು ಈ ಸ್ಥಳದಿಂದ ಬಹುಮಟ್ಟಿಗೆ ಈಶಾನ್ಯ-ನೈಋತ್ಯ ದಿಕ್ಕಿನಲ್ಲಿ ಹೊರಳುತ್ತದೆಯಲ್ಲದೇ, ಜಾರ್ಜ್ ರಸ್ತೆ ಹಾಗೂ ಪ್ರಿನ್ಸಸ್ ರಸ್ತೆಗಳಂತಹಾ ಪ್ರಮುಖ ರಸ್ತೆಗಳು ದ ಆಕ್ಟಾಗನ್ನಲ್ಲಿ ಸಂಧಿಸುತ್ತವೆ. ಇಲ್ಲಿ ಲಂಬಕೋನೀಯವಾಗಿ ಅವುಗಳನ್ನು ಸ್ಟುವರ್ಟ್ ರಸ್ತೆಯು ಸಂಧಿಸುತ್ತದೆ, ಮಾತ್ರವಲ್ಲದೇ ಆಗ್ನೇಯದಲ್ಲಿನ ಡ್ಯುನೆಡಿನ್/ಡ್ಯೂನ್ಡಿನ್ ರೈಲು ನಿಲ್ದಾಣದಿಂದ ವಾಯುವ್ಯದಲ್ಲಿನ ರಾಸ್ಲಿನ್ ಉಪನಗರದ ಕಡಿದಾದ ದಾರಿಯುದ್ದಕ್ಕೂ ಸಾಗುತ್ತದೆ. ಮಹಾನಗರದ ಅನೇಕ ಗಮನಾರ್ಹ ಹಳೆಯ ಕಟ್ಟಡಗಳು ಈ ಪ್ರದೇಶದ ದಕ್ಷಿಣ ಭಾಗದಲ್ಲಿ ಹಾಗೂ ಮಹಾನಗರದ ಕೇಂದ್ರ ಪ್ರದೇಶವನ್ನು ಸುತ್ತುವರೆದಿರುವ ಕೆಳಗಿನ ಗುಡ್ಡಸಾಲುಗಳ ಒಳ ವರ್ತುಲ ಪ್ರದೇಶದಲ್ಲಿ ಕಂಡುಬರುತ್ತವೆ (ಮಾವೊರಿ ಗುಡ್ಡ, ಪೈನ್ ಗುಡ್ಡ, ಮತ್ತು ಮೇರಿಹಿಲ್ಗಳಂತಹಾ ಬಹುತೇಕ ಗುಡ್ಡಗಳು, ಬಯಲು ಪ್ರದೇಶದ {{convert|200|m|ft|-1}}ರಷ್ಟು ಮೇಲ್ಭಾಗಕ್ಕೆ ಏರಿರುತ್ತವೆ).
ಡ್ಯುನೆಡಿನ್/ಡ್ಯೂನ್ಡಿನ್ ನಗರವು ''[[ಗಿನ್ನೆಸ್ ದಾಖಲೆಗಳ ಪುಸ್ತಕ|ಗಿನ್ನೆಸ್ ದಾಖಲೆಗಳ ಗ್ರಂಥ/ಪುಸ್ತಕ]]'' ದ ಪ್ರಕಾರ ವಿಶ್ವದಲ್ಲಿಯೇ ಅತ್ಯಂತ ಕಡಿದಾದ ರಸ್ತೆಯಾಗಿರುವ ಬಾಲ್ಡ್ವಿನ್ ರಸ್ತೆಗೆ ನೆಲೆಯಾಗಿದೆ. ಈ ರಸ್ತೆಯ ಪ್ರವಣತೆಯು 2.9ಕ್ಕೆ 1ರಷ್ಟಿದೆ.<ref>{{cite web|title=Steepest Streets in Dunedin|url=http://www.cityofdunedin.com/city/?page=roading_steep_street|publisher=Dunedin City Council|accessdate=2008-05-16|archive-date=2003-05-26|archive-url=https://web.archive.org/web/20030526004153/http://www.cityofdunedin.com/city/?page=roading_steep_street|url-status=dead}}</ref> ಸಾಕಷ್ಟು ಹಿಂದೆಯೇ ರದ್ದು ಮಾಡಲಾಗಿರುವ ಮೇರಿಹಿಲ್ ಕೇಬಲ್ಕಾರ್ ಮಾರ್ಗವು ಅದರ ಮಾರ್ನಿಂಗ್ಟನ್ ಡಿಪೋದ ಬಳಿ ಅದಕ್ಕೆ ಹೋಲುವಂತಹಾ ಪ್ರವಣತೆಯನ್ನು ಹೊಂದಿವೆ.
ಡ್ಯುನೆಡಿನ್/ಡ್ಯೂನ್ಡಿನ್ ನಗರದ ಹೊರಭಾಗದ ಉಪನಗರಗಳು ಗುಡ್ಡಗಳ ಒಳಪಂಕ್ತಿಯ ಹೊರಭಾಗದಲ್ಲಿದ್ದು, ಗಮನಾರ್ಹವಾಗಿ, ವಾಯುವ್ಯ ದಿಕ್ಕಿಗೆ ರೋಸ್ಲಿನ್ನಿಂದ ಆಚೆಗಿರುವ ಪ್ರದೇಶದಲ್ಲಿವೆ. ಇದೇ ದಿಕ್ಕಿನಲ್ಲಿರುವ ತೈಯೆರಿ ರಸ್ತೆ ಮತ್ತು ಥ್ರೀ ಮೈಲ್ ಗುಡ್ಡಗಳ ನಡುವಿನ ಮಾರ್ಗವು ತೈಯೆರಿ ಬಯಲು ಪ್ರದೇಶಕ್ಕೆ ಮೂಲ ರಸ್ತೆ ಮಾರ್ಗವಾಗಿ ಪರಿಣಮಿಸಿತು. ಆಧುನಿಕ ಸ್ಟೇಟ್ ಹೈವೇ/ಸರ್ಕಾರೀ ಹೆದ್ದಾರಿ 1 ಪಶ್ಚಿಮದಲ್ಲಿ ಕ್ಯಾವರ್ಶ್ಯಾಮ್ನ ಮೂಲಕ ಹಾದುಹೋಗುವ ಹಾಗೂ ಸ್ಯಾಡಲ್ ಬೆಟ್ಟದ ಹಿಂದೆ ಹಾಕುವ ಬೇರೆಯೇ ಮಾರ್ಗವನ್ನು ಬಳಸುತ್ತದೆ. ಗ್ರೀನ್ ಐಲೆಂಡ್ ಮತ್ತು ಅಬಾಟ್ಸ್ಫರ್ಡ್ ಎಂಬ ಹೊರವಲಯದ ಉಪನಗರಗಳು ಸ್ಯಾಡಲ್ ಬೆಟ್ಟ ಮತ್ತು ಕ್ಯಾವರ್ಶ್ಯಾಮ್ ಪ್ರದೇಶಗಳ ನಡುವೆ ಇವೆ. ಗ್ರೀನ್ ಐಲೆಂಡ್ ಮತ್ತು ರೋಸ್ಲಿನ್ ಪ್ರದೇಶಗಳ ನಡುವೆ ಕೈಕೊರಾಯ್ ಹೊಳೆಯ ಕಡಿದಾದ ಬದಿಗಳಿರುವ ಕಣಿವೆಯಿದ್ದು, ಅದೀಗ ಒಂದು ವಸತಿಪ್ರದೇಶ ಹಾಗೂ ಲಘು ಕೈಗಾರಿಕಾ ಪ್ರದೇಶವಾಗಿದೆ. ಉಪನಗರದ ವಸಾಹತುಗಳು – ಬಹುತೇಕ ಪ್ರತ್ಯೇಕ ಪಟ್ಟಣಗಳಂತೆಯೇ ಪರಿಗಣಿಸಲ್ಪಡುವ ಇವು – ಕೂಡಾ ಒಟಾಗೋ ಬಂದರುವಿನ ಎರಡೂ ಬದಿಗಳುದ್ದಕ್ಕೂ ಹರಡಿವೆ. ಇವುಗಳಲ್ಲಿ ಗಮನಾರ್ಹವಾದುವೆಂದರೆ ಒಟಾಗೋ ಪರ್ಯಾಯ ದ್ವೀಪ/ದ್ವೀಪಕಲ್ಪದ ಕರಾವಳಿಯಲ್ಲಿರುವ ಪೋರ್ಟೋಬೆಲ್ಲೋ ಮತ್ತು ಮೆಕಾಂಡ್ರ್ಯೂ ಕೊಲ್ಲಿ ಮತ್ತು ಬಂದರುವಿನ ವಿರುದ್ಧ ದಿಕ್ಕಿನಲ್ಲಿರುವ ಚಾಲ್ಮರ್ಸ್ ರೇವುಪಟ್ಟಣ. ಮಹಾನಗರದ ಧಾರಕ ಹಡಗುಗಳ ರೇವುಪಟ್ಟಣವೂ ಸೇರಿದಂತೆ ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರದ ಪ್ರಮುಖ ಆಳ-ನೀರಿನ ರೇವುಪಟ್ಟಣದ ಸೇವೆಯನ್ನು ಚಾಲ್ಮರ್ಸ್ ರೇವುಪಟ್ಟಣ ನೀಡುತ್ತದೆ.
ಡ್ಯುನೆಡಿನ್/ಡ್ಯೂನ್ಡಿನ್ ನಗರದ ಬಾನಗೆರೆಯು ಜ್ವಾಲಾಮುಖಿಯ ಕುಳಿಯ ಅವಶೇಷಗಳಾಗಿರುವ ಗುಡ್ಡಗಳ ವರ್ತುಲವು (ಸಾಂಪ್ರದಾಯಿಕವಾಗಿ ಏಳು) ಎದ್ದುಕಾಣಿಸುತ್ತವೆ. ಅವುಗಳಲ್ಲಿ ಗಮನಾರ್ಹವಾದವೆಂದರೆ ಕಾರ್ಗಿಲ್ ಬೆಟ್ಟ ({{convert|700|m|ft|-1|abbr=on|disp=/}}), ಫ್ಲಾಗ್ಸ್ಟಾಫ್ ({{convert|680|m|ft|-1|abbr=on|disp=/}}), ಸ್ಯಾಡಲ್ ಬೆಟ್ಟ ({{convert|480|m|ft|-1|abbr=on|disp=/}}), ಸಿಗ್ನಲ್ ಬೆಟ್ಟ/ಹಿಲ್ ({{convert|390|m|ft|-1|abbr=on|disp=/}}), ಮತ್ತು ಬಂದರು ಕೋನ್ ({{convert|320|m|ft|-1|abbr=on|disp=/}}).<ref name="autogenerated1">{{harv|Dann|Peat|1989}}</ref>
===ಹಿನ್ನಾಡು/ಒಳನಾಡು===
ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರದ ಒಳನಾಡು ವೈವಿಧ್ಯಮಯವಾದ ಬೇರೆ ಬೇರೆ ಭೂಸ್ವರೂಪಗಳನ್ನು ಹೊಂದಿದೆ. ನೈಋತ್ಯ ದಿಕ್ಕಿಗೆ ತೈಯೆರಿ ಬಯಲು ಪ್ರದೇಶವಿದ್ದು ವಿಸ್ತಾರವಾದ ಹಾಗೂ ಫಲವತ್ತಾದ ತೈಯೆರಿ ನದಿ ಹಾಗೂ ಅದರ ಪ್ರಧಾನ ಉಪನದಿ ವಾಯ್ಪೊರಿಗಳ ತಗ್ಗುಪ್ರದೇಶದ ಪ್ರವಾಹ ಹರಿಯುವ ಬಯಲಿನಿಂದ ಕೂಡಿದೆ. ಈ ಪ್ರದೇಶಗಳೆಲ್ಲವುಗಳಲ್ಲಿಯೂ ಮಧ್ಯಮ ಪ್ರಮಾಣದಲ್ಲಿ ಸಾಕಷ್ಟು ಜನನಿಬಿಡವಾಗಿ ಜನವಸತಿಯಿದ್ದು ಮೊಸ್ಜಿಯೆಲ್, ಪೂರ್ವ ತೈಯೆರಿ, ಮತ್ತು ಅಲ್ಲಂಟಾನ್ ಪಟ್ಟಣಗಳನ್ನು ಹೊಂದಿವೆ.<ref name="autogenerated1" /> ಈ ಪಟ್ಟಣಗಳು ಸುಮಾರು {{convert|300|m|ft|-1}}ರಷ್ಟು ಎತ್ತರದ ಕೆಳ ಮಟ್ಟದ ಗುಡ್ಡಗಳ ಸರಣಿಯಿಂದಾಗಿ ತೀರದಿಂದ ಪ್ರತ್ಯೇಕಿಸಲ್ಪಟ್ಟಿವೆ. ತೈಯೆರಿ ಬಯಲು ಪ್ರದೇಶದ ಕಡೆಯ ಒಳಪ್ರದೇಶವು ಉರುಟುರುಟಾದ ಗುಡ್ಡಗಳಿಂದ ಕೂಡಿದ ಗ್ರಾಮಾಂತರ ಪ್ರದೇಶವಾಗಿದೆ. ಬಯಲು ಪ್ರದೇಶಕ್ಕೆ ಸಮೀಪವಿರುವ ಬಹುತೇಕ ಪ್ರದೇಶವು ಮರಗಳಿಂದ ಕೂಡಿದ್ದು, ಗಮನಾರ್ಹವಾಗಿ ಬರ್ವಿಕ್ ಮತ್ತು ಮಹಿನೆರಂಗಿ ಸರೋವರದ ಸುತ್ತಮುತ್ತ ಹಾಗೂ ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರ ಪ್ರದೇಶದ ವಾಯುವ್ಯ ದಿಕ್ಕಿಗಿರುವ ಸಿಲ್ವರ್ಪೀಕ್ಸ್ ಬೆಟ್ಟಸಾಲಿನ ಸುತ್ತಮುತ್ತ ಕೂಡಾ ಅದೇ ರೀತಿ ಇದೆ.<ref>{{harv|Bishop|Hamel|1993}}</ref> ಇದಾದ ನಂತರದ ಭೂಮಿಯು ಶುಷ್ಕವಾಗುತ್ತಾ ಹೋಗುತ್ತದೆ ಹಾಗೂ ನಂತರ ಹುಲ್ಲು ಮತ್ತು ಹುಲ್ಲುಮೆದೆಗಳಿಂದ ಕೂಡಿದ ಭೂಮಿಯು ತೆರೆದುಕೊಳ್ಳುತ್ತಾ ಹೋಗುತ್ತದೆ. ಒಂದು ಎತ್ತರ ಮತ್ತು ವ್ಯಾಪಕವಾದ ಕಣಿವೆಯಾದ ಸ್ಟ್ರಾತ್-ತೈಯೆರಿ ಕಣಿವೆಯು ಡ್ಯುನೆಡಿನ್/ಡ್ಯೂನ್ಡಿನ್ ನಗರದ ಬಹುದೂರದಲ್ಲಿ ವಾಯುವ್ಯ ದಿಕ್ಕಿನಲ್ಲಿದ್ದು ಆ ಪ್ರದೇಶದ ಕೆಲವೇ ಜನಸಮೂಹದಿಂದ ಕೂಡಿದ ಪ್ರದೇಶಗಳಲ್ಲಿ ಒಂದಾದ ಮಿಡಲ್ಮಾರ್ಚ್, ಎಂಬ ಪಟ್ಟಣವನ್ನು ಹೊಂದಿದೆ.
ಮಹಾನಗರದ ನಗರವಲಯ ಪ್ರದೇಶದ ಉತ್ತರಕ್ಕೆ ವೈಟಾಟಿ/ತಾತಿ, ವಾರ್ರಿಂಗ್ಟನ್, ಸೀಕ್ಲಿಫ್ ಮತ್ತು ವೈಕೌಐಟಿ/ತಿಗಳೂ ಸೇರಿದಂತೆ ಅನೇಕ ಸಣ್ಣ, ಪ್ರಮುಖವಾಗಿ ಕರಾವಳೀಯ ವಸಾಹತುಗಳು/ನೆಲೆಗಳನ್ನು ಹೊಂದಿದ್ದ ತರಂಗದಾಕಾರದ ಬೆಟ್ಟಗುಡ್ಡಗಳ ಸಾಲಿದೆ. ಅಲ್ಲಿರುವ ಬೆಟ್ಟಗಳ ಸರಣಿಯ ಗಮನಾರ್ಹವಾಗಿ ದ ಕಿಲ್ಮಾಗ್, ಮೂಲಕ ಕಡಿದಾದ ಹಾದಿಯಲ್ಲಿ ಸುತ್ತಿಕೊಂಡು ಸರ್ಕಾರಿ/ರಾಜ್ಯ ಹೆದ್ದಾರಿ 1 ಸಾಗುತ್ತದೆ.<ref name="autogenerated1" /> ಈ ಬೆಟ್ಟಗಳನ್ನು ಸಿಲ್ವರ್ಪೀಕ್ಸ್ ಬೆಟ್ಟ ಸರಣಿಯ ಕರಾವಳಿಯಲ್ಲಿನ ವಿಸ್ತರಣೆ ಎಂದು ಭಾವಿಸಬಹುದಾಗಿರುತ್ತದೆ.
ಪೂರ್ವ ದಿಕ್ಕಿನಲ್ಲಿ, ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರವು ಡ್ಯುನೆಡಿನ್/ಡ್ಯೂನ್ಡಿನ್ ಜ್ವಾಲಾಮುಖಿಯ ಆಗ್ನೇಯ ದಿಕ್ಕಿನ ಹೊರಸುತ್ತಾಗಿ ರೂಪುಗೊಂಡ ದೀರ್ಘವಾದ ಭೂಮಿಯಾದ ಅಖಂಡ ಒಟಾಗೋ ಪರ್ಯಾಯ ದ್ವೀಪ/ದ್ವೀಪಕಲ್ಪವನ್ನು ಒಳಗೊಂಡಿದೆ.<ref name="autogenerated1" /> ಪರ್ಯಾಯ ದ್ವೀಪ/ದ್ವೀಪಕಲ್ಪ ಪ್ರದೇಶವು ಅಲ್ಪ ಪ್ರಮಾಣದ ಜನವಸತಿಯನ್ನು ಹೊಂದಿದ್ದು, ಬಹುತೇಕವಾಗಿ ಇಡೀ ಬಂದರು ಕರಾವಳಿಯುದ್ದಕ್ಕೂ ಆವರಿಸಿದೆ, ಹಾಗೂ ಅವುಗಳಲ್ಲಿ ಬಹುತೇಕವನ್ನು [[ಪರಿಸರ ವ್ಯವಸ್ಥೆ|ನೈಸರ್ಗಿಕ ವಾಸಸ್ಥಾನ]]ವಾಗಿ ಹಾಗೂ ಒಟಾಗೋ ಪರ್ಯಾಯ ದ್ವೀಪ/ದ್ವೀಪಕಲ್ಪ ಟ್ರಸ್ಟ್ ನ್ಯಾಸದಿಂದ ನಿರ್ವಹಿಸಿಕೊಂಡು ಬರಲಾಗಿದೆ. ಪರ್ಯಾಯ ದ್ವೀಪ/ದ್ವೀಪಕಲ್ಪವು ಅನೇಕ ಉತ್ತಮ ತೀರಗಳನ್ನು ಹೊಂದಿದೆ ಹಾಗೂ ಗಮನಾರ್ಹ ಸಂಖ್ಯೆಯ ಪೆಂಗ್ವಿನ್ಗಳು, ಸೀಲ್ ಮೀನುಗಳು, ಮತ್ತು ನೀರುಕಾಗೆಗಳಂತಹಾ ಅಪರೂಪದ ತಳಿಗಳಿಗೆ ನೆಲೆಯಾಗಿದೆ. ಬಹು ಮುಖ್ಯವಾಗಿ, ಈ ಪ್ರದೇಶವು ವಿಶ್ವದ ಏಕೈಕ ರಾಯಲ್ ಆಲ್ಬಟ್ರಾಸ್ಗಳ ಪ್ರಧಾನನಾಡಿನ ತಳಿ ಉತ್ಪಾದಕ ವಸಾಹತುವನ್ನು ಪರ್ಯಾಯ ದ್ವೀಪ/ದ್ವೀಪಕಲ್ಪದ ಈಶಾನ್ಯ ತುದಿಯಲ್ಲಿನ ತಯಾರೊವಾ ಭೂಚಾಚು/ಭೂಶಿರವಿನಲ್ಲಿ ಹೊಂದಿದೆ.
=== ಉಪನಗರಗಳ ಪಟ್ಟಿ ===
{{Main|Suburbs of Dunedin}}
'''ಒಳಭಾಗದ/ನಾಡಿನ ಉಪನಗರಗಳು'''
''(ಪ್ರದಕ್ಷಿಣಾಕಾರವಾಗಿ ಮಹಾನಗರದ ಕೇಂದ್ರದ ನೇರ ಉತ್ತರದಿಕ್ಕಿನಿಂದ ಆರಂಭ)'' <br>
ವುಡ್ಹಾಘ್ ; ಗ್ಲೆನ್ಲೇಯ್ತ್ ; ಲೇಯ್ತ್ ಕಣಿವೆ ; ಡಾಲ್ಮೋರ್ ; ಲಿಬರ್ಟನ್ ; ಪೈನ್ ಹಿಲ್ ; ನಾರ್ಮನ್ಬೈ ; Mt ಮೆರಾ ; ಈಶಾನ್ಯ/ನಾರ್ಥ್ ಈಸ್ಟ್ ಕಣಿವೆ ; ಒಪೋಹೋ ; ಉತ್ತರ ಡ್ಯುನೆಡಿನ್/ಡ್ಯೂನ್ಡಿನ್; ರಾವೆನ್ಸ್ಬೌರ್ನ್/ರ್ನೆ ; ಹೈಕ್ಲಿಫ್ ; ಷೀಲ್ ಹಿಲ್ ; ಛಾಲ್ಲಿಸ್ ; ವೇವರ್ಲೆ ; ವಾಕ್ಸ್ಹಾಲ್ ; ಓಷನ್ ಗ್ರೋವ್ (ಟೋಮಾಹಾಕ್); ಟೈನುಯಿ; ಆಂಡರ್ಸನ್ಸ್ ಬೇ ; ಮಸ್ಸೆಲ್ಬರ್ಗ್ ; ದಕ್ಷಿಣ ಡ್ಯುನೆಡಿನ್/ಡ್ಯೂನ್ಡಿನ್ ; St ಕಿಲ್ಡಾ ; St ಕ್ಲೇರ್ ; ಕಾಸ್ಟೋರ್ಫೈನ್ ; ಕ್ಯೂ ; ಫಾರ್ಬರಿ ; ಕ್ಯಾವರ್ಶ್ಯಾಮ್ ; ಕನ್ಕಾರ್ಡ್ ; ಮೇರಿಹಿಲ್ ; ಕೆನ್ಮ್ಯೂರ್ ; ಮಾರ್ನಿಂಗ್ಟನ್ ; ಕೈಕೊರಾಯ್ ಕಣಿವೆ ; ಸಿಟಿ ರೈಸ್ ; ಬೆಲ್ಲೆನೋವೆಸ್ ; ರೋಸ್ಲಿನ್, ಒಟಾಗೋ ; ಕೈಕೊರಾಯ್ ; ವಕಾರಿ; ಮಾವೊರಿ ಹಿಲ್.
'''ಹೊರಭಾಗದ/ನಾಡಿನ ಉಪನಗರಗಳು'''
''(ಪ್ರದಕ್ಷಿಣಾಕಾರವಾಗಿ ಮಹಾನಗರದ ಕೇಂದ್ರದ ನೇರ ಉತ್ತರದಿಕ್ಕಿನಿಂದ ಆರಂಭ)'' <br>
ಬರ್ಕ್ಸ್ ; ಸೇಂಟ್ ಲಿಯೋನಾರ್ಡ್ಸ್ ; ಬ್ರಾಡ್ ಬೇ ; ಕಂಪೆನಿ ಬೇ ; ಮೆಕಾಂಡ್ರ್ಯೂ ಬೇ ; ಬರ್ನ್ಸೈಡ್ ; ಗ್ರೀನ್ ಐಲೆಂಡ್ ; ವಾಲ್ಡ್ರನ್ವಿಲ್ಲೆ ; ಸ್ಯಾಡಲ್ ಹಿಲ್ ; ಸನ್ನಿವೇಲ್; ಫೇರ್ಫೀಲ್ಡ್ ; ಅಬಾಟ್ಸ್ಫರ್ಡ್ ; ಬ್ರಾಡ್ಫರ್ಡ್; ಬ್ರಾಕ್ವಿಲ್ಲೆ ; ಹಾಫ್ವೇ ಬುಷ್; ಹೆಲೆನ್ಸ್ಬರ್ಗ್.
==== ಮಹಾನಗರಮಿತಿಯೊಳಗೆ ಇರುವ ಪಟ್ಟಣಗಳು ====
''(ಪ್ರದಕ್ಷಿಣಾಕಾರವಾಗಿ ಮಹಾನಗರದ ಕೇಂದ್ರದ ನೇರ ಉತ್ತರದಿಕ್ಕಿನಿಂದ ಆರಂಭ)'' <br>
ವೈಟಾಟಿ/ತಾತಿ; ವೈಕೌಐಟಿ/ತಿ ; ಕರಿಟೇನ್ ; ಸೀಕ್ಲಿಫ್ ; ವಾರ್ರಿಂಗ್ಟನ್ ; ಪುರಾಕನುಯ್ ; ಲಾಂಗ್ ಬೀಚ್ ; ಅರಮೊವಾನಾ ; ಡೆಬೊರಾಹ್ ಬೇ ; ಕ್ಯಾರೆಸ್ ಬೇ ; ಚಾಲ್ಮರ್ಸ್ ರೇವುಪಟ್ಟಣ ; ಸಾಯರ್ಸ್ ಬೇ ; ರೋಸ್ನೀತ್ ; ಒಟಾಕೌ ; ಪೋರ್ಟೋಬೆಲ್ಲೋ ; ಬ್ರೈಟನ್ ; ತೈಯೆರಿ ಮೌತ್ ; ಹೆನ್ಲೆ ; ಅಲ್ಲನ್ಟನ್ ; ಪೂರ್ವ ತೈಯೆರಿ ; ಮೊಮೊನಾ ; ಔಟ್ರಮ್ ; ಮೊಸ್ಜಿಯೆಲ್; ಪಶ್ಚಿಮ ತೈಯೆರಿ; ವಾಯ್ಪೊರಿ; ಮಿಡಲ್ಮಾರ್ಚ್ ; ಹೈಡ್.
1980ರ ದಶಕದ ಕೊನೆಯಲ್ಲಿ ಸ್ಥಳೀಯ ಪೌರ ಸಮಿತಿಯನ್ನು ಮರುಸಂಘಟಿಸಿದ ನಂತರ, ಇವುಗಳು ಉಪನಗರಗಳಾಗಿವೆ, ಆದರೆ ಸಾಧಾರಣವಾಗಿ ಇವುಗಳನ್ನು ಹಾಗೆ ಪರಿಗಣಿಸಲಾಗುವುದಿಲ್ಲ.
=== ಹವಾಮಾನ ===
ಡ್ಯುನೆಡಿನ್/ಡ್ಯೂನ್ಡಿನ್ ನಗರದ ಹವಾಮಾನವು ಸಾಧಾರಣವಾಗಿ ಸಮಶೀತೋಷ್ಣದಿಂದ ಕೂಡಿದ್ದರೂ, ಬಹುತೇಕ ಮಹಾನಗರದ ಸ್ಥಳಸ್ವರೂಪ ವಿನ್ಯಾಸದ ಕಾರಣದಿಂದಾಗಿ ಉಪನಗರಗಳ ನಡುವಿನ ಹವಾಮಾನ ಪರಿಸ್ಥಿತಿಗಳು ಆಗ್ಗಾಗ್ಗೆ ವ್ಯತ್ಯಾಸಗೊಳ್ಳುವುದರಿಂದ ಮಹಾನಗರವು ದೊಡ್ಡ ಸಂಖ್ಯೆಯ ಅಲ್ಪಾವರಣದ ವಾಯುಗುಣಗಳನ್ನು ಹೊಂದಿರುವುದಾಗಿ ಪರಿಗಣಿಸಲಾಗುತ್ತದೆ. {{Citation needed|date=October 2008}} ಇಲ್ಲಿನ ಹವಾಮಾನವು ಮಹಾಸಾಗರದ ಸಾಮೀಪ್ಯತೆಯಿಂದಾಗಿ ಕೂಡಾ ಬಹುಮಟ್ಟಿಗೆ ಬದಲಾಗುತ್ತಿರುತ್ತದೆ. ಇದೇ ಕಾರಣದಿಂದಾಗಿ ಬೆಚ್ಚಗಿನ ಬೇಸಿಗೆ ಹಾಗೂ ತಂಪಾದ ಚಳಿಗಾಲಗಳುಂಟಾಗುತ್ತವೆ. ಚಳಿಗಾಲವು ಹಿಮದಿಂದ ಕೊರೆಯುವಂತೆ ಆಗುವ ಸಾಧ್ಯತೆಯಿದ್ದರೂ (ಪ್ರಾಯಶಃ ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ), ಪ್ರತಿ ವರ್ಷವೂ ಕೆಲ ದಿನಗಳ ಕಾಲ ಹಿಮಪಾತವಾಗುವ ಹಾಫ್ವೇ ಬುಷ್ ಮತ್ತು ವಕಾರಿಯಂತಹಾ ಒಳನಾಡಿನ ಗುಡ್ಡಗಾಡು ಉಪನಗರಗಳಲ್ಲಿ ಹೊರತುಪಡಿಸಿ ಗಮನಾರ್ಹ ಮಟ್ಟದ ಹಿಮಪಾತವಾಗುವುದು ಇಲ್ಲಿ ಅಪರೂಪ. ವಸಂತ ಕಾಲದಲ್ಲಿ "ದಿನಕ್ಕೆ ನಾಲ್ಕು ಋತುಗಳು" ರೀತಿಯ ಹವಾಮಾನವನ್ನು ಹೊಂದಿರಬಹುದಾಗಿದ್ದರೂ, ನವೆಂಬರ್ನಿಂದ ಏಪ್ರಿಲ್ವರೆಗಿನ ಅವಧಿಯು ಸಾಧಾರಣವಾಗಿ ಸ್ಥಿರವಾಗಿದ್ದು ಸೌಮ್ಯವಾಗಿರುತ್ತದೆ. ಬೇಸಿಗೆ ಕಾಲದಲ್ಲಿ ಇಲ್ಲಿನ ತಾಪಮಾನವು {{convert|30|C|F|0|lk=on}}ಕ್ಕೆ ಮುಟ್ಟುತ್ತಿರುತ್ತದೆ
ಡ್ಯುನೆಡಿನ್/ಡ್ಯೂನ್ಡಿನ್ ನಗರವು ಪ್ರತಿವರ್ಷಕ್ಕೆ ಕೇವಲ {{convert|750|mm|in|0}}ರಷ್ಟು ದಾಖಲಿತ ಪ್ರಮಾಣದೊಂದಿಗೆ ಸಾಪೇಕ್ಷವಾಗಿ ನ್ಯೂಝಿಲೆಂಡ್ನ ಅನೇಕ ಮಹಾನಗರಗಳಿಗೆ ಹೋಲಿಸಿದರೆ ಕಡಿಮೆ ಮಳೆಪ್ರಮಾಣವನ್ನು ಹೊಂದಿದೆ. ವಿಷಯ ಹೀಗಿದ್ದರೂ, ಪ್ರಾಯಶಃ ಬಹಳ ದಿನಗಳ ಕಾಲ ತುಂತುರು ಮಳೆಯು ಬೀಳುವ ಕಾರಣದಿಂದ ಬಹುಜನರು ಇದನ್ನು ತೇವದಿಂದ ಕೂಡಿದ ಮಹಾನಗರವೆಂದು ಪರಿಗಣಿಸಲ್ಪಟ್ಟಿದೆ, (ಆಕ್ಲೆಂಡ್ ಮತ್ತು ವೆಲ್ಲಿಂಗ್ಟನ್ನಂತಹಾ ಉತ್ತರದಿಕ್ಕಿನ ಕೇಂದ್ರಪ್ರದೇಶಗಳು ಸಾಪೇಕ್ಷವಾಗಿ ಕೆಲವೇ ದಿನಗಳಲ್ಲಿ ಭಾರೀ ಮಳೆಯನ್ನು ಪಡೆಯುತ್ತವೆ). ದಾಖಲೆಗಳ ಪ್ರಕಾರ ವರ್ಷಕ್ಕೆ ಅಂದಾಜು 1650 ಗಂಟೆಗಳ ಕಾಲ ಮಾತ್ರವೇ ಪ್ರಖರ ಬಿಸಿಲನ್ನು ಪಡೆಯುವ ಡ್ಯುನೆಡಿನ್/ಡ್ಯೂನ್ಡಿನ್ ನಗರವು ರಾಷ್ಟ್ರದಲ್ಲೇ ಅತ್ಯಂತ ಹೆಚ್ಚಿನ ಮೋಡದಿಂದ ಕವಿದ ವಾತಾವರಣವನ್ನು ಹೊಂದಿರುವ ನಗರವಾಗಿದೆ.<ref>ಲ್ಯಾಂಬರ್ಟ್, M. (ed.) (1988) ''ಏರ್ ನ್ಯೂಝಿಲೆಂಡ್ ಅಲ್ಮನಾಕ್''. ವೆಲ್ಲಿಂಗ್ಟನ್, NZ: ನ್ಯೂಝಿಲೆಂಡ್ ಪ್ರೆಸ್ ಅಸೋಸಿಯೇಷನ್, p. 394-5. ದೀರ್ಘಾವಧಿಯ ಸರಾಸರಿ/ಲಾಂಗ್ ಟರ್ಮ್ ಆವರೇಜ್, 1951–1980.</ref> ಮಹಾನಗರದಲ್ಲಿ ಬೀಸುವ ಮಾರುತಗಳು ಎರಡು ದಿಕ್ಕುಗಳಿಂದ ಬರುತ್ತವೆ, ತಂಪಾದ ತೇವದಿಂದ ಕೂಡಿದ ನೈಋತ್ಯ ಮಾರುತಗಳು ಪರ್ಯಾಯವಾಗಿ ಈಶಾನ್ಯ ಮಾರುತಗಳು ಬೀಸುತ್ತಿರುತ್ತವೆ.<ref>A ಡಿಸ್ಕ್ರಿಪ್ಟೀವ್ ಅಟ್ಲಾಸ್ ಆಫ್ ನ್ಯೂಝಿಲೆಂಡ್, A.H. ಮೆಕ್ಲಿನ್ಟಾಕ್ (ed), ನ್ಯೂಝಿಲೆಂಡ್ ಗವರ್ನಮೆಂಟ್ ಪ್ರಿಂಟರ್ ಸಂಸ್ಥೆ, 1959 (ನೋಡಿ ನಕ್ಷೆ 8)</ref> ಬೆಚ್ಚಗಿನ, ಶುಷ್ಕವಾದ ವಾಯುವ್ಯ ಮಾರುತಗಳು ಕೂಡಾ ವಾಯುವ್ಯದಿಂದ ಬೀಸುವ ತೆಂಕಣ ಬಿಸಿಗಾಳಿಗಳ ಗುಣಲಕ್ಷಣಗಳಾಗಿವೆ. ಮಹಾನಗರದ ಒಳಭಾಗವನ್ನು ಸುತ್ತುವರೆದಿರುವ ಗುಡ್ಡಗಳ ವರ್ತುಲವು ಮಹಾನಗರಕ್ಕೆ ಒಟಾಗೋದ ಬಹುತೇಕ ಸಾಧಾರಣ ವಾತಾವರಣದಿಂದ ರಕ್ಷಣೆಯನ್ನು ಒದಗಿಸುವುದರಿಂದ, ಬಹುತೇಕ ವೇಳೆ ಒಟಾಗೋದ ಉಳಿದ ಪ್ರದೇಶಗಳಲ್ಲಿನ ವಾತಾವರಣದ ಪರಿಸ್ಥಿತಿಗಿಂತ ಸಂಪೂರ್ಣವಾಗಿ ಬೇರೆಯದೇ ಆದ ವಾತಾವರಣವು ಪ್ರಧಾನ ನಗರಪ್ರದೇಶದಲ್ಲಿ ಇರುತ್ತದೆ.
ಮಹಾನಗರದ ಹೃದಯಭಾಗದ ಹೊರಗಿರುವ ಒಳನಾಡಿನಲ್ಲಿ ವಾತಾವರಣವು, ಉಪ-ಭೂಖಂಡೀಯ ವಾಯುಗುಣವನ್ನು ಹೊಂದಿರುತ್ತದೆ: ಚಳಿಗಾಲವು ಸಾಕಷ್ಟು ತಂಪಾಗಿದ್ದು ಶುಷ್ಕತೆ ಹೊಂದಿದ್ದರೆ, ಬೇಸಿಗೆಯಲ್ಲಿ ಬಿಸಿಲ ಝಳವಿದ್ದು ಶುಷ್ಕತೆ ಇರುತ್ತದೆ. ಮಿಡಲ್ಮಾರ್ಚ್ಅನ್ನು ಸುತ್ತುವರೆದು ಹರಿಯುವ ತೈಯೆರಿ ನದಿಯ ಮೇಲಿನ ತೀರಪ್ರದೇಶಗಳಲ್ಲಿ ಚಳಿಗಾಲದಲ್ಲಿ ಕೊರೆಯುವ ದಪ್ಪ ಹಿಮವು ನೆಲದ ಮೇಲೆ ಹರಡುವುದು ಸಾಮಾನ್ಯವಾಗಿದ್ದರೆ ಚಳಿಗಾಲದಲ್ಲಿ 30ಡಿಗ್ರಿ ಸೆಲ್ಸಿಯಸ್ನ ಆಸುಪಾಸಿಗೆ ತಲುಪುವುದು ವಾಡಿಕೆ.
{{-}}
{{Weather box
|location = Dunedin
|metric first = Yes
|single line = Yes
|Jan high C = 18.9
|Feb high C = 18.7
|Mar high C = 17.2
|Apr high C = 15.5
|May high C = 12.6
|Jun high C = 10.2
|Jul high C = 9.8
|Aug high C = 11.0
|Sep high C = 12.8
|Oct high C = 14.6
|Nov high C = 16.1
|Dec high C = 17.4
|year high C = 14.6
|Jan mean C = 15.2
|Feb mean C = 15.1
|Mar mean C = 13.7
|Apr mean C = 11.9
|May mean C = 9.2
|Jun mean C = 7.0
|Jul mean C = 6.5
|Aug mean C = 7.5
|Sep mean C = 9.3
|Oct mean C = 10.9
|Nov mean C = 12.4
|Dec mean C = 13.9
|year mean C = 11.0
|Jan low C = 11.5
|Feb low C = 11.4
|Mar low C = 10.2
|Apr low C = 8.3
|May low C = 5.7
|Jun low C = 3.8
|Jul low C = 3.2
|Aug low C = 4.1
|Sep low C = 5.7
|Oct low C = 7.2
|Nov low C = 8.6
|Dec low C = 10.4
|year low C = 7.5
|Jan rain mm = 72
|Feb rain mm = 63
|Mar rain mm = 70
|Apr rain mm = 60
|May rain mm = 72
|Jun rain mm = 74
|Jul rain mm = 69
|Aug rain mm = 65
|Sep rain mm = 53
|Oct rain mm = 71
|Nov rain mm = 63
|Dec rain mm = 82
|year rain mm = 812
|Jan rain days = 10
|Feb rain days = 8
|Mar rain days = 10
|Apr rain days = 9
|May rain days = 11
|Jun rain days = 10
|Jul rain days = 11
|Aug rain days = 11
|Sep rain days = 10
|Oct rain days = 11
|Nov rain days = 11
|Dec rain days = 12
|unit rain days = 1mm
|year rain days = 124
|Jan humidity = 73.1
|Feb humidity = 77.0
|Mar humidity = 76.3
|Apr humidity = 77.2
|May humidity = 78.0
|Jun humidity = 79.0
|Jul humidity = 80.2
|Aug humidity = 78.1
|Sep humidity = 74.2
|Oct humidity = 71.8
|Nov humidity = 71.4
|Dec humidity = 73.1
|year humidity = 75.8
|Jan sun = 178
|Feb sun = 153
|Mar sun = 140
|Apr sun = 121
|May sun = 100
|Jun sun = 86
|Jul sun = 101
|Aug sun = 114
|Sep sun = 129
|Oct sun = 147
|Nov sun = 161
|Dec sun = 169
|year sun = 1585
|source 1 = NIWA CliFlo data Musselburgh<ref name="cliflo">{{cite web
|url = http://cliflo.niwa.co.nz/ | title = CliFlo data Musselburgh (5402, 15752)|work =[[National Institute of Water and Atmospheric Research|NIWA]]|accessdate=2007-10-15}}</ref>
|date=August 2010
}}
==ಜನಸಂಖ್ಯಾ ವಿವರ==
ಒಟ್ಟಾರೆಯಾಗಿ ನ್ಯೂಝಿಲೆಂಡ್ಗೆ ಹೋಲಿಸಿದರೆ, ಡ್ಯುನೆಡಿನ್/ಡ್ಯೂನ್ಡಿನ್ ನಗರದ ಜನಸಮೂಹವು ಮಹಾನಗರದ ಭಾರೀ ವಿಶ್ವವಿದ್ಯಾಲಯ ಶಿಕ್ಷಣಕ್ಷೇತ್ರದ ವಿದ್ಯಾರ್ಥಿ ಜನಸಮೂಹದ ಕಾರಣವಾಗಿ ನ್ಯೂಝಿಲೆಂಡ್ನ ಶಿಕ್ಷಣ ಕ್ಷೇತ್ರದ ವಿಶಿಷ್ಟ ಲಕ್ಷಣಗಳನ್ನು ತೋರಿಸುತ್ತದೆ. ಪುರುಷರಿಗೆ ಹೋಲಿಸಿದರೆ ಹೆಚ್ಚಿನ ಮಹಿಳಾ ಜನಸಮೂಹ, ಸರಾಸರಿಗಿಂತ ಕೆಳಗಿನ ಸರಾಸರಿ ವಯಸ್ಸಿನವರಿರುವುದು, 25 ವರ್ಷದೊಳಗಿನವರು ಹೆಚ್ಚಿನ ಪ್ರಮಾಣದಲ್ಲಿರುವುದು, ಐರೋಪ್ಯ ಹಾಗೂ ಏಷ್ಯಾ ಜನಾಂಗೀಯರು ಹೆಚ್ಚಿನ ಪ್ರಮಾಣದಲ್ಲಿರುವುದು ಹಾಗೂ ಮಾವೊರಿ ಮತ್ತು ಪೆಸಿಫಿಕ್ ದ್ವೀಪನಿವಾಸಿ/ಐಲೆಂಡ್ ಜನಾಂಗೀಯರು ಕಡಿಮೆ ಪ್ರಮಾಣದಲ್ಲಿರುವುದು, ಹೆಚ್ಚಿನ ನಿರುದ್ಯೋಗ, ಕಡಿಮೆ ಸರಾಸರಿ ಆದಾಯ, ಶಾಲೆ ಹಾಗೂ ಶಾಲಾನಂತರದ ಉದ್ಯೋಗಾರ್ಹತೆಗಳನ್ನು ಹೊಂದಿರುವವರು ಹೆಚ್ಚಿನ ಪ್ರಮಾಣದಲ್ಲಿರುವುದು ಈ ಗುಣಲಕ್ಷಣಗಳಲ್ಲಿ ಸೇರಿವೆ.<ref name="population">{{NZ Quickstats|2000071|Dunedin City}}</ref>
2006ರ ಜನಗಣತಿಯ ಸಮಯದಲ್ಲಿ, ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರವು 118,683ರಷ್ಟು ಸ್ಥಳೀಯ ಜನಸಂಖ್ಯೆಯು ಸ್ಥಾನಿಕವಾಗಿದ್ದು ಇದು 2001ರ ಸಾಲಿನ ಜನಗಣತಿಗಿಂತ 4,341ರಷ್ಟು ಅಥವಾ ಪ್ರತಿಶತ 3.8ರಷ್ಟು ಹೆಚ್ಚಳವಾಗಿದೆ. ಅಲ್ಲಿ 45,072 ವಸತಿಗೃಹಗಳಲ್ಲಿ ಜನರು ವಾಸವಿದ್ದರೆ, 3,615 ವಸತಿಗೃಹಗಳು ಖಾಲಿಯಿದ್ದು, 240 ವಸತಿಗೃಹಗಳು ನಿರ್ಮಾಣ ಹಂತದಲ್ಲಿದ್ದವು.<ref name="population" />
ವಸತಿಗೃಹಗಳಲ್ಲಿರುವ ಜನಸಮೂಹದಲ್ಲಿ 56,931 (48.0%) ಜನರು ಪುರುಷರಾಗಿದ್ದಾರೆ ಇದಕ್ಕೆ ಹೋಲಿಸಿದರೆ ರಾಷ್ಟ್ರದಲ್ಲಿ 48.8%ರಷ್ಟು ಜನ ಪುರುಷರಿದ್ದಾರೆ, ಹಾಗೂ 61,752 (52.0%) ಜನರು ಮಹಿಳೆಯರಾಗಿದ್ದರೆ ರಾಷ್ಟ್ರದಲ್ಲಿ 51.2% ಜನರು ಮಹಿಳೆಯರಾಗಿದ್ದಾರೆ. ಮಹಾನಗರದ ಜನರ ಸರಾಸರಿ ವಯಸ್ಸು 35.0 ವರ್ಷಗಳಿದ್ದು, ರಾಷ್ಟ್ರೀಯ ಸರಾಸರಿ ವಯಸ್ಸಾದ 35.9 ವರ್ಷಗಳಿಗಿಂತ 0.9 ವರ್ಷಗಳು ಕಡಿಮೆಯಿದೆ. 65 ಹಾಗೂ ಅದಕ್ಕಿಂತ ಹೆಚ್ಚಿನ ವಯೋಮಾನದ ಜನರು ಜನಸಂಖ್ಯೆಯ 13.4%ರಷ್ಟಿದ್ದಾರೆ, ರಾಷ್ಟ್ರದಲ್ಲಿ ಇವರ ಪ್ರಮಾಣ 12.3%ರಷ್ಟಿದೆ ಹಾಗೂ 15 ವರ್ಷಗಳೊಳಗಿನವರ ಪ್ರಮಾಣವು 16.8%ರಷ್ಟಿದ್ದರೆ, ರಾಷ್ಟ್ರದಲ್ಲಿ ಅವರ ಪ್ರಮಾಣ 21.5%ರಷ್ಟಿದ್ದಾರೆ. ಭಾರೀ ಪ್ರಮಾಣದ ವಿಶ್ವವಿದ್ಯಾಲಯ ಶಿಕ್ಷಣ ಕ್ಷೇತ್ರವಿರುವ ಕಾರಣ, 15ರಿಂದ 24 ವರ್ಷಗಳ ವಯೋಮಾನದವರು ಮಹಾನಗರದಲ್ಲಿ ವಾಸವಿರುವ ಜನಸಮೂಹದ ಅಂದಾಜು 21.6%ರಷ್ಟಿದ್ದಾರೆ.<ref name="population" />
ಡ್ಯುನೆಡಿನ್/ಡ್ಯೂನ್ಡಿನ್ ನಗರದ ಜನಾಂಗೀಯತೆಯ ಪ್ರಮಾಣ ಈ ತರಹವಿದೆ (ಆವರಣದಲ್ಲಿರುವುದು ರಾಷ್ಟ್ರೀಯ ಪ್ರಮಾಣ): 78.7% ಐರೋಪ್ಯ (67.6%), 6.4% ಮಾವೊರಿ (14.7%), 5.3% ಏಷ್ಯನ್ನರು (9.2%), 2.2% ಪೆಸಿಫಿಕ್ ಐಲೆಂಡಿಗರು (6.9%), 0.7% ಮಧ್ಯ ಪ್ರಾಚ್ಯದವರು/ಲ್ಯಾಟಿನ್ ಅಮೇರಿಕನ್ನರು/ಆಫ್ರಿಕನ್ನರು (0.9%), 13.6% ನ್ಯೂಝಿಲೆಂಡಿಗರು (11.1%), ಹಾಗೂ 0.04%ರಷ್ಟು ಇತರರು (0.04%).<ref name="population" />
ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರದ 15 ವರ್ಷಗಳು ಹಾಗೂ ಅದಕ್ಕೂ ಮೀರಿದವರ ನಿರುದ್ಯೋಗದ ಪ್ರಮಾಣವು 6.1%ರಷ್ಟಿದ್ದರೆ, ರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಮಾಣ 5.1%ರಷ್ಟಿದೆ. 15 ವರ್ಷಗಳು ಹಾಗೂ ಅದಕ್ಕೂ ಮೀರಿದ ಎಲ್ಲಾ ಜನರ ಸರಾಸರಿ ವಾರ್ಷಿಕ ಆದಾಯವು $19,400ರಷ್ಟಿದ್ದರೆ, ರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಮಾಣ $24,400ರಷ್ಟಿದೆ. ಅವರುಗಳಲ್ಲಿ $20,000 ಒಳಗಿನ ವರಮಾನದವರು 51.2%ರಷ್ಟು ಜನರಿದ್ದರೆ, ರಾಷ್ಟ್ರೀಯ ಮಟ್ಟದಲ್ಲಿ ಇವರ ಪ್ರಮಾಣ 43.2%ರಷ್ಟಿದೆ, $50,000ಕ್ಕೂ ಮೀರಿದ ವರಮಾನದವರು 13.4%ರಷ್ಟಿದ್ದರೆ ರಾಷ್ಟ್ರೀಯ ಮಟ್ಟದಲ್ಲಿ ಇವರ ಪ್ರಮಾಣ 18.0%ರಷ್ಟಿದೆ.<ref name="population" />
==ಕಲೆ==
===ದೃಶ್ಯ ಕಲೆಗಳು===
ಡ್ಯುನೆಡಿನ್/ಡ್ಯೂನ್ಡಿನ್ ನಗರವು ಆಕ್ಟಾಗನ್ ಪ್ರದೇಶದಲ್ಲಿ ಡ್ಯುನೆಡಿನ್/ಡ್ಯೂನ್ಡಿನ್ ಸಾರ್ವಜನಿಕ ಕಲಾ ಪ್ರದರ್ಶನ ಮಂದಿರ/ಪಬ್ಲಿಕ್ ಆರ್ಟ್ ಗ್ಯಾಲರಿ ಎಂಬ ಬಹುಮಹಡಿ ಕಟ್ಟಡದ ಒಂದು ಕಲಾ ಪ್ರದರ್ಶನ ಮಂದಿರವನ್ನು ಹೊಂದಿದೆ. ಮಹಾನಗರವು ಡಜನ್ನಿಗಿಂತಲೂ ಹೆಚ್ಚಿನ ಸಂಖ್ಯೆಯ ವಿತರಕ ಸ್ವಾಮ್ಯದ ಪ್ರದರ್ಶನ ಮಂದಿರಗಳೂ ಸೇರಿದಂತೆ ಇನ್ನೂ ಇತರೆ ಅನೇಕ ಪ್ರದರ್ಶನ ಮಂದಿರಗಳನ್ನು ಹೊಂದಿದೆ (ಪ್ರಿನ್ಸಸ್ ರಸ್ತೆ, ಮೋರೆ ಪ್ಲೇಸ್ ಮತ್ತು ರಾಟ್ಟ್ರೇ ಸ್ಟ್ರೀಟ್/ರಸ್ತೆಗಳುದ್ದಕ್ಕೂ ಆಕ್ಟಾಗನ್ನ ದಕ್ಷಿಣದಲ್ಲಿ ಇವುಗಳಲ್ಲಿ ಅನೇಕವು ಕಂಡುಬರುತ್ತವೆ. ನಗರದಲ್ಲಿ ಅನೇಕ ಪ್ರಯೋಗಾತ್ಮಕ ಕಲಾ ಕೇಂದ್ರಗಳು ಕೂಡಾ ಇದ್ದು ಅವುಗಳಲ್ಲಿ ಗಮನಾರ್ಹವಾದುದೆಂದರೆ ಮೋರೆ ಪ್ಲೇಸ್ ಎಂಬಲ್ಲಿರುವ ಬ್ಲೂ ಆಯ್ಸ್ಟರ್ ಕಲಾ ಪ್ರದರ್ಶನ ಮಂದಿರ.
ಅನೇಕ ಗಮನಾರ್ಹ ಕಲಾಕಾರರು ಡ್ಯುನೆಡಿನ್/ಡ್ಯೂನ್ಡಿನ್ ನಗರದೊಂದಿಗೆ ಉತ್ಕಟವಾದ ಸಂಬಂಧವನ್ನು ಹೊಂದಿದ್ದಾರೆ, ಅವರುಗಳಲ್ಲಿ ಪ್ರಮುಖರು ರಾಲ್ಫ್ ಹೊಟೆರೆ, ಫ್ರಾನ್ಸಿಸ್/ಫ್ರಾನ್ಸೆಸ್ ಹಾಡ್ಜ್ಕಿನ್ಸ್, ಗ್ರಹೇಮ್ ಸಿಡ್ನಿ ಮತ್ತು ಜೆಫ್ರೆ ಹ್ಯಾರಿಸ್ ಆಗಿದ್ದಾರೆ.
===ನಾಟಕ/ರಂಗಕ್ಷೇತ್ರ===
ಡ್ಯುನೆಡಿನ್/ಡ್ಯೂನ್ಡಿನ್ ನಗರವು ವಿಶ್ವದ ಅತ್ಯಂತ ದಕ್ಷಿಣದಲ್ಲಿನ ವೃತ್ತಿಪರ ರಂಗಭೂಮಿಗಳನ್ನು ಹೊಂದಿದೆ : ಅವು ದ ಫಾರ್ಚ್ಯೂನ್ ಥಿಯೇಟರ್ ಹಾಗೂ ಆಕ್ಟಾಗನ್ನಲ್ಲಿರುವ ರೀಜೆಂಟ್ ಥಿಯೇಟರ್ ಆಗಿವೆ. ಡ್ಯುನೆಡಿನ್/ಡ್ಯೂನ್ಡಿನ್ನಲ್ಲಿನ ಸಣ್ಣದಾದ ರಂಗಭೂಮಿಗಳಲ್ಲಿ ಗ್ಲೋಬ್ ಥಿಯೇಟರ್, ಮೇಫೇರ್ ಥಿಯೇಟರ್, ಮತ್ತು ಪ್ಲೇಹೌಸ್ ಥಿಯೇಟರ್ಗಳು ಸೇರಿವೆ.
===ನೃತ್ಯರಂಗ===
ಡ್ಯುನೆಡಿನ್/ಡ್ಯೂನ್ಡಿನ್ ನಗರವು ಪ್ರವಾಸಿ ಬ್ಯಾಲೆ ಹಾಗೂ ನೃತ್ಯ ಕಂಪೆನಿಗಳ ಭೇಟಿಯ ವಾಡಿಕೆಯ ಸ್ಥಳವಾಗಿದ್ದು ಹಾಗೂ ತನ್ನದೇ ಆದ ನೃತ್ಯ ರಂಗಶಾಲೆಯಾದ : ಕಿಂಗ್ ಎಡ್ವರ್ಡ್ ಕೋರ್ಟ್ನಲ್ಲಿರುವ RASA ಸ್ಕೂಲ್ ಆಫ್ ಡ್ಯಾನ್ಸ್ ಅನ್ನು ಹೊಂದಿದೆ.
===ಸಂಗೀತ===
====ಗಾಯನ/ಸಂಗೀತ ವೃಂದ====
ಡ್ಯುನೆಡಿನ್/ಡ್ಯೂನ್ಡಿನ್ ನಗರವು ಅನೇಕ ಗಾಯನ/ಸಂಗೀತ ವೃಂದಗಳಿಗೆ ನೆಲೆಯಾಗಿದೆ. ಅವುಗಳಲ್ಲಿ ಕೆಳಕಂಡವು ಸೇರಿವೆ:
*ಸಿಟಿ ಆಫ್ ಡ್ಯುನೆಡಿನ್/ಡ್ಯೂನ್ಡಿನ್ ಕಾಯಿರ್ ಎಂಬ ಗಾಯನವೃಂದವು 140-ಸದಸ್ಯರನ್ನು ಹೊಂದಿದ್ದು ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರದ ಮುಂಚೂಣಿ ಗಾಯಕ ಸಂಗೀತ ವೃಂದಗಳ ಭಾರೀ ಪ್ರಮಾಣದ ಕಾರ್ಯಕ್ರಮಗಳನ್ನು ನೀಡುತ್ತದೆ. ಸದರನ್ ಕನ್ಸಾರ್ಟ್ ಆಫ್ ವಾಯ್ಸಸ್ ಎಂಬುದು ನಿಯತವಾಗಿ ಗಾಯನ ವೃಂದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಸಣ್ಣ ಗಾಯನ/ಸಂಗೀತ ವೃಂದವಾಗಿದೆ.
*ರಿಚರ್ಡ್ ಮ್ಯಾಡನ್ರಿಂದ ನಡೆಸಿಕೊಡಲ್ಪಡುವ ರಾಯಲ್ ಡ್ಯುನೆಡಿನ್/ಡ್ಯೂನ್ಡಿನ್ ಮೇಲ್ ಕಾಯಿರ್ ವೃಂದಗಾನ ಕಾರ್ಯಕ್ರಮವು ವರ್ಷಕ್ಕೆ ಎರಡು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತದೆ ಹಾಗೂ ಡ್ಯುನೆಡಿನ್/ಡ್ಯೂನ್ಡಿನ್ RSA ಕಾಯಿರ್ ಕೂಡಾ ನಿಯತವಾಗಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತದೆ.
*ಸಂಪೂರ್ಣ ಸ್ತ್ರೀಯರೇ ನಡೆಸಿಕೊಡುವ ಡ್ಯುನೆಡಿನ್/ಡ್ಯೂನ್ಡಿನ್ ಹಾರ್ಮನಿ ಸಿಂಗರ್ಸ್ ವೃಂದವು ಡ್ಯುನೆಡಿನ್/ಡ್ಯೂನ್ಡಿನ್ ಸಂಸ್ಕೃತಿಯ ಬಹು ಪ್ರಮುಖ ಭಾಗವಾಗಿದೆ.
*ವಿಶ್ವವಿದ್ಯಾಲಯ ಪ್ರದೇಶದ ಮರಾಮ ಹಾಲ್ಅನ್ನು ತನ್ನ ನೆಲೆಯನ್ನು ಹೊಂದಿರುವ ಸದರನ್ ಚಿಲ್ಡ್ರನ್ಸ್ ಕಾಯಿರ್ ವೃಂದವು ಡ್ಯುನೆಡಿನ್/ಡ್ಯೂನ್ಡಿನ್ ನಗರದ ಪ್ರಮುಖ ಮಕ್ಕಳ ಸಂಗೀತ ವೃಂದವಾಗಿದೆ. ಡ್ಯುನೆಡಿನ್/ಡ್ಯೂನ್ಡಿನ್ ನಗರದಲ್ಲಿರುವ ಬಹುತೇಕ ಶಾಲೆಗಳು ಗಾಯನ/ಸಂಗೀತ ವೃಂದವನ್ನು ಹೊಂದಿರುತ್ತವಲ್ಲದೇ, ಕೆಲವು ಒಂದಕ್ಕಿಂತ ಹೆಚ್ಚನ್ನು ಕೂಡಾ ಹೊಂದಿರುತ್ತವೆ. ಗಮನಾರ್ಹ ಶಾಲಾ ಗಾಯನ/ಸಂಗೀತ ವೃಂದಗಳಲ್ಲಿ ಸೇಕ್ರೆಡ್ ಹಾರ್ಟ್ ಸ್ಕೂಲ್ ಕಾಯಿರ್, ಬಾಲ್ಮಾಸೆವೆನ್ ಇಂಟರ್ಮೀಡಿಯೆಟ್ ಸ್ಕೂಲ್ ಸ್ಪೆಷಲ್ ಕಾಯಿರ್, ಒಟಾಗೋ ಬಾಲಕರ ಪ್ರೌಢಶಾಲೆ ಮತ್ತು ಒಟಾಗೋ ಬಾಲಕಿಯರ ಪ್ರೌಢಶಾಲೆಗಳ ಬ್ಯಾರಕ್ ಕಾಯಿರ್ St. ಹಿಲ್ಡಾಸ್ ಕಾಲೇಜಿಯೇಟ್ ಮ್ಯಾಡ್ರಿಗಲ್ ಕಾಯಿರ್ ಕೂಡಾ ಸೇರಿವೆ.
*ಸದರನ್ ಯುತ್ ಕಾಯಿರ್ ಎಂಬುದು ಗಾಯನಕಛೇರಿ-ಆಧಾರಿತ ಯುವ ಗಾಯನ ಸಂಗೀತವೃಂದವಾಗಿದೆ, ಅದೇ ರೀತಿಯ ಇನ್ನೊಂದು ದತ್ತಿನಿಧಿಯ/ಧರ್ಮಾರ್ಥದ ಕೋಥ್ರಮ್ ಫಾಯ್ರ್ಫೆ ಆಗಿದೆ.
*ಒಟಾಗೋ ವಿಶ್ವವಿದ್ಯಾಲಯವು ಮೂರು ಅಧಿಕೃತ ಗಾಯನ/ಸಂಗೀತ ವೃಂದಗಳಿಗೆ ನೆಲೆಯಾಗಿದೆ: ಎರಡು ಚಾಪೆಲ್ ಗಾಯಕರ ಗಾಯನ/ಸಂಗೀತ ವೃಂದಗಳು (ನಾಕ್ಸ್ ಮತ್ತು ಸೆಲ್ವಿನ್), ಹಾಗೂ ಸಂಚಾರಿ ವೃಂದ ಕ್ಯಾಂಟೋರೆಸ್ ಕಾಯಿರ್.
*ಅನೇಕ ಡ್ಯುನೆಡಿನ್/ಡ್ಯೂನ್ಡಿನ್ ಚರ್ಚು/ಇಗರ್ಜಿಗಳು ಹಾಗೂ ಪ್ರಧಾನ ಚರ್ಚು/ಇಗರ್ಜಿಗಳು ಗಾಯನ/ಸಂಗೀತ ವೃಂದಗಳನ್ನು ಹೊಂದಿರುತ್ತವೆ. St. ಜೋಸೆಫ್ಸ್ ಕ್ಯಾಥೊಲಿಕ್ ಕ್ಯಾಥೆಡ್ರಲ್ ಇಗರ್ಜಿಯು ಎರಡು ಗಾಯನ/ಸಂಗೀತ ವೃಂದಗಳಿಗೆ ನೆಲೆಯಾಗಿದೆ: ಕ್ಯಾಥೆಡ್ರಲ್ ಕಾಯಿರ್ ಮತ್ತು ಗೇಬ್ರಿಯೆಲಿ ಸಿಂಗರ್ಸ್ ; ನಾಕ್ಸ್ ಚರ್ಚ್/ಇಗರ್ಜಿಯ ಬೃಹತ್ ಪುರುಷರು ಸ್ತ್ರೀಯರು ಒಟ್ಟಾಗಿ ಸೇರಿ ದೊಡ್ಡವರಿಗಾಗಿ ಹಾಗೂ ಮಕ್ಕಳಿಗಾಗಿ ನಡೆಸಿಕೊಡುವ ನಾಕ್ಸ್ ಚರ್ಚ್ ಕಾಯಿರ್; St. ಜಾನ್ಸ್ ಚರ್ಚ್/ಇಗರ್ಜಿ, ರೋಸ್ಲಿನ್'ನ ಪುರುಷರು ಸ್ತ್ರೀಯರು ಒಟ್ಟಾಗಿ ಸೇರಿ ನಡೆಸಿಕೊಡುವ ಸಣ್ಣ ಪ್ಯಾರಿಷ್ ಕಾಯಿರ್ ; ಮತ್ತು St. ಪಾಲ್ಸ್ ಆಂಗ್ಲಿಕನ್ ಕ್ಯಾಥೆಡ್ರಲ್ ಚರ್ಚ್/ಇಗರ್ಜಿಯ ಪುರುಷರು ಸ್ತ್ರೀಯರು ಒಟ್ಟಾಗಿ ಸೇರಿ ನಡೆಸಿಕೊಡುವ ಪ್ರಾಪ್ತ ವಯಸ್ಕರ ಸಂಗೀತ ವೃಂದ ಹಾಗೂ ಪುರುಷರು ಸ್ತ್ರೀಯರು ಒಟ್ಟಾಗಿ ಸೇರಿ ನಡೆಸಿಕೊಡುವ ಮಕ್ಕಳ ಸಂಗೀತ ವೃಂದಗಳು ಇವುಗಳಲ್ಲಿ ಸೇರಿವೆ.
====ವಾದ್ಯ ಸಂಗೀತ ಶಾಸ್ತ್ರೀಯ/ಅಭಿಜಾತ ಮತ್ತು ಜಾಜ್ ಸಂಗೀತ ಮೇಳಗಳು====
ಸದರನ್ ಸಿನ್ಫೋನಿಯಾ/ಸಿಂಫೋನಿಯಾ ಎಂಬುದು ಡ್ಯುನೆಡಿನ್/ಡ್ಯೂನ್ಡಿನ್ ನಗರ ಮೂಲದ ಒಂದು ಅರೆ-ವೃತ್ತಿಪರ ವಾದ್ಯವೃಂದವಾಗಿದೆ. ಇತರೆ ವಾದ್ಯಸಂಗೀತ ವೃಂದತಂಡಗಳಲ್ಲಿ ರೇರ್ ಬೈರ್ಡ್ಸ್ ಆದಿ ಸಂಗೀತ ಮೇಳ, ಕಾಲೇಜಿಯೇಟ್ ಆರ್ಕೆಸ್ಟ್ರಾ/ವಾದ್ಯವೃಂದ, ಮತ್ತು ಡ್ಯುನೆಡಿನ್/ಡ್ಯೂನ್ಡಿನ್ ಯುತ್ ಆರ್ಕೆಸ್ಟ್ರಾ/ವಾದ್ಯವೃಂದಗಳು ಸೇರಿವೆ. ಹಲವು ಶಾಲೆಗಳು ಕೂಡಾ ಶಾಲಾ ವಾದ್ಯವೃಂದಗಳು ಹಾಗೂ ಬ್ಯಾಂಡ್ಗಳನ್ನು ಹೊಂದಿರುತ್ತದೆ. ಡ್ಯುನೆಡಿನ್/ಡ್ಯೂನ್ಡಿನ್ ನಗರದಲ್ಲಿ ಹಿತ್ತಾಳೆ ವಾದ್ಯಗಳನ್ನು ನುಡಿಸುವ ಮೂರು ಬ್ಯಾಂಡ್ಗಳು ಕೂಡಾ ಇವೆ: ಅವುಗಳೇ St. ಕಿಲ್ಡಾ ಬ್ರಾಸ್, ಕೈಕೊರಾಯ್ ಬ್ರಾಸ್, ಮತ್ತು ಮೊಸ್ಜಿಯೆಲ್ ಬ್ರಾಸ್ ತಂಡಗಳು. ಒಟಾಗೋ ಸಿಂಫೋನಿಕ್ ಬ್ಯಾಂಡ್ ಮತ್ತು ಸಿಟಿ ಆಫ್ ಡ್ಯುನೆಡಿನ್/ಡ್ಯೂನ್ಡಿನ್ ಪೈಪ್ ಬ್ಯಾಂಡ್ಗಳು ಕೂಡಾ ಪ್ರಮುಖ ಡ್ಯುನೆಡಿನ್/ಡ್ಯೂನ್ಡಿನ್ ಸಂಗೀತ ಮೇಳತಂಡಗಳಲ್ಲಿ ಸೇರಿವೆ. ಜಾಜ್ ಬ್ಯಾಂಡ್ಗಳಲ್ಲಿ ಸಿಟಿ ಆಫ್ ಡ್ಯುನೆಡಿನ್/ಡ್ಯೂನ್ಡಿನ್ ಜಾಜ್ ಆರ್ಕೆಸ್ಟ್ರಾ/ವಾದ್ಯವೃಂದ, ಮತ್ತು ತ್ರಿಶತಮಾನೀಯ '''''ಝಿಂಬೆ! '' ''' '''''ಕ್ವಿಂಟೆಟ್/ಪಂಚಮೇಳ'' ''' ಗಳು ಸೇರಿವೆ.
====ಜನಪ್ರಿಯ ಸಂಗೀತ====
ಡ್ಯುನೆಡಿನ್/ಡ್ಯೂನ್ಡಿನ್ ನಗರವು ಮಹಾನಗರದಲ್ಲಿಯೇ 1980ರ ದಶಕದಲ್ಲಿ ರಚಿಸಲಾಗಿದ್ದ ಇಂಡೀ ರಾಕ್ ಸಂಗೀತದ ಒಂದು ರೂಪವಾದ ಡ್ಯುನೆಡಿನ್/ಡ್ಯೂನ್ಡಿನ್ ಸೌಂಡ್ ಸಂಗೀತಕ್ಕೆ ತನ್ನ ಹೆಸರನ್ನು ಅನ್ವರ್ಥವನ್ನಾಗಿಸಿಕೊಂಡಿದೆ. ಆ ಸಮಯದಲ್ಲಿ ಡ್ಯುನೆಡಿನ್/ಡ್ಯೂನ್ಡಿನ್ ನಗರವು ಸಂಗೀತ ಬ್ಯಾಂಡ್ಗಳಿಗೆ ಫಲವತ್ತಾದ/ಫಲದಾಯಕ ಸ್ಥಳವಾಗಿತ್ತು, ಅವುಗಳಲ್ಲಿ ಅನೇಕವನ್ನು ಕ್ರೈಸ್ಟ್ಚರ್ಚ್ ಮೂಲದ ಫ್ಲೈಯಿಂಗ್ ನನ್ ರೆಕಾರ್ಡ್ಸ್ ಕಂಪೆನಿಯ ಹೆಸರಿನಲ್ಲಿ ಇವುಗಳನ್ನು ಧ್ವನಿಮುದ್ರಿಸಿ ಮಾರುಕಟ್ಟೆಗೆ ಬಿಡಲಾಗಿತ್ತು. ಈ ಸಮಯದಲ್ಲಿ ಡ್ಯುನೆಡಿನ್/ಡ್ಯೂನ್ಡಿನ್ ನಗರದೊಂದಿಗೆ ಬಲವಾದ ಸಂಪರ್ಕ ಹೊಂದಿದ್ದ ಬ್ಯಾಂಡ್ಗಳಲ್ಲಿ ದ ಚಿಲ್ಸ್, ದ ಕ್ಲೀನ್, ದ ವರ್ಲೈನ್ಸ್, ದ ಬ್ಯಾಟ್ಸ್, ಸ್ನೀಕಿ ಫೀಲಿಂಗ್ಸ್, ಮತ್ತು ಸ್ಟ್ರೈಟ್ಜ್ಯಾಕೆಟ್ ಫಿಟ್ಸ್ಗಳು ಸೇರಿವೆ, ನ್ಯೂಝಿಲೆಂಡ್ನುದ್ದಕ್ಕೂ ಹಾಗೂ ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ಕಾಲೇಜು/ಮಹಾವಿದ್ಯಾಲಯಗಳ ರೇಡಿಯೋ ವಲಯಗಳಲ್ಲಿ ಗಮನಾರ್ಹ ಶ್ರೋತೃವರ್ಗವನ್ನು ಇವೆಲ್ಲಾ ಹೊಂದಿವೆ.
==ಸರ್ಕಾರ==
===ಸ್ಥಳೀಯ===
[[File:Dave Cull-Blueskin News.jpg|thumb|150px|right|ಡೇವ್ ಕಲ್, ಡ್ಯುನೆಡಿನ್/ಡ್ಯೂನ್ಡಿನ್ ನಗರದ ಪ್ರಸ್ತುತ ಮೇಯರ್.]]
ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರ ಪೌರಸಮಿತಿಯು (DCC) ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರದ ಪ್ರಾಂತೀಯ ಆಡಳಿತದ ಅಧಿಕಾರವನ್ನು ನಿಯಂತ್ರಿಸುತ್ತದೆ. ಈ ಪೌರಸಮಿತಿಯು ಓರ್ವ ಚುನಾಯಿತ ಮೇಯರ್, ನಿಯೋಗಿ ಮೇಯರ್/ಪೌರಸಭಾಸದಸ್ಯ ಮತ್ತು 13 ಹೆಚ್ಚುವರಿ ಪೌರಸಭಾಸದಸ್ಯರನ್ನು ಹೊಂದಿರುತ್ತದೆ. ಅವರುಗಳನ್ನು ಏಕಮಾತ್ರ/ಏಕೈಕ ವರ್ಗಾಯಿಸಬಹುದಾದ ಚುನಾವಣಾ/ವೋಟ್ ವ್ಯವಸ್ಥೆಯ ಮೂಲಕ ನಡೆಯುವ ತ್ರೈವಾರ್ಷಿಕ ಚುನಾವಣೆಗಳಲ್ಲಿ ಆಯ್ಕೆ ಮಾಡಲಾಗುತ್ತದೆ, ಇತ್ತೀಚಿನ ಚುನಾವಣೆಯು 9 ಅಕ್ಟೋಬರ್ 2010ರಂದು ನಡೆದಿದ್ದು, ಮುಂದಿನ ಚುನಾವಣೆ 12 ಅಕ್ಟೋಬರ್ 2013ರಂದು ನಡೆಯಬೇಕಿದೆ.
9 ಅಕ್ಟೋಬರ್ 2010ರ ಚುನಾವಣೆಯ ಪ್ರಕಾರ ಪ್ರಸ್ತುತ ಪೌರಸಮಿತಿಯ ಸದಸ್ಯರು ಈ ಕೆಳಕಂಡಂತಿದ್ದಾರೆ:-
{| class="wikitable"
|-
| '''ಮೇಯರ್'''
| '''ಡೇವ್ ಕಲ್'''
|-
| ಪೌರಸಮಿತಿಯ ಸದಸ್ಯರು - ಕೇಂದ್ರೀಯ/ಪ್ರಧಾನ ನಗರವಿಭಾಗ
| ಬಿಲ್ ಆಕ್ಲಿನ್ <br> ಜಾನ್ ಬೆಝೆಟ್ <br> ಫ್ಲಿಸ್ ಬುಚರ್ <br> ನೀಲ್ ಕಾಲಿನ್ಸ್ <br> ಪಾಲ್ ಹಡ್ಸನ್ <br> ಜಿಂಟಿ ಮೆಕ್ಟಾವಿಷ್ <br> ಕ್ರಿಸ್ ಸ್ಟೇಯ್ನ್ಸ್ <br> ತೆರೆಸಾ ಸ್ಟೀವನ್ಸನ್ <br> ರಿಚರ್ಡ್ ಥಾಂಪ್ಸನ್ <br> ಲೀ ವಾಂಡರ್ವಿಸ್ <br> ಕಾಲಿನ್ ವೆದರಾಲ್
|-
| ಪೌರಸಮಿತಿಯ ಸದಸ್ಯರು – ಮೊಸ್ಜಿಯೆಲ್-ತೈಯೆರಿ ನಗರವಿಭಾಗ
| ಸಿದ್/ಡ್ ಬ್ರೌನ್ <br> ಕೇಟ್ ವಿಲ್ಸನ್
|-
| ಪೌರಸಮಿತಿಯ ಸದಸ್ಯ – ವೈಕೌಐಟಿ/ತಿ ಕರಾವಳಿ - ಚಾಲ್ಮರ್ಸ್ ನಗರವಿಭಾಗ
| ಆಂಡ್ರ್ಯೂ ನೂನ್
|-
|}
===ರಾಷ್ಟ್ರೀಯ===
ಡ್ಯುನೆಡಿನ್/ಡ್ಯೂನ್ಡಿನ್ ನಗರದ ವ್ಯಾಪ್ತಿಯಲ್ಲಿ ಎರಡು ಸಾರ್ವತ್ರಿಕ/ಪ್ರಧಾನ ಮತಕ್ಷೇತ್ರಗಳು ಅಸ್ತಿತ್ವದಲ್ಲಿವೆ: ಉತ್ತರ ಡ್ಯುನೆಡಿನ್/ಡ್ಯೂನ್ಡಿನ್ ಮತ್ತು ದಕ್ಷಿಣ ಡ್ಯುನೆಡಿನ್/ಡ್ಯೂನ್ಡಿನ್ ಹಾಗೂ ಒಂದು ಮಾವೊರಿ ಮತಕ್ಷೇತ್ರ : ಟೆ ತೈ ತೊ/ಟೊಂಗಾ.
2008ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಪ್ರಕಾರ, ಉತ್ತರ ಡ್ಯುನೆಡಿನ್/ಡ್ಯೂನ್ಡಿನ್ ಮತ್ತು ದಕ್ಷಿಣ ಡ್ಯುನೆಡಿನ್/ಡ್ಯೂನ್ಡಿನ್ ಎರಡೂ ಕ್ಷೇತ್ರಗಳಲ್ಲಿ ವಿರೋಧ ಪಕ್ಷವಾದ ಲೇಬರ್ ಪಕ್ಷದ MPಗಳು ಅಧಿಕಾರದಲ್ಲಿದ್ದಾರೆ, ಉತ್ತರ ಡ್ಯುನೆಡಿನ್/ಡ್ಯೂನ್ಡಿನ್ ಕ್ಷೇತ್ರವನ್ನು ಪೀಟ್ ಹಾಡ್ಜ್ಸನ್ ಪ್ರತಿನಿಧಿಸುತ್ತಿದ್ದಾರೆ, ಡ್ಯುನೆಡಿನ್/ಡ್ಯೂನ್ಡಿನ್ ದಕ್ಷಿಣ ಕ್ಷೇತ್ರವನ್ನು ಕ್ಲೇರ್ ಕರ್ರನ್ ಪ್ರತಿನಿಧಿಸುತ್ತಿದ್ದಾರೆ. ಇಡೀ ದಕ್ಷಿಣ ದ್ವೀಪಭಾಗ/ಸೌತ್ ಐಲೆಂಡ್ ಹಾಗೂ ನಾರ್ಥ್ ಐಲೆಂಡ್ನಲ್ಲಿರುವ ವೆಲ್ಲಿಂಗ್ಟನ್ನ ಕೆಲಭಾಗವನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿರುವ ಮಾವೊರಿ ಚುನಾವಣಾ ಕ್ಷೇತ್ರವಾದ ಟೆ ತೈ ತೊ/ಟೊಂಗಾದಲ್ಲಿನ ಅಧಿಕಾರವು ಪ್ರಸ್ತುತ ಮಾವೊರಿ ಪಾರ್ಟಿ ಪಕ್ಷದ ಪಾಲಾಗಿದ್ದು ರಾಹುಯಿ ಕಟೆನೆಯವರು ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಚುನಾವಣೆಯಲ್ಲಿ ಆಯ್ಕೆಯಾದ MPಗಳು ಮಾತ್ರವಲ್ಲದೇ, ಡ್ಯುನೆಡಿನ್/ಡ್ಯೂನ್ಡಿನ್ ನಗರವು ನಾಲ್ವರು ಲಿಸ್ಟ್/ಪಟ್ಟೀಕೃತ ದಾಖಲಾದ MPಗಳಿಗೆ ನೆಲೆಯಾಗಿದೆ : ಅವರುಗಳಲ್ಲಿ ಆಡಳಿತಾರೂಢ ನ್ಯಾಷನಲ್ ಪಾರ್ಟಿ ಪಕ್ಷದ ಮೈಕೆಲ್ ವುಡ್ಹೌಸ್, ಲೇಬರ್ ಪಾರ್ಟಿ ಪಕ್ಷದ ಡೇವಿಡ್ ಪಾರ್ಕರ್, ACT ನ್ಯೂಝಿಲೆಂಡ್ನ ಹಿಲರಿ ಕ್ಯಾಲ್ವರ್ಟ್ ಮತ್ತು ಗ್ರೀನ್ ಪಾರ್ಟಿ ಪಕ್ಷದ ಸಹ-ನಾಯಕಿ ಮೆಟಿರಿಯಾ ಟುರೈ ಸೇರಿದ್ದಾರೆ.
== ಮಾಧ್ಯಮ ==
ಇಲ್ಲಿನ ಪ್ರಧಾನ ದೈನಂದಿನ ವೃತ್ತ/ಸುದ್ದಿಪತ್ರಿಕೆ ''ಒಟಾಗೋ ಡೈಲಿ ಟೈಮ್ಸ್'' ಎಂಬುದಾಗಿದ್ದು, ಇದು ರಾಷ್ಟ್ರದಲ್ಲೇ ಅತ್ಯಂತ ಹಳೆಯದಾದ ದೈನಂದಿನ ವೃತ್ತ/ಸುದ್ದಿಪತ್ರಿಕೆ ಹಾಗೂ ಅಲೈಡ್ ಪ್ರೆಸ್ ಉದ್ಯಮ ಸಮೂಹದ ಭಾಗ ಕೂಡಾ ಆಗಿದೆ. ಸಾಪ್ತಾಹಿಕ ಹಾಗೂ ಪಾಕ್ಷಿಕ ಸಮುದಾಯ ಸುದ್ದಿ/ವೃತ್ತಪತ್ರಿಕೆಗಳಲ್ಲಿ ''ದ ಸ್ಟಾರ್'', ''ತೈಯೆರಿ ಹೆರಾಲ್ಡ್'', ''D-ಸೀನ್'', ''f*INK'' (ಮನರಂಜನೆ), ಮತ್ತು ವಿದ್ಯಾರ್ಥಿ ಪತ್ರಿಕೆಗಳಾದ ''ಕ್ರಿಟಿಕ್'' (ಒಟಾಗೋ ವಿಶ್ವವಿದ್ಯಾಲಯ) ಮತ್ತು ''ಗೈರೋ'' (ಒಟಾಗೋ ಪಾಲಿಟೆಕ್ನಿಕ್) ಸೇರಿವೆ.
ಈ ಮಹಾನಗರಕ್ಕೆ ಎಲ್ಲಾ ಪ್ರಧಾನ ರಾಷ್ಟ್ರೀಯ ರೇಡಿಯೋ ಹಾಗೂ ಕಿರುತೆರೆ ಕೇಂದ್ರಗಳು ಸೇವೆಯನ್ನು ನೀಡುತ್ತಿದ್ದು, ಭೌಮಿಕ ಕಿರುತೆರೆ/ದೂರದರ್ಶನ (ಸಾದೃಶ್ಯ/ಅನಲಾಗ್ ಮತ್ತು ಫ್ರೀವ್ಯೂ/ಮುಕ್ತನೋಟ<nowiki>|</nowiki>HDಗಳೆರಡೂ) ಹಾಗೂ FM ರೇಡಿಯೋಗಳನ್ನು ಮಹಾನಗರದ ಉತ್ತರಕ್ಕಿರುವ ಮೌಂಟ್ ಕಾರ್ಗಿಲ್ ಬೆಟ್ಟದಿಂದ ಪ್ರಸಾರವನ್ನು ಮಾಡಲಾಗುತ್ತದೆ. ಸ್ಥಳೀಯ ರೇಡಿಯೋ ಕೇಂದ್ರಗಳಲ್ಲಿ ರೇಡಿಯೋ ಡ್ಯುನೆಡಿನ್/ಡ್ಯೂನ್ಡಿನ್, ಸಮುದಾಯ ವಾಹಿನಿ/ಕೇಂದ್ರ ಟೊರೊವಾ ರೇಡಿಯೋ (ಪೂರ್ವದಲ್ಲಿ ಹಿಲ್ಸ್ AM), ಹಾಗೂ ವಿಶ್ವವಿದ್ಯಾಲಯದ ರೇಡಿಯೋ ಕೇಂದ್ರ ರೇಡಿಯೋ ಒನ್ಗಳು ಸೇರಿವೆ. ಮಹಾನಗರವು ಅಲೈಡ್ ಪ್ರೆಸ್ ಸಮೂಹದ ಭಾಗವಾದ ಚಾನೆಲ್ 9 ಎಂಬ ಒಂದು ಸ್ಥಳೀಯ ಕಿರುತೆರೆ ವಾಹಿನಿ/ಕೇಂದ್ರವನ್ನು ಹೊಂದಿದೆ.
ಮಹಾನಗರವು ಹಲವು ಪ್ರಮುಖ ಮಾಧ್ಯಮ-ಸಂಬಂಧಿ ನಿರ್ಮಾಣ ಕಂಪೆನಿಗಳಿಗೆ ನೆಲೆಯಾಗಿದ್ದು, ಗಮನಾರ್ಹವಾಗಿ ನ್ಯಾಚುರಲ್ ಹಿಸ್ಟರಿ ನ್ಯೂಝಿಲೆಂಡ್ ಮತ್ತು ಟೇಲರ್ಮೇಡ್ ಮೀಡಿಯಾಗಳ ಕಛೇರಿಯನ್ನು ಹೊಂದಿದೆ.
ಮಹಾನಗರವು ರೇಡಿಯೋ ಒಟಾಗೋದ ಪ್ರಧಾನ ಕಚೇರಿಗಳಿಗೆ ಒಂದು ಕಾಲದಲ್ಲಿ ನೆಲೆಯಾಗಿತ್ತು – ಈಗ ಆಕ್ಲೆಂಡ್ ಮೂಲದ ಇದನ್ನು ಈಗ ರೇಡಿಯೋವರ್ಕ್ಸ್ (ಮೀಡಿಯವರ್ಕ್ಸ್ ಸಮೂಹದ ಭಾಗ) ಎಂದು ಕರೆಯಲಾಗುತ್ತಿದೆ. ಈ ನಗರವು ಈ ಹಿಂದೆ ಅನೇಕ ಪ್ರಸ್ತುತ ಚಾಲ್ತಿಯಲ್ಲಿರದ ಸುದ್ದಿಪತ್ರಿಕೆಗಳಿಗೆ ನೆಲೆಯಾಗಿತ್ತು, ಅವುಗಳಲ್ಲಿ ''ಒಟಾಗೋ ವಿಟ್ನೆಸ್'' ಹಾಗೂ ''ಈವ್ನಿಂಗ್ ಸ್ಟಾರ್'' ಪ್ರಧಾನವಾಗಿದ್ದವು.
== ಸಾರಿಗೆ ==
{{See also|Public transport in Dunedin}}
ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರ ಪ್ರದೇಶಕ್ಕೆ ಎರಡು ಸರ್ಕಾರಿ/ರಾಜ್ಯ ಹೆದ್ದಾರಿಗಳು ಸೇವೆಯನ್ನು ಒದಗಿಸುತ್ತವಲ್ಲದೇ, ಹೆಚ್ಚುವರಿಯಾಗಿ ಎರಡು ಸರ್ಕಾರಿ/ರಾಜ್ಯ ಹೆದ್ದಾರಿಗಳು ಹಾಗೂ ಒಂದು ಪ್ರವಾಸಿ ಮಾರ್ಗಗಳು ಜಿಲ್ಲೆಯ ಇತರೆ ಭಾಗಗಳಿಗೆ ಸೇವೆಯನ್ನು ನೀಡುತ್ತದೆ. ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರದಲ್ಲಿನ ಪ್ರಧಾನ ಸರ್ಕಾರಿ/ರಾಜ್ಯ ಹೆದ್ದಾರಿಗಳಲ್ಲಿ, ಮಹಾನಗರದ ಮಧ್ಯಪ್ರದೇಶದ ಮೂಲಕ ಉತ್ತರ ದಿಕ್ಕಿನಿಂದ ನೈಋತ್ಯ ದಿಕ್ಕಿನೆಡೆಗೆ ಸಾಗುವ, ಡ್ಯುನೆಡಿನ್/ಡ್ಯೂನ್ಡಿನ್ ನಗರವನ್ನು ಇನ್ವರ್ಕಾರ್ಗಿಲ್ನೊಂದಿಗೆ ದಕ್ಷಿಣ ದಿಕ್ಕಿಗೆ ಮತ್ತು ಉತ್ತರ ದಿಕ್ಕಿಗೆ ಟಿಮರು ಮತ್ತು ಕ್ರೈಸ್ಟ್ಚರ್ಚ್ಗಳೊಂದಿಗೆ ಸಂಪರ್ಕಿಸುವ ಸ್ಟೇಟ್ ಹೈವೇ/ಸರ್ಕಾರಿ/ರಾಜ್ಯ ಹೆದ್ದಾರಿ 1 ಸೇರಿದೆ. ದ ಓವಲ್ ಮತ್ತು ಮೊಸ್ಜಿಯೆಲ್ಗಳ ನಡುವೆ, ಸ್ಟೇಟ್ ಹೈವೇ/ಸರ್ಕಾರಿ/ರಾಜ್ಯ ಹೆದ್ದಾರಿ 1 ಹನ್ನೊಂದು-ಕಿಲೋಮೀಟರ್ಗಳಷ್ಟು ದೂರ ಸಾಗುವ ಡ್ಯುನೆಡಿನ್/ಡ್ಯೂನ್ಡಿನ್ ಸದರನ್ ಮೋಟರ್ವೇ ರಸ್ತೆಯನ್ನು ಅನುಸರಿಸುತ್ತದೆ. ಮಹಾನಗರದಲ್ಲಿರುವ ಇತರೆ ಸರ್ಕಾರಿ/ರಾಜ್ಯ ಹೆದ್ದಾರಿಗಳಲ್ಲಿ : ಡ್ಯುನೆಡಿನ್/ಡ್ಯೂನ್ಡಿನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದೊಂದಿಗೆ SH 1ಅನ್ನು ಅಲ್ಲನ್ಟನ್ನಲ್ಲಿ ಸಂಪರ್ಕಿಸುವ ಸ್ಟೇಟ್ ಹೈವೇ/ಸರ್ಕಾರಿ/ರಾಜ್ಯ ಹೆದ್ದಾರಿ 86, SH 1 ಹೆದ್ದಾರಿಯನ್ನು ಕಿನ್ಮಾಂಟ್ ಎಂಬಲ್ಲಿ SH 85 ಹೆದ್ದಾರಿಯನ್ನು ಮಿಡಲ್ಮಾರ್ಚ್ ಮಾರ್ಗದ ಮೂಲಕ ಕ್ಯೇಬರ್ನ್ ಎಂಬಲ್ಲಿ ಸಂಪರ್ಕಿಸುವ ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರದ ಹಿನ್ನಾಡು/ಒಳನಾಡಿಗೆ ಸೇವೆ ನೀಡುವ ಸ್ಟೇಟ್ ಹೈವೇ/ಸರ್ಕಾರ/ರಾಜ್ಯ ಹೆದ್ದಾರಿ 87 ರಸ್ತೆ, ಮತ್ತು ಮಧ್ಯ ಡ್ಯುನೆಡಿನ್/ಡ್ಯೂನ್ಡಿನ್ ಪ್ರದೇಶವನ್ನು ಮಹಾನಗರದ ಚಾಲ್ಮರ್ಸ್ ರೇವುಪಟ್ಟಣದಲ್ಲಿನ ರೇವು ಸೌಲಭ್ಯಗಳೊಂದಿಗೆ ಸಂಪರ್ಕಿಸುವ ಸ್ಟೇಟ್ ಹೈವೇ/ಸರ್ಕಾರಿ/ರಾಜ್ಯ ಹೆದ್ದಾರಿ 88 ಸೇರಿವೆ. ಡ್ಯುನೆಡಿನ್/ಡ್ಯೂನ್ಡಿನ್ ನಗರವು ದ ಕ್ಯಾಟ್ಲಿನ್ಸ್, ಇನ್ವರ್ಕಾರ್ಗಿಲ್ ಮತ್ತು ಫಿಯಾರ್ಡ್ಲ್ಯಾಂಡ್/ಲೆಂಡ್ಗಳ ಮೂಲಕ ಡ್ಯುನೆಡಿನ್/ಡ್ಯೂನ್ಡಿನ್ ನಗರವನ್ನು ಟೆ ಅನೌಗೆ ಸಂಪರ್ಕಿಸುವ ಪ್ರವಾಸಿಮಾರ್ಗ ಹೆದ್ದಾರಿಯಾದ ಸದರನ್ ಸೀನಿಕ್ ರೂಟ್ನ ಈಶಾನ್ಯ ಕೊನೆಯಾಗಿದೆ.
[[File:Low floor.jpg|thumb|left|250px|ಡ್ಯುನೆಡಿನ್/ಡ್ಯೂನ್ಡಿನ್ ನಗರಪ್ರದೇಶದ ಮಾರ್ಗಗಳಲ್ಲಿ ಕಾರ್ಯಾಚರಿಸುವ ಸಿಟಿಬಸ್ನಿಂದ ನಡೆಸಲಾಗುವ ಮೂರು ವಿನ್ಯಾಸಶೈಲಿ-ನಿರ್ಮಿತ/ಡಿಸೈನ್ಲೈನ್-ಬಿಲ್ಟ್ ಬಸ್ಗಳು.]]
ಡ್ಯುನೆಡಿನ್/ಡ್ಯೂನ್ಡಿನ್ ನಗರದ ಬಸ್ಸುಗಳ ವ್ಯವಸ್ಥೆಯನ್ನು ಒಟಾಗೋ ಪ್ರಾಂತೀಯ ಪೌರಸಮಿತಿಯು ''ಗೋಬಸ್'' ಬ್ರಾಂಡ್ನಡಿಯಲ್ಲಿ ಏರ್ಪಡಿಸಲಾಗಿದೆ. ಒಟ್ಟಾರೆ 59 ಬಸ್ಗಳು ಮಹಾನಗರದಾದ್ಯಂತದ 17 ವಾರದದಿನಗಳ ಮಾರ್ಗಗಳಲ್ಲಿ ಹಾಗೂ 13 ವಾರದದಿನಗಳ ರಾತ್ರಿಪ್ರಯಾಣ/ವಾರಾಂತ್ಯ/ರಜಾದಿನ ಮಾರ್ಗಗಳಲ್ಲಿ ಕಾರ್ಯಾಚರಿಸುತ್ತವೆ. ಬಸ್ಸುಗಳನ್ನು ಎರಡು ಸಾರಿಗೆಸೇವಾದಾರ ಸಂಸ್ಥೆಗಳು ಓಡಿಸುತ್ತವೆ ಅವುಗಳಲ್ಲಿ ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರ ಪೌರಸಮಿತಿ-ಸ್ವಾಮ್ಯದ ಸೇವಾದಾರ ಸಂಸ್ಥೆ ಸಿಟಿಬಸ್ (10/11 ಮಾರ್ಗಗಳು) ಹಾಗೂ ಖಾಸಗಿ ಇನ್ವರ್ಕಾರ್ಗಿಲ್-ಮೂಲದ ಸೇವಾದಾರ ಸಂಸ್ಥೆ ಪ್ಯಾಸೆಂಜರ್ ಟ್ರಾನ್ಸ್ಪೋರ್ಟ್ (7/2 ಮಾರ್ಗಗಳು) ಸೇರಿವೆ. ಇವುಗಳಿಗೆ ಹೆಚ್ಚುವರಿಯಾಗಿ, ಮೊಸ್ಜಿಯೆಲ್ ಕೋಚ್ ಸರ್ವೀಸಸ್ ಸಂಸ್ಥೆಯು ವಾರದದಿನಗಳಲ್ಲಿ ಸಂಪೂರ್ಣ ಮಾರ್ಗ ಸೇವೆಯನ್ನು ಮೊಸ್ಜಿಯೆಲ್ ಪಟ್ಟಣದಲ್ಲಿ ನೀಡುತ್ತದೆ.
ಆಕ್ಟಾಗನ್ ಪ್ರದೇಶದ ಪೂರ್ವಕ್ಕಿರುವ ಡ್ಯುನೆಡಿನ್/ಡ್ಯೂನ್ಡಿನ್ ರೈಲುನಿಲ್ದಾಣವು, ಮಹಾನಗರದ ಪ್ರಧಾನ ರೈಲು ನಿಲ್ದಾಣವಾಗಿದೆ. ಒಂದು ಕಾಲದಲ್ಲಿ ರಾಷ್ಟ್ರದಲ್ಲೇ ಅತ್ಯಂತ ಜನನಿಬಿಡವಾಗಿದ್ದ ಇದು, ವರ್ಷಗಳ ಕಳೆದು ಹೋದಂತೆ ರೈಲು ಮಾರ್ಗದ ಬಳಕೆ ಕಡಿಮೆಯಾದಂತೆ ಬಹುತೇಕ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಉಪನಗರಗಳಿಗೆ ನಡೆಸಲಾಗುತ್ತಿದ್ದ ಕಾರ್ಯಾಚರಣೆಗಳನ್ನು 1982ರಲ್ಲಿ ನಿಲ್ಲಿಸಲಾಗಿತ್ತು, ಹಾಗೂ ಕೊನೆಯ ನಿಯತ ವಾಣಿಜ್ಯೋದ್ದೇಶದ ಪ್ರಯಾಣಿಕ ರೈಲು ಡ್ಯುನೆಡಿನ್/ಡ್ಯೂನ್ಡಿನ್ ನಗರದಲ್ಲಿ ಕಾರ್ಯಾಚರಣೆ ನಡೆಸಿದ ದ ಸದರ್ನರ್ಅನ್ನು ಫೆಬ್ರವರಿ 2002ರಲ್ಲಿ ರದ್ದುಗೊಳಿಸಲಾಯಿತು. ತೈಯೆರಿ ಗಾರ್ಜ್/ಕಮರಿ ರೈಲ್ವೆ ಸಂಸ್ಥೆಯು ಪ್ರಸ್ತುತ ಈ ನಿಲ್ದಾಣದಿಂದ ಪ್ರವಾಸಿಗ-ಕೇಂದ್ರಿತ ಸೇವೆಗಳನ್ನು ಒದಗಿಸುತ್ತಿದ್ದು, ಅವುಗಳಲ್ಲಿ ಬಹು ಪ್ರಮುಖವಾಗಿದ್ದುದು ಹಿಂದಿನ ಒಟಾಗೋ ಸೆಂಟ್ರಲ್ ರೈಲುಮಾರ್ಗದುದ್ದಕ್ಕೂ ಪ್ರಕೃತಿಸೌಂದರ್ಯದಿಂದ ಕೂಡಿದ ತೈಯೆರಿ ಕಮರಿಯ ಮೂಲಕ ಕಾರ್ಯಾಚರಿಸುತ್ತಿದ್ದ ಜನಪ್ರಿಯ ಹಾಗೂ ವಿಖ್ಯಾತವಾಗಿದ್ದ ರೈಲು ತೈಯೆರಿ ಗಾರ್ಜ್/ಕಮರಿ ಲಿಮಿಟೆಡ್. ತೈಯೆರಿ ಗಾರ್ಜ್/ಕಮರಿ ರೈಲ್ವೆ ಸಂಸ್ಥೆಯು ಪಾಲ್ಮರ್ಸ್ಟನ್ಗೆ ಕೂಡಾ ವಾರಕ್ಕೊಂದು ಬಾರಿ ಕಾರ್ಯಾಚರಿಸುತ್ತದೆ. ಈ ರೈಲು ನಿಲ್ದಾಣವನ್ನು ಇತರೆ ಪಾರಂಪರಿಕ ರೈಲ್ವೆ ಸಂಸ್ಥೆಗಳು ಆಯೋಜಿಸುವ ವಿಹಾರ ಸಂಚಾರ ಕಾರ್ಯಕ್ರಮಗಳ ಮೂಲಕ ಚಾಲ್ಮರ್ಸ್ ರೇವುಪಟ್ಟಣದಲ್ಲಿ ಲಂಗರು ಹಾಕುವ ವಿಹಾರ ಹಡಗುಗಳು ಆಯೋಜಿಸುವ ರೈಲುಪ್ರಯಾಣಗಳ ರೈಲುಗಳು ಭೇಟಿ ನೀಡುತ್ತವೆ.
[[File:Dunedin International Airport3.jpg|thumb|right|250px|ಡ್ಯುನೆಡಿನ್/ಡ್ಯೂನ್ಡಿನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣ – ಒಂದು ಏರ್ ನ್ಯೂಝಿಲೆಂಡ್ 737 ವಿಮಾನವು ರನ್ವೇನಲ್ಲಿ ಇಳಿಯುತ್ತಿರುವಾಗ ಮತ್ತೊಂದು ಏರ್ ನ್ಯೂಝಿಲೆಂಡ್ A320 ವಿಮಾನವು ಟ್ಯಾಕ್ಸಿವೇನಲ್ಲಿ ಕಾಯುತ್ತಿದೆ.]]
ಡ್ಯುನೆಡಿನ್/ಡ್ಯೂನ್ಡಿನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣವು ಮೊಮೊನಾದಲ್ಲಿರುವ ತೈಯೆರಿ ಬಯಲು ಪ್ರದೇಶದಲ್ಲಿ ಮಹಾನಗರದ ನೈಋತ್ಯ ದಿಕ್ಕಿಗೆ {{convert|30|km|2|abbr=on|lk=out}} ಅಕ್ಷಾಂಶದಲ್ಲಿದೆ. ವಿಮಾನನಿಲ್ದಾಣವು ಒಂದು ಆಗಮನ ನಿರ್ಗಮನ ನಿಲ್ದಾಣ ಹಾಗೂ {{convert|1900|m|ft|adj=on}} ರನ್ವೇಗಳ ಮೂಲಕ ಕಾರ್ಯಾಚರಿಸುತ್ತಿದ್ದು ಕ್ರೈಸ್ಟ್ಚರ್ಚ್ ಮತ್ತು ಕ್ವೀನ್ಸ್ಟೌನ್ಗಳ ನಂತರ ದಕ್ಷಿಣ ದ್ವೀಪಭಾಗ/ಸೌತ್ ಐಲೆಂಡ್ನಲ್ಲಿಯೇ ಮೂರನೇ ಅತ್ಯಂತ ಅವಿಶ್ರಾಂತವಾದ ವಿಮಾನನಿಲ್ದಾಣವಾಗಿದೆ. ಈ ನಿಲ್ದಾಣವನ್ನು ಪ್ರಮುಖವಾಗಿ ದೇಶೀಯ ವಿಮಾನಯಾನಗಳಿಗೆ ಆಕ್ಲೆಂಡ್, ಕ್ರೈಸ್ಟ್ಚರ್ಚ್, ವೆಲ್ಲಿಂಗ್ಟನ್, ರೊಟೊರುವಾ, ಉತ್ತರ ಪಾಲ್ಮರ್ಸ್ಟನ್ಗಳಿಗೆ ಹಾಗೂ ಅವುಗಳಿಂದ ನಗರಕ್ಕೆ ನಿಯತ ವಿಮಾನ ಕಾರ್ಯಾಚರಣೆಗಳನ್ನು ಹಾಗೂ ಕ್ವೀನ್ಸ್ಟೌನ್, ವಾನಾಕಾ, ಮತ್ತು ಫಿಯಾರ್ಡ್ಲ್ಯಾಂಡ್/ಲೆಂಡ್ಗಳಿಗೆ ಹಾಗೂ ಅವುಗಳಿಂದ ನಿರ್ದಿಷ್ಟಾವಧಿಯ ವಿಮಾನಯಾನಗಳನ್ನು ನಡೆಸಲಾಗುತ್ತಿದ್ದರೂ, ವರ್ಷದುದ್ದಕ್ಕೂ ಬ್ರಿಸ್ಬೇನ್ನಿಂದ ಬರುವ ಹಾಗೂ ಅಲ್ಲಿಗೆ ತೆರಳುವ ಅಂತರರಾಷ್ಟ್ರೀಯ ವಿಮಾನಯಾನಗಳ ಕಾರ್ಯಾಚರಣೆಯನ್ನು ಹಾಗೂ ನಿರ್ದಿಷ್ಟಾವಧಿಗಳಲ್ಲಿ [[ಸಿಡ್ನಿ]] ಹಾಗೂ ಮೆಲ್ಬೋರ್ನ್ಗಳಿಗೆ ವಿಮಾನಯಾನಗಳ ಕಾರ್ಯಾಚರಣೆಯನ್ನು ನಡೆಸುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿನ ಇಳಿಕೆಗೆ ಕಾರಣ ಸದರಿ ವಿಮಾನನಿಲ್ದಾಣಕ್ಕೆ ನೇರವಾಗಿ ಕಾರ್ಯಾಚರಿಸುವ ಅಂತರರಾಷ್ಟ್ರೀಯ ವಿಮಾನಯಾನಗಳು ಕಡಿಮೆ ಸಂಖ್ಯೆಯಲ್ಲಿರುವುದು ಎನ್ನಬಹುದಾಗಿದೆ.
ಚಾಲ್ಮರ್ಸ್ ರೇವುಪಟ್ಟಣದಿಂದ ಪೋರ್ಟೋಬೆಲ್ಲೋಗೆ ವಿಹಾರನೌಕೆಗಳ ಯಾನಗಳ 19ನೆಯ ಶತಮಾನದ ಕೊನೆಗೆ ಮತ್ತು 20ನೆಯ ಶತಮಾನದ ಆದಿಯಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿತ್ತು.<ref>[http://thecommunityarchive.org.nz/node/72326/description ಸಮುದಾಯ ದಫ್ತರಖಾನೆ]. 2009ರ ನವೆಂಬರ್ 2ರಂದು ಪಡೆಯಲಾಗಿದೆ.</ref> ಪ್ರಾಸಂಗಿಕವಾಗಿ ಅವುಗಳನ್ನು ಪುನರುಜ್ಜೀವನಗೊಳಿಸುವ ಪ್ರಸ್ತಾಪಗಳನ್ನು ಮಾಡಲಾಗಿ, ಒಂದು ಲಾಭೋದ್ದೇಶ ರಹಿತ ಸಂಸ್ಥೆ, ಒಟಾಗೋ ಫೆರ್ರೀಸ್ Inc.ಅನ್ನು ಹುಟ್ಟು ಹಾಕಿ, ಮೂಲ ವಿಹಾರನೌಕೆಗಳಲ್ಲಿ ಒಂದನ್ನು ಮರುಸಜ್ಜುಗೊಳಿಸುವ ಹಾಗೂ ಅದನ್ನು ಮತ್ತೆ ಈ ಮಾರ್ಗದಲ್ಲಿ ಬಳಸುವುದರ ಬಗ್ಗೆ ಜಾರಿ ವ್ಯವಸ್ಥೆಯನ್ನು ಪರಿಶೀಲಿಸುವ ಹೊಣೆಗಾರಿಕೆಯನ್ನು ಅದಕ್ಕೆ ನೀಡಲಾಗಿದೆ.<ref>[http://ferry.portobello.net.nz/ ಒಟಾಗೋ ಫೆರ್ರೀಸ್ Inc.] {{Webarchive|url=https://web.archive.org/web/20100525091157/http://ferry.portobello.net.nz/ |date=2010-05-25 }} 2009ರ ನವೆಂಬರ್ 2ರಂದು ಪಡೆಯಲಾಗಿದೆ.</ref>
1866ರಲ್ಲಿ ಒಟಾಗೋ ಬಂದರಿಗೆ ಅಡ್ಡಡ್ಡಲಾಗಿ ಚಾಲ್ಮರ್ಸ್ ರೇವುಪಟ್ಟಣ ಮತ್ತು ಪೋರ್ಟೋಬೆಲ್ಲೋಗಳ ನಡುವೆ,<ref>ಹೇವರ್ಡ್ 1998, p.65</ref> ಸೇತುವೆಯೊಂದನ್ನು ಕಟ್ಟುವ ಯೋಜನೆಗಳನ್ನು ಮಾಡಲಾಗಿತ್ತು, ಆದರೆ 1140-ಮೀಟರ್ಗಳ ಕಟ್ಟೋಣದ ಈ ಬೃಹತ್ ಅನುಸಂಧಾನವು ಎಂದಿಗೂ ಸಂಭವಿಸಲಿಲ್ಲ. 1870ರ ದಶಕದ ಅವಧಿಯಲ್ಲಿ ಟೋಮಾಹಾಕ್ನಲ್ಲಿನ ಪೆಸಿಫಿಕ್ ಮಹಾಸಾಗರದ ಕರಾವಳಿ ಹಾಗೂ ಬಂದರುವಿನ ಭೂಚಾಚುವಿಗೆ ಹತ್ತಿರವಿರುವ ಆಂಡರ್ಸನ್ಸ್ ಕೊಲ್ಲಿಗಳ ನಡುವೆ ಕಾಲುವೆಯೊಂದನ್ನು ನಿರ್ಮಿಸುವ ಪ್ರಸ್ತಾವನೆಯೊಂದನ್ನು ಸಹಾ ಪ್ರಸ್ತಾಪಿಸಲಾಗಿತ್ತು.<ref>ಹೇವರ್ಡ್ 1998, p.66</ref> ಈ ಅನುಸಂಧಾನವು ಕೂಡಾ ಎಂದಿಗೂ ಫಲಪ್ರದಗೊಳ್ಳಲಿಲ್ಲ.
== ಸರ್ವತೋಮುಖ ದೃಷ್ಟಿ/ಸಮಗ್ರ ನೋಟ ==
{{wide image|Dunedin Panorama.jpg|800px|180° view of Dunedin shot from the hills on the west. Mount Cargill is at the extreme left of picture, and the Otago Peninsula is beyond the harbour to the centre}}
{{wide image|Mount Cargill 2.jpg|800px|A panorama from just east of the summit of Mount Cargill. The harbour runs from its entrance near the centre to the city centre on the right, the peninsula beyond. The base of a television mast is at the extreme left and right edges}}
{{wide image|Mount Cargill.jpg|800px|The view from the summit of Mount Cargill. The base of a television mast can be seen on the left, with the harbour and the peninsula beyond. The city centre is in the middle}}
{{wide image|Flagstaff Hill.jpg|800px|The view from the summit of Flagstaff. The city centre is on the right, and Mosgiel on the left. Mount Cargill is slightly right of centre}}
{{wide image|Dunedin_pano_from_signal_hill.jpg|800px|The view from the summit of Signal Hill. Dunedin CBD is in the center of the image. The Otago Peninsula stretches out to the left}}
== ಗಣ್ಯ ವ್ಯಕ್ತಿಗಳು==
{{Main|Notable people from Dunedin}}
== ಘಟನೆಗಳು ==
=== ವಾರ್ಷಿಕ ಕಾರ್ಯಕ್ರಮಗಳು ===
* ಜನವರಿ – [http://www.whareflat.co.nz/ ವ್ಹೇರ್ ಫ್ಲಾಟ್ ಫೋಕ್ ಉತ್ಸವ] {{Webarchive|url=https://web.archive.org/web/20110724194800/http://www.whareflat.co.nz/ |date=2011-07-24 }} ವು ಕೊನೆಗೊಳ್ಳುತ್ತಿರುವುದು
* ಜನವರಿ – [https://web.archive.org/web/20070422031915/http://www.dunedin-tourism.co.nz/sfos/ ಸದರನ್ ಫೆಸ್ಟಿವಲ್ ಆಫ್ ಸ್ಪೀಡ್] ಪ್ರಾಚೀನ ಕಾರುಗಳ ರಸ್ತೆ-ರೇಸ್ ಪಂದ್ಯ
* ಫೆಬ್ರವರಿ – [http://www.nzmastersgames.com/ ನ್ಯೂಝಿಲೆಂಡ್ ಮಾಸ್ಟರ್ಸ್ ಗೇಮ್ಸ್] ಪಂದ್ಯಾವಳಿ (ದ್ವೈವಾರ್ಷಿಕ ವಿದ್ಯಮಾನ)
* ಫೆಬ್ರವರಿ – [http://www.ousa.org.nz/ ಒಟಾಗೋ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಘ] & ಒಟಾಗೋ ಪಾಲಿಟೆಕ್ನಿಕ್ ಪರಿಚಯಾತ್ಮಕ ವಾರಾವಧಿಯ ತರಬೇತಿಗಳು
* ಫೆಬ್ರವರಿ – ಡ್ಯುನೆಡಿನ್/ಡ್ಯೂನ್ಡಿನ್ ಬೇಸಿಗೆ ಉತ್ಸವ
* ಮಾರ್ಚ್ – ಫ್ರಿಂಜ್ ಉತ್ಸವ
* ಮಾರ್ಚ್ – [http://www.id-dunedinfashion.com/ ಈದ್ ಡ್ಯುನೆಡಿನ್/ಡ್ಯೂನ್ಡಿನ್] {{Webarchive|url=https://web.archive.org/web/20110324031021/http://www.id-dunedinfashion.com/ |date=2011-03-24 }} ಫ್ಯಾಷನ್ ಷೋ (2010ರ ಏಪ್ರಿಲ್ನ ಆರಂಭದಲ್ಲಿ ನಡೆಯಬೇಕಿರುವುದು)
* ಮೇ – ಪದವಿ ಪ್ರದಾನ ವಾರ (ಒಟಾಗೋ ವಿಶ್ವವಿದ್ಯಾಲಯ) [http://www.ousa.org.nz/ ಒಟಾಗೋ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಘ] ವು ನಡೆಸಿಕೊಡುವ ಪದವಿಪ್ರದಾನ ಪ್ರದರ್ಶನವೂ ಸೇರಿದಂತೆ
* ಮೇ – [http://www.otagorally.co.nz/ ಒಟಾಗೋ ರ್ರ್ಯಾಲಿ] {{Webarchive|url=https://web.archive.org/web/20061205060538/http://otagorally.co.nz/ |date=2006-12-05 }}
* ಮೇ – ರೀಜೆಂಟ್ ಥಿಯೇಟರ್ 24-ಗಂಟೆಗಳ ಪುಸ್ತಕ ಮಾರಾಟ (ನಿಯತವಾಗಿ ಹಮ್ಮಿಕೊಳ್ಳಲಾಗುವ ದಕ್ಷಿಣ ಗೋಳಾರ್ಧದ ಪ್ರಖ್ಯಾತ ಬೃಹತ್ ಬಳಸಿದ ಪುಸ್ತಕಗಳ ಮಾರಾಟ)<ref>{{cite web|url=http://www.scoop.co.nz/stories/CU0505/S00062.htm |title=NZ’s biggest book sale reaches 25 year milestone |publisher=Scoop |date=2005-05-09 |accessdate=2009-07-25}}</ref>
* ಜುಲೈ – [http://www.scifest.org.nz/ ನ್ಯೂಝಿಲೆಂಡ್ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವ] (ಪ್ರತಿ ಎರಡನೇ ವರ್ಷ)
* ಜುಲೈ – ಟೇಸ್ಟ್ ಒಟಾಗೋ ಡ್ಯುನೆಡಿನ್/ಡ್ಯೂನ್ಡಿನ್ ಆಹಾರ ಮತ್ತು ಮದ್ಯ/ವೈನ್ ಉತ್ಸವ
* ಜುಲೈ – [http://www.chocolatecarnival.co.nz/ ಕ್ಯಾಡ್ಬರಿ ಚಾಕೋಲೇಟ್ ವಿಹಾರೋತ್ಸವ/ಉತ್ಸವ] {{Webarchive|url=https://web.archive.org/web/20110724192047/http://www.chocolatecarnival.co.nz/ |date=2011-07-24 }}
* ಜುಲೈ - [http://www.enzedff.co.nz/ ಡ್ಯುನೆಡಿನ್/ಡ್ಯೂನ್ಡಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ] {{Webarchive|url=https://web.archive.org/web/20100602074715/http://www.enzedff.co.nz/ |date=2010-06-02 }}
* ಆಗಸ್ಟ್/ಸೆಪ್ಟೆಂಬರ್ [http://www.otago.ac.nz/German/play/ ಒಟಾಗೋ ವಿಶ್ವವಿದ್ಯಾಲಯದಲ್ಲಿ ದ ಜರ್ಮನ್ ನಾಟಕ] {{Webarchive|url=https://web.archive.org/web/20110610171826/http://www.otago.ac.nz/German/play/ |date=2011-06-10 }}
* ಆಗಸ್ಟ್/ಸೆಪ್ಟೆಂಬರ್ – [ಅನ್ಡೀ/ಡೈ 500]
* ಅಕ್ಟೋಬರ್ – [http://www.otagofestival.co.nz/ ಒಟಾಗೋ ಕಲಾ ಉತ್ಸವ/ಫೆಸ್ಟಿವಲ್ ಆಫ್ ಆರ್ಟ್ಸ್] {{Webarchive|url=https://web.archive.org/web/20110515032422/http://www.otagofestival.co.nz/ |date=2011-05-15 }} – ಪ್ರತಿ ಎರಡನೇ ವರ್ಷ (ಬೆಸ ಸಂಖ್ಯೆಯ ವರ್ಷಗಳು)
* ಅಕ್ಟೋಬರ್ – ರ್ರ್ಹೋಡೋಡೆಂಡ್ರನ್ ಸಪ್ತಾಹ
* ಡಿಸೆಂಬರ್ – [http://www.samstock.org.nz/ ಸ್ಯಾಮ್ಸ್ಟಾಕ್ ಸಂಗೀತೋತ್ಸವ] {{Webarchive|url=https://web.archive.org/web/20100525112018/http://www.samstock.org.nz/ |date=2010-05-25 }}
* ಡಿಸೆಂಬರ್ – ಸಂಟಾ ಪೆರೇಡ್/ಮೆರವಣಿಗೆ
* ಡಿಸೆಂಬರ್ – [http://www.whareflat.co.nz/ ವ್ಹೇರ್ ಫ್ಲಾಟ್ ಫೋಕ್ ಉತ್ಸವ] {{Webarchive|url=https://web.archive.org/web/20110724194800/http://www.whareflat.co.nz/ |date=2011-07-24 }} ವು ಆರಂಭಗೊಳ್ಳುತ್ತಿರುವುದು
* ಡಿಸೆಂಬರ್ – ಹೊಸ ವರ್ಷದ ಹಿಂದಿನ ದಿನ ಸಂಜೆಯ ಪಾರ್ಟಿ/ಮೋಜಿನ ಕೂಟ ಆಕ್ಟಾಗನ್
=== ಹಿಂದಿನ ವಿದ್ಯಮಾನಗಳು ===
* 1865 – ನ್ಯೂಝಿಲೆಂಡ್ ವಸ್ತುಪ್ರದರ್ಶನ/ಎಕ್ಸಿಬಿಷನ್ (1865)
* 1889 – ನ್ಯೂಝಿಲೆಂಡ್ ಅಂಡ್/ಮತ್ತು ಸೌತ್ ಸೀಸ್ ವಸ್ತುಪ್ರದರ್ಶನ/ಎಕ್ಸಿಬಿಷನ್ (1889)
* 1898 – ಒಟಾಗೋ ಜ್ಯುಬಿಲೀ/ಐವತ್ತನೆಯ ವಾರ್ಷಿಕೋತ್ಸವದ ಔದ್ಯಮಿಕ ವಸ್ತುಪ್ರದರ್ಶನ/ಎಕ್ಸಿಬಿಷನ್ (1898)
* 1925 – ನ್ಯೂಝಿಲೆಂಡ್ ಅಂಡ್/ಮತ್ತು ಸೌತ್ ಸೀಸ್ ಅಂತರರಾಷ್ಟ್ರೀಯ ವಸ್ತುಪ್ರದರ್ಶನ/ಎಕ್ಸಿಬಿಷನ್ (1925)
== ಗಮನಾರ್ಹ ಕಟ್ಟಡಗಳು ಹಾಗೂ ಪ್ರಧಾನ ಹೆಗ್ಗುರುತುಗಳು ==
* ಡ್ಯುನೆಡಿನ್/ಡ್ಯೂನ್ಡಿನ್ ರೈಲು ನಿಲ್ದಾಣ
* ಡ್ಯುನೆಡಿನ್/ಡ್ಯೂನ್ಡಿನ್ ಟೌನ್ ಹಾಲ್/ಪುರ ಭವನ
* ಲಾನಾರ್ಚ್/ರ್ಕ್ ಕ್ಯಾಸಲ್/ಕೋಟೆಮನೆ/ಕಿಲ್ಲೆ
* ಕಾರ್ಗಿಲ್ನ ಕ್ಯಾಸಲ್/ಕೋಟೆಮನೆ/ಕಿಲ್ಲೆ
* ಕ್ಯಾಡ್ಬರಿ ವರ್ಲ್ಡ್
* ಓಲ್ವೆಸ್ಟನ್
* ಸ್ಪೇಯ್ಟ್ಸ್ ಬ್ರ್ಯೂವರಿ/ಮದ್ಯ ತಯಾರಿಕಾ ಕೇಂದ್ರ
* ಒಟಾಗೋ ವಿಶ್ವವಿದ್ಯಾಲಯ ರೆಜಿಸ್ಟ್ರಿ/ನೋಂದಣಿ ಕಛೇರಿ ಕಟ್ಟಡ
* ಒಟಾಗೋ ವಿಶ್ವವಿದ್ಯಾಲಯ ಗಡಿಯಾರಗೋಪುರ ಸಂಕೀರ್ಣ
* ರೀಜೆಂಟ್ ಥಿಯೇಟರ್ ನಾಟಕಶಾಲೆ
* ಫಾರ್ಚ್ಯೂನ್ ಥಿಯೇಟರ್ ನಾಟಕಶಾಲೆ
* ಮುನಿಸಿಪಲ್ ಛೇಂಬರ್ಸ್/ಪೌರಸಭೆಯ ಕಛೇರಿ/ಕಚೇರಿ/ಸಭಾಮಂದಿರ
* ಅಲ್ಲೈಡ್ ಪ್ರೆಸ್ ಕಟ್ಟಡ
* ಡ್ಯುನೆಡಿನ್/ಡ್ಯೂನ್ಡಿನ್ ಸಾರ್ವಜನಿಕ ಆಸ್ಪತ್ರೆ/ಚಿಕಿತ್ಸಾಲಯ
* ಮೆರಿಡಿಯನ್ ಮಾಲ್/ವ್ಯಾಪಾರ ಕೇಂದ್ರ
* ದ ಆಕ್ಟಾಗನ್
=== ವಸ್ತುಸಂಗ್ರಹಾಲಯಗಳು, ಕಲಾ ಪ್ರದರ್ಶನ ಮಂದಿರಗಳು ಮತ್ತು ಗ್ರಂಥಾಲಯಗಳು ===
* ಒಟಾಗೋ ವಸ್ತುಸಂಗ್ರಹಾಲಯ
* ಒಟಾಗೋ ಸೆಟ್ಲರ್ಸ್ ವಸ್ತುಸಂಗ್ರಹಾಲಯ
* ಡ್ಯುನೆಡಿನ್/ಡ್ಯೂನ್ಡಿನ್ ಸಾರ್ವಜನಿಕ ಕಲಾ ಪ್ರದರ್ಶನ ಮಂದಿರ
* ಡ್ಯುನೆಡಿನ್/ಡ್ಯೂನ್ಡಿನ್ ಸಾರ್ವಜನಿಕ ಗ್ರಂಥಾಲಯ ಸಂಕೀರ್ಣ
* ಹಾಕೆನ್ ಗ್ರಂಥಾಲಯ
=== ಚರ್ಚು/ಇಗರ್ಜಿಗಳು ===
* ಆಲ್ ಸೇಂಟ್ಸ್ ಚರ್ಚ್/ಇಗರ್ಜಿ
* ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಆಫ್ ಲ್ಯಾಟರ್ ಡೇ ಸೇಂಟ್ಸ್ ಇಗರ್ಜಿ
* ಫಸ್ಟ್ ಚರ್ಚ್/ಇಗರ್ಜಿ
* ಹ್ಯಾನೋವರ್ ಸ್ಟ್ರೀಟ್ ಬಾಪ್ಟಿಸ್ಟ್ ಚರ್ಚ್/ಇಗರ್ಜಿ
* ಕೈಕೊರಾಯ್ ಪ್ರೆಸ್ಬೈಟೀರಿಯನ್ ಚರ್ಚ್/ಇಗರ್ಜಿ
* ನಾಕ್ಸ್ ಚರ್ಚ್/ಇಗರ್ಜಿ
* St. ಜೋಸೆಫ್ಸ್ ಕೆಥಡ್ರಲ್ ಚರ್ಚ್/ಇಗರ್ಜಿ
* St. ಪಾಲ್ಸ್ ಕೆಥಡ್ರಲ್ ಚರ್ಚ್/ಇಗರ್ಜಿ
* ಟ್ರಿನಿಟಿ ವೆಸ್ಲೆಯನ್ ಚರ್ಚ್/ಇಗರ್ಜಿ — ಪ್ರಸಕ್ತ ಫಾರ್ಚ್ಯೂನ್ ರಂಗಮಂದಿರ/ಥಿಯೇಟರ್
===ಉದ್ಯಾನವನಗಳು ಮತ್ತು ತೋಟಗಳು===
* ಜೈವಿಕ ಉದ್ಯಾನಗಳು ಸಸ್ಯೋದ್ಯಾನಗಳು
* ಡ್ಯುನೆಡಿನ್/ಡ್ಯೂನ್ಡಿನ್ ಚೀನೀಯದ ಉದ್ಯಾನ
=== ಶೈಕ್ಷಣಿಕ ನೆಲೆಗಳು ===
==== ವಿಶ್ವವಿದ್ಯಾಲಯ ಶಿಕ್ಷಣ ====
* ಒಟಾಗೋ ವಿಶ್ವವಿದ್ಯಾಲಯ
* ಒಟಾಗೋ ಪಾಲಿಟೆಕ್ನಿಕ್
* ಆವೋರಾಕಿ/ವೊರಾಕಿ/ಆರಾಕಿ ಪಾಲಿಟೆಕ್ನಿಕ್ (ಡ್ಯುನೆಡಿನ್/ಡ್ಯೂನ್ಡಿನ್ ವಿದ್ಯಾಲಯದ ಆವಾರ)
* ಡ್ಯುನೆಡಿನ್/ಡ್ಯೂನ್ಡಿನ್ ಕಾಲೇಜ್ ಆಫ್ ಎಜುಕೇಷನ್
==== ಮಾಧ್ಯಮಿಕ ಶಿಕ್ಷಣ ====
{{See also|List of schools in the Otago Region#Dunedin_City}}
* ಬೆಫೀಲ್ಡ್ ಪ್ರೌಢಶಾಲೆ
* ಒಟಾಗೋ ಬಾಲಕರ ಪ್ರೌಢಶಾಲೆ
* ಒಟಾಗೋ ಬಾಲಕಿಯರ ಪ್ರೌಢಶಾಲೆ
* ಕೊಲಂಬಾ ಕಾಲೇಜು/ಮಹಾವಿದ್ಯಾಲಯ
* St. ಹಿಲ್ಡಾಸ್ ಕಾಲೇಜಿಯೇಟ್ ಶಾಲೆ
* ಜಾನ್ ಮೆಕ್ಗ್ಲಾಷಾನ್ ಕಾಲೇಜು/ಮಹಾವಿದ್ಯಾಲಯ
* ಕಾವಾನಾಗ್ ಕಾಲೇಜು/ಮಹಾವಿದ್ಯಾಲಯ
* ಲೋಗನ್ ಪಾರ್ಕ್ ಪ್ರೌಢಶಾಲೆ
* ಕೈಕೊರಾಯ್ ಕಣಿವೆ ಕಾಲೇಜು/ಮಹಾವಿದ್ಯಾಲಯ
* ಕಿಂಗ್ಸ್ ಪ್ರೌಢಶಾಲೆ
* ಕ್ವೀನ್ಸ್ ಪ್ರೌಢಶಾಲೆ
* ತೈಯೆರಿ ಕಾಲೇಜು/ಮಹಾವಿದ್ಯಾಲಯ
== ಕ್ರೀಡೆ ==
===ಪ್ರಮುಖ ತಂಡಗಳು===
* ದ ಹೈಲ್ಯಾಂಡರ್ಸ್ – ಸೂಪರ್/ಅತ್ಯುತ್ತಮ/ಅತ್ಯುತ್ಕೃಷ್ಟ 14 ರಗ್ಬಿ ಒಕ್ಕೂಟ/ಯೂನಿಯನ್ ತಂಡ (ಒಟಾಗೋ & ಸೌತ್ಲ್ಯಾಂಡ್/ಲೆಂಡ್ ವಲಯಗಳನ್ನು ಪ್ರತಿನಿಧಿಸುತ್ತದೆ)
* ಒಟಾಗೋ ರಗ್ಬಿ ಫುಟ್ಬಾಲ್/ಕಾಲ್ಚೆಂಡು ಒಕ್ಕೂಟ/ಯೂನಿಯನ್ – ಏರ್ ನ್ಯೂಝಿಲೆಂಡ್ ಕಪ್ ರಗ್ಬಿ ಒಕ್ಕೂಟ/ಯೂನಿಯನ್ ತಂಡ
* ಒಟಾಗೋ ವೋಲ್ಟ್ಸ್ ಮತ್ತು ಒಟಾಗೋ ಸ್ಪಾರ್ಕ್ಸ್ – ಪುರುಷರ ಹಾಗೂ ಮಹಿಳೆಯರ [[ಕ್ರಿಕೆಟ್]] ತಂಡಗಳು
* ಸದರನ್ ಸ್ಟೀಲ್ – ANZ ಚಾಂಪಿಯನ್ಷಿಪ್ ನೆಟ್ಬಾಲ್ ತಂಡ (ಒಟಾಗೋ & ಸೌತ್ಲ್ಯಾಂಡ್/ಲೆಂಡ್ ನೆಟ್ಬಾಲ್ ಕ್ರೀಡಾತಂಡಗಳನ್ನು ಪ್ರತಿನಿಧಿಸುತ್ತದೆ - ಇನ್ವರ್ಕಾರ್ಗಿಲ್ನಲ್ಲಿ ನೆಲೆಯನ್ನು ಹೊಂದಿದೆ)
* ಒಟಾಗೋ ಯುನೈಟೆಡ್ – ನ್ಯೂಝಿಲೆಂಡ್ ಫುಟ್ಬಾಲ್ ಚಾಂಪಿಯನ್ಷಿಪ್ ಪಂದ್ಯಾವಳಿಗಳಲ್ಲಿ [[ಫುಟ್ಬಾಲ್|ಅಸೋಸಿಯೇಷನ್ ಫುಟ್ಬಾಲ್]] ತಂಡ
* ಒಟಾಗೋ ನಗ್ಗೆಟ್ಸ್ – ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಲೀಗ್ ತಂಡ
* ಡ್ಯುನೆಡಿನ್/ಡ್ಯೂನ್ಡಿನ್ ಥಂಡರ್ - ನ್ಯೂಝಿಲೆಂಡ್ ಐಸ್ ಹಾಕಿ ಲೀಗ್ ತಂಡ
* ಕ್ಯಾವರ್ಶ್ಯಾಮ್ AFC- ಸಾಕ್ಕರ್ಸೌತ್ ಪ್ರೀಮಿಯರ್ ಲೀಗ್ ತಂಡ
* ಮೊಸ್ಜಿಯೆಲ್ AFC – ಸಾಕ್ಕರ್ಸೌತ್ ಪ್ರೀಮಿಯರ್ ಲೀಗ್ ತಂಡ
===ಪ್ರಧಾನ ಮೈದಾನಗಳು ಹಾಗೂ ಕ್ರೀಡಾಂಗಣಗಳು===
* ಕ್ಯಾಲೆಡೊನಿಯನ್ ಗ್ರೌಂಡ್/ಮೈದಾನ
* ಕ್ಯಾರಿಸ್ಬ್ರೂಕ್ ಪ್ರಖ್ಯಾತವಾದ ಭೂಮಿಯ ಅತ್ಯಂತ ದಕ್ಷಿಣತಮ ಟೆಸ್ಟ್ ಕ್ರಿಕೆಟ್ಗಳನ್ನು ಆಯೋಜಿಸುವ ಸ್ಥಳ
* ಡ್ಯುನೆಡಿನ್/ಡ್ಯೂನ್ಡಿನ್ ಐಸ್ ಕ್ರೀಡಾಂಗಣ
* ದ ಎಡ್ಗರ್ ಸೆಂಟರ್
* ಫಾರ್ಬರಿ ಪಾರ್ಕ್ ರೇಸ್ವೇ
* ಯೂನಿವರ್ಸಿಟಿ ಪ್ಲಾಜಾದಲ್ಲಿರುವ ಫಾರ್ಸಿತ್/ಥ್ ಬಾರ್ ಕ್ರೀಡಾಂಗಣ (ಪ್ರಸ್ತುತ ನಿರ್ಮಾಣ ಹಂತದಲ್ಲಿದೆ)
* ಲೋಗನ್ ಪಾರ್ಕ್
* ಮೊವಾನಾ ಪೂಲ್
* ಟೊಂಗಾ ಪಾರ್ಕ್
* ಯೂನಿವರ್ಸಿಟಿ ಓವಲ್
==ಅಂತರರಾಷ್ಟ್ರೀಯ ಸಂಬಂಧಗಳು==
===ಅವಳಿ ನಗರಗಳು — ಸೋದರಿ ನಗರಗಳು===
ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರಕ್ಕೆ ವಿಶ್ವದಾದ್ಯಂತದ ಹಲವು ಮಹಾನಗರಗಳೊಂದಿಗೆ ಜೋಡಿನಗರಗಳ ಸಂಬಂಧವನ್ನು ಕಲ್ಪಿಸಲಾಗಿದೆ. ಅವುಗಳೆಂದರೆ:
{|
|-
| valign="top"
|
* {{flagicon|GBR}} '''ಎಡಿನ್ಬರ್ಗ್''', [[ಸ್ಕಾಟ್ಲಂಡ್|ಸ್ಕಾಟ್ಲೆಂಡ್]], ಗ್ರೇಟ್ ಬ್ರಿಟನ್, [[ಯುನೈಟೆಡ್ ಕಿಂಗ್ಡಮ್|ಯುನೈಟೆಡ್ ಕಿಂಗ್ಡಮ್]] <small>''(1974ರಿಂದ)'' <ref name="Edinburgh">{{cite web |url=http://www.edinburgh.gov.uk/internet/city_living/CEC_twin_and_partner_cities |title=''Edinburgh – Twin and Partner Cities'' |accessdate=2008-12-21 |publisher=[[ಕೃತಿಸ್ವಾಮ್ಯ|©]] 2008 The City of Edinburgh Council, City Chambers, High Street, Edinburgh, EH1 1YJ Scotland |archive-date=2008-03-28 |archive-url=https://web.archive.org/web/20080328001653/http://www.edinburgh.gov.uk/internet/city_living/CEC_twin_and_partner_cities |url-status=dead }}</ref></small>
* {{flagicon|JPN}} '''ಒಟಾರು''', [[ಜಪಾನ್|ಜಪಾನ್]]
* {{flagicon|USA}} '''ಪೋರ್ಟ್ಸ್ಮೌತ್''', [[ವರ್ಜೀನಿಯ|ವಿರ್ಜಿನಿಯಾ]], [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್]]
* {{flagicon|CHN}} '''[[ಶಾಂಘೈ|ಷಾಂಘಾಯ್]]''', [[ಚೀನಿ ಜನರ ಗಣರಾಜ್ಯ|ಚೀನಾ]]
|}
==ಹೆಚ್ಚಿನ ಓದಿಗಾಗಿ==
* ಹರ್ಡ್, J. & ಗ್ರಿಫಿತ್ಸ್, G. J. (1980). ''ಡಿಸ್ಕವರಿಂಗ್ ಡ್ಯುನೆಡಿನ್/ಡ್ಯೂನ್ಡಿನ್''. ಡ್ಯುನೆಡಿನ್/ಡ್ಯೂನ್ಡಿನ್ : ಜಾನ್ ಮೆಕ್ಇನಡೋ. ISBN 0-86868-030-3.
* ಸ್ಮಾಲ್ಫೀಲ್ಡ್, J. & ಹೀನಾನ್, B. (2006) ''ಎಬೌವ್ ದ ಬೆಲ್ಟ್ : A ಹಿಸ್ಟರಿ ಆಫ್ ದ ಸಬರ್ಬ್ ಆಫ್ ಮಾವೊರಿ ಹಿಲ್''. ಡ್ಯುನೆಡಿನ್/ಡ್ಯೂನ್ಡಿನ್ : ಮಾವೊರಿ ಹಿಲ್ ಹಿಸ್ಟರಿ ದತ್ತಿನಿಧಿ ಪ್ರತಿಷ್ಠಾನ. ISBN 1-877139-98-X.
==ಉಲ್ಲೇಖಗಳು==
===ಗ್ರಂಥಸೂಚಿ ವಿವರಗಳು===
<div class="references-small">
*{{Citation | last =Anderson | first =Atholl | year =1983 | title =When All the Moa-Ovens Grew Cold : nine centuries of changing fortune for the southern Maori | publication-place =Dunedin, NZ | publisher =Otago Heritage Books }}
*{{Citation | last =Anderson | first =Atholl | year =1998 | title =The Welcome of Strangers : an ethnohistory of southern Maori A.D. 1650–1850 | publication-place =Dunedin, NZ | publisher =University of Otago Press with Dunedin City Council | isbn = 1-877133-41-8 pb}}
*{{Citation | last1 =Anderson | first1 =Atholl | last2 =Allingham | first2 =Brian | last3 =Smith | first3 =Ian W G | year =1996| title =Shag River Mouth : the archaeology of an early southern Maori village | publication-place =Canberra, Australia | publisher =Australian National University | isbn = 0-7315-0342-1 | oclc =34751263}}
*{{Citation | last =Bathgate | first =Alexander (ed) | year =1890 | title =Picturesque Dunedin | publication-place =Dunedin, NZ | publisher =Mills, Dick & Co. | oclc =154535977}}
*{{Citation | last =Beaglehole | first =J C (ed) | year =1955–67 | title =The Journals of Captain James Cook | publication-place =London, UK | publisher =The Hakluyt Society }}
*{{Citation | last1 =Begg | first1 =A Charles | last2=Begg | first2 =Neil Colquhoun | year =1979 | title =The world of John Boultbee : including an account of sealing in Australia and New Zealand | publication-place =Christchurch, NZ | publisher =Whitcoulls | isbn =0723306044 }}
*{{Citation | last1 =Bishop | first1 =Graham | last2 =Hamel | first2 =Antony | year =1993| title =From sea to silver peaks | publication-place =Dunedin | publisher =John McIndoe | isbn = 0-86868-149-0}}
*{{Citation | last1 =Collins | first1 =Roger | last2 =Entwisle | first2 =Peter | year =1986 | title =Pavilioned in Splendour, George O'Brien's Vision of Colonial New Zealand | publication-place =Dunedin, NZ | publisher =Dunedin Public Art Gallery | isbn =0-9597758-1-1 }}
*{{Citation | last1 =Dann | first1 =Christine | last2 =Peat | first2 =Neville | year =1989| title =Dunedin, North and South Otago | publication-place =Wellington | publisher =GP Books | isbn = 0-477-01438-0}}
*{{Citation | last =Dunn | first =Michael | year =2005 | title =Nerli an Italian Painter in the South Pacific | publisher =Auckland University Press. | isbn =1-86940-335-5 }}
*{{Citation | last =Entwisle | first =Peter | year =1984 | title =William Mathew Hodgkins & his Circle | publication-place =Dunedin, NZ | publisher =Dunedin Public Art Gallery | isbn =0-473-00263-0 }}
*{{Citation | last =Entwisle | first =Peter | year =1998 | title =Behold the Moon, the European Occupation of the Dunedin District 1770–1848 | publication-place =Dunedin, NZ | publisher =Port Daniel Press. | isbn =0-473-05591-0 }}
*{{Citation | last =Entwisle | first =Peter | year =2005 | title =Taka, a Vignette Life of William Tucker 1784–1817 | publication-place =Dunedin, NZ | publisher =Port Daniel Press. | isbn =0-473-10098-3 }}
*{{Citation | last1 =Entwisle | first1 =Peter | last2 =Dunn | first2 =Michael | last3 =Collins | first3 =Roger | year =1988 | title =Nerli An Exhibition of Paintings & Drawings | publication-place =Dunedin, NZ | publisher =Dunedin Public Art Gallery | isbn =0-9597758-4-6 }}
*{{Citation | last =Hamel | first =J | year =2001 | title =The Archaeology of Otago | publication-place =Wellington, NZ | publisher =Department of Conservation | isbn = 0-478-22016-2}}
*{{Citation | last =Hayward | first =Paul | year =1998 | title =Intriguing Dunedin Street Walks | publication-place =Dunedin, NZ | publisher =Express Office Services | isbn = }}
*{{Citation | last =Hocken | first =Thomas Moreland | year =1898 | title =Contributions to the Early History of New Zealand (Settlement of Otago) | publication-place =London, UK | publisher =Sampson Low, Marston and Company | oclc =3804372 }}
*{{Citation | last =McCormick | first =E H | year =1954 | title =The Expatriate, a Study of Frances Hodgkins | publication-place =Wellington, NZ | publisher =New Zealand University Press. | oclc =6276263 }}
*{{Citation | last =McCormick | first =E H | year =1959 | title =The Inland Eye, a Sketch in Visual Autobiography | publication-place =Auckland, NZ | publisher =Auckland Gallery Associates | oclc =11777388 }}
*{{Citation | last =McDonald | first =K C | year =1965 | title =City of Dunedin, a Century of Civic Enterprise | publication-place =Dunedin, NZ | publisher =Dunedin City Corporation | oclc =10563910 }}
*{{Citation | last =McLintock | first =A H | year =1949 | title =The History of Otago; the origins and growth of a Wakefield class settlement| publication-place =Dunedin, NZ | publisher =Otago Centennial Historical Publications | oclc =154645934 }}
*{{Citation | last =McLintock | first =A H | year =1951 | title =The Port of Otago | publication-place =Dunedin, NZ | publisher =Otago Harbour Board }}
*{{Citation | last =Morrell | first =W P | year =1969 | title =The University of Otago, a Centennial History | publication-place =Dunedin, NZ | publisher =University of Otago Press. | oclc =71676 }}
</div>
===ಟಿಪ್ಪಣಿಗಳು===
{{Reflist|colwidth=30em}}
== ಬಾಹ್ಯ ಕೊಂಡಿಗಳು ==
{{Commons category|Dunedin, New Zealand}}
* [http://www.dunedin.govt.nz/ ಡ್ಯುನೆಡಿನ್/ಡ್ಯೂನ್ಡಿನ್ ಮಹಾನಗರದ ಅಧಿಕೃತ ಜಾಲತಾಣ]
* {{wikivoyage|Dunedin}}
* [https://web.archive.org/web/20070928015436/http://www.livedunedin.co.nz/ ಲೈವ್ ಡ್ಯುನೆಡಿನ್/ಡ್ಯೂನ್ಡಿನ್ – ಕಲೆ, ಸಂಸ್ಕೃತಿ ಮತ್ತು ಜೀವನಶೈಲಿಗೆ ಸಂಬಂಧಿಸಿದ ಡ್ಯುನೆಡಿನ್/ಡ್ಯೂನ್ಡಿನ್ ನಗರದಲ್ಲಿನ ವಿದ್ಯಮಾನಗಳು (ಸಾಪ್ತಾಹಿಕ ತಪಶೀಲು/ಪಟ್ಟಿ)]
* [http://zeal.com/category/preview.jhtml?cid=10116740 ಭೌಗೋಳಿಕವಾಗಿ ವರ್ಗೀಕರಿಸಿದ ಸಂಬಂಧಪಟ್ಟ ಜಾಲತಾಣಗಳ ಕಿರುಪರಿಚಯಗಳು] {{Webarchive|url=https://web.archive.org/web/20151013085305/https://www.zeal.com/category/preview.jhtml?cid=10116740 |date=2015-10-13 }}
* [http://www.dunedinnz.com ಡ್ಯುನೆಡಿನ್/ಡ್ಯೂನ್ಡಿನ್ ಪ್ರವಾಸೋದ್ಯಮ]
* [http://www.justdunedin.co.nz/ ಡ್ಯುನೆಡಿನ್/ಡ್ಯೂನ್ಡಿನ್ ನಿರ್ದೇಶಿಕೆ ಹಾಗೂ ಮಾಹಿತಿ ಜಾಲತಾಣ] {{Webarchive|url=https://web.archive.org/web/20070928142606/http://www.justdunedin.co.nz/ |date=2007-09-28 }}
* [http://www.zoomin.co.nz/nz/dunedin/ ಡ್ಯುನೆಡಿನ್/ಡ್ಯೂನ್ಡಿನ್ ರಸ್ತೆಗಳ ನಕ್ಷೆ/ಭೂಪಟ] {{Webarchive|url=https://web.archive.org/web/20130805161939/http://zoomin.co.nz/nz/dunedin/ |date=2013-08-05 }}
{{Coord|45|52|0|S|170|30|0|E|type:city_region:NZ-OTA|display=title}}
{{Interwikineeded}}
[[ವರ್ಗ:ಡುನೆಡಿನ್/ಡ್ಯೂನ್ಡಿನ್]]
[[ವರ್ಗ:ನ್ಯೂಜಿಲೆಂಡ್ನ ಜನನಿಬಿಡ ಸ್ಥಳಗಳು]]
[[ವರ್ಗ:ನ್ಯೂಜಿಲೆಂಡ್ನಲ್ಲಿನ ಬಂದರು ನಗರಗಳು]]
[[ವರ್ಗ:ವಿಶ್ವವಿದ್ಯಾಲಯ ಶಿಕ್ಷಣಕ್ಕೆ ಹೆಸರಾದ ನಗರಗಳು]]
[[ವರ್ಗ:೧೮೪೮ರಲ್ಲಿ ಸ್ಥಾಪಿಸಲ್ಪಟ್ಟ ಜನನಿಬಿಡ ಸ್ಥಳಗಳು]]
[[ವರ್ಗ:ನ್ಯೂ ಜೀಲ್ಯಾಂಡ್]]
gqqvnzgshfngp0mfttumyn7glvz2t01
ಟೆಂಪ್ಲೇಟು:If
10
28036
1378240
979515
2024-02-17T05:14:35Z
en>Pppery
0
Changed protection settings for "[[Template:If]]": Always cascade protected via main page, for consistency ([Edit=Require administrator access] (indefinite) [Move=Require administrator access] (indefinite))
1378240
wikitext
text/x-wiki
{{ safesubst:<noinclude/>p{{ safesubst:<noinclude/>#ifeq:{{{1}}}|eq|1|2}}|{{ safesubst:<noinclude/>p{{ safesubst:<noinclude/>#ifeq:{{{2}}}|{{{3}}}|1|2}}|{{{4|}}}|{{{5|}}}}}|{{ safesubst:<noinclude/>p{{ safesubst:<noinclude/>#if{{{1}}}:{{{2}}}|1|2}}|{{{3}}}|{{{4|}}}}}}}<noinclude>
{{Documentation}}
</noinclude>
f8ynzwax4uvhq0bvzgatn2t1xjeyefy
1378241
1378240
2026-08-03T07:17:08Z
A826
72368
೧ revisions imported from [[:en:Template:If]]
1378240
wikitext
text/x-wiki
{{ safesubst:<noinclude/>p{{ safesubst:<noinclude/>#ifeq:{{{1}}}|eq|1|2}}|{{ safesubst:<noinclude/>p{{ safesubst:<noinclude/>#ifeq:{{{2}}}|{{{3}}}|1|2}}|{{{4|}}}|{{{5|}}}}}|{{ safesubst:<noinclude/>p{{ safesubst:<noinclude/>#if{{{1}}}:{{{2}}}|1|2}}|{{{3}}}|{{{4|}}}}}}}<noinclude>
{{Documentation}}
</noinclude>
f8ynzwax4uvhq0bvzgatn2t1xjeyefy
ಟೆಂಪ್ಲೇಟು:P2
10
28039
1378242
979543
2024-02-17T05:15:24Z
en>Pppery
0
Changed protection settings for "[[Template:P2]]": Always cascade protected via main page, for consistency ([Edit=Require administrator access] (indefinite) [Move=Require administrator access] (indefinite))
979542
wikitext
text/x-wiki
{{{2}}}<noinclude>
{{documentation}}
<!-- Add categories and interwikis to the /doc subpage, not here! -->
</noinclude>
duozeijtz6f7quc59lhhpe6ycu023mt
1378243
1378242
2026-08-03T07:17:08Z
A826
72368
೧ revisions imported from [[:en:Template:P2]]
979542
wikitext
text/x-wiki
{{{2}}}<noinclude>
{{documentation}}
<!-- Add categories and interwikis to the /doc subpage, not here! -->
</noinclude>
duozeijtz6f7quc59lhhpe6ycu023mt
ಇಲಕಲ
0
28641
1378191
1337866
2026-08-02T16:00:35Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378191
wikitext
text/x-wiki
{{Infobox Indian Jurisdiction |
native_name = [[ಇಳಕಲ್ಲ]] |
type = ನಗರ |
latd = 15.9598 | longd = 76.1156 |
locator_position = right |
state_name = [[ಕರ್ನಾಟಕ]] |
district = [[ಬಾಗಲಕೋಟೆ]] |
altitude = |
area_total = |
area_magnitude = |
population_as_of = |
population_total = 80.000 |
population_density = |
area_telephone = 08351 |
postal_code = 587125,587154 |
vehicle_code_range = |
sex_ratio = |
unlocode = |
website = |
footnotes = |
}}
[[ಇಳಕಲ್ಲ]] ಅಥವಾ [[ಇಲಕಲ್ಲ್]] [[ಕರ್ನಾಟಕ]]ದ [[ಬಾಗಲಕೋಟೆ ಜಿಲ್ಲೆ]]ಯ ಒಂದು ನಗರ.
ಇಳಕಲ್ಲ [[ಬಾಗಲಕೋಟೆ]] ಜಿಲ್ಲೆಯ ಒಂದು ತಾಲ್ಲೂಕ ಕೇಂದ್ರವಾಗಿದೆ.}[[ಇಳಕಲ್ಲ]], [[ಕರಡಿ]], [[ಅಮೀನಗಡ]] ಆಯ್ದ ಗ್ರಾಮಗಳನ್ನು ಹೋಬಳಿಯ ಗ್ರಾಮಗಳನ್ನು ಒಳಗೊಂಡಿದೆ ಬಾಗಲಕೋಟೆಯಿಂದ 60 ಕಿ.ಮೀ.ಗಳ ದೂರದಲ್ಲಿದೆ.
==ಸನ್ನಿವೇಶ==
ಇಳಕಲ್ ಪಟ್ಟಣವು
{{Coord|15.97|N|76.13|E|}}.<ref>{{Cite web |url=http://www.fallingrain.com/world/IN/19/Ilkal.html |title=Falling Rain Genomics, Inc - Ilkal |access-date=2016-08-07 |archive-date=2016-03-03 |archive-url=https://web.archive.org/web/20160303221946/http://www.fallingrain.com/world/IN/19/Ilkal.html |url-status=dead }}</ref> ಅಕ್ಷಾಂಶ ರೇಖಾಂಶಗಳಲ್ಲಿ ಸ್ಥಿತವಾಗಿದೆ.ಸಮುದ್ರ ಮಟ್ಟದಿಂದ ೫೮೫ ಮೀಟರ್ ಎತ್ತರದಲ್ಲಿದೆ.
==ಪ್ರಸಿದ್ಧಿ==
ಇಲ್ಲಿನ ಸೀರೆಗಳು ಬಹಳ ಪ್ರಸಿದ್ಧ, ನೇಯ್ಗೆಯ ಹಾಗೂ ಬಣ್ಣಹಾಕುವ ಕೈಗಾರಿಕೆಗಳಿಗೆ ಪ್ರಸಿದ್ಧವಾಗಿದೆ.ಇಲ್ಲಿ ದೊರೆಕುವ ಕೆಂಪು ಶಿಲೆಯು ವಿಶ್ವದೆಲ್ಲೆಡೆ ಮಾರಾಟವಾಗುತ್ತದೆ.[http://www.ilkalgranite.com pink granite(ruby red)],
==ಪ್ರೇಕ್ಷಣೀಯ ಸ್ಥಳಗಳು==
ಈ ಊರಿನಲ್ಲಿ ಬನಶಂಕರಿ, ಬಸವಣ್ಣ, ಮತ್ತು ವೆಂಕೋಬ ದೇವಸ್ಥಾನಗಳಿವೆ. ಕೊನೆಯದು ಪೂರ್ವಕಾಲದ ಶಿಲ್ಪಕಲೆಯಿಂದ ಕೂಡಿದೆ. ಇಲ್ಲಿ ಬಳಸಲಾಗಿರುವ ಇಲ್ಲಿನ ಕಂಬಗಳನ್ನು [[ಐಹೊಳೆ]]ಯಿಂದ ತಂದಿರಬಹುದೆಂದು ನಂಬಿಕೆ. ದೇವಸ್ಥಾನದ ಕಲ್ಲಿನ ಚಾವಣಿಯಲ್ಲಿ ದೂಲ ಮತ್ತು ಅಡ್ಡಪಟ್ಟಿಗಳನ್ನು ಕೆತ್ತಲಾಗಿದೆ. ಮಹಂತಸ್ವಾಮಿಗಳೆಂಬ ವಿರಕ್ತ ಸ್ವಾಮಿಗಳೊಬ್ಬರು ಇಲ್ಲಿ ಒಂದು ಲಿಂಗಾಯತ ಶ್ರೀ ವಿಜಯ ಮಹಾಂತೇಶ ಮಠವನ್ನು ಸ್ಥಾಪಿಸಿದ್ದಾರೆ. ಇದನ್ನು ಈ ಸ್ಥಳದ ಎಲ್ಲ ವಿಭಾಗದ ಜನರೂ ಆಧರಿಸುತ್ತಾರೆ.[[ಕರಡಿ]]ಗ್ರಾಮದಲ್ಲಿ ಪ್ರಸಿದ್ದ ವಿಜಯನಗರ ಕಾಲದ ಶ್ರೀ ಬಸವಣ್ಣ ದೇವರ ದೇವಾಲಯವಿದೆ.ಬ್ರಿಟಿಷ್ ಕಾಲದ ಸಂತ ಜೋಸೆಫ್ ಚರ್ಚ್ ಇದೆ
==ಆಡಳಿತ==
ಇಲ್ಲಿನ ಪೌರಸಭೆ 1867ರಲ್ಲಿ ಸ್ಥಾಪಿತವಾಯಿತು. ಅದರ 21 ಜನ ಸದಸ್ಯ ಸ್ಥಾನಗಳಲ್ಲಿ 2 ಮಹಿಳೆಯರಿಗಾಗಿ ಮೀಸಲಿವೆ. ಸದಸ್ಯರನ್ನು ನಾಲ್ಕು ವರ್ಷಗಳಿಗೊಂದಾವರ್ತಿ ಚುನಾಯಿಸಲಾಗುತ್ತದೆ.ಈಗ ನಗರಸಭೆಯಾಗಿದೆ.ವಾರ್ಡ
೩೧ಇವೆ
==ಶಿಕ್ಷಣ==
ಇಲ್ಲಿ ಎರಡು ಪ್ರೌಢಶಾಲೆಗಳು, ಒಂದು ಕಾಲೇಜು ಹಾಗೂ ಒಂದು ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜು ಇವೆ.
==ಆಕರಗಳು==
{{reflist}}
[http://www.lib.utexas.edu/maps/ams/india/ AMS Maps of India and Pakistan]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಳಕಲ್ಲು}}
{{Refimprove}}
{{Interwikineeded}}
[[ವರ್ಗ:ಬಾಗಲಕೋಟೆ ಜಿಲ್ಲೆ]]
jipcapepr6gd3iziyffz555y8tmqqdx
ಟೆಂಪ್ಲೇಟು:INRConvert
10
29771
1378258
1032326
2025-02-19T11:24:00Z
en>Danny 1994
0
Updated template name (to avoid template redirect).
1378258
wikitext
text/x-wiki
{{#ifeq:{{#expr:{{{1|1}}}<1}}{{{2|}}}|1
|{{#expr:({{{1}}}*100)}} {{#switch:{{{lk}}}
|on|r=[[paisa|pais{{#ifexpr:{{{1}}}=0.01|a|e}}]]
|pais{{#ifexpr:{{{1}}}=0.01|a|e}}
}} ({{#switch: {{{mode|}}}
| historical = {{INRConvert/HistoricalRate/Formatted|{{{1}}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|0|{{{3|}}}|{{{to|USD}}}|year={{{year}}}<!--
-->}}}})
|<span class="nowrap">{{#switch:{{{lk}}}|on|r={{Indian rupee|link=yes}}|{{Indian rupee}}}}<!--
-->{{#switch:{{lc:{{{2}}}}}
|k={{formatnum:{{#expr:{{{1}}}*1E3}}}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E3}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|3|{{{3|}}}|{{{to|USD}}}|year={{{year}}}<!--
-->}}}})
|m={{formatnum:{{{1}}}}} million</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E6}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|6|{{{3|}}}|{{{to|USD}}}|year={{{year}}}<!--
-->}}}})
|b={{formatnum:{{{1}}}}} {{#switch:{{{lk}}}|on|b=[[1,000,000,000|billion]]|billion}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E9}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|9|{{{3|}}}|{{{to|USD}}}|year={{{year}}}<!--
-->}}}})
|t={{formatnum:{{{1}}}}} {{#switch:{{{lk}}}|on|t=[[1,000,000,000,000|trillion]]|trillion}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E12}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|12|{{{3|}}}|{{{to|USD}}}|year={{{year}}}<!--
-->}}}})
|l={{formatnum:{{{1}}}}} {{#switch:{{{lk}}}|on|l=[[lakh]]|lakh}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E5}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|5|{{{3|}}}|{{{to|USD}}}|year={{{year}}}<!--
-->}}}})
|c={{formatnum:{{{1}}}}} {{#switch:{{{lk}}}|on|c=[[crore]]|crore}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E7}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|7|{{{3|}}}|{{{to|USD}}}|year={{{year}}}<!--
-->}}}})
|lc={{formatnum:{{{1}}}}} {{#switch:{{{lk}}}|on|l|lc=[[lakh]]|lakh}} {{#switch:{{{lk}}}|on|c|lc=[[crore]]|crore}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E12}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|12|{{{3|}}}|{{{to|USD}}}|year={{{year}}}<!--
-->}}}})
|{{formatnum:{{{1|0}}}}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{{1}}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1|0}}}|0|{{{3|}}}|{{{to|USD}}}|year={{{year}}}<!--
-->}}}})
}}
}}<noinclude>
__FORCETOC__
{{documentation}}
</noinclude>
mwt7wr8uvs9rdfax6eau9ae2gfn9wii
1378259
1378258
2026-08-03T07:17:13Z
A826
72368
೧ revisions imported from [[:en:Template:INRConvert]]
1378258
wikitext
text/x-wiki
{{#ifeq:{{#expr:{{{1|1}}}<1}}{{{2|}}}|1
|{{#expr:({{{1}}}*100)}} {{#switch:{{{lk}}}
|on|r=[[paisa|pais{{#ifexpr:{{{1}}}=0.01|a|e}}]]
|pais{{#ifexpr:{{{1}}}=0.01|a|e}}
}} ({{#switch: {{{mode|}}}
| historical = {{INRConvert/HistoricalRate/Formatted|{{{1}}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|0|{{{3|}}}|{{{to|USD}}}|year={{{year}}}<!--
-->}}}})
|<span class="nowrap">{{#switch:{{{lk}}}|on|r={{Indian rupee|link=yes}}|{{Indian rupee}}}}<!--
-->{{#switch:{{lc:{{{2}}}}}
|k={{formatnum:{{#expr:{{{1}}}*1E3}}}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E3}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|3|{{{3|}}}|{{{to|USD}}}|year={{{year}}}<!--
-->}}}})
|m={{formatnum:{{{1}}}}} million</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E6}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|6|{{{3|}}}|{{{to|USD}}}|year={{{year}}}<!--
-->}}}})
|b={{formatnum:{{{1}}}}} {{#switch:{{{lk}}}|on|b=[[1,000,000,000|billion]]|billion}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E9}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|9|{{{3|}}}|{{{to|USD}}}|year={{{year}}}<!--
-->}}}})
|t={{formatnum:{{{1}}}}} {{#switch:{{{lk}}}|on|t=[[1,000,000,000,000|trillion]]|trillion}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E12}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|12|{{{3|}}}|{{{to|USD}}}|year={{{year}}}<!--
-->}}}})
|l={{formatnum:{{{1}}}}} {{#switch:{{{lk}}}|on|l=[[lakh]]|lakh}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E5}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|5|{{{3|}}}|{{{to|USD}}}|year={{{year}}}<!--
-->}}}})
|c={{formatnum:{{{1}}}}} {{#switch:{{{lk}}}|on|c=[[crore]]|crore}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E7}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|7|{{{3|}}}|{{{to|USD}}}|year={{{year}}}<!--
-->}}}})
|lc={{formatnum:{{{1}}}}} {{#switch:{{{lk}}}|on|l|lc=[[lakh]]|lakh}} {{#switch:{{{lk}}}|on|c|lc=[[crore]]|crore}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{#expr:{{{1}}}*1E12}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1}}}|12|{{{3|}}}|{{{to|USD}}}|year={{{year}}}<!--
-->}}}})
|{{formatnum:{{{1|0}}}}}</span> <!--
-->({{#switch: {{{mode|}}}
| historical = {{INRConvert/HistoricalRate/Formatted|{{{1}}}|{{{to|USD}}}|{{{year}}}|{{{round|2}}}}}
| #default = {{INRConvert/{{#ifexpr:{{{year|0}}}>={{Inflation/IN/startyear}} and {{{year|0}}}<{{inflation/year|IN}}|inflation|{{{to|USD}}}}}{{{mode|}}}<!--
-->|{{{1|0}}}|0|{{{3|}}}|{{{to|USD}}}|year={{{year}}}<!--
-->}}}})
}}
}}<noinclude>
__FORCETOC__
{{documentation}}
</noinclude>
mwt7wr8uvs9rdfax6eau9ae2gfn9wii
ಟೆಂಪ್ಲೇಟು:INRConvert/CurrentRate
10
29773
1378260
209069
2026-07-21T22:39:25Z
en>Paine Ellsworth
0
per edit request on talk page - update exchange rate
1378260
wikitext
text/x-wiki
<noinclude>{{pp-template}}{{High-use}}{{asof|2026|07|21}}, 1 INR equals '''</noinclude>{{#switch: {{{1|USD}}}
| AED = 0.03845809
| AUD = 0.01509900
| BDT = 1.29185864
| CAD = 0.01487353
| CNY = 0.07100111
| EUR = 0.00915632
| GBP = 0.00784404
| LKR = 3.51101276
| PKR = 2.91422122
| NZD = 0.01834491
| USD = 0.01038425
| JPY = 1.68998778
}}<noinclude>''' USD.
Source: [[XE.com]] reported data at http://www.xe.com/. For USD converter, see http://themoneyconverter.com/INR/USD.aspx.
This page was last edited on {{#time:j F Y|{{REVISIONYEAR}}-{{REVISIONMONTH}}-{{REVISIONDAY2}}}}.</noinclude>
7xpoo7qxyo6ibzn3ovlrfowkd7zysw2
1378261
1378260
2026-08-03T07:17:13Z
A826
72368
೧ revisions imported from [[:en:Template:INRConvert/CurrentRate]]
1378260
wikitext
text/x-wiki
<noinclude>{{pp-template}}{{High-use}}{{asof|2026|07|21}}, 1 INR equals '''</noinclude>{{#switch: {{{1|USD}}}
| AED = 0.03845809
| AUD = 0.01509900
| BDT = 1.29185864
| CAD = 0.01487353
| CNY = 0.07100111
| EUR = 0.00915632
| GBP = 0.00784404
| LKR = 3.51101276
| PKR = 2.91422122
| NZD = 0.01834491
| USD = 0.01038425
| JPY = 1.68998778
}}<noinclude>''' USD.
Source: [[XE.com]] reported data at http://www.xe.com/. For USD converter, see http://themoneyconverter.com/INR/USD.aspx.
This page was last edited on {{#time:j F Y|{{REVISIONYEAR}}-{{REVISIONMONTH}}-{{REVISIONDAY2}}}}.</noinclude>
7xpoo7qxyo6ibzn3ovlrfowkd7zysw2
ಅಹಲ್ಯ ಬಲ್ಲಾಳ್
0
30521
1378133
1336202
2026-08-02T13:06:57Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378133
wikitext
text/x-wiki
{{Infobox person
| name = ಅಹಲ್ಯ ಬಲ್ಲಾಳ್
| image = ಚಿತ್ರ:Atyuttama naTi2012.jpg
| alt =
| caption =
| birth_name = ಅಹಲ್ಯ
| birth_date = <!-- {{Birth date and age|YYYY|MM|DD}} or {{Birth-date and age|Month DD, YYYY}} --> {{Birth date and age|1963|12|01}}
| birth_place =
| death_date = <!-- {{Death date and age|YYYY|MM|DD|YYYY|MM|DD}} or {{Death-date and age|Month DD, YYYY|Month DD, YYYY}} (death date then birth date) -->
| death_place =
|parents = ಪಿ.ಎನ್.ವೆಂಕಟ್ರಾವ್ <br> ಜಾನಕಿ
| education =
| alma_mater = ಮಂಗಳೂರು ವಿಶ್ವವಿದ್ಯಾಲಯ ಮತ್ತು ಮುಂಬಯಿ ವಿಶ್ವವಿದ್ಯಾಲಯ.
| other_names =
| occupation = ನಟಿ, ಕಂಠದಾನ ಕಲಾವಿದೆ, ಅನುವಾದಕಿ, ಭರತನಾಟ್ಯ ಕಲಾವಿದೆ, ಲೇಖಕಿ ಮತ್ತು ನಾಟಕ ನಿರ್ದೇಶಕಿ
| known_for = ನಾಟಕ ನಿರ್ದೇಶನ, ಅಭಿನಯ
}}
'''ಅಹಲ್ಯ ಬಲ್ಲಾಳ್''',<ref>[http://www.sobagu.in/%E0%B2%95%E0%B2%B5%E0%B2%BF%E0%B2%97%E0%B2%B3%E0%B3%81-%E0%B2%B8%E0%B2%BE%E0%B2%B9%E0%B2%BF%E0%B2%A4%E0%B2%BF%E0%B2%97%E0%B2%B3%E0%B3%81-%E0%B2%95%E0%B2%B2%E0%B2%BE%E0%B2%B5%E0%B2%BF%E0%B2%A6%E0%B2%B0/%E0%B2%85%E0%B2%B9%E0%B2%B2%E0%B3%8D%E0%B2%AF-%E0%B2%AC%E0%B2%B2%E0%B3%8D%E0%B2%B2%E0%B2%BE%E0%B2%B3%E0%B3%8D/ ಸೊಬಗು, 'ಕನ್ನಡನಾಡಿನ ಸಿರಿವಂತಿಕೆ'-ಅಹಲ್ಯ ಬಲ್ಲಾಳ್]</ref> ಕನ್ನಡದ ರಂಗಭೂಮಿ ನಟಿ ಮತ್ತು ನಿರ್ದೇಶಕಿ. [[ಮುಂಬಯಿ]] ನಗರದಲ್ಲಿ ಕನ್ನಡದ ಹಲವಾರು ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಹಲ್ಯ, ಭರತನಾಟ್ಯ ಕಲಾವಿದೆ, ಲೇಖಕಿ ಮತ್ತು ಅನುವಾದಕಿಯೂ ಆಗಿದ್ದಾರೆ.<ref>[http://www.bellevision.com/belle/index.php?action=topnews&type=8268 Mumbai: Dramas convey social and cultural message; Ahalya Ballal, 17 Jan 2014]</ref><ref>[http://www.proz.com/profile/139484 Ahalya Ballal, thorough and good]</ref><ref>[http://vbnewsonline.com/Writer/82824/ 10 ಏಪ್ರಿಲ್ 2015, vArtabharati, ಅಂಕಣ - ಮುಂಬಯಿ ಮೇರಿ ಜಾನ್ ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ ಬುಧವಾರ - ಫೆಬ್ರವರಿ -08-2012]</ref>
==ಜನನ,ವಿದ್ಯಾಭ್ಯಾಸ, ಕುಟುಂಬ ==
ಅಹಲ್ಯ<ref>[http://kn.sciencegraph.net/wiki/%E0%B2%85%E0%B2%B9%E0%B2%B2%E0%B3%8D%E0%B2%AF_%E0%B2%AC%E0%B2%B2%E0%B3%8D%E0%B2%B2%E0%B2%BE%E0%B2%B3%E0%B3%8D Science Graph]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಹುಟ್ಟಿದ್ದು [[ಡಿಸೆಂಬರ್ ೦೧]], [[೧೯೬೩]]ರಲ್ಲಿ{{cite-needed}}. ತಂದೆ ಪಿ. ಎನ್. ವೆಂಕಟ್ರಾವ್, ತಾಯಿಯ ಹೆಸರು ಜಾನಕಿ. ಚಲನಚಿತ್ರ ನಿರ್ದೇಶಕರಾದ ರಾಮಚಂದ್ರ ಪಿ. ಎನ್. ಅಹಲ್ಯಾರ ತಮ್ಮ. [[ಉಡುಪಿ]], [[ಕುಂದಾಪುರ]], [[ಧಾರವಾಡ]], [[ಬೆಂಗಳೂರು]] ಮತ್ತು [[ಮುಂಬಯಿ]] ಯಲ್ಲಿ ವಿದ್ಯಾಭ್ಯಾಸ ಮಾಡಿದ ಅಹಲ್ಯ, ವಿಜ್ಞಾನ ಪದವಿಯನ್ನು [[ಮಂಗಳೂರು]] ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ.<ref>{{Cite web |url=https://m.dailyhunt.in/news/india/kannada/avadi-epaper-avadi/ondondu+nenapu+putagala+naduvina+navilugari+ahalya+ballaal-newsid-116917900, |title=ಅಹಲ್ಯಾ ಬಲ್ಲಾಳ್ ಒಂದೊಂದೂ ನೆನಪು ಪುಟಗಳ ನಡುವಿನ ನವಿಲುಗರಿ: ಅಹಲ್ಯಾಬಲ್ಲಾಳ್, Wednesday, 22 May, |access-date=2021-05-05 |archive-date=2025-12-10 |archive-url=https://web.archive.org/web/20251210170619/https://m.dailyhunt.in/news/india/kannada/avadi-epaper-avadi/ondondu+nenapu+putagala+naduvina+navilugari+ahalya+ballaal-newsid-116917900, |url-status=dead }}</ref>
===ವಿವಾಹ===
ಸಂತೋಷ ಬಲ್ಲಾಳರನ್ನು ಮದುವೆಯಾದ ಅಹಲ್ಯ ಅವರಿಗೆ ಇಬ್ಬರು ಗಂಡುಮಕ್ಕಳಿದ್ದಾರೆ.
==ಭರತನಾಟ್ಯ ರಂಗಪ್ರವೇಶ==
[[೧೯೮೮]]ರಲ್ಲಿ ಬೆಂಗಳೂರಿನ ’[[ಯವನಿಕಾ]]’ ಸಭಾಂಗಣದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದರು. [[ಕರ್ನಾಟಕ]], [[ಮುಂಬಯಿ]] ಹಾಗೂ ಇತರೆ ನಗರಗಳಲ್ಲಿ ಹಲವಾರು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. ಅನೇಕ ನೃತ್ಯನಾಟಕಗಳಲ್ಲಿ ಭಾಗವಹಿಸಿದ್ದಾರೆ.
==ನಾಟಕಗಳಲ್ಲಿ ಅಭಿನಯ==
[[ಮುಂಬಯಿ]]ನ ಕನ್ನಡ ಕಲಾಕೇಂದ್ರ, [[ಮೈಸೂರ್ ಅಸೋಸಿಯೇಷನ್, ಮುಂಬಯಿ]], ’ದೃಶ್ಯ’ ತಂಡ ಮತ್ತು ಮಾತುಂಗ [[ಕರ್ನಾಟಕ ಸಂಘ]]ದ ಕಲಾಭಾರತಿ ತಂಡಗಳ [[ಕನ್ನಡ]] ನಾಟಕಗಳಲ್ಲಿ ಅಭಿನಯಿಸಿದ್ದಾರೆ.
===ಅಭಿನಯಿಸಿದ ನಾಟಕಗಳು===
{{cite-needed}}
* ಪದ್ಮಶ್ರೀ ದುಂಢೀರಾಜ್ (ನಿರ್ದೇಶನ: ಕಿಶೋರಿ ಬಲ್ಲಾಳ)
* ಸಹ್ಯಾದ್ರಿಯ ಸ್ವಾಭಿಮಾನ (ರಚನೆ: [[ಆರ್.ಡಿ.ಕಾಮತ]], ನಿ: ಶ್ರೀಪತಿ ಬಲ್ಲಾಳ)
* ತರುಣ ದುರ್ದಂಡ ಮುದುಕ ಮಾರ್ತಾಂಡ (ಮರಾಠಿ ಮೂಲದ ಕನ್ನಡ ರೂಪಾಂತರ ಮತ್ತು ನಿರ್ದೇಶನ: ಶ್ರೀಪತಿ ಬಲ್ಲಾಳ)
* ನಮ್ಮ ನಮ್ಮಲ್ಲಿ ( ಮರಾಠಿಯ ’ಚಾರ್ ಚೌಗಿಯ’ ನಾಟಕದ ರೂಪಾಂತರ ಮತ್ತು ನಿರ್ದೇಶನ: ಸಂತೋಷ ಬಲ್ಲಾಳ)
* ಬಾಕಿ ಇತಿಹಾಸ (ಮೂಲ ಕೃತಿ:ಬಾದಲ್ ಸರ್ಕಾರ್, ನಿ: ರಮೇಶ್ ಶಿವಪುರ)
* ಬೆಂದಕಾಳೂರು (ರಚನೆ ಮತ್ತು ನಿರ್ದೇಶನ: [[ಡಾ.ಬಿ.ಆರ್.ಮಂಜುನಾಥ್]])
* ಪುಷ್ಪರಾಣಿ (ರಚನೆ: [[ಚಂದ್ರಶೇಖರ ಕಂಬಾರ]], ನಿ: ಜಯಲಕ್ಷ್ಮೀ ಪಾಟೀಲ್)
* ಮಂಥರಾ (ರಚನೆ: ಡಾ.[[ಹೆಚ್.ಎಸ್.ವೆಂಕಟೇಶಮೂರ್ತಿ]], ನಿ: ಜಯಲಕ್ಷ್ಮೀ ಪಾಟೀಲ್)
* ಎಲ್ಲಮ್ಮ (ಮೂಲ ನಾಟಕ: ಲೋರ್ಕಾ, ರೂಪಾಂತರ ಮತ್ತು ನಿರ್ದೇಶನ: ಬಿ. ಬಾಲಚಂದ್ರ ರಾವ್)
* ಅಂಬೆ (ಕನ್ನಡಕ್ಕೆ: ಸರಜೂ ಕಾಟ್ಕರ್, ನಿರ್ದೇಶನ:[[ಭರತ್ ಕುಮಾರ್ ಪೊಲಿಪು]])
* ಅಂಬೆ [ತುಳು] (ನಿ: [[ಭರತ್ ಕುಮಾರ್ ಪೊಲಿಪು]])
* ಕುವೆಂಪು ಕಂಡ ಮಂಥರೆ (ಮೂಲ : ಕುವೆಂಪು, ರಂಗರೂಪ ಮತ್ತು ನಿರ್ದೇಶನ ಸಾ ದಯಾ[ದಯಾನಂದ ಸಾಲ್ಯಾನ])
* ಮಾಯಾವಿ ಸರೋವರ.<ref>[http://kannada.oneindia.com/news/bangalore/mayavi-sarovara-kannada-play-at-kh-kala-soudha-085390.html one India kannada, June 19, 2014, ಜೂ. 21ರಂದು ಮಾಯಾವಿ ಸರೋವರ ನಾಟಕ]</ref>
* ಚೌಕಟ್ಟಿನಾಚೆಯ ಚಿತ್ರಗಳು.<ref>[https://www.facebook.com/media/set/?set=a.596614440355029.146112.524860084197132&type=1 kannada ranga bhumi, facebook, `ಮುಂಬಯಿ ಚುಕ್ಕಿ ಸಂಕುಲ’ ತಂಡದಿಂದ, ‘ಚೌಕಟ್ಟಿನಾಚೆಯ ಚಿತ್ರಗಳು’]</ref>
== ನಿರ್ದೇಶಿಸಿದ ನಾಟಕಗಳು==
{{cite-needed}}
* ನಕ್ಕಳಾ ರಾಜಕುಮಾರಿ (ರಚನೆ: ಪಾಷಾ)
* ಗುಮ್ಮ (ರಚನೆ: ಎ.ಎಸ್. ಮೂರ್ತಿ)
* ಸೂರ್ಯ ಬಂದ (ರಚನೆ: [[ವೈದೇಹಿ]])
* ಯಾರು ಶ್ರೇಷ್ಠರು (ಇಂಗ್ಲೀಷ್ ಮೂಲದ ನಾಟಕ, ಕನ್ನಡ ರೂಪಾಂತರ: ಅಹಲ್ಯ ಬಲ್ಲಾಳ್)
* ಹಕ್ಕಿ ಹಾಡು (ರಚನೆ: [[ವೈದೇಹಿ]])
==ಕೈಲಾಸಂ ಸ್ಮರಣೆಯ ದಿನದಂದು ನಾಟಕ ಪ್ರದರ್ಶನ==
ಮೈಸೂರು ಅಸೋಸಿಯೇಷನ್, ಮುಂಬಯಿನಲ್ಲಿ ಏಕ-ವ್ಯಕ್ತಿ ಪ್ರಧಾನವಾದ ನಾಟಕ "ಅವಳ ಕಾಗದ" ವನ್ನು ಅಹಲ್ಯಾ ಬಲ್ಲಾಳ್ ರವರಿಂದ ೨೮,ಆಗಸ್ಟ್, ೨೦೨೨ ರಂದು ಪ್ರದರ್ಶಿಸಲಾಯಿತು. ಈ ಕಿರು-ಬೆಂಗಾಲಿ ನಾಟಕ,'ಸ್ತ್ರೀರ್ ಪತ್ರ'ದ ಕನ್ನಡ ರೂಪಾಂತರವೇ 'ಅವಳ ಕಾಗದ'. <ref> [[File:Tagore's Bengali drama's translation in kannada was enacted by smt. Ahalya Ballal as one act play at Mysore association, Mumbai.jpg|thumb| ಅಭಿನೇತ್ರಿ ಅಹಲ್ಯ ಬಲ್ಲಾಳರನ್ನು ಅಧ್ಯಕ್ಷೆ ಕಮಲ ಕಾಂತರಾಜ್, ಪುಷ್ಪಗುಚ್ಛದಿಂದ ಗೌರವಿಸುತ್ತಿದ್ದಾರೆ. ಜೊತೆಯಲ್ಲಿ ಲಕ್ಷ್ಮಿಸೀತಾರಾಂ ಸಹ ಇದ್ದಾರೆ.]] </ref>
==ಪ್ರಶಸ್ತಿ ಹಾಗೂ ಪುರಸ್ಕಾರಗಳು==
* ಮಾಟುಂಗಾ [[ಕರ್ನಾಟಕ ಸಂಘ]] [[ಮುಂಬಯಿ]] ಆಯೋಜಿಸುವ [[೨೦೦೪]]ರ ಸಾಲಿನ ಅಖಿಲ ಭಾರತ ಕುವೆಂಪು ನಾಟಕ ಸ್ಪರ್ಧೆ”ಯಲ್ಲಿ ಶ್ರೇಷ್ಠ ಅಭಿನಯಕ್ಕಾಗಿ ‘ಅತ್ಯುತ್ತಮ ನಟಿ ಪ್ರಥಮ ಪ್ರಶಸ್ತಿ’(ನಾಟಕ: ಪುಷ್ಪರಾಣಿ, ಮಹಾರಾಣಿ ಪಾತ್ರ).
* 'ಮಂಥರಾ' ನಾಟಕದ ಮಂಥರೆ ಪಾತ್ರಕ್ಕೆ ''‘ಭಾರತಿ ಕೊಡ್ಲೀಕೆರೆ ಸ್ಮಾರಕ’'' ಪ್ರಶಸ್ತಿ {{cite-needed}}
* ನಾಟಕ: ಎಲ್ಲಮ್ಮ, ಅತ್ಯುತ್ತಮ ನಟಿ ಪ್ರಥಮ ಪ್ರಶಸ್ತಿ, {{cite-needed}}
* ಉಡುಪಿಯ ತುಳು ಕೂಟ ಏರ್ಪಡಿಸಿದ ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯಲ್ಲಿ ’ಅತ್ಯುತ್ತಮ ನಟಿ ಪ್ರಥಮ’ (ನಾಟಕ: ಅಂಬೆ, ಅಂಬೆ ಪಾತ್ರಕ್ಕಾಗಿ)ಪ್ರಶಸ್ತಿ {{cite-needed}}
* `ಕುವೆಂಪು ಕಂಡ ಮಂಥರೆ'ನಾಟಕದಲ್ಲಿನ ಮಂಥರೆ ಪಾತ್ರಕ್ಕಾಗಿ, ಮಾಟುಂಗಾ [[ಕರ್ನಾಟಕ ಸಂಘ]] [[ಮುಂಬಯಿ]] ಆಯೋಜಿಸುವ [[೨೦೧೨]]ರ ಸಾಲಿನ ಅಖಿಲ ಭಾರತ ಕುವೆಂಪು ನಾಟಕ ಸ್ಪರ್ಧೆ”ಯಲ್ಲಿ ಅತ್ಯುತ್ತಮ ನಟಿ, ಗೌರವ {{cite-needed}}
* ಭಾರತಿ ಕೊಡ್ಲೇಕರ್ ಪ್ರಶಸ್ತಿ {{cite-needed}}
* 'ಅಖಿಲ ಭಾರತ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ತೀರ್ಪುಗಾರ'ರಾಗುವ ಗೌರವ ಸಂದಿದೆ {{cite-needed}}
==ಚಿತ್ರಗಳು==
<gallery>
ಚಿತ್ರ:Pushparani.jpg
ಚಿತ್ರ:Pushparani1.jpg
ಚಿತ್ರ:Pushparani2.jpg
ಚಿತ್ರ:Pushparani3.jpg
ಚಿತ್ರ:170679 1762252746204 1535668202 1811271 2943775 o.jpg
ಚಿತ್ರ:ManthareHSV.jpg
ಚಿತ್ರ:ManthareHSV1.jpg
ಚಿತ್ರ:Ambe1.jpg
ಚಿತ್ರ:Ambe2 n.jpg
</gallery>
|
==ಉಲ್ಲೇಖಗಳು==
<References />
==ಬಾಹ್ಯ ಸಂಪರ್ಕಗಳು==
# [http://avadhimag.com/2010/03/22/%E0%B2%B9%E0%B3%8A%E0%B2%9A%E0%B3%8D%E0%B2%9A-%E0%B2%B9%E0%B3%8A%E0%B2%B8%E0%B2%BE-%E0%B2%95%E0%B3%8D%E0%B2%B5%E0%B2%BF%E0%B2%9C%E0%B3%8D-%E0%B2%AF%E0%B2%BE%E0%B2%B0%E0%B2%BF%E0%B2%B5%E0%B2%B0/ ಅವಧಿ,ಕ್ವಿಜ಼್ :'ಬಂತು ಸರಿ ಉತ್ತರ, ಕನ್ಗ್ರಾಟ್ಸ್, ಅಹಲ್ಯ ಬಲ್ಲಾಳ್',ಮಾರ್ಚ್,೨೨,೨೦೧೦]
{{Interwikineeded}}
[[ವರ್ಗ:ರಂಗಭೂಮಿ ಕಲಾವಿದರು]]
[[ವರ್ಗ:ಹವ್ಯಾಸಿ ರಂಗಭೂಮಿ ಕಲಾವಿದೆ]]
[[ವರ್ಗ:ಮುಂಬಯಿ ಕನ್ನಡಿಗರು]]
4sn7os7y8dg3mix8kojmibwcvwnymvm
ಟೆಂಪ್ಲೇಟು:As of
10
31698
1378286
1327160
2026-08-03T08:19:29Z
A826
72368
1378286
wikitext
text/x-wiki
<!--{{As of}} begin--><includeonly><!--
## ಪ್ಯಾರಾಮ್ 1 - ವರ್ಷ (ಕಡ್ಡಾಯ)
## ಪ್ಯಾರಾಮ್ 2 - ತಿಂಗಳು (ಐಚ್ಛಿಕ)
## ಪ್ಯಾರಾಮ್ 3 - ದಿನಾಂಕ (ಐಚ್ಛಿಕ)
## alt - ಪರ್ಯಾಯ ಪಠ್ಯ (ಐಚ್ಛಿಕ)
## num=en - ಇಂಗ್ಲಿಷ್ ಅಂಕಿಗಳು (ಪೂರ್ವನಿಯೋಜಿತ)
## num=kn - ಕನ್ನಡ ಅಂಕಿಗಳು
## df=mdy - ತಿಂಗಳು-ದಿನ-ವರ್ಷ ಸ್ವರೂಪ
-->{{#if: {{{alt|}}} | {{{alt}}} | {{#if: {{{3|}}}
| {{#switch:{{lc:{{{df|}}}}}|us|mdy=
{{#if:{{{2|}}}|{{#switch:{{{num|}}}|en|english={{MONTHNAME|{{{2}}}}}|kn|kannada={{MONTHNAME_KN|{{{2}}}}}}} }}{{{3}}}, {{#switch:{{{num|}}}|en|english={{{1}}}|kn|kannada={{KANNADA_NUM|{{{1}}}}}}}
|{{{3}}} {{#if:{{{2|}}}|{{#switch:{{{num|}}}|en|english={{MONTHNAME|{{{2}}}}}|kn|kannada={{MONTHNAME_KN|{{{2}}}}}}} }}{{{1}}}
}}
| {{#if: {{{2|}}}
|{{#switch:{{{num|}}}|en|english={{MONTHNAME|{{{2}}}}}|kn|kannada={{MONTHNAME_KN|{{{2}}}}}}} {{#switch:{{{num|}}}|en|english={{{1}}}|kn|kannada={{KANNADA_NUM|{{{1}}}}}}}
|{{#switch:{{{num|}}}|en|english={{{1}}}|kn|kannada={{KANNADA_NUM|{{{1}}}}}}}
}}
}} ರಂತೆ
}}<!--
## ಉಲ್ಲೇಖ/ನವೀಕರಣ ಲಿಂಕ್
--><sup class="plainlinks noexcerpt noprint asof-tag {{#if:{{{url|}}}|ref|update}}" style="display:none;">[{{#if:{{{url|}}}|{{{url}}} [ಉಲ್ಲೇಖ]|{{fullurl:{{PAGENAME}}|action=edit}} [ನವೀಕರಿಸಿ]}}]</sup><!--
## ವರ್ಗೀಕರಣ
-->{{Dated maintenance category (articles)|Articles containing potentially dated statements|from|
{{#ifexpr: {{{1}}} > 2004 | {{#ifexpr:{{#time:U|{{#if:{{{2|}}}|{{#switch:{{{num|}}}|en|english={{MONTHNAME|{{{2}}}}}|kn|kannada={{MONTHNAME_KN|{{{2}}}}}}}}}{{{1}}}}} > {{#time:U}} | ಭವಿಷ್ಯ| {{#if:{{{2|}}}|{{#switch:{{{num|}}}|en|english={{MONTHNAME|{{{2}}}}}|kn|kannada={{MONTHNAME_KN|{{{2}}}}}}}} {{{1}}}}} | {{#ifexpr:{{{1}}} > 1989 | {{{1}}} | 1990 ಕ್ಕಿಂತ ಮೊದಲು }}}}
}}<!--
-->All articles containing potentially dated statements}}</includeonly><!--{{As of}} end--><noinclude>
{{documentation}}
</noinclude>{{#invoke:Check for unknown parameters|check|unknown={{main other|[[Category:Pages using as of template with unknown parameters|_VALUE_{{PAGENAME}}]]}}|preview=Page using [[Template:As of]] with unknown parameter "_VALUE_"|ignoreblank=y| 1 | 2 | 3 | alt | df | num | url }}
ckcnstq5cmi6y3irldguzaw1nip6h4y
1378289
1378286
2026-08-03T08:23:41Z
A826
72368
Reverted edits by [[Special:Contributions/A826|A826]] ([[User talk:A826|talk]]) to last revision by [[User:en>Ivanvector|en>Ivanvector]]
1327159
wikitext
text/x-wiki
<!--{{As of}} begin--><includeonly><!--
## param 1 is the year
## optional param 2 is the month
## optional param 3 is the day of the month
## optional named parameter alt=[text] is alternative display text (may include wiki markup)
## optional named parameter df=mdy or df=US produces month-day-year format in displayed text
## optional named parameter lc=on gives lower-case-first output
## optional named parameter url=[URL] gives statement reference
## displayed text ([A/a]s of [Start date] by default)
-->{{#if: {{{alt|}}} | {{{alt}}} | {{#if:{{{bare|}}}||{{#if:{{yesno|{{{since|}}}}}|{{#if: {{yesno|{{{lc|}}}}} | s | S }}ince | {{#if: {{yesno|{{{lc|}}}}} | a | A }}s of}}}} {{#if:{{{pre|}}}|{{{pre}}} }}{{#if: {{{3|}}} | {{#switch:{{lc:{{{df|}}}}}|us|mdy={{MONTHNAME|{{{2}}}}} {{#expr:{{{3}}}}}, |{{#expr:{{{3}}}}} {{MONTHNAME|{{{2}}}}} }}{{{1}}}|{{#if: {{{2|}}} |{{MONTHNAME|{{{2}}}}} }}{{{1}}}}}}}{{#if:{{{post|}}}|<nowiki />{{{post}}}}}<!--
#### That nowiki is required or, various characters (:, ;, #, and *} will be parsed as wikisyntax for list items.
## ref/update inline banner (hidden by default)
--><sup class="plainlinks noexcerpt noprint asof-tag {{#if:{{{url|}}}|ref|update}}" style="display:none;">[{{#if:{{{url|}}}|{{{url}}} [ref]|{{fullurl:{{PAGENAME}}|action=edit}} [update]}}]</sup><!--
## categorisation disabled outside main namespace
-->{{Dated maintenance category (articles)|Articles containing potentially dated statements|from|<!--
## temporal category for template (word method)
-->{{#if: {{#ifexpr: {{{1}}} = 1 }} |{{#ifexpr:{{#time:U|{{{1}}}}} > {{#time:U}} | the future | {{#ifexpr: {{#time:Y|{{{1}}}}} > 2004 | {{{1}}} | {{#ifexpr: {{#time:Y|{{{1}}}}} > 1989 | {{#time:Y|{{{1}}}}} | before 1990 }}}}}} |<!--
## temporal category for template (parameter method)
-->{{#ifexpr: {{{1}}} > 2004 | {{#ifexpr:{{#time:U|{{#if:{{{2|}}} | {{MONTHNAME|{{{2}}}}}}} {{{1}}}}} > {{#time:U}} | the future| {{#if:{{{2|}}} | {{MONTHNAME|{{{2}}}}} }} {{{1}}}}} | {{#ifexpr:{{{1}}} > 1989 | {{{1}}} | before 1990 }}}}}}|<!--
## global category for template
-->All articles containing potentially dated statements}}</includeonly><!--{{As of}} end--><noinclude><!--
## dynamic example (as of today, self ref)
-->{{As of|{{CURRENTYEAR}}|{{CURRENTMONTH}}|{{CURRENTDAY}}}}<sup class="plainlinks">[https://en.wikipedia.org/wiki/Template:As_of [ref]]</sup>
{{documentation}}
<!-- Add categories to the /doc subpage; interwikis go to Wikidata, thank you! -->
</noinclude>{{#invoke:Check for unknown parameters|check|unknown={{main other|[[Category:Pages using as of template with unknown parameters|_VALUE_{{PAGENAME}}]]}}|preview=Page using [[Template:As of]] with unknown parameter "_VALUE_"|ignoreblank=y| 1 | 2 | 3 | alt | bare | df | lc | post | pre | since | url }}
bq5bdna8yn906uggp4lk061xrls2ey6
ಉಪ್ಪಿನಂಗಡಿ
0
33945
1378201
1338448
2026-08-02T16:39:52Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378201
wikitext
text/x-wiki
{{Infobox ಊರು|name=ಉಪ್ಪಿನಂಗಡಿ|native_name=ಉಬರ್|native_name_lang=|other_name=|settlement_type=ಪಟ್ಟಣ|image_skyline=File:Uppinangady bridge.jpg|image_alt=|image_caption=ಉಪ್ಪಿನಂಗಡಿ ಸೇತುವೆ|nickname=|pushpin_map=ಭಾರತ ಕರ್ನಾಟಕ|pushpin_label_position=|pushpin_map_alt=|pushpin_map_caption=ಕರ್ನಾಟಕ, ಭಾರತದಲ್ಲಿರುವ ಸ್ಥಳ|subdivision_type=ದೇಶ|subdivision_name={{flag|ಭಾರತ}}|subdivision_type1=[[ರಾಜ್ಯ]]|subdivision_type2=[[ಜಿಲ್ಲೆ]]|subdivision_name1=[[ಕರ್ನಾಟಕ]]|subdivision_name2=[[ದಕ್ಷಿಣ ಕನ್ನಡ]]|established_title=<!-- Established -->|established_date=|founder=|named_for=|government_type=|governing_body=ಗ್ರಾಮ ಪಂಚಾಯತ್, ನಾಡಕಚೇರಿ|unit_pref=ಮೆಟ್ರಿಕ್|area_footnotes=|area_total_km2=|area_rank=|elevation_footnotes=|elevation_m=|population_total=|population_as_of=|population_footnotes=|population_density_km2=auto|population_rank=|population_demonym=|demographics_type1=ಭಾಷೆಗಳು|demographics1_title1=ಅಧಿಕೃತ|timezone1=|utc_offset1=|postal_code_type=ಪಿನ್ ಕೋಡ್|postal_code=574 241|area_code=08251|area_code_type=ದೂರವಾಣಿ ಕೋಡ್|registration_plate=|website=|footnotes=}}
<templatestyles src="Module:Infobox/styles.css"></templatestyles>
[[ಚಿತ್ರ:Nathravathi_in_Uppina_Angadi.jpg|link=//upload.wikimedia.org/wikipedia/commons/thumb/9/98/Nathravathi_in_Uppina_Angadi.jpg/200px-Nathravathi_in_Uppina_Angadi.jpg|thumb|200x200px| ಉಪ್ಪಿನ ಅಂಗಡಿಯಲ್ಲಿ ನೇತ್ರಾವತಿ ನದಿ]]
[[ಚಿತ್ರ:Kumaradhara_River.jpg|link=//upload.wikimedia.org/wikipedia/commons/thumb/a/ab/Kumaradhara_River.jpg/200px-Kumaradhara_River.jpg|thumb|200x200px| ಉಪ್ಪಿನಂಗಡಿಯ ಕುಮಾರಧಾರ ನದಿ]]
'''ಉಪ್ಪಿನಂಗಡಿ''' ಅಥವಾ ಉಬರ್ [[ಕರ್ನಾಟಕ]] ರಾಜ್ಯದ [[ದಕ್ಷಿಣ ಕನ್ನಡ]] ಜಿಲ್ಲೆಯ ಒಂದು ಪಟ್ಟಣವಾಗಿದೆ.ಇದು ಪುತ್ತೂರು ತಾಲೂಕಿಗೆ ಸೇರಿದೆ. ಇದು ಒಂದು ಕಡೆ [[ಕುಮಾರಧಾರ ನದಿ]] ಮತ್ತು ಇನ್ನೊಂದು ಕಡೆ [[ನೇತ್ರಾವತಿ ನದಿ|ನೇತ್ರಾವತಿ ನದಿಯಿಂದ]] ಸುತ್ತುವರಿದಿದೆ. ಪಟ್ಟಣದ ಸುತ್ತಮುತ್ತಲಿನ ಎರಡು ನದಿಗಳು [[ಮಳೆಗಾಲ|ಮಳೆಗಾಲದಲ್ಲಿ ಉಗಮಿಸಿದಾಗ]] ಮತ್ತು ಸಂಧಿಸಿದಾಗ ಇದನ್ನು "ಸಂಗಮ್" ಎಂದು ಕರೆಯಲಾಗುತ್ತದೆ. ಇದು ಸಂಗಮಕ್ಕೆ [[ಸಂಸ್ಕೃತ]] ಪದವಾಗಿದೆ. ಸಂಗಮವು ಒಂದು ಪ್ರಮುಖ ಘಟನೆಯಾಗಿದೆ ಏಕೆಂದರೆ ಸುತ್ತಮುತ್ತಲಿನ ಹಳ್ಳಿಗಳ ಜನರು ವಿಲೀನವನ್ನು ವೀಕ್ಷಿಸಲು ನದಿ ದಡಗಳಲ್ಲಿ ಕಿಕ್ಕಿರಿದು ಸೇರುತ್ತಾರೆ. ಉಪ್ಪಿನಂಗಡಿಯ ಜನಸಂಖ್ಯೆ ಒಟ್ಟು ೭,೧೭೨.
೧೯೨೩ ರಲ್ಲಿ ಉಪ್ಪಿನಂಗಡಿ ಪಟ್ಟಣವು ಅತಿಯಾದ ಪ್ರವಾಹದಿಂದಾಗಿ ಕೊಚ್ಚಿಕೊಂಡುಹೋಯಿತು ಮತ್ತು ಅದರ ನ್ಯಾಯಾಲಯಗಳನ್ನು [[ಪುತ್ತೂರು|ಪುತ್ತೂರಿಗೆ]] ಸ್ಥಳಾಂತರಿಸಲಾಯಿತು. ೧೯೭೪ರಲ್ಲಿ ತೀವ್ರ ಪ್ರವಾಹವೂ ಉಂಟಾಯಿತು.
ಉಪ್ಪಿನಂಗಡಿ ಪಟ್ಟಣವು ೫೩ ಮೀಟರ್ ಎತ್ತರದಲ್ಲಿದೆ. ಉಪ್ಪಿನಂಗಡಿಯನ್ನು "ದಕ್ಷಿಣ ಕಾಶಿ" ಎಂದೂ ಕರೆಯುತ್ತಾರೆ. ಗುಪ್ತಗಾಮಿನಿ ಎಂದು ಕರೆಯಲ್ಪಡುವ ಇತರ ಎರಡು ನದಿಗಳೊಂದಿಗೆ ಮೂರನೇ ನದಿಯ ಸಂಗಮವೂ ಇದೆ ಎಂದು ನಂಬಲಾಗಿದೆ. ಇದು ಸಹಸ್ರಲಿಂಗೇಶ್ವರ ಮತ್ತು
ಮಹಾಕಾಳಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
== ದಂತಕಥೆ ==
ಇದರ ದಂತಕಥೆಯು [[ಮಹಾಭಾರತ|ಮಹಾಭಾರತದ]] ಕಾಲದಿಂದಲೂ ಇದೆ. ರಾಜ [[ಯುಧಿಷ್ಠಿರ|ಯುಧಿಷ್ಠಿರನು]] ರಾಜಸೂಯ ಯಜ್ಞವನ್ನು (ಅವನ ಸಾರ್ವಭೌಮತ್ವವನ್ನು ಘೋಷಿಸಲು) ಮಾಡಲು ನಿರ್ಧರಿಸಿದಾಗ, ಅವನು [[ಭೀಮಸೇನ|ಭೀಮನನ್ನು]] ಇಂದಿನ ಉಪ್ಪಿನಂಗಡಿಗೆ ಕಳುಹಿಸಿದನು ಎಂದು [[ಸ್ಕಾಂದ ಪುರಾಣ|ಸ್ಕಂದ ಪುರಾಣ]] ಹೇಳುತ್ತದೆ. ಅಲ್ಲಿ, ಪುರುಷ ಮೃಗ ಎಂಬ ದೊಡ್ಡ ದೈತ್ಯ ಪ್ರಾಣಿಯು ಅವನನ್ನು ಆಕ್ರಮಣ ಮಾಡಿತು. ದಾಳಿಯನ್ನು ತಪ್ಪಿಸಲು, ಅವನು ತನ್ನ ಒಂದು ಕೂದಲನ್ನು ಬೀಳಿಸಿದನು, ಅದು ತಕ್ಷಣವೇ ಶಿವಲಿಂಗವಾಗಿ ಮಾರ್ಪಟ್ಟಿತು. ಇದನ್ನು ನೋಡಿದ ಪುರುಷ ಮೃಗ ಲಿಂಗವನ್ನು ಪೂಜಿಸಲು ನಿಲ್ಲಿಸಿದನು ಮತ್ತು ನಂತರ ಆಕ್ರಮಣಕ್ಕೆ ಮುಂದಾದನು. ಭೀಮನು ಮತ್ತೆ ಒಂದು ಕೂದಲನ್ನು ಬೀಳಿಸಿದನು, ಅದು ಮತ್ತೊಂದು ಶಿವಲಿಂಗವಾಗಿ ಮಾರ್ಪಟ್ಟಿತು. ಇದು ಸ್ವಲ್ಪ ಸಮಯದವರೆಗೆ ಸಂಭವಿಸಿತು. ಅಂತಿಮವಾಗಿ, ಅವನು ತನ್ನ ಒಂದು ಹಿಡಿ ಕೂದಲನ್ನು ಬೀಳಿಸಿದನು, ಅದು ತಕ್ಷಣವೇ ಸಾವಿರ ಶಿವಲಿಂಗಗಳಾಗಿ ಮಾರ್ಪಟ್ಟಿತು. ಪುರುಷ ಮೃಗ ಎಲ್ಲಾ ಲಿಂಗಗಳನ್ನು ಪೂಜಿಸಲು ನಿಲ್ಲಿಸಿದನು, ತಪ್ಪಿಸಿಕೊಳ್ಳಲು ಸಮಯವನ್ನು ನೀಡುತ್ತಾನೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಗಳ ಸಂಗಮ (ಸಂಗಮ) ದೇವಸ್ಥಾನದ ಬಳಿ ನಡೆಯುತ್ತದೆ. ಆದರೆ, ಮಳೆಗಾಲದಲ್ಲಿ ಈ ಸಂಗಮ ನೇರವಾಗಿ ಗರ್ಭಗುಡಿಯ ಮುಂದೆ ನಡೆಯುತ್ತದೆ. ನದಿಗಳ ನೀರಿನಲ್ಲಿ ಸ್ನಾನ ಮಾಡಲು ಇದು ಮಂಗಳಕರ ಕ್ಷಣವೆಂದು ಪರಿಗಣಿಸಲಾಗಿದೆ. ಮರಳಿನ ಆಳದಲ್ಲಿ ಅಡಗಿರುವ ೧೦೦೦ ಶಿವಲಿಂಗಗಳು ಮರಳು ಕಡಿಮೆಯಾದಾಗ ಬಹಿರಂಗಗೊಳ್ಳುತ್ತವೆ ಎಂದು ಹೇಳಲಾಗುತ್ತದೆ.
== ಸಾರಿಗೆ ==
ಉಪ್ಪಿನಂಗಡಿಯು ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದೆ ಮತ್ತು ಸುತ್ತಲೂ ಕಾಡುಗಳಿಂದ ಆವೃತವಾಗಿದೆ. ಉಪ್ಪಿನಂಗಡಿಯು [[ಮಂಗಳೂರು|ಮಂಗಳೂರಿನಿಂದ]] [[ಬೆಂಗಳೂರು|ಬೆಂಗಳೂರಿಗೆ]] ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿದೆ. ಈ ಸ್ಥಳದಿಂದ ಮಂಗಳೂರು, [[ಪುತ್ತೂರು|ಪುತ್ತೂರಿಗೆ]] ಮತ್ತು [[ಕುಕ್ಕೆ ಸುಬ್ರಹ್ಮಣ್ಯ|ಕುಕ್ಕೆ ಸುಬ್ರಹ್ಮಣ್ಯಕ್ಕೆ]] ಆಗಾಗ್ಗೆ ಬಸ್ ಮತ್ತು ಟ್ಯಾಕ್ಸಿ ಸೇವೆಗಳಿವೆ. ೧೨ ಕಿ.ಮೀ ದೂರದಲ್ಲಿರುವ ಪುತ್ತೂರು ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ೫೫ ಕಿಮೀ ದೂರದಲ್ಲಿದೆ.
== ಉಲ್ಲೇಖಗಳು ==
== ಬಾಹ್ಯ ಕೊಂಡಿಗಳು ==
* [http://www.fallingrain.com/world/IN/19/Uppinangadi.html Maps, Weather, and Airports for Uppinangadi, India] {{Webarchive|url=https://web.archive.org/web/20221024031714/http://www.fallingrain.com/world/IN/19/Uppinangadi.html |date=2022-10-24 }}
* ಹೆರಾಲ್ಡ್ ಎ. ಸ್ಟೀವರ್ಟ್, ''ಎ ಹ್ಯಾಂಡ್ಬುಕ್ ಟು ಸೌತ್ ಕೆನರಾ'', 1895
* [http://www.sunmediaonline.com/indiachroniclenovember/travel.html ] {{Webarchive|url=https://web.archive.org/web/20070520230614/http://www.sunmediaonline.com/indiachroniclenovember/travel.html |date=2007-05-20 }}
* [https://web.archive.org/web/20070213044550/http://www.kar.nic.in/gazetteer/ ಸೌತ್ ಕೆನರಾ ಗೆಜೆಟಿಯರ್ಸ್ 1894,1938,1973]
{{Unreferenced}}
{{Interwikineeded}}
[[ವರ್ಗ:Articles with short description]]
[[ವರ್ಗ:Short description matches Wikidata]]
[[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು]]
50pkvqs59gziukofx2sm3wifva24hn6
ಇಗ್ನೊಬಲ್ ಪ್ರಶಸ್ತಿ
0
35615
1378150
1337717
2026-08-02T15:46:24Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378150
wikitext
text/x-wiki
[[Image:Frog diamagnetic levitation.jpg|right|thumb|200px|ಒಂದು ಜೀವಂತ ಕಪ್ಪೆಯು [[Magnetic levitation|ಕಾಂತ ಬಲದಿಂದ ತೇಲುವ]], ಸಂಶೋಧನೆಗೆ [[Andre Geim|ಆಂಡ್ರೆ ಗೀಮ್]] [[University of Nijmegen|ನಿಜ್ಮೆಗನ್ ವಿಶ್ವವಿದ್ಯಾನಿಲಯ]] ಮತ್ತು ಸರ್ [[Michael Berry (physicist)|ಮೈಕೆಲ್ ಬೆರ್ರಿ]] [[University of Bristol|ಬ್ರಿಸ್ಟಾಲ್ ವಿಶ್ವವಿದ್ಯಾನಿಲಯ]]ದ ವಿದ್ವಾಂಸರುಗಳಿಗೆ ೨೦೦೦ರದ ಸಾಲಿನ ಭೌತಶಾಸ್ತ್ರ ವಿಭಾಗದ ಇಗ್ನೊಬಲ್ ಪ್ರಶಸ್ತಿ ಸಿಕ್ಕಿತ್ತು. ಗೀಮ್ ೨೦೧೦ರಲ್ಲಿ [[Nobel Prize for Physics|ನೊಬಲ್ ಪ್ರಶಸ್ತಿಯನ್ನು]] [[graphene|ಗ್ರಾಫೀನ್]] ಮೇಲಿನ ಸಂಶೋಧನೆಗೆ ಪಡೆದರು.]]
[[ನೊಬೆಲ್ ಪ್ರಶಸ್ತಿ|ನೊಬೆಲ್ ಪ್ರಶಸ್ತಿಗಳನ್ನು]] ಅತ್ಯುತ್ತಮ ಎನ್ನುವಂತ ಸಂಶೋಧನೆಗಳಿಗೆ ನೀಡಿದರೆ, '''ಇಗ್ನೊಬಲ್ ಪ್ರಶಸ್ತಿ ([[:en:Ig nobel|Ig Nobel Prize]])'''ಗಳನ್ನು, ಅಸ್ವಾಭಾವಿಕ ಅಥವಾ ಅತೀ ಕಮ್ಮಿ ಪ್ರಾಮುಖ್ಯದ ಸಂಶೋಧನೆಗಳನ್ನು ಕೈಗೊಂಡವರಿಗೆ ನೀಡಲಾಗುತ್ತದೆ. ಪ್ರಶಸ್ತಿ ಸಮಿತಿಯು ಈ ಪ್ರಶಸ್ತಿಯ ಉದ್ದೇಶವನ್ನು, ಮೊದಲು ನಗು ಮೂಡಿಸಿ ನಂತರ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಎಂದಿದೆ. ಈ ಪ್ರಶಸ್ತಿಯು ಕೆಲವೊಮ್ಮೆ ವ್ಯಂಗವಾಗಿಯೂ ನೀಡಲ್ಪಡುತ್ತದೆ. ನೋಬೆಲ್ ಎನ್ನುವ ಪದವನ್ನೇ ಬಳಸಿ ಇಗ್ನೊಬಲ್ ಎಂದರೆ ಪ್ರಾಮುಖ್ಯವಲ್ಲದ ಎನ್ನುವ ಅರ್ಥ ಕೊಡುವ ಪದದ ಮೇಲೆ ಇಗ್ನೊಬಲ್ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
ಪ್ರಶಸ್ತಿ ವಿಜೇತರಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ಸ್ಯಾಂಡರ್ಸ್ ಥಿಯೇಟರ್ ನಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರುಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಲ್ಲದೆ ಅಲ್ಲಿ ಪ್ರಶಸ್ತಿ ವಿಜೇತರ ಭಾಷಣವೂ ಇರುತ್ತದೆ. ಅನ್ನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್ ಎನ್ನುವ ವೈಜ್ಞಾನಿಕ ವಿನೋದ ಪತ್ರಿಕೆಯು ಈ ಬಹುಮಾನಗಳನ್ನು ಅಯೋಜಿಸುತ್ತದೆ.
==ಇತಿಹಾಸ ==
೧೯೯೧ರಲ್ಲಿ ಆನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್ ಪತ್ರಿಕೆಯ ಸಂಪಾದಕರು ಮತ್ತು ಸಹ-ಸ್ಥಾಪಕರಾದ ಮಾರ್ಕ್ ಅಬ್ರಹಾಮ್ ಅವರಿಂದ ಸ್ಥಾಪಿಸಲ್ಪಟ್ಟಿತು. ಆ ಬಾರಿಯ ಪ್ರಶಸ್ತಿಗಳನ್ನು ಮತ್ತೆ ಮಾಡಲೇಬಾರದಂತಹ ಸಂಶೋಧನೆಗಳನ್ನು ಮಾಡಿದ ಹತ್ತು ಜನರಿಗೆ ನೀಡಲಾಯಿತು. ನೋಬಲ್ ಪ್ರಶಸ್ತಿಯ ಐದು ವಿಭಾಗಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಶಾಸ್ತ್ರ, ಸಾಹಿತ್ಯ ಮತ್ತು ಶಾಂತಿಯ ವಿಭಾಗಗಳೂ ಮತ್ತು ಜೀವಶಾಸ್ತ್ರ, ಸಾರ್ವಜನಿಕ ಆರೋಗ್ಯ, ಇಂಜಿನಿಯರಿಂಗ್ ಸೇರಿದಂತೆ ಹತ್ತು ವಿಭಾಗಗಳನ್ನು ಇಗ್ನೊಬಲ್ ಪ್ರಶಸ್ತಿ ಹೊಂದಿದೆ.
ಈ ಪ್ರಶಸ್ತಿಗಳು ವಿನೋದದಿಂದ ಕೂಡಿದ ವೈಜ್ಞಾನಿಕ ಸಂಶೋಧನೆಗಳಿಗೆ ನೀಡುವುದಾದರೂ, ಕೆಲವೊಮ್ಮೆ ವ್ಯಂಗಕ್ಕಾಗಿ ಅಥವಾ ವಿಡಂಬನೆಗಾಗಿಯೂ ನೀಡಲ್ಪಡುತ್ತವೆ.
== ಸಮಾರಂಭ ==
ಪ್ರಶಸ್ತಿ ಪ್ರದಾನ ಸಮಾರಂಭವು ಮೊದಲಿಗೆ ಎಮ್. ಐ. ಟಿ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದರೂ, ಈಗ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸ್ಯಾಂಡರ್ಸ್ ಥಿಯೇಟರ್ ನಲ್ಲಿ ನಡೆಯುತ್ತದೆ. ನೈಜ ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರುಗಳಿಂದಲೇ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಲವಾರು ಬಗೆಯ ವಿನೋದಗಳು ಈ ಸಮಾರಂಭದಲ್ಲಿರುತ್ತವೆ. ಉದಾಹರಣೆಗೆ, ಮಿಸ್. ಸ್ವೀಟೀ ಪೂ ಎಂಬ ಚಿಕ್ಕ ಹುಡುಗಿ, ಭಾಷಣಕಾರರ ಭಾಷಣ ಉದ್ದವಾದರೆ " ದಯವಿಟ್ಟು ನಿಲ್ಲಿಸಿ ನನಗೆ ಬೋರಾಗಿದೆ" ಎಂದು ಅಳುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ "ಈ ಪ್ರಶಸ್ತಿ ನಿಮಗಿನ್ನೂ ಸಿಗದಿದ್ದರೆ......... ಅದಕ್ಕಿಂತಲೂ ಹೆಚ್ಚಾಗಿ ಈ ಪ್ರಶಸ್ತಿ ನಿಮಗೆ ಸಿಕ್ಕಿದ್ದರೆ..... ಮುಂದಿನ ವರ್ಷ ಅದೃಷ್ಟ ನಿಮ್ಮ ಜತೆಗಿರಲಿ" ಎನ್ನುವ ಮಾತುಗಳನ್ನು ಹೇಳಲಾಗುತ್ತದೆ.
==ಪ್ರಸಾರ ==
ಈ ಪ್ರಶಸ್ತಿ ಪ್ರದಾನ ಸಮಾರಂಭದ ಮುದ್ರಿಕೆಯನ್ನು ಅಮೆರಿಕಾದ ನ್ಯಾಷನಲ್ ಪಬ್ಲಿಕ್ ರೇಡಿಯೋ ಪ್ರಸಾರ ಮಾಡುತ್ತದೆ. ಅಲ್ಲದೆ ಅಂತರ್ಜಾಲದಲ್ಲಿ ನೇರ ಪ್ರಸಾರವೂ ಇರುತ್ತದೆ.
==೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿಜೇತರು.==
*'''ಮನೋವೈದ್ಯಕೀಯ ಶಾಸ್ತ್ರ''' : ಎಡಬಾಗಕ್ಕೆ ವಾಲುವುದರಿಂದ ಐಫಿಲ್ ಗೋಪುರ ಚಿಕ್ಕದಾಗಿ ಕಾಣುತ್ತದೆ ಎನ್ನುವ ಸಂಶೋಧನೆಗೆ ಅನಿತಾ ಎರ್ಲಾಂಡ್, ಮತ್ತು ರಾಲ್ಫ್ ಸ್ವಾನ್ (ನೆದರ್ಲ್ಯಾಂಡ್) ಮತ್ತು ಟುಲಿಯೋ ಗೌಡಲೂಪೆ (ಪೆರು)
*'''ಶಾಂತಿ ಪ್ರಶಸ್ತಿ'''" ಎಸ್.ಕೆ.ಎನ್. ಕಂಪನಿ.(ರಶಿಯಾ) ಹಳೆಯ ರಷಿಯದ ಸಿಡಿಮದ್ದುಗಳನ್ನು ಹೊಸ ವಜ್ರಗಳನ್ನಾಗಿ ಮಾರ್ಪಡಿಸಿದ್ದಕ್ಕೆ.
*'''ಶಬ್ದಶಾಸ್ತ್ರ ಪ್ರಶಸ್ತಿ''' : ವ್ಯಕ್ತಿಯ ಮಾತುಗಳನ್ನು, ಕೆಲವೇ ಸೂಕ್ಷ್ಮ ಸೆಕೆಂಡುಗಳ ತಡೆಯ ನಂತರ ಪ್ರತಿಧ್ವನಿಸುವಂತೆ ಮಾಡಿ, ವ್ಯಕ್ತಿ ಮಾತಾಡದಂತೆ ತಡೆಯೊಡ್ಡುವ ಸಂಶೋಧನೆ ಮಾಡಿದ್ದಕ್ಕೆ. ಕಜುತುಕಾ ಕುರಿಹಾರ ಮತ್ತು ಕೋಜಿ ಸುಕಾಡ (ಜಪಾನ್) ಅವರಿಗೆ.
*'''ನರಶಾಸ್ತ್ರ ಪ್ರಶಸ್ತಿ'''. ಸತ್ತ ಸಾಲ್ಮನ್ ಮೀನೂ ಸೇರಿದಂತೆ ಎಲ್ಲಾದರೂ, ಮಿದುಳಿನ ಚಟುವಟಿಕೆ ಗಮನಿಸುವದುಕ್ಕಾಗಿ, ಸಂಕೀರ್ಣ ಉಪಕರಣಗಳನ್ನು ಮತ್ತು ಸರಳ ಲೆಕ್ಕಗಳನ್ನು ರೂಪಿಸಿದ್ದಕ್ಕೆ, ಕ್ರೇಗ್ ಬೆನೆಟ್ ಅಬಿಗೇಲ್ ಬೇರ್ಡ್, ಮೈಕೇಲ್ ಮಿಲ್ಲರ್ ಮತ್ತು ಜಾರ್ಜ್ ವೋಲ್ಫೋರ್ಡ್ (ಅಮೆರಿಕಾ ಸಂಯುಕ್ತ ಸಂಸ್ಥಾನ).
*ರಸಾಯನ ಶಾಸ್ತ್ರ : ಸ್ವೀಡನ್ನಿನ ಆಂಡರ್ಸ್ಲಾವ್ ನಗರದ ಕೆಲವು ಮನೆಗಳ ಜನರ ಕೂದಲು ಹಸಿರಾಗುವ ಕಾರಣ ಕಂಡುಹಿಡಿದ್ದಕ್ಕೆ, ಜೊಹಾನ್ ಪೀಟರ್ಸನ್ (ಸ್ವೀಡನ್) ಅವರಿಗೆ.
*ಸಾಹಿತ್ಯ ಪ್ರಶಸ್ತಿ : ವರದಿಗಳ ಬಗ್ಗೆ ವರದಿಯ ವರದಿಗಳನ್ನು ತಯಾರು ಮಾಡುವ ಬಗ್ಗೆ ಸಲಹೆ ನೀಡುವ ವರದಿಗಳ ಬಗೆಗಿನ ವರದಿಗಳ ವರದಿಯನ್ನು ನೀಡಿದ್ದಕ್ಕೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಕೌಂಟಬಿಲಿಟಿ ಕಚೇರಿಗೆ.
*ಭೌತಶಾಸ್ತ್ರ ಪ್ರಶಸ್ತಿ : ವ್ಯಕ್ತಿಯೊಬ್ಬ/ಳು ಕಟ್ಟಿಕೊಳ್ಳುವ ಕುದುರೆಬಾಲದ ಜಡೆಯ ಆಕಾರ ಮತ್ತು ಚಲನೆಯನ್ನು ನಿರ್ಧರಿಸುವ ಬಲಗಳ ತುಲನೆಯನ್ನು ಲೆಕ್ಕಿಸಿದ್ದಕ್ಕಾಗಿ, ಜೋಸೆಫ್ ಕೆಲ್ಲರ್ (ಅಮೆರಿಕಾ) ರೇಮಂಡ್ ಗೋಲ್ಡ್ಸ್ಟೀನ್ (ಅಮೆರಿಕಾ ಮತ್ತು ಇಂಗ್ಲೆಂಡ್), ಪ್ಯಾಟ್ರಿಕ್ ವಾರೆನ್ ಮತ್ತು ರಾಬಿನ್ ಬಾಲ್ (ಇಂಗ್ಲೆಂಡ್) ಇವರಿಗೆ.
*ದ್ರವಚಲನ ಶಾಸ್ತ್ರ ಪ್ರಶಸ್ತಿ: ವ್ಯಕ್ತಿಯೊಬ್ಬ ಕಾಫಿ ಕಪ್ಪನ್ನು ಕೈಯಲ್ಲಿ ಹಿಡಿದು ನಡೆದಾಗ ಏನಾಗುತ್ತದೆ ಎಂದು ತಿಳಿಯಲು ದ್ರವದ ಎರಚುವಿಕೆಯ ಚಲನೆಯನ್ನು ಅಭ್ಯಾಸ ಮಾಡಿದ ಸಂಶೋಧನೆಗೆ, ರೌಸ್ಲನ್ ಕ್ರೆಚೆಟ್ನಿಕೋವ್(ಅಮೆರಿಕಾ, ರಷಿಯಾ ಮತ್ತು ಕೆನಡಾ) ಮತ್ತು ಹಾನ್ಸ್ ಮೇಯರ್ (ಅಮೆರಿಕಾ) ಅವರಿಗೆ
*ದೇಹ ರಚನಾಶಾಸ್ತ್ರ ಪ್ರಶಸ್ತಿ: ಚಿಂಪಾಂಜಿಗಳು ಬೇರೆ ಚಿಂಪಾಂಜಿಗಳ ಹಿಂಭಾಗದ ಚಿತ್ರ ನೋಡುವುದರಿಂದಲೇ ಅವನ್ನು ಗುರುತು ಹಿಡಿಯಬಲ್ಲುವು ಎನ್ನುವ ಸಂಶೋಧನೆಗೆ ಫ಼್ರಾನ್ಸ್ ಡಿ ವಾಲ್ (ನೆದರ್ಲ್ಯಾಂಡ್ ಮತ್ತು ಅಮೆರಿಕಾ) ಜೆನ್ನಿಫರ್ ಪೊಕೊರ್ನಿ (ಅಮೆರಿಕಾ) ಇವರಿಗೆ.
*ಔಷಧಿ ಶಾಸ್ತ್ರ ಪ್ರಶಸ್ತಿ: ಕೊಲೋನೊಸ್ಕೋಪಿ ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿಗಳ ಹೊಟ್ಟೆ ಒಡೆದುಹೋಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದಾದ ಸಲಹೆಗಳನ್ನು ವೈದ್ಯರಿಗೆ ನೀಡಿದ್ದಕ್ಕೆ, ಇಮಾನ್ಯುಯೆಲ್ ಬೆನ್-ಸೌಸನ್ ಮತ್ತು ಮೈಕೇಲ್ ಅಂಟಾನಿಯೆಟ್ಟಿ (ಫ಼್ರಾನ್ಸ್) ಅವರಿಗೆ.
*ವಿಶೇಷ ಪ್ರಶಸ್ತಿ : ೧೯೯೧ರ ತಪ್ಪೊಂದನ್ನು ತಿದ್ದಿಕೊಳ್ಳುವ ಸಲುವಾಗಿ, ಈಗ ಜೋಸೆಫ್ ಕೆಲ್ಲರ್ ಅವರಿಗೆ ಮತ್ತೆ ಪ್ರಶಸ್ತಿ ನೀಡಲಾಗುತ್ತಿದೆ. ಟೀ ಹರಿಯದಂತಿರುವ ಟೀ ಪಾಟ್ ಕೊಳವೆಯನ್ನು ಮಾಡಿದ್ದಕ್ಕಾಗಿ.. ಈ ಮೂಲಕ ಅವರು ೧೯೯೯ ಮತ್ತು ೨೦೧೨ ಎರಡು ಬಾರಿ ಇಗ್ನೊಬಲ್ ಪ್ರಶಸ್ತಿ ಗಳಿಸುತ್ತಿದ್ದಾರೆ.
==೨೦೧೦ ರ ಇಗ್ನೊಬಲ್ ಪ್ರಶಸ್ತಿಗಳ ವಿಜೇತರು ==
*ಇಂಜಿನಿಯರಿಂಗ್ ಪ್ರಶಸ್ತಿ : ಕರೀನಾ ಅಸೆವೆಡೋ ಮತ್ತು ಅಗ್ನೆಸ್ ರೋಕಾ ಲಂಡನ್ ಜೂಯಲಾಜಿಕಲ್ ಸೊಸೈಟಿ. ಮತ್ತು ಡಿಅನೆ ಗೆಂಡ್ರೋನ್ : ನೀಲಿ ತಿಮಿಂಗಲಗಳ ಮೂಗಿನ ಸಿಂಬಳ ಸಂಗ್ರಹಿಸಲು ರಿಮೋಟ್ ಕಂಟ್ರೋಲ್ ಇರುವ ಹೆಲಿಕಾಪ್ಟರ್ ಬಳಸುವ ತಂತ್ರಜ್ಞಾನ ರೂಪಿಸಿದ್ದಕ್ಕೆ.
*ವೈದ್ಯಕೀಯ ಪ್ರಶಸ್ತಿ : ಸೈಮೊನ್ ರೈಟ್ ವೆಲ್ಡ್, ಅಮ್ಸ್ ಟರ್ ಡ್ಯಾಮ್ ವಿಶ್ವವಿದ್ಯಾನಿಲಯ. ಮತ್ತು ಇಲಿಯಾ ವ್ಯಾನ್ ಬೀಸ್ಟ್ ಟಿಲ್ಬರ್ಗ್ ವಿಶ್ವವಿದ್ಯಾನಿಲಯ : ರೋಲರ್ ಕೋಸ್ಟರ್ ಮೇಲಿನ ಪಯಣದಿಂದ ಅಸ್ತಮಾವನ್ನು ಗುಣಪಡಿಸಬಹುದೆಂಬ ಸಂಶೋಧನೆಗೆ
*ಸಾರಿಗೆ ಯೋಜನೆ ಪ್ರಶಸ್ತಿ : ತೊಷಿಯಾಕು ನಾಕಾಗಾಕಿ, ಅತ್ಸುಶಿ ಟೆರೋ, ಸೀಜಿ ಟಕಾಗಿ, ಟೆತ್ಸು ಸೈಗುಸಾ,ಕೆಂಟಾರೋ ಇಟೋ, ಕೆಂಜಿ ಯೂಮಿಕಿ, ರಯೋ ಕೊಬಾಯಾಶಿ, ಡಾನ್ ಬೆಬ್ಬರ್, ಮಾರ್ಕ್ ಫ್ರಿಕರ್, ಮರದ ಮೇಲೆ ಬೆಳೆಯುವ ಬೂಸ್ಟಿನ ಮಾದರಿ ಅನುಸರಿಸಿ ಅತ್ಯಂತ ಲಾಭದಾಯಕವಾದ ರೈಲು ಮಾರ್ಗದ ಯೋಜನೆ ಹಾಕಬಹುದೆಂದು ತೋರಿಸಿಕೊಟ್ಟಿದ್ದಕ್ಕೆ
*ಭೌತಶಾಸ್ತ್ರ ಪ್ರಶಸ್ತಿ: ಲಿಯಾನ್ ಪಾರ್ಕಿನ್, ಶೀಲಾ ವಿಲಿಯಮ್ಸ್ ಮತ್ತು ಪ್ಯಾಟ್ರಿಷಿಯಾ ಪ್ರೀಸ್ಟ್, ಒಟಾಗೋ ವಿಶ್ವವಿದ್ಯಾನಿಲಯ ನ್ಯೂಜಿಲ್ಯಾಂಡ್. : ಹಿಮದಾರಿಗಳಲ್ಲಿ ನಡೆದಾಡುವ ಜನ ಚಳಿಗಾಲದಲ್ಲಿ ತಮ್ಮ ಶೂ ಮೇಲುಗಡೆ ಮತ್ತೊಂದು ಸಾಕ್ಸ್ ಧರಿಸಿದರೆ ಜಾರಿ ಬೀಳುವುದು ಕಮ್ಮಿಯಾಗುತ್ತದೆಂದು ತೋರಿಸಿಕೊಟ್ಟಿದ್ದಕ್ಕಾಗಿ.
*ಶಾಂತಿ ಪ್ರಶಸ್ತಿ: ರಿಚರ್ಡ್ ಸ್ಟೀಫನ್, ಜಾನ್ ಅಟ್ಕಿನ್ಸ್ ಮತ್ತು ಆಂಡ್ರ್ಯೂ ಕಿಂಗ್ ಸ್ಟನ್, ಕೀಲೆ ವಿಶ್ವವಿದ್ಯಾನಿಲಯ, ಹರಕೆ ಹೊರುವುದು ನೋವನ್ನು ಕಡಿಮೆ ಮಾಡುತ್ತದೆ ಎಂಬ ಜನಪ್ರಿಯ ನಂಬಿಕೆ ನಿಜ ಎಂದು ಪ್ರಮಾಣೀಕರಿಸಿದ್ದಕ್ಕಾಗಿ.
*ಸಾರ್ವಜನಿಕ ಆರೋಗ್ಯ ಪ್ರಶಸ್ತಿ: ಮಾನ್ಯುಯೆಲ್ ಬಾರ್ಬಿಟೋ, ಚಾರ್ಲ್ಸ್ ಮಾಥ್ಯೂ, ಲಾರಿ ಟೈಲರ್, ಮೇರಿಲ್ಯಾಂಡ್ ಅಮೆರಿಕಾ ಸಂಯುಕ್ತ ಸಂಸ್ಥಾನ. ಪ್ರಯೋಗದ ಮೂಲಕ ಬ್ಯಾಕ್ಟೀರಿಯಾಗಳು ಗಡ್ಡ ಬಿಟ್ಟ ವಿಜ್ಯಾನಿಗಳ ಗಡ್ಡದಲ್ಲಿರುತ್ತವೆ ಎಂದು ತೋರಿಸಿಕೊಟ್ಟಿದ್ದಕ್ಕಾಗಿ
*ಅರ್ಥಶಾಸ್ತ್ರ ಪ್ರಶಸ್ತಿ: ಗೋಲ್ಡ್ ಮ್ಯಾನ್ ಸಾಶ್, ಎ ಐ ಜಿ, ಲೆಹ್ಮಾನ್ ಬ್ರದರ್ಸ್, ಬೀರ್ ಸ್ಟೀರ್ನ್ಸ್, ಮೆರಿಲ್ ಲಿಂಚ್, ಮತ್ತು ಮಾಗ್ನೇಟರ್ ನ ಉನ್ನತ ಅಧಿಕಾರಿಗಳು ಮತ್ತು ನಿರ್ದೇಶಕರುಗಳಿಗೆ, ಲಾಭ ಹೆಚ್ಚು ಮಾಡಿ, ರಿಸ್ಕ್ ಕಡಿಮೆ ಮಾಡುವ ರೀತಿಯಲ್ಲಿ ಹಣ ಹೂಡಿಕೆಯ ಹೊಸಬಗೆಗಳನ್ನು ಸಂಶೋಧಿಸಿದ್ದಕ್ಕೆ
*ರಸಾಯನ ಶಾಸ್ತ್ರ ಪ್ರಶಸ್ತಿ : ಎರಿಕ್ ಅಡಮ್ಸ್, ಸ್ಕಾಟ್ ಸೊಕೊಲೊಫ್ ಸ್ಕಿ, ಸ್ಟೀಫನ್ ಮಸುಟಾನಿ ಮತ್ತು ಬ್ರಿಟಿಷ್ ಪೆಟ್ರೋಲಿಯಮ್ : ನೀರು ಮತ್ತು ಪೆಟ್ರೋಲ್ ಬೆರೆಯುವುದಿಲ್ಲವೆನ್ನುವ ಹಳೆಯ ನಂಬಿಕೆ ಸುಳ್ಳೆಂದು ತೋರಿಸಿದ್ದಕ್ಕೆ.
*ಮ್ಯಾನೇಜ್ ಮೆಂಟ್ ಪ್ರಶಸ್ತಿ: ಅಲೆಸಾಂಡ್ರೋ ಪ್ಲುಚಿನೋ, ಆಂಡ್ರಿಯಾ ರಾಪಿಸಾರ್ಡಾ ಮತ್ತು ಸೆಸಾರೇ ಗಾರೋಫಾಲೋ, ಇಟಲಿ, ಸಂಸ್ಥೆಯೊಂದರಲ್ಲಿ ಪ್ರಮೋಷನ್ ನೀಡಲು ಯಾವುದೇ ನೀತಿ ಅನುಸರಿಸದೆ, ಸುಮ್ಮನೆ ಪದೋನ್ನತಿ ನೀಡುವುದರಿಂದ ಸಂಸ್ಥೆಗಳ ಚಾಕಚಕ್ಯತೆ ಹೆಚ್ಚುತ್ತದೆ ಎಂದು ಗಣಿತೀಯವಾಗಿ ನಿರೂಪಿಸಿದ್ದಕ್ಕಾಗಿ
*ಜೀವಶಾಸ್ತ್ರ ವಿಭಾಗ: ಲಿಬಿಯವೋ ಝಾಂಗ್, ಮಿನ್ ಟಾನ್, ಝು, ಜಿಯಾನ್ ಪಿಂಗ್ ಯೆ, ತಿಯು ಹೋಂಗ್, ಶಾನ್ಯಿ ಝೂ, ಶುಯಿ ಝಾಂಗ್, ಚೀನಾ ಮತ್ತು ಗರೆತ್ ಜೋನ್ಸ್, ಬಾವಲಿಗಳ ಒಂದು ಬಗೆಯಲ್ಲಿ ಮುಖಮೈಥುನದಿಂದ ಮಿಥುನದ ಸಮಯ ಹೆಚ್ಚಾಗುತ್ತದೆಂಬ ಸಂಶೋಧನೆಗೆ
==ಮೇಕೆ ಮಾನವ'ನಿಗೆ ಐಜಿ ನೊಬೆಲ್ ಪ್ರಶಸ್ತಿ-೨೦೧೬==
ಒಟ್ಟಾವೋ, ಸೆ.25- ಜಗತ್ತಿನಲ್ಲಿ ಮನುಷ್ಯ ಅತೀ ಬುದ್ಧಿವಂತ ಪ್ರಾಣಿ. ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟವಾದ ತಂತ್ರಜ್ಞಾನ ಬೆಳೆಸಿಕೊಂಡು ಐತಿಹಾಸಿಕ ಸಾಧನೆಗೈದು ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪ್ರಾಣಿಗಳ ರೀತಿಯಲ್ಲಿ ಗುಣ-ನಡವಳಿಕೆಗಳನ್ನು ರೂಪಿಸಿಕೊಂಡು ಐಜಿ ನೊಬೆಲ್ ಪುರಸ್ಕಾರಕ್ಕೆ ಭಾಜನವಾಗಿದ್ದಾನೆ. ಸ್ವಿಟ್ಜರ್ಲ್ಯಾಂಡ್ನ ಥಾಮಸ್ ಎಂಬ ವ್ಯಕ್ತಿಯು ಮೇಕೆಗಳ ರೀತಿಯಲ್ಲಿ ಬದುಕುತ್ತಿದ್ದಾನೆ. ಈತ ಹೆಚ್ಚಿನ ಸಮಯವನ್ನು ಮೇಕೆಗಳ ಜತೆ ಕಳೆಯುತ್ತಿದ್ದಾನೆ, ಮೇಕೆಗಳಂತೆ ನಡೆದಾಡುತ್ತಾನೆ. ಅದರ ಜತೆಯೇ ಹುಲ್ಲು ತಿನ್ನುತ್ತಾನೆ. ಅವುಗಳಂತೆ ನಡೆದಾಡಲು ಕೃತಕ ಕಾಲುಗಳನ್ನು ಅಳವಡಿಸಿಕೊಂಡು ಅವುಗಳ ಜತೆ ಬೆಟ್ಟ-ಗುಡ್ಡಗಳಲ್ಲಿ ನಡೆದಾಡುತ್ತಾನೆ.
<ref>{{Cite web |url=http://m.dailyhunt.in/news/india/kannada/eesanje-epaper-eesanje/meke+maanava+nige+aiji+nobel+prashasti-newsid-58324948 |title=ಮೇಕೆ ಮಾನವ'ನಿಗೆ ಐಜಿ |access-date=2016-10-05 |archive-date=2021-11-29 |archive-url=https://web.archive.org/web/20211129123730/https://m.dailyhunt.in/news/india/kannada/eesanje-epaper-eesanje/meke%20maanava%20nige%20aiji%20nobel%20prashasti-newsid-58324948 |url-status=dead }}</ref>
==ನೋಡಿ==
*[[ನೊಬೆಲ್ ಪ್ರಶಸ್ತಿ]]
== ಉಲ್ಲೇಖಗಳು ==
{{ಉಲ್ಲೇಖಗಳು}}
{{Refimprove}}
{{Interwikineeded}}
[[ವರ್ಗ:ಪ್ರಶಸ್ತಿಗಳು]]
s4enwon82glaeyvu40a2sc5xpzwvk65
ಟೆಂಪ್ಲೇಟು:Infobox settlement/areadisp
10
45324
1378246
960847
2025-09-24T14:02:48Z
en>Hike395
0
implement [[Template:Infobox/areadisp/]] in Lua, passing argument to {{tl|Convert}}
1378246
wikitext
text/x-wiki
<includeonly>{{#invoke:ConvertIB|area}}</includeonly><noinclude>
{{documentation}}
</noinclude>
ssk9xtxciqyfcjp55grw02okglo90be
1378247
1378246
2026-08-03T07:17:10Z
A826
72368
೧ revisions imported from [[:en:Template:Infobox_settlement/areadisp]]
1378246
wikitext
text/x-wiki
<includeonly>{{#invoke:ConvertIB|area}}</includeonly><noinclude>
{{documentation}}
</noinclude>
ssk9xtxciqyfcjp55grw02okglo90be
ಟೆಂಪ್ಲೇಟು:Infobox settlement/densdisp
10
45325
1378248
1209827
2025-09-28T01:11:02Z
en>Hike395
0
convert to Lua, computing significant figures correctly, calling [[Template:Convert]]
1378248
wikitext
text/x-wiki
<includeonly>{{#invoke:ConvertIB|density}}</includeonly><noinclude>
{{documentation}}
</noinclude>
q5m7iugxijnh3rv6jucbvcon7hzui0v
1378249
1378248
2026-08-03T07:17:11Z
A826
72368
೧ revisions imported from [[:en:Template:Infobox_settlement/densdisp]]
1378248
wikitext
text/x-wiki
<includeonly>{{#invoke:ConvertIB|density}}</includeonly><noinclude>
{{documentation}}
</noinclude>
q5m7iugxijnh3rv6jucbvcon7hzui0v
ಟೆಂಪ್ಲೇಟು:Uses Infobox settlement
10
45329
1378274
1302404
2025-11-02T06:57:45Z
en>Zackmann08
0
updating to include the {{{wrapped}}} parameter
1378274
wikitext
text/x-wiki
{{#ifeq:{{NAMESPACE}}|Template
| {{Ombox
| type = style
| image = [[File:Ambox warning yellow.svg|40x40px|alt=|link=]]
| text = '''This template is a customized [[Wikipedia:Wrapper templates|wrapper]] for {{tl|Infobox settlement}}'''. Any field from {{tld|Infobox settlement}} can work{{#if:{{{wrapped|}}}|| so long as it is added to this template first}}. It will also emit the same [[hCard]] and [[Geo (microformat)|Geo]] [[microformat]]s as {{tld|Infobox settlement}}. Questions? Just ask [[Template talk:{{BASEPAGENAME}}|here]] or over at [[Template talk:Infobox settlement]].
}}<!--
-->{{#if:{{{main|}}}
| {{Ombox |text=This infobox wraps the [[Template:{{{main}}}|{{{main}}} template]]. See [[Template:{{{main}}}/doc]] for additional documentation.}}
}}<!--
--><includeonly>{{#ifeq:{{PAGENAME}}|{{BASEPAGENAME}} |[[Category:Templates calling Infobox settlement|{{Remove first word|{{PAGENAME}}}}]]}}</includeonly><!--
-->}}<noinclude>
{{Documentation}}
</noinclude>
lrknnnqp6u89ngnu13jtadfme3v3v76
1378275
1378274
2026-08-03T07:17:15Z
A826
72368
೧ revisions imported from [[:en:Template:Uses_Infobox_settlement]]
1378274
wikitext
text/x-wiki
{{#ifeq:{{NAMESPACE}}|Template
| {{Ombox
| type = style
| image = [[File:Ambox warning yellow.svg|40x40px|alt=|link=]]
| text = '''This template is a customized [[Wikipedia:Wrapper templates|wrapper]] for {{tl|Infobox settlement}}'''. Any field from {{tld|Infobox settlement}} can work{{#if:{{{wrapped|}}}|| so long as it is added to this template first}}. It will also emit the same [[hCard]] and [[Geo (microformat)|Geo]] [[microformat]]s as {{tld|Infobox settlement}}. Questions? Just ask [[Template talk:{{BASEPAGENAME}}|here]] or over at [[Template talk:Infobox settlement]].
}}<!--
-->{{#if:{{{main|}}}
| {{Ombox |text=This infobox wraps the [[Template:{{{main}}}|{{{main}}} template]]. See [[Template:{{{main}}}/doc]] for additional documentation.}}
}}<!--
--><includeonly>{{#ifeq:{{PAGENAME}}|{{BASEPAGENAME}} |[[Category:Templates calling Infobox settlement|{{Remove first word|{{PAGENAME}}}}]]}}</includeonly><!--
-->}}<noinclude>
{{Documentation}}
</noinclude>
lrknnnqp6u89ngnu13jtadfme3v3v76
ಸದಸ್ಯರ ಚರ್ಚೆಪುಟ:Revi C.
3
48834
1378140
1378093
2026-08-02T14:23:00Z
Pathoschild
1185
global user pages ([[m:Synchbot|requested by Revi C.]])
1378140
wikitext
text/x-wiki
__NOINDEX__<div class="mw-content-ltr" lang="en" dir="ltr">[[File:Revi logo (pink).png|thumb|center|<span style="color:red">PLEASE DO NOT LEAVE MESSAGE HERE!</span>]]
'''<span style="color:red"> BEFORE YOU BLOCK MY ACCOUNT: IF MY EDIT SUMMARY INCLUDE PREFIX </span>''(Script)''<span style="color:red">, DON'T BLOCK ME, JUST TELL ME TO SLOW DOWN AT COMMONS' TALK PAGE. IT IS AN AUTOMATED SCRIPT BEING USED ON COMMONS TO MOVE FILES.</span>'''
Instead, please leave your message following site:
<br />
[[File:Wikidata-logo-en.svg|45px|link=d:User talk:Revi C.]] [[d:User talk:Revi C.]] for Wikidata (Interwiki links) stuff <!--(I am {{int:Group-sysop}} there)-->
<br />
[[File:Commons-logo.svg|45px|link=commons:User talk:Revi C.]] [[commons:User talk:Revi C.]] for renaming stuff or [[User:CommonsDelinker|CommonsDelinker]] action (I am {{int:Group-sysop}} there)
<br />
[[File:Wikimedia Community Logo optimized.svg|45px|link=m:User talk:Revi C.]] [[meta:User talk:Revi C.]] for other stuff (User right notification, revert message, etc...)
Messages left on this page may be reverted or moved without any response.</div>
5b8qtz4dnjnrhc9ts3mku14m3gujbq8
ಟೆಂಪ್ಲೇಟು:Infobox settlement/lengthdisp
10
51537
1378250
960855
2025-09-25T01:53:15Z
en>Hike395
0
convert to Lua
1378250
wikitext
text/x-wiki
<includeonly>{{#invoke:ConvertIB|length}}</includeonly><noinclude>
{{Documentation}}
</noinclude>
e768qsml1qirs0ewlz6hghb5njmo0hv
1378251
1378250
2026-08-03T07:17:11Z
A826
72368
೧ revisions imported from [[:en:Template:Infobox_settlement/lengthdisp]]
1378250
wikitext
text/x-wiki
<includeonly>{{#invoke:ConvertIB|length}}</includeonly><noinclude>
{{Documentation}}
</noinclude>
e768qsml1qirs0ewlz6hghb5njmo0hv
ಮಾಡ್ಯೂಲ್:Location map
828
56731
1378154
1377610
2026-08-02T13:43:59Z
en>Hike395
0
clean up relief code (DRY)
1378154
Scribunto
text/plain
require('strict')
local p = {}
local getArgs = require('Module:Arguments').getArgs
local function round(n, decimals)
local pow = 10^(decimals or 0)
return math.floor(n * pow + 0.5) / pow
end
function p.getMapParams(map, frame)
if not map then
error('The name of the location map definition to use must be specified', 2)
end
local moduletitle = mw.title.new('Module:Location map/data/' .. map)
if not moduletitle then
error(string.format('%q is not a valid name for a location map definition', map), 2)
elseif moduletitle.exists then
local mapData = mw.loadData('Module:Location map/data/' .. map)
return function(name, params)
if name == nil then
return 'Module:Location map/data/' .. map
elseif mapData[name] == nil then
return ''
elseif params then
return mw.message.newRawMessage(tostring(mapData[name]), unpack(params)):plain()
else
return mapData[name]
end
end
else
error('Unable to find the specified location map definition: "Module:Location map/data/' .. map .. '" does not exist', 2)
end
end
function p.data(frame, args, map)
if not args then
args = getArgs(frame, {frameOnly = true})
end
if not map then
map = p.getMapParams(args[1], frame)
end
local params = {}
for k,v in ipairs(args) do
if k > 2 then
params[k-2] = v
end
end
return map(args[2], #params ~= 0 and params)
end
local hemisphereMultipliers = {
longitude = { W = -1, w = -1, E = 1, e = 1 },
latitude = { S = -1, s = -1, N = 1, n = 1 }
}
local function decdeg(degrees, minutes, seconds, hemisphere, decimal, direction)
if decimal then
if degrees then
error('Decimal and DMS degrees cannot both be provided for ' .. direction, 2)
elseif minutes then
error('Minutes can only be provided with DMS degrees for ' .. direction, 2)
elseif seconds then
error('Seconds can only be provided with DMS degrees for ' .. direction, 2)
elseif hemisphere then
error('A hemisphere can only be provided with DMS degrees for ' .. direction, 2)
end
local retval = tonumber(decimal)
if retval then
return retval
end
error('The value "' .. decimal .. '" provided for ' .. direction .. ' is not valid', 2)
elseif seconds and not minutes then
error('Seconds were provided for ' .. direction .. ' without minutes also being provided', 2)
elseif not degrees then
if minutes then
error('Minutes were provided for ' .. direction .. ' without degrees also being provided', 2)
elseif hemisphere then
error('A hemisphere was provided for ' .. direction .. ' without degrees also being provided', 2)
end
return nil
end
decimal = tonumber(degrees)
if not decimal then
error('The degree value "' .. degrees .. '" provided for ' .. direction .. ' is not valid', 2)
elseif minutes and not tonumber(minutes) then
error('The minute value "' .. minutes .. '" provided for ' .. direction .. ' is not valid', 2)
elseif seconds and not tonumber(seconds) then
error('The second value "' .. seconds .. '" provided for ' .. direction .. ' is not valid', 2)
end
decimal = decimal + (minutes or 0)/60 + (seconds or 0)/3600
if hemisphere then
local multiplier = hemisphereMultipliers[direction][hemisphere]
if not multiplier then
error('The hemisphere "' .. hemisphere .. '" provided for ' .. direction .. ' is not valid', 2)
end
decimal = decimal * multiplier
end
return decimal
end
-- Finds a parameter in a transclusion of {{Coord}}.
local function coord2text(para,coord) -- this should be changed for languages which do not use Arabic numerals or the degree sign
local lat, long = mw.ustring.match(coord,'<span class="p%-latitude latitude">([^<]+)</span><span class="p%-longitude longitude">([^<]+)</span>')
if lat then
return tonumber(para == 'longitude' and long or lat)
end
local result = mw.text.split(mw.ustring.match(coord,'%-?[%.%d]+°[NS] %-?[%.%d]+°[EW]') or '', '[ °]')
if para == 'longitude' then result = {result[3], result[4]} end
if not tonumber(result[1]) or not result[2] then
mw.log('Malformed coordinates value')
mw.logObject(para, 'para')
mw.logObject(coord, 'coord')
return error('Malformed coordinates value', 2)
end
return tonumber(result[1]) * hemisphereMultipliers[para][result[2]]
end
-- effectively make removeBlanks false for caption and maplink, and true for everything else
-- if useWikidata is present but blank, convert it to false instead of nil
-- p.top, p.bottom, and their callers need to use this
function p.valueFunc(key, value)
if value then
value = mw.text.trim(value)
end
if value ~= '' or key == 'caption' or key == 'maplink' then
return value
elseif key == 'useWikidata' then
return false
end
end
local function getContainerImage(args, map)
if args.AlternativeMap then
return args.AlternativeMap
elseif args.relief then
local digits = mw.ustring.match(args.relief,'^[1-9][0-9]?$') -- image1 to image99
if digits then
local imageDigits = map('image' .. digits)
if imageDigits ~= '' then return imageDigits end
end
local yesNo = require('Module:Yesno')
if yesNo(args.relief,true) then
local image1 = map('image1')
if image1 ~= '' then return image1 end
end
end
return map('image')
end
function p.top(frame, args, map)
if not args then
args = getArgs(frame, {frameOnly = true, valueFunc = p.valueFunc})
end
if not map then
map = p.getMapParams(args[1], frame)
end
local width
local default_as_number = tonumber(mw.ustring.match(tostring(args.default_width),"%d*"))
if not args.width then
width = round((default_as_number or 240) * (tonumber(map('defaultscale')) or 1))
elseif mw.ustring.sub(args.width, -2) == 'px' then
width = mw.ustring.sub(args.width, 1, -3)
else
width = args.width
end
local width_as_number = tonumber(mw.ustring.match(tostring(width),"%d*")) or 0;
if width_as_number == 0 then
-- check to see if width is junk. If it is, then use default calculation
width = round((default_as_number or 240) * (tonumber(map('defaultscale')) or 1))
width_as_number = tonumber(mw.ustring.match(tostring(width),"%d*")) or 0;
end
if args.max_width ~= "" and args.max_width ~= nil then
-- check to see if width bigger than max_width
local max_as_number = tonumber(mw.ustring.match(args.max_width,"%d*")) or 0;
if width_as_number>max_as_number and max_as_number>0 then
width = args.max_width;
end
end
local retval = frame:extensionTag{name = 'templatestyles', args = {src = 'Module:Location map/styles.css'}}
if args.float == 'center' then
retval = retval .. '<div class="center">'
end
if args.caption and args.caption ~= '' and args.border ~= 'infobox' then
retval = retval .. '<div class="locmap noresize thumb '
if args.float == '"left"' or args.float == 'left' then
retval = retval .. 'floatleft'
elseif args.float == '"center"' or args.float == 'center' or args.float == '"none"' or args.float == 'none' then
retval = retval .. 'tnone'
else
retval = retval .. 'floatright'
end
retval = retval .. '"><div class="thumbinner" style="width:' .. (width + 2) .. 'px'
if args.border == 'none' then
retval = retval .. ';border:none'
elseif args.border then
retval = retval .. ';border-color:' .. args.border
end
retval = retval .. '"><div style="position:relative;width:' .. width .. 'px' .. (args.border ~= 'none' and ';border:1px solid lightgray">' or '">')
else
retval = retval .. '<div class="locmap" style="width:' .. width .. 'px;'
if args.float == '"left"' or args.float == 'left' then
retval = retval .. 'float:left;clear:left'
elseif args.float == '"center"' or args.float == 'center' then
retval = retval .. 'float:none;clear:both;margin-left:auto;margin-right:auto'
elseif args.float == '"none"' or args.float == 'none' then
retval = retval .. 'float:none;clear:none'
else
retval = retval .. 'float:right;clear:right'
end
retval = retval .. '"><div style="width:' .. width .. 'px;padding:0"><div style="position:relative;width:' .. width .. 'px">'
end
local image = getContainerImage(args, map)
local currentTitle = mw.title.getCurrentTitle()
retval = string.format(
'%s[[File:%s|%spx|%s%s|class=notpageimage noviewer]]',
retval,
image,
width,
args.alt or ((args.label or currentTitle.text) .. ' is located in ' .. map('name')),
args.maplink and ('|link=' .. args.maplink) or ''
)
if args.caption and args.caption ~= '' then
if (currentTitle.namespace == 0) and mw.ustring.find(args.caption, '##') then
retval = retval .. '[[Category:Pages using location map with a double number sign in the caption]]'
end
end
if args.overlay_image then
return retval .. '<div style="position:absolute;top:0;left:0">[[File:' .. args.overlay_image .. '|' .. width .. 'px|class=notpageimage noviewer]]</div>'
else
return retval
end
end
function p.bottom(frame, args, map)
if not args then
args = getArgs(frame, {frameOnly = true, valueFunc = p.valueFunc})
end
if not map then
map = p.getMapParams(args[1], frame)
end
local retval = '</div>'
local currentTitle = mw.title.getCurrentTitle()
if not args.caption or args.border == 'infobox' then
if args.border then
retval = retval .. '<div style="padding-top:0.2em">'
else
retval = retval .. '<div style="font-size:91%;padding-top:3px">'
end
retval = retval
.. (args.caption or (args.label or currentTitle.text) .. ' (' .. map('name') .. ')')
.. '</div>'
elseif args.caption ~= '' then
-- This is not the pipe trick. We're creating a link with no text on purpose, so that CSS can give us a nice image
retval = retval .. '<div class="thumbcaption"><div class="magnify">[[:File:' .. getContainerImage(args, map) .. '| ]]</div>' .. args.caption .. '</div>'
end
if args.switcherLabel then
retval = retval .. '<span class="switcher-label" style="display:none">' .. args.switcherLabel .. '</span>'
elseif args.autoSwitcherLabel then
retval = retval .. '<span class="switcher-label" style="display:none">Show map of ' .. map('name') .. '</span>'
end
retval = retval .. '</div></div>'
if args.caption_undefined then
mw.log('Removed parameter caption_undefined used.')
local parent = frame:getParent()
if parent then
mw.log('Parent is ' .. parent:getTitle())
end
mw.logObject(args, 'args')
if currentTitle.namespace == 0 then
retval = retval .. '[[Category:Location maps with removed parameters|caption_undefined]]'
end
end
if map('skew') ~= '' or map('lat_skew') ~= '' or map('crosses180') ~= '' or map('type') ~= '' then
mw.log('Removed parameter used in map definition ' .. map())
if currentTitle.namespace == 0 then
local key = (map('skew') ~= '' and 'skew' or '') ..
(map('lat_skew') ~= '' and 'lat_skew' or '') ..
(map('crosses180') ~= '' and 'crosses180' or '') ..
(map('type') ~= '' and 'type' or '')
retval = retval .. '[[Category:Location maps with removed parameters|' .. key .. ' ]]'
end
end
if string.find(map('name'), '|', 1, true) then
mw.log('Pipe used in name of map definition ' .. map())
if currentTitle.namespace == 0 then
retval = retval .. '[[Category:Location maps with a name containing a pipe]]'
end
end
if args.float == 'center' then
retval = retval .. '</div>'
end
return retval
end
local function markOuterDiv(x, y, imageDiv, labelDiv, label_size)
return mw.html.create('div')
:addClass('od')
:addClass('notheme') -- T236137
:cssText('top:' .. round(y, 3) .. '%;left:' .. round(x, 3) .. '%;font-size:' .. label_size .. '%')
:node(imageDiv)
:node(labelDiv)
end
local function markImageDiv(mark, marksize, label, link, alt, title)
local builder = mw.html.create('div')
:addClass('id')
:cssText('left:-' .. round(marksize / 2) .. 'px;top:-' .. round(marksize / 2) .. 'px')
:attr('title', title)
if marksize ~= 0 then
builder:wikitext(string.format(
'[[File:%s|%dx%dpx|%s|link=%s%s|class=notpageimage noviewer]]',
mark,
marksize,
marksize,
label,
link,
alt and ('|alt=' .. alt) or ''
))
end
return builder
end
local function markLabelDiv(label, label_size, label_width, position, background, x, marksize)
if tonumber(label_size) == 0 then
return mw.html.create('div'):addClass('l0'):wikitext(label)
end
local builder = mw.html.create('div')
:cssText('width:' .. label_width .. 'em')
local distance = round(marksize / 2 + 1)
if position == 'top' then -- specified top
builder:addClass('pv'):cssText('bottom:' .. distance .. 'px;left:' .. (-label_width / 2) .. 'em')
elseif position == 'bottom' then -- specified bottom
builder:addClass('pv'):cssText('top:' .. distance .. 'px;left:' .. (-label_width / 2) .. 'em')
elseif position == 'left' or (tonumber(x) > 70 and position ~= 'right') then -- specified left or autodetected to left
builder:addClass('pl'):cssText('right:' .. distance .. 'px')
else -- specified right or autodetected to right
builder:addClass('pr'):cssText('left:' .. distance .. 'px')
end
builder = builder:tag('div')
:wikitext(label)
if background then
builder:cssText('background-color:' .. background)
end
return builder:done()
end
local function getX(longitude, left, right)
local width = (right - left) % 360
if width == 0 then
width = 360
end
local distanceFromLeft = (longitude - left) % 360
-- the distance needed past the map to the right equals distanceFromLeft - width. the distance needed past the map to the left equals 360 - distanceFromLeft. to minimize page stretching, go whichever way is shorter
if distanceFromLeft - width / 2 >= 180 then
distanceFromLeft = distanceFromLeft - 360
end
return 100 * distanceFromLeft / width
end
local function getY(latitude, top, bottom)
return 100 * (top - latitude) / (top - bottom)
end
function p.mark(frame, args, map)
if not args then
args = getArgs(frame, {wrappers = 'Template:Location map~'})
end
local mapnames = {}
if not map then
if args[1] then
map = {}
for mapname in mw.text.gsplit(args[1], '#', true) do
map[#map + 1] = p.getMapParams(mw.ustring.gsub(mapname, '^%s*(.-)%s*$', '%1'), frame)
mapnames[#mapnames + 1] = mapname
end
if #map == 1 then map = map[1] end
else
map = p.getMapParams('World', frame)
args[1] = 'World'
end
end
if type(map) == 'table' then
local outputs = {}
local oldargs = args[1]
for k,v in ipairs(map) do
args[1] = mapnames[k]
outputs[k] = tostring(p.mark(frame, args, v))
end
args[1] = oldargs
return table.concat(outputs, '#PlaceList#') .. '#PlaceList#'
end
local x, y, longitude, latitude
longitude = decdeg(args.lon_deg, args.lon_min, args.lon_sec, args.lon_dir, args.long, 'longitude')
latitude = decdeg(args.lat_deg, args.lat_min, args.lat_sec, args.lat_dir, args.lat, 'latitude')
if args.excludefrom then
-- If this mark is to be excluded from certain maps entirely (useful in the context of multiple maps)
for exclusionmap in mw.text.gsplit(args.excludefrom, '#', true) do
-- Check if this map is excluded. If so, return an empty string.
if args[1] == exclusionmap then
return ''
end
end
end
local builder = mw.html.create()
local currentTitle = mw.title.getCurrentTitle()
if args.coordinates then
-- Temporarily removed to facilitate infobox conversion. See [[Wikipedia:Coordinates in infoboxes]]
-- if longitude or latitude then
-- error('Coordinates from [[Module:Coordinates]] and individual coordinates cannot both be provided')
-- end
longitude = coord2text('longitude', args.coordinates)
latitude = coord2text('latitude', args.coordinates)
elseif not longitude and not latitude and args.useWikidata then
-- If they didn't provide either coordinate, try Wikidata. If they provided one but not the other, don't.
local entity = mw.wikibase.getEntity()
if entity and entity.claims and entity.claims.P625 and entity.claims.P625[1].mainsnak.snaktype == 'value' then
local value = entity.claims.P625[1].mainsnak.datavalue.value
longitude, latitude = value.longitude, value.latitude
end
if args.link and (currentTitle.namespace == 0) then
builder:wikitext('[[Category:Location maps with linked markers with coordinates from Wikidata]]')
end
end
if not longitude then
error('No value was provided for longitude')
elseif not latitude then
error('No value was provided for latitude')
end
if currentTitle.namespace > 0 then
if (not args.lon_deg) ~= (not args.lat_deg) then
builder:wikitext('[[Category:Location maps with different longitude and latitude precisions|Degrees]]')
elseif (not args.lon_min) ~= (not args.lat_min) then
builder:wikitext('[[Category:Location maps with different longitude and latitude precisions|Minutes]]')
elseif (not args.lon_sec) ~= (not args.lat_sec) then
builder:wikitext('[[Category:Location maps with different longitude and latitude precisions|Seconds]]')
elseif (not args.lon_dir) ~= (not args.lat_dir) then
builder:wikitext('[[Category:Location maps with different longitude and latitude precisions|Hemisphere]]')
elseif (not args.long) ~= (not args.lat) then
builder:wikitext('[[Category:Location maps with different longitude and latitude precisions|Decimal]]')
end
end
if ((tonumber(args.lat_deg) or 0) < 0) and ((tonumber(args.lat_min) or 0) ~= 0 or (tonumber(args.lat_sec) or 0) ~= 0 or (args.lat_dir and args.lat_dir ~='')) then
builder:wikitext('[[Category:Location maps with negative degrees and minutes or seconds]]')
end
if ((tonumber(args.lon_deg) or 0) < 0) and ((tonumber(args.lon_min) or 0) ~= 0 or (tonumber(args.lon_sec) or 0) ~= 0 or (args.lon_dir and args.lon_dir ~= '')) then
builder:wikitext('[[Category:Location maps with negative degrees and minutes or seconds]]')
end
if (((tonumber(args.lat_min) or 0) < 0) or ((tonumber(args.lat_sec) or 0) < 0)) then
builder:wikitext('[[Category:Location maps with negative degrees and minutes or seconds]]')
end
if (((tonumber(args.lon_min) or 0) < 0) or ((tonumber(args.lon_sec) or 0) < 0)) then
builder:wikitext('[[Category:Location maps with negative degrees and minutes or seconds]]')
end
if args.skew or args.lon_shift or args.markhigh then
mw.log('Removed parameter used in invocation.')
local parent = frame:getParent()
if parent then
mw.log('Parent is ' .. parent:getTitle())
end
mw.logObject(args, 'args')
if currentTitle.namespace == 0 then
local key = (args.skew and 'skew' or '') ..
(args.lon_shift and 'lon_shift' or '') ..
(args.markhigh and 'markhigh' or '')
builder:wikitext('[[Category:Location maps with removed parameters|' .. key ..' ]]')
end
end
if map('x') ~= '' then
x = tonumber(mw.ext.ParserFunctions.expr(map('x', { latitude, longitude })))
else
x = tonumber(getX(longitude, map('left'), map('right')))
end
if map('y') ~= '' then
y = tonumber(mw.ext.ParserFunctions.expr(map('y', { latitude, longitude })))
else
y = tonumber(getY(latitude, map('top'), map('bottom')))
end
if (x < 0 or x > 100 or y < 0 or y > 100) and not args.outside then
mw.log('Mark placed outside map boundaries without outside flag set. x = ' .. x .. ', y = ' .. y)
local parent = frame:getParent()
if parent then
mw.log('Parent is ' .. parent:getTitle())
end
mw.logObject(args, 'args')
if currentTitle.namespace == 0 then
local key = currentTitle.prefixedText
builder:wikitext('[[Category:Location maps with marks outside map and outside parameter not set|' .. key .. ' ]]')
end
end
local mark = args.mark or map('mark')
if mark == '' then
mark = 'Red pog.svg'
end
local marksize = tonumber(args.marksize) or tonumber(map('marksize')) or 8
local imageDiv = markImageDiv(mark, marksize, args.label or mw.title.getCurrentTitle().text, args.link or '', args.alt, args[2])
local label_size = args.label_size or 91
local labelDiv
if args.label and args.position ~= 'none' then
labelDiv = markLabelDiv(args.label, label_size, args.label_width or 6, args.position, args.background, x, marksize)
end
return builder:node(markOuterDiv(x, y, imageDiv, labelDiv, label_size))
end
local function switcherSeparate(s)
if s == nil then return {} end
local retval = {}
for i in string.gmatch(s .. '#', '([^#]*)#') do
i = mw.text.trim(i)
retval[#retval + 1] = (i ~= '' and i)
end
return retval
end
function p.infobox_pushpin_map(frame)
--This function is designed to be invoked from an infobox template
--* Some parameters (generally starting with "pushpin_") are meant to be exposed as parameters
-- in the outer infobox, settable by editors
--* Others are meant to be "hidden" (e.g., only set inside the infobox template code)
-- First get the combined arguments from both parent and invocation frame
local raw_args = getArgs(frame)
--If no map is supplied, return.
if not raw_args['pushpin_map'] then
return
end
-- Now get arguments from just the invocation frame
local frame_args = getArgs(frame,{frameOnly=true})
-- parsed_args will have the resulting merged parameters
local parsed_args = {}
-- Default to using wikidata coodinates if no other coordiantes supplied.
if raw_args.useWikidata == nil then
parsed_args.useWikidata = true
else
parsed_args.useWikidata = raw_args.useWikidata
end
-- Parse the arguments
parsed_args[1] = raw_args['pushpin_map']
parsed_args.float = frame_args.float or 'center'
parsed_args.border = frame_args.border or 'infobox'
parsed_args.default_width = frame_args.default_width
parsed_args.max_width = frame_args.max_width
parsed_args.coordinates = raw_args['coordinates']
parsed_args.caption = raw_args['pushpin_caption']
parsed_args.relief = raw_args['pushpin_relief']
parsed_args.label = raw_args['pushpin_label']
parsed_args.label_size = raw_args['pushpin_label_size']
parsed_args.position = raw_args['pushpin_label_position']
parsed_args.mark = raw_args['pushpin_mark']
parsed_args.marksize = raw_args['pushpin_mark_size']
parsed_args.alt = raw_args['pushpin_alt']
parsed_args.background = raw_args['pushpin_background']
parsed_args.width = raw_args['pushpin_map_size']
local map = {}
local caption_list = {}
for mapname in string.gmatch(parsed_args[1], '[^#]+') do
map[#map + 1] = p.getMapParams(mw.ustring.gsub(mapname, '^%s*(.-)%s*$', '%1'), frame)
end
if parsed_args['caption'] then
for caption in mw.text.gsplit(parsed_args['caption'], '##', true) do
caption_list[#caption_list + 1] = caption
end
end
if #map == 1 then
map = map[1]
if not parsed_args.caption then
parsed_args.caption = 'Location within ' .. map('name')
end
end
if type(map) == 'table' then
mw.log('----')
mw.logObject(map)
if #caption_list > #map then
error(string.format('%d captions were provided, but only %d maps were provided', #caption_list, #map))
elseif not parsed_args.caption then
-- Set a default caption for each of the multiple maps
for i=1, #map do
caption_list[#caption_list + 1] = 'Location within '.. map[i]('name')
end
end
local outputs = {}
parsed_args.autoSwitcherLabel = true
for k,v in ipairs(map) do
parsed_args.caption = caption_list[k]
outputs[k] = p.main(frame, parsed_args, v)
end
return '<div class="switcher-container">' .. table.concat(outputs) .. '</div>'
else
return p.top(frame, parsed_args, map) .. tostring( p.mark(frame, parsed_args, map) ) .. p.bottom(frame, parsed_args, map)
end
end
function p.main(frame, args, map)
local caption_list = {}
if not args then
args = getArgs(frame, {wrappers = 'Template:Location map', valueFunc = p.valueFunc})
end
if args.useWikidata == nil then
args.useWikidata = true
end
if not map then
if args[1] then
map = {}
for mapname in string.gmatch(args[1], '[^#]+') do
map[#map + 1] = p.getMapParams(mw.ustring.gsub(mapname, '^%s*(.-)%s*$', '%1'), frame)
end
if args['caption'] then
if args['caption'] == "" then
while #caption_list < #map do
caption_list[#caption_list + 1] = args['caption']
end
else
for caption in mw.text.gsplit(args['caption'], '##', true) do
caption_list[#caption_list + 1] = caption
end
end
end
if #map == 1 then map = map[1] end
else
map = p.getMapParams('World', frame)
end
end
if type(map) == 'table' then
local altmaps = switcherSeparate(args.AlternativeMap)
if #altmaps > #map then
error(string.format('%d AlternativeMaps were provided, but only %d maps were provided', #altmaps, #map))
end
local overlays = switcherSeparate(args.overlay_image)
if #overlays > #map then
error(string.format('%d overlay_images were provided, but only %d maps were provided', #overlays, #map))
end
if #caption_list > #map then
error(string.format('%d captions were provided, but only %d maps were provided', #caption_list, #map))
end
local outputs = {}
args.autoSwitcherLabel = true
for k,v in ipairs(map) do
args.AlternativeMap = altmaps[k]
args.overlay_image = overlays[k]
args.caption = caption_list[k]
outputs[k] = p.main(frame, args, v)
end
return '<div class="switcher-container">' .. table.concat(outputs) .. '</div>'
else
return p.top(frame, args, map) .. tostring( p.mark(frame, args, map) ) .. p.bottom(frame, args, map)
end
end
return p
91zhegi7fsfcbbwhby8hcnkzzgeqcyx
1378155
1378154
2026-08-02T15:52:07Z
A826
72368
೧ revisions imported from [[:en:Module:Location_map]]
1378154
Scribunto
text/plain
require('strict')
local p = {}
local getArgs = require('Module:Arguments').getArgs
local function round(n, decimals)
local pow = 10^(decimals or 0)
return math.floor(n * pow + 0.5) / pow
end
function p.getMapParams(map, frame)
if not map then
error('The name of the location map definition to use must be specified', 2)
end
local moduletitle = mw.title.new('Module:Location map/data/' .. map)
if not moduletitle then
error(string.format('%q is not a valid name for a location map definition', map), 2)
elseif moduletitle.exists then
local mapData = mw.loadData('Module:Location map/data/' .. map)
return function(name, params)
if name == nil then
return 'Module:Location map/data/' .. map
elseif mapData[name] == nil then
return ''
elseif params then
return mw.message.newRawMessage(tostring(mapData[name]), unpack(params)):plain()
else
return mapData[name]
end
end
else
error('Unable to find the specified location map definition: "Module:Location map/data/' .. map .. '" does not exist', 2)
end
end
function p.data(frame, args, map)
if not args then
args = getArgs(frame, {frameOnly = true})
end
if not map then
map = p.getMapParams(args[1], frame)
end
local params = {}
for k,v in ipairs(args) do
if k > 2 then
params[k-2] = v
end
end
return map(args[2], #params ~= 0 and params)
end
local hemisphereMultipliers = {
longitude = { W = -1, w = -1, E = 1, e = 1 },
latitude = { S = -1, s = -1, N = 1, n = 1 }
}
local function decdeg(degrees, minutes, seconds, hemisphere, decimal, direction)
if decimal then
if degrees then
error('Decimal and DMS degrees cannot both be provided for ' .. direction, 2)
elseif minutes then
error('Minutes can only be provided with DMS degrees for ' .. direction, 2)
elseif seconds then
error('Seconds can only be provided with DMS degrees for ' .. direction, 2)
elseif hemisphere then
error('A hemisphere can only be provided with DMS degrees for ' .. direction, 2)
end
local retval = tonumber(decimal)
if retval then
return retval
end
error('The value "' .. decimal .. '" provided for ' .. direction .. ' is not valid', 2)
elseif seconds and not minutes then
error('Seconds were provided for ' .. direction .. ' without minutes also being provided', 2)
elseif not degrees then
if minutes then
error('Minutes were provided for ' .. direction .. ' without degrees also being provided', 2)
elseif hemisphere then
error('A hemisphere was provided for ' .. direction .. ' without degrees also being provided', 2)
end
return nil
end
decimal = tonumber(degrees)
if not decimal then
error('The degree value "' .. degrees .. '" provided for ' .. direction .. ' is not valid', 2)
elseif minutes and not tonumber(minutes) then
error('The minute value "' .. minutes .. '" provided for ' .. direction .. ' is not valid', 2)
elseif seconds and not tonumber(seconds) then
error('The second value "' .. seconds .. '" provided for ' .. direction .. ' is not valid', 2)
end
decimal = decimal + (minutes or 0)/60 + (seconds or 0)/3600
if hemisphere then
local multiplier = hemisphereMultipliers[direction][hemisphere]
if not multiplier then
error('The hemisphere "' .. hemisphere .. '" provided for ' .. direction .. ' is not valid', 2)
end
decimal = decimal * multiplier
end
return decimal
end
-- Finds a parameter in a transclusion of {{Coord}}.
local function coord2text(para,coord) -- this should be changed for languages which do not use Arabic numerals or the degree sign
local lat, long = mw.ustring.match(coord,'<span class="p%-latitude latitude">([^<]+)</span><span class="p%-longitude longitude">([^<]+)</span>')
if lat then
return tonumber(para == 'longitude' and long or lat)
end
local result = mw.text.split(mw.ustring.match(coord,'%-?[%.%d]+°[NS] %-?[%.%d]+°[EW]') or '', '[ °]')
if para == 'longitude' then result = {result[3], result[4]} end
if not tonumber(result[1]) or not result[2] then
mw.log('Malformed coordinates value')
mw.logObject(para, 'para')
mw.logObject(coord, 'coord')
return error('Malformed coordinates value', 2)
end
return tonumber(result[1]) * hemisphereMultipliers[para][result[2]]
end
-- effectively make removeBlanks false for caption and maplink, and true for everything else
-- if useWikidata is present but blank, convert it to false instead of nil
-- p.top, p.bottom, and their callers need to use this
function p.valueFunc(key, value)
if value then
value = mw.text.trim(value)
end
if value ~= '' or key == 'caption' or key == 'maplink' then
return value
elseif key == 'useWikidata' then
return false
end
end
local function getContainerImage(args, map)
if args.AlternativeMap then
return args.AlternativeMap
elseif args.relief then
local digits = mw.ustring.match(args.relief,'^[1-9][0-9]?$') -- image1 to image99
if digits then
local imageDigits = map('image' .. digits)
if imageDigits ~= '' then return imageDigits end
end
local yesNo = require('Module:Yesno')
if yesNo(args.relief,true) then
local image1 = map('image1')
if image1 ~= '' then return image1 end
end
end
return map('image')
end
function p.top(frame, args, map)
if not args then
args = getArgs(frame, {frameOnly = true, valueFunc = p.valueFunc})
end
if not map then
map = p.getMapParams(args[1], frame)
end
local width
local default_as_number = tonumber(mw.ustring.match(tostring(args.default_width),"%d*"))
if not args.width then
width = round((default_as_number or 240) * (tonumber(map('defaultscale')) or 1))
elseif mw.ustring.sub(args.width, -2) == 'px' then
width = mw.ustring.sub(args.width, 1, -3)
else
width = args.width
end
local width_as_number = tonumber(mw.ustring.match(tostring(width),"%d*")) or 0;
if width_as_number == 0 then
-- check to see if width is junk. If it is, then use default calculation
width = round((default_as_number or 240) * (tonumber(map('defaultscale')) or 1))
width_as_number = tonumber(mw.ustring.match(tostring(width),"%d*")) or 0;
end
if args.max_width ~= "" and args.max_width ~= nil then
-- check to see if width bigger than max_width
local max_as_number = tonumber(mw.ustring.match(args.max_width,"%d*")) or 0;
if width_as_number>max_as_number and max_as_number>0 then
width = args.max_width;
end
end
local retval = frame:extensionTag{name = 'templatestyles', args = {src = 'Module:Location map/styles.css'}}
if args.float == 'center' then
retval = retval .. '<div class="center">'
end
if args.caption and args.caption ~= '' and args.border ~= 'infobox' then
retval = retval .. '<div class="locmap noresize thumb '
if args.float == '"left"' or args.float == 'left' then
retval = retval .. 'floatleft'
elseif args.float == '"center"' or args.float == 'center' or args.float == '"none"' or args.float == 'none' then
retval = retval .. 'tnone'
else
retval = retval .. 'floatright'
end
retval = retval .. '"><div class="thumbinner" style="width:' .. (width + 2) .. 'px'
if args.border == 'none' then
retval = retval .. ';border:none'
elseif args.border then
retval = retval .. ';border-color:' .. args.border
end
retval = retval .. '"><div style="position:relative;width:' .. width .. 'px' .. (args.border ~= 'none' and ';border:1px solid lightgray">' or '">')
else
retval = retval .. '<div class="locmap" style="width:' .. width .. 'px;'
if args.float == '"left"' or args.float == 'left' then
retval = retval .. 'float:left;clear:left'
elseif args.float == '"center"' or args.float == 'center' then
retval = retval .. 'float:none;clear:both;margin-left:auto;margin-right:auto'
elseif args.float == '"none"' or args.float == 'none' then
retval = retval .. 'float:none;clear:none'
else
retval = retval .. 'float:right;clear:right'
end
retval = retval .. '"><div style="width:' .. width .. 'px;padding:0"><div style="position:relative;width:' .. width .. 'px">'
end
local image = getContainerImage(args, map)
local currentTitle = mw.title.getCurrentTitle()
retval = string.format(
'%s[[File:%s|%spx|%s%s|class=notpageimage noviewer]]',
retval,
image,
width,
args.alt or ((args.label or currentTitle.text) .. ' is located in ' .. map('name')),
args.maplink and ('|link=' .. args.maplink) or ''
)
if args.caption and args.caption ~= '' then
if (currentTitle.namespace == 0) and mw.ustring.find(args.caption, '##') then
retval = retval .. '[[Category:Pages using location map with a double number sign in the caption]]'
end
end
if args.overlay_image then
return retval .. '<div style="position:absolute;top:0;left:0">[[File:' .. args.overlay_image .. '|' .. width .. 'px|class=notpageimage noviewer]]</div>'
else
return retval
end
end
function p.bottom(frame, args, map)
if not args then
args = getArgs(frame, {frameOnly = true, valueFunc = p.valueFunc})
end
if not map then
map = p.getMapParams(args[1], frame)
end
local retval = '</div>'
local currentTitle = mw.title.getCurrentTitle()
if not args.caption or args.border == 'infobox' then
if args.border then
retval = retval .. '<div style="padding-top:0.2em">'
else
retval = retval .. '<div style="font-size:91%;padding-top:3px">'
end
retval = retval
.. (args.caption or (args.label or currentTitle.text) .. ' (' .. map('name') .. ')')
.. '</div>'
elseif args.caption ~= '' then
-- This is not the pipe trick. We're creating a link with no text on purpose, so that CSS can give us a nice image
retval = retval .. '<div class="thumbcaption"><div class="magnify">[[:File:' .. getContainerImage(args, map) .. '| ]]</div>' .. args.caption .. '</div>'
end
if args.switcherLabel then
retval = retval .. '<span class="switcher-label" style="display:none">' .. args.switcherLabel .. '</span>'
elseif args.autoSwitcherLabel then
retval = retval .. '<span class="switcher-label" style="display:none">Show map of ' .. map('name') .. '</span>'
end
retval = retval .. '</div></div>'
if args.caption_undefined then
mw.log('Removed parameter caption_undefined used.')
local parent = frame:getParent()
if parent then
mw.log('Parent is ' .. parent:getTitle())
end
mw.logObject(args, 'args')
if currentTitle.namespace == 0 then
retval = retval .. '[[Category:Location maps with removed parameters|caption_undefined]]'
end
end
if map('skew') ~= '' or map('lat_skew') ~= '' or map('crosses180') ~= '' or map('type') ~= '' then
mw.log('Removed parameter used in map definition ' .. map())
if currentTitle.namespace == 0 then
local key = (map('skew') ~= '' and 'skew' or '') ..
(map('lat_skew') ~= '' and 'lat_skew' or '') ..
(map('crosses180') ~= '' and 'crosses180' or '') ..
(map('type') ~= '' and 'type' or '')
retval = retval .. '[[Category:Location maps with removed parameters|' .. key .. ' ]]'
end
end
if string.find(map('name'), '|', 1, true) then
mw.log('Pipe used in name of map definition ' .. map())
if currentTitle.namespace == 0 then
retval = retval .. '[[Category:Location maps with a name containing a pipe]]'
end
end
if args.float == 'center' then
retval = retval .. '</div>'
end
return retval
end
local function markOuterDiv(x, y, imageDiv, labelDiv, label_size)
return mw.html.create('div')
:addClass('od')
:addClass('notheme') -- T236137
:cssText('top:' .. round(y, 3) .. '%;left:' .. round(x, 3) .. '%;font-size:' .. label_size .. '%')
:node(imageDiv)
:node(labelDiv)
end
local function markImageDiv(mark, marksize, label, link, alt, title)
local builder = mw.html.create('div')
:addClass('id')
:cssText('left:-' .. round(marksize / 2) .. 'px;top:-' .. round(marksize / 2) .. 'px')
:attr('title', title)
if marksize ~= 0 then
builder:wikitext(string.format(
'[[File:%s|%dx%dpx|%s|link=%s%s|class=notpageimage noviewer]]',
mark,
marksize,
marksize,
label,
link,
alt and ('|alt=' .. alt) or ''
))
end
return builder
end
local function markLabelDiv(label, label_size, label_width, position, background, x, marksize)
if tonumber(label_size) == 0 then
return mw.html.create('div'):addClass('l0'):wikitext(label)
end
local builder = mw.html.create('div')
:cssText('width:' .. label_width .. 'em')
local distance = round(marksize / 2 + 1)
if position == 'top' then -- specified top
builder:addClass('pv'):cssText('bottom:' .. distance .. 'px;left:' .. (-label_width / 2) .. 'em')
elseif position == 'bottom' then -- specified bottom
builder:addClass('pv'):cssText('top:' .. distance .. 'px;left:' .. (-label_width / 2) .. 'em')
elseif position == 'left' or (tonumber(x) > 70 and position ~= 'right') then -- specified left or autodetected to left
builder:addClass('pl'):cssText('right:' .. distance .. 'px')
else -- specified right or autodetected to right
builder:addClass('pr'):cssText('left:' .. distance .. 'px')
end
builder = builder:tag('div')
:wikitext(label)
if background then
builder:cssText('background-color:' .. background)
end
return builder:done()
end
local function getX(longitude, left, right)
local width = (right - left) % 360
if width == 0 then
width = 360
end
local distanceFromLeft = (longitude - left) % 360
-- the distance needed past the map to the right equals distanceFromLeft - width. the distance needed past the map to the left equals 360 - distanceFromLeft. to minimize page stretching, go whichever way is shorter
if distanceFromLeft - width / 2 >= 180 then
distanceFromLeft = distanceFromLeft - 360
end
return 100 * distanceFromLeft / width
end
local function getY(latitude, top, bottom)
return 100 * (top - latitude) / (top - bottom)
end
function p.mark(frame, args, map)
if not args then
args = getArgs(frame, {wrappers = 'Template:Location map~'})
end
local mapnames = {}
if not map then
if args[1] then
map = {}
for mapname in mw.text.gsplit(args[1], '#', true) do
map[#map + 1] = p.getMapParams(mw.ustring.gsub(mapname, '^%s*(.-)%s*$', '%1'), frame)
mapnames[#mapnames + 1] = mapname
end
if #map == 1 then map = map[1] end
else
map = p.getMapParams('World', frame)
args[1] = 'World'
end
end
if type(map) == 'table' then
local outputs = {}
local oldargs = args[1]
for k,v in ipairs(map) do
args[1] = mapnames[k]
outputs[k] = tostring(p.mark(frame, args, v))
end
args[1] = oldargs
return table.concat(outputs, '#PlaceList#') .. '#PlaceList#'
end
local x, y, longitude, latitude
longitude = decdeg(args.lon_deg, args.lon_min, args.lon_sec, args.lon_dir, args.long, 'longitude')
latitude = decdeg(args.lat_deg, args.lat_min, args.lat_sec, args.lat_dir, args.lat, 'latitude')
if args.excludefrom then
-- If this mark is to be excluded from certain maps entirely (useful in the context of multiple maps)
for exclusionmap in mw.text.gsplit(args.excludefrom, '#', true) do
-- Check if this map is excluded. If so, return an empty string.
if args[1] == exclusionmap then
return ''
end
end
end
local builder = mw.html.create()
local currentTitle = mw.title.getCurrentTitle()
if args.coordinates then
-- Temporarily removed to facilitate infobox conversion. See [[Wikipedia:Coordinates in infoboxes]]
-- if longitude or latitude then
-- error('Coordinates from [[Module:Coordinates]] and individual coordinates cannot both be provided')
-- end
longitude = coord2text('longitude', args.coordinates)
latitude = coord2text('latitude', args.coordinates)
elseif not longitude and not latitude and args.useWikidata then
-- If they didn't provide either coordinate, try Wikidata. If they provided one but not the other, don't.
local entity = mw.wikibase.getEntity()
if entity and entity.claims and entity.claims.P625 and entity.claims.P625[1].mainsnak.snaktype == 'value' then
local value = entity.claims.P625[1].mainsnak.datavalue.value
longitude, latitude = value.longitude, value.latitude
end
if args.link and (currentTitle.namespace == 0) then
builder:wikitext('[[Category:Location maps with linked markers with coordinates from Wikidata]]')
end
end
if not longitude then
error('No value was provided for longitude')
elseif not latitude then
error('No value was provided for latitude')
end
if currentTitle.namespace > 0 then
if (not args.lon_deg) ~= (not args.lat_deg) then
builder:wikitext('[[Category:Location maps with different longitude and latitude precisions|Degrees]]')
elseif (not args.lon_min) ~= (not args.lat_min) then
builder:wikitext('[[Category:Location maps with different longitude and latitude precisions|Minutes]]')
elseif (not args.lon_sec) ~= (not args.lat_sec) then
builder:wikitext('[[Category:Location maps with different longitude and latitude precisions|Seconds]]')
elseif (not args.lon_dir) ~= (not args.lat_dir) then
builder:wikitext('[[Category:Location maps with different longitude and latitude precisions|Hemisphere]]')
elseif (not args.long) ~= (not args.lat) then
builder:wikitext('[[Category:Location maps with different longitude and latitude precisions|Decimal]]')
end
end
if ((tonumber(args.lat_deg) or 0) < 0) and ((tonumber(args.lat_min) or 0) ~= 0 or (tonumber(args.lat_sec) or 0) ~= 0 or (args.lat_dir and args.lat_dir ~='')) then
builder:wikitext('[[Category:Location maps with negative degrees and minutes or seconds]]')
end
if ((tonumber(args.lon_deg) or 0) < 0) and ((tonumber(args.lon_min) or 0) ~= 0 or (tonumber(args.lon_sec) or 0) ~= 0 or (args.lon_dir and args.lon_dir ~= '')) then
builder:wikitext('[[Category:Location maps with negative degrees and minutes or seconds]]')
end
if (((tonumber(args.lat_min) or 0) < 0) or ((tonumber(args.lat_sec) or 0) < 0)) then
builder:wikitext('[[Category:Location maps with negative degrees and minutes or seconds]]')
end
if (((tonumber(args.lon_min) or 0) < 0) or ((tonumber(args.lon_sec) or 0) < 0)) then
builder:wikitext('[[Category:Location maps with negative degrees and minutes or seconds]]')
end
if args.skew or args.lon_shift or args.markhigh then
mw.log('Removed parameter used in invocation.')
local parent = frame:getParent()
if parent then
mw.log('Parent is ' .. parent:getTitle())
end
mw.logObject(args, 'args')
if currentTitle.namespace == 0 then
local key = (args.skew and 'skew' or '') ..
(args.lon_shift and 'lon_shift' or '') ..
(args.markhigh and 'markhigh' or '')
builder:wikitext('[[Category:Location maps with removed parameters|' .. key ..' ]]')
end
end
if map('x') ~= '' then
x = tonumber(mw.ext.ParserFunctions.expr(map('x', { latitude, longitude })))
else
x = tonumber(getX(longitude, map('left'), map('right')))
end
if map('y') ~= '' then
y = tonumber(mw.ext.ParserFunctions.expr(map('y', { latitude, longitude })))
else
y = tonumber(getY(latitude, map('top'), map('bottom')))
end
if (x < 0 or x > 100 or y < 0 or y > 100) and not args.outside then
mw.log('Mark placed outside map boundaries without outside flag set. x = ' .. x .. ', y = ' .. y)
local parent = frame:getParent()
if parent then
mw.log('Parent is ' .. parent:getTitle())
end
mw.logObject(args, 'args')
if currentTitle.namespace == 0 then
local key = currentTitle.prefixedText
builder:wikitext('[[Category:Location maps with marks outside map and outside parameter not set|' .. key .. ' ]]')
end
end
local mark = args.mark or map('mark')
if mark == '' then
mark = 'Red pog.svg'
end
local marksize = tonumber(args.marksize) or tonumber(map('marksize')) or 8
local imageDiv = markImageDiv(mark, marksize, args.label or mw.title.getCurrentTitle().text, args.link or '', args.alt, args[2])
local label_size = args.label_size or 91
local labelDiv
if args.label and args.position ~= 'none' then
labelDiv = markLabelDiv(args.label, label_size, args.label_width or 6, args.position, args.background, x, marksize)
end
return builder:node(markOuterDiv(x, y, imageDiv, labelDiv, label_size))
end
local function switcherSeparate(s)
if s == nil then return {} end
local retval = {}
for i in string.gmatch(s .. '#', '([^#]*)#') do
i = mw.text.trim(i)
retval[#retval + 1] = (i ~= '' and i)
end
return retval
end
function p.infobox_pushpin_map(frame)
--This function is designed to be invoked from an infobox template
--* Some parameters (generally starting with "pushpin_") are meant to be exposed as parameters
-- in the outer infobox, settable by editors
--* Others are meant to be "hidden" (e.g., only set inside the infobox template code)
-- First get the combined arguments from both parent and invocation frame
local raw_args = getArgs(frame)
--If no map is supplied, return.
if not raw_args['pushpin_map'] then
return
end
-- Now get arguments from just the invocation frame
local frame_args = getArgs(frame,{frameOnly=true})
-- parsed_args will have the resulting merged parameters
local parsed_args = {}
-- Default to using wikidata coodinates if no other coordiantes supplied.
if raw_args.useWikidata == nil then
parsed_args.useWikidata = true
else
parsed_args.useWikidata = raw_args.useWikidata
end
-- Parse the arguments
parsed_args[1] = raw_args['pushpin_map']
parsed_args.float = frame_args.float or 'center'
parsed_args.border = frame_args.border or 'infobox'
parsed_args.default_width = frame_args.default_width
parsed_args.max_width = frame_args.max_width
parsed_args.coordinates = raw_args['coordinates']
parsed_args.caption = raw_args['pushpin_caption']
parsed_args.relief = raw_args['pushpin_relief']
parsed_args.label = raw_args['pushpin_label']
parsed_args.label_size = raw_args['pushpin_label_size']
parsed_args.position = raw_args['pushpin_label_position']
parsed_args.mark = raw_args['pushpin_mark']
parsed_args.marksize = raw_args['pushpin_mark_size']
parsed_args.alt = raw_args['pushpin_alt']
parsed_args.background = raw_args['pushpin_background']
parsed_args.width = raw_args['pushpin_map_size']
local map = {}
local caption_list = {}
for mapname in string.gmatch(parsed_args[1], '[^#]+') do
map[#map + 1] = p.getMapParams(mw.ustring.gsub(mapname, '^%s*(.-)%s*$', '%1'), frame)
end
if parsed_args['caption'] then
for caption in mw.text.gsplit(parsed_args['caption'], '##', true) do
caption_list[#caption_list + 1] = caption
end
end
if #map == 1 then
map = map[1]
if not parsed_args.caption then
parsed_args.caption = 'Location within ' .. map('name')
end
end
if type(map) == 'table' then
mw.log('----')
mw.logObject(map)
if #caption_list > #map then
error(string.format('%d captions were provided, but only %d maps were provided', #caption_list, #map))
elseif not parsed_args.caption then
-- Set a default caption for each of the multiple maps
for i=1, #map do
caption_list[#caption_list + 1] = 'Location within '.. map[i]('name')
end
end
local outputs = {}
parsed_args.autoSwitcherLabel = true
for k,v in ipairs(map) do
parsed_args.caption = caption_list[k]
outputs[k] = p.main(frame, parsed_args, v)
end
return '<div class="switcher-container">' .. table.concat(outputs) .. '</div>'
else
return p.top(frame, parsed_args, map) .. tostring( p.mark(frame, parsed_args, map) ) .. p.bottom(frame, parsed_args, map)
end
end
function p.main(frame, args, map)
local caption_list = {}
if not args then
args = getArgs(frame, {wrappers = 'Template:Location map', valueFunc = p.valueFunc})
end
if args.useWikidata == nil then
args.useWikidata = true
end
if not map then
if args[1] then
map = {}
for mapname in string.gmatch(args[1], '[^#]+') do
map[#map + 1] = p.getMapParams(mw.ustring.gsub(mapname, '^%s*(.-)%s*$', '%1'), frame)
end
if args['caption'] then
if args['caption'] == "" then
while #caption_list < #map do
caption_list[#caption_list + 1] = args['caption']
end
else
for caption in mw.text.gsplit(args['caption'], '##', true) do
caption_list[#caption_list + 1] = caption
end
end
end
if #map == 1 then map = map[1] end
else
map = p.getMapParams('World', frame)
end
end
if type(map) == 'table' then
local altmaps = switcherSeparate(args.AlternativeMap)
if #altmaps > #map then
error(string.format('%d AlternativeMaps were provided, but only %d maps were provided', #altmaps, #map))
end
local overlays = switcherSeparate(args.overlay_image)
if #overlays > #map then
error(string.format('%d overlay_images were provided, but only %d maps were provided', #overlays, #map))
end
if #caption_list > #map then
error(string.format('%d captions were provided, but only %d maps were provided', #caption_list, #map))
end
local outputs = {}
args.autoSwitcherLabel = true
for k,v in ipairs(map) do
args.AlternativeMap = altmaps[k]
args.overlay_image = overlays[k]
args.caption = caption_list[k]
outputs[k] = p.main(frame, args, v)
end
return '<div class="switcher-container">' .. table.concat(outputs) .. '</div>'
else
return p.top(frame, args, map) .. tostring( p.mark(frame, args, map) ) .. p.bottom(frame, args, map)
end
end
return p
91zhegi7fsfcbbwhby8hcnkzzgeqcyx
ಚನ್ನಗಿರಿ
0
60175
1378228
1346214
2026-08-03T02:21:49Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378228
wikitext
text/x-wiki
<!-- See [[Wikipedia:WikiProject Indian cities]] for details -->'''ಚನ್ನಗಿರಿ'''
ಇದು ಕರ್ನಾಟಕ ರಾಜ್ಯದಲ್ಲಿ ದಾವಣಗೆರೆ ಜಿಲ್ಲೆಗೆ ಸೇರಿದ ಪಟ್ಟಣ ಮತ್ತು ತಾಲೂಕು ಕೇಂದ್ರ.ಚನ್ನಗಿರಿ ಬಯಲುಸೀಮೆ ಮತ್ತು ಮಲೆನಾಡಿನ ಅಪೂರ್ವ ಸಂಗಮದಿಂದ ಕೂಡಿದೆ. ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆಯಾಗಿ ಅಡಿಕೆ ಯನ್ನೂ ಯಥೇಚ್ಛವಾಗಿ ಬೆಳೆಯುತ್ತಾರೆ ಅದಕ್ಕೆ,ಚನ್ನಗಿರಿ ಯನ್ನು ಅಡಿಕೆ ನಾಡು ಎಂದು ಕರೆಯುತ್ತಾರೆ.ಮುಖ್ಯ ಆಹಾರ ಬೆಳೆಗಳಾಗಿ ಭತ್ತ ಮತ್ತು ರಾಗಿಯನ್ನು ಬೆಳೆಗಳಾಗಿ ಬೆಳೆಯಲಾಗುತ್ತದೆ.
ದಾವಣಗೆರೆ ಜಿಲ್ಲಾ ಕೇಂದ್ರವಾದರು,ಶಿವಮೊಗ್ಗ ಮತ್ತು ಭದ್ರಾವತಿ ಪಟ್ಟಣಗಳು ತುಂಬ ಹತ್ತಿರವಾದ್ದರಿಂದ, ಜನರ ಸಂಪರ್ಕ ಹೆಚ್ಚಾಗಿ ಈ ಎರಡು ಪಟ್ಟಣಗಳಿಗೆ ಇರುತ್ತದೆ.
ಚನ್ನಗಿರಿ ಭಾರತದ ಕರ್ನಾಟಕ ರಾಜ್ಯದ ದಾವನಗರೆ ಜಿಲ್ಲೆಯ ಒಂದು ಪಟ್ಟಣ. ಇದು [[ದಾವಣಗೆರೆ]] ಜಿಲ್ಲೆಯ ತಾಲ್ಲೂಕು ಕೇಂದ್ರ ಕಚೇರಿಯಾಗಿದೆ. 1997 ರವರೆಗೆ ಈ ನಗರವು [[ಶಿವಮೊಗ್ಗ]] ಜಿಲ್ಲೆಯ ಭಾಗವಾಗಿತ್ತು, ಇದು ಹೊಸದಾಗಿ ರೂಪುಗೊಂಡ ದಾವನಾಗರೆ ಜಿಲ್ಲೆಯ ಭಾಗವಾಗುವವರೆಗೆ, ಈ ಬದಲಾವಣೆಯನ್ನು ನಿವಾಸಿಗಳು ವಿರೋಧಿಸಿದರು. [[ಶಿವಮೊಗ್ಗ]] ಪಟ್ಟಣದಿಂದ ಕೇವಲ 40 ಕಿ.ಮೀ ದೂರದಲ್ಲಿದೆ ಆದರೆ [[ದಾವಣಗೆರೆ]] 60 ಕಿ.ಮೀ. [[ಭದ್ರಾವತಿ]], ಕೈಗಾರಿಕಾ ಪಟ್ಟಣವು ಚನ್ನಗಿರಿಯಿಂದ ಕೇವಲ 32 ಕಿ.ಮೀ ದೂರದಲ್ಲಿದೆ.
[[File:Canaldoddaghatta.jpg|thumb]]
==ಹೆಸರಿನ ವ್ಯುತ್ಪತ್ತಿ==
ಕೆಳದಿಯ ರಾಣಿ ಚೆನ್ನಮ್ಮ(೧೬೭೨-೧೬೯೭) ಈ ಪ್ರಾಂತ್ಯಕ್ಕೆ ರಾಣಿಯಾಗಿದ್ದರು.ಈ ಊರಿಗೆ ಅವರ ಹೆಸರು ನೀಡಲಾಗಿದೆ.<ref>[http://asi.nic.in/asi_books/27277.pdf Annual Report of the Mysore Archaeological department for the year 1937] {{Webarchive|url=https://web.archive.org/web/20141106181836/http://asi.nic.in/asi_books/27277.pdf |date=2014-11-06 }} Archeological Survey of India, Government Of India</ref>
==ಪ್ರಾದೇಶಿಕ ಭೂಗೋಳ==
ಚನ್ನಗಿರಿಯ ಭೌಗೋಳಿಕವಾಗಿ ೧೪<sup>೦</sup>.೦೩'ಉ, ಹಾಗೂ೭೫<sup>೦</sup>.೯೩'ಪೂ.ಅಕ್ಷಾಂಶದಲ್ಲಿದೆ <ref>[http://www.fallingrain.com/world/IN/19/Channagiri.html Falling Rain Genomics, Inc - Channagiri] {{Webarchive|url=https://web.archive.org/web/20150912061107/http://www.fallingrain.com/world/IN/19/Channagiri.html |date=2015-09-12 }}.</ref>.ಚನ್ನಗಿರಿ ನಗರ ಸಮುದ್ರ ಮಟ್ಟದಿಂದ 662 ಮೀಟರುಗಳ(2171 ಅಡಿ) ಎತ್ತರದಲ್ಲಿದೆ.
ಚನ್ನಗಿರಿ- ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಒಂದು ತಾಲ್ಲೂಕು; ಆ ತಾಲ್ಲೂಕಿನ ಮುಖ್ಯ ಸ್ಥಳ, ಜಿಲ್ಲೆಯ ಪೂರ್ವಭಾಗದಲ್ಲಿದೆ. ಚನ್ನಗಿರಿ ತಾಲ್ಲೂಕಿನ ಪಶ್ಚಿಮದಲ್ಲಿ ಹೊನ್ನಾಳಿ ಮತ್ತು ಭದ್ರಾವತಿ ತಾಲ್ಲೂಕುಗಳು, ಉತ್ತರ ಮತ್ತು ಪೂರ್ವದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು, ದಕ್ಷಿಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕು-ಇವು ತಾಲ್ಲೂಕಿನ ಮೇರೆಗಳು. ತಾಲ್ಲೂಕಿನ ವಿಸ್ತಿರ್ಣ 1197.7 ಚ.ಕಿಮೀ. ಇದರಲ್ಲಿ 4 ಹೋಬಳಿಗಳೂ 246 ಹಳ್ಳಿಗಳೂ ಇವೆ. ಜನಸಂಖ್ಯೆ 2,92,362 (2001). 1961ರಲ್ಲಿ 1,45,811; 1971 ರಲ್ಲಿ 1,66,560. ಜನಸಾಂದ್ರತೆ ಚ.ಮೈ.ಗೆ 315.
ತಾಲ್ಲೂಕಿನ ದಕ್ಷಿಣ ಹಾಗೂ ಪಶ್ಚಿಮಭಾಗದಲ್ಲಿ ಬೆಟ್ಟಗಳ ಸಾಲುಗಳಿವೆ. ಇವುಗಳಿಂದ ಹರಿದುಬರುವ ತೊರೆಗಳು ಶಾಂತಿಸಾಗರ (ಸೂಳೆಕೆರೆ) ಎನ್ನುವ 40 ಮೈ. ಸುತ್ತಳತೆಯುಳ್ಳ, ಕೆರೆಯನ್ನು ಸೇರುತ್ತದೆ. ಇಲ್ಲಿಂದ ಹರಿದು ಹರಿಹರದ ಬಳಿಯಲ್ಲಿ ತುಂಗಭದ್ರಾ ನದಿಯನ್ನು ಸೇರುವ ಹೊಳೆಗೆ ಹರಿದ್ರಾ ಎಂದು ಹೆಸರು. ಈ ತಾಲ್ಲೂಕಿನ ಉಳಿದ ಪ್ರದೇಶ ಮೈದಾನ. ಇಲ್ಲಿ ವಿಸ್ತಾರವಾದ ಹುಲ್ಲುಗಾವಲುಗಳುಂಟು. ಆದುದರಿಂದ ಶಿವಮೊಗ್ಗ ಜಿಲ್ಲೆಯ ಇತರ ಕಡೆಗಳಿಗಿಂತ ಈ ತಾಲ್ಲೂಕಿನ ದನಕರುಗಳು ಉತ್ತಮವಾದವು. ಈ ತಾಲ್ಲೂಕಿನ ಉತ್ತರದಲ್ಲಿ ತೋಟಗಳೂ ಕಬ್ಬಿನ ಗದೆಗಳೂ ಇವೆ. ಶಾಂತಿಸಾಗರದ ಸುತ್ತಮುತ್ತಲ ಪ್ರದೇಶವನ್ನು ಬಹಳ ವರ್ಷಗಳವರೆಗೆ ನಿರ್ಲಕ್ಷಿಸಲಾಗಿತ್ತು. ಆದರೆ ಇತ್ತೀಚೆಗೆ ಕಪ್ಪು ಮತ್ತು ಕೆಂಪು ಮಣ್ಣು ಇರುವ ಪ್ರದೇಶಗಳನ್ನು ವ್ಯವಸಾಯಕ್ಕಾಗಿ ಉತ್ತಮಗೊಳಿಸಲಾಗಿದೆ. ಹತ್ತಿರದಲ್ಲಿರುವ ಭದ್ರಾ ಜಲಾಶಯಕ್ಕೂ ಶಾಂತಿಸಾಗರಕ್ಕೂ ಸಂಬಂಧವೇರ್ಪಡಿಸಿರುವುದರಿಂದ ನೀರಾವರಿ ಸೌಲಭ್ಯ ಅಧಿಕವಾಗಿ ಲಭ್ಯವಾಗಿ, ವ್ಯವಸಾಯ ವಾಣಿಜ್ಯಗಳಲ್ಲಿ ಈ ತಾಲ್ಲೂಕಿನ ಪ್ರಾಮುಖ್ಯ ಹೆಚ್ಚಾಗತೊಡಗಿದೆ.
ಹೊಳಲ್ಕೆರೆ ರೈಲ್ವೆ ನಿಲ್ದಾಣದಿಂದ ಪಶ್ಚಿಮಕ್ಕೆ 14 ಮೈ. ಮತ್ತು ಶಿವಮೊಗ್ಗದ ಈಶಾನ್ಯಕ್ಕೆ ಭದ್ರಾವತಿ-ಚಿತ್ರದುರ್ಗ ರಸ್ತೆಯಲ್ಲಿ 33 ಮೈ. ದೂರದಲ್ಲಿ ಉ.ಅ. 140 1' ಮತ್ತು ಪೂರೇ. 75059' ಮೇಲಿರುವ ಚನ್ನಗಿರಿ ಪಟ್ಟಣದ ವಿಸ್ತೀರ್ಣ 2.02 ಚ.ಮೈ. (5.23 ಚ.ಕಿ.ಮೀ.) ಜನಸಂಖ್ಯೆ 18,517 (2001). ಇಲ್ಲಿ ಪುರಸಭೆಯಿದೆ. ಟೀಪುವಿನ ಸೈನ್ಯದಲ್ಲಿದ್ದು, 1857 ರ ಬಂಡಾಯಕ್ಕೆ ಹಿಂದೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವರಲ್ಲೊಬ್ಬನಾದ ಧೋಂಡಿಯ ವಾಫ್ ಚನ್ನಗಿರಿಯವನು.
ಈಗಿನ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಅಸುಂಡಿಯಿಂದ ಇದರ ಆಡಳಿತ ನಡೆಯುತ್ತಿತ್ತು. ಈ ಪ್ರದೇಶವೆಲ್ಲ ಗಂಗರ ಆಳ್ವಿಕೆಗೆ ಒಳಪಟ್ಟಿತ್ತೆಂದು ಶಾಸನಗಳಿಂದ ತಿಳಿದುಬರುತ್ತದೆ. 12ನೆಯ ಶತಮಾನದಲ್ಲಿ ಇದು ಚಾಳುಕ್ಯ ಚಕ್ರಾಧಿಪತ್ಯದ ಒಂದು ಭಾಗವಾಗಿ ನೊಣಂಬವಾಡಿ 32 ಸಾಸಿರ ಪ್ರಾಂತ್ಯದಲ್ಲಿತ್ತು. ಇದನ್ನು ಆಳುತ್ತಿದ್ದವನು ಉಚ್ಚಂಗಿಯ ಪಾಂಡ್ಯ. 16ನೆಯ ಶತಮಾನದಲ್ಲೂ ಈ ಪ್ರದೇಶ ಉಚ್ಚಂಗಿಯ ಜಿಲ್ಲೆಯ ಭಾಗವಾಗಿತ್ತು.; ಸಂತೆಬೆನ್ನೂರಿಗೆ ಸೇರಿತ್ತು. ಚನ್ನಗಿರಿ ಪಟ್ಟಣ 17ನೆಯ ಶತಮಾನದ ಅಂತ್ಯದಲ್ಲಿ ಬಿದನೂರು ರಾಜ್ಯದ ವಶಕ್ಕೆ ಬಂತು. ಅದರ ರಾಣಿ ಚೆನ್ನಮ್ಮಾಜಿ ಇಲ್ಲೊಂದು ಕೋಟೆಯನ್ನು ಕಟ್ಟಿಸಿ ಈ ಪಟ್ಟಣಕ್ಕೆ ತನ್ನ ಹೆಸರನ್ನಿಟ್ಟು ಇದನ್ನು ತನ್ನ ತಂಗಿಗೆ ಜಹಗೀರಿಯಾಗಿ ಕೊಟ್ಟಳು.
ಇಲ್ಲಿಯ ಕಲ್ಲೇಶ್ವರ ದೇವಾಲಯ ಹೊಯ್ಸಳ ಶೈಲಿಯ ಹಳೆಯ ಕಟ್ಟಡವೆಂದು ಕಾಣುತ್ತದೆ. ಈ ದೇವಾಲಯ ದಕ್ಷಿಣಾಭಿಮುಖವಾಗಿದೆ. ಇದರ ಎರಡು ಗರ್ಭಗೃಹಗಳ ಪೈಕಿ ಒಂದು ದಕ್ಷಿಣಾಭಿಮುಖವಾಗಿದೆ. ಇದರಲ್ಲಿ 5' ಎತ್ತರದ ಕೇಶವ ವಿಗ್ರಹವಿದೆ. ಇನ್ನೊಂದು ಪೂರ್ವಾಭಿಮುಖವಾಗಿದೆ. ಅಲ್ಲಿ ಲಿಂಗವಿದೆ.
ನಗರದ ನೈಋತ್ಯ ಮೂಲೆಯಲ್ಲಿ ಇರುವ ಸಣ್ಣಬೆಟ್ಟದ ಮೇಲೆ ಕೋಟೆಯೊಂದುಂಟು. ಇದೇ ಚೆನ್ನಮ್ಮಾಜಿ ಕಟ್ಟಿಸಿದ್ದು. ಬೆಟ್ಟದ ತುದಿಯಲ್ಲಿರುವ ದೇವಸ್ಥಾನ ಬೇಟೆ ರಂಗನಾಥಸ್ವಾಮಿಯದು. ಈ ಸ್ಥಳದಿಂದ ಕಾಣುವ ಸುತ್ತಲಿನ ದೃಶ್ಯಸುಂದರವಾದ್ದು. ಉತ್ತರದ ಕಡೆಗೆ 12 ಮೈಲಿ ದೂರದಲ್ಲಿರುವ ಸೂಳೆಕೆರೆ ರಮ್ಯವಾಗಿ ಕಾಣಿಸುತ್ತದೆ. ಬೇಟೆ ರಂಗನಾಥ ಸ್ವಾಮಿಯ ದೇವಾಲಯದ ಮೂಲವಿಗ್ರಹದ ಎತ್ತರ 3'. ಶಂಖ, ಚಕ್ರ, ಬಿಲ್ಲು ಬಾಣಗಳಿಂದ ಅಲಂಕೃತವಾಗಿರುವ ಈ ಮೂರ್ತಿ ಬೇಟೆಗಾರನ ಉಡುಪು ತೊಡವುಗಳಿಂದ ಕೂಡಿದೆ.
ಕಲ್ಲುಮಠ ಎನ್ನುವ ಒಂದು ವೀರಶೈವ ಮಠವೂ ಇಲ್ಲುಂಟು. ಇಲ್ಲಿರುವ ಶಾಸನಗಳ ಅಕ್ಷರಗಳು ಮಾಸಿದೆ. ಇಲ್ಲಿಯ ದೊಡ್ಡ ಮಸೀದಿಯಲ್ಲಿ ಮೊಹಬ್ಬತ್-ಷಾ-ಮಸ್ತಾನ್ ಖಾದ್ರಿ ಎನ್ನುವವರ ಗೋರಿಯಿಂಟು. ಇದು 1636ರಂದು ಟೀಪು, ದಿವಾನ್ ಪೂರ್ಣಯ್ಯ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರು ಈ ಮಸೀದಿಗೆ ಸನ್ನದಗಳನ್ನು ನೀಡಿದ್ದರೆಂದು ತಿಳಿದುಬರುತ್ತದೆ. ಚನ್ನಗಿರಿಯಿಂದ ಭದ್ರಾವತಿ, ಹೊಳಲ್ಕೆರೆಗಳಿಗೂ, ಶಿವನಿ, ಹೊಳಹೊನ್ನೂರು, ನಲ್ಲೂರು, ಬಸವಾಪಟ್ಟಣ, ಕಕನೂರು, ಸಂತೆಬೆನ್ನೂರು, ತ್ಯಾವಣಗಿ, ಬಾಡಗಳ ಕಡೆಗೂ ರಸ್ತೆಗಳುಂಟು. ಬಸ್ಸು ಸೌಕರ್ಯವಿದೆ. ಭದ್ರಾವತಿ-ಚಿತ್ರದುರ್ಗ ರಸ್ತೆ ಈ ಪಟ್ಟಣದ ಮೂಲಕ ಸಾಗುತ್ತದೆ. ಬೆಂಗಳೂರು-ಪುಣೆ ರೈಲುಮಾರ್ಗ ಚನ್ನಗಿರಿ ತಾಲ್ಲೂಕಿನ ಪೂರ್ವದ ಅಂಚಿನಲ್ಲಿ ಹಾದುಹೋಗುತ್ತದೆ.
== ಜನಾಂಗಸ್ಥಿತಿ ಅಧ್ಯಯನ==
2001 ಸಂವತ್ಸರದ ಭಾರತದೇಶ ಜನಗಣನೆ ಪ್ರಕಾರ ಚನ್ನಗಿರಿಯಜನಸಂಖ್ಯೆ 18,517.ಇದರಲ್ಲಿ ಗಂಡುಜನ 52% ಮತು ಹೆಣ್ಣುಜನಗಳು 48% ಇದ್ದಾರೆ.ಜನರಲ್ಲಿ ಅಕ್ಷರಸ್ಥರು 71% ಇದ್ದಾರೆ.ಗಂಡು ಸಾಕ್ಷರಿಗಳು 74% ಹಾಗೂ ಹೆಣ್ಣು ಸಾಕ್ಷರಿಗಳು67% ಆಗಿದ್ದಾರೆ.ಜನಸ್ಂಖ್ಯೆಯಲ್ಲಿ ೧೩% ಜನರು ೬ವರ್ಷಕ್ಕಿಂತೆ ಕಡಿಮೆ ವಯಸ್ಸಿನವರು.ಭೌಗೋಳಿಕವಾಗಿ ಇದು ಅರ್ಧ ಮಲ್ನಾಡು ಪ್ರಾಂತವಾಗಿರುತ್ತದೆ.
<ref>[http://censusindia.gov.in/PopulationFinder/View_Village_Population.aspx?pcaid=3457&category=T.P. Census 2011] Official website of Office of The Registrar General & Census</ref>
==ಕೋಟೆ==
ಚನ್ನಗಿರಿಯ ಬೆಟ್ಟದ ಮೇಲಿನ ಕೋಟೆಯು ಸುಮಾರು ಕ್ರಿ.ಶ.೧೭೭೦ರಲ್ಲಿ ಕಟ್ಟಲಾಗಿದೆ. ಕೋಟೆಯ ಒಳಗೆ ಶ್ರೀರಂಗನಾಥ ಸ್ವಾಮಿಯ ದೇವಾಲಯವಿದೆ.
==ಪ್ರಮುಖ ವ್ಯಕ್ತಿಗಳು==
* ದೊಂಡೀಯ ವಾಘ್ - ಅಂಗ್ಲರ ವಿರುದ್ಧ ಹೊರಾಡಿದ ಕ್ರಾಂತಿಕಾರಿ
* [[ಚಿದಾನಂದ ಮೂರ್ತಿ]] ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರು
* [[ಜೆ ಹೆಚ್ ಪಟೇಲ್]] ಮಾಜಿ ಮುಖ್ಯಮಂತ್ರಿ
* [[ಎಚ್.ಎಸ್.ವೆಂಕಟೇಶಮೂರ್ತಿ]] - ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
==ಇವನ್ನೂ ನೋಡಿ==
*[[ಶಾಂತಿ ಸಾಗರ|ಶಾ೦ತಿಸಾಗರ(ಸೂಳೇಕೆರೆ)]]
*[[ದಾವಣಗೆರೆ]]
*[[ಕರ್ನಾಟಕ]]
== ಉಲ್ಲೇಖಗಳು ==
<references />
{{ದಾವಣಗೆರೆ ತಾಲ್ಲೂಕುಗಳು}}
{{Refimprove}}
{{Interwikineeded}}
[[ವರ್ಗ:ದಾವಣಗೆರೆ ಜಿಲ್ಲೆಯ ತಾಲೂಕುಗಳು]]
{{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}}
8owsh62yjbd7akn8qvm20meyc6xcizo
ಟೆಂಪ್ಲೇಟು:Isnumeric
10
66889
1378156
1255540
2025-08-05T05:31:52Z
en>Theknightwho
0
1378156
wikitext
text/x-wiki
<includeonly>{{safesubst:#iferror:{{safesubst:#expr:{{safesubst:formatnum:{{{1|error}}}|R}}*0}}|{{safesubst:#ifeq:{{{boolean|false}}}|true|0|}}|{{safesubst:#ifeq:{{{boolean|false}}}|true|1|{{{1}}}}}}}</includeonly><noinclude>{{documentation}}</noinclude>
akn18uer5uh8l9w5vp0vsxcsducsfaa
1378157
1378156
2026-08-02T15:52:07Z
A826
72368
೧ revisions imported from [[:en:Template:Isnumeric]]
1378156
wikitext
text/x-wiki
<includeonly>{{safesubst:#iferror:{{safesubst:#expr:{{safesubst:formatnum:{{{1|error}}}|R}}*0}}|{{safesubst:#ifeq:{{{boolean|false}}}|true|0|}}|{{safesubst:#ifeq:{{{boolean|false}}}|true|1|{{{1}}}}}}}</includeonly><noinclude>{{documentation}}</noinclude>
akn18uer5uh8l9w5vp0vsxcsducsfaa
ಟೆಂಪ್ಲೇಟು:Infobox region symbols
10
72039
1378268
1072911
2025-12-28T03:45:07Z
en>Zackmann08
0
Module has been renamed
1378268
wikitext
text/x-wiki
{{Infobox
|child = {{yesno|{{{embed|{{{embedded|}}}}}}|def=}}
|bodyclass = ib-region-symbols {{#switch:{{{align|}}} |left=ib-region-symbols-left |none=ib-region-symbols-none |center=ib-region-symbols-center |#default=}}
|templatestyles = Template:Infobox region symbols/styles.css
|title = <includeonly>{{{title|{{#if:{{yesno|{{{embed|{{{embedded|}}}}}}|def=}}||{{#if:{{{region_type|}}}|{{{region_type}}} symbols|{{#if:{{{state|}}}|State symbols|Symbols}}}}{{if last display both| of |{{if empty|{{{region|}}}|{{{state|}}}|{{{county|}}}|{{{province|}}}|{{{country|}}}|}}}}}}}}}</includeonly>
| abovestyle = font-size:85%; white-space:nowrap;
| above = {{#ifexist:List of {{{state}}} state symbols|{{resize|1=120%|2=[[List of {{{state|}}} state symbols|List of state symbols]]}}}}
|subheader = {{#if:{{yesno|{{{embed|{{{embedded|}}}}}}|def=}}|{{#if: {{yesno|{{{no_header|}}}|def=}}||Symbols{{if last display both| of |{{if empty|{{{region|}}}|{{{state|}}}|{{{county|}}}|{{{province|}}}|{{{country|}}} }} }} }} }}
|subheaderclass = {{#if:{{yesno|{{{islands|{{{island|}}}}}}|def=}}|ib-region-symbols-island}}
| image1 = {{#if:{{yesno|{{{embed|{{{embedded|}}}}}}|def=}}||{{#invoke:InfoboxImage|InfoboxImage
|image={{{image_flag|}}}
|border={{yesno-yes|{{{image_flag_border|}}}}}
|size={{{image_flag_size|}}}
|sizedefault=250px }} }}
| caption1 = {{Infobox region symbols/linked|{{{flag_link|}}}|<!--
-->Flag{{if last display both| of |{{if empty|{{{region|}}}|{{{state|}}}|{{{county|}}}|{{{province|}}}|{{{country|}}}}}}}}}
| image2 = {{#if:{{yesno|{{{embed|{{{embedded|}}}}}}|def=}}||{{#invoke:InfoboxImage|InfoboxImage
|image={{{image_seal|}}}
|size={{{image_seal_size|}}}
|sizedefault=150px }}}}
| caption2 = {{Infobox region symbols/linked|{{{seal_link|}}}|<!--
-->Seal{{if last display both| of |{{if empty|{{{region|}}}|{{{state|}}}|{{{county|}}}|{{{province|}}}|{{{country|}}}}}}}}}
| image3 = {{#invoke:InfoboxImage|InfoboxImage
|image={{{image_emblem|}}}
|size={{{image_emblem_size|}}}
|sizedefault=150px }}
| caption3 = {{Infobox region symbols/linked|{{{emblem_link|}}}|<!--
-->Emblem{{if last display both| of |{{if empty|{{{region|}}}|{{{state|}}}|{{{county|}}}|{{{province|}}}|{{{country|}}}}}}}}}
| image4 = {{#if:{{yesno|{{{embed|{{{embedded|}}}}}}|def=}}||{{#invoke:InfoboxImage|InfoboxImage
|image={{{image_arms|}}}
|size={{{image_arms_size|}}}
|sizedefault=150px }}}}
| caption4 = {{link if exists|Coat of arms{{if last display both| of |{{if empty|{{{region|}}}|{{{state|}}}|{{{county|}}}|{{{province|}}}|{{{country|}}}}}}}}}
| headerstyle = border-top:#aaa 1px solid
<!-- A spacer below the subheader, if embedded -->
|rowclass1 = mergedtoprow
|data1 = {{#if:{{yesno|{{{embed|{{{embedded|}}}}}}|def=}}|<div style="height:0px"></div>}}
|rowclass3 = mergedrow
|label3 = {{#switch:{{{country}}}
| India = [[List of Indian state emblems|Emblem]]
| #default = Emblem
}}
|data3 = {{{emblem|}}}
|rowclass4 = mergedrow
|label4 = {{#ifeq:{{{country}}}|United States|[[List of U.S. state and territory nicknames|Nickname]]|Nickname}}
|data4 = {{{nickname|}}}
|rowclass5 = mergedrow
|label5 = {{#switch:{{{country}}}
| India = [[List of Indian state mottos|Motto]]
| United States = [[List of U.S. state and territory mottos|Motto]]
| #default = Motto
}}
|data5 = {{{motto|}}}
|rowclass6 = mergedrow
|label6 = {{#ifeq:{{{country}}}|United States|[[List of U.S. state poems|Poem]]|Poem}}
|data6 = {{{poem|}}}
|rowclass7 = mergedrow
|label7 = {{#ifeq:{{{country}}}|United States|[[List of U.S. state and territory nicknames|Slogan]]|Slogan}}
|data7 ={{{slogan|}}}
|rowclass8 = mergedrow
|label8 = Anthem
|data8 = {{{anthem|}}}
|rowclass10 = mergedrow
|label10 = {{#switch:{{{country}}}
|India = [[List of Indian state songs|{{#if:{{{song|}}}|Song|Hymn}}]]
|United States = [[List of U.S. state songs|Song]]
| #default = {{#if:{{{song|}}}|Song|Hymn}}
}}
|data10 = {{if empty|{{{song|}}}|{{{hymn|}}}}}
|rowclass12 = mergedrow
|label12 = {{#switch:{{{country}}}
| India = [[Languages with official status in India|Language]]
| #default = Language
}}
|data12 = {{{language|}}}
|rowclass14 = mergedrow
|label14 = {{#switch:{{{country}}}
|India = [[List of Indian state foundation days|Foundation day]]
| #default = Foundation day
}}
|data14 = {{{foundation_day|}}}
|rowclass16 = mergedrow
|label16 = Currency
|data16 = {{{currency|}}}
|rowclass18 = mergedrow
|label18 = Calendar
|data18 = {{{calendar|}}}
|rowclass50 = mergedtoprow
|header50 = {{#if:{{yesno|{{{embed|{{{embedded|}}}}}}|def=}}||{{if both
|{{#ifexpr:{{#invoke:ParameterCount|main
|animal|amphibian|bird|butterfly|cactus|cat|crustacean|dog|domestic_animal|fish|flower|fruit|grass|horse|insect
|mammal|marsupial|mascot|mushroom|pet|plant|reptile|tree|vegetable|wildlife_animal}} > 2|1}}
|{{#ifexpr:{{#invoke:ParameterCount|main
|beverage|colour|color|costume|dance|dinosaur|dish|dress|drink|firearm
|folk_dance|food|fossil|game|instrument|gemstone|lake|mineral
|rock|river|shell|ship|soil|sport|sweet|confectionery|tartan|toy|other}} > 2|1}}
|Living insignia}}}}
|rowclass52 = mergedrow
|label52 = {{#switch:{{{country}}}
| India = [[List of Indian state animals|Animal]]
| #default = Animal
}}
|data52 = {{#if:{{{mammal|}}}{{{bird|}}}{{{fish|}}}{{{insect|}}}{{{butterfly|}}}||{{{animal|}}}}}
|rowclass53 = mergedrow
|label53 = {{#ifeq:{{{country}}}|United States|[[List of U.S. state amphibians|Amphibian]]|Amphibian}}
|data53 = {{{amphibian|}}}
|rowclass54 = mergedrow
|label54 = {{#switch:{{{country}}}
| India = [[List of Indian state birds|Bird]]
| United States = [[List of U.S. state birds|Bird]]
| #default = Bird
}}
|data54 = {{{bird|}}}
|rowclass56 = mergedrow
|label56 = {{#ifeq:{{{country}}}|United States|[[List of U.S. state insects|Butterfly]]|Butterfly}}
|data56 = {{{butterfly|}}}
|rowclass57 = mergedrow
|label57 = Cactus
|data57 = {{{cactus|}}}
|rowclass58 = mergedrow
|label58 = {{#ifeq:{{{country}}}|United States|[[List of U.S. state mammals|Cat breed]]|Cat breed}}
|data58 = {{{cat|}}}
|rowclass59 = mergedrow
|label59 = {{#ifeq:{{{country}}}|United States|[[List of U.S. state crustaceans|Crustacean]]|Crustacean}}
|data59 = {{{crustacean|}}}
|rowclass60 = mergedrow
|label60 = {{#ifeq:{{{country}}}|United States|[[List of U.S. state dogs|Dog breed]]|Dog breed}}
|data60 = {{{dog|}}}
|rowclass61 = mergedrow
|label61 ={{#ifeq:{{{country}}}|United States|[[List of U.S. state mammals|Domestic animal]]|Domestic animal}}
|data61 ={{{domestic_animal|}}}
|rowclass62 = mergedrow
|label62 = {{#ifeq:{{{country}}}|United States|[[List of U.S. state fish|Fish]]|Fish}}
|data62 = {{{fish|}}}
|rowclass63 = mergedrow
|label63 = {{#switch:{{{country}}}
| India = [[List of Indian state flowers|Flower]]
| United States = [[List of U.S. state and territory flowers|Flower]]
| #default = Flower
}}
|data63 = {{{flower|}}}
|rowclass64 = mergedrow
|label64 = Fruit
|data64 = {{{fruit|}}}
|rowclass65 = mergedrow
|label65 = {{#ifeq:{{{country}}}|United States|[[List of U.S. state grasses|Grass]]|Grass}}
|data65 = {{{grass|}}}
|rowclass66 = mergedrow
|label66 = {{#ifeq:{{{country}}}|United States|[[List of U.S. state mammals|Horse breed]]|Horse breed}}
|data66 = {{{horse|}}}
|rowclass67 = mergedrow
|label67 = {{#ifeq:{{{country}}}|United States|[[List of U.S. state insects|Insect]]|Insect}}
|data67 = {{{insect|}}}
|rowclass68 = mergedrow
|label68 = {{#switch:{{{country}}}
| India = [[List of Indian state animals|Mammal]]
| United States = [[List of U.S. state mammals|Mammal]]
| #default = Mammal
}}
|data68 = {{{mammal|}}}
|rowclass69 = mergedrow
|label69 = Marsupial
|data69 = {{{marsupial|}}}
|rowclass70 = mergedrow
|label70 = Mascot
|data70 = {{{mascot|}}}
|rowclass71 = mergedrow
|label71 = {{#ifeq:{{{country}}}|United States|[[List of U.S. state mushrooms|Mushroom]]|Mushroom}}
|data71 = {{{mushroom|}}}
|rowclass72 = mergedrow
|label72 = {{#ifeq:{{{country}}}|United States|[[List of U.S. state dogs|Pet]]|Pet}}
|data72 = {{{pet|}}}
|rowclass73 = mergedrow
|label73 = Plant
|data73 = {{{plant|}}}
|rowclass74 = mergedrow
|label74 = {{#ifeq:{{{country}}}|United States|[[List of U.S. state reptiles|Reptile]]|Reptile}}
|data74 = {{{reptile|}}}
|rowclass75 = mergedrow
|label75 = {{#switch:{{{country}}}
| India = [[List of Indian state trees|Tree]]
| United States = [[List of U.S. state and territory trees|Tree]]
| #default = Tree
}}
|data75 = {{{tree|}}}
|rowclass76 = mergedrow
|label76 = Vegetable
|data76 = {{{vegetable|}}}
|rowclass78 = mergedrow
|label78 = {{#ifeq:{{{country}}}|United States|[[List of U.S. state mammals|Wildlife animal]]|Wildlife animal}}
|data78 = {{{wildlife_animal|}}}
|rowclass90 = mergedtoprow
|header90 = {{#if:{{yesno|{{{embed|{{{embedded|}}}}}}|def=}}||{{if both
|{{#ifexpr:{{#invoke:ParameterCount|main
|animal|amphibian|bird|butterfly|cactus|cat|crustacean|dog|domestic_animal|fish|flower|fruit|grass|horse|insect
|mammal|marsupial|mascot|mushroom|pet|plant|reptile|tree|vegetable|wildlife_animal}} > 2|1}}
|{{#ifexpr:{{#invoke:ParameterCount|main
|beverage|colour|color|costume|dance|dinosaur|dish|dress|drink|firearm
|folk_dance|food|fossil|game|instrument|gemstone|lake|mineral
|rock|river|shell|ship|soil|sport|sweet|confectionery|tartan|toy|other}} > 2|1}}
|Inanimate insignia}}}}
|rowclass92 = mergedrow
|label92 = {{#ifeq:{{{country}}}|United States|[[List of U.S. state beverages|Beverage]]|Beverage}}
|data92 = {{{beverage|}}}
|rowclass94 = mergedrow
|label94 = {{#ifeq:{{{country}}}|United States
|[[List of U.S. state colors|Color]]|{{#if:{{{colour|}}}|Colour|Color}}}}<!--
-->{{Pluralize from text|{{if empty|{{{colors|}}}|{{{colour|}}}|{{{color|}}}}}|likely=(s)|plural=s}}
|data94 = {{if empty|{{{colors|}}}|{{{colour|}}}|{{{color|}}}}}
|rowclass95 = mergedrow
|label95 = Confectionery
|data95 = {{#if:{{{sweet|}}}||{{{confectionery|}}}}}
|rowclass96 = mergedrow
|label96 = Costume
|data96 = {{{costume|}}}
|rowclass98 = mergedrow
|label98 = {{#ifeq:{{{country}}}|United States|[[List of U.S. state dances|Dance]]|Dance}}
|data98 = {{{dance|}}}
|rowclass99 = mergedrow
|label99 = {{#ifeq:{{{country}}}|United States|[[List of U.S. state dinosaurs|Dinosaur]]|Dinosaur}}
|data99 = {{{dinosaur|}}}
|rowclass100 = mergedrow
|label100 = Dish
|data100 = {{#if:{{{food|}}}||{{{dish|}}}}}
|rowclass102 = mergedrow
|label102 = Dress
|data102 = {{#if:{{{costume|}}}|{{{dress|}}}}}
|rowclass104 = mergedrow
|label104 = Drink
|data104 = {{{drink|}}}
|rowclass105 = mergedrow
|label105 = {{#ifeq:{{{country}}}|United States|[[List of U.S. state firearms|Firearm]]|Firearm}}
|data105 = {{{firearm|}}}
|rowclass106 = mergedrow
|label106 = {{#ifeq:{{{country}}}|United States|[[List of U.S. state dances|Folk dance]]|Folk dance}}
|data106 = {{{folk_dance|}}}
|rowclass108 = mergedrow
|label108 = {{#ifeq:{{{country}}}|United States|[[List of U.S. state foods|Food]]|Food}}
|data108 = {{{food|}}}
|rowclass110 = mergedrow
|label110 = {{#ifeq:{{{country}}}|United States|[[List of U.S. state fossils|Fossil]]|Fossil}}
|data110 = {{{fossil|}}}
|rowclass112 = mergedrow
|label112 = Game
|data112 = {{{game|}}}
|rowclass113 = mergedrow
|label113 = {{#ifeq:{{{country}}}|United States|[[List of U.S. state minerals, rocks, stones and gemstones|Gemstone]]|Gemstone}}
|data113 = {{{gemstone|}}}
|rowclass114 = mergedrow
|label114 = {{#ifeq:{{{country}}}|United States|[[List of U.S. state instruments|Instrument]]|Instrument}}
|data114 = {{{instrument|}}}
|rowclass116 = mergedrow
|label116 = Lake
|data116 = {{#if:{{{river|}}}||{{{lake|}}}}}
|rowclass118 = mergedrow
|label118 = {{#ifeq:{{{country}}}|United States|[[List of U.S. state minerals, rocks, stones and gemstones|Mineral]]|Mineral}}
|data118 = {{{mineral|}}}
|rowclass120 = mergedrow
|label120 = {{#ifeq:{{{country}}}|United States|[[List of U.S. state minerals, rocks, stones and gemstones|Rock]]|Rock}}
|data120 = {{{rock|}}}
|rowclass122 = mergedrow
|label122 = River
|data122 = {{{river|}}}
|rowclass123 = mergedrow
|label123 = {{#ifeq:{{{country}}}|United States|[[List of U.S. state shells|Shell]]|Shell}}
|data123 = {{{shell|}}}
|rowclass124 = mergedrow
|label124 = {{#ifeq:{{{country}}}|United States|[[List of U.S. state ships|Ship]]|Ship}}
|data124 = {{{ship|}}}
|rowclass126 = mergedrow
|label126 ={{#ifeq:{{{country}}}|United States|[[List of U.S. state soils|Soil]]|Soil}}
|data126 = {{{soil|}}}
|rowclass128 = mergedrow
|label128 = {{#ifeq:{{{country}}}|United States|[[List of U.S. state sports|Sport]]|Sport}}
|data128 = {{{sport|}}}
|rowclass130 = mergedrow
|label130 = Sweet
|data130 = {{{sweet|}}}
|rowclass132 = mergedrow
|label132 = {{#ifeq:{{{country}}}|United States|[[List of U.S. state tartans|Tartan]]|Tartan}}
|data132 = {{{tartan|}}}
|rowclass134 = mergedrow
|label134 = {{#ifeq:{{{country}}}|United States|[[List of U.S. state toys|Toy]]|Toy}}
|data134 = {{{toy|}}}
|rowclass140 = mergedrow
|label140 = Other
|data140 = {{{other|}}}
|rowclass150 = mergedtoprow
|header150 = {{#if:{{{image_route|}}}|
{{if empty
|{{#if:{{{region|}}}|Route marker}}
|{{#if:{{{county|}}}|County route marker}}
|{{if both|{{{state|}}}|{{#ifeq:{{{country}}}|United States|1}}|[[Numbered highways in the United States#State highways|State route marker]]}}
|{{#if:{{{state|}}}|State route marker}}
|{{#if:{{{province|}}}|Provincial route marker}}
|{{#if:{{{country|}}}|National route marker}}
|Route marker}}
}}
|rowclass152 = mergedrow
|data152 = {{#invoke:InfoboxImage|InfoboxImage|image={{{image_route|}}}|size=125x85px|title=Route marker}}
|rowclass154 = mergedtoprow
|header154 = {{#if:{{{image_quarter|}}}|[[50 State quarters|State quarter]]}}
|rowclass156 = mergedrow
| data156 = {{#if:{{{image_quarter|}}}|{{#invoke:InfoboxImage|InfoboxImage
|image={{{image_quarter|}}}
|size={{{image_quarter_size|}}}
|sizedefault=125x85px
|title={{{state|}}} quarter dollar coin}}{{#if:{{{quarter_release_date|}}}|<div>Released in {{{quarter_release_date}}}</div>}}}}
| belowstyle = border-top:#aaa 1px solid
| below = {{#if:{{yesno|{{{embed|{{{embedded|}}}}}}|def=}}||{{if both|{{{state|}}}|{{#ifeq:{{{country|}}}|United States|1}}|[[Lists of United States state symbols]]}}}}
}}{{#invoke:Check for unknown parameters|check|unknown={{main other|[[Category:Pages using infobox region symbols with unknown parameters|_VALUE_{{PAGENAME}}]]}}|preview=Page using [[Template:Infobox region symbols]] with unknown parameter "_VALUE_"|ignoreblank=y
|title|embed|embedded|align|region_type|region|state|county|province|country
|noheader|island|islands|image_flag|image_flag_border|image_flag_size|flag_link
|image_seal|image_seal_size|seal_link|image_arms|image_arms_size
|image_emblem|image_emblem_size|emblem_link
|emblem|nickname|motto|slogan|anthem
|poem|song|hymn|language|foundation_day|currency|calendar|animal|amphibian|bird
|butterfly|cactus|cat|crustacean|dog|domestic_animal|fish|flower|fruit|grass|horse|insect
|mammal|marsupial|mascot|mushroom|pet|plant|reptile|tree|vegetable|wildlife_animal
|beverage|colour|color|colors|costume|dance|dinosaur|dish|dress|drink|firearm|folk_dance
|food|fossil|game|instrument|gemstone|lake|mineral|rock|river|shell|ship|soil|sport
|sweet|confectionery|tartan|toy|other|image_route|image_quarter|image_quarter_size|quarter_release_date
}}{{#invoke:Check for conflicting parameters|check
|template=Infobox region symbols
|cat={{main other|Category:Pages using infobox region symbols with conflicting parameters}}
|song; hymn
|animal; mammal
|animal; bird
|animal; fish
|animal; insect
|animal; butterfly
|sweet; confectionery
|food; dish
|costume; dress
|river; lake
}}<noinclude>
{{documentation}}</noinclude>
m789u2bsfv62bw4rawl305pl7lx4ls8
1378269
1378268
2026-08-03T07:17:14Z
A826
72368
೧ revisions imported from [[:en:Template:Infobox_region_symbols]]
1378268
wikitext
text/x-wiki
{{Infobox
|child = {{yesno|{{{embed|{{{embedded|}}}}}}|def=}}
|bodyclass = ib-region-symbols {{#switch:{{{align|}}} |left=ib-region-symbols-left |none=ib-region-symbols-none |center=ib-region-symbols-center |#default=}}
|templatestyles = Template:Infobox region symbols/styles.css
|title = <includeonly>{{{title|{{#if:{{yesno|{{{embed|{{{embedded|}}}}}}|def=}}||{{#if:{{{region_type|}}}|{{{region_type}}} symbols|{{#if:{{{state|}}}|State symbols|Symbols}}}}{{if last display both| of |{{if empty|{{{region|}}}|{{{state|}}}|{{{county|}}}|{{{province|}}}|{{{country|}}}|}}}}}}}}}</includeonly>
| abovestyle = font-size:85%; white-space:nowrap;
| above = {{#ifexist:List of {{{state}}} state symbols|{{resize|1=120%|2=[[List of {{{state|}}} state symbols|List of state symbols]]}}}}
|subheader = {{#if:{{yesno|{{{embed|{{{embedded|}}}}}}|def=}}|{{#if: {{yesno|{{{no_header|}}}|def=}}||Symbols{{if last display both| of |{{if empty|{{{region|}}}|{{{state|}}}|{{{county|}}}|{{{province|}}}|{{{country|}}} }} }} }} }}
|subheaderclass = {{#if:{{yesno|{{{islands|{{{island|}}}}}}|def=}}|ib-region-symbols-island}}
| image1 = {{#if:{{yesno|{{{embed|{{{embedded|}}}}}}|def=}}||{{#invoke:InfoboxImage|InfoboxImage
|image={{{image_flag|}}}
|border={{yesno-yes|{{{image_flag_border|}}}}}
|size={{{image_flag_size|}}}
|sizedefault=250px }} }}
| caption1 = {{Infobox region symbols/linked|{{{flag_link|}}}|<!--
-->Flag{{if last display both| of |{{if empty|{{{region|}}}|{{{state|}}}|{{{county|}}}|{{{province|}}}|{{{country|}}}}}}}}}
| image2 = {{#if:{{yesno|{{{embed|{{{embedded|}}}}}}|def=}}||{{#invoke:InfoboxImage|InfoboxImage
|image={{{image_seal|}}}
|size={{{image_seal_size|}}}
|sizedefault=150px }}}}
| caption2 = {{Infobox region symbols/linked|{{{seal_link|}}}|<!--
-->Seal{{if last display both| of |{{if empty|{{{region|}}}|{{{state|}}}|{{{county|}}}|{{{province|}}}|{{{country|}}}}}}}}}
| image3 = {{#invoke:InfoboxImage|InfoboxImage
|image={{{image_emblem|}}}
|size={{{image_emblem_size|}}}
|sizedefault=150px }}
| caption3 = {{Infobox region symbols/linked|{{{emblem_link|}}}|<!--
-->Emblem{{if last display both| of |{{if empty|{{{region|}}}|{{{state|}}}|{{{county|}}}|{{{province|}}}|{{{country|}}}}}}}}}
| image4 = {{#if:{{yesno|{{{embed|{{{embedded|}}}}}}|def=}}||{{#invoke:InfoboxImage|InfoboxImage
|image={{{image_arms|}}}
|size={{{image_arms_size|}}}
|sizedefault=150px }}}}
| caption4 = {{link if exists|Coat of arms{{if last display both| of |{{if empty|{{{region|}}}|{{{state|}}}|{{{county|}}}|{{{province|}}}|{{{country|}}}}}}}}}
| headerstyle = border-top:#aaa 1px solid
<!-- A spacer below the subheader, if embedded -->
|rowclass1 = mergedtoprow
|data1 = {{#if:{{yesno|{{{embed|{{{embedded|}}}}}}|def=}}|<div style="height:0px"></div>}}
|rowclass3 = mergedrow
|label3 = {{#switch:{{{country}}}
| India = [[List of Indian state emblems|Emblem]]
| #default = Emblem
}}
|data3 = {{{emblem|}}}
|rowclass4 = mergedrow
|label4 = {{#ifeq:{{{country}}}|United States|[[List of U.S. state and territory nicknames|Nickname]]|Nickname}}
|data4 = {{{nickname|}}}
|rowclass5 = mergedrow
|label5 = {{#switch:{{{country}}}
| India = [[List of Indian state mottos|Motto]]
| United States = [[List of U.S. state and territory mottos|Motto]]
| #default = Motto
}}
|data5 = {{{motto|}}}
|rowclass6 = mergedrow
|label6 = {{#ifeq:{{{country}}}|United States|[[List of U.S. state poems|Poem]]|Poem}}
|data6 = {{{poem|}}}
|rowclass7 = mergedrow
|label7 = {{#ifeq:{{{country}}}|United States|[[List of U.S. state and territory nicknames|Slogan]]|Slogan}}
|data7 ={{{slogan|}}}
|rowclass8 = mergedrow
|label8 = Anthem
|data8 = {{{anthem|}}}
|rowclass10 = mergedrow
|label10 = {{#switch:{{{country}}}
|India = [[List of Indian state songs|{{#if:{{{song|}}}|Song|Hymn}}]]
|United States = [[List of U.S. state songs|Song]]
| #default = {{#if:{{{song|}}}|Song|Hymn}}
}}
|data10 = {{if empty|{{{song|}}}|{{{hymn|}}}}}
|rowclass12 = mergedrow
|label12 = {{#switch:{{{country}}}
| India = [[Languages with official status in India|Language]]
| #default = Language
}}
|data12 = {{{language|}}}
|rowclass14 = mergedrow
|label14 = {{#switch:{{{country}}}
|India = [[List of Indian state foundation days|Foundation day]]
| #default = Foundation day
}}
|data14 = {{{foundation_day|}}}
|rowclass16 = mergedrow
|label16 = Currency
|data16 = {{{currency|}}}
|rowclass18 = mergedrow
|label18 = Calendar
|data18 = {{{calendar|}}}
|rowclass50 = mergedtoprow
|header50 = {{#if:{{yesno|{{{embed|{{{embedded|}}}}}}|def=}}||{{if both
|{{#ifexpr:{{#invoke:ParameterCount|main
|animal|amphibian|bird|butterfly|cactus|cat|crustacean|dog|domestic_animal|fish|flower|fruit|grass|horse|insect
|mammal|marsupial|mascot|mushroom|pet|plant|reptile|tree|vegetable|wildlife_animal}} > 2|1}}
|{{#ifexpr:{{#invoke:ParameterCount|main
|beverage|colour|color|costume|dance|dinosaur|dish|dress|drink|firearm
|folk_dance|food|fossil|game|instrument|gemstone|lake|mineral
|rock|river|shell|ship|soil|sport|sweet|confectionery|tartan|toy|other}} > 2|1}}
|Living insignia}}}}
|rowclass52 = mergedrow
|label52 = {{#switch:{{{country}}}
| India = [[List of Indian state animals|Animal]]
| #default = Animal
}}
|data52 = {{#if:{{{mammal|}}}{{{bird|}}}{{{fish|}}}{{{insect|}}}{{{butterfly|}}}||{{{animal|}}}}}
|rowclass53 = mergedrow
|label53 = {{#ifeq:{{{country}}}|United States|[[List of U.S. state amphibians|Amphibian]]|Amphibian}}
|data53 = {{{amphibian|}}}
|rowclass54 = mergedrow
|label54 = {{#switch:{{{country}}}
| India = [[List of Indian state birds|Bird]]
| United States = [[List of U.S. state birds|Bird]]
| #default = Bird
}}
|data54 = {{{bird|}}}
|rowclass56 = mergedrow
|label56 = {{#ifeq:{{{country}}}|United States|[[List of U.S. state insects|Butterfly]]|Butterfly}}
|data56 = {{{butterfly|}}}
|rowclass57 = mergedrow
|label57 = Cactus
|data57 = {{{cactus|}}}
|rowclass58 = mergedrow
|label58 = {{#ifeq:{{{country}}}|United States|[[List of U.S. state mammals|Cat breed]]|Cat breed}}
|data58 = {{{cat|}}}
|rowclass59 = mergedrow
|label59 = {{#ifeq:{{{country}}}|United States|[[List of U.S. state crustaceans|Crustacean]]|Crustacean}}
|data59 = {{{crustacean|}}}
|rowclass60 = mergedrow
|label60 = {{#ifeq:{{{country}}}|United States|[[List of U.S. state dogs|Dog breed]]|Dog breed}}
|data60 = {{{dog|}}}
|rowclass61 = mergedrow
|label61 ={{#ifeq:{{{country}}}|United States|[[List of U.S. state mammals|Domestic animal]]|Domestic animal}}
|data61 ={{{domestic_animal|}}}
|rowclass62 = mergedrow
|label62 = {{#ifeq:{{{country}}}|United States|[[List of U.S. state fish|Fish]]|Fish}}
|data62 = {{{fish|}}}
|rowclass63 = mergedrow
|label63 = {{#switch:{{{country}}}
| India = [[List of Indian state flowers|Flower]]
| United States = [[List of U.S. state and territory flowers|Flower]]
| #default = Flower
}}
|data63 = {{{flower|}}}
|rowclass64 = mergedrow
|label64 = Fruit
|data64 = {{{fruit|}}}
|rowclass65 = mergedrow
|label65 = {{#ifeq:{{{country}}}|United States|[[List of U.S. state grasses|Grass]]|Grass}}
|data65 = {{{grass|}}}
|rowclass66 = mergedrow
|label66 = {{#ifeq:{{{country}}}|United States|[[List of U.S. state mammals|Horse breed]]|Horse breed}}
|data66 = {{{horse|}}}
|rowclass67 = mergedrow
|label67 = {{#ifeq:{{{country}}}|United States|[[List of U.S. state insects|Insect]]|Insect}}
|data67 = {{{insect|}}}
|rowclass68 = mergedrow
|label68 = {{#switch:{{{country}}}
| India = [[List of Indian state animals|Mammal]]
| United States = [[List of U.S. state mammals|Mammal]]
| #default = Mammal
}}
|data68 = {{{mammal|}}}
|rowclass69 = mergedrow
|label69 = Marsupial
|data69 = {{{marsupial|}}}
|rowclass70 = mergedrow
|label70 = Mascot
|data70 = {{{mascot|}}}
|rowclass71 = mergedrow
|label71 = {{#ifeq:{{{country}}}|United States|[[List of U.S. state mushrooms|Mushroom]]|Mushroom}}
|data71 = {{{mushroom|}}}
|rowclass72 = mergedrow
|label72 = {{#ifeq:{{{country}}}|United States|[[List of U.S. state dogs|Pet]]|Pet}}
|data72 = {{{pet|}}}
|rowclass73 = mergedrow
|label73 = Plant
|data73 = {{{plant|}}}
|rowclass74 = mergedrow
|label74 = {{#ifeq:{{{country}}}|United States|[[List of U.S. state reptiles|Reptile]]|Reptile}}
|data74 = {{{reptile|}}}
|rowclass75 = mergedrow
|label75 = {{#switch:{{{country}}}
| India = [[List of Indian state trees|Tree]]
| United States = [[List of U.S. state and territory trees|Tree]]
| #default = Tree
}}
|data75 = {{{tree|}}}
|rowclass76 = mergedrow
|label76 = Vegetable
|data76 = {{{vegetable|}}}
|rowclass78 = mergedrow
|label78 = {{#ifeq:{{{country}}}|United States|[[List of U.S. state mammals|Wildlife animal]]|Wildlife animal}}
|data78 = {{{wildlife_animal|}}}
|rowclass90 = mergedtoprow
|header90 = {{#if:{{yesno|{{{embed|{{{embedded|}}}}}}|def=}}||{{if both
|{{#ifexpr:{{#invoke:ParameterCount|main
|animal|amphibian|bird|butterfly|cactus|cat|crustacean|dog|domestic_animal|fish|flower|fruit|grass|horse|insect
|mammal|marsupial|mascot|mushroom|pet|plant|reptile|tree|vegetable|wildlife_animal}} > 2|1}}
|{{#ifexpr:{{#invoke:ParameterCount|main
|beverage|colour|color|costume|dance|dinosaur|dish|dress|drink|firearm
|folk_dance|food|fossil|game|instrument|gemstone|lake|mineral
|rock|river|shell|ship|soil|sport|sweet|confectionery|tartan|toy|other}} > 2|1}}
|Inanimate insignia}}}}
|rowclass92 = mergedrow
|label92 = {{#ifeq:{{{country}}}|United States|[[List of U.S. state beverages|Beverage]]|Beverage}}
|data92 = {{{beverage|}}}
|rowclass94 = mergedrow
|label94 = {{#ifeq:{{{country}}}|United States
|[[List of U.S. state colors|Color]]|{{#if:{{{colour|}}}|Colour|Color}}}}<!--
-->{{Pluralize from text|{{if empty|{{{colors|}}}|{{{colour|}}}|{{{color|}}}}}|likely=(s)|plural=s}}
|data94 = {{if empty|{{{colors|}}}|{{{colour|}}}|{{{color|}}}}}
|rowclass95 = mergedrow
|label95 = Confectionery
|data95 = {{#if:{{{sweet|}}}||{{{confectionery|}}}}}
|rowclass96 = mergedrow
|label96 = Costume
|data96 = {{{costume|}}}
|rowclass98 = mergedrow
|label98 = {{#ifeq:{{{country}}}|United States|[[List of U.S. state dances|Dance]]|Dance}}
|data98 = {{{dance|}}}
|rowclass99 = mergedrow
|label99 = {{#ifeq:{{{country}}}|United States|[[List of U.S. state dinosaurs|Dinosaur]]|Dinosaur}}
|data99 = {{{dinosaur|}}}
|rowclass100 = mergedrow
|label100 = Dish
|data100 = {{#if:{{{food|}}}||{{{dish|}}}}}
|rowclass102 = mergedrow
|label102 = Dress
|data102 = {{#if:{{{costume|}}}|{{{dress|}}}}}
|rowclass104 = mergedrow
|label104 = Drink
|data104 = {{{drink|}}}
|rowclass105 = mergedrow
|label105 = {{#ifeq:{{{country}}}|United States|[[List of U.S. state firearms|Firearm]]|Firearm}}
|data105 = {{{firearm|}}}
|rowclass106 = mergedrow
|label106 = {{#ifeq:{{{country}}}|United States|[[List of U.S. state dances|Folk dance]]|Folk dance}}
|data106 = {{{folk_dance|}}}
|rowclass108 = mergedrow
|label108 = {{#ifeq:{{{country}}}|United States|[[List of U.S. state foods|Food]]|Food}}
|data108 = {{{food|}}}
|rowclass110 = mergedrow
|label110 = {{#ifeq:{{{country}}}|United States|[[List of U.S. state fossils|Fossil]]|Fossil}}
|data110 = {{{fossil|}}}
|rowclass112 = mergedrow
|label112 = Game
|data112 = {{{game|}}}
|rowclass113 = mergedrow
|label113 = {{#ifeq:{{{country}}}|United States|[[List of U.S. state minerals, rocks, stones and gemstones|Gemstone]]|Gemstone}}
|data113 = {{{gemstone|}}}
|rowclass114 = mergedrow
|label114 = {{#ifeq:{{{country}}}|United States|[[List of U.S. state instruments|Instrument]]|Instrument}}
|data114 = {{{instrument|}}}
|rowclass116 = mergedrow
|label116 = Lake
|data116 = {{#if:{{{river|}}}||{{{lake|}}}}}
|rowclass118 = mergedrow
|label118 = {{#ifeq:{{{country}}}|United States|[[List of U.S. state minerals, rocks, stones and gemstones|Mineral]]|Mineral}}
|data118 = {{{mineral|}}}
|rowclass120 = mergedrow
|label120 = {{#ifeq:{{{country}}}|United States|[[List of U.S. state minerals, rocks, stones and gemstones|Rock]]|Rock}}
|data120 = {{{rock|}}}
|rowclass122 = mergedrow
|label122 = River
|data122 = {{{river|}}}
|rowclass123 = mergedrow
|label123 = {{#ifeq:{{{country}}}|United States|[[List of U.S. state shells|Shell]]|Shell}}
|data123 = {{{shell|}}}
|rowclass124 = mergedrow
|label124 = {{#ifeq:{{{country}}}|United States|[[List of U.S. state ships|Ship]]|Ship}}
|data124 = {{{ship|}}}
|rowclass126 = mergedrow
|label126 ={{#ifeq:{{{country}}}|United States|[[List of U.S. state soils|Soil]]|Soil}}
|data126 = {{{soil|}}}
|rowclass128 = mergedrow
|label128 = {{#ifeq:{{{country}}}|United States|[[List of U.S. state sports|Sport]]|Sport}}
|data128 = {{{sport|}}}
|rowclass130 = mergedrow
|label130 = Sweet
|data130 = {{{sweet|}}}
|rowclass132 = mergedrow
|label132 = {{#ifeq:{{{country}}}|United States|[[List of U.S. state tartans|Tartan]]|Tartan}}
|data132 = {{{tartan|}}}
|rowclass134 = mergedrow
|label134 = {{#ifeq:{{{country}}}|United States|[[List of U.S. state toys|Toy]]|Toy}}
|data134 = {{{toy|}}}
|rowclass140 = mergedrow
|label140 = Other
|data140 = {{{other|}}}
|rowclass150 = mergedtoprow
|header150 = {{#if:{{{image_route|}}}|
{{if empty
|{{#if:{{{region|}}}|Route marker}}
|{{#if:{{{county|}}}|County route marker}}
|{{if both|{{{state|}}}|{{#ifeq:{{{country}}}|United States|1}}|[[Numbered highways in the United States#State highways|State route marker]]}}
|{{#if:{{{state|}}}|State route marker}}
|{{#if:{{{province|}}}|Provincial route marker}}
|{{#if:{{{country|}}}|National route marker}}
|Route marker}}
}}
|rowclass152 = mergedrow
|data152 = {{#invoke:InfoboxImage|InfoboxImage|image={{{image_route|}}}|size=125x85px|title=Route marker}}
|rowclass154 = mergedtoprow
|header154 = {{#if:{{{image_quarter|}}}|[[50 State quarters|State quarter]]}}
|rowclass156 = mergedrow
| data156 = {{#if:{{{image_quarter|}}}|{{#invoke:InfoboxImage|InfoboxImage
|image={{{image_quarter|}}}
|size={{{image_quarter_size|}}}
|sizedefault=125x85px
|title={{{state|}}} quarter dollar coin}}{{#if:{{{quarter_release_date|}}}|<div>Released in {{{quarter_release_date}}}</div>}}}}
| belowstyle = border-top:#aaa 1px solid
| below = {{#if:{{yesno|{{{embed|{{{embedded|}}}}}}|def=}}||{{if both|{{{state|}}}|{{#ifeq:{{{country|}}}|United States|1}}|[[Lists of United States state symbols]]}}}}
}}{{#invoke:Check for unknown parameters|check|unknown={{main other|[[Category:Pages using infobox region symbols with unknown parameters|_VALUE_{{PAGENAME}}]]}}|preview=Page using [[Template:Infobox region symbols]] with unknown parameter "_VALUE_"|ignoreblank=y
|title|embed|embedded|align|region_type|region|state|county|province|country
|noheader|island|islands|image_flag|image_flag_border|image_flag_size|flag_link
|image_seal|image_seal_size|seal_link|image_arms|image_arms_size
|image_emblem|image_emblem_size|emblem_link
|emblem|nickname|motto|slogan|anthem
|poem|song|hymn|language|foundation_day|currency|calendar|animal|amphibian|bird
|butterfly|cactus|cat|crustacean|dog|domestic_animal|fish|flower|fruit|grass|horse|insect
|mammal|marsupial|mascot|mushroom|pet|plant|reptile|tree|vegetable|wildlife_animal
|beverage|colour|color|colors|costume|dance|dinosaur|dish|dress|drink|firearm|folk_dance
|food|fossil|game|instrument|gemstone|lake|mineral|rock|river|shell|ship|soil|sport
|sweet|confectionery|tartan|toy|other|image_route|image_quarter|image_quarter_size|quarter_release_date
}}{{#invoke:Check for conflicting parameters|check
|template=Infobox region symbols
|cat={{main other|Category:Pages using infobox region symbols with conflicting parameters}}
|song; hymn
|animal; mammal
|animal; bird
|animal; fish
|animal; insect
|animal; butterfly
|sweet; confectionery
|food; dish
|costume; dress
|river; lake
}}<noinclude>
{{documentation}}</noinclude>
m789u2bsfv62bw4rawl305pl7lx4ls8
ಉತ್ತರಾಖಂಡದಲ್ಲಿ ಚುನಾವಣೆಗಳು
0
79079
1378199
1338250
2026-08-02T16:25:23Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378199
wikitext
text/x-wiki
==[[ಉತ್ತರಾಖಂಡ]] ರಾಜ್ಯದ ಉದಯ==
[[File:India Uttarakhand locator map.svg|thumb|ಭಾರತದಲ್ಲಿ ಉತ್ತರಾಖಂಡವನ್ನು ಗುರುತಿಸಿದ ನಕ್ಷೆ]]
*ಸೆಪ್ಟೆಂಬರ್ 1998 24 [[ಉತ್ತರ ಪ್ರದೇಶ]] ವಿಧಾನಸಭೆ ಮತ್ತು ಉತ್ತರ ಪ್ರದೇಶ ವಿಧಾನ ಪರಿಷತ್ ಹೊಸ ರಾಜ್ಯದ ರಚಿಸುವ ಪ್ರಕ್ರಿಯೆ ಆರಂಭಿಸಿದರು. ಇದು ಉತ್ತರ ಪ್ರದೇಶ ಪುನಸ್ಸಂಘಟನಾ ಕಾಯಿದೆ ಜಾರಿಗೆ ಕಾರಣವಾಯಿತು. ಎರಡು ವರ್ಷಗಳ ನಂತರ ಭಾರತದ ಸಂಸತ್ತು ಉತ್ತರ ಪ್ರದೇಶ ಪುನಸ್ಸಂಘಟನಾ ಕಾಯಿದೆ, 2000 ಜಾರಿಗೆ ಅನುಮೋದನೆ ನೀಡಿತು ಮತ್ತು ಇದರಿಂದಾಗಿ 9,ನವೆಂಬರ್ 2000 ದಂದು ಉತ್ತರಾಖಂಡ್ ಭಾರತ ಗಣರಾಜ್ಯದ 29ನೇ ರಾಜ್ಯವಾಯಿತು.<ref>Define Uttarakhand at Dictionary.com".Dictionary.com.</ref>
*[[ಉತ್ತರಾಖಂಡ]]ದ ವಿಧಾನಸಭೆಯನ್ನು 'ಉತ್ತರಾಖಂಡ್ ವಿಧಾನಸಭೆ' ಎಂದು ಕರೆಯಲಾಗುತ್ತದೆ (ಹಿಂದಿ: उत्तराखण्ड विधानसभा). ಜೊತೆಗೆ ಉತ್ತರಾಖಂಡದ ಏಕಸಭೆಯ ಆಡಳಿತ ಮತ್ತು ಕಾನೂನು ಕೈಗೊಳ್ಳುವ ಶಾಸಕಾಂಗವಾಗಿದೆ. [[ಭಾರತ]]ದ 29 ರಾಜ್ಯಗಳಲ್ಲಿ ಒಂದು, ಮತ್ತು ಡೆಹ್ರಾಡೂನ್ ಉತ್ತರಾಖಂಡ ರಾಜ್ಯದ ರಾಜಧಾನಿ. ಲೆಜಿಸ್ಲೇಟಿವ್ ಅಸೆಂಬ್ಲಿಯಲ್ಲಿ 71 ಸದಸ್ಯರು(MLA)ಇರುತ್ತಾರೆ.<ref>"About Us". Government of Uttarakhand. Retrieved 17 July 2012.</ref>
* ಈಗಿನ ಮುಖ್ಯಮಂತ್ರಿ ಹರೀಶ್ ರಾವತ್ ಉತ್ತರಾಖಂಡ್ ವಿಧಾನಸಭೆ ಮುಖಂಡರಾಗಿದ್ದು. ವಿಧಾನಸಭೆಯ ಸ್ಪೀಕರ್ ಗೋವಿಂದ್ ಸಿಂಗ್ ಕುಂಜುವಾಲಾ ಆಗಿದ್ದಾರೆ. ಕೃಷ್ಣನ್ ಕಾಂತ್ ಪಾಲ್ ಉತ್ತರಖಂಡದ ರಾಜ್ಯಪಾಲರು. ಉತ್ತರಾಖಂಡ್ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳನ್ನು, ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನಡೆಸಲಾಗುತ್ತದೆ. ಉತ್ತರಾಖಂಡ್ ಅಸೆಂಬ್ಲಿ ಏಕಪಕ್ಷೀಯವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಚುನಾವಣೆಗಳ ನಿರ್ವಹಣೆಗೆ ರಾಜ್ಯದ ಶಾಸನಸಭೆಯಿಂದ ಯಾವುದೇ ಬದಲಾವಣೆಗಳನ್ನು ಮಾಡಲು ಭಾರತದ ಪಾರ್ಲಿಮೆಂಟ್'ನ ಅನುಮೋದನೆ ಅಗತ್ಯವಿದೆ. ಆದರೆ ವಿಧಾನಸಭೆ ಕಾನೂನುಗಳು ರಚಿಸುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ಭಾರತ ಸಂವಿಧಾನದ ವಿಧಿ 356 ಪ್ರಕಾರ ಸಂಸತ್ತು ರಾಜ್ಯ ಶಾಸಕಾಂಗವನ್ನು ವಜಾ ಮಾಡಬಹುದು, ಹಾಗೂ ರಾಷ್ಟ್ರಪತಿ ಆಡಳಿತವನ್ನು ಹೊರಿಸಬಹುದು.(ಭಾನುವಾರ 2016 ಮಾರ್ಚ್ 27 ರಿಂದ ಜಾರಿಗೆ ಬರುವಂತೆ ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿದೆ.)<ref name="ref1">http://www.hindustantimes.com/india/president-s-rule-imposed-in-uttarakhand-amid-political-crisis-cong-fumes/story-ksKOtAvVsbuqrWBBMfSiTP.html</ref>
==ಉತ್ತರಾಖಂಡದ ವಿಧಾನಸಭೆ ಚುನಾವಣೆಗಳು==
{| class="wikitable sortable "
|-
!ಅಸೆಂಬ್ಲಿ ||ಚುನಾವಣಾ ವರ್ಷ ||ಸ್ಪೀಕರ್ ||ಮುಖ್ಯಮಂತ್ರಿ||ಪಕ್ಷ ||ನಾಯಕ || ರಾಜಕೀಯ ಪಕ್ಷ
|-
|ಮಧ್ಯಂತರ ಅಸೆಂಬ್ಲಿ|| N/A ||ಪ್ರಕಾಶ್ ಪಂತ್||ಸ್ವಾಮಿ ನಿತ್ಯಾನಂದ, ಎಸ್ ಕೊಶ್ಯಾರಿ|| ಭಾಜಪ ||ಯಾವುದೂ ಇಲ್ಲ ||
|-
|1 ನೇ ಅಸೆಂಬ್ಲಿ|| 2002 ||ಯಶ್ಪಾಲ್ ಆರ್ಯ|| ಎನ್ ಡಿ ತಿವಾರಿ||ಕಾಂಗ್ರೆಸ್||ಸಿಂಗ್ ಕಂಡೂರಿ ಮತಲಬ್|| ಭಾರತೀಯ ಜನತಾ ಪಕ್ಷ
|-
|2 ನೇ ಅಸೆಂಬ್ಲಿ||2007||ಹರಬನ್ಸ್ ಕಪೂರ್|| ಬಿ ಸಿ ಖಂಡಾರಿ, ರಮೇಶ್ಪೊಕ್ರಿಯಾ,ಬಿ ಸಿ ಖಂಡಾರಿ,||ಭಾಜಪ ||ಹರಾಕ್ ಸಿಂಗ್ ರಾವತ್||ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
|3 ನೇ ಅಸೆಂಬ್ಲಿ||2012||ಗೋವಿಂದ್ ಸಿಂಗ್ ಕುಂಜವಾಲಾ ||ವಿಜಯ್ ಬಹುಗುಣ,ಹರೀಶ್ ರಾವತ್ ||ಕಾಂಗ್ರೆಸ್ ||ಅಜಯ್ ಭಟ್||ಭಾರತೀಯ ಜನತಾ ಪಕ್ಷ
|-
|}
==2002 ರ ಚುನಾವಣೆ==
*'''ಉತ್ತರಾಖಂಡ ರಾಜ್ಯ ವಿಧಾನಸಭೆ ಚುನಾವಣೆ, 2002''' ರಲ್ಲಿ[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] 36 ಸ್ಥಾನಗಳನ್ನು ಪಡೆಯುವುದರೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ರಾಜ್ಯದ ಮೊದಲ [[ವಿಧಾನಸಭೆ]] ([[ವಿಧಾನಸಭೆಯ]]) ಚುನಾವಣೆಯ ಚುನಾವಣೆಯಲ್ಲಿ 70 ಸ್ಥಾನದ ಶಾಸನಸಭೆಯಲ್ಲಿ. [[ಭಾರತೀಯ ಜನತಾ ಪಕ್ಷ]] 19 ಸ್ಥಾನಗಳನ್ನು ಹೊಂದಿರುವ ಅಧಿಕೃತ ವಿರೋಧ ಪಕ್ಷವಾಯಿತು.<sup>೧</sup>
{| class="wikitable sortable sortable" style="text-align: center;"
! align="center" | ಕ್ರ.ಸಂ.:
! align="center" | ಪಕ್ಷದ ಹೆಸರು
! align="center" | ಸ್ಪರ್ಧೆ
! align="center" | ಗೆಲುವು
! align="center" | %
|-
|1||align="left"|[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] (INC)||'''70'''||'''36'''||'''26.91%'''
|-
|2||align="left"|[[ಭಾರತೀಯ ಜನತಾ ಪಾರ್ಟಿ]] (BJP)||'''69'''||'''19'''||'''25.45%'''
|-
|3||align="left"|[[ಬಹುಜನ ಸಮಾಜ ಪಾರ್ಟಿ]] (BSP)||'''68'''||'''7'''||'''10.93%'''
|-
|4||align="left"|[[ಉತ್ತರಾಕಂಡ ಕ್ರಾಂತಿದಳ]] (UKD)||'''62'''||'''4'''||'''5.49%'''
|-
|5||align="left"|[[ಪಕ್ಷೇತರರು]]||'''70'''||'''4'''||'''-'''
|-
| ||align="centre"|''' ಒಟ್ಟು '''|| ||'''70'''||
|}
==2007ರ ಚುನಾವಣೆ==
*ಉತ್ತರಾಖಂಡ್ ವಿಧಾನಸಭೆಯ ಚುನಾವಣೆ 2007 - ರಾಜ್ಯದ ಮೂರನೇ ವಿಧಾನಸಭೆ.. ಭಾರತೀಯ ಜನತಾ ಪಕ್ಷ 70 ಸ್ಥಾನಗಳ ಶಾಸನಸಭೆಯಲ್ಲಿ 35 ಸ್ಥಾನಗಳನ್ನು ಪಡೆಯುವುದರೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. 2007 ರ ಫೆಬ್ರವರಿ 21 ರಂದು ನಡೆದ ಚುನಾವಣೆಯಲ್ಲಿ,. ಸರ್ಕಾರ ರಚಿಸಲು ಒಂದು ಸ್ಥಾನವನ್ನು ಪಡೆಯಲು ಬೇರೆ ಪಕ್ಷದ ಬೆಂಬಲ ಅವಲಂಬಿಸಬೇಕಾಗಿತ್ತು. ಬಿಜೆಪಿ ಉತ್ತರಾಖಂಡ್ ಕ್ರಾಂತಿ ದಳ ಮತ್ತು ಮೂರು ಸ್ವತಂತ್ರ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 21 ಸ್ಥಾನಗಳನ್ನು ಹೊಂದಿರುವ ಅಧಿಕೃತ ವಿರೋಧ ಪಕ್ಷವಾಯಿತು.<ref>http://legislativebodiesinindia.nic.in/uttranchal.htm</ref>
;ಫಲಿತಾಂಶ:
{| class="wikitable sortable " style="text-align: center;"
! align="center" | ಕ್ರ.ಸಂ.:
! align="center" | ಪಕ್ಷದ ಹೆಸರು
! align="center" | ಸ್ಪರ್ಧೆ
! align="center" | ಗೆಲುವು
|-
|1||align="left"|[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] (INC)||'''70'''||'''21'''
|-
|2||align="left"|[[ಭಾರತೀಯ ಜನತಾ ಪಾರ್ಟಿ]] (BJP)||'''70'''||'''35'''
|-
|3||align="left"|[[ಬಹುಜನ ಸಮಾಜ ಪಾರ್ಟಿ]] (BSP)||'''70'''||'''8'''
|-
|4||align="left"|[[ಉತ್ತರಾಕಂಡ ಕ್ರಾಂತಿದಳ]] (UKD)||'''61'''||'''3'''
|-
|5||align="left"|[[ಪಕ್ಷೇತರರು]]||'''70'''||'''3'''
|-
| ||align="centre"|''' ಒಟ್ಟು '''||.||'''70'''
|}3
*[[ಭಾರತೀಯ ಜನತಾ ಪಕ್ಷ]], 35 ಸ್ಥಾನಗಳನ್ನು ಪಡೆಯುವುದರೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಹಳ ತಿಕ್ಕಾಟದ ನಂತರ 3 ಉತ್ತರಖಂಡ ಕ್ರಾಂತಿ ದಳದವರು ಮತ್ತು ಮೂವರು ಪಕ್ಷೇತರರು ಸರ್ಕಾರಕ್ಕೆ ಬೆಂಬಲ ಕೊಡುವರೆಂದು ಘೋಷಿಸಲಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರವು 70 ಸ್ಥಾನಗಳ ಪೈಕಿ ಕೇವಲ 21 ಸ್ಥಾನಗಳನ್ನು ಪಡೆದು, ಅಧಿಕಾರ ಕಳೆದುಕೊಂಡಿತು.
*ದೀರ್ಘ ಚರ್ಚೆಗಳ ನಂತರ ಬಿ ಸಿ ಖಂಡೂರಿ ಮುಖ್ಯಮಂತ್ರಿ ಎಂದೂ ಬಿ ಎಸ್ ಕೊಶಾರಿ ಪಕ್ಷದ ಹೊಣೆ ನಿರ್ವಹಿಸಲು ತೀರ್ಮಾನವಾಯಿತು.
;ವಿಧಾನಸಭೆಯಲ್ಲಿ ಮುಖ್ಯ ಸ್ಥಾನ ಹೊಂದಿರುವವರು:
* ಸ್ಪೀಕರ್: ಹರ್ಬನ್ಸ್ ಕಪೂರ್
* ಉಪ-ಸ್ಪೀಕರ್: ಖಾಲಿ
* ಬಿ.ಸಿ.ಖಂಡೂರಿ: ವಿಧಾನಸಭಾ ನಾಯಕ (ಮುಖ್ಯ ಮಂತ್ರಿ)
* ವಿರೋಧ ಪಕ್ಷದ ನಾಯಕ: ಹರಾಕ್ ಸಿಂಗ್ ರಾವತ್
* ಕಾರ್ಯದರ್ಶಿ: ಮಹೇಶ್ ಚಂದ್ರ [೧]
==2012ರ ಚುನಾವಣೆ==
==ಉತ್ತರಾಖಂಡ ಚುನಾವಣೆ ೨೦೧೨==
*(೩೦-೧-೨೦೧೨)- ಮಾರ್ಚಿ
;ಉತ್ತರಾಖಂಡ್ ವಿಧಾನಸಭೆ:
{| class="wikitable sortable sortable"
|-
! ಸ್ಥಾನ !! ಪಾರ್ಟಿ(ಉತ್ತರಾಖಂಡ-2012) !! ನಿಂತ ಸ್ಥಾನ !! ಗೆಲುವು!! % ಒಟ್ಟು ಓಟಿನಲ್ಲಿ !! % ಓಟು ಸ್ಪರ್ಧಿಸಿದ ಕ್ಷೇತ್ರದಲ್ಲಿ
|-
| 1 || ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)|| 70 || 32 || 33.79 ||33.79
|-
| 3|| ಬಹುಜನ ಸಮಾಜ ಪಾರ್ಟಿ (BSP)|| 70 || 3 || 12.1 9 || 19
|-
| 4 || ಪಕ್ಷೇತರ|| -- || 3 || 12.34 || --
|-
| 5 || ಉತ್ತರಖಂಡಕ್ರಾಂತಿ ದಳUKD(P) || 44 || 1|| 1.93 || 3.18
|-
| 2 || ಭಾರತೀಯ ಜನತಾದಳ (BJP)|| 70 || 31 || 33.13|| 33.13
|-
| || - ಒಟ್ಟು - || Total 70 || -- || --|| --
|}
'''ಲೋಕ ಸಭೆ''' 2009 (ಸ್ಥಾನ 5
*ಕಾಂಗ್ರೆಸ್ ------5, (43.14% )
*ಬಿಜೆಪಿ --------0;( 33.80%)
*ಬಿಎಸ್ ಪಿ ----- 0(15.24%)
*ಒಟ್ಟು --------5
==
*ಲೋಕ ಸಭೆ''' 2014
*ಬಿಜೆಪಿ.......5
*ಒಟ್ಟು....5
== ವಿಧಾನಸಭೆ ಉಪಚುನಾವಣೆ ೨೪-೭-೨೦೧೪ ==
*(ಉತ್ತರಾಂಚಲ ಮರುಚುನಾವಣೆ: ಕಾಂಗ್ರೆಸ್ ಸ್ವೀಪ್ಏಜೆನ್ಸೀಸ್ | Jul 25, 2014, 04.18PM)
*ಧಾರ್ಚೂಲಾ ಕ್ಷೇತ್ರದಲ್ಲಿ ಸಿಎಂ ರಾವತ್ 20 ಸಾವಿರ ಮತಗಳಿಂದ ಗೆದ್ದರೆ, ದೊಯ್ವಾಲದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಹಿರಾಸಿಂಗ್ ಬಿಸ್ತ್(6 ಸಾವಿರ) ಹಾಗೂ ಸೋಮೇಶ್ವರ ಮೀಸಲು ಕ್ಷೇತ್ರದಲ್ಲಿ ರೇಖಾ ಆರ್ಯ(9 ಸಾವಿರ) ಮತಗಳಿಂದ ಗೆಲುವು ದಾಖಲಿಸಿದ್ದಾರೆ ಎಂದು ಉತ್ತರಾಖಂಡ್ನ ಮುಖ್ಯ ಚುನಾವಣಾ ಅಧಿಕಾರಿ ರಾಧಾ ರಾತುರಿ ಹೇಳಿದ್ಧಾರೆ.
*ಧಾರ್ಚೂಲಾ ಕ್ಷೇತ್ರದಲ್ಲಿ ರಾವತ್ಗೆ 31214 ಮತಗಳು ಬಂದಿದ್ದರೆ ಪ್ರತಿಸ್ಪರ್ಧಿ ಬಿಜೆಪಿಯ ಬಿ.ಡಿ.ಜೋಷಿಗೆ ಸಿಕ್ಕಿದ್ದು 10610 ಮತಗಳು ಮಾತ್ರ. ಅದೇ ವೇಳೆ ದೊಯ್ವಾಲದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಹಿರಾಸಿಂಗ್ ಬಿಸ್ತ್ಗೆ 35980 ಹಾಗೂ ಪ್ರತಿಸ್ಪರ್ಧಿ ಬಿಜೆಪಿಯ ತ್ರಿವೇಂದ್ರಸಿಂಗ್ ರಾವತ್ಗೆ 29465 ಮತಗಳು ಬಂದಿವೆ. ಸೋಮೇಶ್ವರ ಮೀಸಲು ಕ್ಷೇತ್ರದಲ್ಲಿ ರೇಖಾ ಆರ್ಯಗೆ 22996 ಹಾಗೂ ಎದುರಾಳಿ ಬಿಜೆಪಿಯ ಮೋಹನ್ರಾಮ್ ಆರ್ಯಗೆ 13091 ಮತಗಳು ಸಿಕ್ಕಿವೆ ಎಂದು ರಾಧಾ ರಾತುರಿ ಹೇಳಿದರು.
*70 ಸದಸ್ಯರಿರುವ ವಿದಾನ ಸಭೆಯಲ್ಲಿ ಕಾಂಗ್ರೆಸ್ ತನ್ನ ಬಲವನ್ನು 32ರಿಂದ 35(+1=36?) ಕ್ಕೇರಿಸಿಕೊಂಡಿದೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯನ್ನು 30ರಿಂದ 28ಕ್ಕೆ ಕುಗ್ಗಿಸಿದೆ
==ಇತ್ತೀಚನ ಬೆಳವಣಿಗೆ ೨೬-೩-೨೦೧೬==
*20-3-2016 ಕಾಂಗ್ರೆಸ್'ನ 9 ಶಾಸಕರು ಬಂಡಾಯವೆದ್ದು ಬಿಜೆಪಿ ಬೆಂಬಲಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಮಾ.28ರ ಒಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸಿಎಂ ಹರೀಶ್ ರಾವತ್ಗೆ ರಾಜ್ಯಪಾಲ ಕೆ.ಕೆ.ಪಾಲ್ ಸೂಚಿಸಿದ್ದಾರೆ. ಅಟಾರ್ನಿ ಜನರಲ್ ಉಮಾಕಾಂತ್ ಉನಿಯಾಲ್ ಮತ್ತು ಬಂಡಾಯ ಸಚಿವ ಹರಕ್ ಸಿಂಗ್ ರಾವತ್ರನ್ನು ಸಿಎಂ ವಜಾಗೊಳಿಸಿದ್ದಾರೆ.<ref>{{Cite web |url=http://m.dailyhunt.in/news/india/kannada/vijayavani-epaper-vijvani/patanadatta-uttaraakhanda-kaangres-sarkaara-newsid-51070176 |title=ಆರ್ಕೈವ್ ನಕಲು |access-date=2016-03-27 |archive-date=2025-01-17 |archive-url=https://web.archive.org/web/20250117234605/http://m.dailyhunt.in/news/india/kannada/vijayavani-epaper-vijvani/patanadatta-uttaraakhanda-kaangres-sarkaara-newsid-51070176 |url-status=dead }}</ref>
*27-3-2016 ಮುಖ್ಯಮಂತ್ರಿ ಹರೀಶ್ ರಾವತ್ ಅವರು ಸೋಮವಾರ ವಿಶ್ವಾಸಮತ ಯಾಚಿಸುವುದಕ್ಕೂ ಮುನ್ನ ವಿಧಾನಸಭಾ ಸ್ಪೀಕರ್ ಗೋವಿಂದ್ ಸಿಂಗ್ ಕುಂಜ್ವಾಲ್ ಅವರು ಒಂಬತ್ತು ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರು(ಪಕ್ಷಾಂತರ ವಿರೋಧಿ ಕಾನೂನು). ರಾಜ್ಯಪಾಲ ಕೆ.ಕೆ.ಪಾಲ್ ಅವರು ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ವರದಿ ಸಲ್ಲಿಸಿದ ಆಧಾರದಲ್ಲಿ ಕೇಂದ್ರ ಸಂಪುಟ ಸಭೆ ಸೇರಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಚರ್ಚೆ ನಡೆಸಿದೆ.<ref>http://www.hindustantimes.com/india/uttarakhand-crisis-rawat-condemns-modi-govt-sec-144-imposed-in-doon/story-w6u8ssLFOvtYLbmp0FCcjO.html</ref>
====ದಿ.೨೬-೩-೨೦೧೬ರ ಸದಸ್ಯರ ಬಲಾಬಲ====
{| class="wikitable sortable "
|-
|colspan=5 style="background:#eee;"| <center>30-12-2012 ರ ವಿಧಾನ ಸಭೆ ಚುನಾವಣೆ= ಒಟ್ಟು ಸ್ಥಾನಗಳು 70 -</center>
|-
!ಕ್ರ.ಸಂ.||ಪಕ್ಷದ ಹೆಸರು ||ಸದಸ್ಯಬಲ|| ನಾಯಕ
|-
|01.||ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC || 36 || ಹರೀಶ್ ರಾವತ್
|-
|02.||ಭಾರತೀಯ ಜನತಾ ಪಕ್ಷ (ಬಿಜೆಪಿ|| 28 || ಅಜಯ್ ಭಟ್
|-
|03.||ಬಹುಜನ ಸಮಾಜ ಪಕ್ಷ (ಬಿಎಸ್ಪಿ) 02 || 02 || ಹರಿ ದಾಸ್
|-
|೦4||ಉತ್ತರಾಖಂಡ್ ಕ್ರಾಂತಿ ದಳ (ಪಿ)(UKD (ಪಿ)|| 01 || ಪ್ರೀತಮ್ ಸಿಂಗ್ ಪನ್ವಾರ್
|-
|೦5.|| ಪಕ್ಷೇತರರು || 03 || -
|-
!೦6.|| ಒಟ್ಟು ||70||
|-bgcolor="Yellow"
|07||ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ||36||36 - 9 ಬಂಡಾಯ = 27+3+2+1(ಇತರೆ) =33
|-
!೦6.|| ಒಟ್ಟು:70-9=||ಉಳಿದ ಸದಸ್ಯ ಬಲ=61|| ಕಾಂಗ್ರೆಸ್ (INC)27+3+2+1(ಇತರೆ) =33
|-
|07||ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC:36-> ||61||36-9ಬಂಡಾಯ=27+3+2+1(ಇತರೆ) =33 / 61
|-
|}
;'''ಉತ್ತರಾಖಂಡ್ ರಾಜ್ಯದ ಅಸ್ಥಿರತೆ ಬಗ್ಗೆ ರಾಜ್ಯಪಾಲ ಕೆಕೆ ಪಾಲ್ ಅವರ ವರದಿಗಳನ್ನು ಅನುಸರಿಸಿ, 2016 ಮಾರ್ಚ್ 27,ಭಾನುವಾರ ದಿಂದ ಜಾರಿಗೆ ಬರುವಂತೆ ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿದೆ'''.<ref name="ref1" />
==ಹೈಕೋರ್ಟ್ ತೀರ್ಪು==
*21-4-2016ರಂದು ಉತ್ತರಾಖಂಡದಲ್ಲಿ ಕೇಂದ್ರ ಸರ್ಕಾರ ವಿಧಿಸಿದ್ದ ರಾಷ್ಟ್ರಪತಿ ಆಳ್ವಿಕೆ ರದ್ದುಪಡಿಸಿರುವ ಉತ್ತರಾಖಂಡ ಹೈಕೋರ್ಟ್, ಏಪ್ರಿಲ್ 29ರಂದು ಹೊಸದಾಗಿ ಬಹುಮತ ಸಾಬೀತು ಪಡಿಸುವಂತೆ ಮುಖಂಡ ಹರೀಶ್ ರಾವತ್ ಅವರಿಗೆ ಗುರುವಾರ (21-4-2016) ಸೂಚಿಸಿದೆ. ರಾಷ್ಟ್ರಪತಿ ಆಳ್ವಿಕೆ ಪ್ರಶ್ನಿಸಿ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಹಾಗೂ ನ್ಯಾಯಮೂರ್ತಿ ವಿ.ಕೆ.ಬಿಸ್ಟ್ ಅವರಿದ್ದ ಪೀಠ ಸತತ ನಾಲ್ಕನೇ ದಿನವೂ ಮುಂದುವರೆಸಿ ತೀರ್ಪುನೀಡಿತು. ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂಥ ಪರಿಸ್ಥಿತಿ ಇಲ್ಲದಿದ್ದರೂ ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ಅದನ್ನು ಜಾರಿಗೊಳಿಸಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.<ref>http://www.hindustantimes.com/india/uttarakhand-high-court-sets-aside-president-s-rule/story-6m23Hw6IwXedT3dOiK1KHK.html</ref>
*'''ಸುಪ್ರೀಮ್'ಕೋರ್ಟಿನಲ್ಲಿ :''' 22/4/2016ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಿ ಉತ್ತರಾಖಂಡ ಹೈಕೋರ್ಟ್ ಗುರುವಾರ ನೀಡಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್'ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಶಿವಕೀರ್ತಿ ಸಿಂಗ್ ಅವರಿದ್ದ ಪೀಠ ನಡೆಸಿತು. ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಿದ್ದ ಉತ್ತರಾಖಂಡ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಏಪ್ರಿಲ್ 27ರ ತನಕ ತಡೆ ನೀಡಿದೆ.<ref>http://www.hindustantimes.com/india/sc-stays-uttarakhand-hc-order-which-set-aside-president-s-rule-in-state/story-eDJgkrLFdzLa5GBVeeeczK.html</ref>
*ದಿ.೨೭-೪-೨೦೧೬ ರಂದು ವಿಚಾರಣೆ ನಡೆಸಿ, ರಾಷ್ಟ್ರಪತಿ ಆಡಳಿತ ಉತ್ತರಾಖಂಡದಲ್ಲಿ ಮುಂದುವರೆಯುವುದು ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಬಲಪರೀಕ್ಷೆ ಏಪ್ರಿಲ್ 29 ರಂದು ರಾಜ್ಯ ವಿಧಾನಸಭೆಯಲ್ಲಿ ನಡೆಯುವುದಿಲ್ಲ; ಎಂದು ಸುಪ್ರೀಂ ಕೋರ್ಟ್ ಹೇಳಿದೆ.
*ಜಸ್ಟೀಸ್ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಶಿವ ಕೀರ್ತಿ ಸಿಂಗ್ ಪೀಠ, ಕೇಂದ್ರಸರ್ಕಾರಕ್ಕೆ ಏಳು ಪ್ರಶ್ನೆಗಳನ್ನು ಮಂಡಿಸಿದರು, ಮತ್ತು 'ಸದನ ಪರೀಕ್ಷೆಯು ಸಮಸ್ಯೆಯನ್ನು ಪರಿಹರಿಸಲು ಉತ್ತಮ ಆಯ್ಕೆಯಾಗಿದೆ' ಎಂದು ಹೇಳಿದರು. ಮೊಕದ್ದಮೆ ಪುನಹ ಮೇ 3 ರಂದು ಮತ್ತೆ ವಿಚಾರಣೆಗೆ ಬರಲಿದೆ.<ref>'SC says Prez rule to continue in Uttarakhand, no floor test on Friday' Hindustan Times, New Delhi|Updated: Apr 27, 2016</ref>
*ದಿ.೩-೫-೨೦೧೬ ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವ ಪ್ರಕರಣದ ವಿಚಾರಣೆ ಮುಂದುವರೆಸಿದ ಸುಪ್ರೀಂ ಕೋರ್ಟ್, ಹೊರಹಾಕಲಾಗಿರುವ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಬಹುಮತ ಸಾಬೀತು ಪಡಿಸಲು ಅವಕಾಶ ನೀಡುವ ಸಾಧ್ಯತೆಯನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಕೋರ್ಟ್ ಸೂಚಿಸಿದೆ.
*ನ್ಯಾಯಾಧೀಶ ದೀಪಕ್ ಮಿಶ್ರಾ ಮುಖಂಡತ್ವದ ಅಪೆಕ್ಸ್ ನ್ಯಾಯಾಲಯ ಪೀಠ, ಇದರ ಬಗ್ಗೆ ಸರ್ಕಾರದಿಂದ ಸೂಚನೆ ಪಡೆದು ಕೋರ್ಟ್ ಗೆ ತಿಳಿಸುವಂತೆ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರಿಗೆ ಸೂಚಿಸಿದೆ. ಪರ್ವತ ರಾಜ್ಯದಲ್ಲಿ ಎದ್ದಿರುವ ರಾಜಕೀಯ ಅನಿಶ್ಚಿತತೆಯನ್ನು ಬಗೆಹರಿಸುವಂತೆ ಈ ಹಿಂದೆ ಕೂಡ ಕೋರ್ಟ್ ಹೇಳಿತ್ತು ಎಂದು ಅಭಿಪ್ರಾಯ ಪಟ್ಟಿದೆ.<ref>[ಕನ್ನಡ ಪ್ರಭ ೩-೫-೨೦೧೬)</ref>
*ದಿ.೬-೫-೨೦೧೬ ರಂದು, ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವ ಉತ್ತರಾಖಂಡ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಸುಪ್ರೀಂ ಕೋರ್ಟ್ ಸೂಚನೆಯಂತೆ ಕೇಂದ್ರ ಸರ್ಕಾರ ಶುಕ್ರವಾರ ಸಮ್ಮತಿ ಸೂಚಿಸಿದೆ.
*ಮೇ.10 ರಂದು ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಇದೇ ವೇಳೆ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ವೀಕ್ಷಕರನ್ನು ನೇಮಕ ಮಾಡುವಂತೆ ಕೋರ್ಟ್ಗೆ ಮನವಿ ಮಾಡಿದರು. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಅನರ್ಹಗೊಂಡ ಕಾಂಗ್ರೆಸ್ ನ 9 ಶಾಸಕರು ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.<ref>ದಿ.೬-೫-೨೦೧೬ http://www.prajavani.net/</ref>
*ಉತ್ತರಾಖಂಡ ಬಿಕ್ಕಟ್ಟು ಸೋಮವಾರ ಹೊಸ ತಿರುವು ಪಡೆದಿದ್ದು, ಅನರ್ಹ 9 ಕಾಂಗ್ರೆಸ್ ಶಾಸಕರ ಅರ್ಜಿಯನ್ನು ಮಧ್ಯಾಹ್ನ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
*2 ಗಂಟೆಗೆ ವಿಚಾರಣೆ: ಈ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಧ್ಯಾಹ್ನ 2 ಗಂಟೆಗೆ ಕೈಗೆತ್ತಿಕೊಳ್ಳಲಿದೆ.
*೮-೫-೨೦೧೪;ಸ್ಪೀಕರ್ ಗೋವಿಂದ್ ಸಿಂಗ್ ಕುಂಜ್ವಾಲ್ ನೀಡಿದ್ದ ಅಮಾನತು ಆದೇಶದ ವಿರುದ್ಧ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಉತ್ತರಾಖಂಡ ಹೈಕೋರ್ಟ್ ಬೆಳಿಗ್ಗೆ ನಿರಾಕರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
*೯-೫-೨೦೧೪;ತಮ್ಮ ವಿರುದ್ಧದ ಅನರ್ಹತೆ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಉತ್ತರಾಖಂಡದ ಒಂಬತ್ತು ಶಾಸಕರು ಸಲ್ಲಿಸಿದ್ದ ಅರ್ಜಿ ಸಂಬಂಧ ಮಧ್ಯಂತರ ಆದೇಶ ನೀಡಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ. ಇದರಿಂದ ಉತ್ತರಾಖಂಡ ವಿಧಾನಸಭೆಯಲ್ಲಿ ಮಂಗಳವಾರ(ಮೇ 10) ನಡೆಯಲಿರುವ ಬಹುಮತ ಸಾಬೀತು ಪರೀಕ್ಷೆಯ ವೇಳೆ ಮತ ಹಾಕುವ ಅಧಿಕಾರವನ್ನು ಅವರು ಕಳೆದುಕೊಂಡಿದ್ದಾರೆ.ಸುಪ್ರೀಂ ಕೋರ್ಟ್'ನಿಂದ ಅನರ್ಹಗೊಂಡ ಉತ್ತರಾಖಂಡ್ ಶಾಸಕರಿಗೆ ಯಾವುದೇ ಪರಿಹಾರವಿಲ್ಲ.<ref>http://www.prajavani.net/</ref><ref>http://www.hindustantimes.com/india/</ref>
==ಬಹುಮತ ಸಾಬೀತು==
*ಮೇ ೧೦,೨೦೧೬ ರಂದು ಸುಪ್ರೀಂಕೋರ್ಟ್ ಆದೇಶದಂತೆ ಬಹುಮತ ಸಾಬೀತು ಪರೀಕ್ಷೆ ನೆಡೆದು, ಮಾಧ್ಯಮ ಮೂಲಗಳ ಪ್ರಕಾರ ಕಾಂಗ್ರೆಸ್ 33 ಮತಗಳನ್ನು ಪಡೆದಿದೆ, ನಿರೀಕ್ಷಿತ ಟೈ ಸಂದರ್ಭದಲ್ಲಿ ಮಾತ್ರ 31 (62). ವಿಧಾನಸಭೆ ಸ್ಪೀಕರ್ ಮತ ಹಾಕುವ ಅಗತ್ಯವಿದೆ. ಆದರೆ ಕಾಂಗ್ರೆಸ್ ಎರಡು ಮತ ಹೆಚ್ಚು (33)ಗಳಿಸಿದೆ (ಬಜೆಪಿಗೆ 28 ಮತ). ಆದರೆ ೧೧ ಮೇ ಯಂದು ಫಲಿತಾಂಶವನ್ನು ಸುಪ್ರೀಂಕೋರ್ಟ್ ಘೋಷಣೆ ಮಾಡಬೇಕಾಗಿದೆ.<ref>http://www.hindustantimes.com/india/live-congress-claims-victory-in-uttarakhand-floor-test-result-tomorrow/story-aWVIASDBazI7H0aq9XoW4N.html</ref>
*ವಿಧಾನಸಭೆಯಲ್ಲಿ ಹರೀಶ್ ರಾವತ್ ಅವರು ವಿಶ್ವಾಸ ಮತ ಗೆದ್ದಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಒಪ್ಪಿಕೊಂಡಿದೆ. ಈ ವಿಷಯವನ್ನು ಸುಪ್ರೀಂ ಕೋರ್ಟ್'ಗೆ ತಿಳಿಸಿರುವ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಉತ್ತರಾಖಂಡದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಲಿ ಎಂದು ತಿಳಿಸಿದ್ದಾರೆ. ಮಂಗಳವಾರ ನಡೆದ ಬಹುಮತ ಪರೀಕ್ಷೆಯಲ್ಲಿ 61 ಶಾಸಕರ ಪೈಕಿ ರಾವತ್ ಅವರಿಗೆ 33 ಸದಸ್ಯರು ಬೆಂಬಲಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ಪ್ರಕಟಿಸಿದೆ. ರಾಷ್ಟ್ರಪತಿ ಆಳ್ವಿಕೆ ಹಿಂಪಡೆದ ಕೂಡಲೇ ರಾವತ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. ಉಚ್ಚ ನ್ಯಾಯಾಲಯದ ಆದೇಶದ ಸ್ವಲ್ಪ ಕಾಲದ ನಂತರ, ಕೇಂದ್ರ, ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರಪತಿ ಆಡಳಿತ ವಾಪಾಸಾತಿಗೆ ಶಿಫಾರಸು ಮಾಡಿದೆ.
*ಒಂಬತ್ತು ಬಂಡಾಯ ಶಾಸಕರು: ವಿಜಯ್ ಬಹುಗುಣ, ಹರಾಕ್ ಸಿಂಗ್ ರಾವತ್, ಕನ್ವರ್ ಪ್ರಣವ್ ಸಿಂಗ್ 'ಚಾಂಪಿಯನ್', ಶೈಲಾ ರಾಣಿ ರಾವತ್, ಉಮೇಶ್ ಶರ್ಮಾ 'kau', ಶೈಲೇಂದ್ರ ಮೋಹನ್ ಸಿಂಘಾಲ್, ಅಮೃತಾ ರಾವತ್, ಸುಬೋಧ್ ಉನಿಯಾಲ್ ಪ್ರದೀಪ್ ಬಾತ್ರಾ; ಇವರನ್ನು ಮಂಗಳವಾರ ನಡೆದ ಬಹುಮತ ಪರೀಕ್ಷೆಯಲ್ಲಿ ಭಾಗವಹಿಸದಂತೆ ಅನರ್ಹಗೊಳಿಸಲಾಯಿತು.<ref>[http://www.hindustantimes.com/india/harish-rawat-back-as-uttarakhand-cm-cong-says-hope-pm-learnt-a-lesson/story-UnJrJXQFneJx2ML4DGhm7O.html X:೧೧-೫-೨೦೧೬:Harish Rawat back as Uttarakhand CM]</ref>
==5 ರಾಜ್ಯಗಳ ವಿಧಾನಸಭಾ ಚುನಾವಣೆ==
*2017ರಲ್ಲಿ ಭಾರತದ 5 ರಾಜ್ಯಗಳಾದ [[ಉತ್ತರಪ್ರದೇಶ]], [[ಪಂಜಾಬ್]], [[ಗೋವಾ]], [[ಉತ್ತರಾಖಂಡ]] ಮತ್ತು [[ಮಣಿಪುರ]]ಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ನಡೆಯಲಿದೆ. ಜನವರಿ 04 ರಂದು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ 4-1-2017.ಬುಧವಾರ ಪ್ರಕಟಿಸಿದೆ.
*ಈ 5 ರಾಜ್ಯಗಳ ಶಾಸಕಾಂಗ ಅಸೆಂಬ್ಲಿಗಳ ಅವಧಿ -ಗೋವಾ 18 ಮಾರ್ಚ್, 2017; ಮಣಿಪುರ: 18 ಮಾರ್ಚ್, 2017; ಪಂಜಾಬ್: 18 ಮಾರ್ಚ್, 2017; ಉತ್ತರಾಖಂಡ್: 26 ಮಾರ್ಚ್, 2017; ಯುಪಿ: 27 ಮೇ, 2017; ರಂದು ಮುಕ್ತಾಯಗೊಳ್ಳುತ್ತದೆ.
* ಫೆಬ್ರವರಿ 15(ಬುಧವಾರ)ರಂದು ಮತದಾನ.
* 70 ಅಸೆಂಬ್ಲಿ ಕ್ಷೇತ್ರ.
* ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರ (3)
* ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
<ref>[http://www.hindustantimes.com/assembly-elections/up-to-vote-in-seven-phases-starting-feb-11-punjab-polls-on-feb-4/story-GXceqi5C3rOEX2DYNpX0TO.html Assembly elections 2017:]</ref>
===ಮತದಾರರು ೨೦೧೭===
*ಈ ವರ್ಷ ಉತ್ತರಾಖಂಡದ ರಾಜ್ಯದ ಚುನಾವಣಾ ರೋಲ್ನಲ್ಲಿ, ಮತದಾರರ ಸಂಖ್ಯೆ 38,87 ಲಕ್ಷ ಪುರುಷರು ಮತ್ತು 35,23 ಲಕ್ಷ ಮಹಿಳಾ ಮತದಾರರನ್ನು ಹೊಂದಿತ್ತು. ಇದರಲ್ಲಿ ತಮ್ಮ ಮತ ಚಲಾಯಿಸಿದವರು 24,21 ಲಕ್ಷ ಪುರುಷರು ಮತ್ತು 24,49 ಲಕ್ಷ ಮಹಿಳೆಯರು.<ref name="More women vote than men in all 13 districts">[http://timesofindia.indiatimes.com/elections/assembly-elections/uttarakhand/news/more-women-vote-than-men-in-all-13-districts/articleshow/57322793.cms More women vote than men in all 13 districts; Kautilya Singh | TNN | Updated: Feb 24, 2017,]</ref>
==ಉತ್ತರಾಖಂಡದಲ್ಲಿ ಚುನಾವಣೆ ೨೦೧೭==
* ಫೆಬ್ರವರಿ 15(ಬುಧವಾರ)ರಂದು ಮತದಾನ.
* +70 ಅಸೆಂಬ್ಲಿ ಕ್ಷೇತ್ರ.
* ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3)
* ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
* ವಿಧಾನಸಭಾ ಚುನಾವಣೆ: ಉತ್ತರಾಖಂಡ್ ಚುನಾವಣೆಯಲ್ಲಿ ದಾಖಲೆಯ ಮತದಾನ 68%
* *ಈ ವರ್ಷ ಉತ್ತರಾಖಂಡದ ರಾಜ್ಯದ ಚುನಾವಣಾ ರೋಲ್ನಲ್ಲಿ, ಮತದಾರರ ಸಂಖ್ಯೆ 38,87 ಲಕ್ಷ ಪುರುಷರು ಮತ್ತು 35,23 ಲಕ್ಷ ಮಹಿಳಾ ಮತದಾರರನ್ನು ಹೊಂದಿತ್ತು. ಇದರಲ್ಲಿ ತಮ್ಮ ಮತ ಚಲಾಯಿಸಿದವರು 24,21 ಲಕ್ಷ ಪುರುಷರು ಮತ್ತು 24,49 ಲಕ್ಷ ಮಹಿಳೆಯರು.<ref name="More women vote than men in all 13 districts" />
===ಫಲಿತಾಂಶ===
{| class="wikitable sortable "
|-
! ರಾಜ್ಯ || ಬಿಜೆಪಿ || ಕಾಂಗ್ರೆಸ್ || ಬಿಎಸ್.ಪಿ || ಇತರೆ
|-
| ಉತ್ತರಾಖಂಡ್ (70) || ಬಿಜೆಪಿ 57 || ಕಾಂ; 11 || || 2
|-
|}
<ref>[http://www.prajavani.net/news/article/2017/03/11/477202.html;ಕಮಲಕ್ಕೆ ಒಲಿದ ‘ಉತ್ತರ’ದ ಜನಾದೇಶ;ಏಜೆನ್ಸಿಸ್11 Mar, 2017]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
<ref>[http://timesofindia.indiatimes.com/elections/results Mar 11, 2017, 05.37 PM ISTNEWS;; ELECTIONS 2017 ;RESULTS;ELECTION RESULTS at 5.45pm]</ref>
===ತ್ರಿವೇಂದ್ರ ಸಿಂಗ್ ರಾವತ್ ಉತ್ತರಾಖಂಡ್ ಮುಖ್ಯಮಂತ್ರಿ===
*ಆರ್ಎಸ್ಎಸ್ ಮಾಜಿ ಪ್ರಚಾರಕ್ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಉತ್ತರಾಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ತ್ರಿವೇಂದ್ರ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ನಿನ್ನೆ ರಾತ್ರಿ ಅವರಿಗೆ ಮಾಹಿತಿ ನೀಡಿದ್ದು, ಶುಕ್ರವಾರ ಶಾಸಕಾಂಗ ಸಭೆಯಲ್ಲಿ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
*ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.
*ಉತ್ತರಾಖಂಡದಲ್ಲಿ ಬಿಜೆಪಿ ಮೂರನೆಯ ಎರಡರಷ್ಟು ಸ್ಥಾನಗಳನ್ನು ಪಡೆದಿರುವುದು ಇದೇ ಮೊದಲು. ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್, ಪ್ರಕಾಶ್ ಪಂತ್ ಮತ್ತು ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿರುವ ಸತ್ಪಾಲ್ ಮಹಾರಾಜ್ ಅವರ ಹೆಸರು ಕೇಳಿ ಬಂದಿತ್ತು. ಇಂದು ನಡೆಯಲಿರುವ ಸಭೆಯಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ,ಸರೋಜ್ ಪಾಂಡೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಉತ್ತರಾಖಂಡ್ ರಾಜ್ಯದ ಉಸ್ತುವಾರಿ ವಹಿಸಿರುವ ಶ್ಯಾಮ್ ಜಾಜು ಭಾಗವಹಿಸಿದ್ದಾರೆ.
*2017 ಮಾರ್ಚ್ 18 ರಂದು ಡೆಹ್ರಾಡೂನ್ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು:<ref>[http://www.prajavani.net/news/article/2017/03/17/478298.html ಉತ್ತರಾಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್ ಆಯ್ಕೆ]</ref><ref>[http://www.prajavani.net/news/article/2017/03/18/478501.html ಡೆಹ್ರಾಡೂನ್ ನಗರದ ಪೆರೇಡ್ ಗ್ರೌಂಡ್ನಲ್ಲಿ ಮಧ್ಯಾಹ್ನ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಕೃಷ್ಟಕಾಂತ ಪೌಲ್ ಅವರಿಂದ ರಾಜ್ಯದ 8 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.]</ref>
==ನೋಡಿ==
*[[ಉತ್ತರಾಖಂಡ]]
*[[ಉತ್ತರಾಖಂಡ ವಿಧಾನಸಭೆ]]
*[[ವಿಧಾನಸಭಾ ಚುನಾವಣೆಗಳು ೨೦೧೭]]
== ಉಲ್ಲೇಖಗಳು ==
{{Reflist}}
==ಆಧಾರ==
*೧.http://ceo.uk.gov.in/files/AC2002/Stat_rep_2002_UT.pdf Result
== ಉಲ್ಲೇಖಗಳು ==
[[ಉತ್ತರಾಖಂಡ|.]]
{{Interwikineeded}}
[[ವರ್ಗ:ಭಾರತದ ಚುನಾವಣೆಗಳು]]
[[ವರ್ಗ:ಭಾರತ]]
[[ವರ್ಗ:ವಿಧಾನಸಭೆ ಚುನಾವಣೆಗಳು]]
aiwxybc6taeiu7uy4f1jtx3farrsthq
ಎಡ್ವಿನ್ ಹೊವಾರ್ಡ್ ಆರ್ಮ್ಸ್ಟ್ರಾಂಗ್
0
79395
1378207
1339041
2026-08-02T17:57:27Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378207
wikitext
text/x-wiki
{{Orphan|date=ಮಾರ್ಚ್ ೨೦೧೯}}
{{Infobox person
| name = ಎಡ್ವಿನ್ ಹೊವಾರ್ಡ್ ಆರ್ಮ್ಸ್ಟ್ರಾಂಗ್
| image = EdwinHowardArmstrong.jpg
| birth_name = ಎಡ್ವಿನ್ ಹೊವಾರ್ಡ್ ಆರ್ಮ್ಸ್ಟ್ರಾಂಗ್
| birth_date = ೧೮೯೦ ಡಿಸೆಂಬರ್ ೧೮
| birth_place = ಅಮೇರಿಕ
| nationality = ಅಮೇರಿಕ
| occupation =
| networth =
| spouse =
| children =
| residence =
| alma_mater =
| website =
| signature =
| parents =
}}
ಅಮೇರಿಕದ ಸಂಶೋಧಕರಾಗಿದ್ದ ಎಡ್ವಿನ್ ಹೊವಾರ್ಡ್ ಆರ್ಮ್ಸ್ಟ್ರಾಂಗ್ರವರು [[ನ್ಯೂ ಯಾರ್ಕ್|ನ್ಯೂಯಾರ್ಕಿನಲ್ಲಿ]] ೧೮೯೦ರ ಡಿಸೆಂಬರ್ ೧೮ರಂದು ಜನಿಸಿದರು. ೧೯೦೬ರಲ್ಲಿ ಲೀ ಡಿ ಫಾರೆಸ್ಟ್ ಸಂಶೋಧಿಸಿದ್ದ ‘ಆಡಿಯೋನ್’ ಎಂಬ ಟ್ರಯೋಡ್ ಕವಾಟದ (triode thermionic valve) ಪ್ರವರ್ಧನಾ ಸಾಮರ್ಥ್ಯವನ್ನು ಉಪಯೋಗಿಸಿ ಆರ್ಮ್ಸ್ಟ್ರಾಂಗ್ರವರು ಪುನರ್ಭವನ ರೇಡಿಯೋ ಗ್ರಾಹಕ ಮಂಡಲವನ್ನು (regenerative radio receiving circuit) ೧೯೧೨ರಲ್ಲಿ ಸಂಶೋಧಿಸಿದರು.<ref>{{Cite web |url=http://fecha.org/armstrong.htm |title=ಆರ್ಕೈವ್ ನಕಲು |access-date=2016-04-24 |archive-date=2016-02-10 |archive-url=https://web.archive.org/web/20160210173651/http://fecha.org/armstrong.htm |url-status=dead }}</ref> ಆ ಸಂಶೋಧನೆ ರೇಡಿಯೋ ಸಂವಹನ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡಿತು. ಅವರ ಸಂಶೋಧನೆ ಯಾವ ವಿಕೃತಿಯೂ ಇಲ್ಲದೆ (without distortion) ದುರ್ಬಲ ರೇಡಿಯೋ ಸಂಕೇತಗಳನ್ನು ಪ್ರವರ್ಧಿಸುವುದರಲ್ಲಿ ಸಹಕಾರಿಯಾಯಿತು. ಆರ್ಮ್ಸ್ಟ್ರಾಂಗ್ರವರು ತಮ್ಮ ಆ ಸಂಶೋಧನೆಗೆ ಪೇಟೆಂಟ್ ಗಳಿಸಿದರು. ೧೯೩೩ಯಲ್ಲಿ ಆರ್ಮ್ಸ್ಟ್ರಾಂಗ್ರವರು ಭೌತವಿಜ್ಞಾನಿ ಮೈಕೇಲ್ ಪ್ಯೂಪಿನ್ರವರ ಜೊತೆ ಸೇರಿ, ಎಫ್.ಎಮ್. ಪ್ರಸಾರ ವ್ಯವಸ್ಥೆಯನ್ನು (FM or Frequency Modulation broadcasting system) ಸಂಶೋಧಿಸಿದರು.<ref>http://users.erols.com/oldradio/</ref> ಆರ್ಮ್ಸ್ಟ್ರಾಂಗ್ರವರು ೧೯೫೪ರ ಜನವರಿ ೩೧ರಂದು ಆತ್ಮಹತ್ಯೆ ಮಾಡಿಕೊಂಡರು.
==ಉಲ್ಲೇಖಗಳು==
{{reflist}}
{{Refimprove}}
{{Interwikineeded}}
[[ವರ್ಗ:ವಿಜ್ಞಾನಿಗಳು]]
0go8rvgmuyk5yprd00g46gnwbfxitwf
ಆಲಿವ್ಮರ
0
83215
1378141
1337202
2026-08-02T14:42:42Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378141
wikitext
text/x-wiki
{{Orphan|date=ಮಾರ್ಚ್ ೨೦೧೯}}
[[ಚಿತ್ರ:NCI 2 green olives.jpg|thumb|ಆಲಿವ್]]
'''ಆಲಿವ್ ಮರ
'''
==ಇತಿಹಾಸ==
ಆಲಿಯೆಸಿ ಕುಟುಂಬಕ್ಕೆ ಸೇರಿದ ಮರ. ಕ್ರಿ.ಪೂ.17ನೆಯ ಶತಮಾನದಲ್ಲಿ ಇದು [[ಈಜಿಪ್ಟ್|ಈಜಿಪ್ಟ್]]ನಲ್ಲಿ ಬೆಳೆಯುತ್ತಿದ್ದಂತೆ ತಿಳಿದುಬಂದಿದೆ. [[ಆಲಿವ್]] ಯೂರೇಷಿಯಾ ಎಂಬ ಮರಗಳು ದಕ್ಷಿಣ ಯೂರೋಪಿನ ಭಾಗಗಳಲ್ಲೂ ಏಷ್ಯ ಉಪಖಂಡಗಳಲ್ಲೂ ವಿಪುಲವಾಗಿ ಬೆಳೆಯುತ್ತವೆ. ಮೆಡಿಟರೇನಿಯನ್ ತೀರದಲ್ಲೂ ಆಸ್ಟ್ರೇಲಿಯ ಮತ್ತು ಇತರ ಭಾಗಗಳಲ್ಲೂ ಇವನ್ನು ಬೆಳೆಸುತ್ತಾರೆ. ಈಚಿನ ವರ್ಷಗಳಲ್ಲಿ ಅಮೆರಿಕ, ದಕ್ಷಿಣ ಆಫ್ರಿಕಾಗಳಲ್ಲೂ ಹೇರಳವಾಗಿ ಬೆಳೆಸುತ್ತಾರೆ. ಕ್ಯಾಲಿಫೋರ್ನಿಯ, ಫ್ಲಾರಿಡ, [[ಆರಿಜೋನ]] ಮತ್ತು ನ್ಯೂ ಮೆಕ್ಸಿಕೊಗಳಲ್ಲೂ ಇವನ್ನು ಬೆಳೆಸುತ್ತಿದ್ದಾರೆ. 1880 ಮತ್ತು 1890 ರಲ್ಲಿ ಜಗತ್ತಿನ ಆಲಿವ್ ಬೆಳೆಯಲ್ಲಿ ಕ್ಯಾಲಿಫೋರ್ನಿಯದ ಆಲಿವ್ ಬೆಳೆಯ ಅಂಶ ಅಧಿಕವಾಗಿತ್ತು ಎಂಬುದು ಅಂಕಿಅಂಶಗಳಿಂದ ಸಿದ್ಧಪಟ್ಟಿದೆ.
==ವಿವರಣೆ==
ಆಲಿವ್ ಯೂರೋಪಿಯ ಎಂಬುದು ಹೆಚ್ಚು ಹಸುರಾದ ಚಿಕ್ಕ ಮರ. ಇದರ ಎಲೆ ಸ್ವಲ್ಪ ಒರಟು. 25'-40' ಗಳಷ್ಟು ಎತ್ತರ ಬೆಳೆಯುವ ದೀರ್ಘಾವಧಿ ವೃಕ್ಷ. ಇದು ಬಿಳಿ ಹೂ ಬಿಡುವುದು. ಇದರಲ್ಲಿನ ಹಣ್ಣುಗಳ ಬಣ್ಣ ಊದಾ. ಕಲ್ಲುಗಳಂಥ ಬೀಜಗಳಿಂದ ತುಂಬಿದೆ. ನಿಯತ ಋತುಮಾನಗಳಲ್ಲಿ ಹೂ, ಹಣ್ಣು ಬಿಡುವುದು. ಕಾಡು ಆಲಿವ್ ಮರಗಳಲ್ಲಿ ಮುಳ್ಳುಗಳು ತುಂಬ. ಅವುಗಳ ಹಣ್ಣುಗಳಿಂದ ಯಾವ ಪ್ರಯೋಜನವೂ ಇಲ್ಲ. ಕೃಷಿ ವಿಧಾನಗಳಿಂದ ಬೆಳೆಸುವ ಆಲಿವ್ ಮರಗಳಲ್ಲಿ ಮುಳ್ಳುಗಳಿರುವುದಿಲ್ಲ. ಆಲಿವ್ ಮರಗಳ ಬೇಸಾಯದಲ್ಲಿ ಬಹು ಎಚ್ಚರ ವಹಿಸಬೇಕಾಗುವುದು. ಫಲವತ್ತಾದ ಮಣ್ಣಿನಲ್ಲಿ ಮಾತ್ರ ಇವು ಸೊಂಪಾಗಿ ಬೆಳೆಯುವುವು. ಸರಿಯಾಗಿ ಮಳೆ ಬೀಳದ ಶುಷ್ಕ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯಲಾರವು. ಆಗ ನೀರಾವರಿ ಸೌಲಭ್ಯಗಳನ್ನು ಒದಗಿಸಬೇಕಾಗುವುದು. ಅದರ ಬೆಳೆಗೆ ಕನಿಷ್ಟಪಕ್ಷ 140 ಸೆ. ಉಷ್ಣತೆ ಬೇಕು. ಆಲಿವ್ ಕೊಂಬೆಗಳನ್ನು ನೆಟ್ಟು ಮರ ಬೆಳೆಸಬಹುದು. ಕಾಡು ಆಲಿವ್ ಹಾಗೂ ಕೃಷಿ ಆಲಿವ್ ಮರಗಳ ಕೊಂಬೆಗಳನ್ನು ಕಸಿಕಟ್ಟಿ ಹೊಸ ಜಾತಿಯ ಆಲಿವ್ ಮರಗಳನ್ನು ಬೆಳೆಸುವುದುಂಟು. ಬೀಜಗಳನ್ನು ಮೊಳೆಯಿಸಿಯೂ ಇವನ್ನು ಬೆಳೆಸುತ್ತಾರೆ. ಆದರೆ ಅದು ಸ್ವಲ್ಪ ಪ್ರಯಾಸಕರ. ಆದರೂ ಇವುಗಳ ಮೊಳೆಯುವಿಕೆಯನ್ನು ತ್ವರಿತಗೊಳಿಸಲು ಅನೇಕ ವಿಧಾನಗಳನ್ನು ಬಳಸುವುದುಂಟು. ಬೀಜದ ತುದಿಯನ್ನು ಸುಲಿಯುವುದು ಅಂಥ ಒಂದು ಕ್ರಮ. ಕ್ಯಾಲಿಫೋರ್ನಿಯದಲ್ಲಿ ಈ ಮರಗಳಿಗೆ ಆಲಿವ್ ನಾಟ್ ಎಂಬ ರೋಗ ತಗಲುತ್ತದೆ. ಸಣ್ಣ ದೊಡ್ಡ ಎಲೆಗಳಲ್ಲಿ ಕೊಂಬೆ ರೆಂಬೆಗಳಲ್ಲಿ ಅನೇಕ ಗಂಟುಗಳು ಅಥವಾ ಟ್ಯೂಮರ್ಗಳು ಬೆಳೆಯುವುದೇ ಈ ರೋಗದ ಲಕ್ಷಣ. ಸ್ಯಾವೆಸ್ಬೊನಾಯ್ ಎಂಬ ಅಣುಜೀವಿ ಈ ರೋಗಕ್ಕೆ ಕಾರಣ. ಕೆಲವೊಮ್ಮೆ ಒಂದು ರೀತಿಯ ಅಣಬೆ ರೋಗವೂ ಈ ಎಲೆಗಳಿಗೆ ಬರುವುದುಂಟು. ಆದರೆ ಇದರಿಂದ ಮರಕ್ಕೆ ಅಪಾಯವಿಲ್ಲ.
==ಉಪಯೋಗಗಳು==
ಆಲಿವ್ ಕಾಯಿಗಳನ್ನು ಹಸಿರಾಗಿರುವಾಗ ಕಿತ್ತು ಉಪ್ಪಿನಕಾಯಿ ತಯಾರಿಸುವರು. ಕಾಯಿಗಳು ಕಹಿಯಾಗಿರುವುವು. ದುರ್ಬಲವಾದ ಬಲು ಬಿಸಿಕ್ಷಾರಗಳನ್ನು ಉಪಯೋಗಿಸಿ ಆ ಮೂಲಕ ಇದರ ಕಹಿ ರುಚಿಯನ್ನು ಹೋಗಲಾಡಿಸುತ್ತಾರೆ. ಆ ಬಳಿಕ ಉಪ್ಪುನೀರಿನಲ್ಲಿ ಹಾಕಿ ಉಪ್ಪಿನಕಾಯಿ ತಯಾರಿಸುತ್ತಾರೆ. ಪಾಶ್ಚಾತ್ಯರಿಗೆ ಇದು ಬಲು ಇಷ್ಟ.
ಆಲಿವ್ ಹಣ್ಣುಗಳು ಚೆನ್ನಾಗಿ ಮಾಗಿದಾಗ ಅವನ್ನು ಕೀಳುತ್ತಾರೆ. ಇವುಗಳ ಗುಳ ಮತ್ತು ಸಿಪ್ಪೆಯಲ್ಲಿ ಜುಂಗಿನ ಅಂಶ ಹೆಚ್ಚಾಗಿರುವುದು. ಇವುಗಳ ಬೀಜಗಳಲ್ಲಿ ಸ್ವಲ್ಪ ಎಣ್ಣೆಯಿರುವುದು. ಆದರೆ ಕಾಯಿಗಳಲ್ಲಿ ಎಣ್ಣೆ ಅಂಶ ತೀರ ಕಡಿಮೆ. ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆಗಳಂತೆ ಆಲಿವ್ ಎಣ್ಣೆಯೂ ಆವಿಯಾಗುವುದಿಲ್ಲ. ಶುದ್ಧ ಆಲಿವ್ ಎಣ್ಣೆ ದೀರ್ಘ ಕಾಲದವರೆಗೆ ಕೆಡದೆ ಉಳಿಯಬಲ್ಲದು. ಆದರೆ ಆಲಿವ್ ಎಣ್ಣೆಯಿರುವ ಸೀಸೆಗಳನ್ನು ಮುಚ್ಚದೆ ತೆರೆದಿಟ್ಟರೆ, ವಾತಾವರಣದಲ್ಲಿರುವ ನೀರಿನ ಅಂಶ ಅದರಲ್ಲಿ ಸೇರಿಕೊಂಡು ಬಲುಬೇಗ ಅದರಲ್ಲಿ ಬೂಷ್ಟು ಬೆಳೆದು ಕೆಡುವುದು. ದುರ್ವಾಸನೆ ಬರುವುದು. ಒಳ್ಳೆಯ ಆಲಿವ್ ಎಣ್ಣೆಗೆ ಚಿನ್ನದ ಬಣ್ಣವಿರುತ್ತದೆ. ಇದಕ್ಕೆ ಸಪ್ಪೆ ರುಚಿ, ವಾಸನೆ ಇವೆ. ತಿಳಿಯಾಗಿಯೂ ನಿರ್ಮಲವಾಗಿಯೂ ಇರುವ ಇದಕ್ಕೆ ವರ್ಜಿನ್ ಎಣ್ಣೆ ಅಥವಾ ಉತ್ಕøಷ್ಟ ಎಣ್ಣೆ ಎನ್ನುವರು. ಕೆಳದರ್ಜೆಯ ಆಲಿವ್ ಎಣ್ಣೆ ಮಂದವಾಗಿ ಹಳದಿ ಅಥವಾ ಹಸಿರು ಬಣ್ಣಕ್ಕಿರುವುದು. ಆಲಿವ್ ಮರದ ಕಟ್ಟಿಗೆ ಬಲು ಗಟ್ಟಿಯಾಗಿ ದೀರ್ಘಕಾಲ ಬಾಳಿಕೆ ಬರುವುದು. ನಾಜೂಕಾದ ಕೆತ್ತನೆ ಕೆಲಸ ಮಾಡಬಹುದಾಗಿರುವುದರಿಂದ ಪೀಠೋಪಕರಣಗಳನ್ನು ತಯಾರಿಸುವುದರಲ್ಲಿ ಅದನ್ನು ಉಪಯೋಗಿಸುತ್ತಾರೆ. ಆಲಿವ್ ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಉಪಯೋಗಿಸುವರು. ಆಲಿವ್ ಎಲೆ ಮತ್ತು ತೊಗಟೆಗಳಲ್ಲಿ ಗಾಯದಿಂದ ಸೋರುವ ರಕ್ತವನ್ನು ತಡೆಯುವ ಆಲಿಯಾಕಸ್ಟಿಡೇಟಾ ಎಂಬ ಔಷಧೀಯ ಸತ್ತ್ವವಿದೆ. ಆಲಿಯಾಡಯೊಕ ಮರದ ತೊಗಟೆಯಲ್ಲಿ ಏರಿದ ಜ್ವರದ ಕಾವು ತಗ್ಗಿಸುವ ಶಕ್ತಿಯಿದೆ. ಈ ಎಣ್ಣೆಯಲ್ಲಿ ಕೊಬ್ಬಿನಂಶ ಅಧಿಕ. ಸಾರ್ಡಿನು ಮೊದಲಾದ ಮೀನುಗಳನ್ನು ಹದಮಾಡಲು, ರಕ್ಷಿಸಿ ಇಡಲು ಈ ಎಣ್ಣೆಯನ್ನು ಉಪಯೋಗಿಸುವರು. ಆಲಿವ್ ಎಣ್ಣೆಯಲ್ಲಿ ಮುಖ್ಯವಾಗಿ ಒಲೀಯಿಕ್ ಅಲ್ಲದೆ ಇತರ ಆಮ್ಲಗಳ ಸಾಂದ್ರಮಿಶ್ರಣವಿದೆ. ಸ್ವಲ್ಪ ಪ್ರಮಾಣದ ಲಿನೋಲಿಕ್ ಆಮ್ಲವೂ ಇದೆ. ಆಲಿವ್ ಎಣ್ಣೆ ಪುಷ್ಟಿಕರ. ಭೇದಿ ಔಷಧಿಗಾಗಿ ಕೊಡುವುದಿದೆ. ಹೊಟ್ಟೆ ಸಂಬಂಧದ ಉರಿ ಮೊದಲಾದ ಬೇನೆಗಳಲ್ಲಿ ಶಮನಕಾರಿ. ಗುದದ ಮೂಲಕ ಕೊಡುವ ಮದ್ದುಗಳನ್ನು ಆಲಿವ್ ಎಣ್ಣೆ ಮಿಶ್ರಣದಲ್ಲಿ ಕೊಡಬಹುದು. ಈ ಎಣ್ಣೆಯನ್ನು ಉರಿವ ಚರ್ಮಕ್ಕೆ ಶಾಮಕವಾಗಿ ಲೇಪಿಸುವುದಿದೆ. ಇದನ್ನು ಉಜ್ಜು ತೈಲ, ಮುಲಾಮು, ಅಂಟು ಪಟ್ಟಿ, ಉಣ್ಣೆಬಟ್ಟೆ ಮತ್ತು ಸಾಬೂನುಗಳ ತಯಾರಿಕೆಯಲ್ಲಿ ಬಳಸುತ್ತಾರೆ.
==ಉಲ್ಲೇಖಗಳು==
{{ಉಲ್ಲೇಖಗಳು}}
<ref>{{Cite web |url=http://apps.kew.org/wcsp/namedetail.do?name_id=355112 |title=ಆರ್ಕೈವ್ ನಕಲು |access-date=2016-10-19 |archive-date=2012-01-20 |archive-url=https://web.archive.org/web/20120120064239/http://apps.kew.org/wcsp/namedetail.do?name_id=355112 |url-status=dead }}</ref>
<ref>{{Cite web |url=http://www.np-brijuni.hr/en/natural_heritage/flora/ancient_olive_tree |title=ಆರ್ಕೈವ್ ನಕಲು |access-date=2016-10-19 |archive-date=2016-05-25 |archive-url=https://web.archive.org/web/20160525052323/http://www.np-brijuni.hr/en/natural_heritage/flora/ancient_olive_tree |url-status=dead }}</ref>
{{Interwikineeded}}
9y3yw1rpf6mhivw2f5navcaaaate11f
ಐರೋಪ್ಯ ಸಲ್ಲಿಕೆ ಕೂಟ
0
83739
1378212
1339849
2026-08-02T19:34:38Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378212
wikitext
text/x-wiki
{{Orphan|date=ಮಾರ್ಚ್ ೨೦೧೯}}
ಐರೋಪ್ಯ ಸಲ್ಲಿಕೆ ಕೂಟ:[[ಐರೋಪ್ಯ]] ರಾಷ್ಟ್ರಗಳ ನಡುವೆ ಪರಸ್ಪರ ಹಣ ವಿನಿಮಯವನ್ನು ಸುಸೂತ್ರಗೊಳಿಸುವ ಉದ್ದೇಶದಿಂದ 1950ರಲ್ಲಿ ಜಾರಿಗೆ ಬಂದ ಸಂಸ್ಥೆ([[ಯುರೋಪಿಯನ್]]). ಎರಡನೆಯ ಮಹಾಯುದ್ಧಾನಂತರದಲ್ಲಿ ಆರ್ಥಿಕ ಪುನರ್ರಚನೆಗಾಗಿ ಸ್ಥಾಪಿತವಾಗಿದ್ದ ಐರೋಪ್ಯ ಆರ್ಥಿಕ ಸಹಕಾರ ಸಂಸ್ಥೆಯ (ಆರ್ಗನೈಸೇಷನ್ ಫಾರ್ ಯುರೋಪಿಯನ್ ಇಕೊನಾಮಿಕ್ ಕೋ-ಆಪರೇಷನ್) 17 ಪಾಶ್ಚಾತ್ಯ ಐರೋಪ್ಯ ಸದಸ್ಯ ರಾಷ್ಟ್ರಗಳು ಸೇರಿ ಇದನ್ನು ಸ್ಥಾಪಿಸಿಕೊಂಡುವು. ಆಗ ಪರಸ್ಪರವಾಗಿಯೂ ಅಮೆರಿಕ ಸಂಯುಕ್ತ ಸಂಸ್ಥಾನದೊಡನೆಯೂ ಪ್ರಾಪ್ತವಾಗಿದ್ದ ವಿದೇಶೀ ಹಣ ಕೊರತೆ ಐರೋಪ್ಯ ರಾಷ್ಟ್ರಗಳ ಮುಖ್ಯ ಸಮಸ್ಯೆಗಳಲ್ಲಿ ಒಂದಾಗಿತ್ತು. ರಫ್ತು ಮಾಡುವ ಶಕ್ತಿ ಕುಗ್ಗಿ ಆಮದು ಮಾಡಿಕೊಳ್ಳುವ ಅವಶ್ಯಕತೆ ಹೆಚ್ಚಾಗಿದ್ದುದೇ ಈ ವಿಧದ ಸಮಸ್ಯೆಗೆ ಕಾರಣ. ಹದಗೆಟ್ಟ ಅಂದಿನ ಪರಿಸ್ಥಿತಿಯಲ್ಲಿ ಒಂದೊಂದು ರಾಷ್ಟ್ರವೂ ತನ್ನದೇ ಆದ ಅನೇಕ ವಿನಿಮಯ ಹತೋಟಿ ಕ್ರಮಗಳನ್ನು ಅನುಸರಿಸುತ್ತಿತ್ತು. ಇದರಿಂದ ವ್ಯಾಪಾರ ವ್ಯವಹಾರಗಳಿಗೆ ಅಡ್ಡಿಯಾಗಿತ್ತು. ನೆರೆಯ ರಾಷ್ಟ್ರದಿಂದ ಪಡೆಯಬಹುದಾದ ಪದಾರ್ಥವನ್ನು ವಿದೇಶೀ ವಿನಿಮಯ ತೊಂದರೆಗಳಿಂದಾಗಿ ಅಲ್ಲಿಂದ ಪಡೆಯಲಾಗದೆ, ಸಾಲ ಒದಗಿಸಲು ಸಿದ್ಧವಾಗಿದ್ದ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಪಡೆಯಬೇಕಾದ ಸಂದರ್ಭಗಳಿದ್ದುವು. ಆರ್ಥಿಕ ಪುನರ್ರಚನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದ ಐರೋಪ್ಯ ರಾಷ್ಟ್ರಗಳು ಇಂಥ ಪರಿಸ್ಥಿತಿಯಲ್ಲಿ ಪರಸ್ಪರ ವಿನಿಮಯ ಸೌಲಭ್ಯಗಳನ್ನು ಏರ್ಪಡಿಸಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಾಗಿತ್ತು. ಅಂತೆಯೇ ಐರೋಪ್ಯ ಆರ್ಥಿಕ ಸಹಕಾರ ಸಂಸ್ಥೆಯಿಂದ ಐರೋಪ್ಯ ಸಲ್ಲಿಕೆ ಕೂಟ ಸ್ಥಾಪಿತವಾಯಿತು. ತಾತ್ಕಾಲಿಕ ವ್ಯವಸ್ಥೆಯಾಗಿ ಮೊದಲು ಎರಡು ವರ್ಷಗಳಿಗೆಂದು ರೂಪಿತವಾಗಿದ್ದ ಕೂಟ ತರುವಾಯ ವರ್ಷವರ್ಷವೂ ಹೊಸ ಒಪ್ಪಂದಗಳ ಆಧಾರದ ಮೇಲೆ ಮುಂದುವರಿದು 1958ರವರೆಗೆ ನಡೆದು ಬಂತು.<ref>{{Cite web |url=https://article.wn.com/view/WNAT58628e9591f3a001c58c7fbc9f319b8f/ |title=ಆರ್ಕೈವ್ ನಕಲು |access-date=2016-10-27 |archive-date=2025-09-28 |archive-url=https://web.archive.org/web/20250928210939/https://article.wn.com/view/WNAT58628e9591f3a001c58c7fbc9f319b8f/ |url-status=dead }}</ref>
==ಈ ಕೂಟದ ಮುಖ್ಯ ಉದ್ದೇಶಗಳು ಮೂರು==
* 1. ಸದಸ್ಯರಾಷ್ಟ್ರಗಳ ಪರಸ್ಪರ ಲೇವಾದೇವಿ ಲೆಕ್ಕಗಳ ಬಹುಮುಖ ತೀರುವೆ (ಮಲ್ಟಿಲ್ಯಾಟರಲ್ ಕ್ಲಿಯರಿಂಗ್) ವ್ಯವಸ್ಥೆಯ ಏರ್ಪಾಡು. ಎರಡೆರಡು ರಾಷ್ಟ್ರಗಳು ತಮ್ಮ ಪರಸ್ಪರ ವ್ಯಾಪಾರವನ್ನು ಪ್ರತ್ಯೇಕವಾಗಿಸಬೇಕಾದುದರ ಮತ್ತು ದ್ವಿರಾಷ್ಟ್ರ ಒಪ್ಪಂದಗಳನ್ನು ಏರ್ಪಡಿಸಿಕೊಳ್ಳುವುದರ ಅವಶ್ಯಕತೆಯನ್ನು ಇದು ತಪ್ಪಿಸುತ್ತದೆ.
* 2. ಸದಸ್ಯರಾಷ್ಟ್ರಗಳ ಲೇಣಿ-ದೇಣಿಯಲ್ಲಿ ಪ್ರಾಪ್ತವಾಗುವ ತಾತ್ಕಾಲಿಕ ಕೊರತೆ ನೀಗಿಸಲು ಸಹಾಯವಾಗುವಂತೆ ಉದ್ದರಿ ಸರಬರಾಯಿ. ಈ ಮೂಲಕ ಪರಸ್ಪರ ವ್ಯಾಪಾರ ಮತ್ತು ಸಲ್ಲಿಕೆ ವ್ಯವಹಾರಗಳಿಗೆ ಅಡ್ಡಿಯಾಗಿರುವ ನಿರ್ಬಂಧಗಳನ್ನು ತೆಗೆಯುವಂತೆ ರಾಷ್ಟ್ರಗಳನ್ನು ಪ್ರೇರೇಪಿಸಬಹುದು.
* 3. ಸದಸ್ಯ ರಾಷ್ಟ್ರವೊಂದಕ್ಕೆ ತಾತ್ಕಾಲಿಕವಾಗಿ ಸಂಭವಿಸುವ ಸಲ್ಲಿಕೆ ಕೊರತೆ (ಪೀಮೆಂಟ್ಸ್ ಡಿಫಿಸಿಟ್ಸ್) ದೀರ್ಘಕಾಲದ ಸಮಸ್ಯೆಯಾಗದಂತೆ ನೋಡಿಕೊಳ್ಳಲು ರಾಷ್ಟ್ರ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಉತ್ತೇಜನ ನೀಡುವುದು ಕೂಟದ ಮೂರನೆಯ ಉದ್ದೇಶ.<ref>http://in.shafaqna.com/IN/hashtag/%E0%B2%AF%E0%B2%BF%E0%B2%82%E0%B2%A6{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
==ಐರೋಪ್ಯ ಸಲ್ಲಿಕೆ ಕೂಟ==
ಒಟ್ಟಿನಲ್ಲಿ ಐರೋಪ್ಯ ಸಲ್ಲಿಕೆ ಕೂಟ ಸದಸ್ಯರಾಷ್ಟ್ರಗಳ ವಿದೇಶೀ ವಿನಿಮಯ ವ್ಯವಹಾರಗಳು ಸುಸೂತ್ರವಾಗಿ ನಡೆಯುವಂತೆ ಅನುಕೂಲ ಮಾಡುವ ವ್ಯವಸ್ಥೆಯಾಗಿತ್ತು. ಈ ಕೂಟ ಐರೋಪ್ಯ ಆರ್ಥಿಕ ಸಹಕಾರ ಸಂಸ್ಥೆಯ ಭಾಗವಾಗಿ ಕಾರ್ಯಾಚರಣೆ ನಡೆಯಿಸುತ್ತಿದ್ದುದರಿಂದ ಆ ಸಂಸ್ಥೆಯ ಸಮಿತಿಯ ಅಧಿಕಾರವ್ಯಾಪ್ತಿಗೆ ಇದು ಒಳಪಟ್ಟಿತ್ತು. ಆಡಳಿತ ಸೌಕರ್ಯಕ್ಕಾಗಿ ಸಮಿತಿ ಪ್ರತಿ ವರ್ಷ ಏಳು ಸದಸ್ಯರನ್ನುಳ್ಳ ಒಂದು ಆಡಳಿತ ಮಂಡಲಿಯನ್ನು ಚುನಾಯಿಸುತ್ತಿತ್ತು. ಕೂಟ ವ್ಯವಸ್ಥೆಯ ಕಾರ್ಯನಿರ್ವಹಣೆ, ಋಣಿ ರಾಷ್ಟ್ರಗಳು ಕೊಡಬೇಕಾದ ಮತ್ತು ಧನಿ ರಾಷ್ಟ್ರಗಳಿಗೆ ನೀಡಬೇಕಾದ ಬಡ್ಡಿದರಗಳ ನಿರ್ಣಯ, ಸದಸ್ಯರಾಷ್ಟ್ರಗಳ ಆರ್ಥಿಕ ಸ್ಥಿತಿಗತಿಗಳ ಅವಲೋಕನ ಇವು ಬೋರ್ಡಿನ ಮುಖ್ಯ ಕರ್ತವ್ಯಗಳು. ಲೇಣಿ-ದೇಣಿ ಕೊರತೆ ಅಥವಾ ಹೆಚ್ಚಳ ಹೊಂದಿರುವ ರಾಷ್ಟ್ರಗಳು ಕೈಗೊಳ್ಳಬೇಕಾದ ನೀತಿಗಳ ಮತ್ತು ಕ್ರಮಗಳ ಬಗ್ಗೆ ಸಲಹೆ ಮಾಡುವ ಅಧಿಕಾರವನ್ನು ಕೂಟ ಪಡೆದಿತ್ತು. ಐರೋಪ್ಯ ಸಲ್ಲಿಕೆ ಕೂಟದ ವ್ಯವಹಾರಗಳೂ ಲೆಕ್ಕಾಚಾರಗಳೂ 1921ರಲ್ಲಿ ಸ್ಥಾಪನೆಯಾದ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕಿನ ಮೂಲಕ ನಡೆಯುತ್ತಿದ್ದುವು. ಪ್ರತಿ ಸದಸ್ಯ-ರಾಷ್ಟ್ರವೂ ಇತರ ಒಂದೊಂದು ಸದಸ್ಯ ರಾಷ್ಟ್ರದ ಲೆಕ್ಕದಲ್ಲಿಯೂ ಇಟ್ಟ ಮೊಬಲಗನ್ನು ತಿಂಗಳಿಗೊಮ್ಮೆ ಬ್ಯಾಂಕಿಗೆ ತಿಳಿಸುವುದು; ಈ ಲೆಕ್ಕಗಳ ಆಧಾರದ ಮೇಲೆ ಒಂದೊಂದು ಸದಸ್ಯರಾಷ್ಟ್ರದೊಡನೆಯೂ ಹೊಂದಿದ್ದ ಹೆಚ್ಚಳ ಕೊರತೆ ಸ್ಥಿತಿಯನ್ನು ಬ್ಯಾಂಕು ಲೆಕ್ಕ ಮಾಡಿ, ಇದರ ಆಧಾರದ ಮೇಲೆ ಹೆಚ್ಚಳ ಅಥವಾ ಕೊರತೆಯನ್ನು ಸಂಬಂಧಪಟ್ಟ ಸದಸ್ಯರಾಷ್ಟ್ರ ಬ್ಯಾಂಕಿನೊಡನೆ ಒಂದೇ ವ್ಯವಹಾರದ ಮೂಲಕ ಸರಿತೂಗಿಸುವುದು. ಇದೇ ಸಲ್ಲಿಕೆ ಕೂಟದ ಕಾರ್ಯವಿಧಾನ.
==ವಿದೇಶೀ ಸಲ್ಲಿಕೆ ಕೊರತೆ==
ವಿದೇಶೀ ಸಲ್ಲಿಕೆ ಕೊರತೆ ಹೊಂದಿದ್ದ ಸದಸ್ಯರಾಷ್ಟ್ರಗಳಿಗೆ ಒಂದು ಮಿತಿಯವರೆಗೆ ಕೂಡ ಉದ್ದರಿ ನೀಡುತ್ತಿತ್ತು. ಪ್ರತಿಯೊಂದು ಸದಸ್ಯ ರಾಷ್ಟ್ರವೂ ನಿಗದಿಯಾದ ಪ್ರಮಾಣಕ್ಕೂ ಮೀರಿದ ಕೊರತೆ ಉಂಟಾಗದಂತೆ ಸೂಕ್ತ ಕ್ರಮ ಕೈಕೊಳ್ಳಬೇಕಾಗಿತ್ತು. ಏಕೆಂದರೆ ಕೂಟದ ನಿಯಮಾನುಸಾರ ನಿಗದಿಯಾದ ಒಂದು ಪ್ರಮಾಣಕ್ಕೂ ಮೀರಿದ ಕೊರತೆಯನ್ನು ಚಿನ್ನ ಅಥವಾ ಡಾಲರು ಕೊಟ್ಟು ಸರಿತೂಗಿಸಬೇಕಿತ್ತು. ಇದು ಸಾಮಾನ್ಯವಾಗಿ ಕಷ್ಟವಾಗಿದ್ದುದರಿಂದ ಸದಸ್ಯರಾಷ್ಟ್ರಗಳು ಎಚ್ಚರಿಕೆಯಿಂದ ಕೊರತೆಯ ಪ್ರಮಾಣ ಮಿತಿ ಮೀರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದುವು. ಕೆಲವು ವಿಶೇಷ ಸಂದರ್ಭಗಳಲ್ಲಿ ಕೂಟ ಹೆಚ್ಚು ಉದ್ದರಿಯ ವ್ಯವಸ್ಥೆ ಮಾಡಿಕೊಟ್ಟಿತು.ಲೇಣಿ-ದೇಣಿಗಳಲ್ಲಿ ಹೆಚ್ಚಳ ಹೊಂದುವ ಸದಸ್ಯರಾಷ್ಟ್ರಗಳು ಕೂಟದ ಮೇಲೆ ಹೆಚ್ಚು ಹೆಚ್ಚು ಪಾವತಿ ಹಕ್ಕು (ಕ್ಲೇಂಸ್) ಕೂಡಿಸುತ್ತ ಹೋಗದಂತೆಯೂ ಮಿತಿಗಳನ್ನು ವಿಧಿಸಲಾಗಿತ್ತು. ಮಿತಿಮೀರಿದ ಹಕ್ಕುಗಳನ್ನು ಹೊಂದಿದ ರಾಷ್ಟ್ರಗಳೊಡನೆ ಕೂಟ ವಿಶೇಷ ಏರ್ಪಾಡುಗಳನ್ನು ಮಾಡಿಕೊಳ್ಳುತ್ತಿತ್ತು.
==ಲೇಣೆ-ದೇಣೆಗಳ ಅಸಮತೆ==
ಮುಖ್ಯವಾಗಿ ಕೂಟರಾಷ್ಟ್ರಗಳೊಳಗೆ ಸಂಭವಿಸುತ್ತಿದ್ದ ಲೇಣೆ-ದೇಣೆಗಳ ಅಸಮತೆ ಸರಿಪಡಿಸಲು ಇದು ನೇರ ನೆರವು ನೀಡುತ್ತಿತ್ತು. ಅಲ್ಲದೆ ಕೊರತೆ ಹೊಂದಿದ್ದ ರಾಷ್ಟ್ರಕ್ಕೆ ಇದು ವಿಶೇಷ ಸಲಹೆ ನೀಡುವ ಅಧಿಕಾರ ಪಡೆದಿದ್ದುದರಿಂದ ಆ ರಾಷ್ಟ್ರವಿದೇಶೀ ಹಣ ಮತ್ತು ವ್ಯಾಪಾರ ನೀತಿಗಳ ಮೇಲೂ ಪ್ರಭಾವ ಹೊಂದಿತ್ತು. ಕೂಟದ ಆಡಳಿತ ಮಂಡಳಿ ಪ್ರತಿಯೊಂದು ಸದಸ್ಯರಾಷ್ಟ್ರದ ವಿದೇಶೀ ವ್ಯವಹಾರಗಳನ್ನೂ ಅದರ ಸಾಮಾನ್ಯ ಆರ್ಥಿಕ ಪರಿಸ್ಥಿತಿಯನ್ನೂ ಆಗಿಂದಾಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಏರುಪೇರುಗಳನ್ನು ಸರಿಪಡಿಸಲು ಸೂಕ್ತಕ್ರಮಗಳನ್ನು ಸೂಚಿಸುತ್ತಿತ್ತು. ಮಿತಿಮೀರಿದ ಕೊರತೆ ಅಥವಾ ಹೆಚ್ಚಳಗಳೇ ಈ ಸಂಸ್ಥೆ ಎದುರಿಸಬೇಕಾಗಿದ್ದ ಮುಖ್ಯ ಸಮಸ್ಯೆಯಾಗಿತ್ತು. ಈ ಸಮಸ್ಯೆಯನ್ನು ನಿವಾರಿಸುವುದರಲ್ಲಿ ಸಂದರ್ಭೋಚಿತ ಕ್ರಮ ಕೈಗೊಂಡು ವಿನಿಮಯದಲ್ಲಿ ರಾಷ್ಟ್ರಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದೇ ಕೂಟದ ಮುಖ್ಯ ಗುರಿಯಾಗಿತ್ತು.ಕೂಟ ಸ್ಥಾಪನೆಯಾದ ತಿಂಗಳಲ್ಲೇ ಕೊರಿಯದ ಯುದ್ಧ ಸಂಭವಿಸಿದ್ದರಿಂದ ಇದು ಕಷ್ಟಪರಿಸ್ಥಿತಿ ಎದುರಿಸಬೇಕಾಯಿತು. ಕೆಲವು ಸದಸ್ಯರಾಷ್ಟ್ರಗಳ ಅಂತಾರಾಷ್ಟ್ರೀಯ ಲೇಣೆ-ದೇಣೆಗಳಲ್ಲಿ ಅಸಾಧಾರಣ ಕೊರತೆ ಪ್ರಾಪ್ತವಾಯಿತು; ಇತರ ಕೆಲವು ರಾಷ್ಟ್ರಗಳ ಲೇಣೆ-ದೇಣೆಗಳಲ್ಲಿ ಮಿತಿಮೀರಿದ ಹೆಚ್ಚಳ ಉಂಟಾಯಿತು. ಈ ಎರಡು ರೀತಿಯ ಸಂದರ್ಭಗಳು ವಿಶೇಷ ಸಮಸ್ಯೆಗಳನ್ನೇ ಸೃಷ್ಟಿಸಿದವು.
==ಜರ್ಮನಿ ಆಮದು ನಿರ್ಬಂಧ ಕ್ರಮ==
1950-51ರಲ್ಲಿ ಜರ್ಮನಿಯ ವಿದೇಶೀ ಲೇಣೆ-ದೇಣೆಯಲ್ಲಿ ತೀವ್ರ ಪ್ರಮಾಣದ ಕೊರತೆ ಸಂಭವಿಸಿತು. ಕೂಟ ನೆರವಿಗೆ ಬಾರದಿದ್ದಲ್ಲಿ ಜರ್ಮನಿ ಆಮದು ನಿರ್ಬಂಧ ಕ್ರಮ ಇದರಿಂದಾಗಿ ಬಂದು ತತ್ಪರಿಣಾಮವಾಗಿ [[ನೆದರ್ಲೆಂಡ್ಸ್]], [[ಡೆನ್ಮಾರ್ಕ್]] ಮುಂತಾದ ರಾಷ್ಟ್ರಗಳ ಮೇಲೆ ದುಷ್ಪರಿಣಾಮವಾಗುತ್ತಿದ್ದುದೇ ಅಲ್ಲದೆ ಕ್ರಮೇಣ ಐರೋಪ್ಯ ಆರ್ಥಿಕ ವ್ಯವಸ್ಥೆಯ [[ವ್ಯಾಪಾರ]] ನಿರ್ಬಂಧ ನಿರ್ಮೂಲ ಕಾರ್ಯಕ್ರಮಗಳೆಲ್ಲವೂ ಮುರಿದು ಬೀಳುವಂತಾಗುತ್ತಿತ್ತು. ಕೂಟ ಜರ್ಮನಿಗೆ ಆ ವರ್ಷ (1950-51) ಒದಗಿಸಿದ ಸು. 12 ಕೋಟಿ ಡಾಲರುಗಳ ಉದ್ದರಿಯಿಂದ ಜರ್ಮನಿಯ ಆರ್ಥಿಕ ಪುನರುಜ್ಜೀವನಕ್ಕೆ ಸಹಾಯವಾಯಿತು. ತುರ್ಕಿ, ಗ್ರೀಸ್, ಆಸ್ಟ್ರಿಯ ಮತ್ತು ಐಸ್ಲೆಂಡ್ಗಳು ಅನುಭವಿಸಿದ ಲೇಣೆ-ದೇಣೆ ಕೊರತೆ ಪರಿಸ್ಥಿತಿ ಎದುರಿಸಲೂ ಐರೋಪ್ಯ ಸಲ್ಲಿಕೆ ಕೂಟ ನೆರವು ನೀಡಿತು.ಕೂಟ ಸ್ಥಾಪನೆಯಾದ ವರ್ಷ [[ಬ್ರಿಟನ್]], [[ಫ್ರಾನ್ಸ್]], [[ಪೋರ್ಚುಗಲ್]] ಮತ್ತು [[ಬೆಲ್ಜಿಯಂ]] ರಾಷ್ಟ್ರಗಳ ಲೇಣೆ-ದೇಣೆಗಳಲ್ಲಿ ಮಿತಿಮೀರಿದ ಹೆಚ್ಚಳಗಳು ಸಂಭವಿಸಿದ್ದಾಗ ವಾಣಿಜ್ಯ ಹಾಗೂ ವಿನಿಮಯ ನಿರ್ಬಂಧಗಳನ್ನು ಸಡಲಿಸಬೇಕೆಂದು ಆ ರಾಷ್ಟ್ರಗಳಿಗೆ ಕೂಟ ಸಲಹೆ ಮಾಡಿತು. ಈ ಸಲಹೆಯ ಪ್ರಕಾರ ಕೈಕೊಂಡ ಕ್ರಮಗಳಿಂದ ಪರಿಸ್ಥಿತಿ ಸುಧಾರಿಸಲು ಅನುಕೂಲವಾಯಿತು.
==ಒಪ್ಪಂದ ಪುನರ್ ಪರಿಶೀಲನೆ==
1954ರಲ್ಲಿ ಕೂಟದ ಒಪ್ಪಂದ ಪುನರ್ ಪರಿಶೀಲನೆಗೆ ಬಂದಾಗ 1950ರಲ್ಲಿ ಸದಸ್ಯ ರಾಷ್ಟ್ರಗಳು ಒಪ್ಪದೆ ಇದ್ದ ಒಂದು ಮುಖ್ಯ ತತ್ತ್ವವನ್ನು ಆಗ ಅಂಗೀಕರಿಸಲಾಯಿತು. ಸದಸ್ಯರಾಷ್ಟ್ರಗಳು ಕೂಟದ ಸಾಲಗಳ ಬಗ್ಗೆ ಸಾಲ ತೀರುವೆ ನಿಧಿಯ ಏರ್ಪಾಡು (ಅಮಾರ್ಟೈಸೇಷನ್) ಕೈಕೊಳ್ಳಬೇಕೆಂಬುದೇ ಈ ಹೊಸ ಕ್ರಮ. ಅಂದಿನಿಂದ 1958ರ ತನಕ ಮಾಡಿದ ಇಂಥ ಸಾಲತೀರುವೆ ನಿಧಿಗಳು ಒಟ್ಟಿನಲ್ಲಿ 112 ಕೋಟಿ ಡಾಲರುಗಳಷ್ಟು ತೀರುವೆಗೆ ಏರ್ಪಾಟು ಮಾಡಿದುವು.ಒಟ್ಟಿನಲ್ಲಿ 1950-56ರ ಅವಧಿಯಲ್ಲಿ ಸಂಭವಿಸಿದ 3,200 ಕೋಟಿ ಡಾಲರುಗಳಷ್ಟು ಒಟ್ಟು ಹೆಚ್ಚಳ ಮತ್ತು ಕೊರತೆಗಳಲ್ಲಿ ಮುಕ್ಕಾಲು ಭಾಗದಷ್ಟನ್ನು ಪುಸ್ತಕದಲ್ಲೇ ಪರಸ್ಪರ ಜೋಡಣೆಯಿಂದಲೇ ಸರಿತೂಗಿಸಲು ಸಾಧ್ಯವಾಯಿತು; ಉಳಿದ ಕಾಲು ಭಾಗವನ್ನು ಮಾತ್ರ ಚಿನ್ನ ಮತ್ತು ಡಾಲರುಗಳ ಲೇಣೆ-ದೇಣೆ ಮೂಲಕ ಸರಿತೂಗಿಸಲಾಯಿತು. ಈ ವ್ಯವಹಾರದಲ್ಲಿ ಅಮೆರಿಕದ ಸಹಾಯ ಮೊದಮೊದಲು ಹೆಚ್ಚಾಗಿದ್ದು ಕ್ರಮೇಣ ಕಡಿಮೆಯಾಯಿತು. ಅಂತರ-ಐರೋಪ್ಯ ಲೇವಾದೇವಿಯಲ್ಲಿ ಚಿನ್ನ ಹಾಗೂ ಪರಿವರ್ತನೀಯ ಹಣಗಳ ಹೆಚ್ಚುವರಿಯ ಉಪಯೋಗದಿಂದ ಅಂತಾರಾಷ್ಟ್ರೀಯ ವ್ಯಾಪಾರ ಸರ್ವತೋಮುಖವಾಗಿ ಬೆಳೆಯಲು ಮಾರ್ಗ ಏರ್ಪಟ್ಟಿತು. ದ್ವಿಪಕ್ಷೀಯ ವ್ಯಾಪಾರ ಏರ್ಪಾಡುಗಳ ಮೂಲಕ ಕೆಲವು ದುಬಾರಿ ರಫ್ತುದಾರರು ಹಿಂದೆ ಪಡೆಯುತ್ತಿದ್ದ ರಕ್ಷಣೆಯನ್ನು ಒಕ್ಕೂಟದ ಏರ್ಪಾಡುಗಳು ತೆಗೆದುಹಾಕಿದುದರಿಂದ ವ್ಯಾಪಾರಮಾರ್ಗ ಆರ್ಥಿಕ ಬಲಗಳ ನಿರ್ದೇಶನಕ್ಕೆ ಒಳಗಾದಂತಾಯಿತು.
==ವ್ಯಾಪಾರ ಪ್ರಮಾಣ==
ವ್ಯಾಪಾರ ಪ್ರಮಾಣದ ಬಗ್ಗೆ ಇದ್ದ ಷರತ್ತುಗಳನ್ನು ಸಡಿಲಗೊಳಿಸಿದ್ದರಿಂದ ಅಂತರ ಐರೋಪ್ಯ ವ್ಯಾಪಾರ ನಿರಾತಂಕ ವ್ಯಾಪಾರದತ್ತ ಸಾಗಿತು. ಇವುಗಳಿಂದ ವಿವಿಧ ಐರೋಪ್ಯ ರಾಷ್ಟ್ರಗಳ ಬೆಲೆಮಟ್ಟಗಳಲ್ಲಿ ಹೊಂದಾಣಿಕೆಯುಂಟಾಗುತ್ತ ಬಂತು. ಕೃತಕ ಆರ್ಥಿಕ ಪ್ರತ್ಯೇಕತಾ ಶಕ್ತಿಗಳು ಮಾಯವಾದುವು. ಈ ಕೂಟದಿಂದ ಐರೋಪ್ಯ ಅರ್ಥವ್ಯವಸ್ಥೆಯಲ್ಲಿ ಸ್ವಾಭಾವಿಕ ಸ್ಪರ್ಧಾ ಪ್ರವೃತ್ತಿಗಳನ್ನು ಪುನಃ ಸ್ಥಾಪಿಸಲು ಸಹಾಯವಾಯಿತೆನ್ನಬಹುದು.
==ಉಲ್ಲೇಖಗಳು==
{{reflist}}
{{Refimprove}}
{{Interwikineeded}}
pg5g6fljt0j9x2ad38vku9q4a6uun5i
ಆದವಾನಿ
0
97886
1378135
1336578
2026-08-02T13:32:35Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378135
wikitext
text/x-wiki
'''ಆದವಾನಿ'''ಅಥವಾ ಅದೋನಿ [[ಬಳ್ಳಾರಿ]]ಯ ಈಶಾನ್ಯಕ್ಕೆ 64 ಕಿ.ಮೀ. ದೂರದಲ್ಲೂ, ಹೈದರಾಬಾದಿನ ಆಗ್ನೇಯಕ್ಕೆ ಸುಮಾರು 228 ಕಿ.ಮೀ. ದೂರದಲ್ಲೂ ಇದೆ.
==ಭೌಗೋಳಿಕ==
ಅದೋನಿಯು
{{Coord|15.63|N|77.28|E|}}.<ref>[http://www.fallingrain.com/world/IN/02/Adoni.html ''Adoni.''] {{Webarchive|url=https://web.archive.org/web/20170721150701/http://www.fallingrain.com/world/IN/02/Adoni.html |date=2017-07-21 }} Falling Rain Genomics Accessed 9 October 2014.</ref>
ಇದು ಸಮುದ್ರ ಮಟ್ಟದಿಂದ ಸುಮಾರು 435 ಮೀಟರ್ (1427 [[foot (length)|feet]]) ಎತ್ತರದಲ್ಲಿ ಸ್ಥತವಾಗಿದೆ.
==ಜನಸಂಖ್ಯೆ==
{{bar box
|title=ಆದೋನಿ- ಧರ್ಮ
|titlebar=#Fcd116
|left1=ಧರ್ಮ
|right1=ಶೇಕಡಾ
|float=right
|bars=
{{bar percent|[[ಹಿಂದೂ]]|orange|55.02}}
{{bar percent|[[ಮುಸ್ಲಿಂ]]|green|45.49}}
{{bar percent|[[ಕ್ರೈಸ್ತ ಧರ್ಮ]]|blue|1.27}}
{{bar percent|ಇತರರು†|black|0.42}}
|caption=Distribution of religions<br />
†<small>Includes [[Sikh]]s (0.2%), [[Buddhism|Buddhists]] (<0.2%).</small>
}}
ಜನಸಂಖ್ಯೆ ಸುಮಾರು 166,537 ಕ್ಕೂ ಹೆಚ್ಚು(೨೦೧೧). ರೈಲುನಿಲ್ದಾಣ ಚೆನ್ನೈ-ಮುಂಬೈ ರೈಲುಮಾರ್ಗದಲ್ಲಿ. ಚೆನ್ನೈನಿಂದ 492 ಕಿ.ಮೀ. ದೂರದಲ್ಲಿದೆ.
==ಇತಿಹಾಸ==
ಮೊದಲಿಗೆ ಇದು ಬಳ್ಳಾರಿ ಜಿಲ್ಲೆಗೆ ಸೇರಿದ್ದ ತಾಲ್ಲೂಕು ಕೇಂದ್ರವಾಗಿತ್ತು. ಕನ್ನಡ ಪ್ರದೇಶ. ರಾಜ್ಯ ಪುನರ್ವಿಂಗಡಣಾ ಸಮಯದಲ್ಲಿ (1956) ಆಂಧ್ರಪ್ರದೇಶಕ್ಕೆ ಸೇರಿತು.
ಆದವಾನಿ ವಿಜಯನಗರದರಸರ ಮುಖ್ಯ ಹಾಗೂ ಕೇಂದ್ರಸ್ಥಾನಗಳಲ್ಲಿ ಒಂದಾಗಿತ್ತು. ಅವರ ಕೈತಪ್ಪಿದ ಅನಂತರ 1792ರ ತನಕ ಮುಸಲ್ಮಾನ ಆಳರಸರ ಸ್ವಾಧೀನದಲ್ಲಿತ್ತು. ಟಿಪ್ಪೂ ಮತ್ತು ಈಸ್ಟ್ ಇಂಡಿಯ ಕಂಪೆನಿಗಳಿಗೆ ನಡೆದ ಮೊದಲ ಮೈಸೂರು ಯುದ್ಧದ ತರುವಾಯ ಇದನ್ನು ಹೈದರಾಬಾದ್ ನಿಜಾಮರ ವಶಕ್ಕೆ ಕೊಡಲಾಯಿತು. ಮತ್ತೆ ನಿಜಾಮ 1800ರಲ್ಲಿ ಬ್ರಿಟಿಷರಿಂದ ಮಿಲಿಟರಿ ಸಹಾಯ ಪಡೆಯಲೋಸುಗ ಇದನ್ನು ಅವರಿಗೆ ಒಪ್ಪಿಸಿದ.
ಆದವಾನಿ ಪ್ರಾಚೀನ ವಾಸ್ತುಶಿಲ್ಪ, ಪುರಾತನ ಕೋಟೆಯ ಅವಶೇಷಗಳು, ಸಿದಿ ಮಸೂದ್ಖಾನ್ ಕಟ್ಟಿಸಿದ (1680) ಸುಂದರ ಜುಮ್ಮ ಮಸೀದಿ - ಇವುಗಳಿಗೆ ಹೆಸರಾದುದು.
==ವಾಣಿಜ್ಯ==
ಈಗ ಇದು ಮುಖ್ಯವಾಗಿ ಹತ್ತಿ ವ್ಯಾಪಾರಕೇಂದ್ರ, ಇಲ್ಲಿ ಹತ್ತಿ, ರೇಷ್ಮೆಗಿರಣಿಗಳು ಹಾಗೂ ಪ್ರಯೋಗಾಲಯಗಳಿವೆ. ಇಲ್ಲಿಯ ಜಮಖಾನಗಳು ಹೆಸರುವಾಸಿಯಾದವು. 1867ರಲ್ಲಿ ಪೌರಸಭೆ ಸ್ಥಾಪಿತವಾಯಿತು. ಬೆಟ್ಟದ ಬುಡದಲ್ಲಿರುವ ರಾಮಾಂಜಲ ಚಿಲುಮೆ ವರ್ಷದಲ್ಲಿ ಕೆಲಕಾಲ ಊರಿಗೆ ನೀರನ್ನೊದಗಿಸುತ್ತದೆ
==ಉಲ್ಲೇಖಗಳು==
{{reflist}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆದವಾನಿ}}
{{Refimprove}}
{{Interwikineeded}}
[[ವರ್ಗ:ತೆಲಂಗಾಣ]]
cu0ja08dd4i4catpngn5edcifgk1p1j
ಕನ್ಯಾರ್ಕಾಲಿ ನೃತ್ಯ
0
113437
1378222
1340786
2026-08-02T20:47:01Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378222
wikitext
text/x-wiki
[[File:Vattakalipallassana.JPG|thumb|ವಟಕಾಳಿ ನೃತ್ಯ]]
[[File:Erattakudan2.JPG|thumb|ಇರಾಟಕುಡನ್ ಪುರಟ್ಟು ಶೈಲಿಯ ನೃತ್ಯ]]
'''ಕನ್ಯಾರ್ಕಾಲಿ''' ಎಂಬುದು [[ಕೇರಳ]]ದ ಅಲತೂರ್ ಹಾಗೂ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ತಾಲ್ಲೂಕಿನ ಹಳ್ಳಿಗಳ ದೇವಾಲಯಗಳಲ್ಲಿ ಪ್ರದರ್ಶನಗೊಳ್ಳುವ ಜಾನಪದ ನೃತ್ಯವಾಗಿದೆ. ಈ ನೃತ್ಯವು ಗ್ರಾಮಗಳಲ್ಲಿ ನಡೆಯುವ ವಿಶು ಆಚರಣೆಯ ಒಂದು ಭಾಗವಾಗಿದೆ ಮತ್ತು ನೃತ್ಯವನ್ನು ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಸಲಾಗುತ್ತದೆ.<ref>http://www.keralaculture.org/kaniyarkali/16</ref>
==ನೃತ್ಯ==
ನೃತ್ಯವನ್ನು ರಾತ್ರಿಯಲ್ಲಿ ಪ್ರಾರಂಭಿಸಿ ಮತ್ತು ಮುಂಜಾನೆ ಕೊನೆಗೊಳಿಸಲಾಗುತ್ತದೆ. ಕೆಲವು ಹಳ್ಳಿಗಳಲ್ಲಿ ಇದನ್ನು ಮೂರು ರಾತ್ರಿ ನಡೆಸಲಾಗುತ್ತದೆ. ದೇವಾಲಯಗಳಲ್ಲಿ ಪುರುಷ ಸಮುದಾಯದಿಂದ ವಟಕಾಳಿ<ref>{{Cite web |url=https://wn.com/vatakali_tamilnadu_folk_song |title=ಆರ್ಕೈವ್ ನಕಲು |access-date=2019-03-17 |archive-date=2025-06-11 |archive-url=https://web.archive.org/web/20250611040034/https://wn.com/vatakali_tamilnadu_folk_song |url-status=dead }}</ref> ಎಂಬ ಒಂದು ಲಯಬದ್ಧ ವೃತ್ತಾಕಾರದ ನೃತ್ಯದ ಮೂಲಕ ಆರಂಭಗೊಳ್ಳುತ್ತದೆ. ವಟಕಾಳಿಯನ್ನು ಹಲವರು 'ಪುರಟು'<ref>{{Cite web |url=https://www.india9.com/i9show/Purattu-39499.htm |title=ಆರ್ಕೈವ್ ನಕಲು |access-date=2019-03-17 |archive-date=2023-06-01 |archive-url=https://web.archive.org/web/20230601051746/https://www.india9.com/i9show/Purattu-39499.htm |url-status=dead }}</ref>(ಅಂದರೆ ನಗೆನಾಟಕ)ಎಂದು ಅನುಸರಿಸುತ್ತಾರೆ. ಪುರಟುಗೆ ನಿಜವಾದ ಸ್ವರೂಪವಿಲ್ಲ ಮತ್ತು ಪ್ರತಿಯೊಂದು ಪುರಟುವು ಸುಮಾರು ಒಂದು ಗಂಟೆಯವರೆಗೆ ಇರುತ್ತದೆ. ಕೇರಳ[[ತಮಿಳುನಾಡು|,ತಮಿಳುನಾಡಿ]]ನ ವಿವಿಧ ಜಾತಿಗಳು ಮತ್ತು ಬುಡಕಟ್ಟು ಜನಾಂಗದ ಜೀವನ ಹಾಗೂ ಸಾಮಾಜಿಕ ಸಂಪ್ರದಾಯಗಳನ್ನು ಈ ನೃತ್ಯವು ಚಿತ್ರಿಸುತ್ತದೆ. ಪುರಟು ವೈವಿಧ್ಯಮಯ ಜಾತಿಗಳು ಮತ್ತು ಬುಡಕಟ್ಟುಗಳನ್ನು ಚಿತ್ರಿಸುವುದರಿಂದ,ವೇಷಭೂಷಣಗಳು,ನೃತ್ಯ ಮತ್ತು ಹಾಡುಗಳ ಶೈಲಿಯನ್ನು ಸಹ ವಿಭಿನ್ನ ರೀತಿಯಲ್ಲಿ ಚಿತ್ರಿಸುತ್ತದೆ. ನೃತ್ಯವು ನಿಧಾನ ಮತ್ತು ಲಯಬದ್ಧವಾದ ಚಲನೆಯನ್ನು ಹೊಂದಿದೆ. ಕೆಲವು ಪುರಟುಗಳು ಹಾಸ್ಯದಿಂದ ಕೂಡಿರುತ್ತವೆ. ನೃತ್ಯವನ್ನು ಪೆಂಡಾಲ್ ಎಂಬ ಚದರ ಹಂತದಲ್ಲಿ ಕೂಡ ನಡೆಸಲಾಗುತ್ತದೆ. ಪೆಂಡಾಲ್ ದೇವಾಲಯದ ಮುಂದೆ ಅಥವಾ ಅದರ ಆವರಣದಲ್ಲಿದೆ. ಇದರ ಮಧ್ಯದಲ್ಲಿ ಬೆಳಗಿದ ದೀಪವನ್ನು ಇಡಲಾಗಿದೆ. ಒಂಬತ್ತು ಕಂಬಗಳನ್ನು ಬೆಂಬಲಿಸುವ ಮೇಲ್ಛಾವಣಿಯು ಇಲ್ಲಿ ಒಳಗೊಂಡಿದೆ. ಗಾಯಕರು ವೇದಿಕೆಯ ಕೇಂದ್ರ ಸ್ಥಾನವನ್ನು ಆಕ್ರಮಿಸುತ್ತಾರೆ. ನರ್ತಕರು ವೃತ್ತಾಕಾರದ ಭಾಗದಲ್ಲಿ ನೃತ್ಯ ಮಾಡುತ್ತಾರೆ. ಹಾಡುಗಳು [[ಮಲಯಾಳಂ]],[[ತಮಿಳು]] ಭಾಷೆಯಲ್ಲಿ ರಚಿತವಾಗಿದೆ. ಇದರ ಜೊತೆ ಎಲತಲಮ್,ಚೆಂಡೆ,ಮದ್ದಲೆ,ವಾದ್ಯಗಳನ್ನು ಉಪಯೋಗಿಸುತ್ತಾರೆ.<ref>https://www.justkerala.in/culture/kerala-dance-forms/kanyarkali</ref>
==ಭಾಗವಹಿಸುವವರು==
ಪುರುಷರು ಮುಖ್ಯವಾಗಿ ಈ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಮಹಿಳೆಯರು ಮಾತನಾಡುವ ರೀತಿ ಹಾಗೂ ಅವರ ದೇಹ ಭಾಷೆಯನ್ನು ಅನುಕರಿಸಿ ಪುರುಷರು ಈ ನೃತ್ಯವನ್ನು ಮಾಡುತ್ತಾರೆ.<ref>https://www.revolvy.com/page/Kanyarkali</ref>
=ಉಲ್ಲೇಖಗಳು=
{{ಉಲ್ಲೇಖಗಳು}}
{{Interwikineeded}}
[[ವರ್ಗ:ಜನಪದ ಕಲೆಗಳು]]
8xaw1a7lu61jb97vn1w21jtzdan1ya1
ಟಿಪ್ಪುವಿನ ಹುಲಿ
0
117956
1378231
1348704
2026-08-03T03:54:22Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378231
wikitext
text/x-wiki
{{Wikify}}
[[ಚಿತ್ರ:Tipu's_Tiger_front_view_2006AH4173.jpg|thumb|ಲಂಡನ್ನ ವಿ &amp; ಎ ಮ್ಯೂಸಿಯಂನಲ್ಲಿರುವ ಟಿಪುವಿನ ಹುಲಿ, ಪ್ರಾಸ್ಟ್ರೇಟ್ ಯುರೋಪಿಯನ್ ಮೇಲೆ ದಾಳಿ ನಡೆಸುತ್ತಿದೆ ಎಂದು ತೋರಿಸುತ್ತದೆ]]
'''ಟಿಪ್ಪುವಿನ ಹುಲಿ''' ಅಥವಾ '''ಟಿಪ್ಪುವಿನ ಹುಲಿ''' ಹದಿನೆಂಟನೇ ಶತಮಾನದ ಆಟೊಮ್ಯಾಟನ್ ಅಥವಾ ಯಾಂತ್ರಿಕ ಆಟಿಕೆ, ಇದು ಭಾರತದ [[ಮೈಸೂರು ಸಂಸ್ಥಾನ|ಮೈಸೂರು ಸಾಮ್ರಾಜ್ಯದ]] ಆಡಳಿತಗಾರ [[ಟಿಪ್ಪು ಸುಲ್ತಾನ್|ಟಿಪ್ಪು ಸುಲ್ತಾನನಿಗಾಗಿ]] ರಚಿಸಲಾಗಿದೆ. ಕೆತ್ತಿದ ಮತ್ತು ಚಿತ್ರಿಸಿದ ಮರದ ಕವಚವು ಹುಲಿಯನ್ನು ಜೀವ ಗಾತ್ರದ ಯುರೋಪಿಯನ್ ಮನುಷ್ಯನನ್ನು ರಕ್ಷಿಸುತ್ತದೆ. ಹುಲಿ ಮತ್ತು ಮನುಷ್ಯನ ದೇಹಗಳೊಳಗಿನ ಕಾರ್ಯವಿಧಾನಗಳು ಮನುಷ್ಯನ ಒಂದು ಕೈಯನ್ನು ಚಲಿಸುವಂತೆ ಮಾಡುತ್ತದೆ, ಅವನ ಬಾಯಿಯಿಂದ ಅಳುವ ಶಬ್ದವನ್ನು ಹೊರಸೂಸುತ್ತದೆ ಮತ್ತು ಹುಲಿಯಿಂದ ಗೊಣಗುತ್ತದೆ. ಇದಲ್ಲದೆ 18 ಟಿಪ್ಪಣಿಗಳೊಂದಿಗೆ ಸಣ್ಣ ಕೊಳವೆ ಅಂಗದ ಕೀಳುಮಣೇ ಅನ್ನು ಬಹಿರಂಗಪಡಿಸಲು ಹುಲಿಯ ಬದಿಯಲ್ಲಿರುವ ಫ್ಲಾಪ್ ಕೆಳಗೆ ಮಡಚಿಕೊಳ್ಳುತ್ತದೆ.
ಟಿಪ್ಪುಗಾಗಿ ಹುಲಿಯನ್ನು ರಚಿಸಲಾಗಿದೆ ಮತ್ತು ಹುಲಿಯ ವೈಯಕ್ತಿಕ ಚಿಹ್ನೆಯನ್ನು ಬಳಸಿಕೊಳ್ಳುತ್ತದೆ ಮತ್ತು ತನ್ನ ಶತ್ರು, [[ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ|ಈಸ್ಟ್ ಇಂಡಿಯಾ ಕಂಪನಿಯ]] ಬ್ರಿಟಿಷರ ಬಗ್ಗೆ ತನ್ನ ದ್ವೇಷವನ್ನು ವ್ಯಕ್ತಪಡಿಸುತ್ತದೆ. 1799 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಪಡೆಗಳು ಟಿಪ್ಪುವಿನ ರಾಜಧಾನಿಗೆ ನುಗ್ಗಿದ ನಂತರ ಹುಲಿಯನ್ನು ತನ್ನ [[ಟಿಪ್ಪು ಸುಲ್ತಾನನ ಅರಮನೆ|ಬೇಸಿಗೆ ಅರಮನೆಯಲ್ಲಿ]] ಕಂಡುಹಿಡಿಯಲಾಯಿತು. [[ಭಾರತದ ಗವರ್ನರ್ ಜನರಲ್|ಗವರ್ನರ್ ಜನರಲ್]] ಲಾರ್ಡ್ ಮಾರ್ನಿಂಗ್ಟನ್ ಹುಲಿಯನ್ನು ಬ್ರಿಟನ್ಗೆ ಕಳುಹಿಸಿದರು, ಆರಂಭದಲ್ಲಿ ಇದು [[ಲಂಡನ್ ಗೋಪುರ|ಲಂಡನ್ ಗೋಪುರದಲ್ಲಿ]] ಪ್ರದರ್ಶನವಾಗಬೇಕೆಂದು ಉದ್ದೇಶಿಸಿತ್ತು. ಮೊದಲು ಲಂಡನ್ ಸಾರ್ವಜನಿಕರಿಗೆ 1808 ರಲ್ಲಿ ಈಸ್ಟ್ ಇಂಡಿಯಾ ಹೌಸ್ನಲ್ಲಿ, ನಂತರ ಲಂಡನ್ನ ಈಸ್ಟ್ ಇಂಡಿಯಾ ಕಂಪನಿಯ ಕಚೇರಿಗಳಲ್ಲಿ ಪ್ರದರ್ಶಿಸಲಾಯಿತು, ನಂತರ ಇದನ್ನು 1880 ರಲ್ಲಿ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಸಂಗ್ರಾಲಯಕ್ಕೆ(ವಿ & ಎ) ಗೆ ವರ್ಗಾಯಿಸಲಾಯಿತು (ಪ್ರವೇಶ ಸಂಖ್ಯೆ 2545 (ಐಎಸ್)).<ref name="V&A web">{{Cite web|url=http://www.vam.ac.uk/content/articles/t/tippoos-tiger/|title=Tipu's Tiger|last=Victoria & Albert Museum|authorlink=Victoria and Albert Museum|year=2011|publisher=Victoria & Albert Museum|location=London|access-date=16 July 2011}}</ref> ಇದು ಈಗ "ದಕ್ಷಿಣ ಭಾರತದ ಇಂಪೀರಿಯಲ್ ನ್ಯಾಯಾಲಯಗಳಲ್ಲಿ" ಶಾಶ್ವತ ಪ್ರದರ್ಶನದ ಭಾಗವಾಗಿದೆ.<ref name="HallamStreet2000">{{Cite book|url=https://books.google.com/books?id=Xm8--tAjcUYC|title=Cultural encounters: representing otherness|last=Ivan|last2=Corinne A.|publisher=Routledge|others=Street, Brian V.|year=2000|isbn=978-0-415-20280-0|editor-last=Hallam, Elizabeth|page=194|chapter=Reflections on the fate of Tippoo's Tiger - Defining cultures through public display|access-date=20 July 2011|chapter-url=https://books.google.com/books?id=Xm8--tAjcUYC&pg=PA194}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಇದು ಲಂಡನ್ಗೆ ಆಗಮಿಸಿದ ಕ್ಷಣದಿಂದ ಇಂದಿನವರೆಗೂ ಟಿಪ್ಪು ಟೈಗರ್ ಸಾರ್ವಜನಿಕರ ಆಕರ್ಷಣೆಯಾಗಿದೆ. ಟಿಪ್ಪು ವಿವಾದಾತ್ಮಕ ವ್ಯಕ್ತಿಯಾಗಿದ್ದು, [[ಹಿಂದೂ|ಹಿಂದೂಗಳು]] ಮತ್ತು ಕ್ರಿಶ್ಚಿಯನ್ನರ ದಬ್ಬಾಳಿಕೆಗೆ ಟೀಕಿಸಿದ್ದಾರೆ.<ref name="alexander">{{Cite book|url=https://books.google.com/books?id=y7GKwhuea9kC&pg=PA404&dq=tipu|title=India: History, Religion, Vision and Contribution to the World, Volume 1|last=Varghese|first=Alexander|publisher=Atlantic Publishers|year=2008|isbn=9788126909032}}</ref><ref>{{Cite journal|last=1 Dr. Gurusiddaiah C, 2 Dr. BP Mahesh Chandra Guru, 3 Abhilash MS, 4 Dr. Sreekantaiah|date=January 2018|title=Religious philosophy of Tipu Sultan|url=http://www.educationjournal.in/download/264/3-1-11-268.pdf|publisher=International Journal of Multidisciplinary Education and Research|volume=3|pages=11–16|issn=2455-4588|access-date=2019-08-20|archive-date=2019-01-01|archive-url=https://web.archive.org/web/20190101145314/http://www.educationjournal.in/download/264/3-1-11-268.pdf|url-status=dead}}</ref><ref>{{Cite book|url=https://books.google.com/books?id=oNekDAAAQBAJ|title=The Ocean of Churn: How the Indian Ocean Shaped Human History|last=Sanyal|first=Sanjeev|year=2016|isbn=9789386057617|page=188}}</ref> ಹತ್ಯಾಕಾಂಡಗಳು,<ref>Kerala District Gazetteers: Cannanore By A. Sreedhara Menon p.134-137</ref><ref>{{Cite book|url=https://books.google.com/books?id=bk5uAAAAMAAJ&q=%22surround+and+extricate%22|title=Tipu Sultan: villain or hero? : an... – Sita Ram Goel — Google Books|last=Goel|first=Sita Ram|date=29 August 2008|isbn=9788185990088|access-date=15 November 2011}}</ref> ಜೈಲು ಶಿಕ್ಷೆ,<ref name="Moegling 1855 117">{{Cite book|url=https://books.google.com/?id=k5ABAAAAQAAJ&printsec=frontcover&dq=moegling+coorg#v=snippet&q=5%2C000&f=false|title=Coorg Memoirs: An Account of Coorg and of the Coorg Mission|last=Moegling|first=H|year=1855|page=117|access-date=11 February 2014}}</ref><ref name="Honor">{{harvnb|Society for the Diffusion of Useful Knowledge (Great Britain)|1842|p=[https://books.google.com/books?id=Ad9PAAAAMAAJ&pg=RA1-PA494 494]}}</ref><ref name="acc">{{harvnb|Farias|1999|p=76}}</ref> ಬಲವಂತದ ಮತಾಂತರ,<ref name="Coorg2">{{harvnb|Cariappa|1981|p=48}}</ref><ref>{{harvnb|Knight|1858|p=[https://books.google.com/books?id=QuY-AAAAYAAJ&pg=PA94 94]}}</ref><ref name="dajser2">{{Cite web|url=http://www.daijiworld.com/chan/achievers_view.asp?a_id=28|title=Deportation & The Konkani Christian Captivity at Srirangapatna (February 24, 1784 Ash Wednesday)|publisher=[[Daiji World|Daijiworld Media]]|location=Mangalore|archive-url=https://www.webcitation.org/query?url=http%3A%2F%2Fwww.daijiworld.com%2Fchan%2Fachievers_view.asp%3Fa_id%3D28&date=2012-03-01|archive-date=1 March 2012|access-date=29 February 2008}}</ref> ಮತ್ತು ಸುನ್ನತಿ <ref name="Wilks545">{{Cite book|url=https://books.google.com/?id=MEvQL8wHHngC&pg=PA283&dq=kirkpatrick+coorgs#v=onepage&q=coorgs&f=false|title=Historical Sketches of the South of India, in an Attempt to Trace the History of Mysoor|last=Wilks|first=Mark|publisher=Longman, Hurst, Rees, and Orme|year=1817|isbn=9788120604919|page=545|access-date=12 February 2014}}</ref><ref name="DumgaPeenth">{{harvnb|Prabhu|1999|p=213|Ref=mac}}</ref> ಹಿಂದೂಗಳು ( ಕೂರ್ಗ್ನ ಕೊಡವಾಸ್ ಮತ್ತು ಮಲಬಾರ್ನ ನಾಯರ್ಗಳು ) ಮತ್ತು ಕ್ರಿಶ್ಚಿಯನ್ನರು ( ಮಂಗಳೂರಿನ ಕ್ಯಾಥೊಲಿಕರು ) ಮತ್ತು ಚರ್ಚುಗಳು <ref name="Lobo2">[https://web.archive.org/web/20221206081443/https://archive.today/20140829175532/http://portal.kinnigoli.com/index.php?option=com_content&view=article&id=28:sarasvatis-chi. Sarasvati's Children], Joe Lobo</ref> ಮತ್ತು ದೇವಾಲಯಗಳ ನಾಶ <ref name="ReferenceA2">Panikkassery, Velayudhan. MM Publications (2007), Kottayam India</ref> ಇವುಗಳನ್ನು ಅವರ ಧಾರ್ಮಿಕ ಅಸಹಿಷ್ಣುತೆಗೆ ಸಾಕ್ಷಿಯಾಗಿ ಉಲ್ಲೇಖಿಸಲಾಗಿದೆ. ಇತರ ಮೂಲಗಳು ಅವರ ಆಡಳಿತದಲ್ಲಿ ಹಿಂದೂ ಅಧಿಕಾರಿಗಳ ನೇಮಕ <ref>Hasan 1971, ''History of Tipu Sultan'', pp. 357–8</ref> ಮತ್ತು ಹಿಂದೂ ದೇವಾಲಯಗಳಿಗೆ ಅವರ ದತ್ತಿಯನ್ನು ಉಲ್ಲೇಖಿಸುತ್ತವೆ,<ref name="A. Subbaraya Chetty 2002">A. Subbaraya Chetty, 2002, "Tipu's endowments to Hindus" in Habib. 111–115.</ref><ref name="A. Subbaraya Chetty 2002"/><ref name="padiga3">Habib, Irfan (2002), p118, ''Confronting Colonialism: Resistance and Modernization Under Haidar Ali & Tipu Sultan'', Anthem Press, London, {{ISBN|1-84331-024-4}}</ref><ref name="padiga3"/><ref name="padiga3"/><ref name="hasan2">Hasan, Mohibbul (1951), p360, ''History of Tipu Sultan'', Aakar Books, Delhi, {{ISBN|81-87879-57-2}}</ref><ref name="hasan2"/> ಇವುಗಳನ್ನು ಅವರ ಧಾರ್ಮಿಕ ಸಹಿಷ್ಣುತೆಗೆ ಸಾಕ್ಷಿಯಾಗಿದೆ.
[[ಚಿತ್ರ:Tipu's_Tiger_with_keyboard_on_display_2006AH4168.jpg|thumb|ಅಂಗ ಕೀಬೋರ್ಡ್ ಗೋಚರಿಸುವಂತೆ ಟಿಪುವಿನ ಟೈಗರ್]]
ಟಿಪ್ಪುವಿನ ಹುಲಿಯನ್ನು ಮೂಲತಃ 1795 ರ ಸುಮಾರಿಗೆ ಮೈಸೂರು ಸಾಮ್ರಾಜ್ಯದಲ್ಲಿ (ಇಂದು ಭಾರತದ [[ಕರ್ನಾಟಕ]] ರಾಜ್ಯದಲ್ಲಿ) [[ಟಿಪ್ಪು ಸುಲ್ತಾನ್]] ( [[ಟಿಪ್ಪು ಸುಲ್ತಾನ್|ಟಿಪ್ಪು]] ಸೈಬ್, [[ಟಿಪ್ಪು ಸುಲ್ತಾನ್|ಟಿಪ್ಪುಸುಲ್ತಾನ್]] ಮತ್ತು ಹತ್ತೊಂಬತ್ತನೇ ಶತಮಾನದ ಸಾಹಿತ್ಯದಲ್ಲಿ ಇತರ ಎಪಿಥೀಟ್ಗಳು ಎಂದೂ ಕರೆಯುತ್ತಾರೆ) ಗಾಗಿ ತಯಾರಿಸಲಾಯಿತು.<ref name="Tiger&Thistle11">{{Cite web|url=http://www.tigerandthistle.net/tiger11.htm|title=1.1 Tippoo's Tiger|last=Unattributed|year=2000|website=The Tiger and the Thistle - Tipu Sultan and the Scots in India|publisher=The National Galleries of Scotland.|archive-url=https://web.archive.org/web/20080206054703/http://www.tigerandthistle.net/tiger11.htm|archive-date=6 February 2008|dead-url=yes|access-date=18 July 2011}}</ref> [[ಟಿಪ್ಪು ಸುಲ್ತಾನ್]] ಹುಲಿ ತನ್ನ ಲಾಂಛನವಾಗಿ ವ್ಯವಸ್ಥಿತವಾಗಿ, ತನ್ನ ಶಸ್ತ್ರಾಸ್ತ್ರಗಳ ಮೇಲೆ, ತನ್ನ ಸೈನಿಕರ ಸಮವಸ್ತ್ರದ ಮೇಲೆ ಮತ್ತು ಅವನ ಅರಮನೆಗಳ ಅಲಂಕಾರದ ಮೇಲೆ ಹುಲಿ ಲಕ್ಷಣಗಳನ್ನು ಬಳಸಿಕೊಳ್ಳುತ್ತದೆ.<ref name="ModernAsianStudies">{{Cite journal|last=Brittlebank|first=K.|title=Sakti and Barakat: The Power of Tipu's Tiger. An Examination of the Tiger Emblem of Tipu Sultan of Mysore|journal=Modern Asian Studies|volume=29|issue=2|pages=257–269|year=1995|pmid=|pmc=|jstor=312813|doi=10.1017/S0026749X00012725}}</ref> ಅವನ ಸಿಂಹಾಸನವು ಚಿನ್ನದಿಂದ ಆವೃತವಾಗಿರುವ ಜೀವ ಗಾತ್ರದ ಮರದ ಹುಲಿಯ ಮೇಲೆ ನಿಂತಿದೆ; ಇತರ ಅಮೂಲ್ಯವಾದ ನಿಧಿಗಳಂತೆ ಬ್ರಿಟಿಷರ ಸೈನ್ಯದ ನಡುವೆ ಹಂಚಿಕೆಯಾದ ಹೆಚ್ಚು ಸಂಘಟಿತ ಬಹುಮಾನ ನಿಧಿಗೆ ಇದನ್ನು ವಿಭಜಿಸಲಾಗಿದೆ. {{Sfn|Ord-Hume, 1987a}} <ref>Davis, 156-157 on the throne, and 153-157 on the prize fund generally</ref>
ಟಿಪ್ಪು ತನ್ನ ತಂದೆ [[ಹೈದರಾಲಿ|ಹೈದರ್ ಅಲಿ]] ಎಂಬ ಮುಸ್ಲಿಂ ಸೈನಿಕನಿಂದ ಅಧಿಕಾರವನ್ನು ಪಡೆದಿದ್ದನು, ಅವನು ಆಡಳಿತಾರೂ ಹಿಂದೂ [[ಒಡೆಯರ್|ಒಡೆಯರ್ ರಾಜವಂಶದ]] ಅಡಿಯಲ್ಲಿ ''ದಾಲ್ವಾಯ್'' ಅಥವಾ ಕಮಾಂಡರ್-ಇನ್-ಚೀಫ್ ಆಗಿ ''ಬೆಳೆದನು'', ಆದರೆ 1760 ರಿಂದ ಪರಿಣಾಮಕಾರಿಯಾಗಿ ಸಾಮ್ರಾಜ್ಯದ ಆಡಳಿತಗಾರನಾಗಿದ್ದನು. ಹೈದರ್, ಆರಂಭದಲ್ಲಿ ಮರಾಠರ ವಿರುದ್ಧ ಬ್ರಿಟಿಷರೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿದ ನಂತರ,ಅವರು ತಮ್ಮ ರಾಜ್ಯದ ವಿಸ್ತರಣೆಗೆ ಅತ್ಯಂತ ಪರಿಣಾಮಕಾರಿಯಾದ ಅಡಚಣೆಯನ್ನು ಪ್ರತಿನಿಧಿಸಿದ್ದರಿಂದ ಅವರ ತೀವ್ರವಾದ ಶತ್ರುಗಳಾಗಿದ್ದರು, ಮತ್ತು ಟಿಪ್ಪು ಹಿಂಸಾತ್ಮಕವಾಗಿ ಬ್ರಿಟಿಷ್ ವಿರೋಧಿ ಭಾವನೆಗಳೊಂದಿಗೆ ಬೆಳೆದರು. {{Sfn|Ord-Hume, 1987a}}
ಟಿಪ್ಪು ನಿಯೋಜಿಸಿದ ದೊಡ್ಡ ವ್ಯಂಗ್ಯಚಿತ್ರ ಚಿತ್ರಗಳ ಒಂದು ನಿರ್ದಿಷ್ಟ ಭಾಗದ ಹುಲಿಯು ಯುರೋಪಿಯನ್, ಸಾಮಾನ್ಯವಾಗಿ ನಿರ್ದಿಷ್ಟವಾಗಿ ಬ್ರಿಟಿಷ್, ಹುಲಿಗಳು ಅಥವಾ ಆನೆಗಳಿಂದ ಆಕ್ರಮಣಕ್ಕೊಳಗಾದ ವ್ಯಕ್ತಿಗಳು ಅಥವಾ ಮರಣದಂಡನೆ, ಚಿತ್ರಹಿಂಸೆ ಮತ್ತು ಅವಮಾನ ಮತ್ತು ಇತರ ರೀತಿಯಲ್ಲಿ ದಾಳಿ ಮಾಡಲಾಗುತ್ತಿದೆ. ಟಿಪ್ಪು ರಾಜಧಾನಿ ಶ್ರೀರಂಗ[[ಶ್ರೀರಂಗಪಟ್ಟಣ|ಪಟ್ಟಣ]] ಮುಖ್ಯ ಬೀದಿಗಳಲ್ಲಿರುವ ಮನೆಗಳ ಬಾಹ್ಯ ಗೋಡೆಗಳ ಮೇಲೆ ಟಿಪ್ಪುವಿನ ಆದೇಶದಿಂದ ಇವುಗಳಲ್ಲಿ ಹಲವು ಚಿತ್ರಿಸಲಾಗಿದೆ. {{Sfn|Ord-Hume, 1987a}} ಟಿಪ್ಪು "ರಲ್ಲಿ ನಿಕಟ ಸಹಕಾರ ಬ್ರಿಟನ್ ಯುದ್ಧದ ಇತ್ತು ಮತ್ತು ಇನ್ನೂ ಹೊಂದಿದ್ದ ಫ್ರೆಂಚ್, ಜೊತೆ" ಒಂದು ಅಸ್ತಿತ್ವವನ್ನು ದಕ್ಷಿಣ ಭಾರತದಲ್ಲಿ ಮತ್ತು ಟಿಪ್ಪುವಿನ ಆಸ್ಥಾನಕ್ಕೆ ಭೇಟಿನೀಡಿದರು. ಫ್ರೆಂಚ್ ಕುಶಲಕರ್ಮಿಗಳು ಕೆಲವು ಬಹುಶಃ ಹುಲಿ ಆಂತರಿಕ ಕೆಲಸಗಳಿಗೆ ಕೊಡುಗೆ. {{Sfn|Ord-Hume, 1987a}}
[[ಚಿತ್ರ:Death_of_Munrow.jpg|left|thumb| "ಡೆತ್ ಆಫ್ ಮುನ್ರೋ", ಸ್ಟಾಫರ್ಡ್ಶೈರ್ ಕುಂಬಾರಿಕೆ ಸಿ. 1814 ರಲ್ಲಿ ವಾಲ್ಟನ್ ಶಾಲೆಯಿಂದ ಹುಲಿ ಮೌಲಿಂಗ್ ಹೆಕ್ಟರ್ ಸದರ್ಲ್ಯಾಂಡ್ ಮುನ್ರೊ, ಜನರಲ್ ಹೆಕ್ಟರ್ ಮುನ್ರೊ ಅವರ ನೈಸರ್ಗಿಕ ಮಗ (1726 - 1805)]]
ಇದು ಪ್ರಸ್ತಾಪಿಸಲಾಗಿದೆ <ref name="Archer">{{Cite book|url=https://books.google.com/books?id=c9GnCcBTFYsC|title=Tippoo's Tiger|last=Archer|first=Mildred|publisher=HM Stationery Office|year=1959|series=Museum Monograph, Victoria & Albert Museum|location=London|access-date=16 July 2011|issue=10}}</ref> ವಿನ್ಯಾಸದ ಜನರಲ್ ಮಗನೊಬ್ಬ 1792 ಮರಣ ಪ್ರೇರಣೆ ಎಂದು ಸರ್ ಹೆಕ್ಟರ್ ಮುನ್ರೋ ಸಮಯದಲ್ಲಿ ಒಂದು ವಿಭಾಗನ್ನು, ಸರ್ ಐರ್ ಕೂಟೆ ನಲ್ಲಿ ಮಾಡಿದ ವಿಜಯ ಪೋರ್ಟೊ ನೋವೋ ಕದನ (ಪರಂಗಿಪೆಟೈ 1781 ರಲ್ಲಿ) ಟಿಪ್ಪು ಸುಲ್ತಾನ್ ಅವರ ತಂದೆ [[ಹೈದರಾಲಿ|ಹೈದರ್ ಅಲಿ]] [[ಎರಡನೆಯ ಮೈಸೂರು ಯುದ್ಧ|ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ]] 10,000 ಪುರುಷರನ್ನು ಕಳೆದುಕೊಂಡರು. {{Sfn|Ord-Hume, 1987a}} ಹೆಕ್ಟರ್ ಸದರ್ಲೆಂಡ್ ಮುನ್ರೊ, ಮದ್ರಾಸ್ ದಾರಿಯಲ್ಲಿ ಒಂದು 17 ವರ್ಷದ ಈಸ್ಟ್ ಇಂಡಿಯಾ ಕಂಪನಿ ಕೆಡೆಟ್ <ref>{{Cite journal|last=Munro|first=Colin|date=4 January 2018|title=Thus were the British defeated|url=https://www.lrb.co.uk/v40/n01/colin-munro/thus-were-the-british-defeated|journal=London Review of Books|volume=40|pages=20–21}}</ref>, ಡಿಸೆಂಬರ್ 22 1792 ರಂದು ದಾಳಿ ಕೊಲ್ಲಲಾಯಿತು ಹುಲಿಯೊಂದು ಹಲವಾರು ಸಹಚರರು ಜೊತೆ ಬೇಟೆಯಾಡುವ ಸಂದರ್ಭದಲ್ಲಿ ಸೌಗರ ದ್ವೀಪ ದಲ್ಲಿ [[ಬಂಗಾಳ ಕೊಲ್ಲಿ|ಬಂಗಾಳ ಕೊಲ್ಲಿಯಲ್ಲಿ]] (ಇನ್ನೂ [[ಭಾರತೀಯ ಹುಲಿಗಳು|ಬಂಗಾಳ ಹುಲಿಯ]] ಕೊನೆಯ ನಿರಾಶ್ರಿತರಲ್ಲಿ ಒಬ್ಬರು).<ref name="Victoria & Albert Museum 2011">{{Cite web|url=http://www.vam.ac.uk/school_stdnts/schools/teachers_resources/image_identity/in_the_galleries/info_for_teachers/tippoo_tiger/index.html|title=Tipu's Tiger Sound and Movement animation|last=Victoria & Albert Museum|authorlink=Victoria and Albert Museum|year=2011|publisher=Victoria & Albert Museum|location=London|archive-url=https://web.archive.org/web/20110108030740/http://www.vam.ac.uk/school_stdnts/schools/teachers_resources/image_identity/in_the_galleries/info_for_teachers/tippoo_tiger/index.html|archive-date=8 January 2011|dead-url=yes|access-date=16 July 2011}}</ref><ref name="Victoria & Albert Museum 2011"/><ref name="Victoria & Albert Museum 2011"/><ref name="de Almeida, 38">de Almeida, 38</ref><ref name="de Almeida, 38">de Almeida, 38</ref><ref name="de Almeida, 38">de Almeida, 38</ref> {{Sfn|Ord-Hume, 1987a}} ಆದಾಗ್ಯೂ, ಟಿಪ್ಪುಗಾಗಿ ಮಾಡಿದ ಗನ್ನ ಮೇಲೆ ಬೆಳ್ಳಿಯ ಆರೋಹಣದ ಮೇಲೆ ಇದೇ ರೀತಿಯ ದೃಶ್ಯವನ್ನು ಚಿತ್ರಿಸಲಾಗಿದೆ ಮತ್ತು ಘಟನೆಗೆ ಐದು ವರ್ಷಗಳ ಮೊದಲು 1787-88ರ ದಿನಾಂಕ.<ref>{{Cite book|title=Tipu's tigers|last=Susan.|first=Stronge|date=2009|publisher=V & A Publishing|others=Victoria and Albert Museum.|isbn=978-1851775750|location=London|oclc=317927180}}</ref>
[[ಚಿತ್ರ:Tipu's_Tiger_detail_of_head_2006AH4167.jpg|thumb|ತಲೆಗಳ ನೋಟ]]
ಟಿಪ್ಪುವಿನ ಟೈಗರ್ ಭಾರತದಿಂದ ಬಂದ ಆರಂಭಿಕ ಸಂಗೀತ ಆಟೊಮ್ಯಾಟಾದ ಉದಾಹರಣೆಯಾಗಿ ಗಮನಾರ್ಹವಾಗಿದೆ,<ref name="RaceMusic">{{Cite web|url=http://theracemusic.net/the-history-of-electronic-music/part13-the-first-portable-music-player-%E2%80%93-the-most-popular-automatic-music-instrument-in-the-world|title=Part 13. The First Portable Music Player – The Most Popular Automatic Music Instrument in the World|last=Angelika|date=21 November 2009|website=The Race Music|publisher=theracemusic.net|archive-url=https://web.archive.org/web/20120328155321/http://theracemusic.net/the-history-of-electronic-music/part13-the-first-portable-music-player-%E2%80%93-the-most-popular-automatic-music-instrument-in-the-world|archive-date=28 March 2012|dead-url=unfit|access-date=19 July 2011}}</ref> ಮತ್ತು ಇದನ್ನು ವಿಶೇಷವಾಗಿ ಟಿಪ್ಪು ಸುಲ್ತಾನರಿಗಾಗಿ ನಿರ್ಮಿಸಲಾಗಿದೆ.<ref name="V&A web"/>
ಮಾನವನ ಆಕೃತಿ ಯುರೋಪಿಯನ್ ಉಡುಪಿನಲ್ಲಿ ಸ್ಪಷ್ಟವಾಗಿ ಇದೆ, ಆದರೆ ಇದು ಸೈನಿಕ ಅಥವಾ ನಾಗರಿಕನನ್ನು ಪ್ರತಿನಿಧಿಸುತ್ತದೆಯೆ ಎಂದು ಅಧಿಕಾರಿಗಳು ಭಿನ್ನವಾಗಿರುತ್ತಾರೆ; ವಿ & ಎ ವೆಬ್ಸೈಟ್ನಲ್ಲಿನ ಪ್ರಸ್ತುತ ಪಠ್ಯವು ಆಕೃತಿಯನ್ನು "ಯುರೋಪಿಯನ್" ಎಂದು ವಿವರಿಸುವುದನ್ನು ಹೊರತುಪಡಿಸಿ ನಿರ್ದಿಷ್ಟಪಡಿಸುವುದನ್ನು ತಪ್ಪಿಸುತ್ತದೆ.<ref>[http://www.vam.ac.uk/collections/asia/object_stories/Tippoo's_tiger/index.html Tippoo's Tiger on Victoria & Albert Museum website] {{Webarchive}}; to Ord-Hume he is "a European soldier" (Part 1, 21), but to de Almeida and Gilpin he is "an English gentleman" (p. 35)</ref>
ಕ್ರ್ಯಾಂಕ್ ಹ್ಯಾಂಡಲ್ನ ಕಾರ್ಯಾಚರಣೆಯು ಟಿಪ್ಪುವಿನ ಟೈಗರ್ ಒಳಗೆ ಹಲವಾರು ವಿಭಿನ್ನ ಕಾರ್ಯವಿಧಾನಗಳನ್ನು ಶಕ್ತಿಯನ್ನು ನೀಡುತ್ತದೆ. ಮನುಷ್ಯನ ಗಂಟಲಿನೊಳಗಿನ ಕೊಳವೆ ಮೂಲಕ ಗಾಳಿಯನ್ನು ಹೊರಹಾಕುತ್ತದೆ, ಅದು ಅವನ ಬಾಯಿಗೆ ತೆರೆಯುತ್ತದೆ. ಇದು ಗೋಳಾಟದ ಧ್ವನಿಯನ್ನು ಉಂಟುಮಾಡುತ್ತದೆ, ಬಲಿಪಶುವಿನ ಸಂಕಟದ ಕೂಗುಗಳನ್ನು ಅನುಕರಿಸುತ್ತದೆ. ಯಾಂತ್ರಿಕ ಸಂಪರ್ಕವು ಮನುಷ್ಯನ ಎಡಗೈ ಮೇಲಕ್ಕೆತ್ತಿ ಬೀಳಲು ಕಾರಣವಾಗುತ್ತದೆ. ಈ ಕ್ರಿಯೆಯು 'ವೈಲ್ ಕೊಳವೆ'ಯ ಪಿಚ್ ಅನ್ನು ಬದಲಾಯಿಸುತ್ತದೆ. ಹುಲಿಯ ತಲೆಯೊಳಗಿನ ಮತ್ತೊಂದು ಕಾರ್ಯವಿಧಾನವು ಎರಡು ಟೋನ್ಗಳೊಂದಿಗೆ ಒಂದೇ ಕೊಳವೆಯ ಮೂಲಕ ಗಾಳಿಯನ್ನು ಹೊರಹಾಕುತ್ತದೆ. ಇದು ಹುಲಿಯ ಘರ್ಜನೆಯನ್ನು ಅನುಕರಿಸುವ "ನಿಯಮಿತ ಗೊಣಗಾಟದ ಶಬ್ದ" ವನ್ನು ಉತ್ಪಾದಿಸುತ್ತದೆ. ಹುಲಿಯ ಪಾರ್ಶ್ವದಲ್ಲಿ ಒಂದು ಫ್ಲಾಪ್ನ ಹಿಂದೆ ಮರೆಮಾಡಲಾಗಿದೆ ಹುಲಿಯ ದೇಹದಲ್ಲಿ ಎರಡು-ನಿಲುಗಡೆ ಪೈಪ್ ಅಂಗದ ಸಣ್ಣ ದಂತ ಕೀಬೋರ್ಡ್, ಇದು ರಾಗಗಳನ್ನು ನುಡಿಸಲು ಅನುವು ಮಾಡಿಕೊಡುತ್ತದೆ.<ref>Ord-Hume, Part 2, summarized at p. 64 and throughout in more detail.</ref>
ಶೆಲ್ ಮತ್ತು ವರ್ಕಿಂಗ್ಗಳ ಶೈಲಿ, ಮತ್ತು ಅಂಗದ ಮೂಲ ಹಿತ್ತಾಳೆ ಕೊಳವೆಗಳ ಲೋಹದ ಅಂಶದ ವಿಶ್ಲೇಷಣೆ (ಅನೇಕವನ್ನು ಬದಲಾಯಿಸಲಾಗಿದೆ), ಹುಲಿ ಸ್ಥಳೀಯ ಉತ್ಪಾದನೆಯಿಂದ ಕೂಡಿತ್ತು ಎಂದು ಸೂಚಿಸುತ್ತದೆ. ಟಿಪ್ಪು ನ್ಯಾಯಾಲಯದಲ್ಲಿ ಫ್ರೆಂಚ್ ಕುಶಲಕರ್ಮಿಗಳು ಮತ್ತು ಫ್ರೆಂಚ್ ಸೈನ್ಯದ ಎಂಜಿನಿಯರ್ಗಳು ಇರುವುದು ಅನೇಕ ಇತಿಹಾಸಕಾರರಿಗೆ ಈ ಆಟೊಮ್ಯಾಟನ್ನ ಕಾರ್ಯವಿಧಾನಕ್ಕೆ ಫ್ರೆಂಚ್ ಇನ್ಪುಟ್ ಇದೆ ಎಂದು ಸೂಚಿಸಲು ಕಾರಣವಾಗಿದೆ.<ref name="Archer"/>
== ಇತಿಹಾಸ ==
[[ಚಿತ್ರ:Tipu's_Tiger_Salmond_1800.jpg|right|thumb|300x300px| ಜೇಮ್ಸ್ ಸಾಲ್ಮಂಡ್ ಅವರ 1800 ರ ಪುಸ್ತಕದಲ್ಲಿ ಟಿಪ್ಪುವಿನ ಹುಲಿಯ ಮೊದಲ ಪ್ರಕಟಿತ ವಿವರಣೆ]]
[[ನಾಲ್ಕನೆಯ ಮೈಸೂರು ಯುದ್ಧ|ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ]] ಪರಾಕ್ರಮದಿಂದ ಹೋರಾಡುತ್ತಲೇ 1799 ರ ಮೇ 4 ರಂದು ಟಿಪ್ಪು ನಿಧನರಾದ ಶ್ರೀರಂಗಪಟ್ಟಣ ಶರತ್ಕಾಲದಲ್ಲಿ ಸೆರೆಹಿಡಿಯಲ್ಪಟ್ಟ ಟಿಪ್ಪುವಿನ ಅರಮನೆಯಿಂದ ಟಿಪ್ಪುವಿನ ಹುಲಿ ವ್ಯಾಪಕವಾದ ಲೂಟಿಯ ಭಾಗವಾಗಿತ್ತು. ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್, 1 ನೇ ಮಾರ್ಕ್ವೆಸ್ ವೆಲ್ಲೆಸ್ಲಿ ಅವರ ''ಸಹಾಯಕ-ಶಿಬಿರವು'' ವಸ್ತುವಿನ ಆವಿಷ್ಕಾರವನ್ನು ವಿವರಿಸುವ ಜ್ಞಾಪಕ ಪತ್ರವನ್ನು ಬರೆದಿದೆ:<ref>The St James's Chronicle, April 1800; also reported in the Edinburgh Caledonian Mercury 24 April 1800.</ref><ref>{{harvnb|Stronge|2009|p=62}}</ref>
== ಸಂಗೀತ ವಾದ್ಯವಾಗಿ ==
[[ಚಿತ್ರ:Tipu_Sultan's_Tiger.JPG|thumb|ಪಾರ್ಶ್ವದೃಶ್ಯ, ಕೀಬೋರ್ಡ್ನ ಆಟಗಾರನ ಹಾದಿಯಲ್ಲಿ ಹ್ಯಾಂಡಲ್ ಹೇಗೆ ತಿರುಗುತ್ತದೆ ಎಂಬುದನ್ನು ತೋರಿಸುತ್ತದೆ]]
ಹುಲಿಯ ಸಂಗೀತ ಮತ್ತು ಶಬ್ದ ತಯಾರಿಕೆ ಕಾರ್ಯಗಳ 1987 ರಲ್ಲಿ ಪ್ರಕಟವಾದ ವಿವರವಾದ ಅಧ್ಯಯನವೊಂದರಲ್ಲಿ, ಆರ್ಥರ್ ಡಬ್ಲ್ಯುಜೆಜಿ ಆರ್ಡ್-ಹ್ಯೂಮ್ ಬ್ರಿಟನ್ಗೆ ಬಂದಾಗಿನಿಂದ, "ಈ ಉಪಕರಣವನ್ನು ನಿರ್ಣಯವಾಗಿ ಪುನನಿರ್ಮಾಣ ಮಾಡಲಾಗಿದೆ, ಮತ್ತು ಅದರ ಮೂಲ ಕಾರ್ಯಾಚರಣಾ ತತ್ವಗಳನ್ನು ನಾಶಪಡಿಸಲಾಗಿದೆ" ಎಂದು ತೀರ್ಮಾನಿಸಿದರು. ".<ref>Ord-Hume, Part 1, 31, though his main discussion of the matter is in his Part 2.</ref> ಅಂಗದಲ್ಲಿ ಎರಡು ಶ್ರೇಣಿಯ ಕೊಳವೆಗಳಿವೆ (ಗೋಳಾಟ ಮತ್ತು ಗೊಣಗಾಟದ ಕಾರ್ಯಗಳಿಗೆ ವಿರುದ್ಧವಾಗಿ), ಪ್ರತಿಯೊಂದೂ "ಹದಿನೆಂಟು ಟಿಪ್ಪಣಿಗಳನ್ನು ಒಳಗೊಂಡಿರುತ್ತದೆ, [ಇದು] ನಾಮಮಾತ್ರವಾಗಿ 4 ಅಡಿ ಪಿಚ್ ಮತ್ತು ಯುನಿಸನ್ಗಳಾಗಿವೆ - ಅಂದರೆ ಪ್ರತಿ ರಿಜಿಸ್ಟರ್ನಲ್ಲಿನ ಅನುಗುಣವಾದ ಕೊಳವೆಗಳು ಶಬ್ದಗಳನ್ನು ಉಂಟುಮಾಡುತ್ತವೆ ಅದೇ ಮ್ಯೂಸಿಕಲ್ ಪಿಚ್. ಇದು ಪೈಪ್ ಆರ್ಗನ್ಗೆ ಅಸಾಮಾನ್ಯ ವಿನ್ಯಾಸವಾಗಿದ್ದರೂ, ಎರಡು ನಿಲ್ದಾಣಗಳನ್ನು ಒಟ್ಟಿಗೆ ಆಯ್ಕೆಮಾಡುವಾಗ ಹೆಚ್ಚು ಧ್ವನಿ ಬರುತ್ತದೆ... ಕೊಳವೆಗಳ ನಡುವೆ ಸ್ವಲ್ಪ ಹೊಡೆತವನ್ನು ಸಹ ಪತ್ತೆಹಚ್ಚಬಹುದು, ಆದ್ದರಿಂದ ಸೆಲೆಸ್ಟ್ ಪರಿಣಾಮವನ್ನು ಉಂಟುಮಾಡುತ್ತದೆ.... ಇದನ್ನು ಪರಿಗಣಿಸಲಾಗುತ್ತದೆ ತುಂಬಾ ಕೆಲಸ ಮಾಡಿದಂತೆ... ಈ ಗುಣಲಕ್ಷಣವು ಉದ್ದೇಶಪೂರ್ವಕ ವೈಶಿಷ್ಟ್ಯಕ್ಕಿಂತ ಶ್ರುತಿ ಅಪಘಾತವಾಗಬಹುದು ". {{Sfn|Ord-Hume, 1987b}} ಹುಲಿಯ ಗೊಣಗಾಟವನ್ನು ಹುಲಿಯ ತಲೆಯಲ್ಲಿರುವ ಒಂದು ಕೊಳವೆಯಿಂದ ಮತ್ತು ಮನುಷ್ಯನ ಗೋಳಾಟವನ್ನು ಅವನ ಬಾಯಿಯಲ್ಲಿ ಹೊರಹೊಮ್ಮುವ ಒಂದೇ ಪೈಪ್ನಿಂದ ತಯಾರಿಸಲಾಗುತ್ತದೆ ಮತ್ತು ಮನುಷ್ಯನ ಎದೆಯಲ್ಲಿರುವ ಪ್ರತ್ಯೇಕ ಬೆಲ್ಲೊಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ, ಅಲ್ಲಿ ಅವುಗಳನ್ನು ಬಿಚ್ಚುವ ಮೂಲಕ ಮತ್ತು ಎತ್ತುವ ಮೂಲಕ ಪ್ರವೇಶಿಸಬಹುದು ಹುಲಿ. ಗೊಣಗಾಟವು ಕಾಗ್ಗಳ ಮೂಲಕ ಕ್ರಮೇಣ ತೂಕದ "ಗೊಣಗಾಟ-ಪೈಪ್" ಅನ್ನು ಕೆಳಕ್ಕೆ ಇಳಿಸುವವರೆಗೆ "ಅದರ ಸ್ಥಿರವಾದ ಕೆಳ-ಬೋರ್ಡ್ ಅಥವಾ ಜಲಾಶಯದ ವಿರುದ್ಧ ಬೀಳಲು, ಗಾಳಿಯನ್ನು ಹೊರಹಾಕುವ ಮೂಲಕ ಗೊಣಗುತ್ತಿರುವ ಶಬ್ದವನ್ನು ರೂಪಿಸುತ್ತದೆ" {{Sfn|Ord-Hume, 1987b}} ಧ್ವನಿ ತಯಾರಿಕೆ ಕಾರ್ಯಗಳು ಅವುಗಳನ್ನು ಶಕ್ತಗೊಳಿಸಲು ಕ್ರ್ಯಾಂಕ್-ಹ್ಯಾಂಡಲ್ ಅನ್ನು ಅವಲಂಬಿಸಿವೆ, ಆದರೂ ಆರ್ಡ್-ಹ್ಯೂಮ್ ಇದು ಮೂಲತಃ ಅಲ್ಲ ಎಂದು ನಂಬುತ್ತಾರೆ. {{Sfn|Ord-Hume, 1987a}}
ಶಬ್ದ-ತಯಾರಿಕೆ ಕಾರ್ಯಗಳ ಕುರಿತಾದ ಕೃತಿಗಳಲ್ಲಿ ಹಲವಾರು ದಶಕಗಳಿಂದ ಪ್ರಸಿದ್ಧ ಅಂಗ-ನಿರ್ಮಾಣ ಸಂಸ್ಥೆ ಹೆನ್ರಿ ವಿಲ್ಲೀಸ್ <nowiki>&</nowiki>amp; ಸನ್ಸ್, ಮತ್ತು 1950 ರ ದಶಕದಲ್ಲಿ ಹುಲಿಯ ಮೇಲೆ ಕೆಲಸ ಮಾಡಿದ ಹೆನ್ರಿ ವಿಲ್ಲೀಸ್ III, ಮಿಲ್ಡ್ರೆಡ್ ಆರ್ಚರ್ ಅವರ ಮೊನೊಗ್ರಾಫ್ಗೆ ಖಾತೆಯನ್ನು ನೀಡಿದರು ವಿ & ಎ. ಆರ್ಡ್-ಹ್ಯೂಮ್ ಸಾಮಾನ್ಯವಾಗಿ ವಿಲ್ಲೀಸ್ ಕೃತಿಯನ್ನು ಇತರ ತೀವ್ರವಾದ ಪುನಃಸ್ಥಾಪನೆಗಳ ಕುರಿತಾದ ಟೀಕೆಗಳಿಂದ ವಿನಾಯಿತಿ ನೀಡಲು ಸಿದ್ಧನಾಗಿದ್ದಾನೆ, ಇದನ್ನು "ವಿಧ್ವಂಸಕ ಕೃತ್ಯ" ವನ್ನು ಹಿಂದಿನ ಅಪರಿಚಿತ ಅಂಗ-ನಿರ್ಮಾಣಕಾರರು ಎಂದು ಭಾವಿಸಲಾಗಿದೆ.<ref>Ord-Hume, Part 1, 30, and Part 2 ''passim''</ref> 1835 ರಲ್ಲಿ ''ದಿ ಪೆನ್ನಿ ಮ್ಯಾಗ'' azine ''ೀನ್ನಲ್ಲಿ'' ಧ್ವನಿ ತಯಾರಿಸುವ ಕಾರ್ಯಗಳ ವಿವರವಾದ ವಿವರವಿತ್ತು, ಅವರ ಅನಾಮಧೇಯ ಲೇಖಕರು "ವಸ್ತುಗಳು ಯಾಂತ್ರಿಕ ಮತ್ತು ಅಂಗಗಳನ್ನು ನಿರ್ದಿಷ್ಟವಾಗಿ" ಅರ್ಥಮಾಡಿಕೊಂಡಿದ್ದಾರೆ.<ref>Ord-Hume, Part 2, 75, preceding his full reproduction of the text.</ref> ಇದರಿಂದ ಮತ್ತು ಆರ್ಡ್-ಹ್ಯೂಮ್ ಅವರ ಸ್ವಂತ ತನಿಖೆಯಿಂದ, ಮನುಷ್ಯನ "ಗೋಳಾಟ" ದ ಮೂಲ ಕಾರ್ಯಾಚರಣೆಯು ಮಧ್ಯಂತರವಾಗಿದೆ ಎಂದು ಅವರು ತೀರ್ಮಾನಿಸಿದರು, ಮೇಲಿನ ಹುಲಿಯಿಂದ ಪ್ರತಿ ಡಜನ್ ಅಥವಾ ಅದಕ್ಕಿಂತ ಹೆಚ್ಚಿನ ಗೊಣಗಾಟಗಳ ನಂತರ ಮಾತ್ರ ಗೋಳಾಟವನ್ನು ಉತ್ಪಾದಿಸಲಾಗುತ್ತದೆ, ಆದರೆ ಕೆಲವು ದಿನಾಂಕದಂದು 1835 ರ ನಂತರ ಗೋಳಾಟವನ್ನು ನಿರಂತರವಾಗಿ ಮಾಡಲು ಯಾಂತ್ರಿಕ ವ್ಯವಸ್ಥೆಯನ್ನು ಬದಲಾಯಿಸಲಾಯಿತು, ಮತ್ತು ಗೋಳಾಟದ ಬೆಲ್ಲೊಗಳನ್ನು ಸಣ್ಣ ಮತ್ತು ದುರ್ಬಲವಾದವುಗಳೊಂದಿಗೆ ಬದಲಾಯಿಸಲಾಯಿತು ಮತ್ತು ಚಲಿಸುವ ತೋಳಿನ ಕಾರ್ಯಾಚರಣೆಯನ್ನು ಬದಲಾಯಿಸಲಾಯಿತು. {{Sfn|Ord-Hume, 1987a}} <ref>[http://vimeo.com/8973957 video] of [[David Dimbleby]] playing the grunt and wail only</ref>
ಪ್ರಸ್ತುತ ಉಪಕರಣದ ಗೊಂದಲದ ವೈಶಿಷ್ಟ್ಯಗಳು ಹ್ಯಾಂಡಲ್ ಅನ್ನು ಇಡುವುದನ್ನು ಒಳಗೊಂಡಿವೆ, ಅದು ತಿರುಗಿದಾಗ ಕೀಬೋರ್ಡ್ನ ಆಟಗಾರನನ್ನು ತಡೆಯುವ ಸಾಧ್ಯತೆಯಿದೆ.<ref>Ord-Hume, Part 1, 21</ref> ಆರ್ಡ್-ಹ್ಯೂಮ್, 1835 ರ ಖಾತೆಯನ್ನು ಬಳಸಿ, ಮೂಲತಃ ಹ್ಯಾಂಡಲ್ (ಇದು ಹತ್ತೊಂಬತ್ತನೇ ಶತಮಾನದ ಬ್ರಿಟಿಷ್ ಬದಲಿ, ಬಹುಶಃ ಫ್ರೆಂಚ್ ಮೂಲದ) ಗೊಣಗಾಟ ಮತ್ತು ಗೋಳಾಟವನ್ನು ಮಾತ್ರ ನಿರ್ವಹಿಸುತ್ತದೆ ಎಂದು ತೀರ್ಮಾನಿಸುತ್ತದೆ, ಆದರೆ ಅಂಗವನ್ನು ಕೆಲಸ ಮಾಡಲು ದಾರ ಅಥವಾ ಬಳ್ಳಿಯನ್ನು ಎಳೆಯುವ ಮೂಲಕ ನಡೆಸಲಾಗುತ್ತದೆ ಮೂಲ ಬೆಲ್ಲೊಗಳನ್ನು ಈಗ ಬದಲಾಯಿಸಲಾಗಿದೆ.<ref>Ord-Hume, Part 2, 71, 73, 75, 77, and see videos linked at the end of the section</ref> ಕೀಬೋರ್ಡ್, ಬಹುಮಟ್ಟಿಗೆ ಮೂಲ, ಸುತ್ತಿನಲ್ಲಿ "ಸ್ಕ್ವೇರ್ ದಂತ ಗುಂಡಿಗಳು" ನೊಂದಿಗೆ, "ನಿರ್ಮಾಣದಲ್ಲಿ ಅನನ್ಯ" ಆಗಿದೆ ಲೇಥ್ -turned ಬದಲಿಗೆ ಸಾಂಪ್ರದಾಯಿಕ ಕೀಲಿಗಳ ಮೊದಲನೆಯದಾಗಿದೆ. ಪ್ರತಿ ಗುಂಡಿಯ ಯಾಂತ್ರಿಕ ಕಾರ್ಯವು "ಪ್ರಾಯೋಗಿಕ ಮತ್ತು ಅನುಕೂಲಕರ" ವಾಗಿದ್ದರೂ ಅವುಗಳು "ಅಷ್ಟಮವನ್ನು ಆಡಲು ಕೈ ಚಾಚುವುದು ಅಸಾಧ್ಯ" ಎಂಬ ಅಂತರವನ್ನು ಹೊಂದಿವೆ.<ref>Ord-Hume, Part 2, 69, 73, and see videos linked at the end of the section</ref> ಗುಂಡಿಗಳನ್ನು ಸಣ್ಣ ಕಪ್ಪು ಚುಕ್ಕೆಗಳಿಂದ ಗುರುತಿಸಲಾಗಿದೆ, ವಿಭಿನ್ನವಾಗಿ ಇರಿಸಲಾಗಿದೆ ಆದರೆ ಉತ್ಪಾದಿಸಿದ ಟಿಪ್ಪಣಿಗಳಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಮಾದರಿಯನ್ನು ರೂಪಿಸುವುದಿಲ್ಲ ಮತ್ತು ಯಾವುದೇ ಕೀಲಿಗಳನ್ನು ಗುರುತಿಸುವ ವ್ಯವಸ್ಥೆಗೆ ಅನುಗುಣವಾಗಿರುವುದಿಲ್ಲ.<ref>Ord-Hume, Part 2, 69, and see videos linked at the end of the section</ref> ಅಂಗಕ್ಕಾಗಿ ಎರಡು ಸ್ಟಾಪ್ ಕಂಟ್ರೋಲ್ ಗುಬ್ಬಿಗಳು ಹುಲಿಯ ವೃಷಣಗಳಿಗಿಂತ ಸ್ವಲ್ಪ ಕೆಳಗೆ "ಬದಲಾಗಿ ಗೊಂದಲಮಯವಾಗಿ" ಇವೆ.<ref>Ord-Hume, Part 2, 64</ref> ಈ ಉಪಕರಣವನ್ನು ಈಗ ವಿರಳವಾಗಿ ನುಡಿಸಲಾಗುತ್ತದೆ, ಆದರೆ ಇತ್ತೀಚಿನ ಪ್ರದರ್ಶನದ ವಿ & ಎ ವಿಡಿಯೋ ಇದೆ.<ref>[http://vimeo.com/6699473 Vimeo.com] ''Conservation in Action - Playing Tippoo's Tiger Part 2'', and [http://vimeo.com/6099330 ''Part 1'', with the top of the tiger removed], accessed 17 July 2011</ref>
[[ಚಿತ್ರ:Tipu's_Tiger_Short_History_1903.png|right|thumb| ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದ ಇತಿಹಾಸ ಪುಸ್ತಕದಲ್ಲಿ ಟಿಪ್ಪುವಿನ ಹುಲಿಯ ಚಿತ್ರಣ]]
[[ಚಿತ್ರ:Bunny_eating_an_astronaut.jpg|thumb|''ಮೊಲ ತಿನ್ನುವ ಗಗನಯಾತ್ರಿ'', 2004 ಚಿತ್ರಿಸಿದ ಉಕ್ಕಿನ ಶಿಲ್ಪ, ಎತ್ತರ {{Convert|39|in|cm|abbr=on}} ಯುನೈಟೆಡ್ ಸ್ಟೇಟ್ಸ್ನ ವಿಸ್ಕಾನ್ಸಿನ್ನಿಂದ ಬಿಲ್ ರೀಡ್ ಅವರಿಂದ]]
ಟಿಪ್ಪುವಿನ ಹುಲಿ ಹತ್ತೊಂಬತ್ತನೇ ಶತಮಾನದಿಂದ ಇಂದಿನವರೆಗೆ ಕವಿಗಳು, ಶಿಲ್ಪಿಗಳು, ಕಲಾವಿದರು ಮತ್ತು ಇತರರಿಗೆ ಸ್ಫೂರ್ತಿ ನೀಡಿದೆ.<ref name="Tiger&Thistle343">{{Cite web|url=http://www.tigerandthistle.net/thistle25.htm|title=3.43 Tiger Buckle|last=Unattributed|year=2000|website=The Tiger and the Thistle - Tipu Sultan and the Scotts in India|publisher=The National Galleries of Scotland.|archive-url=https://web.archive.org/web/20111003141607/http://www.tigerandthistle.net/thistle25.htm|archive-date=3 October 2011|dead-url=yes|access-date=18 July 2011}}</ref> ಕವಿ [[ಜಾನ್ ಕೀಟ್ಸ್]] ಟಿಪ್ಪು ಟೈಗರ್ ಅನ್ನು ಲೀಡೆನ್ಹಾಲ್ ಸ್ಟ್ರೀಟ್ನ ಮ್ಯೂಸಿಯಂನಲ್ಲಿ ನೋಡಿದನು ಮತ್ತು ಅದನ್ನು 1819 ರ ''ದಿ ಕ್ಯಾಪ್ ಅಂಡ್ ಬೆಲ್ಸ್ ಎಂಬ'' ವಿಡಂಬನಾತ್ಮಕ ಪದ್ಯದಲ್ಲಿ ಕೆಲಸ ಮಾಡಿದನು.<ref name="Tiger&Thistle343" /> ಕವಿತೆಯಲ್ಲಿ, ಒಬ್ಬ ಸೂತ್ಸೇಯರ್ ಎಲ್ಫಿನಾನ್ ಚಕ್ರವರ್ತಿಯ ಆಸ್ಥಾನಕ್ಕೆ ಭೇಟಿ ನೀಡುತ್ತಾನೆ. ಅವನು ವಿಚಿತ್ರವಾದ ಶಬ್ದವನ್ನು ಕೇಳುತ್ತಾನೆ ಮತ್ತು ಚಕ್ರವರ್ತಿ ಗೊರಕೆ ಹೊಡೆಯುತ್ತಾನೆ ಎಂದು ಭಾವಿಸುತ್ತಾನೆ.<ref name="The Cap and Bells">{{Cite web|url=http://spenserians.cath.vt.edu/TextRecord.php?action=GET&textsid=36307|title=The Cap and Bells; or, the Jealousies, a Faery Tale. Unfinished. - John Keats|last=Radcliffe, David A.|date=|publisher=Department of English, Virginia Tech, Blacksburg, Virginia, USA|access-date=18 July 2011|archive-date=24 ಅಕ್ಟೋಬರ್ 2021|archive-url=https://web.archive.org/web/20211024112637/http://spenserians.cath.vt.edu/TextRecord.php?action=GET&textsid=36307|url-status=dead}}. Dead website, retrieved through [https://archive.org/web/web.php The Wayback Machine]</ref>
:: "ಪುಟಕ್ಕೆ ಉತ್ತರಿಸಿದೆ:" ಸ್ವಲ್ಪ z ೇಂಕರಿಸುವ ಶಬ್ದ....
:: ಚಕ್ರವರ್ತಿಯ ಆಯ್ಕೆಯ ಆಟದ ವಿಷಯದಿಂದ ಬಂದಿದೆ,
:: ಮ್ಯಾನ್-ಟೈಗರ್-ಆರ್ಗನ್ ನಿಂದ, ಅವರ ಆಟಿಕೆಗಳಲ್ಲಿ ಅತ್ಯಂತ ಸುಂದರವಾದದ್ದು "
ಫ್ರೆಂಚ್ ಕವಿ, ಆಗಸ್ಟೆ ಬಾರ್ಬಿಯರ್, ಹುಲಿ ಮತ್ತು ಅದರ ಕಾರ್ಯಗಳನ್ನು ವಿವರಿಸಿದರು ಮತ್ತು 1837 ರಲ್ಲಿ ಪ್ರಕಟವಾದ ''ಲೆ ಜೌಜೌ ಡು ಸುಲ್ತಾನ್'' (ದಿ ಪ್ಲೇಥಿಂಗ್ ಆಫ್ ದಿ ಸುಲ್ತಾನ್) ಎಂಬ ಕವನದಲ್ಲಿ ಅದರ ಅರ್ಥವನ್ನು ಧ್ಯಾನಿಸಿದರು.<ref name="Tiger&Thistle25">{{Cite web|url=http://www.tigerandthistle.net/thistle25.htm|title=2.5 Tippoo's Tiger: On Show, Leadenhall St Museum|last=Unattributed|year=2000|website=The Tiger and the Thistle - Tipu Sultan and the Scotts in India|publisher=The National Galleries of Scotland.|archive-url=https://web.archive.org/web/20081006084903/http://www.tigerandthistle.net//thistle25.htm|archive-date=6 October 2008|dead-url=yes|access-date=18 July 2011}}</ref><ref>[https://books.google.com/books?id=_A4UAAAAQAAJ&pg=PA245&dq=Auguste+Barbier,%27Le+Joujou+du+Sultan%27&hl=en&ei=X2IkTouLGYmx8QO63uS4Aw&sa=X&oi=book_result&ct=result&resnum=2&ved=0CDEQ6AEwAQ#v=onepage&q&f=false Text of ''Le Joujou du Sultan''], from Auguste Barbier, ''Iambes et poèmes'', published E. Dentu, 1868.</ref> ತೀರಾ ಇತ್ತೀಚೆಗೆ, ಅಮೇರಿಕನ್ [[ಆಧುನಿಕತಾವಾದ|ಮಾಡರ್ನಿಸ್ಟ್]] ಕವಿ, ಮೇರಿಯಾನ್ನೆ ಮೂರ್ ತನ್ನ 1967 ರ ''ಟಿಪ್ಪೂಸ್ ಟೈಗರ್ ಎಂಬ'' ಕವಿತೆಯಲ್ಲಿ ಆಟೊಮ್ಯಾಟನ್ನ ಕಾರ್ಯಗಳ ಬಗ್ಗೆ ಬರೆದಿದ್ದಾರೆ,<ref name="Vincent2002">{{Cite book|title=Queer lyrics: difficulty and closure in American poetry|last=Vincent|first=John|publisher=Palgrave Macmillan|year=2002|isbn=978-0-312-29497-7|page=111|chapter=The Magician's Advance : Late Moore|access-date=20 July 2011|chapter-url=https://books.google.com/books?id=jGCR8b8O2swC&pg=PA111}}</ref> ಆದರೂ ಬಾಲವು ಎಂದಿಗೂ ಚಲಿಸಬಲ್ಲದು:
:: "ನಾಸ್ತಿಕನು ಟಿಪ್ಪುವಿನ ಹೆಲ್ಮೆಟ್ ಮತ್ತು ಕ್ಯುರಾಸ್ಸೆ ಎಂದು ಹೇಳಿಕೊಂಡಿದ್ದಾನೆ
:: ಮತ್ತು ವಿಶಾಲವಾದ ಆಟಿಕೆ - ಕುತೂಹಲಕಾರಿ ಆಟೊಮ್ಯಾಟನ್
:: ಹುಲಿಯಿಂದ ಕೊಲ್ಲಲ್ಪಟ್ಟ ವ್ಯಕ್ತಿ; ಅಂಗ ಕೊಳವೆಗಳೊಂದಿಗೆ
:: ಅದರಿಂದ ರಕ್ತದ ಕೂಗು ಅಮಾನವೀಯ ನರಳುವಿಕೆಯೊಂದಿಗೆ ವಿಲೀನಗೊಂಡಿತು.
:: ಮನುಷ್ಯನು ತನ್ನ ತೋಳನ್ನು ಚಲಿಸುತ್ತಿದ್ದಂತೆ ಹುಲಿ ತನ್ನ ಬಾಲವನ್ನು ಸರಿಸಿತು. "
ವರ್ಣಚಿತ್ರಕಾರ ಜಾನ್ ಬಾಲೆಟ್ (1913-2009) ಅವರ ಕೃತಿಯಾದ ''ಡೈ ಸೀಲೆ'' (ದಿ ಸೋಲ್ಸ್), ಹೂವಿನ ಉದ್ಯಾನದ ಮೇಲೆ ದೇವದೂತರ ತುತ್ತೂರಿ ತೋರಿಸುತ್ತಿದ್ದರೆ, ಹುಲಿ ಸಮವಸ್ತ್ರಧಾರಿ ಫ್ರೆಂಚ್ ಸೈನಿಕನನ್ನು ತಿನ್ನುತ್ತದೆ.<ref name="Tiger&Thistle343"/> ಭಾರತೀಯ ವರ್ಣಚಿತ್ರಕಾರ [[ಎಂ.ಎಫ್. ಹುಸೇನ್|ಎಂ.ಎಫ್. ಹುಸೈನ್]] 1986 ರಲ್ಲಿ ಟಿಪ್ಪುವಿನ ಹುಲಿಯನ್ನು ತನ್ನ ವಿಶಿಷ್ಟ ಶೈಲಿಯಲ್ಲಿ ಚಿತ್ರಿಸಿದರು. ಈ ಕೃತಿಯನ್ನು "ಟಿಪ್ಪು ಸುಲ್ತಾನರ ಹುಲಿ" ಎಂದು ಹೆಸರಿಸಿದ್ದಾರೆ.<ref name="ArtvalueHusain">{{Cite web|url=http://www.artvalue.com/auctionresult--husain-maqbool-fida-1915-india-tipu-sultan-s-tiger-2696819.htm|title=Lot 46 HUSAIN Maqbool Fida, *1915 (India)|last=Unattributed|date=15 June 2010|website=Art, Luxe and Collection|publisher=artvalue.com|access-date=19 July 2011|archive-date=1 ಅಕ್ಟೋಬರ್ 2011|archive-url=https://web.archive.org/web/20111001035813/http://www.artvalue.com/auctionresult--husain-maqbool-fida-1915-india-tipu-sultan-s-tiger-2696819.htm|url-status=dead}}</ref> ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ಪಕ್ಕದಲ್ಲಿರುವ ರಾಯಲ್ ಕಾಲೇಜ್ ಆಫ್ ಆರ್ಟ್ನ ವಿದ್ಯಾರ್ಥಿಯೊಬ್ಬ ತನ್ನ ಗಾಜಿನ ಸಂದರ್ಭದಲ್ಲಿ ಟಿಪ್ಪು ಟೈಗರ್ ಅನ್ನು ಆಗಾಗ್ಗೆ ಹಾದುಹೋಗುತ್ತಿದ್ದಾಗ ಮತ್ತು 1986 ರಲ್ಲಿ ''ಟಿಪ್ಪು'' ಎಂಬ ಫೈಬರ್-ಗ್ಲಾಸ್ ಮತ್ತು ಪ್ಲಾಸ್ಟಿಕ್ ಶಿಲ್ಪವನ್ನು ತಯಾರಿಸಲು ಪ್ರೇರೇಪಿಸಿದಾಗ ಶಿಲ್ಪಿ ಧ್ರುವ ಮಿಸ್ತ್ರಿ.<ref name="Tiger&Thistle343" /> ಕಲಾವಿದ ಬಿಲ್ ರೀಡ್ ಬರೆದ ಮೊಲವು ''ಗಗನಯಾತ್ರಿ'' (2004) ಎಂಬ ಶಿಲ್ಪವು ಹುಲಿಗೆ ಹಾಸ್ಯಮಯ ''ಗೌರವವಾಗಿದೆ'', ಮೊಲವು ಅದರ ಬಾಲವನ್ನು ಸುತ್ತಿಕೊಂಡಾಗ "ಚೊಂಪಿಂಗ್" ಮಾಡುತ್ತದೆ.<ref>Illustrated Stronge, p.89; [http://www.beebomb.com/bee/index.cfm?fuseaction=sculpture.detail&sculpture_id=98 beebomb.com here] {{Webarchive}}</ref>
== ಸಹ ನೋಡಿ ==
* ಬೆಕ್ಕು ಅಂಗ ಮತ್ತು ಪಿಗಿನಿನೋ
* [[ಟಿಪ್ಪು ಸುಲ್ತಾನ್]]
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
fgqgvfm7mv6jcsaiq14jnjkb7734wae
ಟಿಫಾನಿ & ಕಂಪನಿ
0
122160
1378232
1348710
2026-08-03T03:54:25Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378232
wikitext
text/x-wiki
{{Infobox company
| name = ಟಿಫಾನಿ & ಕಂಪನಿ<!--this is the company's full legal name-->
| logo = Tiffany & Co. wordmark 2003.svg
| logo_size = 300px
| image = 57th St 5th Av td (2022-04-04) 08 - Tiffany & Co. (727 Fifth Avenue).jpg
| image_caption = [[Tiffany & Co. flagship store|Tiffany's flagship store]] on [[Fifth Avenue]] in 2022
| alt = The Tiffany & Co. flagship store, which has a banner with Tiffany blue, sits at the intersection of two streets with people walking across the crosswalk.
| type = [[:en:Subsidiary|ಅಂಗಸಂಸ್ಥೆ]]
| parent = [[:en:LVMH|ಎಲ್ವಿಎಮ್ಹೆಚ್]]
| former_name = ಟಿಫಾನಿ, ಯಂಗ್ ಮತ್ತು ಎಲ್ಲಿಸ್<br />(೧೮೩೭–೧೮೫೩)
| foundation = ಸೆಪ್ಟೆಂಬರ್ ೧೮, ೧೮೩೭<br /> ಬ್ರೂಕ್ಲಿನ್, ಕನೆಕ್ಟಿಕಟ್, ಯು.ಎಸ್.
| founders = {{ubl|[[Charles Lewis Tiffany]]|ಜಾನ್ ಬಿ ಯಂಗ್}}
| location = ೨೦೦ ಐದನೇ ಅವೆನ್ಯೂ<br />[[ನ್ಯೂ ಯಾರ್ಕ್]], [[:en:New York (state)|ಎನ್ವೈ(NY)]] ೧೦೦೧೦<br />ಯು.ಎಸ್.
| location_city =
| location_country =
| area_served = ವಿಶ್ವಾದ್ಯಂತ
| key_people = {{nowrap|ಆಂಟನಿ ಲೆಡ್ರು}} <small>([[:en:Chief executive officer|ಸಿಇಒ]])</small><br/> ಅಲೆಕ್ಸಾಂಡ್ರೆ ಅರ್ನಾಲ್ಟ್ <small>([[:en:Executive Vice President|ಕಾರ್ಯಕಾರಿ ಉಪಾಧ್ಯಕ್ಷ]])</small><br/>ಮೈಕೆಲ್ ಬರ್ಕ್ <small>([[:en:Chairman|ಅಧ್ಯಕ್ಷ]])</small>
| products = {{hlist|[[ಆಭರಣಗಳು|ಆಭರಣ]]|[[ಪಿಂಗಾಣಿ]]|[[ಸ್ಫಟಿಕ]][[:en:stationery|ಲೇಖನ ಸಾಮಗ್ರಿಗಳು]]|[[:en:Cosmetics#Perfume|ಸುಗಂಧ ದ್ರವ್ಯ]]|[[ಕೈಗಡಿಯಾರ]]|[[:en:Fashion accessory|ಫ್ಯಾಷನ್ ಬಿಡಿಭಾಗಗಳು]]|[[:en:leather goods|ಚರ್ಮದ ಸಾಮಗ್ರಿಗಳು]]}}
| industry= [[ಚಿಲ್ಲರೆ ವ್ಯಾಪಾರ|ಚಿಲ್ಲರೆ ವ್ಯಾಪಾರ(retail)]]
| revenue = {{nowrap|{{increase}} ಯುಎಸ್ $೪.೪೪ ಬಿಲಿಯನ್}}<br/>{{nowrap|(ಹಣಕಾಸು ವರ್ಷ ಜನವರಿ ೩೧, ೨೦೧೯)}}<ref name="TIFfinancials">{{cite web |url=https://finance.yahoo.com/quote/TIF/financials?p=TIF |title=Tiffany & Co. (TIF) NYSE – Nasdaq Real Time Price. Currency in USD |date=May 19, 2020 |website=Yahoo |access-date=May 19, 2020 |archive-date=September 24, 2020 |archive-url=https://web.archive.org/web/20200924230058/https://finance.yahoo.com/quote/TIF/financials?p=TIF |url-status=live }}</ref>
| operating_income = {{nowrap|{{decrease}} $೭೯೦.೩ ಮಿಲಿಯನ್}}<br/>{{nowrap|(ಹಣಕಾಸು ವರ್ಷ ಜನವರಿ ೩೧, ೨೦೧೯)}}<ref name="TIFfinancials" />
| net_income = {{nowrap|{{increase}} $೫೮೬.೪ ಮಿಲಿಯನ್}}<br/>{{nowrap|(ಹಣಕಾಸು ವರ್ಷ ಜನವರಿ ೩೧, ೨೦೧೯)}}<ref name="TIFfinancials" />
| assets = {{nowrap|{{decrease}} $೫.೩೩ ಬಿಲಿಯನ್}}<br/>{{nowrap|(ಹಣಕಾಸು ವರ್ಷ ಜನವರಿ ೩೧, ೨೦೧೯)}}<ref name="TIFfinancials" />
| equity = {{nowrap|{{decrease}} $೩.೧೨ ಬಿಲಿಯನ್}}<br/>{{nowrap|(ಹಣಕಾಸು ವರ್ಷ ಜನವರಿ ೩೧, ೨೦೧೯)}}<ref name="TIFfinancials" />
| num_employees = ೧೪,೨೦೦<ref>{{Cite web|url=https://craft.co/tiffany-co|title=Tiffany company profile|website=Craft|access-date=2019-08-09|archive-date=August 9, 2020|archive-url=https://web.archive.org/web/20200809095603/https://craft.co/tiffany-co|url-status=live}}</ref>
| num_employees_year = 2019
| locations = 326 stores (2020)<ref name="statistalocationnumbers">{{cite web |url=https://www.statista.com/statistics/857587/number-of-tiffany-and-co-stores-by-region-worldwide/ |title=Tiffany & Co.'s number of retail locations worldwide in 2019, by region |last=O'Connell |first=Liam |date=March 27, 2020 |website=Statista |access-date=May 7, 2020 |archive-date=August 3, 2020 |archive-url=https://web.archive.org/web/20200803234153/https://www.statista.com/statistics/857587/number-of-tiffany-and-co-stores-by-region-worldwide/ |url-status=live }}</ref>
}}
[[:en:Tiffany & Co.|ಟಿಫಾನಿ & ಕಂಪನಿ]] (ಆಡುಮಾತಿನಲ್ಲಿ '''ಟಿಫಾನಿ'ಸ್''' ಎಂದು ಕರೆಯಲಾಗುತ್ತದೆ) ಅಮೆರಿಕಾದ ಒಂದು ಐಷಾರಾಮಿ ಆಭರಣ ಮತ್ತು ವಿಶೇಷ ವಿನ್ಯಾಸದ ಮನೆಯಾಗಿದೆ. ಇದರ ಪ್ರಧಾನ ಕಛೇರಿ [[ಮ್ಯಾನ್ಹ್ಯಾಟನ್|ಮ್ಯಾನ್ಹ್ಯಾಟನ್ನ]] ಫಿಫ್ತ್ ಅವೆನ್ಯೂದಲ್ಲಿದೆ.<ref>{{Cite web |last=Dana Rubinstein |date=April 29, 2010 |title=Tiffany & Co. To Relocate Headquarters to Flatiron District |url=https://observer.com/2010/04/tiffany-co-to-relocate-headquarters-to-flatiron-district/ |url-status=live |archive-url=https://web.archive.org/web/20210214102526/https://observer.com/2010/04/tiffany-co-to-relocate-headquarters-to-flatiron-district/ |archive-date=February 14, 2021 |access-date=February 8, 2021 |website=[[The New York Observer]]}}</ref><ref>{{Cite news |title=Tiffany & Co. |work=The New York Times |url=http://topics.nytimes.com/top/news/business/companies/tiffany_and_co/index.html |url-status=live |access-date=20 January 2016 |archive-url=https://web.archive.org/web/20150906090010/http://topics.nytimes.com/top/news/business/companies/tiffany_and_co/index.html |archive-date=September 6, 2015}}</ref> ಟಿಫಾನಿ ತನ್ನ ಐಷಾರಾಮಿ ಸರಕುಗಳಿಗೆ, ವಿಶೇಷವಾಗಿ ಅದರ ಸ್ಟರ್ಲಿಂಗ್ ಬೆಳ್ಳಿ ಮತ್ತು [[ವಜ್ರ]] ಆಭರಣಗಳಿಗೆ ಹೆಸರುವಾಸಿಯಾಗಿದೆ.<ref name="fundinguniverse.com">{{Cite web |title=History of Tiffany & Company – FundingUniverse |url=https://www.fundinguniverse.com/company-histories/tiffany-co-history |url-status=live |archive-url=https://web.archive.org/web/20120513011759/http://www.fundinguniverse.com/company-histories/Tiffany-amp;-Co-company-History.html |archive-date=May 13, 2012 |access-date=2013-02-18 |publisher=Fundinguniverse.com}}</ref> ಈ ಸರಕುಗಳನ್ನು ಟಿಫಾನಿ ಮಳಿಗೆಗಳಲ್ಲಿ, ಆನ್ಲೈನ್ನಲ್ಲಿ ಮತ್ತು ಕಾರ್ಪೊರೇಟ್ ಮರ್ಚಂಡೈಸಿಂಗ್ ಮೂಲಕ ಮಾರಾಟ ಮಾಡಲಾಗುತ್ತದೆ. ಇದರ ಹೆಸರು ಮತ್ತು ಬ್ರ್ಯಾಂಡಿಂಗ್ ಅನ್ನು ಸುಗಂಧ ದ್ರವ್ಯಗಳಿಗಾಗಿ '[[ಕೋಟಿ ಇಂಕ್.|ಕೋಟಿ. ಇಂಕ್ಗೆ]]' ಮತ್ತು ಕನ್ನಡಕಕ್ಕಾಗಿ 'ಲಕ್ಸೋಟಿಕಾ'ಗೆ ಪರವಾನಗಿ ನೀಡಲಾಗಿದೆ.<ref>{{Cite web |last=Danziger |first=Pamela |date=2017-08-19 |title=Luxury Brand Licensing: 5 Keys to Success Revealed In Critical Look At Tiffany-Coty's Fragrance Deal |url=https://www.forbes.com/sites/pamdanziger/2017/08/19/luxury-brand-licensing-5-keys-to-success-revealed-in-critical-look-at-tiffany-cotys-fragrance-deal/ |url-status=live |archive-url=https://web.archive.org/web/20220902154710/https://www.forbes.com/sites/pamdanziger/2017/08/19/luxury-brand-licensing-5-keys-to-success-revealed-in-critical-look-at-tiffany-cotys-fragrance-deal/ |archive-date=September 2, 2022 |access-date=2022-09-02 |website=Forbes |language=en}}</ref><ref>{{Cite news |last=Passariello |first=Christina |date=2006-12-05 |title=Tiffany Signs a Licensing Deal With Glasses Maker Luxottica |language=en-US |work=Wall Street Journal |url=https://www.wsj.com/articles/SB116528178200740672 |url-status=live |access-date=2022-09-02 |archive-url=https://web.archive.org/web/20220902154703/https://www.wsj.com/articles/SB116528178200740672 |archive-date=September 2, 2022 |issn=0099-9660}}</ref>
೧೮೩೭ ರಲ್ಲಿ ಆಭರಣ ವ್ಯಾಪಾರಿ ಚಾರ್ಲ್ಸ್ ಲೆವಿಸ್ ಟಿಫಾನಿ ಅವರು ಟಿಫಾನಿ & ಕಂ(ಕಂಪೆನಿ) ಅನ್ನು ಸ್ಥಾಪಿಸಿದರು ಮತ್ತು ೨೦ ನೇ ಶತಮಾನದ ಆರಂಭದಲ್ಲಿ ಅವರ ಮಗ ಲೂಯಿಸ್ ಕಂಫರ್ಟ್ ಟಿಫಾನಿ ಅವರ ಕಲಾತ್ಮಕ ನಿರ್ದೇಶನದಲ್ಲಿ ಪ್ರಸಿದ್ಧರಾದರು. ೨೦೧೮ ರಲ್ಲಿ, ನಿವ್ವಳ ಮಾರಾಟವು ಒಟ್ಟು ಯುಎಸ್ $೪.೪ ಬಿಲಿಯನ್ ಆಗಿತ್ತು.<ref>{{Cite web |date=11 July 2019 |title=Tiffany & Co |url=https://www.bloomberg.com/profile/company/TIF*:MM |url-status=live |archive-url=https://web.archive.org/web/20200206160353/https://www.bloomberg.com/profile/company/TIF*:MM |archive-date=February 6, 2020 |access-date=30 November 2019 |publisher=Bloomberg |quote=and also engages in direct selling through internet, catalog, and business gift operations}}</ref><ref name="statista_857587">{{Cite web |date=9 August 2019 |title=Number of Tiffany & Co. stores by region worldwide in 2018, by region |url=https://www.statista.com/statistics/857587/number-of-tiffany-and-co-stores-by-region-worldwide/ |url-status=live |archive-url=https://web.archive.org/web/20200803234153/https://www.statista.com/statistics/857587/number-of-tiffany-and-co-stores-by-region-worldwide/ |archive-date=August 3, 2020 |access-date=30 November 2019 |publisher=Statista}}</ref> ೨೦೨೩ ರ ಹೊತ್ತಿಗೆ, ಟಿಫಾನಿಯು ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಕೆನಡಾ, ಯುರೋಪ್, ಲ್ಯಾಟಿನ್ ಅಮೆರಿಕ ಮತ್ತು ಸಾಮೂಹಿಕ ಏಷ್ಯಾ-ಪೆಸಿಫಿಕ್ ಪ್ರದೇಶ ಸೇರಿದಂತೆ ಅನೇಕ ದೇಶಗಳಲ್ಲಿ ಜಾಗತಿಕವಾಗಿ ೩೦೦ ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ವಹಿಸುತ್ತಿದೆ ಮತ್ತು ಆಫ್ರಿಕಾದಲ್ಲಿ ಅವಕಾಶಗಳನ್ನು ಅನ್ವೇಷಿಸುತ್ತಿದೆ. ಕಂಪನಿಯ ಉತ್ಪನ್ನ ಶ್ರೇಣಿಯು ಉತ್ತಮ ಆಭರಣಗಳು, ಸ್ಟರ್ಲಿಂಗ್ ಬೆಳ್ಳಿ, ಕೈಗಡಿಯಾರಗಳು, [[ಪಿಂಗಾಣಿ]], ಸ್ಫಟಿಕ, ಲೇಖನ ಸಾಮಗ್ರಿಗಳು, ಉತ್ತಮ ಫ್ಯಾಷನ್ ಸುಗಂಧ ಮತ್ತು ವೈಯಕ್ತಿಕ ಪರಿಕರಗಳು ಮತ್ತು ಚರ್ಮದ ಸರಕುಗಳನ್ನು ಒಳಗೊಂಡಿದೆ.<ref>{{Cite news |last=Cohen |first=Patricia |title=Tiffany_and_co |work=The New York Times |url=http://topics.nytimes.com/topics/news/business/companies/tiffany_and_co/index.html |url-status=live |access-date=March 15, 2012 |archive-url=https://web.archive.org/web/20130524001542/http://topics.nytimes.com/topics/news/business/companies/tiffany_and_co/index.html |archive-date=May 24, 2013}}</ref>
ಜನವರಿ ೭, ೨೦೨೧ ರಂದು, ಬಹುರಾಷ್ಟ್ರೀಯ ಹಿಡುವಳಿ ಕಂಪನಿಯಾದ 'ಎಲ್ವಿಎಂಹೆಚ್' ಮೊಯೆಟ್ ಹೆನ್ನೆಸ್ಸಿ ಲೂಯಿಸ್ ವಿಟಾನ್, 'ಟಿಫಾನಿ & ಕಂಪೆನಿ'ಯಲ್ಲಿ ಬಹುಪಾಲು ಪಾಲನ್ನು ೧೫.೮ ಬಿಲಿಯನ್ ಯುಎಸ್ ಡಾಲರ್ಗಳಿಗೆ ಸ್ವಾಧೀನಪಡಿಸಿಕೊಂಡಿತು ಮತ್ತು ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಿಂದ ಟಿಫಾನಿಯ ಷೇರುಗಳನ್ನು ಪಟ್ಟಿ ಮಾಡಿತು.<ref>{{Cite web |date=January 7, 2021 |title=LVMH completes the acquisition of Tiffany & Co. |url=https://www.lvmh.com/news-documents/press-releases/lvmh-completes-the-acquisition-of-tiffany-and-co/ |url-status=live |archive-url=https://web.archive.org/web/20210206212439/https://www.lvmh.com/news-documents/press-releases/lvmh-completes-the-acquisition-of-tiffany-and-co/ |archive-date=February 6, 2021 |access-date=2022-05-29 |website=LVMH |language=en}}</ref><ref name=":2">{{Cite web |title=Upcoming delisting of Tiffany & Co's stock |url=https://www.jfdbrokers.com/en/about-jfd/company-news/upcoming-delisting-of-tiffany-co-stock |url-status=live |archive-url=https://web.archive.org/web/20221210102307/https://www.jfdbrokers.com/en/about-jfd/company-news/upcoming-delisting-of-tiffany-co-stock |archive-date=December 10, 2022 |access-date=2022-05-29 |website=www.jfdbrokers.com |language=en}}</ref> ಇದು [[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್ ನಗರದಲ್ಲಿ]] ಪ್ರಧಾನ ಕಛೇರಿಯನ್ನು ಹೊಂದಿದೆ ಮತ್ತು ಸ್ವತಂತ್ರ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
== ಇತಿಹಾಸ ==
=== ಸ್ಥಾಪನೆ ===
[[ಚಿತ್ರ:Tiffany_Co_Union_Square_1887.png|right|thumb|ಟಿಫಾನಿ & ಕಂಪನಿ, ಯೂನಿಯನ್ ಸ್ಕ್ವೇರ್, [[ಮ್ಯಾನ್ಹ್ಯಾಟನ್|ಮ್ಯಾನ್ಹ್ಯಾಟನ್]], [[ಪಿಂಗಾಣಿ]] ಶೇಖರಣಾ ಪ್ರದೇಶ, ೧೮೮೭]]
ಟಿಫಾನಿ & ಕಂಪನಿ ಅನ್ನು ೧೮೩೭ ರಲ್ಲಿ ಚಾರ್ಲ್ಸ್ ಲೆವಿಸ್ ಟಿಫಾನಿ ಮತ್ತು ಜಾನ್ ಬಿ. ಯಂಗ್ ಅವರು ನ್ಯೂಯಾರ್ಕ್ ನಗರದಲ್ಲಿ, "ಲೇಖನ ಸಾಮಗ್ರಿ ಮತ್ತು ಅಲಂಕಾರಿಕ ಸರಕುಗಳ ಎಂಪೋರಿಯಂ" ಆಗಿ ಸ್ಥಾಪಿಸಿದರು. ಚಾರ್ಲ್ಸ್ ಟಿಫಾನಿಯ ತಂದೆಯ ಸಹಾಯದಿಂದ, ಅವರ ಹತ್ತಿ ಗಿರಣಿಯಿಂದ ಬಂದ ಲಾಭದೊಂದಿಗೆ ಅಂಗಡಿಗೆ $೧,೦೦೦ ದ ಹಣಕಾಸನ್ನು ಒದಗಿಸಿದರು.<ref>{{Cite web |title=Tiffany & Co. | About | History | United States |url=http://press.tiffany.com/ViewBackgrounder.aspx?backgrounderId=38 |url-status=live |archive-url=https://web.archive.org/web/20130524163337/http://press.tiffany.com/ViewBackgrounder.aspx?backgrounderId=38 |archive-date=May 24, 2013 |access-date=2015-08-01 |publisher=Press.tiffany.com}}</ref><ref>{{Cite web |last=World |first=Your Black |title=Shocking List of 10 Companies that Profited from the Slave Trade |url=https://www.racism.org/index.php/articles/law-and-justice/citizenship-rights/117-slavery-to-reparations/reparations/1697-reparations1001 |url-status=live |archive-url=https://web.archive.org/web/20200701123527/https://www.racism.org/index.php/articles/law-and-justice/citizenship-rights/117-slavery-to-reparations/reparations/1697-reparations1001 |archive-date=July 1, 2020 |access-date=2020-06-28 |website=Race, Racism and the Law |language=en-gb}}</ref> ಈ ಅಂಗಡಿಯು ಆರಂಭದಲ್ಲಿ ವಿವಿಧ ರೀತಿಯ ಲೇಖನ ಸಾಮಗ್ರಿಗಳನ್ನು ಮಾರಾಟ ಮಾಡಿತು ಮತ್ತು ೧೮೩೭ ರ ಹೊತ್ತಿಗೆ ಲೋವರ್ ಮ್ಯಾನ್ಹ್ಯಾಟನ್ನ ೨೫೯ ಬ್ರಾಡ್ವೇಯಲ್ಲಿ "ಟಿಫಾನಿ, ಯಂಗ್ ಮತ್ತು ಎಲ್ಲಿಸ್" ಆಗಿ ಕಾರ್ಯನಿರ್ವಹಿಸುತ್ತಿತ್ತು.<ref name="nyc-history1988">{{Cite web |date=February 16, 1988 |title=NYC Landmarks Preservation Commission – Designation List 200 I.P-1624 |url=https://s-media.nyc.gov/agencies/lpc/lp/1624.pdf |url-status=live |archive-url=https://web.archive.org/web/20230604203024/https://s-media.nyc.gov/agencies/lpc/lp/1624.pdf |archive-date=June 4, 2023 |access-date=2023-04-22 |website=[[New York City Landmarks Preservation Commission]]}}</ref> ೧೮೫೩ ರಲ್ಲಿ ಚಾರ್ಲ್ಸ್ ಟಿಫಾನಿಯವರು ನಿಯಂತ್ರಣವನ್ನು ತೆಗೆದುಕೊಂಡಾಗ ಮತ್ತು ಆಭರಣಗಳ ಮೇಲೆ ಸಂಸ್ಥೆಯ ಮಹತ್ವವನ್ನು ಸ್ಥಾಪಿಸಿದಾಗ ಹೆಸರನ್ನು '''ಟಿಫಾನಿ & ಕಂಪನಿ''' ಎಂದು ಸಂಕ್ಷಿಪ್ತಗೊಳಿಸಲಾಯಿತು.<ref name="mention">{{Cite web |title=Cushion Cut Archives |url=http://www.awegirls.com/category/cushion-cut-engagement-rings/ |url-status=live |archive-url=https://web.archive.org/web/20140819231801/http://www.awegirls.com/category/cushion-cut-engagement-rings/ |archive-date=August 19, 2014 |access-date=2015-08-01 |publisher=Awegirls}}</ref> ಅಂದಿನಿಂದ ಕಂಪನಿಯು ವಿಶ್ವದ ಪ್ರಮುಖ ನಗರಗಳಲ್ಲಿ ಮಳಿಗೆಗಳನ್ನು ತೆರೆದಿದೆ. ೧೮೩೦ ರ ದಶಕದಲ್ಲಿ ಆ ಸಮಯದಲ್ಲಿದ್ದ ಇತರ ಮಳಿಗೆಗಳಿಗಿಂತ ಭಿನ್ನವಾಗಿ, ಟಿಫಾನಿ ತನ್ನ ಸರಕುಗಳ ಮೇಲೆ ಬೆಲೆಗಳನ್ನು, ಬೆಲೆಗಳ ಮೇಲಿನ ಯಾವುದೇ ರೀತಿಯ ಚೌಕಾಸಿಯನ್ನು ತಡೆಯಲು ಸ್ಪಷ್ಟವಾಗಿ ಗುರುತಿಸಿತು. ಹೆಚ್ಚುವರಿಯಾಗಿ, ಆ ಸಮಯದಲ್ಲಿ ಸಾಮಾಜಿಕ ರೂಢಿಗೆ ವಿರುದ್ಧವಾಗಿ, ಟಿಫಾನಿ ನಗದು ಪಾವತಿಗಳನ್ನು ಮಾತ್ರ ಸ್ವೀಕರಿಸಿದರು ಮತ್ತು ಸಾಲದ ಮೇಲೆ ಖರೀದಿಗಳನ್ನು ಅನುಮತಿಸಲಿಲ್ಲ.<ref name="ReferenceA">{{Cite web |title=History of Tiffany & Company |url=https://www.fundinguniverse.com/company-histories/tiffany-co-history |url-status=live |archive-url=https://web.archive.org/web/20120513011759/http://www.fundinguniverse.com/company-histories/Tiffany-amp;-Co-company-History.html |archive-date=May 13, 2012 |access-date=2013-02-18 |publisher=Fundinguniverse.com}}</ref> ಇಂತಹ ಪದ್ಧತಿಗಳನ್ನು (ಸಿದ್ಧ ಹಣಕ್ಕೆ ನಿಗದಿಪಡಿಸಿದ ಬೆಲೆಗಳು) ಮೊದಲ ಬಾರಿಗೆ ೧೭೫೦ ರಲ್ಲಿ ಲಂಡನ್ ಬ್ರಿಡ್ಜ್ನ ಪಾಮರ್ನಿಂದ ಪರಿಚಯಿಸಲಾಯಿತು.<ref>{{Cite book|title=A History of London Life|last=R. J. Mitchell and M. D. R. Leys|publisher=Longmans, Green and Co|year=1958|location=London|pages=182–184}}</ref>
=== "ಬ್ಲೂ ಬುಕ್" ಮತ್ತು ನಾಗರಿಕ ಯುದ್ಧ ===
"ಬ್ಲೂ ಬುಕ್" ಎಂದು ಕರೆಯಲ್ಪಡುವ ಮೊದಲ ಟಿಫಾನಿ ಮೇಲ್ ಆರ್ಡರ್ ಕ್ಯಾಟಲಾಗ್ ಅನ್ನು ೧೮೪೫ ರಲ್ಲಿ ಯುನೈಟೆಡ್ ಸ್ಟೇಟ್ಸ್ (ಯುಎಸ್) ನಲ್ಲಿ ಪ್ರಕಟಿಸಲಾಯಿತು ಮತ್ತು ಕ್ಯಾಟಲಾಗ್ನ ಪ್ರಕಟಣೆಯು ೨೧ ನೇ ಶತಮಾನದಲ್ಲಿ ಮುಂದುವರೆದಿದೆ.<ref name="tiffany.com">{{Cite web |title=Tiffany & Company | The Tiffany Story | United States |url=https://www.tiffany.com/About/TheTiffanyStory/#p+1-n+6-cg+-c+-s+-r+-t+-ri+-ni+1-x+-pu+-f+/5/0/0 |url-status=live |archive-url=https://web.archive.org/web/20150708144540/http://www.tiffany.com/About/TheTiffanyStory#p+1-n+6-cg+-c+-s+-r+-t+-ri+-ni+1-x+-pu+-f+/5/0/0 |archive-date=July 8, 2015 |access-date=2013-02-18 |publisher=Tiffany.com}}</ref> ೧೮೬೨ ರಲ್ಲಿ, ಟಿಫಾನಿಯು 'ಯೂನಿಯನ್ ಸೈನ್ಯ'ಕ್ಕೆ ಕತ್ತಿಗಳನ್ನು(ಮಾದರಿ ೧೮೪೦ ಕ್ಯಾವಲ್ರಿ ಸೇಬರ್), ಧ್ವಜಗಳು ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಪೂರೈಸಿದರು. ೧೮೬೭ ರಲ್ಲಿ, ಪ್ಯಾರಿಸ್ನ ''ಎಕ್ಸ್ಪೊಸಿಷನ್ ಯೂನಿವರ್ಸೆಲ್'' ಬೆಳ್ಳಿ ಸಾಮಾನುಗಳಲ್ಲಿ ಉತ್ಕೃಷ್ಟತೆಗಾಗಿ ಪ್ರಶಸ್ತಿಯನ್ನು ಗೆದ್ದ ಮೊದಲ ಯು. ಎಸ್. ಸಂಸ್ಥೆ ಇದಾಗಿದೆ. ೧೮೬೮ ರಲ್ಲಿ, ಟಿಫಾನಿ ಸಂಸ್ಥೆಯನ್ನು ಸಂಯೋಜಿಸಲಾಯಿತು.<ref name="fundinguniverse.com"/>
=== "ಗಿಲ್ಡೆಡ್ ಯುಗ" ===
೧೮೭೦ ರಲ್ಲಿ, ಕಂಪನಿಯು ೧೫ ಯೂನಿಯನ್ ಸ್ಕ್ವೇರ್ ವೆಸ್ಟ್, ಮ್ಯಾನ್ಹ್ಯಾಟನ್ನಲ್ಲಿ ಹೊಸ ಅಂಗಡಿ ಕಟ್ಟಡವನ್ನು ನಿರ್ಮಿಸಿತು. ಇದನ್ನು ಜಾನ್ ಕೆಲ್ಲಮ್ರವರು ಯುಎಸ್ $೫೦೦,೦೦೦ ವೆಚ್ಚದಲ್ಲಿ ವಿನ್ಯಾಸಗೊಳಿಸಿದರು. ಇದನ್ನು ''[[ದ ನ್ಯೂ ಯಾರ್ಕ್ ಟೈಮ್ಸ್|ದಿ ನ್ಯೂಯಾರ್ಕ್ ಟೈಮ್ಸ್]],'' "ಆಭರಣಗಳ ಅರಮನೆ" ಎಂದು ಬಣ್ಣಿಸಿದೆ. ಟಿಫಾನಿ ೧೯೦೬ ರವರೆಗೆ ಈ ಸ್ಥಳದಲ್ಲಿದ್ದರು.<ref name="Moved uptown">{{Cite news |last=Christopher Gray |date=July 2, 2006 |title=Before Tiffany & Co. Moved Uptown |work=The New York Times |url=https://www.nytimes.com/2006/07/02/realestate/02scap.html |url-status=live |access-date=2013-09-25 |archive-url=https://web.archive.org/web/20220506140246/https://www.nytimes.com/2006/07/02/realestate/02scap.html |archive-date=May 6, 2022}}</ref><ref name="Moved uptown" />
೧೮೭೭ ರಲ್ಲಿ, ನ್ಯೂಯಾರ್ಕ್ ಯಾಂಕೀಸ್ "ಎನ್ವೈ" ಲಾಂಛನವಾಗಲಿರುವ ಒಂದು ಲಾಂಛನವನ್ನು ಟಿಫಾನಿ ಅವರು ಪೊಲೀಸ್ ಗೌರವ ಪದಕದ ಮೇಲೆ ಮುದ್ರಿಸಿದರು. ಮತ್ತು ಯಾಂಕೀಸ್ ೧೯೦೯ ರಲ್ಲಿ ಲಾಂಛನವನ್ನು ಅಳವಡಿಸಿಕೊಂಡರು. ೧೮೭೮ ರಲ್ಲಿ, ಟಿಫಾನಿ ಆಭರಣಗಳಿಗಾಗಿ ಚಿನ್ನದ ಪದಕವನ್ನು ಗೆದ್ದಿತು ಮತ್ತು ಪ್ಯಾರಿಸ್ ಪ್ರದರ್ಶನದಲ್ಲಿ ಬೆಳ್ಳಿ ಪಾತ್ರೆಗಳಿಗಾಗಿ ದೊಡ್ಡ ಬಹುಮಾನವನ್ನು ಗೆದ್ದಿತು. ೧೮೭೯ ರಲ್ಲಿ, ಟಿಫಾನಿಯು ವಿಶ್ವದ ಅತಿದೊಡ್ಡ ಹಳದಿ ವಜ್ರಗಳಲ್ಲಿ ಒಂದನ್ನು ಖರೀದಿಸಿತು ಮತ್ತು ಇದು '''ಟಿಫಾನಿ ಡೈಮಂಡ್(ವಜ್ರ)''' ಎಂದು ಪ್ರಸಿದ್ಧವಾಯಿತು. ಟಿಫಾನಿ ಡೈಮಂಡ್ ಅನ್ನು ಕೇವಲ ನಾಲ್ಕು ಜನರು ಮಾತ್ರ ಧರಿಸುತ್ತಾರೆ. ಅವರಲ್ಲಿ ಒಬ್ಬರಾದ ಆಡ್ರೆ ಹೆಪ್ಬರ್ನ್ ಅವರು ಟಿಫಾನಿಯ ಉಪಹಾರದ ಪ್ರಚಾರಕ್ಕಾಗಿ ಬಳಸುತ್ತಾರೆ.<ref>{{Cite news |last=Maguire |first=Dannielle |date=February 25, 2019 |title=Oscar nominee Lady Gaga wears Tiffany Diamond previously worn by Audrey Hepburn |work=ABC News |location=Sydney |url=https://www.abc.net.au/news/2019-02-25/lady-gaga-tiffany-diamond-necklace-oscars-academy-awards/10845458 |url-status=live |access-date=2020-09-20 |archive-url=https://web.archive.org/web/20201107233939/https://www.abc.net.au/news/2019-02-25/lady-gaga-tiffany-diamond-necklace-oscars-academy-awards/10845458 |archive-date=November 7, 2020}}</ref> ೧೮೮೭ ರಲ್ಲಿ, ಟಿಫಾನಿಯು 'ಫ್ರೆಂಚ್ ಕ್ರೌನ್ ಜ್ಯುವೆಲ್ಸ್'ನ ಭಾಗದ ಹರಾಜಿನಲ್ಲಿ ಹಲವಾರು ತುಣುಕುಗಳನ್ನು ಖರೀದಿಸಿದರು. ಇದು ಪ್ರಚಾರವನ್ನು ಆಕರ್ಷಿಸಿತು ಮತ್ತು ಉತ್ತಮ-ಗುಣಮಟ್ಟದ ವಜ್ರಗಳೊಂದಿಗೆ ಟಿಫಾನಿ ಬ್ರಾಂಡ್ನ ಸಂಬಂಧವನ್ನು ಮತ್ತಷ್ಟು ಬಲಪಡಿಸಿತು.<ref>{{Cite web |title=Tiffany & Company | A Tiffany Diamond | Our Promise | Tiffany Diamond Certificate | United States |url=https://www.tiffany.com/Expertise/Diamond/History/Default.aspx |url-status=live |archive-url=https://web.archive.org/web/20130707041310/http://www.tiffany.com/Expertise/Diamond/History/Default.aspx |archive-date=July 7, 2013 |access-date=2013-02-18 |publisher=Tiffany.com}}</ref> ಕಂಪನಿಯು ೧೮೮೫ ರಲ್ಲಿ ಯುನೈಟೆಡ್ ಸ್ಟೇಟ್ಸ್ನ ಗ್ರೇಟ್ ಸೀಲ್ ಅನ್ನು ಪರಿಷ್ಕರಿಸಿತು.<ref>{{Cite web |last=Aitken |first=Lauren |date=2018-03-19 |title=The Great Seal |url=https://diplomacy.state.gov/the-great-seal/ |url-status=live |archive-url=https://web.archive.org/web/20230422081306/https://diplomacy.state.gov/the-great-seal/ |archive-date=April 22, 2023 |access-date=2023-04-22 |website=The National Museum of American Diplomacy |language=en-US}}</ref>
=== ೨೦ ನೇ ಶತಮಾನ ===
[[ಚಿತ್ರ:Tiffany_Cross_Medal_of_Honor.jpg|thumb|ಮೆಡಲ್ ಆಫ್ ಆನರ್(ಗೌರವ ಪದಕ)ನ "ಟಿಫಾನಿ ಕ್ರಾಸ್" ಆವೃತ್ತಿ.]]
೧೯೦೨ ರಲ್ಲಿ, ಚಾರ್ಲ್ಸ್ ಲೆವಿಸ್ ಟಿಫಾನಿಯವರ ಮರಣದ ನಂತರ, ಅವರ ಮಗ ಲೂಯಿಸ್ ಕಂಫರ್ಟ್ ಟಿಫಾನಿಯವರು ಕಂಪನಿಯ ಮೊದಲ ಅಧಿಕೃತ ವಿನ್ಯಾಸ ನಿರ್ದೇಶಕರಾದರು.<ref name="tiffany.com"/> ೧೯೦೫ ರಲ್ಲಿ, ಮ್ಯಾನ್ಹ್ಯಾಟನ್ನ ಪ್ರಮುಖ ಅಂಗಡಿಯನ್ನು ೩೭ ನೇ ಬೀದಿ ಮತ್ತು ಫಿಫ್ತ್ ಅವೆನ್ಯೂಗಳ ಮೂಲೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅದು ೩೫ ವರ್ಷಗಳ ಕಾಲ ಉಳಿಯಿತು.<ref>{{Cite news |last=Gray |first=Christopher |date=July 2, 2006 |title=Before Tiffany & Co. Moved Uptown |work=The New York Times |url=https://www.nytimes.com/2006/07/02/realestate/02scap.html |url-status=live |access-date=May 7, 2020 |archive-url=https://web.archive.org/web/20220506140246/https://www.nytimes.com/2006/07/02/realestate/02scap.html |archive-date=May 6, 2022}}</ref>
೧೯೧೯ ರಲ್ಲಿ, ಕಂಪನಿಯು ಯುನೈಟೆಡ್ ಸ್ಟೇಟ್ಸ್ನ ನೌಕಾಪಡೆ ಇಲಾಖೆಯ ಪರವಾಗಿ ಮೆಡಲ್ ಆಫ್ ಆನರ್(ಗೌರವ ಪದಕ)ಗೆ ಪರಿಷ್ಕರಣೆ ಮಾಡಿತು.<ref>{{Cite web |last=Birnie |first=Michael |date=2003-04-27 |title="Tiffany" Medal of Honor Comes to Navy Museum |url=http://www.news.navy.mil/search/display.asp?story_id=7048 |url-status=dead |archive-url=https://web.archive.org/web/20090906172852/http://www.news.navy.mil/search/display.asp?story_id=7048 |archive-date=2009-09-06 |access-date=2010-02-15 |website=[[U.S. Navy Museum]] |publisher=United States Navy}}</ref> ಈ "ಟಿಫಾನಿ ಕ್ರಾಸ್" ಆವೃತ್ತಿಯು ಅಪರೂಪವಾಗಿತ್ತು ಏಕೆಂದರೆ ಇದನ್ನು ಯುದ್ಧಕ್ಕೆ ಮಾತ್ರ ನೀಡಲಾಯಿತು. ಇದರ ಹಿಂದಿನ ವಿನ್ಯಾಸವನ್ನು ಯುದ್ಧ-ಅಲ್ಲದ ಪ್ರಶಸ್ತಿಗಳಿಗಾಗಿ ಬಳಸಲಾಯಿತು.<ref>{{Cite book|title=Above and Beyond: The Aviation Medals of Honor|last=Tillman|first=Barrett|publisher=Smithsonian Institution Press|year=2003|location=Washington, D.C.|page=3}}</ref> ೧೯೪೨ ರಲ್ಲಿ, ನೌಕಾಪಡೆಯು ಯುದ್ಧವನ್ನು ಹೊರತುಪಡಿಸಿದ ವೀರತೆಗಾಗಿ ಟಿಫಾನಿ ಆವೃತ್ತಿಯನ್ನು ಸ್ಥಾಪಿಸಿತು. ಆದರೆ, ಆಗಸ್ಟ್ ೧೯೪೨ ರಲ್ಲಿ, ನೌಕಾಪಡೆಯು ತರುವಾಯ ಟಿಫಾನಿ ಕ್ರಾಸ್ ಮತ್ತು ಎರಡು-ಪದಕಗಳ ವ್ಯವಸ್ಥೆಯನ್ನು ತೆಗೆದುಹಾಕಿತು.<ref>{{Cite web |title=History of the Medal of Honor |url=http://www.cmohs.org/medal-history.php |url-status=live |archive-url=https://web.archive.org/web/20110828043704/http://www.cmohs.org/medal-history.php |archive-date=August 28, 2011 |access-date=2010-07-23 |website=Navy Medal of Honor (1913) |publisher=Congressional Medal of Honor Society}}</ref>
ಕಂಪನಿಯು ತನ್ನ ಪ್ರಮುಖ ಅಂಗಡಿಯನ್ನು ೧೯೪೦ ರಲ್ಲಿ ಅದರ ಇಂದಿನ ೭೨೭ ಫಿಫ್ತ್ ಅವೆನ್ಯೂ ಕಟ್ಟಡಕ್ಕೆ ಸ್ಥಳಾಂತರಿಸಿತು. ಈ ಕಟ್ಟಡವನ್ನುಕ್ರಾಸ್ & ಕ್ರಾಸ್ ವಿನ್ಯಾಸಗೊಳಿಸಿತು.<ref>{{Cite web |date=August 25, 2020 |title=OMA designs glass volume to top Tiffany & Co's New York flagship store |url=https://www.dezeen.com/2020/08/25/oma-glass-volume-tiffany-co-new-york/ |url-status=live |archive-url=https://web.archive.org/web/20210220230737/https://www.dezeen.com/2020/08/25/oma-glass-volume-tiffany-co-new-york/ |archive-date=February 20, 2021 |access-date=February 4, 2021 |website=Dezeen}}</ref> ೧೯೫೬ ರಲ್ಲಿ, ಪ್ರಸಿದ್ಧ ವಿನ್ಯಾಸಕ ಜೀನ್ ಸ್ಕ್ಲಂಬರ್ಗರ್ ಟಿಫಾನಿಯನ್ನು ಸೇರಿಕೊಂಡರು ಮತ್ತು ಆಂಡಿ ವಾರ್ಹೋಲ್ ಟಿಫಾನಿ ರಜಾ ಕಾರ್ಡ್ಗಳನ್ನು ರಚಿಸಲು ಕಂಪನಿಯೊಂದಿಗೆ ಸಹಕರಿಸಿದರು (ಸುಮಾರು ೧೯೫೬-೧೯೬೨).<ref name="tiffany.com"/><ref>{{Cite web |title=Image not available |url=http://www.corbisimages.com/stock-photo/rights-managed/42-18454479/christmas-card-design-for-tiffany-co-by |url-status=live |archive-url=https://web.archive.org/web/20130522142914/http://www.corbisimages.com/stock-photo/rights-managed/42-18454479/christmas-card-design-for-tiffany-co-by |archive-date=May 22, 2013 |access-date=2013-02-18 |publisher=Corbisimages.com}}</ref> ೧೯೬೮ ರಲ್ಲಿ, ಆ ಸಮಯದಲ್ಲಿ ಯು.ಎಸ್. ನ ಪ್ರಥಮ ಮಹಿಳೆ ಲೇಡಿ ಬರ್ಡ್ ಜಾನ್ಸನ್ರವರು, ೯೦ ಹೂವುಗಳನ್ನು ಒಳಗೊಂಡಿರುವ ವೈಟ್ ಹೌಸ್ ಚೀನಾ-ಸೇವೆಯನ್ನು ವಿನ್ಯಾಸಗೊಳಿಸಲು ಟಿಫಾನಿಯನ್ನು ನಿಯೋಜಿಸಿದರು.<ref>{{Cite web |title=Presidential China |url=https://georgewbush-whitehouse.archives.gov/history/whtour/china/johnson.html |url-status=live |archive-url=https://web.archive.org/web/20210305100743/https://georgewbush-whitehouse.archives.gov/history/whtour/china/johnson.html |archive-date=March 5, 2021 |access-date=2008-12-07 |website=[[whitehouse.gov]] |via=[[NARA|National Archives]]}}</ref><ref name="nfll">{{Cite web |title=Party Politics" Entertaining at the White House |url=http://www.firstladies.org/documents/PartyPoliticsbrochure-webcompress.pdf |url-status=live |archive-url=https://web.archive.org/web/20070704013431/http://www.firstladies.org/documents/PartyPoliticsbrochure-webcompress.pdf |archive-date=July 4, 2007 |access-date=2008-12-07 |publisher=National First Ladies Library}}</ref>
೧೯೭೮ ರ ನವೆಂಬರ್ನಲ್ಲಿ, ಟಿಫಾನಿ & ಕಂಪೆನಿಯನ್ನು ''ಏವನ್ ಪ್ರಾಡಕ್ಟ್ಸ್, ಇಂಕ್'' ಸುಮಾರು ಯುಎಸ್ $೧೦೪ ದಶಲಕ್ಷದಷ್ಟು ಸ್ಟಾಕ್ಗಳಿಗೆ ಮಾರಾಟ ಮಾಡಲಾಯಿತು.<ref>{{Cite web |date=August 6, 2020 |title=Who Owns Tiffany & Co? {{!}} Luxury Brand |url=https://aalanddiamond.com/who-owns-tiffany-co/ |url-status=live |archive-url=https://web.archive.org/web/20210817182816/https://aalanddiamond.com/who-owns-tiffany-co/ |archive-date=August 17, 2021 |access-date=2021-08-17 |website=AaLAND Diamond Jewelers |language=en-US}}</ref> ಆದಾಗ್ಯೂ, ೧೯೮೪ ರ ''ನ್ಯೂಸ್ವೀಕ್'' ಲೇಖನದಲ್ಲಿ, ಫಿಫ್ತ್ ಅವೆನ್ಯೂ ಟಿಫಾನಿ ಅಂಗಡಿಯನ್ನು ಬಿಳಿ ಮಾರಾಟ ಸಮಯದಲ್ಲಿ ಮ್ಯಾಕಿಸ್ ಡಿಪಾರ್ಟ್ಮೆಂಟ್ ಸ್ಟೋರ್ಗೆ ಹೋಲಿಸಲಾಯಿತು. ಏಕೆಂದರೆ ಹೆಚ್ಚಿನ ಸಂಖ್ಯೆಯ ಅಗ್ಗದ ವಸ್ತುಗಳು ಮಾರಾಟದಲ್ಲಿವೆ; ಇದಲ್ಲದೆ, ಗ್ರಾಹಕರು ಗುಣಮಟ್ಟ ಮತ್ತು ಸೇವೆಯ ಕುಸಿತದ ಬಗ್ಗೆ ದೂರಿದರು.<ref name="ReferenceA"/> ಆಗಸ್ಟ್ ೧೯೮೪ ರಲ್ಲಿ, ಏವನ್ ಟಿಫಾನಿಯನ್ನು ವಿಲಿಯಂ ಆರ್. ಚಾನೆ ನೇತೃತ್ವದ ಹೂಡಿಕೆದಾರರ ಗುಂಪಿಗೆ $೧೩೫.೫ ಮಿಲಿಯನ್ ನಗದಿಗೆ ಮಾರಾಟ ಮಾಡಿದರು.೧೯೮೭ ರಲ್ಲಿ ಟಿಫಾನಿ ಮತ್ತೆ [[ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ|ಸಾರ್ವಜನಿಕವಾಗಿ]] ಕಾಣಿಸಿಕೊಂಡರು ಮತ್ತು ಸಾಮಾನ್ಯ ಷೇರುಗಳ ೪೫ ಲಕ್ಷ ಷೇರುಗಳ ಮಾರಾಟದಿಂದ ಸುಮಾರು $೧ ದಶಲಕ್ಷವನ್ನು ಸಂಗ್ರಹಿಸಿದರು.<ref name="ReferenceA" />
ಯುನೈಟೆಡ್ ಸ್ಟೇಟ್ಸ್ನಲ್ಲಿ ೧೯೯೦-೧೯೯೧ ರ ಆರ್ಥಿಕ ಹಿಂಜರಿತದ ಕಾರಣ, ಟಿಫಾನಿಯು ಸಾಮೂಹಿಕ ವ್ಯಾಪಾರದ ಮೇಲೆ ಒತ್ತು ನೀಡಲಾರಂಭಿಸಿತು. ಟಿಫಾನಿ ಎಲ್ಲರಿಗೂ ಹೇಗೆ ಕೈಗೆಟುಕುತ್ತದೆ/ಕೈಗೆಟಕುವ ದರದಲ್ಲಿರುತ್ತದೆ ಎಂಬುದನ್ನು ಒತ್ತಿಹೇಳುವ ಹೊಸ ಅಭಿಯಾನವನ್ನು ಪ್ರಾರಂಭಿಸಲಾಯಿತು. ಉದಾಹರಣೆಗೆ, ವಜ್ರದ ನಿಶ್ಚಿತಾರ್ಥದ ಉಂಗುರಗಳ ಬೆಲೆ $೮೫೦ ರಿಂದ ಪ್ರಾರಂಭವಾಗುತ್ತದೆ ಎಂದು ಕಂಪನಿಯು ಜಾಹೀರಾತು ನೀಡಿತು. "ವಜ್ರವನ್ನು ಹೇಗೆ ಖರೀದಿಸುವುದು" ಎಂಬ ಕರಪತ್ರಗಳನ್ನು ೪೦,೦೦೦ ಜನರಿಗೆ ಕಳುಹಿಸಲಾಯಿತು ಮತ್ತು ಅವರು ವಿಶಾಲ ಜನಸಂಖ್ಯೆಯನ್ನು ಗುರಿಯಾಗಿರಿಸಿಕೊಂಡು ನಿರ್ದಿಷ್ಟವಾಗಿ ಸ್ಥಾಪಿಸಲಾದ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿದರು.<ref name="ReferenceA"/> ಆದಾಗ್ಯೂ, ಐಷಾರಾಮಿ ಸರಕುಗಳ ಕಂಪನಿಯಾಗಿ ತನ್ನ ವರ್ಚಸ್ಸನ್ನು ಕಾಪಾಡಿಕೊಳ್ಳಲು, ಟಿಫಾನಿ ಮಳಿಗೆಗಳಲ್ಲಿ ಉನ್ನತ ಶೈಲಿಯ ಚಿತ್ರಗಳನ್ನು ಪ್ರದರ್ಶಿಸಲಾಯಿತು.<ref name="ReferenceA" />
ಸೆಪ್ಟೆಂಬರ್ ೪, ೧೯೯೪ ರಂದು ನ್ಯೂಯಾರ್ಕ್ ನಗರದ ಅಂಗಡಿಯಲ್ಲಿ ಆಭರಣ ದರೋಡೆ ಸಂಭವಿಸಿತು. ಇದರಲ್ಲಿ ಆರು ಪುರುಷರು $ ೧.೯ ಮಿಲಿಯನ್ ಆಭರಣಗಳನ್ನು ಕದ್ದಿದ್ದಾರೆ. ಘಟನೆಯ ಸಂದರ್ಭದಲ್ಲಿ ಯಾವುದೇ ಗುಂಡು ಹಾರಿಸಲಾಗಿಲ್ಲ ಮತ್ತು ಯಾವುದೇ ವಿಧ್ವಂಸಕ ಕೃತ್ಯಗಳು ಸಂಭವಿಸಿಲ್ಲ. ದರೋಡೆ ನಡೆದ ಎರಡು ವಾರಗಳ ನಂತರ ಆರು ಮಂದಿಯನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು.<ref>{{Cite news |date=December 22, 2018 |title=Break-In at Tiffany's: How Thieves Stole $1.9 Million in Jewels During a 1994 New York Heist |work=Inside Edition |url=https://www.insideedition.com/break-tiffanys-how-thieves-stole-19-million-jewels-during-1994-new-york-heist-49395 |url-status=live |access-date=September 25, 2021 |archive-url=https://web.archive.org/web/20210925174327/https://www.insideedition.com/break-tiffanys-how-thieves-stole-19-million-jewels-during-1994-new-york-heist-49395 |archive-date=September 25, 2021}}</ref>
ಟಿಫಾನಿ & ಕಂಪೆನಿ ೧೯೯೮ ರಲ್ಲಿ ಅವರ ಸಹಿಯಾದ '''ಟಿಫಾನಿ ಬ್ಲೂ''' ಬಣ್ಣವನ್ನು ವ್ಯಾಪಾರ ಮುದ್ರೆಯನ್ನಾಗಿ(ಟ್ರೇಡ್ಮಾರ್ಕ್) ಮಾಡಿದರು. ಮೂರು ವರ್ಷಗಳ ನಂತರ ಅವರು "೧೮೩೭ ಬ್ಲೂ" ಬಣ್ಣವನ್ನು ಪ್ರಮಾಣೀಕರಿಸಲು ಪ್ಯಾಂಟೋನ್ನೊಂದಿಗೆ ಪಾಲುದಾರರಾದರು.<ref name="cnnblue">{{Cite web |last=Cohen |first=Alina |date=April 30, 2019 |title=How Tiffany & Co. monopolized a shade of blue |url=https://www.cnn.com/style/article/tiffany--co-blue/index.html |url-status=live |archive-url=https://web.archive.org/web/20200603222953/https://www.cnn.com/style/article/tiffany--co-blue/index.html |archive-date=June 3, 2020 |access-date=May 4, 2020 |website=CNN}}</ref>
=== ೨೦೦೦ ದಶಕ ===
[[ಚಿತ್ರ:Tiffany_blue_box_2.jpg|thumb|ಟಿಫಾನಿ & ಕಂಪನಿಯ ನೀಲಿ ಉಡುಗೊರೆ ಪೆಟ್ಟಿಗೆಗಳು]]
ಟಿಫಾನಿ & ಕಂಪನಿ ಪರಿಸರ ಮತ್ತು ಕಲೆಗಳ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಲಾಭೋದ್ದೇಶವಿಲ್ಲದ ಸಂಸ್ಥೆಗಳಿಗೆ ಅನುದಾನವನ್ನು ಒದಗಿಸಲು ೨೦೦೦ ರಲ್ಲಿ ಅಡಿಪಾಯ ಹಾಕಿತು.<ref>{{Cite web |title=The Tiffany & Co. Foundation | About the Foundation |url=http://www.tiffanyandcofoundation.org/about/ |url-status=live |archive-url=https://archive.today/20130416000810/http://www.tiffanyandcofoundation.org/about/ |archive-date=April 16, 2013 |access-date=2013-02-18 |publisher=Tiffanyandcofoundation.org}}</ref> ಜೂನ್ ೨೦೦೪ ರಲ್ಲಿ, ಟಿಫಾನಿಯು [[ಈಬೇ|ಇಬೇ(eBay)]] ವಿರುದ್ಧ ಮೊಕದ್ದಮೆ ಹೂಡಿದರು. ಅವರು ನಕಲಿ ಟಿಫಾನಿ ಉತ್ಪನ್ನಗಳ ಮಾರಾಟದಿಂದ ಲಾಭವನ್ನು ಗಳಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು; ಆದಾಗ್ಯೂ, ಟಿಫಾನಿ ವಿಚಾರಣೆಯಲ್ಲಿ ಮತ್ತು ಮೇಲ್ಮನವಿಯಲ್ಲಿ ಸೋತಿತು.<ref>{{Cite news |date=March 22, 2004 |title=Tiffany sues eBay, says fake items sold on Web site |publisher=USA Today |url=https://www.usatoday.com/tech/news/2004-06-22-tiffany-ebay_x.htm |url-status=live |access-date=October 29, 2017 |archive-url=https://web.archive.org/web/20120421002739/http://www.usatoday.com/tech/news/2004-06-22-tiffany-ebay_x.htm |archive-date=April 21, 2012}}</ref><ref>{{Cite news |date=April 1, 2010 |title=Tiffany, Inc. v. eBay |url=http://www.ca2.uscourts.gov/decisions/isysquery/65a5a693-7086-4d06-a0d2-13e6c9981866/2/doc/08-3947-cv_opn.pdf |url-status=dead |access-date=June 22, 2010 |archive-url=https://web.archive.org/web/20150610215511/http://www.ca2.uscourts.gov/decisions/isysquery/65a5a693-7086-4d06-a0d2-13e6c9981866/2/doc/08-3947-cv_opn.pdf |archive-date=June 10, 2015}}</ref>
ಟಿಫಾನಿ & ಕಂಪನಿಯು, ಟಿಫಾನಿಯ ವಿಶ್ವವ್ಯಾಪಿ ವಜ್ರ ಪೂರೈಕೆ ಸರಪಳಿಯನ್ನು ನಿರ್ವಹಿಸಲು ೨೦೦೨ ರಲ್ಲಿ ತಮ್ಮ ಅಂಗಸಂಸ್ಥೆಯಾದ ಲಾರೆಲ್ಟನ್ ಡೈಮಂಡ್ಸ್ ಅನ್ನು ಸ್ಥಾಪಿಸಿತು.<ref>{{Cite web |last=O'Connell |first=Vanessa |date=October 26, 2009 |title=Diamond Industry Makeover Sends Fifth Avenue to Africa |url=https://www.wsj.com/articles/SB125650986946206903 |url-status=live |archive-url=https://web.archive.org/web/20200809112532/https://www.wsj.com/articles/SB125650986946206903 |archive-date=August 9, 2020 |access-date=May 4, 2020 |website=Wall Street Journal}}</ref>
೨೦೦೯ ರಲ್ಲಿ, ಜಪಾನಿನ ಮೊಬೈಲ್ ಫೋನ್ ಆಪರೇಟರ್ ಸಾಫ್ಟ್ಬ್ಯಾಂಕ್ ಮತ್ತು ಟಿಫಾನಿ & ಕಂಪನಿ ನಡುವಿನ ಸಹಯೋಗವನ್ನು ಘೋಷಿಸಲಾಯಿತು. ಎರಡು ಕಂಪನಿಗಳು ಸೆಲ್ಫೋನ್ ಅನ್ನು ವಿನ್ಯಾಸಗೊಳಿಸಿದ್ದು, ಹತ್ತು ಪ್ರತಿಗಳಿಗೆ ಸೀಮಿತವಾಗಿದೆ ಮತ್ತು ೪೦೦ ಕ್ಕೂ ಹೆಚ್ಚು ವಜ್ರಗಳನ್ನು ಹೊಂದಿದ್ದು, ಒಟ್ಟು ೨೦ ಕ್ಯಾರೆಟ್ಗಳಿಗಿಂತ ಹೆಚ್ಚು(೪.೦ ಗ್ರಾಂ)ಇದೆ. ಪ್ರತಿ ಸೆಲ್ಫೋನ್ನ ಬೆಲೆ ೧೦೦ ಮಿಲಿಯನ್ ಯೆನ್ಗಿಂತ ಹೆಚ್ಚು(£೭೮೧,೮೨೪) ಇದೆ.<ref>
{{Cite web |script-title=ja:上戸彩:超高価ケータイ「ないしょにしてね」 |url=http://mainichi.jp/enta/geinou/news/20080129spn00m200016000c.html |archive-url=https://web.archive.org/web/20080130125848/http://mainichi.jp/enta/geinou/news/20080129spn00m200016000c.html <!-- Bot retrieved archive --> |archive-date=2008-01-30 |access-date=2008-01-29 |publisher=Sports Nippon |language=ja}}</ref>
೨೦೦೯ ರಲ್ಲಿ, ಕಂಪನಿಯು ತಮ್ಮ ಟಿಫಾನಿ ಕೀಸ್ ಸಂಗ್ರಹವನ್ನು ಪ್ರಾರಂಭಿಸಿತು.<ref>{{Cite web |last=Skinner |first=Poppy |date=September 3, 2015 |title=The Tiffany Key Collection |url=https://www.tatlerasia.com/style/jewellery/the-tiffany-key-collection |url-status=live |archive-url=https://web.archive.org/web/20211003084228/https://www.tatlerasia.com/style/jewellery/the-tiffany-key-collection |archive-date=October 3, 2021 |access-date=May 4, 2020 |website=Singapore Tatler}}</ref>
=== ೨೦೧೦ ಮತ್ತು ೨೦೨೦ ರ ದಶಕಗಳು ===
ಜುಲೈ ೨೦೧೩ ರ ಆರಂಭದಲ್ಲಿ ಮಾಧ್ಯಮ ವರದಿಯೊಂದು ಮಾಜಿ ಟಿಫಾನಿ & ಕಂಪನಿಯ ಉಪಾಧ್ಯಕ್ಷ ಇಂಗ್ರಿಡ್ ಲೆಡರ್ಹಾಸ್-ಒಕುನ್ ಅವರನ್ನು ಬಂಧಿಸಲಾಗಿದೆ ಮತ್ತು $೧.೩ ಮಿಲಿಯನ್ಗಿಂತಲೂ ಹೆಚ್ಚು ವಜ್ರದ ಕಡಗಗಳು, ಡ್ರಾಪ್ ಕಿವಿಯೋಲೆಗಳು ಮತ್ತು ಇತರ ಆಭರಣಗಳನ್ನು ಕದ್ದ ಆರೋಪ ಹೊರಿಸಲಾಗಿದೆ ಎಂದು ಬಹಿರಂಗಪಡಿಸಿತು. [[ಮ್ಯಾನ್ಹ್ಯಾಟನ್|ಮ್ಯಾನ್ಹ್ಯಾಟನ್ನ]]ಪ್ರಾಸಿಕ್ಯೂಟರ್ಗಳ ಪ್ರಕಾರ, ಲೆಡರ್ಹಾಸ್-ಒಕುನ್ ವಿರುದ್ಧ ಸಲ್ಲಿಸಲಾದ ಅಧಿಕೃತ ಆರೋಪಗಳು ಅವಳನ್ನು "ತಂತಿ ವಂಚನೆ ಮತ್ತು ಕದ್ದ ಆಸ್ತಿಯ ಅಂತರರಾಜ್ಯ ಸಾಗಣೆ" ಎಂದು ಆರೋಪಿಸಿವೆ.<ref>{{Cite news |last=Chad Bray |date=4 July 2013 |title=Tiffany executive gem theft charges |work=The Australian |url=http://www.theaustralian.com.au/business/wall-street-journal/tiffany-executive-gem-theft-charges/story-fnay3ubk-1226673939784?net_sub_uid=44933799 |access-date=4 July 2013}}</ref>
ಕಂಪನಿಯ ಫ್ರಾನ್ಸೆಸ್ಕಾ ಅಂಫಿಥಿಯಾಟ್ರೋಫ್-ವಿನ್ಯಾಸಗೊಳಿಸಿದ ಟಿಫಾನಿ ಟಿ ಸಂಗ್ರಹವು ೨೦೧೪ ರಲ್ಲಿ ಪ್ರಾರಂಭವಾಯಿತು.<ref>{{Cite web |last=Rutherford |first=Chrissy |date=November 7, 2014 |title=Tiffany & Co. Takes Us for a Ride on the T Train |url=https://www.harpersbazaar.com/celebrity/party-pictures/g4457/tiffany-t-launch/ |url-status=live |archive-url=https://web.archive.org/web/20200608083147/https://www.harpersbazaar.com/celebrity/party-pictures/g4457/tiffany-t-launch/ |archive-date=June 8, 2020 |access-date=May 4, 2020 |website=Harpers Bazaar}}</ref>
ಫೆಬ್ರವರಿ ೨೦೧೭ ರಲ್ಲಿ, ಕಂಪನಿಯು ದುರ್ಬಲ ಮಾರಾಟ ಫಲಿತಾಂಶಗಳನ್ನು ತೋರಿದೆ ಎಂದು ಕಂಪನಿಯ ಸಿಇಒ ''ಫ್ರೆಡೆರಿಕ್ ಕುಮೆನಾಲ್''ರವರು ೨೨ ತಿಂಗಳ ನಂತರ ತಕ್ಷಣವೇ ಕೆಲಸದಿಂದ ಹೊರಗುಳಿದಿದ್ದಾರೆ ಎಂದು ಕಂಪನಿಯು ಘೋಷಿಸಿತು. ಮಧ್ಯಂತರ ಆಧಾರದ ಮೇಲೆ ಕಂಪನಿಯ ದೀರ್ಘಕಾಲದ ಮಾಜಿ ಸಿಇಒ ಮೈಕೆಲ್ ಕೊವಾಲ್ಸ್ಕಿ ಅವರನ್ನು ಬದಲಾಯಿಸಲಾಯಿತು.<ref>{{Cite web |title=Tiffany CEO Out After Less Than 2 Years Because of Poor Sales |url=http://fortune.com/2017/02/05/tiffany-ceo/ |url-status=live |archive-url=https://web.archive.org/web/20170206124336/http://fortune.com/2017/02/05/tiffany-ceo/ |archive-date=February 6, 2017 |access-date=2017-02-06 |website=Fortune}}</ref> ಅವರ ಹಠಾತ್ ನಿರ್ಗಮನಕ್ಕೆ ಸ್ವಲ್ಪ ಸಮಯದ ಮೊದಲು, ಕುಮೆನಾಲ್ ಅವರು ಮಾಜಿ ಕೋಚ್ ಡಿಸೈನರ್ ರೀಡ್ ಕ್ರಾಕೋಫ್ ಅವರನ್ನು ಕಂಪನಿಯ ಹೊಸ ಮುಖ್ಯ ಕಲಾತ್ಮಕ ಅಧಿಕಾರಿಯಾಗಿ ನೇಮಿಸಿದ್ದರು. ಕ್ರಾಕೋಫ್ರವರಿಗೆ ಆಭರಣ ವಿನ್ಯಾಸದಲ್ಲಿ ಹಿಂದಿನ ಅನುಭವವಿಲ್ಲದಿದ್ದರೂ, ತರಬೇತುದಾರನೊಂದಿಗಿನ ಅವನ ಹಿಂದಿನ ಯಶಸ್ಸು ಮತ್ತು "ಸಾಂಪ್ರದಾಯಿಕ ಅಮೆರಿಕನ್ ವಿನ್ಯಾಸದ ಬಗ್ಗೆ ಆಳವಾದ ತಿಳುವಳಿಕೆ" ಜೊತೆಗೆ ಕ್ರಾಕೋಫ್ರವರು ಬ್ರ್ಯಾಂಡ್ನ ಚಿತ್ರವನ್ನು ರಿಫ್ರೆಶ್ ಮಾಡಲು ಸಾಧ್ಯವಾಗುತ್ತದೆ ಎಂಬ ಭರವಸೆಯು ಅವರ ನೇಮಕಾತಿಗೆ ಕಾರಣವಾಯಿತು.<ref>{{Cite web |date=2017-01-17 |title=Tiffany Appoints Reed Krakoff as Chief Artistic Officer |url=https://www.businessoffashion.com/articles/news-analysis/tiffany-appoints-reed-krakoff-as-chief-artistic-officer |url-status=live |archive-url=https://web.archive.org/web/20190928125038/https://www.businessoffashion.com/articles/news-analysis/tiffany-appoints-reed-krakoff-as-chief-artistic-officer |archive-date=September 28, 2019 |access-date=2019-09-28 |website=The Business of Fashion |language=en-GB}}</ref><ref>{{Cite web |date=2018-05-01 |title=Can the Man Who Made Coach Remake Tiffany? |url=https://www.businessoffashion.com/articles/news-analysis/can-the-man-who-made-coach-remake-tiffany |url-status=live |archive-url=https://web.archive.org/web/20190928125037/https://www.businessoffashion.com/articles/news-analysis/can-the-man-who-made-coach-remake-tiffany |archive-date=September 28, 2019 |access-date=2019-09-28 |website=The Business of Fashion |language=en-GB}}</ref>
ಏಪ್ರಿಲ್ ೨೦೧೭ ರಲ್ಲಿ, ಕಂಪನಿಯು ತಮ್ಮ ಟಿಫಾನಿ ಹಾರ್ಡ್ವೇರ್ ಸಂಗ್ರಹವನ್ನು ಪ್ರಾರಂಭಿಸಿತು.<ref>{{Cite web |last=Halberg |first=Morgan |date=April 28, 2017 |title=Zoë Kravitz, Scarlett Johansson Are Really Into Tiffany's New Collection |url=https://observer.com/2017/04/tiffany-hardwear-collection-launch/ |url-status=live |archive-url=https://web.archive.org/web/20200809144204/https://observer.com/2017/04/tiffany-hardwear-collection-launch/ |archive-date=August 9, 2020 |access-date=May 5, 2020 |website=Observer}}</ref>
ಜುಲೈ ೨೦೧೭ ರಲ್ಲಿ, ಬಲ್ಗಾರಿ ಅನುಭವಿ ಅಲೆಸಾಂಡ್ರೋ ಬೊಗ್ಲಿಯೊಲೊ ಅವರು ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು. ಅವರ ನಾಯಕತ್ವದಲ್ಲಿ, ಟಿಫಾನಿ & ಕಂಪನಿ ಕುಸಿತದ ಮಾರಾಟವನ್ನು ತಿರುಗಿಸಬಹುದು ಮತ್ತು ಕಿರಿಯ ಪ್ರೇಕ್ಷಕರನ್ನು ಸೆರೆಹಿಡಿಯಬಹುದು ಎಂದು ಆಶಿಸಲಾಗಿತ್ತು.<ref>{{Cite news |last=Nicolaou |first=Anna |date=July 13, 2017 |title=Tiffany picks luxury industry veteran Bogliolo to return sparkle |language=en-GB |work=Financial Times |url=https://www.ft.com/content/71a04298-67cc-11e7-8526-7b38dcaef614 |url-status=live |access-date=2019-09-28 |archive-url=https://web.archive.org/web/20190928123857/https://www.ft.com/content/71a04298-67cc-11e7-8526-7b38dcaef614 |archive-date=September 28, 2019}}</ref>
ಟಿಫಾನಿ & ಕಂಪನಿ ನವೆಂಬರ್ ೨೦೧೭ ರಲ್ಲಿ ನ್ಯೂಯಾರ್ಕ್ ನಗರದಲ್ಲಿ 'ಬ್ಲೂ ಬಾಕ್ಸ್ ಕೆಫೆ'ಯನ್ನು ತೆರೆಯಿತು.<ref name="wsjkrakoff">{{Cite web |last=Binkley |first=Christina |date=March 26, 2018 |title=The Secret Inside Tiffany's Blue Box: Reed Krakoff |url=https://www.wsj.com/articles/the-secret-inside-tiffanys-blue-box-reed-krakoff-1522072766 |url-status=live |archive-url=https://web.archive.org/web/20200809113740/https://www.wsj.com/articles/the-secret-inside-tiffanys-blue-box-reed-krakoff-1522072766 |archive-date=August 9, 2020 |access-date=May 5, 2020 |website=Wall Street Journal}}</ref> ನವೆಂಬರ್ ೨೦೧೭ ರಲ್ಲಿ, ಕಂಪನಿಯು ತಮ್ಮ ಮನೆ ಮತ್ತು ಪರಿಕರಗಳ ಸಾಲನ್ನು ಪ್ರಾರಂಭಿಸಿತು.<ref>{{Cite web |last=Roberts |first=Embry |date=November 4, 2017 |title=Tiffany & Co. launched an outrageously indulgent home and accessories line |url=https://www.today.com/home/tiffany-co-launched-outrageously-indulgent-home-accessories-line-t118424 |url-status=live |archive-url=https://web.archive.org/web/20200811045344/https://www.today.com/home/tiffany-co-launched-outrageously-indulgent-home-accessories-line-t118424 |archive-date=August 11, 2020 |access-date=May 5, 2020 |website=Today}}</ref>
ಮಾರ್ಚ್ ೨೦೧೮ ರಲ್ಲಿ, ಕಂಪನಿಯು ಆಭರಣ ವಿನ್ಯಾಸ ಮತ್ತು ನಾವೀನ್ಯತೆ ಕಾರ್ಯಾಗಾರವನ್ನು ತೆರೆಯಿತು. ಇದು ಹೊಸ ೧೭,೦೦೦ ಚದರ ಅಡಿ ಅಟೆಲಿಯರ್ ಆಗಿದೆ.<ref name="wsjkrakoff"/>
ಮೇ ೨೦೧೮ ರಲ್ಲಿ, ಟಿಫಾನಿಯು 'ರೀಡ್ ಕ್ರಾಕೋಫ್'ರವರು ವಿನ್ಯಾಸಗೊಳಿಸಿದ ಕಾಗದದ ಹೂವುಗಳ ಸಂಗ್ರಹವನ್ನು ಪ್ರಾರಂಭಿಸಿದರು.<ref>{{Cite web |last=Friedlander |first=Ruthie |date=May 1, 2018 |title=Tiffany & Co. Unveils a New Collection That Strips Away the Typical Rules of Fine Jewelry |url=https://www.instyle.com/fashion/accessories/jewelry/tiffanys-paper-flowers |url-status=dead |archive-url=https://web.archive.org/web/20220321120453/https://www.instyle.com/fashion/accessories/jewelry/tiffanys-paper-flowers |archive-date=March 21, 2022 |access-date=May 4, 2020 |website=InStyle}}</ref>
ಸೆಪ್ಟೆಂಬರ್ ೨೦೧೮ ರಲ್ಲಿ, ಟಿಫಾನಿಯು ಏಷ್ಯಾದಲ್ಲಿ ತಮ್ಮ ಕಾಗದದ ಹೂವುಗಳ ಸಂಗ್ರಹವನ್ನು ಪ್ರಾರಂಭಿಸಿತು. ಅದೇ ತಿಂಗಳು, ಕಂಪನಿಯು ಟಿಫಾನಿ ಟ್ರೂ ಎಂಬ ಹೊಸ ಸ್ವಾಮ್ಯದ ನಿಶ್ಚಿತಾರ್ಥ ಉಂಗುರದ ವಿನ್ಯಾಸವನ್ನು ಪ್ರಾರಂಭಿಸಿತು.<ref>{{Cite web |last=Chen |first=Joyce |date=September 19, 2018 |title=Tiffany & Co. Debuts New Engagement Design Called the "Tiffany True" Diamond |url=https://www.theknotnews.com/tiffany-co-debuts-true-diamond-ring-33723 |url-status=live |archive-url=https://web.archive.org/web/20200808233504/https://www.theknotnews.com/tiffany-co-debuts-true-diamond-ring-33723 |archive-date=August 8, 2020 |access-date=May 5, 2020 |website=The Knot}}</ref>
ಆಗಸ್ಟ್ ೨೦೧೯ ರಲ್ಲಿ, ಟಿಫಾನಿ ಅದೇ ವರ್ಷದ ಅಕ್ಟೋಬರ್ನಲ್ಲಿ ತಮ್ಮ ಮೊದಲ ಪುರುಷರ ಆಭರಣ ಸಂಗ್ರಹವನ್ನು ಪ್ರಾರಂಭಿಸಿತು.<ref>{{Cite news |last=Siegel |first=Rachel |date=August 15, 2019 |title=Tiffany & Co. launches men's line, hoping diamonds are a dude's best friend |work=Washington Post |url=https://www.washingtonpost.com/business/2019/08/15/tiffany-launches-mens-line-hoping-diamonds-are-dudes-best-friend/ |url-status=live |access-date=May 4, 2020 |archive-url=https://web.archive.org/web/20200820154532/https://www.washingtonpost.com/business/2019/08/15/tiffany-launches-mens-line-hoping-diamonds-are-dudes-best-friend/ |archive-date=August 20, 2020}}</ref> ಈ ಮಾರ್ಗವನ್ನು ರೀಡ್ ಕ್ರಾಕೋಫ್ರವರು ಅಭಿವೃದ್ಧಿಪಡಿಸಿದ್ದಾರೆ.<ref>{{Cite web |last=Remsen |first=Nick |date=September 15, 2019 |title=Tiffany Creates Another Reason for Men to Shop |url=https://www.nytimes.com/2019/09/15/fashion/jewelry-tiffany-mens-reed-krakoff.html |url-status=live |archive-url=https://web.archive.org/web/20200108010436/https://www.nytimes.com/2019/09/15/fashion/jewelry-tiffany-mens-reed-krakoff.html |archive-date=January 8, 2020 |access-date=May 4, 2020 |website=The New York Times}}</ref>
ಅಕ್ಟೋಬರ್ ೨೦೧೯ ರಲ್ಲಿ, ಟಿಫಾನಿಯು ಚೀನಾದ [[ಶಾಂಘೈ|ಶಾಂಘೈನಲ್ಲಿ]] "ವಿಷನ್ & ವರ್ಚುಸಿಟಿ(ದೃಷ್ಟಿ ಮತ್ತು ಕೌಶಲ್ಯ)" ಎಂಬ ಹೊಸ ಬ್ರಾಂಡ್ ಪ್ರದರ್ಶನವನ್ನು ತೆರೆದರು.<ref>{{Cite web |last=Connor |first=Katie |date=November 3, 2019 |title=Tiffany's Vision & Virtuosity Exhibition Offers A Glittering Escape From Reality |url=https://www.elle.com/fashion/a29670267/tiffany-vision-and-virtuosity-shanghai/ |url-status=live |archive-url=https://web.archive.org/web/20200809114530/https://www.elle.com/fashion/a29670267/tiffany-vision-and-virtuosity-shanghai/ |archive-date=August 9, 2020 |access-date=May 5, 2020 |website=Elle}}</ref>
ಟಿಫಾನಿ ತನ್ನ ಮೊದಲ ಮಳಿಗೆಯನ್ನು ಫೆಬ್ರವರಿ ೩, ೨೦೨೦ ರಂದು ಭಾರತದ ನವದೆಹಲಿಯಲ್ಲಿ ತೆರೆಯಿತು.<ref>{{Cite web |title=Tiffany opens first India store in New Delhi - ET Retail |url=https://retail.economictimes.indiatimes.com/news/apparel-fashion/jewellery/tiffany-opens-first-india-store-in-new-delhi/73892931 |url-status=live |archive-url=https://web.archive.org/web/20200213062444/https://retail.economictimes.indiatimes.com/news/apparel-fashion/jewellery/tiffany-opens-first-india-store-in-new-delhi/73892931 |archive-date=February 13, 2020 |access-date=13 February 2020 |website=ETRetail.com |language=en}}</ref>
ಉಕ್ರೇನ್ ಮೇಲೆ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದ ನಂತರ, ಬ್ರ್ಯಾಂಡ್ ರಷ್ಯಾದಿಂದ ವಜ್ರಗಳನ್ನು ಖರೀದಿಸುವುದನ್ನು ನಿಲ್ಲಿಸುವುದಾಗಿ ಘೋಷಿಸಿತು. ಆದಾಗ್ಯೂ, ಅವರು ಯುಎಇ(UAE) ಸೇರಿದಂತೆ ಮಧ್ಯವರ್ತಿಗಳ ಮೂಲಕ ಖರೀದಿಯನ್ನು ಮುಂದುವರೆಸಿದರು ಎಂದು ನಂತರ ಬಹಿರಂಗವಾಯಿತು.[https://www.epravda.com.ua/news/2023/10/12/705412/]
ದುರ್ಬಲ ಯುಎಸ್ ನಿರ್ಬಂಧಗಳು ಮತ್ತು ಈ ರಫ್ತು ವಲಯದ ಮೇಲೆ ಇಯು ನಿರ್ಬಂಧಗಳ ಅನುಪಸ್ಥಿತಿಯಿಂದಾಗಿ, ಭಾಗಶಃ ಸರ್ಕಾರಿ ಸ್ವಾಮ್ಯದ ರಷ್ಯಾದ ಕಂಪನಿಯಾದ ''ಅಲ್ರೋಸಾ'', ಅಮೂಲ್ಯವಾದ ಕಲ್ಲುಗಳ ಮಾರಾಟದಿಂದ ಲಾಭವನ್ನು ಮುಂದುವರೆಸಿದೆ. ಕಂಪನಿಯು ಲಾಭದ ಒಂದು ಭಾಗವನ್ನು ರಷ್ಯಾದ ಸೇನೆಗೆ ಹಣಕಾಸು ಒದಗಿಸಲು ನಿರ್ದೇಶಿಸುತ್ತದೆ ಎಂಬ ಸಲಹೆಗಳಿವೆ.
==== ಎಲ್ವಿಎಂಎಚ್(LVMH)ನಿಂದ ಸ್ವಾಧೀನ ====
ನವೆಂಬರ್ ೨೦೧೯ ರಲ್ಲಿ, ಎಲ್ವಿಎಂಎಚ್(LVMH) ಟಿಫಾನಿ & ಕಂಪೆನಿಯನ್ನು$೧೬.೨ ಶತಕೋಟಿ, $೧೩೫ ಪ್ರತಿ ಷೇರಿಗೆ ಖರೀದಿಸಲು ಘೋಷಿಸಿತು.<ref name="lvmhdeal">{{Cite web |last=Kent |first=Sarah |last2=Guilbault |first2=Laure |date=November 25, 2019 |title=LVMH Buys Tiffany in $16 Billion Deal |url=https://www.businessoffashion.com/articles/news-analysis/lvmh-buys-tiffany-in-16-2-billion-deal |url-status=live |archive-url=https://web.archive.org/web/20201102064717/https://www.businessoffashion.com/articles/news-analysis/lvmh-buys-tiffany-in-16-2-billion-deal |archive-date=November 2, 2020 |access-date=2019-11-25 |website=www.businessoffashion.com}}</ref> ಈ ಒಪ್ಪಂದವು ೨೦೨೦ರ ಜೂನ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು.<ref name="lvmhdeal2">{{Cite web |date=26 November 2019 |title=LVMH Acquires Tiffany & Co. For $16.2 Billion |url=https://www.forbes.com/sites/robertanaas/2019/11/26/lvmh-aquires-tiffany--co-for-162--billion/#619c1bee69ab |url-status=live |archive-url=https://web.archive.org/web/20200803133638/https://www.forbes.com/sites/robertanaas/2019/11/26/lvmh-aquires-tiffany--co-for-162--billion/#619c1bee69ab |archive-date=August 3, 2020 |access-date=30 November 2019 |website=Forbes |quote=LVMH will "develop this jewel with the same dedication and commitment that we have applied to each and every one of our Maisons. We will be proud to have Tiffany sit alongside our iconic brands and look forward to ensuring that Tiffany continues to thrive for centuries to come"}}</ref>
ಸೆಪ್ಟೆಂಬರ್ ೨೦೨೦ ರಲ್ಲಿ ಟಿಫಾನಿಯ ಬಾಕಿ ಇರುವ ಖರೀದಿಯನ್ನು ರದ್ದುಗೊಳಿಸಲು ಎಲ್ವಿಎಂಎಚ್ ನಿರ್ಧರಿಸಿದ ನಂತರ, ಟಿಫಾನಿ ಮೊಕದ್ದಮೆಯನ್ನು ಹೂಡಿದರು ಮತ್ತು ಖರೀದಿಯನ್ನು ಒತ್ತಾಯಿಸಲು ಅಥವಾ ಪ್ರತಿವಾದಿಯ ವಿರುದ್ಧ ಹಾನಿಗಳನ್ನು ನಿರ್ಣಯಿಸಲು ಎಲ್ವಿಎಂಎಚ್ನ ವಿರುದ್ಧ ಮೊಕದ್ದಮೆ ಹೂಡಲು ಯೋಜಿಸಿ, ದುರುಪಯೋಗವು ಖರೀದಿ ಒಪ್ಪಂದವನ್ನು ಅಮಾನ್ಯಗೊಳಿಸಿದೆ ಎಂದು ಆರೋಪಿಸಿತು.<ref>{{Cite web |title=Grandmaster Bernard Arnault looks to the Tiffany endgame |url=https://www.24x7news.live/grandmaster%E2%80%89bernard-arnault-looks-to-the-tiffany-endgame/ |url-status=dead |archive-url=https://web.archive.org/web/20210518205834/https://www.24x7news.live/grandmaster%E2%80%89bernard-arnault-looks-to-the-tiffany-endgame/ |archive-date=May 18, 2021 |access-date=2020-09-12 |website=247 News}}</ref> ಸೆಪ್ಟೆಂಬರ್ ೨೦೨೦ ರ ಮಧ್ಯದಲ್ಲಿ, ಕೋವಿಡ್-೧೯ ಸಾಂಕ್ರಾಮಿಕ ಸಮಯದಲ್ಲಿ ಹಣಕಾಸಿನ ನಷ್ಟದ ಹೊರತಾಗಿಯೂ ಟಿಫಾನಿ ಷೇರುದಾರರಿಗೆ ಲಕ್ಷಾಂತರ ಲಾಭಾಂಶವನ್ನು ಪಾವತಿಸುತ್ತಿರುವ ಕಾರಣ ಎಲ್ವಿಎಂಎಚ್ ತನ್ನ ಒಪ್ಪಂದವನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ''[[ಫೋರ್ಬ್ಸ್|ಫೋರ್ಬ್ಸ್ಗೆ]]'' ವಿಶ್ವಾಸಾರ್ಹ ಮೂಲವೊಂದು ತಿಳಿಸಿದೆ. ಸುಮಾರು ೭೦ ಮಿಲಿಯನ್ ಯುಎಸ್ ಡಾಲರ್ಗಳನ್ನು ಈಗಾಗಲೇ ಟಿಫಾನಿ ಪಾವತಿಸಿದ್ದು, ಹೆಚ್ಚುವರಿ ೭೦ ಮಿಲಿಯನ್ ಯುಎಸ್ ಡಾಲರ್ಗಳನ್ನು ನವೆಂಬರ್ ೨೦೨೦ ರಲ್ಲಿ ಪಾವತಿಸಬೇಕಾಗಿದೆ.<ref>{{Cite web |title=Billionaire Arnault On The Offensive After Tiffany Pays Out $140 Million Pandemic Dividends Despite $32 Million In Losses |url=https://www.24x7news.live/grandmaster%E2%80%89bernard-arnault-looks-to-the-tiffany-endgame/ |url-status=dead |archive-url=https://web.archive.org/web/20210518205834/https://www.24x7news.live/grandmaster%E2%80%89bernard-arnault-looks-to-the-tiffany-endgame/ |archive-date=May 18, 2021 |access-date=2020-09-16 |website=Forbes}}</ref> ಟಿಫಾನಿ ಪ್ರಾರಂಭಿಸಿದ ನ್ಯಾಯಾಲಯದ ಕ್ರಮದ ವಿರುದ್ಧ ಎಲ್ವಿಎಂಎಚ್ ಪ್ರತಿವಾದವನ್ನು ಸಲ್ಲಿಸಿತು. ಎಲ್ವಿಎಂಎಚ್ನ ಒಂದು ಹೇಳಿಕೆಯು ಸಾಂಕ್ರಾಮಿಕ ಸಮಯದಲ್ಲಿ ಟಿಫಾನಿಯ ಅಸಮರ್ಪಕ ನಿರ್ವಹಣೆಯನ್ನು ದೂಷಿಸಿತು ಮತ್ತು ಅದು "ಹಣವನ್ನು ಸುಟ್ಟುಹಾಕುತ್ತಿದೆ ಮತ್ತು ನಷ್ಟಗಳನ್ನು ವರದಿ ಮಾಡುತ್ತಿದೆ" ಎಂದು ಹೇಳಿತು.<ref>{{Cite web |date=29 September 2020 |title=LVMH files countersuit against Tiffany over US$14.5B deal |url=https://beta.ctvnews.ca/national/business/2020/9/29/1_5124559.html |url-status=live |archive-url=https://web.archive.org/web/20201001215347/https://beta.ctvnews.ca/national/business/2020/9/29/1_5124559.html |archive-date=October 1, 2020 |access-date=1 October 2020 |publisher=CTV News}}</ref>
ಅಕ್ಟೋಬರ್ ೨೦೨೦ ರ ಕೊನೆಯಲ್ಲಿ, ಎಲ್ವಿಎಂಎಚ್ ಟಿಫಾನಿ & ಕಂಪೆನಿಯನ್ನು ಸುಮಾರು $೧೬ ಬಿಲಿಯನ್ ಕಡಿಮೆ ಬೆಲೆಗೆ ಖರೀದಿಸಲು ಒಪ್ಪಿಕೊಂಡಿದೆ ಎಂದು ಘೋಷಿಸಿತು ಮತ್ತು ಪ್ರತಿ ಷೇರಿಗೆ $೧೩೫ ರಿಂದ $೧೩೧.೫ ಗೆ ಬೆಲೆಯನ್ನು ಕಡಿಮೆ ಮಾಡಿತು.<ref>{{Cite news |date=2020-10-28 |title=LVMH Revives Luxury's Biggest Deal by Settling Tiffany Dispute |language=en |work=Bloomberg.com |url=https://www.bloomberg.com/news/articles/2020-10-28/tiffany-jumps-on-report-it-s-close-to-new-deal-on-sale-to-lvmh |url-status=live |access-date=2020-10-29 |archive-url=https://web.archive.org/web/20201105182722/https://www.bloomberg.com/news/articles/2020-10-28/tiffany-jumps-on-report-it-s-close-to-new-deal-on-sale-to-lvmh |archive-date=November 5, 2020}}</ref><ref name="White">{{Cite news |last=White |first=Greg Roumeliotis, Sarah |date=2020-10-28 |title=LVMH, Tiffany agree on lower price in $16 billion takeover deal, sources say |language=en |work=Reuters |url=https://uk.reuters.com/article/uk-tiffany-m-a-lvmh-idUKKBN27D2GL |url-status=live |access-date=2020-10-29 |archive-url=https://web.archive.org/web/20201101064043/https://uk.reuters.com/article/uk-tiffany-m-a-lvmh-idUKKBN27D2GL |archive-date=November 1, 2020}}</ref> ಡಿಸೆಂಬರ್ 2020 ರಲ್ಲಿ, ಟಿಫಾನಿ & ಕಂಪನಿಯ ಷೇರುದಾರರು ಎಲ್ವಿಎಂಎಚ್ನೊಂದಿಗೆ $೧೫.೮ ಬಿಲಿಯನ್ ಒಪ್ಪಂದವನ್ನು ಅನುಮೋದಿಸಿದರು.<ref>{{Cite news |date=2020-12-30 |title=Tiffany shareholders back LVMH takeover, ending long-drawn dispute |language=en |work=Reuters |url=https://www.reuters.com/article/us-tiffany-m-a-lvmh-idUSKBN2941IZ |url-status=live |access-date=2020-12-30 |archive-url=https://web.archive.org/web/20201230195818/https://www.reuters.com/article/us-tiffany-m-a-lvmh-idUSKBN2941IZ |archive-date=December 30, 2020}}</ref> ಈ ಒಪ್ಪಂದವು ಜನವರಿ ೭, ೨೦೨೧ ರಂದು ಮುಕ್ತಾಯಗೊಂಡಿತು ಮತ್ತು ಟಿಫಾನಿಯ ಷೇರುಗಳನ್ನು ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಿಂದ ತೆಗೆದುಹಾಕಲಾಯಿತು.<ref name=":2"/><ref>{{Cite web |date=January 7, 2021 |title=LVMH completes the acquisition of Tiffany & Co. |url=https://www.lvmh.com/news-documents/press-releases/lvmh-completes-the-acquisition-of-tiffany-and-co/ |url-status=live |archive-url=https://web.archive.org/web/20210206212439/https://www.lvmh.com/news-documents/press-releases/lvmh-completes-the-acquisition-of-tiffany-and-co/ |archive-date=February 6, 2021 |access-date=February 8, 2021}}</ref> ಎಲ್ವಿಎಂಎಚ್ ಸ್ವಾಧೀನಪಡಿಸಿಕೊಂಡ ನಂತರ, ಟಿಫಾನಿಯ ಹಲವಾರು ಹಿರಿಯ ನಾಯಕರನ್ನು ಎಲ್ವಿಎಂಎಚ್ ನ ಇತರ ವಲಯಗಳ ಕಾರ್ಯನಿರ್ವಾಹಕರೊಂದಿಗೆ ಬದಲಾಯಿಸಲಾಯಿತು.<ref>{{Cite web |last=Research |first=Jeweller |date=2021-12-26 |title=Tiffany & Co. problems continue: French-US rivalry causes confusion |url=https://www.jewellermagazine.com/Article/10288/Tiffany-Co-problems-continue-French-US-rivalry-causes-confusion |url-status=live |archive-url=https://web.archive.org/web/20220515223758/https://www.jewellermagazine.com/Article/10288/Tiffany-Co-problems-continue-French-US-rivalry-causes-confusion |archive-date=May 15, 2022 |access-date=2022-05-29 |website=jewellermagazine.com}}</ref><ref name=":1">{{Cite news |last=Kapner |first=Suzanne |date=2021-12-23 |title=Tiffany's New French Owner Brings a Makeover—and a Culture Clash |language=en-US |work=Wall Street Journal |url=https://www.wsj.com/articles/tiffanys-new-french-owner-brings-a-makeoverand-a-culture-clash-11640264191 |url-status=live |access-date=2022-05-29 |archive-url=https://web.archive.org/web/20220529180317/https://www.wsj.com/articles/tiffanys-new-french-owner-brings-a-makeoverand-a-culture-clash-11640264191 |archive-date=May 29, 2022 |issn=0099-9660}}</ref> ಎಲ್ವಿಎಂಎಚ್ನ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರ ಮಗ ಅಲೆಕ್ಸಾಂಡ್ರೆ ಅರ್ನಾಲ್ಟ್ಗೆ ಕಾರ್ಯನಿರ್ವಾಹಕ ಉಪಾಧ್ಯಕ್ಷರ ಪಾತ್ರವನ್ನು ನೀಡಲಾಯಿತು.<ref>{{Cite news |date=2021-01-07 |title=LVMH gives Tiffany a makeover, promotes Arnault scion after $16 billion deal |language=en |work=Reuters |url=https://www.reuters.com/article/us-tiffany-m-a-lvmh-idUSKBN29C1SM |url-status=live |access-date=2022-05-30 |archive-url=https://web.archive.org/web/20220530221452/https://www.reuters.com/article/us-tiffany-m-a-lvmh-idUSKBN29C1SM |archive-date=May 30, 2022}}</ref>
ಎಲ್ವಿಎಂಎಚ್ ಸಮೂಹದ ಯೋಜನೆಗಳು [[ಯುರೋಪ್]] ಮತ್ತು [[ಚೀನಿ ಜನರ ಗಣರಾಜ್ಯ|ಚೀನಾದಲ್ಲಿ]] ಟಿಫಾನಿ & ಕಂಪನಿಯ ಅಸ್ತಿತ್ವವನ್ನು ವಿಸ್ತರಿಸುವುದನ್ನು ಒಳಗೊಂಡಿವೆ.<ref name=":1"/><ref>{{Cite web |last=Roden |first=Arabella |date=2021-02-02 |title=LVMH reveals new strategy for Tiffany & Co. following management shake-up |url=https://www.jewellermagazine.com/Article/9384/LVMH-reveals-new-strategy-for-Tiffany-Co-following-management-shake-up |url-status=live |archive-url=https://web.archive.org/web/20220529180316/https://www.jewellermagazine.com/Article/9384/LVMH-reveals-new-strategy-for-Tiffany-Co-following-management-shake-up |archive-date=May 29, 2022 |access-date=2022-05-29 |website=jewellermagazine.com}}</ref>
== ಮಳಿಗೆಗಳು ==
[[ಚಿತ್ರ:Tiffany_&_Company's_flagship_store_interior_2016.jpg|thumb|ಟಿಫಾನಿಯ ಪ್ರಮುಖ ಅಂಗಡಿಯ ಒಳಾಂಗಣ.]]
[[ಚಿತ್ರ:Tiffany_&_Co_Phipps.jpg|thumb|ಜಾರ್ಜಿಯಾದ [[ಅಟ್ಲಾಂಟಾ, ಜಾರ್ಜಿಯಾ|ಅಟ್ಲಾಂಟಾದಲ್ಲಿರುವ]] ಫಿಪ್ಸ್ ಪ್ಲಾಜಾದಲ್ಲಿ ಟಿಫಾನಿ & ಕಂಪನಿ.]]
೧೯೪೦ ರಿಂದ, ಟಿಫಾನಿಯ ಪ್ರಮುಖ ಅಂಗಡಿಯು ನ್ಯೂಯಾರ್ಕ್ ನಗರದ [[ಮ್ಯಾನ್ಹ್ಯಾಟನ್|ಮ್ಯಾನ್ಹ್ಯಾಟನ್ನಲ್ಲಿರುವ]] ಫಿಫ್ತ್ ಅವೆನ್ಯೂ ಮತ್ತು ೫೭ ನೇ ಬೀದಿಯ ಮೂಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಯಗೊಳಿಸಿದ ಗ್ರಾನೈಟ್ ಹೊರಭಾಗವು ಕಿಟಕಿ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ಅಂಗಡಿಯು [[ಆಡ್ರಿ ಹೆಪ್ಬರ್ನ್|ಆಡ್ರೆ ಹೆಪ್ಬರ್ನ್]] ನಟಿಸಿದ ''ಬ್ರೇಕ್ಫಾಸ್ಟ್ ಅಟ್ ಟಿಫಾನಿ'ಸ್'' ಮತ್ತು [[ರೀಸ್ ವಿದರ್ಸ್ಪೂನ್|ರೀಸ್ ವಿದರ್ಸ್ಪೂನ್]] ನಟಿಸಿದ ''ಸ್ವೀಟ್ ಹೋಮ್ ಅಲಬಾಮಾ'' ಸೇರಿದಂತೆ ಹಲವಾರು ಚಲನಚಿತ್ರಗಳಿಗೆ ಸ್ಥಳವಾಗಿದೆ. ೨೦೧೯ ರಲ್ಲಿ ಪ್ರಾರಂಭವಾದ ಈ ಅಂಗಡಿಯು ವ್ಯಾಪಕವಾದ ನವೀಕರಣಕ್ಕೆ ಒಳಗಾಯಿತು ನಂತರ ೨೦೨೩ ರಲ್ಲಿ ಮುಕ್ತಾಯಗೊಂಡಿತು ಮತ್ತು ಏಪ್ರಿಲ್ ೨೭ ರಂದು ಸಾರ್ವಜನಿಕರಿಗೆ ಪುನಃ ತೆರೆಯಲಾಯಿತು. ಈ ಯೋಜನೆಯನ್ನು ಅಮೆರಿಕದ ವಾಸ್ತುಶಿಲ್ಪಿ ಪೀಟರ್ ಮರಿನೋ ವಿನ್ಯಾಸಗೊಳಿಸಿದ್ದಾರೆ.<ref>{{Cite web |last=Martin |first=Hannah |date=2023-07-06 |title=Peter Marino Conjures a Private Paradise Atop Tiffany & Co.’s Revamped Manhattan Flagship |url=https://www.architecturaldigest.com/story/peter-marino-conjures-a-private-paradise-atop-tiffany-and-cos-revamped-manhattan-flagship |access-date=2024-04-29 |website=Architectural Digest |language=en}}</ref>
೩೭ ನೇ ಬೀದಿಯಲ್ಲಿರುವ ಹಿಂದಿನ ಟಿಫಾನಿ ಮತ್ತು ಕಂಪನಿ ಕಟ್ಟಡವು ಯು.ಎಸ್.ನ ಐತಿಹಾಸಿಕ ಸ್ಥಳಗಳ ರಾಷ್ಟ್ರೀಯ ದಾಖಲೆಯಲ್ಲಿದೆ.<ref>{{Cite web |last=Holly Hayes |date=1978-06-02 |title=Tiffany and Company Building - New York, New York |url=http://gohistoric.com/places/350605 |url-status=live |archive-url=https://web.archive.org/web/20140911212816/http://gohistoric.com/places/350605 |archive-date=September 11, 2014 |access-date=2015-08-01 |publisher=Gohistoric.com}}</ref>
ಫ್ರಾನ್ಸ್ನಲ್ಲಿ, ಟಿಫಾನಿ ಅಂಗಡಿಗಳು ರೂ ಡೆ ಲಾ ಪೈಕ್ಸ್ನಲ್ಲಿವೆ ಮತ್ತು ಅವೆನ್ಯೂ ಡೆಸ್ ಚಾಂಪ್ಸ್ ಎಲಿಸೀಸ್ (ಅತಿದೊಡ್ಡ ಯುರೋಪಿಯನ್ ಅಂಗಡಿ) ಪ್ಯಾರೀಸ್ನಲ್ಲಿದೆ.<ref>{{Cite news |date=2012-11-05 |title=Le joaillier américain Tiffany arrive sur les Champs-Elysées |language=fr |work=Le Monde.fr |url=http://www.lemonde.fr/economie/article/2012/11/05/le-joaillier-americain-tiffany-arrive-sur-les-champs-elysees_1785916_3234.html |url-status=live |access-date=2017-11-26 |archive-url=https://web.archive.org/web/20171201033650/http://www.lemonde.fr/economie/article/2012/11/05/le-joaillier-americain-tiffany-arrive-sur-les-champs-elysees_1785916_3234.html |archive-date=December 1, 2017 |issn=1950-6244}}</ref>
ಆಸ್ಟ್ರೇಲಿಯಾದಲ್ಲಿ, ಟಿಫಾನಿಯ ಪ್ರಮುಖ ಅಂಗಡಿಯು ಮೆಲ್ಬೋರ್ನ್ನ ಕಾಲಿನ್ಸ್ ಸ್ಟ್ರೀಟ್ನಲ್ಲಿದೆ. ಇದನ್ನು ಮೊದಲು ೧೯೯೬ ರಲ್ಲಿ ಸ್ಥಾಪಿಸಲಾಯಿತು.<ref>{{Cite web |date=2011-08-23 |title=Tiffany is out of the box |url=https://www.heraldsun.com.au/lifestyle/fashion/tiffany-co-reopens-in-collins-street-melbourne/news-story/dff99481d6415e59b3d79522162dcfd7 |url-status=live |archive-url=https://web.archive.org/web/20190714062519/https://www.heraldsun.com.au/lifestyle/fashion/tiffany-co-reopens-in-collins-street-melbourne/news-story/dff99481d6415e59b3d79522162dcfd7 |archive-date=July 14, 2019 |access-date=2019-07-14 |website=www.heraldsun.com.au |language=en}}</ref> ಟಿಫಾನಿ ಆಸ್ಟ್ರೇಲಿಯಾದಲ್ಲಿ ಇನ್ನೂ ಎಂಟು ಮಳಿಗೆಗಳನ್ನು ತೆರೆದಿದೆ. ಇದು ಮೆಲ್ಬೋರ್ನ್, ಸಿಡ್ನಿ, ಬ್ರಿಸ್ಬೇನ್, ಪರ್ತ್, ಅಡಿಲೇಡ್ ಮತ್ತು ಗೋಲ್ಡ್ ಕೋಸ್ಟ್ನಲ್ಲಿದೆ.<ref>{{Cite web |title=Tiffany Store Locations - Australia |url=https://www.tiffany.com.au/jewelry-stores/store-list/australia/ |url-status=live |archive-url=https://web.archive.org/web/20230303082419/https://www.tiffany.com.au/jewelry-stores/store-list/australia/ |archive-date=March 3, 2023 |access-date=February 25, 2024 |website=Tiffany & Co.}}</ref>
ಮಾರ್ಚ್ ೮, ೨೦೦೧ ರಂದು, ಟಿಫಾನಿ ತನ್ನ ಮೊದಲ ಲ್ಯಾಟಿನ್ ಅಮೇರಿಕನ್ ಅಂಗಡಿಯನ್ನು [[ಬ್ರೆಜಿಲ್|ಬ್ರೆಜಿಲ್ನ]] [[ಸಾವೊ ಪಾಲೊ|ಸಾವೊ ಪಾಲೊದಲ್ಲಿ]] ಪ್ರಾರಂಭಿಸಿತು. ಇದು ಇಗ್ವಾಟೆಮಿ ಸಾವೊ ಪಾಲೊ ಶಾಪಿಂಗ್ ಸೆಂಟರ್ನಲ್ಲಿದೆ.<ref>{{Cite web |title=Tiffany abre em SP primeira filial na América Latina |url=http://www.estadao.com.br/arquivo/arteelazer/2001/not20010509p4667.htm |url-status=live |archive-url=https://archive.today/20151204223859/https://www.westfield.com.au/bondijunction/stores/all-stores/tiffany-and-co/50213 |archive-date=December 4, 2015 |access-date=2010-07-26 |publisher=Estadão |language=pt}}</ref> ಕಂಪನಿಯು ನಗರದಲ್ಲಿ ಎರಡನೇ ಮಳಿಗೆಯನ್ನು ಅಕ್ಟೋಬರ್ ೨೦, ೨೦೦೩ ರಂದು ಪ್ರಸಿದ್ಧ ಆಸ್ಕರ್ ಫ್ರೈರ್ ಸ್ಟ್ರೀಟ್ ಬಳಿ ತೆರೆಯಿತು.<ref>{{Cite web |title=Quem entra na Tiffany acaba se apaixonando |url=http://www.terra.com.br/istoegente/222/entrevista/index.htm |url-status=dead |archive-url=https://archive.today/20120911065831/http://www.terra.com.br/istoegente/222/entrevista/index.htm |archive-date=September 11, 2012 |access-date=2010-07-26 |publisher=Terra |language=pt}}</ref>
೨೦೦೪ ರಲ್ಲಿ, ಟಿಫಾನಿ "ಇರಿಡೆಸ್ಸೆ" ಎಂಬ ಮುತ್ತು-ಮಾತ್ರ ಆಭರಣಗಳಿಗೆ ಮೀಸಲಾಗಿರುವ ಮಳಿಗೆಗಳ ಸರಣಿಯನ್ನು ರಚಿಸಿತು. ಕಂಪನಿಯು [[ಫ್ಲಾರಿಡ|ಫ್ಲೋರಿಡಾ]], ನ್ಯೂಜೆರ್ಸಿ, [[ನ್ಯೂ ಯಾರ್ಕ್|ನ್ಯೂಯಾರ್ಕ್]], ಪೆನ್ಸಿಲ್ವೇನಿಯಾ, [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯಾ]], ಇಲಿನಾಯ್ಸ್, ಮ್ಯಾಸಚೂಸೆಟ್ಸ್ ಮತ್ತು ವರ್ಜೀನಿಯಾದಲ್ಲಿ ೧೬ ಮಳಿಗೆಗಳನ್ನು ನಿರ್ವಹಿಸಿತು. ಆದಾಗ್ಯೂ, ಈ ಸರಪಳಿಯು ಅದರ ಸ್ಥಾಪನೆಯ ನಂತರ ನಷ್ಟದಲ್ಲಿ ಕಾರ್ಯನಿರ್ವಹಿಸಿತು ಮತ್ತು ಕಂಪನಿಯು ೨೦೦೯ ರ ಆರಂಭದಲ್ಲಿ ಈ ಪರಿಕಲ್ಪನೆಯ ಬಗ್ಗೆ ತನ್ನ ನಿರಂತರ ನಂಬಿಕೆಯ ಹೊರತಾಗಿಯೂ, ೨೦೦೭-೨೦೦೮ ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಇರಿಡೆಸ್ಸೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು.<ref>{{Cite news |last=Cheng |first=Andria |date=March 10, 2009 |title=Tiffany plans to shut Iridesse pearl-jewelry chain |work=[[Marketwatch]] |url=https://www.marketwatch.com/story/tiffany-plans-shut-iridesse-jewelry-chain |url-status=live |access-date=February 3, 2019 |archive-url=https://web.archive.org/web/20190204122323/https://www.marketwatch.com/story/tiffany-plans-shut-iridesse-jewelry-chain |archive-date=February 4, 2019}}</ref>
೨೦೧೮ ರ ಹೊತ್ತಿಗೆ, ಟಿಫಾನಿ ಯುಎಸ್ ನಲ್ಲಿ ೯೩ ಮಳಿಗೆಗಳನ್ನು ಮತ್ತು ವಿಶ್ವಾದ್ಯಂತ ೩೨೧ ಮಳಿಗೆಗಳನ್ನು ನಿರ್ವಹಿಸುತ್ತಿದೆ, ಇದರಲ್ಲಿ (೩೧ ಜನವರಿ ೨೦೧೭ ರಂತೆ) ಜಪಾನ್ನಲ್ಲಿ ೫೫ ಸ್ಥಳಗಳು ಮತ್ತು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ೮೫ ಸ್ಥಳಗಳು ಸೇರಿವೆ. ೨೦೧೮ ರಲ್ಲಿ ನಿವ್ವಳ ಮಾರಾಟವು ಯುಎಸ್ $ ೪.೪೪ ಬಿಲಿಯನ್ ಆಗಿತ್ತು.<ref name="statista_857587"/><ref>{{Cite web |date=29 November 2019 |title=Tiffany & Co.TIF |url=https://www.reuters.com/companies/TIF |url-status=dead |archive-url=https://web.archive.org/web/20191106223300/https://www.reuters.com/companies/TIF |archive-date=November 6, 2019 |access-date=30 November 2019 |publisher=Reuters |quote=the Company's segments include Americas, Asia-Pacific, Japan, Europe and Other}}</ref>
ಡಿಸೆಂಬರ್ ೨೦೨೩ ರಲ್ಲಿ, ಟಿಫಾನಿ ಶಾಂಘೈ ಟೈಕೂ ಲಿ ಕಿಯಾಂಟನ್ನಲ್ಲಿ [[:en:MVRDV|ಎಂವಿಆರ್ಡಿವಿ(MVRDV]]) ವಿನ್ಯಾಸಗೊಳಿಸಿದ ಮುಂಭಾಗದೊಂದಿಗೆ ಅಂಗಡಿಯನ್ನು ತೆರೆಯಿತು.<ref>{{Cite web |last=Fabris-Shi |first=Amy |date=2024-03-22 |title=Tiffany’s ‘Bird on a Pearl’ takes flight in Shanghai |url=https://jingdaily.com/posts/tiffany-bird-on-a-pearl-takes-flight-in-shanghai |access-date=2024-03-22 |website=Jing Daily |language=en |archive-date=2024-03-22 |archive-url=https://web.archive.org/web/20240322094606/https://jingdaily.com/posts/tiffany-bird-on-a-pearl-takes-flight-in-shanghai |url-status=dead }}</ref> ಈ ಉದ್ಘಾಟನೆಯು ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಎರಡು ಕಂಪನಿಗಳ ನಡುವಿನ ಹಿಂದಿನ ಕೆಲಸವನ್ನು ಅನುಸರಿಸಿತು. 'ಎಂವಿಆರ್ಡಿವಿ'ಯು ಇದಕ್ಕಾಗಿ ಮರುಬಳಕೆಯ ಸಾಗರ ಪ್ಲಾಸ್ಟಿಕ್ ಅನ್ನು ಬಳಸಿಕೊಂಡು ೩-ಡಿ(3-D) ಮುದ್ರಿತ ಮುಂಭಾಗವನ್ನು ರಚಿಸಿತು.<ref>{{Cite web |last=Zeitoun |first=Lea |date=2023-10-17 |title=using ocean plastic, MVRDV sculpts 3D-printed screen around tiffany store in singapore |url=https://www.designboom.com/architecture/using-ocean-plastic-mvrdv-sculpts-3d-printed-screen-for-tiffany-store-singapore-changi-airport-10-17-2023/ |access-date=2024-04-29 |website=Designboom |language=en}}</ref>
ಏಪ್ರಿಲ್ ೨೦೨೪ ರಲ್ಲಿ, ಟಿಫಾನಿ & ಕಂಪೆನಿಯು ಬ್ರಿಸ್ಬೇನ್ನ ಕ್ವೀನ್ಸ್ಪ್ಲಾಜಾದಲ್ಲಿ ತಮ್ಮ ಹೊಸ ಅಂಗಡಿಯನ್ನು ತೆರೆಯಿತು.<ref>{{Cite web |title=Tiffany & Co. in Brisbane, and Melanie Grant’s NZ-skincare partnership: here’s what you missed in fashion this week |url=https://www.russh.com/fashoin-moments-22-mar-2024/ |access-date=26 April 2024 |website=Rushh}}</ref>
== ಜಾಹೀರಾತು ==
[[ಚಿತ್ರ:HK_Central_Landmark_Mall_Tiffany_&_Co_a.jpg|right|thumb|ಸೆಂಟ್ರಲ್, ಹಾಂಗ್ ಕಾಂಗ್ನಲ್ಲಿ 'ಟಿಫಾನಿ & ಕಂಪನಿ']]
೧೮೪೫ ರಲ್ಲಿ "ಬ್ಲೂ ಬುಕ್" ಟಿಫಾನಿ ಕ್ಯಾಟಲಾಗ್ನ ಆರಂಭಿಕ ಪ್ರಕಟಣೆಯ ನಂತರ, ಟಿಫಾನಿ ತನ್ನ ಜಾಹೀರಾತು ತಂತ್ರದ ಭಾಗವಾಗಿ ಅದರ ಕ್ಯಾಟಲಾಗ್ ಅನ್ನು ಬಳಸುವುದನ್ನು ಮುಂದುವರೆಸಿತು. ಪೂರ್ಣ ಬಣ್ಣದಲ್ಲಿ ಮುದ್ರಿಸಲಾದ ಮೊದಲ ಕ್ಯಾಟಲಾಗ್ಗಳಲ್ಲಿ ಒಂದಾದ ಟಿಫಾನಿ ಕ್ಯಾಟಲಾಗ್ ೧೯೭೨ ರವರೆಗೆ ಮುಕ್ತವಾಗಿತ್ತು. ಟಿಫಾನಿಯ ಮೇಲ್-ಆರ್ಡರ್ ಕ್ಯಾಟಲಾಗ್ಗಳು ೧೯೯೪ ರಲ್ಲಿ ೧೫ ದಶಲಕ್ಷ ಜನರನ್ನು ತಲುಪಿದವು. ಟಿಫಾನಿ ಪ್ರತಿ ವರ್ಷ ಕಾರ್ಪೊರೇಟ್-ಗಿಫ್ಟ್ ಕ್ಯಾಟಲಾಗ್ ಅನ್ನು ಸಹ ಉತ್ಪಾದಿಸುತ್ತದೆ ಮತ್ತು ಕಾರ್ಪೊರೇಟ್ ಗ್ರಾಹಕರು ಟಿಫಾನಿ ಉತ್ಪನ್ನಗಳನ್ನು [[ವಾಣಿಜ್ಯ(ವ್ಯಾಪಾರ)|ವ್ಯಾಪಾರ]] ಉಡುಗೊರೆ-ನೀಡುವಿಕೆ, ಉದ್ಯೋಗಿ-ಸೇವೆ ಮತ್ತು ಸಾಧನೆ-ಮನ್ನಣೆ ಪ್ರಶಸ್ತಿಗಳು ಮತ್ತು ಗ್ರಾಹಕರ ಪ್ರೋತ್ಸಾಹಕ್ಕಾಗಿ ಟಿಫಾನಿ ಉತ್ಪನ್ನಗಳನ್ನು ಖರೀದಿಸುತ್ತಾರೆ. ೨೦೧೩ ರ ಹೊತ್ತಿಗೆ ಟಿಫಾನಿ ಇನ್ನೂ ಚಂದಾದಾರರಿಗಾಗಿ ಒಂದು ಕ್ಯಾಟಲಾಗ್ ಅನ್ನು ಉತ್ಪಾದಿಸುತ್ತದೆ. ಆದರೆ ಅದರ ಜಾಹೀರಾತು ತಂತ್ರವು ಇನ್ನು ಮುಂದೆ ಪ್ರಾಥಮಿಕವಾಗಿ ಅದರ ಕ್ಯಾಟಲಾಗ್ನಲ್ಲಿ ಪ್ರಾಥಮಿಕವಾಗಿ ಕೇಂದ್ರೀಕರಿಸುವುದಿಲ್ಲ.<ref name="fundinguniverse.com"/>
ಮೇಲ್-ಆರ್ಡರ್ ಕ್ಯಾಟಲಾಗ್ ಜೊತೆಗೆ, ಟಿಫಾನಿ ತನ್ನ ಜಾಹೀರಾತುಗಳನ್ನು ಬಸ್ ನಿಲ್ದಾಣಗಳಲ್ಲಿ, ನಿಯತಕಾಲಿಕೆಗಳು ಮತ್ತು ಪತ್ರಿಕೆಗಳಲ್ಲಿ ಮತ್ತು ಆನ್ಲೈನ್ನಲ್ಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಪ್ರದರ್ಶಿಸುತ್ತದೆ. ಹೊಸ ತಂತ್ರಜ್ಞಾನಗಳ ಆಗಮನದೊಂದಿಗೆ, ಟಿಫಾನಿ ಐಫೋನ್ಗಾಗಿ ನ್ಯೂಯಾರ್ಕ್ ಟೈಮ್ಸ್ನ [[ಮೊಬೈಲ್ ಅಪ್ಲಿಕೇಶನ್|ಮೊಬೈಲ್ ಅಪ್ಲಿಕೇಶನ್ನಲ್ಲಿ]] ಬ್ಯಾನರ್ ಜಾಹೀರಾತುಗಳನ್ನು ಇರಿಸಿತು ಮತ್ತು ಅದರ ಮೂಲಕ ಬಳಕೆದಾರರು ಟಿಫಾನಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು.<ref>{{Cite web |date=2011-08-01 |title=Tiffany & Company continues app push with banner ads - Luxury Daily - Mobile |url=http://www.luxurydaily.com/tiffany-co-continues-app-push-with-banner-ads/ |url-status=live |archive-url=https://archive.today/20120905235847/http://www.luxurydaily.com/tiffany-co-continues-app-push-with-banner-ads/ |archive-date=September 5, 2012 |access-date=2013-02-18 |publisher=Luxury Daily}}</ref><ref>{{Cite web |date=2011-10-22 |title=Tiffany & Co. Engagement Ring Finder for iPhone, iPod touch, and iPad on the iTunes App Store |url=https://itunes.apple.com/us/app/tiffany-co.-engagement-ring/id375427126?mt=8 |url-status=live |archive-url=https://archive.today/20151204230715/https://itunes.apple.com/us/app/tiffany-co.-engagement-ring/id375427126?mt=8 |archive-date=December 4, 2015 |access-date=2013-02-18 |publisher=Itunes.apple.com}}</ref> ಜನವರಿ ೨೦೧೫ ರಲ್ಲಿ, ಟಿಫಾನಿ ತನ್ನ ಮೊದಲ ಸಲಿಂಗ ದಂಪತಿ ಅಭಿಯಾನವನ್ನು ಪ್ರಾರಂಭಿಸಿತು.
೨೦೧೭ ರಲ್ಲಿ, ಕಂಪನಿಯ ಹಾರ್ಡ್ವೇರ್ ಸಂಗ್ರಹವನ್ನು ಉತ್ತೇಜಿಸುವ ಜಾಹೀರಾತು ಪ್ರಚಾರಕ್ಕಾಗಿ ಟಿಫಾನಿ ಅಮೆರಿಕನ್ ಪಾಪ್ ತಾರೆ [[ಲೇಡಿ ಗಾಗಾ]] ಅವರೊಂದಿಗೆ ಪಾಲುದಾರಿಕೆಯನ್ನು ಹೊಂದಿತ್ತು. [[ಲೇಡಿ ಗಾಗಾ|ಲೇಡಿ ಗಾಗಾರ]] ಸೂಪರ್ ಬೌಲ್ ಎಲ್ಐ ಅರ್ಧಾವಧಿಯ ಪ್ರದರ್ಶನದ ಮೊದಲು ಈ ಪ್ರಕಟಣೆಯು ಸೂಪರ್ ಬೌಲ್ ಜಾಹೀರಾತಾಗಿ ಬಂದಿತು.<ref>{{Cite web |last=Remsen |first=Nick |date=September 15, 2019 |title=Tiffany Creates Another Reason for Men to Shop |url=https://www.nytimes.com/2019/09/15/fashion/jewelry-tiffany-mens-reed-krakoff.html |url-status=live |archive-url=https://web.archive.org/web/20200108010436/https://www.nytimes.com/2019/09/15/fashion/jewelry-tiffany-mens-reed-krakoff.html |archive-date=January 8, 2020 |access-date=May 1, 2020 |website=The New York Times}}</ref>
ಮೇ ೨೦೧೮ ರಲ್ಲಿ, ಟಿಫಾನಿ ಅವರ "ಬಿಲೀವ್ ಇನ್ ಡ್ರೀಮ್ಸ್" ಅಭಿಯಾನ ಮತ್ತು ಪೇಪರ್ ಫ್ಲವರ್ಸ್ ಸಂಗ್ರಹದ ಬಿಡುಗಡೆಗಾಗಿ ಟಿಫಾನಿಯು ಸ್ಪಾಟಿಫೈ ಜೊತೆ ಪಾಲುದಾರಿಕೆ ಹೊಂದಿತ್ತು. ಈ ಸಂದರ್ಭದಲ್ಲಿಎಲ್ಲೆ ಫಾನ್ನಿಂಗ್ ಮತ್ತು ರಾಪರ್ ಎ$ಎಪಿ ಫೆರ್ಗ್ ಅವರ "ಮೂನ್ ರಿವರ್" ಹಾಡಿನ ಮುಖಪುಟವನ್ನು ಸಂಗೀತ ಸ್ಟ್ರೀಮಿಂಗ್ ಸೇವೆಯಲ್ಲಿ ಬಿಡುಗಡೆ ಮಾಡಿದರು.<ref>{{Cite web |last=Hargrove |first=Channing |date=May 3, 2018 |title=Elle Fanning & A$AP Ferg Remix Breakfast At Tiffany's "Moon River" |url=https://www.refinery29.com/en-us/2018/05/198198/asap-ferg-elle-fanning-moon-river-remix |url-status=live |archive-url=https://web.archive.org/web/20200622142554/https://www.refinery29.com/en-us/2018/05/198198/asap-ferg-elle-fanning-moon-river-remix |archive-date=June 22, 2020 |access-date=May 1, 2020 |website=Refinery29}}</ref>
೨೦೧೯ ರಲ್ಲಿ, ಟಿಫಾನಿ ಕಂಪನಿಯ ಸ್ಪ್ರಿಂಗ್ ಫ್ಯಾಷನ್ ಲೈನ್ ಅನ್ನು ಉತ್ತೇಜಿಸಲು ಅಮೇರಿಕನ್ ಸೆಲೆಬ್ರಿಟಿ ಕೆಂಡಾಲ್ ಜೆನ್ನರ್ ಅವರೊಂದಿಗೆ ಪಾಲುದಾರಿಕೆ ಹೊಂದಿದ್ದರು.<ref>{{Cite web |last=Birmingham |first=Kirsten |date=April 17, 2019 |title=A Behind-the-Scenes Look at Kendall Jenner's Stunning Spring 2019 Tiffany & Co. Campaign |url=https://www.usmagazine.com/stylish/pictures/kendall-jenner-stars-in-tiffany-co-s-spring-2019-campaign-pics/robed-and-ready/ |url-status=live |archive-url=https://web.archive.org/web/20200809135018/https://www.usmagazine.com/stylish/pictures/kendall-jenner-stars-in-tiffany-co-s-spring-2019-campaign-pics/robed-and-ready/ |archive-date=August 9, 2020 |access-date=May 1, 2020 |website=US Magazine}}</ref>
೨೦೨೨ ರಲ್ಲಿ, ಟಿಫಾನಿ ತನ್ನ ಮೂಲ "ಲವ್ ಮಿ" ಪರಿಕಲ್ಪನೆಯನ್ನು ಉಳಿಸಿಕೊಳ್ಳುವಾಗ ಕರ್ಟಿಸ್ ಕುಲಿಗ್ ಅವರೊಂದಿಗೆ ಪಾಲುದಾರಿಕೆ ಹೊಂದಿದ್ದ ಕುಲ್ಲಿಗ್, ಟಿಫಾನಿ ಹಾರ್ಡ್ವೇರ್, ಟಿಫಾನಿ ನಾಟ್ ಮತ್ತು ಟಿಫಾನಿ ಟಿ ಸಂಗ್ರಹಗಳ ಜೊತೆಗೆ ಪ್ರದರ್ಶಿಸಲು "ಡೇರ್ ಮಿ", "ನೋ ಮಿ" ಮತ್ತು "ಕಿಸ್ ಮಿ" ನಂತಹ ಇತರ ಪ್ರೇಮ-ವಿಷಯದ ಸಂದೇಶಗಳನ್ನು ಸಹ ರಚಿಸಿದರು.<ref>{{Cite web |date=2022-01-20 |title=Dazzle Your Darling With Tiffany & Co. For Valentine's Day |url=https://harpersbazaar.com.au/tiffany-and-co-love-me-valentines-day-campaign/ |url-status=live |archive-url=https://web.archive.org/web/20220526105741/https://harpersbazaar.com.au/tiffany-and-co-love-me-valentines-day-campaign/ |archive-date=May 26, 2022 |access-date=2022-05-15 |website=Harper's Bazaar Australia |language=en-US}}</ref>
== ಉತ್ಪನ್ನಗಳು ==
=== ವಜ್ರಗಳು ===
[[ಚಿತ್ರ:Tiffany_Diamond2.jpg|thumb|ಟಿಫಾನಿ ಹಳದಿ ವಜ್ರ]]
ಟಿಫಾನಿ ತನ್ನ ಐಷಾರಾಮಿ ಸರಕುಗಳಿಗೆ, ವಿಶೇಷವಾಗಿ ವಜ್ರ ಮತ್ತು ಸ್ಟರ್ಲಿಂಗ್ ಬೆಳ್ಳಿಯ ಆಭರಣಗಳಿಗೆ ಹೆಸರುವಾಸಿಯಾಗಿದೆ.<ref>{{Cite web |last=Agrawal |first=A. J. |title=How Tiffany & Co. Built A Marketing Empire |url=https://www.forbes.com/sites/ajagrawal/2016/01/04/how-tiffany-and-co-built-a-marketing-empire/ |url-status=live |archive-url=https://web.archive.org/web/20200809133124/https://www.forbes.com/sites/ajagrawal/2016/01/04/how-tiffany-and-co-built-a-marketing-empire/ |archive-date=August 9, 2020 |access-date=2019-03-24 |website=Forbes |language=en}}</ref><ref>{{Cite news |last=King |first=Steve |date=2016-11-18 |title=Tiffany & Co: leading the way in ethically produced jewellery |language=en-GB |work=The Telegraph |url=https://www.telegraph.co.uk/luxury/jewellery/tiffany--co-leading-the-way-in-ethically-produced-jewellery/ |url-status=live |access-date=2019-03-24 |archive-url=https://web.archive.org/web/20201124165132/https://www.telegraph.co.uk/luxury/jewellery/tiffany--co-leading-the-way-in-ethically-produced-jewellery/ |archive-date=November 24, 2020 |issn=0307-1235}}</ref><ref>{{Cite news |date=2016-05-26 |title=Tiffany's 'old-world luxury' fails to charm millennials |language=en |work=Reuters |url=https://www.reuters.com/article/us-tiffany-results-competition-idUSKCN0YH2IV |url-status=live |access-date=2019-03-24 |archive-url=https://web.archive.org/web/20200809115955/https://www.reuters.com/article/us-tiffany-results-competition-idUSKCN0YH2IV |archive-date=August 9, 2020}}</ref><ref>{{Cite web |date=Feb 16, 2015 |title=The Anglo Effect: U.S. and British Luxury Brands Gain Ground With China's Rich |url=https://jingdaily.com/the-anglo-effect-u-s-and-british-luxury-brands-gain-ground-with-chinas-rich/ |url-status=live |archive-url=https://web.archive.org/web/20201108134218/https://jingdaily.com/the-anglo-effect-u-s-and-british-luxury-brands-gain-ground-with-chinas-rich/ |archive-date=November 8, 2020 |access-date=2020-02-04 |website=Jing Daily}}</ref>
ಟಿಫಾನಿಯ ರತ್ನಶಾಸ್ತ್ರಜ್ಞರಾದ ''ಜಾರ್ಜ್ ಫ್ರೆಡೆರಿಕ್ ಕುಂಜ್'', ಮೆಟ್ರಿಕ್ ಕ್ಯಾರೆಟ್ ಅನ್ನು ರತ್ನಗಳಿಗೆ ತೂಕದ ಮಾನದಂಡವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಟಿಫಾನಿ ಹಳದಿ ವಜ್ರವನ್ನು(೧೨೮.೫೪ ಕ್ಯಾರೆಟ್ (೨೫.೭೦೮ ಗ್ರಾಂ)) ಸಾಮಾನ್ಯವಾಗಿ ನ್ಯೂಯಾರ್ಕ್ ನಗರದ ಪ್ರಮುಖ ಅಂಗಡಿಯಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.<ref>{{Cite web |date=February 9, 2014 |title=Breakfast at Tiffany's in Beverly Hills |url=https://socialbilitty.com/2014/02/breakfast-at-tiffanys-beverly-hills/ |url-status=dead |archive-url=https://web.archive.org/web/20220321120450/https://socialbilitty.com/2014/02/breakfast-at-tiffanys-beverly-hills/ |archive-date=March 21, 2022 |access-date=February 9, 2014}}</ref>
೧೮೮೬ ರಲ್ಲಿ, ಸಂಸ್ಥಾಪಕ ಚಾರ್ಲ್ಸ್ ಟಿಫಾನಿ ಅವರು ಟಿಫಾನಿ ಸೆಟ್ಟಿಂಗ್ ರಿಂಗ್ ವಿನ್ಯಾಸವನ್ನು ರೂಪಿಸಿದರು. ಇದರಲ್ಲಿ ವಜ್ರವನ್ನು ಉತ್ತಮವಾಗಿ ಎದ್ದು ಕಾಣುವ ಸಲುವಾಗಿ ಆರು ಪ್ರಾಂಗ್ಗಳು ಬ್ಯಾಂಡ್ನ ವಜ್ರವನ್ನು ಹಿಡಿದಿಟ್ಟುಕೊಳ್ಳುತ್ತವೆ.<ref>{{Cite web |last=Pantin |first=Laurel |date=December 16, 2019 |title=The Reason Most Engagement Rings Look the Way They Do |url=https://www.instyle.com/fashion/accessories/jewelry/history-of-tiffany-co |url-status=live |archive-url=https://web.archive.org/web/20191217030854/https://www.instyle.com/fashion/accessories/jewelry/history-of-tiffany-co |archive-date=December 17, 2019 |access-date=May 7, 2019 |website=InStyle}}</ref>
ಇದೇ ರೀತಿಯ ಇತರ ವಜ್ರದ ಚಿಲ್ಲರೆ ವ್ಯಾಪಾರಿಗಳಂತೆ, ಟಿಫಾನಿ ತನ್ನ ಮಳಿಗೆಗಳಿಂದ ಮಾರಾಟವಾಗುವ ವಜ್ರಗಳನ್ನು ಮರುಖರೀದಿ ಮಾಡುವುದರ ವಿರುದ್ಧ ಕಟ್ಟುನಿಟ್ಟಾದ ನೀತಿಯನ್ನು ಜಾರಿಗೆ ತರುತ್ತದೆ. ೧೯೭೮ ರಲ್ಲಿ, ನ್ಯೂಯಾರ್ಕ್ ನಗರದಲ್ಲಿ ಮಹಿಳೆಯೊಬ್ಬರು ಎರಡು ವರ್ಷಗಳ ಹಿಂದೆ ಟಿಫಾನಿಯಿಂದ $೧೦೦,೦೦೦ ಗೆ ಖರೀದಿಸಿದ ವಜ್ರದ ಉಂಗುರವನ್ನು ಮರಳಿ ಮಾರಾಟ ಮಾಡಲು ಪ್ರಯತ್ನಿಸಿದಾಗ ನಿರಾಕರಿಸಲಾಯಿತು. ೧೯೮೨ ರಲ್ಲಿ ''ದಿ ಅಟ್ಲಾಂಟಿಕ್'' ಪ್ರಕಟಣೆಗಾಗಿ ಬರೆಯುತ್ತಾ, ''ಎಡ್ವರ್ಡ್ ಜೇ ಎಪ್ಸ್ಟೀನ್'' ರವರು ಅಂತಹ ನೀತಿಯ ತಾರ್ಕಿಕತೆಯನ್ನು ಹೀಗೆ ವಿವರಿಸಿದರು:{{ನುಡಿಮುತ್ತು|ಚಿಲ್ಲರೆ ಆಭರಣಗಳು, ವಿಶೇಷವಾಗಿ ಪ್ರತಿಷ್ಠಿತ ಫಿಫ್ತ್ ಅವೆನ್ಯೂ ಮಳಿಗೆಗಳು, ಗ್ರಾಹಕರಿಂದ ವಜ್ರಗಳನ್ನು ಮರಳಿ ಖರೀದಿಸದಿರಲು ಬಯಸುತ್ತಾರೆ, ಏಕೆಂದರೆ ಅವರು ನೀಡುವ ಕೊಡುಗೆಯನ್ನು ಹಾಸ್ಯಾಸ್ಪದವಾಗಿ ಕಡಿಮೆ ಎಂದು ಪರಿಗಣಿಸಲಾಗುತ್ತದೆ... ಹೆಚ್ಚಿನ ಆಭರಣ ವ್ಯಾಪಾರಿಗಳು ಗ್ರಾಹಕರನ್ನು ಅವಮಾನಕರವೆಂದು ಪರಿಗಣಿಸಬಹುದಾದ ಕೊಡುಗೆಯನ್ನು ನೀಡದಿರಲು ಬಯಸುತ್ತಾರೆ ಮತ್ತು ವಜ್ರಗಳು ಮೌಲ್ಯವನ್ನು ಹೆಚ್ಚಿಸುತ್ತವೆ ಎಂಬ ವ್ಯಾಪಕವಾದ ಕಲ್ಪನೆಯನ್ನು ಕಡಿಮೆಗೊಳಿಸಬಹುದು. ಇದಲ್ಲದೆ, ಚಿಲ್ಲರೆ ವ್ಯಾಪಾರಿಗಳು ಸಾಮಾನ್ಯವಾಗಿ ತಮ್ಮ ವಜ್ರಗಳನ್ನು ಸಗಟು ವ್ಯಾಪಾರಿಗಳಿಂದ ರವಾನೆಯ ಮೇಲೆ ಸ್ವೀಕರಿಸುತ್ತಾರೆ ಮತ್ತು ಅವುಗಳನ್ನು ಮಾರಾಟ ಮಾಡುವವರೆಗೆ ಪಾವತಿಸಬೇಕಾಗಿಲ್ಲ. ಅವರು ಗ್ರಾಹಕರಿಂದ ವಜ್ರಗಳನ್ನು ಖರೀದಿಸಲು ತಮ್ಮ ಸ್ವಂತ ಹಣವನ್ನು ಸುಲಭವಾಗಿ ಅಪಾಯಕ್ಕೆ ತೆಗೆದುಕೊಳ್ಳುವುದಿಲ್ಲ. ಗ್ರಾಹಕರು ವಜ್ರಗಳಿಗಾಗಿ ಪಾವತಿಸಿದ ಮೊತ್ತದ ಒಂದು ಭಾಗವನ್ನು ನೀಡುವ ಬದಲು, ಚಿಲ್ಲರೆ ಆಭರಣ ವ್ಯಾಪಾರಿಗಳು ತಮ್ಮ ಗ್ರಾಹಕರಿಗೆ ವಜ್ರಗಳನ್ನು "ಚಿಲ್ಲರೆ" ಖರೀದಿಸುವಲ್ಲಿ ಪರಿಣತಿ ಹೊಂದಿರುವ ಸಂಸ್ಥೆಗಳಿಗೆ ಬಹುತೇಕ ಏಕರೂಪವಾಗಿ ಶಿಫಾರಸು ಮಾಡುತ್ತಾರೆ.<ref>{{cite news|title= Have You Ever Tried to Sell a Diamond?|url= https://www.theatlantic.com/magazine/archive/1982/02/have-you-ever-tried-to-sell-a-diamond/304575/?single_page=true|access-date= 15 July 2013|newspaper= The Atlantic|date= 1 February 1982|author= Edward Jay Epstein|archive-date= March 5, 2017|archive-url= https://web.archive.org/web/20170305070554/https://www.theatlantic.com/magazine/archive/1982/02/have-you-ever-tried-to-sell-a-diamond/304575/?single_page=true|url-status= live}}</ref>}}೨೦೧೯ ರಲ್ಲಿ, ಟಿಫಾನಿಯ ಸಿಇಒ ಅಲೆಸ್ಸಾಂಡ್ರೊ ಬೊಗ್ಲಿಯೊಲೊರವರು ೨೦೨೦ ರಲ್ಲಿ ಕಂಪನಿಯು ಹೊಸದಾಗಿ ಮೂಲದ ಮತ್ತು ಪ್ರತ್ಯೇಕವಾಗಿ ನೋಂದಾಯಿತ ವಜ್ರಗಳ ಮೂಲದ ದೇಶ ಅಥವಾ ಪ್ರದೇಶದ ಬಗ್ಗೆ ಪಾರದರ್ಶಕವಾಗಿರುತ್ತದೆ ಎಂದು ಘೋಷಿಸಿದರು.<ref>{{Cite web |last=Bhasin |first=Kim |last2=Chandra |first2=Emma |date=January 9, 2019 |title=Tiffany CEO Says It's His 'Duty' to Reveal Diamonds' Provenance |url=https://www.bloomberg.com/news/articles/2019-01-09/tiffany-ceo-says-it-s-his-duty-to-reveal-diamonds-provenance |url-status=live |archive-url=https://web.archive.org/web/20200820122759/https://www.bloomberg.com/news/articles/2019-01-09/tiffany-ceo-says-it-s-his-duty-to-reveal-diamonds-provenance |archive-date=August 20, 2020 |access-date=May 7, 2020 |website=Bloomberg}}</ref>
=== ಬಣ್ಣದ ರತ್ನದ ಕಲ್ಲುಗಳು ===
ಟಿಫಾನಿಯು ವೈವಿಧ್ಯಮಯ ಬಣ್ಣದ ರತ್ನದ ಕಲ್ಲುಗಳನ್ನು ಒಳಗೊಂಡಿರುವ ಆಭರಣಗಳನ್ನು ನೀಡುತ್ತದೆ. ರತ್ನಗಳು ಸೇರಿದಂತೆ ಟ್ಸಾವೊರೈಟ್, ಕುಂಜೈಟ್ ಮತ್ತು ಮೋರ್ಗಾನೈಟ್ಗಳನ್ನು ಜನಪ್ರಿಯಗೊಳಿಸುವಲ್ಲಿ ಪಾತ್ರವನ್ನು ವಹಿಸಿದೆ.<ref name="ICA">{{Cite web |title=Tsavorite Garnet |url=http://www.gemstone.org/gem-by-gem/english/tsavorite.html |url-status=dead |archive-url=https://web.archive.org/web/20080610182036/http://www.gemstone.org/gem-by-gem/english/tsavorite.html |archive-date=2008-06-10 |access-date=2015-08-01 |publisher=Gemstone.org}}</ref> ಫೆಬ್ರವರಿ ೨೦೧೫ ರಲ್ಲಿ ಟಿಫಾನಿಯ ವಿನ್ಯಾಸ ನಿರ್ದೇಶಕ ಫ್ರಾನ್ಸೆಸ್ಕಾ ಆಮ್ಫಿಥೆಟ್ರೋಫ್ರವರು ವಿನ್ಯಾಸಗೊಳಿಸಿದ ಮತ್ತು ೨೦೧೫ ರ ಅಕಾಡೆಮಿ ಪ್ರಶಸ್ತಿಗಳಲ್ಲಿ [[ಕೇಟ್ ಬ್ಲ್ಯಾಂಚೆಟ್ (Cate Blanchett)|ಕೇಟ್ ಬ್ಲ್ಯಾಂಚೆಟ್]] ಧರಿಸಿರುವ [[ವೈಡೂರ್ಯ]] ಮತ್ತು ಅಕ್ವಾಮರೀನ್ ಬಿಬ್, ಇತರ ನಕ್ಷತ್ರಗಳು ಧರಿಸುವ ಬಿಳಿ-ವಜ್ರದ ಸುತ್ತುವರಿದ ಆಭರಣಗಳೊಂದಿಗೆ ಅನುಕೂಲಕರವಾಗಿ ವ್ಯತಿರಿಕ್ತವಾಗಿದೆ.<ref name="NYT41415">{{Cite news |last=Guy Trebay |date=April 14, 2015 |title=At Tiffany, Something New Inside the Blue Box |work=The New York Times |url=https://www.nytimes.com/2015/04/16/style/at-tiffany-something-new-inside-the-blue-box.html |url-status=live |access-date=April 16, 2015 |archive-url=https://web.archive.org/web/20150416141502/http://www.nytimes.com/2015/04/16/style/at-tiffany-something-new-inside-the-blue-box.html |archive-date=April 16, 2015 |quote=[...] the scene-stealing bib had the commercially desirable effect of making the million-dollar gems on other entertainers look like so much borrowed ice.}}</ref>
=== ಸುಗಂಧಗಳು ===
[[ಚಿತ್ರ:Tiffany4men.jpg|thumb|"ಟಿಫಾನಿ ಫಾರ್ ಮೆನ್" ಪರಿಮಳದ ೧೯೮೯ರ ಮೂಲ ಮಾದರಿ ಬಾಟಲ್]]
೧೯೮೦ ರ ದಶಕದ ಕೊನೆಯಲ್ಲಿ, ಟಿಫಾನಿ & ಕಂಪನಿ ಸುಗಂಧ ದ್ರವ್ಯಗಳ ವ್ಯಾಪಾರಕ್ಕೆ ತೊಡಗಿತು. ಮಹಿಳೆಯರಿಗಾಗಿ "ಟಿಫಾನಿ" ಅನ್ನು ೧೯೮೭ ರಲ್ಲಿ ಪ್ರಾರಂಭಿಸಲಾಯಿತು. ಈ ಮಹಿಳೆಯರ ಹೂವಿನ ಸುಗಂಧ ದ್ರವ್ಯವನ್ನು ಸುಗಂಧ ದ್ರವ್ಯ ತಯಾರಕ ''ಫ್ರಾಂಕೋಯಿಸ್ ಡೆಮಾಚಿ''ಯವರು ತಯಾರಿಸಿದರು. ಪ್ರತಿ ಔನ್ಸ್ಗೆ $೨೨೦ ದರದಲ್ಲಿ, "ಟಿಫಾನಿ" ಯನ್ನು ಯುನೈಟೆಡ್ ಸ್ಟೇಟ್ಸ್ನಾದ್ಯಂತ ಪ್ರಮುಖ ಡಿಪಾರ್ಟ್ಮೆಂಟ್ ಸ್ಟೋರ್ಗಳು ಯಶಸ್ವಿಯಾಗಿ ಮಾರಾಟ ಮಾಡಿದವು.<ref>{{Cite web |title=Tiffany & Co. Company History |url=https://www.fundinguniverse.com/company-histories/tiffany-co-history |url-status=live |archive-url=https://web.archive.org/web/20120513011759/http://www.fundinguniverse.com/company-histories/Tiffany-amp;-Co-company-History.html |archive-date=May 13, 2012 |access-date=2013-02-18 |publisher=Funding Universe}}</ref> ಎರಡು ವರ್ಷಗಳ ನಂತರ, ೧೯೮೯ ರಲ್ಲಿ "ಟಿಫಾನಿ ಫಾರ್ ಮೆನ್" ಅನ್ನು ಪ್ರಾರಂಭಿಸಲಾಯಿತು ಮತ್ತು ಇದನ್ನು ಸುಗಂಧ ದ್ರವ್ಯ ತಯಾರಕ ''ಜಾಕ್ವೆಸ್ ಪೊಲ್ಜ್'' ಅಭಿವೃದ್ಧಿಪಡಿಸಿದರು. ಪುರುಷರ ಮತ್ತು ಮಹಿಳೆಯರ ಸುಗಂಧದ ಬಾಟಲಿಗಳನ್ನು ''ಪಿಯರೆ ದಿನಂದ್'' ವಿನ್ಯಾಸಗೊಳಿಸಿದರು.<ref>{{Cite news |last=Wells |first=Linda |date=1987-07-12 |title=BEAUTY; A NEW SMELL FOR SUCCESS |language=en-US |work=The New York Times |url=https://www.nytimes.com/1987/07/12/magazine/beauty-a-new-smell-for-success.html |url-status=live |access-date=2017-10-01 |archive-url=https://web.archive.org/web/20171101065059/http://www.nytimes.com/1987/07/12/magazine/beauty-a-new-smell-for-success.html |archive-date=November 1, 2017 |issn=0362-4331}}</ref> ೧೯೯೫ ರಲ್ಲಿ, ಟಿಫಾನಿಯು ಮಹಿಳೆಯರಿಗಾಗಿ "ಟ್ರೂಸ್ಟೆ" ಸುಗಂಧ ದ್ರವ್ಯವನ್ನು ಪ್ರಾರಂಭಿಸಿದರು. ನಂತರ ಅದನ್ನು ಸ್ಥಗಿತಗೊಳಿಸಲಾಯಿತು.
ಅಕ್ಟೋಬರ್ ೨೦೧೯ ರಲ್ಲಿ, ಟಿಫಾನಿಯು '<nowiki/>''ಟಿಫಾನಿ & ಲವ್''' ಎಂಬ ಹೊಸ ಸುಗಂಧ ಶ್ರೇಣಿಯನ್ನು ಪ್ರಾರಂಭಿಸಿತು.<ref>{{Cite web |last=Shatzman |first=Celia |date=October 1, 2019 |title=Tiffany & Co. Uses Groundbreaking Technology To Create A New Note For Its Latest Fragrance |url=https://www.forbes.com/sites/celiashatzman/2019/10/01/tiffany-uses-groundbreaking-technology-to-create-new-note-for-latest-fragrance/#4dfeda1415f8 |url-status=live |archive-url=https://web.archive.org/web/20200809115739/https://www.forbes.com/sites/celiashatzman/2019/10/01/tiffany-uses-groundbreaking-technology-to-create-new-note-for-latest-fragrance/#4dfeda1415f8 |archive-date=August 9, 2020 |access-date=May 7, 2020 |website=Forbes}}</ref>
== ಕ್ರೀಡಾ ಪ್ರಶಸ್ತಿಗಳು ==
ಟಿಫಾನಿ & ಕಂಪನಿ ವಿನ್ಸ್ ಲೊಂಬಾರ್ಡಿ ಟ್ರೋಫಿ ತಯಾರಕರಾಗಿದ್ದು, ಆ ವರ್ಷದ ಸೂಪರ್ ಬೌಲ್ ಅನ್ನು ಗೆದ್ದ [[ನ್ಯಾಷನಲ್ ಫುಟ್ಬಾಲ್ ಲೀಗ್|ಎನ್ಎಫ್ಎಲ್]] ತಂಡದ ವಿಜೇತರಿಗಾಗಿ ಇದನ್ನು ತಯಾರಿಸಲಾಗುತ್ತದೆ.<ref name="Tiffany Trophies"/><ref>{{Cite web |date=18 September 2008 |title=Super Bowl Trophy |url=http://www.ixgames.com/super_bowl_trophy/ |url-status=live |archive-url=https://archive.today/20130103170006/http://www.ixgames.com/super_bowl_trophy/ |archive-date=January 3, 2013 |access-date=March 2, 2012 |publisher=ixgames}}</ref>
೧೯೭೭ ರಿಂದಲೂ, ಟಿಫಾನಿ & ಕಂಪನಿ, ಎನ್ಬಿಎ ಫೈನಲ್ಸ್ನ ವಿಜೇತರಿಗೆ ನೀಡಲಾಗುವ ಟ್ರೋಫಿಯಾದ ಲ್ಯಾರಿ ಒ 'ಬ್ರಿಯಾನ್ ಟ್ರೋಫಿಯನ್ನು ತಯಾರಿಸುತ್ತಿದೆ.<ref name="Tiffany Trophies"/>
ಟಿಫಾನಿ ವಿಶ್ವ ಬೇಸ್ಬಾಲ್ ಕ್ಲಾಸಿಕ್ ಟ್ರೋಫಿ ತಯಾರಿಸಿ ವಿನ್ಯಾಸಗೊಳಿಸುತ್ತಾರೆ ಮತ್ತು ಪ್ರತಿ ವರ್ಷ ವಿಶ್ವ ಸರಣಿ ವಿಜೇತರಿಗೆ ನೀಡುವ ಕಮೀಷನರ್ಸ್ ಟ್ರೋಫಿಯನ್ನೂ ತಯಾರಿಸುತ್ತಾರೆ.<ref name="Tiffany Trophies">{{Cite web |title=Tiffany Trophies by the Numbers |url=https://www.tiffany.com/stories/sports-trophies/ |url-status=live |archive-url=https://web.archive.org/web/20200204145120/https://www.tiffany.com/stories/sports-trophies/ |archive-date=February 4, 2020 |access-date=2020-02-04}}</ref> ಟಿಫಾನಿ & ಕಂಪನಿ ಸ್ಯಾನ್ ಫ್ರಾನ್ಸಿಸ್ಕೋ ಜೈಂಟ್ಸ್ಗಾಗಿ ೨೦೧೦ ಮತ್ತು ೨೦೧೨ ವರ್ಲ್ಡ್ ಸೀರೀಸ್ ಉಂಗುರಗಳನ್ನು ಮಾಡಿತು.<ref>{{Cite news |date=10 April 2011 |title=Giants get Tiffany World Series rings |agency=Associated Press |url=http://sports.espn.go.com/mlb/news/story?id=6318744 |url-status=live |access-date=October 11, 2011 |archive-url=https://archive.today/20120716100834/http://sports.espn.go.com/mlb/news/story?id=6318744 |archive-date=July 16, 2012}}</ref>
೧೯೮೭ ರಿಂದ, ಟಿಫಾನಿಯ ಬೆಳ್ಳಿಯ ಅಕ್ಕಸಾಲಿಗರು ಯುನೈಟೆಡ್ ಸ್ಟೇಟ್ಸ್ ಟೆನಿಸ್ ಅಸೋಸಿಯೇಷನ್ಗಾಗಿ ಯುಎಸ್ ಓಪನ್ ಟ್ರೋಫಿಗಳನ್ನು ರಚಿಸಿದ್ದಾರೆ.<ref name="Tiffany Trophies"/>
ಟಿಫಾನಿ & ಕಂಪನಿ ೨೦೦೭ ರಿಂದ ಪ್ರತಿ ವರ್ಷವೂ ''ಪಿಜಿಎ ಟೂರ್ ಫೆಡ್ಎಕ್ಸ್ ಕಪ್'' ಟ್ರೋಫಿಯನ್ನು ಮಾಡುತ್ತದೆ.<ref name="Tiffany Trophies"/>
ಎಂಎಲ್ಎಸ್ ಚಾಂಪಿಯನ್ಶಿಪ್ ಟ್ರೋಫಿಯನ್ನು ಟಿಫಾನಿ & ಕಂಪನಿ ತಯಾರಿಸಿತು.<ref>{{Cite web |title=MLS Cup trophy tour launches this week in Houston | MLSsoccer.com |url=http://www.mlssoccer.com/post/2012/11/19/mls-cup-trophy-tour-launches-week-houston |url-status=live |archive-url=https://web.archive.org/web/20200208160207/https://www.mlssoccer.com/post/2012/11/19/mls-cup-trophy-tour-launches-week-houston |archive-date=February 8, 2020 |access-date=October 28, 2019}}</ref>
ರಗ್ಬಿ ಲೀಗ್ನ ಶತಮಾನೋತ್ಸವವನ್ನು ಆಚರಿಸಲು £೧೦,೦೦೦ ದ ರಗ್ಬಿ ಲೀಗ್ ವಿಶ್ವಕಪ್ ಟ್ರೋಫಿಯನ್ನು ಟಿಫಾನಿ ತಯಾರಿಸಿತು.<ref>{{Cite news |date=1 October 2013 |title=A history of the Rugby League World Cup |work=[[St Helens Star]] |url=http://www.sthelensstar.co.uk/sport/rl_world_cup_2013/did_you_know/10263005.print/ |url-status=live |access-date=4 January 2014 |archive-url=https://web.archive.org/web/20160818181632/http://www.sthelensstar.co.uk/sport/rl_world_cup_2013/did_you_know/10263005.print/ |archive-date=August 18, 2016}}</ref>
೨೦೨೧ ರಲ್ಲಿ, ಲೀಗ್ನ ತ್ವರಿತ ಬೆಳವಣಿಗೆಯನ್ನು ಗಮನಿಸಿದ ನಂತರ ಟಿಫಾನಿ & ಕಂಪನಿಯು ಎಲ್ಸಿಕೆ ಪ್ರಾಯೋಜಕತ್ವದ ತಂಡವನ್ನು ಸೇರಿತು. ಟಿಫಾನಿ & ಕಂಪನಿ ೨೦೨೧ ರ ಬೇಸಿಗೆ ವಿಭಜನೆಯೊಂದಿಗೆ ಪ್ರಾರಂಭವಾಗುವ ಮುಂದಿನ ಮೂರು ವರ್ಷಗಳ ಕಾಲ ಎಲ್ಸಿಕೆ ಫೈನಲ್ನ ವಿಜೇತರಿಗೆ ಚಾಂಪಿಯನ್ಶಿಪ್ ಉಂಗುರಗಳನ್ನು ನೀಡುತ್ತದೆ.<ref>{{Cite web |last=Lee |first=Yoonjae |date=2021-08-18 |title=Tiffany & Co. reaveals the LCK championship ring design |url=https://www.invenglobal.com/articles/14870/tiffany-co-reaveals-the-lck-championship-ring-design |url-status=live |archive-url=https://web.archive.org/web/20220224094638/https://www.invenglobal.com/articles/14870/tiffany-co-reaveals-the-lck-championship-ring-design |archive-date=February 24, 2022 |access-date=2022-02-24 |website=[[Inven Global]] |language=en}}</ref> ಎಲ್ಪಿಎಲ್(LPL)ನಲ್ಲಿ, ಚೀನಾದಲ್ಲಿ ಎಲ್ಒಎಲ್ ನ ಹತ್ತನೇ ವಾರ್ಷಿಕೋತ್ಸವದ ನೆನಪಿಗಾಗಿ ಹೊಸ ಸಿಲ್ವರ್ ಡ್ರ್ಯಾಗನ್ ಕಪ್ಗಾಗಿ ಟಿಫಾನಿ & ಕಂಪನಿಯಿಂದ ಟ್ರೋಫಿಯನ್ನು ವಿನ್ಯಾಸಗೊಳಿಸಲಾಗಿದೆ.<ref>{{Cite news |last=Waananen |first=Kerry |date=2021-09-02 |title=LPL unveils Tiffany and Co. crafted 2021 Summer Final Trophy |language=en-GB |work=Esportsinsider |url=https://esportsinsider.com/2021/09/lpl-tiffany-and-co-trophy/ |url-status=live |access-date=2022-02-24 |archive-url=https://web.archive.org/web/20220224094638/https://esportsinsider.com/2021/09/lpl-tiffany-and-co-trophy/ |archive-date=February 24, 2022}}</ref>
೨೦೨೨ ರ ಲೀಗ್ ಆಫ್ ಲೆಜೆಂಡ್ಸ್ ವಿಶ್ವ ಚಾಂಪಿಯನ್ಶಿಪ್ನಿಂದ, ಟಿಫಾನಿ & ಕಂಪನಿ ಹೊಸದಾಗಿ ಮರುವಿನ್ಯಾಸಗೊಳಿಸಲಾದ ಸಮ್ಮನರ್ಸ್ ಕಪ್ನ ಅಧಿಕೃತ ತಯಾರಕರಾಗಿದ್ದಾರೆ, ಇದನ್ನು ಮೊದಲು ಟಿ೧ ವಿರುದ್ಧ ೩-೨ ಗೆಲುವಿನ ನಂತರ ಡಿಆರ್ಎಕ್ಸ್(DRX)ಗೆ ನೀಡಲಾಯಿತು.
== ಲೋಕೋಪಕಾರ ==
೨೦೦೦ ರಲ್ಲಿ, ಟಿಫಾನಿ & ಕಂಪನಿ ಫೌಂಡೇಶನ್ ಹವಳ ಮತ್ತು ಸಮುದ್ರ ಸಂರಕ್ಷಣೆಯನ್ನು ಬೆಂಬಲಿಸಲು ತನ್ನ ಮೊದಲ ಅನುದಾನವನ್ನು ನೀಡಿತು. ಇಲ್ಲಿಯವರೆಗೆ, ಪ್ರತಿಷ್ಠಾನವು ಹವಳ ಮತ್ತು ಸಮುದ್ರ ಸಂರಕ್ಷಣೆಯ ಕಾರಣಗಳಿಗಾಗಿ $೨೦ ದಶಲಕ್ಷಕ್ಕೂ ಹೆಚ್ಚಿನ ಅನುದಾನವನ್ನು ನೀಡಿದೆ.<ref name="elle coral">{{Cite web |last=Hyland |first=Veronique |date=August 30, 2019 |title=Tiffany & Co. Is Working To Save Coral Reefs In Mauritius |url=https://www.elle.com/fashion/accessories/a28834154/tiffany-sustainability-mauritius/ |url-status=live |archive-url=https://web.archive.org/web/20200506191749/https://www.elle.com/fashion/accessories/a28834154/tiffany-sustainability-mauritius/ |archive-date=May 6, 2020 |access-date=May 5, 2020 |website=Elle}}</ref>
೨೦೦೮ ರಲ್ಲಿ, ಬೋಟ್ಸ್ವಾನಾದಲ್ಲಿ ಎಚ್ಐವಿ/ಏಡ್ಸ್ ಚಿಕಿತ್ಸಾ ಸೌಲಭ್ಯವನ್ನು ನಿರ್ಮಿಸಲು ದಿ ಟಿಫಾನಿ & ಕಂಪನಿ ಫೌಂಡೇಶನ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯಕ್ಕೆ $೨ ದಶಲಕ್ಷವನ್ನು ದೇಣಿಗೆ ನೀಡಿತು.<ref>{{Cite web |last=McWilliams |first=Julie |last2=Buckley |first2=Linda |date=October 16, 2008 |title=The Tiffany & Co. Foundation Gives $2 Million to Penn for HIV/AIDS Treatment Center in Botswana |url=https://penntoday.upenn.edu/news/tiffany-co-foundation-gives-2-million-penn-hivaids-treatment-center-botswana |url-status=live |archive-url=https://web.archive.org/web/20200809124711/https://penntoday.upenn.edu/news/tiffany-co-foundation-gives-2-million-penn-hivaids-treatment-center-botswana |archive-date=August 9, 2020 |access-date=May 4, 2020 |website=Penn Today |publisher=Penn University}}</ref>
೨೦೧೦ ರಲ್ಲಿ, ಟಿಫಾನಿಯು ಸಾರ್ವಜನಿಕ ಭೂಮಿಗಾಗಿ ಟ್ರಸ್ಟ್ಗೆ $೧ ಮಿಲಿಯನ್ ಅನುದಾನವನ್ನು ನೀಡಿದರು ಮತ್ತು ಕ್ಯಾಹುಯೆಂಗಾ ಶಿಖರವನ್ನು ಉಳಿಸುವ ಅಭಿಯಾನವನ್ನು ನೀಡಿದರು.<ref>{{Cite web |date=September 30, 2011 |title=Hugh Hefner Honored for $1 Million Hollywood Sign Contribution |url=https://www.hollywoodreporter.com/news/hugh-hefner-honored-1-million-242706 |url-status=live |archive-url=https://web.archive.org/web/20200827223701/https://www.hollywoodreporter.com/news/hugh-hefner-honored-1-million-242706 |archive-date=August 27, 2020 |access-date=May 4, 2020 |website=THR}}</ref>
ಟಿಫಾನಿ ತಮ್ಮ 'ಸೇವ್ ದಿ ವೈಲ್ಡ್ ಕಲೆಕ್ಷನ್' ಅನ್ನು ೨೦೧೭ ರಲ್ಲಿ ಪ್ರಾರಂಭಿಸಿದರು. ಇದು ಅಳಿವಿನಂಚಿನಲ್ಲಿರುವ ವನ್ಯಜೀವಿ ಸಂರಕ್ಷಣೆಯನ್ನು ಉತ್ತೇಜಿಸುವ ಒಂದು ಮಾರ್ಗವಾಗಿದೆ.<ref>{{Cite web |last=Park |first=Andrea |date=March 7, 2019 |title=Good Company: Tiffany & Co.'s Save the Wild Collection |url=https://www.barrons.com/articles/good-company-tiffany-co-s-save-the-wild-collection-01551960005 |url-status=live |archive-url=https://web.archive.org/web/20200809114634/https://www.barrons.com/articles/good-company-tiffany-co-s-save-the-wild-collection-01551960005 |archive-date=August 9, 2020 |access-date=May 4, 2020 |website=Barrons}}</ref> [[ಆಸ್ಟ್ರೇಲಿಯಾದ ಹವಳದ ದಿಬ್ಬಗಳು|ಗ್ರೇಟ್ ಬ್ಯಾರಿಯರ್ ರೀಫ್]] ಅನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಪ್ರಯತ್ನಗಳಿಗಾಗಿ ೨೦೧೮ ರಲ್ಲಿ ಟಿಫಾನಿಯು [[ಆಸ್ಟ್ರೇಲಿಯ|ಆಸ್ಟ್ರೇಲಿಯಾಕ್ಕೆ]] ಸರಿಸುಮಾರು $೧.೪ ಮಿಲಿಯನ್ ಬದ್ಧತೆಯನ್ನು ಘೋಷಿಸಿತು.<ref>{{Cite web |last=Truman |first=Isabelle |date=July 26, 2018 |title=Tiffany & Co. Is Campaigning To Save The Great Barrier Reef |url=https://www.marieclaire.com.au/tiffany-and-co-great-barrier-reef |url-status=live |archive-url=https://web.archive.org/web/20200925102740/https://www.marieclaire.com.au/tiffany-and-co-great-barrier-reef |archive-date=September 25, 2020 |access-date=May 4, 2020 |website=Marie Claire}}</ref>
== ಕಾರ್ಪೊರೇಟ್ ಸುಸ್ಥಿರತೆಯ ಪ್ರಯತ್ನಗಳು ==
ಟಿಫಾನಿ ೧೯೯೨ ರಿಂದ ನೈತಿಕವಾಗಿ ಗಣಿಗಾರಿಕೆ ಮಾಡಿದ ಚಿನ್ನವನ್ನು ಖರೀದಿಸಿದೆ. ಕಂಪನಿಯು ವಜ್ರಗಳನ್ನು ಪಡೆಯುವಾಗ ಕಿಂಬರ್ಲಿ ಪ್ರಮಾಣೀಕರಣ ಪ್ರಕ್ರಿಯೆಯನ್ನು ಅನುಸರಿಸುತ್ತದೆ.<ref name="triplepundit">{{Cite web |last=Vijayaraghavan |first=Akhila |date=November 16, 2011 |title=Tiffany & Co Launches Sustainability Website |url=https://www.triplepundit.com/story/2011/tiffany-co-launches-sustainability-website/71586 |url-status=live |archive-url=https://web.archive.org/web/20200809090531/https://www.triplepundit.com/story/2011/tiffany-co-launches-sustainability-website/71586 |archive-date=August 9, 2020 |access-date=May 5, 2020 |website=Triple Pundit}}</ref>
ಸಮುದ್ರದ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ೨೦೦೪ ರಲ್ಲಿ ಟಿಫಾನಿಯು ಹವಳದ ಆಭರಣಗಳ ಮಾರಾಟವನ್ನು ನಿಲ್ಲಿಸಿತು.<ref name="elle coral"/> ೨೦೦೫ ರಲ್ಲಿ, ಟಿಫಾನಿಯು ಅರ್ಥ್ವರ್ಕ್ನ 'ನೋ ಡರ್ಟಿ ಗೋಲ್ಡ್' ಅಭಿಯಾನಕ್ಕೆ ಸೇರಿಕೊಂಡರು ಮತ್ತು ಜವಾಬ್ದಾರಿಯುತ ಗಣಿಗಾರಿಕೆಗಾಗಿ ಅರ್ಥ್ವರ್ಕ್ನ ಗೋಲ್ಡನ್ ರೂಲ್ಸ್ ಅನ್ನು ಅನ್ವಯಿಸಿದ ಮೊದಲ ಆಭರಣ ಕಂಪನಿಯಾಯಿತು.<ref>{{Cite news |last=Semeuls |first=Alana |date=February 14, 2007 |title=Jewelry companies look for values in valuables |work=LA Times |url=https://www.latimes.com/archives/la-xpm-2007-feb-14-fi-jewelry14-story.html |url-status=live |access-date=May 5, 2020 |archive-url=https://web.archive.org/web/20200809110932/https://www.latimes.com/archives/la-xpm-2007-feb-14-fi-jewelry14-story.html |archive-date=August 9, 2020}}</ref>
೨೦೦೬ ರಲ್ಲಿ, ಟಿಫಾನಿ & ಕಂಪನಿಯು, [[ಮೈಕ್ರೋಸಾಫ್ಟ್]], ಇಡಸ್ಟ್ರಿಯಲ್ ಗ್ಲೋಬಲ್ ಯೂನಿಯನ್, ಯುನೈಟೆಡ್ ಸ್ಟೀಲ್ ವರ್ಕರ್ಸ್ ಜೊತೆಗೆ ಇತರರೊಂದಿಗೆ ಸೇರಿ, ಐಆರ್ಎಂಎ(IRMA) ಎಂದು ಕರೆಯಲ್ಪಡುವ ಜವಾಬ್ದಾರಿಯುತ ಗಣಿಗಾರಿಕೆ ಭರವಸೆಗಾಗಿ ಉಪಕ್ರಮವನ್ನು ಸ್ಥಾಪಿಸಿತು.<ref>{{Cite web |date=January 10, 2020 |title=BMW backs responsible mining |url=https://www.miningmagazine.com/sustainability/news/1378795/bmw-backs-responsible-mining |url-status=live |archive-url=https://web.archive.org/web/20200114073922/https://www.miningmagazine.com/sustainability/news/1378795/bmw-backs-responsible-mining |archive-date=January 14, 2020 |access-date=May 4, 2020 |website=Mining Magazine}}</ref>
೨೦೧೧ ರಲ್ಲಿ, ಟಿಫಾನಿಯು ಕಂಪನಿಯ ಕಾರ್ಯಾಚರಣೆಗಳನ್ನು ಬಂಧಿಸದ ಜಾಗತಿಕ ಸುಸ್ಥಿರತೆ ಮತ್ತು ಮಾನವ ಹಕ್ಕುಗಳ ಗುರಿಗಳೊಂದಿಗೆ ಜೋಡಿಸುವ ಪ್ರಯತ್ನಕ್ಕಾಗಿ ವಿಶ್ವಸಂಸ್ಥೆಯ ಗ್ಲೋಬಲ್ ಕಾಂಪ್ಯಾಕ್ಟ್ ಉಪಕ್ರಮವನ್ನು ಸೇರಿತು.<ref name="triplepundit"/>
೨೦೧೫ ರಲ್ಲಿ, ''ಅನಿಸಾ ಕೋಸ್ಟಾ'' ಅವರನ್ನು ಟಿಫಾನಿಯ ಮೊದಲ ಮುಖ್ಯ ಸುಸ್ಥಿರತೆ ಅಧಿಕಾರಿಯಾಗಿ ನೇಮಿಸಲಾಯಿತು.<ref>{{Cite web |last=Faulkner |first=Noelle |date=March 11, 2018 |title=Anisa Kamadoli Costa, chief sustainability officer at Tiffany & Co. |url=https://www.vogue.com.au/gamechangers/fashion-and-culture/anisa-kamadoli-costa-chief-sustainability-officer-at-tiffany-co/news-story/da762a85a597d01754b60b58eb186749 |url-status=live |archive-url=https://web.archive.org/web/20200809091513/https://www.vogue.com.au/gamechangers/fashion-and-culture/anisa-kamadoli-costa-chief-sustainability-officer-at-tiffany-co/news-story/da762a85a597d01754b60b58eb186749 |archive-date=August 9, 2020 |access-date=May 4, 2020 |website=Vogue}}</ref><ref>{{Cite web |title=Anisa Kamadoli Costa Bloomberg profile |url=https://www.bloomberg.com/profile/person/19130197 |url-status=live |archive-url=https://web.archive.org/web/20211001224125/https://www.bloomberg.com/profile/person/19130197 |archive-date=October 1, 2021 |access-date=May 4, 2020 |website=Bloomberg}}</ref> ಅದೇ ವರ್ಷ, ಟಿಫಾನಿ ೨೦೫೦ ರ ವೇಳೆಗೆ ನಿವ್ವಳ-ಶೂನ್ಯ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಲುಪಲು ಪ್ರತಿಜ್ಞೆ ಮಾಡಿತು. ಕಂಪನಿಯು ಇತರ ಕಂಪನಿಗಳೊಂದಿಗೆ ಪ್ಯಾರಿಸ್ ಒಪ್ಪಂದದಲ್ಲಿ ಉಳಿಯಲು ಯು.ಎಸ್. ಗೆ ಪ್ರತಿಪಾದಿಸಿತು.<ref>{{Cite web |last=Stephanie |first=Chan |date=May 9, 2017 |title=Tiffany & Co. Sends Message About Climate Change to Donald Trump |url=https://www.hollywoodreporter.com/news/tiffany-climate-change-message-donald-trump-1001902 |url-status=live |archive-url=https://web.archive.org/web/20200828011548/https://www.hollywoodreporter.com/news/tiffany-climate-change-message-donald-trump-1001902 |archive-date=August 28, 2020 |access-date=May 4, 2020 |website=THR}}</ref>
== ಜನಪ್ರಿಯ ಸಂಸ್ಕೃತಿಯಲ್ಲಿ ==
ಚಿಲ್ಲರೆ ವ್ಯಾಪಾರಿಗಳನ್ನು ವಿವಿಧ ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ, ಮುಖ್ಯವಾಗಿ ೧೯೫೮ ರಲ್ಲಿ 'ಟ್ರೂಮನ್ ಕ್ಯಾಪೋಟ್'ರವರು ಬರೆದ 'ಬ್ರೇಕ್ಫಾಸ್ಟ್ ಅಟ್ ಟಿಫಾನಿಸ್' ಎಂಬ ಶೀರ್ಷಿಕೆಯ ಕಾದಂಬರಿಯು, [[ಆಡ್ರಿ ಹೆಪ್ಬರ್ನ್|ಆಡ್ರೆ ಹೆಪ್ಬರ್ನ್]] ನಟಿಸಿದ ೧೯೬೧ ರ ಚಲನಚಿತ್ರವಾಗಿ ಅಳವಡಿಸಲಾಗಿದೆ.
== ಛಾಯಾಂಕಣ ==
<gallery widths="220" heights="220">
ಚಿತ್ರ:WLA_lacma_Tiffany_Studios_Tea_Set_partial_A.jpg|alt=Silver tea pot|ಬೆಳ್ಳಿಯ ಟೀ ಪಾಟ್
ಚಿತ್ರ:Johnson-343.jpg|alt=White House china service for Lady Bird Johnson|ಲೇಡಿ ಬರ್ಡ್ ಜಾನ್ಸನ್ಗಾಗಿ ವೈಟ್ ಹೌಸ್ ಚೀನಾ ಸೇವೆ
ಚಿತ್ರ:Tea_Set_by_Tiffany_&_Company.jpg|alt=Tea set, c. 1877, held at the Birmingham Museum of Art|ಟೀ ಸೆಟ್ ೧೮೭೭, ಬರ್ಮಿಂಗ್ಹ್ಯಾಮ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ನಡೆಯಿತು.
ಚಿತ್ರ:Tiffany_and_Company_-_Frog_-_Walters_42288_-_Three_Quarter.jpg|alt=Carved frog for display at the Exposition Universelle (1900) in Paris|ಪ್ಯಾರಿಸ್ನ ಎಕ್ಸ್ಪೊಸಿಷನ್ ಯೂನಿವರ್ಸೆಲ್ (೧೯೦೦) ನಲ್ಲಿ ಪ್ರದರ್ಶನಕ್ಕಾಗಿ ಕೆತ್ತಿದ ಕಪ್ಪೆ
ಚಿತ್ರ:Tiffany_and_Company_-_Necklace_-_Walters_572121.jpg|alt=Diamond necklace, c. 1904|ವಜ್ರದ ನೆಕ್ಲೇಸ್, ೧೯೦೪
ಚಿತ್ರ:Hooker_Emerald_Brooch.jpg|alt=Hooker Emerald Brooch, commissioned by Tiffany in 1950|ಹೂಕರ್ ಎಮರಾಲ್ಡ್ ಬ್ರೂಚ್, ೧೯೫೦ ರಲ್ಲಿ ಟಿಫಾನಿಯಿಂದ ನಿಯೋಜಿಸಲ್ಪಟ್ಟಿತು
ಚಿತ್ರ:Tiffany_&_Co,_Tray._1893.jpg|alt=Tray or Waiter, displayed at World's Columbian Exposition, 1893, Brooklyn Museum|ಟ್ರೇ ಅಥವಾ ಮಾಣಿ, ೧೮೯೩ ರಲ್ಲಿ ಬ್ರೂಕ್ಲಿನ್ ಮ್ಯೂಸಿಯಂನಲ್ಲಿ ನಡೆದ ವರ್ಲ್ಡ್ಸ್ ಕೊಲಂಬಿಯನ್ ಎಕ್ಸ್ಪೊಸಿಷನ್ನಲ್ಲಿ ಪ್ರದರ್ಶಿಸಲಾಯಿತು
</gallery>
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ಕಂಪನಿಗಳು]]
[[ವರ್ಗ:ಉದ್ಯಮ]]
c2ii4nmzirrrzzolk3mod0qum6udwsd
ಅವನೇ ಶ್ರೀಮನ್ನಾರಾಯಣ (ಚಲನಚಿತ್ರ)
0
122758
1378131
1372371
2026-08-02T12:38:33Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378131
wikitext
text/x-wiki
{{short description|2019 film by Sachin Ravi}}
{{Use dmy dates|date=November 2018}}
{{Infobox film
| name = ಅವನೇ ಶ್ರೀಮನ್ನಾರಾಯಣ
| = Avane Srimannarayana poster.jpg
| alt =
| caption = ಟ್ರೇಲರ್ ರಿಲೀಸ್ ಪೊಸ್ಟರ್
| director = ಸಚಿನ್ ರವಿ
| producer = ಹೆಚ್.ಕೆ ಪ್ರಕಾಶ್<br />ಪುಷ್ಕರ್ ಮಲ್ಲಿಕಾರ್ಜುನಯ್ಯ
| writer = ರಕ್ಷಿತ್ ಶೆಟ್ಟಿ<br />ಚಂದ್ರಜಿತ್ ಬಳಿಯಪ್ಪ<br />ಅಭಿಜಿತ್ ಮಹೇಶ್<br />ಅನಿರುಧ್<br />ನಾಗಾರ್ಜುನ್ ಶರ್ಮ<br />ಅಭಿಲಾಷ್
| story =
| screenplay = ಸಚಿನ್ ರವಿ
| starring = {{plainlist|* [[ರಕ್ಷಿತ್ ಶೆಟ್ಟಿ]]
* ಶಾನ್ವಿ ಶ್ರೀವಾಸ್ತವ}}
| narrator =
| music = {{plainlist|* '''Songs:'''<br/>ಚರಣ್ ರಾಜ್<br/>ಅಜನೀಶ್ ಲೋಕನಾಥ್
*'''Background Score:'''<br />ಅಜನೀಶ್ ಲೋಕನಾಥ್}}
| cinematography = ಕರ್ಮ ಚಾವ್ಲ
| editing = ಸಚಿನ್
| studio = ಶ್ರೀ ದೇವಿ ಎಂಟರ್ಪೈಸಸ್<br />ಪುಷ್ಕರ್ ಫಿಲ್ಮ್ಸ್<br />ಪರ್ಮ ಸ್ಟುಡಿಯೋ
| distributor = ಪುಷ್ಕರ್ ಫಿಲ್ಮ್ಸ್
| released = ೨೭ ಡಿಸೆಂಬರ್, ೨೦೧೯
| country = ಭಾರತ
| language = ಕನ್ನಡ<!--WARNING! Tweaking this parameter will directly affect this articles categorisation. Hence don't add the dubbed languages here.-->
| budget = <!--WARNING! Don't add budget of the film without proper citations-->
| gross =
}}
'''ಅವನೇ ಶ್ರೀಮನ್ನಾರಾಯಣ''' ಸಚಿನ್ ರವಿಯವರ ನಿರ್ದೇಶನದಲ್ಲಿ ಬಿಡುಗಡೆಯಾದ [[ಕನ್ನಡ]] ಫ್ಯಾಂಟಸಿ ಹಾಗು ಸಾಹಸಭರಿತ [[ಚಲನಚಿತ್ರ]]<ref>https://twitter.com/onlynikil/status/1200097479531696128?s=19</ref>. ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗು ಎಚ್.ಕೆ ಪ್ರಕಾಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಹಾಗು ಸಾನ್ವಿ ಶ್ರೀವಾಸ್ತವ್ ಅವರು ಕಾಣಿಸಿಕೊಂಡಿದ್ದಾರೆ. ಮೂಲ ಭಾಷೆ ಕನ್ನಡದ ಜೊತೆಗೆ, [[ತೆಲುಗು]], [[ತಮಿಳು]], [[ಹಿಂದಿ]], [[ಮಲಯಾಳಂ]] ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಆರಂಭದಲ್ಲಿ, ಚಿತ್ರತಂಡ ಈ ಚಿತ್ರವನ್ನು ಎಲ್ಲಾ ಬಾಷೆಗಳಲ್ಲಿ ಏಕಕಾಲದಲ್ಲಿ ೨೭ ಡಿಸೆಂಬರ್ ೨೦೧೯ ರಂದು ಬಿಡುಗಡೆ ಮಾಡಲು ಬಯಸಿದ್ದರು. ತದನಂತರ ಪೈರಸಿಯನ್ನು ತಡೆಗಟ್ಟಲು ಕೇವಲ ಕನ್ನಡ ಅವೃತ್ತಿಯನ್ನು ೨೭ರಂದು ಬಿಡುಗಡೆ ಮಾಡಲಾಗಿತ್ತು. ಹಾಗೆ ತೆಲುಗು ಭಾಷೆಯಲ್ಲಿ ಈ ಚಿತ್ರ ಜನವರಿ ೧, ೨೦೨೦ರಂದು ಬಿಡುಗಡೆಯಾಗಿದೆ. ತಮಿಳು ಮತ್ತು ಮಲಯಾಳಂ ಆವೃತ್ತಿಗಳು ಜನವರಿ ೩ರಂದು ಬಿಡುಗಡೆಯಾಗಿದೆ. ಹಿಂದಿಯಲ್ಲಿ ಜನವರಿ ೧೭ಕ್ಕೆ ಬಿಡುಗಡೆಯಾಗಲಿದೆ.<ref>https://www.newindianexpress.com/entertainment/kannada/2019/dec/17/avane-srimannarayana-to-get-multiple-release-dates-2077030.html</ref> <ref>{{Cite web |url=https://publictv.in/avane-srimannarayana-official-teaser-released/amp |title=ಆರ್ಕೈವ್ ನಕಲು |access-date=11 ಡಿಸೆಂಬರ್ 2019 |archive-date=11 ಡಿಸೆಂಬರ್ 2019 |archive-url=https://web.archive.org/web/20191211123932/https://publictv.in/avane-srimannarayana-official-teaser-released/amp |url-status=dead }}</ref><ref>{{Cite web |url=https://m.dailyhunt.in/news/india/kannada/news18+kannada-epaper-nwseika/asntrailer+aidu+bhaashegalalli+saddu+maadalu+bandha+yaaravanu+avane+shrimannaaraayana-newsid-150167912 |title=ಆರ್ಕೈವ್ ನಕಲು |access-date=11 ಡಿಸೆಂಬರ್ 2019 |archive-date=17 ಏಪ್ರಿಲ್ 2025 |archive-url=https://web.archive.org/web/20250417000947/https://m.dailyhunt.in/news/india/kannada/news18+kannada-epaper-nwseika/asntrailer+aidu+bhaashegalalli+saddu+maadalu+bandha+yaaravanu+avane+shrimannaaraayana-newsid-150167912 |url-status=dead }}</ref>
==ಸಾರಾಂಶ==
ಅಮರಾವತಿ ಎನ್ನುವ ಊರಿನ ರಹಸ್ಯ ತಿಳಿಯುವುದರಲ್ಲಿ ಹೊಸದಾಗಿ ನೇಮಕವಾದ ಪೊಲೀಸ್ ಅಧಿಕಾರಿ ನಾರಾಯಣ(ರಕ್ಷಿತ್ ಶೆಟ್ಟಿ),ಜಯರಾಮ ಹಾಗು ತುಕರಾಮ ಎನ್ನುವ ವ್ಯಕ್ತಿಗಳೊಡನೆ ಹೋರಾಡಿ ಸೋಲಿಸುತ್ತಾನೋ ಇಲ್ಲವೋ ಎನ್ನುವುದು ಈ ಚಿತ್ರದ ಸಾರಾಂಶ.<ref>https://www.facebook.com/AvaneSrimannarayana/</ref>
==ಪಾತ್ರಗಳು==
* [[ರಕ್ಷಿತ್ ಶೆಟ್ಟಿ]]- ನಾರಾಯಣ ಪಾತ್ರದಲ್ಲಿ
* ಸಾನ್ವಿ ಶ್ರೀವಾಸ್ತವ- ಲಕ್ಷ್ಮಿ ಪಾತ್ರದಲ್ಲಿ
* [[ಅಚ್ಯುತ್ ಕುಮಾರ್]]- ಅಚ್ಯುತ್ತಣ್ಣ
* ಬಾಲಾಜಿ ಮನೋಹರ್- ಜಯರಾಮ ಪಾತ್ರದಲ್ಲಿ
* ಪ್ರಮೋದ್ ಶೆಟ್ಟಿ- ತುಕರಾಮ
* [[ರಿಷಬ್ ಶೆಟ್ಟಿ]]- ಅಥಿತಿ ಪಾತ್ರದಲ್ಲಿ
* ಗೋಪಾಲ್ ಕ್ರಿಷ್ಣ ದೇಶ್ಪಾಂಡೆ
* ಮದುಸುದನ್ ರಾವ್
* ಗೌತಮ್ ರಾಜ್
* ಸಲ್ಮಾನ್ ಅಹೆಮದ್
* ಅನಿರುದ್ ಮಹೇಶ್ <ref>https://en.wikipedia.org/wiki/Avane_Srimannarayana</ref>
==ತಯಾರಿಕೆ==
ಅವನೇ ಶ್ರೀಮನ್ನಾರಾಯಣ ಸಚಿನ್ ರವಿಯವರ ಚೊಚ್ಚಲ ಚಿತ್ರ. ರಕ್ಷಿತ್ ಇದರಲ್ಲಿ ಬಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾನ್ವಿ ಮೊದಲನೆಯ ಬಾರಿ ಕನ್ನಡ ಚಿತ್ರಕ್ಕೆ ಕಂಠ ನೀಡಿದ್ದಾರೆ.ಈ ಚಿತ್ರದಲ್ಲಿ ಕಾರ್ಮ್ ಚಾವ್ಲ ಅವರ [[ಕ್ಯಾಮರ]] [[ಕೆಲಸ]]ವಿದೆ. ಚರಣ್ ರಾಜ್ [[ಸಂಗೀತ]] ಸಂಯೋಜನೆ ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಈ ಸಿನಿಮಾಕ್ಕಿದೆ.<ref>{{Cite web |url=https://kannada.news18.com/news/entertainment/avane-srimannarayana-trailer-gets-good-reaction-from-audience-rmd-300261.html |title=ಆರ್ಕೈವ್ ನಕಲು |access-date=11 ಡಿಸೆಂಬರ್ 2019 |archive-date=11 ಡಿಸೆಂಬರ್ 2019 |archive-url=https://web.archive.org/web/20191211112501/https://kannada.news18.com/news/entertainment/avane-srimannarayana-trailer-gets-good-reaction-from-audience-rmd-300261.html |url-status=dead }}</ref>
==ಹಾಡುಗಳು==
# ಹ್ಯಾಂಡ್ಸ್ ಅಪ್<ref>https://www.kannadaprabha.com/cinema/news/2019/dec/11/hands-up-first-single-from-rakshit-shetty-starrer-asn-to-be-released-on-december-12-407497.html<ref>
# [https://www.kannadasongs.online/2021/02/Kannadasongs.html ನಾರಾಯಣ ನಾರಾಯಣ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
==ಉಲ್ಲೇಖಗಳು==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಚಲನಚಿತ್ರ]]
[[ವರ್ಗ:ವರ್ಷ-೨೦೧೯ ಕನ್ನಡಚಿತ್ರಗಳು]]
[[ವರ್ಗ:ಕನ್ನಡ ಚಲನಚಿತ್ರಗಳು]]
t8y1ccnu92m5cj6wd2txwumczoy313s
ಮಾಡ್ಯೂಲ್:Transclusion count/data/I
828
123177
1378170
1377620
2026-08-02T05:10:24Z
en>Ahechtbot
0
[[Wikipedia:BOT|Bot]]: Updated page.
1378170
Scribunto
text/plain
return {
["IAST"] = 6300,
["IA_SCOTUS_URL"] = 3300,
["IBDB_name"] = 9800,
["ICD10"] = 5000,
["ICD9"] = 4400,
["ICS"] = 3500,
["ICS_flag"] = 3500,
["IDN"] = 3800,
["IMDb_episode"] = 11000,
["IMDb_episodes"] = 4100,
["IMDb_name"] = 172000,
["IMDb_title"] = 211000,
["IMO_Number"] = 4500,
["IMSLP"] = 9200,
["INA"] = 2400,
["IND"] = 8600,
["INR"] = 6500,
["INRConvert"] = 6700,
["INRConvert/CurrentRate"] = 6600,
["INRConvert/USD"] = 6600,
["INRConvert/out"] = 6600,
["IOBDB_name"] = 2100,
["IP"] = 2800,
["IPA"] = 181000,
["IPA_audio_link"] = 5000,
["IPA_link"] = 5100,
["IPAblink"] = 2600,
["IPAc-cmn"] = 2800,
["IPAc-en"] = 55000,
["IPAc-pl"] = 51000,
["IPSummary"] = 82000,
["IP_summary"] = 83000,
["IPtalk"] = 18000,
["IPuser"] = 7600,
["IPvandal"] = 2800,
["IRC"] = 7100,
["IRI"] = 2500,
["IRL"] = 6000,
["IRN"] = 4000,
["ISBN"] = 474000,
["ISBN?"] = 2500,
["ISBNT"] = 46000,
["ISBN_missing"] = 3200,
["ISFDB_name"] = 4300,
["ISFDB_title"] = 5100,
["ISL"] = 2300,
["ISO_15924/script-example-character"] = 3100,
["ISO_15924/wp-article"] = 3100,
["ISO_15924/wp-article/format"] = 3100,
["ISO_15924/wp-article/label"] = 3000,
["ISO_3166_code"] = 240000,
["ISO_3166_name"] = 16000,
["ISO_639_name"] = 28000,
["ISP"] = 3700,
["ISR"] = 5600,
["ISSN"] = 12000,
["ISSN_link"] = 33000,
["ISTAT"] = 8100,
["ISU_figure_skater"] = 2300,
["ITA"] = 20000,
["ITF"] = 6800,
["ITF_profile"] = 2600,
["ITIS"] = 5900,
["ITN_talk"] = 13000,
["ITN_talk/date"] = 13000,
["IUCN_banner"] = 15000,
["I_sup"] = 4900,
["Ice_hockey_box"] = 2000,
["Ice_hockey_stats"] = 20000,
["Icehockeystats"] = 11000,
["Icelandic_name"] = 2100,
["Icon"] = 665000,
["If"] = 430000,
["If_all"] = 7700,
["If_autoconfirmed"] = 2200,
["If_between"] = 4800,
["If_both"] = 207000,
["If_dark"] = 4000,
["If_dark/styles.css"] = 4000,
["If_either"] = 22000,
["If_empty"] = 6700000,
["If_first_display_both"] = 122000,
["If_in_category"] = 164000,
["If_in_page"] = 22000,
["If_last_display_both"] = 38000,
["If_mobile"] = 2100,
["If_mobile/styles.css"] = 2600,
["If_preview"] = 66000,
["If_then_show"] = 440000,
["Ifempty"] = 942000,
["Ifeq"] = 83000,
["Iferror_then_show"] = 4000,
["Ifexist_not_redirect"] = 1900000,
["Ifnotempty"] = 18000,
["Ifnoteq_then_show"] = 2300,
["Ifnumber"] = 75000,
["Ifsubst"] = 1020000,
["Ih"] = 8100,
["Ill"] = 253000,
["Illm"] = 5900,
["Image_frame"] = 6200,
["Image_label"] = 4700,
["Image_label_begin"] = 4100,
["Image_label_end"] = 4100,
["Image_label_small"] = 2600,
["Image_needed"] = 4500,
["Image_other"] = 190000,
["Image_requested"] = 137000,
["Image_requested/Category_helper"] = 126000,
["Imbox"] = 996000,
["Imdb_name"] = 5300,
["Imdb_title"] = 2800,
["Importance"] = 15000,
["Importance/colour"] = 30000,
["Importance_mask"] = 619000,
["Improve_categories"] = 7600,
["Improve_documentation"] = 4200,
["Improve_plot"] = 4100,
["In_class"] = 5600,
["In_lang"] = 387000,
["In_progress"] = 3800,
["In_string"] = 306000,
["In_title"] = 30000,
["Inactive_userpage_blanked"] = 4000,
["Inaturalist_taxon"] = 3800,
["Include-USGov"] = 25000,
["Incomplete_list"] = 24000,
["Inconclusive"] = 2300,
["Increase"] = 60000,
["Incumbent_pope"] = 4700,
["Indent"] = 2300,
["Indented_plainlist"] = 2700,
["Independent_sources"] = 10000,
["IndexFungorum"] = 2100,
["Indian_English"] = 4900,
["Indian_railway_code"] = 3500,
["Indian_rupee"] = 12000,
["Inflation"] = 27000,
["Inflation-fn"] = 5800,
["Inflation-year"] = 4300,
["Inflation/IN/startyear"] = 6600,
["Inflation/UK"] = 5500,
["Inflation/UK/dataset"] = 5500,
["Inflation/UK/startyear"] = 5500,
["Inflation/US"] = 16000,
["Inflation/US-GDP"] = 3000,
["Inflation/US-GDP/dataset"] = 3000,
["Inflation/US-GDP/startyear"] = 3000,
["Inflation/US/dataset"] = 16000,
["Inflation/US/startyear"] = 16000,
["Inflation/fn"] = 7500,
["Inflation/year"] = 33000,
["Info"] = 5600,
["Infobox"] = 3420000,
["Infobox/Columns"] = 3300,
["Infobox/mobileviewfix.css"] = 174000,
["Infobox/styles-images.css"] = 20000,
["Infobox3cols"] = 28000,
["Infobox_AFL_biography"] = 15000,
["Infobox_Athletics_Championships"] = 3400,
["Infobox_Australian_place"] = 15000,
["Infobox_Australian_place/styles.css"] = 15000,
["Infobox_Australian_place/table"] = 11000,
["Infobox_COA_wide"] = 3700,
["Infobox_Canada_electoral_district"] = 2600,
["Infobox_Chinese"] = 23000,
["Infobox_Chinese/Chinese"] = 3200,
["Infobox_Chinese/Footer"] = 7200,
["Infobox_Chinese/Header"] = 7200,
["Infobox_Christian_leader"] = 23000,
["Infobox_French_commune"] = 38000,
["Infobox_French_subdivision"] = 2200,
["Infobox_Gaelic_games_biography"] = 5500,
["Infobox_Gaelic_games_player"] = 3300,
["Infobox_German_location"] = 11000,
["Infobox_German_place"] = 14000,
["Infobox_Grand_Prix_race_report"] = 2200,
["Infobox_Greece_place"] = 3600,
["Infobox_Greek_Dimos"] = 3000,
["Infobox_Hindu_temple"] = 2900,
["Infobox_Indian_constituency"] = 5800,
["Infobox_Indian_constituency/defaultdata"] = 5800,
["Infobox_Italian_comune"] = 8100,
["Infobox_Korean"] = 2300,
["Infobox_Korean/auto"] = 14000,
["Infobox_Korean/auto/categories"] = 14000,
["Infobox_Korean/base"] = 2300,
["Infobox_Korean/base/auto"] = 17000,
["Infobox_Korean/categories"] = 2300,
["Infobox_Korean_name"] = 2300,
["Infobox_Korean_name/auto"] = 14000,
["Infobox_Korean_television_name"] = 3400,
["Infobox_NASCAR_driver"] = 2300,
["Infobox_NASCAR_race_report"] = 2700,
["Infobox_NCAA_basketball_conference_tournament"] = 2100,
["Infobox_NCAA_team_season"] = 10000,
["Infobox_NFL_biography"] = 27000,
["Infobox_NFL_team_season"] = 2300,
["Infobox_NRHP"] = 74000,
["Infobox_NRHP/conv"] = 19000,
["Infobox_NRHP/locmapin2region"] = 68000,
["Infobox_Olympic_event"] = 8000,
["Infobox_Olympic_event/event_link"] = 8000,
["Infobox_Olympic_event/games_text"] = 8000,
["Infobox_Pan_American_Games_event"] = 2900,
["Infobox_Paralympic_event"] = 2900,
["Infobox_Paralympic_event/games_text"] = 2900,
["Infobox_Romanian_subdivision"] = 3200,
["Infobox_Russian_district"] = 2100,
["Infobox_Russian_inhabited_locality"] = 4700,
["Infobox_Russian_inhabited_locality/PosMapFS"] = 4200,
["Infobox_Russian_inhabited_locality/federal_subject"] = 4600,
["Infobox_SCOTUS_case"] = 4600,
["Infobox_SSSI"] = 2000,
["Infobox_Site_of_Special_Scientific_Interest"] = 2100,
["Infobox_Slovak_place"] = 3000,
["Infobox_Swiss_town"] = 2900,
["Infobox_Switzerland_municipality"] = 2900,
["Infobox_Turkey_place"] = 20000,
["Infobox_U.S._county"] = 3000,
["Infobox_U.S._county/district"] = 3000,
["Infobox_U.S._legislation"] = 2100,
["Infobox_UK_constituency"] = 2200,
["Infobox_UK_constituency/year"] = 2200,
["Infobox_UK_legislation"] = 6400,
["Infobox_UK_place"] = 27000,
["Infobox_UK_place/NoDialCode"] = 8200,
["Infobox_UK_place/NoPostCode"] = 3600,
["Infobox_UK_place/area"] = 2700,
["Infobox_UK_place/dens"] = 2300,
["Infobox_UK_place/dist"] = 2800,
["Infobox_UK_place/local"] = 27000,
["Infobox_UK_place/styles.css"] = 27000,
["Infobox_UNESCO_World_Heritage_Site"] = 2200,
["Infobox_UN_resolution"] = 2300,
["Infobox_US_Supreme_Court_case"] = 4800,
["Infobox_US_Supreme_Court_case/courts"] = 4800,
["Infobox_United_States_legislative_district"] = 2700,
["Infobox_United_States_legislative_district/representative"] = 2700,
["Infobox_Wikipedia_user"] = 12000,
["Infobox_academic"] = 27000,
["Infobox_aircraft"] = 13000,
["Infobox_aircraft/styles.css"] = 14000,
["Infobox_aircraft_occurrence"] = 2900,
["Infobox_airline"] = 4800,
["Infobox_airline/styles.css"] = 4800,
["Infobox_airport"] = 14000,
["Infobox_airport/datatable"] = 13000,
["Infobox_airport/styles.css"] = 14000,
["Infobox_album"] = 169000,
["Infobox_album/color"] = 208000,
["Infobox_album/link"] = 169000,
["Infobox_anatomy"] = 4500,
["Infobox_animanga/Footer"] = 7800,
["Infobox_animanga/Header"] = 7800,
["Infobox_animanga/Print"] = 6700,
["Infobox_animanga/Video"] = 5100,
["Infobox_architect"] = 4400,
["Infobox_artist"] = 35000,
["Infobox_artist_discography"] = 6500,
["Infobox_artwork"] = 15000,
["Infobox_automobile"] = 9300,
["Infobox_award"] = 16000,
["Infobox_badminton_player"] = 3300,
["Infobox_baseball_biography"] = 30000,
["Infobox_baseball_biography/style"] = 30000,
["Infobox_baseball_biography/styles.css"] = 30000,
["Infobox_baseball_team_season"] = 3300,
["Infobox_baseball_team_season/leagueseason"] = 3300,
["Infobox_baseball_team_season/season"] = 3300,
["Infobox_baseball_team_season/styles.css"] = 3300,
["Infobox_basketball_biography"] = 23000,
["Infobox_basketball_biography/style"] = 23000,
["Infobox_basketball_club"] = 3300,
["Infobox_basketball_club/styles.css"] = 3300,
["Infobox_beauty_pageant"] = 2200,
["Infobox_bilateral_relations"] = 5000,
["Infobox_bishop_styles"] = 2500,
["Infobox_body_of_water"] = 19000,
["Infobox_book"] = 62000,
["Infobox_book/styles.css"] = 62000,
["Infobox_boxer"] = 6500,
["Infobox_brand"] = 2200,
["Infobox_brand/styles.css"] = 2200,
["Infobox_bridge"] = 6800,
["Infobox_building"] = 34000,
["Infobox_bus_company"] = 2000,
["Infobox_cemetery"] = 2100,
["Infobox_character"] = 8400,
["Infobox_character/styles.css"] = 8400,
["Infobox_chess_biography"] = 4800,
["Infobox_chess_player"] = 3800,
["Infobox_church"] = 17000,
["Infobox_church/denomination"] = 17000,
["Infobox_church/font_color"] = 17000,
["Infobox_civil_conflict"] = 3200,
["Infobox_civilian_attack"] = 7600,
["Infobox_college_coach"] = 13000,
["Infobox_college_football_game"] = 2300,
["Infobox_college_football_player"] = 2600,
["Infobox_college_sports_team_season"] = 45000,
["Infobox_college_sports_team_season/link"] = 45000,
["Infobox_college_sports_team_season/name"] = 45000,
["Infobox_college_sports_team_season/succession"] = 45000,
["Infobox_college_sports_team_season/team"] = 45000,
["Infobox_comedian"] = 2200,
["Infobox_comic_book_title"] = 3200,
["Infobox_comics_character"] = 3500,
["Infobox_comics_creator"] = 3600,
["Infobox_comics_creator/styles.css"] = 3600,
["Infobox_company"] = 93000,
["Infobox_company/styles.css"] = 93000,
["Infobox_computing_device"] = 2600,
["Infobox_concert"] = 3900,
["Infobox_constituency"] = 7700,
["Infobox_country"] = 7200,
["Infobox_country/formernext"] = 6700,
["Infobox_country/imagetable"] = 5600,
["Infobox_country/multirow"] = 9300,
["Infobox_country/status_text"] = 3100,
["Infobox_country/styles.css"] = 7200,
["Infobox_country_at_games"] = 17000,
["Infobox_country_at_games/core"] = 17000,
["Infobox_country_at_games/see_also"] = 14000,
["Infobox_court_case"] = 5300,
["Infobox_court_case/images"] = 2900,
["Infobox_court_case/styles.css"] = 5300,
["Infobox_cricket_tournament"] = 2800,
["Infobox_cricketer"] = 32000,
["Infobox_cricketer/career"] = 32000,
["Infobox_cricketer/national_side"] = 7700,
["Infobox_criminal"] = 7800,
["Infobox_curler"] = 2800,
["Infobox_cycling_race_report"] = 5000,
["Infobox_cyclist"] = 17000,
["Infobox_dam"] = 5900,
["Infobox_deity"] = 2300,
["Infobox_deity/color"] = 2300,
["Infobox_designation_list"] = 32000,
["Infobox_designation_list/entry"] = 23000,
["Infobox_dim"] = 6400,
["Infobox_diocese"] = 4100,
["Infobox_drug"] = 12000,
["Infobox_drug/chemical_formula"] = 12000,
["Infobox_drug/data_page_link"] = 12000,
["Infobox_drug/formatATC"] = 12000,
["Infobox_drug/formatCASnumber"] = 12000,
["Infobox_drug/formatChEBI"] = 12000,
["Infobox_drug/formatChEMBL"] = 12000,
["Infobox_drug/formatChemDBNIAID"] = 12000,
["Infobox_drug/formatChemSpider"] = 12000,
["Infobox_drug/formatCompTox"] = 12000,
["Infobox_drug/formatDrugBank"] = 12000,
["Infobox_drug/formatIUPHARBPS"] = 12000,
["Infobox_drug/formatJmol"] = 12000,
["Infobox_drug/formatKEGG"] = 12000,
["Infobox_drug/formatPDBligand"] = 11000,
["Infobox_drug/formatPubChemCID"] = 12000,
["Infobox_drug/formatPubChemSID"] = 12000,
["Infobox_drug/formatUNII"] = 12000,
["Infobox_drug/legal_status"] = 12000,
["Infobox_drug/licence"] = 12000,
["Infobox_drug/maintenance_categories"] = 12000,
["Infobox_drug/non-ref-space"] = 4000,
["Infobox_drug/pregnancy_category"] = 12000,
["Infobox_drug/styles.css"] = 12000,
["Infobox_drug/title"] = 12000,
["Infobox_economist"] = 2000,
["Infobox_election"] = 40000,
["Infobox_election/shortname"] = 2600,
["Infobox_election/styles.css"] = 40000,
["Infobox_enzyme"] = 5100,
["Infobox_ethnic_group"] = 8100,
["Infobox_event"] = 7800,
["Infobox_family"] = 2800,
["Infobox_field_hockey_player"] = 2500,
["Infobox_figure_skater"] = 4000,
["Infobox_film"] = 170000,
["Infobox_film/short_description"] = 166000,
["Infobox_film_awards"] = 3200,
["Infobox_film_awards/link"] = 3200,
["Infobox_film_awards/style"] = 3200,
["Infobox_film_or_theatre_festival"] = 2100,
["Infobox_food"] = 7800,
["Infobox_football_biography"] = 219000,
["Infobox_football_club"] = 29000,
["Infobox_football_club_season"] = 24000,
["Infobox_football_league"] = 2800,
["Infobox_football_league_season"] = 22000,
["Infobox_football_match"] = 6700,
["Infobox_football_tournament"] = 2200,
["Infobox_football_tournament_season"] = 9400,
["Infobox_former_subdivision"] = 3700,
["Infobox_former_subdivision/styles.css"] = 3700,
["Infobox_galaxy"] = 3400,
["Infobox_game"] = 3100,
["Infobox_game_score"] = 3800,
["Infobox_games"] = 2100,
["Infobox_gene"] = 13000,
["Infobox_given_name"] = 4100,
["Infobox_golfer"] = 4900,
["Infobox_golfer/highest_ranking"] = 4900,
["Infobox_government_agency"] = 13000,
["Infobox_government_cabinet"] = 3600,
["Infobox_gridiron_football_biography"] = 40000,
["Infobox_gridiron_football_biography/position"] = 39000,
["Infobox_gridiron_football_team_season"] = 4100,
["Infobox_gymnast"] = 5900,
["Infobox_handball_biography"] = 5600,
["Infobox_historic_site"] = 21000,
["Infobox_holiday"] = 2200,
["Infobox_holiday/date"] = 2200,
["Infobox_horseraces"] = 2700,
["Infobox_hospital"] = 7000,
["Infobox_hospital/care_system"] = 7000,
["Infobox_hospital/lists"] = 7000,
["Infobox_hurling_championship"] = 2700,
["Infobox_ice_hockey_biography"] = 21000,
["Infobox_ice_hockey_player"] = 18000,
["Infobox_ice_hockey_team"] = 3300,
["Infobox_ice_hockey_team_season"] = 2200,
["Infobox_international_football_competition"] = 6700,
["Infobox_islands"] = 9700,
["Infobox_islands/area"] = 10000,
["Infobox_islands/density"] = 10000,
["Infobox_islands/length"] = 9700,
["Infobox_islands/styles.css"] = 9700,
["Infobox_journal"] = 10000,
["Infobox_journal/Abbreviation_search"] = 10000,
["Infobox_journal/Bluebook_check"] = 9900,
["Infobox_journal/Former_check"] = 9900,
["Infobox_journal/ISO_4_check"] = 9900,
["Infobox_journal/ISSN-eISSN"] = 9900,
["Infobox_journal/Indexing_search"] = 10000,
["Infobox_journal/MathSciNet_check"] = 9900,
["Infobox_journal/NLM_check"] = 9900,
["Infobox_journal/frequency"] = 9000,
["Infobox_journal/openaccess"] = 2700,
["Infobox_judoka"] = 2800,
["Infobox_lake"] = 3800,
["Infobox_language"] = 10000,
["Infobox_language/family-color"] = 12000,
["Infobox_language/genetic"] = 7000,
["Infobox_language/lingualist"] = 10000,
["Infobox_language/linguistlist"] = 10000,
["Infobox_language/ref"] = 7400,
["Infobox_law_enforcement_agency"] = 2200,
["Infobox_legislation"] = 2800,
["Infobox_legislative_district"] = 2300,
["Infobox_legislative_election"] = 2700,
["Infobox_legislative_election/row"] = 2600,
["Infobox_legislative_election/styles.css"] = 2700,
["Infobox_legislative_term"] = 2100,
["Infobox_legislature"] = 4400,
["Infobox_library"] = 2500,
["Infobox_lighthouse"] = 2600,
["Infobox_lighthouse/light"] = 2600,
["Infobox_locomotive"] = 5000,
["Infobox_magazine"] = 8300,
["Infobox_manner_of_address"] = 4200,
["Infobox_martial_artist"] = 6300,
["Infobox_martial_artist/record"] = 6300,
["Infobox_medal_templates"] = 477000,
["Infobox_medical_condition"] = 9900,
["Infobox_medical_condition_(new)"] = 6400,
["Infobox_medical_details"] = 2500,
["Infobox_medical_person"] = 2400,
["Infobox_militant_organization"] = 2200,
["Infobox_military_conflict"] = 28000,
["Infobox_military_installation"] = 11000,
["Infobox_military_person"] = 54000,
["Infobox_military_unit"] = 29000,
["Infobox_mine"] = 2300,
["Infobox_mineral"] = 2000,
["Infobox_mobile_phone"] = 2500,
["Infobox_mobile_phone/size"] = 2100,
["Infobox_mobile_phone/weight"] = 2200,
["Infobox_model"] = 2400,
["Infobox_monument"] = 2800,
["Infobox_mountain"] = 30000,
["Infobox_multi-sport_competition_event"] = 2800,
["Infobox_museum"] = 12000,
["Infobox_musical_artist"] = 131000,
["Infobox_musical_artist/hCard_class"] = 122000,
["Infobox_musical_composition"] = 3700,
["Infobox_name"] = 8800,
["Infobox_name_module"] = 9400,
["Infobox_newspaper"] = 11000,
["Infobox_newspaper/styles.css"] = 11000,
["Infobox_noble"] = 7800,
["Infobox_officeholder"] = 280000,
["Infobox_officeholder/office"] = 287000,
["Infobox_official_post"] = 9800,
["Infobox_organization"] = 43000,
["Infobox_pageant_titleholder"] = 3100,
["Infobox_park"] = 9900,
["Infobox_person"] = 572000,
["Infobox_person/Wikidata"] = 5000,
["Infobox_person/height"] = 115000,
["Infobox_person/length"] = 7700,
["Infobox_person/weight"] = 74000,
["Infobox_philosopher"] = 3800,
["Infobox_planet"] = 4800,
["Infobox_play"] = 4600,
["Infobox_political_party"] = 16000,
["Infobox_power_station"] = 3400,
["Infobox_prepared_food"] = 2500,
["Infobox_professional_wrestler"] = 4800,
["Infobox_professional_wrestling_event"] = 3300,
["Infobox_protected_area"] = 15000,
["Infobox_protein_family"] = 2200,
["Infobox_publisher"] = 2600,
["Infobox_racehorse"] = 6000,
["Infobox_racing_driver"] = 5800,
["Infobox_racing_driver_series_section"] = 2900,
["Infobox_radio_station"] = 22000,
["Infobox_radio_station/styles.css"] = 22000,
["Infobox_rail"] = 3200,
["Infobox_rail_line"] = 8000,
["Infobox_rail_service"] = 3300,
["Infobox_reality_competition_season"] = 4300,
["Infobox_record_label"] = 4200,
["Infobox_recurring_event"] = 8100,
["Infobox_religious_biography"] = 7200,
["Infobox_religious_building"] = 15000,
["Infobox_religious_building/color"] = 21000,
["Infobox_restaurant"] = 4600,
["Infobox_river"] = 32000,
["Infobox_river/calcunit"] = 32000,
["Infobox_river/discharge"] = 32000,
["Infobox_river/row-style"] = 32000,
["Infobox_river/source"] = 32000,
["Infobox_road"] = 25000,
["Infobox_road/meta/mask/category"] = 24000,
["Infobox_road/meta/mask/country"] = 25000,
["Infobox_road/styles.css"] = 26000,
["Infobox_road_small"] = 2500,
["Infobox_rockunit"] = 6500,
["Infobox_royalty"] = 26000,
["Infobox_royalty/short_description"] = 8800,
["Infobox_rugby_biography"] = 19000,
["Infobox_rugby_biography/correct_date"] = 19000,
["Infobox_rugby_biography/depcheck"] = 19000,
["Infobox_rugby_league_biography"] = 11000,
["Infobox_rugby_league_biography/PLAYER"] = 11000,
["Infobox_rugby_team"] = 2700,
["Infobox_sailboat_specifications"] = 2300,
["Infobox_saint"] = 5500,
["Infobox_school"] = 40000,
["Infobox_school/short_description"] = 40000,
["Infobox_school/styles.css"] = 40000,
["Infobox_school_district"] = 6500,
["Infobox_school_district/styles.css"] = 6500,
["Infobox_scientist"] = 57000,
["Infobox_settlement"] = 597000,
["Infobox_settlement/areadisp"] = 259000,
["Infobox_settlement/columns"] = 108000,
["Infobox_settlement/columns/styles.css"] = 108000,
["Infobox_settlement/densdisp"] = 457000,
["Infobox_settlement/lengthdisp"] = 182000,
["Infobox_settlement/link"] = 107000,
["Infobox_settlement/styles.css"] = 597000,
["Infobox_ship"] = 43000,
["Infobox_ship/career"] = 39000,
["Infobox_ship/characteristics"] = 43000,
["Infobox_ship/class_overview"] = 4400,
["Infobox_ship/image"] = 42000,
["Infobox_ship/service_record"] = 2500,
["Infobox_shopping_mall"] = 3800,
["Infobox_short_story"] = 2700,
["Infobox_skier"] = 2700,
["Infobox_soap_character"] = 3100,
["Infobox_social_media_personality"] = 4400,
["Infobox_software"] = 14000,
["Infobox_software/simple"] = 15000,
["Infobox_song"] = 84000,
["Infobox_song/color"] = 84000,
["Infobox_song/link"] = 84000,
["Infobox_song_contest_national_year/Year"] = 2100,
["Infobox_spaceflight"] = 4100,
["Infobox_spaceflight/styles.css"] = 4100,
["Infobox_speed_skater"] = 2000,
["Infobox_sport_event"] = 2800,
["Infobox_sports_competition_event"] = 24000,
["Infobox_sports_competition_event/medalrow"] = 15000,
["Infobox_sports_league"] = 5700,
["Infobox_sports_season"] = 6900,
["Infobox_sports_team"] = 2300,
["Infobox_sportsperson"] = 160000,
["Infobox_stadium"] = 2600,
["Infobox_station"] = 58000,
["Infobox_station/services"] = 58000,
["Infobox_station/styles.css"] = 58000,
["Infobox_street"] = 4400,
["Infobox_swimmer"] = 11000,
["Infobox_television"] = 64000,
["Infobox_television/Short_description"] = 61000,
["Infobox_television/styles.css"] = 64000,
["Infobox_television_channel"] = 6700,
["Infobox_television_channel/styles.css"] = 6700,
["Infobox_television_episode"] = 13000,
["Infobox_television_episode/styles.css"] = 14000,
["Infobox_television_season"] = 11000,
["Infobox_television_station"] = 3200,
["Infobox_television_station/styles.css"] = 3300,
["Infobox_tennis_biography"] = 11000,
["Infobox_tennis_event"] = 3300,
["Infobox_tennis_tournament"] = 2000,
["Infobox_tennis_tournament/heading"] = 2000,
["Infobox_tennis_tournament/style"] = 2000,
["Infobox_tennis_tournament_event"] = 22000,
["Infobox_tennis_tournament_year"] = 11000,
["Infobox_tennis_tournament_year/color"] = 33000,
["Infobox_tennis_tournament_year/footer"] = 33000,
["Infobox_tournament_season"] = 13000,
["Infobox_train"] = 2600,
["Infobox_university"] = 26000,
["Infobox_user"] = 3000,
["Infobox_venue"] = 20000,
["Infobox_video_game"] = 30000,
["Infobox_video_game/styles.css"] = 30000,
["Infobox_volleyball_biography"] = 5900,
["Infobox_weapon"] = 8100,
["Infobox_weather_event"] = 3500,
["Infobox_weather_event/Effects"] = 3300,
["Infobox_weather_event/Footer"] = 3300,
["Infobox_weather_event/History"] = 3200,
["Infobox_weather_event/SSHWS"] = 2000,
["Infobox_weather_event/meteorology"] = 3200,
["Infobox_weather_event/scale"] = 2100,
["Infobox_weather_event/styles.css"] = 3500,
["Infobox_website"] = 8300,
["Infobox_writer"] = 45000,
["Information"] = 98000,
["Information/styles.css"] = 98000,
["Inlang"] = 2400,
["Inline"] = 3800,
["Inline_block"] = 5400,
["Inprogress"] = 2600,
["Input_link"] = 32000,
["Instagram"] = 20000,
["InterSportStats"] = 5600,
["Interlanguage_link"] = 300000,
["Interlanguage_link_multi"] = 9500,
["International_Paralympic_Committee"] = 4200,
["International_football_primary_link"] = 3500,
["International_football_primary_style"] = 3500,
["International_football_secondary_style"] = 3400,
["Internet_Archive"] = 2200,
["Internet_Archive_SCOTUS_URL"] = 3300,
["Internet_Archive_author"] = 19000,
["Internet_Archive_film"] = 2600,
["Intitle"] = 21000,
["Ip"] = 2100,
["Iptalk"] = 18000,
["IranCensus2006"] = 30000,
["IranNCSGN"] = 3100,
["Iran_Census_2006"] = 30000,
["Irish_place_name"] = 3000,
["IsIPAddress"] = 45000,
["IsValidPageName"] = 3400,
["Is_MLB_league"] = 3300,
["Is_NPB_league"] = 3300,
["Is_continent"] = 13000,
["Is_country_in_Central_America"] = 17000,
["Is_country_in_the_Caribbean"] = 17000,
["Is_interwiki_link"] = 6500,
["Is_italic_taxon"] = 652000,
["Is_redirect"] = 382000,
["Is_time"] = 6700,
["Is_valid_page_name"] = 3400,
["Isbn"] = 10000,
["Isnum"] = 3000,
["Isnumeric"] = 120000,
["Iso2continent"] = 84000,
["Iso2country"] = 25000,
["Iso2country/article"] = 25000,
["Iso2country/data"] = 25000,
["Issubst"] = 64000,
["Italic_dab2"] = 5900,
["Italic_disambiguation"] = 2400,
["Italic_title"] = 257000,
["Italic_title_prefixed"] = 8800,
["Italictitle"] = 3000,
["Ivmbox"] = 142000,
["Ivory_messagebox"] = 187000,
["Ivory_messagebox/styles.css"] = 187000,
["Module:I18n/complex_date"] = 47000,
["Module:IP"] = 148000,
["Module:IPA"] = 184000,
["Module:IPA/data"] = 166000,
["Module:IPA/styles.css"] = 151000,
["Module:IPA_symbol"] = 6800,
["Module:IPA_symbol/data"] = 6800,
["Module:IPAc-en"] = 55000,
["Module:IPAc-en/data"] = 55000,
["Module:IPAc-en/phonemes"] = 55000,
["Module:IPAc-en/pronunciation"] = 55000,
["Module:IPAddress"] = 214000,
["Module:ISO_3166"] = 909000,
["Module:ISO_3166/data/AT"] = 2500,
["Module:ISO_3166/data/BA"] = 3400,
["Module:ISO_3166/data/CA"] = 2600,
["Module:ISO_3166/data/CH"] = 4200,
["Module:ISO_3166/data/CN"] = 2800,
["Module:ISO_3166/data/CZ"] = 6600,
["Module:ISO_3166/data/DE"] = 15000,
["Module:ISO_3166/data/ES"] = 3700,
["Module:ISO_3166/data/FR"] = 38000,
["Module:ISO_3166/data/GB"] = 7200,
["Module:ISO_3166/data/GR"] = 3500,
["Module:ISO_3166/data/IN"] = 29000,
["Module:ISO_3166/data/IR"] = 23000,
["Module:ISO_3166/data/IT"] = 2500,
["Module:ISO_3166/data/National"] = 909000,
["Module:ISO_3166/data/PL"] = 7600,
["Module:ISO_3166/data/RS"] = 3200,
["Module:ISO_3166/data/RU"] = 27000,
["Module:ISO_3166/data/UA"] = 2200,
["Module:ISO_3166/data/US"] = 90000,
["Module:ISO_639_name"] = 34000,
["Module:ISO_639_name/ISO_639-1"] = 29000,
["Module:ISO_639_name/ISO_639-2"] = 21000,
["Module:ISO_639_name/ISO_639-2B"] = 20000,
["Module:ISO_639_name/ISO_639-3"] = 20000,
["Module:ISO_639_name/ISO_639-3_(dep)"] = 34000,
["Module:ISO_639_name/ISO_639-5"] = 19000,
["Module:ISO_639_name/ISO_639_deprecated"] = 34000,
["Module:ISO_639_name/ISO_639_name_to_code"] = 4600,
["Module:ISO_639_name/ISO_639_override"] = 34000,
["Module:ISOdate"] = 47000,
["Module:Ice_hockey_box"] = 2000,
["Module:Icon"] = 677000,
["Module:Icon/data"] = 677000,
["Module:Icon_box"] = 260000,
["Module:Icon_box/data"] = 260000,
["Module:If_any_equal"] = 251000,
["Module:If_empty"] = 6740000,
["Module:If_in_category"] = 164000,
["Module:If_in_page"] = 22000,
["Module:If_not_given_or_empty"] = 90000,
["Module:If_preview"] = 1370000,
["Module:If_preview/configuration"] = 1370000,
["Module:If_preview/styles.css"] = 1370000,
["Module:In_lang"] = 387000,
["Module:Indent"] = 2300,
["Module:Infobox"] = 4680000,
["Module:Infobox/dates"] = 77000,
["Module:Infobox/styles.css"] = 4950000,
["Module:Infobox/utilities"] = 2600,
["Module:Infobox3cols"] = 321000,
["Module:InfoboxBuilder"] = 2700,
["Module:InfoboxImage"] = 5610000,
["Module:InfoboxImage/data"] = 3350000,
["Module:Infobox_body_of_water_tracking"] = 19000,
["Module:Infobox_cyclist_tracking"] = 17000,
["Module:Infobox_dim"] = 385000,
["Module:Infobox_dim/data"] = 238000,
["Module:Infobox_election"] = 42000,
["Module:Infobox_gene"] = 13000,
["Module:Infobox_gene/orthologs"] = 13000,
["Module:Infobox_mapframe"] = 1680000,
["Module:Infobox_military_conflict"] = 28000,
["Module:Infobox_military_conflict/styles.css"] = 28000,
["Module:Infobox_multi-lingual_name"] = 23000,
["Module:Infobox_multi-lingual_name/data"] = 23000,
["Module:Infobox_power_station"] = 3400,
["Module:Infobox_road"] = 26000,
["Module:Infobox_road/browselinks"] = 26000,
["Module:Infobox_road/errors"] = 25000,
["Module:Infobox_road/length"] = 26000,
["Module:Infobox_road/locations"] = 25000,
["Module:Infobox_road/map"] = 25000,
["Module:Infobox_road/route"] = 26000,
["Module:Infobox_road/sections"] = 25000,
["Module:Infobox_ship"] = 43000,
["Module:Infobox_ship/data"] = 43000,
["Module:Infobox_ship/styles.css"] = 43000,
["Module:Infobox_television"] = 64000,
["Module:Infobox_television_disambiguation_check"] = 72000,
["Module:Infobox_television_episode"] = 13000,
["Module:Infobox_television_season_disambiguation_check"] = 10000,
["Module:Infobox_television_season_name"] = 11000,
["Module:Internet_Archive"] = 22000,
["Module:Is_article"] = 2400,
["Module:Is_infobox_in_lead"] = 462000,
["Module:Is_instance"] = 354000,
["Module:Iso2nationality"] = 95000,
["Module:Italic_title"] = 1250000,
["Module:Italic_title2"] = 5900,
}
mo40tk9rhiat9crfn9ftwb4uwvcnrxj
1378171
1378170
2026-08-02T15:52:08Z
A826
72368
೧ revisions imported from [[:en:Module:Transclusion_count/data/I]]
1378170
Scribunto
text/plain
return {
["IAST"] = 6300,
["IA_SCOTUS_URL"] = 3300,
["IBDB_name"] = 9800,
["ICD10"] = 5000,
["ICD9"] = 4400,
["ICS"] = 3500,
["ICS_flag"] = 3500,
["IDN"] = 3800,
["IMDb_episode"] = 11000,
["IMDb_episodes"] = 4100,
["IMDb_name"] = 172000,
["IMDb_title"] = 211000,
["IMO_Number"] = 4500,
["IMSLP"] = 9200,
["INA"] = 2400,
["IND"] = 8600,
["INR"] = 6500,
["INRConvert"] = 6700,
["INRConvert/CurrentRate"] = 6600,
["INRConvert/USD"] = 6600,
["INRConvert/out"] = 6600,
["IOBDB_name"] = 2100,
["IP"] = 2800,
["IPA"] = 181000,
["IPA_audio_link"] = 5000,
["IPA_link"] = 5100,
["IPAblink"] = 2600,
["IPAc-cmn"] = 2800,
["IPAc-en"] = 55000,
["IPAc-pl"] = 51000,
["IPSummary"] = 82000,
["IP_summary"] = 83000,
["IPtalk"] = 18000,
["IPuser"] = 7600,
["IPvandal"] = 2800,
["IRC"] = 7100,
["IRI"] = 2500,
["IRL"] = 6000,
["IRN"] = 4000,
["ISBN"] = 474000,
["ISBN?"] = 2500,
["ISBNT"] = 46000,
["ISBN_missing"] = 3200,
["ISFDB_name"] = 4300,
["ISFDB_title"] = 5100,
["ISL"] = 2300,
["ISO_15924/script-example-character"] = 3100,
["ISO_15924/wp-article"] = 3100,
["ISO_15924/wp-article/format"] = 3100,
["ISO_15924/wp-article/label"] = 3000,
["ISO_3166_code"] = 240000,
["ISO_3166_name"] = 16000,
["ISO_639_name"] = 28000,
["ISP"] = 3700,
["ISR"] = 5600,
["ISSN"] = 12000,
["ISSN_link"] = 33000,
["ISTAT"] = 8100,
["ISU_figure_skater"] = 2300,
["ITA"] = 20000,
["ITF"] = 6800,
["ITF_profile"] = 2600,
["ITIS"] = 5900,
["ITN_talk"] = 13000,
["ITN_talk/date"] = 13000,
["IUCN_banner"] = 15000,
["I_sup"] = 4900,
["Ice_hockey_box"] = 2000,
["Ice_hockey_stats"] = 20000,
["Icehockeystats"] = 11000,
["Icelandic_name"] = 2100,
["Icon"] = 665000,
["If"] = 430000,
["If_all"] = 7700,
["If_autoconfirmed"] = 2200,
["If_between"] = 4800,
["If_both"] = 207000,
["If_dark"] = 4000,
["If_dark/styles.css"] = 4000,
["If_either"] = 22000,
["If_empty"] = 6700000,
["If_first_display_both"] = 122000,
["If_in_category"] = 164000,
["If_in_page"] = 22000,
["If_last_display_both"] = 38000,
["If_mobile"] = 2100,
["If_mobile/styles.css"] = 2600,
["If_preview"] = 66000,
["If_then_show"] = 440000,
["Ifempty"] = 942000,
["Ifeq"] = 83000,
["Iferror_then_show"] = 4000,
["Ifexist_not_redirect"] = 1900000,
["Ifnotempty"] = 18000,
["Ifnoteq_then_show"] = 2300,
["Ifnumber"] = 75000,
["Ifsubst"] = 1020000,
["Ih"] = 8100,
["Ill"] = 253000,
["Illm"] = 5900,
["Image_frame"] = 6200,
["Image_label"] = 4700,
["Image_label_begin"] = 4100,
["Image_label_end"] = 4100,
["Image_label_small"] = 2600,
["Image_needed"] = 4500,
["Image_other"] = 190000,
["Image_requested"] = 137000,
["Image_requested/Category_helper"] = 126000,
["Imbox"] = 996000,
["Imdb_name"] = 5300,
["Imdb_title"] = 2800,
["Importance"] = 15000,
["Importance/colour"] = 30000,
["Importance_mask"] = 619000,
["Improve_categories"] = 7600,
["Improve_documentation"] = 4200,
["Improve_plot"] = 4100,
["In_class"] = 5600,
["In_lang"] = 387000,
["In_progress"] = 3800,
["In_string"] = 306000,
["In_title"] = 30000,
["Inactive_userpage_blanked"] = 4000,
["Inaturalist_taxon"] = 3800,
["Include-USGov"] = 25000,
["Incomplete_list"] = 24000,
["Inconclusive"] = 2300,
["Increase"] = 60000,
["Incumbent_pope"] = 4700,
["Indent"] = 2300,
["Indented_plainlist"] = 2700,
["Independent_sources"] = 10000,
["IndexFungorum"] = 2100,
["Indian_English"] = 4900,
["Indian_railway_code"] = 3500,
["Indian_rupee"] = 12000,
["Inflation"] = 27000,
["Inflation-fn"] = 5800,
["Inflation-year"] = 4300,
["Inflation/IN/startyear"] = 6600,
["Inflation/UK"] = 5500,
["Inflation/UK/dataset"] = 5500,
["Inflation/UK/startyear"] = 5500,
["Inflation/US"] = 16000,
["Inflation/US-GDP"] = 3000,
["Inflation/US-GDP/dataset"] = 3000,
["Inflation/US-GDP/startyear"] = 3000,
["Inflation/US/dataset"] = 16000,
["Inflation/US/startyear"] = 16000,
["Inflation/fn"] = 7500,
["Inflation/year"] = 33000,
["Info"] = 5600,
["Infobox"] = 3420000,
["Infobox/Columns"] = 3300,
["Infobox/mobileviewfix.css"] = 174000,
["Infobox/styles-images.css"] = 20000,
["Infobox3cols"] = 28000,
["Infobox_AFL_biography"] = 15000,
["Infobox_Athletics_Championships"] = 3400,
["Infobox_Australian_place"] = 15000,
["Infobox_Australian_place/styles.css"] = 15000,
["Infobox_Australian_place/table"] = 11000,
["Infobox_COA_wide"] = 3700,
["Infobox_Canada_electoral_district"] = 2600,
["Infobox_Chinese"] = 23000,
["Infobox_Chinese/Chinese"] = 3200,
["Infobox_Chinese/Footer"] = 7200,
["Infobox_Chinese/Header"] = 7200,
["Infobox_Christian_leader"] = 23000,
["Infobox_French_commune"] = 38000,
["Infobox_French_subdivision"] = 2200,
["Infobox_Gaelic_games_biography"] = 5500,
["Infobox_Gaelic_games_player"] = 3300,
["Infobox_German_location"] = 11000,
["Infobox_German_place"] = 14000,
["Infobox_Grand_Prix_race_report"] = 2200,
["Infobox_Greece_place"] = 3600,
["Infobox_Greek_Dimos"] = 3000,
["Infobox_Hindu_temple"] = 2900,
["Infobox_Indian_constituency"] = 5800,
["Infobox_Indian_constituency/defaultdata"] = 5800,
["Infobox_Italian_comune"] = 8100,
["Infobox_Korean"] = 2300,
["Infobox_Korean/auto"] = 14000,
["Infobox_Korean/auto/categories"] = 14000,
["Infobox_Korean/base"] = 2300,
["Infobox_Korean/base/auto"] = 17000,
["Infobox_Korean/categories"] = 2300,
["Infobox_Korean_name"] = 2300,
["Infobox_Korean_name/auto"] = 14000,
["Infobox_Korean_television_name"] = 3400,
["Infobox_NASCAR_driver"] = 2300,
["Infobox_NASCAR_race_report"] = 2700,
["Infobox_NCAA_basketball_conference_tournament"] = 2100,
["Infobox_NCAA_team_season"] = 10000,
["Infobox_NFL_biography"] = 27000,
["Infobox_NFL_team_season"] = 2300,
["Infobox_NRHP"] = 74000,
["Infobox_NRHP/conv"] = 19000,
["Infobox_NRHP/locmapin2region"] = 68000,
["Infobox_Olympic_event"] = 8000,
["Infobox_Olympic_event/event_link"] = 8000,
["Infobox_Olympic_event/games_text"] = 8000,
["Infobox_Pan_American_Games_event"] = 2900,
["Infobox_Paralympic_event"] = 2900,
["Infobox_Paralympic_event/games_text"] = 2900,
["Infobox_Romanian_subdivision"] = 3200,
["Infobox_Russian_district"] = 2100,
["Infobox_Russian_inhabited_locality"] = 4700,
["Infobox_Russian_inhabited_locality/PosMapFS"] = 4200,
["Infobox_Russian_inhabited_locality/federal_subject"] = 4600,
["Infobox_SCOTUS_case"] = 4600,
["Infobox_SSSI"] = 2000,
["Infobox_Site_of_Special_Scientific_Interest"] = 2100,
["Infobox_Slovak_place"] = 3000,
["Infobox_Swiss_town"] = 2900,
["Infobox_Switzerland_municipality"] = 2900,
["Infobox_Turkey_place"] = 20000,
["Infobox_U.S._county"] = 3000,
["Infobox_U.S._county/district"] = 3000,
["Infobox_U.S._legislation"] = 2100,
["Infobox_UK_constituency"] = 2200,
["Infobox_UK_constituency/year"] = 2200,
["Infobox_UK_legislation"] = 6400,
["Infobox_UK_place"] = 27000,
["Infobox_UK_place/NoDialCode"] = 8200,
["Infobox_UK_place/NoPostCode"] = 3600,
["Infobox_UK_place/area"] = 2700,
["Infobox_UK_place/dens"] = 2300,
["Infobox_UK_place/dist"] = 2800,
["Infobox_UK_place/local"] = 27000,
["Infobox_UK_place/styles.css"] = 27000,
["Infobox_UNESCO_World_Heritage_Site"] = 2200,
["Infobox_UN_resolution"] = 2300,
["Infobox_US_Supreme_Court_case"] = 4800,
["Infobox_US_Supreme_Court_case/courts"] = 4800,
["Infobox_United_States_legislative_district"] = 2700,
["Infobox_United_States_legislative_district/representative"] = 2700,
["Infobox_Wikipedia_user"] = 12000,
["Infobox_academic"] = 27000,
["Infobox_aircraft"] = 13000,
["Infobox_aircraft/styles.css"] = 14000,
["Infobox_aircraft_occurrence"] = 2900,
["Infobox_airline"] = 4800,
["Infobox_airline/styles.css"] = 4800,
["Infobox_airport"] = 14000,
["Infobox_airport/datatable"] = 13000,
["Infobox_airport/styles.css"] = 14000,
["Infobox_album"] = 169000,
["Infobox_album/color"] = 208000,
["Infobox_album/link"] = 169000,
["Infobox_anatomy"] = 4500,
["Infobox_animanga/Footer"] = 7800,
["Infobox_animanga/Header"] = 7800,
["Infobox_animanga/Print"] = 6700,
["Infobox_animanga/Video"] = 5100,
["Infobox_architect"] = 4400,
["Infobox_artist"] = 35000,
["Infobox_artist_discography"] = 6500,
["Infobox_artwork"] = 15000,
["Infobox_automobile"] = 9300,
["Infobox_award"] = 16000,
["Infobox_badminton_player"] = 3300,
["Infobox_baseball_biography"] = 30000,
["Infobox_baseball_biography/style"] = 30000,
["Infobox_baseball_biography/styles.css"] = 30000,
["Infobox_baseball_team_season"] = 3300,
["Infobox_baseball_team_season/leagueseason"] = 3300,
["Infobox_baseball_team_season/season"] = 3300,
["Infobox_baseball_team_season/styles.css"] = 3300,
["Infobox_basketball_biography"] = 23000,
["Infobox_basketball_biography/style"] = 23000,
["Infobox_basketball_club"] = 3300,
["Infobox_basketball_club/styles.css"] = 3300,
["Infobox_beauty_pageant"] = 2200,
["Infobox_bilateral_relations"] = 5000,
["Infobox_bishop_styles"] = 2500,
["Infobox_body_of_water"] = 19000,
["Infobox_book"] = 62000,
["Infobox_book/styles.css"] = 62000,
["Infobox_boxer"] = 6500,
["Infobox_brand"] = 2200,
["Infobox_brand/styles.css"] = 2200,
["Infobox_bridge"] = 6800,
["Infobox_building"] = 34000,
["Infobox_bus_company"] = 2000,
["Infobox_cemetery"] = 2100,
["Infobox_character"] = 8400,
["Infobox_character/styles.css"] = 8400,
["Infobox_chess_biography"] = 4800,
["Infobox_chess_player"] = 3800,
["Infobox_church"] = 17000,
["Infobox_church/denomination"] = 17000,
["Infobox_church/font_color"] = 17000,
["Infobox_civil_conflict"] = 3200,
["Infobox_civilian_attack"] = 7600,
["Infobox_college_coach"] = 13000,
["Infobox_college_football_game"] = 2300,
["Infobox_college_football_player"] = 2600,
["Infobox_college_sports_team_season"] = 45000,
["Infobox_college_sports_team_season/link"] = 45000,
["Infobox_college_sports_team_season/name"] = 45000,
["Infobox_college_sports_team_season/succession"] = 45000,
["Infobox_college_sports_team_season/team"] = 45000,
["Infobox_comedian"] = 2200,
["Infobox_comic_book_title"] = 3200,
["Infobox_comics_character"] = 3500,
["Infobox_comics_creator"] = 3600,
["Infobox_comics_creator/styles.css"] = 3600,
["Infobox_company"] = 93000,
["Infobox_company/styles.css"] = 93000,
["Infobox_computing_device"] = 2600,
["Infobox_concert"] = 3900,
["Infobox_constituency"] = 7700,
["Infobox_country"] = 7200,
["Infobox_country/formernext"] = 6700,
["Infobox_country/imagetable"] = 5600,
["Infobox_country/multirow"] = 9300,
["Infobox_country/status_text"] = 3100,
["Infobox_country/styles.css"] = 7200,
["Infobox_country_at_games"] = 17000,
["Infobox_country_at_games/core"] = 17000,
["Infobox_country_at_games/see_also"] = 14000,
["Infobox_court_case"] = 5300,
["Infobox_court_case/images"] = 2900,
["Infobox_court_case/styles.css"] = 5300,
["Infobox_cricket_tournament"] = 2800,
["Infobox_cricketer"] = 32000,
["Infobox_cricketer/career"] = 32000,
["Infobox_cricketer/national_side"] = 7700,
["Infobox_criminal"] = 7800,
["Infobox_curler"] = 2800,
["Infobox_cycling_race_report"] = 5000,
["Infobox_cyclist"] = 17000,
["Infobox_dam"] = 5900,
["Infobox_deity"] = 2300,
["Infobox_deity/color"] = 2300,
["Infobox_designation_list"] = 32000,
["Infobox_designation_list/entry"] = 23000,
["Infobox_dim"] = 6400,
["Infobox_diocese"] = 4100,
["Infobox_drug"] = 12000,
["Infobox_drug/chemical_formula"] = 12000,
["Infobox_drug/data_page_link"] = 12000,
["Infobox_drug/formatATC"] = 12000,
["Infobox_drug/formatCASnumber"] = 12000,
["Infobox_drug/formatChEBI"] = 12000,
["Infobox_drug/formatChEMBL"] = 12000,
["Infobox_drug/formatChemDBNIAID"] = 12000,
["Infobox_drug/formatChemSpider"] = 12000,
["Infobox_drug/formatCompTox"] = 12000,
["Infobox_drug/formatDrugBank"] = 12000,
["Infobox_drug/formatIUPHARBPS"] = 12000,
["Infobox_drug/formatJmol"] = 12000,
["Infobox_drug/formatKEGG"] = 12000,
["Infobox_drug/formatPDBligand"] = 11000,
["Infobox_drug/formatPubChemCID"] = 12000,
["Infobox_drug/formatPubChemSID"] = 12000,
["Infobox_drug/formatUNII"] = 12000,
["Infobox_drug/legal_status"] = 12000,
["Infobox_drug/licence"] = 12000,
["Infobox_drug/maintenance_categories"] = 12000,
["Infobox_drug/non-ref-space"] = 4000,
["Infobox_drug/pregnancy_category"] = 12000,
["Infobox_drug/styles.css"] = 12000,
["Infobox_drug/title"] = 12000,
["Infobox_economist"] = 2000,
["Infobox_election"] = 40000,
["Infobox_election/shortname"] = 2600,
["Infobox_election/styles.css"] = 40000,
["Infobox_enzyme"] = 5100,
["Infobox_ethnic_group"] = 8100,
["Infobox_event"] = 7800,
["Infobox_family"] = 2800,
["Infobox_field_hockey_player"] = 2500,
["Infobox_figure_skater"] = 4000,
["Infobox_film"] = 170000,
["Infobox_film/short_description"] = 166000,
["Infobox_film_awards"] = 3200,
["Infobox_film_awards/link"] = 3200,
["Infobox_film_awards/style"] = 3200,
["Infobox_film_or_theatre_festival"] = 2100,
["Infobox_food"] = 7800,
["Infobox_football_biography"] = 219000,
["Infobox_football_club"] = 29000,
["Infobox_football_club_season"] = 24000,
["Infobox_football_league"] = 2800,
["Infobox_football_league_season"] = 22000,
["Infobox_football_match"] = 6700,
["Infobox_football_tournament"] = 2200,
["Infobox_football_tournament_season"] = 9400,
["Infobox_former_subdivision"] = 3700,
["Infobox_former_subdivision/styles.css"] = 3700,
["Infobox_galaxy"] = 3400,
["Infobox_game"] = 3100,
["Infobox_game_score"] = 3800,
["Infobox_games"] = 2100,
["Infobox_gene"] = 13000,
["Infobox_given_name"] = 4100,
["Infobox_golfer"] = 4900,
["Infobox_golfer/highest_ranking"] = 4900,
["Infobox_government_agency"] = 13000,
["Infobox_government_cabinet"] = 3600,
["Infobox_gridiron_football_biography"] = 40000,
["Infobox_gridiron_football_biography/position"] = 39000,
["Infobox_gridiron_football_team_season"] = 4100,
["Infobox_gymnast"] = 5900,
["Infobox_handball_biography"] = 5600,
["Infobox_historic_site"] = 21000,
["Infobox_holiday"] = 2200,
["Infobox_holiday/date"] = 2200,
["Infobox_horseraces"] = 2700,
["Infobox_hospital"] = 7000,
["Infobox_hospital/care_system"] = 7000,
["Infobox_hospital/lists"] = 7000,
["Infobox_hurling_championship"] = 2700,
["Infobox_ice_hockey_biography"] = 21000,
["Infobox_ice_hockey_player"] = 18000,
["Infobox_ice_hockey_team"] = 3300,
["Infobox_ice_hockey_team_season"] = 2200,
["Infobox_international_football_competition"] = 6700,
["Infobox_islands"] = 9700,
["Infobox_islands/area"] = 10000,
["Infobox_islands/density"] = 10000,
["Infobox_islands/length"] = 9700,
["Infobox_islands/styles.css"] = 9700,
["Infobox_journal"] = 10000,
["Infobox_journal/Abbreviation_search"] = 10000,
["Infobox_journal/Bluebook_check"] = 9900,
["Infobox_journal/Former_check"] = 9900,
["Infobox_journal/ISO_4_check"] = 9900,
["Infobox_journal/ISSN-eISSN"] = 9900,
["Infobox_journal/Indexing_search"] = 10000,
["Infobox_journal/MathSciNet_check"] = 9900,
["Infobox_journal/NLM_check"] = 9900,
["Infobox_journal/frequency"] = 9000,
["Infobox_journal/openaccess"] = 2700,
["Infobox_judoka"] = 2800,
["Infobox_lake"] = 3800,
["Infobox_language"] = 10000,
["Infobox_language/family-color"] = 12000,
["Infobox_language/genetic"] = 7000,
["Infobox_language/lingualist"] = 10000,
["Infobox_language/linguistlist"] = 10000,
["Infobox_language/ref"] = 7400,
["Infobox_law_enforcement_agency"] = 2200,
["Infobox_legislation"] = 2800,
["Infobox_legislative_district"] = 2300,
["Infobox_legislative_election"] = 2700,
["Infobox_legislative_election/row"] = 2600,
["Infobox_legislative_election/styles.css"] = 2700,
["Infobox_legislative_term"] = 2100,
["Infobox_legislature"] = 4400,
["Infobox_library"] = 2500,
["Infobox_lighthouse"] = 2600,
["Infobox_lighthouse/light"] = 2600,
["Infobox_locomotive"] = 5000,
["Infobox_magazine"] = 8300,
["Infobox_manner_of_address"] = 4200,
["Infobox_martial_artist"] = 6300,
["Infobox_martial_artist/record"] = 6300,
["Infobox_medal_templates"] = 477000,
["Infobox_medical_condition"] = 9900,
["Infobox_medical_condition_(new)"] = 6400,
["Infobox_medical_details"] = 2500,
["Infobox_medical_person"] = 2400,
["Infobox_militant_organization"] = 2200,
["Infobox_military_conflict"] = 28000,
["Infobox_military_installation"] = 11000,
["Infobox_military_person"] = 54000,
["Infobox_military_unit"] = 29000,
["Infobox_mine"] = 2300,
["Infobox_mineral"] = 2000,
["Infobox_mobile_phone"] = 2500,
["Infobox_mobile_phone/size"] = 2100,
["Infobox_mobile_phone/weight"] = 2200,
["Infobox_model"] = 2400,
["Infobox_monument"] = 2800,
["Infobox_mountain"] = 30000,
["Infobox_multi-sport_competition_event"] = 2800,
["Infobox_museum"] = 12000,
["Infobox_musical_artist"] = 131000,
["Infobox_musical_artist/hCard_class"] = 122000,
["Infobox_musical_composition"] = 3700,
["Infobox_name"] = 8800,
["Infobox_name_module"] = 9400,
["Infobox_newspaper"] = 11000,
["Infobox_newspaper/styles.css"] = 11000,
["Infobox_noble"] = 7800,
["Infobox_officeholder"] = 280000,
["Infobox_officeholder/office"] = 287000,
["Infobox_official_post"] = 9800,
["Infobox_organization"] = 43000,
["Infobox_pageant_titleholder"] = 3100,
["Infobox_park"] = 9900,
["Infobox_person"] = 572000,
["Infobox_person/Wikidata"] = 5000,
["Infobox_person/height"] = 115000,
["Infobox_person/length"] = 7700,
["Infobox_person/weight"] = 74000,
["Infobox_philosopher"] = 3800,
["Infobox_planet"] = 4800,
["Infobox_play"] = 4600,
["Infobox_political_party"] = 16000,
["Infobox_power_station"] = 3400,
["Infobox_prepared_food"] = 2500,
["Infobox_professional_wrestler"] = 4800,
["Infobox_professional_wrestling_event"] = 3300,
["Infobox_protected_area"] = 15000,
["Infobox_protein_family"] = 2200,
["Infobox_publisher"] = 2600,
["Infobox_racehorse"] = 6000,
["Infobox_racing_driver"] = 5800,
["Infobox_racing_driver_series_section"] = 2900,
["Infobox_radio_station"] = 22000,
["Infobox_radio_station/styles.css"] = 22000,
["Infobox_rail"] = 3200,
["Infobox_rail_line"] = 8000,
["Infobox_rail_service"] = 3300,
["Infobox_reality_competition_season"] = 4300,
["Infobox_record_label"] = 4200,
["Infobox_recurring_event"] = 8100,
["Infobox_religious_biography"] = 7200,
["Infobox_religious_building"] = 15000,
["Infobox_religious_building/color"] = 21000,
["Infobox_restaurant"] = 4600,
["Infobox_river"] = 32000,
["Infobox_river/calcunit"] = 32000,
["Infobox_river/discharge"] = 32000,
["Infobox_river/row-style"] = 32000,
["Infobox_river/source"] = 32000,
["Infobox_road"] = 25000,
["Infobox_road/meta/mask/category"] = 24000,
["Infobox_road/meta/mask/country"] = 25000,
["Infobox_road/styles.css"] = 26000,
["Infobox_road_small"] = 2500,
["Infobox_rockunit"] = 6500,
["Infobox_royalty"] = 26000,
["Infobox_royalty/short_description"] = 8800,
["Infobox_rugby_biography"] = 19000,
["Infobox_rugby_biography/correct_date"] = 19000,
["Infobox_rugby_biography/depcheck"] = 19000,
["Infobox_rugby_league_biography"] = 11000,
["Infobox_rugby_league_biography/PLAYER"] = 11000,
["Infobox_rugby_team"] = 2700,
["Infobox_sailboat_specifications"] = 2300,
["Infobox_saint"] = 5500,
["Infobox_school"] = 40000,
["Infobox_school/short_description"] = 40000,
["Infobox_school/styles.css"] = 40000,
["Infobox_school_district"] = 6500,
["Infobox_school_district/styles.css"] = 6500,
["Infobox_scientist"] = 57000,
["Infobox_settlement"] = 597000,
["Infobox_settlement/areadisp"] = 259000,
["Infobox_settlement/columns"] = 108000,
["Infobox_settlement/columns/styles.css"] = 108000,
["Infobox_settlement/densdisp"] = 457000,
["Infobox_settlement/lengthdisp"] = 182000,
["Infobox_settlement/link"] = 107000,
["Infobox_settlement/styles.css"] = 597000,
["Infobox_ship"] = 43000,
["Infobox_ship/career"] = 39000,
["Infobox_ship/characteristics"] = 43000,
["Infobox_ship/class_overview"] = 4400,
["Infobox_ship/image"] = 42000,
["Infobox_ship/service_record"] = 2500,
["Infobox_shopping_mall"] = 3800,
["Infobox_short_story"] = 2700,
["Infobox_skier"] = 2700,
["Infobox_soap_character"] = 3100,
["Infobox_social_media_personality"] = 4400,
["Infobox_software"] = 14000,
["Infobox_software/simple"] = 15000,
["Infobox_song"] = 84000,
["Infobox_song/color"] = 84000,
["Infobox_song/link"] = 84000,
["Infobox_song_contest_national_year/Year"] = 2100,
["Infobox_spaceflight"] = 4100,
["Infobox_spaceflight/styles.css"] = 4100,
["Infobox_speed_skater"] = 2000,
["Infobox_sport_event"] = 2800,
["Infobox_sports_competition_event"] = 24000,
["Infobox_sports_competition_event/medalrow"] = 15000,
["Infobox_sports_league"] = 5700,
["Infobox_sports_season"] = 6900,
["Infobox_sports_team"] = 2300,
["Infobox_sportsperson"] = 160000,
["Infobox_stadium"] = 2600,
["Infobox_station"] = 58000,
["Infobox_station/services"] = 58000,
["Infobox_station/styles.css"] = 58000,
["Infobox_street"] = 4400,
["Infobox_swimmer"] = 11000,
["Infobox_television"] = 64000,
["Infobox_television/Short_description"] = 61000,
["Infobox_television/styles.css"] = 64000,
["Infobox_television_channel"] = 6700,
["Infobox_television_channel/styles.css"] = 6700,
["Infobox_television_episode"] = 13000,
["Infobox_television_episode/styles.css"] = 14000,
["Infobox_television_season"] = 11000,
["Infobox_television_station"] = 3200,
["Infobox_television_station/styles.css"] = 3300,
["Infobox_tennis_biography"] = 11000,
["Infobox_tennis_event"] = 3300,
["Infobox_tennis_tournament"] = 2000,
["Infobox_tennis_tournament/heading"] = 2000,
["Infobox_tennis_tournament/style"] = 2000,
["Infobox_tennis_tournament_event"] = 22000,
["Infobox_tennis_tournament_year"] = 11000,
["Infobox_tennis_tournament_year/color"] = 33000,
["Infobox_tennis_tournament_year/footer"] = 33000,
["Infobox_tournament_season"] = 13000,
["Infobox_train"] = 2600,
["Infobox_university"] = 26000,
["Infobox_user"] = 3000,
["Infobox_venue"] = 20000,
["Infobox_video_game"] = 30000,
["Infobox_video_game/styles.css"] = 30000,
["Infobox_volleyball_biography"] = 5900,
["Infobox_weapon"] = 8100,
["Infobox_weather_event"] = 3500,
["Infobox_weather_event/Effects"] = 3300,
["Infobox_weather_event/Footer"] = 3300,
["Infobox_weather_event/History"] = 3200,
["Infobox_weather_event/SSHWS"] = 2000,
["Infobox_weather_event/meteorology"] = 3200,
["Infobox_weather_event/scale"] = 2100,
["Infobox_weather_event/styles.css"] = 3500,
["Infobox_website"] = 8300,
["Infobox_writer"] = 45000,
["Information"] = 98000,
["Information/styles.css"] = 98000,
["Inlang"] = 2400,
["Inline"] = 3800,
["Inline_block"] = 5400,
["Inprogress"] = 2600,
["Input_link"] = 32000,
["Instagram"] = 20000,
["InterSportStats"] = 5600,
["Interlanguage_link"] = 300000,
["Interlanguage_link_multi"] = 9500,
["International_Paralympic_Committee"] = 4200,
["International_football_primary_link"] = 3500,
["International_football_primary_style"] = 3500,
["International_football_secondary_style"] = 3400,
["Internet_Archive"] = 2200,
["Internet_Archive_SCOTUS_URL"] = 3300,
["Internet_Archive_author"] = 19000,
["Internet_Archive_film"] = 2600,
["Intitle"] = 21000,
["Ip"] = 2100,
["Iptalk"] = 18000,
["IranCensus2006"] = 30000,
["IranNCSGN"] = 3100,
["Iran_Census_2006"] = 30000,
["Irish_place_name"] = 3000,
["IsIPAddress"] = 45000,
["IsValidPageName"] = 3400,
["Is_MLB_league"] = 3300,
["Is_NPB_league"] = 3300,
["Is_continent"] = 13000,
["Is_country_in_Central_America"] = 17000,
["Is_country_in_the_Caribbean"] = 17000,
["Is_interwiki_link"] = 6500,
["Is_italic_taxon"] = 652000,
["Is_redirect"] = 382000,
["Is_time"] = 6700,
["Is_valid_page_name"] = 3400,
["Isbn"] = 10000,
["Isnum"] = 3000,
["Isnumeric"] = 120000,
["Iso2continent"] = 84000,
["Iso2country"] = 25000,
["Iso2country/article"] = 25000,
["Iso2country/data"] = 25000,
["Issubst"] = 64000,
["Italic_dab2"] = 5900,
["Italic_disambiguation"] = 2400,
["Italic_title"] = 257000,
["Italic_title_prefixed"] = 8800,
["Italictitle"] = 3000,
["Ivmbox"] = 142000,
["Ivory_messagebox"] = 187000,
["Ivory_messagebox/styles.css"] = 187000,
["Module:I18n/complex_date"] = 47000,
["Module:IP"] = 148000,
["Module:IPA"] = 184000,
["Module:IPA/data"] = 166000,
["Module:IPA/styles.css"] = 151000,
["Module:IPA_symbol"] = 6800,
["Module:IPA_symbol/data"] = 6800,
["Module:IPAc-en"] = 55000,
["Module:IPAc-en/data"] = 55000,
["Module:IPAc-en/phonemes"] = 55000,
["Module:IPAc-en/pronunciation"] = 55000,
["Module:IPAddress"] = 214000,
["Module:ISO_3166"] = 909000,
["Module:ISO_3166/data/AT"] = 2500,
["Module:ISO_3166/data/BA"] = 3400,
["Module:ISO_3166/data/CA"] = 2600,
["Module:ISO_3166/data/CH"] = 4200,
["Module:ISO_3166/data/CN"] = 2800,
["Module:ISO_3166/data/CZ"] = 6600,
["Module:ISO_3166/data/DE"] = 15000,
["Module:ISO_3166/data/ES"] = 3700,
["Module:ISO_3166/data/FR"] = 38000,
["Module:ISO_3166/data/GB"] = 7200,
["Module:ISO_3166/data/GR"] = 3500,
["Module:ISO_3166/data/IN"] = 29000,
["Module:ISO_3166/data/IR"] = 23000,
["Module:ISO_3166/data/IT"] = 2500,
["Module:ISO_3166/data/National"] = 909000,
["Module:ISO_3166/data/PL"] = 7600,
["Module:ISO_3166/data/RS"] = 3200,
["Module:ISO_3166/data/RU"] = 27000,
["Module:ISO_3166/data/UA"] = 2200,
["Module:ISO_3166/data/US"] = 90000,
["Module:ISO_639_name"] = 34000,
["Module:ISO_639_name/ISO_639-1"] = 29000,
["Module:ISO_639_name/ISO_639-2"] = 21000,
["Module:ISO_639_name/ISO_639-2B"] = 20000,
["Module:ISO_639_name/ISO_639-3"] = 20000,
["Module:ISO_639_name/ISO_639-3_(dep)"] = 34000,
["Module:ISO_639_name/ISO_639-5"] = 19000,
["Module:ISO_639_name/ISO_639_deprecated"] = 34000,
["Module:ISO_639_name/ISO_639_name_to_code"] = 4600,
["Module:ISO_639_name/ISO_639_override"] = 34000,
["Module:ISOdate"] = 47000,
["Module:Ice_hockey_box"] = 2000,
["Module:Icon"] = 677000,
["Module:Icon/data"] = 677000,
["Module:Icon_box"] = 260000,
["Module:Icon_box/data"] = 260000,
["Module:If_any_equal"] = 251000,
["Module:If_empty"] = 6740000,
["Module:If_in_category"] = 164000,
["Module:If_in_page"] = 22000,
["Module:If_not_given_or_empty"] = 90000,
["Module:If_preview"] = 1370000,
["Module:If_preview/configuration"] = 1370000,
["Module:If_preview/styles.css"] = 1370000,
["Module:In_lang"] = 387000,
["Module:Indent"] = 2300,
["Module:Infobox"] = 4680000,
["Module:Infobox/dates"] = 77000,
["Module:Infobox/styles.css"] = 4950000,
["Module:Infobox/utilities"] = 2600,
["Module:Infobox3cols"] = 321000,
["Module:InfoboxBuilder"] = 2700,
["Module:InfoboxImage"] = 5610000,
["Module:InfoboxImage/data"] = 3350000,
["Module:Infobox_body_of_water_tracking"] = 19000,
["Module:Infobox_cyclist_tracking"] = 17000,
["Module:Infobox_dim"] = 385000,
["Module:Infobox_dim/data"] = 238000,
["Module:Infobox_election"] = 42000,
["Module:Infobox_gene"] = 13000,
["Module:Infobox_gene/orthologs"] = 13000,
["Module:Infobox_mapframe"] = 1680000,
["Module:Infobox_military_conflict"] = 28000,
["Module:Infobox_military_conflict/styles.css"] = 28000,
["Module:Infobox_multi-lingual_name"] = 23000,
["Module:Infobox_multi-lingual_name/data"] = 23000,
["Module:Infobox_power_station"] = 3400,
["Module:Infobox_road"] = 26000,
["Module:Infobox_road/browselinks"] = 26000,
["Module:Infobox_road/errors"] = 25000,
["Module:Infobox_road/length"] = 26000,
["Module:Infobox_road/locations"] = 25000,
["Module:Infobox_road/map"] = 25000,
["Module:Infobox_road/route"] = 26000,
["Module:Infobox_road/sections"] = 25000,
["Module:Infobox_ship"] = 43000,
["Module:Infobox_ship/data"] = 43000,
["Module:Infobox_ship/styles.css"] = 43000,
["Module:Infobox_television"] = 64000,
["Module:Infobox_television_disambiguation_check"] = 72000,
["Module:Infobox_television_episode"] = 13000,
["Module:Infobox_television_season_disambiguation_check"] = 10000,
["Module:Infobox_television_season_name"] = 11000,
["Module:Internet_Archive"] = 22000,
["Module:Is_article"] = 2400,
["Module:Is_infobox_in_lead"] = 462000,
["Module:Is_instance"] = 354000,
["Module:Iso2nationality"] = 95000,
["Module:Italic_title"] = 1250000,
["Module:Italic_title2"] = 5900,
}
mo40tk9rhiat9crfn9ftwb4uwvcnrxj
ಉತ್ಪಾದನಾನುಗುಣ ಕೂಲಿ
0
123873
1378200
1338282
2026-08-02T16:27:30Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378200
wikitext
text/x-wiki
'''ಉತ್ಪಾದನಾನುಗುಣ ಕೂಲಿ''' ಎಂದರೆ [[ಕಾರ್ಮಿಕ]]ನ [[ದುಡಿಮೆ]]ಯಿಂದ ಲಭ್ಯವಾದ ಉತ್ಪನ್ನದ ಮೊತ್ತಕ್ಕೆ ಅನುಗುಣವಾಗಿ ಆತನಿಗೆ ಕೂಲಿ ನಿರ್ಧರಿಸುವ ವಿಧಾನ; ಕೂಲಿಗುತ್ತಿಗೆ (ಪೀಸ್ವರ್ಕ್, ಪೀಸ್ ರೇಟ್ ವೇಜ್, ಪೇಮೆಂಟ್ ಬೈ ರಿಸಲ್ಟ್ಸ್). ಹೆಚ್ಚು ಉತ್ಪಾದಿಸಿದಷ್ಟೂ ಹೆಚ್ಚು ಕೂಲಿ ದೊರಕುವುದೆಂಬ ಕಾರಣದಿಂದ ಕಾರ್ಮಿಕ ಹೆಚ್ಚು ಆಸ್ಥೆಯಿಂದ ದುಡಿಯಲು ಇದು ಸಾಮಾನ್ಯವಾಗಿ ಉತ್ತೇಜಕ.
==ಹಿನ್ನೆಲೆ==
ಈ ವ್ಯವಸ್ಥೆಯಲ್ಲಿ ಹೆಚ್ಚು [[ಲಾಭ]] ಗಳಿಸುವುದೂ ಬಿಡುವುದೂ ಕಾರ್ಮಿಕನಿಗೇ ಸೇರಿದ್ದು. ಕೊಟ್ಟ ಕೆಲಸ ಬೇಗ ಮುಗಿಸಿದರೆ ಅಷ್ಟಕ್ಕೆ ಆತನಿಗೆ ಸಂಪೂರ್ಣ ಕೂಲಿ ಲಭಿಸುವುದಲ್ಲದೆ, ಮಿಗಿಸಿದ ಕಾಲದಲ್ಲಿ ಆತ ಇನ್ನಷ್ಟು ದುಡಿದು ಇನ್ನಷ್ಟು ಕೂಲಿಗಳಿಸಬಹುದು. ಕೆಲಸ ಮುಗಿಸಲು ಹೆಚ್ಚು ಕಾಲ ತೆಗೆದುಕೊಂಡರೆ ಆಗ ಆತನಿಗೇ ನಷ್ಟ. ಕಾಲಾನುಗುಣ ಕೂಲಿಯಷ್ಟು ಅವನಿಗೆ ದೊರಕದೆ ಹೋಗಬಹುದು ಆದ್ದರಿಂದ ಉತ್ಪಾದಕನಿಗೆ ನಷ್ಟವಿಲ್ಲ. [[ಕಾರ್ಮಿಕ]] ಶೀಘ್ರವಾಗಿ ದುಡಿದರಂತೂ ಉದ್ಯಮ ಚಾಲಕನಿಗೆ ಹೆಚ್ಚು ಲಾಭ. ಇದು ಈ ವಿಧಾನದ ಹಿಂದಿರುವ ಸರಳ ತರ್ಕ.
ಕೂಲಿಗುತ್ತಿಗೆ ಹಲವು ತೆರ. ಉತ್ಪನ್ನಕ್ಕೂ ಕೂಲಿಗೂ ನೇರ ಸಂಬಂಧ ಕಲ್ಪಿಸುವುದು<ref>https://www.mbaskool.com/business-concepts/marketing-and-strategy-terms/7226-payment-by-results-pbr.html</ref> ಒಂದು ವಿಧಾನ. ಇಲ್ಲಿ ಕಾರ್ಮಿಕ ತಯಾರಿಸಿದ ಪದಾರ್ಥದ ಪ್ರತಿ ಘಟಕಕ್ಕೂ ಒಂದೇ ಕೂಲಿಯ ದರ ಇದ್ದು ಆತನ ಉತ್ಪಾದನೆ ಹೆಚ್ಚಿದಂತೆ ಕೂಲಿಯೂ ಸಮಾನಾಂತರವಾಗಿ ಏರುತ್ತದೆ. ಇಲ್ಲಿ ಉತ್ಪನ್ನದ ಪ್ರತಿ ಘಟಕದ ಕೂಲಿವೆಚ್ಚ ಒಂದೇ.
==ವೆಚ್ಚ==
ಆದರೆ ಉತ್ಪಾದನೆ ಹೆಚ್ಚಿದಂತೆ ಸ್ಥಿರ ಬಂಡವಾಳದ ಸರಾಸರಿ ವೆಚ್ಚ ಕಡಿಮೆ ಆಗುವುದರಿಂದ ಘಟಕದ (ಸರಾಸರಿ) ವೆಚ್ಚ ಕಡಿಮೆಯಾಗುತ್ತ ಹೋಗುತ್ತದೆ. ಒಟ್ಟು ಉತ್ಪಾದನ ವೆಚ್ಚ ಕಡಿಮೆಯಾಗಲು ಕಾರ್ಮಿಕನೇ ಕಾರಣನಾದ್ದರಿಂದ ಇದರ ಫಲ ಕಾರ್ಮಿಕನಿಗೇ ಸೇರತಕ್ಕದೆಂಬ ವಾದದ ಆಧಾರದ ಮೇಲೆ ಕಾರ್ಮಿಕನ ಉತ್ಪಾದನೆ ಹೆಚ್ಚಿದಂತೆ ಪ್ರತಿ ಘಟಕಕ್ಕೂ ಕೂಲಿ ದರ ಹೆಚ್ಚಿಸುವುದು ಇನ್ನೊಂದು ವಿಧಾನ.
==ವಿರುದ್ಧ ಯೋಚನೆ==
ಇನ್ನು ಕೆಲವರು ಈ ದೃಷ್ಟಿಯನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಹೆಚ್ಚು ಬಂಡವಾಳ, ಒಳ್ಳೆಯ ಸಾಮಗ್ರಿ ಮತ್ತು ಉದ್ಯಮಿಯ ದಕ್ಷ ನಿರ್ವಹಣೆ-ಇವುಗಳೂ ಅಧಿಕೋತ್ಪಾದನೆಗೆ ಕಾರಣವೆಂಬುದು ಇವರ ವಾದ. ಉತ್ಪಾದನೆಯ ಸರಾಸರಿ ವೆಚ್ಚ ಕಡಿಮೆಯಾಗುವುದರಿಂದ ಬರುವ ಫಲವನ್ನು ಕಾರ್ಮಿಕ ಹಾಗೂ ಉದ್ಯಮಿಗಳ ನಡುವೆ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಹಂಚಬೇಕೆಂಬುದು ಇಂಥವರ ಅಭಿಪ್ರಾಯ. ಇಲ್ಲಿ ಉತ್ಪಾದನೆಯ ಏರಿಕೆಗಿಂತ ಕೂಲಿಯ ಏರಿಕೆಯ ದರ ಕಡಿಮೆ.
ಕಾರ್ಮಿಕರು ಹೆಚ್ಚು ಉತ್ಪತ್ತಿ ಮಾಡುವ ಹಾಗೆ ಉತ್ತೇಜನ ಕೊಡುವ ದೃಷ್ಟಿಯಿಂದ ಹೆಚ್ಚು ಹೆಚ್ಚು ಉತ್ಪತ್ತಿ ಮಾಡಿದಂತೆ ಹೆಚ್ಚು ಹೆಚ್ಚು ದರದಲ್ಲಿ ಕೂಲಿ ನೀಡುವ ವ್ಯವಸ್ಥೆಯೂ ಉಂಟು. ಎಲ್ಲಿ ಉತ್ಪಾದನೆ ಕಾರ್ಮಿಕನ ದುಡಿಮೆಯನ್ನೇ ಹೆಚ್ಚಾಗಿ ಅವಲಂಬಿಸಿದೆಯೋ ಅಂಥಲ್ಲಿ ಈ ವಿಧಾನ ಹೆಚ್ಚು ಉಪಯುಕ್ತ.<ref>{{Cite web |url=https://specialties.bayt.com/en/specialties/q/278605/what-is-the-payment-by-results-schemes/ |title=ಆರ್ಕೈವ್ ನಕಲು |access-date=2020-01-12 |archive-date=2020-01-12 |archive-url=https://web.archive.org/web/20200112050630/https://specialties.bayt.com/en/specialties/q/278605/what-is-the-payment-by-results-schemes/ |url-status=dead }}</ref>
ಇವುಗಳಲ್ಲಿ ಯಾವ ವ್ಯವಸ್ಥೆಯೇ ಜಾರಿಯಲ್ಲಿರಲಿ, ತನ್ನ ಹತೋಟಿಗೆ ಮೀರಿದ ಕಾರಣಗಳಿಂದ ಕಾರ್ಮಿಕ ಸಾಕಷ್ಟು ಉತ್ಪಾದಿಸಲಾಗದಿದ್ದ ಪಕ್ಷದಲ್ಲಿ ಅವನಿಗೆ ಅಗತ್ಯ ಮಟ್ಟದ ಕೂಲಿ (ವೇತನ) ಕೊಡಲಾಗುತ್ತದೆ. ಇದು ಒಬ್ಬ ಸಾಮಾನ್ಯ ಕೆಲಸಗಾರ ತಯಾರಿಸಬಹುದಾದ ಉತ್ಪನ್ನಕ್ಕೆ ಕೊಡಬಹುದಾದ ವೇತನದಷ್ಟಾದರೂ ಇರಬೇಕೆಂಬುದಾಗಿ ಭಾವಿಸಲಾಗಿದೆ. ಎರಡನೆಯದಾಗಿ, ವ್ಯಕ್ತಿಗತ ಉತ್ಪನ್ನವನ್ನಳೆಯಲು ಸಾಧ್ಯವಿರುವಲ್ಲಿ ಮಾತ್ರ ಈ ವ್ಯವಸ್ಥೆಗಳನ್ನು ಆಚರಣೆಗೆ ತರಬಹುದು. ಇಂಥ ಅನುಕೂಲವಿಲ್ಲದಿದ್ದಲ್ಲಿ ಕೊನೆಯ ಪಕ್ಷ ಒಂದು ತಂಡದ ಉತ್ಪನ್ನವನ್ನಳೆಯಲು ಸಾಧ್ಯವಾದರೂ ಆ ತಂಡದ ಉತ್ಪಾದನಾನುಗುಣ ಕೂಲಿಯನ್ನು ಎಲ್ಲರಿಗೂ ಆಚರಣೆಗೆ ತರಬಹುದು. ಉತ್ಪಾದನಾನುಗುಣ ಕೂಲಿ ವ್ಯವಸ್ಥೆಯನ್ನು ಸಾಮಾನ್ಯವಾಗಿ ಉತ್ಪಾದನೆಗೆ ಸಂಬಂಧಿಸಿದ ಕಾರ್ಮಿಕರ ಪ್ರತ್ಯಕ್ಷ ಶ್ರಮಕ್ಕೆ ಅನ್ವಯಿಸುವಂತೆ ಆಚರಣೆಗೆ ತರಬಹುದೇ ಹೊರತು ಪರೋಕ್ಷ ಶ್ರಮಿಕರಾದ ಕಾವಲುಗಾರ, ಗುಮಾಸ್ತ, ಮತ್ತಿತರ ಆಡಳಿತ ವರ್ಗದವರಿಗೆ ಅನ್ವಯಿಸಲು ಸಾಧ್ಯವಿಲ್ಲ.
==ಅನುಕೂಲ==
ಈ ವ್ಯವಸ್ಥೆಯಲ್ಲಿ ಕೆಲವು ಅನುಕೂಲಗಳಿವೆ. ಮೊದಲನೆಯದಾಗಿ, ಉತ್ಪಾದನೆ ಹೆಚ್ಚಿದಂತೆ ಕೂಲಿ ಹೆಚ್ಚುವ ಸಂಭವವಿರುವುದರಿಂದ ಈ ವ್ಯವಸ್ಥೆಯಲ್ಲಿ ಕಾರ್ಮಿಕರು ಹೆಚ್ಚು ಉತ್ಪತ್ತಿ ಮಾಡುವಂತೆ ಉತ್ತೇಜನವಿರುತ್ತದೆ. ಕಾರ್ಮಿಕರ ಉತ್ಪಾದಕತೆ ಹೆಚ್ಚುವುದರಿಂದಲೂ ಹೆಚ್ಚು ಉಸ್ತುವಾರಿಯ ಅವಶ್ಯಕತೆಯಿಲ್ಲದ್ದರಿಂದಲೂ ಉತ್ಪಾದನ ವೆಚ್ಚ ಕಡಿಮೆಯಾಗಿ ಸರಕುಗಳ ಬೆಲೆಗಳು ಕಡಿಮೆಯಾಗುವ ಸಂಭವವುಂಟು. ಅಲ್ಲದೆ, ಕಾರ್ಮಿಕರು ಕಾಲ ಕಳೆಯದೆ ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಹೆಚ್ಚುಗಳಿಸುವಂತೆ ಈ ವ್ಯವಸ್ಥೆ ಸಹಾಯಕ. ಇದರಲ್ಲಿ ಕೆಲವು ನ್ಯೂನತೆಗಳೂ ಉಂಟು. ಕಾರ್ಮಿಕ ಹೆಚ್ಚು ಗಳಿಸುವ ಆಸೆಯಿಂದ ಕೆಲಸದ ವೇಗವನ್ನು ತೀವ್ರಗೊಳಿಸಿ ತನ್ನ ಆರೋಗ್ಯಕ್ಕೆ ಭಂಗ ತಂದುಕೊಳ್ಳುವುದಲ್ಲದೆ ಯಂತ್ರೋಪಕರಣಗಳನ್ನೂ ಕೆಡಿಸಬಹುದು. ಕಾರ್ಮಿಕರಲ್ಲಿ ಪೈಪೋಟಿ ಹೆಚ್ಚಿ, ಸರಕುಗಳ ಗುಣಮಟ್ಟದ ಇಳಿತಕ್ಕೆ ಎಡೆಯಾದರೂ ಆಶ್ಚರ್ಯವಿಲ್ಲ. ಅಲ್ಲದೆ ಇಂಥ ವ್ಯವಸ್ಥೆಯಲ್ಲಿ ಕಾರ್ಮಿಕರ ಉದ್ಯೋಗಾವಕಾಶಗಳು ಹೆಚ್ಚದಿರಬಹುದೆಂದು ಕಾರ್ಮಿಕ ಸಂಘಗಳು ಈ ವ್ಯವಸ್ಥೆಯನ್ನು ಬಲವಾಗಿ ಖಂಡಿಸುವುದೂ ಉಂಟು.
ಆದರೂ ಈ ವ್ಯವಸ್ಥೆ (1940)ರಿಂದ ಈಚೆಗೆ ಹೆಚ್ಚು ಪ್ರಚಾರಕ್ಕೆ ಬರುತ್ತಿದೆ. ಶ್ರಮ ವಿಭಾಗದ ಫಲವಾಗಿ ಪ್ರತಿಯೊಂದು ಕೆಲಸವನ್ನೂ ಹಲವಾರು ಕ್ರಿಯೆಗಳಾಗಿ ವಿಂಗಡಿಸಿ ಒಂದೊಂದು ಕ್ರಿಯೆಯನ್ನೂ ಒಬ್ಬೊಬ್ಬ ಕಾರ್ಮಿಕನಿಗೆ ವಹಿಸುವುದರಿಂದ ಕೆಲಸ ಹೆಚ್ಚು ಸರಳವಾಗಿ ಆತನ ಉತ್ಪನ್ನವನ್ನು ಸುಲಭವಾಗಿ ಅಳೆಯಲು ಸಾಧ್ಯವಾಗಿದೆ. ಕಾಲ ಮತ್ತು ವೇಗಗಳ ಅಧ್ಯಯನಕ್ಕೆ ಈಚೆಗೆ ಹೆಚ್ಚು ಪುರಸ್ಕಾರ ದೊರೆತಿರುವುದರಿಂದ ಒಬ್ಬ ಸಾಮಾನ್ಯ ಕಾರ್ಮಿಕ ತಯಾರಿಸಬಹುದಾದ ಉತ್ಪನ್ನದ ಮೊತ್ತ ಎಷ್ಟೆಂಬುದನ್ನು ನಿಷ್ಕರ್ಷಿಸುವುದು ಸಾಧ್ಯ; ಇದರಿಂದ ಕಾರ್ಮಿಕನಿಗೆ ಕೊಡಬೇಕಾಗಬಹುದಾದ ಕನಿಷ್ಠ ವೇತನವನ್ನು ಗೊತ್ತುಪಡಿಸುವುದೂ ಸಾಧ್ಯವಾಗಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎರಡನೆಯ ಮಹಾಯುದ್ದಾನಂತರ [[ನಿರುದ್ಯೋಗ]] ಕಡಿಮೆಯಾಗುತ್ತ ಬಂದ ಕಾರಣ ಕಾರ್ಮಿಕ ಸಂಘಗಳಿಂದ ಈ ವ್ಯವಸ್ಥೆಗೆ ವಿರೋಧ ಕಡಿಮೆಯಾಗಿದೆ.
ಉತ್ಪಾದನಾನುಗುಣ ಕೂಲಿ ಈಚೆಗೆ ಹೆಚ್ಚು ಪ್ರಚಾರಕ್ಕೆ ಬಂದಿದ್ದರೂ ಇದು ಕೆಲವೇ ಉದ್ಯಮಗಳಿಗೆ ಅನ್ವಯವಾಗಿದೆ. ಏಕೆಂದರೆ ಮೊದಲೇ ಹೇಳಿದಂತೆ ಈ ವ್ಯವಸ್ಥೆಯನ್ನು ಕೇವಲ ವ್ಯಕ್ತಿಗತ ಉತ್ಪನ್ನವನ್ನಳೆಯಲು ಸಾಧ್ಯವಿರುವ ಉದ್ಯಮಗಳಲ್ಲಿ ಮಾತ್ರ ಆಚರಣೆಗೆ ತರಲು ಸಾಧ್ಯ. ಕಾರ್ಖಾನೆ, ಗಣಿ, ಮತ್ತು ಪ್ಲಾಂಟೇಷನ್ ಉದ್ಯಮಗಳಲ್ಲಿ ಮಾತ್ರ ಈ ಬಗೆಯ ಸರಳ ವಿಧಾನಗಳನ್ನನ್ವಯಿಸಬಹುದು. ವ್ಯಕ್ತಿಗತ ಉತ್ಪನ್ನವನ್ನಳೆಯಲು ಸಾಧ್ಯವಿಲ್ಲದಿರುವ ಉದ್ಯಮಗಳಾದ ವಾಣಿಜ್ಯ ಮತ್ತು ಹಂಚಿಕೆ ಉದ್ಯಮಗಳಲ್ಲಿ ಈ ವ್ಯವಸ್ಥೆ ಆಚರಣೆಯಲ್ಲಿಲ್ಲ.
==ದೇಶಾವಾರು ತುಲನೆ==
ಪಾಶ್ಚಾತ್ಯ ದೇಶಗಳಲ್ಲಿ ಉತ್ಪಾದನಾನುಗುಣ ಕೂಲಿ ಪಡೆಯುವವರ ಸಂಖ್ಯೆ ಹೆಚ್ಚಿದೆ. ಉದಾಹರಣೆಗೆ, ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ 30%, ಇಂಗ್ಲೆಂಡಿನಲ್ಲಿ 40%, ಯೂರೋಪಿನಲ್ಲಿ 50%-60% ಮತ್ತು ಸೋವಿಯತ್ ಒಕ್ಕೂಟದಲ್ಲಿ 75% ಕಾರ್ಮಿಕರು ಉತ್ಪಾದನಾನುಗುಣವಾಗಿ ಕೂಲಿ ಪಡೆಯುತ್ತಿದ್ದಾರೆ. ಭಾರತದಲ್ಲಿ ಈ ವ್ಯವಸ್ಥೆ ಬಟ್ಟೆ ಕೈಗಾರಿಕೆಗಳಲ್ಲಿ ಮೊದಮೊದಲು ಆಚರಣೆಗೆ ಬಂತು. ಅನಂತರ ವ್ಯಕ್ತಿಗತ ಉತ್ಪನ್ನವನ್ನಳೆಯಲನುಕೂಲವಾದ ಇತರ ಉದ್ಯಮಗಳಾದ ಗಣಿ ಮತ್ತು ಪ್ಲಾಂಟೇಷನ್ ಉದ್ಯಮಗಳಲ್ಲೂ ಪ್ರಚಾರಕ್ಕೆ ಬರುತ್ತಿದೆ. [[ಭಾರತ ಸರ್ಕಾರ|ಭಾರತ ಸರ್ಕಾರದ]] ಲೇಬರ್ ಬ್ಯೂರೊ (1958-59)ರಲ್ಲಿ ನಡೆಸಿದ ಒಂದು ಪರಿಶೀಲನೆಯ ಪ್ರಕಾರ, ಈ ಬಗೆಯ ಕೂಲಿ ಪಡೆಯುವ ಕಾರ್ಮಿಕರ ಸಂಖ್ಯೆ ಕಾರ್ಖಾನೆ ಕೈಗಾರಿಕೆಗಳಲ್ಲಿ 31.8%, ಗಣಿ ಕೈಗಾರಿಕೆಗಳಲ್ಲಿ 57.8% ಮತ್ತು ಪ್ಲಾಂಟೇಷನ್ 75.4% ಎಂದು ತಿಳಿದುಬಂದಿದೆ. ಉತ್ಪನ್ನವನ್ನಳೆಯುವುದು ಸಾಧ್ಯವಿಲ್ಲದ ಉದ್ಯಮಗಳಲ್ಲಿ ಇಂಥವರ ಸಂಖ್ಯೆ ಬಲು ಕಡಿಮೆ. ಉದಾಹರಣೆಗೆ, ಎಂಜಿನಿಯರಿಂಗ್ ಉದ್ಯಮಗಳಲ್ಲಿ ಇವರ ಸಂಖ್ಯೆ ಕೇವಲ 1.1%.<ref>https://www.collinsdictionary.com/dictionary/english/payment-by-results</ref>
ಯೂರೋಪ್, ಸೋವಿಯತ್ ಒಕ್ಕೂಟ ಮತ್ತು ಚೀನಗಳೊಡನೆ ಹೋಲಿಸಿದರೆ ಭಾರತದಲ್ಲಿ ಉತ್ಪಾದನಾನುಗುಣ ಕೂಲಿವ್ಯವಸ್ಥೆಗೆ ಹೆಚ್ಚು ಪುರಸ್ಕಾರ ಸಿಕ್ಕಿರುವಂತೆ ಕಂಡು ಬರುವುದಿಲ್ಲ. ಆದರೂ ಈಚೆಗೆ ಈ ವ್ಯವಸ್ಥೆ ಹೆಚ್ಚಾಗಿ ಜಾರಿಗೆ ಬರಬೇಕೆಂಬ ಭಾವನೆ ಬೆಳೆಯುತ್ತಿದೆ. ಉತ್ಪನ್ನಗಳನ್ನು ಹೆಚ್ಚಿಸುವುದೇ ಭಾರತದ ಯೋಜನೆಗಳ ಸದ್ಯದ ಗುರಿಯಾದ್ದರಿಂದ ಉತ್ಪನ್ನವನ್ನು ಹೆಚ್ಚಿಸುವಂತೆ ಉತ್ತೇಜನ ಕೊಡುವಂಥ ಈ ವ್ಯವಸ್ಥೆ ಒಳ್ಳೆಯದೆಂದು ಭಾರತ ಸರ್ಕಾರ ಒಪ್ಪಿಕೊಂಡು ಇದಕ್ಕೆ ಹೆಚ್ಚು ಪ್ರಾಮುಖ್ಯ ಕೊಟ್ಟಿದೆ. ಅಲ್ಲದೆ ಪ್ರತಿ ಕೈಗಾರಿಕೆಗೂ ನೇಮಕವಾಗುವ ವೇತನ ಮಂಡಲಿಗೆ ಸಮರ್ಪಕವಾದ ಉತ್ಪಾದನಾನುಗುಣ ಕೂಲಿ ವ್ಯವಸ್ಥೆಯೊಂದನ್ನು ರಚಿಸಿಕೊಡುವಂತೆ ಸರ್ಕಾರ ಮನವಿ ಮಾಡಿಕೊಂಡಿದೆ. ವೇತನ ಮಂಡಲಿಗಳು ಈ ವಿಷಯದಲ್ಲಿ ಅನೇಕ ಸಲಹೆಗಳನ್ನು ಆಗ್ಗಿಂದಾಗ್ಗೆ ನೀಡುತ್ತಿವೆ.
ಈ ವ್ಯವಸ್ಥೆಯನ್ನು ಯಾವುದೇ ಉದ್ಯಮದಲ್ಲಿ ಆಚರಣೆಗೆ ತರುವ ಮೊದಲು ಹಲವು ಅಂಶಗಳನ್ನು ಗಮನದಲ್ಲಿಡುವುದು ಅತ್ಯಾವಶ್ಯಕ. ಮೊದಲನೆಯದಾಗಿ, ಕಾಲ ಮತ್ತು ವೇಗದ ಅಧ್ಯಯನದ ಸಹಾಯದಿಂದ ಪ್ರತಿ ಕೆಲಸದ ವಿಷಯದಲ್ಲೂ ಸಾಮಾನ್ಯ ಕೆಲಸಗಾರ ತಯಾರಿಸಬಹುದಾದ ಉತ್ಪನ್ನವೆಷ್ಟೆಂಬುದನ್ನು ಖಚಿತಪಡಿಸಿಕೊಂಡು ಪ್ರತಿ ಕೆಲಸಕ್ಕೂ ಮೂಲಭೂತ ಕೂಲಿಯನ್ನು ನಿಗದಿಪಡಿಸಬೇಕು. ಇದರ ಜೊತೆಗೆ ಕಾರ್ಮಿಕರು ಅನವಶ್ಯ ವೇಗದಿಂದ ಕೆಲಸ ಮಾಡಿ ಯಂತ್ರೋಪಕರಣ ಮತ್ತು ಸರಕುಗಳನ್ನು ಕೆಡಿಸದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕು. ಈ ವ್ಯವಸ್ಥೆಯನ್ನು ಆಚರಣೆಗೆ ತಂದ ಮೇಲೆ, ವೇತನ ದರವನ್ನು ಸೂಕ್ತವಾಗಿ ಬದಲಾಯಿಸದೆ ಉತ್ಪಾದನ ವಿಧಾನಗಳನ್ನು ಬದಲಾಯಿಸಕೂಡದು. ಕೊನೆಯದಾಗಿ, ಇದನ್ನು ಆಚರಣೆಗೆ ತರುವ ಮೊದಲು ಕಾರ್ಮಿಕ ಸಂಘಗಳ ಸಲಹೆ ಪಡೆಯುವುದು ಒಳ್ಳೆಯದು; ಇಲ್ಲದಿದ್ದರೆ ಕೈಗಾರಿಕಾ ಸಂಬಂಧಗಳು ಕೆಡುವ ಸಂಭವವುಂಟು. ಈ ಮುಂಜಾಗ್ರತೆ ತೆಗೆದುಕೊಳ್ಳುವುದರಿಂದ ಉತ್ಪಾದನಾನುಗುಣ ಕೂಲಿ ವ್ಯವಸ್ಥೆ ಯಶಸ್ವಿಯಾಗುವುದೆಂದು ಭಾವಿಸಲಾಗಿದೆ. <ref>https://www.trinityp3.com/2010/09/reasons-why-performance-based-remuneration-or-payment-by-results-often-fail/</ref>
==ಉಲ್ಲೇಖಗಳು==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗೆ ಬರೆದ ಲೇಖನ]]
[[ವರ್ಗ:ಅರ್ಥಶಾಸ್ತ್ರದ ನಿಯಮಗಳು]]
[[ವರ್ಗ:ಅರ್ಥಶಾಸ್ತ್ರ]]
m12idpqa8pldc3m3htg0k0i9ovyrkyb
ಆರ್.ಬಿ.ಚೌಧರಿ
0
127027
1378139
1337002
2026-08-02T14:19:09Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378139
wikitext
text/x-wiki
{{Infobox Writer
| name = ಡಾ.ಆರ್.ಬಿ.ಚೌಧರಿ
| image =
| imagesize =
| caption = ಡಾ.ಆರ್.ಬಿ.ಚೌಧರಿ
| pseudonym =
| birth_date =
| birth_place = [[ದೇವಣಗಾಂವ]], [[ಸಿಂದಗಿ ತಾಲ್ಲೂಕು]], [[ವಿಜಯಪುರ ಜಿಲ್ಲೆ]], [[ಕರ್ನಾಟಕ]]
| death_date =
| death_place =
| occupation = ರಾಜಕೀಯ
| nationality = ಭಾರತೀಯ
| period =
| genre =
| subject =
| movement =
| debut_works =
| influences =
| influenced =
| signature =
|website =
}}
ಡಾ.ಆರ್.ಬಿ.ಚೌಧರಿ(ರಾಯಗೊಂಡಪ್ಪ ಭೀಮಪ್ಪ ಚೌಧರಿ)ಯವರು ಮಾಜಿ ಶಾಸಕರು, ಸಚಿವರು, ವೈದ್ಯರು ಹಾಗೂ ರಾಜಕೀಯ ಧುರೀಣರು. [[ವಿಜಯಪುರ ಲೋಕಸಭಾ ಕ್ಷೇತ್ರ]]ದ ಮಾಜಿ ಸಂಸರಾದ [[ಭೀಮಪ್ಪ ಎಲ್ಲಪ್ಪ ಚೌಧರಿ]]ಯವರ ಮಗ.
==ಜನನ==
ಚೌಧರಿಯವರು [[ವಿಜಯಪುರ ಜಿಲ್ಲೆ]]ಯ [[ಸಿಂದಗಿ]] ತಾಲ್ಲೂಕಿನ [[ದೇವಣಗಾಂವ]] ಗ್ರಾಮದಲ್ಲಿ ಜನಿಸಿದರು.
==ಶಿಕ್ಷಣ==
ಚೌಧರಿಯವರು ಎಮ್.ಬಿ.ಬಿ.ಎಸ್. ಪದವಿ ಪಡೆದಿದ್ದಾರೆ.
==ನಿರ್ವಹಿಸಿದ ಖಾತೆಗಳು==
* 1989ರಲ್ಲಿ [[ಸಿಂದಗಿ ವಿಧಾನಸಭಾ ಕ್ಷೇತ್ರ]]ದಿಂದ ಕಾಂಗ್ರೇಸ್ನಿಂದ ಆಯ್ಕೆಯಾಗಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿ, ನಂತರ ಬಂಧಿಖಾನೆ ಹಾಗೂ ಗೃಹ ರಕ್ಷಕ ಸಚಿವರಾಗಿ ಕಾರ್ಯ ನಿರ್ವಹಿಸದ್ದಾರೆ.
* 1994ರಲ್ಲಿ [[ಸಿಂದಗಿ ವಿಧಾನಸಭಾ ಕ್ಷೇತ್ರ]]ದಿಂದ ಕಾಂಗ್ರೇಸ್ನಿಂದ, 2009ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಪರಾಭವಗೊಂಡರು.
* 1984ರಲ್ಲಿ ನಡೆದ 8ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ [[ವಿಜಯಪುರ ಲೋಕಸಭಾ ಕ್ಷೇತ್ರ]]ದಿಂದ ಪರಾಭವಗೊಂಡರು.
* ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದರು.
* ಕರ್ನಾಟಕ ರಾಜ್ಯ ಗಂಗಾಮತಸ್ಥ ಸಂಘದ ರಾಜ್ಯಾಧ್ಯಕ್ಷರಾಗಿದ್ದರು.
==ನಿಧನ==
ಡಾ.ಆರ್.ಬಿ.ಚೌಧರಿಯವರು 2ನೇ ಫೆಬ್ರುವರಿ 2012ರಲ್ಲಿ ನಿಧನರಾದರು.<ref>https://www.prajavani.net/article/%E0%B2%AE%E0%B2%BE%E0%B2%9C%E0%B2%BF-%E0%B2%B8%E0%B2%9A%E0%B2%BF%E0%B2%B5-%E0%B2%A1%E0%B2%BE-%E0%B2%86%E0%B2%B0%E0%B3%8D%E0%B2%AC%E0%B2%BF-%E0%B2%9A%E0%B3%8C%E0%B2%A7%E0%B2%B0%E0%B2%BF-%E0%B2%A8%E0%B2%BF%E0%B2%A7%E0%B2%A8</ref><ref>{{Cite web |url=https://m.dailyhunt.in/news/india/kannada/karnataka-epaper-knataka/shithilaavastheyalli+sindagi+minividhaanasoudha-newsid-139711412 |title=ಆರ್ಕೈವ್ ನಕಲು |access-date=2020-04-20 |archive-date=2025-08-13 |archive-url=https://web.archive.org/web/20250813074704/https://m.dailyhunt.in/news/india/kannada/karnataka-epaper-knataka/shithilaavastheyalli+sindagi+minividhaanasoudha-newsid-139711412 |url-status=dead }}</ref>
==ಉಲ್ಲೇಖಗಳು==
{{reflist}}
{{Refimprove}}
{{Interwikineeded}}
[[ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು]]
[[ವರ್ಗ:ರಾಜಕಾರಣಿಗಳು]]<br>[[ವರ್ಗ:ಕರ್ನಾಟಕ ರಾಜಕಾರಣಿಗಳು]]<br>
d0jag3dpwpgkwet5hgqbbrkx6ufvpy2
ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಸ್ಥಾನ
0
128871
1378230
1372585
2026-08-03T03:29:17Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378230
wikitext
text/x-wiki
[[ಚಿತ್ರ:Jenukallu siddeshwara Betta (hill) Arsikere.jpg|thumb|ಜೇನುಕಲ್ ಸಿದ್ದೇಶ್ವರ ದೇವಾಲಯ]]
'''ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಸ್ಥಾನ'''ವು ಕರ್ನಾಟಕದ [[ಹಾಸನ]] ಜಿಲ್ಲೆಯ [[ಅರಸಿಕೆರೆ]] ತಾಲ್ಲೂಕಿನ ಯಾದಪುರ ಗ್ರಾಮದಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ.<ref>https://www.localguidesconnect.com/t5/General-Discussion/Shree-Jenukal-Siddeshwara-Temple-Arsikere/td-p/1388517</ref><ref>http://wikimapia.org/12282465/Shree-Jenukal-Siddeshwara-Betta</ref> ಯಾದಪುರವು ಅರಸಿಕೆರೆಯಿಂದ ೮ ಕಿಲೋ ಮೀಟರ್ ದೂರದಲ್ಲಿದೆ.<ref>{{cite web| url = http://www.fallingrain.com/world/IN/19/Arsikere.html| title = Arsikere, India Page| work = Falling Rain Genomics, Inc| access-date = 11 September 2017| archive-date = 11 ಜನವರಿ 2020| archive-url = https://web.archive.org/web/20200111043243/http://www.fallingrain.com/world/IN/19/Arsikere.html| url-status = dead}}</ref> ಈ ದೇವಾಲಯವು ಬೆಟ್ಟದ ಮೇಲಿದ್ದು ಶಿವನಿಗೆ ಸಮರ್ಪಿತವಾಗಿದೆ.
೧೧೦೧ ಮೆಟ್ಟಿಲುಗಳನ್ನು ಹೊಂದಿರುವ [[ಬೆಟ್ಟ]]ವನ್ನು ಉತ್ತರ ದಕ್ಷಿಣವಾಗಿ ಎರಡು ಕಡೆಯಿಂದ ಹತ್ತಬಹುದು. ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿಯ ಪಾದವನ್ನು ಕಾಣಬಹುದು. ಈ ಬೆಟ್ಟದ ತುದಿಯಲ್ಲಿ ಒಂದು ಗೋಪುರವಿದೆ. ಅಲ್ಲೇ ಪಕ್ಕದಲ್ಲಿ ಗಂಗಮ್ಮ ಕೊಳ ಇದೆ. ಬೆಟ್ಟದ ಕೆಳಗೆ ಒಂದು ಬಸವಣ್ಣನ ಗುಡಿ ಇದೆ..
ಇಲ್ಲಿಗೆ ಭೇಟಿ ನೀಡುವ ಭಕ್ತರು ಬೆಟ್ಟದ ಮೇಲೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮನೊ ಧೈರ್ಯಕ್ಕಾಗಿ ದೇವರ ರೂಪವಾದ '''ಪಾದಗಳ ಮೇಲಿನ ಹೂ ಪ್ರಸಾದ ಕೇಳುವುದು ಇಲ್ಲಿನ ವಾಡಿಕೆಯಾಗಿದೆ.'''
ಬೆಟ್ಟದ ಕೆಳಗೆ ಭಕ್ತಾದಿಗಳಿಗಾಗಿ ಪ್ರತಿ ನಿತ್ಯ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ
== ಇತಿಹಾಸ ==
ಹಿಂದೆ ಈ ಪ್ರಾಂತ್ಯ ಮೊದಲು ಅರಣ್ಯವಾಗಿತ್ತು. ಸಿದ್ಧರು ಅನೇಕ ವರ್ಷ ತಪಸ್ಸು ಮಾಡಿ ಸಿದ್ದಿಯಾದ ಸ್ಥಳವೇ ಯಾದಪುರವಾಯಿತೆಂದು ಪ್ರಚಲಿತದಲ್ಲಿ ಇದೆ. ಒಂದು [[ದಂತಕಥೆ|ದಂತಕಥೆಯ]] ಪ್ರಕಾರ, ಒಮ್ಮೆ ಒಬ್ಬ ಸನ್ಯಾಸಿಯು ಈ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದಾಗ ಓರ್ವ ಮಹಿಳೆಯು ತನ್ನ ಮಗುವನ್ನು ಕಳೆದುಕೊಂಡು ದುಃಖಿಸುತ್ತಿರುತ್ತಾಳೆ. ಆಕೆಯ ಮಗುವಿನ ಸಾವಿಗೆ ಕಾರಣ ತಿಳಿದಾಗ ಗ್ರಾಮಸ್ಥರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ. ಅದನ್ನು ತೊಡೆದುಹಾಕಲು ಸನ್ಯಾಸಿಯು ಸಿದ್ದೇಶ್ವರನನ್ನು ಕುರಿತು ತಪಸ್ಸು ಮಾಡಿ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿಯನ್ನು ([[ಶಿವ]]) ಮೆಚ್ಚಿಸಿ, ಆ ಊರಿನಲ್ಲಿರುವ ಆರೋಗ್ಯದ ಸಮಸ್ಯೆಗಳನ್ನು ತೊಡೆದುಹಾಕುವ ವರವನ್ನು ಕೇಳುತ್ತಾರೆ. ಹೀಗೆ, ವಿವಿಧ ರೋಗಗಳಿಂದ ಬಳಲುತ್ತಿರುವ ಜನರು ಈ ಸ್ಥಳಕ್ಕೆ ಬಂದು ಗುಣಮುಖರಾದರಂತೆ.<ref>https://myadhyatm.com/sri-jenukallu-siddeshwara-swamy-devasthana/</ref>
ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯು ಬೆಟ್ಟದ ಮೇಲೆ ತಮ್ಮ ಎರಡು ಪಾದಗಳನ್ನು ಮಾತ್ರ ಮೂಡಿಸಿ ಕೆಳಗೆ ಯಾದಪುರದ ಊರ ಮಧ್ಯಭಾಗದಲ್ಲಿ ಮಲಗಿರುವ ಮುದ್ದು [[ನಂದಿ]]ಯ ರೂಪದಲ್ಲಿ ಉದ್ಭವಿಸಿದರಂತೆ.
== ಹೆಸರಿನ ಉಗಮ ==
ಹಿಂದೆ ಎತ್ತರವಾದ ಬೆಟ್ಟದಲ್ಲಿ ಶ್ರೀಯವರ ಸನ್ನಿಧಾನದ ಪಕ್ಕದಲ್ಲಿ [[ಜೇನುಗೂಡು]] ಸದಾಕಾಲ ಕಟ್ಟಿರುವುದರಿಂದ ಈ ಕ್ಷೇತ್ರಕ್ಕೆ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಕ್ಷೇತ್ರವೆಂದು ಹೆಸರು ಬಂದಿದೆ. ಈ ಜೇನುಗೂಡುನಲ್ಲಿ, ಜೇನುನೊಣಗಳ ರೂಪದಲ್ಲಿ ದೇವತೆಗಳ ವಾಸಸ್ಥಾನವಾಗಿದ್ದಾರೆ ಎಂದು ಹೇಳಲಾಗುತ್ತದೆ. ಜೇನುಕಲ್ಲು ಸಿದ್ದೇಶ್ವರರನ್ನು ಅಜ್ಜಯ್ಯಾ, ಸಿದ್ದೇಶ್ವರ ಎಂಬ ಹೆಸರುಗಳಿಂದ ಕರೆಯುತ್ತಾರೆ.
== ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಭಕ್ತರು ದಂಡು ==
ಪ್ರತಿ ತಿಂಗಳು ಹುಣ್ಣಿಮೆ ಹಾಗೂ [[ಅಮವಾಸ್ಯೆ]]ಯಂದು ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.<ref>https://kannada.nativeplanet.com/travel-guide/jenukallu-siddeshwara-temple-arsikere-history-timings-how-003608.html</ref> ಪ್ರತಿ ವರ್ಷ ಏಪ್ರಿಲ್ / ಜೂನ್ ತಿಂಗಳಲ್ಲಿ ನಡೆಯುವ ಪ್ರಸಿದ್ಧವಾದ ಶ್ರೀ ಜೇನುಕಲ್ಲು ಸಿದ್ದೇಶ್ವರ [[ಉತ್ಸವ]]ಕ್ಕೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.<ref>https://vijaykarnataka.com/news/hasana/jenukal-siddeshvaras-fair/articleshow/46815431.cms</ref>
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ದೇವಾಲಯಗಳು]]
[[ವರ್ಗ:ಕರ್ನಾಟಕದ ದೇವಾಲಯಗಳು]]
dzzcv70cfsls67j09wm1gcl1rr2yvky
ಮಾಡ್ಯೂಲ್:ISO 3166/data/IN
828
132137
1378270
1009999
2023-11-24T23:33:59Z
en>Drmccreedy
0
Changes for 2023-11-23 ISO 3166-2 update
1378270
Scribunto
text/plain
return {
lang = "en", -- administrative languages: en, hi
["AP"] = {name="Andhra Pradesh"},
["AR"] = {name="Arunachal Pradesh",isoname="Arunāchal Pradesh"},
["AS"] = {name="Assam"},
["BR"] = {name="Bihar",isoname="Bihār"},
["CG"] = {name="Chhattisgarh",isoname="Chhattīsgarh"},
["GA"] = {name="Goa"},
["GJ"] = {name="Gujarat",isoname="Gujarāt"},
["HP"] = {name="Himachal Pradesh",isoname="Himāchal Pradesh"},
["HR"] = {name="Haryana",isoname="Haryāna"},
["JH"] = {name="Jharkhand",isoname="Jhārkhand"},
["JK"] = {name="Jammu and Kashmir",isoname="Jammu and Kashmīr"},
["KA"] = {name="Karnataka",isoname="Karnātaka"},
["KL"] = {name="Kerala"},
["LA"] = {name="Ladakh",isoname="Ladākh"},
["MH"] = {name="Maharashtra",isoname="Mahārāshtra"},
["ML"] = {name="Meghalaya",isoname="Meghālaya"},
["MN"] = {name="Manipur"},
["MP"] = {name="Madhya Pradesh"},
["MZ"] = {name="Mizoram"},
["NL"] = {name="Nagaland",isoname="Nāgāland"},
["OD"] = {name="Odisha"},
["PB"] = {name="Punjab"},
["RJ"] = {name="Rajasthan",isoname="Rājasthān"},
["SK"] = {name="Sikkim"},
["TN"] = {name="Tamil Nadu",isoname="Tamil Nādu"},
["TR"] = {name="Tripura"},
["TS"] = {name="Telangana",isoname="Telangāna"},
["UK"] = {name="Uttarakhand",isoname="Uttarākhand"},
["UP"] = {name="Uttar Pradesh"},
["WB"] = {name="West Bengal"},
["AN"] = {name="Andaman and Nicobar Islands"},
["CH"] = {name="Chandigarh",isoname="Chandīgarh"},
["DH"] = {name="Dadra and Nagar Haveli and Daman and Diu",isoname="Dādra and Nagar Haveli and Damān and Diu"},
["DL"] = {name="Delhi"},
["LD"] = {name="Lakshadweep"},
["PY"] = {name="Puducherry"}
}
2eukhrki5dgvpf3tgfo9k1bf9ylsxro
1378271
1378270
2026-08-03T07:17:14Z
A826
72368
೧ revisions imported from [[:en:Module:ISO_3166/data/IN]]
1378270
Scribunto
text/plain
return {
lang = "en", -- administrative languages: en, hi
["AP"] = {name="Andhra Pradesh"},
["AR"] = {name="Arunachal Pradesh",isoname="Arunāchal Pradesh"},
["AS"] = {name="Assam"},
["BR"] = {name="Bihar",isoname="Bihār"},
["CG"] = {name="Chhattisgarh",isoname="Chhattīsgarh"},
["GA"] = {name="Goa"},
["GJ"] = {name="Gujarat",isoname="Gujarāt"},
["HP"] = {name="Himachal Pradesh",isoname="Himāchal Pradesh"},
["HR"] = {name="Haryana",isoname="Haryāna"},
["JH"] = {name="Jharkhand",isoname="Jhārkhand"},
["JK"] = {name="Jammu and Kashmir",isoname="Jammu and Kashmīr"},
["KA"] = {name="Karnataka",isoname="Karnātaka"},
["KL"] = {name="Kerala"},
["LA"] = {name="Ladakh",isoname="Ladākh"},
["MH"] = {name="Maharashtra",isoname="Mahārāshtra"},
["ML"] = {name="Meghalaya",isoname="Meghālaya"},
["MN"] = {name="Manipur"},
["MP"] = {name="Madhya Pradesh"},
["MZ"] = {name="Mizoram"},
["NL"] = {name="Nagaland",isoname="Nāgāland"},
["OD"] = {name="Odisha"},
["PB"] = {name="Punjab"},
["RJ"] = {name="Rajasthan",isoname="Rājasthān"},
["SK"] = {name="Sikkim"},
["TN"] = {name="Tamil Nadu",isoname="Tamil Nādu"},
["TR"] = {name="Tripura"},
["TS"] = {name="Telangana",isoname="Telangāna"},
["UK"] = {name="Uttarakhand",isoname="Uttarākhand"},
["UP"] = {name="Uttar Pradesh"},
["WB"] = {name="West Bengal"},
["AN"] = {name="Andaman and Nicobar Islands"},
["CH"] = {name="Chandigarh",isoname="Chandīgarh"},
["DH"] = {name="Dadra and Nagar Haveli and Daman and Diu",isoname="Dādra and Nagar Haveli and Damān and Diu"},
["DL"] = {name="Delhi"},
["LD"] = {name="Lakshadweep"},
["PY"] = {name="Puducherry"}
}
2eukhrki5dgvpf3tgfo9k1bf9ylsxro
ಮಾಡ್ಯೂಲ್:Check for deprecated parameters
828
133061
1378168
1327634
2026-06-11T18:41:51Z
en>Zackmann08
0
Adding support for regular expression matching. Credit for this edit goes to [[User:Frietjes]] who did this in the sandbox.
1378168
Scribunto
text/plain
-- This module may be used to compare the arguments passed to the parent
-- with a list of arguments, returning a specified result if an argument is
-- on the list
local p = {}
local MAX_PARAMS = 9 -- Limit to only showing 10 preview warnings
local function isnotempty(s)
return s and mw.text.trim(s) ~= ''
end
local function scanValues(values,results,args,replaceTable)
for k, v in pairs(values) do
local c = args.category:gsub('_VALUE_', v)
table.insert(results, c)
if v == '' then
-- Fix odd bug for | = which gets stripped to the empty string
-- and breaks category links
v = ' '
end
local replaceString = '<code>'..v..'</code>. '
local replaceValue = replaceTable and replaceTable[v]
replaceString = replaceString..(replaceValue and 'Replace with <code>'..replaceValue..'</code>.' or 'It should be removed.')
local p = args.preview:gsub('_VALUE_',replaceString)
table.insert(results, p )
end
end
function p.check (frame)
-- create the table of deprecated values and their matching new value
return p._check(frame.args, frame:getParent().args, frame:getParent():getTitle())
end
local moduleParams = {ignoreblank=true, preview=true, _category=true, _remove=true}
function p._check(args, pargs, caller)
local dep_values = {}
local reg_exps = {}
for k, v in pairs(args) do
if ( type(k) == 'string' and k:find('^_regexp[1-9][0-9]*$') and v:find('=') ) then
local v_split = mw.text.split(v, '%s*=%s*')
if ( #v_split == 2 ) then
table.insert(reg_exps, { '^' .. v_split[1] .. '$', v_split[2] } )
end
elseif not moduleParams[k] then
dep_values[k] = v
end
end
-- Parse params to remove
local removes = {}
if args['_remove'] then
for r in args['_remove']:gmatch("([^;]+)") do
removes[mw.text.trim(r)] = 1
end
end
-- loop over the parent args and see if any are deprecated
local values = {}
local remove_values = {}
local ignoreblank = isnotempty(args['ignoreblank'])
for k, v in pairs(pargs) do
if not ignoreblank or isnotempty(v) then
if dep_values[k] then
table.insert(values, k)
elseif removes[k] then
table.insert(remove_values, k)
else
for _, regexp in ipairs(reg_exps) do
if mw.ustring.match( tostring(k), regexp[1] ) then
table.insert(values, k)
dep_values[k] = mw.ustring.gsub(tostring(k), regexp[1], regexp[2])
break
end
end
end
end
end
-- find out about calling context
local title = mw.title.getCurrentTitle()
-- create local defaulted arguments
local category = args["_category"] or title.namespace == 0 and "[[Category:Pages with deprecated parameters]]" or ""
local preview = args['preview'] or 'Page using [['..caller..']] with deprecated parameter _VALUE_'
if isnotempty(preview) then
preview = require('Module:If preview')._warning({preview})
end
local localArgs = {category=category,preview=preview}
-- scan through values and remove_values and create output results
local results = {}
scanValues(values,results,localArgs,dep_values)
scanValues(remove_values,results,localArgs)
if #results >= MAX_PARAMS*2 then
while #results > MAX_PARAMS*2 do
table.remove(results) -- Calling without index removes the last element
end
table.insert(results, require('Module:If preview')._warning({'Page using [['..caller..']] with <b>multiple other</b> deprecated parameters. Fix those above and preview again.'}))
end
return table.concat(results)
end
return p
nf33yh045bpqn46orpqnkwwyw4ret2j
1378169
1378168
2026-08-02T15:52:07Z
A826
72368
೧ revisions imported from [[:en:Module:Check_for_deprecated_parameters]]
1378168
Scribunto
text/plain
-- This module may be used to compare the arguments passed to the parent
-- with a list of arguments, returning a specified result if an argument is
-- on the list
local p = {}
local MAX_PARAMS = 9 -- Limit to only showing 10 preview warnings
local function isnotempty(s)
return s and mw.text.trim(s) ~= ''
end
local function scanValues(values,results,args,replaceTable)
for k, v in pairs(values) do
local c = args.category:gsub('_VALUE_', v)
table.insert(results, c)
if v == '' then
-- Fix odd bug for | = which gets stripped to the empty string
-- and breaks category links
v = ' '
end
local replaceString = '<code>'..v..'</code>. '
local replaceValue = replaceTable and replaceTable[v]
replaceString = replaceString..(replaceValue and 'Replace with <code>'..replaceValue..'</code>.' or 'It should be removed.')
local p = args.preview:gsub('_VALUE_',replaceString)
table.insert(results, p )
end
end
function p.check (frame)
-- create the table of deprecated values and their matching new value
return p._check(frame.args, frame:getParent().args, frame:getParent():getTitle())
end
local moduleParams = {ignoreblank=true, preview=true, _category=true, _remove=true}
function p._check(args, pargs, caller)
local dep_values = {}
local reg_exps = {}
for k, v in pairs(args) do
if ( type(k) == 'string' and k:find('^_regexp[1-9][0-9]*$') and v:find('=') ) then
local v_split = mw.text.split(v, '%s*=%s*')
if ( #v_split == 2 ) then
table.insert(reg_exps, { '^' .. v_split[1] .. '$', v_split[2] } )
end
elseif not moduleParams[k] then
dep_values[k] = v
end
end
-- Parse params to remove
local removes = {}
if args['_remove'] then
for r in args['_remove']:gmatch("([^;]+)") do
removes[mw.text.trim(r)] = 1
end
end
-- loop over the parent args and see if any are deprecated
local values = {}
local remove_values = {}
local ignoreblank = isnotempty(args['ignoreblank'])
for k, v in pairs(pargs) do
if not ignoreblank or isnotempty(v) then
if dep_values[k] then
table.insert(values, k)
elseif removes[k] then
table.insert(remove_values, k)
else
for _, regexp in ipairs(reg_exps) do
if mw.ustring.match( tostring(k), regexp[1] ) then
table.insert(values, k)
dep_values[k] = mw.ustring.gsub(tostring(k), regexp[1], regexp[2])
break
end
end
end
end
end
-- find out about calling context
local title = mw.title.getCurrentTitle()
-- create local defaulted arguments
local category = args["_category"] or title.namespace == 0 and "[[Category:Pages with deprecated parameters]]" or ""
local preview = args['preview'] or 'Page using [['..caller..']] with deprecated parameter _VALUE_'
if isnotempty(preview) then
preview = require('Module:If preview')._warning({preview})
end
local localArgs = {category=category,preview=preview}
-- scan through values and remove_values and create output results
local results = {}
scanValues(values,results,localArgs,dep_values)
scanValues(remove_values,results,localArgs)
if #results >= MAX_PARAMS*2 then
while #results > MAX_PARAMS*2 do
table.remove(results) -- Calling without index removes the last element
end
table.insert(results, require('Module:If preview')._warning({'Page using [['..caller..']] with <b>multiple other</b> deprecated parameters. Fix those above and preview again.'}))
end
return table.concat(results)
end
return p
nf33yh045bpqn46orpqnkwwyw4ret2j
ಊತಿಯೂರು
0
141607
1378203
1373087
2026-08-02T16:54:22Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378203
wikitext
text/x-wiki
{{Translate|en|Uthiyur}}{{Infobox settlement
| name = ಊತಿಯೂರು
| demographics2_info1 = [[Hindi]], [[Malayalam]]
| population_demonym = Uthiyurian
| government_type = [[Town panchayat]]
| pushpin_map = India
| elevation_m = 305
| map_caption = [[ತಿರುಪ್ಪೂರ್ ಜಿಲ್ಲೆ]], ತಮಿಳುನಾಡು
| postal_code_type = [[Postal Index Number|Postal Code]]
| demographics2_title1 = Minority
| coordinates = {{coord|10|53|55|N|77|31|41|E}}
| demographics1_info1 = [[Tamil language|Tamil]], [[Indian English|English]]
| nickname = ಪೊನ್ನೂತಿ ಬೆಟ್ಟಗಳು
| demographics1_title1 = Official
| demographics_type1 = ಭಾಷೆಗಳು
| named_for = ಪೊನ್ನುತಿ ಬೆಟ್ಟಗಳು, ವೇಲಾಯುತ ಸಾಮಿ ದೇವಸ್ಥಾನ, ಕೊಂಗುಣ ಸಿದ್ಧರ ಗುಹೆಗಳು
| other_name = Ūthiyūr
| area_code = 04257, 04258
| timezone1 = [[Indian Standard Time]]
| postal_code = 638703
| official_name = Uthiyur
| subdivision_type = ದೇಶ
| settlement_type = Historical Town
| image_seal =
| image_skyline =
| image_alt = ಊತಿಯೂರು ಬೆಟ್ಟಗಳು
| image_caption =
| subdivision_name = {{flag|ಭಾರತ}}
| subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| population_total = 3500
| subdivision_name1 = [[File:Seal of Tamil Nadu.svg|22px]] [[ತಮಿಳುನಾಡು]]
| subdivision_type2 = [[ತಮಿಳುನಾಡು|ಪ್ರದೇಶ]]
| subdivision_name2 = [[ಕೊಂಗು ನಾಡು]]
| subdivision_type3 = [[ತಮಿಳುನಾಡಿನ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| subdivision_name3 = [[ತಿರುಪ್ಪೂರ್ ಜಿಲ್ಲೆ|ತಿರುಪ್ಪೂರ್]]
| subdivision_type4 = [[ತಿರುಪ್ಪೂರು ಜಿಲ್ಲೆ|ತಾಲೂಕು]]
| subdivision_name4 = ಕಾಂಗೆಯಂ ತಾಲ್ಲೂಕು
| utc_offset = +5.30
}}
'''ಊತಿಯೂರು''' ({{Lang-ta|ஊதியூர்|translit=Ūthiyūr}},''ūthiyūr'') ಭಾರತದ ತಮಿಳುನಾಡಿನ [[ತಿರುಪ್ಪೂರು]] ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಊತಿಯೂರು ಕಾಂಗೇಯಂ-[[ಧಾರಾಪುರಂ]] ಹೆದ್ದಾರಿಯಲ್ಲಿ ಪೊನ್ನುಧಿ ಬೆಟ್ಟಗಳ ತಪ್ಪಲಿನಲ್ಲಿದೆ. ಈ ಪಟ್ಟಣವು 9 ನೇ ಶತಮಾನದ ಶ್ರೀ ವೇಲಾಯುತಸ್ವಾಮಿ ದೇವಾಲಯ ಮತ್ತು ಕೊಂಗುನ ಸಿದ್ಧರ ಜೀವ ಸಮಾಧಿಗೆ ಹೆಸರುವಾಸಿಯಾಗಿದೆ.<ref>{{Cite web|url=https://villageinfo.in/tamil-nadu/tiruppur/kangeyam/uthiyur.html|title=Uthiyur Village in Kangeyam (Tiruppur) Tamil Nadu {{!}} villageinfo.in|website=villageinfo.in|access-date=2021-07-26}}</ref><ref>{{Cite web|url=https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf|title=ஊதிமலை உத்தண்ட வேலாயுதசுவாமி திருத்தலம் {{!}}{{!}} othimalai velayutha swamy temple|last=100010509524078|date=2020-06-16|website=Maalaimalar|language=English|access-date=2021-10-29|archive-date=2021-10-17|archive-url=https://web.archive.org/web/20211017120150/https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf|url-status=dead}}</ref><ref>{{Cite journal|title=Kongu Nadu History|url=https://books.google.co.in/books?id=So2pSQQ3JGYC&q=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&dq=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&hl=en&newbks=1&newbks_redir=1&printsec=frontcover&sa=X&ved=2ahUKEwiK8MH0_u_zAhVFxTgGHdmoCb0Q6AF6BAgEEAI|journal=Google Books}}</ref><ref>{{Cite web|url=https://tamilminutes.com/kongu-mandalam-murugan-temples/|title=கொங்கு மண்டலத்தில் மட்டும் இருக்கும் அதிக முருகன் கோவில்கள் {{!}} Tamil Minutes|last=A|first=Abiram|language=en-US|access-date=2022-01-03}}</ref>
ಈ ನಗರ ಈರೋಡು ಮತ್ತು ಪಳನಿಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ 83A (ತಮಿಳುನಾಡು)-ಇಲ್ಲಿದೆ. ಇದು ಕಾಂಗೆಯಲ್ಲಿ 14 ಕಿ.ಮೀ. ದೂರದಲ್ಲಿ ತಾರಾಪುರದಿಂದ 18 ಕಿ.ಮೀ. ದೂರವಿಲ್, ವೆಲ್ಲಕ್ಕೊಯಿಲಿನಲ್ಲಿ 24 ಕಿ.ಮೀ. ದೂರದಲ್ಲಿ ಆ ಜಿಲ್ಲಾ ಮುಖ್ಯಸ್ಥರ ತಿರುಪುರದಿಂದ 38 ಕಿ.ಮೀ. ಮತ್ತು ಇರೋಟ್ನಿಂದ 60 ಕಿ.ಮೀ. ದೂರದಲ್ಲಿ ಇದೆ.
== ವ್ಯುತ್ಪತ್ತಿ ಮತ್ತು ಹೆಸರಿನ ಕಾರಣ ==
ಈ ನಗರ ಮತ್ತು ಅದರ ಪರ್ವತಗಳಿಗೆ ಎರಡು ಸಾಮಾನ್ಯ ಹೆಸರುಗಳಿವೆ.
ಕೊಂಕಣರು ಈ ಬೆಟ್ಟದಲ್ಲಿ ವಾಸಿಸುತ್ತಿದ್ದಾಗ ಜನರ ಬಡತನವನ್ನು ಹೋಗಲಾಡಿಸಲು ಬಯಸಿದ್ದರು. [[ಸುಬ್ರಹ್ಮಣ್ಯ ಸ್ವಾಮಿ|ಜನರ ಹಿತದೃಷ್ಟಿಯಿಂದ ಮುರುಗನ್]] ಪರ್ವತದಲ್ಲಿ ಸಿಗುವ ಅಪರೂಪದ ಗಿಡಮೂಲಿಕೆಗಳ ಸಹಾಯದಿಂದ ತಾನು ಉದಯಿಸಿದ ಪರ್ವತವನ್ನು ಚಿನ್ನಾಭರಣ ಮಾಡಿ ಹೊಗೆಯ ಮಣ್ಣಿನಿಂದ ಹಣ ಪಾವತಿಸಿದ್ದಾನೆ. ಆದುದರಿಂದ ಇದಕ್ಕೆ ಊಟೂರ್ ಎಂಬ ಹೆಸರು ಬಂದಿದೆ. ಇಲ್ಲಿ ‘ಪೊನ್ನುತಿ’ ಎಂಬ ಪುರಾತನ ಬೆಟ್ಟವಿದೆ. [[ಬೋಗಾರ|ಇದು ಇದೆ]] ಬೆಟ್ಟದ ಕಾರಣ ಬೆಂಕಿ ಮತ್ತು ಹೆಸರು 'Ponnuthi ಹಿಲ್' ಕೊಂಡಿರುವ ಹೇಳಿದರು Konkanar Siddhar, ಒಂದು ಮಾಡಿದ ಚಿನ್ನದ Pokhara ಅನುಯಾಯಿಯನ್ನು.<ref>{{Cite web|url=https://temple.dinamalar.com/en/new_en.php?id=1547|title=Uthanda Velayutha Swami Temple : Uthanda Velayutha Swami Temple Details {{!}} Uthanda Velayutha Swami- Uthiyur {{!}} Tamilnadu Temple {{!}} உத்தண்ட வேலாயுத சுவாமி|website=temple.dinamalar.com|access-date=2021-05-14}}</ref>
ಕೆಲವು ವಿದ್ವಾಂಸರು ಬೇರೆ ಕಾರಣವನ್ನು ಸೂಚಿಸುತ್ತಾರೆ. 'ಉದಿ' ಎಂಬ ಮರವು [[ಕೊಂಗು ರಾಜ್ಯ|ಪಶ್ಚಿಮ ದೇಶವನ್ನು ಆಳಿದ ಉಡಿಯರ ಸಂಕೇತವಾಗಿತ್ತು.]] ಮರವನ್ನು ಓಧಿ ಮತ್ತು ಓಧಿ ಎಂದೂ ಕರೆಯುತ್ತಾರೆ. ಅಲ್ಲದೆ, ಈ ಉಧಿ ಮರದಲ್ಲಿ ಅರಳುವ ಹೂವುಗಳು ಚಿನ್ನದ ಬಣ್ಣದಿಂದ ಹೊಳೆಯುತ್ತವೆ. ಈ ಬೆಟ್ಟಗಳಲ್ಲಿ ಈ ಮರಗಳು ಹೇರಳವಾಗಿದ್ದವು. ಆದುದರಿಂದ ಆ ಊರನ್ನು ‘ಪೊನ್ ಓಧಿ ಮಲೈ’ ಎಂದು ಕರೆಯಲಾಯಿತು. ಹಾಗಾಗಿಯೇ ಮರುವಿ ‘ಪೊನ್ನುತಿ ಬೆಟ್ಟ’ ಎನ್ನುತ್ತಾರೆ ಸಂಶೋಧಕರು.<ref name=":0"/>
== ಪುರಾತತ್ವ ಮತ್ತು ಸಾಹಿತ್ಯಿಕ ಉಲ್ಲೇಖ ==
ಅಗಾಧವಾದ ಔಷಧೀಯ ಗಿಡಮೂಲಿಕೆಗಳನ್ನು ಹೊಂದಿರುವ ಸಂಜೀವಿ ಬೆಟ್ಟದ ಒಂದು ಭಾಗವೆಂದು ಪರಿಗಣಿಸಲ್ಪಟ್ಟಿರುವುದರಿಂದ ಇದನ್ನು ದಕ್ಷಿಣ ಭಾರತದ ಸಂಜೀವಿ ಬೆಟ್ಟ ಎಂದೂ ಕರೆಯುತ್ತಾರೆ. [[ಅರುಣಗಿರಿನಾಥ|Arunagirinathar]] patiya Tiruppukal (106) punniya ತಾಣ ಸಂಗ್ ಮುರುಗನ್ ದೇವಸ್ಥಾನ ಇಲ್ಲಿದೆ. [[ಹಿಂದೂ ಧರ್ಮ|ಈ ಬೆಟ್ಟವು ಹಿಂದೂಗಳು]] ಮತ್ತು ತಮಿಳರ ಸಂಸ್ಕೃತಿಯನ್ನು ಬಿಂಬಿಸುವ ಪ್ರಾಚೀನ ಕಲಾಕೃತಿಗಳು ಮತ್ತು ಶಿಲ್ಪಗಳ ನಿಧಿಗಳಿಗೆ ನೆಲೆಯಾಗಿದೆ. ಬೆಟ್ಟದ ಸುತ್ತಲೂ ಐತಿಹಾಸಿಕ ಹೆಮ್ಮೆಯ ವಿವಿಧ ಪುರಾತತ್ವ ಶಿಲ್ಪಗಳಿವೆ.<ref>{{Cite web|url=https://travel.bhushavali.com/2010/05/uthiyur-hills-aka-pon-uthiyur-konganar.html|title=Pon Uthiyur Hills & Konganar Siddhar Samadhi (Karur - Tamil Nadu)|access-date=2021-07-26}}</ref><ref>{{Cite web|url=https://travel.bhushavali.com/2010/05/uthiyur-hills-aka-pon-uthiyur-konganar.html|title=Pon Uthiyur Hills & Konganar Siddhar Samadhi (Karur - Tamil Nadu)|access-date=2021-04-24}}</ref>
* ತಮಿಳು ಸಮುದಾಯದ ಜೀವನ ವಿಧಾನ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಶಿಲ್ಪಗಳು ಮತ್ತು ಶಾಸನಗಳು ಈಗ ಬೆಟ್ಟದ ತಪ್ಪಲಿನಲ್ಲಿ ಕಂಡುಬರುತ್ತವೆ.
* ಚೋಳರ ಕಾಲದಲ್ಲಿ 12 ನೇ ಶತಮಾನದಷ್ಟು ಹಿಂದಿನ ನಂದಿ ಶಿಲ್ಪಗಳು ಮತ್ತು ನಾಗ ಶಿಲ್ಪಗಳು ತಮಿಳುನಾಡಿನ ಶ್ರೀಮಂತ ಇತಿಹಾಸವನ್ನು ಹೊಂದಿವೆ.
ಬೆಟ್ಟದ ಸುತ್ತಲಿನ ವಿವಿಧ ಪುರಾತತ್ವ ಶಿಲ್ಪಗಳು ಐತಿಹಾಸಿಕ ಹೆಮ್ಮೆಯನ್ನು ಹೊಂದಿವೆ.<ref>{{Cite web|url=https://travel.bhushavali.com/2010/05/uthiyur-hills-aka-pon-uthiyur-konganar.html|title=Pon Uthiyur Hills & Konganar Siddhar Samadhi (Karur - Tamil Nadu)|access-date=2021-04-30}}</ref> ಕೊಂಕಣ ಸಿದ್ಧರನ್ನು ಚಿನ್ನ ಮಾಡಲು ಬಳಸುವ ಮಣ್ಣಿನ ಪೈಪುಗಳು ಈಗಲೂ ಇವೆ ಎಂಬುದು ಈ ತಾಣದ ವಿಶೇಷ.<ref>{{Cite web|url=https://www.vikatan.com/spiritual/temples/145043-pon-uthiyur-konganar-cave-siddhars|title=சித்தர்கள் உலாவும் பொன்னூதி மாமலை...|last=காமராஜ்|first=மு ஹரி|website=www.vikatan.com/|language=ta|access-date=2021-05-14}}</ref><ref>{{Citation|title=Moondravathu Kan {{!}} [Epi - 252]|url=https://www.youtube.com/watch?v=s0eYRTTGibw|language=en|access-date=2021-05-14}}</ref><ref>{{Citation|title=Kongana Siddhar Mystery - சித்தர்களைத் தேடி ஒரு பயணம் {{!}} Karna {{!}} Tamilnavigation|url=https://www.youtube.com/watch?v=teu_MZ_7QmA|language=en|access-date=2021-05-15}}</ref><ref name="epuja.co.in">{{Cite web|url=https://epuja.co.in/product-details.php?puja_id=726&page=Uthiyur-Velayudhaswamy-Murugan-Temple|title=Uthiyur Velayudhaswamy Murugan Temple|website=ePuja|language=en|access-date=2021-07-24}}</ref><ref>{{Cite book}}</ref>
== ಪುರಾಣ ==
ಮಹಾನ್ ಮಹಾಕಾವ್ಯ [[ರಾಮಾಯಣ|ರಾಮಾಯಣದಲ್ಲಿ]], [[ಶ್ರೀಲಂಕಾ|ಶ್ರೀಲಂಕಾದಲ್ಲಿ]] ರಾಮ ಮತ್ತು [[ರಾವಣ|ರಾವಣರ]] ನಡುವಿನ [[ರಾಮಾಯಣ]] ಯುದ್ಧದ ಸಮಯದಲ್ಲಿ, ರಾಮನ ಸಹೋದರ [[ಲಕ್ಷ್ಮಣ|ಲಕ್ಷ್ಮಣನು]] ರಾವಣನಿಂದ ಕಳುಹಿಸಲಾದ ಇಂದ್ರಜಿತ್ನ ಬಾಣದಿಂದ ಆಕ್ರಮಣಕ್ಕೆ ಒಳಗಾಗುತ್ತಾನೆ ಮತ್ತು ಅವನು ತನ್ನ ಪ್ರಾಣಕ್ಕಾಗಿ ಹೋರಾಡಿದನು. ಆದ್ದರಿಂದ ಅವನನ್ನು ಗುಣಪಡಿಸಲು, ಜಾಂಬವಾನ್ ವೃಷಭ ಮತ್ತು ಕೈಲಾಸ ಶಿಖರಗಳ ನಡುವಿನ ಹಿಮಾಲಯ ಶ್ರೇಣಿಯಿಂದ ಸಂಜೀವನಿ ಮೂಲಿಕೆಯನ್ನು ಪಡೆಯಲು ಹನುಮಂತನನ್ನು ಕೇಳಿದನು. [[ಹನುಮಂತ|ಹನುಮಂತನು]] ಅವನ ಸಲಹೆಯನ್ನು ಸ್ವೀಕರಿಸಿ ಸಂಜೀವಿನಿ ಮೂಲಿಕೆಯನ್ನು ಪಡೆಯಲು ಹೊರಟನು. ಆದರೆ ಆ ಎರಡರ ನಡುವಿನ ಪರ್ವತದ ಆ ನಿರ್ದಿಷ್ಟ ಸ್ಥಳದಲ್ಲಿ ಜೀವ ಉಳಿಸುವ ಮೂಲಿಕೆಯನ್ನು ಕಂಡುಹಿಡಿಯಲಾಗಲಿಲ್ಲ. ತುಂಬಾ ನಿರಾಶೆಗೊಂಡ ಅವರು ಪರ್ವತವನ್ನು ತುಂಡುಗಳಾಗಿ ಒಡೆಯುವಂತೆ ಭಾವಿಸಿದರು. ಆದರೆ ದಿಢೀರನೆ ಇಡೀ ಬೆಟ್ಟವನ್ನೇ ಎತ್ತಿ ಜಾಂಬವನಕ್ಕೆ ಕೊಂಡೊಯ್ಯುವ ಯೋಚನೆ ಬಂದಾಗ ಅವನು ಹಾಗೆಯೇ ಮಾಡಿದ. ಅವನು [[ಶ್ರೀಲಂಕಾ|ಹಿಮಾಲಯದಿಂದ ಶ್ರೀಲಂಕಾಕ್ಕೆ ಭಾರತದ ಸಂಪೂರ್ಣ ಉದ್ದವನ್ನು ಹಾರಿಸಿದಾಗ,]] ಪರ್ವತದ ಕೆಲವು ಭಾಗಗಳು ಹಲವಾರು ಸ್ಥಳಗಳಲ್ಲಿ ನೆಲಕ್ಕೆ ಬಿದ್ದವು. ಅವುಗಳಲ್ಲಿ ಒಂದು ಕೊಂಕಣ ಸಿದ್ಧರ ಋಷಿ ಧ್ಯಾನ ಮಾಡಿದ ಊಟೂರ್ ಬೆಟ್ಟ. ಹನುಮಂತನು ಬಂದ ಕೂಡಲೇ ಜಾಂಬವನನು ಪರ್ವತದಿಂದ ಸಂಜೀವಿನಿ ಮೂಲಿಕೆಯನ್ನು ತೆಗೆದುಕೊಂಡು ಅದರ ರಸವನ್ನು ಅಮಲೇರಿದ ಇಲಶ್ಮಣನಿಗೆ ಮತ್ತು ಅವನ ವಾನರ ಸೇನೆಯಲ್ಲಿದ್ದವರಿಗೆ ನೀಡಿ ಅದರ ಜೀವವನ್ನು ಉಳಿಸಿದನು.<ref>{{Cite web|url=https://tamilandvedas.com/tag/%e0%ae%95%e0%af%8a%e0%ae%99%e0%af%8d%e0%ae%95%e0%ae%a3-%e0%ae%9a%e0%ae%bf%e0%ae%a4%e0%af%8d%e0%ae%a4%e0%ae%b0%e0%af%8d/|title=கொங்கண சித்தர்|website=Tamil and Vedas|language=en|access-date=2021-08-05}}</ref><ref>{{Cite web|url=https://books.google.co.in/books?id=KzTwCgAAQBAJ&pg=PT135&dq=ramayana+Uthiyur&hl=en&newbks=1&newbks_redir=1&sa=X&ved=2ahUKEwjKkLqX0ZnyAhWM63MBHfs7Dv4Q6AEwAHoECAcQAg|title=Professor's Dairy - Ramayana and Pon uthi hills}}</ref>
ಈ ಬೆಟ್ಟವು ಇಂದಿಗೂ ಸಂಜೀವಿನಿ ಸೇರಿದಂತೆ ಎಲ್ಲಾ ಔಷಧೀಯ ಸಸ್ಯಗಳನ್ನು ಒಳಗೊಂಡಿದೆ.<ref>{{Cite web|url=https://travel.bhushavali.com/2010/05/uthiyur-hills-aka-pon-uthiyur-konganar.html|title=Pon Uthiyur Hills & Konganar Siddhar Samadhi (Karur - Tamil Nadu)|access-date=2021-08-05}}</ref> ಹಲವಾರು ಔಷಧೀಯ ಸಸ್ಯಗಳನ್ನು ಹೊಂದಿರುವ ಇದನ್ನು '''ದಕ್ಷಿಣದ ಸಂಜೀವಿ ಬೆಟ್ಟ''' ಎಂದೂ ಕರೆಯುತ್ತಾರೆ '''.''' <ref>{{Cite web|url=https://travel.bhushavali.com/2010/05/uthiyur-hills-aka-pon-uthiyur-konganar.html|title=Pon Uthiyur Hills & Konganar Siddhar Samadhi (Karur - Tamil Nadu)|access-date=2021-08-01}}</ref>
== ಇತಿಹಾಸ ==
ಬ್ರಿಟಿಷರ ಆಳ್ವಿಕೆಯಲ್ಲಿ, ಊಟಿಯು [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ರಾಜ್ಯದ]] ಕೊಯಮತ್ತೂರು ಜಿಲ್ಲೆಯ ತಾರಾಪುರಂ ತಾಲೂಕಿನಲ್ಲಿತ್ತು.<ref>{{Cite book|url=https://books.google.com/books?id=p7oQAAAAIAAJ&newbks=0&printsec=frontcover&dq=Uthiyur&q=Uthiyur&hl=en|title=Minutes of Several Conversations at the... Yearly Conference of the People Called Methodists...|date=1897|language=en}}</ref>
== ಭೂವಿಜ್ಞಾನ ಮತ್ತು ಹವಾಮಾನ ==
[https://www.google.com/maps/search/10%C2%B053%E2%80%B255%E2%80%B3N+77%C2%B031%E2%80%B241%E2%80%B3E ಊಟಿಯು 10 ° 53′55 "N 77 ° 31′41" E ನಲ್ಲಿದ್ದು] ಸಮುದ್ರ ಮಟ್ಟದಿಂದ ಸರಾಸರಿ 305 ಅಡಿ ಎತ್ತರದಲ್ಲಿದೆ. ಉಡಿಯೂರು ಬೆಟ್ಟವು 7 ಕಿಮೀ ಉದ್ದದ ಪರ್ವತ ಶ್ರೇಣಿಯಾಗಿದೆ.<ref>{{Cite web|url=http://wikimapia.org/444712/Uthiyur-Hills|title=Uthiyur Hills|website=wikimapia.org|language=en|access-date=2021-07-19}}</ref>
ಊಟಿಯು ವರ್ಷಪೂರ್ತಿ ಬಿಸಿಯಾಗಿರುತ್ತದೆ. ವರ್ಷದುದ್ದಕ್ಕೂ, ತಾಪಮಾನವು ಸಾಮಾನ್ಯವಾಗಿ 70 F ನಿಂದ 98 F ವರೆಗೆ ಇರುತ್ತದೆ ಮತ್ತು ಅಪರೂಪವಾಗಿ 65 F ಅಥವಾ 103 F ಗಿಂತ ಕಡಿಮೆ ಇರುತ್ತದೆ.<ref>{{Cite web|url=https://www.accuweather.com/en/in/uthiyur/2808548/weather-forecast/2808548|title=Weather in Uthiyur, Tamil Nadu - Accuweather}}</ref>
=== ಪರ್ವತಗಳು ಮತ್ತು ಕಾಡು ===
ಪರ್ವತಗಳು ವೈವಿಧ್ಯಮಯ ವನ್ಯಜೀವಿಗಳಿಗೆ ನೆಲೆಯಾಗಿದೆ ಮತ್ತು ಜಿಂಕೆ, ಮಂಗಗಳು, ನರಿಗಳು, ಹಂದಿಗಳು, ಕಾಡುಹಂದಿಗಳು, ಕಾಡು ನಾಯಿಗಳು, ಹಸುಗಳು ಮತ್ತು ಇತರ ಸರೀಸೃಪಗಳು ಸೇರಿದಂತೆ ವಿವಿಧ ಅಪರೂಪದ ಸಸ್ಯಗಳಿಗೆ ನೆಲೆಯಾಗಿದೆ. ಈ ಪರ್ವತವು [[ಇಂದಿರಾ ಗಾಂಧಿ ವನ್ಯ ಮೃಗ ಧಾಮ ಮತ್ತು ರಾಷ್ಟ್ರೀಯ ಉದ್ಯಾನ|ಅನಮಲೈ ಹುಲಿ ಸಂರಕ್ಷಿತ ಪ್ರದೇಶದ ನಿಯಂತ್ರಣದಲ್ಲಿದೆ.]] ಹಲವಾರು ಔಷಧೀಯ ಸಸ್ಯಗಳನ್ನು ಹೊಂದಿರುವ ಇದನ್ನು ದಕ್ಷಿಣ ಭಾರತದ '''ಸಂಜೀವಿ ಬೆಟ್ಟ''' ಎಂದೂ ಕರೆಯುತ್ತಾರೆ.<ref>{{Cite web|url=https://www.maalaimalar.com/news/district/2021/07/07123213/2803845/Wildlife-suffering-due-to-lack-of-water-tank-in-the.vpf|title=வனப்பகுதியில் தண்ணீர்த் தொட்டி இல்லாததால் தவிக்கும் வனவிலங்குகள் {{!}}{{!}} Wildlife suffering due to lack of water tank in the forest|last=100010509524078|date=2021-07-07|website=Maalaimalar|language=English|access-date=2021-08-01}}</ref><ref>{{Cite web|url=https://www.dinamani.com/tamilnadu/2019/jan/07/கூண்டில்-சிக்கிய-அரிய-வகை-மர-நாய்-3072038.html|title=கூண்டில் சிக்கிய அரிய வகை மர நாய்|website=Dinamani|language=ta|access-date=2021-08-23}}</ref><ref>{{Cite web|url=https://www.dinamalar.com/news_detail.asp?id=2257441|title=அரிய வகை தேவாங்கு வனத்துறையிடம் ஒப்படைப்பு|date=2019-04-16|website=Dinamalar|access-date=2021-08-23}}</ref><ref name="dinamani.com">{{Cite web|url=https://www.dinamani.com/tamilnadu/2021/mar/19/kangayam-firefighters-caught-a-snake-inside-the-apartment-3585422.html|title=காங்கயம்: குடியிருப்பில் புகுந்த பாம்பைப் பிடித்த தீயணைப்பு வீரர்கள்|website=Dinamani|language=ta|access-date=2021-08-23}}</ref> ಬೆಟ್ಟದ ವಿವಿಧ ಭಾಗಗಳಲ್ಲಿ ಶ್ರೀಗಂಧದ ಮರಗಳೂ ಇವೆ.<ref name="dinamani.com"/><ref>{{Cite web|url=https://www.tamilhindu.com/2019/02/கோயில்-நிலத்தைக்-காக்க/|title=கோயில் நிலத்தைக் காக்கப் போராடும் தனியொருவர்!|last=குழு|first=ஆசிரியர்|date=2019-02-07|website=தமிழ்ஹிந்து|language=en-US|access-date=2021-10-18}}{{Dead link|date=ಮಾರ್ಚ್ 2023 |bot=InternetArchiveBot |fix-attempted=yes }}</ref>
== ಜನಸಂಖ್ಯೆಯ ವರ್ಗೀಕರಣ ==
{{bar box|title=மதவாரியான கணக்கீடு|titlebar=#ddd|left1=மதம்|right1=சதவீதம்(%)|float=right|bars={{bar percent|[[இந்து|இந்துக்கள்(அனைத்து சமயங்கள்)]]|Orange|97.60}}{{bar percent|[[கிறிஸ்தவம்|கிறிஸ்தவர்கள்]]|blue|2.33}}{{bar percent|[[முஸ்லிம்|முஸ்லிம்கள்]]|Green|0.02}}{{bar percent|மற்றவை|violet|0.05}}}}{{bar box|title=மதவாரியான கணக்கீடு|titlebar=#ddd|left1=மதம்|right1=சதவீதம்(%)|float=right|bars={{bar percent|[[இந்து|இந்துக்கள்(அனைத்து சமயங்கள்)]]|Orange|97.60}}{{bar percent|[[கிறிஸ்தவம்|கிறிஸ்தவர்கள்]]|blue|2.33}}{{bar percent|[[முஸ்லிம்|முஸ்லிம்கள்]]|Green|0.02}}{{bar percent|மற்றவை|violet|0.05}}}}2011 ರ ಭಾರತದ ಜನಗಣತಿಯ ಪ್ರಕಾರ, ಪಂಚಾಯತ್ ವ್ಯಾಪ್ತಿಯ ಪ್ರದೇಶವು 3500 ಜನಸಂಖ್ಯೆಯನ್ನು ಹೊಂದಿದೆ ಮತ್ತು 10000 ರ ನಗರ ಸಮಗ್ರ ಜನಸಂಖ್ಯೆಯನ್ನು ಹೊಂದಿದೆ. 2011 ರಲ್ಲಿ, ಉಡಿಯೂರು ಗ್ರಾಮದ ಸಾಕ್ಷರತೆ ಪ್ರಮಾಣವು 68.63% ಆಗಿತ್ತು. ತಮಿಳುನಾಡಿನಲ್ಲಿ ಶೇ.80.09ಕ್ಕಿಂತ ಕಡಿಮೆ ಇತ್ತು. ಊಟಿಯಲ್ಲಿ, ಪುರುಷರ ಸಾಕ್ಷರತೆಯ ಪ್ರಮಾಣವು 78.20% ಮತ್ತು ಮಹಿಳೆಯರಲ್ಲಿ ಇದು 59.15% ಆಗಿದೆ.<ref>{{Cite web|url=https://geoiq.io/places/Uthiyur/WtaQZ1Hw2q|title=Uthiyur, Tiruppur {{!}} Village {{!}} GeoIQ|website=geoiq.io|access-date=2021-10-17}}</ref><ref>{{Cite web|url=https://www.censusindia2011.com/tamil-nadu/tiruppur/kangeyam/uthiyur-population.html|title=Uthiyur Village Population - Kangeyam, Tiruppur, Tamil Nadu|website=Censusindia2011.com|language=en-US|access-date=2021-10-17|archive-date=2021-10-17|archive-url=https://web.archive.org/web/20211017100835/https://www.censusindia2011.com/tamil-nadu/tiruppur/kangeyam/uthiyur-population.html|url-status=dead}}</ref><ref>{{Cite web|url=http://censusindia.gov.in/2011census/dchb/3332_PART_B_DCHB_TIRUPPUR.pdf|title=Census 2011 - Tiruppur district}}</ref><ref>{{Cite web|url=https://tnrd.gov.in/databases/census_of_india_2011TN/pdf/12-Tiruppur.pdf|title=TN census 2011 Tiruppur district}}</ref><ref>{{Cite web|url=https://tiruppur.nic.in/document/census/|title=District Census Handbook 2011 {{!}} Tiruppur District, Government of Tamil Nadu {{!}} Textile City {{!}} India|language=en-US|access-date=2021-10-17}}</ref>
ಸಮೀಕ್ಷೆಯ ಪ್ರಕಾರ, ಉಡಿಯೂರು ಗ್ರಾಮದ ಸರಾಸರಿ ಲಿಂಗ ಅನುಪಾತವು 1006 ಆಗಿದೆ, ಇದು ತಮಿಳುನಾಡು ರಾಜ್ಯದ ಸರಾಸರಿ 996 ಕ್ಕಿಂತ ಹೆಚ್ಚಾಗಿದೆ. ವೇತನಕ್ಕಾಗಿ ಮಕ್ಕಳ ಲಿಂಗ ಅನುಪಾತವು 969 ಆಗಿದೆ, ಇದು ತಮಿಳುನಾಡಿನ ಸರಾಸರಿ 943 ಕ್ಕಿಂತ ಹೆಚ್ಚಾಗಿದೆ.<ref>{{Cite web|url=https://www.census2011.co.in/data/village/644631-uthiyur-tamil-nadu.html#:~:text=Average%20Sex%20Ratio%20of%20Uthiyur,rate%20compared%20to%20Tamil%20Nadu.|title=Uthiyur Village Population - Kangeyam - Tiruppur, Tamil Nadu|website=www.census2011.co.in|access-date=2021-10-17}}</ref> ಹೆಚ್ಚಿನವರ ಇಲ್ಲಿ ಅನುಸರಿಸಿ [[ಶೈವ ಪಂಥ|ಹಿಂದೂ ಧರ್ಮ ಸಸ್ಯಾಹಾರಿ ಧರ್ಮ.]] [[ತಮಿಳು]] ಮತ್ತು ಇಂಗ್ಲಿಷ್ ಪುರಸಭೆಯ ಅಧಿಕೃತ ಭಾಷೆಗಳು. ಇಲ್ಲಿ ಮಾತನಾಡುವ ತಮಿಳಿನ ಉಪಭಾಷೆ [[ಕೊಂಗು ರಾಜ್ಯ|ಕೊಂಗು ತಮಿಳು]].<ref>{{Cite web|url=https://www.nammacoimbatore.com/kongu-tamil/|title=Kongu Tamil|website=Namma Coimbatore|language=en|access-date=2021-10-17|archive-date=2021-10-17|archive-url=https://web.archive.org/web/20211017102338/https://www.nammacoimbatore.com/kongu-tamil/|url-status=dead}}</ref><ref>{{Cite web|url=http://www.valaitamil.com/%E0%AE%95%E0%AF%8A%E0%AE%99%E0%AF%8D%E0%AE%95%E0%AF%81--tamil-dictionary84847.html|title=Kongu, கொங்கு Tamil Agaraathi, tamil-english dictionary, english words, tamil words|last=ValaiTamil|website=ValaiTamil|access-date=2021-10-17}}</ref> ವಲಸೆ ಕಾರ್ಮಿಕರು ಮತ್ತು ಪ್ರವಾಸಿಗರಲ್ಲಿ [[ಮಲಯಾಳಂ]] ಮತ್ತು [[ಹಿಂದಿ|ಹಿಂದಿ ಮಾತನಾಡುತ್ತಾರೆ.]]
== ಆರ್ಥಿಕತೆ ==
[[ಕೃಷಿ]] ಮತ್ತು ವ್ಯಾಪಾರ ಇಲ್ಲಿನ ಎರಡು ಮುಖ್ಯ ಕೈಗಾರಿಕೆಗಳು. ಇದು ಪ್ರದೇಶದ ಜನರಿಗೆ ಉದ್ಯೋಗವನ್ನು ಒದಗಿಸುವ ಸಣ್ಣ ಆರ್ಥಿಕ ಕೇಂದ್ರವಾಗಿದ್ದು, ಇತರ ಅನೇಕ ಆರ್ಥಿಕ, ಗಣಿಗಾರಿಕೆ, ಜವಳಿ, ತೆಂಗು, ಸೆಣಬು, ಡೈರಿ, ವಿದ್ಯುತ್ ಸ್ಥಾವರಗಳು ಮತ್ತು ಪ್ರದೇಶದ ಸುತ್ತಮುತ್ತಲಿನ ಅನೇಕ ಕಂಪನಿಗಳು ಮತ್ತು ಉತ್ತರ ಭಾರತದ ಕಾರ್ಮಿಕರನ್ನು ಆಕರ್ಷಿಸುತ್ತದೆ. ಹಡ್ಸನ್ ಆಗ್ರೋ ಸ್ಥಾವರವು ನಗರದ ಕುಂಡಡಂ ರಸ್ತೆಯಲ್ಲಿದೆ.<ref>{{Cite web|url=https://geoiq.io/places/Uthiyur/Village|title=Uthiyur {{!}} Village {{!}} GeoIQ|website=geoiq.io|language=en|archive-url=https://web.archive.org/web/20210424122259/https://geoiq.io/places/Uthiyur/Village|archive-date=2021-04-24|dead-url=dead|access-date=2021-04-24}}</ref><ref>{{Cite web|url=https://www.moneycontrol.com/news/business/hatsun-agro-product-commences-commercial-production-of-milk-at-uthiyur-plant-in-tamil-nadu-7158371.html|title=Hatsun Agro Product Commences Commercial Production Of Milk At Uthiyur Plant, In Tamil Nadu|website=Moneycontrol|language=en|access-date=2021-07-14}}</ref><ref>{{Cite web|url=https://www.outlookindia.com/newsscroll/hatsun-agro-product-commences-commercial-production-of-milk-at-uthiyur-plant-in-tamil-nadu/2119000|title=Hatsun Agro Product commences commercial production of milk at Uthiyur plant, in Tamil Nadu|website=www.outlookindia.com/|access-date=2021-07-19}}</ref><ref>{{Cite web|url=https://www.moneycontrol.com/news/photos/business/stocks/gainers-losers-10-stocks-that-moved-most-on-july-12-7160311.html|title=Gainers & Losers: 10 Stocks That Moved Most On July 12|website=Moneycontrol|language=en|access-date=2021-07-19}}</ref><ref>{{Cite news}}</ref><ref>{{Cite web|url=https://www.indiamart.com/proddetail/electric-tumble-dryer-5744929433.html|title=Electric Tumble Dryer|website=indiamart.com|language=en|access-date=2021-08-01|archive-date=2021-08-01|archive-url=https://web.archive.org/web/20210801070904/https://www.indiamart.com/proddetail/electric-tumble-dryer-5744929433.html|url-status=dead}}</ref>
== ರಾಜಕೀಯ ಮತ್ತು ಆಡಳಿತ ==
ಈ ಚಿಕ್ಕ ಪಟ್ಟಣವು ಕುಂಡಡಂ ಪಂಚಾಯತ್ ಯೂನಿಯನ್, ಕಂಗಯಂ ಸರ್ಕಲ್, ತಾರಾಪುರಂ ಕಂದಾಯ ವಿಭಾಗ ಮತ್ತು ತಿರುಪುರ್ ಜಿಲ್ಲೆಗೆ ಸೇರಿದೆ.<ref>{{Cite web|url=https://tiruppur.nic.in/department/block-development-office/|title=Block Development Office {{!}} Tiruppur District, Government of Tamil Nadu {{!}} Textile City {{!}} India|language=en-US|access-date=2021-10-21}}</ref><ref>{{Cite web|url=https://www.census2011.co.in/data/subdistrict/5901-kangeyam-tiruppur-tamil-nadu.html|title=Villages & Towns in Kangeyam Taluka of Tiruppur, Tamil Nadu|website=www.census2011.co.in|access-date=2021-10-21}}</ref><ref>{{Cite web|url=https://tiruppur.nic.in/administrative-setup/revvilllage/|title=REVENUE VILLAGES {{!}} Tiruppur District, Government of Tamil Nadu {{!}} Textile City {{!}} India|language=en-US|access-date=2021-10-21}}</ref>
ನಗರವು ಕಂಗಯಂ ವಿಧಾನಸಭಾ ಕ್ಷೇತ್ರ ಮತ್ತು ಈರೋಡ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.<ref>{{Cite web|url=https://www.vikatan.com/government-and-politics/politics/mlas-activities-of-5-years-minister-vellamandi-natarajan|title=என்ன செய்தார் எம்.எல்.ஏ ? - அமைச்சர் வெல்லமண்டி நடராஜன்|last=டீம்|first=ஜூனியர் விகடன்|website=www.vikatan.com/|language=ta|access-date=2021-08-23}}</ref><ref>{{Cite web|url=https://economictimes.indiatimes.com/news/politics-and-nation/tamil-nadu-polls-2021-rahul-gandhi-holds-roadshow-in-uthiyur/videoshow/80436434.cms|title=Tamil Nadu polls 2021: Rahul Gandhi holds roadshow in Uthiyur|last=Jan 2021|first=ANI {{!}} 24|last2=Ist|first2=09:00 Pm|website=The Economic Times|access-date=2021-07-19}}</ref> ಸಾಮಾನ್ಯ ಎಐಎಡಿಎಂಕೆ, ಡಿಎಂಕೆ ಮತ್ತು [[ಭಾರತೀಯ ಜನತಾ ಪಕ್ಷ|ಬಿಜೆಪಿ]] ಇಲ್ಲಿ ಪ್ರಾಬಲ್ಯ ಹೊಂದಿವೆ.<ref name="timesofindia.indiatimes.com">{{Cite web|url=https://timesofindia.indiatimes.com/videos/city/chennai/rahul-gandhi-holds-roadshow-in-tns-uthiyur/videoshow/80437678.cms|title=Rahul Gandhi holds roadshow in TN's Uthiyur {{!}} City - Times of India Videos|website=The Times of India|language=en|access-date=2021-07-19}}</ref><ref name="timesofindia.indiatimes.com"/><ref>{{Cite web|url=https://economictimes.indiatimes.com/news/politics-and-nation/tamil-nadu-polls-2021-rahul-gandhi-holds-roadshow-in-uthiyur/videoshow/80436434.cms|title=Tamil Nadu polls 2021: Rahul Gandhi holds roadshow in Uthiyur|last=Jan 2021|first=ANI {{!}} 24|last2=Ist|first2=09:00 Pm|website=The Economic Times|access-date=2021-07-19}}</ref><ref>{{Cite web|url=https://www.vikatan.com/government-and-politics/politics/mlas-activities-of-5-years-minister-vellamandi-natarajan|title=என்ன செய்தார் எம்.எல்.ஏ? - அமைச்சர் வெல்லமண்டி நடராஜன்|last=டீம்|first=ஜூனியர் விகடன்|website=www.vikatan.com/|language=ta|access-date=2021-08-23}}</ref><ref name="dinamalar.com">{{Cite web|url=https://www.dinamalar.com/home.html|title=Dinamalar world no.1 Tamil website {{!}} Tamil News {{!}} Tamil Nadu {{!}} Breaking News {{!}} Political {{!}} Business {{!}} Cinema {{!}} Sports {{!}}|website=www.dinamalar.com|access-date=2021-08-23}}</ref> ಈ ಪ್ರದೇಶದಲ್ಲಿ ಬಹುತೇಕ ದೇವಸ್ಥಾನಗಳ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿ ಮಾರಾಟ ಮಾಡುತ್ತಿರುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.<ref name="dinamalar.com"/>
== ದೇವಾಲಯಗಳು ==
[[ಚಿತ್ರ:PonnuuthiMalai.jpg|thumb|ಅರುಲ್ಮಿಗು ಉತ್ತಂಡ ವೇಲಾಯುತ ಸ್ವಾಮಿ ದೇವಸ್ಥಾನ]]
ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ವ್ಯವಹಾರಗಳ ಇಲಾಖೆಯಿಂದ ನಿರ್ವಹಿಸಲ್ಪಡುವ ಊಟೂರ್ ಬೆಟ್ಟದ ಮೇಲೆ ಹಲವಾರು ದೇವಾಲಯಗಳಿವೆ. ಉತ್ತಂಡ ವೇಲಾಯುತ ಸ್ವಾಮಿ ದೇವಸ್ಥಾನ, ಚೆಟ್ಟಿ ತಂಬಿರಾನ್ ದೇವಸ್ಥಾನ ಮತ್ತು ಉಚ್ಚಿ ಪಿಳ್ಳೈಯಾರ್ ದೇವಸ್ಥಾನಗಳು ಕೆಲವು ಪ್ರಮುಖವಾದವುಗಳಾಗಿವೆ. ಊಟೂರು ಶ್ರೇಣಿಯು ಅಂದಾಜು 7 ಕಿ.ಮೀ. ನಾನು. ಅಗಲದೊಂದಿಗೆ.<ref>{{Cite web|url=http://hindumunnani.org.in/news/%e0%ae%aa%e0%af%86%e0%ae%b0%e0%af%81%e0%ae%ae%e0%af%88%e0%ae%ae%e0%ae%bf%e0%ae%95%e0%af%81-%e0%ae%8a%e0%ae%a4%e0%ae%bf%e0%ae%af%e0%af%82%e0%ae%b0%e0%af%8d-%e0%ae%95%e0%af%8a%e0%ae%99%e0%af%8d%e0%ae%95/|title=பெருமைமிகு ஊதியூர் கொங்கணச் சித்தர் கோவிலில் இந்து முன்னணி மாநில தலைவர் காடேஸ்வரா சி.சுப்பிரமணியம் வழிபாடு..|last=Admin|date=2019-02-04|website=இந்துமுன்னணி|language=en-US|access-date=2021-10-17}}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref>
ರಸ್ತೆಯಿಂದ ನೋಡಿದರೆ ಸುಂದರ ಬೆಟ್ಟದ ಮೇಲಿನ ಮುರುಗನ್ ದೇವಸ್ಥಾನ ಕಣ್ಣಿಗೆ ಹಬ್ಬ. ಇದು ಸುಮಾರು 300 ಅಡಿ ಎತ್ತರ ಮತ್ತು 150 ಮೆಟ್ಟಿಲುಗಳನ್ನು ಹೊಂದಿದೆ. ತಳದಲ್ಲಿ ಪಾದ ಗಣೇಶ ಮತ್ತು ಅನುಮಂತರಾಯರ ಗುಡಿಗಳಿವೆ. ದಾರಿಯಲ್ಲಿ ಪುರಾತನವಾದ ಗಣೇಶನ ಕೆತ್ತನೆ ಮತ್ತು ಅದರ ಸಮೀಪದಲ್ಲಿ ಇಡುಂಬನ ಸನ್ನಿಧಿ ಇದೆ. ಮುರುಗನ್ ದೇವಾಲಯವು ಪೊನ್ನುತಿ ಬೆಟ್ಟದ ಮಧ್ಯದಲ್ಲಿದೆ ಮತ್ತು ಭಕ್ತರಿಗೆ ಆಶೀರ್ವಾದವನ್ನು ನೀಡುತ್ತದೆ.<ref name=":0"/><ref name="travel.bhushavali.com">{{Cite web|url=https://travel.bhushavali.com/2010/05/uthiyur-hills-aka-pon-uthiyur-konganar.html|title=Pon Uthiyur Hills & Konganar Siddhar Samadhi (Karur - Tamil Nadu)|access-date=2021-10-17}}</ref> ದಾಟಿ ಮೇಲೆ ಹೋದರೆ ಪ್ರವೇಶ ದ್ವಾರವಿರುವ ಸಭಾಂಗಣವಿದೆ. ಇದನ್ನು ಸ್ನ್ಯಾಚ್ ಗೇಟ್ ಎಂದು ಕರೆಯಿರಿ.<ref name="koyil.siththan.org">{{Cite web|url=http://koyil.siththan.org/archives/2628|title=அருள்மிகு உத்தண்ட வேலாயுத சுவாமி திருக்கோயில், ஊதியூர் – Aalayangal.com|website=koyil.siththan.org|access-date=2021-10-17|archive-date=2021-10-19|archive-url=https://web.archive.org/web/20211019121350/http://koyil.siththan.org/archives/2628|url-status=dead}}</ref><ref>{{Cite web|url=https://www.vikatan.com/spiritual/temples/145043-pon-uthiyur-konganar-cave-siddhars|title=சித்தர்கள் உலாவும் பொன்னூதி மாமலை...|last=காமராஜ்|first=மு ஹரி|website=https://www.vikatan.com/|language=ta|access-date=2021-10-17}}</ref><ref>{{Cite book|url=https://books.google.co.in/books?id=zxpHAQAAIAAJ&q=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&dq=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&hl=en&newbks=1&newbks_redir=1&printsec=frontcover&sa=X&ved=2ahUKEwiK8MH0_u_zAhVFxTgGHdmoCb0Q6AF6BAgCEAI/}}</ref>
=== ಉತ್ತಂಡ ವೇಲಾಯುತ ಸ್ವಾಮಿ ದೇವಸ್ಥಾನ ===
ಉತ್ತಂಡ ವೇಲಾಯುತಸಾಮಿ ದೇವಸ್ಥಾನವು ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಪಟ್ಟಣದ ಪ್ರಮುಖ ಶಿವ ದೇವಾಲಯವಾಗಿದ್ದು, ಇದು ಬೆಟ್ಟಗಳಲ್ಲಿ ಮುರುಗನ್ ದೇವರಿಗೆ ಸಮರ್ಪಿತವಾಗಿದೆ. ಇದು ಜಿಲ್ಲೆಯಾದ್ಯಂತ ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಕ್ರಿ.ಶ., ಪುರಾತತ್ವಶಾಸ್ತ್ರಜ್ಞರು ಕಂಡುಹಿಡಿದರು. ತಮಿಳಿನಲ್ಲಿ 9ನೇ ಶತಮಾನದಷ್ಟು ಪ್ರಾಚೀನ ಶಾಸನಗಳಿವೆ. ಇದು ಪರ್ವತಗಳ ಮೇಲೆ ನೆಲದಿಂದ 100 ಮೆಟ್ಟಿಲುಗಳ ಮೇಲೆ ಇದೆ. ಪಳನಿಯ ಯಾತ್ರಾರ್ಥಿಗಳಿಗೆ ಇದು ಪ್ರಮುಖ ಸ್ಥಳವಾಗಿದೆ.<ref name=":0"/><ref>{{Cite web|url=https://temple.dinamalar.com/New.php?id=1547|title=Uthanda Velayutha Swami Temple : Uthanda Velayutha Swami Uthanda Velayutha Swami Temple Details {{!}} Uthanda Velayutha Swami- Uthiyur {{!}} Tamilnadu Temple {{!}} உத்தண்ட வேலாயுத சுவாமி|website=temple.dinamalar.com|access-date=2021-10-17}}</ref><ref>{{Cite web|url=https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf|title=ஊதிமலை உத்தண்ட வேலாயுதசுவாமி திருத்தலம் {{!}}{{!}} othimalai velayutha swamy temple|last=100010509524078|date=2020-06-16|website=Maalaimalar|language=English|access-date=2021-10-17|archive-date=2021-10-17|archive-url=https://web.archive.org/web/20211017120150/https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf|url-status=dead}}</ref>
ದೇವಾಲಯದ ಪ್ರವೇಶದ್ವಾರವು ದಕ್ಷಿಣ ಭಾಗದಲ್ಲಿದೆ. ಪೂರ್ವಕ್ಕೆ ರಾಜಗೋಪುರವು ಪ್ರವೇಶದ್ವಾರವಿದೆ. ಗರ್ಭಗುಡಿಯಲ್ಲಿ ಉತ್ತಂಡ ವೇಲಾಯುತ ಸ್ವಾಮಿಯು ಪೂರ್ವಾಭಿಮುಖವಾಗಿ ಐದು ಅಡಿ ಎತ್ತರದಲ್ಲಿ ನಿಂತಿರುವುದು ಕಂಡುಬರುತ್ತದೆ. ಅವರ ಕೋಲಮ್ ಪಳನಿ ದೇವರಿಗೆ ಪಶ್ಚಿಮಾಭಿಮುಖವಾಗಿ ನೆಲೆಗೊಂಡಿರುವುದು ಗಮನಾರ್ಹವಾಗಿದೆ. ಮೂಲವನ್ನು ಕೊಂಕಣ ಸಿದ್ಧರು ರಚಿಸಿದ್ದಾರೆಂದು ಇತಿಹಾಸ ಹೇಳುತ್ತದೆ. ಅವನೊಂದಿಗೆ ಗಣೇಶ ಮತ್ತು ಭೈರವನ ಗುಡಿಗಳಿವೆ.
ಈ ದೇವಾಲಯದಲ್ಲಿ ಪಾವುರ್ಣಮಿ, ಷಷ್ಠಿ ಮತ್ತು ಪಂಗುನಿ ಉತ್ತರ ಹಬ್ಬಗಳು ನಡೆಯುತ್ತವೆ. ಪಾವುರ್ಣಮಿಯ ದಿನಗಳಲ್ಲಿ ಮಧ್ಯರಾತ್ರಿಯವರೆಗೆ ಸ್ವಾಮಿಯ ದರ್ಶನ ಮಾಡಬಹುದು.<ref name=":0"/><ref name="travel.bhushavali.com"/>
=== ಕೊಂಕಣ ಸಿದ್ಧರ ದೇವಸ್ಥಾನ ===
ಪೋಖರನ ಶಿಷ್ಯರಾಗಿದ್ದ ಋಷಿ ಕೊಂಕಣಾಚ ಸಿದ್ಧರು ತಪಸ್ಸು ಮಾಡಲು ಸೂಕ್ತವಾದ ಸ್ಥಳವನ್ನು ಹುಡುಕುತ್ತಿದ್ದಾಗ ಈ ಪರ್ವತವನ್ನು ಕಂಡರು. ತಕ್ಷಣವೇ ಅವನಿಗೆ ಜನಾಂಗೀಯವಾಗಿ ಗ್ರಹಿಸಲಾಗದ ಆಕರ್ಷಣೆಯುಂಟಾಯಿತು. ಅವರು ಈ ಪರ್ವತವನ್ನು ಪಂಚಪುತ್ರ ಸ್ಥಳವಾಗಿ ಮತ್ತು ಅಪರೂಪದ ಕಲ್ಲುಗಳು ಮತ್ತು ಬಂಡೆಗಳಿಂದ ತುಂಬಿದ ಸ್ಥಳವಾಗಿ ಕಂಡರು. ಹೀಗೆ ಈ ಬೆಟ್ಟದ ಮೇಲಿನ ಚಂದ್ರಕಾಂತ ಶಿಲಾಸ್ತಂಭದ ಮೇಲೆ ಕುಳಿತು ತಪಸ್ಸು ಮಾಡಿದರು.<ref>{{Citation|title=Kongana Siddhar Mystery - சித்தர்களைத் தேடி ஒரு பயணம் {{!}} Karna {{!}} Tamilnavigation|url=https://www.youtube.com/watch?v=teu_MZ_7QmA|language=en|access-date=2021-08-01}}</ref>
ಅವರ ಜೀವ ಸಮಾಧಿ ಮತ್ತು ಚಂದ್ರಕಾಂತ್ ಧ್ಯಾನ ಶಿಲೆಗಳು ಇಲ್ಲಿವೆ.<ref>{{Cite web|url=https://www.dinamani.com/all-editions/edition-coimbatore/tiruppur/2019/jul/30/ஊதியூர்-கொங்கண-சித்தர்-கோயிலில்-நாளை-பஞ்சகலச-யாக-பூஜை-3203118.html|title=ஊதியூர் கொங்கண சித்தர் கோயிலில் நாளை பஞ்சகலச யாக பூஜை|website=Dinamani|language=ta|access-date=2021-08-23}}</ref><ref>{{Cite web|url=https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf|title=ஊதிமலை உத்தண்ட வேலாயுதசுவாமி திருத்தலம் {{!}}{{!}} othimalai velayutha swamy temple|last=100010509524078|date=2020-06-16|website=Maalaimalar|language=English|access-date=2021-08-23|archive-date=2021-10-17|archive-url=https://web.archive.org/web/20211017120150/https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf|url-status=dead}}</ref><ref>{{Cite web|url=https://www.vikatan.com/arts/literature/136224-samiyargal-bits|title=சாமியார்கள் - துணுக்குகள்|last=ராமகிருஷ்ணன்,எம்.புண்ணியமூர்த்தி|first=ஜி பழனிச்சாமி,கு|website=www.vikatan.com/|language=ta|access-date=2021-08-23}}</ref> ಅದರ ಸಮೀಪದಲ್ಲಿ ಒಂದು ದೊಡ್ಡ ಬಾವಿಯಂತಹ ಜೌಗು ಪ್ರದೇಶವಿದೆ.<ref>{{Cite web|url=https://www.toptamilnews.com/காரிய-சித்திக்கும்-பகைய/|title=காரிய சித்திக்கும், பகையை வெல்லவும், வாழ்வில் வளம் பெறவும் கொங்கணர் சித்தரை வழிபடும் முறைகள்|date=2019-01-24|website=TopTamilNews|language=en-US|access-date=2021-08-23}}</ref>
ಕೊಂಕಣರ ದೇವಾಲಯವು ಪೊನ್ನುತಿ ಬೆಟ್ಟದ ತುದಿಯಲ್ಲಿದೆ. ಉತ್ತಂಡ ವೇಲಾಯುತ ಸ್ವಾಮಿ ದೇವಸ್ಥಾನದ ಮೂಲಕ ಮೂರು ಕಿಲೋಮೀಟರ್ ದೂರದ ಬೆಟ್ಟದ ಮೇಲೆ ಹೋಗಬೇಕು. ಚೆಟ್ಟಿತಾಂಬ್ರನ್ ಸಿದ್ಧರ್ ಜೀವಸಮತಿ ಮತ್ತು ಉಚ್ಚಿಪಿಳ್ಳೈಯಾರ್ ದೇವಸ್ಥಾನವನ್ನು ಹಾದು ಕೊಂಕಣಾರ್ ಸಿದ್ಧರ ದೇವಸ್ಥಾನವನ್ನು ತಲುಪಬಹುದು. ಇನ್ನೊಂದು ಸರಳ ಮಾರ್ಗವಿದೆ. ಈ ಪರ್ವತದ ಬುಡದಿಂದ ಎರಡು ಕಿಲೋಮೀಟರ್ ದೂರದ ಹಾದಿಯನ್ನು ಹತ್ತಿದರೆ ಕೇವಲ ಅರ್ಧ ಕಿಲೋಮೀಟರ್ ದೂರ. ದಾರಿಹೋಕರು ಚಂದ್ರಕಾಂತಕಲ್, ಅಕ್ಯುಪಂಕ್ಚರ್ ರಾಕ್ ಮತ್ತು ವಿಷದ ಕಲ್ಲುಗಳನ್ನು ನೋಡಬಹುದು.<ref name="threadreaderapp.com">{{Cite web|url=https://threadreaderapp.com/thread/1440575067381846023|title=Thread by @kannanthvan on Thread Reader App|website=threadreaderapp.com|access-date=2021-10-17}}</ref>
ಬಂಡೆಯ ಮೇಲೆ ನಿರ್ಮಿಸಲಾದ ಸರಳ ಕೊಂಕಣರ ದೇವಾಲಯ. ಗರ್ಭಗುಡಿಯಲ್ಲಿ, ಕೊಂಕಣ ಸಿದ್ಧರು ಚಂದ್ರಶಿಲೆಯ ಮೇಲೆ ತಪಸ್ಸಿಗೆ ಕುಳಿತಿದ್ದಾರೆ. 200 ಅಡಿ ದೂರದಲ್ಲಿ ಕೊಂಕಣರು ತಪಸ್ಸು ಮಾಡಿದ ಗುಹೆಯಿದೆ. [[ಪಳನಿ ಮುರುಗನ್ ದೇವಾಲಯ|ಇಲ್ಲಿಂದ ಪಳನಿ ಮುರುಗನ್ ದೇವಸ್ಥಾನಕ್ಕೆ]] ಸುರಂಗವಿದೆ ಎಂದು ಹೇಳಲಾಗುತ್ತದೆ. ಧ್ಯಾನದಲ್ಲಿ ನಂಬಿಕೆ ಇರುವವರು ಇಲ್ಲಿ ತಪಸ್ಸು ಮಾಡುವಾಗ ದೈವಿಕ ಅನುಭವವನ್ನು ಪಡೆಯಬಹುದು.<ref name="threadreaderapp.com"/>
ಪಾವುರ್ಣಮಿಯ ಮೊದಲ ದಿನದಿಂದ ನಾಲ್ಕು ದಿನಗಳ ಕಾಲ ಈ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ನ್ಯೂನತೆಯೊಂದಿಗೆ ಬರುವ ಭಕ್ತರು ಇಲ್ಲಿನ ವಿಷ ಬಂಡೆಯ ಮೇಲೆ ಮಲಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ.<ref name=":0">{{Cite web|url=https://m.dailyhunt.in/news/india/tamil/swasthiktv-epaper-swasthik/oothimalai+uthanda+velayuthasuvami+tiruthalam-newsid-n191838402|title=ஊதிமலை உத்தண்ட வேலாயுதசுவாமி திருத்தலம் - Swasthiktv|website=Dailyhunt|language=en|access-date=2021-10-17}}</ref><ref>{{Cite web|url=https://www.drstaranandram.com/%E0%AE%95%E0%AF%8A%E0%AE%99%E0%AF%8D%E0%AE%95%E0%AE%A3%E0%AE%B0%E0%AF%8D-%E0%AE%9A%E0%AE%BF%E0%AE%A4%E0%AF%8D%E0%AE%A4%E0%AE%B0%E0%AE%BF%E0%AE%A9%E0%AF%8D-%E0%AE%9A%E0%AF%82%E0%AE%9F%E0%AF%8D%E0%AE%9A/|title=கொங்கணர் சித்தரின் சூட்சுமங்கள்|last=Staranandram|date=2020-09-11|website=Dr.Star Anand Ram|language=en-US|access-date=2021-10-29|archive-date=2021-10-29|archive-url=https://web.archive.org/web/20211029161329/https://www.drstaranandram.com/%E0%AE%95%E0%AF%8A%E0%AE%99%E0%AF%8D%E0%AE%95%E0%AE%A3%E0%AE%B0%E0%AF%8D-%E0%AE%9A%E0%AE%BF%E0%AE%A4%E0%AF%8D%E0%AE%A4%E0%AE%B0%E0%AE%BF%E0%AE%A9%E0%AF%8D-%E0%AE%9A%E0%AF%82%E0%AE%9F%E0%AF%8D%E0%AE%9A/|url-status=dead}}</ref>
=== ತಂಪುರನ್ ಚೆಟ್ಟಿ ದೇವಸ್ಥಾನ ===
ಬೆಟ್ಟದ ತುದಿಯಲ್ಲಿ ಕೊಂಕಣ ಸಿದ್ಧಾರ್ಥನ ಶಿಷ್ಯನಾದ ತಂಪುರನ್ ಚೆಟ್ಟಿ ದೇವಾಲಯವಿದೆ, ಅವನ ಸಮಾಧಿ ಮತ್ತು ಅವನ ತಪಸ್ಸು ಗುಹೆ ಇದೆ. ಸಮೀಪದಲ್ಲಿ ಗಣೇಶ, ರಾಹು ಮತ್ತು ಕೇತುಗಳ ಗುಡಿಗಳಿವೆ. ಅರುಲ್ಪಲಿಕ್ಕಿರರ್ '''''ಲಕ್ಷ್ಮಿ ಗಣಪತಿಯ''''' ಜೊತೆಗೆ [[ಲಕ್ಷ್ಮಿ|ಮಹಾಲಕ್ಷ್ಮಿಯಲ್ಲಿ]] ಎಲ್ಲಿಯಾದರೂ ಗಣೇಶ. ಇವರನ್ನು ಪೂಜಿಸುವುದರಿಂದ ಮನೆಯಲ್ಲಿನ ದಾರಿದ್ರ್ಯ ನಿವಾರಣೆಯಾಗುತ್ತದೆ, ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ನಂಬಿಕೆ. ಇಲ್ಲಿನ ಸುತ್ತಮುತ್ತಲಿನವರು ವ್ಯಾಪಾರ ಮಾಡಬೇಕೆಂದರೆ ಆತನಿಗೆ ಪೂಜೆ ಸಲ್ಲಿಸಿ ವ್ಯಾಪಾರ ಆರಂಭಿಸುತ್ತಾರೆ. ತಂಬಿರಾನ್ ಚೆಟ್ಟಿ ದೇವಸ್ಥಾನದ ಮೇಲೆ ಹೋದರೆ ಉಚ್ಚಿಪಿಳ್ಳೈಯಾರ್ ದೇವಸ್ಥಾನವಿದೆ.<ref name=":0"/><ref>{{Cite web|url=http://famous-astrologer-in-madurai.blogspot.com/2015/10/blog-post.html|title=Famous Astrologer in Tamil Nadu: முருகன் கோயில்கள் ஊர் வாரியாக!|last=Unknown|website=Famous Astrologer in Tamil Nadu|access-date=2021-10-17}}</ref>
=== ಉಚ್ಚಿ ಪಿಳ್ಳೈಯಾರ್ ದೇವಸ್ಥಾನ ===
ಉಚ್ಚಿ ಪಿಳ್ಳೈಯಾರ್ ದೇವಾಲಯವು ಗಣೇಶನಿಗೆ ಅರ್ಪಿತವಾದ ಬೆಟ್ಟದ ಮೇಲಿನ ದೇವಾಲಯವಾಗಿದೆ. ಇದು ಸಮುದ್ರ ಮಟ್ಟದಿಂದ 1080 ಮೀ ಎತ್ತರದಲ್ಲಿದೆ.<ref>{{Cite web|url=https://www.dinamani.com/all-editions/edition-coimbatore/tiruppur/2017/nov/25/ஊதியூர்-மலைக்-கோயில்களுக்குப்-படிக்கட்டுகள்-வேண்டும்-பக்தர்கள்-கோரிக்கை-2814453.html|title=ஊதியூர் மலைக் கோயில்களுக்குப் படிக்கட்டுகள் வேண்டும்: பக்தர்கள் கோரிக்கை|website=Dinamani|language=ta|access-date=2021-09-17}}</ref>
=== ಸೋರ್ಣ ಲಿಂಗೇಶ್ವರ ದೇವಸ್ಥಾನ ===
ಬೆಟ್ಟದ ತುದಿಯಲ್ಲಿ ಶಿವನು ಸಿದ್ಧಾರ್ಥನಿಗೆ ಮತ್ತು ಶಿವಲಿಂಗಕ್ಕೆ ಕಾಣಿಸಿಕೊಂಡ ಸ್ಥಳವಾಗಿದೆ. ಇಲ್ಲಿ ಶಿವನನ್ನು ಸೋರ್ಣ ಲಿಂಗೇಶ್ವರ ಎಂದು ಕರೆಯಲಾಗುತ್ತದೆ. ಆದರೆ ಎಲ್ಲರೂ ಇದನ್ನು ನೋಡುವುದಿಲ್ಲ ಮತ್ತು ಏರಲು ತುಂಬಾ ಕಷ್ಟ. ವೆಲ್ಲಿಯಂಗಿರಿ ಬೆಟ್ಟದಂತೆ ಈ ಬೆಟ್ಟವೂ ಏಳು ಬೆಟ್ಟಗಳನ್ನು ಹೊಂದಿದೆ. ವೆಲ್ಲಿಯಂಗಿರಿ ಬೆಟ್ಟದ ಮೇಲಿನ ಮೂರು ಬಂಡೆಗಳ ನಡುವೆ ಶಿವನನ್ನು ಕಾಣುವಂತೆ ಇಲ್ಲಿಯೂ ಮೂರು ಬಂಡೆಗಳ ನಡುವೆ ಶಿವನು ಕಾಣುತ್ತಾನೆ. ಅದಕ್ಕಾಗಿಯೇ ಈ ಬೆಟ್ಟವನ್ನು '''ಚಿನ್ನ ವೆಲ್ಲಿಯಂಗಿರಿ ಎಂದೂ ಕರೆಯುತ್ತಾರೆ.''' ವೆಲ್ಲಿಯಂಗಿರಿ ಬೆಟ್ಟವನ್ನು ಏರಲು ಸಾಧ್ಯವಾಗದವರು ಈ ಸ್ಥಳಕ್ಕೆ ಭೇಟಿ ನೀಡಬಹುದು.
ಹುಣ್ಣಿಮೆ ಇಲ್ಲಿ ಬಹಳ ಮುಖ್ಯ. ಈ ಬಂಡೆಗಳ ಮೇಲಿನ ಚಂದ್ರಶಿಲಾ ರಚನೆಗಳು ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನ ಬೆಳಕನ್ನು ಪ್ರತಿಬಿಂಬಿಸುತ್ತವೆ. ದೇಹ ಮತ್ತು ಮನಸ್ಸಿನ ಎಲ್ಲಾ ಕಾಯಿಲೆಗಳು ನಮ್ಮ ದೇಹಕ್ಕೆ ಬೀಳುವ ಮೂಲಕ ಗುಣವಾಗುತ್ತವೆ ಎಂದು ಹೇಳಲಾಗುತ್ತದೆ. ಹೀಗಾಗಿ ಭಕ್ತರು ರಾತ್ರಿಯಿಡೀ ಬಂಡೆಗಳ ಮೇಲೆ ಮಲಗುತ್ತಿದ್ದರು.
ಪರ್ವತಗಳಿಂದ ತಂದ ಗಿಡಮೂಲಿಕೆಗಳಿಂದ ತಯಾರಿಸಿದ ಗಿಡಮೂಲಿಕೆಗಳ ಕಷಾಯ ಇಲ್ಲಿದೆ. ಇದು ಅನೇಕ ಗುಣಪಡಿಸಲಾಗದ ರೋಗಗಳನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ. ಈ ಪರ್ವತವು ಅರಣ್ಯ ಇಲಾಖೆಯ ಅಧೀನದಲ್ಲಿರುವುದರಿಂದ ಕೆಲವು ನಿರ್ಬಂಧಗಳಿವೆ.<ref>{{Cite web|url=http://www.tamilkovil.in/2016/10/Uthanda.html|title=அருள்மிகு உத்தண்ட வேலாயுத சுவாமி திருக்கோவில்,கோயம்புத்தூர்|language=english|access-date=2021-10-17}}</ref>
=== ಮಹಾಮಂಡಪಂ ===
[[ಸುಬ್ರಹ್ಮಣ್ಯ ಸ್ವಾಮಿ|ಮಹಾಮಂಡಪದಲ್ಲಿರುವ ಸ್ತಂಭಗಳಲ್ಲಿ ಮಾಯಿಲ್ವಾಕನ ಮುರುಗನ್]], ಕಾಮದೇನು, ಆದಿಯವರ್, ಇಡುಂಬನ್, ಮಾರ್ಕಂಡೇಯರ್, ತಿರುಮಾಲ್, ಅಯ್ಯನಾರ್, ಸೂರ್ಯ, ವೇಲಾಯುಧರ್, ಪೂತಮ್, ಗಣೇಶ ಮತ್ತು [[ರಾಮ]] [[ಲಕ್ಷ್ಮಣ|ಲಕ್ಷ್ಮಣನ]] ಚಿತ್ರಗಳನ್ನು ಕೆತ್ತಲಾಗಿದೆ. ಮಹಾ ಮಂಟಪ ಮತ್ತು ವಾದ್ಯ ಮಂಟಪಗಳಲ್ಲಿ ಸುಂದರರ್ ಮೊಸಳೆಯಿಂದ ಮಗುವನ್ನು ರಕ್ಷಿಸುವ ದೃಶ್ಯವನ್ನು ಚಿತ್ರಿಸಲಾಗಿದೆ. ಬೀವರ್ಗಾಗಿ ಖಾಸಗಿ ಸಭೆಯ ಸ್ಥಳವಿದೆ.<ref name="koyil.siththan.org"/>
=== ಹಬ್ಬಗಳು ಮತ್ತು ಹಬ್ಬಗಳು ===
ದೇವಾಲಯದ Krittikai, ಪ್ರತಿ ತಿಂಗಳ ತಾರಾ ದಿನಗಳು, ಆಚರಿಸುತ್ತದೆ [[ಥೈಪುಸಮ್]], ಚಿತ್ರ ಪೌರ್ಣಮಿಯಂದು, Amavasai, ಥಲಾ ಆಡಿ, Vaikasi ಬ್ರಹ್ಮೋತ್ಸವಮ್, Vaikasi Visakam, ಮತ್ತು ಎಲ್ಲಾ ಶುಕ್ರವಾರ. [[ದೀಪಾವಳಿ]], ನವರಾತ್ರಿ, ಪಂಗುನಿ ಉತ್ತರಂ ಮತ್ತು ಕಾರ್ತಿಕ ದೀಪಂ ಇವು ಊಟೂರ್ ವೇಲಾಯುತಸ್ವಾಮಿ ಮುರುಗನ್ ದೇವಸ್ಥಾನದ ಕೆಲವು ಪ್ರಮುಖ ಹಬ್ಬಗಳಾಗಿವೆ.<ref name="epuja.co.in"/>
ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳು ಇಲ್ಲಿ ಬಹಳ ವಿಶೇಷ.<ref>{{Cite web|url=https://www.dinamani.com/all-editions/edition-coimbatore/tiruppur/2017/nov/25/ஊதியூர்-மலைக்-கோயில்களுக்கு-படிக்கட்டுகள்-வேண்டும்-பக்தர்கள்-கோரிக்கை-2814453.html|title=ஊதியூர் மலைக் கோயில்களுக்குப் படிக்கட்டுகள் வேண்டும்: பக்தர்கள் கோரிக்கை|website=Dinamani|language=ta|access-date=2021-08-23}}</ref>
== ಸಾರಿಗೆ ಲಿಂಕ್ ==
ಹತ್ತಿರದ ಪಟ್ಟಣಗಳು ಕಾಂಗೇಯಂ ಮತ್ತು ತಾರಾಪುರಂ ಕ್ರಮವಾಗಿ ಉಡಿಯೂರಿನಿಂದ 14 ಕಿ.ಮೀ. ಮತ್ತು 18 ಕಿ.ಮೀ. ದೂರದಲ್ಲಿದೆ.<ref>{{Cite web|url=https://www.google.com/maps/dir/Uthiyur,+Tamil+Nadu/Kangeyam,+Tamil+Nadu+638701/@10.9473087,77.4695795,12z/data=!3m1!4b1!4m14!4m13!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3ba99f585df32af3:0x890a9d4c243ef9e8!2m2!1d77.5626379!2d11.0016341!3e0|title=Uthiyur to Kangeyam|website=Uthiyur to Kangeyam|language=en|access-date=2021-05-26}}</ref><ref>{{Cite web|url=https://www.google.com/maps/dir/Uthiyur,+Tamil+Nadu/Dharapuram,+Tamil+Nadu/@10.814855,77.4580031,12z/data=!3m1!4b1!4m14!4m13!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3ba9bf8dce0d08cb:0x2a6c8d1c21a80cad!2m2!1d77.5253827!2d10.737009!3e0|title=Uthiyur to Dharapuram|website=Uthiyur to Dharapuram|language=en|access-date=2021-05-26}}</ref> ತಿರುಪುರ್ 38 ಕಿ.ಮೀ. ಈರೋಡ್ ನಿಂದ 60 ಕಿ.ಮೀ. ಕೊಯಮತ್ತೂರು 71 ಕಿ.ಮೀ. ನಾನು. ದೂರದಲ್ಲಿದೆ.<ref>{{Cite web|url=https://www.google.com/maps/dir/Uthiyur,+Tamil+Nadu/Tiruppur,+Tamil+Nadu/@11.0019074,77.2880232,11z/data=!3m1!4b1!4m14!4m13!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3ba907b0424d75b9:0x4750551698a91687!2m2!1d77.3410656!2d11.1085242!3e0|title=Uthiyur to Tiruppur|website=Uthiyur to Tiruppur|language=en|access-date=2021-05-26}}</ref><ref>{{Cite web|url=https://www.google.com/maps/dir/Uthiyur,+Tamil+Nadu/Erode,+Tamil+Nadu/@11.1183148,77.3487132,10z/data=!3m1!4b1!4m14!4m13!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3ba96f46762f4671:0xd97da6e3d9c7f75e!2m2!1d77.7171642!2d11.3410364!3e0|title=Uthiyur to Erode|website=Uthiyur to Erode|language=en|access-date=2021-05-26}}</ref><ref>{{Cite web|url=https://www.google.com/maps/dir/Uthiyur,+Tamil+Nadu/Coimbatore,+Tamil+Nadu/@10.9292956,76.9618859,10z/data=!3m1!4b1!4m14!4m13!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3ba859af2f971cb5:0x2fc1c81e183ed282!2m2!1d76.9558321!2d11.0168445!3e0|title=Uthiyur to Coimbatore|website=Uthiyur to Coimbatore|language=en|access-date=2021-05-26}}</ref><ref>{{Cite web|url=https://www.google.com/maps/dir/Uthiyur,+Tamil+Nadu/Vellakoil,+Tamil+Nadu/@10.9376435,77.5501463,12z/data=!4m15!4m14!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3ba99aeeee830ff3:0x6322e0170be32a96!2m2!1d77.7131261!2d10.9459068!3e0!5i1|title=Uthiyur to Vellakoil|website=Uthiyur to Vellakoil|language=en|access-date=2021-05-26}}</ref>
ಊಟಿಯು ರಾಜ್ಯ ಹೆದ್ದಾರಿ 83A (ತಮಿಳುನಾಡು) ದಲ್ಲಿದೆ. ಇಫ್ಯು ಈರೋಡ್, [[ಸೇಲಂ, ತಮಿಳುನಾಡು|ಸೇಲಂ]] ಮತ್ತು [[ಬೆಂಗಳೂರು]] ನಡುವಿನ ಪಳನಿ ಮತ್ತು ತಾರಾಪುರಂನಂತಹ ನಗರಗಳಿಗೆ ಸಂಪರ್ಕ ರಸ್ತೆಯಾಗಿದೆ. ಈ ಚತುಷ್ಪಥ ರಸ್ತೆಯಲ್ಲಿ ಬಸ್ಸುಗಳು 24/7 ಓಡುತ್ತವೆ.<ref>{{Cite web|url=https://www.bustimes.in/search.php?frmstop=Erode&tostop=Palani|title=Erode to Palani bus timetable - Bustimes.in|website=www.bustimes.in|access-date=2021-05-26}}</ref> ನಗರವು ಕುಂಡಡಮ್ ಮತ್ತು ವೈಟ್ ಟೆಂಪಲ್ ನಡುವಿನ ಕೊಂಡಿಯಾಗಿಯೂ ಕಾರ್ಯನಿರ್ವಹಿಸುತ್ತದೆ.
[[ಧಾರಾಪುರಂ|ತಾರಾಪುರಂ]], ಪಳನಿ, ಇರೋಟು ಮತ್ತು [[ಸೇಲಂ, ತಮಿಳುನಾಡು|ಸೇಲಂ]] ಪ್ರತಿ 5 ನಿಮಿಷಕ್ಕೆ ಬಸ್ಸುಗಳು ಓಡುತ್ತವೆ. ಸಿಟಿ ಬಸ್ ಇಲ್ಲಿ ಲಭ್ಯವಿವೆ ಕಂಗಾಯಂ, [[ಧಾರಾಪುರಂ|Tarapuram]], Kundadam, ವೈಟ್ ದೇವಾಲಯ, [[ತಿರುಪ್ಪೂರು|ತಿರುಪ್ಪೂರ್]] ಮತ್ತು Palladam.
ಹತ್ತಿರದ ರೈಲು ನಿಲ್ದಾಣವು ತಿರುಪುರ್ನಲ್ಲಿದ್ದು, ಸುಮಾರು 40 ಕಿ.ಮೀ ದೂರದಲ್ಲಿದೆ. ಮತ್ತು ಪಳನಿ ರೈಲು ನಿಲ್ದಾಣ 50 ಕಿ.ಮೀ. ನಾನು. ಇದೆ. ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಕೊಯಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸೇಲಂ ವಿಮಾನ ನಿಲ್ದಾಣ.<ref>{{Cite web|url=https://www.google.com/maps/dir/Uthiyur,+Tamil+Nadu+638703/Coimbatore+International+Airport+-+CJB,+Airport+Rd,+Peelamedu,+Coimbatore,+Tamil+Nadu+641014/data=!4m8!4m7!1m2!1m1!1s0x3ba9bd2551770233:0xdf079bcf77b8df87!1m2!1m1!1s0x3ba857bc9b5ea9af:0x317ea10df48c4678!3e0?sa=X&ved=2ahUKEwioi6nt6tHzAhWqILcAHfpRDG4Qox16BAgBEAM|title=ஊதியூர் to கோயம்புத்தூர் பன்னாட்டு வானூர்தி நிலையம்|website=ஊதியூர் to கோயம்புத்தூர் பன்னாட்டு வானூர்தி நிலையம்|language=ta-US|access-date=2021-10-17}}</ref><ref>{{Cite web|url=https://www.google.com/maps/dir/Uthiyur,+Tamil+Nadu+638703/Salem+Airport,+Airport,+Airport+Road,+Kamalapuram,+Tamil+Nadu/@11.3382485,77.2671219,9z/data=!3m1!4b1!4m14!4m13!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3babf8f87b1279e3:0xbe8dbb2438f66f95!2m2!1d78.0618676!2d11.7826426!3e0|title=ஊதியூர் to Salem Airport|website=ஊதியூர் to Salem Airport|language=ta-US|access-date=2021-10-17}}</ref>
== ಶಿಕ್ಷಣ, ಆರೋಗ್ಯ ಸೌಲಭ್ಯಗಳು ==
ಊಟಿ ಮತ್ತು ಸುತ್ತಮುತ್ತ ಅನೇಕ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ದೊಡ್ಡ ಮತ್ತು ಖಾಸಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿವೆ.
* ಶಾಂತಿ ನಿಕೇತನ ಹೈಸ್ಕೂಲ್, ಕೆಕೆಎಸ್ ನಗರ, ಕುಲ್ಲಪಾಳ್ಯಂ, ಊಟಿ 638703 <ref>{{Cite web|url=https://www.google.com/maps/place/Shanthinikethan+Higher+Secondary+School/@10.9294411,77.5294822,17z/data=!3m1!4b1!4m5!3m4!1s0x3ba9a2e9a22b476f:0x48126410302095d6!8m2!3d10.9294411!4d77.5316709?shorturl=1|title=Shanthinikethan Higher Secondary School|website=Shanthinikethan Higher Secondary School|language=en|access-date=2021-03-30}}</ref>
* VMCDV ಸರ್ಕಾರಿ ಅನುದಾನಿತ ಪ್ರೌಢಶಾಲೆ, ತಾಯಂಬಲಯಂ, ಊಟಿ.<ref>{{Cite web|url=https://schools.thelearningpoint.net/districts/district-listing-ERODE.html|title=Schools in the district of ERODE : DISE information - Classes, Infrastructure, Facilities|website=schools.thelearningpoint.net|access-date=2021-04-30|archive-date=2021-08-29|archive-url=https://web.archive.org/web/20210829145634/https://schools.thelearningpoint.net/districts/district-listing-ERODE.html|url-status=dead}}</ref>
* ಸರ್ಕಾರಿ ಮಧ್ಯಮ ಶಾಲೆ, ಮುದಲಿಪಾಳ್ಯಂ, ಊಟೂರು 638703
* ಶ್ರೀ ನಂದನ ವಿದ್ಯಾಲಯ ಮೆಟ್ರಿಕ್ಯುಲೇಷನ್ ಶಾಲೆ, ಊಟಿ.
ಈ ಪ್ರದೇಶದಲ್ಲಿ ಅನೇಕ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಿವೆ.
* ಕುಲ್ಲಪಾಳ್ಯಂ ಪ್ರಾಥಮಿಕ ಆರೋಗ್ಯ ಕೇಂದ್ರ, ಊಟೂರು 638703 <ref>{{Cite web|url=https://www.google.com/maps/place/Kullampalayam+primary+health+centre/@10.9294411,77.5294822,17z/data=!4m5!3m4!1s0x3ba9a2e96be468bb:0xca523a1a1be650eb!8m2!3d10.9309205!4d77.5321779?shorturl=1|title=Kullampalayam primary health centre|website=Kullampalayam primary health centre|language=en|access-date=2021-03-30}}</ref>
* ತಾಯಂಪಲಯಂ ಸುಧಾರಿತ ಸರ್ಕಾರಿ ಆರೋಗ್ಯ ಕೇಂದ್ರ, ಊಟೂರ್ 638703 <ref>{{Cite web|url=https://www.google.com/maps/place/Thayam+Palayam+Government+Hospital/@10.8714714,77.4910862,14.59z/data=!4m5!3m4!1s0x3ba9bc96084e9def:0xb406aa88e005645e!8m2!3d10.8800578!4d77.4872857?shorturl=1|title=Thayam Palayam Government Hospital|website=Thayam Palayam Government Hospital|language=en|access-date=2021-03-30}}</ref>
* ಪ್ರಭಾದೇವಿ ಆಸ್ಪತ್ರೆ, ಊಟೂರ್ ಟೌನ್ 638703
ಊಟಿಯಲ್ಲಿರುವ ಪೊಲೀಸ್ ಠಾಣೆಯು ಅದರ ಪಕ್ಕದ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತದೆ.<ref>{{Cite web|url=https://tiruppur.nic.in/public-utility-category/police-stations/|title=Police Stations {{!}} Tiruppur District, Government of Tamil Nadu {{!}} Textile City {{!}} India|language=en-US|access-date=2021-05-26}}</ref> ಊಟಿ ಭಾರತದ ಕೇರಳ ರಾಜ್ಯದ ತಿರುಪುರ್ ಜಿಲ್ಲೆಯ ಕಾಂಗೇಯಂ ತಾಲೂಕಿನ ಒಂದು ಜಿಲ್ಲೆಯಾಗಿದೆ. ಊಟಿ ಈ ಪ್ರದೇಶದಲ್ಲಿ ಪ್ರಧಾನ ಅಂಚೆ ಕಚೇರಿಯಾಗಿದೆ.<ref>{{Cite web|url=https://tiruppur.nic.in/administrative-setup/revvilllage/|title=REVENUE VILLAGES {{!}} Tiruppur District, Government of Tamil Nadu {{!}} Textile City {{!}} India|language=en-US|access-date=2021-05-26}}</ref> ಊಟಿಯಲ್ಲಿ ಎಟಿಎಂ ಮತ್ತು [[ಕೆನರಾ ಬ್ಯಾಂಕ್]] ಕಾರ್ಯನಿರ್ವಹಿಸುತ್ತಿವೆ.<ref>{{Cite web|url=https://cleartax.in/|title=Canara Bank Erode Uthiyur Tamil Nadu (IFSC Code) IFSC Code - Bank branch MIRC Code, Address details|website=cleartax.in|language=en|access-date=2021-07-24}}</ref><ref>{{Cite web|url=http://www.getpincodes.com/locality/uthiyur-kangeyam-tiruppur-tamil-nadu-638703|title=Pin code 638703, Udhiyur S.O Post Office in Erode, Tamil Nadu|last=GetPincodes|website=GetPincodes|language=en-US|access-date=2021-05-27|archive-date=2021-07-28|archive-url=https://web.archive.org/web/20210728002549/http://www.getpincodes.com/locality/uthiyur-kangeyam-tiruppur-tamil-nadu-638703|url-status=dead}}</ref>
== ಮತ್ತಷ್ಟು ಓದು ==
* ಶಿವನ್ಮಲೈ ತಿರುಪುರ್ ಜಿಲ್ಲೆಯ ಒಂದು ದೇವಸ್ಥಾನದ ಗ್ರಾಮ
* ಕಂಗಯಂ ಭಾರತದ ತಮಿಳುನಾಡು ರಾಜ್ಯದ ತಿರುಪುರ್ ಜಿಲ್ಲೆಯ ಒಂದು ಪಟ್ಟಣ
* [[ಧಾರಾಪುರಂ|ತಾರಾಪುರಂ]] ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿರುವ ಐತಿಹಾಸಿಕ ನಗರವಾಗಿದೆ
* [[ತಿರುಪ್ಪೂರು|ತಿರುಪುರ್]] ತಮಿಳುನಾಡಿನ ಒಂದು ನಗರ
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* [http://www.kulaluravuthiagi.org/karma.htm ಕೊಂಕಣರ ಸಿದ್ಧರ ಸೂಕ್ಷ್ಮತೆಗಳು]{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}
* [https://www.vikatan.com/spiritual/temples/145043-pon-uthiyur-konganar-cave-siddhars ಸಿದ್ಧರು ಸಂಚರಿಸುವ ಪೊನ್ನುತಿ ಮಾಮಲೈ - ವಿಕಟನ್]
* [https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf ಉತ್ತಿಮಲೈ ಉತ್ತಂಡ ವೇಲಾಯುತಸ್ವಾಮಿ ತಿದ್ದುಪಡಿ - ಸಂಜೆ ಪುಷ್ಪ] {{Webarchive|url=https://web.archive.org/web/20211017120150/https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf |date=2021-10-17 }}
* [https://m.dailyhunt.in/news/india/tamil/swasthiktv-epaper-swasthik/oothimalai+uthanda+velayuthasuvami+tiruthalam-newsid-n191838402 ಉತ್ತಿಮಲೈ ಉತ್ತಂಡ ವೇಲಾಯುತಸ್ವಾಮಿ ತಿದ್ದುಪಡಿ]
* [https://temple.dinamalar.com/New.php?id=2021 ಉತ್ತಂಡ ವೇಲಾಯುತಸ್ವಾಮಿ]
* [https://books.google.co.in/books?id=mZJGAQAAIAAJ&q=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&dq=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&hl=en&newbks=1&newbks_redir=1&printsec=frontcover&sa=X&ved=2ahUKEwiK8MH0_u_zAhVFxTgGHdmoCb0Q6AF6BAgFEAI ತಿರುಪ್ಪುಗಲ್ ತಿರುತಲಂಗಲ್ - ಇಬುಕ್]
* [https://books.google.co.in/books?id=VCUrAAAAMAAJ&q=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&dq=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&hl=en&newbks=1&newbks_redir=1&printsec=frontcover&sa=X&ved=2ahUKEwiK8MH0_u_zAhVFxTgGHdmoCb0Q6AF6BAgIEAI ಅಕಾರವಾರಿಕಲ್ ಇರಾಂ ತೋಕುಟಿ]
* [https://books.google.co.in/books?id=qkQ_AAAAIAAJ&q=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&dq=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&hl=en&newbks=1&newbks_redir=1&printsec=frontcover&sa=X&ved=2ahUKEwiK8MH0_u_zAhVFxTgGHdmoCb0Q6AF6BAgKEAI ಕೊಂಗು ನಾಡು]
{{Interwikineeded}}
[[ವರ್ಗ:ಜಿಲ್ಲೆಯಲ್ಲಿರುವ]]
bomm5kqazsu9949o1s4g76jcn71t5ls
ಟೆಂಪ್ಲೇಟು:Infobox settlement/styles.css
10
141645
1378252
1209831
2025-10-03T02:11:47Z
en>Jonesey95
0
fix text color in dark mode; this generally works but may cause problems, in which case revert or try specifying a different CSS value
1378252
sanitized-css
text/css
/* {{pp|small=y}} */
.ib-settlement {
border-collapse: collapse;
line-height: 1.2em;
}
@media (min-width: 640px) {
.ib-settlement {
width: 23em;
}
}
/* TODO split definitions to appropriate class names when live from HTML element */
.ib-settlement td,
.ib-settlement th {
border-top: 1px solid #a2a9b1;
padding: 0.4em 0.6em 0.4em 0.6em;
}
.ib-settlement .mergedtoprow .infobox-full-data,
.ib-settlement .mergedtoprow .infobox-header,
.ib-settlement .mergedtoprow .infobox-data,
.ib-settlement .mergedtoprow .infobox-label,
.ib-settlement .mergedtoprow .infobox-below {
border-top: 1px solid #a2a9b1;
padding: 0.4em 0.6em 0.2em 0.6em;
}
.ib-settlement .mergedrow .infobox-full-data,
.ib-settlement .mergedrow .infobox-data,
.ib-settlement .mergedrow .infobox-label {
border: 0;
padding: 0 0.6em 0.2em 0.6em;
}
.ib-settlement .mergedbottomrow .infobox-full-data,
.ib-settlement .mergedbottomrow .infobox-data,
.ib-settlement .mergedbottomrow .infobox-label {
border-top: 0;
border-bottom: 1px solid #a2a9b1;
padding: 0 0.6em 0.4em 0.6em;
}
.ib-settlement .maptable {
border: 0;
padding: 0;
}
.ib-settlement .infobox-header,
.ib-settlement .infobox-below {
text-align: left;
}
.ib-settlement .infobox-above {
font-size: 125%;
line-height: 1.3em;
}
.ib-settlement .infobox-subheader {
background-color: #cddeff;color:inherit;
font-weight: bold;
}
.ib-settlement-native {
font-weight: normal;
padding-top: 0.2em;
}
.ib-settlement-other-name {
font-size: 78%;
}
.ib-settlement-official {
font-weight: bold;
}
.ib-settlement-caption {
padding: 0.3em 0 0 0;
}
.ib-settlement-caption-link {
padding: 0.2em 0;
}
.ib-settlement-nickname {
display: inline;
}
.ib-settlement-fn {
font-weight: normal;
display: inline;
}
r64slwko84pew5lxs3tepin9znpz4pc
1378253
1378252
2026-08-03T07:17:12Z
A826
72368
೧ revisions imported from [[:en:Template:Infobox_settlement/styles.css]]
1378252
sanitized-css
text/css
/* {{pp|small=y}} */
.ib-settlement {
border-collapse: collapse;
line-height: 1.2em;
}
@media (min-width: 640px) {
.ib-settlement {
width: 23em;
}
}
/* TODO split definitions to appropriate class names when live from HTML element */
.ib-settlement td,
.ib-settlement th {
border-top: 1px solid #a2a9b1;
padding: 0.4em 0.6em 0.4em 0.6em;
}
.ib-settlement .mergedtoprow .infobox-full-data,
.ib-settlement .mergedtoprow .infobox-header,
.ib-settlement .mergedtoprow .infobox-data,
.ib-settlement .mergedtoprow .infobox-label,
.ib-settlement .mergedtoprow .infobox-below {
border-top: 1px solid #a2a9b1;
padding: 0.4em 0.6em 0.2em 0.6em;
}
.ib-settlement .mergedrow .infobox-full-data,
.ib-settlement .mergedrow .infobox-data,
.ib-settlement .mergedrow .infobox-label {
border: 0;
padding: 0 0.6em 0.2em 0.6em;
}
.ib-settlement .mergedbottomrow .infobox-full-data,
.ib-settlement .mergedbottomrow .infobox-data,
.ib-settlement .mergedbottomrow .infobox-label {
border-top: 0;
border-bottom: 1px solid #a2a9b1;
padding: 0 0.6em 0.4em 0.6em;
}
.ib-settlement .maptable {
border: 0;
padding: 0;
}
.ib-settlement .infobox-header,
.ib-settlement .infobox-below {
text-align: left;
}
.ib-settlement .infobox-above {
font-size: 125%;
line-height: 1.3em;
}
.ib-settlement .infobox-subheader {
background-color: #cddeff;color:inherit;
font-weight: bold;
}
.ib-settlement-native {
font-weight: normal;
padding-top: 0.2em;
}
.ib-settlement-other-name {
font-size: 78%;
}
.ib-settlement-official {
font-weight: bold;
}
.ib-settlement-caption {
padding: 0.3em 0 0 0;
}
.ib-settlement-caption-link {
padding: 0.2em 0;
}
.ib-settlement-nickname {
display: inline;
}
.ib-settlement-fn {
font-weight: normal;
display: inline;
}
r64slwko84pew5lxs3tepin9znpz4pc
ಕಲ್ಯಾಣದುರ್ಗ
0
142204
1378223
1370859
2026-08-02T21:30:36Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378223
wikitext
text/x-wiki
[[ಚಿತ್ರ:KalyanadurgHills.jpg|350px|thumb|right|alt=ಕಲ್ಯಾಣದುರ್ಗ|ಕಲ್ಯಾಣದುರ್ಗ]]
'''ಕಲ್ಯಾಣದುರ್ಗ'''ವು [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತದ]] [[ಆಂಧ್ರ ಪ್ರದೇಶ|ಆಂಧ್ರಪ್ರದೇಶದ]] [[ಅನಂತಪುರ್ ಜಿಲ್ಲೆ|ಅನಂತಪುರ ಜಿಲ್ಲೆಯ]] ಒಂದು ಪಟ್ಟಣವಾಗಿದೆ. ಇದು [[:en:Kalyandurg|ಕಲ್ಯಾಣದುರ್ಗ]] [[ತಾಲ್ಲೂಕು|ಮಂಡಲ]] ಮತ್ತು ಕಲ್ಯಾಣದುರ್ಗ ಕಂದಾಯ ವಿಭಾಗಕ್ಕೆದ ಪ್ರಧಾನ ಕಛೇರಿಯಾಗಿದೆ.<ref>{{Cite web|url=http://censusindia.gov.in/2011census/maps/atlas/28part32.pdf|title=Anantapur District Mandals|publisher=Census of India|pages=386|access-date=6 June 2017}}</ref> <ref>{{Cite news|url=http://www.thehindu.com/todays-paper/tp-national/tp-andhrapradesh/anantapur-gets-two-more-revenue-divisions/article4855117.ece|title=Anantapur gets two more revenue divisions|date=27 June 2013|work=The Hindu|access-date=10 June 2015|location=Anantapur}}</ref> ಕಲ್ಯಾಣದುರ್ಗ ಪ್ರದೇಶದಲ್ಲಿ ವಜ್ರ-ಹೊಂದಿರುವ ಕಿಂಬರ್ಲೈಟ್ಗಳ ಆವಿಷ್ಕಾರವು ಪತ್ತೆಯಾದ ಸಮೂಹಗಳಲ್ಲಿ ಒಂದಾಗಿದೆ.<ref>{{Cite web|url=http://www.iisc.ernet.in/currsci/apr25/articles13.htm|title=Discovery of diamond-bearing kimberlites in Kalyandurg area, Anantapur district, Andhra Pradesh|publisher=Indian Institute of Science, Bangalore|access-date=11 September 2014}}</ref>
== ಇತಿಹಾಸ ==
ಕಲ್ಯಾಣದುರ್ಗವು ಶ್ರೀ [[ಕೃಷ್ಣದೇವರಾಯ|ಕೃಷ್ಣದೇವರಾಯನ]] ಆಳ್ವಿಕೆಯಲ್ಲಿತ್ತು ಮತ್ತು [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯದ]] ಪ್ರಮುಖ ಭಾಗವಾಗಿತ್ತು.
'''ಭಾರತದ ಸಾಮ್ರಾಜ್ಯಶಾಹಿ ಗೆಜೆಟಿಯರ್''' ಪ್ರಕಾರ, '''ರಾಯದುರ್ಗ''', '''ಚಿತ್ರದುರ್ಗ''' ಮತ್ತು '''ಕಲ್ಯಾಣದುರ್ಗ'''ವು ಬೋಯ ಪಾಳೇಗಾರರು ಆಳಿದ ಮೂರು ಪ್ರಮುಖ ಕೋಟೆಗಳಾಗಿವೆ. ಕಲ್ಯಾಣದುರ್ಗ ಎಂಬ ಹೆಸರು ೧೬ ನೇ ಶತಮಾನದಲ್ಲಿ ಬೋಯ ಕಲ್ಯಾಣಪ್ಪ ಎಂಬ ಪಾಳೇಗಾರರಿಂದ ಬಂದಿತು. ವಿಜಯನಗರದ ಆಳ್ವಿಕೆಯಲ್ಲಿ ಕಲ್ಯಾಣದುರ್ಗವು ತುಂಬಾ ಪ್ರಕ್ಷುಬ್ಧವಾಗಿತ್ತು.
ಕಲ್ಯಾಣದುರ್ಗ ತಾಲೂಕನ್ನು [[ಡಿಸೆಂಬರ್]] ೧೮೯೩ರಲ್ಲಿ ಬ್ರಿಟಿಷರು ಧರ್ಮಾವರಂ ಮತ್ತು ಬಳ್ಳಾರಿಯ ರಾಯದುರ್ಗ ತಾಲೂಕಿನ ಭಾಗಗಳಿಂದ ರಚಿಸಿದರು. ಮಾರ್ಚ್ ೨೦೧೨ರಲ್ಲಿ ಕಲ್ಯಾಣದುರ್ಗ ಪುರಸಭೆಯಾಯಿತು. ಇದು [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ಪ್ರಾಂತ್ಯದ]] [[ಅನಂತಪುರ್ ಜಿಲ್ಲೆ|ಅನಂತಪುರ ಜಿಲ್ಲೆಯ]] ಒಂದು ತಾಲ್ಲೂಕಾಗಿತ್ತು. ಇದು ಮೊದಲು '''ಧರ್ಮಾವರಂ'''ನ ಭಾಗವಾಗಿತ್ತು. ಇದನ್ನು ೧೮೯೩ರಲ್ಲಿ ಪ್ರತ್ಯೇಕಿಸಲಾಯಿತು.<ref>{{Cite web|url=http://www.bedar.nayaka.in/Boyar_Mudiraja.php|title=Boyar mudiraja|last=Prem Loganathan|website=The Great Boyar Valmiki Nayaka Emperors|publisher=bedar.nayaka.in|access-date=12 September 2014|archive-date=12 ಸೆಪ್ಟೆಂಬರ್ 2014|archive-url=https://web.archive.org/web/20140912095338/http://www.bedar.nayaka.in/Boyar_Mudiraja.php|url-status=dead}}</ref>
'''ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ'''ವು ಈ ಪಟ್ಟಣದ ಹೃದಯಭಾಗದಲ್ಲಿದೆ. ಈ ದೇವಾಲಯವನ್ನು ಸುಮಾರು ೧೬ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. [[ಅನಂತಪುರ]] ಜಿಲ್ಲೆಯು ಬೃಹತ್ ಶಿಲಾಯುಗದ ಅವಶೇಷಗಳಿಂದ ತುಂಬಿದೆ.<ref>{{Cite web|url=http://asihyd.ap.nic.in/anantapur_gooty.html|title=Archeological Survey of India|website=asihyd.ap.nic.in|access-date=2022-02-23|archive-date=2016-06-14|archive-url=https://web.archive.org/web/20160614022947/http://asihyd.ap.nic.in/anantapur_gooty.html|url-status=dead}}</ref> ಕಲ್ಯಾಣದುರ್ಗದ ಆಸುಪಾಸಿನಲ್ಲಿ, ಅಕ್ಕಮ್ಮ ವರಿ ಬೆಟ್ಟಗಳ ತಪ್ಪಲಿನಲ್ಲಿ ಮತ್ತು ಇಳಿಜಾರುಗಳಲ್ಲಿ ಡೊಲೆಮ್ನಾಯ್ಡ್ ಸಿಸ್ಟ್ಗಳು ಮತ್ತು ಕಲ್ಲುಗುಡ್ಡೆಗಳಂತಹ ನೂರಾರು ದೊಡ್ಡಕಲ್ಲುಗಳ ಸ್ಮಾರಕಗಳು ನೆಲೆಗೊಂಡಿವೆ. ಕೇರ್ನ್ ವೃತ್ತಗಳ ಮತ್ತೊಂದು ದೊಡ್ಡ ಗುಂಪು ಅಕ್ಕಮ್ಮ ಗರಿ ಕೊಂಡದಿಂದ ಉತ್ತರಕ್ಕೆ ೨ ಕಿ.ಮೀ ದೂರದಲ್ಲಿದೆ. ಕಲ್ಯಾಣದುರ್ಗದಿಂದ ಪೂರ್ವಕ್ಕೆ ೫ ಕಿ.ಮೀ ದೂರದಲ್ಲಿರುವ ಮುಡಿಗಲ್ಲು ಗ್ರಾಮ ಮತ್ತು ಪಟ್ಟಣದಿಂದ ಈಶಾನ್ಯಕ್ಕೆ ೨ ಕಿ.ಮೀ ದೂರದಲ್ಲಿರುವ ಮುತ್ತಲಬಂಡಾ ಗ್ರಾಮ ಮತ್ತು ರಾಯದುರ್ಗಂ ಕಡೆಗೆ ಇರುವ ಗಲ್ಲಪಲ್ಲಿಯಲ್ಲಿ ಇದೇ ರೀತಿಯ ಅವಶೇಷಗಳಿವೆ.<ref>{{Cite book|url=https://books.google.com/books?id=yK8D8c5-HXAC&q=Megalithic++kalyandurg&pg=PA123|title=Comprehensive History and Culture of Andhra Pradesh: Pre- and protohistoric Andhra Pradesh up to 500 BC|last=Murty|first=M. L. K.|date=6 June 2017|publisher=Orient Blackswan|isbn=9788125024750|via=Google Books}}</ref>
== ಭೂಗೋಳಶಾಸ್ತ್ರ ==
ಕಲ್ಯಾಣದುರ್ಗವು {{Coord|14.5500|N|77.1000|E|}} ನಲ್ಲಿದೆ.<ref>{{Cite web|url=http://www.fallingrain.com/world/IN/02/Kalyandrug.html|title=Maps, Weather, and Airports for Kalyandrug, India|website=www.fallingrain.com|access-date=2022-02-23|archive-date=2023-11-02|archive-url=https://web.archive.org/web/20231102190650/http://www.fallingrain.com/world/IN/02/Kalyandrug.html|url-status=dead}}</ref> ಇದು ಸರಾಸರಿ ೫೯೧ ಮೀಟರ್ (೧೯೪೨ ಅಡಿ)ಎತ್ತರದಲ್ಲಿದೆ.<ref>{{Cite web|url=http://shodhganga.inflibnet.ac.in/bitstream/10603/15896/5/05_introduction.pdf|title=Region geography|publisher=shodhganga|page=48|access-date=12 September 2014}}</ref>
== ಜನಸಂಖ್ಯಾಶಾಸ್ತ್ರ ==
೨೦೧೧ ರ ಜನಗಣತಿಯ ಪ್ರಕಾರ, ಕಲ್ಯಾಣದುರ್ಗವು ೩೨,೩೨೮ ಜನಸಂಖ್ಯೆಯನ್ನು ಹೊಂದಿತ್ತು. ಈ ಜನಸಂಖ್ಯೆಯು ೧೬,೦೩೬ ಪುರುಷರು ಮತ್ತು ೧೬,೨೯೨ ಮಹಿಳೆಯರನ್ನು ಒಳಗೊಂಡಿದೆ. ಇಲ್ಲಿನ ಲಿಂಗ ಅನುಪಾತವು ೧೦೦೦ ಪುರುಷರಿಗೆ ೧೦೧೬ ಮಹಿಳೆಯರು. ೩,೪೦೪ ಮಕ್ಕಳು ೦-೬ ವರ್ಷ ವಯಸ್ಸಿನವರಾಗಿದ್ದಾರೆ. ಅದರಲ್ಲಿ ೧,೭೬೦ ಹುಡುಗರು ಮತ್ತು ೧,೬೪೪ ಹುಡುಗಿಯರಿದ್ದಾರೆ ಮತ್ತು ಇದರ ಅನುಪಾತವು ೧೦೦೦ ಕ್ಕೆ ೯೭೯ ಆಗಿದೆ. ಸರಾಸರಿ ಸಾಕ್ಷರತಾ ಪ್ರಮಾಣವು ೨೧,೪೪೩ ಸಾಕ್ಷರರೊಂದಿಗೆ ೭೪.೧೪% ರಷ್ಟಿದೆ. ಇದು ರಾಜ್ಯದ ಸರಾಸರಿ ೬೭.೪೧% ಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
== ಆಡಳಿತ ==
=== ನಾಗರಿಕ ಆಡಳಿತ ===
ಪುರಸಭೆಯು ೧೫.೮೯೫ ಚದರ ಕಿಮೀ (೬.೧೩೭ ಚದರ ಮೈಲಿ) ಪ್ರದೇಶದಲ್ಲಿ ಹರಡಿದೆ. ಇದು ₹ ೨೨೯.೨೯ ಕೋಟಿ (ಯುಎಸ್ $ ೨೯ ಮಿಲಿಯನ್) ವೆಚ್ಚವನ್ನು ಹೊಂದಿದೆ ಮತ್ತು ವಾರ್ಷಿಕ ಆದಾಯ ₹ ೨೨೨.೮೭ ಕೋಟಿ (ಯುಎಸ್ $ ೨೮ ಮಿಲಿಯನ್)ಯನ್ನು ಉತ್ಪಾದಿಸುತ್ತದೆ.<ref name="info">{{Cite web|url=http://cdma.ap.gov.in/KALYANDURGAM/Basic_information_Municipality.html|title=Basic Information of Municipality|website=Commissioner & Director of Municipal Administration|publisher=Municipal Administration & Urban Development Department, Govt. of Andhra Pradesh|access-date=11 September 2014|archive-date=22 ಡಿಸೆಂಬರ್ 2015|archive-url=https://web.archive.org/web/20151222102526/http://cdma.ap.gov.in/KALYANDURGAM/Basic_information_Municipality.html|url-status=dead}}</ref> ಪುರಸಭೆಯು ೪೫೩ ಸಾರ್ವಜನಿಕ ನಲ್ಲಿಗಳು ಮತ್ತು ೬೬ ಕೊಳವೆಬಾವಿಗಳ ರೂಪದಲ್ಲಿ ದಿನಕ್ಕೆ ತಲಾ ೭೦ ಲೀಟರ್ ನೀರು ಸರಬರಾಜಿನ ಮೇಲ್ವಿಚಾರಣೆ ನಡೆಸುತ್ತದೆ. ಇದರ ಇತರ ಸೇವೆಗಳಲ್ಲಿ ಸಮುದಾಯ ಭವನಗಳು, ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಗಳು, ೧೩.೪೫ ಕಿಮೀ ೨ (೫.೧೯ ಚದರ ಮೈಲಿ) ರಸ್ತೆಗಳು, ಸರ್ಕಾರಿ ಆಸ್ಪತ್ರೆ, ಆರ್ಡಿಟಿ(RDT) ಆಸ್ಪತ್ರೆ ಮತ್ತು ಇತರ ಹೆರಿಗೆ ಮತ್ತು ಮಕ್ಕಳ ಆರೋಗ್ಯ ಕೇಂದ್ರಗಳ ನಿರ್ವಹಣೆ ಸೇರಿವೆ.<ref>{{Cite web|url=http://cdma.ap.gov.in/KALYANDURGAM/Public%20services_amenities.html|title=Public services/amenities|website=Commissioner & Director of Municipal Administration|publisher=Municipal Administration & Urban Development Department, Govt. of Andhra Pradesh|access-date=11 September 2014|archive-date=13 ಜನವರಿ 2016|archive-url=https://web.archive.org/web/20160113145634/http://cdma.ap.gov.in/KALYANDURGAM/Public%20services_amenities.html|url-status=dead}}</ref><ref>https://www.rdthospitals.org/</ref>
=== ರಾಜಕೀಯ ===
ಕಲ್ಯಾಣದುರ್ಗ (ವಿಧಾನಸಭಾ ಕ್ಷೇತ್ರ) [[ಅನಂತಪುರ್ ಜಿಲ್ಲೆ|ಅನಂತಪುರ ಜಿಲ್ಲೆಯ]] ೧೪ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಆಂಧ್ರ ಪ್ರದೇಶ ವಿಧಾನಸಭೆಯನ್ನು ಪ್ರತಿನಿಧಿಸುತ್ತದೆ. [[:en:YSR_Congress_Party|ವೈಎಸ್ಆರ್ ಕಾಂಗ್ರೆಸ್ ಪಕ್ಷದ]] ಕೆ.ವಿ. ಉಷಾಶ್ರೀ ಚರಣ್ ಪ್ರಸ್ತುತ ಕಲ್ಯಾಣದುರ್ಗ (ವಿಧಾನಸಭಾ ಕ್ಷೇತ್ರ) ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.<ref>{{Cite web|url=https://www.indiatoday.in/elections/andhra-pradesh-assembly-polls-2019/story/andhra-pradesh-assembly-election-2019-results-winners-list-names-of-winning-candidates-of-bjp-congress-npp-1532110-2019-05-23|title=Andhra Pradesh Assembly Election 2019 Results: Full Winners List|last=DelhiMay 23|first=India Today Web Desk New|last2=May 24|first2=2019UPDATED|website=India Today|last3=Ist|first3=2019 18:15}}</ref><ref>{{Cite web|url=http://www.ap.gov.in/Pages/MLA.aspx|title=MLA's|publisher=Official portal of Andhra Pradesh Government|access-date=11 September 2014|archive-date=25 ಜುಲೈ 2014|archive-url=https://web.archive.org/web/20140725195126/http://www.ap.gov.in/Pages/MLA.aspx|url-status=dead}}</ref>
== ಶಿಕ್ಷಣ ==
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ರಾಜ್ಯದ ''ಶಾಲಾ ಶಿಕ್ಷಣ ಇಲಾಖೆಯ'' ಅಡಿಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ನೀಡುತ್ತವೆ.<ref>{{Cite web|url=http://rmsaap.nic.in/Notification_TSG_2015.pdf|title=School Education Department|publisher=School Education Department, Government of Andhra Pradesh|archive-url=https://web.archive.org/web/20151227185018/http://rmsaap.nic.in/Notification_TSG_2015.pdf|archive-date=27 December 2015|access-date=7 November 2016}}</ref> <ref>{{Cite web|url=http://www.ap.gov.in/department/organizations/school-education/|title=The Department of School Education – Official AP State Government Portal {{!}} AP State Portal|website=www.ap.gov.in|archive-url=https://web.archive.org/web/20161107155331/http://www.ap.gov.in/department/organizations/school-education/|archive-date=7 November 2016|access-date=7 November 2016}}</ref> ವಿವಿಧ ಶಾಲೆಗಳು ಅನುಸರಿಸುವ ಬೋಧನಾ ಮಾಧ್ಯಮವು [[ಆಂಗ್ಲ]] ಮತ್ತು [[ತೆಲುಗು]] ಆಗಿದೆ.
== ಸಾರಿಗೆ ==
ಕಲ್ಯಾಣದುರ್ಗ ರೈಲು ನಿಲ್ದಾಣವು [[ನೈಋತ್ಯ ರೈಲ್ವೆ ವಲಯ|ನೈಋತ್ಯ ರೈಲ್ವೆ ವಲಯದ]] ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಗೆ ಒಳಪಟ್ಟಿದೆ.<ref>{{Cite web|url=http://indiarailinfo.com/arrivals/kalyandurga-kynd/11559|title=Trains to KYND/Kalyandurga Station - 2 Arrivals SWR/South Western Zone - Railway Enquiry|last=Jayashree|website=indiarailinfo.com}}</ref>
==ಛಾಯಾಂಕಣ==
<gallery>
File:Kld2.jpg|ದೊಡ್ಡಗಟ್ಟಾ ರಸ್ತೆ
File:Kumaraswamycircle kld.jpg|ಮಜ್ಜಿದ್ ಬಳಿಯ ಟಿ-ಸರ್ಕಲ್
File:Timmppakonda.jpg|ತಿಮ್ಮಪ್ಪಸ್ವಾಮಿ ಕೊಂಡ, ಮುಳಕನೂರು
File:Sunset at KLD.jpg|ಮಾರ್ಚ್ ತಿಂಗಳ ಸೂರ್ಯಾಸ್ತ.
File:Beatuiful Rice and Pappya fileds in South Kalyandurg.JPG|ಕೆಎಲ್ಡಿ ತಾಲೂಕಿನ ದಕ್ಷಿಣ ಭಾಗದಲ್ಲಿರುವ ಕೃಷಿ ಕ್ಷೇತ್ರಗಳು.
File:HanumanthaRaya Swamy Temple in Kairevu Forest.JPG|ಕಾಡಿನ ಒಳಗಿನ ದೇವಾಲಯ/ಕೀರೇವು.
File:Lambsneargangavaram.jpg|ಕಲ್ಯಾಣದುರ್ಗದ ಉತ್ತರ ಭಾಗದಲ್ಲಿ ಕಪ್ಪು ಮಣ್ಣಿನ ಮೇಲೆ ಜಾನುವಾರುಗಳು.
File:In Side of Kairevu Reserved forest.JPG|ಕಲ್ಯಾಣದುರ್ಗ ತಾಲೂಕಿನ ಕೈರೇವು ಮೀಸಲು ಅರಣ್ಯದ ಬದಿಯಲ್ಲಿದೆ.
</gallery>
== ಸಹ ನೋಡಿ ==
*[[ಅನಂತಪುರ್ ಜಿಲ್ಲೆ|ಅನಂತಪುರ ಜಿಲ್ಲೆ]]
== ಉಲ್ಲೇಖಗಳು ==
<references />
{{Interwikineeded}}
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
64n6563smsqnkegsnetuxf4r6urumm2
ಬಾಣಾಸುರ ಸಾಗರ ಅಣೆಕಟ್ಟು
0
144511
1378293
1355226
2026-08-03T09:08:18Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378293
wikitext
text/x-wiki
{{Infobox dam
| name = ಬಾಣಾಸುರ ಸಾಗರ ಅಣೆಕಟ್ಟು
| image = Banasurasagar Main Dam.jpg
| image_caption = ಬಾಣಾಸುರ ಸಾಗರ ಅಣೆಕಟ್ಟು
| name_official =
| dam_crosses = [[ಕಬಿನಿ ನದಿ]] ಉಪನದಿ
| res_name = ಬಾಣಾಸುರಸಾಗರ ಜಲಾಶಯ
| location = [[ವಯನಾಡು]], [[ಕೇರಳ]]
| dam_length = {{Convert|685.0|m|ft|0|abbr=on}}
| dam_height =
| dam_width_base =
| construction_began =
| opening = ೨೦೦೪
| location_map = ಭಾರತ ಕೇರಳ#ಭಾರತ
| location_map_caption = [[ಕೇರಳ]] ##ಸ್ಥಳ [[ಭಾರತ]]ದಲ್ಲಿನ ಸ್ಥಳ
| coordinates = {{coord|11|40|12|N|75|57|28|E|region:IN_type:landmark|display=inline,title}}
| extra =
| status = ೦
| owner = ಕೇರಳ ರಾಜ್ಯ ವಿದ್ಯುತ್ ಮಂಡಳಿ
| dam_volume =
| res_catchment = {{Convert|61.44|km2|mi2|0|abbr=on}}
| res_capacity_total = {{Convert|209250000|m3|acre.ft|0|abbr=on}}
| country = [[ಭಾರತ]]
| purpose = ಬಹುಪಯೋಗಿ
| spillway_count = ಶೂನ್ಯ
| dam_height_foundation = {{Convert|38.5|m|ft|0|abbr=on}}
| res_elevation = {{Convert|775.60|m|ft|0|abbr=on}}
| plant_capacity = ೨೩೧.೭೫ MW
}}
[[ಕಬಿನಿ ನದಿ|ಕಬಿನಿ ನದಿಯ]] ಕರಮನತೋಡು ಎಂಬ ಉಪನದಿಯನ್ನು ಹೊಂದಿದ್ದು, ಈ ನದಿಗೆ '''ಬಾಣಾಸುರ ಸಾಗರ ಅಣೆಕಟ್ಟ'''ನ್ನು ನಿರ್ಮಿಸಲಾಗಿದೆ. ೧೯೭೯ ರಲ್ಲಿ ಪ್ರಾರಂಭವಾದ ಈ ಅಣೆಕಟ್ಟು, ಭಾರತೀಯ ಕಾಲುವೆ ಯೋಜನೆಯನ್ನು ಒಳಗೊಂಡಿದೆ. ಈ ಯೋಜನೆಯ ಗುರಿಯು ಕಕ್ಕಯಂ ಜಲ ವಿದ್ಯುತ್ ಯೋಜನೆಯನ್ನು ಬೆಂಬಲಿಸುವುದು ಮತ್ತು ಕಾಲೋಚಿತ ಶುಷ್ಕ ಅವಧಿಗಳಲ್ಲಿ ನೀರಿನ ಕೊರತೆಯನ್ನು ಹೊಂದಿರುವ ಪ್ರದೇಶದಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸುವುದು ಆಗಿದೆ. ಈ ಅಣೆಕಟ್ಟನ್ನು ಕುಟ್ಟಿಯಾಡಿ ಆಗ್ಮೆಂಟೇಶನ್ ಮುಖ್ಯ ಮಣ್ಣಿನ ಅಣೆಕಟ್ಟು ಎಂದೂ ಕರೆಯಲಾಗುತ್ತದೆ. ಅಣೆಕಟ್ಟು ೩೮.೫ ಮೀಟರ್ ಎತ್ತರವಿದ್ದು ಮತ್ತು ೬೮೫ ಮೀಟರ್ ನಷ್ಟು ಉದ್ದವನ್ನು ಹೊಂದಿದೆ.
ಅಣೆಕಟ್ಟಿನ [[ಜಲಾಶಯ|ಜಲಾಶಯದಲ್ಲಿ]] ಜಲಾಶಯವು ಸುತ್ತಮುತ್ತಲಿನ ಪ್ರದೇಶಗಳನ್ನು ಮುಳುಗಿಸಿದಾಗ ರೂಪುಗೊಂಡ ದ್ವೀಪಗಳ ಗುಂಪಿದೆ. ಬಾಣಾಸುರ ಬೆಟ್ಟಗಳನ್ನು ಹೊಂದಿರುವ ದ್ವೀಪಗಳು ಹಿನ್ನೆಲೆಯ ನೋಟದಲ್ಲಿವೆ. ಇದು ಭಾರತದಲ್ಲಿನ ಅತಿದೊಡ್ಡ ಮಣ್ಣಿನ ಅಣೆಕಟ್ಟು ಮತ್ತು ಏಷ್ಯಾದಲ್ಲಿ ಈ ರೀತಿಯ ಎರಡನೇ ದೊಡ್ಡದಾದ ಅಣೆಕಟ್ಟಾಗಿದೆ. ಅಣೆಕಟ್ಟು ಕಲ್ಲುಗಳು ಮತ್ತು ಬಂಡೆಗಳ ಬೃಹತ್ ರಾಶಿಗಳಿಂದ ಮಾಡಲ್ಪಟ್ಟಿದೆ.
ಕುಟ್ಟಿಯಾಡಿ ವರ್ಧನೆ ಯೋಜನೆಯು ಬಾಣಾಸುರಸಾಗರ ಅಣೆಕಟ್ಟು ಎಂದು ಕರೆಯಲ್ಪಡುವ ಮುಖ್ಯ ಅಣೆಕಟ್ಟು, ಭೂಮಿ ತುಂಬುವ ಅಣೆಕಟ್ಟು ಮತ್ತು ಕಾಂಕ್ರೀಟ್ ಗುರುತ್ವಾಕರ್ಷಣೆಯ ಸ್ಪಿಲ್ವೇ ಅಣೆಕಟ್ಟು ಮತ್ತು ಆರು ಸ್ಯಾಡಲ್ ಅಣೆಕಟ್ಟುಗಳನ್ನು ಒಳಗೊಂಡಿದೆ. ಅವುಗಳೆಂದರೆ, ಎ) ಕೊಸಾನಿ (ಭೂಮಿಯನ್ನು ತುಂಬುವ ಅಣೆಕಟ್ಟು) ೧೩.೮ ಮೀ ಎತ್ತರ, ಬಿ) ಕೊಟ್ಟಗಿರಿ ಹತ್ತಿರ (ಭೂಮಿ ತುಂಬುವ ಅಣೆಕಟ್ಟು) ೧೧.೦ ಮೀ ಎತ್ತರ,ಸಿ) ಕೊಟ್ಟಗಿರಿ (ಭೂಮಿ ತುಂಬುವ ಅಣೆಕಟ್ಟು) ೧೪.೫ ಮೀ ಎತ್ತರ, ಡಿ) ಕುಟ್ಟಿಯಾಡಿ (ಕಾಂಕ್ರೀಟ್ ಅಣೆಕಟ್ಟು) ೧೬.೫ ಮೀ ಎತ್ತರ, ಇ) ನಾಯನಮೂಲ (ಭೂಮಿ ತುಂಬುವ ಅಣೆಕಟ್ಟು) ೩.೫ ಮೀ ಎತ್ತರ, ಎಫ಼್) ಮಂಜೂರ (ಭೂಮಿ ತುಂಬುವ ಅಣೆಕಟ್ಟು) ೪.೦ ಮೀ ಎತ್ತರ. ಕುಟ್ಟಿಯಾಡಿ ತಡಿ ಹೊರತುಪಡಿಸಿ ಎಲ್ಲಾ ಅಣೆಕಟ್ಟುಗಳು ಭೂಮಿ ತುಂಬುವ ಅಣೆಕಟ್ಟುಗಳಾಗಿವೆ. ಕುಟ್ಟಿಯಾಡಿ ಸ್ಯಾಡಲ್ ಅಣೆಕಟ್ಟು ಕಾಂಕ್ರೀಟ್ ಅಣೆಕಟ್ಟು ಆಗಿದೆ. ಮೂಲ ನದಿಯ ಹಾದಿಯ ಬಲದಂಡೆಯಲ್ಲಿ ಮುಖ್ಯ ಅಣೆಕಟ್ಟಿನ ಪಕ್ಕದಲ್ಲಿ ಸ್ಪಿಲ್ವೇ ಇದೆ. ಎಫ಼್.ಆರ್.ಎಲ್ / ಎಮ್.ಡಬ್ಲೂ.ಎಲ್ ನಲ್ಲಿ ನೀರಿನ ಹರಡುವಿಕೆ ಪ್ರದೇಶವು ೧೨.೭೭ ಕಿಲೊಮೀಟರ್ ಆಗಿದೆ. ಬಾಣಾಸುರಸಾಗರ ಅಣೆಕಟ್ಟಿನ ಜಲಾನಯನ ಪ್ರದೇಶವು ೬೧.೪೪ ಕಿ.ಮೀ ಆಗಿದೆ.<ref>{{Cite web|url=https://dams.kseb.in/?p=1|title=BANASURASAGAR DAM – KSEB Limted Dam Safety Organisation|language=en-US|access-date=2021-07-30|archive-date=2026-01-17|archive-url=https://web.archive.org/web/20260117080747/https://dams.kseb.in/?p=1|url-status=dead}}</ref>
== ವಿಶೇಷಣಗಳು ==
===ಸ್ಥಳ===
* ಅಕ್ಷಾಂಶ:೧೧⁰೪೦'೧೫”ಎನ್
* ರೇಖಾಂಶ:೭೫⁰೫೭'೨೧”ಇ
* ಪಂಚಾಯತ್ : ಪಡಿಂಜರಥರ
* ಗ್ರಾಮ : ಪಡಿಂಜರಥರ
* ಜಿಲ್ಲೆ : [[ವಯನಾಡು]]
* ನದಿ ಜಲಾನಯನ ಪ್ರದೇಶ : [[ಕಬಿನಿ ನದಿ]]
* ನದಿ : ಕರಮಂತೋಡು, [[ಕಬಿನಿ ನದಿ|ಕಬಿನಿ ನದಿಯ]] ಉಪನದಿ
* ಅಣೆಕಟ್ಟೆಯಿಂದ ನದಿಗೆ ಬಿಡುಗಡೆ : ಕರಮಂತೋಡು
* ಬಿಡುಗಡೆ ಹರಿಯುವ ತಾಲೂಕು : ವೈತಿರಿ, ಮಾನಂತವಾಡಿ
* ಪೂರ್ಣಗೊಂಡ ವರ್ಷ : ೨೦೦೪
* ಯೋಜನೆಯ ಹೆಸರು : ಕುಟ್ಟಿಯಾಡಿ ವರ್ಧನೆ ಯೋಜನೆ
* ಯೋಜನೆಯ ಉದ್ದೇಶ : ಬಹು ಉದ್ದೇಶ
* ಅಣೆಕಟ್ಟಿನ ವಿಧ : ಏಕರೂಪದ ಸುತ್ತಿಕೊಂಡ ಭೂಮಿಯ ಭರ್ತಿ
* ವರ್ಗೀಕರಣ : ಹೆಚ್ ಹೆಚ್ (ಹೆಚ್ಚಿನ ಎತ್ತರ)
* ಗರಿಷ್ಠ ನೀರಿನ ಮಟ್ಟ (ಎಮ್ ಡಬ್ಲೂ ಎಲ್) : ಇಎಲ್ ೭೭೫.೬೦ ಮೀ
* ಪೂರ್ಣ ಜಲಾಶಯ ಮಟ್ಟ (ಎಫ಼್ ಆರ್ ಎಲ್) : ಇಎಲ್ ೭೭೫.೬೦ ಮೀ
* ಎಫ಼್ ಆರ್ ಎಲ್ ನಲ್ಲಿ ಸಂಗ್ರಹಣೆ : ೨೦೯.೨೫ ಎಂಎಂ೩
* ಆಳವಾದ ಅಡಿಪಾಯದಿಂದ ಎತ್ತರ : ೩೮.೫ ಮೀ (ಬೆಡ್ ಮಟ್ಟದಿಂದ ಎತ್ತರ)
* ಉದ್ದ : ೬೮೫.೦೦ ಮೀ
* ಸ್ಪಿಲ್ವೇ : ಸ್ಪಿಲ್ ವೇ ಇಲ್ಲ
* ಕ್ರೆಸ್ಟ್ ಮಟ್ಟ : ಎನ್ / ಎ
* ನದಿಯ ಔಟ್ಲೆಟ್ : ಶೂನ್ಯ
* ಪ್ರಭಾರ ಅಧಿಕಾರಿಗಳು ಮತ್ತು ದೂರವಾಣಿ ಸಂಖ್ಯೆ :೯೪೪೬೦೦೮೪೧೫
* ಕಾರ್ಯನಿರ್ವಾಹಕ ಇಂಜಿನಿಯರ್, ಅಣೆಕಟ್ಟು ಸುರಕ್ಷತಾ ವಿಭಾಗ ಸಂಖ್ಯೆ. ವಿ, ಥರಿಯೋಡ್, ಪಿನ್- ೬೭೩೧೧೨ ದೂರವಾಣಿ – ೯೪೪೬೦೦೮೪೧೫
** ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಅಣೆಕಟ್ಟು ಸುರಕ್ಷತಾ ಉಪ ವಿಭಾಗ, ತಾರಿಯೋಡ್ ಪಿನ್- ೬೭೩೧೧೨ ದೂರವಾಣಿ- ೯೪೯೬೦೦೪೪೮೦
* ಯೋಜನೆಯ ಸ್ಥಾಪಿತ ಸಾಮರ್ಥ್ಯ : ೨೩೧.೭೫ ಮೆ.ವ್ಯಾ
* ಪ್ರಾಜೆಕ್ಟ್ ಐಡೆಂಟಿಫಿಕೇಶನ್ ಕೋಡ್ (ಪಿಕ್) : ಕೆ ಎಲ್ ೨೯ ಹೆಚ್ ಹೆಚ್ ೦೦೪೪
== ಸ್ಥಳ ==
ಬಾಣಾಸುರ ಸಾಗರ ಅಣೆಕಟ್ಟು ೨೧ ಕಿ.ಮೀ. ಗಳಲ್ಲಿ ಇದೆ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳಲ್ಲಿ]] [[ಕೇರಳ|ಕೇರಳದ]] [[ವಯನಾಡು|ವಯನಾಡ್ ಜಿಲ್ಲೆಯ]] ಕಲ್ಪೆಟ್ಟಾದಿಂದ ಇದು ಭಾರತದಲ್ಲಿನ ಅತಿ ದೊಡ್ಡ ಮಣ್ಣಿನ ಅಣೆಕಟ್ಟು ಮತ್ತು [[ಏಷ್ಯಾ|ಏಷ್ಯಾದಲ್ಲಿ]] ಎರಡನೇ ಅತಿ ದೊಡ್ಡದಾಗಿದೆ ಮತ್ತು ಸುತ್ತಮುತ್ತಲಿನ ಪರ್ವತಗಳಿಗೆ ಪಾದಯಾತ್ರೆಯ ಆರಂಭಿಕ ಹಂತವಾಗಿದೆ. ಇದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಬಾಣಾಸುರ ಸಾಗರ ಅಣೆಕಟ್ಟು ಬಾಣಾಸುರ ಬೆಟ್ಟದ ತಪ್ಪಲಿನಲ್ಲಿದೆ.
== ಸ್ಪಿಲ್ವೇ ಅಣೆಕಟ್ಟು ==
[[ಚಿತ್ರ:Banasurasagar-Spillway.jpg|link=//upload.wikimedia.org/wikipedia/commons/thumb/a/a5/Banasurasagar-Spillway.jpg/250px-Banasurasagar-Spillway.jpg|right|thumb|250x250px| ಬಾಣಾಸುರ ಸಾಗರ ಅಣೆಕಟ್ಟಿನ ಸ್ಪಿಲ್ವೇ ಅಣೆಕಟ್ಟು]]
ಕುಟ್ಟಿಯಾಡಿ ಆಗ್ಮೆಂಟೇಶನ್ ಸ್ಪಿಲ್ವೇ ಅಣೆಕಟ್ಟು ಬಾಣಾಸುರಸಾಗರ (ಕುಟ್ಯಾಡಿ ಆಗ್ಮೆಂಟೇಶನ್) ಜಲಾಶಯಕ್ಕೆ ಸ್ಪಿಲ್ವೇಗಳನ್ನು ಹೊಂದಿರುವ ಕಾಂಕ್ರೀಟ್ ಅಣೆಕಟ್ಟುವಾಗಿದೆ. ಸ್ಪಿಲ್ವೇ ಅಣೆಕಟ್ಟು ವಯನಾಡು ಜಿಲ್ಲೆಯಲ್ಲಿ ಇರುವ ಕುಟ್ಟಿಯಾಡಿ ವರ್ಧನೆ ಯೋಜನೆಯ ಭಾಗವಾಗಿದೆ. ಇದು ಕಬನಿ ನದಿಯ ಉಪನದಿಯಾದ ಕರಮಂತೋಡು ನದಿಯ ನೀರನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಬಾಣಾಸುರಸಾಗರ ಅಣೆಕಟ್ಟು ಎಂದು ಕರೆಯಲ್ಪಡುವ ಒಂದು ಮುಖ್ಯ ಅಣೆಕಟ್ಟನ್ನು ಒಳಗೊಂಡಿದೆ. ಇದು ಭೂಮಿ ತುಂಬುವ ಅಣೆಕಟ್ಟು ಮತ್ತು ಕಾಂಕ್ರೀಟ್ ಗುರುತ್ವಾಕರ್ಷಣೆಯ ಸ್ಪಿಲ್ವೇ ಅಣೆಕಟ್ಟು ಮತ್ತು ಆರು ಸ್ಯಾಡಲ್ ಅಣೆಕಟ್ಟುಗಳನ್ನು ಒಳಗೊಂಡಿದೆ.
== ಜಲಾಶಯ ==
[[ಚಿತ್ರ:Kutyadi_augmentation_Reservoir.jpg|link=//upload.wikimedia.org/wikipedia/commons/thumb/6/6d/Kutyadi_augmentation_Reservoir.jpg/220px-Kutyadi_augmentation_Reservoir.jpg|thumb| ಕುಟ್ಯಾಡಿ ಜಲಾಶಯದ ಬಡಾವಣೆ]]
ಕುಟ್ಟಿಯಾಡಿ ಆಗ್ಮೆಂಟೇಶನ್ (ಬಾಣಾಸುರ ಸಾಗರ) ಜಲಾಶಯದ ಒಟ್ಟು ಸಂಗ್ರಹಣೆ ೨೦೯ ಎಮ್ ಎಮ್೩ ಮತ್ತು ನೇರ ಸಂಗ್ರಹಣೆ ೧೮೫ ಎಮೆಮ್೩. ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಪರಸ್ಪರ ಸಂಪರ್ಕ ಸುರಂಗದ ಮೂಲಕ ಕುಟ್ಟಿಯಾಡಿ ಜಲವಿದ್ಯುತ್ ಯೋಜನೆಯ ಜಲಾಶಯಕ್ಕೆ ತಿರುಗಿಸಲಾಗುತ್ತದೆ. ಪ್ರವೇಶದ್ವಾರದಲ್ಲಿ ತಿರುವು ಸುರಂಗದ ಸಿಲ್ ಮಟ್ಟವು ೭೫೦.೮೩ ಮೀ. ಸುರಂಗದ ಗಾತ್ರ ಮತ್ತು ಆಕಾರವು ವಿಭಿನ್ನವಾಗಿದೆ. ಇದು ೨.೩೫ ಮೀ ವ್ಯಾಸದಿಂದ ಬದಲಾಗುತ್ತದೆ. ೮೯೦ ಮೀ ಮತ್ತು ೨.೮೫ ಮೀ ಉದ್ದದ ವೃತ್ತಾಕಾರದ ರೇಖೆಯ ಸುರಂಗ ೩೮೭೩ ಮೀ ಉದ್ದದ ಡಿ ಆಕಾರದ ಗೆರೆಯಿಲ್ಲದ ಸುರಂಗವಾಗಿದೆ. ಗರಿಷ್ಠ ತಿರುವು ೧೧.೬ ಎಮ್೩/ಎಸ್ ಆಗಿದೆ. ತಿರುಗಿಸಿದ ನೀರನ್ನು ಕುಟ್ಟಿಯಾಡಿ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ. ಜಲಾಶಯದ ಎಫ್ಆರ್ಎಲ್ ೭೭೫.೬೦ ಮೀ. ಅಣೆಕಟ್ಟಿನ ಉನ್ನತ ಮಟ್ಟ ೭೭೮.೫೦ ಮೀ. ನಾಲ್ಕು ರೇಡಿಯಲ್ ಗೇಟ್ಗಳಿವೆ, ಪ್ರತಿಯೊಂದೂ ೧೦.೯೭ ಮೀ X ೯.೨೦ ಮೀ. ಸ್ಪಿಲ್ವೇಯ ಕ್ರೆಸ್ಟ್ ಮಟ್ಟ ೭೬೭.೦೦ ಮೀ. ಸ್ಪಿಲ್ವೇ ಸಾಮರ್ಥ್ಯ ೧೬೬೪ ಎಮ್೩/ಎಸ್. ನೀರಾವರಿ ಅಗತ್ಯವನ್ನು ಬಿಡುಗಡೆ ಮಾಡಲು ೧.೧೦ ಮೀ X ೧.೭೫.೭೫ ಮೀ ಗಾತ್ರದ ೭೫೦.೭೫ ಮೀ ನಲ್ಲಿ ಸ್ಪಿಲ್ವೇ ರಚನೆಯಲ್ಲಿ ಒಂದು ಕೆಳ ಹಂತದ ಔಟ್ಲೆಟ್ ಅನ್ನು ಒದಗಿಸಲಾಗಿದೆ.
== ವ್ಯುತ್ಪತ್ತಿ ==
ಸ್ಥಳೀಯ ಹಿಂದೂ ಪುರಾಣದ ನಂಬಿಕೆಯ ಪ್ರಕಾರ ಕೇರಳದ ಅತ್ಯಂತ ಗೌರವಾನ್ವಿತ ರಾಜನಾಗಿದ್ದ [[ಬಲಿ|ಮಹಾಬಲಿಯ]] ಮಗನಾದ ಬಾಣಾಸುರನ ಹೆಸರನ್ನು ಬಾಣಾಸುರ ಸಾಗರ ಅಣೆಕಟ್ಟಿಗೆ ಹೆಸರಿಸಲಾಗಿದೆ.
== ಪ್ರವಾಸೋದ್ಯಮ ==
ಅಣೆಕಟ್ಟು ಜನಪ್ರಿಯ ಪ್ರವಾಸಿ ತಾಣವಾಗಿದೆ. ಬಾಣಾಸುರ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡಲು ಮತ್ತು ಬಾಣಾಸುರ ಸಾಗರ ಅಣೆಕಟ್ಟಿನಲ್ಲಿ ಸ್ಪೀಡ್ ಬೋಟಿಂಗ್ ಮಾಡಲು ಅನೇಕ ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಬಾಣಾಸುರ ಹಿಲ್ ರೆಸಾರ್ಟ್, ಸುಮಾರು ೨೦ ಕಿಮೀ ನಲ್ಲಿ ಇದೆ .ಅಣೆಕಟ್ಟಿನಿಂದ ಏಷ್ಯಾದ ಅತಿದೊಡ್ಡ ಮಣ್ಣಿನ ರೆಸಾರ್ಟ್ ಎಂದು [[ಬಿಬಿಸಿ]] ರೇಟ್ ಮಾಡಿದೆ. ಸ್ಪೀಡ್ ಮತ್ತು ಪೆಡಲ್ ಬೋಟ್ಗಳು ಲಭ್ಯವಿವೆ ಮತ್ತು ಪ್ರವಾಸಿಗರಿಗೆ ಪ್ರಮುಖ ಹಿಟ್ ಆಗಿವೆ. ಸ್ಪೀಡ್ ಬೋಟ್ ರೈಡ್ ನಿರ್ದಿಷ್ಟವಾಗಿ ಒಂದು ಆಹ್ಲಾದಕರ ಅನುಭವವಾಗಿದೆ.
== ಗ್ಯಾಲರಿ ==
<gallery mode="packed">
DR0071DSC 9245.jpg|ಹತ್ತಿರದ ಪರ್ವತಗಳಿಂದ ಜಲಾಶಯದ ನೋಟ
Banasurasagar dam1(wayanad).jpg|ಮುಖ್ಯ ಭೂಕುಸಿತ ಅಣೆಕಟ್ಟಿನ ಪಕ್ಕದಲ್ಲಿರುವ ಬಾಣಾಸುರ ಸಾಗರ್ ಸ್ಪಿಲ್ ವೇ ಅಣೆಕಟ್ಟು
Orange Minivet(Male) at Banasura Dam.JPG|ಬಾಣಾಸುರ ಅಣೆಕಟ್ಟಿನಲ್ಲಿ ಪುರುಷ ಕಿತ್ತಳೆ ಮಿನಿವೆಟ್
A typical view of Banasura Dam.JPG|ಬಾಣಾಸುರ ಅಣೆಕಟ್ಟಿನಿಂದ ಒಂದು ನೋಟ
Banasura Dam3.jpg|ಬೋಟಿಂಗ್ ಸೌಲಭ್ಯ
</gallery>
== ಪ್ರಸ್ತುತ ಸನ್ನಿವೇಶ ==
ಈ ಅಣೆಕಟ್ಟಿನ ನಿಜವಾದ ಮಿಷನ್ಗಳು ಕಕ್ಕಯಂ ಜಲಾಶಯಕ್ಕೆ ನೀರನ್ನು ಒದಗಿಸುವುದು.<ref>{{Cite web|url=http://wikimapia.org/456161/Kakkayam-Dam-Reservoir|title=Kakkayam Dam Reservoir - Wikimapia|website=wikimapia.org|access-date=2015-12-16}}</ref> ಇದು ಕೋಯಿಕ್ಕೋಡ್ ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದಿಸಲು ಮತ್ತು ವಯನಾಡಿನಲ್ಲಿ ನೀರಾವರಿ ಮಾಡಲು, ಈ ಎರಡೂ ಕಾರ್ಯಾಚರಣೆಗಳನ್ನು ಸಾಧಿಸಲಾಗಿಲ್ಲ. ಮತ್ತು ಪ್ರಸ್ತುತ ಇದು ಹೈಡಲ್ ಯೋಜನೆಯ ಭಾಗವಾಗಿದೆ. ಇದು ಭಾರತದ ಮೊದಲ ಸೋಲಾರ್ ಅಟಾಪ್ ಅಣೆಕಟ್ಟನ್ನು ಹೊಂದಿದೆ.<ref>{{Cite web|url=http://www.deccanchronicle.com/nation/in-other-news/300416/kerala-solar-panel-atop-dam-a-reality.html?ref=yfp|title=Kerala: Solar panel atop dam a reality|date=30 April 2016}}</ref>
== ಇದನ್ನೂ ಸಹ ನೋಡಿ ==
* [[:en:List of dams and reservoirs in India|ಭಾರತದಲ್ಲಿನ ಅಣೆಕಟ್ಟುಗಳು ಮತ್ತು ಜಲಾಶಯಗಳ ಪಟ್ಟಿ]]
== ಬಾಹ್ಯ ಕೊಂಡಿಗಳು ==
* [https://web.archive.org/web/20090816150255/http://www.keralaplanningboard.org/html/Reports/wr%26apr.pdf ಕೇರಳ ಸರ್ಕಾರದ ಹತ್ತನೇ ಪಂಚವಾರ್ಷಿಕ ಯೋಜನೆ 2002-07 'ಜಲ ಸಂಪನ್ಮೂಲಗಳು ಮತ್ತು ಪರಿಸರ - ಅಪ್ರೋಚ್, ನೀತಿಗಳು ಮತ್ತು ಸುಧಾರಣೆಗಳು' (PDF) ಕುರಿತು ವರ್ಕಿಂಗ್ ಗ್ರೂಪ್ನ ವರದಿ]
* [https://web.archive.org/web/20180521081702/http://wayanad.nic.in/ ವಯನಾಡ್ ಜಿಲ್ಲೆಯ ಅಧಿಕೃತ ವೆಬ್ಸೈಟ್]
==ಉಲ್ಲೇಖಗಳು==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಜಲಾಶಯಗಳು]]
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ]]
pg6jpkd640fsa8d7ohnh46pkpqnlgen
ಟೆಂಪ್ಲೇಟು:If last display both
10
146853
1378256
1134734
2025-08-05T05:12:16Z
en>Theknightwho
0
Make substable.
1378256
wikitext
text/x-wiki
{{safesubst:<noinclude/>#if:{{{2|}}}|{{{1|}}}{{{2|}}}}}<noinclude>
{{Documentation}}
</noinclude>
iixsn6gmy5v6zp1aqm79vhpce8m4a1b
1378257
1378256
2026-08-03T07:17:13Z
A826
72368
೧ revisions imported from [[:en:Template:If_last_display_both]]
1378256
wikitext
text/x-wiki
{{safesubst:<noinclude/>#if:{{{2|}}}|{{{1|}}}{{{2|}}}}}<noinclude>
{{Documentation}}
</noinclude>
iixsn6gmy5v6zp1aqm79vhpce8m4a1b
ಟೆಂಪ್ಲೇಟು:Infobox Indian state or territory
10
150467
1378238
1171754
2026-08-02T20:59:40Z
en>Zackmann08
0
dumb typo
1378238
wikitext
text/x-wiki
{{Infobox settlement
| name = {{{name|}}}
| type = {{#if:{{{type|}}}|[[States and union territories of India|{{{type}}}]]|[[States and union territories of India|State or UT]]}}{{#ifeq:{{{former}}}|yes|{{#if:{{{year_start|}}}|<div style="padding:3px">{{#if:{{{year_start|}}}|{{{year_start}}}–{{{year_end}}}}} </div>}}}}
| image = {{{image_skyline|}}}
| image_size = {{{imagesize|270}}}
| alt = {{{image_alt|A collection of images of {{{name|}}}}}}
| caption = {{{image_caption|}}}
<!-- Emblem of the state or union territory -->
| image_seal = {{{image_seal|}}}
| seal_size = {{{seal_size|125}}}
| seal_alt = Official emblem of {{{name|}}}
| seal_type = {{#if:{{{image_seal|}}}|[[Emblem of {{{name|}}}]]|[[List of Indian state emblems|Emblem of {{{name|}}}]]}}
| etymology = {{{etymology|}}}
| nickname = {{{nickname|}}}
| motto_link = List of Indian state mottos
| motto = {{{motto|}}}
| mottoes = <!-- If any state or territory has more than one motto -->
| anthem_link = List of Indian state songs
| anthem = {{{anthem|}}}
<!-- map data -->
| image_map = {{{image_map|}}}
| map_size = 300 <!-- dafault size is 300 -->
| map_alt = {{#if:{{{image_map|}}}| The map of India showing {{{name|}}}}}
| map_caption = {{#if:{{{image_map|}}}|Location of {{{name|}}} in India}}
| coordinates = {{{coordinates|}}}
| subdivision_type = Country
| subdivision_name = India
| subdivision_type1 = [[Administrative divisions of India|Region]]
| subdivision_name1 = {{#if:{{{region|}}}|[[{{{region|}}}]]}}
<!-- Formation and joining -->
| established_title1 = <div style="height:0px"></div>
| established_date1 = <!--
-->{{#invoke:infobox|infoboxTemplate|child = yes <!--
-->| label1 = Previously was
| data1 = {{#if:{{{before_was|}}}[[{{{before_was|}}}]]|{{{before_was|}}}}}
| rowclass2 = {{If empty |{{{before_was|}}} |mergedtoprow}} {{#if:{{{before_was|}}}|mergedrow}}
| label2 = {{#ifeq:{{{former}}}|yes|Formation}}
| data2 = {{#ifeq:{{{former}}}|yes|{{{formation_date4|}}}}}
| rowclass3 = {{If empty |{{{before_was|}}} |mergedtoprow}} {{#if:{{{before_was|}}}|mergedrow}}
| label3 = Admission to union
| data3 = {{{formation_date|}}}
| rowclass4 = {{If empty |{{{before_was|}}} |mergedtoprow}} {{#if:{{{before_was|}}}{{{formation_date|}}}|mergedrow}}
| label4 = As union territory
| data4 = {{{formation_date1|}}}
| rowclass5 = mergedrow
| label5 = As state
| data5 = {{#ifeq:{{{formation_date2|}}}|formation1||{{{formation_date2|}}}}}
| rowclass6 = mergedrow
| label6 = Bifurcation
| data6 = {{#ifeq:{{{formation_date3|}}}|formation||{{{formation_date3|}}}}}
| rowclass7 = mergedrow
| label7 = Consolidation
| data7 = {{{consolidation|}}}
| rowclass8 = {{If empty |{{{before_was|}}} |mergedtoprow}} {{#if:{{{before_was|}}}{{{formation_date|}}}{{{formation_date1|}}}{{{formation_date2|}}}{{{formation_date3|}}}|mergedrow}} {{#ifeq:{{{former}}}|yes|mergedrow}}
| label8 = {{#switch:{{{former}}} | yes = Dissolution | #default = {{#if:{{{formation_date2|}}}{{{formation_date3|}}}|{{#ifeq:{{{formation_date3}}}|formation|[[List of Indian state foundation days|Formation]]<br/>{{nobold|([[List of Indian state foundation days|by bifurcation]])}}|[[List of Indian state foundation days|Formation]]}}|{{#ifeq:{{{formation_date2}}}|formation1|[[List of Indian state foundation days|Formation]]<br/>{{nobold|([[List of Indian state foundation days|as a state]])}}|[[List of Indian state foundation days|Formation]]}} }} }}
| data8 = {{#switch:{{{former}}} | yes = {{{dissolution|}}}| #default = {{{formation_date4|}}} }} }}
<!-- City and regions -->
| seat_type = {{#ifeq:{{{largestcity|}}}|capital|[[List of state and union territory capitals in India|Capital]]<br/>{{nobold|[[List of cities in India by population|and largest city]]}}|[[List of state and union territory capitals in India|Capital]]}}
| seat = {{#if:{{{capital|}}}|[[{{{capital|}}}]]|{{{capital|}}}}}{{#if:{{{winter_capital|}}}| <br/> [[{{{winter_capital|}}}]] (winter)}}
| seat1_type = [[List of cities in India by population|Largest city]]
| seat1 = {{#if:{{{largestcity|}}}|{{#ifeq:{{{largestcity|}}}|capital||[[{{{largestcity|}}}]]}}}}
| seat2_type = [[List of metropolitan areas in India|Largest metro]]
| seat2 = {{#if:{{{metro|}}}|[[{{{metro|}}}]]}}
| parts_type = [[List of districts in India|Districts]]
| parts_style = <!-- list, coll (collapsed list), para (paragraph format) -->
| parts = {{{districts|}}}
<!-- Government and leaders -->
| government_footnotes = {{{government_footnotes|}}}
| government_type = {{#ifexist:{{{government_type|}}}|[[{{{government_type|}}}]]|{{{government_type|}}}}}
| governing_body = {{#if:{{{governor|}}}{{{chief_minister|}}}{{{party|}}}{{{lt_governor|}}}{{{administrator|}}}{{{chief_secretary|}}}{{{judiciary|}}}|{{#ifeq:{{{name|}}}|Punjab|[[Government of Punjab, India|Government of Punjab]]|[[Government of {{{name|}}}]]}}}}
| leader_title = {{#switch:{{{former}}}
| yes = {{#if:{{{govfirst_year|}}}|Governor}}
| #default = [[{{#ifeq:{{{name}}}|Punjab|List of governors of Punjab, India|List of governors of {{{name}}}}}|Governor]] }}
| leader_name = {{#switch:{{{former}}}
| yes = {{#invoke:infobox|infoboxTemplate|child = yes
| rowclass1 = mergedrow
| data1 = {{#if:{{{govfirst_year|}}}|{{Infobox country/multirow|{{{govfirst_year|}}} |{{{gov_first|}}} |{{{govlast_year|}}} |{{{gov_last|}}} }} }} }}
| #default = {{#if:{{{governor|}}}|{{{governor|}}}}} }}
| leader_title1 = [[List of current Indian lieutenant governors and administrators#Current Indian lieutenant governors|Lieutenant Governor]]
| leader_name1 = {{#if:{{{lt_governor|}}}|{{{lt_governor|}}}}}
| leader_title2 = {{if|eq|{{{name}}}|Punjab|[[Chief Minister of Punjab (India)|Chief Minister]]
| {{#switch:{{{former}}}
| yes = {{#if:{{{cmfirst_year|}}}|Chief Minister}}
| #default = [[Chief Minister of {{{name}}}|Chief Minister]] }}
}}
| leader_name2 = {{#switch:{{{former}}}
| yes = {{#invoke:infobox|infoboxTemplate|child = yes
| rowclass3 = mergedrow
| data3 = {{#if:{{{cmfirst_year|}}} | {{Infobox country/multirow|{{{cmfirst_year|}}} |{{{cm_first|}}} |{{{cmlast_year|}}} |{{{cm_last|}}} }} }} }}
| #default = {{#if:{{{chief_minister|}}}{{{CM|}}}|{{{CM|{{{chief_minister|}}}}}}}} {{#if:{{{party|}}}|({{{party|}}})}} }}
| leader_title3 = {{#switch:{{{type}}}
| State = {{#if:{{{deputy_cm|}}}|[[List of deputy chief ministers of {{{name|}}}|Deputy Chief Minister]]}}
| Union Territory = {{#if:{{{administrator|}}}|[[List of current Indian lieutenant governors and administrators#Current Indian administrators|Administrator]]}}
| #default = {{#if:{{{deputy_cm|}}}|[[List of deputy chief ministers of {{{name|}}}|Deputy Chief Minister]]}} }}
| leader_name3 = {{#switch:{{{type}}}
| State = {{#if:{{{deputy_cm|}}}|{{{deputy_cm|}}}}}
| Union Territory = {{#if:{{{administrator|}}}|{{{administrator|}}}}}
| #default = {{#if:{{{deputy_cm|}}}|{{{deputy_cm|}}}}} }}
| leader_title4 = [[Chief secretary (India)|Chief Secretary]]
| leader_name4 = {{#if:{{{chief_secretary|}}}|{{{chief_secretary|}}}}}
<!-- Governing bodies and seats -->
| government_blank1_title =
| government_blank1 = {{#if:{{{council|}}}{{{council_seats|}}}{{{assembly|}}}{{{assembly_seats|}}}{{{rajya_sabha_seats|}}}{{{lok_sabha_seats|}}}|{{#invoke:infobox|infoboxTemplate|child = yes
| rowclass1 = mergedtoprow
| label1 = {{#switch:{{{type}}}
| Union Territory = {{#if:{{{council|}}}{{{council_seats|}}}{{{assembly|}}}{{{assembly_seats|}}}|[[Legislature]]}}
| State = {{#if:{{{council|}}}{{{council_seats|}}}{{{assembly|}}}{{{assembly_seats|}}}|[[State Legislature]]}}
| #default = {{#if:{{{council|}}}{{{council_seats|}}}{{{assembly|}}}{{{assembly_seats|}}}|Legislature}} }}
| data1 = <b>{{{legislature_type|}}}</b>
| rowclass2 = mergedrow
| label2 = • [[State legislative councils of India|Council]]
| data2 = {{{council|}}} {{#if:{{{council_seats|}}}|([[{{{name|}}} Legislative Council|{{{council_seats|}}}]])}}
| rowclass3 = mergedrow
| label3 = • [[State legislative assemblies of India|Assembly]]
| data3 = {{{assembly|}}} {{#if:{{{assembly_seats|}}}|([[List of constituencies of the {{{name|}}} Legislative Assembly|{{{assembly_seats|}}}]])}}
| rowclass4 = mergedrow
| label4 = National Parliament
| data4 = {{#if:{{{rajya_sabha_seats|}}}{{{lok_sabha_seats|}}}|<b>[[Parliament of India]]</b>}}
| rowclass5 = mergedrow
| label5 = • [[Rajya Sabha|Rajya Sabha]]
| data5 = {{#if:{{{rajya_sabha_seats|}}}|[[List of current members of the Rajya Sabha #{{{name|}}}|{{{rajya_sabha_seats|}}}]]}}
| rowclass6 = mergedrow
| label6 = • [[Lok Sabha|Lok Sabha]]
| data6 = {{#if:{{{lok_sabha_seats|}}}|[[List of members of the 18th Lok Sabha#{{{name|}}}|{{{lok_sabha_seats|}}}]]}}
| rowclass7 = mergedrow
| label7 = [[High courts of India|High Court]]
| data7 = {{#if:{{{judiciary|}}}|{{{judiciary|}}}}}
}} }}
<!-- Area and elevation -->
| area_footnotes = {{{area_footnotes|}}}
| area_total_km2 = {{{area_total_km2|}}}
| area_total_sq_mi = {{{area_total_sq_mi|}}}
| area_rank = {{#if:{{{area_rank|}}}|[[List of states and union territories of India by area|{{{area_rank|}}}]]}}
| length_km = {{{length_km|}}}
| length_mi = {{{length_mi|}}}
| width_km = {{{width_km|}}}
| width_mi = {{{width_mi|}}}
| elevation_footnotes = {{{elevation_footnotes|}}}
| elevation_m = {{{elevation_m|}}}
| elevation_ft = {{{elevation_ft|}}}
| elevation_max_m = {{{elevation_max_m|}}}
| elevation_max_ft = {{{elevation_max_ft|}}}
| elevation_max_point = {{{elevation_max_point|}}}
| elevation_min_m = {{{elevation_min_m|}}}
| elevation_min_ft = {{{elevation_min_ft|}}}
| elevation_min_point = {{{elevation_min_point|}}}
<!-- Population -->
| population_footnotes = {{{population_footnotes|}}}
| population_total = {{{population_total|}}}
| population_as_of = {{{population_as_of|}}}
| population_rank = {{#if:{{{population_rank|}}}|[[List of states and union territories of India by population|{{{population_rank|}}}]]}}
| population_density_km2 = {{{population_density|}}} {{#if:{{{population_density|}}}|{{{density_rank|}}}}}
| population_density_sq_mi =
| population_blank1_title = Urban
| population_blank1 = {{#if:{{{population_urban|}}}|{{{population_urban|}}}}}
| population_blank2_title = Rural
| population_blank2 = {{#if:{{{population_rural|}}}|{{{population_rural|}}}}}
| population_demonym = {{#if:{{{population_demonym|}}}|{{{population_demonym|}}}}}
| population_demonyms =
<!-- Languages -->
| demographics_type1 = {{#if:{{{official_langs|}}}{{{additional_official|}}}{{{official_script|}}}{{{ethnicity|}}}|Language}}
| demographics1_title1 = [[Languages with official status in India|Official]] {{#if:{{{official_langs|}}}}}
| demographics1_info1 = {{{official_langs|}}}
| demographics1_title2 = [[Languages with official status in India|Additional official]] {{#if:{{{additional_official|}}}}}
| demographics1_info2 = {{{additional_official|}}}
| demographics1_title3 = [[Official scripts of the Indian Republic|Official script]] {{#if:{{{official_script|}}}}}
| demographics1_info3 = {{{official_script|}}}
| demographics1_title4 = {{#if:{{{ethnicity|}}}|Ethnic groups}}
| demographics1_info4 = {{{ethnicity|}}}
<!-- GDP -->
| demographics_type2 = {{#if:{{{GDP_rank|}}}{{{GDP_total|}}}{{{GDP_per_capita|}}}|[[GDP]]}}
| demographics2_footnotes = {{{GDP_footnotes|}}}
| demographics2_title1 = Total {{#if:{{{GDP_year}}}|{{nobold|({{{GDP_year}}})}}}}
| demographics2_info1 = {{#if:{{{GDP_total|}}}|{{{GDP_total|}}}}}
| demographics2_title2 = Rank
| demographics2_info2 = {{#if:{{{GDP_rank|}}}|[[List of Indian states and union territories by GDP|{{{GDP_rank|}}}]]}}
| demographics2_title3 = Per capita
| demographics2_info3 = {{{GDP_per_capita|}}} {{#if:{{{GDP_per_capita_rank|}}}|([[List of Indian states and union territories by GDP per capita|{{{GDP_per_capita_rank|}}}]])}}
<!-- Indian time zone -->
| time_zone1 = [[Indian Standard Time|IST]]
| utc_offset1 = +05:30
<!-- iso and registration -->
| iso_code = {{#if:{{{iso_code|}}}|[[ISO 3166-2:IN|{{{iso_code}}}]]}}
| registration_plate_type = [[List of Regional Transport Office districts in India|Vehicle registration]]
| registration_plate = {{{registration_plate|}}}
<!-- HDI, Literacy rate and sex ratio -->
| custom_label_sec1 = [[Human Development Index|HDI]] {{#if:{{{HDI_year|}}}|{{nobold|({{{HDI_year|}}})}}}}
| custom_data_sec1 = {{#if:{{{HDI|}}}|{{{HDI|}}}}} {{#if:{{{HDI_rank|}}}|([[List of Indian states and union territories by Human Development Index|{{{HDI_rank|}}}]])}}
| custom_label1_sec1 = [[Literacy]] {{#if:{{{literacy_year|}}}|{{nobold|({{{literacy_year|}}})}}}}
| custom_data1_sec1 = {{#if:{{{literacy|}}}|{{{literacy|}}}}} {{#if:{{{literacy_rank|}}}|([[List of Indian states and union territories by literacy rate|{{{literacy_rank|}}}]])}}
| custom_label2_sec1 = [[Sex ratio]] {{#if:{{{sexratio_year|}}}|{{nobold|({{{sexratio_year|}}})}}}}
| custom_data2_sec1 = {{#if:{{{sex_ratio|}}}|{{{sex_ratio|}}}}} {{#if:{{{sexratio_rank|}}}|([[List of states and union territories of India by sex ratio|{{{sexratio_rank|}}}]])}}
<!-- website, footnotes -->
| website = {{#if:{{{website|}}}|{{URL|1={{{website|}}}}}}}
<!-- module contains parameters of Infobox place symbols -->
| module ={{#switch:{{{former}}}<!--
-->| yes = {{#invoke:infobox|infoboxTemplate|child = yes
| data1 = {{#if:{{{p1}}}{{{s1}}}
|{{Infobox country/formernext|flag_p1 = {{{flag_p1|}}} |image_p1 = {{{image_p1|}}} |p1 = {{{p1|}}} |flag_p2 ={{{flag_p2|}}} |image_p2 = {{{image_p2|}}} |p2 = {{{p2|}}} |flag_p3={{{flag_p3|}}} |image_p3 = {{{image_p3|}}} |p3 = {{{p3|}}} |flag_p4 = {{{flag_p4|}}} | image_p4= {{{image_p4|}}} | p4={{{p4|}}} |flag_p5 = {{{flag_p5|}}} |image_p5 = {{{image_p5|}}} |p5 = {{{p5|}}} ||flag_s1={{{flag_s1|}}} |image_s1 = {{{image_s1|}}} | s1 = {{{s1|}}}|flag_s2 = {{{flag_s2|}}} |image_s2 = {{{image_s2|}}} |s2 = {{{s2|}}} |flag_s3 = {{{flag_s3|}}} |image_s3 = {{{image_s3|}}} |s3 = {{{s3|}}} |flag_s4 = {{{flag_s4|}}} |image_s4={{{image_s4|}}} |s4 = {{{s4|}}} |flag_s5 = {{{flag_s5|}}} |image_s5 = {{{image_s5|}}} |s5 = {{{s5|}}}}} }} }}
<!-- Symbols of the state or territory -->
| #default = {{#if:{{{song|}}}{{{foundation_day|}}}{{{mammal|}}}{{{bird|}}}{{{fish|}}}{{{butterfly|}}}{{{flower|}}}{{{tree|}}}{{{fruit|}}}|{{Infobox place symbols
| embedded = yes
| region = {{{name|}}}
| country = India
| song = {{{anthem|}}}
| foundation_day = {{#if:{{{foundation_day|}}}|[[{{{foundation_day|}}}]]}}
| mammal = {{{mammal|}}}
| bird = {{{bird|}}}
| fish = {{{fish|}}}
| butterfly = {{{butterfly|}}}
| flower = {{{flower|}}}
| tree = {{{tree|}}}
| fruit = {{{fruit|}}} }} }}
{{#if:{{{image_highway|}}}{{{image_size_highway|}}}{{{sh_numbers|}}}|{{#invoke:infobox|infoboxTemplate|child = yes
| rowclass1 = mergedtoprow
| data1 = <b>State highway mark</b>
| rowclass2 = mergedrow
| data2 ={{#invoke:InfoboxImage|InfoboxImage | image={{{image_highway|}}} | size={{{image_size_highway|}}} | sizedefault=90px }}
| rowclass3 = mergedrow
| data3 = State highway of {{{name|}}} <br/> {{{sh_numbers|}}}
}}}} }}
{{#if:{{{song|}}}{{{language|}}}{{{foundation_day|}}}{{{mammal|}}}{{{bird|}}}{{{fish|}}}{{{butterfly|}}}{{{flower|}}}{{{tree|}}}{{{fruit|}}}{{{image_highway|}}}|{{#invoke:infobox|infoboxTemplate|child = yes |rowclass1 = mergedtoprow | data1 = {{#switch:{{{type}}}| State = [[List of Indian state symbols]] | Union Territory = [[List of Indian state symbols#Union territories|List of union territory symbols]] | #default = [[List of Indian state symbols|List of Indian state and union territory symbols]]}} }}}}
<!-- Footnotes -->
| footnotes = {{{footnotes|}}}
}}<!--
-->{{#invoke:Check for unknown parameters|check|unknown={{main other|[[Category:Pages using infobox Indian state or territory with unknown parameters|_VALUE_{{PAGENAME}}]]}}|preview=Page using [[Template:Infobox Indian state or territory]] with unknown parameter "_VALUE_"|ignoreblank=y|
|name |official_name |former |image_skyline |imagesize |image_alt |image_caption |type |image_seal |seal_size |seal_type |etymology |nickname |motto |anthem |image_map |mapsize |map_caption |map_alt |coordinates |region |before_was |today |formation_date |formation_date1 |formation_date2 |formation_date3 |formation_date4 | consolidation | dissolution |capital |winter_capital |largestcity |metro |districts
|government_footnotes |government_type |governor |chief_minister |party |lt_governor |administrator |deputy_cm |chief_secretary |judiciary |legislature_type |council |council_seats |assembly |assembly_seats |rajya_sabha_seats |lok_sabha_seats |MPs |area_footnotes |area_rank |area_total_sq_mi |area_total_km2 | length_km |length_mi | width_km |width_mi |elevation_max_m |elevation_max_ft |elevation_max_point |elevation_min_m |elevation_min_ft |elevation_min_point |elevation_footnotes |elevation_m |elevation_ft |population_footnotes |population_total |population_rank |population_as_of |population_density |ethnicity |population_density_rank |population_urban |population_rural |population_demonym |official_langs |additional_official |official_script |GDP_footnotes |GDP_rank |GDP_year |GDP_total |GDP_per_capita |GDP_per_capita_rank |iso_code |registration_plate |HDI |HDI_year |literacy |literacy_year |literacy_rank |HDI_rank |sex_ratio |sexratio_year |sexratio_rank |website |footnotes |song
| cmfirst_year | cm_first | cmlast_year | cm_last | govfirst_year | gov_first | govlast_year | gov_last
|foundation_day |language |mammal |bird |butterfly |fish |flower |tree |fruit |image_highway |image_size_highway |sh_numbers |year_start |year_end |flag_p1 |image_p1 |p1 |flag_p2 |image_p2 |p2 |flag_p3 |image_p3 |p3 |flag_p4 |image_p4 |p4 |flag_p5 |image_p5 |p5 |flag_s1 |image_s1 |s1 |border_s1 |flag_s2 |image_s2 |s2 |flag_s3 |image_s3 |s3 |flag_s4 |image_s4 |s4 |flag_s5 |image_s5 |s5 }}<!--
--><noinclude>{{documentation}}</noinclude>
lw1zra5np4192mvy5qgi7sjofdubyk8
1378239
1378238
2026-08-03T07:17:06Z
A826
72368
೧ revisions imported from [[:en:Template:Infobox_Indian_state_or_territory]]
1378238
wikitext
text/x-wiki
{{Infobox settlement
| name = {{{name|}}}
| type = {{#if:{{{type|}}}|[[States and union territories of India|{{{type}}}]]|[[States and union territories of India|State or UT]]}}{{#ifeq:{{{former}}}|yes|{{#if:{{{year_start|}}}|<div style="padding:3px">{{#if:{{{year_start|}}}|{{{year_start}}}–{{{year_end}}}}} </div>}}}}
| image = {{{image_skyline|}}}
| image_size = {{{imagesize|270}}}
| alt = {{{image_alt|A collection of images of {{{name|}}}}}}
| caption = {{{image_caption|}}}
<!-- Emblem of the state or union territory -->
| image_seal = {{{image_seal|}}}
| seal_size = {{{seal_size|125}}}
| seal_alt = Official emblem of {{{name|}}}
| seal_type = {{#if:{{{image_seal|}}}|[[Emblem of {{{name|}}}]]|[[List of Indian state emblems|Emblem of {{{name|}}}]]}}
| etymology = {{{etymology|}}}
| nickname = {{{nickname|}}}
| motto_link = List of Indian state mottos
| motto = {{{motto|}}}
| mottoes = <!-- If any state or territory has more than one motto -->
| anthem_link = List of Indian state songs
| anthem = {{{anthem|}}}
<!-- map data -->
| image_map = {{{image_map|}}}
| map_size = 300 <!-- dafault size is 300 -->
| map_alt = {{#if:{{{image_map|}}}| The map of India showing {{{name|}}}}}
| map_caption = {{#if:{{{image_map|}}}|Location of {{{name|}}} in India}}
| coordinates = {{{coordinates|}}}
| subdivision_type = Country
| subdivision_name = India
| subdivision_type1 = [[Administrative divisions of India|Region]]
| subdivision_name1 = {{#if:{{{region|}}}|[[{{{region|}}}]]}}
<!-- Formation and joining -->
| established_title1 = <div style="height:0px"></div>
| established_date1 = <!--
-->{{#invoke:infobox|infoboxTemplate|child = yes <!--
-->| label1 = Previously was
| data1 = {{#if:{{{before_was|}}}[[{{{before_was|}}}]]|{{{before_was|}}}}}
| rowclass2 = {{If empty |{{{before_was|}}} |mergedtoprow}} {{#if:{{{before_was|}}}|mergedrow}}
| label2 = {{#ifeq:{{{former}}}|yes|Formation}}
| data2 = {{#ifeq:{{{former}}}|yes|{{{formation_date4|}}}}}
| rowclass3 = {{If empty |{{{before_was|}}} |mergedtoprow}} {{#if:{{{before_was|}}}|mergedrow}}
| label3 = Admission to union
| data3 = {{{formation_date|}}}
| rowclass4 = {{If empty |{{{before_was|}}} |mergedtoprow}} {{#if:{{{before_was|}}}{{{formation_date|}}}|mergedrow}}
| label4 = As union territory
| data4 = {{{formation_date1|}}}
| rowclass5 = mergedrow
| label5 = As state
| data5 = {{#ifeq:{{{formation_date2|}}}|formation1||{{{formation_date2|}}}}}
| rowclass6 = mergedrow
| label6 = Bifurcation
| data6 = {{#ifeq:{{{formation_date3|}}}|formation||{{{formation_date3|}}}}}
| rowclass7 = mergedrow
| label7 = Consolidation
| data7 = {{{consolidation|}}}
| rowclass8 = {{If empty |{{{before_was|}}} |mergedtoprow}} {{#if:{{{before_was|}}}{{{formation_date|}}}{{{formation_date1|}}}{{{formation_date2|}}}{{{formation_date3|}}}|mergedrow}} {{#ifeq:{{{former}}}|yes|mergedrow}}
| label8 = {{#switch:{{{former}}} | yes = Dissolution | #default = {{#if:{{{formation_date2|}}}{{{formation_date3|}}}|{{#ifeq:{{{formation_date3}}}|formation|[[List of Indian state foundation days|Formation]]<br/>{{nobold|([[List of Indian state foundation days|by bifurcation]])}}|[[List of Indian state foundation days|Formation]]}}|{{#ifeq:{{{formation_date2}}}|formation1|[[List of Indian state foundation days|Formation]]<br/>{{nobold|([[List of Indian state foundation days|as a state]])}}|[[List of Indian state foundation days|Formation]]}} }} }}
| data8 = {{#switch:{{{former}}} | yes = {{{dissolution|}}}| #default = {{{formation_date4|}}} }} }}
<!-- City and regions -->
| seat_type = {{#ifeq:{{{largestcity|}}}|capital|[[List of state and union territory capitals in India|Capital]]<br/>{{nobold|[[List of cities in India by population|and largest city]]}}|[[List of state and union territory capitals in India|Capital]]}}
| seat = {{#if:{{{capital|}}}|[[{{{capital|}}}]]|{{{capital|}}}}}{{#if:{{{winter_capital|}}}| <br/> [[{{{winter_capital|}}}]] (winter)}}
| seat1_type = [[List of cities in India by population|Largest city]]
| seat1 = {{#if:{{{largestcity|}}}|{{#ifeq:{{{largestcity|}}}|capital||[[{{{largestcity|}}}]]}}}}
| seat2_type = [[List of metropolitan areas in India|Largest metro]]
| seat2 = {{#if:{{{metro|}}}|[[{{{metro|}}}]]}}
| parts_type = [[List of districts in India|Districts]]
| parts_style = <!-- list, coll (collapsed list), para (paragraph format) -->
| parts = {{{districts|}}}
<!-- Government and leaders -->
| government_footnotes = {{{government_footnotes|}}}
| government_type = {{#ifexist:{{{government_type|}}}|[[{{{government_type|}}}]]|{{{government_type|}}}}}
| governing_body = {{#if:{{{governor|}}}{{{chief_minister|}}}{{{party|}}}{{{lt_governor|}}}{{{administrator|}}}{{{chief_secretary|}}}{{{judiciary|}}}|{{#ifeq:{{{name|}}}|Punjab|[[Government of Punjab, India|Government of Punjab]]|[[Government of {{{name|}}}]]}}}}
| leader_title = {{#switch:{{{former}}}
| yes = {{#if:{{{govfirst_year|}}}|Governor}}
| #default = [[{{#ifeq:{{{name}}}|Punjab|List of governors of Punjab, India|List of governors of {{{name}}}}}|Governor]] }}
| leader_name = {{#switch:{{{former}}}
| yes = {{#invoke:infobox|infoboxTemplate|child = yes
| rowclass1 = mergedrow
| data1 = {{#if:{{{govfirst_year|}}}|{{Infobox country/multirow|{{{govfirst_year|}}} |{{{gov_first|}}} |{{{govlast_year|}}} |{{{gov_last|}}} }} }} }}
| #default = {{#if:{{{governor|}}}|{{{governor|}}}}} }}
| leader_title1 = [[List of current Indian lieutenant governors and administrators#Current Indian lieutenant governors|Lieutenant Governor]]
| leader_name1 = {{#if:{{{lt_governor|}}}|{{{lt_governor|}}}}}
| leader_title2 = {{if|eq|{{{name}}}|Punjab|[[Chief Minister of Punjab (India)|Chief Minister]]
| {{#switch:{{{former}}}
| yes = {{#if:{{{cmfirst_year|}}}|Chief Minister}}
| #default = [[Chief Minister of {{{name}}}|Chief Minister]] }}
}}
| leader_name2 = {{#switch:{{{former}}}
| yes = {{#invoke:infobox|infoboxTemplate|child = yes
| rowclass3 = mergedrow
| data3 = {{#if:{{{cmfirst_year|}}} | {{Infobox country/multirow|{{{cmfirst_year|}}} |{{{cm_first|}}} |{{{cmlast_year|}}} |{{{cm_last|}}} }} }} }}
| #default = {{#if:{{{chief_minister|}}}{{{CM|}}}|{{{CM|{{{chief_minister|}}}}}}}} {{#if:{{{party|}}}|({{{party|}}})}} }}
| leader_title3 = {{#switch:{{{type}}}
| State = {{#if:{{{deputy_cm|}}}|[[List of deputy chief ministers of {{{name|}}}|Deputy Chief Minister]]}}
| Union Territory = {{#if:{{{administrator|}}}|[[List of current Indian lieutenant governors and administrators#Current Indian administrators|Administrator]]}}
| #default = {{#if:{{{deputy_cm|}}}|[[List of deputy chief ministers of {{{name|}}}|Deputy Chief Minister]]}} }}
| leader_name3 = {{#switch:{{{type}}}
| State = {{#if:{{{deputy_cm|}}}|{{{deputy_cm|}}}}}
| Union Territory = {{#if:{{{administrator|}}}|{{{administrator|}}}}}
| #default = {{#if:{{{deputy_cm|}}}|{{{deputy_cm|}}}}} }}
| leader_title4 = [[Chief secretary (India)|Chief Secretary]]
| leader_name4 = {{#if:{{{chief_secretary|}}}|{{{chief_secretary|}}}}}
<!-- Governing bodies and seats -->
| government_blank1_title =
| government_blank1 = {{#if:{{{council|}}}{{{council_seats|}}}{{{assembly|}}}{{{assembly_seats|}}}{{{rajya_sabha_seats|}}}{{{lok_sabha_seats|}}}|{{#invoke:infobox|infoboxTemplate|child = yes
| rowclass1 = mergedtoprow
| label1 = {{#switch:{{{type}}}
| Union Territory = {{#if:{{{council|}}}{{{council_seats|}}}{{{assembly|}}}{{{assembly_seats|}}}|[[Legislature]]}}
| State = {{#if:{{{council|}}}{{{council_seats|}}}{{{assembly|}}}{{{assembly_seats|}}}|[[State Legislature]]}}
| #default = {{#if:{{{council|}}}{{{council_seats|}}}{{{assembly|}}}{{{assembly_seats|}}}|Legislature}} }}
| data1 = <b>{{{legislature_type|}}}</b>
| rowclass2 = mergedrow
| label2 = • [[State legislative councils of India|Council]]
| data2 = {{{council|}}} {{#if:{{{council_seats|}}}|([[{{{name|}}} Legislative Council|{{{council_seats|}}}]])}}
| rowclass3 = mergedrow
| label3 = • [[State legislative assemblies of India|Assembly]]
| data3 = {{{assembly|}}} {{#if:{{{assembly_seats|}}}|([[List of constituencies of the {{{name|}}} Legislative Assembly|{{{assembly_seats|}}}]])}}
| rowclass4 = mergedrow
| label4 = National Parliament
| data4 = {{#if:{{{rajya_sabha_seats|}}}{{{lok_sabha_seats|}}}|<b>[[Parliament of India]]</b>}}
| rowclass5 = mergedrow
| label5 = • [[Rajya Sabha|Rajya Sabha]]
| data5 = {{#if:{{{rajya_sabha_seats|}}}|[[List of current members of the Rajya Sabha #{{{name|}}}|{{{rajya_sabha_seats|}}}]]}}
| rowclass6 = mergedrow
| label6 = • [[Lok Sabha|Lok Sabha]]
| data6 = {{#if:{{{lok_sabha_seats|}}}|[[List of members of the 18th Lok Sabha#{{{name|}}}|{{{lok_sabha_seats|}}}]]}}
| rowclass7 = mergedrow
| label7 = [[High courts of India|High Court]]
| data7 = {{#if:{{{judiciary|}}}|{{{judiciary|}}}}}
}} }}
<!-- Area and elevation -->
| area_footnotes = {{{area_footnotes|}}}
| area_total_km2 = {{{area_total_km2|}}}
| area_total_sq_mi = {{{area_total_sq_mi|}}}
| area_rank = {{#if:{{{area_rank|}}}|[[List of states and union territories of India by area|{{{area_rank|}}}]]}}
| length_km = {{{length_km|}}}
| length_mi = {{{length_mi|}}}
| width_km = {{{width_km|}}}
| width_mi = {{{width_mi|}}}
| elevation_footnotes = {{{elevation_footnotes|}}}
| elevation_m = {{{elevation_m|}}}
| elevation_ft = {{{elevation_ft|}}}
| elevation_max_m = {{{elevation_max_m|}}}
| elevation_max_ft = {{{elevation_max_ft|}}}
| elevation_max_point = {{{elevation_max_point|}}}
| elevation_min_m = {{{elevation_min_m|}}}
| elevation_min_ft = {{{elevation_min_ft|}}}
| elevation_min_point = {{{elevation_min_point|}}}
<!-- Population -->
| population_footnotes = {{{population_footnotes|}}}
| population_total = {{{population_total|}}}
| population_as_of = {{{population_as_of|}}}
| population_rank = {{#if:{{{population_rank|}}}|[[List of states and union territories of India by population|{{{population_rank|}}}]]}}
| population_density_km2 = {{{population_density|}}} {{#if:{{{population_density|}}}|{{{density_rank|}}}}}
| population_density_sq_mi =
| population_blank1_title = Urban
| population_blank1 = {{#if:{{{population_urban|}}}|{{{population_urban|}}}}}
| population_blank2_title = Rural
| population_blank2 = {{#if:{{{population_rural|}}}|{{{population_rural|}}}}}
| population_demonym = {{#if:{{{population_demonym|}}}|{{{population_demonym|}}}}}
| population_demonyms =
<!-- Languages -->
| demographics_type1 = {{#if:{{{official_langs|}}}{{{additional_official|}}}{{{official_script|}}}{{{ethnicity|}}}|Language}}
| demographics1_title1 = [[Languages with official status in India|Official]] {{#if:{{{official_langs|}}}}}
| demographics1_info1 = {{{official_langs|}}}
| demographics1_title2 = [[Languages with official status in India|Additional official]] {{#if:{{{additional_official|}}}}}
| demographics1_info2 = {{{additional_official|}}}
| demographics1_title3 = [[Official scripts of the Indian Republic|Official script]] {{#if:{{{official_script|}}}}}
| demographics1_info3 = {{{official_script|}}}
| demographics1_title4 = {{#if:{{{ethnicity|}}}|Ethnic groups}}
| demographics1_info4 = {{{ethnicity|}}}
<!-- GDP -->
| demographics_type2 = {{#if:{{{GDP_rank|}}}{{{GDP_total|}}}{{{GDP_per_capita|}}}|[[GDP]]}}
| demographics2_footnotes = {{{GDP_footnotes|}}}
| demographics2_title1 = Total {{#if:{{{GDP_year}}}|{{nobold|({{{GDP_year}}})}}}}
| demographics2_info1 = {{#if:{{{GDP_total|}}}|{{{GDP_total|}}}}}
| demographics2_title2 = Rank
| demographics2_info2 = {{#if:{{{GDP_rank|}}}|[[List of Indian states and union territories by GDP|{{{GDP_rank|}}}]]}}
| demographics2_title3 = Per capita
| demographics2_info3 = {{{GDP_per_capita|}}} {{#if:{{{GDP_per_capita_rank|}}}|([[List of Indian states and union territories by GDP per capita|{{{GDP_per_capita_rank|}}}]])}}
<!-- Indian time zone -->
| time_zone1 = [[Indian Standard Time|IST]]
| utc_offset1 = +05:30
<!-- iso and registration -->
| iso_code = {{#if:{{{iso_code|}}}|[[ISO 3166-2:IN|{{{iso_code}}}]]}}
| registration_plate_type = [[List of Regional Transport Office districts in India|Vehicle registration]]
| registration_plate = {{{registration_plate|}}}
<!-- HDI, Literacy rate and sex ratio -->
| custom_label_sec1 = [[Human Development Index|HDI]] {{#if:{{{HDI_year|}}}|{{nobold|({{{HDI_year|}}})}}}}
| custom_data_sec1 = {{#if:{{{HDI|}}}|{{{HDI|}}}}} {{#if:{{{HDI_rank|}}}|([[List of Indian states and union territories by Human Development Index|{{{HDI_rank|}}}]])}}
| custom_label1_sec1 = [[Literacy]] {{#if:{{{literacy_year|}}}|{{nobold|({{{literacy_year|}}})}}}}
| custom_data1_sec1 = {{#if:{{{literacy|}}}|{{{literacy|}}}}} {{#if:{{{literacy_rank|}}}|([[List of Indian states and union territories by literacy rate|{{{literacy_rank|}}}]])}}
| custom_label2_sec1 = [[Sex ratio]] {{#if:{{{sexratio_year|}}}|{{nobold|({{{sexratio_year|}}})}}}}
| custom_data2_sec1 = {{#if:{{{sex_ratio|}}}|{{{sex_ratio|}}}}} {{#if:{{{sexratio_rank|}}}|([[List of states and union territories of India by sex ratio|{{{sexratio_rank|}}}]])}}
<!-- website, footnotes -->
| website = {{#if:{{{website|}}}|{{URL|1={{{website|}}}}}}}
<!-- module contains parameters of Infobox place symbols -->
| module ={{#switch:{{{former}}}<!--
-->| yes = {{#invoke:infobox|infoboxTemplate|child = yes
| data1 = {{#if:{{{p1}}}{{{s1}}}
|{{Infobox country/formernext|flag_p1 = {{{flag_p1|}}} |image_p1 = {{{image_p1|}}} |p1 = {{{p1|}}} |flag_p2 ={{{flag_p2|}}} |image_p2 = {{{image_p2|}}} |p2 = {{{p2|}}} |flag_p3={{{flag_p3|}}} |image_p3 = {{{image_p3|}}} |p3 = {{{p3|}}} |flag_p4 = {{{flag_p4|}}} | image_p4= {{{image_p4|}}} | p4={{{p4|}}} |flag_p5 = {{{flag_p5|}}} |image_p5 = {{{image_p5|}}} |p5 = {{{p5|}}} ||flag_s1={{{flag_s1|}}} |image_s1 = {{{image_s1|}}} | s1 = {{{s1|}}}|flag_s2 = {{{flag_s2|}}} |image_s2 = {{{image_s2|}}} |s2 = {{{s2|}}} |flag_s3 = {{{flag_s3|}}} |image_s3 = {{{image_s3|}}} |s3 = {{{s3|}}} |flag_s4 = {{{flag_s4|}}} |image_s4={{{image_s4|}}} |s4 = {{{s4|}}} |flag_s5 = {{{flag_s5|}}} |image_s5 = {{{image_s5|}}} |s5 = {{{s5|}}}}} }} }}
<!-- Symbols of the state or territory -->
| #default = {{#if:{{{song|}}}{{{foundation_day|}}}{{{mammal|}}}{{{bird|}}}{{{fish|}}}{{{butterfly|}}}{{{flower|}}}{{{tree|}}}{{{fruit|}}}|{{Infobox place symbols
| embedded = yes
| region = {{{name|}}}
| country = India
| song = {{{anthem|}}}
| foundation_day = {{#if:{{{foundation_day|}}}|[[{{{foundation_day|}}}]]}}
| mammal = {{{mammal|}}}
| bird = {{{bird|}}}
| fish = {{{fish|}}}
| butterfly = {{{butterfly|}}}
| flower = {{{flower|}}}
| tree = {{{tree|}}}
| fruit = {{{fruit|}}} }} }}
{{#if:{{{image_highway|}}}{{{image_size_highway|}}}{{{sh_numbers|}}}|{{#invoke:infobox|infoboxTemplate|child = yes
| rowclass1 = mergedtoprow
| data1 = <b>State highway mark</b>
| rowclass2 = mergedrow
| data2 ={{#invoke:InfoboxImage|InfoboxImage | image={{{image_highway|}}} | size={{{image_size_highway|}}} | sizedefault=90px }}
| rowclass3 = mergedrow
| data3 = State highway of {{{name|}}} <br/> {{{sh_numbers|}}}
}}}} }}
{{#if:{{{song|}}}{{{language|}}}{{{foundation_day|}}}{{{mammal|}}}{{{bird|}}}{{{fish|}}}{{{butterfly|}}}{{{flower|}}}{{{tree|}}}{{{fruit|}}}{{{image_highway|}}}|{{#invoke:infobox|infoboxTemplate|child = yes |rowclass1 = mergedtoprow | data1 = {{#switch:{{{type}}}| State = [[List of Indian state symbols]] | Union Territory = [[List of Indian state symbols#Union territories|List of union territory symbols]] | #default = [[List of Indian state symbols|List of Indian state and union territory symbols]]}} }}}}
<!-- Footnotes -->
| footnotes = {{{footnotes|}}}
}}<!--
-->{{#invoke:Check for unknown parameters|check|unknown={{main other|[[Category:Pages using infobox Indian state or territory with unknown parameters|_VALUE_{{PAGENAME}}]]}}|preview=Page using [[Template:Infobox Indian state or territory]] with unknown parameter "_VALUE_"|ignoreblank=y|
|name |official_name |former |image_skyline |imagesize |image_alt |image_caption |type |image_seal |seal_size |seal_type |etymology |nickname |motto |anthem |image_map |mapsize |map_caption |map_alt |coordinates |region |before_was |today |formation_date |formation_date1 |formation_date2 |formation_date3 |formation_date4 | consolidation | dissolution |capital |winter_capital |largestcity |metro |districts
|government_footnotes |government_type |governor |chief_minister |party |lt_governor |administrator |deputy_cm |chief_secretary |judiciary |legislature_type |council |council_seats |assembly |assembly_seats |rajya_sabha_seats |lok_sabha_seats |MPs |area_footnotes |area_rank |area_total_sq_mi |area_total_km2 | length_km |length_mi | width_km |width_mi |elevation_max_m |elevation_max_ft |elevation_max_point |elevation_min_m |elevation_min_ft |elevation_min_point |elevation_footnotes |elevation_m |elevation_ft |population_footnotes |population_total |population_rank |population_as_of |population_density |ethnicity |population_density_rank |population_urban |population_rural |population_demonym |official_langs |additional_official |official_script |GDP_footnotes |GDP_rank |GDP_year |GDP_total |GDP_per_capita |GDP_per_capita_rank |iso_code |registration_plate |HDI |HDI_year |literacy |literacy_year |literacy_rank |HDI_rank |sex_ratio |sexratio_year |sexratio_rank |website |footnotes |song
| cmfirst_year | cm_first | cmlast_year | cm_last | govfirst_year | gov_first | govlast_year | gov_last
|foundation_day |language |mammal |bird |butterfly |fish |flower |tree |fruit |image_highway |image_size_highway |sh_numbers |year_start |year_end |flag_p1 |image_p1 |p1 |flag_p2 |image_p2 |p2 |flag_p3 |image_p3 |p3 |flag_p4 |image_p4 |p4 |flag_p5 |image_p5 |p5 |flag_s1 |image_s1 |s1 |border_s1 |flag_s2 |image_s2 |s2 |flag_s3 |image_s3 |s3 |flag_s4 |image_s4 |s4 |flag_s5 |image_s5 |s5 }}<!--
--><noinclude>{{documentation}}</noinclude>
lw1zra5np4192mvy5qgi7sjofdubyk8
1378282
1378239
2026-08-03T07:20:18Z
A826
72368
1378282
wikitext
text/x-wiki
{{Infobox settlement
| name = {{{name|}}}
| type = {{#if:{{{type|}}}|[[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|{{{type}}}]]|[[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ]]}}{{#ifeq:{{{former}}}|yes|{{#if:{{{year_start|}}}|<div style="padding:3px">{{#if:{{{year_start|}}}|{{{year_start}}}–{{{year_end}}}}} </div>}}}}
| image = {{{image_skyline|}}}
| image_size = {{{imagesize|270}}}
| alt = {{{image_alt|{{{name|}}} ರ ಚಿತ್ರಗಳ ಸಂಗ್ರಹ}}}
| caption = {{{image_caption|}}}
<!-- ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಲಾಂಛನ -->
| image_seal = {{{image_seal|}}}
| seal_size = {{{seal_size|125}}}
| seal_alt = {{{name|}}} ರ ಅಧಿಕೃತ ಲಾಂಛನ
| seal_type = {{#if:{{{image_seal|}}}|[[{{{name|}}} ರ ಲಾಂಛನ]]|[[ಭಾರತೀಯ ರಾಜ್ಯ ಲಾಂಛನಗಳ ಪಟ್ಟಿ|{{{name|}}} ರ ಲಾಂಛನ]]}}
| etymology = {{{etymology|}}}
| nickname = {{{nickname|}}}
| motto_link = ಭಾರತೀಯ ರಾಜ್ಯ ಧ್ಯೇಯವಾಕ್ಯಗಳ ಪಟ್ಟಿ
| motto = {{{motto|}}}
| mottoes = <!-- ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ಒಂದಕ್ಕಿಂತ ಹೆಚ್ಚು ಧ್ಯೇಯವಾಕ್ಯಗಳನ್ನು ಹೊಂದಿದ್ದರೆ -->
| anthem_link = ಭಾರತೀಯ ರಾಜ್ಯ ಗೀತೆಗಳ ಪಟ್ಟಿ
| anthem = {{{anthem|}}}
<!-- ನಕ್ಷೆ ಮಾಹಿತಿ -->
| image_map = {{{image_map|}}}
| map_size = 300 <!-- ಡೀಫಾಲ್ಟ್ ಗಾತ್ರ 300 -->
| map_alt = {{#if:{{{image_map|}}}| ಭಾರತದ ನಕ್ಷೆಯಲ್ಲಿ {{{name|}}} ರ ಸ್ಥಾನವನ್ನು ತೋರಿಸುತ್ತದೆ}}
| map_caption = {{#if:{{{image_map|}}}|ಭಾರತದಲ್ಲಿ {{{name|}}} ರ ಸ್ಥಾನ}}
| coordinates = {{{coordinates|}}}
| subdivision_type = ದೇಶ
| subdivision_name = ಭಾರತ
| subdivision_type1 = [[ಭಾರತದ ಆಡಳಿತ ವಿಭಾಗಗಳು|ಪ್ರದೇಶ]]
| subdivision_name1 = {{#if:{{{region|}}}|[[{{{region|}}}]]}}
<!-- ರಚನೆ ಮತ್ತು ಸೇರ್ಪಡೆ -->
| established_title1 = <div style="height:0px"></div>
| established_date1 = <!--
-->{{#invoke:infobox|infoboxTemplate|child = yes <!--
-->| label1 = ಹಿಂದೆ ಇದ್ದದ್ದು
| data1 = {{#if:{{{before_was|}}}[[{{{before_was|}}}]]|{{{before_was|}}}}}
| rowclass2 = {{If empty |{{{before_was|}}} |mergedtoprow}} {{#if:{{{before_was|}}}|mergedrow}}
| label2 = {{#ifeq:{{{former}}}|yes|ರಚನೆ}}
| data2 = {{#ifeq:{{{former}}}|yes|{{{formation_date4|}}}}}
| rowclass3 = {{If empty |{{{before_was|}}} |mergedtoprow}} {{#if:{{{before_was|}}}|mergedrow}}
| label3 = ಒಕ್ಕೂಟಕ್ಕೆ ಸೇರ್ಪಡೆ
| data3 = {{{formation_date|}}}
| rowclass4 = {{If empty |{{{before_was|}}} |mergedtoprow}} {{#if:{{{before_was|}}}{{{formation_date|}}}|mergedrow}}
| label4 = ಕೇಂದ್ರಾಡಳಿತ ಪ್ರದೇಶವಾಗಿ
| data4 = {{{formation_date1|}}}
| rowclass5 = mergedrow
| label5 = ರಾಜ್ಯವಾಗಿ
| data5 = {{#ifeq:{{{formation_date2|}}}|formation1||{{{formation_date2|}}}}}
| rowclass6 = mergedrow
| label6 = ವಿಭಜನೆ
| data6 = {{#ifeq:{{{formation_date3|}}}|formation||{{{formation_date3|}}}}}
| rowclass7 = mergedrow
| label7 = ಏಕೀಕರಣ
| data7 = {{{consolidation|}}}
| rowclass8 = {{If empty |{{{before_was|}}} |mergedtoprow}} {{#if:{{{before_was|}}}{{{formation_date|}}}{{{formation_date1|}}}{{{formation_date2|}}}{{{formation_date3|}}}|mergedrow}} {{#ifeq:{{{former}}}|yes|mergedrow}}
| label8 = {{#switch:{{{former}}} | yes = ವಿಸರ್ಜನೆ | #default = {{#if:{{{formation_date2|}}}{{{formation_date3|}}}|{{#ifeq:{{{formation_date3}}}|formation|[[ಭಾರತೀಯ ರಾಜ್ಯ ಸ್ಥಾಪನಾ ದಿನಗಳ ಪಟ್ಟಿ|ರಚನೆ]]<br/>{{nobold|([[ಭಾರತೀಯ ರಾಜ್ಯ ಸ್ಥಾಪನಾ ದಿನಗಳ ಪಟ್ಟಿ|ವಿಭಜನೆಯ ಮೂಲಕ]])}}|[[ಭಾರತೀಯ ರಾಜ್ಯ ಸ್ಥಾಪನಾ ದಿನಗಳ ಪಟ್ಟಿ|ರಚನೆ]]}}|{{#ifeq:{{{formation_date2}}}|formation1|[[ಭಾರತೀಯ ರಾಜ್ಯ ಸ್ಥಾಪನಾ ದಿನಗಳ ಪಟ್ಟಿ|ರಚನೆ]]<br/>{{nobold|([[ಭಾರತೀಯ ರಾಜ್ಯ ಸ್ಥಾಪನಾ ದಿನಗಳ ಪಟ್ಟಿ|ರಾಜ್ಯವಾಗಿ]])}}|[[ಭಾರತೀಯ ರಾಜ್ಯ ಸ್ಥಾಪನಾ ದಿನಗಳ ಪಟ್ಟಿ|ರಚನೆ]]}} }} }}
| data8 = {{#switch:{{{former}}} | yes = {{{dissolution|}}}| #default = {{{formation_date4|}}} }} }}
<!-- ನಗರ ಮತ್ತು ಪ್ರದೇಶಗಳು -->
| seat_type = {{#ifeq:{{{largestcity|}}}|capital|[[ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ರಾಜಧಾನಿಗಳ ಪಟ್ಟಿ|ರಾಜಧಾನಿ]]<br/>{{nobold|[[ಭಾರತದ ನಗರಗಳ ಪಟ್ಟಿ (ಜನಸಂಖ್ಯೆಯ ಪ್ರಕಾರ)|ಮತ್ತು ದೊಡ್ಡ ನಗರ]]}}|[[ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ರಾಜಧಾನಿಗಳ ಪಟ್ಟಿ|ರಾಜಧಾನಿ]]}}
| seat = {{#if:{{{capital|}}}|[[{{{capital|}}}]]|{{{capital|}}}}}{{#if:{{{winter_capital|}}}| <br/> [[{{{winter_capital|}}}]] (ಚಳಿಗಾಲ)}}
| seat1_type = [[ಭಾರತದ ನಗರಗಳ ಪಟ್ಟಿ (ಜನಸಂಖ್ಯೆಯ ಪ್ರಕಾರ)|ದೊಡ್ಡ ನಗರ]]
| seat1 = {{#if:{{{largestcity|}}}|{{#ifeq:{{{largestcity|}}}|capital||[[{{{largestcity|}}}]]}}}}
| seat2_type = [[ಭಾರತದ ಮಹಾನಗರ ಪ್ರದೇಶಗಳ ಪಟ್ಟಿ|ದೊಡ್ಡ ಮಹಾನಗರ]]
| seat2 = {{#if:{{{metro|}}}|[[{{{metro|}}}]]}}
| parts_type = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆಗಳು]]
| parts_style = <!-- list, coll (collapsed list), para (paragraph format) -->
| parts = {{{districts|}}}
<!-- ಸರ್ಕಾರ ಮತ್ತು ನಾಯಕರು -->
| government_footnotes = {{{government_footnotes|}}}
| government_type = {{#ifexist:{{{government_type|}}}|[[{{{government_type|}}}]]|{{{government_type|}}}}}
| governing_body = {{#if:{{{governor|}}}{{{chief_minister|}}}{{{party|}}}{{{lt_governor|}}}{{{administrator|}}}{{{chief_secretary|}}}{{{judiciary|}}}|{{#ifeq:{{{name|}}}|Punjab|[[ಪಂಜಾಬ್ ಸರ್ಕಾರ, ಭಾರತ|ಪಂಜಾಬ್ ಸರ್ಕಾರ]]|[[{{{name|}}} ಸರ್ಕಾರ]]}}}}
| leader_title = {{#switch:{{{former}}}
| yes = {{#if:{{{govfirst_year|}}}|ರಾಜ್ಯಪಾಲರು}}
| #default = [[{{#ifeq:{{{name}}}|Punjab|ಭಾರತದ ಪಂಜಾಬ್ ರಾಜ್ಯಪಾಲರ ಪಟ್ಟಿ|{{{name}}} ರ ರಾಜ್ಯಪಾಲರ ಪಟ್ಟಿ}}|ರಾಜ್ಯಪಾಲರು]] }}
| leader_name = {{#switch:{{{former}}}
| yes = {{#invoke:infobox|infoboxTemplate|child = yes
| rowclass1 = mergedrow
| data1 = {{#if:{{{govfirst_year|}}}|{{Infobox country/multirow|{{{govfirst_year|}}} |{{{gov_first|}}} |{{{govlast_year|}}} |{{{gov_last|}}} }} }} }}
| #default = {{#if:{{{governor|}}}|{{{governor|}}}}} }}
| leader_title1 = [[ಪ್ರಸ್ತುತ ಭಾರತೀಯ ಉಪರಾಜ್ಯಪಾಲರು ಮತ್ತು ಪ್ರಶಾಸಕರ ಪಟ್ಟಿ#ಪ್ರಸ್ತುತ ಭಾರತೀಯ ಉಪರಾಜ್ಯಪಾಲರು|ಉಪರಾಜ್ಯಪಾಲರು]]
| leader_name1 = {{#if:{{{lt_governor|}}}|{{{lt_governor|}}}}}
| leader_title2 = {{if|eq|{{{name}}}|Punjab|[[ಪಂಜಾಬ್ ಮುಖ್ಯಮಂತ್ರಿ (ಭಾರತ)|ಮುಖ್ಯಮಂತ್ರಿ]]
| {{#switch:{{{former}}}
| yes = {{#if:{{{cmfirst_year|}}}|ಮುಖ್ಯಮಂತ್ರಿ}}
| #default = [[{{{name}}} ರ ಮುಖ್ಯಮಂತ್ರಿ|ಮುಖ್ಯಮಂತ್ರಿ]] }}
}}
| leader_name2 = {{#switch:{{{former}}}
| yes = {{#invoke:infobox|infoboxTemplate|child = yes
| rowclass3 = mergedrow
| data3 = {{#if:{{{cmfirst_year|}}} | {{Infobox country/multirow|{{{cmfirst_year|}}} |{{{cm_first|}}} |{{{cmlast_year|}}} |{{{cm_last|}}} }} }} }}
| #default = {{#if:{{{chief_minister|}}}{{{CM|}}}|{{{CM|{{{chief_minister|}}}}}}}} {{#if:{{{party|}}}|({{{party|}}})}} }}
| leader_title3 = {{#switch:{{{type}}}
| State = {{#if:{{{deputy_cm|}}}|[[{{{name|}}} ರ ಉಪ ಮುಖ್ಯಮಂತ್ರಿಗಳ ಪಟ್ಟಿ|ಉಪ ಮುಖ್ಯಮಂತ್ರಿ]]}}
| Union Territory = {{#if:{{{administrator|}}}|[[ಪ್ರಸ್ತುತ ಭಾರತೀಯ ಉಪರಾಜ್ಯಪಾಲರು ಮತ್ತು ಪ್ರಶಾಸಕರ ಪಟ್ಟಿ#ಪ್ರಸ್ತುತ ಭಾರತೀಯ ಪ್ರಶಾಸಕರು|ಪ್ರಶಾಸಕ]]}}
| #default = {{#if:{{{deputy_cm|}}}|[[{{{name|}}} ರ ಉಪ ಮುಖ್ಯಮಂತ್ರಿಗಳ ಪಟ್ಟಿ|ಉಪ ಮುಖ್ಯಮಂತ್ರಿ]]}} }}
| leader_name3 = {{#switch:{{{type}}}
| State = {{#if:{{{deputy_cm|}}}|{{{deputy_cm|}}}}}
| Union Territory = {{#if:{{{administrator|}}}|{{{administrator|}}}}}
| #default = {{#if:{{{deputy_cm|}}}|{{{deputy_cm|}}}}} }}
| leader_title4 = [[ಮುಖ್ಯ ಕಾರ್ಯದರ್ಶಿ (ಭಾರತ)|ಮುಖ್ಯ ಕಾರ್ಯದರ್ಶಿ]]
| leader_name4 = {{#if:{{{chief_secretary|}}}|{{{chief_secretary|}}}}}
<!-- ಆಡಳಿತ ಸಂಸ್ಥೆಗಳು ಮತ್ತು ಸ್ಥಾನಗಳು -->
| government_blank1_title =
| government_blank1 = {{#if:{{{council|}}}{{{council_seats|}}}{{{assembly|}}}{{{assembly_seats|}}}{{{rajya_sabha_seats|}}}{{{lok_sabha_seats|}}}|{{#invoke:infobox|infoboxTemplate|child = yes
| rowclass1 = mergedtoprow
| label1 = {{#switch:{{{type}}}
| Union Territory = {{#if:{{{council|}}}{{{council_seats|}}}{{{assembly|}}}{{{assembly_seats|}}}|[[ಶಾಸನ ಸಭೆ]]}}
| State = {{#if:{{{council|}}}{{{council_seats|}}}{{{assembly|}}}{{{assembly_seats|}}}|[[ರಾಜ್ಯ ಶಾಸನ ಸಭೆ]]}}
| #default = {{#if:{{{council|}}}{{{council_seats|}}}{{{assembly|}}}{{{assembly_seats|}}}|ಶಾಸನ ಸಭೆ}} }}
| data1 = <b>{{{legislature_type|}}}</b>
| rowclass2 = mergedrow
| label2 = • [[ಭಾರತದ ರಾಜ್ಯ ಶಾಸನ ಮಂಡಳಿಗಳು|ಮಂಡಳಿ]]
| data2 = {{{council|}}} {{#if:{{{council_seats|}}}|([[{{{name|}}} ಶಾಸನ ಮಂಡಳಿ|{{{council_seats|}}}]])}}
| rowclass3 = mergedrow
| label3 = • [[ಭಾರತದ ರಾಜ್ಯ ಶಾಸನ ಸಭೆಗಳು|ವಿಧಾನ ಸಭೆ]]
| data3 = {{{assembly|}}} {{#if:{{{assembly_seats|}}}|([[{{{name|}}} ವಿಧಾನ ಸಭೆಯ ಕ್ಷೇತ್ರಗಳ ಪಟ್ಟಿ|{{{assembly_seats|}}}]])}}
| rowclass4 = mergedrow
| label4 = ರಾಷ್ಟ್ರೀಯ ಸಂಸತ್ತು
| data4 = {{#if:{{{rajya_sabha_seats|}}}{{{lok_sabha_seats|}}}|<b>[[ಭಾರತದ ಸಂಸತ್ತು]]</b>}}
| rowclass5 = mergedrow
| label5 = • [[ರಾಜ್ಯ ಸಭಾ|ರಾಜ್ಯ ಸಭಾ]]
| data5 = {{#if:{{{rajya_sabha_seats|}}}|[[ರಾಜ್ಯ ಸಭೆಯ ಪ್ರಸ್ತುತ ಸದಸ್ಯರ ಪಟ್ಟಿ#{{{name|}}}|{{{rajya_sabha_seats|}}}]]}}
| rowclass6 = mergedrow
| label6 = • [[ಲೋಕ ಸಭಾ|ಲೋಕ ಸಭಾ]]
| data6 = {{#if:{{{lok_sabha_seats|}}}|[[18ನೇ ಲೋಕ ಸಭೆಯ ಸದಸ್ಯರ ಪಟ್ಟಿ#{{{name|}}}|{{{lok_sabha_seats|}}}]]}}
| rowclass7 = mergedrow
| label7 = [[ಭಾರತದ ಉಚ್ಚ ನ್ಯಾಯಾಲಯಗಳು|ಉಚ್ಚ ನ್ಯಾಯಾಲಯ]]
| data7 = {{#if:{{{judiciary|}}}|{{{judiciary|}}}}}
}} }}
<!-- ಪ್ರದೇಶ ಮತ್ತು ಎತ್ತರ -->
| area_footnotes = {{{area_footnotes|}}}
| area_total_km2 = {{{area_total_km2|}}}
| area_total_sq_mi = {{{area_total_sq_mi|}}}
| area_rank = {{#if:{{{area_rank|}}}|[[ಪ್ರದೇಶದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|{{{area_rank|}}}]]}}
| length_km = {{{length_km|}}}
| length_mi = {{{length_mi|}}}
| width_km = {{{width_km|}}}
| width_mi = {{{width_mi|}}}
| elevation_footnotes = {{{elevation_footnotes|}}}
| elevation_m = {{{elevation_m|}}}
| elevation_ft = {{{elevation_ft|}}}
| elevation_max_m = {{{elevation_max_m|}}}
| elevation_max_ft = {{{elevation_max_ft|}}}
| elevation_max_point = {{{elevation_max_point|}}}
| elevation_min_m = {{{elevation_min_m|}}}
| elevation_min_ft = {{{elevation_min_ft|}}}
| elevation_min_point = {{{elevation_min_point|}}}
<!-- ಜನಸಂಖ್ಯೆ -->
| population_footnotes = {{{population_footnotes|}}}
| population_total = {{{population_total|}}}
| population_as_of = {{{population_as_of|}}}
| population_rank = {{#if:{{{population_rank|}}}|[[ಜನಸಂಖ್ಯೆಯ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|{{{population_rank|}}}]]}}
| population_density_km2 = {{{population_density|}}} {{#if:{{{population_density|}}}|{{{density_rank|}}}}}
| population_density_sq_mi =
| population_blank1_title = ನಗರ
| population_blank1 = {{#if:{{{population_urban|}}}|{{{population_urban|}}}}}
| population_blank2_title = ಗ್ರಾಮೀಣ
| population_blank2 = {{#if:{{{population_rural|}}}|{{{population_rural|}}}}}
| population_demonym = {{#if:{{{population_demonym|}}}|{{{population_demonym|}}}}}
| population_demonyms =
<!-- ಭಾಷೆಗಳು -->
| demographics_type1 = {{#if:{{{official_langs|}}}{{{additional_official|}}}{{{official_script|}}}{{{ethnicity|}}}|ಭಾಷೆ}}
| demographics1_title1 = [[ಭಾರತದಲ್ಲಿ ಅಧಿಕೃತ ಸ್ಥಾನಮಾನವುಳ್ಳ ಭಾಷೆಗಳು|ಅಧಿಕೃತ]] {{#if:{{{official_langs|}}}}}
| demographics1_info1 = {{{official_langs|}}}
| demographics1_title2 = [[ಭಾರತದಲ್ಲಿ ಅಧಿಕೃತ ಸ್ಥಾನಮಾನವುಳ್ಳ ಭಾಷೆಗಳು|ಹೆಚ್ಚುವರಿ ಅಧಿಕೃತ]] {{#if:{{{additional_official|}}}}}
| demographics1_info2 = {{{additional_official|}}}
| demographics1_title3 = [[ಭಾರತೀಯ ಗಣರಾಜ್ಯದ ಅಧಿಕೃತ ಲಿಪಿಗಳು|ಅಧಿಕೃತ ಲಿಪಿ]] {{#if:{{{official_script|}}}}}
| demographics1_info3 = {{{official_script|}}}
| demographics1_title4 = {{#if:{{{ethnicity|}}}|ಜನಾಂಗೀಯ ಗುಂಪುಗಳು}}
| demographics1_info4 = {{{ethnicity|}}}
<!-- GDP -->
| demographics_type2 = {{#if:{{{GDP_rank|}}}{{{GDP_total|}}}{{{GDP_per_capita|}}}|[[GDP]]}}
| demographics2_footnotes = {{{GDP_footnotes|}}}
| demographics2_title1 = ಒಟ್ಟು {{#if:{{{GDP_year}}}|{{nobold|({{{GDP_year}}})}}}}
| demographics2_info1 = {{#if:{{{GDP_total|}}}|{{{GDP_total|}}}}}
| demographics2_title2 = ಶ್ರೇಯಾಂಕ
| demographics2_info2 = {{#if:{{{GDP_rank|}}}|[[GDP ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|{{{GDP_rank|}}}]]}}
| demographics2_title3 = ತಲಾವಾರು
| demographics2_info3 = {{{GDP_per_capita|}}} {{#if:{{{GDP_per_capita_rank|}}}|([[ತಲಾವಾರು GDP ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|{{{GDP_per_capita_rank|}}}]])}}
<!-- ಭಾರತೀಯ ಸಮಯ ವಲಯ -->
| time_zone1 = [[ಭಾರತೀಯ ಪ್ರಮಾಣಿತ ಸಮಯ|IST]]
| utc_offset1 = +05:30
<!-- iso ಮತ್ತು ನೋಂದಣಿ -->
| iso_code = {{#if:{{{iso_code|}}}|[[ISO 3166-2:IN|{{{iso_code}}}]]}}
| registration_plate_type = [[ಭಾರತದ ಪ್ರಾದೇಶಿಕ ಸಾರಿಗೆ ಕಚೇರಿ ಜಿಲ್ಲೆಗಳ ಪಟ್ಟಿ|ವಾಹನ ನೋಂದಣಿ]]
| registration_plate = {{{registration_plate|}}}
<!-- HDI, ಸಾಕ್ಷರತಾ ಪ್ರಮಾಣ ಮತ್ತು ಲಿಂಗ ಅನುಪಾತ -->
| custom_label_sec1 = [[ಮಾನವ ಅಭಿವೃದ್ಧಿ ಸೂಚ್ಯಂಕ|HDI]] {{#if:{{{HDI_year|}}}|{{nobold|({{{HDI_year|}}})}}}}
| custom_data_sec1 = {{#if:{{{HDI|}}}|{{{HDI|}}}}} {{#if:{{{HDI_rank|}}}|([[ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|{{{HDI_rank|}}}]])}}
| custom_label1_sec1 = [[ಸಾಕ್ಷರತೆ]] {{#if:{{{literacy_year|}}}|{{nobold|({{{literacy_year|}}})}}}}
| custom_data1_sec1 = {{#if:{{{literacy|}}}|{{{literacy|}}}}} {{#if:{{{literacy_rank|}}}|([[ಸಾಕ್ಷರತಾ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|{{{literacy_rank|}}}]])}}
| custom_label2_sec1 = [[ಲಿಂಗ ಅನುಪಾತ]] {{#if:{{{sexratio_year|}}}|{{nobold|({{{sexratio_year|}}})}}}}
| custom_data2_sec1 = {{#if:{{{sex_ratio|}}}|{{{sex_ratio|}}}}} {{#if:{{{sexratio_rank|}}}|([[ಲಿಂಗ ಅನುಪಾತದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|{{{sexratio_rank|}}}]])}}
<!-- ವೆಬ್ಸೈಟ್, ಅಡಿಟಿಪ್ಪಣಿಗಳು -->
| website = {{#if:{{{website|}}}|{{URL|1={{{website|}}}}}}}
<!-- ಮಾಡ್ಯೂಲ್ Infobox ಸ್ಥಳ ಚಿಹ್ನೆಗಳ ನಿಯತಾಂಕಗಳನ್ನು ಒಳಗೊಂಡಿದೆ -->
| module ={{#switch:{{{former}}}<!--
-->| yes = {{#invoke:infobox|infoboxTemplate|child = yes
| data1 = {{#if:{{{p1}}}{{{s1}}}
|{{Infobox country/formernext|flag_p1 = {{{flag_p1|}}} |image_p1 = {{{image_p1|}}} |p1 = {{{p1|}}} |flag_p2 ={{{flag_p2|}}} |image_p2 = {{{image_p2|}}} |p2 = {{{p2|}}} |flag_p3={{{flag_p3|}}} |image_p3 = {{{image_p3|}}} |p3 = {{{p3|}}} |flag_p4 = {{{flag_p4|}}} | image_p4= {{{image_p4|}}} | p4={{{p4|}}} |flag_p5 = {{{flag_p5|}}} |image_p5 = {{{image_p5|}}} |p5 = {{{p5|}}} ||flag_s1={{{flag_s1|}}} |image_s1 = {{{image_s1|}}} | s1 = {{{s1|}}}|flag_s2 = {{{flag_s2|}}} |image_s2 = {{{image_s2|}}} |s2 = {{{s2|}}} |flag_s3 = {{{flag_s3|}}} |image_s3 = {{{image_s3|}}} |s3 = {{{s3|}}} |flag_s4 = {{{flag_s4|}}} |image_s4={{{image_s4|}}} |s4 = {{{s4|}}} |flag_s5 = {{{flag_s5|}}} |image_s5 = {{{image_s5|}}} |s5 = {{{s5|}}}}} }} }}
<!-- ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಚಿಹ್ನೆಗಳು -->
| #default = {{#if:{{{song|}}}{{{foundation_day|}}}{{{mammal|}}}{{{bird|}}}{{{fish|}}}{{{butterfly|}}}{{{flower|}}}{{{tree|}}}{{{fruit|}}}|{{Infobox place symbols
| embedded = yes
| region = {{{name|}}}
| country = India
| song = {{{anthem|}}}
| foundation_day = {{#if:{{{foundation_day|}}}|[[{{{foundation_day|}}}]]}}
| mammal = {{{mammal|}}}
| bird = {{{bird|}}}
| fish = {{{fish|}}}
| butterfly = {{{butterfly|}}}
| flower = {{{flower|}}}
| tree = {{{tree|}}}
| fruit = {{{fruit|}}} }} }}
{{#if:{{{image_highway|}}}{{{image_size_highway|}}}{{{sh_numbers|}}}|{{#invoke:infobox|infoboxTemplate|child = yes
| rowclass1 = mergedtoprow
| data1 = <b>ರಾಜ್ಯ ಹೆದ್ದಾರಿ ಗುರುತು</b>
| rowclass2 = mergedrow
| data2 ={{#invoke:InfoboxImage|InfoboxImage | image={{{image_highway|}}} | size={{{image_size_highway|}}} | sizedefault=90px }}
| rowclass3 = mergedrow
| data3 = {{{name|}}} ರ ರಾಜ್ಯ ಹೆದ್ದಾರಿ <br/> {{{sh_numbers|}}}
}}}} }}
{{#if:{{{song|}}}{{{language|}}}{{{foundation_day|}}}{{{mammal|}}}{{{bird|}}}{{{fish|}}}{{{butterfly|}}}{{{flower|}}}{{{tree|}}}{{{fruit|}}}{{{image_highway|}}}|{{#invoke:infobox|infoboxTemplate|child = yes |rowclass1 = mergedtoprow | data1 = {{#switch:{{{type}}}| State = [[ಭಾರತೀಯ ರಾಜ್ಯ ಚಿಹ್ನೆಗಳ ಪಟ್ಟಿ]] | Union Territory = [[ಭಾರತೀಯ ರಾಜ್ಯ ಚಿಹ್ನೆಗಳ ಪಟ್ಟಿ#ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶದ ಚಿಹ್ನೆಗಳ ಪಟ್ಟಿ]] | #default = [[ಭಾರತೀಯ ರಾಜ್ಯ ಚಿಹ್ನೆಗಳ ಪಟ್ಟಿ|ಭಾರತೀಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಚಿಹ್ನೆಗಳ ಪಟ್ಟಿ]]}} }}}}
<!-- ಅಡಿಟಿಪ್ಪಣಿಗಳು -->
| footnotes = {{{footnotes|}}}
}}<!--
-->{{#invoke:Check for unknown parameters|check|unknown={{main other|[[Category:Pages using infobox Indian state or territory with unknown parameters|_VALUE_{{PAGENAME}}]]}}|preview=Page using [[Template:Infobox Indian state or territory]] with unknown parameter "_VALUE_"|ignoreblank=y|
|name |official_name |former |image_skyline |imagesize |image_alt |image_caption |type |image_seal |seal_size |seal_type |etymology |nickname |motto |anthem |image_map |mapsize |map_caption |map_alt |coordinates |region |before_was |today |formation_date |formation_date1 |formation_date2 |formation_date3 |formation_date4 | consolidation | dissolution |capital |winter_capital |largestcity |metro |districts
|government_footnotes |government_type |governor |chief_minister |party |lt_governor |administrator |deputy_cm |chief_secretary |judiciary |legislature_type |council |council_seats |assembly |assembly_seats |rajya_sabha_seats |lok_sabha_seats |MPs |area_footnotes |area_rank |area_total_sq_mi |area_total_km2 | length_km |length_mi | width_km |width_mi |elevation_max_m |elevation_max_ft |elevation_max_point |elevation_min_m |elevation_min_ft |elevation_min_point |elevation_footnotes |elevation_m |elevation_ft |population_footnotes |population_total |population_rank |population_as_of |population_density |ethnicity |population_density_rank |population_urban |population_rural |population_demonym |official_langs |additional_official |official_script |GDP_footnotes |GDP_rank |GDP_year |GDP_total |GDP_per_capita |GDP_per_capita_rank |iso_code |registration_plate |HDI |HDI_year |literacy |literacy_year |literacy_rank |HDI_rank |sex_ratio |sexratio_year |sexratio_rank |website |footnotes |song
| cmfirst_year | cm_first | cmlast_year | cm_last | govfirst_year | gov_first | govlast_year | gov_last
|foundation_day |language |mammal |bird |butterfly |fish |flower |tree |fruit |image_highway |image_size_highway |sh_numbers |year_start |year_end |flag_p1 |image_p1 |p1 |flag_p2 |image_p2 |p2 |flag_p3 |image_p3 |p3 |flag_p4 |image_p4 |p4 |flag_p5 |image_p5 |p5 |flag_s1 |image_s1 |s1 |border_s1 |flag_s2 |image_s2 |s2 |flag_s3 |image_s3 |s3 |flag_s4 |image_s4 |s4 |flag_s5 |image_s5 |s5 }}<!--
--><noinclude>{{documentation}}</noinclude>
74njh1z2vak91so2quj0bwd4gk4s1ho
ಟೆಂಪ್ಲೇಟು:Infobox Indian state or territory/doc
10
150468
1378276
1171755
2026-06-17T19:51:08Z
en>Zackmann08
0
/* Template data */
1378276
wikitext
text/x-wiki
{{Documentation subpage}}
{{uses infobox settlement}}
{{Lua|Module:Infobox|Module:InfoboxImage|Module:Check for unknown parameters|Module:Settlement short description}}
The {{tl|Infobox Indian state or territory}} is used to display information about a state or union territory in india (present or former) in a standardized format. It is designed to provide a quick overview of key facts and figures related to the state or territory. For the guidelines and additional informations about using perametares see, [[Wikipedia:Wikiproject Indian cities#Basic India conventions|Basic India Conventions]].
Enter {{para|largest_city|capital}}, if the capital and the largest city are the same. If the state or territory has a winter capital then the largest city should be mentioned, even if it is the same as the capital one.
If the state or territory was formed with/by a bifurcation, then mention Bifurcation:{{para|formation_date3|formation}} . Similarly, if the state or territory was formed as a state, then mention As State:{{para|formation_date2|formation1}}.
Values that might be necessitate manually linking ( [[Interwiki link|InterWiki]] ) are: any person's name, District, Council and Assembly, High court and Languages.
{{Generic template demo
| name |official_name |image_skyline |imagesize |image_alt |image_caption |type |image_seal |seal_size |seal_type |etymology |nickname |motto |anthem |image_map |mapsize |map_caption |coordinates |region |before_was |formation_date |formation_date1 |formation_date2 |formation_date3 |formation_date4 |capital |winter_capital |largestcity |metro |districts |government_footnotes |government_type |governor |chief_minister |party |deputy_cm |lt_governor |administrator |chief_secretary |judiciary |legislature_type |council |council_seats |assembly |assembly_seats |rajya_sabha_seats |lok_sabha_seats |area_rank |area_total_sq_mi |area_total_km2 |length_km |length_mi | width_km |width_mi |elevation_m |elevation_ft |population_total |population_rank |population_as_of |population_density |population_urban |population_rural |population_demonym |official_langs |additional_official |official_script |GDP_rank |GDP_year |GDP_total |GDP_per_capita |GDP_per_capita_rank |iso_code |registration_plate |HDI |HDI_year |literacy |literacy_year |literacy_rank |HDI_rank |sex_ratio |sexratio_year |sexratio_rank |website |footnotes |song |foundation_day |language |mammal |bird |butterfly |fish |flower |tree |fruit |image_highway |image_size_highway |sh_numbers
| }}
==Usage==
=== Complete empty syntax ===
<syntaxhighlight lang="wikitext" style="overflow:auto">
{{Infobox Indian state or territory
| name =
| official_name =
| image_skyline =
| imagesize =
| image_alt =
| image_caption =
| image_seal =
| etymology =
| nickname =
| motto =
| anthem =
| image_map =
| mapsize =
| map_caption =
| coordinates =
| region =
| before_was =
| formation_date =
| formation_date1 =
| formation_date2 =
| formation_date3 =
| formation_date4 =
| capital =
| winter_capital =
| largestcity =
| metro =
| districts =
| government_footnotes =
| government_type =
| governor =
| chief_minister =
| party =
| lt_governor =
| administrator =
| chief_secretary =
| judiciary =
| legislature_type =
| council =
| council_seats =
| assembly =
| assembly_seats =
| rajya_sabha_seats =
| lok_sabha_seats =
| area_rank =
| area_total_sq_mi =
| area_total_km2 =
| length_km =
| width_km =
| elevation_max_m =
| elevation_max_point =
| elevation_min_m =
| elevation_min_point =
| elevation_footnotes =
| elevation_m =
| population_total =
| population_rank =
| population_as_of =
| population_density =
| population_density_rank =
| population_urban =
| population_rural =
| population_demonym =
| official_langs =
| Regional_Langs =
| National_Langs =
| official_script =
| GDP_total =
| GDP_rank =
| GDP_year =
| GDP_per_capita =
| GDP_per_capita_rank =
| iso_code =
| registration_plate =
| HDI =
| HDI_rank =
| HDI_year =
| literacy =
| literacy_year =
| literacy_rank =
| sex_ratio =
| sexratio_year =
| sexratio_rank =
| website =
| footnotes =
}}
</syntaxhighlight>
{{clear}}
=== Syntax for Former territory ===
These parameters are used to display key information about a geographic area or region that was once a separate political entity within India but is now a part of present-day state/union territory or formed as a new state/territory.
Specify {{para|former|yes}}, to use/ activate these parameters. Note: all the other parameters can also be used (if needed). See the comments on the syntax to understand which parameters are what for.{{para|country|India}} and the time zone are defaults.
<syntaxhighlight lang="wikitext" style="overflow:auto">
{{Infobox Indian state or territory
| name =
| former = yes
| govfirst_year = <!-- administration period of the first governor of the state or territory -->
| gov_first = <!-- name of the first governor of the state or territory -->
| govlast_year = <!-- administration period of the last governor of the state or territory -->
| gov_last = <!-- name of the last governor of the state or territory -->
| cmfirst_year = <!-- administration period of the first chief minister of the state or territory -->
| cm_first = <!-- name of the first chief minister -->
| cmlast_year = <!-- administration period of the last chief minister of the state or territory -->
| cm_last = <!-- name of the last chief minister -->
| year_start = <!-- the year in which the territory was established as a separate entity -->
| formation_date4 = <!-- formation date of the state or territory -->
| consolidation = <!-- date when the states or territories were merged with each other or into another state -->
| formation_date3 = <!-- date when the state or territory was bifurcated -->
| dissolution = <!-- date when the state or territory was disestablished -->
| year_end = <!-- the year in which the state or territory was dissolved or merged with another entity -->
}}
</syntaxhighlight>
==Microformat==
{{UF-hcard-geo}}
==Template data==
{{TemplateData header}}
{{collapse top|title=TemplateData}}
<templatedata>
{
"params": {
"name": {
"label": "Name",
"required": true,
"description": "The common name of the state or union territory",
"type": "content"
},
"official_name": {
"description": "Official name of the state or union territory, if any.",
"label": "Official Name",
"type": "content"
},
"image_skyline": {
"label": "Image",
"description": "It can be any image for identification of the landmarks or landscapes or cultural heritage of the place that the editor(s) wish.",
"type": "content"
},
"imagesize": {
"label": "Imagesize",
"description": "Size of the image if added",
"type": "number"
},
"image_alt": {
"label": "Image alt",
"description": "It can be alternative to the image.",
"type": "string"
},
"image_caption": {
"label": "Caption",
"description": "Description of the image(s) if added.",
"type": "string"
},
"type": {
"example": "State or Union Territory",
"required": true,
"label": "Settlement Type",
"description": "The type of settlement, which should be \"State\" or \"Union Territory\".",
"type": "content"
},
"nickname": {
"label": "Nickname",
"type": "content",
"description": "Popular nickname of the state or union territory."
},
"motto": {
"label": "Motto",
"description": "The state or Union territory's motto.",
"type": "content"
},
"anthem": {
"label": "Song",
"description": "The state or Union territory's song.",
"example": "\"[[Jai Jai Garavi Gujarat]]\" <br/> [[File:File Name]]",
"type": "content"
},
"image_map": {
"type": "wiki-file-name",
"label": "Image Map",
"description": "Image of location map of the state or union territory in India."
},
"government_footnotes": {
"label": "Govt. References",
"description": "References for the government section",
"example": "<ref>{{cite web |title=SITE TITLE |url=https:// |url-status=live }}</ref>",
"type": "string"
},
"area_footnotes": {
"label": "Area Reference",
"description": "References for the area section",
"example": "<ref>{{cite web |title=SITE TITLE |url=https:// |url-status=live }}</ref>",
"type": "string"
},
"area_total_km2": {
"label": "Total Area km2",
"description": "Total area of the state or Union territory (Only use numbers, no need to add comma,decimals can be added).",
"example": "112345 or 112.345",
"type": "number"
},
"area_rank": {
"label": "Area rank",
"type": "string",
"description": "Rank of the State or Union Territory by size, overall or only among Indian states or union territories."
},
"elevation_footnotes": {
"label": "Elevation References",
"description": "References for elevation section"
},
"elevation_m": {
"label": "Elevation Meter",
"description": "Elevation of the state or union territory.",
"example": "14 (Result: 14 m)",
"type": "number"
},
"population_total": {
"label": "Total Population",
"description": "Total population of the state or union territory.",
"type": "number"
},
"population_as_of": {
"label": "Population Year",
"description": "The year the most recent census was conducted.",
"example": "2011",
"type": "number"
},
"population_rank": {
"label": "Population Rank",
"description": "Rank of the State or Union Territory by population, overall or only among states or union territories.",
"type": "number"
},
"population_density": {
"label": "Population Density KM2",
"type": "number",
"description": "Population density in per square kilometre."
},
"GDP_footnotes": {
"label": "GDP References",
"description": "References for the GDP section.",
"type": "string"
},
"GDP_rank": {
"label": "GDP Rank",
"description": "Rank of the state or union territory in India by GDP or GSDP.",
"type": "number"
},
"GDP_year": {
"label": "GDP Year",
"description": "The year in which GDP or GSDP was enumerated.",
"type": "number"
},
"GDP_total": {
"label": "Total GDP",
"description": "Total GDP of the state or territory.",
"example": "{{INRConvert|10.1|lc|lk=r}} Value will come 10.1 lakh crore, replace \"lc\" with \"t\" for value with trillion unite.",
"type": "string"
},
"GDP_per_capita": {
"label": "GDP per capita",
"description": "Per capita GDP of the state or territory",
"example": "{{INRConvert|10111|lk=r}}",
"type": "string"
},
"GDP_per_capita_rank": {
"label": "Per capita rank",
"type": "string",
"description": "The rank of the state or territory by Per Capita GDP."
},
"HDI_year": {
"label": "HDI Year",
"description": "The year in which state or union territory's HDI was enumerated.",
"type": "number"
},
"HDI_rank": {
"type": "string",
"label": "HDI Rank",
"description": "The rank of the state or territory by HDI."
},
"iso_code": {
"label": "ISO code",
"example": "IN-TG",
"type": "string",
"description": "The ISO code for the state or union territory."
},
"website": {
"label": "Govt. Website",
"description": "No need to add www or https before the website name",
"example": "assam.gov.in",
"type": "url"
},
"footnotes": {
"label": "Footnotes",
"description": "Any additional notes or explanations that may be needed for the Infobox",
"type": "string"
},
"party": {
"label": "CM's Party",
"description": "Short form of the name of the governing political party.",
"example": "([[Political Party of India|PPI]])",
"type": "string"
},
"etymology": {
"label": "Etymology",
"description": "Literal meaning of the name of the state or union territory.",
"type": "string"
},
"coordinates": {
"label": "Coordinates",
"example": "{{coord|41|50|15|N|87|40|55|W}}",
"description": "Coordinates of the state or union territory's capital."
},
"HDI": {
"description": "Human Development Index of the state or union territory. ",
"type": "number"
},
"registration_plate": {
"label": "Vehicle Registration ",
"example": "MH",
"type": "string"
},
"image_seal": {
"label": "Emblem Image",
"description": "Image of the state or union territory's Emblem.",
"type": "wiki-file-name"
},
"foundation_day": {
"label": "State/UT Foundation day",
"type": "string"
},
"mammal": {
"label": "State/UT Mammal",
"type": "string"
},
"bird": {
"label": "State/UT Bird",
"type": "string"
},
"fish": {
"label": "State/UT Fish",
"type": "string"
},
"butterfly": {
"label": "State/UT Butterfly",
"type": "string"
},
"flower": {
"label": "State/UT Flower",
"type": "string"
},
"tree": {
"label": "State/UT Tree",
"type": "string"
},
"fruit": {
"label": "State/UT Fruit ",
"type": "string"
},
"sexratio_year": {
"description": "The year in which sex ratio of the state or union territory was enumerated.",
"type": "number",
"label": "Sexratio Year",
"default": "2011"
},
"winter_capital": {
"label": "Winter capital",
"description": "If the state or union territory has a winter capital",
"type": "wiki-page-name"
},
"former": {
"label": "Former territory ?",
"type": "string",
"description": "If the State or Union Territory was a former territory then enter: yes , otherwise leave it blank."
},
"chief_minister": {
"label": "Chief Minister",
"description": "Name of the state or union territory's Chief Minister.",
"type": "string"
},
"population_urban": {
"label": "Urban Population %",
"description": "Percentage of Urban Population",
"type": "string"
},
"population_rural": {
"label": "Rural Population %",
"description": "Percentage of Rural Population",
"type": "string"
},
"population_demonym": {
"label": "Population Demonym ",
"type": "string"
},
"image_highway": {
"label": "State Highway mark",
"type": "wiki-file-name",
"description": "Image of State Highway Milestone/mark. "
},
"region": {
"description": "In which region or zone the state or Union territory is located",
"example": "South India or North-East India",
"type": "wiki-page-name",
"label": "Region"
},
"before_was": {
"label": "Before was",
"description": "Former name of the state or union territory or the name of the region it was part of.",
"example": "[[Bombay State]] or [[Kingdom of Sikkim]]",
"type": "string"
},
"formation_date": {
"label": "Admission to Union",
"description": "When the state or union territory joined the Indian union",
"type": "date"
},
"formation_date1": {
"label": "As Union territory",
"description": "When the region was recognized as an Union territory",
"type": "date"
},
"formation_date2": {
"label": "As State",
"description": "When the region was recognized as a State ( If this date is same as the formation date then just enter the word: formation1)",
"type": "string"
},
"formation_date3": {
"label": "Bifurcation",
"description": "When the state was separated or Bifurcated (Just enter the word: formation , if the bifurcation and formation dates are the same)",
"example": "1 May 1960 or formation",
"type": "string"
},
"formation_date4": {
"label": "Formation",
"description": "When the state or union territory was formed or established",
"type": "date",
"suggested": true
},
"capital": {
"label": "Capital City",
"description": "Largest City of the state or union territory ( If the capital and largest city are the same, then just enter the word: capital .",
"type": "wiki-page-name",
"required": true
},
"largestcity": {
"description": "If the capital and largest city are the same, then just fill in the space with the word: capital",
"example": "If Capital City: Bengaluru ; then Largest City: capital",
"type": "wiki-page-name",
"suggested": true,
"label": "Largest City"
},
"metro": {
"label": "Largest Metro Area ",
"description": "Largest Metropolitan area ",
"type": "wiki-page-name"
},
"districts": {
"label": "Districts",
"description": "Total number of districts in the state or Union territory.",
"example": "[[List of districts of Maharashtra|36]] or [[List of districts of Maharashtra|36 (6 divisions)]]",
"type": "content",
"suggested": true
},
"judiciary": {
"label": "High court",
"description": "High court for the state of union territory.",
"type": "string"
},
"assembly": {
"label": "Assembly",
"description": "Name of the State or UT Legislative Assembly ",
"example": "[[Tamil Nadu Legislative Assembly]]",
"type": "content"
},
"assembly_seats": {
"label": "Assembly Seats ",
"description": "State Legislative Assembly Seats.",
"example": "234 seats",
"type": "string"
},
"council": {
"label": "Council",
"description": "Name of the State Legislative Council.",
"example": "[[Maharashtra Legislative Council]]",
"type": "content"
},
"council_seats": {
"label": "Council Seats",
"description": "Total number of state's council seats.",
"example": "78 seats",
"type": "string"
},
"rajya_sabha_seats": {
"label": "Rajya Sabha Seats",
"description": "Total number of seats of the state or union territory in Rajya sabha.",
"example": "1 seat or 2 seats",
"type": "string"
},
"lok_sabha_seats": {
"label": " Lok Sabha Seats",
"description": "Total number of seats of the state or union territory in Lok sabha.",
"example": "1 seat or 2 seats",
"type": "string"
},
"official_langs": {
"label": "Official Languages",
"description": "Official language(s) of the state or union territory. ",
"type": "content"
},
"additional_official": {
"label": "Additional Official",
"description": "Additional official languages of the state or union territory, if any.",
"type": "content"
},
"literacy": {
"description": "The literacy rate of the state or union territory as recorded in the most recent census.",
"type": "number",
"label": "Literacy Rate"
},
"literacy_rank": {
"type": "string",
"label": "Literacy Rank"
},
"literacy_year": {
"description": "The year in which Literacy rate was enumerated.",
"type": "number",
"label": "Literacy Year",
"example": "2011",
"default": "2011"
},
"legislature_type": {
"description": "Type of Legislature ",
"example": "Unicameral",
"type": "string",
"label": "Legislature Type"
},
"sex_ratio": {
"label": "Sex ratio",
"description": "Number of females per 1000 males.",
"example": "1000[[female|♀]]/1000 [[male|♂]]",
"type": "string",
"suggestedvalues": [
"1000[[female|♀]]/1000 [[male|♂]]"
]
},
"population_footnotes": {
"label": "Population References",
"description": "References for the Population Section.",
"type": "string"
},
"seal_size": {
"label": "Emblem Size",
"description": "Use only if 125 is too big or small for the image.",
"example": "100",
"type": "string",
"default": "125"
},
"sexratio_rank": {
"type": "string",
"label": "Sexratio Rank"
},
"official_script": {
"label": "Official Script",
"type": "string"
},
"density_rank": {
"label": "Density Rank",
"description": "Rank of the state or union territory by population density.",
"type": "number"
},
"length_km": {
"label": "Length KM",
"description": "Length KM",
"type": "number"
},
"width_km": {
"label": "Width KM",
"type": "number"
},
"elevation_max_m": {
"label": "Elevation Max m",
"type": "number"
},
"elevation_max_point": {
"label": "Elevation Max Point",
"type": "string"
},
"elevation_min_m": {
"label": "Elevation Min m",
"type": "number"
},
"elevation_min_point": {
"label": "Elevation Min Point",
"type": "string"
},
"dissolution": {
"label": "Dissolution",
"description": "Add only if it's a former state or union territory",
"type": "string"
},
"consolidation": {
"label": "Consolidation",
"type": "string"
},
"year_start": {
"description": "The year in which the territory was established as a separate entity (Add only if it's a former state or union territory)",
"type": "string",
"label": "Formation Year"
},
"year_end": {
"description": "The year in which the state or territory was dissolved or merged with another entity (Add only if it's a former state or union territory)",
"type": "string",
"label": "Dissolution Year"
},
"govfirst_year": {
"description": "Add only if it's a former state or union territory",
"type": "string",
"label": "First governor Year"
},
"gov_first": {
"description": "Add only if it's a former state or union territory",
"type": "string",
"label": "First governor"
},
"govlast_year": {
"description": "Add only if it's a former state or union territory",
"type": "string",
"label": "Last governor Year"
},
"gov_last": {
"description": "Add only if it's a former state or union territory",
"type": "string",
"label": "Last Governor"
},
"cmfirst_year": {
"description": "Add only if it's a former state or union territory",
"type": "string",
"label": "First CM Year"
},
"cm_first": {
"description": "Add only if it's a former state or union territory",
"type": "string",
"label": "First CM"
},
"cmlast_year": {
"description": "Add only if it's a former state or union territory",
"type": "string",
"label": "Last CM Year"
},
"cm_last": {
"description": "Add only if it's a former state or union territory",
"type": "string",
"label": "Last CM"
},
"governor": {
"description": "The name of the current Governor of the state or union territory.",
"type": "string",
"suggested": true
},
"lt_governor": {
"label": "Lieutenant Governor",
"description": "The name of the current Lieutenant Governor of the state or union territory."
},
"deputy_cm": {
"label": "Deputy CM",
"description": "Name of Deputy Chief Minister of the state or territory ( Use only if the government is a Coalition )",
"type": "string"
},
"chief_secretary": {
"label": "Chief Secretary ",
"description": "Name of the Chief Secretary of the State or Union territory ",
"type": "string"
},
"administrator": {
"label": "Administrator",
"description": "Name of the Administrator of the Union Territory ( Specify, type: Union Territory to display this. )",
"type": "string"
},
"sh_numbers": {
"label": "SH Numbers",
"description": "The number of State Highways. ",
"type": "string"
}
},
"paramOrder": [
"name",
"official_name",
"former",
"image_skyline",
"imagesize",
"image_alt",
"image_caption",
"type",
"image_seal",
"seal_size",
"etymology",
"nickname",
"motto",
"anthem",
"image_map",
"coordinates",
"region",
"before_was",
"formation_date",
"formation_date1",
"formation_date2",
"formation_date3",
"consolidation",
"formation_date4",
"dissolution",
"capital",
"winter_capital",
"largestcity",
"metro",
"districts",
"government_footnotes",
"governor",
"lt_governor",
"chief_minister",
"party",
"deputy_cm",
"administrator",
"chief_secretary",
"legislature_type",
"council",
"council_seats",
"assembly",
"assembly_seats",
"rajya_sabha_seats",
"lok_sabha_seats",
"judiciary",
"area_footnotes",
"area_total_km2",
"area_rank",
"length_km",
"width_km",
"elevation_footnotes",
"elevation_m",
"elevation_max_m",
"elevation_max_point",
"elevation_min_m",
"elevation_min_point",
"population_footnotes",
"population_total",
"population_as_of",
"population_rank",
"population_density",
"density_rank",
"population_urban",
"population_rural",
"population_demonym",
"official_langs",
"additional_official",
"official_script",
"GDP_footnotes",
"GDP_total",
"GDP_year",
"GDP_rank",
"GDP_per_capita",
"GDP_per_capita_rank",
"HDI",
"HDI_year",
"HDI_rank",
"literacy",
"literacy_year",
"literacy_rank",
"sex_ratio",
"sexratio_year",
"sexratio_rank",
"iso_code",
"registration_plate",
"website",
"footnotes",
"foundation_day",
"mammal",
"bird",
"fish",
"butterfly",
"flower",
"tree",
"fruit",
"image_highway",
"sh_numbers",
"year_start",
"year_end",
"govfirst_year",
"gov_first",
"govlast_year",
"gov_last",
"cmfirst_year",
"cm_first",
"cmlast_year",
"cm_last"
],
"description": "Infobox for Indian States and Union Territories ",
"format": "block"
}
</templatedata>
{{collapse bottom}}
== Examples ==
=== 1) Example 1 ===
These are just examples, to show how the {{tl|Infobox Indian state or territory}} can be displayed. The examples may be doesn't have recent and totally accurate information.
{{Infobox Indian state or territory
| name = Maharashtra
| type = State
| image_seal = Seal of Maharashtra.svg
| seal_type = [[Emblem of Maharashtra]]
| etymology = Mahā ("great") and Rāṣṭra ("nation/dominion")
| motto = Pratipaccandralēkhēva vardhiṣṇurviśva vanditā Mahārāṣṭrasya rājyasya mudrā bhadrāya rājatē
| anthem = [[Jai Jai Maharashtra Maza]]
| image_map = IN-MH.svg
| map_alt = Map of India highlighting Maharashtra
| coordinates = {{coord|18.97|72.82|region:IN-MH_type:adm1st|display=inline,title}}
| region = West India
| before_was = [[Bombay State|State of Bombay (1950–1960)]]
| formation_date3 = formation
| formation_date4 = 1 May 1960
| capital = Mumbai
| winter_capital = Nagpur
| largestcity = Mumbai
| metro = Mumbai Metropolitan Region
| districts = [[List of districts of Maharashtra|36 (6 divisions)]]
| governor = [[Ramesh Bais]]
| chief_minister = [[Eknath Shinde]]
| party = [[Shiv Sena|SS]]
| judiciary = [[Bombay High Court]]
| legislature_type = Bicemiral
| assembly = [[Maharashtra Legislative Assembly]]
| assembly_seats = 228 seats
| council = [[Maharashtra Legislative Council]]
| council_seats = 78 seats
| rajya_sabha_seats = 19 seats
| lok_sabha_seats = 48 seats
| area_total_km2 = 307713
| area_rank = 3rd
| elevation_m = 14
| population_total = 112,374,333
| population_as_of = 2011
| population_rank = 2nd
| population_urban = 45.22%
| population_rural = 54.78%
| population_density = 370
| population_demonym = Maharashtrian
| official_langs = Marathi
| GDP_total = {{INRConvert|31.97|t|lk=r}}
| GDP_year = 2021–22 est
| GDP_rank = 1st
| GDP_per_capita = {{INRConvert|225073|lk=r}}
| GDP_per_capita_rank = 14th
| HDI_year = 2022
| HDI = 0.750
| HDI_rank = 9th
| literacy = 84.8%
| literacy_year = 2017
| sex_ratio = 966
| sexratio_year = 2021
| iso_code = IN-MH
| registration_plate = MH
| website = maharashtra.gov.in
| footnotes = Joint High Court with Goa
| foundation_day = Maharashtra Day
| bird = Yellow-footed green pigeon
| fish = Rohu
| butterfly = Blue mormon
| flower = Jarul
| tree = Mango tree
| image_highway = Major State Highway 1 (Maharashtra).png
| image_size_highway = 100
| sh_numbers = [[List of state highways in Maharashtra|MH SH1-MH SH368]]
}}
<syntaxhighlight lang="wikitext" style="overflow:auto; white-space: pre-wrap;">
{{Infobox Indian state or territory
| name = Maharashtra
| type = State
| image_seal = Seal of Maharashtra.svg
| seal_type = [[Emblem of Maharashtra]]
| etymology = Mahā ("great") and Rāshtra ("nation/dominion")
| motto = Pratipaccandralēkhēva vardhiṣṇurviśva vanditā Mahārāṣṭrasya rājyasya mudrā bhadrāya rājatē
| anthem = [[Jai Jai Maharashtra Maza]]
| image_map = IN-MH.svg
| map_alt = Map of India highlighting Maharashtra
| coordinates = {{coord|18.97|72.82|region:IN-MH_type:adm1st|display=inline,title}}
| region = West India
| before_was = [[Bombay State|State of Bombay (1950–1960)]]
| formation_date3 = formation
| formation_date4 = 1 May 1960
| capital = Mumbai
| winter_capital = Nagpur
| largestcity = Mumbai
| metro = Mumbai Metropolitan Region
| districts = [[List of districts of Maharashtra|36 (6 divisions)]]
| governor = [[Bhagat Singh Koshyari]]
| chief_minister = [[Eknath Shinde]]
| party = [[Balasahebanchi Shiv Sena|BSS]]
| judiciary = [[Bombay High Court]]
| legislature_type = Bicemiral
| assembly = [[Maharashtra Legislative Assembly]]
| assembly_seats = 228 seats
| council = [[Maharashtra Legislative Council]]
| council_seats = 78 seats
| rajya_sabha_seats = 19 seats
| lok_sabha_seats = 48 seats
| area_total_km2 = 307713
| area_rank = 3rd
| elevation_m = 14
| population_total = 112,374,333
| population_as_of = 2011
| population_rank = 2nd
| population_urban = 45.22%
| population_rural = 54.78%
| population_density = 370
| population_demonym = Maharashtrian
| official_langs = Marathi
| GDP_total = {{INRConvert|31.97|t|lk=r}}
| GDP_year = 2021–22 est
| GDP_rank = 1st
| GDP_per_capita = {{INRConvert|225073|lk=r}}
| GDP_per_capita_rank = 14th
| HDI_year = 2022
| HDI = 0.750
| HDI_rank = 9th
| literacy = 84.8%
| literacy_year = 2017
| sex_ratio = 966
| sexratio_year = 2021
| iso_code = IN-MH
| registration_plate = MH
| website = maharashtra.gov.in
| footnotes = Joint High Court with Goa
| foundation_day = Maharashtra Day
| bird = Yellow-footed green pigeon
| fish = Rohu
| butterfly = Blue mormon
| flower = Jarul
| tree = Mango tree
| image_highway = Major State Highway 1 (Maharashtra).png
| image_size_highway = 100
| sh_numbers = [[List of state highways in Maharashtra|MH SH1-MH SH368]]
}}
</syntaxhighlight>
{{clear}}
----
=== 2) Example 2 ===
{{Template:Infobox Indian state or territory
| name = Puducherry
| type = Union Territory
| image_seal = Emblem of the Government of Puducherry.png
| seal_type = Emblem of Puducherry
| motto = Satyameva Jayate <br/> (Truth alone triumphs)
| anthem = [[Tamil Thai Valthu (Tamil Nadu)|Tamil Thai Valthu]]
| image_map = IN-PY.svg
| region = South India
| formation_date = 1 November 1954
| formation_date4 = 1 July 1963
| capital = Puducherry (city){{!}}Puducherry
| largestcity = capital
| districts = [[List of districts of Puducherry|4]]
| lt_governor = [[Tamilisai Soundararajan]]
| chief_minister = [[N. Rangaswamy]]
| party = [[All India N.R. Congress|AINRC]]
| chief_secretary = Ashwani Kumar, IAS
| judiciary = [[Madras High Court]]
| legislature_type = Unicameral
| assembly = [[Puducherry Legislative Assembly]]
| assembly_seats = 33 seats
| rajya_sabha_seats = 1 seat
| lok_sabha_seats = 1 seat
| area_total_km2 = 483
| area_rank = 34th
| population_total = 1,394,467
| population_as_of = 2011
| population_rank = 29th
| population_urban = 68.33%
| population_rural = 31.67%
| population_density = 2,900
| official_langs = [[Tamil language|Tamil]] •[[English language|English]] •[[French language|French]]
| additional_official = [[Malayalam]] • [[Telugu language|Telugu]]
| GDP_total = {{INRConvert|210|b|lk=r}}
| GDP_year = 2019-20
| GDP_rank = 26th
| GDP_per_capita = {{INRConvert|206888|lk=r}}
| GDP_per_capita_rank = 10th
| HDI_year = 2018
| HDI = {{increase}}0.740 (<span style="color:#090">High</span>)
| HDI_rank = 7th
| literacy = 86.55%
| literacy_year = 2011
| sex_ratio = 1037
| sexratio_year = 2011
| iso_code = IN-PY
| registration_plate = PY 01 - PY 05
| website = py.gov.in
| footnotes = Territories of French India were completely transferred to the Republic of India de facto.
}}
<syntaxhighlight lang="wikitext" style="overflow:auto; white-space: pre-wrap;">
{{Template:Infobox Indian state or territory
| name = Puducherry
| type = Union Territory
| image_seal = Emblem of the Government of Puducherry.png
| seal_type = Emblem of Puducherry
| motto = Satyameva Jayate <br/> (Truth alone triumphs)
| anthem = [[Tamil Thai Valthu (Tamil Nadu)|Tamil Thai Valthu]]
| image_map = IN-PY.svg
| region = South India
| formation_date = 1 November 1954
| formation_date4 = 1 July 1963
| capital = Puducherry (city){{!}}Puducherry
| largestcity = capital
| districts = [[List of districts of Puducherry|4]]
| lt_governor = [[Tamilisai Soundararajan]]
| chief_minister = [[N. Rangaswamy]]
| party = [[All India N.R. Congress|AINRC]]
| chief_secretary = Ashwani Kumar, IAS
| judiciary = [[Madras High Court]]
| legislature_type = Unicameral
| assembly = [[Puducherry Legislative Assembly]]
| assembly_seats = 33 seats
| rajya_sabha_seats = 1 seat
| lok_sabha_seats = 1 seat
| area_total_km2 = 483
| area_rank = 34th
| population_total = 1,394,467
| population_as_of = 2011
| population_rank = 29th
| population_urban = 68.33%
| population_rural = 31.67%
| population_density = 2,900
| official_langs = [[Tamil language|Tamil]] •[[English language|English]] •[[French language|French]]
| additional_official = [[Malayalam]] • [[Telugu language|Telugu]]
| GDP_total = {{INRConvert|210|b|lk=r}}
| GDP_year = 2019-20
| GDP_rank = 26th
| GDP_per_capita = {{INRConvert|206888|lk=r}}
| GDP_per_capita_rank = 10th
| coastline = 30.6
| HDI_year = 2018
| HDI = {{increase}}0.740 (<span style="color:#090">High</span>)
| HDI_rank = 7th
| literacy = 86.55%
| literacy_year = 2011
| sex_ratio = 1037
| sexratio_year = 2011
| iso_code = IN-PY
| registration_plate = PY 01 - PY 05
| website = py.gov.in
| footnotes = Territories of French India were completely transferred to the Republic of India de facto.
}}
</syntaxhighlight>
== Tracking category ==
* {{clc|Pages using infobox Indian state or territory with unknown parameters}}
liwnr6njovc36fb6o8s325cq7mwh8sk
1378277
1378276
2026-08-03T07:17:15Z
A826
72368
೧ revisions imported from [[:en:Template:Infobox_Indian_state_or_territory/doc]]
1378276
wikitext
text/x-wiki
{{Documentation subpage}}
{{uses infobox settlement}}
{{Lua|Module:Infobox|Module:InfoboxImage|Module:Check for unknown parameters|Module:Settlement short description}}
The {{tl|Infobox Indian state or territory}} is used to display information about a state or union territory in india (present or former) in a standardized format. It is designed to provide a quick overview of key facts and figures related to the state or territory. For the guidelines and additional informations about using perametares see, [[Wikipedia:Wikiproject Indian cities#Basic India conventions|Basic India Conventions]].
Enter {{para|largest_city|capital}}, if the capital and the largest city are the same. If the state or territory has a winter capital then the largest city should be mentioned, even if it is the same as the capital one.
If the state or territory was formed with/by a bifurcation, then mention Bifurcation:{{para|formation_date3|formation}} . Similarly, if the state or territory was formed as a state, then mention As State:{{para|formation_date2|formation1}}.
Values that might be necessitate manually linking ( [[Interwiki link|InterWiki]] ) are: any person's name, District, Council and Assembly, High court and Languages.
{{Generic template demo
| name |official_name |image_skyline |imagesize |image_alt |image_caption |type |image_seal |seal_size |seal_type |etymology |nickname |motto |anthem |image_map |mapsize |map_caption |coordinates |region |before_was |formation_date |formation_date1 |formation_date2 |formation_date3 |formation_date4 |capital |winter_capital |largestcity |metro |districts |government_footnotes |government_type |governor |chief_minister |party |deputy_cm |lt_governor |administrator |chief_secretary |judiciary |legislature_type |council |council_seats |assembly |assembly_seats |rajya_sabha_seats |lok_sabha_seats |area_rank |area_total_sq_mi |area_total_km2 |length_km |length_mi | width_km |width_mi |elevation_m |elevation_ft |population_total |population_rank |population_as_of |population_density |population_urban |population_rural |population_demonym |official_langs |additional_official |official_script |GDP_rank |GDP_year |GDP_total |GDP_per_capita |GDP_per_capita_rank |iso_code |registration_plate |HDI |HDI_year |literacy |literacy_year |literacy_rank |HDI_rank |sex_ratio |sexratio_year |sexratio_rank |website |footnotes |song |foundation_day |language |mammal |bird |butterfly |fish |flower |tree |fruit |image_highway |image_size_highway |sh_numbers
| }}
==Usage==
=== Complete empty syntax ===
<syntaxhighlight lang="wikitext" style="overflow:auto">
{{Infobox Indian state or territory
| name =
| official_name =
| image_skyline =
| imagesize =
| image_alt =
| image_caption =
| image_seal =
| etymology =
| nickname =
| motto =
| anthem =
| image_map =
| mapsize =
| map_caption =
| coordinates =
| region =
| before_was =
| formation_date =
| formation_date1 =
| formation_date2 =
| formation_date3 =
| formation_date4 =
| capital =
| winter_capital =
| largestcity =
| metro =
| districts =
| government_footnotes =
| government_type =
| governor =
| chief_minister =
| party =
| lt_governor =
| administrator =
| chief_secretary =
| judiciary =
| legislature_type =
| council =
| council_seats =
| assembly =
| assembly_seats =
| rajya_sabha_seats =
| lok_sabha_seats =
| area_rank =
| area_total_sq_mi =
| area_total_km2 =
| length_km =
| width_km =
| elevation_max_m =
| elevation_max_point =
| elevation_min_m =
| elevation_min_point =
| elevation_footnotes =
| elevation_m =
| population_total =
| population_rank =
| population_as_of =
| population_density =
| population_density_rank =
| population_urban =
| population_rural =
| population_demonym =
| official_langs =
| Regional_Langs =
| National_Langs =
| official_script =
| GDP_total =
| GDP_rank =
| GDP_year =
| GDP_per_capita =
| GDP_per_capita_rank =
| iso_code =
| registration_plate =
| HDI =
| HDI_rank =
| HDI_year =
| literacy =
| literacy_year =
| literacy_rank =
| sex_ratio =
| sexratio_year =
| sexratio_rank =
| website =
| footnotes =
}}
</syntaxhighlight>
{{clear}}
=== Syntax for Former territory ===
These parameters are used to display key information about a geographic area or region that was once a separate political entity within India but is now a part of present-day state/union territory or formed as a new state/territory.
Specify {{para|former|yes}}, to use/ activate these parameters. Note: all the other parameters can also be used (if needed). See the comments on the syntax to understand which parameters are what for.{{para|country|India}} and the time zone are defaults.
<syntaxhighlight lang="wikitext" style="overflow:auto">
{{Infobox Indian state or territory
| name =
| former = yes
| govfirst_year = <!-- administration period of the first governor of the state or territory -->
| gov_first = <!-- name of the first governor of the state or territory -->
| govlast_year = <!-- administration period of the last governor of the state or territory -->
| gov_last = <!-- name of the last governor of the state or territory -->
| cmfirst_year = <!-- administration period of the first chief minister of the state or territory -->
| cm_first = <!-- name of the first chief minister -->
| cmlast_year = <!-- administration period of the last chief minister of the state or territory -->
| cm_last = <!-- name of the last chief minister -->
| year_start = <!-- the year in which the territory was established as a separate entity -->
| formation_date4 = <!-- formation date of the state or territory -->
| consolidation = <!-- date when the states or territories were merged with each other or into another state -->
| formation_date3 = <!-- date when the state or territory was bifurcated -->
| dissolution = <!-- date when the state or territory was disestablished -->
| year_end = <!-- the year in which the state or territory was dissolved or merged with another entity -->
}}
</syntaxhighlight>
==Microformat==
{{UF-hcard-geo}}
==Template data==
{{TemplateData header}}
{{collapse top|title=TemplateData}}
<templatedata>
{
"params": {
"name": {
"label": "Name",
"required": true,
"description": "The common name of the state or union territory",
"type": "content"
},
"official_name": {
"description": "Official name of the state or union territory, if any.",
"label": "Official Name",
"type": "content"
},
"image_skyline": {
"label": "Image",
"description": "It can be any image for identification of the landmarks or landscapes or cultural heritage of the place that the editor(s) wish.",
"type": "content"
},
"imagesize": {
"label": "Imagesize",
"description": "Size of the image if added",
"type": "number"
},
"image_alt": {
"label": "Image alt",
"description": "It can be alternative to the image.",
"type": "string"
},
"image_caption": {
"label": "Caption",
"description": "Description of the image(s) if added.",
"type": "string"
},
"type": {
"example": "State or Union Territory",
"required": true,
"label": "Settlement Type",
"description": "The type of settlement, which should be \"State\" or \"Union Territory\".",
"type": "content"
},
"nickname": {
"label": "Nickname",
"type": "content",
"description": "Popular nickname of the state or union territory."
},
"motto": {
"label": "Motto",
"description": "The state or Union territory's motto.",
"type": "content"
},
"anthem": {
"label": "Song",
"description": "The state or Union territory's song.",
"example": "\"[[Jai Jai Garavi Gujarat]]\" <br/> [[File:File Name]]",
"type": "content"
},
"image_map": {
"type": "wiki-file-name",
"label": "Image Map",
"description": "Image of location map of the state or union territory in India."
},
"government_footnotes": {
"label": "Govt. References",
"description": "References for the government section",
"example": "<ref>{{cite web |title=SITE TITLE |url=https:// |url-status=live }}</ref>",
"type": "string"
},
"area_footnotes": {
"label": "Area Reference",
"description": "References for the area section",
"example": "<ref>{{cite web |title=SITE TITLE |url=https:// |url-status=live }}</ref>",
"type": "string"
},
"area_total_km2": {
"label": "Total Area km2",
"description": "Total area of the state or Union territory (Only use numbers, no need to add comma,decimals can be added).",
"example": "112345 or 112.345",
"type": "number"
},
"area_rank": {
"label": "Area rank",
"type": "string",
"description": "Rank of the State or Union Territory by size, overall or only among Indian states or union territories."
},
"elevation_footnotes": {
"label": "Elevation References",
"description": "References for elevation section"
},
"elevation_m": {
"label": "Elevation Meter",
"description": "Elevation of the state or union territory.",
"example": "14 (Result: 14 m)",
"type": "number"
},
"population_total": {
"label": "Total Population",
"description": "Total population of the state or union territory.",
"type": "number"
},
"population_as_of": {
"label": "Population Year",
"description": "The year the most recent census was conducted.",
"example": "2011",
"type": "number"
},
"population_rank": {
"label": "Population Rank",
"description": "Rank of the State or Union Territory by population, overall or only among states or union territories.",
"type": "number"
},
"population_density": {
"label": "Population Density KM2",
"type": "number",
"description": "Population density in per square kilometre."
},
"GDP_footnotes": {
"label": "GDP References",
"description": "References for the GDP section.",
"type": "string"
},
"GDP_rank": {
"label": "GDP Rank",
"description": "Rank of the state or union territory in India by GDP or GSDP.",
"type": "number"
},
"GDP_year": {
"label": "GDP Year",
"description": "The year in which GDP or GSDP was enumerated.",
"type": "number"
},
"GDP_total": {
"label": "Total GDP",
"description": "Total GDP of the state or territory.",
"example": "{{INRConvert|10.1|lc|lk=r}} Value will come 10.1 lakh crore, replace \"lc\" with \"t\" for value with trillion unite.",
"type": "string"
},
"GDP_per_capita": {
"label": "GDP per capita",
"description": "Per capita GDP of the state or territory",
"example": "{{INRConvert|10111|lk=r}}",
"type": "string"
},
"GDP_per_capita_rank": {
"label": "Per capita rank",
"type": "string",
"description": "The rank of the state or territory by Per Capita GDP."
},
"HDI_year": {
"label": "HDI Year",
"description": "The year in which state or union territory's HDI was enumerated.",
"type": "number"
},
"HDI_rank": {
"type": "string",
"label": "HDI Rank",
"description": "The rank of the state or territory by HDI."
},
"iso_code": {
"label": "ISO code",
"example": "IN-TG",
"type": "string",
"description": "The ISO code for the state or union territory."
},
"website": {
"label": "Govt. Website",
"description": "No need to add www or https before the website name",
"example": "assam.gov.in",
"type": "url"
},
"footnotes": {
"label": "Footnotes",
"description": "Any additional notes or explanations that may be needed for the Infobox",
"type": "string"
},
"party": {
"label": "CM's Party",
"description": "Short form of the name of the governing political party.",
"example": "([[Political Party of India|PPI]])",
"type": "string"
},
"etymology": {
"label": "Etymology",
"description": "Literal meaning of the name of the state or union territory.",
"type": "string"
},
"coordinates": {
"label": "Coordinates",
"example": "{{coord|41|50|15|N|87|40|55|W}}",
"description": "Coordinates of the state or union territory's capital."
},
"HDI": {
"description": "Human Development Index of the state or union territory. ",
"type": "number"
},
"registration_plate": {
"label": "Vehicle Registration ",
"example": "MH",
"type": "string"
},
"image_seal": {
"label": "Emblem Image",
"description": "Image of the state or union territory's Emblem.",
"type": "wiki-file-name"
},
"foundation_day": {
"label": "State/UT Foundation day",
"type": "string"
},
"mammal": {
"label": "State/UT Mammal",
"type": "string"
},
"bird": {
"label": "State/UT Bird",
"type": "string"
},
"fish": {
"label": "State/UT Fish",
"type": "string"
},
"butterfly": {
"label": "State/UT Butterfly",
"type": "string"
},
"flower": {
"label": "State/UT Flower",
"type": "string"
},
"tree": {
"label": "State/UT Tree",
"type": "string"
},
"fruit": {
"label": "State/UT Fruit ",
"type": "string"
},
"sexratio_year": {
"description": "The year in which sex ratio of the state or union territory was enumerated.",
"type": "number",
"label": "Sexratio Year",
"default": "2011"
},
"winter_capital": {
"label": "Winter capital",
"description": "If the state or union territory has a winter capital",
"type": "wiki-page-name"
},
"former": {
"label": "Former territory ?",
"type": "string",
"description": "If the State or Union Territory was a former territory then enter: yes , otherwise leave it blank."
},
"chief_minister": {
"label": "Chief Minister",
"description": "Name of the state or union territory's Chief Minister.",
"type": "string"
},
"population_urban": {
"label": "Urban Population %",
"description": "Percentage of Urban Population",
"type": "string"
},
"population_rural": {
"label": "Rural Population %",
"description": "Percentage of Rural Population",
"type": "string"
},
"population_demonym": {
"label": "Population Demonym ",
"type": "string"
},
"image_highway": {
"label": "State Highway mark",
"type": "wiki-file-name",
"description": "Image of State Highway Milestone/mark. "
},
"region": {
"description": "In which region or zone the state or Union territory is located",
"example": "South India or North-East India",
"type": "wiki-page-name",
"label": "Region"
},
"before_was": {
"label": "Before was",
"description": "Former name of the state or union territory or the name of the region it was part of.",
"example": "[[Bombay State]] or [[Kingdom of Sikkim]]",
"type": "string"
},
"formation_date": {
"label": "Admission to Union",
"description": "When the state or union territory joined the Indian union",
"type": "date"
},
"formation_date1": {
"label": "As Union territory",
"description": "When the region was recognized as an Union territory",
"type": "date"
},
"formation_date2": {
"label": "As State",
"description": "When the region was recognized as a State ( If this date is same as the formation date then just enter the word: formation1)",
"type": "string"
},
"formation_date3": {
"label": "Bifurcation",
"description": "When the state was separated or Bifurcated (Just enter the word: formation , if the bifurcation and formation dates are the same)",
"example": "1 May 1960 or formation",
"type": "string"
},
"formation_date4": {
"label": "Formation",
"description": "When the state or union territory was formed or established",
"type": "date",
"suggested": true
},
"capital": {
"label": "Capital City",
"description": "Largest City of the state or union territory ( If the capital and largest city are the same, then just enter the word: capital .",
"type": "wiki-page-name",
"required": true
},
"largestcity": {
"description": "If the capital and largest city are the same, then just fill in the space with the word: capital",
"example": "If Capital City: Bengaluru ; then Largest City: capital",
"type": "wiki-page-name",
"suggested": true,
"label": "Largest City"
},
"metro": {
"label": "Largest Metro Area ",
"description": "Largest Metropolitan area ",
"type": "wiki-page-name"
},
"districts": {
"label": "Districts",
"description": "Total number of districts in the state or Union territory.",
"example": "[[List of districts of Maharashtra|36]] or [[List of districts of Maharashtra|36 (6 divisions)]]",
"type": "content",
"suggested": true
},
"judiciary": {
"label": "High court",
"description": "High court for the state of union territory.",
"type": "string"
},
"assembly": {
"label": "Assembly",
"description": "Name of the State or UT Legislative Assembly ",
"example": "[[Tamil Nadu Legislative Assembly]]",
"type": "content"
},
"assembly_seats": {
"label": "Assembly Seats ",
"description": "State Legislative Assembly Seats.",
"example": "234 seats",
"type": "string"
},
"council": {
"label": "Council",
"description": "Name of the State Legislative Council.",
"example": "[[Maharashtra Legislative Council]]",
"type": "content"
},
"council_seats": {
"label": "Council Seats",
"description": "Total number of state's council seats.",
"example": "78 seats",
"type": "string"
},
"rajya_sabha_seats": {
"label": "Rajya Sabha Seats",
"description": "Total number of seats of the state or union territory in Rajya sabha.",
"example": "1 seat or 2 seats",
"type": "string"
},
"lok_sabha_seats": {
"label": " Lok Sabha Seats",
"description": "Total number of seats of the state or union territory in Lok sabha.",
"example": "1 seat or 2 seats",
"type": "string"
},
"official_langs": {
"label": "Official Languages",
"description": "Official language(s) of the state or union territory. ",
"type": "content"
},
"additional_official": {
"label": "Additional Official",
"description": "Additional official languages of the state or union territory, if any.",
"type": "content"
},
"literacy": {
"description": "The literacy rate of the state or union territory as recorded in the most recent census.",
"type": "number",
"label": "Literacy Rate"
},
"literacy_rank": {
"type": "string",
"label": "Literacy Rank"
},
"literacy_year": {
"description": "The year in which Literacy rate was enumerated.",
"type": "number",
"label": "Literacy Year",
"example": "2011",
"default": "2011"
},
"legislature_type": {
"description": "Type of Legislature ",
"example": "Unicameral",
"type": "string",
"label": "Legislature Type"
},
"sex_ratio": {
"label": "Sex ratio",
"description": "Number of females per 1000 males.",
"example": "1000[[female|♀]]/1000 [[male|♂]]",
"type": "string",
"suggestedvalues": [
"1000[[female|♀]]/1000 [[male|♂]]"
]
},
"population_footnotes": {
"label": "Population References",
"description": "References for the Population Section.",
"type": "string"
},
"seal_size": {
"label": "Emblem Size",
"description": "Use only if 125 is too big or small for the image.",
"example": "100",
"type": "string",
"default": "125"
},
"sexratio_rank": {
"type": "string",
"label": "Sexratio Rank"
},
"official_script": {
"label": "Official Script",
"type": "string"
},
"density_rank": {
"label": "Density Rank",
"description": "Rank of the state or union territory by population density.",
"type": "number"
},
"length_km": {
"label": "Length KM",
"description": "Length KM",
"type": "number"
},
"width_km": {
"label": "Width KM",
"type": "number"
},
"elevation_max_m": {
"label": "Elevation Max m",
"type": "number"
},
"elevation_max_point": {
"label": "Elevation Max Point",
"type": "string"
},
"elevation_min_m": {
"label": "Elevation Min m",
"type": "number"
},
"elevation_min_point": {
"label": "Elevation Min Point",
"type": "string"
},
"dissolution": {
"label": "Dissolution",
"description": "Add only if it's a former state or union territory",
"type": "string"
},
"consolidation": {
"label": "Consolidation",
"type": "string"
},
"year_start": {
"description": "The year in which the territory was established as a separate entity (Add only if it's a former state or union territory)",
"type": "string",
"label": "Formation Year"
},
"year_end": {
"description": "The year in which the state or territory was dissolved or merged with another entity (Add only if it's a former state or union territory)",
"type": "string",
"label": "Dissolution Year"
},
"govfirst_year": {
"description": "Add only if it's a former state or union territory",
"type": "string",
"label": "First governor Year"
},
"gov_first": {
"description": "Add only if it's a former state or union territory",
"type": "string",
"label": "First governor"
},
"govlast_year": {
"description": "Add only if it's a former state or union territory",
"type": "string",
"label": "Last governor Year"
},
"gov_last": {
"description": "Add only if it's a former state or union territory",
"type": "string",
"label": "Last Governor"
},
"cmfirst_year": {
"description": "Add only if it's a former state or union territory",
"type": "string",
"label": "First CM Year"
},
"cm_first": {
"description": "Add only if it's a former state or union territory",
"type": "string",
"label": "First CM"
},
"cmlast_year": {
"description": "Add only if it's a former state or union territory",
"type": "string",
"label": "Last CM Year"
},
"cm_last": {
"description": "Add only if it's a former state or union territory",
"type": "string",
"label": "Last CM"
},
"governor": {
"description": "The name of the current Governor of the state or union territory.",
"type": "string",
"suggested": true
},
"lt_governor": {
"label": "Lieutenant Governor",
"description": "The name of the current Lieutenant Governor of the state or union territory."
},
"deputy_cm": {
"label": "Deputy CM",
"description": "Name of Deputy Chief Minister of the state or territory ( Use only if the government is a Coalition )",
"type": "string"
},
"chief_secretary": {
"label": "Chief Secretary ",
"description": "Name of the Chief Secretary of the State or Union territory ",
"type": "string"
},
"administrator": {
"label": "Administrator",
"description": "Name of the Administrator of the Union Territory ( Specify, type: Union Territory to display this. )",
"type": "string"
},
"sh_numbers": {
"label": "SH Numbers",
"description": "The number of State Highways. ",
"type": "string"
}
},
"paramOrder": [
"name",
"official_name",
"former",
"image_skyline",
"imagesize",
"image_alt",
"image_caption",
"type",
"image_seal",
"seal_size",
"etymology",
"nickname",
"motto",
"anthem",
"image_map",
"coordinates",
"region",
"before_was",
"formation_date",
"formation_date1",
"formation_date2",
"formation_date3",
"consolidation",
"formation_date4",
"dissolution",
"capital",
"winter_capital",
"largestcity",
"metro",
"districts",
"government_footnotes",
"governor",
"lt_governor",
"chief_minister",
"party",
"deputy_cm",
"administrator",
"chief_secretary",
"legislature_type",
"council",
"council_seats",
"assembly",
"assembly_seats",
"rajya_sabha_seats",
"lok_sabha_seats",
"judiciary",
"area_footnotes",
"area_total_km2",
"area_rank",
"length_km",
"width_km",
"elevation_footnotes",
"elevation_m",
"elevation_max_m",
"elevation_max_point",
"elevation_min_m",
"elevation_min_point",
"population_footnotes",
"population_total",
"population_as_of",
"population_rank",
"population_density",
"density_rank",
"population_urban",
"population_rural",
"population_demonym",
"official_langs",
"additional_official",
"official_script",
"GDP_footnotes",
"GDP_total",
"GDP_year",
"GDP_rank",
"GDP_per_capita",
"GDP_per_capita_rank",
"HDI",
"HDI_year",
"HDI_rank",
"literacy",
"literacy_year",
"literacy_rank",
"sex_ratio",
"sexratio_year",
"sexratio_rank",
"iso_code",
"registration_plate",
"website",
"footnotes",
"foundation_day",
"mammal",
"bird",
"fish",
"butterfly",
"flower",
"tree",
"fruit",
"image_highway",
"sh_numbers",
"year_start",
"year_end",
"govfirst_year",
"gov_first",
"govlast_year",
"gov_last",
"cmfirst_year",
"cm_first",
"cmlast_year",
"cm_last"
],
"description": "Infobox for Indian States and Union Territories ",
"format": "block"
}
</templatedata>
{{collapse bottom}}
== Examples ==
=== 1) Example 1 ===
These are just examples, to show how the {{tl|Infobox Indian state or territory}} can be displayed. The examples may be doesn't have recent and totally accurate information.
{{Infobox Indian state or territory
| name = Maharashtra
| type = State
| image_seal = Seal of Maharashtra.svg
| seal_type = [[Emblem of Maharashtra]]
| etymology = Mahā ("great") and Rāṣṭra ("nation/dominion")
| motto = Pratipaccandralēkhēva vardhiṣṇurviśva vanditā Mahārāṣṭrasya rājyasya mudrā bhadrāya rājatē
| anthem = [[Jai Jai Maharashtra Maza]]
| image_map = IN-MH.svg
| map_alt = Map of India highlighting Maharashtra
| coordinates = {{coord|18.97|72.82|region:IN-MH_type:adm1st|display=inline,title}}
| region = West India
| before_was = [[Bombay State|State of Bombay (1950–1960)]]
| formation_date3 = formation
| formation_date4 = 1 May 1960
| capital = Mumbai
| winter_capital = Nagpur
| largestcity = Mumbai
| metro = Mumbai Metropolitan Region
| districts = [[List of districts of Maharashtra|36 (6 divisions)]]
| governor = [[Ramesh Bais]]
| chief_minister = [[Eknath Shinde]]
| party = [[Shiv Sena|SS]]
| judiciary = [[Bombay High Court]]
| legislature_type = Bicemiral
| assembly = [[Maharashtra Legislative Assembly]]
| assembly_seats = 228 seats
| council = [[Maharashtra Legislative Council]]
| council_seats = 78 seats
| rajya_sabha_seats = 19 seats
| lok_sabha_seats = 48 seats
| area_total_km2 = 307713
| area_rank = 3rd
| elevation_m = 14
| population_total = 112,374,333
| population_as_of = 2011
| population_rank = 2nd
| population_urban = 45.22%
| population_rural = 54.78%
| population_density = 370
| population_demonym = Maharashtrian
| official_langs = Marathi
| GDP_total = {{INRConvert|31.97|t|lk=r}}
| GDP_year = 2021–22 est
| GDP_rank = 1st
| GDP_per_capita = {{INRConvert|225073|lk=r}}
| GDP_per_capita_rank = 14th
| HDI_year = 2022
| HDI = 0.750
| HDI_rank = 9th
| literacy = 84.8%
| literacy_year = 2017
| sex_ratio = 966
| sexratio_year = 2021
| iso_code = IN-MH
| registration_plate = MH
| website = maharashtra.gov.in
| footnotes = Joint High Court with Goa
| foundation_day = Maharashtra Day
| bird = Yellow-footed green pigeon
| fish = Rohu
| butterfly = Blue mormon
| flower = Jarul
| tree = Mango tree
| image_highway = Major State Highway 1 (Maharashtra).png
| image_size_highway = 100
| sh_numbers = [[List of state highways in Maharashtra|MH SH1-MH SH368]]
}}
<syntaxhighlight lang="wikitext" style="overflow:auto; white-space: pre-wrap;">
{{Infobox Indian state or territory
| name = Maharashtra
| type = State
| image_seal = Seal of Maharashtra.svg
| seal_type = [[Emblem of Maharashtra]]
| etymology = Mahā ("great") and Rāshtra ("nation/dominion")
| motto = Pratipaccandralēkhēva vardhiṣṇurviśva vanditā Mahārāṣṭrasya rājyasya mudrā bhadrāya rājatē
| anthem = [[Jai Jai Maharashtra Maza]]
| image_map = IN-MH.svg
| map_alt = Map of India highlighting Maharashtra
| coordinates = {{coord|18.97|72.82|region:IN-MH_type:adm1st|display=inline,title}}
| region = West India
| before_was = [[Bombay State|State of Bombay (1950–1960)]]
| formation_date3 = formation
| formation_date4 = 1 May 1960
| capital = Mumbai
| winter_capital = Nagpur
| largestcity = Mumbai
| metro = Mumbai Metropolitan Region
| districts = [[List of districts of Maharashtra|36 (6 divisions)]]
| governor = [[Bhagat Singh Koshyari]]
| chief_minister = [[Eknath Shinde]]
| party = [[Balasahebanchi Shiv Sena|BSS]]
| judiciary = [[Bombay High Court]]
| legislature_type = Bicemiral
| assembly = [[Maharashtra Legislative Assembly]]
| assembly_seats = 228 seats
| council = [[Maharashtra Legislative Council]]
| council_seats = 78 seats
| rajya_sabha_seats = 19 seats
| lok_sabha_seats = 48 seats
| area_total_km2 = 307713
| area_rank = 3rd
| elevation_m = 14
| population_total = 112,374,333
| population_as_of = 2011
| population_rank = 2nd
| population_urban = 45.22%
| population_rural = 54.78%
| population_density = 370
| population_demonym = Maharashtrian
| official_langs = Marathi
| GDP_total = {{INRConvert|31.97|t|lk=r}}
| GDP_year = 2021–22 est
| GDP_rank = 1st
| GDP_per_capita = {{INRConvert|225073|lk=r}}
| GDP_per_capita_rank = 14th
| HDI_year = 2022
| HDI = 0.750
| HDI_rank = 9th
| literacy = 84.8%
| literacy_year = 2017
| sex_ratio = 966
| sexratio_year = 2021
| iso_code = IN-MH
| registration_plate = MH
| website = maharashtra.gov.in
| footnotes = Joint High Court with Goa
| foundation_day = Maharashtra Day
| bird = Yellow-footed green pigeon
| fish = Rohu
| butterfly = Blue mormon
| flower = Jarul
| tree = Mango tree
| image_highway = Major State Highway 1 (Maharashtra).png
| image_size_highway = 100
| sh_numbers = [[List of state highways in Maharashtra|MH SH1-MH SH368]]
}}
</syntaxhighlight>
{{clear}}
----
=== 2) Example 2 ===
{{Template:Infobox Indian state or territory
| name = Puducherry
| type = Union Territory
| image_seal = Emblem of the Government of Puducherry.png
| seal_type = Emblem of Puducherry
| motto = Satyameva Jayate <br/> (Truth alone triumphs)
| anthem = [[Tamil Thai Valthu (Tamil Nadu)|Tamil Thai Valthu]]
| image_map = IN-PY.svg
| region = South India
| formation_date = 1 November 1954
| formation_date4 = 1 July 1963
| capital = Puducherry (city){{!}}Puducherry
| largestcity = capital
| districts = [[List of districts of Puducherry|4]]
| lt_governor = [[Tamilisai Soundararajan]]
| chief_minister = [[N. Rangaswamy]]
| party = [[All India N.R. Congress|AINRC]]
| chief_secretary = Ashwani Kumar, IAS
| judiciary = [[Madras High Court]]
| legislature_type = Unicameral
| assembly = [[Puducherry Legislative Assembly]]
| assembly_seats = 33 seats
| rajya_sabha_seats = 1 seat
| lok_sabha_seats = 1 seat
| area_total_km2 = 483
| area_rank = 34th
| population_total = 1,394,467
| population_as_of = 2011
| population_rank = 29th
| population_urban = 68.33%
| population_rural = 31.67%
| population_density = 2,900
| official_langs = [[Tamil language|Tamil]] •[[English language|English]] •[[French language|French]]
| additional_official = [[Malayalam]] • [[Telugu language|Telugu]]
| GDP_total = {{INRConvert|210|b|lk=r}}
| GDP_year = 2019-20
| GDP_rank = 26th
| GDP_per_capita = {{INRConvert|206888|lk=r}}
| GDP_per_capita_rank = 10th
| HDI_year = 2018
| HDI = {{increase}}0.740 (<span style="color:#090">High</span>)
| HDI_rank = 7th
| literacy = 86.55%
| literacy_year = 2011
| sex_ratio = 1037
| sexratio_year = 2011
| iso_code = IN-PY
| registration_plate = PY 01 - PY 05
| website = py.gov.in
| footnotes = Territories of French India were completely transferred to the Republic of India de facto.
}}
<syntaxhighlight lang="wikitext" style="overflow:auto; white-space: pre-wrap;">
{{Template:Infobox Indian state or territory
| name = Puducherry
| type = Union Territory
| image_seal = Emblem of the Government of Puducherry.png
| seal_type = Emblem of Puducherry
| motto = Satyameva Jayate <br/> (Truth alone triumphs)
| anthem = [[Tamil Thai Valthu (Tamil Nadu)|Tamil Thai Valthu]]
| image_map = IN-PY.svg
| region = South India
| formation_date = 1 November 1954
| formation_date4 = 1 July 1963
| capital = Puducherry (city){{!}}Puducherry
| largestcity = capital
| districts = [[List of districts of Puducherry|4]]
| lt_governor = [[Tamilisai Soundararajan]]
| chief_minister = [[N. Rangaswamy]]
| party = [[All India N.R. Congress|AINRC]]
| chief_secretary = Ashwani Kumar, IAS
| judiciary = [[Madras High Court]]
| legislature_type = Unicameral
| assembly = [[Puducherry Legislative Assembly]]
| assembly_seats = 33 seats
| rajya_sabha_seats = 1 seat
| lok_sabha_seats = 1 seat
| area_total_km2 = 483
| area_rank = 34th
| population_total = 1,394,467
| population_as_of = 2011
| population_rank = 29th
| population_urban = 68.33%
| population_rural = 31.67%
| population_density = 2,900
| official_langs = [[Tamil language|Tamil]] •[[English language|English]] •[[French language|French]]
| additional_official = [[Malayalam]] • [[Telugu language|Telugu]]
| GDP_total = {{INRConvert|210|b|lk=r}}
| GDP_year = 2019-20
| GDP_rank = 26th
| GDP_per_capita = {{INRConvert|206888|lk=r}}
| GDP_per_capita_rank = 10th
| coastline = 30.6
| HDI_year = 2018
| HDI = {{increase}}0.740 (<span style="color:#090">High</span>)
| HDI_rank = 7th
| literacy = 86.55%
| literacy_year = 2011
| sex_ratio = 1037
| sexratio_year = 2011
| iso_code = IN-PY
| registration_plate = PY 01 - PY 05
| website = py.gov.in
| footnotes = Territories of French India were completely transferred to the Republic of India de facto.
}}
</syntaxhighlight>
== Tracking category ==
* {{clc|Pages using infobox Indian state or territory with unknown parameters}}
liwnr6njovc36fb6o8s325cq7mwh8sk
ಇಂಕ್ವಿಲಾಬ್ ಜಿಂದಾಬಾದ್
0
153556
1378146
1337518
2026-08-02T15:19:08Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378146
wikitext
text/x-wiki
'''ಇಂಕ್ವಿಲಾಬ್ ಜಿಂದಾಬಾದ್''' ( {{Lang-ur|{{Nastaliq|اِنقلاب زِنده باد}}}}; {{Lang-hi|इंक़लाब ज़िन्दाबाद}}) ಒಂದು ಹಿಂದೂಸ್ತಾನಿ ಘೋಷಣೆಯಾಗಿದೆ<ref>{{Cite web |title=inquilab {{!}} Definition of inquilab in English by Oxford Dictionaries |url=https://en.oxforddictionaries.com/definition/inquilab |url-status=dead |archive-url=https://web.archive.org/web/20180129004323/https://en.oxforddictionaries.com/definition/inquilab |archive-date=29 January 2018 |access-date=2018-03-22 |website=Oxford Dictionaries {{!}} English}}</ref><ref>{{Cite news |title=इंकलाब जिंदाबाद का नारा किसने दिया ? - Azab Gazab {{!}} DailyHunt |language=kn |work=DailyHunt |url=https://m.dailyhunt.in/news/india/hindi/azab+gazab-epaper-azabgaz/inkalab+jindabad+ka+nara+kisane+diya-newsid-71491288 |access-date=2018-08-04 |archive-date=2018-08-04 |archive-url=https://web.archive.org/web/20180804201302/https://m.dailyhunt.in/news/india/hindi/azab+gazab-epaper-azabgaz/inkalab+jindabad+ka+nara+kisane+diya-newsid-71491288 |url-status=dead }}</ref> ಇದು "ಕ್ರಾಂತಿ ಚಿರಾಯುವಾಗಲಿ" ಎಂಬ ಅರ್ಥವನ್ನು ಕೊಡುತ್ತದೆ. ಮೂಲತಃ ಈ ಘೋಷಣೆಯನ್ನು ಬ್ರಿಟಿಷ್ ಭಾರತದಲ್ಲಿ ಎಡಪಂಥೀಯರು ಬಳಸಿದ್ದರೂ, ಇಂದು ಇದನ್ನು [[ಭಾರತ]] ಮತ್ತು [[ಪಾಕಿಸ್ತಾನ|ಪಾಕಿಸ್ತಾನದಲ್ಲಿ]] ಪ್ರತಿಭಟನೆಯ ಸಮಯದಲ್ಲಿ ನಾಗರಿಕ ಸಮಾಜದ ಕಾರ್ಯಕರ್ತರು ಮತ್ತು ವಿವಿಧ ಸೈದ್ಧಾಂತಿಕ ಹಿನ್ನೆಲೆಯ ರಾಜಕಾರಣಿಗಳು ಬಳಸುತ್ತಾರೆ.<ref>{{Cite web |title=Arvind Kejriwal Calls His Win in Delhi Election the 'Birth of a New Politics' |url=https://thewire.in/politics/arvind-kejriwal-delhi-assembly-elections-win}}</ref><ref>{{Cite web |title=Pakistan में Inquilab Zindabad और Azaadi के Slogan क्यों गूंज रहे हैं? (BBC Hindi) |url=https://www.youtube.com/watch?v=WRRtaqOQPjY |website=[[YouTube]]}}</ref><ref>{{Cite web |url=https://rightswireblog.org/tag/kanhaiya-kumar/ |title=ಆರ್ಕೈವ್ ನಕಲು |access-date=2023-11-19 |archive-date=2023-01-08 |archive-url=https://web.archive.org/web/20230108212707/https://rightswireblog.org/tag/kanhaiya-kumar/ |url-status=dead }}</ref><ref>{{Cite web |date=29 May 2022 |title=Inquilab Zindabad slogan will stay relevant till people continue their struggle against diverse inequalities |url=https://indianexpress.com/article/opinion/columns/the-idealism-behind-inquilab-zindabad-indian-freedom-struggle-umar-khalid-delhi-high-court-7941740/}}</ref><ref>{{Cite web |date=20 May 2022 |title=At Umar Khalid's bail hearing, Delhi HC deliberates on meaning of 'inquilab': 'Revolution not necessarily bloodless' |url=https://indianexpress.com/article/cities/delhi/delhi-high-court-umar-khalid-speech-pm-modi-krantikari-northeast-riots-7928252/}}</ref>
== ಇತಿಹಾಸ ==
ಈ ಘೋಷಣೆಯನ್ನು ಇಸ್ಲಾಮಿಕ್ ವಿದ್ವಾಂಸ, ಉರ್ದು ಕವಿ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಮುಖ ನಾಯಕ ಮತ್ತು ಭಾರತದ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ [[ಹಸರತ್ ಮೊಹಾನಿ|ಮೌಲಾನಾ ಹಸರತ್ ಮೊಹಾನಿ ಅವರು]] 1921 ರಲ್ಲಿ ರಚಿಸಿದರು<ref>{{Cite book|url=https://books.google.com/books?id=4g1_BAAAQBAJ&dq=zindabad+mohani&pg=PA2|title=Indian Philately Digest|last=Pandya|first=Prashant H.|date=2014-03-01|publisher=Indian Philatelists' Forum|language=kn}}</ref><ref>{{Cite news |date=June 18, 2005 |title=LITERACY NOTES: Hasrat Mohani – a unique poet & politician |work=Business Recorder |url=https://fp.brecorder.com/2005/06/20050618282881 |access-date=April 6, 2018 |archive-url=https://web.archive.org/web/20180406065746/https://fp.brecorder.com/2005/06/20050618282881/ |archive-date=April 6, 2018}}</ref><ref>{{Cite news |date=2017-01-02 |title=India remembers Maulana Hasrat Mohani who gave the revolutionary slogan 'Inquilab Zindabad' |language=kn |work=Zee News |url=http://zeenews.india.com/india/india-remembers-maulana-hasrat-mohani-who-gave-the-revolutionary-slogan-inquilab-zindabad_1963758.html |access-date=2018-04-06}}</ref> ಇದನ್ನು [[ಭಗತ್ ಸಿಂಗ್]] (1907-1931) 1920 ರ ದಶಕದ ಉತ್ತರಾರ್ಧದಲ್ಲಿ ಅವರ ಭಾಷಣಗಳು ಮತ್ತು ಬರಹಗಳ ಮೂಲಕ ಜನಪ್ರಿಯಗೊಳಿಸಿದರು.<ref name="book_bhagat_singh_speeches_writings_2007" /> ಇದು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ನ ಅಧಿಕೃತ ಘೋಷಣೆಯಾಗಿದೆ,<ref name="book_bhagat_singh_speeches_writings_2007" /> <ref name="livehistory_2017_inquilab_article">{{Cite news |title=Inquilab Zindabad: A War Cry for Change |url=https://www.livehistoryindia.com/snapshort-histories/2017/08/06/inquilab-zindabad-a-war-cry-for-change |url-status=dead |access-date=2018-04-06 |archive-url=https://web.archive.org/web/20180110234242/https://www.livehistoryindia.com/snapshort-histories/2017/08/06/inquilab-zindabad-a-war-cry-for-change |archive-date=10 January 2018}}</ref> ಮತ್ತು ಕಮ್ಯುನಿಸ್ಟ್ ಬಲವರ್ಧನೆಯ ಘೋಷಣೆ ಮತ್ತು ಅಖಿಲ ಭಾರತ ಆಜಾದ್ ಮುಸ್ಲಿಂ ಸಮ್ಮೇಳನದ ಘೋಷಣೆಯಾಗಿದೆ.<ref name="Ali2017">{{Cite web |last=Ali |first=Afsar |date=17 July 2017 |title=Partition of India and Patriotism of Indian Muslims |url=http://www.milligazette.com/news/15756-partition-of-india-and-patriotism-of-indian-muslims |publisher=[[The Milli Gazette]] |language=kn}}</ref> ಏಪ್ರಿಲ್ 1929 ರಲ್ಲಿ, ಈ ಘೋಷಣೆಯನ್ನು ಭಗತ್ ಸಿಂಗ್ ಮತ್ತು ಅವರ ಸಹವರ್ತಿ [[ಬಟುಕೇಶ್ವರ ದತ್ತ|ಬಟುಕೇಶ್ವರ್ ದತ್]] ಅವರು ದೆಹಲಿಯ [[ಕೇಂದ್ರ ಶಾಸನ ಸಭೆ|ಕೇಂದ್ರ ಶಾಸನ ಸಭೆ]]ಯ ಮೇಲೆ ಬಾಂಬ್ ಸ್ಫೋಟಿಸಿದ ನಂತರ ಈ ಘೋಷಣೆಯನ್ನು ಕೂಗಿದರು.<ref>{{Cite journal|last=Habib|first=S. Irfan|date=2007|title=Shaheed Bhagat Singh and his Revolutionary Inheritance|journal=Indian Historical Review|volume=34|issue=2|pages=79–94|doi=10.1177/037698360703400205}}</ref> ನಂತರ, ಮೊದಲ ಬಾರಿಗೆ ತೆರೆದ ನ್ಯಾಯಾಲಯದಲ್ಲಿ, ಈ ಘೋಷಣೆಯನ್ನು ಜೂನ್ 1929 ರಲ್ಲಿ ದೆಹಲಿಯ ಹೈಕೋರ್ಟ್ನಲ್ಲಿ ಅವರ [[wikisource:Joint Statement of Bhagat Singh and B. K. Dutt in the Assembly Bomb Case|ಜಂಟಿ ಹೇಳಿಕೆಯ]] ಭಾಗವಾಗಿ ಎತ್ತಲಾಯಿತು.<ref name="book_bhagat_singh_speeches_writings_2007">{{Cite web |title=Bhagat Singh: Select Speeches And Writings, Edited by D. N. Gupta |url=https://archive.org/stream/BhagatSinghSelectSpeechesAndWritingsD.N.Gupta/Bhagat%20Singh%20Select%20Speeches%20And%20Writing's%20-%20D.N.%20Gupta |access-date=2018-04-06 |website=archive.org}}</ref><ref>{{Cite web |last=Singh |first=Bhagat |title=Full Text of Statement of S. Bhagat Singh and B.K. Dutt in the Assembly Bomb Case |url=https://www.marxists.org/archive/bhagat-singh/1929/06/06.htm |access-date=2018-04-06 |website=www.marxists.org}}</ref> ಅಂದಿನಿಂದ, ಇದು [[ಭಾರತದ ಸ್ವಾತಂತ್ರ್ಯ ಚಳುವಳಿ|ಭಾರತೀಯ ಸ್ವಾತಂತ್ರ್ಯ ಚಳುವಳಿಯ]] ರ್ಯಾಲಿ ಕೂಗುಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ ಚಳುವಳಿಯನ್ನು ವಿವರಿಸುವ ಭಾರತೀಯ ರಾಜಕೀಯ ಕಾದಂಬರಿಗಳಲ್ಲಿ, ಸ್ವಾತಂತ್ರ್ಯದ ಪರವಾದ ಭಾವನೆಯು ಈ ಘೋಷಣೆಯನ್ನು ಕೂಗುವ ಪಾತ್ರಗಳಿಂದ ನಿರೂಪಿಸಲ್ಪಟ್ಟಿದೆ.<ref>{{Cite book|url=https://books.google.com/books?id=j1Abhv0NUaUC&dq=inquilab+zindabad&pg=PA42|title=Indian Political Novel in English|last=Bhatnagar|first=O.P.|publisher=Saruk and Sons|year=2007|isbn=9788176257992|location=Delhi|page=42}}</ref>
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಭಾರತೀಯ ಸ್ವಾತಂತ್ರ್ಯ ಚಳುವಳಿ]]
i7jls18q0odpm35u2b9lw35xungptun
ಖಾಜ಼ಾರ್
0
159608
1378226
1375361
2026-08-03T01:28:42Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1378226
wikitext
text/x-wiki
[[ಚಿತ್ರ:Chasaren.jpg|thumb|ಖಾಜ಼ಾರ್ ಖಾಗನೇಟ್, ೬೫೦-೮೫೦]]
'''ಖಾಜ಼ಾರ್''' ಎನ್ನುವುದು ಒಂದು [[:en:Race_(human_categorization)|ಜನಾಂಗ]]. ಈ ಜನಾಂಗದವರ [[ಭಾಷೆ]] ಬಹುಶಃ ಟರ್ಕಿಕ್. ಕ್ರಿ.ಶ. 500-1000ದ ಕಾಲದಲ್ಲಿ ಪ್ರಾಮುಖ್ಯ ತಳೆದಿದ್ದರು.
'''ಎಲ್ಲೆಗಳು''': ಇವರ ಸಾಮ್ರಾಜ್ಯದ ಎಲ್ಲೆಗಳನ್ನು ನಿರ್ದಿಷ್ಟವಾಗಿ ಗುರುತಿಸುವುದು ಅಸಾಧ್ಯ. ಅವು ಸ್ಥಿರವಾಗೇನೂ ಇರಲಿಲ್ಲ. ಆದರೆ 6ನೆಯ ಶತಮಾನದ ಉತ್ತರಾರ್ಧದ ವೇಳೆಗೆ ಸ್ಥೂಲವಾಗಿ [[:en:Sea_of_Azov|ಆಜ಼ಾವ್ ಸಮುದ್ರ]], [[ಕ್ಯಾಸ್ಪಿಯನ್ ಸಮುದ್ರ|ಕ್ಯಾಸ್ಪಿಯನ್ ಸಮುದ್ರ]], [[ವೋಲ್ಗಾ ನದಿ|ವಾಲ್ಗ ನದಿ]], [[ಡಾನ್ (ನದಿ)|ಡಾನ್ ನದಿ]]-ಇವು ಇದರ [[ಗಡಿ|ಗಡಿಗಳಾಗಿದ್ದುವು]]. ದಕ್ಷಿಣದಲ್ಲಿ ಇವರ ಸಾಮ್ರಾಜ್ಯ [[:en:Caucasus_Mountains|ಕಾಕಸಸ್ ಪರ್ವತಗಳವರೆಗೂ]] ಹಬ್ಬಿತ್ತು.
'''ಉಗಮ''': ಖಾಜ಼ಾರ್ ಎಂಬ ಹೆಸರು ಮೊದಲ ಬಾರಿಗೆ 6ನೆಯ ಶತಮಾನದಲ್ಲಿ ಬರುತ್ತದೆ. ಆದರೆ ಈ ಜನ ಇದಕ್ಕೂ ಹಿಂದೆ ಬೇರೊಂದು ಹೆಸರಿನಲ್ಲಿ ಇದ್ದಿರಲೇಬೇಕೆಂಬುದಂತೂ ನಿಸ್ಸಂದೇಹ. [[:en:Akatziri|ಅಕಾಟ್ಜ಼ಿರ್]] ಎಂದು ಕರೆಯಲ್ಪಡುತ್ತಿದ್ದ [[:en:Huns|ಹೂಣರೇ]] ಖಾಜ಼ಾರರ ಮೂಲಪುರುಷರೆಂಬುದು ಕೆಲವು [[ವಿದ್ವಾಂಸ|ವಿದ್ವಾಂಸರ]] ಅಭಿಮತ. ಇದು ನಿಜವಾಗಿದ್ದ ಪಕ್ಷದಲ್ಲಿ ಖಾಜ಼ಾರರ ಇತಿಹಾಸವನ್ನು ಇನ್ನೊಂದು ಶತಮಾನ ಕಾಲ ಹಿಂದಕ್ಕೆ ತೆಗೆದುಕೊಂಡು ಹೋಗಬಹುದು. ಏಕೆಂದರೆ ಅಕಾಟ್ಸಿರರು 5ನೆಯ ಶತಮಾನದ ನಡುಗಾಲದಲ್ಲಿದ್ದರೆಂದು ತಿಳಿದುಬರುತ್ತದೆ.{{sfn|Blockley|1992|p=73}}{{sfn|Atwood|2012|p=48}} ಆದರೆ ಅಕಾಟ್ಸಿರರ ವಿಚಾರವೂ ಇತಿಹಾಸಕಾರರಿಗೆ ಹೆಚ್ಚಾಗಿ ಗೊತ್ತಿಲ್ಲ. ಆದ್ದರಿಂದ ಖಾಜ಼ಾರರ ಬಗ್ಗೆ ಹೊಸ ಸಂಗತಿಯೇನೂ ದೊರಕುವುದಿಲ್ಲ. [[:en:Ravenna_Cosmography|ರ್ಯಾವೆನಾ ಕಾಸ್ಮಾಗ್ರಫಿ]] ಎಂಬ ಗ್ರಂಥ ಬರೆದ ಅನಾಮಿಕ ಚರಿತ್ರಕಾರನ ಪ್ರಕಾರ ಅಕಾಟ್ಸಿರರೂ ಖಾಜ಼ಾರರೂ ಒಂದೇ. ಆದರೆ ತುರ್ಕದಿಂದ [[:en:Sabir_people|ಸಾಬಿರ್]] ಎಂದು ಕರೆಯಲ್ಪಡುತ್ತಿದ್ದ ಜನರೇ [[ಪಾರ್ಸಿ ಭಾಷೆ|ಪರ್ಷಿಯನ್ನಲ್ಲಿ]] ಖಾಜ಼ಾರ್ ಎನಿಸಿಕೊಂಡರೆಂಬುದು ಅರಬ್ ಚರಿತ್ರಕಾರ [[ಅಲ್ ಮಸೂದ್|ಅಲ್-ಮಸೂದಿಯ]] ಮತ. ಈ ಎರಡೂ ಮತಗಳನ್ನು ಸಮನ್ವಯಗೊಳಿಸಬೇಕಾದರೆ ಅಕಾಟ್ಸಿರರೂ ಸಾಬಿರರೂ ಒಂದೇ ಎನ್ನಬೇಕಾಗುತ್ತದೆ. ಆದರೆ 5ನೆಯ ಶತಮಾನದ ಬಿಜ಼ಾಂಟಿನ್ ಚರಿತ್ರಕಾರ [[:en:Priscus|ಪ್ರಿಸ್ಕಸನ]] ಅಭಿಪ್ರಾಯ ಇದಕ್ಕೆ ವಿರುದ್ಧವಾಗಿದೆ. ಖಾಜ಼ಾರರೂ ಸಾಬಿರ್ಗಳೂ ಭಿನ್ನ ಜನರೆಂದು ಆತ ಹೇಳುತ್ತಾನೆ.
== ಇತಿಹಾಸ ==
6ನೆಯ ಶತಮಾನದಲ್ಲಿದ್ದ [[:en:Zacharias_Rhetor|ಮಿಟಲೀನಿನ ಜ಼ಕಾರಿಯನ]] ಸಿರಿಯಾಕ್ ಉದಂತಗಳಲ್ಲಿ (The Syriac Chronicle) ಖಾಜ಼ಾರರ ಬಗ್ಗೆ ಪ್ರಥಮವಾಗಿ ಖಚಿತವಾದ ಉಲ್ಲೇಖವಿದೆ.<ref>https://www.missionislam.com/nwo/tribe.htm</ref> ಈ ಕಾಲದ ಪರ್ಷಿಯನ್ ದಾಖಲೆಗಳಲ್ಲಿ ಖಾಜ಼ಾರರ ಉಲ್ಲೇಖವಿಲ್ಲವಾದರೂ [[:en:Khosrow_I|1ನೆಯ ಖುಸ್ರೋ]] (531-579) ಕಾಲದಲ್ಲೇ ಪರ್ಷಿಯನರು ಖಾಜ಼ಾರರೊಂದಿಗೆ ಸಂಪರ್ಕ ಹೊಂದಿದ್ದರೆಂದು ಹೇಳಬಹುದು. ಈ ಕಾಲದಲ್ಲಿ ಅವರು [[:en:Western_Turkic_Khaganate|ಪಶ್ಚಿಮ ಟರ್ಕಿಕ್ ಸಾಮ್ರಾಜ್ಯಕ್ಕೆ]] ಸೇರಿದ್ದಿರಬಹುದು. ಖಾಜ಼ಾರರು ಪಶ್ಚಿಮದ ರಾಜಕೀಯವನ್ನು ಪ್ರವೇಶಿಸಿದ್ದು [[:en:Heraclius|ಹಿರಾಕ್ಲಿಯಸ್ ಚಕ್ರವರ್ತಿಯ]] (610-641) ಕಾಲದಲ್ಲಿ. ಹಿರಾಕ್ಲಿಯಸ್ ಷರ್ಷಿಯನ್ನರ ವಿರುದ್ಧ ನಡೆಸಿದ [[ಯುದ್ಧ|ಯುದ್ಧದಲ್ಲಿ]] ಖಾಜ಼ಾರರ ಸಹಾಯಕ ದಳದ ನೆರವು ಪಡೆದ. ಇದರಿಂದ ಹಿರಾಕ್ಲಿಯಸನಿಗೆ ಜಯ ಲಭಿಸಿತು. ಚಕ್ರವರ್ತಿಯ ಪುತ್ರಿಯರಲ್ಲೊಬ್ಬಳನ್ನು ಖಾಜ಼ಾರರ ಮುಖಂಡ ಮದುವೆಯಾದ.{{sfn|Kaegi|2003|pp=143–145}}
7ನೆಯ ಶತಮಾನದ ಮಧ್ಯಭಾಗದಲ್ಲಿ ಅರಬರು ಟ್ರಾನ್ಸ್ಕಾಕೇಷಿಯನ್ ಪ್ರದೇಶವನ್ನು ಗೆದ್ದರು. 661ರಲ್ಲಿ ಅವರ ಸೇನೆ [[:en:North_Caucasus|ಉತ್ತರ ಕಾಕಸಸ್ಗೆ]] ನುಗ್ಗಿ [[:en:Derbent|ಡೆರ್ಬೆಂಟ್]] [[ನಗರ|ನಗರವನ್ನು]] ಖಾಜ಼ಾರರಿಂದ ವಶಪಡಿಸಿಕೊಂಡಿತು. ಇದರಿಂದಾಗಿ ಆಕ್ರಮಣಕಾರಿ ಅರಬರಿಗೂ ಖಾಜ಼ಾರರಿಗೂ ದೀರ್ಘಕಾಲದ [[:en:Arab–Khazar_wars|ಯುದ್ಧ]] ಪ್ರಾರಂಭವಾಯಿತು. ಖಾಜ಼ಾರರು ಪಶ್ಚಿಮದ ಕಡೆಯಲ್ಲಿ ಹರಡಿಕೊಂಡರು. 681ರ ವೇಳೆಗೆ ಖಾಜ಼ಾರರು ಪ್ರಬಲರಾದರು. 685ರ ವೇಳೆಗೆ ಕಾಕಸಸಿನ ದಕ್ಷಿಣದ ಕಡೆ ದಾಳಿ ನಡೆಸಲಾರಂಭಿಸಿದರು. [[ಜಾರ್ಜಿಯ]], [[ಆರ್ಮೇನಿಯ|ಆರ್ಮೀನಿಯ]], ಕ್ಯಾಸ್ಟಿಯನ್ ಆಲ್ಟೇನಿಯ ಅವರ ಆಕ್ರಮಣಕ್ಕೆ ಒಳಗಾದುವು. 717ರಲ್ಲಿ [[ಅಜೆರ್ಬೈಜಾನ್|ಅಜ಼ರ್ಬೈಜಾನನ್ನು]] ಕೂಡ ಆಕ್ರಮಿಸಿಕೊಂಡರು. 721-722ರಲ್ಲಿ ಅವರು ತಮ್ಮ ಆಕ್ರಮಣ ಮುಂದುವರಿಸಿದರು. ಈ ವಿಜಯಗಳಿಂದಾಗಿ ಖಾಜ಼ಾರರು ಅರಬರ ನೆರೆಗೆ ಬಂದಂತಾಯಿತು. 722ರಲ್ಲಿ ಅರಬರಿಗೂ ಖಾಜ಼ಾರರಿಗೂ ಘರ್ಷಣೆ ಸಂಭವಿಸಿತು. ಮೊದಲ ವಿಜಯ ಖಾಜ಼ಾರರದು. ಆದರೆ ಅನಂತರ ಅರಬರು ಪ್ರತಿದಾಳಿ ನಡೆಸಿ, [[:en:Darial_Gorge|ಡೇರಿಯಲ್ ಕಣಿವೆ]] ಉತ್ತರದಲ್ಲಿದ್ದ ಖಾಜ಼ಾರ್ರ ನಗರವಾದ [[:en:Balanjar|ಬಲಾಂಜಾರನ್ನು]] ಹಿಡಿದುಕೊಂಡರು.{{sfn|Brook|2010|pp=126–127}} ವಾಲ್ಗ ನದಿಯ ಮೇಲಿದ್ದ ಖಾಜ಼ಾರ್ [[ರಾಜಧಾನಿ]] [[:en:Atil|ಆಟಿಲ್ಗೂ]] ಅಪಾಯವಿತ್ತು (729). ಆದರೆ 730ರಲ್ಲಿ ಖಾಜ಼ಾರರು ಮತ್ತೆ ಉಗ್ರವಾಗಿ ಮುನ್ನುಗ್ಗಿದರು. ಅವರ ವಿಜಯೀ ಸೇನೆ [[ಟೈಗ್ರಿಸ್]] [[ನದಿ|ನದಿಯ]] ದಂಡೆಯ ಮೇಲಿನ ಅರಬ್ ನಗರವಾದ [[:en:Mosul|ಮೊಸೂಲ್ವರೆಗೂ]] ಹೋಯಿತು. ಅನಂತರ ಅರಬರು ಖಾಜ಼ಾರರನ್ನು ಕಾಕಸಸಿನ ಉತ್ತರಕ್ಕೆ ಹಿಂತಳ್ಳಿದರಾದರೂ ಅರಬರ ವಿಸ್ತರಣ ಪ್ರಯತ್ನಕ್ಕೆ ಕಾಕಸಸ್ಸೇ ಉತ್ತರದ ಗಡಿಯಾಯಿತು.
ಈ ಕಾಲದಲ್ಲೆಲ್ಲ ಖಾಜ಼ಾರರು ಬಿಜ಼ಂಟೀನ್ ಚಕ್ರವರ್ತಿಗಳೊಡನೆ ಸಂಪರ್ಕ ಹೊಂದಿದ್ದರು. [[:en:Justinian_II|2ನೆಯ ಜಸ್ಟಿನಿಯನ್]] ದೇಶಭ್ರಷ್ಟನಾಗಿದ್ದಾಗ ಅನೇಕ ವರ್ಷಗಳ ಕಾಲ ಖಾಜ಼ಾರರೊಂದಿಗಿದ್ದ.<ref name="Ostrogorsky, pp. 124-126">{{harvnb|Ostrogorsky|1956|pp=124–126}}</ref> 704ರಲ್ಲಿ ಖಾಜ಼ಾರರ ಮುಖಂಡನ ಮಗಳನ್ನು ಲಗ್ನವಾದ. ಆದರೆ ಅವರ ಸ್ನೇಹ ಹೆಚ್ಚು ಕಾಲ ಉಳಿಯಲಿಲ್ಲ. [[:en:Kherson|ಖೆರ್ಸಾನ್]] [[ಪಟ್ಟಣ|ಪಟ್ಟಣದಲ್ಲಿ]] ಜನ [[ದಂಗೆ|ದಂಗೆಯೆದ್ದಾಗ]] ಅವರಿಗೆ ಖಾಜ಼ಾರರು ಸಹಾಯ ನೀಡಿ ಜಸ್ಟಿನಿಯನನ ಪತನಕ್ಕೆ (711) ಮುಖ್ಯ ಕಾರಣರಾದರು. 732ರಲ್ಲಿ ಮತ್ತೊಬ್ಬ ಬಿಜ಼ಾಂಟಿನ್ ಚಕ್ರವರ್ತಿ [[:en:Leo_III_the_Isaurian|3ನೆಯ ಲೀಯೋ]] (685-741) ತನ್ನ ಮಗನಿಗೆ ಖಾಜ಼ಾರ್ ರಾಜಕುಮಾರಿಯೊಬ್ಬಳನ್ನು ಮದುವೆ ಮಾಡಿದ. ಆತನೇ ಮುಂದೆ [[:en:Constantine_V|5ನೆಯ ಕಾನ್ಸ್ಟಂಟೀನ್]] ಆದ. ಆ ಕಾಲದ ಬಿಜ಼ಾಂಟಿನ್ ಆಸ್ಥಾನದಲ್ಲಿ ಖಾಜ಼ಾರರು ಅತ್ಯಂತ ಪ್ರಭಾವಶಾಲಿಗಳಾಗಿದ್ದರು. ಕಾನ್ಸ್ಟಂಟೀನನ ಮಗ [[:en:Leo_IV_the_Khazar|4ನೆಯ ಲೀಯೋಗೆ]] ಖಾಜ಼ಾರ್ ಎಂಬುದು ಉಪನಾಮವಾಗಿತ್ತು.{{sfn|Bury|2015|p=478}}
ಒಟ್ಟಿನಲ್ಲಿ 8ನೆಯ ಶತಮಾನದ ಉತ್ತರಾರ್ಧದಲ್ಲಿ ಖಾಜ಼ಾರ್ ಚಕ್ರಾಧಿಪತ್ಯ ವೈಭವದ ಶಿಖರ ಮುಟ್ಟಿತ್ತು. ಖಾಜ಼ಾರರ ನೇರ ಪ್ರಭಾವ [[ಕಪ್ಪು ಸಮುದ್ರ]], ಕ್ಯಾಸ್ಪಿಯನ್ ಸಮುದ್ರಗಳ ಉತ್ತರ ತೀರದಿಂದ [[:en:Ural_Mountains|ಯೂರಲ್ಸ್]] ಮತ್ತು ವಾಲ್ಗವರೆಗೂ ಹಬ್ಬಿತ್ತು. [[:en:Alans|ಅಲಾನಿ]] ಮತ್ತು ಇತರ ಜನಾಂಗಗಳೂ, ಹಂಗರಿಯನರೂ, [[:en:Goths|ಗಾಥರೂ]], [[ಕ್ರಿಮಿಯ|ಕ್ರಿಮಿಯನ್ ಪರ್ಯಾಯದ್ವೀಪದ]] ಗ್ರೀಕ್ [[ವಸಾಹತು|ವಸಾಹತುಗಳ]] ಜನರೂ ಖಾಜ಼ಾರರನ್ನು ತಮ್ಮ ಮಹಾಪ್ರಭುಗಳೆಂದು ಒಪ್ಪಿಕೊಂಡಿದ್ದರು.
8ನೆಯ ಶತಮಾನದ ಉತ್ತರಾರ್ಧದಲ್ಲಿ ಖಾಜ಼ಾರರಿಗೂ ಅರಬರಿಗೂ ನಡುವೆ ಯುದ್ಧಗಳು ಮತ್ತೆ ಆರಂಭವಾದವು. 786 ಮತ್ತು 787ರಲ್ಲಿ ಖಾಜ಼ಾರರು ಕ್ರಿಮಿಯದ ಗಾಥರ ಮೇಲೆ ದಂಡೆತ್ತಿ ಹೋದರು. ಈ ಸಮಯದಲ್ಲೇ ಜಾರ್ಜಿಯದ ಮೇಲೂ ಖಾಜ಼ಾರರು ಆಕ್ರಮಣ ನಡೆಸಿದರು.
9ನೆಯ ಶತಮಾನದಲ್ಲಿ ರಷ್ಯನರು ಖಾಜ಼ಾರರ ಪ್ರಬಲ ವಿರೋಧಿಗಳಾದರು. 965ರಲ್ಲಿ ರಷ್ಯನರ ಸೇನೆ ಖಾಜ಼ಾರರನ್ನು ಮಣಿಸಿತು. 1016ರಲ್ಲಿ ಬಿಜ಼ಾಂಟಿನ್ ಚಕ್ರವರ್ತಿ [[:en:Basil_II|2ನೆಯ ಬ್ಯಾಸಲ್]] ರಷ್ಯನರೊಡನೆ ಸೇರಿಕೊಂಡು ಖಾಜ಼ಾರರ ಮೇಲೆ ದಂಡೆತ್ತಿ ಹೋಗಿ ಇವರ ಕ್ರಿಮಿಯನ್ ಪ್ರದೇಶಗಳನ್ನು ವಶಪಡಿಸಿಕೊಂಡ.{{sfn|Holmes|2003}}{{sfn|Mango|2002|p=180}} 1030ರ ವೇಳೆಗೆ ಕಪ್ಪು ಸಮುದ್ರದ ಉತ್ತರ ಕರಾವಳಿ ಪ್ರದೇಶದಲ್ಲಿ ಖಾಜ಼ಾರರ ರಾಜಕೀಯ ಪ್ರಭಾವ ಕೊನೆಗೊಂಡಿತು. ಅವರ ಪ್ರದೇಶಗಳೆಲ್ಲ ಬಿಜ಼ಾಂಟಿಯಂಗೆ ಸೇರಿಹೋದುವು. ಆದರೂ 12ನೆಯ ಶತಮಾನದವರೆಗೂ ಖಾಜ಼ಾರರ ಹೆಸರಿನ ಉಲ್ಲೇಖಗಳು ಕಂಡುಬರುತ್ತವೆ.
== ನಾಗರಿಕತೆ ==
ಖಾಜ಼ಾರರ [[ನಾಗರೀಕತೆ|ನಾಗರಿಕತೆ]] ಸಂಕೀರ್ಣವಾದ್ದು. [[ಕ್ರೈಸ್ತ ಧರ್ಮ|ಕ್ರೈಸ್ತಮತ]], [[ಇಸ್ಲಾಂ ಧರ್ಮ|ಇಸ್ಲಾಂ]], [[ಯಹೂದಿ ಧರ್ಮ|ಯೆಹೂದ್ಯಮತ]] ಮುಂತಾದವುಗಳ ಪ್ರಭಾವ ಖಾಜ಼ಾರರ ಮೇಲೆ ಬಿದ್ದಿತ್ತು. 740ರ ಸುಮಾರಿನಲ್ಲಿ ಖಾಜ಼ಾರ್ ದೊರೆಯೂ ಅವನ ಪರಿವಾರದ ಬಹು ಮಂದಿಯೂ ಯೆಹೂದ್ಯ ಮತಕ್ಕೆ ಪರಿವರ್ತನೆ ಹೊಂದಿದರೆಂದು ಹೇಳಲಾಗಿದೆ.{{sfn|Korobkin|1998|p=352, n.8}}{{sfn|Dunlop|1954|p=170}}
ಖಾಜ಼ಾರರ ನಾಗರಿಕತೆ ಉನ್ನತಮಟ್ಟದ್ದಾಗಿತ್ತು. ಬಿಜ಼ಾಂಟಿನ್ ಮತ್ತು ಅರಬ್ ಮೂಲಗಳಿಂದ ಇದರ ಬಗ್ಗೆ ಅನೇಕ ವಿವರಗಳು ದೊರಕುತ್ತವೆ. ಆದರೆ [[:en:Khazar_language|ಖಾಜ಼ಾರ್ ಭಾಷೆಯ]] ಒಂದು ಸಾಲೂ ಲಭ್ಯವಿಲ್ಲ. ಖಾಜ಼ಾರರ [[ಶಾಸನಗಳು]] ಯಾವುವೂ ಇದುವರೆಗೂ ದೊರಕಿಲ್ಲ. ಗ್ರೀಕ್ ಗ್ರಂಥಗಳಲ್ಲಿ ಅಲ್ಲಲ್ಲಿ ಬರುವ ಪದಗಳನ್ನು-ಇವುಗಳಲ್ಲಿ ಹಲವು ವ್ಯಕ್ತಿನಾಮಗಳು-ನೋಡಿದಾಗ ಈ ಜನ [[:en:Turkic_languages|ಟರ್ಕಿಕ್ ಭಾಷೆಯೊಂದನ್ನು]] ಆಡುತ್ತಿದ್ದರೆಂಬುದು ಗೊತ್ತಾಗುತ್ತದೆ.
ಮೂಲತಃ ಇವರ ಆಡಳಿತ ಟರ್ಕಿಕ್ ಮಾದರಿಯದಾದರೂ ಮಧ್ಯ ಯುರೇಷ್ಯದ ಇತರ ಟರ್ಕಿಕ್ ಸಾಮ್ರಾಜ್ಯಗಳಂತೆ ಇದು ಇರಲಿಲ್ಲ. ಇವರ ಸಾಮ್ರಾಜ್ಯ ವ್ಯವಸ್ಥೆ ಭಿನ್ನರೀತಿಯದು. ಇದರ ದೊರೆತನ ಅರೆ-ಧಾರ್ಮಿಕ ಸ್ವರೂಪದ್ದು. ದೊರೆಗೆ ವಾಸ್ತವವಾಗಿ ಅಧಿಕಾರವೇನೂ ಇರಲಿಲ್ಲ. ಟರ್ಕಿಕ್-ಮಂಗೋಲ್ ಅಲೆಮಾರಿಗಳ ಚಕ್ರಾಧಿಪತ್ಯಗಳಂತೆ ಇದು ಅತಿಯಾಗಿ ಆಕ್ರಮಣಶೀಲವಾಗಿರಲಿಲ್ಲ. ಈ ಜನಕ್ಕೆ [[ಕೃಷಿ|ಕೃಷಿಯಲ್ಲಿ]] ಹೆಚ್ಚಿನ ಆಸಕ್ತಿಯಿತ್ತು. ವ್ಯಾಪಾರ ಮುಖ್ಯವಾಗಿತ್ತು. ರಷ್ಯನರು ಮಧ್ಯ ರಷ್ಯದ ಮುಖ್ಯ ವ್ಯಾಪಾರ ಮಾರ್ಗಗಳನ್ನು ಆಕ್ರಮಿಸಿಕೊಂಡಿದ್ದರಿಂದಲೇ ಖಾಜ಼ಾರ್ ಸಾಮ್ರಾಜ್ಯದ ಪತನವಾಯಿತೆಂದು ಊಹಿಸಬಹುದಾಗಿದೆ.
ಡಾನ್ ನದಿಯ ಕೆಳದಂಡೆಯ ಮೇಲಣ [[:en:Sarkel|ಸಾರ್ಕೆಲ್]] ನೆಲೆಯಲ್ಲಿ 9ನೆಯ ಶತಮಾನದಲ್ಲಿ ಗ್ರೀಕ್ ಶಿಲ್ಪಿಗಳ ನೆರವಿನಿಂದ ಕಟ್ಟಲಾದ ಖಾಜ಼ಾರ್ ಕೋಟೆಯ ಅವಶೇಷಗಳ ಉತ್ಖನನಗಳಿಂದ ಖಾಜ಼ಾರ್ ನಾಗರಿಕತೆಯ ಮಿಶ್ರಲಕ್ಷಣಗಳು ವ್ಯಕ್ತಪಟ್ಟಿದ್ದುವು. ವಾಲ್ಗ-ಡಾನ್ ಕಾಲುವೆಯ ನಿರ್ಮಾಣದಿಂದಾಗಿ ಈ ನೆಲೆ ನೀರಿನಲ್ಲಿ ಮುಚ್ಚಿಹೋಯಿತು.
== ಉಲ್ಲೇಖಗಳು ==
{{ಉಲ್ಲೇಖಗಳು}}
== ಗ್ರಂಥಸೂಚಿ ==
* {{cite book|url=https://books.google.com/books?id=SWNoAAAAMAAJ|title=East Roman Foreign Policy: Formation and Conduct from Diocletian to Anastasius|last=Blockley|first=R. C.|publisher=Cairns|year=1992|isbn=978-0-905205-83-0}}
* {{cite book|title=Dubitando: Studies in History and Culture in Honor of Donald Ostrowski|last=Atwood|first=Christopher P.|publisher=Cambridge University Press|year=2012|isbn=978-0-8-9357-404-8|editor-last1=Boeck|editor-first1=Brian J.|pages=27–52|chapter=Huns and Xiōngnú: New Thoughts on an Old Problem|editor-last2=Martin|editor-first2=Russell E.|editor-last3=Rowland|editor-first3=Daniel}}
* {{Cite book|url=https://books.google.com/books?id=tlNlFZ_7UhoC&pg=PA142|title=Heraclius, Emperor of Byzantium|last=Kaegi|first=Walter Emil|publisher=[[Cambridge University Press]]|year=2003|isbn=978-0-521-81459-1|edition=2nd|author-link=Walter Kaegi|via=[[Google Books]]}}
* {{cite book|url=https://books.google.com/books?id=hEuIveNl9kcC|title=The Jews of Khazaria|last=Brook|first=Kevin Alan|publisher=[[Rowman & Littlefield]]|year=2010|isbn=978-0-7425-4982-1|edition=2nd|access-date=14 August 2015|orig-year=First published 1999|archive-url=https://web.archive.org/web/20230417104350/https://books.google.com/books?id=hEuIveNl9kcC|archive-date=17 April 2023|via=[[Google Books]]|url-status=live}}
* {{Cite book|url=https://books.google.com/books?id=Bt0_AAAAYAAJ|title=History of the Byzantine State|last=Ostrogorsky|first=George|publisher=Basil Blackwell|year=1956|place=Oxford|author-link=George Ostrogorsky}}
* {{cite book|title=A History of the Later Roman Empire|last1=Bury|first1=J. B.|date=2015|publisher=Cambridge University Press|isbn=9781108083188}}
* {{cite web |last=Holmes |first=Catherine |date=1 April 2003 |title=Basil II |url=http://www.roman-emperors.org/basilii.htm |access-date=9 July 2018 |website=De Imperatoribus Romanis |archive-date=13 ಮಾರ್ಚ್ 2015 |archive-url=https://web.archive.org/web/20150313115140/http://www.roman-emperors.org/basilii.htm |url-status=dead }}
* {{cite book|url=https://books.google.com/books?id=EOcmkgEACAAJ|title=The Oxford History of Byzantium|last=Mango|first=Cyril|date=2002|publisher=Oxford University Press|isbn=978-0198140986}}
* {{Cite book|url=https://books.google.com/books?id=QKzXAAAAMAAJ|title=The Kuzari: In Defense of the Despised Faith|last=HaLevi|first=Yehuda|publisher=[[Jason Aronson]]|year=1998|isbn=978-0-7657-9970-8|editor-last=Korobkin|editor-first=Nissan Daniel|location=Northvale, New Jersey-Jerusalem|ref={{harvid|Korobkin|1998}}|author-link=Judah Halevi|via=[[Google Books]]}}
* {{cite book|url=https://books.google.com/books?id=_YdAAAAAIAAJ&q=Dunlop%2BHistory+of+the+Jewish+Khazars|title=History of the Jewish Khazars|last=Dunlop|first=Douglas Morton|publisher=[[Schocken Books]]|year=1954|location=New York, NY|author-link=Douglas Morton Dunlop|via=[[Google Books]]}}
== ಹೊರಗಿನ ಕೊಂಡಿಗಳು ==
* [http://www.lib.cam.ac.uk/cgi-bin/GOLD/thumbs?class_mark=T-S_12.122 The Kievan Letter scan] in the [[Cambridge University Library]] collection.
* [http://www.khazaria.com Khazaria.com] {{Webarchive|url=https://web.archive.org/web/19971221083021/http://khazaria.com/|date=21 December 1997}}
* [https://web.archive.org/web/20061003195338/http://www.dinur.org/resources/resourceCategoryDisplay.aspx?categoryid=457&rsid=478 Resources – Medieval Jewish History – The Khazars] The Jewish History Resource Center, Project of the Dinur Center for Research in Jewish History, The Hebrew University of Jerusalem
* {{webarchive|url=https://web.archive.org/web/20091026233731/http://geocities.com/ayatoles/|date=26 October 2009|title=Khazar Historic Maps}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖಾಜಾರ್}}
{{Interwikineeded}}
[[ವರ್ಗ:ಅಲೆಮಾರಿ ಸಾಮ್ರಾಜ್ಯಗಳು]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
clb3mesnn9zzvzzghvvdvj344kwgamj
ಸದಸ್ಯ:-revi
2
160208
1378144
1253715
2026-08-02T14:59:50Z
Pathoschild
1185
global user pages ([[m:Synchbot|requested by Revi C.]])
1378144
wikitext
text/x-wiki
#REDIRECT [[User:Revi C.]]
88g0cv17whfgb1wkeh281mptujwtlut
ಸದಸ್ಯರ ಚರ್ಚೆಪುಟ:-revi
3
160209
1378148
1253716
2026-08-02T15:36:21Z
Pathoschild
1185
global user pages ([[m:Synchbot|requested by Revi C.]])
1378148
wikitext
text/x-wiki
#REDIRECT [[User talk:Revi C.]]
o9z79lcc9a9pfmqmrod5w3eyk4q9i0o
ಟೆಂಪ್ಲೇಟು:Inflation/year
10
160468
1378254
1255520
2026-06-16T02:33:30Z
en>Zackmann08
0
FR values updated in [[Special:Diff/1327688078/1359566136]]
1378254
wikitext
text/x-wiki
<includeonly>{{#switch:{{{index|{{{1|ERR}}}}}}
<!-- *** When changing this, also update the reference in [[Template:Inflation/fn]] and the datasets for [[Template:Inflation]]! *** -->
| AR = 2020
| AT = 2018
| AU = 2022
| AU-road = 2018
| BD = 2024
| BE = 2025
| BR = 2020
| CA = 2025
| CH = 2021
| CL = 2024
| CN = 2024
| DE = 2021
| DK = 2022
| EG = 2024
| ES = 2022
| EU = 2023
| FI = 2023
| FR = 2025
| GR = 2025
| HK = 2020
| ID = 2025
| IL = 2021
| IN = 2023
| IR = 1398
| IS = 2025
| IT = 2020
| JP = 2024
| KRW = 2025
| MX = 2025
| NL = 2024
| NO = 2018
| NZ = 2026
| PE = 2017
| PH = 2021
| PK = 2021
| PL = 2021
| PT = 2007
| RU = 2023
| SE = 2023
| SG = 2022
| TEST = 2012
| TH = 2020
| TR = 2024
| TW = 2021
| UK|GBP = 2025
| UKGDP
| UK-GDP
| UK-CAP = 2024
| US|USD = 2025
| USGDP
| US-GDP
| US-CAP = 2024
| VN = 2022
| ZAR = 2018
| ERR = <span class="error">Error: no index specified when using {{tl|Inflation/year}}.{{main other|[[Category:Pages with errors in inflation template]]}}</span>
|#default = <span class="error">Error: undefined index "{{{index|{{{1}}}}}}" when using {{tl|Inflation/year}}.{{main other|[[Category:Pages with errors in inflation template]]}}</span>
}}</includeonly><noinclude>
{{Documentation}}
</noinclude>
2j1ug8kuef5ruya5a8xsl75qqckvgep
1378255
1378254
2026-08-03T07:17:12Z
A826
72368
೧ revisions imported from [[:en:Template:Inflation/year]]
1378254
wikitext
text/x-wiki
<includeonly>{{#switch:{{{index|{{{1|ERR}}}}}}
<!-- *** When changing this, also update the reference in [[Template:Inflation/fn]] and the datasets for [[Template:Inflation]]! *** -->
| AR = 2020
| AT = 2018
| AU = 2022
| AU-road = 2018
| BD = 2024
| BE = 2025
| BR = 2020
| CA = 2025
| CH = 2021
| CL = 2024
| CN = 2024
| DE = 2021
| DK = 2022
| EG = 2024
| ES = 2022
| EU = 2023
| FI = 2023
| FR = 2025
| GR = 2025
| HK = 2020
| ID = 2025
| IL = 2021
| IN = 2023
| IR = 1398
| IS = 2025
| IT = 2020
| JP = 2024
| KRW = 2025
| MX = 2025
| NL = 2024
| NO = 2018
| NZ = 2026
| PE = 2017
| PH = 2021
| PK = 2021
| PL = 2021
| PT = 2007
| RU = 2023
| SE = 2023
| SG = 2022
| TEST = 2012
| TH = 2020
| TR = 2024
| TW = 2021
| UK|GBP = 2025
| UKGDP
| UK-GDP
| UK-CAP = 2024
| US|USD = 2025
| USGDP
| US-GDP
| US-CAP = 2024
| VN = 2022
| ZAR = 2018
| ERR = <span class="error">Error: no index specified when using {{tl|Inflation/year}}.{{main other|[[Category:Pages with errors in inflation template]]}}</span>
|#default = <span class="error">Error: undefined index "{{{index|{{{1}}}}}}" when using {{tl|Inflation/year}}.{{main other|[[Category:Pages with errors in inflation template]]}}</span>
}}</includeonly><noinclude>
{{Documentation}}
</noinclude>
2j1ug8kuef5ruya5a8xsl75qqckvgep
ಮಾಡ್ಯೂಲ್:ConvertIB
828
166947
1378280
1331436
2026-07-11T19:22:17Z
en>Hike395
0
handle sigfig for cases like 0.0029 (should be 2)
1378280
Scribunto
text/plain
require('strict')
local p = {}
local getArgs = require('Module:Arguments').getArgs
-- Function to pull out values and units from numeric args
-- Returns:
-- values: list of numeric values, or "false" if no numeric argument is given
-- units: list of units (str)
-- value: if there is a last numeric value unpaired with a unit, it becomes the precision
-- anyValue: whether there is a non-false value in the values list
local function parseValuesUnits(args)
local values = {}
local units = {}
local indx = 1
local value = nil
local anyValue = false
-- loop through numeric arguments in pairs
while args[indx] or args[indx+1] do
value = args[indx]
anyValue = anyValue or value
-- if there is a unit, save in output lists
if args[indx+1] then
table.insert(values, value or false)
table.insert(units, args[indx+1])
value = nil
end
indx = indx+2
end
return values, units, value, anyValue
end
-- Function to identify multiple units and rewrite them as new input or output groups
-- Args:
-- values, units: numeric values and units, as lists with same length
-- Returns:
-- newValues, newUnits: same lists rewritten
local function parseMultiples(values, units)
local newValues = {}
local newUnits = {}
local i = 1
-- we will search for multiples with up to 4 entries (depending on length)
local maxMultiple = math.min(4,#units-1)
local valueFound = false -- flag to suppress second (and later) input values
--- Hack for handling "stone": check if only value supplied is "lb"
local onlyPounds = true
for i = 1, #units do
if values[i] and units[i] ~= 'lb' then
onlyPounds = false
break
end
end
local multiple = mw.loadData('Module:ConvertIB/data').multiple
-- sweep through units
while i <= #units do
-- determine index of last possible unit that could contain a multiple
local last_unit = math.min(i+maxMultiple-1,#units)
local multipleFound = false
-- try from longest multiple down to double multiple (prefer longest ones)
for j = last_unit, i+1, -1 do
local key = table.concat({unpack(units,i,j)}, '')
if multiple[key] then
-- we found a multiple unit
multipleFound = true
-- Hack for "stone": add either 'lb' or multiple unit string to output units
-- depending on whether 'lb' was the only unit string with a value
if mw.ustring.sub(key,1,2) == 'st' then
table.insert(newValues, false)
table.insert(newUnits, onlyPounds and key or 'lb')
end
-- if there are any value in the span of the multiple,
-- then the multiple is an input
-- assume all missing values after the first are zero
local firstValueFound = false
for k = i, j do
firstValueFound = not valueFound and (firstValueFound or values[k])
if firstValueFound then
table.insert(newValues, values[k] or 0)
table.insert(newUnits, units[k])
end
end
valueFound = valueFound or firstValueFound
-- if no values in the span of the multiple,
-- then the multiple is an output. Insert combined string as output unit
if not firstValueFound then
table.insert(newValues, false)
table.insert(newUnits, key)
end
i = j+1
break
end
end
--- If no multiple unit was found, insert value[i] and unit[i] into rewritten lists
if not multipleFound then
if valueFound then
table.insert(newValues, false) -- skip writing value if it is a duplicate
else
table.insert(newValues,values[i])
valueFound = values[i]
end
table.insert(newUnits, units[i])
i = i+1
end
end
return newValues, newUnits
end
-- Call {{convert}} with args
local function callConvert(args)
local frame = mw.getCurrentFrame()
return frame:expandTemplate{title='Convert', args=args}
end
-- Implement {{convinfobox}}
function p._convert(args)
-- find all values and units in numeric args (and the precision, if it exists)
local values, units, precision, anyValue = parseValuesUnits(args)
-- bail if no values at all
if not anyValue then
return nil
end
-- rewrite values and units if multiple units are found
values, units = parseMultiples(values, units)
-- sort input and outputs into different buckets
local input_values = {}
local input_units = {}
local output_units = {}
for i = 1, #units do
if values[i] then
table.insert(input_values, values[i])
table.insert(input_units, units[i])
else
table.insert(output_units, units[i])
end
end
-- bail if nothing to convert
if #input_values == 0 or #output_units == 0 then
return nil
end
-- assemble argument list to {{convert}}
local innerArgs = {}
-- First, pass all input unit(s)
for i, v in ipairs(input_values) do
table.insert(innerArgs,v)
table.insert(innerArgs,input_units[i])
end
-- Then the output unit(s) [concatenated as single argument]
table.insert(innerArgs,table.concat(output_units,"+"))
if precision then
table.insert(innerArgs,precision) -- last non-nil value contains precision
end
-- now handle all non-numeric arguments, passing to {{convert}}
innerArgs.abbr = 'on' -- abbr=on by default
for k, v in pairs(args) do
if not tonumber(k) then
innerArgs[k] = v
end
end
return callConvert(innerArgs)
end
local function impUnitPref(pref,country)
--- lower case all arguments
pref = pref and mw.ustring.lower(pref)
country = country and mw.ustring.lower(country)
--- determine imperial unit by going thru arguments in priority order
if pref and pref ~= 'dunam' then
local impPref = mw.loadData('Module:ConvertIB/data').impPref
return impPref[pref]
elseif country then
return mw.ustring.find(country,"united states",1,true)
or mw.ustring.find(country,"united kingdom",1,true)
end
return false
end
local largeUnits = {km2=true,mi2=true,sqmi=true,km=true,mi=true}
-- Implement {{Infobox settlement/areadisp}}
function p._area(args)
local pref = args['pref']
local country = args['name']
local impus = impUnitPref(pref, country)
local dunam = args['dunam'] or args['dunum']
local link = args['link']
local innerArgs = {}
innerArgs.abbr = 'on'
innerArgs.order = 'out'
for _, unit in ipairs({'km2','mi2','sqmi','ha','acre'}) do
if args[unit] then
table.insert(innerArgs,args[unit])
table.insert(innerArgs,unit)
if largeUnits[unit] then
table.insert(innerArgs,impus and 'sqmi km2' or 'km2 sqmi')
else
table.insert(innerArgs,impus and 'acre ha' or 'ha acre')
end
return callConvert(innerArgs)
end
end
if dunam then
table.insert(innerArgs,dunam)
table.insert(innerArgs,'dunam')
pref = pref and mw.ustring.lower(pref)
local order = pref == 'dunam' and 'dunam ' or ''
dunam = mw.getContentLanguage():parseFormattedNumber(dunam)
if impus then
order = order..(dunam and dunam < 2589 and 'acre ha' or 'sqmi km2')
else
order = order..(dunam and dunam < 1000 and 'ha acre' or 'km2 sqmi')
end
table.insert(innerArgs,order)
local yesNo = require('Module:Yesno')
if yesNo(link,true) and link ~= 'none' then
innerArgs.lk = 'in'
end
return callConvert(innerArgs)
end
return nil
end
-- Implement {{Infobox settlement/lengthdisp}}
function p._length(args)
local pref = args['pref']
if pref == 'dunam' then -- ignore dunam pref for this function
pref = nil
end
local country = args['name']
local impus = impUnitPref(pref, country)
local innerArgs = {}
innerArgs.abbr = 'on'
innerArgs.order = 'out'
for _, unit in ipairs({'km','mi','m','ft'}) do
if args[unit] then
table.insert(innerArgs,args[unit])
table.insert(innerArgs,unit)
if largeUnits[unit] then
table.insert(innerArgs,impus and 'mi km' or 'km mi')
else
table.insert(innerArgs,impus and 'ft m' or 'm ft')
end
return callConvert(innerArgs)
end
end
return nil
end
local lang
local function parseNumeric(s)
local num_str = string.match(tostring(s), '^[+-]?%d[%d,]*%.?%d*e?[+-]?%d*')
if not num_str then
return nil
end
lang = lang or mw.getContentLanguage()
return lang:parseFormattedNumber(num_str)
end
--Compute number of significant digits in a numeric string
local function computeSigFig(s)
local num_str = string.match(tostring(s), '^[+-]?%d[%d,]*%.?%d*')
if not num_str then
return 0
end
-- Strip leading signs
num_str = string.gsub(num_str, '^[+-]', '')
-- Strip commas
num_str = string.gsub(num_str, ',', '')
-- Strip leading zeros that cross decimal point
num_str = string.gsub(num_str, '^0*%.0*','.')
-- Strip leading zeros
num_str = string.gsub(num_str, '^0*', '')
if num_str == '' then
return 0
end
-- If there's a decimal point, all trailing zeros are significant.
if string.find(num_str, '%.') then
return #string.gsub(num_str, '%.', '') -- Count all digits after removing decimal
end
-- If no decimal point, trailing zeros are not significant.
-- Count all digits up to the last non-zero one.
num_str = string.gsub(num_str, '0+$', '')
return #num_str
end
-- Implement {{Infobox settlement/densdisp}}
-- Returns table:
-- density = computed value if no error
-- error = error string if error.
-- These are only errors detected in this code, {{convert}} does its own error handling
function p._density(args)
local result = {}
local pref = args['pref']
if pref == 'dunam' then -- ignore dunam pref for this function
pref = nil
end
local country = args['name']
local per_km2 = args['/km2']
local per_mi2 = args['/mi2'] or args['/sqmi']
local impus = impUnitPref(pref, country, per_km2, per_mi2)
local per_km2_value = parseNumeric(per_km2)
local per_mi2_value = parseNumeric(per_mi2)
local innerArgs = {}
innerArgs.abbr = 'on'
if per_km2_value or per_mi2_value then
innerArgs.order = 'out'
if per_km2_value then
table.insert(innerArgs,per_km2_value)
table.insert(innerArgs,'/km2')
else
table.insert(innerArgs,per_mi2_value)
table.insert(innerArgs,'/sqmi')
end
table.insert(innerArgs,impus and '/sqmi /km2' or '/km2 /sqmi')
result.density = callConvert(innerArgs)
return result
end
if per_km2 ~= 'auto' and per_mi2 ~= 'auto' then
-- automatic computation not requested, fail silently
return result
end
if not args['pop'] then
-- fail silently if no population given
return result
end
local areaSigFig
local areaValue
local areaUnit
for _, unit in ipairs({'km2','mi2','sqmi','ha','acre','dunam','dunum'}) do
local value = parseNumeric(args[unit])
if value then
if value <= 0 then
result.error = unit.." value not positive"
return result
end
areaValue = value
areaUnit = unit
areaSigFig = computeSigFig(args[unit])
break
elseif args[unit] then
result.error = "Malformed "..unit.." value"
return result
end
end
if not areaSigFig then
-- fail silently if no area given
return result
end
if areaSigFig == 0 then
result.error = "Malformed area string"
return result
end
local popValue = parseNumeric(args['pop'])
if not popValue then
result.error = "Malformed population value"
return result
end
if popValue < 0 then
result.error = "Negative population value"
return result
end
table.insert(innerArgs,popValue/areaValue)
table.insert(innerArgs,'/'..areaUnit)
local popSigFig = computeSigFig(args['pop'])
local sigFig = popSigFig < areaSigFig and popSigFig or areaSigFig
if sigFig < 2 then
sigFig = 2
end
innerArgs.sigfig = sigFig
innerArgs.disp = 'out'
table.insert(innerArgs,'/km2')
local metric = callConvert(innerArgs)
innerArgs[3] = '/sqmi'
local imperial = callConvert(innerArgs)
if impus then
result.density = string.format("%s (%s)",imperial,metric)
else
result.density = string.format("%s (%s)",metric,imperial)
end
return result
end
function p.convert(frame)
local args = getArgs(frame)
return p._convert(args) or ""
end
function p.area(frame)
local args = getArgs(frame)
return p._area(args) or ""
end
function p.length(frame)
local args = getArgs(frame)
return p._length(args) or ""
end
function p.density(frame)
local args = getArgs(frame)
local result = p._density(args)
if result.density then
return result.density
end
if result.error then
local warning = require('Module:If_preview')._warning
local result = warning({result.error})
if mw.title.getCurrentTitle().namespace == 0 then
result = result..'[[Category:Pages using infobox settlement with bad density arguments]]'
end
return result
end
return ''
end
return p
360aq9gklckfcwwcowcpaqdl3zu5aai
1378281
1378280
2026-08-03T07:17:16Z
A826
72368
೧ revisions imported from [[:en:Module:ConvertIB]]
1378280
Scribunto
text/plain
require('strict')
local p = {}
local getArgs = require('Module:Arguments').getArgs
-- Function to pull out values and units from numeric args
-- Returns:
-- values: list of numeric values, or "false" if no numeric argument is given
-- units: list of units (str)
-- value: if there is a last numeric value unpaired with a unit, it becomes the precision
-- anyValue: whether there is a non-false value in the values list
local function parseValuesUnits(args)
local values = {}
local units = {}
local indx = 1
local value = nil
local anyValue = false
-- loop through numeric arguments in pairs
while args[indx] or args[indx+1] do
value = args[indx]
anyValue = anyValue or value
-- if there is a unit, save in output lists
if args[indx+1] then
table.insert(values, value or false)
table.insert(units, args[indx+1])
value = nil
end
indx = indx+2
end
return values, units, value, anyValue
end
-- Function to identify multiple units and rewrite them as new input or output groups
-- Args:
-- values, units: numeric values and units, as lists with same length
-- Returns:
-- newValues, newUnits: same lists rewritten
local function parseMultiples(values, units)
local newValues = {}
local newUnits = {}
local i = 1
-- we will search for multiples with up to 4 entries (depending on length)
local maxMultiple = math.min(4,#units-1)
local valueFound = false -- flag to suppress second (and later) input values
--- Hack for handling "stone": check if only value supplied is "lb"
local onlyPounds = true
for i = 1, #units do
if values[i] and units[i] ~= 'lb' then
onlyPounds = false
break
end
end
local multiple = mw.loadData('Module:ConvertIB/data').multiple
-- sweep through units
while i <= #units do
-- determine index of last possible unit that could contain a multiple
local last_unit = math.min(i+maxMultiple-1,#units)
local multipleFound = false
-- try from longest multiple down to double multiple (prefer longest ones)
for j = last_unit, i+1, -1 do
local key = table.concat({unpack(units,i,j)}, '')
if multiple[key] then
-- we found a multiple unit
multipleFound = true
-- Hack for "stone": add either 'lb' or multiple unit string to output units
-- depending on whether 'lb' was the only unit string with a value
if mw.ustring.sub(key,1,2) == 'st' then
table.insert(newValues, false)
table.insert(newUnits, onlyPounds and key or 'lb')
end
-- if there are any value in the span of the multiple,
-- then the multiple is an input
-- assume all missing values after the first are zero
local firstValueFound = false
for k = i, j do
firstValueFound = not valueFound and (firstValueFound or values[k])
if firstValueFound then
table.insert(newValues, values[k] or 0)
table.insert(newUnits, units[k])
end
end
valueFound = valueFound or firstValueFound
-- if no values in the span of the multiple,
-- then the multiple is an output. Insert combined string as output unit
if not firstValueFound then
table.insert(newValues, false)
table.insert(newUnits, key)
end
i = j+1
break
end
end
--- If no multiple unit was found, insert value[i] and unit[i] into rewritten lists
if not multipleFound then
if valueFound then
table.insert(newValues, false) -- skip writing value if it is a duplicate
else
table.insert(newValues,values[i])
valueFound = values[i]
end
table.insert(newUnits, units[i])
i = i+1
end
end
return newValues, newUnits
end
-- Call {{convert}} with args
local function callConvert(args)
local frame = mw.getCurrentFrame()
return frame:expandTemplate{title='Convert', args=args}
end
-- Implement {{convinfobox}}
function p._convert(args)
-- find all values and units in numeric args (and the precision, if it exists)
local values, units, precision, anyValue = parseValuesUnits(args)
-- bail if no values at all
if not anyValue then
return nil
end
-- rewrite values and units if multiple units are found
values, units = parseMultiples(values, units)
-- sort input and outputs into different buckets
local input_values = {}
local input_units = {}
local output_units = {}
for i = 1, #units do
if values[i] then
table.insert(input_values, values[i])
table.insert(input_units, units[i])
else
table.insert(output_units, units[i])
end
end
-- bail if nothing to convert
if #input_values == 0 or #output_units == 0 then
return nil
end
-- assemble argument list to {{convert}}
local innerArgs = {}
-- First, pass all input unit(s)
for i, v in ipairs(input_values) do
table.insert(innerArgs,v)
table.insert(innerArgs,input_units[i])
end
-- Then the output unit(s) [concatenated as single argument]
table.insert(innerArgs,table.concat(output_units,"+"))
if precision then
table.insert(innerArgs,precision) -- last non-nil value contains precision
end
-- now handle all non-numeric arguments, passing to {{convert}}
innerArgs.abbr = 'on' -- abbr=on by default
for k, v in pairs(args) do
if not tonumber(k) then
innerArgs[k] = v
end
end
return callConvert(innerArgs)
end
local function impUnitPref(pref,country)
--- lower case all arguments
pref = pref and mw.ustring.lower(pref)
country = country and mw.ustring.lower(country)
--- determine imperial unit by going thru arguments in priority order
if pref and pref ~= 'dunam' then
local impPref = mw.loadData('Module:ConvertIB/data').impPref
return impPref[pref]
elseif country then
return mw.ustring.find(country,"united states",1,true)
or mw.ustring.find(country,"united kingdom",1,true)
end
return false
end
local largeUnits = {km2=true,mi2=true,sqmi=true,km=true,mi=true}
-- Implement {{Infobox settlement/areadisp}}
function p._area(args)
local pref = args['pref']
local country = args['name']
local impus = impUnitPref(pref, country)
local dunam = args['dunam'] or args['dunum']
local link = args['link']
local innerArgs = {}
innerArgs.abbr = 'on'
innerArgs.order = 'out'
for _, unit in ipairs({'km2','mi2','sqmi','ha','acre'}) do
if args[unit] then
table.insert(innerArgs,args[unit])
table.insert(innerArgs,unit)
if largeUnits[unit] then
table.insert(innerArgs,impus and 'sqmi km2' or 'km2 sqmi')
else
table.insert(innerArgs,impus and 'acre ha' or 'ha acre')
end
return callConvert(innerArgs)
end
end
if dunam then
table.insert(innerArgs,dunam)
table.insert(innerArgs,'dunam')
pref = pref and mw.ustring.lower(pref)
local order = pref == 'dunam' and 'dunam ' or ''
dunam = mw.getContentLanguage():parseFormattedNumber(dunam)
if impus then
order = order..(dunam and dunam < 2589 and 'acre ha' or 'sqmi km2')
else
order = order..(dunam and dunam < 1000 and 'ha acre' or 'km2 sqmi')
end
table.insert(innerArgs,order)
local yesNo = require('Module:Yesno')
if yesNo(link,true) and link ~= 'none' then
innerArgs.lk = 'in'
end
return callConvert(innerArgs)
end
return nil
end
-- Implement {{Infobox settlement/lengthdisp}}
function p._length(args)
local pref = args['pref']
if pref == 'dunam' then -- ignore dunam pref for this function
pref = nil
end
local country = args['name']
local impus = impUnitPref(pref, country)
local innerArgs = {}
innerArgs.abbr = 'on'
innerArgs.order = 'out'
for _, unit in ipairs({'km','mi','m','ft'}) do
if args[unit] then
table.insert(innerArgs,args[unit])
table.insert(innerArgs,unit)
if largeUnits[unit] then
table.insert(innerArgs,impus and 'mi km' or 'km mi')
else
table.insert(innerArgs,impus and 'ft m' or 'm ft')
end
return callConvert(innerArgs)
end
end
return nil
end
local lang
local function parseNumeric(s)
local num_str = string.match(tostring(s), '^[+-]?%d[%d,]*%.?%d*e?[+-]?%d*')
if not num_str then
return nil
end
lang = lang or mw.getContentLanguage()
return lang:parseFormattedNumber(num_str)
end
--Compute number of significant digits in a numeric string
local function computeSigFig(s)
local num_str = string.match(tostring(s), '^[+-]?%d[%d,]*%.?%d*')
if not num_str then
return 0
end
-- Strip leading signs
num_str = string.gsub(num_str, '^[+-]', '')
-- Strip commas
num_str = string.gsub(num_str, ',', '')
-- Strip leading zeros that cross decimal point
num_str = string.gsub(num_str, '^0*%.0*','.')
-- Strip leading zeros
num_str = string.gsub(num_str, '^0*', '')
if num_str == '' then
return 0
end
-- If there's a decimal point, all trailing zeros are significant.
if string.find(num_str, '%.') then
return #string.gsub(num_str, '%.', '') -- Count all digits after removing decimal
end
-- If no decimal point, trailing zeros are not significant.
-- Count all digits up to the last non-zero one.
num_str = string.gsub(num_str, '0+$', '')
return #num_str
end
-- Implement {{Infobox settlement/densdisp}}
-- Returns table:
-- density = computed value if no error
-- error = error string if error.
-- These are only errors detected in this code, {{convert}} does its own error handling
function p._density(args)
local result = {}
local pref = args['pref']
if pref == 'dunam' then -- ignore dunam pref for this function
pref = nil
end
local country = args['name']
local per_km2 = args['/km2']
local per_mi2 = args['/mi2'] or args['/sqmi']
local impus = impUnitPref(pref, country, per_km2, per_mi2)
local per_km2_value = parseNumeric(per_km2)
local per_mi2_value = parseNumeric(per_mi2)
local innerArgs = {}
innerArgs.abbr = 'on'
if per_km2_value or per_mi2_value then
innerArgs.order = 'out'
if per_km2_value then
table.insert(innerArgs,per_km2_value)
table.insert(innerArgs,'/km2')
else
table.insert(innerArgs,per_mi2_value)
table.insert(innerArgs,'/sqmi')
end
table.insert(innerArgs,impus and '/sqmi /km2' or '/km2 /sqmi')
result.density = callConvert(innerArgs)
return result
end
if per_km2 ~= 'auto' and per_mi2 ~= 'auto' then
-- automatic computation not requested, fail silently
return result
end
if not args['pop'] then
-- fail silently if no population given
return result
end
local areaSigFig
local areaValue
local areaUnit
for _, unit in ipairs({'km2','mi2','sqmi','ha','acre','dunam','dunum'}) do
local value = parseNumeric(args[unit])
if value then
if value <= 0 then
result.error = unit.." value not positive"
return result
end
areaValue = value
areaUnit = unit
areaSigFig = computeSigFig(args[unit])
break
elseif args[unit] then
result.error = "Malformed "..unit.." value"
return result
end
end
if not areaSigFig then
-- fail silently if no area given
return result
end
if areaSigFig == 0 then
result.error = "Malformed area string"
return result
end
local popValue = parseNumeric(args['pop'])
if not popValue then
result.error = "Malformed population value"
return result
end
if popValue < 0 then
result.error = "Negative population value"
return result
end
table.insert(innerArgs,popValue/areaValue)
table.insert(innerArgs,'/'..areaUnit)
local popSigFig = computeSigFig(args['pop'])
local sigFig = popSigFig < areaSigFig and popSigFig or areaSigFig
if sigFig < 2 then
sigFig = 2
end
innerArgs.sigfig = sigFig
innerArgs.disp = 'out'
table.insert(innerArgs,'/km2')
local metric = callConvert(innerArgs)
innerArgs[3] = '/sqmi'
local imperial = callConvert(innerArgs)
if impus then
result.density = string.format("%s (%s)",imperial,metric)
else
result.density = string.format("%s (%s)",metric,imperial)
end
return result
end
function p.convert(frame)
local args = getArgs(frame)
return p._convert(args) or ""
end
function p.area(frame)
local args = getArgs(frame)
return p._area(args) or ""
end
function p.length(frame)
local args = getArgs(frame)
return p._length(args) or ""
end
function p.density(frame)
local args = getArgs(frame)
local result = p._density(args)
if result.density then
return result.density
end
if result.error then
local warning = require('Module:If_preview')._warning
local result = warning({result.error})
if mw.title.getCurrentTitle().namespace == 0 then
result = result..'[[Category:Pages using infobox settlement with bad density arguments]]'
end
return result
end
return ''
end
return p
360aq9gklckfcwwcowcpaqdl3zu5aai
ಗುಣಗ ಜಾತಿ
0
174339
1378206
1345073
2026-08-02T17:45:17Z
G N vig
100889
/* */
1378206
wikitext
text/x-wiki
'''ಗುನಗ''' (Gunaga) ಎಂಬುದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಕಂಡುಬರುವ ಒಂದು ವಿಶಿಷ್ಟ ಸಮುದಾಯ. ಇವರು ಕರಾವಳಿಯ ಬಹುತೇಕ ಗ್ರಾಮದೇವತೆಗಳ ಸಾಂಪ್ರದಾಯಿಕ ಆರಾಧಕರು (ಅರ್ಚಕರು) ಮತ್ತು ಐತಿಹಾಸಿಕ 'ಬಂಡಿಹಬ್ಬ'ದ ಪ್ರಧಾನ ರೂವಾರಿಗಳಾಗಿದ್ದಾರೆ. ಮೂಲತಃ ಹಿಂದೂ-ಕುಂಬಾರ ಜಾತಿಗೆ ಸೇರಿದ ಇವರನ್ನು, ಕರಾವಳಿ ಭಾಗದಲ್ಲಿ ಇವರು ನಿರ್ವಹಿಸುವ ಪೌರೋಹಿತ್ಯ, ಧಾರ್ಮಿಕ ಆಚರಣೆಗಳು ಮತ್ತು ತಾಂತ್ರಿಕತೆಯ ಹಿನ್ನೆಲೆಯಲ್ಲಿ ಒಂದು ಪ್ರತ್ಯೇಕ ಜನಾಂಗವಾಗಿ ಅಥವಾ ಸಮುದಾಯವಾಗಿ ಗುರುತಿಸಲಾಗುತ್ತದೆ.ಗುನಗ, ವಿಘ್ನೇಶ್ವರ (೨೦೨೬). ''ಬಂಡಿ ಹಬ್ಬ: ಜಗತ್ತಿನ ಅತಿ ಪ್ರಾಚೀನ ಜಾತ್ರೆಯೊಂದರ ಅನಾವರಣ'' (ಬಂಡಿಹಬ್ಬ ಮತ್ತು ಗುನಗರು ಅಧ್ಯಾಯ).
== ಭೌಗೋಳಿಕ ಹರಡುವಿಕೆ ==ಗುನಗರು ಪ್ರಧಾನವಾಗಿ ಕಾರವಾರದಿಂದ ಹೊನ್ನಾವರದವರೆಗಿನ ಕರಾವಳಿ ಪ್ರದೇಶದಲ್ಲಷ್ಟೇ ವಾಸಿಸುತ್ತಾರೆ. ಬಂಡಿಹಬ್ಬ ಎಂಬ ವಿಶಿಷ್ಟ ಆಚರಣೆಯೂ ಭೌಗೋಳಿಕವಾಗಿ ಇದೇ ಭಾಗದಲ್ಲಿಯೇ ಕಂಡುಬರುತ್ತದೆ. ಕರಾವಳಿಯ ಹಿಂದು-ಕುಂಬಾರರನ್ನು ಇಡೀ ಒಂದು ಜಾತಿಯನ್ನೇ 'ಗುನಗ' ಎಂದು ಕರೆಯುವ ವಾಡಿಕೆಯಿದೆ. ಈ ಪದದ ಪ್ರಭಾವ ಎಷ್ಟಿದೆ ಎಂದರೆ, ಗ್ರಾಮದೇವತೆಯ ಅರ್ಚಕರಾಗಿರುವ ಇತರೆ ಜಾತಿಯ (ಉದಾಹರಣೆಗೆ ಹಾಲಕ್ಕಿ ಒಕ್ಕಲಿಗ, ನಾಮಧಾರಿ, ಕೋಮಾರಪಂಥ ಮತ್ತು ಜೈನ) ಮನೆತನಗಳೂ ಕೂಡ ತಮ್ಮನ್ನು ತಾವು ಹೆಮ್ಮೆಯಿಂದ "ಗುನಗರು" ಎಂದೇ ಕರೆದುಕೊಳ್ಳುತ್ತವೆ.
== ಪದದ ನಿಷ್ಪತ್ತಿ (Etymology) ==
'ಗುನಗ' ಪದದ ಮೂಲದ ಬಗ್ಗೆ ಸಂಶೋಧಕರು ಮತ್ತು ವಿಮರ್ಶಕರಲ್ಲಿ ಭಿನ್ನಭಿಪ್ರಾಯಗಳು ಮತ್ತು ಚರ್ಚೆಗಳಿವೆ:
'''ಗೌರೀಶ ಕಾಯ್ಕಿಣಿಯವರ ವಾದ:''' ಪ್ರಸಿದ್ಧ ವಿಮರ್ಶಕ ಗೌರೀಶ ಕಾಯ್ಕಿಣಿಯವರು ತಮ್ಮ ''"ಗೋಕರ್ಣ ಮಂಡಲದ ಹಿರಿ-ಕಿರಿ ದೇವತೆಗಳು"'' ಕೃತಿಯಲ್ಲಿ ತಾರ್ಕಿಕವಾಗಿ ವಿಶ್ಲೇಷಿಸಿದ್ದಾರೆ.ಕಾಯ್ಕಿಣಿ, ಗೌರೀಶ. ''ಗೋಕರ್ಣ ಮಂಡಲದ ಹಿರಿ-ಕಿರಿ ದೇವತೆಗಳು''. ಗುನಗರು ಹೆಚ್ಚಾಗಿ ಕುಂಬಾರರು. ಮಣ್ಣಿನ ಕೆಲಸ ಮಾಡುವ ಕುಂಬಾರರಿಗೆ ಮಣ್ಣಿನ ಅಥವಾ ಭೂಮಿಯ ದೇವತೆಯ (ಅಮ್ಮನವರ) ಪೂಜೆ ಮೀಸಲಾಗಿರುವುದು ಸಮಂಜಸ. 'ಗುನಿ' ಎಂದರೆ ಗುಂಗು ಅಥವಾ ಅಮಲು. ಅಮ್ಮನವರ ಪೂಜಾರಿ ಕಳಸ ಹೊತ್ತಾಗ ಆವೇಶ (ಭಾರ) ಬರುತ್ತದೆ. ಆ ದೈವಿಕ ಗುಂಗಿನಲ್ಲಿ ಆತ ನುಡಿಯುತ್ತಾನೆ, ಮತ್ತು 'ಗುನಗುತ್ತಾ-ಗೊಣಗುತ್ತಾ' ಇರುತ್ತಾನೆ. ಅಂತೆಯೇ ಆತ 'ಗುನಗ'ನಾಗಿದ್ದಾನೆ.
'''ಗುಂ-ಗುಂಗಾ ವಾದ:''' 'ಗುಂ' ಎಂಬ ಧ್ವನಿಜನ್ಯ ಪದವು ಆದಿಮ ಆದಿವಾಸಿಗಳ ಅನುಕರಣೀಯ ಧ್ವನಿಯಾಗಿರುವುದು. ಇದನ್ನು animism (ಸರ್ವಾತ್ಮವಾದ), totemism (ಕುಲಚಿಹ್ನಾವಾದ), shamanism (ಮಾಂತ್ರಿಕತೆ) ಹಿನ್ನೆಲೆಯಲ್ಲಿ ಪರಿಶೀಲಿಸುವುದು ಸೂಕ್ತ. ಇವರಲ್ಲಿ ಕುಂಬಾರಿಕೆಗಿಂತ ಆದಿಮ ಅವಸ್ಥೆಯ ಪೂಜಾರಿಕೆ ಮಹತ್ವ ಪಡೆದಿದೆ ಹಾಗೂ ಇವರ ಆರಾಧನೆಯು ಪೂರ್ವಿಕರ ಪ್ರಾಕೃತಿಕ ಆರಾಧನೆಯಾಗಿದೆ ಎಂಬುದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ.ಎಂ. ಮೇತ್ರಿ ಅವರ ಅಭಿಪ್ರಾಯವಾಗಿದೆ.ಮೇತ್ರಿ, ಡಾ. ಕೆ.ಎಂ. (ಬಂಡಿಹಬ್ಬ: ಜಗತ್ತಿನ ಅತಿ ಪ್ರಾಚೀನ ಜಾತ್ರೆಯೊಂದರ ಅನಾವರಣ ಕೃತಿಗೆ ನೀಡಿದ ಅಭಿಪ್ರಾಯ).
'''ಗುಣಗಾನ:''' ಇವರು ಸದಾ ದೇವರ ಗುಣಗಾನದಲ್ಲಿಯೇ ಮಗ್ನರಾಗಿರುತ್ತಿದ್ದರಿಂದ ಇವರನ್ನು 'ಗುನಗ' ಎಂದು ಕರೆಯಲಾಗಿರಬಹುದು ಎಂಬುದು ನೀಲಪ್ಪ ಗುನಗ ಅವರ ಅಭಿಪ್ರಾಯ.
ಇತರ ವಾದಗಳ ಪ್ರಕಾರ, "ಗುಣಕರ್ಮ", "ಗುಣವರ್ಮ" ಮುಂತಾದ ಜೈನ ಧರ್ಮದ ಹೆಸರುಗಳ ಪ್ರಭಾವದಿಂದ ಈ ಪದ ಬಂದಿರಬಹುದು ಎಂದು ಊಹಿಸಲಾಗಿತ್ತು. ಆದರೆ, ಸಂಶೋಧಕ ಡಾ. ದತ್ತಾತ್ರೇಯ ಗಾಂವಕಾರ ಅವರು ಇದನ್ನು 'ಆಧಾರರಹಿತ' ಎಂದು ತಿರಸ್ಕರಿಸಿದ್ದಾರೆ.ಗಾಂವಕಾರ, ಡಾ. ದತ್ತಾತ್ರೇಯ. ''ಬಂಡಿಹಬ್ಬ: ಒಂದು ಜಾನಪದ ಅಧ್ಯಯನ, ಸಂಶೋಧನಾ ಲೇಖನ''.
== ಇತಿಹಾಸ ಮತ್ತು ಮೂಲ ==ಕ್ರಿ.ಶ. ೧೮೮೩ರಲ್ಲಿ ಬ್ರಿಟಿಷರು ಪ್ರಕಟಿಸಿದ ಅಧಿಕೃತ ದಾಖಲೆಯಾದ ''ಗೆಜೆಟಿಯರ್ ಆಫ್ ಬಾಂಬೆ ಪ್ರೆಸಿಡೆನ್ಸಿ'' (Gazetteer of Bombay Presidency) ಯಲ್ಲಿ ಇತಿಹಾಸದ ಲಿಖಿತ ಪುಟಗಳಲ್ಲಿ ಮೊದಲ ಬಾರಿಗೆ "ಗುನಗರು" ಮತ್ತು "ಬಂಡಿಹಬ್ಬ" ಶಬ್ದಗಳು ಒಟ್ಟೊಟ್ಟಿಗೆ ಕಾಣಿಸಿಕೊಂಡಿವೆ.Gazetteer of Bombay Presidency (Vol. 15, Part 1). (1883). Government Central Press, Bombay.
ಇದಕ್ಕೂ ಪೂರ್ವದಲ್ಲಿ ವೇಂಗಿ ಚಾಲುಕ್ಯ ವಂಶದ ಪ್ರಸಿದ್ಧ ಅರಸ 'ವಿಕ್ರಮಾದಿತ್ಯ'ನಿಗೂ "ಗುನಗ" ಎಂಬ ಬಿರುದಿತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ.
ಗೆಜೆಟಿಯರ್ ದಾಖಲೆಗಳ ಪ್ರಕಾರ, ಬ್ರಾಹ್ಮಣರ ಆಗಮನಕ್ಕಿಂತ ಪೂರ್ವದಲ್ಲಿ ಈ ಭಾಗದ 'ಅಧಿಕೃತ ಪುರೋಹಿತ ವರ್ಗ'ದ ಸ್ಥಾನ-ಮಾನವನ್ನು ಗುನಗರೇ ಹೊಂದಿದ್ದರು. ಇಂದು ಕೇವಲ ಗ್ರಾಮದೇವತೆಯ ಪೂಜೆಗೆ ಸೀಮಿತವಾಗಿರುವ ಗುನಗರು, ಸುಮಾರು ೧೫೦ ವರ್ಷಗಳ ಹಿಂದೆ ಊರಿನ ಮಾಂತ್ರಿಕರು ಮತ್ತು ಜ್ಯೋತಿಷಿಗಳೂ ಆಗಿದ್ದರು. ಅಷ್ಟೇ ಅಲ್ಲದೆ, ಅಂದಿನ ಕಾಲದಲ್ಲಿ ಉಳಿದೆಲ್ಲಾ ಶೂದ್ರ ವರ್ಗದವರ ಮರಣೋತ್ತರ 'ಶ್ರಾದ್ಧ ಕ್ರಿಯೆ'ಯನ್ನೂ ಗುನಗರೇ ನೆರವೇರಿಸುತ್ತಿದ್ದರು ಎಂದು ಇತಿಹಾಸ ಸ್ಪಷ್ಟಪಡಿಸುತ್ತದೆ.Gazetteer of Bombay Presidency (Vol. 15, Part 1). (1883). pp 271.
== ಶಕ್ತಿ ದೇವತೆ 'ಕುಂಬಾರಕುಂಠಿ' ಮತ್ತು ಮುಂಡಾ ಬುಡಕಟ್ಟು ನಂಟು ==
ಕಾರವಾರ ಮತ್ತು ಅಂಕೋಲಾದ ಭಾಗದಲ್ಲಿ ಗುನಗರು ತಮ್ಮ ಮನೆತನದ ಶಕ್ತಿ ದೇವತೆಯಾಗಿ 'ಕುಂಬಾರಕುಂಠಿ'ಯನ್ನು ಆರಾಧಿಸುತ್ತಾರೆ. ಬಂಡಿಹಬ್ಬದಲ್ಲಿ ದೇವಿಯ ಮುದ್ರೆಯೊಂದಿಗೆ ಕಳಸ ಮನೆಗೆ ಹೋಗುವ, ಭಕ್ತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಾರ್ಯ ಈ ಶಕ್ತಿ ದೇವತೆಯ ಪ್ರೇರಣೆಯಿಂದಲೇ ನಡೆಯುತ್ತದೆ ಎಂಬ ನಂಬಿಕೆಯಿದೆ.Gazetteer of Bombay Presidency (Vol. 15, Part 1). (1883, p 146).
ಪ್ರಖ್ಯಾತ ಇತಿಹಾಸಕಾರ ಸತೀಶ ಧುಮೆಯವರ ಪ್ರಕಾರ, "ಕ್ರಿ.ಪೂ. 3000ರ ಸುಮಾರಿಗೆ ಛೋಟಾ ನಾಗ್ಪುರದಿಂದ ಗೋವಾ-ಕರಾವಳಿಯತ್ತ ವಲಸೆ ಬಂದ 'ಮುಂಡಾ' (Munda) ಬುಡಕಟ್ಟು ಜನಾಂಗದವರು, ತಾವು ನೆಲೆನಿಂತ ಜಾಗದಲ್ಲಿ ಗುಂಡು ಕಲ್ಲೊಂದನ್ನು ಪ್ರತಿಷ್ಠಾಪಿಸಿ ಅದಕ್ಕೆ 'ಕುಂಠಿ' ಎಂದು ಕರೆಯುತ್ತಿದ್ದರು." ಈ ಮುಂಡಾರಿ ಬುಡಕಟ್ಟು ಜನಾಂಗದವರು ಪೂಜಿಸುತ್ತಿದ್ದ ಕುಂಠಿ ದೇವತೆ ಮತ್ತು ಗುನಗರ ಕುಂಬಾರಕುಂಠಿ ಎರಡೂ ಒಂದೇ ಆಗಿರಬಹುದು ಎಂಬ ಐತಿಹಾಸಿಕ ವಾದಕ್ಕೆ ಇದು ಪುಷ್ಟಿ ನೀಡುತ್ತದೆ.Dhume, Anant Ramkrishna. ''The Cultural History of Goa from 10,000 BC - 1352 AD''.==
ಬಂಡಿಹಬ್ಬದಲ್ಲಿ ಗುನಗನ ಆಯ್ಕೆ ಮತ್ತು ವಿಧಿ-ವಿಧಾನಗಳು ==
ಬಂಡಿಹಬ್ಬ, ಗುನಗರು ವಾಸಿಸುವ ಪ್ರದೇಶಗಳಲ್ಲಿ ವಾರ್ಷಿಕವಾಗಿ ಆಚರಣೆಯಲ್ಲಿರುವ ಗ್ರಾಮದೇವತೆಗಳ ಜಾತ್ರೆ. ಕೃಷಿ ಪೂರ್ವ ಜಾತ್ರೆಯಾಗಿ ಆಚರಣೆಯಲ್ಲಿರುವ ಈ ಬಂಡಿಹಬ್ಬ ನಡೆಯುವ ಬಹುತೇಕ ಗ್ರಾಮಗಳಲ್ಲಿ ಗುನಗರೇ ಅರ್ಚಕರಾಗಿದ್ದಾರೆ. ಬಂಡಿಹಬ್ಬದ ಪ್ರಧಾನ ಆಕರ್ಷಣೆಯಾದ ಗ್ರಾಮದೇವತೆಯ (ಬಂಗಾರ ಅಥವಾ ಬೆಳ್ಳಿಯ) ಕಳಸ ಹೊರುವ ಗುನಗನ ಆಯ್ಕೆಯು ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಒಳಗೊಂಡಿರುತ್ತದೆ.
'''ವೈವಾಹಿಕ ನಿಯಮ:''' ಕಳಸ ಹೊರುವ ಗುನಗನು ಕಡ್ಡಾಯವಾಗಿ ವಿವಾಹಿತನಾಗಿರಲೇಬೇಕು. ಅವಿವಾಹಿತರಿಗೆ ಕಳಸವನ್ನು ಹೊರುವುದು ನಿಷಿದ್ಧವಾಗಿದೆ.'''ಆಯ್ಕೆಯ ಹಂತಗಳು:''' ಮೊದಲು ಗುನಗನ ಕುಟುಂಬದವರು ಅರ್ಹ ವ್ಯಕ್ತಿಯನ್ನು ಆರಿಸುತ್ತಾರೆ. ನಂತರ ಸಮಾಜದ ಒಪ್ಪಿಗೆ ಪಡೆದು, ಅಂತಿಮವಾಗಿ ಗ್ರಾಮದೇವತೆಯ ಎದುರು 'ಪ್ರಸಾದ' ಕೇಳುವ ಮೂಲಕ ದೈವಿಕ ಸಮ್ಮತಿ ಸಿಕ್ಕ ನಂತರವಷ್ಟೇ ಗುನಗನ ಆಯ್ಕೆ ಅಧಿಕೃತಗೊಳ್ಳುತ್ತದೆ.
'''ಪನ್ನೆ ಮಾಡುವುದು:''' ಬಂಡಿಹಬ್ಬದ ಆರಂಭದ ದಿನ ಊರಿನ ಕ್ಷೌರಿಕನು ಕಳಸ ದೇವಾಲಯದ ಬಳಿ ಬಂದು ಗುನಗ ಮತ್ತು ಕಟ್ಟಿಗೆದಾರರ ಗಡ್ಡ-ಕೂದಲು ತೆಗೆಯುತ್ತಾನೆ. ಇದನ್ನು "ಪನ್ನೆ ಮಾಡುವುದು" ಎನ್ನುತ್ತಾರೆ. ಈ ಪದ್ಧತಿಯನ್ನು ಕೇವಲ ಗುನಗರ ಪೂಜಾ ಪದ್ದತಿಯಲ್ಲಿ ಕಾಣಬಹುದು. ತದನಂತರ ಗುನಗರು ಎದೆ ಮತ್ತು ಭುಜಗಳಿಗೆ ಶ್ರೀಗಂಧವನ್ನು ಲೇಪಿಸಿಕೊಂಡು, ಆಧುನಿಕ ಅಗರಬತ್ತಿಯ ಬದಲಿಗೆ ಹಿತ್ತಾಳೆಯ ಆರತಿಯ ತಟ್ಟೆಯಲ್ಲಿ ಕೆಂಡವನ್ನು ಹಾಕಿ 'ಅಂಗಾರಾರತಿ' (ಸಾಂಬ್ರಾಣಿ ಧೂಪ) ಮಾಡುವ ಪ್ರಾಚೀನ ಪದ್ಧತಿ ರೂಢಿಯಲ್ಲಿದೆ.
== ವೇಷಭೂಷಣ ಮತ್ತು 'ಮುಖಸುತ್ತ' =='''ಗುನಗನ ವೇಷ:''' ಪಟ್ಟೆ ಪೀತಾಂಬರವನ್ನು 'ವೀರಗಚ್ಚೆ'ಯಂತೆ ಉಟ್ಟು, ಸೊಂಟಕ್ಕೆ ಸುಮಾರು ೨೦ ಅಡಿ ಉದ್ದದ ಬಟ್ಟೆಯ ಪಟ್ಟಿಯನ್ನು ಸುತ್ತಿಕೊಳ್ಳುತ್ತಾರೆ. ಅದರಲ್ಲಿ ಒಂದು ಅಡಿ ಉದ್ದದ 'ಖಂಜೂರ್' (ಚೂರಿ) ಹಾಗೂ ಒಂದುವರೆ ಅಡಿ ಉದ್ದದ 'ಕಿರುಕಟ್ಟಿಗೆ' ಇಟ್ಟುಕೊಳ್ಳುತ್ತಾರೆ.'''ಮುಖಸುತ್ತ (ಶಿರಸ್ತ್ರಾಣ) ಮತ್ತು ಮೌನವ್ರತ:''' ಕಳಸ ಹೊರುವಾಗ ತಲೆಯ ಮೇಲೆ ೧೮ ಮೊಳದ ೨-೩ ಪೀತಾಂಬರಗಳನ್ನು ಬಳಸಿ 'ಮುಖಸುತ್ತ' ಎಂಬ ಬೃಹತ್ ಪೇಟವನ್ನು ಧರಿಸುತ್ತಾರೆ. ಇದನ್ನು ಧರಿಸಿರುವಾಗ, ಕೇವಲ 'ಮುಖವಚನ'ವನ್ನು (ದೈವದ ನುಡಿ) ಹೊರತುಪಡಿಸಿ, ಸಾಮಾನ್ಯ ವಿಷಯಗಳ ಬಗ್ಗೆ ಮಾತನಾಡುವಂತಿಲ್ಲ (ಮೌನವ್ರತ).
== 'ತಲೆ ಬಿಡುವುದು' ಮತ್ತು ಅಂತ್ಯೇಷ್ಟಿ ತಾಂತ್ರಿಕತೆಯ ವ್ರತಗಳು ==
ಬಂಡಿಹಬ್ಬದಲ್ಲಿ ಗುನಗರು ಆಚರಿಸುವ ಕಠಿಣ ವ್ರತಗಳು ಮನುಷ್ಯನ ಮರಣದ ನಂತರ ಆಚರಿಸುವ 'ಅಪರಕ್ರಿಯೆ'ಯನ್ನು ಹೋಲುತ್ತವೆ. ಇದನ್ನು "ಅಂತ್ಯೇಷ್ಟಿ ತಾಂತ್ರಿಕತೆ" ಎಂದೇ ಕರೆಯಲಾಗುತ್ತದೆ.
'''ವಸ್ತ್ರಸಂಹಿತೆ ಮತ್ತು ತಲೆ ಬಿಡುವುದು:''' ಹಬ್ಬ ಮುಗಿಯುವವರೆಗೆ ಹೊಲಿದ ಬಟ್ಟೆಗಳನ್ನು ಧರಿಸುವಂತಿಲ್ಲ (ಕೇವಲ ಬಿಳಿ ಪಂಚೆ ಮತ್ತು ಶಾಲು). ೧೨ ದಿನಗಳ ಕಾಲ ಬರಿಗಾಲಿನಲ್ಲೇ ಸಂಚರಿಸಬೇಕು. 'ಮುಖಸುತ್ತ'ವನ್ನು ಹೊರತುಪಡಿಸಿ, ಬೇರೆ ಯಾವುದೇ ಟವೆಲ್ ಅಥವಾ ಪಂಚೆಯಿಂದ ತಲೆ ಮುಚ್ಚಿಕೊಳ್ಳುವಂತಿಲ್ಲ (ತಲೆ ಬಿಡುವುದು).
'''ಬ್ರಹ್ಮಚರ್ಯ ಮತ್ತು ಸೂತಕದ ನಿಯಮ:''' ಹಬ್ಬದ ಅವಧಿಯಲ್ಲಿ ಗುನಗರು ದೇವಾಲಯದಲ್ಲೇ ಉಳಿದು ಸ್ವಯಂ ಅಡುಗೆ ಮಾಡಿಕೊಳ್ಳಬೇಕು. ಹೆಂಡತಿಯ ಮುಖ ನೋಡುವಂತಿಲ್ಲ. ಊರಿನಲ್ಲಿ ಮದುವೆ, ಮುಂಜಿ ಮುಂತಾದ ಶುಭ ಕಾರ್ಯಗಳಿಗೆ ಹೋಗುವಂತಿಲ್ಲ. ಸ್ವಂತ ಕುಟುಂಬದಲ್ಲೇ ಮರಣದ ಸೂತಕ ಸಂಭವಿಸಿದರೂ, ಬಂಡಿಹಬ್ಬವನ್ನು ಅರ್ಧಕ್ಕೆ ನಿಲ್ಲಿಸುವಂತಿಲ್ಲ.
'''ಜಾಗತಿಕ ಸಾಮ್ಯತೆ:''' ಉತ್ತರ ಕನ್ನಡದ ಈ ವಿಸ್ಮಯಕಾರಿ ಆಚರಣೆಯು, ಆಸ್ಟ್ರೇಲಿಯಾದ ಪ್ರಾಚೀನ ಬುಡಕಟ್ಟು ಜನಾಂಗದ ವಾರ್ಷಿಕ ಜಾತ್ರೆಯಾದ "ಇಂಟಿಚಿಯಮಾ" (Intichiuma) ಪದ್ಧತಿಯನ್ನು ಬಹುತೇಕ ಹೋಲುತ್ತದೆ.Eliade, Mircea. (1959). ''The Sacred and the Profane: The Nature of Religion''. pp 85-86.
== ಪ್ರಾಣಾಪಾಯ, ಸಮರ್ಪಣೆ ಮತ್ತು ಮಹಿಳೆಯರ ಪಾತ್ರ ==
ಬಂಡಿಹಬ್ಬವು ಇತರ ಸಾಮಾನ್ಯ ಜಾತ್ರೆಗಳಿಗಿಂತ ಭಿನ್ನವಾದ, ಪ್ರಾಣಾಪಾಯದ ಹಾಗೂ ರಕ್ತಸಿಕ್ತ ಸಮರ್ಪಣೆಯ ಹಬ್ಬವಾಗಿದೆ. ಹಬ್ಬದ ಆರಂಭದಲ್ಲಿಯೇ ಗ್ರಾಮದೇವತೆ ಮತ್ತು ಪರಿವಾರ ದೇವತೆಗಳನ್ನೆಲ್ಲಾ 'ಸಾಸಿ ಹೊಡೆದು' ವಿಧ್ಯುಕ್ತವಾಗಿ ಎಬ್ಬಿಸಲಾಗುತ್ತದೆ. ಈ ಆವಾಹನೆಯೊಂದಿಗೆ ಗ್ರಾಮಕ್ಕೆ ತೊಂದರೆ ಕೊಡುವ 'ಕ್ಷುದ್ರ ಶಕ್ತಿ'ಗಳೂ ಎಚ್ಚೆತ್ತುಕೊಳ್ಳುತ್ತವೆ. ಗುನಗರು ಮುಖವಾಡ ಕುಣಿತ, ಮಂಡಲ ಕುಣಿತಗಳಂತಹ ರಹಸ್ಯ ತಾಂತ್ರಿಕ ಕ್ರಿಯೆಗಳಿಂದ ಆ ಶಕ್ತಿಗಳನ್ನು ನಾಶಗೊಳಿಸಿ ಇಡೀ ಗ್ರಾಮವನ್ನು ಕಾಪಾಡುತ್ತಾರೆ.
'''ಆತ್ಮಹತ್ಯೆಯ ಕಠೋರ ಪದ್ಧತಿ:''' ಈ ಅಗೋಚರ ಶಕ್ತಿಗಳ ಕಾದಾಟದಲ್ಲಿ ಗುನಗನಿಗೆ ಪ್ರಾಣಾಪಾಯದ ಸಾಧ್ಯತೆಯೂ ಇರುತ್ತದೆ. ಬಂಡಿಹಬ್ಬದಲ್ಲಿ ಕಳಸಕ್ಕೆ ಅವಘಡವಾದರೆ (ಕಳಸ ಕೆಳಗೆ ಬಿದ್ದರೆ), ಗುನಗನು ತನ್ನ ಸೊಂಟದಲ್ಲಿರುವ 'ಖಂಜೂರು' (ಚೂರಿ) ಯಿಂದ ತನ್ನನ್ನು ತಾನೇ ತಿವಿದುಕೊಂಡು ಅಲ್ಲೇ ಪ್ರಾಣಬಿಡಬೇಕು ಎಂಬುದು ಹಿಂದಿನಿಂದಲೂ ಆಚರಣೆಯಲ್ಲಿರುವ ಅತ್ಯಂತ ಕಠೋರ ಪದ್ಧತಿ.
'''ಮೂಗುತಿ ತೆಗೆದಿಡುವ ಹೆಂಡತಿ:''' ಈ ಕಠೋರ ವಾಸ್ತವ ಗುನಗನ ಹೆಂಡತಿಗೂ ತಿಳಿದಿರುತ್ತದೆ. ಹಬ್ಬ ಮುಗಿಯುವವರೆಗೆ ತನ್ನ ಗಂಡ ಜೀವಂತವಾಗಿ ಬರುತ್ತಾನೆಯೋ ಇಲ್ಲವೋ ಎಂಬ ಆತಂಕದಲ್ಲಿ, ಗುನಗನ ಹೆಂಡತಿಯು ತನ್ನ ಮಾಂಗಲ್ಯದ ಸಂಕೇತವಾದ 'ಮೂಗುತಿ'ಯನ್ನು ತೆಗೆದು ಕಳಸ ದೇವರ ಪೀಠದ ಮೇಲಿರಿಸಿ "ನನ್ನ ಮಾಂಗಲ್ಯ ಕಾಪಾಡು ತಾಯೇ" ಎಂದು ಬೇಡಿಕೊಳ್ಳುವ ಕರುಣಾಜನಕ ಪದ್ಧತಿ ಅಂಕೋಲಾ ಭಾಗದಲ್ಲಿದೆ.ಇವರಿಂದ ಆಚರಿಸಲ್ಪಡುವ ‘ಬಂಡಿಹಬ್ಬ’ ಮೈನವಿರೇಳಿಸುವ ಒಂದು ರಕ್ತಸಿಕ್ತ ಸಮರ್ಪಣೆಯ ಹಬ್ಬವೇ ಹೊರತು, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸುವ ಸಾಮಾನ್ಯ ಜಾತ್ರೆಯಲ್ಲ.
== ಸಾಂಸ್ಕೃತಿಕ ಮಹತ್ವ (Conclusion) ==ಒಂದು ಕಾಲದಲ್ಲಿ ಮಾಂತ್ರಿಕ, ಪುರೋಹಿತ ಮತ್ತು ಜ್ಯೋತಿಷಿಗಳಾಗಿದ್ದ ಗುನಗರು ಅನೇಕ ಅವೈದಿಕ ತಾಂತ್ರಿಕತೆಗಳನ್ನು ಕರಗತ ಮಾಡಿಕೊಂಡಿದ್ದರು. ಆದರೆ ಆ ಉಗ್ರ ತಾಂತ್ರಿಕತೆಗಳನ್ನು ಅವರು ಕೇವಲ 'ಗ್ರಾಮದ ಒಳಿತಿಗಾಗಿ' ಮಾತ್ರ ಉಪಯೋಗಿಸುತ್ತಿದ್ದರು. ಕಳಸ ಮತ್ತು ಕಳಸಗನ್ನಡಿಯಂತಹ ಸಾಧನಗಳ ಬಳಕೆಯಿಂದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ನೋಡಬಲ್ಲ ದೈವಿಕ ಶಕ್ತಿಯನ್ನು ಅವರು ಹೊಂದಿದ್ದರು.ಈ ಎಲ್ಲಾ ವಿಸ್ಮಯಕಾರಿ ಅಂಶಗಳು ಗುನಗರು ಕೇವಲ 'ಪೂಜಾರಿ'ಗಳಲ್ಲ; ಬದಲಿಗೆ ಅವರು ಕರಾವಳಿ ಮಣ್ಣಿನ ಆದಿಮ ಸಂಸ್ಕೃತಿಯ ಮತ್ತು ಮರೆತುಹೋದ ಗತ ಇತಿಹಾಸದ '''"ಜೀವಂತ ಕೊಂಡಿಗಳು"''' (Living Links) ಎಂಬುದನ್ನು ನಿಸ್ಸಂದೇಹವಾಗಿ ಸಾಬೀತುಪಡಿಸುತ್ತವೆ.
== ಪೂಜಾ ವಿಧಾನ ಮತ್ತು ಆಹಾರ ಪದ್ಧತಿ ==ವೈದಿಕರಂತೆ ಮರದ ಮಣೆಯ ಮೇಲೆ ಕುಳಿತು ಪೂಜೆ ಸಲ್ಲಿಸುವ ಪದ್ಧತಿ ಗುನಗರಲ್ಲಿಲ್ಲ. ಇವರು ಯಾವುದೇ ಕಠಿಣ ಮಂತ್ರೋಚ್ಚಾರ ಮಾಡದೆ ಕೇವಲ ಭಕ್ತಿಯಿಂದ 'ನಿಂತುಕೊಂಡೇ' ಪೂಜೆ ಸಲ್ಲಿಸುತ್ತಾರೆ. ದೇವರಿಗೆ ಹಾಲಿನ ಅಭಿಷೇಕಕ್ಕಿಂತ 'ಎಣ್ಣೆಯ ಸ್ನಾನ'ಕ್ಕೆ ಆದ್ಯತೆ ನೀಡುತ್ತಾರೆ. ಸಂಸ್ಕೃತದ ಅರಿವಿಲ್ಲದ ಇವರು ದೇವರೊಂದಿಗೆ ಸಂವಹನ ನಡೆಸಲು ತಮ್ಮ ಮಣ್ಣಿನ ಸೊಗಡಿನ 'ಗ್ರಾಮ್ಯ ಕನ್ನಡ ಭಾಷೆ'ಯನ್ನೇ ಬಳಸುತ್ತಾರೆ (ಇದನ್ನು ''ಹೇಳಿಕೆ ಮಾಡಿಕೊಳ್ಳುವುದು'' ಎನ್ನುತ್ತಾರೆ). ಪ್ರಾಣಿಬಲಿ ಪಡೆಯುವ ಉಗ್ರ ದೇವತೆಗಳನ್ನು ಆರಾಧಿಸುವ ಇವರು ಸಸ್ಯಾಹಾರದೊಂದಿಗೆ ಮೀನು, ಕೋಳಿ, ಕುರಿಯನ್ನು ಸೇವಿಸುವ ಮಾಂಸಾಹಾರಿಗಳಾಗಿದ್ದಾರೆ.
== ಉಲ್ಲೇಖಗಳು (References) ==== ಆಧಾರ ಗ್ರಂಥಗಳು (Bibliography) ==Gazetteer of Bombay Presidency (Vol. 15, Part 1). (1883). Government Central Press, Bombay.Ancient Indian History and Civilization, Mysore state Gazetteer; Raichur District.ಕಾಯ್ಕಿಣಿ, ಗೌರೀಶ. ''ಗೋಕರ್ಣ ಮಂಡಲದ ಹಿರಿ-ಕಿರಿ ದೇವತೆಗಳು''.ಗಾಂವಕಾರ, ಡಾ. ದತ್ತಾತ್ರೇಯ. ''ಬಂಡಿಹಬ್ಬ: ಒಂದು ಜಾನಪದ ಅಧ್ಯಯನ''.Eliade, Mircea. (1959). ''The Sacred and the Profane: The Nature of Religion''.Dhume, Anant Ramkrishna. ''The Cultural History of Goa from 10,000 BC - 1352 AD''.[[ವರ್ಗ:ಕರ್ನಾಟಕದ ಜನಾಂಗಗಳು]][[ವರ್ಗ:ಉತ್ತರ ಕನ್ನಡ ಜಿಲ್ಲೆಯ ಸಂಸ್ಕೃತಿ]][[ವರ್ಗ:ಕರ್ನಾಟಕದ ಜಾನಪದ]]
ಗುಣಗಾ ಅಥವಾ ಗುನಗಾ ಜಾತಿಯನ್ನು ಜಗತ್ತಿನಲ್ಲಿಯೇ, ವಿಶಿಷ್ಟ ಜಾತಿಯೆಂದು ಹೇಳಬಹುದು. ಯಾಕೆಂದರೆ ಜಾತಿ ಎಂಬುದು ಆಯಾ ಜಾತಿಯ ಜನರು ಮಾಡುವ ಆಯಾ ಕಸುಬಿನಿಂದ ನಿರ್ಧಾರವಾಗುವಂತದ್ದು . ಸಾಮಾನ್ಯವಾಗಿ ಪ್ರತಿಯೊಂದು ಜಾತಿಗೂ, ಒಂದೊಂದೇ ಕಸುಬು ಇರುತ್ತದೆಯೇ ಹೊರತು, ಎರಡಲ್ಲ. ಆದರೆ, ಗುಣಗಾ /ಗುನಗಾ ಜಾತಿಯ ವಿಷಯಕ್ಕೆ ಬಂದರೆ, ಜಾತಿ ಒಂದು, ಕಸುಬು (ವೃತ್ತಿ) ಎರಡು. ಒಂದು ಪುರೋಹಿತರು ಮಾಡುವಂತಹ, ದೇವಸ್ಥಾನಗಳಲ್ಲಿ ದೇವರ ಪೂಜೆ ಮಾಡುವ ಕಸುಬು ಅಂದರೆ ಅರ್ಚಕ ಕೆಲಸ. ಮತ್ತೊಂದು ಕುಂಬಾರಿಕೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಇರುವ ಈ ಗುಣಗಾ ಅಥವಾ ಗುನಗಾ ಅಡ್ಡ ಹೆಸರಿನ ಜನರಲ್ಲಿ, ಮೂರು ಗುಂಪು . ಒಂದುಅತ್ಯಂತ ಸಣ್ಣಗುಂಪು. ಜೈನ ಗುಣಗರು ಈ ಗುಂಪು ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ಮಾತ್ರ ಸೀವಿತವಾಗಿದ್ದು, ಕೆಲವೇ ಕುಟುಂಬಗಳಿದ್ದು ಬೆರಳೆಣಿಕೆಯಷ್ಟಿದ್ದಾರೆ. ಇವರು ಗುಣಗಾ ಅಡ್ಡ ಹೆಸರನ್ನು ಹೊಂದಿ, ದೇವಸ್ಥಾನಗಳಲ್ಲಿ ಅರ್ಚಕ ಕೆಲಸಮಾಡಿಕೊಂಡಿದ್ದು ಇದ್ದು ಸಂಪೂರ್ಣ ಸಸ್ಯಹಾರಿಗಳಾಗಿದ್ದು, ಜೈನ ಮತದೊಟ್ಟಿಗೆ ಗುರುತಿಸಿಕೊಂಡಿದ್ದಾರೆ.
ಇನ್ನೊಂದು ಗುಣಗಾ ಗುಂಪು ಗುನಗಾ ಜಾತಿಯವರಿಗೆ ಸೇರಿದ್ದು. ಜೈನ ಮೂಲದ ಇವರು ಉಳಿದೆರಡು ಗುಂಪುಗಳಿಗೆ ಹೋಲಿಸಿದರೆ ಜನಸಂಖ್ಯೆಯಲ್ಲಿ ಈ ಗುಂಪಿನವರು ಹೆಚ್ಚಿದ್ದು, ಉತ್ತರ ಕನ್ನಡದ ಕರಾವಳಿ ತಾಲ್ಲೂಕುಗಳಾದ ಕುಮಟಾ, ಹೊನ್ನಾವರ, ಅಂಕೋಲಾ ಮತ್ತು ಕಾರವಾರ ತಾಲೂಕುಗಳವರೆಗೆ ವ್ಯಾಪಿಸಿದ್ದು, ದೇವಸ್ಥಾನಗಳಲ್ಲಿ ಅರ್ಚಕ ವೃತ್ತಿಯ ಜೊತೆಗೆ ಕುಂಬಾರಿಕೆ ವೃತ್ತಿಯನ್ನೂ ಮಾಡುತ್ತಾರೆ. ಇವರು ಮಿಶ್ರಾಹಾರಿಗಳಾಗಿದ್ದು ಹಿಂದು (ಜೀವನ ವಿಧಾನ) ಧರ್ಮದೊಂದಿಗೆ ಗುರುತಿಸಿಕೊಂಡಿದ್ದು ಇದ್ದು ಗುಣಗಾ /ಗುನಗಾ ಜಾತಿಗೆ ಸೇರಿದವರಾಗಿದ್ದಾರೆ. ಜೈನ ಮೂಲದ ಇವರು ಇತಿಹಾಸದ ಒತ್ತಡಕ್ಕೆ ಸಿಲುಕಿ ತಮ್ಮ ಆಚಾರ, ವಿಚಾರ ಮತ್ತು ಆಹಾರದಲ್ಲಿ ಬಹಳ ಮಟ್ಟಿಗೆ ಸ್ಥಳೀಯ ಸಂಸ್ಕೃತಿಗೆ ಒಗ್ಗಿ ಹೋಗಿದ್ದಾರೆ. ಸಾಮಾನ್ಯವಾಗಿ ಗುಣಗ ಜಾತಿಯವರ ಎಲ್ಲರ ಅಡ್ಡ ಹೆಸರು ಗುಣಗಾ ಇದ್ದು, ಎಲ್ಲರೂ ಮೂಲದಲ್ಲಿ ಗುಣಗರಾಗಿದ್ದವರೇ (ಅರ್ಚಕತನ) ಆಗಿರುತ್ತಾರೆ. ಇವರು ಉತ್ತರ ಕನ್ನಡದ ಕರಾವಳಿಯ ತಾಲೂಕುಗಳ ಸುಮಾರು ಐವತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಗ್ರಾಮ ದೇವರುಗಳ ಅಫೀಷಿಯಲ್ ಅರ್ಚಕರು. ಇವರು ಪೂಜಿಸುವ ದೇವ ದೇವತೆಗಳು ರೂಪಾಂತರಿತ ಜೈನ ದೇವರುಗಳು. ಇವರು ಅರ್ಚಕತನದ ಜೊತೆಗೆ, ದೇವರುಗಳಿಗೆ ಬೇಕಾಗುವ ಮಣ್ಣಿನ ವಿಗ್ರಹ, ಪಣತೆ, ಕುಂಭ, ಕಲಶ ಇತ್ಯಾದಿ ಮಾಡುವ ಉಪಕಸುಬನ್ನು ಹೊಂದಿ ಕಲಾಕಾರರಾಗಿ ಹೊರಹೊಮ್ಮಿದ್ದಾರೆ .
ದೇವರೊಂದಿಗೆ ಭಕ್ತರನ್ನು ನೇರವಾಗಿ ಸಂಪರ್ಕಿಸುವ ಈ ಗುನಗರ ಪೂಜಾ ಶೈಲಿಯು ವಿಭಿನ್ನವಾಗಿದೆ. ಇವರು ಪೂಜಿಸುವ ದೇವಾಲಯಗಳು ಜಾತಿ ಮತ್ತು ಮತಗಳ ಭೇದವಿಲ್ಲದೆ ಎಲ್ಲಾ ಜನರಿಂದ ಆರಾಧಿಸಲ್ಪಡುತ್ತವೆ. ಪುರೋಹಿತಶಾಹಿ ವೃತ್ತಿಯು ಈ ಗುನಗರಿಗೆ ವ್ಯವಸ್ಥಿತವಾಗಿ ಪರಂಪರೆಯಿಂದ ಬಂದಿದ್ದು, ಇದಕ್ಕಾಗಿಯೇ ಅವರಿಗೆ ಜಮೀನು, ಜಾಗ ನೀಡಲಾಗಿದೆ. ಗುನಗ ಹಿರಿಯರು ತಮ್ಮದೇ ಆದ ಪರಂಪರಾಗತ ಪೂಜಾ ವಿಧಾನಗಳಿಂದ ಜನಮಾನಸವನ್ನು ಗೆದ್ದು ಅರ್ಚಕ ವೃತ್ತಿಗೆ ತಮ್ಮದೇ ಛಾಪು ಒತ್ತಿ ಹೋಗಿದ್ದಾರೆ. ಅರ್ಚಕರುಗಳು ಮಡಿ ಬಟ್ಟೆಯುಟ್ಟು, ಹಣೆಗೆ ತಿಲಕವಿಟ್ಟು , ಗುನಗರದ್ದೇ ಸ್ಟೈಲಿನಲ್ಲಿ ದೇವಸ್ಥಾನಕ್ಕೆ ಬಂದು ತಮ್ಮ ಪರಂಪರಾಗತ ಪೂರ್ವಜರಿಂದ ಬಳುವಳಿಯಾಗಿ ಬಂದ ಅವೈದಿಕ ಪದ್ದತಿಯಲ್ಲಿ ದೇವರ ಪೂಜೆಗೆ ಕೂತಾಗ ನೋಡಬೇಕಿತ್ತು ಅವರ ಕಳೆ. ಲೋಕ ಸಂಚಾರದಲ್ಲಿದ್ದ ದೇವರೇ ವಾಪಸ್ಸು ಬಂದು ತನ್ನ ಸ್ವಸ್ಠಾನದಲ್ಲಿ ರರಾಜಿಸುತ್ತಿದ್ದನೆಂದು ಪ್ರತೀತಿಯಿದೆ.ಉತ್ತರ ಕನ್ನಡದ ಸಾಂಸ್ಕೃತಿಕ ಹಬ್ಬ ’ಬಂಡಿಹಬ್ಬ”ದಲ್ಲಿ ಗುಣಗ ರದ್ದೇ ಪ್ರಧಾನ ಪಾತ್ರ. ಸರ್ವಾಲಂಕೃತ ದೇವಿ ಕಳಶ ಹೊರುವದೇನು! ಬಾರ ಬರುವದೇನು!ಭಕ್ತರಿಗೆ ಅಪ್ಪಣೆ ಕೊಡುವದೇನು! ,ಕಟ್ಟಿಗೆದಾರ-ಚೋಮದಾರರ ನಡುವೆ ಜನಜಂಗುಳಿಯಲ್ಲಿ ದಾಪುಕಾಲು ಹಾಕುತ್ತಾ ಸಾಗುವದೇನು! ಆ ಸಮಯದಲ್ಲಿ ಈ ಗುಣಗರನ್ನು ನೋಡಿದರೆ, ಯಾರಿಗಾದರೂ , ಇವರು ಧರೆಗಿಳಿದ ಸಾಕ್ಷಾತ್ ಅವಧೂತರೇ ಇವರಿರಬೇಕು ಅನ್ನಿಸದಿರದು '''ಇತಿಹಾಸದಲ್ಲಿ''' '''ದಾಖಲಾದ''' '''ಈ''' '''ಗುನಗರುಗಳು''' '''ಹಾಕಿದ''' '''ಶಾಪಗಳು''' '''ತೊಂಬಾ''' '''ರೋಚಕವಾಗಿದ್ದು''' , “ '''ಹೀಗೂ''' '''ಉಂಟೇ'''” '''ಎಂದು''' '''ಯೋಚಿಸಬೇಕಾಗುತ್ತದೆ'''.
ಸ್ಪಷ್ಟೀಕರಣ:
ಉತ್ತರ ಕನ್ನಡದ ಕರಾವಳಿಯಲ್ಲಿ ಸುಮಾರು ಕ್ರಿ.ಶ. 1200 ರಿಂದ 1600 ರ ನಡುವೆ ಅಂದರೆ ಸುಮಾರು 400 ಕ್ಕೂ ಹೆಚ್ಚು ವರ್ಷ ಜೈನ ಸಂಸ್ಕೃತಿ ನೆಲೆಯೂರಿತ್ತು. ಗೇರುಸೊಪ್ಪೆಯ ಮಹಾಮಂಡಲೇಶ್ವರಿ ಜೈನ ರಾಣಿ ಚೆನ್ನಭೈರಾದೇವಿಯ (ಕ್ರಿ.ಶ. 1554-1603) ಪತನದ ನಂತರ ಉತ್ತರ ಕನ್ನಡದ ಕರಾವಳಿಯಲ್ಲಿ ಜೈನ ಧರ್ಮದ ಮೇಲೆ ಅಪಾರ ಒತ್ತಡ ಉಂಟಾಯಿತು. ಜೈನ ಧರ್ಮದ ಮೇಲಿನ ಈ ಒತ್ತಡದಿಂದಾಗಿ, ಪುರೋಹಿತ ಸ್ಥಾನದಲ್ಲಿದ್ದ ಗುಣಧಾರಿ ಗುಣ(ನ)ಗರ ಸಂಸ್ಕೃತಿ ಮತ್ತು ಸಂಪ್ರದಾಯಗಳು ವೈದಿಕತೆಯ ಮೇಲಾಟದಿಂದ ಬಹಳಷ್ಟು ಬದಲಾದುದ್ದು ಇತಿಹಾಸ ಸತ್ಯ
ಇನ್ನು ಮೂರನೇ ಗುಣಗರ ಗುಂಪು. ಇವರ ಅಡ್ಡ ಹೆಸರು (ಉಪನಾಮ) ಮಾತ್ರ ಗುಣಗಾ. ಆದರೆ ಜಾತಿಯಲ್ಲಿ ಬೇರೆ, ಬೇರೆ ಜಾತಿಗೆ ಸೇರಿದ್ದಾರೆ. ಇವರಿಗೆ ಪೂಜೆ ವ್ಯವಸ್ಥಿತವಾಗಿ ಬಂದಿಲ್ಲ . ಅರ್ಚಕತನ ಮಾಡುವ ಮನೆತನ ಮಾತ್ರ ಸಾಮಾನ್ಯವಾಗಿ ಗುಣಗಾ ಅಡ್ಡ ಹೆಸರನ್ನು ಇಟ್ಟುಕೊಂಡಿರುತ್ತಾರೆ. ಅದೂ ಇತ್ತಿತ್ತಲಾಗಿ ಮತ್ತು ಸಾಮಾನ್ಯವಾಗಿ ಇವರ ದೇವರುಗಳು, ದೇವಸ್ಥಾನ ಅವರ ಸಮಾಜಕ್ಕೆ ಇಲ್ಲಾ ಅವರ ಕುಟುಂಬಕ್ಕೆ ಸೇರಿದೆ ಇಲ್ಲಾ ಗುಣಗಾ ಜಾತಿಯವರಿಂದ ಕಾರಣಾಂತರಗಳಿಂದ ಕೈ ತಪ್ಪಿದ ದೇವಸ್ಥಾನಗಳು ಇವರಿಗೆ ಹೋಗಿವೆ. ಇವರು ಪೂಜಿಸುವ ದೇವರುಗಳು ಸಾಮಾನ್ಯವಾಗಿ ಜನಪದರ ದೇವರುಗಳೇ ಜಾಸ್ತಿ.
ಸರ್ಕಾರ ಗುಣಗಾ ಜಾತಿಯ ಸಾಮಾಜಿಕ ವಸ್ತು ಸ್ಥಿತಿ ಇತ್ಯಾದಿ ಪರಿಶೀಲಿಸಿ ಅಂತಿಮವಾಗಿ ಕುಂಬಾರ ಜಾತಿಯಲ್ಲಿ ಸೇರಿ ಹೋಗಿದ್ದ ಈ ಗುನಗರಿಗೆ ಅವರ ಜೈನ್ ಮೂಲ ಮತ್ತು ಅವರ ಮುಖ್ಯ ವೃತ್ತಿ ಅರ್ಚಕತನ, ಉಪ ಕಸಬು ಕುಂಬಾರಿಕೆಯನ್ನು ಗಮನದಲ್ಲಿ ಇಟ್ಟು ಕೊಂಡು, ಅದಕ್ಕೆ ಸಮಾನಾರ್ಥಕವಾದ ಪ್ರತೇಕ ಗುಣಗಾ ಜಾತಿ ಸೃಷ್ಟಿಸಿ ಅಧಿಸೂಚನೆಯನ್ನು ಹೊರಡಿಸಿತು ( ಸಪ್ಟೆಂಬರ್ ೧೭, ೧೯೯೪). ಅಂದಿನಿಂದ ಈ ಗುಣಗರಿಗೆ ಜಾತಿ ಕಾಲಂ ಅಡಿಯಲ್ಲಿ ಗುಣಗಾ ಎಂದು ನಮೂದಿಸಲು ಕಾನೂನಾತ್ಮಕವಾಗಿ ಅನುವಾಯಿತು. ಮೇಲಾಗಿ ಮೀಸಲಾತಿಗೆ ಏನೂ ತೊಂದರೆ ಅಗದಂತೆ ನೋಢಿಕೊಂಡಿತು.
ಇಷ್ಟೆಲ್ಲಾ ಬೆಳವಣಿಗೆಯ ನಂತರವೂ ಮೂಲತಹ ಉತ್ತರ ಕನ್ನಡದ ಕರಾವಳಿಯ ತಾಲೂಕುಗಳಲ್ಲಿ ಕಂಡುಬರುವ ಅರ್ಚಕತನ ಮತ್ತು ಕುಂಬಾರಿಕೆಯ ಹಿನ್ನಲೆ ಇರುವ ಈ ಗುಣಗರು ಜಾತಿ ಕಾಲಂನಲ್ಲಿ ಕುಂಬಾರ ಎಂದು ಬರೆದುಕೊಂಡರೆ ತಾಂತ್ರಿಕ ತಪ್ಪಾಗುತ್ತದೆ. ಸರ್ಕಾರದ ಈ ಅಧಿಸೂಚನೆಯ ನಂತರ ಬಹುಸಂಖ್ಯಾತ ಗುಣಗರು ತಮ್ಮನ್ನು ಗುಣಗಾ ಜಾತಿಯಲ್ಲಿ ಗುರುತಿಸಿಕೊಂಡಿದ್ದು ಇದ್ದು, ಇವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗತ್ತಿದೆ. ಅದುದರಿಂದ ಯಾವುದೇ ತಲೆಬುಡ ತಿಳಿಯದೇ ಹೊನ್ನಾವರದ ಹಳದಿಪುರದಿಂದ ಕಾರವಾರದವರೆಗೆ ಮಾತ್ರ ಕಂಡು ಬರುವ ಈ ವಿಶಿಷ್ಟ ಜಾತಿಗೆ ಸೇರಿದ ಗುಣಗರನ್ನು ಸರಿಯಾಗಿ ಅರ್ಥೈಸದೇ ಅನವಶ್ಯಕವಾಗಿ ಅಥವಾ ಅಸೂಯೆಯಿಂದ ಕುಂಬಾರ ಎಂದು ಟ್ಯಾಗ್ ಮಾಡುವುದು ಕಾನೂನಾತ್ಮಕವಾಗಿ, ತಾಂತ್ರಿಕವಾಗಿ ಮತ್ತು ನೈತಿಕವಾಗಿ ತಪ್ಪಾಗುತ್ತದೆ.
'''ಸಂಕ್ಷಿಪ್ತದಲ್ಲಿ ಎಲ್ಲರಿಗೂ ಅರ್ಥವಾಗವಂತೆ ಹೇಳಬೇಕೆಂದರೆ ಕುಂಬಾರ ಮತ್ತು ಗುಣಗಾ ಜಾತಿಗಳು ಬಯೋಲಜಿ ಮತ್ತು ಬಯೋಕೆಮಿಸ್ಟ್ರಿ ಸಬ್ಜಕ್ಟ್ಸಗಳಿದ್ದಂತೆ. ಬಯೋಲಜಿ ಎರಡರಲ್ಲೂ ಇದ್ದರೂ ಬಯೋಲಜಿ ಮತ್ತು ಬಯೋಕೆಮಿಸ್ಟ್ರಿ ಬೇರೆ ಬೇರೆ ಸಬ್ಜಕ್ಟ್ಸಗಳು. ಎರಡಕ್ಕೂ ಅವುಗಳದೇ ಅದ ಬೇರೆ ಬೇರೆ ದಾರಿಗಳಿವೆ, ಉಧ್ಯೊಗಾವಕಾಶಗಳಿವೆ. ಅವುಗಳಿಗೆ ಅವುಗಳದ್ದೇ ಆದ ಐಡೆಂಟಿಟಿ ಇದೆ. ಸಾಮ್ಯತೆ ಇದೆ.ಒಂದು ಕಾಲದಲ್ಲಿ ಜೈನರಾಗಿದ್ದು, ಗುಣಧಾರಿ (ಪುರೋಹಿತ ಅಥವಾ ಇಂದ್ರು) ಸ್ಥಾನದಲ್ಲಿದ್ದು, ಕಾಲಚಕ್ರಕ್ಕೆ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಜೀವನ ವಿಧಾನದ(ಹಿಂದು) ಭಾಗವಾಗಿ, ಗುಣಧಾರಿ ಉಪನಾಮವೇ ಗುಣಗಾ ಆಗಿ ಅಪಬ್ರಂಶವಾಗಿ ಮತ್ತೆ ಗುನಗಾ ಆಗಿ, ಉಪಕಸಬಿನ ಕಾರಣ ಕುಂಬಾರರಾಗಿ ಗುರುತಿಸಿಕೊಂಡು ನಂತರ ಈಗ ಗುಣಗಾ ಜಾತಿಗೆ ಸೇರಿರುವ ಇವರ ಇತಿಹಾಸ ನಿಜಕ್ಕೂ ಇತಿಹಾಸದ ಪುಟಗಳಲ್ಲಿ ಕಾಪಿಡುವಂತದ್ದು.'''
{{Unreferenced}}
{{Interwikineeded}}
d8fxl5ar31g45hu69ddkc73qvv55vs2
1378210
1378206
2026-08-02T19:22:47Z
A826
72368
1378210
wikitext
text/x-wiki
'''ಗುನಗ''' (Gunaga) ಎಂಬುದು [[ಕರ್ನಾಟಕ]]ದ [[ಉತ್ತರ ಕನ್ನಡ]] ಜಿಲ್ಲೆಯ ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಕಂಡುಬರುವ ಒಂದು ವಿಶಿಷ್ಟ ಸಮುದಾಯ. ಇವರು ಕರಾವಳಿಯ ಬಹುತೇಕ ಗ್ರಾಮದೇವತೆಗಳ ಸಾಂಪ್ರದಾಯಿಕ ಆರಾಧಕರು (ಅರ್ಚಕರು) ಮತ್ತು ಐತಿಹಾಸಿಕ '[[ಬಂಡಿಹಬ್ಬ]]'ದ ಪ್ರಧಾನ ರೂವಾರಿಗಳಾಗಿದ್ದಾರೆ. ಮೂಲತಃ [[ಹಿಂದೂ]]-[[ಕುಂಬಾರ]] ಜಾತಿಗೆ ಸೇರಿದ ಇವರನ್ನು, ಕರಾವಳಿ ಭಾಗದಲ್ಲಿ ಇವರು ನಿರ್ವಹಿಸುವ ಪೌರೋಹಿತ್ಯ, ಧಾರ್ಮಿಕ ಆಚರಣೆಗಳು ಮತ್ತು ತಾಂತ್ರಿಕತೆಯ ಹಿನ್ನೆಲೆಯಲ್ಲಿ ಒಂದು ಪ್ರತ್ಯೇಕ ಜನಾಂಗವಾಗಿ ಗುರುತಿಸಲಾಗುತ್ತದೆ.<ref>ಗುನಗ, ವಿಘ್ನೇಶ್ವರ (೨೦೨೬). ''ಬಂಡಿ ಹಬ್ಬ: ಜಗತ್ತಿನ ಅತಿ ಪ್ರಾಚೀನ ಜಾತ್ರೆಯೊಂದರ ಅನಾವರಣ''.</ref>
== ಭೌಗೋಳಿಕ ಹರಡುವಿಕೆ ==
ಗುನಗರು ಪ್ರಧಾನವಾಗಿ [[ಕಾರವಾರ]]ದಿಂದ [[ಹೊನ್ನಾವರ]]ದವರೆಗಿನ ಕರಾವಳಿ ಪ್ರದೇಶದಲ್ಲಿ ವಾಸಿಸುತ್ತಾರೆ. [[ಬಂಡಿಹಬ್ಬ]]ವೂ ಇದೇ ಭಾಗದಲ್ಲಿ ಕಂಡುಬರುತ್ತದೆ. ಗ್ರಾಮದೇವತೆಯ ಅರ್ಚಕರಾಗಿರುವ [[ಹಾಲಕ್ಕಿ ಒಕ್ಕಲಿಗ]], [[ನಾಮಧಾರಿ]], [[ಕೋಮಾರಪಂಥ]] ಮತ್ತು [[ಜೈನ]] ಮನೆತನಗಳೂ ಸಹ ತಮ್ಮನ್ನು "ಗುನಗರು" ಎಂದೇ ಕರೆದುಕೊಳ್ಳುತ್ತವೆ.
== ಪದದ ನಿಷ್ಪತ್ತಿ ==
'ಗುನಗ' ಪದದ ಮೂಲದ ಬಗ್ಗೆ ವಿವಿಧ ಅಭಿಪ್ರಾಯಗಳಿವೆ:
* '''ಗೌರೀಶ ಕಾಯ್ಕಿಣಿಯವರ ವಾದ:''' 'ಗುನಿ' ಎಂದರೆ ಗುಂಗು ಅಥವಾ ಅಮಲು. ಅಮ್ಮನವರ ಪೂಜಾರಿ ಕಳಸ ಹೊತ್ತಾಗ ಆವೇಶದಲ್ಲಿ 'ಗುನಗುತ್ತಾ-ಗೊಣಗುತ್ತಾ' ಇರುವುದರಿಂದ 'ಗುನಗ'ನಾದ.<ref>ಕಾಯ್ಕಿಣಿ, ಗೌರೀಶ. ''ಗೋಕರ್ಣ ಮಂಡಲದ ಹಿರಿ-ಕಿರಿ ದೇವತೆಗಳು''.</ref>
* '''ಗುಂ-ಗುಂಗಾ ವಾದ:''' 'ಗುಂ' ಎಂಬ ಧ್ವನಿಯು [[ಅನಿಮಿಸಮ್|ಸರ್ವಾತ್ಮವಾದ]], [[ಶಮನಿಸಮ್|ಮಾಂತ್ರಿಕತೆ]] ಹಿನ್ನೆಲೆಯ ಆದಿಮ ಧ್ವನಿ. ಡಾ. ಕೆ.ಎಂ. ಮೇತ್ರಿ ಅವರ ಅಭಿಪ್ರಾಯ.<ref>ಮೇತ್ರಿ, ಡಾ. ಕೆ.ಎಂ. (ಬಂಡಿಹಬ್ಬ: ಜಗತ್ತಿನ ಅತಿ ಪ್ರಾಚೀನ ಜಾತ್ರೆಯೊಂದರ ಅನಾವರಣ ಕೃತಿಗೆ ನೀಡಿದ ಅಭಿಪ್ರಾಯ).</ref>
* '''ಗುಣಗಾನ:''' ದೇವರ ಗುಣಗಾನದಲ್ಲಿ ಮಗ್ನರಾಗಿರುವುದರಿಂದ- ನೀಲಪ್ಪ ಗುನಗ ಅವರ ಅಭಿಪ್ರಾಯ.
ಜೈನ ಧರ್ಮದ 'ಗುಣಕರ್ಮ', 'ಗುಣವರ್ಮ' ಹೆಸರುಗಳ ಪ್ರಭಾವ ಎಂಬ ವಾದವನ್ನು ಡಾ. ದತ್ತಾತ್ರೇಯ ಗಾಂವಕಾರರು 'ಆಧಾರರಹಿತ'ವೆಂದು ತಿರಸ್ಕರಿಸಿದ್ದಾರೆ.<ref>ಗಾಂವಕಾರ, ಡಾ. ದತ್ತಾತ್ರೇಯ. ''ಬಂಡಿಹಬ್ಬ: ಒಂದು ಜಾನಪದ ಅಧ್ಯಯನ''.</ref>
== ಇತಿಹಾಸ ಮತ್ತು ಮೂಲ ==
೧೮೮೩ರ ''ಗೆಜೆಟಿಯರ್ ಆಫ್ ಬಾಂಬೆ ಪ್ರೆಸಿಡೆನ್ಸಿ''ಯಲ್ಲಿ "ಗುನಗರು" ಮತ್ತು "ಬಂಡಿಹಬ್ಬ" ಶಬ್ದಗಳು ಮೊದಲ ಬಾರಿಗೆ ದಾಖಲಾಗಿವೆ.<ref>Gazetteer of Bombay Presidency (Vol. 15, Part 1). (1883).</ref> [[ವೇಂಗಿ ಚಾಲುಕ್ಯ]] ವಂಶದ 'ವಿಕ್ರಮಾದಿತ್ಯ'ನಿಗೂ "ಗುನಗ" ಬಿರುದಿತ್ತು. [[ಬ್ರಾಹ್ಮಣ]]ರ ಆಗಮನಕ್ಕಿಂತ ಪೂರ್ವದಲ್ಲಿ ಈ ಭಾಗದ 'ಅಧಿಕೃತ ಪುರೋಹಿತ ವರ್ಗ'ವಾಗಿದ್ದ ಗುನಗರು, ಮಾಂತ್ರಿಕರು, ಜ್ಯೋತಿಷಿಗಳು ಮತ್ತು ಶೂದ್ರರ ಮರಣೋತ್ತರ 'ಶ್ರಾದ್ಧ ಕ್ರಿಯೆ'ಯನ್ನೂ ನೆರವೇರಿಸುತ್ತಿದ್ದರು.<ref>Gazetteer of Bombay Presidency (Vol. 15, Part 1). (1883). pp 271.</ref>
== ಶಕ್ತಿ ದೇವತೆ 'ಕುಂಬಾರಕುಂಠಿ' ==
[[ಕಾರವಾರ]]-[[ಅಂಕೋಲಾ]] ಭಾಗದಲ್ಲಿ ಗುನಗರು 'ಕುಂಬಾರಕುಂಠಿ'ಯನ್ನು ಮನೆತನದ ಶಕ್ತಿ ದೇವತೆಯಾಗಿ ಆರಾಧಿಸುತ್ತಾರೆ.<ref>Gazetteer of Bombay Presidency (Vol. 15, Part 1). (1883, p 146).</ref> ಪ್ರಖ್ಯಾತ ಇತಿಹಾಸಕಾರ ಸತೀಶ ಧುಮೆಯವರ ಪ್ರಕಾರ, [[ಛೋಟಾ ನಾಗ್ಪುರ]]ದಿಂದ ವಲಸೆ ಬಂದ '[[ಮುಂಡಾ]]' ಬುಡಕಟ್ಟು ಪೂಜಿಸುತ್ತಿದ್ದ 'ಕುಂಠಿ' ದೇವತೆಯೇ ಇದಾಗಿರಬಹುದು.<ref>Dhume, Anant Ramkrishna. ''The Cultural History of Goa from 10,000 BC - 1352 AD''.</ref>
== ಬಂಡಿಹಬ್ಬದಲ್ಲಿ ಗುನಗನ ಪಾತ್ರ ==
[[ಬಂಡಿಹಬ್ಬ]]ದಲ್ಲಿ ಕಳಸ ಹೊರುವ ಗುನಗನ ಆಯ್ಕೆ ಕಟ್ಟುನಿಟ್ಟಿನ ನಿಯಮಗಳನ್ನೊಳಗೊಂಡಿದೆ:
* '''ವೈವಾಹಿಕ ನಿಯಮ:''' ಕಳಸ ಹೊರುವವನು ವಿವಾಹಿತನಾಗಿರಲೇಬೇಕು.
* '''ಆಯ್ಕೆ:''' ಕುಟುಂಬ, ಸಮಾಜ, ಮತ್ತು ದೇವಿಯ ಸಮ್ಮತಿ ಪಡೆದ ನಂತರವೇ ಆಯ್ಕೆ.
* '''ಪನ್ನೆ:''' ಕ್ಷೌರಿಕನಿಂದ ಗಡ್ಡ-ಕೂದಲು ತೆಗೆಸುವುದು. ನಂತರ ಶ್ರೀಗಂಧ ಲೇಪನ ಮತ್ತು 'ಅಂಗಾರಾರತಿ' (ಸಾಂಬ್ರಾಣಿ ಧೂಪ).
== ವೇಷಭೂಷಣ ಮತ್ತು ವ್ರತಗಳು ==
* '''ವೇಷ:''' ಪಟ್ಟೆ ಪೀತಾಂಬರ, ಸೊಂಟಕ್ಕೆ ೨೦ ಅಡಿ ಬಟ್ಟೆಯ ಪಟ್ಟಿ, ಖಂಜೂರ್ (ಚೂರಿ) ಮತ್ತು ಕಿರುಕಟ್ಟಿಗೆ.
* '''ಮುಖಸುತ್ತ:''' ೧೮ ಮೊಳದ ೨-೩ ಪೀತಾಂಬರಗಳ ಬೃಹತ್ ಪೇಟ. ಧರಿಸಿರುವಾಗ ಮೌನವ್ರತ (ದೈವದ ನುಡಿ ಹೊರತುಪಡಿಸಿ).
* '''ಕಠಿಣ ವ್ರತಗಳು:''' ೧೨ ದಿನ ಬರಿಗಾಲು, ಹೊಲಿದ ಬಟ್ಟೆ ನಿಷೇಧ, ತಲೆ ಮುಚ್ಚಿಕೊಳ್ಳಲು ಅವಕಾಶವಿಲ್ಲ (ಮುಖಸುತ್ತ ಹೊರತುಪಡಿಸಿ). ದೇವಾಲಯದಲ್ಲೇ ಉಳಿದು ಸ್ವಯಂ ಅಡುಗೆ, ಪತ್ನಿಯ ಮುಖ ನೋಡಲು ನಿಷೇಧ, ಶುಭ ಕಾರ್ಯಗಳಿಗೆ ಹೋಗಲು ನಿಷೇಧ.
* '''ಜಾಗತಿಕ ಸಾಮ್ಯತೆ:''' ಈ ಆಚರಣೆಯು [[ಆಸ್ಟ್ರೇಲಿಯಾ]]ದ "ಇಂಟಿಚಿಯಮಾ" (Intichiuma) ಪದ್ಧತಿಯನ್ನು ಹೋಲುತ್ತದೆ.<ref>Eliade, Mircea. (1959). ''The Sacred and the Profane''. pp 85-86.</ref>
== ಪ್ರಾಣಾಪಾಯ ಮತ್ತು ಆತ್ಮಹತ್ಯೆಯ ಕಠೋರ ಪದ್ಧತಿ ==
ಹಬ್ಬದಲ್ಲಿ ಕಳಸ ಕೆಳಗೆ ಬಿದ್ದರೆ, ಗುನಗನು ತನ್ನ 'ಖಂಜೂರು' (ಚೂರಿ)ಯಿಂದ ತನ್ನನ್ನು ತಾನೇ ತಿವಿದುಕೊಂಡು ಪ್ರಾಣಬಿಡಬೇಕು. ಈ ಆತಂಕದಲ್ಲಿ ಗುನಗನ ಹೆಂಡತಿ ತನ್ನ 'ಮೂಗುತಿ'ಯನ್ನು ತೆಗೆದು ದೇವಿಯ ಪೀಠದ ಮೇಲಿರಿಸಿ "ನನ್ನ ಮಾಂಗಲ್ಯ ಕಾಪಾಡು" ಎಂದು ಬೇಡಿಕೊಳ್ಳುವ ಪದ್ಧತಿ ಅಂಕೋಲಾ ಭಾಗದಲ್ಲಿದೆ.
== ಸಾಂಸ್ಕೃತಿಕ ಮಹತ್ವ ==
ಗುನಗರು 'ಜೀವಂತ ಕೊಂಡಿಗಳು' (Living Links)- ಕರಾವಳಿ ಮಣ್ಣಿನ ಆದಿಮ ಸಂಸ್ಕೃತಿಯನ್ನು ಜೀವಂತವಾಗಿಟ್ಟಿರುವವರು. ಅವೈದಿಕ ಪದ್ಧತಿಯಲ್ಲಿ 'ನಿಂತುಕೊಂಡೇ' ಪೂಜೆ, ಹಾಲಿಗಿಂತ 'ಎಣ್ಣೆಯ ಸ್ನಾನ'ಕ್ಕೆ ಆದ್ಯತೆ, ಸಂಸ್ಕೃತ ಬದಲು ಗ್ರಾಮ್ಯ ಕನ್ನಡದಲ್ಲಿ ದೇವರೊಂದಿಗೆ ಸಂವಹನ ('ಹೇಳಿಕೆ ಮಾಡಿಕೊಳ್ಳುವುದು'). ಇವರು ಮಿಶ್ರಾಹಾರಿಗಳು.
== ಗುಣಗಾ ವರ್ಗೀಕರಣ ==
ಉತ್ತರ ಕನ್ನಡದಲ್ಲಿ '''ಗುಣಗಾ/ಗುನಗಾ''' ಎಂಬುದು:
# '''ಜೈನ ಗುಣಗರು:''' ಕುಮಟಾ ತಾಲೂಕಿನ ಹೆಗಡೆಯಲ್ಲಿ ಕೆಲವೇ ಕುಟುಂಬಗಳು. ಸಂಪೂರ್ಣ ಸಸ್ಯಾಹಾರಿಗಳು. ಅರ್ಚಕರು.
# '''ಗುನಗಾ ಜಾತಿ:''' ಕುಮಟಾ, ಹೊನ್ನಾವರ, ಅಂಕೋಲಾ, ಕಾರವಾರಗಳಲ್ಲಿ ವ್ಯಾಪಿಸಿದ್ದಾರೆ. ಅರ್ಚಕತನ + ಕುಂಬಾರಿಕೆ. ಮಿಶ್ರಾಹಾರಿಗಳು. ಜೈನ ಮೂಲವಿದ್ದರೂ ಸ್ಥಳೀಯ ಸಂಸ್ಕೃತಿಗೆ ಒಗ್ಗಿಹೋಗಿದ್ದಾರೆ. ೫೦+ ಗ್ರಾಮಗಳ ಅಧಿಕೃತ ಅರ್ಚಕರು.
# '''ಉಪನಾಮ ಮಾತ್ರ ಗುಣಗಾ:''' ಬೇರೆ ಜಾತಿಗೆ ಸೇರಿದವರು. ಆಕಸ್ಮಿಕವಾಗಿ ಅರ್ಚಕತನ ಪಡೆದವರು. ಜನಪದ ದೇವತೆಗಳ ಪೂಜೆ.
ಸರ್ಕಾರವು ೧೯೯೪ರ ಸೆಪ್ಟೆಂಬರ್ ೧೭ರಂದು ಗುಣಗಾ ಜಾತಿಯನ್ನು ಪ್ರತ್ಯೇಕವಾಗಿ ಅಧಿಸೂಚಿಸಿದೆ. ಆದ್ದರಿಂದ ಇವರನ್ನು 'ಕುಂಬಾರ' ಎಂದು ಕರೆಯುವುದು ಕಾನೂನಾತ್ಮಕ, ತಾಂತ್ರಿಕ ಮತ್ತು ನೈತಿಕವಾಗಿ ತಪ್ಪು.
== ಆಧಾರ ಗ್ರಂಥಗಳು ==
* Gazetteer of Bombay Presidency (Vol. 15, Part 1). (1883).
* ಕಾಯ್ಕಿಣಿ, ಗೌರೀಶ. ''ಗೋಕರ್ಣ ಮಂಡಲದ ಹಿರಿ-ಕಿರಿ ದೇವತೆಗಳು''.
* ಗಾಂವಕಾರ, ಡಾ. ದತ್ತಾತ್ರೇಯ. ''ಬಂಡಿಹಬ್ಬ: ಒಂದು ಜಾನಪದ ಅಧ್ಯಯನ''.
* Eliade, Mircea. (1959). ''The Sacred and the Profane''.
* Dhume, Anant Ramkrishna. ''The Cultural History of Goa from 10,000 BC - 1352 AD''.
{{reflist}}
[[ವರ್ಗ:ಕರ್ನಾಟಕದ ಜನಾಂಗಗಳು]]
[[ವರ್ಗ:ಉತ್ತರ ಕನ್ನಡ ಜಿಲ್ಲೆಯ ಸಂಸ್ಕೃತಿ]]
[[ವರ್ಗ:ಕರ್ನಾಟಕದ ಜಾನಪದ]]
erjnjiygur241sv828rb42vak2pmlvg
ಸದಸ್ಯ:ಗಣೇಶ್ ಎಂ/ನನ್ನ ಪ್ರಯೋಗಪುಟ
2
179308
1378129
1377961
2026-08-02T12:21:28Z
ಗಣೇಶ್ ಎಂ
88310
1378129
wikitext
text/x-wiki
ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು.
ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು.
ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು.
ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು
ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ
ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ
ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ
ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ
ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ
ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ
ಕನಪಾಯಿಯ ಮಗಳು - ಸೀತಮ್ಮ,
ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ.
ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು.
ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು.
1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು.
ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು.
ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು.
ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು.
ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ.
2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು.
ಖುಷಿಯಿಂದ ಓಡಿದೆನು
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಖುಷಿಯಿಂದ ಓಡಿದೆನು ಅಂದು ನಾನು
ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು,
ನೋಡುವಿರಿ ಸಾಕೆನಗೆ ಅದುವೆ ಬಹುಮಾನ
ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು,
ನೋಡುವಿರಿ ಸಾಕೆನಗೆ ಅದುವೆ ಬಹುಮಾನ
ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ?
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ
ಓಡುವುದು ಅನಿವಾರ್ಯ ಕರ್ಮ ನನಗೆ
ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ
ಓಡುವುದು ಅನಿವಾರ್ಯ ಕರ್ಮ ನನಗೆ
ನೋಡುವವರಿಹರೆಂದು ನಾ ಬಲ್ಲೆ ಅದರಿಂದ
ಓಡುವುದು ಮೈ ದುಂಬಿ ಎಂದಿನಂತೆ
ಯಾರು ಏನು ಹೇಳಿದರೂ
ಯಾರು ಏನು ಹೇಳಿದರೂ
ನನಗಿಲ್ಲ ಚಿಂತೆ
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಗಣೇಶ್.ಎಂ
(ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ)
ನಿವ್ರತ್ತಿ
ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು
ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು
ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ
ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ
ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ
ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ
ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು
ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು
ವ್ರತ್ತಿ ಜೀವನದಲ್ಲಿ, ದುಷ್ಚಟಗಳಿಂದ ದೂರವಿದ್ದು ಕಾಪಾಡಿದ ಆರೋಗ್ಯ
ನೀಡುವುದು ವಿಶ್ರಾಂತ ಜೀವನದಲ್ಲಿ, ನೆಮ್ಮದಿ ನಿಟ್ಟುಸಿರಿನ ಸ್ವಾಸ್ಥ್ಯ
ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ
ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ
ಗಣೇಶ್ ಎಂ
(ಎಂ.ಆರ್.ಪಿ.ಎಲ್ ನಿವ್ರತ್ತ ಮುಖ್ಯ ಪ್ರಬಂದಕ)
"ಮಧುರ" ಮನೆ ನಂಬ್ರ ೧-೫೦/೬, ಮಾದರಿಬೆಟ್ಟು ರೋಡು,
ಕಾನ ಕಡಂಬೋಡಿ, ಸುರತ್ಕಲ್-೫೭೫೦೧೪
ಮೊಬೈಲ್ ನಂ. ೯೪೪೯೩೯೦೪೭೬
ರೋಟರಿ ನಾ ಕಂಡಂತೆ
ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ,
ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥
ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು,
ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥
ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ,
ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥
ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ,
ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥
ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು
ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥
ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ,
ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥
ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ,
ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥
ಗಣೇಶ್.ಎಂ
ನಮ್ಮ ಸತೀಷ
ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ,
ತಿಳಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ.
ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ,
ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ.
ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ,
ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ.
ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ,
ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ.
ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ,
ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ.
ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ,
ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ.
ಗಣೇಶ್ ಎಂ
ಆಧ್ಯಕ್ಷ ರೋಟೇರಿಯನ್ ದಿನೇಶ್
ರೋಟರಿ ವರ್ಷ ಆದಿಯಲ್ಲಿ ಅಧ್ಯಕ್ಷರಾದ ರೋಟೇರಿಯನ್ ದಿನೇಶ
ಸಾಧನೆಗಳ ಹಿರಿಮೆಯೊಂದಿಗೆ ಅಂತ್ಯಗೊಂಡ ಗೆಲುವಿನ ವರುಷ
ರೋಟರಿ ಮಿತ್ರರ ಸಲಹೆಗಳೇ ಅಧ್ಯಕ್ಷರಿಗೆ ಸ್ಪೂರ್ತಿ
ಪ್ರಭುಗಳ ಆಶಿರ್ವಾದದಿಂದ ಸಿಕ್ಕಿದೆ ಪ್ರಶಸ್ತಿಗಳ ಕೀರ್ತಿ
ಸಹನೆ ಸಂಯಮ ಕಾರ್ಯವೈಕರಿ ಎಲ್ಲರಿಗೂ ಮಾದರಿ
ಸಂತೋಷದಿಂದ ಕಳೆದ ವರ್ಷಕ್ಕೆ ನಾವೆಲ್ಲರೂ ನಿಮಗೆ ಅಭಾರಿ
ಸಮಾಜ ಸೇವೆಯ ನಿಮ್ಮ ಅಂಬಲಕ್ಕೆ ಇಡೀ ಕುಟುಂಬದ ಬೆಂಬಲ
ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ ರೀತಿ ವರ್ಣಿಸಲಸದಲ
ಯಶಸ್ವೀ ರೋಟರಿ ವರ್ಷ ನಿಮ್ಮ ಜೀವನದ ಕಿರೀಟಕ್ಕೊಂದು ಚಿನ್ನದ ಗರಿ
ಸರ್ವೇಸ್ವರನ ಕ್ರಪೆಯಿಂದ ದೊರೆಯಲಿ ಸುಖ ಶಾಂತಿ ನೆಮ್ಮದಿಯ ಐಸಿರಿ
ಅಪರೇಷನ್ ವಿಜಯ
ಅಪರೇಷನ್ ವಿಜಯ ಭಾರತಮಾತೆಯ ಯೋಧರ ಕದರ್
ತಲೆಕೆಳಗಾಯಿತು ನರಿ ಬುದ್ಧಿ ಮಾತಿನ ಆಪರೇಷನ್ ಬದ್ರ್.
ವರ್ಣಿಸಲಸದಲ ಕಾರ್ಗಿಲ್ ವಿಜಯ ಕಥಾ ವರ್ಣ
ಬಾನಾಡಿ ಹಾರಿದ ನಿತ್ಯ ಚೇತನ ನಮ್ಮ ತ್ರಿವರ್ಣ
ಅಪರೇಷನ್ ವಿಜಯದ ರೂವಾರಿ ಕ್ಯಾಪ್ಟನ್ ವಿಕ್ರಂ ಬಾತ್ರ
ಟೈಗರ್ ಹಿಲ್ಸ್ ನಲ್ಲಿ ನಟಿಸಿದರು ಜೀವನದ ಕೊನೆಯ ಪಾತ್ರ.
ಕಂಡರು ಶಿಖರದ ತುದಿಯಲ್ಲಿ ತ್ರಿವರ್ಣದ ನಡುವೆ ಅಶೋಕ ಚಕ್ರ,
ಮರಣೋತ್ತರವಾಗಿ ಪಡೆದರು ವಿಕ್ರಂ ಗೆಲುವಿನ ಪರಮ ವೀರ ಚಕ್ರ.
ಜಾವಲಿನ್ ಚಾಂಪಿಯನ್
ವರ್ಲ್ಡ್ ಮಾಸ್ಟರ್ಸ್ ನ ಜಾವಲಿನ್ ಚಾಂಪಿಯನ್
ನಮ್ಮ ಮಂಗಳೂರಿನ ಶ್ರೀ ಗಿರಿಧರ್ ಸಾಲಿಯಾನ್
ಪರಿಶ್ರಮಕ್ಕೆ ಸಂದ ಗೌರವ, ಭಾರತ ರತ್ನ ಸಮ್ಮಾನ
ತೈಪೆಯಲ್ಲೂ ಬಂಗಾರ ಮಿಂಚು ನೀವೊಬ್ಬ ಮಹಾನ್
ಕ್ರೀಡಾಂಗಣದಲ್ಲಿ ನೀವೊಬ್ಬ ಅದ್ಭುತ ಜಾವಲಿನ್ ಎಸೆತಗಾರ
ಮಾತಿಗಿಳಿದರೆ ನೀವೊಬ್ಬ ಪ್ರಬುದ್ಧ ಮಾತುಗಾರ
ವಿದ್ಯಾರ್ಥಿಗಳಿಗೆ ನೀವೊಬ್ಬ ಬೋಧನಾ ತರಬೇತುದಾರ
ಕ್ರೀಡಾಳುಗಳಿಗೆ ನೀವೊಬ್ಬ ನೆಚ್ಚಿನ ಸಲಹೆಗಾರ
ನಾವು ಕಂಡೆವು ನಿಮ್ಮಲ್ಲಿ ಸಂಘಟನಾ ಕೌಶಲ್ಯತೆ
ಅಪೇಕ್ಷಿಸುವೆವು ನಾವೆಲ್ಲರೂ, ವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷತೆ.
ಮೇಸ್ಟ್ರು ಸುಭಾಶ್ಚಂದ್ರ ರೈ
ಬಾಳಿಲ ಗ್ರಾಮದ ನಿವೃತ್ತ ಶಿಕ್ಷಕ ಶ್ರೀ ಸುಭಾಶ್ಚಂದ್ರ ರೈ
ಎಲ್ಲಾ ಕ್ರೀಡೆಗಳ ಅಪ್ರತಿಮ ಸಾಧನೆಗೆ ನೀವೊಬ್ಬರು ಎತ್ತಿದ ಕೈ
ಮಾಸ್ಟರ್ಸ್ ಕ್ರೀಡಾಕೂಟಕ್ಕೆ ನೀವು ಸ್ಫೂರ್ತಿಯ ಚಿಲುಮೆ
ಕ್ರೀಡಾಸಕ್ತರಿಗೆ ಸಿಗುವುದು ನಿಮ್ಮಿಂದ ಪ್ರೀತಿಯ ಒಲುಮೆ
ಅತಿಥಿ ಸತ್ಕಾರಕ್ಕೆ ನಿಮ್ಮ ಹೃದಯ ವೈಶಾಲ್ಯವೇ ಸಾಕ್ಷಿ
ಧನ್ಯತಾ ಭಾವದಿಂದ ತುಂಬಿ ಬಂತು ನಮ್ಮೆಲ್ಲರ ಅಕ್ಷಿ.
ಸುಧಾಕರ ಪೂಂಜ
ಬೈಕಂಪಾಡಿ ರೋಟರಿಯ ಮಾಜಿ ಅಧ್ಯಕ್ಷರು,
ನಮ್ಮೆಲ್ಲರ ಪ್ರೀತಿಯ ಅಚ್ಚುಮೆಚ್ಚಿನ ಸುಧಾಕರ ಪೂಂಜರು.
ಕಠಣ ಪರಿಶ್ರಮದಿಂದ ಉದ್ಯಮದಲ್ಲಿ ನೀವು ಬೆಳೆದು ಬಂದ ದಾರಿ,
ಉದಯೋನ್ಮುಕ ಯುವ ಉದ್ಯಮದಾರರಿಗೆ ನೀವೊಬ್ಬರು ಮಾದರಿ.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಂಟರ ಸಂಘದ ನೇತಾರರು,
ತಾರತಮ್ಯವಿಲ್ಲದೆ ಜನಸೇವೆಯಲ್ಲಿ ನೀವೇ ಅಗ್ರಗಣ್ಯರು.
ರೋಟರಿ ಮಿತ್ರರ ಸಮ್ಮುಖದಲ್ಲಿ ಆಚರಿಸಿದ ನಿಮ್ಮ ಜನ್ಮದಿನದ ಷಷ್ಠ್ಯಬ್ದಿ
ನಂಬಿದ ದೈವಗಳ ಕ್ರಪೆಯಿಂದ ಆಚರಿಸುವಂತಾಗಳಲಿ ಜನ್ಮದಿನದ ಶತಾಬ್ದಿ.
ಮಿತ್ರರೆಲ್ಲರ ಸಮ್ಮುಖದಲ್ಲಿ ನಿಮಗಿದೋ ಜನ್ಮದಿನದ ಶುಭಾಶಯಗಳು
ಕಟೀಲಮ್ಮನ ಕ್ರಪೆಯಿಂದ ದೊರಕಲಿ ಸುಖಸಂತೋಷದ ನೂರು ವಸಂತಗಳು
ಸುಧಾಕರ ಪೂಂಜೆರ್
ಬೈಕಂಪಾಡಿ ರೋಟರಿದ ಪಿರಾಕ್ ದ ರಡ್ಡನೆ ಗುರಿಕಾರೆರ್,
ನಮ್ಮ ಮಾತ ಮೊಕೆದ ಅರ್ತಿ ಪಿರ್ತಿದ ಸುಧಾಕರ ಪೂಂಜರ್
ಕಷ್ಟೊಡು ಬೆಗರ್ ಸೀಂಟ್ ದ್ ಉದ್ಯಮೊಡು ಬುಲೆದ್ ಬತ್ತಿನ ಸಾದಿ
ಉದ್ಯಮದ ಬಗ್ಯೆ ಜಕ್ ಜವನಿಯೆರೆಗ್ ಕೊರ್ಪೆರ್ ಅಲ್ಂಬೇಗ್ ದ ಬುದ್ಧಿ.
ಜಿಲ್ಲಾ ರಾಜ್ಯೋತ್ಸವ ಮಾನಾದಿಗೆ ಪಡೆತಿನ ಬಂಟರ ಸಂಘದ ಪೆರ್ಮೆದ ಗುರ್ಕಾರ್ಲು
ಬೇದದಾಂತಿ ಇರ್ನ ಜನಸೇವೆನ್ ತೂಯರೆ ಬಾರಿ ಪೊರ್ಲು
ರೋಟರಿ ಸಂಸಾರ ಬೊಕ್ಕ ದೊಸ್ತಿನಕ್ಲ್ನನ ಸಮುಕೊಡು ಇರ್ನ ಪುಟ್ಟು ಪರ್ಬದ ಷಷ್ಠ್ಯಬ್ದಿ
ಈರ್ ನಂಬುದಿನ ದೈವದೇವೆರೆನ ದಯೆಟ್ ಯಂಕ್ಲೆಗ್ ತಿಕ್ಕಡ್ ಇರ್ನ ಜನ್ಮ ಶತಾಬ್ದಿ.
ದೋಸ್ತಿನಕುಲೆನ ಮೋಕೆದ ಸಂಸಾರದ ನಡುಟು ಇರೆಗ್ ಪುಟ್ಟು ಪರ್ಬದ ಎಡ್ಡೆಪ್ಪುಲು
ಕಟೀಲಪ್ಪೆನ ದಯೆಟ್ ತಿಕ್ಕಡ್ ಇರೆಗ್ ಸುಖ ಸಂತೋಸದ ನೂದು ಬಿಸು ಪರ್ಬೊಲು
ಆನ್ಲೈನ್ ಸ್ಪರ್ಧೆಗೆ ನನ್ನ ಕಥೆ
ಜಯರಾಮನು ಹುಟ್ಟಿದ್ದು ಉಳ್ಳಾಲ ನೇತ್ರಾವತಿ ದಕ್ಷಿಣಕ್ಕಿರುವ ಕೇರಳ ಗಡಿ ಭಾಗಕ್ಕೆ ತಾಗಿಕೊಂಡಿರುವ ಒಂದು ಪುಟ್ಟ ಗ್ರಾಮದಲ್ಲಿ. ಹಿಂದುಳಿದ ಬಡ ಕುಟುಂಬದಲ್ಲಿ ಜಯರಾಮನು ಹುಟ್ಟಿದಾಗ, ಮಂಗಳೂರು ಕೇರಳ ಸಂಪರ್ಕಿಸುವ ನೇತ್ರಾವತಿ ಸೇತುವೆ ಪ್ರಾರಂಭವಾಗಿ ಎರಡು ವರ್ಷ ಆಗಿತ್ತು. ಅದಕ್ಕಿಂತ ಮೊದಲು ಮಂಗಳೂರಿನಿಂದ ತೊಕ್ಕೋಟ್ಟಿಗೆ ಬರಬೇಕಾಗಿದ್ದರೆ, ಜಪ್ಪು ಮೋರ್ಗನ್ ಗೇಟಿನಿಂದ ಕಲ್ಲಾಪಿನ ತನಕ ದೋಣಿಯಲ್ಲಿ ಬಂದು ಆಮೇಲೆ ನಡೆದುಕೊಂಡು ಬರಬೇಕಾಗಿತ್ತು. ಇಲ್ಲವೇ ರೈಲ್ವೆ ಹಳ್ಳಿಯ ಪಕ್ಕದಲ್ಲೇ ಮಂಗಳೂರಿನಿಂದ ತೊಕ್ಕೋಟಿಗೆ ನಡೆದುಕೊಂಡು ಬರುತ್ತಿದ್ದರು. ಜಯರಾಮನು ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಿ ಅವನ ತಂದೆಯ ಮೂವರು ಮಾವಂದಿರು ಅಜ್ಜಿ ಹಾಗೂ ಇಬ್ಬರು ಚಿಕ್ಕಮ್ಮಂದಿರು ಆ ಮನೆಯಲ್ಲಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು. ಜಯರಾಮನು ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಆರೋಗ್ಯವಾಗಿ ಹಾಗೂ ಸದೃಢವಾಗಿ ಇದ್ದ. ಸುಮಾರು ಎರಡು- ಎರಡುವರೆ ವರ್ಷದವನಿದ್ದಾಗ, ಒಂದು ದಿನ ಅವರ ಕುಟುಂಬದಲ್ಲಿ ಜಯರಾಮನ ತಂದೆಯ ಮಾವನ ಮಕ್ಕಳಿಗೆ ವಿಪರೀತ ಜ್ವರ ಬಂದು, ಒಂದು ಮಗು ಕೈಕಾಲು ಸ್ವಾಧೀನವಿಲ್ಲದೆ ತೀರಿಕೊಂಡಿತು. ಎರಡು ವಾರ ಆಗುವಷ್ಟರಲ್ಲಿ ಇನ್ನಿಬ್ಬರು ಮಕ್ಕಳು ಅದೇ ರೀತಿ ಕೈಕಾಲು ಬಲ ಇಲ್ಲದೆ ತೀರಿಕೊಂಡವು. ಮಕ್ಕಳು ಜ್ವರದಿಂದ ನರಳುತ್ತಿದ್ದಾಗ, ಕೈಕಾಲಿನಲ್ಲಿ ಬಲ ಇಲ್ಲದಾಗ, ಮಂತ್ರವಾದಿ ಹಾಗೂ ಗಿಡಮೂಲಿಕೆ ಪಂಡಿತರ ಮೊರೆ ಹೋದರೇ ವಿನಹ: ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಈ ಮಹಾಮಾರಿ ಯಾವುದೆಂದು ತಿಳಿಯುವ, ಮದ್ದು ಮಾಡುವ ಇಲ್ಲವೇ ಮನೆಯಲ್ಲಿ ಇರುವ ಇನ್ನುಳಿದ ಮಕ್ಕಳಿಗೆ ರೋಗ ಬರದಂತೆ ರೋಗ ನಿರೋಧಕವನ್ನು ಕೊಡುವ ಗೋಜಿಗೆ ಹೋಗಲಿಲ್ಲ. ಇದಾಗಿ ಒಂದು ತಿಂಗಳು ಆಗುವಷ್ಟರಲ್ಲಿ ಒಂದು ದಿನ ಜಯರಾಮನು ಬೆಳಿಗ್ಗೆ ಎದ್ದಾಗ ಎಡಕೈ ಹಾಗೂ ಎಡಕಾಲು ಬಲವಿಲ್ಲದೆ ಮಗುವಿಗೆ ನಿಲ್ಲಲು ಆಗುತ್ತಿರಲಿಲ್ಲ ಇಡೀ ಮೈ ಬಿಸಿಯಾಗಿತ್ತು. ಕೂಡಲೇ ಜಯರಾಮನ ತಂದೆ ತಾಯಿ ಮಗುವನ್ನು ಎತ್ತಿಕೊಂಡು ಹತ್ತಿರದಲ್ಲಿರುವ ಆಲೋಪತಿ ಡಾಕ್ಟರ್ ಹತ್ತಿರ ಹೋಗಿ ತೋರಿಸಿ, ಮನೆಯಲ್ಲಿ ನಡೆದ ಎಲ್ಲಾ ಅನಾಹುತಗಳ ಬಗ್ಗೆ ಅವರಿಗೆ ತಿಳಿಸಿದಾಗ ಡಾಕ್ಟರ್ ಹೇಳಿದರು ಭಾಗಶಃ ನಿಮ್ಮ ಮಗುವಿಗೆ ಪೋಲಿಯೋ ಅಟ್ಯಾಕ್ ಆಗಿದೆ, ತಡ ಮಾಡದೆ ಮಂಗಳೂರಿನ ಹಾಸ್ಪಿಟಲ್ ಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಿ ಎಂದು ತಿಳಿಸಿದರು. ಆ ಊರಲ್ಲಿ ಅದೇ ವರ್ಷದಲ್ಲಿ ಹಲವಾರು ಪೋಲಿಯೋ ಪ್ರಕರಣಗಳು ಕಂಡುಬಂದಿದ್ದವು. ಜಯರಾಮನ ತಂದೆ ತಾಯಿಗಳು ತಡ ಮಾಡದೆ ಮಗುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಡಾಕ್ಟರುಗಳು ಮಗುವನ್ನು ಪರೀಕ್ಷಿಸಿ, ಮಗುವಿಗೆ ಭಾಗಶಃ ಪೋಲಿ ಅಟ್ಯಾಕ್ ಆಗಿದೆ, ನಿಮ್ಮ ಹಾಗೂ ಮಗುವಿನ ಅದೃಷ್ಟ ಚೆನ್ನಾಗಿದ್ದರೆ ಅವನು ಮುಂಚಿನಂತೆ ಆಗಲೂಬಹುದು, ಮಾಂಸಖಂಡಗಳ ಮೇಲೆ ವೈರಸ್ ದಾಳಿಯಾಗಿದ್ದರೆ ಅದನ್ನು ಸರಿ ಮಾಡಲು ಬರುವುದಿಲ್ಲ, ಜೀವನಪರ್ಯಂತ ಅಂಗ ಹೀನತೆಯೊಂದಿಗೆ ಬದುಕಬೇಕಾಗುತ್ತದೆ. ಈ ಮೊದಲೇ ಪೋಲಿಯೋ ಲಸಿಕೆ ನೀಡುತ್ತಿದ್ದರೆ ಮಗುವಿಗೇನು ಆಗುತಿರಲಿಲ್ಲ. ಈಗ ಮಗುವಿನ ಜೀವಕ್ಕೆ ಏನೂ ಅಪಾಯವಿಲ್ಲವೆಂದು ಹೇಳಿ ಆಸ್ಪತ್ರೆಯಲ್ಲಿ ಒಂದು ವಾರ ಒಳ ರೋಗಿಯಾಗಿ ದಾಖಲಿಸಿಕೊಂಡರು.
ಮಗುವಿಗೆ ಎಡಗೈಗೆ ಹಾಗೂ ಎಡ ಕಾಲಿಗೆ ಪೂರ್ತಿಯಾಗಿ ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಬ್ಯಾಂಡೇಜ್ ಹಾಕಿದರು. ಬ್ಯಾಂಡೇಜ್ ತೆಗೆಯುವ 21 ದಿನಗಳ ಕಾಲ, ಜಯರಾಮನ ತಂದೆ ತಾಯಿಗಳ ಪಾಡು ಹೇಳುತೀರದು. ಅವರ ಕೈಯ ತೋಳಿನ ಹಾಗೂ ಕಾಲಿನ ತೊಡೆ ಭಾಗದ ಚರ್ಮ ಮಗುವನ್ನು ಎತ್ತಿ ಕೊಂಡಾಗ ಹಾಗೂ ಮಗುವನ್ನು ಸಮಾಧಾನ ಮಾಡಿಸುವಾಗ ಬ್ಯಾಂಡೇಜ್ ಉಜ್ಜಿ ಚರ್ಮ ಕಿತ್ತು ಬಂದು ಗಾಯಗಳಾಗಿತ್ತು. 21 ದಿನಗಳ ನಂತರ ಬ್ಯಾಂಡೇಜ್ ತೆಗೆದಾಗ ಎಡ ಕಾಲು ವೈರಸ್ ಅಟ್ಯಾಕ್ ಆಗದೆ ಸರಿಯಾಗಿತ್ತು ಆದರೆ ಎಡಗೈ ಭುಜದ ಮೇಲಿನ ಮಾಂಸಖಂಡದ ಮೇಲೆ ವೈರಸ್ ದಾಳಿ ಮಾಡಿದರಿಂದ, ಎಡಗೈ ಮನಗಂಟಿನಿಂದ ಭುಜದವರೆಗೆ ಮಾಂಸಖಂಡಗಳು ಕರಗಿ ಎಡಗೈ ಭಾಗಶಃ ತನ್ನ ಬಲವನ್ನು ಕಳಕೊಂಡಿತ್ತು.
ಜಯರಾಮನಿಗೆ 5 ವರ್ಷ ಆದ ನಂತರ ಆ ಪರಿಸರದಲ್ಲಿರುವ ಕ್ರಿಶ್ಚಿಯನ್ ಶಾಲೆಗೆ ಸೇರಿಸಲಾಯಿತು. ಅಂಗಿ ಹಾಕಿದಾಗ ಭುಜದ ನ್ಯೂನತೆ ಯಾರಿಗೂ ಗೊತ್ತಾಗುತ್ತಿರಲಿಲ್ಲ ಆದರೆ ಬಲಗೈಯಲ್ಲಿರುವಷ್ಟು ಬಲ, ಎಡಗೈಯಲ್ಲಿ ಇರಲಿಲ್ಲ. ಎಡ ಕೈಯನ್ನು ಮೇಲೆ ಎತ್ತಿದ ಕೂಡಲೇ ಕಳಗೆ ಬೀಳುತ್ತಿತ್ತು. ಭಾರವನ್ನು ಎಡಗೈ ಒಂದರಲ್ಲೇ ಮೇಲೆತ್ತಲು ಆಗುತಿರಲಿಲ್ಲ, ಎರಡು ಕೈ ಜೋಡಿಸಿದಾಗ ಭಾರವನ್ನು ಮೇಲೆತ್ತಲು ಆಗುತ್ತಿತ್ತು. ಅವನಿಗೆ ಭುಜದ ತನಕ ಭಾರ ಎತ್ತಲಿಕ್ಕೆ ಆಗುತ್ತಿತ್ತು. ಬಾವಿಯಿಂದ ಎಲ್ಲರ ಹಾಗೆ ನೀರು ಸೇರುತ್ತಿದ್ದ. ಬುಜದ ಮೇಲಕ್ಕೆ ಮಾತ್ರ ಎಡಗೈ ಒಂದರಲ್ಲೇ ಬಾರ ಎತ್ತಲಿಕ್ಕೆ ಆಗುತ್ತಿರಲಿಲ್ಲ. ಒಂದು ದಿನ ಶಾಲಾ ವಾರ್ಷಿಕೋತ್ಸವಕ್ಕೆ ಮರದ ಡಂಬಲ್ಸ್ ಹಿಡಿದು ವ್ಯಾಯಾಮ ಮಾಡುವ ಪ್ರದರ್ಶನ ಕಾರ್ಯಕ್ರಮವಿತ್ತು. ಜಯರಾಮನು ಕೂಡ ಆ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಲು ಸೇರಿಕೊಂಡ. ಡಂಬಲ್ಸ್ನೊಂದಿಗೆ ವ್ಯಾಯಾಮ ಮಾಡುವಾಗ ಎಡಗೈಯಲ್ಲಿ, ಭಜದ ಮೇಲಕ್ಕೆ ಡಂಬಲ್ಸ್ ಎತ್ತಲಿಕ್ಕೆ ಆಗಲಿಲ್ಲ, ಆಗ ಶಾಲೆಯ ದೈಹಿಕ ಶಿಕ್ಷಕರು ನಾಗರಬೆತ್ತದಿಂದ ಜಯರಾಮನಿಗೆ ಹೊಡೆದು ನಿನಗೆ ಆಗುವುದಿಲ್ಲ ಎಂದಾದರೆ ಯಾಕೆ ಬಂದು ಸೇರುತ್ತೀಯ ಎಂದು ಎಲ್ಲರೆದುರಿಗೆ ಅವಮಾನ ಮಾಡಿದರು. ವ್ಯಾಯಾಮದ ಅವಧಿ ಮುಗಿಯುವವರೆಗೆ ಮೈದಾನದಲ್ಲಿ ಒಬ್ಬನನ್ನೇ ಬಿಸಿಲಿನಲ್ಲೇ ಕೂರಿಸಿದ್ದಾರೆ. ಜಯರಾಮನಿಗೆ ಯಕ್ಷಗಾನದಲ್ಲಿ ಕೂಡ ತುಂಬಾ ಆಸಕ್ತಿ ಇತ್ತು, ಆದರೆ ಯಕ್ಷಗಾನದ ನೃತ್ಯ ಮಾಡಲು ಎಡಗೈಯಿಂದ ಆಗದ ಕಾರಣ ಯಕ್ಷಗಾನದ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡ. ಜಯರಾಮನಿಗೆ ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆ ಏನೂ ಆಗುತಿರಲಿಲ್ಲ. ಅವನ ಮನೋಬಲ ಎಷ್ಟು ಗಟ್ಟಿಯಾಗಿತ್ತೆಂದರೆ ಎಲ್ಲಾ ಕ್ರೀಡೆಗಳನ್ನು ಜಯರಾಮನು ಲೀಲಜಾಲವಾಗಿ ಆಡುತ್ತಿದ್ದನು. ಕೆಲವೂಂದು ಕ್ರೀಡೆಗಳಾದ ವಾಲಿಬಾಲ್ನಲ್ಲಿ ಚೆಂಡನ್ನು ಮೇಲಕ್ಕೆ ಎತ್ತಿಕೊಡಲು ಸಮಸ್ಯೆ ಆಗುತ್ತಿತ್ತು ಹಾಗೆನೇ ಕ್ರಿಕೆಟ್ನಲ್ಲಿ ಮೇಲಿಂದ ಬರುವ ಬಾಲ್ಗಳನ್ನು ಎರಡು ಕೈ ಮೇಲಕ್ಕೆತ್ತಿ ಕ್ಯಾಚ್ ಹಿಡಿಯಲು ಕಷ್ಟವಾಗುತ್ತಿತ್ತು. ತನ್ನ ನ್ಯೂನ್ಯತೆಯಿಂದ ತಂಡ ಸೋಲಬಾರದೆಂಬ ದೃಷ್ಟಿಯಿಂದ ಇಂತಹ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಆದರೆ ವೈಯಕ್ತಿಕ ಸ್ಪರ್ಧೆಗಳಾದ ಓಟ, ಊದ್ಧ ಜಿಗಿತ, ಎತ್ತರ ಜಿಗಿತ ಮತ್ತು ಶಟಲ್ ಬ್ಯಾಡ್ಮಿಂಟನ್ ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಓಟ ಆಗು ಎತ್ತರ ಜಿಗಿತದಲ್ಲಿ ಪ್ರಶಸ್ತಿಗಳನ್ನು ಕೂಡ ಪಡೆಯುತ್ತಿದ್ದ.
ಕಲಿಕೆಯಲ್ಲಿಯೂ ಕೂಡ ಉತ್ತಮ ಅಂಕಗಳನ್ನು ಪಡೆಯುತ್ತಿದ್ದನು. ಎಸ್ ಎಸ್ ಎಲ್ ಸಿ ಯಲ್ಲಿ ಆಗಿನ ಕಾಲದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಂಗಳೂರಿನ ಕರ್ನಾಟಕ ಪಾಲಿಟೆಕ್ಟಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಪಡೆದು, ಖಾಸಗಿ ಸಂಸ್ಥೆ ಗಳಲ್ಲಿ ದುಡಿದು, ತದನಂತರ ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಯಾವೊಂದು ಮೀಸಲಾತಿಯ ಲಾಭ ಪಡೆಯದೆ ಕೇವಲ ತನ್ನ ತಾಂತ್ರಿಕ ಕೌಶಲ್ಯ ಹಾಗೂ ಅನುಭವದಿಂದ ಉದ್ಯೋಗ ಪಡೆದನು. ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಮಯದ ಕೊರತೆ, ಕೆಲಸದ ಒತ್ತಡ ಹಾಗೂ ಸಂಸಾರದ ಜಂಜಾಟಗಳಿಂದಾಗಿ ಕ್ರೀಡೆಗಳಿಂದ ದೂರವಾದ. ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ದುಡಿಯುವ ಉದ್ಯೋಗಿಗಳು ತಮ್ಮ ವಯಸ್ಸು 40 ವರ್ಷ ಆದ ಮೇಲೆ, ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಬೇಕು. ಜಯರಾಮನು ಕೂಡ 40 ರ ನಂತರ ಆರೋಗ್ಯ ತಪಾಸಣೆ ಮಾಡಿಸಬೇಕಾಯಿತು. ರಕ್ತದ ಪರೀಕ್ಷೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಇದೆ ಎಂದು ತಿಳಿದು ಬಂತು. ತಪಾಸಣೆ ನಡೆಸಿದ ವೈದ್ಯರು 2 ಆಯ್ಕೆಗಳನ್ನು ನೀಡಿದರು. ಮೊದಲನೆಯದು ಪ್ರತಿದಿನ ಮಾತ್ರೆ ಸೇವಿಸುವುದು ಎರಡನೆಯದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು. ಮಾತ್ರೆಗಳಿಂದ ದೂರವಿದ್ದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳನ್ನು ಜಯರಾಮನು ಆಯ್ಕೆ ಮಾಡಿಕೊಂಡ.
ಜಯರಾಮನ ಕಂಪನಿಯಲ್ಲಿ, ಆ ಸಮಯದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಕಾರಿಯೊಬ್ಬರು ಪ್ರತಿದಿನ ಸುಮಾರು 5 ರಿಂದ 10 ಕಿ.ಮೀ ಓಡುತ್ತಿದ್ದರು, ಅವರು ಸದ್ರಡ ಮತ್ತು ಆರೋಗ್ಯವಾಗಿದ್ದರು. ಅವರು ತಮ್ಮ ತೂಕವನ್ನು ಸುಮಾರು 100 ಕೆಜಿಯಿಂದ 75 ಕೆಜಿಗೆ ಇಳಿಸಿಕೊಂಡಿದ್ದರು. ಜಯರಾಮನು ಅವರಿಂದ ಸ್ಫೂರ್ತಿ ಪಡೆದು ಪ್ರತಿದಿನ ಒಂದು ಕಿ.ಮೀ ಓಡಲು ಮತ್ತು ದಿನಕ್ಕೆ 200 ಮೀಟರ್ ಹೆಚ್ಚಿಸಲು ತನ್ನೊಳಗೆಯೇ ಯೋಜನೆ ಹಾಕಿಕೊಂಡ. ಅವನು ಯೋಜನೆ ಹಾಕಿಕೊಂಡ ಹಾಗೆ ಆಗಲಿಲ್ಲ. ಆ ಮೊದಲ ದಿನದ ಓಟವನ್ನು ತನ್ನ ಮಿತ್ರರೊಂದಿಗೆ ಹೀಗೆ ಹಂಚಿಕೊಂಡಿದ್ದಾನೆ "ಮೊದಲ ದಿನದ ಓಟ ತುಂಬಾ ಆಯಾಸಕರವಾಗಿತ್ತು, ಅರ್ಧ ಕಿ.ಮೀ ಓಡಲು ಸಹ ಸಾಧ್ಯವಾಗಲಿಲ್ಲ, ಉಸಿರುಗಟ್ಟುತ್ತಿತ್ತು ಮತ್ತು ತುಂಬಾ ಬೆವರುತ್ತಿತ್ತು ಓಟವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ನಿಧಾನವಾಗಿ ನಡೆದು ಬಂದಾಗ, ಸಹ-ಓಟಗಾರರು ಸಾಧ್ಯವಾದಷ್ಟು ಓಡುವುದನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಛಲ ಬಿಡದ ತ್ರಿವಿಕ್ರಮನ ಹಾಗೆ ಓಡುವುದನ್ನು ಮುಂದುವರಿಸಿದೆ. ಎರಡನೇ ದಿನವೂ ಉತ್ತಮವಾಗಿರಲಿಲ್ಲ, ಆದರೆ ಒಂದು ವಾರದ ನಂತರ ಉಸಿರಾಟ ನಿಧಾನವಾಗಿ ಸುಧಾರಿಸಿತು ಮತ್ತು ಕಾಲುಗಳು ಓಡಲು ಒಗ್ಗಿಕೊಂಡವು" ಎಂದು ಹೇಳುತ್ತಾನೆ. ದಿನಾಲೂ ಓಡುವುದನ್ನು ನೋಡಿ ಜಯರಾಮನ ಸಹೋದ್ಯೊಗಿಯೊಬ್ಬರು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ನ ವತಿಯಿಂದ ನಡೆಯುವ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಲಹೆ ನೀಡಿದರು. ಜಯರಾಮನು ಸಲಹೆಯನ್ನು ಸ್ವೀಕರಿಸಿ ಪ್ರತಿದಿನ 500 ಮೀಟರ್ಗಳನ್ನು ಹೆಚ್ಚಿಸುವ ಮೂಲಕ 5000 ಮೀಟರ್ಗಳ ನಿರಂತರ ಓಟದ ಕಠಿಣ ಗುರಿಯ ಅಭ್ಯಾಸ ಮಾಡಲು ಪ್ರಾರಂಬಿಸಿದ. ಹೆಂಡತಿಯೂ ಅವನ ಗುರಿಯನ್ನು ಸಾಧಿಸಲು ಬೆಂಬಲ ನೀಡಿದಳು, ಅವನು ಓಡುತ್ತಿದ್ದ ಅದೇ ಸಮಯದಲ್ಲಿ ಅವಳೂ ಅವನ್ನೊಂದಿಗೆ ಮೈದಾನಕ್ಕೆ ಬಂದು ಜಯರಾಮ ಓಡುವಾಗ, ಅವಳು ನಡೆದು ಅವನನ್ನು ಪ್ರೋತ್ಸಾಹಿಸುತ್ತಿದ್ದಳು. ಅವನ ಮಕ್ಕಳು ಕೂಡ ಅವನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದರು. ಸುಮಾರು ಒಂದು ತಿಂಗಳ ನಂತರ ಜಯರಾಮನು ತನ್ನ 5000 ಮೀಟರ್ ನಿರಂತರ ಓಟದ ಗುರಿಯನ್ನು (13 ಸುತ್ತುಗಳು, ಒಂದು ಸುತ್ತು 400 ಮೀಟರ್) ತಲುಪಿದ ಮತ್ತು ಅದೇ ಸಮಯದಲ್ಲಿ, ಅವನ ಹೆಂಡತಿ 7 ಸುತ್ತುಗಳ ನಡಿಗೆಯನ್ನು ಪೂರ್ಣಗೊಳಿಸಿದಳು. ನಂತರ ಜಯರಾಮನು ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್ನಲ್ಲಿ ಮತ್ತು ಮ್ಯಾರಥಾನ್ನಲ್ಲಿಯೂ ಭಾಗವಹಿಸಿದ. ಮೊದಲ 2 ವರ್ಷಗಳಲ್ಲಿ ಅವನಿಗೆ ಪೋಡಿಯಂ ಫಿನಿಷ್ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವನ ಶ್ರೇಯಾಂಕ 5 ಅಥವಾ 6 ನೇ ಸ್ಥಾನದಲ್ಲಿರುತ್ತಿತ್ತು, ಆದರೆ ನಿಯಮಿತ ಅಭ್ಯಾಸ ಮಾಡುವುದನ್ನು ಬಿಡದೆ ಮುಂದುವರಿಸಿದ ಮತ್ತು ವಾರದಿಂದ ವಾರಕ್ಕೆ ಅರ್ಧ ಕಿ.ಮೀ. ಓಟವನ್ನು ಹಾಗೂ ವೇಗವನ್ನು ಹೆಚ್ಚಿಸಿಕೊಂಡ. ಅವನ ಓಟದ ಗುರಿಯನ್ನು 5 ಕಿ.ಮೀ. ಸೌಕರ್ಯ ವಲಯದಿಂದ 10 ಕಿ.ಮೀ.ಗೆ ಹೆಚ್ಚಿಸಿದ.
2012 ರಲ್ಲಿ, ಜಯರಾಮನು ಮೊದಲ ಬಾರಿಗೆ ಸ್ವಾತಂತ್ರ್ಯ ದಿನದ ಮ್ಯಾರಥಾನ್ (13.2 ಕಿ.ಮೀ) ಓಟದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡ, ನಂತರ ಅವನು ಎಂದಿಗೂ ಹಿಂತಿರುಗಿ ನೋಡಲಿಲ್ಲ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಮೀಟ್ಗಳಲ್ಲಿ ಮತ್ತು ಮ್ಯಾರಥಾನ್ಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾನೆ. 2019 ರಲ್ಲಿ ಹಿರಿಯ ವಯಸ್ಸಿನ ವಿಭಾಗದಲ್ಲಿ ದೆಹಲಿ ಮ್ಯಾರಥಾನ್ 10K ಓಟದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡ. ನೂರಕ್ಕೂ ಮಿಕ್ಕಿ ಮ್ಯಾರಥಾನ್ಗಳಲ್ಲಿ ಭಾಗವಹಿಸಿ 70ಕ್ಕೂ ಅಧಿಕ ಪೋಡಿಯಂ ಫಿನಿಷ್ ಬಹುಮಾನಗಳನ್ನು ಪಡೆದಿದ್ದಾನೆ. ಪ್ರೌಢ ಶಾಲೆಯಲ್ಲಿರುವಾಗ ಯಾವ ದೈಹಿಕ ಶಿಕ್ಷಕರಿಂದ ಅವಮಾನಿಸಲ್ಪಟ್ಟಿದ್ದಾನಾ, ಅದೇ ಶಿಕ್ಷಕರಿಂದ ಅದೇ ಶಾಲೆಯಲ್ಲಿ ಕ್ರೀಡಾ ಸಾಧನೆಗಾಗಿ ಸನ್ಮಾನ ಸ್ವೀಕರಿಸಿದ್ದನು.
ಜಯರಾಮನು ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿದರೂ ಯಾವತ್ತೂ ಮೀಸಲಾತಿ ಇಲ್ಲವೇ ಅನುಕಂಪದ ಆಧಾರದಲ್ಲಿ ಏನನ್ನೂ ಪಡೆದವನಲ್ಲ. ಸಂಸ್ಥೆಗೆ ಸೇರಿದ ಮೇಲೆ ಸಂಸ್ಥೆಯ ಅಭಿವೃದ್ಧಿಗೋಸ್ಕರ ಹಗಲಿರುಳು ದುಡಿದ. ಸೃಜನಶೀಲ ಚಿಂತನೆ, ಸಮಸ್ಯೆಗಳಿಗೆ ಪರಿಹಾರ ಆಧುನಿಕ ತಂತ್ರಜ್ಞಾನ ಅಳವಡಿಕೆ ಈ ಎಲ್ಲ ಕೆಲಸಗಳಿಂದ ಮೇಲಾಧಿಕಾರಿಗಳ ಪ್ರಶಂಸೆ ಗಿಟ್ಟಿಸಿಕೊಂಡು, ಒಂದು ವಿಭಾಗದ ಮುಖ್ಯಸ್ಥನಾಗಿ ಬಡ್ತಿ ಪಡೆದ. ಅನ್ನ ನೀಡುವ ಉದ್ಯೋಗ ಹಾಗೂ ಸಂಸಾರಕ್ಕೆ ಮೊದಲ ಪ್ರಾಶಸ್ತ್ಯ ನೀಡಿ, ಕ್ರೀಡಾ ಚಟುವಟಿಕೆಗಳೊಂದಿಗೆ ಸಮಾಜ ಸೇವೆಯಲ್ಲಿ ಕೂಡಾ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ತನ್ನ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜ ಸೇವೆಗೆ ಮೀಸಲಿಟ್ಟಿದ್ದಾನೆ. ಪೋಲಿಯೋ ನಿರ್ಮೂಲನೆ ಮಾಡುವ ಅಂತರಾಷ್ಟ್ರೀಯ ಸೇ ವಾ ಸಂಸ್ಥೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು 5 ವರ್ಷದಿಂದ ಕೆಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದಾನೆ. 2014ರಲ್ಲಿ ನಮ್ಮ ಸರ್ಕಾರವು ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಿಸಿದಾಗ, ಅತ್ಯಂತ ಕುಶಿ ಪಟ್ಟ ವ್ಯಕ್ತಿ ಗಳಲ್ಲಿ ಜಯರಾಮನೂ ಒಬ್ಬ. ಈಗ ಸಾರ್ವಜನಿಕರಂಗದ ಉದ್ಯೊಗದಿಂದ ನಿವ್ರತ್ತಿ ಹೊಂದಿ ಮ್ಯಾರಥಾನ್ ಜೊತೆ ಅವನ ಮನಸ್ಸಿಗೆ ಸರಿಹೊಂದುವ ಹವ್ಯಾಸಗಳು ಹಾಗೂ ಸಮಾಜ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಅವನು ಯಾವಾಗಲೂ ತನ್ನ ಮಿತ್ರರಿಗೆ, ಕಿರಿಯರಿಗೆ ಹಾಗೂ ಹಿತೈಸಿಗಳಿಗೆ ಹೇಳುವ ಮಾತು "ನೀವು ಕಳೆದುಕೊಂಡದ್ದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಮತ್ತು ನಿಮ್ಮ ಬಳಿ ಇನ್ನೂ ಏನಿದೆಯೋ ಅದರ ಮೇಲೆ ಗಮನ ಹರಿಸಿ" ಚಕ್ಕಂದಿನಿಂದಲೂ ತನ್ನ ಅಂಗಹೀನತೆಯಿಂದ ಕ್ರೀಡೆಯಲ್ಲಿ ಟೀಕೆ ನಿಂದನೆ ನೋವುಗಳನ್ನು ಅನುಭವಿಸಿ ತನ್ನ ಮನೋಬಲದಿಂದ ಉದ್ಯೋಗ ಹಾಗೂ ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಿದ ಜಯರಾಮನ ಜೀವನದ ಜಯದ ಕಥೆ.
1.ಉಪ್ಪಡ್ - ಗ್ರೀಷ್ಮ ಪ್ರಕಾಶ್
2.ತಿಮರೆದ ,ಕೊಳ್ಳತರು ಚಟ್ನಿ,- ಸುಪ್ರೀತಾ ಮಹೇಶ್
ಕುಡುತ ಚಟ್ನಿ, ಪೂಂಬೆ ಚಟ್ನಿ,
3.ತೋಜಂಕ್ ಪೆಲತಾರಿ
4.ಉಪ್ಪಡ್ ಪಚ್ಚಿರ್ - ದೀಪ್ತಿ ರಾಜು
5. ಮೆಂತೆ ಗಂಜಿ - ಕವಿತಾ ಪುಷ್ಪಾರಾಜ್
6. ಮಂಜಲ್ದಾ ಇರೆತ ಅಡ್ಯೆ - ಕವಿತಾ ಗಣೇಶ್
7. ಪೆಲಕಾಯಿ ಅಡ್ಯೆ - ನಂದನ ಹರೀಶ್
8. ಪತ್ರೊಡೆ - ಪ್ರಜ್ಞಾ ಪ್ರಭು
5. ಅರೆಪು ಪುಂಡಿ - ಮಮತಾ ಗಂಗಾಧರ್
9. ಮರುವಾಯಿ ಪಲ್ಯ ಜ್ಯೋತಿ ಪ್ರವೀಣ್ /ಅಂಜನಾ ಶಶಿಧರ್
10. ಬುತಾಯಿ ಪುಳಿಮುಂಚಿ - ಪ್ರೀತಿ ವಿನೀತ್
11. ಸಾರ್ನಡ್ದೆ ಪಾಯಸ - ಕೇಸರಿ ಪೂಂಜ / ನೂತನ್ ಶ್ರೀಕಾಂತ್
12. ಕಡ್ಲೆ ಸಲಾಯಿ ಪಾಯಸ ಪೂರ್ಣಿಮ ಹೆಗ್ಡೆ / ಅಕ್ಷಿತಾ ಗಣೇಶ ಪ್ರಸಾದ್
13. ಕುಡುತ್ತ ಸಾರ್ - ದೀಪ್ತಿ
14. ಎಟ್ಟಿ ಚಟ್ನಿ - ಶಿಪ್ರಾ ಲೊಕನಾಥ್
15. ಗಂಜಿ - ಅನುಶ್ರೀ
16. ಪದೆಂಗಿ ಅಂಬಡೆ ಕಜಿಪು - ಶರ್ಮಿಳಾ ಭರತ್
17. ತೆಟ್ಲಾ ಅಂಬಡೆ - ಕೇಸರಿ ಪೂಂಜ
18. ಮಣ್ಣಿ - ಲತಾ ಹರೀಶ್ ಸನಿಲ್
19. ಎಡ್ಡೆಮುಂಚಿ ಕಷಾಯ - ಪ್ರಜ್ಞಾ
. ಕುಡು ಅರಿ
20. ಮಾವಿನ ಚಟ್ನಿ - ಪ್ರಿಯಾಂಕಾ ಶಿವಪ್ರಸಾದ್
21. ಪೆಜಕಾಯಿ ಚಟ್ನಿ - ಅಮಿತಾ ಸತೀಶ್
22. ಕೊಂಕಣಿತೊವೆ - ಉಷಾ ಯೋಗೀಶ
23. ಚಿಕನ್ ಸುಕ್ಕ - ರೇಷ್ಮಾ ಶಬರಿ ಶಂಕರ್/ ಜಯಲಕ್ಷ್ಮಿ ಶಶಿಕುಮಾರ್
24. ಮಾವಿನಕಾಯಿ ಚಟ್ನಿ- ಗ್ರೀಷ್ಮ
25 ತೋಜಂಕ್ ಅಂಬಡೇ- ಕನ್ನಿಕಾ
26 . ಮಸಾಲಾ ಮಜ್ಜಿಗೆ- ಕನ್ನಿಕಾ
27. ನೀರ್ ದೋಸೆ- ಕಾಜಲ್ ನವೀನ್
28. ಎಟ್ಟಿ ಸುಕ್ಕ - ಪ್ರಿಯಾಂಕಾ ಶಿವಪ್ರಸಾದ್
29. ಅರಿತ ಪಾಯಸಾ - ಪ್ರೀತಾ ದಿನೇಶ್
30. ಸೇಮೆದ ಅಡ್ಯ ಬೊಕ್ಕ ಪೇರ್- ಜ್ಯೋತಿ ಶೆಟ್ಟಿ
31. ಕಡ್ಲೆ ಬಲ್ಯಾರ್ ಸುಕ್ಕ- ಅಕ್ಷ ಆಶ್ರಯ
32. ಪುಂಡಿ , ನುಂಗೆಲ್ ಅಂಬಡೆ ಕಜಿಪು - ಆಶಾ ಜಗನ್ನಾಥ್
ತುಳುನಾಡ್ದ್ ಪದ ನಲಿಕೆ
opo0ggoev0z4ke8ardo8pggmxfhuvwv
ಆರ್. ಚಂದ್ರು
0
179720
1378138
1377026
2026-08-02T14:13:22Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1378138
wikitext
text/x-wiki
{{ಅಳಿಸುವಿಕೆ|ಜಾಹೀರಾತು ಮಾದರಿಯ ಅತಿಯಾದ ಹೊಗಳಿಕೆಗಳಿಂದ ತುಂಬಿದ ಲೇಖನ}}
{{Infobox person
| name = ಆರ್. ಚಂದ್ರು
| image = RChandru.jpg
| birth_date = {{birth date and age|1980|02|07|df=yes}}
| birth_place = ಕೇಶಾವರ, ಚಿಕ್ಕಬಳ್ಳಾಪುರ, ಬೆಂಗಳೂರು, ಕರ್ನಾಟಕ, ಭಾರತ
| citizenship = ಭಾರತೀಯ
| education = ಬ್ಯಾಚುಲರ್ ಆಫ್ ಕಾಮರ್ಸ್ (ಬಿ.ಕಾಂ)
| occupation = {{hlist|ಚಲನಚಿತ್ರ ನಿರ್ದೇಶಕ | ಬರಹಗಾರ | ಚಲನಚಿತ್ರ ನಿರ್ಮಾಪಕ }}
| years_active = 2007– ಪ್ರಸ್ತುತ
| known_for = ಆರ್. ಚಂದ್ರು ಒಬ್ಬ ಭಾರತೀಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಬರಹಗಾರ, ಗೀತರಚನೆಕಾರ ಮತ್ತು ವಿತರಕ, ಮುಖ್ಯವಾಗಿ 12 ಯಶಸ್ವಿ ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿರುವುದಕ್ಕಾಗಿ ಇವರು ಪ್ರಸಿದ್ದ ರಾಗಿದ್ದಾರೆ
| spouse = ಯಮುನಾ
| children = 3
| mother = ಲಕ್ಷ್ಮಿ ದೇವಮ್ಮ
| father = ಎಂ. ರಾಮಯ್ಯ
| awards = ಅತ್ಯುತ್ತಮ ಗೀತರಚನೆಕಾರರಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ – ಕನ್ನಡ (ತಾಜ್ ಮಹಲ್ - 2008), ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ನಿರ್ಮಾಪಕರಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು (ಚಾರ್ಮಿನಾರ್ - 2013), ಪಿಆರ್ಸಿಎಲ್ (PRCL) ಸಮ್ಮೋಹನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಜೈಪುರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (JIFF) 2015ರಲ್ಲಿ ಅತ್ಯುತ್ತಮ ಪ್ರಣಯಾತ್ಮಕ ಚಲನಚಿತ್ರ ಪ್ರಶಸ್ತಿ, ಹಾಗೂ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಫಿಲ್ಮ್ಫೇರ್ ಪ್ರಶಸ್ತಿಗೆ (ಕನ್ನಡ - 2008) ನಾಮನಿರ್ದೇಶನ.
| honours = ಮಣಿಪುರ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಿಂದ 2025ರಲ್ಲಿ ಗೌರವ ಡಾಕ್ಟರೇಟ್
| website = www.rchandrustudios.com
| image_size =
}}
'''ಡಾ. ಆರ್. ಚಂದ್ರು''' ಅವರು ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಒಬ್ಬ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಗೀತರಚನೆಕಾರ ಮತ್ತು ವಿತರಕರಾಗಿದ್ದಾರೆ. ತಮ್ಮ ಬಹುಮುಖ ಪ್ರತಿಭೆ ಹಾಗೂ ಕಮರ್ಷಿಯಲ್ ಆಗಿ ಯಶಸ್ವಿ ಕಥೆ ಹೇಳುವ ಶೈಲಿಯಿಂದಾಗಿ ವ್ಯಾಪಕ ಮನ್ನಣೆ ಪಡೆದಿರುವ ಇವರು, ಸಮಕಾಲೀನ ಕನ್ನಡ ಚಿತ್ರರಂಗದ ಮುಂಚೂಣಿ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಎರಡು ದಶಕಗಳಿಗೂ ಹೆಚ್ಚಿನ ಸುದೀರ್ಘ ವೃತ್ತಿಜೀವನದಲ್ಲಿ, ಚಂದ್ರು ಅವರು ಪ್ರೇಮಕಥೆ, ಆಕ್ಷನ್, ಕೌಟುಂಬಿಕ ಡ್ರಾಮಾ ಮತ್ತು ಭಾರಿ ಬಜೆಟ್ನ ಪ್ಯಾನ್-ಇಂಡಿಯಾ ಮನರಂಜನಾ ಚಿತ್ರಗಳು ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಹಲವು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಭಾವನಾತ್ಮಕ ನಿರೂಪಣೆಗಳನ್ನು ಮುಖ್ಯವಾಹಿನಿಯ ಅಂಶಗಳೊಂದಿಗೆ ಸಂಯೋಜಿಸುವ ಅವರ ಸಾಮರ್ಥ್ಯವು ಅವರಿಗೆ ಅಪಾರ ಅಭಿಮಾನಿ ವರ್ಗ ಹಾಗೂ ಭಾರತೀಯ ಚಿತ್ರರಂಗದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ತಂದುಕೊಟ್ಟಿದೆ.
== ಆರಂಭಿಕ ಜೀವನ ಮತ್ತು ವೃತ್ತಿಜೀವನ ==
ಆರ್. ಚಂದ್ರು ಫೆಬ್ರವರಿ 7, 1980 ರಂದು [[ಕರ್ನಾಟಕ|ಕರ್ನಾಟಕದ]] ಚಿಕ್ಕಬಳ್ಳಾಪುರದ ಕೇಶವವರ ಗ್ರಾಮದಲ್ಲಿ ಎಂ. ರಾಮಯ್ಯ ಮತ್ತು ಲಕ್ಷ್ಮಿ ದೇವಮ್ಮ ದಂಪತಿಗಳಿಗೆ ವಿನಮ್ರ ಕೃಷಿ ಕುಟುಂಬದಲ್ಲಿ ಜನಿಸಿದರು. ಸಾಧಾರಣ ಆರ್ಥಿಕ ಪರಿಸ್ಥಿತಿಯಲ್ಲಿ ಬೆಳೆದ ಅವರು ಬಾಲ್ಯದಲ್ಲಿ ಹಲವಾರು ಸವಾಲುಗಳನ್ನು ನಿವಾರಿಸಿಕೊಂಡು ಸಿನಿಮಾದ ಬಗ್ಗೆ ಬಲವಾದ ಉತ್ಸಾಹವನ್ನು ಬೆಳೆಸಿಕೊಂಡರು.
ಆರ್ ಚಂದ್ರು ಅವರು ಮನರಂಜನಾ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಹಿರಿಯ ನಿರ್ದೇಶಕ [[ಎಸ್.ನಾರಾಯಣ್|ಎಸ್. ನಾರಾಯಣ್]] ಅವರ ಸಹಾಯಕರಾಗಿ ಪ್ರಾರಂಭಿಸಿದರು, ಭಾಗೀರಥಿ ಎಂಬ ದೂರದರ್ಶನ ಧಾರಾವಾಹಿಯಲ್ಲಿ ಕೆಲಸ ಮಾಡಿದರು. ಪದವಿ ಪಡೆದ ನಂತರ, ಅವರು 2008 ರಲ್ಲಿ ಸಹಾಯಕ ನಿರ್ದೇಶಕರಾಗಿ ಕನ್ನಡ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು. ಈ ಅವಧಿಯಲ್ಲಿ, ಅವರು ಸ್ಥಾಪಿತ ಚಲನಚಿತ್ರ ನಿರ್ಮಾಪಕರಿಂದ ಚಿತ್ರಕಥೆ, ಚಲನಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಅಮೂಲ್ಯವಾದ ಅನುಭವವನ್ನು ಪಡೆದರು, ಅಂತಿಮವಾಗಿ ಸ್ವತಂತ್ರ ಚಲನಚಿತ್ರ ನಿರ್ಮಾಣಕ್ಕೆ ಪರಿವರ್ತನೆಗೊಳ್ಳಲು ದಾರಿ ಮಾಡಿಕೊಟ್ಟ ಸೃಜನಶೀಲ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಿದರು.
ಆರ್. ಚಂದ್ರು ಅವರು [[ಅಜಯ್ ರಾವ್]] ಮತ್ತು [[ಪೂಜಾ ಗಾಂಧಿ]] ನಟಿಸಿದ ತಾಜ್ ಮಹಲ್ (2008) ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು. ಈ ಪ್ರಣಯ ನಾಟಕವು ಪ್ರಮುಖ ವಾಣಿಜ್ಯ ಯಶಸ್ಸನ್ನು ಗಳಿಸಿತು ಮತ್ತು [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಅತ್ಯಂತ ಭರವಸೆಯ ಯುವ ನಿರ್ದೇಶಕರಲ್ಲಿ ಒಬ್ಬರಾಗಿ ಅವರನ್ನು ಸ್ಥಾಪಿಸಿತು. ಈ ಚಿತ್ರದ ಅಗಾಧ ಯಶಸ್ಸು ಅವರಿಗೆ "ತಾಜ್ ಮಹಲ್ ಚಂದ್ರು <ref>{{ಉಲ್ಲೇಖ ಸುದ್ದಿ |last=Sebastian |first=Shilpa |date=2017-12-04 |title=Breaking through every brass gate |url=https://www.thehindu.com/entertainment/director-r-chandru-on-taj-mahal/article21259155.ece |access-date=2026-07-15 |work=The Hindu |language=en-IN |issn=0971-751X}}</ref> " ಎಂಬ ಜನಪ್ರಿಯ ಅಡ್ಡಹೆಸರನ್ನು ತಂದುಕೊಟ್ಟಿತು, ಇದು ಅವರ ವೃತ್ತಿಜೀವನದುದ್ದಕ್ಕೂ ಅವರೊಂದಿಗೆ ಸಂಬಂಧ ಹೊಂದಿದೆ.
ಅವರ ಪ್ರಗತಿಯ ನಂತರ, ಚಂದ್ರು ಪ್ರೇಮ್ ಕಹಾನಿ, [[ಮೈಲಾರಿ (ಚಲನ ಚಿತ್ರ)|ಮೈಲಾರಿ]], <ref>{{Cite web |title=Producers make a beeline on Chandru |url=https://www.filmibeat.com/kannada/news/2008/chandru-taj-mahal-120808.html |access-date=6 August 2022 |website=Fimlibeat}}</ref> [[ಕೋ ಕೋ (ಚಲನಚಿತ್ರ)|ಕೋ ಕೋ]], [[ಚಾರ್ ಮಿನಾರ್ (ಚಲನಚಿತ್ರ)|ಚಾರ್ಮಿನಾರ್]], ಬ್ರಹ್ಮ, [[ಮಳೆ (ಚಲನಚಿತ್ರ)|ಮಾಲೆ]], [[ಲಕ್ಷ್ಮಣ]], [[ಕನಕ (ಚಲನಚಿತ್ರ)|ಕನಕ]], ಐ ಲವ್ ಯು, ಮತ್ತು ಬಹುಭಾಷಾ ಆಕ್ಷನ್ ಚಮತ್ಕಾರ [[ಕಬ್ಜ (ಚಲನಚಿತ್ರ)|ಕಬ್ಜಾ]] ಸೇರಿದಂತೆ ಹಲವಾರು ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸಿದರು. ಅವರ ಚಲನಚಿತ್ರ ನಿರ್ಮಾಣದ ಪ್ರಯಾಣದ ಉದ್ದಕ್ಕೂ, ಅವರು ಪ್ರಣಯ ನಾಟಕಗಳು, <ref>{{Cite web |title=Films directed by R. Chandru |url=https://letterboxd.com/director/r-chandru/ |access-date=2026-07-15 |website=letterboxd.com |language=en}}</ref> ಕುಟುಂಬ ಮನರಂಜನಾ ಚಿತ್ರಗಳು, ಆಕ್ಷನ್ ಚಲನಚಿತ್ರಗಳು ಮತ್ತು ಮಹತ್ವಾಕಾಂಕ್ಷೆಯ ಪ್ಯಾನ್-ಇಂಡಿಯನ್ ನಿರ್ಮಾಣಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಬಹುಮುಖತೆಯನ್ನು ನಿರಂತರವಾಗಿ ಪ್ರದರ್ಶಿಸಿದ್ದಾರೆ. <ref>{{Cite web |last=Lakshminarayana |first=Shruti Indira |title=Review: Mylari is a good entertainer |url=https://www.rediff.com/movies/report/south-review-mylari/20101224.htm |access-date=2022-08-06 |website=Rediff |language=en}}</ref> ಅವರ ಚಲನಚಿತ್ರಗಳು ಅವುಗಳ ಭಾವನಾತ್ಮಕ ಕಥೆ ಹೇಳುವಿಕೆ, ಸ್ಮರಣೀಯ ಸಂಗೀತ, ದೃಶ್ಯ ಶ್ರೀಮಂತ ಪ್ರಸ್ತುತಿ ಮತ್ತು ಬಲವಾದ ವಾಣಿಜ್ಯ ಆಕರ್ಷಣೆಗಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿವೆ, ಇದು ಕಲಾತ್ಮಕ ಸಂವೇದನೆಗಳನ್ನು ಬಾಕ್ಸ್ ಆಫೀಸ್ ಯಶಸ್ಸಿನೊಂದಿಗೆ ಸಮತೋಲನಗೊಳಿಸುವ ಸಾಮರ್ಥ್ಯವಿರುವ ಕೆಲವೇ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರನ್ನಾಗಿ ಮಾಡಿದೆ <ref>{{Cite web |title=R. Chandru - Movies, Biography, News, Age & Photos |url=https://in.bookmyshow.com/person/r-chandru/34718/in.bookmyshow.com/person/r.-chandru/34718 |access-date=2026-07-15 |website=BookMyShow |language=en-IN }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref> <ref>{{Cite web |title=Breaking through every brass gate |url=https://www.thehindu.com/entertainment/director-r-chandru-on-taj-mahal/article21259155.ece |access-date=6 August 2022 |website=The Hindu}}</ref>
ಕರುನಾಡ ಚಕ್ರವರ್ತಿ [[ಶಿವರಾಜ್ಕುಮಾರ್ (ನಟ)|ಶಿವರಾಜಕುಮಾರ್]], ರಿಯಲ್ ಸ್ಟಾರ್ [[ಉಪೇಂದ್ರ]], ಅಭಿನಯ ಚಕ್ರವರ್ತಿ ಕಿಚ್ಚ [[ಸುದೀಪ್]], ವಿ. [[ರವಿಚಂದ್ರನ್]], [[ಅಜಯ್ ರಾವ್]], [[ದುನಿಯಾ ವಿಜಯ್]], ಪ್ರೇಮ್ ಕುಮಾರ್ (ಲವ್ಲಿ ಸ್ಟಾರ್, [[ಕೃಷ್ಣ (ಕನ್ನಡ ನಟ)|ದರ್ಲಿಂಗೆ ಬಾಬು]], [[ಶ್ರೀನಗರ ಕಿಟ್ಟಿ (ನಟ)|ಶ್ರೀನಗರ ರೇವಣಸಿದ್ದಪ್ಪ]] ), ಭಾರತೀಯ ಚಿತ್ರರಂಗದ ಹಲವಾರು ಪ್ರಮುಖ ತಾರೆಗಳು ಮತ್ತು ಪೌರಾಣಿಕ ಕಲಾವಿದರೊಂದಿಗೆ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸಿ ಮತ್ತು ನಿರ್ಮಿಸುವ ಮೂಲಕ., ಸಂದೀಪ್ ಕಿಶನ್, ಶ್ರೀಹರಿ, [[ಪ್ರಕಾಶ್ ರೈ|ಪ್ರಕಾಶ್ ರಾಜ್]], [[ಅನಂತ್ ನಾಗ್]], [[ರಂಗಾಯಣ ರಘು]], [[ಸಾಧು ಕೋಕಿಲ]], ಬುಲೆಟ್ ಪ್ರಕಾಶ್, [[ಪಿ.ರವಿ ಶಂಕರ್|ಪಿ. ರವಿಶಂಕರ್ ,]] ಮುರಳಿ ಶರ್ಮಾ, ನವಾಬ್ ಶಾ, ಜಾನ್ ಕೊಕ್ಕೆನ್, ಪ್ರದೀಪ್ ರಾವತ್, ನಾಸರ್, ಸಯಾಜಿ ಶಿಂಧೆ, ದೇವ್ ಗಿಲ್, ಕಬೀರ್ ಶ್ರೀನಿವಾಸ್ ದುಹಾನ್ ಸಿಂಗ್, [[ಕೋಟ ಶ್ರೀನಿವಾಸ ರಾವ್|ಕೋಟ]] ಶ್ರೀನಿವಾಸ್, ಕೃಷ್ಣಾ ರಾವ್, ಸುಂದೀಪ್ ಕೃಷ್ಣ ರಾವ್ [[ಪ್ರಮೋದ್ ಶೆಟ್ಟಿ (ನಟ)|. ಶೆಟ್ಟಿ]], ಬಿ. ಸುರೇಶ, ಅವಿನಾಶ್, ಶರಣ್, ಲಕ್ಕಿ ಲಕ್ಷ್ಮಣ್, ತಾಹಾ ಶಾ, ಎಂ. ಕಾಮರಾಜ್, ಡ್ಯಾನಿಶ್ ಅಖ್ತರ್ ಸೈಫಿ, ಮೋಹನ್ ಜುನೇಜಾ, ಮತ್ತು ಸುಚೇಂದ್ರ ಪ್ರಸಾದ್, ಹಾಗೂ ನಟಿಯರಾದ [[ಶ್ರಿಯಾ ಶರಣ್|ಶ್ರಿಯಾ ಸರಣ್]], [[ರಚಿತಾ ರಾಮ್]], [[ಪೂಜಾ ಗಾಂಧಿ]], [[ಪ್ರಣಿತಾ ಸುಭಾಷ್]], ಸದಾ, ಮೇಘನಾ ಗಾಂವ್ಕರ್, [[ಪ್ರಿಯಾಮಣಿ]], [[ಹರಿಪ್ರಿಯಾ]], ಮಾನ್ವಿತಾ ಕಾಮತ್, ಶೀಲಾ ಕೌರ್, ಸೋನು ಗೌಡ, [[ಮೇಘನಾ ರಾಜ್]], [[ಅಮೂಲ್ಯ (ನಟಿ)|ಅಮೂಲ್ಯ]], ಸಂಜನಾ ಗಲ್ರಾಣಿ, ನಂದಿತಾ ರಾಜ್, ತಾರಾ ಅನುರಾಧಾ, ಸುಧಾ, ಸುಹಾಸಿನಿ ಮಣಿರತ್ನಂ, ರೋಜಾ ಮಣಿರತ್ನಂ, ರೋಜಾ - ಆರ್. ಚಂದ್ರು ತಾನೊಬ್ಬ 'ಸ್ಟಾರ್ ಡೈರೆಕ್ಟರ್' ಅಂತ ಪ್ರೂವ್ ಮಾಡಿದ್ದಾರೆ. ನಿರ್ದೇಶನದ ಜೊತೆಗೆ, ಚಂದ್ರು ಅವರು ನಿರ್ಮಾಪಕ, ಚಿತ್ರಕಥೆಗಾರ, ಗೀತರಚನೆಕಾರ ಮತ್ತು ಚಲನಚಿತ್ರ ವಿತರಕರಾಗಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ, ಚಲನಚಿತ್ರ ನಿರ್ಮಾಣದ ಪ್ರತಿಯೊಂದು ವಿಭಾಗದಲ್ಲಿ ತಮ್ಮ ಬಹುಮುಖ ಪ್ರತಿಭೆ ಮತ್ತು ಆಳವಾದ ಜ್ಞಾನವನ್ನು ಪ್ರದರ್ಶಿಸಿದ್ದಾರೆ. <ref>{{Cite web |url=https://www.imdb.com/name/nm1318567/ |access-date=2026-07-15 |website=www.imdb.com}}</ref> <ref>{{Cite web |title=Charminar is a true story: R Chandru |url=https://timesofindia.indiatimes.com/entertainment/kannada/movies/news/charminar-is-a-true-story-r-chandru/articleshow/18348535.cms |access-date=6 August 2022 |website=The Times of India}}</ref> <ref>{{Cite web |title=Show must go on, but with precautions: Kabza director R Chandru |url=https://www.newindianexpress.com/entertainment/kannada/2020/apr/20/show-must-go-on-but-with-precautions-kabza-director-r-chandru-2132482.html |access-date=2022-08-06 |website=The New Indian Express}}</ref> <ref>{{Cite web |date=2020-10-07 |title=Upendra's Kabza: Director R Chandru has plans to helm a sequel? |url=https://www.pinkvilla.com/entertainment/south/upendra-s-kabza-director-r-chandru-has-plans-helm-sequel-566927 |access-date=2022-08-06 |website=PINKVILLA |language=en |archive-date=2022-08-06 |archive-url=https://web.archive.org/web/20220806103722/https://www.pinkvilla.com/entertainment/south/upendra-s-kabza-director-r-chandru-has-plans-helm-sequel-566927 |url-status=dead }}{{ಮಡಿದ ಕೊಂಡಿ|date=July 2025|bot=InternetArchiveBot}}</ref>
== ಆರ್.ಸಿ. ಸ್ಟುಡಿಯೋಸ್ ==
'''[https://www.rchandrustudios.com ಆರ್ಸಿ ಸ್ಟುಡಿಯೋಸ್]''' ಕರ್ನಾಟಕದ ಬೆಂಗಳೂರಿನಲ್ಲಿ ನೆಲೆಗೊಂಡಿರುವ ಪ್ರಮುಖ ಸೃಜನಶೀಲ ನಿರ್ಮಾಣ ಕಂಪನಿಯಾಗಿದೆ. ಯಶಸ್ವಿ ಭಾರತೀಯ ಚಲನಚಿತ್ರ ನಿರ್ಮಾಪಕ '''ಆರ್. ಚಂದ್ರು''' ಸ್ಥಾಪಿಸಿದ, ಉತ್ಸಾಹ, ಪರಿಶ್ರಮ ಮತ್ತು ಕಥೆ ಹೇಳುವ ಶ್ರೇಷ್ಠತೆಯ ನಿರಂತರ ಅನ್ವೇಷಣೆಯ ಅಡಿಪಾಯದ ಮೇಲೆ ನಿರ್ಮಿಸಲಾದ ಈ ಸ್ಟುಡಿಯೋ, ಉತ್ತಮ ಗುಣಮಟ್ಟದ ಕನ್ನಡ ಮತ್ತು ಪ್ಯಾನ್-ಇಂಡಿಯನ್ ಸಿನಿಮಾಗಳನ್ನು ನಿರ್ಮಿಸಲು ಸಮರ್ಪಿತವಾಗಿದೆ. <ref>{{Cite web |date=2024-01-23 |title=RC Studios New Projects launched by CM Siddaramaiah ಮಾನ್ಯ ಮುಖ್ಯಮಂತ್ರಿ ಸಿದ್ದ ರಾಮಯ್ಯ ರವರಿಂದ ಶುರುವಾಯ್ತು R.ಚಂದ್ರುರವರ 5 ಚಿತ್ರಗಳು. |url=https://www.dailynewskarnataka.in/dailynews/cinema-news/rc-studios-new-projects-launched-by-cm-siddaramaiah-%e0%b2%ae%e0%b2%be%e0%b2%a8%e0%b3%8d%e0%b2%af-%e0%b2%ae%e0%b3%81%e0%b2%96%e0%b3%8d%e0%b2%af%e0%b2%ae%e0%b2%82%e0%b2%a4%e0%b3%8d%e0%b2%b0%e0%b2%bf/ |access-date=2026-07-15 |language=en}}</ref>
'''ಜನವರಿ 24, 2024''' ರಂದು <ref>{{ಉಲ್ಲೇಖ ಸುದ್ದಿ |date=2024-01-25 |title=R. Chandru launches RC Studios and reveals an ambitious film lineup, including the 'Kabzaa' sequel |url=https://timesofindia.indiatimes.com/entertainment/kannada/movies/news/r-chandru-launches-rc-studios-and-reveals-an-ambitious-film-lineup-including-the-kabzaa-sequel/articleshow/107143493.cms |access-date=2026-07-15 |work=The Times of India |issn=0971-8257}}</ref>, '''ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ [[ಸಿದ್ದರಾಮಯ್ಯ]]''', <ref>{{Cite web |last=News |first=Chittara |date=2024-01-25 |title=RC Studios Launch event |url=https://chittaranews.com/rc-studios-launch-event/ |access-date=2026-07-15 |website=Chittara news |language=en-US}}</ref> ಕನ್ನಡ ಚಿತ್ರರಂಗದ 'ರಿಯಲ್ ಸ್ಟಾರ್' '''[[ಉಪೇಂದ್ರ]]''' ಮತ್ತು ಇತರ ಹಲವಾರು ಗಣ್ಯರ ಜೊತೆಯಲ್ಲಿ ನಡೆದ ತಾರಾಬಳಗದ ಉದ್ಘಾಟನಾ ಸಮಾರಂಭದಲ್ಲಿ, ಸ್ಟುಡಿಯೋ ಅಧಿಕೃತವಾಗಿ ಮನರಂಜನಾ ಕ್ಷೇತ್ರಕ್ಕೆ ತನ್ನ ಭವ್ಯ ಪ್ರವೇಶವನ್ನು ಗುರುತಿಸಿತು <ref>{{Cite web |title=RC Studios launches 5 projects announced by Filmmaker R Chandru in the presence of Chief Minister of Karnataka Siddaramaiah |url=https://www.aninews.in/news/business/business/rc-studios-launches-5-projects-announced-by-filmmaker-r-chandru-in-the-presence-of-chief-minister-of-karnataka-siddaramaiah20240125163246/ |access-date=2026-07-15 |website=ANI News |language=en}}</ref> <ref>{{Cite web |last=Fb |last2=Tw |last3=Linkdin |last4=Whatsapp |title=ಆರ್ಸಿ ಸ್ಟುಡಿಯೋಸ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ; ರಿಯಲ್ ಸ್ಟಾರ್ ಹಾಜರಿ, ಚಂದ್ರುಗೆ ಶಬ್ಬಾಸ್ಗಿರಿ |url=https://kannada.asianetnews.com/sandalwood/chief-minister-siddaramaiah-launches-kabzaa-fame-movie-director-r-chandru-rc-studios-srb-s7tnwk |access-date=2026-07-15 |website=Asianet Suvarna News |language=kn}}</ref> <ref>{{Cite web |last=Parvathaneni |first=RamBabu |date=2024-01-22 |title=RC studios investing over 400 Crores on Pan India movies |url=https://www.cinejosh.com/news/1/104825/rc-studios-investing-over-400-crores-on-pan-india-movies.html |access-date=2026-07-15 |website=cinejosh.com |language=english}}</ref>
== ಪ್ರಶಸ್ತಿಗಳು ಮತ್ತು ಮನ್ನಣೆ ==
ವರ್ಷಗಳಲ್ಲಿ, ಆರ್. ಚಂದ್ರು ಕನ್ನಡ ಚಲನಚಿತ್ರೋದ್ಯಮಕ್ಕೆ ನೀಡಿದ ಅಪಾರ ಕೊಡುಗೆಗಾಗಿ ವ್ಯಾಪಕ ಮನ್ನಣೆಯನ್ನು ಪಡೆದಿದ್ದಾರೆ. ಅವರ ಹಲವಾರು ಚಲನಚಿತ್ರಗಳು ವಿಮರ್ಶಾತ್ಮಕ ಮೆಚ್ಚುಗೆ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿವೆ, ಉದ್ಯಮದ ಅತ್ಯಂತ ಯಶಸ್ವಿ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿ ಅವರ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿವೆ. <ref>{{Cite web |last=Sharadhaa |first=A. |date=2026-05-27 |title=Shivarajkumar to team up with R Chandru |url=https://www.cinemaexpress.com/kannada/news/2026/May/27/shivarajkumar-to-team-up-with-r-chandru |access-date=2026-07-15 |website=Cinema Express |language=en}}</ref>
'''ಫಿಲ್ಮ್ಫೇರ್ ಯಶಸ್ಸು:''' ಅವರು ತಮ್ಮ ಚೊಚ್ಚಲ ನಿರ್ದೇಶನದ ತಾಜ್ ಮಹಲ್ (2008) ಚಿತ್ರದ "ಖುಷಿಯಾಗಿದೇ ಯೇಕೋ ನಿನ್ನಿಂದಲೆ" ಎಂಬ ಭಾವಪೂರ್ಣ ಗೀತೆಗಾಗಿ '''ಕನ್ನಡದ ಅತ್ಯುತ್ತಮ ಗೀತರಚನೆಕಾರ [[ಫಿಲ್ಮ್ಫೇರ್ ಪ್ರಶಸ್ತಿಗಳು|ಫಿಲ್ಮ್ಫೇರ್ ಪ್ರಶಸ್ತಿಯನ್ನು]]''' ಗೆದ್ದರು <ref>{{Citation |title=56th Filmfare Awards South |date=2026-05-14 |work=Wikipedia |url=https://en.wikipedia.org/w/index.php?title=56th_Filmfare_Awards_South&oldid=1354162754 |access-date=2026-07-15 |language=en}}</ref>, ಇದಕ್ಕಾಗಿ ಅವರು '''ಕನ್ನಡದ ಅತ್ಯುತ್ತಮ ನಿರ್ದೇಶಕ''' ಪ್ರಶಸ್ತಿಗೂ ನಾಮನಿರ್ದೇಶನಗೊಂಡರು. <ref>{{ಉಲ್ಲೇಖ ಸುದ್ದಿ |last=Sebastian |first=Shilpa |date=2017-12-04 |title=Breaking through every brass gate |url=https://www.thehindu.com/entertainment/director-r-chandru-on-taj-mahal/article21259155.ece |access-date=2026-07-15 |work=The Hindu |language=en-IN |issn=0971-751X}}</ref>
'''ಚಾರ್ಮಿನಾರ್ ಚಿತ್ರಕ್ಕೆ ರಾಜ್ಯ ಪ್ರಶಸ್ತಿಗಳು''' <ref>{{ಉಲ್ಲೇಖ ಸುದ್ದಿ |date=2015-01-05 |title=Karantaka State Film Awards announced |url=https://timesofindia.indiatimes.com/entertainment/kannada/movies/news/karantaka-state-film-awards-announced/articleshow/45756810.cms |access-date=2026-07-15 |work=The Times of India |issn=0971-8257}}</ref> ''':''' ಅವರ ೨೦೧೩ ರ ಬ್ಲಾಕ್ಬಸ್ಟರ್ ಪ್ರಣಯ ನಾಟಕ ಚಾರ್ಮಿನಾರ್ ಎರಡು ಪ್ರತಿಷ್ಠಿತ '''[[ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ|ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು]]''' ಗೆದ್ದುಕೊಂಡಿತು — ವಿಶೇಷವಾಗಿ '''ಅತ್ಯುತ್ತಮ ನಿರ್ದೇಶಕ''' ಮತ್ತು '''ಅತ್ಯುತ್ತಮ ನಿರ್ಮಾಪಕ''' ( '''ಅತ್ಯುತ್ತಮ ಮನರಂಜನಾ ಚಲನಚಿತ್ರ''' ವಿಭಾಗದ ಅಡಿಯಲ್ಲಿ) <ref>{{Cite web |date=2013-12-25 |title=Charminar – ಚಾರ್ಮಿನಾರ್ (2013/೨೦೧೩) |url=https://kannadamoviesinfo.wordpress.com/2013/12/25/charminar-2013/ |access-date=2026-07-15 |website=Kannada Movies Info |language=en}}</ref> — ಇದನ್ನು ಅವರು ಮುಖ್ಯಮಂತ್ರಿ [[ಸಿದ್ದರಾಮಯ್ಯ]] ಅವರಿಂದ ಪಡೆದರು. <ref>{{Cite web |url=https://www.imdb.com/title/tt3006554/awards/ |access-date=2026-07-15 |website=www.imdb.com}}</ref>
'''ಪಿಆರ್ಸಿಎಲ್ ಸಮ್ಮೋಹನ ಪ್ರಶಸ್ತಿ:''' ಚಾರ್ಮಿನಾರ್ನಲ್ಲಿನ ಅವರ ಅಸಾಧಾರಣ ನಿರ್ದೇಶನಕ್ಕಾಗಿ, ಅವರಿಗೆ ಆಗಿನ ಮುಖ್ಯಮಂತ್ರಿ [[ಡಿ. ವಿ. ಸದಾನಂದ ಗೌಡ|ಡಿವಿ ಸದಾನಂದ ಗೌಡ]] ಅವರಿಂದ '''ಪಿಆರ್ಸಿಎಲ್ ಸಮ್ಮೋಹನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು''' ನೀಡಿ ಗೌರವಿಸಲಾಯಿತು.
'''ಟಾಲಿವುಡ್ ಮನ್ನಣೆ:''' ಸ್ಯಾಂಡಲ್ವುಡ್ನ ಆಚೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ, ಅವರ 2015 ರ ತೆಲುಗು ನಿರ್ದೇಶನದ ಕೃಷ್ಣಮ್ಮ ಕಲಿಪಿಂಡಿ ಇದ್ದರಿನಿ ಜೈಪುರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (JIFF) '''ಅತ್ಯುತ್ತಮ ರೋಮ್ಯಾಂಟಿಕ್ ಚಲನಚಿತ್ರ ಪ್ರಶಸ್ತಿಯನ್ನು''' ಗೆದ್ದುಕೊಂಡಿತು.
'''ಗೌರವ ಡಾಕ್ಟರೇಟ್ ಪದವಿ :''' <ref>{{Cite web |last=M |first=Narayana |date=2026-02-06 |title=ಕನ್ನಡ ಸಿನಿಮಾ ನಿರ್ದೇಶಕ, ನಿರ್ಮಾಪಕ ಆರ್. ಚಂದ್ರು ಇನ್ಮುಂದೆ ಡಾ. ಆರ್. ಚಂದ್ರು |url=https://kannada.filmibeat.com/news/r-chandru-honoured-with-honorary-doctorate-for-contribution-to-cinema-culture-and-social-service-108649.html |access-date=2026-07-15 |website=https://kannada.filmibeat.com |language=kn}}</ref> ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ಏರಿಸುವಲ್ಲಿ ಅವರ ಪ್ರಯತ್ನಗಳು, ಕಠಿಣ ಪರಿಶ್ರಮ ಮತ್ತು ಗಮನಾರ್ಹ ಸಾಧನೆಗಳನ್ನು ಗುರುತಿಸಿ, ಮಣಿಪುರ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯವು 2025 ರಲ್ಲಿ ಅವರಿಗೆ '''ಗೌರವ ಡಾಕ್ಟರೇಟ್ ಪದವಿಯನ್ನು''' ನೀಡಿ ಗೌರವಿಸಿತು. <ref>{{Cite web |title=ʻಕಬ್ಜʼ ನಿರ್ದೇಶಕ ಆರ್.ಚಂದ್ರುಗೆ ಗೌರವ ಡಾಕ್ಟರೇಟ್ ಘೋಷಣೆ! |url=https://vijaykarnataka.com/entertainment/news/kabza-movie-director-r-chandru-receives-honorary-doctorate-on-45th-birthday/articleshow/128120025.cms |access-date=2026-07-15 |website=Vijay Karnataka |language=kn}}</ref>
== ವೈಯಕ್ತಿಕ ಜೀವನ ==
ಆರ್. ಚಂದ್ರು '''ಸೆಪ್ಟೆಂಬರ್ 5, 2010 ರಂದು''' '''ಯಮುನಾ''' <ref>{{Cite web |last=Hooli |first=By: Shekhar H. |date=2010-09-06 |title=Taj Mahal fame R Chandru ties the knot with Yamuna |url=https://www.filmibeat.com/kannada/news/2010/rchandru-ties-knot-yamuna-060910.html |access-date=2026-07-15 |website=https://www.filmibeat.com |language=en}}</ref> ಅವರನ್ನು ವಿವಾಹವಾದರು ಮತ್ತು ದಂಪತಿಗೆ ಮೂವರು ಮಕ್ಕಳಿದ್ದಾರೆ. ಚಲನಚಿತ್ರೋದ್ಯಮದಲ್ಲಿ ಅವರ ಸಾಧನೆಗಳ ಹೊರತಾಗಿಯೂ, ಅವರು ತಮ್ಮ ಗ್ರಾಮೀಣ ಬೇರುಗಳೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ ಮತ್ತು ಕೇಶವವರ ಗ್ರಾಮದಲ್ಲಿ ಬೆಳೆದದ್ದು ಅವರ ಮೌಲ್ಯಗಳು, ಕೆಲಸದ ನೀತಿ ಮತ್ತು ಕಥೆ ಹೇಳುವ ಶೈಲಿಯನ್ನು ರೂಪಿಸಿದ್ದಕ್ಕಾಗಿ ಅವರಿಗೆ ಸಲ್ಲುತ್ತದೆ. ಅವರ ವಿನಮ್ರ ಆರಂಭವು ಅವರ ಸೃಜನಶೀಲ ದೃಷ್ಟಿಕೋನಕ್ಕೆ ಸ್ಫೂರ್ತಿ ನೀಡುತ್ತಲೇ ಇದೆ, ಇದು ಕುಟುಂಬ, ಭಾವನೆಗಳು, ಸ್ಥಿತಿಸ್ಥಾಪಕತ್ವ ಮತ್ತು ಮಾನವ ಸಂಬಂಧಗಳ ವಿಷಯಗಳನ್ನು ಆಗಾಗ್ಗೆ ಪ್ರತಿಬಿಂಬಿಸುತ್ತದೆ. <ref>{{Cite web |title=R. Chandru |url=https://grokipedia.com/page/R._Chandru |access-date=2026-07-15 |website=Grokipedia |language=en}}</ref>
== ಚಲನಚಿತ್ರಗಳ ಪಟ್ಟಿ ==
ಆರ್. ಚಂದ್ರು ಅವರು ತಾಜ್ ಮಹಲ್ (2008) ಚಿತ್ರದ ಮೂಲಕ ತಮ್ಮ ನಿರ್ದೇಶನದ ವೃತ್ತಿಜೀವನವನ್ನು ಪ್ರಾರಂಭಿಸಿದರು, ನಂತರ ಪ್ರೇಮ್ ಕಹಾನಿ (2009), ಮೈಲಾರಿ (2010), ಕೋ ಕೋ (2012), ಚಾರ್ಮಿನಾರ್ (2013), ಬ್ರಹ್ಮ (2014), ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ (ತೆಲುಗು, 2015), ಮಳೆ (2015), ಲಕ್ಷ್ಮಣ (2016), ಕನಕ (2018), ಐ ಲವ್ ಯೂ (2019), ಮತ್ತು ಬಹುಭಾಷೆಯ ಆಕ್ಷನ್ ದೃಶ್ಯ ವೈಭವದ ಕಬ್ಜ (2023) ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಎಲ್ಲ ಸಿನಿಮಾಗಳ ಮೂಲಕ ಯಶಸ್ವಿ ಮನರಂಜನೆಯನ್ನು ನೀಡಬಲ್ಲ ಚಲನಚಿತ್ರ ನಿರ್ದೇಶಕ/ನಿರ್ಮಾಪಕರೆಂಬ ಖ್ಯಾತಿ ಆರ್. ಚಂದ್ರು ಅವರಿಗೆ ದೊರಕಿದೆ.<ref>{{Cite web |title=R Chandru Movies List: Kannada Director{{!}} Writer |url=https://chiloka.com/celebrity/r-chandru/filmography |access-date=2026-07-16 |website=chiloka.com}}</ref>
== ಮುಂಬರುವ ಯೋಜನೆಗಳು ==
ಆರ್. ಚಂದ್ರು ಅವರು ಪ್ರಸ್ತುತ ಆರ್ಸಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಹಲವಾರು ಮಹತ್ವಾಕಾಂಕ್ಷೆಯ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ, ಇದು ಭಾರತದಾದ್ಯಂತ ಪ್ರೇಕ್ಷಕರಿಗೆ ದೊಡ್ಡ ಪ್ರಮಾಣದ ಸಿನಿಮೀಯ ಅನುಭವಗಳನ್ನು ಸೃಷ್ಟಿಸುವ ಅವರ ದೃಷ್ಟಿಕೋನವನ್ನು ಪುನರುಚ್ಚರಿಸುತ್ತದೆ. <ref>{{ಉಲ್ಲೇಖ ಸುದ್ದಿ |date=2024-01-27 |title=Kabzaa director R Chandru announces five ambitious films |url=https://timesofindia.indiatimes.com/entertainment/kannada/movies/news/kabzaa-director-r-chandru-announces-five-ambitious-films/articleshow/107182952.cms |access-date=2026-07-15 |work=The Times of India |issn=0971-8257}}</ref>
ಅವರ ಮುಂಬರುವ ಚಿತ್ರಗಳಲ್ಲಿ ಫಾದರ್, ಡಾಗ್, ಶ್ರೀ ರಾಮ ಬಾಣ ಚರಿತ, ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ), ಮತ್ತು ಕಬ್ಜಾ 2 ಸೇರಿವೆ <ref>{{Cite web |last=Information |first=Film |date=2024-01-24 |title=R. Chandru Launches 5 Films {{!}} 24 January, 2024 |url=https://filminformation.com/featured/r-chandru-launches-5-films-24-january-2024/ |access-date=2026-07-15 |website=Film Information |language=en-US}}</ref> ಈ ಯೋಜನೆಗಳು ಪ್ಯಾನ್-ಇಂಡಿಯನ್ ಕಥೆ ಹೇಳುವಿಕೆ ಮತ್ತು ಹೆಚ್ಚಿನ ನಿರ್ಮಾಣ ಮೌಲ್ಯದ ಚಲನಚಿತ್ರ ನಿರ್ಮಾಣದ ಮೂಲಕ ಕನ್ನಡ ಸಿನೆಮಾದ ವ್ಯಾಪ್ತಿಯನ್ನು ವಿಸ್ತರಿಸುವುದರೊಂದಿಗೆ ವೈವಿಧ್ಯಮಯ ಪ್ರಕಾರಗಳನ್ನು ಅನ್ವೇಷಿಸುವತ್ತ ಅವರ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತವೆ. <ref>{{Cite web |last=Sharadhaa |first=A. |date=2024-01-24 |title=R Chandru announces five new projects in multiple languages |url=https://www.newindianexpress.com/entertainment/kannada/2024/Jan/24/r-chandru-announces-five-new-projectsin-multiple-languages |access-date=2026-07-15 |website=The New Indian Express |language=en}}</ref>
== ಉಲ್ಲೇಖಗಳು ==
<templatestyles src="Reflist/styles.css" />{{ಉಲ್ಲೇಖಗಳು}}
== ಬಾಹ್ಯ ಕೊಂಡಿಗಳು ==
* {{Imdb name|id=1318567}}
[[ವರ್ಗ:ಚಲನಚಿತ್ರ ಕಥೆಗಾರರು]]
[[ವರ್ಗ:೧೯೮೦ ಜನನ]]
[[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:Articles with hCards]]
[[ವರ್ಗ:Pages with unreviewed translations]]
2djr2h3m1juuvrx71ees78bw8lywkyi
ಪರ್ಲ್ ಮಾಣಿ
0
179960
1378236
1378025
2026-08-03T06:55:50Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1378236
wikitext
text/x-wiki
{{databox}}
{{Infobox social media personality
| name = ಪರ್ಲ್ ಮಾಣಿ
| image = Pearle Maaney in November 2020.png
| caption = 2020ರಲ್ಲಿ ಪರ್ಲ್
| birth_name =
| birth_date = {{birth date and age|1989|05|28|df=y}}<ref>{{Cite news |title=Happy Birthday my 'ideal wife and friend', says Srinish as he shares a love-filled birthday wish for wife Pearle Maaney |url=https://timesofindia.indiatimes.com/tv/news/malayalam/happy-birthday-my-ideal-wife-and-friend-says-srinish-as-he-shares-a-love-filled-birthday-wish-for-wife-pearle-maaney/articleshow/76060406.cms |access-date=6 April 2021 |website=The Times of India|date=28 May 2020 }}</ref>
| birth_place = [[ಆಲುವಾ]], [[ಕೇರಳ]], ಭಾರತ
| other names =
| education = [[ಕ್ರೈಸ್ಟ್ ವಿಶ್ವವಿದ್ಯಾಲಯ]], [[ಬೆಂಗಳೂರು]]
| occupation = {{hlist |ನಟಿ|ಗೀತರಚನೆಕಾರ್ತಿ|ಗಾಯಕಿ|ಯೂಟ್ಯೂಬರ್|ದೂರದರ್ಶನ ನಿರೂಪಕಿ}}
| years_active = 2011{{endash}}ಪ್ರಸ್ತುತ
| notable_works =
| spouse = {{Marriage|[[ಶ್ರೀನಿಷ್ ಅರವಿಂದ್]]|2019}}
| children = 2
| youtube_handle = PearleMaaneyShow
| youtube_display_name = Pearle Maaney
| youtube_years_active =
| youtube_genre = ಸೆಲೆಬ್ರಿಟಿ ಸಂದರ್ಶನಗಳು, ಜೀವನಶೈಲಿ, ಪ್ರೇರಣೆ, ವೆಬ್ ಸರಣಿ, ದಂಪತಿಗಳ ವ್ಲಾಗ್ಗಳು
| youtube_subscribers = 4.62 ಮಿಲಿಯನ್<!-- PLEASE DO NOT CHANGE WITHOUT UPDATING stats_update BELOW -->
| youtube_views = 2.1 ಶತಕೋಟಿ<!-- PLEASE DO NOT CHANGE WITHOUT UPDATING stats_update BELOW -->
| stats_update = ಜುಲೈ 2026
}}
'''ಪರ್ಲ್ ಮಾಣಿ''' ([[Help:IPA/Malayalam|/maːɳi/]]; ಜನನ 28 ಮೇ 1989) ಇವರು ಭಾರತೀಯ ನಟಿ, ಗೀತರಚನೆಕಾರ್ತಿ, [[ಯೂಟ್ಯೂಬರ್]] ಮತ್ತು [[ದೂರದರ್ಶನ ನಿರೂಪಕಿ]]ಯಾಗಿದ್ದು, [[ಮಲಯಾಳಂ]] ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಾರೆ. ಅವರು ಮಲಯಾಳಂ ನೃತ್ಯ ರಿಯಾಲಿಟಿ ಶೋ ''[[ಡಿ 4 ಡಾನ್ಸ್]]''ನ ಮೂರು ಸೀಸನ್ಗಳನ್ನು ಸಹ-ನಿರೂಪಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ.<ref>{{cite web |url=https://timesofindia.indiatimes.com/entertainment/malayalam/movies/news/Pearle-Maaney-in-Sameer-Thahirs-next-film/articleshow/20365776.cms |title=Pearle Maaney in Sameer Thahir's next film |work=The Times of India |date=1 June 2013 |access-date=26 February 2015}}</ref> ಪರ್ಲ್ [[ಬಿಗ್ ಬಾಸ್ (ಮಲಯಾಳಂ ಸೀಸನ್ 1)|''ಬಿಗ್ ಬಾಸ್'' ಮಲಯಾಳಂ ಸೀಸನ್ 1]]ರ ಪ್ರಥಮ ರನ್ನರ್-ಅಪ್ ಆಗಿ ಹೊರಹೊಮ್ಮಿದರು.<ref name="FilmibeatSabumon2018">Bigg Boss Malayalam Season 1 Grand Finale: Sabumon Emerges As The Big Winner!, *Filmibeat*, 1 October 2018. Retrieved from https://www.filmibeat.com/malayalam/news/2018/bigg-boss-malayaam-season-1-grand-finale-sabumon-emerges-as-the-big-winner-277895.html</ref>
== ಆರಂಭಿಕ ಜೀವನ ==
ಪರ್ಲ್ ಮಾಣಿ ಅವರು [[ಕೊಚ್ಚಿ]] ಮೂಲದ ಮತ್ತು [[ಚೋವರ]]ದಲ್ಲಿ ಬೇರುಗಳನ್ನು ಹೊಂದಿರುವ [[ಸಿರೋ-ಮಲಬಾರ್]] [[ಸಂತ್ ಥಾಮಸ್ ಕ್ರೈಸ್ತರು|ಸಿರಿಯನ್ ಕ್ರಿಶ್ಚಿಯನ್]]<ref name="auto">{{Cite web |date=6 May 2019 |title=In pics: 'Bigg Boss' Malayalam stars Pearle Maaney and Srinish get married |url=https://www.thenewsminute.com/article/pics-bigg-boss-malayalam-stars-pearle-maaney-and-srinish-get-married-101307 |access-date=23 October 2021 |website=The News Minute |language=en}}</ref> ಜಂಟಿ ಕುಟುಂಬದಲ್ಲಿ ಬೆಳೆದರು.<ref name="auto"/> ಅವರು [[ಹೋಲಿ ಏಂಜಲ್ಸ್ ಕಾನ್ವೆಂಟ್ ತಿರುವನಂತಪುರಂ]] ಮತ್ತು ರಾಜಗಿರಿ ಪಬ್ಲಿಕ್ ಸ್ಕೂಲ್, [[ಕಳಮಸ್ಸೇರಿ]]ಗಳಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದರು ಮತ್ತು [[ಕ್ರೈಸ್ಟ್ ವಿಶ್ವವಿದ್ಯಾಲಯ]], [[ಬೆಂಗಳೂರು]]ನಲ್ಲಿ [[ಮಾಧ್ಯಮ ಅಧ್ಯಯನ]]ದಲ್ಲಿ ಪದವಿ ಪೂರೈಸಿದರು.<ref>{{cite web |url=http://www.malayalimag.com/articles/oct2013_22/ |title=Catching up with Pearle Maaney |publisher=MalayaliMag.com |date=7 October 2013 |access-date=26 February 2015 |archive-url=https://web.archive.org/web/20150402095410/http://www.malayalimag.com/articles/oct2013_22/ |archive-date=2 April 2015 |url-status=dead}}</ref> ಅವರ ಪೋಷಕರು ತೃಶ್ಶೂರ್ನಲ್ಲಿ ನೆಲೆಸಿದ್ದಾರೆ.<ref>{{cite web |title=Very Pearle – WtzUp Kochi |url=http://issuu.com/fwdlife/docs/wtzup_kochi_dec_for_issuu/1 |website=WtzUp Kochi |date=4 January 2015 |access-date=25 February 2015}}</ref><ref>{{cite news |title=People think I'm of Arab origin: Pearle Maaney|url=https://timesofindia.indiatimes.com/entertainment/malayalam/movies/news/People-think-Im-of-Arab-origin-Pearle-Maaney/articleshow/35517293.cms |work=The Times of India |date=24 May 2014 |access-date=25 February 2015}}</ref>
== ವೃತ್ತಿಜೀವನ ==
ಪರ್ಲ್ ಅವರು [[ಮಲಯಾಳಂ]] ದೂರದರ್ಶನ ವಾಹಿನಿ ಯೆಸ್ ಇಂಡಿಯಾವಿಷನ್ನ ([[ಇಂಡಿಯಾವಿಷನ್]]ನ ಅಂಗಸಂಸ್ಥೆ) ಸಂಗೀತ ಕಾರ್ಯಕ್ರಮ ''ಯೆಸ್ ಜ್ಯೂಕ್ಬಾಕ್ಸ್''ನ 250ಕ್ಕೂ ಹೆಚ್ಚು ಸಂಚಿಕೆಗಳನ್ನು ನಿರೂಪಿಸಿದ್ದಾರೆ.<ref>{{cite web |title=Pearle Maaney Biography |url=http://www.drollydoll.com/pearle-maaney-biography-latest-photo-gallery/ |website=DROLLYDOLL |access-date=25 February 2015 |archive-url=https://web.archive.org/web/20150127003052/http://www.drollydoll.com/pearle-maaney-biography-latest-photo-gallery/ |archive-date=27 January 2015 |url-status=dead}}</ref> ಅವರು [[ಅಮೃತ ಟಿವಿ]]ಯಲ್ಲಿ ಸೆರಾ ಎಂಬ [[ರಂಗನಾಮ]]ದಲ್ಲಿ ಪ್ರವಾಸ ಆಧಾರಿತ ಅಡುಗೆ ಕಾರ್ಯಕ್ರಮ ''[[ಟೇಸ್ಟ್ ಆಫ್ ಕೇರಳ]]''ವನ್ನು ನಿರೂಪಿಸಿದರು.<ref>{{cite web |title=Serah Profile on Amrita TV |url=http://tasteofkerala.amritatv.com/serah.html |publisher=Amrita TV |access-date=22 August 2015 |archive-url=https://web.archive.org/web/20160304042004/http://tasteofkerala.amritatv.com/serah.html |archive-date=4 March 2016 |url-status=dead}}</ref><ref>{{cite web |title=Taste of Kerala – With SALT & PEPPER Team 1/3 |url=https://www.youtube.com/watch?v=Ca8xSruX-G4 |via=YouTube |access-date=22 August 2015}}</ref>
ಅಕ್ಟೋಬರ್ 2014ರಲ್ಲಿ, ಅವರು [[ಮಳವಿಲ್ ಮನೋರಮ]]ದಲ್ಲಿ ನೃತ್ಯ ರಿಯಾಲಿಟಿ ಶೋ ''ಗಮ್ ಆನ್ ಡಿ2'' ಅನ್ನು ನಿರೂಪಿಸಲು ಪ್ರಾರಂಭಿಸಿದರು, ಇದು ನಿರೂಪಕಿ [[ಜ್ಯುವೆಲ್ ಮೇರಿ]] ಅವರನ್ನು ಬದಲಾಯಿಸಿತು. ಅವರ ಸಹ-ನಿರೂಪಕ [[ಗೋವಿಂದ್ ಪದ್ಮಸೂರ್ಯ]] ಆಗಿದ್ದರು.<ref>{{cite news |title=Pearle Maaney replaces Jewel in D for Dance |url=https://timesofindia.indiatimes.com/tv/news/malayalam/Pearle-Maaney-replaces-Jewel-in-D-for-Dance/articleshow/44969535.cms |work=The Times of India |date=29 October 2014 |access-date=25 February 2015}}</ref> ಅವರು [[ಕೌಮುದಿ ಟಿವಿ]] ಕಾರ್ಯಕ್ರಮ ''ಸಿನೆಮಾ ಕಂಪನಿ'' ಸೀಸನ್ 2ನ್ನು ಸಹ ನಿರೂಪಿಸಿದರು. 2018ರಲ್ಲಿ, ಅವರು [[ಏಷ್ಯಾನೆಟ್ (ಟಿವಿ ಚಾನೆಲ್)|ಏಷ್ಯಾನೆಟ್]]ನಲ್ಲಿ ರಿಯಾಲಿಟಿ ಶೋ ''[[ಬಿಗ್ ಬಾಸ್ (ಮಲಯಾಳಂ ಟಿವಿ ಸರಣಿ)|ಬಿಗ್ ಬಾಸ್]]''ನ [[ಬಿಗ್ ಬಾಸ್ (ಮಲಯಾಳಂ ಸೀಸನ್ 1)|ಮೊದಲ ಸೀಸನ್]]ನಲ್ಲಿ ಭಾಗವಹಿಸಿದರು ಮತ್ತು ರನ್ನರ್-ಅಪ್ ಆಗಿ ಹೊರಹೊಮ್ಮಿದರು. ಅವರು 100 ದಿನಗಳನ್ನು ಪೂರೈಸಿದ ಏಕೈಕ ಮಹಿಳಾ ಸ್ಪರ್ಧಿ ಆಗಿದ್ದರು.{{Citation needed|date=April 2023}}
== ವೈಯಕ್ತಿಕ ಜೀವನ ==
2018ರಲ್ಲಿ ''ಬಿಗ್ ಬಾಸ್'' ರಿಯಾಲಿಟಿ ಶೋನ ಮೊದಲ ಸೀಸನ್ ಸಮಯದಲ್ಲಿ, ಅವರು ತಮ್ಮ ಸಹ-ಸ್ಪರ್ಧಿ [[ಶ್ರೀನಿಷ್ ಅರವಿಂದ್]] ಅವರೊಂದಿಗೆ ಪ್ರಣಯ ಸಂಬಂಧವನ್ನು ಬೆಳೆಸಿಕೊಂಡರು ಮತ್ತು ಅವರಿಬ್ಬರೂ ಮದುವೆಯಾಗುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು.<ref>{{Cite news |url=https://www.mathrubhumi.com/movies-music/tv/pearly-maaney-srinish-aravind-sreenish-love-big-boss-malayalam-sabumon-mohanlal--1.3186360 |title=ഞാന് ശ്രീനിയെ ശരിക്കും സ്നേഹിക്കുന്നു; ബിഗ് ബോസിന് പുറത്തും പേളി പറയുന്നു |work=Mathrubhumi |access-date=2 October 2018 |archive-date=2 October 2018 |archive-url=https://web.archive.org/web/20181002102352/https://www.mathrubhumi.com/movies-music/tv/pearly-maaney-srinish-aravind-sreenish-love-big-boss-malayalam-sabumon-mohanlal--1.3186360 |url-status=dead}}</ref> 17 ಜನವರಿ 2019ರಂದು, ಮಾಣಿ ಅವರು [[ಶ್ರೀನಿಷ್ ಅರವಿಂದ್]] ಅವರೊಂದಿಗೆ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.<ref>{{Cite news |url=https://keralaweddingtrends.com/malayalam-actor-srinish-aravind-pearle-maaney-engagement-photos/ |title=Bigg Boss Malayalam runner-up Pearle Maaney engaged to Srinish |work=Kerala Wedding Trends |access-date=18 January 2019}}</ref> 5 ಮೇ 2019ರಂದು, ಈ ದಂಪತಿಗಳು [[ಕ್ರೈಸ್ತ|ಕ್ರಿಶ್ಚಿಯನ್]] ಪದ್ಧತಿಗಳ ಪ್ರಕಾರ ವಿವಾಹವಾದರು ಮತ್ತು 8 ಮೇ 2019ರಂದು, ಅವರು [[ಹಿಂದೂ|ಹಿಂದೂ]] ವಿವಾಹ ಸಮಾರಂಭವನ್ನು ಸಹ ನಡೆಸಿದರು.<ref>{{Cite news |url=https://english.mathrubhumi.com/mobile/movies-music/movie-news/pearle-and-srinish-make-it-official-see-wedding-pics-here-1.3773833 |title=Pearle and Srinish make it official; see wedding pics here |work=Mathrubhumi |access-date=24 January 2021}}{{dead link|date=October 2022 |bot=InternetArchiveBot |fix-attempted=yes }}</ref> ಅವರಿಗೆ ನೀಲಾ ಮತ್ತು ನಿತಾರಾ ಎಂಬ ಇಬ್ಬರು ಪುತ್ರಿಯರಿದ್ದಾರೆ, ಅವರು 20 ಮಾರ್ಚ್ 2021 ಮತ್ತು 13 ಜನವರಿ 2024ರಂದು ಜನಿಸಿದರು.<ref>{{Cite news |url=https://www.ndtv.com/entertainment/its-a-baby-girl-for-ludo-actress-pearle-maaney-see-pic-2395618?amp=1&akamai-rum=off |title=It's A Baby Girl For Ludo Actress Pearle Maaney. |publisher=NDTV |access-date=21 January 2021}}</ref><ref>{{Cite news |url=https://timesofindia.indiatimes.com/tv/news/malayalam/its-a-baby-girl-for-tv-couple-pearle-maaney-and-srinish-aravind-the-latter-says-both-big-baby-and-small-baby-are-adipoli/articleshow/81612676.cms |title=Its a baby girl for TV couple Pearle Maaney and Srinish Aravind; the latter says 'both big baby and small baby are adipoli' |work=The Times of India |access-date=21 January 2021}}</ref><ref>{{Cite news| url=https://timesofindia.indiatimes.com/tv/news/malayalam/tv-couple-pearle-maaney-and-srinish-aravind-welcome-their-second-baby-girl/articleshow/106820719.cms |title=TV couple Pearle Maaney and Srinish Aravind welcome their second baby girl, Nitara Srinish |date=13 January 2024}}</ref>
== ವಿವಾದ ==
ಜುಲೈ 2026ರಲ್ಲಿ, ಪರ್ಲ್ ಅವರು [[2026 ದೆಹಲಿ ಜಂತರ್ ಮಂತರ್ ಪ್ರತಿಭಟನೆ|ವಿದ್ಯಾರ್ಥಿಗಳ ನೇತೃತ್ವದ ಜಂತರ್ ಮಂತರ್ ಪ್ರತಿಭಟನೆ]]ಯ ಬಗ್ಗೆ ಕಾಮೆಂಟ್ ಮಾಡಿದ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ರಚಿಸಿದರು. ಅವರ ಪೋಸ್ಟ್ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು, ಹೆಚ್ಚಾಗಿ ನಕಾರಾತ್ಮಕ.<ref>{{Cite web |title=Pearle Maaney faces massive backlash for comments on student protests, loses 2 lakh Instagram followers |url=https://www.onmanorama.com/entertainment/entertainment-news/2026/07/26/pearle-maany-loses-instagram-followers-student-protests-comments.html |access-date=2026-07-26 |website=@onmanorama}}</ref> ಅವರನ್ನು ಟೀಕಿಸಿದವರಲ್ಲಿ ನಿರ್ದೇಶಕ [[ಸಿಬಿ ಮಲಯಿಲ್]] ಅವರ ಪುತ್ರ ಜೋ ಸಿಬಿ ಮಲಯಿಲ್ ಸೇರಿದ್ದರು.<ref>{{Cite news |title='You're messing with the wrong person': Pearle Maaney hits back at backlash over student protest remarks, deletes post calling out 'failed filmmaker' |url=https://timesofindia.indiatimes.com/entertainment/malayalam/movies/news/youre-messing-with-the-wrong-person-pearle-maaney-hits-back-at-backlash-over-student-protest-remarks-deletes-post-calling-out-failed-filmmaker/amp_articleshow/132604229.cms |access-date=2026-07-26 |work=The Times of India |issn=0971-8257}}</ref> ಪರ್ಲ್ ಅವರು ತಮ್ಮ ಸ್ಟೋರಿಯಲ್ಲಿ ಜೋ ಅವರಿಗೆ ಪ್ರತಿಕ್ರಿಯಿಸಿ ಸಿಬಿ ಮಲಯಿಲ್ ಅವರನ್ನು "ವಿಫಲ ಚಲನಚಿತ್ರ ನಿರ್ಮಾಪಕ" ಎಂದು ಕರೆದರು, ಅದನ್ನು ಅವರು ನಂತರ ಅಳಿಸಿದರು.<ref>{{Cite news |last=Bureau |first=The Hindu |date=2026-07-24 |title=Internet rallies behind filmmaker Sibi Malayil after influencer Pearle Maaney's "failed filmmaker" dig |url=https://www.thehindu.com/news/national/kerala/internet-rallies-behind-filmmaker-sibi-malayil-after-influencer-pearle-maaneys-failed-filmmaker-dig/article71262380.ece |access-date=2026-07-26 |work=The Hindu |language=en-IN |issn=0971-751X}}</ref><ref>{{Cite web |last=Das |first=Santanu |date=2026-07-24 |title=Did Pearle Maaney call Sibi Malayil a failed filmmaker? His son fires back after she deletes post |url=https://www.hindustantimes.com/entertainment/tv/did-pearle-maaney-call-sibi-malayil-a-failed-filmmaker-his-son-fires-back-after-she-deletes-post-101784880855522.html |access-date=2026-07-26 |website=Hindustan Times |language=en}}</ref><ref>{{Cite web |last=Prakash |first=സമകാലിക മലയാളം ഡെസ്ക്,Hima |date=2026-07-08 |title='കശ്മീരിൽ കല്ലേറ് നിർത്തിച്ചവർ, ഡൽഹിയിൽ കല്ലേറ് നിർത്തിക്കാൻ വന്നിട്ട് തിരിച്ചു പോയീന്ന് കേട്ടു'; കൃഷ്ണകുമാറിനും പേളിക്കുമെതിരെ ചന്തു |url=https://www.samakalikamalayalam.com/movie-news/chandu-salimkumar-troll-against-krishna-kumar-and-pearle-maaney |access-date=2026-07-26 |website=Samakalika Malayalam - The New Indian Express |language=ml}}</ref>
== ಚಲನಚಿತ್ರಗಳ ಪಟ್ಟಿ ==
=== ಚಲನಚಿತ್ರಗಳು ===
{| class="wikitable"
! ವರ್ಷ !! ಚಿತ್ರ !! ಪಾತ್ರ !! ಟಿಪ್ಪಣಿಗಳು !! {{Abbr|ಉಲ್ಲೇಖ|ಉಲ್ಲೇಖ}}
|-
| 2013 || ''[[ನೀಲಾಕಾಶಂ ಪಚಕ್ಕಡಲ್ ಚುವಣ್ಣ ಭೂಮಿ]]'' || ಬೈಕರ್ ಗರ್ಲ್ || || <ref>{{cite news |url=https://timesofindia.indiatimes.com/entertainment/regional/malayalam/news-and-interviews/Pearle-Maaney-in-Sameer-Thahirs-next-film/articleshow/20365776.cms |archive-url=https://web.archive.org/web/20131103043414/http://articles.timesofindia.indiatimes.com/2013-06-01/news-and-interviews/39656442_1_film-sameer-thahir-last-supper |url-status=live |archive-date=3 November 2013 |newspaper=[[The Times of India]] |title=Pearle Maaney in Sameer Thahir's next film |access-date=13 June 2013}}</ref>
|-
| rowspan="2" | 2014 || ''[[ದಿ ಲಾಸ್ಟ್ ಸಪ್ಪರ್ (2014 ಚಿತ್ರ)|ದಿ ಲಾಸ್ಟ್ ಸಪ್ಪರ್]]'' || ಪರ್ಲಿ || || <ref>{{Cite web |date=12 May 2014 |title=The Last Supper |url=https://www.sify.com/movies/the-last-supper-review-malayalam-pcmbqlbejbffg.html |url-status=dead |archive-url=https://web.archive.org/web/20220401093944/https://www.sify.com/movies/the-last-supper-review-malayalam-pcmbqlbejbffg.html |archive-date=1 April 2022 |access-date=1 April 2022 |website=[[Sify]]}}</ref>
|-
| ''[[ನ್ಜಾನ್ (ಚಿತ್ರ)|ನ್ಜಾನ್]]'' || ವಲ್ಲಿ || ||<ref name="auto1">{{Cite web|url=https://www.jiocinema.com/movies|title=Watch Latest Full Movies Online in HD for Free: All Genres & Languages streaming on jiocinema.com|website=www.jiocinema.com}}</ref>
|-
| rowspan="3" | 2015 || ''[[ಲೋಹಂ (ಚಿತ್ರ)|ಲೋಹಂ]]''<ref>{{Cite news |last=Radhika C Pillai |date=8 April 2015 |title=Pearle Maaney to do a cameo in Mohanlal film |work=[[The Times of India]] |url=https://timesofindia.indiatimes.com/entertainment/malayalam/movies/news/Pearle-Maaney-to-do-a-cameo-in-Mohanlal-film/articleshow/46837702.cms |url-status=live |access-date=3 August 2015 |archive-url=https://web.archive.org/web/20150416052222/http://timesofindia.indiatimes.com/entertainment/malayalam/movies/news/Pearle-Maaney-to-do-a-cameo-in-Mohanlal-film/articleshow/46837702.cms |archive-date=16 April 2015}}</ref><ref>{{Cite news |last=Litty Simon |date=24 August 2015 |title=Curly 'Mane'y on a roll |work=[[Malayala Manorama]] |url=http://english.manoramaonline.com/entertainment/interview/pearle-maaney-on-double-barrel-loham-and-telugu-project.html |url-status=live |access-date=24 August 2015 |archive-url=https://web.archive.org/web/20150825230158/http://english.manoramaonline.com/entertainment/interview/pearle-maaney-on-double-barrel-loham-and-telugu-project.html |archive-date=25 August 2015}}</ref> || ವಧು || ||<ref>{{cite web |title=Pearle Maaney will be part of Ranjith's Loham |url=http://www.cochintalkies.com/malayalam-movie-news/pearle-maaney-will-be-part-of-ranjiths-loham.html |publisher=Cochin Talkies |access-date=30 June 2015 }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
|-
| ''[[ಡಬಲ್ ಬ್ಯಾರೆಲ್ (2015 ಚಲನಚಿತ್ರ)|ಡಬಲ್ ಬ್ಯಾರೆಲ್]]'' || ಶೀ || ||<ref>{{cite news |title=Pearle Maaney is Asif's heroine in Double Barrel |url=https://timesofindia.indiatimes.com/entertainment/malayalam/movies/news/Pearle-Maaney-is-Asifs-heroine-in-Double-Barrel/articleshow/44959379.cms |work=The Times of India |date=29 October 2014 |access-date=25 February 2015}}</ref>
|-
| ''[[ಜೋ ಅಂಡ್ ದ ಬಾಯ್]]'' || ಮಿಥು || ||<ref name="auto1"/>
|-
| rowspan="3" | 2016 || ''[[ಕಲ್ಯಾಣ ವೈಭೋಗಂ]]'' || ವೈದೇಹಿ || [[ತೆಲುಗು ಭಾಷೆ|ತೆಲುಗು]] ಚಿತ್ರ || <ref>{{Cite web|url=https://www.idlebrain.com/movie/archive/kalyanavaibhogame.html|title=Kalyana Vaibhogame review by jeevi - Telugu cinema review - Naga Shourya & Malavika Nair|website=www.idlebrain.com}}</ref>
|-
|''[[ಪ್ರೇತಂ (ಚಲನಚಿತ್ರ)|ಪ್ರೇತಂ]]''|| ಸುಹನ್ನಿಸ || ||<ref name="auto1"/>
|-
|''[[ಕಪ್ಪಿರಿ ತುರುತ್]]''|| ಯಾಮಿ || ||<ref>{{Cite news|url=https://www.deccanchronicle.com/entertainment/movie-reviews/111216/kappiri-thuruthu-movie-review-peek-into-fort-kochis-music-trove.html|title=Kappiri Thuruthu movie review: Peek into Fort Kochi's music trove|date=2016-12-11|newspaper=[[Deccan Chronicle]]|access-date=2017-01-07}}{{Rating|2.5|5}}</ref>
|-
| rowspan="2" |2017||''[[ಟೀಮ್ 5]]''|| ಸುರೇಶ್ ಆಲೀನ || ||{{Citation needed|date=August 2024}}
|-
|''[[ಪುಳ್ಳಿಕ್ಕಾರನ್ ಸ್ಟಾರಾ]]'' || ಏಂಜೆಲಿನಾ || ||<ref>{{Cite web|url=https://www.hotstar.com/in/movies/pullikkaran-stara/1000196112/watch|title=Watch Pullikkaran Stara|website=Disney+ Hotstar}}</ref>
|-
|2018 ||''[[ಹೂ (ಚಲನಚಿತ್ರ)|ಹೂ]]'' || ಡೊಲೊರೆಸ್ || ಇಂಗ್ಲಿಷ್/ ಮಲಯಾಳಂ <br />ದ್ವಿಭಾಷಾ ಚಿತ್ರ ||<ref>{{Cite web|url=https://timesofindia.indiatimes.com/entertainment/malayalam/movies/news/what-is-pearle-maaneys-character-in-who/articleshow/62379847.cms|title=What is Pearle Maaney's character in Who?|date=5 January 2018|work=The Times of India}}</ref>
|-
|2020 ||''[[ಲುಡೋ (ಚಲನಚಿತ್ರ)|ಲುಡೋ]]'' || ಶೀಜಾ ಥಾಮಸ್ || [[ಹಿಂದಿ]] ಚಿತ್ರ Netflixನಲ್ಲಿ ಬಿಡುಗಡೆಯಾಯಿತು ||<ref>{{Cite web |title=Ludo |website=[[Netflix]] |url=https://www.netflix.com/in/title/81107576}}</ref>
|-
|2022 ||''[[ವಲಿಮೈ]]'' ||ಕ್ರಿಸ್ಟಿನಾ || [[ತಮಿಳು ಭಾಷೆ|ತಮಿಳು]] ಚಿತ್ರ ||<ref>{{Cite web|url=https://www.zee5.com/movies/details/valimai/0-0-1z5117562|title=Watch Valimai (2022) Full HD Tamil Movie Online on ZEE5|website=ZEE5}}</ref>
|-
|2023||''[[ಕ್ವೀನ್ ಎಲಿಜಬೆತ್ (2023 ಚಲನಚಿತ್ರ)|ಕ್ವೀನ್ ಎಲಿಜಬೆತ್]]''||ಸೆಲೆಬ್ರಿಟಿ||
|-
|2025 ||''[[ಡಿಟೆಕ್ಟಿವ್ ಉಜ್ಜ್ವಲನ್]]'' || ದಿವ್ಯ || ಅತಿಥಿ ಪಾತ್ರ||<ref>{{Cite web|url=https://www.hollywoodreporterindia.com/features/insight/detective-ujjwalan-directors-to-make-big-budget-superhero-film-next-exclusive|title=Exclusive {{!}} 'Detective Ujjwalan' Directors To Make Big-Budget Superhero Film Next|date=18 July 2025|work=Hollywood Reporter India}}</ref>
|}
=== ಲಘು ಚಿತ್ರಗಳು ===
{| class="wikitable"
! ವರ್ಷ !! ಚಿತ್ರ !! ಪಾತ್ರ !! {{Abbr|ಉಲ್ಲೇಖ|ಉಲ್ಲೇಖ}}
|-
| 2015 || ''[[ಪುಂಚಿರಿಕ್ಕು ಪರಸ್ಪರಂ]]'' || ಬೈಕರ್ ಗರ್ಲ್ ||<ref>{{cite news |author=Sanjith Sidhardhan |title=Mammootty, Mohanlal unite for a 'smile' venture |url=https://timesofindia.indiatimes.com/entertainment/malayalam/movies/news/Mammootty-Mohanlal-unite-for-a-smile-venture/articleshow/49630837.cms |access-date=3 December 2015 |work=[[The Times of India]] |date=3 November 2015}}</ref>
|-
|2017||''ಹ್ಯಾಂಡ್ ಆಫ್ ಗಾಡ್''|| ಸ್ವತಃ (ಕಾರ್ ಗರ್ಲ್) ||<ref>{{Cite web |title=Hand of God |date=5 September 2017 |via=[[YouTube]] |url=https://www.youtube.com/watch?v=stOX8s3utjg}}</ref>
|-
|2023||''ದಿ ಡಿಲೇ''||ನೆರೆಹೊರೆಯವರು||
|}
=== ದೂರದರ್ಶನ ===
==== ನಿರೂಪಕಿಯಾಗಿ ====
{| class="wikitable sortable"
!ವರ್ಷ!! ಕಾರ್ಯಕ್ರಮ !! ಚಾನೆಲ್ !! ಟಿಪ್ಪಣಿಗಳು
|-
|2008|| ''ಯೆಸ್ ಜ್ಯೂಕ್ಬಾಕ್ಸ್'' || [[ಇಂಡಿಯಾವಿಷನ್]] ||
|-
|2010–2012|| ''[[ಟೇಸ್ಟ್ ಆಫ್ ಕೇರಳ]]'' || [[ಅಮೃತ ಟಿವಿ]] || "ಸೆರಾ" ಎಂದು ಕ್ರೆಡಿಟ್
|-
|2014|| ''[[ಡಿ 4 ಡಾನ್ಸ್]]'' || rowspan=2|[[ಮಳವಿಲ್ ಮನೋರಮ]] || [[ಜ್ಯುವೆಲ್ ಮೇರಿ]] ಅವರನ್ನು ಬದಲಾಯಿಸಿದರು<br />[[ಗೋವಿಂದ್ ಪದ್ಮಸೂರ್ಯ]] ಅವರೊಂದಿಗೆ ಸಹ-ನಿರೂಪಕಿ
|-
|2014–2015|| ''[[ಡಿ 4 ಡಾನ್ಸ್|ಡಿ2 – ಡಿ 4 ಡಾನ್ಸ್]]'' ||[[ಗೋವಿಂದ್ ಪದ್ಮಸೂರ್ಯ]] ಅವರೊಂದಿಗೆ ಸಹ-ನಿರೂಪಕಿ
|-
|2015–2016||''ಸಿನೆಮಾ ಕಂಪನಿ'' ಸೀಸನ್ 2 || [[ಕೌಮುದಿ ಟಿವಿ]] ||
|-
|2015||''[[ಐಐಎಫ್ಎ ಉತ್ಸವಂ]]'' || [[ಸನ್ ಟಿವಿ ನೆಟ್ವರ್ಕ್]] || [[ಸುರಾಜ್ ವೆಂಜಾರಮೂಡ್]] ಅವರೊಂದಿಗೆ
|-
|2015||''ರಾಣಿಪದ್ಮಿನಿಮಾರ್'' || [[ಮಳವಿಲ್ ಮನೋರಮ]] ||
|-
|2015||''ಕಾವ್ಯಕೊಪ್ಪಂ ಜಿಪಿಯುಂ ಪರ್ಲೆಯುಂ'' || [[ಮಳವಿಲ್ ಮನೋರಮ]] ||
|-
|rowspan=2|2016|| ''[[ಡಿ 4 ಡಾನ್ಸ್|ಡಿ3 – ಡಿ 4 ಡಾನ್ಸ್]]'' ||rowspan =2| [[ಮಳವಿಲ್ ಮನೋರಮ]] || ಸಹ-ನಿರೂಪಕ ಅದಿಲ್ ಇಬ್ರಾಹಿಂ
|-
| ''[[ಡಿ 4 ಡಾನ್ಸ್|ಡಿ 4 ಡಾನ್ಸ್ ರೀಲೋಡೆಡ್]]'' || ಸಹ-ನಿರೂಪಕ ಅದಿಲ್ ಇಬ್ರಾಹಿಂ
|-
|2016–2017||''[[ಕಟ್ಟುರುಂಬು]]''||rowspan=2|[[ಫ್ಲವರ್ಸ್ (ಟಿವಿ ಚಾನೆಲ್)|ಫ್ಲವರ್ಸ್]]||
|-
|rowspan=2|2017||''ಫ್ಲವರ್ಸ್ ಟಿವಿ ಅವಾರ್ಡ್ಸ್ 2017''||ಅವಾರ್ಡ್ ಶೋ
|-
|''[[2ನೇ ಐಐಎಫ್ಎ ಉತ್ಸವಂ]]''||[[ಸೂರ್ಯ ಟಿವಿ]]||[[ಟಿನಿ ಟಾಮ್]] ಅವರೊಂದಿಗೆ
|-
|2017–2018||''ಮನ್ಯ ಮಹಾಜನಂಗಳೆ''||[[ಕೈರಳಿ ಟಿವಿ]]|| ತೀರ್ಪುಗಾರರಾಗಿಯೂ
|-
|2018–ಪ್ರಸ್ತುತ||''ಪರ್ಲ್ ಮಾಣಿ ಶೋ''||[[ಯೂಟ್ಯೂಬ್]]||ಪರ್ಲ್ ಪ್ರೊಡಕ್ಷನ್ಸ್
|-
|2017||''ತಮಾರ್ ಪದಾರ್''||[[ಫ್ಲವರ್ಸ್ (ಟಿವಿ ಚಾನೆಲ್)|ಫ್ಲವರ್ಸ್]]|| [[ಲಕ್ಷ್ಮಿ (ದೂರದರ್ಶನ ನಿರೂಪಕಿ)|ಲಕ್ಷ್ಮಿ ನಕ್ಷತ್ರ]] ಅವರಿಂದ ಬದಲಾಯಿಸಲ್ಪಟ್ಟರು
|-
|Rowspan=6|2018||''[[ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ಸೌತ್]]''||rowspan=3|[[ಏಷ್ಯಾನೆಟ್ (ಟಿವಿ ಚಾನೆಲ್)|ಏಷ್ಯಾನೆಟ್]]||ಅವಾರ್ಡ್ ಶೋ
|-
|''[[ಏಷ್ಯಾನೆಟ್ ಕಾಮಿಡಿ ಅವಾರ್ಡ್ಸ್]]'' ||ಅವಾರ್ಡ್ ಶೋ
|-
|''ಏಷ್ಯಾನೆಟ್ ಟೆಲಿವಿಷನ್ ಅವಾರ್ಡ್ಸ್ 2018'' ||ಅವಾರ್ಡ್ ಶೋ
|-
|''[[ಮಿಡುಕ್ಕಿ]]''||rowspan=3|[[ಮಳವಿಲ್ ಮನೋರಮ]]||
|-
|''ಅಮ್ಮ ಮಳವಿಲ್ಲು ವಿಳಂಬರಂ''||
|-
|''ನಾಯಿಕಾ ನಾಯಕನ್''|| ಅಶ್ವತಿ ಶ್ರೀಕಾಂತ್ ಅವರಿಂದ ಬದಲಾಯಿಸಲ್ಪಟ್ಟರು
|-
|2019||''[[8ನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್]]''||ಸೂರ್ಯ ಟಿವಿ||ಅವಾರ್ಡ್ ಶೋ
|-
|2019–2020||''ಡಾನ್ಸ್ ಜೋಡಿ ಡಾನ್ಸ್ 3.0''||[[ಜೀ ತಮಿಳ್]]||[[ತಮಿಳು ಭಾಷೆ|ತಮಿಳು]] ರಿಯಾಲಿಟಿ ಶೋ<br />[[ದೀಪಕ್ ದಿನಕರ್]] ಅವರೊಂದಿಗೆ ಸಹ-ನಿರೂಪಕಿ
|-
|rowspan=2|2020||''[[ಫನ್ನಿ ನೈಟ್ಸ್ ವಿತ್ ಪರ್ಲ್ ಮಾಣಿ]]''||ಜೀ ಕೇರಳಂ||[[ಸುರಾಜ್ ವೆಂಜಾರಮೂಡ್]] ಅವರಿಂದ ಬದಲಾಯಿಸಲ್ಪಟ್ಟು 'ಫನ್ನಿ ನೈಟ್ಸ್' ಎಂದು ಪುನಃ ಪ್ರಾರಂಭಿಸಲಾಯಿತು
|-
|''ಲಾಕ್ಡೌನ್ ಟಾಕ್ಸ್''||[[ಯೂಟ್ಯೂಬ್]]||ಕ್ವಾರಂಟೀನ್ ವಿಶೇಷ ಶೋ
|-
|2021
|''[[10ನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್]]''
|[[ಸೂರ್ಯ ಟಿವಿ]]
|ಅವಾರ್ಡ್ ಶೋ<br />[[ಗೋವಿಂದ್ ಪದ್ಮಸೂರ್ಯ]] ಅವರೊಂದಿಗೆ
|-
|2022||''ಕುಕ್ ವಿತ್ ಕಾಮಿಡಿ ''||ಏಷ್ಯಾನೆಟ್||
|}
==== ಇತರ ಪಾತ್ರಗಳು ====
{| class="wikitable sortable"
! ವರ್ಷ!!ಶೋ !! ಪಾತ್ರ!!ಚಾನೆಲ್ !! ಟಿಪ್ಪಣಿಗಳು
|-
|2011–2012||''ಚುಮ್ಮ''||ಸೇರಾ||[[ಅಮೃತ ಟಿವಿ]]||ಟಿವಿ ಸರಣಿ
|-
|2015||''[[ಡಿ 4 ಡಾನ್ಸ್|ಥೆಂಗಕೋಲ ಮಂಗತೋಳಿ]]''||[[ಗೋವಿಂದ್ ಪದ್ಮಸೂರ್ಯ]] ಅವರೊಂದಿಗೆ ಸ್ವತಃ|| rowspan="4" |[[ಮಳವಿಲ್ ಮನೋರಮ]]||ಸಂಗೀತ ಆಲ್ಬಮ್
|-
|2015||''ಸೆಲಿಬ್ರೇಟ್ ಹ್ಯಾಪಿನೆಸ್''||ಸ್ವತಃ || ಸಂಗೀತ ವೀಡಿಯೊ
|-
|2016||''[[ಡಿ 4 ಡಾನ್ಸ್|ದೇಶದಾನಕಿಲಿ ಕರಯಾರಿಲ]]''||ಸ್ವತಃ||ವೀಡಿಯೊ ಆಲ್ಬಮ್
|-
|2017||''[[ಡಿ 4 ಡಾನ್ಸ್|ಹ್ಯಾಂಡ್ ಆಫ್ ಗಾಡ್]]''||ಕಾರ್ ಗರ್ಲ್ ಆಗಿ ಸ್ವತಃ||ಲಘು ಚಿತ್ರ
|-
|2017||''ಮಿನಿಟ್ ಟು ವಿನ್ ಇಟ್''||ಸ್ಪರ್ಧಿ||ಗೇಮ್ ಶೋ
|-
|2018 || ''[[ಬಿಗ್ ಬಾಸ್ (ಮಲಯಾಳಂ ಸೀಸನ್ 1)]]'' || ಸ್ಪರ್ಧಿಯಾಗಿ ಸ್ವತಃ ||[[ಏಷ್ಯಾನೆಟ್ (ಟಿವಿ ಚಾನೆಲ್)|ಏಷ್ಯಾನೆಟ್]]|| ರಿಯಾಲಿಟಿ ಶೋ; {{won|1ನೇ ರನ್ನರ್-ಅಪ್}} <ref>{{Cite news |url=https://timesofindia.indiatimes.com/tv/news/malayalam/bigg-boss-malayalam-live-blog-the-curtain-unveils-for-the-grand-show/articleshow/64722113.cms |title=Bigg Boss Malayalam highlights: Host Mohanlal locks the contestants with 'Manichithra Poottu' in the house |work=The Times of India |access-date=2 October 2018}}</ref>
|-
|2018–2019||''ಪರ್ಲಿಷ್'' ಸೀಸನ್ 1,2||[[ಶ್ರೀನಿಷ್ ಅರವಿಂದ್]] ಅವರೊಂದಿಗೆ ಪರ್ಲ್||rowspan="2" |[[ಯೂಟ್ಯೂಬ್]]||ಸಂಗೀತ ಆಲ್ಬಮ್ / ವೆಬ್ ಸರಣಿ
|-
|2019||''ಒರು ಕುತು ಕಥ''||[[ಶ್ರೀನಿಷ್ ಅರವಿಂದ್]] / ಶಿಯಾಸ್ ಕರೀಮ್ ಅವರೊಂದಿಗೆ ಪರ್ಲ್||ಸಂಗೀತ ಆಲ್ಬಮ್ / ವೆಬ್ ಸರಣಿ
|-
|2020||''ಕಿಚನ್, ಖನ್ನ & ಕಾನ್ವರ್ಸೇಷನ್ ಸೀಸನ್ 3''||ಶೆಫ್||[[ಹಾಟ್ಸ್ಟಾರ್]]||ಅಡುಗೆ ಶೋ
|-
|2020||''ಪ್ಲಾಸ್ಟಿಕ್&ಇಲಾಸ್ಟಿಕ್''||ಪ್ಲಾಸ್||rowspan=3|ಯೂಟ್ಯೂಬ್||ವೆಬ್ ಸರಣಿ
|-
|2020||''ಅವಸ್ಥ''||rowspan=2|ಐಶ್ವರ್ಯ||ವೆಬ್ ಸರಣಿ
|-
|2020||''ಚೆಲ್ಲಕುಟ್ಟಿಯೇ''||ತಮಿಳು ಸಂಗೀತ ಆಲ್ಬಮ್
|-
|2021||''ಮಾವೇಲಿ''||ಸ್ವತಃ||[[ನೆಟ್ಫ್ಲಿಕ್ಸ್]]||ಲಘು ಚಿತ್ರ
|}
== ಡಿಸ್ಕೋಗ್ರಫಿ ==
{| class="wikitable sortable"
! ವರ್ಷ
! ಹಾಡು
! ಚಿತ್ರ
! ಗೀತರಚನೆಕಾರ
! ಗಾಯಕಿ
! ಸಂಗೀತ ನಿರ್ದೇಶಕ
! ಭಾಷೆ
! ಟಿಪ್ಪಣಿಗಳು
|-
| 2014 || "ಬೆಲ್ಲಿ ಸಾಂಗ್" ||''[[ದಿ ಲಾಸ್ಟ್ ಸಪ್ಪರ್ (2014 ಚಲನಚಿತ್ರ)|ದಿ ಲಾಸ್ಟ್ ಸಪ್ಪರ್]]''|| {{No}} || {{Yes}} ||[[ಗೋಪಿ ಸುಂದರ್]] || ಅರೇಬಿಕ್
|
|-
| 2016 || "ಪಲ್ ಪಲ್" ||''[[ಕಲ್ಯಾಣ ವೈಭೋಗಂ]]''|| {{No}} || {{Yes}} ||[[ಕಲ್ಯಾಣ್ ಕೊಡೂರಿ]] || ತೆಲುಗು
| [[ರಾಹುಲ್ ನಂಬ್ಯಾರ್]] (ಸಹ-ಗಾಯಕ)
|-
| rowspan=2|2018 || "ಟೈಟಲ್ ಸಾಂಗ್" ||''ಪರ್ಲ್ ಮಾಣಿ ಶೋ'' (ವೆಬ್ ಸರಣಿ)|| {{Yes}} || {{Yes}} ||[[ಗೋಪಿ ಸುಂದರ್]] || ಇಂಗ್ಲಿಷ್
|
|-
|| "ಫ್ಲೈ ವಿತ್ ಯು" ||''ಪರ್ಲಿಷ್'' (ವೆಬ್ ಸರಣಿ)|| {{Yes}} || {{Yes}} ||[[ಜೆಸಿನ್ ಜಾರ್ಜ್]] || ತಮಿಳು
| [[ಜೆಸಿನ್ ಜಾರ್ಜ್]] (ಸಹ-ಗಾಯಕ)
|-
| rowspan=3|2019 || "ಹೂ ಆರ್ ಯು" ||rowspan=2|''[[ಹೂ (ಚಲನಚಿತ್ರ)|ಹೂ]]''|| {{Yes}} || {{No}} ||ಮಂಗಲ್ ಸುವರ್ಣನ್ || rowspan=2|ಇಂಗ್ಲಿಷ್
|
|-
|| "ಲೋನ್ಲಿ ಲೇಕ್" || {{Yes}} || {{No}} ||ಮಣಿಕಂಠನ್ ಅಯ್ಯಪ್ಪ ||
|-
|| "ಮುನ್ನಾಲೆ ಪೊಣಾಲೆ" ||''[[ಒರು ಅಡಾರ್ ಲವ್]]''|| {{Yes}} || {{No}} ||[[ಶಾನ್ ರಹ್ಮಾನ್]] || rowspan=3|ತಮಿಳು
|
|-
| rowspan=2|2020 || "ಚೆಲ್ಲಕುಟ್ಟಿಯೇ" || ''ಅವಸ್ಥ'' (ವೆಬ್ ಸರಣಿ)|| {{Yes}} || {{No}} ||[[ಜೆಸಿನ್ ಜಾರ್ಜ್]]
|
|-
|| "ಚೆಲ್ಲಕಣ್ಣನೇ" || ಸಂಗೀತ ವೀಡಿಯೊ|| {{Yes}} || {{Yes}} ||[[ಜೆಸಿನ್ ಜಾರ್ಜ್]]
| [[ಜೆಸಿನ್ ಜಾರ್ಜ್]] (ಸಹ-ಗಾಯಕ)
|-
| 2021 || "ಕ್ರೇಜಿ ವರ್ಲ್ಡ್" ||ಸಂಗೀತ ವೀಡಿಯೊ|| {{Yes}} || {{Yes}} ||[[ಜೆಸಿನ್ ಜಾರ್ಜ್]] || ಇಂಗ್ಲಿಷ್
|
|}
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* {{IMDb name|5807496}}
* {{Instagram|pearlemaany}}
* {{Facebook|PearleMaaneyOnline}}
{{authority control}}
{{DEFAULTSORT:Maaney, Pearle}}
[[ವರ್ಗ:ಭಾರತೀಯ ವೀಡಿಯೊ ಜಾಕಿಗಳು]]
[[ವರ್ಗ:ಭಾರತೀಯ ಮಹಿಳಾ ದೂರದರ್ಶನ ನಿರೂಪಕಿಯರು]]
[[ವರ್ಗ:ಭಾರತೀಯ ದೂರದರ್ಶನ ನಿರೂಪಕಿಯರು]]
[[ವರ್ಗ:ಮಲಯಾಳಂ ಚಲನಚಿತ್ರ ನಟಿಯರು]]
[[ವರ್ಗ:ಭಾರತೀಯ ಚಲನಚಿತ್ರ ನಟಿಯರು]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ಮಲಯಾಳಂ ದೂರದರ್ಶನ ನಟಿಯರು]]
[[ವರ್ಗ:ಭಾರತೀಯ ದೂರದರ್ಶನ ನಟಿಯರು]]
[[ವರ್ಗ:ಕೊಚ್ಚಿಯ ನಟಿಯರು]]
[[ವರ್ಗ:21ನೇ ಶತಮಾನದ ಭಾರತೀಯ ನಟಿಯರು]]
[[ವರ್ಗ:ಆಲುವಾದ ವ್ಯಕ್ತಿಗಳು]]
[[ವರ್ಗ:ಎರ್ನಾಕುಳಂ ಜಿಲ್ಲೆಯ ನಟರು]]
[[ವರ್ಗ:1989 ಜನನಗಳು]]
[[ವರ್ಗ:ಕೊಚ್ಚಿಯ ಗಾಯಕರು]]
[[ವರ್ಗ:ಕೇರಳದ ಮಹಿಳಾ ಸಂಗೀತಗಾರ್ತಿಯರು]]
[[ವರ್ಗ:21ನೇ ಶತಮಾನದ ಭಾರತೀಯ ಮಹಿಳಾ ಗಾಯಕಿಯರು]]
[[ವರ್ಗ:ಬಿಗ್ ಬಾಸ್ (ಮಲಯಾಳಂ ಟಿವಿ ಸರಣಿ) ಸ್ಪರ್ಧಿಗಳು]]
[[ವರ್ಗ:ಕ್ರೈಸ್ಟ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು]]
[[ವರ್ಗ:ಹಿಂದಿ ಚಲನಚಿತ್ರ ನಟಿಯರು]]
[[ವರ್ಗ:ತೆಲುಗು ಚಲನಚಿತ್ರ ನಟಿಯರು]]
[[ವರ್ಗ:ತಮಿಳು ಚಲನಚಿತ್ರ ನಟಿಯರು]]
[[ವರ್ಗ:ಭಾರತೀಯ ಯೂಟ್ಯೂಬರ್ಗಳು]]
[[ವರ್ಗ:2011ರಲ್ಲಿ ಪ್ರಾರಂಭವಾದ ಯೂಟ್ಯೂಬ್ ಚಾನೆಲ್ಗಳು]]
[[ವರ್ಗ:ಮಲಯಾಳಿ ಜನರು]]
[[ವರ್ಗ:ಕೇರಳದ ಕಲಾವಿದರು]]
[[ವರ್ಗ:ಕೇರಳದ ಯೂಟ್ಯೂಬರ್ಗಳು]]
53ujhzg9qag56zq5cqru1b7dkeq0wf6
ಪಳ್ಳಿಪ್ಪುರಂ ಕೋಟೆ
0
179972
1378237
1378059
2026-08-03T06:59:38Z
InternetArchiveBot
69876
Rescuing 1 sources and tagging 1 as dead.) #IABot (v2.0.9.5
1378237
wikitext
text/x-wiki
{{Infobox military installation
| name = ಪಳ್ಳಿಪ್ಪುರಂ ಕೋಟೆ
| native_name = Paliport Castelo em Cima (Castle on the Top)
| part_of =
| location = [[Pallippuram, Ernakulam|Pallippuram]], [[Vyppin]], [[Ernakulam district]]
| image = [[File:Pallipuram Fort 2.jpg|300px]]
| caption = Ruins of the Portuguese fort in Vyppin
| pushpin_map = India Kerala
| map_size = 300
| map_caption = Shown within [[Kerala]]
| type = Island fort
| coordinates = {{coord|10.170|N|76.180|E|type:landmark|display=inline,title}}
| built = 27 September 1503
| builder =
| materials = Stone
| height =
| in_use =
| demolished =
| condition = Structure
| owner = Government of Kerala
| open_to_public = Yes
| controlled_by = * {{flagcountry|Portuguese Empire}} (<small>1503-1661</small>)
* {{flagcountry|The Netherlands}} (<small>1661-1789</small>)
* {{flagcountry|Travancore}} (<small>1789-1858</small>)
* {{flagcountry|British Raj}}
** {{flagcountry|Travancore}} (<small>1858-1947</small>)
* {{flagcountry|India}} (<small>1947-</small>)
| garrison =
| current_commander =
| past_commanders =
| occupants =
| battles =
| events =
| image2 =
| caption2 =
}}
'''ಪಳ್ಳಿಪ್ಪುರಂ ಕೋಟೆ ಅಥವಾ (ಪೇಲ್ಪೋರ್ಟ್ ಕಾಸ್ಟೆಲೊ ಎಮ್ ಸಿಮಾ)''' ದಕ್ಷಿಣ ಭಾರತದ [[ಕೇರಳ]]ದ [[ಎರ್ನಾಕುಳಂ]] ಜಿಲ್ಲೆಯ [[ಪಳ್ಳಿಪ್ಪುರಂ, ಎರ್ನಾಕುಳಂ|ಪಳ್ಳಿಪ್ಪುರಂ]], [[ವೈಪ್ಪಿನ್]] ನಲ್ಲಿರುವ ಒಂದು ಕೋಟೆಯಾಗಿದೆ. ಇದನ್ನು [[ಪೋರ್ಚುಗೀಸ್ ಕೊಚ್ಚಿನ್|ಪೋರ್ಚುಗೀಸ್]] ನಾವಿಕರು 27 ಸೆಪ್ಟೆಂಬರ್ 1503 ರಂದು ಕೇವಲ ಮರದ ದಿಮ್ಮಿಗಳನ್ನು ಬಳಸಿ ನಿರ್ಮಿಸಿದರು, ಮತ್ತು ನಂತರ 1505 ರಲ್ಲಿ ಮರದ ರಚನೆಯನ್ನು ಕಲ್ಲಿನಿಂದ ಬದಲಾಯಿಸಿ ನವೀಕರಿಸಲಾಯಿತು. ಇದು ಭಾರತದಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ [[ಯುರೋಪ್|ಯುರೋಪಿಯನ್]] ಕೋಟೆಯಾಗಿದೆ. ಡಚ್ಚರು 1663 ರಲ್ಲಿ ಈ ಕೋಟೆಯನ್ನು ವಶಪಡಿಸಿಕೊಂಡರು ಮತ್ತು 1789 ರಲ್ಲಿ ಅದನ್ನು [[ತಿರುವಾಂಕೂರು]] ರಾಜ್ಯಕ್ಕೆ ಮಾರಿದರು. ಈ ಕೋಟೆಯು [[ವೈಪೀನ್ ದ್ವೀಪ]]ದ ಉತ್ತರ ತುದಿಯಲ್ಲಿದೆ ಮತ್ತು ಷಡ್ಭುಜಾಕೃತಿಯಲ್ಲಿದೆ, ಇದು ''ಅಯಿಕ್ಕೋಟ'' ಅಥವಾ ''ಅಲಿಕ್ಕೋಟ'' ಎಂದು ಪ್ರಸಿದ್ಧವಾಗಿರುವ ಒಂದು ರೂಪವಾಗಿದೆ.<ref>{{cite web|url=http://www.kerala.gov.in/dept_archaeology/monuments.htm|archive-url=https://web.archive.org/web/20041222115758/http://www.kerala.gov.in/dept_archaeology/monuments.htm|archive-date=2004-12-22|access-date=2014-02-24|publisher=[[Government of Kerala]]|title=Monuments at a Glance}}</ref>
== ಇತಿಹಾಸ ==
ಪಳ್ಳಿಪ್ಪುರಂ ಕೋಟೆಯನ್ನು [[ಪೋರ್ಚುಗೀಸ್ ಭಾರತ|ಪೋರ್ಚುಗೀಸರು]] 27 ಸೆಪ್ಟೆಂಬರ್ 1503 ರಂದು ನಿರ್ಮಿಸಿದರು, ಆರಂಭದಲ್ಲಿ ಮರದಿಂದ ಮತ್ತು 1505 ರ ವೇಳೆಗೆ ಕಲ್ಲಿನಿಂದ ಪುನರ್ನಿರ್ಮಿಸಲಾಯಿತು. ಇದು ಭಾರತದಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಯುರೋಪಿಯನ್ ಕೋಟೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಡಚ್ಚರು 1661/1663 ರಲ್ಲಿ ಈ ಕೋಟೆಯನ್ನು ವಶಪಡಿಸಿಕೊಂಡರು, ನಂತರ ಅದನ್ನು 1789 ರಲ್ಲಿ [[ತಿರುವಾಂಕೂರು]] ರಾಜ್ಯಕ್ಕೆ ಮಾರಿದರು. ಇದು [[ಭಾರತೀಯ ಸ್ವಾತಂತ್ರ್ಯ ಕಾಯ್ದೆ 1947|ಭಾರತದ ಸ್ವಾತಂತ್ರ್ಯ]]ದವರೆಗೂ ತಿರುವಾಂಕೂರಿನ ನಿಯಂತ್ರಣದಲ್ಲಿತ್ತು.<ref name="Palli">{{Cite web |title=Pallipuram Fort- A Passage through Time {{!}} Forts of Kerala {{!}} European Fort {{!}} Vypin Islands {{!}} Kochi {{!}} Kerala |url=https://www.keralatourism.org/kerala-article/2021/pallipuram-fort-passage-through-time/1045 |access-date=2025-07-16 |website=Kerala Tourism |language=en}}</ref> ಪಳ್ಳಿಪ್ಪುರಂ ಕೋಟೆಯನ್ನು 1964 ರಲ್ಲಿ ಪುರಾತತ್ವ ಇಲಾಖೆಯು ಸಂರಕ್ಷಿತ ಸ್ಮಾರಕವೆಂದು ಘೋಷಿಸಿತು.<ref>{{Cite web |date=2024-12-11 |title=Pallipuram Fort |url=https://keralatourisms.com/pallipuram-fort/ |access-date=2025-07-16 |website=Kerala Tourisms |language=en-US }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
ಪಳ್ಳಿಪ್ಪುರಂ ಎಂಬ ಹೆಸರು ಸಮೀಪದಲ್ಲಿರುವ [[ಔವರ್ ಲೇಡಿ ಆಫ್ ಸ್ನೋಸ್ ಬೆಸಿಲಿಕಾ, ಪಳ್ಳಿಪ್ಪುರಂ]] ನಿಂದ ಬಂದಿದೆ ("ಪಲ್ಲಿ" ಎಂದರೆ ಮಲಯಾಳಂನಲ್ಲಿ ಚರ್ಚ್), ಇದನ್ನು ಪೋರ್ಚುಗೀಸರು ಕೋಟೆಯ ಜೊತೆಗೆ ನಿರ್ಮಿಸಿದರು. ದಂತಕಥೆಯ ಪ್ರಕಾರ, ಒಂದು ಅದ್ಭುತ ಮಂಜು [[ಟಿಪ್ಪು ಸುಲ್ತಾನ್|ಟಿಪ್ಪು ಸುಲ್ತಾನನ ದಾಳಿಯಿಂದ]] ಚರ್ಚ್ ಅನ್ನು ಮರೆಮಾಡಿತು, ಅದು ಸ್ನೋಸ್ ಲೇಡಿಗೆ ಸಮರ್ಪಿಸಲು ಪ್ರೇರೇಪಿಸಿತು.<ref>{{Cite web |title=Pallipuram Fort, Kochi, Ernakulam, Kerala Tourism |url=https://www.keralatourism.org/kerala-article/2012/pallipuram-fort-kochi/195 |access-date=2025-07-16 |website=Kerala Tourism |language=en}}</ref>
== ವಾಸ್ತುಶಿಲ್ಪ ==
ಪಳ್ಳಿಪ್ಪುರಂ ಕೋಟೆಯು ಮೂರು ಅಂತಸ್ತಿನ ಎತ್ತರವನ್ನು ಹೊಂದಿದೆ ಮತ್ತು ಷಡ್ಭುಜಾಕೃತಿಯ ಯೋಜನೆಯನ್ನು ಹೊಂದಿದೆ, ಗೋಡೆಗಳು ನೆಲದಿಂದ ಐದು ಅಡಿ ಎತ್ತರದಲ್ಲಿದ್ದು, ಲ್ಯಾಟರೈಟ್, ಚುನಾಂ, ಗ್ರಾನೈಟ್ ಮತ್ತು ಮರದಿಂದ ನಿರ್ಮಿಸಲಾಗಿದೆ; ಪ್ರತಿಯೊಂದು ಮುಖವು ಸರಿಸುಮಾರು 32 ಅಡಿ ಉದ್ದ × 34 ಅಡಿ ಎತ್ತರವಿದ್ದು, ಗೋಡೆಗಳು ಆರು ಅಡಿ ದಪ್ಪವಾಗಿವೆ. ಆರು ಮುಂಭಾಗಗಳಲ್ಲಿ ಪ್ರತಿಯೊಂದೂ ಮೂರು ತೋಪು ರಂಧ್ರಗಳನ್ನು ಒಳಗೊಂಡಿದೆ.<ref>{{Cite web |title=Pallippuram Fort: History, Architecture, and Significance |url=https://www.archaeology.kerala.gov.in/pages/pallippuram-fort-kochi/199 |access-date=2025-07-16 |website=Archaeology}}</ref> ಈ ಕೋಟೆಯು [[ಲ್ಯಾಟರೈಟ್]] ಬ್ಲಾಕ್ಗಳು, ಗ್ರಾನೈಟ್ ಮತ್ತು ಮರದಿಂದ ಮಾಡಿದ ಕಲ್ಲಿನ ದ್ವಾರವನ್ನು ಹೊಂದಿದೆ, ಲ್ಯಾಟರೈಟ್ನ ಗೋಡೆಗಳು, ಗ್ರಾನೈಟ್ನ ಕೇಂದ್ರ ಸ್ತಂಭ ಮತ್ತು ಮರದ ಮೇಲಿನ ಮಹಡಿಯನ್ನು ಹೊಂದಿದೆ. ಇದು 4 ಅಡಿ ಎತ್ತರ ಮತ್ತು 7 ಅಡಿ ಚೌಕಾಕಾರದ ನೆಲಮಾಳಿಗೆಯನ್ನು ಒಳಗೊಂಡಿದೆ, ಇದನ್ನು ಬಹುಶಃ ಬಂದೂಕುಗಳನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತು, ತೋಪುಗಳಿಗಾಗಿ 18 ಹಿಂದಿನ ರಂಧ್ರಗಳು, ಮತ್ತು ಸಮೀಪದಲ್ಲಿರುವ ಹಳೆಯ ಮತ್ತು ಆಧುನಿಕ ಪ್ರಾರ್ಥನಾ ಮಂದಿರಗಳ ಅವಶೇಷಗಳನ್ನು ಹೊಂದಿದೆ.<ref name="Palli"/> ಮಂಜುಮಾತಾ ಚರ್ಚ್ ಅನ್ನು ಕೋಟೆಯ ದಕ್ಷಿಣ ಭಾಗದಲ್ಲಿ ನಿರ್ಮಿಸಲಾಗಿದೆ, ಕೋಟೆ ಮತ್ತು ಚರ್ಚ್ ಎರಡೂ ಪೋರ್ಚುಗೀಸ್ ವಾಸ್ತುಶಿಲ್ಪ ಶೈಲಿಯಲ್ಲಿವೆ.<ref>{{Cite book |last=Pottamkulam |first=George Abraham |url=https://www.google.co.in/books/edition/Kerala_A_Journey_in_Time_Part_II/kvYyEAAAQBAJ?hl=en&gbpv=1&dq=%22Pallipuram+fort%22&pg=PA1456&printsec=frontcover |title=Kerala A Journey in Time Part II: Kingdom Of Cochin & Thekamkoor Rajyam; People Places and Potpourri |date=2021-06-11 |publisher=Notion Press |isbn=978-1-63873-514-4 |language=en}}</ref>
== ಚಿತ್ರಸಂಪುಟ ==
<gallery>
File:Ayakotta information board.jpg|ಮಾಹಿತಿ ಫಲಕ
File:Ayakotta pallipuram (Inner view).jpg|ಅಯಕ್ಕೋಟದ ಒಳ ಪ್ರದೇಶ
File:Pallippuram-fort-02.jpg|ಕೋಟೆಯ ಅವಶೇಷಗಳು (ವಿಶಾಲ ನೋಟ)
File:Pallippuram-fort-03.jpg|ಪ್ರವೇಶದ್ವಾರ
</gallery>
==ಉಲ್ಲೇಖಗಳು==
{{Reflist}}
==ಬಾಹ್ಯ ಕೊಂಡಿಗಳು==
{{commons category|Pallipuram Fort}}
*[http://www.cochin.org/tourism.htm Cochin.org]
*[http://enchantingkerala.org/kerala-monuments/pallippuram-fort.php Enchantingkerala.org] {{Webarchive|url=https://web.archive.org/web/20131211040043/http://enchantingkerala.org/kerala-monuments/pallippuram-fort.php |date=2013-12-11 }}
*[https://www.flickr.com/photos/33367869@N03/3820156758/ ಫ್ಲಿಕರ್ನಲ್ಲಿ ಪಳ್ಳಿಪ್ಪುರಂ ಕೋಟೆ]
{{Forts in India}}
{{Tourism in Kerala}}
[[ವರ್ಗ:ಕೇರಳದ ಕೋಟೆಗಳು]]
[[ವರ್ಗ:ಭಾರತದಲ್ಲಿನ ಪೋರ್ಚುಗೀಸ್ ಕೋಟೆಗಳು]]
[[ವರ್ಗ:ಎರ್ನಾಕುಳಂ ಜಿಲ್ಲೆಯ ಕಟ್ಟಡಗಳು ಮತ್ತು ರಚನೆಗಳು]]
[[ವರ್ಗ:ಪೋರ್ಚುಗೀಸ್ ಇಂಡಿಯಾ ಅರ್ಮಡಾಸ್]]
[[ವರ್ಗ:1503 ರಲ್ಲಿ ಪೂರ್ಣಗೊಂಡ ಕಟ್ಟಡಗಳು]]
[[ವರ್ಗ:1503 ರ ಭಾರತದ ಸ್ಥಾಪನೆಗಳು]]
[[ವರ್ಗ:ಪೋರ್ಚುಗೀಸ್ ಭಾರತದಲ್ಲಿ 1500 ರ ದಶಕದ ಸ್ಥಾಪನೆಗಳು]]
[[ವರ್ಗ:ಭಾರತದ 16 ನೇ ಶತಮಾನದ ಕೋಟೆಗಳು]]
[[ವರ್ಗ:1661 ರ ಡಚ್ ಸಾಮ್ರಾಜ್ಯದ ಸ್ಥಾಪನೆಗಳು]]
[[ವರ್ಗ:ಕೊಚ್ಚಿನ್ ರಾಜ್ಯ]]
9nwm883noqntmrwhm0ob5r5joaz04ek
ಸದಸ್ಯರ ಚರ್ಚೆಪುಟ:ಹರೀಶ ಗೌಡ ಗಂಗೆಕೊಳ್ಳ
3
179985
1378128
2026-08-02T12:08:16Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1378128
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=ಹರೀಶ ಗೌಡ ಗಂಗೆಕೊಳ್ಳ}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೭:೩೮, ೨ ಆಗಸ್ಟ್ ೨೦೨೬ (IST)
th4c7tns3h3mkouofozma8s3q6tzipc
ಸದಸ್ಯರ ಚರ್ಚೆಪುಟ:Punithbhaskar Maragowdanahlli
3
179986
1378132
2026-08-02T12:56:25Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1378132
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Punithbhaskar Maragowdanahlli}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೮:೨೬, ೨ ಆಗಸ್ಟ್ ೨೦೨೬ (IST)
74pautaepmknmy577wwjb22av4u3erz
ಸದಸ್ಯ:Punithbhaskar Maragowdanahlli/ನನ್ನ ಪ್ರಯೋಗಪುಟ
2
179987
1378136
2026-08-02T13:32:37Z
Punithbhaskar Maragowdanahlli
100881
. ಮಂಡ್ಯ ಜಿಲ್ಲೆ, ಮಂಡ್ಯ ತಾಲ್ಲೂಕು, ಕೆರಗೋಡು ಹೋಬಳಿಯ ಮಾರಗೌಡನಹಳ್ಳಿ ಕ್ಷೇತ್ರದಲ್ಲಿ ಸ್ವತಃ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿ, "ಮಾರಗೌಡನಹಳ್ಳಿಯ ದೇವಾಲಯಗಳು ಮತ್ತು ಪಟ್ಟಲದಮ್ಮ ಮಹೋತ್ಸವದ ಜಾನಪದ ಅಧ್ಯಯನ"
1378136
wikitext
text/x-wiki
. ಮಂಡ್ಯ ಜಿಲ್ಲೆ, ಮಂಡ್ಯ ತಾಲ್ಲೂಕು, ಕೆರಗೋಡು ಹೋಬಳಿಯ ಮಾರಗೌಡನಹಳ್ಳಿ ಕ್ಷೇತ್ರದಲ್ಲಿ ಸ್ವತಃ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿ, "ಮಾರಗೌಡನಹಳ್ಳಿಯ ದೇವಾಲಯಗಳು ಮತ್ತು ಪಟ್ಟಲದಮ್ಮ ಮಹೋತ್ಸವದ ಜಾನಪದ ಅಧ್ಯಯನ"
----
== ಪರಿವಿಡಿ ==
== C) ೧. ಗ್ರಾಮದ ಪರಿಚಯ ==
· '''೧.೧''' ಮಾರಗೌಡನಹಳ್ಳಿ ಗ್ರಾಮದ ಐತಿಹ್ಯ
· '''೧.೨''' ಭೌಗೋಳಿಕ ಹಿನ್ನೆಲೆ
· '''೧.೩''' ಧಾರ್ಮಿಕತೆ
· '''೧.೪''' ಶೈಕ್ಷಣಿಕತೆ
· '''೧.೫''' ಆರ್ಥಿಕ ಪರಿಸ್ಥಿತಿ / ಸ್ಥಿತಿಗತಿ
· '''೧.೬''' ಅಡುಗೆ-ಉಡುಗೆ (ಆಹಾರ ಮತ್ತು ಉಡುಪು)
· '''೧.೭''' ರಾಜಕೀಯ
೨. ದೇವಸ್ಥಾನಗಳ ಪರಿಚಯ
೩. ಮಾರಗೌಡನಹಳ್ಳಿಯಲ್ಲಿ ಆಚರಿಸುವ ಹಬ್ಬಗಳು
೪. ಪಟ್ಟಲದ್ದಮ್ಮ ದೇವಿಯ ಜಾನಪದ ಹಿನ್ನೆಲೆ ಮತ್ತು ಉತ್ಸವ
· '''೪.೧''' ಪಟ್ಟಲದ್ದಮ್ಮ ಹುಟ್ಟಿದ ಕಥೆ
· '''೪.೨''' ಪಟ್ಟಲದ್ದಮ್ಮ ಮಹೋತ್ಸವ
· '''೪.೩''' ಸಿದ್ಧತೆ, ಆಚರಣೆ ಮತ್ತು ಅನ್ನಸಂತರ್ಪಣೆ
· '''೪.೪''' ಬಾಯಿಬೀಗ, ಮೀಸಲು ಮತ್ತು ನೀರು ತರುವುದು
· '''೪.೫''' ಕೊಂಡ ಹಾಯುವುದು
· '''೪.೬''' ಮರುದಿನ ಮನೆಮನೆಗೆ ದೇವರ ದರ್ಶನ
· '''೪.೭''' ಸಂಪ್ರದಾಯಗಳು
· '''೪.೮''' ನಮ್ಮೂರಿನ ಜನಪದೀಯ ನಂಬಿಕೆಗಳು ಮತ್ತು ಶಕುನಗಳು
· '''೪.೯''' ಜಾನಪದದ ಕಠೋರ ಹಾಗೂ ಮೋಹಕ ನುಡಿಗಳು
== D) ೫. ಉಪಸಂಹಾರ ==
· '''೫.೧''' ಸಂದರ್ಶಿಸಿದ ವಕ್ತೃಗಳು (ಮಾಹಿತಿ ನೀಡಿದವರು)
· '''೫.೨''' ಆಕರ ಗ್ರಂಥಗಳು (ಸಲಹೆ/ಉಲ್ಲೇಖ ನೀಡಿದ ಗ್ರಂಥಗಳು
== E)ಮುನ್ನುಡಿ ==
ಜನಪದ ಅಥವಾ ಜಾನಪದ ಎನ್ನುವುದು 'ಮಾಯದ ಲೋಕದ ಕನ್ನಡಿ' ಎಂದೇ ಪ್ರಸಿದ್ಧ. ಮೊದಲು ನನಗೆ ಈ ವಿಷಯದ ಬಗ್ಗೆ ಹೆಚ್ಚಿನ ಜ್ಞಾನವಿರಲಿಲ್ಲ. ಆದರೆ ಕ್ಷೇತ್ರಕಾರ್ಯಕ್ಕೆ ಪೂರ್ವಭಾವಿಯಾಗಿ ಸಿದ್ಧತೆ ಮಾಡಿಕೊಂಡು, ಈ ವಿಷಯದ ಅಧ್ಯಯನಕ್ಕೆ ಇಳಿದಾಗ ಹಾಗೂ ನಮ್ಮ ಗ್ರಾಮದ ಬಗ್ಗೆ ಆಳವಾಗಿ ತಿಳಿದಾಗ ಇದರ ನೈಜ ಮಹತ್ವದ ಅರಿವಾಯಿತು. ಈ ವಿಷಯವನ್ನು ಆಯ್ಕೆ ಮಾಡಿಕೊಂಡ ಮೇಲೆ ನಮ್ಮ ಸಂಸ್ಕೃತಿಯ ಆಳ-ಅಗಲ, ತೀವ್ರತೆ ಹಾಗೂ ಅದರ ಪ್ರಯೋಜನಗಳು ತಿಳಿಯಲ್ಪಟ್ಟವು. ನಮ್ಮೂರಿನ ಜಾನಪದೀಯ ಅಂಶಗಳು ಮತ್ತು ಇಲ್ಲಿನ ಸಾಂಸ್ಕೃತಿಕ ಪರಂಪರೆಯ ಪರಿಚಯ ನನಗಾಯಿತು.
ಪದವಿ ಕೋರ್ಸ್ನ ಕೊನೆಯ ವರ್ಷದಲ್ಲಿ ಜಾನಪದ ಕ್ಷೇತ್ರಕಾರ್ಯವನ್ನು (Field Work) ಪಠ್ಯಕ್ರಮದಲ್ಲಿ ಅಳವಡಿಸಿರುವುದು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿದೆ. ಒಬ್ಬ ವ್ಯಕ್ತಿ ಕ್ಷೇತ್ರಕ್ಕಿಳಿದು (Field) ಪ್ರತ್ಯಕ್ಷವಾಗಿ ಅಧ್ಯಯನ ನಡೆಸಿದಾಗ ಮಾತ್ರ ಆ ವಿಷಯದ ನೈಜ ಚಿತ್ರಣ ದೊರೆಯಲು ಸಾಧ್ಯ.
ವಿಶ್ವವಿದ್ಯಾನಿಲಯಗಳು ಕೇವಲ ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಿ ಕಳುಹಿಸುವ ಯಂತ್ರಗಳಾಗಬಾರದು. ಬದಲಿಗೆ, ಪ್ರಪಂಚದ ಎಲ್ಲಾ ವಿಷಯಗಳನ್ನು ಚಿಂತಿಸಿ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಂಗತಿಗಳನ್ನು ಮನನ ಮಾಡಿಕೊಂಡು ಅಧ್ಯಯನ ನಡೆಸಲು ಹಾಗೂ ಅದರ ಫಲವನ್ನು ಸಮಾಜಕ್ಕೆ ತಲುಪಿಸಲು ಪೂರಕವಾಗಿ ಕಾರ್ಯನಿರ್ವಹಿಸಬೇಕು. ಆ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾನಿಲಯಗಳು ಹೆಜ್ಜೆ ಇಡಬೇಕಿದೆ.
ನನಗೆ ಈ ಜಾನಪದ ಕ್ಷೇತ್ರಕಾರ್ಯವನ್ನು ಅಧ್ಯಯನ ಮಾಡಲು ನಿಜಕ್ಕೂ ಹೆಮ್ಮೆಯೂ, ಸಂತೋಷವೂ ಎನಿಸಿದೆ. ಪ್ರತಿಯೊಬ್ಬರೂ ತಮ್ಮ ಜಾನಪದ ಮೂಲವನ್ನು ಅರಿಯಲೇಬೇಕು ಎನ್ನುವುದು ನನ್ನ ಅನಿಸಿಕೆ. ನಮ್ಮ ಸುತ್ತಮುತ್ತಲಿನ ಸಂಸ್ಕೃತಿಯನ್ನು ತಿಳಿದುಕೊಳ್ಳುವುದು ಕೇವಲ ಅಂಕಗಳನ್ನು ಗಳಿಸಲು ಅಷ್ಟೇ ಅಲ್ಲದೆ, ನಮ್ಮ ಭವಿಷ್ಯದ ದಾರಿಯನ್ನು ಸುಗಮಗೊಳಿಸಿಕೊಳ್ಳಲು ಸಹಾಯಕವಾಗುತ್ತದೆ. ರಾಷ್ಟ್ರವನ್ನು ಸುಂದರವಾಗಿ ಕಟ್ಟುವ ಜವಾಬ್ದಾರಿಯನ್ನು ಹೊತ್ತಿರುವ ಇಂದಿನ ಯುವಪೀಳಿಗೆ, ಜಾನಪದದ ಮಹತ್ವವನ್ನು ಅರಿತು ಅದರಲ್ಲಿಡಗಿರುವ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಲಿ ಎಂದು ಆಶಿಸುತ್ತೇನೆ.
ಈ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ 'ಜಾನಪದ ಎಂದರೇನು? ಅದರ ವಸ್ತು-ವಿಷಯ ಎಷ್ಟು ಸೊಗಸಾಗಿದೆ? ಅದರ ಮಹತ್ವ ಹಾಗೂ ಪ್ರಸ್ತುತ ದಿನಗಳಲ್ಲಿ ಅದಕ್ಕಿರುವ ಸ್ಥಾನಮಾನಗಳೇನು?' ಎಂಬುದನ್ನು ತಿಳಿಸಿಕೊಟ್ಟು, ಈ ಪ್ರಬಂಧ ಬರೆಯಲು ಮಾರ್ಗದರ್ಶನ ನೀಡಿದ ಪೂಜ್ಯ ಗುರುಗಳಾದ ಶ್ರೀ ಹೆಚ್. ಎನ್. ಮರಿಯಯ್ಯನವರಿಗೂ ಹಾಗೂ ಶ್ರೀ ಛಾಯಾವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ಹಾಗೆಯೇ, ಈ ಕ್ಷೇತ್ರಕಾರ್ಯದ ಮಾಹಿತಿಯನ್ನು ಅತ್ಯಂತ ಪ್ರೀತಿಯಿಂದ ನೀಡಿ ಸಹಕರಿಸಿದ ನಮ್ಮ ಗ್ರಾಮಸ್ಥರು, ನನ್ನ ಕುಟುಂಬ ವರ್ಗದವರಾದ ತಾತ-ಅಜ್ಜಿ (ಶ್ರೀ ಚಿಕ್ಕಲಿಂಗೇಗೌಡ (ಕೆಂಚೇಗೌಡ) ಮತ್ತು ಶ್ರೀಮತಿ ನಿಂಗಮ್ಮ), ಈ ಪ್ರಬಂಧವು ಸುಂದರವಾಗಿ ಮೂಡಿಬರಲು ಕಂಪ್ಯೂಟರ್ನಲ್ಲಿ ಮುದ್ರಿಸಿಕೊಟ್ಟ ಚಿಕ್ಕಮ್ಮನವರಾದ ಶ್ರೀಮತಿ ಕೆ. ಪಿ. ಹೇಮಾವತಿ ರಾಮಕೃಷ್ಣ ('ನಮಿತಾ ಎಂಟರ್ಪ್ರೈಸಸ್'), ನನಗೆ ಸದಾ ಸಹಕಾರ ನೀಡಿದ ನನ್ನ ಆತ್ಮೀಯ ಮಿತ್ರರಾದ ತೃತೀಯ ಬಿ.ಎ. ಇಂಗ್ಲಿಷ್ ವಿಭಾಗದ ಕೆ. ಟಿ. ಮಹೇಶ್, ಶ್ರೀನಿವಾಸ್, ಭರತ್, ಅನಿಲ್, ನಟರಾಜು, ವಿಜಿಕುಮಾರ್, ರಾಜಶೇಖರ್, ಕಾಂತ, ಪ್ರದೀಪ್, ಕುಮಾರ್, ನಂದೀಶ್, ಯೋಗನಂದಸ್ವಾಮಿ, ಮಧು, ಸಂತೋಷ್ ಹಾಗೂ ನನ್ನ ಸಹೋದರರಾದ ರಘು, ಶೀಮತಿ ನಿಕಿತಾ ಗೌರೀಶಭಾಸ್ಕರ್ & ,ಟುಮೇಶಗೌಡ ಮತ್ತು ಕುಮಾರ್ ತೇಜಸ್ವಿ ಶ್ರೀಮತಿ ಲಕ್ಷ್ಮಿಪುನೀತ್ ಭಾಸ್ಕರ್ & ಶ್ರೀಮತಿ ಚನ್ನಮ್ಮ ಶಿವರಾಮು ಅವರಿಗೆ ಭಾವಪೂರ್ವಕ ಹಾಗೂ ಹೃದಯಪೂರ್ವಕ ಧನ್ಯವಾದಗಳು.
'''ಇಂತಿ ತಮ್ಮ ವಿಧೇಯ,'''
'''ಎಂ. ಬಿ. ಪುನೀತಭಾಸ್ಕರ್'''
ನಂದಣಿ ಸಂಖ್ಯೆ (Reg. No.): '''ಎಲ್. ೪೧೩೧೧೦'''
== F) ೧. ಗ್ರಾಮದ ಪರಿಚಯ: ಮಾರಗೌಡನಹಳ್ಳಿ ==
ಮಾರಗೌಡನಹಳ್ಳಿಯು ಮಂಡ್ಯ ಜಿಲ್ಲಾ ಕೇಂದ್ರದಿಂದ ಸುಮಾರು ೧೮ ಕಿ.ಮೀ. ದೂರದಲ್ಲಿದ್ದು, ಮಂಡ್ಯ ತಾಲ್ಲೂಕಿನ ಕೆರಗೋಡು ಹೋಬಳಿ ವ್ಯಾಪ್ತಿಗೆ ಸೇರುತ್ತದೆ. 'ಎಂ.ಜಿ. ಹಳ್ಳಿ' ಎಂದೇ ಪ್ರಸಿದ್ಧವಾಗಿರುವ ಈ ಗ್ರಾಮವು ಸ್ವತಂತ್ರ ಗ್ರಾಮ ಪಂಚಾಯತಿಯಾಗಿದೆ. ಇದರ ವ್ಯಾಪ್ತಿಗೆ ಶಿವಾರ, ಸೋಲಿಗಾರ ಕಾಲೋನಿ ಹಾಗೂ ಮಾರಗೌಡನಹಳ್ಳಿ ವ್ಯವಸಾಯ ಕಾಲೋನಿಗಳು ಸೇರುತ್ತವೆ. ಈ ಗ್ರಾಮವು ಸುಮಾರು ೩ ಕಿ.ಮೀ. ಉದ್ದ ಮತ್ತು ೩ ಕಿ.ಮೀ. ಅಗಲದ ವಿಸ್ತೀರ್ಣವನ್ನು ಹೊಂದಿದೆ. ಕಾವೇರಿ ನದಿಯ ನಾಲೆಗಳು ಗ್ರಾಮದ ಭಾಗವಾಗಿ ಹರಿಯುವುದರಿಂದ ಹಾಗೂ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುವುದರಿಂದ, ಈ ಊರು ಸದಾ ಅಚ್ಚಹಸಿರಿನಿಂದ ಕಂಗೊಳಿಸುತ್ತಿರುತ್ತದೆ.
ಗ್ರಾಮವು ಸುಮಾರು ೭,೦೦೦ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ೧,೫೦೦ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಊರಿನಲ್ಲಿ ಒಕ್ಕಲಿಗರು, ವಿಶ್ವಕರ್ಮ, ಅಗಸರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಯ್ಯಂಗಾರ್, ಕುರುಬ ಹಾಗೂ ಶೆಟ್ಟಿ ಜನಾಂಗ ಸೇರಿದಂತೆ ಹಲವು ಸಮುದಾಯಗಳ ಜನರಿದ್ದಾರೆ. ಸಾಮಾನ್ಯವಾಗಿ ಇತರ ಊರುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನವಸತಿಗಳು ಊರ ಹೊರಗಿರುವುದು ಕಂಡುಬರುತ್ತದೆ. ಆದರೆ, ನಮ್ಮ ಮಾರಗೌಡನಹಳ್ಳಿಯಲ್ಲಿ ಎಲ್ಲ ಜನಾಂಗದವರೂ ಊರಿನ ಮುಖ್ಯ ಭಾಗದಲ್ಲೇ ಒಂದಾಗಿ ಬಾಳುತ್ತಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ, ಕಲಹಗಳಿಗೆ ಆಸ್ಪದ ನೀಡದೆ, 'ಹಾಲಿಗೆ ಜೇನು ಬೆರೆತಂತೆ' ಸಾಮರಸ್ಯದಿಂದ ಜೀವಿಸುತ್ತಿರುವುದು ಈ ಗ್ರಾಮದ ವಿಶೇಷತೆಯಾಗಿದೆ.
== G) ಆರ್ಥಿಕತೆ ಮತ್ತು ಕೃಷಿ ==
ಕಾವೇರಿ ನೀರಾವರಿ ಸೌಲಭ್ಯವಿರುವುದರಿಂದ ಗ್ರಾಮದ ಭೂಮಿ ಅತ್ಯಂತ ಫಲವತ್ತಾಗಿದೆ. ಕಬ್ಬು, ಭತ್ತ ಮತ್ತು ರಾಗಿ ಇಲ್ಲಿನ ಮುಖ್ಯ ಬೆಳೆಗಳಾಗಿದ್ದು, ಇತ್ತೀಚಿನ ದಿನಗಳಲ್ಲಿ ರೇಷ್ಮೆ ಕೃಷಿಯಲ್ಲೂ ಗ್ರಾಮಸ್ಥರು ಉತ್ತಮ ಪ್ರಗತಿಯನ್ನು ಕಂಡಿದ್ದಾರೆ. ಗ್ರಾಮದಲ್ಲಿ ಸುಮಾರು ೨೫ ಅಲೆಮನೆಗಳಿದ್ದು, ಹಿಂದೆ ಇವುಗಳಿಂದ ಒಳ್ಳೆಯ ಆದಾಯ ಬರುತ್ತಿತ್ತು (ಇತ್ತೀಚೆಗೆ ಕಬ್ಬು ಅರೆಯುವುದು ಕಡಿಮೆಯಾಗಿದೆ). ಧಾನ್ಯಗಳ ಜೊತೆಗೆ ವಾಣಿಜ್ಯ ಬೆಳೆಗಳನ್ನೂ ಇಲ್ಲಿ ಬೆಳೆಯಲಾಗುತ್ತದೆ.
ಗ್ರಾಮದ ಪ್ರಮುಖ ರಸ್ತೆಗಳು ಅಗಲವಾಗಿದ್ದು, 'ರಾಜಬೀದಿ'ಗಳಂತೆ ಕಂಗೊಳಿಸುತ್ತವೆ. ನೈಸರ್ಗಿಕವಾಗಿ ಈ ಊರು ನೋಡುಗರ ಕಣ್ಣಿಗೆ ಅತ್ಯಂತ ಸುಂದರವಾಗಿ ಕಾಣಿಸುತ್ತದೆ. ಪಕ್ಕದಲ್ಲೇ ಇರುವ 'ಶಿವಾರಗುಡ್ಡ', ಸೊಗಸಾದ ದೇವಾಲಯಗಳು, ಸ್ವಚ್ಛವಾದ ರಸ್ತೆಗಳು ಹಾಗೂ ಇಲ್ಲಿನ ಜನರ ಸೌಮ್ಯತೆ ಮತ್ತು ಸೌಹಾರ್ದತೆಯ ನಡವಳಿಕೆ ಈ ಗ್ರಾಮದ ನೈಜ ಸೌಂದರ್ಯಕ್ಕೆ ಸಾಕ್ಷಿಯಾಗಿವೆ. ರೈತರು ಮತ್ತು ಉದ್ಯೋಗಿಗಳು ಪರಸ್ಪರ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದು, ಕಾವೇರಿಯ ನಾಲೆಗಳು, ಕೆರೆಗಳು ಹಾಗೂ ಕಾಲುವೆಗಳು ಊರಿನ ಸಮೃದ್ಧಿಯನ್ನು ಹೆಚ್ಚಿಸಿವೆ.
== H) ಮೂಲಸೌಕರ್ಯ ಮತ್ತು ಶಿಕ್ಷಣ ==
ಗ್ರಾಮದಲ್ಲಿ ಕುಡಿಯುವ ನೀರಿನ ಸೌಲಭ್ಯ ಅತ್ಯುತ್ತಮವಾಗಿದೆ. ಜಿಲ್ಲಾ ಪಂಚಾಯತ್ ನಿರ್ಮಿಸಿರುವ ಎರಡು ಬೃಹತ್ ನೀರಿನ ಟ್ಯಾಂಕ್ಗಳ ಮೂಲಕ ಪ್ರತಿಯೊಂದು ರಸ್ತೆಗೂ ನಳದ (ನಲ್ಲಿ) ಸಂಪರ್ಕವನ್ನು ಕಲ್ಪಿಸಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣದ ಜೊತೆಗೆ ಪ್ರೌಢಶಾಲೆ ಹಾಗೂ ನರ್ಸರಿ ಶಾಲೆಗಳೂ ಇಲ್ಲಿವೆ. ಅಷ್ಟೇ ಅಲ್ಲದೆ, ವಯಸ್ಕರ ಶಿಕ್ಷಣಕ್ಕೂ ಅವಕಾಶವಿದೆ.
ಪುಟ್ಟ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರಗಳಿದ್ದು, ಮಕ್ಕಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಬಿಸಿಊಟದ ವ್ಯವಸ್ಥೆಯಿದೆ. "ಊರಿನ ಪ್ರತಿಯೊಬ್ಬ ಮಗುವೂ ಕಡ್ಡಾಯವಾಗಿ ವಿದ್ಯಾಭ್ಯಾಸ ಪಡೆಯಬೇಕು" ಎನ್ನುವುದು ಇಲ್ಲಿನ ಹಿರಿಯರ ಮುಖ್ಯ ಆಶಯವಾಗಿದೆ. ಊರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘಗಳಿದ್ದು, ಗ್ರಾಮಸ್ಥರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿವೆ.
== I) ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ==
ಮಾರಗೌಡನಹಳ್ಳಿಯಲ್ಲಿ ನಡೆಯುವ ಪ್ರತಿಯೊಂದು ಶುಭ ಕಾರ್ಯಕ್ರಮಗಳಲ್ಲೂ ಯುವಕರ ಸಂಘ ಹಾಗೂ ಮಹಿಳಾ ಸಂಘಗಳು ಸಕ್ರಿಯವಾಗಿ ಭಾಗವಹಿಸಿ, ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸುತ್ತವೆ. ಊರಿನಲ್ಲಿ ಹಲವು ಸಂಘ-ಸಂಸ್ಥೆಗಳು ಕಾರ್ಯಾಚರಿಸುತ್ತಿವೆ.
ಐತಿಹಾಸಿಕವಾಗಿ ನೋಡಿದರೆ, ಈ ಗ್ರಾಮಕ್ಕೆ ಬೇರೆ ಬೇರೆ ಪ್ರದೇಶಗಳಿಂದ ಬಂದು ನೆಲೆಸಿದ ಸಮುದಾಯಗಳೂ ಇವೆ. ಮುಖ್ಯವಾಗಿ ಕಂಚಿ, ಡಣಾಯನಕಪುರ, ಮೈಸೂರು ಹಾಗೂ ತುಮಕೂರು ಸುತ್ತಮುತ್ತಲಿನ ಪ್ರದೇಶಗಳಿಂದ ಬಂದ ಜನ ಇಲ್ಲಿದ್ದಾರೆ. ಊರಿನಲ್ಲಿ ಹಳೆಯ ಶೈಲಿಯ ಮಣ್ಣಿನ ಗೋಡೆಯ ಮನೆಗಳು, ಗುಡಿಸಲುಗಳು, ಮಂಗಳೂರು ಹೆಂಚಿನ ಮನೆಗಳ ಜೊತೆಗೆ ಆಧುನಿಕ ಶೈಲಿಯ ಸುಂದರ ಕಟ್ಟಡಗಳನ್ನೂ ಕಾಣಬಹುದು.
ಮಾರಗೌಡನಹಳ್ಳಿಯನ್ನು '''<nowiki/>'ದೇವಾಲಯಗಳ ಬೀಡು'<nowiki/>''' ಎಂದರೂ ತಪ್ಪಾಗಲಾರದು. ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆಯ ಹಬ್ಬವಾದ '''<nowiki/>'ಪಟ್ಟಲದ್ದಮ್ಮನ ಮಹೋತ್ಸವ'''' ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ. ಆಧುನಿಕ ಸೌಕರ್ಯಗಳನ್ನು ಮೈಗೂಡಿಸಿಕೊಂಡಿದ್ದರೂ, ಜಾನಪದೀಯ ಸೊಗಡನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿರುವುದು ನಮ್ಮ ಮಾರಗೌಡನಹಳ್ಳಿಯ ಹೆಮ್ಮೆಯಾಗಿದೆ.
.
== J) ೧.೧ ಮಾರಗೌಡನಹಳ್ಳಿಯ ಐತಿಹ್ಯ ==
ಮಾರಗೌಡನಹಳ್ಳಿ ಎಂಬ ಹೆಸರು ಈ ಗ್ರಾಮಕ್ಕೆ ಹೇಗೆ ಬಂತು ಎಂಬುದಕ್ಕೆ ಯಾವುದೇ ಸ್ಪಷ್ಟವಾದ ಶಾಸನಬದ್ಧ ಆಧಾರಗಳು ಅಥವಾ ಐತಿಹಾಸಿಕ ದಾಖಲೆಗಳು ದೊರೆಯುವುದಿಲ್ಲ. ಇದೇ ಹೆಸರಿನ ಗ್ರಾಮಗಳನ್ನು ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಇತರ ಭಾಗಗಳಲ್ಲೂ ಕಾಣಬಹುದಾಗಿದೆ.
ಜನಪದರ ಮೌಖಿಕ ಐತಿಹ್ಯ ಹಾಗೂ ಹಿರಿಯರ ನಂಬಿಕೆಯ ಪ್ರಕಾರ, ಈ ಗ್ರಾಮವನ್ನು ಆರಂಭದಲ್ಲಿ ಒಕ್ಕಲಿಗ ಜನಾಂಗದವರು ನಿರ್ಮಿಸಲಿಲ್ಲ. ಬದಲಿಗೆ, '''ವಿಶ್ವಕರ್ಮ ಮತ್ತು ಅಗಸ (ಮಡಿವಾಳ) ಜನಾಂಗದವರು''' ಮೊದಲು ಬಂದು ಇಲ್ಲಿ ನೆಲೆಸಿ, ಗ್ರಾಮವನ್ನು ನಿರ್ಮಿಸಿದರು ಎನ್ನಲಾಗುತ್ತದೆ. ನಂತರದ ದಿನಗಳಲ್ಲಿ ಶೆಟ್ಟರು ಹಾಗೂ ಒಕ್ಕಲಿಗ ಜನಾಂಗದವರು ಪ್ರವೇಶ ಪಡೆದರು ಎಂಬ ಮಾಹಿತಿಯಿದೆ. ಆದ್ದರಿಂದ, "ಇದು ಮೂಲತಃ ವಿಶ್ವಕರ್ಮ ಜನಾಂಗದವರ ಬಿಡಾಗಿತ್ತು" ಎಂಬುದು ಅನೇಕ ಹಿರಿಯರ ಅಭಿಪ್ರಾಯ. ಇಲ್ಲಿನ ಬಹುತೇಕ ಕೃಷಿ ಭೂಮಿಗಳು ಹಿಂದೆ ಅವರ ಆಸ್ತಿಯಾಗಿದ್ದು, ಕಾಲಕ್ರಮೇಣ ಇತರರಿಗೆ ಮಾರಾಟವಾದವು ಎಂದು ಹೇಳಲಾಗುತ್ತದೆ.
ಕ್ಷೇತ್ರಕಾರ್ಯದ ಸಮಯದಲ್ಲಿ ಗಮನ ಸೆಳೆದ ಅತಿ ಮುಖ್ಯ ಸಂಗತಿಯೆಂದರೆ— ಈ ಮಾರಗೌಡನಹಳ್ಳಿ ಗ್ರಾಮಕ್ಕೆ ಬೇರೆ ಬೇರೆ ಸ್ಥಳಗಳಿಂದ, ಬೇರೆ ಬೇರೆ ಕಾಲಘಟ್ಟಗಳಲ್ಲಿ ವಿವಿಧ ಜನಾಂಗದವರು ಬಂದು ನೆಲೆಸಿರುವುದು.
ಹೀಗೆ ವಿಭಿನ್ನ ಪ್ರದೇಶಗಳಿಂದ ವಲಸೆ ಬಂದು ನೆಲೆಸಿದ ಕುಟುಂಬಗಳಲ್ಲಿ '''ನಮ್ಮ ಕುಟುಂಬವೂ ಒಂದಾಗಿದೆ.''' ನಮ್ಮ ಕುಟುಂಬದ ಮೂಲ ಸ್ಥಳ '''<nowiki/>'ಡಣಾಯಕರಪುರ'''' (ದನಗುರು) ಆಗಿದ್ದು, ನಂತರದ ದಿನಗಳಲ್ಲಿ ನಮ್ಮ ಹಿರಿಯರು ಇಲ್ಲಿಗೆ ಬಂದು ನೆಲೆಸಿದರು ಎಂಬುದು ತಿಳಿದುಬರುತ್ತದೆ. ಈ ರೀತಿ ವಿವಿಧ ಕಡೆಗಳಿಂದ ಬಂದವರು ತಮ್ಮೊಂದಿಗೆ ತಮ್ಮ ಮನೆದೇವರುಗಳ ಆರಾಧನೆಯನ್ನೂ ತಂದಿದ್ದಾರೆ. ಗ್ರಾಮದಲ್ಲಿ ತಿಮ್ಮಪ್ಪ (ಶ್ರೀನಿವಾಸ), ಅರ್ಕೇಶ್ವರ, ಚುಂಚನಗಿರಿ ಭೈರಲೇಶ್ವರ, ಕಂಬದಹಳ್ಳಿ ಮಠದ ದೈವಗಳನ್ನು ಪೂಜಿಸುವ ಭಿನ್ನ-ಭಿನ್ನ ಕುಟುಂಬಗಳನ್ನು ಕಾಣಬಹುದು. ಈ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯೇ ಮಾರಗೌಡನಹಳ್ಳಿಯ ಐತಿಹ್ಯದ ವಿಶೇಷತೆಯಾಗಿದೆ.
== K) ೧.೨ ಭೌಗೋಳಿಕ ಹಿನ್ನೆಲೆ ==
ಮಾರಗೌಡನಹಳ್ಳಿಯು ಕೇವಲ ಮಳೆಯನ್ನೇ ನೆಚ್ಚಿಕೊಂಡ ಗ್ರಾಮವಲ್ಲ. ಕೃಷ್ಣರಾಜಸಾಗರ (ಕೆ.ಆರ್.ಎಸ್.) ಜಲಾಶಯದಿಂದ ಹರಿಯುವ ಕಾವೇರಿ ನದಿಯ ನಾಲೆಗಳೇ ಈ ಗ್ರಾಮದ ಜೀವಾಳ. ನಾಲೆಯಲ್ಲಿ ನೀರು ಹರಿಯುವಾಗ ಇಲ್ಲಿಯ ವಾತಾವರಣವು ಸಂಪೂರ್ಣ ಮಲೆನಾಡಿನಂತೆ ಬದಲಾಗಿ, ಇಡೀ ಗ್ರಾಮವು ಹಸಿರು-ಹೂವುಗಳ ತೋರಣದಿಂದ ಮಂಗಲಮಯವಾಗಿ ಕಂಗೊಳಿಸುತ್ತದೆ. ರೈತರು ಕೃಷಿಗಾಗಿ ಸಾಂಪ್ರದಾಯಿಕ ನೀರಾವರಿಯ ಜೊತೆಗೆ ಪಂಪ್ಸೆಟ್ಗಳು ಹಾಗೂ ಕೊಳವೆ ಬಾವಿಗಳನ್ನು (ಬೋರ್ವೆಲ್) ಹೆಚ್ಚಾಗಿ ಬಳಸುತ್ತಾರೆ. ಗ್ರಾಮದ ಶೇಕಡಾ ೯೦ ರಷ್ಟು ಜನರು ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಕೃಷಿ ಕೂಲಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದ್ದು, ಆರ್ಥಿಕವಾಗಿ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಮಟ್ಟದ ಜೀವನ ಶೈಲಿಯನ್ನು ಕಾಣಬಹುದು.
== L) ಚತುರ್ಗಡಿಗಳು (ಸೀಮೆಗಳು) ==
ಮಾರಗೌಡನಹಳ್ಳಿ ಗ್ರಾಮದ ಭೌಗೋಳಿಕ ಗಡಿಗಳು ಈ ಕೆಳಗಿನಂತಿವೆ:
· '''ಪೂರ್ವಕ್ಕೆ:''' ಶಿವಾರಗುಡ್ಡ
· '''ಪಶ್ಚಿಮಕ್ಕೆ:''' ಸಿದ್ಧೇಗೌಡನದೊಡ್ಡಿ ಮತ್ತು ಪಂಚೇಗೌಡನ ದೊಡ್ಡಿ ,ಕೆರಗೋಡು
· '''ಉತ್ತರಕ್ಕೆ:''' ಬಿದರಕೋಟೆ ಮತ್ತು ಗೊಳೂರು
· '''ದಕ್ಷಿಣಕ್ಕೆ:''' ನಲ್ಲಹಳ್ಳಿ
ಈ ಗ್ರಾಮದ ಸುತ್ತಲೂ ಕಾವೇರಿ ನದಿಯ ನಾಲೆಗಳು ಪ್ರವಹಿಸುವುದರಿಂದ ಭೂಮಿ ಫಲವತ್ತಾಗಿದ್ದು, ಈ ಭಾಗದ ಇತರ ಹಳ್ಳಿಗಳಿಗೆ ಮಾದರಿ ಗ್ರಾಮವಾಗಿ ತನ್ನದೇ ಆದ ಪ್ರಸಿದ್ಧಿಯನ್ನು ಗಳಿಸಿಕೊಂಡಿದೆ.
ಮಂಡ್ಯ ಜಿಲ್ಲೆಯ ಬೃಹತ್ ಹಳ್ಳಿಗಳಲ್ಲಿ ಮಾರಗೌಡನಹಳ್ಳಿಯೂ ಒಂದಾಗಿದೆ. ಪ್ರತಿಯೊಂದು ಗ್ರಾಮವೂ ತನ್ನದೇ ಆದ ವಿಶಿಷ್ಟ ಇತಿಹಾಸ-ಸಂಸ್ಕೃತಿಗಳನ್ನು ಹೊಂದಿರುತ್ತದೆಯೋ, ಹಾಗೆಯೇ ಮಾರಗೌಡನಹಳ್ಳಿಯು ಕೂಡ ನೈಸರ್ಗಿಕ ಸೌಂದರ್ಯ ಮತ್ತು ಸಮೃದ್ಧವಾದ ಜಾನಪದ ಸೊಗಡಿನಿಂದ ಕೂಡಿ ವೈಭವಯುತವಾಗಿ ಕಂಗೊಳಿಸುತ್ತಿದೆ.
É.
== M) ೧.೩ ಧಾರ್ಮಿಕತೆ ==
ಮಾರಗೌಡನಹಳ್ಳಿ ಗ್ರಾಮವು ಅತ್ಯಂತ ಆಧ್ಯಾತ್ಮಿಕ ಹಿನ್ನೆಲೆಯನ್ನು ಹೊಂದಿದ್ದು, ಸುಮಾರು ೧೪ ಪ್ರಮುಖ ದೇವಾಲಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಗ್ರಾಮದ ದಕ್ಷಿಣ ಭಾಗದ ದ್ವಾರದಲ್ಲೇ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯವಿದೆ. ಇದರ ಪಕ್ಕದಲ್ಲೇ ಗ್ರಾಮಸ್ಥರ ಪೂಜನೀಯ ವ್ಯಕ್ತಿಯಾದ ಸರ್ ಎಂ. ವಿಶ್ವೇಶ್ವರಯ್ಯನವರ ಪ್ರತಿಮೆಯಿದ್ದು, ಅದರ ಬಳಿಯೇ ವಿಶಾಲವಾದ ಅರಳಿಕಟ್ಟೆ ಹಾಗೂ ಸುಂದರವಾದ ಕೆರೆ ಕಣ್ಣಿಗೆ ಮುದ ನೀಡುತ್ತದೆ.
ಗ್ರಾಮದಲ್ಲಿ ಶ್ರೀ ತಿರುಮಲೇಶ್ವರ ಸ್ವಾಮಿ ದೇವಾಲಯವಿದ್ದು, ಇಲ್ಲಿ ತಿರುಪತಿಯ ವೈಖಾನಸ ಆಗಮ ಪರಂಪರೆಯಂತೆಯೇ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ಪ್ರತಿದಿನ ಹಾಗೂ ವಿಶೇಷ ದಿನಗಳಲ್ಲಿ ನೂರಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಈ ದೇವಾಲಯದ ಮುಂಭಾಗದಲ್ಲೇ ಪುರಾತನ ಈಶ್ವರ ದೇವಾಲಯವನ್ನು ಕಾಣಬಹುದು. ಗ್ರಾಮದಲ್ಲಿ ನವವಧು-ವರರ ವಿವಾಹವಾದ ನಂತರ, ಈ ಈಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿಯೇ ಊರೊಳಗೆ ಪ್ರವೇಶಿಸುವುದು ಇಲ್ಲಿನ ನಡೆದುಬಂದ ಸಂಪ್ರದಾಯವಾಗಿದೆ.
== N) ಧಾರ್ಮಿಕ ಸೌಹಾರ್ದತೆ ಮತ್ತು ಸಹಬಾಳ್ವೆ ==
ಮಾರಗೌಡನಹಳ್ಳಿಯ ಧಾರ್ಮಿಕ ಚಟುವಟಿಕೆಗಳಲ್ಲಿ ಜಾತಿ-ಮತಗಳ ಯಾವುದೇ ತಾರತಮ್ಯವಿಲ್ಲ. ಹರಿಜನ ಮತ್ತು ಗಿರಿಜನ ಸಮುದಾಯದವರು ಸೇರಿದಂತೆ ಪ್ರತಿಯೊಬ್ಬರೂ ದೇವಾಲಯಗಳಲ್ಲಿ ಮುಕ್ತವಾಗಿ ಪೂಜೆ ಸಲ್ಲಿಸಲು ಅವಕಾಶವಿದೆ. ಹಬ್ಬ-ಹರಿದಿನಗಳಲ್ಲಿ ಹಾಗೂ ಧಾರ್ಮಿಕ ಉತ್ಸವಗಳಲ್ಲಿ ಎಲ್ಲ ಸಮುದಾಯದ ಜನರೂ ಒಟ್ಟಾಗಿ ಕುಳಿತು ಪ್ರಸಾದ ಮತ್ತು ಅನ್ನಸಂತರ್ಪಣೆಯನ್ನು ಸ್ವೀಕರಿಸುತ್ತಾರೆ. ಅಷ್ಟೇ ಅಲ್ಲದೆ, ಶುಭ ಸಮಾರಂಭ ಹಾಗೂ ಮದುವೆಗಳಲ್ಲಿ ಪರಸ್ಪರ ಆಹ್ವಾನಿಸಿಕೊಂಡು ಭಾಗವಹಿಸುವ ಸುಂದರ ಸೌಹಾರ್ದತೆ ಇಲ್ಲಿದೆ.
ಸಾಕಷ್ಟು ದೇವಾಲಯಗಳನ್ನು ಹೊಂದಿರುವ ಈ ಪವಿತ್ರ ಭೂಮಿಯಲ್ಲಿ, ಎಲ್ಲ ಜನಾಂಗದವರೂ ಸಹಬಾಳ್ವೆಯಿಂದ ಜೀವಿಸುತ್ತಿದ್ದಾರೆ. ಊರಿನ ಜಾತ್ರೆ ಮತ್ತು ಧಾರ್ಮಿಕ ಹಬ್ಬಗಳನ್ನು ಯಾವುದೇ ಕಲಹಗಳಿಗೆ ಆಸ್ಪದ ನೀಡದೆ, ಅತ್ಯಂತ ಒಗ್ಗಟ್ಟಿನಿಂದ ಹಾಗೂ ವಿಜೃಂಭಣೆಯಿಂದ ಆಚರಿಸುವುದು ಮಾರಗೌಡನಹಳ್ಳಿಯ ಧಾರ್ಮಿಕ ವೈಶಿಷ್ಟ್ಯವಾಗಿದೆ.
== O) ೧.೪ ಆರ್ಥಿಕತೆ ==
ಮಾರಗೌಡನಹಳ್ಳಿ ಗ್ರಾಮಕ್ಕೆ ಕಾವೇರಿ ನದಿಯ ನೀರಾವರಿ ಸೌಲಭ್ಯವಿರುವುದರಿಂದ, ಇಲ್ಲಿನ ಶೇಕಡಾ ೯೦ ರಷ್ಟು ಜನರು ಜೀವನಾಧಾರಕ್ಕಾಗಿ ವ್ಯವಸಾಯವನ್ನೇ ನೆಚ್ಚಿಕೊಂಡಿದ್ದಾರೆ. ಗ್ರಾಮದಲ್ಲಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಶ್ರೀಮಂತರು, ಮಧ್ಯಮ ವರ್ಗದವರು ಹಾಗೂ ಕೃಷಿ ಕೂಲಿಯನ್ನು ನೆಚ್ಚಿಕೊಂಡಿರುವ ಬಡವರು ಹೀಗೆ ಎಲ್ಲಾ ವರ್ಗದ ಜನರೂ ವಾಸಿಸುತ್ತಿದ್ದಾರೆ.
ಊರಿನಲ್ಲಿ ಇಂದಿಗೂ ಸರಳವಾದ ಗುಡಿಸಲು/ಹೆಂಚಿನ ಮನೆಗಳಲ್ಲಿ ವಾಸಿಸುವ ಬಡವರನ್ನು ಕಾಣಬಹುದು; ಹಾಗೆಯೇ ಆಧುನಿಕ ಸೌಲಭ್ಯಗಳುಳ್ಳ ಆಕರ್ಷಕ ಮನೆಗಳನ್ನು ನಿರ್ಮಿಸಿಕೊಂಡು ಸುಖ ಜೀವನ ನಡೆಸುವ ಬೃಹತ್ ವ್ಯಾಪಾರಿಗಳು ಹಾಗೂ ಉದ್ಯಮಿಗಳನ್ನೂ ಕಾಣಬಹುದು. ಒಟ್ಟಾರೆಯಾಗಿ ಗ್ರಾಮದಲ್ಲಿ ಶೇಕಡಾ ೭೦ ರಷ್ಟು ಜನರು ಆರ್ಥಿಕವಾಗಿ ಉತ್ತಮ ಪ್ರಗತಿ ಸಾಧಿಸಿದ್ದಾರೆ.
== P) ಕೃಷಿ ಮತ್ತು ಬೆಳೆಗಳು ==
ಗ್ರಾಮದ ಪ್ರಮುಖ ಬೆಳೆಗಳೆಂದರೆ '''ಕಬ್ಬು, ಭತ್ತ, ರಾಗಿ, ತೆಂಗು ಮತ್ತು ರೇಷ್ಮೆ.''' ಇದರ ಜೊತೆಗೆ ಅಲ್ಪ ಪ್ರಮಾಣದಲ್ಲಿ ದ್ವಿದಳ ಧಾನ್ಯಗಳನ್ನು ಸಹ ಬೆಳೆಯಲಾಗುತ್ತದೆ. ಕಬ್ಬು ಮತ್ತು ಭತ್ತವು ದೀರ್ಘಾವಧಿಯ (ವರ್ಷ ಹಾಗೂ ೩-೪ ತಿಂಗಳ) ಬೆಳೆಗಳಾಗಿರುವುದರಿಂದ, ಇತ್ತೀಚಿನ ದಿನಗಳಲ್ಲಿ ದಿನನಿತ್ಯದ ಆದಾಯಕ್ಕಾಗಿ ರೇಷ್ಮೆ ಕೃಷಿಯು ರೈತರ ಮುಖ್ಯ ಕಸುಬುಗಳಲ್ಲಿ ಒಂದಾಗಿ ಬೆಳೆದಿದೆ. ಇಲ್ಲಿ ಬೆಳೆಯುವ ಭತ್ತ ಹಾಗೂ ಕಬ್ಬು ಹೆಚ್ಚಾಗಿ ಹೊರಗಿನ ಮಾರುಕಟ್ಟೆಗಳಿಗೆ ಮಾರಾಟವಾಗುತ್ತದೆ. ತಂತ್ರಜ್ಞಾನಕ್ಕೆ ತಕ್ಕಂತೆ ನವ-ನವೀನ ತಳಿಯ ಬೆಳೆಗಳನ್ನು ಬೆಳೆಯುವ ಪ್ರಗತಿಪರ ರೈತರೂ ಇಲ್ಲಿದ್ದಾರೆ.
== Q) ಕೂಲಿ ಕಾರ್ಮಿಕರ ಜೀವನೋಪಾಯ ==
ಗ್ರಾಮದಲ್ಲಿ ಮಧ್ಯಮ ವರ್ಗದವರ ಸಂಖ್ಯೆ ಹೆಚ್ಚಿದ್ದು, ಜಮೀನಿಲ್ಲದ ಬಡವರು ಕೃಷಿ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಕಬ್ಬು ಕಟಾವು, ಭತ್ತದ ಕೊಯ್ಲು, ಒಕ್ಕಣೆ ಹಾಗೂ ರೇಷ್ಮೆ ಸಾಕಣೆಯ ಕೆಲಸಗಳು ಇವರಿಗೆ ವರ್ಷಪೂರ್ತಿ ದಿನಗೂಲಿ ಆಸರೆಯಾಗಿ ಸಿಗುತ್ತವೆ. ಕೃಷಿ ಕೆಲಸಗಳಿಲ್ಲದ ಅವಧಿಯಲ್ಲಿ ತೆಂಗಿನ ಗರಿ ಹೆಣೆಯುವುದು ಹಾಗೂ ಕರಕುಶಲ ಕೆಲಸಗಳನ್ನು ಮಾಡಿ ಜೀವನ ಸಾಗಿಸುತ್ತಾರೆ. ಹಿಂದೆ ಗ್ರಾಮ ಪಂಚಾಯತಿ ವತಿಯಿಂದ ವಸತಿ ಯೋಜನೆಯಡಿ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ.
ಆರ್ಥಿಕವಾಗಿ ಎಷ್ಟೇ ಬಡತನವಿದ್ದರೂ, ಊರಿನ ಜನರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ '''<nowiki/>'ಪಟ್ಟಲದ್ದಮ್ಮನ ಮಹೋತ್ಸವ'''' ಹಾಗೂ ಇತರ ಪ್ರಮುಖ ಹಬ್ಬಗಳನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸುತ್ತಾರೆ.
== R) ೧.೫ ಉಡುಗೆ-ತೊಡುಗೆ ಮತ್ತು ಆಭರಣಗಳು ==
ಮಾರಗೌಡನಹಳ್ಳಿ ಗ್ರಾಮದ ಜನರು ಅತ್ಯಂತ ಶಿಸ್ತು ಮತ್ತು ಆಕರ್ಷಕವಾದ ಉಡುಪುಗಳನ್ನು ಧರಿಸುತ್ತಾರೆ. ಊರಿನ ಹಿರಿಯ ಹಾಗೂ ಮಧ್ಯಮ ವಯಸ್ಕ ಗಂಡಸರು ಬಿಳಿ ಬಣ್ಣದ ಪಂಚೆ, ಲುಂಗಿ, ತುಂಬು ತೋಳಿನ ಶರ್ಟ್ (ಅಂಗಿ) ಹಾಗೂ ಭುಜದ ಮೇಲೆ ಶಲ್ಯ ಅಥವಾ ಕರಚೀಲ/ಟವೆಲ್ (ಕರವಸ್ತ್ರ) ಧರಿಸುವುದನ್ನು ಹೆಚ್ಚಾಗಿ ಕಾಣಬಹುದು. ಇವರು ಅಚ್ಚಪಂಚೆ ಉಟ್ಟು ಊರಿನ ರಸ್ತೆಯಲ್ಲಿ ನಡೆದುಬರುತ್ತಿದ್ದರೆ, ಯಾವುದೇ ಸಿನಿಮಾ ನಟನಿಗಿಂತ ಕಡಿಮೆಯಿಲ್ಲದಂತಹ ಗಾಂಭೀರ್ಯ ಮತ್ತು ಸೌಂದರ್ಯ ಎದ್ದು ಕಾಣುತ್ತದೆ. ಕಾಲುಗಳಿಗೆ ಗುಣಮಟ್ಟದ ಚಪ್ಪಲಿ/ಪಾದರಕ್ಷೆಗಳನ್ನು ಧರಿಸುವುದು ಇಲ್ಲಿನ ಗಂಡಸರ ವೈಶಿಷ್ಟ್ಯ.
ಇತ್ತೀಚಿನ ದಿನಗಳಲ್ಲಿ ಗ್ರಾಮಕ್ಕೆ ಆಧುನಿಕತೆಯ ಪ್ರಭಾವ ತಟ್ಟಿದ್ದು, ಯುವಕರು ಷರಾಯಿ (ಪ್ಯಾಂಟ್), ಶರ್ಟ್, ಚಡ್ಡಿ (ಶಾರ್ಟ್ಸ್) ಹಾಗೂ ಟೀ-ಶರ್ಟ್ಗಳನ್ನು ಧರಿಸುತ್ತಿದ್ದಾರೆ.
== S) ಯುವಪೀಳಿಗೆ ಮತ್ತು ಆಧುನಿಕ ಉಡುಪುಗಳು ==
ಆಧುನಿಕ ಶೈಕ್ಷಣಿಕ ಹಾಗೂ ಪಟ್ಟಣದ ಸಂಪರ್ಕದಿಂದಾಗಿ ಇಂದಿನ ಯುವಕ-ಯುವತಿಯರ ಉಡುಗೆ-ತೊಡುಗೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹುಡುಗರು ಹಾಗೂ ಹುಡುಗಿಯರು ನಗರದ ಶೈಲಿಯ ಜೀನ್ಸ್ ಪ್ಯಾಂಟ್, ಟೀ-ಶರ್ಟ್, ಚೂಡಿದಾರ್, ಮಿಡ್ಡಿ ಮುಂತಾದ ನವ-ನವೀನ ನಮೂನೆಯ ಉಡುಪುಗಳನ್ನು ತೊಡುತ್ತಾರೆ. ಈ ಆಧುನಿಕ ಉಡುಪುಗಳ ಬೆಲೆ ಹೆಚ್ಚಾಗಿದ್ದರೂ ಸಹ, ಇವುಗಳನ್ನು ಧರಿಸುವ ಯುವಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
== T) ಹಬ್ಬ-ಹರಿದಿನಗಳು ಮತ್ತು ಆಭರಣಗಳು ==
ಹಬ್ಬ-ಹರಿದಿನಗಳಲ್ಲಿ ಹಾಗೂ ವಿಶೇಷ ಸಮಾರಂಭಗಳಲ್ಲಿ ಗ್ರಾಮದ ಪ್ರತಿಯೊಬ್ಬರೂ ನವ-ನವೀನ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ. ಹಿರಿಯ ಮುದುಕ-ಮುದುಕಿಯರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದರೆ, ಯುವತಿಯರು ಮತ್ತು ಹೆಣ್ಣುಮಕ್ಕಳು ಅತ್ಯಂತ ಸುಂದರವಾಗಿ ಅಲಂಕಾರ ಮಾಡಿಕೊಳ್ಳುತ್ತಾರೆ. ಹಿಂದೆ ಧರಿಸುತ್ತಿದ್ದ ಒಂಬತ್ತು ಗಜ (ಕಚ್ಚೆ ಸೀರೆ) ಹಾಗೂ 'ಹದಿನಾರು ಗಜ'ದ ಸೀರೆಗಳನ್ನು ಧರಿಸುವವರ ಸಂಖ್ಯೆ ಈಗ ಕಡಿಮೆಯಾಗಿದ್ದು, ಸಾಂಪ್ರದಾಯಿಕ ರೇಷ್ಮೆ ಸೀರೆಗಳನ್ನು ಹೆಚ್ಚಾಗಿ ಉಡುತ್ತಾರೆ.
ಮಹಿಳೆಯರು ಕೈಗಳಿಗೆ ಗಾಜಿನ ಹಾಗೂ ಚಿನ್ನದ ಬಳೆಗಳು, ಕಿವಿಗೆ ಓಲೆ, ಜುಮುಕಿ ಹಾಗೂ ಬಿಚ್ಚೋಲೆ ಮುಂತಾದ ಹೊಸ ವಿನ್ಯಾಸದ ಆಭರಣಗಳನ್ನು ಧರಿಸುತ್ತಾರೆ. ಗ್ರಾಮದ ಶೇಕಡಾ ೯೮ ರಷ್ಟು ಕುಟುಂಬಗಳಲ್ಲಿ ಚಿನ್ನದ ಆಭರಣಗಳ ಬಳಕೆಯನ್ನು ಕಾಣಬಹುದು. ವಿಶೇಷವಾಗಿ ಹಬ್ಬಗಳಲ್ಲಿ ಪುರುಷರು ಸಹ ಕೈಗೆ ಚಿನ್ನದ ಕಡಗ, ಉಂಗುರ ಹಾಗೂ ಕತ್ತಿಗೆ ಚಿನ್ನದ ಸರಗಳನ್ನು ಧರಿಸಿ ಸಂಭ್ರಮಿಸುವುದು ಈ ಗ್ರಾಮದ ಪ್ರಮುಖ ಶ್ರೀಮಂತ ಸಂಸ್ಕೃತಿಯಾಗಿದೆ.
== U) ೧.೬ ಶೈಕ್ಷಣಿಕತೆ (ವಿದ್ಯಾರ್ಹತೆ) ==
ಮಾರಗೌಡನಹಳ್ಳಿ ಗ್ರಾಮವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ ಗ್ರಾಮವಾಗಿದೆ. ಗ್ರಾಮದಲ್ಲಿ ಅಂಗನವಾಡಿ, ನರ್ಸರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಉತ್ತಮ ಸೌಲಭ್ಯವಿರುವುದರಿಂದ, ಇಲ್ಲಿನ ಜನರು ಉತ್ತಮ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದಾರೆ. ಗ್ರಾಮದಲ್ಲಿ ಶೇಕಡಾ ೯೦ ರಷ್ಟು ಜನರು ಸಾಕ್ಷರರಾಗಿದ್ದು (ವಿದ್ಯಾವಂತರು), ಬಹುತೇಕರು ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪೂರೈಸಿರುವುದು ಕಂಡುಬರುತ್ತದೆ.
ಈ ಊರಿನಲ್ಲಿ ಹುಟ್ಟಿ ಬೆಳೆದ ಅನೇಕರು ಉನ್ನತ ಶಿಕ್ಷಣವನ್ನು ಪಡೆದು ಡಾಕ್ಟರ್ (ವೈದ್ಯರು), ಎಂಜಿನಿಯರ್, ವಕೀಲರು, ಉಪನ್ಯಾಸಕರು ಹಾಗೂ ಪೊಲೀಸ್ (ಆರಕ್ಷಕ) ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಲ್ಲೂ ಶಿಕ್ಷಣ ಪಡೆಯಬೇಕೆಂಬ ತೀವ್ರ ಹಂಬಲವಿರುವುದು ಈ ಗ್ರಾಮದ ಪ್ರಮುಖ ಲಕ್ಷಣವಾಗಿದೆ.
== V) ತರಬೇತಿ ಮತ್ತು ಸೌಲಭ್ಯಗಳು ==
ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯದ ಸೌಲಭ್ಯವಿದ್ದು, ಜ್ಞಾನಾರ್ಜನೆಗೆ ನೆರವಾಗಿದೆ. ಈ ಹಿಂದೆ ವಯಸ್ಕರ ಶಿಕ್ಷಣ ಕೇಂದ್ರವೂ ಕಾರ್ಯಾಚರಿಸುತ್ತಿತ್ತು (ಪ್ರಸ್ತುತ ಇದರ ಕಾರ್ಯಾಚರಣೆ ನಿಂತಿದೆಯಾದರೂ, ವಯಸ್ಕರ ಸಾಕ್ಷರತೆಗೆ ಇದು ನೀಡಿದ ಕೊಡುಗೆ ಅಪಾರ). ಹೆಚ್ಚುವರಿಯಾಗಿ, ಹೆಣ್ಣುಮಕ್ಕಳ ಸ್ವಾವಲಂಬನೆಗೆ ಪೂರಕವಾಗಿ '''ಉಚಿತ ಹೊಲಿಗೆ ತರಬೇತಿ ಕೇಂದ್ರ'''ವೂ ಕಾರ್ಯಾಚರಿಸುತ್ತಿದೆ.
ಕೇವಲ ಸರ್ಕಾರಿ ಉದ್ಯೋಗವನ್ನು ಪಡೆದವರನ್ನು ಮಾತ್ರ ವಿದ್ಯಾವಂತರು ಎನ್ನುವುದು ತಪ್ಪು ಕಲ್ಪನೆ. ಇಲ್ಲಿ ಉತ್ತಮ ಶಿಕ್ಷಣ ಪಡೆದು ಸ್ವಂತ ವ್ಯಾಪಾರ-ಉದ್ಯಮಗಳಲ್ಲಿ ಯಶಸ್ಸು ಕಂಡವರು ಹಾಗೂ ತಮ್ಮ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯಿಂದ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಲವು ಮಹನೀಯರನ್ನು ನಾವು ಈ ಗ್ರಾಮದಲ್ಲಿ ಕಾಣಬಹುದಾಗಿದೆ.
ನಿಮ್ಮ ಪ್ರಬಂಧದ '''<nowiki/>'ಮಾರಗೌಡನಹಳ್ಳಿ ಜನರ ಕಸುಬು' (ಆರ್ಥಿಕ ಜೀವನಾಧಾರ/ವೃತ್ತಿ)''' ಭಾಗದಲ್ಲಿದ್ದ ಫಾಂಟ್ ದೋಷಗಳು (ಉದಾಹರಣೆಗೆ: "ತಾ¬ÀÄಗೆ Äತ್ತಾರೆÀ", "ಉದ್ಯಾಮಕ್ಕೆ", "ರÉÃಷ್ಮೆ"), ಅಚ್ಚುಕೂಟದ ತಪ್ಪುಗಳು ಹಾಗೂ ಅರ್ಧಕ್ಕೆ ನಿಂತಿದ್ದ ಸಾಲುಗಳನ್ನು ಸರಿಪಡಿಸಿ, ಶೈಕ್ಷಣಿಕ ವರದಿಗೆ ಪೂರಕವಾಗುವಂತೆ ಪ್ರಬುದ್ಧ ಭಾಷೆಯಲ್ಲಿ ಕೆಳಗೆ ನೀಡಲಾಗಿದೆ:
== W)೧.೭ ಜನರ ಕಸುಬು ಮತ್ತು ಜೀವನೋಪಾಯ ==
ಮಾರಗೌಡನಹಳ್ಳಿ ಗ್ರಾಮದಲ್ಲಿ ಕೃಷಿಯೇ (ವ್ಯವಸಾಯ) ಪ್ರಧಾನವಾದ ಕಸುಬಾಗಿದೆ. ಬಹುತೇಕ ಕುಟುಂಬಗಳು ಜಮೀನನ್ನು ಹೊಂದಿರುವುದರಿಂದ, ಪ್ರತಿದಿನ ಮನೆಮಂದಿಯೆಲ್ಲಾ ಹೊಲ-ಗದ್ದೆಗಳಿಗೆ ತೆರಳಿ ಕೆಲಸ ಮಾಡುತ್ತಾರೆ. ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಹ ಅಭ್ಯಾಸದ ನಂತರ ತಮ್ಮ ತಂದೆ-ತಾಯಿಯಂದಿರಿಗೆ ಕೃಷಿ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಕೃಷಿಯ ಜೊತೆಗೆ '''ಹೈನುಗಾರಿಕೆ''' ಹಾಗೂ '''ರೇಷ್ಮೆ ಸಾಕಣೆ'''ಯನ್ನು ಉಪಕಸುಬುಗಳಾಗಿ ಅಳವಡಿಸಿಕೊಂಡಿದ್ದು, ಇವು ದೊಡ್ಡ ಪ್ರಮಾಣದಲ್ಲಿ ಬೆಳೆದು ಗ್ರಾಮಸ್ಥರಿಗೆ ವರದಾನವಾಗಿವೆ. ಹೈನುಗಾರಿಕೆಯಲ್ಲಿ ನಿರತರಾಗಿರುವ ರೈತರು ಪ್ರತಿದಿನ ಹಾಲಿನ ಡೈರಿಗೆ ಸರಾಸರಿ ೧೫ ರಿಂದ ೨೦ ಕ್ಯಾನ್ಗಳಷ್ಟು ಹಾಲನ್ನು ಪೂರೈಸುತ್ತಾರೆ.
== X) ಬೆಳೆಗಳ ವೈವಿಧ್ಯತೆ ==
ಕೃಷ್ಣರಾಜಸಾಗರ (ಕೆ.ಆರ್.ಎಸ್.) ಜಲಾಶಯ ತುಂಬಿ, ನಾಲೆಯಲ್ಲಿ ನೀರು ಹರಿಯುವಾಗ ಗ್ರಾಮದ ಶೇಕಡಾ ೧೦೦ ರಷ್ಟು ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಹೀಗಾಗಿ ವರ್ಷಪೂರ್ತಿ ಇಲ್ಲಿನ ರೈತರಿಗೆ ಗದ್ದೆಗಳಲ್ಲಿ ಕೃಷಿ ಕೆಲಸಗಳು ಸಿಗುತ್ತವೆ.
· '''ಪ್ರಮುಖ ವಾಣಿಜ್ಯ ಬೆಳೆಗಳು:''' ಕಬ್ಬು, ಭತ್ತ, ರೇಷ್ಮೆ ಮತ್ತು ತೆಂಗು.
· '''ಧಾನ್ಯ ಮತ್ತು ತರಕಾರಿಗಳು:''' ರಾಗಿ, ಜೋಳ, ಹುರುಳಿ, ತೊಗರಿ, ಅವರೇಕಾಳು ಹಾಗೂ ವಿವಿಧ ದ್ವಿದಳ ಧಾನ್ಯಗಳನ್ನು ಮಳೆಗಾಲದ ಬೆಳೆಗಳಾಗಿ ಬೆಳೆಯುತ್ತಾರೆ.
· '''ಸ್ವಂತ ಬಳಕೆಯ ಕೃಷಿ:''' ಪ್ರತಿಯೊಂದು ಕುಟುಂಬವು ತಮ್ಮ ದಿನನಿತ್ಯದ ಅಡುಗೆಯ ಅಗತ್ಯಕ್ಕೆ ಬೇಕಾಗುವ ವಿವಿಧ ಸೊಪ್ಪು ಮತ್ತು ತರಕಾರಿಗಳನ್ನು ತಮ್ಮ ಹೊಲಗಳಲ್ಲೇ ಸ್ವಂತವಾಗಿ ಬೆಳೆದುಕೊಳ್ಳುವುದು ಇಲ್ಲಿನ ಮತ್ತೊಂದು ನೈಸರ್ಗಿಕ ವೈಶಿಷ್ಟ್ಯವಾಗಿದೆ
== Y) ಮಾರಗೌಡನಹಳ್ಳಿ ಗ್ರಾಮದ ಜನರ ಅಡುಗೆ ಪದ್ಧತಿ ==
ಈ ಗ್ರಾಮದಲ್ಲಿ ಸಾಮಾನ್ಯವಾಗಿ ದಿನನಿತ್ಯದ ಅಡುಗೆಯಾಗಿ ರಾಗಿಮುದ್ದೆ, ಉಪ್ಪುಸಾರು, ಮಸೊಪ್ಪು, ಬಸ್ಸಾರು, ಹುರುಳಿಸಾರು, ಅನ್ನ ಮತ್ತು ತರಕಾರಿ ಸಾರನ್ನು ಮಾಡುತ್ತಾರೆ. ಹಬ್ಬ-ಹರಿದಿನಗಳಲ್ಲಿ ಸಿಹಿ ಹಾಗೂ ಖಾರದ ತಿಂಡಿ-ತಿನಿಸುಗಳನ್ನು ತಯಾರಿಸುತ್ತಾರೆ. ಕೆಲವರ ಮನೆಗಳಲ್ಲಿ ಬೆಳಿಗ್ಗೆ ರಾಗಿಮುದ್ದೆಯ ಬದಲು ಬೆಳಗಿನ ಉಪಹಾರವಾಗಿ ಚಿತ್ರಾನ್ನ, ಬಾತ್, ಪೂರಿ ಇತ್ಯಾದಿಗಳನ್ನು ಮಾಡಿಕೊಳ್ಳುತ್ತಾರೆ. ವಾರಕ್ಕೊಮ್ಮೆ ಹಂದಿಯನ್ನು ಕೊಯ್ದು ವ್ಯಾಪಾರ ಮಾಡುವುದರಿಂದ, ಇಲ್ಲಿನ ಜನರು ಸಾಮಾನ್ಯವಾಗಿ ವಾರಕ್ಕೊಮ್ಮೆಯಾದರೂ ಮಾಂಸವನ್ನು ಸೇವಿಸುತ್ತಾರೆ. ಹಂದಿ ಮಾಂಸ ದೇಹಕ್ಕೆ ಶೀತ ಎಂಬುದು ಇವರ ನಂಬಿಕೆ. ಹಂದಿ ಮಾಂಸ ತಿನ್ನದವರು ಕುರಿ ಹಾಗೂ ಕೋಳಿ ಮಾಂಸವನ್ನು ಪಕ್ಕದ ಬೆಸಗರಹಳ್ಳಿ ಮತ್ತು ಕೆರಗೋಡಿಗೆ ಹೋಗಿ ತಂದು ಸೇವಿಸುತ್ತಾರೆ.
ಹಬ್ಬ-ಹರಿದಿನಗಳಲ್ಲಿ ಲಾಡು, ಬೂಂದಿ, ಪಾಯಸ, ಒಬ್ಬಟ್ಟು, ತಂಬಿಟ್ಟು ಮುಂತಾದ ಸಿಹಿ ತಿನಿಸುಗಳನ್ನು ಮಾಡಿ ಸವಿಯುತ್ತಾರೆ. ಮಾರಗೌಡನಹಳ್ಳಿಯ ವಿಶೇಷತೆಯೆಂದರೆ ಇಲ್ಲಿನ ಪ್ರತಿ ಮನೆಯ ಅಡುಗೆಯ ರುಚಿಯೂ ಬಲು ಸೊಗಸಾಗಿರುತ್ತದೆ. ಈ ವಿಷಯದ ಕುರಿತು ಬರೆಯುವಾಗ ನನ್ನ ಬಾಯಲ್ಲಿ ನೀರೂರುತ್ತಿತ್ತು; ಅಷ್ಟರಮಟ್ಟಿಗೆ ಇಲ್ಲಿನ ಅಡುಗೆ ರುಚಿಕರವಾಗಿರುತ್ತದೆ. ಸಂಭ್ರಮ-ಉತ್ಸಾಹದ ಸಂದರ್ಭಗಳಲ್ಲಿ ವಿಶೇಷವಾದ ಕರಿದ ತಿಂಡಿಗಳನ್ನು ಮಾಡಿ ಸೇವಿಸುತ್ತಾರೆ. ಎಲ್ಲಾ ಕಡೆಗಳಂತೆ ಈ ಊರಿನಲ್ಲಿಯೂ ಅಡುಗೆ ಪದ್ಧತಿಯಲ್ಲಿ ವೈವಿಧ್ಯತೆ ಕಂಡುಬರುತ್ತದೆ.
== Z) ೧.೮ ರಾಜಕೀಯ ಹಾಗೂ ಗ್ರಾಮದ ಮುಖಂಡರು ==
ಮಾರಗೌಡನಹಳ್ಳಿಯು ರಾಜಕೀಯ ಕ್ಷೇತ್ರದಲ್ಲಿ ಬೃಹತ್ ಮಟ್ಟದ ಬೆಳವಣಿಗೆಯನ್ನು ಕಂಡಿಲ್ಲ. ಇಲ್ಲಿನ ಜನರು ತೀವ್ರ ಸ್ವರೂಪದ ರಾಜಕೀಯ ಶಕ್ತಿಯನ್ನಾಗಲಿ ಅಥವಾ ರಾಜಕೀಯ ಮಹತ್ವಾಕಾಂಕ್ಷೆಯನ್ನಾಗಲಿ ಹೊಂದಿಲ್ಲ. ಆದಾಗ್ಯೂ, ಗ್ರಾಮದ ಅಭಿವೃದ್ಧಿಗೆ ಮತ್ತು ಜನಸೇವೆಗೆ ಸದಾ ಶ್ರಮಿಸುವಂತಹ ವ್ಯಕ್ತಿಗಳು ಇಲ್ಲಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಹೊರತುಪಡಿಸಿದರೆ, ರಾಜ್ಯ ಅಥವಾ ರಾಷ್ಟ್ರ ಮಟ್ಟದ ಅತಿ ದೊಡ್ಡ ರಾಜಕೀಯ ಹುದ್ದೆಗಳನ್ನು ಅಲಂಕರಿಸಿದ ವ್ಯಕ್ತಿಗಳನ್ನು ಇಲ್ಲಿ ಕಾಣುವುದು ಅಪರೂಪ.
ಆದರೆ, ಕೇವಲ ರಾಜಕೀಯ ಬಲಕ್ಕಿಂತ ಹೆಚ್ಚಾಗಿ '''ಸಮಾಜ ಸೇವೆ'''ಯ ಮೂಲಕ ಈ ಹಳ್ಳಿಯನ್ನು ಕಟ್ಟಿ ಬೆಳೆಸಿದ ಅನೇಕ ಹಿರಿಯರು ಮತ್ತು ಮುಖಂಡರು ಇಲ್ಲಿದ್ದಾರೆ. ಅವರಲ್ಲಿ ಪ್ರಮುಖರಾದವರೆಂದರೆ:
· ಮರಿಗೋಪೇಗೌಡ
· ಖಜಾನಿಗೌಡ
· ಎಂ.ಜಿ. ಮುದ್ದಯ್ಯ
· ಗದ್ದೇಗೌಡ
· ಯಜಮಾನ ಮುದ್ದೇಗೌಡ
· ದೇವಿರಿ ದೇವರಗುಡ್ಡ
· ಲಿಂಗೇಗೌಡ
· ಕಳಿಂಗೇಗೌಡ
· ಚಿಕ್ಕಲಿಂಗೇಗೌಡ (ಕೆಂಚೇಗೌಡ)
· ಖಜಾನಿ ತಮ್ಮೇಗೌಡ
· ಮಗಣ್ಣ
· ಗುರಣಿ ಮುದ್ದೇಗೌಡ
· ಶ್ರೀಧರ್ ಮತ್ತು ಸುರೇಶ್ ಮುಂತಾದವರು.
ಗ್ರಾಮದ ಶಾಂತಿ-ಸೌಹಾರ್ದತೆಯ ವಿಷಯಕ್ಕೆ ಬಂದರೆ, ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೇವಲ ಕೆಲವು ವೈಯಕ್ತಿಕ ದಾವೆಗಳು ದಾಖಲಾಗಿರಬಹುದಷ್ಟೇ ಹೊರತು, ರಾಜಕೀಯ ದ್ವೇಷ ಅಥವಾ ವೈಷಮ್ಯದಿಂದ ಯಾವುದೇ ರೀತಿಯ ದೊಡ್ಡ ಕಲಹಗಳು ನಡೆದ ಉದಾಹರಣೆಗಳಿಲ್ಲ. ಇದು ಗ್ರಾಮಸ್ಥರಿಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಾರಗೌಡನಹಳ್ಳಿಯು ತೀವ್ರ ರಾಜಕೀಯ ಕ್ರಾಂತಿ ಅಥವಾ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿಲ್ಲ. ಒಂದು ವೇಳೆ ರಾಜಕೀಯವಾಗಿ ಇನ್ನು ಹೆಚ್ಚಿನ ಪ್ರಭಾವಿ ನಾಯಕತ್ವ ಮೂಡಿಬಂದಿದ್ದರೆ, ನಮ್ಮೂರಿನ ಪ್ರಗತಿ ಇನ್ನಷ್ಟು ವೇಗವಾಗಿ ಆಗುತ್ತಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.
== AA) ==
== BB) ಮಾರಗೌಡನಹಳ್ಳಿಯಲ್ಲಿರುವ ದೇವಸ್ಥಾನಗಳು ==
ಮಾರಗೌಡನಹಳ್ಳಿಯ ಸುತ್ತಮುತ್ತ ಹಲವಾರು ಪ್ರಸಿದ್ಧ ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
1. ಮಾಸ್ತಮ್ಮ ದೇವಸ್ಥಾನ
2. ನಂದಿಗುಡಿ
3. ಹೀರಪ್ಪನ ಅರಳಿಕಟ್ಟೆ
4. ತಿರುಮಲೇಶ್ವರ ಸ್ವಾಮಿ ದೇವಸ್ಥಾನ
5. ಬೋರಪ್ಪ ದೇವಸ್ಥಾನ
6. ಈಶ್ವರಪ್ಪನ ಗುಡಿ
7. ತಗಡೂರಪ್ಪ ದೇವಸ್ಥಾನ ಮತ್ತು ಚಿಕ್ಕಯ್ಯನ ದೇವಸ್ಥಾನ
8. ಮನೆ ದೇವರ ಗುಡಿ
9. ಕುಂಬಾರರಕಟ್ಟೆ ಮನೆ ದೇವರು
10. ದೊಡ್ಡೇಗೌಡರ ಹಟ್ಟಿ ಚಿಕ್ಕಮನೆ ದೇವರು (ಗಂಡಹಳ್ಳಿ ಮಾರಮ್ಮ)
11. ಬೀರಪ್ಪನ ವಿಗ್ರಹ (ದೊಡ್ಡೇಗೌಡರ ಹಟ್ಟಿಗೆ ಸೇರಿದ್ದು)
12. ರಾಮಮಂದಿರ ಹಾಗೂ ಗಣಪತಿ ದೇವಸ್ಥಾನ
13. ಶನಿಮಹಾತ್ಮ ಹಾಗೂ ಮುರುಗೇಶ್ವರ ದೇವಸ್ಥಾನ
14. ಪಟ್ಟಲದಮ್ಮ ದೇವಸ್ಥಾನ
ಹೀಗೆ ಮಾರಗೌಡನಹಳ್ಳಿಯಲ್ಲಿ ಹತ್ತಾರು ಗುಡಿ-ಗೋಪುರಗಳಿದ್ದು, ಇಲ್ಲಿನ ಜನರು ಅತ್ಯಂತ ಧಾರ್ಮಿಕ ಪ್ರವೃತ್ತಿಯವರಾಗಿದ್ದಾರೆ. ಇವರು ಬಹುದೇವತಾರಾಧಕರಾಗಿದ್ದರೂ ಸಹ ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಇದು ಅವರ ಜನಪದೀಯ ಪರಂಪರೆ ಹಾಗೂ ವಿಶಾಲ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
"ದೊಡ್ಡ ದೊಡ್ಡದಾದ ಭಾವ-ಕೋಶಗಳನ್ನು ಮನದಲ್ಲಿಟ್ಟುಕೊಂಡು, ಭಕ್ತಿಯಿಂದ ಕೊರಳನ್ನು ತಂಬೂರಿ-ಸಂಗೀತಕ್ಕೆ ತೆರೆದು, ನಾನು ಕಂಡ ಮಾರಗೌಡನಹಳ್ಳಿಯ ಧಾರ್ಮಿಕ ಚಿತ್ರಣವನ್ನು ಜನಪದೀಯ ಶೈಲಿಯಲ್ಲಿ ನಿಮ್ಮೆದುರು ಇಡುತ್ತಿದ್ದೇನೆ."
== CC) ೧. ಮಾಸ್ತಮ್ಮ ದೇವಸ್ಥಾನ ==
ಮಾರಗೌಡನಹಳ್ಳಿಯ ದಕ್ಷಿಣ ದಿಕ್ಕಿನಲ್ಲಿ, ನಲ್ಲಹಳ್ಳಿಗೆ ಹೋಗುವ ರಸ್ತೆಯ ಬದಿಯಲ್ಲಿ ಮಾಸ್ತಮ್ಮ ದೇವಸ್ಥಾನವಿದೆ. ಈ ರಸ್ತೆಯನ್ನು ಗ್ರಾಮಸ್ಥರು '''<nowiki/>'ಸಂಕ್ರಾಂತಿ ತಿಟ್ಟಿನ ರಸ್ತೆ'''' ಎಂದೂ ಕರೆಯುತ್ತಾರೆ. ಈ ಸ್ಥಳಕ್ಕೆ ಸರಿಸುಮಾರು ೨೦೦ ವರ್ಷಗಳ ಇತಿಹಾಸವಿದೆ.
· '''ಸಂಪ್ರದಾಯ:''' ಹಿಂದೆ ರೈತರು ತಾವು ತಂದ ಹೊಸ ಬಟ್ಟೆಗಳನ್ನು ಮೊದಲು ಅಮ್ಮನ ಸನ್ನಿಧಾನದಲ್ಲಿಟ್ಟು ಪೂಜೆ ಸಲ್ಲಿಸಿ, ನಂತರ ಉಡುವ ಪದ್ಧತಿಯಿತ್ತು. ಕಾಲಕ್ರಮೇಣ ಈ ಸಂಪ್ರದಾಯ ಕಡಿಮೆಯಾಗಿದ್ದರೂ, ಇಂದಿಗೂ ಹಬ್ಬ-ಹರಿದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ ಸಲ್ಲಿಸುವ ಪದ್ಧತಿ ಜಾರಿಯಲ್ಲಿದೆ.
· '''ವಿಶೇಷತೆ:''' ಈ ದೇವಸ್ಥಾನದಲ್ಲಿ ಯಾವುದೇ ವಿಗ್ರಹವಿಲ್ಲ; ಬದಲಾಗಿ ಇಲ್ಲಿರುವ '''ಆಲದ ಮರ'''ವನ್ನೇ 'ಮಾಸ್ತಮ್ಮ' ಎಂದು ಭಾವಿಸಿ ಪೂಜಿಸಲಾಗುತ್ತದೆ. ಮಾಸ್ತಮ್ಮ ದೇವಿ ಮಾಟ-ಮಂತ್ರ ಮತ್ತು ದೃಷ್ಟಿದೋಷಗಳನ್ನು ನಿವಾರಿಸುತ್ತಾಳೆ ಎಂಬ ಬಲವಾದ ನಂಬಿಕೆ ಗ್ರಾಮಸ್ಥರಲ್ಲಿದೆ.
== DD) ೨. ನಂದಿಗುಡಿ (ಬಸವೇಶ್ವರ ದೇವಸ್ಥಾನ) ==
ಊರಿನ ದಕ್ಷಿಣ ಭಾಗದ ಪ್ರವೇಶದ್ವಾರದ ಬಳಿ, ಕೆರೆಯ ಅಂಚಿನಲ್ಲಿ ಈ ನಂದಿಗುಡಿ ಇದೆ. ಇದರ ಪಕ್ಕದಲ್ಲೇ ಗ್ರಾಮಸ್ಥರು ನಿರ್ಮಿಸಿರುವ '''ಸರ್ ಎಂ. ವಿಶ್ವೇಶ್ವರಯ್ಯನವರ ಪ್ರತಿಮೆ'''ಯನ್ನು ಕಾಣಬಹುದು.
==== ಐತಿಹಾಸಿಕ ಹಿನ್ನೆಲೆ: ====
ಹಿಂದಿನ ಕಾಲದಲ್ಲಿ ರಾಜರು ಈ ಭಾಗಕ್ಕೆ ಭೇಟಿ ನೀಡಿದ್ದಾಗ, ಇಲ್ಲಿನ ರೈತರು ಗೋವುಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ ಸಾಕಿ-ಸಲುಹುತ್ತಿದ್ದುದನ್ನು ಕಂಡರು. ಇದರ ಸಂಕೇತವಾಗಿ ಮತ್ತು ತಮ್ಮ ಭೇಟಿಯ ನೆನಪಿಗಾಗಿ, ರಾಜರು ತಂಗಿದ್ದ ಸ್ಥಳವನ್ನು '''<nowiki/>'ಬಸವೇಶ್ವರನ ಜಾಗ'''' ಎಂದು ಕರೆದರು. ಆರಂಭದಲ್ಲಿ ಇಲ್ಲಿ ಉದ್ದನೆಯ ಏಕಶಿಲಾ ಬಸವಣ್ಣನ ವಿಗ್ರಹವಿತ್ತು. ಆದರೆ ಕಾಲಕ್ರಮೇಣ ಅದು ಕಳುವಾದ ಕಾರಣ, ನಂತರದ ದಿನಗಳಲ್ಲಿ ಚಿಕ್ಕ ಗುಡಿಯನ್ನು ಕಟ್ಟಿ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಕೆಲವರ ಪ್ರಕಾರ, ಈ ಪ್ರಸ್ತುತ ವಿಗ್ರಹವನ್ನು ಅರ್ಚಕರು ಜೋಳಿಗೆಯಲ್ಲಿ ತಂದು ಸ್ಥಾಪಿಸಿದ್ದೆಂದು ಹೇಳಲಾಗುತ್ತದೆ.
==== ಧಾರ್ಮಿಕ ಆಚರಣೆ ಮತ್ತು ಹಬ್ಬದ ವಿಶೇಷತೆಗಳು: ====
· '''ಕೊಂಡ ಹಾಯುವ ಆಚರಣೆ:''' ಗ್ರಾಮದೇವತೆಯ ಹಬ್ಬ ಮುಗಿದ ಮರುದಿನ (ಸೋಮವಾರ) ಬೆಳಗಿನ ಜಾವ ೨ ರಿಂದ ೪ ಗಂಟೆಯ ಅವಧಿಯಲ್ಲಿ ಬಸವೇಶ್ವರನ ಅದ್ದೂರಿ ಹಬ್ಬ ನಡೆಯುತ್ತದೆ. ಈ ಸಂದರ್ಭದಲ್ಲಿ '''ನಿಂಗೀರಯ್ಯನವರು''' ಕೊಂಡವನ್ನು ಹಾಯುತ್ತಾರೆ. ಗ್ರಾಮದೇವತೆಯ ಆಭರಣದ ಮನೆಯಿಂದ ನಿಂಗೀರಯ್ಯನವರಿಗೆ ವಿಶೇಷ ಪೂಜೆ ಸಲ್ಲಿಸಿ, ತಮಟೆ-ನಗಾರಿ ವಾದ್ಯಗಳೊಂದಿಗೆ ಕರೆತರಲಾಗುತ್ತದೆ. ಊರಿನ ಮಹಿಳೆಯರು ನಿಂಗೀರಯ್ಯನವರ ನಾಟ್ಯವನ್ನು ವೀಕ್ಷಿಸುತ್ತಾ ಮೆರವಣಿಗೆಯಲ್ಲಿ ಸಾಗುತ್ತಾರೆ. ಇಲ್ಲಿ ಯೋಗಿ ನಿಂಗೀರಯ್ಯನವರಿಗೆ ದೇವರು ಮೈಮೇಲೆ ಬರುವುದಿಲ್ಲವಾದರೂ, ಅವರು ಅತ್ಯಂತ ಶ್ರದ್ಧೆಯಿಂದ ಕೊಂಡವನ್ನು ಹಾಯುವುದು ಇಲ್ಲಿನ ವಿಶೇಷ.
· '''ಕಾರ್ಯ ಹಂಚಿಕೆ ಮತ್ತು ಜಾನಪದ ನಿಷ್ಠೆ:'''
o ಕೊಂಡಕ್ಕೆ ಗ್ರಾಮದ ಪ್ರತಿಯೊಂದು ಮನೆಯವರೂ ಶ್ರದ್ಧೆಯಿಂದ ಸೌದೆಗಳನ್ನು ತಂದು ಹಾಕುತ್ತಾರೆ.
o ಗುಡಿಯ ಮುಂದಿನ ಕೊಂಡವನ್ನು ಸಿದ್ಧಪಡಿಸಲು ಗ್ರಾಮದಲ್ಲಿ ಕಾರ್ಯ ಹಂಚಿಕೆಯಿದೆ. '''ಸಿದ್ಧಣ್ಣನವರ ಮನೆಯವರು''' ಕೊಂಡವನ್ನು ಬೇಯಿಸುವ (ಕಿಚ್ಚು ಕಾಯಿಸುವ) ಕಾಯಕ ಮಾಡಿದರೆ, '''ಬೋರಿಕುಳ್ಳಿರವರ ಹಾಗೂ ಚಿಟ್ಟೆ ಚನ್ನಯ್ಯನ ಹಟ್ಟಿಯವರು''' ಅಲಂಕಾರದ ಉಸ್ತುವಾರಿ ವಹಿಸುತ್ತಾರೆ.
· '''ಪಶುಪ್ರೇಮ ಮತ್ತು ನಂಬಿಕೆಗಳು:'''
o '''ಕೊಂಡ ಮುಚ್ಚುವ ಪದ್ಧತಿ:''' ಕೊಂಡ ಹಾಯ್ದ ತಕ್ಷಣ ಬೆಳಗಿನ ಜಾವವೇ ಅದನ್ನು ಮಣ್ಣಿನಿಂದ ಮುಚ್ಚಲಾಗುತ್ತದೆ. ಏಕೆಂದರೆ, ಸೂರ್ಯೋದಯದ ನಂತರ ದನ-ಕರುಗಳು ಈ ಕೊಂಡದ ಬೂದಿಯನ್ನು ನೋಡಬಾರದು; ನೋಡಿದರೆ ಜಾನುವಾರುಗಳಿಗೆ ಕೆಡಕಾಗುತ್ತದೆ ಎಂಬ ಬಲವಾದ ಜನಪದ ನಂಬಿಕೆಯಿದೆ.
o '''ಕೃಷಿ ಪರಿಕರಗಳ ಸಮರ್ಪಣೆ:''' ಎತ್ತಿನಗಾಡಿಯ ನೊಗ ಮತ್ತು ಉಳುವ ನೊಗಗಳನ್ನು ಸಾಮಾನ್ಯ ಉರುವಲಾಗಿ ಬಳಸದೆ, ಭಕ್ತಿಯಿಂದ ಈ ಕೊಂಡದ ಕಿಚ್ಚಿಗೆ ಸಮರ್ಪಿಸುತ್ತಾರೆ.
o '''ಬಸವನ ವಾರ:''' ಹಬ್ಬ ನಡೆಯುವ ಸೋಮವಾರದಂದು ಮಾರಗೌಡನಹಳ್ಳಿಯ ಯಾವುದೇ ರೈತರೂ ಎತ್ತುಗಳನ್ನು ಉಳುವ ಕಾಯಕಕ್ಕೆ ಕಟ್ಟುವುದಿಲ್ಲ. ಅಂದು ಬಸವೇಶ್ವರನಿಗೆ ಮೀಸಲಾದ ಪವಿತ್ರ ದಿನವೆಂದು ಭಾವಿಸಿ ಜಾನುವಾರುಗಳಿಗೆ ವಿಶ್ರಾಂತಿ ನೀಡಿ ಪೂಜಿಸುತ್ತಾರೆ.
ಹೀಗೆ ನಂದಿಗುಡಿಯ ಆಚರಣೆಗಳು ಮಾರಗೌಡನಹಳ್ಳಿ ಗ್ರಾಮಸ್ಥರ ಪಶುಪ್ರೇಮ, ಕೃಷಿ ಸಂಸ್ಕೃತಿ ಮತ್ತು ಆಳವಾದ ಜಾನಪದ ನಂಬಿಕೆಗಳಿಗೆ ಜೀವಂತ ಸಾಕ್ಷಿಯಾಗಿವೆ.
· '''"ಎತ್ತಿಲ್ಲದ ಮನೆ, ಧೈರ್ಯ-ಶಕ್ತಿ ಇಲ್ಲದ ಮನೆಯಂತೆ."'''
· ''(ಅರ್ಥ: ಎತ್ತುಗಳಿಲ್ಲದ ಮನೆ ಆಸರೆ ಮತ್ತು ಧೈರ್ಯವಿಲ್ಲದ ಮನೆಯಂತೆ ಭಾಸವಾಗುತ್ತದೆ.)''
· '''"ರಾತ್ರಿ ಎನ್ನಲು ಹೆಂಡತಿ ಬೇಕು, ರೈತ ಎನ್ನಲು ದನ-ಕರು ಬೇಕು."'''
· ''(ತಿದ್ದುಪಡಿ: 'ಎಂದಾಗ/ಬೇಕಾ' ಎಂಬ ಗೊಂದಲಕಾರಿ ಪದಗಳ ಬದಲಿಗೆ ಜನಪದ ಪ್ರಾಸಕ್ಕೆ ತಕ್ಕಂತೆ 'ಎನ್ನಲು/ಬೇಕು' ಎಂದು ತಿದ್ದಲಾಗಿದೆ.)''
· '''"ಗೋವಿಲ್ಲದ ಮನೆ, ಭಾವವಿಲ್ಲದ ಮನವಿದ್ದಂತೆ."'''
· ''(ತಿದ್ದುಪಡಿ: 'ಗೋವು ಇಲ್ಲದ' $\rightarrow$ 'ಗೋವಿಲ್ಲದ', 'ಮನವಿದಂತೆ' $\rightarrow$ 'ಮನವಿದ್ದಂತೆ'.)''
· '''"ಸಾಕೋಕೆ ಮಕ್ಕಳೇ ಬೇಕಿಲ್ಲ, ಪಶು-ಪ್ರಾಣಿ ಸಾಕಿದರೆ ಸಾಕು; ಸಾಯೋದಕ್ಕೆ ಕಾರಣ ಬೇಕಾ?"'''
· ''(ಅರ್ಥ ಮತ್ತು ವಾಕ್ಯ ಸರಿಪಡಿಸಲಾಗಿದೆ: ಜಾನಪದದಲ್ಲಿ 'ಮಕ್ಕಳಿಲ್ಲದಿದ್ದರೂ ಪಶು-ಪ್ರಾಣಿಗಳನ್ನು ಸಾಕಿದರೆ ಸಾಕು, ಅವುಗಳೇ ಮಕ್ಕಳಂತೆ ಇರುತ್ತವೆ' ಎಂಬ ಭಾವನೆಗೆ ತಕ್ಕಂತೆ ವಾಕ್ಯರಚನೆ ತಿದ್ದಲಾಗಿದೆ.)''
== EE) ಕವನ: ಗೋಮಾತೆ ==
ಧರಣಿ ಮಳೆಯ ಭರಣಿ ಸೋನೆ,
ಮಗದ ಸಿರಿಯ ನಗುವ ಮಾಲೆ.
ತುಂತುರು ಮಳೆಯ ಭುವಿಯೂ ನಾನೇ,
ಮನೆ-ಮಡಿಲ ಗುಡಿಯು ನಾನೇ.
ನಾ ಲೋಕದ ಪೂಜೆಯ ದೇವರು,
ನಾ ರೈತರ ಸ್ವರ್ಗ, ನಾಗರಿಕರ ಮೂರ್ತಿ.
ನಾ ಯಾರೆಂದು ಗೊತ್ತೇ? ನಾನೇ ಗೋಮಾತೆ...
ಪುನೀತಭಾಸ್ಕರ್ ಎಂ.ಬಿ ಮಾರಗೌಡನಹಳ್ಳಿ
== FF) ೩. ಈರಪ್ಪನ ಅರಳಿಕಟ್ಟೆ ==
ಮಾರಗೌಡನಹಳ್ಳಿ ಗ್ರಾಮದ ದಕ್ಷಿಣದಿಂದ ಎರಡನೆಯ ಬೀದಿಯ ರಸ್ತೆಯ ಪಕ್ಕದಲ್ಲಿ (ಊರಿನ ಪೂರ್ವ ಭಾಗದಲ್ಲಿ) ಈರಪ್ಪನ ಅರಳಿಕಟ್ಟೆಯನ್ನು ಕಾಣಬಹುದು. ಈ ಅರಳಿಕಟ್ಟೆಯು '''<nowiki/>'ಊರಿನ ಹೆಬ್ಬಾಗಿಲು'''' ಎಂದೇ ಪ್ರಸಿದ್ಧವಾಗಿದೆ.
· '''ಸಂಪ್ರದಾಯ:''' ಊರಿಗೆ ಹೊಸದಾಗಿ ಬರುವ ನವವಧುಗಳು (ನವವಧೂ-ವರರು) ಊರಿನ ಒಳಗೆ ಪ್ರವೇಶಿಸುವ ಮೊದಲು ಈ ಅರಳಿಕಟ್ಟೆಗೆ ಪೂಜೆ ಸಲ್ಲಿಸಿ, ನಂತರ ಮನೆಗೆ ಆಗಮಿಸುವ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ.
· '''ವೀರಕಲ್ಲು ಮತ್ತು ಶಾಸನ:''' ಇಲ್ಲಿ ಪುರಾತನ ವೀರಕಲ್ಲು ಮತ್ತು ಶಾಸನಗಳು ಕಂಡುಬರುತ್ತವೆ. ಹಿರಿಯರು ಹೇಳುವಂತೆ, ಈ ಶಾಸನವನ್ನು ಯಾರು ಬರೆಸಿದವರು ಎಂಬ ಸ್ಪಷ್ಟ ಮಾಹಿತಿಯಿಲ್ಲ. ಆದರೆ, ಈ ಶಾಸನವನ್ನು ಓದಿದರೆ ಅದರಲ್ಲಿ 'ನಿಧಿ' ಇರುವುದು ತಿಳಿಯುತ್ತದೆ ಎಂಬ ಮಾತಿದೆ. ಹಿಂದೆ ವಿದೇಶಿಯರು (ಅಥವಾ ಪುರಾತತ್ವ ಶಾಸ್ತ್ರಜ್ಞರು) ಈ ಶಾಸನವನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದಾಗ ಗ್ರಾಮಸ್ಥರು ಒಗ್ಗಟ್ಟಿನಿಂದ ಅದನ್ನು ನಿರಾಕರಿಸಿದ್ದರು.
· '''ವಿಶೇಷತೆ ಹಾಗೂ ಐತಿಹಾಸಿಕ ನಂಬಿಕೆ:'''
1. ಈ ಕಟ್ಟೆಯಲ್ಲಿ ವಿವಿಧ ರೀತಿಯ ದೇವತಾವಿಗ್ರಹಗಳನ್ನು ಕಾಣಬಹುದಾಗಿದೆ. ಹಿಂದೆ ಗ್ರಾಮದಲ್ಲಿ ಉಂಟಾಗುವ ತಕರಾರು, ಜಗಳಗಳನ್ನು ಬಗೆಹರಿಸಲು ಈ ಕಟ್ಟೆಯು ಪ್ರಮುಖ ನ್ಯಾಯಪೀಠದಂತೆ ಬಳಕೆಯಾಗುತ್ತಿತ್ತು.
ಈರಪ್ಪನ ಅರಳಿಕಟ್ಟೆಯು ಗ್ರಾಮದೇವತೆಯಾದ ಶ್ರೀ ಪಟ್ಟಲದಮ್ಮ ದೇವಿಯ ಉಗಮ ಸ್ಥಾನವೆಂದೂ ಬಲವಾಗಿ ನಂಬಲಾಗುತ್ತದೆ. ಈ ದೇವಿಯ ಪೂಜಾ ಪರಂಪರೆಯ ಮೊದಲ ಮೆಟ್ಟಿಲಾಗಿ ಈ ಕಟ್ಟೆಯು ಕಂಗೊಳಿಸುತ್ತಿದೆ.
== GG) ೪. ತಿರುಮಲೇಶ್ವರ (ತಿಮ್ಮಪ್ಪ) ದೇವಸ್ಥಾನ ==
ಮಾರಗೌಡನಹಳ್ಳಿಯ ಹಳೆ ಊರಿನಲ್ಲಿರುವ ಈ ತಿರುಮಲೇಶ್ವರ ದೇವಸ್ಥಾನವು ಸರಿಸುಮಾರು ೧೦೦೦ ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯವಾಗಿದೆ.
==== ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆ: ====
ಜನಪದ ಐತಿಹ್ಯದ ಪ್ರಕಾರ, ಆನೆಕಲ್ ರಾಜನು ಈ ದೇವಾಲಯವನ್ನು ಒಂದೇ ದಿನದಲ್ಲಿ ಕಟ್ಟಿಸಿದನು ಎಂಬ ಮಾತಿದೆ. ಹಿರಿಯ ಅರ್ಚಕರಾದ ಕೆ.ಟಿ. ಶ್ರೀನಿವಾಸಮೂರ್ತಿ ಅವರ ಪ್ರಕಾರ, 'ದೇವತೆಗಳ ಒಂದು ದಿನ ಎಂದರೆ ಮಾನವರ ಲೆಕ್ಕಾಚಾರದಲ್ಲಿ ಒಂದು ವರ್ಷಕ್ಕೆ ಸಮಾನ'. ಇದನ್ನು 'ಬ್ರಹ್ಮ ದಿನ' ಎಂದು ಕರೆಯಲಾಗುತ್ತದೆ. ವಿಷ್ಣುವರ್ಧನನ ಕಾಲ ಹಾಗೂ ತಿಮ್ಮಪ್ಪ ಒಡೆಯರ ಕಾಲದಲ್ಲಿ (ಸುಮಾರು ೧೦೦೫ ವರ್ಷಗಳ ಹಿಂದೆ) ಕಲ್ಲಿನಿಂದ ಈ ಗುಡಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ದೇವಸ್ಥಾನದ ಮುಂದೆ ಸುಂದರವಾದ ಕಲ್ಲಿನ ಗರುಡಗಂಭವಿದೆ. ಗರ್ಭಗುಡಿಯಲ್ಲಿ ಮುಖ್ಯದೇವ ರಂಗನಾಥ/ತಿರುಮಲೇಶ್ವರನ ಜೊತೆಗೆ ಮಧ್ವಾಚಾರ್ಯರು ಹಾಗೂ ರಾಮಾನುಜಾಚಾರ್ಯರ ವಿಗ್ರಹಗಳನ್ನು ಕಾಣಬಹುದು.
==== ತಿಮ್ಮಪ್ಪನ ಹಬ್ಬ ಹಾಗೂ ಹರಿ ಸೇವೆ (ಆಚರಣೆಯ ಹಂತಗಳು): ====
ಗ್ರಾಮದೇವತೆಯ ಹಬ್ಬ ಮುಗಿದ ೧೫ ದಿನಗಳ ನಂತರ (ಸಾಮಾನ್ಯವಾಗಿ ಮೇ ತಿಂಗಳಲ್ಲಿ) ವರ್ಷಕ್ಕೊಮ್ಮೆ ಈ ದೇವಸ್ಥಾನದಲ್ಲಿ ಅತ್ಯಂತ ಅದ್ದೂರಿಯಾಗಿ ಹಬ್ಬ ನಡೆಯುತ್ತದೆ.
1. '''ಪರಾಕ್ ಹಾಕುವುದು (ಪ್ರಸಾದ ಸಂಗ್ರಹಣೆ):'''
o ತಿಮ್ಮಪ್ಪನ ಒಕ್ಕಲಿಗೆ ಸೇರಿದ ಸುಮಾರು ೭೦ಕ್ಕೂ ಹೆಚ್ಚು ಪಂಗಡಗಳ ಜನರಿದ್ದಾರೆ. ಹಬ್ಬದ ದಿನ ಇವರೆಲ್ಲರೂ ಮಡಿಯುಟ್ಟು, ಹಣೆಗೆ ಶಂಖ-ಚಕ್ರ-ನಾಮಗಳನ್ನು ಧರಿಸಿ, ತಮಟೆ-ನಗಾರಿ ವಾದ್ಯಗಳೊಂದಿಗೆ "ಗೋವಿಂದ, ಗೋವಿಂದ" ಎಂದು ಜಯಘೋಷ ಕೂಗುತ್ತಾ ಮನೆ ಮನೆಗೆ ಹೋಗಿ ಪರಾಕ್ ಹಾಕುತ್ತಾರೆ (ಪ್ರಸಾದ ಸಂಗ್ರಹಿಸುತ್ತಾರೆ).
o ಇವರೊಂದಿಗೆ ಊರಿನ ಹಿರಿಯರು ತಿಮ್ಮಪ್ಪನ ಅಡಿಗೆ (ಬೆತ್ತ), ಛತ್ರಿಯನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗುತ್ತಾರೆ.
o ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಮಹಿಳೆಯರು ಮತ್ತು ಮಕ್ಕಳು ಸಡಗರದಿಂದ ಸಿದ್ಧರಾಗಿರುತ್ತಾರೆ. ಮನೆಬಾಗಿಲ ಮುಂದೆ ಮಣೆಯನ್ನಿಟ್ಟು, ಅದರ ಮೇಲೆ ಬಿಳಿ ಪಂಚೆ ಹಾಸಿ, ಬಾಳೆಎಲೆಯನ್ನಿಡುತ್ತಾರೆ. ಅದರ ಮೇಲೆ ಐಸಕ (ಅಕ್ಕಿಹಿಟ್ಟಿನ ಸಿಹಿ), ಬೆಲ್ಲದ ಅನ್ನ, ಕಜ್ಜಾಯ ಮುಂತಾದ ಸಿಹಿ ತಿಂಡಿಗಳನ್ನು ಬಡಿಸಿ, ಪಕ್ಕದಲ್ಲಿ ದೀಪ ಬೆಳಗಿಸಿ ಸ್ವಾಮಿಯ ಒಕ್ಕಲಿನವರನ್ನು ಸ್ವಾಗತಿಸುತ್ತಾರೆ.
2. '''ಹರಿ ಸೇವೆ ಮತ್ತು ಅನ್ನಸಂತರ್ಪಣೆ:'''
o ಹಬ್ಬಕ್ಕೂ ಮೊದಲು ಊರಿನ ಪ್ರತಿಯೊಂದು ಮನೆಯವರು ತಮ್ಮ ಇಚ್ಛೆಯಂತೆ ಅಕ್ಕಿ, ರಾಗಿಹಿಟ್ಟು, ತೆಂಗಿನಕಾಯಿ, ಬೆಲ್ಲ, ಕಾಳುಗಳು, ಎಣ್ಣೆ ಹಾಗೂ ಉರುವಲು ಸೌದೆಯನ್ನು ಧಾರ್ಮಿಕ ಕಾರ್ಯಕ್ಕೆ ನೀಡುತ್ತಾರೆ. ಕೆಲವರು ಹಣದ ರೂಪದಲ್ಲೂ ಕಾಣಿಕೆ ಸಲ್ಲಿಸುತ್ತಾರೆ.
o ಸಂಜೆ ೫ ರಿಂದ ೮ ಗಂಟೆಯವರೆಗೆ ಬೃಹತ್ ಮಟ್ಟದ '''<nowiki/>'ಹರಿ ಸೇವೆ'''' (ಅನ್ನಸಂತರ್ಪಣೆ) ನಡೆಯುತ್ತದೆ. ದಾಸರ ಪಂಗಡಕ್ಕೆ 'ಎಡೆ' ಇಟ್ಟ ನಂತರ ಸಾರ್ವಜನಿಕ ಭೋಜನ ಪ್ರಾರಂಭವಾಗುತ್ತದೆ. ಊರಿನ ಯುವಕರು ಮತ್ತು ಗಣ್ಯರು ಶ್ರದ್ಧೆಯಿಂದ ಈ ಅನ್ನಸಂತರ್ಪಣೆಯನ್ನು ನಡೆಸಿಕೊಡುತ್ತಾರೆ. ಅಂದು ಅನೇಕ ಜನರು ಉಪವಾಸವಿದ್ದು (ಒಪ್ಪತ್ತು ಬಿಟ್ಟು), ಈ ಹರಿ ಸೇವೆಯ ಪ್ರಸಾದವನ್ನು ಸ್ವೀಕರಿಸುತ್ತಾರೆ.
==== ಜನಪದೀಯ ಮತ್ತು ಸಾಂಸ್ಥಿಕ ಮೌಲ್ಯಗಳು: ====
ಈ ಹಬ್ಬವು ಕೇವಲ ಧಾರ್ಮಿಕ ಆಚರಣೆಯಷ್ಟೇ ಆಗಿರದೆ, ಸಾಮುದಾಯಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ:
1. '''ಸಾಮರಸ್ಯದ ಸಂಕೇತ:''' ಊರಿನ ಜನರು ಯಾವುದೇ ಜಾತಿ, ಪಂಗಡ ಅಥವಾ ತಾರತಮ್ಯವಿಲ್ಲದೆ ಒಂದಾಗಿ ಸೇರಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಳ್ಳುತ್ತಾರೆ.
2. '''ಸಹಕಾರ ತತ್ವ:''' ಪ್ರತಿಯೊಂದು ಮನೆಯಿಂದಲೂ ಪದಾರ್ಥಗಳನ್ನು ಸಂಗ್ರಹಿಸಿ ಬೃಹತ್ ಅನ್ನಸಂತರ್ಪಣೆ ಮಾಡುವುದು ಗ್ರಾಮಸ್ಥರ ಒಗ್ಗಟ್ಟು ಮತ್ತು ಧರ್ಮಶ್ರದ್ಧೆಯನ್ನು ಎತ್ತಿಹಿಡಿಯುತ್ತದೆ.
ಮನುಷ್ಯನು ಸಮಾಜದಲ್ಲಿ ನೆಲೆ ಕಂಡುಕೊಳ್ಳಲು ಶ್ರಮಿಸುವಂತೆಯೇ, ಪ್ರೀತಿ ಮತ್ತು ಸ್ನೇಹವನ್ನು ಗಳಿಸಲು ಇಂತಹ ಸಾಂಸ್ಕೃತಿಕ ಹಬ್ಬಗಳು ನೆರವಾಗುತ್ತವೆ. ಯಾವುದೇ ಭೇದಭಾವವಿಲ್ಲದೆ ವಿಸ್ಮಯಕಾರಿಯಾಗಿ ಒಂದೆಡೆ ಸೇರುವ ಮಾರಗೌಡನಹಳ್ಳಿಯ ಜನರು, ಜಾನಪದೀಯ ಭಾವನೆಗಳಿಗೆ ಅತ್ಯಂತ ಸುಂದರವಾಗಿ ಸ್ಪಂದಿಸುತ್ತಾರೆ ಎಂಬುದಕ್ಕೆ ಈ ಹಬ್ಬವೇ ಜೀವಂತ ಸಾಕ್ಷಿ.
== HH) ೫. ಬೋರಪ್ಪ ದೇವಸ್ಥಾನ ==
ಮಾರಗೌಡನಹಳ್ಳಿಯ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಬೋರಪ್ಪ ದೇವಸ್ಥಾನವೂ ಒಂದಾಗಿತ್ತು. ಆದರೆ, ಇದು ಒಂದು ಅಪರೂಪದ ಹಾಗೂ ಭಿನ್ನವಾದ ಇತಿಹಾಸವನ್ನು ಹೊಂದಿರುವ ದೇವಾಲಯವಾಗಿದೆ. ಪ್ರಸ್ತುತ ಈ ದೇವಾಲಯ ಸಂಪೂರ್ಣವಾಗಿ ನಶಿಸಿಹೋಗಿದೆ.
==== ಐತಿಹಾಸಿಕ ನಂಬಿಕೆ ಹಾಗೂ ಐತಿಹ್ಯ: ====
ಹಿಂದೆ ಈ ದೇವರಿಗೆ ಅತ್ಯಂತ ವಿಜೃಂಭಣೆಯಿಂದ ಪೂಜೆ-ಪುರಸ್ಕಾರಗಳನ್ನು ಹಾಗೂ ವರ್ಷಕ್ಕೊಮ್ಮೆ ಅದ್ದೂರಿಯಾಗಿ ಹಬ್ಬವನ್ನು ಆಚರಿಸಲಾಗುತ್ತಿತ್ತು ಎಂಬ ಮಾಹಿತಿಯಿದೆ. ಆದರೆ ಜಾನಪದ ಐತಿಹ್ಯದ ಪ್ರಕಾರ, ಬೋರಪ್ಪ ದೇವರು ವರ್ಷಕ್ಕೊಮ್ಮೆ ತುಂಬು ಗರ್ಭಿಣಿಯನ್ನು ಬಲಿಯಾಗಿ ಕೇಳಿತು ಎಂಬ ಕಾರಣಕ್ಕೆ, ಭೀತಿ ಹಾಗೂ ಆಕ್ರೋಶಗೊಂಡ ಗ್ರಾಮಸ್ಥರು ಈ ದೇವಾಲಯವನ್ನು ಕೆಡವಿಹಾಕಿದರು ಎಂದು ಹೇಳಲಾಗುತ್ತದೆ.
ದೇವಾಲಯವು ಎಷ್ಟರಮಟ್ಟಿಗೆ ನಾಶವಾಗಿದೆಯೆಂದರೆ, ಪ್ರಸ್ತುತ ಆ ಜಾಗದಲ್ಲಿ ದೇವಸ್ಥಾನವಿತ್ತು ಎಂಬುದಕ್ಕೆ ಯಾವುದೇ ಕುರುಹುಗಳಾಗಲಿ ಅಥವಾ ಅಡಿಪಾಯವಾಗಲಿ ಉಳಿದಿಲ್ಲ. ಈ ಊರಿನಲ್ಲಿ ಇಂತಹದೊಂದು ದೇವಾಲಯವಿತ್ತು ಎಂದು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಾಗದ ರೀತಿಯಲ್ಲಿ ಅದು ಕಾಲಗರ್ಭದಲ್ಲಿ ಲೀನವಾಗಿದೆ.
==== ಜಾನಪದೀಯ ಮೌಲ್ಯ ಹಾಗೂ ವಿಶ್ಲೇಷಣೆ: ====
ಸ್ಥಳೀಯವಾಗಿ ಈ ದೇವಾಲಯ ನಶಿಸಿಹೋಗಿದ್ದರೂ, ಜನಪದೀಯ ಅಧ್ಯಯನದ ದೃಷ್ಟಿಯಿಂದ ಈ ಘಟನೆ ಅತ್ಯಂತ ವಿಶಿಷ್ಟವಾಗಿದೆ. ದೇವರು ಗರ್ಭಿಣಿ ಮಹಿಳೆಯನ್ನು ಬಲಿ ಕೇಳಲು ನಿಜವಾದ ಕಾರಣವೇನು ಎಂಬುದರ ಸ್ಪಷ್ಟ ಚಿತ್ರಣ ಸಿಗುವುದಿಲ್ಲವಾದರೂ, ಜಾನಪದ ಕಥನಗಳಲ್ಲಿ ಇಂತಹ ಕ್ರೂರ ಬಲಿ ಆಚರಣೆಗಳ ಉಲ್ಲೇಖಗಳು ಕಂಡುಬರುತ್ತವೆ.
ಈ ದೇವಾಲಯದ ವಿನಾಶವು ಜಾನಪದ ಸಮಾಜದ ಒಂದು ಪ್ರಮುಖ ಮನೋಭಾವವನ್ನು ಎತ್ತಿಹಿಡಿಯುತ್ತದೆ: '''"ಜನರಿಗೆ ಕಷ್ಟವನ್ನು, ಭೀತಿಯನ್ನು ಅಥವಾ ವಿನಾಶವನ್ನು ತಂದೊಡ್ಡುವ ದೇವತೆಗಳು ಅಥವಾ ಆಚರಣೆಗಳು ಸಮಾಜಕ್ಕೆ ಬೇಡ"''' ಎಂಬ ಪ್ರಬುದ್ಧ ನಿರ್ಧಾರಕ್ಕೆ ಗ್ರಾಮಸ್ಥರು ಬಂದಿರುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ
== II) ೬. ಈಶ್ವರಪ್ಪನ ಗುಡಿ ==
ಮಾರಗೌಡನಹಳ್ಳಿ ಗ್ರಾಮದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಈಶ್ವರಪ್ಪನ ಗುಡಿಯೂ ಒಂದಾಗಿದೆ. ಇದು ಸರಿಸುಮಾರು ೧೦೦೧ ವರ್ಷಗಳಷ್ಟು ಸುದೀರ್ಘ ಇತಿಹಾಸವನ್ನು ಹೊಂದಿರುವ ಕಲ್ಲಿನಿಂದ ನಿರ್ಮಿತವಾದ ದೇವಾಲಯವಾಗಿದೆ.
==== ಚಾರಿತ್ರಿಕ ಹಿನ್ನೆಲೆ ಮತ್ತು ವಾಸ್ತುಶಿಲ್ಪ: ====
ಗ್ರಾಮದ ಹಿರಿಯ ನಾಗರಿಕರಾದ ಸಿದ್ಧೇಗೌಡನದೊಡ್ಡಿಯ ಮಲ್ಲ ಎಂಬುವವರ ಪ್ರಕಾರ, ಪಕ್ಕದ ಕೆರಗೋಡು ಗ್ರಾಮದ ಪ್ರಸಿದ್ಧ 'ಪಂಚಲಿಂಗೇಶ್ವರ ದೇವಾಲಯ' ಮತ್ತು ಈ ಈಶ್ವರಪ್ಪನ ಗುಡಿಯ ಶಿವಲಿಂಗ ಹಾಗೂ ವಿಗ್ರಹಗಳನ್ನು ಕೆತ್ತಿದ ಶಿಲ್ಪಿ ಒಬ್ಬನೇ ಆಗಿದ್ದಾನೆ. ಈ ದೇವಾಲಯವು ಚೋಳರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ. ಸಂಪೂರ್ಣ ಕಲ್ಲಿನಿಂದ ನಿರ್ಮಿತವಾದ ಈ ದೇವಾಲಯವು ಕಾಲಕ್ರಮೇಣ ಮಣ್ಣಿನಿಂದ ಮುಚ್ಚಿಹೋಗಿ, ಪ್ರಸ್ತುತ ಗರ್ಭಗುಡಿಯ ಭಾಗವನ್ನು ಹೊರತುಪಡಿಸಿ ಉಳಿದ ಭಾಗಗಳು ಮಣ್ಣು ಸವೆದು ನಶಿಸುವ ಸ್ಥಿತಿಯಲ್ಲಿದೆ.
==== ಪೂಜಾ ಪರಂಪರೆ ಮತ್ತು ಅರ್ಚಕರು: ====
ಹಿಂದೆ ಈ ಗ್ರಾಮದ ನರಸಿಂಹಯ್ಯ, ತಿರುವೆಂಕಟಪ್ಪ ಹಾಗೂ ರಾಮಪ್ಪ ಎಂಬ ಹಿರಿಯ ಅರ್ಚಕರು ಈಶ್ವರಪ್ಪನ ದೇವಾಲಯ ಮತ್ತು ತಿರುಮಲೇಶ್ವರ ದೇವಾಲಯಗಳ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಪ್ರಸ್ತುತ ನಿಂಗೀರಯ್ಯನವರು ಈಶ್ವರಪ್ಪನ ಗುಡಿ ಹಾಗೂ ನಂದಿಗುಡಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
==== ಗುಪ್ತ ಬಾವಿ ಮತ್ತು ಐತಿಹ್ಯಗಳು: ====
ಈ ದೇವಾಲಯದ ಗರ್ಭಗುಡಿಯ ಒಳಗೆ ಒಂದು ಅಪರೂಪದ ಬಾವಿಯಿದೆ. ಹಿರಿಯರ ಜನಪದ ಐತಿಹ್ಯದ ಪ್ರಕಾರ, ಈ ಬಾವಿಯು ಬೇರೆ ಲೋಕಕ್ಕೆ (ಪಾತಾಳ ಲೋಕಕ್ಕೆ) ಹೋಗುವ ಗುಪ್ತ ದಾರಿಯಾಗಿದೆ ಎಂದು ನಂಬಲಾಗುತ್ತದೆ. ಪ್ರಸ್ತುತ ಸುರಕ್ಷತೆಯ ದೃಷ್ಟಿಯಿಂದ ಈ ಬಾವಿಯನ್ನು ಕಲ್ಲಿನಿಂದ ಮುಚ್ಚಲಾಗಿದೆ. ಈ ಬಾವಿಯೊಳಗೆ ಪುರಾತನ ಕಾಲದ ಚಿನ್ನ, ತಾಮ್ರದ ಪಾತ್ರೆಗಳು ಹಾಗೂ ದೇವರ ಪೂಜಾ ಸಾಮಗ್ರಿಗಳಿವೆ ಎಂಬ ನಂಬಿಕೆಯೂ ಗ್ರಾಮಸ್ಥರಲ್ಲಿದೆ.
==== ಧಾರ್ಮಿಕ ಆಚರಣೆಗಳು ಮತ್ತು ಪ್ರಾಮುಖ್ಯತೆ: ====
· '''ಕಾರ್ತಿಕ ಮಾಸದ ಪೂಜೆ:''' ಕಾರ್ತಿಕ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆ-ಪುರಸ್ಕಾರಗಳು ನಡೆಯುತ್ತವೆ. ಭಕ್ತರು ಮನಃಶಾಂತಿ ಮತ್ತು ಹರಿಕೆಗೆ ಅನುಗುಣವಾಗಿ ೭, ೧೫ ಅಥವಾ ೨೫ ದಿನಗಳ ಕಾಲ ಕ್ರಮವಾಗಿ ಬೆಳಿಗ್ಗೆ ಅಥವಾ ಸಂಜೆ ಈ ದೇವಾಲಯಕ್ಕೆ ಬಂದು ದೀಪ ಬೆಳಗಿಸುತ್ತಾರೆ.
· '''ಅಯ್ಯಪ್ಪ ಸ್ವಾಮಿ ಸನ್ನಿಧಿ:''' ಈ ದೇವಾಲಯದ ಆವರಣದಲ್ಲೇ ಅಯ್ಯಪ್ಪ ಸ್ವಾಮಿಯ ಸನ್ನಿಧಿಯೂ ಇದ್ದು, ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತರು ಇಲ್ಲಿಂದಲೇ ತೀರ್ಥಯಾತ್ರೆಗೆ ಹೊರಡುತ್ತಾರೆ.
· '''ಪೂಜಾ ಬಾವಿ ಮತ್ತು ಕಲ್ಯಾಣಿ:''' ದೇವರ ನಿತ್ಯ ಪೂಜೆಯ ನೀರಿಗಾಗಿ ದೇವಾಲಯದ ಮುಂದೆ ಗ್ರಾಮಸ್ಥರೇ ನಿರ್ಮಿಸಿದ ಬಾವಿಯಿದೆ. ಹಾಗೆಯೇ, ಧಾರ್ಮಿಕ ಕಾರ್ಯಗಳಿಗಾಗಿ ಹಿಂದೆ ನಿರ್ಮಿಸಲಾಗಿದ್ದ ಕೊಳವನ್ನು (ಕಲ್ಯಾಣಿ) ದೇವಾಲಯದಿಂದ ಸ್ವಲ್ಪ ದೂರದಲ್ಲಿ ಕಾಣಬಹುದು.
==== ಸಾಮುದಾಯಿಕ ಕೇಂದ್ರ ಹಾಗೂ ಪ್ರಸ್ತುತ ಸ್ಥಿತಿ: ====
ಗ್ರಾಮದಲ್ಲಿ ಯಾವುದೇ ಹಬ್ಬ-ಹರಿದಿನಗಳು ಅಥವಾ ವಿಶೇಷ ಉತ್ಸವಗಳು ನಡೆದರೂ ಪ್ರಥಮ ಪೂಜೆಯು ಈ ಈಶ್ವರಪ್ಪನ ಗುಡಿಯಲ್ಲೇ ನೆರವೇರುತ್ತದೆ. ದೇವಾಲಯವು ವಿಶಾಲವಾದ ಆವರಣವನ್ನು ಹೊಂದಿರುವುದರಿಂದ, ಗ್ರಾಮಸ್ಥರ ಸಹಕಾರ ಹಾಗೂ ಸರ್ಕಾರದ ಶ್ರಮದಿಂದ ಇಲ್ಲಿ ಸಮುದಾಯ ಭವನ/ಛತ್ರವನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಇಲ್ಲಿ ಸರಳ ವಿವಾಹಗಳು, ಧಾರ್ಮಿಕ ಸಭೆ ಹಾಗೂ ಸಮಾರಂಭಗಳು ಜರುಗುತ್ತವೆ.
ಈ ದೇವಾಲಯವನ್ನು ಗ್ರಾಮಸ್ಥರು '''<nowiki/>'ಊರಿನ ಶಾಂತಿಯ ಸಂಕೇತ'''' ಎಂದು ಭಾವಿಸುತ್ತಾರೆ. ಇಲ್ಲಿಗೆ ಬಂದು ಪೂಜೆ ಸಲ್ಲಿಸಿ, ಸ್ವಲ್ಪ ಸಮಯ ಪ್ರಶಾಂತ ವಾತಾವರಣದಲ್ಲಿ ಕುಳಿತು ಹೋದರೆ ಮನಸ್ಸಿಗೆ ಅಪಾರ ನೆಮ್ಮದಿ ದೊರೆಯುತ್ತದೆ ಎಂಬುದು ಊರಿನವರ ಆಳವಾದ ಅನುಭವವಾಗಿದೆ (ಇದನ್ನು ಲೇಖಕರಾದ ನಾನು ಹಾಗೂ ನನ್ನ ತಾಯಿಯವರಾದ ಶ್ರೀಮತಿ ಎನ್.ಎಲ್. ಲಲಿತ ಅವರೂ ಸಹ ಅನುಭವಿಸಿದ್ದೇವೆ)
== JJ) ==
== KK) ೭) ತಗಡೂರಪ್ಪ ಮತ್ತು ಚಿಕ್ಕಮ್ಮನ ದೇವಸ್ಥಾನ ==
ಮಾರಗೌಡನಹಳ್ಳಿಯ ಹೃದಯಭಾಗದಲ್ಲಿ ತಗಡೂರಪ್ಪ ಮತ್ತು ಚಿಕ್ಕಮ್ಮನ ದೇವಸ್ಥಾನಗಳನ್ನು ಕಾಣಬಹುದು. ಇವು ಮೊದಲು ಮಾರಗೌಡನಹಳ್ಳಿಯ 'ಹಳೆಊರು' ಎಂಬಲ್ಲಿ ನೆಲೆಸಿದ್ದವು ಎಂದು ನಿಂಗಣ್ಣಚಾರಿ (ಪೋಸ್ಟ್ ಮಾಸ್ಟರ್) ಹೇಳುತ್ತಾರೆ. ಚಾಮರಾಜನಗರದ ಪಕ್ಕದ ತಗಡೂರು ಎಂಬ ಗ್ರಾಮದಿಂದ 'ತಗಡೂರಪ್ಪ' ಹೆಸರು ಬಂದಿದೆ ಎಂಬ ಮಾಹಿತಿಯಿದೆ. ಇದೇ ದೇವಾಲಯದ ರೀತಿಯಲ್ಲೇ ಅಂತರಹಳ್ಳಿ (ಮಳವಳ್ಳಿ, ಅಲಗೂರು), ವಾಜಮಂಗಲ (ಮೈಸೂರು), ಪಕ್ಕದ ಹಳ್ಳಿಯಾದ ಶಿವಾರ, ಕೀಳ್ಗಟ್ಟ, ಬೂದನೂರು, ಬನ್ನಿಕುಪ್ಪೆ (ಕನಕಪುರ) ಹಾಗೂ ಚಾಮರಾಜನಗರದಲ್ಲಿ ಈ ದೇವರನ್ನು ಒಂದೇ ದಿನದಂದು ಪ್ರತಿಷ್ಠಾಪನೆ ಮಾಡಲಾಗಿದೆ.
ತಗಡೂರಪ್ಪನ ದೇವಾಲಯದಲ್ಲಿ ಸೋಮವಾರ ಮತ್ತು ಭಾನುವಾರದಂದು ಪೂಜೆ ನಡೆಯುತ್ತದೆ. ಪಕ್ಕದ ಗ್ರಾಮವಾದ ಶಿವಾರದಲ್ಲಿ 'ಅಂಕನಾಥೇಶ್ವರ' ಎಂಬ ಹೆಸರಿನಲ್ಲಿ ಈ ದೇವಾಲಯ ಕಂಡುಬರುತ್ತದೆ. ಅಪ್ಪಾಜಪ್ಪ, ವೀರಪ್ಪ, ಮಹದೇವು ಎಂಬುವರು ಇಲ್ಲಿ ಪೂಜೆ ಮಾಡಿಕೊಂಡು ಬಂದಿರುವ ಅರ್ಚಕರಾಗಿದ್ದಾರೆ. ತಗಡೂರು ಒಕ್ಕಲಿಗೆ ಸೇರಿದ ಪಂಗಡದವರು ಇಲ್ಲಿದ್ದಾರೆ.
ತಗಡೂರಪ್ಪನ ಈ ದೇವಾಲಯದಲ್ಲಿ ನಾಗರ ಹೆಡೆ, ಬಸವನ ಮೂರು ವಿಗ್ರಹಗಳು ಹಾಗೂ ೧೫ ಚಿಕ್ಕ ಚಿಕ್ಕ ಬಸವನ ವಿಗ್ರಹಗಳಿವೆ. ಚಾಮರಾಜನಗರದ ಸಮೀಪದ ತಗಡೂರು ಎಂಬ ಹಳ್ಳಿಯಿಂದ ಈ ದೇವರು ಬಂದಿದೆ ಎಂದು ಹೇಳಲಾಗುತ್ತದೆಯಾದರೂ, ಸರಿಯಾದ ದಂತಕಥೆಯ ಆಧಾರವಿಲ್ಲ. ಇದು ಈ ಹಳ್ಳಿಯ ನಾಗರ ಹೆಡೆಯನ್ನು ಹೊಂದಿರುವ ಮುನೇಶ್ವರ ದೇವಾಲಯವಾಗಿದೆ.
==== ಚಿಕ್ಕಮ್ಮನ ದೇವಸ್ಥಾನ: ====
ಇದು ವಿಶ್ವಕರ್ಮ ಜನಾಂಗಕ್ಕೆ ಸೇರಿದ ದೇವಸ್ಥಾನವಾಗಿದೆ. ಈ ದೇವಸ್ಥಾನವು ಈ ಹಳ್ಳಿಯ ಒಗ್ಗಟ್ಟನ್ನು ಸಾರುವ ಸಂಕೇತವಾಗಿದೆ. ಹಾಗೂ ಈ ದೇವಾಲಯವು ಈ ಊರಿನ ಎಲ್ಲಾ ಜನತೆಯ ಸಹಕಾರದಿಂದ ನಿರ್ಮಾಣವಾಗಿರುವ ದೇವಾಲಯವಾಗಿದೆ. ಇದರಿಂದ ಇದು ಜನಪದೀಯ ಸಂಘಟನೆಯನ್ನು ಹೊಂದಿದೆ ಎಂದು ಹೇಳಬಹುದು.
ಈ ದೇವಸ್ಥಾನವು ತಗಡೂರಪ್ಪನ ದೇವಸ್ಥಾನದ ಮುಂದಿದೆ. ಇದು ಹೆಂಚಿನ ಮನೆಯಂತೆ ಕಾಣುವ ಸುಂದರವಾದ ದೇವಾಲಯವಾಗಿದೆ. ಇಲ್ಲಿ ಹಿತ್ತಾಳೆಯ ವಿಗ್ರಹವಿದೆ. ಚಿಕ್ಕಮ್ಮನು ಸುಮಾರು ೩೦೦ ವರ್ಷಗಳ ಹಿಂದೆ ಇಲ್ಲಿ ಬಂದು ನೆಲೆಸಿದಳು ಎಂದು ಹೇಳಲಾಗುತ್ತದೆ. ಇಲ್ಲಿ ಶುಕ್ರವಾರದಂದು ಪೂಜೆ ನಡೆಯುತ್ತದೆ. 'ಪಟ್ಟಲದಮ್ಮನ ಅಕ್ಕ ಚಿಕ್ಕಮ್ಮ' ಎಂದು ಇಲ್ಲಿನ ಜನರು ಹೇಳುತ್ತಾರೆ. ಈ ದೇವಿಯ ಆರಾಧಕರು ಬೇರೆ ಬೇರೆ ಊರುಗಳಲ್ಲೂ ಇರುವುದು ವಿಶೇಷ.
ವಿಶ್ವಕರ್ಮ ಜನಾಂಗಕ್ಕೆ ಸೇರಿದ ಈ ದೇವಾಲಯದಲ್ಲಿ ಆ ಜನಾಂಗದವರೇ ಪೂಜೆಯನ್ನು ನೆರವೇರಿಸುತ್ತಾರೆ. ಇದು ಮಾರಗೌಡನಹಳ್ಳಿಯ ಎಲ್ಲಾ ಜಾತಿಯ ಜನರ ನಡುವಿನ ಜನಪದೀಯ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.
== LL) ==
== MM) ೮) ದೊಡ್ಡೇಗೌಡರ ಹಟ್ಟಿ ಚಿಕ್ಕಮನೆ ದೇವರು (ಗಂಡಳ್ಳಿ ಮಾರಮ್ಮ) ==
ಮಾರಗೌಡನಹಳ್ಳಿಯ ಶಾಂತಿ ಮತ್ತು ನೆಮ್ಮದಿಗಾಗಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಪರದೊಡ್ಡಯ್ಯನವರ ಮರಿಯಣ್ಣನವರ ಪ್ರಕಾರ, ಈ ದೇವಾಲಯವು ಅವರ ಪಂಗಡಕ್ಕೆ ಸೇರಿದ್ದಾಗಿದೆ. ಈ ಚಿಕ್ಕಮ್ಮ ದೇವಿಯು ಊರಿನ ಮನೆಮನಗಳಿಗೆ ಶಾಂತಿ ನೀಡುತ್ತಾಳೆ ಎಂಬ ನಂಬಿಕೆಯಿಂದ ಇಲ್ಲಿನ ಜನರು ಪ್ರತಿದಿನ ದೀಪ ಹಚ್ಚಿ ಪೂಜೆ ಸಲ್ಲಿಸುತ್ತಾರೆ.
== NN) ೯) ವೀರಪ್ಪನ ವಿಗ್ರಹಗಳು (ದೊಡ್ಡೇಗೌಡರ ಹಟ್ಟಿಗೆ ಸೇರಿದ್ದು) ==
ಮಾರಗೌಡನಹಳ್ಳಿಯ ಪೂರ್ವ ದಿಕ್ಕಿನಲ್ಲಿ ಕಂಡುಬರುವ ಈ ಸ್ಥಳವು ಪ್ರಾಚೀನ ಶಾಸನವೊಂದನ್ನು ಹೊಂದಿದೆ. ಇಲ್ಲಿ ಶಿವಲಿಂಗ ಹಾಗೂ ಬಸವನ ವಿಗ್ರಹಗಳನ್ನು ಕೆತ್ತಲಾಗಿದೆ. ಇಲ್ಲಿರುವ ಪ್ರಾಚೀನ ಶಾಸನವು ಯಾವುದೋ ನಿಧಿಗೆ ಸಂಬಂಧಿಸಿದ ಶಾಸನ ಎಂದು ಇಲ್ಲಿನ ಜನರು ನಂಬುತ್ತಾರೆ. ಈ ಶಾಸನದಲ್ಲಿ 'ಮಾರಗೌಡನಹಳ್ಳಿ' ಎಂಬ ಹೆಸರನ್ನು ಹೊರತುಪಡಿಸಿ, ಉಳಿದ ಅಕ್ಷರಗಳನ್ನು ಓದಲು ಸಾಧ್ಯವಾಗದಷ್ಟು ಹಳೆಯದಾದ ಬರವಣಿಗೆಯಲ್ಲಿದೆ.
ಇದರ ಪಕ್ಕದಲ್ಲೇ ಊರಿನವರ ಸಹಕಾರದಿಂದ ನಿರ್ಮಿಸಲಾದ ಸರ್ ಎಂ. ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ಕಾಣಬಹುದು. ಈ ಆವರಣವು ಅರಳಿಕಟ್ಟೆಯಿಂದ ಕೂಡಿದ್ದು, ವಿಶೇಷ ದಿನಗಳಲ್ಲಿ ಇಲ್ಲಿ ಪೂಜೆ-ಪುರಸ್ಕಾರಗಳು ನಡೆಯುತ್ತವೆ. ಇದನ್ನು ಊರಿನ ಎರಡನೇ ಹೆಬ್ಬಾಗಿಲು ಎಂದು ಪರಿಗಣಿಸಲಾಗಿದ್ದು, ಇದರ ಎರಡೂ ಬದಿಗಳಲ್ಲಿ ದೇವರ ಮೂರ್ತಿಗಳನ್ನು ಕಾಣಬಹುದಾಗಿದೆ.
== OO) ==
== PP) ೧೦) ಕುಂಬಾರರ ಮನೆ ದೇವರ ಗುಡಿ ==
ಮಾರಗೌಡನಹಳ್ಳಿಯ ಹಾಲಿನ ಡೈರಿ ಕೇಂದ್ರದ ಹಿಂಭಾಗದಲ್ಲಿ ಈ ದೇವಾಲಯವಿದೆ. ಇದು ಕುಂಬಾರ ಸಮುದಾಯದ ಪಂಗಡಕ್ಕೆ ಸೇರಿದ ದೇವಸ್ಥಾನವಾಗಿದೆ. ಆರಂಭದಲ್ಲಿ ಈ ಊರಿಗೆ ವಲಸೆ ಬಂದಂತಹ ಕುಂಬಾರರು ಇಲ್ಲೇ ನೆಲೆಸಿದರು; ಅವರಿಗಾಗಿ ಊರಿನ ಜನರು ಈ ದೇವಸ್ಥಾನವನ್ನು ನಿರ್ಮಿಸಿಕೊಟ್ಟರು. ಗ್ರಾಮದೇವತೆಯ ಉತ್ಸವ ನಡೆದಾಗ ಇಲ್ಲಿ ವಿಶೇಷ ಪೂಜೆ-ಪುರಸ್ಕಾರಗಳು ನಡೆಯುತ್ತವೆ. ಕುಂಬಾರ ಜನಾಂಗದವರು ಭಕ್ತಿ-ಶ್ರದ್ಧೆಯಿಂದ ಬಂದು ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಜೊತೆಗೆ, ಈ ದೇವಾಲಯದ ಆವರಣವು ಊರಿನ ಜನರಿಗೆ ಮಧ್ಯಾಹ್ನದ ವಿಶ್ರಾಂತಿಯ ತಾಣವಾಗಿಯೂ ಬಳಕೆಯಾಗುತ್ತದೆ.
== QQ) ೧೧) ಮನೆದೇವರ ಗುಡಿ (ಸಾಮಗ್ರಿಗಳ ಮನೆ) ==
ಮಾರಗೌಡನಹಳ್ಳಿಯ ಗ್ರಾಮದೇವತೆಗೆ ಸಂಬಂಧಿಸಿದ ಧಾರ್ಮಿಕ ಸಾಮಗ್ರಿಗಳನ್ನು ಈ ಮನೆದೇವರ ಗುಡಿಯಲ್ಲೇ ಇಡಲಾಗುತ್ತದೆ. ಆದ್ದರಿಂದ ಹಬ್ಬ-ಹರಿದಿನಗಳಲ್ಲಿ ಇಲ್ಲೂ ಸಹ ವಿಶೇಷ ಪೂಜೆ ನೆರವೇರುತ್ತದೆ. ಪೂಜೆಗೆ ಬಳಸುವ ಪಟ್ಟಲದಮ್ಮನ ವಿಗ್ರಹ, ತಮಟೆ-ನಗಾರಿ, ವಾದ್ಯಗಳು, ಬಿಲ್ಲೆ ಹಾಗೂ ದೇವರ ಕಂಬಗಳು ಮುಂತಾದ ಪವಿತ್ರ ವಸ್ತುಗಳನ್ನು ಇಲ್ಲೇ ಭದ್ರವಾಗಿ ಕಾಯ್ದಿರಿಸಲಾಗಿದೆ.
== RR) ೧೨) ಗಂಡಳ್ಳಿ ಮಾರಮ್ಮ (ಮಾರಿಗುಡಿ) ==
ಗಂಡಳ್ಳಿ ಒಕ್ಕಲಿಗೆ ಸೇರಿದ ಈ ಗುಡಿಯು ಹೆಂಚಿನ ಮನೆಯಿಂದ ಕೂಡಿದ್ದು, 'ಮಾರಮ್ಮನ ಗುಡಿ' (ಮಾರಿಗುಡಿ) ಎಂದೇ ಪ್ರಸಿದ್ಧವಾಗಿದೆ. ವರ್ಷದಲ್ಲಿ ೨-೩ ಬಾರಿ ಮಾರಿ ಹಬ್ಬವನ್ನು ಆಚರಿಸಿ ದೇವಿಗೆ '''ತನಿ ಎರೆಯುವ''' ಪದ್ಧತಿಯಿದೆ. ಈ ಸಂದರ್ಭದಲ್ಲಿ ಮಹಿಳೆಯರು ಭಕ್ತಿಯಿಂದ ತಂಬಿಟ್ಟು ತಯಾರಿಸಿ, ಅದರಲ್ಲಿ ಬೇವಿನಸೊಪ್ಪು ಹಾಗೂ ದೀಪವನ್ನಿಟ್ಟುಕೊಂಡು ಮಾರಮ್ಮನ ಗುಡಿಗೆ ಬಂದು ತನಿ ಎರೆಯುತ್ತಾರೆ. ಕುರಿ ಮತ್ತು ಕೋಳಿ ಬಲಿ ನೀಡಿ ವಿಶೇಷವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಕ್ಕಳಿಗೆ ಅಮ್ಮ (ಸಿಡುಬು/ದೇವತೆ ರೋಗ) ಬಂದಾಗಲೂ ಇಲ್ಲಿಗೆ ಬಂದು ತನಿ ಎರೆದು ಪ್ರಾರ್ಥಿಸುವ ನಂಬಿಕೆಯಿದೆ. ಗಂಡಳ್ಳಿ ಕುಟುಂಬಕ್ಕೆ ಸೇರಿದ ಈ ದೇವಸ್ಥಾನವು ದೊಡ್ಡೇಗೌಡರ ಹಟ್ಟಿಯ ಕುಟುಂಬದ ಧರ್ಮಶ್ರದ್ಧೆ ಮತ್ತು ಭಕ್ತಿಗೆ ಸಾಕ್ಷಿಯಾಗಿದೆ.
== SS) ೧೩) ರಾಮ ಮಂದಿರ ಹಾಗೂ ಗಣಪತಿ ದೇವಸ್ಥಾನ ==
ಮಾರಗೌಡನಹಳ್ಳಿಯ ಈ ದೇವಾಲಯವು ಗ್ರಾಮದ 'ಸದ್ಭಾವನಾ ಪ್ರಾರ್ಥನಾ ಮಂದಿರ'ವಾಗಿದೆ. ಇದರ ಪಕ್ಕದಲ್ಲಿಯೇ ಶ್ರೀ ಗಣಪತಿ ದೇವಾಲಯ ಹಾಗೂ ಮುಂಭಾಗದಲ್ಲಿ ಎರಡು ಅರಳಿಕಟ್ಟೆಗಳಿವೆ. ಬಲಭಾಗದ ಅರಳಿಕಟ್ಟೆಯಲ್ಲಿ ಮುನೇಶ್ವರನ (ನಾಗರ ವಿಗ್ರಹ) ಚಿಕ್ಕ ಗುಡಿಯನ್ನು ಕಾಣಬಹುದು.
==== ಸ್ಥಾಪನೆ ಮತ್ತು ಬೆಳವಣಿಗೆಯ ಇತಿಹಾಸ: ====
೧೯೬೫ರ ಅವಧಿಯಲ್ಲಿ ಭಾರತಾದ್ಯಂತ ಭಕ್ತರು ಶ್ರೀರಾಮನನ್ನು ವಿಶೇಷವಾಗಿ ಆರಾಧಿಸುತ್ತಿದ್ದ ದಿನಗಳಲ್ಲಿ, ಗ್ರಾಮಸ್ಥರು ದಿನವಿಡೀ ದುಡಿದು ಸಂಜೆ ವೇಳೆ ಸುಮ್ಮನೆ ಕಾಲ ಕಳೆಯುವ ಬದಲು ಭಗವಂತನ ಧ್ಯಾನದಲ್ಲಿ ತೊಡಗಲೆಂಬ ಉದ್ದೇಶದಿಂದ ಹಿರಿಯರು ಇಲ್ಲಿ ಶ್ರೀರಾಮನ ಆರಾಧನೆಗೆ ನಾಂದಿ ಹಾಡಿದರು. ಆರಂಭದಲ್ಲಿ ಚಿಕ್ಕ ಗುಡಿಸಲು ನಿರ್ಮಿಸಿ ಶ್ರೀರಾಮಚಂದ್ರನ ಭಾವಚಿತ್ರವನ್ನಿಟ್ಟು ಪೂಜಿಸಲಾಗುತ್ತಿತ್ತು. ನಂತರ ದಿನಗಳಲ್ಲಿ ಸುಂದರವಾದ ಗುಡಿಯನ್ನು ನಿರ್ಮಿಸಿ, ಮನಸ್ಸಿಗೆ ಪ್ರಶಾಂತತೆ ನೀಡುವಂತಹ ಜನಪದೀಯ ಧಾರ್ಮಿಕ ವಾತಾವರಣವನ್ನು ರೂಪಿಸಿಕೊಂಡರು.
ದೇವಾಲಯದ ಪಕ್ಕದ ಬಲಭಾಗದಲ್ಲಿ ಶ್ರೀ ಗಣಪತಿ ಗುಡಿಯಿದ್ದು, ಮುಂಭಾಗದಲ್ಲಿ ಸುಂದರವಾದ '''ತುಳಸಿಕಟ್ಟೆ''' ಇದೆ. ಊರಿನ ಜನರು ಸತತ ಪ್ರಯತ್ನ ಹಾಗೂ ಶ್ರಮದ ಫಲವಾಗಿ ಈ ರಾಮಮಂದಿರವನ್ನು ಪ್ರಗತಿಯತ್ತ ಕೊಂಡೊಯ್ದಿದ್ದಾರೆ. ದೇವಾಲಯದ ಆವರಣದಲ್ಲಿ ಪಡಸಾಲೆ (ಮೊಗಸಾಲೆ) ನಿರ್ಮಿಸಿ, ಸುತ್ತಮುತ್ತಲಿನ ವಾತಾವರಣವನ್ನು ಅಭಿವೃದ್ಧಿಪಡಿಸಿದ್ದಾರೆ.
==== ವಿಗ್ರಹ ಪ್ರತಿಷ್ಠಾಪನೆ ಮತ್ತು ಶಿಲ್ಪಕಲೆ: ====
ಗ್ರಾಮಸ್ಥರು ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಯ ೪ ಅಡಿ ಎತ್ತರದ ಸುಂದರ ಮೂರ್ತಿಗಳನ್ನು '''ಕೃಷ್ಣಶಿಲೆಯಲ್ಲಿ''' ಕೆತ್ತಿಸಿದ್ದಾರೆ. ಮೈಸೂರಿನ ಕರ್ನಾಟಕ ರಾಜ್ಯ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರಸಿದ್ಧ ಶಿಲ್ಪಿ ಶಿವಾನಂದ್ ಅವರ ಅಮೃತ ಹಸ್ತದಿಂದ ಈ ಮೂರ್ತಿಗಳು ಕೆತ್ತಲ್ಪಟ್ಟಿವೆ. ಸಾವಿರಾರು ವರ್ಷಗಳ ಕಾಲ ಬಾಳಿಕೆ ಬರುವ ಮೃದುವಾದ ಕೃಷ್ಣಶಿಲೆಯಲ್ಲಿ ಸುಮಾರು ೮೦ ಸಾವಿರ ರೂಪಾಯಿ ವೆಚ್ಚದಲ್ಲಿ ಈ ಮೂರ್ತಿಗಳನ್ನು ನಿರ್ಮಿಸಲಾಯಿತು. ಇದಕ್ಕಾಗಿ ಗ್ರಾಮದ ಪ್ರತಿಯೊಂದು ಮನೆಯವರು ಹಾಗೂ ದಾನಿಗಳು ಉದಾರವಾಗಿ ಧನಸಹಾಯ ಮಾಡಿದ್ದಾರೆ.
'''ಶಿಲ್ಪಿಯ ಕುರಿತು ಭಾವನೆ:''' ''"ಮೊನಚಾದ ಆಯುಧಗಳಿಂದ ಕಲ್ಲನ್ನು ಸುಂದರ ವಿಗ್ರಹವನ್ನಾಗಿ ರೂಪಿಸುವ ಶಿಲ್ಪಿಯ ಅಗಾಧ ಭಕ್ತಿ ಮತ್ತು ಮರ್ಮಜ್ಞತೆಗೆ ಮೊದಲು ನಮಸ್ಕರಿಸಬೇಕು; ಆ ನಂತರವೇ ದೇವರಿಗೆ ನಮಸ್ಕರಿಸಬೇಕು ಎಂಬುದು ಇಲ್ಲಿನ ಲೇಖಕರ ಚಿಂತನೆಯಾಗಿದೆ."''
ಬೆಂಗಳೂರಿನ ವೇದಬ್ರಹ್ಮ '''ಶ್ರೀ ಗುರುದತ್ತ ಶರ್ಮ''' ಅವರ ನೇತೃತ್ವದಲ್ಲಿ, '''೧-೩-೨೦೦೭ (ಗುರುವಾರ)''' ರಂದು ವೇದಘೋಷಗಳೊಂದಿಗೆ 'ಹನುಮತ್ ಸಮೇತ ಸೀತಾ-ಲಕ್ಷ್ಮಣ-ರಾಮಚಂದ್ರ' ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಇದು ಸರ್ವಧರ್ಮ ಸಮಭಾವ ಮತ್ತು ಸಾಮುದಾಯಿಕ ಐಕ್ಯತೆಯ ಸಂಕೇತವಾಗಿ ನೆರವೇರಿತು.
==== ಸಾಂಸ್ಕೃತಿಕ ಹಾಗೂ ಜಾನಪದ ಮಹತ್ವ: ====
ಜನರು ಕೆಟ್ಟ ಮಾರ್ಗಕ್ಕೆ ತುಳಿಯದೆ, ಸನ್ಮಾರ್ಗದಲ್ಲಿ ನಡೆಯಲು ಸಾಂಸ್ಕೃತಿಕ ಕೇಂದ್ರಗಳು ಅಗತ್ಯವೆಂಬ ಹಿರಿಯರ ಕನಸು ಈ ಮಂದಿರದ ಮೂಲಕ ನನಸಾಗಿದೆ.
· '''ರಾಮನವಮಿ:''' ಶ್ರೀರಾಮನವಮಿಯಂದು ಇಲ್ಲಿ ವಿಶೇಷ ಪೂಜೆ-ಪುರಸ್ಕಾರಗಳು ನಡೆಯುತ್ತವೆ.
· '''ಧ್ವನಿವರ್ಧಕದ ಮೂಲಕ ಜ್ಞಾನಪ್ರಸಾರ:''' ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಮಂದಿರದ ಧ್ವನಿವರ್ಧಕದ ಮೂಲಕ ಹರಿಕಥೆ, ಭಜನೆ, ಲಾವಣಿ, ಜಾನಪದ ಗೀತೆ ಹಾಗೂ ಭಕ್ತಿಗೀತೆಗಳನ್ನು ಬಿತ್ತರಿಸಲಾಗುತ್ತದೆ.
· '''ಜಾಗರಣೆ ಮತ್ತು ಭಜನೆ:''' ಶಿವರಾತ್ರಿಯಂದು ವಿಜೃಂಭಣೆಯ ಜಾಗರಣೆ ನಡೆಯುತ್ತದೆ. 'ಗುರು ಭಜನಾ ಮಂಡಳಿ'ಯ ಶಂಕರ್ ಅವರ ನೇತೃತ್ವದಲ್ಲಿ ಹಾಗೂ ಶಿವಾರ ಯುವಕರ ತಂಡದಿಂದ ವಿಶೇಷ ಭಜನಾ ಕಾರ್ಯಕ್ರಮಗಳು ನೆರವೇರುತ್ತವೆ.
ಒಟ್ಟಾರೆಯಾಗಿ, ಈ ರಾಮಮಂದಿರವು ಮಾರಗೌಡನಹಳ್ಳಿಯ ಜನರ ಸೌಹಾರ್ದತೆ, ಸ್ನೇಹ ಮತ್ತು ಭಕ್ತಿಪೂರ್ವಕ ಸ್ಪೂರ್ತಿಯ ಜೀವಂತ ಸಂಕೇತವಾಗಿದೆ.
== TT) ೧೪) ಶನಿಮಹಾತ್ಮ ದೇವಸ್ಥಾನ ==
ಮಾರಗೌಡನಹಳ್ಳಿಯ ಜನರು ಶನಿಮಹಾತ್ಮ ದೇವರನ್ನು ತಮ್ಮ ಸಂಕಟಗಳನ್ನು ನಿವಾರಿಸುವ 'ಕಷ್ಟನಿವಾರಕ ದೈವ'ವೆಂದು ಶ್ರದ್ಧೆಯಿಂದ ಪೂಜಿಸುತ್ತಾರೆ. ಈ ದೇವಾಲಯವು ೧೯೮೭ ರಲ್ಲಿ ನಿರ್ಮಾಣವಾಯಿತು. ಮೂಲತಃ ಪಕ್ಕದ ಗ್ರಾಮವಾದ ಅನಾಸೊಸಲು (ಅನ್ನಾಸಮುದ್ರ) ಗ್ರಾಮದಲ್ಲಿದ್ದ ಈ ದೇವರನ್ನು ಮಾರಗೌಡನಹಳ್ಳಿಯಲ್ಲಿ ಸ್ಥಾಪಿಸಲು ಬೋರೇಗೌಡರು ಮುಖ್ಯ ಕಾರಣಕರ್ತರಾಗಿದ್ದರು.
==== ದೇವಾಲಯದ ನಿರ್ಮಾಣ ಮತ್ತು ವಿಗ್ರಹ: ====
ಆರಂಭದಲ್ಲಿ ಈ ದೇವಾಲಯದಲ್ಲಿ ಕಲ್ಲಿನ ವಿಗ್ರಹವಿರಲಿಲ್ಲ. ನಂತರ ರಾಜಪುರದ ಇಂಜಿನಿಯರ್ ಆದ ಗೋವಿಂದಪ್ಪನವರ ಧನಸಹಾಯದೊಂದಿಗೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ 'ಶಿವಾರ ಪಟ್ಟಣ'ದಿಂದ ಕಪ್ಪು ಕಲ್ಲಿನ ಸುಂದರ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಲಾಯಿತು. ರಾಮಮಂದಿರದ ವಿಗ್ರಹದ ಮಾದರಿಯಲ್ಲೇ ಇದು ಕೂಡ ಸುಂದರವಾದ ಕೃಷ್ಣಶಿಲೆಯ ವಿಗ್ರಹವಾಗಿದೆ. ಪಾಪಣ್ಣ, ಗಿಡ್ಡಯ್ಯನವರ ನಿಂಗಣ್ಣ, ರಾಮಣ್ಣ ಹಾಗೂ ಮಹಾಲಿಂಗಣ್ಣನವರು ಈ ದೇವಾಲಯದ ನಿರ್ಮಾಣಕ್ಕೆ ಶ್ರಮಿಸಿದ ಪ್ರಮುಖ ಜನಕರೆನ್ನಬಹುದು.
==== ಧಾರ್ಮಿಕ ಆಚರಣೆ ಮತ್ತು ಮಹತ್ವ: ====
· '''ಕಷ್ಟನಿವಾರಣೆಯ ನಂಬಿಕೆ:''' ಇದು ರೈತರ ಕಷ್ಟ ನಿವಾರಿಸುವ ದೇವರೆಂಬ ಬಲವಾದ ನಂಬಿಕೆಯಿದೆ. ಭಕ್ತಾದಿಗಳು ತಮ್ಮ ಸಂಕಟಗಳು ದೂರವಾದರೆ ಕಾಣಿಕೆ ಹಾಗೂ ಹರಿಕೆಯನ್ನು ಸಲ್ಲಿಸುವುದಾಗಿ ಪ್ರಾರ್ಥಿಸಿಕೊಂಡು ಹೋಗುತ್ತಾರೆ.
· '''ಶನಿಮಹಾತ್ಮನ ಪರ (ಅನ್ನಸಂತರ್ಪಣೆ):''' ಇಲ್ಲಿ ವರ್ಷಕ್ಕೊಮ್ಮೆ ಶನಿಮಹಾತ್ಮನ 'ಪರ' (ಸಾಮೂಹಿಕ ಅನ್ನಸಂತರ್ಪಣೆ/ಹರಿ ಸೇವೆ) ನೆರವೇರುತ್ತದೆ. ಗ್ರಾಮದೇವತೆಯ ಹಬ್ಬ ನಡೆದಾಗ ತಿರುಮಲೇಶ್ವರ ಸ್ವಾಮಿಗೆ ಹಾಗೂ ಶನಿಮಹಾತ್ಮನಿಗೆ ಒಟ್ಟಿಗೆ 'ಪರ' ಆಯೋಜಿಸಲಾಗುತ್ತದೆ.
· '''ಸಹಬಾಳ್ವೆಯ ಪ್ರತೀಕ:''' ಈ ಅನ್ನಸಂತರ್ಪಣೆಗೆ (ಪರಕ್ಕೆ) ಊರಿನ ಪ್ರತಿಯೊಂದು ಮನೆಯಿಂದ ಅಕ್ಕಿ, ರಾಗಿಹಿಟ್ಟು, ಕಾಳು, ಎಣ್ಣೆ, ಬೆಲ್ಲ, ಉಪ್ಪು ಮುಂತಾದ ದವಸ-ಧಾನ್ಯಗಳನ್ನು ಹಾಗೂ ಹಣವನ್ನು ಕಾಣಿಕೆಯಾಗಿ ನೀಡುತ್ತಾರೆ. ಇದು ಗ್ರಾಮಸ್ಥರು ಒಗ್ಗಟ್ಟಿನಿಂದ ಮತ್ತು ಸಹಬಾಳ್ವೆಯಿಂದ ಜೀವಿಸಲು ಪ್ರೇರಣೆಯಾಗುವ ಹಬ್ಬವೆಂಬುದು ಲೇಖಕರ ಚಿಕ್ಕಪ್ಪಂದಿರಾದ '''ಶ್ರೀ ಪ್ರಭುದೇವ್ ಎಂ.ಸಿ.''' ಹಾಗೂ '''ಶ್ರೀ ಶ್ರೀಕಂಠ ಎಂ.ಸಿ.''' ಅವರ ಅಭಿಪ್ರಾಯವಾಗಿದೆ.
==== ವಿಶೇಷ ಆಚರಣೆಗಳು: ====
ಹಿಂದೆ ಈ ಹಬ್ಬದ ಸಂದರ್ಭದಲ್ಲಿ 'ಗುಡ್ಡಪ್ಪ'ನಿಗೆ ದೇವರು ಮೈಮೇಲೆ ಬರುತ್ತಿತ್ತು; ಆದರೆ ಇತ್ತೀಚಿನ ದಿನಗಳಲ್ಲಿ ಈ ಆಚರಣೆ ಕಂಡುಬರುವುದಿಲ್ಲ. ಹಬ್ಬದ ದಿನಗಳಲ್ಲಿ ಭಕ್ತರು ಭಕ್ತಿಯಿಂದ 'ಬಾಯಿ ಬೀಗ' (ಆಯುಧ) ಚುಚ್ಚಿಸಿಕೊಳ್ಳುವ ಕಠಿಣ ಹರಿಕೆಗಳನ್ನು ತೀರಿಸುತ್ತಾರೆ. ದೇವಾಲಯದ ಆವರಣದಲ್ಲಿ ನವಗ್ರಹಗಳ ಸುಂದರ ವಿಗ್ರಹಗಳನ್ನೂ ಸಹ ಕಾಣಬಹುದಾಗಿದೆ.
== UU) ಅರ್ಪಣೆ ==
'''ನನ್ನ ಪರಮಪೂಜ್ಯ ಅಜ್ಜ-ಅಜ್ಜಿ ಶ್ರೀ ಚಿಕ್ಕಲಿಂಗೇಗೌಡ (ಕೆಂಜೆಗೌಡ), ಶ್ರೀಮತಿ ನಿಂಗಮ್ಮನವರಿಗೆ ಹಾಗೂ ನಮ್ಮ ಚಿಕ್ಕಪ್ಪನವರಾದ ದಿವಂಗತ ಡಾ. ಹಿಮಂತರಾಜು (ಬಿ.ಎಸ್ಸಿ. ಅಗ್ರಿ) ಮತ್ತು ನಮ್ಮ ಕುಟುಂಬ ವರ್ಗಕ್ಕೆ ಭಾವಪೂರ್ಣ ಅರ್ಪಣೆ.'''
== VV) ನಮ್ಮೂರಿನ ದೇವಾಲಯಗಳು ಮತ್ತು ಪಟ್ಟಲದಮ್ಮನ ಮಹೋತ್ಸವ ==
== WW) (ಜಾನಪದ ಅಧ್ಯಯನ) ==
== XX) ಮಾರಗೌಡನಹಳ್ಳಿಯಲ್ಲಿ ಆಚರಿಸುವ ಪ್ರಮುಖ ಹಬ್ಬಗಳು: ==
೧) ಸುಂಕದಮ್ಮನ ಹಬ್ಬ
೨) ಕೊಲ್ಲಾಪುರದಮ್ಮನ ಹಬ್ಬ
೩) ಕಾರ್ತಿಕ ಮಾಸದಲ್ಲಿ ಆಚರಿಸುವ ಕಾರ್ತಿಕ ಸೋಮವಾರ
೪) ದಿಕ್ಕಿನ ಮರಿ
೫) ಮಾರಿಹಬ್ಬ
೬) ಖಾರಬ್ಬ (ಖಾರ ಹಬ್ಬ)
೭) ಮಹಾಲಯ ಅಮಾವಾಸ್ಯೆ
೮) ಸಂಕ್ರಾಂತಿ ಹಬ್ಬ
೯) ಶಿವರಾತ್ರಿ ಹಬ್ಬ
೧೦) ಬಸವೇಶ್ವರ ಹಬ್ಬ
೧೧) ಮುನಿಸ್ವಾಮಿ ಹಬ್ಬ
೧೨) ಪಟ್ಟಲದಮ್ಮನ ಹಬ್ಬ
==== ಒ) ಗ್ರಾಮೀಣ ಹಬ್ಬಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳು ====
== YY) ಳು ==
ಮಾನವನ ಹಿಂದೆ ಬೆಳೆದು ಬಂದಿರುವ ಸಂಪ್ರದಾಯಗಳು ಹಾಗೂ ಅವುಗಳಿಗೆ ಪೂರಕವಾಗಿ ರೂಪುಗೊಂಡಿರುವ ಆಚರಣೆಗಳು ಮೈ-ಮನಗಳನ್ನು ಸಂತೋಷಗೊಳಿಸುವ ಮತ್ತು ಹುರಿದುಂಬಿಸುವ ಮಾಧ್ಯಮಗಳಾಗಿವೆ. ಇಲ್ಲಿನ ಜನರು ತಮ್ಮ ದೈನಂದಿನ ದೇವತಾ ಆರಾಧನೆಯ ಭಾಗವಾಗಿ ಹಾಗೂ ಮನಸಂತೋಷಕ್ಕಾಗಿ ತಿಂಗಳಿಗೆ ಕನಿಷ್ಠ ಒಂದು ಹಬ್ಬವನ್ನಾದರೂ ಆಚರಿಸುತ್ತಾರೆ. ಇಂತಹ ಹಬ್ಬಗಳಲ್ಲಿ ಸಿಹಿ ತಿನಿಸುಗಳನ್ನು ತಯಾರಿಸಿ, ಅಗತ್ಯವಿದ್ದಾಗ ಕೋಳಿ-ಕುರಿಗಳನ್ನು ಬಲಿ ನೀಡಿ, ಊರಿನವರೆಲ್ಲರೂ ಒಟ್ಟಾಗಿ ಊಟ ಸವಿದು ಸೌಹಾರ್ದತೆಯಿಂದ ಬಾಳುತ್ತಾರೆ.
ಮೇಲೆ ವಿವರಿಸಿದ ಗ್ರಾಮದೇವತೆಗಳ ಹಬ್ಬಗಳಷ್ಟೇ ಅಲ್ಲದೆ, ನಾಡಿನ ಪ್ರಮುಖ ಹಬ್ಬಗಳಾದ ದೀಪಾವಳಿ, ಯುಗಾದಿ, ಆಯುಧ ಪೂಜೆ, ವಿಜಯದಶಮಿ ಮುಂತಾದ ಹಬ್ಬಗಳನ್ನು ಪ್ರತಿ ವರ್ಷವೂ ವಿಜೃಂಭಣೆಯಿಂದ ನೆರವೇರಿಸುತ್ತಾರೆ. ಒಟ್ಟಾರೆಯಾಗಿ ಈ ಊರಿನಲ್ಲಿ ತಿಂಗಳಿಗೆ ಒಂದಾದರೂ ಹಬ್ಬ-ಹರಿದಿನಗಳು ನಡೆದೇ ನಡೆಯುತ್ತವೆ.
== ZZ) ಸಂಸ್ಕೃತಿಯ ಜೀವಾಳ ಮತ್ತು ಜಾನಪದ ನಂಬಿಕೆ: ==
ಸಂಸ್ಕೃತಿಯ ಉಗಮವು ನಿರಂತರ ಪ್ರವಾಹವಿದ್ದಂತೆ; ಪ್ರತಿಯೊಂದು ಆರಂಭದೊಂದಿಗೂ ಒಂದು ಅಂತ್ಯ ಮತ್ತು ಮರುಜೀವ ಬೆಸೆದುಕೊಂಡಿರುತ್ತದೆ. ಹೀಗೆ ಉಗಮವಾದ ಸಂಸ್ಕೃತಿಯು ಆಚಾರ, ವಿಚಾರ, ನಂಬಿಕೆ ಹಾಗೂ ಆಚರಣೆಗಳಂತಹ ಅನೇಕ ಮುಖಗಳನ್ನು ಒಳಗೊಂಡಿದ್ದು, ಜಾನಪದ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ. ಪ್ರತಿಯೊಂದು ಹಬ್ಬದ ಹಿಂದೆಯೂ ನಾನಾ ತೆರನಾದ ಪೂಜೆ-ಪುನಸ್ಕಾರಗಳನ್ನು ನೆರವೇರಿಸುವ ಇಲ್ಲಿನ ಜನರು, ಸಕಲ ಹಬ್ಬಗಳನ್ನು ಅತ್ಯಂತ ಸಹಬಾಳ್ವೆ ಮತ್ತು ಒಗ್ಗಟ್ಟಿನಿಂದ ಆಚರಿಸುತ್ತಾರೆ.
'''ಜಾನಪದ ನಾಣ್ಣುಡಿ:'''
''"ಯುಗಾದಿ 'ಉಗೇ' ಎಂದುಕೊಂಡು ಹೋಯಿತು, ಖಾರಬ್ಬ ಎಲ್ಲರನ್ನು ಕರೆದುಕೊಂಡು ಬಂತು!"''
ಎಂಬುದು ಇಲ್ಲಿನ ಜಾನಪದ ನುಡಿಯಾಗಿದೆ. ಕೇವಲ ಸಮೃದ್ಧಿಯ ಕಾಲದಲ್ಲಷ್ಟೇ ಅಲ್ಲದೆ, ಬರಗಾಲದ ಕಷ್ಟದ ದಿನಗಳಲ್ಲೂ ಸಹ ಕಷ್ಟಪಟ್ಟು ಅಥವಾ ಸಾಲ-ಸೋಲ ಮಾಡಿಯಾದರೂ ಸರಿ, ಭಕ್ತಿಯಿಂದ ಹಬ್ಬವನ್ನು ನೆರವೇರಿಸುವ ಪದ್ಧತಿ ಇಲ್ಲಿದೆ. ಇದು ಇಲ್ಲಿನ ಜನರ ಶ್ರದ್ಧೆ ಹಾಗೂ ಸಾಂಪ್ರದಾಯಿಕ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ. ತಿಂಗಳಿಗೊಂದು ಹಬ್ಬವನ್ನು ಆಚರಿಸುವ ಇಲ್ಲಿನ ಗ್ರಾಮಸ್ಥರು ಹಬ್ಬ-ಹರಿದಿನಗಳ ಕುರಿತು ಎಂದಿಗೂ ಉಡಾಪೆಯಿಂದ ವರ್ತಿಸುವುದಿಲ್ಲ. ಬದಲಿಗೆ, ಪ್ರತಿಯೊಂದು ಹಬ್ಬವನ್ನು ನಿಯಮಬದ್ಧವಾಗಿ, ಎಚ್ಚರಿಕೆಯಿಂದ ಹಾಗೂ ಸಡಗರ-ಸಂತೋಷದಿಂದ ನೆರವೇರಿಸುತ್ತಾರೆ.
ನೀವು ನೀಡಿರುವ ಪಠ್ಯದಲ್ಲಿ ಗ್ರಾಮೀಣ ಭಾಗದ ಕಾವಲು ದೇವತೆಯಾದ '''<nowiki/>'ಸುಂಕದಮ್ಮನ'''' ಪೂಜಾ ಆಚರಣೆ, ರೋಗ-ರುಜಿನಗಳ ನಿವಾರಣೆಯ ನಂಬಿಕೆ, ಮಣ್ಣಿನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗ್ರಾಮಸ್ಥರ ಬಾಂಧವ್ಯದ ಸುಂದರ ವಿವರಣೆಯಿದೆ.
ಆದರೆ ಪಠ್ಯದಲ್ಲಿ ಕೆಲವು ಕಾಗುಣಿತ/ಅಕ್ಷರ ದೋಷಗಳು (ಉದಾ: <code>ಆಚರಿಸÀಲು</code>, <code>ತೆಂಬಿಟ್ಟು</code>, <code>ಕುಂಕುಮಗಳಿAದ</code>), ಒಂದಷ್ಟು ಪದಗಳ ಪುನರಾವರ್ತನೆ (ಉದಾ: 'ಮಂಗಳವಾರದ ದಿನ' ಪದೇ ಪದೇ ಬಂದಿರುವುದು) ಹಾಗೂ ಸಣ್ಣಪುಟ್ಟ ವ್ಯಾಕರಣ ದೋಷಗಳಿದ್ದವು. ವಿಷಯದ ಜಾನಪದ ಹಿನ್ನೆಲೆಗೆ ಧಕ್ಕೆಯಾಗದಂತೆ ತಿದ್ದಿ ಸಿದ್ಧಪಡಿಸಿದ '''ಶುದ್ಧೀಕರಿಸಿದ ಪಠ್ಯ''' ಇಲ್ಲಿದೆ:
== AAA) ೧. ಸುಂಕದಮ್ಮನ ಹಬ್ಬ ==
ಸುಂಕದಮ್ಮನ ಹಬ್ಬವನ್ನು ವರ್ಷದ ಯಾವುದಾದರೂ ಒಂದು ತಿಂಗಳ ಮಂಗಳವಾರದಂದು ಆಚರಿಸಲಾಗುತ್ತದೆ. ಪ್ರಮುಖವಾಗಿ ಒಕ್ಕಲಿಗ ಜನಾಂಗದವರು ಸೇರಿದಂತೆ ಊರಿನ ಸಕಲ ಜನಾಂಗದವರೂ ಒಟ್ಟಾಗಿ ಆಚರಿಸುವ ಹಬ್ಬ ಇದಾಗಿದೆ. ಊರಿಗೆ ಯಾವುದೇ ರೋಗ-ರುಜಿನಗಳು, ಮಾರಕ ಕಾಯಿಲೆಗಳು ಹಾಗೂ ದುಷ್ಟ ಶಕ್ತಿಗಳು ಪ್ರವೇಶಿಸಬಾರದು ಎಂಬ ದೃಢವಾದ ನಂಬಿಕೆಯಿಂದ ಸುಂಕದಮ್ಮನ ಆರಾಧನೆಯನ್ನು ನೆರವೇರಿಸಲಾಗುತ್ತದೆ.
== BBB) ಆಚರಣೆಯ ವಿಧಿ-ವಿಧಾನಗಳು: ==
ಮಂಗಳವಾರದ ದಿನದಂದು ಗ್ರಾಮದೇವತೆಯಾದ ಸುಂಕದಮ್ಮನ ವಿಗ್ರಹವನ್ನು ಮಣ್ಣಿನಿಂದ ರೂಪಿಸಿ, ಅರಿಶಿನ-ಕುಂಕುಮಗಳಿಂದ ಸುಂದರವಾಗಿ ಶೃಂಗರಿಸಲಾಗುತ್ತದೆ. ನಂತರ ಈ ಮೂರ್ತಿಯನ್ನು ಊರಿನ ಹಾಲಿನ ಡೈರಿಯ ಮುಂಭಾಗದಲ್ಲಿ ಪ್ರತಿಷ್ಠಾಪಿಸುತ್ತಾರೆ.
ದೇವಿಯ ಪೂಜೆಗಾಗಿ ಭಕ್ತಿಯಿಂದ ತಂಬಿಟ್ಟು ಹಾಗೂ ಬೆಲ್ಲದ ಅನ್ನದಿಂದ 'ಮಡೆ' (ನೈವೇದ್ಯ) ಸಿದ್ಧಪಡಿಸಿ ಅರ್ಪಿಸುತ್ತಾರೆ. ಜೊತೆಗೆ ಕೋಳಿ, ಕುರಿಗಳನ್ನು ಬಲಿಕೊಟ್ಟು, ಊರಿನ ನಂಟು-ಬಂಧುಗಳನ್ನು ಆಹ್ವಾನಿಸಿ, ಎಲ್ಲರೂ ಒಟ್ಟಾಗಿ ಸೇರಿ ಹಬ್ಬದ ಅಡುಗೆಯನ್ನು ತಯಾರಿಸಿ ಅದ್ದೂರಿಯಾಗಿ ಉಣ್ಣುತ್ತಾರೆ. ಊರಿನ ಸಮಸ್ತ ಜನರೂ ಒಂದಾಗಿ ಸೇರಿ ಆಚರಿಸುವ ಈ ಹಬ್ಬವು ಗ್ರಾಮಸ್ಥರ ಸೌಹಾರ್ದತೆ ಮತ್ತು ಜಾನಪದೀಯ ಭಕ್ತಿಗೆ ಸಾಕ್ಷಿಯಾಗಿದೆ.
ನೀವು ನೀಡಿರುವ ಪಠ್ಯದಲ್ಲಿ ಗ್ರಾಮೀಣ ದೇವತೆಯಾದ '''<nowiki/>'ಕೊಲ್ಲಾಪುರದಮ್ಮನ'''' ಪೂಜಾ ಆಚರಣೆ, ದಿಗ್ಬಂಧನದ ನಂಬಿಕೆ, ಸುಂಕದಮ್ಮ ಹಾಗೂ ಕೊಲ್ಲಾಪುರದಮ್ಮನ ಸಹೋದರತ್ವ ಮತ್ತು ಜಾನಪದೀಯ ಸಾಮಾಜಿಕ ಮೌಲ್ಯಗಳ ಸುಂದರ ವಿವರಣೆಯಿದೆ.
ಆದರೆ ಪಠ್ಯದಲ್ಲಿ ಕೆಲವು ಕಾಗುಣಿತ/ಅಕ್ಷರ ದೋಷಗಳು (ಉದಾ: <code>ಆಚರಿಸುತ್ತಾರೆ ಎಂಬAತೆ</code>, <code>ದೃಷ್ರ್ಟ ಸಂಹಾರಕ್ಕೆ</code>, <code>ಅವತರವೆ</code>, <code>ದಿU್ಪ್ಬಂಧನ</code>, <code>ಕುಂಕುಮಗಳಿAದ</code>, <code>ವಾÀತಾವರಣ</code>) ಹಾಗೂ ವಾಕ್ಯ ರಚನೆಯ ದೋಷಗಳಿದ್ದವು. ವಿಷಯದ ಜಾನಪದ ಸಂಪ್ರದಾಯ ಹಾಗೂ ಭಕ್ತಿಗೆ ಭಂಗ ಬಾರದಂತೆ ತಿದ್ದಿ ಸಿದ್ಧಪಡಿಸಿದ '''ಶುದ್ಧೀಕರಿಸಿದ ಪಠ್ಯ''' ಇಲ್ಲಿದೆ:
== CCC) ೨. ಕೊಲ್ಲಾಪುರದಮ್ಮನ ಪೂಜೆ ==
ಮಾರಗೌಡನಹಳ್ಳಿಯಲ್ಲಿ ಈ ಪೂಜೆಯನ್ನು ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ, ಅಂದರೆ ಮೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ದುಷ್ಟ ಸಂಹಾರಕ್ಕಾಗಿ ಚಾಮುಂಡೇಶ್ವರಿಯು ತಳೆದ ರೂಪವೇ ಈ '''ಕೊಲ್ಲಾಪುರದಮ್ಮ''' ಎಂಬುದು ಜನರ ನಂಬಿಕೆಯಾಗಿದೆ. ಊರಿನಲ್ಲಿ ಕೆಟ್ಟ ಗಾಳಿ, ಪಿಶಾಚಿ, ದೆವ್ವಗಳ ಕಾಟವನ್ನು ದೂರಮಾಡಲು ಹಾಗೂ ಮಾಟ-ಮಂತ್ರಗಳ ದುಷ್ಪರಿಣಾಮಗಳು ತಾಗದಂತೆ ಊರಿಗೆ ದಿಗ್ಬಂಧನ ಮಾಡುವುದಕ್ಕಾಗಿ ಕೊಲ್ಲಾಪುರದಮ್ಮನನ್ನು ಶ್ರದ್ಧೆಯಿಂದ ಪೂಜಿಸುತ್ತಾರೆ.
== DDD) ಆಚರಣೆಯ ವಿಧಿ-ವಿಧಾನಗಳು: ==
ಸುಂಕದಮ್ಮನ ಪೂಜೆಯಂತೆಯೇ ಈ ಹಬ್ಬದಲ್ಲೂ ಮಣ್ಣಿನ ವಿಗ್ರಹವನ್ನು ಮಾಡಿ, ಅರಿಶಿನ-ಕುಂಕುಮಗಳಿಂದ ಸುಂದರವಾಗಿ ಶೃಂಗರಿಸಲಾಗುತ್ತದೆ. ನಂತರ ತಂಬಿಟ್ಟು, ಅನ್ನ ಹಾಗೂ ಬೆಲ್ಲದ ಅನ್ನದಿಂದ 'ಮಡೆ' ಸಿದ್ಧಪಡಿಸಿ, ಕೋಳಿಯನ್ನು ಬಲಿ ನೀಡಿ ಎಲ್ಲರೂ ಒಟ್ಟಾಗಿ ಹಬ್ಬದ ಅಡುಗೆಯನ್ನು ತಯಾರಿಸುತ್ತಾರೆ. ನಂಬಿಕೆಯ ಪ್ರಕಾರ '''ಸುಂಕದಮ್ಮ ಮತ್ತು ಕೊಲ್ಲಾಪುರದಮ್ಮ ಇಬ್ಬರೂ ಅಕ್ಕ-ತಂಗಿಯರು''' ಎಂದು ಹೇಳಲಾಗುತ್ತದೆ. ಈ ಹಬ್ಬಕ್ಕೆ ನೆಂಟರಿಷ್ಟರನ್ನೆಲ್ಲಾ ಆಹ್ವಾನಿಸಿ ಊರಿನವರೆಲ್ಲರೂ ವಿಜೃಂಭಣೆಯಿಂದ ಆಚರಿಸುತ್ತಾರೆ.
== EEE) ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯ: ==
ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ರೈತರು ದೇವರಿಗೆ ಯಾವ ಯಾವ ರೀತಿಯಲ್ಲಿ ಶರಣಾಗಿ ತಮ್ಮ ಭಕ್ತಿ ಮತ್ತು ನಂಬಿಕೆಯನ್ನು ಪ್ರಕಟಿಸುತ್ತಾರೆ ಎಂಬುದು. ಈ ಆಚರಣೆಯಲ್ಲಿ ಹಲವು ಜಾನಪದೀಯ ಅಂಶಗಳು ಎದ್ದು ಕಾಣುತ್ತವೆ. ಹಬ್ಬದ ನೆಪದಲ್ಲಿ ಊರಿನ ಜನರೆಲ್ಲರೂ ಒಂದೆಡೆ ಸೇರಿ ಮುಖಾಮುಖಿಯಾಗಿ ಮಾತನಾಡುತ್ತಾ ಸೌಹಾರ್ದತೆಯ ವಾತಾವರಣವನ್ನು ನಿರ್ಮಿಸುತ್ತಾರೆ. ಪ್ರೀತಿ, ಬಾಂಧವ್ಯ ಹಾಗೂ ಸ್ನೇಹದ ಲೋಕವನ್ನು ಸೃಷ್ಟಿಸುವ ಈ ವಾತಾವರಣವು ನಮ್ಮ ಜಾನಪದ ಸಂಸ್ಕೃತಿಯ ಮಹೋನ್ನತ ಮೌಲ್ಯವಾಗಿದೆ.
ನೀವು ನೀಡಿರುವ ಪಠ್ಯದಲ್ಲಿ ಕಾರ್ತಿಕ ಮಾಸದ ಪವಿತ್ರ ದಿನವಾದ 'ಕಾರ್ತಿಕ ಸೋಮವಾರ'ದ ಆಚರಣೆ, ಪಂಚಲಿಂಗ ದೇವಾಲಯದ ದರ್ಶನ ಹಾಗೂ ಬಸವೇಶ್ವರ ಗುಡಿಯಲ್ಲಿ ದೀಪ ಬೆಳಗುವ ಸುಂದರ ಜಾನಪದ ಧಾರ್ಮಿಕ ನಂಬಿಕೆಯ ವಿವರಣೆಯಿದೆ.
ಆದರೆ ಪಠ್ಯದಲ್ಲಿ ಕೆಲವು ಕಾಗುಣಿತ/ಲಿಪಿ ದೋಷಗಳು (ಉದಾ: <code>ಆಚÀರಿಸುತ್ತಾರೆ</code>, <code>ಪಂಚಲಿAಗ</code>, <code>ಪ್ರಜೆ-ಪುನಸ್ಕಾರಗಳನ್ನು</code>, <code>ಮನೆಯಲು</code>) ಹಾಗೂ ಒಂದೆರಡು ವಾಕ್ಯಗಳು ಪುನರಾವರ್ತನೆಯಾಗಿದ್ದವು. ವಿಷಯದ ಶ್ರದ್ಧಾಭಕ್ತಿ ಹಾಗೂ ಜಾನಪದ ಆಶಯಕ್ಕೆ ಕುಂದು ಬಾರದಂತೆ ತಿದ್ದಿ സಿದ್ಧಪಡಿಸಿದ '''ಶುದ್ಧೀಕರಿಸಿದ ಪಠ್ಯ''' ಇಲ್ಲಿದೆ:
== FFF) ೩. ಕಾರ್ತಿಕ ಮಾಸದ ಕಾರ್ತಿಕ ಸೋಮವಾರ ==
ಕಾರ್ತಿಕ ಮಾಸದಲ್ಲಿ ಬರುವ ಕಾರ್ತಿಕ ಸೋಮವಾರಗಳನ್ನು ಮಾರಗೌಡನಹಳ್ಳಿಯ ಗ್ರಾಮಸ್ಥರು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾರೆ. ಅದರಲ್ಲೂ '''ಮೊದಲನೇ ಮತ್ತು ಕೊನೆಯ (ಕಡೆ) ಕಾರ್ತಿಕ ಸೋಮವಾರಗಳನ್ನು''' ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ.
ಕಾರ್ತಿಕ ಸೋಮವಾರದ ದಿನದಂದು ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ತೊಳೆದು ಶುಚಿಗೊಳಿಸಿ, ಮನೆಯಲ್ಲಿ ದೇವರ ಪೂಜೆ ನೆರವೇರಿಸುತ್ತಾರೆ. ನಂತರ ಪಕ್ಕದ ಊರಿನಲ್ಲಿರುವ ಪ್ರಸಿದ್ಧ '''ಪಂಚಲಿಂಗ ದೇವಾಲಯಕ್ಕೆ''' ತೆರಳಿ ದೇವರಿಗೆ ವಿಶೇಷ ಪೂಜೆ-ಅಭಿಷೇಕಗಳನ್ನು ಮಾಡಿಸುತ್ತಾರೆ. ವಿಶೇಷವಾಗಿ ಕಡೆ ಕಾರ್ತಿಕ ಸೋಮವಾರದಂದು ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ಬೇರೆ ಬೇರೆ ಕಡೆಗಳಿಂದ ಭಕ್ತಾದಿಗಳು ಹಿಂಡು-ಹಿಂಡಾಗಿ ಎತ್ತಿನ ಬಂಡಿ/ವಾಹನಗಳನ್ನು ಕಟ್ಟಿಕೊಂಡು ಪಂಚಲಿಂಗ ದೇವಸ್ಥಾನಕ್ಕೆ ಪೂಜೆಗಾಗಿ ಆಗಮಿಸುತ್ತಾರೆ.
== GGG) ಬಸವೇಶ್ವರ ಗುಡಿಯಲ್ಲಿ ದೀಪಾರಾಧನೆ: ==
ಮಾರಗೌಡನಹಳ್ಳಿ ಗ್ರಾಮಸ್ಥರಿಗೆ ಈ ಕಾರ್ತಿಕ ಸೋಮವಾರವು ಊರಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನದಂದು ಊರಿನ '''ಬಸವೇಶ್ವರ ಗುಡಿಯಲ್ಲಿ ಸಾಲು ದೀಪಗಳನ್ನು ಬೆಳಗಿಸುವುದು''' ಇಲ್ಲಿನ ಮುಖ್ಯ ವಿಶೇಷತೆಯಾಗಿದೆ. ಪ್ರತಿಯೊಂದು ಕುಟುಂಬದವರೂ ತಮ್ಮ ಮನೆಯ ಪರವಾಗಿ ಬಸವೇಶ್ವರನ ಗುಡಿಗೆ ತೆರಳಿ ದೀಪ ಹಚ್ಚಿ ಪೂಜೆ ಸಲ್ಲಿಸುತ್ತಾರೆ. ಹೀಗೆ ಕಾರ್ತಿಕ ಸೋಮವಾರದಂದು ದೇವರಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸುವ ಮೂಲಕ ಗ್ರಾಮಸ್ಥರು ಜಗತ್ತಿನ ಕಲ್ಯಾಣಕ್ಕಾಗಿ ಹಾಗೂ ಸರ್ವರ ಒಳಿತಿಗಾಗಿ ಪ್ರಾರ್ಥಿಸುತ್ತಾರೆ.
== HHH) ೪. ದಿಕ್ಕಿನ ಮರಿ ಹಬ್ಬ ==
ಮಾರಗೌಡನಹಳ್ಳಿಯಲ್ಲಿ ಆಚರಿಸಲಾಗುವ 'ದಿಕ್ಕಿನ ಮರಿ' ಹಬ್ಬವು ಅತ್ಯಂತ ವಿಶಿಷ್ಟವಾದುದು. ಸಾಮಾನ್ಯವಾಗಿ ಮೇ ತಿಂಗಳಲ್ಲಿ ನಡೆಯುವ ಈ ಹಬ್ಬದಲ್ಲಿ, ಊರಿನ ನಾಲ್ಕು ದಿಕ್ಕುಗಳಲ್ಲಿ ಗ್ರಾಮದೇವತೆಯ ಹೆಸರಿನಲ್ಲಿ ಕುರಿ ಅಥವಾ ಆಡುಗಳನ್ನು ಬಲಿಕೊಡಲಾಗುತ್ತದೆ. ಈ ಆಚರಣೆಯ ಪ್ರಮುಖ ಉದ್ದೇಶ '''<nowiki/>'ದಿಗ್ಬಂಧನ'''' ಮಾಡುವುದಾಗಿದೆ. ಊರಿಗೆ ಯಾವುದೇ ಸಾಂಕ್ರಾಮಿಕ ರೋಗ-ರುಜಿನಗಳು, ದುಷ್ಟ ಶಕ್ತಿಗಳು ಅಥವಾ ಪಿಡುಗುಗಳು ಪ್ರವೇಶಿಸಬಾರದು ಹಾಗೂ ಕಾಲ-ಕಾಲಕ್ಕೆ ಸರಿಯಾಗಿ ಮಳೆ-ಬೆಳೆಯಾಗಿ ಊರು ಸುಭಿಕ್ಷವಾಗಿರಬೇಕು ಎಂಬ ನಂಬಿಕೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ.
ದಿಕ್ಕಿನ ಮರಿ ಕಡೆಯುವ ಸಂದರ್ಭದಲ್ಲಿ, ಸಂಕ್ರಾಂತಿ ಹಬ್ಬದಂತೆಯೇ ಕುರಿ-ಆಡುಗಳನ್ನು ನೀರಲ್ಲಿ ತೊಳೆದು ಶೃಂಗರಿಸಲಾಗುತ್ತದೆ. ಊರಿನ ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಕಿಚ್ಚು ಹಾಯಿಸಿ, ಪ್ರಾಣಿಗಳಿಗೆ ಪೂಜೆ ಸಲ್ಲಿಸಿ ಕುಂಕುಮಾನ್ನವನ್ನು (ಬಲಿ ಅನ್ನ) ಎರಚುತ್ತಾರೆ. ನಂತರ ನಾಲ್ಕೂ ದಿಕ್ಕುಗಳಲ್ಲಿ ಬಲಿಕೊಟ್ಟ ಕುರಿ ಹಾಗೂ ಆಡುಗಳ ಮಾಂಸವನ್ನು ಹಳ್ಳಿಯ ಜನರೆಲ್ಲರೂ ಸಮಾನವಾಗಿ ಹಂಚಿಕೊಳ್ಳುತ್ತಾರೆ.
ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ವಿಚಾರವೆಂದರೆ— ಗ್ರಾಮಸ್ಥರು ಪ್ರಾಣಿಗಳ ಹೆಸರಿನಲ್ಲಿ ಸಂಕ್ರಾಂತಿ, ಬಸವೇಶ್ವರ ಉತ್ಸವ ಹಾಗೂ ದಿಕ್ಕಿನ ಮರಿ ಹಬ್ಬಗಳನ್ನು ಆಚರಿಸುತ್ತಾರೆ. ಪ್ರಾಣಿಗಳನ್ನು ದೈವಿಕವಾಗಿ ಪೂಜಿಸಿ, ಅವುಗಳಿಗೆ ಜಾನಪದೀಯ ಕಲ್ಪನೆ ಮತ್ತು ಗೌರವ ನೀಡಿ ಆರಾಧಿಸುವುದು ಇಲ್ಲಿನ ವಿಶೇಷತೆಯಾಗಿದೆ.
== III) ೫. ಮಾರಿಹಬ್ಬ ==
ಮಾರಿಹಬ್ಬವು ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಬರುತ್ತದೆ. ಈ ಹಬ್ಬವನ್ನು ಶುಕ್ರವಾರದಂದು ಆಚರಿಸಲಾಗುತ್ತದೆ. ಹೊಸ ವರ್ಷದ ಪಂಚಾಂಗದಂತೆ ಯುಗಾದಿ ಹಬ್ಬ ಮುಗಿದ ನಂತರ ಆಚರಿಸಲಾಗುವ ಮೊದಲ ಗ್ರಾಮದೇವತೆ ಹಬ್ಬವಾಗಿ ಇದು ಈ ಊರಿನಲ್ಲಿ ಪ್ರಸಿದ್ದಿಯಾಗಿದೆ.
ಹಬ್ಬದ ದಿನದಂದು ಊರಿನ ಜನರೆಲ್ಲರೂ ತಮ್ಮ ಮನೆಗಳನ್ನು ತೊಳೆದು ಶುಚಿಗೊಳಿಸುತ್ತಾರೆ. ಹೆಣ್ಣುಮಕ್ಕಳು ತಂಬಿಟ್ಟು, ಬೆಲ್ಲದ ಅನ್ನವನ್ನು ತಯಾರಿಸಿ, ಪಾತ್ರೆಗಳಲ್ಲಿಟ್ಟು, ಮಾವಿನ ಸೊಪ್ಪು ಮತ್ತು ಬೇವಿನ ಸೊಪ್ಪಿನಿಂದ ಶೃಂಗರಿಸಿ ಶಿರಸ್ಸಿನಲ್ಲಿ ಹೊತ್ತು ತರುತ್ತಾರೆ. ಈ ಪದ್ಧತಿಯನ್ನು '''<nowiki/>'ಮಡೆ' (ಮಡೆ ತರುವುದು)''' ಎಂದು ಕರೆಯುತ್ತಾರೆ. ಇದರ ಜೊತೆಯಲ್ಲಿ ಪುರುಷರು ಸಾಕುಪ್ರಾಣಿಗಳಾದ ಕುರಿ, ಕೋಳಿ, ಮೇಕೆಗಳನ್ನು ಕರೆತಂದು ಗ್ರಾಮದೇವತೆಗೆ ಪೂಜಿಸಿದ ನಂತರ ಬಲಿ ನೀಡುತ್ತಾರೆ.
ಬಲಿ ನೀಡಿದ ನಂತರ ಪ್ರಾಣಿಯ ರಕ್ತ ಸಂಪೂರ್ಣವಾಗಿ ಸೋರಿ ಹೋಗುವವರೆಗೆ ಅದನ್ನು ಅಲ್ಲೇ ಬಿಟ್ಟು, ಬಳಿಕ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ನಂತರ ಗ್ರಾಮಸ್ಥರೆಲ್ಲರೂ ಬಯಲು ಪ್ರದೇಶಕ್ಕೆ ತೆರಳಿ ಅಮ್ಮನವರಿಗೆ (ಮಾರಮ್ಮನಿಗೆ) ತಂಬಿಟ್ಟು, ಬೆಲ್ಲದ ಅನ್ನ, ಮೊಸರನ್ನ ಹಾಗೂ ತುಪ್ಪದ ಮಡೆಯಿಟ್ಟು ಪೂಜೆ ಸಲ್ಲಿಸಿ ಕೋಳಿಯನ್ನು ಬಲಿ ಕೊಡುತ್ತಾರೆ. ಮಾರಿದೇವತೆಯನ್ನು ಒಲಿಸಿಕೊಂಡರೆ ಊರಿಗೆ ಒಳಿತಾಗುತ್ತದೆ ಮತ್ತು ಆಕೆಯು ಊರಿನ ಕಾವಲು ದೇವತೆ ಎಂಬ ದೃಢವಾದ ನಂಬಿಕೆ ಇಲ್ಲಿದೆ
== JJJ) ೬. ಕಾರಬ್ಬ (ಖಾರ ಹಬ್ಬ) ==
ಖಾರ ಹಬ್ಬವನ್ನು ರೈತರು ವರ್ಷದ ಆರಂಭದಲ್ಲೇ (ಯುಗಾದಿಯ ಮಾರನೇ ದಿನ) ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಭೂಮಿಯನ್ನು ಉಳುಮೆ ಮಾಡಲು ಉಪಯೋಗಿಸುವ ಕೃಷಿ ಸಲಕರಣೆಗಳನ್ನು ಹಾಗೂ ಪ್ರಾಣಿಗಳನ್ನು ಈ ಹಬ್ಬದಲ್ಲಿ ಶ್ರದ್ಧೆಯಿಂದ ಪೂಜಿಸಲಾಗುತ್ತದೆ. ಇಲ್ಲಿನ ರೈತ ಸಮುದಾಯಕ್ಕೆ ಇದು ವರ್ಷದ ಸಕಲ ಸುಖ-ದುಃಖಗಳನ್ನು ಹಂಚಿಕೊಳ್ಳುವ ಜೀವನಾಡಿಯ ಹಬ್ಬವಾಗಿದೆ.
ರೈತರು ವರ್ಷದ ಮೊದಲ ಹಬ್ಬವಾಗಿ ಇದನ್ನು ಆಚರಿಸಿದ ನಂತರವೇ ಉಳಿದ ಹಬ್ಬಗಳತ್ತ ಗಮನ ಹರಿಸುತ್ತಾರೆ. ''"ಮನೆಯೇ ಮೊದಲ ಪಾಠಶಾಲೆ"'' ಎಂಬ ನಾಣ್ಣುಡಿಯಂತೆ, ರೈತರು ತಾವು ಉಳುಮೆಗೆ ಬಳಸುವ ನೇಗಿಲು, ಕುಡುಗೋಲು, ಕೊಸಲಿ, ಗುದ್ದಲಿ, ನೊಗ ಹಾಗೂ ಮುಖ್ಯವಾಗಿ ಎತ್ತಿನ ಬಂಡಿಯನ್ನು (ಗಾಡಿ) ಪೂಜೆಗೆ ಸಿದ್ಧಪಡಿಸುತ್ತಾರೆ. ದನ-ಕರುಗಳನ್ನು ತೊಳೆದು, ಸಿಂಗರಿಸಿ, ಮಾವಿನ ಸೊಪ್ಪು ಮತ್ತು ಬೇವಿನ ಸೊಪ್ಪುಗಳಿಂದ ಅಲಂಕರಿಸಿ, ಗಂಧ-ಕುಂಕುಮ ಹಚ್ಚಿ ಪೂಜಿಸುತ್ತಾರೆ.
== KKK) ಕೃಷಿ ಸಂಸ್ಕೃತಿ ಮತ್ತು ಜಾನಪದ ಮೌಲ್ಯ: ==
ಪೂಜೆಯ ನಂತರ ತಮ್ಮ ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿಗಳನ್ನು (ಪಾಯಸ, ಕಜ್ಜಾಯ ಇತ್ಯಾದಿ) ದನ-ಕರುಗಳಿಗೆ ಪ್ರೀತಿಯಿಂದ ತಿನ್ನಿಸುತ್ತಾರೆ. ಅತ್ಯಂತ ಗಮನಾರ್ಹ ಸಂಗತಿಯೆಂದರೆ, '''ಈ ಹಬ್ಬದ ದಿನದಂದು ಯಾವೊಬ್ಬ ರೈತನೂ ತನ್ನ ದನ-ಕರುಗಳನ್ನು ಕೃಷಿ ಕೆಲಸಕ್ಕೆ ಬಳಸುವುದಿಲ್ಲ; ಬದಲಿಗೆ ಅವುಗಳಿಗೆ ಸಂಪೂರ್ಣ ವಿಶ್ರಾಂತಿ (ಬಿಡುವು) ನೀಡಲಾಗುತ್ತದೆ.'''
ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ರೈತರು ತಮ್ಮ ವ್ಯವಸಾಯದ ಸಲಕರಣೆಗಳನ್ನು ಹಾಗೂ ಜಾನುವಾರುಗಳನ್ನು ದೈವಸ್ವರೂಪಿಯಾಗಿ ಪೂಜಿಸುವುದು. ಇದು ನಮ್ಮ ಕೃಷಿ ಆಧಾರಿತ ಜಾನಪದ ಸಂಸ್ಕೃತಿಯ ಉನ್ನತ ಮೌಲ್ಯವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ, ಈ ಹಬ್ಬಕ್ಕೆ ನೆಂಟರಿಷ್ಟರನ್ನು, ಅಕ್ಕ-ತಂಗಿಯರನ್ನು ಹಾಗೂ ಅಳಿಯನನ್ನು ಆಹ್ವಾನಿಸಿ, ಸತ್ಕರಿಸಿ ಮನೆಯವರೆಲ್ಲರೂ ಒಟ್ಟಾಗಿ ಕುಳಿತು ಸಂತೋಷದಿಂದ ಊಟ ಸವಿಯುತ್ತಾರೆ.
== LLL) ೭. ಮಹಾಲಯ ಅಮಾವಾಸ್ಯೆ ==
ಮಾರಗೌಡನಹಳ್ಳಿ ಗ್ರಾಮಸ್ಥರು 'ಮಹಾಲಯ ಅಮಾವಾಸ್ಯೆ' ಹಬ್ಬವನ್ನು ಅತ್ಯಂತ ಶ್ರದ್ಧೆ ಮತ್ತು ವಿಜೃಂಭಣೆಯಿಂದ ಆಚರಿಸುತ್ತಾರೆ. ಇಲ್ಲಿನ ಜನರಿಗೆ ಈ ಹಬ್ಬವು ವರ್ಷದ ಅತ್ಯಂತ ಪ್ರಮುಖ ಹಾಗೂ ಅದ್ದೂರಿಯಾದ ಹಬ್ಬವಾಗಿದೆ. ಈ ಹಬ್ಬವು ಸಾಮಾನ್ಯವಾಗಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಬರುತ್ತದೆ. ಹಬ್ಬಕ್ಕೆ ಒಂದು ವಾರವಿರುವಂತೆಯೇ ಮನೆಗಳಿಗೆ ಸುಣ್ಣ-ಬಣ್ಣ ಬಳಿದು ಸ್ವಚ್ಛಗೊಳಿಸುತ್ತಾರೆ. ಜೊತೆಗೆ ಹಬ್ಬದ ಅಡುಗೆಗೆ ಬೇಕಾದ ದವಸ-ಧಾನ್ಯ, ದಿನಸಿ ಮುಂತಾದ ಸಕಲ ಸಾಮಗ್ರಿಗಳನ್ನೂ ಮುಂಚಿತವಾಗಿಯೇ ಸಂಗ್ರಹಿಸಿಕೊಳ್ಳುತ್ತಾರೆ.
== MMM) ಹಿರಿಯರ ಸ್ಮರಣೆ ಮತ್ತು ನಂಬಿಕೆ: ==
ಈ ಹಬ್ಬದ ಮುಖ್ಯ ವಿಶೇಷತೆಯೆಂದರೆ, ತಮ್ಮನ್ನು ಅಗಲಿದ ಪಿತೃಗಳು (ಹಿರಿಯರು) ಅಂದು ಮನೆಗೆ ಆಗಮಿಸಿ ತಮ್ಮ ಕುಟುಂಬದವರು ನೀಡುವ ಎಡೆ-ಪೂಜೆಯನ್ನು ಸ್ವೀಕರಿಸಿ ಆಶೀರ್ವದಿಸುತ್ತಾರೆ ಎಂಬ ದೃಢವಾದ ನಂಬಿಕೆ ಇಲ್ಲಿದೆ. ಆದ್ದರಿಂದಲೇ ಈ ಹಬ್ಬಕ್ಕೆ ಎಷ್ಟೇ ಖರ್ಚಾದರೂ, ಕೊನೆಗೆ ಸಾಲ-ಸೋಲ ಮಾಡಿದರೂ ಸರಿ ಹಬ್ಬವನ್ನು ಅದ್ದೂರಿಯಾಗಿಯೇ ಆಚರಿಸುತ್ತಾರೆ. ''"ಸಾಲದ ಮೇಲೆ ಸಾಲವಾಗಲಿ, ತುಪ್ಪ-ಅನ್ನ ಉಣ್ಣೋ ಬಡ್ಡಿ"'' ಎಂಬ ಜಾನಪದ ಗಾದೆಯಂತೆ ಹಿರಿಯರ ಗೌರವಾರ್ಥವಾಗಿ ಈ ಹಬ್ಬವನ್ನು ಸಂಭ್ರಮದಿಂದ ನೆರವೇರಿಸುತ್ತಾರೆ.
== NNN) ಎಡೆ ಇಡುವ ಸಂಪ್ರದಾಯ: ==
ಹಬ್ಬದ ದಿನದಂದು ಕಜ್ಜಾಯ, ಚಾಕ್ಲೇಟ್/ಚಿಕ್ಕಿ ಉಂಡೆ, ವಡೆ, ಚಕ್ಕುಲಿ, ನುಚ್ಚಿನುಂಡೆ, ಕೋಡುಬಳೆ ಮುಂತಾದ ನಾನಾ ನಮೂನೆಯ ಸಿಹಿ-ಖಾರಗಳನ್ನು ಸಿದ್ಧಪಡಿಸುತ್ತಾರೆ.
ಅಷ್ಟೇ ಅಲ್ಲದೆ, ಹಿರಿಯರು ಜೀವಂತವಾಗಿದ್ದಾಗ ಬಳಸುತ್ತಿದ್ದ ಅಥವಾ ಇಷ್ಟಪಡುತ್ತಿದ್ದ ಪ್ರತಿಯೊಂದು ವಸ್ತುವನ್ನೂ ಪೂಜೆಯ ಎಡೆಯ ಬಳಿ ಇಡಲಾಗುತ್ತದೆ:
· '''ಆಹಾರ ಮತ್ತು ಅಭ್ಯಾಸಗಳು:''' ಬೀಡಿ, ಸಿಗರೇಟ್, ಮದ್ಯಪಾನ, ಅಡಿಕೆ-ಎಲೆ, ನಶ್ಯ, ಕಡ್ಡಿಪುಡಿ ಇತ್ಯಾದಿ.
· '''ಸಾಮಗ್ರಿಗಳು:''' ಅಜ್ಜ-ಅಜ್ಜಿಯರು ಬಳಸುತ್ತಿದ್ದ ಎಲೆ-ಅಡಿಕೆ ಕುಟ್ಟುವ ಕಲ್ಲು/ಸಂಸಾರಿಕ ಡಬ್ಬ.
· '''ಆಭರಣ ಮತ್ತು ಉಡುಪು:''' ಅಜ್ಜಿಯಂದಿರು ಅಲಂಕರಿಸಿಕೊಳ್ಳುತ್ತಿದ್ದ ಚಿನ್ನದ ಓಲೆ, ಡಾಬು, ಕಾಲಿನ ಕಡಗ ಹಾಗೂ ಅವರು ಉಡುತ್ತಿದ್ದ ಸೀರೆ, ಪಂಚೆ, ಬಟ್ಟೆಗಳನ್ನು ಹಿರಿಯರ ಎಡೆಯ ಮುಂದೆ ಶ್ರದ್ಧೆಯಿಂದ ಇಡುತ್ತಾರೆ.
== OOO) ಎಡೆ ಹಾಕುವುದು ಮತ್ತು ಆಚರಣೆಯ ವಿಧಿ: ==
ಪ್ರತಿಯೊಂದು ಮನೆಯಲ್ಲೂ ಮೇಕೆ ಅಥವಾ ಕುರಿಯನ್ನು ಬಲಿಕೊಟ್ಟು (ಅಥವಾ ತಂದು) ಸಾಯಂಕಾಲ ವಿಶೇಷ ಮಾಂಸದ ಅಡುಗೆ ಸಿದ್ಧಪಡಿಸುತ್ತಾರೆ. ಸಾಯಂಕಾಲ ಹಿರಿಯರ ಸಮಾಧಿಗೆ (ಗಡಂಗಿಗೆ) ಹೋಗಿ ಪೂಜೆ ಸಲ್ಲಿಸಿ ಬಂದ ನಂತರ, ಮನೆಯಲ್ಲಿ ಮೇಲೆ ತಿಳಿಸಿದ ತಿಂಡಿ-ತಿನಿಸುಗಳು ಹಾಗೂ ರುಚಿಯಾದ ಅಡುಗೆಯನ್ನು ಎಡೆ ಇಟ್ಟು ಪೂಜೆ ಮಾಡುತ್ತಾರೆ.
ನಂತರ ಅಲ್ಪಸಮಯ ಮನೆಯ ಮುಖ್ಯ ಬಾಗಿಲನ್ನು ಮುಚ್ಚಿ ಹೊರಗೆ ಕಾಯುತ್ತಾರೆ. ಹಿರಿಯರು ನಿರ್ವಿಘ್ನವಾಗಿ ಬಂದು ಊಟ ಸ್ವೀಕರಿಸಲಿ ಎಂಬ ಆಂತರ್ಯದ ನಂಬಿಕೆ ಇದಾಗಿದೆ. ಸ್ವಲ್ಪ ಸಮಯದ ನಂತರ ಬಾಗಿಲು ತೆರೆದು ಪುನಃ ಧೂಪ-ದೀಪಗಳ ಪೂಜೆ-ಪುನಸ್ಕಾರ ಮಾಡಿ, ಹಬ್ಬಕ್ಕೆ ಬಂದ ಅತಿಥಿಗಳಿಗೆ ಹಾಗೂ ನೆಂಟರಿಷ್ಟರಿಗೆ ಪ್ರೀತಿಯಿಂದ ಊಟ ಬಡಿಸುತ್ತಾರೆ. ಮರುದಿನವೂ ಸಹ ಮನೆಗೆ ಬಂದ ಅತಿಥಿ- ಅಭ್ಯಾಸಗತರಿಗೆ ಮಾಂಸಾಹಾರದ ಹಬ್ಬದ ಊಟವನ್ನು ಬಡಿಸಿ ಸಂತೋಷಪಡುತ್ತಾರೆ.
== PPP) ಸಾಂಸ್ಕೃತಿಕ ಆಶಯ: ==
ಈ ಹಬ್ಬದ ಮುಖ್ಯ ವೈಶಿಷ್ಟ್ಯವೆಂದರೆ ತಮ್ಮನ್ನು ಹೆತ್ತು, ಹೊತ್ತು ಸಾಕಿ ಬೆಳೆಸಿದ ಹಿರಿಯರನ್ನು ಎಂದಿಗೂ ಮರೆಯದೆ ಸ್ಮರಿಸಿಕೊಳ್ಳುವುದೇ ಆಗಿದೆ. ಇದು ಭಾರತೀಯ ಕೃಷಿ ಹಾಗೂ ಜಾನಪದ ಸಂಸ್ಕೃತಿಯ ಉನ್ನತ ಮೌಲ್ಯವಾಗಿದೆ.
== QQQ) ೧೩. ಸಂಕ್ರಾಂತಿ ಹಬ್ಬ ==
ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಜನವರಿ ತಿಂಗಳ ೧೪ ನೇ ತಾರೀಖಿನಂದು (ಮಕರ ಸಂಕ್ರಮಣದಂದು) ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಸಂಪೂರ್ಣವಾಗಿ ರೈತನ ಜೀವಾಳವಾದ ದನ-ಕರುಗಳಿಗೆ ಹಾಗೂ ಆತ ಬೆಳೆದ ದವಸ-ಧಾನ್ಯಗಳಿಗೆ ಸಂಬಂಧಿಸಿದ ಕೃತಜ್ಞತಾ ಹಬ್ಬವಾಗಿದೆ ಎಂದರೆ ತಪ್ಪಾಗಲಾರದು.
ಹಬ್ಬದ ಹಿಂದಿನ ಸಂಜೆಯೇ ರೈತರು ತಮ್ಮ ಹೊಲಗಳ ಹುಲ್ಲಿನ ಮೆದೆಗಳಿಗೆ ಮಾವಿನ ಸೊಪ್ಪು, ಅಂತರಗಂಗೆ ಹಾಗೂ ಬೇವಿನ ಸೊಪ್ಪುಗಳನ್ನು ಸಿಕ್ಕಿಸಿ ಶೃಂಗರಿಸುತ್ತಾರೆ. ನಂತರ ತಾವು ಬೆಳೆದ ಭತ್ತ ಹಾಗೂ ದವಸ-ಧಾನ್ಯಗಳನ್ನು ದಾನ ಮಾಡುತ್ತಾರೆ. ಅಂದು ಕಣಗಳಿಗೆ, ಏಣಿಗಳಿಗೆ ಮತ್ತು ನೇಗಿಲುಗಳಿಗೆ ಸುಂದರವಾದ ಚಿತ್ತಾರ/ಚಿತ್ರಗಳನ್ನು ಬಿಡಿಸುತ್ತಾರೆ.
== RRR) ದನ-ಕರುಗಳ ಶೃಂಗಾರ ಮತ್ತು ಕಿಚ್ಚು ಹಾಯಿಸುವುದು: ==
ಈ ಹಬ್ಬವು ಸಾಕುಪ್ರಾಣಿಗಳಿಗೆ ಮೀಸಲಾಗಿರುವುದರಿಂದ, ಹಬ್ಬದ ದಿನದಂದು ದನ-ಕರುಗಳನ್ನು ಹಾಗೂ ಎಮ್ಮೆಗಳನ್ನು ಕರೆದೊಯ್ದು ತೊಳೆದು, ಕೊಂಬುಗಳಿಗೆ ಬಣ್ಣ ಬಳಿದು, ಅರಿಶಿನ, ಕುಂಕುಮ, ಬಣ್ಣದ ಕಾಗದದ ಕುಚ್ಚುಗಳು ಹಾಗೂ ಮಾಲೆಗಳನ್ನು ಹಾಕಿ ಶೃಂಗರಿಸುತ್ತಾರೆ.
ಸಂಜೆ ವೇಳೆ ದನ-ಕರುಗಳನ್ನು ಕಿಚ್ಚು ಹಾಯಿಸಲು ಊರಿನ ಜನರೆಲ್ಲರೂ ಒಣಗಿದ ತರಗನ್ನು (ಒಣದೆಲೆ/ಕಸ) ತಂದು ರಸ್ತೆಯಲ್ಲಿ ಸಾಲಾಗಿ ಹರಡುತ್ತಾರೆ. ತರಗಿಗೆ ಬೆಂಕಿ ಹಾಕಿ, ತಮಟೆ, ನಗಾರಿ ಮುಂತಾದ ವಾದ್ಯಗಳ ಮಂಗಳಘೋಷದೊಂದಿಗೆ ಊರಿನ ಜನರೆಲ್ಲರೂ ತಮ್ಮ ಎತ್ತು, ಹಸು, ಎಮ್ಮೆ ಮುಂತಾದ ಪ್ರಾಣಿಗಳನ್ನು ಆ ಉರಿಯುವ ಬೆಂಕಿಯ ಮೇಲಿಂದ ಧಾವಿಸಿ ಹಾಯಿಸುತ್ತಾರೆ (ಕಿಚ್ಚಾಯಿಸುತ್ತಾರೆ).
ನಂತರ ಶ್ರೀ ಸಂಕ್ರಾಂತಮ್ಮ ದೇವಿಗೆ ಪೂಜೆ ಸಲ್ಲಿಸಿ, ಮನೆಗೆ ತೆರಳಿ ತಾವು ಸಿದ್ಧಪಡಿಸಿದ ಸಿಹಿ ತಿಂಡಿಗಳನ್ನು (ಎಳ್ಳು-ಬೆಲ್ಲ, ಪಾಯಸ/ಕಿಚಡಿ) ಮೊದಲು ದನ-ಕರುಗಳಿಗೆ ತಿನ್ನಿಸಿ, ತದನಂತರ ಮನೆಯವರೆಲ್ಲರೂ ಒಟ್ಟಾಗಿ ಕುಳಿತು ಭೋಜನ ಸವಿಯುತ್ತಾರೆ.
== SSS) ಮಾರಗೌಡನಹಳ್ಳಿಯ ಹಬ್ಬಗಳ ಸಾಂಸ್ಕೃತಿಕ ಆಶಯ: ==
ಹೀಗೆ ಮಾರಗೌಡನಹಳ್ಳಿಯ ಗ್ರಾಮಸ್ಥರು ವರ್ಷವಿಡೀ ಹಲವು ಹತ್ತು ತೆರನಾದ ಹಬ್ಬ-ಹರಿದಿನಗಳನ್ನು ಆಚರಿಸುತ್ತಾರೆ. ಪ್ರತಿ ಹಬ್ಬದ ಹಿಂದೆಯೂ ಒಂದೊಂದು ಸುಂದರ ಜಾನಪದ ಆಶಯಗಳಿವೆ:
· '''ಸಂಕ್ರಾಂತಿ:''' ರೈತನ ಜೀವಾಳವಾದ ದನ-ಕರುಗಳ ಪ್ರೀತಿ ಮತ್ತು ಗೌರವಕ್ಕಾಗಿ.
· '''ಮಹಾಲಯ ಅಮಾವಾಸ್ಯೆ ಮತ್ತು ಆಯುಧ ಪೂಜೆ:''' ತಮ್ಮನ್ನು ಅಗಲಿದ ಪಿತೃಗಳನ್ನು/ಹಿರಿಯರನ್ನು ಸ್ಮರಿಸಲು ಹಾಗೂ ಕಾಯಕದ ಉಪಕರಣಗಳನ್ನು ಪೂಜಿಸಲು.
ಒಟ್ಟಾರೆಯಾಗಿ ಹೇಳುವುದಾದರೆ, ಈ ಗ್ರಾಮದಲ್ಲಿ ಆಚರಿಸಲಾಗುವ ಪ್ರತಿ ಹಬ್ಬವೂ '''ಒಗ್ಗಟ್ಟು, ಸಹಬಾಳ್ವೆ ಹಾಗೂ ಸೌಹಾರ್ದತೆಯ ಭದ್ರ ಬುನಾದಿಯ ಮೇಲೆಯೇ ನಡೆಯುತ್ತದೆ'''. ವರ್ಷಪೂರ್ತಿ ಅವರು ಆಚರಿಸುವ ಹಬ್ಬಗಳನ್ನು ಗಮನಿಸಿದರೆ, ಮಾರಗೌಡನಹಳ್ಳಿಯ ಗ್ರಾಮಸ್ಥರು ಅತಿ ಸರಳ ಜೀವಿಗಳು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
''೯.ಶಿವರಾತ್ರಿ:-''
''ಈ ಹಬ್ಬವನ್ನು ಫೆಬ್ರವರಿ ತಿಂಗಳಿನಲ್ಲಿ ಆಚರಿಸುತ್ತಾರೆ. ಈ ಊರಿನಲ್ಲಿ ದೇವಸ್ಥಾನಗಳಲ್ಲಿ ಮತ್ತು ರಾಮ ಮಂದಿರದಲ್ಲಿ ಭಜನೆ ಮಾಡುವ ಮುಖಾಂತರ ಶಿವಾನಿಗೆ ಇಲ್ಲಿ ಜನರು ಭಕ್ತಿಯನ್ನು ಧಾರೆ ಎರೆಯುತ್ತಾರೆ. ಈ ಭಜನೆಯನ್ನು ಮಾಡುವುದಕ್ಕಿಂತ ಮೊದಲು ಇಲ್ಲಿ ಹಬ್ಬ ವಾತಾವರಣವನ್ನು ನಾವು ಕಾಣಬಹುದು. ದೇವಾಲಯ ದೀಪಗಳಿಂದ ಅಲಂಕಾರವಾಗಿರುತ್ತದೆ. ಹಾಗೂ ಸುಂದರವಾಗಿ ಕಾಣುತ್ತಿರುತ್ತದೆ. ಪಕ್ಕದ ಊರಿನಲ್ಲಿ ಪಂಚಲಿAಗೇಶ್ವರ ಪೂಜೆಯು ಬಹಳ ವಿಜೃಂಭಣೆಯಿAದ ನಡೆಯುತ್ತದೆ. ಕೆಲವು ಜನರು ಅಲ್ಲಿಗೆ ಹೋಗುತ್ತಾರೆ.''
''ಶಿವನ ಧ್ಯಾನ, ಭಕ್ತಿಯ ಸಾಗರದ ಹಾಡುಗಳು ವಾದ್ಯ ಮೇಳ ಎಲ್ಲೆಲ್ಲಿಯೂ ಕಾಣುತ್ತೇವೆ. ಶಿವನ ಧ್ಯಾನವನ್ನು ಮಾಡುವ ಜನರುಗಳು ಶ್ಮಚಿಯಾಗಿ ದೇವಾಲಯಕ್ಕೆ ಬಂದು ಭಜನೆ ಮಾಡುತ್ತಾರೆ. ಈ ಊರಿನಲ್ಲಿ ಶಿವರಾತ್ರಿ ದಿನ ವಿಶೇಷವಾದ ಭಜನೆ ರಾಮಮಂದಿರದಲ್ಲಿ, ಗುರುವೃಂದದವರಾದ ಶಂಕರಣ್ಣ ಎಂಬುವರ ಸಮ್ಮುಖದಲ್ಲಿ ನಡೆಯುತ್ತದೆ. ಉÁತ್ರಿಯ ದೇವರ ಭಕ್ತಿಗೀತೆ, ಜಾನಪದಗೀತೆ, ಲಾವಣಿ, ಸಂಸ್ಕೃತ ಸ್ತೋತ್ರಗಳನ್ನು ಜಪಿಸುತ್ತಾರೆ. ಬೆಳಿಗ್ಗೆ ಎಲ್ಲಾರು ಪ್ರಸಾದವನ್ನು ತೆಗೆದುಕೊಂಡು ಬರುತ್ತಾರೆ. ಬಂದು ಬೆಳೆಗ್ಗೆ ಮಲಗಬಾರದು ಎಂಬ ನಿಯಮವಿದೆ. ಆದರಿಂದ ಯಾರು ಮಲಗುವುದಿಲ್ಲ. ಪ್ರಸಾದಕ್ಕೆ ಊರಿನ ಪ್ರಮುಖರು ಹಣದ ರೂಪವಾಗಿ ಹಣವನ್ನು, ಕಾಯಿ, ಬೆಲ್ಲ, ಅಕ್ಕಿ, ತುಪ್ಪ, ಬಾಳೇಹಣ್ಣುಗಳನ್ನು ಕೊಡುವ ಪದ್ದತಿಯನ್ನು ಕಾಣಬಹುದು.''
''ನಮಗೆ ತಿಳಿಯಬೇಕಾದ ಅಂಶಗಳು ಇಲ್ಲಿ, ಜನಪದ ಹಾಡುಗಳು, ಲಾವಣಿ, ಪದಕಟ್ಟೆ ಹಾಡುವ ಗೀತೆಗಳು ಮನವನ್ನು ಪರಿವರ್ತನೆ ಆಗಬಹುದು ಎಂದು ಇಲ್ಲಿಯ ಗ್ರಾಮಸ್ಥರ ಅಭಿಪ್ರಾಯ. ಇದು ಜನ+ಪದ= ಜಾನಪದ ಎಂದು ಹೇಳಬಹುದಲ್ಲವೆ.''
== ೧೨. ಬಸವೇಶ್ವರನ ಹಬ್ಬ ಮತ್ತು ಬಸವನ ಕೊಂಡ ==
ಮಾರಗೌಡನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆಯ (ಶ್ರೀ ಪಟ್ಟಲದಮ್ಮನ) ಪ್ರಮುಖ ಉತ್ಸವ ಮುಗಿದ ಎರಡು ದಿನಗಳ ನಂತರ '''<nowiki/>'ಬಸವೇಶ್ವರನ ಹಬ್ಬ'''' ನಡೆಯುತ್ತದೆ. ಪ್ರತಿಯೊಂದು ಮನೆಯಲ್ಲೂ ಈ ಹಬ್ಬಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತದೆ.
== TTT) ಕೃಷಿ ಸಲಕರಣೆಗಳ ನಂಬಿಕೆ ಮತ್ತು ಬಸವನ ಕೊಂಡ: ==
ಈ ಹಬ್ಬದ ಆಚರಣೆಯ ಭಾಗವಾಗಿ ಊರಿನ ಮನೆಗಳಲ್ಲಿ ಮುರಿದುಹೋದ ನೊಗ, ನೇಗಿಲಿನ ತುಂಡುಗಳು ಹಾಗೂ ಕೃಷಿಗೆ ಬಳಸುವ ಇತರ ಮರದ ಸಾಮಗ್ರಿಗಳನ್ನು 'ಬಸವನ ಕೊಂಡ'ಕ್ಕೆ ಭಕ್ತಿಯಿಂದ ಸಮರ್ಪಿಸುತ್ತಾರೆ.
'''ಗಮನಾರ್ಹ ಸಂಪ್ರದಾಯ:''' ಕೃಷಿಗೆ ಆಸರೆಯಾಗಿ ನಿಂತ ಮರದ ನೊಗ ಮತ್ತು ನೇಗಿಲುಗಳು ಕೇವಲ ವಸ್ತುವಲ್ಲ; ಅವು ರೈತನಿಗೆ ದೈವಸ್ವರೂಪಿ. ಧನ-ಕರುಗಳಿಗೆ ಹಾಗೂ ಕೃಷಿ ಪರಿಕರಗಳಿಗೆ ಗೌರವ ನೀಡಬೇಕೆಂಬ ಕಾರಣಕ್ಕೆ, ಮುರಿದ ನೊಗ-ನೇಗಿಲುಗಳನ್ನು ಮನೆಯ ಒಲೆಗಳಿಗೆ ಉರಿಯಾಗಿ ಹಾಕಿ ಸುಡುವುದಿಲ್ಲ. ಬದಲಿಗೆ, ಅವುಗಳನ್ನು ಪವಿತ್ರವೆಂದು ಭಾವಿಸಿ 'ಬಸವನ ಕೊಂಡ'ಕ್ಕೆ ಅರ್ಪಿಸುವುದು ಇಲ್ಲಿನ ವಿಶೇಷ ಧಾರ್ಮಿಕ ನಿಯಮವಾಗಿದೆ.
== UUU) ಕೊಂಡದ ವಿಧಿ-ವಿಧಾನಗಳು: ==
· '''ಸಮಯ:''' ಬೆಳಗಿನ ಜಾವ ಸುಮಾರು '''೨:೦೦ ರಿಂದ ೫:೦೦ ಗಂಟೆಯ ಅವಧಿಯಲ್ಲಿ''' ಬಸವನ ಕೊಂಡೋತ್ಸವವು ನೆರವೇರುತ್ತದೆ.
· '''ನಿಂಗೀರಯ್ಯನ ಮೆರವಣಿಗೆ:''' ಕೊಂಡ ಹಾಯುವುದಕ್ಕಾಗಿ 'ನಿಂಗೀರಯ್ಯ'ನನ್ನು ತೆಂಗಿನಕಾಯಿ ಒಡೆಯುತ್ತಾ, ಬೀದಿಗಳಲ್ಲಿ ದೈವಿಕವಾಗಿ ಮೆರವಣಿಗೆ ಮಾಡುತ್ತಾ ಕರೆದುಕೊಂಡು ಬರಲಾಗುತ್ತದೆ. ಮೆರವಣಿಗೆಯ ಹಾದಿಯಲ್ಲಿ ನಿಂಗೀರಯ್ಯನು ಸೂಚಿಸಿದಾಗಲೆಲ್ಲಾ ಭಕ್ತಿಯಿಂದ ತೆಂಗಿನಕಾಯಿಗಳನ್ನು ಒಡೆಯಲಾಗುತ್ತದೆ.
· '''ಕೊಂಡ ಮುಚ್ಚುವುದು:''' ಬೆಳಗಿನ ಜಾವ ಸೂರ್ಯನ ಮೊದಲ ಕಿರಣಗಳು ಭೂಮಿಗೆ ಸ್ಪರ್ಶಿಸುವ ಸಮಯಕ್ಕೇ (ಸೂರ್ಯೋದಯವಾಗುತ್ತಿದ್ದಂತೆ) ಈ ಬಸವನ ಕೊಂಡವನ್ನು ಮುಚ್ಚಲಾಗುತ್ತದೆ.
ನೀವು ನೀಡಿರುವ ಪಠ್ಯದಲ್ಲಿ ಗ್ರಾಮೀಣ ಭಾಗದ ವಿಶಿಷ್ಟ ಹಾಗೂ ಅರ್ಥಪೂರ್ಣ ಆಚರಣೆಯಾದ '''<nowiki/>'ಮುನಿಹಬ್ಬ' (ಮುನಿ ಪೂಜೆ)''' ಮತ್ತು ಪ್ರಕೃತಿ-ರೈತನ ನಡುವಿನ ಸಂಬಂಧದ ಸುಂದರ ವಿವರಣೆಯಿದೆ.
ಆದರೆ ಪಠ್ಯದಲ್ಲಿ ಕೆಲವು ಕಾಗುಣಿತ/ಲಿಪಿ ದೋಷಗಳು (ಉದಾ: 'ಸತ್ತಸ್ಕರಿಸುತ್ತಾರೆ', 'ಆಚರಿಸುವ ಬಂದAತಹ', 'ಊರಿನ್ಲಲಿ', 'ಬಹು ಮುಖ್ಯವಾಸ') ಹಾಗೂ ವಾಕ್ಯ ರಚನೆಯ ದೋಷಗಳಿದ್ದವು. ವಿಷಯದ ಮೂಲ ಭಾವನೆ ಹಾಗೂ ಜಾನಪದ ಹಿನ್ನೆಲೆಗೆ ಧಕ್ಕೆಯಾಗದಂತೆ ತಿದ್ದಿ ಸಿದ್ಧಪಡಿಸಿದ '''ಶುದ್ಧೀಕರಿಸಿದ ಪಠ್ಯ''' ಇಲ್ಲಿದೆ:
== VVV) ೧೧. ಮುನಿಹಬ್ಬ (ಮುನಿ ಪೂಜೆ) ==
ಮುನಿಹಬ್ಬವು ಹೆಚ್ಚಿನ ಎಲ್ಲಾ ಗ್ರಾಮಗಳಲ್ಲಿಯೂ ಕಂಡುಬರುವ ಅತ್ಯಂತ ಸಾಂಪ್ರದಾಯಿಕ ಆಚರಣೆಯಾಗಿದ್ದು, ಮಾರಗೌಡನಹಳ್ಳಿಯಲ್ಲೂ ಸಹ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಕೊನೆಯ ವಾರದಿಂದ ಪ್ರಾರಂಭವಾಗಿ ಮಾರ್ಚ್ ತಿಂಗಳ ಅವಧಿಯವರೆಗೆ ಈ ಹಬ್ಬ ನಡೆಯುತ್ತದೆ. ಈ ಪೂಜೆಯನ್ನು ಸೋಮವಾರ, ಬುಧವಾರ ಅಥವಾ ಶುಕ್ರವಾರಗಳಂದು ನೆರವೇರಿಸುವುದು ಇಲ್ಲಿನ ವಿಶೇಷ.
ರೈತರು ಈ ಪೂಜೆಯನ್ನು ತಮ್ಮ ತಮ್ಮ ಗದ್ದೆ, ತೋಟ ಹಾಗೂ ಹೊಲಗಳಲ್ಲಿ ನೆರವೇರಿಸುತ್ತಾರೆ. ತಾವು ಮಾಡಿರುವ ಕೃಷಿ ಮತ್ತು ಬೆಳೆಗಳನ್ನು ಸದಾ ಕಾಯುವ ದೈವವೇ ಈ '''ಮುನಿಸ್ವಾಮಿ (ನಾಗರಹಾವು)''' ಎಂಬ ದೃಢವಾದ ನಂಬಿಕೆ ಇಲ್ಲಿದೆ. ಅಂದು ಹೊಲದಲ್ಲಿರುವ ನಾಗರಹಾವಿನ ಹುತ್ತಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿ, ಎಡೆ ಇಟ್ಟು, ಹಾಲು-ತುಪ್ಪವನ್ನು ಎರೆಯುತ್ತಾರೆ. ಇದನ್ನು '''<nowiki/>'ಮುನಿ ಮಾಡುವುದು'<nowiki/>''' ಎನ್ನಲಾಗುತ್ತದೆ. ಈ ಪೂಜೆಯಲ್ಲಿ '''<nowiki/>'ಸಿಹಿ ಮುನಿ'<nowiki/>''' ಮತ್ತು '''<nowiki/>'ಮಾಂಸಾಹಾರದ ಮುನಿ'''' (ಖಾರ ಮುನಿ) ಎಂಬ ಎರಡು ಆಚರಣಾ ಪದ್ಧತಿಗಳಿವೆ.
== WWW) ನಾಗರಹಾವು - ರೈತನ ಕೃಷಿ ಮಿತ್ರ: ==
ನಾಗರಹಾವು ರೈತನ ನಿಷ್ಠಾವಂತ ಮಿತ್ರ ಎಂಬ ನಂಬಿಕೆಗೆ ವೈಜ್ಞಾನಿಕ ಹಿನ್ನೆಲೆಯೂ ಇದೆ. ಹೊಲ-ಗದ್ದೆಗಳಲ್ಲಿ ಬೆಳೆಗಳನ್ನು ಹಾಳು ಮಾಡುವ ಇಲಿ, ಹಂದಿ-ತೋಡು, ನಳ್ಳಿ (ಏಡಿ) ಮುಂತಾದ ಕ್ರಿಮಿ-ಕೀಟ ಹಾಗೂ ಜೀವಿಗಳನ್ನು ಹಾವುಗಳು ಭಕ್ಷಿಸಿ ಬೆಳೆಗಳನ್ನು ರಕ್ಷಿಸುತ್ತವೆ. ಹೀಗೆ ಕೃಷಿಗೆ ಹಲವು ವಿಧಗಳಲ್ಲಿ ನೆರವಾಗುವ ನಾಗರಹಾವಿಗೆ ಕೃತಜ್ಞತೆಯನ್ನು ಸಲ್ಲಿಸುವುದು ಈ ಆಚರಣೆಯ ಹಿಂದಿರುವ ಬಹುಮುಖ್ಯ ಆಶಯವಾಗಿದೆ.
== XXX) ಆಚರಣೆಯ ಜಾನಪದೀಯ ಸಾಂಸ್ಕೃತಿಕ ಮಹತ್ವ: ==
ಈ ಊರಿನಲ್ಲಿ ಪ್ರತಿ ಮನೆಯವರೂ ತಮ್ಮ ಜಮೀನುಗಳಲ್ಲಿ ಮುನಿಹಬ್ಬವನ್ನು ನೆರವೇರಿಸಿ, ಕುಟುಂಬದ ಹಿರಿಯರನ್ನು ಹಾಗೂ ಹಿರಿಯಾಯಿತರನ್ನು ಸ್ಮರಿಸಿ ಸತ್ಕರಿಸುತ್ತಾರೆ. ಸಿಹಿ ಮುನಿ ಆಚರಿಸುವಾಗ ಪಾಯಸ ಮಾಡುವುದು ಇಲ್ಲಿನ ವಿಶೇಷ.
ಜಾನಪದೀಯವಾಗಿ ಜನರು ಪ್ರಾಚೀನ ಕಾಲದಿಂದಲೂ 'ದೇವರು' ಎಂಬ ಸದ್ಭಾವನೆಯಲ್ಲಿ ಶಿಲೆಗಳನ್ನು (ಕಲ್ಲುಗಳನ್ನು) ಪ್ರತಿಷ್ಠಾಪಿಸಿ ಪೂಜಿಸುವುದು, ಪ್ರಕೃತಿಯ ಜೀವರಾಶಿಗಳನ್ನು ದೈವಸ್ವರೂಪಿ ಎಂದು ಭಾವಿಸಿ ಆರಾಧಿಸುವುದು ನಡೆದುಬಂದಿದೆ. "ದೇವರು ಎಲ್ಲ ಜೀವ ರಾಶಿಗಳಲ್ಲೂ ನೆಲೆಸಿದ್ದಾನೆ" ಎಂಬ ಭಾರತೀಯ ತತ್ತ್ವಜ್ಞಾನಕ್ಕೆ ಈ 'ಮುನಿಹಬ್ಬ'ವು ಅತ್ಯುತ್ತಮ ನಿದರ್ಶನವಾಗಿದೆ.
== ಶ್ರೀ ಪಟ್ಟಲದಮ್ಮನ ಉದ್ಭವ ಮತ್ತು ಇತಿಹಾಸ ==
ಮಾರಗೌಡನಹಳ್ಳಿ ಗ್ರಾಮದಲ್ಲಿ ಶ್ರೀ ಪಟ್ಟಲದಮ್ಮ ದೇವಿಯು ಉದ್ಭವಿಸಿದ ಬಗ್ಗೆ ಸುದೀರ್ಘ ಹಾಗೂ ರೋಮಾಂಚನಕಾರಿ ಐತಿಹಾಸಿಕ ಹಿನ್ನೆಲೆಯಿದೆ. ಈ ದೇವಸ್ಥಾನವು ಸುಮಾರು '''೪೨೯ ವರ್ಷಗಳ ವೈಭವೋಪೇತ ಇತಿಹಾಸವನ್ನು''' ಹೊಂದಿದೆ. ಶ್ರೀ ಪಟ್ಟಲದಮ್ಮ ದೇವಿಯು ಈ ಊರಿನ ಸಕಲ ಜನರನ್ನು ಕಾಯುವ ಗ್ರಾಮದೇವತೆಯಾಗಿ ನೆಲೆಸಿದ್ದಾಳೆ.
=== ದೇವಾಲಯದ ಮೂಲ ಸ್ಥಾಪಕರು: ===
ಈ ಪವಿತ್ರ ಸನ್ನಿಧಿಯ ಸ್ಥಾಪನೆ ಮತ್ತು ಆಚರಣೆಗಳಿಗೆ ಮಾರಗೌಡನಹಳ್ಳಿ ಗ್ರಾಮದ ಯಜಮಾನರು ಹಾಗೂ ಪಟೇಲರು ಮುಖ್ಯ ಕಾರಣಕರ್ತರಾಗಿದ್ದಾರೆ. ಮಾರಗೌಡನಹಳ್ಳಿಯಲ್ಲಿ ಪಟ್ಟಲದಮ್ಮ ದೇವಿಯು ಉದ್ಭವಿಸಿದ ಸಂದರ್ಭದಲ್ಲಿ (ಕ್ರಿ.ಶ. ೧೫೭೮ ರಲ್ಲಿ) '''ಆರು ಜನ ಮೂಲ ತೆಂಡೆಗೌಡರಿದ್ದರು''':
೧. ಕುಂಬಾರ ಗುಡ್ಡಯ್ಯ
೨. ಮಾದಿಗರ ಮಂಚಯ್ಯ
೩. ಮಾದೇಗೌಡ
೪. ತೂಗುಮಂಚದ ಗೋಪೆಗೌಡ
೫. ಹುಲಿವಾನದ ಬೋರೇಗೌಡ
೬. ಚಲುವೇಗೌಡ
ಈ ಆರೂ ಜನ ಮಹನೀಯರು ಬೇರೆ ಬೇರೆ ಸ್ಥಳಗಳಿಂದ ಆಗಮಿಸಿ ಇಲ್ಲಿ ನೆಲೆಸಿದವರಾಗಿದ್ದು, ದೇವಿಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು.
== ಪ್ರಸ್ತುತ ವ್ಯವಸ್ಥೆ ಮತ್ತು ೧೮ ಜನ ತೆಂಡೆಗೌಡರು: ==
ಕಾಲಕ್ರಮೇಣ ಜನಸಂಖ್ಯೆ ಬೆಳೆದಂತೆ ಹಾಗೂ ಕುಟುಂಬಗಳ ಸಂಖ್ಯೆ ಹೆಚ್ಚಿದಂತೆ, ಪಟ್ಟಲದಮ್ಮನ ಕೃಪೆಗೆ ಪಾತ್ರರಾದ ತೆಂಡೆಗೌಡರ ಸಂಖ್ಯೆಯೂ ವಿಸ್ತಾರಗೊಂಡಿದೆ. ಇಂದು '''೧೮ ಜನ ತೆಂಡೆಗೌಡರು''' ಈ ಗ್ರಾಮದೇವತೆಯ ಸೇವಾ ಕಾಯಕದಲ್ಲಿ ನಿರತರಾಗಿದ್ದು, ತಮ್ಮ ಶ್ರದ್ಧಾಭಕ್ತಿಗಳನ್ನು ಸಮರ್ಪಿಸುತ್ತಿದ್ದಾರೆ.
==== ಪ್ರಸ್ತುತ ಗ್ರಾಮದ ಮುಖ್ಯಸ್ಥರು: ====
· '''ಯಜಮಾನರು:''' ಪಂಚಲಿಂಗಪ್ಪ
· '''ಪಟೇಲರು:''' ಶಿವಲಿಂಗಪ್ಪ
==== ೧೮ ಜನ ತೆಂಡೆಗೌಡರ ಪಟ್ಟಿ: ====
೧. ಗುಡ್ಡೆ ಶಿವರಾಮ
೨. ಮಹಾಲಿಂಗಯ್ಯ ಮತ್ತು ಶಿವಲಿಂಗಯ್ಯ
೩. ಕಳೆ ಪುಟ್ಟಸ್ವಾಮಿ
೪. ಪುಟ್ಟ ನಿಂಗಣ್ಣ
೫. ದೊಡ್ಡೇಗೋಪಣ್ಣರ ಪಂಚಲಿಂಗಣ್ಣ
೬. ಮೋಟಣ್ಣ
೭. ಶಂಕರ
೮. ನಿಂಗೇಗೌಡ
೯. ಪಂಚಲಿಂಗಯ್ಯ
೧೦. ಪರದೊಡ್ಡಯ್ಯರ ಮರೀಗೌಡ
೧೧. ತಮ್ಮಯಣ್ಣ
೧೨. ಪರದೇಶಿ ಪಂಚಲಿಂಗಣ್ಣ
೧೩. ಬೋರೇಗೌಡರ ಶ್ರೀಧರ
೧೪. ಚಿಕ್ಕವನು (ಮಳ್ಳವಳ್ಳಿ ಮಹಾಲಿಂಗಯ್ಯ)
೧೫. ಮೇಡಣ್ಣನವರ ಕೆಂಚೇಗೌಡ
೧೬. ಗೋಪಾಲಯ್ಯ (ಮಳ್ಳೆ ಬೆಟ್ಟಣ್ಣ)
೧೭. ಸಂಜಯ್ಯನ ತಮ್ಮ ಶೇಖರಿ (ಶೇಖರ್)
೧೮. ಮರ್ಚನಯ್ಯ
== YYY) ಪಟ್ಟಲದಮ್ಮ ದೇವಾಲಯದ ಉದ್ಭವ ಮತ್ತು ಜಾನಪದ ದಂತಕಥೆ ==
೧. ಕೆರಗೋಡಿನಿಂದ ಮಾರಗೌಡನಹಳ್ಳಿಗೆ ಪಟ್ಟಲದಮ್ಮನ ಆಗಮನ
ಕಂಚಿ ದೇಶದಲ್ಲಿ ಅಪೂರ್ವ ಆಶ್ಚರ್ಯವೊಂದು ನಡೆದು, ಪಟ್ಟಲದಮ್ಮ ದೇವಿಯನ್ನು ಹೊತ್ತುಕೊಂಡು ಕಾಳೇಗೌಡ, ಕೆಂಪೇಗೌಡ ಮತ್ತು ವರದೇಗೌಡ ಮೂವರೂ ಸೇರಿ ೩ ಕೋಟಿ ಗಾಡಿಗಳೊಂದಿಗೆ ಊರಿಂದ ಊರಿಗೆ ತಂಗುತ್ತಾ ಮೇಲುಕೋಟೆಗೆ ಬಂದರು. ಅಲ್ಲಿ ಒಂದು ರಾತ್ರಿ ತಂಗಿದ ನಂತರ ಮಂಡ್ಯ ಗ್ರಾಮಕ್ಕೆ ಬಂದು, ಅಲ್ಲಿಂದ ಮುಂದೆ ಕೆರಗೋಡು ಪಟ್ಟಣಕ್ಕೆ ತಲುಪಿದರು.
ಕೆರಗೋಡು ಪಟ್ಟಣದಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ ಹತ್ತಿರ ತಂಗಿ, ದೇವಿಯ ಹೆಡಗೆಯನ್ನು (ಬುಟ್ಟಿಯನ್ನು) ಕೆಳಗಿಳಿಸಿದರು. ನಂತರ ಪಂಚಲಿಂಗೇಶ್ವರನ ಬಳಿ ಹೋಗಿ, "ಅಣ್ಣಾ, ನಮಗೆ ನೆಲೆಸಲು ಸ್ವಲ್ಪ ಜಾಗ ಕೊಡು" ಎಂದು ಪಟ್ಟಲದಮ್ಮ ಕೇಳಿದಳು. ಆಗ ಪಂಚಲಿಂಗೇಶ್ವರನು, "ತಂಗಿ, ನಾನು ತಲಕಾಡು ಸೀಮೆಯಿಂದ ಬಂದವನು. ನಿನಗೆ ಜಾಗ ಕೊಡಲು ಸಾಧ್ಯವಿಲ್ಲ. ನಿನ್ನ ಜೊತೆ ರಾಕ್ಷಸ ಶಕ್ತಿಗಳಿರುವುದರಿಂದ ನನ್ನಿಂದ ತಡೆಯಲು ಆಗುವುದಿಲ್ಲ. ಅರ್ಧಪಾಲು ಜಾಗ ಕೊಟ್ಟರೂ ಕೊಡಬಹುದು, ಆದರೆ ಇಲ್ಲಿ ಬೇಡ. ನೀನು ಮರೆಯಾಗಿ 'ಮಾರಗೌಡನಹಳ್ಳಿ' ಎಂಬ ಗ್ರಾಮದ ಹೊಲದ ಜಾಗಕ್ಕೆ ಹೋಗು," ಎಂದನು.
ಆಗ ಕೆಂಪೇಗೌಡ, ಕಾಳೇಗೌಡ ಮತ್ತು ವರದೇಗೌಡ ಮೂವರೂ ಎಡಗೈ ಹತ್ತಿರ ಗಾಡಿಯನ್ನು ಕಟ್ಟಿ, ಆಲದ ಮರದ ಬಳಿ ಹೆಡಗೆಯನ್ನು ಕೆಳಗಿಳಿಸಿದರು. ಅವರ ಸಣ್ಣ ಮಕ್ಕಳು ಊಟಕ್ಕೆ ಕುಳಿತರು.
== ZZZ) ೨. ಹೆಡಗೆ ಹುತ್ತವಾದದ್ದು ಹಾಗೂ ಜಾಗದ ಹಕ್ಕು ==
ಊಟಕ್ಕೆ ಕುಳಿತಿದ್ದಾಗ, ಮಡಿಕೆ ಮಣ್ಣಿಗಾಗಿ ಬಂದ ಕುಂಬಾರ ಗುಡ್ಡಪ್ಪ ಅವರನ್ನು ನೋಡಿ, "ನೀವು ಯಾರಪ್ಪ?" ಎಂದು ಕೇಳಿದನು. ಅದಕ್ಕೆ ಅವರು, "ನಾವು ಕಂಚಿ ದೇಶದಿಂದ ಬಂದೆವು," ಎಂದರು. ಊಟ ಮುಗಿಸಿ ಏಳುವಷ್ಟರಲ್ಲಿ, ಕೆಳಗಿಳಿಸಿದ್ದ ದೇವಿಯ ಹೆಡಗೆಯಷ್ಟೂ ಹುತ್ತವಾಗಿ ಮಾರ್ಪಟ್ಟಿತ್ತು! ಅಷ್ಟೇ ಅಲ್ಲದೆ, ಮುಂದಿನ ರಾಜ್ಯಕ್ಕೆ ಹೋಗಲು ಕಟ್ಟಿದ್ದ ಗಾಡಿಯ ಚಕ್ರ, ಕತ್ತು ಹಾಗೂ ಕೀಲುಗಳು ಮುರಿದುಹೋಗಿದ್ದವು.
ಆಗ ಏನು ಮಾಡುವುದೆಂದು ತೋಚದೆ ಚಿಂತಿಸುತ್ತಿದ್ದಾಗ, ಕುಂಬಾರ ಗುಡ್ಡಪ್ಪನು ಕೆಂಪೇಗೌಡನನ್ನು ಕರೆದು, "ಬನ್ನೀರಪ್ಪ, ನಮ್ಮ ಮಾರಗೌಡನಹಳ್ಳಿಗೆ ಹೋಗೋಣ," ಎಂದನು. ಕುಂಬಾರ ಗುಡ್ಡಪ್ಪ ಮತ್ತು ಮಾದಿಗರ ಮಾಚಯ್ಯ ಇಬ್ಬರೂ ಸೇರಿ ತಮ್ಮ ಕೀರೆಮಡಿ ಸಹಿತ ಭಾಗವನ್ನು ಅವರಿಗೆ ಕೊಟ್ಟರು. ತರಗನ್ನು ಗುಡಿಸಿ, ಮನೆ ಕಟ್ಟಿಕೊಟ್ಟರು. ಹೀಗೆ ನಾಲ್ಕು ಜನ ಗೌಡರು (ಮುದ್ದೇಗೌಡ, ಗೋಪೇಗೌಡ, ಕೆಂಪೇಗೌಡ, ವರದೇಗೌಡ) ಮಾರಗೌಡನಹಳ್ಳಿ ಗ್ರಾಮದ ಜನರೊಂದಿಗೆ ಸೇರಿಕೊಂಡರು.
ಮುದ್ದೇಗೌಡ ಮತ್ತು ಗೋಪೇಗೌಡರು ಮಾಸ್ತಮ್ಮನನ್ನು ಎಡಗೆಯಲ್ಲಿ ಮಡಗಿಕೊಂಡು, ಕೆರಗೋಡಿನಿಂದ ಹೊರಟು ಮಾರಗೌಡನಹಳ್ಳಿಯ ಕೆರೆಕೋಡಿಯ ಆಲದ ಮರದ ಅಡಿಯಲ್ಲಿ ಹೆಡಗೆಯನ್ನು ಇಳಿಸಿದರು. ದಾರಿಯಲ್ಲಿ ಹುಲಿವಾನದ ಬಾಳೇಗೌಡನಿಂದ ಹೋರಾಟ ನಡೆದು, ಕದ್ದು ಮಾರಗೌಡನಹಳ್ಳಿಯ ಮುದ್ದೇಗೌಡನ ಬಳಿಗೆ ಬಂದರು. ಅಣ್ಣ-ತಮ್ಮಂದಿರು ಆಲದ ಮರದಡಿಯಲ್ಲಿ ಮಲಗಿದ್ದಾಗ, ಕುಂಬಾರ ಗುಡ್ಡಯ್ಯ ಹಾಗೂ ಮಾದಿಗರ ಮಾಚಯ್ಯ ಅವರಿಗೆ ಕುರಿಯನ್ನು ಬಿಟ್ಟುಕೊಟ್ಟು ಕಾಡಿಗೆ ಹೋದರು. ನಂತರ ಅವರೆಲ್ಲರೂ ಒಂದಾಗಿ, "ನನ್ನ ದೇವರು, ನನ್ನ ಹಕ್ಕು-ಬಕ್ಕು, ಕೊಂಡ-ಬಂಡಿ, ಆರತಿ ಇಷ್ಟನ್ನೂ ನಿಮಗೇ ಕೊಡುತ್ತೇನೆ," ಎಂದು ತಮ್ಮೊಡನೆ ಇರಿಸಿಕೊಂಡರು. ಹೀಗೆ ಮುದ್ದೇಗೌಡ, ಗೋಪೇಗೌಡ, ಬಾಳೇಗೌಡ ಮತ್ತು ಕೆಂಪೇಗೌಡ ಎಂಬ ನಾಲ್ವರು ಅಣ್ಣ-ತಮ್ಮಂದಿರಂತೆ ಬಾಳತೊಡಗಿದರು.
== AAAA) ೩. ಕೀಲಾರದ ಪವಾಡ ಹಾಗೂ ಚಿಕ್ಕಮ್ಮನ ಮಹಿಮೆ ==
ವಿಜಯನಗರದಿಂದ ಹಿರೇಗೌಡ ಮತ್ತು ಚೆಲುವೇಗೌಡ ಎಂಬುವವರು ಹಿರೇಗಲ್ಲನ್ನು ಕೋಣನ ಮೇಲೆ ಏರಿಸಿಕೊಂಡು, ಚಿಕ್ಕಮ್ಮನ ಹೆಡಗೆಯನ್ನು ಹೊತ್ತು ಬಂಡಿಯಲ್ಲಿ ಮೇಲುಕೋಟೆಗೆ ಬಂದರು. ಅಲ್ಲಿ ಚೆಲುವರಾಯಸ್ವಾಮಿಯ ದರ್ಶನ ಪಡೆದು, ನಂತರ ಮಂಡ್ಯ ಮಾರ್ಗವಾಗಿ ಕೀಲಾರಕ್ಕೆ ಬಂದರು.
ಕೀಲಾರದಲ್ಲಿ ಭತ್ತವನ್ನು ತುಂಬಿಕೊಂಡು 'ಈಚಲಕೆರೆ ತೋಪಿಗೆ' ಬಂದು, ತರಗನ್ನು ಕೊಯ್ದು ಅಡುಗೆ ಮಾಡುತ್ತಿದ್ದರು. ಅಷ್ಟರಲ್ಲಿ ಕೀಲಾರದ ಗೌಡನು ದೊಣ್ಣೆ ಹಿಡಿದು ಬಂದು, "ನಮ್ಮ ಭತ್ತವನ್ನು ತುಂಬಿ, ತರಗನ್ನು ಕೊಯ್ಯುತ್ತೀರಲ್ಲಾ! ನಿಮ್ಮ ಭತ್ತವು ತರಕಾರಿ-ಮಾಂಸವಾಗದಿದ್ದರೆ ಸಾಸಿರ (ಸಾವಿರ) ರೂಪಾಯಿ ದಂಡ ಕೊಡಬೇಕು," ಎಂದು ಹೆದರಿಸಿದನು.
ಆಗ ಅವರು, "ನಮ್ಮ ಭತ್ತ ರತನ್ಜೋಡಿ ಭತ್ತ. ಮೇಲುಕೋಟೆ ಚೆಲುವರಾಯಸ್ವಾಮಿಯ ಕೃಪೆಯಿಂದ ಇದು ಕೆಂಬೂತಿ ಭತ್ತ ಮತ್ತು ಅವರೆಕಾಳು ಬದನೆಕಾಯಿಯಾದರೆ ತೇರಿನ ಭತ್ತ ನೀಡುತ್ತೇವೆ. ಟಗರಿನ ಮಾಂಸವು ಒಲೆಯ ಅಡುಗೆಯಾದರೆ ನಿನಗೆ ಕವಳ ಕೊಡ್ತೀವಿ," ಎಂದು ಪ್ರಾರ್ಥಿಸಿದರು. ಪವಾಡದಂತೆ ರತನ್ಜೋಡಿ ಭತ್ತವು ಕೆಂಬೂತಿ ಭತ್ತವಾಗಿ, ಮಾಂಸವು ಬದನೆಕಾಯಿಯಾಗಿ ಮಾರ್ಪಟ್ಟಿತು! ದಂಡದ ಹಣವನ್ನು ತೆಗೆದುಕೊಂಡು ಅವರು ಮಾರಗೌಡನಹಳ್ಳಿಯ ಊರ ಮುಂದಕ್ಕೆ ಬಂದರು.
== ) ೪. ಧರ್ಮಭಾಗ ಹಾಗೂ ಹಬ್ಬದ ಆಚರಣೆ ==
ಮಾರಗೌಡನಹಳ್ಳಿಯ ಕಲ್ಲು ಕಟ್ಟೆಯ ಮೇಲೆ ಚಿಂತಾಕ್ರಾಂತರಾಗಿ ಕುಳಿತಿದ್ದ ಹಿರೇಗೌಡ ಮತ್ತು ಚೆಲುವೇಗೌಡರನ್ನು ಕಂಡು, ಮುದ್ದೇಗೌಡ ಹಾಗೂ ಇತರರು ವಿಚಾರಿಸಿದರು. ತಮ್ಮ ಹೆಡಗೆ ಜಡ ಹಿಡಿದು ಕೋಣ ಕೆಳಗೆ ಬಿದ್ದ ವಿಷಯವನ್ನು ಅವರು ತಿಳಿಸಿದರು. ಮುದ್ದೇಗೌಡನು ಅವರನ್ನು ಗೌರವದಿಂದ ಊರೊಳಗೆ ಕರೆತಂದು, ಕೀರೆಮಡಿ ಸಹಿತ ಭಾಗವನ್ನು ಕೊಟ್ಟನು.
ಎಲ್ಲರೂ ಸೇರಿ ಪಟ್ಟಲದಮ್ಮನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹಬ್ಬದ ವೇಳೆ:
· '''ಮೊದಲನೇ ಆರತಿ ಮತ್ತು ಬಂಡಿ:''' ಮೊದಲನೇ ಬಂಡಿ ಕೆಂಪೇಗೌಡರದ್ದು, ಎರಡನೇ ಬಂಡಿ ಬಾಳೇಗೌಡರದ್ದು, ಮೂರನೇ ಬಂಡಿ ಬೋಳೇಗೌಡರದ್ದು.
· '''ಆರತಿಯ ಹಕ್ಕು:''' ಮಾಲಿಂಗೇಗೌಡರ ಬೀದಿಯಲ್ಲಿ ಮಾಲಿಂಗೇಗೌಡರದು ಮೊದಲನೇ ಆರತಿಯಾದರೆ, ನಂತರ ಕುಂಬಾರ ಮನೆ ಆರತಿ. ಉಗ್ರಾಣದ ಮನೆಯಿಂದ ಮುಖಸಿರಿ ತರುವಾಗ ಮುದ್ದೇಗೌಡರದ್ದು ಮೊದಲ ಆರತಿಯಾಯಿತು.
· '''ಕುಂಬಾರ ಗುಂಡಯ್ಯನ ಹಕ್ಕು:''' ಕುಂಬಾರ ಗುಂಡಯ್ಯನು ಊರು ಬಿಟ್ಟು ಹೋಗುವಾಗ ಚಿಕ್ಕಮ್ಮನ ಗುಡಿ ಮತ್ತು ಬಸವನಗುಡಿಯ ಹೂವಿನ ಹಕ್ಕನ್ನು ಗೌಡರ ಹತ್ತಿರ ಬರೆಸಿಕೊಟ್ಟು ಹೋದನು.
ಹೀಗೆ ಕಂಚಿಯಿಂದ ಬಂದ ಪಟ್ಟಲದಮ್ಮ ಮತ್ತು ವಿಜಯನಗರದಿಂದ ಬಂದ ಚಿಕ್ಕಮ್ಮ ದೇವಿಯರು ಮಾರಗೌಡನಹಳ್ಳಿಯಲ್ಲಿ ನೆಲೆನಿಂತು, ಊರಿನ ಗೌಡರು, ಕುಂಬಾರರು ಮತ್ತು ಮಾದಿಗ ಸಮುದಾಯದವರ ಸಹಬಾಳ್ವೆ ಹಾಗೂ ಶ್ರದ್ಧೆಗೆ ಸಾಕ್ಷಿಯಾಗಿ ಉದ್ಭವಗೊಂಡರು.
== ಶ್ರೀ ಪಟ್ಟಲದಮ್ಮನ ಮಹೋತ್ಸವದ ಒಂದು ಸಮೀಕ್ಷೆ ==
== ೧. ಮಹೋತ್ಸವಕ್ಕೂ ಮುನ್ನ ನಡೆಸುವ ಸಿದ್ಧತೆಗಳು ==
ಈ ಮಹೋತ್ಸವಕ್ಕೆ 'ಇಂತಿಷ್ಟೇ ಊರಿನವರು ಬರಬೇಕು' ಎಂಬ ಯಾವುದೇ ಭೇದ-ಭಾವವಿಲ್ಲ. ಈ ದೇವಿಯನ್ನು ನಂಬಿ ಬಂದ ಭಕ್ತರಿಗೆ ಆಕೆ ಯಾವುದೇ ರೀತಿಯ ಕೆಡುಕು ಮಾಡದೆ, ಸದಾ ಒಳ್ಳೆಯದನ್ನೇ ಕರುಣಿಸಿದ್ದಾಳೆ ಎಂಬುದು ಜನರ ನಂಬಿಕೆ.
ಅದರಂತೆ, ಸಂಪ್ರದಾಯಬದ್ಧವಾಗಿ ಮಾರಗೌಡನಹಳ್ಳಿಯ ಕೆಲವು ಹಿರಿಯರು ಮತ್ತು ತೆಂಡೆಗೌಡರು (ಊರಿನ ಗೌಡರು) ಸೇರಿ ಉತ್ಸವವನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ಸಭೆ ಕರೆದು ತೀರ್ಮಾನಿಸುತ್ತಾರೆ. ತದನಂತರ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ, ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಮುಖ ಊರುಗಳಿಗೆ ಕಳುಹಿಸಿಕೊಡುತ್ತಾರೆ.
ಉತ್ಸವದ ದಿನಾಂಕ ನಿಗದಿಯಾದ ನಂತರ, ಊರಿನ ಪ್ರಮುಖ ಬೀದಿಗಳಲ್ಲಿ 'ಕೋಲುಕಾರನ' (ಸಾರುವವನ) ಮೂಲಕ ಡಂಗುರ ಸಾರಿಸಲಾಗುತ್ತದೆ. ಇದನ್ನು ತಿಳಿದ ಊರಿನ ಜನರು ಹಬ್ಬಕ್ಕೆ ಬೇಕಾದ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ.
== ೨. ಉತ್ಸವದ ಆಚರಣೆ ಮತ್ತು ಭಕ್ತರ ಸಹಕಾರ ==
ಉತ್ಸವಕ್ಕೆ ಬೇಕಾದ ಮೂಲಭೂತ ಸಾಮಗ್ರಿಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳಲಾಗುತ್ತದೆ. ಹಬ್ಬಕ್ಕೆ ಸರಿಯಾಗಿ '''೮ ದಿನಗಳು ಬಾಕಿ ಇರುವಾಗ ಕಂಬವನ್ನು ನೆಡಲಾಗುತ್ತದೆ.''' ಜೊತೆಗೆ ಟಮಟೆ ಬಾರಿಸಿ, ಡಂಗುರ ಸಾರುವ ಮೂಲಕ ಹಬ್ಬದ ದಿನವನ್ನು ಇಡೀ ಊರಿಗೆ ಮತ್ತೊಮ್ಮೆ ನೆನಪಿಸಲಾಗುತ್ತದೆ.
ನಂತರ ಊರಿನ ಪ್ರತಿಯೊಂದು ಕುಟುಂಬದವರು ತಮ್ಮ ಮನೆಯಲ್ಲಿರುವ:
· ಅಕ್ಕಿ, ಬೆಲ್ಲ, ತೆಂಗಿನಕಾಯಿ
· ಖಾರದಪುಡಿ, ಹುಣಸೆಹಣ್ಣು
· ದವಸ-ಧಾನ್ಯಗಳು ಹಾಗೂ ಹಣವನ್ನು ದೇವಾಲಯಕ್ಕೆ ಕಾಣಿಕೆಯಾಗಿ ನೀಡುತ್ತಾರೆ.
ಊರಿನ ಮುಖಂಡರು ನಿಗದಿಪಡಿಸಿದ ಚಂದಾದ ಹಣವನ್ನು (ಉದಾಹರಣೆಗೆ: ₹೨೦) ಪ್ರತಿಯೊಬ್ಬರೂ ನೀಡುತ್ತಾರೆ. ಅಷ್ಟೇ ಅಲ್ಲದೆ, ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ದೇವಸ್ಥಾನಕ್ಕೆ ಬರುವ ಸಕಲ ಭಕ್ತಾದಿಗಳು ತಮ್ಮ ಶಕ್ತಿಗನುಸಾರ ಹಣ ಅಥವಾ ದವಸ-ಧಾನ್ಯಗಳ ರೂಪದಲ್ಲಿ ಭಕ್ತಿಯಿಂದ ಕಾಣಿಕೆ ಒಪ್ಪಿಸುತ್ತಾರೆ.
ಅಂತಿಮವಾಗಿ, ದೇವಸ್ಥಾನದ ಪ್ರಮುಖರು ಸಂಗ್ರಹವಾದ ವಸ್ತುಗಳ ಪಟ್ಟಿಯನ್ನು ಪರಿಶೀಲಿಸಿ, ಇನ್ನುಳಿದ ಅಗತ್ಯ ಸಾಮಗ್ರಿಗಳನ್ನು ಅಂಗಡಿಯಿಂದ ಖರೀದಿಸಿ ತರುತ್ತಾರೆ. ಹೀಗೆ ಎಲ್ಲರ ಸಹಕಾರದೊಂದಿಗೆ ಶ್ರೀ ಪಟ್ಟಲದಮ್ಮನ ಮಹೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ
ಖಂಡಿತ, ನೀವು ನೀಡಿರುವ ಪಠ್ಯದಲ್ಲಿ ಜಾನಪದ ನಂಬಿಕೆಗಳು ಮತ್ತು ಆಚರಣೆಗಳ ಬಗ್ಗೆ ಅದ್ಭುತವಾದ ಮಾಹಿತಿಯಿದೆ. ಪಠ್ಯದಲ್ಲಿ ಕೆಲವು ಕಾಗುಣಿತ ದೋಷಗಳು (ಉದಾ: 'ಉತ್ಸ್ಸಾವದ', 'ಕೊಂಡದಿAದ', 'ಒಪ್ಪತ್ತುನ್ನು') ಹಾಗೂ ವಾಕ್ಯ ರಚನೆಯಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದವು.
ವಿಷಯದ ಮೂಲ ಆಶಯ ಮತ್ತು ಜಾನಪದ ಸೊಗಡಿಗೆ ಯಾವುದೇ ಧಕ್ಕೆಯಾಗದಂತೆ ವ್ಯಾಕರಣಬದ್ಧವಾಗಿ ತಿದ್ದಿ, ಓದಲು ಸುಲಭವಾಗುವಂತೆ ವಿಂಗಡಿಸಿ ಬರೆದ '''ಶುದ್ಧೀಕರಿಸಿದ ಪಠ್ಯ''' ಇಲ್ಲಿದೆ:
== FFFF) ೩. ಉತ್ಸವದ ಮುನ್ನ ದೇವರ ಗುಡ್ಡಪ್ಪ ಮತ್ತು ಅವನ ಸಹಾಯಕ ಪಾಲಿಸಬೇಕಾದ ನಿಯಮಗಳು: ==
ಪಟ್ಟಲದಮ್ಮ ದೇವಿಯು ತನ್ನ ಸನ್ನಿಧಿಯಲ್ಲಿ ಶುಕ್ರವಾರದಂದು ಕಾಣಿಸಿಕೊಳ್ಳುತ್ತಾಳೆ. 'ದೇವರು ಪ್ರತ್ಯಕ್ಷಳಾಗುತ್ತಾಳೆ' ಎಂಬುದು ಜಾನಪದ ನಂಬಿಕೆ ಹಾಗೂ ಸತ್ಯವೂ ಹೌದು. ಹೀಗೆ ಮೈಮೇಲೆ ದೇವರು ಆವಾಹನೆಯಾದಾಗ, ಕೇವಲ ಸಾಮಾನ್ಯ ಮನುಷ್ಯನಾಗಿದ್ದವನಿಗೆ ಒಂದು ರೀತಿಯ ಅದ್ಭುತ ಅಥವಾ ಅತಿಮಾನುಷ ಶಕ್ತಿ ಬರುತ್ತದೆ. ಇದರ ಮೂಲಕ ಜನರಲ್ಲಿ ದೈವಿಶಕ್ತಿ ನೆಲೆಸಿದೆ ಎಂದು ಗುರುತಿಸಿಕೊಳ್ಳಲಾಗುತ್ತದೆ. ಆದರೆ, ಈ ಊರಿನಲ್ಲಿ ಪಟ್ಟಲದಮ್ಮ ದೇವಿಯು (ದೇವರ ಗುಡ್ಡಪ್ಪನನ್ನು ಹೊರತುಪಡಿಸಿ) ಬೇರೆ ಯಾರ ಮೈಮೇಲೂ ಬರುವುದಿಲ್ಲ.
'''ಗುಡ್ಡಪ್ಪ ಮತ್ತು ಸಹಾಯಕರ ವ್ರತಾಚರಣೆ:'''
· '''ವಾರ ಒಪ್ಪತ್ತಿನ ವ್ರತ:''' ದೇವರ ಗುಡ್ಡಪ್ಪನು ಉತ್ಸವಕ್ಕೂ ಹದಿನೈದು ದಿವಸ ಮುಂಚಿತವಾಗಿಯೇ 'ವಾರ ಒಪ್ಪತ್ತು' (ವ್ರತ) ಆಚರಿಸಲು ಪ್ರಾರಂಭಿಸುತ್ತಾನೆ.
· '''ಆಹಾರದ ನಿಯಮ:''' ಈ ಹದಿನೈದು ದಿನಗಳ ಕಾಲ, ಬೆಳಿಗ್ಗೆಯಿಂದ ಸಂಜೆಯವರೆಗೆ ಉಪವಾಸವಿದ್ದು ಕೇವಲ ಹಾಲು ಮತ್ತು ಬಿಸಿನೀರನ್ನು ಮಾತ್ರ ಸೇವಿಸುತ್ತಾನೆ.
· '''ಸಹಾಯಕನ ಪಾತ್ರ:''' ಗುಡ್ಡಪ್ಪನ ಜೊತೆಯಲ್ಲಿ ಆತನ ಆಪ್ತನಾದ ಒಬ್ಬ ಸಹಾಯಕನು ಕೂಡ ಹದಿನೈದು ದಿವಸಗಳ ಕಾಲ ಇದೇ ರೀತಿ 'ವಾರ ಒಪ್ಪತ್ತು' ವ್ರತವನ್ನು ಶ್ರದ್ಧೆಯಿಂದ ಆಚರಿಸುತ್ತಾನೆ.
· '''ಹಬ್ಬದ ದಿನದ ಉಪವಾಸ:''' ಹಬ್ಬದ ದಿನದಂದು ಗುಡ್ಡಪ್ಪನು ಬೆಳಿಗ್ಗೆಯಿಂದಲೇ ಕಠಿಣ ಉಪವಾಸವನ್ನು ಪ್ರಾರಂಭಿಸುತ್ತಾನೆ. '''<nowiki/>'ಕೊಂಡ ಹಾಯುವವರೆಗೂ'''' (ಬೆಂಕಿಯ ಮೇಲೆ ನಡೆಯುವವರೆಗೂ) ಯಾವುದೇ ಆಹಾರ ಹಾಗೂ ನೀರನ್ನೂ ಸಹ ಆತ ಸೇವಿಸುವುದಿಲ್ಲ.
· '''ಉಪವಾಸ ಅಂತ್ಯ:''' ಕೊಂಡ ಹಾಯ್ದು ಬಂದ ನಂತರ, ದೇವರಿಗೆ ಪೂಜೆ ಸಲ್ಲಿಸಿ ಆನಂತರವಷ್ಟೇ ಪ್ರಸಾದವನ್ನು ಸ್ವೀಕರಿಸಿ ಅವರಿಬ್ಬರೂ ಊಟ ಮಾಡುತ್ತಾರೆ.
ನೀವು ನೀಡಿರುವ ಪಠ್ಯದಲ್ಲಿ ದೇವಸ್ಥಾನದ ಅಲಂಕಾರ, ಪೂಜಾ ವಿಧಿವಿಧಾನಗಳು ಹಾಗೂ ಕೊಂಡಬಂಡಿ ಮತ್ತು ಮೀಸಲು ನೀರು ತರುವ ಜಾನಪದ ಸಂಪ್ರದಾಯದ ವಿವರಣೆ ಬಹಳ ಸುಂದರವಾಗಿದೆ. ಆದರೆ ಪಠ್ಯದಲ್ಲಿ ಕೆಲವು ಲಿಪಿ/ಕಾಗುಣಿತ ದೋಷಗಳು (ಉದಾ: 'ದೆÃವತೆಯ', 'ಕಂಗೊಳಿಸುವAತೆ', 'ಆದ್ಯ', 'ಮೀಸಲು ನೀರು ತರುವುದಕ್ಕೆ ಏರ್ಪಾಡು') ಹಾಗೂ ವಾಕ್ಯ ಪುನರಾವರ್ತನೆಗಳಿದ್ದವು.
ವಿಷಯದ ಹರಿವಿಗೆ ಯಾವುದೇ ಧಕ್ಕೆಯಾಗದಂತೆ, ವ್ಯಾಕರಣಬದ್ಧವಾಗಿ ತಿದ್ದಿ ಸಿದ್ಧಪಡಿಸಿದ '''ಶುದ್ಧೀಕರಿಸಿದ ಪಠ್ಯ''' ಇಲ್ಲಿದೆ:
== GGGG) ೪.ದೇವಸ್ಥಾನದ ಅಲಂಕಾರ ಮತ್ತು ಪೂಜಾ ವಿಧಿವಿಧಾನಗಳು ==
== HHHH) ದೇವಸ್ಥಾನದ ಸಿದ್ಧತೆ ಮತ್ತುಬೆಳಕಿನ ಅಲಂಕಾರ ==
ಉತ್ಸವದ ಮುಂಚಿತವಾಗಿಯೇ ದೇವಸ್ಥಾನಕ್ಕೆ ಸುಣ್ಣ-ಬಣ್ಣವನ್ನು ಬಳಿಯಲಾಗುತ್ತದೆ. ನಂತರ ದೇವಸ್ಥಾನದಲ್ಲಿರುವ ಗಂಟೆಗಳು, ತ್ರಿಶೂಲಗಳು, ಅಡುಗೆ ಪಾತ್ರೆಗಳು ಮುಂತಾದ ಸಾಮಗ್ರಿಗಳನ್ನು ಶುಚಿಗೊಳಿಸಿ, ಗರ್ಭಗುಡಿಯನ್ನು ತೊಳೆದು ವಿವಿಧ ಬಗೆಯ ನವನವೀನ ಹೂವುಗಳಿಂದ ಸುಂದರವಾಗಿ ಅಲಂಕರಿಸುತ್ತಾರೆ.
ದೇವಸ್ಥಾನದ ಸುತ್ತಮುತ್ತ ವಿದ್ಯುತ್ ದೀಪಗಳನ್ನು ಅಳವಡಿಸಿ, ಇಡೀ ದೇವಸ್ಥಾನವು ಕಂಗೊಳಿಸುವಂತೆ ಮಾಡಲಾಗುತ್ತದೆ. ಊರಿನ ಪ್ರಮುಖರು ಈ ವಿದ್ಯುತ್ ದೀಪಾಲಂಕಾರದ ಉಸ್ತುವಾರಿಯನ್ನು ವಹಿಸಿಕೊಳ್ಳುತ್ತಾರೆ. ದೇವತೆಯ ಬಣ್ಣ-ಬಣ್ಣದ ವಿದ್ಯುತ್ ಚಿತ್ರಗಳು ಮತ್ತು ಮನಮೋಹಕ ಧ್ವನಿವರ್ಧಕಗಳ ಜೋಡಣೆ ಕಣ್ಣಿಗೆ ಮೈಸೂರು ದಸರಾವನ್ನೇ ನೆನಪಿಸುವಂತೆ ಮಾಡುತ್ತದೆ. ಊರಿನ ಎಲ್ಲ ದೇವಸ್ಥಾನಗಳನ್ನೂ ಸಾಲು ದೀಪಗಳಿಂದ ಶೃಂಗರಿಸುವುದರಿಂದ, ಆ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬ.
ಅನ್ನಸಂತರ್ಪಣೆಯ ಸಿದ್ಧತೆ
ನಂತರ ಅನ್ನಸಂತರ್ಪಣೆಗಾಗಿ ರಾಮಮಂದಿರದ ಬಳಿ ಅಡುಗೆಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಅಡುಗೆಗೆ ಬೇಕಾದ ದೊಡ್ಡ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆದು ಶುಚಿ ಮಾಡಿ, ಒಲೆಗಳನ್ನು ಹೂಡಿ, ಸಾಮಗ್ರಿಗಳನ್ನೆಲ್ಲಾ ಒಂದೆಡೆ ಶೇಖರಿಸಲಾಗುತ್ತದೆ. ಈ ಸಮಯದಲ್ಲಿ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ನೆರೆದಿರುತ್ತಾರೆ. ದೇವಸ್ಥಾನವು ಊರಿನಿಂದ ಸ್ವಲ್ಪ ದೂರದಲ್ಲಿದ್ದು, ಗದ್ದೆಯ ಅಂಚಿನ ರಸ್ತೆಯಲ್ಲಿ ಸಾಗುವುದರಿಂದ ಆ ಹಾದಿಯಲ್ಲಿ ನಡೆದು ಹೋಗುವುದು ಮುದ ನೀಡುತ್ತದೆ.
== IIII) ನವಗ್ರಹ ಹೋಮ ಮತ್ತು ದೇವಿಗೆ ಅಭಿಷೇಕ ==
ರಾತ್ರಿ ಸುಮಾರು ೧೧ ಗಂಟೆಯ ನಂತರ 'ನವಗ್ರಹ ಹೋಮ'ವನ್ನು ನೆರವೇರಿಸಲಾಗುತ್ತದೆ. ನವಗ್ರಹಗಳಾದ ರವಿ, ಚಂದ್ರ, ಕುಜ (ಮಂಗಳ), ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತುಗಳನ್ನು ಪೂಜಿಸುವುದು ನಂಬಿಕೆ. ದೇವಾನುದೇವತೆಗಳಿಗೂ ಈ ಗ್ರಹಗಳು ಪ್ರಿಯವಾಗಿರುವುದರಿಂದ, ''"ಊಟಕ್ಕೆ ಉಪ್ಪಿನಕಾಯಿ ಇದ್ದಂತೆ"'' ಹಬ್ಬದ ಮುಖ್ಯ ಪೂಜೆಗೆ ಮುನ್ನ ಈ ಒಂಬತ್ತು ಗ್ರಹಗಳನ್ನು ಪೂಜಿಸುವ ಪದ್ಧತಿ ಇಂದಿಗೂ ಮುಂದುವರಿದುಕೊಂಡು ಬಂದಿದೆ.
ಅದರಂತೆ ನವಗ್ರಹಗಳನ್ನು ಹಾಗೂ ಶ್ರೀ ಪಟ್ಟಲದಮ್ಮನ ಮೂಲ ವಿಗ್ರಹವನ್ನು ಮೊದಲಿಗೆ ಎಣ್ಣೆಯಿಂದ ತೊಳೆದು ಪೂಜಿಸಲಾಗುತ್ತದೆ. ನಂತರ:
· ಎಳೆನೀರು ಅಭಿಷೇಕ
· ತುಪ್ಪದ ಅಭಿಷೇಕ
· ಹಾಲಿನ ಅಭಿಷೇಕ
· ಒಂಬತ್ತು ತರಹದ ಹಣ್ಣಿನ ರಸಗಳಿಂದ (ಫಲಾಭಿಷೇಕ) ಮೂರ್ತಿಯನ್ನು ಶುದ್ಧೀಕರಿಸಿ, ಹೂವುಗಳಿಂದ ದೇವಿಯನ್ನು ಭಕ್ತಿಯಿಂದ ಅಲಂಕರಿಸುತ್ತಾರೆ.
==== ಕೊಂಡಬಂಡಿ ಮತ್ತು ಮೀಸಲು ನೀರು ತರುವುದು ====
ನಂತರ 'ಮೀಸಲು ನೀರು' ತರುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಕೊಂಡಬಂಡಿ ಹೊರಟ ನಂತರ, "ಕೊಂಡಬಂಡಿ ಬರುತ್ತದೆ" ಎಂದು ಕೋಲುಕಾರನ ಮೂಲಕ ಊರಿನಲ್ಲೆಲ್ಲಾ ಡಂಗುರ ಸಾರಿಸಲಾಗುತ್ತದೆ.
ತಮಟೆ, ವಾದ್ಯ, ನಗಾರಿ ಮುಂತಾದ ಮಂಗಳವಾದ್ಯಗಳ ಸಮೇತ ಮಾರಗೌಡನಹಳ್ಳಿಯಲ್ಲಿರುವ ಪಟ್ಟಲದಮ್ಮ ದೇವಿಗೆ 'ಕೊಂಡ ಹಾಯಲು' ಭಕ್ತರು ಸಾಗುತ್ತಾರೆ. ಕಾವೇರಿ ನದಿಯ ನಾಲೆ (ಕಾಲುವೆ) ದಡದ ಬಳಿ ಬಂದು ಅತ್ಯಂತ ಸಡಗರ-ಸಂಭ್ರಮದಿಂದ ಮೀಸಲು ನೀರನ್ನು ತರಲಾಗುತ್ತದೆ. (ಈ ವೈಭವದ ಸಂಪ್ರದಾಯವು ಇಂದಿನ ದಿನಗಳಲ್ಲಿ ಕೊಂಚ ಕಡಿಮೆಯಾಗಿದ್ದರೂ, ಜನರಲ್ಲಿ ಭಕ್ತಿ ಇಂದಿಗೂ ಜೀವಂತವಾಗಿದೆ).
==== ೫. ಅನ್ನಸಂತರ್ಪಣೆ ಮತ್ತು ಪಟ್ಟಲದಮ್ಮನ ಪವಾಡ ====
==== ಸೌಹಾರ್ದತೆಯ ಅನ್ನಸಂತರ್ಪಣೆ ====
ಉತ್ಸವದ ದಿನದಂದು ಸಂಜೆ ೭ ಗಂಟೆಯಿಂದ ಅನ್ನಸಂತರ್ಪಣೆಯ ಕಾರ್ಯಕ್ರಮವು ಪ್ರಾರಂಭವಾಗುತ್ತದೆ. ಈ ಕಾರ್ಯಕ್ರಮವನ್ನು ನೆರವೇರಿಸಲು 'ಇಂತಹುದೇ ಗ್ರಾಮದವರು' ಎಂಬ ಯಾವುದೇ ಭೇದಭಾವವಿಲ್ಲ; ಊರಿನ ಪ್ರತಿಯೊಬ್ಬರೂ ಈ ದೇವಸ್ಥಾನದ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಾರೆ.
ಹರಕೆ ಹೊತ್ತುಕೊಂಡ ಭಕ್ತಾದಿಗಳು ನೀಡಿದ ಅಕ್ಕಿ, ಕಾಳು, ಕಡ್ಡಿ, ಹುಣಸೆಹಣ್ಣು, ತೆಂಗಿನಕಾಯಿ, ಖಾರದಪುಡಿ, ಬೆಲ್ಲ ಮುಂತಾದ ದವಸ-ಧಾನ್ಯಗಳನ್ನು ಶೇಖರಿಸಿಟ್ಟುಕೊಳ್ಳಲಾಗುತ್ತದೆ. ಮಾರಗೌಡನಹಳ್ಳಿಯ ಗ್ರಾಮಸ್ಥರು ಸ್ವತಃ ಹೆಚ್ಚಿನ ಶ್ರಮವಹಿಸಿ ಅಡುಗೆ ಸಿದ್ಧಪಡಿಸುತ್ತಾರೆ. ಬೇರೆ ಊರುಗಳಿಂದ ಬಂದ ಭಕ್ತಾದಿಗಳನ್ನು '''ಧ್ವನಿವರ್ಧಕದ (ಮೈಕ್) ಮೂಲಕ ಕೂಗಿ ಕರೆದು''' ಪ್ರೀತಿಯಿಂದ ಊಟ ಬಡಿಸುವ ಸುಂದರ ಸಂಪ್ರದಾಯ ಇಲ್ಲಿದೆ. ಈ ಅನ್ನಸಂತರ್ಪಣೆಯು ಪಟ್ಟಲದಮ್ಮ ದೇವಸ್ಥಾನದ ಬಳಿ ನಡೆಯದೆ, '''ಶ್ರೀರಾಮಮಂದಿರದ ಹತ್ತಿರ''' ನಡೆಯುತ್ತದೆ.
==== ರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ====
ದೂರದ ಊರುಗಳಿಂದ ಬಂದ ಭಕ್ತಾದಿಗಳು ಹಸಿದು ಮಲಗಬಾರದು ಎಂಬ ಉದಾತ್ತ ಆಶಯದಿಂದ ಇಲ್ಲಿನ ಹಿರಿಯರು ಈ ಅನ್ನದಾನವನ್ನು ನಡೆಸಿಕೊಂಡು ಬಂದಿದ್ದಾರೆ. ಅನ್ನಸಂತರ್ಪಣೆಯ ನಂತರ ರಾತ್ರಿಯ ವೇಳೆ ಭಕ್ತರ ಮನರಂಜನೆಗಾಗಿ:
· ತೊಗಲು ಬೊಂಬೆಯಾಟ
· ಲಾವಣಿ ಗೀತೆಗಳು
· ಮನಮೋಹಕ ಭರತನಾಟ್ಯ ಹಾಗೂ ಜಾನಪದ ಕಲಾ ಸಂಭ್ರಮಗಳು ನಡೆಯುತ್ತವೆ.
ಈ ಅನ್ನಸಂತರ್ಪಣೆ ಮತ್ತು ಹಬ್ಬಗಳು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಪ್ರತಿಯೊಬ್ಬರೂ ಒಟ್ಟಾಗಿ ಜೀವಿಸುವ '''<nowiki/>'ಮಾನವೀಯ ಸ್ನೇಹ ಮತ್ತು ಸಹಬಾಳ್ವೆಯನ್ನು'''' ಸಾರುವ ಸಂಕೇತವಾಗಿವೆ.
==== ದೇವಿಯ ಮಹಿಮೆ ಮತ್ತು ಐತಿಹಾಸಿಕ ಹಿನ್ನೆಲೆ ====
ಶ್ರೀ ಪಟ್ಟಲದಮ್ಮ ದೇವಿ ತನ್ನ ಅಪಾರ ಅದ್ಭುತ ಶಕ್ತಿಯಿಂದ ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಾದ ಮೈಸೂರು, ಬೆಂಗಳೂರು, ಹಾಸನ, ತುಮಕೂರು, ಚಿತ್ರದುರ್ಗ ಹಾಗೂ ಕೋಲಾರ ಭಾಗಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದಾಳೆ.
'''ಊರಿನಿಂದ ದೂರ ನೆಲೆಸಲು ಕಾರಣ:''' ಪಟ್ಟಲದಮ್ಮ ದೇವಸ್ಥಾನವು ಊರಿನಿಂದ ಸ್ವಲ್ಪ ದೂರದಲ್ಲಿದೆ. ದೇವಿ ನೆಲೆಸಿದ ಜಾಗಕ್ಕೆ ಊರಿನ ಕೋಳಿಯ ಕೂಗು ಕೇಳಿಸಬಾರದು ಎಂಬುದು ಇಲ್ಲಿನ ನಂಬಿಕೆ. ದೇವಿಯು ಆರಂಭದಲ್ಲಿ ಊರಿನ ಕೆಲವು ಮೂಢರು/ತಿಳಿಗೇಡಿಗಳಿಂದ ಅವಮಾನಕ್ಕೊಳಗಾಗಿ, ಊರಿನಿಂದ ಹೊರಬಂದು ಸಮೀಪದ ಜಾಗದಲ್ಲಿ ನೆಲೆಸಿದಳು ಎಂಬ ಐತಿಹ್ಯವಿದೆ. ತನ್ಮೂಲಕ ಆಕೆಯನ್ನು ನಂಬಿದವರಿಗೆ ಒಳ್ಳೆಯದನ್ನು ಮಾಡುತ್ತಾ, ಹೀಯಾಳಿಸಿದವರಿಗೆ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವಂತೆ ಮಾಡಿದ್ದಾಳೆ.
'''ದೇವಾಲಯದ ಸ್ಥಾಪನೆ:''' ಎಲೆಮರೆಯ ಕಾಯಿಯಂತಿದ್ದ ಈ ದೇವಿ ಜನರ ನಂಬಿಕೆಯ ಮುಖಾಂತರವೇ ಪ್ರಚಾರಕ್ಕೆ ಬಂದಳು. ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾ, ಸುಮಾರು '''ಕ್ರಿ.ಶ. ೧೫೭೮ ರಲ್ಲಿ''' ಮಣ್ಣಿನಲ್ಲಿ ತೆಂಗಿನ ಗರಿಯ ಚಪ್ಪರದ ಅಡಿಯಲ್ಲಿ ನೆಲೆಸಿದ್ದಳು. ನಂತರ '''೧೯೮೦ ರ ವರ್ಷದಲ್ಲಿ''' ಇಲ್ಲಿನ ಜನರು ವಿಗ್ರಹವನ್ನು ವಿಧಿಪೂರ್ವಕವಾಗಿ ಪ್ರತಿಷ್ಠಾಪಿಸಿದರು. "ನಮ್ಮ ಕಷ್ಟ-ಸುಖಗಳಿಗೆ ಸದಾ ಆಸರೆಯಾಗುವ ಜೀವಂತ ದೈವ" ಎಂದು ಇಲ್ಲಿನ ಜನರು ಪಟ್ಟಲದಮ್ಮನ ಮಹಿಮೆಯನ್ನು ಶ್ರದ್ಧೆಯಿಂದ ಸ್ಮರಿಸುತ್ತಾರೆ.
== JJJJ) ೬. ಕೊಂಡಬಂಡಿ ==
ಮಾರಗೌಡನಹಳ್ಳಿಯಲ್ಲಿ '''<nowiki/>'ಕೊಂಡಬಂಡಿ'''' ಎಂಬುದು ಎತ್ತಿನ ಗಾಡಿಗಳಿಂದ ನಡೆಯುವ ಒಂದು ವಿಶೇಷವಾದ ರಥೋತ್ಸವವಾಗಿದೆ. ಇಲ್ಲಿ ಪ್ರಥಮವಾಗಿ ಊರಿನ ತೆಂಡೆಗೌಡರ (ಊರಿನ ಯಜಮಾನರ) ಮನೆಗೆ ಎತ್ತಿನ ಗಾಡಿಗಳು ಆಗಮಿಸುತ್ತವೆ. ಹೀಗೆ ಬಂದಂತಹ ಗಾಡಿಗಳನ್ನು ಅತ್ಯಂತ ಸುಂದರವಾಗಿ ಶೃಂಗರಿಸಲಾಗುತ್ತದೆ.
ನಂತರ, ಭಕ್ತಾದಿಗಳು ಕೋವಿ-ಪಟಾಕಿಗಳು, ತಮಟೆ-ವಾದ್ಯಗಳ ಮಂಗಳಘೋಷದೊಂದಿಗೆ ದೇವರ ಗುಡ್ಡಪ್ಪನನ್ನು ಕರೆದುಕೊಂಡು ಮಾರಗೌಡನಹಳ್ಳಿಯ ಮುಖ್ಯ ರಸ್ತೆಯ ಮೂಲಕ ಪಟ್ಟಲದಮ್ಮನ ದೇವಸ್ಥಾನದತ್ತ ಸಾಗುತ್ತಾರೆ.
ಗುಡ್ಡಪ್ಪನ ಗಾಡಿಯ ವಿಶೇಷತೆ:
· '''ವಿಶೇಷ ರಥ:''' ದೇವರ ಗುಡ್ಡಪ್ಪನಿಗಾಗಿ ಪ್ರತ್ಯೇಕವಾಗಿ ಮರದ ಚಕ್ರಗಳಿರುವ ವಿಶೇಷ ಗಾಡಿಯನ್ನು ತಯಾರಿಸಲಾಗಿರುತ್ತದೆ.
· '''ತ್ರಿಕೋನ ಸಿಂಗಾರ:''' ಈ ಗಾಡಿಯನ್ನು ತ್ರಿಕೋನಾಕಾರದಲ್ಲಿ ಸುತ್ತಲೂ ರೇಷ್ಮೆ ಸೀರೆಗಳಿಂದ ಮುಚ್ಚಿ ಶೃಂಗರಿಸಿರುತ್ತಾರೆ. ಅದರ ಮಧ್ಯಭಾಗದಲ್ಲಿ ದೇವರ ಗುಡ್ಡಪ್ಪ ಕುಳಿತಿರುತ್ತಾನೆ.
· '''ಹುಳಿ ಪಾನಕದ ಹಂಚಿಕೆ:''' ಗುಡ್ಡಪ್ಪನು ತನ್ನ ಬಳಿಯಿರುವ ಮಡಕೆಯಿಂದ ವಿಶೇಷವಾದ ಹುಳಿ ಪಾನಕವನ್ನು (ತೀರ್ಥ/ಪ್ರಸಾದವನ್ನು) ಭಕ್ತರಿಗೆ ನೀಡುತ್ತಾನೆ. ದೇವಸ್ಥಾನದ ಮುಂದೆ ಕೊಂಡ ಹಾಯುವ/ಹಚ್ಚುವ ಸಂದರ್ಭದಲ್ಲಿ ಇದನ್ನು ಭಕ್ತರಿಗೆ ಹಂಚಲಾಗುತ್ತದೆ.
ಈ ಕೊಂಡಬಂಡಿ ಉತ್ಸವವು ಜಾನಪದ ಕಲೆ ಮತ್ತು ಆಚರಣೆಗಳ ಸಮೃದ್ಧ ಸಂಕೇತವಾಗಿದೆ. ಇಲ್ಲಿ ಒಟ್ಟು '''೪ ಕೊಂಡಬಂಡಿ ಗಾಡಿಗಳನ್ನು''' ಕಾಣಬಹುದು. ಇವುಗಳಲ್ಲಿ ೨ ಗಾಡಿಗಳನ್ನು ರಥದ ಮಾದರಿಯಲ್ಲಿ ವೈಭವದಿಂದ ಸಿಂಗಾರಗೊಳಿಸಿರುತ್ತಾರೆ. ಗುಡ್ಡಪ್ಪನ ಗಾಡಿಯು ಮೆರವಣಿಗೆಯ ಮುಂದೆ ಗಂಭೀರವಾಗಿ (ಮಂದಗತಿಯಲ್ಲಿ) ಸಾಗುತ್ತದೆ. ಕೊಂಡಬಂಡಿ ಸಾಗುವ ಆ ಸುಂದರ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬ.
== C) ೭. ಮೀಸಲು ನೀರು ತರುವುದು ==
ಕೊಂಡಬಂಡಿಯು ದೇವಸ್ಥಾನವನ್ನು ತಲುಪಿದ ನಂತರ, ರಾತ್ರಿ ಸುಮಾರು ೧೦ ಗಂಟೆಯ ಸಮಯದಲ್ಲಿ ಈ ಮೀಸಲು ನೀರು ತರುವ ಕಾರ್ಯಕ್ರಮವು ಸಾಂಪ್ರದಾಯಿಕವಾಗಿ ಪ್ರಾರಂಭವಾಗುತ್ತದೆ.
'''ಮೀಸಲು ನೀರಿನ ಆಚರಣೆ:''' ಒಟ್ಟು ಒಂಬತ್ತು ಬಿಂದಿಗೆಗಳಲ್ಲಿ (ಹಾಗೂ ಮತ್ತೊಂದು ಪ್ರತ್ಯೇಕ ವಿಧಿಗಾಗಿ ಹನ್ನೊಂದನೇ ಬಿಂದಿಗೆಯಲ್ಲಿ) ದೇವರಿಗೆ ಪವಿತ್ರವಾದ ನೀರನ್ನು ತುಂಬಿ, ಆ ಬಿಂದಿಗೆಗಳಿಗೆ ಅರಿಶಿನ, ಕುಂಕುಮ ಮತ್ತು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗುತ್ತದೆ. ನಂತರ ಆ ನೀರಿನೊಳಗೆ ಅಡಿಕೆ ಹೂವಿನ ಹೊಂಬಾಳೆಯನ್ನು ಹಾಕಿ ತರಲಾಗುತ್ತದೆ. ಹೀಗೆ ತರುವ ಪವಿತ್ರ ಜಲವನ್ನೇ '''<nowiki/>'ಮೀಸಲು ನೀರು'''' ಎಂದು ಕರೆಯುತ್ತಾರೆ.
ಈ ಕಾರ್ಯಕ್ರಮವು ಅತ್ಯಂತ ಭಕ್ತಿ-ಶ್ರದ್ಧೆ ಹಾಗೂ ಸಡಗರದಿಂದ ನೆರವೇರುತ್ತದೆ.
ನೀವು ನೀಡಿದ ಪಠ್ಯದಲ್ಲಿ '''ಮೀಸಲು ನೀರು ತರುವಾಗ ನಡೆಯುವ ವಿಶೇಷ ಆಚರಣೆಗಳು ಮತ್ತು ನಂಬಿಕೆಗಳ''' ಕುರಿತು ಉತ್ತಮವಾದ ವಿವರಣೆಯಿದೆ. ಆದರೆ ಪಠ್ಯದಲ್ಲಿ 'ಲಕ್ಷಿö್ಮÃದೇವಿ', 'ಮಾಡಗೇಕಾದಂತಹ', 'ಅ ಸ್ಥಳದಲ್ಲಿ' ಎಂಬಂತಹ ಕೆಲವು ಕಾಗುಣಿತ/ಲಿಪಿ ದೋಷಗಳು ಹಾಗೂ ಸಣ್ಣಪುಟ್ಟ ವಾಕ್ಯ ರಚನೆಯ ಕೊರತೆಗಳಿದ್ದವು.
ವಿಷಯದ ಭಾವನೆಗೆ ಧಕ್ಕೆಯಾಗದಂತೆ, ವ್ಯಾಕರಣಬದ್ಧವಾಗಿ ತಿದ್ದಿ ಸಿದ್ಧಪಡಿಸಿದ '''ಶುದ್ಧೀಕರಿಸಿದ ಪಠ್ಯ''' ಇಲ್ಲಿದೆ:
==== ವಿಶೇಷತೆ: ====
ಈ ಮೀಸಲು ನೀರನ್ನು ತರುವಾಗ ಆ ಸ್ಥಳಕ್ಕೆ ಇತರ ಪ್ರಮುಖ ದೇವತೆಗಳೂ ಆಗಮಿಸುತ್ತಾರೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಆ ದೇವತೆಗಳೆಂದರೆ:
· '''ಲಕ್ಷ್ಮೀದೇವಿ'''
· '''ಕಾಳಮ್ಮ'''
· '''ಹಿರಿಯಮ್ಮ'''
ಈ ದೇವತೆಗಳು ಆವಾಹನೆಯಾದ ತಕ್ಷಣ ಅವರಿಗೆ ಸಲ್ಲಿಸಬೇಕಾದ ದೈವಿಕ ಮರ್ಯಾದೆ ಮತ್ತು ಪೂಜೆ-ಪುರಸ್ಕಾರಗಳನ್ನು ನೆರವೇರಿಸಿ, ನಂತರ ಮೀಸಲು ನೀರನ್ನು ದೇವಸ್ಥಾನಕ್ಕೆ ಹಾಗೂ ಮನೆಗಳಿಗೆ ತೆಗೆದುಕೊಂಡು ಬರಲಾಗುತ್ತದೆ. ಮನೆಗಳಲ್ಲಿ ಹಬ್ಬದ ಅಡುಗೆ ಅಥವಾ ಉಪಹಾರವನ್ನು ಸಿದ್ಧಪಡಿಸುವುದಕ್ಕೆ ಈ ಮೀಸಲು ನೀರನ್ನೇ ಬಳಸುವುದು ಇಲ್ಲಿನ ವಿಶೇಷ ಸಂಪ್ರದಾಯವಾಗಿದೆ.
'''ಗಂಗೆ ಪೂಜೆ:''' ಈ ಆಚರಣೆಯ ಮುಖ್ಯ ಉದ್ದೇಶ ಗಂಗೆ ಪೂಜೆ ಮಾಡುವುದಾಗಿದೆ. ಹಿಂದೆಲ್ಲಾ ಊರಿನ ಕೆರೆ, ಕಟ್ಟೆ ಅಥವಾ ಕಾಲುವೆಗಳಿಂದ ಈ ಪವಿತ್ರ ನೀರನ್ನು ತರಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಮನೆಯಲ್ಲಿರುವ ಬಾವಿ, ಕೊಳವೆಬಾವಿ (ಬೋರ್ವೆಲ್) ಅಥವಾ ನಲ್ಲಿಯ ಬಳಿಯೇ ಪೂಜೆ ಸಲ್ಲಿಸಿ ಮೀಸಲು ನೀರನ್ನು ಪಡೆದುಕೊಳ್ಳುತ್ತಾರೆ.
ನೀವು ನೀಡಿರುವ ಪಠ್ಯದಲ್ಲಿ ಪಟ್ಟಲದಮ್ಮ ದೇವಿಯ ಎರಡನೇ ದಿನದ ಆಚರಣೆ, '''ಕೊಂಡ ಹಾಯುವುದು''', ಮಾರಿ ಬಲಿ, ಪೂಜಾ ಕಳಸದ ವಿಶೇಷತೆ ಹಾಗೂ ದೇವಸ್ಥಾನದ ಗಂಟೆಯ ನಂಬಿಕೆಯ ಕುರಿತು ಅತ್ಯಂತ ರಸವತ್ತಾದ ಜಾನಪದ ವಿವರಣೆಯಿದೆ.
ಆದರೆ ಪಠ್ಯದಲ್ಲಿ ಕೆಲವು ಕಾಗುಣಿತ/ಲಿಪಿ ದೋಷಗಳು (ಉದಾ: 'ಪ್ರಜೆಯನ್ನು' ಬದಲು 'ಪೂಜೆಯನ್ನು', 'ವ್ಮರಿಯನ್ನು', 'P್ಪಡಿಯಲಾಗುತ್ತದೆ', 'ಠಿಚಿಠಿeಡಿಷ್ಟವನ್ನು', 'ದೆÃವಸ್ಥಾನದ') ಹಾಗೂ ವ್ಯಾಕರಣದ ದೋಷಗಳಿದ್ದವು.
ವಿಷಯದ ಮೂಲ ಆಶಯ ಮತ್ತು ಜಾನಪದ ಮೆರುಗಿಗೆ ಯಾವುದೇ ಕುಂದು ಬಾರದಂತೆ ತಿದ್ದಿ, ಸ್ಪಷ್ಟವಾಗಿ ವಿಂಗಡಿಸಿ ಬರೆದ '''ಶುದ್ಧೀಕರಿಸಿದ ಪಠ್ಯ''' ಇಲ್ಲಿದೆ:
== D) ೮. ಎರಡನೇ ದಿನದ ಕಾರ್ಯಕ್ರಮ ಮತ್ತು ಕೊಂಡ ಹಾಯುವುದು ==
ರಾತ್ರಿಯ ಕೊಂಡಬಂಡಿ ಉತ್ಸವದ ವೇಳೆ ಮೀಸಲು ನೀರನ್ನು ತರಲಾಗುತ್ತದೆ. ಈ ಕೊಂಡಬಂಡಿಯು ಗುಡ್ಡಪ್ಪನನ್ನು ಕೊಂಡದ ಪೂಜೆ ಮಾಡುವುದಕ್ಕಾಗಿ ಕರೆದುಕೊಂಡು ಹೋಗುವ ಸಾಂಪ್ರದಾಯಿಕ ಪದ್ಧತಿಯಾಗಿದೆ.
ಮಾರನೆಯ ದಿನ ಅಂದರೆ ಶನಿವಾರದ ಬೆಳಿಗ್ಗೆ, ಮನೆದೇವರ ಗುಡಿಯಿಂದ ಹೋಮ ಮತ್ತು ನವಗ್ರಹಗಳ ಪೂಜೆಯನ್ನು ನೆರವೇರಿಸಲಾಗುತ್ತದೆ. ಶ್ರೀ ಪಟ್ಟಲದಮ್ಮನ ಪೂಜಾ ಕಳಸವನ್ನು, ದೇವರ ಆವಾಹನೆಯಾದ (ಮೈಮೇಲೆ ದೇವರು ಬಂದ) ಗುಡ್ಡಪ್ಪನ ತಲೆಯ ಮೇಲೆ ಇಲ್ಲಿನ ತಡೆಗೌಡರು (ಊರಿನ ಗೌಡರು) ಶ್ರದ್ಧೆಯಿಂದ ಹೊರಿಸುತ್ತಾರೆ. ನಂತರ ದೇವರ ಗುಡ್ಡಪ್ಪನು ಕುಂಬಾರಕಟ್ಟೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ಕೊಂಡದ ಕಡೆಗೆ ನಡೆಯುತ್ತಾನೆ. ಗುಡ್ಡಪ್ಪನ ಈ ದೈವಿಕ ನಡೆಯನ್ನು ಕಂಡು ಭಕ್ತರಲ್ಲಿ 'ದೇವರೇ ಪ್ರತ್ಯಕ್ಷನಾಗಿದ್ದಾನೆ' ಎಂಬ ದೈವಭಾವನೆ ಮೂಡುತ್ತದೆ. ಜನರೆಲ್ಲರೂ ಭಕ್ತಿಯಿಂದ ಕೂಗುತ್ತಾ, ಶಿಳ್ಳೆ ಹಾಕುತ್ತಾ, ತಮಟೆ-ವಾದ್ಯಗಳ ಮಂಗಳಘೋಷದೊಂದಿಗೆ ದೇವಸ್ಥಾನದ ಬಳಿಯಿರುವ ಕೊಂಡದ ಸಮೀಪಕ್ಕೆ ಸಾಗುತ್ತಾರೆ.
====== ಧೂಳಿನ ಮರಿ ಬಲಿ ಮತ್ತು ಕೊಂಡದ ಸಿದ್ಧತೆ: ======
ದೈವಬಲದಿಂದ ಕೊಂಡ ಹಾಯಲು ಹೊರಡುವ ದೇವರ ಗುಡ್ಡಪ್ಪನ ನಡಿಗೆಯನ್ನು ನೋಡುವುದೇ ಕಣ್ಣಿಗೊಂದು ಅದ್ಭುತ ದೃಶ್ಯ. ಸ್ವಲ್ಪ ದೂರ ಸಾಗಿದ ನಂತರ 'ಧೂಳಿನ ಮರಿ'ಯನ್ನು (ಕುರಿ) ಬಲಿ ನೀಡಲಾಗುತ್ತದೆ. (''ದೇವರು ತನ್ನ ಗುಡಿಯಿಂದ ಹೊರಗೆ ಬಂದಿದ್ದಕ್ಕಾಗಿ ಶಾಂತಿಗಾಗಿ ನೀಡುವ ಬಲಿಯನ್ನು ಧೂಳಿನ ಮರಿ ಎಂದು ಕರೆಯಲಾಗುತ್ತದೆ.'')
ನಂತರ ಹೋಗುವ ದಾರಿಯಲ್ಲಿರುವ ಒಂದು ಕೊಳದ ಬಳಿ ಪೂಜೆ ಮಾಡಿ, ದೇವರು ದೇವಸ್ಥಾನದ ಕಡೆಗೆ ಮುಖ ಮಾಡಿದಾಗ ಯುವಕರ ಉತ್ಸಾಹ, ಶಿಳ್ಳೆ, ತಮಟೆ-ನಗಾರಿ ಜಯಘೋಷಗಳು ಮುಗಿಲು ಮುಟ್ಟುತ್ತವೆ. ಮದ್ದು-ಪಟಾಕಿಗಳ ಧಮಾಕ ಇಲ್ಲಿನ ವಿಶೇಷ. ನಂತರ ದೇವರು ಕೊಂಡದ ಸುತ್ತ ಪ್ರದಕ್ಷಿಣೆ ಹಾಕುತ್ತಾನೆ. ಅಷ್ಟರಲ್ಲಿ ಕೊಂಡಕ್ಕೆ 'ಮಡೆ'ಯನ್ನು ತಂದಿರುವ ಮಹಿಳೆಯರನ್ನು (ಮಾಲಿನಿಯರನ್ನು) ಕಟಾಕ್ಷಿಸಿ, ಪೂಜೆ ಹೊತ್ತ ಗುಡ್ಡಪ್ಪನು ಕೊಂಡದ ಸಮೀಪಕ್ಕೆ ಬರುತ್ತಾನೆ. ಇಲ್ಲೂ ಸಹ ಮತ್ತೊಂದು ಧೂಳಿನ ಮರಿಯನ್ನು ಬಲಿ ಕೊಡಲಾಗುತ್ತದೆ.
'''ಗಮನಾರ್ಹ ಅಂಶ:''' ಈ ಹಬ್ಬದ ದಿನದಂದು ಊರಿನ ಮನೆಗಳಲ್ಲಿ (ವಿಶೇಷವಾಗಿ ಒಕ್ಕಲಿಗರ ಮನೆಗಳಲ್ಲಿ) ಮಾಂಸದ ಅಡುಗೆಯನ್ನು (ಖಾರ) ಮಾಡುವುದಿಲ್ಲ.
====== ಕೊಂಡ ಹಾಯುವುದು ಮತ್ತು ನೃತ್ಯ: ======
ಕೊಂಡ ಹಾಯುವುದು ಇಲ್ಲಿನ ಭಕ್ತಾದಿಗಳಿಗೆ ರೋಮಾಂಚನ ಉಂಟುಮಾಡುವ ಸುಂದರ ಜಾನಪದ ಆಚರಣೆಯಾಗಿದೆ. ಗುಡ್ಡಪ್ಪನು ಧಗಧಗಿಸುವ ಕೊಂಡವನ್ನು ಹಾಯ್ದು, ದೇವಸ್ಥಾನದ ಮುಂದೆ ನಿಂತು ಸ್ವಲ್ಪ ಸಮಯ ಭಕ್ತಿಯಿಂದ ನೃತ್ಯ ಮಾಡುತ್ತಾನೆ. ತಮಟೆ ಹಾಗೂ ನಗಾರಿಯ ಸದ್ದು ಈ ನೃತ್ಯಕ್ಕೆ ಮತ್ತಷ್ಟು ಸ್ಪೂರ್ತಿ ನೀಡುತ್ತದೆ. ನಂತರ ಗುಡ್ಡಪ್ಪನು ತನ್ನ ತಲೆಯ ಮೇಲಿರುವ ಪೂಜಾ ಕಳಸವನ್ನು ಇಳಿಸುತ್ತಾನೆ. ತಕ್ಷಣವೇ ಯುವಕರು ಮತ್ತು ಸಹಚರರು ಗುಡ್ಡಪ್ಪನನ್ನು ಎತ್ತಿಕೊಂಡು ದೇವಸ್ಥಾನದ ಒಳಗೆ ಕರೆದೊಯ್ಯುತ್ತಾರೆ. ಸ್ವಲ್ಪ ಸಮಯದ ನಂತರ ಗುಡ್ಡಪ್ಪನು ಚೇತರಿಸಿಕೊಂಡು ಎದ್ದು, ಪಟ್ಟಲದಮ್ಮನಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾನೆ.
====== ಪೂಜಾ ಕಳಸದ ವಿಶೇಷತೆ: ======
ದೇವರ ಗುಡ್ಡಪ್ಪ ಹೊರುವ ಈ ಪೂಜಾ ಕಳಸವು ವಿಶೇಷವಾಗಿ '''೫ ಕಳಸಗಳನ್ನು''' ಹೊಂದಿರುತ್ತದೆ. ಈ ಪೂಜಾ ಭಾರವು ಇತರ ಸಾಮಾನ್ಯ ದೇವರುಗಳ ಪೂಜೆಯಂತೆ ಹಗುರವಾಗಿರುವುದಿಲ್ಲ; ಇದು ಸುಮಾರು '''೪ ಅಂಗುಲ ರಾಗಿ ತೂಕದಷ್ಟು ಸುದೀರ್ಘ ಭಾರವನ್ನು''' ಹೊಂದಿರುತ್ತದೆ. ಸುತ್ತಲೂ ಎರಡು ಭಾಗಗಳಲ್ಲಿ ರೇಷ್ಮೆ ಸೀರೆಗಳನ್ನು ಸುಂದರವಾಗಿ ಕಟ್ಟಲಾಗಿರುತ್ತದೆ. ಗುಡ್ಡಪ್ಪನು (ನಾಗಣ್ಣ) ದೇವಸ್ಥಾನದ ಮುಂದೆ ಮೆರೆಯುವಾಗ ನೋಡುಗರಿಗೆ ಮೈ ಜುಮ್ ಎನ್ನುವಂತಹ ಅದ್ಭುತ ಅನುಭವವಾಗುತ್ತದೆ.
====== ನೆರವೇರಿಕೆಯ ಗಂಟೆ ಮತ್ತು ಇತರ ಆಚರಣೆಗಳು: ======
ದೇವಸ್ಥಾನದ ಮುಂದೆ ಕೊಂಡದ ಸಮೀಪ ಎತ್ತರವಾದ ಒಂದು ದೊಡ್ಡ ಗಂಟೆಯನ್ನು ಕಾಣಬಹುದು. ಭಕ್ತರಿಗೆ ಏನಾದರೂ ಹರಿಕೆ, ಮನದಾಸೆ ಅಥವಾ ಕಷ್ಟ-ನೋವುಗಳಿದ್ದರೆ, ಈ ಗಂಟೆಯನ್ನು ನೆನೆಸಿಕೊಂಡು ಹೊಡೆಯುವ ಪದ್ಧತಿ ಇದೆ. ಇದನ್ನು '''ಮೂರು ಬಾರಿ ಹೊಡೆದರೆ ಕಷ್ಟಗಳೆಲ್ಲವೂ ನಿವಾರಣೆಯಾಗುತ್ತವೆ''' ಎಂಬುದು ಭಕ್ತರ ದೃಢ ನಂಬಿಕೆ. ಈ ಗಂಟೆಯು ಅಷ್ಟು ಎತ್ತರದಲ್ಲಿರುವುದರಿಂದ, ಅತ್ಯಂತ ಎತ್ತರವಿರುವ ವ್ಯಕ್ತಿಗಳಿಗೂ ಇದನ್ನು ಹೊಡೆಯುವುದು ಸುಲಭದ ಮಾತಲ್ಲ. ಸತತ ಪ್ರಯತ್ನದಿಂದ ಹೊಡೆಯುತ್ತಾರೆಯೇ ಹೊರತು, ಒಂದೇ ಬಾರಿಗೆ ಸುಲಭವಾಗಿ ೩ ಬಾರಿ ಹೊಡೆದವರು ವಿರಳ. (ಇದೇ ಸಂದರ್ಭದಲ್ಲಿ ಕೋಣಗಳನ್ನು ಬಲಿ ಕೊಡುವ ಪದ್ಧತಿಯೂ ಇತ್ತು).
ಇದಾದ ನಂತರ '''<nowiki/>'ಅಳ್ಳು ಹಾಕುವುದು'<nowiki/>''' (ಪಾಪ/ದೋಷ ನಿವಾರಣೆಯಾದಾಗ ಹಾಕುವ ಪದ್ಧತಿ) ಮತ್ತು '''<nowiki/>'ಮುಡಿ ಕೊಡುವುದು'''' (ತಲೆಗೂದಲು ಒಪ್ಪಿಸುವುದು) ಮುಂತಾದ ಹರಕೆಗಳು ನೆರವೇರುತ್ತವೆ. ಕೊಂಡದ ಪವಿತ್ರ ಬೂದಿಯನ್ನು ಭಕ್ತರು ಪ್ರಸಾದವಾಗಿ (ವಿಭೂತಿಯಾಗಿ) ಮನೆಗೆ ತೆಗೆದುಕೊಂಡು ಹೋಗುತ್ತಾರೆ.
ಪಟ್ಟಲದಮ್ಮನ ದೇವಸ್ಥಾನದ ಎಡ ಮತ್ತು ಬಲ ಭಾಗಗಳಲ್ಲಿ ಹರಿಜನ ಮತ್ತು ಗಿರಿಜನ ಸಮುದಾಯದವರಿಗೂ ಪಟ್ಟಲದಮ್ಮನ ದೇವತೆಗಳ ಮೂಲ ಸನ್ನಿಧಿಗಳನ್ನು ಕಾಣಬಹುದು
== E)೯. ಬಾಯಿಬೀಗ (ಹರಕೆ ಆಚರಣೆ) ==
''"ಕಷ್ಟ ಬಂದಾಗ ವೆಂಕಟರಮಣ"'' ಎಂಬ ನಾಣ್ಣುಡಿಯಂತೆ, ಜನರಿಗೆ ಕಷ್ಟಗಳು ಎದುರಾದಾಗ ದೇವರ ಬಳಿ ಹೋಗಿ ಹರಕೆ ಕಟ್ಟಿಕೊಳ್ಳುವುದು ಬಹು ಹಿಂದಿನಿಂದಲೂ ನಡೆದುಬಂದಿರುವ ಸಾಂಪ್ರದಾಯಿಕ ಪದ್ಧತಿಯಾಗಿದೆ. ಕಷ್ಟಗಳು ನಿವಾರಣೆಯಾದ ನಂತರ, ಭಕ್ತಿಯಿಂದ ಕಟ್ಟಿಕೊಂಡ ಹರಕೆಯನ್ನು ತೀರಿಸುವುದು ಜಾನಪದ ಜೀವನದ ಬಹುಮುಖ್ಯ ಆಚರಣೆ. ಅದರಂತೆ ಮಾರಗೌಡನಹಳ್ಳಿಯ ಪಟ್ಟಲದಮ್ಮನಿಗೆ ಹರಕೆ ಹೊತ್ತುಕೊಂಡ ಭಕ್ತಾದಿಗಳು ಹಬ್ಬದ ದಿನದಂದು ತಮ್ಮ ಹರಕೆಯನ್ನು ನೆರವೇರಿಸುತ್ತಾರೆ.
==== ಬಾಯಿಬೀಗ ಚುಚ್ಚಿಸಿಕೊಳ್ಳುವ ವಿಧಿ: ====
· '''ಮುಂಚಿತವಾಗಿ ದೈವಜ್ಞಾಪನೆ:''' ಕಷ್ಟ ತೀರಿದ ನಂತರ "ಬಂದು ನನಗೆ ಬಾಯಿಬೀಗ ಕೊಡು" ಎಂದು ದೇವಿಯು ದರ್ಶನದಲ್ಲಿ ಅಥವಾ ಪೂಜೆಯಲ್ಲಿ ಸೂಚಿಸಿರುತ್ತಾಳೆ ಎಂಬುದು ನಂಬಿಕೆ.
· '''ಉಪವಾಸ ಮತ್ತು ಸಿದ್ಧತೆ:''' ಹರಕೆ ಹೊತ್ತ ಭಕ್ತಾದಿಗಳು ಹಬ್ಬದ ದಿನದಂದು ಸಂಪೂರ್ಣ ಉಪವಾಸವಿದ್ದು, ಸಾಯಂಕಾಲ ದೇವಸ್ಥಾನದ ಸನ್ನಿಧಿಗೆ ಆಗಮಿಸುತ್ತಾರೆ. ಮನೆದೇವರ ಗುಡಿಯಲ್ಲಿ ನವಗ್ರಹ ಪೂಜೆ ಹಾಗೂ ಮೀಸಲು ನೀರಿನ ಸ್ಥಳದಲ್ಲಿ ವಿಧಿ-ವಿಧಾನಗಳನ್ನು ಪೂರೈಸುತ್ತಾರೆ.
· '''ಬಾಯಿಬೀಗ ಹಾಕುವುದು:''' ಬಾಯಿಬೀಗವನ್ನು ಚುಚ್ಚಿಸಿಕೊಳ್ಳುವ ಭಕ್ತರು ಮುಂಚಿತವಾಗಿಯೇ ಕಾಣಿಕೆ (ಉದಾ: ₹೧೦) ನೀಡಿ ದೇವಸ್ಥಾನದ ಮುಖ್ಯಸ್ಥರಿಂದ 'ಪಿನ್' (ಬಾಯಿಬೀಗಕ್ಕೆ ಬಳಸುವ ಸಣ್ಣ ಬೆಳ್ಳಿ/ಲೋಹದ ಸರಡು) ಪಡೆದುಕೊಳ್ಳುತ್ತಾರೆ. ಹಬ್ಬದ ದಿನ ಬೆಳಗಿನ ಜಾವದಲ್ಲಿ ಭಕ್ತಿಯಿಂದ ಬಾಯಿಬೀಗವನ್ನು ಚುಚ್ಚಿಸಿಕೊಳ್ಳುತ್ತಾರೆ.
· '''ದೇವರ ಹಿಂದೆ ಸಾಗುವುದು:''' ಬಾಯಿಬೀಗ ಹಾಕಿಸಿಕೊಂಡ ಭಕ್ತರು ದೇವರು ಕೊಂಡಕ್ಕೆ ಹೋಗುವಾಗ ದೇವರ ಗುಡ್ಡಪ್ಪನ ಹಿಂದೆಯೇ ಸಾಗುವುದು ಕಡ್ಡಾಯ ಸಂಪ್ರದಾಯವಾಗಿದೆ.
ಎಲ್ಲಾ ಪೂಜಾ ವಿಧಿ-ವಿಧಾನಗಳು ಮುಗಿದ ನಂತರ, ದೇವಸ್ಥಾನದ ಸನ್ನಿಧಾನದಲ್ಲಿ ಆ ಬಾಯಿಬೀಗವನ್ನು ಜಾಗರೂಕತೆಯಿಂದ ತೆಗೆಯಲಾಗುತ್ತದೆ. ತದನಂತರ ಭಕ್ತರು ಪ್ರಸಾದ (ಫಲಾಹಾರ) ಸ್ವೀಕರಿಸಿ, ಮನೆಗೆ ತೆರಳಿ ಭಕ್ತಿಪೂರ್ವಕವಾಗಿ ಒಪ್ಪತ್ತನ್ನು (ಉಪವಾಸವನ್ನು) ಬಿಡುತ್ತಾರೆ.
== F) ೧೦. ಮಹಾ ಮಂಗಳಾರತಿ ==
ಎರಡನೇ ದಿನದ ಕೊಂಡೋತ್ಸವ ಮುಗಿದ ನಂತರ ಈ ಕಾರ್ಯಕ್ರಮ ನಡೆಯುತ್ತದೆ. ಪೂಜಾ ಕಳಸವನ್ನು ಹೊತ್ತ ದೇವರ ಗುಡ್ಡಪ್ಪನು ದೇವಸ್ಥಾನದಿಂದ ಊರಿಗೆ ಮರಳುವ ಸಮಯದಲ್ಲಿ ಈ '''ಮಹಾ ಮಂಗಳಾರತಿ''' ನೆರವೇರುತ್ತದೆ.
ಅಲ್ಲಿಯವರೆಗೂ (ಉತ್ಸವದ ಪ್ರಮುಖ ದಿನದಂದು) ದೇವಸ್ಥಾನದ ಒಳಗೆ ಸಾಮಾನ್ಯ ಮಂಗಳಾರತಿಯನ್ನು ಬೇರೆಯವರಿಗೆ ಮಾಡಿರುವುದಿಲ್ಲ. ಅಂದು ಬೆಳಿಗ್ಗೆ ಶ್ರೀ ಪಟ್ಟಲದಮ್ಮ ದೇವಿಯ ಮೂಲಮೂರ್ತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಶೃಂಗರಿಸಿ, ಭಕ್ತಾದಿಗಳಿಗೆ ಗರ್ಭಗುಡಿಯ ದರ್ಶನಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ. ತದನಂತರ ಅರ್ಚಕರು ಮಹಾ ಮಂಗಳಾರತಿಯನ್ನು ನೆರವೇರಿಸುತ್ತಾರೆ.
==== ಮಂಗಳಾರತಿಯ ಪ್ರಾಮುಖ್ಯತೆ: ====
ಮಹಾ ಮಂಗಳಾರತಿಯು ಮಂಗಳದ (ಶುಭದ) ಸೂಚಕವಾಗಿದ್ದು, ಪ್ರತಿಯೊಂದು ಉತ್ಸವದ ಅಂತಿಮ ಹಾಗೂ ಅತ್ಯಂತ ಅವಶ್ಯಕ ವಿಧಿಯಾಗಿದೆ. ಈ ಮಂಗಳಾರತಿ ಇಲ್ಲದೆ ಪೂಜಾ ಕಾರ್ಯವು ಪೂರ್ಣಗೊಳ್ಳುವುದಿಲ್ಲ.
ದೇವಸ್ಥಾನದ ಅರ್ಚಕರು ಆ ಮಂಗಳಾರತಿಯನ್ನು ನೆರವೇರಿಸಿ, ಅಲ್ಲಿ ಸೇರಿರುವ ಸಕಲ ಭಕ್ತಾದಿಗಳ ಶ್ರೇಯೋಭಿವೃದ್ಧಿಗಾಗಿ ಮತ್ತು ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ. ಇದರಿಂದ ಭಕ್ತರ ಮನಸ್ಸಿನ ಆತಂಕಗಳು ನಿವಾರಣೆಯಾಗಿ, ಕಷ್ಟಗಳು ಕಳೆದು ಪ್ರಫುಲ್ಲತೆ ಮತ್ತು ಮನಸ್ಸಿಗೆ ಶಾಂತಿ ದೊರೆಯುತ್ತದೆ.
ಹೀಗೆ ಗುಡಿಯಳಗಿನ ಪೂಜಾ ವಿಧಿಯ ಅಂತಿಮ ಹಂತವಾದ ಮಹಾ ಮಂಗಳಾರತಿ ಮುಗಿದ ನಂತರ, ಪೂಜಾ ಕಳಸದ ಸಮೇತ ದೇವರ ಗುಡ್ಡಪ್ಪನು ಊರಿಗೆ ಆಗಮಿಸುತ್ತಾನೆ. ಊರಿನ ಮನೆದೇವರ ಗುಡಿಯಲ್ಲಿ ಪೂಜಾ ಕಳಸವನ್ನು ಮಡಗಿ, ತನ್ನ ಕಠಿಣ ವ್ರತ/ಒಪ್ಪತ್ತನ್ನು ಬಿಡುತ್ತಾನೆ.
== C) ಸಂಪ್ರದಾಯ ==
ಸಂಪ್ರದಾಯವಿಲ್ಲದ ಸಮಾಜವಿಲ್ಲ; ಸಂಸ್ಕೃತಿಯಿಲ್ಲದ ನಾಡಿಲ್ಲ. ಈ ಸಂಪ್ರದಾಯಗಳು ಮಾನವನ ಬದುಕಿನ ಉದ್ದಕ್ಕೂ, ಅಗಲಕ್ಕೂ ಹರಡಿಕೊಂಡಿವೆ. ತಲೆತಲಾಂತರಗಳಿಂದ ಆಚರಿಸಿಕೊಂಡು ಬಂದಿರುವ ಧಾರ್ಮಿಕ ನೆಲೆಗಟ್ಟು ಹಾಗೂ ಸಂಸ್ಕೃತಿಯ ಒಟ್ಟು ಮೊತ್ತವನ್ನು '''<nowiki/>'ಸಂಪ್ರದಾಯ'''' ಎಂದು ಕರೆಯಲಾಗುತ್ತದೆ. ಜನರ ಮನೋಭಾವ, ಅಭಿಪ್ರಾಯ ಮತ್ತು ಆಚಾರ-ರೂಢಿಗಳ ಸಮ್ಮಿಶ್ರಣವೇ ಸಂಪ್ರದಾಯ.
ಅದರಂತೆ, ಈ ಊರಿನ ಜನರು ಧಾರ್ಮಿಕ ನೆಲೆಗಟ್ಟಿಗೆ ಹಾಗೂ ಸಂಪ್ರದಾಯಕ್ಕೆ ಕಟ್ಟುಬಿದ್ದು, ಊರಿನ ನಿಯಮ-ಕಟ್ಟಳೆಗಳನ್ನು ಶ್ರದ್ಧೆಯಿಂದ ಪಾಲಿಸುತ್ತಾ ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸುವುದನ್ನು ನಾವು ಕಾಣಬಹುದು
ನೀವು ನೀಡಿರುವ ಪಠ್ಯದಲ್ಲಿ ಹಬ್ಬದ ನಂತರದ ದಿನ ನಡೆಯುವ '''ಮನೆ ಮನೆಗೆ ದೇವರ ದರ್ಶನ (ಮೆರವಣಿಗೆ)''' ಹಾಗೂ ಭಕ್ತರ ಶ್ರದ್ಧಾಭಕ್ತಿಗಳ ಜಾನಪದ ಸೊಗಡಿನ ಸುಂದರ ವಿವರಣೆಯಿದೆ.
ಆದರೆ ಪಠ್ಯದಲ್ಲಿ ಕೆಲವು ಕಾಗುಣಿತ/ಲಿಪಿ ದೋಷಗಳು (ಉದಾ: 'ದೇವg', 'ಮನೆUಳಿಗೆ', 'ಹೊಬಾಳೆ', 'ಪ್ರೂಜೆಯಾದ') ಹಾಗೂ ವಾಕ್ಯ ರಚನೆಯ ದೋಷಗಳಿದ್ದವು. ವಿಷಯದ ಮೂಲ ಆಶಯಕ್ಕೆ ಯಾವುದೇ ಧಕ್ಕೆಯಾಗದಂತೆ ತಿದ್ದಿ, ಸ್ಪಷ್ಟವಾಗಿ ವಿಂಗಡಿಸಿ ಸಿದ್ಧಪಡಿಸಿದ '''ಶುದ್ಧೀಕರಿಸಿದ ಪಠ್ಯ''' ಇಲ್ಲಿದೆ:
== D) ೧೧. ಮರುದಿನ ಊರಿನ ಮನೆ ಮನೆಗೆ ದೇವರ ದರ್ಶನ ==
ಶುಕ್ರವಾರ ಬೆಳಗಿನ ಜಾವ ಕೊಂಡೋತ್ಸವ ಮತ್ತು ಶನಿವಾರದ ಹಬ್ಬದ ನಂತರ, ಭಾನುವಾರ ಸಾಯಂಕಾಲ ಊರಿನ ಮನೆ ಮನೆಗೆ 'ದೇವರ ದರ್ಶನ'ದ ಕಾರ್ಯಕ್ರಮವು ವೈಭವದಿಂದ ನಡೆಯುತ್ತದೆ.
ಭಾನುವಾರ ಸಂಜೆ ದೇವರ ಪೂಜಾ ಕಳಸವನ್ನು ವಿಶೇಷವಾಗಿ ಅಲಂಕರಿಸಿ, ಈಶ್ವರಪ್ಪನ ಗುಡಿಯಿಂದ ಅಡಿಕೆ ಹೊಂಬಾಳೆಯನ್ನು ತರಲಾಗುತ್ತದೆ. ತಮಟೆ, ವಾದ್ಯ ಮತ್ತು ನಗಾರಿಗಳ ಮಂಗಳಘೋಷದೊಂದಿಗೆ ದೇವರ ಗುಡ್ಡಪ್ಪನು ಪೂಜಾ ಕಳಸವನ್ನು ಹೊತ್ತುಕೊಂಡು ಮೆರವಣಿಗೆಯ ಮೂಲಕ ಊರಿನ ಮನೆ ಮನೆಗೆ ದೇವರ ದರ್ಶನ ನೀಡಲು ಹೊರಡುತ್ತಾನೆ.
== E) ಮೆರವಣಿಗೆಯ ವೈಭವ ಮತ್ತು ಭಕ್ತರ ನಂಬಿಕೆ: ==
· '''ಸಡಗರದ ಪೂಜೆ:''' ಊರಿನ ಪ್ರತಿಯೊಂದು ಮನೆಯವರು ದೇವರಿಗೆ ಪೂಜೆ ಸಲ್ಲಿಸಲು 'ನಾನು-ತಾನು' ಎಂದು ಸಡಗರದಿಂದ ಮುಂದೆ ಬರುತ್ತಾರೆ.
· '''ದೇವ ಕುಣಿತ:''' ಊರಿನ ಪ್ರಮುಖ ಜಾಗಗಳು ಮತ್ತು ಕೌಂಟರ್ಗಳಲ್ಲಿ (ಕಟ್ಟೆಗಳಲ್ಲಿ) ಪೂಜಾ ಕಳಸವನ್ನು ಹೊತ್ತ ದೇವರ ಗುಡ್ಡಪ್ಪನು ಅತ್ಯಂತ ಉತ್ಸಾಹದಿಂದ ಮೆರೆಯುತ್ತಾನೆ (ಕುಣಿಯುತ್ತಾನೆ). ಈ ರಮಣೀಯ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತಾದಿಗಳು ನೆರೆದಿರುತ್ತಾರೆ.
· '''ನಾದಕ್ಕೆ ತಕ್ಕ ನೃತ್ಯ:''' ದೇವರು ಮೆರೆಯುವಾಗ ತಮಟೆಗಾರರು ಸರಿಯಾದ ಲಯದಲ್ಲಿ ವಾದ್ಯ ಬಾರಿಸದಿದ್ದರೆ, ಗುಡ್ಡಪ್ಪನು ಅವರಿಗೆ ತಕ್ಕ ಮರ್ಯಾದೆ/ರುಚಿ ತೋರಿಸುವುದು (ಗದರಿಸುವುದು) ಇಲ್ಲಿನ ವಿಶಿಷ್ಟ ಆಚರಣೆಯಾಗಿದೆ.
· '''ಮೆರವಣಿಗೆಯ ಪರಿವಾರ:''' ಗುಡ್ಡಪ್ಪನ ಜೊತೆಯಲ್ಲಿ '''೪ ಪಟಗಳು (ದೇವತಾಂಕಿತ ಧ್ವಜಗಳು), ಬಿಳಿ ಕಂಬ ಹಾಗೂ ೧ ಧೂಪದ ದಂಡೆ (ದುಪುಣ್ಣೆ)''' ಹಿಡಿದು ಭಕ್ತರು ಕುಣಿಯುತ್ತಾ ಮೆರವಣಿಗೆಯಲ್ಲಿ ಸಾಗುತ್ತಾರೆ.
== F) ಆಶೀರ್ವಾದದ ವಿಶೇಷತೆ: ==
ಈ ಮನೆ ಮನೆಗೆ ದೇವರ ದರ್ಶನದ ಕಾರ್ಯಕ್ರಮವು ಸತತ '''೧೭ ಗಂಟೆಗಳಿಗೂ ಹೆಚ್ಚು ಕಾಲ''' ಸುದೀರ್ಘವಾಗಿ ನಡೆಯುತ್ತದೆ. ಊರಿನ ಎಲ್ಲ ಮನೆಗಳಲ್ಲೂ ಪೂಜೆ ಮುಗಿದ ನಂತರ, ಮನೆದೇವರ ಗುಡಿಯ ಬಳಿಗೆ ಹೋಗುವ ದಾರಿಯಲ್ಲಿ ಭಕ್ತರು ನೆಲದ ಮೇಲೆ ಸಾಲಾಗಿ ಮಲಗಿಕೊಳ್ಳುತ್ತಾರೆ. ಪೂಜಾ ಕಳಸ ಹೊತ್ತ ದೇವರ ಗುಡ್ಡಪ್ಪನು ಮಲಗಿರುವ ಭಕ್ತರನ್ನು ದಾಟಿಕೊಂಡು (ದಾಟಿ/ಹಾಯ್ದು) ಹೋಗುತ್ತಾನೆ. ಈ ಸಂದರ್ಭದಲ್ಲಿ ದೇವರಿಂದ ಸಿಗುವ ಸಣ್ಣ ಏಟು ಅಥವಾ ಸ್ಪರ್ಶವನ್ನು ಭಕ್ತರು ದೇವಿಯ ಆಶೀರ್ವಾದ ಹಾಗೂ ಪ್ರಸಾದವೆಂದೇ ಭಾವಿಸುತ್ತಾರೆ.
== C) ನಮ್ಮೂರಿನ ಜನಪದೀಯ ನಂಬಿಕೆಗಳು ಮತ್ತು ಶಕುನಗಳು ==
೧. '''ಪ್ರಯಾಣದ ಶಕುನ:''' ಯಾವುದಾದರೂ ಕೆಲಸಕ್ಕೆ ಹೊರಡುವಾಗ ಬೆಕ್ಕು ಬಲಭಾಗದಿಂದ ಎಡಭಾಗಕ್ಕೆ ಅಡ್ಡ ಬರಬಾರದು. ಹಾಗೂ ಕೈಯಲ್ಲಿ ಕ್ಷೌರದ ಪೆಟ್ಟಿಗೆಯಿಲ್ಲದ ಕ್ಷೌರಿಕ ಎದುರಾದರೆ ಹೊರಟ ಕೆಲಸ ನೆರವೇರುವುದಿಲ್ಲ ಎಂಬ ನಂಬಿಕೆಯಿದೆ.
೨. '''ಮದುವೆಯ ಶಕುನ:''' ಮದುವೆಯ ಸಮಯದಲ್ಲಿ ಮದುಮಗಳು ಶುಭಕಾರ್ಯಕ್ಕೆ ಹೊರಡುವಾಗ, ಕನ್ಯೆಯರು ನೀರು ತುಂಬಿದ ಕೊಡದೊಂದಿಗೆ ಎದುರಿಗೆ ಬಂದರೆ, ಆ ದಂಪತಿಗಳು ಜೀವನದಲ್ಲಿ ಉತ್ತಮ ಸಂಸಾರ ನಡೆಸುತ್ತಾರೆ ಎಂಬ ಶಕುನವಿದೆ.
೩. '''ಮಳೆಯ ನಂಬಿಕೆ (ಅಶ್ವಿನಿ ಮಳೆ):''' ಅಶ್ವಿನಿ ನಕ್ಷತ್ರದ ಮಳೆ ಸರಿಯಾಗಿ ಬಾರದಿದ್ದರೆ (ಅಥವಾ ಕೊರತೆಯಾದರೆ) ಪಶು-ಪಕ್ಷಿಗಳಿಗೆ ಹಾಗೂ ಕೃಷಿಗೆ ನೀರಿನ ಅಭಾವ ಉಂಟಾಗುತ್ತದೆ ಎನ್ನಲಾಗುತ್ತದೆ.
೪. '''ಮಾಘ ಮಳೆಯ ನಂಬಿಕೆ:''' ಮಾಘ ಮಳೆಯ ಹನಿ ಮೈಮೇಲೆ ಬಿದ್ದರೆ, ಹಿಂದೆ ಹುಚ್ಚು ನಾಯಿ ಕಡಿದಿದ್ದ ರೋಗವು ಮರುಕಳಿಸಿ ಮರಣ ತರಬಹುದು ಎಂಬ ಜಾನಪದ ನಂಬಿಕೆಯಿದೆ.
೫. '''ಸೂರ್ಯ-ಚಂದ್ರರ ಪರಿವೇಷ (ಮಂಡಲ):''' ಸೂರ್ಯನ ಸುತ್ತ ಮಂಡಲ (ಸುತ್ತು) ಕಟ್ಟಿದರೆ ಮಳೆ ಬರುತ್ತದೆ; ಅದೇ ಚಂದ್ರನ ಸುತ್ತ ಮಂಡಲ ಕಟ್ಟಿದರೆ ಬರಗಾಲ ಅಥವಾ ಕ್ಷಾಮದ ಭಯವಿರುತ್ತದೆ ಎನ್ನಲಾಗುತ್ತದೆ.
೬. '''ಸಿಡಿಲಿಗೆ ಪರಿಹಾರ:''' ಸಿಡಿಲು-ಮಿಂಚು ಬರುವಾಗ ಮರದ ಕೆಳಗೆ ನಿಲ್ಲಬಾರದು. ಮನೆಯ ಹೊರಗೆ ಕೊಡಲಿ, ಕುಡುಗೋಲು ಅಥವಾ ಕಬ್ಬಿಣದ ವಸ್ತುಗಳನ್ನು ಇಟ್ಟರೆ ಸಿಡಿಲಿನ ಅಪಾಯ ದೂರವಾಗುತ್ತದೆ ಎಂಬ ನಂಬಿಕೆಯಿದೆ.
೭. '''ಕಣದ ಪವಿತ್ರತೆ:''' ರಾತ್ರಿಯ ಹೊತ್ತು ಕಣದ ರಾಶಿಯಿಂದ ಭತ್ತ, ರಾಗಿ ಮುಂತಾದ ಧಾನ್ಯಗಳನ್ನು ಕದಿಯಬಾರದು. ಕದ್ದರೆ ತನಗೆ ಅನ್ನ ನೀಡಿದ ಭೂಮಿತಾಯಿಗೆ ದ್ರೋಹ ಬಗೆದಂತೆ ಎಂಬ ಶಿಸ್ತಿನ ನಿಯಮವಿದೆ.
೮. '''ಗೂಬೆಯ ಶಕುನ:''' ರಾತ್ರಿ ಅಥವಾ ಬೆಳಗಿನ ಜಾವ ಮನೆಯ ಮೇಲೆ ಗೂಬೆ ಬಂದು ಕುಳಿತರೆ ಆ ಮನೆಯ ಜನರಿಗೆ ಕೆಡುಕಾಗುತ್ತದೆ ಎಂಬ ಅಪಶಕುನದ ನಂಬಿಕೆಯಿದೆ.
೯. '''ರೈತನ ಶ್ರಮ ಮತ್ತು ಫಸಲು:''' ಹಗಲು-ರಾತ್ರಿ ಜಮೀನಿನಲ್ಲಿ ದುಡಿಯುವ ರೈತನ ಕಾಲಿಗೆ ಮಣ್ಣು ಹತ್ತಿ, ಮೈಗೆ ಧೂಳು ಸೋಕಿದರೆ ಆ ವರ್ಷ ಭರ್ಜರಿ ಬೆಳೆ ಬರುತ್ತದೆ ಎಂಬ ಪ್ರೋತ್ಸಾಹದಾಯಕ ನಂಬಿಕೆಯಿದೆ.
೧೦. '''ಎತ್ತಿನ ಪ್ರಾಮುಖ್ಯತೆ:''' ''"ಎತ್ತಿಲ್ಲದ ಮನೆ, ಧೈರ್ಯ-ಶಕ್ತಿಯಿಲ್ಲದ ಮನೆ"'' ಎಂಬಂತೆ, ಕೃಷಿ ಸಂಸ್ಕೃತಿಯಲ್ಲಿ ಎತ್ತುಗಳಿಲ್ಲದ ಮನೆ ಆಸರೆಯಿಲ್ಲದ ಮನೆಯಿದ್ದಂತೆ ಎಂಬ ಗಾದೆಯಂತಿದೆ.
೧೧. '''ಹಿರಿಯರ ಪ್ರಭಾವ:''' ಹಿರಿಯ ಮಕ್ಕಳ ನಡವಳಿಕೆ ಮತ್ತು ಚಾಳಿಗಳೇ ಇಡೀ ಮನೆಯ ಕುಟುಂಬದ ಇತರ ಸದಸ್ಯರ ಮೇಲೆಯೂ ಪ್ರಭಾವ ಬೀರುತ್ತವೆ.
೧೨. '''ಪ್ರಕೃತಿ ಪೂಜೆ:''' ಗೋಮೂತ್ರ, ಸಗಣಿ, ತುಳಸಿ, ಬನ್ನಿ, ಪತ್ರಿ, ನುಗ್ಗೆ, ಕರಿಬೇವು, ಬೇವಿನ ಗಿಡ, ಅಶ್ವತ್ಥ ಮರ ಹಾಗೂ ಪಶುಗಳನ್ನು ದೇವರ ಸಮಾನವೆಂದು ಪೂಜಿಸುವ ಪವಿತ್ರ ಸಂಪ್ರದಾಯ ಇಲ್ಲಿದೆ.
೧೩. '''ಸಂಸಾರದ ಸೂತ್ರ:''' ಕುಚೇಷ್ಟೆಯಿಂದ ದುರಭಿಮಾನ/ಪ್ರತಿಷ್ಠೆ ಬೆಳೆದು, ಆ ಪ್ರತಿಷ್ಠೆಯಿಂದ ಸಂಬಂಧಗಳು ಹಾಳಾಗುವುದರಿಂದ, ಅಂತಹ ವೈರತ್ವದಿಂದ ಸದಾ ದೂರವಿರಬೇಕು ಎಂಬ ನೀತಿಯಿದೆ.
೧೪. '''ದೈವಾರಾಧನೆ:''' ಮನಸ್ಸಿಗೆ ಶಾಂತಿಯಿಲ್ಲದಿದ್ದರೆ ಅಥವಾ ಸಂತಾನ ಭಾಗ್ಯವಿಲ್ಲದಿದ್ದರೆ ಬಂಜೆಯರು ಹಾಗೂ ನವವಧು ಈಶ್ವರ ದೇವಾಲಯಕ್ಕೆ ಹೋಗಿ ದೀಪ ಬೆಳಗಿಸುತ್ತಾರೆ. ಹಾಗೆಯೇ ಶನಿಮಹಾತ್ಮ ಮತ್ತು ಗಣಪತಿ ದೇವಾಲಯಗಳಿಗೂ ಹೋಗಿ ಪ್ರಾರ್ಥಿಸುತ್ತಾರೆ.
೧೫. '''ಮೊದಲ ಫಸಲಿನ ಹರಕೆ:''' ಮನೆ, ಹೊಲ, ಗದ್ದೆ ಹಾಗೂ ತೋಟಗಳಲ್ಲಿ ಮೊದಲ ಫಸಲು ಬಂದಾಗ, ಮೊದಲು ಗ್ರಾಮದೇವತೆಗೆ ಪೂಜೆ (ಪರಮು/ನೈವೇದ್ಯ) ಮಾಡಿಸಿ, ಕಾಣಿಕೆ ಒಪ್ಪಿಸಿದ ನಂತರವೇ ಅದನ್ನು ಸ್ವಂತಕ್ಕೆ ಬಳಸುವ ಪದ್ಧತಿ ಇದೆ. ದೈವಕಾರ್ಯಗಳಿಗೆ ಕಾಣಿಕೆ ಅಥವಾ ದಕ್ಷಿಣೆ ಕೊಟ್ಟು ನಮಸ್ಕರಿಸಿದರೆ ಮಾತ್ರ ಮುಂದೆ ಮಾಡುವ ಕಾರ್ಯಗಳು ವಿಘ್ನವಿಲ್ಲದೆ ನೆರವೇರುತ್ತವೆ ಎಂಬ ನಂಬಿಕೆಯಿದೆ.
ನೀವು ನೀಡಿರುವ ಪಠ್ಯದಲ್ಲಿ ಗ್ರಾಮೀಣ ಭಾಗದ ಕಠೋರ (ಖಡಕ್) ಹಾಗೂ ಅನುಭವಜನ್ಯ ಜಾನಪದ ನುಡಿಗಳು, ಜೀವನ ನೀತಿಗಳು ಮತ್ತು ಆರೋಗ್ಯದ ನಂಬಿಕೆಗಳಿವೆ.
ಆದರೆ ಪಠ್ಯದಲ್ಲಿ ಕೆಲವು ಕಾಗುಣಿತ/ಲಿಪಿ ದೋಷಗಳು (ಉದಾ: 'ಸ್ತಿçÃ', 'ತಿನ್ನವ', 'ಅದಾಲ್ಲಿ') ಹಾಗೂ ಅರ್ಧಕ್ಕೆ ನಿಂತಂತೆ ಇರುವ ವಾಕ್ಯಗಳಿದ್ದವು. ವಿಷಯದ ಶೈಲಿ ಮತ್ತು ನುಡಿಗಳ ಗಾಂಭೀರ್ಯಕ್ಕೆ ಕುಂದು ಬಾರದಂತೆ ತಿದ್ದಿ, ಅತ್ಯಂತ ಸ್ಪಷ್ಟವಾಗಿ ಸಿದ್ಧಪಡಿಸಿದ '''ಶುದ್ಧೀಕರಿಸಿದ ಪಠ್ಯ''' ಇಲ್ಲಿದೆ:
== D) ಇಲ್ಲಿನ ಕಠೋರ ಮೋಹಕ ನುಡಿಗಳು ==
· '''ಹದ ನೋಡಿ ಬಿತ್ತಬೇಕು, ಬೆದೆ ನೋಡಿ ಕೂformat/ಎರಗಬೇಕು:''' ಹೊಲಕ್ಕೆ ಹದ ನೋಡಿ ಬಿತ್ತನೆ ಮಾಡಬೇಕು; ಹಾಗೆಯೇ ಪ್ರಾಣಿ-ಪಕ್ಷಿ ಅಥವಾ ಸನ್ನಿವೇಶದ ಹದ/ಸಮಯ ನೋಡಿ ಸೂಕ್ತ ಕ್ರಮ ಕೈಗೊಳ್ಳಬೇಕು.
· '''ದೈಹಿಕ ಚಟದ ಎಚ್ಚರಿಕೆ:''' ದೇಹದ ಕಾಮ ಅಥವಾ ದೈಹಿಕ ಬಯಕೆಗಳನ್ನು ನಿರಂತರ ತಿನ್ನುವ ಚಟವನ್ನಾಗಿ (ದಾಸ್ಯವನ್ನಾಗಿ) ಮಾಡಿಕೊಳ್ಳಬಾರದು.
· '''ಸಂಸಾರ ನೀತಿ:''' ಸಮಾಜದಲ್ಲಿ 'ಛೀ' ಎನಿಸಿಕೊಂಡು ಹತ್ತು ಮಂದಿಯನ್ನು ಕಟ್ಟಿಕೊಳ್ಳುವುದಕ್ಕಿಂತ, ಗುಣವಂತೆಯಾದ '''ಒಂದು ಮುತ್ತಿನಂತಹ ಹೆಂಡತಿಯನ್ನು''' ಕಟ್ಟಿಕೋ.
· '''ಅತಿ ಸೌಂದರ್ಯದ ಎಚ್ಚರಿಕೆ:''' ಅತಿಯಾದ ರೂಪವತಿಯಾದ ಹೆಂಡತಿಯು (ಅತಿಯಾದ ಮೋಹ ಮತ್ತು ಆಕರ್ಷಣೆಯಿಂದಾಗಿ) ಶತ್ರುವಿನ ಮೊದಲ ರೂಪವಾಗುತ್ತಾಳೆ.
· '''ಕಾಯಕದ ತಾರತಮ್ಯ (ಜಾನಪದ ವ್ಯಂಗ್ಯ):''' ಅನಾಚಾರಿ/ಹಾದರಗಿತ್ತಿಗೆ ಸದಾ ಉನ್ನತ ಹಾಜರಿ (ಸಮ್ಮಾನ); ಆದರೆ ಸಚ್ಛರಿತ ಪತಿವ್ರತೆಗೆ ದಿನವಿಡೀ ಎಂಜಲೆಲೆ ಎತ್ತುವ, ಮುಸುರೆ ತೊಳೆಯುವ ಮತ್ತು ಕಸ ಗುಡಿಸುವ ಕೆಲಸದಲ್ಲೇ ಹಾಜರಿ!
· '''ಆಹಾರ ನೀತಿ:''' ರಾತ್ರಿ ಊಟದಲ್ಲಿ ಅತಿಯಾಗಿ ಮಜ್ಜಿಗೆ ಮತ್ತು ಮೊಸರನ್ನು ಉಂಡರೆ ಆರೋಗ್ಯಕ್ಕೆ ಕೇಡು (ಅನಾರೋಗ್ಯ).
· '''ಆರೋಗ್ಯ ಸೂತ್ರ:''' ಸ್ತ್ರೀ ಮುಟ್ಟಾದಾಗ (ಋತುಮತಿಯಾದಾಗ) ಆಕೆಯೊಂದಿಗೆ ದೈಹಿಕ ಸುಖ ಅನುಭವಿಸುವುದು ಹನಿ ಹನಿಯಾಗಿ ಅನಾರೋಗ್ಯವನ್ನು ಮೈಮೇಲೆ ಎಳೆದುಕೊಂಡಂತೆ.
== E)ಗ್ರಂಥಸೂಚಿ ==
== F) ಪ್ರಮುಖ ಆಕರ ಗ್ರಂಥಗಳು: ==
೧. '''ಕ್ಷೇತ್ರ ಕಾರ್ಯದ ಹಾದಿಯಲ್ಲಿ''' — ಕ್ಯಾತನಹಳ್ಳಿ ರಾಮಣ್ಣ
೨. '''ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ''' — ತೈಲೂರು ವೆಂಕಟಪ್ಪ
೩. '''ಮಂಡ್ಯ ಜಿಲ್ಲಾ ದರ್ಶಿನಿ''' — ದೇ. ಜ. ಗೌ. (ದೇ ಜವರೇಗೌಡ)
೪. '''ಜಾನಪದ ವಿವರ''' — ಡಾ. ಅಂಬಳಿಕೆ ಹಿರಿಯಣ್ಣ
೫. '''ಒಕ್ಕಣಿ''' — ಎಸ್. ಬಿ. ಶಂಕರಗೌಡ
೬. '''ಜಾನಪದ ಸಿದ್ಧಾಂತಗಳು ಮತ್ತು ವಿಧಾನಗಳು''' — ಡಾ. ಅಂಬಳಿಕೆ ಹಿರಿಯಣ್ಣ
೭. '''ಕನ್ನಡ ವಿಶ್ವಕೋಶ''' — ಪಂಡಿತ ಕವಲೆ
== G) ಅಧ್ಯಯನಕ್ಕೆ ಬಳಸಲಾದ ಇತರ ಆಕರ ಗ್ರಂಥಗಳು ಮತ್ತು ಪ್ರಕಟಣೆಗಳು: ==
ನಮ್ಮೂರಿನ ಸಂಸ್ಕೃತಿ, ಆಚರಣೆಗಳು ಮತ್ತು ಇತಿಹಾಸವನ್ನು ವಿವರವಾಗಿ ತಿಳಿಯಲು ಉಲ್ಲೇಖಿಸಿದ ಇತರ ಪ್ರಮುಖ ಕೃತಿಗಳು ಹಾಗೂ ಆಕರ ಮೂಲಗಳು:
· '''ಸಿಂಗಾರ'''
· '''ಕರ್ನಾಟಕ ಇತಿಹಾಸ ವಿಶ್ವಕೋಶ'''
· '''ಮಂಡ್ಯ ಜಿಲ್ಲಾ ಗೆಜೆಟಿಯರ್ (District Gazetteer)'''
· '''ಕರ್ನಾಟಕ ಜಾನಪದ ವಿಶ್ವಕೋಶ'''
· '''ಕರ್ನಾಟಕ ಶಾಸನ ಸಂಸ್ಕೃತಿ'''
· '''ಮಂಡ್ಯ ಜಿಲ್ಲಾ ದರ್ಶಿನಿ'''
· '''ಮಂಡ್ಯ ಜಿಲ್ಲೆಯ ಸಂಸ್ಕೃತಿ ಮತ್ತು ಪರಂಪರೆ'''
=== H) ಪ್ರಮುಖ ತಿದ್ದುಪಡಿಗಳು: ===
1. '''ಪುನರಾವರ್ತನೆಯ ನಿವಾರಣೆ:''' 'ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ - ತೈಲೂರು ವೆಂಕಟಪ್ಪ' ಎಂಬ ಹೆಸರು ಪಟ್ಟಿಯಲ್ಲಿ ಎರಡು ಬಾರಿ (೨ ಮತ್ತು ೬ರಲ್ಲಿ) ಬಂದಿದ್ದರಿಂದ ಪುನರಾವರ್ತನೆ ತೆಗೆದು ಕ್ರಮಸಂಖ್ಯೆಯನ್ನು ಸರಿಪಡಿಸಲಾಗಿದೆ
== H) ಉಪಸಂಹಾರ ==
ನಾನು ತುಂಬಾ ಇಷ್ಟಪಡುವ ಉತ್ಸವ ಇದಾಗಿರುವುದರಿಂದ ಹಾಗೂ ಈ ದೇವರ ಮಹಿಮೆಯನ್ನು ಕಣ್ಣಾರೆ ನೋಡಿ ಅನುಭವಿಸಿದ್ದರಿಂದ, ಈ ಉತ್ಸವವನ್ನು ನನ್ನ ಕ್ಷೇತ್ರಕಾರ್ಯಕ್ಕೆ (Fieldwork) ಆಯ್ಕೆ ಮಾಡಿಕೊಳ್ಳಲು ತುಂಬಾ ಸಂತೋಷವಾಯಿತು. ಈ ಉತ್ಸವವು ನನ್ನ ಸ್ನೇಹಿತನ ಊರಿನಲ್ಲಿ ನಡೆಯುವುದರಿಂದ ಹಾಗೂ ಆ ಊರಿನ ಪ್ರಮುಖ ವ್ಯಕ್ತಿಗಳ ಪರಿಚಯ ನನಗಿದ್ದುದರಿಂದ, ಜೊತೆಗೆ ಪ್ರತಿವರ್ಷವೂ ಈ ಉತ್ಸವವನ್ನು ಹತ್ತಿರದಿಂದ ನೋಡುತ್ತಿದ್ದುದರಿಂದ, ಈ ದೈವಿಕ ಮಹಿಮೆಯನ್ನು ಪ್ರಚಾರ ಪಡಿಸುವ ಉದ್ದೇಶದಿಂದ ಈ ವಿಷಯವನ್ನು ಆಯ್ಕೆ ಮಾಡಿಕೊಂಡೆ.
ಈ ಉತ್ಸವದಲ್ಲಿ ಎಲ್ಲಾ ಕೋಮುಗಳ ಜನರು, ಅವರ ನೆಂಟರಿಷ್ಟರು, ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರು ಎಲ್ಲರೂ ಒಂದೆಡೆ ಸೇರುವುದರಿಂದ ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಹಾಗೂ ಪರಸ್ಪರ ಸಂಸ್ಕೃತಿಗಳನ್ನು ಪರಿಚಯಿಸಿಕೊಳ್ಳಲು ಇದು ಸೂಕ್ತವಾದ ಸಮಯವಾಗಿದೆ. ಇಲ್ಲಿಗೆ ಸೇರುವ ಜನರಲ್ಲಿ ಯಾವುದೇ ಒಳಜಗಳಗಳಿದ್ದರೂ, ಈ ಹಬ್ಬದ ಸಂದರ್ಭದಲ್ಲಿ ಎಲ್ಲವನ್ನೂ ಮರೆತು ಒಂದಾಗಿ ಬೆರೆತು ಹಬ್ಬವನ್ನು ಆಚರಿಸುತ್ತಾರೆ. ಈ ಉತ್ಸವದಲ್ಲಿ ಭಾಗವಹಿಸಿದ ನನಗೆ ಅಲ್ಲಿನ ನಿಯಮಗಳು, ಲೋಕಾರೂಢಿಗಳು, ಸಾಂಪ್ರದಾಯಿಕ ಆಚರಣೆಗಳು, ದೈವಿಕ ನಂಬಿಕೆಗಳು, ಗಾದೆಗಳು, ಒಗಟುಗಳು, ಕಥೆಗಳು ಹಾಗೂ ಜನಪದ ಗೀತೆಗಳು ಮುಂತಾದ ವಿವಿಧ ಜಾನಪದ ಪ್ರಕಾರಗಳು ಹತ್ತಿರದಿಂದ ಪರಿಚಿತವಾದವು.
==== ಎಲ್ಲಕ್ಕಿಂತ ಹೆಚ್ಚಾಗಿ ಕ್ಷೇತ್ರಕಾರ್ಯದ ಮುಖಾಂತರ ಈ ಉತ್ಸವವನ್ನು ಅತ್ಯಂತ ಹತ್ತಿರದಿಂದ ಅಭ್ಯಾಸ ಮಾಡಿದ್ದು ನನಗೆ ಅಪಾರ ಸಂತೋಷವನ್ನು ನೀಡಿದೆ. ಇಲ್ಲಿಗೆ ಆಗಮಿಸುವ ವಿಭಿನ್ನ ಊರಿನ ಜನರು ತಮ್ಮ ಮಾತುಗಳ ಮೂಲಕ ತಮ್ಮ ಊರಿನ ಆಚಾರ-ವಿಚಾರಗಳನ್ನು ವ್ಯಕ್ತಪಡಿಸುತ್ತಿದ್ದರು. ಇದರಿಂದ ನಮ್ಮ ಸಂಪ್ರದಾಯ ಹಾಗೂ ಅವರ ಸಂಪ್ರದಾಯಗಳ ನಡುವಿನ ವ್ಯತ್ಯಾಸಗಳನ್ನು ಅರ್ಥೈಸಿಕೊಳ್ಳಲು ಮತ್ತು ಹೊಸ ಹೊಸ ಸಂಬಂಧಗಳ ಪರಿಚಯವನ್ನು ಮಾಡಿಕೊಳ್ಳಲು ಸಾಧ್ಯವಾಯಿತು. ಒಟ್ಟಾರೆಯಾಗಿ ನನ್ನ ಈ ಕ್ಷೇತ್ರಕಾರ್ಯದ ಅನುಭವವು ಈ ಕಿರು ಪ್ರಬಂಧವನ್ನು ಬರೆಯಲು ಸಹಾಯ ಮಾಡುವುದರ ಜೊತೆಗೆ, ನನ್ನ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೂ ಅತ್ಯಂತ ಉಪಯುಕ್ತವಾಗುತ್ತದೆ ಎಂದು ನಂಬಿದ್ದೇನೆ. ====
==== ಜಾನಪದದ ಸಾಂಸ್ಕೃತಿಕ ಮೌಲ್ಯ: ====
ವಿಭಿನ್ನ ಜನಾಂಗಗಳ ಸಾಂಸ್ಕೃತಿಕ ಮೌಲ್ಯಗಳನ್ನು ಹಾಗೂ ಅವರ ಲೋಕದೃಷ್ಟಿಯನ್ನು ಗುರುತಿಸುವುದನ್ನೇ 'ಜನಪದ' ಎನ್ನಬಹುದು. ಅಂತೆಯೇ ಜನಪದ ಎಂಬುದು ಸಾಂಸ್ಕೃತಿಕ ಬದುಕಿನ ಒಳನೋಟವಾಗಿದೆ. ನೂರಾರು ವರ್ಷಗಳಿಂದ ನಮ್ಮ ಪೂರ್ವಜರು ರೂಢಿಸಿಕೊಂಡು ಬಂದ ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಸಾಮಾಜಿಕ, ಕೌಟುಂಬಿಕ, ನೈತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳಲ್ಲಿ ಈ ಜನಪದವು ಹಾಸುಹೊಕ್ಕಾಗಿದೆ.
ಜನಪದರ ಬದುಕಿನ ಸತ್ಯಗಳು ಮತ್ತು ಭಾವನೆಗಳು ಇಲ್ಲಿ ಪ್ರತಿಫಲಿಸಿವೆ. ಜಾನಪದ ಬದುಕು ನಮಗೆ ಸಿಕ್ಕ ಪಿತ್ರಾರ್ಜಿತ ಆಸ್ತಿಯಿದ್ದಂತೆ. ಜನಾಂಗವೊಂದರ ಜೀವಾಳವನ್ನು ಅರಿಯಲು ಅತ್ಯಂತ ಮೌಲ್ಯಯುತವಾದ ಆಕರ ವಸ್ತುವಾಗಿರುವ ಜಾನಪದವು, ಸಮಾಜದ ಪ್ರಮುಖ ಅಂಗವಾಗಿದೆ. ಇಂತಹ ಭವ್ಯ ಜಾನಪದ ಸಂಸ್ಕೃತಿಯನ್ನು ಹೊಂದಿರುವ ಈ ಗ್ರಾಮವು ಜಾನಪದದ ರತ್ನಖಚಿತ ಕಳಂಜಿಯಾಗಿದೆ ಎಂಬುದು ನನ್ನ ದೃಢ ನಂಬಿಕೆ.
==== ಕವಿತೆ (ಮಂಗಳಾಚರಣೆ/ದೇವತಾ ಪ್ರಾರ್ಥನೆ): ====
ಬಾರೋ ಬಾರೋ ಮುಗಿಲ ನೇಸರನೇ
ಬುವಿಯ ಮಡಿಲ ಹಸಿರ ರಾಶಿಯ ಶಕ್ತಿಯಾಗಿ
ಬಾರೋ ಬಾ, ಬೇಗ ಬಾರೋ
ಬಾಲ ರೂಪವಾಗಿ ಬಾ
ನಕ್ಷತ್ರದಂತೆ ನೀ ಬಾ
ಬಾರೋ ಬಾ, ಹರಿದ ಗಂಗೆ ಕಡಲ ಸೇರಿದಂತೆ
ಹುಣ್ಣಿಮೆಯ ಚಂದ್ರನಂತೆ ಬಾ
ಬಾರೋ ಬಾ, ಮೋಹಕ ಹೃದಯದವನೇ ಬಾ
ಬೆಳಿಗ್ಗೆಯೇ ಬಾ, ಹೇ ಭಾಸ್ಕರನೇ ಬಾರೋ...
'''ಪುನೀತ್ಭಾಸ್ಕರ್ ಎಂ.ಬಿ ಮಾರಗೌಡನಹಳ್ಳಿ'''
== ಸಂದರ್ಶಿಸಿದ ಪ್ರಮುಖ ವ್ಯಕ್ತಿಗಳ ಪಟ್ಟಿ ==
{| class="wikitable"
|'''ಹೆಸರು'''
|'''ವಯಸ್ಸು'''
|'''ವಿದ್ಯಾರ್ಹತೆ'''
|'''ಉದ್ಯೋಗ / ಹುದ್ದೆ'''
|-
|'''ಎಂ. ಸಿ. ಭಾಸ್ಕರ'''
|೫೦
|೭ ನೇ ತರಗತಿ
|ವ್ಯವಸಾಯ
|-
|'''ಶಿವಲಿಂಗಯ್ಯ ಬಿ.'''
|೪೫
|ಬಿ.ಎಡ್. (B.Ed.)
|ಶಿಕ್ಷಕರು ಹಾಗೂ ಸಮಾಜ ಸೇವಕರು
|-
|'''ಗೌತಮ್ಮ'''
|೩೦
|ದ್ವಿತೀಯ ಪಿಯುಸಿ (II PUC)
|ಗುಡ್ಡಪ್ಪ ಪಟ್ಟಲದಮ್ಮ
|-
|'''ಶ್ರೀನಿವಾಸಮೂರ್ತಿ'''
|೪೫
|ಎಸ್.ಎಸ್.ಎಲ್.ಸಿ (SSLC)
|ಅರ್ಚಕರು
|-
|'''ಚಲುವೇಗೌಡ'''
|೩೦
|ಎಂ.ಎ. (M.A.)
|ಉದ್ಯೋಗಿ
|-
|'''ಮಲ್ಲಯ್ಯ'''
|೭೦
|ಅಕ್ಷರಸ್ಥರಲ್ಲ
|ದೇವರ ಆರಾಧಕರು
|-
|'''ಮರಿಯಣ್ಣ (ಪರದೊಡ್ಡಯ್ಯ)'''
|೭೦
|ಅಕ್ಷರಸ್ಥರಲ್ಲ
|ದೇವರ ಆರಾಧಕರು
|-
|'''ತಮ್ಮಯ್ಯ (ತಮ್ಮಯಣ್ಣ)'''
|೬೫
|ಅಕ್ಷರಸ್ಥರಲ್ಲ
|ದೇವರ ಆರಾಧಕರು
|-
|'''ಎಂ. ಸಿ. ಶ್ರೀಧರ'''
|೫೦
|ಪದವಿ (Degree)
|ಗ್ರಾಮದ ಮುಖಂಡರು
|-
|'''ನಾಗಣ್ಣ (ಗುಡ್ಡಪ್ಪ)'''
|೩೫
|ಎಸ್.ಎಸ್.ಎಲ್.ಸಿ (SSLC)
|ಗ್ರಾಮದ ದೇವರ ಗುಡ್ಡಪ್ಪ
|}
=== ಕೃತಜ್ಞತೆಗಳು ===
ಹೀಗೆ ನಮ್ಮ ಕುಟುಂಬ ವರ್ಗದವರೆಲ್ಲರೂ, ಗ್ರಾಮಸ್ಥರು ಹಾಗೂ ನೆರೆ-ಹೊರೆಯವರು ಈ ಗ್ರಾಮದ ದೇವಾಲಯಗಳ ಹಾಗೂ 'ಶ್ರೀ ಪಟ್ಟಲದಮ್ಮ ದೇವಿಯ' ಐತಿಹ್ಯದ ಕುರಿತು ತಮಗೆ ತಿಳಿದಿರುವಷ್ಟು ಮಾಹಿತಿಯ ಕಣಜವನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಂಚಿಕೊಂಡು, ಈ ಕ್ಷೇತ್ರಕಾರ್ಯದ ಲೇಖನವನ್ನು ಪೂರ್ಣಗೊಳಿಸಲು ಸಹಕರಿಸಿದ್ದಾರೆ. ಇವರೆಲ್ಲರಿಗೂ ನನ್ನ ಹೃತ್ಪೂರ್ವಕ '''ಕೃತಜ್ಞತೆಗಳು'''.
m0xtx9f542krd6qt2ezechfau5xvc9o
ಸದಸ್ಯರ ಚರ್ಚೆಪುಟ:Basavaraj katral
3
179988
1378142
2026-08-02T14:43:18Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1378142
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Basavaraj katral}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೦:೧೩, ೨ ಆಗಸ್ಟ್ ೨೦೨೬ (IST)
m1lbmhqri03so77l9u1qym51im63o9r
ಸದಸ್ಯರ ಚರ್ಚೆಪುಟ:M jayakumara
3
179989
1378143
2026-08-02T14:43:56Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1378143
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=M jayakumara}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೦:೧೩, ೨ ಆಗಸ್ಟ್ ೨೦೨೬ (IST)
pgh95t7z4gw26iolga0uxpbryq6d56l
ತಿರುಮುಲ್ಲವಾರಂ ಸಮುದ್ರತೀರ
0
179990
1378147
2026-08-02T15:32:14Z
A826
72368
ಹೊಸ ಪುಟ: {{databox}} {{Infobox landform | name = ತಿರುಮುಲ್ಲವಾರಂ ಬೀಚ್<br>തിരുമുല്ലവാരം ബീച്ച് | other_name = | image = Thirumullavaram DTPC Notification board.jpg | image_size = | alt = | caption = ತಿರುಮುಲ್ಲವಾರಂ ಬೀಚ್ನಲ್ಲಿನ ನ್ಯಾವಿಗೇಷನ್ ಬೋರ್ಡ್ | pushpin_map = India Koll...
1378147
wikitext
text/x-wiki
{{databox}}
{{Infobox landform
| name = ತಿರುಮುಲ್ಲವಾರಂ ಬೀಚ್<br>തിരുമുല്ലവാരം ബീച്ച്
| other_name =
| image = Thirumullavaram DTPC Notification board.jpg
| image_size =
| alt =
| caption = ತಿರುಮುಲ್ಲವಾರಂ ಬೀಚ್ನಲ್ಲಿನ ನ್ಯಾವಿಗೇಷನ್ ಬೋರ್ಡ್
| pushpin_map = India Kollam#Kerala
| map_width =
| map_caption =
| pushpin_alt =
| pushpin_relief =
| pushpin_label =
| mark =
| marker_size =
| location = [[ತಿರುಮುಲ್ಲವಾರಂ]], [[ಕೊಲ್ಲಂ]], [[ಭಾರತ]]
| grid_ref =
| grid_ref_UK =
| grid_ref_Ireland =
| coordinates = {{coord|8|53|41|N|76|33|13|E|display=inline}}
| coordinates_ref =
| range =
| part_of =
| water_bodies =
| length = 100+ ಮೀ
| formed_by =
| type = ಸಮುದ್ರ ತೀರ
| free_label_1 = ಇದರಿಂದ ಗಸ್ತು
| free_data_1 =
| free_label_2 = ಅಪಾಯದ ಮಟ್ಟ
| free_data_2 = <span style="color:#090">'''ಕಡಿಮೆ'''</span>
| free_label_3 = ಪ್ರವೇಶ
| free_data_3 = [[ಕೊಲ್ಲಂ KSRTC ಬಸ್ ನಿಲ್ದಾಣ|ಬಸ್ ನಿಲ್ದಾಣ]] {{rint|bus}} - 4.2 ಕಿಮೀ,<br>[[ಕೊಲ್ಲಂ ಜಂಕ್ಷನ್ ರೈಲ್ವೆ ನಿಲ್ದಾಣ|ರೈಲ್ವೆ ನಿಲ್ದಾಣ]] {{rint|rail}} - 5.5 ಕಿಮೀ, <br>[[ಕೊಲ್ಲಂ KSWTD ಫೆರ್ರಿ ಟರ್ಮಿನಲ್|ಫೆರ್ರಿ ಟರ್ಮಿನಲ್]] {{rint|ferry}} - 4.2 ಕಿಮೀ
| embedded = {{succession links|left=[[ಕೊಲ್ಲಂ ಬೀಚ್]]|right=[[ಅಝೀಕಲ್ ಬೀಚ್]]}}
}}
'''ತಿರುಮುಲ್ಲವಾರಂ ಬೀಚ್''' ([[ಮಲಯಾಳಂ]]: തിരുമുല്ലവാരം ബീച്ച്), [[ಕೊಲ್ಲಂ]] ನಗರದ ಜನಪ್ರಿಯ ಸಮುದ್ರ ತೀರಗಳಲ್ಲಿ ಒಂದಾಗಿದೆ ಮತ್ತು [[ಕೇರಳ]] ರಾಜ್ಯದ ಪ್ರವಾಸಿ ತಾಣವಾಗಿದೆ.<ref>[http://www.swadeshnews.com/lifestyle/gods-own-country-kerala ದೇವರ ಸ್ವಂತ ನಾಡು : ಕೇರಳ]</ref> ಈ ಸಮುದ್ರ ತೀರವು [[ಕೊಲ್ಲಂ]] ನಗರದ ಪ್ರಮುಖ ನೆರೆಹೊರೆಯಾದ [[ತಿರುಮುಲ್ಲವಾರಂ]]ನಲ್ಲಿದೆ. ಕಾರ್ಕಿಡಕ ವಾವುಬಲಿ ಆಚರಣೆಗಳಿಗೆ ಈ ಸಮುದ್ರ ತೀರವು ಬಹಳ ಪ್ರಸಿದ್ಧವಾಗಿದೆ.<ref>[http://www.thehindu.com/todays-paper/tp-national/tp-kerala/thirumullavaram-readying-for-vavubali/article3644487.ece ವಾವುಬಲಿಗಾಗಿ ತಿರುಮುಲ್ಲವಾರಂ ಸಿದ್ಧವಾಗುತ್ತಿದೆ]</ref> ಪ್ರತಿವರ್ಷ ಸಾವಿರಾರು ಭಕ್ತರು ವಾವುಬಲಿ ತರ್ಪಣವನ್ನು ನಡೆಸಲು ಸಮುದ್ರ ತೀರಕ್ಕೆ ಆಗಮಿಸುತ್ತಾರೆ. ಇದು ದಕ್ಷಿಣ ಭಾರತದಲ್ಲಿರುವ ಅತ್ಯಂತ ಆಕರ್ಷಕ ಸಮುದ್ರ ತೀರಗಳಲ್ಲಿ ಒಂದಾಗಿದೆ.
==ತಿರುಮುಲ್ಲವಾರಂ ಬೀಚ್ನ ಮಹತ್ವ==
ತಿರುಮುಲ್ಲವಾರಂ ಬೀಚ್ [[ಕೊಲ್ಲಂ]]ನಲ್ಲಿರುವ ('ವಿಶ್ವದ ಗೋಡಂಬಿ ರಾಜಧಾನಿ' ಎಂದು ಕರೆಯಲ್ಪಡುವ) ಎರಡು ಮುಖ್ಯ ಸಮುದ್ರ ತೀರಗಳಲ್ಲಿ ಒಂದಾಗಿದೆ.<ref>{{cite web|url=https://www.thehindu.com/news/national/kerala/kollams-cashew-crunch/article23701507.ece |title=ಕೊಲ್ಲಂನ ಗೋಡಂಬಿ ಸಮಸ್ಯೆ |publisher=ದ ಹಿಂದೂ |date=28 April 2018 |access-date=10 August 2018}}</ref> ಸಮುದ್ರ ತೀರದ ಪ್ರದೇಶವು ತೆಂಗಿನ ಮರಗಳಿಂದ ತುಂಬಿದ್ದು, ಈ ಸ್ಥಳವನ್ನು ನೆರಳಿನ ಮತ್ತು ಶಾಂತವಾದ ಸ್ಥಳವನ್ನಾಗಿ ಮಾಡುತ್ತದೆ.{{fact|date=ಜೂನ್ 2018}} ಈ ಸಮುದ್ರ ತೀರವು ಬೆಳಿಗ್ಗೆ ನಡಿಗೆಗೆ ಸೂಕ್ತವಾಗಿದೆ.<ref>[http://www.thehindu.com/todays-paper/tp-national/tp-kerala/thirumullavaram-readying-for-vavubali/article3644487.ece ವಾವುಬಲಿಗಾಗಿ ತಿರುಮುಲ್ಲವಾರಂ ಸಿದ್ಧವಾಗುತ್ತಿದೆ]</ref> ಈ ಸಮುದ್ರ ತೀರವು ಈಜಲು ಮತ್ತು ಸೂರ್ಯಸ್ನಾನಕ್ಕೆ ಸೂಕ್ತವಾಗಿದೆ ಮತ್ತು ಯಾವುದೇ ಅಪಾಯಕಾರಿ ವಲಯಗಳನ್ನು ಗುರುತಿಸಲಾಗಿಲ್ಲ. ಈ ಸಮುದ್ರ ತೀರವು ರಾಜ್ಯದ ಸುತ್ತಲಿನ ಎಲ್ಲಾ ಪ್ರಮುಖ ರಸ್ತೆಗಳೊಂದಿಗೆ ಸಂಪರ್ಕ ಹೊಂದಿದೆ ಮತ್ತು ಸ್ಥಳವನ್ನು ತಲುಪಲು ಸುಲಭವಾಗಿ ಪ್ರವೇಶಿಸಬಹುದು.<ref>[http://www.rainbowskill.com/medium/the-most-beautiful-thirumullavaram-beach-in-kerala.php ಕೇರಳದಲ್ಲಿ ಅತ್ಯಂತ ಸುಂದರವಾದ ತಿರುಮುಲ್ಲವಾರಂ ಬೀಚ್]</ref> ತೆಂಗು ಮತ್ತು ಏಲಕ್ಕಿ, ಕರಿಮೆಣಸು, ಲವಂಗ, ದಾಲ್ಚಿನ್ನಿ ಮತ್ತು ಶುಂಠಿಯಂತಹ ಮಸಾಲೆಗಳಿಂದ ಹೆಚ್ಚಾಗಿ ಸುವಾಸನೆಯುಳ್ಳ ಸ್ಥಳೀಯ ಪಾಕಪದ್ಧತಿಯ ರುಚಿಯೂ ಉತ್ತಮ ಸಂಖ್ಯೆಯ ಸಂದರ್ಶಕರನ್ನು ಆಕರ್ಷಿಸುತ್ತದೆ. '''ಞರಳ್ಚ ಪಾರ''' ಎಂದು ಕರೆಯಲ್ಪಡುವ ಒಂದು ಜಲ ದಿಬ್ಬವು ಇಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೆಯಾಗಿದೆ. ಕಡಿಮೆ ಉಬ್ಬರವಿಳಿತದ ಸಮಯದಲ್ಲಿ, ಈ ದಿಬ್ಬವನ್ನು ಸಮುದ್ರದೊಳಗೆ ಸುಮಾರು ಒಂದೂವರೆ ಕಿಲೋಮೀಟರ್ ದೂರದಿಂದ ದಡದಿಂದ ಸ್ಪಷ್ಟವಾಗಿ ಕಾಣಬಹುದು. ಭಾರತದ [[ಕೇಂದ್ರ ಸಮುದ್ರ ಮತ್ಸ್ಯ ಸಂಶೋಧನಾ ಸಂಸ್ಥೆ|ಕೇಂದ್ರ ಸಮುದ್ರ ಮತ್ಸ್ಯ ಸಂಶೋಧನಾ ಸಂಸ್ಥೆ(CMRFRI)]] 2018 ರ ಅಧ್ಯಯನ ವರದಿಯ ಪ್ರಕಾರ, ತಿರುಮುಲ್ಲವಾರಂ ಬೀಚ್ ಭಾರತದ 16 ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟ ಸಮುದ್ರ ತೀರಗಳಲ್ಲಿ ಒಂದಾಗಿದೆ, ಇದು [[ಕೇರಳ]] ರಾಜ್ಯದ ಮೊದಲ ಸ್ಥಾನವಾಗಿದೆ.<ref>{{cite web|url=https://travel.manoramaonline.com/travel/travel-news/2018/08/14/kerala-has-sisteen-of-indias-best-beaches.html| title=ಕೇರಳವು ಭಾರತದ 16 ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟ ಸಮುದ್ರ ತೀರಗಳನ್ನು ಹೊಂದಿದೆ |publisher=ಓನ್ ಮನೋರಮ |date=15 August 2018 |access-date=16 August 2018}}</ref>
==ಸ್ಥಳ==
ಈ ಸಮುದ್ರ ತೀರವು [[ಕೊಲ್ಲಂ]] ನಗರದ ಹೃದಯಭಾಗದಿಂದ 6 ಕಿಮೀ ದೂರದಲ್ಲಿದೆ. ಇದು ಪಿಕ್ನಿಕ್ ಕೇಂದ್ರವಾಗಿದ್ದು, ನಗರಕ್ಕೆ ಆಗಾಗ್ಗೆ ಬಸ್ ಸಂಪರ್ಕವನ್ನು ಹೊಂದಿದೆ.<ref>[http://www.keralatourslane.ezeetips.com/kerala-beaches/thirumullavaram-beach.html ತಿರುಮುಲ್ಲವಾರಂ ಬೀಚ್ - ಕೇರಳ ಪ್ರವಾಸಗಳು]</ref> ಕೊಲ್ಲಂ KSRTC ಬಸ್ ನಿಲ್ದಾಣವು ಇಲ್ಲಿಂದ 5 ಕಿಮೀ ದೂರದಲ್ಲಿದೆ. ಹತ್ತಿರದ ರೈಲ್ವೆ ನಿಲ್ದಾಣವು [[ಕೊಲ್ಲಂ ಜಂಕ್ಷನ್ ರೈಲ್ವೆ ನಿಲ್ದಾಣ]]ವಾಗಿದ್ದು, ಇದು 7 ಕಿಮೀ ದೂರದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣವು [[ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ]]ವಾಗಿದ್ದು, ಇದು 80 ಕಿಮೀ ದೂರದಲ್ಲಿದೆ.
===ಪ್ರಮುಖ ರಸ್ತೆ ಗಮ್ಯಸ್ಥಾನಗಳು===
# [[ಥಂಗಸ್ಸೇರಿ]] - {{nowrap|3 ಕಿಮೀ}}
# [[ಕೊಲ್ಲಂ]] [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|KSRTC]] ಬಸ್ ನಿಲ್ದಾಣ - {{nowrap|5 ಕಿಮೀ}}
# [[ಕೊಲ್ಲಂ ಬೀಚ್]] - {{nowrap|6 ಕಿಮೀ}}
# [[ಚಿನ್ನಕಡ]] - {{nowrap|6 ಕಿಮೀ}}
# [[ಕೊಲ್ಲಂ ಜಂಕ್ಷನ್ ರೈಲ್ವೆ ನಿಲ್ದಾಣ]] - {{nowrap|7 ಕಿಮೀ}}
# [[ಕರುನಾಗಪಲ್ಲಿ]] - {{nowrap|22 ಕಿಮೀ}}
# [[ಪರವೂರು, ಕೊಲ್ಲಂ|ಪರವೂರು]] - {{nowrap|29 ಕಿಮೀ}}
# [[ಪರವೂರು ರೈಲ್ವೆ ನಿಲ್ದಾಣ]] - {{nowrap|29 ಕಿಮೀ}}
# [[ಥೆಕ್ಕುಂಭಗಂ|ಥೆಕ್ಕುಂಭಗಂ ಬೀಚ್]] - {{nowrap|33 ಕಿಮೀ}}
{{wide image|Thirumullavaram Panorama Sep 2015.jpg|1950px|ಸೆಪ್ಟೆಂಬರ್ 2015 ರಲ್ಲಿ ತಿರುಮುಲ್ಲವಾರಂ ಬೀಚ್ನ ಪನೋರಮಾ}}
==ಉಲ್ಲೇಖಗಳು==
{{Reflist}}
==ಬಾಹ್ಯ ಕೊಂಡಿಗಳು==
{{commons category|Thirumullavarum}}
{{Tourism in Kerala}}
[[ವರ್ಗ:ಕೊಲ್ಲಂನ ಸಮುದ್ರ ತೀರಗಳು]]
[[ವರ್ಗ:ಕೊಲ್ಲಂ ಜಿಲ್ಲೆಯ ಪ್ರವಾಸಿ ಆಕರ್ಷಣೆಗಳು]]
6lmk7lb10ngftda3xj8v9oam37u2unq
1378235
1378147
2026-08-03T04:32:20Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1378235
wikitext
text/x-wiki
{{databox}}
{{Infobox landform
| name = ತಿರುಮುಲ್ಲವಾರಂ ಬೀಚ್<br>തിരുമുല്ലവാരം ബീച്ച്
| other_name =
| image = Thirumullavaram DTPC Notification board.jpg
| image_size =
| alt =
| caption = ತಿರುಮುಲ್ಲವಾರಂ ಬೀಚ್ನಲ್ಲಿನ ನ್ಯಾವಿಗೇಷನ್ ಬೋರ್ಡ್
| pushpin_map = India Kollam#Kerala
| map_width =
| map_caption =
| pushpin_alt =
| pushpin_relief =
| pushpin_label =
| mark =
| marker_size =
| location = [[ತಿರುಮುಲ್ಲವಾರಂ]], [[ಕೊಲ್ಲಂ]], [[ಭಾರತ]]
| grid_ref =
| grid_ref_UK =
| grid_ref_Ireland =
| coordinates = {{coord|8|53|41|N|76|33|13|E|display=inline}}
| coordinates_ref =
| range =
| part_of =
| water_bodies =
| length = 100+ ಮೀ
| formed_by =
| type = ಸಮುದ್ರ ತೀರ
| free_label_1 = ಇದರಿಂದ ಗಸ್ತು
| free_data_1 =
| free_label_2 = ಅಪಾಯದ ಮಟ್ಟ
| free_data_2 = <span style="color:#090">'''ಕಡಿಮೆ'''</span>
| free_label_3 = ಪ್ರವೇಶ
| free_data_3 = [[ಕೊಲ್ಲಂ KSRTC ಬಸ್ ನಿಲ್ದಾಣ|ಬಸ್ ನಿಲ್ದಾಣ]] {{rint|bus}} - 4.2 ಕಿಮೀ,<br>[[ಕೊಲ್ಲಂ ಜಂಕ್ಷನ್ ರೈಲ್ವೆ ನಿಲ್ದಾಣ|ರೈಲ್ವೆ ನಿಲ್ದಾಣ]] {{rint|rail}} - 5.5 ಕಿಮೀ, <br>[[ಕೊಲ್ಲಂ KSWTD ಫೆರ್ರಿ ಟರ್ಮಿನಲ್|ಫೆರ್ರಿ ಟರ್ಮಿನಲ್]] {{rint|ferry}} - 4.2 ಕಿಮೀ
| embedded = {{succession links|left=[[ಕೊಲ್ಲಂ ಬೀಚ್]]|right=[[ಅಝೀಕಲ್ ಬೀಚ್]]}}
}}
'''ತಿರುಮುಲ್ಲವಾರಂ ಬೀಚ್''' ([[ಮಲಯಾಳಂ]]: തിരുമുല്ലവാരം ബീച്ച്), [[ಕೊಲ್ಲಂ]] ನಗರದ ಜನಪ್ರಿಯ ಸಮುದ್ರ ತೀರಗಳಲ್ಲಿ ಒಂದಾಗಿದೆ ಮತ್ತು [[ಕೇರಳ]] ರಾಜ್ಯದ ಪ್ರವಾಸಿ ತಾಣವಾಗಿದೆ.<ref>{{Cite web |url=http://www.swadeshnews.com/lifestyle/gods-own-country-kerala |title=ದೇವರ ಸ್ವಂತ ನಾಡು : ಕೇರಳ |access-date=2026-08-02 |archive-date=2014-10-14 |archive-url=https://web.archive.org/web/20141014225537/http://www.swadeshnews.com/lifestyle/gods-own-country-kerala |url-status=dead }}</ref> ಈ ಸಮುದ್ರ ತೀರವು [[ಕೊಲ್ಲಂ]] ನಗರದ ಪ್ರಮುಖ ನೆರೆಹೊರೆಯಾದ [[ತಿರುಮುಲ್ಲವಾರಂ]]ನಲ್ಲಿದೆ. ಕಾರ್ಕಿಡಕ ವಾವುಬಲಿ ಆಚರಣೆಗಳಿಗೆ ಈ ಸಮುದ್ರ ತೀರವು ಬಹಳ ಪ್ರಸಿದ್ಧವಾಗಿದೆ.<ref>[http://www.thehindu.com/todays-paper/tp-national/tp-kerala/thirumullavaram-readying-for-vavubali/article3644487.ece ವಾವುಬಲಿಗಾಗಿ ತಿರುಮುಲ್ಲವಾರಂ ಸಿದ್ಧವಾಗುತ್ತಿದೆ]</ref> ಪ್ರತಿವರ್ಷ ಸಾವಿರಾರು ಭಕ್ತರು ವಾವುಬಲಿ ತರ್ಪಣವನ್ನು ನಡೆಸಲು ಸಮುದ್ರ ತೀರಕ್ಕೆ ಆಗಮಿಸುತ್ತಾರೆ. ಇದು ದಕ್ಷಿಣ ಭಾರತದಲ್ಲಿರುವ ಅತ್ಯಂತ ಆಕರ್ಷಕ ಸಮುದ್ರ ತೀರಗಳಲ್ಲಿ ಒಂದಾಗಿದೆ.
==ತಿರುಮುಲ್ಲವಾರಂ ಬೀಚ್ನ ಮಹತ್ವ==
ತಿರುಮುಲ್ಲವಾರಂ ಬೀಚ್ [[ಕೊಲ್ಲಂ]]ನಲ್ಲಿರುವ ('ವಿಶ್ವದ ಗೋಡಂಬಿ ರಾಜಧಾನಿ' ಎಂದು ಕರೆಯಲ್ಪಡುವ) ಎರಡು ಮುಖ್ಯ ಸಮುದ್ರ ತೀರಗಳಲ್ಲಿ ಒಂದಾಗಿದೆ.<ref>{{cite web|url=https://www.thehindu.com/news/national/kerala/kollams-cashew-crunch/article23701507.ece |title=ಕೊಲ್ಲಂನ ಗೋಡಂಬಿ ಸಮಸ್ಯೆ |publisher=ದ ಹಿಂದೂ |date=28 April 2018 |access-date=10 August 2018}}</ref> ಸಮುದ್ರ ತೀರದ ಪ್ರದೇಶವು ತೆಂಗಿನ ಮರಗಳಿಂದ ತುಂಬಿದ್ದು, ಈ ಸ್ಥಳವನ್ನು ನೆರಳಿನ ಮತ್ತು ಶಾಂತವಾದ ಸ್ಥಳವನ್ನಾಗಿ ಮಾಡುತ್ತದೆ.{{fact|date=ಜೂನ್ 2018}} ಈ ಸಮುದ್ರ ತೀರವು ಬೆಳಿಗ್ಗೆ ನಡಿಗೆಗೆ ಸೂಕ್ತವಾಗಿದೆ.<ref>[http://www.thehindu.com/todays-paper/tp-national/tp-kerala/thirumullavaram-readying-for-vavubali/article3644487.ece ವಾವುಬಲಿಗಾಗಿ ತಿರುಮುಲ್ಲವಾರಂ ಸಿದ್ಧವಾಗುತ್ತಿದೆ]</ref> ಈ ಸಮುದ್ರ ತೀರವು ಈಜಲು ಮತ್ತು ಸೂರ್ಯಸ್ನಾನಕ್ಕೆ ಸೂಕ್ತವಾಗಿದೆ ಮತ್ತು ಯಾವುದೇ ಅಪಾಯಕಾರಿ ವಲಯಗಳನ್ನು ಗುರುತಿಸಲಾಗಿಲ್ಲ. ಈ ಸಮುದ್ರ ತೀರವು ರಾಜ್ಯದ ಸುತ್ತಲಿನ ಎಲ್ಲಾ ಪ್ರಮುಖ ರಸ್ತೆಗಳೊಂದಿಗೆ ಸಂಪರ್ಕ ಹೊಂದಿದೆ ಮತ್ತು ಸ್ಥಳವನ್ನು ತಲುಪಲು ಸುಲಭವಾಗಿ ಪ್ರವೇಶಿಸಬಹುದು.<ref>[http://www.rainbowskill.com/medium/the-most-beautiful-thirumullavaram-beach-in-kerala.php ಕೇರಳದಲ್ಲಿ ಅತ್ಯಂತ ಸುಂದರವಾದ ತಿರುಮುಲ್ಲವಾರಂ ಬೀಚ್]</ref> ತೆಂಗು ಮತ್ತು ಏಲಕ್ಕಿ, ಕರಿಮೆಣಸು, ಲವಂಗ, ದಾಲ್ಚಿನ್ನಿ ಮತ್ತು ಶುಂಠಿಯಂತಹ ಮಸಾಲೆಗಳಿಂದ ಹೆಚ್ಚಾಗಿ ಸುವಾಸನೆಯುಳ್ಳ ಸ್ಥಳೀಯ ಪಾಕಪದ್ಧತಿಯ ರುಚಿಯೂ ಉತ್ತಮ ಸಂಖ್ಯೆಯ ಸಂದರ್ಶಕರನ್ನು ಆಕರ್ಷಿಸುತ್ತದೆ. '''ಞರಳ್ಚ ಪಾರ''' ಎಂದು ಕರೆಯಲ್ಪಡುವ ಒಂದು ಜಲ ದಿಬ್ಬವು ಇಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೆಯಾಗಿದೆ. ಕಡಿಮೆ ಉಬ್ಬರವಿಳಿತದ ಸಮಯದಲ್ಲಿ, ಈ ದಿಬ್ಬವನ್ನು ಸಮುದ್ರದೊಳಗೆ ಸುಮಾರು ಒಂದೂವರೆ ಕಿಲೋಮೀಟರ್ ದೂರದಿಂದ ದಡದಿಂದ ಸ್ಪಷ್ಟವಾಗಿ ಕಾಣಬಹುದು. ಭಾರತದ [[ಕೇಂದ್ರ ಸಮುದ್ರ ಮತ್ಸ್ಯ ಸಂಶೋಧನಾ ಸಂಸ್ಥೆ|ಕೇಂದ್ರ ಸಮುದ್ರ ಮತ್ಸ್ಯ ಸಂಶೋಧನಾ ಸಂಸ್ಥೆ(CMRFRI)]] 2018 ರ ಅಧ್ಯಯನ ವರದಿಯ ಪ್ರಕಾರ, ತಿರುಮುಲ್ಲವಾರಂ ಬೀಚ್ ಭಾರತದ 16 ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟ ಸಮುದ್ರ ತೀರಗಳಲ್ಲಿ ಒಂದಾಗಿದೆ, ಇದು [[ಕೇರಳ]] ರಾಜ್ಯದ ಮೊದಲ ಸ್ಥಾನವಾಗಿದೆ.<ref>{{cite web|url=https://travel.manoramaonline.com/travel/travel-news/2018/08/14/kerala-has-sisteen-of-indias-best-beaches.html| title=ಕೇರಳವು ಭಾರತದ 16 ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟ ಸಮುದ್ರ ತೀರಗಳನ್ನು ಹೊಂದಿದೆ |publisher=ಓನ್ ಮನೋರಮ |date=15 August 2018 |access-date=16 August 2018}}</ref>
==ಸ್ಥಳ==
ಈ ಸಮುದ್ರ ತೀರವು [[ಕೊಲ್ಲಂ]] ನಗರದ ಹೃದಯಭಾಗದಿಂದ 6 ಕಿಮೀ ದೂರದಲ್ಲಿದೆ. ಇದು ಪಿಕ್ನಿಕ್ ಕೇಂದ್ರವಾಗಿದ್ದು, ನಗರಕ್ಕೆ ಆಗಾಗ್ಗೆ ಬಸ್ ಸಂಪರ್ಕವನ್ನು ಹೊಂದಿದೆ.<ref>{{Cite web |url=http://www.keralatourslane.ezeetips.com/kerala-beaches/thirumullavaram-beach.html |title=ತಿರುಮುಲ್ಲವಾರಂ ಬೀಚ್ - ಕೇರಳ ಪ್ರವಾಸಗಳು |access-date=2026-08-02 |archive-date=2014-10-17 |archive-url=https://web.archive.org/web/20141017090326/http://www.keralatourslane.ezeetips.com/kerala-beaches/thirumullavaram-beach.html |url-status=dead }}</ref> ಕೊಲ್ಲಂ KSRTC ಬಸ್ ನಿಲ್ದಾಣವು ಇಲ್ಲಿಂದ 5 ಕಿಮೀ ದೂರದಲ್ಲಿದೆ. ಹತ್ತಿರದ ರೈಲ್ವೆ ನಿಲ್ದಾಣವು [[ಕೊಲ್ಲಂ ಜಂಕ್ಷನ್ ರೈಲ್ವೆ ನಿಲ್ದಾಣ]]ವಾಗಿದ್ದು, ಇದು 7 ಕಿಮೀ ದೂರದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣವು [[ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ]]ವಾಗಿದ್ದು, ಇದು 80 ಕಿಮೀ ದೂರದಲ್ಲಿದೆ.
===ಪ್ರಮುಖ ರಸ್ತೆ ಗಮ್ಯಸ್ಥಾನಗಳು===
# [[ಥಂಗಸ್ಸೇರಿ]] - {{nowrap|3 ಕಿಮೀ}}
# [[ಕೊಲ್ಲಂ]] [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|KSRTC]] ಬಸ್ ನಿಲ್ದಾಣ - {{nowrap|5 ಕಿಮೀ}}
# [[ಕೊಲ್ಲಂ ಬೀಚ್]] - {{nowrap|6 ಕಿಮೀ}}
# [[ಚಿನ್ನಕಡ]] - {{nowrap|6 ಕಿಮೀ}}
# [[ಕೊಲ್ಲಂ ಜಂಕ್ಷನ್ ರೈಲ್ವೆ ನಿಲ್ದಾಣ]] - {{nowrap|7 ಕಿಮೀ}}
# [[ಕರುನಾಗಪಲ್ಲಿ]] - {{nowrap|22 ಕಿಮೀ}}
# [[ಪರವೂರು, ಕೊಲ್ಲಂ|ಪರವೂರು]] - {{nowrap|29 ಕಿಮೀ}}
# [[ಪರವೂರು ರೈಲ್ವೆ ನಿಲ್ದಾಣ]] - {{nowrap|29 ಕಿಮೀ}}
# [[ಥೆಕ್ಕುಂಭಗಂ|ಥೆಕ್ಕುಂಭಗಂ ಬೀಚ್]] - {{nowrap|33 ಕಿಮೀ}}
{{wide image|Thirumullavaram Panorama Sep 2015.jpg|1950px|ಸೆಪ್ಟೆಂಬರ್ 2015 ರಲ್ಲಿ ತಿರುಮುಲ್ಲವಾರಂ ಬೀಚ್ನ ಪನೋರಮಾ}}
==ಉಲ್ಲೇಖಗಳು==
{{Reflist}}
==ಬಾಹ್ಯ ಕೊಂಡಿಗಳು==
{{commons category|Thirumullavarum}}
{{Tourism in Kerala}}
[[ವರ್ಗ:ಕೊಲ್ಲಂನ ಸಮುದ್ರ ತೀರಗಳು]]
[[ವರ್ಗ:ಕೊಲ್ಲಂ ಜಿಲ್ಲೆಯ ಪ್ರವಾಸಿ ಆಕರ್ಷಣೆಗಳು]]
6k1w0lta2mv9vvzq1jaiq6q7jq29hmu
ಅಚನ್ಕೋವಿಲ್ ನದಿ
0
179991
1378151
2026-08-02T15:50:25Z
A826
72368
ಹೊಸ ಪುಟ: {{Infobox river | name = ಅಚನ್ಕೋವಿಲ್ ನದಿ | native_name = {{native name|ml|അച്ചന്കോവിലാറ്}} | other_name = ಅಚನ್ಕೋವಿಲ್ ಆರ್ | etymology = | image = Achankovil river.jpg | image_size = 320px | image_caption = | image_alt = | map = | map_size = | map_caption = | map_alt = | subdivision_type1 = ದ...
1378151
wikitext
text/x-wiki
{{Infobox river
| name = ಅಚನ್ಕೋವಿಲ್ ನದಿ
| native_name = {{native name|ml|അച്ചന്കോവിലാറ്}}
| other_name = ಅಚನ್ಕೋವಿಲ್ ಆರ್
| etymology =
| image = Achankovil river.jpg
| image_size = 320px
| image_caption =
| image_alt =
| map =
| map_size =
| map_caption =
| map_alt =
| subdivision_type1 = [[ದೇಶ]]
| subdivision_name1 = [[ಭಾರತ]]
| subdivision_type2 = [[ಭಾರತದ ರಾಜ್ಯ|ರಾಜ್ಯ]]
| subdivision_name2 = [[ಕೇರಳ]]
| subdivision_type3 = [[ಜಿಲ್ಲೆಗಳು]]
| subdivision_name3 = [[ಕೊಲ್ಲಂ]], [[ಪತ್ತನಂತಿಟ್ಟ]], [[ಆಲಪ್ಪುಝಾ]]
| subdivision_type4 = [[ನಗರಗಳು]]
| subdivision_name4 = [[ಕೊನ್ನಿ, ಪತ್ತನಂತಿಟ್ಟ]], [[ಪಂಡಾಲಂ]], [[ಮಾವೆಲಿಕ್ಕರ]],
| subdivision_type5 =
| subdivision_name5 =
<!---------------------- BASIN -->
| source1_location = [[ಪಶುಕಿಡಮೆಟ್ಟು ನದಿ|ಪಶುಕಿಡಮೆಟ್ಟು]], [[ರಿಶಿಮಲಾ ನದಿ|ರಿಶಿಮಲೈ]] ಮತ್ತು [[ಪಶ್ಚಿಮ ಘಟ್ಟಗಳ]] ದೇವರ್ಮಲೈಯಿಂದ ಹುಟ್ಟುವ ರಾಮಕ್ಕಲ್ಟೇರಿ ನದಿಗಳು
| source1_coordinates =
| source1_elevation = {{cvt|700|m|ft}}
| mouth_location = [[ವೀಯಪುರಂ]]
| mouth_coordinates = {{coord|9|19|0|N|76|28|0|E|display=inline,title}}
| mouth_elevation =
| altitude_difference =
| progression =
| river_system =
| basin_size = {{Convert|1484|km2|mi2|abbr=on}}
| basin_landmarks = [[ಥಝೂರ್ ಭಗವತಿ ಕ್ಷೇತ್ರಂ]], ತ್ರಿಪ್ಪರ ಶಿವ ದೇವಾಲಯ, ವಲಂಚುಳ್ಳಿ ದೇವಿ ಕ್ಷೇತ್ರಂ, ಪಂಡಾಲಂ ವಲಿಯಕೊಯಿಕಲ್ ಶಾಸ್ತಾ ದೇವಾಲಯ, ಪಂಡಾಲಂ ಅರಮನೆ, (ಮಟ್ಟೋಮ್ ಮಹಾದೇವ ದೇವಾಲಯ), ಪಂಡಾಲಂ ಮಹಾದೇವ ದೇವಾಲಯ, ಕಂಡಿಯೂರ್ ಮಹಾದೇವ ದೇವಾಲಯ, [[ಚೆಟ್ಟಿಕುಲಂಗರ ದೇವಿ ದೇವಾಲಯ]], [[ವೆನ್ಮಣಿ]] ಸರ್ಗಕಾವು ದೇವಾಲಯ, ಕೊನ್ನಿ ಮುರಿಂಗ ಮಂಗಲಂ ಮಹಾದೇವ ದೇವಾಲಯ
| basin_population =
<!---------------------- PHYSICAL CHARACTERISTICS -->
| length = {{Convert|128|km|mi|abbr=on}}
| width_min =
| width_avg =
| width_max =
| depth_min =
| depth_avg =
| depth_max =
| discharge1_location =
| discharge1_min =
| discharge1_avg =
| discharge1_max =
<!---------------------- FEATURES -->
| tributaries_left =
| tributaries_right =
| waterbodies =
| waterfalls =
| bridges = ಕೈಪಟ್ಟೂರ್ ಸೇತುವೆ, ಪಂಡಾಲಂ ಸೇತುವೆ, ವೆಟ್ಟಿಯಾರ್ ಸೇತುವೆ, ಪರಕ್ಕಡವು ಸೇತುವೆ, ಪುಳಕಡವು ಸೇತುವೆ, ಚಾಮಕ್ಕಾವು ಪಾದಚಾರಿ ಸೇತುವೆ, ಕೊಲ್ಲಕಡು ಸೇತುವೆ, ವಲಿಯಪೆರುಂಪುಳ ಸೇತುವೆ, ಪ್ರಯಿಕ್ಕರ ಸೇತುವೆ, ಪೊಟ್ಟಮೆಲ್ಕಡವು ಸೇತುವೆ, ಕೊನ್ನಿ ಸೇತುವೆ
| ports =
| custom_label =
| custom_data =
| extra =
| mouth = [[ಪಂಬಾ ನದಿ|ಪಂಬಾ]]
| pushpin_map = India Kerala#India
| pushpin_relief = 1
| pushpin_caption = ಕೇರಳದಲ್ಲಿ ಸಂಗಮಸ್ಥಾನದ ಸ್ಥಳ
}}
'''ಅಚನ್ಕೋವಿಲ್''' [[ಕೇರಳ]], ಭಾರತದಲ್ಲಿ ಪಶ್ಚಿಮಕ್ಕೆ ಹರಿಯುವ {{Convert|128|km|abbr=on}} ಉದ್ದದ ನದಿಯಾಗಿದೆ. ಇದು [[ಕೊಲ್ಲಂ ಜಿಲ್ಲೆ|ಕೊಲ್ಲಂ]], [[ಪತ್ತನಂತಿಟ್ಟ ಜಿಲ್ಲೆ|ಪತ್ತನಂತಿಟ್ಟ]] ಮತ್ತು [[ಆಲಪ್ಪುಝಾ ಜಿಲ್ಲೆ|ಆಲಪ್ಪುಝಾ]] [[ಕೇರಳದ ಜಿಲ್ಲೆಗಳ ಪಟ್ಟಿ|ಜಿಲ್ಲೆಗಳ]] ಮೂಲಕ ಹರಿಯುತ್ತದೆ. ಈ ನದಿಯು [[ಆಲಪ್ಪುಝಾ]] ಮತ್ತು [[ಪತ್ತನಂತಿಟ್ಟ]] ಜಿಲ್ಲೆಗಳಲ್ಲಿನ [[ಮೇಲಿನ ಕುಟ್ಟನಾಡು]]ನ ಫಲವತ್ತಾದ ವ್ಯಾಪಕವಾದ ಬಯಲು ಪ್ರದೇಶವನ್ನು ಒಳಚರಂಡಿ ಮಾಡುತ್ತದೆ. ಇದು ತನ್ನ ಹಾದಿಯಲ್ಲಿನ [[ಕೊನ್ನಿ, ಕೇರಳ|ಕೊನ್ನಿ]], [[ಪತ್ತನಂತಿಟ್ಟ]], [[ಪಂಡಾಲಂ]] ಮತ್ತು [[ಮಾವೆಲಿಕ್ಕರ]]ದಂತಹ ಹಲವಾರು [[ನಗರ ವಸಾಹತು]]ಗಳನ್ನು ಪೋಷಿಸುತ್ತದೆ.<ref>{{Cite news|last=ಕುಟ್ಟೂರ್|first=ರಾಧಾಕೃಷ್ಣನ್|date=2014-08-04|title=ಮೇಲಿನ ಕುಟ್ಟನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಭೀಕರ|language=en-IN|work=ದ ಹಿಂದೂ|url=https://www.thehindu.com/news/national/kerala/flood-situation-grim-in-upper-kuttanad/article6279499.ece|access-date=2021-10-24|issn=0971-751X}}</ref>
== ಹಾದಿ ==
ಈ ನದಿಯು ಕೊನ್ನಿ ಮೀಸಲು ಅರಣ್ಯದಲ್ಲಿರುವ [[ಪಶ್ಚಿಮ ಘಟ್ಟಗಳ]] ದೇವರ್ ಮಲೈ ಶಿಖರದಲ್ಲಿ ಉಗಮಿಸುತ್ತದೆ. [[ರಿಶಿಮಲಾ ನದಿ|ರಿಶಿಮಲಾ]], [[ಪಶುಕಿಡಮೆಟ್ಟು ನದಿ|ಪಶುಕಿಡಮೆಟ್ಟು]] ಮತ್ತು [[ರಾಮಕ್ಕಲ್ಟೇರಿ ನದಿ|ರಾಮಕ್ಕಲ್ಥೇರಿ]] ನದಿಗಳು ಅಚನ್ಕೋವಿಲ್ ನದಿಯ ಪ್ರಮುಖ ಉಪನದಿಗಳಾಗಿವೆ.<ref>{{Cite web|title=ಅಚೆನ್ಕೋಯಿಲ್|url=http://www.kerenvis.nic.in/Database/Achencoil_1846.aspx|access-date=2021-05-19|website=www.kerenvis.nic.in}}</ref> ಇದು ತನ್ನ ಉಗಮಸ್ಥಾನದಿಂದ [[ನೈಋತ್ಯ]] ದಿಕ್ಕಿನಲ್ಲಿ ಹರಿಯುತ್ತದೆ ಮತ್ತು ಅಚನ್ಕೋವಿಲ್ ಗ್ರಾಮದ ಬಳಿ [[ಕೊಲ್ಲಂ ಜಿಲ್ಲೆ]]ಗೆ ಪ್ರವೇಶಿಸುತ್ತದೆ. ನಂತರ ನದಿಯು ತನ್ನ ಹಾದಿಯನ್ನು [[ವಾಯುವ್ಯ]] ದಿಕ್ಕಿನತ್ತ ಬದಲಾಯಿಸುತ್ತದೆ ಮತ್ತು [[ಕೊಲ್ಲಂ ಜಿಲ್ಲೆ]]ಯ ಮೂಲಕ ಸುಮಾರು 20 ಕಿಮೀ ಹರಿದು [[ಕಲ್ಲೇಲಿ]] ಬಳಿ [[ಪತ್ತನಂತಿಟ್ಟ ಜಿಲ್ಲೆ|ಪತ್ತನಂತಿಟ್ಟ]] ಜಿಲ್ಲೆಗೆ ಮರು-ಪ್ರವೇಶಿಸುತ್ತದೆ.
ನಂತರ ಅದು [[ಕೊನ್ನಿ, ಕೇರಳ|ಕೊನ್ನಿ]], [[ಕುಂಬಾಝಾ]], [[ಮೈಲಾಪ್ರ]], [[ಕೊನ್ನಿಥಾಝಂ]], [[ವೆಟ್ಟೂರ್]], [[ಪತ್ತನಂತಿಟ್ಟ]], [[ಪ್ರಮಾಡೋಂ|ಪ್ರಮಾದಂ]], [[ವಲ್ಲಿಕೋಡ್|ವಲ್ಲಿಕೋಡ್]]ನ ಬೆಟ್ಟದ ಪಟ್ಟಣಗಳ ಮೂಲಕ ಹರಿಯುತ್ತದೆ ಮತ್ತು [[ಮೇಲಿನ ಕುಟ್ಟನಾಡ್]]ಗೆ ಪ್ರವೇಶಿಸುತ್ತದೆ. ನಂತರ ನದಿಯು [[ಕೈಪಟ್ಟೂರ್]], [[ನರಿಯಾಪುರಂ]], [[ತುಂಬಮೋನ್|ತುಂಬಮೋನ್]], [[ವೆನ್ಮೋನಿ]], [[ಕುಲನಾಡ]], [[ಪಂಡಾಲಂ]], [[ಎಡಪ್ಪೋನ್]] ([[ನೂರನಾಡ್]]), [[ವೆಟ್ಟಿಯಾರ್]], [[ಕೊಲ್ಲಕಡವು|ಕೊಲ್ಲಕ್ಕಡವು]] ಮತ್ತು [[ಚೆರಿಯನಾಡ್]] ಪಟ್ಟಣಗಳ ಮೂಲಕ ಹಾದುಹೋಗುತ್ತದೆ. [[ಮಾವೆಲಿಕ್ಕರ]]ವನ್ನು ತಲುಪಿದ ನಂತರ, ನದಿಯು ಉತ್ತರ ದಿಕ್ಕಿನತ್ತ ತೀಕ್ಷ್ಣ ತಿರುವು ತೆಗೆದುಕೊಳ್ಳುತ್ತದೆ ಮತ್ತು [[ಚೆನ್ನಿಥಲಾ]], [[ಪಲ್ಲಿಪ್ಪಾಡ್]], [[ಪೈಪ್ಪಾಡ್]] ಪಟ್ಟಣಗಳ ಮೂಲಕ ಹರಿದು ಅಂತಿಮವಾಗಿ [[ವೀಯಪುರಂ]]ನಲ್ಲಿ [[ಪಂಬಾ ನದಿ|ಪಂಬಾ]] ನದಿಯನ್ನು ಸೇರುತ್ತದೆ. [[ಪಂಬಾ ನದಿ|ಪಂಬಾ]] ನದಿಯು ಅಚನ್ಕೋವಿಲ್ ಮತ್ತು [[ಮಣಿಮಲಾ ನದಿ|ಮಣಿಮಲಾ]] ನದಿಗಳ ಜೊತೆಗೆ, ನಂತರ ಎರಡು ಕವಲುಗಳಾಗಿ ಒಡೆಯುತ್ತದೆ, ಒಂದು [[ಅರೇಬಿಯನ್ ಸಮುದ್ರ]]ಕ್ಕೆ [[ಥೊಟ್ಟಪಲ್ಲಿ|ಥೊಟ್ಟಪಲ್ಲಿ]]ಯಲ್ಲಿ ಮತ್ತು ಇನ್ನೊಂದು [[ಕೈನಕರಿ]]ಯಲ್ಲಿ [[ವೆಂಬನಾಡ್]] ಸರೋವರಕ್ಕೆ ಹರಿಯುತ್ತದೆ.<ref>{{Cite web|last=ಭಾಸ್ಕರ್|first=ಸಾಜು|title=ಎಣ್ಣೂರು ಮಹಿಳೆಯರು ಒಂದು ನದಿಯ ಜೀವವನ್ನು ಮರಳಿ ಪಡೆದ ಕಥೆ|url=https://www.mathrubhumi.com/environment/clean-earth/kuttamperoor-river-rejuvenation-1.1925575|access-date=2021-05-19|website=ಮಾತೃಭೂಮಿ|language=ml|archive-date=19 May 2021|archive-url=https://web.archive.org/web/20210519191306/https://www.mathrubhumi.com/environment/clean-earth/kuttamperoor-river-rejuvenation-1.1925575|url-status=dead}}</ref>
[[ಪತ್ತನಂತಿಟ್ಟ]] ಪಟ್ಟಣವು, ಇದು ಪತ್ತನಂತಿಟ್ಟ ಜಿಲ್ಲೆಯ ಆಡಳಿತ ರಾಜಧಾನಿಯಾಗಿದೆ, ಇದು ನದಿಯ ದಂಡೆಯಲ್ಲಿದೆ. ಈ ಪಟ್ಟಣವು ನದಿಯೊಂದಿಗಿನ ತನ್ನ ಸಂಬಂಧದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ; ''ಪತ್ತನಂತಿಟ್ಟ'', [[ಮಲಯಾಳಂ]] ಪದಗಳಾದ ''{{Transliteration|ml|pathanam}}-ಪತ್ತನಂ'' ಮತ್ತು ''{{Transliteration|ml|thitta}}-ತಿಟ್ಟ'' ಅಂದರೆ "ನದಿಯ ದಡದಲ್ಲಿನ ಮನೆಗಳು" ಎಂದರ್ಥ.
== ಅಚೆನ್ಕೋವಿಲ್ ಗ್ರಾಮ ಮತ್ತು ಮೀಸಲು ಅರಣ್ಯ ಪ್ರದೇಶ ==
ಈ ನದಿಯ [[ನೀರಿನ ಸಂಗ್ರಹ ಪ್ರದೇಶ|ಸಂಗ್ರಹ ಪ್ರದೇಶ]]ವಾಗಿರುವ ಅರಣ್ಯ ಪ್ರದೇಶವನ್ನು ಅಚೆನ್ಕೋವಿಲ್ ಮೀಸಲು ಅರಣ್ಯ ಎಂದೂ ಕರೆಯಲಾಗುತ್ತದೆ. ಇದು [[ಅಗಸ್ತ್ಯಮಲೈ ಜೀವಗೋಳ ಮೀಸಲು ಪ್ರದೇಶ]]ದ ಭಾಗವಾಗಿದೆ.<ref>{{Cite journal|last=ಮ್ಯಾಥ್ಯೂ|first=ಜೋಸ್|date=2013-12-01|title=ಅಗಸ್ತ್ಯಮಲೈ ಜೀವಗೋಳ ಮೀಸಲು ಪ್ರದೇಶ, ಪಶ್ಚಿಮ ಘಟ್ಟಗಳು, ಕೇರಳದಲ್ಲಿ ಅಚನ್ಕೋವಿಲ್ ಶಿಯರ್ ವಲಯದ ಸ್ಥಳೀಯ ಹೂಬಿಡುವ ಸಸ್ಯಗಳ ಮಾರ್ಫೋ-ಇಕೋಟೈಪ್ಗಳು|url=https://www.researchgate.net/publication/280569439|journal=ಅನ್ನಲ್ಸ್ ಆಫ್ ಪ್ಲಾಂಟ್ ಸೈನ್ಸಸ್|volume=2|pages=514–519}}</ref>
ನದಿಯ ಮೇಲ್ಭಾಗದ ಪ್ರದೇಶದಲ್ಲಿರುವ ಒಂದು ಸಣ್ಣ ಗ್ರಾಮವನ್ನು ಅಚೆನ್ಕೋವಿಲ್ ಗ್ರಾಮ ಎಂದು ಕರೆಯಲಾಗುತ್ತದೆ. ಅಚೆನ್ಕೋವಿಲ್ ಗ್ರಾಮವು [[ಶಬರಿಮಲೆ]]ಯ ದಂತಕಥೆಯೊಂದಿಗೆ ಸಂಬಂಧಿಸಿರುವ ಪ್ರಮುಖ [[ಯಾತ್ರಾ]] ಕೇಂದ್ರವಾಗಿದೆ ಮತ್ತು ಇದು [[ಕೊಲ್ಲಂ ಜಿಲ್ಲೆ]] ಮತ್ತು [[ತೆಂಕಾಸಿ ಜಿಲ್ಲೆ]]ಗಳ ನಡುವಿನ ಪ್ರಮುಖ ಅಂತರರಾಜ್ಯ ಗಡಿ ಬಿಂದುವಾಗಿದೆ.<ref>{{Cite web|date=2018-03-17|title=ಕಾಡಿನಲ್ಲಿ ನಡಿಗೆ!|url=https://www.deccanchronicle.com/lifestyle/travel/170318/walk-on-the-wild-side.html|access-date=2021-10-24|website=ಡೆಕ್ಕನ್ ಕ್ರಾನಿಕಲ್|language=en}}</ref>
== ಅಚನ್ಕೋವಿಲ್ ಶಾಸ್ತಾ ದೇವಾಲಯ ==
[[File:അച്ചൻകോവിൽ ശാസ്താക്ഷേത്രം.jpg|thumb|ಅಚನ್ಕೋವಿಲ್ ದೇವಾಲಯ]]
ಅಚನ್ಕೋವಿಲ್ ಶಾಸ್ತಾ ದೇವಾಲಯ, ಅಥವಾ ಧರ್ಮಶಾಸ್ತಾ ದೇವಾಲಯವು [[ಕೇರಳ]]ದಲ್ಲಿ [[ಅಯ್ಯಪ್ಪ]]ಗೆ ಸಮರ್ಪಿತವಾದ ಐದು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಲಾರ್ಡ್ ಅಯ್ಯಪ್ಪನು ಇಲ್ಲಿ [[ಗೃಹಸ್ಥ|ಗೃಹಸ್ಥ ಆಶ್ರಮ]] ಜೀವನವನ್ನು ನಡೆಸುತ್ತಾರೆ – ಅವರನ್ನು ಇಲ್ಲಿ ಕುಟುಂಬಸ್ಥ ಅಥವಾ ವಿವಾಹಿತ ಜೀವನವನ್ನು ನಡೆಸುವವನಾಗಿ ಚಿತ್ರಿಸಲಾಗಿದೆ. ಅವರನ್ನು ತಮ್ಮ ಇಬ್ಬರು ಪತ್ನಿಯರಾದ – ಪೂರ್ಣಾ ಮತ್ತು ಪುಷ್ಕಲಾ ಅವರೊಂದಿಗೆ ಚಿತ್ರಿಸಲಾಗಿದೆ. ಇಲ್ಲಿನ [[ವಿಗ್ರಹ]]ವನ್ನು [[ಪರಶುರಾಮ]] ಸ್ಥಾಪಿಸಿದನೆಂದು ನಂಬಲಾಗಿದೆ.<ref>{{Cite news|date=2021-02-14|title=ಅರಣ್ಯ ರಸ್ತೆಯನ್ನು ಸಂಚಾರಕ್ಕೆ ತೆರೆಯಲಾಗುವುದು|language=en-IN|work=ದ ಹಿಂದೂ|url=https://www.thehindu.com/news/national/kerala/forest-road-to-be-opened-to-traffic/article33836597.ece|access-date=2021-10-24|issn=0971-751X}}</ref>
ಅಚನ್ಕೋವಿಲ್ ಶಾಸ್ತಾ ದೇವಾಲಯವು ವಿಷಕಾರಿ [[ಹಾವು]]ಗಳ ಕಡಿತವನ್ನು ಗುಣಪಡಿಸಲು ಪ್ರಸಿದ್ಧವಾಗಿದೆ. ಅಚನ್ಕೋವಿಲ್ ಶಾಸ್ತಾ ದೇವಾಲಯದಲ್ಲಿ ಅಯ್ಯಪ್ಪನ ವಿಗ್ರಹದ ಎಡಗೈಯು ಯಾವಾಗಲೂ 'ಚಂದನ' ([[ಚಂದನದ ತಿರುಳು|ಚಂದನದ ಲೇಪ]]) ಮತ್ತು ತೀರ್ಥ (ಪವಿತ್ರ ನೀರು)ವನ್ನು ಹಿಡಿದಿರುತ್ತದೆ.<ref>{{Cite web|date=ಸೆಪ್ಟೆಂಬರ್ 13, 2014|title=ಈ ಕೊಲ್ಲಂ ದೇವಾಲಯವು ಹಾವಿನ ಕಡಿತಕ್ಕೆ ವಿಶಿಷ್ಟ ಪರಿಹಾರವನ್ನು ನೀಡುತ್ತದೆ|url=https://timesofindia.indiatimes.com/city/thiruvananthapuram/this-kollam-temple-offers-unique-cure-for-snakebites/articleshow/42393746.cms|access-date=2021-10-24|website=ದ ಟೈಮ್ಸ್ ಆಫ್ ಇಂಡಿಯಾ|language=en}}</ref> ಚಂದನ ಮತ್ತು ತೀರ್ಥವು ಹಾವಿನ ಕಡಿತವನ್ನು ಗುಣಪಡಿಸಲು ಔಷಧೀಯ ಗುಣಗಳನ್ನು ಹೊಂದಿವೆ ಎಂದು ಪರಿಗಣಿಸಲಾಗಿದೆ. ದೇವಾಲಯದ ಸಂಕೀರ್ಣವು ಅಯ್ಯಪ್ಪನ ದಂತಕಥೆಗೆ ಸಂಬಂಧಿಸಿದ ಇತರ ದೇವತೆಗಳನ್ನೂ ಒಳಗೊಂಡಿದೆ. ಇಲ್ಲಿ ನಡೆಯುವ ಹಬ್ಬಗಳು ಮತ್ತು ಆಚರಣೆಗಳು ಬಲವಾದ [[ತಮಿಳರು|ತಮಿಳು]] ಬೇರುಗಳನ್ನು ಹೊಂದಿವೆ.
[[ಶಬರಿಮಲೆ]] ಯಾತ್ರೆಯ ಸಮಯದಲ್ಲಿ, ಭಕ್ತರು ತಮ್ಮ ಪ್ರಾರ್ಥನೆಗಳನ್ನು ಅರ್ಪಿಸಲು ಈ ದೇವಾಲಯಕ್ಕೂ ಭೇಟಿ ನೀಡುತ್ತಾರೆ. ಈ ದೇವಾಲಯದ ವಿಗ್ರಹವನ್ನು ಋಷಿ ಪರಶುರಾಮರು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ವಿಗ್ರಹದ ಎರಡೂ ಬದಿಗಳಲ್ಲಿ, ಲಾರ್ಡ್ ಶಾಸ್ತಾರ ಪತ್ನಿಯರಾದ ಪೂರ್ಣಾ ಮತ್ತು ಪುಷ್ಕಲಾ ಅವರನ್ನೂ ಸ್ಥಾಪಿಸಲಾಗಿದೆ. ಇಲ್ಲಿನ ಅತ್ಯಂತ ಪ್ರಮುಖ ಹಬ್ಬವನ್ನು ಮಲಯಾಳಂ ತಿಂಗಳ ಧನು (ಡಿಸೆಂಬರ್ – ಜನವರಿ) ಮೊದಲನೆಯಿಂದ ಹತ್ತನೇ ದಿನದವರೆಗೆ ಆಚರಿಸಲಾಗುತ್ತದೆ.
== ಅಚೆನ್ಕೋವಿಲ್ ಶಿಯರ್ ವಲಯ ==
[[ಭೂವಿಜ್ಞಾನ]]ದಲ್ಲಿ ಇದು [[ಪ್ರೋಟೆರೊಜೋಯಿಕ್]] ಯುಗದ ಪ್ರಮುಖ ಹೊರಪದರದ ಅಸಾತತ್ಯವಾಗಿದ್ದು, ಇದು ದಕ್ಷಿಣದಲ್ಲಿರುವ ಕೇರಳ ಖೊಂಡಲೈಟ್ ಪಟ್ಟಿಯನ್ನು (KKB) (ತಿರುವನಂತಪುರಂ ಬ್ಲಾಕ್) ಉತ್ತರದಲ್ಲಿರುವ [[ಚಾರ್ನೊಕೈಟ್]] ಸಮೂಹದಿಂದ (ಮಧುರೈ ಬ್ಲಾಕ್) ಪ್ರತ್ಯೇಕಿಸುತ್ತದೆ.<ref>{{Cite web|title=ಚಿತ್ರ. 1. ದಕ್ಷಿಣ ಭಾರತದ ಭೂವಿಜ್ಞಾನ (ಸಂತೋಷ್ ಮತ್ತು ಸಜೀವ್, 2006; ಸಂತೋಷ್ ಮತ್ತು ಇತರರು, 2009 ರ ನಂತರ ಮಾರ್ಪಡಿಸಲಾಗಿದೆ)|url=https://www.researchgate.net/figure/Geology-of-south-India-modi-ed-after-Santosh-and-Sajeev-2006-Santosh-et-al-2009_fig1_280826493|access-date=2021-10-24|website=ResearchGate|language=en}}</ref> ಅಚನ್ಕೋವಿಲ್ ನದಿಯು ಈ ರಚನಾತ್ಮಕ ಕಣಿವೆಯನ್ನು ಒಳಚರಂಡಿ ಮಾಡುತ್ತದೆ.<ref>{{Cite web|title=ಚಿತ್ರ 1. a, ಅಚನ್ಕೋವಿಲ್ ಶಿಯರ್ ವಲಯದ ಸ್ಥಳವನ್ನು ತೋರಿಸುವ ಸಾಮಾನ್ಯ ನಕ್ಷೆ...|url=https://www.researchgate.net/figure/a-A-general-map-showing-location-of-Achankovil-Shear-Zone-ASZ-b-Simplified-geology_fig1_282295892|access-date=2021-10-24|website=ResearchGate|language=en}}</ref> ಈ ಶಿಯರ್ ವಲಯವು [[ಭಾರತ]] ಮತ್ತು [[ಮಡಗಾಸ್ಕರ್]] ನಡುವಿನ ಭೂ ಸಂಪರ್ಕದ ಮುದ್ರೆಗಳನ್ನು ಹೊಂದಿರುವ ಪ್ರಮುಖ ಕೊಂಡಿಯಾಗಿದೆ ಎಂದು ವಾದಿಸುವ ಭೂವಿಜ್ಞಾನಿಗಳಿದ್ದಾರೆ, ಏಕೆಂದರೆ ಈ ಎರಡೂ ಭೂ ದ್ರವ್ಯರಾಶಿಗಳು [[ಗೊಂಡ್ವಾನಾ]] ಭೂಭಾಗದ ಭಾಗವಾಗಿದ್ದವು.<ref>{{Cite journal|last1=ಪ್ರಹರಾಜ್|first1=P.|last2=S|first2=R.|date=2018-12-01|title=ಅಚನ್ಕೋವಿಲ್ ಶಿಯರ್ ವಲಯ, ದಕ್ಷಿಣ ಭಾರತ: ಮಡಗಾಸ್ಕರ್ಗೆ ಅದರ ವಿಸ್ತರಣೆ|journal=AGU ಫಾಲ್ ಮೀಟಿಂಗ್ ಅಬ್ಸ್ಟ್ರಾಕ್ಟ್ಸ್|url=https://ui.adsabs.harvard.edu/abs/2018AGUFM.T33C0420P|volume=2018|pages=T33C–0420|bibcode=2018AGUFM.T33C0420P}}</ref>
== ಆಕರ್ಷಣೆಗಳು ==
ಈ ನದಿಯು ತನ್ನ ಹಾದಿಯಲ್ಲಿ ಹಲವಾರು ಪ್ರಾಚೀನ ದೇವಾಲಯಗಳನ್ನು ಹೊಂದಿದೆ ಎಂಬುದು ವಿಶೇಷವಾಗಿದೆ, ಇದು ನದಿ ಜಲಾನಯನ ಪ್ರದೇಶದ ಶ್ರೀಮಂತಿಕೆಯನ್ನು ಪ್ರಾಚೀನ ಕಾಲದಿಂದಲೂ ಮಾನವರು ಗುರುತಿಸಿದ್ದಾರೆ ಮತ್ತು ಅವರು ಫಲವತ್ತಾದ ಭೂಮಿಯಲ್ಲಿ ತಮ್ಮ ಬೆಳೆಗಳನ್ನು ಬೆಳೆಸಲು ಅಲ್ಲಿ ನೆಲೆಸಲು ಆದ್ಯತೆ ನೀಡಿದ್ದಾರೆ ಎಂದು ಸೂಚಿಸುತ್ತದೆ.
<gallery>
File:Achenkovil River Near Konni, December 2007.jpg|[[ಕೈಪಟ್ಟೂರ್]] ಬಳಿ ಅಚನ್ಕೋವಿಲ್ ನದಿ
File:Thazhoor View 1.jpg|ಅಚನ್ಕೋವಿಲ್ ನದಿಯ ದಂಡೆಯಲ್ಲಿರುವ [[ಥಝೂರ್ ಭಗವತಿ ಕ್ಷೇತ್ರಂ]] ದೇವಾಲಯ - ಥಝೂರ್ ಸೇತುವೆಯಿಂದ ನೋಟ
File:ThripparaTempleEntranceView 1.jpg|ಅಚನ್ಕೋವಿಲ್ ನದಿಯ ದಂಡೆಯಲ್ಲಿರುವ ತ್ರಿಪ್ಪರ ಶಿವ ಕ್ಷೇತ್ರಂಗೆ ಪ್ರವೇಶ
</gallery>
* [[ಪಂಡಾಲಂ]] ಪುರಸಭೆ, [[ನೂರನಾಡ್]] ಮತ್ತು ಪಾಲಮೇಲ್ ಪಂಚಾಯತ್ಗಳಲ್ಲಿ ಹರಡಿರುವ ಕರಿಂಗಲಿಚಲ್ ಜೌಗು ಪ್ರದೇಶಗಳು, ತಮ್ಮ ಸಸ್ಯ ಮತ್ತು ಪ್ರಾಣಿಗಳಿಗೆ ಪ್ರಸಿದ್ಧವಾದ ಸ್ಥಳವಾಗಿದ್ದು, ಇದು ಅಚನ್ಕೋವಿಲ್ ನದಿಯ ದಂಡೆಯಲ್ಲಿದೆ.<ref>{{Cite web|title=KLSO ಸುದ್ದಿ ನವೀಕರಣಗಳು 2015|url=https://www.wwfindia.org/?16461/KLSO-News-Updates-2015|access-date=2021-10-24|website=www.wwfindia.org|language=en}}</ref>
* ನದಿ ಜಲಾನಯನ ಪ್ರದೇಶವು [[ಮಧ್ಯಯುಗ]]ದಲ್ಲಿ ಸಕ್ರಿಯ [[ಬೌದ್ಧ]] ವಸಾಹತುಗಳನ್ನು ಹೊಂದಿತ್ತು. [[ವೆನ್ಮಣಿ]] ಬಳಿಯ ಪ್ರಸ್ತುತ ಚಾಮಕ್ಕಾವು ಶರ್ನ್ಗಕಾವು ದೇವಿ ದೇವಾಲಯವು ಹಿಂದೂ ದೇವಾಲಯವಾಗಿದ್ದು, ಇದು ಬೌದ್ಧ ಆರಾಧನಾ ಸ್ಥಳವಾಗಿತ್ತು, ಇದನ್ನು ಆರಂಭದಲ್ಲಿ ವಿಷ್ಣು ದೇವಾಲಯವಾಗಿ (ನಂತರ ಶರ್ನ್ಗ-ಕಾವು ಎಂದು ಕರೆಯಲಾಯಿತು) ಮತ್ತು ನಂತರ ದೇವಿ ದೇವಾಲಯವಾಗಿ ಪರಿವರ್ತಿಸಲಾಯಿತು. ವಾರ್ಷಿಕ ರಥೋತ್ಸವ ಮತ್ತು ಇತರ ಸಂಪ್ರದಾಯಗಳು ಕೇರಳದಲ್ಲಿ ಹಿಂದೂ ಧರ್ಮಕ್ಕೆ ಸಮೀಕರಿಸಲ್ಪಟ್ಟ "ಕೆಟ್ಟು ಕಾಝ್ಚ" ಎಂಬ ಹಳೆಯ ಬೌದ್ಧ ಆಚರಣೆಗಳಿಗೆ ಸಂಬಂಧಿಸಿವೆ. [[ಮಾವೆಲಿಕ್ಕರ]] ಬಳಿ ಕಂಡುಬರುವ [[ಕರುಮಾಡಿಕುಟ್ಟನ್]] ಪ್ರತಿಮೆ ಮತ್ತು [[ಬುದ್ಧ|ಬೌದ್ಧ]] ಅವಶೇಷಗಳು ಇದನ್ನು ಮತ್ತಷ್ಟು ಎತ್ತಿ ತೋರಿಸುತ್ತವೆ.<ref>{{Cite web|title=ಮಾವೆಲಿಕ್ಕರದ ಪ್ರವಾಸಿ ಆಕರ್ಷಣೆಗಳು ಅಜ್ಞಾತವಾಗಿವೆ|url=https://www.onmanorama.com/travel/kerala/2018/09/26/mavelikkara-tourism-charms-are-unknown.html|access-date=2021-10-24|website=ಓನ್ ಮನೋರಮ}}</ref><ref>{{Cite journal|title=ಮಾವೆಲಿಕ್ಕರದ ಸ್ಥಳೀಯ ಇತಿಹಾಸ|url=https://shodhgangotri.inflibnet.ac.in/bitstream/123456789/773/2/02_synopsis.pdf|journal=[[ಕೇರಳ ವಿಶ್ವವಿದ್ಯಾಲಯ]]}}</ref>
* [[ಕೊಲ್ಲಂ ಜಿಲ್ಲೆ]]ಯಲ್ಲಿನ [[ಕುಂಭವುರುತ್ಯ ಜಲಪಾತ]]ಗಳು ನದಿಯ ಮೇಲ್ಭಾಗದ ಹಾದಿಯಲ್ಲಿವೆ.
== ಉಲ್ಲೇಖಗಳು ==
{{commons category|Achankovil}}
<references/>
=== ಬಾಹ್ಯ ಕೊಂಡಿಗಳು ===
* [http://www.asishinside.com/2017/12/trip-to-achankovil-malayalam-travelouge.html ಅಚನ್ಕೋವಿಲ್ಗೆ ಒಂದು ಪ್ರವಾಸ] {{Webarchive|url=https://web.archive.org/web/20171227124535/http://www.asishinside.com/2017/12/trip-to-achankovil-malayalam-travelouge.html |date=27 December 2017 }}
{{Waters of Kerala}}
[[ವರ್ಗ:ಪತ್ತನಂತಿಟ್ಟ ಜಿಲ್ಲೆಯ ನದಿಗಳು]]
[[ವರ್ಗ:ಪತ್ತನಂತಿಟ್ಟ]]
[[ವರ್ಗ:ಪಂಬಾ ನದಿ]]
[[ವರ್ಗ:ಆಲಪ್ಪುಝಾ ಜಿಲ್ಲೆಯ ನದಿಗಳು]]
n5vhqwq068y065sqt4svsugraa7tgfe
1378190
1378151
2026-08-02T15:58:14Z
A826
72368
1378190
wikitext
text/x-wiki
{{databox}}
{{Infobox ನದಿ
| name = ಅಚನ್ಕೋವಿಲ್ ನದಿ
| native_name = {{native name|ml|അച്ചന്കോവിലാറ്}}
| other_name = ಅಚನ್ಕೋವಿಲ್ ಆರ್
| etymology =
| image = Achankovil river.jpg
| image_size = 320px
| image_caption =
| image_alt =
| map =
| map_size =
| map_caption =
| map_alt =
| subdivision_type1 = [[ದೇಶ]]
| subdivision_name1 = [[ಭಾರತ]]
| subdivision_type2 = [[ಭಾರತದ ರಾಜ್ಯ|ರಾಜ್ಯ]]
| subdivision_name2 = [[ಕೇರಳ]]
| subdivision_type3 = [[ಜಿಲ್ಲೆಗಳು]]
| subdivision_name3 = [[ಕೊಲ್ಲಂ]], [[ಪತ್ತನಂತಿಟ್ಟ]], [[ಆಲಪ್ಪುಝಾ]]
| subdivision_type4 = [[ನಗರಗಳು]]
| subdivision_name4 = [[ಕೊನ್ನಿ, ಪತ್ತನಂತಿಟ್ಟ]], [[ಪಂಡಾಲಂ]], [[ಮಾವೆಲಿಕ್ಕರ]],
| subdivision_type5 =
| subdivision_name5 =
<!---------------------- BASIN -->
| source1_location = [[ಪಶುಕಿಡಮೆಟ್ಟು ನದಿ|ಪಶುಕಿಡಮೆಟ್ಟು]], [[ರಿಶಿಮಲಾ ನದಿ|ರಿಶಿಮಲೈ]] ಮತ್ತು [[ಪಶ್ಚಿಮ ಘಟ್ಟಗಳ]] ದೇವರ್ಮಲೈಯಿಂದ ಹುಟ್ಟುವ ರಾಮಕ್ಕಲ್ಟೇರಿ ನದಿಗಳು
| source1_coordinates =
| source1_elevation = {{cvt|700|m|ft}}
| mouth_location = [[ವೀಯಪುರಂ]]
| mouth_coordinates = {{coord|9|19|0|N|76|28|0|E|display=inline,title}}
| mouth_elevation =
| altitude_difference =
| progression =
| river_system =
| basin_size = {{Convert|1484|km2|mi2|abbr=on}}
| basin_landmarks = [[ಥಝೂರ್ ಭಗವತಿ ಕ್ಷೇತ್ರಂ]], ತ್ರಿಪ್ಪರ ಶಿವ ದೇವಾಲಯ, ವಲಂಚುಳ್ಳಿ ದೇವಿ ಕ್ಷೇತ್ರಂ, ಪಂಡಾಲಂ ವಲಿಯಕೊಯಿಕಲ್ ಶಾಸ್ತಾ ದೇವಾಲಯ, ಪಂಡಾಲಂ ಅರಮನೆ, (ಮಟ್ಟೋಮ್ ಮಹಾದೇವ ದೇವಾಲಯ), ಪಂಡಾಲಂ ಮಹಾದೇವ ದೇವಾಲಯ, ಕಂಡಿಯೂರ್ ಮಹಾದೇವ ದೇವಾಲಯ, [[ಚೆಟ್ಟಿಕುಲಂಗರ ದೇವಿ ದೇವಾಲಯ]], [[ವೆನ್ಮಣಿ]] ಸರ್ಗಕಾವು ದೇವಾಲಯ, ಕೊನ್ನಿ ಮುರಿಂಗ ಮಂಗಲಂ ಮಹಾದೇವ ದೇವಾಲಯ
| basin_population =
<!---------------------- PHYSICAL CHARACTERISTICS -->
| length = {{Convert|128|km|mi|abbr=on}}
| width_min =
| width_avg =
| width_max =
| depth_min =
| depth_avg =
| depth_max =
| discharge1_location =
| discharge1_min =
| discharge1_avg =
| discharge1_max =
<!---------------------- FEATURES -->
| tributaries_left =
| tributaries_right =
| waterbodies =
| waterfalls =
| bridges = ಕೈಪಟ್ಟೂರ್ ಸೇತುವೆ, ಪಂಡಾಲಂ ಸೇತುವೆ, ವೆಟ್ಟಿಯಾರ್ ಸೇತುವೆ, ಪರಕ್ಕಡವು ಸೇತುವೆ, ಪುಳಕಡವು ಸೇತುವೆ, ಚಾಮಕ್ಕಾವು ಪಾದಚಾರಿ ಸೇತುವೆ, ಕೊಲ್ಲಕಡು ಸೇತುವೆ, ವಲಿಯಪೆರುಂಪುಳ ಸೇತುವೆ, ಪ್ರಯಿಕ್ಕರ ಸೇತುವೆ, ಪೊಟ್ಟಮೆಲ್ಕಡವು ಸೇತುವೆ, ಕೊನ್ನಿ ಸೇತುವೆ
| ports =
| custom_label =
| custom_data =
| extra =
| mouth = [[ಪಂಬಾ ನದಿ|ಪಂಬಾ]]
| pushpin_map = India Kerala#India
| pushpin_relief = 1
| pushpin_caption = ಕೇರಳದಲ್ಲಿ ಸಂಗಮಸ್ಥಾನದ ಸ್ಥಳ
}}
'''ಅಚನ್ಕೋವಿಲ್''' [[ಕೇರಳ]], ಭಾರತದಲ್ಲಿ ಪಶ್ಚಿಮಕ್ಕೆ ಹರಿಯುವ {{Convert|128|km|abbr=on}} ಉದ್ದದ ನದಿಯಾಗಿದೆ. ಇದು [[ಕೊಲ್ಲಂ ಜಿಲ್ಲೆ|ಕೊಲ್ಲಂ]], [[ಪತ್ತನಂತಿಟ್ಟ ಜಿಲ್ಲೆ|ಪತ್ತನಂತಿಟ್ಟ]] ಮತ್ತು [[ಆಲಪ್ಪುಝಾ ಜಿಲ್ಲೆ|ಆಲಪ್ಪುಝಾ]] [[ಕೇರಳದ ಜಿಲ್ಲೆಗಳ ಪಟ್ಟಿ|ಜಿಲ್ಲೆಗಳ]] ಮೂಲಕ ಹರಿಯುತ್ತದೆ. ಈ ನದಿಯು [[ಆಲಪ್ಪುಝಾ]] ಮತ್ತು [[ಪತ್ತನಂತಿಟ್ಟ]] ಜಿಲ್ಲೆಗಳಲ್ಲಿನ [[ಮೇಲಿನ ಕುಟ್ಟನಾಡು]]ನ ಫಲವತ್ತಾದ ವ್ಯಾಪಕವಾದ ಬಯಲು ಪ್ರದೇಶವನ್ನು ಒಳಚರಂಡಿ ಮಾಡುತ್ತದೆ. ಇದು ತನ್ನ ಹಾದಿಯಲ್ಲಿನ [[ಕೊನ್ನಿ, ಕೇರಳ|ಕೊನ್ನಿ]], [[ಪತ್ತನಂತಿಟ್ಟ]], [[ಪಂಡಾಲಂ]] ಮತ್ತು [[ಮಾವೆಲಿಕ್ಕರ]]ದಂತಹ ಹಲವಾರು [[ನಗರ ವಸಾಹತು]]ಗಳನ್ನು ಪೋಷಿಸುತ್ತದೆ.<ref>{{Cite news|last=ಕುಟ್ಟೂರ್|first=ರಾಧಾಕೃಷ್ಣನ್|date=2014-08-04|title=ಮೇಲಿನ ಕುಟ್ಟನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಭೀಕರ|language=en-IN|work=ದ ಹಿಂದೂ|url=https://www.thehindu.com/news/national/kerala/flood-situation-grim-in-upper-kuttanad/article6279499.ece|access-date=2021-10-24|issn=0971-751X}}</ref>
== ಹಾದಿ ==
ಈ ನದಿಯು ಕೊನ್ನಿ ಮೀಸಲು ಅರಣ್ಯದಲ್ಲಿರುವ [[ಪಶ್ಚಿಮ ಘಟ್ಟಗಳ]] ದೇವರ್ ಮಲೈ ಶಿಖರದಲ್ಲಿ ಉಗಮಿಸುತ್ತದೆ. [[ರಿಶಿಮಲಾ ನದಿ|ರಿಶಿಮಲಾ]], [[ಪಶುಕಿಡಮೆಟ್ಟು ನದಿ|ಪಶುಕಿಡಮೆಟ್ಟು]] ಮತ್ತು [[ರಾಮಕ್ಕಲ್ಟೇರಿ ನದಿ|ರಾಮಕ್ಕಲ್ಥೇರಿ]] ನದಿಗಳು ಅಚನ್ಕೋವಿಲ್ ನದಿಯ ಪ್ರಮುಖ ಉಪನದಿಗಳಾಗಿವೆ.<ref>{{Cite web|title=ಅಚೆನ್ಕೋಯಿಲ್|url=http://www.kerenvis.nic.in/Database/Achencoil_1846.aspx|access-date=2021-05-19|website=www.kerenvis.nic.in}}</ref> ಇದು ತನ್ನ ಉಗಮಸ್ಥಾನದಿಂದ [[ನೈಋತ್ಯ]] ದಿಕ್ಕಿನಲ್ಲಿ ಹರಿಯುತ್ತದೆ ಮತ್ತು ಅಚನ್ಕೋವಿಲ್ ಗ್ರಾಮದ ಬಳಿ [[ಕೊಲ್ಲಂ ಜಿಲ್ಲೆ]]ಗೆ ಪ್ರವೇಶಿಸುತ್ತದೆ. ನಂತರ ನದಿಯು ತನ್ನ ಹಾದಿಯನ್ನು [[ವಾಯುವ್ಯ]] ದಿಕ್ಕಿನತ್ತ ಬದಲಾಯಿಸುತ್ತದೆ ಮತ್ತು [[ಕೊಲ್ಲಂ ಜಿಲ್ಲೆ]]ಯ ಮೂಲಕ ಸುಮಾರು 20 ಕಿಮೀ ಹರಿದು [[ಕಲ್ಲೇಲಿ]] ಬಳಿ [[ಪತ್ತನಂತಿಟ್ಟ ಜಿಲ್ಲೆ|ಪತ್ತನಂತಿಟ್ಟ]] ಜಿಲ್ಲೆಗೆ ಮರು-ಪ್ರವೇಶಿಸುತ್ತದೆ.
ನಂತರ ಅದು [[ಕೊನ್ನಿ, ಕೇರಳ|ಕೊನ್ನಿ]], [[ಕುಂಬಾಝಾ]], [[ಮೈಲಾಪ್ರ]], [[ಕೊನ್ನಿಥಾಝಂ]], [[ವೆಟ್ಟೂರ್]], [[ಪತ್ತನಂತಿಟ್ಟ]], [[ಪ್ರಮಾಡೋಂ|ಪ್ರಮಾದಂ]], [[ವಲ್ಲಿಕೋಡ್|ವಲ್ಲಿಕೋಡ್]]ನ ಬೆಟ್ಟದ ಪಟ್ಟಣಗಳ ಮೂಲಕ ಹರಿಯುತ್ತದೆ ಮತ್ತು [[ಮೇಲಿನ ಕುಟ್ಟನಾಡ್]]ಗೆ ಪ್ರವೇಶಿಸುತ್ತದೆ. ನಂತರ ನದಿಯು [[ಕೈಪಟ್ಟೂರ್]], [[ನರಿಯಾಪುರಂ]], [[ತುಂಬಮೋನ್|ತುಂಬಮೋನ್]], [[ವೆನ್ಮೋನಿ]], [[ಕುಲನಾಡ]], [[ಪಂಡಾಲಂ]], [[ಎಡಪ್ಪೋನ್]] ([[ನೂರನಾಡ್]]), [[ವೆಟ್ಟಿಯಾರ್]], [[ಕೊಲ್ಲಕಡವು|ಕೊಲ್ಲಕ್ಕಡವು]] ಮತ್ತು [[ಚೆರಿಯನಾಡ್]] ಪಟ್ಟಣಗಳ ಮೂಲಕ ಹಾದುಹೋಗುತ್ತದೆ. [[ಮಾವೆಲಿಕ್ಕರ]]ವನ್ನು ತಲುಪಿದ ನಂತರ, ನದಿಯು ಉತ್ತರ ದಿಕ್ಕಿನತ್ತ ತೀಕ್ಷ್ಣ ತಿರುವು ತೆಗೆದುಕೊಳ್ಳುತ್ತದೆ ಮತ್ತು [[ಚೆನ್ನಿಥಲಾ]], [[ಪಲ್ಲಿಪ್ಪಾಡ್]], [[ಪೈಪ್ಪಾಡ್]] ಪಟ್ಟಣಗಳ ಮೂಲಕ ಹರಿದು ಅಂತಿಮವಾಗಿ [[ವೀಯಪುರಂ]]ನಲ್ಲಿ [[ಪಂಬಾ ನದಿ|ಪಂಬಾ]] ನದಿಯನ್ನು ಸೇರುತ್ತದೆ. [[ಪಂಬಾ ನದಿ|ಪಂಬಾ]] ನದಿಯು ಅಚನ್ಕೋವಿಲ್ ಮತ್ತು [[ಮಣಿಮಲಾ ನದಿ|ಮಣಿಮಲಾ]] ನದಿಗಳ ಜೊತೆಗೆ, ನಂತರ ಎರಡು ಕವಲುಗಳಾಗಿ ಒಡೆಯುತ್ತದೆ, ಒಂದು [[ಅರೇಬಿಯನ್ ಸಮುದ್ರ]]ಕ್ಕೆ [[ಥೊಟ್ಟಪಲ್ಲಿ|ಥೊಟ್ಟಪಲ್ಲಿ]]ಯಲ್ಲಿ ಮತ್ತು ಇನ್ನೊಂದು [[ಕೈನಕರಿ]]ಯಲ್ಲಿ [[ವೆಂಬನಾಡ್]] ಸರೋವರಕ್ಕೆ ಹರಿಯುತ್ತದೆ.<ref>{{Cite web|last=ಭಾಸ್ಕರ್|first=ಸಾಜು|title=ಎಣ್ಣೂರು ಮಹಿಳೆಯರು ಒಂದು ನದಿಯ ಜೀವವನ್ನು ಮರಳಿ ಪಡೆದ ಕಥೆ|url=https://www.mathrubhumi.com/environment/clean-earth/kuttamperoor-river-rejuvenation-1.1925575|access-date=2021-05-19|website=ಮಾತೃಭೂಮಿ|language=ml|archive-date=19 May 2021|archive-url=https://web.archive.org/web/20210519191306/https://www.mathrubhumi.com/environment/clean-earth/kuttamperoor-river-rejuvenation-1.1925575|url-status=dead}}</ref>
[[ಪತ್ತನಂತಿಟ್ಟ]] ಪಟ್ಟಣವು, ಇದು ಪತ್ತನಂತಿಟ್ಟ ಜಿಲ್ಲೆಯ ಆಡಳಿತ ರಾಜಧಾನಿಯಾಗಿದೆ, ಇದು ನದಿಯ ದಂಡೆಯಲ್ಲಿದೆ. ಈ ಪಟ್ಟಣವು ನದಿಯೊಂದಿಗಿನ ತನ್ನ ಸಂಬಂಧದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ; ''ಪತ್ತನಂತಿಟ್ಟ'', [[ಮಲಯಾಳಂ]] ಪದಗಳಾದ ''{{Transliteration|ml|pathanam}}-ಪತ್ತನಂ'' ಮತ್ತು ''{{Transliteration|ml|thitta}}-ತಿಟ್ಟ'' ಅಂದರೆ "ನದಿಯ ದಡದಲ್ಲಿನ ಮನೆಗಳು" ಎಂದರ್ಥ.
== ಅಚೆನ್ಕೋವಿಲ್ ಗ್ರಾಮ ಮತ್ತು ಮೀಸಲು ಅರಣ್ಯ ಪ್ರದೇಶ ==
ಈ ನದಿಯ [[ನೀರಿನ ಸಂಗ್ರಹ ಪ್ರದೇಶ|ಸಂಗ್ರಹ ಪ್ರದೇಶ]]ವಾಗಿರುವ ಅರಣ್ಯ ಪ್ರದೇಶವನ್ನು ಅಚೆನ್ಕೋವಿಲ್ ಮೀಸಲು ಅರಣ್ಯ ಎಂದೂ ಕರೆಯಲಾಗುತ್ತದೆ. ಇದು [[ಅಗಸ್ತ್ಯಮಲೈ ಜೀವಗೋಳ ಮೀಸಲು ಪ್ರದೇಶ]]ದ ಭಾಗವಾಗಿದೆ.<ref>{{Cite journal|last=ಮ್ಯಾಥ್ಯೂ|first=ಜೋಸ್|date=2013-12-01|title=ಅಗಸ್ತ್ಯಮಲೈ ಜೀವಗೋಳ ಮೀಸಲು ಪ್ರದೇಶ, ಪಶ್ಚಿಮ ಘಟ್ಟಗಳು, ಕೇರಳದಲ್ಲಿ ಅಚನ್ಕೋವಿಲ್ ಶಿಯರ್ ವಲಯದ ಸ್ಥಳೀಯ ಹೂಬಿಡುವ ಸಸ್ಯಗಳ ಮಾರ್ಫೋ-ಇಕೋಟೈಪ್ಗಳು|url=https://www.researchgate.net/publication/280569439|journal=ಅನ್ನಲ್ಸ್ ಆಫ್ ಪ್ಲಾಂಟ್ ಸೈನ್ಸಸ್|volume=2|pages=514–519}}</ref>
ನದಿಯ ಮೇಲ್ಭಾಗದ ಪ್ರದೇಶದಲ್ಲಿರುವ ಒಂದು ಸಣ್ಣ ಗ್ರಾಮವನ್ನು ಅಚೆನ್ಕೋವಿಲ್ ಗ್ರಾಮ ಎಂದು ಕರೆಯಲಾಗುತ್ತದೆ. ಅಚೆನ್ಕೋವಿಲ್ ಗ್ರಾಮವು [[ಶಬರಿಮಲೆ]]ಯ ದಂತಕಥೆಯೊಂದಿಗೆ ಸಂಬಂಧಿಸಿರುವ ಪ್ರಮುಖ [[ಯಾತ್ರಾ]] ಕೇಂದ್ರವಾಗಿದೆ ಮತ್ತು ಇದು [[ಕೊಲ್ಲಂ ಜಿಲ್ಲೆ]] ಮತ್ತು [[ತೆಂಕಾಸಿ ಜಿಲ್ಲೆ]]ಗಳ ನಡುವಿನ ಪ್ರಮುಖ ಅಂತರರಾಜ್ಯ ಗಡಿ ಬಿಂದುವಾಗಿದೆ.<ref>{{Cite web|date=2018-03-17|title=ಕಾಡಿನಲ್ಲಿ ನಡಿಗೆ!|url=https://www.deccanchronicle.com/lifestyle/travel/170318/walk-on-the-wild-side.html|access-date=2021-10-24|website=ಡೆಕ್ಕನ್ ಕ್ರಾನಿಕಲ್|language=en}}</ref>
== ಅಚನ್ಕೋವಿಲ್ ಶಾಸ್ತಾ ದೇವಾಲಯ ==
[[File:അച്ചൻകോവിൽ ശാസ്താക്ഷേത്രം.jpg|thumb|ಅಚನ್ಕೋವಿಲ್ ದೇವಾಲಯ]]
ಅಚನ್ಕೋವಿಲ್ ಶಾಸ್ತಾ ದೇವಾಲಯ, ಅಥವಾ ಧರ್ಮಶಾಸ್ತಾ ದೇವಾಲಯವು [[ಕೇರಳ]]ದಲ್ಲಿ [[ಅಯ್ಯಪ್ಪ]]ಗೆ ಸಮರ್ಪಿತವಾದ ಐದು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಲಾರ್ಡ್ ಅಯ್ಯಪ್ಪನು ಇಲ್ಲಿ [[ಗೃಹಸ್ಥ|ಗೃಹಸ್ಥ ಆಶ್ರಮ]] ಜೀವನವನ್ನು ನಡೆಸುತ್ತಾರೆ – ಅವರನ್ನು ಇಲ್ಲಿ ಕುಟುಂಬಸ್ಥ ಅಥವಾ ವಿವಾಹಿತ ಜೀವನವನ್ನು ನಡೆಸುವವನಾಗಿ ಚಿತ್ರಿಸಲಾಗಿದೆ. ಅವರನ್ನು ತಮ್ಮ ಇಬ್ಬರು ಪತ್ನಿಯರಾದ – ಪೂರ್ಣಾ ಮತ್ತು ಪುಷ್ಕಲಾ ಅವರೊಂದಿಗೆ ಚಿತ್ರಿಸಲಾಗಿದೆ. ಇಲ್ಲಿನ [[ವಿಗ್ರಹ]]ವನ್ನು [[ಪರಶುರಾಮ]] ಸ್ಥಾಪಿಸಿದನೆಂದು ನಂಬಲಾಗಿದೆ.<ref>{{Cite news|date=2021-02-14|title=ಅರಣ್ಯ ರಸ್ತೆಯನ್ನು ಸಂಚಾರಕ್ಕೆ ತೆರೆಯಲಾಗುವುದು|language=en-IN|work=ದ ಹಿಂದೂ|url=https://www.thehindu.com/news/national/kerala/forest-road-to-be-opened-to-traffic/article33836597.ece|access-date=2021-10-24|issn=0971-751X}}</ref>
ಅಚನ್ಕೋವಿಲ್ ಶಾಸ್ತಾ ದೇವಾಲಯವು ವಿಷಕಾರಿ [[ಹಾವು]]ಗಳ ಕಡಿತವನ್ನು ಗುಣಪಡಿಸಲು ಪ್ರಸಿದ್ಧವಾಗಿದೆ. ಅಚನ್ಕೋವಿಲ್ ಶಾಸ್ತಾ ದೇವಾಲಯದಲ್ಲಿ ಅಯ್ಯಪ್ಪನ ವಿಗ್ರಹದ ಎಡಗೈಯು ಯಾವಾಗಲೂ 'ಚಂದನ' ([[ಚಂದನದ ತಿರುಳು|ಚಂದನದ ಲೇಪ]]) ಮತ್ತು ತೀರ್ಥ (ಪವಿತ್ರ ನೀರು)ವನ್ನು ಹಿಡಿದಿರುತ್ತದೆ.<ref>{{Cite web|date=ಸೆಪ್ಟೆಂಬರ್ 13, 2014|title=ಈ ಕೊಲ್ಲಂ ದೇವಾಲಯವು ಹಾವಿನ ಕಡಿತಕ್ಕೆ ವಿಶಿಷ್ಟ ಪರಿಹಾರವನ್ನು ನೀಡುತ್ತದೆ|url=https://timesofindia.indiatimes.com/city/thiruvananthapuram/this-kollam-temple-offers-unique-cure-for-snakebites/articleshow/42393746.cms|access-date=2021-10-24|website=ದ ಟೈಮ್ಸ್ ಆಫ್ ಇಂಡಿಯಾ|language=en}}</ref> ಚಂದನ ಮತ್ತು ತೀರ್ಥವು ಹಾವಿನ ಕಡಿತವನ್ನು ಗುಣಪಡಿಸಲು ಔಷಧೀಯ ಗುಣಗಳನ್ನು ಹೊಂದಿವೆ ಎಂದು ಪರಿಗಣಿಸಲಾಗಿದೆ. ದೇವಾಲಯದ ಸಂಕೀರ್ಣವು ಅಯ್ಯಪ್ಪನ ದಂತಕಥೆಗೆ ಸಂಬಂಧಿಸಿದ ಇತರ ದೇವತೆಗಳನ್ನೂ ಒಳಗೊಂಡಿದೆ. ಇಲ್ಲಿ ನಡೆಯುವ ಹಬ್ಬಗಳು ಮತ್ತು ಆಚರಣೆಗಳು ಬಲವಾದ [[ತಮಿಳರು|ತಮಿಳು]] ಬೇರುಗಳನ್ನು ಹೊಂದಿವೆ.
[[ಶಬರಿಮಲೆ]] ಯಾತ್ರೆಯ ಸಮಯದಲ್ಲಿ, ಭಕ್ತರು ತಮ್ಮ ಪ್ರಾರ್ಥನೆಗಳನ್ನು ಅರ್ಪಿಸಲು ಈ ದೇವಾಲಯಕ್ಕೂ ಭೇಟಿ ನೀಡುತ್ತಾರೆ. ಈ ದೇವಾಲಯದ ವಿಗ್ರಹವನ್ನು ಋಷಿ ಪರಶುರಾಮರು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ವಿಗ್ರಹದ ಎರಡೂ ಬದಿಗಳಲ್ಲಿ, ಲಾರ್ಡ್ ಶಾಸ್ತಾರ ಪತ್ನಿಯರಾದ ಪೂರ್ಣಾ ಮತ್ತು ಪುಷ್ಕಲಾ ಅವರನ್ನೂ ಸ್ಥಾಪಿಸಲಾಗಿದೆ. ಇಲ್ಲಿನ ಅತ್ಯಂತ ಪ್ರಮುಖ ಹಬ್ಬವನ್ನು ಮಲಯಾಳಂ ತಿಂಗಳ ಧನು (ಡಿಸೆಂಬರ್ – ಜನವರಿ) ಮೊದಲನೆಯಿಂದ ಹತ್ತನೇ ದಿನದವರೆಗೆ ಆಚರಿಸಲಾಗುತ್ತದೆ.
== ಅಚೆನ್ಕೋವಿಲ್ ಶಿಯರ್ ವಲಯ ==
[[ಭೂವಿಜ್ಞಾನ]]ದಲ್ಲಿ ಇದು [[ಪ್ರೋಟೆರೊಜೋಯಿಕ್]] ಯುಗದ ಪ್ರಮುಖ ಹೊರಪದರದ ಅಸಾತತ್ಯವಾಗಿದ್ದು, ಇದು ದಕ್ಷಿಣದಲ್ಲಿರುವ ಕೇರಳ ಖೊಂಡಲೈಟ್ ಪಟ್ಟಿಯನ್ನು (KKB) (ತಿರುವನಂತಪುರಂ ಬ್ಲಾಕ್) ಉತ್ತರದಲ್ಲಿರುವ [[ಚಾರ್ನೊಕೈಟ್]] ಸಮೂಹದಿಂದ (ಮಧುರೈ ಬ್ಲಾಕ್) ಪ್ರತ್ಯೇಕಿಸುತ್ತದೆ.<ref>{{Cite web|title=ಚಿತ್ರ. 1. ದಕ್ಷಿಣ ಭಾರತದ ಭೂವಿಜ್ಞಾನ (ಸಂತೋಷ್ ಮತ್ತು ಸಜೀವ್, 2006; ಸಂತೋಷ್ ಮತ್ತು ಇತರರು, 2009 ರ ನಂತರ ಮಾರ್ಪಡಿಸಲಾಗಿದೆ)|url=https://www.researchgate.net/figure/Geology-of-south-India-modi-ed-after-Santosh-and-Sajeev-2006-Santosh-et-al-2009_fig1_280826493|access-date=2021-10-24|website=ResearchGate|language=en}}</ref> ಅಚನ್ಕೋವಿಲ್ ನದಿಯು ಈ ರಚನಾತ್ಮಕ ಕಣಿವೆಯನ್ನು ಒಳಚರಂಡಿ ಮಾಡುತ್ತದೆ.<ref>{{Cite web|title=ಚಿತ್ರ 1. a, ಅಚನ್ಕೋವಿಲ್ ಶಿಯರ್ ವಲಯದ ಸ್ಥಳವನ್ನು ತೋರಿಸುವ ಸಾಮಾನ್ಯ ನಕ್ಷೆ...|url=https://www.researchgate.net/figure/a-A-general-map-showing-location-of-Achankovil-Shear-Zone-ASZ-b-Simplified-geology_fig1_282295892|access-date=2021-10-24|website=ResearchGate|language=en}}</ref> ಈ ಶಿಯರ್ ವಲಯವು [[ಭಾರತ]] ಮತ್ತು [[ಮಡಗಾಸ್ಕರ್]] ನಡುವಿನ ಭೂ ಸಂಪರ್ಕದ ಮುದ್ರೆಗಳನ್ನು ಹೊಂದಿರುವ ಪ್ರಮುಖ ಕೊಂಡಿಯಾಗಿದೆ ಎಂದು ವಾದಿಸುವ ಭೂವಿಜ್ಞಾನಿಗಳಿದ್ದಾರೆ, ಏಕೆಂದರೆ ಈ ಎರಡೂ ಭೂ ದ್ರವ್ಯರಾಶಿಗಳು [[ಗೊಂಡ್ವಾನಾ]] ಭೂಭಾಗದ ಭಾಗವಾಗಿದ್ದವು.<ref>{{Cite journal|last1=ಪ್ರಹರಾಜ್|first1=P.|last2=S|first2=R.|date=2018-12-01|title=ಅಚನ್ಕೋವಿಲ್ ಶಿಯರ್ ವಲಯ, ದಕ್ಷಿಣ ಭಾರತ: ಮಡಗಾಸ್ಕರ್ಗೆ ಅದರ ವಿಸ್ತರಣೆ|journal=AGU ಫಾಲ್ ಮೀಟಿಂಗ್ ಅಬ್ಸ್ಟ್ರಾಕ್ಟ್ಸ್|url=https://ui.adsabs.harvard.edu/abs/2018AGUFM.T33C0420P|volume=2018|pages=T33C–0420|bibcode=2018AGUFM.T33C0420P}}</ref>
== ಆಕರ್ಷಣೆಗಳು ==
ಈ ನದಿಯು ತನ್ನ ಹಾದಿಯಲ್ಲಿ ಹಲವಾರು ಪ್ರಾಚೀನ ದೇವಾಲಯಗಳನ್ನು ಹೊಂದಿದೆ ಎಂಬುದು ವಿಶೇಷವಾಗಿದೆ, ಇದು ನದಿ ಜಲಾನಯನ ಪ್ರದೇಶದ ಶ್ರೀಮಂತಿಕೆಯನ್ನು ಪ್ರಾಚೀನ ಕಾಲದಿಂದಲೂ ಮಾನವರು ಗುರುತಿಸಿದ್ದಾರೆ ಮತ್ತು ಅವರು ಫಲವತ್ತಾದ ಭೂಮಿಯಲ್ಲಿ ತಮ್ಮ ಬೆಳೆಗಳನ್ನು ಬೆಳೆಸಲು ಅಲ್ಲಿ ನೆಲೆಸಲು ಆದ್ಯತೆ ನೀಡಿದ್ದಾರೆ ಎಂದು ಸೂಚಿಸುತ್ತದೆ.
<gallery>
File:Achenkovil River Near Konni, December 2007.jpg|[[ಕೈಪಟ್ಟೂರ್]] ಬಳಿ ಅಚನ್ಕೋವಿಲ್ ನದಿ
File:Thazhoor View 1.jpg|ಅಚನ್ಕೋವಿಲ್ ನದಿಯ ದಂಡೆಯಲ್ಲಿರುವ [[ಥಝೂರ್ ಭಗವತಿ ಕ್ಷೇತ್ರಂ]] ದೇವಾಲಯ - ಥಝೂರ್ ಸೇತುವೆಯಿಂದ ನೋಟ
File:ThripparaTempleEntranceView 1.jpg|ಅಚನ್ಕೋವಿಲ್ ನದಿಯ ದಂಡೆಯಲ್ಲಿರುವ ತ್ರಿಪ್ಪರ ಶಿವ ಕ್ಷೇತ್ರಂಗೆ ಪ್ರವೇಶ
</gallery>
* [[ಪಂಡಾಲಂ]] ಪುರಸಭೆ, [[ನೂರನಾಡ್]] ಮತ್ತು ಪಾಲಮೇಲ್ ಪಂಚಾಯತ್ಗಳಲ್ಲಿ ಹರಡಿರುವ ಕರಿಂಗಲಿಚಲ್ ಜೌಗು ಪ್ರದೇಶಗಳು, ತಮ್ಮ ಸಸ್ಯ ಮತ್ತು ಪ್ರಾಣಿಗಳಿಗೆ ಪ್ರಸಿದ್ಧವಾದ ಸ್ಥಳವಾಗಿದ್ದು, ಇದು ಅಚನ್ಕೋವಿಲ್ ನದಿಯ ದಂಡೆಯಲ್ಲಿದೆ.<ref>{{Cite web|title=KLSO ಸುದ್ದಿ ನವೀಕರಣಗಳು 2015|url=https://www.wwfindia.org/?16461/KLSO-News-Updates-2015|access-date=2021-10-24|website=www.wwfindia.org|language=en}}</ref>
* ನದಿ ಜಲಾನಯನ ಪ್ರದೇಶವು [[ಮಧ್ಯಯುಗ]]ದಲ್ಲಿ ಸಕ್ರಿಯ [[ಬೌದ್ಧ]] ವಸಾಹತುಗಳನ್ನು ಹೊಂದಿತ್ತು. [[ವೆನ್ಮಣಿ]] ಬಳಿಯ ಪ್ರಸ್ತುತ ಚಾಮಕ್ಕಾವು ಶರ್ನ್ಗಕಾವು ದೇವಿ ದೇವಾಲಯವು ಹಿಂದೂ ದೇವಾಲಯವಾಗಿದ್ದು, ಇದು ಬೌದ್ಧ ಆರಾಧನಾ ಸ್ಥಳವಾಗಿತ್ತು, ಇದನ್ನು ಆರಂಭದಲ್ಲಿ ವಿಷ್ಣು ದೇವಾಲಯವಾಗಿ (ನಂತರ ಶರ್ನ್ಗ-ಕಾವು ಎಂದು ಕರೆಯಲಾಯಿತು) ಮತ್ತು ನಂತರ ದೇವಿ ದೇವಾಲಯವಾಗಿ ಪರಿವರ್ತಿಸಲಾಯಿತು. ವಾರ್ಷಿಕ ರಥೋತ್ಸವ ಮತ್ತು ಇತರ ಸಂಪ್ರದಾಯಗಳು ಕೇರಳದಲ್ಲಿ ಹಿಂದೂ ಧರ್ಮಕ್ಕೆ ಸಮೀಕರಿಸಲ್ಪಟ್ಟ "ಕೆಟ್ಟು ಕಾಝ್ಚ" ಎಂಬ ಹಳೆಯ ಬೌದ್ಧ ಆಚರಣೆಗಳಿಗೆ ಸಂಬಂಧಿಸಿವೆ. [[ಮಾವೆಲಿಕ್ಕರ]] ಬಳಿ ಕಂಡುಬರುವ [[ಕರುಮಾಡಿಕುಟ್ಟನ್]] ಪ್ರತಿಮೆ ಮತ್ತು [[ಬುದ್ಧ|ಬೌದ್ಧ]] ಅವಶೇಷಗಳು ಇದನ್ನು ಮತ್ತಷ್ಟು ಎತ್ತಿ ತೋರಿಸುತ್ತವೆ.<ref>{{Cite web|title=ಮಾವೆಲಿಕ್ಕರದ ಪ್ರವಾಸಿ ಆಕರ್ಷಣೆಗಳು ಅಜ್ಞಾತವಾಗಿವೆ|url=https://www.onmanorama.com/travel/kerala/2018/09/26/mavelikkara-tourism-charms-are-unknown.html|access-date=2021-10-24|website=ಓನ್ ಮನೋರಮ}}</ref><ref>{{Cite journal|title=ಮಾವೆಲಿಕ್ಕರದ ಸ್ಥಳೀಯ ಇತಿಹಾಸ|url=https://shodhgangotri.inflibnet.ac.in/bitstream/123456789/773/2/02_synopsis.pdf|journal=[[ಕೇರಳ ವಿಶ್ವವಿದ್ಯಾಲಯ]]}}</ref>
* [[ಕೊಲ್ಲಂ ಜಿಲ್ಲೆ]]ಯಲ್ಲಿನ [[ಕುಂಭವುರುತ್ಯ ಜಲಪಾತ]]ಗಳು ನದಿಯ ಮೇಲ್ಭಾಗದ ಹಾದಿಯಲ್ಲಿವೆ.
== ಉಲ್ಲೇಖಗಳು ==
{{commons category|Achankovil}}
<references/>
=== ಬಾಹ್ಯ ಕೊಂಡಿಗಳು ===
* [http://www.asishinside.com/2017/12/trip-to-achankovil-malayalam-travelouge.html ಅಚನ್ಕೋವಿಲ್ಗೆ ಒಂದು ಪ್ರವಾಸ] {{Webarchive|url=https://web.archive.org/web/20171227124535/http://www.asishinside.com/2017/12/trip-to-achankovil-malayalam-travelouge.html |date=27 December 2017 }}
{{Waters of Kerala}}
[[ವರ್ಗ:ಪತ್ತನಂತಿಟ್ಟ ಜಿಲ್ಲೆಯ ನದಿಗಳು]]
[[ವರ್ಗ:ಪತ್ತನಂತಿಟ್ಟ]]
[[ವರ್ಗ:ಪಂಬಾ ನದಿ]]
[[ವರ್ಗ:ಆಲಪ್ಪುಝಾ ಜಿಲ್ಲೆಯ ನದಿಗಳು]]
7702l37auxqww1vsezvxyudwt4d39bz
ಟೆಂಪ್ಲೇಟು:Infobox ನದಿ
10
179992
1378152
2026-07-29T02:08:00Z
en>Zackmann08
0
initiating deprecation of parameters per talk page
1378152
wikitext
text/x-wiki
<includeonly>{{main other|{{#if:{{Has short description}} |<!--Do nothing--> |{{#invoke:Type in location|main|River|{{comma separated entries
|1= {{Plain text|{{strip tags|{{replace|{{{subdivision_name2|}}}|</li>|, </li>}}}}}}
|2= {{Plain text|{{strip tags|{{replace|{{{subdivision_name1|}}}|</li>|, </li>}}}}}}
}}}}}}}}{{Infobox
| child = {{{embed|}}}
| abovestyle = background-color: #CEDEFF;color: #202122;
| above = {{if empty|{{{name|}}}|{{PAGENAMEBASE}}}}{{#if:{{{other_name|}}}{{{name_other|}}}|<br /><div class="nickname" style="display:inline;font-size:78%">{{if empty|{{{other_name|}}}|{{{name_other|}}}}}</div>}}
| autoheaders= y
| headerstyle= background-color: #CEDEFF;color: #202122;
| image = {{#invoke:InfoboxImage|InfoboxImage|image={{#invoke:WikidataIB |getValue|rank=best|P18 |name=image |qid={{{qid|}}} |suppressfields={{{suppressfields|}}} |fetchwikidata={{if empty|{{{fetchwikidata|}}}|ALL}} |onlysourced=no |noicon=yes |maxvals=1 |{{{image|}}}}}|size={{{image_size|}}}|sizedefault=250px|upright={{if empty|{{{image_upright|}}}|1}}|alt={{{image_alt|}}}|suppressplaceholder=yes}}
| caption = {{#if:{{{image|}}}|{{{image_caption|}}}|{{if empty|{{{image_caption|}}}|{{#invoke:WikidataIB|getValue|P18|qual=P2096|qualsonly=y|fwd=ALL}}}}}}
| image2 = {{#invoke:InfoboxImage|InfoboxImage|image={{{map|}}}|size={{{map_size|}}}|sizedefault=250px|alt={{{map_alt|}}}}}
| caption2 = {{{map_caption|}}}
| image3 = {{#if:{{both|{{{pushpin_map|}}}|{{{mouth_coordinates|}}}{{#property:P625}}}}|{{#invoke:Location map|infobox_pushpin_map
| default_width = 250
| coordinates = {{{mouth_coordinates|}}}
| pushpin_alt = {{if empty|{{{pushpin_map_alt|}}}|{{{pushpin_alt|}}}}}
| pushpin_relief = {{if empty|{{{pushpin_map_relief|}}}|{{{pushpin_relief|}}}|1}}
| pushpin_caption = {{if empty|{{{pushpin_map_caption|}}}|{{{pushpin_caption|}}}}}
}}}}
| image4 = {{#invoke:Infobox mapframe
|autoWithCaption
|onByDefault={{#if:{{{map|}}}{{{pushpin_map|}}}|no|yes}}
|mapframe-frame-width=250
|mapframe-stroke-color=#0000ff
|mapframe-marker=water
|mapframe-type=river
|mapframe-length_km={{{length_km|}}}|mapframe-length_mi={{{length_mi|}}}
|mapframe-area_km2={{{basin_size_km2|}}}|mapframe-area_mi2={{{basin_size_mi2|}}}
}}
| label1 = Etymology
| data1 = {{if empty|{{{etymology|}}}|{{{name_etymology|}}}}}
| class2 = nickname
| label2 = Nickname{{pluralize from text|{{{nickname|}}}|plural=s}}
| data2 = {{{nickname|}}}
| class3 = nickname
| label3 = Native name
| data3 = {{native name checker|{{if empty|{{{native_name|}}}|{{{name_native|}}}}}}}
| header5 = Location
| label6 = {{if empty|{{{subdivision_type1|}}}|{{{country_type|}}}|Country}}
| rowstyle6 = {{Infobox river/row-style}}
| data6 = {{if empty|{{{subdivision_name1|}}}|{{{country|}}}}}
| label7 = {{if empty|{{{subdivision_type2|}}}|{{{state_type|}}}|State}}
| rowstyle7 = {{Infobox river/row-style}}
| data7 = {{if empty|{{{subdivision_name2|}}}|{{{state|}}}}}
| label8 = {{if empty|{{{subdivision_type3|}}}|{{{region_type|}}}|Region}}
| rowstyle8 = {{Infobox river/row-style}}
| data8 = {{if empty|{{{subdivision_name3|}}}|{{{region|}}}}}
| label9 = {{if empty|{{{subdivision_type4|}}}|{{{district_type|}}}|District}}
| rowstyle9 = {{Infobox river/row-style}}
| data9 = {{if empty|{{{subdivision_name4|}}}|{{{district|}}}}}
| label10 = {{if empty|{{{subdivision_type5|}}}|{{{municipality_type|}}}|Municipality}}
| rowstyle10 = {{Infobox river/row-style}}
| data10 = {{if empty|{{{subdivision_name5|}}}|{{{municipality|}}}}}
| header15 = Physical characteristics
| rowstyle16 = display:none;
| data16 = {{Infobox river/source|source={{{source1|}}}|loc={{{source1_location|}}}|elev={{{source1_elevation|}}}|coord={{{source1_coordinates|}}}|len={{{source1_length|}}}|coord_ref={{{source1_coord_ref|}}}}}
| rowstyle17 = display:none;
| data17 = {{Infobox river/source|2nd source|source={{{source2|}}}|loc={{{source2_location|}}}|elev={{{source2_elevation|}}}|coord={{{source2_coordinates|}}}|len={{{source2_length|}}}|coord_ref={{{source2_coord_ref|}}}}}
| rowstyle18 = display:none;
| data18 = {{Infobox river/source|3rd source|source={{{source3|}}}|loc={{{source3_location|}}}|elev={{{source3_elevation|}}}|coord={{{source3_coordinates|}}}|len={{{source3_length|}}}|coord_ref={{{source3_coord_ref|}}}}}
| rowstyle19 = display:none;
| data19 = {{Infobox river/source|4th source|source={{{source4|}}}|loc={{{source4_location|}}}|elev={{{source4_elevation|}}}|coord={{{source4_coordinates|}}}|len={{{source4_length|}}}|coord_ref={{{source4_coord_ref|}}}}}
| rowstyle20 = display:none;
| data20 = {{Infobox river/source|5th source|source={{{source5|}}}|loc={{{source5_location|}}}|elev={{{source5_elevation|}}}|coord={{{source5_coordinates|}}}|len={{{source5_length|}}}|coord_ref={{{source5_coord_ref|}}}}}
| rowstyle21 = display:none;
| data21 = {{Infobox river/source|Source confluence|source={{{source_confluence|}}}|loc={{{source_confluence_location|}}}|elev={{{source_confluence_elevation|}}}|coord={{{source_confluence_coordinates|}}}|coord_ref={{{source_confluence_coord_ref|}}}}}
| label22 = [[River mouth|Mouth]]
| data22 = {{#if:{{{mouth|}}}|{{{mouth}}}|{{#if:{{{mouth_location|}}}{{{mouth_coordinates|}}}{{{mouth_elevation|}}}| }}}}
| label23 = <div style="display:inline;font-weight:normal"> • location</div>
| rowstyle23 = {{Infobox river/row-style}}
| data23 = {{{mouth_location|}}}
| label24 = <div style="display:inline;font-weight:normal"> • coordinates</div>
| rowstyle24 = {{Infobox river/row-style}}
| data24 = {{#if:{{{mouth_coordinates|}}}|{{#invoke:Coordinates|coordinsert|{{{mouth_coordinates}}}|type:river}}{{{mouth_coord_ref|}}}}}
| label25 = <div style="display:inline;font-weight:normal"> • elevation</div>
| rowstyle25 = {{Infobox river/row-style}}
| data25 = {{Infobox river/calcunit|free={{{mouth_elevation|}}}|met_unit=m|imp_unit=ft}}
| label30 = Length
| rowstyle30 = {{Infobox river/row-style}}
| data30 = {{Infobox river/calcunit|free={{{length|}}}|met={{{length_km|}}}|met_unit=km|imp={{{length_mi|}}}|imp_unit=mi}}<!--
-->{{#if:{{{length_km|}}}{{{length_mi|}}}|{{{length_ref|}}}}}
| label31 = {{longitem|Basin size}}
| data31 = {{Infobox river/calcunit|free={{{basin_size|}}}|met={{{basin_size_km2|}}}|met_unit=km2|imp={{{basin_size_mi2|}}}|imp_unit=mi2}}<!--
-->{{#if:{{{basin_size_km2|}}}{{{basin_size_mi2|}}}|{{{basin_size_ref|}}}}}
| label32 = Width
| rowstyle32 = {{Infobox river/row-style}}
| data32 = {{#if:{{{width_min|}}}{{{width_avg|}}}{{{width_max|}}}| }}
| label33 = <span style="font-weight:normal"> • minimum</span>
| rowstyle33 = {{Infobox river/row-style}}
| data33 = {{Infobox river/calcunit|free={{{width_min|}}}|met_unit=m|imp_unit=yd}}
| label34 = <span style="font-weight:normal"> • average</span>
| rowstyle34 = {{Infobox river/row-style}}
| data34 = {{Infobox river/calcunit|free={{{width_avg|}}}|met_unit=m|imp_unit=yd}}
| label35 = <span style="font-weight:normal"> • maximum</span>
| rowstyle35 = {{Infobox river/row-style}}
| data35 = {{Infobox river/calcunit|free={{{width_max|}}}|met_unit=m|imp_unit=yd}}
| label36 = Depth
| data36 = {{#if:{{{depth_min|}}}{{{depth_avg|}}}{{{depth_max|}}}| }}
| label37 = <span style="font-weight:normal"> • minimum</span>
| rowstyle37 = {{Infobox river/row-style}}
| data37 = {{{depth_min|}}}
| label38 = <span style="font-weight:normal"> • average</span>
| rowstyle38 = {{Infobox river/row-style}}
| data38 = {{{depth_avg|}}}
| label39 = <span style="font-weight:normal"> • maximum</span>
| rowstyle39 = {{Infobox river/row-style}}
| data39 = {{{depth_max|}}}
| rowstyle50 = display:none;
| data50 = {{Infobox river/discharge|loc={{{discharge1_location|}}}
|min={{Infobox river/calcunit|free={{{discharge1_min|}}}|met_unit=m3/s|imp_unit=cuft/s}}
|avg={{Infobox river/calcunit|free={{{discharge1_avg|}}}|met_unit=m3/s|imp_unit=cuft/s}}
|max={{Infobox river/calcunit|free={{{discharge1_max|}}}|met_unit=m3/s|imp_unit=cuft/s}}
}}
| rowstyle51 = display:none;
| data51 = {{Infobox river/discharge|loc={{{discharge2_location|}}}|min={{{discharge2_min|}}}|avg={{{discharge2_avg|}}}|max={{{discharge2_max|}}}}}
| rowstyle52 = display:none;
| data52 = {{Infobox river/discharge|loc={{{discharge3_location|}}}|min={{{discharge3_min|}}}|avg={{{discharge3_avg|}}}|max={{{discharge3_max|}}}}}
| rowstyle53 = display:none;
| data53 = {{Infobox river/discharge|loc={{{discharge4_location|}}}|min={{{discharge4_min|}}}|avg={{{discharge4_avg|}}}|max={{{discharge4_max|}}}}}
| rowstyle54 = display:none;
| data54 = {{Infobox river/discharge|loc={{{discharge5_location|}}}|min={{{discharge5_min|}}}|avg={{{discharge5_avg|}}}|max={{{discharge5_max|}}}}}
| header55 = Basin features
| label56 = Progression
| data56 = {{{progression|}}}
| label57 = {{nowrap|[[Drainage basin|River system]]}}
| data57 = {{if empty|{{{river_system|}}}|{{{parent|}}}}}
| label58 = Landmarks
| data58 = {{if empty|{{{basin_landmarks|}}}|{{{landmark|}}}}}
| label59 = Cities
| data59 = {{if empty|{{{cities|}}}|{{{city|}}}}}
| label60 = Population
| data60 = {{{basin_population|}}}
| label61 = Tributaries
| data61 = {{#if:{{{tributaries_left|}}}{{{tributaries_right|}}}| }}
| rowstyle61 = {{Infobox river/row-style}}
| label62 = <span style="font-weight:normal"> • left</span>
| rowstyle62 = {{Infobox river/row-style}}
| data62 = {{{tributaries_left|}}}
| label63 = <span style="font-weight:normal"> • right</span>
| rowstyle63 = {{Infobox river/row-style}}
| data63 = {{{tributaries_right|}}}
| label64 = Waterbodies
| data64 = {{{waterbodies|}}}
| label65 = Waterfalls
| data65 = {{{waterfalls|}}}
| label66 = Bridges
| data66 = {{{bridges|}}}
| label67 = [[Inland port]]s
| data67 = {{{ports|}}}
| label68 = {{longitem|{{{custom_label|}}}}}
| data68 = {{{custom_data|}}}
| below = {{{extra|}}}
}}</includeonly>{{#invoke:Check for unknown parameters|check|unknown={{main other|[[Category:Pages using infobox river with unknown parameters|_VALUE_{{PAGENAME}}]]}}|preview=Page using [[Template:Infobox river]] with unknown parameter "_VALUE_"|ignoreblank=y|mapframe_args=y| pushpin_map_args = y | basin_landmarks | basin_population | basin_size | basin_size_km2 | basin_size_mi2 | basin_size_ref | bridges | cities | city | country | country_type | custom_data | custom_label | depth_avg | depth_max | depth_min | discharge1_avg | discharge1_location | discharge1_max | discharge1_min | discharge2_avg | discharge2_location | discharge2_max | discharge2_min | discharge3_avg | discharge3_location | discharge3_max | discharge3_min | discharge4_avg | discharge4_location | discharge4_max | discharge4_min | discharge5_avg | discharge5_location | discharge5_max | discharge5_min | district | district_type | embed | etymology | extra | fetchwikidata | image | image_alt | image_caption | image_size | image_upright | landmark | length | length_km | length_mi | length_ref | map | map_alt | map_caption | map_size | mouth | mouth_coord_ref | mouth_coordinates | mouth_elevation | mouth_location | municipality | municipality_type | name | name_etymology | name_native | name_other | native_name | nickname | other_name | parent | ports | progression | pushpin_map | pushpin_map_alt | pushpin_map_caption | pushpin_map_relief | pushpin_map_size | qid | region | region_type | river_system | source_confluence | source_confluence_coord_ref | source_confluence_coordinates | source_confluence_elevation | source_confluence_location | source1 | source1_coord_ref | source1_coordinates | source1_elevation | source1_length | source1_location | source2 | source2_coord_ref | source2_coordinates | source2_elevation | source2_length | source2_location | source3 | source3_coord_ref | source3_coordinates | source3_elevation | source3_length | source3_location | source4 | source4_coord_ref | source4_coordinates | source4_elevation | source4_length | source4_location | source5 | source5_coord_ref | source5_coordinates | source5_elevation | source5_length | source5_location | state | state_type | subdivision_name1 | subdivision_name2 | subdivision_name3 | subdivision_name4 | subdivision_name5 | subdivision_type1 | subdivision_type2 | subdivision_type3 | subdivision_type4 | subdivision_type5 | suppressfields | tributaries_left | tributaries_right | waterbodies | waterfalls | width_avg | width_max | width_min }}{{main other|{{#if:{{{map|}}}{{{pushpin_map|}}}||[[Category:Pages using infobox river with mapframe]]}}}}{{#invoke:Check for conflicting parameters|check
| template = [[Template:Infobox river]]
| cat = {{main other|Category:Pages using infobox river with conflicting parameters}}
| other_name; name_other
| etymology; name_etymology
| native_name; name_native
| subdivision_type1; country_type
| subdivision_name1; country
| subdivision_type2; state_type
| subdivision_name2; state
| subdivision_type3; region_type
| subdivision_name3; region
| subdivision_type4; district_type
| subdivision_name4; district
| subdivision_type5; municipality_type
| subdivision_name5; municipality
| river_system; parent
| basin_landmarks; landmark
| cities; city
}}{{#invoke:Check for deprecated parameters|check
| _category = {{main other|[[Category:Pages using infobox river with deprecated parameters|_VALUE_]]}}
| name_other = other_name
| pushpin_map_alt = pushpin_alt
| pushpin_map_relief = pushpin_relief
| pushpin_map_caption = pushpin_caption
| name_etymology = etymology
| name_native = native_name
| parent = river_system
| landmark = basin_landmarks
| city = cities
| country_type = subdivision_type1
| country = subdivision_name1
| state_type = subdivision_type2
| state = subdivision_name2
| region_type = subdivision_type3
| region = subdivision_name3
| district_type = subdivision_type4
| district = subdivision_name4
| municipality_type = subdivision_type5
| municipality = subdivision_name5
}}<noinclude>
{{Documentation}}
</noinclude>
pborx98ykwtmwy4n7fye2i4bwvnkv8l
1378153
1378152
2026-08-02T15:52:05Z
A826
72368
೧ revisions imported from [[:en:Template:Infobox_river]]
1378152
wikitext
text/x-wiki
<includeonly>{{main other|{{#if:{{Has short description}} |<!--Do nothing--> |{{#invoke:Type in location|main|River|{{comma separated entries
|1= {{Plain text|{{strip tags|{{replace|{{{subdivision_name2|}}}|</li>|, </li>}}}}}}
|2= {{Plain text|{{strip tags|{{replace|{{{subdivision_name1|}}}|</li>|, </li>}}}}}}
}}}}}}}}{{Infobox
| child = {{{embed|}}}
| abovestyle = background-color: #CEDEFF;color: #202122;
| above = {{if empty|{{{name|}}}|{{PAGENAMEBASE}}}}{{#if:{{{other_name|}}}{{{name_other|}}}|<br /><div class="nickname" style="display:inline;font-size:78%">{{if empty|{{{other_name|}}}|{{{name_other|}}}}}</div>}}
| autoheaders= y
| headerstyle= background-color: #CEDEFF;color: #202122;
| image = {{#invoke:InfoboxImage|InfoboxImage|image={{#invoke:WikidataIB |getValue|rank=best|P18 |name=image |qid={{{qid|}}} |suppressfields={{{suppressfields|}}} |fetchwikidata={{if empty|{{{fetchwikidata|}}}|ALL}} |onlysourced=no |noicon=yes |maxvals=1 |{{{image|}}}}}|size={{{image_size|}}}|sizedefault=250px|upright={{if empty|{{{image_upright|}}}|1}}|alt={{{image_alt|}}}|suppressplaceholder=yes}}
| caption = {{#if:{{{image|}}}|{{{image_caption|}}}|{{if empty|{{{image_caption|}}}|{{#invoke:WikidataIB|getValue|P18|qual=P2096|qualsonly=y|fwd=ALL}}}}}}
| image2 = {{#invoke:InfoboxImage|InfoboxImage|image={{{map|}}}|size={{{map_size|}}}|sizedefault=250px|alt={{{map_alt|}}}}}
| caption2 = {{{map_caption|}}}
| image3 = {{#if:{{both|{{{pushpin_map|}}}|{{{mouth_coordinates|}}}{{#property:P625}}}}|{{#invoke:Location map|infobox_pushpin_map
| default_width = 250
| coordinates = {{{mouth_coordinates|}}}
| pushpin_alt = {{if empty|{{{pushpin_map_alt|}}}|{{{pushpin_alt|}}}}}
| pushpin_relief = {{if empty|{{{pushpin_map_relief|}}}|{{{pushpin_relief|}}}|1}}
| pushpin_caption = {{if empty|{{{pushpin_map_caption|}}}|{{{pushpin_caption|}}}}}
}}}}
| image4 = {{#invoke:Infobox mapframe
|autoWithCaption
|onByDefault={{#if:{{{map|}}}{{{pushpin_map|}}}|no|yes}}
|mapframe-frame-width=250
|mapframe-stroke-color=#0000ff
|mapframe-marker=water
|mapframe-type=river
|mapframe-length_km={{{length_km|}}}|mapframe-length_mi={{{length_mi|}}}
|mapframe-area_km2={{{basin_size_km2|}}}|mapframe-area_mi2={{{basin_size_mi2|}}}
}}
| label1 = Etymology
| data1 = {{if empty|{{{etymology|}}}|{{{name_etymology|}}}}}
| class2 = nickname
| label2 = Nickname{{pluralize from text|{{{nickname|}}}|plural=s}}
| data2 = {{{nickname|}}}
| class3 = nickname
| label3 = Native name
| data3 = {{native name checker|{{if empty|{{{native_name|}}}|{{{name_native|}}}}}}}
| header5 = Location
| label6 = {{if empty|{{{subdivision_type1|}}}|{{{country_type|}}}|Country}}
| rowstyle6 = {{Infobox river/row-style}}
| data6 = {{if empty|{{{subdivision_name1|}}}|{{{country|}}}}}
| label7 = {{if empty|{{{subdivision_type2|}}}|{{{state_type|}}}|State}}
| rowstyle7 = {{Infobox river/row-style}}
| data7 = {{if empty|{{{subdivision_name2|}}}|{{{state|}}}}}
| label8 = {{if empty|{{{subdivision_type3|}}}|{{{region_type|}}}|Region}}
| rowstyle8 = {{Infobox river/row-style}}
| data8 = {{if empty|{{{subdivision_name3|}}}|{{{region|}}}}}
| label9 = {{if empty|{{{subdivision_type4|}}}|{{{district_type|}}}|District}}
| rowstyle9 = {{Infobox river/row-style}}
| data9 = {{if empty|{{{subdivision_name4|}}}|{{{district|}}}}}
| label10 = {{if empty|{{{subdivision_type5|}}}|{{{municipality_type|}}}|Municipality}}
| rowstyle10 = {{Infobox river/row-style}}
| data10 = {{if empty|{{{subdivision_name5|}}}|{{{municipality|}}}}}
| header15 = Physical characteristics
| rowstyle16 = display:none;
| data16 = {{Infobox river/source|source={{{source1|}}}|loc={{{source1_location|}}}|elev={{{source1_elevation|}}}|coord={{{source1_coordinates|}}}|len={{{source1_length|}}}|coord_ref={{{source1_coord_ref|}}}}}
| rowstyle17 = display:none;
| data17 = {{Infobox river/source|2nd source|source={{{source2|}}}|loc={{{source2_location|}}}|elev={{{source2_elevation|}}}|coord={{{source2_coordinates|}}}|len={{{source2_length|}}}|coord_ref={{{source2_coord_ref|}}}}}
| rowstyle18 = display:none;
| data18 = {{Infobox river/source|3rd source|source={{{source3|}}}|loc={{{source3_location|}}}|elev={{{source3_elevation|}}}|coord={{{source3_coordinates|}}}|len={{{source3_length|}}}|coord_ref={{{source3_coord_ref|}}}}}
| rowstyle19 = display:none;
| data19 = {{Infobox river/source|4th source|source={{{source4|}}}|loc={{{source4_location|}}}|elev={{{source4_elevation|}}}|coord={{{source4_coordinates|}}}|len={{{source4_length|}}}|coord_ref={{{source4_coord_ref|}}}}}
| rowstyle20 = display:none;
| data20 = {{Infobox river/source|5th source|source={{{source5|}}}|loc={{{source5_location|}}}|elev={{{source5_elevation|}}}|coord={{{source5_coordinates|}}}|len={{{source5_length|}}}|coord_ref={{{source5_coord_ref|}}}}}
| rowstyle21 = display:none;
| data21 = {{Infobox river/source|Source confluence|source={{{source_confluence|}}}|loc={{{source_confluence_location|}}}|elev={{{source_confluence_elevation|}}}|coord={{{source_confluence_coordinates|}}}|coord_ref={{{source_confluence_coord_ref|}}}}}
| label22 = [[River mouth|Mouth]]
| data22 = {{#if:{{{mouth|}}}|{{{mouth}}}|{{#if:{{{mouth_location|}}}{{{mouth_coordinates|}}}{{{mouth_elevation|}}}| }}}}
| label23 = <div style="display:inline;font-weight:normal"> • location</div>
| rowstyle23 = {{Infobox river/row-style}}
| data23 = {{{mouth_location|}}}
| label24 = <div style="display:inline;font-weight:normal"> • coordinates</div>
| rowstyle24 = {{Infobox river/row-style}}
| data24 = {{#if:{{{mouth_coordinates|}}}|{{#invoke:Coordinates|coordinsert|{{{mouth_coordinates}}}|type:river}}{{{mouth_coord_ref|}}}}}
| label25 = <div style="display:inline;font-weight:normal"> • elevation</div>
| rowstyle25 = {{Infobox river/row-style}}
| data25 = {{Infobox river/calcunit|free={{{mouth_elevation|}}}|met_unit=m|imp_unit=ft}}
| label30 = Length
| rowstyle30 = {{Infobox river/row-style}}
| data30 = {{Infobox river/calcunit|free={{{length|}}}|met={{{length_km|}}}|met_unit=km|imp={{{length_mi|}}}|imp_unit=mi}}<!--
-->{{#if:{{{length_km|}}}{{{length_mi|}}}|{{{length_ref|}}}}}
| label31 = {{longitem|Basin size}}
| data31 = {{Infobox river/calcunit|free={{{basin_size|}}}|met={{{basin_size_km2|}}}|met_unit=km2|imp={{{basin_size_mi2|}}}|imp_unit=mi2}}<!--
-->{{#if:{{{basin_size_km2|}}}{{{basin_size_mi2|}}}|{{{basin_size_ref|}}}}}
| label32 = Width
| rowstyle32 = {{Infobox river/row-style}}
| data32 = {{#if:{{{width_min|}}}{{{width_avg|}}}{{{width_max|}}}| }}
| label33 = <span style="font-weight:normal"> • minimum</span>
| rowstyle33 = {{Infobox river/row-style}}
| data33 = {{Infobox river/calcunit|free={{{width_min|}}}|met_unit=m|imp_unit=yd}}
| label34 = <span style="font-weight:normal"> • average</span>
| rowstyle34 = {{Infobox river/row-style}}
| data34 = {{Infobox river/calcunit|free={{{width_avg|}}}|met_unit=m|imp_unit=yd}}
| label35 = <span style="font-weight:normal"> • maximum</span>
| rowstyle35 = {{Infobox river/row-style}}
| data35 = {{Infobox river/calcunit|free={{{width_max|}}}|met_unit=m|imp_unit=yd}}
| label36 = Depth
| data36 = {{#if:{{{depth_min|}}}{{{depth_avg|}}}{{{depth_max|}}}| }}
| label37 = <span style="font-weight:normal"> • minimum</span>
| rowstyle37 = {{Infobox river/row-style}}
| data37 = {{{depth_min|}}}
| label38 = <span style="font-weight:normal"> • average</span>
| rowstyle38 = {{Infobox river/row-style}}
| data38 = {{{depth_avg|}}}
| label39 = <span style="font-weight:normal"> • maximum</span>
| rowstyle39 = {{Infobox river/row-style}}
| data39 = {{{depth_max|}}}
| rowstyle50 = display:none;
| data50 = {{Infobox river/discharge|loc={{{discharge1_location|}}}
|min={{Infobox river/calcunit|free={{{discharge1_min|}}}|met_unit=m3/s|imp_unit=cuft/s}}
|avg={{Infobox river/calcunit|free={{{discharge1_avg|}}}|met_unit=m3/s|imp_unit=cuft/s}}
|max={{Infobox river/calcunit|free={{{discharge1_max|}}}|met_unit=m3/s|imp_unit=cuft/s}}
}}
| rowstyle51 = display:none;
| data51 = {{Infobox river/discharge|loc={{{discharge2_location|}}}|min={{{discharge2_min|}}}|avg={{{discharge2_avg|}}}|max={{{discharge2_max|}}}}}
| rowstyle52 = display:none;
| data52 = {{Infobox river/discharge|loc={{{discharge3_location|}}}|min={{{discharge3_min|}}}|avg={{{discharge3_avg|}}}|max={{{discharge3_max|}}}}}
| rowstyle53 = display:none;
| data53 = {{Infobox river/discharge|loc={{{discharge4_location|}}}|min={{{discharge4_min|}}}|avg={{{discharge4_avg|}}}|max={{{discharge4_max|}}}}}
| rowstyle54 = display:none;
| data54 = {{Infobox river/discharge|loc={{{discharge5_location|}}}|min={{{discharge5_min|}}}|avg={{{discharge5_avg|}}}|max={{{discharge5_max|}}}}}
| header55 = Basin features
| label56 = Progression
| data56 = {{{progression|}}}
| label57 = {{nowrap|[[Drainage basin|River system]]}}
| data57 = {{if empty|{{{river_system|}}}|{{{parent|}}}}}
| label58 = Landmarks
| data58 = {{if empty|{{{basin_landmarks|}}}|{{{landmark|}}}}}
| label59 = Cities
| data59 = {{if empty|{{{cities|}}}|{{{city|}}}}}
| label60 = Population
| data60 = {{{basin_population|}}}
| label61 = Tributaries
| data61 = {{#if:{{{tributaries_left|}}}{{{tributaries_right|}}}| }}
| rowstyle61 = {{Infobox river/row-style}}
| label62 = <span style="font-weight:normal"> • left</span>
| rowstyle62 = {{Infobox river/row-style}}
| data62 = {{{tributaries_left|}}}
| label63 = <span style="font-weight:normal"> • right</span>
| rowstyle63 = {{Infobox river/row-style}}
| data63 = {{{tributaries_right|}}}
| label64 = Waterbodies
| data64 = {{{waterbodies|}}}
| label65 = Waterfalls
| data65 = {{{waterfalls|}}}
| label66 = Bridges
| data66 = {{{bridges|}}}
| label67 = [[Inland port]]s
| data67 = {{{ports|}}}
| label68 = {{longitem|{{{custom_label|}}}}}
| data68 = {{{custom_data|}}}
| below = {{{extra|}}}
}}</includeonly>{{#invoke:Check for unknown parameters|check|unknown={{main other|[[Category:Pages using infobox river with unknown parameters|_VALUE_{{PAGENAME}}]]}}|preview=Page using [[Template:Infobox river]] with unknown parameter "_VALUE_"|ignoreblank=y|mapframe_args=y| pushpin_map_args = y | basin_landmarks | basin_population | basin_size | basin_size_km2 | basin_size_mi2 | basin_size_ref | bridges | cities | city | country | country_type | custom_data | custom_label | depth_avg | depth_max | depth_min | discharge1_avg | discharge1_location | discharge1_max | discharge1_min | discharge2_avg | discharge2_location | discharge2_max | discharge2_min | discharge3_avg | discharge3_location | discharge3_max | discharge3_min | discharge4_avg | discharge4_location | discharge4_max | discharge4_min | discharge5_avg | discharge5_location | discharge5_max | discharge5_min | district | district_type | embed | etymology | extra | fetchwikidata | image | image_alt | image_caption | image_size | image_upright | landmark | length | length_km | length_mi | length_ref | map | map_alt | map_caption | map_size | mouth | mouth_coord_ref | mouth_coordinates | mouth_elevation | mouth_location | municipality | municipality_type | name | name_etymology | name_native | name_other | native_name | nickname | other_name | parent | ports | progression | pushpin_map | pushpin_map_alt | pushpin_map_caption | pushpin_map_relief | pushpin_map_size | qid | region | region_type | river_system | source_confluence | source_confluence_coord_ref | source_confluence_coordinates | source_confluence_elevation | source_confluence_location | source1 | source1_coord_ref | source1_coordinates | source1_elevation | source1_length | source1_location | source2 | source2_coord_ref | source2_coordinates | source2_elevation | source2_length | source2_location | source3 | source3_coord_ref | source3_coordinates | source3_elevation | source3_length | source3_location | source4 | source4_coord_ref | source4_coordinates | source4_elevation | source4_length | source4_location | source5 | source5_coord_ref | source5_coordinates | source5_elevation | source5_length | source5_location | state | state_type | subdivision_name1 | subdivision_name2 | subdivision_name3 | subdivision_name4 | subdivision_name5 | subdivision_type1 | subdivision_type2 | subdivision_type3 | subdivision_type4 | subdivision_type5 | suppressfields | tributaries_left | tributaries_right | waterbodies | waterfalls | width_avg | width_max | width_min }}{{main other|{{#if:{{{map|}}}{{{pushpin_map|}}}||[[Category:Pages using infobox river with mapframe]]}}}}{{#invoke:Check for conflicting parameters|check
| template = [[Template:Infobox river]]
| cat = {{main other|Category:Pages using infobox river with conflicting parameters}}
| other_name; name_other
| etymology; name_etymology
| native_name; name_native
| subdivision_type1; country_type
| subdivision_name1; country
| subdivision_type2; state_type
| subdivision_name2; state
| subdivision_type3; region_type
| subdivision_name3; region
| subdivision_type4; district_type
| subdivision_name4; district
| subdivision_type5; municipality_type
| subdivision_name5; municipality
| river_system; parent
| basin_landmarks; landmark
| cities; city
}}{{#invoke:Check for deprecated parameters|check
| _category = {{main other|[[Category:Pages using infobox river with deprecated parameters|_VALUE_]]}}
| name_other = other_name
| pushpin_map_alt = pushpin_alt
| pushpin_map_relief = pushpin_relief
| pushpin_map_caption = pushpin_caption
| name_etymology = etymology
| name_native = native_name
| parent = river_system
| landmark = basin_landmarks
| city = cities
| country_type = subdivision_type1
| country = subdivision_name1
| state_type = subdivision_type2
| state = subdivision_name2
| region_type = subdivision_type3
| region = subdivision_name3
| district_type = subdivision_type4
| district = subdivision_name4
| municipality_type = subdivision_type5
| municipality = subdivision_name5
}}<noinclude>
{{Documentation}}
</noinclude>
pborx98ykwtmwy4n7fye2i4bwvnkv8l
1378174
1378153
2026-08-02T15:54:17Z
A826
72368
1378174
wikitext
text/x-wiki
<includeonly>{{main other|{{#if:{{Has short description}} |<!--ಏನೂ ಮಾಡಬೇಡ--> |{{#invoke:Type in location|main|ನದಿ|{{comma separated entries
|1= {{Plain text|{{strip tags|{{replace|{{{subdivision_name2|}}}|</li>|, </li>}}}}}}
|2= {{Plain text|{{strip tags|{{replace|{{{subdivision_name1|}}}|</li>|, </li>}}}}}}
}}}}}}}}{{Infobox
| child = {{{embed|}}}
| abovestyle = background-color: #CEDEFF;color: #202122;
| above = {{if empty|{{{name|}}}|{{PAGENAMEBASE}}}}{{#if:{{{other_name|}}}{{{name_other|}}}|<br /><div class="nickname" style="display:inline;font-size:78%">{{if empty|{{{other_name|}}}|{{{name_other|}}}}}</div>}}
| autoheaders= y
| headerstyle= background-color: #CEDEFF;color: #202122;
| image = {{#invoke:InfoboxImage|InfoboxImage|image={{#invoke:WikidataIB |getValue|rank=best|P18 |name=image |qid={{{qid|}}} |suppressfields={{{suppressfields|}}} |fetchwikidata={{if empty|{{{fetchwikidata|}}}|ALL}} |onlysourced=no |noicon=yes |maxvals=1 |{{{image|}}}}}|size={{{image_size|}}}|sizedefault=250px|upright={{if empty|{{{image_upright|}}}|1}}|alt={{{image_alt|}}}|suppressplaceholder=yes}}
| caption = {{#if:{{{image|}}}|{{{image_caption|}}}|{{if empty|{{{image_caption|}}}|{{#invoke:WikidataIB|getValue|P18|qual=P2096|qualsonly=y|fwd=ALL}}}}}}
| image2 = {{#invoke:InfoboxImage|InfoboxImage|image={{{map|}}}|size={{{map_size|}}}|sizedefault=250px|alt={{{map_alt|}}}}}
| caption2 = {{{map_caption|}}}
| image3 = {{#if:{{both|{{{pushpin_map|}}}|{{{mouth_coordinates|}}}{{#property:P625}}}}|{{#invoke:Location map|infobox_pushpin_map
| default_width = 250
| coordinates = {{{mouth_coordinates|}}}
| pushpin_alt = {{if empty|{{{pushpin_map_alt|}}}|{{{pushpin_alt|}}}}}
| pushpin_relief = {{if empty|{{{pushpin_map_relief|}}}|{{{pushpin_relief|}}}|1}}
| pushpin_caption = {{if empty|{{{pushpin_map_caption|}}}|{{{pushpin_caption|}}}}}
}}}}
| image4 = {{#invoke:Infobox mapframe
|autoWithCaption
|onByDefault={{#if:{{{map|}}}{{{pushpin_map|}}}|no|yes}}
|mapframe-frame-width=250
|mapframe-stroke-color=#0000ff
|mapframe-marker=water
|mapframe-type=river
|mapframe-length_km={{{length_km|}}}|mapframe-length_mi={{{length_mi|}}}
|mapframe-area_km2={{{basin_size_km2|}}}|mapframe-area_mi2={{{basin_size_mi2|}}}
}}
| label1 = ವ್ಯುತ್ಪತ್ತಿ
| data1 = {{if empty|{{{etymology|}}}|{{{name_etymology|}}}}}
| class2 = nickname
| label2 = ಅಡ್ಡಹೆಸರು{{pluralize from text|{{{nickname|}}}|plural=s}}
| data2 = {{{nickname|}}}
| class3 = nickname
| label3 = ಸ್ಥಳೀಯ ಹೆಸರು
| data3 = {{native name checker|{{if empty|{{{native_name|}}}|{{{name_native|}}}}}}}
| header5 = ಸ್ಥಳ
| label6 = {{if empty|{{{subdivision_type1|}}}|{{{country_type|}}}|ದೇಶ}}
| rowstyle6 = {{Infobox river/row-style}}
| data6 = {{if empty|{{{subdivision_name1|}}}|{{{country|}}}}}
| label7 = {{if empty|{{{subdivision_type2|}}}|{{{state_type|}}}|ರಾಜ್ಯ}}
| rowstyle7 = {{Infobox river/row-style}}
| data7 = {{if empty|{{{subdivision_name2|}}}|{{{state|}}}}}
| label8 = {{if empty|{{{subdivision_type3|}}}|{{{region_type|}}}|ಪ್ರದೇಶ}}
| rowstyle8 = {{Infobox river/row-style}}
| data8 = {{if empty|{{{subdivision_name3|}}}|{{{region|}}}}}
| label9 = {{if empty|{{{subdivision_type4|}}}|{{{district_type|}}}|ಜಿಲ್ಲೆ}}
| rowstyle9 = {{Infobox river/row-style}}
| data9 = {{if empty|{{{subdivision_name4|}}}|{{{district|}}}}}
| label10 = {{if empty|{{{subdivision_type5|}}}|{{{municipality_type|}}}|ನಗರಸಭೆ}}
| rowstyle10 = {{Infobox river/row-style}}
| data10 = {{if empty|{{{subdivision_name5|}}}|{{{municipality|}}}}}
| header15 = ಭೌತಿಕ ಲಕ್ಷಣಗಳು
| rowstyle16 = display:none;
| data16 = {{Infobox river/source|source={{{source1|}}}|loc={{{source1_location|}}}|elev={{{source1_elevation|}}}|coord={{{source1_coordinates|}}}|len={{{source1_length|}}}|coord_ref={{{source1_coord_ref|}}}}}
| rowstyle17 = display:none;
| data17 = {{Infobox river/source|2ನೇ ಉಗಮ|source={{{source2|}}}|loc={{{source2_location|}}}|elev={{{source2_elevation|}}}|coord={{{source2_coordinates|}}}|len={{{source2_length|}}}|coord_ref={{{source2_coord_ref|}}}}}
| rowstyle18 = display:none;
| data18 = {{Infobox river/source|3ನೇ ಉಗಮ|source={{{source3|}}}|loc={{{source3_location|}}}|elev={{{source3_elevation|}}}|coord={{{source3_coordinates|}}}|len={{{source3_length|}}}|coord_ref={{{source3_coord_ref|}}}}}
| rowstyle19 = display:none;
| data19 = {{Infobox river/source|4ನೇ ಉಗಮ|source={{{source4|}}}|loc={{{source4_location|}}}|elev={{{source4_elevation|}}}|coord={{{source4_coordinates|}}}|len={{{source4_length|}}}|coord_ref={{{source4_coord_ref|}}}}}
| rowstyle20 = display:none;
| data20 = {{Infobox river/source|5ನೇ ಉಗಮ|source={{{source5|}}}|loc={{{source5_location|}}}|elev={{{source5_elevation|}}}|coord={{{source5_coordinates|}}}|len={{{source5_length|}}}|coord_ref={{{source5_coord_ref|}}}}}
| rowstyle21 = display:none;
| data21 = {{Infobox river/source|ಉಗಮ ಸಂಗಮ|source={{{source_confluence|}}}|loc={{{source_confluence_location|}}}|elev={{{source_confluence_elevation|}}}|coord={{{source_confluence_coordinates|}}}|coord_ref={{{source_confluence_coord_ref|}}}}}
| label22 = [[ನದೀಮುಖ|ಮುಖಭಾಗ]]
| data22 = {{#if:{{{mouth|}}}|{{{mouth}}}|{{#if:{{{mouth_location|}}}{{{mouth_coordinates|}}}{{{mouth_elevation|}}}| }}}}
| label23 = <div style="display:inline;font-weight:normal"> • ಸ್ಥಳ</div>
| rowstyle23 = {{Infobox river/row-style}}
| data23 = {{{mouth_location|}}}
| label24 = <div style="display:inline;font-weight:normal"> • ನಿರ್ದೇಶಾಂಕಗಳು</div>
| rowstyle24 = {{Infobox river/row-style}}
| data24 = {{#if:{{{mouth_coordinates|}}}|{{#invoke:Coordinates|coordinsert|{{{mouth_coordinates}}}|type:river}}{{{mouth_coord_ref|}}}}}
| label25 = <div style="display:inline;font-weight:normal"> • ಎತ್ತರ</div>
| rowstyle25 = {{Infobox river/row-style}}
| data25 = {{Infobox river/calcunit|free={{{mouth_elevation|}}}|met_unit=m|imp_unit=ft}}
| label30 = ಉದ್ದ
| rowstyle30 = {{Infobox river/row-style}}
| data30 = {{Infobox river/calcunit|free={{{length|}}}|met={{{length_km|}}}|met_unit=ಕಿಮೀ|imp={{{length_mi|}}}|imp_unit=ಮೈ}}<!--
-->{{#if:{{{length_km|}}}{{{length_mi|}}}|{{{length_ref|}}}}}
| label31 = {{longitem|ಜಲಾನಯನ ಪ್ರದೇಶದ ಗಾತ್ರ}}
| data31 = {{Infobox river/calcunit|free={{{basin_size|}}}|met={{{basin_size_km2|}}}|met_unit=ಕಿಮೀ²|imp={{{basin_size_mi2|}}}|imp_unit=ಮೈ²}}<!--
-->{{#if:{{{basin_size_km2|}}}{{{basin_size_mi2|}}}|{{{basin_size_ref|}}}}}
| label32 = ಅಗಲ
| rowstyle32 = {{Infobox river/row-style}}
| data32 = {{#if:{{{width_min|}}}{{{width_avg|}}}{{{width_max|}}}| }}
| label33 = <span style="font-weight:normal"> • ಕನಿಷ್ಠ</span>
| rowstyle33 = {{Infobox river/row-style}}
| data33 = {{Infobox river/calcunit|free={{{width_min|}}}|met_unit=m|imp_unit=yd}}
| label34 = <span style="font-weight:normal"> • ಸರಾಸರಿ</span>
| rowstyle34 = {{Infobox river/row-style}}
| data34 = {{Infobox river/calcunit|free={{{width_avg|}}}|met_unit=m|imp_unit=yd}}
| label35 = <span style="font-weight:normal"> • ಗರಿಷ್ಠ</span>
| rowstyle35 = {{Infobox river/row-style}}
| data35 = {{Infobox river/calcunit|free={{{width_max|}}}|met_unit=m|imp_unit=yd}}
| label36 = ಆಳ
| data36 = {{#if:{{{depth_min|}}}{{{depth_avg|}}}{{{depth_max|}}}| }}
| label37 = <span style="font-weight:normal"> • ಕನಿಷ್ಠ</span>
| rowstyle37 = {{Infobox river/row-style}}
| data37 = {{{depth_min|}}}
| label38 = <span style="font-weight:normal"> • ಸರಾಸರಿ</span>
| rowstyle38 = {{Infobox river/row-style}}
| data38 = {{{depth_avg|}}}
| label39 = <span style="font-weight:normal"> • ಗರಿಷ್ಠ</span>
| rowstyle39 = {{Infobox river/row-style}}
| data39 = {{{depth_max|}}}
| rowstyle50 = display:none;
| data50 = {{Infobox river/discharge|loc={{{discharge1_location|}}}
|min={{Infobox river/calcunit|free={{{discharge1_min|}}}|met_unit=ಮೀ³/ಸೆ|imp_unit=ಘನ ಅಡಿ/ಸೆ}}
|avg={{Infobox river/calcunit|free={{{discharge1_avg|}}}|met_unit=ಮೀ³/ಸೆ|imp_unit=ಘನ ಅಡಿ/ಸೆ}}
|max={{Infobox river/calcunit|free={{{discharge1_max|}}}|met_unit=ಮೀ³/ಸೆ|imp_unit=ಘನ ಅಡಿ/ಸೆ}}
}}
| rowstyle51 = display:none;
| data51 = {{Infobox river/discharge|loc={{{discharge2_location|}}}|min={{{discharge2_min|}}}|avg={{{discharge2_avg|}}}|max={{{discharge2_max|}}}}}
| rowstyle52 = display:none;
| data52 = {{Infobox river/discharge|loc={{{discharge3_location|}}}|min={{{discharge3_min|}}}|avg={{{discharge3_avg|}}}|max={{{discharge3_max|}}}}}
| rowstyle53 = display:none;
| data53 = {{Infobox river/discharge|loc={{{discharge4_location|}}}|min={{{discharge4_min|}}}|avg={{{discharge4_avg|}}}|max={{{discharge4_max|}}}}}
| rowstyle54 = display:none;
| data54 = {{Infobox river/discharge|loc={{{discharge5_location|}}}|min={{{discharge5_min|}}}|avg={{{discharge5_avg|}}}|max={{{discharge5_max|}}}}}
| header55 = ಜಲಾನಯನ ಲಕ್ಷಣಗಳು
| label56 = ಹರಿವಿನ ಮಾರ್ಗ
| data56 = {{{progression|}}}
| label57 = {{nowrap|[[ಜಲಾನಯನ ವ್ಯವಸ್ಥೆ|ನದಿ ವ್ಯವಸ್ಥೆ]]}}
| data57 = {{if empty|{{{river_system|}}}|{{{parent|}}}}}
| label58 = ಹೆಗ್ಗುರುತುಗಳು
| data58 = {{if empty|{{{basin_landmarks|}}}|{{{landmark|}}}}}
| label59 = ನಗರಗಳು
| data59 = {{if empty|{{{cities|}}}|{{{city|}}}}}
| label60 = ಜನಸಂಖ್ಯೆ
| data60 = {{{basin_population|}}}
| label61 = ಉಪನದಿಗಳು
| data61 = {{#if:{{{tributaries_left|}}}{{{tributaries_right|}}}| }}
| rowstyle61 = {{Infobox river/row-style}}
| label62 = <span style="font-weight:normal"> • ಎಡ</span>
| rowstyle62 = {{Infobox river/row-style}}
| data62 = {{{tributaries_left|}}}
| label63 = <span style="font-weight:normal"> • ಬಲ</span>
| rowstyle63 = {{Infobox river/row-style}}
| data63 = {{{tributaries_right|}}}
| label64 = ಜಲರಾಶಿಗಳು
| data64 = {{{waterbodies|}}}
| label65 = ಜಲಪಾತಗಳು
| data65 = {{{waterfalls|}}}
| label66 = ಸೇತುವೆಗಳು
| data66 = {{{bridges|}}}
| label67 = [[ಒಳನಾಡು ಬಂದರು]]ಗಳು
| data67 = {{{ports|}}}
| label68 = {{longitem|{{{custom_label|}}}}}
| data68 = {{{custom_data|}}}
| below = {{{extra|}}}
}}</includeonly>{{#invoke:Check for unknown parameters|check|unknown={{main other|[[ವರ್ಗ:ಅಜ್ಞಾತ ನಿಯತಾಂಕಗಳೊಂದಿಗೆ infobox ನದಿ ಬಳಸುವ ಪುಟಗಳು|_VALUE_{{PAGENAME}}]]}}|preview=[[ಟೆಂಪ್ಲೇಟು:Infobox ನದಿ]] ಅನ್ನು ಅಜ್ಞಾತ ನಿಯತಾಂಕ "_VALUE_" ಜೊತೆಗೆ ಬಳಸಲಾಗುತ್ತಿದೆ|ignoreblank=y|mapframe_args=y| pushpin_map_args = y | basin_landmarks | basin_population | basin_size | basin_size_km2 | basin_size_mi2 | basin_size_ref | bridges | cities | city | country | country_type | custom_data | custom_label | depth_avg | depth_max | depth_min | discharge1_avg | discharge1_location | discharge1_max | discharge1_min | discharge2_avg | discharge2_location | discharge2_max | discharge2_min | discharge3_avg | discharge3_location | discharge3_max | discharge3_min | discharge4_avg | discharge4_location | discharge4_max | discharge4_min | discharge5_avg | discharge5_location | discharge5_max | discharge5_min | district | district_type | embed | etymology | extra | fetchwikidata | image | image_alt | image_caption | image_size | image_upright | landmark | length | length_km | length_mi | length_ref | map | map_alt | map_caption | map_size | mouth | mouth_coord_ref | mouth_coordinates | mouth_elevation | mouth_location | municipality | municipality_type | name | name_etymology | name_native | name_other | native_name | nickname | other_name | parent | ports | progression | pushpin_map | pushpin_map_alt | pushpin_map_caption | pushpin_map_relief | pushpin_map_size | qid | region | region_type | river_system | source_confluence | source_confluence_coord_ref | source_confluence_coordinates | source_confluence_elevation | source_confluence_location | source1 | source1_coord_ref | source1_coordinates | source1_elevation | source1_length | source1_location | source2 | source2_coord_ref | source2_coordinates | source2_elevation | source2_length | source2_location | source3 | source3_coord_ref | source3_coordinates | source3_elevation | source3_length | source3_location | source4 | source4_coord_ref | source4_coordinates | source4_elevation | source4_length | source4_location | source5 | source5_coord_ref | source5_coordinates | source5_elevation | source5_length | source5_location | state | state_type | subdivision_name1 | subdivision_name2 | subdivision_name3 | subdivision_name4 | subdivision_name5 | subdivision_type1 | subdivision_type2 | subdivision_type3 | subdivision_type4 | subdivision_type5 | suppressfields | tributaries_left | tributaries_right | waterbodies | waterfalls | width_avg | width_max | width_min }}{{main other|{{#if:{{{map|}}}{{{pushpin_map|}}}||[[ವರ್ಗ:mapframe ಜೊತೆಗೆ infobox ನದಿ ಬಳಸುವ ಪುಟಗಳು]]}}}}{{#invoke:Check for conflicting parameters|check
| template = [[ಟೆಂಪ್ಲೇಟು:Infobox ನದಿ]]
| cat = {{main other|ವರ್ಗ:ವಿರುದ್ಧ ನಿಯತಾಂಕಗಳೊಂದಿಗೆ infobox ನದಿ ಬಳಸುವ ಪುಟಗಳು}}
| other_name; name_other
| etymology; name_etymology
| native_name; name_native
| subdivision_type1; country_type
| subdivision_name1; country
| subdivision_type2; state_type
| subdivision_name2; state
| subdivision_type3; region_type
| subdivision_name3; region
| subdivision_type4; district_type
| subdivision_name4; district
| subdivision_type5; municipality_type
| subdivision_name5; municipality
| river_system; parent
| basin_landmarks; landmark
| cities; city
}}{{#invoke:Check for deprecated parameters|check
| _category = {{main other|[[ವರ್ಗ:ಬಳಕೆಯಲ್ಲಿಲ್ಲದ ನಿಯತಾಂಕಗಳೊಂದಿಗೆ infobox ನದಿ ಬಳಸುವ ಪುಟಗಳು|_VALUE_]]}}
| name_other = other_name
| pushpin_map_alt = pushpin_alt
| pushpin_map_relief = pushpin_relief
| pushpin_map_caption = pushpin_caption
| name_etymology = etymology
| name_native = native_name
| parent = river_system
| landmark = basin_landmarks
| city = cities
| country_type = subdivision_type1
| country = subdivision_name1
| state_type = subdivision_type2
| state = subdivision_name2
| region_type = subdivision_type3
| region = subdivision_name3
| district_type = subdivision_type4
| district = subdivision_name4
| municipality_type = subdivision_type5
| municipality = subdivision_name5
}}<noinclude>
{{Documentation}}
</noinclude>
2vifgh8zhisbcv1zx7h4t4ogiwwxjf1
1378175
1378174
2026-08-02T15:55:28Z
A826
72368
A826 [[ಟೆಂಪ್ಲೇಟು:Infobox river]] ಪುಟವನ್ನು [[ಟೆಂಪ್ಲೇಟು:Infobox ನದಿ]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ
1378174
wikitext
text/x-wiki
<includeonly>{{main other|{{#if:{{Has short description}} |<!--ಏನೂ ಮಾಡಬೇಡ--> |{{#invoke:Type in location|main|ನದಿ|{{comma separated entries
|1= {{Plain text|{{strip tags|{{replace|{{{subdivision_name2|}}}|</li>|, </li>}}}}}}
|2= {{Plain text|{{strip tags|{{replace|{{{subdivision_name1|}}}|</li>|, </li>}}}}}}
}}}}}}}}{{Infobox
| child = {{{embed|}}}
| abovestyle = background-color: #CEDEFF;color: #202122;
| above = {{if empty|{{{name|}}}|{{PAGENAMEBASE}}}}{{#if:{{{other_name|}}}{{{name_other|}}}|<br /><div class="nickname" style="display:inline;font-size:78%">{{if empty|{{{other_name|}}}|{{{name_other|}}}}}</div>}}
| autoheaders= y
| headerstyle= background-color: #CEDEFF;color: #202122;
| image = {{#invoke:InfoboxImage|InfoboxImage|image={{#invoke:WikidataIB |getValue|rank=best|P18 |name=image |qid={{{qid|}}} |suppressfields={{{suppressfields|}}} |fetchwikidata={{if empty|{{{fetchwikidata|}}}|ALL}} |onlysourced=no |noicon=yes |maxvals=1 |{{{image|}}}}}|size={{{image_size|}}}|sizedefault=250px|upright={{if empty|{{{image_upright|}}}|1}}|alt={{{image_alt|}}}|suppressplaceholder=yes}}
| caption = {{#if:{{{image|}}}|{{{image_caption|}}}|{{if empty|{{{image_caption|}}}|{{#invoke:WikidataIB|getValue|P18|qual=P2096|qualsonly=y|fwd=ALL}}}}}}
| image2 = {{#invoke:InfoboxImage|InfoboxImage|image={{{map|}}}|size={{{map_size|}}}|sizedefault=250px|alt={{{map_alt|}}}}}
| caption2 = {{{map_caption|}}}
| image3 = {{#if:{{both|{{{pushpin_map|}}}|{{{mouth_coordinates|}}}{{#property:P625}}}}|{{#invoke:Location map|infobox_pushpin_map
| default_width = 250
| coordinates = {{{mouth_coordinates|}}}
| pushpin_alt = {{if empty|{{{pushpin_map_alt|}}}|{{{pushpin_alt|}}}}}
| pushpin_relief = {{if empty|{{{pushpin_map_relief|}}}|{{{pushpin_relief|}}}|1}}
| pushpin_caption = {{if empty|{{{pushpin_map_caption|}}}|{{{pushpin_caption|}}}}}
}}}}
| image4 = {{#invoke:Infobox mapframe
|autoWithCaption
|onByDefault={{#if:{{{map|}}}{{{pushpin_map|}}}|no|yes}}
|mapframe-frame-width=250
|mapframe-stroke-color=#0000ff
|mapframe-marker=water
|mapframe-type=river
|mapframe-length_km={{{length_km|}}}|mapframe-length_mi={{{length_mi|}}}
|mapframe-area_km2={{{basin_size_km2|}}}|mapframe-area_mi2={{{basin_size_mi2|}}}
}}
| label1 = ವ್ಯುತ್ಪತ್ತಿ
| data1 = {{if empty|{{{etymology|}}}|{{{name_etymology|}}}}}
| class2 = nickname
| label2 = ಅಡ್ಡಹೆಸರು{{pluralize from text|{{{nickname|}}}|plural=s}}
| data2 = {{{nickname|}}}
| class3 = nickname
| label3 = ಸ್ಥಳೀಯ ಹೆಸರು
| data3 = {{native name checker|{{if empty|{{{native_name|}}}|{{{name_native|}}}}}}}
| header5 = ಸ್ಥಳ
| label6 = {{if empty|{{{subdivision_type1|}}}|{{{country_type|}}}|ದೇಶ}}
| rowstyle6 = {{Infobox river/row-style}}
| data6 = {{if empty|{{{subdivision_name1|}}}|{{{country|}}}}}
| label7 = {{if empty|{{{subdivision_type2|}}}|{{{state_type|}}}|ರಾಜ್ಯ}}
| rowstyle7 = {{Infobox river/row-style}}
| data7 = {{if empty|{{{subdivision_name2|}}}|{{{state|}}}}}
| label8 = {{if empty|{{{subdivision_type3|}}}|{{{region_type|}}}|ಪ್ರದೇಶ}}
| rowstyle8 = {{Infobox river/row-style}}
| data8 = {{if empty|{{{subdivision_name3|}}}|{{{region|}}}}}
| label9 = {{if empty|{{{subdivision_type4|}}}|{{{district_type|}}}|ಜಿಲ್ಲೆ}}
| rowstyle9 = {{Infobox river/row-style}}
| data9 = {{if empty|{{{subdivision_name4|}}}|{{{district|}}}}}
| label10 = {{if empty|{{{subdivision_type5|}}}|{{{municipality_type|}}}|ನಗರಸಭೆ}}
| rowstyle10 = {{Infobox river/row-style}}
| data10 = {{if empty|{{{subdivision_name5|}}}|{{{municipality|}}}}}
| header15 = ಭೌತಿಕ ಲಕ್ಷಣಗಳು
| rowstyle16 = display:none;
| data16 = {{Infobox river/source|source={{{source1|}}}|loc={{{source1_location|}}}|elev={{{source1_elevation|}}}|coord={{{source1_coordinates|}}}|len={{{source1_length|}}}|coord_ref={{{source1_coord_ref|}}}}}
| rowstyle17 = display:none;
| data17 = {{Infobox river/source|2ನೇ ಉಗಮ|source={{{source2|}}}|loc={{{source2_location|}}}|elev={{{source2_elevation|}}}|coord={{{source2_coordinates|}}}|len={{{source2_length|}}}|coord_ref={{{source2_coord_ref|}}}}}
| rowstyle18 = display:none;
| data18 = {{Infobox river/source|3ನೇ ಉಗಮ|source={{{source3|}}}|loc={{{source3_location|}}}|elev={{{source3_elevation|}}}|coord={{{source3_coordinates|}}}|len={{{source3_length|}}}|coord_ref={{{source3_coord_ref|}}}}}
| rowstyle19 = display:none;
| data19 = {{Infobox river/source|4ನೇ ಉಗಮ|source={{{source4|}}}|loc={{{source4_location|}}}|elev={{{source4_elevation|}}}|coord={{{source4_coordinates|}}}|len={{{source4_length|}}}|coord_ref={{{source4_coord_ref|}}}}}
| rowstyle20 = display:none;
| data20 = {{Infobox river/source|5ನೇ ಉಗಮ|source={{{source5|}}}|loc={{{source5_location|}}}|elev={{{source5_elevation|}}}|coord={{{source5_coordinates|}}}|len={{{source5_length|}}}|coord_ref={{{source5_coord_ref|}}}}}
| rowstyle21 = display:none;
| data21 = {{Infobox river/source|ಉಗಮ ಸಂಗಮ|source={{{source_confluence|}}}|loc={{{source_confluence_location|}}}|elev={{{source_confluence_elevation|}}}|coord={{{source_confluence_coordinates|}}}|coord_ref={{{source_confluence_coord_ref|}}}}}
| label22 = [[ನದೀಮುಖ|ಮುಖಭಾಗ]]
| data22 = {{#if:{{{mouth|}}}|{{{mouth}}}|{{#if:{{{mouth_location|}}}{{{mouth_coordinates|}}}{{{mouth_elevation|}}}| }}}}
| label23 = <div style="display:inline;font-weight:normal"> • ಸ್ಥಳ</div>
| rowstyle23 = {{Infobox river/row-style}}
| data23 = {{{mouth_location|}}}
| label24 = <div style="display:inline;font-weight:normal"> • ನಿರ್ದೇಶಾಂಕಗಳು</div>
| rowstyle24 = {{Infobox river/row-style}}
| data24 = {{#if:{{{mouth_coordinates|}}}|{{#invoke:Coordinates|coordinsert|{{{mouth_coordinates}}}|type:river}}{{{mouth_coord_ref|}}}}}
| label25 = <div style="display:inline;font-weight:normal"> • ಎತ್ತರ</div>
| rowstyle25 = {{Infobox river/row-style}}
| data25 = {{Infobox river/calcunit|free={{{mouth_elevation|}}}|met_unit=m|imp_unit=ft}}
| label30 = ಉದ್ದ
| rowstyle30 = {{Infobox river/row-style}}
| data30 = {{Infobox river/calcunit|free={{{length|}}}|met={{{length_km|}}}|met_unit=ಕಿಮೀ|imp={{{length_mi|}}}|imp_unit=ಮೈ}}<!--
-->{{#if:{{{length_km|}}}{{{length_mi|}}}|{{{length_ref|}}}}}
| label31 = {{longitem|ಜಲಾನಯನ ಪ್ರದೇಶದ ಗಾತ್ರ}}
| data31 = {{Infobox river/calcunit|free={{{basin_size|}}}|met={{{basin_size_km2|}}}|met_unit=ಕಿಮೀ²|imp={{{basin_size_mi2|}}}|imp_unit=ಮೈ²}}<!--
-->{{#if:{{{basin_size_km2|}}}{{{basin_size_mi2|}}}|{{{basin_size_ref|}}}}}
| label32 = ಅಗಲ
| rowstyle32 = {{Infobox river/row-style}}
| data32 = {{#if:{{{width_min|}}}{{{width_avg|}}}{{{width_max|}}}| }}
| label33 = <span style="font-weight:normal"> • ಕನಿಷ್ಠ</span>
| rowstyle33 = {{Infobox river/row-style}}
| data33 = {{Infobox river/calcunit|free={{{width_min|}}}|met_unit=m|imp_unit=yd}}
| label34 = <span style="font-weight:normal"> • ಸರಾಸರಿ</span>
| rowstyle34 = {{Infobox river/row-style}}
| data34 = {{Infobox river/calcunit|free={{{width_avg|}}}|met_unit=m|imp_unit=yd}}
| label35 = <span style="font-weight:normal"> • ಗರಿಷ್ಠ</span>
| rowstyle35 = {{Infobox river/row-style}}
| data35 = {{Infobox river/calcunit|free={{{width_max|}}}|met_unit=m|imp_unit=yd}}
| label36 = ಆಳ
| data36 = {{#if:{{{depth_min|}}}{{{depth_avg|}}}{{{depth_max|}}}| }}
| label37 = <span style="font-weight:normal"> • ಕನಿಷ್ಠ</span>
| rowstyle37 = {{Infobox river/row-style}}
| data37 = {{{depth_min|}}}
| label38 = <span style="font-weight:normal"> • ಸರಾಸರಿ</span>
| rowstyle38 = {{Infobox river/row-style}}
| data38 = {{{depth_avg|}}}
| label39 = <span style="font-weight:normal"> • ಗರಿಷ್ಠ</span>
| rowstyle39 = {{Infobox river/row-style}}
| data39 = {{{depth_max|}}}
| rowstyle50 = display:none;
| data50 = {{Infobox river/discharge|loc={{{discharge1_location|}}}
|min={{Infobox river/calcunit|free={{{discharge1_min|}}}|met_unit=ಮೀ³/ಸೆ|imp_unit=ಘನ ಅಡಿ/ಸೆ}}
|avg={{Infobox river/calcunit|free={{{discharge1_avg|}}}|met_unit=ಮೀ³/ಸೆ|imp_unit=ಘನ ಅಡಿ/ಸೆ}}
|max={{Infobox river/calcunit|free={{{discharge1_max|}}}|met_unit=ಮೀ³/ಸೆ|imp_unit=ಘನ ಅಡಿ/ಸೆ}}
}}
| rowstyle51 = display:none;
| data51 = {{Infobox river/discharge|loc={{{discharge2_location|}}}|min={{{discharge2_min|}}}|avg={{{discharge2_avg|}}}|max={{{discharge2_max|}}}}}
| rowstyle52 = display:none;
| data52 = {{Infobox river/discharge|loc={{{discharge3_location|}}}|min={{{discharge3_min|}}}|avg={{{discharge3_avg|}}}|max={{{discharge3_max|}}}}}
| rowstyle53 = display:none;
| data53 = {{Infobox river/discharge|loc={{{discharge4_location|}}}|min={{{discharge4_min|}}}|avg={{{discharge4_avg|}}}|max={{{discharge4_max|}}}}}
| rowstyle54 = display:none;
| data54 = {{Infobox river/discharge|loc={{{discharge5_location|}}}|min={{{discharge5_min|}}}|avg={{{discharge5_avg|}}}|max={{{discharge5_max|}}}}}
| header55 = ಜಲಾನಯನ ಲಕ್ಷಣಗಳು
| label56 = ಹರಿವಿನ ಮಾರ್ಗ
| data56 = {{{progression|}}}
| label57 = {{nowrap|[[ಜಲಾನಯನ ವ್ಯವಸ್ಥೆ|ನದಿ ವ್ಯವಸ್ಥೆ]]}}
| data57 = {{if empty|{{{river_system|}}}|{{{parent|}}}}}
| label58 = ಹೆಗ್ಗುರುತುಗಳು
| data58 = {{if empty|{{{basin_landmarks|}}}|{{{landmark|}}}}}
| label59 = ನಗರಗಳು
| data59 = {{if empty|{{{cities|}}}|{{{city|}}}}}
| label60 = ಜನಸಂಖ್ಯೆ
| data60 = {{{basin_population|}}}
| label61 = ಉಪನದಿಗಳು
| data61 = {{#if:{{{tributaries_left|}}}{{{tributaries_right|}}}| }}
| rowstyle61 = {{Infobox river/row-style}}
| label62 = <span style="font-weight:normal"> • ಎಡ</span>
| rowstyle62 = {{Infobox river/row-style}}
| data62 = {{{tributaries_left|}}}
| label63 = <span style="font-weight:normal"> • ಬಲ</span>
| rowstyle63 = {{Infobox river/row-style}}
| data63 = {{{tributaries_right|}}}
| label64 = ಜಲರಾಶಿಗಳು
| data64 = {{{waterbodies|}}}
| label65 = ಜಲಪಾತಗಳು
| data65 = {{{waterfalls|}}}
| label66 = ಸೇತುವೆಗಳು
| data66 = {{{bridges|}}}
| label67 = [[ಒಳನಾಡು ಬಂದರು]]ಗಳು
| data67 = {{{ports|}}}
| label68 = {{longitem|{{{custom_label|}}}}}
| data68 = {{{custom_data|}}}
| below = {{{extra|}}}
}}</includeonly>{{#invoke:Check for unknown parameters|check|unknown={{main other|[[ವರ್ಗ:ಅಜ್ಞಾತ ನಿಯತಾಂಕಗಳೊಂದಿಗೆ infobox ನದಿ ಬಳಸುವ ಪುಟಗಳು|_VALUE_{{PAGENAME}}]]}}|preview=[[ಟೆಂಪ್ಲೇಟು:Infobox ನದಿ]] ಅನ್ನು ಅಜ್ಞಾತ ನಿಯತಾಂಕ "_VALUE_" ಜೊತೆಗೆ ಬಳಸಲಾಗುತ್ತಿದೆ|ignoreblank=y|mapframe_args=y| pushpin_map_args = y | basin_landmarks | basin_population | basin_size | basin_size_km2 | basin_size_mi2 | basin_size_ref | bridges | cities | city | country | country_type | custom_data | custom_label | depth_avg | depth_max | depth_min | discharge1_avg | discharge1_location | discharge1_max | discharge1_min | discharge2_avg | discharge2_location | discharge2_max | discharge2_min | discharge3_avg | discharge3_location | discharge3_max | discharge3_min | discharge4_avg | discharge4_location | discharge4_max | discharge4_min | discharge5_avg | discharge5_location | discharge5_max | discharge5_min | district | district_type | embed | etymology | extra | fetchwikidata | image | image_alt | image_caption | image_size | image_upright | landmark | length | length_km | length_mi | length_ref | map | map_alt | map_caption | map_size | mouth | mouth_coord_ref | mouth_coordinates | mouth_elevation | mouth_location | municipality | municipality_type | name | name_etymology | name_native | name_other | native_name | nickname | other_name | parent | ports | progression | pushpin_map | pushpin_map_alt | pushpin_map_caption | pushpin_map_relief | pushpin_map_size | qid | region | region_type | river_system | source_confluence | source_confluence_coord_ref | source_confluence_coordinates | source_confluence_elevation | source_confluence_location | source1 | source1_coord_ref | source1_coordinates | source1_elevation | source1_length | source1_location | source2 | source2_coord_ref | source2_coordinates | source2_elevation | source2_length | source2_location | source3 | source3_coord_ref | source3_coordinates | source3_elevation | source3_length | source3_location | source4 | source4_coord_ref | source4_coordinates | source4_elevation | source4_length | source4_location | source5 | source5_coord_ref | source5_coordinates | source5_elevation | source5_length | source5_location | state | state_type | subdivision_name1 | subdivision_name2 | subdivision_name3 | subdivision_name4 | subdivision_name5 | subdivision_type1 | subdivision_type2 | subdivision_type3 | subdivision_type4 | subdivision_type5 | suppressfields | tributaries_left | tributaries_right | waterbodies | waterfalls | width_avg | width_max | width_min }}{{main other|{{#if:{{{map|}}}{{{pushpin_map|}}}||[[ವರ್ಗ:mapframe ಜೊತೆಗೆ infobox ನದಿ ಬಳಸುವ ಪುಟಗಳು]]}}}}{{#invoke:Check for conflicting parameters|check
| template = [[ಟೆಂಪ್ಲೇಟು:Infobox ನದಿ]]
| cat = {{main other|ವರ್ಗ:ವಿರುದ್ಧ ನಿಯತಾಂಕಗಳೊಂದಿಗೆ infobox ನದಿ ಬಳಸುವ ಪುಟಗಳು}}
| other_name; name_other
| etymology; name_etymology
| native_name; name_native
| subdivision_type1; country_type
| subdivision_name1; country
| subdivision_type2; state_type
| subdivision_name2; state
| subdivision_type3; region_type
| subdivision_name3; region
| subdivision_type4; district_type
| subdivision_name4; district
| subdivision_type5; municipality_type
| subdivision_name5; municipality
| river_system; parent
| basin_landmarks; landmark
| cities; city
}}{{#invoke:Check for deprecated parameters|check
| _category = {{main other|[[ವರ್ಗ:ಬಳಕೆಯಲ್ಲಿಲ್ಲದ ನಿಯತಾಂಕಗಳೊಂದಿಗೆ infobox ನದಿ ಬಳಸುವ ಪುಟಗಳು|_VALUE_]]}}
| name_other = other_name
| pushpin_map_alt = pushpin_alt
| pushpin_map_relief = pushpin_relief
| pushpin_map_caption = pushpin_caption
| name_etymology = etymology
| name_native = native_name
| parent = river_system
| landmark = basin_landmarks
| city = cities
| country_type = subdivision_type1
| country = subdivision_name1
| state_type = subdivision_type2
| state = subdivision_name2
| region_type = subdivision_type3
| region = subdivision_name3
| district_type = subdivision_type4
| district = subdivision_name4
| municipality_type = subdivision_type5
| municipality = subdivision_name5
}}<noinclude>
{{Documentation}}
</noinclude>
2vifgh8zhisbcv1zx7h4t4ogiwwxjf1
1378187
1378175
2026-08-02T15:56:15Z
A826
72368
1378187
wikitext
text/x-wiki
<includeonly>{{main other|{{#if:{{Has short description}} |<!--ಏನೂ ಮಾಡಬೇಡ--> |{{#invoke:Type in location|main|ನದಿ|{{comma separated entries
|1= {{Plain text|{{strip tags|{{replace|{{{subdivision_name2|}}}|</li>|, </li>}}}}}}
|2= {{Plain text|{{strip tags|{{replace|{{{subdivision_name1|}}}|</li>|, </li>}}}}}}
}}}}}}}}{{Infobox
| child = {{{embed|}}}
| abovestyle = background-color: #CEDEFF;color: #202122;
| above = {{if empty|{{{name|}}}|{{PAGENAMEBASE}}}}{{#if:{{{other_name|}}}{{{name_other|}}}|<br /><div class="nickname" style="display:inline;font-size:78%">{{if empty|{{{other_name|}}}|{{{name_other|}}}}}</div>}}
| autoheaders= y
| headerstyle= background-color: #CEDEFF;color: #202122;
| image = {{#invoke:InfoboxImage|InfoboxImage|image={{#invoke:WikidataIB |getValue|rank=best|P18 |name=image |qid={{{qid|}}} |suppressfields={{{suppressfields|}}} |fetchwikidata={{if empty|{{{fetchwikidata|}}}|ALL}} |onlysourced=no |noicon=yes |maxvals=1 |{{{image|}}}}}|size={{{image_size|}}}|sizedefault=250px|upright={{if empty|{{{image_upright|}}}|1}}|alt={{{image_alt|}}}|suppressplaceholder=yes}}
| caption = {{#if:{{{image|}}}|{{{image_caption|}}}|{{if empty|{{{image_caption|}}}|{{#invoke:WikidataIB|getValue|P18|qual=P2096|qualsonly=y|fwd=ALL}}}}}}
| image2 = {{#invoke:InfoboxImage|InfoboxImage|image={{{map|}}}|size={{{map_size|}}}|sizedefault=250px|alt={{{map_alt|}}}}}
| caption2 = {{{map_caption|}}}
| image3 = {{#if:{{both|{{{pushpin_map|}}}|{{{mouth_coordinates|}}}{{#property:P625}}}}|{{#invoke:Location map|infobox_pushpin_map
| default_width = 250
| coordinates = {{{mouth_coordinates|}}}
| pushpin_alt = {{if empty|{{{pushpin_map_alt|}}}|{{{pushpin_alt|}}}}}
| pushpin_relief = {{if empty|{{{pushpin_map_relief|}}}|{{{pushpin_relief|}}}|1}}
| pushpin_caption = {{if empty|{{{pushpin_map_caption|}}}|{{{pushpin_caption|}}}}}
}}}}
| image4 = {{#invoke:Infobox mapframe
|autoWithCaption
|onByDefault={{#if:{{{map|}}}{{{pushpin_map|}}}|no|yes}}
|mapframe-frame-width=250
|mapframe-stroke-color=#0000ff
|mapframe-marker=water
|mapframe-type=river
|mapframe-length_km={{{length_km|}}}|mapframe-length_mi={{{length_mi|}}}
|mapframe-area_km2={{{basin_size_km2|}}}|mapframe-area_mi2={{{basin_size_mi2|}}}
}}
| label1 = ವ್ಯುತ್ಪತ್ತಿ
| data1 = {{if empty|{{{etymology|}}}|{{{name_etymology|}}}}}
| class2 = nickname
| label2 = ಅಡ್ಡಹೆಸರು{{pluralize from text|{{{nickname|}}}|plural=s}}
| data2 = {{{nickname|}}}
| class3 = nickname
| label3 = ಸ್ಥಳೀಯ ಹೆಸರು
| data3 = {{native name checker|{{if empty|{{{native_name|}}}|{{{name_native|}}}}}}}
| header5 = ಸ್ಥಳ
| label6 = {{if empty|{{{subdivision_type1|}}}|{{{country_type|}}}|ದೇಶ}}
| rowstyle6 = {{Infobox river/row-style}}
| data6 = {{if empty|{{{subdivision_name1|}}}|{{{country|}}}}}
| label7 = {{if empty|{{{subdivision_type2|}}}|{{{state_type|}}}|ರಾಜ್ಯ}}
| rowstyle7 = {{Infobox river/row-style}}
| data7 = {{if empty|{{{subdivision_name2|}}}|{{{state|}}}}}
| label8 = {{if empty|{{{subdivision_type3|}}}|{{{region_type|}}}|ಪ್ರದೇಶ}}
| rowstyle8 = {{Infobox river/row-style}}
| data8 = {{if empty|{{{subdivision_name3|}}}|{{{region|}}}}}
| label9 = {{if empty|{{{subdivision_type4|}}}|{{{district_type|}}}|ಜಿಲ್ಲೆ}}
| rowstyle9 = {{Infobox river/row-style}}
| data9 = {{if empty|{{{subdivision_name4|}}}|{{{district|}}}}}
| label10 = {{if empty|{{{subdivision_type5|}}}|{{{municipality_type|}}}|ನಗರಸಭೆ}}
| rowstyle10 = {{Infobox river/row-style}}
| data10 = {{if empty|{{{subdivision_name5|}}}|{{{municipality|}}}}}
| header15 = ಭೌತಿಕ ಲಕ್ಷಣಗಳು
| rowstyle16 = display:none;
| data16 = {{Infobox river/source|source={{{source1|}}}|loc={{{source1_location|}}}|elev={{{source1_elevation|}}}|coord={{{source1_coordinates|}}}|len={{{source1_length|}}}|coord_ref={{{source1_coord_ref|}}}}}
| rowstyle17 = display:none;
| data17 = {{Infobox river/source|2ನೇ ಉಗಮ|source={{{source2|}}}|loc={{{source2_location|}}}|elev={{{source2_elevation|}}}|coord={{{source2_coordinates|}}}|len={{{source2_length|}}}|coord_ref={{{source2_coord_ref|}}}}}
| rowstyle18 = display:none;
| data18 = {{Infobox river/source|3ನೇ ಉಗಮ|source={{{source3|}}}|loc={{{source3_location|}}}|elev={{{source3_elevation|}}}|coord={{{source3_coordinates|}}}|len={{{source3_length|}}}|coord_ref={{{source3_coord_ref|}}}}}
| rowstyle19 = display:none;
| data19 = {{Infobox river/source|4ನೇ ಉಗಮ|source={{{source4|}}}|loc={{{source4_location|}}}|elev={{{source4_elevation|}}}|coord={{{source4_coordinates|}}}|len={{{source4_length|}}}|coord_ref={{{source4_coord_ref|}}}}}
| rowstyle20 = display:none;
| data20 = {{Infobox river/source|5ನೇ ಉಗಮ|source={{{source5|}}}|loc={{{source5_location|}}}|elev={{{source5_elevation|}}}|coord={{{source5_coordinates|}}}|len={{{source5_length|}}}|coord_ref={{{source5_coord_ref|}}}}}
| rowstyle21 = display:none;
| data21 = {{Infobox river/source|ಉಗಮ ಸಂಗಮ|source={{{source_confluence|}}}|loc={{{source_confluence_location|}}}|elev={{{source_confluence_elevation|}}}|coord={{{source_confluence_coordinates|}}}|coord_ref={{{source_confluence_coord_ref|}}}}}
| label22 = [[ನದೀಮುಖ|ಮುಖಭಾಗ]]
| data22 = {{#if:{{{mouth|}}}|{{{mouth}}}|{{#if:{{{mouth_location|}}}{{{mouth_coordinates|}}}{{{mouth_elevation|}}}| }}}}
| label23 = <div style="display:inline;font-weight:normal"> • ಸ್ಥಳ</div>
| rowstyle23 = {{Infobox river/row-style}}
| data23 = {{{mouth_location|}}}
| label24 = <div style="display:inline;font-weight:normal"> • ನಿರ್ದೇಶಾಂಕಗಳು</div>
| rowstyle24 = {{Infobox river/row-style}}
| data24 = {{#if:{{{mouth_coordinates|}}}|{{#invoke:Coordinates|coordinsert|{{{mouth_coordinates}}}|type:river}}{{{mouth_coord_ref|}}}}}
| label25 = <div style="display:inline;font-weight:normal"> • ಎತ್ತರ</div>
| rowstyle25 = {{Infobox river/row-style}}
| data25 = {{Infobox river/calcunit|free={{{mouth_elevation|}}}|met_unit=ಮೀ|imp_unit=ಅಡಿ}}
| label30 = ಉದ್ದ
| rowstyle30 = {{Infobox river/row-style}}
| data30 = {{Infobox river/calcunit|free={{{length|}}}|met={{{length_km|}}}|met_unit=ಕಿಮೀ|imp={{{length_mi|}}}|imp_unit=ಮೈ}}<!--
-->{{#if:{{{length_km|}}}{{{length_mi|}}}|{{{length_ref|}}}}}
| label31 = {{longitem|ಜಲಾನಯನ ಪ್ರದೇಶದ ಗಾತ್ರ}}
| data31 = {{Infobox river/calcunit|free={{{basin_size|}}}|met={{{basin_size_km2|}}}|met_unit=ಕಿಮೀ²|imp={{{basin_size_mi2|}}}|imp_unit=ಮೈ²}}<!--
-->{{#if:{{{basin_size_km2|}}}{{{basin_size_mi2|}}}|{{{basin_size_ref|}}}}}
| label32 = ಅಗಲ
| rowstyle32 = {{Infobox river/row-style}}
| data32 = {{#if:{{{width_min|}}}{{{width_avg|}}}{{{width_max|}}}| }}
| label33 = <span style="font-weight:normal"> • ಕನಿಷ್ಠ</span>
| rowstyle33 = {{Infobox river/row-style}}
| data33 = {{Infobox river/calcunit|free={{{width_min|}}}|met_unit=ಮೀ|imp_unit=ಗಜ}}
| label34 = <span style="font-weight:normal"> • ಸರಾಸರಿ</span>
| rowstyle34 = {{Infobox river/row-style}}
| data34 = {{Infobox river/calcunit|free={{{width_avg|}}}|met_unit=ಮೀ|imp_unit=ಗಜ}}
| label35 = <span style="font-weight:normal"> • ಗರಿಷ್ಠ</span>
| rowstyle35 = {{Infobox river/row-style}}
| data35 = {{Infobox river/calcunit|free={{{width_max|}}}|met_unit=ಮೀ|imp_unit=ಗಜ}}
| label36 = ಆಳ
| data36 = {{#if:{{{depth_min|}}}{{{depth_avg|}}}{{{depth_max|}}}| }}
| label37 = <span style="font-weight:normal"> • ಕನಿಷ್ಠ</span>
| rowstyle37 = {{Infobox river/row-style}}
| data37 = {{{depth_min|}}}
| label38 = <span style="font-weight:normal"> • ಸರಾಸರಿ</span>
| rowstyle38 = {{Infobox river/row-style}}
| data38 = {{{depth_avg|}}}
| label39 = <span style="font-weight:normal"> • ಗರಿಷ್ಠ</span>
| rowstyle39 = {{Infobox river/row-style}}
| data39 = {{{depth_max|}}}
| rowstyle50 = display:none;
| data50 = {{Infobox river/discharge|loc={{{discharge1_location|}}}
|min={{Infobox river/calcunit|free={{{discharge1_min|}}}|met_unit=ಮೀ³/ಸೆ|imp_unit=ಘನ ಅಡಿ/ಸೆ}}
|avg={{Infobox river/calcunit|free={{{discharge1_avg|}}}|met_unit=ಮೀ³/ಸೆ|imp_unit=ಘನ ಅಡಿ/ಸೆ}}
|max={{Infobox river/calcunit|free={{{discharge1_max|}}}|met_unit=ಮೀ³/ಸೆ|imp_unit=ಘನ ಅಡಿ/ಸೆ}}
}}
| rowstyle51 = display:none;
| data51 = {{Infobox river/discharge|loc={{{discharge2_location|}}}|min={{{discharge2_min|}}}|avg={{{discharge2_avg|}}}|max={{{discharge2_max|}}}}}
| rowstyle52 = display:none;
| data52 = {{Infobox river/discharge|loc={{{discharge3_location|}}}|min={{{discharge3_min|}}}|avg={{{discharge3_avg|}}}|max={{{discharge3_max|}}}}}
| rowstyle53 = display:none;
| data53 = {{Infobox river/discharge|loc={{{discharge4_location|}}}|min={{{discharge4_min|}}}|avg={{{discharge4_avg|}}}|max={{{discharge4_max|}}}}}
| rowstyle54 = display:none;
| data54 = {{Infobox river/discharge|loc={{{discharge5_location|}}}|min={{{discharge5_min|}}}|avg={{{discharge5_avg|}}}|max={{{discharge5_max|}}}}}
| header55 = ಜಲಾನಯನ ಲಕ್ಷಣಗಳು
| label56 = ಹರಿವಿನ ಮಾರ್ಗ
| data56 = {{{progression|}}}
| label57 = {{nowrap|[[ಜಲಾನಯನ ವ್ಯವಸ್ಥೆ|ನದಿ ವ್ಯವಸ್ಥೆ]]}}
| data57 = {{if empty|{{{river_system|}}}|{{{parent|}}}}}
| label58 = ಹೆಗ್ಗುರುತುಗಳು
| data58 = {{if empty|{{{basin_landmarks|}}}|{{{landmark|}}}}}
| label59 = ನಗರಗಳು
| data59 = {{if empty|{{{cities|}}}|{{{city|}}}}}
| label60 = ಜನಸಂಖ್ಯೆ
| data60 = {{{basin_population|}}}
| label61 = ಉಪನದಿಗಳು
| data61 = {{#if:{{{tributaries_left|}}}{{{tributaries_right|}}}| }}
| rowstyle61 = {{Infobox river/row-style}}
| label62 = <span style="font-weight:normal"> • ಎಡ</span>
| rowstyle62 = {{Infobox river/row-style}}
| data62 = {{{tributaries_left|}}}
| label63 = <span style="font-weight:normal"> • ಬಲ</span>
| rowstyle63 = {{Infobox river/row-style}}
| data63 = {{{tributaries_right|}}}
| label64 = ಜಲರಾಶಿಗಳು
| data64 = {{{waterbodies|}}}
| label65 = ಜಲಪಾತಗಳು
| data65 = {{{waterfalls|}}}
| label66 = ಸೇತುವೆಗಳು
| data66 = {{{bridges|}}}
| label67 = [[ಒಳನಾಡು ಬಂದರು]]ಗಳು
| data67 = {{{ports|}}}
| label68 = {{longitem|{{{custom_label|}}}}}
| data68 = {{{custom_data|}}}
| below = {{{extra|}}}
}}</includeonly>{{#invoke:Check for unknown parameters|check|unknown={{main other|[[ವರ್ಗ:ಅಜ್ಞಾತ ನಿಯತಾಂಕಗಳೊಂದಿಗೆ infobox ನದಿ ಬಳಸುವ ಪುಟಗಳು|_VALUE_{{PAGENAME}}]]}}|preview=[[ಟೆಂಪ್ಲೇಟು:Infobox ನದಿ]] ಅನ್ನು ಅಜ್ಞಾತ ನಿಯತಾಂಕ "_VALUE_" ಜೊತೆಗೆ ಬಳಸಲಾಗುತ್ತಿದೆ|ignoreblank=y|mapframe_args=y| pushpin_map_args = y | basin_landmarks | basin_population | basin_size | basin_size_km2 | basin_size_mi2 | basin_size_ref | bridges | cities | city | country | country_type | custom_data | custom_label | depth_avg | depth_max | depth_min | discharge1_avg | discharge1_location | discharge1_max | discharge1_min | discharge2_avg | discharge2_location | discharge2_max | discharge2_min | discharge3_avg | discharge3_location | discharge3_max | discharge3_min | discharge4_avg | discharge4_location | discharge4_max | discharge4_min | discharge5_avg | discharge5_location | discharge5_max | discharge5_min | district | district_type | embed | etymology | extra | fetchwikidata | image | image_alt | image_caption | image_size | image_upright | landmark | length | length_km | length_mi | length_ref | map | map_alt | map_caption | map_size | mouth | mouth_coord_ref | mouth_coordinates | mouth_elevation | mouth_location | municipality | municipality_type | name | name_etymology | name_native | name_other | native_name | nickname | other_name | parent | ports | progression | pushpin_map | pushpin_map_alt | pushpin_map_caption | pushpin_map_relief | pushpin_map_size | qid | region | region_type | river_system | source_confluence | source_confluence_coord_ref | source_confluence_coordinates | source_confluence_elevation | source_confluence_location | source1 | source1_coord_ref | source1_coordinates | source1_elevation | source1_length | source1_location | source2 | source2_coord_ref | source2_coordinates | source2_elevation | source2_length | source2_location | source3 | source3_coord_ref | source3_coordinates | source3_elevation | source3_length | source3_location | source4 | source4_coord_ref | source4_coordinates | source4_elevation | source4_length | source4_location | source5 | source5_coord_ref | source5_coordinates | source5_elevation | source5_length | source5_location | state | state_type | subdivision_name1 | subdivision_name2 | subdivision_name3 | subdivision_name4 | subdivision_name5 | subdivision_type1 | subdivision_type2 | subdivision_type3 | subdivision_type4 | subdivision_type5 | suppressfields | tributaries_left | tributaries_right | waterbodies | waterfalls | width_avg | width_max | width_min }}{{main other|{{#if:{{{map|}}}{{{pushpin_map|}}}||[[ವರ್ಗ:mapframe ಜೊತೆಗೆ infobox ನದಿ ಬಳಸುವ ಪುಟಗಳು]]}}}}{{#invoke:Check for conflicting parameters|check
| template = [[ಟೆಂಪ್ಲೇಟು:Infobox ನದಿ]]
| cat = {{main other|ವರ್ಗ:ವಿರುದ್ಧ ನಿಯತಾಂಕಗಳೊಂದಿಗೆ infobox ನದಿ ಬಳಸುವ ಪುಟಗಳು}}
| other_name; name_other
| etymology; name_etymology
| native_name; name_native
| subdivision_type1; country_type
| subdivision_name1; country
| subdivision_type2; state_type
| subdivision_name2; state
| subdivision_type3; region_type
| subdivision_name3; region
| subdivision_type4; district_type
| subdivision_name4; district
| subdivision_type5; municipality_type
| subdivision_name5; municipality
| river_system; parent
| basin_landmarks; landmark
| cities; city
}}{{#invoke:Check for deprecated parameters|check
| _category = {{main other|[[ವರ್ಗ:ಬಳಕೆಯಲ್ಲಿಲ್ಲದ ನಿಯತಾಂಕಗಳೊಂದಿಗೆ infobox ನದಿ ಬಳಸುವ ಪುಟಗಳು|_VALUE_]]}}
| name_other = other_name
| pushpin_map_alt = pushpin_alt
| pushpin_map_relief = pushpin_relief
| pushpin_map_caption = pushpin_caption
| name_etymology = etymology
| name_native = native_name
| parent = river_system
| landmark = basin_landmarks
| city = cities
| country_type = subdivision_type1
| country = subdivision_name1
| state_type = subdivision_type2
| state = subdivision_name2
| region_type = subdivision_type3
| region = subdivision_name3
| district_type = subdivision_type4
| district = subdivision_name4
| municipality_type = subdivision_type5
| municipality = subdivision_name5
}}<noinclude>
{{Documentation}}
</noinclude>
iha00ewdcxlhxi99v71oqv75qamphtl
ಟೆಂಪ್ಲೇಟು:Infobox ನದಿ/calcunit
10
179993
1378158
2024-11-10T10:23:03Z
en>Hike395
0
add tracking cat
1378158
wikitext
text/x-wiki
<noinclude>{{pp-template|small=yes}}</noinclude>{{#if:{{{free|}}}
|{{{free}}}{{#if:{{isnumeric|{{{free}}}}}| {{error|units?}}[[Category:Articles requiring unit attention]]}}
|{{#if:{{{met|}}}
|{{convert|{{{met}}}|{{{met_unit|km}}}|abbr=on}}
|{{#if:{{{imp|}}}
|{{convert|{{{imp}}}|{{{imp_unit|miles}}}|abbr=on}}
}}
}}
}}
swozdvyx826u7ligmu3owp5jleabs78
1378159
1378158
2026-08-02T15:52:07Z
A826
72368
೧ revisions imported from [[:en:Template:Infobox_river/calcunit]]
1378158
wikitext
text/x-wiki
<noinclude>{{pp-template|small=yes}}</noinclude>{{#if:{{{free|}}}
|{{{free}}}{{#if:{{isnumeric|{{{free}}}}}| {{error|units?}}[[Category:Articles requiring unit attention]]}}
|{{#if:{{{met|}}}
|{{convert|{{{met}}}|{{{met_unit|km}}}|abbr=on}}
|{{#if:{{{imp|}}}
|{{convert|{{{imp}}}|{{{imp_unit|miles}}}|abbr=on}}
}}
}}
}}
swozdvyx826u7ligmu3owp5jleabs78
1378177
1378159
2026-08-02T15:55:28Z
A826
72368
A826 [[ಟೆಂಪ್ಲೇಟು:Infobox river/calcunit]] ಪುಟವನ್ನು [[ಟೆಂಪ್ಲೇಟು:Infobox ನದಿ/calcunit]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ
1378158
wikitext
text/x-wiki
<noinclude>{{pp-template|small=yes}}</noinclude>{{#if:{{{free|}}}
|{{{free}}}{{#if:{{isnumeric|{{{free}}}}}| {{error|units?}}[[Category:Articles requiring unit attention]]}}
|{{#if:{{{met|}}}
|{{convert|{{{met}}}|{{{met_unit|km}}}|abbr=on}}
|{{#if:{{{imp|}}}
|{{convert|{{{imp}}}|{{{imp_unit|miles}}}|abbr=on}}
}}
}}
}}
swozdvyx826u7ligmu3owp5jleabs78
ಟೆಂಪ್ಲೇಟು:Infobox ನದಿ/discharge
10
179994
1378160
2023-09-12T21:17:17Z
en>MSGJ
0
Undid revision 1169815140 by [[Special:Contributions/Paine Ellsworth|Paine Ellsworth]] ([[User talk:Paine Ellsworth|talk]]) - per request on talk
1378160
wikitext
text/x-wiki
{{#if:{{{discharge|}}}{{{loc|}}}{{{min|}}}{{{avg|}}}{{{max|}}}|{{infobox
| child = yes
| label1 = Discharge
| rowstyle1 = {{Infobox river/row-style}}
| data1 = {{#if:{{{discharge|}}}|{{{discharge}}}|{{#if:{{{loc|}}}{{{min|}}}{{{avg|}}}{{{max|}}}| }}}}
| label2 = <span style="font-weight:normal"> • location</span>
| rowstyle2 = {{Infobox river/row-style}}
| data2 = {{{loc|}}}
| label3 = <span style="font-weight:normal"> • average</span>
| rowstyle3 = {{Infobox river/row-style}}
| data3 = {{{avg|}}}
| label4 = <span style="font-weight:normal"> • minimum</span>
| rowstyle4 = {{Infobox river/row-style}}
| data4 = {{{min|}}}
| label5 = <span style="font-weight:normal"> • maximum</span>
| rowstyle5 = {{Infobox river/row-style}}
| data5 = {{{max|}}}
}}}}<noinclude>
{{Documentation}}
</noinclude>
5rpveqcdfnyrq5gvgnp988clavusdbe
1378161
1378160
2026-08-02T15:52:07Z
A826
72368
೧ revisions imported from [[:en:Template:Infobox_river/discharge]]
1378160
wikitext
text/x-wiki
{{#if:{{{discharge|}}}{{{loc|}}}{{{min|}}}{{{avg|}}}{{{max|}}}|{{infobox
| child = yes
| label1 = Discharge
| rowstyle1 = {{Infobox river/row-style}}
| data1 = {{#if:{{{discharge|}}}|{{{discharge}}}|{{#if:{{{loc|}}}{{{min|}}}{{{avg|}}}{{{max|}}}| }}}}
| label2 = <span style="font-weight:normal"> • location</span>
| rowstyle2 = {{Infobox river/row-style}}
| data2 = {{{loc|}}}
| label3 = <span style="font-weight:normal"> • average</span>
| rowstyle3 = {{Infobox river/row-style}}
| data3 = {{{avg|}}}
| label4 = <span style="font-weight:normal"> • minimum</span>
| rowstyle4 = {{Infobox river/row-style}}
| data4 = {{{min|}}}
| label5 = <span style="font-weight:normal"> • maximum</span>
| rowstyle5 = {{Infobox river/row-style}}
| data5 = {{{max|}}}
}}}}<noinclude>
{{Documentation}}
</noinclude>
5rpveqcdfnyrq5gvgnp988clavusdbe
1378179
1378161
2026-08-02T15:55:28Z
A826
72368
A826 [[ಟೆಂಪ್ಲೇಟು:Infobox river/discharge]] ಪುಟವನ್ನು [[ಟೆಂಪ್ಲೇಟು:Infobox ನದಿ/discharge]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ
1378160
wikitext
text/x-wiki
{{#if:{{{discharge|}}}{{{loc|}}}{{{min|}}}{{{avg|}}}{{{max|}}}|{{infobox
| child = yes
| label1 = Discharge
| rowstyle1 = {{Infobox river/row-style}}
| data1 = {{#if:{{{discharge|}}}|{{{discharge}}}|{{#if:{{{loc|}}}{{{min|}}}{{{avg|}}}{{{max|}}}| }}}}
| label2 = <span style="font-weight:normal"> • location</span>
| rowstyle2 = {{Infobox river/row-style}}
| data2 = {{{loc|}}}
| label3 = <span style="font-weight:normal"> • average</span>
| rowstyle3 = {{Infobox river/row-style}}
| data3 = {{{avg|}}}
| label4 = <span style="font-weight:normal"> • minimum</span>
| rowstyle4 = {{Infobox river/row-style}}
| data4 = {{{min|}}}
| label5 = <span style="font-weight:normal"> • maximum</span>
| rowstyle5 = {{Infobox river/row-style}}
| data5 = {{{max|}}}
}}}}<noinclude>
{{Documentation}}
</noinclude>
5rpveqcdfnyrq5gvgnp988clavusdbe
1378188
1378179
2026-08-02T15:57:02Z
A826
72368
1378188
wikitext
text/x-wiki
{{#if:{{{discharge|}}}{{{loc|}}}{{{min|}}}{{{avg|}}}{{{max|}}}|{{infobox
| child = yes
| label1 = ಹರಿವಿನ ಪ್ರಮಾಣ
| rowstyle1 = {{Infobox river/row-style}}
| data1 = {{#if:{{{discharge|}}}|{{{discharge}}}|{{#if:{{{loc|}}}{{{min|}}}{{{avg|}}}{{{max|}}}| }}}}
| label2 = <span style="font-weight:normal"> • ಸ್ಥಳ</span>
| rowstyle2 = {{Infobox river/row-style}}
| data2 = {{{loc|}}}
| label3 = <span style="font-weight:normal"> • ಸರಾಸರಿ</span>
| rowstyle3 = {{Infobox river/row-style}}
| data3 = {{{avg|}}}
| label4 = <span style="font-weight:normal"> • ಕನಿಷ್ಠ</span>
| rowstyle4 = {{Infobox river/row-style}}
| data4 = {{{min|}}}
| label5 = <span style="font-weight:normal"> • ಗರಿಷ್ಠ</span>
| rowstyle5 = {{Infobox river/row-style}}
| data5 = {{{max|}}}
}}}}<noinclude>
{{Documentation}}
</noinclude>
p58qmd3gngqn51dtdbre1zczsu9xxwq
ಟೆಂಪ್ಲೇಟು:Infobox ನದಿ/row-style
10
179995
1378162
2018-12-07T07:07:41Z
en>Mifter
0
Adding {{pp-template}} ([[WP:TW|TW]])
1378162
wikitext
text/x-wiki
<noinclude>{{pp-template|small=yes}}</noinclude>padding: 0 0.6em 0.2em 0.6em;line-height: 1.2em;
f677wiw8m0s0nfn9aecylac1vg004t5
1378163
1378162
2026-08-02T15:52:07Z
A826
72368
೧ revisions imported from [[:en:Template:Infobox_river/row-style]]
1378162
wikitext
text/x-wiki
<noinclude>{{pp-template|small=yes}}</noinclude>padding: 0 0.6em 0.2em 0.6em;line-height: 1.2em;
f677wiw8m0s0nfn9aecylac1vg004t5
1378183
1378163
2026-08-02T15:55:28Z
A826
72368
A826 [[ಟೆಂಪ್ಲೇಟು:Infobox river/row-style]] ಪುಟವನ್ನು [[ಟೆಂಪ್ಲೇಟು:Infobox ನದಿ/row-style]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ
1378162
wikitext
text/x-wiki
<noinclude>{{pp-template|small=yes}}</noinclude>padding: 0 0.6em 0.2em 0.6em;line-height: 1.2em;
f677wiw8m0s0nfn9aecylac1vg004t5
ಟೆಂಪ್ಲೇಟು:Infobox ನದಿ/source
10
179996
1378164
2020-06-29T06:11:45Z
en>Rehman
0
changed bullet per talkpage
1378164
wikitext
text/x-wiki
<noinclude>{{pp-template|small=yes}}</noinclude>{{#if:{{{source|}}}{{{loc|}}}{{{coord|}}}{{{len|}}}{{{elev|}}}|{{infobox
| child = yes
| label1 = {{#if:{{{1|}}}|{{{1}}}|Source}}
| data1 = {{#if:{{{source|}}}|{{{source}}}|{{#if:{{{loc|}}}{{{coord|}}}{{{len|}}}{{{elev|}}}| }}}}
| label2 = <span style="font-weight:normal"> • location</span>
| rowstyle2 = {{Infobox river/row-style}}
| data2 = {{{loc|}}}
| label3 = <span style="font-weight:normal"> • coordinates</span>
| rowstyle3 = {{Infobox river/row-style}}
| data3 = {{{coord|}}}{{{coord_ref|}}}
| label4 = <span style="font-weight:normal"> • length</span>
| rowstyle4 = {{Infobox river/row-style}}
| data4 = {{{len|}}}
| label5 = <span style="font-weight:normal"> • elevation</span>
| rowstyle5 = {{Infobox river/row-style}}
| data5 = {{{elev|}}}
}}}}
1zio0fqrgu9tiecgieew4r3sct8g3ny
1378165
1378164
2026-08-02T15:52:07Z
A826
72368
೧ revisions imported from [[:en:Template:Infobox_river/source]]
1378164
wikitext
text/x-wiki
<noinclude>{{pp-template|small=yes}}</noinclude>{{#if:{{{source|}}}{{{loc|}}}{{{coord|}}}{{{len|}}}{{{elev|}}}|{{infobox
| child = yes
| label1 = {{#if:{{{1|}}}|{{{1}}}|Source}}
| data1 = {{#if:{{{source|}}}|{{{source}}}|{{#if:{{{loc|}}}{{{coord|}}}{{{len|}}}{{{elev|}}}| }}}}
| label2 = <span style="font-weight:normal"> • location</span>
| rowstyle2 = {{Infobox river/row-style}}
| data2 = {{{loc|}}}
| label3 = <span style="font-weight:normal"> • coordinates</span>
| rowstyle3 = {{Infobox river/row-style}}
| data3 = {{{coord|}}}{{{coord_ref|}}}
| label4 = <span style="font-weight:normal"> • length</span>
| rowstyle4 = {{Infobox river/row-style}}
| data4 = {{{len|}}}
| label5 = <span style="font-weight:normal"> • elevation</span>
| rowstyle5 = {{Infobox river/row-style}}
| data5 = {{{elev|}}}
}}}}
1zio0fqrgu9tiecgieew4r3sct8g3ny
1378185
1378165
2026-08-02T15:55:29Z
A826
72368
A826 [[ಟೆಂಪ್ಲೇಟು:Infobox river/source]] ಪುಟವನ್ನು [[ಟೆಂಪ್ಲೇಟು:Infobox ನದಿ/source]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ
1378164
wikitext
text/x-wiki
<noinclude>{{pp-template|small=yes}}</noinclude>{{#if:{{{source|}}}{{{loc|}}}{{{coord|}}}{{{len|}}}{{{elev|}}}|{{infobox
| child = yes
| label1 = {{#if:{{{1|}}}|{{{1}}}|Source}}
| data1 = {{#if:{{{source|}}}|{{{source}}}|{{#if:{{{loc|}}}{{{coord|}}}{{{len|}}}{{{elev|}}}| }}}}
| label2 = <span style="font-weight:normal"> • location</span>
| rowstyle2 = {{Infobox river/row-style}}
| data2 = {{{loc|}}}
| label3 = <span style="font-weight:normal"> • coordinates</span>
| rowstyle3 = {{Infobox river/row-style}}
| data3 = {{{coord|}}}{{{coord_ref|}}}
| label4 = <span style="font-weight:normal"> • length</span>
| rowstyle4 = {{Infobox river/row-style}}
| data4 = {{{len|}}}
| label5 = <span style="font-weight:normal"> • elevation</span>
| rowstyle5 = {{Infobox river/row-style}}
| data5 = {{{elev|}}}
}}}}
1zio0fqrgu9tiecgieew4r3sct8g3ny
1378189
1378185
2026-08-02T15:57:40Z
A826
72368
1378189
wikitext
text/x-wiki
<noinclude>{{pp-template|small=yes}}</noinclude>{{#if:{{{source|}}}{{{loc|}}}{{{coord|}}}{{{len|}}}{{{elev|}}}|{{infobox
| child = yes
| label1 = {{#if:{{{1|}}}|{{{1}}}|ಉಗಮ}}
| data1 = {{#if:{{{source|}}}|{{{source}}}|{{#if:{{{loc|}}}{{{coord|}}}{{{len|}}}{{{elev|}}}| }}}}
| label2 = <span style="font-weight:normal"> • ಸ್ಥಳ</span>
| rowstyle2 = {{Infobox river/row-style}}
| data2 = {{{loc|}}}
| label3 = <span style="font-weight:normal"> • ನಿರ್ದೇಶಾಂಕಗಳು</span>
| rowstyle3 = {{Infobox river/row-style}}
| data3 = {{{coord|}}}{{{coord_ref|}}}
| label4 = <span style="font-weight:normal"> • ಉದ್ದ</span>
| rowstyle4 = {{Infobox river/row-style}}
| data4 = {{{len|}}}
| label5 = <span style="font-weight:normal"> • ಎತ್ತರ</span>
| rowstyle5 = {{Infobox river/row-style}}
| data5 = {{{elev|}}}
}}}}
nbm49ga5rzw8b89qv9kjwj116erj9tf
ಮಾಡ್ಯೂಲ್:Location map/data/Brazil
828
179997
1378166
2018-03-11T23:50:02Z
en>Plastikspork
0
Protected "[[Module:Location map/data/Brazil]]" ([Edit=Require template editor access] (indefinite) [Move=Require template editor access] (indefinite))
1378166
Scribunto
text/plain
return {
name = 'Brazil',
top = 6.0,
bottom = -34.0,
left = -74.5,
right = -32.0,
image = 'Brazil location map.svg',
image1 = 'Relief Map of Brazil.jpg'
}
7zvub7vncocsujed6ogutglrd3zcc2s
1378167
1378166
2026-08-02T15:52:07Z
A826
72368
೧ revisions imported from [[:en:Module:Location_map/data/Brazil]]
1378166
Scribunto
text/plain
return {
name = 'Brazil',
top = 6.0,
bottom = -34.0,
left = -74.5,
right = -32.0,
image = 'Brazil location map.svg',
image1 = 'Relief Map of Brazil.jpg'
}
7zvub7vncocsujed6ogutglrd3zcc2s
ಟೆಂಪ್ಲೇಟು:Infobox ನದಿ/doc
10
179998
1378172
2026-07-29T02:20:35Z
en>Zackmann08
0
Cleaning up syntax using [[:en:User:Zackmann08/scripts/indent|indent.js]]
1378172
wikitext
text/x-wiki
{{Documentation subpage}}
{{High-use}}
{{Lua|Module:Check for unknown parameters|Module:Coordinates|Module:InfoboxImage|Module:String|Module:WikidataIB|Module:Wikidata|Module:Mapframe}}
{{Tracks Wikidata|P18|cat=No local image but image on Wikidata}}
{{auto short description}}
{{Parameter names example|_template=| basin_landmarks | basin_population | basin_size | basin_size_km2 | basin_size_mi2 | basin_size_ref | bridges | custom_data | custom_label | depth_avg | depth_max | depth_min | discharge1_avg | discharge1_location | discharge1_max | discharge1_min | discharge5_avg | discharge5_location | discharge5_max | discharge5_min | embed | etymology | extra | image | image_alt | image_caption | image_size | length | length_km | length_mi | map | map_alt | map_caption | map_size | mapframe | mouth | mouth_coord_ref | mouth_coordinates | mouth_elevation | mouth_location | name | native_name | nickname | ports | progression | pushpin_map = | pushpin_alt | pushpin_caption | pushpin_map_size | river_system | source1 | source1_coord_ref | source1_coordinates | source1_elevation | source1_location | source5 | source5_coord_ref | source5_coordinates | source5_elevation | source5_location | subdivision_name1 | subdivision_name2 | subdivision_name3 | subdivision_name4 | subdivision_name5 | subdivision_type1 | subdivision_type2 | subdivision_type3 | subdivision_type4 | subdivision_type5 | tributaries_left | tributaries_right | waterbodies | waterfalls | width_avg | width_max | width_min | source_confluence | source_confluence_location | source_confluence_elevation | source_confluence_coordinates }}
== Usage ==
<syntaxhighlight lang="wikitext" style="overflow: auto">
{{Infobox river
| name =
| native_name = <!-- {{native name|<tag>|<name>}} or {{native name list |tag1=<tag>|name1=<name> |tag2=<tag>|name2=<name> ... }} -->
| other_name =
| etymology =
| nickname =
<!---------------------- IMAGE-->
| image =
| image_size =
| image_caption =
| image_alt =
<!---------------------- MAPS -->
| map =
| map_size =
| map_caption =
| map_alt =
| pushpin_map =
| pushpin_map_size =
| pushpin_caption =
| pushpin_alt =
| mapframe = yes<!-- see below for more mapframe parameters -->
<!---------------------- LOCATION -->
| subdivision_type1 =
| subdivision_name1 =
| subdivision_type2 =
| subdivision_name2 =
| subdivision_type3 =
| subdivision_name3 =
| subdivision_type4 =
| subdivision_name4 =
| subdivision_type5 =
| subdivision_name5 =
<!---------------------- PHYSICAL CHARACTERISTICS -->
| length =
| width_min =
| width_avg =
| width_max =
| depth_min =
| depth_avg =
| depth_max =
| discharge1_location =
| discharge1_min =
| discharge1_avg =
| discharge1_max =
<!---------------------- BASIN FEATURES -->
| source1 =
| source1_location =
| source1_coordinates = <!-- {{Coord|...}} -->
| source1_elevation =
| mouth =
| mouth_location =
| mouth_coordinates = <!-- {{Coord|...|display=inline,title}} -->
| mouth_elevation =
| progression =
| river_system =
| basin_size =
| basin_landmarks =
| basin_population =
| tributaries_left =
| tributaries_right =
| waterbodies =
| waterfalls =
| bridges =
| ports =
| custom_label =
| custom_data =
| extra =
}}
</syntaxhighlight>{{Clear}}
== Parameter names and descriptions ==
{| class="wikitable plainrowheaders"
|-
! scope="col" | Parameter name
! scope="col" | Description
|-
! scope="row" | '''name'''
| The [[WP:COMMONNAME|common name]] of the river.
|-
! scope="row" | '''native_name'''
| The name in its official or de facto language. Use {{tlx|native name}} or, for multiple names, use {{tlx|native name list}}
|-
! scope="row" | '''other_name'''
| Other name(s) of the river. Use commas to enter multiple. Displayed under the infobox heading.
|-
! scope="row" | '''nickname'''
| Local name(s) for the river. Use commas to enter multiple.
|-
! scope="row" | '''etymology'''
| Person, event or other entity the body is named after
|-
! scope="row" | '''image'''
| Image filename without the <code>File:</code> or <code>Image:</code> prefix.
|-
! scope="row" | '''image_size'''
| Width of the image in pixels (i.e. <code>200px</code>). Common sizes are usually around <code>280px</code> to <code>300px</code>.
|-
! scope="row" | '''image_caption'''
| Caption for the main image.
|-
! scope="row" | '''image_alt'''
| [[Wikipedia:Alternative text for images|Alt text]] for the main image.
|-
! scope="row" | '''map'''
| Map image filename without the <code>File:</code> or <code>Image:</code> prefix.
|-
! scope="row" | '''map_size'''
| Width of the image in pixels (i.e. <code>200px</code>). Common sizes are usually around <code>280px</code> to <code>300px</code>.
|-
! scope="row" | '''map_caption'''
| Caption for the map image.
|-
! scope="row" | '''map_alt'''
| [[Wikipedia:Alternative text for images|Alt text]] for the map image.
|-
! scope="row" | '''pushpin_map'''
| The name of a location map to be used with {{tl|location map}}, with the pin placed at the location specified by the <code>mouth_coordinates</code> parameter, or the value from wikidata if no mouth coordinates are provided. Manually add parameter <code>pushpin_relief = 0</code> to disable the use of a relief location map.
|-
! scope="row" | '''pushpin_map_size'''
| The width of the location map in pixels as a raw number, without any <code>px</code> suffix
|-
! scope="row" | '''pushpin_caption'''
| Caption for the location map
|-
! scope="row" | '''pushpin_alt'''
| [[Wikipedia:Alternative text for images|Alt text]] for the location map image.
|-
! scope="row" | '''pushpin_relief'''
| A pushpin map will be displayed in relief by default. Use <code>pushpin_relief = 0</code> for a plain map.
|-
! scope="row" | '''mapframe'''
| A mapframe map can be enabled with this. See [[#Mapframe parameters]] below for more information.
|-
! scope="row" | '''subdivision_type1'''
| Primary political region(s), typically <code>Country</code> or <code>Countries</code>.
|-
! scope="row" | '''subdivision_name1'''
| Used with above. The country/ies in which the river flows in/through. Use commas for multiple.
|-
! scope="row" | '''subdivision_type2'''
| Secondary political region(s). <code>States</code>, <code>Provinces</code>, <code>Districts</code>, or <code>Regions</code>, in which the river flows through.
|-
! scope="row" | '''subdivision_name2'''
| Used with above. The secondary political region(s) in which the river flows through. Use commas for multiple.
|-
! scope="row" | '''subdivision_type3'''
| Tertiary political region(s), such as the <code>Cities</code> along the river.
|-
! scope="row" | '''subdivision_name3'''
| Used with above. The tertiary political region(s) through which the river flows. Use commas for multiple.
|-
! scope="row" | '''subdivision_type4'''
| Other types of political subdivisions.
|-
! scope="row" | '''subdivision_name4'''
| Used with above. Other political subdivisions through which the river flows. Use commas for multiple.
|-
! scope="row" | '''subdivision_type5'''
| Other types of political subdivisions.
|-
! scope="row" | '''subdivision_name5'''
| Used with above. Other political subdivisions through which the river flows. Use commas for multiple.
|-
| colspan=2 bgcolor=#CEDEFF | '''{{center|PHYSICAL CHARACTERISTICS}}'''
|-
! scope="row" | '''length'''
| The total length of the river's [[main stem]]. Consider using '''<code><nowiki>{{</nowiki>[[Template:Convert|Convert]]|1234|km|mi|abbr=on<nowiki>}}</nowiki></code>'''
|-
! scope="row" | '''length_km'''
| Total length of the river's main stem, measured in kilometers.
|-
! scope="row" | '''length_mi'''
| Total length of the river's main stem, measured in miles.
|-
! scope="row" | '''length_ref'''
| References or other notes for length of river, used only if {{para|length_km}} or {{para|length_mi}} are used.
|-
! scope="row" | '''width_min'''
| Minimum width between banks of the river. Rarely used as it is often difficult to determine the exact source of the river. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''width_avg'''
| Average width of the river. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''width_max'''
| Maximum width of the river before the [[river mouth|mouth]]. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''depth_min'''
| Minimum depth of the river. Rarely used as it is often difficult to determine the exact source of the river. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''depth_avg'''
| Average depth of the river. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''depth_max'''
| Maximum depth of the river before the [[river mouth|mouth]]. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''discharge1_location'''
| Location or gauge/sensor name at which the below details are recorded. Commonly at the <code>River mouth</code>.
|-
! scope="row" | '''discharge1_min'''
| Minimum discharge rate. Rarely used. Consider using '''<code><nowiki>{{</nowiki>[[Template:Convert|Convert]]|1234|m3/s|ft3/s|abbr=on<nowiki>}}</nowiki></code>'''
|-
! scope="row" | '''discharge1_avg'''
| Average discharge rate (also use if a source provides only one discharge rate without a minimum or maximum). Consider using '''<code><nowiki>{{</nowiki>[[Template:Convert|Convert]]|1234|m3/s|ft3/s|abbr=on<nowiki>}}</nowiki></code>'''
|-
! scope="row" | '''discharge1_max'''
| Maximum discharge rate before flooding occurs in the surrounding areas. Consider using '''<code><nowiki>{{</nowiki>[[Template:Convert|Convert]]|1234|m3/s|ft3/s|abbr=on<nowiki>}}</nowiki></code>'''
|-
! scope="row" | '''discharge2_* ⇒ 5_*'''
| Up to four more sets of discharge parameters. '''You may add up to <code>discharge5_*</code>'''.
|-
| colspan=2 bgcolor=#CEDEFF | '''{{center|BASIN FEATURES}}'''
|-
! scope="row" | '''source1'''
| Landform or waterbody of the primary source. For a source that is a [[confluence]], you may add as: <code><nowiki>Confluence of [[River-A]] and [[River-B]]</nowiki></code>.
|-
! scope="row" | '''source1_location'''
| Political details of the source location, such as Province, District, State, etc.
|-
! scope="row" | '''source1_elevation'''
| Elevation at the main source of water
|-
! scope="row" | '''source1_coordinates'''
| Coordinates of the main source, using the {{tl|coord}} template. Use {{para|display|inline}} only.
|-
! scope="row" | '''source1_coord_ref'''
| Reference for the coordinates of the main source.
|-
! scope="row" | '''source1_length'''
| Length from the main source<!-- to what? -->.
|-
! scope="row" | '''source2 ⇒ source5'''
| Landform or waterbody of further sources. You may add up to '''<code>source5</code>'''. Also '''source2_location''', '''source2_elevation''', '''source2_coordinates''', '''source2_coord_ref''', '''source2_length''' etc.
|-
! scope="row" | '''mouth'''
| Landform or waterbody of the [[river mouth]].
|-
! scope="row" | '''mouth_location'''
| Political details of the mouth location, such as Province, District, State, etc.
|-
! scope="row" | '''mouth_coordinates'''
| Coordinates of the river mouth, using the {{tl|coord}} template. Use {{para|display|inline,title}} if possible.
|-
! scope="row" | '''mouth_elevation'''
| Elevation at the river mouth.
|-
! scope="row" | '''progression'''
| Progression from the mouth of the river in the article to the sea. For example, the [[Pegnitz (river)|Pegnitz]] in Germany flows into the Regnitz, which flows into the Main, which flows into the Rhine, which flows into the North Sea. This is entered into the progression field with a special template {{tl|RRegnitz}}, but could be hard-coded as <code><nowiki>[[Regnitz]]→ [[Main (river)|Main]]→ [[Rhine]]→ [[North Sea]]</nowiki></code>. These both render as [[Regnitz]]→ [[Main (river)|Main]]→ [[Rhine]]→ [[North Sea]] in the Infobox. See {{Cl|Drainage basin succession templates}} for a list of templates that can be used with this parameter.
|-
! scope="row" | '''river_system'''
| Name of the [[Drainage system (geomorphology)|river system]].
|-
! scope="row" | '''basin_landmarks'''
| Popular landmarks along the river. Use commas for multiple.
|-
! scope="row" | '''basin_population'''
| Population within the river basin.
|-
! scope="row" | '''basin_size'''
| Size of the river's [[drainage basin]]. Consider using '''<code><nowiki>{{</nowiki>[[Template:Convert|Convert]]|1234|km2|mi2|abbr=on<nowiki>}}</nowiki></code>'''
|-
! scope="row" | '''basin_size_km2'''
| Size of the river's drainage basin, in square kilometers.
|-
! scope="row" | '''basin_size_mi2'''
| Size of the river's drainage basin, in square miles.
|-
! scope="row" | '''tributaries_left'''
| [[Tributary|Tributaries]] located on the left bank of the river flowing towards the mouth. List in order from source to mouth.
|-
! scope="row" | '''tributaries_right'''
| [[Tributary|Tributaries]] located on the right bank of the river flowing towards the mouth. List in order from source to mouth.
|-
! scope="row" | '''waterbodies'''
| Water bodies located along the river (such as lakes, reservoirs, etc). List in order from source to mouth.
|-
! scope="row" | '''waterfalls'''
| [[Waterfall]]s along the river. List in order from source to mouth.
|-
! scope="row" | '''bridges'''
| [[Bridge]]s along the river. List in order from source to mouth.
|-
! scope="row" | '''ports'''
| [[Inland port]]s along the river. List in order from source to mouth.
|-
! scope="row" | '''cities'''
| Cities along the river. List in order from source to mouth.
|-
! scope="row" | '''custom_label'''
| Use this to enter a custom label (such as <code>bridges</code>). To be used with the field below.
|-
! scope="row" | '''custom_data'''
| Custom data parameter. See above.
|-
! scope="row" | '''extra'''
| Use this parameter to add content to the very bottom of the infobox. Useful for adding maps, charts, and so on.
|-
|}
===Mapframe parameters===
{{Infobox mapframe/doc/parameters
| onByDefault = yes, unless one of these parameters has a value: {{para|map}}, {{para|pushpin_map}}.
| mapframe-frame-width = 250
| mapframe-stroke-color = #0000ff
| mapframe-marker = water
| mapframe-type = river
}}
===Suppressing images ===
To completely suppress the default image in the Infobox, including any image from Wikidata, use {{para|suppressfields|image}}.
== Example ==
{{Infobox river
| name = Amazon River (dummy data)
| native_name = {{native name|pt|Amazonia}}
| other_name = Apurímac, Ene, Tambo, Ucayali, Amazonas, Solimões
| etymology = Named after the Amazon Rainforest
| image = Amazon River ESA387332.jpg
| image_caption = Satellite image of the [[Amazon Delta]]
| image_alt = Alt text for image
| map = Amazonrivermap.svg
| map_caption = Map of the Amazon basin
| map_alt = Alt text for map
| pushpin_map = Brazil
| pushpin_caption = Location of the mouth in Brazil
| pushpin_alt = Map showing the location of the river mouth in Brazil
| mapframe = yes
| mapframe-id = Q3783
| subdivision_type1 = Countries
| subdivision_name1 = [[Brazil]], [[Colombia]], [[Peru]], [[Ecuador]]
| subdivision_type2 = States
| subdivision_name2 = [[Loreto Region|Loreto]] (Peru);<br />[[Amazonas (Colombian department)|Amazonas]] (Columbia);<br />[[North Region, Brazil|North Region]] (Brazil)
| subdivision_type3 = Cities
| subdivision_name3 = [[Iquitos]] (Peru); [[Leticia, Amazonas|Leticia]] (Colombia);<br /> [[Tabatinga]] (Brazil); [[Tefé]] (Brazil);<br /> [[Itacoatiara, Amazonas|Itacoatiara]] (Brazil); [[Parintins]] (Brazil);<br /> [[Óbidos, Pará|Óbidos]] (Brazil); [[Santarém, Pará|Santarém]] (Brazil);<br /> [[Almeirim, Pará|Almeirim]] (Brazil); [[Macapá]] (Brazil)
<!---------------------- PHYSICAL CHARACTERISTICS -->
| length_km = 6992
| width_min = {{Convert|4|km|mi|abbr=on}}
| width_avg = {{Convert|6|km|mi|abbr=on}}
| width_max = {{Convert|8|km|mi|abbr=on}}
| depth_min = {{Convert|3|m|ft|abbr=on}}
| depth_avg = {{Convert|15|m|ft|abbr=on}}
| depth_max = {{Convert|30|m|ft|abbr=on}}
| discharge1_location = [[Santarém, Pará]]
| discharge1_min = {{Convert|109000|m3/s|ft3/s|abbr=on}}
| discharge1_avg = {{Convert|209000|m3/s|ft3/s|abbr=on}}
| discharge1_max = {{Convert|309000|m3/s|ft3/s|abbr=on}}
<!---------------------- BASIN FEATURES -->
| source1 = [[Nevado Mismi]], [[Peru]]
| source1_location = [[Arequipa Region]]
| source1_coordinates = {{coord|15|31|05|S|71|45|55|W}}
| source1_elevation = {{Convert|5170|m|ft|abbr=on}}
| mouth = [[Atlantic Ocean]]
| mouth_location = [[Amapá|State of Amapá]], [[Pará|State of Pará]]
| mouth_coordinates = {{coord|00|42|28|S|50|05|22|W}}
| mouth_elevation = {{Convert|0|m|ft|abbr=on}}
| progression = [[Apurímac River|Apurímac]]—[[Solimões River|Solimões]]—[[Marañón River|Marañón]]
| river_system = [[Amazon Basin]]
| basin_size_km2 = 7050000
| basin_landmarks = [[Arena da Amazônia|Amazon Arena]]
| basin_population = 1,234,567
| tributaries_left = {{hlist|[[Marañón River|Marañón]]|[[Japurá River|Japurá]]|[[Rio Negro (Amazon)|Rio Negro]]|[[Putumayo River|Putumayo]]}}
| tributaries_right = {{hlist|[[Ucayali River|Ucayali]]|[[Purus River|Purus]]|[[Madeira River|Madeira]]|[[Tapajós]]|[[Xingu River|Xingu]]}}
| waterbodies = [[Lawriqucha|Lake Lawriqucha]]
| waterfalls = [[Noel Kempff Mercado National Park|Ahlfeld Waterfall]]
| bridges = [[Manaus–Iranduba Bridge]]
| ports = [[Port of Manaus]]
| custom_label = '''''Custom label'''''
| custom_data = ''Custom data''
| extra =
}}
<syntaxhighlight lang="wikitext" style="overflow: auto">
{{Infobox river
| name = Amazon River (dummy data)
| native_name = {{Native name|pt|Amazonia}}
| other_name = Apurímac, Ene, Tambo, Ucayali, Amazonas, Solimões
| etymology = Named after the Amazon Rainforest
| image = Amazon River ESA387332.jpg
| image_caption = Satellite image of the [[Amazon Delta]]
| image_alt = Alt text for image
| map = Amazonrivermap.svg
| map_caption = Map of the Amazon basin
| map_alt = Alt text for map
| pushpin_map = Brazil
| pushpin_caption = Location of the mouth in Brazil
| pushpin_alt = Map showing the location of the river mouth in Brazil
| mapframe = yes
| subdivision_type1 = Countries
| subdivision_name1 = [[Brazil]], [[Colombia]], [[Peru]], [[Ecuador]]
| subdivision_type2 = States
| subdivision_name2 = [[Loreto Region|Loreto]] (Peru);<br />[[Amazonas (Colombian department)|Amazonas]] (Columbia);<br />[[North Region, Brazil|North Region]] (Brazil)
| subdivision_type3 = Cities
| subdivision_name3 = [[Iquitos]] (Peru); [[Leticia, Amazonas|Leticia]] (Colombia);<br /> [[Tabatinga]] (Brazil); [[Tefé]] (Brazil);<br /> [[Itacoatiara, Amazonas|Itacoatiara]] (Brazil); [[Parintins]] (Brazil);<br /> [[Óbidos, Pará|Óbidos]] (Brazil); [[Santarém, Pará|Santarém]] (Brazil);<br /> [[Almeirim, Pará|Almeirim]] (Brazil); [[Macapá]] (Brazil)
<!---------------------- PHYSICAL CHARACTERISTICS -->
| length_km = 6992
| width_min = {{Convert|4|km|mi|abbr=on}}
| width_avg = {{Convert|6|km|mi|abbr=on}}
| width_max = {{Convert|8|km|mi|abbr=on}}
| depth_min = {{Convert|3|m|ft|abbr=on}}
| depth_avg = {{Convert|15|m|ft|abbr=on}}
| depth_max = {{Convert|30|m|ft|abbr=on}}
| discharge1_location = [[Santarém, Pará]]
| discharge1_min = {{Convert|109000|m3/s|ft3/s|abbr=on}}
| discharge1_avg = {{Convert|209000|m3/s|ft3/s|abbr=on}}
| discharge1_max = {{Convert|309000|m3/s|ft3/s|abbr=on}}
<!---------------------- BASIN FEATURES -->
| source1 = [[Nevado Mismi]], [[Peru]]
| source1_location = [[Arequipa Region]]
| source1_coordinates = {{coord|15|31|05|S|71|45|55|W}}
| source1_elevation = {{Convert|5170|m|ft|abbr=on}}
| mouth = [[Atlantic Ocean]]
| mouth_location = [[Amapá|State of Amapá]], [[Pará|State of Pará]]
| mouth_coordinates = {{coord|00|42|28|S|50|05|22|W|display=inline,title}}
| mouth_elevation = {{Convert|0|m|ft|abbr=on}}
| progression = [[Apurímac River|Apurímac]]—[[Solimões River|Solimões]]—[[Marañón River|Marañón]]
| river_system = [[Amazon Basin]]
| basin_size_km2 = 7050000
| basin_landmarks = [[Arena da Amazônia|Amazon Arena]]
| basin_population = 1,234,567
| tributaries_left = {{hlist|[[Marañón River|Marañón]]|[[Japurá River|Japurá]]|[[Rio Negro (Amazon)|Rio Negro]]|[[Putumayo River|Putumayo]]}}
| tributaries_right = {{hlist|[[Ucayali River|Ucayali]]|[[Purus River|Purus]]|[[Madeira River|Madeira]]|[[Tapajós]]|[[Xingu River|Xingu]]}}
| waterbodies = [[Lawriqucha|Lake Lawriqucha]]
| waterfalls = [[Noel Kempff Mercado National Park|Ahlfeld Waterfall]]
| bridges = [[Manaus–Iranduba Bridge]]
| ports = [[Port of Manaus]]
| custom_label = '''''Custom label'''''
| custom_data = ''Custom data''
| extra = ''(optional content at the bottom – centred)''
}}
</syntaxhighlight>
{{Clear}}
== Template Data ==
{{TemplateData header}}
{{collapse top|bg=#ccc|title=Template Data}}
<templatedata>
{
"params": {
"embed": {},
"name": {},
"qid": {},
"suppressfields": {},
"fetchwikidata": {},
"image": {
"type": "wiki-file-name"
},
"image_size": {},
"image_upright": {},
"image_alt": {},
"image_caption": {},
"map": {},
"map_size": {},
"map_alt": {},
"map_caption": {},
"mouth_coordinates": {},
"pushpin_map": {},
"pushpin_alt": {},
"pushpin_map_size": {},
"pushpin_relief": {},
"pushpin_caption": {},
"native_name": {},
"other_name": {},
"nickname": {},
"etymology": {},
"subdivision_type1": {},
"subdivision_name1": {},
"subdivision_type2": {},
"subdivision_name2": {},
"subdivision_type3": {},
"subdivision_name3": {},
"subdivision_type4": {},
"subdivision_name4": {},
"subdivision_type5": {},
"subdivision_name5": {},
"cities": {},
"source1": {},
"source1_location": {},
"source1_length": {},
"source1_elevation": {},
"source1_coordinates": {},
"source1_coord_ref": {},
"source2": {},
"source2_location": {},
"source2_length": {},
"source2_elevation": {},
"source2_coordinates": {},
"source2_coord_ref": {},
"source3": {},
"source3_location": {},
"source3_length": {},
"source3_elevation": {},
"source3_coordinates": {},
"source3_coord_ref": {},
"source4": {},
"source4_location": {},
"source4_length": {},
"source4_elevation": {},
"source4_coordinates": {},
"source4_coord_ref": {},
"source5": {},
"source5_location": {},
"source5_length": {},
"source5_elevation": {},
"source5_coordinates": {},
"source5_coord_ref": {},
"source_confluence": {},
"source_confluence_location": {},
"source_confluence_elevation": {},
"source_confluence_coordinates": {},
"source_confluence_coord_ref": {},
"mouth": {},
"mouth_location": {},
"mouth_elevation": {},
"mouth_elevation_metric": {},
"mouth_elevation_imperial": {},
"mouth_coord_ref": {},
"length": {},
"length_metric": {},
"length_imperial": {},
"width_min": {},
"width_min_metric": {},
"width_min_imperial": {},
"width_avg": {},
"width_avg_metric": {},
"width_avg_imperial": {},
"width_max": {},
"width_max_metric": {},
"width_max_imperial": {},
"depth_min": {},
"depth_avg": {},
"depth_max": {},
"discharge1_location": {},
"discharge1_min": {},
"discharge1_avg": {},
"discharge1_max": {},
"discharge1": {},
"discharge1_min_metric": {},
"discharge1_min_imperial": {},
"discharge1_avg_metric": {},
"discharge1_avg_imperial": {},
"discharge1_max_metric": {},
"discharge1_max_imperial": {},
"discharge2": {},
"discharge2_location": {},
"discharge2_min": {},
"discharge2_avg": {},
"discharge2_max": {},
"discharge3": {},
"discharge3_location": {},
"discharge3_min": {},
"discharge3_avg": {},
"discharge3_max": {},
"discharge4": {},
"discharge4_location": {},
"discharge4_min": {},
"discharge4_avg": {},
"discharge4_max": {},
"discharge5": {},
"discharge5_location": {},
"discharge5_min": {},
"discharge5_avg": {},
"discharge5_max": {},
"progression": {},
"river_system": {},
"basin_size": {},
"basin_landmarks": {},
"basin_population": {},
"tributaries_left": {},
"tributaries_right": {},
"waterbodies": {},
"waterfalls": {},
"bridges": {},
"ports": {},
"custom_data": {},
"custom_label": {},
"extra": {},
"mapframe": {
"label": "Show mapframe map",
"description": "Specify yes or no to show or hide the map, overriding the default",
"example": "yes",
"type": "string",
"default": "no",
"suggested": true
},
"mapframe-caption": {
"label": "Mapframe caption",
"description": "Caption for the map. If mapframe-geomask is set, then the default is \"Location in <<geomask's label>>\"",
"type": "string"
},
"mapframe-custom": {
"label": "Custom mapframe",
"description": "Use a custom map instead of the automatic mapframe. Specify either a {{maplink}} template, or another template that generates a mapframe map, or an image name. If used, other mapframe parameters will be ignored.",
"type": "wiki-template-name"
},
"mapframe-id": {
"aliases": [
"id",
"qid"
],
"label": "Mapframe Wikidata item",
"description": "Id (Q-number) of Wikidata item to use.",
"type": "string",
"default": "(item for current page)"
},
"mapframe-coordinates": {
"aliases": [
"mapframe-coord",
"coordinates",
"coord"
],
"label": "Mapframe coordinates ",
"description": "Coordinates to use, instead of any on Wikidata. Use the {{Coord}} template.",
"example": "{{Coord|12.34|N|56.78|E}}",
"type": "wiki-template-name",
"default": "(coordinates from Wikidata)"
},
"mapframe-wikidata": {
"label": "Mapframe shapes from Wikidata",
"description": "et to yes to show shape/line features from the wikidata item, if any, when coordinates are specified by parameter",
"example": "yes",
"type": "string"
},
"mapframe-shape": {
"label": "Mapframe shape feature",
"description": "Override display of mapframe shape feature. Turn off by setting to \"none\". Use an inverse shape (geomask) instead of a regular shape by setting to \"inverse\"",
"type": "string"
},
"mapframe-point": {
"label": "Mapframe point feature",
"description": "Override display of mapframe point feature. Turn off display of point feature by setting to \"none\". Force point marker to be displayed by setting to \"on\"",
"type": "string"
},
"mapframe-geomask": {
"label": "Mapframe geomask",
"description": "Wikidata item to use as a geomask (everything outside the boundary is shaded darker). Can either be a specific Wikidata item (Q-number), or a property that specifies the item to use (e.g. P17 for country, or P131 for located in the administrative territorial entity)",
"example": "Q100",
"type": "wiki-page-name"
},
"mapframe-switcher": {
"label": "Mapframe switcher",
"description": "Set to \"auto\" or \"geomasks\" or \"zooms\" to enable Template:Switcher-style switching between multiple mapframes. IF SET TO auto – switch geomasks found in location (P276) and located in the administrative territorial entity (P131) statements on the page's Wikidata item, searching recursively. E.g. an item's city, that city's state, and that state's country. IF SET TO geomasks – switch between the geomasks specified as a comma-separated list of Wikidata items (Q-numbers) in the mapframe-geomask parameter. IF SET TO zooms – switch between \"zoomed in\"/\"zoomed midway\"/\"zoomed out\", where \"zoomed in\" is the default zoom (with a minimum of 3), \"zoomed out\" is 1, and \"zoomed midway\" is the average.",
"type": "string"
},
"mapframe-frame-width": {
"aliases": [
"mapframe-width"
],
"label": "Mapframe width",
"description": "Frame width in pixels",
"type": "number",
"default": "270"
},
"mapframe-frame-height": {
"aliases": [
"mapframe-height"
],
"label": "Mapframe height",
"description": "Frame height in pixels",
"type": "number",
"default": "200"
},
"mapframe-shape-fill": {
"label": "Mapframe shape fill",
"description": "Color used to fill shape features",
"type": "string",
"default": "#606060"
},
"mapframe-shape-fill-opacity": {
"label": "Mapframe shape fill opacity",
"description": "Opacity level of shape fill, a number between 0 and 1",
"type": "number",
"default": "0.5"
},
"mapframe-stroke-color": {
"aliases": [
"mapframe-stroke-colour"
],
"label": "Mapframe stroke color",
"description": "Color of line features, and outlines of shape features",
"type": "string",
"default": "#ff0000"
},
"mapframe-stroke-width": {
"label": "Mapframe stroke width",
"description": "Width of line features, and outlines of shape features",
"type": "number",
"default": "5"
},
"mapframe-marker": {
"label": "Mapframe marker",
"description": "Marker symbol to use for coordinates; see [[mw:Help:Extension:Kartographer/Icons]] for options",
"example": "museum",
"type": "string"
},
"mapframe-marker-color": {
"aliases": [
"mapframe-marker-colour"
],
"label": "Mapframe marker color",
"description": "Background color for the marker",
"type": "string",
"default": "#5E74F3"
},
"mapframe-geomask-stroke-color": {
"aliases": [
"mapframe-geomask-stroke-colour"
],
"label": "Mapframe geomask stroke color",
"description": "Color of outline of geomask shape",
"type": "string",
"default": "#555555"
},
"mapframe-geomask-stroke-width": {
"label": "Mapframe geomask stroke width",
"description": "Width of outline of geomask shape",
"type": "number",
"default": "2"
},
"mapframe-geomask-fill": {
"label": "Mapframe geomask fill",
"description": "Color used to fill outside geomask features",
"type": "string",
"default": "#606060"
},
"mapframe-geomask-fill-opacity": {
"label": "Mapframe geomask fill opacity",
"description": "Opacity level of fill outside geomask features, a number between 0 and 1",
"type": "number",
"default": "0.5"
},
"mapframe-zoom": {
"label": "Mapframe zoom",
"description": "Set the zoom level, from \"1\" to \"18\", to used if the zoom level cannot be determined automatically from object length or area",
"example": "12",
"type": "number",
"default": "10"
},
"mapframe-length_km": {
"label": "Mapframe length (km)",
"description": "Object length in kilometres, for automatically determining zoom level. ONLY use ONE of the available parameters for length or area",
"type": "number"
},
"mapframe-length_mi": {
"label": "Mapframe length (mi)",
"description": "Object length in miles, for automatically determining zoom level. ONLY use ONE of the available parameters for length or area",
"type": "number"
},
"mapframe-area_km2": {
"label": "Mapframe area (km^2)",
"description": "Object arean square kilometres, for automatically determining zoom level. ONLY use ONE of the available parameters for length or area",
"type": "number"
},
"mapframe-area_mi2": {
"label": "Mapframe area (mi^2)",
"description": "Object area in square miles, for automatically determining zoom level. ONLY use ONE of the available parameters for length or area",
"type": "number"
},
"mapframe-frame-coordinates": {
"aliases": [
"mapframe-frame-coord"
],
"label": "Mapframe frame coordinates",
"description": "Alternate latitude and longitude coordinates for initial placement of map, using {{coord}}",
"example": "{{Coord|12.35|N|56.71|E}}",
"type": "wiki-template-name"
},
"mapframe-line": {}
},
"format": "block"
}
</templatedata>
{{collapse bottom}}
== Subtemplates ==
* {{Template link|Infobox river/discharge}}
* {{Template link|Infobox river/row-style}}
* {{Template link|Infobox river/calcunit}}
* {{Template link|Infobox river/source}}
== Tracking categories ==
{{Infobox tracking categories
}}
* {{clc|Pages using infobox river with mapframe}}
{{When on basepage
|<!--Categories below this line, please; interwikis at Wikidata-->
[[Category:Place infobox templates|River]]
[[Category:WikiProject Rivers]]
[[Category:WikiProject Rivers templates]]
[[Category:Embeddable templates]]
[[Category:Templates that add a tracking category]]
}}
5wa05kjajd3ybepra1s73s9t03nr2ln
1378173
1378172
2026-08-02T15:52:08Z
A826
72368
೧ revisions imported from [[:en:Template:Infobox_river/doc]]
1378172
wikitext
text/x-wiki
{{Documentation subpage}}
{{High-use}}
{{Lua|Module:Check for unknown parameters|Module:Coordinates|Module:InfoboxImage|Module:String|Module:WikidataIB|Module:Wikidata|Module:Mapframe}}
{{Tracks Wikidata|P18|cat=No local image but image on Wikidata}}
{{auto short description}}
{{Parameter names example|_template=| basin_landmarks | basin_population | basin_size | basin_size_km2 | basin_size_mi2 | basin_size_ref | bridges | custom_data | custom_label | depth_avg | depth_max | depth_min | discharge1_avg | discharge1_location | discharge1_max | discharge1_min | discharge5_avg | discharge5_location | discharge5_max | discharge5_min | embed | etymology | extra | image | image_alt | image_caption | image_size | length | length_km | length_mi | map | map_alt | map_caption | map_size | mapframe | mouth | mouth_coord_ref | mouth_coordinates | mouth_elevation | mouth_location | name | native_name | nickname | ports | progression | pushpin_map = | pushpin_alt | pushpin_caption | pushpin_map_size | river_system | source1 | source1_coord_ref | source1_coordinates | source1_elevation | source1_location | source5 | source5_coord_ref | source5_coordinates | source5_elevation | source5_location | subdivision_name1 | subdivision_name2 | subdivision_name3 | subdivision_name4 | subdivision_name5 | subdivision_type1 | subdivision_type2 | subdivision_type3 | subdivision_type4 | subdivision_type5 | tributaries_left | tributaries_right | waterbodies | waterfalls | width_avg | width_max | width_min | source_confluence | source_confluence_location | source_confluence_elevation | source_confluence_coordinates }}
== Usage ==
<syntaxhighlight lang="wikitext" style="overflow: auto">
{{Infobox river
| name =
| native_name = <!-- {{native name|<tag>|<name>}} or {{native name list |tag1=<tag>|name1=<name> |tag2=<tag>|name2=<name> ... }} -->
| other_name =
| etymology =
| nickname =
<!---------------------- IMAGE-->
| image =
| image_size =
| image_caption =
| image_alt =
<!---------------------- MAPS -->
| map =
| map_size =
| map_caption =
| map_alt =
| pushpin_map =
| pushpin_map_size =
| pushpin_caption =
| pushpin_alt =
| mapframe = yes<!-- see below for more mapframe parameters -->
<!---------------------- LOCATION -->
| subdivision_type1 =
| subdivision_name1 =
| subdivision_type2 =
| subdivision_name2 =
| subdivision_type3 =
| subdivision_name3 =
| subdivision_type4 =
| subdivision_name4 =
| subdivision_type5 =
| subdivision_name5 =
<!---------------------- PHYSICAL CHARACTERISTICS -->
| length =
| width_min =
| width_avg =
| width_max =
| depth_min =
| depth_avg =
| depth_max =
| discharge1_location =
| discharge1_min =
| discharge1_avg =
| discharge1_max =
<!---------------------- BASIN FEATURES -->
| source1 =
| source1_location =
| source1_coordinates = <!-- {{Coord|...}} -->
| source1_elevation =
| mouth =
| mouth_location =
| mouth_coordinates = <!-- {{Coord|...|display=inline,title}} -->
| mouth_elevation =
| progression =
| river_system =
| basin_size =
| basin_landmarks =
| basin_population =
| tributaries_left =
| tributaries_right =
| waterbodies =
| waterfalls =
| bridges =
| ports =
| custom_label =
| custom_data =
| extra =
}}
</syntaxhighlight>{{Clear}}
== Parameter names and descriptions ==
{| class="wikitable plainrowheaders"
|-
! scope="col" | Parameter name
! scope="col" | Description
|-
! scope="row" | '''name'''
| The [[WP:COMMONNAME|common name]] of the river.
|-
! scope="row" | '''native_name'''
| The name in its official or de facto language. Use {{tlx|native name}} or, for multiple names, use {{tlx|native name list}}
|-
! scope="row" | '''other_name'''
| Other name(s) of the river. Use commas to enter multiple. Displayed under the infobox heading.
|-
! scope="row" | '''nickname'''
| Local name(s) for the river. Use commas to enter multiple.
|-
! scope="row" | '''etymology'''
| Person, event or other entity the body is named after
|-
! scope="row" | '''image'''
| Image filename without the <code>File:</code> or <code>Image:</code> prefix.
|-
! scope="row" | '''image_size'''
| Width of the image in pixels (i.e. <code>200px</code>). Common sizes are usually around <code>280px</code> to <code>300px</code>.
|-
! scope="row" | '''image_caption'''
| Caption for the main image.
|-
! scope="row" | '''image_alt'''
| [[Wikipedia:Alternative text for images|Alt text]] for the main image.
|-
! scope="row" | '''map'''
| Map image filename without the <code>File:</code> or <code>Image:</code> prefix.
|-
! scope="row" | '''map_size'''
| Width of the image in pixels (i.e. <code>200px</code>). Common sizes are usually around <code>280px</code> to <code>300px</code>.
|-
! scope="row" | '''map_caption'''
| Caption for the map image.
|-
! scope="row" | '''map_alt'''
| [[Wikipedia:Alternative text for images|Alt text]] for the map image.
|-
! scope="row" | '''pushpin_map'''
| The name of a location map to be used with {{tl|location map}}, with the pin placed at the location specified by the <code>mouth_coordinates</code> parameter, or the value from wikidata if no mouth coordinates are provided. Manually add parameter <code>pushpin_relief = 0</code> to disable the use of a relief location map.
|-
! scope="row" | '''pushpin_map_size'''
| The width of the location map in pixels as a raw number, without any <code>px</code> suffix
|-
! scope="row" | '''pushpin_caption'''
| Caption for the location map
|-
! scope="row" | '''pushpin_alt'''
| [[Wikipedia:Alternative text for images|Alt text]] for the location map image.
|-
! scope="row" | '''pushpin_relief'''
| A pushpin map will be displayed in relief by default. Use <code>pushpin_relief = 0</code> for a plain map.
|-
! scope="row" | '''mapframe'''
| A mapframe map can be enabled with this. See [[#Mapframe parameters]] below for more information.
|-
! scope="row" | '''subdivision_type1'''
| Primary political region(s), typically <code>Country</code> or <code>Countries</code>.
|-
! scope="row" | '''subdivision_name1'''
| Used with above. The country/ies in which the river flows in/through. Use commas for multiple.
|-
! scope="row" | '''subdivision_type2'''
| Secondary political region(s). <code>States</code>, <code>Provinces</code>, <code>Districts</code>, or <code>Regions</code>, in which the river flows through.
|-
! scope="row" | '''subdivision_name2'''
| Used with above. The secondary political region(s) in which the river flows through. Use commas for multiple.
|-
! scope="row" | '''subdivision_type3'''
| Tertiary political region(s), such as the <code>Cities</code> along the river.
|-
! scope="row" | '''subdivision_name3'''
| Used with above. The tertiary political region(s) through which the river flows. Use commas for multiple.
|-
! scope="row" | '''subdivision_type4'''
| Other types of political subdivisions.
|-
! scope="row" | '''subdivision_name4'''
| Used with above. Other political subdivisions through which the river flows. Use commas for multiple.
|-
! scope="row" | '''subdivision_type5'''
| Other types of political subdivisions.
|-
! scope="row" | '''subdivision_name5'''
| Used with above. Other political subdivisions through which the river flows. Use commas for multiple.
|-
| colspan=2 bgcolor=#CEDEFF | '''{{center|PHYSICAL CHARACTERISTICS}}'''
|-
! scope="row" | '''length'''
| The total length of the river's [[main stem]]. Consider using '''<code><nowiki>{{</nowiki>[[Template:Convert|Convert]]|1234|km|mi|abbr=on<nowiki>}}</nowiki></code>'''
|-
! scope="row" | '''length_km'''
| Total length of the river's main stem, measured in kilometers.
|-
! scope="row" | '''length_mi'''
| Total length of the river's main stem, measured in miles.
|-
! scope="row" | '''length_ref'''
| References or other notes for length of river, used only if {{para|length_km}} or {{para|length_mi}} are used.
|-
! scope="row" | '''width_min'''
| Minimum width between banks of the river. Rarely used as it is often difficult to determine the exact source of the river. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''width_avg'''
| Average width of the river. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''width_max'''
| Maximum width of the river before the [[river mouth|mouth]]. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''depth_min'''
| Minimum depth of the river. Rarely used as it is often difficult to determine the exact source of the river. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''depth_avg'''
| Average depth of the river. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''depth_max'''
| Maximum depth of the river before the [[river mouth|mouth]]. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''discharge1_location'''
| Location or gauge/sensor name at which the below details are recorded. Commonly at the <code>River mouth</code>.
|-
! scope="row" | '''discharge1_min'''
| Minimum discharge rate. Rarely used. Consider using '''<code><nowiki>{{</nowiki>[[Template:Convert|Convert]]|1234|m3/s|ft3/s|abbr=on<nowiki>}}</nowiki></code>'''
|-
! scope="row" | '''discharge1_avg'''
| Average discharge rate (also use if a source provides only one discharge rate without a minimum or maximum). Consider using '''<code><nowiki>{{</nowiki>[[Template:Convert|Convert]]|1234|m3/s|ft3/s|abbr=on<nowiki>}}</nowiki></code>'''
|-
! scope="row" | '''discharge1_max'''
| Maximum discharge rate before flooding occurs in the surrounding areas. Consider using '''<code><nowiki>{{</nowiki>[[Template:Convert|Convert]]|1234|m3/s|ft3/s|abbr=on<nowiki>}}</nowiki></code>'''
|-
! scope="row" | '''discharge2_* ⇒ 5_*'''
| Up to four more sets of discharge parameters. '''You may add up to <code>discharge5_*</code>'''.
|-
| colspan=2 bgcolor=#CEDEFF | '''{{center|BASIN FEATURES}}'''
|-
! scope="row" | '''source1'''
| Landform or waterbody of the primary source. For a source that is a [[confluence]], you may add as: <code><nowiki>Confluence of [[River-A]] and [[River-B]]</nowiki></code>.
|-
! scope="row" | '''source1_location'''
| Political details of the source location, such as Province, District, State, etc.
|-
! scope="row" | '''source1_elevation'''
| Elevation at the main source of water
|-
! scope="row" | '''source1_coordinates'''
| Coordinates of the main source, using the {{tl|coord}} template. Use {{para|display|inline}} only.
|-
! scope="row" | '''source1_coord_ref'''
| Reference for the coordinates of the main source.
|-
! scope="row" | '''source1_length'''
| Length from the main source<!-- to what? -->.
|-
! scope="row" | '''source2 ⇒ source5'''
| Landform or waterbody of further sources. You may add up to '''<code>source5</code>'''. Also '''source2_location''', '''source2_elevation''', '''source2_coordinates''', '''source2_coord_ref''', '''source2_length''' etc.
|-
! scope="row" | '''mouth'''
| Landform or waterbody of the [[river mouth]].
|-
! scope="row" | '''mouth_location'''
| Political details of the mouth location, such as Province, District, State, etc.
|-
! scope="row" | '''mouth_coordinates'''
| Coordinates of the river mouth, using the {{tl|coord}} template. Use {{para|display|inline,title}} if possible.
|-
! scope="row" | '''mouth_elevation'''
| Elevation at the river mouth.
|-
! scope="row" | '''progression'''
| Progression from the mouth of the river in the article to the sea. For example, the [[Pegnitz (river)|Pegnitz]] in Germany flows into the Regnitz, which flows into the Main, which flows into the Rhine, which flows into the North Sea. This is entered into the progression field with a special template {{tl|RRegnitz}}, but could be hard-coded as <code><nowiki>[[Regnitz]]→ [[Main (river)|Main]]→ [[Rhine]]→ [[North Sea]]</nowiki></code>. These both render as [[Regnitz]]→ [[Main (river)|Main]]→ [[Rhine]]→ [[North Sea]] in the Infobox. See {{Cl|Drainage basin succession templates}} for a list of templates that can be used with this parameter.
|-
! scope="row" | '''river_system'''
| Name of the [[Drainage system (geomorphology)|river system]].
|-
! scope="row" | '''basin_landmarks'''
| Popular landmarks along the river. Use commas for multiple.
|-
! scope="row" | '''basin_population'''
| Population within the river basin.
|-
! scope="row" | '''basin_size'''
| Size of the river's [[drainage basin]]. Consider using '''<code><nowiki>{{</nowiki>[[Template:Convert|Convert]]|1234|km2|mi2|abbr=on<nowiki>}}</nowiki></code>'''
|-
! scope="row" | '''basin_size_km2'''
| Size of the river's drainage basin, in square kilometers.
|-
! scope="row" | '''basin_size_mi2'''
| Size of the river's drainage basin, in square miles.
|-
! scope="row" | '''tributaries_left'''
| [[Tributary|Tributaries]] located on the left bank of the river flowing towards the mouth. List in order from source to mouth.
|-
! scope="row" | '''tributaries_right'''
| [[Tributary|Tributaries]] located on the right bank of the river flowing towards the mouth. List in order from source to mouth.
|-
! scope="row" | '''waterbodies'''
| Water bodies located along the river (such as lakes, reservoirs, etc). List in order from source to mouth.
|-
! scope="row" | '''waterfalls'''
| [[Waterfall]]s along the river. List in order from source to mouth.
|-
! scope="row" | '''bridges'''
| [[Bridge]]s along the river. List in order from source to mouth.
|-
! scope="row" | '''ports'''
| [[Inland port]]s along the river. List in order from source to mouth.
|-
! scope="row" | '''cities'''
| Cities along the river. List in order from source to mouth.
|-
! scope="row" | '''custom_label'''
| Use this to enter a custom label (such as <code>bridges</code>). To be used with the field below.
|-
! scope="row" | '''custom_data'''
| Custom data parameter. See above.
|-
! scope="row" | '''extra'''
| Use this parameter to add content to the very bottom of the infobox. Useful for adding maps, charts, and so on.
|-
|}
===Mapframe parameters===
{{Infobox mapframe/doc/parameters
| onByDefault = yes, unless one of these parameters has a value: {{para|map}}, {{para|pushpin_map}}.
| mapframe-frame-width = 250
| mapframe-stroke-color = #0000ff
| mapframe-marker = water
| mapframe-type = river
}}
===Suppressing images ===
To completely suppress the default image in the Infobox, including any image from Wikidata, use {{para|suppressfields|image}}.
== Example ==
{{Infobox river
| name = Amazon River (dummy data)
| native_name = {{native name|pt|Amazonia}}
| other_name = Apurímac, Ene, Tambo, Ucayali, Amazonas, Solimões
| etymology = Named after the Amazon Rainforest
| image = Amazon River ESA387332.jpg
| image_caption = Satellite image of the [[Amazon Delta]]
| image_alt = Alt text for image
| map = Amazonrivermap.svg
| map_caption = Map of the Amazon basin
| map_alt = Alt text for map
| pushpin_map = Brazil
| pushpin_caption = Location of the mouth in Brazil
| pushpin_alt = Map showing the location of the river mouth in Brazil
| mapframe = yes
| mapframe-id = Q3783
| subdivision_type1 = Countries
| subdivision_name1 = [[Brazil]], [[Colombia]], [[Peru]], [[Ecuador]]
| subdivision_type2 = States
| subdivision_name2 = [[Loreto Region|Loreto]] (Peru);<br />[[Amazonas (Colombian department)|Amazonas]] (Columbia);<br />[[North Region, Brazil|North Region]] (Brazil)
| subdivision_type3 = Cities
| subdivision_name3 = [[Iquitos]] (Peru); [[Leticia, Amazonas|Leticia]] (Colombia);<br /> [[Tabatinga]] (Brazil); [[Tefé]] (Brazil);<br /> [[Itacoatiara, Amazonas|Itacoatiara]] (Brazil); [[Parintins]] (Brazil);<br /> [[Óbidos, Pará|Óbidos]] (Brazil); [[Santarém, Pará|Santarém]] (Brazil);<br /> [[Almeirim, Pará|Almeirim]] (Brazil); [[Macapá]] (Brazil)
<!---------------------- PHYSICAL CHARACTERISTICS -->
| length_km = 6992
| width_min = {{Convert|4|km|mi|abbr=on}}
| width_avg = {{Convert|6|km|mi|abbr=on}}
| width_max = {{Convert|8|km|mi|abbr=on}}
| depth_min = {{Convert|3|m|ft|abbr=on}}
| depth_avg = {{Convert|15|m|ft|abbr=on}}
| depth_max = {{Convert|30|m|ft|abbr=on}}
| discharge1_location = [[Santarém, Pará]]
| discharge1_min = {{Convert|109000|m3/s|ft3/s|abbr=on}}
| discharge1_avg = {{Convert|209000|m3/s|ft3/s|abbr=on}}
| discharge1_max = {{Convert|309000|m3/s|ft3/s|abbr=on}}
<!---------------------- BASIN FEATURES -->
| source1 = [[Nevado Mismi]], [[Peru]]
| source1_location = [[Arequipa Region]]
| source1_coordinates = {{coord|15|31|05|S|71|45|55|W}}
| source1_elevation = {{Convert|5170|m|ft|abbr=on}}
| mouth = [[Atlantic Ocean]]
| mouth_location = [[Amapá|State of Amapá]], [[Pará|State of Pará]]
| mouth_coordinates = {{coord|00|42|28|S|50|05|22|W}}
| mouth_elevation = {{Convert|0|m|ft|abbr=on}}
| progression = [[Apurímac River|Apurímac]]—[[Solimões River|Solimões]]—[[Marañón River|Marañón]]
| river_system = [[Amazon Basin]]
| basin_size_km2 = 7050000
| basin_landmarks = [[Arena da Amazônia|Amazon Arena]]
| basin_population = 1,234,567
| tributaries_left = {{hlist|[[Marañón River|Marañón]]|[[Japurá River|Japurá]]|[[Rio Negro (Amazon)|Rio Negro]]|[[Putumayo River|Putumayo]]}}
| tributaries_right = {{hlist|[[Ucayali River|Ucayali]]|[[Purus River|Purus]]|[[Madeira River|Madeira]]|[[Tapajós]]|[[Xingu River|Xingu]]}}
| waterbodies = [[Lawriqucha|Lake Lawriqucha]]
| waterfalls = [[Noel Kempff Mercado National Park|Ahlfeld Waterfall]]
| bridges = [[Manaus–Iranduba Bridge]]
| ports = [[Port of Manaus]]
| custom_label = '''''Custom label'''''
| custom_data = ''Custom data''
| extra =
}}
<syntaxhighlight lang="wikitext" style="overflow: auto">
{{Infobox river
| name = Amazon River (dummy data)
| native_name = {{Native name|pt|Amazonia}}
| other_name = Apurímac, Ene, Tambo, Ucayali, Amazonas, Solimões
| etymology = Named after the Amazon Rainforest
| image = Amazon River ESA387332.jpg
| image_caption = Satellite image of the [[Amazon Delta]]
| image_alt = Alt text for image
| map = Amazonrivermap.svg
| map_caption = Map of the Amazon basin
| map_alt = Alt text for map
| pushpin_map = Brazil
| pushpin_caption = Location of the mouth in Brazil
| pushpin_alt = Map showing the location of the river mouth in Brazil
| mapframe = yes
| subdivision_type1 = Countries
| subdivision_name1 = [[Brazil]], [[Colombia]], [[Peru]], [[Ecuador]]
| subdivision_type2 = States
| subdivision_name2 = [[Loreto Region|Loreto]] (Peru);<br />[[Amazonas (Colombian department)|Amazonas]] (Columbia);<br />[[North Region, Brazil|North Region]] (Brazil)
| subdivision_type3 = Cities
| subdivision_name3 = [[Iquitos]] (Peru); [[Leticia, Amazonas|Leticia]] (Colombia);<br /> [[Tabatinga]] (Brazil); [[Tefé]] (Brazil);<br /> [[Itacoatiara, Amazonas|Itacoatiara]] (Brazil); [[Parintins]] (Brazil);<br /> [[Óbidos, Pará|Óbidos]] (Brazil); [[Santarém, Pará|Santarém]] (Brazil);<br /> [[Almeirim, Pará|Almeirim]] (Brazil); [[Macapá]] (Brazil)
<!---------------------- PHYSICAL CHARACTERISTICS -->
| length_km = 6992
| width_min = {{Convert|4|km|mi|abbr=on}}
| width_avg = {{Convert|6|km|mi|abbr=on}}
| width_max = {{Convert|8|km|mi|abbr=on}}
| depth_min = {{Convert|3|m|ft|abbr=on}}
| depth_avg = {{Convert|15|m|ft|abbr=on}}
| depth_max = {{Convert|30|m|ft|abbr=on}}
| discharge1_location = [[Santarém, Pará]]
| discharge1_min = {{Convert|109000|m3/s|ft3/s|abbr=on}}
| discharge1_avg = {{Convert|209000|m3/s|ft3/s|abbr=on}}
| discharge1_max = {{Convert|309000|m3/s|ft3/s|abbr=on}}
<!---------------------- BASIN FEATURES -->
| source1 = [[Nevado Mismi]], [[Peru]]
| source1_location = [[Arequipa Region]]
| source1_coordinates = {{coord|15|31|05|S|71|45|55|W}}
| source1_elevation = {{Convert|5170|m|ft|abbr=on}}
| mouth = [[Atlantic Ocean]]
| mouth_location = [[Amapá|State of Amapá]], [[Pará|State of Pará]]
| mouth_coordinates = {{coord|00|42|28|S|50|05|22|W|display=inline,title}}
| mouth_elevation = {{Convert|0|m|ft|abbr=on}}
| progression = [[Apurímac River|Apurímac]]—[[Solimões River|Solimões]]—[[Marañón River|Marañón]]
| river_system = [[Amazon Basin]]
| basin_size_km2 = 7050000
| basin_landmarks = [[Arena da Amazônia|Amazon Arena]]
| basin_population = 1,234,567
| tributaries_left = {{hlist|[[Marañón River|Marañón]]|[[Japurá River|Japurá]]|[[Rio Negro (Amazon)|Rio Negro]]|[[Putumayo River|Putumayo]]}}
| tributaries_right = {{hlist|[[Ucayali River|Ucayali]]|[[Purus River|Purus]]|[[Madeira River|Madeira]]|[[Tapajós]]|[[Xingu River|Xingu]]}}
| waterbodies = [[Lawriqucha|Lake Lawriqucha]]
| waterfalls = [[Noel Kempff Mercado National Park|Ahlfeld Waterfall]]
| bridges = [[Manaus–Iranduba Bridge]]
| ports = [[Port of Manaus]]
| custom_label = '''''Custom label'''''
| custom_data = ''Custom data''
| extra = ''(optional content at the bottom – centred)''
}}
</syntaxhighlight>
{{Clear}}
== Template Data ==
{{TemplateData header}}
{{collapse top|bg=#ccc|title=Template Data}}
<templatedata>
{
"params": {
"embed": {},
"name": {},
"qid": {},
"suppressfields": {},
"fetchwikidata": {},
"image": {
"type": "wiki-file-name"
},
"image_size": {},
"image_upright": {},
"image_alt": {},
"image_caption": {},
"map": {},
"map_size": {},
"map_alt": {},
"map_caption": {},
"mouth_coordinates": {},
"pushpin_map": {},
"pushpin_alt": {},
"pushpin_map_size": {},
"pushpin_relief": {},
"pushpin_caption": {},
"native_name": {},
"other_name": {},
"nickname": {},
"etymology": {},
"subdivision_type1": {},
"subdivision_name1": {},
"subdivision_type2": {},
"subdivision_name2": {},
"subdivision_type3": {},
"subdivision_name3": {},
"subdivision_type4": {},
"subdivision_name4": {},
"subdivision_type5": {},
"subdivision_name5": {},
"cities": {},
"source1": {},
"source1_location": {},
"source1_length": {},
"source1_elevation": {},
"source1_coordinates": {},
"source1_coord_ref": {},
"source2": {},
"source2_location": {},
"source2_length": {},
"source2_elevation": {},
"source2_coordinates": {},
"source2_coord_ref": {},
"source3": {},
"source3_location": {},
"source3_length": {},
"source3_elevation": {},
"source3_coordinates": {},
"source3_coord_ref": {},
"source4": {},
"source4_location": {},
"source4_length": {},
"source4_elevation": {},
"source4_coordinates": {},
"source4_coord_ref": {},
"source5": {},
"source5_location": {},
"source5_length": {},
"source5_elevation": {},
"source5_coordinates": {},
"source5_coord_ref": {},
"source_confluence": {},
"source_confluence_location": {},
"source_confluence_elevation": {},
"source_confluence_coordinates": {},
"source_confluence_coord_ref": {},
"mouth": {},
"mouth_location": {},
"mouth_elevation": {},
"mouth_elevation_metric": {},
"mouth_elevation_imperial": {},
"mouth_coord_ref": {},
"length": {},
"length_metric": {},
"length_imperial": {},
"width_min": {},
"width_min_metric": {},
"width_min_imperial": {},
"width_avg": {},
"width_avg_metric": {},
"width_avg_imperial": {},
"width_max": {},
"width_max_metric": {},
"width_max_imperial": {},
"depth_min": {},
"depth_avg": {},
"depth_max": {},
"discharge1_location": {},
"discharge1_min": {},
"discharge1_avg": {},
"discharge1_max": {},
"discharge1": {},
"discharge1_min_metric": {},
"discharge1_min_imperial": {},
"discharge1_avg_metric": {},
"discharge1_avg_imperial": {},
"discharge1_max_metric": {},
"discharge1_max_imperial": {},
"discharge2": {},
"discharge2_location": {},
"discharge2_min": {},
"discharge2_avg": {},
"discharge2_max": {},
"discharge3": {},
"discharge3_location": {},
"discharge3_min": {},
"discharge3_avg": {},
"discharge3_max": {},
"discharge4": {},
"discharge4_location": {},
"discharge4_min": {},
"discharge4_avg": {},
"discharge4_max": {},
"discharge5": {},
"discharge5_location": {},
"discharge5_min": {},
"discharge5_avg": {},
"discharge5_max": {},
"progression": {},
"river_system": {},
"basin_size": {},
"basin_landmarks": {},
"basin_population": {},
"tributaries_left": {},
"tributaries_right": {},
"waterbodies": {},
"waterfalls": {},
"bridges": {},
"ports": {},
"custom_data": {},
"custom_label": {},
"extra": {},
"mapframe": {
"label": "Show mapframe map",
"description": "Specify yes or no to show or hide the map, overriding the default",
"example": "yes",
"type": "string",
"default": "no",
"suggested": true
},
"mapframe-caption": {
"label": "Mapframe caption",
"description": "Caption for the map. If mapframe-geomask is set, then the default is \"Location in <<geomask's label>>\"",
"type": "string"
},
"mapframe-custom": {
"label": "Custom mapframe",
"description": "Use a custom map instead of the automatic mapframe. Specify either a {{maplink}} template, or another template that generates a mapframe map, or an image name. If used, other mapframe parameters will be ignored.",
"type": "wiki-template-name"
},
"mapframe-id": {
"aliases": [
"id",
"qid"
],
"label": "Mapframe Wikidata item",
"description": "Id (Q-number) of Wikidata item to use.",
"type": "string",
"default": "(item for current page)"
},
"mapframe-coordinates": {
"aliases": [
"mapframe-coord",
"coordinates",
"coord"
],
"label": "Mapframe coordinates ",
"description": "Coordinates to use, instead of any on Wikidata. Use the {{Coord}} template.",
"example": "{{Coord|12.34|N|56.78|E}}",
"type": "wiki-template-name",
"default": "(coordinates from Wikidata)"
},
"mapframe-wikidata": {
"label": "Mapframe shapes from Wikidata",
"description": "et to yes to show shape/line features from the wikidata item, if any, when coordinates are specified by parameter",
"example": "yes",
"type": "string"
},
"mapframe-shape": {
"label": "Mapframe shape feature",
"description": "Override display of mapframe shape feature. Turn off by setting to \"none\". Use an inverse shape (geomask) instead of a regular shape by setting to \"inverse\"",
"type": "string"
},
"mapframe-point": {
"label": "Mapframe point feature",
"description": "Override display of mapframe point feature. Turn off display of point feature by setting to \"none\". Force point marker to be displayed by setting to \"on\"",
"type": "string"
},
"mapframe-geomask": {
"label": "Mapframe geomask",
"description": "Wikidata item to use as a geomask (everything outside the boundary is shaded darker). Can either be a specific Wikidata item (Q-number), or a property that specifies the item to use (e.g. P17 for country, or P131 for located in the administrative territorial entity)",
"example": "Q100",
"type": "wiki-page-name"
},
"mapframe-switcher": {
"label": "Mapframe switcher",
"description": "Set to \"auto\" or \"geomasks\" or \"zooms\" to enable Template:Switcher-style switching between multiple mapframes. IF SET TO auto – switch geomasks found in location (P276) and located in the administrative territorial entity (P131) statements on the page's Wikidata item, searching recursively. E.g. an item's city, that city's state, and that state's country. IF SET TO geomasks – switch between the geomasks specified as a comma-separated list of Wikidata items (Q-numbers) in the mapframe-geomask parameter. IF SET TO zooms – switch between \"zoomed in\"/\"zoomed midway\"/\"zoomed out\", where \"zoomed in\" is the default zoom (with a minimum of 3), \"zoomed out\" is 1, and \"zoomed midway\" is the average.",
"type": "string"
},
"mapframe-frame-width": {
"aliases": [
"mapframe-width"
],
"label": "Mapframe width",
"description": "Frame width in pixels",
"type": "number",
"default": "270"
},
"mapframe-frame-height": {
"aliases": [
"mapframe-height"
],
"label": "Mapframe height",
"description": "Frame height in pixels",
"type": "number",
"default": "200"
},
"mapframe-shape-fill": {
"label": "Mapframe shape fill",
"description": "Color used to fill shape features",
"type": "string",
"default": "#606060"
},
"mapframe-shape-fill-opacity": {
"label": "Mapframe shape fill opacity",
"description": "Opacity level of shape fill, a number between 0 and 1",
"type": "number",
"default": "0.5"
},
"mapframe-stroke-color": {
"aliases": [
"mapframe-stroke-colour"
],
"label": "Mapframe stroke color",
"description": "Color of line features, and outlines of shape features",
"type": "string",
"default": "#ff0000"
},
"mapframe-stroke-width": {
"label": "Mapframe stroke width",
"description": "Width of line features, and outlines of shape features",
"type": "number",
"default": "5"
},
"mapframe-marker": {
"label": "Mapframe marker",
"description": "Marker symbol to use for coordinates; see [[mw:Help:Extension:Kartographer/Icons]] for options",
"example": "museum",
"type": "string"
},
"mapframe-marker-color": {
"aliases": [
"mapframe-marker-colour"
],
"label": "Mapframe marker color",
"description": "Background color for the marker",
"type": "string",
"default": "#5E74F3"
},
"mapframe-geomask-stroke-color": {
"aliases": [
"mapframe-geomask-stroke-colour"
],
"label": "Mapframe geomask stroke color",
"description": "Color of outline of geomask shape",
"type": "string",
"default": "#555555"
},
"mapframe-geomask-stroke-width": {
"label": "Mapframe geomask stroke width",
"description": "Width of outline of geomask shape",
"type": "number",
"default": "2"
},
"mapframe-geomask-fill": {
"label": "Mapframe geomask fill",
"description": "Color used to fill outside geomask features",
"type": "string",
"default": "#606060"
},
"mapframe-geomask-fill-opacity": {
"label": "Mapframe geomask fill opacity",
"description": "Opacity level of fill outside geomask features, a number between 0 and 1",
"type": "number",
"default": "0.5"
},
"mapframe-zoom": {
"label": "Mapframe zoom",
"description": "Set the zoom level, from \"1\" to \"18\", to used if the zoom level cannot be determined automatically from object length or area",
"example": "12",
"type": "number",
"default": "10"
},
"mapframe-length_km": {
"label": "Mapframe length (km)",
"description": "Object length in kilometres, for automatically determining zoom level. ONLY use ONE of the available parameters for length or area",
"type": "number"
},
"mapframe-length_mi": {
"label": "Mapframe length (mi)",
"description": "Object length in miles, for automatically determining zoom level. ONLY use ONE of the available parameters for length or area",
"type": "number"
},
"mapframe-area_km2": {
"label": "Mapframe area (km^2)",
"description": "Object arean square kilometres, for automatically determining zoom level. ONLY use ONE of the available parameters for length or area",
"type": "number"
},
"mapframe-area_mi2": {
"label": "Mapframe area (mi^2)",
"description": "Object area in square miles, for automatically determining zoom level. ONLY use ONE of the available parameters for length or area",
"type": "number"
},
"mapframe-frame-coordinates": {
"aliases": [
"mapframe-frame-coord"
],
"label": "Mapframe frame coordinates",
"description": "Alternate latitude and longitude coordinates for initial placement of map, using {{coord}}",
"example": "{{Coord|12.35|N|56.71|E}}",
"type": "wiki-template-name"
},
"mapframe-line": {}
},
"format": "block"
}
</templatedata>
{{collapse bottom}}
== Subtemplates ==
* {{Template link|Infobox river/discharge}}
* {{Template link|Infobox river/row-style}}
* {{Template link|Infobox river/calcunit}}
* {{Template link|Infobox river/source}}
== Tracking categories ==
{{Infobox tracking categories
}}
* {{clc|Pages using infobox river with mapframe}}
{{When on basepage
|<!--Categories below this line, please; interwikis at Wikidata-->
[[Category:Place infobox templates|River]]
[[Category:WikiProject Rivers]]
[[Category:WikiProject Rivers templates]]
[[Category:Embeddable templates]]
[[Category:Templates that add a tracking category]]
}}
5wa05kjajd3ybepra1s73s9t03nr2ln
1378181
1378173
2026-08-02T15:55:28Z
A826
72368
A826 [[ಟೆಂಪ್ಲೇಟು:Infobox river/doc]] ಪುಟವನ್ನು [[ಟೆಂಪ್ಲೇಟು:Infobox ನದಿ/doc]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ
1378172
wikitext
text/x-wiki
{{Documentation subpage}}
{{High-use}}
{{Lua|Module:Check for unknown parameters|Module:Coordinates|Module:InfoboxImage|Module:String|Module:WikidataIB|Module:Wikidata|Module:Mapframe}}
{{Tracks Wikidata|P18|cat=No local image but image on Wikidata}}
{{auto short description}}
{{Parameter names example|_template=| basin_landmarks | basin_population | basin_size | basin_size_km2 | basin_size_mi2 | basin_size_ref | bridges | custom_data | custom_label | depth_avg | depth_max | depth_min | discharge1_avg | discharge1_location | discharge1_max | discharge1_min | discharge5_avg | discharge5_location | discharge5_max | discharge5_min | embed | etymology | extra | image | image_alt | image_caption | image_size | length | length_km | length_mi | map | map_alt | map_caption | map_size | mapframe | mouth | mouth_coord_ref | mouth_coordinates | mouth_elevation | mouth_location | name | native_name | nickname | ports | progression | pushpin_map = | pushpin_alt | pushpin_caption | pushpin_map_size | river_system | source1 | source1_coord_ref | source1_coordinates | source1_elevation | source1_location | source5 | source5_coord_ref | source5_coordinates | source5_elevation | source5_location | subdivision_name1 | subdivision_name2 | subdivision_name3 | subdivision_name4 | subdivision_name5 | subdivision_type1 | subdivision_type2 | subdivision_type3 | subdivision_type4 | subdivision_type5 | tributaries_left | tributaries_right | waterbodies | waterfalls | width_avg | width_max | width_min | source_confluence | source_confluence_location | source_confluence_elevation | source_confluence_coordinates }}
== Usage ==
<syntaxhighlight lang="wikitext" style="overflow: auto">
{{Infobox river
| name =
| native_name = <!-- {{native name|<tag>|<name>}} or {{native name list |tag1=<tag>|name1=<name> |tag2=<tag>|name2=<name> ... }} -->
| other_name =
| etymology =
| nickname =
<!---------------------- IMAGE-->
| image =
| image_size =
| image_caption =
| image_alt =
<!---------------------- MAPS -->
| map =
| map_size =
| map_caption =
| map_alt =
| pushpin_map =
| pushpin_map_size =
| pushpin_caption =
| pushpin_alt =
| mapframe = yes<!-- see below for more mapframe parameters -->
<!---------------------- LOCATION -->
| subdivision_type1 =
| subdivision_name1 =
| subdivision_type2 =
| subdivision_name2 =
| subdivision_type3 =
| subdivision_name3 =
| subdivision_type4 =
| subdivision_name4 =
| subdivision_type5 =
| subdivision_name5 =
<!---------------------- PHYSICAL CHARACTERISTICS -->
| length =
| width_min =
| width_avg =
| width_max =
| depth_min =
| depth_avg =
| depth_max =
| discharge1_location =
| discharge1_min =
| discharge1_avg =
| discharge1_max =
<!---------------------- BASIN FEATURES -->
| source1 =
| source1_location =
| source1_coordinates = <!-- {{Coord|...}} -->
| source1_elevation =
| mouth =
| mouth_location =
| mouth_coordinates = <!-- {{Coord|...|display=inline,title}} -->
| mouth_elevation =
| progression =
| river_system =
| basin_size =
| basin_landmarks =
| basin_population =
| tributaries_left =
| tributaries_right =
| waterbodies =
| waterfalls =
| bridges =
| ports =
| custom_label =
| custom_data =
| extra =
}}
</syntaxhighlight>{{Clear}}
== Parameter names and descriptions ==
{| class="wikitable plainrowheaders"
|-
! scope="col" | Parameter name
! scope="col" | Description
|-
! scope="row" | '''name'''
| The [[WP:COMMONNAME|common name]] of the river.
|-
! scope="row" | '''native_name'''
| The name in its official or de facto language. Use {{tlx|native name}} or, for multiple names, use {{tlx|native name list}}
|-
! scope="row" | '''other_name'''
| Other name(s) of the river. Use commas to enter multiple. Displayed under the infobox heading.
|-
! scope="row" | '''nickname'''
| Local name(s) for the river. Use commas to enter multiple.
|-
! scope="row" | '''etymology'''
| Person, event or other entity the body is named after
|-
! scope="row" | '''image'''
| Image filename without the <code>File:</code> or <code>Image:</code> prefix.
|-
! scope="row" | '''image_size'''
| Width of the image in pixels (i.e. <code>200px</code>). Common sizes are usually around <code>280px</code> to <code>300px</code>.
|-
! scope="row" | '''image_caption'''
| Caption for the main image.
|-
! scope="row" | '''image_alt'''
| [[Wikipedia:Alternative text for images|Alt text]] for the main image.
|-
! scope="row" | '''map'''
| Map image filename without the <code>File:</code> or <code>Image:</code> prefix.
|-
! scope="row" | '''map_size'''
| Width of the image in pixels (i.e. <code>200px</code>). Common sizes are usually around <code>280px</code> to <code>300px</code>.
|-
! scope="row" | '''map_caption'''
| Caption for the map image.
|-
! scope="row" | '''map_alt'''
| [[Wikipedia:Alternative text for images|Alt text]] for the map image.
|-
! scope="row" | '''pushpin_map'''
| The name of a location map to be used with {{tl|location map}}, with the pin placed at the location specified by the <code>mouth_coordinates</code> parameter, or the value from wikidata if no mouth coordinates are provided. Manually add parameter <code>pushpin_relief = 0</code> to disable the use of a relief location map.
|-
! scope="row" | '''pushpin_map_size'''
| The width of the location map in pixels as a raw number, without any <code>px</code> suffix
|-
! scope="row" | '''pushpin_caption'''
| Caption for the location map
|-
! scope="row" | '''pushpin_alt'''
| [[Wikipedia:Alternative text for images|Alt text]] for the location map image.
|-
! scope="row" | '''pushpin_relief'''
| A pushpin map will be displayed in relief by default. Use <code>pushpin_relief = 0</code> for a plain map.
|-
! scope="row" | '''mapframe'''
| A mapframe map can be enabled with this. See [[#Mapframe parameters]] below for more information.
|-
! scope="row" | '''subdivision_type1'''
| Primary political region(s), typically <code>Country</code> or <code>Countries</code>.
|-
! scope="row" | '''subdivision_name1'''
| Used with above. The country/ies in which the river flows in/through. Use commas for multiple.
|-
! scope="row" | '''subdivision_type2'''
| Secondary political region(s). <code>States</code>, <code>Provinces</code>, <code>Districts</code>, or <code>Regions</code>, in which the river flows through.
|-
! scope="row" | '''subdivision_name2'''
| Used with above. The secondary political region(s) in which the river flows through. Use commas for multiple.
|-
! scope="row" | '''subdivision_type3'''
| Tertiary political region(s), such as the <code>Cities</code> along the river.
|-
! scope="row" | '''subdivision_name3'''
| Used with above. The tertiary political region(s) through which the river flows. Use commas for multiple.
|-
! scope="row" | '''subdivision_type4'''
| Other types of political subdivisions.
|-
! scope="row" | '''subdivision_name4'''
| Used with above. Other political subdivisions through which the river flows. Use commas for multiple.
|-
! scope="row" | '''subdivision_type5'''
| Other types of political subdivisions.
|-
! scope="row" | '''subdivision_name5'''
| Used with above. Other political subdivisions through which the river flows. Use commas for multiple.
|-
| colspan=2 bgcolor=#CEDEFF | '''{{center|PHYSICAL CHARACTERISTICS}}'''
|-
! scope="row" | '''length'''
| The total length of the river's [[main stem]]. Consider using '''<code><nowiki>{{</nowiki>[[Template:Convert|Convert]]|1234|km|mi|abbr=on<nowiki>}}</nowiki></code>'''
|-
! scope="row" | '''length_km'''
| Total length of the river's main stem, measured in kilometers.
|-
! scope="row" | '''length_mi'''
| Total length of the river's main stem, measured in miles.
|-
! scope="row" | '''length_ref'''
| References or other notes for length of river, used only if {{para|length_km}} or {{para|length_mi}} are used.
|-
! scope="row" | '''width_min'''
| Minimum width between banks of the river. Rarely used as it is often difficult to determine the exact source of the river. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''width_avg'''
| Average width of the river. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''width_max'''
| Maximum width of the river before the [[river mouth|mouth]]. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''depth_min'''
| Minimum depth of the river. Rarely used as it is often difficult to determine the exact source of the river. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''depth_avg'''
| Average depth of the river. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''depth_max'''
| Maximum depth of the river before the [[river mouth|mouth]]. Consider using '''<code><nowiki>{{</nowiki>[[Template:Convert|Convert]]|1234|m|ft|abbr=on<nowiki>}}</nowiki></code>'''
|-
! scope="row" | '''discharge1_location'''
| Location or gauge/sensor name at which the below details are recorded. Commonly at the <code>River mouth</code>.
|-
! scope="row" | '''discharge1_min'''
| Minimum discharge rate. Rarely used. Consider using '''<code><nowiki>{{</nowiki>[[Template:Convert|Convert]]|1234|m3/s|ft3/s|abbr=on<nowiki>}}</nowiki></code>'''
|-
! scope="row" | '''discharge1_avg'''
| Average discharge rate (also use if a source provides only one discharge rate without a minimum or maximum). Consider using '''<code><nowiki>{{</nowiki>[[Template:Convert|Convert]]|1234|m3/s|ft3/s|abbr=on<nowiki>}}</nowiki></code>'''
|-
! scope="row" | '''discharge1_max'''
| Maximum discharge rate before flooding occurs in the surrounding areas. Consider using '''<code><nowiki>{{</nowiki>[[Template:Convert|Convert]]|1234|m3/s|ft3/s|abbr=on<nowiki>}}</nowiki></code>'''
|-
! scope="row" | '''discharge2_* ⇒ 5_*'''
| Up to four more sets of discharge parameters. '''You may add up to <code>discharge5_*</code>'''.
|-
| colspan=2 bgcolor=#CEDEFF | '''{{center|BASIN FEATURES}}'''
|-
! scope="row" | '''source1'''
| Landform or waterbody of the primary source. For a source that is a [[confluence]], you may add as: <code><nowiki>Confluence of [[River-A]] and [[River-B]]</nowiki></code>.
|-
! scope="row" | '''source1_location'''
| Political details of the source location, such as Province, District, State, etc.
|-
! scope="row" | '''source1_elevation'''
| Elevation at the main source of water
|-
! scope="row" | '''source1_coordinates'''
| Coordinates of the main source, using the {{tl|coord}} template. Use {{para|display|inline}} only.
|-
! scope="row" | '''source1_coord_ref'''
| Reference for the coordinates of the main source.
|-
! scope="row" | '''source1_length'''
| Length from the main source<!-- to what? -->.
|-
! scope="row" | '''source2 ⇒ source5'''
| Landform or waterbody of further sources. You may add up to '''<code>source5</code>'''. Also '''source2_location''', '''source2_elevation''', '''source2_coordinates''', '''source2_coord_ref''', '''source2_length''' etc.
|-
! scope="row" | '''mouth'''
| Landform or waterbody of the [[river mouth]].
|-
! scope="row" | '''mouth_location'''
| Political details of the mouth location, such as Province, District, State, etc.
|-
! scope="row" | '''mouth_coordinates'''
| Coordinates of the river mouth, using the {{tl|coord}} template. Use {{para|display|inline,title}} if possible.
|-
! scope="row" | '''mouth_elevation'''
| Elevation at the river mouth.
|-
! scope="row" | '''progression'''
| Progression from the mouth of the river in the article to the sea. For example, the [[Pegnitz (river)|Pegnitz]] in Germany flows into the Regnitz, which flows into the Main, which flows into the Rhine, which flows into the North Sea. This is entered into the progression field with a special template {{tl|RRegnitz}}, but could be hard-coded as <code><nowiki>[[Regnitz]]→ [[Main (river)|Main]]→ [[Rhine]]→ [[North Sea]]</nowiki></code>. These both render as [[Regnitz]]→ [[Main (river)|Main]]→ [[Rhine]]→ [[North Sea]] in the Infobox. See {{Cl|Drainage basin succession templates}} for a list of templates that can be used with this parameter.
|-
! scope="row" | '''river_system'''
| Name of the [[Drainage system (geomorphology)|river system]].
|-
! scope="row" | '''basin_landmarks'''
| Popular landmarks along the river. Use commas for multiple.
|-
! scope="row" | '''basin_population'''
| Population within the river basin.
|-
! scope="row" | '''basin_size'''
| Size of the river's [[drainage basin]]. Consider using '''<code><nowiki>{{</nowiki>[[Template:Convert|Convert]]|1234|km2|mi2|abbr=on<nowiki>}}</nowiki></code>'''
|-
! scope="row" | '''basin_size_km2'''
| Size of the river's drainage basin, in square kilometers.
|-
! scope="row" | '''basin_size_mi2'''
| Size of the river's drainage basin, in square miles.
|-
! scope="row" | '''tributaries_left'''
| [[Tributary|Tributaries]] located on the left bank of the river flowing towards the mouth. List in order from source to mouth.
|-
! scope="row" | '''tributaries_right'''
| [[Tributary|Tributaries]] located on the right bank of the river flowing towards the mouth. List in order from source to mouth.
|-
! scope="row" | '''waterbodies'''
| Water bodies located along the river (such as lakes, reservoirs, etc). List in order from source to mouth.
|-
! scope="row" | '''waterfalls'''
| [[Waterfall]]s along the river. List in order from source to mouth.
|-
! scope="row" | '''bridges'''
| [[Bridge]]s along the river. List in order from source to mouth.
|-
! scope="row" | '''ports'''
| [[Inland port]]s along the river. List in order from source to mouth.
|-
! scope="row" | '''cities'''
| Cities along the river. List in order from source to mouth.
|-
! scope="row" | '''custom_label'''
| Use this to enter a custom label (such as <code>bridges</code>). To be used with the field below.
|-
! scope="row" | '''custom_data'''
| Custom data parameter. See above.
|-
! scope="row" | '''extra'''
| Use this parameter to add content to the very bottom of the infobox. Useful for adding maps, charts, and so on.
|-
|}
===Mapframe parameters===
{{Infobox mapframe/doc/parameters
| onByDefault = yes, unless one of these parameters has a value: {{para|map}}, {{para|pushpin_map}}.
| mapframe-frame-width = 250
| mapframe-stroke-color = #0000ff
| mapframe-marker = water
| mapframe-type = river
}}
===Suppressing images ===
To completely suppress the default image in the Infobox, including any image from Wikidata, use {{para|suppressfields|image}}.
== Example ==
{{Infobox river
| name = Amazon River (dummy data)
| native_name = {{native name|pt|Amazonia}}
| other_name = Apurímac, Ene, Tambo, Ucayali, Amazonas, Solimões
| etymology = Named after the Amazon Rainforest
| image = Amazon River ESA387332.jpg
| image_caption = Satellite image of the [[Amazon Delta]]
| image_alt = Alt text for image
| map = Amazonrivermap.svg
| map_caption = Map of the Amazon basin
| map_alt = Alt text for map
| pushpin_map = Brazil
| pushpin_caption = Location of the mouth in Brazil
| pushpin_alt = Map showing the location of the river mouth in Brazil
| mapframe = yes
| mapframe-id = Q3783
| subdivision_type1 = Countries
| subdivision_name1 = [[Brazil]], [[Colombia]], [[Peru]], [[Ecuador]]
| subdivision_type2 = States
| subdivision_name2 = [[Loreto Region|Loreto]] (Peru);<br />[[Amazonas (Colombian department)|Amazonas]] (Columbia);<br />[[North Region, Brazil|North Region]] (Brazil)
| subdivision_type3 = Cities
| subdivision_name3 = [[Iquitos]] (Peru); [[Leticia, Amazonas|Leticia]] (Colombia);<br /> [[Tabatinga]] (Brazil); [[Tefé]] (Brazil);<br /> [[Itacoatiara, Amazonas|Itacoatiara]] (Brazil); [[Parintins]] (Brazil);<br /> [[Óbidos, Pará|Óbidos]] (Brazil); [[Santarém, Pará|Santarém]] (Brazil);<br /> [[Almeirim, Pará|Almeirim]] (Brazil); [[Macapá]] (Brazil)
<!---------------------- PHYSICAL CHARACTERISTICS -->
| length_km = 6992
| width_min = {{Convert|4|km|mi|abbr=on}}
| width_avg = {{Convert|6|km|mi|abbr=on}}
| width_max = {{Convert|8|km|mi|abbr=on}}
| depth_min = {{Convert|3|m|ft|abbr=on}}
| depth_avg = {{Convert|15|m|ft|abbr=on}}
| depth_max = {{Convert|30|m|ft|abbr=on}}
| discharge1_location = [[Santarém, Pará]]
| discharge1_min = {{Convert|109000|m3/s|ft3/s|abbr=on}}
| discharge1_avg = {{Convert|209000|m3/s|ft3/s|abbr=on}}
| discharge1_max = {{Convert|309000|m3/s|ft3/s|abbr=on}}
<!---------------------- BASIN FEATURES -->
| source1 = [[Nevado Mismi]], [[Peru]]
| source1_location = [[Arequipa Region]]
| source1_coordinates = {{coord|15|31|05|S|71|45|55|W}}
| source1_elevation = {{Convert|5170|m|ft|abbr=on}}
| mouth = [[Atlantic Ocean]]
| mouth_location = [[Amapá|State of Amapá]], [[Pará|State of Pará]]
| mouth_coordinates = {{coord|00|42|28|S|50|05|22|W}}
| mouth_elevation = {{Convert|0|m|ft|abbr=on}}
| progression = [[Apurímac River|Apurímac]]—[[Solimões River|Solimões]]—[[Marañón River|Marañón]]
| river_system = [[Amazon Basin]]
| basin_size_km2 = 7050000
| basin_landmarks = [[Arena da Amazônia|Amazon Arena]]
| basin_population = 1,234,567
| tributaries_left = {{hlist|[[Marañón River|Marañón]]|[[Japurá River|Japurá]]|[[Rio Negro (Amazon)|Rio Negro]]|[[Putumayo River|Putumayo]]}}
| tributaries_right = {{hlist|[[Ucayali River|Ucayali]]|[[Purus River|Purus]]|[[Madeira River|Madeira]]|[[Tapajós]]|[[Xingu River|Xingu]]}}
| waterbodies = [[Lawriqucha|Lake Lawriqucha]]
| waterfalls = [[Noel Kempff Mercado National Park|Ahlfeld Waterfall]]
| bridges = [[Manaus–Iranduba Bridge]]
| ports = [[Port of Manaus]]
| custom_label = '''''Custom label'''''
| custom_data = ''Custom data''
| extra =
}}
<syntaxhighlight lang="wikitext" style="overflow: auto">
{{Infobox river
| name = Amazon River (dummy data)
| native_name = {{Native name|pt|Amazonia}}
| other_name = Apurímac, Ene, Tambo, Ucayali, Amazonas, Solimões
| etymology = Named after the Amazon Rainforest
| image = Amazon River ESA387332.jpg
| image_caption = Satellite image of the [[Amazon Delta]]
| image_alt = Alt text for image
| map = Amazonrivermap.svg
| map_caption = Map of the Amazon basin
| map_alt = Alt text for map
| pushpin_map = Brazil
| pushpin_caption = Location of the mouth in Brazil
| pushpin_alt = Map showing the location of the river mouth in Brazil
| mapframe = yes
| subdivision_type1 = Countries
| subdivision_name1 = [[Brazil]], [[Colombia]], [[Peru]], [[Ecuador]]
| subdivision_type2 = States
| subdivision_name2 = [[Loreto Region|Loreto]] (Peru);<br />[[Amazonas (Colombian department)|Amazonas]] (Columbia);<br />[[North Region, Brazil|North Region]] (Brazil)
| subdivision_type3 = Cities
| subdivision_name3 = [[Iquitos]] (Peru); [[Leticia, Amazonas|Leticia]] (Colombia);<br /> [[Tabatinga]] (Brazil); [[Tefé]] (Brazil);<br /> [[Itacoatiara, Amazonas|Itacoatiara]] (Brazil); [[Parintins]] (Brazil);<br /> [[Óbidos, Pará|Óbidos]] (Brazil); [[Santarém, Pará|Santarém]] (Brazil);<br /> [[Almeirim, Pará|Almeirim]] (Brazil); [[Macapá]] (Brazil)
<!---------------------- PHYSICAL CHARACTERISTICS -->
| length_km = 6992
| width_min = {{Convert|4|km|mi|abbr=on}}
| width_avg = {{Convert|6|km|mi|abbr=on}}
| width_max = {{Convert|8|km|mi|abbr=on}}
| depth_min = {{Convert|3|m|ft|abbr=on}}
| depth_avg = {{Convert|15|m|ft|abbr=on}}
| depth_max = {{Convert|30|m|ft|abbr=on}}
| discharge1_location = [[Santarém, Pará]]
| discharge1_min = {{Convert|109000|m3/s|ft3/s|abbr=on}}
| discharge1_avg = {{Convert|209000|m3/s|ft3/s|abbr=on}}
| discharge1_max = {{Convert|309000|m3/s|ft3/s|abbr=on}}
<!---------------------- BASIN FEATURES -->
| source1 = [[Nevado Mismi]], [[Peru]]
| source1_location = [[Arequipa Region]]
| source1_coordinates = {{coord|15|31|05|S|71|45|55|W}}
| source1_elevation = {{Convert|5170|m|ft|abbr=on}}
| mouth = [[Atlantic Ocean]]
| mouth_location = [[Amapá|State of Amapá]], [[Pará|State of Pará]]
| mouth_coordinates = {{coord|00|42|28|S|50|05|22|W|display=inline,title}}
| mouth_elevation = {{Convert|0|m|ft|abbr=on}}
| progression = [[Apurímac River|Apurímac]]—[[Solimões River|Solimões]]—[[Marañón River|Marañón]]
| river_system = [[Amazon Basin]]
| basin_size_km2 = 7050000
| basin_landmarks = [[Arena da Amazônia|Amazon Arena]]
| basin_population = 1,234,567
| tributaries_left = {{hlist|[[Marañón River|Marañón]]|[[Japurá River|Japurá]]|[[Rio Negro (Amazon)|Rio Negro]]|[[Putumayo River|Putumayo]]}}
| tributaries_right = {{hlist|[[Ucayali River|Ucayali]]|[[Purus River|Purus]]|[[Madeira River|Madeira]]|[[Tapajós]]|[[Xingu River|Xingu]]}}
| waterbodies = [[Lawriqucha|Lake Lawriqucha]]
| waterfalls = [[Noel Kempff Mercado National Park|Ahlfeld Waterfall]]
| bridges = [[Manaus–Iranduba Bridge]]
| ports = [[Port of Manaus]]
| custom_label = '''''Custom label'''''
| custom_data = ''Custom data''
| extra = ''(optional content at the bottom – centred)''
}}
</syntaxhighlight>
{{Clear}}
== Template Data ==
{{TemplateData header}}
{{collapse top|bg=#ccc|title=Template Data}}
<templatedata>
{
"params": {
"embed": {},
"name": {},
"qid": {},
"suppressfields": {},
"fetchwikidata": {},
"image": {
"type": "wiki-file-name"
},
"image_size": {},
"image_upright": {},
"image_alt": {},
"image_caption": {},
"map": {},
"map_size": {},
"map_alt": {},
"map_caption": {},
"mouth_coordinates": {},
"pushpin_map": {},
"pushpin_alt": {},
"pushpin_map_size": {},
"pushpin_relief": {},
"pushpin_caption": {},
"native_name": {},
"other_name": {},
"nickname": {},
"etymology": {},
"subdivision_type1": {},
"subdivision_name1": {},
"subdivision_type2": {},
"subdivision_name2": {},
"subdivision_type3": {},
"subdivision_name3": {},
"subdivision_type4": {},
"subdivision_name4": {},
"subdivision_type5": {},
"subdivision_name5": {},
"cities": {},
"source1": {},
"source1_location": {},
"source1_length": {},
"source1_elevation": {},
"source1_coordinates": {},
"source1_coord_ref": {},
"source2": {},
"source2_location": {},
"source2_length": {},
"source2_elevation": {},
"source2_coordinates": {},
"source2_coord_ref": {},
"source3": {},
"source3_location": {},
"source3_length": {},
"source3_elevation": {},
"source3_coordinates": {},
"source3_coord_ref": {},
"source4": {},
"source4_location": {},
"source4_length": {},
"source4_elevation": {},
"source4_coordinates": {},
"source4_coord_ref": {},
"source5": {},
"source5_location": {},
"source5_length": {},
"source5_elevation": {},
"source5_coordinates": {},
"source5_coord_ref": {},
"source_confluence": {},
"source_confluence_location": {},
"source_confluence_elevation": {},
"source_confluence_coordinates": {},
"source_confluence_coord_ref": {},
"mouth": {},
"mouth_location": {},
"mouth_elevation": {},
"mouth_elevation_metric": {},
"mouth_elevation_imperial": {},
"mouth_coord_ref": {},
"length": {},
"length_metric": {},
"length_imperial": {},
"width_min": {},
"width_min_metric": {},
"width_min_imperial": {},
"width_avg": {},
"width_avg_metric": {},
"width_avg_imperial": {},
"width_max": {},
"width_max_metric": {},
"width_max_imperial": {},
"depth_min": {},
"depth_avg": {},
"depth_max": {},
"discharge1_location": {},
"discharge1_min": {},
"discharge1_avg": {},
"discharge1_max": {},
"discharge1": {},
"discharge1_min_metric": {},
"discharge1_min_imperial": {},
"discharge1_avg_metric": {},
"discharge1_avg_imperial": {},
"discharge1_max_metric": {},
"discharge1_max_imperial": {},
"discharge2": {},
"discharge2_location": {},
"discharge2_min": {},
"discharge2_avg": {},
"discharge2_max": {},
"discharge3": {},
"discharge3_location": {},
"discharge3_min": {},
"discharge3_avg": {},
"discharge3_max": {},
"discharge4": {},
"discharge4_location": {},
"discharge4_min": {},
"discharge4_avg": {},
"discharge4_max": {},
"discharge5": {},
"discharge5_location": {},
"discharge5_min": {},
"discharge5_avg": {},
"discharge5_max": {},
"progression": {},
"river_system": {},
"basin_size": {},
"basin_landmarks": {},
"basin_population": {},
"tributaries_left": {},
"tributaries_right": {},
"waterbodies": {},
"waterfalls": {},
"bridges": {},
"ports": {},
"custom_data": {},
"custom_label": {},
"extra": {},
"mapframe": {
"label": "Show mapframe map",
"description": "Specify yes or no to show or hide the map, overriding the default",
"example": "yes",
"type": "string",
"default": "no",
"suggested": true
},
"mapframe-caption": {
"label": "Mapframe caption",
"description": "Caption for the map. If mapframe-geomask is set, then the default is \"Location in <<geomask's label>>\"",
"type": "string"
},
"mapframe-custom": {
"label": "Custom mapframe",
"description": "Use a custom map instead of the automatic mapframe. Specify either a {{maplink}} template, or another template that generates a mapframe map, or an image name. If used, other mapframe parameters will be ignored.",
"type": "wiki-template-name"
},
"mapframe-id": {
"aliases": [
"id",
"qid"
],
"label": "Mapframe Wikidata item",
"description": "Id (Q-number) of Wikidata item to use.",
"type": "string",
"default": "(item for current page)"
},
"mapframe-coordinates": {
"aliases": [
"mapframe-coord",
"coordinates",
"coord"
],
"label": "Mapframe coordinates ",
"description": "Coordinates to use, instead of any on Wikidata. Use the {{Coord}} template.",
"example": "{{Coord|12.34|N|56.78|E}}",
"type": "wiki-template-name",
"default": "(coordinates from Wikidata)"
},
"mapframe-wikidata": {
"label": "Mapframe shapes from Wikidata",
"description": "et to yes to show shape/line features from the wikidata item, if any, when coordinates are specified by parameter",
"example": "yes",
"type": "string"
},
"mapframe-shape": {
"label": "Mapframe shape feature",
"description": "Override display of mapframe shape feature. Turn off by setting to \"none\". Use an inverse shape (geomask) instead of a regular shape by setting to \"inverse\"",
"type": "string"
},
"mapframe-point": {
"label": "Mapframe point feature",
"description": "Override display of mapframe point feature. Turn off display of point feature by setting to \"none\". Force point marker to be displayed by setting to \"on\"",
"type": "string"
},
"mapframe-geomask": {
"label": "Mapframe geomask",
"description": "Wikidata item to use as a geomask (everything outside the boundary is shaded darker). Can either be a specific Wikidata item (Q-number), or a property that specifies the item to use (e.g. P17 for country, or P131 for located in the administrative territorial entity)",
"example": "Q100",
"type": "wiki-page-name"
},
"mapframe-switcher": {
"label": "Mapframe switcher",
"description": "Set to \"auto\" or \"geomasks\" or \"zooms\" to enable Template:Switcher-style switching between multiple mapframes. IF SET TO auto – switch geomasks found in location (P276) and located in the administrative territorial entity (P131) statements on the page's Wikidata item, searching recursively. E.g. an item's city, that city's state, and that state's country. IF SET TO geomasks – switch between the geomasks specified as a comma-separated list of Wikidata items (Q-numbers) in the mapframe-geomask parameter. IF SET TO zooms – switch between \"zoomed in\"/\"zoomed midway\"/\"zoomed out\", where \"zoomed in\" is the default zoom (with a minimum of 3), \"zoomed out\" is 1, and \"zoomed midway\" is the average.",
"type": "string"
},
"mapframe-frame-width": {
"aliases": [
"mapframe-width"
],
"label": "Mapframe width",
"description": "Frame width in pixels",
"type": "number",
"default": "270"
},
"mapframe-frame-height": {
"aliases": [
"mapframe-height"
],
"label": "Mapframe height",
"description": "Frame height in pixels",
"type": "number",
"default": "200"
},
"mapframe-shape-fill": {
"label": "Mapframe shape fill",
"description": "Color used to fill shape features",
"type": "string",
"default": "#606060"
},
"mapframe-shape-fill-opacity": {
"label": "Mapframe shape fill opacity",
"description": "Opacity level of shape fill, a number between 0 and 1",
"type": "number",
"default": "0.5"
},
"mapframe-stroke-color": {
"aliases": [
"mapframe-stroke-colour"
],
"label": "Mapframe stroke color",
"description": "Color of line features, and outlines of shape features",
"type": "string",
"default": "#ff0000"
},
"mapframe-stroke-width": {
"label": "Mapframe stroke width",
"description": "Width of line features, and outlines of shape features",
"type": "number",
"default": "5"
},
"mapframe-marker": {
"label": "Mapframe marker",
"description": "Marker symbol to use for coordinates; see [[mw:Help:Extension:Kartographer/Icons]] for options",
"example": "museum",
"type": "string"
},
"mapframe-marker-color": {
"aliases": [
"mapframe-marker-colour"
],
"label": "Mapframe marker color",
"description": "Background color for the marker",
"type": "string",
"default": "#5E74F3"
},
"mapframe-geomask-stroke-color": {
"aliases": [
"mapframe-geomask-stroke-colour"
],
"label": "Mapframe geomask stroke color",
"description": "Color of outline of geomask shape",
"type": "string",
"default": "#555555"
},
"mapframe-geomask-stroke-width": {
"label": "Mapframe geomask stroke width",
"description": "Width of outline of geomask shape",
"type": "number",
"default": "2"
},
"mapframe-geomask-fill": {
"label": "Mapframe geomask fill",
"description": "Color used to fill outside geomask features",
"type": "string",
"default": "#606060"
},
"mapframe-geomask-fill-opacity": {
"label": "Mapframe geomask fill opacity",
"description": "Opacity level of fill outside geomask features, a number between 0 and 1",
"type": "number",
"default": "0.5"
},
"mapframe-zoom": {
"label": "Mapframe zoom",
"description": "Set the zoom level, from \"1\" to \"18\", to used if the zoom level cannot be determined automatically from object length or area",
"example": "12",
"type": "number",
"default": "10"
},
"mapframe-length_km": {
"label": "Mapframe length (km)",
"description": "Object length in kilometres, for automatically determining zoom level. ONLY use ONE of the available parameters for length or area",
"type": "number"
},
"mapframe-length_mi": {
"label": "Mapframe length (mi)",
"description": "Object length in miles, for automatically determining zoom level. ONLY use ONE of the available parameters for length or area",
"type": "number"
},
"mapframe-area_km2": {
"label": "Mapframe area (km^2)",
"description": "Object arean square kilometres, for automatically determining zoom level. ONLY use ONE of the available parameters for length or area",
"type": "number"
},
"mapframe-area_mi2": {
"label": "Mapframe area (mi^2)",
"description": "Object area in square miles, for automatically determining zoom level. ONLY use ONE of the available parameters for length or area",
"type": "number"
},
"mapframe-frame-coordinates": {
"aliases": [
"mapframe-frame-coord"
],
"label": "Mapframe frame coordinates",
"description": "Alternate latitude and longitude coordinates for initial placement of map, using {{coord}}",
"example": "{{Coord|12.35|N|56.71|E}}",
"type": "wiki-template-name"
},
"mapframe-line": {}
},
"format": "block"
}
</templatedata>
{{collapse bottom}}
== Subtemplates ==
* {{Template link|Infobox river/discharge}}
* {{Template link|Infobox river/row-style}}
* {{Template link|Infobox river/calcunit}}
* {{Template link|Infobox river/source}}
== Tracking categories ==
{{Infobox tracking categories
}}
* {{clc|Pages using infobox river with mapframe}}
{{When on basepage
|<!--Categories below this line, please; interwikis at Wikidata-->
[[Category:Place infobox templates|River]]
[[Category:WikiProject Rivers]]
[[Category:WikiProject Rivers templates]]
[[Category:Embeddable templates]]
[[Category:Templates that add a tracking category]]
}}
5wa05kjajd3ybepra1s73s9t03nr2ln
ಟೆಂಪ್ಲೇಟು:Infobox river
10
179999
1378176
2026-08-02T15:55:28Z
A826
72368
A826 [[ಟೆಂಪ್ಲೇಟು:Infobox river]] ಪುಟವನ್ನು [[ಟೆಂಪ್ಲೇಟು:Infobox ನದಿ]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ
1378176
wikitext
text/x-wiki
#REDIRECT [[ಟೆಂಪ್ಲೇಟು:Infobox ನದಿ]]
jp9w4odoy1cxx2j51ajess6lww936p1
ಟೆಂಪ್ಲೇಟು:Infobox river/calcunit
10
180000
1378178
2026-08-02T15:55:28Z
A826
72368
A826 [[ಟೆಂಪ್ಲೇಟು:Infobox river/calcunit]] ಪುಟವನ್ನು [[ಟೆಂಪ್ಲೇಟು:Infobox ನದಿ/calcunit]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ
1378178
wikitext
text/x-wiki
#REDIRECT [[ಟೆಂಪ್ಲೇಟು:Infobox ನದಿ/calcunit]]
i4nnqvrublwttawht1p0tyufy0lj9cx
ಟೆಂಪ್ಲೇಟು:Infobox river/discharge
10
180001
1378180
2026-08-02T15:55:28Z
A826
72368
A826 [[ಟೆಂಪ್ಲೇಟು:Infobox river/discharge]] ಪುಟವನ್ನು [[ಟೆಂಪ್ಲೇಟು:Infobox ನದಿ/discharge]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ
1378180
wikitext
text/x-wiki
#REDIRECT [[ಟೆಂಪ್ಲೇಟು:Infobox ನದಿ/discharge]]
sjozx515k6yhsq5czzk1rf9j4przm32
ಟೆಂಪ್ಲೇಟು:Infobox river/doc
10
180002
1378182
2026-08-02T15:55:28Z
A826
72368
A826 [[ಟೆಂಪ್ಲೇಟು:Infobox river/doc]] ಪುಟವನ್ನು [[ಟೆಂಪ್ಲೇಟು:Infobox ನದಿ/doc]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ
1378182
wikitext
text/x-wiki
#REDIRECT [[ಟೆಂಪ್ಲೇಟು:Infobox ನದಿ/doc]]
i0epl454g05wrcwfbcb4noy5ryoph97
ಟೆಂಪ್ಲೇಟು:Infobox river/row-style
10
180003
1378184
2026-08-02T15:55:28Z
A826
72368
A826 [[ಟೆಂಪ್ಲೇಟು:Infobox river/row-style]] ಪುಟವನ್ನು [[ಟೆಂಪ್ಲೇಟು:Infobox ನದಿ/row-style]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ
1378184
wikitext
text/x-wiki
#REDIRECT [[ಟೆಂಪ್ಲೇಟು:Infobox ನದಿ/row-style]]
o38p9z2vauwctyxbsxi25k63nfybdfl
ಟೆಂಪ್ಲೇಟು:Infobox river/source
10
180004
1378186
2026-08-02T15:55:29Z
A826
72368
A826 [[ಟೆಂಪ್ಲೇಟು:Infobox river/source]] ಪುಟವನ್ನು [[ಟೆಂಪ್ಲೇಟು:Infobox ನದಿ/source]] ಕ್ಕೆ ಸರಿಸಿದ್ದಾರೆ: ಆಂಗ್ಲ ಶೀರ್ಷಿಕೆ → ಕನ್ನಡ ಶೀರ್ಷಿಕೆ
1378186
wikitext
text/x-wiki
#REDIRECT [[ಟೆಂಪ್ಲೇಟು:Infobox ನದಿ/source]]
5pvmeotbipceno8drdimjxv001a3z74
ಆಲಪ್ಪುಝಾ
0
180005
1378192
2026-08-02T16:06:29Z
A826
72368
[[ಆಲಪುಳ]] ಪುಟಕ್ಕೆ ಪುನರ್ನಿರ್ದೇಶನ
1378192
wikitext
text/x-wiki
#REDIRECT [[ಆಲಪುಳ]]
orfjmhky3i4k1afrx9x4nlyyns26vt7
ಪತ್ತನಂತಿಟ್ಟ
0
180006
1378193
2026-08-02T16:07:11Z
A826
72368
[[ಪತ್ತನಂತಿಟ್ಟ ಜಿಲ್ಲೆ]] ಪುಟಕ್ಕೆ ಪುನರ್ನಿರ್ದೇಶನ
1378193
wikitext
text/x-wiki
#REDIRECT [[ಪತ್ತನಂತಿಟ್ಟ ಜಿಲ್ಲೆ]]
h7mfd2gnky04cr3kcyafqaoiz4i0tsl
ಆಲಪ್ಪುಝಾ ಜಿಲ್ಲೆ
0
180007
1378194
2026-08-02T16:08:01Z
A826
72368
[[ಆಲಪುಳ ಜಿಲ್ಲೆ]] ಪುಟಕ್ಕೆ ಪುನರ್ನಿರ್ದೇಶನ
1378194
wikitext
text/x-wiki
#REDIRECT [[ಆಲಪುಳ_ಜಿಲ್ಲೆ]]
b181izimixhv50re2uc87ivhujvvcjv
ಕೊಲತ್ತುನಾಡು
0
180008
1378195
2026-08-02T16:12:39Z
A826
72368
ಹೊಸ ಪುಟ: {{Infobox country |native_name = ಕೊಲತ್ತುನಾಡು |conventional_long_name = ಕೋಲ ಸ್ವರೂಪಂ |common_name = ಕೊಲತ್ತುನಾಡು |image_map = Ezhimala beach.JPG |image_map_caption = [[ಎಳಿಮಲ (ಬೆಟ್ಟ, ಕಣ್ಣೂರು)|ಎಳಿಮಲ]], ''ಕೋಲ ಸ್ವರೂಪಂ''ನ ಆರಂಭಿಕ ಐತಿಹಾಸಿಕ ಪ್ರಧಾನ ಕಚೇರಿ |capital = [[ಎಳಿಮಲ]], ವಲಪ...
1378195
wikitext
text/x-wiki
{{Infobox country
|native_name = ಕೊಲತ್ತುನಾಡು
|conventional_long_name = ಕೋಲ ಸ್ವರೂಪಂ
|common_name = ಕೊಲತ್ತುನಾಡು
|image_map = Ezhimala beach.JPG
|image_map_caption = [[ಎಳಿಮಲ (ಬೆಟ್ಟ, ಕಣ್ಣೂರು)|ಎಳಿಮಲ]], ''ಕೋಲ ಸ್ವರೂಪಂ''ನ ಆರಂಭಿಕ ಐತಿಹಾಸಿಕ ಪ್ರಧಾನ ಕಚೇರಿ
|capital = [[ಎಳಿಮಲ]], [[ವಲಪಟ್ಟಣಂ]], [[ಚಿರಕ್ಕಲ್, ಕಣ್ಣೂರು|ಚಿರಕ್ಕಲ್]] ಮತ್ತು ಇತರ ವಿವಿಧ ರಾಜಧಾನಿಗಳು
|government_type = [[ಸಂಪೂರ್ಣ ರಾಜಪ್ರಭುತ್ವ]]
|p1 = ಚೇರ ರಾಜವಂಶ
|s1 = ಭಾರತದಲ್ಲಿ ಕಂಪನಿ ಆಳ್ವಿಕೆ
|year_start = ಸು. ಕ್ರಿ.ಪೂ. 6ನೇ ಶತಮಾನ (ಸಾಂಪ್ರದಾಯಿಕ ದಿನಾಂಕ)
|year_end = ಆಧುನಿಕ ಯುಗ
|common_languages = [[ಮಲಯಾಳಂ ಭಾಷೆ|ಮಲಯಾಳಂ]]
|religion = [[ಹಿಂದೂ ಧರ್ಮ]]
|title_leader = [[ಕೊಲತ್ತಿರಿ|ಕೊಲತ್ತಿರಿ]]
}}
{{Keralahistory}}
'''ಕೊಲತ್ತುನಾಡು''' (ಮಲಯಾಳಂ: കോലത്തുനാട്, {{IPA|ml|koːlɐt̪ːun̪aːɖə̆|pron}}) ('''ಕೋಲ ಸ್ವರೂಪಂ''', ವಿದೇಶಿ ಖಾತೆಗಳಲ್ಲಿ '''ಕನ್ನನೋರ್ ಸಾಮ್ರಾಜ್ಯ''', ನಂತರದ ಕಾಲದಲ್ಲಿ '''ಚಿರಕ್ಕಲ್ (ಚೆರಿಕುಲ್)''') [[ಪೋರ್ಚುಗೀಸ್ ಭಾರತದ ನೌಕಾಪಡೆ|ಪೋರ್ಚುಗೀಸ್ ನೌಕಾಪಡೆಗಳು]] ಭಾರತಕ್ಕೆ ಆಗಮಿಸುವ ಸಮಯದಲ್ಲಿ [[ಮಲಬಾರ್ ಕರಾವಳಿ]]ಯಲ್ಲಿ [[ಜಾಮೋರಿನ್]], [[ಕೊಚ್ಚಿ ಸಾಮ್ರಾಜ್ಯ]] ಮತ್ತು [[ವೆನಾಡ್|ಕ್ವಿಲಾನ್]] ಜೊತೆಗೆ ಅತ್ಯಂತ ಪ್ರಬಲವಾದ ನಾಲ್ಕು [[ರಾಜ್ಯ|ಸಾಮ್ರಾಜ್ಯ]]ಗಳಲ್ಲಿ ಒಂದಾಗಿತ್ತು. ಕೊಲತ್ತುನಾಡು ತನ್ನ ರಾಜಧಾನಿಯನ್ನು [[ಎಳಿಮಲ]]ದಲ್ಲಿ ಹೊಂದಿತ್ತು ಮತ್ತು [[ಕೊಲತ್ತಿರಿ|ಕೊಲತ್ತಿರಿ ರಾಜಮನೆತನ]]ದಿಂದ ಆಳಲ್ಪಡುತ್ತಿತ್ತು ಮತ್ತು ಸ್ಥೂಲವಾಗಿ ಭಾರತದ [[ಕೇರಳ ರಾಜ್ಯ]]ದ [[ಉತ್ತರ ಮಲಬಾರ್]] ಪ್ರದೇಶವನ್ನು ಒಳಗೊಂಡಿತ್ತು. ಸಾಂಪ್ರದಾಯಿಕವಾಗಿ, ಕೊಲತ್ತುನಾಡು ಉತ್ತರದಲ್ಲಿ [[ಚಂದ್ರಗಿರಿ ನದಿ]] ಮತ್ತು ದಕ್ಷಿಣದಲ್ಲಿ [[ಕೊರಪುಳ]] ನದಿಯ ನಡುವಿನ ಭೂಮಿ ಎಂದು ವರ್ಣಿಸಲಾಗಿದೆ.<ref name="Kol1">ಕೇರಳೋಲ್ಪತ್ತಿ ಗ್ರಂಥವರಿ: ದ ಕೊಲತ್ತುನಾಡ್ ಟ್ರೆಡಿಶನ್ಸ್ (ಮಲಯಾಳಂ) (ಕೋಝಿಕ್ಕೋಡ್: ಕ್ಯಾಲಿಕಟ್ ವಿಶ್ವವಿದ್ಯಾಲಯ, 1984) M. R. ರಾಘವ ವರಿಯರ್ (ಸಂಪಾದಕರು)</ref> ಕೊಲತ್ತುನಾಡು ([[ಕಣ್ಣೂರು]]) ಸಾಮ್ರಾಜ್ಯವು ತನ್ನ ಉತ್ತುಂಗದ ಸಮಯದಲ್ಲಿ, ಉತ್ತರದಲ್ಲಿ [[ನೇತ್ರಾವತಿ ನದಿ]] ([[ಮಂಗಳೂರು]]) ಯಿಂದ ದಕ್ಷಿಣದಲ್ಲಿ [[ಕೊರಪುಳ]] ([[ಕೋಝಿಕ್ಕೋಡ್]]) ವರೆಗೆ, ಪಶ್ಚಿಮದಲ್ಲಿ [[ಅರೇಬಿಯನ್ ಸಮುದ್ರ]] ಮತ್ತು ಪೂರ್ವದ ಗಡಿಯಲ್ಲಿ [[ಕೊಡಗು]] ಬೆಟ್ಟಗಳೊಂದಿಗೆ, [[ಅರೇಬಿಯನ್ ಸಮುದ್ರ]]ದಲ್ಲಿನ [[ಲಕ್ಷದ್ವೀಪ]]ದ ಪ್ರತ್ಯೇಕ ದ್ವೀಪಗಳನ್ನು ಸಹ ಒಳಗೊಂಡಂತೆ ವಿಸ್ತರಿಸಿದೆ ಎಂದು ವರದಿಯಾಗಿದೆ.<ref name="Kola Swaroopam"/>
ಕೊಲತ್ತುನಾಡಿನ ಆಳುವ ಮನೆತನ, [[ಕೊಲತ್ತಿರಿ]]ಗಳು ಎಂದು ಕರೆಯಲ್ಪಡುತ್ತದೆ, ಇವರು ಕೇರಳದ ಪ್ರಾಚೀನ ರಾಜವಂಶವಾದ [[ಮುಷಿಕ ಸಾಮ್ರಾಜ್ಯ|ಮುಷಿಕ ರಾಜಮನೆತನ]]ದ ವಂಶಸ್ಥರಾಗಿದ್ದರು ಮತ್ತು ಕ್ರಿ.ಶ. 12ನೇ ಶತಮಾನದಲ್ಲಿ [[ಕುಲಶೇಖರ ವಂಶ (ಎರಡನೇ ಚೇರರು)|ಮಹೋದಯಪುರದ ಚೇರರು]] ಮತ್ತು [[ಪಾಂಡ್ಯ ವಂಶ]] ಕಣ್ಮರೆಯಾದ ನಂತರ ಕೇರಳ ಪ್ರದೇಶದ ಪ್ರಮುಖ ರಾಜಕೀಯ ಶಕ್ತಿಗಳಲ್ಲಿ ಒಂದಾಗಿ ಏರಿದರು.<ref>{{Cite book | url=https://books.google.com/books?id=wnAjqjhc1VcC&pg=PA32 | title=ಕೇರಳ ಇತಿಹಾಸ ಮತ್ತು ಅದರ ನಿರ್ಮಾತೃಗಳು| isbn=9788126437825| last1=ಶ್ರೀಧರ ಮೇನನ್| first1=A.| date=4 March 2011| publisher=DC Books}}</ref><ref name = "Kol2">ಕೇರಳದ ಪೆರುಮಾಳ್ M. G. S. ನಾರಾಯಣನ್ (ಕೋಝಿಕ್ಕೋಡ್: ಖಾಸಗಿ ಪ್ರಕಟಣೆ, 1996)</ref>
ಕೊಲತ್ತಿರಿಗಳು ತಮ್ಮ ಪೂರ್ವಜರನ್ನು ಪ್ರಾಚೀನ ಮುಷಿಕ ಸಾಮ್ರಾಜ್ಯಕ್ಕೆ (ಎಳಿಮಲ ಸಾಮ್ರಾಜ್ಯ, ಎಲಿ-ನಾಡು) [[ತಮಿಳು ಸಂಗಮ್]] ಯುಗದಲ್ಲಿ ಗುರುತಿಸುತ್ತಾರೆ. ಮುಷಿಕ ರಾಜವಂಶದ ರಾಜ ನನ್ನನ್ [[ಚೇರ ವಂಶ|ಚೇರರು]] ವಿರುದ್ಧದ ಯುದ್ಧದಲ್ಲಿ ಕೊಲ್ಲಲ್ಪಟ್ಟ ನಂತರ, ರಾಜವಂಶದ ದಾಖಲಿತ ಇತಿಹಾಸವು ಅಲ್ಲಲ್ಲಿ ಕೆಲವು ಪರೋಕ್ಷ ಉಲ್ಲೇಖಗಳನ್ನು ಹೊರತುಪಡಿಸಿ ಅಸ್ಪಷ್ಟವಾಗಿದೆ. ಆದಾಗ್ಯೂ, ಸಾಂಪ್ರದಾಯಿಕ ವಿದ್ವಾಂಸರಲ್ಲಿ ಕೊಲತ್ತಿರಿಗಳು ರಾಜ ನನ್ನನ್ ಅವರ ವಂಶಸ್ಥರು ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ, ಮತ್ತು ನಂತರದ ಸಾಹಿತ್ಯ ಕೃತಿಗಳು ಮುಷಿಕ ರಾಜವಂಶದ ವಿಕ್ರಮಾರಾಮನ್, ಜಯಮಣಿ, ವಲಭನ್ ಮತ್ತು ಶ್ರೀಕಂದನ್ ನಂತಹ ರಾಜರನ್ನು ಸೂಚಿಸುತ್ತವೆ. ಭಾರತೀಯ ಮಾನವಶಾಸ್ತ್ರಜ್ಞ [[A. ಅಯ್ಯಪ್ಪನ್|ಅಯಿನಪಲ್ಲಿ ಅಯ್ಯಪ್ಪನ್]] ಅವರು [[ತುಳುನಾಡು]]ನ [[ಬಂಟ್ (ಸಮುದಾಯ)|ಬಂಟ್ ಸಮುದಾಯ]]ದ ಪ್ರಬಲ ಮತ್ತು ಯುದ್ಧೋಚಿತ ಕುಲವನ್ನು ''ಕೋಲ ಬಾರಿ'' ಎಂದು ಕರೆಯಲಾಗುತ್ತಿತ್ತು ಮತ್ತು ಕೊಲತ್ತುನಾಡಿನ ಕೊಲತ್ತಿರಿ ರಾಜನು ಈ ಕುಲದ ವಂಶಸ್ಥನಾಗಿದ್ದನು ಎಂದು ಹೇಳುತ್ತಾರೆ.<ref name="Aiyappan">{{cite book |last1=ಅಯಿನಪಲ್ಲಿ |first1=ಅಯ್ಯಪ್ಪನ್ |title=ಕೇರಳದ ವ್ಯಕ್ತಿತ್ವ |date=1982 |publisher=ಪ್ರಕಟಣಾ ವಿಭಾಗ, [[ಕೇರಳ ವಿಶ್ವವಿದ್ಯಾಲಯ]] |page=162 |url=https://books.google.com/books?id=SXFuAAAAMAAJ |access-date=27 July 2018 |quote=ತುಳುನಾಡಿನ ಬಂಟರ ಅತ್ಯಂತ ಪ್ರಬಲ ಮತ್ತು ಯುದ್ಧೋಚಿತ ವಿಭಾಗವನ್ನು ಕೋಲ ಬಾರಿ ಎಂದು ಕರೆಯಲಾಗುತ್ತಿತ್ತು. ಕೋಲ ರಾಜವಂಶವು ತುಳುನಾಡಿನ ಕೋಲ ವಂಶಾವಳಿಗಳ ಭಾಗವಾಗಿತ್ತು ಎಂದು ಸೂಚಿಸುವುದು ಸಮಂಜಸವಾಗಿದೆ.}}</ref> ಹೆಚ್ಚು ಪ್ರಸಿದ್ಧವಾದ [[ತಿರುವಾಂಕೂರು ರಾಜಮನೆತನ]]ವು ಕೊಲತ್ತಿರಿಗಳ ನಿಕಟ ಸೋದರಸಂಬಂಧಿ ರಾಜವಂಶವಾಗಿದೆ.<ref>{{Cite book | url=https://books.google.com/books?id=LFy4pWUlnfwC&pg=PA22 | title=ಕೇರಳದಲ್ಲಿ ಫೋರ್ಟ್ ಕೊಚ್ಚಿ, 1750-1830: ಭಾರತೀಯ ಪರಿಸರದಲ್ಲಿ ಡಚ್ ಸಮುದಾಯದ ಸಾಮಾಜಿಕ ಸ್ಥಿತಿ| isbn=978-9004168169| last1=ಸಿಂಗ್| first1=ಅಂಜನಾ| year=2010| publisher=BRILL}}</ref><ref>{{Cite book |last=ಇಂದುಚೂಡನ್ |first=V. T. |url=https://books.google.com/books?id=Vns9AAAAIAAJ |title=ಗೋಲ್ಡನ್ ಟವರ್: ತಿರುಕ್ಕುಲಶೇಖರಪುರಂ ಮತ್ತು ಇತರ ದೇವಾಲಯಗಳ ಐತಿಹಾಸಿಕ ಅಧ್ಯಯನ |date=1971 |publisher=ಕೊಚ್ಚಿ ದೇವಸ್ವಂ ಬೋರ್ಡ್ |pages=164 |language=en}}</ref><ref>{{Cite book |last=ಡಿ ಲ್ಯಾನೊಯ್ |first=ಮಾರ್ಕ್ |url=https://books.google.com/books?id=pKjZAAAAMAAJ |title=ತಿರುವಾಂಕೂರಿನ ಕುಲಶೇಖರ ಪೆರುಮಾಳ್ಗಳು: 1671 ರಿಂದ 1758 ರವರೆಗೆ ತಿರುವಾಂಕೂರಿನ ಇತಿಹಾಸ ಮತ್ತು ರಾಜ್ಯ ರಚನೆ |date=1997 |publisher=ಲೈಡನ್ ವಿಶ್ವವಿದ್ಯಾಲಯ |isbn=978-90-73782-92-1 |pages=20 |language=en}}</ref>
ಕೊಲತ್ತಿರಿಗಳು ಸಾಮಾನ್ಯವಾಗಿ [[ಕೆನರಾ|ಕೆನರಾ]] ಮತ್ತು [[ಜಾಮೋರಿನ್]]ರ ಕ್ಯಾಲಿಕಟ್ ಸಾಮ್ರಾಜ್ಯಗಳ ನಡುವಿನ ವಲಯದ ಮೇಲೆ ಉನ್ನತ ರಾಜಕೀಯ ಅಧಿಕಾರವನ್ನು ಹೊಂದಿದ್ದರು ಎಂದು ಹೇಳಲಾಗಿದ್ದರೂ, ಅವರ ರಾಜಕೀಯ ಪ್ರಭಾವವು ಹೆಚ್ಚು ಕಡಿಮೆ ಕೊಲತ್ತುನಾಡಿಗೆ ಸೀಮಿತವಾಗಿತ್ತು.<ref name = "Kol3">ಡುವಾರ್ಟೆ ಬಾರ್ಬೋಸಾ, ದ ಬುಕ್ ಆಫ್ ಡುವಾರ್ಟೆ ಬಾರ್ಬೋಸಾ: ಆನ್ ಅಕೌಂಟ್ ಆಫ್ ದ ಕಂಟ್ರೀಸ್ ಬಾರ್ಡರಿಂಗ್ ಆನ್ ದ ಇಂಡಿಯನ್ ಓಷನ್ ಅಂಡ್ ದೇರ್ ಇನ್ಹ್ಯಾಬಿಟೆಂಟ್ಸ್, II, ಸಂ. M. L ಡೇಮ್ಸ್ (ಮರುಮುದ್ರಣ, ಲಂಡನ್: ಹಕ್ಲುಯಿಟ್ ಸೊಸೈಟಿ, 1921)</ref><ref name = "Kol4">ಮಲಬಾರ್ನಲ್ಲಿ ಡಚ್: ಮದ್ರಾಸ್ ಸರ್ಕಾರದ ದಾಖಲೆಗಳಿಂದ ಆಯ್ಕೆ, ಸಂ. 13 (ಮದ್ರಾಸ್: ಸೂಪರಿಂಟೆಂಡೆಂಟ್, ಸರ್ಕಾರಿ ಮುದ್ರಣಾಲಯ, 1911), 143.</ref>
ಅವರ ಪ್ರಾಚೀನ ರಾಜಧಾನಿಯಾದ ಎಳಿಮಲವು [[ಕೊಲ್ಲಂ|ಕ್ವಿಲಾನ್]] ಮತ್ತು ಕ್ಯಾಲಿಕಟ್ ಜೊತೆಗೆ ಮಲಬಾರ್ ಕರಾವಳಿಯ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿತ್ತು ಮತ್ತು [[ಇಬ್ನ್ ಬತೂತಾ]], [[ಮಾರ್ಕೊ ಪೊಲೊ]] ಮತ್ತು ವಾಂಗ್ ತಾ-ಯುಆನ್ ಅವರ ಬರಹಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಕಾಲಾನಂತರದಲ್ಲಿ, ಅವರ ಪ್ರದೇಶಗಳು ಹಲವಾರು ಸಣ್ಣ ಸಾಮಂತ ರಾಜ್ಯಗಳಾಗಿ ವಿಂಗಡಿಸಲ್ಪಟ್ಟವು, ಅವುಗಳಲ್ಲಿ ಮುಖ್ಯವಾದವು [[ಅರಕ್ಕಲ್ ಸಾಮ್ರಾಜ್ಯ|ಕನ್ನನೋರ್ ಮತ್ತು ಲಕ್ಷದ್ವೀಪ]], ಕೋಟಿಯೋಟ್ ಮತ್ತು ವೈನಾಡ್, ಕಾರ್ಟಿನಾಡ್ (ಬಡಗರ), ಇರ್ವೆನಾಡ್, ಮತ್ತು ರಂಡತೆರ್ರ. "ಐದು ಸ್ನೇಹಪರ ಉತ್ತರ ಆಡಳಿತಗಾರರು" (ನಿಲೇಶ್ವರಂ, ಕುಂಬಳ, ವಿಟಾಲ್ಹ್, ಬಂಗೋರ್, ಮತ್ತು ಚೌತ್ವಾರ) ಎಂದು ಕರೆಯಲ್ಪಡುವವರು ಕೊಲತ್ತುನಾಡಿಗೆ ಸಮೀಪದಲ್ಲಿದ್ದರು, [[ಕವ್ವೈ ಪುಳ ನದಿ|ಕವ್ವಾಯ್ ನದಿ]]ಯ ಉತ್ತರಕ್ಕೆ. ಅವರು ದಕ್ಷಿಣದಲ್ಲಿ ತಮ್ಮ ಪ್ರಬಲ ನೆರೆಯವರಾದ ಕ್ಯಾಲಿಕಟ್ನ [[ಜಾಮೋರಿನ್]]ರೊಂದಿಗೆ ಆಗಾಗ್ಗೆ ಪೈಪೋಟಿಯಲ್ಲಿ ತೊಡಗಿದ್ದರು - ಇದು ಕೇರಳ ಇತಿಹಾಸದ ಶಾಶ್ವತ ಲಕ್ಷಣವಾಗಿದೆ. ಉತ್ತರ ಮಲಬಾರ್ ಮತ್ತು ಜಾಮೋರಿನ್ ಸಾಮ್ರಾಜ್ಯದ ನಡುವಿನ ಜಾತಿ ನಿರ್ಬಂಧಗಳು ಮತ್ತು ಕೊರಪುಳ ಗಡಿಯು ಅವರ ಪೈಪೋಟಿಯ ನಂತರ ಸ್ಥಾಪಿಸಲ್ಪಟ್ಟಿತು. ಕೆಲವು ಐತಿಹಾಸಿಕ ದಾಖಲೆಗಳು ಕೊಲತ್ತುನಾಡ್ ಸಾಮ್ರಾಜ್ಯವು [[ತಿರುವಾಂಕೂರು]] ಸಾಮ್ರಾಜ್ಯ ಮತ್ತು [[ತುಳು ಸಾಮ್ರಾಜ್ಯ|ತುಳು]] ಸಾಮ್ರಾಜ್ಯದೊಂದಿಗೆ ಸ್ನೇಹಪರವಾಗಿತ್ತು ಎಂದು ಸೂಚಿಸುತ್ತವೆ.<ref name=":02">{{Cite book |last=ಬ್ರಿಟಿಷ್ ಭಾರತ ಸರ್ಕಾರದ ಮದ್ರಾಸ್ |url=http://archive.org/details/MalabarMarriageCommissionReport |title=ಮಲಬಾರ್ ವಿವಾಹ ಆಯೋಗ ವರದಿ |date=1891}}</ref>
[[ಮಲಯಾಳಂ ಸಾಹಿತ್ಯ]]ದ ಬೆಳವಣಿಗೆಯಲ್ಲಿ ಮೈಲಿಗಲ್ಲಾದ ''ಕೃಷ್ಣ ಗಾಥಾ''ದ ಕರ್ತೃವಾದ [[ಚೇರುಸ್ಸೇರಿ ನಂಬೂತಿರಿ]] (ಸು. 1375-1475 ಕ್ರಿ.ಶ.) ಕೊಲತ್ತಿರಿ ರಾಜವಂಶದ ರಾಜರಲ್ಲಿ ಒಬ್ಬನಾದ ಉದಯವರ್ಮನ್ ಕೊಲತ್ತಿರಿಯ ಆಸ್ಥಾನದಲ್ಲಿ ವಾಸಿಸುತ್ತಿದ್ದರು.
==ಇತಿಹಾಸ==
{{Moresources|section|date=ಜುಲೈ 2023}}
===ಹಿನ್ನೆಲೆ===
ಎಳಿಮಲ ಆಡಳಿತಗಾರರು, ಮುಷಿಕ ಸಾಮ್ರಾಜ್ಯ, ಮತ್ತು ಕೊಲತ್ತುನಾಡಿನ ಮೂಲವು ಸಾಂಪ್ರದಾಯಿಕ ಇತಿಹಾಸದ ದೃಷ್ಟಿಯಿಂದ ಅಸ್ಪಷ್ಟವಾಗಿದೆ.
ಕ್ರಿಶ್ಚಿಯನ್ ಮಿಷನರಿ [[ಮತೀರ್ ಮೆಮೋರಿಯಲ್ ಚರ್ಚ್#ರೆವ್. ಸ್ಯಾಮುಯೆಲ್ ಮತೀರ್|ಸ್ಯಾಮುಯೆಲ್ ಮತೀರ್]] ಅಭಿಪ್ರಾಯಪಟ್ಟರು: "ಮಲಬಾರ್ನ ಎಲ್ಲಾ ರಾಜರುಗಳೂ ಸಹ, ಇತ್ತೀಚೆಗೆ ಅವರ ಅವಲಂಬಿಗಳಿಂದ ಅವರಿಗಾಗಿ ಎತ್ತಲಾದ ಹಕ್ಕುಗಳ ಹೊರತಾಗಿಯೂ, ಅದೇ ದೊಡ್ಡ ಸಮೂಹಕ್ಕೆ ಸೇರಿದ್ದಾರೆ ಮತ್ತು ನಾಯರ್ ಎಂದು ಕರೆಯಲ್ಪಡುವ ಜನಸಮೂಹದೊಂದಿಗೆ ಏಕರೂಪವಾಗಿದ್ದಾರೆ ಎಂದು ನಂಬಲು ಕಾರಣವಿದೆ, ಆದ್ದರಿಂದ ನಂಬೂದಿರಿಗಳು ಎಲ್ಲಾ ನಾಯರ್ ಪ್ರಭುಗಳಿಗೆ ಕ್ಷತ್ರಿಯತ್ವವನ್ನು ನೀಡಲು ಹಿಂಜರಿಯುತ್ತಿದ್ದರು, 1617 ರಲ್ಲಿ ಕೊಲತ್ತಿರಿ ರಾಜ ಉದಯವರ್ಮನ್ ಅವರು ಹಿರಣ್ಯ-ಗರ್ಭವನ್ನು ನಡೆಸುವ ಮೂಲಕ ಸೋಮ ಕ್ಷತ್ರಿಯ ಸ್ಥಾನಕ್ಕೆ ಏರಲು ಬಯಸಿದ್ದರು,<ref>{{Cite book|last=ಮತೀರ್|first=ಸ್ಯಾಮುಯೆಲ್|url=https://books.google.com/books?id=aYdCAAAAIAAJ&q=172|title=ತಿರುವಾಂಕೂರಿನ ಸ್ಥಳೀಯ ಜೀವನ|date=1883|publisher=W.H. ಅಲೆನ್ & ಕಂಪನಿ|language=en}}</ref><ref name="Namboothiri Websites Kozhikode">{{cite web|author=ನಂಬೂತಿರಿ ವೆಬ್ಸೈಟ್ಗಳು ಕೋಝಿಕ್ಕೋಡ್ |url=http://www.namboothiri.com/articles/saagaradwijans.htm |title=ಕೇರಳದ ಸಾಗರ ದ್ವಿಜರು |publisher=Namboothiri.com |access-date=2011-09-13}}</ref> ಇದಕ್ಕೆ ನಂಬೂದಿರಿಗಳು ನಿರಾಕರಿಸಿದರು. ಪರಿಣಾಮವಾಗಿ, ಉದಯವರ್ಮನ್ [[ಗೋಕರ್ಣ, ಭಾರತ|ಗೋಕರ್ಣ]]ದಿಂದ 237 ಬ್ರಾಹ್ಮಣ ಕುಟುಂಬಗಳನ್ನು (ಸಾಗರ ದ್ವಿಜರು) ಕರೆತಂದು ಅವರನ್ನು ಐದು ದೇಶಗಳಲ್ಲಿ ನೆಲೆಸಿಸಿದರು. (ಪೆರಿಂಚೆಲ್ಲೂರ್ ಗ್ರಾಮದ ಚೇರುತಾಝಂ, ಕುನ್ನಿರಿಯಂ, ಅರತಿಲ್, ಕುಲಪ್ಪುರಂ ಮತ್ತು ವರರುಚಿಮಂಗಲಂ). ನಂತರದವರು ನಂಬೂದಿರಿ ಪದ್ಧತಿಗಳನ್ನು ಅಳವಡಿಸಿಕೊಂಡರು ಮತ್ತು ಹಿರಣ್ಯ-ಗರ್ಭವನ್ನು ನಡೆಸಿ ಮೊದಲಿನವರಿಗೆ ಕ್ಷತ್ರಿಯತ್ವವನ್ನು ನೀಡಿದರು.<ref name="Namboothiri Websites Kozhikode"/><ref name = "Kol55">ಕೇರಳದಲ್ಲಿ ಶ್ರೌತ ಯಜ್ಞಗಳು (ಕೋಝಿಕ್ಕೋಡ್: ಕ್ಯಾಲಿಕಟ್ ವಿಶ್ವವಿದ್ಯಾಲಯ, 2002), 98 V. ಗೋವಿಂದನ್ ನಂಬೂದಿರಿ; ಫ್ರೀಮನ್, 'ಪ್ಯೂರಿಟಿ ಅಂಡ್ ವಯಲೆನ್ಸ್', 527-8</ref>
====ಎಳಿಮಲ ಆಡಳಿತಗಾರರು====
{{See also|ನನ್ನನ್}}
[[File:Periplous of the Erythraean Sea.svg|thumbnail|''[[ಪೆರಿಪ್ಲಸ್ ಆಫ್ ದ ಎರಿತ್ರಿಯನ್ ಸೀ]]'' (1ನೇ ಶತಮಾನ ಕ್ರಿ.ಶ.) ನ ಹೆಸರುಗಳು, ಮಾರ್ಗಗಳು ಮತ್ತು ಸ್ಥಳಗಳು]]
''[[ಪೆರಿಪ್ಲಸ್ ಆಫ್ ದ ಎರಿತ್ರಿಯನ್ ಸೀ]]''ನಲ್ಲಿ [[ಮುಜಿರಿಸ್]]ನ ಉತ್ತರಕ್ಕೆ ಎಲ್ಲೋ ಒಂದು ಬಂದರು ಎಂದು ಉಲ್ಲೇಖಿಸಲಾದ ಪ್ರಾಚೀನ ಬಂದರು ''ನೌರಾ''ವನ್ನು [[ಕಣ್ಣೂರು]] ಎಂದು ಗುರುತಿಸಲಾಗಿದೆ.<ref name="Ente_Kannur">{{cite book|author=ಮೇನನ್, A. ಶ್ರೀಧರ |title=ಕೇರಳ ಇತಿಹಾಸದ ಸಮೀಕ್ಷೆ|url=https://books.google.com/books?id=FVsw35oEBv4C|year=2007|publisher=DC Books|isbn=9788126415786}}</ref>
[[ಪ್ಲಿನಿ ದಿ ಎಲ್ಡರ್]] (1ನೇ ಶತಮಾನ ಕ್ರಿ.ಶ.) [[ಟಿಂಡಿಸ್]] ಬಂದರು [[ಚೇರ ವಂಶ|ಚೇರ ಸಾಮ್ರಾಜ್ಯ]]ದ ವಾಯುವ್ಯ ಗಡಿಯಲ್ಲಿತ್ತು ಎಂದು ಹೇಳುತ್ತಾರೆ.<ref name=":2">ಗುರುಕ್ಕಲ್, R., & ವಿಟ್ಟೇಕರ್, D. (2001). ಮುಜಿರಿಸ್ ಹುಡುಕಾಟದಲ್ಲಿ. ''ಜರ್ನಲ್ ಆಫ್ ರೋಮನ್ ಆರ್ಕಿಯಾಲಜಿ,'' ''14'', 334-350.</ref> [[ಟಿಂಡಿಸ್]] ಬಂದರಿನ ಉತ್ತರಕ್ಕೆ ಇರುವ [[ಉತ್ತರ ಮಲಬಾರ್]] ಪ್ರದೇಶವು [[ಸಂಗಮ್ ಕಾಲ]]ದಲ್ಲಿ [[ಎಳಿಮಲ]] ಸಾಮ್ರಾಜ್ಯದಿಂದ ಆಳಲ್ಪಡುತ್ತಿತ್ತು.<ref name="odra">A. ಶ್ರೀಧರ ಮೇನನ್, ಕೇರಳ ಇತಿಹಾಸದ ಸಮೀಕ್ಷೆ</ref> ''[[ಪೆರಿಪ್ಲಸ್ ಆಫ್ ದ ಎರಿತ್ರಿಯನ್ ಸೀ]]''ನ ಪ್ರಕಾರ, [[ಲಿಮಿರಿಕೆ]] ಎಂದು ಕರೆಯಲ್ಪಡುವ ಪ್ರದೇಶವು [[ಕಣ್ಣೂರು|ನೌರಾ]] ಮತ್ತು ಟಿಂಡಿಸ್ನಲ್ಲಿ ಪ್ರಾರಂಭವಾಯಿತು. ಆದಾಗ್ಯೂ [[ಟಾಲೆಮಿ]] ''[[ಲಿಮಿರಿಕೆ]]''ಯ ಆರಂಭಿಕ ಬಿಂದುವಾಗಿ ಟಿಂಡಿಸ್ ಅನ್ನು ಮಾತ್ರ ಉಲ್ಲೇಖಿಸುತ್ತಾರೆ. ಈ ಪ್ರದೇಶವು ಬಹುಶಃ [[ಕನ್ಯಾಕುಮಾರಿ]]ಯಲ್ಲಿ ಕೊನೆಗೊಂಡಿತು; ಆದ್ದರಿಂದ ಇದು ಸ್ಥೂಲವಾಗಿ ಪ್ರಸ್ತುತ ಮಲಬಾರ್ ಕರಾವಳಿಗೆ ಸಮಾನವಾಗಿದೆ. ಈ ಪ್ರದೇಶದೊಂದಿಗೆ ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವು ಸುಮಾರು 50,000,000 [[ಸೆಸ್ಟೆರ್ಸೆಸ್]] ಎಂದು ಅಂದಾಜಿಸಲಾಗಿದೆ.<ref>ಪ್ಲಿನಿ ದಿ ಎಲ್ಡರ್ ಪ್ರಕಾರ, ಭಾರತದಿಂದ ಸರಕುಗಳನ್ನು ಸಾಮ್ರಾಜ್ಯದಲ್ಲಿ ಅವುಗಳ ಮೂಲ ಖರೀದಿ ಬೆಲೆಯ 100 ಪಟ್ಟು ಮಾರಾಟ ಮಾಡಲಾಗುತ್ತಿತ್ತು. ನೋಡಿ [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> ಪ್ಲಿನಿ ದಿ ಎಲ್ಡರ್ [[ಲಿಮಿರಿಕೆ]]ಯು ಕಡಲ್ಗಳ್ಳರಿಂದ ಬಾಧಿತವಾಗಿದೆ ಎಂದು ಉಲ್ಲೇಖಿಸಿದ್ದಾರೆ.<ref>ಬೋಸ್ಟಾಕ್, ಜಾನ್ (1855). "26 (ಭಾರತಕ್ಕೆ ಪ್ರಯಾಣಗಳು)". ಪ್ಲಿನಿ ದಿ ಎಲ್ಡರ್, ದ ನ್ಯಾಚುರಲ್ ಹಿಸ್ಟರಿ. ಲಂಡನ್: ಟೇಲರ್ ಅಂಡ್ ಫ್ರಾನ್ಸಿಸ್.</ref> [[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟೆಸ್]] ''[[ಲಿಮಿರಿಕೆ]]''ಯು ಮೆಣಸಿನ ಮೂಲವಾಗಿತ್ತು ಎಂದು ಉಲ್ಲೇಖಿಸಿದ್ದಾರೆ.<ref>ಇಂಡಿಕೋಪ್ಲ್ಯೂಸ್ಟೆಸ್, ಕಾಸ್ಮಾಸ್ (1897). ಕ್ರಿಶ್ಚಿಯನ್ ಟೋಪೋಗ್ರಫಿ. 11. ಯುನೈಟೆಡ್ ಕಿಂಗ್ಡಮ್: ದ ಟೆರ್ಟುಲಿಯನ್ ಪ್ರಾಜೆಕ್ಟ್. pp. 358–373.</ref><ref>ದಾಸ್, ಸಂತೋಷ್ ಕುಮಾರ್ (2006). ಪ್ರಾಚೀನ ಭಾರತದ ಆರ್ಥಿಕ ಇತಿಹಾಸ. ಜೆನೆಸಿಸ್ ಪಬ್ಲಿಷಿಂಗ್ ಪ್ರೈ. ಲಿಮಿಟೆಡ್. p. 301.</ref>
[[ಸಂಗಮ್ ಕಾಲ]]ದಲ್ಲಿ, ಕ್ರೈಸ್ತ ಶಕೆಯ ಆರಂಭಿಕ ಶತಮಾನಗಳಲ್ಲಿ, ಪ್ರಸ್ತುತ ಕೇರಳ ಮತ್ತು ತಮಿಳುನಾಡು ಎರಡೂ ಪ್ರತ್ಯೇಕ ರಾಜಕೀಯ ಘಟಕಗಳ ಅಡಿಯಲ್ಲಿದ್ದರೂ, ಸಾಮಾನ್ಯ ಸಾಂಸ್ಕೃತಿಕ ಕ್ಷೇತ್ರ ಮತ್ತು ಸಾಮಾನ್ಯ ಭೌಗೋಳಿಕ ವಸಾಹತು ಮಾದರಿಯ ಭಾಗವಾಗಿ ಪರಿಗಣಿಸಲ್ಪಟ್ಟಿದ್ದವು.<ref name = "Kol77"/> ಹೆಚ್ಚು ನಿರ್ದಿಷ್ಟವಾಗಿ, ಕ್ರೈಸ್ತ ಶಕೆಯ ಆರಂಭಿಕ ತಮಿಳು ಸಂಕಲನಗಳು ಪಾಂಡ್ಯರು, ಚೇರರು, ಅಥವಾ ಚೋಳರು, ಮತ್ತು ವೇಳಿರ್ ಮುಖ್ಯಸ್ಥರ ನಡುವೆ ಯಾವುದೇ ತೀಕ್ಷ್ಣವಾದ ಸಾಂಸ್ಕೃತಿಕ ಅಥವಾ ಸಾಮಾಜಿಕ ವ್ಯತ್ಯಾಸವನ್ನು ಮಾಡುವುದಿಲ್ಲ, ಇವರೆಲ್ಲರೂ ಸಾಮಾನ್ಯ ಸಾಂಸ್ಕೃತಿಕ ಮತ್ತು ಭೌಗೋಳಿಕ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ, ಪಶ್ಚಿಮ ಕರಾವಳಿಯ ಹಿಂದೂ ದೇವಾಲಯಗಳನ್ನು ಸಹ ತಮಿಳು ಭಕ್ತಿ ಚಳವಳಿಯ ಪವಿತ್ರ ಭೂಗೋಳದಲ್ಲಿ ಸೇರಿಸಲಾಯಿತು ಮತ್ತು ಅವುಗಳನ್ನು ಚಳವಳಿಯ ಪ್ರಮುಖ ಪ್ರತಿಪಾದಕರಾದ [[ಆಳ್ವಾರರು]] ಮತ್ತು [[ನಾಯನಾರ್|ನಾಯನಾರ್]]ಗಳು ತಮ್ಮ ಪದ್ಯಗಳಲ್ಲಿ ಹೇರಳವಾಗಿ ಹೊಗಳಿದರು.<ref name = "Kol90">ದಕ್ಷಿಣ ಭಾರತದ ಸಮಾಜ ಮತ್ತು ಸಂಸ್ಕೃತಿಯ ಅಡಿಪಾಯಗಳು M. G. S. ನಾರಾಯಣನ್, (ದೆಹಲಿ: ಭಾರತೀಯ ಬುಕ್ ಕಾರ್ಪೋರೇಷನ್, 1994), 194</ref>
[[ತಮಿಳಕಂ|ತಮಿಳು]] [[ಸಂಗಮ್ ಕಾಲ|ಸಂಗಮ್ ಯುಗ]]ದಲ್ಲಿ, ಪ್ರಸ್ತುತ ಕೇರಳದ ಉಳಿದ ಭಾಗ, [[ತುಳುನಾಡು]], [[ಕೊಡಗು ಜಿಲ್ಲೆ|ಕೂರ್ಗ್]], ಮತ್ತು ತಮಿಳುನಾಡಿನ ಕೆಲವು ಭಾಗಗಳಂತೆಯೇ ಉತ್ತರ ಮಲಬಾರ್ ಚೇರರ ಆಳ್ವಿಕೆಯಲ್ಲಿತ್ತು. ಚೇರರ (ಮತ್ತು ಪಾಂಡ್ಯರು ಮತ್ತು ಚೋಳರಂತಹ ಇತರರು) ಒಂದು ಶಾಖೆಯು ಎಳಿಲ್ ಮಲದಲ್ಲಿ (ಮತ್ತು ಪಳ್ಳಿಯಲ್ಲಿ ಎರಡನೇ ರಾಜಧಾನಿಯೊಂದಿಗೆ) ತನ್ನ ರಾಜಧಾನಿಯನ್ನು ಹೊಂದಿತ್ತು, ಇದನ್ನು ಮುಷಿಕ ವಂಶ ಎಂದು ಕರೆಯಲಾಗುತ್ತಿತ್ತು, ಇದು ಚೇರರ ಪರವಾಗಿ ಪ್ರದೇಶವನ್ನು ಆಳಿತು. ಎಳಿಲ್ ಮಲ (ಯುರೋಪಿಯನ್ ಖಾತೆಗಳಲ್ಲಿ ಮೌಂಟ್ ಡೆಲಿ) ಮತ್ತು ಅದರ ನೆರೆಯ ಪ್ರದೇಶಗಳು ಕ್ರೈಸ್ತ ಶಕೆಯ ಆರಂಭಿಕ ಶತಮಾನಗಳಲ್ಲಿ ಸಾಮಾಜಿಕ-ರಾಜಕೀಯ ಚಟುವಟಿಕೆಗಳ ಕ್ರಿಯಾಶೀಲ ಕೇಂದ್ರಗಳಾದವು.<ref name = "Kol21">ಕೊಲತ್ತುಪಝಮ ಕುಮಾರನ್ ಅವರಿಂದ</ref> ಎಳಿಲ್ ಮಲ ಸಾಮ್ರಾಜ್ಯವು (ಕೊಂಕ-ನಾಮ್, ಪುಳಿ-ನಾಡಿನ ಒಂದು ಭಾಗ) ಪ್ರಾಯೋಗಿಕವಾಗಿ ಪ್ರಸ್ತುತ ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳ ಸಂಪೂರ್ಣ ಮತ್ತು ತುಳು ದೇಶದ ಒಂದು ಭಾಗ ಮತ್ತು ಕೂರ್ಗ್ ಮತ್ತು ಗುದಲೂರಿನ ಭಾಗಗಳನ್ನು ಒಳಗೊಂಡಿತ್ತು. ಇದು ಪ್ರಾಚೀನ ತಮಿಳು ದೇಶದ ವಾಯುವ್ಯ ದಿಕ್ಕಿನ ತಮಿಳು ಮಾತನಾಡುವ ಪ್ರದೇಶವಾಗಿತ್ತು. [[ಎಳಿಮಲ]]ದಲ್ಲಿ ನೆಲೆಗೊಂಡಿದ್ದ ಎಳಿಮಲ ಸಾಮ್ರಾಜ್ಯವು ಎರಡು ನಾಡುಗಳ ಮೇಲೆ ಅಧಿಕಾರವನ್ನು ಹೊಂದಿತ್ತು - ಕರಾವಳಿ ಪೂಳಿನಾಡು ಮತ್ತು ಬೆಟ್ಟದ ಪೂರ್ವ ಕರ್ಕನಾಡು. [[ಸಂಗಮ್ ಸಾಹಿತ್ಯ]]ದ ಕೃತಿಗಳ ಪ್ರಕಾರ, ಪೂಳಿನಾಡು [[ಮಂಗಳೂರು]] ಮತ್ತು [[ಕೋಝಿಕ್ಕೋಡ್]] ನಡುವಿನ ಕರಾವಳಿ ಪಟ್ಟಿಯ ಹೆಚ್ಚಿನ ಭಾಗವನ್ನು ಒಳಗೊಂಡಿತ್ತು.<ref name="Census_Handbook">{{Cite book|title=ಜಿಲ್ಲಾ ಜನಗಣತಿ ಕೈಪಿಡಿ, ಕಾಸರಗೋಡು (2011)|publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ|location=ತಿರುವನಂತಪುರಂ|pages=9|url=https://censusindia.gov.in/2011census/dchb/3201_PART_B_KASARAGOD.pdf}}</ref> ಕರ್ಕನಾಡು [[ವಯನಾಡ್]]-[[ಗುದಲೂರು, ನೀಲಗಿರಿ|ಗುದಲೂರು]] ಅನ್ನು ಒಳಗೊಂಡಿತ್ತು, ಇದು [[ಕೊಡಗು]] (ಕೂರ್ಗ್) ನ ಭಾಗಗಳನ್ನು ಹೊಂದಿರುವ ಬೆಟ್ಟದ ಪ್ರದೇಶವಾಗಿದೆ.<ref name="wnd">{{cite book
| author = ಭಾರತ ಸರ್ಕಾರ | year=2014–15
| title= ಜಿಲ್ಲಾ ಜನಗಣತಿ ಕೈಪಿಡಿ – ವಯನಾಡ್ (ಭಾಗ-ಬಿ) 2011 | publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ
| url= https://censusindia.gov.in/2011census/dchb/3203_PART_B_WAYANAD.pdf}}</ref>
ಎಳಿಮಲ ರಾಜವಂಶದ ಅತ್ಯಂತ ಪ್ರಸಿದ್ಧ ಆಡಳಿತಗಾರ ನನ್ನನ್, ಕ್ರಿ.ಶ. 5ನೇ ಶತಮಾನದಲ್ಲಿ [[ಚೇರ ವಂಶ|ಚೇರರು]] ವಿರುದ್ಧ ಸೋತಾಗ [[ವಯನಾಡ್]] ಬೆಟ್ಟಗಳಲ್ಲಿ ಆಶ್ರಯ ಪಡೆದನು, [[ಸಂಗಮ್ ಸಾಹಿತ್ಯ|ಸಂಗಮ್ ಕೃತಿಗಳ]] ಪ್ರಕಾರ, ಯುದ್ಧದಲ್ಲಿ ಅವನ ಮರಣದ ಸ್ವಲ್ಪ ಮೊದಲು.<ref name="wnd"/> ಎಳಿಮಲ ಸಾಮ್ರಾಜ್ಯವು ಆರಂಭಿಕ ಮಧ್ಯಯುಗದಲ್ಲಿ [[ಮುಷಿಕ ವಂಶ]]ದಿಂದ ಉತ್ತರಾಧಿಕಾರವನ್ನು ಪಡೆಯಿತು, ಹೆಚ್ಚಾಗಿ [[ತುಳುನಾಡು]]ನಿಂದ [[ತುಳುವ ಬ್ರಾಹ್ಮಣ]]ರ ವಲಸೆಯ ಕಾರಣದಿಂದಾಗಿರಬಹುದು. ಕೊಲತ್ತುನಾಡು ([[ಕಣ್ಣೂರು]]) ಸಾಮ್ರಾಜ್ಯವು ಮುಷಿಕ ರಾಜವಂಶದ ವಂಶಸ್ಥರು, ತನ್ನ ಉತ್ತುಂಗದ ಸಮಯದಲ್ಲಿ ಉತ್ತರದಲ್ಲಿ [[ನೇತ್ರಾವತಿ ನದಿ]] (ಮಂಗಳೂರು) ಯಿಂದ<ref name="Kola Swaroopam">{{cite book |last1=ಶ್ರೀಧರ ಮೇನನ್ |first1=A. |title=''ಕೇರಳ ಚರಿತ್ರಂ'' |year=2007 |publisher=DC Books |location=ಕೊಟ್ಟಾಯಂ |isbn=978-8126415885 |edition=2007 |page=175 |url=https://books.google.com/books?id=FAlXPgAACAAJ|access-date=19 July 2020}}</ref> ದಕ್ಷಿಣದಲ್ಲಿ [[ಕೊರಪುಳ]] ವರೆಗೆ, ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ ಮತ್ತು ಪೂರ್ವದ ಗಡಿಯಲ್ಲಿ [[ಕೊಡಗು]] ಬೆಟ್ಟಗಳೊಂದಿಗೆ ವಿಸ್ತರಿಸಿತು ಎಂದು ವರದಿಯಾಗಿದೆ.<ref name="Census_Handbook"/>
ಎಳಿಲ್ ಮಲದ ನನ್ನನ್ ಈ ರಾಜವಂಶದ ಅತ್ಯಂತ ಪ್ರಸಿದ್ಧ ಆಡಳಿತಗಾರನಾಗಿದ್ದನು. ಉಳಿದಿರುವ ತಮಿಳು ಸಂಕಲನಗಳು ನನ್ನನನ ಒಂದು ಶಕ್ತಿಯುತ ಚಿತ್ರಣವನ್ನು ಚಿತ್ರಿಸುತ್ತವೆ ಮತ್ತು [[ಚೇರ ವಂಶಗಳು|ಚೇರರು]] ನಂತಹ ಆಳುವ ಗಣ್ಯರೊಂದಿಗಿನ ಅವನ ಯುದ್ಧಗಳನ್ನು ವಿವರಿಸುತ್ತವೆ.<ref name="Kol21"/> ಅವನು ಹೆಚ್ಚಾಗಿ ಒಬ್ಬ ಬುಡಕಟ್ಟು ಮುಖ್ಯಸ್ಥನಾಗಿದ್ದು, ನೆರೆಯ ಪ್ರದೇಶಗಳಲ್ಲಿ ಲೂಟಿ ದಾಳಿಗಳಲ್ಲಿ ಪ್ರಮುಖವಾಗಿ ತೊಡಗಿದ್ದನು.<ref name = "Kol29">ರಾಜನ್ ಗುರುಕ್ಕಲ್, 'ದಕ್ಷಿಣ ಭಾರತದಲ್ಲಿ ರಾಜ್ಯ ರಚನೆಯ ಪೂರ್ವಭಾವಿ', R. ಚಂಪಕಲಕ್ಷ್ಮಿ, ಕೇಸವನ್ ವೇಲುತ್ತಟ್, T. R. ವೆನುಗೋಪಾಲನ್, (ಸಂಪಾದಕರು), ಪ್ರಾಚೀನ ದಕ್ಷಿಣ ಭಾರತದಲ್ಲಿ ರಾಜ್ಯ ಮತ್ತು ಸಮಾಜ (ತ್ರಿಸೂರ್: ಕಾಸ್ಮೊಬುಕ್ಸ್, 2002), pp. 39-59</ref>
ಆದಾಗ್ಯೂ, 1ನೇ ಶತಮಾನ ಕ್ರಿ.ಶ. ಆರಂಭದಲ್ಲಿ, ಎಳಿಲ್ ಮಲ ಸಾಮ್ರಾಜ್ಯವು ನನ್ನನ್ ಅಡಿಯಲ್ಲಿ ತನ್ನ ರಾಜಧಾನಿ ಪಳ್ಳಿಯೊಂದಿಗೆ ರಾಜಕೀಯ ಪ್ರಾಮುಖ್ಯತೆಗೆ ಏರಿತು. ನನ್ನನ್ ಒಬ್ಬ ಯುದ್ಧೋಚಿತ ರಾಜನಾಗಿದ್ದು, ಆಂತರಿಕ ಪ್ರದೇಶಗಳಿಗೆ ಆಳವಾದ ದಂಡಯಾತ್ರೆಗಳನ್ನು ನಡೆಸಿದನು ಮತ್ತು ವೈನಾಡ್-ಗುದಲೂರು ಪ್ರದೇಶ ಮತ್ತು ಕೊಂಗುನಾಡಿನ (ಸೇಲಂ-ಕೊಯಮತ್ತೂರು ಪ್ರದೇಶ) ಒಂದು ಭಾಗವನ್ನು ತನ್ನ ನಿಯಂತ್ರಣಕ್ಕೆ ತಂದನು. ತಮಿಳು ಕವಿಗಳ ಪ್ರಕಾರ ಅವನು ಚೇರರ ವಿರುದ್ಧ ಹಲವಾರು ವಿಜಯಗಳನ್ನು (ಪಳ್ಳಿ ಯುದ್ಧ ಸೇರಿದಂತೆ) ಸಾಧಿಸಿದನು. ಸೆಲ್ ಕೇಳು ಕುಟ್ಟುವನ್ನನ ಉತ್ತರಾಧಿಕಾರಿಯಾದ ರಾಜ ನರ್ಮುಡಿ ಚೇರಲ್, ಜನರಲ್ ಮಿಗಿಲಿ ಅಡಿಯಲ್ಲಿ ಚೇರ ಪಡೆಗಳನ್ನು ನನ್ನನನ ವಿರುದ್ಧ ಕಳುಹಿಸಿದನು. ಆದರೆ, ಅವನು ಎಳಿಲ್ ಮಲ ಪಡೆಗಳ ವಿರುದ್ಧ ಪಳ್ಳಿ ಯುದ್ಧದಲ್ಲಿ ಸೋಲಿಸಲ್ಪಟ್ಟನು. ಆದರೆ ನಂತರ, ನನ್ನನನು ನಂತರದ ಸತತ ಘರ್ಷಣೆಗಳಲ್ಲಿ ಸೋಲಿಸಲ್ಪಟ್ಟನು. ಅವನು ತನ್ನ ರಾಜಧಾನಿ ಪಳ್ಳಿಯಿಂದ ಪಲಾಯನ ಮಾಡಲು ಮತ್ತು ವೈನಾಡ್ ಬೆಟ್ಟಗಳಲ್ಲಿ ಆಶ್ರಯ ಪಡೆಯಲು ಒತ್ತಾಯಿಸಲ್ಪಟ್ಟನು. ಯುದ್ಧಗಳು ನರ್ಮುಡಿ ಚೇರಲ್ ವಾಗೈ ಪೆರುಂ ತುರೈ ಯುದ್ಧದಲ್ಲಿ ನನ್ನನನ ಪಡೆಗಳನ್ನು ನುಚ್ಚುನೂರು ಮಾಡಿದಾಗ ಕೊನೆಗೊಂಡಿತು. ''ಅಗನಾನೂರು'' ಪ್ರಕಾರ, ನನ್ನನನು ಯುದ್ಧದಲ್ಲಿ ಕೊಲ್ಲಲ್ಪಟ್ಟನು. ಅವನ ಮರಣದ ನಂತರ, ಎಳಿಮಲ ಸಾಮ್ರಾಜ್ಯದ ನಿಯಂತ್ರಣವು ಚೇರರ ವಶಕ್ಕೆ ಬಂದಿತು.
ಪಳ್ಳಿ ನಗರವು, ಎಳಿಲ್ ಮಲ ಸಾಮ್ರಾಜ್ಯದ ನಂತರದ ರಾಜಧಾನಿಯಾಗಿದ್ದು, ಚಿನ್ನ ಮತ್ತು ಅಮೂಲ್ಯ ಕಲ್ಲುಗಳ ಶ್ರೀಮಂತ ನಿಧಿಗಳಿಗೆ ಪ್ರಸಿದ್ಧವಾಗಿತ್ತು. ಅವರು ಮಲಬಾರ್ ಕರಾವಳಿಯಲ್ಲಿ ಪ್ರಾಚೀನ ರೋಮನ್ನರೊಂದಿಗೆ ನಿಕಟ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದರು.
[[ಉತ್ತರ ಮಲಬಾರ್]] ಈ ಯುಗದಲ್ಲಿ [[ಹಿಂದೂ ಮಹಾಸಾಗರ ವ್ಯಾಪಾರ]]ದ ಕೇಂದ್ರವಾಗಿತ್ತು. [[ಮಲಬಾರ್ ಮುಸ್ಲಿಮರು|ಕೇರಳ ಮುಸ್ಲಿಮ್]] ಸಂಪ್ರದಾಯದ ಪ್ರಕಾರ, ಕೊಲತ್ತುನಾಡು [[ಭಾರತೀಯ ಉಪಖಂಡ]]ದಲ್ಲಿನ ಹಲವಾರು [[ಭಾರತದಲ್ಲಿ ಇಸ್ಲಾಂ|ಅತ್ಯಂತ ಹಳೆಯ ಮಸೀದಿಗಳ]] ನೆಲೆಯಾಗಿದೆ. [[ಚೇರಮನ್ ಪೆರುಮಾಳ್ಳ ದಂತಕಥೆ]]ಯ ಪ್ರಕಾರ, ಮೊದಲ ಭಾರತೀಯ ಮಸೀದಿಯನ್ನು 624 ಕ್ರಿ.ಶ.ಯಲ್ಲಿ ಕೊಡುಂಗಲ್ಲೂರಿನಲ್ಲಿ [[ಚೇರ ವಂಶ]]ದ ಕೊನೆಯ ಆಡಳಿತಗಾರನ (ಚೇರಮನ್ ಪೆರುಮಾಳ್) ಆದೇಶದೊಂದಿಗೆ ನಿರ್ಮಿಸಲಾಯಿತು, ಅವರು [[ಧರ್ಮಡೋಂ]]ನಿಂದ [[ಮಕ್ಕಾ]]ಗೆ ತೆರಳಿ [[ಮುಹಮ್ಮದ್]] (ಸು. 570–632) ಅವರ ಜೀವಿತಾವಧಿಯಲ್ಲಿ [[ಇಸ್ಲಾಂ]]ಗೆ ಮತಾಂತರಗೊಂಡರು.<ref>{{cite book |author=ಜೊನಾಥನ್ ಗೋಲ್ಡ್ಸ್ಟೀನ್ |title=ಚೀನಾದ ಯಹೂದಿಗಳು |publisher=M. E. ಶಾರ್ಪ್ |year=1999|isbn=9780765601049 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=ಎಡ್ವರ್ಡ್ ಸಿಂಪ್ಸನ್|author2=ಕೈ ಕ್ರೆಸ್ಸೆ|title=ಇತಿಹಾಸದೊಂದಿಗೆ ಹೋರಾಟ: ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಇಸ್ಲಾಂ ಮತ್ತು ವಿಶ್ವವಾದ|url=https://books.google.com/books?id=w0qHKA7zEaEC&pg=PA333|access-date=24 July 2012 |year=2008|publisher=ಕೊಲಂಬಿಯಾ ವಿಶ್ವವಿದ್ಯಾಲಯ ಮುದ್ರಣಾಲಯ|isbn=978-0-231-70024-5|pages=333}}</ref><ref name="Kupferschmidt1987">{{cite book|author=ಉರಿ M. ಕುಪ್ಫರ್ಶ್ಮಿಡ್ಟ್|title=ಸುಪ್ರೀಂ ಮುಸ್ಲಿಂ ಕೌನ್ಸಿಲ್: ಪ್ಯಾಲೆಸ್ಟೈನ್ಗಾಗಿ ಬ್ರಿಟಿಷ್ ಆದೇಶದ ಅಡಿಯಲ್ಲಿ ಇಸ್ಲಾಂ|url=https://books.google.com/books?id=ChEVAAAAIAAJ&pg=PA458|access-date=25 July 2012|year=1987|publisher=ಬ್ರಿಲ್|isbn=978-90-04-07929-8|pages=458–459}}</ref><ref name="Raṇṭattāṇi2007">{{cite book|author=ಹುಸೇನ್ ರಂಟತ್ತಾಣಿ|title=ಮಾಪಿಳ್ಳ ಮುಸ್ಲಿಮರು: ಸಮಾಜ ಮತ್ತು ವಿರೋಧಿ ವಸಾಹತು ಹೋರಾಟಗಳ ಅಧ್ಯಯನ |url=https://books.google.com/books?id=xlb5BrabQd8C&pg=PA179|access-date=25 July 2012|year=2007|publisher=ಇತರೆ ಪುಸ್ತಕಗಳು|isbn=978-81-903887-8-8|pages=179–}}</ref>
''[[ಕ್ವಿಸ್ಸತ್ ಶಕರ್ವತಿ ಫರ್ಮದ್]]'' ಪ್ರಕಾರ, ಕೊಡುಂಗಲ್ಲೂರು, ಕೊಲ್ಲಂ, [[ಮಾದಾಯಿ]], [[ಬರ್ಕೂರು]], ಮಂಗಳೂರು, [[ಕಾಸರಗೋಡು]], [[ಕಣ್ಣೂರು]], [[ಧರ್ಮಡೋಂ]], [[ಕೊಯಿಲಾಂಡಿ|ಪಂತಲಯಾನಿ]], ಮತ್ತು [[ಚಾಲಿಯಂ]]ಗಳಲ್ಲಿನ [[ಮಸೀದಿ|''ಮಸ್ಜಿದ್'']]ಗಳನ್ನು [[ಮಲಿಕ್ ದಿನಾರ್]]ರ ಕಾಲದಲ್ಲಿ ನಿರ್ಮಿಸಲಾಯಿತು, ಮತ್ತು ಅವು [[ಭಾರತೀಯ ಉಪಖಂಡ]]ದಲ್ಲಿನ ಅತ್ಯಂತ ಹಳೆಯ ''ಮಸ್ಜಿದ್''ಗಳಲ್ಲಿ ಸೇರಿವೆ.<ref>ಪ್ರೇಂಜ್, ಸೆಬಾಸ್ಟಿಯನ್ R. ''ಮಾನ್ಸೂನ್ ಇಸ್ಲಾಂ: ಮಧ್ಯಕಾಲೀನ ಮಲಬಾರ್ ಕರಾವಳಿಯಲ್ಲಿ ವ್ಯಾಪಾರ ಮತ್ತು ನಂಬಿಕೆ.'' ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮುದ್ರಣಾಲಯ, 2018. Pg. 98.</ref> [[ಮಲಿಕ್ ದಿನಾರ್]] ಅವರು [[ಕಾಸರಗೋಡು]]ನ [[ಥಲಂಗರ]]ದಲ್ಲಿ ನಿಧನರಾದರು ಎಂದು ನಂಬಲಾಗಿದೆ.<ref name="ch">Pg 58, [[ಕೇರಳ]]ದ ಸಾಂಸ್ಕೃತಿಕ ಪರಂಪರೆ: ಒಂದು ಪರಿಚಯ, A. ಶ್ರೀಧರ ಮೇನನ್, ಈಸ್ಟ್-ವೆಸ್ಟ್ ಪಬ್ಲಿಕೇಷನ್ಸ್, 1978</ref>
ಇವುಗಳಲ್ಲಿ ಹೆಚ್ಚಿನವು {{clarify|date=ಜುಲೈ 2023}} ಎಳಿಮಲದ ಹಿಂದಿನ ಪ್ರದೇಶದಲ್ಲಿವೆ. ಕೊಯಿಲಾಂಡಿ ಜುಮುಆ ಮಸೀದಿಯು 10ನೇ ಶತಮಾನ ಕ್ರಿ.ಶ.ಯ ಹಿಂದಿನ ''[[ವಟ್ಟೆಳುತ್ತು]]'' ಮತ್ತು [[ಗ್ರಂಥ ಲಿಪಿ]]ಗಳ ಮಿಶ್ರಣದಲ್ಲಿ ಬರೆಯಲಾದ [[ಹಳೆಯ ಮಲಯಾಳಂ]] ಶಾಸನವನ್ನು ಹೊಂದಿದೆ.<ref name="Okay">ಐಯರ್, K. V. ಸುಬ್ರಹ್ಮಣ್ಯ (ಸಂಪಾದಕರು), ''ದಕ್ಷಿಣ ಭಾರತದ ಶಾಸನಗಳು.'' VIII, ಸಂ. 162, ಮದ್ರಾಸ್: ಭಾರತ ಸರ್ಕಾರ, ಕೇಂದ್ರ ಪ್ರಕಟಣಾ ವಿಭಾಗ, ಕಲ್ಕತ್ತಾ, 1932. p. 69.</ref> ಇದು [[ಹಿಂದೂ]] ರಾಜ (ಭಾಸ್ಕರ ರವಿ) ಕೇರಳದ [[ಮುಸ್ಲಿಮ್]]ರಿಗೆ ನೀಡಿದ ಆಶ್ರಯವನ್ನು ದಾಖಲಿಸುವ ಅಪರೂಪದ ಉಳಿದಿರುವ ದಾಖಲೆಯಾಗಿದೆ.<ref name="Okay"/>
====ಮುಷಿಕ ವಂಶ====
{{Main|ಮುಷಿಕ ಸಾಮ್ರಾಜ್ಯ}}
[[File:Anantapura Lake Temple.jpg|left|thumbnail|[[ಕುಂಬಳ]]ದ ಅನಂತಪುರದಲ್ಲಿರುವ [[ಅನಂತಪುರ ಸರೋವರ ದೇವಾಲಯ|ಅನಂತಪದ್ಮನಾಭಸ್ವಾಮಿ ದೇವಾಲಯ]]]]
8ನೇ ಶತಮಾನದ ವೇಳೆಗೆ, ದಕ್ಷಿಣ ಭಾರತದ ರಾಜಕೀಯ ವಾತಾವರಣವು ಸಾಕಷ್ಟು ನಾಟಕೀಯವಾಗಿ ಬದಲಾಗಿತ್ತು, ಏಕೆಂದರೆ ಸ್ಥಾಯೀಕೃತ ಕೃಷಿ ಶೋಷಣೆಯ ಆಧಾರದ ಮೇಲೆ ಹೊಸ ರಾಜಕೀಯ ಸಂಸ್ಕೃತಿಯು ಈ ಪ್ರದೇಶದಲ್ಲಿ ಬೇರುಬಿಟ್ಟಿತು. ಭಾರತೀಯ ಉಪಖಂಡದ ಇತರ ಭಾಗಗಳಲ್ಲಿರುವಂತೆ, ಬ್ರಾಹ್ಮಣ್ಯವು ಈ ಹೊಸದಾಗಿ ಹೊರಹೊಮ್ಮುತ್ತಿರುವ ಪ್ರಾದೇಶಿಕ, ಪ್ರಾಥಮಿಕವಾಗಿ ಕೃಷಿ ಆಧಾರಿತ ರಾಜ್ಯಗಳಿಗೆ ಸೈದ್ಧಾಂತಿಕ ಬೆಂಬಲವನ್ನು ಒದಗಿಸಿತು.
1075 ಕ್ರಿ.ಶ.ದ ಹಳೆಯ ಮಲಯಾಳಂ ಶಾಸನವನ್ನು ([[ರಾಮಂತಲಿ ಶಾಸನಗಳು]]), [[ಮಂಗಳೂರು]]ನ [[ಅಳುಪ ವಂಶ]]ದ ಆಡಳಿತಗಾರ ರಾಜ ಕುಂದ ಅಳುಪನನ್ನು ಉಲ್ಲೇಖಿಸುತ್ತದೆ, ಇದನ್ನು [[ಕಣ್ಣೂರು|ಕನ್ನನೋರ್]] ಬಳಿಯ [[ಎಳಿಮಲ]]ದಲ್ಲಿ ([[ಮುಷಿಕ ವಂಶ]]ದ ಹಿಂದಿನ ಪ್ರಧಾನ ಕಚೇರಿ) ಕಾಣಬಹುದು.<ref>ನಾರಾಯಣನ್, M. G. S. ''ಕೇರಳದ ಪೆರುಮಾಳ್ಗಳು.'' ತ್ರಿಸೂರ್ (ಕೇರಳ): ಕಾಸ್ಮೊಬುಕ್ಸ್, 2013. 483.</ref> [[ಕಣ್ಣೂರು]]ನಲ್ಲಿರುವ [[ಮಾದಾಯಿ ಪಲ್ಲಿ|ಮಾದಾಯಿ ಮಸೀದಿ]]ಯಲ್ಲಿನ ತಾಮ್ರದ ಹಲಗೆಯ ಮೇಲಿನ [[ಅರೇಬಿಕ್]] ಶಾಸನವು ಅದರ ಸ್ಥಾಪನೆಯ ವರ್ಷವನ್ನು 1124 ಕ್ರಿ.ಶ. ಎಂದು ದಾಖಲಿಸುತ್ತದೆ.<ref name="Madayi">{{cite book
| author = ಚಾರ್ಲ್ಸ್ ಅಲೆಕ್ಸಾಂಡರ್ ಇನ್ನೆಸ್ | year=1908
| title= ಮದ್ರಾಸ್ ಡಿಸ್ಟ್ರಿಕ್ಟ್ ಗೆಜೆಟಿಯರ್ಸ್ ಮಲಬಾರ್ (ಸಂಪುಟ-I) | publisher=ಮದ್ರಾಸ್ ಸರ್ಕಾರಿ ಮುದ್ರಣಾಲಯ |pages=423–424
| url= https://archive.org/details/in.ernet.dli.2015.358941/mode/2up
}}</ref> 11ನೇ ಶತಮಾನದಲ್ಲಿ [[ಅಥುಲ]] ಬರೆದ ''[[ಮುಷಿಕ-ವಂಶ]] ಮಹಾಕಾವ್ಯ''ವು ಆ ಹಂತದವರೆಗಿನ [[ಮುಷಿಕ ಸಾಮ್ರಾಜ್ಯ|ಮುಷಿಕ ರಾಜಮನೆತನ]]ದ ದಾಖಲಿತ ಭೂತಕಾಲದ ಮೇಲೆ ಬೆಳಕು ಚೆಲ್ಲುತ್ತದೆ.<ref name="Kola Swaroopam"/>
9ನೇ ಮತ್ತು 12ನೇ ಶತಮಾನಗಳ ನಡುವೆ, "ಮುಷಿಕ" ಎಂಬ ರಾಜವಂಶವು ಉತ್ತರ ಮಲಬಾರ್ನ ಚಿರಕ್ಕಲ್ ಪ್ರದೇಶಗಳನ್ನು ನಿಯಂತ್ರಿಸಿತು (ವೈನಾಡ್-ಟೆಲ್ಲಿಚೇರಿ ಪ್ರದೇಶವು ಎರಡನೇ ಚೇರ ಸಾಮ್ರಾಜ್ಯದ ಭಾಗವಾಗಿತ್ತು). ಮುಷಿಕರು ಬಹುಶಃ ಎಳಿ ಮಲದ ನನ್ನನನ ಪ್ರಾಚೀನ ರಾಜಮನೆತನದ ವಂಶಸ್ಥರಾಗಿದ್ದರು ಮತ್ತು ಬಹುಶಃ ಚೇರರ ಸಾಮಂತರಾಗಿದ್ದರು. ಮುಷಿಕರು ಚೇರರ ಅಡಿಯಲ್ಲಿರಲಿಲ್ಲ ಎಂಬ ಅಭಿಪ್ರಾಯವನ್ನು ಕೆಲವು ವಿದ್ವಾಂಸರು ವ್ಯಕ್ತಪಡಿಸಿದ್ದಾರೆ, ಏಕೆಂದರೆ ಮುಷಿಕನ ಆಡಳಿತಗಾರನು ಪ್ರಸಿದ್ಧ ತೆರಿಸಪ್ಪಲ್ಲಿ ಮತ್ತು ಯಹೂದಿ ತಾಮ್ರ ಫಲಕಗಳಲ್ಲಿ ಎರಲ್ನಾಡು ಮತ್ತು ವಲ್ಲುವನಾಡು ಆಡಳಿತಗಾರರೊಂದಿಗೆ ಸಹಿ ಮಾಡುವವರಲ್ಲಿ ಕಾಣಿಸಿಕೊಳ್ಳುವುದಿಲ್ಲ. 11ನೇ ಶತಮಾನದವರೆಗೆ, ಮುಷಿಕ ರಾಜರು ಪಿತೃಪ್ರಧಾನ ಉತ್ತರಾಧಿಕಾರ ವ್ಯವಸ್ಥೆಯನ್ನು ಅನುಸರಿಸಿದರು, ಮತ್ತು ನಂತರ ಅವರು ಕ್ರಮೇಣ ಮಾತೃಪ್ರಧಾನ ವ್ಯವಸ್ಥೆಗೆ ಬದಲಾಯಿಸಿದರು. ಅವರ ಪ್ರಯಾಣ ಪುಸ್ತಕದಲ್ಲಿ (''[[ಇಲ್ ಮಿಲಿಯೋನ್]]''), [[ಮಾರ್ಕೊ ಪೊಲೊ]] 1290ರ ದಶಕದ ಮಧ್ಯಭಾಗದಲ್ಲಿ ಈ ಪ್ರದೇಶಕ್ಕೆ ತನ್ನ ಭೇಟಿಯನ್ನು ವಿವರಿಸಿದ್ದಾರೆ. ಇತರ ಸಂದರ್ಶಕರಲ್ಲಿ ಬೌದ್ಧ ಯಾತ್ರಿಕ [[ಫಾಕ್ಸಿಯಾನ್]] ಮತ್ತು [[ಟ್ಯಾಂಜಿಯರ್ಸ್]]ನ ಬರಹಗಾರ ಮತ್ತು ಇತಿಹಾಸಕಾರ [[ಇಬ್ನ್ ಬತೂತಾ]] ಸೇರಿದ್ದಾರೆ.
''[[ಮುಷಿಕ-ವಂಶ]]'', ಅಥುಲ ಬರೆದ ಸಂಸ್ಕೃತ ಕಾವ್ಯವು, ವಿಕ್ರಮ ರಾಮ, ಜಯಮಣಿ, ವಲ್ಲಭ II ಮತ್ತು ಶ್ರೀಕಂಠನಂತಹ ಹಲವಾರು ಮುಷಿಕ ರಾಜರನ್ನು ವಿವರಿಸುತ್ತದೆ. ಅಥುಲನು ಕ್ರಿ.ಶ. 11ನೇ ಶತಮಾನದ ಅಂತ್ಯದ ವೇಳೆಗೆ ಆಳಿದ ರಾಜ ಶ್ರೀಕಂಠನ ಆಸ್ಥಾನ ಕವಿಯಾಗಿದ್ದನು.
ರಾಜ ವಿಕ್ರಮ ರಾಮನು ಮಲಬಾರ್ ಕರಾವಳಿಯಲ್ಲಿ ಭೀಕರ ಸಮುದ್ರ ಸವೆತದಿಂದ ಪ್ರಸಿದ್ಧ ಬೌದ್ಧ ವಿಹಾರವಾದ ಶ್ರೀ ಮೂಲವಾಸವನ್ನು ಉಳಿಸಿದನು ಎಂದು ಹೇಳಲಾಗುತ್ತದೆ. ರಾಜಕುಮಾರ ವಲ್ಲಭ II ರನ್ನು ಚೋಳ ಆಡಳಿತಗಾರ ಕುಲೋತ್ತುಂಗನ ಆಕ್ರಮಣದ ಸಮಯದಲ್ಲಿ ಚೇರ ಪಡೆಗಳಿಗೆ ಸಹಾಯ ಮಾಡಲು ರಾಜ ಜಯಮಣಿಯು ಕಳುಹಿಸಿದನು. ಆದಾಗ್ಯೂ, ಅವನು ಚೇರ ಸೈನ್ಯದೊಂದಿಗೆ ಸೇರುವ ಮೊದಲು, ಅವನು ತನ್ನ ತಂದೆಯ ಮರಣದ ಸುದ್ದಿಯನ್ನು ಕೇಳಿದನು ಮತ್ತು ತನ್ನ ಶತ್ರುಗಳಿಂದ ಮುಷಿಕ ಸಿಂಹಾಸನದ ಅಪಹರಣವನ್ನು ತಡೆಗಟ್ಟಲು ರಾಜಧಾನಿಗೆ ಮರಳಿದನು. ರಾಜಧಾನಿಯನ್ನು ತಲುಪಿದ ನಂತರ, ಅವನು ತನ್ನ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಸಿಂಹಾಸನವನ್ನು ಏರಿದನು. ವಲ್ಲಭ II ಕಿಲ್ಲಾ ನದಿಯ ಬಾಯಿಯಲ್ಲಿ ಮರಾಹಿ (ಮಾದಾಯಿ) ಬಂದರು ಮತ್ತು ವಲಭ ಪಟ್ಟಣಂ (ವಲಿಯಪ್ಟಂ) ಬಂದರನ್ನು ಸ್ಥಾಪಿಸಿದನು. ವಲಭ ಪಟ್ಟಣಂ ನಗರವು ಎತ್ತರದ ಗೋಪುರಗಳು ಮತ್ತು ಎತ್ತರದ ಗೋಡೆಗಳಿಂದ ರಕ್ಷಿಸಲ್ಪಟ್ಟಿತು. ಅವನು ಅರೇಬಿಯನ್ ಸಮುದ್ರದಲ್ಲಿ ಲಕ್ಷದ್ವೀಪ, ಮಿನಿಕಾಯ್ ಮತ್ತು ಅಮಿಂದಿವಿ ದ್ವೀಪಗಳನ್ನು ಸಹ ಸ್ವಾಧೀನಪಡಿಸಿಕೊಂಡನು. ಶ್ರೀಕಂಠ (ರಾಜ ಧರ್ಮ ಎಂದೂ ಕರೆಯಲಾಗುತ್ತದೆ), ಅವನ ಕಿರಿಯ ಸಹೋದರ, ವಲ್ಲಭ II ರ ನಂತರ ಸಿಂಹಾಸನವನ್ನು ಏರಿದನು.
''ಮುಷಿಕ ವಂಶ''ದ ಪ್ರಕಾರ, ರಾಮ ಘಟ ಮುಷಿಕನು ಕೋಲ ಸ್ವರೂಪಂನ ವಂಶಾವಳಿಯನ್ನು ಸ್ಥಾಪಿಸಿದನು.<ref>ಮುಷಿಕವಂಶಂ. ರಾಘವನ್ ಪಿಳ್ಳ (ಸಂಪಾದಕರು), ಮುಷಿಕವಂಶಂ, 26, 268</ref> ಹೆಚ್ಚುವರಿಯಾಗಿ, 929 ಕ್ರಿ.ಶ.ದ ಶಾಸನವು ''ಮುಷಿಕ ವಂಶ''ದಲ್ಲಿ ಕಾಣಿಸಿಕೊಳ್ಳುವ ಆಡಳಿತಗಾರ ವಿಕ್ರಮ ರಾಮನೊಂದಿಗೆ ಗುರುತಿಸಬಹುದಾದ ವಿಕ್ರಮ ರಾಮನನ್ನು ಉಲ್ಲೇಖಿಸುತ್ತದೆ.<ref>ಕೇರಳ ಚರಿತ್ರಾತಿಂಟೆ ಅಡಿಸ್ಥಾನ ಶಿಲಗಳು (ಮಲಯಾಳಂ) M. G. S. ನಾರಾಯಣನ್, (ಕೋಝಿಕ್ಕೋಡ್: ಲಿಪಿ ಪಬ್ಲಿಕೇಷನ್ಸ್, 2000), 85-99</ref> 10ನೇ ಶತಮಾನ ಕ್ರಿ.ಶ.ದ ಮತ್ತೊಂದು ಶಾಸನವು "ರಾಮ ಘಟ ಮುವರ್" ಎಂಬ ಬಿರುದನ್ನು ಹೊಂದಿದ ಮುಖ್ಯಸ್ಥ ಉದಯ ವರ್ಮನನ್ನು ಉಲ್ಲೇಖಿಸುತ್ತದೆ — ಇದು ಮುಷಿಕ ರಾಜರು ಬಳಸಿದ ವಿಶೇಷಣವಾಗಿದೆ. ತಿರುವಟ್ಟೂರು ದೇವಾಲಯದ ಶಾಸನವು ''ಮುಷಿಕ ವಂಶ''ದಲ್ಲಿ 109ನೇ ಆಡಳಿತಗಾರನಾಗಿ ಕಾಣಿಸಿಕೊಳ್ಳುವ ರಾಜನೊಂದಿಗೆ ಗುರುತಿಸಬಹುದಾದ ಎರಮನ್ ಚೇಮನಿ (ರಾಮ ಜಯಮಣಿ)ಯನ್ನು ಉಲ್ಲೇಖಿಸುತ್ತದೆ.<ref name = "Kol25">ಮುಷಿಕವಂಶದ ಇತಿಹಾಸ N. P. ಉನ್ನಿ, (ತಿರುವನಂತಪುರಂ: ಕಾಲೇಜ್ ಬುಕ್ ಹೌಸ್, 1978), 14</ref>
ಮುಷಿಕ ಕುಟುಂಬವು [[ವಿಷ್ಣು ಪುರಾಣ]]ದಂತಹ ಉಳಿದಿರುವ ಪೌರಾಣಿಕ ಭಾರತೀಯ ಗ್ರಂಥಗಳಲ್ಲಿ<ref>{{cite book|url=https://books.google.com/books?id=3kCVg44-xRAC&q=%22Vishnu+Purana%22+%22Mushika%22&pg=PA171 |title=ವಿಷ್ಣು ಪುರಾಣ - ಗೂಗಲ್ ಪುಸ್ತಕಗಳು |date= April 2009|access-date=2011-09-13|isbn=9780559054679 |last1=ವಿಲ್ಸನ್ |first1=ಹೊರೇಸ್ ಹೇಮನ್ |publisher=ಬಿಬ್ಲಿಯೋಬಜಾರ್ }}</ref> ಮತ್ತು [[ಸ್ಟ್ರಾಬೋ]]ನಂತಹ ಗ್ರೀಕ್ ಖಾತೆಗಳಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ.<ref>{{cite book|url=https://books.google.com/books?id=YoAwor58utYC&q=Mushika+Strabo&pg=PA45 |title=ನಂದ ಮತ್ತು ಮೌರ್ಯರ ಯುಗ - ಗೂಗಲ್ ಪುಸ್ತಕಗಳು |access-date=2011-09-13|isbn=9788120804661 |year=1988 |publisher=ಮೋತಿಲಾಲ್ ಬನಾರ್ಸಿದಾಸ್ }}</ref> ಕೊಲತ್ತಿರಿಗಳನ್ನು ಪ್ರಸಿದ್ಧ "[[ಕೇರಳೋಲ್ಪತ್ತಿ]]"ಯು ವಡಕ್ಕನ್ ಪೆರುಮಾಳ್ಗಳು ("ಉತ್ತರದ ರಾಜರು") ಎಂದು ಹೊಗಳಿದೆ.<ref name = "Kol95">ವರಿಯರ್, ಕೇರಳೋಲ್ಪತ್ತಿ ಗ್ರಂಥವರಿ, 51</ref>
===ಕೊಲತ್ತುನಾಡಿನ (ಕನ್ನನೋರ್) ಏರಿಕೆ===
[[File:Mappila Bay Fishing Harbour3.jpg|thumbnail|[[ಅಯಿಕ್ಕರ]]ದಲ್ಲಿನ [[ಮಾಪ್ಪಿಲಾ ಬೇ]] ಬಂದರು. ಒಂದು ಕಡೆ [[ಸೇಂಟ್ ಏಂಜೆಲೋ ಕೋಟೆ]] (1505 ರಲ್ಲಿ ನಿರ್ಮಿಸಲಾಯಿತು) ಮತ್ತು ಇನ್ನೊಂದು ಕಡೆ [[ಅರಕ್ಕಲ್ ಸಾಮ್ರಾಜ್ಯ|ಅರಕ್ಕಲ್ ಅರಮನೆ]] ಇದೆ.]]
[[File:City of Cannanore, 1572.jpg|thumbnail|1572 ರಲ್ಲಿ ಕಣ್ಣೂರಿನ ಭಾವಚಿತ್ರ, [[ಜಾರ್ಜ್ ಬ್ರೌನ್]] ಮತ್ತು [[ಫ್ರಾನ್ಸ್ ಹೋಗೆನ್ಬರ್ಗ್]] ಅವರ ''ಸಿವಿಟೇಟ್ಸ್ ಆರ್ಬಿಸ್ ಟೆರಾರಮ್'' ಸಂಪುಟ I ನಿಂದ]]
[[File:Cannonore fort & Bay'; a watercolor by John Johnston, c.1795-1801.jpg|thumbnail|ಕಣ್ಣೂರು ಕೋಟೆ ಮತ್ತು ಕೊಲ್ಲಿ; ಜಾನ್ ಜಾನ್ಸ್ಟನ್ (1795–1801) ರ ಜಲವರ್ಣ ಚಿತ್ರ]]
ಕೊಲತ್ತುನಾಡು ಎಂಬ ರಾಜ್ಯದ ಸಾಮಾಜಿಕ-ಸಾಂಸ್ಕೃತಿಕ ವಿಶಿಷ್ಟತೆಯು 12ನೇ ಶತಮಾನದ ಆರಂಭದ ವೇಳೆಗೆ ಎರಡನೇ ಚೇರರು ಕಣ್ಮರೆಯಾದ ನಂತರವೇ ಹೆಚ್ಚು ವಿಶಿಷ್ಟವಾಯಿತು.<ref name = "Kol77">ನಾರಾಯಣನ್, ದಕ್ಷಿಣ ಭಾರತದ ಇತಿಹಾಸದಲ್ಲಿ ಮರು-ವ್ಯಾಖ್ಯಾನಗಳು, 6-10</ref> ಭಾರತೀಯ ಮಾನವಶಾಸ್ತ್ರಜ್ಞ [[A. ಅಯ್ಯಪ್ಪನ್|ಅಯಿನಪಲ್ಲಿ ಅಯ್ಯಪ್ಪನ್]] ಅವರು [[ತುಳುನಾಡು]]ನ [[ಬಂಟ್ (ಸಮುದಾಯ)|ಬಂಟ್ ಸಮುದಾಯ]]ದ ಪ್ರಬಲ ಮತ್ತು ಯುದ್ಧೋಚಿತ ಕುಲವನ್ನು ''ಕೋಲ ಬಾರಿ'' ಎಂದು ಕರೆಯಲಾಗುತ್ತಿತ್ತು ಮತ್ತು ಕೊಲತ್ತುನಾಡಿನ ಕೊಲತ್ತಿರಿ ರಾಜನು ಈ ಕುಲದ ವಂಶಸ್ಥನಾಗಿದ್ದನು ಎಂದು ಹೇಳುತ್ತಾರೆ.<ref name="Aiyappan"/> ಪೋರ್ಚುಗೀಸರ ಆಗಮನದ ಮೊದಲು, [[ಕೋಝಿಕ್ಕೋಡ್|ಕ್ಯಾಲಿಕಟ್]] ಕನ್ನನೋರ್ (ಕೊಲತ್ತುನಾಡ್) ವಿರುದ್ಧ ಹಲವಾರು ಯುದ್ಧಗಳನ್ನು ನಡೆಸಿತು. ಕೊಲತ್ತಿರಿ ರಾಜಮನೆತನದ ಒಬ್ಬ ರಾಜಕುಮಾರನು ದಕ್ಷಿಣ ವೈಸ್ರಾಯ್ ಆಗಿ ಪಂತಲಯಿನಿ ಕೊಲ್ಲಂನಲ್ಲಿ ನೆಲೆಸಿದ್ದನು. ಪಂತಲಯಿನಿ ಕೊಲ್ಲಂ ಮಲಬಾರ್ ಕರಾವಳಿಯ ಪ್ರಮುಖ ಬಂದರಾಗಿತ್ತು. ತನ್ನ ವಿಜಯಗಳ ಸಮಯದಲ್ಲಿ, ಜಾಮೋರಿನ್ ಕನ್ನನೋರ್ಗೆ ಪ್ರಾಥಮಿಕ ಮುನ್ನಡೆಯಾಗಿ ಪಂತಲಯಿನಿ ಕೊಲ್ಲಂ ಅನ್ನು ಆಕ್ರಮಿಸಿಕೊಂಡನು. ಕೊಲತ್ತಿರಿಯು ತಕ್ಷಣವೇ ಕ್ಯಾಲಿಕಟ್ ನಿರ್ದೇಶಿಸಬಹುದಾದ ಯಾವುದೇ ಷರತ್ತುಗಳಿಗೆ ಶರಣಾಗಲು ರಾಯಭಾರಿಗಳನ್ನು ಕಳುಹಿಸಿದನು. ಕನ್ನನೋರ್ ಈಗಾಗಲೇ ಆಕ್ರಮಿಸಲ್ಪಟ್ಟ ಪ್ರದೇಶಗಳನ್ನು ಮತ್ತು ಕೆಲವು ಹಿಂದೂ ದೇವಾಲಯದ ಹಕ್ಕುಗಳನ್ನು ಕ್ಯಾಲಿಕಟ್ಗೆ ಅಧಿಕೃತವಾಗಿ ವರ್ಗಾಯಿಸಿತು.
ವಿದೇಶಿ ಖಾತೆಗಳು ಕೊಲತ್ತುನಾಡಿನ ವಿಶಿಷ್ಟ ಗುರುತನ್ನು ಸಮರ್ಥಿಸುತ್ತವೆ. 12ನೇ ಶತಮಾನದಲ್ಲಿ ಮಲಬಾರ್ ಕರಾವಳಿಗೆ ಭೇಟಿ ನೀಡಿದ [[ಮಾರ್ಕೊ ಪೊಲೊ]] ಈ ಪ್ರದೇಶದ ರಾಜನ ಸ್ವತಂತ್ರ ಸ್ಥಾನಮಾನವನ್ನು ಗಮನಿಸಿದನು.<ref name = "Kol27">ದ ಬುಕ್ ಆಫ್ ಸೆರ್ ಮಾರ್ಕೊ ಪೊಲೊ: ದ ವೆನೆಷಿಯನ್, ಕನ್ಸರ್ನಿಂಗ್ ದ ಕಿಂಗ್ಡಮ್ಸ್ ಅಂಡ್ ಮಾರ್ವೆಲ್ಸ್ ಆಫ್ ದ ಈಸ್ಟ್, III, 3ನೇ ಆವೃತ್ತಿ. ಸಂ. [[ಹೆನ್ರಿ ಯೂಲ್]] ಮತ್ತು [[ಹೆನ್ರಿ ಕಾರ್ಡಿಯರ್]] (ಮರುಮುದ್ರಣ, ಆಮ್ಸ್ಟರ್ಡ್ಯಾಮ್: ಫಿಲೋ ಪ್ರೆಸ್, 1975), 385</ref> 14ನೇ ಶತಮಾನದ [[ಇಬ್ನ್ ಬತೂತಾ]]ನ ನಿರೂಪಣೆಯು ಈ ಪ್ರದೇಶದ ಆಡಳಿತಗಾರನು [[ಬಾಲಿಯಾ ಪಟ್ಟಣಂ]] ಎಂದು ಕರೆಯಲ್ಪಡುವ ನಗರದಲ್ಲಿ ವಾಸಿಸುತ್ತಿದ್ದನೆಂದು ಉಲ್ಲೇಖಿಸುತ್ತದೆ.<ref name = "Kol28">ಇಬ್ನ್ ಬತೂತಾನ ರೆಹ್ಲಾ (ಭಾರತ, ಮಾಲ್ಡೀವ್ ದ್ವೀಪಗಳು ಮತ್ತು ಸಿಲೋನ್), ಅನುವಾದ ಮತ್ತು ವ್ಯಾಖ್ಯಾನ ಮಹ್ದಿ ಹುಸೇನ್ ಅವರಿಂದ (ಬರೋಡ: ಓರಿಯೆಂಟಲ್ ಇನ್ಸ್ಟಿಟ್ಯೂಟ್, 1953), 186</ref> ಇದು ಈ ಸಮಯದ ವೇಳೆಗೆ, ಕೊಲತ್ತುನಾಡಿನ ರಾಜಧಾನಿಯು ಎಳಿಲ್ ಮಲದಿಂದ ಬಾಲಿಯಾ ಪಟ್ಟಣಂಗೆ ಬದಲಾಗಿತ್ತು, ಇದು ಎಳಿಲ್ ಮಲದ ದಕ್ಷಿಣಕ್ಕೆ ಇರುವ ಪಟ್ಟಣವಾಗಿದೆ. 16ನೇ ಶತಮಾನದಲ್ಲಿ, ಪೋರ್ಚುಗೀಸ್ ಅಧಿಕಾರಿ ಡುವಾರ್ಟೆ ಬಾರ್ಬೋಸಾ ಕೂಡ ಕನ್ನನೋರ್ ರಾಜನ ನಿವಾಸವಾಗಿ ಬಾಲಿಯಾ ಪಟ್ಟಣಂ ("ಬಾಲಿಯಾ ಪಟಾಮ್" ಯುರೋಪಿಯನ್ ದಾಖಲೆಗಳಲ್ಲಿ) ಅನ್ನು ಉಲ್ಲೇಖಿಸುತ್ತಾನೆ.<ref name = "Kol3"/>
ಕ್ರಿ.ಶ. 16ನೇ ಶತಮಾನದವರೆಗೆ, [[ಕಾಸರಗೋಡು]] ಪಟ್ಟಣವು [[ಮಲಯಾಳಂ]]ನಲ್ಲಿ ''ಕನ್ಹಿರಕೋಡ್'' (ಬಹುಶಃ, 'ಕನ್ಹಿರ ಮರಗಳ ನಾಡು' ಎಂಬ ಅರ್ಥದಿಂದ) ಎಂದು ಕರೆಯಲ್ಪಡುತ್ತಿತ್ತು.<ref name="Kanhirakode">{{cite book
| author = S. ಮುಹಮ್ಮದ್ ಹುಸೇನ್ ನೈನಾರ್ | year=1942
| title= ತುಹ್ಫತ್-ಅಲ್-ಮುಜಾಹಿದಿನ್: ಅರೇಬಿಕ್ ಭಾಷೆಯಲ್ಲಿನ ಐತಿಹಾಸಿಕ ಕೃತಿ | publisher=ಮದ್ರಾಸ್ ವಿಶ್ವವಿದ್ಯಾಲಯ
| url= https://archive.org/details/Tuhfat-al-MujahidinAnHistoricalWorkInTheArabicLanguage
}}</ref> [[ಕುಂಬಳ]]ದ ''ಮೈಪಾಡಿ ಅರಮನೆ''ಯಿಂದ [[ಪಯಸ್ವಿನಿ|ಚಂದ್ರಗಿರಿ ನದಿ]] ಮತ್ತು [[ನೇತ್ರಾವತಿ ನದಿ]] (ಪ್ರಸ್ತುತ [[ಮಂಜೇಶ್ವರ]] ಮತ್ತು [[ಕಾಸರಗೋಡು]] ತಾಲೂಕುಗಳು ಸೇರಿದಂತೆ) ನಡುವಿನ ದಕ್ಷಿಣ [[ತುಳುನಾಡು]] ಭೂಮಿಯನ್ನು ಆಳಿದ [[ಕುಂಬಳ]] ರಾಜವಂಶವು [[ವಿಜಯನಗರ ಸಾಮ್ರಾಜ್ಯ]]ದ [[ಕನ್ನಡ|ಕರ್ನಾಟಕ]] ವಿಜಯಗಳ ಮೊದಲು [[ಉತ್ತರ ಮಲಬಾರ್]]ನ ಕೊಲತ್ತುನಾಡು ಸಾಮ್ರಾಜ್ಯಕ್ಕೆ ಸಾಮಂತರಾಗಿದ್ದರು.<ref>{{cite book
| author = M. ವಿಜಯಾನುನ್ನಿ
| title= 1981 ಜನಗಣತಿ ಕೈಪಿಡಿ- ಕಾಸರಗೋಡು ಜಿಲ್ಲೆ | publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5757/1/51134_1981_KAS.pdf
}}</ref> ಕುಂಬಳ ರಾಜವಂಶವು [[ಮಲಯಾಳಿ]] [[ನಾಯರ್]]ಗಳು ಮತ್ತು [[ತುಳುವ ಬ್ರಾಹ್ಮಣ]]ರ ಮಿಶ್ರ ವಂಶಾವಳಿಯನ್ನು ಹೊಂದಿತ್ತು.<ref name="askh">{{cite book |last1=ಶ್ರೀಧರ ಮೇನನ್ |first1=A. |title=''ಕೇರಳ ಚರಿತ್ರಂ'' |date=January 2007 |publisher=DC Books |location=ಕೊಟ್ಟಾಯಂ |isbn=978-81-264-1588-5 |edition=2007 |url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |access-date=19 July 2020}}</ref> ಅವರು ಕೇರಳದ [[ಚೇರಮನ್ ಪೆರುಮಾಳ್ಳ ದಂತಕಥೆ|ಚೇರಮನ್ ಪೆರುಮಾಳ್ಳ]]ರಿಂದ ತಮ್ಮ ಮೂಲವನ್ನು ಹೇಳಿಕೊಂಡರು.<ref name="askh"/> [[ಫ್ರಾನ್ಸಿಸ್ ಬುಕಾನನ್-ಹ್ಯಾಮಿಲ್ಟನ್]] ಕುಂಬಳ ರಾಜವಂಶದ ಪದ್ಧತಿಗಳು ಸಮಕಾಲೀನ [[ಮಲಯಾಳಿ]] ರಾಜರ ಪದ್ಧತಿಗಳನ್ನು ಹೋಲುತ್ತವೆ ಎಂದು ಹೇಳುತ್ತಾರೆ, ಆದರೂ ಕುಂಬಳವು [[ತುಳುನಾಡು]]ನ ಅತ್ಯಂತ ದಕ್ಷಿಣದ ಪ್ರದೇಶವೆಂದು ಪರಿಗಣಿಸಲ್ಪಟ್ಟಿತು.<ref name="askh"/> 17ನೇ ಶತಮಾನದಲ್ಲಿ, ಕಣ್ಣೂರು ಮಲಬಾರ್ ಪ್ರದೇಶದಲ್ಲಿ ಏಕೈಕ [[ಮುಸ್ಲಿಮ್]] ಸುಲ್ತಾನೇಟಿನ ರಾಜಧಾನಿ ನಗರವಾಗಿತ್ತು - [[ಅರಕ್ಕಲ್]] - ಇದು ಕಣ್ಣೂರು ನಗರದ ಜೊತೆಗೆ [[ಲಕ್ಷದ್ವೀಪ]] ದ್ವೀಪಗಳನ್ನೂ ಆಳಿತು.<ref name=anathapuri>{{Cite web|url=http://www.ananthapuri.com/kerala-history.asp?page=muslim|archive-url=https://web.archive.org/web/20120605222957/http://ananthapuri.com/kerala-history.asp?page=muslim|url-status=dead|title=ಅರಕ್ಕಲ್ ರಾಜಮನೆತನ|archive-date=5 June 2012}}</ref>
[[ಕೋಝಿಕ್ಕೋಡ್]] ಬಂದರು ಮಧ್ಯಕಾಲೀನ ಕೇರಳ ಕರಾವಳಿಯಲ್ಲಿ ಉತ್ತಮ ಆರ್ಥಿಕ ಮತ್ತು ರಾಜಕೀಯ ಸ್ಥಾನವನ್ನು ಹೊಂದಿತ್ತು, ಆದರೆ [[ಕಣ್ಣೂರು]], [[ಕೊಲ್ಲಂ]], ಮತ್ತು [[ಕೊಚ್ಚಿ]]ಗಳು ಪ್ರಪಂಚದ ವಿವಿಧ ಭಾಗಗಳಿಂದ ವ್ಯಾಪಾರಿಗಳು ಸೇರುವ ವಾಣಿಜ್ಯಿಕವಾಗಿ ಪ್ರಮುಖ ದ್ವಿತೀಯ ಬಂದರುಗಳಾಗಿದ್ದವು.<ref name="Malekandathil">''ದ ಪೋರ್ಚುಗೀಸ್, ಇಂಡಿಯನ್ ಓಷನ್ ಅಂಡ್ ಯುರೋಪಿಯನ್ ಬ್ರಿಜ್ಹೆಡ್ಸ್ 1500–1800''. ಪ್ರೊ. K. S. ಮ್ಯಾಥ್ಯೂ ಗೌರವಾರ್ಥ ಸಂಪುಟ (2001). ಸಂಪಾದಕರು: ಪಿಯಸ್ ಮಾಲೆಕಂಡತಿಲ್ ಮತ್ತು T. ಜಮಾಲ್ ಮೊಹಮ್ಮದ್. ಫಂಡಕೋನ್ ಒರಿಯೆಂಟ್. MESHAR (ಕೇರಳ) ನ ಸಾಮಾಜಿಕ ವಿಜ್ಞಾನ ಮತ್ತು ಮಾನವಿಕ ಸಂಶೋಧನಾ ಸಂಸ್ಥೆ</ref> ಪೋರ್ಚುಗೀಸರು [[ಶೋಧನೆಯ ಯುಗ]]ದಲ್ಲಿ 1498 ರಲ್ಲಿ [[ಕಪ್ಪಾಡ್]] [[ಕೋಝಿಕ್ಕೋಡ್]]ಗೆ ಆಗಮಿಸಿದರು, ಹೀಗಾಗಿ [[ಯುರೋಪ್]] ನಿಂದ [[ಭಾರತ]]ಕ್ಕೆ ನೇರ ಸಮುದ್ರ ಮಾರ್ಗವನ್ನು ತೆರೆದರು.<ref>DC Books, ಕೊಟ್ಟಾಯಂ (2007), A. ಶ್ರೀಧರ ಮೇನನ್, ಕೇರಳ ಇತಿಹಾಸದ ಸಮೀಕ್ಷೆ</ref> ಕಣ್ಣೂರಿನ [[ಸೇಂಟ್ ಏಂಜೆಲೋ ಕೋಟೆ]]ಯನ್ನು 1505 ರಲ್ಲಿ ಭಾರತದ ಮೊದಲ ಪೋರ್ಚುಗೀಸ್ ವೈಸ್ರಾಯ್ ಡೊಮ್ [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] ನಿರ್ಮಿಸಿದರು.
==ಆಡಳಿತ==
[[File:Minister Kuruppu's Arabic letter to da Gama (1524).jpg|thumb|[[ಕೊಲತ್ತಿರಿ|ಕೊಲತ್ತಿರಿ ರಾಜ]]ನ ಮಂತ್ರಿ ಕುರುಪ್ಪು ಅವರ [[ವಾಸ್ಕೋ ಡಿ ಗಾಮಾ]]ಗೆ ಬರೆದ [[ಅರೇಬಿಕ್]] ಪತ್ರ (1524)|235x235px]]
ಕೊಲತ್ತಿರಿಯ ಮೂಲ ಸಾಮ್ರಾಜ್ಯದ ರಾಜಕೀಯ ಪ್ರಭುತ್ವವು ಕೊಲತ್ತಿರಿ ಕುಟುಂಬದ ವಿವಿಧ ಮಾತೃಪ್ರಧಾನ-ವಿಭಾಗಗಳ ಉದ್ದಕ್ಕೂ ವಿಭಜಿಸಲ್ಪಟ್ಟಿತು ಮತ್ತು ಅನುಕ್ರಮವಾಗಿ ಕೊಲತ್ತಿರಿ, ತೆಕ್ಕಾಲಂಕೂರ್, ವಡಕ್ಕಾಲಂಕೂರ್, ನಾಲಾಂಕೂರ್, ಮತ್ತು ಅಂಜಾಂಕೂರ್ ಎಂಬ ಭಾಗಗಳು ಅಥವಾ ಕೂರ್-ವಾಝ್ಚ (ಭಾಗ-ಪ್ರಭುತ್ವಗಳು) ಆಡಳಿತಗಾರರನ್ನು ಹೊಂದಿತ್ತು. ಕೊಲತ್ತುನಾಡಿನ ಆಡಳಿತವು ಪ್ರತಿಯೊಂದೂ ಉನ್ನತ ಅಧಿಕಾರಗಳಿಗೆ ಹೋಲುವ ಕಾರ್ಯಗಳನ್ನು ಆದರೆ ಸಣ್ಣ ಪ್ರಮಾಣದಲ್ಲಿ ನಿರ್ವಹಿಸುವ ವಿವಿಧ ಅಧಿಕಾರ ವಿಭಾಗಗಳಾಗಿ ವಿಂಗಡಿಸಲಾಗಿತ್ತು.<ref>ಎಂತುರ್ಡಾಜಿಯ ಕುರಿತು ಉಪನ್ಯಾಸಗಳು A. ಕೃಷ್ಣ ಅಯ್ಯರ್ ಕಲ್ಕತ್ತಾ, 1925.</ref>
ಆಡಳಿತವನ್ನು ಕೊಲತ್ತಿರಿಯ ಅಡಿಯಲ್ಲಿ ಬಾಡಿಗೆದಾರ-ಮುಖ್ಯಸ್ಥರ ಮೂಲಕ ನಡೆಸಲಾಯಿತು. ಇದರಲ್ಲಿ "ನಾಡುವಾಳಿಗಳು", "ದೇಶವಾಳಿಗಳು" ಮತ್ತು "ಮುಖ್ಯಸ್ಥರು" ಎಂದು ಕರೆಯಲ್ಪಡುವ ಗಣ್ಯರು ಸೇರಿದ್ದರು. ನಾಡುವಾಳಿಗಳು, ಅವರು "ನಾಡುಗಳು" ಅಥವಾ ಜಿಲ್ಲೆಗಳ ಮುಖ್ಯಸ್ಥರಾಗಿದ್ದು, 500 - 20,000 ರ ನಾಯರ್ ಸೈನ್ಯಗಳನ್ನು ಮುನ್ನಡೆಸುತ್ತಿದ್ದರು. ಆಡಳಿತ ಕ್ರಮಾನುಗತದಲ್ಲಿ ನಾಡುವಾಳಿಗಳ ಕೆಳಗೆ "ದೇಶಗಳು" ಎಂದು ಕರೆಯಲ್ಪಡುವ ಹಳ್ಳಿಗಳ ಮುಖ್ಯಸ್ಥರಾಗಿದ್ದ ದೇಶವಾಳಿಗಳು ಇದ್ದರು. ಇವು ನಾಡುಗಳ ವಿಭಾಗಗಳಾಗಿದ್ದವು. ದೇಶವಾಳಿಗಳು 100 ರಿಂದ 500 ಜನರ ನಾಯರ್ ಸೈನ್ಯಗಳನ್ನು ಮುನ್ನಡೆಸುತ್ತಿದ್ದರು. ದೇಶವಾಳಿಗಳ ಕೆಳಗೆ ಮುಖ್ಯಸ್ಥರು ಎಂದು ಕರೆಯಲ್ಪಡುವ ಇತರ ಸ್ಥಳೀಯ ಪ್ರಭುಗಳು ಇದ್ದರು. ಆದಾಗ್ಯೂ, ಯಾವುದೇ ಊಳಿಗಮಾನ್ಯ ಸಮಾಜದಲ್ಲಿರುವಂತೆ, ಕೊಲತ್ತಿರಿಗಳು ತಮ್ಮ ರಾಜ್ಯವನ್ನು ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ ಮತ್ತು ಅವರ ದುರ್ಬಲ ಆರ್ಥಿಕ ಸ್ಥಾನದಿಂದಾಗಿ ಕೊಲತ್ತಿರಿಗಳು ರಾಜ್ಯದಲ್ಲಿ ಬಲದ ಬಳಕೆಯನ್ನು ಏಕಸ್ವಾಮ್ಯಗೊಳಿಸಲು ಅಸಮರ್ಥತೆಯು ರಾಜ ಅಧಿಕಾರದ ಬಾಹ್ಯ ನೋಟವು ಹೆಚ್ಚು ಕಡಿಮೆ ನಾಮಮಾತ್ರವಾಗಿ ಉಳಿಯಿತು ಎಂದರ್ಥ.
===ವಿಕೇಂದ್ರೀಕೃತ ರಾಜ್ಯ===
ಕೇರಳೋಲ್ಪತ್ತಿಯಂತಹ ಬ್ರಾಹ್ಮಣ ಗ್ರಂಥಗಳಲ್ಲಿ ಪ್ರಸ್ತುತಪಡಿಸಲಾದ ರಾಜಕೀಯ ವ್ಯವಸ್ಥೆಯ ಆದರ್ಶ ಪ್ರಕಾರ, ಅಲ್ಲಿ ಕೊಲತ್ತಿರಿ ರಾಜನು ಕಾನೂನುಬದ್ಧ ರಾಜಕೀಯ ಅಧಿಕಾರದ ರಕ್ಷಕನಾಗಿ ಪ್ರಸ್ತುತಪಡಿಸಲ್ಪಟ್ಟಿದ್ದಾನೆ, ಮತ್ತು ಈ ಪ್ರದೇಶದಲ್ಲಿ ಅಧಿಕಾರ ಸಂಬಂಧಗಳ ನಿಜವಾದ ಕಾರ್ಯವಿಧಾನದ ನಡುವೆ ಗಮನಾರ್ಹ ವ್ಯತ್ಯಾಸವಿದೆ ಎಂದು ತೋರುತ್ತದೆ.
ಕೊಲತ್ತಿರಿಗಳು ಎಂದಿಗೂ ರಾಜ್ಯದಲ್ಲಿ ಅಧಿಕಾರದ ಏಕಸ್ವಾಮ್ಯವನ್ನು ಚಲಾಯಿಸಲಿಲ್ಲ ಎಂದು ತೋರುತ್ತದೆ. ಅಧಿಕಾರವು ಒಂದು ವಿಕೇಂದ್ರೀಕೃತ, ಹಂಚಿಕೆಯ, ಮತ್ತು ಬಹುತ್ವದ ಘಟಕವಾಗಿತ್ತು. ಕೊಲತ್ತಿರಿಗಳಿಗೆ ಆರೋಪಿಸಲಾದ ರಾಜಕೀಯ ಸ್ಥಾನಮಾನವು ಹೆಚ್ಚು ಕಡಿಮೆ ನಾಮಮಾತ್ರವಾಗಿ ಉಳಿಯಿತು. ಕೊಲತ್ತುನಾಡಿನ ಭೌಗೋಳಿಕ ಲಕ್ಷಣಗಳು ದೊಡ್ಡ ಪ್ರಮಾಣದ ಕೃಷಿ ಹೆಚ್ಚುವರಿಯನ್ನು ಖಾತರಿಪಡಿಸದ ಕಾರಣ ಕೊಲತ್ತಿರಿಗಳು ತಮ್ಮ ಆರ್ಥಿಕ ಸಂಪನ್ಮೂಲ ನೆಲೆಯ ಮಿತಿಗಳಿಂದ ನಿಗದಿಪಡಿಸಿದ ನಿರ್ಬಂಧಗಳೊಳಗೆ ತಮ್ಮ ರಾಜಕೀಯ ಘನತೆಯನ್ನು ಉಳಿಸಿಕೊಳ್ಳಬೇಕಾಯಿತು. ಕೊಲತ್ತುನಾಡಿನ ಸೀಮಿತ ಕೃಷಿ ಆರ್ಥಿಕತೆಯಿಂದ ರೂಪುಗೊಂಡ, ಕೇಂದ್ರೀಕೃತ ರಾಜಕೀಯ ರಚನೆಯು ಹೊರಹೊಮ್ಮುವ ಸಾಧ್ಯತೆಯು ಸೀಮಿತವಾಗಿತ್ತು.<ref name = "Gow90">ಮಲಬಾರ್ ಕರಾವಳಿಯಲ್ಲಿ ಸ್ತ್ರೀ ದೀಕ್ಷಾ ಸಮಾರಂಭಗಳು, ಗಫ್, ಕ್ಯಾಥ್ಲೀನ್ 1955a, ''ದ ಜರ್ನಲ್ ಆಫ್ ದ ರಾಯಲ್ ಆಂಥ್ರೊಪೊಲಾಜಿಕಲ್ ಇನ್ಸ್ಟಿಟ್ಯೂಟ್ ಆಫ್ ಗ್ರೇಟ್ ಬ್ರಿಟನ್ ಅಂಡ್ ಅಯರ್ಲ್ಯಾಂಡ್''.</ref>
ಸೀಮಿತ ಕೃಷಿ ಹೆಚ್ಚುವರಿಯನ್ನು ಬಳಸಿಕೊಳ್ಳುವ ಈ ಸಂಕುಚಿತ ಅವಕಾಶವು ನಿಸ್ಸಂಶಯವಾಗಿ ಕೊಲತ್ತಿರಿಗಳು ಈ ಪ್ರದೇಶದ ಜನರ ಮೇಲೆ ಗಮನಾರ್ಹ ಪ್ರಭಾವವನ್ನು ಚಲಾಯಿಸುವ ಸಾಧ್ಯತೆಗಳನ್ನು ನಿರ್ಬಂಧಿಸಿತು. ಬದಲಾಗಿ, ನಾಯರರ ಪ್ರಬಲ ತರವಾಡುಗಳ ಏರಿಳಿತದ ಕ್ಷೇತ್ರವು ಅವರ ಸ್ವಂತ ಭೂ ಆಸ್ತಿಗಳು ಮತ್ತು ಅವಲಂಬಿತ ಕಾರ್ಮಿಕ-ಸೇವಾ ವರ್ಗಗಳಿಂದ ಸಂಪನ್ಮೂಲಗಳ ಮೇಲೆ ನಿಯಂತ್ರಣವನ್ನು ಚಲಾಯಿಸುತ್ತಿತ್ತು. ಅವರ ದುರ್ಬಲ ಆರ್ಥಿಕ ಸ್ಥಾನದಿಂದಾಗಿ ಕೊಲತ್ತಿರಿಗಳು ರಾಜ್ಯದಲ್ಲಿ ಬಲದ ಬಳಕೆಯನ್ನು ಏಕಸ್ವಾಮ್ಯಗೊಳಿಸಲು ಅಸಮರ್ಥತೆಯು ರಾಜ ಅಧಿಕಾರದ ಬಾಹ್ಯ ನೋಟವು ಹೆಚ್ಚು ಕಡಿಮೆ ನಾಮಮಾತ್ರವಾಗಿ ಉಳಿಯಿತು.
ಕೊಲತ್ತಿರಿ ಪ್ರಭುತ್ವವು ಆಂತರಿಕ ಭಿನ್ನಾಭಿಪ್ರಾಯಗಳ ಪರಿಣಾಮವಾಗಿ [[ಕಡತನಾಡು]] ([[ವಡಕರ]]), [[ಧರ್ಮಡೋಂ|ರಂಡತರ]] ಅಥವಾ ಪೊಯನಾಡ್ ([[ಧರ್ಮಡೋಂ]]), [[ಕೊಟ್ಟಾಯಂ ಸಾಮ್ರಾಜ್ಯ|ಕೊಟ್ಟಾಯಂ]] ([[ತಲಶ್ಶೇರಿ]]), [[ನಿಲೇಶ್ವರಂ]], ಇರುವಾಳಿನಾಡು ([[ಪನೂರು (ಪುರಸಭೆ)|ಪನೂರು]], [[ಕುರುಂಬ್ರನಾಡ್]] ಇತ್ಯಾದಿ) ಪ್ರತ್ಯೇಕ ರಾಜ ಮುಖ್ಯಸ್ಥರ ಅಡಿಯಲ್ಲಿ ಸ್ವತಂತ್ರ 10 ರಾಜ್ಯಗಳಾಗಿ ಹೊರಹೊಮ್ಮಿತು. ಪೊಯನಾಡ್ (ರಂಡು ತರ) ಮತ್ತು (ಅಂಜರಕ್ಕಂಡಿ, ಚೆಂಬಿಲೋಡ್, ಮಾವಿಲಾಯಿ, ಎಡಕ್ಕಾಡ್, ಮತ್ತು ಧರ್ಮಡೋಂ) ವರೆಗಿನ ವ್ಯಾಪಕ ಭೂಪ್ರದೇಶವನ್ನು ರಂಡುತರ ಅಚ್ಚನ್ಮಾರ್ ಆಳಿದರು. ರಂಡುತರ ಅಚ್ಚನ್ಮಾರ್ 4 ನಂಬಿಯಾರ್ ಕುಟುಂಬಗಳ (ಕಂಡೋತ್, ಪಲ್ಲಿಯತ್, ಆಯಿಲ್ಲಿಯತ್ ಮತ್ತು ಅರಾಯತ್) ಸಮೂಹವಾಗಿದ್ದು, ಅವರು ಎಡತಿಲ್ ಕಡಂಗೋಡನ್ ಮತ್ತು ಪೊನ್ನತ್ತಿಲ್ ಮಾವಿಲ ಅವರ ವಂಶಸ್ಥರಾಗಿದ್ದರು ಮತ್ತು ಪೊಯನಾಡಿನ ಮುಖ್ಯಸ್ಥರಾಗಿದ್ದರು. "ಅಚ್ಚನ್ಮಾರ್" ನಂತರ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ವಿಶೇಷ ಆರೈಕೆಯಲ್ಲಿ ಬಂದರು. <ref name="Logan">{{Cite book|title=ಮಲಬಾರ್ ಕೈಪಿಡಿ (ಸಂಪುಟ-I)|last=ಲೋಗನ್|first=ವಿಲಿಯಮ್|publisher=ಏಷ್ಯನ್ ಎಜುಕೇಷನಲ್ ಸರ್ವಿಸಸ್|year=2010|isbn=9788120604476|location=ನವ ದೆಹಲಿ|pages=631–666}}</ref>
[[ಕೊಲತ್ತಿರಿ]] ಪ್ರಭುತ್ವದ ಅತ್ಯಂತ ಉತ್ತರದ ಭಾಗದಲ್ಲಿರುವ [[ನಿಲೇಶ್ವರಂ]] ರಾಜವಂಶವು ಆರಂಭಿಕ ಮಧ್ಯಯುಗದಲ್ಲಿ ಕೊಲತ್ತುನಾಡು ಮತ್ತು [[ಕ್ಯಾಲಿಕಟ್]]ನ [[ಜಾಮೋರಿನ್]] ಇಬ್ಬರಿಗೂ ಸಂಬಂಧಿಸಿತ್ತು.<ref name="Neeleswaram fete">{{cite news|url=http://www.thehindu.com/todays-paper/tp-national/tp-kerala/neeleswaram-fete-to-showcase-its-heritage/article2645520.ece | title=ನಿಲೇಶ್ವರಂ ಉತ್ಸವವು ಅದರ ಪರಂಪರೆಯನ್ನು ಪ್ರದರ್ಶಿಸಲಿದೆ | author=ದ ಹಿಂದೂ ಸ್ಟಾಫ್ ರಿಪೋರ್ಟರ್ | website=ದ ಹಿಂದೂ | date=21 November 2011 | access-date=24 November 2016 }}</ref>
===ಬ್ರಿಟಿಷ್ ವಸಾಹತು ಮತ್ತು ನಂತರದ ಘಟನೆಗಳು===
[[File:Wellington, soldier and statesman, and the revival of the military power of England (1904) (14593177119).jpg|left|thumbnail|1804 ರಲ್ಲಿ [[ಭಾರತ]]ದ ಹಳೆಯ ನಕ್ಷೆ. ಪ್ರಸ್ತುತ [[ಕೇರಳ]] ರಾಜ್ಯದೊಳಗೆ [[ತಲಶ್ಶೇರಿ]], [[ಕೋಝಿಕ್ಕೋಡ್]], ಮತ್ತು [[ಕೊಚ್ಚಿ]] ಮಾತ್ರ ನಗರಗಳಾಗಿ ಗುರುತಿಸಲ್ಪಟ್ಟಿವೆ ಎಂಬುದನ್ನು ಗಮನಿಸಿ.]]
ಕೊಲತ್ತುನಾಡಿನ ಬ್ರಿಟಿಷ್ ವಸಾಹತಿಗೆ ಕಾರಣವಾದ 1689 ಮತ್ತು 2000 ರ ನಡುವಿನ ಪ್ರಮುಖ ಘಟನೆಗಳು.<ref>{{cite journal |author=B. ಸ್ವಾಯಿ |year=1985 |title=ಕೊಲತ್ತುನಾಡಿನಿಂದ ಚಿರಕ್ಕಲ್ಗೆ: ಬ್ರಿಟಿಷ್ ವ್ಯಾಪಾರಿ ಬಂಡವಾಳ ಮತ್ತು ಟೆಲ್ಲಿಚೇರಿಯ ಹಿನ್ನಾಡು, 1694–1766 |journal=ಸ್ಟಡೀಸ್ ಇನ್ ಹಿಸ್ಟರಿ |volume=1 |pages=87–110 |doi=10.1177/025764308500100107|s2cid=161182476 }}</ref>
'''1689''': [[ಕೊಲತ್ತಿರಿ ರಾಜ]] ಮತ್ತು ಅವನ [[ಪ್ರಿನ್ಸ್ ರೀಜೆಂಟ್]] (ವಡಕ್ಕಾಲಂಕೂರ್), ನಂತರದವನನ್ನು ಅವನ ವಿರೋಧಿ [[ಕುರಂಗೋತ್ ನಾಯರ್]]ನಿಂದ ರಕ್ಷಿಸಲು, ಮಲಬಾರ್ನಲ್ಲಿನ ಆಗಿನ ಬ್ರಿಟಿಷ್ ಮಧ್ಯಪ್ರವೇಶಕರಿಗೆ ಅವರು ಪ್ರದೇಶದಲ್ಲಿ ವ್ಯಾಪಾರವನ್ನು ಮುಂದುವರಿಸಬಹುದು ಎಂದು ತಿಳಿಸಲು ಅಂತಿಮ ಎಚ್ಚರಿಕೆಯನ್ನು ಕಳುಹಿಸಿದನು, ಆದರೆ ಅವರು ಪ್ರದೇಶದಲ್ಲಿ ಕಾರ್ಖಾನೆಯನ್ನು ನಿರ್ಮಿಸಲು ಒಪ್ಪಿದರೆ ಮಾತ್ರ.
'''1708''': [[ತಲಶ್ಶೇರಿ ಕೋಟೆ]]ಯ ಪೂರ್ಣಗೊಳಿಸುವಿಕೆ.
'''1722''': [[ಮಲಬಾರ್ ಕರಾವಳಿ|ಮಲಬಾರ್]]ನಲ್ಲಿ ತಮ್ಮ ಆಸಕ್ತಿಯನ್ನು ರಕ್ಷಿಸಲು ಕಾರ್ಖಾನೆಗೆ ಫ್ರೆಂಚ್ ಹಕ್ಕು ಸಾಧಿಸಲಾಯಿತು [[ಮಾಹೆ, ಭಾರತ|ಮಾಹೆ]]ಯಲ್ಲಿ. ಅವರು [[ತಲಶ್ಶೇರಿ]]ಯಿಂದ ಕೇವಲ ಮೂರು ಮೈಲಿ ದಕ್ಷಿಣದಲ್ಲಿರುವ ಮಾಹೆಯಲ್ಲಿ ಕಾರ್ಖಾನೆಯನ್ನು ಸ್ಥಾಪಿಸುವ ಉದ್ದೇಶದಿಂದ [[ವಡಕರ|ಬಡಗರ]]ನ [[ವಾಝುನೋರ್]] ವಿರುದ್ಧ ಯುದ್ಧವನ್ನು ಪ್ರಾರಂಭಿಸಿದರು. ಕೊಲತ್ತಿರಿಯು ಈಸ್ಟ್ ಇಂಡಿಯಾ ಕಂಪನಿಗೆ 'ತನ್ನ ಪ್ರದೇಶದಲ್ಲಿನ ಎಲ್ಲಾ ವ್ಯಾಪಾರಗಳು ಮತ್ತು ಕೃಷಿಗಳನ್ನು' '[[ಕನ್ಹರೋಟ್]]ನಿಂದ [[ಪುದುಪಟ್ಟಣಂ ನದಿ]]ಯ ಕೆಳಗೆ' ನೀಡಿದನು, ಅಲ್ಲಿ ಡಚ್ಚರು ಕಣ್ಣೂರಿನಲ್ಲಿ ನೆಲೆಸಿದ್ದ ಪ್ರದೇಶಗಳನ್ನು ಹೊರತುಪಡಿಸಿ. ತಮ್ಮ ಸೌಕರ್ಯಗಳಲ್ಲಿ ಹಸ್ತಕ್ಷೇಪ ಮಾಡುವ 'ಯಾವುದೇ ಇತರ ಅಪರಿಚಿತರನ್ನು' 'ಶಿಕ್ಷಿಸಲು, ತಡೆಯಲು ಮತ್ತು ಓಡಿಸಲು' ಬ್ರಿಟಿಷರಿಗೂ ಅಧಿಕಾರ ನೀಡಲಾಯಿತು.
'''1725''': [[ಫ್ರಾನ್ಸ್|ಫ್ರೆಂಚ್]] ವಾಝುನೋರ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಮಾಹೆಯಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿದರು.
'''1720ರ ದಶಕ''' [[ಅರಕ್ಕಲ್|ಅರಕ್ಕಲ್ ರಾಜ]]ನ [[ಅಲಿ ರಾಜರು|ಅಲಿ ರಾಜ]] ಆಗಿನ ಕೊಲತ್ತುನಾಡಿನ ಪ್ರಿನ್ಸ್ ರೀಜೆಂಟ್, [[ಕುನ್ಹಿ ಹೋಮೋ]] ಮೇಲೆ ದಾಳಿ ಮಾಡಿದನು ಮತ್ತು ಅವನು ಬ್ರಿಟಿಷರನ್ನು ಸಹಾಯಕ್ಕಾಗಿ ಸಂಪರ್ಕಿಸಿದನು, ಪ್ರತಿಯಾಗಿ ತನ್ನ ಚಿಕ್ಕಪ್ಪ ಕೊಲತ್ತಿರಿಯು ಅವರಿಗೆ ನೀಡಿದ ಸವಲತ್ತುಗಳು ಮತ್ತು ಕಾರ್ಖಾನೆಗೆ.
'''ಆಗಸ್ಟ್ 1727''': [[ತಲಶ್ಶೇರಿ]]ಯ ಮುಖ್ಯಸ್ಥರು ಪ್ರಿನ್ಸ್ ರೀಜೆಂಟ್ಗೆ ಸ್ಥಳೀಯ ಪ್ರಭುಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಯುದ್ಧಗಳನ್ನು ನಡೆಸಲು ಸ್ಫೋಟಕಗಳನ್ನು ಪೂರೈಸುವುದು [[ಬಾಂಬೆ ಪ್ರೆಸಿಡೆನ್ಸಿ]]ಯ ನೀತಿಯಾಗಿದೆ ಎಂದು ತಿಳಿಸುತ್ತಾರೆ.
'''1728''' ತಲಶ್ಶೇರಿಯ ಮುಖ್ಯಸ್ಥ, [[ಆಡಮ್ಸ್ (ತಲಶ್ಶೇರಿಯ ಮುಖ್ಯಸ್ಥ)|ಆಡಮ್ಸ್]] ಅವರನ್ನು [[ಬಾಂಬೆ]]ಗೆ ಮರುಕರೆಯಲಾಯಿತು ಮತ್ತು ಪ್ರಿನ್ಸ್ ರೀಜೆಂಟ್ [[ಕೊಚ್ಚಿ]]ನಲ್ಲಿನ [[ನೆದರ್ಲ್ಯಾಂಡ್ಸ್|ಡಚ್]]ರಿಂದ ಮಿಲಿಟರಿ ಸಹಾಯವನ್ನು ಕೋರಿದನು. ಡಚ್ಚರು ಪ್ರತಿಯಾಗಿ [[ಧರ್ಮಪಟ್ಟಣಂ]] ಬಂದರನ್ನು ಬೇಡಿದರು. [[ಈಸ್ಟ್ ಇಂಡಿಯಾ ಕಂಪನಿಯು]] ಡಚ್ ಪ್ರಭಾವಕ್ಕೆ ಹೆದರಿ ಕೊಲತ್ತುನಾಡಿಗೆ 20,000 ಫಾನಮ್ಗಳ ಮಿಲಿಟರಿ ಸಾಮಗ್ರಿಗಳನ್ನು ಪೂರೈಸಿತು ಮತ್ತು [[ಅಲಿ ರಾಜ]] ಮೌನವಾದನು. ಬದಲಾಗಿ ಬ್ರಿಟಿಷರಿಗೆ ಕೊಲತ್ತುನಾಡಿನಲ್ಲಿ ಮಸಾಲೆಗಳನ್ನು ಖರೀದಿಸಲು ಇತರ ಯುರೋಪಿಯನ್ನರಿಗಿಂತ ವಿಶೇಷ ಅನುಮತಿಯನ್ನು ಪ್ರಿನ್ಸ್ [[ಉದಯ ವರ್ಮನ್]] ನೀಡಿದರು.
'''1732-34''': 1732 ರಲ್ಲಿ [[ಕನ್ನಡಿಗರು]] [[ಕೊಲತ್ತುನಾಡಿನ]] ಮುಖ್ಯಸ್ಥ [[ಕುನ್ಹಿ ಹೋಮೋ]]ನ ಕೋಟೆಗಳನ್ನು ಸುಲಭವಾಗಿ ಆಕ್ರಮಿಸಿಕೊಂಡರು. 1734 ರ ಆರಂಭದಲ್ಲಿ ಕನ್ನಡಿಗ ಸೈನಿಕರು [[ಕುದಾಲಿ]] ಮತ್ತು [[ಧರ್ಮಪಟ್ಟಣಂ]] ಅನ್ನು ವಶಪಡಿಸಿಕೊಂಡರು.
'''1736''': ಬ್ರಿಟಿಷರ ಸಹಾಯದಿಂದ ಕನ್ನಡಿಗ ಸೈನ್ಯವನ್ನು ಸಂಪೂರ್ಣ ಉತ್ತರದಿಂದ ಹೊರಹಾಕಲಾಯಿತು ಆದರೆ ಪ್ರಿನ್ಸ್ ರೀಜೆಂಟ್ ಇದರ ಪರಿಣಾಮವಾಗಿ ತೆಲ್ಲಿಚೇರಿಯಲ್ಲಿನ ಅಂಶಗಳಿಗೆ ಭಾರಿ ಸಾಲವನ್ನು ಹೊಂದುತ್ತಾನೆ.
'''1737''': [[ಬೆಡ್ನೂರಿನ ನಾಯಕರು]] ಕೊಲತ್ತುನಾಡಿನ ಮೇಲೆ ಮತ್ತೊಂದು ದಾಳಿಯನ್ನು ಯೋಜಿಸುತ್ತಾರೆ. ಪ್ರಿನ್ಸ್ [[ಕುನ್ಹಿ ಹೋಮೋ]] ಕನ್ನಡಿಗರೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡನು, ಇದು ಕೊಲತ್ತುನಾಡಿನ ಉತ್ತರ ಗಡಿಯನ್ನು [[ಮಡ್ಡಾಯ್]]ನಲ್ಲಿ ನಿಗದಿಪಡಿಸಿತು. ಟೆಲ್ಲಿಚೇರಿಯ ಅಂಶಗಳು [[ಬೆಡಾನೂರ್]]ನ ನಾಯಕನೊಂದಿಗೆ ತಮ್ಮದೇ ಆದ ಒಪ್ಪಂದಕ್ಕೆ ಸಹಿ ಹಾಕಿದವು, ಇದು ಕನ್ನಡಿಗರು ಮತ್ತು ಕೊಲತ್ತುನಾಡಿನ ಆಡಳಿತಗಾರರ ನಡುವಿನ ಭವಿಷ್ಯದ ಸಂಘರ್ಷಗಳ ಸಂದರ್ಭದಲ್ಲಿ ಮಲಬಾರ್ನಲ್ಲಿ ಬ್ರಿಟಿಷ್ ವ್ಯಾಪಾರ ಸೌಲಭ್ಯಗಳ ಸಮಗ್ರತೆಯನ್ನು ಖಾತರಿಪಡಿಸಿತು.
'''1739-42''' ಪ್ರಿನ್ಸ್ ಒಕ್ಕೂ, ಫ್ರೆಂಚ್ ಬೆಂಬಲಿತ ಪ್ರಿನ್ಸ್ ರೀಜೆಂಟ್ನ ವಿರೋಧಿ ಮತ್ತು ಅವನ ಅನುಯಾಯಿಗಳನ್ನು ಟೆಲ್ಲಿಚೇರಿಯ ಅಂಶಗಳು ಕೊಂದರು.
'''1741''' ಪ್ರಿನ್ಸ್ ರೀಜೆಂಟ್ ತನ್ನ ಸಾಮಂತರಾದ [[ರಂಡು ತರ ಅಚ್ಚನ್ಮಾರ್|ರಂಡುತರದ ಅಚ್ಚನ್ಮಾರ್]]ಗಳಿಗೆ ರಾಜ್ಯದ ಸಾಲವನ್ನು ತೀರಿಸಲು 30,000 [[ಫಾನಮ್ಗಳನ್ನು]] ಕೊಡುಗೆಯಾಗಿ ನೀಡುವಂತೆ ಕೇಳಿದನು. [[ಅಚ್ಚನ್ಮಾರ್]]ಗಳು ನಿರಾಕರಿಸಿದರು. ಪ್ರಿನ್ಸ್ ರೀಜೆಂಟ್ ಅಚ್ಚನ್ಮಾರ್ಗಳು ಒಪ್ಪದ ಹೊರತು [[ರಂಡುತರ]]ದಲ್ಲಿ ಕಂದಾಯ ವಸೂಲಿಯನ್ನು ವಹಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದನು. ಬ್ರಿಟಿಷರು ಅಚ್ಚನ್ಮಾರ್ಗಳ ಪರವಾಗಿ ಪ್ರಿನ್ಸ್ ರೀಜೆಂಟ್ಗೆ 30,000 ಫಾನಮ್ಗಳ ಮೊತ್ತವನ್ನು ರಂಡುತರದ ಭೂ ಕಂದಾಯ ವಸೂಲಿಗೆ ಬದಲಾಗಿ ಪಾವತಿಸಲು ವ್ಯವಸ್ಥೆ ಮಾಡಿದರು. ಹೀಗೆ ಸಾಲದ ಬಲೆಯು ಬ್ರಿಟಿಷರು ಮಲಬಾರ್ನಲ್ಲಿ ವ್ಯಾಪಾರದ ಏಕಸ್ವಾಮ್ಯವನ್ನು ಸುರಕ್ಷಿತಗೊಳಿಸಲು ಬಳಸಿದ ಪ್ರಮುಖ ಸಾಧನವಾಗಿತ್ತು.
'''1745''': ಟೆಲ್ಲಿಚೇರಿಯ ಅಂಶಗಳು ಕೊಲತ್ತುನಾಡಿನ ಸಾಮಂತರೊಂದಿಗೆ ಬೆಳೆಸುತ್ತಿದ್ದ ನೇರ ಸಂಬಂಧಗಳು, ಆದಾಗ್ಯೂ, ಕೊಲತ್ತಿರಿಯನ್ನು ಅಪರಿಚಿತಗೊಳಿಸುವ ಪ್ರವೃತ್ತಿಯನ್ನು ಹೊಂದಿದ್ದವು. ಕೊಲತ್ತುನಾಡಿನ ಪ್ರಿನ್ಸ್ ರೀಜೆಂಟ್ ಟೆಲ್ಲಿಚೇರಿಯ ಅಂಶಗಳು 'ತನ್ನ ದೇಶದ ಆಡಳಿತದಲ್ಲಿ ಹೆಚ್ಚು ಮಧ್ಯಪ್ರವೇಶಿಸುತ್ತಿದ್ದಾರೆ' ಎಂದು ಆರೋಪಿಸಿದನು.
'''1746''': ಪ್ರಿನ್ಸ್ ಉದಯ ವರ್ಮನ್ ಅವರ ಮರಣ. ಕೊಲತ್ತಿರಿಯ ಪ್ರಭುತ್ವದ ವಿಘಟನೆಯು ಪ್ರಾರಂಭವಾಗಿತ್ತು ಮತ್ತು ಇಂಗ್ಲಿಷರು ರಾಜಮನೆತನದಲ್ಲಿ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿದರು. ಬ್ರಿಟಿಷರು ರಾಜಮನೆತನದ ಸಹವರ್ತಿಗಳ ಮೂಲಕ ಹೆಚ್ಚು ಹೆಚ್ಚು ಪ್ರದೇಶವನ್ನು ಭೂಮಿಯನ್ನು ಖರೀದಿಸುವ ಮೂಲಕ ನಿಯಂತ್ರಣವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.
'''ಅಕ್ಟೋಬರ್ 1747''': ಕೊಲತ್ತಿರಿ ಮತ್ತು ಟೆಲ್ಲಿಚೇರಿಯಲ್ಲಿನ ಅಂಶಗಳ ನಡುವಿನ ಸಣ್ಣ ಯುದ್ಧ, ಅವರು [[ಪ್ರಿನ್ಸ್ ರಾಮನ್ ಉನಿತಿರಿ]]ಯನ್ನು ಬಳಸಿ [[ಸಮಸ್ತಾನೋಂ]]ನಲ್ಲಿ 'ಬ್ರಿಟಿಷ್ ವಿರೋಧಿ ಮಂತ್ರಿಗಳನ್ನು' 'ಶಿಕ್ಷಿಸಿದರು'. ಪ್ರಿನ್ಸ್ [[ಕುನ್ಹಿ ಹೋಮೋಸ್|ಕುನ್ಹಿ ಹೋಮೋಸ್]] ಮರಣದ ನಂತರ ಉತ್ತರಾಧಿಕಾರದಿಂದಾಗಿ, [[ಪ್ರಿನ್ಸ್ ಕುನ್ಹಿ ರಾಮನ್]] ಈಸ್ಟ್ ಇಂಡಿಯಾ ಕಂಪನಿಯ ಕಾಳಜಿಗೆ ತನ್ನ ಸಾಮಂತರ ಮೇಲೆ ತನ್ನ ಅಧಿಕಾರವನ್ನು ಮರುಸ್ಥಾಪಿಸಲು ಮಹತ್ವಾಕಾಂಕ್ಷೆಯನ್ನು ಹೊಂದಿದ್ದನು. ತನ್ನ ಅಧಿಕಾರವನ್ನು ಬಲಪಡಿಸಿದ ನಂತರ, ಪ್ರಿನ್ಸ್ ಕುನ್ಹಿ ರಾಮನ್ ಕೊಲತ್ತುನಾಡಿನ ಆಡಳಿತವನ್ನು ಕೇಂದ್ರೀಕರಿಸುವ ನೀತಿಯನ್ನು ಪ್ರಾರಂಭಿಸಿದನು, ಇದರಿಂದಾಗಿ ತನ್ನ ಸಾಮಂತರ ಮೇಲೆ ಹೆಚ್ಚಿನ ಅಧಿಕಾರವನ್ನು ಪಡೆದುಕೊಳ್ಳಲು. ಅಚ್ಚನ್ಮಾರ್ ಇನ್ನು ಮುಂದೆ ತನಗೆ ವಿಧೇಯರಾಗಿಲ್ಲ ಎಂದು ಅವನು ಭಾವಿಸಿದ್ದರಿಂದ ರಂಡುತರದ ಭೂ ಕಂದಾಯವನ್ನು ವಸೂಲಿ ಮಾಡಲು ತನ್ನ ಆಸೆಯನ್ನು ವ್ಯಕ್ತಪಡಿಸಿದನು.
'''1749''': ಪ್ರಿನ್ಸ್ ಕುನ್ಹಿ ರಾಮನ್ [[ಇರುವಾಲಿನಾಡ್]] ಮತ್ತು [[ಕಡತ್ತನಾಡ್]] ತಾಲೂಕುಗಳನ್ನು ಆಡಳಿತಕ್ಕೆ ತನ್ನ ಸ್ವಂತ ಪುತ್ರರನ್ನು ನೇಮಿಸಲು ಬೆದರಿಕೆ ಹಾಕಿದನು. ಅದೇ ವರ್ಷದಲ್ಲಿ, ಆದಾಗ್ಯೂ, [[ಬೋಯಾನೋರ್]] ಕೊಲತ್ತುನಾಡ್ ಅರಮನೆಯೊಂದಿಗಿನ ಸಾಮಂತ್ಯದ ಕೊನೆಯ ಸಂಬಂಧಗಳನ್ನು ಕಡಿದುಕೊಂಡನು ಮತ್ತು ತನ್ನನ್ನು ಕಡತ್ತನಾಡಿನ ರಾಜ ಎಂದು ಘೋಷಿಸಿಕೊಂಡನು. ಇರುವಾಲಿನಾಡ್ನ [[ನಂಬಿಯಾರ್ಗಳು]] ಅದನ್ನು ಅನುಸರಿಸಲು ಬೆದರಿಕೆ ಹಾಕಿದರು. ರಂಡುತರದ ಅಚ್ಚನ್ಮಾರ್ ಹೆಚ್ಚಿನ ರಕ್ಷಣೆಗಾಗಿ ಬ್ರಿಟಿಷರಿಗೆ ಮನವಿ ಮಾಡಿದರು. ಕೊಲತ್ತುನಾಡ್ ವಿಭಜನೆಯಾಗುತ್ತಿತ್ತು. ಕೊಲತ್ತಿರಿ ಮತ್ತು ಅವನ ಪ್ರಿನ್ಸ್ ರೀಜೆಂಟ್ ಕೊಲತ್ತುನಾಡ್ 'ಸರಿಯಾದ' ಪ್ರದೇಶಕ್ಕೆ ಹಿಂತೆಗೆದುಕೊಳ್ಳಲು ಮತ್ತು ಆದ್ದರಿಂದ ತಮ್ಮ ಅಧಿಕಾರವನ್ನು [[ಚಿರಕ್ಕಲ್, ಕಣ್ಣೂರು|ಚಿರಕ್ಕಲ್]]ನ [[ತಾಲೂಕು]] ಆಗಲಿದ್ದಕ್ಕೆ ನಿರ್ಬಂಧಿಸಲು ಒತ್ತಾಯಿಸಲ್ಪಟ್ಟರು.
'''ಏಪ್ರಿಲ್ 1751''': [[ಬೋಯಾನೋರ್]] ರಾಜ ಎಂಬ ಬಿರುದನ್ನು ವಹಿಸಿಕೊಂಡ ನಂತರ, ಪ್ರಿನ್ಸ್ ಕುನ್ಹಿ ರಾಮನ್ ಕಡತ್ತನಾಡ್, ಇರುವಾಲಿನಾಡ್ ಮೇಲೆ ಯುದ್ಧ ಘೋಷಿಸಿದನು, ಅಲ್ಲಿ [[ಈಸ್ಟ್ ಇಂಡಿಯಾ ಕಂಪನಿಯು]] ಮೆಣಸನ್ನು ಖರೀದಿಸುವ ಏಕಸ್ವಾಮ್ಯವನ್ನು ಪಡೆದುಕೊಂಡಿತ್ತು. ಅನೇಕ ಚರ್ಚೆಗಳ ನಂತರ, ಅಂಶಗಳು [[ಥಾಮಸ್ ಡೆರಿಲ್]] ಅವರ ಸಮ್ಮುಖದಲ್ಲಿ ಕೊಲತ್ತಿರಿಯನ್ನು (ಕೊಲತ್ತುನಾಡಿನ ಹಿರಿಯ ರಾಜ) ಪ್ರಿನ್ಸ್ ಕುನ್ಹಿ ರಾಮನನ್ನು ವಜಾ ಮಾಡಲು ಮತ್ತು [[ಅಂಬು ತಂಬನ್]] ಅನ್ನು ಪ್ರಿನ್ಸ್ ರೀಜೆಂಟ್ ಆಗಿ ನೇಮಿಸಲು ಮನವೊಲಿಸುವಲ್ಲಿ ಯಶಸ್ವಿಯಾದರು.
'''ಅಕ್ಟೋಬರ್ 1751''': ಪ್ರಿನ್ಸ್ ಕುನ್ಹಿ ರಾಮನ್ [[ಮೌಂಟ್ ಡೆಲ್ಲಿ]]ಯನ್ನು ಕೋಟೆಗಾಗಿ ಫ್ರೆಂಚರಿಗೆ ಅನುಮತಿಸಿದನು, ಇದರಿಂದಾಗಿ [[ಮಂಗಳೂರು]] ಮತ್ತು [[ಟೆಲ್ಲಿಚೇರಿ]] ನಡುವಿನ ಬ್ರಿಟಿಷ್ ಅಕ್ಕಿ ವ್ಯಾಪಾರವನ್ನು ಅಡ್ಡಿಪಡಿಸಿದನು.
'''ಜನವರಿ 1752''': [[ಕೋಟಿಯೋಟ್]]ನ ರಾಜನು ಟೆಲ್ಲಿಚೇರಿ ಮತ್ತು ಕೊಲತ್ತುನಾಡ್ ನಡುವೆ ಸಮಾಧಾನಕ್ಕಾಗಿ ಮಧ್ಯಸ್ಥಿಕೆ ವಹಿಸಿದನು.
'''1756''': ಪ್ರಿನ್ಸ್ ಕುನ್ಹಿ ರಾಮನ ಮರಣ ಮತ್ತು ಪ್ರಿನ್ಸ್ ರಾಮ ವರ್ಮನ ಉತ್ತರಾಧಿಕಾರ.
'''1760''': ಪ್ರಿನ್ಸ್ ರಾಮ ವರ್ಮನ ಮರಣ
'''ಆಗಸ್ಟ್ 1760''': ಉನಾನಾಮೆನ್ ತಂಬನ್ (ಹೊಸ ಪ್ರಿನ್ಸ್ ರೀಜೆಂಟ್) ಕೊಲತ್ತುನಾಡ್ ರಾಜ್ಯದಲ್ಲಿ ಬ್ರಿಟಿಷ್ ಪರ ಗುಂಪಿನ ನಾಯಕ ಸಿಬೆನ್ ಪುಟ್ಟೇಯ್ಯನನ್ನು ಕುರುಡನನ್ನಾಗಿ ಮಾಡಿದನು.
'''1761''': [[ಕೊಲತ್ತಿರಿ]] ಪ್ರಿನ್ಸ್ ರೀಜೆಂಟ್ ಅನ್ನು ವಜಾ ಮಾಡಿ ನೇರವಾಗಿ ಕೊಲತ್ತುನಾಡ್ ರಾಜ್ಯವನ್ನು ವಹಿಸಿಕೊಂಡನು ಮತ್ತು [[ಸಮಸ್ತಾನೋಂ]] ಪರವಾಗಿ [[ಉತ್ತರ ಮಲಬಾರ್]]ನ ಎಲ್ಲಾ ಸುಂಕದ ಕರ್ತವ್ಯಗಳನ್ನು ಸಂಗ್ರಹಿಸುವ ಹಕ್ಕನ್ನು ಬ್ರಿಟಿಷರಿಗೆ ನೀಡಿದನು. 1761 ರಲ್ಲಿ, ಬ್ರಿಟಿಷರು [[ಮಾಹೆ, ಭಾರತ|ಮಾಹೆ]]ಯನ್ನು ವಶಪಡಿಸಿಕೊಂಡರು ಮತ್ತು ವಸಾಹತುವನ್ನು [[ಕಡತನಾಡು]]ನ ಆಡಳಿತಗಾರನಿಗೆ ಹಸ್ತಾಂತರಿಸಲಾಯಿತು.<ref name="Mahé"/>
'''1763''':ಬ್ರಿಟಿಷರು 1763 ರ ಪ್ಯಾರಿಸ್ ಒಪ್ಪಂದದ ಭಾಗವಾಗಿ [[ಮಾಹೆ, ಭಾರತ|ಮಾಹೆ]]ಯನ್ನು ಫ್ರೆಂಚರಿಗೆ ಹಿಂದಿರುಗಿಸಿದರು.<ref name="Mahé"/>
'''1764''': [[ಚಿರಕ್ಕಲ್ನ ಪ್ರಿನ್ಸ್]] ಕೊಲತ್ತುನಾಡಿನ ಆಡಳಿತವನ್ನು ವಹಿಸಿಕೊಂಡನು.
'''1765''': ಚಿರಕ್ಕಲ್ನ ಪ್ರಿನ್ಸ್ [[ರಂಡುತರ]] ತಾಲೂಕಿನಲ್ಲಿ ಟೆಲ್ಲಿಚೇರಿಯ ಪ್ರಬಲ ಸ್ಥಾನವನ್ನು ಗುರುತಿಸಿದನು, ಪ್ರದೇಶವನ್ನು ಈಸ್ಟ್ ಇಂಡಿಯಾ ಕಂಪನಿಗೆ ಬಿಟ್ಟುಕೊಟ್ಟನು.
'''ಫೆಬ್ರವರಿ 1766''': [[ಹೈದರ್ ಅಲಿ]] ಒಂದು ಪ್ರಬಲ ಪಡೆಯೊಂದಿಗೆ [[ಅಲಿ ರಾಜ]] ಕಣ್ಣೂರಿನಿಂದ ಕೇರಳಕ್ಕೆ ಸ್ವಾಗತಿಸಲ್ಪಟ್ಟನು. [[ಮೈಸೂರು ಸೈನ್ಯ]] ಅಲಿ ರಾಜ ಮತ್ತು ಅವನ ಸಹೋದರನ ಮಾರ್ಗದರ್ಶನದಲ್ಲಿ [[ಚಿರಕ್ಕಲ್, ಕಣ್ಣೂರು|ಚಿರಕ್ಕಲ್]]ನಲ್ಲಿ ಕೊಲತ್ತಿರಿ ರಾಜನ ಅರಮನೆಯನ್ನು ವಶಪಡಿಸಿಕೊಂಡಿತು. ರಾಜ ಮತ್ತು ಅವನ ಕುಟುಂಬವು ತಲಶ್ಶೇರಿಯಲ್ಲಿನ ಇಂಗ್ಲಿಷ್ ವ್ಯಾಪಾರ ಕೇಂದ್ರದಲ್ಲಿ ಆಶ್ರಯ ಪಡೆಯಲು ದಕ್ಷಿಣಕ್ಕೆ ಪಲಾಯನ ಮಾಡಿದರು. ಅವರು ಅಲಿ ರಾಜನನ್ನು ತಮ್ಮ ನೌಕಾ ಮುಖ್ಯಸ್ಥ (ಹೈ ಅಡ್ಮಿರಲ್) ಆಗಿ ಮತ್ತು ರಾಜನ ಸಹೋದರ [[ಶೇಕ್ ಅಲಿ]] ಅವರನ್ನು ಬಂದರು ಪ್ರಾಧಿಕಾರದ ಮುಖ್ಯಸ್ಥ (ನೌಕಾ ವ್ಯವಸ್ಥಾಪಕ) ಆಗಿ ನೇಮಿಸಿದರು.
'''1773''': ಹೈದರ್ ಅಲಿ 1768 ರಲ್ಲಿ ಒಪ್ಪಿದಂತೆ ಮಲಬಾರ್ನ ರಾಜರು ಅವನಿಗೆ ಕಪ್ಪ ಕಾಣಿಕೆಯನ್ನು ಪಾವತಿಸದ ಕಾರಣ 1773 ರಲ್ಲಿ ಎರಡನೇ ಬಾರಿಗೆ ಮಲಬಾರ್ ಅನ್ನು ಆಕ್ರಮಿಸಿದನು.<ref name = "NM11"/>
'''1779''': 1779 ರಲ್ಲಿ, ಆಂಗ್ಲೋ-ಫ್ರೆಂಚ್ ಯುದ್ಧ ಪ್ರಾರಂಭವಾಯಿತು, ಇದರ ಪರಿಣಾಮವಾಗಿ ಫ್ರೆಂಚರು [[ಮಾಹೆ, ಭಾರತ|ಮಾಹೆ]]ಯನ್ನು ಕಳೆದುಕೊಂಡರು.<ref name="Mahé"/>
'''1783''': 1783 ರಲ್ಲಿ, ಬ್ರಿಟಿಷರು ತಮ್ಮ ವಸಾಹತುಗಳನ್ನು ಫ್ರೆಂಚರಿಗೆ ಹಿಂದಿರುಗಿಸಲು ಒಪ್ಪಿಕೊಂಡರು.
'''1785''': [[ಮಾಹೆ, ಭಾರತ|ಮಾಹೆ]]ಯನ್ನು 1785 ರಲ್ಲಿ ಫ್ರೆಂಚರಿಗೆ ಹಸ್ತಾಂತರಿಸಲಾಯಿತು.<ref name="Mahé">{{cite web|url=http://mahe.gov.in/mws/leftmenupages/history.html|title=ಮಾಹೆಯ ಇತಿಹಾಸ|access-date=19 April 2021|url-status=dead|archive-url=https://web.archive.org/web/20131230232052/http://mahe.gov.in/mws/leftmenupages/history.html|archive-date=30 December 2013}}</ref>
'''ಫೆಬ್ರವರಿ 1789''': [[ಟಿಪು ಸುಲ್ತಾನ್]] ಎಲ್ಲಾ ರಾಜರು ಮತ್ತು ಉತ್ತರ ಮಲಬಾರ್ನ ಮುಖ್ಯಸ್ಥರು ದಂಗೆ ಎದ್ದು [[ಮೈಸೂರು]]ನಿಂದ ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿದ್ದರಿಂದ ಎರಡನೇ ಬಾರಿಗೆ ಮಲಬಾರ್ ಅನ್ನು ಪ್ರವೇಶಿಸಿದನು. ಅವನು ಕಡತನಾಡನ್ನು ಧ್ವಂಸಗೊಳಿಸಿದನು ಮತ್ತು ತನ್ನ ಮಗ (ಅಬ್ದುಲ್ ಖಲಿಕ್) ಅನ್ನು ಕಣ್ಣೂರಿನ [[ಅರಕ್ಕಲ್ ಬೀಬಿ]]ಯ ಮಗಳೊಂದಿಗೆ ವಿವಾಹ ಮಾಡಿದನು. ಕೊಲತ್ತಿರಿ ಕುಟುಂಬದ ಒಬ್ಬ ರಾಜಕುಮಾರನು ಅವನ ತಪ್ಪಿಸಿಕೊಳ್ಳುವ ಸಮಯದಲ್ಲಿ [[ಟಿಪ್ಪು ಸುಲ್ತಾನ್|ಟಿಪ್ಪು]]ನ ಸೈನಿಕರಿಂದ ಕೊಲ್ಲಲ್ಪಟ್ಟನು ಮತ್ತು ಅವನ ಶವವನ್ನು ಆನೆಗಳಿಂದ ಟಿಪ್ಪುನ ಶಿಬಿರದ ಮೂಲಕ ಎಳೆಯಲಾಯಿತು ಮತ್ತು ಅದನ್ನು ನಂತರ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಅವನ ಹದಿನೇಳು ಅನುಯಾಯಿಗಳೊಂದಿಗೆ ಮರದ ಮೇಲೆ ನೇತುಹಾಕಲಾಯಿತು.
'''ಮೇ 1790''': ಟಿಪು ಮಲಬಾರ್ ಅನ್ನು ತೊರೆದನು, ಎಂದಿಗೂ ಹಿಂತಿರುಗಲಿಲ್ಲ.
[[File:Madras Prov 1859.gif|thumb|right|[[ಬ್ರಿಟಿಷ್ ರಾಜ್|ಬ್ರಿಟಿಷ್ ಭಾರತ]]ದಲ್ಲಿ [[ಮದ್ರಾಸ್ ಪ್ರಾಂತ್ಯ]]ದ 19ನೇ ಶತಮಾನದ ನಕ್ಷೆ]]
'''ಮಾರ್ಚ್ 1792''': ಮಲಬಾರ್ ಅನ್ನು ಬ್ರಿಟಿಷರಿಗೆ ಅಧಿಕೃತವಾಗಿ ಬಿಟ್ಟುಕೊಡಲಾಯಿತು. ಬ್ರಿಟಿಷರು [[ಚಿರಕ್ಕಲ್, ಕಣ್ಣೂರು|ಚಿರಕ್ಕಲ್]], ಕೊಟ್ಟಾಯಂ ಮತ್ತು [[ಕಡತನಾಡ್]]ನ ರಾಜರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡರು ಮತ್ತು ಅವರೆಲ್ಲರೂ ತಮ್ಮ ಸಂಬಂಧಿತ ಪ್ರದೇಶಗಳ ಮೇಲಿನ ಕಂಪನಿಯ ಸಂಪೂರ್ಣ ಸಾರ್ವಭೌಮತ್ವವನ್ನು ಒಪ್ಪಿಕೊಂಡರು. [[ಬ್ರಿಟಿಷ್ ಸರ್ಕಾರ]]ವು ಮಲಬಾರ್ ಪ್ರಾಂತ್ಯವನ್ನು ಎರಡು ಆಡಳಿತ ವಿಭಾಗಗಳಾಗಿ ವಿಂಗಡಿಸಿತು - [[ಉತ್ತರ ಮಲಬಾರ್|ಉತ್ತರ]] ಮತ್ತು [[ದಕ್ಷಿಣ ಮಲಬಾರ್|ದಕ್ಷಿಣ]], ಪ್ರತಿಯೊಂದೂ ತಲಶ್ಶೇರಿ ಮತ್ತು [[ಚೇರ್ಪುಲಸ್ಸೇರಿ]]ನಲ್ಲಿ ಅಧೀಕ್ಷಕರ ಅಧ್ಯಕ್ಷತೆಯಲ್ಲಿ, ಮಲಬಾರ್ ಪ್ರಾಂತ್ಯದ ಮೇಲ್ವಿಚಾರಕ ಮತ್ತು ಮುಖ್ಯ ನ್ಯಾಯಾಧೀಶರ ಸಾಮಾನ್ಯ ನಿಯಂತ್ರಣದಲ್ಲಿ, ಅವರು ಕ್ಯಾಲಿಕಟ್ನಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿದ್ದರು.
'''1800''': ಮಲಬಾರ್ ಅನ್ನು [[ಮದ್ರಾಸ್ ಪ್ರೆಸಿಡೆನ್ಸಿ]]ಯ ಭಾಗವನ್ನಾಗಿ ಮಾಡಲಾಯಿತು.
'''1801''': ತನ್ನ ಎಲ್ಲಾ ಪ್ರಭುತ್ವಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟ ಕೊನೆಯ ಕೊಲತ್ತಿರಿ ರಾಜನ ಮರಣ (ಸಾಮಾನ್ಯವಾಗಿ [[ಚಿರಕ್ಕಲ್ನ ಮೊದಲ ರಾಜ]] ಎಂದು ಕರೆಯಲ್ಪಡುತ್ತಿದ್ದನು). ಮೇಜರ್ ಮ್ಯಾಕ್ಲಿಯೋಡ್ 1 ಅಕ್ಟೋಬರ್ 1801 ರಂದು ಮಲಬಾರ್ನ ಮೊದಲ ಪ್ರಧಾನ ಸಂಗ್ರಾಹಕನಾಗಿ ಅಧಿಕಾರ ವಹಿಸಿಕೊಂಡನು.
ಕೊಲತ್ತುನಾಡ್ 1947 ರವರೆಗೆ ಮದ್ರಾಸ್ ಪ್ರೆಸಿಡೆನ್ಸಿಯಡಿಯಲ್ಲಿ ಬ್ರಿಟಿಷ್ ಭಾರತದ ಆಡಳಿತ ಜಿಲ್ಲೆಯಾದ [[ಮಲಬಾರ್ ಜಿಲ್ಲೆ]]ಯ ಭಾಗವಾಗಿ ಉಳಿಯಿತು ಮತ್ತು ನಂತರ 1956 ರವರೆಗೆ ಭಾರತದ [[ಮದ್ರಾಸ್ ರಾಜ್ಯ]]ದ ಭಾಗವಾಗಿತ್ತು. 1 ನವೆಂಬರ್ 1956 ರಂದು, [[ರಾಜ್ಯ ಪುನರ್ರಚನೆ ಕಾಯ್ದೆ]]ಯಿಂದ ಮಲಬಾರ್ ಜಿಲ್ಲೆ, [[ತಿರುವಾಂಕೂರು-ಕೊಚ್ಚಿ]] (ನಾಲ್ಕು ದಕ್ಷಿಣ ತಾಲೂಕುಗಳನ್ನು ಹೊರತುಪಡಿಸಿ, ಅವುಗಳನ್ನು [[ಮದ್ರಾಸ್ ರಾಜ್ಯ]]ದೊಂದಿಗೆ ವಿಲೀನಗೊಳಿಸಲಾಯಿತು) ಅನ್ನು ವಿಲೀನಗೊಳಿಸುವ ಮೂಲಕ ಕೇರಳ ರಾಜ್ಯವನ್ನು ರಚಿಸಲಾಯಿತು.
==ಕೊಲತ್ತಿರಿ ಕುಟುಂಬದ ಸಂವಿಧಾನ==
17ನೇ ಶತಮಾನದ ವೇಳೆಗೆ, ಕೋಲಸ್ವರೂಪಂ ತನ್ನ ರಾಜಕೀಯ ಅಧಿಕಾರವನ್ನು ಉತ್ತರ ಕೇರಳದ ಇತರ ಎರಡು ವಂಶಾವಳಿಗಳೊಂದಿಗೆ ಹಂಚಿಕೊಳ್ಳಬೇಕಾಯಿತು. ನಿಲೇಶ್ವರಂ (ಅಲ್ಲದಂ) ಸ್ವರೂಪಂ ಮತ್ತು ಅರಕ್ಕಲ್ ಸ್ವರೂಪಂ ಸ್ವತಂತ್ರ ರಾಜಕೀಯ ಗುರುತನ್ನು ಹೇಳಿಕೊಂಡವು. ಇದಲ್ಲದೆ, ಕೋಲಸ್ವರೂಪಂನೊಳಗಿನ ರಾಜಕೀಯ ಅಧಿಕಾರವು ವಿವಿಧ ಕೊವಿಲಕಂಗಳಲ್ಲಿಯೂ ಪ್ರಸಾರವಾಯಿತು. ಕೇರಳೋಲ್ಪತ್ತಿಯಲ್ಲಿ ಕೋಲಸ್ವರೂಪಂನ ರಾಜಕೀಯ ಅಧಿಕಾರವನ್ನು ಹಂಚಿಕೊಳ್ಳುವ ನಾಲ್ಕು ಕೊವಿಲಕಂಗಳಿವೆ: ತಲೋರ ಕೊವಿಲಕಂ; ಅರತಿಲ್ ಕೊವಿಲಕಂ; ಮುತ್ತತಿಲ್ ಕೊವಿಲಕಂ; ಕರಿಪತು ಕೊವಿಲಕಂ; ಮತ್ತು ಕೋಲತ್ ಕೊವಿಲಕಂ.<ref>ವರಿಯರ್, ಕೇರಳೋಲ್ಪತ್ತಿ ಗ್ರಂಥವರಿ, 52-3</ref> ಕೇರಳೋಲ್ಪತ್ತಿ ಕೊಲತ್ತುನಾಡ್ ಸಂಪ್ರದಾಯದ ಪ್ರಕಾರ, ಕರಿಪತು ಕೊವಿಲಕಂ ಮತ್ತು ಕೋಲತ್ ಕೊವಿಲಕಂ ಉಳಿದವುಗಳಿಗಿಂತ ಕೆಲವು ರೀತಿಯ ಶ್ರೇಷ್ಠತೆಯನ್ನು ಹೇಳಿಕೊಂಡವು. ಆದಾಗ್ಯೂ, ಡಚ್ ದಾಖಲೆಗಳಿಂದ ಸ್ಪಷ್ಟವಾಗಿ ತಿಳಿದುಬರುವಂತೆ, ಕೊಲತ್ತುನಾಡಿನ ರಾಜಕೀಯ ದೃಶ್ಯದಲ್ಲಿ ಪ್ರಾಬಲ್ಯ ಸಾಧಿಸಿದ್ದು ಪಳ್ಳಿ ಕೊವಿಲಕಂ ಮತ್ತು ಉದಯಮಂಗಲಂ ಕೊವಿಲಕಂ. ಈ ಎರಡೂ ಕೊವಿಲಕಂಗಳು ಮತ್ತೆ ವಿವಿಧ ಕೊವಿಲಕಂಗಳಾಗಿ ಶಾಖೆಗಳನ್ನು ಹೊಂದಿದ್ದವು, ಹೀಗಾಗಿ ಕೋಲಸ್ವರೂಪಂನೊಳಗೆ ರಾಜಕೀಯ ಮನೆಗಳ ಜಾಲವನ್ನು ಸೃಷ್ಟಿಸಿದವು.
ಕೊಲತ್ತಿರಿಯ ಮೂಲ ಸಾಮ್ರಾಜ್ಯವು ಕೊಲತ್ತಿರಿ ಕುಟುಂಬದ 5 ಮಾತೃಪ್ರಧಾನ-ವಿಭಾಗಗಳ ಉದ್ದಕ್ಕೂ ವಿಭಜಿಸಲ್ಪಟ್ಟಿತು ಮತ್ತು ಅನುಕ್ರಮವಾಗಿ ಕೊಲತ್ತಿರಿ, ತೆಕ್ಕಾಲಂಕೂರ್, ವಡಕ್ಕಾಲಂಕೂರ್, ನಾಲಾಂಕೂರ್, ಅಂಜಾಂಕೂರ್ ಎಂಬ ಭಾಗಗಳು/ ಕೂರ್-ವಾಝ್ಚ (ಭಾಗ-ಪ್ರಭುತ್ವಗಳು) ಆಡಳಿತಗಾರರನ್ನು ಹೊಂದಿತ್ತು.
{| class="wikitable"
|-
| style="text-align:left;" colspan="4"|''' ''ಕೊಲತ್ತಿರಿ'' ಕುಟುಂಬದ ಮಾತೃಪ್ರಧಾನ ವಿಭಾಗಗಳು (ಕೊವಿಲಕಂಗಳು)'''<ref name = "Kol38">ಮಲಬಾರ್ನಲ್ಲಿ ಬ್ರಿಟಿಷ್ ಅಧಿಕಾರದ ಸ್ಥಾಪನೆ, 1664 ರಿಂದ 1799 N. ರಾಜೇಂದ್ರನ್</ref>
|-
!ವಿಭಾಗ
!ಶಾಖೆ
!ಉಪ-ಶಾಖೆ
|- style="text-align:center;"
|'''ಉದಯಮಂಗಲಂ'''
|
|
|- style="text-align:center;"
|'''ಪಳ್ಳಿ'''
| '''ಚಿರಕ್ಕಲ್'''
|
|- style="text-align:center;"
|
| '''ಚೆಂಗ'''
|'''ಪ್ರಾಯಿಕ್ಕರ''' ಮಾವೆಲಿಕ್ಕರದಲ್ಲಿ, '''ಎನ್ನಕ್ಕಾಟ್''' (ಮತ್ತಷ್ಟು '''ಎನ್ನಕ್ಕಾಟ್''' ಮತ್ತು '''ಮಾವೆಲಿಕ್ಕರ''' ಎಂದು ವಿಭಜಿಸಲಾಗಿದೆ)
|- style="text-align:center;"
|
| '''ತೇವನಂ ಕೋಟ'''
|
|- style="text-align:center;"
|
| '''ಪಡಿಂಜಾರೆ'''
|
|- style="text-align:center;"
|
|''' ಥೆಕುಂಕುರೆ'''
|'''ಕೋಲತ್ ಕೊವಿಲಕಂ'''
|- style="text-align:center;"
|
| '''ಕಾವಿನಿಶ್ಶೇರಿ'''
|
|}
[[ಹೈದರ್ ಅಲಿ]] ಮತ್ತು [[ಟಿಪು ಸುಲ್ತಾನ್]] ಅವರ ಅವಧಿಯಲ್ಲಿ 1766 ರಿಂದ 1792 ರವರೆಗೆ ಉತ್ತರ ಮತ್ತು ದಕ್ಷಿಣ ಮಲಬಾರ್ನಲ್ಲಿ ಬಹು ಸೈನಿಕ ಆಕ್ರಮಣಗಳು, ಲೂಟಿ ಮತ್ತು ವ್ಯವಸ್ಥಿತ ಬಲವಂತದ ಮತಾಂತರಗಳನ್ನು ನಡೆಸಲಾಯಿತು.<ref name="NM11">[[ಮಲಬಾರ್ ಕೈಪಿಡಿ]] [[ವಿಲಿಯಮ್ ಲೋಗನ್ (ಮಲಬಾರ್ ಕೈಪಿಡಿ)|ವಿಲಿಯಮ್ ಲೋಗನ್]] ([[ಡಾ. ಸಿ.ಕೆ, ಕರೀಮ್]], ತಿರುವನಂತಪುರಂ ಅವರ ಸಂಪಾದಕತ್ವದಲ್ಲಿ [[ಚರಿತ್ರಂ ಪಬ್ಲಿಕೇಷನ್ಸ್]] ಮುದ್ರಿಸಿ ಪ್ರಕಟಿಸಲಾಗಿದೆ)</ref><ref name="NM12">[[ಫ್ರಾ ಬಾರ್ಟೊಲೊಮಿಯೊ]] (ಪೋರ್ಚುಗೀಸ್ ಪ್ರಯಾಣಿಕ ಮತ್ತು ಇತಿಹಾಸಕಾರ) ಅವರಿಂದ [[ಪೂರ್ವ ಇಂಡೀಸ್]]ಗೆ ಪ್ರಯಾಣ</ref><ref name="NM13">[[ಕರ್ನಲ್ ವಿಲ್ಕ್ಸ್]] ಅವರ ಐತಿಹಾಸಿಕ ರೇಖಾಚಿತ್ರಗಳು, ಸಂಪುಟ II.</ref> ಬಲವಂತದ ಮತಾಂತರಕ್ಕೆ ಹೆದರಿ, ಕೊಲತ್ತಿರಿ ಸೇರಿದಂತೆ 'ಮಲಬಾರ್' ಪ್ರದೇಶದ ಗಮನಾರ್ಹವಾದ ದೊಡ್ಡ ವಿಭಾಗವು (ಮುಖ್ಯಸ್ಥರು ಮತ್ತು ಬ್ರಾಹ್ಮಣರು) ತಮ್ಮ ಪ್ರಭುತ್ವಗಳಲ್ಲಿನ ದೇವಾಲಯಗಳ ಭೌತಿಕ ಸಂಪತ್ತಿನೊಂದಿಗೆ, ಹಿಂದಿನ ತಿರುವಾಂಕೂರು ಸಾಮ್ರಾಜ್ಯದಲ್ಲಿ ಆಶ್ರಯ ಪಡೆಯಲು ಪಲಾಯನ ಮಾಡಿದರು. ತಿರುವಾಂಕೂರು ಇಂಗ್ಲಿಷ್ ಕಂಪನಿಯೊಂದಿಗೆ ([[ಮಂಗಳೂರು ಒಪ್ಪಂದ]]) ಮೈತ್ರಿಯನ್ನು ಹೊಂದಿತ್ತು, ಅದರ ಪ್ರಕಾರ "ತಿರುವಾಂಕೂರಿನ ಮೇಲಿನ ಆಕ್ರಮಣವು ಇಂಗ್ಲಿಷರ ವಿರುದ್ಧ ಯುದ್ಧದ ಘೋಷಣೆಗೆ ಸಮಾನವಾಗಿ ಪರಿಗಣಿಸಲ್ಪಡುತ್ತದೆ". ಹೀಗೆ 1766 ಮತ್ತು 1792 ರ ನಡುವಿನ ವಿವಿಧ ಸಮಯಗಳಲ್ಲಿ, ಕೊಲತ್ತಿರಿ ಕುಟುಂಬದ ಎಲ್ಲಾ ಸ್ತ್ರೀ ಸದಸ್ಯರು ಮತ್ತು ಅನೇಕ ಪುರುಷ ಸದಸ್ಯರು ತಮ್ಮ ದೇವಾಲಯಗಳ ಸಂಪತ್ತಿನೊಂದಿಗೆ [[ತಿರುವನಂತಪುರಂ]]ನಲ್ಲಿ ಆಶ್ರಯ ಪಡೆದಿದ್ದರು. ಮಲಬಾರ್ನಲ್ಲಿ ಶಾಂತಿಯ ಪುನಃಸ್ಥಾಪನೆಯಾದಾಗ, ಕುಟುಂಬವು ಹಿಂತಿರುಗಿದಾಗ, ಮೂವರು ಸಹೋದರಿಯರು ಮಾವೆಲಿಕ್ಕರದಲ್ಲಿ ತಿರುವಾಂಕೂರಿನಲ್ಲಿಯೇ ಉಳಿದರು. ಭಿನ್ನಾಭಿಪ್ರಾಯಗಳು ಅವರಲ್ಲಿ ಒಬ್ಬರು ಎನ್ನಕ್ಕಾಡ್ಗೆ ತೆರಳಲು ಕಾರಣವಾದವು, ಮತ್ತೊಬ್ಬರು ಪ್ರಯಿಕ್ಕರದಲ್ಲಿ ನೆಲೆಸಿದರು ಮತ್ತು ಇತರ ಗುಂಪು ಕೋಳಂಚೇರಿಯಲ್ಲಿ ನೆಲೆಸಿತು. ಹೀಗೆ ಕೊಲತ್ತಿರಿ ಕುಟುಂಬದ ಮೂರು ಮಾತೃಪ್ರಧಾನ ಶಾಖೆಗಳು ತಿರುವಾಂಕೂರಿನಲ್ಲಿ ನೆಲೆಸಿ ಮಾವೆಲಿಕ್ಕರ, ಕೋಳಂಚೇರಿ, ಎನ್ನಕ್ಕಾಟ್ ಮತ್ತು ಪ್ರಯಿಕ್ಕರ ರಾಜಮನೆತನಗಳನ್ನು ಸ್ಥಾಪಿಸಿದವು.
===ಕೊಲತ್ತಿರಿ ರಾಜ ಎಂಬ ಬಿರುದಿನ ನಿಲುಗಡೆ===
ಹಿಂದೆ ಉದಯಮಂಗಲಂ ಮತ್ತು ಪಳ್ಳಿ ಎರಡೂ ವಿಭಾಗಗಳ ಸದಸ್ಯರು ತಮ್ಮ ವಯಸ್ಸಿನ ಹಿರಿತನದ ಆಧಾರದ ಮೇಲೆ ಕೊಲತ್ತಿರಿ ರಾಜ ಎಂಬ ಬಿರುದನ್ನು ವಹಿಸಿಕೊಳ್ಳಲು ಅರ್ಹರಾಗಿದ್ದರು. ಕೊಲತ್ತಿರಿ ಕುಟುಂಬದ ಪ್ರದೇಶಗಳ ಮೇಲೆ ಬೆಡ್ನೂರ್ / ಇಕ್ಕೇರಿಯ ರಾಜನ ಆಕ್ರಮಣ ಮತ್ತು ನಂತರ ಕೊಲತ್ತಿರಿ ಮತ್ತು ಆಕ್ರಮಣಕಾರನ ನಡುವಿನ ಕ್ರಿ.ಶ. 1736-37 ರ ನೆಲೆಸುವಿಕೆಯು ಕೊಲತ್ತಿರಿಗಳ ಕುಟುಂಬದೊಳಗೆ ಗಣನೀಯ ಬದಲಾವಣೆಗೆ ಕಾರಣವಾಯಿತು. ರಾಜ ಎಂಬ ಬಿರುದನ್ನು ವಹಿಸಿಕೊಳ್ಳುವುದರಿಂದ ಉದಯಮಂಗಲಂ ಶಾಖೆಯನ್ನು ಹೊರಗಿಡಲಾಯಿತು ಮತ್ತು ಕೊಲತ್ತಿರಿ ಎಂಬ ಬಿರುದು ಬಳಕೆಯಲ್ಲಿಲ್ಲದಾಯಿತು. ಆಳುವ ಕುಟುಂಬವು (ಪಳ್ಳಿ ವಿಭಾಗ) ರಾಜನಾಗಿ ಉತ್ತರಾಧಿಕಾರದ ಹಕ್ಕನ್ನು ಏಕಸ್ವಾಮ್ಯಗೊಳಿಸಿತು, ಇದು ಕೊಲತ್ತಿರಿ ರಾಜ ಎಂಬ ಪ್ರಾಚೀನ ಬಿರುದಿನ [[ಚಿರಕ್ಕಲ್ ರಾಜ]]ರಿಂದ ನಿಲುಗಡೆಗೆ ಕಾರಣವಾಯಿತು.<ref name = "Kol66">ಕೇರಳ ಜಿಲ್ಲಾ ಗೆಜೆಟಿಯರ್ಗಳು: ಕಣ್ಣೂರು (1962)</ref><ref name = "Kol38"/>
===ಕ್ಷತ್ರಿಯತ್ವಕ್ಕೆ ಏರಿಕೆ===
1617 ಕ್ರಿ.ಶ.ದಲ್ಲಿ ಕೊಲತ್ತಿರಿ ರಾಜ ಉದಯವರ್ಮನ್ ತನ್ನನ್ನು ಪೂರ್ಣ ಮನ್ನಣೆಗೆ ಹಿರಣ್ಯ-ಗರ್ಭವನ್ನು ನಡೆಸುವ ಮೂಲಕ ಏರಿಸಿಕೊಳ್ಳಲು ಬಯಸಿದನು, ಇದಕ್ಕೆ ನಂಬೂದಿರಿಗಳು ನಿರಾಕರಿಸಿದರು. ಅವನು ತಾಳಿಪರಂಬದ (ಪೆರುಂಚೆಲ್ಲೂರ್) ನಂಬೂದಿರಿ ಬ್ರಾಹ್ಮಣರು ತನಗಾಗಿ ಈ ಆಚರಣೆಯನ್ನು ನಡೆಸುವಂತೆ ಒತ್ತಾಯಿಸಲು ಪ್ರಯತ್ನಿಸಿದಾಗ, ನಂಬೂದಿರಿ ಬ್ರಾಹ್ಮಣರು ಅವನಿಗೆ ಹೀಗೆ ನಿರಾಕರಿಸಿದರು:
‘''ಕೊಲತ್ತಿರಿಗೆ ಪೆರುಂತ್ರಿಕ್ಕೊವಿಲಪ್ಪನ (ತಾಳಿಪರಂಬದ ಪೆರುಂಚೆಲ್ಲೂರಿನ ರಾಜರಾಜೇಶ್ವರ ದೇವಾಲಯದ ದೇವತೆ) ಅಧಿಕಾರ ವ್ಯಾಪ್ತಿಯಲ್ಲಿ ಯಾವುದೇ ರಾಜನ ಆದೇಶವು ಮಾನ್ಯವಾಗದ ಕಾರಣ, ತನಗಾಗಿ ಯಜ್ಞವನ್ನು ನಡೆಸುವಂತೆ ಕೇಳುವ ಹಕ್ಕಿಲ್ಲ''’ (ದೇವತೆಯ ರಾಜರಾಜೇಶ್ವರ ಅಥವಾ ರಾಜರ ರಾಜ ಎಂಬ ಬಿರುದು ದೇವತೆಯು ವಹಿಸಿಕೊಂಡ ರಾಜ ಸ್ಥಾನಮಾನವನ್ನು ಸ್ಪಷ್ಟವಾಗಿ ಸೂಚಿಸುತ್ತದೆ).<ref name="Kol55"/>
ಇತಿಹಾಸಕಾರ ಸ್ಯಾಮುಯೆಲ್ ಮತೀರ್; "ಮಲಬಾರ್ನ ಎಲ್ಲಾ ರಾಜರುಗಳೂ ಸಹ, ಇತ್ತೀಚೆಗೆ ಅವರ ಅವಲಂಬಿಗಳಿಂದ ಅವರಿಗಾಗಿ ಎತ್ತಲಾದ ಹಕ್ಕುಗಳ ಹೊರತಾಗಿಯೂ, ಅದೇ ದೊಡ್ಡ ಸಮೂಹಕ್ಕೆ ಸೇರಿದ್ದಾರೆ ಮತ್ತು ನಾಯರ್ ಎಂದು ಕರೆಯಲ್ಪಡುವ ಜನಸಮೂಹದೊಂದಿಗೆ ಏಕರೂಪವಾಗಿದ್ದಾರೆ ಎಂದು ನಂಬಲು ಕಾರಣವಿದೆ, ಆದ್ದರಿಂದ ನಂಬೂದಿರಿಗಳು ಎಲ್ಲಾ ನಾಯರ್ ಪ್ರಭುಗಳಿಗೆ ಕ್ಷತ್ರಿಯತ್ವವನ್ನು ನೀಡಲು ಹಿಂಜರಿಯುತ್ತಿದ್ದರು, ಪರಿಣಾಮವಾಗಿ, ಉದಯವರ್ಮನ್ [[ಗೋಕರ್ಣ, ಭಾರತ|ಗೋಕರ್ಣ]]ದಿಂದ 237 ಬ್ರಾಹ್ಮಣ ಕುಟುಂಬಗಳನ್ನು (ಸಾಗರ ದ್ವಿಜರು) ಕರೆತಂದು ಅವರನ್ನು ಐದು ದೇಶಗಳಲ್ಲಿ ನೆಲೆಸಿಸಿದರು. (ಪೆರಿಂಚೆಲ್ಲೂರ್ ಗ್ರಾಮದ ಚೇರುತಾಝಂ, ಕುನ್ನಿರಿಯಂ, ಅರತಿಲ್, ಕುಲಪ್ಪುರಂ ಮತ್ತು ವರರುಚಿಮಂಗಲಂ). ನಂತರದವರು ನಂಬೂದಿರಿ ಪದ್ಧತಿಗಳನ್ನು ಅಳವಡಿಸಿಕೊಂಡರು ಮತ್ತು ಹಿರಣ್ಯ-ಗರ್ಭವನ್ನು ನಡೆಸಿ ಮೊದಲಿನವರಿಗೆ ಕ್ಷತ್ರಿಯತ್ವವನ್ನು ನೀಡಿದರು. ನಂತರ, ತಿರುವಾಂಕೂರಿನ ರಾಜನ ಕೋರಿಕೆಯ ಮೇರೆಗೆ, ಈ ಸಾಗರ ದ್ವಿಜರು ಕುಟುಂಬಗಳಲ್ಲಿ 185 ಅನ್ನು ತಿರುವಲ್ಲಾಗೆ ಕಳುಹಿಸಲಾಯಿತು. (ತಿರುವಲ್ಲಾದೇಶಿ ಎಂಬ್ರಾಂತಿರಿಗಳು).<ref name="Namboothiri Websites Kozhikode"/>
==ಕೊಲತ್ತಿರಿ ರಾಜ ಯಾರು==
ಕೊಲತ್ತಿರಿ ಕುಟುಂಬಗಳಿಂದ ವಿಭಜನೆಯಾದ 9 ಶಾಖೆಗಳಿಂದ ಹಿರಿಯ ಪುರುಷರು.
ಕೊಲತ್ತಿರಿ ರಾಜಮನೆತನದ ಶಾಖೆಗಳು
*ಪ್ರಾಯಿಕ್ಕರ ಅರಮನೆ
*ಮಾವೆಲಿಕ್ಕರ ಅರಮನೆ
*ಎನ್ನಕ್ಕಾಡ್ ಅರಮನೆ
*ನೆಡುಂಪ್ರಂ ಅರಮನೆ (ತಿರುವಲ್ಲಾ)
*ಚೇರುಕುನ್ನು ಪಡಿಂಜಾರೆ ಕೊವಿಲಕಂ
*ಕಾವಿನಿಸ್ಸೇರಿ ಕೊವಿಲಕಂ
*ಮರಿಯಾಪ್ಪಲ್ಲಿ ಅರಮನೆ
*ಚಿರಕ್ಕಲ್ ಕೊವಿಲಕಂ
*ಥೇವನಗೋಡು ಕೊವಿಲಕಂ (ಪ್ರಸ್ತುತ ಎನ್ನಕ್ಕಾಡ್ ಅರಮನೆಯೊಂದಿಗೆ ವಿಲೀನಗೊಂಡಿದೆ)
*ಅದುತಿಲ ಪಡಿಂಜಾರೆ ಕೊವಿಲಕಂ
ಪ್ರಸ್ತುತ ಕೊಲತ್ತಿರಿ ವಲಿಯ ರಾಜನು ಬ್ರಿಗೇಡಿಯರ್ (ನಿವೃತ್ತ). R. ನಂದಕುಮಾರ ವರ್ಮ, ಮಾವೆಲಿಕ್ಕರ ಅರಮನೆಯ ವಲಿಯ ತಂಪುರಾನ್.
ಪ್ರಸ್ತುತ ಕೊಲತ್ತಿರಿ ಎಳಯ ರಾಜ
N. ನಂದಕುಮಾರ ವರ್ಮ, ನೆಡುಂಪ್ರಂ ಅರಮನೆಯ ವಲಿಯ ರಾಜ.
===ಕೊಲತ್ತಿರಿಯ ಮಾಜಿ ರಾಜರು===
==ಕ್ಯಾಲೆಂಡರ್ ವ್ಯವಸ್ಥೆ==
ಕೇರಳದ ಮಧ್ಯ/ದಕ್ಷಿಣದಲ್ಲಿ (ಉತ್ತರ ಮಲಬಾರ್ / ಕೊಲತ್ತುನಾಡನ್ನು ಹೊರತುಪಡಿಸಿ) ಆಚರಿಸಲಾಗುವ [[ಮಲಯಾಳಂ ಕ್ಯಾಲೆಂಡರ್|ಕೊಲ್ಲ-ವರ್ಷಂ]] ಅಥವಾ ''ಕೊಲ್ಲ-ವರ್ಷಂ'' ಆವೃತ್ತಿಯು 25 ಆಗಸ್ಟ್ 825 ಕ್ರಿ.ಶ.ದಲ್ಲಿ ಪ್ರಾರಂಭವಾಯಿತು ಮತ್ತು ವರ್ಷವು ಇತರ ಭಾರತೀಯ ಕ್ಯಾಲೆಂಡರ್ಗಳಲ್ಲಿರುವಂತೆ ''ಮೇಷ-ರಾಶಿ'' (ಮೇಷ) ಯಲ್ಲಲ್ಲದೆ ''ಸಿಂಹ-ರಾಶಿ'' (ಸಿಂಹ) ಯಿಂದ ಪ್ರಾರಂಭವಾಗುತ್ತದೆ. ಕೊಲ್ಲಂ ಯುಗದ ಪ್ರಾರಂಭದ ಬಗ್ಗೆ ಹಲವಾರು ಖಾತೆಗಳು, ಪ್ರಸ್ತುತ, ದಾಖಲಿತ ಮತ್ತು ವದಂತಿಗಳಿದ್ದರೂ, ಹಿಂದಿನ ಉತ್ತರ ಮಲಬಾರ್ / ಕೊಲತ್ತುನಾಡಿನಲ್ಲಿ, ''ಕೊಲ್ಲಂ'' ಯುಗವನ್ನು ಬದಲಾಗಿ ಮುಂದಿನ ತಿಂಗಳು, ''ಕನ್ಯಾ-ರಾಶಿ'' (ಕನ್ಯೆ) (25 ಸೆಪ್ಟೆಂಬರ್) ನಿಂದ ಲೆಕ್ಕಹಾಕಲಾಗುತ್ತದೆ. ಈ ವ್ಯತ್ಯಾಸವು ಅದಕ್ಕೆ ಸಂಬಂಧಿಸಿದ ಎರಡು ಆಸಕ್ತಿದಾಯಕ ಖಾತೆಗಳನ್ನು ಹೊಂದಿದೆ.<ref name="astrom">[[K.V ಸರ್ಮಾ]] (1996), ಕೊಲ್ಲಂ ಯುಗ, ಇಂಡಿಯನ್ ಜರ್ನಲ್ ಆಫ್ ಹಿಸ್ಟರಿ ಆಫ್ ಸೈನ್ಸ್, 31 (1)[http://www.new.dli.ernet.in/rawdataupload/upload/insa/INSA_1/20005b5f_93.pdf] {{Webarchive|url=https://web.archive.org/web/20120316083252/http://www.new.dli.ernet.in/rawdataupload/upload/insa/INSA_1/20005b5f_93.pdf|date=16 March 2012}}</ref>
(1) ಸಾಂಪ್ರದಾಯಿಕ ಪಠ್ಯ ''ಕೇರೋಲೋಲ್ಪತ್ತಿ''ಯು [[ಕೊಲ್ಲಂ ಯುಗ]]ದ ಪರಿಚಯವನ್ನು [[ಶಂಕರಾಚಾರ್ಯ]]ರಿಗೆ ಆರೋಪಿಸುತ್ತದೆ. ಆದ್ದರಿಂದ ನೀವು "ಆಚಾರ್ಯ ವಾಗ ಭೇದ್ಯ" (ಶಂಕರಾಚಾರ್ಯರ ಮಾತು/ನಿಯಮವು ಬದಲಾಗದು ಎಂದರ್ಥ) ಎಂಬ ಪದವನ್ನು [[ಕಟಪಯಾಡಿ]] ಸಂಕೇತದಲ್ಲಿ ಸಂಖ್ಯೆಗಳಿಗೆ ಪರಿವರ್ತಿಸಿದರೆ ಅದು 0 6 1 4 3 4 1 ಎಂದು ಅನುವಾದಿಸುತ್ತದೆ ಮತ್ತು ಇವುಗಳನ್ನು ಹಿಂದಕ್ಕೆ ಬರೆದಾಗ ಕೊಲ್ಲಂ ಯುಗದ ಮೊದಲ ವರ್ಷದಲ್ಲಿ ''[[ಕಲಿಯುಗ]]''ದ ವಯಸ್ಸನ್ನು ನೀಡುತ್ತದೆ. ''ಕಲಿ'' ದಿನ 1434160ವು 25 ಸೆಪ್ಟೆಂಬರ್ 825 ಕ್ರಿ.ಶ. ಆಗಿ ಕೆಲಸ ಮಾಡುತ್ತದೆ, ಇದು ಕೊಲತ್ತುನಾಡಿನಲ್ಲಿ ಕೊಲ್ಲಂ ಯುಗದ ಪ್ರಾರಂಭಕ್ಕೆ ಅನುರೂಪವಾಗಿದೆ, ಅಂದರೆ ''ಕನ್ಯಾ-ರಾಶಿ'' (ಕನ್ಯೆ) ಮೊದಲ ದಿನ.
(2) ಎರಡನೆಯ ಖಾತೆಯೆಂದರೆ ಕೊಲ್ಲಂ ಯುಗವು ಕೊಲ್ಲಂನಲ್ಲಿ ಮಾಡಲಾದ ಘೋಷಣೆಯೊಂದಿಗೆ ಪ್ರಾರಂಭವಾಯಿತು.
==ಕೊಲತ್ತಿರಿಯ ರಾಜ ಸಂಕೇತಗಳು==
ದಂತಕಥೆಯ ಪ್ರಕಾರ, ಲಾರ್ಡ್ [[ಪರಶುರಾಮ]]ನು ರಾಮಘಾತ ಮೂಷಿಕನಿಗೆ ತನ್ನ ಪಟ್ಟಾಭಿಷೇಕದ ದಿನದಂದು (1) ನಾಂದಕಂ ವಾಲ್ (ವಿಶೇಷ ಖಡ್ಗ) (2) ಮತ್ತು ನೆನ್ಮೆನಿ-ವಕ (''ಮುಮೋಸಾ ಲೆಬ್ಬೆಕ್'') ಮೂಲಿಕೆಯನ್ನು ರಾಜವಂಶಕ್ಕೆ ಸಂಬಂಧಿಸಿದ ಮರವಾಗಿ ನಿಯೋಜಿಸಿದನು (3) ಮತ್ತು ಮತ್ತಷ್ಟು ವಾಕಪೂಕ್ಕುಲ (''ಮುಮೋಸಾ ಲೆಬ್ಬೆಕ್''ನ ಪುಷ್ಪಗುಚ್ಛ) ಮತ್ತು ಚಂಗಲವಟ್ಟಂ ವಿಲಕ್ಕು (ಇದು ದೇವಾಲಯದ ಮೆರವಣಿಗೆಗಳಲ್ಲಿ ಬಳಸಲಾಗುವ ಭಾರವಾದ ಕಂಚಿನ ದೀಪ ಮತ್ತು ದೀಪವು ಸರಪಳಿಯೊಂದಿಗೆ ಅದಕ್ಕೆ ಜೋಡಿಸಲಾದ ಚಮಚದೊಂದಿಗೆ ಎಣ್ಣೆ ಶೇಖರಣಾ ಸ್ಥಳವನ್ನು ಹೊಂದಿದೆ), ರಾಜ ಸಂಕೇತಗಳಾಗಿ ನೀಡಿದನು. ಕೋಲ-ಸ್ವರೂಪಂ ರಾಜವಂಶವು ನೆನ್ಮೆನಿ-ವಕ (''ಮುಮೋಸಾ ಲೆಬ್ಬೆಕ್'') ನೊಂದಿಗಿನ ತಮ್ಮ ಈ ಸಂಬಂಧವು ಮೂಷಿಕನ್ ಎಂಬ ತಮ್ಮ ನಾಮಕರಣಕ್ಕೆ ಕಾರಣವಾಯಿತು ಎಂದು ನಂಬುತ್ತದೆ. ಆದ್ದರಿಂದ ಕೊಲತ್ತಿರಿ ಕುಟುಂಬದ ರಾಜ ಧ್ವಜ ಮತ್ತು ರಾಜ ಮುದ್ರೆಯು ಚಿತ್ರಗಳ ಸಂಯೋಜನೆಯಾಗಿತ್ತು, ಅವುಗಳೆಂದರೆ: ತೋನಿ (ದೋಣಿ), ಚಂಗಲವಟ್ಟಂ ವಿಲಕ್ಕು, ನಾಂದಕಂ ವಾಲ್ ಮತ್ತು ನೆನ್ಮೆನಿ-ವಕ.
===ರಾಜ ಧ್ವಜ/ಮಾನದಂಡ (ಕೊಡಿಕ್ಕೂರ ಅಥವಾ ಧ್ವಜಂ)===
ಧ್ವಜದ ಚಿತ್ರಣವು ಎರಡೂ ಬದಿಗಳಲ್ಲಿ ಎರಡು ನಾಂದಕಂ-ವಾಲ್-ಖಡ್ಗಗಳನ್ನು ಕೇಂದ್ರದಲ್ಲಿ ಇರಿಸಲಾದ ವಾಕಪೂಕ್ಕುಲ-''ಮುಮೋಸಾ ಲೆಬ್ಬೆಕ್''ನ ಪುಷ್ಪಗುಚ್ಛ ಮತ್ತು ಅದರ ಕೆಳಗೆ ಐದು ಅರ್ಧ ಚಂದ್ರಾಕೃತಿಗಳನ್ನು ಒಳಗೊಂಡಿತ್ತು.
===ರಾಜ ಮುದ್ರೆ (ಮುದ್ರ)===
ಮುದ್ರೆಯ ಚಿತ್ರಣವು ಅದರ ಕೆಳಗೆ ಒಂದು ತೋನಿ-ದೋಣಿ, ಅದರ ಮೇಲೆ ಒಂದು ಚಂಗಲವಟ್ಟಂ-ದೀಪ, ಅದರ ಮೇಲೆ ಲಂಬವಾಗಿ ಇರಿಸಲಾದ ನಾಂದಕಂ-ವಾಲ್-ಖಡ್ಗ, ನಂತರ ಎರಡೂ ಪಕ್ಕದ ಬದಿಗಳಲ್ಲಿ ಒಂದು ವಾಕಪೂಕ್ಕುಲ-ಪುಷ್ಪಗುಚ್ಛವನ್ನು ಒಳಗೊಂಡಿತ್ತು.
==ಇವನ್ನೂ ನೋಡಿ==
*[[ಮನ್ನನಾರ್]]
*[[ತುಳುನಾಡು]]
==ಉಲ್ಲೇಖಗಳು==
{{reflist|24em}}
{{Malabar}}
{{Kerala}}
{{coord missing|Kerala}}
[[ವರ್ಗ:ಭಾರತದಲ್ಲಿನ ಐತಿಹಾಸಿಕ ಪ್ರದೇಶಗಳು]]
[[ವರ್ಗ:ಕ್ರಿ.ಪೂ. 6ನೇ ಶತಮಾನದಲ್ಲಿ ಸ್ಥಾಪಿತವಾದ ರಾಜ್ಯಗಳು ಮತ್ತು ಪ್ರದೇಶಗಳು]]
[[ವರ್ಗ:1940ರ ದಶಕದಲ್ಲಿ ಭಾರತದಲ್ಲಿ ವಿಸರ್ಜನೆಗಳು]]
[[ವರ್ಗ:ಕಣ್ಣೂರು ಜಿಲ್ಲೆಯ ಇತಿಹಾಸ]]
[[ವರ್ಗ:ಕೇರಳದ ಸಾಮ್ರಾಜ್ಯಗಳು]]
[[ವರ್ಗ:ಭಾರತದ ಮಾಜಿ ರಾಜಪ್ರಭುತ್ವಗಳು]]
[[ವರ್ಗ:ಭಾರತದ ರಾಜ್ಯಗಳು]]
[[ವರ್ಗ:ಮಾಜಿ ಸಾಮ್ರಾಜ್ಯಗಳು]]
ntghvjbu4wvuwsstekn1kuky2iuze3y
1378196
1378195
2026-08-02T16:15:09Z
A826
72368
/* ಉಲ್ಲೇಖಗಳು */
1378196
wikitext
text/x-wiki
{{Infobox country
|native_name = ಕೊಲತ್ತುನಾಡು
|conventional_long_name = ಕೋಲ ಸ್ವರೂಪಂ
|common_name = ಕೊಲತ್ತುನಾಡು
|image_map = Ezhimala beach.JPG
|image_map_caption = [[ಎಳಿಮಲ (ಬೆಟ್ಟ, ಕಣ್ಣೂರು)|ಎಳಿಮಲ]], ''ಕೋಲ ಸ್ವರೂಪಂ''ನ ಆರಂಭಿಕ ಐತಿಹಾಸಿಕ ಪ್ರಧಾನ ಕಚೇರಿ
|capital = [[ಎಳಿಮಲ]], [[ವಲಪಟ್ಟಣಂ]], [[ಚಿರಕ್ಕಲ್, ಕಣ್ಣೂರು|ಚಿರಕ್ಕಲ್]] ಮತ್ತು ಇತರ ವಿವಿಧ ರಾಜಧಾನಿಗಳು
|government_type = [[ಸಂಪೂರ್ಣ ರಾಜಪ್ರಭುತ್ವ]]
|p1 = ಚೇರ ರಾಜವಂಶ
|s1 = ಭಾರತದಲ್ಲಿ ಕಂಪನಿ ಆಳ್ವಿಕೆ
|year_start = ಸು. ಕ್ರಿ.ಪೂ. 6ನೇ ಶತಮಾನ (ಸಾಂಪ್ರದಾಯಿಕ ದಿನಾಂಕ)
|year_end = ಆಧುನಿಕ ಯುಗ
|common_languages = [[ಮಲಯಾಳಂ ಭಾಷೆ|ಮಲಯಾಳಂ]]
|religion = [[ಹಿಂದೂ ಧರ್ಮ]]
|title_leader = [[ಕೊಲತ್ತಿರಿ|ಕೊಲತ್ತಿರಿ]]
}}
{{Keralahistory}}
'''ಕೊಲತ್ತುನಾಡು''' (ಮಲಯಾಳಂ: കോലത്തുനാട്, {{IPA|ml|koːlɐt̪ːun̪aːɖə̆|pron}}) ('''ಕೋಲ ಸ್ವರೂಪಂ''', ವಿದೇಶಿ ಖಾತೆಗಳಲ್ಲಿ '''ಕನ್ನನೋರ್ ಸಾಮ್ರಾಜ್ಯ''', ನಂತರದ ಕಾಲದಲ್ಲಿ '''ಚಿರಕ್ಕಲ್ (ಚೆರಿಕುಲ್)''') [[ಪೋರ್ಚುಗೀಸ್ ಭಾರತದ ನೌಕಾಪಡೆ|ಪೋರ್ಚುಗೀಸ್ ನೌಕಾಪಡೆಗಳು]] ಭಾರತಕ್ಕೆ ಆಗಮಿಸುವ ಸಮಯದಲ್ಲಿ [[ಮಲಬಾರ್ ಕರಾವಳಿ]]ಯಲ್ಲಿ [[ಜಾಮೋರಿನ್]], [[ಕೊಚ್ಚಿ ಸಾಮ್ರಾಜ್ಯ]] ಮತ್ತು [[ವೆನಾಡ್|ಕ್ವಿಲಾನ್]] ಜೊತೆಗೆ ಅತ್ಯಂತ ಪ್ರಬಲವಾದ ನಾಲ್ಕು [[ರಾಜ್ಯ|ಸಾಮ್ರಾಜ್ಯ]]ಗಳಲ್ಲಿ ಒಂದಾಗಿತ್ತು. ಕೊಲತ್ತುನಾಡು ತನ್ನ ರಾಜಧಾನಿಯನ್ನು [[ಎಳಿಮಲ]]ದಲ್ಲಿ ಹೊಂದಿತ್ತು ಮತ್ತು [[ಕೊಲತ್ತಿರಿ|ಕೊಲತ್ತಿರಿ ರಾಜಮನೆತನ]]ದಿಂದ ಆಳಲ್ಪಡುತ್ತಿತ್ತು ಮತ್ತು ಸ್ಥೂಲವಾಗಿ ಭಾರತದ [[ಕೇರಳ ರಾಜ್ಯ]]ದ [[ಉತ್ತರ ಮಲಬಾರ್]] ಪ್ರದೇಶವನ್ನು ಒಳಗೊಂಡಿತ್ತು. ಸಾಂಪ್ರದಾಯಿಕವಾಗಿ, ಕೊಲತ್ತುನಾಡು ಉತ್ತರದಲ್ಲಿ [[ಚಂದ್ರಗಿರಿ ನದಿ]] ಮತ್ತು ದಕ್ಷಿಣದಲ್ಲಿ [[ಕೊರಪುಳ]] ನದಿಯ ನಡುವಿನ ಭೂಮಿ ಎಂದು ವರ್ಣಿಸಲಾಗಿದೆ.<ref name="Kol1">ಕೇರಳೋಲ್ಪತ್ತಿ ಗ್ರಂಥವರಿ: ದ ಕೊಲತ್ತುನಾಡ್ ಟ್ರೆಡಿಶನ್ಸ್ (ಮಲಯಾಳಂ) (ಕೋಝಿಕ್ಕೋಡ್: ಕ್ಯಾಲಿಕಟ್ ವಿಶ್ವವಿದ್ಯಾಲಯ, 1984) M. R. ರಾಘವ ವರಿಯರ್ (ಸಂಪಾದಕರು)</ref> ಕೊಲತ್ತುನಾಡು ([[ಕಣ್ಣೂರು]]) ಸಾಮ್ರಾಜ್ಯವು ತನ್ನ ಉತ್ತುಂಗದ ಸಮಯದಲ್ಲಿ, ಉತ್ತರದಲ್ಲಿ [[ನೇತ್ರಾವತಿ ನದಿ]] ([[ಮಂಗಳೂರು]]) ಯಿಂದ ದಕ್ಷಿಣದಲ್ಲಿ [[ಕೊರಪುಳ]] ([[ಕೋಝಿಕ್ಕೋಡ್]]) ವರೆಗೆ, ಪಶ್ಚಿಮದಲ್ಲಿ [[ಅರೇಬಿಯನ್ ಸಮುದ್ರ]] ಮತ್ತು ಪೂರ್ವದ ಗಡಿಯಲ್ಲಿ [[ಕೊಡಗು]] ಬೆಟ್ಟಗಳೊಂದಿಗೆ, [[ಅರೇಬಿಯನ್ ಸಮುದ್ರ]]ದಲ್ಲಿನ [[ಲಕ್ಷದ್ವೀಪ]]ದ ಪ್ರತ್ಯೇಕ ದ್ವೀಪಗಳನ್ನು ಸಹ ಒಳಗೊಂಡಂತೆ ವಿಸ್ತರಿಸಿದೆ ಎಂದು ವರದಿಯಾಗಿದೆ.<ref name="Kola Swaroopam"/>
ಕೊಲತ್ತುನಾಡಿನ ಆಳುವ ಮನೆತನ, [[ಕೊಲತ್ತಿರಿ]]ಗಳು ಎಂದು ಕರೆಯಲ್ಪಡುತ್ತದೆ, ಇವರು ಕೇರಳದ ಪ್ರಾಚೀನ ರಾಜವಂಶವಾದ [[ಮುಷಿಕ ಸಾಮ್ರಾಜ್ಯ|ಮುಷಿಕ ರಾಜಮನೆತನ]]ದ ವಂಶಸ್ಥರಾಗಿದ್ದರು ಮತ್ತು ಕ್ರಿ.ಶ. 12ನೇ ಶತಮಾನದಲ್ಲಿ [[ಕುಲಶೇಖರ ವಂಶ (ಎರಡನೇ ಚೇರರು)|ಮಹೋದಯಪುರದ ಚೇರರು]] ಮತ್ತು [[ಪಾಂಡ್ಯ ವಂಶ]] ಕಣ್ಮರೆಯಾದ ನಂತರ ಕೇರಳ ಪ್ರದೇಶದ ಪ್ರಮುಖ ರಾಜಕೀಯ ಶಕ್ತಿಗಳಲ್ಲಿ ಒಂದಾಗಿ ಏರಿದರು.<ref>{{Cite book | url=https://books.google.com/books?id=wnAjqjhc1VcC&pg=PA32 | title=ಕೇರಳ ಇತಿಹಾಸ ಮತ್ತು ಅದರ ನಿರ್ಮಾತೃಗಳು| isbn=9788126437825| last1=ಶ್ರೀಧರ ಮೇನನ್| first1=A.| date=4 March 2011| publisher=DC Books}}</ref><ref name = "Kol2">ಕೇರಳದ ಪೆರುಮಾಳ್ M. G. S. ನಾರಾಯಣನ್ (ಕೋಝಿಕ್ಕೋಡ್: ಖಾಸಗಿ ಪ್ರಕಟಣೆ, 1996)</ref>
ಕೊಲತ್ತಿರಿಗಳು ತಮ್ಮ ಪೂರ್ವಜರನ್ನು ಪ್ರಾಚೀನ ಮುಷಿಕ ಸಾಮ್ರಾಜ್ಯಕ್ಕೆ (ಎಳಿಮಲ ಸಾಮ್ರಾಜ್ಯ, ಎಲಿ-ನಾಡು) [[ತಮಿಳು ಸಂಗಮ್]] ಯುಗದಲ್ಲಿ ಗುರುತಿಸುತ್ತಾರೆ. ಮುಷಿಕ ರಾಜವಂಶದ ರಾಜ ನನ್ನನ್ [[ಚೇರ ವಂಶ|ಚೇರರು]] ವಿರುದ್ಧದ ಯುದ್ಧದಲ್ಲಿ ಕೊಲ್ಲಲ್ಪಟ್ಟ ನಂತರ, ರಾಜವಂಶದ ದಾಖಲಿತ ಇತಿಹಾಸವು ಅಲ್ಲಲ್ಲಿ ಕೆಲವು ಪರೋಕ್ಷ ಉಲ್ಲೇಖಗಳನ್ನು ಹೊರತುಪಡಿಸಿ ಅಸ್ಪಷ್ಟವಾಗಿದೆ. ಆದಾಗ್ಯೂ, ಸಾಂಪ್ರದಾಯಿಕ ವಿದ್ವಾಂಸರಲ್ಲಿ ಕೊಲತ್ತಿರಿಗಳು ರಾಜ ನನ್ನನ್ ಅವರ ವಂಶಸ್ಥರು ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ, ಮತ್ತು ನಂತರದ ಸಾಹಿತ್ಯ ಕೃತಿಗಳು ಮುಷಿಕ ರಾಜವಂಶದ ವಿಕ್ರಮಾರಾಮನ್, ಜಯಮಣಿ, ವಲಭನ್ ಮತ್ತು ಶ್ರೀಕಂದನ್ ನಂತಹ ರಾಜರನ್ನು ಸೂಚಿಸುತ್ತವೆ. ಭಾರತೀಯ ಮಾನವಶಾಸ್ತ್ರಜ್ಞ [[A. ಅಯ್ಯಪ್ಪನ್|ಅಯಿನಪಲ್ಲಿ ಅಯ್ಯಪ್ಪನ್]] ಅವರು [[ತುಳುನಾಡು]]ನ [[ಬಂಟ್ (ಸಮುದಾಯ)|ಬಂಟ್ ಸಮುದಾಯ]]ದ ಪ್ರಬಲ ಮತ್ತು ಯುದ್ಧೋಚಿತ ಕುಲವನ್ನು ''ಕೋಲ ಬಾರಿ'' ಎಂದು ಕರೆಯಲಾಗುತ್ತಿತ್ತು ಮತ್ತು ಕೊಲತ್ತುನಾಡಿನ ಕೊಲತ್ತಿರಿ ರಾಜನು ಈ ಕುಲದ ವಂಶಸ್ಥನಾಗಿದ್ದನು ಎಂದು ಹೇಳುತ್ತಾರೆ.<ref name="Aiyappan">{{cite book |last1=ಅಯಿನಪಲ್ಲಿ |first1=ಅಯ್ಯಪ್ಪನ್ |title=ಕೇರಳದ ವ್ಯಕ್ತಿತ್ವ |date=1982 |publisher=ಪ್ರಕಟಣಾ ವಿಭಾಗ, [[ಕೇರಳ ವಿಶ್ವವಿದ್ಯಾಲಯ]] |page=162 |url=https://books.google.com/books?id=SXFuAAAAMAAJ |access-date=27 July 2018 |quote=ತುಳುನಾಡಿನ ಬಂಟರ ಅತ್ಯಂತ ಪ್ರಬಲ ಮತ್ತು ಯುದ್ಧೋಚಿತ ವಿಭಾಗವನ್ನು ಕೋಲ ಬಾರಿ ಎಂದು ಕರೆಯಲಾಗುತ್ತಿತ್ತು. ಕೋಲ ರಾಜವಂಶವು ತುಳುನಾಡಿನ ಕೋಲ ವಂಶಾವಳಿಗಳ ಭಾಗವಾಗಿತ್ತು ಎಂದು ಸೂಚಿಸುವುದು ಸಮಂಜಸವಾಗಿದೆ.}}</ref> ಹೆಚ್ಚು ಪ್ರಸಿದ್ಧವಾದ [[ತಿರುವಾಂಕೂರು ರಾಜಮನೆತನ]]ವು ಕೊಲತ್ತಿರಿಗಳ ನಿಕಟ ಸೋದರಸಂಬಂಧಿ ರಾಜವಂಶವಾಗಿದೆ.<ref>{{Cite book | url=https://books.google.com/books?id=LFy4pWUlnfwC&pg=PA22 | title=ಕೇರಳದಲ್ಲಿ ಫೋರ್ಟ್ ಕೊಚ್ಚಿ, 1750-1830: ಭಾರತೀಯ ಪರಿಸರದಲ್ಲಿ ಡಚ್ ಸಮುದಾಯದ ಸಾಮಾಜಿಕ ಸ್ಥಿತಿ| isbn=978-9004168169| last1=ಸಿಂಗ್| first1=ಅಂಜನಾ| year=2010| publisher=BRILL}}</ref><ref>{{Cite book |last=ಇಂದುಚೂಡನ್ |first=V. T. |url=https://books.google.com/books?id=Vns9AAAAIAAJ |title=ಗೋಲ್ಡನ್ ಟವರ್: ತಿರುಕ್ಕುಲಶೇಖರಪುರಂ ಮತ್ತು ಇತರ ದೇವಾಲಯಗಳ ಐತಿಹಾಸಿಕ ಅಧ್ಯಯನ |date=1971 |publisher=ಕೊಚ್ಚಿ ದೇವಸ್ವಂ ಬೋರ್ಡ್ |pages=164 |language=en}}</ref><ref>{{Cite book |last=ಡಿ ಲ್ಯಾನೊಯ್ |first=ಮಾರ್ಕ್ |url=https://books.google.com/books?id=pKjZAAAAMAAJ |title=ತಿರುವಾಂಕೂರಿನ ಕುಲಶೇಖರ ಪೆರುಮಾಳ್ಗಳು: 1671 ರಿಂದ 1758 ರವರೆಗೆ ತಿರುವಾಂಕೂರಿನ ಇತಿಹಾಸ ಮತ್ತು ರಾಜ್ಯ ರಚನೆ |date=1997 |publisher=ಲೈಡನ್ ವಿಶ್ವವಿದ್ಯಾಲಯ |isbn=978-90-73782-92-1 |pages=20 |language=en}}</ref>
ಕೊಲತ್ತಿರಿಗಳು ಸಾಮಾನ್ಯವಾಗಿ [[ಕೆನರಾ|ಕೆನರಾ]] ಮತ್ತು [[ಜಾಮೋರಿನ್]]ರ ಕ್ಯಾಲಿಕಟ್ ಸಾಮ್ರಾಜ್ಯಗಳ ನಡುವಿನ ವಲಯದ ಮೇಲೆ ಉನ್ನತ ರಾಜಕೀಯ ಅಧಿಕಾರವನ್ನು ಹೊಂದಿದ್ದರು ಎಂದು ಹೇಳಲಾಗಿದ್ದರೂ, ಅವರ ರಾಜಕೀಯ ಪ್ರಭಾವವು ಹೆಚ್ಚು ಕಡಿಮೆ ಕೊಲತ್ತುನಾಡಿಗೆ ಸೀಮಿತವಾಗಿತ್ತು.<ref name = "Kol3">ಡುವಾರ್ಟೆ ಬಾರ್ಬೋಸಾ, ದ ಬುಕ್ ಆಫ್ ಡುವಾರ್ಟೆ ಬಾರ್ಬೋಸಾ: ಆನ್ ಅಕೌಂಟ್ ಆಫ್ ದ ಕಂಟ್ರೀಸ್ ಬಾರ್ಡರಿಂಗ್ ಆನ್ ದ ಇಂಡಿಯನ್ ಓಷನ್ ಅಂಡ್ ದೇರ್ ಇನ್ಹ್ಯಾಬಿಟೆಂಟ್ಸ್, II, ಸಂ. M. L ಡೇಮ್ಸ್ (ಮರುಮುದ್ರಣ, ಲಂಡನ್: ಹಕ್ಲುಯಿಟ್ ಸೊಸೈಟಿ, 1921)</ref><ref name = "Kol4">ಮಲಬಾರ್ನಲ್ಲಿ ಡಚ್: ಮದ್ರಾಸ್ ಸರ್ಕಾರದ ದಾಖಲೆಗಳಿಂದ ಆಯ್ಕೆ, ಸಂ. 13 (ಮದ್ರಾಸ್: ಸೂಪರಿಂಟೆಂಡೆಂಟ್, ಸರ್ಕಾರಿ ಮುದ್ರಣಾಲಯ, 1911), 143.</ref>
ಅವರ ಪ್ರಾಚೀನ ರಾಜಧಾನಿಯಾದ ಎಳಿಮಲವು [[ಕೊಲ್ಲಂ|ಕ್ವಿಲಾನ್]] ಮತ್ತು ಕ್ಯಾಲಿಕಟ್ ಜೊತೆಗೆ ಮಲಬಾರ್ ಕರಾವಳಿಯ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿತ್ತು ಮತ್ತು [[ಇಬ್ನ್ ಬತೂತಾ]], [[ಮಾರ್ಕೊ ಪೊಲೊ]] ಮತ್ತು ವಾಂಗ್ ತಾ-ಯುಆನ್ ಅವರ ಬರಹಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಕಾಲಾನಂತರದಲ್ಲಿ, ಅವರ ಪ್ರದೇಶಗಳು ಹಲವಾರು ಸಣ್ಣ ಸಾಮಂತ ರಾಜ್ಯಗಳಾಗಿ ವಿಂಗಡಿಸಲ್ಪಟ್ಟವು, ಅವುಗಳಲ್ಲಿ ಮುಖ್ಯವಾದವು [[ಅರಕ್ಕಲ್ ಸಾಮ್ರಾಜ್ಯ|ಕನ್ನನೋರ್ ಮತ್ತು ಲಕ್ಷದ್ವೀಪ]], ಕೋಟಿಯೋಟ್ ಮತ್ತು ವೈನಾಡ್, ಕಾರ್ಟಿನಾಡ್ (ಬಡಗರ), ಇರ್ವೆನಾಡ್, ಮತ್ತು ರಂಡತೆರ್ರ. "ಐದು ಸ್ನೇಹಪರ ಉತ್ತರ ಆಡಳಿತಗಾರರು" (ನಿಲೇಶ್ವರಂ, ಕುಂಬಳ, ವಿಟಾಲ್ಹ್, ಬಂಗೋರ್, ಮತ್ತು ಚೌತ್ವಾರ) ಎಂದು ಕರೆಯಲ್ಪಡುವವರು ಕೊಲತ್ತುನಾಡಿಗೆ ಸಮೀಪದಲ್ಲಿದ್ದರು, [[ಕವ್ವೈ ಪುಳ ನದಿ|ಕವ್ವಾಯ್ ನದಿ]]ಯ ಉತ್ತರಕ್ಕೆ. ಅವರು ದಕ್ಷಿಣದಲ್ಲಿ ತಮ್ಮ ಪ್ರಬಲ ನೆರೆಯವರಾದ ಕ್ಯಾಲಿಕಟ್ನ [[ಜಾಮೋರಿನ್]]ರೊಂದಿಗೆ ಆಗಾಗ್ಗೆ ಪೈಪೋಟಿಯಲ್ಲಿ ತೊಡಗಿದ್ದರು - ಇದು ಕೇರಳ ಇತಿಹಾಸದ ಶಾಶ್ವತ ಲಕ್ಷಣವಾಗಿದೆ. ಉತ್ತರ ಮಲಬಾರ್ ಮತ್ತು ಜಾಮೋರಿನ್ ಸಾಮ್ರಾಜ್ಯದ ನಡುವಿನ ಜಾತಿ ನಿರ್ಬಂಧಗಳು ಮತ್ತು ಕೊರಪುಳ ಗಡಿಯು ಅವರ ಪೈಪೋಟಿಯ ನಂತರ ಸ್ಥಾಪಿಸಲ್ಪಟ್ಟಿತು. ಕೆಲವು ಐತಿಹಾಸಿಕ ದಾಖಲೆಗಳು ಕೊಲತ್ತುನಾಡ್ ಸಾಮ್ರಾಜ್ಯವು [[ತಿರುವಾಂಕೂರು]] ಸಾಮ್ರಾಜ್ಯ ಮತ್ತು [[ತುಳು ಸಾಮ್ರಾಜ್ಯ|ತುಳು]] ಸಾಮ್ರಾಜ್ಯದೊಂದಿಗೆ ಸ್ನೇಹಪರವಾಗಿತ್ತು ಎಂದು ಸೂಚಿಸುತ್ತವೆ.<ref name=":02">{{Cite book |last=ಬ್ರಿಟಿಷ್ ಭಾರತ ಸರ್ಕಾರದ ಮದ್ರಾಸ್ |url=http://archive.org/details/MalabarMarriageCommissionReport |title=ಮಲಬಾರ್ ವಿವಾಹ ಆಯೋಗ ವರದಿ |date=1891}}</ref>
[[ಮಲಯಾಳಂ ಸಾಹಿತ್ಯ]]ದ ಬೆಳವಣಿಗೆಯಲ್ಲಿ ಮೈಲಿಗಲ್ಲಾದ ''ಕೃಷ್ಣ ಗಾಥಾ''ದ ಕರ್ತೃವಾದ [[ಚೇರುಸ್ಸೇರಿ ನಂಬೂತಿರಿ]] (ಸು. 1375-1475 ಕ್ರಿ.ಶ.) ಕೊಲತ್ತಿರಿ ರಾಜವಂಶದ ರಾಜರಲ್ಲಿ ಒಬ್ಬನಾದ ಉದಯವರ್ಮನ್ ಕೊಲತ್ತಿರಿಯ ಆಸ್ಥಾನದಲ್ಲಿ ವಾಸಿಸುತ್ತಿದ್ದರು.
==ಇತಿಹಾಸ==
{{Moresources|section|date=ಜುಲೈ 2023}}
===ಹಿನ್ನೆಲೆ===
ಎಳಿಮಲ ಆಡಳಿತಗಾರರು, ಮುಷಿಕ ಸಾಮ್ರಾಜ್ಯ, ಮತ್ತು ಕೊಲತ್ತುನಾಡಿನ ಮೂಲವು ಸಾಂಪ್ರದಾಯಿಕ ಇತಿಹಾಸದ ದೃಷ್ಟಿಯಿಂದ ಅಸ್ಪಷ್ಟವಾಗಿದೆ.
ಕ್ರಿಶ್ಚಿಯನ್ ಮಿಷನರಿ [[ಮತೀರ್ ಮೆಮೋರಿಯಲ್ ಚರ್ಚ್#ರೆವ್. ಸ್ಯಾಮುಯೆಲ್ ಮತೀರ್|ಸ್ಯಾಮುಯೆಲ್ ಮತೀರ್]] ಅಭಿಪ್ರಾಯಪಟ್ಟರು: "ಮಲಬಾರ್ನ ಎಲ್ಲಾ ರಾಜರುಗಳೂ ಸಹ, ಇತ್ತೀಚೆಗೆ ಅವರ ಅವಲಂಬಿಗಳಿಂದ ಅವರಿಗಾಗಿ ಎತ್ತಲಾದ ಹಕ್ಕುಗಳ ಹೊರತಾಗಿಯೂ, ಅದೇ ದೊಡ್ಡ ಸಮೂಹಕ್ಕೆ ಸೇರಿದ್ದಾರೆ ಮತ್ತು ನಾಯರ್ ಎಂದು ಕರೆಯಲ್ಪಡುವ ಜನಸಮೂಹದೊಂದಿಗೆ ಏಕರೂಪವಾಗಿದ್ದಾರೆ ಎಂದು ನಂಬಲು ಕಾರಣವಿದೆ, ಆದ್ದರಿಂದ ನಂಬೂದಿರಿಗಳು ಎಲ್ಲಾ ನಾಯರ್ ಪ್ರಭುಗಳಿಗೆ ಕ್ಷತ್ರಿಯತ್ವವನ್ನು ನೀಡಲು ಹಿಂಜರಿಯುತ್ತಿದ್ದರು, 1617 ರಲ್ಲಿ ಕೊಲತ್ತಿರಿ ರಾಜ ಉದಯವರ್ಮನ್ ಅವರು ಹಿರಣ್ಯ-ಗರ್ಭವನ್ನು ನಡೆಸುವ ಮೂಲಕ ಸೋಮ ಕ್ಷತ್ರಿಯ ಸ್ಥಾನಕ್ಕೆ ಏರಲು ಬಯಸಿದ್ದರು,<ref>{{Cite book|last=ಮತೀರ್|first=ಸ್ಯಾಮುಯೆಲ್|url=https://books.google.com/books?id=aYdCAAAAIAAJ&q=172|title=ತಿರುವಾಂಕೂರಿನ ಸ್ಥಳೀಯ ಜೀವನ|date=1883|publisher=W.H. ಅಲೆನ್ & ಕಂಪನಿ|language=en}}</ref><ref name="Namboothiri Websites Kozhikode">{{cite web|author=ನಂಬೂತಿರಿ ವೆಬ್ಸೈಟ್ಗಳು ಕೋಝಿಕ್ಕೋಡ್ |url=http://www.namboothiri.com/articles/saagaradwijans.htm |title=ಕೇರಳದ ಸಾಗರ ದ್ವಿಜರು |publisher=Namboothiri.com |access-date=2011-09-13}}</ref> ಇದಕ್ಕೆ ನಂಬೂದಿರಿಗಳು ನಿರಾಕರಿಸಿದರು. ಪರಿಣಾಮವಾಗಿ, ಉದಯವರ್ಮನ್ [[ಗೋಕರ್ಣ, ಭಾರತ|ಗೋಕರ್ಣ]]ದಿಂದ 237 ಬ್ರಾಹ್ಮಣ ಕುಟುಂಬಗಳನ್ನು (ಸಾಗರ ದ್ವಿಜರು) ಕರೆತಂದು ಅವರನ್ನು ಐದು ದೇಶಗಳಲ್ಲಿ ನೆಲೆಸಿಸಿದರು. (ಪೆರಿಂಚೆಲ್ಲೂರ್ ಗ್ರಾಮದ ಚೇರುತಾಝಂ, ಕುನ್ನಿರಿಯಂ, ಅರತಿಲ್, ಕುಲಪ್ಪುರಂ ಮತ್ತು ವರರುಚಿಮಂಗಲಂ). ನಂತರದವರು ನಂಬೂದಿರಿ ಪದ್ಧತಿಗಳನ್ನು ಅಳವಡಿಸಿಕೊಂಡರು ಮತ್ತು ಹಿರಣ್ಯ-ಗರ್ಭವನ್ನು ನಡೆಸಿ ಮೊದಲಿನವರಿಗೆ ಕ್ಷತ್ರಿಯತ್ವವನ್ನು ನೀಡಿದರು.<ref name="Namboothiri Websites Kozhikode"/><ref name = "Kol55">ಕೇರಳದಲ್ಲಿ ಶ್ರೌತ ಯಜ್ಞಗಳು (ಕೋಝಿಕ್ಕೋಡ್: ಕ್ಯಾಲಿಕಟ್ ವಿಶ್ವವಿದ್ಯಾಲಯ, 2002), 98 V. ಗೋವಿಂದನ್ ನಂಬೂದಿರಿ; ಫ್ರೀಮನ್, 'ಪ್ಯೂರಿಟಿ ಅಂಡ್ ವಯಲೆನ್ಸ್', 527-8</ref>
====ಎಳಿಮಲ ಆಡಳಿತಗಾರರು====
{{See also|ನನ್ನನ್}}
[[File:Periplous of the Erythraean Sea.svg|thumbnail|''[[ಪೆರಿಪ್ಲಸ್ ಆಫ್ ದ ಎರಿತ್ರಿಯನ್ ಸೀ]]'' (1ನೇ ಶತಮಾನ ಕ್ರಿ.ಶ.) ನ ಹೆಸರುಗಳು, ಮಾರ್ಗಗಳು ಮತ್ತು ಸ್ಥಳಗಳು]]
''[[ಪೆರಿಪ್ಲಸ್ ಆಫ್ ದ ಎರಿತ್ರಿಯನ್ ಸೀ]]''ನಲ್ಲಿ [[ಮುಜಿರಿಸ್]]ನ ಉತ್ತರಕ್ಕೆ ಎಲ್ಲೋ ಒಂದು ಬಂದರು ಎಂದು ಉಲ್ಲೇಖಿಸಲಾದ ಪ್ರಾಚೀನ ಬಂದರು ''ನೌರಾ''ವನ್ನು [[ಕಣ್ಣೂರು]] ಎಂದು ಗುರುತಿಸಲಾಗಿದೆ.<ref name="Ente_Kannur">{{cite book|author=ಮೇನನ್, A. ಶ್ರೀಧರ |title=ಕೇರಳ ಇತಿಹಾಸದ ಸಮೀಕ್ಷೆ|url=https://books.google.com/books?id=FVsw35oEBv4C|year=2007|publisher=DC Books|isbn=9788126415786}}</ref>
[[ಪ್ಲಿನಿ ದಿ ಎಲ್ಡರ್]] (1ನೇ ಶತಮಾನ ಕ್ರಿ.ಶ.) [[ಟಿಂಡಿಸ್]] ಬಂದರು [[ಚೇರ ವಂಶ|ಚೇರ ಸಾಮ್ರಾಜ್ಯ]]ದ ವಾಯುವ್ಯ ಗಡಿಯಲ್ಲಿತ್ತು ಎಂದು ಹೇಳುತ್ತಾರೆ.<ref name=":2">ಗುರುಕ್ಕಲ್, R., & ವಿಟ್ಟೇಕರ್, D. (2001). ಮುಜಿರಿಸ್ ಹುಡುಕಾಟದಲ್ಲಿ. ''ಜರ್ನಲ್ ಆಫ್ ರೋಮನ್ ಆರ್ಕಿಯಾಲಜಿ,'' ''14'', 334-350.</ref> [[ಟಿಂಡಿಸ್]] ಬಂದರಿನ ಉತ್ತರಕ್ಕೆ ಇರುವ [[ಉತ್ತರ ಮಲಬಾರ್]] ಪ್ರದೇಶವು [[ಸಂಗಮ್ ಕಾಲ]]ದಲ್ಲಿ [[ಎಳಿಮಲ]] ಸಾಮ್ರಾಜ್ಯದಿಂದ ಆಳಲ್ಪಡುತ್ತಿತ್ತು.<ref name="odra">A. ಶ್ರೀಧರ ಮೇನನ್, ಕೇರಳ ಇತಿಹಾಸದ ಸಮೀಕ್ಷೆ</ref> ''[[ಪೆರಿಪ್ಲಸ್ ಆಫ್ ದ ಎರಿತ್ರಿಯನ್ ಸೀ]]''ನ ಪ್ರಕಾರ, [[ಲಿಮಿರಿಕೆ]] ಎಂದು ಕರೆಯಲ್ಪಡುವ ಪ್ರದೇಶವು [[ಕಣ್ಣೂರು|ನೌರಾ]] ಮತ್ತು ಟಿಂಡಿಸ್ನಲ್ಲಿ ಪ್ರಾರಂಭವಾಯಿತು. ಆದಾಗ್ಯೂ [[ಟಾಲೆಮಿ]] ''[[ಲಿಮಿರಿಕೆ]]''ಯ ಆರಂಭಿಕ ಬಿಂದುವಾಗಿ ಟಿಂಡಿಸ್ ಅನ್ನು ಮಾತ್ರ ಉಲ್ಲೇಖಿಸುತ್ತಾರೆ. ಈ ಪ್ರದೇಶವು ಬಹುಶಃ [[ಕನ್ಯಾಕುಮಾರಿ]]ಯಲ್ಲಿ ಕೊನೆಗೊಂಡಿತು; ಆದ್ದರಿಂದ ಇದು ಸ್ಥೂಲವಾಗಿ ಪ್ರಸ್ತುತ ಮಲಬಾರ್ ಕರಾವಳಿಗೆ ಸಮಾನವಾಗಿದೆ. ಈ ಪ್ರದೇಶದೊಂದಿಗೆ ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವು ಸುಮಾರು 50,000,000 [[ಸೆಸ್ಟೆರ್ಸೆಸ್]] ಎಂದು ಅಂದಾಜಿಸಲಾಗಿದೆ.<ref>ಪ್ಲಿನಿ ದಿ ಎಲ್ಡರ್ ಪ್ರಕಾರ, ಭಾರತದಿಂದ ಸರಕುಗಳನ್ನು ಸಾಮ್ರಾಜ್ಯದಲ್ಲಿ ಅವುಗಳ ಮೂಲ ಖರೀದಿ ಬೆಲೆಯ 100 ಪಟ್ಟು ಮಾರಾಟ ಮಾಡಲಾಗುತ್ತಿತ್ತು. ನೋಡಿ [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> ಪ್ಲಿನಿ ದಿ ಎಲ್ಡರ್ [[ಲಿಮಿರಿಕೆ]]ಯು ಕಡಲ್ಗಳ್ಳರಿಂದ ಬಾಧಿತವಾಗಿದೆ ಎಂದು ಉಲ್ಲೇಖಿಸಿದ್ದಾರೆ.<ref>ಬೋಸ್ಟಾಕ್, ಜಾನ್ (1855). "26 (ಭಾರತಕ್ಕೆ ಪ್ರಯಾಣಗಳು)". ಪ್ಲಿನಿ ದಿ ಎಲ್ಡರ್, ದ ನ್ಯಾಚುರಲ್ ಹಿಸ್ಟರಿ. ಲಂಡನ್: ಟೇಲರ್ ಅಂಡ್ ಫ್ರಾನ್ಸಿಸ್.</ref> [[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟೆಸ್]] ''[[ಲಿಮಿರಿಕೆ]]''ಯು ಮೆಣಸಿನ ಮೂಲವಾಗಿತ್ತು ಎಂದು ಉಲ್ಲೇಖಿಸಿದ್ದಾರೆ.<ref>ಇಂಡಿಕೋಪ್ಲ್ಯೂಸ್ಟೆಸ್, ಕಾಸ್ಮಾಸ್ (1897). ಕ್ರಿಶ್ಚಿಯನ್ ಟೋಪೋಗ್ರಫಿ. 11. ಯುನೈಟೆಡ್ ಕಿಂಗ್ಡಮ್: ದ ಟೆರ್ಟುಲಿಯನ್ ಪ್ರಾಜೆಕ್ಟ್. pp. 358–373.</ref><ref>ದಾಸ್, ಸಂತೋಷ್ ಕುಮಾರ್ (2006). ಪ್ರಾಚೀನ ಭಾರತದ ಆರ್ಥಿಕ ಇತಿಹಾಸ. ಜೆನೆಸಿಸ್ ಪಬ್ಲಿಷಿಂಗ್ ಪ್ರೈ. ಲಿಮಿಟೆಡ್. p. 301.</ref>
[[ಸಂಗಮ್ ಕಾಲ]]ದಲ್ಲಿ, ಕ್ರೈಸ್ತ ಶಕೆಯ ಆರಂಭಿಕ ಶತಮಾನಗಳಲ್ಲಿ, ಪ್ರಸ್ತುತ ಕೇರಳ ಮತ್ತು ತಮಿಳುನಾಡು ಎರಡೂ ಪ್ರತ್ಯೇಕ ರಾಜಕೀಯ ಘಟಕಗಳ ಅಡಿಯಲ್ಲಿದ್ದರೂ, ಸಾಮಾನ್ಯ ಸಾಂಸ್ಕೃತಿಕ ಕ್ಷೇತ್ರ ಮತ್ತು ಸಾಮಾನ್ಯ ಭೌಗೋಳಿಕ ವಸಾಹತು ಮಾದರಿಯ ಭಾಗವಾಗಿ ಪರಿಗಣಿಸಲ್ಪಟ್ಟಿದ್ದವು.<ref name = "Kol77"/> ಹೆಚ್ಚು ನಿರ್ದಿಷ್ಟವಾಗಿ, ಕ್ರೈಸ್ತ ಶಕೆಯ ಆರಂಭಿಕ ತಮಿಳು ಸಂಕಲನಗಳು ಪಾಂಡ್ಯರು, ಚೇರರು, ಅಥವಾ ಚೋಳರು, ಮತ್ತು ವೇಳಿರ್ ಮುಖ್ಯಸ್ಥರ ನಡುವೆ ಯಾವುದೇ ತೀಕ್ಷ್ಣವಾದ ಸಾಂಸ್ಕೃತಿಕ ಅಥವಾ ಸಾಮಾಜಿಕ ವ್ಯತ್ಯಾಸವನ್ನು ಮಾಡುವುದಿಲ್ಲ, ಇವರೆಲ್ಲರೂ ಸಾಮಾನ್ಯ ಸಾಂಸ್ಕೃತಿಕ ಮತ್ತು ಭೌಗೋಳಿಕ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ, ಪಶ್ಚಿಮ ಕರಾವಳಿಯ ಹಿಂದೂ ದೇವಾಲಯಗಳನ್ನು ಸಹ ತಮಿಳು ಭಕ್ತಿ ಚಳವಳಿಯ ಪವಿತ್ರ ಭೂಗೋಳದಲ್ಲಿ ಸೇರಿಸಲಾಯಿತು ಮತ್ತು ಅವುಗಳನ್ನು ಚಳವಳಿಯ ಪ್ರಮುಖ ಪ್ರತಿಪಾದಕರಾದ [[ಆಳ್ವಾರರು]] ಮತ್ತು [[ನಾಯನಾರ್|ನಾಯನಾರ್]]ಗಳು ತಮ್ಮ ಪದ್ಯಗಳಲ್ಲಿ ಹೇರಳವಾಗಿ ಹೊಗಳಿದರು.<ref name = "Kol90">ದಕ್ಷಿಣ ಭಾರತದ ಸಮಾಜ ಮತ್ತು ಸಂಸ್ಕೃತಿಯ ಅಡಿಪಾಯಗಳು M. G. S. ನಾರಾಯಣನ್, (ದೆಹಲಿ: ಭಾರತೀಯ ಬುಕ್ ಕಾರ್ಪೋರೇಷನ್, 1994), 194</ref>
[[ತಮಿಳಕಂ|ತಮಿಳು]] [[ಸಂಗಮ್ ಕಾಲ|ಸಂಗಮ್ ಯುಗ]]ದಲ್ಲಿ, ಪ್ರಸ್ತುತ ಕೇರಳದ ಉಳಿದ ಭಾಗ, [[ತುಳುನಾಡು]], [[ಕೊಡಗು ಜಿಲ್ಲೆ|ಕೂರ್ಗ್]], ಮತ್ತು ತಮಿಳುನಾಡಿನ ಕೆಲವು ಭಾಗಗಳಂತೆಯೇ ಉತ್ತರ ಮಲಬಾರ್ ಚೇರರ ಆಳ್ವಿಕೆಯಲ್ಲಿತ್ತು. ಚೇರರ (ಮತ್ತು ಪಾಂಡ್ಯರು ಮತ್ತು ಚೋಳರಂತಹ ಇತರರು) ಒಂದು ಶಾಖೆಯು ಎಳಿಲ್ ಮಲದಲ್ಲಿ (ಮತ್ತು ಪಳ್ಳಿಯಲ್ಲಿ ಎರಡನೇ ರಾಜಧಾನಿಯೊಂದಿಗೆ) ತನ್ನ ರಾಜಧಾನಿಯನ್ನು ಹೊಂದಿತ್ತು, ಇದನ್ನು ಮುಷಿಕ ವಂಶ ಎಂದು ಕರೆಯಲಾಗುತ್ತಿತ್ತು, ಇದು ಚೇರರ ಪರವಾಗಿ ಪ್ರದೇಶವನ್ನು ಆಳಿತು. ಎಳಿಲ್ ಮಲ (ಯುರೋಪಿಯನ್ ಖಾತೆಗಳಲ್ಲಿ ಮೌಂಟ್ ಡೆಲಿ) ಮತ್ತು ಅದರ ನೆರೆಯ ಪ್ರದೇಶಗಳು ಕ್ರೈಸ್ತ ಶಕೆಯ ಆರಂಭಿಕ ಶತಮಾನಗಳಲ್ಲಿ ಸಾಮಾಜಿಕ-ರಾಜಕೀಯ ಚಟುವಟಿಕೆಗಳ ಕ್ರಿಯಾಶೀಲ ಕೇಂದ್ರಗಳಾದವು.<ref name = "Kol21">ಕೊಲತ್ತುಪಝಮ ಕುಮಾರನ್ ಅವರಿಂದ</ref> ಎಳಿಲ್ ಮಲ ಸಾಮ್ರಾಜ್ಯವು (ಕೊಂಕ-ನಾಮ್, ಪುಳಿ-ನಾಡಿನ ಒಂದು ಭಾಗ) ಪ್ರಾಯೋಗಿಕವಾಗಿ ಪ್ರಸ್ತುತ ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳ ಸಂಪೂರ್ಣ ಮತ್ತು ತುಳು ದೇಶದ ಒಂದು ಭಾಗ ಮತ್ತು ಕೂರ್ಗ್ ಮತ್ತು ಗುದಲೂರಿನ ಭಾಗಗಳನ್ನು ಒಳಗೊಂಡಿತ್ತು. ಇದು ಪ್ರಾಚೀನ ತಮಿಳು ದೇಶದ ವಾಯುವ್ಯ ದಿಕ್ಕಿನ ತಮಿಳು ಮಾತನಾಡುವ ಪ್ರದೇಶವಾಗಿತ್ತು. [[ಎಳಿಮಲ]]ದಲ್ಲಿ ನೆಲೆಗೊಂಡಿದ್ದ ಎಳಿಮಲ ಸಾಮ್ರಾಜ್ಯವು ಎರಡು ನಾಡುಗಳ ಮೇಲೆ ಅಧಿಕಾರವನ್ನು ಹೊಂದಿತ್ತು - ಕರಾವಳಿ ಪೂಳಿನಾಡು ಮತ್ತು ಬೆಟ್ಟದ ಪೂರ್ವ ಕರ್ಕನಾಡು. [[ಸಂಗಮ್ ಸಾಹಿತ್ಯ]]ದ ಕೃತಿಗಳ ಪ್ರಕಾರ, ಪೂಳಿನಾಡು [[ಮಂಗಳೂರು]] ಮತ್ತು [[ಕೋಝಿಕ್ಕೋಡ್]] ನಡುವಿನ ಕರಾವಳಿ ಪಟ್ಟಿಯ ಹೆಚ್ಚಿನ ಭಾಗವನ್ನು ಒಳಗೊಂಡಿತ್ತು.<ref name="Census_Handbook">{{Cite book|title=ಜಿಲ್ಲಾ ಜನಗಣತಿ ಕೈಪಿಡಿ, ಕಾಸರಗೋಡು (2011)|publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ|location=ತಿರುವನಂತಪುರಂ|pages=9|url=https://censusindia.gov.in/2011census/dchb/3201_PART_B_KASARAGOD.pdf}}</ref> ಕರ್ಕನಾಡು [[ವಯನಾಡ್]]-[[ಗುದಲೂರು, ನೀಲಗಿರಿ|ಗುದಲೂರು]] ಅನ್ನು ಒಳಗೊಂಡಿತ್ತು, ಇದು [[ಕೊಡಗು]] (ಕೂರ್ಗ್) ನ ಭಾಗಗಳನ್ನು ಹೊಂದಿರುವ ಬೆಟ್ಟದ ಪ್ರದೇಶವಾಗಿದೆ.<ref name="wnd">{{cite book
| author = ಭಾರತ ಸರ್ಕಾರ | year=2014–15
| title= ಜಿಲ್ಲಾ ಜನಗಣತಿ ಕೈಪಿಡಿ – ವಯನಾಡ್ (ಭಾಗ-ಬಿ) 2011 | publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ
| url= https://censusindia.gov.in/2011census/dchb/3203_PART_B_WAYANAD.pdf}}</ref>
ಎಳಿಮಲ ರಾಜವಂಶದ ಅತ್ಯಂತ ಪ್ರಸಿದ್ಧ ಆಡಳಿತಗಾರ ನನ್ನನ್, ಕ್ರಿ.ಶ. 5ನೇ ಶತಮಾನದಲ್ಲಿ [[ಚೇರ ವಂಶ|ಚೇರರು]] ವಿರುದ್ಧ ಸೋತಾಗ [[ವಯನಾಡ್]] ಬೆಟ್ಟಗಳಲ್ಲಿ ಆಶ್ರಯ ಪಡೆದನು, [[ಸಂಗಮ್ ಸಾಹಿತ್ಯ|ಸಂಗಮ್ ಕೃತಿಗಳ]] ಪ್ರಕಾರ, ಯುದ್ಧದಲ್ಲಿ ಅವನ ಮರಣದ ಸ್ವಲ್ಪ ಮೊದಲು.<ref name="wnd"/> ಎಳಿಮಲ ಸಾಮ್ರಾಜ್ಯವು ಆರಂಭಿಕ ಮಧ್ಯಯುಗದಲ್ಲಿ [[ಮುಷಿಕ ವಂಶ]]ದಿಂದ ಉತ್ತರಾಧಿಕಾರವನ್ನು ಪಡೆಯಿತು, ಹೆಚ್ಚಾಗಿ [[ತುಳುನಾಡು]]ನಿಂದ [[ತುಳುವ ಬ್ರಾಹ್ಮಣ]]ರ ವಲಸೆಯ ಕಾರಣದಿಂದಾಗಿರಬಹುದು. ಕೊಲತ್ತುನಾಡು ([[ಕಣ್ಣೂರು]]) ಸಾಮ್ರಾಜ್ಯವು ಮುಷಿಕ ರಾಜವಂಶದ ವಂಶಸ್ಥರು, ತನ್ನ ಉತ್ತುಂಗದ ಸಮಯದಲ್ಲಿ ಉತ್ತರದಲ್ಲಿ [[ನೇತ್ರಾವತಿ ನದಿ]] (ಮಂಗಳೂರು) ಯಿಂದ<ref name="Kola Swaroopam">{{cite book |last1=ಶ್ರೀಧರ ಮೇನನ್ |first1=A. |title=''ಕೇರಳ ಚರಿತ್ರಂ'' |year=2007 |publisher=DC Books |location=ಕೊಟ್ಟಾಯಂ |isbn=978-8126415885 |edition=2007 |page=175 |url=https://books.google.com/books?id=FAlXPgAACAAJ|access-date=19 July 2020}}</ref> ದಕ್ಷಿಣದಲ್ಲಿ [[ಕೊರಪುಳ]] ವರೆಗೆ, ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ ಮತ್ತು ಪೂರ್ವದ ಗಡಿಯಲ್ಲಿ [[ಕೊಡಗು]] ಬೆಟ್ಟಗಳೊಂದಿಗೆ ವಿಸ್ತರಿಸಿತು ಎಂದು ವರದಿಯಾಗಿದೆ.<ref name="Census_Handbook"/>
ಎಳಿಲ್ ಮಲದ ನನ್ನನ್ ಈ ರಾಜವಂಶದ ಅತ್ಯಂತ ಪ್ರಸಿದ್ಧ ಆಡಳಿತಗಾರನಾಗಿದ್ದನು. ಉಳಿದಿರುವ ತಮಿಳು ಸಂಕಲನಗಳು ನನ್ನನನ ಒಂದು ಶಕ್ತಿಯುತ ಚಿತ್ರಣವನ್ನು ಚಿತ್ರಿಸುತ್ತವೆ ಮತ್ತು [[ಚೇರ ವಂಶಗಳು|ಚೇರರು]] ನಂತಹ ಆಳುವ ಗಣ್ಯರೊಂದಿಗಿನ ಅವನ ಯುದ್ಧಗಳನ್ನು ವಿವರಿಸುತ್ತವೆ.<ref name="Kol21"/> ಅವನು ಹೆಚ್ಚಾಗಿ ಒಬ್ಬ ಬುಡಕಟ್ಟು ಮುಖ್ಯಸ್ಥನಾಗಿದ್ದು, ನೆರೆಯ ಪ್ರದೇಶಗಳಲ್ಲಿ ಲೂಟಿ ದಾಳಿಗಳಲ್ಲಿ ಪ್ರಮುಖವಾಗಿ ತೊಡಗಿದ್ದನು.<ref name = "Kol29">ರಾಜನ್ ಗುರುಕ್ಕಲ್, 'ದಕ್ಷಿಣ ಭಾರತದಲ್ಲಿ ರಾಜ್ಯ ರಚನೆಯ ಪೂರ್ವಭಾವಿ', R. ಚಂಪಕಲಕ್ಷ್ಮಿ, ಕೇಸವನ್ ವೇಲುತ್ತಟ್, T. R. ವೆನುಗೋಪಾಲನ್, (ಸಂಪಾದಕರು), ಪ್ರಾಚೀನ ದಕ್ಷಿಣ ಭಾರತದಲ್ಲಿ ರಾಜ್ಯ ಮತ್ತು ಸಮಾಜ (ತ್ರಿಸೂರ್: ಕಾಸ್ಮೊಬುಕ್ಸ್, 2002), pp. 39-59</ref>
ಆದಾಗ್ಯೂ, 1ನೇ ಶತಮಾನ ಕ್ರಿ.ಶ. ಆರಂಭದಲ್ಲಿ, ಎಳಿಲ್ ಮಲ ಸಾಮ್ರಾಜ್ಯವು ನನ್ನನ್ ಅಡಿಯಲ್ಲಿ ತನ್ನ ರಾಜಧಾನಿ ಪಳ್ಳಿಯೊಂದಿಗೆ ರಾಜಕೀಯ ಪ್ರಾಮುಖ್ಯತೆಗೆ ಏರಿತು. ನನ್ನನ್ ಒಬ್ಬ ಯುದ್ಧೋಚಿತ ರಾಜನಾಗಿದ್ದು, ಆಂತರಿಕ ಪ್ರದೇಶಗಳಿಗೆ ಆಳವಾದ ದಂಡಯಾತ್ರೆಗಳನ್ನು ನಡೆಸಿದನು ಮತ್ತು ವೈನಾಡ್-ಗುದಲೂರು ಪ್ರದೇಶ ಮತ್ತು ಕೊಂಗುನಾಡಿನ (ಸೇಲಂ-ಕೊಯಮತ್ತೂರು ಪ್ರದೇಶ) ಒಂದು ಭಾಗವನ್ನು ತನ್ನ ನಿಯಂತ್ರಣಕ್ಕೆ ತಂದನು. ತಮಿಳು ಕವಿಗಳ ಪ್ರಕಾರ ಅವನು ಚೇರರ ವಿರುದ್ಧ ಹಲವಾರು ವಿಜಯಗಳನ್ನು (ಪಳ್ಳಿ ಯುದ್ಧ ಸೇರಿದಂತೆ) ಸಾಧಿಸಿದನು. ಸೆಲ್ ಕೇಳು ಕುಟ್ಟುವನ್ನನ ಉತ್ತರಾಧಿಕಾರಿಯಾದ ರಾಜ ನರ್ಮುಡಿ ಚೇರಲ್, ಜನರಲ್ ಮಿಗಿಲಿ ಅಡಿಯಲ್ಲಿ ಚೇರ ಪಡೆಗಳನ್ನು ನನ್ನನನ ವಿರುದ್ಧ ಕಳುಹಿಸಿದನು. ಆದರೆ, ಅವನು ಎಳಿಲ್ ಮಲ ಪಡೆಗಳ ವಿರುದ್ಧ ಪಳ್ಳಿ ಯುದ್ಧದಲ್ಲಿ ಸೋಲಿಸಲ್ಪಟ್ಟನು. ಆದರೆ ನಂತರ, ನನ್ನನನು ನಂತರದ ಸತತ ಘರ್ಷಣೆಗಳಲ್ಲಿ ಸೋಲಿಸಲ್ಪಟ್ಟನು. ಅವನು ತನ್ನ ರಾಜಧಾನಿ ಪಳ್ಳಿಯಿಂದ ಪಲಾಯನ ಮಾಡಲು ಮತ್ತು ವೈನಾಡ್ ಬೆಟ್ಟಗಳಲ್ಲಿ ಆಶ್ರಯ ಪಡೆಯಲು ಒತ್ತಾಯಿಸಲ್ಪಟ್ಟನು. ಯುದ್ಧಗಳು ನರ್ಮುಡಿ ಚೇರಲ್ ವಾಗೈ ಪೆರುಂ ತುರೈ ಯುದ್ಧದಲ್ಲಿ ನನ್ನನನ ಪಡೆಗಳನ್ನು ನುಚ್ಚುನೂರು ಮಾಡಿದಾಗ ಕೊನೆಗೊಂಡಿತು. ''ಅಗನಾನೂರು'' ಪ್ರಕಾರ, ನನ್ನನನು ಯುದ್ಧದಲ್ಲಿ ಕೊಲ್ಲಲ್ಪಟ್ಟನು. ಅವನ ಮರಣದ ನಂತರ, ಎಳಿಮಲ ಸಾಮ್ರಾಜ್ಯದ ನಿಯಂತ್ರಣವು ಚೇರರ ವಶಕ್ಕೆ ಬಂದಿತು.
ಪಳ್ಳಿ ನಗರವು, ಎಳಿಲ್ ಮಲ ಸಾಮ್ರಾಜ್ಯದ ನಂತರದ ರಾಜಧಾನಿಯಾಗಿದ್ದು, ಚಿನ್ನ ಮತ್ತು ಅಮೂಲ್ಯ ಕಲ್ಲುಗಳ ಶ್ರೀಮಂತ ನಿಧಿಗಳಿಗೆ ಪ್ರಸಿದ್ಧವಾಗಿತ್ತು. ಅವರು ಮಲಬಾರ್ ಕರಾವಳಿಯಲ್ಲಿ ಪ್ರಾಚೀನ ರೋಮನ್ನರೊಂದಿಗೆ ನಿಕಟ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದರು.
[[ಉತ್ತರ ಮಲಬಾರ್]] ಈ ಯುಗದಲ್ಲಿ [[ಹಿಂದೂ ಮಹಾಸಾಗರ ವ್ಯಾಪಾರ]]ದ ಕೇಂದ್ರವಾಗಿತ್ತು. [[ಮಲಬಾರ್ ಮುಸ್ಲಿಮರು|ಕೇರಳ ಮುಸ್ಲಿಮ್]] ಸಂಪ್ರದಾಯದ ಪ್ರಕಾರ, ಕೊಲತ್ತುನಾಡು [[ಭಾರತೀಯ ಉಪಖಂಡ]]ದಲ್ಲಿನ ಹಲವಾರು [[ಭಾರತದಲ್ಲಿ ಇಸ್ಲಾಂ|ಅತ್ಯಂತ ಹಳೆಯ ಮಸೀದಿಗಳ]] ನೆಲೆಯಾಗಿದೆ. [[ಚೇರಮನ್ ಪೆರುಮಾಳ್ಳ ದಂತಕಥೆ]]ಯ ಪ್ರಕಾರ, ಮೊದಲ ಭಾರತೀಯ ಮಸೀದಿಯನ್ನು 624 ಕ್ರಿ.ಶ.ಯಲ್ಲಿ ಕೊಡುಂಗಲ್ಲೂರಿನಲ್ಲಿ [[ಚೇರ ವಂಶ]]ದ ಕೊನೆಯ ಆಡಳಿತಗಾರನ (ಚೇರಮನ್ ಪೆರುಮಾಳ್) ಆದೇಶದೊಂದಿಗೆ ನಿರ್ಮಿಸಲಾಯಿತು, ಅವರು [[ಧರ್ಮಡೋಂ]]ನಿಂದ [[ಮಕ್ಕಾ]]ಗೆ ತೆರಳಿ [[ಮುಹಮ್ಮದ್]] (ಸು. 570–632) ಅವರ ಜೀವಿತಾವಧಿಯಲ್ಲಿ [[ಇಸ್ಲಾಂ]]ಗೆ ಮತಾಂತರಗೊಂಡರು.<ref>{{cite book |author=ಜೊನಾಥನ್ ಗೋಲ್ಡ್ಸ್ಟೀನ್ |title=ಚೀನಾದ ಯಹೂದಿಗಳು |publisher=M. E. ಶಾರ್ಪ್ |year=1999|isbn=9780765601049 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=ಎಡ್ವರ್ಡ್ ಸಿಂಪ್ಸನ್|author2=ಕೈ ಕ್ರೆಸ್ಸೆ|title=ಇತಿಹಾಸದೊಂದಿಗೆ ಹೋರಾಟ: ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಇಸ್ಲಾಂ ಮತ್ತು ವಿಶ್ವವಾದ|url=https://books.google.com/books?id=w0qHKA7zEaEC&pg=PA333|access-date=24 July 2012 |year=2008|publisher=ಕೊಲಂಬಿಯಾ ವಿಶ್ವವಿದ್ಯಾಲಯ ಮುದ್ರಣಾಲಯ|isbn=978-0-231-70024-5|pages=333}}</ref><ref name="Kupferschmidt1987">{{cite book|author=ಉರಿ M. ಕುಪ್ಫರ್ಶ್ಮಿಡ್ಟ್|title=ಸುಪ್ರೀಂ ಮುಸ್ಲಿಂ ಕೌನ್ಸಿಲ್: ಪ್ಯಾಲೆಸ್ಟೈನ್ಗಾಗಿ ಬ್ರಿಟಿಷ್ ಆದೇಶದ ಅಡಿಯಲ್ಲಿ ಇಸ್ಲಾಂ|url=https://books.google.com/books?id=ChEVAAAAIAAJ&pg=PA458|access-date=25 July 2012|year=1987|publisher=ಬ್ರಿಲ್|isbn=978-90-04-07929-8|pages=458–459}}</ref><ref name="Raṇṭattāṇi2007">{{cite book|author=ಹುಸೇನ್ ರಂಟತ್ತಾಣಿ|title=ಮಾಪಿಳ್ಳ ಮುಸ್ಲಿಮರು: ಸಮಾಜ ಮತ್ತು ವಿರೋಧಿ ವಸಾಹತು ಹೋರಾಟಗಳ ಅಧ್ಯಯನ |url=https://books.google.com/books?id=xlb5BrabQd8C&pg=PA179|access-date=25 July 2012|year=2007|publisher=ಇತರೆ ಪುಸ್ತಕಗಳು|isbn=978-81-903887-8-8|pages=179–}}</ref>
''[[ಕ್ವಿಸ್ಸತ್ ಶಕರ್ವತಿ ಫರ್ಮದ್]]'' ಪ್ರಕಾರ, ಕೊಡುಂಗಲ್ಲೂರು, ಕೊಲ್ಲಂ, [[ಮಾದಾಯಿ]], [[ಬರ್ಕೂರು]], ಮಂಗಳೂರು, [[ಕಾಸರಗೋಡು]], [[ಕಣ್ಣೂರು]], [[ಧರ್ಮಡೋಂ]], [[ಕೊಯಿಲಾಂಡಿ|ಪಂತಲಯಾನಿ]], ಮತ್ತು [[ಚಾಲಿಯಂ]]ಗಳಲ್ಲಿನ [[ಮಸೀದಿ|''ಮಸ್ಜಿದ್'']]ಗಳನ್ನು [[ಮಲಿಕ್ ದಿನಾರ್]]ರ ಕಾಲದಲ್ಲಿ ನಿರ್ಮಿಸಲಾಯಿತು, ಮತ್ತು ಅವು [[ಭಾರತೀಯ ಉಪಖಂಡ]]ದಲ್ಲಿನ ಅತ್ಯಂತ ಹಳೆಯ ''ಮಸ್ಜಿದ್''ಗಳಲ್ಲಿ ಸೇರಿವೆ.<ref>ಪ್ರೇಂಜ್, ಸೆಬಾಸ್ಟಿಯನ್ R. ''ಮಾನ್ಸೂನ್ ಇಸ್ಲಾಂ: ಮಧ್ಯಕಾಲೀನ ಮಲಬಾರ್ ಕರಾವಳಿಯಲ್ಲಿ ವ್ಯಾಪಾರ ಮತ್ತು ನಂಬಿಕೆ.'' ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮುದ್ರಣಾಲಯ, 2018. Pg. 98.</ref> [[ಮಲಿಕ್ ದಿನಾರ್]] ಅವರು [[ಕಾಸರಗೋಡು]]ನ [[ಥಲಂಗರ]]ದಲ್ಲಿ ನಿಧನರಾದರು ಎಂದು ನಂಬಲಾಗಿದೆ.<ref name="ch">Pg 58, [[ಕೇರಳ]]ದ ಸಾಂಸ್ಕೃತಿಕ ಪರಂಪರೆ: ಒಂದು ಪರಿಚಯ, A. ಶ್ರೀಧರ ಮೇನನ್, ಈಸ್ಟ್-ವೆಸ್ಟ್ ಪಬ್ಲಿಕೇಷನ್ಸ್, 1978</ref>
ಇವುಗಳಲ್ಲಿ ಹೆಚ್ಚಿನವು {{clarify|date=ಜುಲೈ 2023}} ಎಳಿಮಲದ ಹಿಂದಿನ ಪ್ರದೇಶದಲ್ಲಿವೆ. ಕೊಯಿಲಾಂಡಿ ಜುಮುಆ ಮಸೀದಿಯು 10ನೇ ಶತಮಾನ ಕ್ರಿ.ಶ.ಯ ಹಿಂದಿನ ''[[ವಟ್ಟೆಳುತ್ತು]]'' ಮತ್ತು [[ಗ್ರಂಥ ಲಿಪಿ]]ಗಳ ಮಿಶ್ರಣದಲ್ಲಿ ಬರೆಯಲಾದ [[ಹಳೆಯ ಮಲಯಾಳಂ]] ಶಾಸನವನ್ನು ಹೊಂದಿದೆ.<ref name="Okay">ಐಯರ್, K. V. ಸುಬ್ರಹ್ಮಣ್ಯ (ಸಂಪಾದಕರು), ''ದಕ್ಷಿಣ ಭಾರತದ ಶಾಸನಗಳು.'' VIII, ಸಂ. 162, ಮದ್ರಾಸ್: ಭಾರತ ಸರ್ಕಾರ, ಕೇಂದ್ರ ಪ್ರಕಟಣಾ ವಿಭಾಗ, ಕಲ್ಕತ್ತಾ, 1932. p. 69.</ref> ಇದು [[ಹಿಂದೂ]] ರಾಜ (ಭಾಸ್ಕರ ರವಿ) ಕೇರಳದ [[ಮುಸ್ಲಿಮ್]]ರಿಗೆ ನೀಡಿದ ಆಶ್ರಯವನ್ನು ದಾಖಲಿಸುವ ಅಪರೂಪದ ಉಳಿದಿರುವ ದಾಖಲೆಯಾಗಿದೆ.<ref name="Okay"/>
====ಮುಷಿಕ ವಂಶ====
{{Main|ಮುಷಿಕ ಸಾಮ್ರಾಜ್ಯ}}
[[File:Anantapura Lake Temple.jpg|left|thumbnail|[[ಕುಂಬಳ]]ದ ಅನಂತಪುರದಲ್ಲಿರುವ [[ಅನಂತಪುರ ಸರೋವರ ದೇವಾಲಯ|ಅನಂತಪದ್ಮನಾಭಸ್ವಾಮಿ ದೇವಾಲಯ]]]]
8ನೇ ಶತಮಾನದ ವೇಳೆಗೆ, ದಕ್ಷಿಣ ಭಾರತದ ರಾಜಕೀಯ ವಾತಾವರಣವು ಸಾಕಷ್ಟು ನಾಟಕೀಯವಾಗಿ ಬದಲಾಗಿತ್ತು, ಏಕೆಂದರೆ ಸ್ಥಾಯೀಕೃತ ಕೃಷಿ ಶೋಷಣೆಯ ಆಧಾರದ ಮೇಲೆ ಹೊಸ ರಾಜಕೀಯ ಸಂಸ್ಕೃತಿಯು ಈ ಪ್ರದೇಶದಲ್ಲಿ ಬೇರುಬಿಟ್ಟಿತು. ಭಾರತೀಯ ಉಪಖಂಡದ ಇತರ ಭಾಗಗಳಲ್ಲಿರುವಂತೆ, ಬ್ರಾಹ್ಮಣ್ಯವು ಈ ಹೊಸದಾಗಿ ಹೊರಹೊಮ್ಮುತ್ತಿರುವ ಪ್ರಾದೇಶಿಕ, ಪ್ರಾಥಮಿಕವಾಗಿ ಕೃಷಿ ಆಧಾರಿತ ರಾಜ್ಯಗಳಿಗೆ ಸೈದ್ಧಾಂತಿಕ ಬೆಂಬಲವನ್ನು ಒದಗಿಸಿತು.
1075 ಕ್ರಿ.ಶ.ದ ಹಳೆಯ ಮಲಯಾಳಂ ಶಾಸನವನ್ನು ([[ರಾಮಂತಲಿ ಶಾಸನಗಳು]]), [[ಮಂಗಳೂರು]]ನ [[ಅಳುಪ ವಂಶ]]ದ ಆಡಳಿತಗಾರ ರಾಜ ಕುಂದ ಅಳುಪನನ್ನು ಉಲ್ಲೇಖಿಸುತ್ತದೆ, ಇದನ್ನು [[ಕಣ್ಣೂರು|ಕನ್ನನೋರ್]] ಬಳಿಯ [[ಎಳಿಮಲ]]ದಲ್ಲಿ ([[ಮುಷಿಕ ವಂಶ]]ದ ಹಿಂದಿನ ಪ್ರಧಾನ ಕಚೇರಿ) ಕಾಣಬಹುದು.<ref>ನಾರಾಯಣನ್, M. G. S. ''ಕೇರಳದ ಪೆರುಮಾಳ್ಗಳು.'' ತ್ರಿಸೂರ್ (ಕೇರಳ): ಕಾಸ್ಮೊಬುಕ್ಸ್, 2013. 483.</ref> [[ಕಣ್ಣೂರು]]ನಲ್ಲಿರುವ [[ಮಾದಾಯಿ ಪಲ್ಲಿ|ಮಾದಾಯಿ ಮಸೀದಿ]]ಯಲ್ಲಿನ ತಾಮ್ರದ ಹಲಗೆಯ ಮೇಲಿನ [[ಅರೇಬಿಕ್]] ಶಾಸನವು ಅದರ ಸ್ಥಾಪನೆಯ ವರ್ಷವನ್ನು 1124 ಕ್ರಿ.ಶ. ಎಂದು ದಾಖಲಿಸುತ್ತದೆ.<ref name="Madayi">{{cite book
| author = ಚಾರ್ಲ್ಸ್ ಅಲೆಕ್ಸಾಂಡರ್ ಇನ್ನೆಸ್ | year=1908
| title= ಮದ್ರಾಸ್ ಡಿಸ್ಟ್ರಿಕ್ಟ್ ಗೆಜೆಟಿಯರ್ಸ್ ಮಲಬಾರ್ (ಸಂಪುಟ-I) | publisher=ಮದ್ರಾಸ್ ಸರ್ಕಾರಿ ಮುದ್ರಣಾಲಯ |pages=423–424
| url= https://archive.org/details/in.ernet.dli.2015.358941/mode/2up
}}</ref> 11ನೇ ಶತಮಾನದಲ್ಲಿ [[ಅಥುಲ]] ಬರೆದ ''[[ಮುಷಿಕ-ವಂಶ]] ಮಹಾಕಾವ್ಯ''ವು ಆ ಹಂತದವರೆಗಿನ [[ಮುಷಿಕ ಸಾಮ್ರಾಜ್ಯ|ಮುಷಿಕ ರಾಜಮನೆತನ]]ದ ದಾಖಲಿತ ಭೂತಕಾಲದ ಮೇಲೆ ಬೆಳಕು ಚೆಲ್ಲುತ್ತದೆ.<ref name="Kola Swaroopam"/>
9ನೇ ಮತ್ತು 12ನೇ ಶತಮಾನಗಳ ನಡುವೆ, "ಮುಷಿಕ" ಎಂಬ ರಾಜವಂಶವು ಉತ್ತರ ಮಲಬಾರ್ನ ಚಿರಕ್ಕಲ್ ಪ್ರದೇಶಗಳನ್ನು ನಿಯಂತ್ರಿಸಿತು (ವೈನಾಡ್-ಟೆಲ್ಲಿಚೇರಿ ಪ್ರದೇಶವು ಎರಡನೇ ಚೇರ ಸಾಮ್ರಾಜ್ಯದ ಭಾಗವಾಗಿತ್ತು). ಮುಷಿಕರು ಬಹುಶಃ ಎಳಿ ಮಲದ ನನ್ನನನ ಪ್ರಾಚೀನ ರಾಜಮನೆತನದ ವಂಶಸ್ಥರಾಗಿದ್ದರು ಮತ್ತು ಬಹುಶಃ ಚೇರರ ಸಾಮಂತರಾಗಿದ್ದರು. ಮುಷಿಕರು ಚೇರರ ಅಡಿಯಲ್ಲಿರಲಿಲ್ಲ ಎಂಬ ಅಭಿಪ್ರಾಯವನ್ನು ಕೆಲವು ವಿದ್ವಾಂಸರು ವ್ಯಕ್ತಪಡಿಸಿದ್ದಾರೆ, ಏಕೆಂದರೆ ಮುಷಿಕನ ಆಡಳಿತಗಾರನು ಪ್ರಸಿದ್ಧ ತೆರಿಸಪ್ಪಲ್ಲಿ ಮತ್ತು ಯಹೂದಿ ತಾಮ್ರ ಫಲಕಗಳಲ್ಲಿ ಎರಲ್ನಾಡು ಮತ್ತು ವಲ್ಲುವನಾಡು ಆಡಳಿತಗಾರರೊಂದಿಗೆ ಸಹಿ ಮಾಡುವವರಲ್ಲಿ ಕಾಣಿಸಿಕೊಳ್ಳುವುದಿಲ್ಲ. 11ನೇ ಶತಮಾನದವರೆಗೆ, ಮುಷಿಕ ರಾಜರು ಪಿತೃಪ್ರಧಾನ ಉತ್ತರಾಧಿಕಾರ ವ್ಯವಸ್ಥೆಯನ್ನು ಅನುಸರಿಸಿದರು, ಮತ್ತು ನಂತರ ಅವರು ಕ್ರಮೇಣ ಮಾತೃಪ್ರಧಾನ ವ್ಯವಸ್ಥೆಗೆ ಬದಲಾಯಿಸಿದರು. ಅವರ ಪ್ರಯಾಣ ಪುಸ್ತಕದಲ್ಲಿ (''[[ಇಲ್ ಮಿಲಿಯೋನ್]]''), [[ಮಾರ್ಕೊ ಪೊಲೊ]] 1290ರ ದಶಕದ ಮಧ್ಯಭಾಗದಲ್ಲಿ ಈ ಪ್ರದೇಶಕ್ಕೆ ತನ್ನ ಭೇಟಿಯನ್ನು ವಿವರಿಸಿದ್ದಾರೆ. ಇತರ ಸಂದರ್ಶಕರಲ್ಲಿ ಬೌದ್ಧ ಯಾತ್ರಿಕ [[ಫಾಕ್ಸಿಯಾನ್]] ಮತ್ತು [[ಟ್ಯಾಂಜಿಯರ್ಸ್]]ನ ಬರಹಗಾರ ಮತ್ತು ಇತಿಹಾಸಕಾರ [[ಇಬ್ನ್ ಬತೂತಾ]] ಸೇರಿದ್ದಾರೆ.
''[[ಮುಷಿಕ-ವಂಶ]]'', ಅಥುಲ ಬರೆದ ಸಂಸ್ಕೃತ ಕಾವ್ಯವು, ವಿಕ್ರಮ ರಾಮ, ಜಯಮಣಿ, ವಲ್ಲಭ II ಮತ್ತು ಶ್ರೀಕಂಠನಂತಹ ಹಲವಾರು ಮುಷಿಕ ರಾಜರನ್ನು ವಿವರಿಸುತ್ತದೆ. ಅಥುಲನು ಕ್ರಿ.ಶ. 11ನೇ ಶತಮಾನದ ಅಂತ್ಯದ ವೇಳೆಗೆ ಆಳಿದ ರಾಜ ಶ್ರೀಕಂಠನ ಆಸ್ಥಾನ ಕವಿಯಾಗಿದ್ದನು.
ರಾಜ ವಿಕ್ರಮ ರಾಮನು ಮಲಬಾರ್ ಕರಾವಳಿಯಲ್ಲಿ ಭೀಕರ ಸಮುದ್ರ ಸವೆತದಿಂದ ಪ್ರಸಿದ್ಧ ಬೌದ್ಧ ವಿಹಾರವಾದ ಶ್ರೀ ಮೂಲವಾಸವನ್ನು ಉಳಿಸಿದನು ಎಂದು ಹೇಳಲಾಗುತ್ತದೆ. ರಾಜಕುಮಾರ ವಲ್ಲಭ II ರನ್ನು ಚೋಳ ಆಡಳಿತಗಾರ ಕುಲೋತ್ತುಂಗನ ಆಕ್ರಮಣದ ಸಮಯದಲ್ಲಿ ಚೇರ ಪಡೆಗಳಿಗೆ ಸಹಾಯ ಮಾಡಲು ರಾಜ ಜಯಮಣಿಯು ಕಳುಹಿಸಿದನು. ಆದಾಗ್ಯೂ, ಅವನು ಚೇರ ಸೈನ್ಯದೊಂದಿಗೆ ಸೇರುವ ಮೊದಲು, ಅವನು ತನ್ನ ತಂದೆಯ ಮರಣದ ಸುದ್ದಿಯನ್ನು ಕೇಳಿದನು ಮತ್ತು ತನ್ನ ಶತ್ರುಗಳಿಂದ ಮುಷಿಕ ಸಿಂಹಾಸನದ ಅಪಹರಣವನ್ನು ತಡೆಗಟ್ಟಲು ರಾಜಧಾನಿಗೆ ಮರಳಿದನು. ರಾಜಧಾನಿಯನ್ನು ತಲುಪಿದ ನಂತರ, ಅವನು ತನ್ನ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಸಿಂಹಾಸನವನ್ನು ಏರಿದನು. ವಲ್ಲಭ II ಕಿಲ್ಲಾ ನದಿಯ ಬಾಯಿಯಲ್ಲಿ ಮರಾಹಿ (ಮಾದಾಯಿ) ಬಂದರು ಮತ್ತು ವಲಭ ಪಟ್ಟಣಂ (ವಲಿಯಪ್ಟಂ) ಬಂದರನ್ನು ಸ್ಥಾಪಿಸಿದನು. ವಲಭ ಪಟ್ಟಣಂ ನಗರವು ಎತ್ತರದ ಗೋಪುರಗಳು ಮತ್ತು ಎತ್ತರದ ಗೋಡೆಗಳಿಂದ ರಕ್ಷಿಸಲ್ಪಟ್ಟಿತು. ಅವನು ಅರೇಬಿಯನ್ ಸಮುದ್ರದಲ್ಲಿ ಲಕ್ಷದ್ವೀಪ, ಮಿನಿಕಾಯ್ ಮತ್ತು ಅಮಿಂದಿವಿ ದ್ವೀಪಗಳನ್ನು ಸಹ ಸ್ವಾಧೀನಪಡಿಸಿಕೊಂಡನು. ಶ್ರೀಕಂಠ (ರಾಜ ಧರ್ಮ ಎಂದೂ ಕರೆಯಲಾಗುತ್ತದೆ), ಅವನ ಕಿರಿಯ ಸಹೋದರ, ವಲ್ಲಭ II ರ ನಂತರ ಸಿಂಹಾಸನವನ್ನು ಏರಿದನು.
''ಮುಷಿಕ ವಂಶ''ದ ಪ್ರಕಾರ, ರಾಮ ಘಟ ಮುಷಿಕನು ಕೋಲ ಸ್ವರೂಪಂನ ವಂಶಾವಳಿಯನ್ನು ಸ್ಥಾಪಿಸಿದನು.<ref>ಮುಷಿಕವಂಶಂ. ರಾಘವನ್ ಪಿಳ್ಳ (ಸಂಪಾದಕರು), ಮುಷಿಕವಂಶಂ, 26, 268</ref> ಹೆಚ್ಚುವರಿಯಾಗಿ, 929 ಕ್ರಿ.ಶ.ದ ಶಾಸನವು ''ಮುಷಿಕ ವಂಶ''ದಲ್ಲಿ ಕಾಣಿಸಿಕೊಳ್ಳುವ ಆಡಳಿತಗಾರ ವಿಕ್ರಮ ರಾಮನೊಂದಿಗೆ ಗುರುತಿಸಬಹುದಾದ ವಿಕ್ರಮ ರಾಮನನ್ನು ಉಲ್ಲೇಖಿಸುತ್ತದೆ.<ref>ಕೇರಳ ಚರಿತ್ರಾತಿಂಟೆ ಅಡಿಸ್ಥಾನ ಶಿಲಗಳು (ಮಲಯಾಳಂ) M. G. S. ನಾರಾಯಣನ್, (ಕೋಝಿಕ್ಕೋಡ್: ಲಿಪಿ ಪಬ್ಲಿಕೇಷನ್ಸ್, 2000), 85-99</ref> 10ನೇ ಶತಮಾನ ಕ್ರಿ.ಶ.ದ ಮತ್ತೊಂದು ಶಾಸನವು "ರಾಮ ಘಟ ಮುವರ್" ಎಂಬ ಬಿರುದನ್ನು ಹೊಂದಿದ ಮುಖ್ಯಸ್ಥ ಉದಯ ವರ್ಮನನ್ನು ಉಲ್ಲೇಖಿಸುತ್ತದೆ — ಇದು ಮುಷಿಕ ರಾಜರು ಬಳಸಿದ ವಿಶೇಷಣವಾಗಿದೆ. ತಿರುವಟ್ಟೂರು ದೇವಾಲಯದ ಶಾಸನವು ''ಮುಷಿಕ ವಂಶ''ದಲ್ಲಿ 109ನೇ ಆಡಳಿತಗಾರನಾಗಿ ಕಾಣಿಸಿಕೊಳ್ಳುವ ರಾಜನೊಂದಿಗೆ ಗುರುತಿಸಬಹುದಾದ ಎರಮನ್ ಚೇಮನಿ (ರಾಮ ಜಯಮಣಿ)ಯನ್ನು ಉಲ್ಲೇಖಿಸುತ್ತದೆ.<ref name = "Kol25">ಮುಷಿಕವಂಶದ ಇತಿಹಾಸ N. P. ಉನ್ನಿ, (ತಿರುವನಂತಪುರಂ: ಕಾಲೇಜ್ ಬುಕ್ ಹೌಸ್, 1978), 14</ref>
ಮುಷಿಕ ಕುಟುಂಬವು [[ವಿಷ್ಣು ಪುರಾಣ]]ದಂತಹ ಉಳಿದಿರುವ ಪೌರಾಣಿಕ ಭಾರತೀಯ ಗ್ರಂಥಗಳಲ್ಲಿ<ref>{{cite book|url=https://books.google.com/books?id=3kCVg44-xRAC&q=%22Vishnu+Purana%22+%22Mushika%22&pg=PA171 |title=ವಿಷ್ಣು ಪುರಾಣ - ಗೂಗಲ್ ಪುಸ್ತಕಗಳು |date= April 2009|access-date=2011-09-13|isbn=9780559054679 |last1=ವಿಲ್ಸನ್ |first1=ಹೊರೇಸ್ ಹೇಮನ್ |publisher=ಬಿಬ್ಲಿಯೋಬಜಾರ್ }}</ref> ಮತ್ತು [[ಸ್ಟ್ರಾಬೋ]]ನಂತಹ ಗ್ರೀಕ್ ಖಾತೆಗಳಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ.<ref>{{cite book|url=https://books.google.com/books?id=YoAwor58utYC&q=Mushika+Strabo&pg=PA45 |title=ನಂದ ಮತ್ತು ಮೌರ್ಯರ ಯುಗ - ಗೂಗಲ್ ಪುಸ್ತಕಗಳು |access-date=2011-09-13|isbn=9788120804661 |year=1988 |publisher=ಮೋತಿಲಾಲ್ ಬನಾರ್ಸಿದಾಸ್ }}</ref> ಕೊಲತ್ತಿರಿಗಳನ್ನು ಪ್ರಸಿದ್ಧ "[[ಕೇರಳೋಲ್ಪತ್ತಿ]]"ಯು ವಡಕ್ಕನ್ ಪೆರುಮಾಳ್ಗಳು ("ಉತ್ತರದ ರಾಜರು") ಎಂದು ಹೊಗಳಿದೆ.<ref name = "Kol95">ವರಿಯರ್, ಕೇರಳೋಲ್ಪತ್ತಿ ಗ್ರಂಥವರಿ, 51</ref>
===ಕೊಲತ್ತುನಾಡಿನ (ಕನ್ನನೋರ್) ಏರಿಕೆ===
[[File:Mappila Bay Fishing Harbour3.jpg|thumbnail|[[ಅಯಿಕ್ಕರ]]ದಲ್ಲಿನ [[ಮಾಪ್ಪಿಲಾ ಬೇ]] ಬಂದರು. ಒಂದು ಕಡೆ [[ಸೇಂಟ್ ಏಂಜೆಲೋ ಕೋಟೆ]] (1505 ರಲ್ಲಿ ನಿರ್ಮಿಸಲಾಯಿತು) ಮತ್ತು ಇನ್ನೊಂದು ಕಡೆ [[ಅರಕ್ಕಲ್ ಸಾಮ್ರಾಜ್ಯ|ಅರಕ್ಕಲ್ ಅರಮನೆ]] ಇದೆ.]]
[[File:City of Cannanore, 1572.jpg|thumbnail|1572 ರಲ್ಲಿ ಕಣ್ಣೂರಿನ ಭಾವಚಿತ್ರ, [[ಜಾರ್ಜ್ ಬ್ರೌನ್]] ಮತ್ತು [[ಫ್ರಾನ್ಸ್ ಹೋಗೆನ್ಬರ್ಗ್]] ಅವರ ''ಸಿವಿಟೇಟ್ಸ್ ಆರ್ಬಿಸ್ ಟೆರಾರಮ್'' ಸಂಪುಟ I ನಿಂದ]]
[[File:Cannonore fort & Bay'; a watercolor by John Johnston, c.1795-1801.jpg|thumbnail|ಕಣ್ಣೂರು ಕೋಟೆ ಮತ್ತು ಕೊಲ್ಲಿ; ಜಾನ್ ಜಾನ್ಸ್ಟನ್ (1795–1801) ರ ಜಲವರ್ಣ ಚಿತ್ರ]]
ಕೊಲತ್ತುನಾಡು ಎಂಬ ರಾಜ್ಯದ ಸಾಮಾಜಿಕ-ಸಾಂಸ್ಕೃತಿಕ ವಿಶಿಷ್ಟತೆಯು 12ನೇ ಶತಮಾನದ ಆರಂಭದ ವೇಳೆಗೆ ಎರಡನೇ ಚೇರರು ಕಣ್ಮರೆಯಾದ ನಂತರವೇ ಹೆಚ್ಚು ವಿಶಿಷ್ಟವಾಯಿತು.<ref name = "Kol77">ನಾರಾಯಣನ್, ದಕ್ಷಿಣ ಭಾರತದ ಇತಿಹಾಸದಲ್ಲಿ ಮರು-ವ್ಯಾಖ್ಯಾನಗಳು, 6-10</ref> ಭಾರತೀಯ ಮಾನವಶಾಸ್ತ್ರಜ್ಞ [[A. ಅಯ್ಯಪ್ಪನ್|ಅಯಿನಪಲ್ಲಿ ಅಯ್ಯಪ್ಪನ್]] ಅವರು [[ತುಳುನಾಡು]]ನ [[ಬಂಟ್ (ಸಮುದಾಯ)|ಬಂಟ್ ಸಮುದಾಯ]]ದ ಪ್ರಬಲ ಮತ್ತು ಯುದ್ಧೋಚಿತ ಕುಲವನ್ನು ''ಕೋಲ ಬಾರಿ'' ಎಂದು ಕರೆಯಲಾಗುತ್ತಿತ್ತು ಮತ್ತು ಕೊಲತ್ತುನಾಡಿನ ಕೊಲತ್ತಿರಿ ರಾಜನು ಈ ಕುಲದ ವಂಶಸ್ಥನಾಗಿದ್ದನು ಎಂದು ಹೇಳುತ್ತಾರೆ.<ref name="Aiyappan"/> ಪೋರ್ಚುಗೀಸರ ಆಗಮನದ ಮೊದಲು, [[ಕೋಝಿಕ್ಕೋಡ್|ಕ್ಯಾಲಿಕಟ್]] ಕನ್ನನೋರ್ (ಕೊಲತ್ತುನಾಡ್) ವಿರುದ್ಧ ಹಲವಾರು ಯುದ್ಧಗಳನ್ನು ನಡೆಸಿತು. ಕೊಲತ್ತಿರಿ ರಾಜಮನೆತನದ ಒಬ್ಬ ರಾಜಕುಮಾರನು ದಕ್ಷಿಣ ವೈಸ್ರಾಯ್ ಆಗಿ ಪಂತಲಯಿನಿ ಕೊಲ್ಲಂನಲ್ಲಿ ನೆಲೆಸಿದ್ದನು. ಪಂತಲಯಿನಿ ಕೊಲ್ಲಂ ಮಲಬಾರ್ ಕರಾವಳಿಯ ಪ್ರಮುಖ ಬಂದರಾಗಿತ್ತು. ತನ್ನ ವಿಜಯಗಳ ಸಮಯದಲ್ಲಿ, ಜಾಮೋರಿನ್ ಕನ್ನನೋರ್ಗೆ ಪ್ರಾಥಮಿಕ ಮುನ್ನಡೆಯಾಗಿ ಪಂತಲಯಿನಿ ಕೊಲ್ಲಂ ಅನ್ನು ಆಕ್ರಮಿಸಿಕೊಂಡನು. ಕೊಲತ್ತಿರಿಯು ತಕ್ಷಣವೇ ಕ್ಯಾಲಿಕಟ್ ನಿರ್ದೇಶಿಸಬಹುದಾದ ಯಾವುದೇ ಷರತ್ತುಗಳಿಗೆ ಶರಣಾಗಲು ರಾಯಭಾರಿಗಳನ್ನು ಕಳುಹಿಸಿದನು. ಕನ್ನನೋರ್ ಈಗಾಗಲೇ ಆಕ್ರಮಿಸಲ್ಪಟ್ಟ ಪ್ರದೇಶಗಳನ್ನು ಮತ್ತು ಕೆಲವು ಹಿಂದೂ ದೇವಾಲಯದ ಹಕ್ಕುಗಳನ್ನು ಕ್ಯಾಲಿಕಟ್ಗೆ ಅಧಿಕೃತವಾಗಿ ವರ್ಗಾಯಿಸಿತು.
ವಿದೇಶಿ ಖಾತೆಗಳು ಕೊಲತ್ತುನಾಡಿನ ವಿಶಿಷ್ಟ ಗುರುತನ್ನು ಸಮರ್ಥಿಸುತ್ತವೆ. 12ನೇ ಶತಮಾನದಲ್ಲಿ ಮಲಬಾರ್ ಕರಾವಳಿಗೆ ಭೇಟಿ ನೀಡಿದ [[ಮಾರ್ಕೊ ಪೊಲೊ]] ಈ ಪ್ರದೇಶದ ರಾಜನ ಸ್ವತಂತ್ರ ಸ್ಥಾನಮಾನವನ್ನು ಗಮನಿಸಿದನು.<ref name = "Kol27">ದ ಬುಕ್ ಆಫ್ ಸೆರ್ ಮಾರ್ಕೊ ಪೊಲೊ: ದ ವೆನೆಷಿಯನ್, ಕನ್ಸರ್ನಿಂಗ್ ದ ಕಿಂಗ್ಡಮ್ಸ್ ಅಂಡ್ ಮಾರ್ವೆಲ್ಸ್ ಆಫ್ ದ ಈಸ್ಟ್, III, 3ನೇ ಆವೃತ್ತಿ. ಸಂ. [[ಹೆನ್ರಿ ಯೂಲ್]] ಮತ್ತು [[ಹೆನ್ರಿ ಕಾರ್ಡಿಯರ್]] (ಮರುಮುದ್ರಣ, ಆಮ್ಸ್ಟರ್ಡ್ಯಾಮ್: ಫಿಲೋ ಪ್ರೆಸ್, 1975), 385</ref> 14ನೇ ಶತಮಾನದ [[ಇಬ್ನ್ ಬತೂತಾ]]ನ ನಿರೂಪಣೆಯು ಈ ಪ್ರದೇಶದ ಆಡಳಿತಗಾರನು [[ಬಾಲಿಯಾ ಪಟ್ಟಣಂ]] ಎಂದು ಕರೆಯಲ್ಪಡುವ ನಗರದಲ್ಲಿ ವಾಸಿಸುತ್ತಿದ್ದನೆಂದು ಉಲ್ಲೇಖಿಸುತ್ತದೆ.<ref name = "Kol28">ಇಬ್ನ್ ಬತೂತಾನ ರೆಹ್ಲಾ (ಭಾರತ, ಮಾಲ್ಡೀವ್ ದ್ವೀಪಗಳು ಮತ್ತು ಸಿಲೋನ್), ಅನುವಾದ ಮತ್ತು ವ್ಯಾಖ್ಯಾನ ಮಹ್ದಿ ಹುಸೇನ್ ಅವರಿಂದ (ಬರೋಡ: ಓರಿಯೆಂಟಲ್ ಇನ್ಸ್ಟಿಟ್ಯೂಟ್, 1953), 186</ref> ಇದು ಈ ಸಮಯದ ವೇಳೆಗೆ, ಕೊಲತ್ತುನಾಡಿನ ರಾಜಧಾನಿಯು ಎಳಿಲ್ ಮಲದಿಂದ ಬಾಲಿಯಾ ಪಟ್ಟಣಂಗೆ ಬದಲಾಗಿತ್ತು, ಇದು ಎಳಿಲ್ ಮಲದ ದಕ್ಷಿಣಕ್ಕೆ ಇರುವ ಪಟ್ಟಣವಾಗಿದೆ. 16ನೇ ಶತಮಾನದಲ್ಲಿ, ಪೋರ್ಚುಗೀಸ್ ಅಧಿಕಾರಿ ಡುವಾರ್ಟೆ ಬಾರ್ಬೋಸಾ ಕೂಡ ಕನ್ನನೋರ್ ರಾಜನ ನಿವಾಸವಾಗಿ ಬಾಲಿಯಾ ಪಟ್ಟಣಂ ("ಬಾಲಿಯಾ ಪಟಾಮ್" ಯುರೋಪಿಯನ್ ದಾಖಲೆಗಳಲ್ಲಿ) ಅನ್ನು ಉಲ್ಲೇಖಿಸುತ್ತಾನೆ.<ref name = "Kol3"/>
ಕ್ರಿ.ಶ. 16ನೇ ಶತಮಾನದವರೆಗೆ, [[ಕಾಸರಗೋಡು]] ಪಟ್ಟಣವು [[ಮಲಯಾಳಂ]]ನಲ್ಲಿ ''ಕನ್ಹಿರಕೋಡ್'' (ಬಹುಶಃ, 'ಕನ್ಹಿರ ಮರಗಳ ನಾಡು' ಎಂಬ ಅರ್ಥದಿಂದ) ಎಂದು ಕರೆಯಲ್ಪಡುತ್ತಿತ್ತು.<ref name="Kanhirakode">{{cite book
| author = S. ಮುಹಮ್ಮದ್ ಹುಸೇನ್ ನೈನಾರ್ | year=1942
| title= ತುಹ್ಫತ್-ಅಲ್-ಮುಜಾಹಿದಿನ್: ಅರೇಬಿಕ್ ಭಾಷೆಯಲ್ಲಿನ ಐತಿಹಾಸಿಕ ಕೃತಿ | publisher=ಮದ್ರಾಸ್ ವಿಶ್ವವಿದ್ಯಾಲಯ
| url= https://archive.org/details/Tuhfat-al-MujahidinAnHistoricalWorkInTheArabicLanguage
}}</ref> [[ಕುಂಬಳ]]ದ ''ಮೈಪಾಡಿ ಅರಮನೆ''ಯಿಂದ [[ಪಯಸ್ವಿನಿ|ಚಂದ್ರಗಿರಿ ನದಿ]] ಮತ್ತು [[ನೇತ್ರಾವತಿ ನದಿ]] (ಪ್ರಸ್ತುತ [[ಮಂಜೇಶ್ವರ]] ಮತ್ತು [[ಕಾಸರಗೋಡು]] ತಾಲೂಕುಗಳು ಸೇರಿದಂತೆ) ನಡುವಿನ ದಕ್ಷಿಣ [[ತುಳುನಾಡು]] ಭೂಮಿಯನ್ನು ಆಳಿದ [[ಕುಂಬಳ]] ರಾಜವಂಶವು [[ವಿಜಯನಗರ ಸಾಮ್ರಾಜ್ಯ]]ದ [[ಕನ್ನಡ|ಕರ್ನಾಟಕ]] ವಿಜಯಗಳ ಮೊದಲು [[ಉತ್ತರ ಮಲಬಾರ್]]ನ ಕೊಲತ್ತುನಾಡು ಸಾಮ್ರಾಜ್ಯಕ್ಕೆ ಸಾಮಂತರಾಗಿದ್ದರು.<ref>{{cite book
| author = M. ವಿಜಯಾನುನ್ನಿ
| title= 1981 ಜನಗಣತಿ ಕೈಪಿಡಿ- ಕಾಸರಗೋಡು ಜಿಲ್ಲೆ | publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5757/1/51134_1981_KAS.pdf
}}</ref> ಕುಂಬಳ ರಾಜವಂಶವು [[ಮಲಯಾಳಿ]] [[ನಾಯರ್]]ಗಳು ಮತ್ತು [[ತುಳುವ ಬ್ರಾಹ್ಮಣ]]ರ ಮಿಶ್ರ ವಂಶಾವಳಿಯನ್ನು ಹೊಂದಿತ್ತು.<ref name="askh">{{cite book |last1=ಶ್ರೀಧರ ಮೇನನ್ |first1=A. |title=''ಕೇರಳ ಚರಿತ್ರಂ'' |date=January 2007 |publisher=DC Books |location=ಕೊಟ್ಟಾಯಂ |isbn=978-81-264-1588-5 |edition=2007 |url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |access-date=19 July 2020}}</ref> ಅವರು ಕೇರಳದ [[ಚೇರಮನ್ ಪೆರುಮಾಳ್ಳ ದಂತಕಥೆ|ಚೇರಮನ್ ಪೆರುಮಾಳ್ಳ]]ರಿಂದ ತಮ್ಮ ಮೂಲವನ್ನು ಹೇಳಿಕೊಂಡರು.<ref name="askh"/> [[ಫ್ರಾನ್ಸಿಸ್ ಬುಕಾನನ್-ಹ್ಯಾಮಿಲ್ಟನ್]] ಕುಂಬಳ ರಾಜವಂಶದ ಪದ್ಧತಿಗಳು ಸಮಕಾಲೀನ [[ಮಲಯಾಳಿ]] ರಾಜರ ಪದ್ಧತಿಗಳನ್ನು ಹೋಲುತ್ತವೆ ಎಂದು ಹೇಳುತ್ತಾರೆ, ಆದರೂ ಕುಂಬಳವು [[ತುಳುನಾಡು]]ನ ಅತ್ಯಂತ ದಕ್ಷಿಣದ ಪ್ರದೇಶವೆಂದು ಪರಿಗಣಿಸಲ್ಪಟ್ಟಿತು.<ref name="askh"/> 17ನೇ ಶತಮಾನದಲ್ಲಿ, ಕಣ್ಣೂರು ಮಲಬಾರ್ ಪ್ರದೇಶದಲ್ಲಿ ಏಕೈಕ [[ಮುಸ್ಲಿಮ್]] ಸುಲ್ತಾನೇಟಿನ ರಾಜಧಾನಿ ನಗರವಾಗಿತ್ತು - [[ಅರಕ್ಕಲ್]] - ಇದು ಕಣ್ಣೂರು ನಗರದ ಜೊತೆಗೆ [[ಲಕ್ಷದ್ವೀಪ]] ದ್ವೀಪಗಳನ್ನೂ ಆಳಿತು.<ref name=anathapuri>{{Cite web|url=http://www.ananthapuri.com/kerala-history.asp?page=muslim|archive-url=https://web.archive.org/web/20120605222957/http://ananthapuri.com/kerala-history.asp?page=muslim|url-status=dead|title=ಅರಕ್ಕಲ್ ರಾಜಮನೆತನ|archive-date=5 June 2012}}</ref>
[[ಕೋಝಿಕ್ಕೋಡ್]] ಬಂದರು ಮಧ್ಯಕಾಲೀನ ಕೇರಳ ಕರಾವಳಿಯಲ್ಲಿ ಉತ್ತಮ ಆರ್ಥಿಕ ಮತ್ತು ರಾಜಕೀಯ ಸ್ಥಾನವನ್ನು ಹೊಂದಿತ್ತು, ಆದರೆ [[ಕಣ್ಣೂರು]], [[ಕೊಲ್ಲಂ]], ಮತ್ತು [[ಕೊಚ್ಚಿ]]ಗಳು ಪ್ರಪಂಚದ ವಿವಿಧ ಭಾಗಗಳಿಂದ ವ್ಯಾಪಾರಿಗಳು ಸೇರುವ ವಾಣಿಜ್ಯಿಕವಾಗಿ ಪ್ರಮುಖ ದ್ವಿತೀಯ ಬಂದರುಗಳಾಗಿದ್ದವು.<ref name="Malekandathil">''ದ ಪೋರ್ಚುಗೀಸ್, ಇಂಡಿಯನ್ ಓಷನ್ ಅಂಡ್ ಯುರೋಪಿಯನ್ ಬ್ರಿಜ್ಹೆಡ್ಸ್ 1500–1800''. ಪ್ರೊ. K. S. ಮ್ಯಾಥ್ಯೂ ಗೌರವಾರ್ಥ ಸಂಪುಟ (2001). ಸಂಪಾದಕರು: ಪಿಯಸ್ ಮಾಲೆಕಂಡತಿಲ್ ಮತ್ತು T. ಜಮಾಲ್ ಮೊಹಮ್ಮದ್. ಫಂಡಕೋನ್ ಒರಿಯೆಂಟ್. MESHAR (ಕೇರಳ) ನ ಸಾಮಾಜಿಕ ವಿಜ್ಞಾನ ಮತ್ತು ಮಾನವಿಕ ಸಂಶೋಧನಾ ಸಂಸ್ಥೆ</ref> ಪೋರ್ಚುಗೀಸರು [[ಶೋಧನೆಯ ಯುಗ]]ದಲ್ಲಿ 1498 ರಲ್ಲಿ [[ಕಪ್ಪಾಡ್]] [[ಕೋಝಿಕ್ಕೋಡ್]]ಗೆ ಆಗಮಿಸಿದರು, ಹೀಗಾಗಿ [[ಯುರೋಪ್]] ನಿಂದ [[ಭಾರತ]]ಕ್ಕೆ ನೇರ ಸಮುದ್ರ ಮಾರ್ಗವನ್ನು ತೆರೆದರು.<ref>DC Books, ಕೊಟ್ಟಾಯಂ (2007), A. ಶ್ರೀಧರ ಮೇನನ್, ಕೇರಳ ಇತಿಹಾಸದ ಸಮೀಕ್ಷೆ</ref> ಕಣ್ಣೂರಿನ [[ಸೇಂಟ್ ಏಂಜೆಲೋ ಕೋಟೆ]]ಯನ್ನು 1505 ರಲ್ಲಿ ಭಾರತದ ಮೊದಲ ಪೋರ್ಚುಗೀಸ್ ವೈಸ್ರಾಯ್ ಡೊಮ್ [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] ನಿರ್ಮಿಸಿದರು.
==ಆಡಳಿತ==
[[File:Minister Kuruppu's Arabic letter to da Gama (1524).jpg|thumb|[[ಕೊಲತ್ತಿರಿ|ಕೊಲತ್ತಿರಿ ರಾಜ]]ನ ಮಂತ್ರಿ ಕುರುಪ್ಪು ಅವರ [[ವಾಸ್ಕೋ ಡಿ ಗಾಮಾ]]ಗೆ ಬರೆದ [[ಅರೇಬಿಕ್]] ಪತ್ರ (1524)|235x235px]]
ಕೊಲತ್ತಿರಿಯ ಮೂಲ ಸಾಮ್ರಾಜ್ಯದ ರಾಜಕೀಯ ಪ್ರಭುತ್ವವು ಕೊಲತ್ತಿರಿ ಕುಟುಂಬದ ವಿವಿಧ ಮಾತೃಪ್ರಧಾನ-ವಿಭಾಗಗಳ ಉದ್ದಕ್ಕೂ ವಿಭಜಿಸಲ್ಪಟ್ಟಿತು ಮತ್ತು ಅನುಕ್ರಮವಾಗಿ ಕೊಲತ್ತಿರಿ, ತೆಕ್ಕಾಲಂಕೂರ್, ವಡಕ್ಕಾಲಂಕೂರ್, ನಾಲಾಂಕೂರ್, ಮತ್ತು ಅಂಜಾಂಕೂರ್ ಎಂಬ ಭಾಗಗಳು ಅಥವಾ ಕೂರ್-ವಾಝ್ಚ (ಭಾಗ-ಪ್ರಭುತ್ವಗಳು) ಆಡಳಿತಗಾರರನ್ನು ಹೊಂದಿತ್ತು. ಕೊಲತ್ತುನಾಡಿನ ಆಡಳಿತವು ಪ್ರತಿಯೊಂದೂ ಉನ್ನತ ಅಧಿಕಾರಗಳಿಗೆ ಹೋಲುವ ಕಾರ್ಯಗಳನ್ನು ಆದರೆ ಸಣ್ಣ ಪ್ರಮಾಣದಲ್ಲಿ ನಿರ್ವಹಿಸುವ ವಿವಿಧ ಅಧಿಕಾರ ವಿಭಾಗಗಳಾಗಿ ವಿಂಗಡಿಸಲಾಗಿತ್ತು.<ref>ಎಂತುರ್ಡಾಜಿಯ ಕುರಿತು ಉಪನ್ಯಾಸಗಳು A. ಕೃಷ್ಣ ಅಯ್ಯರ್ ಕಲ್ಕತ್ತಾ, 1925.</ref>
ಆಡಳಿತವನ್ನು ಕೊಲತ್ತಿರಿಯ ಅಡಿಯಲ್ಲಿ ಬಾಡಿಗೆದಾರ-ಮುಖ್ಯಸ್ಥರ ಮೂಲಕ ನಡೆಸಲಾಯಿತು. ಇದರಲ್ಲಿ "ನಾಡುವಾಳಿಗಳು", "ದೇಶವಾಳಿಗಳು" ಮತ್ತು "ಮುಖ್ಯಸ್ಥರು" ಎಂದು ಕರೆಯಲ್ಪಡುವ ಗಣ್ಯರು ಸೇರಿದ್ದರು. ನಾಡುವಾಳಿಗಳು, ಅವರು "ನಾಡುಗಳು" ಅಥವಾ ಜಿಲ್ಲೆಗಳ ಮುಖ್ಯಸ್ಥರಾಗಿದ್ದು, 500 - 20,000 ರ ನಾಯರ್ ಸೈನ್ಯಗಳನ್ನು ಮುನ್ನಡೆಸುತ್ತಿದ್ದರು. ಆಡಳಿತ ಕ್ರಮಾನುಗತದಲ್ಲಿ ನಾಡುವಾಳಿಗಳ ಕೆಳಗೆ "ದೇಶಗಳು" ಎಂದು ಕರೆಯಲ್ಪಡುವ ಹಳ್ಳಿಗಳ ಮುಖ್ಯಸ್ಥರಾಗಿದ್ದ ದೇಶವಾಳಿಗಳು ಇದ್ದರು. ಇವು ನಾಡುಗಳ ವಿಭಾಗಗಳಾಗಿದ್ದವು. ದೇಶವಾಳಿಗಳು 100 ರಿಂದ 500 ಜನರ ನಾಯರ್ ಸೈನ್ಯಗಳನ್ನು ಮುನ್ನಡೆಸುತ್ತಿದ್ದರು. ದೇಶವಾಳಿಗಳ ಕೆಳಗೆ ಮುಖ್ಯಸ್ಥರು ಎಂದು ಕರೆಯಲ್ಪಡುವ ಇತರ ಸ್ಥಳೀಯ ಪ್ರಭುಗಳು ಇದ್ದರು. ಆದಾಗ್ಯೂ, ಯಾವುದೇ ಊಳಿಗಮಾನ್ಯ ಸಮಾಜದಲ್ಲಿರುವಂತೆ, ಕೊಲತ್ತಿರಿಗಳು ತಮ್ಮ ರಾಜ್ಯವನ್ನು ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ ಮತ್ತು ಅವರ ದುರ್ಬಲ ಆರ್ಥಿಕ ಸ್ಥಾನದಿಂದಾಗಿ ಕೊಲತ್ತಿರಿಗಳು ರಾಜ್ಯದಲ್ಲಿ ಬಲದ ಬಳಕೆಯನ್ನು ಏಕಸ್ವಾಮ್ಯಗೊಳಿಸಲು ಅಸಮರ್ಥತೆಯು ರಾಜ ಅಧಿಕಾರದ ಬಾಹ್ಯ ನೋಟವು ಹೆಚ್ಚು ಕಡಿಮೆ ನಾಮಮಾತ್ರವಾಗಿ ಉಳಿಯಿತು ಎಂದರ್ಥ.
===ವಿಕೇಂದ್ರೀಕೃತ ರಾಜ್ಯ===
ಕೇರಳೋಲ್ಪತ್ತಿಯಂತಹ ಬ್ರಾಹ್ಮಣ ಗ್ರಂಥಗಳಲ್ಲಿ ಪ್ರಸ್ತುತಪಡಿಸಲಾದ ರಾಜಕೀಯ ವ್ಯವಸ್ಥೆಯ ಆದರ್ಶ ಪ್ರಕಾರ, ಅಲ್ಲಿ ಕೊಲತ್ತಿರಿ ರಾಜನು ಕಾನೂನುಬದ್ಧ ರಾಜಕೀಯ ಅಧಿಕಾರದ ರಕ್ಷಕನಾಗಿ ಪ್ರಸ್ತುತಪಡಿಸಲ್ಪಟ್ಟಿದ್ದಾನೆ, ಮತ್ತು ಈ ಪ್ರದೇಶದಲ್ಲಿ ಅಧಿಕಾರ ಸಂಬಂಧಗಳ ನಿಜವಾದ ಕಾರ್ಯವಿಧಾನದ ನಡುವೆ ಗಮನಾರ್ಹ ವ್ಯತ್ಯಾಸವಿದೆ ಎಂದು ತೋರುತ್ತದೆ.
ಕೊಲತ್ತಿರಿಗಳು ಎಂದಿಗೂ ರಾಜ್ಯದಲ್ಲಿ ಅಧಿಕಾರದ ಏಕಸ್ವಾಮ್ಯವನ್ನು ಚಲಾಯಿಸಲಿಲ್ಲ ಎಂದು ತೋರುತ್ತದೆ. ಅಧಿಕಾರವು ಒಂದು ವಿಕೇಂದ್ರೀಕೃತ, ಹಂಚಿಕೆಯ, ಮತ್ತು ಬಹುತ್ವದ ಘಟಕವಾಗಿತ್ತು. ಕೊಲತ್ತಿರಿಗಳಿಗೆ ಆರೋಪಿಸಲಾದ ರಾಜಕೀಯ ಸ್ಥಾನಮಾನವು ಹೆಚ್ಚು ಕಡಿಮೆ ನಾಮಮಾತ್ರವಾಗಿ ಉಳಿಯಿತು. ಕೊಲತ್ತುನಾಡಿನ ಭೌಗೋಳಿಕ ಲಕ್ಷಣಗಳು ದೊಡ್ಡ ಪ್ರಮಾಣದ ಕೃಷಿ ಹೆಚ್ಚುವರಿಯನ್ನು ಖಾತರಿಪಡಿಸದ ಕಾರಣ ಕೊಲತ್ತಿರಿಗಳು ತಮ್ಮ ಆರ್ಥಿಕ ಸಂಪನ್ಮೂಲ ನೆಲೆಯ ಮಿತಿಗಳಿಂದ ನಿಗದಿಪಡಿಸಿದ ನಿರ್ಬಂಧಗಳೊಳಗೆ ತಮ್ಮ ರಾಜಕೀಯ ಘನತೆಯನ್ನು ಉಳಿಸಿಕೊಳ್ಳಬೇಕಾಯಿತು. ಕೊಲತ್ತುನಾಡಿನ ಸೀಮಿತ ಕೃಷಿ ಆರ್ಥಿಕತೆಯಿಂದ ರೂಪುಗೊಂಡ, ಕೇಂದ್ರೀಕೃತ ರಾಜಕೀಯ ರಚನೆಯು ಹೊರಹೊಮ್ಮುವ ಸಾಧ್ಯತೆಯು ಸೀಮಿತವಾಗಿತ್ತು.<ref name = "Gow90">ಮಲಬಾರ್ ಕರಾವಳಿಯಲ್ಲಿ ಸ್ತ್ರೀ ದೀಕ್ಷಾ ಸಮಾರಂಭಗಳು, ಗಫ್, ಕ್ಯಾಥ್ಲೀನ್ 1955a, ''ದ ಜರ್ನಲ್ ಆಫ್ ದ ರಾಯಲ್ ಆಂಥ್ರೊಪೊಲಾಜಿಕಲ್ ಇನ್ಸ್ಟಿಟ್ಯೂಟ್ ಆಫ್ ಗ್ರೇಟ್ ಬ್ರಿಟನ್ ಅಂಡ್ ಅಯರ್ಲ್ಯಾಂಡ್''.</ref>
ಸೀಮಿತ ಕೃಷಿ ಹೆಚ್ಚುವರಿಯನ್ನು ಬಳಸಿಕೊಳ್ಳುವ ಈ ಸಂಕುಚಿತ ಅವಕಾಶವು ನಿಸ್ಸಂಶಯವಾಗಿ ಕೊಲತ್ತಿರಿಗಳು ಈ ಪ್ರದೇಶದ ಜನರ ಮೇಲೆ ಗಮನಾರ್ಹ ಪ್ರಭಾವವನ್ನು ಚಲಾಯಿಸುವ ಸಾಧ್ಯತೆಗಳನ್ನು ನಿರ್ಬಂಧಿಸಿತು. ಬದಲಾಗಿ, ನಾಯರರ ಪ್ರಬಲ ತರವಾಡುಗಳ ಏರಿಳಿತದ ಕ್ಷೇತ್ರವು ಅವರ ಸ್ವಂತ ಭೂ ಆಸ್ತಿಗಳು ಮತ್ತು ಅವಲಂಬಿತ ಕಾರ್ಮಿಕ-ಸೇವಾ ವರ್ಗಗಳಿಂದ ಸಂಪನ್ಮೂಲಗಳ ಮೇಲೆ ನಿಯಂತ್ರಣವನ್ನು ಚಲಾಯಿಸುತ್ತಿತ್ತು. ಅವರ ದುರ್ಬಲ ಆರ್ಥಿಕ ಸ್ಥಾನದಿಂದಾಗಿ ಕೊಲತ್ತಿರಿಗಳು ರಾಜ್ಯದಲ್ಲಿ ಬಲದ ಬಳಕೆಯನ್ನು ಏಕಸ್ವಾಮ್ಯಗೊಳಿಸಲು ಅಸಮರ್ಥತೆಯು ರಾಜ ಅಧಿಕಾರದ ಬಾಹ್ಯ ನೋಟವು ಹೆಚ್ಚು ಕಡಿಮೆ ನಾಮಮಾತ್ರವಾಗಿ ಉಳಿಯಿತು.
ಕೊಲತ್ತಿರಿ ಪ್ರಭುತ್ವವು ಆಂತರಿಕ ಭಿನ್ನಾಭಿಪ್ರಾಯಗಳ ಪರಿಣಾಮವಾಗಿ [[ಕಡತನಾಡು]] ([[ವಡಕರ]]), [[ಧರ್ಮಡೋಂ|ರಂಡತರ]] ಅಥವಾ ಪೊಯನಾಡ್ ([[ಧರ್ಮಡೋಂ]]), [[ಕೊಟ್ಟಾಯಂ ಸಾಮ್ರಾಜ್ಯ|ಕೊಟ್ಟಾಯಂ]] ([[ತಲಶ್ಶೇರಿ]]), [[ನಿಲೇಶ್ವರಂ]], ಇರುವಾಳಿನಾಡು ([[ಪನೂರು (ಪುರಸಭೆ)|ಪನೂರು]], [[ಕುರುಂಬ್ರನಾಡ್]] ಇತ್ಯಾದಿ) ಪ್ರತ್ಯೇಕ ರಾಜ ಮುಖ್ಯಸ್ಥರ ಅಡಿಯಲ್ಲಿ ಸ್ವತಂತ್ರ 10 ರಾಜ್ಯಗಳಾಗಿ ಹೊರಹೊಮ್ಮಿತು. ಪೊಯನಾಡ್ (ರಂಡು ತರ) ಮತ್ತು (ಅಂಜರಕ್ಕಂಡಿ, ಚೆಂಬಿಲೋಡ್, ಮಾವಿಲಾಯಿ, ಎಡಕ್ಕಾಡ್, ಮತ್ತು ಧರ್ಮಡೋಂ) ವರೆಗಿನ ವ್ಯಾಪಕ ಭೂಪ್ರದೇಶವನ್ನು ರಂಡುತರ ಅಚ್ಚನ್ಮಾರ್ ಆಳಿದರು. ರಂಡುತರ ಅಚ್ಚನ್ಮಾರ್ 4 ನಂಬಿಯಾರ್ ಕುಟುಂಬಗಳ (ಕಂಡೋತ್, ಪಲ್ಲಿಯತ್, ಆಯಿಲ್ಲಿಯತ್ ಮತ್ತು ಅರಾಯತ್) ಸಮೂಹವಾಗಿದ್ದು, ಅವರು ಎಡತಿಲ್ ಕಡಂಗೋಡನ್ ಮತ್ತು ಪೊನ್ನತ್ತಿಲ್ ಮಾವಿಲ ಅವರ ವಂಶಸ್ಥರಾಗಿದ್ದರು ಮತ್ತು ಪೊಯನಾಡಿನ ಮುಖ್ಯಸ್ಥರಾಗಿದ್ದರು. "ಅಚ್ಚನ್ಮಾರ್" ನಂತರ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ವಿಶೇಷ ಆರೈಕೆಯಲ್ಲಿ ಬಂದರು. <ref name="Logan">{{Cite book|title=ಮಲಬಾರ್ ಕೈಪಿಡಿ (ಸಂಪುಟ-I)|last=ಲೋಗನ್|first=ವಿಲಿಯಮ್|publisher=ಏಷ್ಯನ್ ಎಜುಕೇಷನಲ್ ಸರ್ವಿಸಸ್|year=2010|isbn=9788120604476|location=ನವ ದೆಹಲಿ|pages=631–666}}</ref>
[[ಕೊಲತ್ತಿರಿ]] ಪ್ರಭುತ್ವದ ಅತ್ಯಂತ ಉತ್ತರದ ಭಾಗದಲ್ಲಿರುವ [[ನಿಲೇಶ್ವರಂ]] ರಾಜವಂಶವು ಆರಂಭಿಕ ಮಧ್ಯಯುಗದಲ್ಲಿ ಕೊಲತ್ತುನಾಡು ಮತ್ತು [[ಕ್ಯಾಲಿಕಟ್]]ನ [[ಜಾಮೋರಿನ್]] ಇಬ್ಬರಿಗೂ ಸಂಬಂಧಿಸಿತ್ತು.<ref name="Neeleswaram fete">{{cite news|url=http://www.thehindu.com/todays-paper/tp-national/tp-kerala/neeleswaram-fete-to-showcase-its-heritage/article2645520.ece | title=ನಿಲೇಶ್ವರಂ ಉತ್ಸವವು ಅದರ ಪರಂಪರೆಯನ್ನು ಪ್ರದರ್ಶಿಸಲಿದೆ | author=ದ ಹಿಂದೂ ಸ್ಟಾಫ್ ರಿಪೋರ್ಟರ್ | website=ದ ಹಿಂದೂ | date=21 November 2011 | access-date=24 November 2016 }}</ref>
===ಬ್ರಿಟಿಷ್ ವಸಾಹತು ಮತ್ತು ನಂತರದ ಘಟನೆಗಳು===
[[File:Wellington, soldier and statesman, and the revival of the military power of England (1904) (14593177119).jpg|left|thumbnail|1804 ರಲ್ಲಿ [[ಭಾರತ]]ದ ಹಳೆಯ ನಕ್ಷೆ. ಪ್ರಸ್ತುತ [[ಕೇರಳ]] ರಾಜ್ಯದೊಳಗೆ [[ತಲಶ್ಶೇರಿ]], [[ಕೋಝಿಕ್ಕೋಡ್]], ಮತ್ತು [[ಕೊಚ್ಚಿ]] ಮಾತ್ರ ನಗರಗಳಾಗಿ ಗುರುತಿಸಲ್ಪಟ್ಟಿವೆ ಎಂಬುದನ್ನು ಗಮನಿಸಿ.]]
ಕೊಲತ್ತುನಾಡಿನ ಬ್ರಿಟಿಷ್ ವಸಾಹತಿಗೆ ಕಾರಣವಾದ 1689 ಮತ್ತು 2000 ರ ನಡುವಿನ ಪ್ರಮುಖ ಘಟನೆಗಳು.<ref>{{cite journal |author=B. ಸ್ವಾಯಿ |year=1985 |title=ಕೊಲತ್ತುನಾಡಿನಿಂದ ಚಿರಕ್ಕಲ್ಗೆ: ಬ್ರಿಟಿಷ್ ವ್ಯಾಪಾರಿ ಬಂಡವಾಳ ಮತ್ತು ಟೆಲ್ಲಿಚೇರಿಯ ಹಿನ್ನಾಡು, 1694–1766 |journal=ಸ್ಟಡೀಸ್ ಇನ್ ಹಿಸ್ಟರಿ |volume=1 |pages=87–110 |doi=10.1177/025764308500100107|s2cid=161182476 }}</ref>
'''1689''': [[ಕೊಲತ್ತಿರಿ ರಾಜ]] ಮತ್ತು ಅವನ [[ಪ್ರಿನ್ಸ್ ರೀಜೆಂಟ್]] (ವಡಕ್ಕಾಲಂಕೂರ್), ನಂತರದವನನ್ನು ಅವನ ವಿರೋಧಿ [[ಕುರಂಗೋತ್ ನಾಯರ್]]ನಿಂದ ರಕ್ಷಿಸಲು, ಮಲಬಾರ್ನಲ್ಲಿನ ಆಗಿನ ಬ್ರಿಟಿಷ್ ಮಧ್ಯಪ್ರವೇಶಕರಿಗೆ ಅವರು ಪ್ರದೇಶದಲ್ಲಿ ವ್ಯಾಪಾರವನ್ನು ಮುಂದುವರಿಸಬಹುದು ಎಂದು ತಿಳಿಸಲು ಅಂತಿಮ ಎಚ್ಚರಿಕೆಯನ್ನು ಕಳುಹಿಸಿದನು, ಆದರೆ ಅವರು ಪ್ರದೇಶದಲ್ಲಿ ಕಾರ್ಖಾನೆಯನ್ನು ನಿರ್ಮಿಸಲು ಒಪ್ಪಿದರೆ ಮಾತ್ರ.
'''1708''': [[ತಲಶ್ಶೇರಿ ಕೋಟೆ]]ಯ ಪೂರ್ಣಗೊಳಿಸುವಿಕೆ.
'''1722''': [[ಮಲಬಾರ್ ಕರಾವಳಿ|ಮಲಬಾರ್]]ನಲ್ಲಿ ತಮ್ಮ ಆಸಕ್ತಿಯನ್ನು ರಕ್ಷಿಸಲು ಕಾರ್ಖಾನೆಗೆ ಫ್ರೆಂಚ್ ಹಕ್ಕು ಸಾಧಿಸಲಾಯಿತು [[ಮಾಹೆ, ಭಾರತ|ಮಾಹೆ]]ಯಲ್ಲಿ. ಅವರು [[ತಲಶ್ಶೇರಿ]]ಯಿಂದ ಕೇವಲ ಮೂರು ಮೈಲಿ ದಕ್ಷಿಣದಲ್ಲಿರುವ ಮಾಹೆಯಲ್ಲಿ ಕಾರ್ಖಾನೆಯನ್ನು ಸ್ಥಾಪಿಸುವ ಉದ್ದೇಶದಿಂದ [[ವಡಕರ|ಬಡಗರ]]ನ [[ವಾಝುನೋರ್]] ವಿರುದ್ಧ ಯುದ್ಧವನ್ನು ಪ್ರಾರಂಭಿಸಿದರು. ಕೊಲತ್ತಿರಿಯು ಈಸ್ಟ್ ಇಂಡಿಯಾ ಕಂಪನಿಗೆ 'ತನ್ನ ಪ್ರದೇಶದಲ್ಲಿನ ಎಲ್ಲಾ ವ್ಯಾಪಾರಗಳು ಮತ್ತು ಕೃಷಿಗಳನ್ನು' '[[ಕನ್ಹರೋಟ್]]ನಿಂದ [[ಪುದುಪಟ್ಟಣಂ ನದಿ]]ಯ ಕೆಳಗೆ' ನೀಡಿದನು, ಅಲ್ಲಿ ಡಚ್ಚರು ಕಣ್ಣೂರಿನಲ್ಲಿ ನೆಲೆಸಿದ್ದ ಪ್ರದೇಶಗಳನ್ನು ಹೊರತುಪಡಿಸಿ. ತಮ್ಮ ಸೌಕರ್ಯಗಳಲ್ಲಿ ಹಸ್ತಕ್ಷೇಪ ಮಾಡುವ 'ಯಾವುದೇ ಇತರ ಅಪರಿಚಿತರನ್ನು' 'ಶಿಕ್ಷಿಸಲು, ತಡೆಯಲು ಮತ್ತು ಓಡಿಸಲು' ಬ್ರಿಟಿಷರಿಗೂ ಅಧಿಕಾರ ನೀಡಲಾಯಿತು.
'''1725''': [[ಫ್ರಾನ್ಸ್|ಫ್ರೆಂಚ್]] ವಾಝುನೋರ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಮಾಹೆಯಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿದರು.
'''1720ರ ದಶಕ''' [[ಅರಕ್ಕಲ್|ಅರಕ್ಕಲ್ ರಾಜ]]ನ [[ಅಲಿ ರಾಜರು|ಅಲಿ ರಾಜ]] ಆಗಿನ ಕೊಲತ್ತುನಾಡಿನ ಪ್ರಿನ್ಸ್ ರೀಜೆಂಟ್, [[ಕುನ್ಹಿ ಹೋಮೋ]] ಮೇಲೆ ದಾಳಿ ಮಾಡಿದನು ಮತ್ತು ಅವನು ಬ್ರಿಟಿಷರನ್ನು ಸಹಾಯಕ್ಕಾಗಿ ಸಂಪರ್ಕಿಸಿದನು, ಪ್ರತಿಯಾಗಿ ತನ್ನ ಚಿಕ್ಕಪ್ಪ ಕೊಲತ್ತಿರಿಯು ಅವರಿಗೆ ನೀಡಿದ ಸವಲತ್ತುಗಳು ಮತ್ತು ಕಾರ್ಖಾನೆಗೆ.
'''ಆಗಸ್ಟ್ 1727''': [[ತಲಶ್ಶೇರಿ]]ಯ ಮುಖ್ಯಸ್ಥರು ಪ್ರಿನ್ಸ್ ರೀಜೆಂಟ್ಗೆ ಸ್ಥಳೀಯ ಪ್ರಭುಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಯುದ್ಧಗಳನ್ನು ನಡೆಸಲು ಸ್ಫೋಟಕಗಳನ್ನು ಪೂರೈಸುವುದು [[ಬಾಂಬೆ ಪ್ರೆಸಿಡೆನ್ಸಿ]]ಯ ನೀತಿಯಾಗಿದೆ ಎಂದು ತಿಳಿಸುತ್ತಾರೆ.
'''1728''' ತಲಶ್ಶೇರಿಯ ಮುಖ್ಯಸ್ಥ, [[ಆಡಮ್ಸ್ (ತಲಶ್ಶೇರಿಯ ಮುಖ್ಯಸ್ಥ)|ಆಡಮ್ಸ್]] ಅವರನ್ನು [[ಬಾಂಬೆ]]ಗೆ ಮರುಕರೆಯಲಾಯಿತು ಮತ್ತು ಪ್ರಿನ್ಸ್ ರೀಜೆಂಟ್ [[ಕೊಚ್ಚಿ]]ನಲ್ಲಿನ [[ನೆದರ್ಲ್ಯಾಂಡ್ಸ್|ಡಚ್]]ರಿಂದ ಮಿಲಿಟರಿ ಸಹಾಯವನ್ನು ಕೋರಿದನು. ಡಚ್ಚರು ಪ್ರತಿಯಾಗಿ [[ಧರ್ಮಪಟ್ಟಣಂ]] ಬಂದರನ್ನು ಬೇಡಿದರು. [[ಈಸ್ಟ್ ಇಂಡಿಯಾ ಕಂಪನಿಯು]] ಡಚ್ ಪ್ರಭಾವಕ್ಕೆ ಹೆದರಿ ಕೊಲತ್ತುನಾಡಿಗೆ 20,000 ಫಾನಮ್ಗಳ ಮಿಲಿಟರಿ ಸಾಮಗ್ರಿಗಳನ್ನು ಪೂರೈಸಿತು ಮತ್ತು [[ಅಲಿ ರಾಜ]] ಮೌನವಾದನು. ಬದಲಾಗಿ ಬ್ರಿಟಿಷರಿಗೆ ಕೊಲತ್ತುನಾಡಿನಲ್ಲಿ ಮಸಾಲೆಗಳನ್ನು ಖರೀದಿಸಲು ಇತರ ಯುರೋಪಿಯನ್ನರಿಗಿಂತ ವಿಶೇಷ ಅನುಮತಿಯನ್ನು ಪ್ರಿನ್ಸ್ [[ಉದಯ ವರ್ಮನ್]] ನೀಡಿದರು.
'''1732-34''': 1732 ರಲ್ಲಿ [[ಕನ್ನಡಿಗರು]] [[ಕೊಲತ್ತುನಾಡಿನ]] ಮುಖ್ಯಸ್ಥ [[ಕುನ್ಹಿ ಹೋಮೋ]]ನ ಕೋಟೆಗಳನ್ನು ಸುಲಭವಾಗಿ ಆಕ್ರಮಿಸಿಕೊಂಡರು. 1734 ರ ಆರಂಭದಲ್ಲಿ ಕನ್ನಡಿಗ ಸೈನಿಕರು [[ಕುದಾಲಿ]] ಮತ್ತು [[ಧರ್ಮಪಟ್ಟಣಂ]] ಅನ್ನು ವಶಪಡಿಸಿಕೊಂಡರು.
'''1736''': ಬ್ರಿಟಿಷರ ಸಹಾಯದಿಂದ ಕನ್ನಡಿಗ ಸೈನ್ಯವನ್ನು ಸಂಪೂರ್ಣ ಉತ್ತರದಿಂದ ಹೊರಹಾಕಲಾಯಿತು ಆದರೆ ಪ್ರಿನ್ಸ್ ರೀಜೆಂಟ್ ಇದರ ಪರಿಣಾಮವಾಗಿ ತೆಲ್ಲಿಚೇರಿಯಲ್ಲಿನ ಅಂಶಗಳಿಗೆ ಭಾರಿ ಸಾಲವನ್ನು ಹೊಂದುತ್ತಾನೆ.
'''1737''': [[ಬೆಡ್ನೂರಿನ ನಾಯಕರು]] ಕೊಲತ್ತುನಾಡಿನ ಮೇಲೆ ಮತ್ತೊಂದು ದಾಳಿಯನ್ನು ಯೋಜಿಸುತ್ತಾರೆ. ಪ್ರಿನ್ಸ್ [[ಕುನ್ಹಿ ಹೋಮೋ]] ಕನ್ನಡಿಗರೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡನು, ಇದು ಕೊಲತ್ತುನಾಡಿನ ಉತ್ತರ ಗಡಿಯನ್ನು [[ಮಡ್ಡಾಯ್]]ನಲ್ಲಿ ನಿಗದಿಪಡಿಸಿತು. ಟೆಲ್ಲಿಚೇರಿಯ ಅಂಶಗಳು [[ಬೆಡಾನೂರ್]]ನ ನಾಯಕನೊಂದಿಗೆ ತಮ್ಮದೇ ಆದ ಒಪ್ಪಂದಕ್ಕೆ ಸಹಿ ಹಾಕಿದವು, ಇದು ಕನ್ನಡಿಗರು ಮತ್ತು ಕೊಲತ್ತುನಾಡಿನ ಆಡಳಿತಗಾರರ ನಡುವಿನ ಭವಿಷ್ಯದ ಸಂಘರ್ಷಗಳ ಸಂದರ್ಭದಲ್ಲಿ ಮಲಬಾರ್ನಲ್ಲಿ ಬ್ರಿಟಿಷ್ ವ್ಯಾಪಾರ ಸೌಲಭ್ಯಗಳ ಸಮಗ್ರತೆಯನ್ನು ಖಾತರಿಪಡಿಸಿತು.
'''1739-42''' ಪ್ರಿನ್ಸ್ ಒಕ್ಕೂ, ಫ್ರೆಂಚ್ ಬೆಂಬಲಿತ ಪ್ರಿನ್ಸ್ ರೀಜೆಂಟ್ನ ವಿರೋಧಿ ಮತ್ತು ಅವನ ಅನುಯಾಯಿಗಳನ್ನು ಟೆಲ್ಲಿಚೇರಿಯ ಅಂಶಗಳು ಕೊಂದರು.
'''1741''' ಪ್ರಿನ್ಸ್ ರೀಜೆಂಟ್ ತನ್ನ ಸಾಮಂತರಾದ [[ರಂಡು ತರ ಅಚ್ಚನ್ಮಾರ್|ರಂಡುತರದ ಅಚ್ಚನ್ಮಾರ್]]ಗಳಿಗೆ ರಾಜ್ಯದ ಸಾಲವನ್ನು ತೀರಿಸಲು 30,000 [[ಫಾನಮ್ಗಳನ್ನು]] ಕೊಡುಗೆಯಾಗಿ ನೀಡುವಂತೆ ಕೇಳಿದನು. [[ಅಚ್ಚನ್ಮಾರ್]]ಗಳು ನಿರಾಕರಿಸಿದರು. ಪ್ರಿನ್ಸ್ ರೀಜೆಂಟ್ ಅಚ್ಚನ್ಮಾರ್ಗಳು ಒಪ್ಪದ ಹೊರತು [[ರಂಡುತರ]]ದಲ್ಲಿ ಕಂದಾಯ ವಸೂಲಿಯನ್ನು ವಹಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದನು. ಬ್ರಿಟಿಷರು ಅಚ್ಚನ್ಮಾರ್ಗಳ ಪರವಾಗಿ ಪ್ರಿನ್ಸ್ ರೀಜೆಂಟ್ಗೆ 30,000 ಫಾನಮ್ಗಳ ಮೊತ್ತವನ್ನು ರಂಡುತರದ ಭೂ ಕಂದಾಯ ವಸೂಲಿಗೆ ಬದಲಾಗಿ ಪಾವತಿಸಲು ವ್ಯವಸ್ಥೆ ಮಾಡಿದರು. ಹೀಗೆ ಸಾಲದ ಬಲೆಯು ಬ್ರಿಟಿಷರು ಮಲಬಾರ್ನಲ್ಲಿ ವ್ಯಾಪಾರದ ಏಕಸ್ವಾಮ್ಯವನ್ನು ಸುರಕ್ಷಿತಗೊಳಿಸಲು ಬಳಸಿದ ಪ್ರಮುಖ ಸಾಧನವಾಗಿತ್ತು.
'''1745''': ಟೆಲ್ಲಿಚೇರಿಯ ಅಂಶಗಳು ಕೊಲತ್ತುನಾಡಿನ ಸಾಮಂತರೊಂದಿಗೆ ಬೆಳೆಸುತ್ತಿದ್ದ ನೇರ ಸಂಬಂಧಗಳು, ಆದಾಗ್ಯೂ, ಕೊಲತ್ತಿರಿಯನ್ನು ಅಪರಿಚಿತಗೊಳಿಸುವ ಪ್ರವೃತ್ತಿಯನ್ನು ಹೊಂದಿದ್ದವು. ಕೊಲತ್ತುನಾಡಿನ ಪ್ರಿನ್ಸ್ ರೀಜೆಂಟ್ ಟೆಲ್ಲಿಚೇರಿಯ ಅಂಶಗಳು 'ತನ್ನ ದೇಶದ ಆಡಳಿತದಲ್ಲಿ ಹೆಚ್ಚು ಮಧ್ಯಪ್ರವೇಶಿಸುತ್ತಿದ್ದಾರೆ' ಎಂದು ಆರೋಪಿಸಿದನು.
'''1746''': ಪ್ರಿನ್ಸ್ ಉದಯ ವರ್ಮನ್ ಅವರ ಮರಣ. ಕೊಲತ್ತಿರಿಯ ಪ್ರಭುತ್ವದ ವಿಘಟನೆಯು ಪ್ರಾರಂಭವಾಗಿತ್ತು ಮತ್ತು ಇಂಗ್ಲಿಷರು ರಾಜಮನೆತನದಲ್ಲಿ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿದರು. ಬ್ರಿಟಿಷರು ರಾಜಮನೆತನದ ಸಹವರ್ತಿಗಳ ಮೂಲಕ ಹೆಚ್ಚು ಹೆಚ್ಚು ಪ್ರದೇಶವನ್ನು ಭೂಮಿಯನ್ನು ಖರೀದಿಸುವ ಮೂಲಕ ನಿಯಂತ್ರಣವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.
'''ಅಕ್ಟೋಬರ್ 1747''': ಕೊಲತ್ತಿರಿ ಮತ್ತು ಟೆಲ್ಲಿಚೇರಿಯಲ್ಲಿನ ಅಂಶಗಳ ನಡುವಿನ ಸಣ್ಣ ಯುದ್ಧ, ಅವರು [[ಪ್ರಿನ್ಸ್ ರಾಮನ್ ಉನಿತಿರಿ]]ಯನ್ನು ಬಳಸಿ [[ಸಮಸ್ತಾನೋಂ]]ನಲ್ಲಿ 'ಬ್ರಿಟಿಷ್ ವಿರೋಧಿ ಮಂತ್ರಿಗಳನ್ನು' 'ಶಿಕ್ಷಿಸಿದರು'. ಪ್ರಿನ್ಸ್ [[ಕುನ್ಹಿ ಹೋಮೋಸ್|ಕುನ್ಹಿ ಹೋಮೋಸ್]] ಮರಣದ ನಂತರ ಉತ್ತರಾಧಿಕಾರದಿಂದಾಗಿ, [[ಪ್ರಿನ್ಸ್ ಕುನ್ಹಿ ರಾಮನ್]] ಈಸ್ಟ್ ಇಂಡಿಯಾ ಕಂಪನಿಯ ಕಾಳಜಿಗೆ ತನ್ನ ಸಾಮಂತರ ಮೇಲೆ ತನ್ನ ಅಧಿಕಾರವನ್ನು ಮರುಸ್ಥಾಪಿಸಲು ಮಹತ್ವಾಕಾಂಕ್ಷೆಯನ್ನು ಹೊಂದಿದ್ದನು. ತನ್ನ ಅಧಿಕಾರವನ್ನು ಬಲಪಡಿಸಿದ ನಂತರ, ಪ್ರಿನ್ಸ್ ಕುನ್ಹಿ ರಾಮನ್ ಕೊಲತ್ತುನಾಡಿನ ಆಡಳಿತವನ್ನು ಕೇಂದ್ರೀಕರಿಸುವ ನೀತಿಯನ್ನು ಪ್ರಾರಂಭಿಸಿದನು, ಇದರಿಂದಾಗಿ ತನ್ನ ಸಾಮಂತರ ಮೇಲೆ ಹೆಚ್ಚಿನ ಅಧಿಕಾರವನ್ನು ಪಡೆದುಕೊಳ್ಳಲು. ಅಚ್ಚನ್ಮಾರ್ ಇನ್ನು ಮುಂದೆ ತನಗೆ ವಿಧೇಯರಾಗಿಲ್ಲ ಎಂದು ಅವನು ಭಾವಿಸಿದ್ದರಿಂದ ರಂಡುತರದ ಭೂ ಕಂದಾಯವನ್ನು ವಸೂಲಿ ಮಾಡಲು ತನ್ನ ಆಸೆಯನ್ನು ವ್ಯಕ್ತಪಡಿಸಿದನು.
'''1749''': ಪ್ರಿನ್ಸ್ ಕುನ್ಹಿ ರಾಮನ್ [[ಇರುವಾಲಿನಾಡ್]] ಮತ್ತು [[ಕಡತ್ತನಾಡ್]] ತಾಲೂಕುಗಳನ್ನು ಆಡಳಿತಕ್ಕೆ ತನ್ನ ಸ್ವಂತ ಪುತ್ರರನ್ನು ನೇಮಿಸಲು ಬೆದರಿಕೆ ಹಾಕಿದನು. ಅದೇ ವರ್ಷದಲ್ಲಿ, ಆದಾಗ್ಯೂ, [[ಬೋಯಾನೋರ್]] ಕೊಲತ್ತುನಾಡ್ ಅರಮನೆಯೊಂದಿಗಿನ ಸಾಮಂತ್ಯದ ಕೊನೆಯ ಸಂಬಂಧಗಳನ್ನು ಕಡಿದುಕೊಂಡನು ಮತ್ತು ತನ್ನನ್ನು ಕಡತ್ತನಾಡಿನ ರಾಜ ಎಂದು ಘೋಷಿಸಿಕೊಂಡನು. ಇರುವಾಲಿನಾಡ್ನ [[ನಂಬಿಯಾರ್ಗಳು]] ಅದನ್ನು ಅನುಸರಿಸಲು ಬೆದರಿಕೆ ಹಾಕಿದರು. ರಂಡುತರದ ಅಚ್ಚನ್ಮಾರ್ ಹೆಚ್ಚಿನ ರಕ್ಷಣೆಗಾಗಿ ಬ್ರಿಟಿಷರಿಗೆ ಮನವಿ ಮಾಡಿದರು. ಕೊಲತ್ತುನಾಡ್ ವಿಭಜನೆಯಾಗುತ್ತಿತ್ತು. ಕೊಲತ್ತಿರಿ ಮತ್ತು ಅವನ ಪ್ರಿನ್ಸ್ ರೀಜೆಂಟ್ ಕೊಲತ್ತುನಾಡ್ 'ಸರಿಯಾದ' ಪ್ರದೇಶಕ್ಕೆ ಹಿಂತೆಗೆದುಕೊಳ್ಳಲು ಮತ್ತು ಆದ್ದರಿಂದ ತಮ್ಮ ಅಧಿಕಾರವನ್ನು [[ಚಿರಕ್ಕಲ್, ಕಣ್ಣೂರು|ಚಿರಕ್ಕಲ್]]ನ [[ತಾಲೂಕು]] ಆಗಲಿದ್ದಕ್ಕೆ ನಿರ್ಬಂಧಿಸಲು ಒತ್ತಾಯಿಸಲ್ಪಟ್ಟರು.
'''ಏಪ್ರಿಲ್ 1751''': [[ಬೋಯಾನೋರ್]] ರಾಜ ಎಂಬ ಬಿರುದನ್ನು ವಹಿಸಿಕೊಂಡ ನಂತರ, ಪ್ರಿನ್ಸ್ ಕುನ್ಹಿ ರಾಮನ್ ಕಡತ್ತನಾಡ್, ಇರುವಾಲಿನಾಡ್ ಮೇಲೆ ಯುದ್ಧ ಘೋಷಿಸಿದನು, ಅಲ್ಲಿ [[ಈಸ್ಟ್ ಇಂಡಿಯಾ ಕಂಪನಿಯು]] ಮೆಣಸನ್ನು ಖರೀದಿಸುವ ಏಕಸ್ವಾಮ್ಯವನ್ನು ಪಡೆದುಕೊಂಡಿತ್ತು. ಅನೇಕ ಚರ್ಚೆಗಳ ನಂತರ, ಅಂಶಗಳು [[ಥಾಮಸ್ ಡೆರಿಲ್]] ಅವರ ಸಮ್ಮುಖದಲ್ಲಿ ಕೊಲತ್ತಿರಿಯನ್ನು (ಕೊಲತ್ತುನಾಡಿನ ಹಿರಿಯ ರಾಜ) ಪ್ರಿನ್ಸ್ ಕುನ್ಹಿ ರಾಮನನ್ನು ವಜಾ ಮಾಡಲು ಮತ್ತು [[ಅಂಬು ತಂಬನ್]] ಅನ್ನು ಪ್ರಿನ್ಸ್ ರೀಜೆಂಟ್ ಆಗಿ ನೇಮಿಸಲು ಮನವೊಲಿಸುವಲ್ಲಿ ಯಶಸ್ವಿಯಾದರು.
'''ಅಕ್ಟೋಬರ್ 1751''': ಪ್ರಿನ್ಸ್ ಕುನ್ಹಿ ರಾಮನ್ [[ಮೌಂಟ್ ಡೆಲ್ಲಿ]]ಯನ್ನು ಕೋಟೆಗಾಗಿ ಫ್ರೆಂಚರಿಗೆ ಅನುಮತಿಸಿದನು, ಇದರಿಂದಾಗಿ [[ಮಂಗಳೂರು]] ಮತ್ತು [[ಟೆಲ್ಲಿಚೇರಿ]] ನಡುವಿನ ಬ್ರಿಟಿಷ್ ಅಕ್ಕಿ ವ್ಯಾಪಾರವನ್ನು ಅಡ್ಡಿಪಡಿಸಿದನು.
'''ಜನವರಿ 1752''': [[ಕೋಟಿಯೋಟ್]]ನ ರಾಜನು ಟೆಲ್ಲಿಚೇರಿ ಮತ್ತು ಕೊಲತ್ತುನಾಡ್ ನಡುವೆ ಸಮಾಧಾನಕ್ಕಾಗಿ ಮಧ್ಯಸ್ಥಿಕೆ ವಹಿಸಿದನು.
'''1756''': ಪ್ರಿನ್ಸ್ ಕುನ್ಹಿ ರಾಮನ ಮರಣ ಮತ್ತು ಪ್ರಿನ್ಸ್ ರಾಮ ವರ್ಮನ ಉತ್ತರಾಧಿಕಾರ.
'''1760''': ಪ್ರಿನ್ಸ್ ರಾಮ ವರ್ಮನ ಮರಣ
'''ಆಗಸ್ಟ್ 1760''': ಉನಾನಾಮೆನ್ ತಂಬನ್ (ಹೊಸ ಪ್ರಿನ್ಸ್ ರೀಜೆಂಟ್) ಕೊಲತ್ತುನಾಡ್ ರಾಜ್ಯದಲ್ಲಿ ಬ್ರಿಟಿಷ್ ಪರ ಗುಂಪಿನ ನಾಯಕ ಸಿಬೆನ್ ಪುಟ್ಟೇಯ್ಯನನ್ನು ಕುರುಡನನ್ನಾಗಿ ಮಾಡಿದನು.
'''1761''': [[ಕೊಲತ್ತಿರಿ]] ಪ್ರಿನ್ಸ್ ರೀಜೆಂಟ್ ಅನ್ನು ವಜಾ ಮಾಡಿ ನೇರವಾಗಿ ಕೊಲತ್ತುನಾಡ್ ರಾಜ್ಯವನ್ನು ವಹಿಸಿಕೊಂಡನು ಮತ್ತು [[ಸಮಸ್ತಾನೋಂ]] ಪರವಾಗಿ [[ಉತ್ತರ ಮಲಬಾರ್]]ನ ಎಲ್ಲಾ ಸುಂಕದ ಕರ್ತವ್ಯಗಳನ್ನು ಸಂಗ್ರಹಿಸುವ ಹಕ್ಕನ್ನು ಬ್ರಿಟಿಷರಿಗೆ ನೀಡಿದನು. 1761 ರಲ್ಲಿ, ಬ್ರಿಟಿಷರು [[ಮಾಹೆ, ಭಾರತ|ಮಾಹೆ]]ಯನ್ನು ವಶಪಡಿಸಿಕೊಂಡರು ಮತ್ತು ವಸಾಹತುವನ್ನು [[ಕಡತನಾಡು]]ನ ಆಡಳಿತಗಾರನಿಗೆ ಹಸ್ತಾಂತರಿಸಲಾಯಿತು.<ref name="Mahé"/>
'''1763''':ಬ್ರಿಟಿಷರು 1763 ರ ಪ್ಯಾರಿಸ್ ಒಪ್ಪಂದದ ಭಾಗವಾಗಿ [[ಮಾಹೆ, ಭಾರತ|ಮಾಹೆ]]ಯನ್ನು ಫ್ರೆಂಚರಿಗೆ ಹಿಂದಿರುಗಿಸಿದರು.<ref name="Mahé"/>
'''1764''': [[ಚಿರಕ್ಕಲ್ನ ಪ್ರಿನ್ಸ್]] ಕೊಲತ್ತುನಾಡಿನ ಆಡಳಿತವನ್ನು ವಹಿಸಿಕೊಂಡನು.
'''1765''': ಚಿರಕ್ಕಲ್ನ ಪ್ರಿನ್ಸ್ [[ರಂಡುತರ]] ತಾಲೂಕಿನಲ್ಲಿ ಟೆಲ್ಲಿಚೇರಿಯ ಪ್ರಬಲ ಸ್ಥಾನವನ್ನು ಗುರುತಿಸಿದನು, ಪ್ರದೇಶವನ್ನು ಈಸ್ಟ್ ಇಂಡಿಯಾ ಕಂಪನಿಗೆ ಬಿಟ್ಟುಕೊಟ್ಟನು.
'''ಫೆಬ್ರವರಿ 1766''': [[ಹೈದರ್ ಅಲಿ]] ಒಂದು ಪ್ರಬಲ ಪಡೆಯೊಂದಿಗೆ [[ಅಲಿ ರಾಜ]] ಕಣ್ಣೂರಿನಿಂದ ಕೇರಳಕ್ಕೆ ಸ್ವಾಗತಿಸಲ್ಪಟ್ಟನು. [[ಮೈಸೂರು ಸೈನ್ಯ]] ಅಲಿ ರಾಜ ಮತ್ತು ಅವನ ಸಹೋದರನ ಮಾರ್ಗದರ್ಶನದಲ್ಲಿ [[ಚಿರಕ್ಕಲ್, ಕಣ್ಣೂರು|ಚಿರಕ್ಕಲ್]]ನಲ್ಲಿ ಕೊಲತ್ತಿರಿ ರಾಜನ ಅರಮನೆಯನ್ನು ವಶಪಡಿಸಿಕೊಂಡಿತು. ರಾಜ ಮತ್ತು ಅವನ ಕುಟುಂಬವು ತಲಶ್ಶೇರಿಯಲ್ಲಿನ ಇಂಗ್ಲಿಷ್ ವ್ಯಾಪಾರ ಕೇಂದ್ರದಲ್ಲಿ ಆಶ್ರಯ ಪಡೆಯಲು ದಕ್ಷಿಣಕ್ಕೆ ಪಲಾಯನ ಮಾಡಿದರು. ಅವರು ಅಲಿ ರಾಜನನ್ನು ತಮ್ಮ ನೌಕಾ ಮುಖ್ಯಸ್ಥ (ಹೈ ಅಡ್ಮಿರಲ್) ಆಗಿ ಮತ್ತು ರಾಜನ ಸಹೋದರ [[ಶೇಕ್ ಅಲಿ]] ಅವರನ್ನು ಬಂದರು ಪ್ರಾಧಿಕಾರದ ಮುಖ್ಯಸ್ಥ (ನೌಕಾ ವ್ಯವಸ್ಥಾಪಕ) ಆಗಿ ನೇಮಿಸಿದರು.
'''1773''': ಹೈದರ್ ಅಲಿ 1768 ರಲ್ಲಿ ಒಪ್ಪಿದಂತೆ ಮಲಬಾರ್ನ ರಾಜರು ಅವನಿಗೆ ಕಪ್ಪ ಕಾಣಿಕೆಯನ್ನು ಪಾವತಿಸದ ಕಾರಣ 1773 ರಲ್ಲಿ ಎರಡನೇ ಬಾರಿಗೆ ಮಲಬಾರ್ ಅನ್ನು ಆಕ್ರಮಿಸಿದನು.<ref name = "NM11"/>
'''1779''': 1779 ರಲ್ಲಿ, ಆಂಗ್ಲೋ-ಫ್ರೆಂಚ್ ಯುದ್ಧ ಪ್ರಾರಂಭವಾಯಿತು, ಇದರ ಪರಿಣಾಮವಾಗಿ ಫ್ರೆಂಚರು [[ಮಾಹೆ, ಭಾರತ|ಮಾಹೆ]]ಯನ್ನು ಕಳೆದುಕೊಂಡರು.<ref name="Mahé"/>
'''1783''': 1783 ರಲ್ಲಿ, ಬ್ರಿಟಿಷರು ತಮ್ಮ ವಸಾಹತುಗಳನ್ನು ಫ್ರೆಂಚರಿಗೆ ಹಿಂದಿರುಗಿಸಲು ಒಪ್ಪಿಕೊಂಡರು.
'''1785''': [[ಮಾಹೆ, ಭಾರತ|ಮಾಹೆ]]ಯನ್ನು 1785 ರಲ್ಲಿ ಫ್ರೆಂಚರಿಗೆ ಹಸ್ತಾಂತರಿಸಲಾಯಿತು.<ref name="Mahé">{{cite web|url=http://mahe.gov.in/mws/leftmenupages/history.html|title=ಮಾಹೆಯ ಇತಿಹಾಸ|access-date=19 April 2021|url-status=dead|archive-url=https://web.archive.org/web/20131230232052/http://mahe.gov.in/mws/leftmenupages/history.html|archive-date=30 December 2013}}</ref>
'''ಫೆಬ್ರವರಿ 1789''': [[ಟಿಪು ಸುಲ್ತಾನ್]] ಎಲ್ಲಾ ರಾಜರು ಮತ್ತು ಉತ್ತರ ಮಲಬಾರ್ನ ಮುಖ್ಯಸ್ಥರು ದಂಗೆ ಎದ್ದು [[ಮೈಸೂರು]]ನಿಂದ ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿದ್ದರಿಂದ ಎರಡನೇ ಬಾರಿಗೆ ಮಲಬಾರ್ ಅನ್ನು ಪ್ರವೇಶಿಸಿದನು. ಅವನು ಕಡತನಾಡನ್ನು ಧ್ವಂಸಗೊಳಿಸಿದನು ಮತ್ತು ತನ್ನ ಮಗ (ಅಬ್ದುಲ್ ಖಲಿಕ್) ಅನ್ನು ಕಣ್ಣೂರಿನ [[ಅರಕ್ಕಲ್ ಬೀಬಿ]]ಯ ಮಗಳೊಂದಿಗೆ ವಿವಾಹ ಮಾಡಿದನು. ಕೊಲತ್ತಿರಿ ಕುಟುಂಬದ ಒಬ್ಬ ರಾಜಕುಮಾರನು ಅವನ ತಪ್ಪಿಸಿಕೊಳ್ಳುವ ಸಮಯದಲ್ಲಿ [[ಟಿಪ್ಪು ಸುಲ್ತಾನ್|ಟಿಪ್ಪು]]ನ ಸೈನಿಕರಿಂದ ಕೊಲ್ಲಲ್ಪಟ್ಟನು ಮತ್ತು ಅವನ ಶವವನ್ನು ಆನೆಗಳಿಂದ ಟಿಪ್ಪುನ ಶಿಬಿರದ ಮೂಲಕ ಎಳೆಯಲಾಯಿತು ಮತ್ತು ಅದನ್ನು ನಂತರ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಅವನ ಹದಿನೇಳು ಅನುಯಾಯಿಗಳೊಂದಿಗೆ ಮರದ ಮೇಲೆ ನೇತುಹಾಕಲಾಯಿತು.
'''ಮೇ 1790''': ಟಿಪು ಮಲಬಾರ್ ಅನ್ನು ತೊರೆದನು, ಎಂದಿಗೂ ಹಿಂತಿರುಗಲಿಲ್ಲ.
[[File:Madras Prov 1859.gif|thumb|right|[[ಬ್ರಿಟಿಷ್ ರಾಜ್|ಬ್ರಿಟಿಷ್ ಭಾರತ]]ದಲ್ಲಿ [[ಮದ್ರಾಸ್ ಪ್ರಾಂತ್ಯ]]ದ 19ನೇ ಶತಮಾನದ ನಕ್ಷೆ]]
'''ಮಾರ್ಚ್ 1792''': ಮಲಬಾರ್ ಅನ್ನು ಬ್ರಿಟಿಷರಿಗೆ ಅಧಿಕೃತವಾಗಿ ಬಿಟ್ಟುಕೊಡಲಾಯಿತು. ಬ್ರಿಟಿಷರು [[ಚಿರಕ್ಕಲ್, ಕಣ್ಣೂರು|ಚಿರಕ್ಕಲ್]], ಕೊಟ್ಟಾಯಂ ಮತ್ತು [[ಕಡತನಾಡ್]]ನ ರಾಜರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡರು ಮತ್ತು ಅವರೆಲ್ಲರೂ ತಮ್ಮ ಸಂಬಂಧಿತ ಪ್ರದೇಶಗಳ ಮೇಲಿನ ಕಂಪನಿಯ ಸಂಪೂರ್ಣ ಸಾರ್ವಭೌಮತ್ವವನ್ನು ಒಪ್ಪಿಕೊಂಡರು. [[ಬ್ರಿಟಿಷ್ ಸರ್ಕಾರ]]ವು ಮಲಬಾರ್ ಪ್ರಾಂತ್ಯವನ್ನು ಎರಡು ಆಡಳಿತ ವಿಭಾಗಗಳಾಗಿ ವಿಂಗಡಿಸಿತು - [[ಉತ್ತರ ಮಲಬಾರ್|ಉತ್ತರ]] ಮತ್ತು [[ದಕ್ಷಿಣ ಮಲಬಾರ್|ದಕ್ಷಿಣ]], ಪ್ರತಿಯೊಂದೂ ತಲಶ್ಶೇರಿ ಮತ್ತು [[ಚೇರ್ಪುಲಸ್ಸೇರಿ]]ನಲ್ಲಿ ಅಧೀಕ್ಷಕರ ಅಧ್ಯಕ್ಷತೆಯಲ್ಲಿ, ಮಲಬಾರ್ ಪ್ರಾಂತ್ಯದ ಮೇಲ್ವಿಚಾರಕ ಮತ್ತು ಮುಖ್ಯ ನ್ಯಾಯಾಧೀಶರ ಸಾಮಾನ್ಯ ನಿಯಂತ್ರಣದಲ್ಲಿ, ಅವರು ಕ್ಯಾಲಿಕಟ್ನಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿದ್ದರು.
'''1800''': ಮಲಬಾರ್ ಅನ್ನು [[ಮದ್ರಾಸ್ ಪ್ರೆಸಿಡೆನ್ಸಿ]]ಯ ಭಾಗವನ್ನಾಗಿ ಮಾಡಲಾಯಿತು.
'''1801''': ತನ್ನ ಎಲ್ಲಾ ಪ್ರಭುತ್ವಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟ ಕೊನೆಯ ಕೊಲತ್ತಿರಿ ರಾಜನ ಮರಣ (ಸಾಮಾನ್ಯವಾಗಿ [[ಚಿರಕ್ಕಲ್ನ ಮೊದಲ ರಾಜ]] ಎಂದು ಕರೆಯಲ್ಪಡುತ್ತಿದ್ದನು). ಮೇಜರ್ ಮ್ಯಾಕ್ಲಿಯೋಡ್ 1 ಅಕ್ಟೋಬರ್ 1801 ರಂದು ಮಲಬಾರ್ನ ಮೊದಲ ಪ್ರಧಾನ ಸಂಗ್ರಾಹಕನಾಗಿ ಅಧಿಕಾರ ವಹಿಸಿಕೊಂಡನು.
ಕೊಲತ್ತುನಾಡ್ 1947 ರವರೆಗೆ ಮದ್ರಾಸ್ ಪ್ರೆಸಿಡೆನ್ಸಿಯಡಿಯಲ್ಲಿ ಬ್ರಿಟಿಷ್ ಭಾರತದ ಆಡಳಿತ ಜಿಲ್ಲೆಯಾದ [[ಮಲಬಾರ್ ಜಿಲ್ಲೆ]]ಯ ಭಾಗವಾಗಿ ಉಳಿಯಿತು ಮತ್ತು ನಂತರ 1956 ರವರೆಗೆ ಭಾರತದ [[ಮದ್ರಾಸ್ ರಾಜ್ಯ]]ದ ಭಾಗವಾಗಿತ್ತು. 1 ನವೆಂಬರ್ 1956 ರಂದು, [[ರಾಜ್ಯ ಪುನರ್ರಚನೆ ಕಾಯ್ದೆ]]ಯಿಂದ ಮಲಬಾರ್ ಜಿಲ್ಲೆ, [[ತಿರುವಾಂಕೂರು-ಕೊಚ್ಚಿ]] (ನಾಲ್ಕು ದಕ್ಷಿಣ ತಾಲೂಕುಗಳನ್ನು ಹೊರತುಪಡಿಸಿ, ಅವುಗಳನ್ನು [[ಮದ್ರಾಸ್ ರಾಜ್ಯ]]ದೊಂದಿಗೆ ವಿಲೀನಗೊಳಿಸಲಾಯಿತು) ಅನ್ನು ವಿಲೀನಗೊಳಿಸುವ ಮೂಲಕ ಕೇರಳ ರಾಜ್ಯವನ್ನು ರಚಿಸಲಾಯಿತು.
==ಕೊಲತ್ತಿರಿ ಕುಟುಂಬದ ಸಂವಿಧಾನ==
17ನೇ ಶತಮಾನದ ವೇಳೆಗೆ, ಕೋಲಸ್ವರೂಪಂ ತನ್ನ ರಾಜಕೀಯ ಅಧಿಕಾರವನ್ನು ಉತ್ತರ ಕೇರಳದ ಇತರ ಎರಡು ವಂಶಾವಳಿಗಳೊಂದಿಗೆ ಹಂಚಿಕೊಳ್ಳಬೇಕಾಯಿತು. ನಿಲೇಶ್ವರಂ (ಅಲ್ಲದಂ) ಸ್ವರೂಪಂ ಮತ್ತು ಅರಕ್ಕಲ್ ಸ್ವರೂಪಂ ಸ್ವತಂತ್ರ ರಾಜಕೀಯ ಗುರುತನ್ನು ಹೇಳಿಕೊಂಡವು. ಇದಲ್ಲದೆ, ಕೋಲಸ್ವರೂಪಂನೊಳಗಿನ ರಾಜಕೀಯ ಅಧಿಕಾರವು ವಿವಿಧ ಕೊವಿಲಕಂಗಳಲ್ಲಿಯೂ ಪ್ರಸಾರವಾಯಿತು. ಕೇರಳೋಲ್ಪತ್ತಿಯಲ್ಲಿ ಕೋಲಸ್ವರೂಪಂನ ರಾಜಕೀಯ ಅಧಿಕಾರವನ್ನು ಹಂಚಿಕೊಳ್ಳುವ ನಾಲ್ಕು ಕೊವಿಲಕಂಗಳಿವೆ: ತಲೋರ ಕೊವಿಲಕಂ; ಅರತಿಲ್ ಕೊವಿಲಕಂ; ಮುತ್ತತಿಲ್ ಕೊವಿಲಕಂ; ಕರಿಪತು ಕೊವಿಲಕಂ; ಮತ್ತು ಕೋಲತ್ ಕೊವಿಲಕಂ.<ref>ವರಿಯರ್, ಕೇರಳೋಲ್ಪತ್ತಿ ಗ್ರಂಥವರಿ, 52-3</ref> ಕೇರಳೋಲ್ಪತ್ತಿ ಕೊಲತ್ತುನಾಡ್ ಸಂಪ್ರದಾಯದ ಪ್ರಕಾರ, ಕರಿಪತು ಕೊವಿಲಕಂ ಮತ್ತು ಕೋಲತ್ ಕೊವಿಲಕಂ ಉಳಿದವುಗಳಿಗಿಂತ ಕೆಲವು ರೀತಿಯ ಶ್ರೇಷ್ಠತೆಯನ್ನು ಹೇಳಿಕೊಂಡವು. ಆದಾಗ್ಯೂ, ಡಚ್ ದಾಖಲೆಗಳಿಂದ ಸ್ಪಷ್ಟವಾಗಿ ತಿಳಿದುಬರುವಂತೆ, ಕೊಲತ್ತುನಾಡಿನ ರಾಜಕೀಯ ದೃಶ್ಯದಲ್ಲಿ ಪ್ರಾಬಲ್ಯ ಸಾಧಿಸಿದ್ದು ಪಳ್ಳಿ ಕೊವಿಲಕಂ ಮತ್ತು ಉದಯಮಂಗಲಂ ಕೊವಿಲಕಂ. ಈ ಎರಡೂ ಕೊವಿಲಕಂಗಳು ಮತ್ತೆ ವಿವಿಧ ಕೊವಿಲಕಂಗಳಾಗಿ ಶಾಖೆಗಳನ್ನು ಹೊಂದಿದ್ದವು, ಹೀಗಾಗಿ ಕೋಲಸ್ವರೂಪಂನೊಳಗೆ ರಾಜಕೀಯ ಮನೆಗಳ ಜಾಲವನ್ನು ಸೃಷ್ಟಿಸಿದವು.
ಕೊಲತ್ತಿರಿಯ ಮೂಲ ಸಾಮ್ರಾಜ್ಯವು ಕೊಲತ್ತಿರಿ ಕುಟುಂಬದ 5 ಮಾತೃಪ್ರಧಾನ-ವಿಭಾಗಗಳ ಉದ್ದಕ್ಕೂ ವಿಭಜಿಸಲ್ಪಟ್ಟಿತು ಮತ್ತು ಅನುಕ್ರಮವಾಗಿ ಕೊಲತ್ತಿರಿ, ತೆಕ್ಕಾಲಂಕೂರ್, ವಡಕ್ಕಾಲಂಕೂರ್, ನಾಲಾಂಕೂರ್, ಅಂಜಾಂಕೂರ್ ಎಂಬ ಭಾಗಗಳು/ ಕೂರ್-ವಾಝ್ಚ (ಭಾಗ-ಪ್ರಭುತ್ವಗಳು) ಆಡಳಿತಗಾರರನ್ನು ಹೊಂದಿತ್ತು.
{| class="wikitable"
|-
| style="text-align:left;" colspan="4"|''' ''ಕೊಲತ್ತಿರಿ'' ಕುಟುಂಬದ ಮಾತೃಪ್ರಧಾನ ವಿಭಾಗಗಳು (ಕೊವಿಲಕಂಗಳು)'''<ref name = "Kol38">ಮಲಬಾರ್ನಲ್ಲಿ ಬ್ರಿಟಿಷ್ ಅಧಿಕಾರದ ಸ್ಥಾಪನೆ, 1664 ರಿಂದ 1799 N. ರಾಜೇಂದ್ರನ್</ref>
|-
!ವಿಭಾಗ
!ಶಾಖೆ
!ಉಪ-ಶಾಖೆ
|- style="text-align:center;"
|'''ಉದಯಮಂಗಲಂ'''
|
|
|- style="text-align:center;"
|'''ಪಳ್ಳಿ'''
| '''ಚಿರಕ್ಕಲ್'''
|
|- style="text-align:center;"
|
| '''ಚೆಂಗ'''
|'''ಪ್ರಾಯಿಕ್ಕರ''' ಮಾವೆಲಿಕ್ಕರದಲ್ಲಿ, '''ಎನ್ನಕ್ಕಾಟ್''' (ಮತ್ತಷ್ಟು '''ಎನ್ನಕ್ಕಾಟ್''' ಮತ್ತು '''ಮಾವೆಲಿಕ್ಕರ''' ಎಂದು ವಿಭಜಿಸಲಾಗಿದೆ)
|- style="text-align:center;"
|
| '''ತೇವನಂ ಕೋಟ'''
|
|- style="text-align:center;"
|
| '''ಪಡಿಂಜಾರೆ'''
|
|- style="text-align:center;"
|
|''' ಥೆಕುಂಕುರೆ'''
|'''ಕೋಲತ್ ಕೊವಿಲಕಂ'''
|- style="text-align:center;"
|
| '''ಕಾವಿನಿಶ್ಶೇರಿ'''
|
|}
[[ಹೈದರ್ ಅಲಿ]] ಮತ್ತು [[ಟಿಪು ಸುಲ್ತಾನ್]] ಅವರ ಅವಧಿಯಲ್ಲಿ 1766 ರಿಂದ 1792 ರವರೆಗೆ ಉತ್ತರ ಮತ್ತು ದಕ್ಷಿಣ ಮಲಬಾರ್ನಲ್ಲಿ ಬಹು ಸೈನಿಕ ಆಕ್ರಮಣಗಳು, ಲೂಟಿ ಮತ್ತು ವ್ಯವಸ್ಥಿತ ಬಲವಂತದ ಮತಾಂತರಗಳನ್ನು ನಡೆಸಲಾಯಿತು.<ref name="NM11">[[ಮಲಬಾರ್ ಕೈಪಿಡಿ]] [[ವಿಲಿಯಮ್ ಲೋಗನ್ (ಮಲಬಾರ್ ಕೈಪಿಡಿ)|ವಿಲಿಯಮ್ ಲೋಗನ್]] ([[ಡಾ. ಸಿ.ಕೆ, ಕರೀಮ್]], ತಿರುವನಂತಪುರಂ ಅವರ ಸಂಪಾದಕತ್ವದಲ್ಲಿ [[ಚರಿತ್ರಂ ಪಬ್ಲಿಕೇಷನ್ಸ್]] ಮುದ್ರಿಸಿ ಪ್ರಕಟಿಸಲಾಗಿದೆ)</ref><ref name="NM12">[[ಫ್ರಾ ಬಾರ್ಟೊಲೊಮಿಯೊ]] (ಪೋರ್ಚುಗೀಸ್ ಪ್ರಯಾಣಿಕ ಮತ್ತು ಇತಿಹಾಸಕಾರ) ಅವರಿಂದ [[ಪೂರ್ವ ಇಂಡೀಸ್]]ಗೆ ಪ್ರಯಾಣ</ref><ref name="NM13">[[ಕರ್ನಲ್ ವಿಲ್ಕ್ಸ್]] ಅವರ ಐತಿಹಾಸಿಕ ರೇಖಾಚಿತ್ರಗಳು, ಸಂಪುಟ II.</ref> ಬಲವಂತದ ಮತಾಂತರಕ್ಕೆ ಹೆದರಿ, ಕೊಲತ್ತಿರಿ ಸೇರಿದಂತೆ 'ಮಲಬಾರ್' ಪ್ರದೇಶದ ಗಮನಾರ್ಹವಾದ ದೊಡ್ಡ ವಿಭಾಗವು (ಮುಖ್ಯಸ್ಥರು ಮತ್ತು ಬ್ರಾಹ್ಮಣರು) ತಮ್ಮ ಪ್ರಭುತ್ವಗಳಲ್ಲಿನ ದೇವಾಲಯಗಳ ಭೌತಿಕ ಸಂಪತ್ತಿನೊಂದಿಗೆ, ಹಿಂದಿನ ತಿರುವಾಂಕೂರು ಸಾಮ್ರಾಜ್ಯದಲ್ಲಿ ಆಶ್ರಯ ಪಡೆಯಲು ಪಲಾಯನ ಮಾಡಿದರು. ತಿರುವಾಂಕೂರು ಇಂಗ್ಲಿಷ್ ಕಂಪನಿಯೊಂದಿಗೆ ([[ಮಂಗಳೂರು ಒಪ್ಪಂದ]]) ಮೈತ್ರಿಯನ್ನು ಹೊಂದಿತ್ತು, ಅದರ ಪ್ರಕಾರ "ತಿರುವಾಂಕೂರಿನ ಮೇಲಿನ ಆಕ್ರಮಣವು ಇಂಗ್ಲಿಷರ ವಿರುದ್ಧ ಯುದ್ಧದ ಘೋಷಣೆಗೆ ಸಮಾನವಾಗಿ ಪರಿಗಣಿಸಲ್ಪಡುತ್ತದೆ". ಹೀಗೆ 1766 ಮತ್ತು 1792 ರ ನಡುವಿನ ವಿವಿಧ ಸಮಯಗಳಲ್ಲಿ, ಕೊಲತ್ತಿರಿ ಕುಟುಂಬದ ಎಲ್ಲಾ ಸ್ತ್ರೀ ಸದಸ್ಯರು ಮತ್ತು ಅನೇಕ ಪುರುಷ ಸದಸ್ಯರು ತಮ್ಮ ದೇವಾಲಯಗಳ ಸಂಪತ್ತಿನೊಂದಿಗೆ [[ತಿರುವನಂತಪುರಂ]]ನಲ್ಲಿ ಆಶ್ರಯ ಪಡೆದಿದ್ದರು. ಮಲಬಾರ್ನಲ್ಲಿ ಶಾಂತಿಯ ಪುನಃಸ್ಥಾಪನೆಯಾದಾಗ, ಕುಟುಂಬವು ಹಿಂತಿರುಗಿದಾಗ, ಮೂವರು ಸಹೋದರಿಯರು ಮಾವೆಲಿಕ್ಕರದಲ್ಲಿ ತಿರುವಾಂಕೂರಿನಲ್ಲಿಯೇ ಉಳಿದರು. ಭಿನ್ನಾಭಿಪ್ರಾಯಗಳು ಅವರಲ್ಲಿ ಒಬ್ಬರು ಎನ್ನಕ್ಕಾಡ್ಗೆ ತೆರಳಲು ಕಾರಣವಾದವು, ಮತ್ತೊಬ್ಬರು ಪ್ರಯಿಕ್ಕರದಲ್ಲಿ ನೆಲೆಸಿದರು ಮತ್ತು ಇತರ ಗುಂಪು ಕೋಳಂಚೇರಿಯಲ್ಲಿ ನೆಲೆಸಿತು. ಹೀಗೆ ಕೊಲತ್ತಿರಿ ಕುಟುಂಬದ ಮೂರು ಮಾತೃಪ್ರಧಾನ ಶಾಖೆಗಳು ತಿರುವಾಂಕೂರಿನಲ್ಲಿ ನೆಲೆಸಿ ಮಾವೆಲಿಕ್ಕರ, ಕೋಳಂಚೇರಿ, ಎನ್ನಕ್ಕಾಟ್ ಮತ್ತು ಪ್ರಯಿಕ್ಕರ ರಾಜಮನೆತನಗಳನ್ನು ಸ್ಥಾಪಿಸಿದವು.
===ಕೊಲತ್ತಿರಿ ರಾಜ ಎಂಬ ಬಿರುದಿನ ನಿಲುಗಡೆ===
ಹಿಂದೆ ಉದಯಮಂಗಲಂ ಮತ್ತು ಪಳ್ಳಿ ಎರಡೂ ವಿಭಾಗಗಳ ಸದಸ್ಯರು ತಮ್ಮ ವಯಸ್ಸಿನ ಹಿರಿತನದ ಆಧಾರದ ಮೇಲೆ ಕೊಲತ್ತಿರಿ ರಾಜ ಎಂಬ ಬಿರುದನ್ನು ವಹಿಸಿಕೊಳ್ಳಲು ಅರ್ಹರಾಗಿದ್ದರು. ಕೊಲತ್ತಿರಿ ಕುಟುಂಬದ ಪ್ರದೇಶಗಳ ಮೇಲೆ ಬೆಡ್ನೂರ್ / ಇಕ್ಕೇರಿಯ ರಾಜನ ಆಕ್ರಮಣ ಮತ್ತು ನಂತರ ಕೊಲತ್ತಿರಿ ಮತ್ತು ಆಕ್ರಮಣಕಾರನ ನಡುವಿನ ಕ್ರಿ.ಶ. 1736-37 ರ ನೆಲೆಸುವಿಕೆಯು ಕೊಲತ್ತಿರಿಗಳ ಕುಟುಂಬದೊಳಗೆ ಗಣನೀಯ ಬದಲಾವಣೆಗೆ ಕಾರಣವಾಯಿತು. ರಾಜ ಎಂಬ ಬಿರುದನ್ನು ವಹಿಸಿಕೊಳ್ಳುವುದರಿಂದ ಉದಯಮಂಗಲಂ ಶಾಖೆಯನ್ನು ಹೊರಗಿಡಲಾಯಿತು ಮತ್ತು ಕೊಲತ್ತಿರಿ ಎಂಬ ಬಿರುದು ಬಳಕೆಯಲ್ಲಿಲ್ಲದಾಯಿತು. ಆಳುವ ಕುಟುಂಬವು (ಪಳ್ಳಿ ವಿಭಾಗ) ರಾಜನಾಗಿ ಉತ್ತರಾಧಿಕಾರದ ಹಕ್ಕನ್ನು ಏಕಸ್ವಾಮ್ಯಗೊಳಿಸಿತು, ಇದು ಕೊಲತ್ತಿರಿ ರಾಜ ಎಂಬ ಪ್ರಾಚೀನ ಬಿರುದಿನ [[ಚಿರಕ್ಕಲ್ ರಾಜ]]ರಿಂದ ನಿಲುಗಡೆಗೆ ಕಾರಣವಾಯಿತು.<ref name = "Kol66">ಕೇರಳ ಜಿಲ್ಲಾ ಗೆಜೆಟಿಯರ್ಗಳು: ಕಣ್ಣೂರು (1962)</ref><ref name = "Kol38"/>
===ಕ್ಷತ್ರಿಯತ್ವಕ್ಕೆ ಏರಿಕೆ===
1617 ಕ್ರಿ.ಶ.ದಲ್ಲಿ ಕೊಲತ್ತಿರಿ ರಾಜ ಉದಯವರ್ಮನ್ ತನ್ನನ್ನು ಪೂರ್ಣ ಮನ್ನಣೆಗೆ ಹಿರಣ್ಯ-ಗರ್ಭವನ್ನು ನಡೆಸುವ ಮೂಲಕ ಏರಿಸಿಕೊಳ್ಳಲು ಬಯಸಿದನು, ಇದಕ್ಕೆ ನಂಬೂದಿರಿಗಳು ನಿರಾಕರಿಸಿದರು. ಅವನು ತಾಳಿಪರಂಬದ (ಪೆರುಂಚೆಲ್ಲೂರ್) ನಂಬೂದಿರಿ ಬ್ರಾಹ್ಮಣರು ತನಗಾಗಿ ಈ ಆಚರಣೆಯನ್ನು ನಡೆಸುವಂತೆ ಒತ್ತಾಯಿಸಲು ಪ್ರಯತ್ನಿಸಿದಾಗ, ನಂಬೂದಿರಿ ಬ್ರಾಹ್ಮಣರು ಅವನಿಗೆ ಹೀಗೆ ನಿರಾಕರಿಸಿದರು:
‘''ಕೊಲತ್ತಿರಿಗೆ ಪೆರುಂತ್ರಿಕ್ಕೊವಿಲಪ್ಪನ (ತಾಳಿಪರಂಬದ ಪೆರುಂಚೆಲ್ಲೂರಿನ ರಾಜರಾಜೇಶ್ವರ ದೇವಾಲಯದ ದೇವತೆ) ಅಧಿಕಾರ ವ್ಯಾಪ್ತಿಯಲ್ಲಿ ಯಾವುದೇ ರಾಜನ ಆದೇಶವು ಮಾನ್ಯವಾಗದ ಕಾರಣ, ತನಗಾಗಿ ಯಜ್ಞವನ್ನು ನಡೆಸುವಂತೆ ಕೇಳುವ ಹಕ್ಕಿಲ್ಲ''’ (ದೇವತೆಯ ರಾಜರಾಜೇಶ್ವರ ಅಥವಾ ರಾಜರ ರಾಜ ಎಂಬ ಬಿರುದು ದೇವತೆಯು ವಹಿಸಿಕೊಂಡ ರಾಜ ಸ್ಥಾನಮಾನವನ್ನು ಸ್ಪಷ್ಟವಾಗಿ ಸೂಚಿಸುತ್ತದೆ).<ref name="Kol55"/>
ಇತಿಹಾಸಕಾರ ಸ್ಯಾಮುಯೆಲ್ ಮತೀರ್; "ಮಲಬಾರ್ನ ಎಲ್ಲಾ ರಾಜರುಗಳೂ ಸಹ, ಇತ್ತೀಚೆಗೆ ಅವರ ಅವಲಂಬಿಗಳಿಂದ ಅವರಿಗಾಗಿ ಎತ್ತಲಾದ ಹಕ್ಕುಗಳ ಹೊರತಾಗಿಯೂ, ಅದೇ ದೊಡ್ಡ ಸಮೂಹಕ್ಕೆ ಸೇರಿದ್ದಾರೆ ಮತ್ತು ನಾಯರ್ ಎಂದು ಕರೆಯಲ್ಪಡುವ ಜನಸಮೂಹದೊಂದಿಗೆ ಏಕರೂಪವಾಗಿದ್ದಾರೆ ಎಂದು ನಂಬಲು ಕಾರಣವಿದೆ, ಆದ್ದರಿಂದ ನಂಬೂದಿರಿಗಳು ಎಲ್ಲಾ ನಾಯರ್ ಪ್ರಭುಗಳಿಗೆ ಕ್ಷತ್ರಿಯತ್ವವನ್ನು ನೀಡಲು ಹಿಂಜರಿಯುತ್ತಿದ್ದರು, ಪರಿಣಾಮವಾಗಿ, ಉದಯವರ್ಮನ್ [[ಗೋಕರ್ಣ, ಭಾರತ|ಗೋಕರ್ಣ]]ದಿಂದ 237 ಬ್ರಾಹ್ಮಣ ಕುಟುಂಬಗಳನ್ನು (ಸಾಗರ ದ್ವಿಜರು) ಕರೆತಂದು ಅವರನ್ನು ಐದು ದೇಶಗಳಲ್ಲಿ ನೆಲೆಸಿಸಿದರು. (ಪೆರಿಂಚೆಲ್ಲೂರ್ ಗ್ರಾಮದ ಚೇರುತಾಝಂ, ಕುನ್ನಿರಿಯಂ, ಅರತಿಲ್, ಕುಲಪ್ಪುರಂ ಮತ್ತು ವರರುಚಿಮಂಗಲಂ). ನಂತರದವರು ನಂಬೂದಿರಿ ಪದ್ಧತಿಗಳನ್ನು ಅಳವಡಿಸಿಕೊಂಡರು ಮತ್ತು ಹಿರಣ್ಯ-ಗರ್ಭವನ್ನು ನಡೆಸಿ ಮೊದಲಿನವರಿಗೆ ಕ್ಷತ್ರಿಯತ್ವವನ್ನು ನೀಡಿದರು. ನಂತರ, ತಿರುವಾಂಕೂರಿನ ರಾಜನ ಕೋರಿಕೆಯ ಮೇರೆಗೆ, ಈ ಸಾಗರ ದ್ವಿಜರು ಕುಟುಂಬಗಳಲ್ಲಿ 185 ಅನ್ನು ತಿರುವಲ್ಲಾಗೆ ಕಳುಹಿಸಲಾಯಿತು. (ತಿರುವಲ್ಲಾದೇಶಿ ಎಂಬ್ರಾಂತಿರಿಗಳು).<ref name="Namboothiri Websites Kozhikode"/>
==ಕೊಲತ್ತಿರಿ ರಾಜ ಯಾರು==
ಕೊಲತ್ತಿರಿ ಕುಟುಂಬಗಳಿಂದ ವಿಭಜನೆಯಾದ 9 ಶಾಖೆಗಳಿಂದ ಹಿರಿಯ ಪುರುಷರು.
ಕೊಲತ್ತಿರಿ ರಾಜಮನೆತನದ ಶಾಖೆಗಳು
*ಪ್ರಾಯಿಕ್ಕರ ಅರಮನೆ
*ಮಾವೆಲಿಕ್ಕರ ಅರಮನೆ
*ಎನ್ನಕ್ಕಾಡ್ ಅರಮನೆ
*ನೆಡುಂಪ್ರಂ ಅರಮನೆ (ತಿರುವಲ್ಲಾ)
*ಚೇರುಕುನ್ನು ಪಡಿಂಜಾರೆ ಕೊವಿಲಕಂ
*ಕಾವಿನಿಸ್ಸೇರಿ ಕೊವಿಲಕಂ
*ಮರಿಯಾಪ್ಪಲ್ಲಿ ಅರಮನೆ
*ಚಿರಕ್ಕಲ್ ಕೊವಿಲಕಂ
*ಥೇವನಗೋಡು ಕೊವಿಲಕಂ (ಪ್ರಸ್ತುತ ಎನ್ನಕ್ಕಾಡ್ ಅರಮನೆಯೊಂದಿಗೆ ವಿಲೀನಗೊಂಡಿದೆ)
*ಅದುತಿಲ ಪಡಿಂಜಾರೆ ಕೊವಿಲಕಂ
ಪ್ರಸ್ತುತ ಕೊಲತ್ತಿರಿ ವಲಿಯ ರಾಜನು ಬ್ರಿಗೇಡಿಯರ್ (ನಿವೃತ್ತ). R. ನಂದಕುಮಾರ ವರ್ಮ, ಮಾವೆಲಿಕ್ಕರ ಅರಮನೆಯ ವಲಿಯ ತಂಪುರಾನ್.
ಪ್ರಸ್ತುತ ಕೊಲತ್ತಿರಿ ಎಳಯ ರಾಜ
N. ನಂದಕುಮಾರ ವರ್ಮ, ನೆಡುಂಪ್ರಂ ಅರಮನೆಯ ವಲಿಯ ರಾಜ.
===ಕೊಲತ್ತಿರಿಯ ಮಾಜಿ ರಾಜರು===
==ಕ್ಯಾಲೆಂಡರ್ ವ್ಯವಸ್ಥೆ==
ಕೇರಳದ ಮಧ್ಯ/ದಕ್ಷಿಣದಲ್ಲಿ (ಉತ್ತರ ಮಲಬಾರ್ / ಕೊಲತ್ತುನಾಡನ್ನು ಹೊರತುಪಡಿಸಿ) ಆಚರಿಸಲಾಗುವ [[ಮಲಯಾಳಂ ಕ್ಯಾಲೆಂಡರ್|ಕೊಲ್ಲ-ವರ್ಷಂ]] ಅಥವಾ ''ಕೊಲ್ಲ-ವರ್ಷಂ'' ಆವೃತ್ತಿಯು 25 ಆಗಸ್ಟ್ 825 ಕ್ರಿ.ಶ.ದಲ್ಲಿ ಪ್ರಾರಂಭವಾಯಿತು ಮತ್ತು ವರ್ಷವು ಇತರ ಭಾರತೀಯ ಕ್ಯಾಲೆಂಡರ್ಗಳಲ್ಲಿರುವಂತೆ ''ಮೇಷ-ರಾಶಿ'' (ಮೇಷ) ಯಲ್ಲಲ್ಲದೆ ''ಸಿಂಹ-ರಾಶಿ'' (ಸಿಂಹ) ಯಿಂದ ಪ್ರಾರಂಭವಾಗುತ್ತದೆ. ಕೊಲ್ಲಂ ಯುಗದ ಪ್ರಾರಂಭದ ಬಗ್ಗೆ ಹಲವಾರು ಖಾತೆಗಳು, ಪ್ರಸ್ತುತ, ದಾಖಲಿತ ಮತ್ತು ವದಂತಿಗಳಿದ್ದರೂ, ಹಿಂದಿನ ಉತ್ತರ ಮಲಬಾರ್ / ಕೊಲತ್ತುನಾಡಿನಲ್ಲಿ, ''ಕೊಲ್ಲಂ'' ಯುಗವನ್ನು ಬದಲಾಗಿ ಮುಂದಿನ ತಿಂಗಳು, ''ಕನ್ಯಾ-ರಾಶಿ'' (ಕನ್ಯೆ) (25 ಸೆಪ್ಟೆಂಬರ್) ನಿಂದ ಲೆಕ್ಕಹಾಕಲಾಗುತ್ತದೆ. ಈ ವ್ಯತ್ಯಾಸವು ಅದಕ್ಕೆ ಸಂಬಂಧಿಸಿದ ಎರಡು ಆಸಕ್ತಿದಾಯಕ ಖಾತೆಗಳನ್ನು ಹೊಂದಿದೆ.<ref name="astrom">[[K.V ಸರ್ಮಾ]] (1996), ಕೊಲ್ಲಂ ಯುಗ, ಇಂಡಿಯನ್ ಜರ್ನಲ್ ಆಫ್ ಹಿಸ್ಟರಿ ಆಫ್ ಸೈನ್ಸ್, 31 (1)[http://www.new.dli.ernet.in/rawdataupload/upload/insa/INSA_1/20005b5f_93.pdf] {{Webarchive|url=https://web.archive.org/web/20120316083252/http://www.new.dli.ernet.in/rawdataupload/upload/insa/INSA_1/20005b5f_93.pdf|date=16 March 2012}}</ref>
(1) ಸಾಂಪ್ರದಾಯಿಕ ಪಠ್ಯ ''ಕೇರೋಲೋಲ್ಪತ್ತಿ''ಯು [[ಕೊಲ್ಲಂ ಯುಗ]]ದ ಪರಿಚಯವನ್ನು [[ಶಂಕರಾಚಾರ್ಯ]]ರಿಗೆ ಆರೋಪಿಸುತ್ತದೆ. ಆದ್ದರಿಂದ ನೀವು "ಆಚಾರ್ಯ ವಾಗ ಭೇದ್ಯ" (ಶಂಕರಾಚಾರ್ಯರ ಮಾತು/ನಿಯಮವು ಬದಲಾಗದು ಎಂದರ್ಥ) ಎಂಬ ಪದವನ್ನು [[ಕಟಪಯಾಡಿ]] ಸಂಕೇತದಲ್ಲಿ ಸಂಖ್ಯೆಗಳಿಗೆ ಪರಿವರ್ತಿಸಿದರೆ ಅದು 0 6 1 4 3 4 1 ಎಂದು ಅನುವಾದಿಸುತ್ತದೆ ಮತ್ತು ಇವುಗಳನ್ನು ಹಿಂದಕ್ಕೆ ಬರೆದಾಗ ಕೊಲ್ಲಂ ಯುಗದ ಮೊದಲ ವರ್ಷದಲ್ಲಿ ''[[ಕಲಿಯುಗ]]''ದ ವಯಸ್ಸನ್ನು ನೀಡುತ್ತದೆ. ''ಕಲಿ'' ದಿನ 1434160ವು 25 ಸೆಪ್ಟೆಂಬರ್ 825 ಕ್ರಿ.ಶ. ಆಗಿ ಕೆಲಸ ಮಾಡುತ್ತದೆ, ಇದು ಕೊಲತ್ತುನಾಡಿನಲ್ಲಿ ಕೊಲ್ಲಂ ಯುಗದ ಪ್ರಾರಂಭಕ್ಕೆ ಅನುರೂಪವಾಗಿದೆ, ಅಂದರೆ ''ಕನ್ಯಾ-ರಾಶಿ'' (ಕನ್ಯೆ) ಮೊದಲ ದಿನ.
(2) ಎರಡನೆಯ ಖಾತೆಯೆಂದರೆ ಕೊಲ್ಲಂ ಯುಗವು ಕೊಲ್ಲಂನಲ್ಲಿ ಮಾಡಲಾದ ಘೋಷಣೆಯೊಂದಿಗೆ ಪ್ರಾರಂಭವಾಯಿತು.
==ಕೊಲತ್ತಿರಿಯ ರಾಜ ಸಂಕೇತಗಳು==
ದಂತಕಥೆಯ ಪ್ರಕಾರ, ಲಾರ್ಡ್ [[ಪರಶುರಾಮ]]ನು ರಾಮಘಾತ ಮೂಷಿಕನಿಗೆ ತನ್ನ ಪಟ್ಟಾಭಿಷೇಕದ ದಿನದಂದು (1) ನಾಂದಕಂ ವಾಲ್ (ವಿಶೇಷ ಖಡ್ಗ) (2) ಮತ್ತು ನೆನ್ಮೆನಿ-ವಕ (''ಮುಮೋಸಾ ಲೆಬ್ಬೆಕ್'') ಮೂಲಿಕೆಯನ್ನು ರಾಜವಂಶಕ್ಕೆ ಸಂಬಂಧಿಸಿದ ಮರವಾಗಿ ನಿಯೋಜಿಸಿದನು (3) ಮತ್ತು ಮತ್ತಷ್ಟು ವಾಕಪೂಕ್ಕುಲ (''ಮುಮೋಸಾ ಲೆಬ್ಬೆಕ್''ನ ಪುಷ್ಪಗುಚ್ಛ) ಮತ್ತು ಚಂಗಲವಟ್ಟಂ ವಿಲಕ್ಕು (ಇದು ದೇವಾಲಯದ ಮೆರವಣಿಗೆಗಳಲ್ಲಿ ಬಳಸಲಾಗುವ ಭಾರವಾದ ಕಂಚಿನ ದೀಪ ಮತ್ತು ದೀಪವು ಸರಪಳಿಯೊಂದಿಗೆ ಅದಕ್ಕೆ ಜೋಡಿಸಲಾದ ಚಮಚದೊಂದಿಗೆ ಎಣ್ಣೆ ಶೇಖರಣಾ ಸ್ಥಳವನ್ನು ಹೊಂದಿದೆ), ರಾಜ ಸಂಕೇತಗಳಾಗಿ ನೀಡಿದನು. ಕೋಲ-ಸ್ವರೂಪಂ ರಾಜವಂಶವು ನೆನ್ಮೆನಿ-ವಕ (''ಮುಮೋಸಾ ಲೆಬ್ಬೆಕ್'') ನೊಂದಿಗಿನ ತಮ್ಮ ಈ ಸಂಬಂಧವು ಮೂಷಿಕನ್ ಎಂಬ ತಮ್ಮ ನಾಮಕರಣಕ್ಕೆ ಕಾರಣವಾಯಿತು ಎಂದು ನಂಬುತ್ತದೆ. ಆದ್ದರಿಂದ ಕೊಲತ್ತಿರಿ ಕುಟುಂಬದ ರಾಜ ಧ್ವಜ ಮತ್ತು ರಾಜ ಮುದ್ರೆಯು ಚಿತ್ರಗಳ ಸಂಯೋಜನೆಯಾಗಿತ್ತು, ಅವುಗಳೆಂದರೆ: ತೋನಿ (ದೋಣಿ), ಚಂಗಲವಟ್ಟಂ ವಿಲಕ್ಕು, ನಾಂದಕಂ ವಾಲ್ ಮತ್ತು ನೆನ್ಮೆನಿ-ವಕ.
===ರಾಜ ಧ್ವಜ/ಮಾನದಂಡ (ಕೊಡಿಕ್ಕೂರ ಅಥವಾ ಧ್ವಜಂ)===
ಧ್ವಜದ ಚಿತ್ರಣವು ಎರಡೂ ಬದಿಗಳಲ್ಲಿ ಎರಡು ನಾಂದಕಂ-ವಾಲ್-ಖಡ್ಗಗಳನ್ನು ಕೇಂದ್ರದಲ್ಲಿ ಇರಿಸಲಾದ ವಾಕಪೂಕ್ಕುಲ-''ಮುಮೋಸಾ ಲೆಬ್ಬೆಕ್''ನ ಪುಷ್ಪಗುಚ್ಛ ಮತ್ತು ಅದರ ಕೆಳಗೆ ಐದು ಅರ್ಧ ಚಂದ್ರಾಕೃತಿಗಳನ್ನು ಒಳಗೊಂಡಿತ್ತು.
===ರಾಜ ಮುದ್ರೆ (ಮುದ್ರ)===
ಮುದ್ರೆಯ ಚಿತ್ರಣವು ಅದರ ಕೆಳಗೆ ಒಂದು ತೋನಿ-ದೋಣಿ, ಅದರ ಮೇಲೆ ಒಂದು ಚಂಗಲವಟ್ಟಂ-ದೀಪ, ಅದರ ಮೇಲೆ ಲಂಬವಾಗಿ ಇರಿಸಲಾದ ನಾಂದಕಂ-ವಾಲ್-ಖಡ್ಗ, ನಂತರ ಎರಡೂ ಪಕ್ಕದ ಬದಿಗಳಲ್ಲಿ ಒಂದು ವಾಕಪೂಕ್ಕುಲ-ಪುಷ್ಪಗುಚ್ಛವನ್ನು ಒಳಗೊಂಡಿತ್ತು.
==ಇವನ್ನೂ ನೋಡಿ==
*[[ಮನ್ನನಾರ್]]
*[[ತುಳುನಾಡು]]
==ಉಲ್ಲೇಖಗಳು==
{{reflist|24em}}
{{Kerala}}
{{coord missing|Kerala}}
[[ವರ್ಗ:ಭಾರತದಲ್ಲಿನ ಐತಿಹಾಸಿಕ ಪ್ರದೇಶಗಳು]]
[[ವರ್ಗ:ಕ್ರಿ.ಪೂ. 6ನೇ ಶತಮಾನದಲ್ಲಿ ಸ್ಥಾಪಿತವಾದ ರಾಜ್ಯಗಳು ಮತ್ತು ಪ್ರದೇಶಗಳು]]
[[ವರ್ಗ:1940ರ ದಶಕದಲ್ಲಿ ಭಾರತದಲ್ಲಿ ವಿಸರ್ಜನೆಗಳು]]
[[ವರ್ಗ:ಕಣ್ಣೂರು ಜಿಲ್ಲೆಯ ಇತಿಹಾಸ]]
[[ವರ್ಗ:ಕೇರಳದ ಸಾಮ್ರಾಜ್ಯಗಳು]]
[[ವರ್ಗ:ಭಾರತದ ಮಾಜಿ ರಾಜಪ್ರಭುತ್ವಗಳು]]
[[ವರ್ಗ:ಭಾರತದ ರಾಜ್ಯಗಳು]]
[[ವರ್ಗ:ಮಾಜಿ ಸಾಮ್ರಾಜ್ಯಗಳು]]
oabt0mdcb8xy1co7bnq2xpsauweuqdg
1378197
1378196
2026-08-02T16:24:03Z
A826
72368
1378197
wikitext
text/x-wiki
{{databox}}{{Infobox country
|native_name = ಕೊಲತ್ತುನಾಡು
|conventional_long_name = ಕೋಲ ಸ್ವರೂಪಂ
|common_name = ಕೊಲತ್ತುನಾಡು
|image_map = Ezhimala beach.JPG
|image_map_caption = [[ಎಳಿಮಲ (ಬೆಟ್ಟ, ಕಣ್ಣೂರು)|ಎಳಿಮಲ]], ''ಕೋಲ ಸ್ವರೂಪಂ''ನ ಆರಂಭಿಕ ಐತಿಹಾಸಿಕ ಪ್ರಧಾನ ಕಚೇರಿ
|capital = [[ಎಳಿಮಲ]], [[ವಲಪಟ್ಟಣಂ]], [[ಚಿರಕ್ಕಲ್, ಕಣ್ಣೂರು|ಚಿರಕ್ಕಲ್]] ಮತ್ತು ಇತರ ವಿವಿಧ ರಾಜಧಾನಿಗಳು
|government_type = [[ಸಂಪೂರ್ಣ ರಾಜಪ್ರಭುತ್ವ]]
|p1 = ಚೇರ ರಾಜವಂಶ
|s1 = ಭಾರತದಲ್ಲಿ ಕಂಪನಿ ಆಳ್ವಿಕೆ
|year_start = ಸು. ಕ್ರಿ.ಪೂ. 6ನೇ ಶತಮಾನ (ಸಾಂಪ್ರದಾಯಿಕ ದಿನಾಂಕ)
|year_end = ಆಧುನಿಕ ಯುಗ
|common_languages = [[ಮಲಯಾಳಂ ಭಾಷೆ|ಮಲಯಾಳಂ]]
|religion = [[ಹಿಂದೂ ಧರ್ಮ]]
|title_leader = [[ಕೊಲತ್ತಿರಿ|ಕೊಲತ್ತಿರಿ]]
}}
{{Keralahistory}}
'''ಕೊಲತ್ತುನಾಡು''' (ಮಲಯಾಳಂ: കോലത്തുനാട്, {{IPA|ml|koːlɐt̪ːun̪aːɖə̆|pron}}) ('''ಕೋಲ ಸ್ವರೂಪಂ''', ವಿದೇಶಿ ಖಾತೆಗಳಲ್ಲಿ '''ಕನ್ನನೋರ್ ಸಾಮ್ರಾಜ್ಯ''', ನಂತರದ ಕಾಲದಲ್ಲಿ '''ಚಿರಕ್ಕಲ್ (ಚೆರಿಕುಲ್)''') [[ಪೋರ್ಚುಗೀಸ್ ಭಾರತದ ನೌಕಾಪಡೆ|ಪೋರ್ಚುಗೀಸ್ ನೌಕಾಪಡೆಗಳು]] ಭಾರತಕ್ಕೆ ಆಗಮಿಸುವ ಸಮಯದಲ್ಲಿ [[ಮಲಬಾರ್ ಕರಾವಳಿ]]ಯಲ್ಲಿ [[ಜಾಮೋರಿನ್]], [[ಕೊಚ್ಚಿ ಸಾಮ್ರಾಜ್ಯ]] ಮತ್ತು [[ವೆನಾಡ್|ಕ್ವಿಲಾನ್]] ಜೊತೆಗೆ ಅತ್ಯಂತ ಪ್ರಬಲವಾದ ನಾಲ್ಕು [[ರಾಜ್ಯ|ಸಾಮ್ರಾಜ್ಯ]]ಗಳಲ್ಲಿ ಒಂದಾಗಿತ್ತು. ಕೊಲತ್ತುನಾಡು ತನ್ನ ರಾಜಧಾನಿಯನ್ನು [[ಎಳಿಮಲ]]ದಲ್ಲಿ ಹೊಂದಿತ್ತು ಮತ್ತು [[ಕೊಲತ್ತಿರಿ|ಕೊಲತ್ತಿರಿ ರಾಜಮನೆತನ]]ದಿಂದ ಆಳಲ್ಪಡುತ್ತಿತ್ತು ಮತ್ತು ಸ್ಥೂಲವಾಗಿ ಭಾರತದ [[ಕೇರಳ ರಾಜ್ಯ]]ದ [[ಉತ್ತರ ಮಲಬಾರ್]] ಪ್ರದೇಶವನ್ನು ಒಳಗೊಂಡಿತ್ತು. ಸಾಂಪ್ರದಾಯಿಕವಾಗಿ, ಕೊಲತ್ತುನಾಡು ಉತ್ತರದಲ್ಲಿ [[ಚಂದ್ರಗಿರಿ ನದಿ]] ಮತ್ತು ದಕ್ಷಿಣದಲ್ಲಿ [[ಕೊರಪುಳ]] ನದಿಯ ನಡುವಿನ ಭೂಮಿ ಎಂದು ವರ್ಣಿಸಲಾಗಿದೆ.<ref name="Kol1">ಕೇರಳೋಲ್ಪತ್ತಿ ಗ್ರಂಥವರಿ: ದ ಕೊಲತ್ತುನಾಡ್ ಟ್ರೆಡಿಶನ್ಸ್ (ಮಲಯಾಳಂ) (ಕೋಝಿಕ್ಕೋಡ್: ಕ್ಯಾಲಿಕಟ್ ವಿಶ್ವವಿದ್ಯಾಲಯ, 1984) M. R. ರಾಘವ ವರಿಯರ್ (ಸಂಪಾದಕರು)</ref> ಕೊಲತ್ತುನಾಡು ([[ಕಣ್ಣೂರು]]) ಸಾಮ್ರಾಜ್ಯವು ತನ್ನ ಉತ್ತುಂಗದ ಸಮಯದಲ್ಲಿ, ಉತ್ತರದಲ್ಲಿ [[ನೇತ್ರಾವತಿ ನದಿ]] ([[ಮಂಗಳೂರು]]) ಯಿಂದ ದಕ್ಷಿಣದಲ್ಲಿ [[ಕೊರಪುಳ]] ([[ಕೋಝಿಕ್ಕೋಡ್]]) ವರೆಗೆ, ಪಶ್ಚಿಮದಲ್ಲಿ [[ಅರೇಬಿಯನ್ ಸಮುದ್ರ]] ಮತ್ತು ಪೂರ್ವದ ಗಡಿಯಲ್ಲಿ [[ಕೊಡಗು]] ಬೆಟ್ಟಗಳೊಂದಿಗೆ, [[ಅರೇಬಿಯನ್ ಸಮುದ್ರ]]ದಲ್ಲಿನ [[ಲಕ್ಷದ್ವೀಪ]]ದ ಪ್ರತ್ಯೇಕ ದ್ವೀಪಗಳನ್ನು ಸಹ ಒಳಗೊಂಡಂತೆ ವಿಸ್ತರಿಸಿದೆ ಎಂದು ವರದಿಯಾಗಿದೆ.<ref name="Kola Swaroopam"/>
ಕೊಲತ್ತುನಾಡಿನ ಆಳುವ ಮನೆತನ, [[ಕೊಲತ್ತಿರಿ]]ಗಳು ಎಂದು ಕರೆಯಲ್ಪಡುತ್ತದೆ, ಇವರು ಕೇರಳದ ಪ್ರಾಚೀನ ರಾಜವಂಶವಾದ [[ಮುಷಿಕ ಸಾಮ್ರಾಜ್ಯ|ಮುಷಿಕ ರಾಜಮನೆತನ]]ದ ವಂಶಸ್ಥರಾಗಿದ್ದರು ಮತ್ತು ಕ್ರಿ.ಶ. 12ನೇ ಶತಮಾನದಲ್ಲಿ [[ಕುಲಶೇಖರ ವಂಶ (ಎರಡನೇ ಚೇರರು)|ಮಹೋದಯಪುರದ ಚೇರರು]] ಮತ್ತು [[ಪಾಂಡ್ಯ ವಂಶ]] ಕಣ್ಮರೆಯಾದ ನಂತರ ಕೇರಳ ಪ್ರದೇಶದ ಪ್ರಮುಖ ರಾಜಕೀಯ ಶಕ್ತಿಗಳಲ್ಲಿ ಒಂದಾಗಿ ಏರಿದರು.<ref>{{Cite book | url=https://books.google.com/books?id=wnAjqjhc1VcC&pg=PA32 | title=ಕೇರಳ ಇತಿಹಾಸ ಮತ್ತು ಅದರ ನಿರ್ಮಾತೃಗಳು| isbn=9788126437825| last1=ಶ್ರೀಧರ ಮೇನನ್| first1=A.| date=4 March 2011| publisher=DC Books}}</ref><ref name = "Kol2">ಕೇರಳದ ಪೆರುಮಾಳ್ M. G. S. ನಾರಾಯಣನ್ (ಕೋಝಿಕ್ಕೋಡ್: ಖಾಸಗಿ ಪ್ರಕಟಣೆ, 1996)</ref>
ಕೊಲತ್ತಿರಿಗಳು ತಮ್ಮ ಪೂರ್ವಜರನ್ನು ಪ್ರಾಚೀನ ಮುಷಿಕ ಸಾಮ್ರಾಜ್ಯಕ್ಕೆ (ಎಳಿಮಲ ಸಾಮ್ರಾಜ್ಯ, ಎಲಿ-ನಾಡು) [[ತಮಿಳು ಸಂಗಮ್]] ಯುಗದಲ್ಲಿ ಗುರುತಿಸುತ್ತಾರೆ. ಮುಷಿಕ ರಾಜವಂಶದ ರಾಜ ನನ್ನನ್ [[ಚೇರ ವಂಶ|ಚೇರರು]] ವಿರುದ್ಧದ ಯುದ್ಧದಲ್ಲಿ ಕೊಲ್ಲಲ್ಪಟ್ಟ ನಂತರ, ರಾಜವಂಶದ ದಾಖಲಿತ ಇತಿಹಾಸವು ಅಲ್ಲಲ್ಲಿ ಕೆಲವು ಪರೋಕ್ಷ ಉಲ್ಲೇಖಗಳನ್ನು ಹೊರತುಪಡಿಸಿ ಅಸ್ಪಷ್ಟವಾಗಿದೆ. ಆದಾಗ್ಯೂ, ಸಾಂಪ್ರದಾಯಿಕ ವಿದ್ವಾಂಸರಲ್ಲಿ ಕೊಲತ್ತಿರಿಗಳು ರಾಜ ನನ್ನನ್ ಅವರ ವಂಶಸ್ಥರು ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ, ಮತ್ತು ನಂತರದ ಸಾಹಿತ್ಯ ಕೃತಿಗಳು ಮುಷಿಕ ರಾಜವಂಶದ ವಿಕ್ರಮಾರಾಮನ್, ಜಯಮಣಿ, ವಲಭನ್ ಮತ್ತು ಶ್ರೀಕಂದನ್ ನಂತಹ ರಾಜರನ್ನು ಸೂಚಿಸುತ್ತವೆ. ಭಾರತೀಯ ಮಾನವಶಾಸ್ತ್ರಜ್ಞ [[A. ಅಯ್ಯಪ್ಪನ್|ಅಯಿನಪಲ್ಲಿ ಅಯ್ಯಪ್ಪನ್]] ಅವರು [[ತುಳುನಾಡು]]ನ [[ಬಂಟ್ (ಸಮುದಾಯ)|ಬಂಟ್ ಸಮುದಾಯ]]ದ ಪ್ರಬಲ ಮತ್ತು ಯುದ್ಧೋಚಿತ ಕುಲವನ್ನು ''ಕೋಲ ಬಾರಿ'' ಎಂದು ಕರೆಯಲಾಗುತ್ತಿತ್ತು ಮತ್ತು ಕೊಲತ್ತುನಾಡಿನ ಕೊಲತ್ತಿರಿ ರಾಜನು ಈ ಕುಲದ ವಂಶಸ್ಥನಾಗಿದ್ದನು ಎಂದು ಹೇಳುತ್ತಾರೆ.<ref name="Aiyappan">{{cite book |last1=ಅಯಿನಪಲ್ಲಿ |first1=ಅಯ್ಯಪ್ಪನ್ |title=ಕೇರಳದ ವ್ಯಕ್ತಿತ್ವ |date=1982 |publisher=ಪ್ರಕಟಣಾ ವಿಭಾಗ, [[ಕೇರಳ ವಿಶ್ವವಿದ್ಯಾಲಯ]] |page=162 |url=https://books.google.com/books?id=SXFuAAAAMAAJ |access-date=27 July 2018 |quote=ತುಳುನಾಡಿನ ಬಂಟರ ಅತ್ಯಂತ ಪ್ರಬಲ ಮತ್ತು ಯುದ್ಧೋಚಿತ ವಿಭಾಗವನ್ನು ಕೋಲ ಬಾರಿ ಎಂದು ಕರೆಯಲಾಗುತ್ತಿತ್ತು. ಕೋಲ ರಾಜವಂಶವು ತುಳುನಾಡಿನ ಕೋಲ ವಂಶಾವಳಿಗಳ ಭಾಗವಾಗಿತ್ತು ಎಂದು ಸೂಚಿಸುವುದು ಸಮಂಜಸವಾಗಿದೆ.}}</ref> ಹೆಚ್ಚು ಪ್ರಸಿದ್ಧವಾದ [[ತಿರುವಾಂಕೂರು ರಾಜಮನೆತನ]]ವು ಕೊಲತ್ತಿರಿಗಳ ನಿಕಟ ಸೋದರಸಂಬಂಧಿ ರಾಜವಂಶವಾಗಿದೆ.<ref>{{Cite book | url=https://books.google.com/books?id=LFy4pWUlnfwC&pg=PA22 | title=ಕೇರಳದಲ್ಲಿ ಫೋರ್ಟ್ ಕೊಚ್ಚಿ, 1750-1830: ಭಾರತೀಯ ಪರಿಸರದಲ್ಲಿ ಡಚ್ ಸಮುದಾಯದ ಸಾಮಾಜಿಕ ಸ್ಥಿತಿ| isbn=978-9004168169| last1=ಸಿಂಗ್| first1=ಅಂಜನಾ| year=2010| publisher=BRILL}}</ref><ref>{{Cite book |last=ಇಂದುಚೂಡನ್ |first=V. T. |url=https://books.google.com/books?id=Vns9AAAAIAAJ |title=ಗೋಲ್ಡನ್ ಟವರ್: ತಿರುಕ್ಕುಲಶೇಖರಪುರಂ ಮತ್ತು ಇತರ ದೇವಾಲಯಗಳ ಐತಿಹಾಸಿಕ ಅಧ್ಯಯನ |date=1971 |publisher=ಕೊಚ್ಚಿ ದೇವಸ್ವಂ ಬೋರ್ಡ್ |pages=164 |language=en}}</ref><ref>{{Cite book |last=ಡಿ ಲ್ಯಾನೊಯ್ |first=ಮಾರ್ಕ್ |url=https://books.google.com/books?id=pKjZAAAAMAAJ |title=ತಿರುವಾಂಕೂರಿನ ಕುಲಶೇಖರ ಪೆರುಮಾಳ್ಗಳು: 1671 ರಿಂದ 1758 ರವರೆಗೆ ತಿರುವಾಂಕೂರಿನ ಇತಿಹಾಸ ಮತ್ತು ರಾಜ್ಯ ರಚನೆ |date=1997 |publisher=ಲೈಡನ್ ವಿಶ್ವವಿದ್ಯಾಲಯ |isbn=978-90-73782-92-1 |pages=20 |language=en}}</ref>
ಕೊಲತ್ತಿರಿಗಳು ಸಾಮಾನ್ಯವಾಗಿ [[ಕೆನರಾ|ಕೆನರಾ]] ಮತ್ತು [[ಜಾಮೋರಿನ್]]ರ ಕ್ಯಾಲಿಕಟ್ ಸಾಮ್ರಾಜ್ಯಗಳ ನಡುವಿನ ವಲಯದ ಮೇಲೆ ಉನ್ನತ ರಾಜಕೀಯ ಅಧಿಕಾರವನ್ನು ಹೊಂದಿದ್ದರು ಎಂದು ಹೇಳಲಾಗಿದ್ದರೂ, ಅವರ ರಾಜಕೀಯ ಪ್ರಭಾವವು ಹೆಚ್ಚು ಕಡಿಮೆ ಕೊಲತ್ತುನಾಡಿಗೆ ಸೀಮಿತವಾಗಿತ್ತು.<ref name = "Kol3">ಡುವಾರ್ಟೆ ಬಾರ್ಬೋಸಾ, ದ ಬುಕ್ ಆಫ್ ಡುವಾರ್ಟೆ ಬಾರ್ಬೋಸಾ: ಆನ್ ಅಕೌಂಟ್ ಆಫ್ ದ ಕಂಟ್ರೀಸ್ ಬಾರ್ಡರಿಂಗ್ ಆನ್ ದ ಇಂಡಿಯನ್ ಓಷನ್ ಅಂಡ್ ದೇರ್ ಇನ್ಹ್ಯಾಬಿಟೆಂಟ್ಸ್, II, ಸಂ. M. L ಡೇಮ್ಸ್ (ಮರುಮುದ್ರಣ, ಲಂಡನ್: ಹಕ್ಲುಯಿಟ್ ಸೊಸೈಟಿ, 1921)</ref><ref name = "Kol4">ಮಲಬಾರ್ನಲ್ಲಿ ಡಚ್: ಮದ್ರಾಸ್ ಸರ್ಕಾರದ ದಾಖಲೆಗಳಿಂದ ಆಯ್ಕೆ, ಸಂ. 13 (ಮದ್ರಾಸ್: ಸೂಪರಿಂಟೆಂಡೆಂಟ್, ಸರ್ಕಾರಿ ಮುದ್ರಣಾಲಯ, 1911), 143.</ref>
ಅವರ ಪ್ರಾಚೀನ ರಾಜಧಾನಿಯಾದ ಎಳಿಮಲವು [[ಕೊಲ್ಲಂ|ಕ್ವಿಲಾನ್]] ಮತ್ತು ಕ್ಯಾಲಿಕಟ್ ಜೊತೆಗೆ ಮಲಬಾರ್ ಕರಾವಳಿಯ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿತ್ತು ಮತ್ತು [[ಇಬ್ನ್ ಬತೂತಾ]], [[ಮಾರ್ಕೊ ಪೊಲೊ]] ಮತ್ತು ವಾಂಗ್ ತಾ-ಯುಆನ್ ಅವರ ಬರಹಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಕಾಲಾನಂತರದಲ್ಲಿ, ಅವರ ಪ್ರದೇಶಗಳು ಹಲವಾರು ಸಣ್ಣ ಸಾಮಂತ ರಾಜ್ಯಗಳಾಗಿ ವಿಂಗಡಿಸಲ್ಪಟ್ಟವು, ಅವುಗಳಲ್ಲಿ ಮುಖ್ಯವಾದವು [[ಅರಕ್ಕಲ್ ಸಾಮ್ರಾಜ್ಯ|ಕನ್ನನೋರ್ ಮತ್ತು ಲಕ್ಷದ್ವೀಪ]], ಕೋಟಿಯೋಟ್ ಮತ್ತು ವೈನಾಡ್, ಕಾರ್ಟಿನಾಡ್ (ಬಡಗರ), ಇರ್ವೆನಾಡ್, ಮತ್ತು ರಂಡತೆರ್ರ. "ಐದು ಸ್ನೇಹಪರ ಉತ್ತರ ಆಡಳಿತಗಾರರು" (ನಿಲೇಶ್ವರಂ, ಕುಂಬಳ, ವಿಟಾಲ್ಹ್, ಬಂಗೋರ್, ಮತ್ತು ಚೌತ್ವಾರ) ಎಂದು ಕರೆಯಲ್ಪಡುವವರು ಕೊಲತ್ತುನಾಡಿಗೆ ಸಮೀಪದಲ್ಲಿದ್ದರು, [[ಕವ್ವೈ ಪುಳ ನದಿ|ಕವ್ವಾಯ್ ನದಿ]]ಯ ಉತ್ತರಕ್ಕೆ. ಅವರು ದಕ್ಷಿಣದಲ್ಲಿ ತಮ್ಮ ಪ್ರಬಲ ನೆರೆಯವರಾದ ಕ್ಯಾಲಿಕಟ್ನ [[ಜಾಮೋರಿನ್]]ರೊಂದಿಗೆ ಆಗಾಗ್ಗೆ ಪೈಪೋಟಿಯಲ್ಲಿ ತೊಡಗಿದ್ದರು - ಇದು ಕೇರಳ ಇತಿಹಾಸದ ಶಾಶ್ವತ ಲಕ್ಷಣವಾಗಿದೆ. ಉತ್ತರ ಮಲಬಾರ್ ಮತ್ತು ಜಾಮೋರಿನ್ ಸಾಮ್ರಾಜ್ಯದ ನಡುವಿನ ಜಾತಿ ನಿರ್ಬಂಧಗಳು ಮತ್ತು ಕೊರಪುಳ ಗಡಿಯು ಅವರ ಪೈಪೋಟಿಯ ನಂತರ ಸ್ಥಾಪಿಸಲ್ಪಟ್ಟಿತು. ಕೆಲವು ಐತಿಹಾಸಿಕ ದಾಖಲೆಗಳು ಕೊಲತ್ತುನಾಡ್ ಸಾಮ್ರಾಜ್ಯವು [[ತಿರುವಾಂಕೂರು]] ಸಾಮ್ರಾಜ್ಯ ಮತ್ತು [[ತುಳು ಸಾಮ್ರಾಜ್ಯ|ತುಳು]] ಸಾಮ್ರಾಜ್ಯದೊಂದಿಗೆ ಸ್ನೇಹಪರವಾಗಿತ್ತು ಎಂದು ಸೂಚಿಸುತ್ತವೆ.<ref name=":02">{{Cite book |last=ಬ್ರಿಟಿಷ್ ಭಾರತ ಸರ್ಕಾರದ ಮದ್ರಾಸ್ |url=http://archive.org/details/MalabarMarriageCommissionReport |title=ಮಲಬಾರ್ ವಿವಾಹ ಆಯೋಗ ವರದಿ |date=1891}}</ref>
[[ಮಲಯಾಳಂ ಸಾಹಿತ್ಯ]]ದ ಬೆಳವಣಿಗೆಯಲ್ಲಿ ಮೈಲಿಗಲ್ಲಾದ ''ಕೃಷ್ಣ ಗಾಥಾ''ದ ಕರ್ತೃವಾದ [[ಚೇರುಸ್ಸೇರಿ ನಂಬೂತಿರಿ]] (ಸು. 1375-1475 ಕ್ರಿ.ಶ.) ಕೊಲತ್ತಿರಿ ರಾಜವಂಶದ ರಾಜರಲ್ಲಿ ಒಬ್ಬನಾದ ಉದಯವರ್ಮನ್ ಕೊಲತ್ತಿರಿಯ ಆಸ್ಥಾನದಲ್ಲಿ ವಾಸಿಸುತ್ತಿದ್ದರು.
==ಇತಿಹಾಸ==
{{Moresources|section|date=ಜುಲೈ 2023}}
===ಹಿನ್ನೆಲೆ===
ಎಳಿಮಲ ಆಡಳಿತಗಾರರು, ಮುಷಿಕ ಸಾಮ್ರಾಜ್ಯ, ಮತ್ತು ಕೊಲತ್ತುನಾಡಿನ ಮೂಲವು ಸಾಂಪ್ರದಾಯಿಕ ಇತಿಹಾಸದ ದೃಷ್ಟಿಯಿಂದ ಅಸ್ಪಷ್ಟವಾಗಿದೆ.
ಕ್ರಿಶ್ಚಿಯನ್ ಮಿಷನರಿ [[ಮತೀರ್ ಮೆಮೋರಿಯಲ್ ಚರ್ಚ್#ರೆವ್. ಸ್ಯಾಮುಯೆಲ್ ಮತೀರ್|ಸ್ಯಾಮುಯೆಲ್ ಮತೀರ್]] ಅಭಿಪ್ರಾಯಪಟ್ಟರು: "ಮಲಬಾರ್ನ ಎಲ್ಲಾ ರಾಜರುಗಳೂ ಸಹ, ಇತ್ತೀಚೆಗೆ ಅವರ ಅವಲಂಬಿಗಳಿಂದ ಅವರಿಗಾಗಿ ಎತ್ತಲಾದ ಹಕ್ಕುಗಳ ಹೊರತಾಗಿಯೂ, ಅದೇ ದೊಡ್ಡ ಸಮೂಹಕ್ಕೆ ಸೇರಿದ್ದಾರೆ ಮತ್ತು ನಾಯರ್ ಎಂದು ಕರೆಯಲ್ಪಡುವ ಜನಸಮೂಹದೊಂದಿಗೆ ಏಕರೂಪವಾಗಿದ್ದಾರೆ ಎಂದು ನಂಬಲು ಕಾರಣವಿದೆ, ಆದ್ದರಿಂದ ನಂಬೂದಿರಿಗಳು ಎಲ್ಲಾ ನಾಯರ್ ಪ್ರಭುಗಳಿಗೆ ಕ್ಷತ್ರಿಯತ್ವವನ್ನು ನೀಡಲು ಹಿಂಜರಿಯುತ್ತಿದ್ದರು, 1617 ರಲ್ಲಿ ಕೊಲತ್ತಿರಿ ರಾಜ ಉದಯವರ್ಮನ್ ಅವರು ಹಿರಣ್ಯ-ಗರ್ಭವನ್ನು ನಡೆಸುವ ಮೂಲಕ ಸೋಮ ಕ್ಷತ್ರಿಯ ಸ್ಥಾನಕ್ಕೆ ಏರಲು ಬಯಸಿದ್ದರು,<ref>{{Cite book|last=ಮತೀರ್|first=ಸ್ಯಾಮುಯೆಲ್|url=https://books.google.com/books?id=aYdCAAAAIAAJ&q=172|title=ತಿರುವಾಂಕೂರಿನ ಸ್ಥಳೀಯ ಜೀವನ|date=1883|publisher=W.H. ಅಲೆನ್ & ಕಂಪನಿ|language=en}}</ref><ref name="Namboothiri Websites Kozhikode">{{cite web|author=ನಂಬೂತಿರಿ ವೆಬ್ಸೈಟ್ಗಳು ಕೋಝಿಕ್ಕೋಡ್ |url=http://www.namboothiri.com/articles/saagaradwijans.htm |title=ಕೇರಳದ ಸಾಗರ ದ್ವಿಜರು |publisher=Namboothiri.com |access-date=2011-09-13}}</ref> ಇದಕ್ಕೆ ನಂಬೂದಿರಿಗಳು ನಿರಾಕರಿಸಿದರು. ಪರಿಣಾಮವಾಗಿ, ಉದಯವರ್ಮನ್ [[ಗೋಕರ್ಣ, ಭಾರತ|ಗೋಕರ್ಣ]]ದಿಂದ 237 ಬ್ರಾಹ್ಮಣ ಕುಟುಂಬಗಳನ್ನು (ಸಾಗರ ದ್ವಿಜರು) ಕರೆತಂದು ಅವರನ್ನು ಐದು ದೇಶಗಳಲ್ಲಿ ನೆಲೆಸಿಸಿದರು. (ಪೆರಿಂಚೆಲ್ಲೂರ್ ಗ್ರಾಮದ ಚೇರುತಾಝಂ, ಕುನ್ನಿರಿಯಂ, ಅರತಿಲ್, ಕುಲಪ್ಪುರಂ ಮತ್ತು ವರರುಚಿಮಂಗಲಂ). ನಂತರದವರು ನಂಬೂದಿರಿ ಪದ್ಧತಿಗಳನ್ನು ಅಳವಡಿಸಿಕೊಂಡರು ಮತ್ತು ಹಿರಣ್ಯ-ಗರ್ಭವನ್ನು ನಡೆಸಿ ಮೊದಲಿನವರಿಗೆ ಕ್ಷತ್ರಿಯತ್ವವನ್ನು ನೀಡಿದರು.<ref name="Namboothiri Websites Kozhikode"/><ref name = "Kol55">ಕೇರಳದಲ್ಲಿ ಶ್ರೌತ ಯಜ್ಞಗಳು (ಕೋಝಿಕ್ಕೋಡ್: ಕ್ಯಾಲಿಕಟ್ ವಿಶ್ವವಿದ್ಯಾಲಯ, 2002), 98 V. ಗೋವಿಂದನ್ ನಂಬೂದಿರಿ; ಫ್ರೀಮನ್, 'ಪ್ಯೂರಿಟಿ ಅಂಡ್ ವಯಲೆನ್ಸ್', 527-8</ref>
====ಎಳಿಮಲ ಆಡಳಿತಗಾರರು====
{{See also|ನನ್ನನ್}}
[[File:Periplous of the Erythraean Sea.svg|thumbnail|''[[ಪೆರಿಪ್ಲಸ್ ಆಫ್ ದ ಎರಿತ್ರಿಯನ್ ಸೀ]]'' (1ನೇ ಶತಮಾನ ಕ್ರಿ.ಶ.) ನ ಹೆಸರುಗಳು, ಮಾರ್ಗಗಳು ಮತ್ತು ಸ್ಥಳಗಳು]]
''[[ಪೆರಿಪ್ಲಸ್ ಆಫ್ ದ ಎರಿತ್ರಿಯನ್ ಸೀ]]''ನಲ್ಲಿ [[ಮುಜಿರಿಸ್]]ನ ಉತ್ತರಕ್ಕೆ ಎಲ್ಲೋ ಒಂದು ಬಂದರು ಎಂದು ಉಲ್ಲೇಖಿಸಲಾದ ಪ್ರಾಚೀನ ಬಂದರು ''ನೌರಾ''ವನ್ನು [[ಕಣ್ಣೂರು]] ಎಂದು ಗುರುತಿಸಲಾಗಿದೆ.<ref name="Ente_Kannur">{{cite book|author=ಮೇನನ್, A. ಶ್ರೀಧರ |title=ಕೇರಳ ಇತಿಹಾಸದ ಸಮೀಕ್ಷೆ|url=https://books.google.com/books?id=FVsw35oEBv4C|year=2007|publisher=DC Books|isbn=9788126415786}}</ref>
[[ಪ್ಲಿನಿ ದಿ ಎಲ್ಡರ್]] (1ನೇ ಶತಮಾನ ಕ್ರಿ.ಶ.) [[ಟಿಂಡಿಸ್]] ಬಂದರು [[ಚೇರ ವಂಶ|ಚೇರ ಸಾಮ್ರಾಜ್ಯ]]ದ ವಾಯುವ್ಯ ಗಡಿಯಲ್ಲಿತ್ತು ಎಂದು ಹೇಳುತ್ತಾರೆ.<ref name=":2">ಗುರುಕ್ಕಲ್, R., & ವಿಟ್ಟೇಕರ್, D. (2001). ಮುಜಿರಿಸ್ ಹುಡುಕಾಟದಲ್ಲಿ. ''ಜರ್ನಲ್ ಆಫ್ ರೋಮನ್ ಆರ್ಕಿಯಾಲಜಿ,'' ''14'', 334-350.</ref> [[ಟಿಂಡಿಸ್]] ಬಂದರಿನ ಉತ್ತರಕ್ಕೆ ಇರುವ [[ಉತ್ತರ ಮಲಬಾರ್]] ಪ್ರದೇಶವು [[ಸಂಗಮ್ ಕಾಲ]]ದಲ್ಲಿ [[ಎಳಿಮಲ]] ಸಾಮ್ರಾಜ್ಯದಿಂದ ಆಳಲ್ಪಡುತ್ತಿತ್ತು.<ref name="odra">A. ಶ್ರೀಧರ ಮೇನನ್, ಕೇರಳ ಇತಿಹಾಸದ ಸಮೀಕ್ಷೆ</ref> ''[[ಪೆರಿಪ್ಲಸ್ ಆಫ್ ದ ಎರಿತ್ರಿಯನ್ ಸೀ]]''ನ ಪ್ರಕಾರ, [[ಲಿಮಿರಿಕೆ]] ಎಂದು ಕರೆಯಲ್ಪಡುವ ಪ್ರದೇಶವು [[ಕಣ್ಣೂರು|ನೌರಾ]] ಮತ್ತು ಟಿಂಡಿಸ್ನಲ್ಲಿ ಪ್ರಾರಂಭವಾಯಿತು. ಆದಾಗ್ಯೂ [[ಟಾಲೆಮಿ]] ''[[ಲಿಮಿರಿಕೆ]]''ಯ ಆರಂಭಿಕ ಬಿಂದುವಾಗಿ ಟಿಂಡಿಸ್ ಅನ್ನು ಮಾತ್ರ ಉಲ್ಲೇಖಿಸುತ್ತಾರೆ. ಈ ಪ್ರದೇಶವು ಬಹುಶಃ [[ಕನ್ಯಾಕುಮಾರಿ]]ಯಲ್ಲಿ ಕೊನೆಗೊಂಡಿತು; ಆದ್ದರಿಂದ ಇದು ಸ್ಥೂಲವಾಗಿ ಪ್ರಸ್ತುತ ಮಲಬಾರ್ ಕರಾವಳಿಗೆ ಸಮಾನವಾಗಿದೆ. ಈ ಪ್ರದೇಶದೊಂದಿಗೆ ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವು ಸುಮಾರು 50,000,000 [[ಸೆಸ್ಟೆರ್ಸೆಸ್]] ಎಂದು ಅಂದಾಜಿಸಲಾಗಿದೆ.<ref>ಪ್ಲಿನಿ ದಿ ಎಲ್ಡರ್ ಪ್ರಕಾರ, ಭಾರತದಿಂದ ಸರಕುಗಳನ್ನು ಸಾಮ್ರಾಜ್ಯದಲ್ಲಿ ಅವುಗಳ ಮೂಲ ಖರೀದಿ ಬೆಲೆಯ 100 ಪಟ್ಟು ಮಾರಾಟ ಮಾಡಲಾಗುತ್ತಿತ್ತು. ನೋಡಿ [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> ಪ್ಲಿನಿ ದಿ ಎಲ್ಡರ್ [[ಲಿಮಿರಿಕೆ]]ಯು ಕಡಲ್ಗಳ್ಳರಿಂದ ಬಾಧಿತವಾಗಿದೆ ಎಂದು ಉಲ್ಲೇಖಿಸಿದ್ದಾರೆ.<ref>ಬೋಸ್ಟಾಕ್, ಜಾನ್ (1855). "26 (ಭಾರತಕ್ಕೆ ಪ್ರಯಾಣಗಳು)". ಪ್ಲಿನಿ ದಿ ಎಲ್ಡರ್, ದ ನ್ಯಾಚುರಲ್ ಹಿಸ್ಟರಿ. ಲಂಡನ್: ಟೇಲರ್ ಅಂಡ್ ಫ್ರಾನ್ಸಿಸ್.</ref> [[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟೆಸ್]] ''[[ಲಿಮಿರಿಕೆ]]''ಯು ಮೆಣಸಿನ ಮೂಲವಾಗಿತ್ತು ಎಂದು ಉಲ್ಲೇಖಿಸಿದ್ದಾರೆ.<ref>ಇಂಡಿಕೋಪ್ಲ್ಯೂಸ್ಟೆಸ್, ಕಾಸ್ಮಾಸ್ (1897). ಕ್ರಿಶ್ಚಿಯನ್ ಟೋಪೋಗ್ರಫಿ. 11. ಯುನೈಟೆಡ್ ಕಿಂಗ್ಡಮ್: ದ ಟೆರ್ಟುಲಿಯನ್ ಪ್ರಾಜೆಕ್ಟ್. pp. 358–373.</ref><ref>ದಾಸ್, ಸಂತೋಷ್ ಕುಮಾರ್ (2006). ಪ್ರಾಚೀನ ಭಾರತದ ಆರ್ಥಿಕ ಇತಿಹಾಸ. ಜೆನೆಸಿಸ್ ಪಬ್ಲಿಷಿಂಗ್ ಪ್ರೈ. ಲಿಮಿಟೆಡ್. p. 301.</ref>
[[ಸಂಗಮ್ ಕಾಲ]]ದಲ್ಲಿ, ಕ್ರೈಸ್ತ ಶಕೆಯ ಆರಂಭಿಕ ಶತಮಾನಗಳಲ್ಲಿ, ಪ್ರಸ್ತುತ ಕೇರಳ ಮತ್ತು ತಮಿಳುನಾಡು ಎರಡೂ ಪ್ರತ್ಯೇಕ ರಾಜಕೀಯ ಘಟಕಗಳ ಅಡಿಯಲ್ಲಿದ್ದರೂ, ಸಾಮಾನ್ಯ ಸಾಂಸ್ಕೃತಿಕ ಕ್ಷೇತ್ರ ಮತ್ತು ಸಾಮಾನ್ಯ ಭೌಗೋಳಿಕ ವಸಾಹತು ಮಾದರಿಯ ಭಾಗವಾಗಿ ಪರಿಗಣಿಸಲ್ಪಟ್ಟಿದ್ದವು.<ref name = "Kol77"/> ಹೆಚ್ಚು ನಿರ್ದಿಷ್ಟವಾಗಿ, ಕ್ರೈಸ್ತ ಶಕೆಯ ಆರಂಭಿಕ ತಮಿಳು ಸಂಕಲನಗಳು ಪಾಂಡ್ಯರು, ಚೇರರು, ಅಥವಾ ಚೋಳರು, ಮತ್ತು ವೇಳಿರ್ ಮುಖ್ಯಸ್ಥರ ನಡುವೆ ಯಾವುದೇ ತೀಕ್ಷ್ಣವಾದ ಸಾಂಸ್ಕೃತಿಕ ಅಥವಾ ಸಾಮಾಜಿಕ ವ್ಯತ್ಯಾಸವನ್ನು ಮಾಡುವುದಿಲ್ಲ, ಇವರೆಲ್ಲರೂ ಸಾಮಾನ್ಯ ಸಾಂಸ್ಕೃತಿಕ ಮತ್ತು ಭೌಗೋಳಿಕ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ, ಪಶ್ಚಿಮ ಕರಾವಳಿಯ ಹಿಂದೂ ದೇವಾಲಯಗಳನ್ನು ಸಹ ತಮಿಳು ಭಕ್ತಿ ಚಳವಳಿಯ ಪವಿತ್ರ ಭೂಗೋಳದಲ್ಲಿ ಸೇರಿಸಲಾಯಿತು ಮತ್ತು ಅವುಗಳನ್ನು ಚಳವಳಿಯ ಪ್ರಮುಖ ಪ್ರತಿಪಾದಕರಾದ [[ಆಳ್ವಾರರು]] ಮತ್ತು [[ನಾಯನಾರ್|ನಾಯನಾರ್]]ಗಳು ತಮ್ಮ ಪದ್ಯಗಳಲ್ಲಿ ಹೇರಳವಾಗಿ ಹೊಗಳಿದರು.<ref name = "Kol90">ದಕ್ಷಿಣ ಭಾರತದ ಸಮಾಜ ಮತ್ತು ಸಂಸ್ಕೃತಿಯ ಅಡಿಪಾಯಗಳು M. G. S. ನಾರಾಯಣನ್, (ದೆಹಲಿ: ಭಾರತೀಯ ಬುಕ್ ಕಾರ್ಪೋರೇಷನ್, 1994), 194</ref>
[[ತಮಿಳಕಂ|ತಮಿಳು]] [[ಸಂಗಮ್ ಕಾಲ|ಸಂಗಮ್ ಯುಗ]]ದಲ್ಲಿ, ಪ್ರಸ್ತುತ ಕೇರಳದ ಉಳಿದ ಭಾಗ, [[ತುಳುನಾಡು]], [[ಕೊಡಗು ಜಿಲ್ಲೆ|ಕೂರ್ಗ್]], ಮತ್ತು ತಮಿಳುನಾಡಿನ ಕೆಲವು ಭಾಗಗಳಂತೆಯೇ ಉತ್ತರ ಮಲಬಾರ್ ಚೇರರ ಆಳ್ವಿಕೆಯಲ್ಲಿತ್ತು. ಚೇರರ (ಮತ್ತು ಪಾಂಡ್ಯರು ಮತ್ತು ಚೋಳರಂತಹ ಇತರರು) ಒಂದು ಶಾಖೆಯು ಎಳಿಲ್ ಮಲದಲ್ಲಿ (ಮತ್ತು ಪಳ್ಳಿಯಲ್ಲಿ ಎರಡನೇ ರಾಜಧಾನಿಯೊಂದಿಗೆ) ತನ್ನ ರಾಜಧಾನಿಯನ್ನು ಹೊಂದಿತ್ತು, ಇದನ್ನು ಮುಷಿಕ ವಂಶ ಎಂದು ಕರೆಯಲಾಗುತ್ತಿತ್ತು, ಇದು ಚೇರರ ಪರವಾಗಿ ಪ್ರದೇಶವನ್ನು ಆಳಿತು. ಎಳಿಲ್ ಮಲ (ಯುರೋಪಿಯನ್ ಖಾತೆಗಳಲ್ಲಿ ಮೌಂಟ್ ಡೆಲಿ) ಮತ್ತು ಅದರ ನೆರೆಯ ಪ್ರದೇಶಗಳು ಕ್ರೈಸ್ತ ಶಕೆಯ ಆರಂಭಿಕ ಶತಮಾನಗಳಲ್ಲಿ ಸಾಮಾಜಿಕ-ರಾಜಕೀಯ ಚಟುವಟಿಕೆಗಳ ಕ್ರಿಯಾಶೀಲ ಕೇಂದ್ರಗಳಾದವು.<ref name = "Kol21">ಕೊಲತ್ತುಪಝಮ ಕುಮಾರನ್ ಅವರಿಂದ</ref> ಎಳಿಲ್ ಮಲ ಸಾಮ್ರಾಜ್ಯವು (ಕೊಂಕ-ನಾಮ್, ಪುಳಿ-ನಾಡಿನ ಒಂದು ಭಾಗ) ಪ್ರಾಯೋಗಿಕವಾಗಿ ಪ್ರಸ್ತುತ ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳ ಸಂಪೂರ್ಣ ಮತ್ತು ತುಳು ದೇಶದ ಒಂದು ಭಾಗ ಮತ್ತು ಕೂರ್ಗ್ ಮತ್ತು ಗುದಲೂರಿನ ಭಾಗಗಳನ್ನು ಒಳಗೊಂಡಿತ್ತು. ಇದು ಪ್ರಾಚೀನ ತಮಿಳು ದೇಶದ ವಾಯುವ್ಯ ದಿಕ್ಕಿನ ತಮಿಳು ಮಾತನಾಡುವ ಪ್ರದೇಶವಾಗಿತ್ತು. [[ಎಳಿಮಲ]]ದಲ್ಲಿ ನೆಲೆಗೊಂಡಿದ್ದ ಎಳಿಮಲ ಸಾಮ್ರಾಜ್ಯವು ಎರಡು ನಾಡುಗಳ ಮೇಲೆ ಅಧಿಕಾರವನ್ನು ಹೊಂದಿತ್ತು - ಕರಾವಳಿ ಪೂಳಿನಾಡು ಮತ್ತು ಬೆಟ್ಟದ ಪೂರ್ವ ಕರ್ಕನಾಡು. [[ಸಂಗಮ್ ಸಾಹಿತ್ಯ]]ದ ಕೃತಿಗಳ ಪ್ರಕಾರ, ಪೂಳಿನಾಡು [[ಮಂಗಳೂರು]] ಮತ್ತು [[ಕೋಝಿಕ್ಕೋಡ್]] ನಡುವಿನ ಕರಾವಳಿ ಪಟ್ಟಿಯ ಹೆಚ್ಚಿನ ಭಾಗವನ್ನು ಒಳಗೊಂಡಿತ್ತು.<ref name="Census_Handbook">{{Cite book|title=ಜಿಲ್ಲಾ ಜನಗಣತಿ ಕೈಪಿಡಿ, ಕಾಸರಗೋಡು (2011)|publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ|location=ತಿರುವನಂತಪುರಂ|pages=9|url=https://censusindia.gov.in/2011census/dchb/3201_PART_B_KASARAGOD.pdf}}</ref> ಕರ್ಕನಾಡು [[ವಯನಾಡ್]]-[[ಗುದಲೂರು, ನೀಲಗಿರಿ|ಗುದಲೂರು]] ಅನ್ನು ಒಳಗೊಂಡಿತ್ತು, ಇದು [[ಕೊಡಗು]] (ಕೂರ್ಗ್) ನ ಭಾಗಗಳನ್ನು ಹೊಂದಿರುವ ಬೆಟ್ಟದ ಪ್ರದೇಶವಾಗಿದೆ.<ref name="wnd">{{cite book
| author = ಭಾರತ ಸರ್ಕಾರ | year=2014–15
| title= ಜಿಲ್ಲಾ ಜನಗಣತಿ ಕೈಪಿಡಿ – ವಯನಾಡ್ (ಭಾಗ-ಬಿ) 2011 | publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ
| url= https://censusindia.gov.in/2011census/dchb/3203_PART_B_WAYANAD.pdf}}</ref>
ಎಳಿಮಲ ರಾಜವಂಶದ ಅತ್ಯಂತ ಪ್ರಸಿದ್ಧ ಆಡಳಿತಗಾರ ನನ್ನನ್, ಕ್ರಿ.ಶ. 5ನೇ ಶತಮಾನದಲ್ಲಿ [[ಚೇರ ವಂಶ|ಚೇರರು]] ವಿರುದ್ಧ ಸೋತಾಗ [[ವಯನಾಡ್]] ಬೆಟ್ಟಗಳಲ್ಲಿ ಆಶ್ರಯ ಪಡೆದನು, [[ಸಂಗಮ್ ಸಾಹಿತ್ಯ|ಸಂಗಮ್ ಕೃತಿಗಳ]] ಪ್ರಕಾರ, ಯುದ್ಧದಲ್ಲಿ ಅವನ ಮರಣದ ಸ್ವಲ್ಪ ಮೊದಲು.<ref name="wnd"/> ಎಳಿಮಲ ಸಾಮ್ರಾಜ್ಯವು ಆರಂಭಿಕ ಮಧ್ಯಯುಗದಲ್ಲಿ [[ಮುಷಿಕ ವಂಶ]]ದಿಂದ ಉತ್ತರಾಧಿಕಾರವನ್ನು ಪಡೆಯಿತು, ಹೆಚ್ಚಾಗಿ [[ತುಳುನಾಡು]]ನಿಂದ [[ತುಳುವ ಬ್ರಾಹ್ಮಣ]]ರ ವಲಸೆಯ ಕಾರಣದಿಂದಾಗಿರಬಹುದು. ಕೊಲತ್ತುನಾಡು ([[ಕಣ್ಣೂರು]]) ಸಾಮ್ರಾಜ್ಯವು ಮುಷಿಕ ರಾಜವಂಶದ ವಂಶಸ್ಥರು, ತನ್ನ ಉತ್ತುಂಗದ ಸಮಯದಲ್ಲಿ ಉತ್ತರದಲ್ಲಿ [[ನೇತ್ರಾವತಿ ನದಿ]] (ಮಂಗಳೂರು) ಯಿಂದ<ref name="Kola Swaroopam">{{cite book |last1=ಶ್ರೀಧರ ಮೇನನ್ |first1=A. |title=''ಕೇರಳ ಚರಿತ್ರಂ'' |year=2007 |publisher=DC Books |location=ಕೊಟ್ಟಾಯಂ |isbn=978-8126415885 |edition=2007 |page=175 |url=https://books.google.com/books?id=FAlXPgAACAAJ|access-date=19 July 2020}}</ref> ದಕ್ಷಿಣದಲ್ಲಿ [[ಕೊರಪುಳ]] ವರೆಗೆ, ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ ಮತ್ತು ಪೂರ್ವದ ಗಡಿಯಲ್ಲಿ [[ಕೊಡಗು]] ಬೆಟ್ಟಗಳೊಂದಿಗೆ ವಿಸ್ತರಿಸಿತು ಎಂದು ವರದಿಯಾಗಿದೆ.<ref name="Census_Handbook"/>
ಎಳಿಲ್ ಮಲದ ನನ್ನನ್ ಈ ರಾಜವಂಶದ ಅತ್ಯಂತ ಪ್ರಸಿದ್ಧ ಆಡಳಿತಗಾರನಾಗಿದ್ದನು. ಉಳಿದಿರುವ ತಮಿಳು ಸಂಕಲನಗಳು ನನ್ನನನ ಒಂದು ಶಕ್ತಿಯುತ ಚಿತ್ರಣವನ್ನು ಚಿತ್ರಿಸುತ್ತವೆ ಮತ್ತು [[ಚೇರ ವಂಶಗಳು|ಚೇರರು]] ನಂತಹ ಆಳುವ ಗಣ್ಯರೊಂದಿಗಿನ ಅವನ ಯುದ್ಧಗಳನ್ನು ವಿವರಿಸುತ್ತವೆ.<ref name="Kol21"/> ಅವನು ಹೆಚ್ಚಾಗಿ ಒಬ್ಬ ಬುಡಕಟ್ಟು ಮುಖ್ಯಸ್ಥನಾಗಿದ್ದು, ನೆರೆಯ ಪ್ರದೇಶಗಳಲ್ಲಿ ಲೂಟಿ ದಾಳಿಗಳಲ್ಲಿ ಪ್ರಮುಖವಾಗಿ ತೊಡಗಿದ್ದನು.<ref name = "Kol29">ರಾಜನ್ ಗುರುಕ್ಕಲ್, 'ದಕ್ಷಿಣ ಭಾರತದಲ್ಲಿ ರಾಜ್ಯ ರಚನೆಯ ಪೂರ್ವಭಾವಿ', R. ಚಂಪಕಲಕ್ಷ್ಮಿ, ಕೇಸವನ್ ವೇಲುತ್ತಟ್, T. R. ವೆನುಗೋಪಾಲನ್, (ಸಂಪಾದಕರು), ಪ್ರಾಚೀನ ದಕ್ಷಿಣ ಭಾರತದಲ್ಲಿ ರಾಜ್ಯ ಮತ್ತು ಸಮಾಜ (ತ್ರಿಸೂರ್: ಕಾಸ್ಮೊಬುಕ್ಸ್, 2002), pp. 39-59</ref>
ಆದಾಗ್ಯೂ, 1ನೇ ಶತಮಾನ ಕ್ರಿ.ಶ. ಆರಂಭದಲ್ಲಿ, ಎಳಿಲ್ ಮಲ ಸಾಮ್ರಾಜ್ಯವು ನನ್ನನ್ ಅಡಿಯಲ್ಲಿ ತನ್ನ ರಾಜಧಾನಿ ಪಳ್ಳಿಯೊಂದಿಗೆ ರಾಜಕೀಯ ಪ್ರಾಮುಖ್ಯತೆಗೆ ಏರಿತು. ನನ್ನನ್ ಒಬ್ಬ ಯುದ್ಧೋಚಿತ ರಾಜನಾಗಿದ್ದು, ಆಂತರಿಕ ಪ್ರದೇಶಗಳಿಗೆ ಆಳವಾದ ದಂಡಯಾತ್ರೆಗಳನ್ನು ನಡೆಸಿದನು ಮತ್ತು ವೈನಾಡ್-ಗುದಲೂರು ಪ್ರದೇಶ ಮತ್ತು ಕೊಂಗುನಾಡಿನ (ಸೇಲಂ-ಕೊಯಮತ್ತೂರು ಪ್ರದೇಶ) ಒಂದು ಭಾಗವನ್ನು ತನ್ನ ನಿಯಂತ್ರಣಕ್ಕೆ ತಂದನು. ತಮಿಳು ಕವಿಗಳ ಪ್ರಕಾರ ಅವನು ಚೇರರ ವಿರುದ್ಧ ಹಲವಾರು ವಿಜಯಗಳನ್ನು (ಪಳ್ಳಿ ಯುದ್ಧ ಸೇರಿದಂತೆ) ಸಾಧಿಸಿದನು. ಸೆಲ್ ಕೇಳು ಕುಟ್ಟುವನ್ನನ ಉತ್ತರಾಧಿಕಾರಿಯಾದ ರಾಜ ನರ್ಮುಡಿ ಚೇರಲ್, ಜನರಲ್ ಮಿಗಿಲಿ ಅಡಿಯಲ್ಲಿ ಚೇರ ಪಡೆಗಳನ್ನು ನನ್ನನನ ವಿರುದ್ಧ ಕಳುಹಿಸಿದನು. ಆದರೆ, ಅವನು ಎಳಿಲ್ ಮಲ ಪಡೆಗಳ ವಿರುದ್ಧ ಪಳ್ಳಿ ಯುದ್ಧದಲ್ಲಿ ಸೋಲಿಸಲ್ಪಟ್ಟನು. ಆದರೆ ನಂತರ, ನನ್ನನನು ನಂತರದ ಸತತ ಘರ್ಷಣೆಗಳಲ್ಲಿ ಸೋಲಿಸಲ್ಪಟ್ಟನು. ಅವನು ತನ್ನ ರಾಜಧಾನಿ ಪಳ್ಳಿಯಿಂದ ಪಲಾಯನ ಮಾಡಲು ಮತ್ತು ವೈನಾಡ್ ಬೆಟ್ಟಗಳಲ್ಲಿ ಆಶ್ರಯ ಪಡೆಯಲು ಒತ್ತಾಯಿಸಲ್ಪಟ್ಟನು. ಯುದ್ಧಗಳು ನರ್ಮುಡಿ ಚೇರಲ್ ವಾಗೈ ಪೆರುಂ ತುರೈ ಯುದ್ಧದಲ್ಲಿ ನನ್ನನನ ಪಡೆಗಳನ್ನು ನುಚ್ಚುನೂರು ಮಾಡಿದಾಗ ಕೊನೆಗೊಂಡಿತು. ''ಅಗನಾನೂರು'' ಪ್ರಕಾರ, ನನ್ನನನು ಯುದ್ಧದಲ್ಲಿ ಕೊಲ್ಲಲ್ಪಟ್ಟನು. ಅವನ ಮರಣದ ನಂತರ, ಎಳಿಮಲ ಸಾಮ್ರಾಜ್ಯದ ನಿಯಂತ್ರಣವು ಚೇರರ ವಶಕ್ಕೆ ಬಂದಿತು.
ಪಳ್ಳಿ ನಗರವು, ಎಳಿಲ್ ಮಲ ಸಾಮ್ರಾಜ್ಯದ ನಂತರದ ರಾಜಧಾನಿಯಾಗಿದ್ದು, ಚಿನ್ನ ಮತ್ತು ಅಮೂಲ್ಯ ಕಲ್ಲುಗಳ ಶ್ರೀಮಂತ ನಿಧಿಗಳಿಗೆ ಪ್ರಸಿದ್ಧವಾಗಿತ್ತು. ಅವರು ಮಲಬಾರ್ ಕರಾವಳಿಯಲ್ಲಿ ಪ್ರಾಚೀನ ರೋಮನ್ನರೊಂದಿಗೆ ನಿಕಟ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದರು.
[[ಉತ್ತರ ಮಲಬಾರ್]] ಈ ಯುಗದಲ್ಲಿ [[ಹಿಂದೂ ಮಹಾಸಾಗರ ವ್ಯಾಪಾರ]]ದ ಕೇಂದ್ರವಾಗಿತ್ತು. [[ಮಲಬಾರ್ ಮುಸ್ಲಿಮರು|ಕೇರಳ ಮುಸ್ಲಿಮ್]] ಸಂಪ್ರದಾಯದ ಪ್ರಕಾರ, ಕೊಲತ್ತುನಾಡು [[ಭಾರತೀಯ ಉಪಖಂಡ]]ದಲ್ಲಿನ ಹಲವಾರು [[ಭಾರತದಲ್ಲಿ ಇಸ್ಲಾಂ|ಅತ್ಯಂತ ಹಳೆಯ ಮಸೀದಿಗಳ]] ನೆಲೆಯಾಗಿದೆ. [[ಚೇರಮನ್ ಪೆರುಮಾಳ್ಳ ದಂತಕಥೆ]]ಯ ಪ್ರಕಾರ, ಮೊದಲ ಭಾರತೀಯ ಮಸೀದಿಯನ್ನು 624 ಕ್ರಿ.ಶ.ಯಲ್ಲಿ ಕೊಡುಂಗಲ್ಲೂರಿನಲ್ಲಿ [[ಚೇರ ವಂಶ]]ದ ಕೊನೆಯ ಆಡಳಿತಗಾರನ (ಚೇರಮನ್ ಪೆರುಮಾಳ್) ಆದೇಶದೊಂದಿಗೆ ನಿರ್ಮಿಸಲಾಯಿತು, ಅವರು [[ಧರ್ಮಡೋಂ]]ನಿಂದ [[ಮಕ್ಕಾ]]ಗೆ ತೆರಳಿ [[ಮುಹಮ್ಮದ್]] (ಸು. 570–632) ಅವರ ಜೀವಿತಾವಧಿಯಲ್ಲಿ [[ಇಸ್ಲಾಂ]]ಗೆ ಮತಾಂತರಗೊಂಡರು.<ref>{{cite book |author=ಜೊನಾಥನ್ ಗೋಲ್ಡ್ಸ್ಟೀನ್ |title=ಚೀನಾದ ಯಹೂದಿಗಳು |publisher=M. E. ಶಾರ್ಪ್ |year=1999|isbn=9780765601049 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=ಎಡ್ವರ್ಡ್ ಸಿಂಪ್ಸನ್|author2=ಕೈ ಕ್ರೆಸ್ಸೆ|title=ಇತಿಹಾಸದೊಂದಿಗೆ ಹೋರಾಟ: ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಇಸ್ಲಾಂ ಮತ್ತು ವಿಶ್ವವಾದ|url=https://books.google.com/books?id=w0qHKA7zEaEC&pg=PA333|access-date=24 July 2012 |year=2008|publisher=ಕೊಲಂಬಿಯಾ ವಿಶ್ವವಿದ್ಯಾಲಯ ಮುದ್ರಣಾಲಯ|isbn=978-0-231-70024-5|pages=333}}</ref><ref name="Kupferschmidt1987">{{cite book|author=ಉರಿ M. ಕುಪ್ಫರ್ಶ್ಮಿಡ್ಟ್|title=ಸುಪ್ರೀಂ ಮುಸ್ಲಿಂ ಕೌನ್ಸಿಲ್: ಪ್ಯಾಲೆಸ್ಟೈನ್ಗಾಗಿ ಬ್ರಿಟಿಷ್ ಆದೇಶದ ಅಡಿಯಲ್ಲಿ ಇಸ್ಲಾಂ|url=https://books.google.com/books?id=ChEVAAAAIAAJ&pg=PA458|access-date=25 July 2012|year=1987|publisher=ಬ್ರಿಲ್|isbn=978-90-04-07929-8|pages=458–459}}</ref><ref name="Raṇṭattāṇi2007">{{cite book|author=ಹುಸೇನ್ ರಂಟತ್ತಾಣಿ|title=ಮಾಪಿಳ್ಳ ಮುಸ್ಲಿಮರು: ಸಮಾಜ ಮತ್ತು ವಿರೋಧಿ ವಸಾಹತು ಹೋರಾಟಗಳ ಅಧ್ಯಯನ |url=https://books.google.com/books?id=xlb5BrabQd8C&pg=PA179|access-date=25 July 2012|year=2007|publisher=ಇತರೆ ಪುಸ್ತಕಗಳು|isbn=978-81-903887-8-8|pages=179–}}</ref>
''[[ಕ್ವಿಸ್ಸತ್ ಶಕರ್ವತಿ ಫರ್ಮದ್]]'' ಪ್ರಕಾರ, ಕೊಡುಂಗಲ್ಲೂರು, ಕೊಲ್ಲಂ, [[ಮಾದಾಯಿ]], [[ಬರ್ಕೂರು]], ಮಂಗಳೂರು, [[ಕಾಸರಗೋಡು]], [[ಕಣ್ಣೂರು]], [[ಧರ್ಮಡೋಂ]], [[ಕೊಯಿಲಾಂಡಿ|ಪಂತಲಯಾನಿ]], ಮತ್ತು [[ಚಾಲಿಯಂ]]ಗಳಲ್ಲಿನ [[ಮಸೀದಿ|''ಮಸ್ಜಿದ್'']]ಗಳನ್ನು [[ಮಲಿಕ್ ದಿನಾರ್]]ರ ಕಾಲದಲ್ಲಿ ನಿರ್ಮಿಸಲಾಯಿತು, ಮತ್ತು ಅವು [[ಭಾರತೀಯ ಉಪಖಂಡ]]ದಲ್ಲಿನ ಅತ್ಯಂತ ಹಳೆಯ ''ಮಸ್ಜಿದ್''ಗಳಲ್ಲಿ ಸೇರಿವೆ.<ref>ಪ್ರೇಂಜ್, ಸೆಬಾಸ್ಟಿಯನ್ R. ''ಮಾನ್ಸೂನ್ ಇಸ್ಲಾಂ: ಮಧ್ಯಕಾಲೀನ ಮಲಬಾರ್ ಕರಾವಳಿಯಲ್ಲಿ ವ್ಯಾಪಾರ ಮತ್ತು ನಂಬಿಕೆ.'' ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮುದ್ರಣಾಲಯ, 2018. Pg. 98.</ref> [[ಮಲಿಕ್ ದಿನಾರ್]] ಅವರು [[ಕಾಸರಗೋಡು]]ನ [[ಥಲಂಗರ]]ದಲ್ಲಿ ನಿಧನರಾದರು ಎಂದು ನಂಬಲಾಗಿದೆ.<ref name="ch">Pg 58, [[ಕೇರಳ]]ದ ಸಾಂಸ್ಕೃತಿಕ ಪರಂಪರೆ: ಒಂದು ಪರಿಚಯ, A. ಶ್ರೀಧರ ಮೇನನ್, ಈಸ್ಟ್-ವೆಸ್ಟ್ ಪಬ್ಲಿಕೇಷನ್ಸ್, 1978</ref>
ಇವುಗಳಲ್ಲಿ ಹೆಚ್ಚಿನವು {{clarify|date=ಜುಲೈ 2023}} ಎಳಿಮಲದ ಹಿಂದಿನ ಪ್ರದೇಶದಲ್ಲಿವೆ. ಕೊಯಿಲಾಂಡಿ ಜುಮುಆ ಮಸೀದಿಯು 10ನೇ ಶತಮಾನ ಕ್ರಿ.ಶ.ಯ ಹಿಂದಿನ ''[[ವಟ್ಟೆಳುತ್ತು]]'' ಮತ್ತು [[ಗ್ರಂಥ ಲಿಪಿ]]ಗಳ ಮಿಶ್ರಣದಲ್ಲಿ ಬರೆಯಲಾದ [[ಹಳೆಯ ಮಲಯಾಳಂ]] ಶಾಸನವನ್ನು ಹೊಂದಿದೆ.<ref name="Okay">ಐಯರ್, K. V. ಸುಬ್ರಹ್ಮಣ್ಯ (ಸಂಪಾದಕರು), ''ದಕ್ಷಿಣ ಭಾರತದ ಶಾಸನಗಳು.'' VIII, ಸಂ. 162, ಮದ್ರಾಸ್: ಭಾರತ ಸರ್ಕಾರ, ಕೇಂದ್ರ ಪ್ರಕಟಣಾ ವಿಭಾಗ, ಕಲ್ಕತ್ತಾ, 1932. p. 69.</ref> ಇದು [[ಹಿಂದೂ]] ರಾಜ (ಭಾಸ್ಕರ ರವಿ) ಕೇರಳದ [[ಮುಸ್ಲಿಮ್]]ರಿಗೆ ನೀಡಿದ ಆಶ್ರಯವನ್ನು ದಾಖಲಿಸುವ ಅಪರೂಪದ ಉಳಿದಿರುವ ದಾಖಲೆಯಾಗಿದೆ.<ref name="Okay"/>
====ಮುಷಿಕ ವಂಶ====
{{Main|ಮುಷಿಕ ಸಾಮ್ರಾಜ್ಯ}}
[[File:Anantapura Lake Temple.jpg|left|thumbnail|[[ಕುಂಬಳ]]ದ ಅನಂತಪುರದಲ್ಲಿರುವ [[ಅನಂತಪುರ ಸರೋವರ ದೇವಾಲಯ|ಅನಂತಪದ್ಮನಾಭಸ್ವಾಮಿ ದೇವಾಲಯ]]]]
8ನೇ ಶತಮಾನದ ವೇಳೆಗೆ, ದಕ್ಷಿಣ ಭಾರತದ ರಾಜಕೀಯ ವಾತಾವರಣವು ಸಾಕಷ್ಟು ನಾಟಕೀಯವಾಗಿ ಬದಲಾಗಿತ್ತು, ಏಕೆಂದರೆ ಸ್ಥಾಯೀಕೃತ ಕೃಷಿ ಶೋಷಣೆಯ ಆಧಾರದ ಮೇಲೆ ಹೊಸ ರಾಜಕೀಯ ಸಂಸ್ಕೃತಿಯು ಈ ಪ್ರದೇಶದಲ್ಲಿ ಬೇರುಬಿಟ್ಟಿತು. ಭಾರತೀಯ ಉಪಖಂಡದ ಇತರ ಭಾಗಗಳಲ್ಲಿರುವಂತೆ, ಬ್ರಾಹ್ಮಣ್ಯವು ಈ ಹೊಸದಾಗಿ ಹೊರಹೊಮ್ಮುತ್ತಿರುವ ಪ್ರಾದೇಶಿಕ, ಪ್ರಾಥಮಿಕವಾಗಿ ಕೃಷಿ ಆಧಾರಿತ ರಾಜ್ಯಗಳಿಗೆ ಸೈದ್ಧಾಂತಿಕ ಬೆಂಬಲವನ್ನು ಒದಗಿಸಿತು.
1075 ಕ್ರಿ.ಶ.ದ ಹಳೆಯ ಮಲಯಾಳಂ ಶಾಸನವನ್ನು ([[ರಾಮಂತಲಿ ಶಾಸನಗಳು]]), [[ಮಂಗಳೂರು]]ನ [[ಅಳುಪ ವಂಶ]]ದ ಆಡಳಿತಗಾರ ರಾಜ ಕುಂದ ಅಳುಪನನ್ನು ಉಲ್ಲೇಖಿಸುತ್ತದೆ, ಇದನ್ನು [[ಕಣ್ಣೂರು|ಕನ್ನನೋರ್]] ಬಳಿಯ [[ಎಳಿಮಲ]]ದಲ್ಲಿ ([[ಮುಷಿಕ ವಂಶ]]ದ ಹಿಂದಿನ ಪ್ರಧಾನ ಕಚೇರಿ) ಕಾಣಬಹುದು.<ref>ನಾರಾಯಣನ್, M. G. S. ''ಕೇರಳದ ಪೆರುಮಾಳ್ಗಳು.'' ತ್ರಿಸೂರ್ (ಕೇರಳ): ಕಾಸ್ಮೊಬುಕ್ಸ್, 2013. 483.</ref> [[ಕಣ್ಣೂರು]]ನಲ್ಲಿರುವ [[ಮಾದಾಯಿ ಪಲ್ಲಿ|ಮಾದಾಯಿ ಮಸೀದಿ]]ಯಲ್ಲಿನ ತಾಮ್ರದ ಹಲಗೆಯ ಮೇಲಿನ [[ಅರೇಬಿಕ್]] ಶಾಸನವು ಅದರ ಸ್ಥಾಪನೆಯ ವರ್ಷವನ್ನು 1124 ಕ್ರಿ.ಶ. ಎಂದು ದಾಖಲಿಸುತ್ತದೆ.<ref name="Madayi">{{cite book
| author = ಚಾರ್ಲ್ಸ್ ಅಲೆಕ್ಸಾಂಡರ್ ಇನ್ನೆಸ್ | year=1908
| title= ಮದ್ರಾಸ್ ಡಿಸ್ಟ್ರಿಕ್ಟ್ ಗೆಜೆಟಿಯರ್ಸ್ ಮಲಬಾರ್ (ಸಂಪುಟ-I) | publisher=ಮದ್ರಾಸ್ ಸರ್ಕಾರಿ ಮುದ್ರಣಾಲಯ |pages=423–424
| url= https://archive.org/details/in.ernet.dli.2015.358941/mode/2up
}}</ref> 11ನೇ ಶತಮಾನದಲ್ಲಿ [[ಅಥುಲ]] ಬರೆದ ''[[ಮುಷಿಕ-ವಂಶ]] ಮಹಾಕಾವ್ಯ''ವು ಆ ಹಂತದವರೆಗಿನ [[ಮುಷಿಕ ಸಾಮ್ರಾಜ್ಯ|ಮುಷಿಕ ರಾಜಮನೆತನ]]ದ ದಾಖಲಿತ ಭೂತಕಾಲದ ಮೇಲೆ ಬೆಳಕು ಚೆಲ್ಲುತ್ತದೆ.<ref name="Kola Swaroopam"/>
9ನೇ ಮತ್ತು 12ನೇ ಶತಮಾನಗಳ ನಡುವೆ, "ಮುಷಿಕ" ಎಂಬ ರಾಜವಂಶವು ಉತ್ತರ ಮಲಬಾರ್ನ ಚಿರಕ್ಕಲ್ ಪ್ರದೇಶಗಳನ್ನು ನಿಯಂತ್ರಿಸಿತು (ವೈನಾಡ್-ಟೆಲ್ಲಿಚೇರಿ ಪ್ರದೇಶವು ಎರಡನೇ ಚೇರ ಸಾಮ್ರಾಜ್ಯದ ಭಾಗವಾಗಿತ್ತು). ಮುಷಿಕರು ಬಹುಶಃ ಎಳಿ ಮಲದ ನನ್ನನನ ಪ್ರಾಚೀನ ರಾಜಮನೆತನದ ವಂಶಸ್ಥರಾಗಿದ್ದರು ಮತ್ತು ಬಹುಶಃ ಚೇರರ ಸಾಮಂತರಾಗಿದ್ದರು. ಮುಷಿಕರು ಚೇರರ ಅಡಿಯಲ್ಲಿರಲಿಲ್ಲ ಎಂಬ ಅಭಿಪ್ರಾಯವನ್ನು ಕೆಲವು ವಿದ್ವಾಂಸರು ವ್ಯಕ್ತಪಡಿಸಿದ್ದಾರೆ, ಏಕೆಂದರೆ ಮುಷಿಕನ ಆಡಳಿತಗಾರನು ಪ್ರಸಿದ್ಧ ತೆರಿಸಪ್ಪಲ್ಲಿ ಮತ್ತು ಯಹೂದಿ ತಾಮ್ರ ಫಲಕಗಳಲ್ಲಿ ಎರಲ್ನಾಡು ಮತ್ತು ವಲ್ಲುವನಾಡು ಆಡಳಿತಗಾರರೊಂದಿಗೆ ಸಹಿ ಮಾಡುವವರಲ್ಲಿ ಕಾಣಿಸಿಕೊಳ್ಳುವುದಿಲ್ಲ. 11ನೇ ಶತಮಾನದವರೆಗೆ, ಮುಷಿಕ ರಾಜರು ಪಿತೃಪ್ರಧಾನ ಉತ್ತರಾಧಿಕಾರ ವ್ಯವಸ್ಥೆಯನ್ನು ಅನುಸರಿಸಿದರು, ಮತ್ತು ನಂತರ ಅವರು ಕ್ರಮೇಣ ಮಾತೃಪ್ರಧಾನ ವ್ಯವಸ್ಥೆಗೆ ಬದಲಾಯಿಸಿದರು. ಅವರ ಪ್ರಯಾಣ ಪುಸ್ತಕದಲ್ಲಿ (''[[ಇಲ್ ಮಿಲಿಯೋನ್]]''), [[ಮಾರ್ಕೊ ಪೊಲೊ]] 1290ರ ದಶಕದ ಮಧ್ಯಭಾಗದಲ್ಲಿ ಈ ಪ್ರದೇಶಕ್ಕೆ ತನ್ನ ಭೇಟಿಯನ್ನು ವಿವರಿಸಿದ್ದಾರೆ. ಇತರ ಸಂದರ್ಶಕರಲ್ಲಿ ಬೌದ್ಧ ಯಾತ್ರಿಕ [[ಫಾಕ್ಸಿಯಾನ್]] ಮತ್ತು [[ಟ್ಯಾಂಜಿಯರ್ಸ್]]ನ ಬರಹಗಾರ ಮತ್ತು ಇತಿಹಾಸಕಾರ [[ಇಬ್ನ್ ಬತೂತಾ]] ಸೇರಿದ್ದಾರೆ.
''[[ಮುಷಿಕ-ವಂಶ]]'', ಅಥುಲ ಬರೆದ ಸಂಸ್ಕೃತ ಕಾವ್ಯವು, ವಿಕ್ರಮ ರಾಮ, ಜಯಮಣಿ, ವಲ್ಲಭ II ಮತ್ತು ಶ್ರೀಕಂಠನಂತಹ ಹಲವಾರು ಮುಷಿಕ ರಾಜರನ್ನು ವಿವರಿಸುತ್ತದೆ. ಅಥುಲನು ಕ್ರಿ.ಶ. 11ನೇ ಶತಮಾನದ ಅಂತ್ಯದ ವೇಳೆಗೆ ಆಳಿದ ರಾಜ ಶ್ರೀಕಂಠನ ಆಸ್ಥಾನ ಕವಿಯಾಗಿದ್ದನು.
ರಾಜ ವಿಕ್ರಮ ರಾಮನು ಮಲಬಾರ್ ಕರಾವಳಿಯಲ್ಲಿ ಭೀಕರ ಸಮುದ್ರ ಸವೆತದಿಂದ ಪ್ರಸಿದ್ಧ ಬೌದ್ಧ ವಿಹಾರವಾದ ಶ್ರೀ ಮೂಲವಾಸವನ್ನು ಉಳಿಸಿದನು ಎಂದು ಹೇಳಲಾಗುತ್ತದೆ. ರಾಜಕುಮಾರ ವಲ್ಲಭ II ರನ್ನು ಚೋಳ ಆಡಳಿತಗಾರ ಕುಲೋತ್ತುಂಗನ ಆಕ್ರಮಣದ ಸಮಯದಲ್ಲಿ ಚೇರ ಪಡೆಗಳಿಗೆ ಸಹಾಯ ಮಾಡಲು ರಾಜ ಜಯಮಣಿಯು ಕಳುಹಿಸಿದನು. ಆದಾಗ್ಯೂ, ಅವನು ಚೇರ ಸೈನ್ಯದೊಂದಿಗೆ ಸೇರುವ ಮೊದಲು, ಅವನು ತನ್ನ ತಂದೆಯ ಮರಣದ ಸುದ್ದಿಯನ್ನು ಕೇಳಿದನು ಮತ್ತು ತನ್ನ ಶತ್ರುಗಳಿಂದ ಮುಷಿಕ ಸಿಂಹಾಸನದ ಅಪಹರಣವನ್ನು ತಡೆಗಟ್ಟಲು ರಾಜಧಾನಿಗೆ ಮರಳಿದನು. ರಾಜಧಾನಿಯನ್ನು ತಲುಪಿದ ನಂತರ, ಅವನು ತನ್ನ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಸಿಂಹಾಸನವನ್ನು ಏರಿದನು. ವಲ್ಲಭ II ಕಿಲ್ಲಾ ನದಿಯ ಬಾಯಿಯಲ್ಲಿ ಮರಾಹಿ (ಮಾದಾಯಿ) ಬಂದರು ಮತ್ತು ವಲಭ ಪಟ್ಟಣಂ (ವಲಿಯಪ್ಟಂ) ಬಂದರನ್ನು ಸ್ಥಾಪಿಸಿದನು. ವಲಭ ಪಟ್ಟಣಂ ನಗರವು ಎತ್ತರದ ಗೋಪುರಗಳು ಮತ್ತು ಎತ್ತರದ ಗೋಡೆಗಳಿಂದ ರಕ್ಷಿಸಲ್ಪಟ್ಟಿತು. ಅವನು ಅರೇಬಿಯನ್ ಸಮುದ್ರದಲ್ಲಿ ಲಕ್ಷದ್ವೀಪ, ಮಿನಿಕಾಯ್ ಮತ್ತು ಅಮಿಂದಿವಿ ದ್ವೀಪಗಳನ್ನು ಸಹ ಸ್ವಾಧೀನಪಡಿಸಿಕೊಂಡನು. ಶ್ರೀಕಂಠ (ರಾಜ ಧರ್ಮ ಎಂದೂ ಕರೆಯಲಾಗುತ್ತದೆ), ಅವನ ಕಿರಿಯ ಸಹೋದರ, ವಲ್ಲಭ II ರ ನಂತರ ಸಿಂಹಾಸನವನ್ನು ಏರಿದನು.
''ಮುಷಿಕ ವಂಶ''ದ ಪ್ರಕಾರ, ರಾಮ ಘಟ ಮುಷಿಕನು ಕೋಲ ಸ್ವರೂಪಂನ ವಂಶಾವಳಿಯನ್ನು ಸ್ಥಾಪಿಸಿದನು.<ref>ಮುಷಿಕವಂಶಂ. ರಾಘವನ್ ಪಿಳ್ಳ (ಸಂಪಾದಕರು), ಮುಷಿಕವಂಶಂ, 26, 268</ref> ಹೆಚ್ಚುವರಿಯಾಗಿ, 929 ಕ್ರಿ.ಶ.ದ ಶಾಸನವು ''ಮುಷಿಕ ವಂಶ''ದಲ್ಲಿ ಕಾಣಿಸಿಕೊಳ್ಳುವ ಆಡಳಿತಗಾರ ವಿಕ್ರಮ ರಾಮನೊಂದಿಗೆ ಗುರುತಿಸಬಹುದಾದ ವಿಕ್ರಮ ರಾಮನನ್ನು ಉಲ್ಲೇಖಿಸುತ್ತದೆ.<ref>ಕೇರಳ ಚರಿತ್ರಾತಿಂಟೆ ಅಡಿಸ್ಥಾನ ಶಿಲಗಳು (ಮಲಯಾಳಂ) M. G. S. ನಾರಾಯಣನ್, (ಕೋಝಿಕ್ಕೋಡ್: ಲಿಪಿ ಪಬ್ಲಿಕೇಷನ್ಸ್, 2000), 85-99</ref> 10ನೇ ಶತಮಾನ ಕ್ರಿ.ಶ.ದ ಮತ್ತೊಂದು ಶಾಸನವು "ರಾಮ ಘಟ ಮುವರ್" ಎಂಬ ಬಿರುದನ್ನು ಹೊಂದಿದ ಮುಖ್ಯಸ್ಥ ಉದಯ ವರ್ಮನನ್ನು ಉಲ್ಲೇಖಿಸುತ್ತದೆ — ಇದು ಮುಷಿಕ ರಾಜರು ಬಳಸಿದ ವಿಶೇಷಣವಾಗಿದೆ. ತಿರುವಟ್ಟೂರು ದೇವಾಲಯದ ಶಾಸನವು ''ಮುಷಿಕ ವಂಶ''ದಲ್ಲಿ 109ನೇ ಆಡಳಿತಗಾರನಾಗಿ ಕಾಣಿಸಿಕೊಳ್ಳುವ ರಾಜನೊಂದಿಗೆ ಗುರುತಿಸಬಹುದಾದ ಎರಮನ್ ಚೇಮನಿ (ರಾಮ ಜಯಮಣಿ)ಯನ್ನು ಉಲ್ಲೇಖಿಸುತ್ತದೆ.<ref name = "Kol25">ಮುಷಿಕವಂಶದ ಇತಿಹಾಸ N. P. ಉನ್ನಿ, (ತಿರುವನಂತಪುರಂ: ಕಾಲೇಜ್ ಬುಕ್ ಹೌಸ್, 1978), 14</ref>
ಮುಷಿಕ ಕುಟುಂಬವು [[ವಿಷ್ಣು ಪುರಾಣ]]ದಂತಹ ಉಳಿದಿರುವ ಪೌರಾಣಿಕ ಭಾರತೀಯ ಗ್ರಂಥಗಳಲ್ಲಿ<ref>{{cite book|url=https://books.google.com/books?id=3kCVg44-xRAC&q=%22Vishnu+Purana%22+%22Mushika%22&pg=PA171 |title=ವಿಷ್ಣು ಪುರಾಣ - ಗೂಗಲ್ ಪುಸ್ತಕಗಳು |date= April 2009|access-date=2011-09-13|isbn=9780559054679 |last1=ವಿಲ್ಸನ್ |first1=ಹೊರೇಸ್ ಹೇಮನ್ |publisher=ಬಿಬ್ಲಿಯೋಬಜಾರ್ }}</ref> ಮತ್ತು [[ಸ್ಟ್ರಾಬೋ]]ನಂತಹ ಗ್ರೀಕ್ ಖಾತೆಗಳಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ.<ref>{{cite book|url=https://books.google.com/books?id=YoAwor58utYC&q=Mushika+Strabo&pg=PA45 |title=ನಂದ ಮತ್ತು ಮೌರ್ಯರ ಯುಗ - ಗೂಗಲ್ ಪುಸ್ತಕಗಳು |access-date=2011-09-13|isbn=9788120804661 |year=1988 |publisher=ಮೋತಿಲಾಲ್ ಬನಾರ್ಸಿದಾಸ್ }}</ref> ಕೊಲತ್ತಿರಿಗಳನ್ನು ಪ್ರಸಿದ್ಧ "[[ಕೇರಳೋಲ್ಪತ್ತಿ]]"ಯು ವಡಕ್ಕನ್ ಪೆರುಮಾಳ್ಗಳು ("ಉತ್ತರದ ರಾಜರು") ಎಂದು ಹೊಗಳಿದೆ.<ref name = "Kol95">ವರಿಯರ್, ಕೇರಳೋಲ್ಪತ್ತಿ ಗ್ರಂಥವರಿ, 51</ref>
===ಕೊಲತ್ತುನಾಡಿನ (ಕನ್ನನೋರ್) ಏರಿಕೆ===
[[File:Mappila Bay Fishing Harbour3.jpg|thumbnail|[[ಅಯಿಕ್ಕರ]]ದಲ್ಲಿನ [[ಮಾಪ್ಪಿಲಾ ಬೇ]] ಬಂದರು. ಒಂದು ಕಡೆ [[ಸೇಂಟ್ ಏಂಜೆಲೋ ಕೋಟೆ]] (1505 ರಲ್ಲಿ ನಿರ್ಮಿಸಲಾಯಿತು) ಮತ್ತು ಇನ್ನೊಂದು ಕಡೆ [[ಅರಕ್ಕಲ್ ಸಾಮ್ರಾಜ್ಯ|ಅರಕ್ಕಲ್ ಅರಮನೆ]] ಇದೆ.]]
[[File:City of Cannanore, 1572.jpg|thumbnail|1572 ರಲ್ಲಿ ಕಣ್ಣೂರಿನ ಭಾವಚಿತ್ರ, [[ಜಾರ್ಜ್ ಬ್ರೌನ್]] ಮತ್ತು [[ಫ್ರಾನ್ಸ್ ಹೋಗೆನ್ಬರ್ಗ್]] ಅವರ ''ಸಿವಿಟೇಟ್ಸ್ ಆರ್ಬಿಸ್ ಟೆರಾರಮ್'' ಸಂಪುಟ I ನಿಂದ]]
[[File:Cannonore fort & Bay'; a watercolor by John Johnston, c.1795-1801.jpg|thumbnail|ಕಣ್ಣೂರು ಕೋಟೆ ಮತ್ತು ಕೊಲ್ಲಿ; ಜಾನ್ ಜಾನ್ಸ್ಟನ್ (1795–1801) ರ ಜಲವರ್ಣ ಚಿತ್ರ]]
ಕೊಲತ್ತುನಾಡು ಎಂಬ ರಾಜ್ಯದ ಸಾಮಾಜಿಕ-ಸಾಂಸ್ಕೃತಿಕ ವಿಶಿಷ್ಟತೆಯು 12ನೇ ಶತಮಾನದ ಆರಂಭದ ವೇಳೆಗೆ ಎರಡನೇ ಚೇರರು ಕಣ್ಮರೆಯಾದ ನಂತರವೇ ಹೆಚ್ಚು ವಿಶಿಷ್ಟವಾಯಿತು.<ref name = "Kol77">ನಾರಾಯಣನ್, ದಕ್ಷಿಣ ಭಾರತದ ಇತಿಹಾಸದಲ್ಲಿ ಮರು-ವ್ಯಾಖ್ಯಾನಗಳು, 6-10</ref> ಭಾರತೀಯ ಮಾನವಶಾಸ್ತ್ರಜ್ಞ [[A. ಅಯ್ಯಪ್ಪನ್|ಅಯಿನಪಲ್ಲಿ ಅಯ್ಯಪ್ಪನ್]] ಅವರು [[ತುಳುನಾಡು]]ನ [[ಬಂಟ್ (ಸಮುದಾಯ)|ಬಂಟ್ ಸಮುದಾಯ]]ದ ಪ್ರಬಲ ಮತ್ತು ಯುದ್ಧೋಚಿತ ಕುಲವನ್ನು ''ಕೋಲ ಬಾರಿ'' ಎಂದು ಕರೆಯಲಾಗುತ್ತಿತ್ತು ಮತ್ತು ಕೊಲತ್ತುನಾಡಿನ ಕೊಲತ್ತಿರಿ ರಾಜನು ಈ ಕುಲದ ವಂಶಸ್ಥನಾಗಿದ್ದನು ಎಂದು ಹೇಳುತ್ತಾರೆ.<ref name="Aiyappan"/> ಪೋರ್ಚುಗೀಸರ ಆಗಮನದ ಮೊದಲು, [[ಕೋಝಿಕ್ಕೋಡ್|ಕ್ಯಾಲಿಕಟ್]] ಕನ್ನನೋರ್ (ಕೊಲತ್ತುನಾಡ್) ವಿರುದ್ಧ ಹಲವಾರು ಯುದ್ಧಗಳನ್ನು ನಡೆಸಿತು. ಕೊಲತ್ತಿರಿ ರಾಜಮನೆತನದ ಒಬ್ಬ ರಾಜಕುಮಾರನು ದಕ್ಷಿಣ ವೈಸ್ರಾಯ್ ಆಗಿ ಪಂತಲಯಿನಿ ಕೊಲ್ಲಂನಲ್ಲಿ ನೆಲೆಸಿದ್ದನು. ಪಂತಲಯಿನಿ ಕೊಲ್ಲಂ ಮಲಬಾರ್ ಕರಾವಳಿಯ ಪ್ರಮುಖ ಬಂದರಾಗಿತ್ತು. ತನ್ನ ವಿಜಯಗಳ ಸಮಯದಲ್ಲಿ, ಜಾಮೋರಿನ್ ಕನ್ನನೋರ್ಗೆ ಪ್ರಾಥಮಿಕ ಮುನ್ನಡೆಯಾಗಿ ಪಂತಲಯಿನಿ ಕೊಲ್ಲಂ ಅನ್ನು ಆಕ್ರಮಿಸಿಕೊಂಡನು. ಕೊಲತ್ತಿರಿಯು ತಕ್ಷಣವೇ ಕ್ಯಾಲಿಕಟ್ ನಿರ್ದೇಶಿಸಬಹುದಾದ ಯಾವುದೇ ಷರತ್ತುಗಳಿಗೆ ಶರಣಾಗಲು ರಾಯಭಾರಿಗಳನ್ನು ಕಳುಹಿಸಿದನು. ಕನ್ನನೋರ್ ಈಗಾಗಲೇ ಆಕ್ರಮಿಸಲ್ಪಟ್ಟ ಪ್ರದೇಶಗಳನ್ನು ಮತ್ತು ಕೆಲವು ಹಿಂದೂ ದೇವಾಲಯದ ಹಕ್ಕುಗಳನ್ನು ಕ್ಯಾಲಿಕಟ್ಗೆ ಅಧಿಕೃತವಾಗಿ ವರ್ಗಾಯಿಸಿತು.
ವಿದೇಶಿ ಖಾತೆಗಳು ಕೊಲತ್ತುನಾಡಿನ ವಿಶಿಷ್ಟ ಗುರುತನ್ನು ಸಮರ್ಥಿಸುತ್ತವೆ. 12ನೇ ಶತಮಾನದಲ್ಲಿ ಮಲಬಾರ್ ಕರಾವಳಿಗೆ ಭೇಟಿ ನೀಡಿದ [[ಮಾರ್ಕೊ ಪೊಲೊ]] ಈ ಪ್ರದೇಶದ ರಾಜನ ಸ್ವತಂತ್ರ ಸ್ಥಾನಮಾನವನ್ನು ಗಮನಿಸಿದನು.<ref name = "Kol27">ದ ಬುಕ್ ಆಫ್ ಸೆರ್ ಮಾರ್ಕೊ ಪೊಲೊ: ದ ವೆನೆಷಿಯನ್, ಕನ್ಸರ್ನಿಂಗ್ ದ ಕಿಂಗ್ಡಮ್ಸ್ ಅಂಡ್ ಮಾರ್ವೆಲ್ಸ್ ಆಫ್ ದ ಈಸ್ಟ್, III, 3ನೇ ಆವೃತ್ತಿ. ಸಂ. [[ಹೆನ್ರಿ ಯೂಲ್]] ಮತ್ತು [[ಹೆನ್ರಿ ಕಾರ್ಡಿಯರ್]] (ಮರುಮುದ್ರಣ, ಆಮ್ಸ್ಟರ್ಡ್ಯಾಮ್: ಫಿಲೋ ಪ್ರೆಸ್, 1975), 385</ref> 14ನೇ ಶತಮಾನದ [[ಇಬ್ನ್ ಬತೂತಾ]]ನ ನಿರೂಪಣೆಯು ಈ ಪ್ರದೇಶದ ಆಡಳಿತಗಾರನು [[ಬಾಲಿಯಾ ಪಟ್ಟಣಂ]] ಎಂದು ಕರೆಯಲ್ಪಡುವ ನಗರದಲ್ಲಿ ವಾಸಿಸುತ್ತಿದ್ದನೆಂದು ಉಲ್ಲೇಖಿಸುತ್ತದೆ.<ref name = "Kol28">ಇಬ್ನ್ ಬತೂತಾನ ರೆಹ್ಲಾ (ಭಾರತ, ಮಾಲ್ಡೀವ್ ದ್ವೀಪಗಳು ಮತ್ತು ಸಿಲೋನ್), ಅನುವಾದ ಮತ್ತು ವ್ಯಾಖ್ಯಾನ ಮಹ್ದಿ ಹುಸೇನ್ ಅವರಿಂದ (ಬರೋಡ: ಓರಿಯೆಂಟಲ್ ಇನ್ಸ್ಟಿಟ್ಯೂಟ್, 1953), 186</ref> ಇದು ಈ ಸಮಯದ ವೇಳೆಗೆ, ಕೊಲತ್ತುನಾಡಿನ ರಾಜಧಾನಿಯು ಎಳಿಲ್ ಮಲದಿಂದ ಬಾಲಿಯಾ ಪಟ್ಟಣಂಗೆ ಬದಲಾಗಿತ್ತು, ಇದು ಎಳಿಲ್ ಮಲದ ದಕ್ಷಿಣಕ್ಕೆ ಇರುವ ಪಟ್ಟಣವಾಗಿದೆ. 16ನೇ ಶತಮಾನದಲ್ಲಿ, ಪೋರ್ಚುಗೀಸ್ ಅಧಿಕಾರಿ ಡುವಾರ್ಟೆ ಬಾರ್ಬೋಸಾ ಕೂಡ ಕನ್ನನೋರ್ ರಾಜನ ನಿವಾಸವಾಗಿ ಬಾಲಿಯಾ ಪಟ್ಟಣಂ ("ಬಾಲಿಯಾ ಪಟಾಮ್" ಯುರೋಪಿಯನ್ ದಾಖಲೆಗಳಲ್ಲಿ) ಅನ್ನು ಉಲ್ಲೇಖಿಸುತ್ತಾನೆ.<ref name = "Kol3"/>
ಕ್ರಿ.ಶ. 16ನೇ ಶತಮಾನದವರೆಗೆ, [[ಕಾಸರಗೋಡು]] ಪಟ್ಟಣವು [[ಮಲಯಾಳಂ]]ನಲ್ಲಿ ''ಕನ್ಹಿರಕೋಡ್'' (ಬಹುಶಃ, 'ಕನ್ಹಿರ ಮರಗಳ ನಾಡು' ಎಂಬ ಅರ್ಥದಿಂದ) ಎಂದು ಕರೆಯಲ್ಪಡುತ್ತಿತ್ತು.<ref name="Kanhirakode">{{cite book
| author = S. ಮುಹಮ್ಮದ್ ಹುಸೇನ್ ನೈನಾರ್ | year=1942
| title= ತುಹ್ಫತ್-ಅಲ್-ಮುಜಾಹಿದಿನ್: ಅರೇಬಿಕ್ ಭಾಷೆಯಲ್ಲಿನ ಐತಿಹಾಸಿಕ ಕೃತಿ | publisher=ಮದ್ರಾಸ್ ವಿಶ್ವವಿದ್ಯಾಲಯ
| url= https://archive.org/details/Tuhfat-al-MujahidinAnHistoricalWorkInTheArabicLanguage
}}</ref> [[ಕುಂಬಳ]]ದ ''ಮೈಪಾಡಿ ಅರಮನೆ''ಯಿಂದ [[ಪಯಸ್ವಿನಿ|ಚಂದ್ರಗಿರಿ ನದಿ]] ಮತ್ತು [[ನೇತ್ರಾವತಿ ನದಿ]] (ಪ್ರಸ್ತುತ [[ಮಂಜೇಶ್ವರ]] ಮತ್ತು [[ಕಾಸರಗೋಡು]] ತಾಲೂಕುಗಳು ಸೇರಿದಂತೆ) ನಡುವಿನ ದಕ್ಷಿಣ [[ತುಳುನಾಡು]] ಭೂಮಿಯನ್ನು ಆಳಿದ [[ಕುಂಬಳ]] ರಾಜವಂಶವು [[ವಿಜಯನಗರ ಸಾಮ್ರಾಜ್ಯ]]ದ [[ಕನ್ನಡ|ಕರ್ನಾಟಕ]] ವಿಜಯಗಳ ಮೊದಲು [[ಉತ್ತರ ಮಲಬಾರ್]]ನ ಕೊಲತ್ತುನಾಡು ಸಾಮ್ರಾಜ್ಯಕ್ಕೆ ಸಾಮಂತರಾಗಿದ್ದರು.<ref>{{cite book
| author = M. ವಿಜಯಾನುನ್ನಿ
| title= 1981 ಜನಗಣತಿ ಕೈಪಿಡಿ- ಕಾಸರಗೋಡು ಜಿಲ್ಲೆ | publisher=ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5757/1/51134_1981_KAS.pdf
}}</ref> ಕುಂಬಳ ರಾಜವಂಶವು [[ಮಲಯಾಳಿ]] [[ನಾಯರ್]]ಗಳು ಮತ್ತು [[ತುಳುವ ಬ್ರಾಹ್ಮಣ]]ರ ಮಿಶ್ರ ವಂಶಾವಳಿಯನ್ನು ಹೊಂದಿತ್ತು.<ref name="askh">{{cite book |last1=ಶ್ರೀಧರ ಮೇನನ್ |first1=A. |title=''ಕೇರಳ ಚರಿತ್ರಂ'' |date=January 2007 |publisher=DC Books |location=ಕೊಟ್ಟಾಯಂ |isbn=978-81-264-1588-5 |edition=2007 |url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |access-date=19 July 2020}}</ref> ಅವರು ಕೇರಳದ [[ಚೇರಮನ್ ಪೆರುಮಾಳ್ಳ ದಂತಕಥೆ|ಚೇರಮನ್ ಪೆರುಮಾಳ್ಳ]]ರಿಂದ ತಮ್ಮ ಮೂಲವನ್ನು ಹೇಳಿಕೊಂಡರು.<ref name="askh"/> [[ಫ್ರಾನ್ಸಿಸ್ ಬುಕಾನನ್-ಹ್ಯಾಮಿಲ್ಟನ್]] ಕುಂಬಳ ರಾಜವಂಶದ ಪದ್ಧತಿಗಳು ಸಮಕಾಲೀನ [[ಮಲಯಾಳಿ]] ರಾಜರ ಪದ್ಧತಿಗಳನ್ನು ಹೋಲುತ್ತವೆ ಎಂದು ಹೇಳುತ್ತಾರೆ, ಆದರೂ ಕುಂಬಳವು [[ತುಳುನಾಡು]]ನ ಅತ್ಯಂತ ದಕ್ಷಿಣದ ಪ್ರದೇಶವೆಂದು ಪರಿಗಣಿಸಲ್ಪಟ್ಟಿತು.<ref name="askh"/> 17ನೇ ಶತಮಾನದಲ್ಲಿ, ಕಣ್ಣೂರು ಮಲಬಾರ್ ಪ್ರದೇಶದಲ್ಲಿ ಏಕೈಕ [[ಮುಸ್ಲಿಮ್]] ಸುಲ್ತಾನೇಟಿನ ರಾಜಧಾನಿ ನಗರವಾಗಿತ್ತು - [[ಅರಕ್ಕಲ್]] - ಇದು ಕಣ್ಣೂರು ನಗರದ ಜೊತೆಗೆ [[ಲಕ್ಷದ್ವೀಪ]] ದ್ವೀಪಗಳನ್ನೂ ಆಳಿತು.<ref name=anathapuri>{{Cite web|url=http://www.ananthapuri.com/kerala-history.asp?page=muslim|archive-url=https://web.archive.org/web/20120605222957/http://ananthapuri.com/kerala-history.asp?page=muslim|url-status=dead|title=ಅರಕ್ಕಲ್ ರಾಜಮನೆತನ|archive-date=5 June 2012}}</ref>
[[ಕೋಝಿಕ್ಕೋಡ್]] ಬಂದರು ಮಧ್ಯಕಾಲೀನ ಕೇರಳ ಕರಾವಳಿಯಲ್ಲಿ ಉತ್ತಮ ಆರ್ಥಿಕ ಮತ್ತು ರಾಜಕೀಯ ಸ್ಥಾನವನ್ನು ಹೊಂದಿತ್ತು, ಆದರೆ [[ಕಣ್ಣೂರು]], [[ಕೊಲ್ಲಂ]], ಮತ್ತು [[ಕೊಚ್ಚಿ]]ಗಳು ಪ್ರಪಂಚದ ವಿವಿಧ ಭಾಗಗಳಿಂದ ವ್ಯಾಪಾರಿಗಳು ಸೇರುವ ವಾಣಿಜ್ಯಿಕವಾಗಿ ಪ್ರಮುಖ ದ್ವಿತೀಯ ಬಂದರುಗಳಾಗಿದ್ದವು.<ref name="Malekandathil">''ದ ಪೋರ್ಚುಗೀಸ್, ಇಂಡಿಯನ್ ಓಷನ್ ಅಂಡ್ ಯುರೋಪಿಯನ್ ಬ್ರಿಜ್ಹೆಡ್ಸ್ 1500–1800''. ಪ್ರೊ. K. S. ಮ್ಯಾಥ್ಯೂ ಗೌರವಾರ್ಥ ಸಂಪುಟ (2001). ಸಂಪಾದಕರು: ಪಿಯಸ್ ಮಾಲೆಕಂಡತಿಲ್ ಮತ್ತು T. ಜಮಾಲ್ ಮೊಹಮ್ಮದ್. ಫಂಡಕೋನ್ ಒರಿಯೆಂಟ್. MESHAR (ಕೇರಳ) ನ ಸಾಮಾಜಿಕ ವಿಜ್ಞಾನ ಮತ್ತು ಮಾನವಿಕ ಸಂಶೋಧನಾ ಸಂಸ್ಥೆ</ref> ಪೋರ್ಚುಗೀಸರು [[ಶೋಧನೆಯ ಯುಗ]]ದಲ್ಲಿ 1498 ರಲ್ಲಿ [[ಕಪ್ಪಾಡ್]] [[ಕೋಝಿಕ್ಕೋಡ್]]ಗೆ ಆಗಮಿಸಿದರು, ಹೀಗಾಗಿ [[ಯುರೋಪ್]] ನಿಂದ [[ಭಾರತ]]ಕ್ಕೆ ನೇರ ಸಮುದ್ರ ಮಾರ್ಗವನ್ನು ತೆರೆದರು.<ref>DC Books, ಕೊಟ್ಟಾಯಂ (2007), A. ಶ್ರೀಧರ ಮೇನನ್, ಕೇರಳ ಇತಿಹಾಸದ ಸಮೀಕ್ಷೆ</ref> ಕಣ್ಣೂರಿನ [[ಸೇಂಟ್ ಏಂಜೆಲೋ ಕೋಟೆ]]ಯನ್ನು 1505 ರಲ್ಲಿ ಭಾರತದ ಮೊದಲ ಪೋರ್ಚುಗೀಸ್ ವೈಸ್ರಾಯ್ ಡೊಮ್ [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] ನಿರ್ಮಿಸಿದರು.
==ಆಡಳಿತ==
[[File:Minister Kuruppu's Arabic letter to da Gama (1524).jpg|thumb|[[ಕೊಲತ್ತಿರಿ|ಕೊಲತ್ತಿರಿ ರಾಜ]]ನ ಮಂತ್ರಿ ಕುರುಪ್ಪು ಅವರ [[ವಾಸ್ಕೋ ಡಿ ಗಾಮಾ]]ಗೆ ಬರೆದ [[ಅರೇಬಿಕ್]] ಪತ್ರ (1524)|235x235px]]
ಕೊಲತ್ತಿರಿಯ ಮೂಲ ಸಾಮ್ರಾಜ್ಯದ ರಾಜಕೀಯ ಪ್ರಭುತ್ವವು ಕೊಲತ್ತಿರಿ ಕುಟುಂಬದ ವಿವಿಧ ಮಾತೃಪ್ರಧಾನ-ವಿಭಾಗಗಳ ಉದ್ದಕ್ಕೂ ವಿಭಜಿಸಲ್ಪಟ್ಟಿತು ಮತ್ತು ಅನುಕ್ರಮವಾಗಿ ಕೊಲತ್ತಿರಿ, ತೆಕ್ಕಾಲಂಕೂರ್, ವಡಕ್ಕಾಲಂಕೂರ್, ನಾಲಾಂಕೂರ್, ಮತ್ತು ಅಂಜಾಂಕೂರ್ ಎಂಬ ಭಾಗಗಳು ಅಥವಾ ಕೂರ್-ವಾಝ್ಚ (ಭಾಗ-ಪ್ರಭುತ್ವಗಳು) ಆಡಳಿತಗಾರರನ್ನು ಹೊಂದಿತ್ತು. ಕೊಲತ್ತುನಾಡಿನ ಆಡಳಿತವು ಪ್ರತಿಯೊಂದೂ ಉನ್ನತ ಅಧಿಕಾರಗಳಿಗೆ ಹೋಲುವ ಕಾರ್ಯಗಳನ್ನು ಆದರೆ ಸಣ್ಣ ಪ್ರಮಾಣದಲ್ಲಿ ನಿರ್ವಹಿಸುವ ವಿವಿಧ ಅಧಿಕಾರ ವಿಭಾಗಗಳಾಗಿ ವಿಂಗಡಿಸಲಾಗಿತ್ತು.<ref>ಎಂತುರ್ಡಾಜಿಯ ಕುರಿತು ಉಪನ್ಯಾಸಗಳು A. ಕೃಷ್ಣ ಅಯ್ಯರ್ ಕಲ್ಕತ್ತಾ, 1925.</ref>
ಆಡಳಿತವನ್ನು ಕೊಲತ್ತಿರಿಯ ಅಡಿಯಲ್ಲಿ ಬಾಡಿಗೆದಾರ-ಮುಖ್ಯಸ್ಥರ ಮೂಲಕ ನಡೆಸಲಾಯಿತು. ಇದರಲ್ಲಿ "ನಾಡುವಾಳಿಗಳು", "ದೇಶವಾಳಿಗಳು" ಮತ್ತು "ಮುಖ್ಯಸ್ಥರು" ಎಂದು ಕರೆಯಲ್ಪಡುವ ಗಣ್ಯರು ಸೇರಿದ್ದರು. ನಾಡುವಾಳಿಗಳು, ಅವರು "ನಾಡುಗಳು" ಅಥವಾ ಜಿಲ್ಲೆಗಳ ಮುಖ್ಯಸ್ಥರಾಗಿದ್ದು, 500 - 20,000 ರ ನಾಯರ್ ಸೈನ್ಯಗಳನ್ನು ಮುನ್ನಡೆಸುತ್ತಿದ್ದರು. ಆಡಳಿತ ಕ್ರಮಾನುಗತದಲ್ಲಿ ನಾಡುವಾಳಿಗಳ ಕೆಳಗೆ "ದೇಶಗಳು" ಎಂದು ಕರೆಯಲ್ಪಡುವ ಹಳ್ಳಿಗಳ ಮುಖ್ಯಸ್ಥರಾಗಿದ್ದ ದೇಶವಾಳಿಗಳು ಇದ್ದರು. ಇವು ನಾಡುಗಳ ವಿಭಾಗಗಳಾಗಿದ್ದವು. ದೇಶವಾಳಿಗಳು 100 ರಿಂದ 500 ಜನರ ನಾಯರ್ ಸೈನ್ಯಗಳನ್ನು ಮುನ್ನಡೆಸುತ್ತಿದ್ದರು. ದೇಶವಾಳಿಗಳ ಕೆಳಗೆ ಮುಖ್ಯಸ್ಥರು ಎಂದು ಕರೆಯಲ್ಪಡುವ ಇತರ ಸ್ಥಳೀಯ ಪ್ರಭುಗಳು ಇದ್ದರು. ಆದಾಗ್ಯೂ, ಯಾವುದೇ ಊಳಿಗಮಾನ್ಯ ಸಮಾಜದಲ್ಲಿರುವಂತೆ, ಕೊಲತ್ತಿರಿಗಳು ತಮ್ಮ ರಾಜ್ಯವನ್ನು ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ ಮತ್ತು ಅವರ ದುರ್ಬಲ ಆರ್ಥಿಕ ಸ್ಥಾನದಿಂದಾಗಿ ಕೊಲತ್ತಿರಿಗಳು ರಾಜ್ಯದಲ್ಲಿ ಬಲದ ಬಳಕೆಯನ್ನು ಏಕಸ್ವಾಮ್ಯಗೊಳಿಸಲು ಅಸಮರ್ಥತೆಯು ರಾಜ ಅಧಿಕಾರದ ಬಾಹ್ಯ ನೋಟವು ಹೆಚ್ಚು ಕಡಿಮೆ ನಾಮಮಾತ್ರವಾಗಿ ಉಳಿಯಿತು ಎಂದರ್ಥ.
===ವಿಕೇಂದ್ರೀಕೃತ ರಾಜ್ಯ===
ಕೇರಳೋಲ್ಪತ್ತಿಯಂತಹ ಬ್ರಾಹ್ಮಣ ಗ್ರಂಥಗಳಲ್ಲಿ ಪ್ರಸ್ತುತಪಡಿಸಲಾದ ರಾಜಕೀಯ ವ್ಯವಸ್ಥೆಯ ಆದರ್ಶ ಪ್ರಕಾರ, ಅಲ್ಲಿ ಕೊಲತ್ತಿರಿ ರಾಜನು ಕಾನೂನುಬದ್ಧ ರಾಜಕೀಯ ಅಧಿಕಾರದ ರಕ್ಷಕನಾಗಿ ಪ್ರಸ್ತುತಪಡಿಸಲ್ಪಟ್ಟಿದ್ದಾನೆ, ಮತ್ತು ಈ ಪ್ರದೇಶದಲ್ಲಿ ಅಧಿಕಾರ ಸಂಬಂಧಗಳ ನಿಜವಾದ ಕಾರ್ಯವಿಧಾನದ ನಡುವೆ ಗಮನಾರ್ಹ ವ್ಯತ್ಯಾಸವಿದೆ ಎಂದು ತೋರುತ್ತದೆ.
ಕೊಲತ್ತಿರಿಗಳು ಎಂದಿಗೂ ರಾಜ್ಯದಲ್ಲಿ ಅಧಿಕಾರದ ಏಕಸ್ವಾಮ್ಯವನ್ನು ಚಲಾಯಿಸಲಿಲ್ಲ ಎಂದು ತೋರುತ್ತದೆ. ಅಧಿಕಾರವು ಒಂದು ವಿಕೇಂದ್ರೀಕೃತ, ಹಂಚಿಕೆಯ, ಮತ್ತು ಬಹುತ್ವದ ಘಟಕವಾಗಿತ್ತು. ಕೊಲತ್ತಿರಿಗಳಿಗೆ ಆರೋಪಿಸಲಾದ ರಾಜಕೀಯ ಸ್ಥಾನಮಾನವು ಹೆಚ್ಚು ಕಡಿಮೆ ನಾಮಮಾತ್ರವಾಗಿ ಉಳಿಯಿತು. ಕೊಲತ್ತುನಾಡಿನ ಭೌಗೋಳಿಕ ಲಕ್ಷಣಗಳು ದೊಡ್ಡ ಪ್ರಮಾಣದ ಕೃಷಿ ಹೆಚ್ಚುವರಿಯನ್ನು ಖಾತರಿಪಡಿಸದ ಕಾರಣ ಕೊಲತ್ತಿರಿಗಳು ತಮ್ಮ ಆರ್ಥಿಕ ಸಂಪನ್ಮೂಲ ನೆಲೆಯ ಮಿತಿಗಳಿಂದ ನಿಗದಿಪಡಿಸಿದ ನಿರ್ಬಂಧಗಳೊಳಗೆ ತಮ್ಮ ರಾಜಕೀಯ ಘನತೆಯನ್ನು ಉಳಿಸಿಕೊಳ್ಳಬೇಕಾಯಿತು. ಕೊಲತ್ತುನಾಡಿನ ಸೀಮಿತ ಕೃಷಿ ಆರ್ಥಿಕತೆಯಿಂದ ರೂಪುಗೊಂಡ, ಕೇಂದ್ರೀಕೃತ ರಾಜಕೀಯ ರಚನೆಯು ಹೊರಹೊಮ್ಮುವ ಸಾಧ್ಯತೆಯು ಸೀಮಿತವಾಗಿತ್ತು.<ref name = "Gow90">ಮಲಬಾರ್ ಕರಾವಳಿಯಲ್ಲಿ ಸ್ತ್ರೀ ದೀಕ್ಷಾ ಸಮಾರಂಭಗಳು, ಗಫ್, ಕ್ಯಾಥ್ಲೀನ್ 1955a, ''ದ ಜರ್ನಲ್ ಆಫ್ ದ ರಾಯಲ್ ಆಂಥ್ರೊಪೊಲಾಜಿಕಲ್ ಇನ್ಸ್ಟಿಟ್ಯೂಟ್ ಆಫ್ ಗ್ರೇಟ್ ಬ್ರಿಟನ್ ಅಂಡ್ ಅಯರ್ಲ್ಯಾಂಡ್''.</ref>
ಸೀಮಿತ ಕೃಷಿ ಹೆಚ್ಚುವರಿಯನ್ನು ಬಳಸಿಕೊಳ್ಳುವ ಈ ಸಂಕುಚಿತ ಅವಕಾಶವು ನಿಸ್ಸಂಶಯವಾಗಿ ಕೊಲತ್ತಿರಿಗಳು ಈ ಪ್ರದೇಶದ ಜನರ ಮೇಲೆ ಗಮನಾರ್ಹ ಪ್ರಭಾವವನ್ನು ಚಲಾಯಿಸುವ ಸಾಧ್ಯತೆಗಳನ್ನು ನಿರ್ಬಂಧಿಸಿತು. ಬದಲಾಗಿ, ನಾಯರರ ಪ್ರಬಲ ತರವಾಡುಗಳ ಏರಿಳಿತದ ಕ್ಷೇತ್ರವು ಅವರ ಸ್ವಂತ ಭೂ ಆಸ್ತಿಗಳು ಮತ್ತು ಅವಲಂಬಿತ ಕಾರ್ಮಿಕ-ಸೇವಾ ವರ್ಗಗಳಿಂದ ಸಂಪನ್ಮೂಲಗಳ ಮೇಲೆ ನಿಯಂತ್ರಣವನ್ನು ಚಲಾಯಿಸುತ್ತಿತ್ತು. ಅವರ ದುರ್ಬಲ ಆರ್ಥಿಕ ಸ್ಥಾನದಿಂದಾಗಿ ಕೊಲತ್ತಿರಿಗಳು ರಾಜ್ಯದಲ್ಲಿ ಬಲದ ಬಳಕೆಯನ್ನು ಏಕಸ್ವಾಮ್ಯಗೊಳಿಸಲು ಅಸಮರ್ಥತೆಯು ರಾಜ ಅಧಿಕಾರದ ಬಾಹ್ಯ ನೋಟವು ಹೆಚ್ಚು ಕಡಿಮೆ ನಾಮಮಾತ್ರವಾಗಿ ಉಳಿಯಿತು.
ಕೊಲತ್ತಿರಿ ಪ್ರಭುತ್ವವು ಆಂತರಿಕ ಭಿನ್ನಾಭಿಪ್ರಾಯಗಳ ಪರಿಣಾಮವಾಗಿ [[ಕಡತನಾಡು]] ([[ವಡಕರ]]), [[ಧರ್ಮಡೋಂ|ರಂಡತರ]] ಅಥವಾ ಪೊಯನಾಡ್ ([[ಧರ್ಮಡೋಂ]]), [[ಕೊಟ್ಟಾಯಂ ಸಾಮ್ರಾಜ್ಯ|ಕೊಟ್ಟಾಯಂ]] ([[ತಲಶ್ಶೇರಿ]]), [[ನಿಲೇಶ್ವರಂ]], ಇರುವಾಳಿನಾಡು ([[ಪನೂರು (ಪುರಸಭೆ)|ಪನೂರು]], [[ಕುರುಂಬ್ರನಾಡ್]] ಇತ್ಯಾದಿ) ಪ್ರತ್ಯೇಕ ರಾಜ ಮುಖ್ಯಸ್ಥರ ಅಡಿಯಲ್ಲಿ ಸ್ವತಂತ್ರ 10 ರಾಜ್ಯಗಳಾಗಿ ಹೊರಹೊಮ್ಮಿತು. ಪೊಯನಾಡ್ (ರಂಡು ತರ) ಮತ್ತು (ಅಂಜರಕ್ಕಂಡಿ, ಚೆಂಬಿಲೋಡ್, ಮಾವಿಲಾಯಿ, ಎಡಕ್ಕಾಡ್, ಮತ್ತು ಧರ್ಮಡೋಂ) ವರೆಗಿನ ವ್ಯಾಪಕ ಭೂಪ್ರದೇಶವನ್ನು ರಂಡುತರ ಅಚ್ಚನ್ಮಾರ್ ಆಳಿದರು. ರಂಡುತರ ಅಚ್ಚನ್ಮಾರ್ 4 ನಂಬಿಯಾರ್ ಕುಟುಂಬಗಳ (ಕಂಡೋತ್, ಪಲ್ಲಿಯತ್, ಆಯಿಲ್ಲಿಯತ್ ಮತ್ತು ಅರಾಯತ್) ಸಮೂಹವಾಗಿದ್ದು, ಅವರು ಎಡತಿಲ್ ಕಡಂಗೋಡನ್ ಮತ್ತು ಪೊನ್ನತ್ತಿಲ್ ಮಾವಿಲ ಅವರ ವಂಶಸ್ಥರಾಗಿದ್ದರು ಮತ್ತು ಪೊಯನಾಡಿನ ಮುಖ್ಯಸ್ಥರಾಗಿದ್ದರು. "ಅಚ್ಚನ್ಮಾರ್" ನಂತರ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ವಿಶೇಷ ಆರೈಕೆಯಲ್ಲಿ ಬಂದರು. <ref name="Logan">{{Cite book|title=ಮಲಬಾರ್ ಕೈಪಿಡಿ (ಸಂಪುಟ-I)|last=ಲೋಗನ್|first=ವಿಲಿಯಮ್|publisher=ಏಷ್ಯನ್ ಎಜುಕೇಷನಲ್ ಸರ್ವಿಸಸ್|year=2010|isbn=9788120604476|location=ನವ ದೆಹಲಿ|pages=631–666}}</ref>
[[ಕೊಲತ್ತಿರಿ]] ಪ್ರಭುತ್ವದ ಅತ್ಯಂತ ಉತ್ತರದ ಭಾಗದಲ್ಲಿರುವ [[ನಿಲೇಶ್ವರಂ]] ರಾಜವಂಶವು ಆರಂಭಿಕ ಮಧ್ಯಯುಗದಲ್ಲಿ ಕೊಲತ್ತುನಾಡು ಮತ್ತು [[ಕ್ಯಾಲಿಕಟ್]]ನ [[ಜಾಮೋರಿನ್]] ಇಬ್ಬರಿಗೂ ಸಂಬಂಧಿಸಿತ್ತು.<ref name="Neeleswaram fete">{{cite news|url=http://www.thehindu.com/todays-paper/tp-national/tp-kerala/neeleswaram-fete-to-showcase-its-heritage/article2645520.ece | title=ನಿಲೇಶ್ವರಂ ಉತ್ಸವವು ಅದರ ಪರಂಪರೆಯನ್ನು ಪ್ರದರ್ಶಿಸಲಿದೆ | author=ದ ಹಿಂದೂ ಸ್ಟಾಫ್ ರಿಪೋರ್ಟರ್ | website=ದ ಹಿಂದೂ | date=21 November 2011 | access-date=24 November 2016 }}</ref>
===ಬ್ರಿಟಿಷ್ ವಸಾಹತು ಮತ್ತು ನಂತರದ ಘಟನೆಗಳು===
[[File:Wellington, soldier and statesman, and the revival of the military power of England (1904) (14593177119).jpg|left|thumbnail|1804 ರಲ್ಲಿ [[ಭಾರತ]]ದ ಹಳೆಯ ನಕ್ಷೆ. ಪ್ರಸ್ತುತ [[ಕೇರಳ]] ರಾಜ್ಯದೊಳಗೆ [[ತಲಶ್ಶೇರಿ]], [[ಕೋಝಿಕ್ಕೋಡ್]], ಮತ್ತು [[ಕೊಚ್ಚಿ]] ಮಾತ್ರ ನಗರಗಳಾಗಿ ಗುರುತಿಸಲ್ಪಟ್ಟಿವೆ ಎಂಬುದನ್ನು ಗಮನಿಸಿ.]]
ಕೊಲತ್ತುನಾಡಿನ ಬ್ರಿಟಿಷ್ ವಸಾಹತಿಗೆ ಕಾರಣವಾದ 1689 ಮತ್ತು 2000 ರ ನಡುವಿನ ಪ್ರಮುಖ ಘಟನೆಗಳು.<ref>{{cite journal |author=B. ಸ್ವಾಯಿ |year=1985 |title=ಕೊಲತ್ತುನಾಡಿನಿಂದ ಚಿರಕ್ಕಲ್ಗೆ: ಬ್ರಿಟಿಷ್ ವ್ಯಾಪಾರಿ ಬಂಡವಾಳ ಮತ್ತು ಟೆಲ್ಲಿಚೇರಿಯ ಹಿನ್ನಾಡು, 1694–1766 |journal=ಸ್ಟಡೀಸ್ ಇನ್ ಹಿಸ್ಟರಿ |volume=1 |pages=87–110 |doi=10.1177/025764308500100107|s2cid=161182476 }}</ref>
'''1689''': [[ಕೊಲತ್ತಿರಿ ರಾಜ]] ಮತ್ತು ಅವನ [[ಪ್ರಿನ್ಸ್ ರೀಜೆಂಟ್]] (ವಡಕ್ಕಾಲಂಕೂರ್), ನಂತರದವನನ್ನು ಅವನ ವಿರೋಧಿ [[ಕುರಂಗೋತ್ ನಾಯರ್]]ನಿಂದ ರಕ್ಷಿಸಲು, ಮಲಬಾರ್ನಲ್ಲಿನ ಆಗಿನ ಬ್ರಿಟಿಷ್ ಮಧ್ಯಪ್ರವೇಶಕರಿಗೆ ಅವರು ಪ್ರದೇಶದಲ್ಲಿ ವ್ಯಾಪಾರವನ್ನು ಮುಂದುವರಿಸಬಹುದು ಎಂದು ತಿಳಿಸಲು ಅಂತಿಮ ಎಚ್ಚರಿಕೆಯನ್ನು ಕಳುಹಿಸಿದನು, ಆದರೆ ಅವರು ಪ್ರದೇಶದಲ್ಲಿ ಕಾರ್ಖಾನೆಯನ್ನು ನಿರ್ಮಿಸಲು ಒಪ್ಪಿದರೆ ಮಾತ್ರ.
'''1708''': [[ತಲಶ್ಶೇರಿ ಕೋಟೆ]]ಯ ಪೂರ್ಣಗೊಳಿಸುವಿಕೆ.
'''1722''': [[ಮಲಬಾರ್ ಕರಾವಳಿ|ಮಲಬಾರ್]]ನಲ್ಲಿ ತಮ್ಮ ಆಸಕ್ತಿಯನ್ನು ರಕ್ಷಿಸಲು ಕಾರ್ಖಾನೆಗೆ ಫ್ರೆಂಚ್ ಹಕ್ಕು ಸಾಧಿಸಲಾಯಿತು [[ಮಾಹೆ, ಭಾರತ|ಮಾಹೆ]]ಯಲ್ಲಿ. ಅವರು [[ತಲಶ್ಶೇರಿ]]ಯಿಂದ ಕೇವಲ ಮೂರು ಮೈಲಿ ದಕ್ಷಿಣದಲ್ಲಿರುವ ಮಾಹೆಯಲ್ಲಿ ಕಾರ್ಖಾನೆಯನ್ನು ಸ್ಥಾಪಿಸುವ ಉದ್ದೇಶದಿಂದ [[ವಡಕರ|ಬಡಗರ]]ನ [[ವಾಝುನೋರ್]] ವಿರುದ್ಧ ಯುದ್ಧವನ್ನು ಪ್ರಾರಂಭಿಸಿದರು. ಕೊಲತ್ತಿರಿಯು ಈಸ್ಟ್ ಇಂಡಿಯಾ ಕಂಪನಿಗೆ 'ತನ್ನ ಪ್ರದೇಶದಲ್ಲಿನ ಎಲ್ಲಾ ವ್ಯಾಪಾರಗಳು ಮತ್ತು ಕೃಷಿಗಳನ್ನು' '[[ಕನ್ಹರೋಟ್]]ನಿಂದ [[ಪುದುಪಟ್ಟಣಂ ನದಿ]]ಯ ಕೆಳಗೆ' ನೀಡಿದನು, ಅಲ್ಲಿ ಡಚ್ಚರು ಕಣ್ಣೂರಿನಲ್ಲಿ ನೆಲೆಸಿದ್ದ ಪ್ರದೇಶಗಳನ್ನು ಹೊರತುಪಡಿಸಿ. ತಮ್ಮ ಸೌಕರ್ಯಗಳಲ್ಲಿ ಹಸ್ತಕ್ಷೇಪ ಮಾಡುವ 'ಯಾವುದೇ ಇತರ ಅಪರಿಚಿತರನ್ನು' 'ಶಿಕ್ಷಿಸಲು, ತಡೆಯಲು ಮತ್ತು ಓಡಿಸಲು' ಬ್ರಿಟಿಷರಿಗೂ ಅಧಿಕಾರ ನೀಡಲಾಯಿತು.
'''1725''': [[ಫ್ರಾನ್ಸ್|ಫ್ರೆಂಚ್]] ವಾಝುನೋರ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಮಾಹೆಯಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿದರು.
'''1720ರ ದಶಕ''' [[ಅರಕ್ಕಲ್|ಅರಕ್ಕಲ್ ರಾಜ]]ನ [[ಅಲಿ ರಾಜರು|ಅಲಿ ರಾಜ]] ಆಗಿನ ಕೊಲತ್ತುನಾಡಿನ ಪ್ರಿನ್ಸ್ ರೀಜೆಂಟ್, [[ಕುನ್ಹಿ ಹೋಮೋ]] ಮೇಲೆ ದಾಳಿ ಮಾಡಿದನು ಮತ್ತು ಅವನು ಬ್ರಿಟಿಷರನ್ನು ಸಹಾಯಕ್ಕಾಗಿ ಸಂಪರ್ಕಿಸಿದನು, ಪ್ರತಿಯಾಗಿ ತನ್ನ ಚಿಕ್ಕಪ್ಪ ಕೊಲತ್ತಿರಿಯು ಅವರಿಗೆ ನೀಡಿದ ಸವಲತ್ತುಗಳು ಮತ್ತು ಕಾರ್ಖಾನೆಗೆ.
'''ಆಗಸ್ಟ್ 1727''': [[ತಲಶ್ಶೇರಿ]]ಯ ಮುಖ್ಯಸ್ಥರು ಪ್ರಿನ್ಸ್ ರೀಜೆಂಟ್ಗೆ ಸ್ಥಳೀಯ ಪ್ರಭುಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಯುದ್ಧಗಳನ್ನು ನಡೆಸಲು ಸ್ಫೋಟಕಗಳನ್ನು ಪೂರೈಸುವುದು [[ಬಾಂಬೆ ಪ್ರೆಸಿಡೆನ್ಸಿ]]ಯ ನೀತಿಯಾಗಿದೆ ಎಂದು ತಿಳಿಸುತ್ತಾರೆ.
'''1728''' ತಲಶ್ಶೇರಿಯ ಮುಖ್ಯಸ್ಥ, [[ಆಡಮ್ಸ್ (ತಲಶ್ಶೇರಿಯ ಮುಖ್ಯಸ್ಥ)|ಆಡಮ್ಸ್]] ಅವರನ್ನು [[ಬಾಂಬೆ]]ಗೆ ಮರುಕರೆಯಲಾಯಿತು ಮತ್ತು ಪ್ರಿನ್ಸ್ ರೀಜೆಂಟ್ [[ಕೊಚ್ಚಿ]]ನಲ್ಲಿನ [[ನೆದರ್ಲ್ಯಾಂಡ್ಸ್|ಡಚ್]]ರಿಂದ ಮಿಲಿಟರಿ ಸಹಾಯವನ್ನು ಕೋರಿದನು. ಡಚ್ಚರು ಪ್ರತಿಯಾಗಿ [[ಧರ್ಮಪಟ್ಟಣಂ]] ಬಂದರನ್ನು ಬೇಡಿದರು. [[ಈಸ್ಟ್ ಇಂಡಿಯಾ ಕಂಪನಿಯು]] ಡಚ್ ಪ್ರಭಾವಕ್ಕೆ ಹೆದರಿ ಕೊಲತ್ತುನಾಡಿಗೆ 20,000 ಫಾನಮ್ಗಳ ಮಿಲಿಟರಿ ಸಾಮಗ್ರಿಗಳನ್ನು ಪೂರೈಸಿತು ಮತ್ತು [[ಅಲಿ ರಾಜ]] ಮೌನವಾದನು. ಬದಲಾಗಿ ಬ್ರಿಟಿಷರಿಗೆ ಕೊಲತ್ತುನಾಡಿನಲ್ಲಿ ಮಸಾಲೆಗಳನ್ನು ಖರೀದಿಸಲು ಇತರ ಯುರೋಪಿಯನ್ನರಿಗಿಂತ ವಿಶೇಷ ಅನುಮತಿಯನ್ನು ಪ್ರಿನ್ಸ್ [[ಉದಯ ವರ್ಮನ್]] ನೀಡಿದರು.
'''1732-34''': 1732 ರಲ್ಲಿ [[ಕನ್ನಡಿಗರು]] [[ಕೊಲತ್ತುನಾಡಿನ]] ಮುಖ್ಯಸ್ಥ [[ಕುನ್ಹಿ ಹೋಮೋ]]ನ ಕೋಟೆಗಳನ್ನು ಸುಲಭವಾಗಿ ಆಕ್ರಮಿಸಿಕೊಂಡರು. 1734 ರ ಆರಂಭದಲ್ಲಿ ಕನ್ನಡಿಗ ಸೈನಿಕರು [[ಕುದಾಲಿ]] ಮತ್ತು [[ಧರ್ಮಪಟ್ಟಣಂ]] ಅನ್ನು ವಶಪಡಿಸಿಕೊಂಡರು.
'''1736''': ಬ್ರಿಟಿಷರ ಸಹಾಯದಿಂದ ಕನ್ನಡಿಗ ಸೈನ್ಯವನ್ನು ಸಂಪೂರ್ಣ ಉತ್ತರದಿಂದ ಹೊರಹಾಕಲಾಯಿತು ಆದರೆ ಪ್ರಿನ್ಸ್ ರೀಜೆಂಟ್ ಇದರ ಪರಿಣಾಮವಾಗಿ ತೆಲ್ಲಿಚೇರಿಯಲ್ಲಿನ ಅಂಶಗಳಿಗೆ ಭಾರಿ ಸಾಲವನ್ನು ಹೊಂದುತ್ತಾನೆ.
'''1737''': [[ಬೆಡ್ನೂರಿನ ನಾಯಕರು]] ಕೊಲತ್ತುನಾಡಿನ ಮೇಲೆ ಮತ್ತೊಂದು ದಾಳಿಯನ್ನು ಯೋಜಿಸುತ್ತಾರೆ. ಪ್ರಿನ್ಸ್ [[ಕುನ್ಹಿ ಹೋಮೋ]] ಕನ್ನಡಿಗರೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡನು, ಇದು ಕೊಲತ್ತುನಾಡಿನ ಉತ್ತರ ಗಡಿಯನ್ನು [[ಮಡ್ಡಾಯ್]]ನಲ್ಲಿ ನಿಗದಿಪಡಿಸಿತು. ಟೆಲ್ಲಿಚೇರಿಯ ಅಂಶಗಳು [[ಬೆಡಾನೂರ್]]ನ ನಾಯಕನೊಂದಿಗೆ ತಮ್ಮದೇ ಆದ ಒಪ್ಪಂದಕ್ಕೆ ಸಹಿ ಹಾಕಿದವು, ಇದು ಕನ್ನಡಿಗರು ಮತ್ತು ಕೊಲತ್ತುನಾಡಿನ ಆಡಳಿತಗಾರರ ನಡುವಿನ ಭವಿಷ್ಯದ ಸಂಘರ್ಷಗಳ ಸಂದರ್ಭದಲ್ಲಿ ಮಲಬಾರ್ನಲ್ಲಿ ಬ್ರಿಟಿಷ್ ವ್ಯಾಪಾರ ಸೌಲಭ್ಯಗಳ ಸಮಗ್ರತೆಯನ್ನು ಖಾತರಿಪಡಿಸಿತು.
'''1739-42''' ಪ್ರಿನ್ಸ್ ಒಕ್ಕೂ, ಫ್ರೆಂಚ್ ಬೆಂಬಲಿತ ಪ್ರಿನ್ಸ್ ರೀಜೆಂಟ್ನ ವಿರೋಧಿ ಮತ್ತು ಅವನ ಅನುಯಾಯಿಗಳನ್ನು ಟೆಲ್ಲಿಚೇರಿಯ ಅಂಶಗಳು ಕೊಂದರು.
'''1741''' ಪ್ರಿನ್ಸ್ ರೀಜೆಂಟ್ ತನ್ನ ಸಾಮಂತರಾದ [[ರಂಡು ತರ ಅಚ್ಚನ್ಮಾರ್|ರಂಡುತರದ ಅಚ್ಚನ್ಮಾರ್]]ಗಳಿಗೆ ರಾಜ್ಯದ ಸಾಲವನ್ನು ತೀರಿಸಲು 30,000 [[ಫಾನಮ್ಗಳನ್ನು]] ಕೊಡುಗೆಯಾಗಿ ನೀಡುವಂತೆ ಕೇಳಿದನು. [[ಅಚ್ಚನ್ಮಾರ್]]ಗಳು ನಿರಾಕರಿಸಿದರು. ಪ್ರಿನ್ಸ್ ರೀಜೆಂಟ್ ಅಚ್ಚನ್ಮಾರ್ಗಳು ಒಪ್ಪದ ಹೊರತು [[ರಂಡುತರ]]ದಲ್ಲಿ ಕಂದಾಯ ವಸೂಲಿಯನ್ನು ವಹಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದನು. ಬ್ರಿಟಿಷರು ಅಚ್ಚನ್ಮಾರ್ಗಳ ಪರವಾಗಿ ಪ್ರಿನ್ಸ್ ರೀಜೆಂಟ್ಗೆ 30,000 ಫಾನಮ್ಗಳ ಮೊತ್ತವನ್ನು ರಂಡುತರದ ಭೂ ಕಂದಾಯ ವಸೂಲಿಗೆ ಬದಲಾಗಿ ಪಾವತಿಸಲು ವ್ಯವಸ್ಥೆ ಮಾಡಿದರು. ಹೀಗೆ ಸಾಲದ ಬಲೆಯು ಬ್ರಿಟಿಷರು ಮಲಬಾರ್ನಲ್ಲಿ ವ್ಯಾಪಾರದ ಏಕಸ್ವಾಮ್ಯವನ್ನು ಸುರಕ್ಷಿತಗೊಳಿಸಲು ಬಳಸಿದ ಪ್ರಮುಖ ಸಾಧನವಾಗಿತ್ತು.
'''1745''': ಟೆಲ್ಲಿಚೇರಿಯ ಅಂಶಗಳು ಕೊಲತ್ತುನಾಡಿನ ಸಾಮಂತರೊಂದಿಗೆ ಬೆಳೆಸುತ್ತಿದ್ದ ನೇರ ಸಂಬಂಧಗಳು, ಆದಾಗ್ಯೂ, ಕೊಲತ್ತಿರಿಯನ್ನು ಅಪರಿಚಿತಗೊಳಿಸುವ ಪ್ರವೃತ್ತಿಯನ್ನು ಹೊಂದಿದ್ದವು. ಕೊಲತ್ತುನಾಡಿನ ಪ್ರಿನ್ಸ್ ರೀಜೆಂಟ್ ಟೆಲ್ಲಿಚೇರಿಯ ಅಂಶಗಳು 'ತನ್ನ ದೇಶದ ಆಡಳಿತದಲ್ಲಿ ಹೆಚ್ಚು ಮಧ್ಯಪ್ರವೇಶಿಸುತ್ತಿದ್ದಾರೆ' ಎಂದು ಆರೋಪಿಸಿದನು.
'''1746''': ಪ್ರಿನ್ಸ್ ಉದಯ ವರ್ಮನ್ ಅವರ ಮರಣ. ಕೊಲತ್ತಿರಿಯ ಪ್ರಭುತ್ವದ ವಿಘಟನೆಯು ಪ್ರಾರಂಭವಾಗಿತ್ತು ಮತ್ತು ಇಂಗ್ಲಿಷರು ರಾಜಮನೆತನದಲ್ಲಿ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿದರು. ಬ್ರಿಟಿಷರು ರಾಜಮನೆತನದ ಸಹವರ್ತಿಗಳ ಮೂಲಕ ಹೆಚ್ಚು ಹೆಚ್ಚು ಪ್ರದೇಶವನ್ನು ಭೂಮಿಯನ್ನು ಖರೀದಿಸುವ ಮೂಲಕ ನಿಯಂತ್ರಣವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.
'''ಅಕ್ಟೋಬರ್ 1747''': ಕೊಲತ್ತಿರಿ ಮತ್ತು ಟೆಲ್ಲಿಚೇರಿಯಲ್ಲಿನ ಅಂಶಗಳ ನಡುವಿನ ಸಣ್ಣ ಯುದ್ಧ, ಅವರು [[ಪ್ರಿನ್ಸ್ ರಾಮನ್ ಉನಿತಿರಿ]]ಯನ್ನು ಬಳಸಿ [[ಸಮಸ್ತಾನೋಂ]]ನಲ್ಲಿ 'ಬ್ರಿಟಿಷ್ ವಿರೋಧಿ ಮಂತ್ರಿಗಳನ್ನು' 'ಶಿಕ್ಷಿಸಿದರು'. ಪ್ರಿನ್ಸ್ [[ಕುನ್ಹಿ ಹೋಮೋಸ್|ಕುನ್ಹಿ ಹೋಮೋಸ್]] ಮರಣದ ನಂತರ ಉತ್ತರಾಧಿಕಾರದಿಂದಾಗಿ, [[ಪ್ರಿನ್ಸ್ ಕುನ್ಹಿ ರಾಮನ್]] ಈಸ್ಟ್ ಇಂಡಿಯಾ ಕಂಪನಿಯ ಕಾಳಜಿಗೆ ತನ್ನ ಸಾಮಂತರ ಮೇಲೆ ತನ್ನ ಅಧಿಕಾರವನ್ನು ಮರುಸ್ಥಾಪಿಸಲು ಮಹತ್ವಾಕಾಂಕ್ಷೆಯನ್ನು ಹೊಂದಿದ್ದನು. ತನ್ನ ಅಧಿಕಾರವನ್ನು ಬಲಪಡಿಸಿದ ನಂತರ, ಪ್ರಿನ್ಸ್ ಕುನ್ಹಿ ರಾಮನ್ ಕೊಲತ್ತುನಾಡಿನ ಆಡಳಿತವನ್ನು ಕೇಂದ್ರೀಕರಿಸುವ ನೀತಿಯನ್ನು ಪ್ರಾರಂಭಿಸಿದನು, ಇದರಿಂದಾಗಿ ತನ್ನ ಸಾಮಂತರ ಮೇಲೆ ಹೆಚ್ಚಿನ ಅಧಿಕಾರವನ್ನು ಪಡೆದುಕೊಳ್ಳಲು. ಅಚ್ಚನ್ಮಾರ್ ಇನ್ನು ಮುಂದೆ ತನಗೆ ವಿಧೇಯರಾಗಿಲ್ಲ ಎಂದು ಅವನು ಭಾವಿಸಿದ್ದರಿಂದ ರಂಡುತರದ ಭೂ ಕಂದಾಯವನ್ನು ವಸೂಲಿ ಮಾಡಲು ತನ್ನ ಆಸೆಯನ್ನು ವ್ಯಕ್ತಪಡಿಸಿದನು.
'''1749''': ಪ್ರಿನ್ಸ್ ಕುನ್ಹಿ ರಾಮನ್ [[ಇರುವಾಲಿನಾಡ್]] ಮತ್ತು [[ಕಡತ್ತನಾಡ್]] ತಾಲೂಕುಗಳನ್ನು ಆಡಳಿತಕ್ಕೆ ತನ್ನ ಸ್ವಂತ ಪುತ್ರರನ್ನು ನೇಮಿಸಲು ಬೆದರಿಕೆ ಹಾಕಿದನು. ಅದೇ ವರ್ಷದಲ್ಲಿ, ಆದಾಗ್ಯೂ, [[ಬೋಯಾನೋರ್]] ಕೊಲತ್ತುನಾಡ್ ಅರಮನೆಯೊಂದಿಗಿನ ಸಾಮಂತ್ಯದ ಕೊನೆಯ ಸಂಬಂಧಗಳನ್ನು ಕಡಿದುಕೊಂಡನು ಮತ್ತು ತನ್ನನ್ನು ಕಡತ್ತನಾಡಿನ ರಾಜ ಎಂದು ಘೋಷಿಸಿಕೊಂಡನು. ಇರುವಾಲಿನಾಡ್ನ [[ನಂಬಿಯಾರ್ಗಳು]] ಅದನ್ನು ಅನುಸರಿಸಲು ಬೆದರಿಕೆ ಹಾಕಿದರು. ರಂಡುತರದ ಅಚ್ಚನ್ಮಾರ್ ಹೆಚ್ಚಿನ ರಕ್ಷಣೆಗಾಗಿ ಬ್ರಿಟಿಷರಿಗೆ ಮನವಿ ಮಾಡಿದರು. ಕೊಲತ್ತುನಾಡ್ ವಿಭಜನೆಯಾಗುತ್ತಿತ್ತು. ಕೊಲತ್ತಿರಿ ಮತ್ತು ಅವನ ಪ್ರಿನ್ಸ್ ರೀಜೆಂಟ್ ಕೊಲತ್ತುನಾಡ್ 'ಸರಿಯಾದ' ಪ್ರದೇಶಕ್ಕೆ ಹಿಂತೆಗೆದುಕೊಳ್ಳಲು ಮತ್ತು ಆದ್ದರಿಂದ ತಮ್ಮ ಅಧಿಕಾರವನ್ನು [[ಚಿರಕ್ಕಲ್, ಕಣ್ಣೂರು|ಚಿರಕ್ಕಲ್]]ನ [[ತಾಲೂಕು]] ಆಗಲಿದ್ದಕ್ಕೆ ನಿರ್ಬಂಧಿಸಲು ಒತ್ತಾಯಿಸಲ್ಪಟ್ಟರು.
'''ಏಪ್ರಿಲ್ 1751''': [[ಬೋಯಾನೋರ್]] ರಾಜ ಎಂಬ ಬಿರುದನ್ನು ವಹಿಸಿಕೊಂಡ ನಂತರ, ಪ್ರಿನ್ಸ್ ಕುನ್ಹಿ ರಾಮನ್ ಕಡತ್ತನಾಡ್, ಇರುವಾಲಿನಾಡ್ ಮೇಲೆ ಯುದ್ಧ ಘೋಷಿಸಿದನು, ಅಲ್ಲಿ [[ಈಸ್ಟ್ ಇಂಡಿಯಾ ಕಂಪನಿಯು]] ಮೆಣಸನ್ನು ಖರೀದಿಸುವ ಏಕಸ್ವಾಮ್ಯವನ್ನು ಪಡೆದುಕೊಂಡಿತ್ತು. ಅನೇಕ ಚರ್ಚೆಗಳ ನಂತರ, ಅಂಶಗಳು [[ಥಾಮಸ್ ಡೆರಿಲ್]] ಅವರ ಸಮ್ಮುಖದಲ್ಲಿ ಕೊಲತ್ತಿರಿಯನ್ನು (ಕೊಲತ್ತುನಾಡಿನ ಹಿರಿಯ ರಾಜ) ಪ್ರಿನ್ಸ್ ಕುನ್ಹಿ ರಾಮನನ್ನು ವಜಾ ಮಾಡಲು ಮತ್ತು [[ಅಂಬು ತಂಬನ್]] ಅನ್ನು ಪ್ರಿನ್ಸ್ ರೀಜೆಂಟ್ ಆಗಿ ನೇಮಿಸಲು ಮನವೊಲಿಸುವಲ್ಲಿ ಯಶಸ್ವಿಯಾದರು.
'''ಅಕ್ಟೋಬರ್ 1751''': ಪ್ರಿನ್ಸ್ ಕುನ್ಹಿ ರಾಮನ್ [[ಮೌಂಟ್ ಡೆಲ್ಲಿ]]ಯನ್ನು ಕೋಟೆಗಾಗಿ ಫ್ರೆಂಚರಿಗೆ ಅನುಮತಿಸಿದನು, ಇದರಿಂದಾಗಿ [[ಮಂಗಳೂರು]] ಮತ್ತು [[ಟೆಲ್ಲಿಚೇರಿ]] ನಡುವಿನ ಬ್ರಿಟಿಷ್ ಅಕ್ಕಿ ವ್ಯಾಪಾರವನ್ನು ಅಡ್ಡಿಪಡಿಸಿದನು.
'''ಜನವರಿ 1752''': [[ಕೋಟಿಯೋಟ್]]ನ ರಾಜನು ಟೆಲ್ಲಿಚೇರಿ ಮತ್ತು ಕೊಲತ್ತುನಾಡ್ ನಡುವೆ ಸಮಾಧಾನಕ್ಕಾಗಿ ಮಧ್ಯಸ್ಥಿಕೆ ವಹಿಸಿದನು.
'''1756''': ಪ್ರಿನ್ಸ್ ಕುನ್ಹಿ ರಾಮನ ಮರಣ ಮತ್ತು ಪ್ರಿನ್ಸ್ ರಾಮ ವರ್ಮನ ಉತ್ತರಾಧಿಕಾರ.
'''1760''': ಪ್ರಿನ್ಸ್ ರಾಮ ವರ್ಮನ ಮರಣ
'''ಆಗಸ್ಟ್ 1760''': ಉನಾನಾಮೆನ್ ತಂಬನ್ (ಹೊಸ ಪ್ರಿನ್ಸ್ ರೀಜೆಂಟ್) ಕೊಲತ್ತುನಾಡ್ ರಾಜ್ಯದಲ್ಲಿ ಬ್ರಿಟಿಷ್ ಪರ ಗುಂಪಿನ ನಾಯಕ ಸಿಬೆನ್ ಪುಟ್ಟೇಯ್ಯನನ್ನು ಕುರುಡನನ್ನಾಗಿ ಮಾಡಿದನು.
'''1761''': [[ಕೊಲತ್ತಿರಿ]] ಪ್ರಿನ್ಸ್ ರೀಜೆಂಟ್ ಅನ್ನು ವಜಾ ಮಾಡಿ ನೇರವಾಗಿ ಕೊಲತ್ತುನಾಡ್ ರಾಜ್ಯವನ್ನು ವಹಿಸಿಕೊಂಡನು ಮತ್ತು [[ಸಮಸ್ತಾನೋಂ]] ಪರವಾಗಿ [[ಉತ್ತರ ಮಲಬಾರ್]]ನ ಎಲ್ಲಾ ಸುಂಕದ ಕರ್ತವ್ಯಗಳನ್ನು ಸಂಗ್ರಹಿಸುವ ಹಕ್ಕನ್ನು ಬ್ರಿಟಿಷರಿಗೆ ನೀಡಿದನು. 1761 ರಲ್ಲಿ, ಬ್ರಿಟಿಷರು [[ಮಾಹೆ, ಭಾರತ|ಮಾಹೆ]]ಯನ್ನು ವಶಪಡಿಸಿಕೊಂಡರು ಮತ್ತು ವಸಾಹತುವನ್ನು [[ಕಡತನಾಡು]]ನ ಆಡಳಿತಗಾರನಿಗೆ ಹಸ್ತಾಂತರಿಸಲಾಯಿತು.<ref name="Mahé"/>
'''1763''':ಬ್ರಿಟಿಷರು 1763 ರ ಪ್ಯಾರಿಸ್ ಒಪ್ಪಂದದ ಭಾಗವಾಗಿ [[ಮಾಹೆ, ಭಾರತ|ಮಾಹೆ]]ಯನ್ನು ಫ್ರೆಂಚರಿಗೆ ಹಿಂದಿರುಗಿಸಿದರು.<ref name="Mahé"/>
'''1764''': [[ಚಿರಕ್ಕಲ್ನ ಪ್ರಿನ್ಸ್]] ಕೊಲತ್ತುನಾಡಿನ ಆಡಳಿತವನ್ನು ವಹಿಸಿಕೊಂಡನು.
'''1765''': ಚಿರಕ್ಕಲ್ನ ಪ್ರಿನ್ಸ್ [[ರಂಡುತರ]] ತಾಲೂಕಿನಲ್ಲಿ ಟೆಲ್ಲಿಚೇರಿಯ ಪ್ರಬಲ ಸ್ಥಾನವನ್ನು ಗುರುತಿಸಿದನು, ಪ್ರದೇಶವನ್ನು ಈಸ್ಟ್ ಇಂಡಿಯಾ ಕಂಪನಿಗೆ ಬಿಟ್ಟುಕೊಟ್ಟನು.
'''ಫೆಬ್ರವರಿ 1766''': [[ಹೈದರ್ ಅಲಿ]] ಒಂದು ಪ್ರಬಲ ಪಡೆಯೊಂದಿಗೆ [[ಅಲಿ ರಾಜ]] ಕಣ್ಣೂರಿನಿಂದ ಕೇರಳಕ್ಕೆ ಸ್ವಾಗತಿಸಲ್ಪಟ್ಟನು. [[ಮೈಸೂರು ಸೈನ್ಯ]] ಅಲಿ ರಾಜ ಮತ್ತು ಅವನ ಸಹೋದರನ ಮಾರ್ಗದರ್ಶನದಲ್ಲಿ [[ಚಿರಕ್ಕಲ್, ಕಣ್ಣೂರು|ಚಿರಕ್ಕಲ್]]ನಲ್ಲಿ ಕೊಲತ್ತಿರಿ ರಾಜನ ಅರಮನೆಯನ್ನು ವಶಪಡಿಸಿಕೊಂಡಿತು. ರಾಜ ಮತ್ತು ಅವನ ಕುಟುಂಬವು ತಲಶ್ಶೇರಿಯಲ್ಲಿನ ಇಂಗ್ಲಿಷ್ ವ್ಯಾಪಾರ ಕೇಂದ್ರದಲ್ಲಿ ಆಶ್ರಯ ಪಡೆಯಲು ದಕ್ಷಿಣಕ್ಕೆ ಪಲಾಯನ ಮಾಡಿದರು. ಅವರು ಅಲಿ ರಾಜನನ್ನು ತಮ್ಮ ನೌಕಾ ಮುಖ್ಯಸ್ಥ (ಹೈ ಅಡ್ಮಿರಲ್) ಆಗಿ ಮತ್ತು ರಾಜನ ಸಹೋದರ [[ಶೇಕ್ ಅಲಿ]] ಅವರನ್ನು ಬಂದರು ಪ್ರಾಧಿಕಾರದ ಮುಖ್ಯಸ್ಥ (ನೌಕಾ ವ್ಯವಸ್ಥಾಪಕ) ಆಗಿ ನೇಮಿಸಿದರು.
'''1773''': ಹೈದರ್ ಅಲಿ 1768 ರಲ್ಲಿ ಒಪ್ಪಿದಂತೆ ಮಲಬಾರ್ನ ರಾಜರು ಅವನಿಗೆ ಕಪ್ಪ ಕಾಣಿಕೆಯನ್ನು ಪಾವತಿಸದ ಕಾರಣ 1773 ರಲ್ಲಿ ಎರಡನೇ ಬಾರಿಗೆ ಮಲಬಾರ್ ಅನ್ನು ಆಕ್ರಮಿಸಿದನು.<ref name = "NM11"/>
'''1779''': 1779 ರಲ್ಲಿ, ಆಂಗ್ಲೋ-ಫ್ರೆಂಚ್ ಯುದ್ಧ ಪ್ರಾರಂಭವಾಯಿತು, ಇದರ ಪರಿಣಾಮವಾಗಿ ಫ್ರೆಂಚರು [[ಮಾಹೆ, ಭಾರತ|ಮಾಹೆ]]ಯನ್ನು ಕಳೆದುಕೊಂಡರು.<ref name="Mahé"/>
'''1783''': 1783 ರಲ್ಲಿ, ಬ್ರಿಟಿಷರು ತಮ್ಮ ವಸಾಹತುಗಳನ್ನು ಫ್ರೆಂಚರಿಗೆ ಹಿಂದಿರುಗಿಸಲು ಒಪ್ಪಿಕೊಂಡರು.
'''1785''': [[ಮಾಹೆ, ಭಾರತ|ಮಾಹೆ]]ಯನ್ನು 1785 ರಲ್ಲಿ ಫ್ರೆಂಚರಿಗೆ ಹಸ್ತಾಂತರಿಸಲಾಯಿತು.<ref name="Mahé">{{cite web|url=http://mahe.gov.in/mws/leftmenupages/history.html|title=ಮಾಹೆಯ ಇತಿಹಾಸ|access-date=19 April 2021|url-status=dead|archive-url=https://web.archive.org/web/20131230232052/http://mahe.gov.in/mws/leftmenupages/history.html|archive-date=30 December 2013}}</ref>
'''ಫೆಬ್ರವರಿ 1789''': [[ಟಿಪು ಸುಲ್ತಾನ್]] ಎಲ್ಲಾ ರಾಜರು ಮತ್ತು ಉತ್ತರ ಮಲಬಾರ್ನ ಮುಖ್ಯಸ್ಥರು ದಂಗೆ ಎದ್ದು [[ಮೈಸೂರು]]ನಿಂದ ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿದ್ದರಿಂದ ಎರಡನೇ ಬಾರಿಗೆ ಮಲಬಾರ್ ಅನ್ನು ಪ್ರವೇಶಿಸಿದನು. ಅವನು ಕಡತನಾಡನ್ನು ಧ್ವಂಸಗೊಳಿಸಿದನು ಮತ್ತು ತನ್ನ ಮಗ (ಅಬ್ದುಲ್ ಖಲಿಕ್) ಅನ್ನು ಕಣ್ಣೂರಿನ [[ಅರಕ್ಕಲ್ ಬೀಬಿ]]ಯ ಮಗಳೊಂದಿಗೆ ವಿವಾಹ ಮಾಡಿದನು. ಕೊಲತ್ತಿರಿ ಕುಟುಂಬದ ಒಬ್ಬ ರಾಜಕುಮಾರನು ಅವನ ತಪ್ಪಿಸಿಕೊಳ್ಳುವ ಸಮಯದಲ್ಲಿ [[ಟಿಪ್ಪು ಸುಲ್ತಾನ್|ಟಿಪ್ಪು]]ನ ಸೈನಿಕರಿಂದ ಕೊಲ್ಲಲ್ಪಟ್ಟನು ಮತ್ತು ಅವನ ಶವವನ್ನು ಆನೆಗಳಿಂದ ಟಿಪ್ಪುನ ಶಿಬಿರದ ಮೂಲಕ ಎಳೆಯಲಾಯಿತು ಮತ್ತು ಅದನ್ನು ನಂತರ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಅವನ ಹದಿನೇಳು ಅನುಯಾಯಿಗಳೊಂದಿಗೆ ಮರದ ಮೇಲೆ ನೇತುಹಾಕಲಾಯಿತು.
'''ಮೇ 1790''': ಟಿಪು ಮಲಬಾರ್ ಅನ್ನು ತೊರೆದನು, ಎಂದಿಗೂ ಹಿಂತಿರುಗಲಿಲ್ಲ.
[[File:Madras Prov 1859.gif|thumb|right|[[ಬ್ರಿಟಿಷ್ ರಾಜ್|ಬ್ರಿಟಿಷ್ ಭಾರತ]]ದಲ್ಲಿ [[ಮದ್ರಾಸ್ ಪ್ರಾಂತ್ಯ]]ದ 19ನೇ ಶತಮಾನದ ನಕ್ಷೆ]]
'''ಮಾರ್ಚ್ 1792''': ಮಲಬಾರ್ ಅನ್ನು ಬ್ರಿಟಿಷರಿಗೆ ಅಧಿಕೃತವಾಗಿ ಬಿಟ್ಟುಕೊಡಲಾಯಿತು. ಬ್ರಿಟಿಷರು [[ಚಿರಕ್ಕಲ್, ಕಣ್ಣೂರು|ಚಿರಕ್ಕಲ್]], ಕೊಟ್ಟಾಯಂ ಮತ್ತು [[ಕಡತನಾಡ್]]ನ ರಾಜರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡರು ಮತ್ತು ಅವರೆಲ್ಲರೂ ತಮ್ಮ ಸಂಬಂಧಿತ ಪ್ರದೇಶಗಳ ಮೇಲಿನ ಕಂಪನಿಯ ಸಂಪೂರ್ಣ ಸಾರ್ವಭೌಮತ್ವವನ್ನು ಒಪ್ಪಿಕೊಂಡರು. [[ಬ್ರಿಟಿಷ್ ಸರ್ಕಾರ]]ವು ಮಲಬಾರ್ ಪ್ರಾಂತ್ಯವನ್ನು ಎರಡು ಆಡಳಿತ ವಿಭಾಗಗಳಾಗಿ ವಿಂಗಡಿಸಿತು - [[ಉತ್ತರ ಮಲಬಾರ್|ಉತ್ತರ]] ಮತ್ತು [[ದಕ್ಷಿಣ ಮಲಬಾರ್|ದಕ್ಷಿಣ]], ಪ್ರತಿಯೊಂದೂ ತಲಶ್ಶೇರಿ ಮತ್ತು [[ಚೇರ್ಪುಲಸ್ಸೇರಿ]]ನಲ್ಲಿ ಅಧೀಕ್ಷಕರ ಅಧ್ಯಕ್ಷತೆಯಲ್ಲಿ, ಮಲಬಾರ್ ಪ್ರಾಂತ್ಯದ ಮೇಲ್ವಿಚಾರಕ ಮತ್ತು ಮುಖ್ಯ ನ್ಯಾಯಾಧೀಶರ ಸಾಮಾನ್ಯ ನಿಯಂತ್ರಣದಲ್ಲಿ, ಅವರು ಕ್ಯಾಲಿಕಟ್ನಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿದ್ದರು.
'''1800''': ಮಲಬಾರ್ ಅನ್ನು [[ಮದ್ರಾಸ್ ಪ್ರೆಸಿಡೆನ್ಸಿ]]ಯ ಭಾಗವನ್ನಾಗಿ ಮಾಡಲಾಯಿತು.
'''1801''': ತನ್ನ ಎಲ್ಲಾ ಪ್ರಭುತ್ವಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟ ಕೊನೆಯ ಕೊಲತ್ತಿರಿ ರಾಜನ ಮರಣ (ಸಾಮಾನ್ಯವಾಗಿ [[ಚಿರಕ್ಕಲ್ನ ಮೊದಲ ರಾಜ]] ಎಂದು ಕರೆಯಲ್ಪಡುತ್ತಿದ್ದನು). ಮೇಜರ್ ಮ್ಯಾಕ್ಲಿಯೋಡ್ 1 ಅಕ್ಟೋಬರ್ 1801 ರಂದು ಮಲಬಾರ್ನ ಮೊದಲ ಪ್ರಧಾನ ಸಂಗ್ರಾಹಕನಾಗಿ ಅಧಿಕಾರ ವಹಿಸಿಕೊಂಡನು.
ಕೊಲತ್ತುನಾಡ್ 1947 ರವರೆಗೆ ಮದ್ರಾಸ್ ಪ್ರೆಸಿಡೆನ್ಸಿಯಡಿಯಲ್ಲಿ ಬ್ರಿಟಿಷ್ ಭಾರತದ ಆಡಳಿತ ಜಿಲ್ಲೆಯಾದ [[ಮಲಬಾರ್ ಜಿಲ್ಲೆ]]ಯ ಭಾಗವಾಗಿ ಉಳಿಯಿತು ಮತ್ತು ನಂತರ 1956 ರವರೆಗೆ ಭಾರತದ [[ಮದ್ರಾಸ್ ರಾಜ್ಯ]]ದ ಭಾಗವಾಗಿತ್ತು. 1 ನವೆಂಬರ್ 1956 ರಂದು, [[ರಾಜ್ಯ ಪುನರ್ರಚನೆ ಕಾಯ್ದೆ]]ಯಿಂದ ಮಲಬಾರ್ ಜಿಲ್ಲೆ, [[ತಿರುವಾಂಕೂರು-ಕೊಚ್ಚಿ]] (ನಾಲ್ಕು ದಕ್ಷಿಣ ತಾಲೂಕುಗಳನ್ನು ಹೊರತುಪಡಿಸಿ, ಅವುಗಳನ್ನು [[ಮದ್ರಾಸ್ ರಾಜ್ಯ]]ದೊಂದಿಗೆ ವಿಲೀನಗೊಳಿಸಲಾಯಿತು) ಅನ್ನು ವಿಲೀನಗೊಳಿಸುವ ಮೂಲಕ ಕೇರಳ ರಾಜ್ಯವನ್ನು ರಚಿಸಲಾಯಿತು.
==ಕೊಲತ್ತಿರಿ ಕುಟುಂಬದ ಸಂವಿಧಾನ==
17ನೇ ಶತಮಾನದ ವೇಳೆಗೆ, ಕೋಲಸ್ವರೂಪಂ ತನ್ನ ರಾಜಕೀಯ ಅಧಿಕಾರವನ್ನು ಉತ್ತರ ಕೇರಳದ ಇತರ ಎರಡು ವಂಶಾವಳಿಗಳೊಂದಿಗೆ ಹಂಚಿಕೊಳ್ಳಬೇಕಾಯಿತು. ನಿಲೇಶ್ವರಂ (ಅಲ್ಲದಂ) ಸ್ವರೂಪಂ ಮತ್ತು ಅರಕ್ಕಲ್ ಸ್ವರೂಪಂ ಸ್ವತಂತ್ರ ರಾಜಕೀಯ ಗುರುತನ್ನು ಹೇಳಿಕೊಂಡವು. ಇದಲ್ಲದೆ, ಕೋಲಸ್ವರೂಪಂನೊಳಗಿನ ರಾಜಕೀಯ ಅಧಿಕಾರವು ವಿವಿಧ ಕೊವಿಲಕಂಗಳಲ್ಲಿಯೂ ಪ್ರಸಾರವಾಯಿತು. ಕೇರಳೋಲ್ಪತ್ತಿಯಲ್ಲಿ ಕೋಲಸ್ವರೂಪಂನ ರಾಜಕೀಯ ಅಧಿಕಾರವನ್ನು ಹಂಚಿಕೊಳ್ಳುವ ನಾಲ್ಕು ಕೊವಿಲಕಂಗಳಿವೆ: ತಲೋರ ಕೊವಿಲಕಂ; ಅರತಿಲ್ ಕೊವಿಲಕಂ; ಮುತ್ತತಿಲ್ ಕೊವಿಲಕಂ; ಕರಿಪತು ಕೊವಿಲಕಂ; ಮತ್ತು ಕೋಲತ್ ಕೊವಿಲಕಂ.<ref>ವರಿಯರ್, ಕೇರಳೋಲ್ಪತ್ತಿ ಗ್ರಂಥವರಿ, 52-3</ref> ಕೇರಳೋಲ್ಪತ್ತಿ ಕೊಲತ್ತುನಾಡ್ ಸಂಪ್ರದಾಯದ ಪ್ರಕಾರ, ಕರಿಪತು ಕೊವಿಲಕಂ ಮತ್ತು ಕೋಲತ್ ಕೊವಿಲಕಂ ಉಳಿದವುಗಳಿಗಿಂತ ಕೆಲವು ರೀತಿಯ ಶ್ರೇಷ್ಠತೆಯನ್ನು ಹೇಳಿಕೊಂಡವು. ಆದಾಗ್ಯೂ, ಡಚ್ ದಾಖಲೆಗಳಿಂದ ಸ್ಪಷ್ಟವಾಗಿ ತಿಳಿದುಬರುವಂತೆ, ಕೊಲತ್ತುನಾಡಿನ ರಾಜಕೀಯ ದೃಶ್ಯದಲ್ಲಿ ಪ್ರಾಬಲ್ಯ ಸಾಧಿಸಿದ್ದು ಪಳ್ಳಿ ಕೊವಿಲಕಂ ಮತ್ತು ಉದಯಮಂಗಲಂ ಕೊವಿಲಕಂ. ಈ ಎರಡೂ ಕೊವಿಲಕಂಗಳು ಮತ್ತೆ ವಿವಿಧ ಕೊವಿಲಕಂಗಳಾಗಿ ಶಾಖೆಗಳನ್ನು ಹೊಂದಿದ್ದವು, ಹೀಗಾಗಿ ಕೋಲಸ್ವರೂಪಂನೊಳಗೆ ರಾಜಕೀಯ ಮನೆಗಳ ಜಾಲವನ್ನು ಸೃಷ್ಟಿಸಿದವು.
ಕೊಲತ್ತಿರಿಯ ಮೂಲ ಸಾಮ್ರಾಜ್ಯವು ಕೊಲತ್ತಿರಿ ಕುಟುಂಬದ 5 ಮಾತೃಪ್ರಧಾನ-ವಿಭಾಗಗಳ ಉದ್ದಕ್ಕೂ ವಿಭಜಿಸಲ್ಪಟ್ಟಿತು ಮತ್ತು ಅನುಕ್ರಮವಾಗಿ ಕೊಲತ್ತಿರಿ, ತೆಕ್ಕಾಲಂಕೂರ್, ವಡಕ್ಕಾಲಂಕೂರ್, ನಾಲಾಂಕೂರ್, ಅಂಜಾಂಕೂರ್ ಎಂಬ ಭಾಗಗಳು/ ಕೂರ್-ವಾಝ್ಚ (ಭಾಗ-ಪ್ರಭುತ್ವಗಳು) ಆಡಳಿತಗಾರರನ್ನು ಹೊಂದಿತ್ತು.
{| class="wikitable"
|-
| style="text-align:left;" colspan="4"|''' ''ಕೊಲತ್ತಿರಿ'' ಕುಟುಂಬದ ಮಾತೃಪ್ರಧಾನ ವಿಭಾಗಗಳು (ಕೊವಿಲಕಂಗಳು)'''<ref name = "Kol38">ಮಲಬಾರ್ನಲ್ಲಿ ಬ್ರಿಟಿಷ್ ಅಧಿಕಾರದ ಸ್ಥಾಪನೆ, 1664 ರಿಂದ 1799 N. ರಾಜೇಂದ್ರನ್</ref>
|-
!ವಿಭಾಗ
!ಶಾಖೆ
!ಉಪ-ಶಾಖೆ
|- style="text-align:center;"
|'''ಉದಯಮಂಗಲಂ'''
|
|
|- style="text-align:center;"
|'''ಪಳ್ಳಿ'''
| '''ಚಿರಕ್ಕಲ್'''
|
|- style="text-align:center;"
|
| '''ಚೆಂಗ'''
|'''ಪ್ರಾಯಿಕ್ಕರ''' ಮಾವೆಲಿಕ್ಕರದಲ್ಲಿ, '''ಎನ್ನಕ್ಕಾಟ್''' (ಮತ್ತಷ್ಟು '''ಎನ್ನಕ್ಕಾಟ್''' ಮತ್ತು '''ಮಾವೆಲಿಕ್ಕರ''' ಎಂದು ವಿಭಜಿಸಲಾಗಿದೆ)
|- style="text-align:center;"
|
| '''ತೇವನಂ ಕೋಟ'''
|
|- style="text-align:center;"
|
| '''ಪಡಿಂಜಾರೆ'''
|
|- style="text-align:center;"
|
|''' ಥೆಕುಂಕುರೆ'''
|'''ಕೋಲತ್ ಕೊವಿಲಕಂ'''
|- style="text-align:center;"
|
| '''ಕಾವಿನಿಶ್ಶೇರಿ'''
|
|}
[[ಹೈದರ್ ಅಲಿ]] ಮತ್ತು [[ಟಿಪು ಸುಲ್ತಾನ್]] ಅವರ ಅವಧಿಯಲ್ಲಿ 1766 ರಿಂದ 1792 ರವರೆಗೆ ಉತ್ತರ ಮತ್ತು ದಕ್ಷಿಣ ಮಲಬಾರ್ನಲ್ಲಿ ಬಹು ಸೈನಿಕ ಆಕ್ರಮಣಗಳು, ಲೂಟಿ ಮತ್ತು ವ್ಯವಸ್ಥಿತ ಬಲವಂತದ ಮತಾಂತರಗಳನ್ನು ನಡೆಸಲಾಯಿತು.<ref name="NM11">[[ಮಲಬಾರ್ ಕೈಪಿಡಿ]] [[ವಿಲಿಯಮ್ ಲೋಗನ್ (ಮಲಬಾರ್ ಕೈಪಿಡಿ)|ವಿಲಿಯಮ್ ಲೋಗನ್]] ([[ಡಾ. ಸಿ.ಕೆ, ಕರೀಮ್]], ತಿರುವನಂತಪುರಂ ಅವರ ಸಂಪಾದಕತ್ವದಲ್ಲಿ [[ಚರಿತ್ರಂ ಪಬ್ಲಿಕೇಷನ್ಸ್]] ಮುದ್ರಿಸಿ ಪ್ರಕಟಿಸಲಾಗಿದೆ)</ref><ref name="NM12">[[ಫ್ರಾ ಬಾರ್ಟೊಲೊಮಿಯೊ]] (ಪೋರ್ಚುಗೀಸ್ ಪ್ರಯಾಣಿಕ ಮತ್ತು ಇತಿಹಾಸಕಾರ) ಅವರಿಂದ [[ಪೂರ್ವ ಇಂಡೀಸ್]]ಗೆ ಪ್ರಯಾಣ</ref><ref name="NM13">[[ಕರ್ನಲ್ ವಿಲ್ಕ್ಸ್]] ಅವರ ಐತಿಹಾಸಿಕ ರೇಖಾಚಿತ್ರಗಳು, ಸಂಪುಟ II.</ref> ಬಲವಂತದ ಮತಾಂತರಕ್ಕೆ ಹೆದರಿ, ಕೊಲತ್ತಿರಿ ಸೇರಿದಂತೆ 'ಮಲಬಾರ್' ಪ್ರದೇಶದ ಗಮನಾರ್ಹವಾದ ದೊಡ್ಡ ವಿಭಾಗವು (ಮುಖ್ಯಸ್ಥರು ಮತ್ತು ಬ್ರಾಹ್ಮಣರು) ತಮ್ಮ ಪ್ರಭುತ್ವಗಳಲ್ಲಿನ ದೇವಾಲಯಗಳ ಭೌತಿಕ ಸಂಪತ್ತಿನೊಂದಿಗೆ, ಹಿಂದಿನ ತಿರುವಾಂಕೂರು ಸಾಮ್ರಾಜ್ಯದಲ್ಲಿ ಆಶ್ರಯ ಪಡೆಯಲು ಪಲಾಯನ ಮಾಡಿದರು. ತಿರುವಾಂಕೂರು ಇಂಗ್ಲಿಷ್ ಕಂಪನಿಯೊಂದಿಗೆ ([[ಮಂಗಳೂರು ಒಪ್ಪಂದ]]) ಮೈತ್ರಿಯನ್ನು ಹೊಂದಿತ್ತು, ಅದರ ಪ್ರಕಾರ "ತಿರುವಾಂಕೂರಿನ ಮೇಲಿನ ಆಕ್ರಮಣವು ಇಂಗ್ಲಿಷರ ವಿರುದ್ಧ ಯುದ್ಧದ ಘೋಷಣೆಗೆ ಸಮಾನವಾಗಿ ಪರಿಗಣಿಸಲ್ಪಡುತ್ತದೆ". ಹೀಗೆ 1766 ಮತ್ತು 1792 ರ ನಡುವಿನ ವಿವಿಧ ಸಮಯಗಳಲ್ಲಿ, ಕೊಲತ್ತಿರಿ ಕುಟುಂಬದ ಎಲ್ಲಾ ಸ್ತ್ರೀ ಸದಸ್ಯರು ಮತ್ತು ಅನೇಕ ಪುರುಷ ಸದಸ್ಯರು ತಮ್ಮ ದೇವಾಲಯಗಳ ಸಂಪತ್ತಿನೊಂದಿಗೆ [[ತಿರುವನಂತಪುರಂ]]ನಲ್ಲಿ ಆಶ್ರಯ ಪಡೆದಿದ್ದರು. ಮಲಬಾರ್ನಲ್ಲಿ ಶಾಂತಿಯ ಪುನಃಸ್ಥಾಪನೆಯಾದಾಗ, ಕುಟುಂಬವು ಹಿಂತಿರುಗಿದಾಗ, ಮೂವರು ಸಹೋದರಿಯರು ಮಾವೆಲಿಕ್ಕರದಲ್ಲಿ ತಿರುವಾಂಕೂರಿನಲ್ಲಿಯೇ ಉಳಿದರು. ಭಿನ್ನಾಭಿಪ್ರಾಯಗಳು ಅವರಲ್ಲಿ ಒಬ್ಬರು ಎನ್ನಕ್ಕಾಡ್ಗೆ ತೆರಳಲು ಕಾರಣವಾದವು, ಮತ್ತೊಬ್ಬರು ಪ್ರಯಿಕ್ಕರದಲ್ಲಿ ನೆಲೆಸಿದರು ಮತ್ತು ಇತರ ಗುಂಪು ಕೋಳಂಚೇರಿಯಲ್ಲಿ ನೆಲೆಸಿತು. ಹೀಗೆ ಕೊಲತ್ತಿರಿ ಕುಟುಂಬದ ಮೂರು ಮಾತೃಪ್ರಧಾನ ಶಾಖೆಗಳು ತಿರುವಾಂಕೂರಿನಲ್ಲಿ ನೆಲೆಸಿ ಮಾವೆಲಿಕ್ಕರ, ಕೋಳಂಚೇರಿ, ಎನ್ನಕ್ಕಾಟ್ ಮತ್ತು ಪ್ರಯಿಕ್ಕರ ರಾಜಮನೆತನಗಳನ್ನು ಸ್ಥಾಪಿಸಿದವು.
===ಕೊಲತ್ತಿರಿ ರಾಜ ಎಂಬ ಬಿರುದಿನ ನಿಲುಗಡೆ===
ಹಿಂದೆ ಉದಯಮಂಗಲಂ ಮತ್ತು ಪಳ್ಳಿ ಎರಡೂ ವಿಭಾಗಗಳ ಸದಸ್ಯರು ತಮ್ಮ ವಯಸ್ಸಿನ ಹಿರಿತನದ ಆಧಾರದ ಮೇಲೆ ಕೊಲತ್ತಿರಿ ರಾಜ ಎಂಬ ಬಿರುದನ್ನು ವಹಿಸಿಕೊಳ್ಳಲು ಅರ್ಹರಾಗಿದ್ದರು. ಕೊಲತ್ತಿರಿ ಕುಟುಂಬದ ಪ್ರದೇಶಗಳ ಮೇಲೆ ಬೆಡ್ನೂರ್ / ಇಕ್ಕೇರಿಯ ರಾಜನ ಆಕ್ರಮಣ ಮತ್ತು ನಂತರ ಕೊಲತ್ತಿರಿ ಮತ್ತು ಆಕ್ರಮಣಕಾರನ ನಡುವಿನ ಕ್ರಿ.ಶ. 1736-37 ರ ನೆಲೆಸುವಿಕೆಯು ಕೊಲತ್ತಿರಿಗಳ ಕುಟುಂಬದೊಳಗೆ ಗಣನೀಯ ಬದಲಾವಣೆಗೆ ಕಾರಣವಾಯಿತು. ರಾಜ ಎಂಬ ಬಿರುದನ್ನು ವಹಿಸಿಕೊಳ್ಳುವುದರಿಂದ ಉದಯಮಂಗಲಂ ಶಾಖೆಯನ್ನು ಹೊರಗಿಡಲಾಯಿತು ಮತ್ತು ಕೊಲತ್ತಿರಿ ಎಂಬ ಬಿರುದು ಬಳಕೆಯಲ್ಲಿಲ್ಲದಾಯಿತು. ಆಳುವ ಕುಟುಂಬವು (ಪಳ್ಳಿ ವಿಭಾಗ) ರಾಜನಾಗಿ ಉತ್ತರಾಧಿಕಾರದ ಹಕ್ಕನ್ನು ಏಕಸ್ವಾಮ್ಯಗೊಳಿಸಿತು, ಇದು ಕೊಲತ್ತಿರಿ ರಾಜ ಎಂಬ ಪ್ರಾಚೀನ ಬಿರುದಿನ [[ಚಿರಕ್ಕಲ್ ರಾಜ]]ರಿಂದ ನಿಲುಗಡೆಗೆ ಕಾರಣವಾಯಿತು.<ref name = "Kol66">ಕೇರಳ ಜಿಲ್ಲಾ ಗೆಜೆಟಿಯರ್ಗಳು: ಕಣ್ಣೂರು (1962)</ref><ref name = "Kol38"/>
===ಕ್ಷತ್ರಿಯತ್ವಕ್ಕೆ ಏರಿಕೆ===
1617 ಕ್ರಿ.ಶ.ದಲ್ಲಿ ಕೊಲತ್ತಿರಿ ರಾಜ ಉದಯವರ್ಮನ್ ತನ್ನನ್ನು ಪೂರ್ಣ ಮನ್ನಣೆಗೆ ಹಿರಣ್ಯ-ಗರ್ಭವನ್ನು ನಡೆಸುವ ಮೂಲಕ ಏರಿಸಿಕೊಳ್ಳಲು ಬಯಸಿದನು, ಇದಕ್ಕೆ ನಂಬೂದಿರಿಗಳು ನಿರಾಕರಿಸಿದರು. ಅವನು ತಾಳಿಪರಂಬದ (ಪೆರುಂಚೆಲ್ಲೂರ್) ನಂಬೂದಿರಿ ಬ್ರಾಹ್ಮಣರು ತನಗಾಗಿ ಈ ಆಚರಣೆಯನ್ನು ನಡೆಸುವಂತೆ ಒತ್ತಾಯಿಸಲು ಪ್ರಯತ್ನಿಸಿದಾಗ, ನಂಬೂದಿರಿ ಬ್ರಾಹ್ಮಣರು ಅವನಿಗೆ ಹೀಗೆ ನಿರಾಕರಿಸಿದರು:
‘''ಕೊಲತ್ತಿರಿಗೆ ಪೆರುಂತ್ರಿಕ್ಕೊವಿಲಪ್ಪನ (ತಾಳಿಪರಂಬದ ಪೆರುಂಚೆಲ್ಲೂರಿನ ರಾಜರಾಜೇಶ್ವರ ದೇವಾಲಯದ ದೇವತೆ) ಅಧಿಕಾರ ವ್ಯಾಪ್ತಿಯಲ್ಲಿ ಯಾವುದೇ ರಾಜನ ಆದೇಶವು ಮಾನ್ಯವಾಗದ ಕಾರಣ, ತನಗಾಗಿ ಯಜ್ಞವನ್ನು ನಡೆಸುವಂತೆ ಕೇಳುವ ಹಕ್ಕಿಲ್ಲ''’ (ದೇವತೆಯ ರಾಜರಾಜೇಶ್ವರ ಅಥವಾ ರಾಜರ ರಾಜ ಎಂಬ ಬಿರುದು ದೇವತೆಯು ವಹಿಸಿಕೊಂಡ ರಾಜ ಸ್ಥಾನಮಾನವನ್ನು ಸ್ಪಷ್ಟವಾಗಿ ಸೂಚಿಸುತ್ತದೆ).<ref name="Kol55"/>
ಇತಿಹಾಸಕಾರ ಸ್ಯಾಮುಯೆಲ್ ಮತೀರ್; "ಮಲಬಾರ್ನ ಎಲ್ಲಾ ರಾಜರುಗಳೂ ಸಹ, ಇತ್ತೀಚೆಗೆ ಅವರ ಅವಲಂಬಿಗಳಿಂದ ಅವರಿಗಾಗಿ ಎತ್ತಲಾದ ಹಕ್ಕುಗಳ ಹೊರತಾಗಿಯೂ, ಅದೇ ದೊಡ್ಡ ಸಮೂಹಕ್ಕೆ ಸೇರಿದ್ದಾರೆ ಮತ್ತು ನಾಯರ್ ಎಂದು ಕರೆಯಲ್ಪಡುವ ಜನಸಮೂಹದೊಂದಿಗೆ ಏಕರೂಪವಾಗಿದ್ದಾರೆ ಎಂದು ನಂಬಲು ಕಾರಣವಿದೆ, ಆದ್ದರಿಂದ ನಂಬೂದಿರಿಗಳು ಎಲ್ಲಾ ನಾಯರ್ ಪ್ರಭುಗಳಿಗೆ ಕ್ಷತ್ರಿಯತ್ವವನ್ನು ನೀಡಲು ಹಿಂಜರಿಯುತ್ತಿದ್ದರು, ಪರಿಣಾಮವಾಗಿ, ಉದಯವರ್ಮನ್ [[ಗೋಕರ್ಣ, ಭಾರತ|ಗೋಕರ್ಣ]]ದಿಂದ 237 ಬ್ರಾಹ್ಮಣ ಕುಟುಂಬಗಳನ್ನು (ಸಾಗರ ದ್ವಿಜರು) ಕರೆತಂದು ಅವರನ್ನು ಐದು ದೇಶಗಳಲ್ಲಿ ನೆಲೆಸಿಸಿದರು. (ಪೆರಿಂಚೆಲ್ಲೂರ್ ಗ್ರಾಮದ ಚೇರುತಾಝಂ, ಕುನ್ನಿರಿಯಂ, ಅರತಿಲ್, ಕುಲಪ್ಪುರಂ ಮತ್ತು ವರರುಚಿಮಂಗಲಂ). ನಂತರದವರು ನಂಬೂದಿರಿ ಪದ್ಧತಿಗಳನ್ನು ಅಳವಡಿಸಿಕೊಂಡರು ಮತ್ತು ಹಿರಣ್ಯ-ಗರ್ಭವನ್ನು ನಡೆಸಿ ಮೊದಲಿನವರಿಗೆ ಕ್ಷತ್ರಿಯತ್ವವನ್ನು ನೀಡಿದರು. ನಂತರ, ತಿರುವಾಂಕೂರಿನ ರಾಜನ ಕೋರಿಕೆಯ ಮೇರೆಗೆ, ಈ ಸಾಗರ ದ್ವಿಜರು ಕುಟುಂಬಗಳಲ್ಲಿ 185 ಅನ್ನು ತಿರುವಲ್ಲಾಗೆ ಕಳುಹಿಸಲಾಯಿತು. (ತಿರುವಲ್ಲಾದೇಶಿ ಎಂಬ್ರಾಂತಿರಿಗಳು).<ref name="Namboothiri Websites Kozhikode"/>
==ಕೊಲತ್ತಿರಿ ರಾಜ ಯಾರು==
ಕೊಲತ್ತಿರಿ ಕುಟುಂಬಗಳಿಂದ ವಿಭಜನೆಯಾದ 9 ಶಾಖೆಗಳಿಂದ ಹಿರಿಯ ಪುರುಷರು.
ಕೊಲತ್ತಿರಿ ರಾಜಮನೆತನದ ಶಾಖೆಗಳು
*ಪ್ರಾಯಿಕ್ಕರ ಅರಮನೆ
*ಮಾವೆಲಿಕ್ಕರ ಅರಮನೆ
*ಎನ್ನಕ್ಕಾಡ್ ಅರಮನೆ
*ನೆಡುಂಪ್ರಂ ಅರಮನೆ (ತಿರುವಲ್ಲಾ)
*ಚೇರುಕುನ್ನು ಪಡಿಂಜಾರೆ ಕೊವಿಲಕಂ
*ಕಾವಿನಿಸ್ಸೇರಿ ಕೊವಿಲಕಂ
*ಮರಿಯಾಪ್ಪಲ್ಲಿ ಅರಮನೆ
*ಚಿರಕ್ಕಲ್ ಕೊವಿಲಕಂ
*ಥೇವನಗೋಡು ಕೊವಿಲಕಂ (ಪ್ರಸ್ತುತ ಎನ್ನಕ್ಕಾಡ್ ಅರಮನೆಯೊಂದಿಗೆ ವಿಲೀನಗೊಂಡಿದೆ)
*ಅದುತಿಲ ಪಡಿಂಜಾರೆ ಕೊವಿಲಕಂ
ಪ್ರಸ್ತುತ ಕೊಲತ್ತಿರಿ ವಲಿಯ ರಾಜನು ಬ್ರಿಗೇಡಿಯರ್ (ನಿವೃತ್ತ). R. ನಂದಕುಮಾರ ವರ್ಮ, ಮಾವೆಲಿಕ್ಕರ ಅರಮನೆಯ ವಲಿಯ ತಂಪುರಾನ್.
ಪ್ರಸ್ತುತ ಕೊಲತ್ತಿರಿ ಎಳಯ ರಾಜ
N. ನಂದಕುಮಾರ ವರ್ಮ, ನೆಡುಂಪ್ರಂ ಅರಮನೆಯ ವಲಿಯ ರಾಜ.
===ಕೊಲತ್ತಿರಿಯ ಮಾಜಿ ರಾಜರು===
==ಕ್ಯಾಲೆಂಡರ್ ವ್ಯವಸ್ಥೆ==
ಕೇರಳದ ಮಧ್ಯ/ದಕ್ಷಿಣದಲ್ಲಿ (ಉತ್ತರ ಮಲಬಾರ್ / ಕೊಲತ್ತುನಾಡನ್ನು ಹೊರತುಪಡಿಸಿ) ಆಚರಿಸಲಾಗುವ [[ಮಲಯಾಳಂ ಕ್ಯಾಲೆಂಡರ್|ಕೊಲ್ಲ-ವರ್ಷಂ]] ಅಥವಾ ''ಕೊಲ್ಲ-ವರ್ಷಂ'' ಆವೃತ್ತಿಯು 25 ಆಗಸ್ಟ್ 825 ಕ್ರಿ.ಶ.ದಲ್ಲಿ ಪ್ರಾರಂಭವಾಯಿತು ಮತ್ತು ವರ್ಷವು ಇತರ ಭಾರತೀಯ ಕ್ಯಾಲೆಂಡರ್ಗಳಲ್ಲಿರುವಂತೆ ''ಮೇಷ-ರಾಶಿ'' (ಮೇಷ) ಯಲ್ಲಲ್ಲದೆ ''ಸಿಂಹ-ರಾಶಿ'' (ಸಿಂಹ) ಯಿಂದ ಪ್ರಾರಂಭವಾಗುತ್ತದೆ. ಕೊಲ್ಲಂ ಯುಗದ ಪ್ರಾರಂಭದ ಬಗ್ಗೆ ಹಲವಾರು ಖಾತೆಗಳು, ಪ್ರಸ್ತುತ, ದಾಖಲಿತ ಮತ್ತು ವದಂತಿಗಳಿದ್ದರೂ, ಹಿಂದಿನ ಉತ್ತರ ಮಲಬಾರ್ / ಕೊಲತ್ತುನಾಡಿನಲ್ಲಿ, ''ಕೊಲ್ಲಂ'' ಯುಗವನ್ನು ಬದಲಾಗಿ ಮುಂದಿನ ತಿಂಗಳು, ''ಕನ್ಯಾ-ರಾಶಿ'' (ಕನ್ಯೆ) (25 ಸೆಪ್ಟೆಂಬರ್) ನಿಂದ ಲೆಕ್ಕಹಾಕಲಾಗುತ್ತದೆ. ಈ ವ್ಯತ್ಯಾಸವು ಅದಕ್ಕೆ ಸಂಬಂಧಿಸಿದ ಎರಡು ಆಸಕ್ತಿದಾಯಕ ಖಾತೆಗಳನ್ನು ಹೊಂದಿದೆ.<ref name="astrom">[[K.V ಸರ್ಮಾ]] (1996), ಕೊಲ್ಲಂ ಯುಗ, ಇಂಡಿಯನ್ ಜರ್ನಲ್ ಆಫ್ ಹಿಸ್ಟರಿ ಆಫ್ ಸೈನ್ಸ್, 31 (1)[http://www.new.dli.ernet.in/rawdataupload/upload/insa/INSA_1/20005b5f_93.pdf] {{Webarchive|url=https://web.archive.org/web/20120316083252/http://www.new.dli.ernet.in/rawdataupload/upload/insa/INSA_1/20005b5f_93.pdf|date=16 March 2012}}</ref>
(1) ಸಾಂಪ್ರದಾಯಿಕ ಪಠ್ಯ ''ಕೇರೋಲೋಲ್ಪತ್ತಿ''ಯು [[ಕೊಲ್ಲಂ ಯುಗ]]ದ ಪರಿಚಯವನ್ನು [[ಶಂಕರಾಚಾರ್ಯ]]ರಿಗೆ ಆರೋಪಿಸುತ್ತದೆ. ಆದ್ದರಿಂದ ನೀವು "ಆಚಾರ್ಯ ವಾಗ ಭೇದ್ಯ" (ಶಂಕರಾಚಾರ್ಯರ ಮಾತು/ನಿಯಮವು ಬದಲಾಗದು ಎಂದರ್ಥ) ಎಂಬ ಪದವನ್ನು [[ಕಟಪಯಾಡಿ]] ಸಂಕೇತದಲ್ಲಿ ಸಂಖ್ಯೆಗಳಿಗೆ ಪರಿವರ್ತಿಸಿದರೆ ಅದು 0 6 1 4 3 4 1 ಎಂದು ಅನುವಾದಿಸುತ್ತದೆ ಮತ್ತು ಇವುಗಳನ್ನು ಹಿಂದಕ್ಕೆ ಬರೆದಾಗ ಕೊಲ್ಲಂ ಯುಗದ ಮೊದಲ ವರ್ಷದಲ್ಲಿ ''[[ಕಲಿಯುಗ]]''ದ ವಯಸ್ಸನ್ನು ನೀಡುತ್ತದೆ. ''ಕಲಿ'' ದಿನ 1434160ವು 25 ಸೆಪ್ಟೆಂಬರ್ 825 ಕ್ರಿ.ಶ. ಆಗಿ ಕೆಲಸ ಮಾಡುತ್ತದೆ, ಇದು ಕೊಲತ್ತುನಾಡಿನಲ್ಲಿ ಕೊಲ್ಲಂ ಯುಗದ ಪ್ರಾರಂಭಕ್ಕೆ ಅನುರೂಪವಾಗಿದೆ, ಅಂದರೆ ''ಕನ್ಯಾ-ರಾಶಿ'' (ಕನ್ಯೆ) ಮೊದಲ ದಿನ.
(2) ಎರಡನೆಯ ಖಾತೆಯೆಂದರೆ ಕೊಲ್ಲಂ ಯುಗವು ಕೊಲ್ಲಂನಲ್ಲಿ ಮಾಡಲಾದ ಘೋಷಣೆಯೊಂದಿಗೆ ಪ್ರಾರಂಭವಾಯಿತು.
==ಕೊಲತ್ತಿರಿಯ ರಾಜ ಸಂಕೇತಗಳು==
ದಂತಕಥೆಯ ಪ್ರಕಾರ, ಲಾರ್ಡ್ [[ಪರಶುರಾಮ]]ನು ರಾಮಘಾತ ಮೂಷಿಕನಿಗೆ ತನ್ನ ಪಟ್ಟಾಭಿಷೇಕದ ದಿನದಂದು (1) ನಾಂದಕಂ ವಾಲ್ (ವಿಶೇಷ ಖಡ್ಗ) (2) ಮತ್ತು ನೆನ್ಮೆನಿ-ವಕ (''ಮುಮೋಸಾ ಲೆಬ್ಬೆಕ್'') ಮೂಲಿಕೆಯನ್ನು ರಾಜವಂಶಕ್ಕೆ ಸಂಬಂಧಿಸಿದ ಮರವಾಗಿ ನಿಯೋಜಿಸಿದನು (3) ಮತ್ತು ಮತ್ತಷ್ಟು ವಾಕಪೂಕ್ಕುಲ (''ಮುಮೋಸಾ ಲೆಬ್ಬೆಕ್''ನ ಪುಷ್ಪಗುಚ್ಛ) ಮತ್ತು ಚಂಗಲವಟ್ಟಂ ವಿಲಕ್ಕು (ಇದು ದೇವಾಲಯದ ಮೆರವಣಿಗೆಗಳಲ್ಲಿ ಬಳಸಲಾಗುವ ಭಾರವಾದ ಕಂಚಿನ ದೀಪ ಮತ್ತು ದೀಪವು ಸರಪಳಿಯೊಂದಿಗೆ ಅದಕ್ಕೆ ಜೋಡಿಸಲಾದ ಚಮಚದೊಂದಿಗೆ ಎಣ್ಣೆ ಶೇಖರಣಾ ಸ್ಥಳವನ್ನು ಹೊಂದಿದೆ), ರಾಜ ಸಂಕೇತಗಳಾಗಿ ನೀಡಿದನು. ಕೋಲ-ಸ್ವರೂಪಂ ರಾಜವಂಶವು ನೆನ್ಮೆನಿ-ವಕ (''ಮುಮೋಸಾ ಲೆಬ್ಬೆಕ್'') ನೊಂದಿಗಿನ ತಮ್ಮ ಈ ಸಂಬಂಧವು ಮೂಷಿಕನ್ ಎಂಬ ತಮ್ಮ ನಾಮಕರಣಕ್ಕೆ ಕಾರಣವಾಯಿತು ಎಂದು ನಂಬುತ್ತದೆ. ಆದ್ದರಿಂದ ಕೊಲತ್ತಿರಿ ಕುಟುಂಬದ ರಾಜ ಧ್ವಜ ಮತ್ತು ರಾಜ ಮುದ್ರೆಯು ಚಿತ್ರಗಳ ಸಂಯೋಜನೆಯಾಗಿತ್ತು, ಅವುಗಳೆಂದರೆ: ತೋನಿ (ದೋಣಿ), ಚಂಗಲವಟ್ಟಂ ವಿಲಕ್ಕು, ನಾಂದಕಂ ವಾಲ್ ಮತ್ತು ನೆನ್ಮೆನಿ-ವಕ.
===ರಾಜ ಧ್ವಜ/ಮಾನದಂಡ (ಕೊಡಿಕ್ಕೂರ ಅಥವಾ ಧ್ವಜಂ)===
ಧ್ವಜದ ಚಿತ್ರಣವು ಎರಡೂ ಬದಿಗಳಲ್ಲಿ ಎರಡು ನಾಂದಕಂ-ವಾಲ್-ಖಡ್ಗಗಳನ್ನು ಕೇಂದ್ರದಲ್ಲಿ ಇರಿಸಲಾದ ವಾಕಪೂಕ್ಕುಲ-''ಮುಮೋಸಾ ಲೆಬ್ಬೆಕ್''ನ ಪುಷ್ಪಗುಚ್ಛ ಮತ್ತು ಅದರ ಕೆಳಗೆ ಐದು ಅರ್ಧ ಚಂದ್ರಾಕೃತಿಗಳನ್ನು ಒಳಗೊಂಡಿತ್ತು.
===ರಾಜ ಮುದ್ರೆ (ಮುದ್ರ)===
ಮುದ್ರೆಯ ಚಿತ್ರಣವು ಅದರ ಕೆಳಗೆ ಒಂದು ತೋನಿ-ದೋಣಿ, ಅದರ ಮೇಲೆ ಒಂದು ಚಂಗಲವಟ್ಟಂ-ದೀಪ, ಅದರ ಮೇಲೆ ಲಂಬವಾಗಿ ಇರಿಸಲಾದ ನಾಂದಕಂ-ವಾಲ್-ಖಡ್ಗ, ನಂತರ ಎರಡೂ ಪಕ್ಕದ ಬದಿಗಳಲ್ಲಿ ಒಂದು ವಾಕಪೂಕ್ಕುಲ-ಪುಷ್ಪಗುಚ್ಛವನ್ನು ಒಳಗೊಂಡಿತ್ತು.
==ಇವನ್ನೂ ನೋಡಿ==
*[[ಮನ್ನನಾರ್]]
*[[ತುಳುನಾಡು]]
==ಉಲ್ಲೇಖಗಳು==
{{reflist|24em}}
{{Kerala}}
{{coord missing|Kerala}}
[[ವರ್ಗ:ಭಾರತದಲ್ಲಿನ ಐತಿಹಾಸಿಕ ಪ್ರದೇಶಗಳು]]
[[ವರ್ಗ:ಕ್ರಿ.ಪೂ. 6ನೇ ಶತಮಾನದಲ್ಲಿ ಸ್ಥಾಪಿತವಾದ ರಾಜ್ಯಗಳು ಮತ್ತು ಪ್ರದೇಶಗಳು]]
[[ವರ್ಗ:1940ರ ದಶಕದಲ್ಲಿ ಭಾರತದಲ್ಲಿ ವಿಸರ್ಜನೆಗಳು]]
[[ವರ್ಗ:ಕಣ್ಣೂರು ಜಿಲ್ಲೆಯ ಇತಿಹಾಸ]]
[[ವರ್ಗ:ಕೇರಳದ ಸಾಮ್ರಾಜ್ಯಗಳು]]
[[ವರ್ಗ:ಭಾರತದ ಮಾಜಿ ರಾಜಪ್ರಭುತ್ವಗಳು]]
[[ವರ್ಗ:ಭಾರತದ ರಾಜ್ಯಗಳು]]
[[ವರ್ಗ:ಮಾಜಿ ಸಾಮ್ರಾಜ್ಯಗಳು]]
66ojbi2nk6sj0ez8sb0lrhblo10g523
ಸದಸ್ಯರ ಚರ್ಚೆಪುಟ:Nirupadikareyattin
3
180009
1378202
2026-08-02T16:43:55Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1378202
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Nirupadikareyattin}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೨:೧೩, ೨ ಆಗಸ್ಟ್ ೨೦೨೬ (IST)
p3ve77b43ak5w8j603wffvzn2ge4i2v
ಸದಸ್ಯರ ಚರ್ಚೆಪುಟ:G N vig
3
180010
1378205
2026-08-02T17:13:34Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1378205
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=G N vig}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೨:೪೩, ೨ ಆಗಸ್ಟ್ ೨೦೨೬ (IST)
48vbryuoxlmr7o18xdj1qy4hzycghhh
ಸದಸ್ಯರ ಚರ್ಚೆಪುಟ:Chandrahema
3
180012
1378218
2026-08-02T19:50:14Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1378218
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Chandrahema}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೧:೨೦, ೩ ಆಗಸ್ಟ್ ೨೦೨೬ (IST)
gjp9lka2qjk5yyv97odw6btwgmjn7tl
ಸದಸ್ಯರ ಚರ್ಚೆಪುಟ:Sachidanand bhat D
3
180013
1378233
2026-08-03T04:03:29Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1378233
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Sachidanand bhat D}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೩೩, ೩ ಆಗಸ್ಟ್ ೨೦೨೬ (IST)
n9ugr9db857bmznxm91evrvzz7pmzts
ಟೆಂಪ್ಲೇಟು:INRConvert/USD
10
180014
1378262
2020-09-28T23:00:53Z
en>Jonesey95
0
fix invalid input to formatnum causing articles to appear in [[:Category:Pages with non-numeric formatnum arguments]]
1378262
wikitext
text/x-wiki
{{{or|}}}{{INRConvert/out|{{#expr:{{{1|1}}}*1E{{{2|0}}}*{{INRConvert/CurrentRate|USD}}}}|{{order of magnitude|{{#expr:{{{1|1}}}*1E0{{{2|0}}}*{{INRConvert/CurrentRate|USD}}}}}}|{{{3|}}}|¢=¢ US|$=US$}}
lc08ysbbn07b1gbyed9d0ppn1bfly5x
1378263
1378262
2026-08-03T07:17:14Z
A826
72368
೧ revisions imported from [[:en:Template:INRConvert/USD]]
1378262
wikitext
text/x-wiki
{{{or|}}}{{INRConvert/out|{{#expr:{{{1|1}}}*1E{{{2|0}}}*{{INRConvert/CurrentRate|USD}}}}|{{order of magnitude|{{#expr:{{{1|1}}}*1E0{{{2|0}}}*{{INRConvert/CurrentRate|USD}}}}}}|{{{3|}}}|¢=¢ US|$=US$}}
lc08ysbbn07b1gbyed9d0ppn1bfly5x
ಟೆಂಪ್ಲೇಟು:INRConvert/out
10
180015
1378264
2025-02-19T11:33:36Z
en>Danny 1994
0
Corrected template name to avoid template redirect.
1378264
wikitext
text/x-wiki
{{#if:{{{3|}}}
|{{#ifexpr:{{{1|1}}}round{{{3|2}}}<1
|{{round|{{{1|1}}}*100|{{{3|0}}}}}{{{¢|}}}
|{{#ifexpr:{{{1|1}}}round{{{3|2}}}<1E6
|{{{$|}}}{{round|{{{1|1}}}|{{{3|0}}}}}{{#ifeq:{{{3|0}}}|1|0}}
|{{#ifexpr:{{{1|1}}}round{{{3|2}}}<1E9
|{{{$|}}}{{round|{{{1|1}}}/1E6|{{{3|0}}}}} million
|{{#ifexpr:{{{1|1}}}round{{{3|2}}}<1E12
|{{{$|}}}{{round|{{{1|1}}}/1E9|{{{3|0}}}}} billion
|{{#ifexpr:{{{1|1}}}round{{{3|2}}}<1E15
|{{{$|}}}{{round|{{{1|1}}}/1E12|{{{3|0}}}}} trillion
|{{{$|}}}{{round|{{{1|1}}}|{{{3|0}}}-{{{2|0}}}}}
}}
}}
}}
}}
}}
|{{#switch:{{#expr:{{{2|0}}}+(100=({{{1|1}}}E(1-{{{2|0}}}))round0)}}
|-4={{round|{{{1|1}}}*100|3}}{{{¢|}}}
|-3={{round|{{{1|1}}}*100|2}}{{{¢|}}}
|-2={{round|{{{1|1}}}*100|1}}{{{¢|}}}
|-1={{round|{{{1|1}}}*100|0}}{{{¢|}}}
|0={{{$|}}}{{round|{{{1|1}}}|1}}0
|1={{{$|}}}{{round|{{{1|1}}}|0}}
|2={{{$|}}}{{round|{{{1|1}}}|-1}}
|3={{{$|}}}{{round|{{{1|1}}}|-2}}
|4={{{$|}}}{{round|{{{1|1}}}|-3}}
|5={{{$|}}}{{round|{{{1|1}}}|-4}}
|6={{{$|}}}{{round|{{{1|1}}}/1E6|1}} million
|7={{{$|}}}{{round|{{{1|1}}}/1E6|0}} million
|8={{{$|}}}{{round|{{{1|1}}}/1E6|-1}} million
|9={{{$|}}}{{round|{{{1|1}}}/1E9|1}} billion
|10={{{$|}}}{{round|{{{1|1}}}/1E9|0}} billion
|11={{{$|}}}{{round|{{{1|1}}}/1E9|-1}} billion
|12={{{$|}}}{{round|{{{1|1}}}/1E12|1}} trillion
|13={{{$|}}}{{round|{{{1|1}}}/1E12|0}} trillion
|14={{{$|}}}{{round|{{{1|1}}}/1E12|-1}} trillion
|{{{$|}}}{{round|{{{1|1}}}|{{#expr:{{{2|0}}}+(100=({{{1|1}}}E(1-{{{2|0}}}))round0)}}}}
}}
}}<noinclude>
{{pp-template|small=yes}}
</noinclude>
204y05pxp0c9hzpa57vkzlqie7yrieh
1378265
1378264
2026-08-03T07:17:14Z
A826
72368
೧ revisions imported from [[:en:Template:INRConvert/out]]
1378264
wikitext
text/x-wiki
{{#if:{{{3|}}}
|{{#ifexpr:{{{1|1}}}round{{{3|2}}}<1
|{{round|{{{1|1}}}*100|{{{3|0}}}}}{{{¢|}}}
|{{#ifexpr:{{{1|1}}}round{{{3|2}}}<1E6
|{{{$|}}}{{round|{{{1|1}}}|{{{3|0}}}}}{{#ifeq:{{{3|0}}}|1|0}}
|{{#ifexpr:{{{1|1}}}round{{{3|2}}}<1E9
|{{{$|}}}{{round|{{{1|1}}}/1E6|{{{3|0}}}}} million
|{{#ifexpr:{{{1|1}}}round{{{3|2}}}<1E12
|{{{$|}}}{{round|{{{1|1}}}/1E9|{{{3|0}}}}} billion
|{{#ifexpr:{{{1|1}}}round{{{3|2}}}<1E15
|{{{$|}}}{{round|{{{1|1}}}/1E12|{{{3|0}}}}} trillion
|{{{$|}}}{{round|{{{1|1}}}|{{{3|0}}}-{{{2|0}}}}}
}}
}}
}}
}}
}}
|{{#switch:{{#expr:{{{2|0}}}+(100=({{{1|1}}}E(1-{{{2|0}}}))round0)}}
|-4={{round|{{{1|1}}}*100|3}}{{{¢|}}}
|-3={{round|{{{1|1}}}*100|2}}{{{¢|}}}
|-2={{round|{{{1|1}}}*100|1}}{{{¢|}}}
|-1={{round|{{{1|1}}}*100|0}}{{{¢|}}}
|0={{{$|}}}{{round|{{{1|1}}}|1}}0
|1={{{$|}}}{{round|{{{1|1}}}|0}}
|2={{{$|}}}{{round|{{{1|1}}}|-1}}
|3={{{$|}}}{{round|{{{1|1}}}|-2}}
|4={{{$|}}}{{round|{{{1|1}}}|-3}}
|5={{{$|}}}{{round|{{{1|1}}}|-4}}
|6={{{$|}}}{{round|{{{1|1}}}/1E6|1}} million
|7={{{$|}}}{{round|{{{1|1}}}/1E6|0}} million
|8={{{$|}}}{{round|{{{1|1}}}/1E6|-1}} million
|9={{{$|}}}{{round|{{{1|1}}}/1E9|1}} billion
|10={{{$|}}}{{round|{{{1|1}}}/1E9|0}} billion
|11={{{$|}}}{{round|{{{1|1}}}/1E9|-1}} billion
|12={{{$|}}}{{round|{{{1|1}}}/1E12|1}} trillion
|13={{{$|}}}{{round|{{{1|1}}}/1E12|0}} trillion
|14={{{$|}}}{{round|{{{1|1}}}/1E12|-1}} trillion
|{{{$|}}}{{round|{{{1|1}}}|{{#expr:{{{2|0}}}+(100=({{{1|1}}}E(1-{{{2|0}}}))round0)}}}}
}}
}}<noinclude>
{{pp-template|small=yes}}
</noinclude>
204y05pxp0c9hzpa57vkzlqie7yrieh
ಟೆಂಪ್ಲೇಟು:Inflation/IN/startyear
10
180016
1378266
2021-05-20T14:14:40Z
en>Pppery
0
Per edit request
1378266
wikitext
text/x-wiki
1595<noinclude>{{documentation|Template:Inflation/doc/startyear}}</noinclude>
diykan7h77vqe3dxs8rmdbur3mrn0yw
1378267
1378266
2026-08-03T07:17:14Z
A826
72368
೧ revisions imported from [[:en:Template:Inflation/IN/startyear]]
1378266
wikitext
text/x-wiki
1595<noinclude>{{documentation|Template:Inflation/doc/startyear}}</noinclude>
diykan7h77vqe3dxs8rmdbur3mrn0yw
ಟೆಂಪ್ಲೇಟು:Indian rupee
10
180017
1378272
2024-10-03T02:04:22Z
en>HouseBlaster
0
HouseBlaster moved page [[Template:Indian Rupee]] to [[Template:Indian rupee]] without leaving a redirect: move to match with mainspace [[Indian Rupee]]
1378272
wikitext
text/x-wiki
<span style="white-space: nowrap">{{#ifeq:{{{link|no}}}|yes
|[[Indian rupee|₹]]
|₹
}}{{formatnum:{{{1|}}}}}</span><!--
-->{{#ifeq:{{{year|{{{2|0}}}}}}|0||{{#ifexpr:{{Inflation/IN/startyear}}<={{{year|{{{2|0}}}}}} and {{{year|{{{2|0}}}}}}<{{Inflation/year|IN}}
| ({{#if:{{{about|}}}
|equivalent to about ₹{{formatnum:{{Inflation|IN|{{formatnum:{{{1|}}}|R}}|{{{year|{{{2}}}}}}|r={{{round|0}}}}}}}
|equivalent to ₹{{formatnum:{{Inflation|IN|{{formatnum:{{{1|}}}|R}}|{{{year|{{{2}}}}}}|r={{{round|{{#ifexpr:{{Inflation|IN|{{formatnum:{{{1|}}}|R}}|{{{year|{{{2}}}}}}}}>1000|0|2}}}}}}}}}
}} in {{Inflation/year|IN}})
}}}}<noinclude>
{{documentation}}
<!-- Add categories to the /doc subpage, interwikis to Wikidata, not here -->
</noinclude>
4hpgxd9iwfqxdfs2wbsjy53wdnig81r
1378273
1378272
2026-08-03T07:17:15Z
A826
72368
೧ revisions imported from [[:en:Template:Indian_rupee]]
1378272
wikitext
text/x-wiki
<span style="white-space: nowrap">{{#ifeq:{{{link|no}}}|yes
|[[Indian rupee|₹]]
|₹
}}{{formatnum:{{{1|}}}}}</span><!--
-->{{#ifeq:{{{year|{{{2|0}}}}}}|0||{{#ifexpr:{{Inflation/IN/startyear}}<={{{year|{{{2|0}}}}}} and {{{year|{{{2|0}}}}}}<{{Inflation/year|IN}}
| ({{#if:{{{about|}}}
|equivalent to about ₹{{formatnum:{{Inflation|IN|{{formatnum:{{{1|}}}|R}}|{{{year|{{{2}}}}}}|r={{{round|0}}}}}}}
|equivalent to ₹{{formatnum:{{Inflation|IN|{{formatnum:{{{1|}}}|R}}|{{{year|{{{2}}}}}}|r={{{round|{{#ifexpr:{{Inflation|IN|{{formatnum:{{{1|}}}|R}}|{{{year|{{{2}}}}}}}}>1000|0|2}}}}}}}}}
}} in {{Inflation/year|IN}})
}}}}<noinclude>
{{documentation}}
<!-- Add categories to the /doc subpage, interwikis to Wikidata, not here -->
</noinclude>
4hpgxd9iwfqxdfs2wbsjy53wdnig81r
ಟೆಂಪ್ಲೇಟು:Infobox region symbols/styles.css
10
180018
1378278
2023-02-24T21:32:08Z
en>Hike395
0
island subheader in bold
1378278
sanitized-css
text/css
/* {{pp|small=y}} */
.ib-region-symbols-left {
float: left;
clear: left;
margin: 0.5em 1em 0.5em 0;
}
.ib-region-symbols-none {
float: none;
clear: none;
margin: 0.5em 1em 0.5em 0;
}
.ib-region-symbols-center {
float: none;
clear: none;
margin: 0.5em auto;
}
.ib-region-symbols .infobox-title {
font-size: 120%;
}
.ib-region-symbols .infobox-subheader {
font-weight: bold;
background-color: #cddeff;
}
.ib-region-symbols-island {
font-weight: bold;
background-color: #cef2e0;
}
bprv2g9fsvtdlj4fvk8eqetznv5wekf
1378279
1378278
2026-08-03T07:17:16Z
A826
72368
೧ revisions imported from [[:en:Template:Infobox_region_symbols/styles.css]]
1378278
sanitized-css
text/css
/* {{pp|small=y}} */
.ib-region-symbols-left {
float: left;
clear: left;
margin: 0.5em 1em 0.5em 0;
}
.ib-region-symbols-none {
float: none;
clear: none;
margin: 0.5em 1em 0.5em 0;
}
.ib-region-symbols-center {
float: none;
clear: none;
margin: 0.5em auto;
}
.ib-region-symbols .infobox-title {
font-size: 120%;
}
.ib-region-symbols .infobox-subheader {
font-weight: bold;
background-color: #cddeff;
}
.ib-region-symbols-island {
font-weight: bold;
background-color: #cef2e0;
}
bprv2g9fsvtdlj4fvk8eqetznv5wekf
ಕೇರಳಂ
0
180019
1378283
2026-08-03T07:34:24Z
A826
72368
ಹೊಸ ಪುಟ: {{databox}}
1378283
wikitext
text/x-wiki
{{databox}}
1cuz34gp65axujgbyib7d5oqwb73c81
1378284
1378283
2026-08-03T08:08:46Z
A826
72368
1378284
wikitext
text/x-wiki
{{databox}}
{{Infobox Indian state or territory
| name = ಕೇರಳ
| official_name =
| type = ರಾಜ್ಯ
| image_seal = Government of Kerala Logo.svg{{!}}class=skin-invert
| image_skyline = <!-- Do not add additional pictures here without discussion, per consensus [[Talk:Kerala/Archive_6#Infobox montage]]--> Boathouse (7063399547).jpg
| image_caption = [[ಕೇರಳದ ಬ್ಯಾಕ್ವಾಟರ್ಗಳು|ಕೇರಳದ ಬ್ಯಾಕ್ವಾಟರ್ಗಳಲ್ಲಿ]] ಒಂದು [[ಹೌಸ್ ಬೋಟ್]]
| nickname = "[[ಗಾಡ್ಸ್ ಓನ್ ಕಂಟ್ರಿ#ಕೇರಳ|ದೇವರ ಸ್ವಂತ ನಾಡು]]"
| image_map = IN-KL.svg
| coordinates = {{coord|10.0|N|76.3|E|region:IN-KL|display=inline,title}}
| region = ದಕ್ಷಿಣ ಭಾರತ
| before_was = [[ತಿರುವಾಂಕೂರು-ಕೊಚ್ಚಿ]]<br>[[ಮಲಬಾರ್ ಜಿಲ್ಲೆ]]<br>[[ದಕ್ಷಿಣ ಕನ್ನಡ]]
| formation_date4 = 1 ನವೆಂಬರ್ 1956
| capital = ತಿರುವನಂತಪುರ
| districts = [[ಕೇರಳದ ಜಿಲ್ಲೆಗಳ ಪಟ್ಟಿ|14]]
| governor = [[ರಾಜೇಂದ್ರ ಅರ್ಲೇಕರ್]]
| chief_minister = [[ವಿ. ಡಿ. ಸತೀಶನ್]]
| party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
| judiciary = [[ಕೇರಳ ಉಚ್ಚ ನ್ಯಾಯಾಲಯ]]
| chief_secretary = ಬಿಶ್ವನಾಥ್ ಸಿನ್ಹಾ I.A.S.
| legislature_type = ಏಕಸಭಾ
| assembly = [[ಕೇರಳ ವಿಧಾನಸಭೆ]]
| assembly_seats = 140 ಸ್ಥಾನಗಳು
| rajya_sabha_seats = 9 ಸ್ಥಾನಗಳು
| lok_sabha_seats = 20 ಸ್ಥಾನಗಳು
| area_total_km2 = 38863
| area_footnotes = <ref>{{Cite web |title=About Kerala
|url=https://kerala.gov.in/subdetail/NTM1ODMxNzQuNDg=/MjA0ODc2ODQuMzY= |access-date=10 March 2025 |language=en-US }}</ref>
| area_rank = 21ನೇ
| length_km = 560
| width_km = 70
| elevation_footnotes = <ref>{{Cite web |title=Kerala Physiography {{!}} Geographical location {{!}} Kerala {{!}} Kerala |url=https://kerala.me/geography |access-date=24 March 2023 |language=en-US |archive-date=24 March 2023 |archive-url=https://web.archive.org/web/20230324220056/https://kerala.me/geography |url-status=live }}</ref>
| elevation_m = 900
| elevation_max_m = 2,695
| elevation_max_point = [[ಅನಮುಡಿ]]<ref>{{Cite web |title=Anamudi – Peakbagger.com |url=https://www.peakbagger.com/peak.aspx?pid=10664 |access-date=24 March 2023 |website=www.peakbagger.com |archive-date=24 March 2023 |archive-url=https://web.archive.org/web/20230324210042/https://www.peakbagger.com/peak.aspx?pid=10664 |url-status=live }}</ref>
| elevation_min_m = −2.7
| elevation_min_point = [[ಕುಟ್ಟನಾಡು]]<ref>{{Cite web |title=Kuttanadan.com : Explore the Rice Bowl of Kerala |url=https://kuttanadan.com/ |access-date=24 March 2023 |website=Kuttanadan Website |language=en-US |archive-date=24 March 2023 |archive-url=https://web.archive.org/web/20230324210043/https://kuttanadan.com/ |url-status=live }}</ref>
| population_footnotes = <ref>{{cite book | url=https://ruralindiaonline.org/en/library/resource/population-projections-for-india-and-states-2011-2036/ | title=Population Projections for India and States, 2011–2036 | date=July 2020 | access-date=25 March 2023 | archive-date=13 March 2023 | archive-url=https://web.archive.org/web/20230313055356/https://ruralindiaonline.org/en/library/resource/population-projections-for-india-and-states-2011-2036/ | url-status=live }}</ref>
| population_total = 36,111,000
| population_as_of = 2025
| population_rank = 13ನೇ
| population_urban = 79.42%
| population_rural = 20.58%
| population_density = 890
| population_demonym = [[ಕೇರಳೀಯ]],<ref>{{Cite web|url=https://www.theguardian.com/world/2026/feb/25/india-state-kerala-to-be-renamed-keralam-malayalam-language|title=Indian state of Kerala to be renamed Keralam to reflect local pronunciation|first=Penelope|last=MacRae|work=The Guardian |date=25 February 2026}}</ref> [[ಮಲಯಾಳಿಗಳು|ಮಲಯಾಳಿ]]
| official_langs = [[ಮಲಯಾಳಂ]]<ref name="OfficialLang">{{cite web |url=https://prsindia.org/files/bills_acts/acts_states/kerala/2026/Act3of2026KL.pdf |title=The Malayalam Language Act, 2025 |publisher=prsindia.org |date=5 March 2026 |access-date=22 April 2026 }}</ref>
| GDP_footnotes = <ref name="MOSPI">{{cite web|url=http://mospi.nic.in/sites/default/files/press_releases_statements/State_wise_SDP_15_03_2021.xls|title=MOSPI State Domestic Product, Ministry of Statistics and Programme Implementation, Government of India|date=15 March 2021|accessdate=28 March 2021}}</ref>
| GDP_total = {{Increase}} $167.90 billion (nominal)<br/>{{Increase}} $707.26 billion (PPP)
| GDP_year = 2025-26
| GDP_rank = 11ನೇ
| GDP_per_capita = {{Increase}} {{INRConvert|317723|lk=r}} (nominal)<br/>{{Increase}} $19,586 (PPP)
| GDP_per_capita_rank = 11ನೇ
| HDI = {{Increase}} 0.804 {{colour|#090|ಅತಿ ಹೆಚ್ಚು}}<ref name="UNDP">{{cite report|title=Subnational HDI|url=https://globaldatalab.org/shdi/table/shdi/IND/?levels=1+4&interpolation=0&extrapolation=0|access-date=1 April 2026|work=Global Data Lab, [[United Nations Development Programme]]}}</ref>
| HDI_year = 2023
| HDI_rank = 2ನೇ
| literacy = 95.3%<ref>{{Cite book |url=https://www.mospi.gov.in/sites/default/files/publication_reports/AnnualReport_PLFS2023-24L2.pdf |title=Annual Report, Periodic Labour Force Survey (PLFS) (July 2023 – June 2024) |date=23 September 2024 |publisher=National Sample Survey Office, Ministry of Statistics and Programme Implementation, Government of India |pages=A-10 |chapter=Appendix-A: Detailed tables, Table (7): Literacy rate (in per cent) of persons of different age groups for each State/UT (persons, age-group (years): 7 & above, rural+urban (column 6))}}</ref>
| literacy_year = 2024
| literacy_rank = 4ನೇ
| sex_ratio = 1084[[female|♀]]/1000 [[male|♂]]<ref name="pc-census2011" />
| sexratio_year = 2025
| sexratio_rank = 17ನೇ
| iso_code = IN-KL
| registration_plate = KL
| website = kerala.gov.in
| foundation_day = 1 ನವೆಂಬರ್
| mammal = [[ಭಾರತೀಯ ಆನೆ]]<ref name="ENVIS">{{Cite web |date=1 December 2017 |title=State Symbols of India |url=http://wiienvis.nic.in/KidsCentre/state_symbols_india_8411.aspx |archive-url=https://web.archive.org/web/20210415100206/http://wiienvis.nic.in/KidsCentre/state_symbols_india_8411.aspx |archive-date=15 April 2021 |access-date=3 June 2022 |publisher=ENVIS Centre on Wildlife & Protected Areas}}</ref>
| bird = [[ಮಹಾಶಿಖಿ]]<ref name="ENVIS" />
| fish = [[ಗ್ರೀನ್ ಕ್ರೋಮೈಡ್]]
| butterfly = [[ಪಾಪಿಲಿಯೋ ಬುದ್ಧ]]<ref>{{Cite news |last=Jacob |first=Aneesh |title='Budha Mayoori' to be named Kerala's state butterfly |language=en |work=Mathrubhumi |url=https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |url-status=dead |access-date=30 March 2019 |archive-url=https://web.archive.org/web/20190330094056/https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |archive-date=30 March 2019}}</ref>
| flower = [[ಕಸ್ಸಿಯಾ ಫಿಸ್ಟುಲಾ|ಸ್ವರ್ಣ ಮರ]]<ref name="ENVIS" />
| tree = [[ತೆಂಗಿನ]] ಮರ<ref name="ENVIS" />
| fruit = [[ಹಲಸು]]<ref>{{Cite news |date=17 March 2018 |title=Jackfruit to be Kerala's state fruit; declaration on March 21 |work=[[The Indian Express]] |agency=[[Press Trust of India|PTI]] |url=https://indianexpress.com/article/india/jackfruit-to-be-keralas-state-fruit-declaration-on-march-21-5101170/ |access-date=22 March 2018 |archive-date=22 March 2018 |archive-url=https://web.archive.org/web/20180322144926/http://indianexpress.com/article/india/jackfruit-to-be-keralas-state-fruit-declaration-on-march-21-5101170/ |url-status=live }}</ref>
| image_highway = SH IN-KL.png
| sh_numbers = [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|SH KL1 – SH KL79]]
}}
'''ಕೇರಳ'''{{efn|[[ಭಾರತೀಯ ಇಂಗ್ಲಿಷ್]]: [[Help:IPA/English|/ˈkɛrələ/]] {{audio|Kerala (English Pronunciation).ogg| }}, {{respell|KERR|ə|lə}} <br/> {{IPA|ml|ˈkeːɾɐɭɐm|lang|Ml-Keralam.ogg}} ''[[ISO 15919|ಕೇರಳಂ]]''}} [[ದಕ್ಷಿಣ ಭಾರತ]]ದ [[ಮಲಬಾರ್ ಕರಾವಳಿ]]ಯಲ್ಲಿರುವ ಒಂದು [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]ವಾಗಿದೆ. ಇದನ್ನು 1 ನವೆಂಬರ್ 1956 ರಂದು [[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ರಚಿಸಲಾಯಿತು, ಇದು ದೇಶದ [[ಮಲಯಾಳಂ]] ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿ ಏಕೀಕರಿಸಿತು. {{cvt|38863|km2|sqmi|0}} ವ್ಯಾಪಿಸಿರುವ ಕೇರಳವು ಪ್ರಾಥಮಿಕವಾಗಿ [[ಪಶ್ಚಿಮ ಘಟ್ಟಗಳು]] ಮತ್ತು [[ಲಕ್ಷದ್ವೀಪ ಸಮುದ್ರ]]ದ ನಡುವೆ ಸ್ಯಾಂಡ್ವಿಚ್ ಆಗಿರುವ [[ಪಶ್ಚಿಮ ಕರಾವಳಿ ಬಯಲು|ಕರಾವಳಿ ಬಯಲು]]ಗಳ ಪಟ್ಟಿಯಾಗಿದ್ದು, ಈಶಾನ್ಯಕ್ಕೆ [[ಕರ್ನಾಟಕ]], ಪೂರ್ವಕ್ಕೆ [[ತಮಿಳುನಾಡು]] ಮತ್ತು ಪಶ್ಚಿಮ ಸಮೀಪದಲ್ಲಿ [[ಲಕ್ಷದ್ವೀಪ]] ದ್ವೀಪಗಳಿಂದ ಸುತ್ತುವರೆದಿದೆ. [[2011 ರ ಭಾರತದ ಜನಗಣತಿ|2011 ರ ಜನಗಣತಿಯ]] ಪ್ರಕಾರ 33 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಕೇರಳವು ಭಾರತದ [[ಜನಸಂಖ್ಯೆಯ ಪ್ರಕಾರ ಭಾರತದ ರಾಜ್ಯಗಳ ಪಟ್ಟಿ|13 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ]]. [[ತಿರುವನಂತಪುರ]]ವು ರಾಜಧಾನಿ ನಗರವಾಗಿದ್ದರೆ [[ಕೊಚ್ಚಿ ಮಹಾನಗರ ಪ್ರದೇಶ]]ವು ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶವಾಗಿದೆ. ಮಲಯಾಳಂ ಅತಿ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದ್ದು, ಇಂಗ್ಲಿಷ್ ಜೊತೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ.
ಕೇರಳವು 3000 [[ಸಾಮಾನ್ಯ ಯುಗ|BCE]] ಯಿಂದಲೂ ಮಸಾಲೆಗಳ ಪ್ರಮುಖ ರಫ್ತುದಾರನಾಗಿದೆ. [[ಚೇರ ಸಾಮ್ರಾಜ್ಯ|ಚೇರ]] ರಾಜವಂಶವು, ಈ ಪ್ರದೇಶದ ಮೊದಲ ಪ್ರಮುಖ ಸಾಮ್ರಾಜ್ಯವು, ಸಮುದ್ರ ವಾಣಿಜ್ಯದ ಮೂಲಕ ಪ್ರಾಮುಖ್ಯತೆಗೆ ಏರಿತು ಆದರೆ ಆಗಾಗ್ಗೆ ನೆರೆಯ [[ಚೋಳ]] ಮತ್ತು [[ಪಾಂಡ್ಯ]] ರಾಜವಂಶಗಳ ದಾಳಿಗಳನ್ನು ಎದುರಿಸಿತು. 15 ನೇ ಶತಮಾನದಲ್ಲಿ, ಮಸಾಲೆ ವ್ಯಾಪಾರವು ಪೋರ್ಚುಗೀಸ್ ವ್ಯಾಪಾರಿಗಳನ್ನು ಕೇರಳಕ್ಕೆ ಆಕರ್ಷಿಸಿತು, ಇದು ಭಾರತದಲ್ಲಿ [[ವಸಾಹತುಶಾಹಿ ಭಾರತ|ಯುರೋಪಿಯನ್ ವಸಾಹತುಶಾಹಿಯನ್ನು]] ಪ್ರಾರಂಭಿಸಿತು. [[ಭಾರತೀಯ ಸ್ವಾತಂತ್ರ್ಯ ಚಳುವಳಿ|1947 ರಲ್ಲಿ ಭಾರತದ ಸ್ವಾತಂತ್ರ್ಯದ]] ನಂತರ, [[ತಿರುವಾಂಕೂರು]] ಮತ್ತು [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿ]] ಸಾಮ್ರಾಜ್ಯಗಳು ಹೊಸದಾಗಿ ರೂಪುಗೊಂಡ ಗಣರಾಜ್ಯಕ್ಕೆ ಸೇರಿಕೊಂಡವು ಮತ್ತು 1949 ರಲ್ಲಿ [[ತಿರುವಾಂಕೂರು-ಕೊಚ್ಚಿ]] ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. 1956 ರಲ್ಲಿ, ಆಧುನಿಕ ಕೇರಳ ರಾಜ್ಯವನ್ನು ಹಿಂದಿನ [[ಮದ್ರಾಸ್ ರಾಜ್ಯ]]ದೊಂದಿಗೆ ಪರಿಧಿಯ ಪ್ರದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸ್ಥಾಪಿಸಲಾಯಿತು; [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡ ಜಿಲ್ಲೆಯ]] [[ಕಾಸರಗೋಡು]] ತಾಲೂಕನ್ನು ಕೇರಳವನ್ನು ರೂಪಿಸಲು ತಿರುವಾಂಕೂರು-ಕೊಚ್ಚಿಯೊಂದಿಗೆ ವಿಲೀನಗೊಳಿಸಲಾಯಿತು, ಆದರೆ [[ಕನ್ಯಾಕುಮಾರಿ ಜಿಲ್ಲೆ]] ಮತ್ತು [[ಶೆಂಕೋಟ್ಟೈ ತಾಲೂಕಿನ]] ಭಾಗಗಳನ್ನು ಮದ್ರಾಸ್ ರಾಜ್ಯಕ್ಕೆ ಸೇರಿಸಲಾಯಿತು. ಕೇರಳವು 1984 ರಿಂದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಒಳಗೊಂಡಿದೆ.
ಕೇರಳವು ಅತ್ಯಧಿಕ [[ಮಾನವ ಅಭಿವೃದ್ಧಿ ಸೂಚ್ಯಂಕ|ಮಾನವ ಅಭಿವೃದ್ಧಿ ಸೂಚ್ಯಂಕವನ್ನು]] ಹೊಂದಿದೆ, 2018 ರಲ್ಲಿ 0.784; ಅತ್ಯಧಿಕ ಸಾಕ್ಷರತಾ ಪ್ರಮಾಣ, 2018 ರಲ್ಲಿ 96.2%; ಅತ್ಯಧಿಕ ಜೀವಿತಾವಧಿ, 77.3 ವರ್ಷಗಳು; ಮತ್ತು ಅತ್ಯಧಿಕ [[ಲಿಂಗಾನುಪಾತ]], 1,000 ಪುರುಷರಿಗೆ 1,084 ಮಹಿಳೆಯರು ಮತ್ತು ಭಾರತದಲ್ಲಿ ಅತ್ಯಂತ ಕಡಿಮೆ ಧನಾತ್ಮಕ ಜನಸಂಖ್ಯಾ ಬೆಳವಣಿಗೆ ದರ (3.44%). ಇದು ದೇಶದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಕಡಿಮೆ ಬಡತನ ಹೊಂದಿರುವ]] ಮತ್ತು [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ]] ರಾಜ್ಯವಾಗಿದೆ. ರಾಜ್ಯವು ಗಮನಾರ್ಹವಾದ ವಲಸೆಯನ್ನು ಕಂಡಿದೆ, ವಿಶೇಷವಾಗಿ 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಿಗೆ]], ಮತ್ತು ಅದರ ಆರ್ಥಿಕತೆಯು ದೊಡ್ಡ [[ಮಲಯಾಳಿ]] ವಲಸೆ ಜನಸಂಖ್ಯೆಯಿಂದ ಸ್ಥಳಾಂತರ ವರ್ಗಾವಣೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. [[ಕೇರಳದಲ್ಲಿ ಧರ್ಮ|ಜನಸಂಖ್ಯೆಯ 54% ಕ್ಕಿಂತ ಹೆಚ್ಚು]] ಜನರು ಹಿಂದೂ ಧರ್ಮವನ್ನು ಆಚರಿಸುತ್ತಾರೆ, ನಂತರ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು. ಸಂಸ್ಕೃತಿಯು [[ಆರ್ಯ]] ಮತ್ತು [[ದ್ರಾವಿಡರು|ದ್ರಾವಿಡ]] ಸಂಪ್ರದಾಯಗಳ ಸಮ್ಮಿಳನವಾಗಿದ್ದು, ಸಹಸ್ರಮಾನಗಳಿಂದ ಭಾರತ ಮತ್ತು ವಿದೇಶಗಳಿಂದ ಪ್ರಭಾವಗಳಿಂದ ರೂಪುಗೊಂಡಿದೆ.
[[ಕರಿ ಮೆಣಸು]] ಮತ್ತು [[ನೈಸರ್ಗಿಕ ರಬ್ಬರ್]] ಉತ್ಪಾದನೆಯು ರಾಷ್ಟ್ರೀಯ ಉತ್ಪಾದನೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಕೃಷಿ ವಲಯದಲ್ಲಿ, ತೆಂಗು, ಚಹಾ, ಕಾಫಿ, ಗೋಡಂಬಿ ಮತ್ತು ಮಸಾಲೆಗಳು ಪ್ರಮುಖ ಬೆಳೆಗಳಾಗಿವೆ. ರಾಜ್ಯವು {{convert|595|km|mi}} ಕರಾವಳಿಯನ್ನು ಹೊಂದಿದೆ, ಮತ್ತು 1.1 ಮಿಲಿಯನ್ ಜನರು ಮೀನುಗಾರಿಕಾ ಉದ್ಯಮವನ್ನು ಅವಲಂಬಿಸಿದ್ದಾರೆ, ಇದು ರಾಜ್ಯದ ಆದಾಯದ ಸುಮಾರು 3% ರಷ್ಟಿದೆ. ಆರ್ಥಿಕತೆಯು ಹೆಚ್ಚಾಗಿ ಸೇವಾ ವಲಯ ಆಧಾರಿತವಾಗಿದ್ದರೆ, ಪ್ರಾಥಮಿಕ ವಲಯವು ತುಲನಾತ್ಮಕವಾಗಿ ಚಿಕ್ಕ ಪಾಲನ್ನು ನೀಡುತ್ತದೆ. ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರವನ್ನು]] ಹೊಂದಿದ್ದು, ಒಂಬತ್ತು ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸುತ್ತದೆ, ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್. ಕೇರಳವು ಭಾರತದ ಪ್ರಮುಖ [[ಕೇರಳದ ಪ್ರವಾಸೋದ್ಯಮ|ಪ್ರವಾಸಿ ತಾಣಗಳಲ್ಲಿ]] ಒಂದಾಗಿದೆ, [[ಕೇರಳದ ಬೀಚ್ಗಳು|ತೆಂಗಿನ ಗಿಡಗಳಿಂದ ಕೂಡಿದ ಮರಳು ಕಡಲತೀರಗಳು]], [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳು]], [[ಬೆಟ್ಟದ ತಾಣ]]ಗಳು, [[ಆಯುರ್ವೇದ|ಆಯುರ್ವೇದ ಪ್ರವಾಸೋದ್ಯಮ]] ಮತ್ತು [[ಉಷ್ಣವಲಯದ]] ಹಸಿರು ಅದರ ಪ್ರಮುಖ ಆಕರ್ಷಣೆಗಳಾಗಿವೆ.
== ಹೆಸರು ==
=== ವ್ಯುತ್ಪತ್ತಿ ===
"ಕೇರಳ" ಪದವನ್ನು ಮೊದಲು "ಕೇರಳಪುಟೊ" ('[[ಚೇರ ಸಾಮ್ರಾಜ್ಯ|ಚೇರ]] ರ ಮಗ[ಗಳು]') ಎಂದು [[ಮೌರ್ಯ ಸಾಮ್ರಾಜ್ಯ|ಮೌರ್ಯ ಚಕ್ರವರ್ತಿ]] [[ಅಶೋಕ]] (274–237 BCE) ಅವರು ತಮ್ಮ [[ಅಶೋಕನ ಶಾಸನಗಳು|ಶಾಸನಗಳಲ್ಲಿ]] ಒಂದಾದ ಕಲ್ಯಾಣಕ್ಕೆ ಸಂಬಂಧಿಸಿದ 3 ನೇ ಶತಮಾನದ BCE ಯ ಬಂಡೆಯ ಕೆತ್ತನೆಯಲ್ಲಿ ದಾಖಲಿಸಲಾಗಿದೆ.<ref>{{Cite book |last=P. C. Alexander |title=Buddhism in Kerala |pages=23}}</ref> ಆ ಸಮಯದಲ್ಲಿ, ಈ ಪ್ರದೇಶದ ಮೂರು ರಾಜ್ಯಗಳಲ್ಲಿ ಒಂದನ್ನು ಶಾಸ್ತ್ರೀಯ ತಮಿಳಿನಲ್ಲಿ [[ಚೇರ ಸಾಮ್ರಾಜ್ಯ|{{transliteration|ta|ISO|Ceralam}}]] (ಚೇರಲಂ) ಎಂದು ಕರೆಯಲಾಗುತ್ತಿತ್ತು: {{transliteration|ta|ISO|Cera}} (ಚೇರ) ಮತ್ತು {{transliteration|ta|ISO|Kera}} (ಕೇರ) ಒಂದೇ ಪದದ ರೂಪಾಂತರಗಳಾಗಿವೆ.<ref name="Sainz1972">{{Cite book |last=Nicasio Silverio Sainz |url=https://books.google.com/books?id=AOEBAAAAMAAJ |title=Cuba y la Casa de Austria |publisher=Ediciones Universal |year=1972 |page=120 |access-date=6 January 2013}}</ref> {{transliteration|ta|ISO|Cer al}} (ಚೇರಲ್) ಪದವು ಕೇರಳ ರಾಜರ ಅತ್ಯಂತ ಹಳೆಯ ರಾಜವಂಶವನ್ನು ಸೂಚಿಸುತ್ತದೆ ಮತ್ತು ಇದು ಹಳೆಯ ತಮಿಳು ಪದದಿಂದ 'ಸರೋವರ' ಎಂದು ಬಂದಿದೆ.<ref name="Marr1985">{{Cite book |last=John R. Marr |url=https://books.google.com/books?id=x3gOAAAAYAAJ |title=The Eight Anthologies: A Study in Early Tamil Literature |publisher=Institute of Asian Studies |year=1985 |page=263}}</ref> {{transliteration|ta|ISO|Keralam}} (ಕೇರಳಂ) ಶಾಸ್ತ್ರೀಯ [[ತಮಿಳು ಭಾಷೆ|ತಮಿಳು]] {{transliteration|ta|ISO|cerive-alam}} (ಚೆರಿವೆ-ಆಲಂ) 'ಗುಡ್ಡ ಅಥವಾ ಬೆಟ್ಟದ ಇಳಿಜಾರು'<ref name="AlexDeborah2014">{{Cite book |last1=Rayson K. Alex |url=https://books.google.com/books?id=1swxBwAAQBAJ&pg=PA226 |title=Culture and Media: Ecocritical Explorations |last2=S. Susan Deborah |last3=Sachindev P.S. |publisher=Cambridge Scholars Publishing |year=2014 |isbn=978-1-4438-6190-8 |page=226}}</ref> ಅಥವಾ {{transliteration|ta|ISO|cera alam}} (ಚೇರ ಆಲಂ) 'ಚೇರರ ಭೂಮಿ' ಎಂಬುದರಿಂದ ಹುಟ್ಟಿಕೊಂಡಿರಬಹುದು. ಒಂದು [[ಜಾನಪದ ವ್ಯುತ್ಪತ್ತಿ]] ''ಕೇರಳ'' ವನ್ನು [[ಮಲಯಾಳಂ]] ಪದ {{transliteration|ml|ISO|kera}} (ಕೇರ) 'ತೆಂಗಿನ ಮರ' ಮತ್ತು {{transliteration|ml|ISO|alam}} (ಆಲಂ) 'ಭೂಮಿ' ಎಂಬುದರಿಂದ ಪಡೆಯುತ್ತದೆ; ಹೀಗೆ, 'ತೆಂಗಿನ ಮರಗಳ ನಾಡು',<ref name="Sadasivan2000">{{Cite book |last=S. N. Sadasivan |url=https://books.google.com/books?id=Be3PCvzf-BYC&pg=PA101 |title=A Social History of India |publisher=APH Publishing |year=2000 |isbn=978-8176481700 |page=101}}</ref> ಇದು ತೆಂಗಿನ ಮರಗಳ ಸಮೃದ್ಧಿಯಿಂದಾಗಿ ಸ್ಥಳೀಯರು ಬಳಸುವ ರಾಜ್ಯದ ಅಡ್ಡಹೆಸರಾಗಿದೆ.<ref name="PreedyWatson2011">{{Cite book |last1=Victor R. Preedy |url=https://books.google.com/books?id=C6lYoH8rwywC&pg=PT400 |title=Nuts and Seeds in Health and Disease Prevention |last2=Ronald Ross Watson |last3=Vinood B. Patel |publisher=Academic Press |year=2011 |isbn=978-0-12-375689-3 |page=400}}</ref> ಕೇರಳವನ್ನು [[ಭಾರತೀಯ ಮಹಾಸಾಗರದ ವ್ಯಾಪಾರ|ವಿದೇಶಿ ವ್ಯಾಪಾರ ವಲಯಗಳಲ್ಲಿ]] ಪರ್ಯಾಯವಾಗಿ ''[[ಮಲಬಾರ್ ಕರಾವಳಿ|ಮಲಬಾರ್]]'' ಎಂದು ಕರೆಯಲಾಗುತ್ತಿತ್ತು. [[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟೆಸ್]] (6 ನೇ ಶತಮಾನ CE) ಕಾಲದಿಂದಲೂ, [[ಅರಬ್ಬರು|ಅರಬ್]] ನಾವಿಕರು ಕೇರಳವನ್ನು ''ಮೇಲ್'' ಎಂದು ಕರೆಯುತ್ತಿದ್ದರು.{{citation needed|date=October 2025}}
=== ಕೇರಳಂ ಎಂದು ಮರುನಾಮಕರಣ ===
ರಾಜ್ಯದ [[ಮಲಯಾಳಂ]] ಹೆಸರಾದ ಕೇರಳಂ ಎಂದು ಹೆಸರನ್ನು ಬದಲಾಯಿಸಲು ದೀರ್ಘಕಾಲದಿಂದ ಬೇಡಿಕೆಗಳಿವೆ. ಅಧಿಕೃತವಾಗಿ, ರಾಜ್ಯದ ಹೆಸರು ಮಲಯಾಳಂನಲ್ಲಿ 'ಕೇರಳಂ' (കേരളം) ಆಗಿದ್ದರೆ, ಅದರ ಇಂಗ್ಲಿಷ್ ಹೆಸರು 'ಕೇರಳ' ಆಗಿದೆ.<ref>{{Cite web |last=Vineeth |first=T. K. |date=2026-03-07 |title=KERALA-M: What's in a name? |url=https://www.newindianexpress.com/explainers/2026/Mar/07/kerala-m-whats-in-a-name |access-date=2026-03-13 |website=The New Indian Express |language=en}}</ref><ref>{{Cite web |title=Renaming Kerala: Modi Hails Kerala's New Name Keralam |url=https://www.deccanherald.com/india/kerala/rightful-name-as-per-malayali-culture-pm-modi-praises-renaming-of-kerala-to-keralam-3927718 |access-date=2026-03-13 |website=Deccan Herald |language=en}}</ref> [[ಕೇರಳ ವಿಧಾನಸಭೆ]]ಯು ಜೂನ್ 2024 ರಲ್ಲಿ ರಾಜ್ಯದ ಹೆಸರನ್ನು 'ಕೇರಳ' ದಿಂದ 'ಕೇರಳಂ' ಗೆ ಬದಲಾಯಿಸಲು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು, ಇದು ಆಗಸ್ಟ್ 2023 ರ ಹಿಂದಿನ ಸರ್ವಾನುಮತದ ನಿರ್ಣಯವನ್ನು ಅನುಸರಿಸಿತು. [[ಕೇರಳದ ಮುಖ್ಯಮಂತ್ರಿ|ಮುಖ್ಯಮಂತ್ರಿ]] [[ಪಿಣರಾಯಿ ವಿಜಯನ್]] ಅವರು ಎರಡೂ ನಿರ್ಣಯಗಳನ್ನು ಮಂಡಿಸಿದ್ದರು, ಇದು ಅದರ [[ಮಲಯಾಳಿ]] ಗುರುತನ್ನು ಪ್ರತಿಬಿಂಬಿಸಲು ಸಂವಿಧಾನದ ಅನುಚ್ಛೇದ 3 ರ ಅಡಿಯಲ್ಲಿ ರಾಜ್ಯದ ಹೆಸರನ್ನು ತಿದ್ದುಪಡಿ ಮಾಡಲು ಪ್ರಯತ್ನಿಸಿತು.<ref name="auto1">{{cite web | last=TNIE online desk | first=Agencies | title=Ahead of polls, Union Cabinet approves Kerala's renaming to 'Keralam' | website=The New Indian Express | date=2026-02-24 | url=https://www.newindianexpress.com/states/kerala/2026/Feb/24/union-cabinet-approves-keralas-renaming-to-keralam-ahead-of-polls | access-date=2026-02-24}}</ref>
[[ಮೂರನೇ ಮೋದಿ ಸಚಿವ ಸಂಪುಟ|ಕೇಂದ್ರ ಸಚಿವ ಸಂಪುಟ]]ವು ಈ ಪ್ರಸ್ತಾಪವನ್ನು ಫೆಬ್ರವರಿ 24, 2026 ರಂದು ಅನುಮೋದಿಸಿತು. ಸಚಿವ ಸಂಪುಟದ ಅನುಮೋದನೆಯ ನಂತರ, [[ಭಾರತದ ರಾಷ್ಟ್ರಪತಿ]]ಗಳು ಕೇರಳ (ಹೆಸರು ಬದಲಾವಣೆ) ಮಸೂದೆ, 2026 ಅನ್ನು ಭಾರತದ ಸಂವಿಧಾನದ ಅನುಚ್ಛೇದ 3 ರ ಷರತ್ತಿನ ಅಡಿಯಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು [[ಕೇರಳ ವಿಧಾನಸಭೆ|ರಾಜ್ಯ ವಿಧಾನಸಭೆಗೆ]] ಉಲ್ಲೇಖಿಸುತ್ತಾರೆ.<ref name="auto">{{cite web | title=Kerala will now be called Keralam | website=India Today | date=2026-02-24 | url=https://www.indiatoday.in/india/story/union-cabinet-approves-proposal-renaming-kerala-to-keralam-2873528-2026-02-24 | access-date=2026-02-24}}</ref>
[[ಕೇರಳ ವಿಧಾನಸಭೆ]]ಯ ಅನುಮೋದನೆಯ ನಂತರ, ಈ ಮಸೂದೆಯನ್ನು [[ಭಾರತದ ಸಂಸತ್ತಿನಲ್ಲಿ]] ಮಂಡಿಸಲಾಗುವುದು ಮತ್ತು ಅಂಗೀಕರಿಸಿದರೆ, ರಾಜ್ಯದ ಹೆಸರು ಅಧಿಕೃತವಾಗಿ ಕೇರಳಂ ಆಗುತ್ತದೆ.
== ಇತಿಹಾಸ ==
{{Main|ಕೇರಳದ ಇತಿಹಾಸ}}
=== ದಂತಕಥೆ ===
[[File:Parshuramsaraswats.jpg|thumb|[[ಪರಶುರಾಮ]]ನನ್ನು ಚಿತ್ರಿಸುವ ವರ್ಣಚಿತ್ರ, ವಸಾಹತುಗಾರರಿಂದ ಸುತ್ತುವರಿದು, [[ವರುಣ]] ([[ಹಿಂದೂ]] ಜಲದೇವತೆ) ನನ್ನು ಸಮುದ್ರಗಳನ್ನು ಬೇರ್ಪಡಿಸಲು ಆಜ್ಞಾಪಿಸುತ್ತಾನೆ]]
[[ಹಿಂದೂ]] ಪುರಾಣಗಳ [[ದಶಾವತಾರ]] ಕಥೆಗಳಲ್ಲಿ, ಕೇರಳದ ಭೂಮಿಯನ್ನು ಕೊಡಲಿ-ಧಾರಿಯ ವೀರ ಋಷಿ [[ಪರಶುರಾಮ]]ನು, [[ವಿಷ್ಣು]]ವಿನ ಆರನೇ [[ಅವತಾರ]] (ಅವತಾರ), ಸಮುದ್ರದಿಂದ ಮರಳಿ ಪಡೆದನು. ಪರಿಣಾಮವಾಗಿ, ಕೇರಳವನ್ನು ಸಾಂಪ್ರದಾಯಿಕವಾಗಿ ''ಪರಶುರಾಮ ಕ್ಷೇತ್ರಂ'' ("ಪರಶುರಾಮನ ನಾಡು") ಎಂದು ಕರೆಯಲಾಗುತ್ತದೆ.<ref>S. C. Bhatt, Gopal K. Bhargava (2006) "Land and People of Indian States and Union Territories: Volume 14.", p.18</ref> ದಂತಕಥೆಯ ಪ್ರಕಾರ, ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರದ ಮೇಲೆ ಎಸೆದನು, ಮತ್ತು ಅದು ಬಿದ್ದ ಸ್ಥಳದವರೆಗೆ ನೀರು ಹಿಂಜರಿಯಿತು. ಈ ರೀತಿ ಹೊರಹೊಮ್ಮಿದ ಭೂಮಿಯು [[ಗೋಕರ್ಣ]]ದಿಂದ [[ಕನ್ಯಾಕುಮಾರಿ]]ಯವರೆಗೆ ವಿಸ್ತರಿಸಿತು.<ref>{{cite book |author=Aiya VN |title=The Travancore State Manual|publisher=Travancore Government Press |pages=210–212 |year=1906 |accessdate=12 November 2007 |url=https://books.google.com/books?id=RdzaPW-kEvQC}}</ref> ಹೊರಹೊಮ್ಮಿದ ಭೂಮಿಯು ಲವಣಯುಕ್ತ ಮತ್ತು ವಾಸಯೋಗ್ಯವಾಗಿರಲಿಲ್ಲ, ಆದ್ದರಿಂದ ಪರಶುರಾಮನು ಸರ್ಪರಾಜ [[ವಾಸುಕಿ]]ಯನ್ನು ಪ್ರಾರ್ಥಿಸಿದನು, ಅವನು ಮಣ್ಣನ್ನು ಶುದ್ಧೀಕರಿಸಲು ಪವಿತ್ರ ವಿಷವನ್ನು ಉಗುಳಿದನು, ಅದನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದನು. ಗೌರವದಿಂದ, ವಾಸುಕಿ ಮತ್ತು ಎಲ್ಲಾ ಹಾವುಗಳನ್ನು ಭೂಮಿಯ ರಕ್ಷಕರಾಗಿ ನೇಮಿಸಲಾಯಿತು. ಈ ದಂತಕಥೆಯನ್ನು 17 ನೇ ಅಥವಾ 18 ನೇ ಶತಮಾನದ ಪಠ್ಯ ''[[ಕೇರಳೋಲ್ಪತ್ತಿ]]'' ಯಲ್ಲಿ ವಿಸ್ತರಿಸಲಾಯಿತು ಮತ್ತು ಸಂಹಿತೆಗೊಳಿಸಲಾಯಿತು. ಇದು ಆರಂಭಿಕ ಕೇರಳ ಸಂಸ್ಥೆಗಳ{{mdash}}ಉದಾಹರಣೆಗೆ ಭೂ ಹಿಡುವಳಿ ಮತ್ತು ಆಡಳಿತ{{mdash}}ಮೂಲವನ್ನು ಪರಶುರಾಮನ ಕಥೆಗೆ ಸಂಪರ್ಕಿಸುತ್ತದೆ.<ref>{{cite book|author=M. T. Narayanan|title=Agrarian Relations in Late Medieval Malabar|url=https://books.google.com/books?id=kHtbkuXruzwC&pg=PA17|accessdate=28 July 2012|date=1 January 2003|publisher=Northern Book Centre|isbn=978-81-7211-135-9|pages=16–18}}</ref> ಮಧ್ಯಕಾಲೀನ ಯುಗದಲ್ಲಿ, [[ಚೇರ]] ರಾಜ [[ಚೆಂಕುಟ್ಟುವನ್]] ತನ್ನ ಈಟಿಯನ್ನು ಸಮುದ್ರಕ್ಕೆ ಎಸೆಯುವ ಮೂಲಕ ಪರಶುರಾಮ ಸಂಪ್ರದಾಯವನ್ನು ಅನುಕರಿಸಿರಬಹುದು, ಅದರ ಮೇಲಿನ ತನ್ನ ಪ್ರಭುತ್ವವನ್ನು ಸಂಕೇತಿಸಲು.<ref>{{Cite book |last=Srinivisa Iyengar |first=P. T. |title=History of the Tamils: From the Earliest Times to 600 A.D. |publisher=Asian Educational Services |year=1929 |isbn=978-8120601451 |location=Madras |page=515}}</ref>
ಕೇರಳದೊಂದಿಗೆ ಸಂಬಂಧಿಸಿದ ಪ್ರಮುಖ [[ಪೌರಾಣಿಕ]] ವ್ಯಕ್ತಿಯೆಂದರೆ [[ಮಹಾಬಲಿ]], ಒಬ್ಬ [[ಅಸುರ]] ಮತ್ತು ಮಾದರಿ ನ್ಯಾಯಪ್ರಿಯ ರಾಜ, ಅವರು ಕೇರಳದಿಂದ ಭೂಮಿಯನ್ನು ಆಳಿದರು ಎಂದು ಹೇಳಲಾಗುತ್ತದೆ. ಅವನು ಯುದ್ಧದಲ್ಲಿ [[ದೇವ (ಹಿಂದೂ ಧರ್ಮ)|ದೇವ]] ಗಳನ್ನು ಸೋಲಿಸಿ, ಅವರನ್ನು ಗಡಿಪಾರು ಮಾಡಿದನು. ಪ್ರತಿಕ್ರಿಯೆಯಾಗಿ, ದೇವರುಗಳು ವಿಷ್ಣುವಿಗೆ ಮನವಿ ಮಾಡಿದರು, ಅವರು [[ವಾಮನ]]ನಾಗಿ ತಮ್ಮ ಐದನೇ ಅವತಾರವನ್ನು ತಾಳಿದರು ಮತ್ತು ಕ್ರಮವನ್ನು ಪುನಃಸ್ಥಾಪಿಸಲು, ಮಹಾಬಲಿಯನ್ನು [[ಪಾತಾಳ]] (ಪಾತಾಳ ಲೋಕ) ಕೆಳಗೆ ತಳ್ಳಿದರು. ಜನಪ್ರಿಯ ನಂಬಿಕೆಯ ಪ್ರಕಾರ, ಮಹಾಬಲಿ ವರ್ಷಕ್ಕೊಮ್ಮೆ ಕೇರಳಕ್ಕೆ ಹಿಂತಿರುಗುತ್ತಾನೆ, ಇದನ್ನು [[ಓಣಂ]] ಹಬ್ಬವಾಗಿ ಆಚರಿಸಲಾಗುತ್ತದೆ.<ref name="Rinehart2004">{{cite book|author=Robin Rinehart|title=Contemporary Hinduism: Ritual, Culture, and Practice|url=https://books.google.com/books?id=hMPYnfS_R90C&pg=PA146|accessdate=28 July 2012|year=2004|publisher=ABC-CLIO|isbn=978-1-57607-905-8|page=146}}</ref> 18 [[ಪುರಾಣಗಳಲ್ಲಿ]] ಅತ್ಯಂತ ಹಳೆಯದಾದ ''[[ಮತ್ಸ್ಯ ಪುರಾಣ]]''ವು,<ref>{{cite book|last=Goldberg|first=Ellen|title=The Lord who is Half Woman: Ardhanārīśvara in Indian and Feminist Perspective|url=https://books.google.com/books?id=xUhlxBozntoC&pg=PA20|year=2002|publisher=SUNY Press|isbn=978-0-7914-5325-4|page=20|accessdate=30 May 2015}}</ref><ref>{{cite book|last=Kemmerer|first=Lisa|title=Animals and World Religions|url=https://books.google.com/books?id=iFEL2yjkbAAC&pg=PA78|year=2011|publisher=Oxford University Press|isbn=978-0-19-991255-1|page=78|accessdate=30 May 2015}}</ref> [[ಮತ್ಸ್ಯ]]ದ{{mdash}}ವಿಷ್ಣುವಿನ ಮೊದಲ ಅವತಾರ{{mdash}}ಮತ್ತು ರಾಜ [[ಮನು (ಹಿಂದೂ ಧರ್ಮ)|ಮನು]]ನ ಕಥೆಯನ್ನು, ಮೊದಲ ಮನುಷ್ಯ ಮತ್ತು ಈ ಪ್ರದೇಶದ ಆಡಳಿತಗಾರ, ಕೇರಳ ಮತ್ತು [[ತಮಿಳುನಾಡಿನ]] [[ಮಲಯ ಪರ್ವತಗಳಲ್ಲಿ]] ಇರಿಸುತ್ತದೆ.<ref>{{cite book|last=Dalal|first=Roshen|title=Hinduism: An Alphabetical Guide|url=https://books.google.com/books?id=DH0vmD8ghdMC&pg=PA250|year=2011|publisher=Penguin Books India|isbn=978-0-14-341421-6|page=250|accessdate=30 May 2015}}</ref><ref>{{cite book|last=Ragozin|first=Zenaide A.|title=Vedic India As Embodied Principally in the Rig-veda|url=https://books.google.com/books?id=T16d-eRG5VkC&pg=PA341|year=2005|publisher=Kessinger Publishing|isbn=978-1-4179-4463-7|page=341|accessdate=21 March 2013}}</ref>
=== ಪ್ರಾಗಿತಿಹಾಸ ===
[[File:MarayoorDolmen.JPG|thumb|[[ಮಾರಯೂರು|ಮಾರಯೂರಿನಲ್ಲಿ]] ನವಶಿಲಾಯುಗದ ಜನರು ನಿರ್ಮಿಸಿದ [[ಡಾಲ್ಮೆನ್]]]]
ಪ್ರಸ್ತುತ ಕೇರಳದ ಗಣನೀಯ ಭಾಗವು ಪ್ರಾಚೀನ ಕಾಲದಲ್ಲಿ ಸಮುದ್ರದ ಅಡಿಯಲ್ಲಿ ಮುಳುಗಿತ್ತು ಎಂದು ನಂಬಲಾಗಿದೆ. ಚಂಗನಾಶ್ಶೇರಿಯ ಬಳಿ ಸಾಗರಿಕ ಪಳೆಯುಳಿಕೆಗಳ ಆವಿಷ್ಕಾರವು ಈ ಊಹೆಯನ್ನು ಬೆಂಬಲಿಸುತ್ತದೆ.<ref name="Menon2007">{{cite book|author=A. Sreedhara Menon|title=A Survey of Kerala History|url=https://books.google.com/books?id=FVsw35oEBv4C&pg=PA20|accessdate=27 July 2012|date=1 January 2007|publisher=DC Books|isbn=978-81-264-1578-6|pages=20–21}}</ref> ಕೇರಳದಲ್ಲಿನ ಪ್ರಾಗೈತಿಹಾಸಿಕ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರಗಳು ಇಡುಕ್ಕಿ ಜಿಲ್ಲೆಯ [[ಮಾರಯೂರು]] ಪ್ರದೇಶದಲ್ಲಿ [[ನವಶಿಲಾಯುಗ]]-ಯುಗದ [[ಡಾಲ್ಮೆನ್]]ಗಳನ್ನು ಒಳಗೊಂಡಿವೆ, ಸ್ಥಳೀಯವಾಗಿ ''ಮುನಿಯಾರ'' ಎಂದು ಕರೆಯಲಾಗುತ್ತದೆ{{mdash}}''ಮುನಿ'' (ಸನ್ಯಾಸಿ ಅಥವಾ ಋಷಿ) ಮತ್ತು ''ಆರ'' (ಡಾಲ್ಮೆನ್) ನಿಂದ ಬಂದಿದೆ.<ref name="Unlocking the secrets of history">{{cite news|url=http://www.hindu.com/2004/12/06/stories/2004120604900300.htm | location=Chennai, India | work=The Hindu | title=Unlocking the secrets of history | date=6 December 2004 | accessdate= 12 November 2015}}</ref> [[ವಯನಾಡಿನ]] [[ಎಡಕ್ಕಲ್ ಗುಹೆಗಳು|ಎಡಕ್ಕಲ್ ಗುಹೆಗಳಲ್ಲಿನ]] ಬಂಡೆಯ ಕೆತ್ತನೆಗಳು ಸುಮಾರು 6000 BCE ಯ ನವಶಿಲಾಯುಗದ ಅವಧಿಯ ಹಿಂದಿನವು.<ref name="Kapoor2002">{{cite book|author=Subodh Kapoor|title=The Indian Encyclopaedia|url=https://books.google.com/books?id=gxIpYtnyzu4C&pg=PA2184|accessdate=1 August 2012|date=1 July 2002|publisher=Cosmo Publications|isbn=978-81-7755-257-7|page=2184}}</ref><ref>{{cite web|title=Travel and Tourism|url=http://www.kerala.gov.in/index.php?option=com_content&view=article&id=3792:travel-and-tourism&catid=271:about-kerala&Itemid=2267|website=kerala.gov.in|publisher=Government of Kerala|accessdate=12 November 2015}}</ref> ಪುರಾತತ್ತ್ವ ಶಾಸ್ತ್ರದ ಅಧ್ಯಯನಗಳು ಈ ಪ್ರದೇಶದಾದ್ಯಂತ [[ಮಧ್ಯಶಿಲಾಯುಗ]], ನವಶಿಲಾಯುಗ ಮತ್ತು [[ಮೆಗಾಲಿಥಿಕ್]] ತಾಣಗಳನ್ನು ಗುರುತಿಸಿವೆ.<ref name="AroraSingh116">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=116}}</ref> ಈ ಆವಿಷ್ಕಾರಗಳು ಆರಂಭಿಕ ಕೇರಳ ಸಮಾಜ ಮತ್ತು ಸಂಸ್ಕೃತಿಯ ಅಭಿವೃದ್ಧಿಯು [[ಪ್ಯಾಲಿಯೋಲಿಥಿಕ್|ಪ್ಯಾಲಿಯೋಲಿಥಿಕ್ ಯುಗದಲ್ಲಿ]] ಪ್ರಾರಂಭವಾಯಿತು ಮತ್ತು ಮಧ್ಯಶಿಲಾಯುಗ, ನವಶಿಲಾಯುಗ ಮತ್ತು ಮೆಗಾಲಿಥಿಕ್ ಅವಧಿಗಳ ಮೂಲಕ ಮುಂದುವರೆಯಿತು ಎಂದು ಸೂಚಿಸುತ್ತವೆ.<ref name="google">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|pages=118, 123}}</ref> ವಿದೇಶಿ ಸಾಂಸ್ಕೃತಿಕ ಸಂವಹನಗಳು ಸಹ ಈ ಅಭಿವೃದ್ಧಿಯನ್ನು ರೂಪಿಸುವಲ್ಲಿ ಪಾತ್ರವಹಿಸಿವೆ;<ref name="AroraSingh1999">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=123}}</ref> ಕೆಲವು ಇತಿಹಾಸಕಾರರು ಕೊನೆಯ [[ಕಂಚಿನ ಯುಗ]] ಮತ್ತು ಆರಂಭಿಕ [[ಕಬ್ಬಿಣ ಯುಗ|ಕಬ್ಬಿಣದ ಯುಗ]]ದಲ್ಲಿ [[ಸಿಂಧೂ ಕಣಿವೆ ನಾಗರಿಕತೆ]]ಯೊಂದಿಗೆ ಸಂಭವನೀಯ ಸಂಪರ್ಕಗಳನ್ನು ಸೂಚಿಸುತ್ತಾರೆ.<ref>{{cite news|url=http://www.thehindu.com/news/states/article26324.ece | work=The Hindu | title=Symbols akin to Indus valley culture discovered in Kerala | date=29 September 2009 |accessdate= 12 November 2015}}</ref>
=== ಪ್ರಾಚೀನ ಇತಿಹಾಸ ===
[[File:Silk route copy.jpg|thumb|225px|[[ರೇಷ್ಮೆ ಮಾರ್ಗ]] ನಕ್ಷೆ. ಮಸಾಲೆ ವ್ಯಾಪಾರವು ಜಲಮಾರ್ಗಗಳಲ್ಲಿತ್ತು (ನೀಲಿ).]]
[[ಸುಮೇರ್|ಸುಮೇರಿಯನ್]] ದಾಖಲೆಗಳ ಪ್ರಕಾರ, ಕೇರಳವು ಕನಿಷ್ಠ 3000 BCE ಯಿಂದಲೂ ಪ್ರಮುಖ ಮಸಾಲೆ ರಫ್ತುದಾರನಾಗಿದೆ ಮತ್ತು ಇದು "ಮಸಾಲೆಗಳ ತೋಟ" ಅಥವಾ "ಭಾರತದ ಮಸಾಲೆ ತೋಟ" ಎಂದು ಉಲ್ಲೇಖಿಸಲ್ಪಡುತ್ತದೆ.<ref>{{cite news|url=http://www.thehindu.com/todays-paper/tp-national/tp-kerala/of-kerala-egypt-and-the-spice-link/article5625620.ece | first = Kaavya | last = Pradeep Kumar | work=The Hindu | title=Of Kerala, Egypt, and the Spice link | date=28 January 2014 | accessdate=12 November 2015}}</ref><ref>[https://books.google.com/books?id=gOrvghLklKoC ''Striving for sustainability, environmental stress and democratic initiatives in Kerala''], p. 79; ISBN 81-8069-294-9, Srikumar Chattopadhyay, Richard W. Franke; Year: 2006.</ref><ref name="spiceHindu">{{Cite news |title=Route it through the seas |newspaper=The Hindu |date=December 2016 |url=https://www.thehindu.com/children/ROUTE-it-through-the-seas/article16735515.ece |access-date=2024-01-08 |archive-date=5 March 2022 |archive-url=https://web.archive.org/web/20220305035957/https://www.thehindu.com/children/ROUTE-it-through-the-seas/article16735515.ece |url-status=live |last1=Subramanian |first1=Archana }}</ref> ಈ ಪ್ರದೇಶದ ಮಸಾಲೆಗಳು 3 ಮತ್ತು 2 ನೇ ಸಹಸ್ರಮಾನ BCE ಯಲ್ಲಿ ಮಲಬಾರ್ ಕರಾವಳಿಗೆ ಪ್ರಾಚೀನ [[ಬ್ಯಾಬಿಲೋನಿಯನ್ನರು]], [[ಅಸಿರಿಯನ್ನರು]] ಮತ್ತು [[ಈಜಿಪ್ಟಿನವರು|ಈಜಿಪ್ಟಿನವರನ್ನು]] ಆಕರ್ಷಿಸಿದವು. [[ಅರಬ್ಬರು]] ಮತ್ತು [[ಫೀನಿಷಿಯನ್ನರು]] ಸಹ ಈ ಅವಧಿಯಲ್ಲಿ ಕೇರಳದೊಂದಿಗೆ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಿದರು.<ref name="Menon57">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA57|accessdate=10 October 2012|date=1 January 2007|publisher=DC Books|isbn=978-81-264-1578-6|pages=57–58}}</ref> ಕೇರಳಪುತ್ರದ ಭೂಮಿಯು ಚಕ್ರವರ್ತಿ ಅಶೋಕನ ಕಾಲದಲ್ಲಿ ದಕ್ಷಿಣ ಭಾರತದ ನಾಲ್ಕು ಸ್ವತಂತ್ರ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು, [[ಚೋಳ ಸಾಮ್ರಾಜ್ಯ|ಚೋಳ]], [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಮತ್ತು [[ಸತಿಯಪುತ್ರರು|ಸತಿಯಪುತ್ರ]] ಸಾಮ್ರಾಜ್ಯಗಳ ಜೊತೆಗೆ.<ref name="SmithJackson2008">{{cite book|author1=Vincent A. Smith|author2=A. V. Williams Jackson|title=History of India, in Nine Volumes: Vol. II – From the Sixth Century BCE to the Mohammedan Conquest, Including the Invasion of Alexander the Great|url=https://books.google.com/books?id=bP7DzXQBoM4C&pg=PA166|accessdate=1 August 2012|date=30 November 2008|publisher=Cosimo, Inc.|isbn=978-1-60520-492-5|page=166}}</ref> ವಿದ್ವಾಂಸರು ಸಾಮಾನ್ಯವಾಗಿ ಕೇರಳಪುತ್ರವನ್ನು [[ಚೇರ ಸಾಮ್ರಾಜ್ಯ|ಚೇರರು]] ಎಂದು ಗುರುತಿಸುತ್ತಾರೆ, ಇದು ಕೇರಳದ ಅತ್ಯಂತ ಹಳೆಯ ಪ್ರಮುಖ ರಾಜವಂಶವಾಗಿದೆ.<ref name="The Cambridge Shorter History of India">{{cite book|title=The Cambridge Shorter History of India|url=https://books.google.com/books?id=9_48AAAAIAAJ&pg=PA193|accessdate=10 October 2012|publisher=CUP Archive|page=193|id=GGKEY:2W0QHXZ7K40}}</ref><ref name="Dwivedi1994">{{cite book|author=Bhanwar Lal Dwivedi|title=Evolution of Education Thought in India|url=https://books.google.com/books?id=idERT6Tg4MMC&pg=PA164|accessdate=10 October 2012|date=1 January 1994|publisher=Northern Book Centre|isbn=978-81-7211-059-8|page=164}}</ref> ಈ ದಕ್ಷಿಣ ಪ್ರದೇಶಗಳು ಒಮ್ಮೆ ಸಾಮಾನ್ಯ ಭಾಷೆ ಮತ್ತು ಸಾಂಸ್ಕೃತಿಕ ಚೌಕಟ್ಟನ್ನು ಹಂಚಿಕೊಂಡಿದ್ದವು, ಇತಿಹಾಸದಲ್ಲಿ [[ತಮಿಳಕಂ]] ಎಂದು ಕರೆಯಲ್ಪಡುವ ಪ್ರದೇಶದೊಳಗೆ.<ref>{{Cite book
| last=Kanakasabhai | first=V.
| title=The Tamils Eighteen Hundred Years Ago
| url=https://books.google.com/books?id=VuvshP5_hg8C
| year=1997
| publisher=Asian Educational Services
| isbn=978-81-206-0150-5
| accessdate=16 June 2009}}</ref> ಚೇರರು ಪ್ರಸ್ತುತ ಕೇರಳದ ಹೆಚ್ಚಿನ ಭಾಗವನ್ನು ಆಳಿದರೆ, ಪ್ರದೇಶದ ದಕ್ಷಿಣ ತುದಿಯು [[ಪಾಂಡ್ಯರ]] ನಿಯಂತ್ರಣಕ್ಕೆ ಒಳಪಟ್ಟಿತ್ತು,<ref name="Singh2008">{{cite book|author=Upinder Singh|title=A History of Ancient and Early Medieval India: From the Stone Age to the 12th Century|url=https://books.google.com/books?id=GW5Gx0HSXKUC&pg=PA385|accessdate=10 October 2012|year=2008|publisher=Pearson Education India|isbn=978-81-317-1677-9|page=385}}</ref> ಅವರ ವ್ಯಾಪಾರ ಬಂದರನ್ನು ಪ್ರಾಚೀನ ಪಾಶ್ಚಾತ್ಯ ಮೂಲಗಳಲ್ಲಿ [[ನೆಲ್ಸಿಂಡಾ]] (ಅಥವಾ ನಿಯಾಸಿಂಡಿ) ಎಂದು ಗುರುತಿಸಲಾಗಿದೆ.<ref name="Books.google.co.in">{{Cite book|url=https://books.google.com/books?id=rQipbjusDyQC&dq=nelcynda&pg=PA301 |title=History of ancient geography – Google Books |author=James Oliver Thomson|publisher=Biblo & Tannen Publishers, 1948|accessdate=30 July 2009|isbn=978-0-8196-0143-8|year=1948}}</ref> ನಂತರ, ಈ ಪ್ರದೇಶದ ನಿಯಂತ್ರಣವು ಪಾಂಡ್ಯರು, ಚೇರರು ಮತ್ತು ಚೋಳರ ನಡುವೆ ಪರ್ಯಾಯವಾಗಿತ್ತು. [[ಆಯ್ ಸಾಮ್ರಾಜ್ಯ|ಆಯ್ಸ್]] ಮತ್ತು [[ಎಝಿಮಲ ಸಾಮ್ರಾಜ್ಯ|ಮುಷಿಕರು]] ಪ್ರಾಚೀನ ಕೇರಳದ ಇತರ ಎರಡು ರಾಜವಂಶಗಳಾಗಿದ್ದು, ಕ್ರಮವಾಗಿ ಚೇರ ಪ್ರದೇಶದ ದಕ್ಷಿಣ ಮತ್ತು ಉತ್ತರಕ್ಕೆ ನೆಲೆಗೊಂಡಿದ್ದವು.<ref name="Shashi1996">{{cite book|author=S. S. Shashi|title=Encyclopaedia Indica: India, Pakistan, Bangladesh|url=https://books.google.com/books?id=lwswAQAAIAAJ|accessdate=10 October 2012|year=1996|publisher=Anmol Publications|isbn=978-81-7041-859-7|page=1207}}</ref><ref name="Ramunny1993">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA3|accessdate=10 October 2012|date=1 January 1993|publisher=Northern Book Centre|isbn=978-81-7211-052-9|page=3}}</ref>
ಕೊನೆಯ ಶತಮಾನಗಳ BCE ಯ ಹೊತ್ತಿಗೆ, ಕರಾವಳಿಯು ಗ್ರೀಕ್ ಮತ್ತು ರೋಮನ್ ವ್ಯಾಪಾರಕ್ಕೆ, ವಿಶೇಷವಾಗಿ [[ಕರಿ ಮೆಣಸು|ಕರಿಮೆಣಸಿನಲ್ಲಿ]] ಪ್ರಮುಖ ಕೇಂದ್ರವಾಗಿತ್ತು. ಚೇರರು [[ಪ್ರಾಚೀನ ಚೀನಾ]], [[ಪಶ್ಚಿಮ ಏಷ್ಯಾ]], ಈಜಿಪ್ಟ್, ಗ್ರೀಸ್ ಮತ್ತು [[ರೋಮನ್ ಸಾಮ್ರಾಜ್ಯ]]ದೊಂದಿಗೆ ವಾಣಿಜ್ಯ ಸಂಪರ್ಕಗಳನ್ನು ಹೊಂದಿದ್ದರು. ವಿದೇಶಿ ವ್ಯಾಪಾರ ದಾಖಲೆಗಳಲ್ಲಿ, ಈ ಪ್ರದೇಶವನ್ನು ಮೇಲ್ ಅಥವಾ [[ಮಲಬಾರ್ ಕರಾವಳಿ|ಮಲಬಾರ್]] ಎಂದು ಕರೆಯಲಾಗುತ್ತಿತ್ತು.<ref>{{cite web | url=http://www.siamese-heritage.org/jsspdf/1961/JSS_054_1c_Minattur_MalayaWhatsInAName.pdf | title=Malaya: What's in the name | publisher=siamese-heritage.org | accessdate=7 August 2012 | author=Joseph Minattur | page=1}}</ref> ಆ ಕಾಲದ ಪ್ರಮುಖ ಬಂದರುಗಳು [[ಮುಝಿರಿಸ್]], ಬೆರ್ಕರೈ ಮತ್ತು ನೆಲ್ಸಿಂಡಾ.<ref name="Kusuman">{{cite book |author=K. K. Kusuman |title=A History of Trade & Commerce in Travancore |publisher=Mittal Publications |year=1987 |isbn=978-81-7099-026-0 |url=https://books.google.com/books?id=qbNuyHswr1cC |pages=1–2 |accessdate=30 May 2015}}</ref> ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವನ್ನು 50 ಮಿಲಿಯನ್ [[ಸೆಸ್ಟರ್ಸಸ್]] ಎಂದು ಅಂದಾಜಿಸಲಾಗಿದೆ.<ref>According to [[Pliny the Elder]], goods from India were sold in the Empire at 100 times their original purchase price. See [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> ಸಮಕಾಲೀನ [[ಸಂಗಮ್ ಸಾಹಿತ್ಯ]]ವು ಮೆಣಸಿನ ಬದಲಿಗೆ ಚಿನ್ನದಿಂದ ತುಂಬಿದ ರೋಮನ್ ಹಡಗುಗಳು ಮುಝಿರಿಸ್ಗೆ ಆಗಮಿಸುವುದನ್ನು ವಿವರಿಸುತ್ತದೆ. ಕೇರಳವನ್ನು ತಲುಪಲು ಮಾನ್ಸೂನ್ ಗಾಳಿಯನ್ನು ನ್ಯಾವಿಗೇಟ್ ಮಾಡಿದ ಮೊದಲ ಪಶ್ಚಿಮ ವ್ಯಾಪಾರಿಗಳಲ್ಲಿ ಒಬ್ಬರು [[ಸೈಜಿಕಸ್ನ ಯುಡೋಕ್ಸಸ್]], ಅವರು ಈಜಿಪ್ಟ್ನ [[ಹೆಲ್ಲೆನಿಸ್ಟಿಕ್ ನಾಗರಿಕತೆ|ಹೆಲ್ಲೆನಿಸ್ಟಿಕ್]] [[ಟಾಲಮಿಕ್ ರಾಜವಂಶ]]ದ ರಾಜ [[ಟಾಲಮಿ VIII ಫಿಸ್ಕಾನ್|ಟಾಲಮಿ VIII]] ರ ಆಶ್ರಯದಲ್ಲಿ ಸುಮಾರು 118 ಅಥವಾ 166 BCE ಯಲ್ಲಿ ಪ್ರಯಾಣ ಮಾಡಿದರು. ಈ ಪ್ರದೇಶದ ಬಂದರು ನಗರಗಳಲ್ಲಿನ ರೋಮನ್ ಸ್ಥಾಪನೆಗಳು{{mdash}}[[ಆಗಸ್ಟಸ್]] ದೇವಾಲಯ ಮತ್ತು ರೋಮನ್ ಸೈನಿಕರಿಗೆ ಬ್ಯಾರಕ್ಗಳು ಸೇರಿದಂತೆ{{mdash}}ರೋಮನ್ ''[[ಕರ್ಸಸ್ ಪಬ್ಲಿಕಸ್]]'' ನ ಏಕೈಕ ಉಳಿದಿರುವ ನಕ್ಷೆಯಾದ ''[[ಟ್ಯಾಬುಲಾ ಪ್ಯೂಟಿಂಗೇರಿಯಾನಾ]]'' ದಲ್ಲಿ ದಾಖಲಿಸಲಾಗಿದೆ.<ref>{{cite book|author=Abraham Eraly|title=The First Spring: The Golden Age of India|url=https://books.google.com/books?id=te1sqTzTxD8C&pg=PA246|accessdate=7 August 2012|date=1 December 2011|publisher=Penguin Books India|isbn=978-0-670-08478-4|pages=246–}}</ref><ref name="Iyengar_2001">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |accessdate=29 December 2008}}</ref>
ಪಶ್ಚಿಮ ಏಷ್ಯಾ ಮತ್ತು ದಕ್ಷಿಣ ಯುರೋಪಿನ ವ್ಯಾಪಾರಿಗಳು ಕೇರಳದಲ್ಲಿ ಕರಾವಳಿ ಠಾಣ್ಯಗಳು ಮತ್ತು ವಸಾಹತುಗಳನ್ನು ಸ್ಥಾಪಿಸಿದರು.<ref name="google2">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |pages=192–195 |accessdate=29 December 2008}}</ref> ಕೇರಳದೊಂದಿಗಿನ ಯಹೂದಿ ಸಂಪರ್ಕವು 573 BCE ಯ ಹಿಂದಿನದು ಎಂದು ನಂಬಲಾಗಿದೆ.<ref name="Orpa Slapak">[https://books.google.co.in/books?id=qhKGPprbQaYC&printsec=frontcover&dq=isbn:9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA#v=onepage&q=two%20millennia&f=true ''The Jews of India: A Story of Three Communities''] by Orpa Slapak. The Israel Museum, Jerusalem. 2003. p. 27. ISBN 965-278-179-7.</ref><ref name="Hillel1832">{{cite book|author=David D'Beth Hillel|title=The Travels of Rabbi David D'Beth Hillel: From Jerusalem, Through Arabia, Koordistan, Part of Persia, and India to Madras|url=https://books.google.com/books?id=j5NeAAAAcAAJ&pg=PR9|year=1832|publisher=author|page=135}}</ref><ref>{{cite book|title=The Jews in India and the Far East|url=https://books.google.com/books?id=w_v-nQEACAAJ|year=1976|publisher=Greenwood Press|pages=24–26 | isbn=978-0-8371-2615-9 }}</ref> ಅರಬ್ ವ್ಯಾಪಾರಿಗಳು ಕನಿಷ್ಠ 4 ನೇ ಶತಮಾನ BCE ಯಿಂದಲೂ ಕೇರಳದೊಂದಿಗೆ ಸಂಪರ್ಕ ಹೊಂದಿದ್ದರು; [[ಹೆರೊಡೋಟಸ್]] (484–413 BCE) ಅರಬ್ಬರು ಕೇರಳದಿಂದ ತಂದ ಸರಕುಗಳನ್ನು ಈಡನ್ನಲ್ಲಿರುವ ಯಹೂದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಗಮನಿಸಿದರು.<ref name="Kusuman"/> ಈ ಅರಬ್ ವ್ಯಾಪಾರಿಗಳು ಸ್ಥಳೀಯ ಸಮುದಾಯಗಳೊಂದಿಗೆ ಮದುವೆಯಾದರು, ಇದು ಮುಸ್ಲಿಂ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಸಮುದಾಯದ ರಚನೆಗೆ ಕಾರಣವಾಯಿತು.<ref name="Dialogue">{{cite book |author=Rolland E. Miller |title=Hindu-Christian Dialogue: Perspectives and Encounters |publisher=Motilal Banarsidass Publications |year=1993 |isbn=978-81-208-1158-4 |url=https://books.google.com/books?id=6eHgNyNimoAC |page=50}}</ref> 4 ನೇ ಶತಮಾನ CE ಯಲ್ಲಿ, ಕೆಲವು ಕ್ರೈಸ್ತರು [[ಪರ್ಷಿಯಾ]]ದಿಂದ ವಲಸೆ ಬಂದರು ಮತ್ತು ಆರಂಭಿಕ [[ಸೇಂಟ್ ತಾಮಸ್ ಕ್ರೈಸ್ತರು|ಸಿರಿಯನ್ ಕ್ರಿಶ್ಚಿಯನ್]] ಸಮುದಾಯಕ್ಕೆ ಸೇರ್ಪಡೆಗೊಂಡರು, ಇದು 1 ನೇ ಶತಮಾನ CE ಯಲ್ಲಿ [[ತಾಮಸ್ ಪ್ರೇರಿತ]]ನ ಪ್ರಚಾರ ಚಟುವಟಿಕೆಗಳಿಂದ ತನ್ನ ಮೂಲವನ್ನು ಪತ್ತೆಹಚ್ಚುತ್ತದೆ.<ref name="Erwin Fahlbusch">[https://books.google.co.in/books?id=lZUBZlth2qgC&printsec=frontcover&dq=isbn:9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA#v=onepage&q=Muziris&f=true ''The Encyclopedia of Christianity, Volume 5''] by Erwin Fahlbusch. Wm. B. Eerdmans Publishing - 2008. p. 285. ISBN 978-0-8028-2417-2.</ref><ref>{{cite book |author=Geoffrey Wainwright |title=The Oxford History Of Christian Worship |publisher=Oxford University Press |year=2006 |isbn=978-0-19-513886-3 |url=https://books.google.com/books?id=h5VQUdZhx1gC |page=666 |accessdate=30 May 2015}}</ref> ಮಾಪ್ಪಿಲ ಎಂಬ ಪದವು{{mdash}}ಮೂಲತಃ ಗೌರವಾನ್ವಿತ ವಿದೇಶಿ ಸಂದರ್ಶಕರಿಗೆ ಅನ್ವಯಿಸುವ ಗೌರವಾರ್ಥ ಪದವಾಗಿದ್ದು{{mdash}}ನಂತರ ಯಹೂದಿ, ಸಿರಿಯನ್ ಕ್ರಿಶ್ಚಿಯನ್ ಮತ್ತು ಮುಸ್ಲಿಂ ವಲಸಿಗರ ವಂಶಸ್ಥರೊಂದಿಗೆ ಸಂಬಂಧ ಹೊಂದಿತು, ಇದು ಕ್ರಮವಾಗಿ [[ಯೆಹೂದ ಮಾಪ್ಪಿಲ]]ಗಳು, [[ಸೇಂಟ್ ತಾಮಸ್ ಕ್ರೈಸ್ತರು|ನಸ್ರಾನಿ ಮಾಪ್ಪಿಲ]]ಗಳು ಮತ್ತು [[ಮಲಬಾರ್ ಮುಸ್ಲಿಮರು|ಮುಸ್ಲಿಂ ಮಾಪ್ಪಿಲ]]ಗಳ ಪದಗಳಿಗೆ ಕಾರಣವಾಯಿತು.<ref name="BMalieckal">* Bindu Malieckal (2005) Muslims, Matriliny, and A Midsummer Night's Dream: European Encounters with the Mappilas of Malabar, India; The Muslim World Volume 95 Issue 2</ref><ref>{{cite book |author=Milton J, Skeat WW, Pollard AW, Brown L |title=The Indian Christians of St Thomas |publisher=Cambridge University Press |date=31 August 1982 |isbn=0-521-21258-8 |page=171}}</ref> ಈ ಸಮುದಾಯಗಳ ಸಂಪ್ರದಾಯಗಳ ಪ್ರಕಾರ, ಭಾರತದಲ್ಲಿನ ಕೆಲವು ಆರಂಭಿಕ ಧಾರ್ಮಿಕ ಸ್ಥಾಪನೆಗಳನ್ನು ಕೇರಳದಲ್ಲಿ ನಿರ್ಮಿಸಲಾಯಿತು.<ref name="Dialogue"/> ಇವುಗಳಲ್ಲಿ [[ಸೇಂಟ್ ತಾಮಸ್ ಕ್ರಿಶ್ಚಿಯನ್ ಚರ್ಚುಗಳು]],<ref>{{cite book |author=Susan Bayly |title=Saints, Goddesses and Kings |publisher=Cambridge University Press |year=2004 |isbn=978-0-521-89103-5 |url=https://books.google.com/books?id=Fxqtx8SflEsC |page=40 |accessdate=30 May 2015}}</ref> [[ಚೇರಮನ್ ಜುಮಾ ಮಸೀದಿ]] (629 CE ಯಲ್ಲಿ ಸ್ಥಾಪಿಸಲಾಯಿತು), ಭಾರತದ ಮೊದಲ ಮಸೀದಿ,<ref>{{cite book |author=Jonathan Goldstein |title=The Jews of China |publisher=M.E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123 |accessdate=30 May 2015}}</ref> ಮತ್ತು [[ಪರದೇಶಿ ಸಿನಾಗೋಗ್]] (1568 CE ಯಲ್ಲಿ ನಿರ್ಮಿಸಲಾಯಿತು), [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಕ್ರಿಯ ಸಿನಾಗೋಗ್ ಸೇರಿವೆ.<ref>{{cite book |author=Nathan Katz |title=Who Are the Jews of India? |publisher=University of California Press |year=2000 |isbn=978-0-520-21323-4 |url=https://books.google.com/books?id=ZWX6pF2PTJwC |page=245 |accessdate=30 May 2015}}</ref>
=== ಮಧ್ಯಕಾಲೀನ ಅವಧಿ ===
[[File:3rd Tiruvalla Copper Plate.jpg|thumb|[[ಸೇಂಟ್ ತಾಮಸ್ ಕ್ರೈಸ್ತರು|ಸೇಂಟ್ ತಾಮಸ್ ಕ್ರೈಸ್ತರಿಗೆ]] ನೀಡಲಾದ [[ಥರಿಸಪಲ್ಲಿ ತಟ್ಟೆಗಳು]] ವ್ಯಾಪಾರಿ ಸಂಘಗಳು ಮತ್ತು ವ್ಯಾಪಾರ ನಿಗಮಗಳು ಕುಲಶೇಖರ ಅವಧಿಯಲ್ಲಿ ಆರ್ಥಿಕತೆ ಮತ್ತು ಸಾಮಾಜಿಕ ಜೀವನದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದವು ಎಂದು ಸಾಕ್ಷ್ಯ ನೀಡುತ್ತವೆ.]]
ಎರಡನೇ ಚೇರ ಸಾಮ್ರಾಜ್ಯ (c. 800–1102), ಇದನ್ನು [[ಮಹೋದಯಪುರಂ]]ನ ಕುಲಶೇಖರ ರಾಜವಂಶ ಎಂದೂ ಕರೆಯುತ್ತಾರೆ, ಇದನ್ನು [[ಕುಲಶೇಖರ ಆಳ್ವಾರ್|ಕುಲಶೇಖರ ವರ್ಮನ್]] ಸ್ಥಾಪಿಸಿದರು ಮತ್ತು ಪ್ರಸ್ತುತ ಕೇರಳದ ಹೆಚ್ಚಿನ ಭಾಗ ಮತ್ತು ಆಧುನಿಕ ತಮಿಳುನಾಡಿನ ಭಾಗಗಳನ್ನು ಒಳಗೊಂಡ ಪ್ರದೇಶವನ್ನು ಆಳಿದರು. ಕುಲಶೇಖರ ಅವಧಿಯ ಆರಂಭಿಕ ಹಂತದಲ್ಲಿ, ದಕ್ಷಿಣ ಪ್ರದೇಶವು{{mdash}}[[ನಾಗರ್ಕೋವಿಲ್]] ನಿಂದ [[ತಿರುವಲ್ಲ]] ವರೆಗೆ{{mdash}}[[ಆಯ್ಸ್ (ಕೇರಳ)|ಆಯ್]] ರಾಜವಂಶದ ನಿಯಂತ್ರಣದಲ್ಲಿತ್ತು. 10 ನೇ ಶತಮಾನದ ವೇಳೆಗೆ, ಆಯ್ಸ್ ತಮ್ಮ ಶಕ್ತಿಯನ್ನು ಕಳೆದುಕೊಂಡರು ಮತ್ತು ಈ ಪ್ರದೇಶವನ್ನು ಕುಲಶೇಖರ ಸಾಮ್ರಾಜ್ಯಕ್ಕೆ ಸೇರಿಸಲಾಯಿತು.<ref name="Balachand">{{cite book|author=K. Balachandran Nayar|title=In quest of Kerala|url=https://books.google.com/books?id=EXIeAAAAMAAJ|accessdate=8 August 2012|year=1974|publisher=Accent Publications|page=86}}</ref><ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|page=97}}</ref> ಕುಲಶೇಖರ ಆಳ್ವಿಕೆಯಲ್ಲಿ, ಕೇರಳವು ಕಲೆ, ಸಾಹಿತ್ಯ, ವ್ಯಾಪಾರ ಮತ್ತು ಹಿಂದೂ ಧರ್ಮದಲ್ಲಿ [[ಭಕ್ತಿ ಚಳುವಳಿ]] ಯಲ್ಲಿ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟ ಒಂದು ಅಭಿವೃದ್ಧಿ ಹೊಂದಿದ ಅವಧಿಯನ್ನು ಅನುಭವಿಸಿತು.<ref name="Sreedhar123">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|pages=123–131}}</ref> ಈ ಸಮಯದಲ್ಲಿ ವಿಶಿಷ್ಟವಾದ ಕೇರಳೀಯ ಗುರುತು ಹೊರಹೊಮ್ಮಲು ಪ್ರಾರಂಭಿಸಿತು, ವಿಶೇಷವಾಗಿ ಭಾಷಾ ವ್ಯತ್ಯಾಸದ ಮೂಲಕ ತಮಿಳು ಸಂಸ್ಕೃತಿಯಿಂದ ಪ್ರತ್ಯೇಕವಾಯಿತು.<ref name="AsherKumari1997">{{cite book|author1=R. E. Asher|author2=T. C. Kumari|title=Malayalam|url=https://books.google.com/books?id=uFQG2DCaIsIC|year=1997|publisher=Psychology Press|isbn=978-0-415-02242-2|pages=24–27}}</ref> ಆಡಳಿತ ಉದ್ದೇಶಗಳಿಗಾಗಿ, ಸಾಮ್ರಾಜ್ಯವನ್ನು [[ನಾಡುವಾಜಿ]]ಗಳು ಎಂದು ಕರೆಯಲ್ಪಡುವ ಸ್ಥಳೀಯ ಮುಖಂಡರು ಆಳುವ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ಪ್ರಾಂತ್ಯವನ್ನು ಮತ್ತಷ್ಟು ''ದೇಶಂ'' ಗಳಾಗಿ ವಿಂಗಡಿಸಲಾಗಿತ್ತು, ಅವುಗಳನ್ನು ದೇಶವಾಝಿಗಳು ಮೇಲ್ವಿಚಾರಣೆ ಮಾಡುತ್ತಿದ್ದರು.<ref name="Sreedhar123"/>
11 ನೇ ಶತಮಾನದಲ್ಲಿ ಚೇರ-ಚೋಳ ಸಂಘರ್ಷಗಳ ಸರಣಿಯು ಕೇರಳದ ಬಂದರುಗಳ ಮೂಲಕ ವಿದೇಶಿ ವ್ಯಾಪಾರಕ್ಕೆ ಅಡ್ಡಿಯಾಯಿತು. ಈ ಅವಧಿಯಲ್ಲಿ, ಹಿಂದೂ ಧರ್ಮದೊಂದಿಗೆ ಹಿಂದೆ ಸಹಬಾಳ್ವೆ ನಡೆಸಿದ್ದ [[ಬೌದ್ಧ]] ಮತ್ತು [[ಜೈನ]] ಧರ್ಮಗಳು ಕ್ಷೀಣಿಸಿದವು ಮತ್ತು ಅಂತಿಮವಾಗಿ ಈ ಪ್ರದೇಶದಿಂದ ಕಣ್ಮರೆಯಾಯಿತು.<ref>{{cite web |url=http://www.kerala.cc/keralahistory/index34.htm |title=The Buddhist History of Kerala |publisher=Kerala.cc |accessdate=25 September 2013 |archive-date=4 March 2016 |archive-url=https://web.archive.org/web/20160304215933/http://www.kerala.cc/keralahistory/index34.htm |url-status=dead }}</ref> ಸಾಮಾಜಿಕ ರಚನೆಗಳು ಹೆಚ್ಚು ಬಿಗಿಯಾದವು, ಮತ್ತು [[ಕೇರಳದಲ್ಲಿ ಜಾತಿ ವ್ಯವಸ್ಥೆ|ಜಾತಿ ವಿಭಾಗಗಳು]] ಆಳವಾದವು.<ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=9 August 2012|date=1 January 2007|publisher=DC Books|isbn=978-81-264-1578-6|page=138}}</ref> ಕುಲಶೇಖರ ರಾಜವಂಶವು ಅಂತಿಮವಾಗಿ 1102 CE ಯಲ್ಲಿ [[ನಂತರದ ಪಾಂಡ್ಯರು]] ಮತ್ತು [[ನಂತರದ ಚೋಳರು]] ನ ಸಂಯೋಜಿತ ದಾಳಿಯ ನಂತರ ಕುಸಿಯಿತು.<ref name="Balachand"/> 14 ನೇ ಶತಮಾನದಲ್ಲಿ, ದಕ್ಷಿಣ [[ವೇಣಾಡ್|ವೇಣಾಡ್ ಸಾಮ್ರಾಜ್ಯ]]ದ ರವಿ ವರ್ಮ ಕುಲಶೇಖರ (r. 1299–1314) ದಕ್ಷಿಣ ಭಾರತದ ಹೆಚ್ಚಿನ ಭಾಗದಲ್ಲಿ ಸಂಕ್ಷಿಪ್ತವಾಗಿ ಅಲ್ಪಕಾಲಿಕ ಪ್ರಾಮುಖ್ಯತೆಯನ್ನು ಸ್ಥಾಪಿಸಿದರು. ಅವರ ಮರಣದ ನಂತರ, ಮತ್ತು ಬಲವಾದ ಕೇಂದ್ರ ಅಧಿಕಾರದ ಅನುಪಸ್ಥಿತಿಯಲ್ಲಿ, ಈ ಪ್ರದೇಶವು ಮೂವತ್ತು ಸಣ್ಣ, ಆಗಾಗ್ಗೆ ಯುದ್ಧ ಮಾಡುವ ಸಂಸ್ಥಾನಗಳಾಗಿ ವಿಭಜನೆಯಾಯಿತು. ಅತ್ಯಂತ ಶಕ್ತಿಶಾಲಿಗಳೆಂದರೆ ಉತ್ತರದಲ್ಲಿ [[ಸಮೂತಿರಿ]] (ಜಾಮೋರಿನ್) ಸಾಮ್ರಾಜ್ಯ, ದಕ್ಷಿಣದಲ್ಲಿ ವೇಣಾಡ್ ಮತ್ತು ಮಧ್ಯ ಪ್ರದೇಶದಲ್ಲಿ ಕೊಚ್ಚಿ. 18 ನೇ ಶತಮಾನದಲ್ಲಿ, ತಿರುವಾಂಕೂರಿನ ರಾಜ [[ಅನಿಝಂ ತಿರುನಾಳ್ ಮಾರ್ತಾಂಡ ವರ್ಮ]] ಅವರು ಸೈನ್ಯದ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಿದರು ಮತ್ತು ಉತ್ತರ ಕೇರಳದವರೆಗೆ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡರು, ಈ ಪ್ರದೇಶದಲ್ಲಿ ತಿರುವಾಂಕೂರನ್ನು ಪ್ರಬಲ ಶಕ್ತಿಯಾಗಿ ಸ್ಥಾಪಿಸಿದರು. ಕೊಚ್ಚಿ ಆಡಳಿತಗಾರನು ಶಾಂತಿಗಾಗಿ ಮೊಕದ್ದಮೆ ಹೂಡಿದನು, ಮತ್ತು ಮಲಬಾರ್ ಪ್ರದೇಶವು ಅಂತಿಮವಾಗಿ [[1947 ರಲ್ಲಿ ಭಾರತದ ಸ್ವಾತಂತ್ರ್ಯ|ಭಾರತದ ಸ್ವಾತಂತ್ರ್ಯ]] ದವರೆಗೆ ನೇರ [[ಬ್ರಿಟಿಷ್ ಆಳ್ವಿಕೆ|ಬ್ರಿಟಿಷ್ ಆಳ್ವಿಕೆ]] ಯ ಅಡಿಯಲ್ಲಿ ಬಂದಿತು.<ref>{{cite book|author=Educational Britannica Educational|title=The Geography of India: Sacred and Historic Places|url=https://books.google.com/books?id=xPUvqtdfjyAC&pg=PA311|accessdate=15 September 2012|date=15 August 2010|publisher=The Rosen Publishing Group|isbn=978-1-61530-202-4|page=311}}</ref><ref>{{cite book |last1=Boland-Crewe |first1=Tara |last2=Lea |first2=David |title=The Territories and States of India |date=2003 |doi=10.4324/9780203402900 |isbn=978-1-135-35625-5 |pages=144–146 }}</ref>
=== ವಸಾಹತುಶಾಹಿ ಆಳ್ವಿಕೆ ===
[[File:Caminho maritimo para a India.png|thumb|ಕೇರಳವನ್ನು ತಲುಪಲು [[ವಾಸ್ಕೋ ಡ ಗಾಮಾ]] ತೆಗೆದುಕೊಂಡ ಮಾರ್ಗ (ಕಪ್ಪು ಬಣ್ಣದಲ್ಲಿ ಸೂಚಿಸಲಾಗಿದೆ)]]
[[ಮಧ್ಯಯುಗ|ಉಚ್ಚ]] ಮತ್ತು [[ಕೊನೆಯ ಮಧ್ಯಯುಗ]]ದಲ್ಲಿ, ಅರಬ್ ವ್ಯಾಪಾರಿಗಳು [[ಹಿಂದೂ ಮಹಾಸಾಗರ]]ದಲ್ಲಿ ಮಸಾಲೆ ವ್ಯಾಪಾರದ ಮೇಲೆ ಸಮುದ್ರ ಏಕಸ್ವಾಮ್ಯವನ್ನು ಹೊಂದಿದ್ದರು. ಯುರೋಪಿಯನ್ [[ಭೌಗೋಳಿಕ ಅನ್ವೇಷಣೆಗಳ ಯುಗ]] ದಲ್ಲಿ ಮಸಾಲೆ ವ್ಯಾಪಾರವು{{mdash}}ವಿಶೇಷವಾಗಿ ಕರಿಮೆಣಸಿನಲ್ಲಿ{{mdash}}ಯುರೋಪಿಯನ್ ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾದಾಗ ಈ ಪ್ರಾಬಲ್ಯವನ್ನು ಸವಾಲು ಮಾಡಲಾಯಿತು.<ref>{{cite book | last = Corn | first = Charles |author2=Glasserman, Debbie | title = The Scents of Eden: A History of the Spice Trade | publisher = Kodansha America |date=March 1999 | isbn = 1-56836-249-8}}</ref> 15 ನೇ ಶತಮಾನದ ವೇಳೆಗೆ, ಪೋರ್ಚುಗೀಸರು ಪೂರ್ವ ಸಮುದ್ರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಾರಂಭಿಸಿದರು, ಇದು 1498 ರಲ್ಲಿ [[ಕೋಝಿಕೋಡ್]] (ಕ್ಯಾಲಿಕಟ್) ಬಳಿಯ [[ಕಪ್ಪಾಡ್]] ನಲ್ಲಿ [[ವಾಸ್ಕೋ ಡ ಗಾಮಾ]] ಆಗಮನದೊಂದಿಗೆ ಕೊನೆಗೊಂಡಿತು.<ref>{{Cite book |author=Ravindran PN |title=Black Pepper: Piper Nigrum |publisher=CRC Press |year=2000 |accessdate=11 November 2007 |url=https://books.google.com/books?id=VaGCgSLrdr4C |page=3 |isbn=978-90-5702-453-5}}</ref><ref name="Curtin1984">{{cite book|author=Philip D. Curtin|title=Cross-Cultural Trade in World History|url=https://books.google.com/books?id=R4IiYFhliv4C|date=25 May 1984|publisher=Cambridge University Press|isbn=978-0-521-26931-5|page=144}}</ref> ಕೋಝಿಕೋಡ್ನ [[ಜಾಮೋರಿನ್]] ಪೋರ್ಚುಗೀಸರಿಗೆ ತನ್ನ ಪ್ರಜೆಗಳೊಂದಿಗೆ ವ್ಯಾಪಾರ ಮಾಡಲು ಅನುಮತಿ ನೀಡಿದರು, ಇದು ಸಮೃದ್ಧ ಪೋರ್ಚುಗೀಸ್ [[ಕಾರ್ಖಾನೆ (ವ್ಯಾಪಾರ ಠಾಣ್ಯ)|ಕಾರ್ಖಾನೆ]] ಮತ್ತು ಕೋಟೆಯ ಸ್ಥಾಪನೆಗೆ ಕಾರಣವಾಯಿತು.<ref name="Mehta2005" />
ಆದಾಗ್ಯೂ, ಪೋರ್ಚುಗೀಸರು ಜಾಮೋರಿನ್ ರಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಬ್ ವ್ಯಾಪಾರಿಗಳ ಮೇಲೆ ದಾಳಿ ಮಾಡಿದಾಗ ಉದ್ವಿಗ್ನತೆಗಳು ಹುಟ್ಟಿಕೊಂಡವು, ಇದು ಸಂಬಂಧಗಳಲ್ಲಿ ಕುಸಿತಕ್ಕೆ ಕಾರಣವಾಯಿತು. ಜಾಮೋರಿನ್ ಮತ್ತು ಕೊಚ್ಚಿ ರಾಜನ ನಡುವಿನ ಪೈಪೋಟಿಯಿಂದ ಪ್ರಯೋಜನ ಪಡೆಯುವ ಅವಕಾಶವನ್ನು ಬಳಸಿಕೊಂಡು, ಪೋರ್ಚುಗೀಸರು ಕೊಚ್ಚಿಯೊಂದಿಗೆ ಮೈತ್ರಿ ಮಾಡಿಕೊಂಡರು. [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] 1505 ರಲ್ಲಿ ಪೋರ್ಚುಗೀಸ್ ಭಾರತದ ವೈಸರಾಯ್ ಆಗಿ ನೇಮಕಗೊಂಡಾಗ, ಅವರು ತಮ್ಮ ಪ್ರಧಾನ ಕಛೇರಿಯನ್ನು ಕೋಝಿಕೋಡ್ನಲ್ಲಿ ಅಲ್ಲ, ಬದಲಿಗೆ [[ಫೋರ್ಟ್ ಕೊಚ್ಚಿ]] ([[ಫೋರ್ಟ್ ಇಮ್ಯಾನುಯೆಲ್]]) ಯಲ್ಲಿ ಸ್ಥಾಪಿಸಿದರು. ಅವರ ಆಡಳಿತದ ಅಡಿಯಲ್ಲಿ, ಪೋರ್ಚುಗೀಸರು ಮಲಬಾರ್ ಕರಾವಳಿಯಲ್ಲಿ ಹಲವಾರು ಕೋಟೆಗಳನ್ನು ನಿರ್ಮಿಸುವ ಮೂಲಕ ತಮ್ಮ ಪ್ರಭಾವವನ್ನು ಬಲಪಡಿಸಿದರು.<ref name="Mehta2005">{{cite book|author=J. L. Mehta|title=Advanced Study in the History of Modern India: Volume One: 1707–1813|url=https://books.google.com/books?id=d1wUgKKzawoC&pg=PA324|accessdate=9 August 2012|date=1 January 2005|publisher=Sterling Publishers Pvt. Ltd|isbn=978-1-932705-54-6|pages=324–327}}</ref> ಈ ಮುನ್ನಡೆಗಳ ಹೊರತಾಗಿಯೂ, ಪೋರ್ಚುಗೀಸರು ಜಾಮೋರಿನ್ನ ನೌಕಾ ಪಡೆಗಳಿಂದ ಗಮನಾರ್ಹ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ ಕೋಝಿಕೋಡ್ನ ಅಡ್ಮಿರಲ್ಗಳಾದ [[ಕುಂಜಲಿ ಮರಕ್ಕರ್]]ರ ಆಜ್ಞೆಯಡಿಯಲ್ಲಿ, ಅವರು ಪರಿಣಾಮಕಾರಿ ಸಮುದ್ರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರು. ಈ ಪ್ರತಿರೋಧವು ಅಂತಿಮವಾಗಿ ಪೋರ್ಚುಗೀಸರನ್ನು ಒಪ್ಪಂದಕ್ಕೆ ಒತ್ತಾಯಿಸಿತು. 1571 ರಲ್ಲಿ, ಜಾಮೋರಿನ್ ಪಡೆಗಳು [[ತಾನೂರ್ ಸಾಮ್ರಾಜ್ಯ#ಚಾಲಿಯಮ್ ಕೋಟೆಯ ಕದನಗಳು|ಚಾಲಿಯಮ್ ಕೋಟೆಯ ಕದನದಲ್ಲಿ]] ಪೋರ್ಚುಗೀಸರನ್ನು ಸೋಲಿಸಿದವು, ಇದು ಈ ಪ್ರದೇಶದಲ್ಲಿ ಪೋರ್ಚುಗೀಸ್ ಮಹತ್ವಾಕಾಂಕ್ಷೆಗಳಿಗೆ ದೊಡ್ಡ ಹಿನ್ನಡೆಯನ್ನು ಗುರುತಿಸಿತು.<ref>{{cite book|author=K. K. N. Kurup|title=India's Naval Traditions: The Role of Kunhali Marakkars|url=https://books.google.com/books?id=HKmXcBCKEcAC&pg=PA51|accessdate=9 August 2012|date=1 January 1997|publisher=Northern Book Centre|isbn=978-81-7211-083-3|pages=37–38}}</ref>
ಪೋರ್ಚುಗೀಸರು ಅಂತಿಮವಾಗಿ [[ಡಚ್ ಈಸ್ಟ್ ಇಂಡಿಯಾ ಕಂಪನಿ]]ಯಿಂದ ಸ್ಥಳಾಂತರಿಸಲ್ಪಟ್ಟರು, ಇದು ಈ ಪ್ರದೇಶದಲ್ಲಿ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲು ಕೋಝಿಕೋಡ್ ಮತ್ತು ಕೊಚ್ಚಿ ನಡುವಿನ ನಡೆಯುತ್ತಿರುವ ಸಂಘರ್ಷಗಳ ಲಾಭವನ್ನು ಪಡೆಯಿತು.<ref name="South Asia 2006">{{cite book|title=South Asia 2006|url=https://books.google.com/books?id=YG8bAQAAMAAJ|accessdate=18 November 2012|date=1 December 2005|publisher=Taylor & Francis|page=289}}</ref> ಆದಾಗ್ಯೂ, ಡಚ್ಚರು ಸಹ ಸೈನ್ಯದ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ [[ತಿರುವಾಂಕೂರು ರಾಜಮನೆತನ]]ದ [[ಮಾರ್ತಾಂಡ ವರ್ಮ]]ರಿಂದ. 1741 ರಲ್ಲಿ [[ಕೊಲಾಚೆಲ್ ಕದನ]]ದಲ್ಲಿ ನಿರ್ಣಾಯಕ ಡಚ್ ಸೋಲಿನ ನಂತರ,<ref name="google3">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA57|accessdate=18 November 2012|date=1 January 1993|publisher=Northern Book Centre|isbn=978-81-7211-052-9|pages=57–70}}</ref> 1753 ರಲ್ಲಿ ಮಾವೆಲಿಕ್ಕರ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಡಚ್ಚರು ಪ್ರಾದೇಶಿಕ ರಾಜಕೀಯ ವ್ಯವಹಾರಗಳಿಂದ ಹಿಂತೆಗೆದುಕೊಳ್ಳಲು ಮತ್ತು ಅವರ ಪಾತ್ರವನ್ನು ವ್ಯಾಪಾರಕ್ಕೆ ಸೀಮಿತಗೊಳಿಸಲು ಒತ್ತಾಯಿಸಲಾಯಿತು.<ref name="Singh2010">{{cite book|author=Anjana Singh|title=Fort Kochi in Kerala, 1750–1830: The Social Condition of a Dutch Community in an Indian Milieu|url=https://books.google.com/books?id=LFy4pWUlnfwC&pg=PA22|accessdate=18 November 2012|date=30 April 2010|publisher=BRILL|isbn=978-90-04-16816-9|pages=22–52}}</ref><ref name="Iyer1995">{{cite book|author=S. Krishna Iyer|title=Travancore Dutch relations, 1729–1741|url=https://books.google.com/books?id=rUtuAAAAMAAJ|accessdate=18 November 2012|year=1995|publisher=CBH Publications|isbn=978-81-85381-42-8|page=49}}</ref><ref name="Lannoy1997">{{cite book|author=Mark de Lannoy|title=The Kulasekhara Perumals of Travancore: history and state formation in Travancore from 1671 to 1758|url=https://books.google.com/books?id=pKjZAAAAMAAJ|accessdate=18 November 2012|year=1997|publisher=Leiden University|isbn=978-90-73782-92-1|page=190}}</ref> ಮಾರ್ತಾಂಡ ವರ್ಮ ತಮ್ಮ ಸೈನ್ಯದ ಕಾರ್ಯಾಚರಣೆಗಳನ್ನು ಮುಂದುವರೆಸಿದರು, ಕೇರಳದಲ್ಲಿ ತಿರುವಾಂಕೂರನ್ನು ಪ್ರಮುಖ ಶಕ್ತಿಯಾಗಿ ಸ್ಥಾಪಿಸಿದರು.<ref>{{cite book|author=A. Sreedhara Menon|title=Political History of Modern Kerala|url=https://books.google.com/books?id=wnAjqjhc1VcC&pg=PA140|accessdate=10 August 2012|year=1987|publisher=D C Books|isbn=978-81-264-2156-5|page=140}}</ref>
1766 ರಲ್ಲಿ, [[ಮೈಸೂರು ಸಾಮ್ರಾಜ್ಯ|ಮೈಸೂರಿನ]] ಆಡಳಿತಗಾರ [[ಹೈದರ್ ಅಲಿ]], [[ಮೈಸೂರಿನ ಕೇರಳ ಆಕ್ರಮಣ#ಹೈದರ್ ಅಲಿಯ ಆಕ್ರಮಣ|ಉತ್ತರ ಕೇರಳವನ್ನು ಆಕ್ರಮಿಸಿದನು]],<ref name="Rai">{{cite book|author=Raghunath Rai|title=History|url=https://books.google.com/books?id=Z4-8Z0gqBkoC&pg=PA14|accessdate=18 November 2012|publisher=FK Publications|isbn=978-81-87139-69-0|pages=14–}}</ref> ಮತ್ತು ಅವನ ಮಗ ಮತ್ತು ಉತ್ತರಾಧಿಕಾರಿ, [[ಟಿಪ್ಪು ಸುಲ್ತಾನ್]], ವಿಸ್ತರಿಸುತ್ತಿರುವ [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]] ವಿರುದ್ಧ [[ಮೈಸೂರಿನ ಕೇರಳ ಆಕ್ರಮಣ#ಟಿಪ್ಪು ಸುಲ್ತಾನನ ಆಕ್ರಮಣಗಳು|ಸೈನ್ಯದ ಕಾರ್ಯಾಚರಣೆಗಳನ್ನು]] ಪ್ರಾರಂಭಿಸಿದರು. ಈ ಮುಖಾಮುಖಿಗಳು ನಾಲ್ಕು [[ಆಂಗ್ಲೋ-ಮೈಸೂರು ಯುದ್ಧಗಳಲ್ಲಿ]] ಎರಡಕ್ಕೆ ಕೊಡುಗೆ ನೀಡಿದವು.<ref name="MuseumDallapiccola2010">{{cite book|author1=British Museum|author2=Anna Libera Dallapiccola|title=South Indian Paintings: A Catalogue of the British Museum Collection|url=https://books.google.com/books?id=FIzWapiacQcC&pg=PA12|accessdate=18 November 2012|date=22 June 2010|publisher=Mapin Publishing Pvt Ltd|isbn=978-0-7141-2424-7|pages=12–}}</ref><ref name="ThorpeEdgar">{{cite book|author1=Edgar Thorpe, Showick Thorpe|author2=Thorpe Edgar|title=The Pearson CSAT Manual 2011|url=https://books.google.com/books?id=WuBFs6yFRwcC&pg=RA1-PA99|accessdate=18 November 2012|publisher=Pearson Education India|isbn=978-81-317-5830-4|page=99}}</ref> 1790 ರ ದಶಕದ ಆರಂಭದ ವೇಳೆಗೆ, ಟಿಪ್ಪು ಸುಲ್ತಾನ್ [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ವನ್ನು ಬ್ರಿಟಿಷರಿಗೆ ಬಿಟ್ಟುಕೊಡಲು ಒತ್ತಾಯಿಸಲಾಯಿತು, ಮತ್ತು ಈ ಪ್ರದೇಶಗಳನ್ನು 1792 ರಲ್ಲಿ [[ಬ್ರಿಟಿಷ್ ಭಾರತ]]ದ [[ಮದ್ರಾಸ್ ಪ್ರೆಸಿಡೆನ್ಸಿ]] ಗೆ ಸೇರಿಸಲಾಯಿತು.<ref name="The Edinburgh Gazetteer: Or, Geographical Dictionary: Containing a Description of the Various Countries, Kingdoms, States, Cities, Towns, Mountains, &c. of the World; an Account of the Government, Customs, and Religion of the Inhabitants; the Boundaries and Natural Productions of Each Country, &c. &c. Forming a Complete Body of Geography, Physical, Political, Statistical, and Commercial with Addenda, Containing the Present State of the New Governments in South America...">{{cite book|title=The Edinburgh Gazetteer|url=https://books.google.com/books?id=xRIyAQAAMAAJ&pg=PA63|accessdate=18 November 2012|year=1827|publisher=Longman, Rees, Orme, Brown, and Green|pages=63–}}</ref><ref name="Kumar1965">{{cite book|author=Dharma Kumar|title=Land and Caste in South India: Agricultural Labor in the Madras Presidency During the Nineteenth Century|url=https://books.google.com/books?id=psw5AAAAIAAJ&pg=PA87|accessdate=18 November 2012|year=1965|publisher=CUP Archive|pages=87–|id=GGKEY:T72DPF9AZDK}}</ref><ref name="Ittaman2003">{{cite book|author=K.P. Ittaman|title=History of Mughal Architecture Volume Ii|url=https://books.google.com/books?id=ZQ5lFywZAqYC&pg=PA30|accessdate=18 November 2012|date=1 June 2003|publisher=Abhinav Publications|isbn=978-81-7017-034-1|pages=30–}}</ref> ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 1791 ರಲ್ಲಿ ಕೊಚ್ಚಿ ಮತ್ತು 1795 ರಲ್ಲಿ ತಿರುವಾಂಕೂರಿನೊಂದಿಗೆ ಸಹಾಯಕ ಮೈತ್ರಿಗಳನ್ನು ಸುರಕ್ಷಿತಗೊಳಿಸಿತು.<ref>{{Cite book |author=Superintendent of Government Printing |title=Imperial Gazetteer of India (Provincial Series): Madras |publisher=Government of India |location=Calcutta |year=1908 |accessdate=11 November 2007 |url=https://books.google.com/books?id=xXglUxeS_WkC |page=22}}</ref> 18 ನೇ ಶತಮಾನದ ಅಂತ್ಯದ ವೇಳೆಗೆ, ಕೇರಳವು ಸಂಪೂರ್ಣವಾಗಿ ಬ್ರಿಟಿಷರಿಂದ ನೇರವಾಗಿ ಆಡಳಿತ ನಡೆಸಲ್ಪಡುತ್ತಿತ್ತು ಅಥವಾ ಅವರ [[ಸಾಮಂತತ್ವ]]ದ ಅಡಿಯಲ್ಲಿತ್ತು.<ref name="RajTharakan1981">{{cite book|author1=Kakkadan Nandanath Raj|author2=Michael Tharakan|title=Agrarian reform in Kerala and its impact on the rural economy: a preliminary assessment|url=https://books.google.com/books?id=JF6FAAAAIAAJ|accessdate=18 November 2012|year=1981|publisher=International Labour Office|pages=2–3}}</ref>
20 ನೇ ಶತಮಾನದಲ್ಲಿ, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಕೇರಳವು ಹಲವಾರು ಪ್ರಮುಖ ದಂಗೆಗಳ ತಾಣವಾಗಿತ್ತು. ಇವುಗಳಲ್ಲಿ ಅತ್ಯಂತ ಗಮನಾರ್ಹವಾದುದು 1921 ರ [[ಮಲಬಾರ್ ದಂಗೆ]], ಇದರಲ್ಲಿ ಮಲಬಾರ್ ಪ್ರದೇಶದ ಮಾಪ್ಪಿಲ ಮುಸ್ಲಿಮರು ಹಿಂದೂ [[ಜಮೀನ್ದಾರ್]]ಗಳು (ಭೂಮಾಲೀಕರು) ಮತ್ತು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳ ವಿರುದ್ಧ ಗಲಭೆ ನಡೆಸಿದರು.<ref name="Qureshi1999">{{cite book|author=M. Naeem Qureshi|title=Pan-Islam in British Indian Politics: A Study of the Khilafat Movement, 1918–1924|url=https://books.google.com/books?id=czKYZPyoyx0C|year=1999|publisher=BRILL|isbn=90-04-11371-1|pages=445–447}}</ref> ಸಾಮಾಜಿಕ ಸುಧಾರಣೆಯ ಕ್ಷಣಗಳು ಸಹ ಈ ಅವಧಿಯಲ್ಲಿ ವೇಗವನ್ನು ಪಡೆದುಕೊಂಡವು, ವಿಶೇಷವಾಗಿ ಜಾತಿ-ಆಧಾರಿತ ತಾರತಮ್ಯವನ್ನು ಸವಾಲು ಮಾಡುವವು. ಒಂದು ಪ್ರಮುಖ ಮೈಲಿಗಲ್ಲು 1936 ರ ತಿರುವಾಂಕೂರಿನ [[ದೇವಾಲಯ ಪ್ರವೇಶ ಘೋಷಣೆ]]ಯಾಗಿದ್ದು, ಇದು ಕೆಳ ಜಾತಿಯ ಹಿಂದೂಗಳಿಗೆ ಹಿಂದೆ ಉನ್ನತ ಜಾತಿಗಳಿಗೆ ಸೀಮಿತವಾಗಿದ್ದ ದೇವಾಲಯಗಳನ್ನು ಪ್ರವೇಶಿಸುವ ಹಕ್ಕನ್ನು ನೀಡಿತು.<ref name="Smith1976">{{cite book|author=Bardwell L. Smith|title=Religion and Social Conflict in South Asia|url=https://books.google.com/books?id=07Y3AAAAIAAJ&pg=PA42|accessdate=31 July 2012|year=1976|publisher=BRILL|isbn=978-90-04-04510-1|pages=35–42}}</ref>
=== ಭಾರತದ ರಾಜ್ಯ ===
1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಸ್ವತಂತ್ರ ಪ್ರಭುತ್ವಗಳಾಗಿ [[ಭಾರತದ ವಿಭಜನೆ]] ಯ ನಂತರ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು [[ಭಾರತದ ಪ್ರಭುತ್ವ|ಭಾರತದ ಒಕ್ಕೂಟಕ್ಕೆ]] ಸೇರಿಕೊಂಡವು. 1 ಜುಲೈ 1949 ರಂದು, ಎರಡೂ ರಾಜ್ಯಗಳನ್ನು ವಿಲೀನಗೊಳಿಸಿ [[ತಿರುವಾಂಕೂರು-ಕೊಚ್ಚಿ]] ರೂಪಿಸಲಾಯಿತು.<ref name="Sabharwal2007">{{cite book|author=Gopa Sabharwal|title=India Since 1947: The Independent Years|url=https://books.google.com/books?id=LKySGJAGVEQC&pg=PA23|accessdate=18 November 2012|year=2007|publisher=Penguin Books India|isbn=978-0-14-310274-8|pages=23–}}</ref> 1 ನವೆಂಬರ್ 1956 ರಂದು, ಮದ್ರಾಸಿನ ದಕ್ಷಿಣ ಕನ್ನಡ ಜಿಲ್ಲೆಯ [[ಕಾಸರಗೋಡು ಜಿಲ್ಲೆ|ಕಾಸರಗೋಡು]] ತಾಲೂಕು, [[ಮದ್ರಾಸ್ ರಾಜ್ಯ]]ದ [[ಮಲಬಾರ್ ಜಿಲ್ಲೆ]] ([[ನೀಲಗಿರಿ ಜಿಲ್ಲೆಯ]] [[ಗುಡಾಲೂರು ತಾಲೂಕು]], [[ಲಕ್ಷದ್ವೀಪ]], [[ಟಾಪ್ಸ್ಲಿಪ್]], ಮತ್ತು ಅನಕಟ್ಟಿಯ ಪೂರ್ವದ [[ಅಟ್ಟಪ್ಪಾಡಿ]] ಕಾಡು ಹೊರತುಪಡಿಸಿ), ಮತ್ತು ತಿರುವಾಂಕೂರು-ಕೊಚ್ಚಿ ರಾಜ್ಯವು{{mdash}}ನಾಲ್ಕು ದಕ್ಷಿಣ ತಾಲೂಕುಗಳನ್ನು ([[ಕನ್ಯಾಕುಮಾರಿ ಜಿಲ್ಲೆ]] ಮತ್ತು ಶೆಂಕೋಟ್ಟೈ ತಾಲೂಕುಗಳು) ಹೊರತುಪಡಿಸಿ, ಅವುಗಳನ್ನು ತಮಿಳುನಾಡಿಗೆ ವರ್ಗಾಯಿಸಲಾಯಿತು{{mdash}}[[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ಕೇರಳ ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು.<ref name="Tmh">{{cite book|author=Tmh|title=General Knowledge Digest 2010|url=https://books.google.com/books?id=RyLmXWTKHXgC&pg=SA3-PA106|accessdate=18 November 2012|publisher=Tata McGraw-Hill Education|isbn=978-0-07-069939-7|page=3}}</ref><ref name="SinghKarafin2009">{{cite book|author1=Sarina Singh|author2=Amy Karafin|author3=Anirban Mahapatra|title=South India|url=https://books.google.com/books?id=8KnLFpjEHpUC|accessdate=6 January 2013|date=1 September 2009|publisher=Lonely Planet|isbn=978-1-74179-155-6}}</ref><ref name="Kerala">{{Cite web |title=The States Reorganisation Act, 1956 |url=https://legislative.gov.in/sites/default/files/A1956-37.pdf |url-status=live |archive-url=https://web.archive.org/web/20211117014954/https://legislative.gov.in/sites/default/files/A1956-37.pdf |archive-date=17 November 2021 |access-date=11 May 2021 |website=legislative.gov.in |publisher=Government of India}}</ref> 1957 ರಲ್ಲಿ ಹೊಸ ಕೇರಳ ವಿಧಾನಸಭೆಗೆ ಮೊದಲ ಚುನಾವಣೆಗಳ ನಂತರ [[ಇ. ಎಂ. ಎಸ್. ನಂಬೂದಿರಿಪಾಡ್]] ನೇತೃತ್ವದ [[ಕಮ್ಯುನಿಸ್ಟ್]] ಸರ್ಕಾರವು ರೂಪುಗೊಂಡಿತು.<ref name="SinghKarafin2009"/> ಇದು 1945 ರಲ್ಲಿ [[ಸ್ಯಾನ್ ಮರಿನೋ ಗಣರಾಜ್ಯ]]ದಲ್ಲಿ ಕಮ್ಯುನಿಸ್ಟ್ ಚುನಾವಣಾ ಯಶಸ್ಸಿನ ನಂತರ ವಿಶ್ವದ ಆರಂಭಿಕ ಪ್ರಜಾಪ್ರಭುತ್ವವಾಗಿ ಚುನಾಯಿತ ಕಮ್ಯುನಿಸ್ಟ್ ಸರ್ಕಾರಗಳಲ್ಲಿ ಒಂದಾಗಿದೆ.<ref name=Hindu>{{cite news|title=50 years of development|url=http://www.thehindubusinessline.com/todays-paper/tp-others/tp-states/50-years-of-development/article1655056.ece?ref=archive|accessdate=30 August 2013|newspaper=The Hindu|date=12 April 2007|author=K.G. Kumar}}</ref><ref name="Desai2006">{{cite book|author=Manali Desai|title=State Formation and Radical Democracy in India|url=https://books.google.com/books?id=60m9znJQmmkC&pg=PA142|accessdate=31 August 2013|date=27 November 2006|publisher=Taylor & Francis|isbn=978-0-203-96774-4|page=142}}</ref><ref name="ChitkaraŚarmā1997">{{cite book|author1=Madan Gopal Chitkara|author2=Baṃśī Rāma Śarmā|title=Indian Republic: Issues and Perspective|url=https://books.google.com/books?id=7YrmNURVoroC&pg=PA134|accessdate=18 November 2012|date=1 January 1997|publisher=APH Publishing|isbn=978-81-7024-836-1|pages=134–}}</ref>
== ಭೌಗೋಳಿಕತೆ ==
{{Main|ಕೇರಳದ ಭೌಗೋಳಿಕತೆ}}
{{Multiple image
| direction = vertical
| width = 220
| image1 = AnaimudiPeak DSC 4834.jpg
| caption1 = [[ಅನಮುಡಿ]], [[ದಕ್ಷಿಣ ಭಾರತ]]ದ ಅತಿ ಎತ್ತರದ ಶಿಖರ.
| image2 = DR0071DSC 9245.jpg
| caption2 = [[ವಯನಾಡು|ವಯನಾಡಿನ]] ಬೆಟ್ಟ ಪ್ರದೇಶಗಳಲ್ಲಿ [[ಚಹಾ]] ಮತ್ತು [[ಕಾಫಿ]] ಉತ್ಪಾದಿಸಲಾಗುತ್ತದೆ.
| image3 = Kumarkom.jpg
| caption3 = [[ವೇಂಬನಾಡು]], [[ಕೇರಳ ಬ್ಯಾಕ್ವಾಟರ್ಗಳ]] ಒಂದು ಭಾಗ, ಭಾರತದ ಅತಿ ಉದ್ದದ ಸರೋವರ.
| image4 = Light house in Ponnani.jpg
| caption4 = [[ಪೊನ್ನಾನಿ]] ಲೈಟ್ ಹೌಸ್ ಬೀಚ್
}}
ರಾಜ್ಯವು [[ಲಕ್ಷದ್ವೀಪ ಸಮುದ್ರ]] ಮತ್ತು [[ಪಶ್ಚಿಮ ಘಟ್ಟಗಳ]] ನಡುವೆ ಸಿಕ್ಕಿಕೊಂಡಿದೆ.<ref>{{Cite web |year=1953 |title=Limits of Oceans and Seas, 3rd edition |url=https://iho.int/uploads/user/pubs/standards/s-23/S-23_Ed3_1953_EN.pdf |archive-url=https://web.archive.org/web/20181005131902/https://www.iho.int/iho_pubs/standard/S-23/S-23_Ed3_1953_EN.pdf |archive-date=5 October 2018 |access-date=28 December 2020 |publisher=International Hydrographic Organization}}</ref> ಉತ್ತರ ಅಕ್ಷಾಂಶ 8°18' ಮತ್ತು 12°48' ಮತ್ತು ಪೂರ್ವ ರೇಖಾಂಶ 74°52' ಮತ್ತು 77°22' ನಡುವೆ ಇದೆ,<ref>{{cite web |title=Physical and Anatomical Characteristic of Wood of Some Less-Known Tree Species of Kerala |url=https://docs.kfri.res.in/KFRI-RR/KFRI-RR096.pdf |work=Kerala Forest Research Institute |publisher=Government of Kerala |access-date=18 November 2012 |archive-date=9 July 2013 |archive-url=https://web.archive.org/web/20130709150101/http://docs.kfri.res.in/KFRI-RR/KFRI-RR096.pdf |url-status=live }}</ref> ಕೇರಳವು ಕೆಲವು ಚಂಡಮಾರುತಗಳೊಂದಿಗೆ ಆರ್ದ್ರ [[ಉಷ್ಣವಲಯದ ಮಳೆಕಾಡು ಹವಾಮಾನ]]ವನ್ನು ಹೊಂದಿದೆ. ರಾಜ್ಯವು {{cvt|590|km|mi}} ಕರಾವಳಿಯನ್ನು ಹೊಂದಿದೆ<ref>{{cite web |title=Marine Fisheries |url=https://www.fisheries.kerala.gov.in/index.php?option=com_content&view=article&id=76&Itemid=44 |website=fisheries.kerala.gov.in |publisher=Department of Fisheries, Government of Kerala |access-date=13 November 2015 |archive-date=17 November 2015 |archive-url=https://web.archive.org/web/20151117021802/http://www.fisheries.kerala.gov.in/index.php?option=com_content&view=article&id=76&Itemid=44 |url-status=live }}</ref> ಮತ್ತು ರಾಜ್ಯದ ಅಗಲವು {{convert|11|and|121|km|mi|0}} ನಡುವೆ ಬದಲಾಗುತ್ತದೆ.<ref name="Nair1994">{{cite book |author=V. Balakrishnan Nair |title=Social Development and Demographic Changes in South India: Focus on Kerala |url=https://books.google.com/books?id=sTS4OO9lcdgC&pg=PA15 |access-date=18 November 2012 |year=1994 |publisher=M.D. Publications Pvt. Ltd. |isbn=978-8185880501 |page=15}}</ref> ಭೌಗೋಳಿಕವಾಗಿ, ಕೇರಳವನ್ನು ಮೂರು ಹವಾಮಾನದ ಪ್ರತ್ಯೇಕ ಪ್ರದೇಶಗಳಾಗಿ ವಿಂಗಡಿಸಬಹುದು: ಪೂರ್ವ ಎತ್ತರದ ಪ್ರದೇಶಗಳು; ಒರಟು ಮತ್ತು ತಂಪಾದ ಪರ್ವತ ಪ್ರದೇಶ, ಮಧ್ಯ ಮಧ್ಯ-ನೆಲಗಳು; ರೋಲಿಂಗ್ ಬೆಟ್ಟಗಳು, ಮತ್ತು ಪಶ್ಚಿಮ ತಗ್ಗು ಪ್ರದೇಶಗಳು; ಕರಾವಳಿ ಬಯಲುಗಳು.<ref name="ChattopadhyayFranke2006">{{cite book |author1=Srikumar Chattopadhyay |author2=Richard W. Franke |title=Striving for Sustainability: Environmental Stress and Democratic Initiatives in Kerala |url=https://books.google.com/books?id=gOrvghLklKoC&pg=PA110 |access-date=19 March 2019 |year=2006 |publisher=Concept Publishing Company |isbn=978-8180692949}}</ref>{{rp|110}} [[ಪೂರ್ವ-ಕೇಂಬ್ರಿಯನ್]] ಮತ್ತು [[ಪ್ಲಿಸ್ಟೊಸೀನ್]] ಭೂವೈಜ್ಞಾನಿಕ ರಚನೆಗಳು ಕೇರಳದ ಭೂಪ್ರದೇಶದ ಬಹುಭಾಗವನ್ನು ರೂಪಿಸುತ್ತವೆ.<ref name="Geological Survey Water-supply Paper">{{cite book |title=Geological Survey Water-supply Paper |url=https://books.google.com/books?id=0qUYAQAAIAAJ&pg=SL4-PA6 |access-date=19 March 2019 |year=1961 |publisher=U.S. Government Printing Office |page=4}}</ref><ref name="SharmaKumari2008">{{cite book |author1=Pradeep Sharma |author2=Y. Dharnai Kumari |author3=Tirunagaram Lakshmamma |title=Status Of Women And Family Planning |url=https://books.google.com/books?id=2b6Ok2EcnBIC&pg=PA217 |access-date=18 November 2012 |year=2008 |publisher=Discovery Publishing House |isbn=978-8183563260 |page=217}}</ref> 1341 CE ಯಲ್ಲಿ ಕೇರಳದಲ್ಲಿ ವಿನಾಶಕಾರಿ ಪ್ರವಾಹವು ಅದರ ಭೂಪ್ರದೇಶವನ್ನು ಆಮೂಲಾಗ್ರವಾಗಿ ಬದಲಾಯಿಸಿತು ಮತ್ತು ಅದರ ಇತಿಹಾಸದ ಮೇಲೆ ಪರಿಣಾಮ ಬೀರಿತು; ಇದು ಮಸಾಲೆ ಸಾಗಣೆಗೆ ನೈಸರ್ಗಿಕ ಬಂದರನ್ನು ಸೃಷ್ಟಿಸಿತು.<ref name="LimitedKitchen2010">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA100 |access-date=18 November 2012 |year=2010 |publisher=Murdoch Books |isbn=978-1-74196-438-7 |page=100}}</ref>
ಕೇರಳದ ಪೂರ್ವ ಪ್ರದೇಶವು ಪಶ್ಚಿಮ ಘಟ್ಟಗಳ [[ಮಳೆ ನೆರಳು]] ಯ ಪಶ್ಚಿಮಕ್ಕೆ ತಕ್ಷಣವೇ ಎತ್ತರದ ಪರ್ವತಗಳು, ಕಮರಿಗಳು ಮತ್ತು ಆಳವಾದ ಕತ್ತರಿಸಿದ ಕಣಿವೆಗಳನ್ನು ಒಳಗೊಂಡಿದೆ.<ref name=ChattopadhyayFranke2006 />{{rp|110}} ಕೇರಳದ ಪಶ್ಚಿಮಕ್ಕೆ ಹರಿಯುವ 41 ನದಿಗಳು,<ref name="Sadasivan2003">{{cite book |author=S. N. Sadasivan |title=River Disputes in India: Kerala Rivers Under Siege |url=https://books.google.com/books?id=hhrRboi5kOcC&pg=PA223 |access-date=18 November 2012 |year=2003 |publisher=Mittal Publications |isbn=978-8170999133 |page=223}}</ref> ಮತ್ತು ಅದರ ಪೂರ್ವಕ್ಕೆ ಹರಿಯುವ 3 ನದಿಗಳು ಈ ಪ್ರದೇಶದಲ್ಲಿ ಹುಟ್ಟುತ್ತವೆ.<ref name="Darpan2006">{{cite book |author=Pratiyogita Darpan |title=Pratiyogita Darpan |url=https://books.google.com/books?id=QegDAAAAMBAJ&pg=PT72 |access-date=18 November 2012 |date=September 2006 |publisher=Pratiyogita Darpan |page=72}}</ref><ref name="India2008">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA11 |access-date=18 November 2012 |year=2008 |publisher=Sura Books |isbn=978-8174781642 |page=11}}</ref> ಪಶ್ಚಿಮ ಘಟ್ಟಗಳು [[ಪಾಲಕ್ಕಾಡ್]] ಬಳಿ ಮಾತ್ರ ಅಡ್ಡಿಪಡಿಸುವ ಪರ್ವತಗಳ ಗೋಡೆಯನ್ನು ರೂಪಿಸುತ್ತವೆ; ಆದ್ದರಿಂದ ಪಾಲ್''ಘಾಟ್'' ಎಂದೂ ಕರೆಯಲ್ಪಡುತ್ತದೆ, ಅಲ್ಲಿ [[ಪಾಲಕ್ಕಾಡ್ ಅಂತರ]]ವು ಮುರಿಯುತ್ತದೆ.<ref>{{cite web |last1=Chandran Nair |first1=Dr.S.Sathis |title=India – Silent Valley Rainforest Under Threat Once More |url=https://www.rainforestinfo.org.au/wrr2004/silentvalley.htm |website=rainforestinfo.org.au |access-date=12 November 2015 |archive-date=24 September 2015 |archive-url=https://web.archive.org/web/20150924084520/http://www.rainforestinfo.org.au/wrr2004/silentvalley.htm |url-status=live }}</ref> ಪಶ್ಚಿಮ ಘಟ್ಟಗಳು ಸರಾಸರಿ {{convert|1500|m|ft|lk=out|abbr=off}} [[ಸಮುದ್ರ ಮಟ್ಟ]]ದವರೆಗೆ ಏರುತ್ತವೆ,<ref name="Biju2006">{{cite book |author=M.R. Biju |title=Sustainable Dimensions Of Tourism Management |url=https://books.google.com/books?id=AkAdvTbg0dEC&pg=PA63 |access-date=18 November 2012 |year=2006 |publisher=Mittal Publications |isbn=978-8183241298 |page=63}}</ref> ಆದರೆ ಅತಿ ಎತ್ತರದ ಶಿಖರಗಳು ಸುಮಾರು {{convert|2500|m|ft|abbr=off}} ತಲುಪುತ್ತವೆ.<ref name="Hussain">{{cite book |author=Hussain |title=Geography Of India For Civil Ser Exam |url=https://books.google.com/books?id=wUzKCZxvNQoC&pg=SA2-PA9 |access-date=18 November 2012 |publisher=Tata McGraw-Hill Education |isbn=978-0-07-066772-3 |page=2}}</ref> [[ಇಡುಕ್ಕಿ]] ಜಿಲ್ಲೆಯ [[ಅನಮುಡಿ]] ದಕ್ಷಿಣ ಭಾರತದ ಅತಿ ಎತ್ತರದ ಶಿಖರವಾಗಿದ್ದು, {{cvt|2,695|m}} ಎತ್ತರದಲ್ಲಿದೆ.<ref name="gazetteer">{{cite book |last1=Frowde |first1=Henry |url=https://dsal.uchicago.edu/reference/gazetteer/ |title=Imperial Gazetteer of India |date=1908–1909 |publisher=Clarendon Press |edition=New |location=Oxford |access-date=2 December 2020 |archive-url=https://web.archive.org/web/20081216124143/http://dsal.uchicago.edu/reference/gazetteer/ |archive-date=16 December 2008 |url-status=live}}</ref> ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯು ವಿಶ್ವದ ಎಂಟು "ಅತ್ಯಂತ ಬಿಸಿಯಾದ ಜೈವಿಕ ವೈವಿಧ್ಯತೆಯ ಹಾಟ್ಸ್ಪಾಟ್ಗಳಲ್ಲಿ" ಒಂದಾಗಿ ಗುರುತಿಸಲ್ಪಟ್ಟಿದೆ ಮತ್ತು [[UNESCO]] [[ವಿಶ್ವ ಪರಂಪರೆಯ ತಾಣ]]ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.<ref name="UNESCO">{{cite news |url=https://timesofindia.indiatimes.com/home/environment/flora-fauna/UN-designates-Western-Ghats-as-world-heritage-site/articleshow/14595602.cms |archive-url=https://web.archive.org/web/20130131192257/https://articles.timesofindia.indiatimes.com/2012-07-02/flora-fauna/32507340_1_world-heritage-list-western-ghats-border-town |url-status=live |archive-date=31 January 2013 |title=UN designates Western Ghats as world heritage site |date=2 July 2012 |newspaper=[[The Times of India]] |access-date=27 November 2018}}</ref> ಈ ಶ್ರೇಣಿಯ ಕಾಡುಗಳು ಹಿಮಾಲಯ ಪರ್ವತಗಳಿಗಿಂತ ಹಳೆಯದು ಎಂದು ಪರಿಗಣಿಸಲಾಗಿದೆ.<ref name="UNESCO" /> ಪಶ್ಚಿಮ ಘಟ್ಟಗಳ ಹಿನ್ನೆಲೆಯಲ್ಲಿ ನೆಲೆಗೊಂಡಿರುವ [[ಅತಿರಪ್ಪಿಲ್ಲಿ ಜಲಪಾತ]]ವನ್ನು ''ಭಾರತದ [[ನಯಾಗರ ಜಲಪಾತ|ನಯಾಗರ]]'' ಎಂದೂ ಕರೆಯಲಾಗುತ್ತದೆ.<ref name="Athirappilly">{{cite news |url=https://articles.timesofindia.indiatimes.com/2013-05-30/travel/33064279_1_palm-trees-trek-coconut-trees |title=The Times of India: Latest News India, World & Business News, Cricket & Sports, Bollywood |access-date=2 July 2013 |archive-url=https://web.archive.org/web/20130621233624/https://articles.timesofindia.indiatimes.com/2013-05-30/travel/33064279_1_palm-trees-trek-coconut-trees |archive-date=21 June 2013 |work=[[The Times of India]] |url-status=dead}}</ref> ಇದು [[ಚಾಲಕ್ಕುಡಿ ನದಿ]]ಯಲ್ಲಿದೆ ಮತ್ತು ರಾಜ್ಯದ ಅತಿ ದೊಡ್ಡ ಜಲಪಾತವಾಗಿದೆ.<ref name="Athirappilly" /> [[ವಯನಾಡು]] ಕೇರಳದ ಏಕೈಕ [[ಪ್ರಸ್ಥಭೂಮಿ]]ಯಾಗಿದೆ.<ref>{{cite book |author=William Logan |year=1887 |title=Malabar Manual (Volume-II) |publisher=Madras Government Press |url=https://archive.org/details/malabar_manual_volume2/mode/2up}}</ref> [[ವಯನಾಡು ಜಿಲ್ಲೆ|ವಯನಾಡು]], [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ([[ನಿಲಂಬೂರು|ನಿಲಂಬೂರಿನ]] [[ಚಾಲಿಯಾರ್]] ಕಣಿವೆ), ಮತ್ತು [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] ([[ಅಟ್ಟಪ್ಪಾಡಿ]] ಕಣಿವೆ) ಜಿಲ್ಲೆಗಳಲ್ಲಿನ ಪೂರ್ವ ಪ್ರದೇಶಗಳು, ಒಟ್ಟಾಗಿ [[ನೀಲಗಿರಿ ಜೀವಗೋಳ ಮೀಸಲು]] ಮತ್ತು [[ಮೈಸೂರು ಪ್ರಸ್ಥಭೂಮಿ]]ಯ ಮುಂದುವರಿಕೆಯ ಭಾಗಗಳಾಗಿವೆ, ಇವು ನೈಸರ್ಗಿಕ [[ಚಿನ್ನ]]ದ ಹೊಲಗಳಿಗೆ ಹೆಸರುವಾಸಿಯಾಗಿದೆ, ಜೊತೆಗೆ [[ಕರ್ನಾಟಕ]]ದ ಪಕ್ಕದ ಜಿಲ್ಲೆಗಳು.<ref>{{Cite web |url=https://dmg.kerala.gov.in/mineral-resources/ |title=Mineral Resources |website=Department of Mining and Geology – Government of Kerala |access-date=4 April 2022 |archive-date=13 May 2022 |archive-url=https://web.archive.org/web/20220513124121/https://dmg.kerala.gov.in/mineral-resources/ |url-status=live }}</ref> [[ಇಲ್ಮೆನೈಟ್]], [[ಮೊನಾಜೈಟ್]], [[ಥೋರಿಯಮ್]], ಮತ್ತು [[ಟೈಟಾನಿಯಮ್]] ಸೇರಿದಂತೆ ಖನಿಜಗಳು ಕೇರಳದ ಕರಾವಳಿ ಪಟ್ಟಿಯಲ್ಲಿ ಕಂಡುಬರುತ್ತವೆ.{{sfn|Chandran|2018|p=343}} ಕೇರಳದ [[ಕರುನಾಗಪ್ಪಳ್ಳಿ]] ಕರಾವಳಿ ಪಟ್ಟಿಯು [[ಥೋರಿಯಮ್]]-ಹೊಂದಿರುವ [[ಮೊನಾಜೈಟ್]] ಮರಳಿನಿಂದ ಹೆಚ್ಚಿನ ಹಿನ್ನೆಲೆ ವಿಕಿರಣಕ್ಕೆ ಹೆಸರುವಾಸಿಯಾಗಿದೆ. ಕೆಲವು ಕರಾವಳಿ ಪಂಚಾಯತ್ಗಳಲ್ಲಿ, ಸರಾಸರಿ ಹೊರಾಂಗಣ ವಿಕಿರಣ ಮಟ್ಟಗಳು 4 [[ಗ್ರೇ (ಘಟಕ)#ದೇಹದ ಮೇಲಿನ ಪರಿಣಾಮ|mGy/yr]] ಗಿಂತ ಹೆಚ್ಚು ಮತ್ತು ಕರಾವಳಿಯ ಕೆಲವು ಸ್ಥಳಗಳಲ್ಲಿ, ಇದು 70 mGy/yr ನಷ್ಟು ಹೆಚ್ಚಾಗಿದೆ.<ref>{{Cite news |vauthors=Nair RR, Rajan B, Akiba S, Jayalekshmi P, Nair MK, Gangadharan P, Koga T, Morishima H, Nakamura S, Sugahara T |title=Background radiation and cancer incidence in Kerala, India-Karanagappally cohort study. |publisher=Health Physics |date=January 2009 |pmid=19066487}}</ref>
ಕೇರಳದ ಪಶ್ಚಿಮ ಕರಾವಳಿ ಪಟ್ಟಿಯು ಪೂರ್ವ ಪ್ರದೇಶಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಸಮತಟ್ಟಾಗಿದೆ,<ref name="ChattopadhyayFranke2006" />{{rp|33}} ಮತ್ತು ಅಂತರ್ಸಂಪರ್ಕಿತ [[ಉಪ್ಪುನೀರಿನ]] ಕಾಲುವೆಗಳು, ಸರೋವರಗಳು, [[ಅಳಿವೆ]]ಗಳು,<ref name="Moss2010">{{cite book |author=Danny Moss |title=Public Relations Cases: International Perspectives |url=https://books.google.com/books?id=s0-CJ3djEdEC&pg=PA41 |access-date=18 November 2012 |year=2010 |publisher=Taylor & Francis |isbn=978-0-415-77336-2 |page=41}}</ref> ಮತ್ತು [[ಕೇರಳ ಬ್ಯಾಕ್ವಾಟರ್ಗಳು]] ಎಂದು ಕರೆಯಲ್ಪಡುವ ನದಿಗಳ ಜಾಲದಿಂದ ಕೂಡಿದೆ.<ref name="Thorpe2012">{{cite book |author=Edgar Thorpe |title=The Pearson CSAT Manual 2012 |url=https://books.google.com/books?id=1cruroSVFoUC&pg=RA3-PA38 |access-date=18 November 2012 |year=2012 |publisher=Pearson Education India |isbn=978-8131767344 |page=3}}</ref> ''ಕೇರಳದ ಅಕ್ಕಿಯ ಬಟ್ಟಲು'' ಎಂದೂ ಕರೆಯಲ್ಪಡುವ [[ಕುಟ್ಟನಾಡು]] ಭಾರತದಲ್ಲಿ [[ಭಾರತದ ತೀವ್ರ ಬಿಂದುಗಳ ಪಟ್ಟಿ#ಎತ್ತರಗಳು|ಅತ್ಯಂತ ಕಡಿಮೆ ಎತ್ತರವನ್ನು]] ಹೊಂದಿದೆ, ಮತ್ತು ಇದು ಸಮುದ್ರ ಮಟ್ಟಕ್ಕಿಂತ ಕೆಳಗೆ ಬೇಸಾಯ ನಡೆಯುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿದೆ.<ref>{{Cite news |title=Kerala Boat Ferries Lone Passenger To Help Her Take Exam |url=https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |last=Press Trust of India |date=1 June 2020 |access-date=17 November 2020 |work=NDTV |archive-date=16 November 2021 |archive-url=https://web.archive.org/web/20211116093316/https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |url-status=live }}</ref><ref>{{Cite web |url=https://www.hindu.com/mag/2003/07/13/stories/2003071300600200.htm |title=Thirst below sea level |last=Suchitra |first=M |date=13 August 2003 |work=[[The Hindu]] |access-date=17 November 2020 |archive-url=https://web.archive.org/web/20190922101804/https://www.thehindu.com/todays-paper/tp-features/tp-sundaymagazine/thirst-below-sea-level/article28523147.ece |archive-date=22 September 2019}}</ref> ದೇಶದ ಅತಿ ಉದ್ದದ ಸರೋವರ [[ವೇಂಬನಾಡು ಸರೋವರ|ವೇಂಬನಾಡು]] ಬ್ಯಾಕ್ವಾಟರ್ಗಳಲ್ಲಿ ಪ್ರಾಬಲ್ಯ ಹೊಂದಿದೆ; ಇದು [[ಆಲಪ್ಪುಳ]] ಮತ್ತು [[ಕೊಚ್ಚಿ]] ನಡುವೆ ಇದೆ ಮತ್ತು ಸುಮಾರು {{cvt|200|km2|sqmi}} ಪ್ರದೇಶದಲ್ಲಿದೆ.<ref name="Husain">{{cite book |author=Majid Husain |title=Understanding: Geographical: Map Entries: for Civil Services Examinations: Second Edition |url=https://books.google.com/books?id=_9VGKfQ-sQsC&pg=RA9-PT18 |access-date=18 November 2012 |publisher=Tata McGraw-Hill Education |isbn=978-0-07-070288-2 |page=9 |year=2011}}</ref> ಭಾರತದ ಸುಮಾರು ಎಂಟು ಪ್ರತಿಶತದಷ್ಟು ಜಲಮಾರ್ಗಗಳು ಕೇರಳದಲ್ಲಿ ಕಂಡುಬರುತ್ತವೆ.<ref name="IWAI_2005">{{Cite journal |author=Inland Waterways Authority of India (IWAI—Ministry of Shipping) |year=2005 |title=Introduction to Inland Water Transport |journal=IWAI (Ministry of Shipping) |url=https://iwai.nic.in/Introduction.html |archive-url=https://archive.today/20050204175110/http://iwai.nic.in/Introduction.html |url-status=dead |archive-date=4 February 2005 |access-date=19 January 2006}}</ref> ಕೇರಳದ [[ಕೇರಳದ ನದಿಗಳ ಪಟ್ಟಿ|44 ನದಿಗಳು]] [[ಪೆರಿಯಾರ್ ನದಿ|ಪೆರಿಯಾರ್]]; {{convert|244|km|mi|0}}, [[ಭಾರತಪುಳ]]; {{convert|209|km|mi|0}}, [[ಪಂಬಾ ನದಿ|ಪಂಬಾ]]; {{convert|176|km|mi|0}}, [[ಚಾಲಿಯಾರ್ ನದಿ|ಚಾಲಿಯಾರ್]]; {{convert|169|km|mi|0}}, [[ಕಡಲುಂಡಿಪುಳ ನದಿ|ಕಡಲುಂಡಿಪುಳ]]; {{convert|130|km|mi|0}}, [[ಚಾಲಕ್ಕುಡಿ ನದಿ|ಚಾಲಕ್ಕುಡಿಪುಳ]]; {{convert|130|km|mi|0}}, [[ವಲಪಟ್ಟಣಂ ನದಿ|ವಲಪಟ್ಟಣಂ]]; {{convert|129|km|mi|0}} ಮತ್ತು [[ಅಚನ್ಕೋವಿಲ್ ನದಿ]]; {{convert|128|km|mi|0}}. ನದಿಗಳ ಸರಾಸರಿ ಉದ್ದ {{convert|64|km|mi|0}}. ಅನೇಕ ನದಿಗಳು ಚಿಕ್ಕದಾಗಿರುತ್ತವೆ ಮತ್ತು ಸಂಪೂರ್ಣವಾಗಿ ಮಳೆಗಾಲದ ಮಳೆಯಿಂದ ಪೋಷಿಸಲ್ಪಡುತ್ತವೆ.<ref name=riverreport>{{cite book |last=India. |first=Planning Commission |title=Kerala Development Report |year=2008 |publisher=Academic Foundation |isbn=978-8171885947 |page=224 |url=https://books.google.com/books?isbn=8171885942}}</ref> ಕೇರಳದ ನದಿಗಳು ಚಿಕ್ಕದಾಗಿರುವುದರಿಂದ ಮತ್ತು [[ನದೀಮುಖಜ ಭೂಮಿ|ಮುಖಜ ಭೂಮಿಯ]] ಕೊರತೆಯಿಂದಾಗಿ, ಅವು ಪರಿಸರ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತವೆ. ನದಿಗಳು ಮರಳು ಗಣಿಗಾರಿಕೆ ಮತ್ತು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತವೆ.<ref name="Padmalal">{{cite journal | url=https://doi.org/10.1007/s00254-007-0870-z | doi=10.1007/s00254-007-0870-z | title=Environmental effects of river sand mining: A case from the river catchments of Vembanad lake, Southwest coast of India | year=2008 | last1=Padmalal | first1=D. | last2=Maya | first2=K. | last3=Sreebha | first3=S. | last4=Sreeja | first4=R. | journal=Environmental Geology | volume=54 | issue=4 | pages=879–889 | bibcode=2008EnGeo..54..879P | s2cid=129312081 | access-date=12 February 2020 | archive-date=25 November 2023 | archive-url=https://web.archive.org/web/20231125191757/https://link.springer.com/article/10.1007/s00254-007-0870-z | url-status=live | issn = 0943-0105 | url-access=subscription }}</ref> ರಾಜ್ಯವು ಭೂಕುಸಿತ, ಪ್ರವಾಹ ಮತ್ತು ಬರಗಾಲದಂತಹ ಹಲವಾರು ನೈಸರ್ಗಿಕ ಅಪಾಯಗಳನ್ನು ಅನುಭವಿಸುತ್ತದೆ. 2004 ರ [[2004 ರ ಹಿಂದೂ ಮಹಾಸಾಗರದ ಭೂಕಂಪ ಮತ್ತು ಸುನಾಮಿ|ಹಿಂದೂ ಮಹಾಸಾಗರದ ಸುನಾಮಿ]] ಯಿಂದ ರಾಜ್ಯವು ಸಹ ಪರಿಣಾಮ ಬೀರಿತು,<ref name="Jha2010">{{cite book |author=M.K. Jha |title=Natural and Anthropogenic Disasters: Vulnerability, Preparedness and Mitigation |url=https://books.google.com/books?id=fICXQSPJwx8C&pg=PA81 |access-date=18 November 2012 |year=2010 |publisher=Springer |isbn=978-9048124978 |page=81}}</ref> ಮತ್ತು 2018 ರಲ್ಲಿ ಸುಮಾರು ಒಂದು ಶತಮಾನದಲ್ಲಿ [[2018 ಕೇರಳ ಪ್ರವಾಹ|ಕೆಟ್ಟ ಪ್ರವಾಹವನ್ನು]] ಅನುಭವಿಸಿತು.<ref>{{Cite news |url=https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |title=Worst floods in nearly a century kill 44 in India's Kerala state amid torrential monsoon rains |last=Baynes |first=Chris |date=15 August 2018 |work=The Independent |access-date=16 August 2018 |archive-date=23 May 2019 |archive-url=https://web.archive.org/web/20190523232643/https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |url-status=live }}</ref> 2024 ರಲ್ಲಿ, ಕೇರಳವು ತನ್ನ ಇತಿಹಾಸದಲ್ಲಿ [[2024 ವಯನಾಡು ಭೂಕುಸಿತ|ಕೆಟ್ಟ ಭೂಕುಸಿತಗಳನ್ನು]] ಅನುಭವಿಸಿತು.<ref>{{Cite news |url=https://www.onmanorama.com/news/kerala/2024/07/30/wayand-landslide-kerala-rain-live.html |title=Wayanad landslides: 133 dead, 481 saved, at least 98 missing |date=30 July 2024 |work=[[Onmanorama]] |access-date=31 July 2024 |archive-date=30 July 2024|archive-url=https://web.archive.org/web/20240730073647/https://www.onmanorama.com/news/kerala/2024/07/30/wayand-landslide-kerala-rain-live.html |url-status=live }}</ref>
=== ಹವಾಮಾನ ===
ವರ್ಷಕ್ಕೆ ಸುಮಾರು 120–140 ಮಳೆಯ ದಿನಗಳೊಂದಿಗೆ,<ref name="Chacko_2002">{{Cite journal |last1=Chacko |first1=T. |last2=Renuka |first2=G. |year=2002 |title=Temperature mapping, thermal diffusivity and subsoil heat flux at Kariavattom, Kerala |journal=Proc Indian Acad Sci (Earth Planet Sci) |volume=111 |issue=1 |pages=79 |title-link=Kariavattom |bibcode=2002InEPS.111...79T |doi=10.1007/BF02702224 |doi-access=free}}</ref>{{rp|80}} ಕೇರಳವು [[ನೈಋತ್ಯ ಮಾನ್ಸೂನ್|ನೈಋತ್ಯ ಬೇಸಿಗೆ ಮಾನ್ಸೂನ್]] ಮತ್ತು [[ಈಶಾನ್ಯ ಮಾನ್ಸೂನ್|ಈಶಾನ್ಯ ಚಳಿಗಾಲದ ಮಾನ್ಸೂನ್]] ನ ಕಾಲಿಕ ಭಾರೀ ಮಳೆಯಿಂದ ಪ್ರಭಾವಿತವಾದ ಆರ್ದ್ರ ಮತ್ತು ಸಮುದ್ರಯಾನ ಉಷ್ಣವಲಯದ ಹವಾಮಾನವನ್ನು ಹೊಂದಿದೆ.<ref name="Devrep">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=223 |access-date=30 May 2015}}</ref> ಸುಮಾರು 65% ಮಳೆಯು ಜೂನ್ ನಿಂದ ಆಗಸ್ಟ್ ವರೆಗೆ ನೈಋತ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ, ಮತ್ತು ಉಳಿದವು ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಈಶಾನ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ.<ref name="Devrep" /> ನೈಋತ್ಯ ಮಾನ್ಸೂನ್ನ ತೇವಾಂಶ-ಹೊತ್ತ ಗಾಳಿಗಳು, [[ಭಾರತೀಯ ಪರ್ಯಾಯ ದ್ವೀಪ]]ದ ಅತ್ಯಂತ ದಕ್ಷಿಣದ ಬಿಂದುವನ್ನು ತಲುಪಿದಾಗ, ಅದರ ಸ್ಥಳಾಕೃತಿಯ ಕಾರಣದಿಂದಾಗಿ, ಎರಡು ಶಾಖೆಗಳಾಗಿ ವಿಭಜನೆಯಾಗುತ್ತವೆ; "ಅರೇಬಿಯನ್ ಸಮುದ್ರ ಶಾಖೆ" ಮತ್ತು "ಬಂಗಾಳ ಕೊಲ್ಲಿಯ ಶಾಖೆ".<ref name="Jain">{{cite book |author=RK Jain |title=Geography 10 |url=https://books.google.com/books?id=7hOybWJeZN0C&pg=PA110 |access-date=18 November 2012 |publisher=Ratna Sagar |isbn=978-8183320818 |page=110}}</ref> ನೈಋತ್ಯ ಮಾನ್ಸೂನ್ನ "ಅರೇಬಿಯನ್ ಸಮುದ್ರ ಶಾಖೆ" ಮೊದಲು ಪಶ್ಚಿಮ ಘಟ್ಟಗಳಿಗೆ ಬಡಿಯುತ್ತದೆ,<ref name="Together with Social Science Term II">{{cite book |title=Together with Social Science Term II |url=https://books.google.com/books?id=oOA1nsSU8JYC&pg=PA112 |access-date=18 November 2012 |publisher=Rachna Sagar |isbn=978-8181373991 |page=112}}</ref> ನೈಋತ್ಯ ಮಾನ್ಸೂನ್ನಿಂದ ಮಳೆಯನ್ನು ಪಡೆಯುವ ಭಾರತದ ಮೊದಲ ರಾಜ್ಯವಾಗಿ ಕೇರಳವನ್ನು ಮಾಡುತ್ತದೆ.<ref name="google6">{{cite book |author1=Edgar Thorpe, Showick Thorpe |author2=Thorpe Edgar |title=The Pearson CSAT Manual 2011 |url=https://books.google.com/books?id=WuBFs6yFRwcC&pg=SL7-PA168 |access-date=18 November 2012 |publisher=Pearson Education India |isbn=978-8131758304 |page=7}}</ref><ref name="Aggarwal">{{cite book |author1=N.N. Kher |author2=Jaideep Aggarwal |title=A Text Book of Social Sciences |url=https://books.google.com/books?id=jV6k0FvIC4sC&pg=RA5-PA16 |access-date=18 November 2012 |publisher=Pitambar Publishing |isbn=978-8120914667 |page=5}}</ref> ಈಶಾನ್ಯ ಮಾನ್ಸೂನ್ನಲ್ಲಿ ಒತ್ತಡದ ಮಾದರಿಗಳ ವಿತರಣೆಯು ಹಿಮ್ಮುಖವಾಗುತ್ತದೆ, ಈ ಋತುವಿನಲ್ಲಿ ಉತ್ತರ ಭಾರತದಿಂದ ತಣ್ಣನೆಯ ಗಾಳಿಗಳು ಬಂಗಾಳ ಕೊಲ್ಲಿಯಿಂದ ತೇವಾಂಶವನ್ನು ಪಡೆದುಕೊಳ್ಳುತ್ತವೆ ಮತ್ತು ಪರ್ಯಾಯ ದ್ವೀಪ ಭಾರತದ ಪೂರ್ವ ಕರಾವಳಿಯಲ್ಲಿ ಅದನ್ನು ಮಳೆಯಾಗಿ ಸುರಿಸುತ್ತವೆ.<ref name="google7">{{cite book |author1=Sarina Singh |author2=Amy Karafin |author3=Anirban Mahapatra |title=South India |url=https://books.google.com/books?id=8KnLFpjEHpUC&pg=PA15 |access-date=18 November 2012 |year=2009 |publisher=Lonely Planet |isbn=978-1-74179-155-6 |page=15}}</ref><ref name="Reddy">{{cite book |author=S.V. Jeevananda Reddy |title=Climate Change: Myths and Realities |url=https://books.google.com/books?id=y_GMTXRtxJ8C&pg=PA71 |access-date=18 November 2012 |publisher=Jeevananda Reddy |page=71 |id=GGKEY:WDFHBL1XHK3}}</ref> ಕೇರಳದಲ್ಲಿ, ಈಶಾನ್ಯ ಮಾನ್ಸೂನ್ನ ಪ್ರಭಾವವು ದಕ್ಷಿಣ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುತ್ತದೆ.<ref>{{Cite book |author=Rao |title=Agricultural Meteorology |url=https://books.google.com/books?id=Kd-3lt-yAtAC&pg=PA173 |publisher=PHI Learning |year=2008 |isbn=978-8120333383 |pages=173–74 |access-date=30 May 2015}}</ref> ಕೇರಳದ ಮಳೆಯು ವಾರ್ಷಿಕವಾಗಿ ಸರಾಸರಿ 2,923 mm (115 in) ಆಗಿದೆ.<ref name="IMD">{{cite web |url=https://www.imd.gov.in/section/hydro/dynamic/rfmaps/updated.html |title=Hydromet Division Updated/Real Time Maps |publisher=[[India Meteorological Department]] |access-date=21 October 2014 |archive-url=https://web.archive.org/web/20160305062728/https://www.imd.gov.in/section/hydro/dynamic/rfmaps/updated.html |archive-date=5 March 2016 |url-status=dead}}</ref> ಕೇರಳದ ಕೆಲವು ಶುಷ್ಕ ತಗ್ಗು ಪ್ರದೇಶಗಳು ಸರಾಸರಿ ಕೇವಲ 1,250 mm (49 in) ಪಡೆಯುತ್ತವೆ; ಪೂರ್ವ [[ಇಡುಕ್ಕಿ ಜಿಲ್ಲೆ]]ಯ ಪರ್ವತಗಳು 5,000 mm (197 in) ಗಿಂತ ಹೆಚ್ಚು [[ಮಳೆ (ಹವಾಮಾನಶಾಸ್ತ್ರ)#ಶಿಲಾವೃಷ್ಟಿ ಮಳೆ|ಶಿಲಾವೃಷ್ಟಿ ಮಳೆಯನ್ನು]] ಪಡೆಯುತ್ತವೆ: ರಾಜ್ಯದಲ್ಲಿ ಅತಿ ಹೆಚ್ಚು. ಪೂರ್ವ ಕೇರಳದಲ್ಲಿ, ಶುಷ್ಕ ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಹವಾಮಾನವು ಪ್ರಚಲಿತವಾಗಿದೆ. ಬೇಸಿಗೆಯಲ್ಲಿ, ರಾಜ್ಯವು ಭಾರಿ ಗಾಳಿ, ಸುಂಟರಗಾಳಿ, ಚಂಡಮಾರುತ-ಸಂಬಂಧಿತ ಧಾರಾಕಾರ ಮಳೆ, ಸಾಂದರ್ಭಿಕ ಬರಗಾಲ ಮತ್ತು ಸಮುದ್ರ ಮಟ್ಟದ ಏರಿಕೆಗೆ ಒಳಗಾಗುತ್ತದೆ.<ref name="Brenkert_Malone_2003">{{Cite journal |last1=Brenkert |first1=A. |last2=Malone |first2=E. |year=2003 |title=Vulnerability and resilience of India and Indian states to climate change: a first-order approximation |journal=Joint Global Change Research Institute}}</ref>{{rp|26, 46, 52}} ಸರಾಸರಿ ದೈನಂದಿನ ತಾಪಮಾನವು 19.8 °C ನಿಂದ 36.7 °C ವರೆಗೆ ಇರುತ್ತದೆ.<ref name="moef">{{cite web |last=Sudha |first=T. M. |title=Opportunities in participatory planning to Evolve a Landuse Policy for Western Ghats Region in Kerala |url=https://moef.nic.in/downloads/public-information/tenth/Annexure%203.pdf |publisher=Department of Town and Country Planning, Kerala |page=14 |access-date=18 January 2015 |archive-url=https://web.archive.org/web/20160325095604/https://www.moef.nic.in/downloads/public-information/tenth/Annexure%203.pdf |archive-date=25 March 2016 |url-status=dead}}</ref> ವಾರ್ಷಿಕ ಸರಾಸರಿ ತಾಪಮಾನವು ಕರಾವಳಿ ತಗ್ಗು ಪ್ರದೇಶಗಳಲ್ಲಿ 25.0 ರಿಂದ 27.5 °C ವರೆಗೆ ಮತ್ತು ಪೂರ್ವ ಎತ್ತರದ ಪ್ರದೇಶಗಳಲ್ಲಿ 20.0–22.5 °C ವರೆಗೆ ಇರುತ್ತದೆ.<ref name="Brenkert_Malone_2003" />{{rp|65}}
=== ಸಸ್ಯ ಮತ್ತು ಪ್ರಾಣಿ ===
{{Main|ಕೇರಳದ ಸಸ್ಯ ಮತ್ತು ಪ್ರಾಣಿ}}
{{Multiple image
| direction = vertical
| width = 220
| image1 = Ichthyaetus ichthyaetus Kadalundi.jpg
| caption1 = [[ಕಡಲುಂಡಿ ಪಕ್ಷಿ ಅಭಯಾರಣ್ಯ|ಕಡಲುಂಡಿ ಪಕ್ಷಿ ಅಭಯಾರಣ್ಯದಲ್ಲಿ]] ಒಂದು ವಲಸೆ ''[[ಇಚ್ಥ್ಯಾಏಟಸ್]]''
| image2 = Highland Grassland Shola of Silent Valley National Park.jpg
| caption2 = [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]]
| image3 = Munnarhills.jpg
| caption3 = [[ಏಲಕ್ಕಿ ಬೆಟ್ಟಗಳು]] ತಮ್ಮ [[ಜೈವಿಕ ವೈವಿಧ್ಯತೆ]]ಗೆ ಹೆಸರುವಾಸಿಯಾಗಿದೆ
}}
ಹೆಚ್ಚಿನ [[ಜೈವಿಕ ವೈವಿಧ್ಯತೆ]]ಯು [[ಪಶ್ಚಿಮ ಘಟ್ಟಗಳಲ್ಲಿ]] ಕೇಂದ್ರೀಕೃತವಾಗಿದೆ ಮತ್ತು ರಕ್ಷಿಸಲ್ಪಟ್ಟಿದೆ. 18 ನೇ ಶತಮಾನದವರೆಗೆ ಕೇರಳದ ಮೂರು-ನಾಲ್ಕು ಭಾಗದಷ್ಟು ಭೂ ಪ್ರದೇಶವು ದಟ್ಟವಾದ ಅರಣ್ಯದ ಅಡಿಯಲ್ಲಿತ್ತು.<ref name="History">{{cite web |url=https://www.forest.kerala.gov.in/index.php?option=com_content&view=article&id=46&Itemid=2 |title=History |access-date=12 August 2015 |publisher=Kerala forests and wildlife department |archive-date=12 September 2015 |archive-url=https://web.archive.org/web/20150912231001/http://www.forest.kerala.gov.in/index.php?option=com_content&view=article&id=46&Itemid=2 |url-status=dead }}</ref> {{As of|2004}}, ಭಾರತದ 15,000 ಸಸ್ಯ ಪ್ರಭೇದಗಳಲ್ಲಿ 25% ಕ್ಕಿಂತ ಹೆಚ್ಚು ಕೇರಳದಲ್ಲಿವೆ. 4,000 [[ಹೂಬಿಡುವ ಸಸ್ಯ]] ಪ್ರಭೇದಗಳಲ್ಲಿ; ಅವುಗಳಲ್ಲಿ 1,272 [[ಸ್ಥಳೀಯ (ಪರಿಸರ ವಿಜ್ಞಾನ)|ಕೇರಳಕ್ಕೆ ಸ್ಥಳೀಯವಾಗಿವೆ]], 900 [[ಸಸ್ಯವೈದ್ಯ|ಔಷಧೀಯವಾಗಿವೆ]], ಮತ್ತು 159 [[ಅಳಿವಿನಂಚಿನಲ್ಲಿರುವ ಪ್ರಭೇದಗಳು|ಬೆದರಿಕೆಗೆ ಒಳಗಾಗಿವೆ]].<ref name="Sreedharan_2004">{{Cite journal |author=Sreedharan TP |year=2004 |title=Biological Diversity of Kerala: A survey of Kalliasseri panchayat, Kannur district |journal=Centre for Development Studies |url=https://krpcds.org/publication/downloads/62.pdf |archive-url=https://web.archive.org/web/20090326054155/https://krpcds.org/publication/downloads/62.pdf |archive-date=26 March 2009 |access-date=28 December 2008}}</ref>{{rp|11}} ಇದರ {{cvt|9,400|km2}} ಕಾಡುಗಳು ಉಷ್ಣವಲಯದ ಆರ್ದ್ರ ನಿತ್ಯಹಸಿರು ಮತ್ತು ಅರೆ-ನಿತ್ಯಹಸಿರು ಕಾಡುಗಳು (ಕೆಳ ಮತ್ತು ಮಧ್ಯಮ ಎತ್ತರಗಳು—3,470 km<sup>2</sup>), ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಪತನಶೀಲ ಕಾಡುಗಳು (ಮಧ್ಯಮ ಎತ್ತರಗಳು—4,100 km<sup>2</sup> ಮತ್ತು {{cvt|100|km2}}, ಕ್ರಮವಾಗಿ), ಮತ್ತು ಪರ್ವತ ಉಪೋಷ್ಣವಲಯ ಮತ್ತು [[ಸಮಶೀತೋಷ್ಣ]] (''ಶೋಲ'') ಕಾಡುಗಳು (ಅತಿ ಎತ್ತರದ ಎತ್ತರಗಳು—100 km<sup>2</sup>) ಒಳಗೊಂಡಿವೆ. ಒಟ್ಟಾರೆಯಾಗಿ, ಕೇರಳದ 24% ಅರಣ್ಯವಾಗಿದೆ.<ref name="Sreedharan_2004" />{{rp|12}} ವಿಶ್ವದ [[ರಾಮ್ಸರ್ ಒಪ್ಪಂದ]]ದಲ್ಲಿ ಪಟ್ಟಿ ಮಾಡಲಾದ ನಾಲ್ಕು [[ಜವುಗು ಪ್ರದೇಶ]]ಗಳು—[[ಶಾಸ್ತಾಂಕೋಟ್ಟ ಸರೋವರ|ಸರೋವರ ಶಾಸ್ತಾಂಕೋಟ್ಟ]], [[ಅಷ್ಟಮುಡಿ ಸರೋವರ]], [[ತೃಶೂರ್-ಪೊನ್ನಾನಿ ಕೋಲ್ ಜವುಗು ಪ್ರದೇಶಗಳು]], ಮತ್ತು ವೇಂಬನಾಡು-ಕೋಲ್ ಜವುಗು ಪ್ರದೇಶಗಳು—ಕೇರಳದಲ್ಲಿವೆ,{{sfn|Chandran|2018|p=342}} ಜೊತೆಗೆ ವಿಶಾಲವಾದ [[ನೀಲಗಿರಿ ಜೀವಗೋಳ ಮೀಸಲು]]ಯ {{cvt|1455.4|km2}} ಮತ್ತು [[ಅಗಸ್ತ್ಯಮಲೈ ಜೀವಗೋಳ ಮೀಸಲು]]ಯ {{cvt|1828|km2}} ಸೇರಿವೆ.{{sfn|Chandran|2018|p=347}} 20 ನೇ ಶತಮಾನದಲ್ಲಿ ಬೇಸಾಯಕ್ಕಾಗಿ ವ್ಯಾಪಕವಾಗಿ ತೆರವುಗೊಳಿಸಲ್ಪಟ್ಟಿದ್ದು,<ref name="Jayarajan_2004">{{Cite journal |author=Jayarajan M |year=2004 |title=Sacred Groves of North Malabar |journal=Centre for Development Studies |url=https://krpcds.org/publication/downloads/92.pdf |archive-url=https://web.archive.org/web/20090326054142/https://krpcds.org/publication/downloads/92.pdf |archive-date=26 March 2009 |access-date=28 December 2008}}</ref>{{rp|6–7}} ಉಳಿದ ಅರಣ್ಯ ಹೊದಿಕೆಯ ಹೆಚ್ಚಿನ ಭಾಗವನ್ನು ಈಗ [[ಸ್ಪಷ್ಟ ಕಡಿತ]]ದಿಂದ ರಕ್ಷಿಸಲಾಗಿದೆ.<ref name="Evans2008">{{cite book |author=Julian Evans |title=The Forests Handbook, Applying Forest Science for Sustainable Management |url=https://books.google.com/books?id=Ol_CCkYQNKIC&pg=PA235 |access-date=18 November 2012 |year=2008 |publisher=John Wiley & Sons |isbn=978-0-470-75683-6 |page=235}}</ref> ಪೂರ್ವ ಕೇರಳದ ಗಾಳಿಗೆ ಮುಖವಾದ ಪರ್ವತಗಳು [[ಉಷ್ಣವಲಯ ಮತ್ತು ಉಪೋಷ್ಣವಲಯದ ಆರ್ದ್ರ ಪರ್ಣಪಾತಿ ಕಾಡುಗಳು|ಉಷ್ಣವಲಯದ ಆರ್ದ್ರ ಕಾಡುಗಳನ್ನು]] ಮತ್ತು [[ಉಷ್ಣವಲಯ ಮತ್ತು ಉಪೋಷ್ಣವಲಯದ ಶುಷ್ಕ ಪರ್ಣಪಾತಿ ಕಾಡುಗಳು|ಉಷ್ಣವಲಯದ ಶುಷ್ಕ ಕಾಡುಗಳನ್ನು]] ಆಶ್ರಯಿಸುತ್ತವೆ, ಇವು ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿವೆ.<ref name="google8">{{cite book |author1=R. P. Singh |author2=Zubairul Islam |title=Environmental Studies |url=https://books.google.com/books?id=gaQptMlw3X8C&pg=PA172 |access-date=18 November 2012 |publisher=Concept Publishing Company |isbn=978-8180697746 |page=172 |year=2012 |archive-date=25 November 2023 |archive-url=https://web.archive.org/web/20231125191749/https://books.google.com/books?id=gaQptMlw3X8C&pg=PA172#v=onepage&q&f=false |url-status=live }}</ref><ref name="Geer2008">{{cite book |author=Alexandra Anna Enrica van der Geer |title=Animals in Stone: Indian Mammals Sculptured Through Time |url=https://books.google.com/books?id=oQ3quxh9gsgC&pg=PA7 |access-date=18 November 2012 |year=2008 |publisher=Brill |isbn=978-9004168190 |page=7}}</ref> ವಿಶ್ವದ ಅತ್ಯಂತ ಹಳೆಯ ತೇಗದ ತೋಟ 'ಕೊನೊಲ್ಲಿಸ್ ಪ್ಲಾಟ್' [[ನಿಲಂಬೂರು|ನಿಲಂಬೂರಿನಲ್ಲಿದೆ]].<ref>{{Cite web |url=https://www.dnaindia.com/india/report-world-s-oldest-teak-trees-dying-in-kerala-1255723 |title=World's oldest teak trees dying in Kerala |date=13 May 2009 |website=DNA India |access-date=25 November 2020 |archive-date=15 April 2021 |archive-url=https://web.archive.org/web/20210415102931/https://www.dnaindia.com/india/report-world-s-oldest-teak-trees-dying-in-kerala-1255723 |url-status=live }}</ref>
ಕೇರಳದ ಪ್ರಾಣಿಗಳು ಅವುಗಳ ವೈವಿಧ್ಯತೆ ಮತ್ತು ಹೆಚ್ಚಿನ ಸ್ಥಳೀಯತೆಯ ಪ್ರಮಾಣಕ್ಕೆ ಗಮನಾರ್ಹವಾಗಿವೆ: ಇದು 118 [[ಸಸ್ತನಿ]] ಪ್ರಭೇದಗಳನ್ನು (1 ಸ್ಥಳೀಯ), [[ಕೇರಳದ ಪಕ್ಷಿಗಳ ಪಟ್ಟಿ|500 ಪಕ್ಷಿ ಪ್ರಭೇದಗಳು]], 189 ಸಿಹಿನೀರಿನ ಮೀನು ಪ್ರಭೇದಗಳು, 173 [[ಸರೀಸೃಪ]] ಪ್ರಭೇದಗಳು (ಅವುಗಳಲ್ಲಿ 10 ಸ್ಥಳೀಯ), ಮತ್ತು 151 [[ಉಭಯಚರ]] ಪ್ರಭೇದಗಳನ್ನು (36 ಸ್ಥಳೀಯ) ಒಳಗೊಂಡಿದೆ.<ref>{{Cite web |url=https://threatenedtaxa.org/index.php/JoTT/article/view/1999/3443 |archive-url=https://web.archive.org/web/20161007224232/https://threatenedtaxa.org/index.php/JoTT/article/view/1999/3443 |url-status=dead |title=View of A checklist of the vertebrates of Kerala State, India | Journal of Threatened Taxa |archive-date=7 October 2016 |website=threatenedtaxa.org}}</ref> ಇವುಗಳು ವ್ಯಾಪಕವಾದ ಆವಾಸಸ್ಥಾನ ನಾಶ, ಮಣ್ಣಿನ ಸವಕಳಿ, ಭೂಕುಸಿತ, [[ಮಣ್ಣಿನ ಲವಣೀಕರಣ|ಉಪ್ಪಿನಂಶ]], ಮತ್ತು ಸಂಪನ್ಮೂಲ ಹೊರತೆಗೆಯುವಿಕೆಯಿಂದ ಬೆದರಿಕೆಗೆ ಒಳಗಾಗಿವೆ. ಕಾಡುಗಳಲ್ಲಿ, ''ಸೋನೋಕೆಲಿಂಗ್'', ''[[ಡಾಲ್ಬರ್ಗಿಯಾ ಲ್ಯಾಟಿಫೋಲಿಯಾ]]'', ''ಅಂಜಿಲಿ'', ''ಮುಲ್ಲುಮುರಿಕ್ಕು'', ''[[ಎರಿಥ್ರಿನಾ]]'', ಮತ್ತು ''[[ಸಿನ್ನಮೋಮಮ್ ಕ್ಯಾಸಿಯಾ|ಕ್ಯಾಸಿಯಾ]]'' ಕೇರಳದ 1,000 ಕ್ಕೂ ಹೆಚ್ಚು ಮರ ಪ್ರಭೇದಗಳಲ್ಲಿ ಸೇರಿವೆ. ಇತರ ಸಸ್ಯಗಳಲ್ಲಿ [[ಬಿದಿರು]], ಕಾಡು ಕರಿಮೆಣಸು, ಕಾಡು [[ಏಲಕ್ಕಿ]], [[ಕ್ಯಾಲಮಸ್ (ತಾಳೆ)|ಕ್ಯಾಲಮಸ್]] [[ರಟ್ಟನ್]] ತಾಳೆ, ಮತ್ತು ಸುಗಂಧಯುಕ್ತ ವೆಟಿವರ್ ಹುಲ್ಲು, ''ವೆಟಿವೇರಿಯಾ ಝಿಝಾನಿಯಾಯ್ಡ್ಸ್'' ಸೇರಿವೆ.<ref name="Sreedharan_2004" />{{rp|12}} [[ಭಾರತೀಯ ಆನೆ]], [[ಬಂಗಾಳ ಹುಲಿ]], [[ಭಾರತೀಯ ಚಿರತೆ]], [[ನೀಲಗಿರಿ ತಾರ್]], [[ಸಾಮಾನ್ಯ ತಾಳೆ ನರಿ]], ಮತ್ತು [[ಬೂದು ದೈತ್ಯ ಅಳಿಲು]]ಗಳು ಸಹ ಕಾಡುಗಳಲ್ಲಿ ಕಂಡುಬರುತ್ತವೆ.<ref name="Sreedharan_2004" />{{rp|12, 174–75}} ಸರೀಸೃಪಗಳಲ್ಲಿ [[ರಾಜ ನಾಗ]], [[ವೈಪೆರಿಡೆ|ಹಾವು]], [[ಪೈಥಾನ್]], ಮತ್ತು [[ಚಿಪ್ಪು ಮೊಸಳೆ]] ಸೇರಿವೆ. ಕೇರಳದ ಪಕ್ಷಿಗಳಲ್ಲಿ [[ಮಲಬಾರ್ ಟ್ರೋಗನ್]], [[ಮಹಾಶಿಖಿ]], [[ಕೇರಳ ಕುಕ್ಕುರ]], [[ಡಾರ್ಟರ್]] ಮತ್ತು [[ದಕ್ಷಿಣ ಬೆಟ್ಟ ಮೈನಾ]] ಸೇರಿವೆ. ಸರೋವರಗಳು, ಜವುಗು ಪ್ರದೇಶಗಳು ಮತ್ತು ಜಲಮಾರ್ಗಗಳಲ್ಲಿ, [[ಹೆಟೆರೋಪ್ನ್ಯೂಸ್ಟಿಸ್ ಫಾಸಿಲಿಸ್|ಕಾಡು]], [[ರೆಡ್ ಲೈನ್ ಟಾರ್ಪಿಡೋ ಬಾರ್ಬ್]] ಮತ್ತು ''ಚೂಟ್ಟಾಚಿ''; [[ಆರೆಂಜ್ ಕ್ರೋಮೈಡ್]]—''ಎಟ್ರೋಪ್ಲಸ್ ಮ್ಯಾಕುಲಾಟಸ್'' ಮುಂತಾದ ಮೀನುಗಳು ಕಂಡುಬರುತ್ತವೆ.<ref>{{cite book |last1=Institute |first1=Kerala Forest Research |title=Biodiversity Documentation for Kerala: Freshwater fishes |year=2003 |publisher=Kerala Forest Research Institute |isbn=978-8185041544 |url=https://books.google.com/books?id=SYcPAQAAMAAJ&q=fishes+in+kerala |language=en |access-date=18 October 2020 |archive-date=25 November 2023 |archive-url=https://web.archive.org/web/20231125192259/https://books.google.com/books?id=SYcPAQAAMAAJ&q=fishes+in+kerala |url-status=live }}</ref><ref name="Sreedharan_2004" />{{rp|163–65}} ಇತ್ತೀಚೆಗೆ, ಕೇರಳದ ವಡಕರಾ ಕರಾವಳಿಯಿಂದ ಸಂಗ್ರಹಿಸಿದ ಹೊಸದಾಗಿ ವಿವರಿಸಲಾದ ಟಾರ್ಡಿಗ್ರೇಡ್ (ನೀರಿನ ಕರಡಿಗಳು) ಪ್ರಭೇದವನ್ನು ಕೇರಳ ರಾಜ್ಯದ ಹೆಸರಿನಿಂದ ಹೆಸರಿಸಲಾಗಿದೆ; ''[[ಸ್ಟೈಗಾರ್ಕ್ಟಸ್ ಕೇರಳೆನ್ಸಿಸ್]]''.<ref>{{cite journal |last1=Vishnudattan |first1=N. K. |display-authors=etal |title=A new Tardigrade species, Stygarctus keralensis sp. nov. (Arthrotardigrada: Stygarctidae) from the intertidal zone of Southwest coast of India |url=https://www.mapress.com/zt/article/view/42726 |date=15 June 2021 |journal=[[Zootaxa]] |volume=4985 |issue=3 |page=381391 |doi=10.11646/zootaxa.4985.3.5 |pmid=34186802 |s2cid=235688035 |access-date=22 June 2021 |archive-date=27 November 2021 |archive-url=https://web.archive.org/web/20211127214807/https://www.mapress.com/zt/article/view/zootaxa.4985.3.5 |url-status=live |url-access=subscription }}</ref>
== ಪ್ರದೇಶಗಳು, ಜಿಲ್ಲೆಗಳು ಮತ್ತು ನಗರಗಳು ==
{{Main|ಕೇರಳದ ಆಡಳಿತ ವಿಭಾಗಗಳು|ಕೇರಳದ ಜಿಲ್ಲೆಗಳು|ಕೇರಳದ ಆದಾಯ ವಿಭಾಗಗಳ ಪಟ್ಟಿ|ಕೇರಳದ ತಾಲೂಕುಗಳ ಪಟ್ಟಿ|ಕೇರಳದ ನಗರಗಳು ಮತ್ತು ಪಟ್ಟಣಗಳ ಪಟ್ಟಿ}}
{{See also|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಆರು ಪ್ರದೇಶಗಳಾಗಿ ವಿತರಿಸಲಾಗಿದೆ: [[ಉತ್ತರ ಮಲಬಾರ್]] (ದೂರದ-ಉತ್ತರ ಕೇರಳ), [[ದಕ್ಷಿಣ ಮಲಬಾರ್]] (ಉತ್ತರ-ಮಧ್ಯ ಕೇರಳ), [[ಕೊಚ್ಚಿ]] (ಮಧ್ಯ ಕೇರಳ), [[ಉತ್ತರ ತಿರುವಾಂಕೂರು]] (ದಕ್ಷಿಣ-ಮಧ್ಯ ಕೇರಳ), [[ಮಧ್ಯ ತಿರುವಾಂಕೂರು]] (ದಕ್ಷಿಣ ಕೇರಳ) ಮತ್ತು [[ದಕ್ಷಿಣ ತಿರುವಾಂಕೂರು]] (ದೂರದ-ದಕ್ಷಿಣ ಕೇರಳ). ತೆರಿಗೆ ಮತ್ತು ಭೂ ಆದಾಯ ಉದ್ದೇಶಗಳಿಗಾಗಿ ಆಡಳಿತ ಪ್ರದೇಶಗಳಾಗಿ ಕಾರ್ಯನಿರ್ವಹಿಸುವ ಜಿಲ್ಲೆಗಳನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳು|27 ಆದಾಯ ವಿಭಾಗಗಳಾಗಿ]] ಮತ್ತು [[ಕೇರಳದ ತಾಲೂಕುಗಳ ಪಟ್ಟಿ|77 ತಾಲೂಕುಗಳಾಗಿ]] ವಿಂಗಡಿಸಲಾಗಿದೆ, ಇವುಗಳು ತಮ್ಮ ಗಡಿಗಳೊಳಗಿನ ವಸಾಹತುಗಳ ಮೇಲೆ ಆಡಳಿತ ಮತ್ತು ಆರ್ಥಿಕ ಅಧಿಕಾರಗಳನ್ನು ಹೊಂದಿವೆ, ಸ್ಥಳೀಯ ಭೂ ದಾಖಲೆಗಳ ನಿರ್ವಹಣೆ ಸೇರಿದಂತೆ. ಕೇರಳದ ತಾಲೂಕುಗಳನ್ನು ಮತ್ತಷ್ಟು 1,674 [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ.<ref>{{cite web |url=https://ildm.kerala.gov.in/wp-content/uploads/2018/01/Revenue-Guide-2018.pdf |title=Revenue Guide 2018 |date= |website=[[Government of Kerala]] |access-date=28 September 2020 |archive-date=20 September 2020 |archive-url=https://web.archive.org/web/20200920133932/https://ildm.kerala.gov.in/wp-content/uploads/2018/01/Revenue-Guide-2018.pdf |url-status=live }}</ref><ref>{{Cite web |url=https://kerala.gov.in/revenue-department |title=Revenue department, government of Kerala |access-date=28 September 2020 |archive-date=17 August 2021 |archive-url=https://web.archive.org/web/20210817225825/https://kerala.gov.in/revenue-department |url-status=dead}}</ref>
[[ಭಾರತದ ಸಂವಿಧಾನದ ತಿದ್ದುಪಡಿಗಳ ಪಟ್ಟಿ|73 ಮತ್ತು 74 ನೇ]] ಸಾಂವಿಧಾನಿಕ ತಿದ್ದುಪಡಿಗಳಿಂದ, ಕೇರಳದಲ್ಲಿ ಸ್ಥಳೀಯ ಸ್ವಯಂ-ಸರ್ಕಾರಿ ಸಂಸ್ಥೆಗಳು ಸರ್ಕಾರದ ಮೂರನೇ ಹಂತವಾಗಿ ಕಾರ್ಯನಿರ್ವಹಿಸುತ್ತವೆ, ಗ್ರಾಮೀಣ ಆಡಳಿತಕ್ಕಾಗಿ 14 [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳು]], 152 [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು 941 [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], ಮತ್ತು ನಗರ ಆಡಳಿತಕ್ಕಾಗಿ 87 [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]], ಆರು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿವೆ.<ref>{{cite web |title=Local Self Governance in Kerala |url=https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |publisher=Government of Kerala |access-date=28 September 2020 |archive-date=28 September 2021 |archive-url=https://web.archive.org/web/20210928223404/https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |url-status=dead}}</ref>
[[ಮಾಹೆ, ಭಾರತ|ಮಾಹೆ]], ಭಾರತೀಯ [[ಕೇಂದ್ರಾಡಳಿತ ಪ್ರದೇಶ]] [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]]ಯ ಒಂದು ಭಾಗವಾಗಿದ್ದು,<ref>{{cite web |url=https://www.censusindia.net/results/town.php?stad=A&state5=999 |archive-url=https://web.archive.org/web/20040616075334/https://www.censusindia.net/results/town.php?stad=A&state5=999 |archive-date=16 June 2004 |title=Census of India 2001: Data from the 2001 Census, including cities, villages and towns (Provisional) |access-date=1 November 2008 |publisher=Census Commission of India}}</ref> ಇದು {{convert|647|km}} ದೂರದಲ್ಲಿದ್ದರೂ,<ref name="ShiraAssociates.2012">{{cite book |author1=Dezan Shira |author2=Associates. |title=Doing Business in India |url=https://books.google.com/books?id=9YjXW41yMwQC&pg=PT313 |access-date=18 November 2012 |year=2012 |publisher=Springer |isbn=978-3-642-27618-7 |pages=313–}}</ref> ಇದು ಕೇರಳದಿಂದ ಅದರ ಎಲ್ಲಾ ಭೂಮುಖ ವಿಧಾನಗಳಲ್ಲಿ ಸುತ್ತುವರೆದಿರುವ ಕರಾವಳಿ ಬಹಿರಂಗವಾಗಿದೆ. [[ಕಣ್ಣೂರು ಜಿಲ್ಲೆ|ಕಣ್ಣೂರು ಜಿಲ್ಲೆಯು]] ಮೂರು ಕಡೆ ಮಾಹೆಯನ್ನು ಸುತ್ತುವರೆದಿದೆ ಮತ್ತು ನಾಲ್ಕನೇ ಕಡೆ [[ಕೋಝಿಕೋಡ್ ಜಿಲ್ಲೆ|ಕೋಝಿಕೋಡ್ ಜಿಲ್ಲೆಯಿದೆ]].<ref name="Menon2002">{{cite book |author1=D Banerjea |author2=N. R. Madhava Menon |title=Criminal Justice India Series, Vol. 20 |url=https://books.google.com/books?id=Axfuc5A8mxMC&pg=PA9 |access-date=18 November 2012 |year=2002 |publisher=Allied Publishers |isbn=978-8177648713 |pages=9–}}</ref>
1664 ರಲ್ಲಿ, [[ಫೋರ್ಟ್ ಕೊಚ್ಚಿ]] ಪುರಸಭೆಯನ್ನು [[ಡಚ್ ಮಲಬಾರ್]] ಸ್ಥಾಪಿಸಿತು, ಇದು [[ಭಾರತೀಯ ಉಪಖಂಡ]]ದ ಮೊದಲ ಪುರಸಭೆಯಾಗಿದೆ, ಇದು 18 ನೇ ಶತಮಾನದಲ್ಲಿ ಡಚ್ ಅಧಿಕಾರವು ದುರ್ಬಲಗೊಂಡಾಗ ವಿಸರ್ಜಿಸಲಾಯಿತು.<ref name="d_1664">{{Cite news |title=50 years on, Kochi still has a long way to go |url=https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |last=M K Sunil Kumar |date=26 September 2017 |access-date=1 June 2021 |work=The Times of India |archive-date=2 June 2021 |archive-url=https://web.archive.org/web/20210602230954/https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |url-status=live }}</ref> [[ಕೋಝಿಕೋಡ್]], [[ಪಾಲಕ್ಕಾಡ್]], [[ಫೋರ್ಟ್ ಕೊಚ್ಚಿ]], [[ಕಣ್ಣೂರು]], ಮತ್ತು [[ತಲಶ್ಶೇರಿ]] ಪುರಸಭೆಗಳನ್ನು 1 ನವೆಂಬರ್ 1866 ರಂದು<ref name="Ref1">{{cite web |title=Chronological List of Central Acts (Updated up to 17-10-2014) |url=https://www.lawmin.nic.in/chronology.doc |url-status=dead |archive-url=https://web.archive.org/web/20180107091128/http://lawmin.nic.in/chronology.doc |archive-date=7 January 2018 |access-date=7 August 2016 |website=Lawmin.nic.in}}</ref><ref name="c1881">{{cite book |last1=Lewis McIver |first1=G. Stokes |url=https://books.google.com/books?id=b_YIAAAAQAAJ |title=Imperial Census of 1881 Operations and Results in the Presidency of Madras |publisher=E.Keys at the Government Press |year=1883 |edition=(Vol II) |location=Madras |page=444 |access-date=5 December 2020 |archive-url=https://web.archive.org/web/20230327063433/https://books.google.com/books?id=b_YIAAAAQAAJ |archive-date=27 March 2023 |url-status=live}}</ref><ref name="google.co.in">{{cite book |last1=Presidency |first1=Madras (India |url=https://books.google.com/books?id=aUEwnQEACAAJ |title=Madras District Gazetteers, Statistical Appendix For Malabar District. |publisher=The Superintendent, Government Press |year=1915 |edition=Vol.2 |location=Madras |page=20 |language=en |access-date=2 December 2020 |archive-url=https://web.archive.org/web/20230327063433/https://books.google.com/books?id=aUEwnQEACAAJ |archive-date=27 March 2023 |url-status=live}}</ref><ref name="gazetteer" /> [[ಬ್ರಿಟಿಷ್ ಭಾರತ ಸಾಮ್ರಾಜ್ಯ]]ದಲ್ಲಿ ಸ್ಥಾಪಿಸಲಾಯಿತು, ಇದು ಕೇರಳ ರಾಜ್ಯದ ಮೊದಲ ಆಧುನಿಕ ಪುರಸಭೆಗಳಾಗಿವೆ. [[ತಿರುವನಂತಪುರ]] ಪುರಸಭೆಯು 1920 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಎರಡು ದಶಕಗಳ ನಂತರ, [[ಶ್ರೀ ಚಿತಿರಾ ತಿರುನಾಳ್]] ರ ಆಳ್ವಿಕೆಯಲ್ಲಿ, ತಿರುವನಂತಪುರ ಪುರಸಭೆಯನ್ನು 30 ಅಕ್ಟೋಬರ್ 1940 ರಂದು ನಿಗಮವಾಗಿ ಪರಿವರ್ತಿಸಲಾಯಿತು, ಇದು ಕೇರಳದ ಅತ್ಯಂತ ಹಳೆಯ ನಗರ ನಿಗಮವಾಗಿದೆ.<ref>{{cite web |title=Thiruvananthapuram |url=https://www.corporationoftrivandrum.org/index.php?option=com_content&view=article&id=158&Itemid=11 |date=2010 |url-status=usurped |archive-url=https://web.archive.org/web/20100918085703/https://www.corporationoftrivandrum.org/index.php?option=com_content&view=article&id=158&Itemid=11 |archive-date=18 September 2010 |access-date=4 April 2022}} Year of becoming a corporation</ref> [[ಭಾರತ]]ದ ಸ್ವಾತಂತ್ರ್ಯದ ನಂತರ ಸ್ಥಾಪಿಸಲಾದ ಮೊದಲ ನಗರ ನಿಗಮ ಮತ್ತು ರಾಜ್ಯದ ಎರಡನೇ ಅತ್ಯಂತ ಹಳೆಯ ನಗರ ನಿಗಮವು 1962 ರಲ್ಲಿ [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]] ನಲ್ಲಿದೆ.<ref>[https://web.archive.org/web/20080209134539/https://www.hindu.com/2008/02/05/stories/2008020561140500.htm Kozhikode Lok Sabha constituency redrawn Delimitation impact], ''The Hindu'' 5 February 2008</ref> ಕೇರಳದಲ್ಲಿ ಆರು [[ಭಾರತದಲ್ಲಿ ನಗರ ನಿಗಮಗಳು|ನಗರ ನಿಗಮಗಳಿವೆ]], ಅವು [[ತಿರುವನಂತಪುರ ನಗರ ನಿಗಮ|ತಿರುವನಂತಪುರ]], [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]], [[ಕೊಚ್ಚಿ ನಗರ ನಿಗಮ|ಕೊಚ್ಚಿ]], [[ಕೊಲ್ಲಂ ನಗರ ನಿಗಮ|ಕೊಲ್ಲಂ]], [[ತೃಶೂರ್ ನಗರ ನಿಗಮ|ತೃಶೂರ್]], ಮತ್ತು [[ಕಣ್ಣೂರು ನಗರ ನಿಗಮ|ಕಣ್ಣೂರು]] ನಗರಗಳನ್ನು ಆಳುತ್ತವೆ.<ref>{{cite web |title=Kerala Sustainable Urban Development Project |url=https://www.ksudp.org/ |publisher=Local Self Government Department |access-date=7 February 2022 |archive-date=20 September 2020 |archive-url=https://web.archive.org/web/20200920051936/http://ksudp.org/ |url-status=dead }}</ref> [[ತಿರುವನಂತಪುರ ನಗರ ನಿಗಮ]]ವು ಕೇರಳದ ಅತಿದೊಡ್ಡ ನಿಗಮವಾಗಿದ್ದರೆ ಕೊಚ್ಚಿ ಮಹಾನಗರ ಪ್ರದೇಶವನ್ನು [[ಕೊಚ್ಚಿ UA]] ಎಂದು ಕರೆಯಲಾಗುತ್ತದೆ, ಇದು ಅತಿದೊಡ್ಡ ನಗರ ಸಮೂಹವಾಗಿದೆ.<ref>{{cite web |title=City Information |url=https://cial.aero/contents/viewcontent.aspx?linkIdLvl2=32&linkid=32 |work=Cochin International Airport |publisher=Government of Kerala |access-date=18 November 2012 |archive-date=10 December 2012 |archive-url=https://web.archive.org/web/20121210070804/http://cial.aero/contents/viewcontent.aspx?linkIdLvl2=32&linkid=32 |url-status=live }}</ref> ಅರ್ಥಶಾಸ್ತ್ರ ಸಂಶೋಧನಾ ಸಂಸ್ಥೆ ಇಂಡಿಕಸ್ ಅನಾಲಿಟಿಕ್ಸ್ 2007 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, [[ತಿರುವನಂತಪುರ]], [[ಕೋಝಿಕೋಡ್]], [[ಕೊಚ್ಚಿ]], [[ಕೊಲ್ಲಂ]], [[ತೃಶೂರ್]] "ಭಾರತದಲ್ಲಿ ವಾಸಿಸಲು ಅತ್ಯುತ್ತಮ ನಗರಗಳಲ್ಲಿ" ಸೇರಿವೆ; ಸಮೀಕ್ಷೆಯು ನಗರಗಳನ್ನು ಶ್ರೇಣೀಕರಿಸಲು ಆರೋಗ್ಯ, ಶಿಕ್ಷಣ, ಪರಿಸರ, ಸುರಕ್ಷತೆ, ಸಾರ್ವಜನಿಕ ಸೌಲಭ್ಯಗಳು ಮತ್ತು ಮನರಂಜನೆಯಂತಹ ನಿಯತಾಂಕಗಳನ್ನು ಬಳಸಿದೆ.<ref>{{cite news |title=Cities best to earn a living are not the best to live: Survey |url=https://articles.economictimes.indiatimes.com/2007-11-26/news/27682663_1_cities-entertainment-indicus-analytics |work=The Times of India |date=26 November 2007 |access-date=7 February 2022 |archive-date=5 March 2016 |archive-url=https://web.archive.org/web/20160305021646/http://articles.economictimes.indiatimes.com/2007-11-26/news/27682663_1_cities-entertainment-indicus-analytics |url-status=dead }}</ref>
== ಸರ್ಕಾರ ಮತ್ತು ಆಡಳಿತ ==
{{Main|ಕೇರಳ ಸರ್ಕಾರ|ಕೇರಳ ವಿಧಾನಸಭೆ|ಕೇರಳದಲ್ಲಿ ಸ್ಥಳೀಯ ಸರ್ಕಾರ|ಕೇರಳ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಪಟ್ಟಿ|ಕೇರಳದ ಆಡಳಿತ ವಿಭಾಗಗಳು|l4 = ಕೇರಳ ಸರ್ಕಾರದ ಇಲಾಖೆಗಳ ಪಟ್ಟಿ}}
{{See also|ಕೇರಳದ ರಾಜಕೀಯ|ಕೇರಳದಲ್ಲಿ ರಾಜಕೀಯ ಪಕ್ಷಗಳು|ಕೇರಳದಲ್ಲಿ ಚುನಾವಣೆಗಳು}}
{{Multiple image
| direction = vertical
| width = 220
| header_align = center
| footer_align = center
| image1 = Kerala Legislative Assembly, Thiruvananthapuram.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಧಾನಸಭೆ]] ಕಟ್ಟಡ
| image2 = Kerala Government Secretariat.jpg
| caption2 = [[ಕೇರಳ ಸರ್ಕಾರದ ಕಚೇರಿ|ಸರ್ಕಾರಿ ಕಚೇರಿ]] [[ತಿರುವನಂತಪುರ|ತಿರುವನಂತಪುರದಲ್ಲಿ]] – ಕೇರಳದ ಕಾರ್ಯನಿರ್ವಾಹಕ ಆಡಳಿತದ ಆಸನ
| image3 = High Court of Kerala Building.jpg
| caption3 = [[ಕೊಚ್ಚಿ|ಕೊಚ್ಚಿಯ]] [[ಕೇರಳ ಉಚ್ಚ ನ್ಯಾಯಾಲಯ]] ಸಂಕೀರ್ಣ
}}
ರಾಜ್ಯವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯಿಂದ ಆಳಲ್ಪಡುತ್ತದೆ. ಕೇರಳವು [[ಏಕಸಭಾ]] ಶಾಸಕಾಂಗವನ್ನು ಹೊಂದಿದೆ. [[ಕೇರಳ ವಿಧಾನಸಭೆ]]ಯು ನಿಯಮಸಭೆ ಎಂದೂ ಕರೆಯಲ್ಪಡುತ್ತದೆ, ಇದು 140 ಸದಸ್ಯರನ್ನು ಒಳಗೊಂಡಿದ್ದು, ಅವರು ಐದು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.<ref>{{cite web |title=History of Kerala Legislature |url=https://kerala.gov.in/index.php?option=com_content&view=article&id=3776&Itemid=3022 |publisher=Government of Kerala |access-date=17 November 2012 |archive-url=https://web.archive.org/web/20120619040353/https://www.kerala.gov.in/index.php?option=com_content&view=article&id=3776&Itemid=3022 |archive-date=19 June 2012 |url-status=dead}}</ref> ರಾಜ್ಯವು [[ಭಾರತದ ಸಂಸತ್ತು|ಭಾರತೀಯ ಸಂಸತ್ತಿನ]] ಕೆಳಮನೆಯಾದ [[ಲೋಕಸಭೆ]]ಗೆ 20 ಸದಸ್ಯರನ್ನು ಮತ್ತು [[ರಾಜ್ಯಸಭೆ]]ಗೆ 9 ಸದಸ್ಯರನ್ನು ಚುನಾಯಿಸುತ್ತದೆ.<ref>{{cite web |url=https://www.parliamentofindia.nic.in/ls/intro/p1.htm |title=Our Parliament |publisher=Parliamentofindia.nic.in |access-date=25 February 2010 |archive-date=10 February 2010 |archive-url=https://web.archive.org/web/20100210043333/http://www.parliamentofindia.nic.in/ls/intro/p1.htm |url-status=live }}</ref>
[[ಕೇರಳ ಸರ್ಕಾರ]]ವು ಭಾರತದಲ್ಲಿ [[ಪ್ರಜಾಪ್ರಭುತ್ವ|ಪ್ರಜಾಪ್ರಭುತ್ವ]] ರೀತಿಯಲ್ಲಿ ಚುನಾಯಿತ ಸಂಸ್ಥೆಯಾಗಿದ್ದು, [[ಕೇರಳದ ರಾಜ್ಯಪಾಲರು|ರಾಜ್ಯಪಾಲರು]] ಇದರ ಸಾಂವಿಧಾನಿಕ ಮುಖ್ಯಸ್ಥರಾಗಿದ್ದಾರೆ ಮತ್ತು [[ಭಾರತದ ರಾಷ್ಟ್ರಪತಿ]]ಗಳಿಂದ ಐದು ವರ್ಷಗಳ ಅವಧಿಗೆ ನೇಮಕಗೊಳ್ಳುತ್ತಾರೆ.<ref name="govern">{{cite web |url=https://www.rajbhavan.kerala.gov.in/index.php?option=com_content&view=article&id=44&Itemid=2 |archive-url=https://web.archive.org/web/20090731095433/https://rajbhavan.kerala.gov.in/index.php?option=com_content&view=article&id=44&Itemid=2 |url-status=dead |archive-date=31 July 2009 |title=Responsibilities |access-date=13 November 2015 |publisher=Kerala Rajbhavan}}</ref> [[ಕೇರಳ ವಿಧಾನಸಭೆ|ವಿಧಾನಸಭೆಯಲ್ಲಿ]] ಬಹುಮತ ಹೊಂದಿರುವ ಪಕ್ಷ ಅಥವಾ ಒಕ್ಕೂಟದ ನಾಯಕನನ್ನು ರಾಜ್ಯಪಾಲರಿಂದ [[ಕೇರಳದ ಮುಖ್ಯಮಂತ್ರಿಗಳ ಪಟ್ಟಿ|ಮುಖ್ಯಮಂತ್ರಿಯಾಗಿ]] ನೇಮಿಸಲಾಗುತ್ತದೆ, ಮತ್ತು [[ಕೇರಳ ಸಚಿವ ಸಂಪುಟ|ಸಚಿವರ ಸಂಪುಟವನ್ನು]] ಮುಖ್ಯಮಂತ್ರಿಯ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಿಸುತ್ತಾರೆ.<ref name=govern /> ರಾಜ್ಯಪಾಲರು ರಾಜ್ಯದ ಆಚಾರಪೂರ್ಣ ಮುಖ್ಯಸ್ಥರಾಗಿ ಉಳಿಯುತ್ತಾರೆ, ಆದರೆ ಮುಖ್ಯಮಂತ್ರಿ ಮತ್ತು ಅವರ ಸಂಪುಟವು ದೈನಂದಿನ ಸರ್ಕಾರಿ ಕಾರ್ಯಗಳಿಗೆ ಜವಾಬ್ದಾರರಾಗಿರುತ್ತಾರೆ. ಸಚಿವರ ಸಂಪುಟವು ಸಚಿವ ಸಂಪುಟದ ಸಚಿವರು ಮತ್ತು ರಾಜ್ಯ ಸಚಿವರನ್ನು (MoS) ಒಳಗೊಂಡಿದೆ. [[ಕೇರಳ ಸರ್ಕಾರದ ಕಚೇರಿ|ಕಾರ್ಯದರ್ಶಿ]] [[ಮುಖ್ಯ ಕಾರ್ಯದರ್ಶಿ (ಭಾರತ)|ಮುಖ್ಯ ಕಾರ್ಯದರ್ಶಿ]] ನೇತೃತ್ವದಲ್ಲಿ, ಸಚಿವ ಸಂಪುಟಕ್ಕೆ ಸರ್ಕಾರಿ ನೀತಿಗಳ ರಚನೆ ಮತ್ತು ಅನುಷ್ಠಾನದಲ್ಲಿ ಸಹಾಯ ಮಾಡುತ್ತದೆ. ಮುಖ್ಯ ಕಾರ್ಯದರ್ಶಿಯು ಹಿರಿಯ [[ನಾಗರಿಕ ಸೇವೆ|ನಾಗರಿಕ ಸೇವಕ]] ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ರಾಜ್ಯ ಸರ್ಕಾರದ ಆಡಳಿತವು 47 ಕಾರ್ಯದರ್ಶಿ ಇಲಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ.<ref name=":0" /> ಪ್ರತಿಯೊಂದು ಸರ್ಕಾರಿ ಇಲಾಖೆಯನ್ನು ರಾಜಕೀಯವಾಗಿ ಸಚಿವರು ಮತ್ತು ಆಡಳಿತಾತ್ಮಕವಾಗಿ ಸರ್ಕಾರದ ಕಾರ್ಯದರ್ಶಿಯು ಮುಖ್ಯಸ್ಥರಾಗಿರುತ್ತಾರೆ, ಇವರು [[ಹೆಚ್ಚುವರಿ ಮುಖ್ಯ ಕಾರ್ಯದರ್ಶಿ|ಹೆಚ್ಚುವರಿ ಮುಖ್ಯ ಕಾರ್ಯದರ್ಶಿ]], [[ಪ್ರಿನ್ಸಿಪಾಲ್ ಕಾರ್ಯದರ್ಶಿ (ಭಾರತ)|ಪ್ರಿನ್ಸಿಪಾಲ್ ಕಾರ್ಯದರ್ಶಿ]], ಅಥವಾ [[ಕಾರ್ಯದರ್ಶಿ]] ಹುದ್ದೆಯಲ್ಲಿರುತ್ತಾರೆ, ಇವರು ಸಾಮಾನ್ಯವಾಗಿ [[ಭಾರತೀಯ ಆಡಳಿತ ಸೇವೆ]] (IAS) ನ ಅಧಿಕಾರಿಯಾಗಿರುತ್ತಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು/ಪ್ರಿನ್ಸಿಪಾಲ್ ಕಾರ್ಯದರ್ಶಿಗಳು ತಮಗೆ ನಿಯೋಜಿಸಲಾದ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರತಿಯೊಂದು ಇಲಾಖೆಯು ವಿಶೇಷ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಂಡರ್ ಸೆಕ್ರೆಟರಿ ಮತ್ತು ಇತರ ಸಹಾಯಕ ಅಧಿಕಾರಿಗಳ ಹುದ್ದೆಗಳನ್ನು ಸಹ ಹೊಂದಿದೆ. ಈ ಕಾರ್ಯದರ್ಶಿ ಇಲಾಖೆಗಳು ನೀತಿ ರಚನೆ ಮತ್ತು ಆಡಳಿತಾತ್ಮಕ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುತ್ತವೆ, ಆದರೆ ರೇಖಾ ಇಲಾಖೆಗಳು ಮತ್ತು ಇತರ ಕಾರ್ಯನಿರ್ವಾಹಕ ಸಂಸ್ಥೆಗಳು ಸರ್ಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಕ್ಷೇತ್ರ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತವೆ.
ಪ್ರತಿಯೊಂದು ಕಾರ್ಯದರ್ಶಿ ಇಲಾಖೆಯು ಒಂದು ಅಥವಾ ಹೆಚ್ಚು ರೇಖಾ ಇಲಾಖೆಗಳು, ನಿರ್ದೇಶನಾಲಯಗಳು, ಆಯುಕ್ತ ಕಚೇರಿಗಳು, ಮಂಡಳಿಗಳು, ಅಥವಾ ಅಂತಹುದೇ ಕಾರ್ಯನಿರ್ವಾಹಕ ಸಂಸ್ಥೆಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಚಲಾಯಿಸುತ್ತದೆ. ಈ ಸಂಸ್ಥೆಗಳು ಸರ್ಕಾರಿ ನೀತಿಗಳನ್ನು ಅನುಷ್ಠಾನಗೊಳಿಸಲು, ನಿಯಂತ್ರಕ ಆಡಳಿತ, ಜಾರಿ, ಸಾರ್ವಜನಿಕ ಸೇವೆಗಳನ್ನು ಒದಗಿಸಲು ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯಗಳನ್ನು ನಿರ್ವಹಿಸಲು ಜವಾಬ್ದಾರರಾಗಿರುತ್ತವೆ. ಅವುಗಳನ್ನು ಸಾಮಾನ್ಯವಾಗಿ ನಿರ್ದೇಶಕರು, ಆಯುಕ್ತರು, ಅಥವಾ ಅಂತಹುದೇ ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ, ಅವರು ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ, ಇದು ಸಂಸ್ಥೆಯ ಸ್ವರೂಪವನ್ನು ಅವಲಂಬಿಸಿರುತ್ತದೆ. ಈ ಪ್ರತಿಯೊಂದು ಇಲಾಖೆಗಳು/ಸಂಸ್ಥೆಗಳು ತಮ್ಮದೇ ಆದ ಆಡಳಿತಾತ್ಮಕ ಉಪವಿಭಾಗಗಳನ್ನು ಹೊಂದಿವೆ.<ref>Rules of Business of [[Government of Kerala]]
PART II
FIRST SCHEDULE
https://gad.kerala.gov.in/sites/default/files/general_attachment/Rules%20of%20Business%20-%20Part%20II.pdf</ref>
ರಾಜ್ಯವನ್ನು ಹದಿನಾಲ್ಕು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದೂ ಜಿಲ್ಲಾ ಆಡಳಿತದ ಪ್ರಧಾನ ಕಚೇರಿಯಾಗಿ ಕಲೆಕ್ಟರೇಟ್ ಅನ್ನು ಹೊಂದಿದೆ. [[ಜಿಲ್ಲಾ ಮ್ಯಾಜಿಸ್ಟ್ರೇಟ್|ಜಿಲ್ಲಾ ಕಲೆಕ್ಟರ್]] ಜಿಲ್ಲಾ ಆಡಳಿತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭೂ ಆದಾಯ ಆಡಳಿತ, ವಿಪತ್ತು ನಿರ್ವಹಣೆ, ಚುನಾವಣೆಗಳು, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಮತ್ತು ಜಿಲ್ಲೆಯೊಳಗಿನ ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯಕ್ಕೆ ಜವಾಬ್ದಾರರಾಗಿರುತ್ತಾರೆ.<ref>{{Cite web |title=Collectorate {{!}} District Thiruvananthapuram, Government of Kerala {{!}} India |url=https://trivandrum.nic.in/en/collectrate/ |access-date=2026-04-04 |language=en-US}}</ref> ಆಡಳಿತಾತ್ಮಕ ಅನುಕೂಲಕ್ಕಾಗಿ, ಪ್ರತಿಯೊಂದು ಜಿಲ್ಲೆಯನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳ ಪಟ್ಟಿ|ಆದಾಯ ವಿಭಾಗಗಳಾಗಿ]], [[ತಹಸೀಲ್ದಾರ್|ತಾಲೂಕುಗಳಾಗಿ]], ಮತ್ತು [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ, ಪ್ರಾಥಮಿಕವಾಗಿ ಭೂ ಆದಾಯ ಆಡಳಿತದ ಉದ್ದೇಶಕ್ಕಾಗಿ.<ref>{{Cite web |last=Admin |date=2025-01-22 |title=Land revenue administration, Government of Kerala |url=https://clr.kerala.gov.in/eng/index.php/department/organisation-structure |access-date=2026-01-01 |website=Department of Land Revenue |language=en-gb}}</ref>
ಕೇರಳದಲ್ಲಿ ಕಾನೂನು ಜಾರಿಯನ್ನು ಪ್ರಾಥಮಿಕವಾಗಿ [[ಕೇರಳ ಪೊಲೀಸ್]] ನಡೆಸುತ್ತದೆ, ಇದು ಕೇರಳ ಸರ್ಕಾರದ [[ಗೃಹ ಇಲಾಖೆ (ಕೇರಳ)|ಗೃಹ ಇಲಾಖೆಯ]] ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇರಳ ಪೊಲೀಸ್ ಅನ್ನು ಎರಡು ಪೊಲೀಸ್ ವಲಯಗಳಾಗಿ (ಉತ್ತರ ಮತ್ತು ದಕ್ಷಿಣ) ರಚಿಸಲಾಗಿದೆ, ಅವುಗಳನ್ನು ಮತ್ತಷ್ಟು ವ್ಯಾಪ್ತಿಗಳು, ಪೊಲೀಸ್ ಜಿಲ್ಲೆಗಳು, ಉಪವಿಭಾಗಗಳು ಮತ್ತು ಪೊಲೀಸ್ ಠಾಣೆಗಳಾಗಿ ವಿಂಗಡಿಸಲಾಗಿದೆ. ಪ್ರಾಥಮಿಕ ಕಾನೂನು ಜಾರಿಗೆ ಜವಾಬ್ದಾರರಾಗಿರುವ 484 ಸ್ಥಳೀಯ ಪೊಲೀಸ್ ಠಾಣೆಗಳಿವೆ.<ref>{{Cite web |title=Official Website of Kerala Police |url=https://keralapolice.gov.in/ |access-date=2026-04-24 |website=keralapolice.gov.in |language=en}}</ref>
[[ನ್ಯಾಯಾಂಗ]]ವು [[ಕೇರಳ ಉಚ್ಚ ನ್ಯಾಯಾಲಯ]] ಮತ್ತು ಕೆಳ ನ್ಯಾಯಾಲಯಗಳ ವ್ಯವಸ್ಥೆಯನ್ನು ಒಳಗೊಂಡಿದೆ.<ref>{{cite web |title=History of Judiciary |url=https://www.allindiajudges.org/Judgment/FNJPC2.htm |publisher=All-India Judges Association |access-date=29 April 2015 |archive-date=1 October 2015 |archive-url=https://web.archive.org/web/20151001072113/http://www.allindiajudges.org/Judgment/FNJPC2.htm |url-status=dead }}</ref> [[ಕೊಚ್ಚಿ|ಕೊಚ್ಚಿಯಲ್ಲಿ]] ನೆಲೆಗೊಂಡಿರುವ ಉಚ್ಚ ನ್ಯಾಯಾಲಯವು,<ref name="Congress (US)2010">{{cite book |author1=U S Congress |author2=Congress (U.S.) |title=Congressional Record, V. 153, Pt. 1, January 4, 2007 to January 17, 2007 |url=https://books.google.com/books?id=M3bLOwbeOZYC&pg=PA1198 |access-date=18 November 2012 |year=2010 |publisher=Government Printing Office |isbn=978-0-16-086824-5 |page=1198}}</ref> {{As of|2021|lc=y}} ರಂತೆ ಮುಖ್ಯ ನ್ಯಾಯಮೂರ್ತಿ ಮತ್ತು 35 ಖಾಯಂ ಮತ್ತು ಹನ್ನೆರಡು ಹೆಚ್ಚುವರಿ ''[[ಪ್ರೋ ಟೆಂಪೋರ್]]'' ನ್ಯಾಯಮೂರ್ತಿಗಳನ್ನು ಹೊಂದಿದೆ.<ref>{{cite web |title=High Court of Kerala Profile |url=https://highcourtofkerala.nic.in/profile.html |publisher=High Court of Kerala |access-date=18 November 2012 |archive-date=31 October 2012 |archive-url=https://web.archive.org/web/20121031233641/http://highcourtofkerala.nic.in/profile.html |url-status=live }}</ref> ಉಚ್ಚ ನ್ಯಾಯಾಲಯವು [[ಲಕ್ಷದ್ವೀಪ]] ಕೇಂದ್ರಾಡಳಿತ ಪ್ರದೇಶದ ಪ್ರಕರಣಗಳನ್ನು ಸಹ ವಿಚಾರಣೆಗೆ ತೆಗೆದುಕೊಳ್ಳುತ್ತದೆ.<ref name="Banerjea2002">{{cite book |author=D. Banerjea |title=Criminal Justice India Series, Vol. 21 |url=https://books.google.com/books?id=L6NWL-a14mkC&pg=PA80 |access-date=18 November 2012 |year=2002 |publisher=Allied Publishers |isbn=978-8177648720 |page=80}}</ref><ref name="SharmaB.k.2007">{{cite book |author1=Sharma |author2=Sharma B.k. |title=Intro. to the Constitution of India, 4/e |url=https://books.google.com/books?id=srDytmFE3KMC&pg=PA261 |access-date=18 November 2012 |year=2007 |publisher=PHI Learning Pvt. Ltd. |isbn=978-8120332461 |page=261}}</ref> ರಾಜ್ಯದ ಅಧೀನ ನ್ಯಾಯಾಂಗವು ಪ್ರತಿಯೊಂದು 14 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳನ್ನು ಒಳಗೊಂಡಿದೆ, ಇವುಗಳನ್ನು ಜಿಲ್ಲಾ ನ್ಯಾಯಾಧೀಶರು ಮುಖ್ಯಸ್ಥರಾಗಿರುತ್ತಾರೆ, ಜೊತೆಗೆ ನಾಗರಿಕ ನ್ಯಾಯಾಲಯಗಳು (''ಮುನ್ಸಿಫ್ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು'') ಮತ್ತು ಅಪರಾಧ ನ್ಯಾಯಾಲಯಗಳು (''ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮತ್ತು ಸೆಷನ್ಸ್ ನ್ಯಾಯಾಲಯಗಳು'') ತಮ್ಮ ಅಧಿಕಾರ ವ್ಯಾಪ್ತಿಯ ಪ್ರಕಾರ ಪ್ರಕರಣಗಳನ್ನು ನಿರ್ವಹಿಸುತ್ತವೆ.
=== ಸ್ಥಳೀಯ ಸರ್ಕಾರ ===
{{Main|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ಕೇರಳದಲ್ಲಿ, ಪಂಚಾಯತ್ಗಳು, ಪುರಸಭೆಗಳು ಮತ್ತು ನಿಗಮಗಳಂತಹ ಸ್ಥಳೀಯ ಸರ್ಕಾರಿ ಸಂಸ್ಥೆಗಳು 1959 ರಿಂದಲೂ ಅಸ್ತಿತ್ವದಲ್ಲಿವೆ. ಆದಾಗ್ಯೂ, ಗಮನಾರ್ಹವಾದ ವಿಕೇಂದ್ರೀಕರಣ ಉಪಕ್ರಮವು 1993 ರಲ್ಲಿ ಪ್ರಾರಂಭವಾಯಿತು, ಇದು [[ಭಾರತ ಸರ್ಕಾರ|ಕೇಂದ್ರ ಸರ್ಕಾರ]]ದ ಸಾಂವಿಧಾನಿಕ ತಿದ್ದುಪಡಿಗಳೊಂದಿಗೆ ಹೊಂದಾಣಿಕೆಯಾಯಿತು.<ref name="Capdeck">{{cite web |url=https://www.lenobl.ru/Document/1412700121.pdf |title=An Introduction to local self governments in Kerala |publisher=SDC CAPDECK |access-date=17 November 2012 |author=Mariamma Sanu George |pages=17–20 |archive-date=30 May 2015 |archive-url=https://web.archive.org/web/20150530224012/http://www.lenobl.ru/Document/1412700121.pdf |url-status=live }}</ref><ref name="KILA">{{cite web |url=https://www.kilaonline.org/site_docu/pub200904a.pdf |archive-url=https://web.archive.org/web/20130513015050/https://www.kilaonline.org/site_docu/pub200904a.pdf |archive-date=13 May 2013 |title=Kerala – A Case Study of Classical Democratic Decentralisation |publisher=Kerala Institute of Local Administration |date=April 2009 |access-date=17 November 2012 |author=S M Vijayanand }}</ref>{{rp|page=12}} ಕೇರಳ ಪಂಚಾಯತ್ ರಾಜ್ ಕಾಯ್ದೆ ಮತ್ತು ಕೇರಳ ಪುರಸಭೆ ಕಾಯ್ದೆಯನ್ನು 1994 ರಲ್ಲಿ ಜಾರಿಗೊಳಿಸಲಾಯಿತು, ಇದು ಗ್ರಾಮೀಣ ಆಡಳಿತಕ್ಕಾಗಿ ಮೂರು-ಹಂತದ ವ್ಯವಸ್ಥೆಯನ್ನು ಮತ್ತು ನಗರ ಆಡಳಿತಕ್ಕಾಗಿ ಏಕ-ಹಂತದ ವ್ಯವಸ್ಥೆಯನ್ನು ಸ್ಥಾಪಿಸಿತು.<ref>{{cite act
| title = Kerala Panchayat Raj Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref><ref>{{cite act
| title = Kerala Municipality Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref>
ಗ್ರಾಮೀಣ ಆಡಳಿತದ ಮೂರು-ಹಂತದ ರಚನೆಯು [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳನ್ನು]] ಒಳಗೊಂಡಿದೆ.<ref name="TandonMohanty2006">{{cite book |author1=Rajesh Tandon |author2=Ranjita Mohanty |title=Participatory Citizenship: Identity, Exclusion, Inclusion |url=https://books.google.com/books?id=oPByu7CWoUEC&pg=PA199 |access-date=17 November 2012 |year=2006 |publisher=Sage |isbn=978-0-7619-3467-7 |page=199}}</ref> ಕೇರಳ ಪಂಚಾಯತ್ ರಾಜ್ ಕಾಯ್ದೆ, 1994 ಈ ಸಂಸ್ಥೆಗಳಿಗೆ ಸ್ಪಷ್ಟವಾದ ಅಧಿಕಾರಗಳನ್ನು ವ್ಯಾಖ್ಯಾನಿಸುತ್ತದೆ.<ref name="Capdeck" /> ನಗರ ಪ್ರದೇಶಗಳಿಗೆ, ಕೇರಳ ಪುರಸಭೆ ಕಾಯ್ದೆಯು ಏಕ-ಹಂತದ ವ್ಯವಸ್ಥೆಯನ್ನು ಒದಗಿಸುತ್ತದೆ, ಇದು [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]] ಮತ್ತು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿದೆ, ಅವು ಸ್ಥಳೀಯ ಆಡಳಿತ ಮತ್ತು ನಾಗರಿಕ ಆಡಳಿತಕ್ಕೆ ಜವಾಬ್ದಾರರಾಗಿರುತ್ತವೆ. ಈ ಸಂಸ್ಥೆಗಳನ್ನು ನಿಯಮಿತವಾಗಿ [[ಕೇರಳದಲ್ಲಿ ಚುನಾವಣೆಗಳು|ಸ್ಥಳೀಯ ಸಂಸ್ಥೆಗಳ ಚುನಾವಣೆಗಳ]] ಮೂಲಕ ರಚಿಸಲಾಗುತ್ತದೆ.<ref name="Chaudhary2009">{{cite book |author=Shyam Nandan Chaudhary |title=Tribal Development Since Independence |url=https://books.google.com/books?id=KBX1EJVhjGEC&pg=PA235 |access-date=18 November 2012 |year=2009 |publisher=Concept Publishing Company |isbn=978-8180696220 |page=235}}</ref> ಈ ಸಂಸ್ಥೆಗಳು ಪರಿಣಾಮಕಾರಿ ವಿಕೇಂದ್ರೀಕರಣವನ್ನು ಖಚಿತಪಡಿಸಿಕೊಳ್ಳಲು ಗಣನೀಯ ಆಡಳಿತಾತ್ಮಕ, ಕಾನೂನು ಮತ್ತು ಆರ್ಥಿಕ ಅಧಿಕಾರಗಳನ್ನು ಪಡೆಯುತ್ತವೆ.<ref name="KILA" />{{rp|page=13}} ಪ್ರಸ್ತುತ, ರಾಜ್ಯ ಸರ್ಕಾರವು ರಾಜ್ಯ ಯೋಜನಾ ವಿನಿಯೋಗದ ಸುಮಾರು 40% ಅನ್ನು ಸ್ಥಳೀಯ ಸರ್ಕಾರಗಳಿಗೆ ನಿಯೋಜಿಸುತ್ತದೆ.<ref name="IsaacFranke2002">{{cite book |author1=T. M. Thomas Isaac |author2=Richard W. Franke |title=Local Democracy and Development: The Kerala People's Campaign for Decentralized Planning |url=https://books.google.com/books?id=x6v6F2a3Gs0C&pg=PR13 |year=2002 |publisher=Rowman & Littlefield |isbn=978-0-7425-1607-6 |page=13}}</ref> ಕೇರಳವು 1,200 ಸ್ಥಳೀಯ ಸಂಸ್ಥೆಗಳನ್ನು ಹೊಂದಿದೆ, ಇವುಗಳಲ್ಲಿ 941 ಗ್ರಾಮ ಪಂಚಾಯತ್ಗಳು, 152 ಬ್ಲಾಕ್ ಪಂಚಾಯತ್ಗಳು, 14 ಜಿಲ್ಲಾ ಪಂಚಾಯತ್ಗಳು, 87 ಪುರಸಭೆಗಳು, ಮತ್ತು 6 ನಗರ ನಿಗಮಗಳು ಸೇರಿವೆ.<ref>{{Cite web |title=Local Bodies {{!}} Local Self Government Department |url=https://lsgkerala.gov.in/en/lsgd/localbody-list |access-date=2025-07-08 |website=lsgkerala.gov.in |archive-date=2 June 2023 |archive-url=https://web.archive.org/web/20230602134126/https://lsgkerala.gov.in/en/lsgd/localbody-list |url-status=dead }}</ref>
ಕೇರಳವನ್ನು 2016 ರಲ್ಲಿ ಭಾರತದ ಮೊದಲ ಡಿಜಿಟಲ್ ರಾಜ್ಯವೆಂದು ಘೋಷಿಸಲಾಯಿತು ಮತ್ತು [[ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್]] ನ 2019 ರ ಭಾರತ ಭ್ರಷ್ಟಾಚಾರ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕನಿಷ್ಠ ಭ್ರಷ್ಟ ರಾಜ್ಯವೆಂದು ಪರಿಗಣಿಸಲಾಗಿದೆ.<ref>{{Cite book |title=India Corruption Survey 2019 – Report |last= |publisher=Transparency International India |year=2019 |location= |pages=22 |url=https://transparencyindia.org/wp-content/uploads/2019/11/India-Corruption-Survey-2019.pdf |access-date=18 June 2021 |archive-date=10 July 2021 |archive-url=https://web.archive.org/web/20210710100154/https://transparencyindia.org/wp-content/uploads/2019/11/India-Corruption-Survey-2019.pdf |url-status=live }}</ref><ref>{{Cite news |title=Kerala the first digital State |url=https://www.thehindu.com/news/cities/kozhikode/kerala-the-first-digital-state/article8291466.ece |last=Special currespondent |date=28 February 2016 |access-date=17 November 2020 |work=The Hindu |archive-date=15 April 2021 |archive-url=https://web.archive.org/web/20210415102347/https://www.thehindu.com/news/cities/kozhikode/kerala-the-first-digital-state/article8291466.ece |url-status=live }}</ref> ಪಬ್ಲಿಕ್ ಅಫೇರ್ಸ್ ಇಂಡೆಕ್ಸ್-2020 ಕೇರಳವನ್ನು ಭಾರತದ ಅತ್ಯುತ್ತಮ ಆಡಳಿತ ರಾಜ್ಯವೆಂದು ಗೊತ್ತುಪಡಿಸಿತು.<ref>{{Cite news |title=Kerala, Tamil Nadu and Goa best governed States: report |url=https://www.thehindu.com/news/national/kerala-goa-and-chandigarh-best-governed-states-ut-report/article32985716.ece |last=PTI |date=30 October 2020 |access-date=20 June 2021 |work=The Hindu |archive-date=7 October 2021 |archive-url=https://web.archive.org/web/20211007210542/https://www.thehindu.com/news/national/kerala-goa-and-chandigarh-best-governed-states-ut-report/article32985716.ece |url-status=live }}</ref>
=== ರಾಜಕೀಯ ===
ಕೇರಳವು ತನ್ನ ಬಲವಾದ ಸಾಮಾಜಿಕ ಕಲ್ಯಾಣ ನೀತಿಗಳು, ಭೂ ಸುಧಾರಣೆಗಳು ಮತ್ತು ಉನ್ನತ ಮಾನವ ಅಭಿವೃದ್ಧಿ ಸೂಚಕಗಳಿಂದಾಗಿ ಭಾರತದ ಅತ್ಯಂತ [[ಸಮಾನತಾವಾದ|ಸಮಾನತಾವಾದಿ]] ರಾಜ್ಯಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ.<ref>{{Cite journal |last1=B |first1=Bibimol R. |last2=Seena |first2=Dr Anand Lali |last3=Thanammal |first3=Dr K. K. |date=2023-11-30 |title=C.Achutha Menon's Social Reforms: Paving The Way For A Progressive Kerala |url=https://kuey.net/index.php/kuey/article/view/8887 |journal=Educational Administration: Theory and Practice |language=en |volume=29 |issue=4 |pages=4074–4079 |doi=10.53555/kuey.v29i4.8887 |doi-broken-date=15 June 2026 |issn=2148-2403}}</ref><ref>{{Cite journal |last=Duran |first=Jane |date=April 2025 |title=Egalitarianism and Justice in Kerala |url=https://www.cambridge.org/core/journals/think/article/abs/egalitarianism-and-justice-in-kerala/5B093820090E9266A4852C40F93F5A51 |journal=Think |language=en |volume=24 |issue=70 |pages=23–29 |doi=10.1017/S147717562500017X |issn=1477-1756}}</ref><ref>{{Cite journal |last1=Thiranagama |first1=Sharika |title=Rural Civilities: Caste, Gender and Public Life in Kerala |journal=South Asia: Journal of South Asian Studies |date=2019 |volume=42 |issue=2 |pages=310–327 |doi=10.1080/00856401.2019.1582190}}</ref><ref>{{Cite journal |last=Devika |first=J. |date=August 2010 |title=Egalitarian Developmentalism, Communist Mobilization, and the Question of Caste in Kerala State, India |url=https://www.cambridge.org/core/journals/journal-of-asian-studies/article/abs/egalitarian-developmentalism-communist-mobilization-and-the-question-of-caste-in-kerala-state-india/8F65915C540DB6AC5D3EEE6DE800DB3B? |journal=The Journal of Asian Studies |language=en |volume=69 |issue=3 |pages=799–820 |doi=10.1017/S0021911810001506 |issn=1752-0401}}</ref> ಕೇರಳದ ರಾಜಕೀಯವು ಪ್ರಾಥಮಿಕವಾಗಿ [[ಭಾರತದಲ್ಲಿ ಕಮ್ಯುನಿಸಂ|ಕಮ್ಯುನಿಸಂ]], [[ಪ್ರಜಾಪ್ರಭುತ್ವ ಸಮಾಜವಾದ]], [[ಜಾತ್ಯತೀತತೆ]], [[ಮಧ್ಯಮಾರ್ಗ#ಭಾರತ|ಮಧ್ಯಮಾರ್ಗ]] ಮತ್ತು ಪ್ರಾದೇಶಿಕ ಹಿತಾಸಕ್ತಿಗಳಿಂದ ರೂಪುಗೊಂಡಿದೆ. [[ಬಲಪಂಥೀಯ ರಾಜಕೀಯ#ಭಾರತ|ಬಲಪಂಥೀಯ ರಾಜಕೀಯ]]ವು ತುಲನಾತ್ಮಕವಾಗಿ ಚಿಕ್ಕ ಶಕ್ತಿಯಾಗಿದ್ದು, ಇದನ್ನು ಪ್ರಾಥಮಿಕವಾಗಿ [[ಭಾರತೀಯ ಜನತಾ ಪಕ್ಷ]]-ನೇತೃತ್ವದ [[ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ|NDA]] ಪ್ರತಿನಿಧಿಸುತ್ತದೆ.<ref>{{Cite journal |title=Hindu Nationalism in South India: The Rise of Saffron in Kerala |url=https://www.researchgate.net/publication/381937210_Hindu_Nationalism_in_South_India_The_Rise_of_Saffron_in_Kerala |journal=}}</ref><ref>{{Cite journal |last=Nair |first=A. Balakrishnan |date=1994 |title=The Dynamics of Kerala Politics |url=https://www.jstor.org/stable/41855697 |journal=The Indian Journal of Political Science |volume=55 |issue=3 |pages=251–260 |issn=0019-5510}}</ref>
ಕೇರಳವು ಎರಡು ಪ್ರಮುಖ ರಾಜಕೀಯ ಮೈತ್ರಿಗಳನ್ನು ಹೊಂದಿದೆ: [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ನೇತೃತ್ವದ [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್]] (UDF); ಮತ್ತು [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)]] (CPI(M)) ನೇತೃತ್ವದ [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್]] (LDF). 1980 ರಿಂದ, ಕೇರಳದ ರಾಜಕೀಯವು LDF ಮತ್ತು UDF ನಿಂದ ಪ್ರಾಬಲ್ಯ ಹೊಂದಿದೆ, ಸರ್ಕಾರಗಳು ಹೆಚ್ಚಾಗಿ ಎರಡು ಮೈತ್ರಿಗಳ ನಡುವೆ ಪರ್ಯಾಯವಾಗಿವೆ.<ref>{{Cite news |date=2026-05-22 |title=Kerala election wrap-up: How UDF ended LDF’s 10-year rule |url=https://timesofindia.indiatimes.com/india/kerala-election-wrap-up-how-udf-ended-ldfs-10-year-rule/articleshow/131249440.cms |access-date=2026-06-19 |work=The Times of India |issn=0971-8257}}</ref> {{As of|2021|alt=}} [[2026 ಕೇರಳ ವಿಧಾನಸಭಾ ಚುನಾವಣೆ]]ಯ ಪ್ರಕಾರ, UDF ಆಡಳಿತ ಒಕ್ಕೂಟವಾಗಿದೆ, ಮತ್ತು [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್|LDF]] ಅಧಿಕೃತ ವಿರೋಧ ಪಕ್ಷವಾಗಿದೆ.<ref>{{Cite web |title=Pinarayi Vijayan elected as Leader of Opposition in Kerala |url=https://www.deccanherald.com/india/kerala/pinarayi-vijayan-elected-as-leader-of-opposition-in-kerala-4003109 |access-date=2026-05-15 |website=Deccan Herald |language=en}}</ref><ref>{{Cite news |last=Parthasarathy |first=Srinivasan Ramani , Pon Vasanth B. A. , Nitika Francis , Devyanshi Bihani , Areena Arora & Sambavi |date=2026-05-06 |title=UDF's near three-fourths majority marked a historic victory for the Congress-led coalition |url=https://www.thehindu.com/news/national/kerala/udfs-near-three-fourths-majority-marked-a-historicvictory-for-the-congress-led-coalition/article70944163.ece |access-date=2026-05-15 |work=The Hindu |language=en-IN |issn=0971-751X}}</ref>
[[ಭಾರತದ ಸಂವಿಧಾನ]]ದ ಪ್ರಕಾರ, ಕೇರಳವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯನ್ನು ಹೊಂದಿದೆ; [[ಸಾರ್ವತ್ರಿಕ ಮತದಾನ]]ವನ್ನು ನಿವಾಸಿಗಳಿಗೆ ನೀಡಲಾಗಿದೆ.<ref name=":0">{{cite web |url=https://niyamasabha.org/codes/govt_2.htm |title=Kerala Government – Legislature |publisher=Government of Kerala |access-date=19 November 2012 |archive-date=8 December 2012 |archive-url=https://web.archive.org/web/20121208011357/http://www.niyamasabha.org/codes/govt_2.htm |url-status=dead }}</ref>
== ಆರ್ಥಿಕತೆ ==
{{Main|ಕೇರಳದ ಆರ್ಥಿಕತೆ}}
ಸ್ವಾತಂತ್ರ್ಯದ ನಂತರ, ರಾಜ್ಯವನ್ನು [[ಸಾಮಾಜಿಕ ಪ್ರಜಾಪ್ರಭುತ್ವ|ಸಾಮಾಜಿಕ ಪ್ರಜಾಪ್ರಭುತ್ವ]] [[ಕಲ್ಯಾಣ ಆರ್ಥಿಕತೆ]]ಯಾಗಿ ನಿರ್ವಹಿಸಲಾಯಿತು.<ref>{{Cite news |title=A virus, social democracy, and dividends for Kerala |url=https://www.thehindu.com/opinion/lead/a-virus-social-democracy-and-dividends-for-kerala/article31370554.ece |last=Heller |first=Patrick |date=18 April 2020 |access-date=2 February 2021 |work=The Hindu |archive-date=19 November 2021 |archive-url=https://web.archive.org/web/20211119130557/https://www.thehindu.com/opinion/lead/a-virus-social-democracy-and-dividends-for-kerala/article31370554.ece |url-status=live }}</ref> ಅತ್ಯಧಿಕ ಮಾನವ ಅಭಿವೃದ್ಧಿ ಮತ್ತು ತುಲನಾತ್ಮಕವಾಗಿ ಕಡಿಮೆ ಆರ್ಥಿಕ ಅಭಿವೃದ್ಧಿಯ "ಕೇರಳ ವಿದ್ಯಮಾನ" ಅಥವಾ "[[ಕೇರಳ ಮಾದರಿ]]" ಅಭಿವೃದ್ಧಿಯು ಬಲವಾದ ಸೇವಾ ವಲಯದಿಂದ ಉಂಟಾಗಿದೆ.<ref name="Brenkert_Malone_2003" />{{rp|48}}<ref name="Tharamangalam_2005">{{Cite journal |author=Tharamangalam J |year=2005 |title=The Perils of Social Development without Economic Growth: The Development Debacle of Kerala, India |journal=Political Economy for Environmental Planners |url=https://www.infra.kth.se/courses/1H1142/Kerala_Paper_4.pdf |archive-url=https://web.archive.org/web/20131115072025/https://www.infra.kth.se/courses/1H1142/Kerala_Paper_4.pdf |archive-date=15 November 2013 |access-date=28 December 2008}}</ref>{{rp|1}} 2019–20 ರಲ್ಲಿ, ಕೇರಳದ ಆರ್ಥಿಕತೆಯು {{INRConvert|8.55|t}} ಸ್ಥೂಲ ರಾಜ್ಯ ಆಂತರಿಕ ಉತ್ಪನ್ನ (GSDP) ಮತ್ತು {{INRConvert|222|k}} ತಲಾ ನಿವ್ವಳ ರಾಜ್ಯ ಆಂತರಿಕ ಉತ್ಪನ್ನದೊಂದಿಗೆ ಭಾರತದಲ್ಲಿ [[ಸ್ಥೂಲ ರಾಜ್ಯ ಆಂತರಿಕ ಉತ್ಪನ್ನದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|8 ನೇ ಅತಿದೊಡ್ಡದಾಗಿದೆ]].<ref>{{Cite web |date=15 March 2021 |title=MOSPI State Domestic Product, Ministry of Statistics and Programme Implementation, Government of India |url=https://mospi.nic.in/sites/default/files/press_releases_statements/State_wise_SDP_15_03_2021.xls |access-date=23 June 2021 |archive-date=17 June 2021 |archive-url=https://web.archive.org/web/20210617193238/http://mospi.nic.in/sites/default/files/press_releases_statements/State_wise_SDP_15_03_2021.xls |url-status=live }}</ref> 2019–20 ರಲ್ಲಿ, [[ಆರ್ಥಿಕತೆಯ ತೃತೀಯ ವಲಯ|ತೃತೀಯ ವಲಯ]]ವು ರಾಜ್ಯದ [[ಸ್ಥೂಲ ಮೌಲ್ಯವರ್ಧಿತ|GSVA]] ಯ ಸುಮಾರು 63% ಕೊಡುಗೆ ನೀಡಿದೆ, ಇದಕ್ಕೆ [[ಆರ್ಥಿಕತೆಯ ದ್ವಿತೀಯ ವಲಯ|ದ್ವಿತೀಯ ವಲಯ]] 28% ಮತ್ತು [[ಆರ್ಥಿಕತೆಯ ಪ್ರಾಥಮಿಕ ವಲಯ|ಪ್ರಾಥಮಿಕ ವಲಯ]] 8% ಕೊಡುಗೆ ನೀಡಿದೆ.<ref name="eco">{{Cite book |last=Government of Kerala |url=https://spb.kerala.gov.in/sites/default/files/2021-01/English-Vol-1_0.pdf |title=Economic Review 2020 – Volume I |publisher=Kerala State Planning Board |year=2021 |location=Thiruvananthapuram |access-date=18 June 2021 |archive-date=2 May 2021 |archive-url=https://web.archive.org/web/20210502171017/https://spb.kerala.gov.in/sites/default/files/2021-01/English-Vol-1_0.pdf |url-status=live }}</ref> 1960 ಮತ್ತು 2020 ರ ಅವಧಿಯಲ್ಲಿ, ಕೇರಳದ ಆರ್ಥಿಕತೆಯು ಕೃಷಿ ಆರ್ಥಿಕತೆಯಿಂದ ಸೇವಾ ಆಧಾರಿತ ಆರ್ಥಿಕತೆಗೆ ಕ್ರಮೇಣ ಬದಲಾಗುತ್ತಿತ್ತು.<ref name="eco" />
{{multiple image
| direction = vertical
| width = 220
| image1 = Technopark Trivandum Ganga and Yamuna Buildings.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಟೆಕ್ನೋಪಾರ್ಕ್, ತಿರುವನಂತಪುರ|ಟೆಕ್ನೋಪಾರ್ಕ್]], ಭಾರತದ ಮೊದಲ ಮತ್ತು ಅತಿದೊಡ್ಡ [[ಮಾಹಿತಿ ತಂತ್ರಜ್ಞಾನ]] (IT) ಉದ್ಯಾನವನ
| image2 = Container terminal.JPG
| caption2 = [[ಕೊಚ್ಚಿ|ಕೊಚ್ಚಿಯ]] [[ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್, ಕೊಚ್ಚಿ|ವಲ್ಲಾರ್ಪಾಡಂ ಟರ್ಮಿನಲ್]], ಭಾರತದ ಮೊದಲ [[ಕಂಟೇನರ್ ಟರ್ಮಿನಲ್|ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್]]
| image4 = Mappila bay.JPG
| caption4 = [[ಕಣ್ಣೂರು|ಕಣ್ಣೂರಿನ]] [[ಮಾಪ್ಪಿಲ ಕೊಲ್ಲಿ]] ಬಂದರು
}}
ರಾಜ್ಯದ [[ಆರ್ಥಿಕತೆಯ ತೃತೀಯ ವಲಯ|ಸೇವಾ ವಲಯ]]ವು ಅದರ ಆದಾಯದ ಸುಮಾರು 63% ರಷ್ಟಿದ್ದು, ಇದು ಮುಖ್ಯವಾಗಿ [[ಆತಿಥ್ಯ ಉದ್ಯಮ]], [[ಕೇರಳದ ಪ್ರವಾಸೋದ್ಯಮ|ಪ್ರವಾಸೋದ್ಯಮ]], [[ಆಯುರ್ವೇದ]] ಮತ್ತು ವೈದ್ಯಕೀಯ ಸೇವೆಗಳು, ಯಾತ್ರಾ ಸ್ಥಳಗಳು, [[ಮಾಹಿತಿ ತಂತ್ರಜ್ಞಾನ]], [[ಕೇರಳದ ರಸ್ತೆಗಳು|ಸಾರಿಗೆ]], ಹಣಕಾಸು ವಲಯ, ಮತ್ತು [[ಕೇರಳದಲ್ಲಿ ಶಿಕ್ಷಣ|ಶಿಕ್ಷಣ]]ವನ್ನು ಆಧರಿಸಿದೆ.<ref name=":15">{{Cite web |url=https://slbckerala.com/Economy.aspx |title=Economy of Kerala – 2016 |website=slbckerala.com |access-date=7 February 2022 |archive-date=28 March 2022 |archive-url=https://web.archive.org/web/20220328191455/http://slbckerala.com/Economy.aspx |url-status=dead }}</ref> ಕೈಗಾರಿಕಾ ವಲಯದಡಿಯಲ್ಲಿನ ಪ್ರಮುಖ ಉಪಕ್ರಮಗಳಲ್ಲಿ [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ]], ಹಡಗು ನಿರ್ಮಾಣ, ತೈಲ ಸಂಸ್ಕರಣಾಗಾರ, ಸಾಫ್ಟ್ವೇರ್ ಉದ್ಯಮ, ಕರಾವಳಿ ಖನಿಜ ಉದ್ಯಮಗಳು,{{sfn|Chandran|2018|p=343}} ಆಹಾರ ಸಂಸ್ಕರಣೆ, ಸಮುದ್ರ ಉತ್ಪನ್ನಗಳ ಸಂಸ್ಕರಣೆ, ಮತ್ತು ರಬ್ಬರ್ ಆಧಾರಿತ ಉತ್ಪನ್ನಗಳು ಸೇರಿವೆ. ರಾಜ್ಯದ ಪ್ರಾಥಮಿಕ ವಲಯವು ಮುಖ್ಯವಾಗಿ [[ವಾಣಿಜ್ಯ ಬೆಳೆ]]ಗಳನ್ನು ಆಧರಿಸಿದೆ.{{sfn|Chandran|2018|p=409}} ಕೇರಳವು ಭಾರತದಲ್ಲಿ [[ತೆಂಗು]], [[ಚಹಾ]], [[ಕಾಫಿ]], [[ಮಲಬಾರ್ ಮೆಣಸು|ಮೆಣಸು]], [[ನೈಸರ್ಗಿಕ ರಬ್ಬರ್]], [[ಏಲಕ್ಕಿ]], ಮತ್ತು [[ಗೋಡಂಬಿ]] ಮುಂತಾದ ವಾಣಿಜ್ಯ ಬೆಳೆಗಳ ರಾಷ್ಟ್ರೀಯ ಉತ್ಪಾದನೆಯ ಗಮನಾರ್ಹ ಪ್ರಮಾಣವನ್ನು ಉತ್ಪಾದಿಸುತ್ತದೆ.{{sfn|Chandran|2018|p=409}} ಆಹಾರ ಬೆಳೆಗಳ ಕೃಷಿಯು 1950 ರ ದಶಕದಿಂದ ಕಡಿಮೆಯಾಗಲು ಪ್ರಾರಂಭಿಸಿತು.{{sfn|Chandran|2018|p=409}}
ಕೇರಳದ ಆರ್ಥಿಕತೆಯು [[ಕೇರಳ ಗಲ್ಫ್ ವಲಸೆ|ವಿದೇಶಗಳಲ್ಲಿ ಕೆಲಸ ಮಾಡುವ ವಲಸಿಗರ]] ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ, ಮುಖ್ಯವಾಗಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಲ್ಲಿ]], ಮತ್ತು ವಾರ್ಷಿಕ ಸ್ಥಳಾಂತರ ವರ್ಗಾವಣೆಗಳು GSDP ಯ ಐದನೇ ಒಂದು ಭಾಗಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ.<ref name="rem1">{{cite report |author1=K.P. Kannan |author2=K.S. Hari |title=Kerala's Gulf connection: Emigration, remittances and their macroeconomic impact, 1972–2000 |url=https://ideas.repec.org/p/ind/cdswpp/328.html |year=2002 |website=[[Research Papers in Economics]] |access-date=4 April 2022 |archive-date=28 June 2021 |archive-url=https://web.archive.org/web/20210628135450/https://ideas.repec.org/p/ind/cdswpp/328.html |url-status=live }}</ref> 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ ರಾಜ್ಯವು ಗಮನಾರ್ಹ ವಲಸೆಯನ್ನು ಕಂಡಿತು. 2012 ರಲ್ಲಿ, ಕೇರಳವು ಎಲ್ಲಾ ರಾಜ್ಯಗಳ ಅತಿ ಹೆಚ್ಚು ಸ್ಥಳಾಂತರ ವರ್ಗಾವಣೆಗಳನ್ನು ಪಡೆಯಿತು: US$11.3 ಬಿಲಿಯನ್, ಇದು ದೇಶಕ್ಕೆ US$71 ಬಿಲಿಯನ್ ಸ್ಥಳಾಂತರ ವರ್ಗಾವಣೆಗಳಲ್ಲಿ ಸುಮಾರು 16% ಆಗಿತ್ತು.<ref>{{cite news |url=https://in.finance.yahoo.com/news/remittances--kerala-drives-dollar-flows-to-india-053414379.html |title=Remittances: Kerala drives dollar flows to India |work=[[Yahoo! Finance]] |date=5 November 2013 |access-date=8 November 2013 |archive-date=7 November 2013 |archive-url=https://web.archive.org/web/20131107053009/http://in.finance.yahoo.com/news/remittances--kerala-drives-dollar-flows-to-india-053414379.html |url-status=live }}</ref> 2015 ರಲ್ಲಿ, ಕೇರಳದಲ್ಲಿ NRI ಠೇವಣಿಗಳು {{INRConvert|1|lc}} ಕ್ಕಿಂತ ಹೆಚ್ಚಾಗಿದ್ದು, ಇದು NRI ಖಾತೆಗಳಲ್ಲಿ ಠೇವಣಿಯಾದ ಎಲ್ಲಾ ಹಣದ ಆರನೇ ಒಂದು ಭಾಗಕ್ಕೆ ಸಮನಾಗಿರುತ್ತದೆ, ಇದು ಸುಮಾರು {{INRConvert|7|lc}} ಆಗಿದೆ.<ref>{{cite news |url=https://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |title=NRI deposits in Kerala banks cross Rs 1 lakh crore |date=22 June 2015 |access-date=13 November 2015 |work=[[The Times of India]] |archive-date=25 June 2015 |archive-url=https://web.archive.org/web/20150625121200/http://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |url-status=live }}</ref> [[ಮಲಪ್ಪುರಂ ಜಿಲ್ಲೆ]]ಯು ರಾಜ್ಯದಲ್ಲಿ ಅತಿ ಹೆಚ್ಚು ವಲಸೆ ಕುಟುಂಬಗಳ ಪ್ರಮಾಣವನ್ನು ಹೊಂದಿದೆ.<ref name="eco" /> [[ಕೇರಳ ರಾಜ್ಯ ಯೋಜನಾ ಮಂಡಳಿ]]ಯು ನಿಯೋಜಿಸಿದ ಅಧ್ಯಯನವು, ತನ್ನ ವೆಚ್ಚಕ್ಕೆ ಹಣಕಾಸು ಒದಗಿಸಲು ಸ್ಥಳಾಂತರ ವರ್ಗಾವಣೆಗಳ ಮೇಲೆ ಅವಲಂಬಿಸುವ ಬದಲು ರಾಜ್ಯವು ಇತರ ವಿಶ್ವಾಸಾರ್ಹ ಆದಾಯದ ಮೂಲಗಳನ್ನು ಹುಡುಕಬೇಕೆಂದು ಸೂಚಿಸಿದೆ.<ref name="Commission2008b">{{cite book |author=India. Planning Commission |title=Kerala Development Report |url=https://books.google.com/books?id=Ul-OkF5gUJQC&pg=PA457 |year=2008 |publisher=Academic Foundation |isbn=978-8171885947 |page=396}}</ref>
ಮಾರ್ಚ್ 2002 ರಂತೆ, ಕೇರಳದ ಬ್ಯಾಂಕಿಂಗ್ ವಲಯವು 3341 ಸ್ಥಳೀಯ ಶಾಖೆಗಳನ್ನು ಒಳಗೊಂಡಿತ್ತು: ಪ್ರತಿ ಶಾಖೆಯು 10,000 ಜನರಿಗೆ ಸೇವೆ ಸಲ್ಲಿಸಿತು, ಇದು ರಾಷ್ಟ್ರೀಯ ಸರಾಸರಿ 16,000 ಕ್ಕಿಂತ ಕಡಿಮೆಯಾಗಿದೆ; ರಾಜ್ಯವು ಭಾರತೀಯ ರಾಜ್ಯಗಳಲ್ಲಿ ಮೂರನೇ ಅತಿ ಹೆಚ್ಚು ಬ್ಯಾಂಕ್ ಪ್ರವೇಶವನ್ನು ಹೊಂದಿದೆ.<ref name="RBI_2002">{{cite web |url=https://rbidocs.rbi.org.in/rdocs/Publications/PDFs/35585.pdf |title=State/Union Territory-Wise Number of Branches of Scheduled Commercial Banks and Average Population Per Bank Branch |date=March 2002 |work=Reserve Bank of India |access-date=28 December 2008 |url-status=dead |archive-url=https://web.archive.org/web/20070810094850/https://rbidocs.rbi.org.in/rdocs/Publications/PDFs/35585.pdf |archive-date=10 August 2007}}</ref> 1 ಅಕ್ಟೋಬರ್ 2011 ರಂದು, ಕೇರಳವು ಪ್ರತಿ ಗ್ರಾಮದಲ್ಲಿ ಕನಿಷ್ಠ ಒಂದು ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಯಿತು.<ref>{{cite news |url=https://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |work=The Times of India |title=Now, you can bank on every village in Kerala |date=1 October 2011 |access-date=13 November 2015 |archive-date=4 January 2017 |archive-url=https://web.archive.org/web/20170104180910/http://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |url-status=live }}</ref> [[ಕೇರಳದಲ್ಲಿ ನಿರುದ್ಯೋಗ|2007 ರಲ್ಲಿ ನಿರುದ್ಯೋಗವು]] 9.4% ಎಂದು ಅಂದಾಜಿಸಲಾಗಿದೆ;<ref>{{cite news |author=Kumar KG |title=Jobless no more? |newspaper=Business Line |date=8 October 2007 |url=https://www.thehindubusinessline.com/todays-paper/tp-economy/article1671367.ece |quote=A study by K.C. Zacharia and S. Irudaya Rajan, two economists at the Centre for Development Studies (CDS), unemployment in Kerala has dropped from 19.1[%] in 2003 to 9.4[%] in 2007. |access-date=16 November 2012 |archive-date=6 November 2013 |archive-url=https://web.archive.org/web/20131106032604/http://www.thehindubusinessline.com/todays-paper/tp-economy/article1671367.ece |url-status=live }}</ref> ದೀರ್ಘಕಾಲದ ಸಮಸ್ಯೆಗಳೆಂದರೆ [[ನಿರುದ್ಯೋಗ]], ಯುವಜನರ ಕಡಿಮೆ ಉದ್ಯೋಗಸಾಧ್ಯತೆ, ಮತ್ತು ಕೇವಲ 13.5% ರಷ್ಟಿರುವ ಕಡಿಮೆ ಮಹಿಳಾ [[ಕಾರ್ಮಿಕ|ಕಾರ್ಮಿಕ ಭಾಗವಹಿಸುವಿಕೆ ದರ]],<ref name="Nair_2004">{{Cite book |author=Nair NG |veditors=Nair PR, Shaji H |title=Measurement of Employment, Unemployment, and Underemployment |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621751 |url=https://www.cds.ac.in/krpcds/publication/downloads/72.pdf |access-date=31 December 2008 |archive-date=30 May 2015 |archive-url=https://web.archive.org/web/20150530210334/http://www.cds.ac.in/krpcds/publication/downloads/72.pdf |url-status=live }}</ref>{{rp|5, 13}} ಜೊತೆಗೆ ''[[ನೋಕ್ಕು ಕೂಲಿ]]'' ("ನೋಡುವಿಕೆಗೆ ವೇತನ") ಪದ್ಧತಿಯೂ ಇತ್ತು.<ref name="Outlook-2008">{{cite news |url=https://www.outlookindia.com/article.aspx?237419 |first=John |last=Mary |title=Men (Not) At Work |work=[[Outlook (Indian magazine)|Outlook]] |date=12 May 2008 |access-date=13 November 2015 |archive-date=6 November 2013 |archive-url=https://web.archive.org/web/20131106032651/http://www.outlookindia.com/article.aspx?237419 |url-status=live }}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6">{{Cite report |last=Deaton |first=Angus |title=Regional poverty estimates for India, 1999–2000 |url=https://www.princeton.edu/rpds/papers/pdfs/deaton_regionalpovertyindia.pdf |date=22 August 2003 |archive-url=https://web.archive.org/web/20110628193845/https://www.princeton.edu/rpds/papers/pdfs/deaton_regionalpovertyindia.pdf |archive-date=28 June 2011 |url-status=dead |page=10 |access-date=4 April 2022}}</ref>
2020–2021 ರ ರಾಜ್ಯದ ಬಜೆಟ್ {{INRConvert|1.15|lc}} ಆಗಿತ್ತು.<ref name="Budget">{{cite web |url=https://www.finance.kerala.gov.in/bdgtDcs.jsp |title=Budget In Brief |format=PDF |website=finance.kerala.gov.in |publisher=Government of Kerala |access-date=4 December 2020 |archive-date=25 November 2020 |archive-url=https://web.archive.org/web/20201125214731/http://www.finance.kerala.gov.in/bdgtDcs.jsp |url-status=live }}</ref> ರಾಜ್ಯ ಸರ್ಕಾರದ ತೆರಿಗೆ ಆದಾಯವು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–21 ರಲ್ಲಿ {{INRConvert|674|b}} ಆಗಿತ್ತು; 2019–20 ರಲ್ಲಿ {{INRConvert|557|b}} ರಿಂದ ಹೆಚ್ಚಾಗಿದೆ. ಕೇರಳ ಸರ್ಕಾರದ ಅದರ [[ತೆರಿಗೆ-ಅಲ್ಲದ ಆದಾಯ]]ಗಳು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–2021 ರಲ್ಲಿ {{INRConvert|146|b}} ತಲುಪಿದೆ.<ref name="Budget" /> ಆದಾಗ್ಯೂ, ಕೇರಳದ GSDP ಗೆ ತೆರಿಗೆಯ ಹೆಚ್ಚಿನ ಅನುಪಾತವು ದೀರ್ಘಕಾಲದ ಬಜೆಟ್ ಕೊರತೆಗಳು ಮತ್ತು ಸುಸ್ಥಿರವಲ್ಲದ ಮಟ್ಟದ ಸರ್ಕಾರಿ ಸಾಲವನ್ನು ನಿವಾರಿಸಿಲ್ಲ, ಇದು ಸಾಮಾಜಿಕ ಸೇವೆಗಳ ಮೇಲೆ ಪರಿಣಾಮ ಬೀರಿದೆ.<ref>{{cite web |url=https://fincomindia.nic.in/pubsugg/memo_ker.pdf |archive-url=https://web.archive.org/web/20080626195846/https://fincomindia.nic.in/pubsugg/memo_ker.pdf |archive-date=26 June 2008 |title=Memoranda from States: Kerala |website=fincomindia.nic.in |access-date=25 September 2013}}</ref> 2006 ರಲ್ಲಿ ಒಟ್ಟು 223 [[ಹರ್ತಾಲ್]]ಗಳು ನಡೆದಿದ್ದವು, ಇದರ ಪರಿಣಾಮವಾಗಿ {{INRConvert|20|b}} ಕ್ಕಿಂತ ಹೆಚ್ಚು ಆದಾಯ ನಷ್ಟವಾಗಿದೆ.<ref>[https://www.rediff.com/news/2008/jul/06kerala.htm Kerala: Hartals Own Country?] {{webarchive |url=https://web.archive.org/web/20160304043808/https://www.rediff.com/news/2008/jul/06kerala.htm |date=4 March 2016 }} 6 July 2008</ref> ಕೇರಳದ GDP ಯಲ್ಲಿ 10% ಏರಿಕೆಯು ರಾಷ್ಟ್ರೀಯ GDP ಗಿಂತ 3% ಹೆಚ್ಚಾಗಿದೆ. 2013 ರಲ್ಲಿ, ಬಂಡವಾಳ ವೆಚ್ಚವು ರಾಷ್ಟ್ರೀಯ ಸರಾಸರಿ 5% ಕ್ಕೆ ಹೋಲಿಸಿದರೆ 30% ರಷ್ಟು ಏರಿತು, ದ್ವಿಚಕ್ರ ವಾಹನಗಳ ಮಾಲೀಕರು ರಾಷ್ಟ್ರೀಯ ದರ 15% ಕ್ಕೆ ಹೋಲಿಸಿದರೆ 35% ರಷ್ಟು ಏರಿತು, ಮತ್ತು ಶಿಕ್ಷಕ-ವಿದ್ಯಾರ್ಥಿ ಅನುಪಾತವು 2:100 ರಿಂದ 4:100 ಕ್ಕೆ 50% ರಷ್ಟು ಏರಿತು.<ref>{{cite web |url=https://www.keralacm.gov.in/index.php/news2catleist/2443-23-12-2013-india-today |archive-url=https://web.archive.org/web/20131224091613/https://www.keralacm.gov.in/index.php/news2catleist/2443-23-12-2013-india-today |url-status=dead |archive-date=24 December 2013 |title=India Today On Cm |publisher=Keralacm.gov.in |access-date=11 January 2014}}</ref>
[[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ]]ಯು ರಾಜ್ಯದ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು, ರಾಜ್ಯದ ಆದಾಯದ ಹೊರಗಿನಿಂದ ಮೂಲಸೌಕರ್ಯ ಅಭಿವೃದ್ಧಿಗೆ ನಿಧಿಯನ್ನು ಸಜ್ಜುಗೊಳಿಸಲು ರಾಜ್ಯದ ಸರ್ಕಾರಿ-ಸ್ವಾಮ್ಯದ [[ಹಣಕಾಸು ಸಂಸ್ಥೆ]]ಯಾಗಿದೆ.<ref>{{Cite news |url=https://www.thehindu.com/news/national/kerala/big-push-for-infrastructure-in-budget/article17403255.ece |title=Big push for infrastructure in Budget |newspaper=The Hindu |date=3 March 2017 |via=www.thehindu.com |access-date=25 November 2020 |archive-date=29 January 2021 |archive-url=https://web.archive.org/web/20210129210933/https://www.thehindu.com/news/national/kerala/big-push-for-infrastructure-in-budget/article17403255.ece |url-status=live }}</ref><ref>{{Cite web |url=https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |title=Kerala Budget: Infrastructure projects get a major fillip |website=The New Indian Express |date=4 March 2017 |access-date=25 November 2020 |archive-date=30 January 2021 |archive-url=https://web.archive.org/web/20210130030958/https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |url-status=live }}</ref>
ನವೆಂಬರ್ 2015 ರಲ್ಲಿ, [[ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯ|ನಗರಾಭಿವೃದ್ಧಿ ಸಚಿವಾಲಯ]]ವು [[ಅಟಲ್ ನವೀಕರಣ ಮತ್ತು ನಗರ ಪರಿವರ್ತನೆಗಾಗಿ ಮಿಷನ್]] (AMRUT) ಎಂದು ಕರೆಯಲ್ಪಡುವ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಕೇರಳದ ಏಳು ನಗರಗಳನ್ನು ಆಯ್ಕೆ ಮಾಡಿತು.<ref>{{cite news |title=Modi to address heads of civic bodies on urban revamp |url=https://www.thehindu.com/news/national/modi-to-address-heads-of-civic-bodies-on-urban-revamp/article7336851.ece |date=20 June 2015 |newspaper=[[The Hindu]] |access-date=25 June 2015 |archive-date=2 February 2021 |archive-url=https://web.archive.org/web/20210202155935/https://www.thehindu.com/news/national/modi-to-address-heads-of-civic-bodies-on-urban-revamp/article7336851.ece |url-status=live }}</ref> ಸೇವಾ ಮಟ್ಟದ ಸುಧಾರಣಾ ಯೋಜನೆಯನ್ನು (SLIP) ಅಭಿವೃದ್ಧಿಪಡಿಸಲು ಪ್ರತಿ ನಗರಕ್ಕೆ {{INRConvert|2.5|m}} ನ ಪ್ಯಾಕೇಜ್ ಅನ್ನು ಘೋಷಿಸಲಾಯಿತು, ಇದು ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಕೊಚ್ಚಿ, ತೃಶೂರ್, ಕೋಝಿಕೋಡ್, ಮತ್ತು ಪಾಲಕ್ಕಾಡ್ ನಗರಗಳಲ್ಲಿ ಸ್ಥಳೀಯ ನಗರ ಸಂಸ್ಥೆಗಳ ಉತ್ತಮ ಕಾರ್ಯನಿರ್ವಹಣೆಗೆ ಯೋಜನೆಯಾಗಿದೆ.<ref>{{cite news |last=R. Ramabhadran |first=Pillai |title=AMRUT to roll out on a smaller scale |url=https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |access-date=12 November 2015 |work=The Hindu |issue=12 November 2015 |archive-date=7 February 2021 |archive-url=https://web.archive.org/web/20210207052652/https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |url-status=live }}</ref> [[ಗ್ರ್ಯಾಂಡ್ ಕೇರಳ ಶಾಪಿಂಗ್ ಫೆಸ್ಟಿವಲ್]] (GKSF) ಅನ್ನು 2007 ರಲ್ಲಿ ಪ್ರಾರಂಭಿಸಲಾಯಿತು, ಇದು ಕೇರಳದ ಒಂಬತ್ತು ನಗರಗಳಾದ್ಯಂತ 3000 ಕ್ಕೂ ಹೆಚ್ಚು ಮಳಿಗೆಗಳನ್ನು ದೊಡ್ಡ ತೆರಿಗೆ ರಿಯಾಯಿತಿಗಳು, VAT ಮರುಪಾವತಿಗಳು ಮತ್ತು ದೊಡ್ಡ ಪ್ರಮಾಣದ ಬಹುಮಾನಗಳೊಂದಿಗೆ ಒಳಗೊಂಡಿದೆ.<ref name="GKSF begins">{{cite news |title=Shopping festival begins |url=https://www.thehindu.com/todays-paper/tp-national/tp-kerala/shopping-festival-begins/article1959420.ece |work=The Hindu |date=2 December 2007 |access-date=24 January 2013 |archive-date=27 September 2013 |archive-url=https://web.archive.org/web/20130927054507/http://www.thehindu.com/todays-paper/tp-national/tp-kerala/shopping-festival-begins/article1959420.ece |url-status=live }}</ref> [[ತಿರುವನಂತಪುರ|ತಿರುವನಂತಪುರದ]] [[ಲುಲು ಮಾಲ್, ತಿರುವನಂತಪುರ|ಲುಲು ಇಂಟರ್ನ್ಯಾಷನಲ್ ಮಾಲ್]] ಭಾರತದ ಅತಿದೊಡ್ಡ [[ಶಾಪಿಂಗ್ ಮಾಲ್|ಶಾಪಿಂಗ್ ಮಾಲ್]] ಆಗಿದೆ.<ref>{{cite news |title=LuLu Group: Going places |url=https://www.khaleejtimes.com/business/local/lulu-group-going-places |work=[[Khaleej Times]] |access-date=13 November 2020 |archive-date=26 April 2021 |archive-url=https://web.archive.org/web/20210426172244/https://www.khaleejtimes.com/business/local/lulu-group-going-places |url-status=live }}</ref>
ಅನೇಕ ಸಾಧನೆಗಳ ಹೊರತಾಗಿಯೂ, ಕೇರಳವು ವಿದ್ಯಾವಂತ ಮಹಿಳೆಯರ ಮೇಲೆ ಅಸಮಾನವಾಗಿ ಪರಿಣಾಮ ಬೀರುವ ಹೆಚ್ಚಿನ ಮಟ್ಟದ ನಿರುದ್ಯೋಗ, ಹೆಚ್ಚಿನ ಮಟ್ಟದ ಜಾಗತಿಕ ಪ್ರಭಾವ ಮತ್ತು ಅತ್ಯಂತ ಸೂಕ್ಷ್ಮ ಪರಿಸರದಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದೆ.<ref name="Hindu2021">{{cite journal |title=Making sense of Kerala |journal=The Hindu |date=13 December 2021 |last1=Heller |first1=Patrick |last2=Törnquist |first2=Olle |url=https://www.thehindu.com/news/national/kerala/making-sense-of-kerala/article37942860.ece |archive-url=https://web.archive.org/web/20211214151547/https://www.thehindu.com/news/national/kerala/making-sense-of-kerala/article37942860.ece |accessdate=5 March 2022 |archive-date=14 December 2021 |quote=Kerala has specific challenges: persistently high levels of unemployment that disproportionately impact educated women, a high degree of global exposure and a very fragile environment. More broadly, as the 21st century unfolds, it becomes increasingly clearer that the role of the State in supporting development must fundamentally change. First, in highly educated societies like Kerala, industrialisation is no longer the path to economic prosperity.}}</ref>
=== ಕೈಗಾರಿಕೆಗಳು ===
ಸಾಂಪ್ರದಾಯಿಕ ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳು; [[ತೆಂಗಿನ ನಾರು]], [[ಕೈಮಗ್ಗ]]ಗಳು, ಮತ್ತು [[ಕರಕುಶಲ]]ಗಳು ಸುಮಾರು ಒಂದು ಮಿಲಿಯನ್ ಜನರನ್ನು ಉದ್ಯೋಗಿಸುತ್ತವೆ.<ref name="KumarKerala2007">{{cite book |author1=S. Rajitha Kumar |author2=University of Kerala |title=Traditional Industries of India in the Globalised World |url=https://books.google.com/books?id=aBvtAAAAMAAJ |year=2007 |publisher=University of Kerala |isbn=978-8177081435 |page=223}}</ref> ಕೇರಳವು ಬಿಳಿ ತೆಂಗಿನ ನಾರಿನ ನಾರಿನ ಒಟ್ಟು ಜಾಗತಿಕ ಉತ್ಪಾದನೆಯ 60% ಅನ್ನು ಪೂರೈಸುತ್ತದೆ. ಭಾರತದ ಮೊದಲ ತೆಂಗಿನ ನಾರಿನ ಕಾರ್ಖಾನೆಯನ್ನು [[ಆಲಪ್ಪುಳ]]ದಲ್ಲಿ 1859–60 ರಲ್ಲಿ ಸ್ಥಾಪಿಸಲಾಯಿತು.<ref>{{cite web |title=Indian Coir Industry |url=https://www.indianmirror.com/indian-industries/coir.html |work=Indian Mirror |access-date=29 April 2014 |archive-date=2 May 2014 |archive-url=https://web.archive.org/web/20140502033302/http://www.indianmirror.com/indian-industries/coir.html |url-status=live }}</ref> ಕೇಂದ್ರ ತೆಂಗಿನ ನಾರಿನ ಸಂಶೋಧನಾ ಸಂಸ್ಥೆಯನ್ನು ಅಲ್ಲಿ 1959 ರಲ್ಲಿ ಸ್ಥಾಪಿಸಲಾಯಿತು. 2006–2007 ರ [[SIDBI]] ಯ ಜನಗಣತಿಯ ಪ್ರಕಾರ, ಕೇರಳದಲ್ಲಿ {{formatnum:1468104}} [[ಸಣ್ಣ ಮತ್ತು ಮಧ್ಯಮ ಉದ್ಯಮಗಳು#ಭಾರತ|ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿವೆ]], ಇವು {{formatnum:3031272}} ಜನರನ್ನು ಉದ್ಯೋಗಿಸುತ್ತವೆ.<ref name="SIDBI Report 2010">{{cite book |title=SIDBI Report on Micro, Small and Medium Enterprises Sector, 2010 |publisher=Small Industries Development Bank of India |year=2010}}</ref><ref>{{cite journal |title=A Study on the Position of Small and Medium Enterprises in Kerala vis a vis the National Scenario |author=N. Rajeevan |journal=International Journal of Research in Commerce, Economics and Management |date=March 2012 |volume=2 |issue=3}}</ref> [[KSIDC]] ಕೇರಳದಲ್ಲಿ 650 ಕ್ಕೂ ಹೆಚ್ಚು ಮಧ್ಯಮ ಮತ್ತು ದೊಡ್ಡ ಉತ್ಪಾದನಾ ಸಂಸ್ಥೆಗಳನ್ನು ಪ್ರೋತ್ಸಾಹಿಸಿದೆ, 72,500 ಜನರಿಗೆ ಉದ್ಯೋಗವನ್ನು ಸೃಷ್ಟಿಸಿದೆ.<ref>{{cite web |url=https://www.ksidc.org/about-functions.php |archive-url=https://web.archive.org/web/20140709062837/https://www.ksidc.org/about-functions.php |archive-date=9 July 2014 |title=Functions, KSIDC, Thiruvananthapuram |publisher=Kerala State Industrial Development Corporation |access-date=6 December 2013}}</ref> GSDP ಯ 0.3% ರಷ್ಟಿರುವ ಗಣಿಗಾರಿಕಾ ವಲಯವು [[ಇಲ್ಮೆನೈಟ್]], [[ಕಯೋಲಿನ್]], [[ಬಾಕ್ಸೈಟ್]], [[ಸಿಲಿಕಾ]], [[ಕ್ವಾರ್ಟ್ಜ್]], [[ರುಟೈಲ್]], [[ಜಿರ್ಕಾನ್]], ಮತ್ತು [[ಸಿಲ್ಲಿಮನೈಟ್]] ಹೊರತೆಗೆಯುವಿಕೆಯನ್ನು ಒಳಗೊಂಡಿದೆ.<ref name="GOK_2005c">{{Cite journal |author=Government of Kerala |year=2005 |title=Kerala at a Glance |journal=Government of Kerala |url=https://www.kerala.gov.in/ |access-date=22 January 2006 |url-status=dead |archive-url=https://web.archive.org/web/20060118031516/https://www.kerala.gov.in/ |archive-date=18 January 2006}}</ref> ಇತರ ಪ್ರಮುಖ ವಲಯಗಳೆಂದರೆ [[ಕೇರಳದಲ್ಲಿ ಪ್ರವಾಸೋದ್ಯಮ|ಪ್ರವಾಸೋದ್ಯಮ]], ವೈದ್ಯಕೀಯ ವಲಯ, [[ಕೇರಳದಲ್ಲಿ ಶಿಕ್ಷಣ|ಶೈಕ್ಷಣಿಕ ವಲಯ]], ಬ್ಯಾಂಕಿಂಗ್, [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಹಡಗು ನಿರ್ಮಾಣ]], [[ಕೊಚ್ಚಿ ಸಂಸ್ಕರಣಾಗಾರ|ತೈಲ ಸಂಸ್ಕರಣಾಗಾರ]], ಮೂಲಸೌಕರ್ಯ, ಉತ್ಪಾದನೆ, [[ವಸತಿ ಉದ್ಯಾನ|ಮನೆ ತೋಟಗಳು]], ಪಶುಪಾಲನೆ ಮತ್ತು [[ವ್ಯಾಪಾರ ಪ್ರಕ್ರಿಯೆಯ ಹೊರಗುತ್ತಿಗೆ]].{{citation needed|date=October 2025}}
=== ಕೃಷಿ ===
[[File:Tea plantations in Munnar, Kerala.jpg|thumb|[[ಮುನ್ನಾರ್|ಮುನ್ನಾರಿನಲ್ಲಿ]] ಚಹಾ ತೋಟಗಳು, ಕೇರಳ]]
[[File:Nemmara-paddy.jpg|alt=A field|thumb|[[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡಿನ]] ಒಂದು ಭತ್ತದ ಗದ್ದೆ, ಇದನ್ನು ''ಕೇರಳದ ಧಾನ್ಯದ ಬುಟ್ಟಿ'' ಎಂದೂ ಕರೆಯುತ್ತಾರೆ]]
ಕೇರಳದಲ್ಲಿ ಕೃಷಿಯಲ್ಲಿ ಪ್ರಮುಖ ಬದಲಾವಣೆಯು 1970 ರ ದಶಕದಲ್ಲಿ ಸಂಭವಿಸಿತು, ಭಾರತಾದ್ಯಂತ ಅಕ್ಕಿಯ ಲಭ್ಯತೆ ಹೆಚ್ಚಾದ ಕಾರಣ ಮತ್ತು ಕಾರ್ಮಿಕರ ಲಭ್ಯತೆ ಕಡಿಮೆಯಾದ ಕಾರಣ ಅಕ್ಕಿ ಉತ್ಪಾದನೆಯು ಕುಸಿಯಿತು.<ref name="Sinha2003">{{cite book |author=B.R. Sinha |title=Encyclopaedia Of Professional Education (10 Vol.) |url=https://books.google.com/books?id=mdjGoXN3y1AC&pg=PA205 |access-date=18 November 2012 |year=2003 |publisher=Sarup & Sons |isbn=978-8176254106 |pages=204–05}}</ref> ಪರಿಣಾಮವಾಗಿ, ಅಕ್ಕಿ ಉತ್ಪಾದನೆಯಲ್ಲಿ ಹೂಡಿಕೆ ಕಡಿಮೆಯಾಯಿತು ಮತ್ತು ಭೂಮಿಯ ಗಮನಾರ್ಹ ಭಾಗವು ದೀರ್ಘಕಾಲಿಕ ಮರದ ಬೆಳೆಗಳು ಮತ್ತು ಕಾಲಿಕ ಬೆಳೆಗಳ ಕೃಷಿಗೆ ಬದಲಾಯಿತು.<ref name="Remesh2010">{{cite book |author=Babu P. Remesh |title=Dynamics of Rural Labour: A Study of Small Holding Rubber Tappers in Kerala |url=https://books.google.com/books?id=uOyNsKXSa0gC&pg=PA52 |access-date=18 November 2012 |year=2010 |publisher=Concept Publishing Company |isbn=978-8180696602 |pages=52–}}</ref><ref name="Commission2008">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA66 |access-date=18 November 2012 |year=2008 |publisher=Academic Foundation |isbn=978-8171885947 |pages=66–}}</ref> ಕೃಷಿ ಕಾರ್ಮಿಕರ ಕೊರತೆ, ಭೂಮಿಯ ಹೆಚ್ಚಿನ ಬೆಲೆ ಮತ್ತು ಕಾರ್ಯಾಚರಣೆಯ ಹಿಡುವಳಿಗಳ ಅನಾರೋಗ್ಯಕರ ಗಾತ್ರದಿಂದಾಗಿ ಬೆಳೆಗಳ ಲಾಭದಾಯಕತೆಯು ಕುಸಿಯಿತು.<ref name="google9">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=66 |access-date=30 May 2015}}</ref> ಕೇರಳದಲ್ಲಿ ಕೇವಲ 27.3% ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿವೆ, ಇದು ಭಾರತದಲ್ಲಿ ಅತ್ಯಂತ ಕಡಿಮೆ ಪ್ರಮಾಣವಾಗಿದೆ.{{sfn|Chandran|2018|p=406}}
ಕೇರಳವು ಕರಿಮೆಣಸಿನ ರಾಷ್ಟ್ರೀಯ ಉತ್ಪಾದನೆಯ 97% ಅನ್ನು ಉತ್ಪಾದಿಸುತ್ತದೆ<ref name="Limca Book of Records">{{cite book |title=Limca Book of Records |url=https://books.google.com/books?id=Y-JtAAAAMAAJ |access-date=18 November 2012 |year=2001 |publisher=Bisleri Beverages Limited |page=97}}</ref> ಮತ್ತು ದೇಶದ [[ನೈಸರ್ಗಿಕ ರಬ್ಬರ್]]ನ 85% ರಷ್ಟಿದೆ.<ref name="google10">{{cite book |title=South Asia 2006 |url=https://books.google.com/books?id=YG8bAQAAMAAJ |access-date=18 November 2012 |year=2005 |publisher=Taylor & Francis |page=291 |isbn=978-1-85743-318-0}}</ref><ref name="Economic Affairs">{{cite book |title=Economic Affairs |url=https://books.google.com/books?id=StHsAAAAMAAJ |access-date=18 November 2012 |year=1998 |publisher=H. Roy |page=47}}</ref> [[ತೆಂಗು]], [[ಚಹಾ]], [[ಕಾಫಿ]], [[ಗೋಡಂಬಿ]], ಮತ್ತು ಮಸಾಲೆಗಳು—ಏಲಕ್ಕಿ, [[ವೆನಿಲ್ಲಾ]], [[ದಾಲ್ಚಿನ್ನಿ]], ಮತ್ತು [[ಜಾಯಿಕಾಯಿ]] ಪ್ರಮುಖ ಕೃಷಿ ಉತ್ಪನ್ನಗಳಾಗಿವೆ.<ref name="ChattopadhyayFranke2006" />{{rp|74}}<ref name="Newton">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT3 |access-date=18 November 2012 |publisher=Springwood emedia |isbn=978-1-4761-2308-0 |pages=3–}}</ref><ref name="B.L.MarkoseMarkose2007">{{cite book |author1=Rajan, S. & B.L.Markose |author2=Baby Lissy Markose |title=Propagation of Horticultural Crops: Vol.06. Horticulture Science Series |url=https://books.google.com/books?id=19zgbxw-YhYC&pg=PA212 |access-date=18 November 2012 |year=2007 |publisher=New India Publishing |isbn=978-8189422486 |pages=212–}}</ref><ref name="Pradhan2009">{{cite book |author=Pradhan |title=Retailing Management 3E |url=https://books.google.com/books?id=8y7Zb_D-_oYC&pg=PA256 |access-date=18 November 2012 |year=2009 |publisher=Tata McGraw-Hill Education |isbn=978-0-07-015256-4 |pages=256–}}</ref><ref name="PradeepkumarPradeep2008">{{cite book |author1=T. Pradeepkumar |author2=Kumar, Pradeep |title=Management of Horticultural Crops: Vol.11 Horticulture Science Series: In 2 Parts |url=https://books.google.com/books?id=VHmokNZXbHUC&pg=PA509 |access-date=18 November 2012 |year=2008 |publisher=New India Publishing |isbn=978-8189422493 |pages=509–}}</ref><ref name="OsellaOsella2000">{{cite book |author1=Filippo Osella |author2=Caroline Osella |title=Social Mobility In Kerala: Modernity and Identity in Conflict |url=https://books.google.com/books?id=rMRw0gTZSJwC&pg=PA235 |access-date=18 November 2012 |year=2000 |publisher=Pluto Press |isbn=978-0-7453-1693-2 |pages=235–}}</ref> [[ಭಾರತ]]ದ ರಫ್ತು ಗುಣಮಟ್ಟದ ಗೋಡಂಬಿ ಬೀಜಗಳಲ್ಲಿ ಸುಮಾರು 80% ಅನ್ನು [[ಕೊಲ್ಲಂ]]ನಲ್ಲಿ ತಯಾರಿಸಲಾಗುತ್ತದೆ.<ref>{{cite news |url=https://www.thehindu.com/news/national/kerala/cashew-sector-in-a-tailspin/article8767346.ece |title=Cashew sector in a tailspin |newspaper=The Hindu |access-date=24 June 2016 |archive-date=24 June 2016 |archive-url=https://web.archive.org/web/20160624004205/http://www.thehindu.com/news/national/kerala/cashew-sector-in-a-tailspin/article8767346.ece |url-status=live }}</ref> ಪ್ರಮುಖ ವಾಣಿಜ್ಯ ಬೆಳೆ [[ತೆಂಗು]] ಮತ್ತು ಕೇರಳವು ಭಾರತದಲ್ಲಿ ತೆಂಗಿನ ಕೃಷಿ ಪ್ರದೇಶದಲ್ಲಿ ಮೊದಲ ಸ್ಥಾನದಲ್ಲಿದೆ.{{sfn|Chandran|2018|p=407}} ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಏಲಕ್ಕಿ]]ಯಲ್ಲಿ ಸುಮಾರು 90% ಕೇರಳದಿಂದ ಬರುತ್ತದೆ.<ref name="eco" /> ಭಾರತವು ವಿಶ್ವದಲ್ಲಿ ಏಲಕ್ಕಿಯ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ.<ref name="eco" /> ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಕಾಫಿ]]ಯಲ್ಲಿ ಸುಮಾರು 20% ಕೇರಳದಿಂದ ಬರುತ್ತದೆ.{{sfn|Chandran|2018|p=409}} ಪ್ರಮುಖ ಕೃಷಿ ಪ್ರಧಾನ ಆಹಾರವೆಂದರೆ ಅಕ್ಕಿ, ವಿವಿಧ ಪ್ರಭೇದಗಳನ್ನು ವ್ಯಾಪಕವಾದ ಭತ್ತದ ಗದ್ದೆಗಳಲ್ಲಿ ಬೆಳೆಯಲಾಗುತ್ತದೆ.<ref name="VarshneyRzóska1976">{{cite book |author1=C.K. Varshney |author2=J. Rzóska |title=Aquatic Weeds in South East Asia |url=https://books.google.com/books?id=lW3fHiDjHNcC&pg=PA100 |access-date=18 November 2012 |year=1976 |publisher=Springer |isbn=978-9061935568 |pages=100–}}</ref> ಮನೆ ತೋಟಗಳು ಕೃಷಿ ವಲಯದ ಗಮನಾರ್ಹ ಭಾಗವನ್ನು ರೂಪಿಸಿದವು.<ref name="Dobbie2006">{{cite book |author=Aline Dobbie |title=India the Elephants Blessing |url=https://books.google.com/books?id=ckpEd4emnCkC&pg=PA123 |access-date=18 November 2012 |year=2006 |publisher=Melrose Press |isbn=978-1-905226-85-6 |pages=123–}}</ref>
=== ಮೀನುಗಾರಿಕೆ ===
{{convert|590|km|mi|lk=out|abbr=off}} ಕರಾವಳಿ ಪಟ್ಟಿಯೊಂದಿಗೆ,<ref>{{cite web |title=Kerala: Natural Resources |url=https://india.gov.in/knowindia/state_uts.php?id=70 |archive-url=https://web.archive.org/web/20111218084509/https://india.gov.in/knowindia/state_uts.php?id=70 |archive-date=18 December 2011 |publisher=Government of India |access-date=18 November 2012}}</ref> 400,000 ಹೆಕ್ಟೇರ್ ಒಳನಾಡಿನ ಜಲ ಸಂಪನ್ಮೂಲಗಳು<ref>{{cite web |title=Kerala: April 2012 |url=https://www.ibef.org/download/Kerala_060710.pdf |publisher=Indian Brand Equity Fund |access-date=18 November 2012 |archive-date=10 May 2013 |archive-url=https://web.archive.org/web/20130510151146/http://www.ibef.org/download/Kerala_060710.pdf |url-status=live }}</ref> ಮತ್ತು ಸರಿಸುಮಾರು 220,000 ಸಕ್ರಿಯ ಮೀನುಗಾರರು,<ref name="Commission1961">{{cite book |author=India. Planning Commission |title=Third five year plan |url=https://books.google.com/books?id=5_G5AAAAIAAJ |access-date=18 November 2012 |year=1961 |publisher=Manager of Publications |page=359}}</ref> ಕೇರಳವು ಭಾರತದ ಪ್ರಮುಖ ಮೀನು ಉತ್ಪಾದಕರಲ್ಲಿ ಒಂದಾಗಿದೆ.<ref name="google13">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA51 |access-date=18 November 2012 |year=2008 |publisher=Academic Foundation |isbn=978-8171885947 |page=51}}</ref> 2003–04 ರ ವರದಿಗಳ ಪ್ರಕಾರ, ಸುಮಾರು 11 ಲಕ್ಷ (1.1 ಮಿಲಿಯನ್) ಜನರು ಮೀನುಗಾರಿಕೆ ಮತ್ತು ಒಣಗಿಸುವಿಕೆ, ಸಂಸ್ಕರಣೆ, ಪ್ಯಾಕೇಜಿಂಗ್, ರಫ್ತು ಮತ್ತು ಮೀನುಗಾರಿಕೆ ಸಾಗಣೆಯಂತಹ ಸಂಯೋಜಿತ ಚಟುವಟಿಕೆಗಳಿಂದ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ. 2003–04 ರಲ್ಲಿ ವಲಯದ ವಾರ್ಷಿಕ ಇಳುವರಿಯನ್ನು 6,08,000 ಟನ್ ಎಂದು ಅಂದಾಜಿಸಲಾಗಿದೆ.<ref>{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=51 |access-date=30 May 2015}}</ref> ಇದು ರಾಜ್ಯದ ಒಟ್ಟು ಆರ್ಥಿಕತೆಯ ಸುಮಾರು 3% ರಷ್ಟು ಕೊಡುಗೆ ನೀಡುತ್ತದೆ. 2006 ರಲ್ಲಿ, ಒಟ್ಟು ಭಾರತೀಯ ಸಮುದ್ರ ಮೀನುಗಾರಿಕೆ ಇಳುವರಿಯಲ್ಲಿ ಸುಮಾರು 22% ಕೇರಳದಿಂದ ಬಂದಿದೆ.<ref name="Handbook" /> ನೈಋತ್ಯ ಮಾನ್ಸೂನ್ ಸಮಯದಲ್ಲಿ, ತೀರದ ಉದ್ದಕ್ಕೂ ಅಮಾನತುಗೊಂಡ ಮಣ್ಣಿನ ಬ್ಯಾಂಕ್ ಬೆಳೆಯುತ್ತದೆ, ಇದು ಪ್ರಶಾಂತ ಸಮುದ್ರದ ನೀರಿಗೆ ಕಾರಣವಾಗುತ್ತದೆ, ಇದು ಮೀನುಗಾರಿಕಾ ಉದ್ಯಮದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ವಿದ್ಯಮಾನವನ್ನು ಸ್ಥಳೀಯವಾಗಿ ''[[ಚಕರ]]'' ಎಂದು ಕರೆಯಲಾಗುತ್ತದೆ.<ref name="Gulati1984">{{cite book |author=Leela Gulati |title=Fisherwomen on the Kerala Coast: Demographic and Socio-Economic Impact of a Fisheries Development Project |url=https://archive.org/details/fisherwomenonker0000gula |url-access=registration |access-date=18 November 2012 |year=1984 |publisher=International Labour Organization |isbn=978-9221036265 |page=[https://archive.org/details/fisherwomenonker0000gula/page/103 103]}}</ref><ref name="Journal of Kerala Studies">{{cite book |title=Journal of Kerala Studies |url=https://books.google.com/books?id=EgSSAAAAIAAJ |access-date=18 November 2012 |year=1987 |publisher=University of Kerala. |page=201}}</ref> ಜಲಗಳು ವಿವಿಧ ರೀತಿಯ ಮೀನುಗಳನ್ನು ಒದಗಿಸುತ್ತವೆ: [[ಪೆಲಾಜಿಕ್ ಮೀನು|ಪೆಲಾಜಿಕ್ ಪ್ರಭೇದಗಳು]]; 59%, [[ಡೆಮರ್ಸಲ್ ಮೀನು|ಡೆಮರ್ಸಲ್ ಪ್ರಭೇದಗಳು]]; 23%, [[ಕಠಿಣಚರ್ಮಿಗಳು]], [[ಮೃದ್ವಂಗಿಗಳು]] ಮತ್ತು ಇತರವುಗಳು 18% ರಷ್ಟಿವೆ.<ref name="Handbook">{{cite book |title=Handbook of Marine Fisheries Conservation and Management |url=https://archive.org/details/handbookmarinefi00graf |url-access=limited |publisher=Oxford University Press |author1=R. Quentin Grafton |author2=Ray Hilborn |author3=Dale Squires |year=2009 |pages=[https://archive.org/details/handbookmarinefi00graf/page/n24 10]–12 |isbn=978-0-19-537028-7}}</ref> ಸುಮಾರು 1,050,000 (1.050 ಮಿಲಿಯನ್) ಮೀನುಗಾರರು 1999–2000 ರ ಅಂದಾಜಿನಂತೆ 668,000 ಟನ್ ವಾರ್ಷಿಕ ಕ್ಯಾಚ್ ಅನ್ನು ಎಳೆಯುತ್ತಾರೆ; 222 ಮೀನುಗಾರಿಕಾ ಗ್ರಾಮಗಳು {{convert|590|km|adj=on|abbr=off}} ಕರಾವಳಿಯ ಉದ್ದಕ್ಕೂ ಹರಡಿವೆ. ಇನ್ನೂ 113 ಮೀನುಗಾರಿಕಾ ಗ್ರಾಮಗಳು ಒಳನಾಡಿನಲ್ಲಿ ಹರಡಿವೆ.{{citation needed|date=October 2025}}
== ಸಾರಿಗೆ ==
=== ರಸ್ತೆಗಳು ===
{{Main|ಕೇರಳದ ರಸ್ತೆಗಳು}}
{{See also|ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ}}{{multiple image
<!-- Layout parameters -->| align = <!-- right (default), left, centre, none -->
| direction = vertical
| width = 240
| image1 = Thrissur sixlane.jpg
| caption1 = [[ತೃಶೂರ್]] ನಿಂದ [[ವಡಕ್ಕೆಂಚೇರಿ]] ವರೆಗಿನ [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ನ ಆರು ಪಥದ ವಿಭಾಗ
<!--image 2-->}}
ಕೇರಳವು {{convert|331904|km|mi}} ರಸ್ತೆಗಳನ್ನು ಹೊಂದಿದೆ, ಇದು ಭಾರತದ ಒಟ್ಟು ರಸ್ತೆಗಳ 5.6% ರಷ್ಟಿದೆ.<ref name="eco" /><ref name="road">{{Cite book |title=Ministry Annual Report (2019–20) |publisher=Ministry of Road Transport & Highways Transport Research Wing, Government of India |year=2020 |location=New Delhi |url=https://morth.nic.in/sites/default/files/Ministry%20Annual%20Report_2019-20.pdf |archive-date=28 October 2021 |access-date=20 June 2021 |archive-url=https://web.archive.org/web/20211028140933/https://morth.nic.in/sites/default/files/Ministry%20Annual%20Report_2019-20.pdf |url-status=live }}</ref> ಇದು ಪ್ರತಿ ಸಾವಿರ ಜನರಿಗೆ ಸುಮಾರು {{convert|9.94|km|mi|2}} ರಸ್ತೆ ಎಂದು ಅನುವಾದಿಸುತ್ತದೆ, ಇದು ದೇಶದ ಸರಾಸರಿ {{convert|4.87|km|mi|2}} ಗೆ ಹೋಲಿಸಿದರೆ.<ref name="eco" /><ref name="road" /> ಕೇರಳದ ರಸ್ತೆಗಳು {{convert|1812|km|mi}} ರಾಷ್ಟ್ರೀಯ ಹೆದ್ದಾರಿಯನ್ನು ಒಳಗೊಂಡಿವೆ; ರಾಷ್ಟ್ರದ ಒಟ್ಟು 1.6%, {{convert|4342|km|mi}} ರಾಜ್ಯ ಹೆದ್ದಾರಿ; ರಾಷ್ಟ್ರದ ಒಟ್ಟು 2.5%, {{convert|27470|km|mi}} ಜಿಲ್ಲಾ ರಸ್ತೆಗಳು; ರಾಷ್ಟ್ರದ ಒಟ್ಟು 4.7%, {{convert|33201|km|mi}} ನಗರ (ಪುರಸಭೆ) ರಸ್ತೆಗಳು; ರಾಷ್ಟ್ರದ ಒಟ್ಟು 6.3%, ಮತ್ತು {{convert|158775|km|mi}} ಗ್ರಾಮೀಣ ರಸ್ತೆಗಳು; ರಾಷ್ಟ್ರದ ಒಟ್ಟು 3.8%.<ref name=":16-17">{{Cite book |title=Basic Road Statistics of India (2016–17) |publisher=Ministry of Road Transport & Highways Transport Research Wing, Government of India |year=2019 |location=New Delhi |pages=7–18 |url=https://morth.nic.in/sites/default/files/Basic%20_Road_Statics_of_India.pdf |archive-date=28 August 2021 |access-date=25 November 2020 |archive-url=https://web.archive.org/web/20210828082929/https://www.morth.nic.in/sites/default/files/Basic%20_Road_Statics_of_India.pdf |url-status=live }}</ref> [[ಕೋಟ್ಟಯಂ ಜಿಲ್ಲೆ|ಕೋಟ್ಟಯಂ]] [[ಕೇರಳದ ಜಿಲ್ಲೆಗಳ ಪಟ್ಟಿ|ಕೇರಳದ ಜಿಲ್ಲೆಗಳಲ್ಲಿ]] ಅತಿ ಉದ್ದದ ರಸ್ತೆಗಳನ್ನು ಹೊಂದಿದ್ದರೆ, [[ವಯನಾಡು]] ಕಡಿಮೆ ಪ್ರಮಾಣವನ್ನು ಹೊಂದಿದೆ.{{sfn|Chandran|2018|p=422}} ಕೇರಳದ ಪಶ್ಚಿಮ ಕರಾವಳಿಯ ಹೆಚ್ಚಿನ ಭಾಗವು [[ರಾಷ್ಟ್ರೀಯ ಹೆದ್ದಾರಿ 66 (ಭಾರತ)|NH 66]] (ಹಿಂದೆ NH 17 ಮತ್ತು 47) ಮೂಲಕ ಪ್ರವೇಶಿಸಬಹುದು; ಮತ್ತು ಪೂರ್ವ ಭಾಗವು ರಾಜ್ಯ ಹೆದ್ದಾರಿಗಳ ಮೂಲಕ ಪ್ರವೇಶಿಸಬಹುದು.<ref name="Kerala PWD">{{cite web |title=National Highways in Kerala |url=https://www.keralapwd.gov.in/getPage.php%3Fpage%3DNH%2520in%2520Kerala%26pageId%3D301&ved=2ahUKEwjRh7jHod7YAhWFmZQKHWSeAeoQFjAOegQIBxAB&usg=AOvVaw15WM6wG3ueKFD1qj28WEps |work=Kerala Public Works Department |publisher=Government of Kerala}} {{dead link|date=September 2019 |bot=InternetArchiveBot |fix-attempted=yes }}</ref> ಬೆಟ್ಟ ಮತ್ತು ಕರಾವಳಿ ಹೆದ್ದಾರಿಗಳಿಗೆ ಹೊಸ ಯೋಜನೆಗಳನ್ನು ಇತ್ತೀಚೆಗೆ [[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ|KIIFB]] ಅಡಿಯಲ್ಲಿ ಘೋಷಿಸಲಾಯಿತು.<ref>{{cite news |title=Coastal, Hill Highways to become a reality |url=https://www.thehindu.com/news/national/kerala/coastal-hill-highways-to-become-a-reality/article19262450.ece |date=12 July 2017 |newspaper=The Hindu |access-date=12 February 2019 |archive-date=15 April 2021 |archive-url=https://web.archive.org/web/20210415092848/https://www.thehindu.com/news/national/kerala/coastal-hill-highways-to-become-a-reality/article19262450.ece |url-status=live }}</ref> ಅತಿ ಉದ್ದದ ರಸ್ತೆ ({{convert|1622|km|mi}}) ಹೊಂದಿರುವ ರಾಷ್ಟ್ರೀಯ ಹೆದ್ದಾರಿ 66, [[ಕನ್ಯಾಕುಮಾರಿ]]ಯನ್ನು [[ಮುಂಬೈ]]ಗೆ ಸಂಪರ್ಕಿಸುತ್ತದೆ; ಇದು [[ಕಾಸರಗೋಡು|ಕಾಸರಗೋಡಿನ]] [[ತಲಪಾಡಿ]] ಮೂಲಕ ಕೇರಳವನ್ನು ಪ್ರವೇಶಿಸುತ್ತದೆ ಮತ್ತು [[ಕಣ್ಣೂರು]], [[ಕೋಝಿಕೋಡ್]], [[ಮಲಪ್ಪುರಂ]], [[ಗುರುವಾಯೂರು]], [[ಕೊಚ್ಚಿ]], [[ಆಲಪ್ಪುಳ]], [[ಕೊಲ್ಲಂ]], [[ತಿರುವನಂತಪುರ]] ಮೂಲಕ ಹಾದುಹೋಗುವ ಮೊದಲು [[ತಮಿಳುನಾಡು]] ಪ್ರವೇಶಿಸುತ್ತದೆ.<ref name="Kerala PWD" /> [[ಪಾಲಕ್ಕಾಡ್ ಜಿಲ್ಲೆ]]ಯನ್ನು ಸಾಮಾನ್ಯವಾಗಿ ಕೇರಳದ ಪ್ರವೇಶದ್ವಾರ ಎಂದು ಕರೆಯಲಾಗುತ್ತದೆ, ಪಶ್ಚಿಮ ಘಟ್ಟಗಳಲ್ಲಿ ಪಾಲಕ್ಕಾಡ್ ಅಂತರದ ಉಪಸ್ಥಿತಿಯಿಂದಾಗಿ, ಅದರ ಮೂಲಕ ಕೇರಳದ ಉತ್ತರ ([[ಮಲಬಾರ್ ಪ್ರದೇಶ|ಮಲಬಾರ್]]) ಮತ್ತು ದಕ್ಷಿಣ (ತಿರುವಾಂಕೂರು) ಭಾಗಗಳು ರಸ್ತೆ ಮತ್ತು ರೈಲು ಮೂಲಕ ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಿವೆ. ರಾಜ್ಯದ ಅತಿದೊಡ್ಡ ತಪಾಸಣಾ ಕೇಂದ್ರ, [[ವಾಲಯಾರ್]], [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ರಲ್ಲಿದೆ, ಕೇರಳ ಮತ್ತು [[ತಮಿಳುನಾಡು]] ನಡುವಿನ ಗಡಿ ಪಟ್ಟಣದಲ್ಲಿ, ಅದರ ಮೂಲಕ ದೊಡ್ಡ ಪ್ರಮಾಣದ ಸಾರ್ವಜನಿಕ ಮತ್ತು ವಾಣಿಜ್ಯ ಸಾರಿಗೆಯು ಕೇರಳದ ಉತ್ತರ ಮತ್ತು ಮಧ್ಯ ಜಿಲ್ಲೆಗಳನ್ನು ತಲುಪುತ್ತದೆ.<ref>{{cite web |url=https://www.keralatourism.org/districts/palakkad/ |title=District of Palakkad – the granary of Kerala, Silent Valley National Park, Nelliyampathy |publisher=keralatourism.org |access-date=30 May 2015 |archive-date=15 April 2021 |archive-url=https://web.archive.org/web/20210415114106/https://www.keralatourism.org/districts/palakkad/ |url-status=live }}</ref>
[[ಸಾರ್ವಜನಿಕ ಕಾರ್ಯಗಳ ಇಲಾಖೆ (ಕೇರಳ)|ಸಾರ್ವಜನಿಕ ಕಾರ್ಯಗಳ ಇಲಾಖೆ]] [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|ರಾಜ್ಯ ಹೆದ್ದಾರಿ ವ್ಯವಸ್ಥೆ]] ಮತ್ತು ಪ್ರಮುಖ ಜಿಲ್ಲಾ ರಸ್ತೆಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ.<ref>{{cite web |title=About us |url=https://www.keralapwd.gov.in/getPage.php?page=About%20Us&pageId=256&link=About%20PWD |archive-url=https://web.archive.org/web/20101201055142/https://www.keralapwd.gov.in/getPage.php?page=About%20Us&pageId=256&link=About%20PWD |url-status=dead |archive-date=1 December 2010 |work=Kerala Public Works Department |publisher=Government of Kerala |access-date=18 November 2012}}</ref> ಕೇರಳ ರಾಜ್ಯ ಸಾರಿಗೆ ಯೋಜನೆ (KSTP), ಇದು [[GIS]]-ಆಧಾರಿತ ರಸ್ತೆ ಮಾಹಿತಿ ಮತ್ತು ನಿರ್ವಹಣಾ ಯೋಜನೆಯನ್ನು (RIMS) ಒಳಗೊಂಡಿದೆ, ಕೇರಳದ ರಾಜ್ಯ ಹೆದ್ದಾರಿಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಕೆಲವು ಪ್ರಮುಖ ಜಿಲ್ಲಾ ರಸ್ತೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ.<ref>{{Cite news |author=Kumar VS |title=Kerala State transport project second phase to be launched next month |work=The Hindu |date=20 January 2006 |access-date=11 November 2007 |url=https://www.thehindubusinessline.com/2006/01/20/stories/2006012002272100.htm |archive-url=https://web.archive.org/web/20070304181402/https://www.thehindubusinessline.com/2006/01/20/stories/2006012002272100.htm |archive-date=4 March 2007}}</ref><ref>{{cite web |author=Kumar VS |title=Institutional Strengthening Action Plan (ISAP) |work=Kerala Public Works Department |publisher=Government of Kerala |year=2003 |access-date=11 November 2007 |url=https://www.keralapwd.gov.in/pwd/public/isap.jsp |archive-url=https://web.archive.org/web/20080512054304/https://www.keralapwd.gov.in/pwd/public/isap.jsp |archive-date=12 May 2008}}</ref> ಕೇರಳದಲ್ಲಿ ಸಾರಿಗೆಯು ಪ್ರತಿ ವರ್ಷ 10-11% ದರದಲ್ಲಿ ಬೆಳೆಯುತ್ತಿದೆ, ಇದು ಹೆಚ್ಚಿನ ಸಾರಿಗೆ ಮತ್ತು ರಸ್ತೆಗಳ ಮೇಲಿನ ಒತ್ತಡಕ್ಕೆ ಕಾರಣವಾಗಿದೆ. ಸಾರಿಗೆ ಸಾಂದ್ರತೆಯು ರಾಷ್ಟ್ರೀಯ ಸರಾಸರಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ, ಇದು ರಾಜ್ಯದ ಹೆಚ್ಚಿನ ಜನಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ. ಕೇರಳದ ವಾರ್ಷಿಕ ಒಟ್ಟು ರಸ್ತೆ ಅಪಘಾತಗಳು ರಾಷ್ಟ್ರದಲ್ಲಿ ಅತಿ ಹೆಚ್ಚಿನದಾಗಿದೆ. ಅಪಘಾತಗಳು ಮುಖ್ಯವಾಗಿ ಕಿರಿದಾದ ರಸ್ತೆಗಳು ಮತ್ತು ಅಜಾಗರೂಕ ಚಾಲನೆಯ ಪರಿಣಾಮವಾಗಿದೆ.<ref>{{Cite news |author=Kumar KG |title=Accidentally notorious |work=The Hindu |date=22 September 2003 |access-date=11 November 2007 |url=https://www.thehindubusinessline.in/2003/09/22/stories/2003092201111300.htm |archive-date=10 August 2011 |archive-url=https://web.archive.org/web/20110810210809/http://www.thehindubusinessline.in/2003/09/22/stories/2003092201111300.htm |url-status=live }}</ref> ಕೇರಳದ ರಾಷ್ಟ್ರೀಯ ಹೆದ್ದಾರಿಗಳು ದೇಶದಲ್ಲಿ ಅತ್ಯಂತ ಕಿರಿದಾದವುಗಳಲ್ಲಿ ಸೇರಿವೆ ಮತ್ತು ಮುಂದಿನ ಭವಿಷ್ಯಕ್ಕೂ ಹಾಗೆಯೇ ಉಳಿಯುತ್ತವೆ, ಏಕೆಂದರೆ ರಾಜ್ಯ ಸರ್ಕಾರವು ಕಿರಿದಾದ ರಾಷ್ಟ್ರೀಯ ಹೆದ್ದಾರಿಗಳನ್ನು ಅನುಮತಿಸುವ ವಿನಾಯಿತಿಯನ್ನು ಪಡೆದುಕೊಂಡಿದೆ. ಕೇರಳದಲ್ಲಿ, ಹೆದ್ದಾರಿಗಳು {{convert|45|m|abbr=off}} ಅಗಲವಾಗಿವೆ. ಇತರ ರಾಜ್ಯಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ದರ್ಜೆಯಿಂದ ಪ್ರತ್ಯೇಕಿಸಲ್ಪಟ್ಟಿವೆ, {{convert|60|m|abbr=off}} ಅಗಲವಾಗಿದ್ದು ಕನಿಷ್ಠ ನಾಲ್ಕು ಪಥಗಳನ್ನು ಹೊಂದಿವೆ, ಜೊತೆಗೆ 6 ಅಥವಾ 8-ಪಥದ ಪ್ರವೇಶ-ನಿಯಂತ್ರಿತ ಎಕ್ಸ್ಪ್ರೆಸ್ವೇಗಳನ್ನು ಹೊಂದಿವೆ.<ref>{{cite web |url=https://www.indianexpress.com/news/kerala-parties-finally-toe-nhai-line-of-45m-wide-highways/661729/ |title=Kerala parties finally toe NHAI line of 45-m wide highways |work=Indian Express |date=18 August 2010 |access-date=25 September 2013}}</ref><ref>{{cite web |url=https://www.rediff.com/business/slide-show/slide-show-1-indias-13-super-highways/20110705.htm |title=Check out India's 13 super expressways |work=Rediff.com |date=5 July 2011 |access-date=25 September 2013 |archive-date=28 September 2013 |archive-url=https://web.archive.org/web/20130928024436/http://www.rediff.com/business/slide-show/slide-show-1-indias-13-super-highways/20110705.htm |url-status=live }}</ref> ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೇರಳ ಸರ್ಕಾರಕ್ಕೆ, ಕೇರಳದಲ್ಲಿ ಉತ್ತಮ ಹೆದ್ದಾರಿಗಳಿಗೆ ರಾಜಕೀಯ ಬದ್ಧತೆಯ ಕೊರತೆಯಿರುವುದರಿಂದ ಹೆದ್ದಾರಿ ಅಭಿವೃದ್ಧಿಯಲ್ಲಿ ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಬೆದರಿಕೆ ಹಾಕಿದೆ.<ref>{{Cite news |title=Kerala against development of five NHs |url=https://www.thehindu.com/news/national/kerala/kerala-against-development-of-five-nhs/article4555024.ece |url-access=subscription |newspaper=[[The Hindu]] |date=28 March 2013 |access-date=29 September 2024 |archive-date=4 December 2024 |archive-url=https://web.archive.org/web/20241204153945/https://www.thehindu.com/news/national/kerala/kerala-against-development-of-five-nhs/article4555024.ece |url-status=live }}</ref> {{As of|2013}}, ಕೇರಳವು ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ದರವನ್ನು ಹೊಂದಿತ್ತು, ಹೆಚ್ಚಿನ ಮಾರಣಾಂತಿಕ ಅಪಘಾತಗಳು ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ.<ref>{{Cite news |url=https://www.thehindu.com/todays-paper/tp-national/tp-kerala/states-troubled-highways-a-shocking-revelation-for-centre/article4865464.ece |title=State's troubled highways a shocking revelation for Centre |journal=The Hindu |date=30 June 2013 |access-date=25 September 2013 |author=Staff Reporter}}</ref>
=== ರೈಲುಮಾರ್ಗಗಳು ===
{{Main|ಕೇರಳದ ರೈಲು ನಿಲ್ದಾಣಗಳ ಪಟ್ಟಿ}}
{{See also|ಕೊಚ್ಚಿ ಮೆಟ್ರೋ}}
[[ಭಾರತೀಯ ರೈಲ್ವೆ]]ಯ [[ದಕ್ಷಿಣ ರೈಲ್ವೆ]] ವಲಯವು [[ಇಡುಕ್ಕಿ ಜಿಲ್ಲೆ|ಇಡುಕ್ಕಿ]] ಮತ್ತು [[ವಯನಾಡು ಜಿಲ್ಲೆ|ವಯನಾಡು]] ಎತ್ತರದ ಜಿಲ್ಲೆಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರಮುಖ ಪಟ್ಟಣಗಳು ಮತ್ತು ನಗರಗಳನ್ನು ಸಂಪರ್ಕಿಸುವ ರಾಜ್ಯದ ಎಲ್ಲಾ ರೈಲು ಮಾರ್ಗಗಳನ್ನು ನಿರ್ವಹಿಸುತ್ತದೆ.<ref>{{cite web |title=Introduction |url=https://khsrcl.com/downloads/ch-1.pdf |publisher=Delhi Metro Rail Corporation |access-date=18 November 2012 |url-status=dead |archive-url=https://web.archive.org/web/20120906213234/https://khsrcl.com/downloads/ch-1.pdf |archive-date=6 September 2012}}</ref> ರಾಜ್ಯದ ರೈಲು ಜಾಲವು [[ದಕ್ಷಿಣ ರೈಲ್ವೆ ವಲಯ|ದಕ್ಷಿಣ ರೈಲ್ವೆಯ]] ಆರು ವಿಭಾಗಗಳಲ್ಲಿ ಎರಡರ ನಿಯಂತ್ರಣದಲ್ಲಿದೆ; [[ತಿರುವನಂತಪುರ]] ಮೂಲಸ್ಥಾನವನ್ನು ಹೊಂದಿರುವ [[ತಿರುವನಂತಪುರ ರೈಲ್ವೆ ವಿಭಾಗ]] ಮತ್ತು [[ಪಾಲಕ್ಕಾಡ್]] ಮೂಲಸ್ಥಾನವನ್ನು ಹೊಂದಿರುವ [[ಪಾಲಕ್ಕಾಡ್ ರೈಲ್ವೆ ವಿಭಾಗ]].<ref>{{cite web |title=The Zonal Dream Of Railway Kerala |url=https://www.yentha.com/news/view/features/the-zonal-dream-of-railway-kerala |work=yentha.com |access-date=18 November 2012 |archive-url=https://web.archive.org/web/20121025033001/https://www.yentha.com/news/view/features/the-zonal-dream-of-railway-kerala |archive-date=25 October 2012 |url-status=dead}}</ref> [[ತಿರುವನಂತಪುರ ಸೆಂಟ್ರಲ್]] (TVC) ರಾಜ್ಯದ ಅತಿ ಜನನಿಬಿಡ ರೈಲು ನಿಲ್ದಾಣವಾಗಿದೆ.<ref>{{Cite news |url=https://www.thehindu.com/todays-paper/tp-national/tp-kerala/article1807051.ece |title=Thiruvananthapuram Central to be made a world-class station |date=7 March 2007 |newspaper=The Hindu |language=en-IN |issn=0971-751X |access-date=8 May 2016}}</ref> ಕೇರಳದ ಪ್ರಮುಖ ರೈಲು ನಿಲ್ದಾಣಗಳು:
{{columns-list|colwidth=19em|
* [[ತಿರುವನಂತಪುರ ಸೆಂಟ್ರಲ್]] (TVC)
* [[ಎರ್ನಾಕುಳಂ ಜಂಕ್ಷನ್ ರೈಲು ನಿಲ್ದಾಣ|ಎರ್ನಾಕುಳಂ ಜಂಕ್ಷನ್ (ದಕ್ಷಿಣ)]] (ERS)
* [[ಕೋಝಿಕೋಡ್ ರೈಲು ನಿಲ್ದಾಣ|ಕೋಝಿಕೋಡ್]] (CLT)
* [[ಕೊಲ್ಲಂ ಜಂಕ್ಷನ್ ರೈಲು ನಿಲ್ದಾಣ|ಕೊಲ್ಲಂ ಜಂಕ್ಷನ್]] (QLN)
* [[ತೃಶೂರ್ ರೈಲು ನಿಲ್ದಾಣ|ತೃಶೂರ್]] (TCR)
* [[ಪಾಲಕ್ಕಾಡ್ ಜಂಕ್ಷನ್]] (PGT)
* [[ಕಣ್ಣೂರು ರೈಲು ನಿಲ್ದಾಣ|ಕಣ್ಣೂರು]] (CAN)
* [[ಶೊರಾನೂರು ಜಂಕ್ಷನ್]] (SRR)
* [[ಎರ್ನಾಕುಳಂ ಟೌನ್]] (ಉತ್ತರ) (ERN)
* [[ಕೋಟ್ಟಯಂ ರೈಲು ನಿಲ್ದಾಣ|ಕೋಟ್ಟಯಂ]] (KTYM)
* [[ಚೆಂಗನ್ನೂರು ರೈಲು ನಿಲ್ದಾಣ|ಚೆಂಗನ್ನೂರು]] (CNGR)
* [[ಆಲಪ್ಪುಳ ರೈಲು ನಿಲ್ದಾಣ|ಆಲಪ್ಪುಳ]] (ALLP)
* [[ತಿರುವನಂತಪುರ ಉತ್ತರ ರೈಲು ನಿಲ್ದಾಣ|ತಿರುವನಂತಪುರ ಉತ್ತರ]] (TVCN)
* [[ಕಾಯಂಕುಲಂ]] ಜಂಕ್ಷನ್ (KYJ)
* [[ತಿರೂರ್ ರೈಲು ನಿಲ್ದಾಣ|ತಿರೂರ್]] (TIR)
* [[ಕಾಸರಗೋಡು ರೈಲು ನಿಲ್ದಾಣ|ಕಾಸರಗೋಡು]] (KGQ)
* [[ಆಲುವಾ ರೈಲು ನಿಲ್ದಾಣ|ಆಲುವಾ]] (AWY)
* [[ತಲಶ್ಶೇರಿ]] (TLY)}}
=== ವಿಮಾನ ನಿಲ್ದಾಣಗಳು ===
{{Main|ಕೇರಳ ರಾಜ್ಯದ ವಿಮಾನ ನಿಲ್ದಾಣಗಳ ಪಟ್ಟಿ}}
[[File:Cochin International Airport Limited.jpg|right|thumb|[[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]], ರಾಜ್ಯದ ಅತಿ ಜನನಿಬಿಡ ವಿಮಾನ ನಿಲ್ದಾಣವು ಸೌರಶಕ್ತಿಯಿಂದ ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ]]
ಕೇರಳವು ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ: {{Cast listing|
* [[ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
}}
ಮದ್ರಾಸ್ ಪ್ರೆಸಿಡೆನ್ಸಿಯಡಿಯಲ್ಲಿ ಸ್ಥಾಪಿಸಲಾದ [[ಕೊಲ್ಲಂ ವಿಮಾನ ನಿಲ್ದಾಣ]]ವು ನಂತರ ಮುಚ್ಚಲ್ಪಟ್ಟಿತು, ಇದು ಕೇರಳದ ಮೊದಲ ವಿಮಾನ ನಿಲ್ದಾಣವಾಗಿತ್ತು.<ref>{{Cite news |url=https://www.thehindu.com/todays-paper/tp-national/tp-kerala/article252269.ece |title=Aviation school proposal evokes mixed response |journal=The Hindu |date=8 June 2009 |access-date=21 July 2015 |archive-date=20 December 2016 |archive-url=https://web.archive.org/web/20161220075251/http://www.thehindu.com/todays-paper/tp-national/tp-kerala/article252269.ece |url-status=live }}</ref> [[ಕಣ್ಣೂರು]] 1935 ರಷ್ಟು ಹಿಂದೆಯೇ ವಾಣಿಜ್ಯ ವಿಮಾನಯಾನಕ್ಕೆ ಬಳಸಲ್ಪಟ್ಟ ವಿಮಾನ ನಿಲ್ದಾಣವನ್ನು ಹೊಂದಿತ್ತು, [[ಟಾಟಾ ಗ್ರೂಪ್|ಟಾಟಾ]] ಏರ್ಲೈನ್ಸ್ [[ಮುಂಬೈ]] ಮತ್ತು ತಿರುವನಂತಪುರ ನಡುವೆ ಸಾಪ್ತಾಹಿಕ ವಿಮಾನಗಳನ್ನು ನಡೆಸುತ್ತಿತ್ತು – [[ಗೋವಾ]] ಮತ್ತು ಕಣ್ಣೂರಿನಲ್ಲಿ ನಿಲ್ಲುತ್ತಿತ್ತು.<ref>{{cite news |author=Sudhakaran, P |url=https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |title=Kannur flew, way before its first airport |newspaper=The Times of India |date=14 September 2015 |publisher=Timesofindia.indiatimes.com |access-date=13 November 2020 |url-status=live |archive-url=https://web.archive.org/web/20170518022943/https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |archive-date=18 May 2017}}</ref> ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ವಿಮಾನ ನಿಲ್ದಾಣ ಪ್ರಾಧಿಕಾರ]]ದಿಂದ ನಿರ್ವಹಿಸಲ್ಪಡುತ್ತದೆ, ಇದು ದಕ್ಷಿಣ ಭಾರತದ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. 1988 ರಲ್ಲಿ ತೆರೆಯಲ್ಪಟ್ಟ [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ವು ಕೇರಳದ ಎರಡನೇ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣ ಮತ್ತು [[ಮಲಬಾರ್ ಪ್ರದೇಶ|ಮಲಬಾರ್ ಪ್ರದೇಶದಲ್ಲಿ]] ಅತ್ಯಂತ ಹಳೆಯದಾಗಿದೆ.<ref>{{cite news |url=https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |work=The Times of India |title=Silver jubilee does not bring cheer to Karipur airport users |date=2 April 2012 |archive-date=4 June 2021 |access-date=7 February 2022 |archive-url=https://web.archive.org/web/20210604110846/https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಜ್ಯದಲ್ಲಿ ಅತಿ ಜನನಿಬಿಡವಾಗಿದೆ ಮತ್ತು [[ಭಾರತದ ಅತಿ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ|ದೇಶದಲ್ಲಿ ಏಳನೇ ಅತಿ ಜನನಿಬಿಡವಾಗಿದೆ]]. ಇದು [[CIAL ಸೌರಶಕ್ತಿ ಯೋಜನೆ|ಸೌರಶಕ್ತಿಯಿಂದ]] ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ<ref name="BBC">{{cite news |last=Menon |first=Supriya |url=https://www.bbc.com/news/world-asia-india-34421419 |title=How is the world's first solar-powered airport faring? – BBC News |publisher=Bbc.com |date=9 October 2015 |access-date=21 December 2018 |work=BBC News |archive-date=25 May 2023 |archive-url=https://web.archive.org/web/20230525214353/https://www.bbc.com/news/world-asia-india-34421419 |url-status=live }}</ref> ಮತ್ತು [[ಸಂಯುಕ್ತ ರಾಷ್ಟ್ರಗಳು]] ಸ್ಥಾಪಿಸಿದ ಅತ್ಯುನ್ನತ ಪರಿಸರ ಗೌರವವಾದ [[ಚಾಂಪಿಯನ್ಸ್ ಆಫ್ ದಿ ಅರ್ಥ್|ಚಾಂಪಿಯನ್ ಆಫ್ ದಿ ಅರ್ಥ್]] ಪ್ರಶಸ್ತಿಯನ್ನು ಗೆದ್ದುಕೊಂಡಿದೆ.<ref name="UN">{{cite news |url=https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |title=CIAL chosen for UN environmental honour |newspaper=[[The New Indian Express]] |date=26 July 2018 |archive-date=7 April 2023 |access-date=7 February 2022 |archive-url=https://web.archive.org/web/20230407102227/https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಪಬ್ಲಿಕ್ ಲಿಮಿಟೆಡ್ ಕಂಪನಿ]]ಯಾಗಿ ಸೇರಿಸಲ್ಪಟ್ಟ ಮೊದಲ ಭಾರತೀಯ ವಿಮಾನ ನಿಲ್ದಾಣವಾಗಿದೆ; ಇದನ್ನು 30 ದೇಶಗಳ ಸುಮಾರು 10,000 [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಅನಿವಾಸಿ ಭಾರತೀಯರು]] ಹಣಕಾಸು ಒದಗಿಸಿದ್ದಾರೆ.<ref>{{Cite news |title=The three airports in Kerala can be in business without affecting each other |publisher=[[Rediff.com|Rediff]] |date=6 December 1999 |access-date=11 November 2007 |url=https://www.rediff.com/business/1999/dec/06inter.htm |archive-date=20 January 2008 |archive-url=https://web.archive.org/web/20080120015042/http://www.rediff.com/business/1999/dec/06inter.htm |url-status=live }}</ref>
ನಾಗರಿಕ ವಿಮಾನ ನಿಲ್ದಾಣಗಳ ಜೊತೆಗೆ, [[ಕೊಚ್ಚಿ]] [[INS ಗರುಡ]] ಎಂಬ ನೌಕಾ ವಿಮಾನ ನಿಲ್ದಾಣವನ್ನು ಹೊಂದಿದೆ. ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಭಾರತೀಯ ವಾಯುಪಡೆ]]ಯ ದಕ್ಷಿಣ ವಾಯು ಕಮಾಂಡ್ನೊಂದಿಗೆ ನಾಗರಿಕ ಸೌಲಭ್ಯಗಳನ್ನು ಹಂಚಿಕೊಳ್ಳುತ್ತದೆ. ಈ ಸೌಲಭ್ಯಗಳನ್ನು ಹೆಚ್ಚಾಗಿ ಕೇರಳಕ್ಕೆ ಭೇಟಿ ನೀಡುವ ಕೇಂದ್ರ ಸರ್ಕಾರದ VIP ಗಳು ಬಳಸುತ್ತಾರೆ.{{citation needed|date=October 2025}}
=== ಜಲ ಸಾರಿಗೆ ===
{{Main|ಕೇರಳದ ಬಂದರುಗಳು}}
{{See also|ಕೊಚ್ಚಿ ವಾಟರ್ ಮೆಟ್ರೋ}}[[File:Cochin Ship Yard Cranes.JPG|alt=|thumb|230px|[[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಕೊಚ್ಚಿ ಹಡಗು ನಿರ್ಮಾಣ ಕೇಂದ್ರದಲ್ಲಿ]] ಕ್ರೇನ್ಗಳು]]
ಕೇರಳವು [[ಕೇರಳದ ಬಂದರುಗಳು|ಎರಡು ಪ್ರಮುಖ ಬಂದರುಗಳು, ನಾಲ್ಕು ಮಧ್ಯಂತರ ಬಂದರುಗಳು, ಮತ್ತು 13 ಸಣ್ಣ ಬಂದರುಗಳನ್ನು]] ಹೊಂದಿದೆ, ಅವುಗಳಲ್ಲಿ 4 ವಲಸೆ ತಪಾಸಣಾ ಸೌಲಭ್ಯಗಳನ್ನು ಹೊಂದಿವೆ.<ref>{{cite web |url=https://www.thehindu.com/news/national/kerala/kollam-port-gets-icp-clearance/article68293607.ece |date=15 Jun 2024 |title=Kollam port gets ICP clearance |work=The Hindu |access-date=16 Jun 2024 |archive-date=16 June 2024 |archive-url=https://web.archive.org/web/20240616013704/https://www.thehindu.com/news/national/kerala/kollam-port-gets-icp-clearance/article68293607.ece |url-status=live }}</ref><ref>{{cite web |url=https://www.mha.gov.in/sites/default/files/2024-03/ICPList_05032024..pdf |date= |title=LIST OF IMMIGRATION CHECK POSTs |publisher=Ministry of Home Affairs - Govt. of India |access-date=16 Jun 2024 |archive-date=31 July 2024 |archive-url=https://web.archive.org/web/20240731204706/https://www.mha.gov.in/sites/default/files/2024-03/ICPList_05032024..pdf |url-status=live }}</ref> ರಾಜ್ಯದ ಪ್ರಮುಖ ಬಂದರು [[ಕೊಚ್ಚಿ ಬಂದರು|ಕೊಚ್ಚಿಯಲ್ಲಿದೆ]], ಇದು {{cvt|8.27|km2}} ವಿಸ್ತೀರ್ಣವನ್ನು ಹೊಂದಿದೆ.{{sfn|Chandran|2018|p=424}} [[ವಿಝಿನ್ಜಂ ಅಂತಾರಾಷ್ಟ್ರೀಯ ಸಮುದ್ರ ಬಂದರು ತಿರುವನಂತಪುರ]], ಇದನ್ನು ಪ್ರಸ್ತುತ ಪ್ರಮುಖ ಬಂದರಾಗಿ ವರ್ಗೀಕರಿಸಲಾಗಿದೆ, ಇತರೆ ನಿರ್ಮಾಣ ಹಂತದಲ್ಲಿರುವುದರಿಂದ ಹಂತ I ಮಾತ್ರ ಪೂರ್ಣಗೊಂಡಿದೆ.{{sfn|Chandran|2018|p=424}} ಇತರ ಮಧ್ಯಂತರ ಬಂದರುಗಳು [[ಬೇಪುರ]], [[ಕೊಲ್ಲಂ]], ಮತ್ತು [[ಅಝಿಕೋಡ್ ಮತ್ತು ಅಝಿಕ್ಕಲ್|ಅಝೀಕಲ್]].{{sfn|Chandran|2018|p=424}} ಉಳಿದ ಬಂದರುಗಳನ್ನು ಸಣ್ಣ ಬಂದರುಗಳಾಗಿ ವರ್ಗೀಕರಿಸಲಾಗಿದೆ, ಇವುಗಳಲ್ಲಿ [[ಮಂಜೇಶ್ವರಂ]], [[ಕಾಸರಗೋಡು]], [[ನೀಲೇಶ್ವರಂ]], [[ಕಣ್ಣೂರು]], [[ತಲಶ್ಶೇರಿ]], [[ವಡಕರ]], [[ಪೊನ್ನಾನಿ]], [[ಮುನಂಬಂ]], ಮನಕೋಡಂ, [[ಆಲಪ್ಪುಳ]], [[ಕಾಯಂಕುಲಂ]], [[ನೀಂದಕರ]], ಮತ್ತು [[ವಲಿಯತುರ]] ಸೇರಿವೆ.{{sfn|Chandran|2018|p=424}} [[ಕೇರಳ ಸಮುದ್ರ ಸಂಸ್ಥೆ]]ಯ ಪ್ರಧಾನ ಕಛೇರಿಯು [[ನೀಂದಕರ]]ದಲ್ಲಿದೆ, ಇದು [[ಕೊಡುಂಗಲ್ಲೂರು]] ನಲ್ಲಿ ಹೆಚ್ಚುವರಿ ಉಪಕೇಂದ್ರವನ್ನು ಸಹ ಹೊಂದಿದೆ.{{sfn|Chandran|2018|p=424}} ರಾಜ್ಯವು ಹಲವಾರು [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳನ್ನು]] ಹೊಂದಿದೆ, ಅವುಗಳನ್ನು ವಾಣಿಜ್ಯ [[ಒಳನಾಡಿನ ನ್ಯಾವಿಗೇಷನ್]] ಗೆ ಬಳಸಲಾಗುತ್ತದೆ. ಸಾರಿಗೆ ಸೇವೆಗಳನ್ನು ಮುಖ್ಯವಾಗಿ ದೇಶೀಯ ದೋಣಿಗಳು ಮತ್ತು ಪ್ರಯಾಣಿಕ ಹಡಗುಗಳು ಒದಗಿಸುತ್ತವೆ. ರಾಜ್ಯದಲ್ಲಿ 67 ನ್ಯಾವಿಗೇಬಲ್ ನದಿಗಳಿವೆ, ಒಳನಾಡಿನ ಜಲಮಾರ್ಗಗಳ ಒಟ್ಟು ಉದ್ದ {{convert|1687|km}} ಆಗಿದೆ.<ref name="google14">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA207 |access-date=18 November 2012 |year=2008 |publisher=Academic Foundation |isbn=978-8171885947 |page=207}}</ref> ಒಳನಾಡಿನ ನ್ಯಾವಿಗೇಷನ್ ವಿಸ್ತರಣೆಗೆ ಮುಖ್ಯ ಅಡೆತಡೆಗಳೆಂದರೆ; ಮಣ್ಣು ತುಂಬುವಿಕೆಯಿಂದ ಜಲಮಾರ್ಗಗಳಲ್ಲಿ ಆಳದ ಕೊರತೆ, ನ್ಯಾವಿಗೇಷನ್ ವ್ಯವಸ್ಥೆಗಳು ಮತ್ತು ದಂಡೆ ರಕ್ಷಣೆಯ ನಿರ್ವಹಣೆಯ ಕೊರತೆ, [[ನೀರಿನ ಹಯಸಿಂತ್]] ನ ವೇಗವರ್ಧಿತ ಬೆಳವಣಿಗೆ, ಆಧುನಿಕ ಒಳನಾಡಿನ ಕ್ರಾಫ್ಟ್ ಟರ್ಮಿನಲ್ಗಳ ಕೊರತೆ, ಮತ್ತು ಸರಕು ನಿರ್ವಹಣಾ ವ್ಯವಸ್ಥೆಯ ಕೊರತೆ.{{citation needed|date=October 2025}}
ಕೇರಳವು ಭಾರತದ ಮೊದಲ ಜಲ ಮೆಟ್ರೋವನ್ನು ಸಹ ಹೊಂದಿದೆ, ಇದನ್ನು 'ಕೊಚ್ಚಿ ವಾಟರ್ ಮೆಟ್ರೋ' ಎಂದು ಕರೆಯಲಾಗುತ್ತದೆ.<ref>{{Cite web |last=Prabhakaran |first=Aishwarya |date=2024-04-28 |title='Sustainable, scenic': Kochi Water Metro carves niche & new paths |url=https://www.newindianexpress.com/states/kerala/2024/Apr/28/sustainable-scenic-kochi-water-metro-carves-niche-new-paths |access-date=2025-03-08 |website=The New Indian Express |language=en}}</ref> ಕೊಚ್ಚಿ ವಾಟರ್ ಮೆಟ್ರೋ ಯೋಜನೆಯು 15 ಮಾರ್ಗಗಳನ್ನು ಗುರುತಿಸಿದೆ, 10 ದ್ವೀಪಗಳನ್ನು 78 ಕಿಮೀ ವ್ಯಾಪಿಸಿರುವ ಮಾರ್ಗಗಳ ಜಾಲದೊಂದಿಗೆ 78 ವೇಗದ ಮತ್ತು ಸಂಪೂರ್ಣವಾಗಿ ವಿದ್ಯುತ್ ಚಾಲಿತ ಹೈಬ್ರಿಡ್ ದೋಣಿಗಳ ತಂಡದೊಂದಿಗೆ ಸಂಪರ್ಕಿಸುತ್ತದೆ.<ref>{{Cite web |title=Kochi Water Metro {{!}} About Us |url=https://watermetro.co.in/about |access-date=2025-03-08 |website=Kochi Water Metro |language=en}}</ref>
{{convert|616|km}} ಉದ್ದದ ಪಶ್ಚಿಮ-ಕರಾವಳಿ ಕಾಲುವೆಯು [[ಕಾಸರಗೋಡು]]ವನ್ನು [[ಪೂವಾರ್]] ಗೆ ಸಂಪರ್ಕಿಸುವ ರಾಜ್ಯದ ಅತಿ ಉದ್ದದ ಜಲಮಾರ್ಗವಾಗಿದೆ.{{sfn|Chandran|2018|p=423}} ಇದನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ: {{convert|41|km}} ಉದ್ದದ [[ಕಾಸರಗೋಡು]]-[[ನೀಲೇಶ್ವರಂ]] ವ್ಯಾಪ್ತಿ, {{convert|188|km}} ಉದ್ದದ [[ನೀಲೇಶ್ವರಂ]]-[[ಕೋಝಿಕೋಡ್]] ವ್ಯಾಪ್ತಿ, {{convert|160|km}} [[ಕೋಝಿಕೋಡ್]]-[[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]] ವ್ಯಾಪ್ತಿ, {{convert|168|km}} ಉದ್ದದ [[ರಾಷ್ಟ್ರೀಯ ಜಲಮಾರ್ಗ 3]] ([[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]]-[[ಕೊಲ್ಲಂ]] ವ್ಯಾಪ್ತಿ), ಮತ್ತು {{convert|74|km}} ಉದ್ದದ [[ಕೊಲ್ಲಂ]]-[[ವಿಝಿನ್ಜಂ]] ವ್ಯಾಪ್ತಿ.<ref name="eco" /> ಪಶ್ಚಿಮ-ಕರಾವಳಿ ಕಾಲುವೆಯ ಒಂದು ಭಾಗವಾದ [[ಕೊನೊಲ್ಲಿ ಕಾಲುವೆ]]ಯು [[ಕೋಝಿಕೋಡ್]] ನಗರವನ್ನು [[ಪೊನ್ನಾನಿ]] ಮೂಲಕ [[ಕೊಚ್ಚಿ]] ಗೆ ಸಂಪರ್ಕಿಸುತ್ತದೆ, [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಮತ್ತು [[ತೃಶೂರ್ ಜಿಲ್ಲೆ|ತೃಶೂರ್]] ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು [[ವಡಕರ]] ದಲ್ಲಿ ಪ್ರಾರಂಭವಾಗುತ್ತದೆ.<ref name="hindu_jan08" /> ಇದನ್ನು 1848 ರಲ್ಲಿ ಆಗಿನ [[ಮಲಬಾರ್ ಜಿಲ್ಲೆ|ಮಲಬಾರಿನ]] [[ಜಿಲ್ಲಾ ಕಲೆಕ್ಟರ್]] ಎಚ್. ವಿ. ಕೊನೊಲ್ಲಿ ಅವರ ಆದೇಶದಂತೆ ನಿರ್ಮಿಸಲಾಯಿತು, ಆರಂಭದಲ್ಲಿ ಮಲಬಾರಿನ ಒಳನಾಡಿನಿಂದ [[ಕುಟ್ಟಿಯಾಡಿ]] ಮತ್ತು [[ಕೊರಪುಳ]] ನದಿ ವ್ಯವಸ್ಥೆಗಳ ಮೂಲಕ [[ಕಲ್ಲಾಯಿ]] ಬಂದರಿಗೆ ಸರಕುಗಳ ಚಲನೆಯನ್ನು ಸುಗಮಗೊಳಿಸಲು.<ref name="hindu_jan08">{{cite news |url=https://www.hindu.com/pp/2008/01/05/stories/2008010550730300.htm |archive-url=https://web.archive.org/web/20100923092718/https://www.hindu.com/pp/2008/01/05/stories/2008010550730300.htm |url-status=dead |archive-date=23 September 2010 |title=Reviving the historic Canoly Canal |date=5 January 2005 |work=[[The Hindu]] |access-date=16 August 2009}}</ref> ಒಂದು ಶತಮಾನಕ್ಕೂ ಹೆಚ್ಚು ಕಾಲ ಕೋಝಿಕೋಡ್ ಮತ್ತು ಕೊಚ್ಚಿ ನಡುವೆ [[ಪೊನ್ನಾನಿ]] ಮೂಲಕ ಸರಕು ಸಾಗಣೆಗೆ ಇದು ಮುಖ್ಯ ಜಲಮಾರ್ಗವಾಗಿತ್ತು.<ref name="hindu_jan08" /> ಕೇರಳದ ಇತರ ಪ್ರಮುಖ ಜಲಮಾರ್ಗಗಳಲ್ಲಿ [[ಆಲಪ್ಪುಳ]]-[[ಚಂಗನಾಶ್ಶೇರಿ]] ಕಾಲುವೆ, [[ಆಲಪ್ಪುಳ]]-[[ಕೋಟ್ಟಯಂ]]-[[ಅತಿರಂಪುಳ]] ಕಾಲುವೆ, ಮತ್ತು [[ಕೋಟ್ಟಯಂ]]-[[ವೈಕೋಂ]] ಕಾಲುವೆ ಸೇರಿವೆ.{{sfn|Chandran|2018|p=424}}
== ಜನಸಂಖ್ಯಾಶಾಸ್ತ್ರ ==
{{Main|ಕೇರಳದ ಜನಸಂಖ್ಯಾಶಾಸ್ತ್ರ}}
{{See also|ಕೇರಳದ ಜನಾಂಗೀಯ ಗುಂಪುಗಳು|ಕೇರಳದ ಜನರ ಪಟ್ಟಿ}}
[[File:Kerala Population Pyramid in 5-year age groups (2011 census).png|thumbnail|ಕೇರಳದ [[ಜನಸಂಖ್ಯಾ ಪಿರಮಿಡ್]]]]
ಕೇರಳವು ಭಾರತದ ಜನಸಂಖ್ಯೆಯ 2.8% ರಷ್ಟಿದೆ; 859 ವ್ಯಕ್ತಿಗಳ ಪ್ರತಿ km<sup>2</sup> ಸಾಂದ್ರತೆಯೊಂದಿಗೆ, ಅದರ ಭೂಮಿಯು ರಾಷ್ಟ್ರೀಯ ಸರಾಸರಿ 370 ವ್ಯಕ್ತಿಗಳ ಪ್ರತಿ km<sup>2</sup> ಗಿಂತ ಸುಮಾರು ಮೂರು ಪಟ್ಟು ಹೆಚ್ಚು ಜನನಿಬಿಡವಾಗಿದೆ.<ref name="Census 2011">{{cite web |title=Size, Growth Rate and Distribution of Population |url=https://www.censusindia.gov.in/2011-prov-results/data_files/india/Final_PPT_2011_chapter3.pdf |website=Census 2011 |publisher=Government of India |access-date=13 November 2015 |archive-date=23 September 2015 |archive-url=https://web.archive.org/web/20150923224858/http://www.censusindia.gov.in/2011-prov-results/data_files/india/Final_PPT_2011_chapter3.pdf |url-status=live }}</ref> {{As of|2011}}, ತಿರುವನಂತಪುರವು ಕೇರಳದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ.<ref name="Census2011cities">{{cite web|title=Provisional Population Totals, Census of India 2011|url=http://urbanaffairskerala.org/images/downloads/ulb_population2011.pdf|work=Population of the urban local bodies in Kerala (2011)|publisher=Government of Kerala|accessdate=4 December 2020|archive-date=24 September 2020|archive-url=https://web.archive.org/web/20200924173424/http://urbanaffairskerala.org/images/downloads/ulb_population2011.pdf|url-status=dead}}</ref> ರಾಜ್ಯದಲ್ಲಿ, ಜನಸಂಖ್ಯಾ ಬೆಳವಣಿಗೆಯ ಪ್ರಮಾಣವು ಭಾರತದಲ್ಲಿ ಅತ್ಯಂತ ಕಡಿಮೆಯಾಗಿದೆ, ಮತ್ತು 2011 ರಲ್ಲಿ 4.9% ರಷ್ಟಿರುವ ದಶಕೀಯ ಬೆಳವಣಿಗೆಯು ಅಖಿಲ ಭಾರತ ಸರಾಸರಿ 17.6% ರಷ್ಟಕ್ಕಿಂತ ಕಡಿಮೆಯಾಗಿದೆ.<ref name="Census 2011" /> ಕೇರಳದ ಜನಸಂಖ್ಯೆಯು 1951 ಮತ್ತು 1991 ರ ನಡುವೆ ಎರಡು ಪಟ್ಟು ಹೆಚ್ಚಾಗಿ 15.6 ಮಿಲಿಯನ್ ಜನರನ್ನು ಸೇರಿಸಿ 1991 ರಲ್ಲಿ 29.1 ಮಿಲಿಯನ್ ನಿವಾಸಿಗಳನ್ನು ತಲುಪಿತು; 2011 ರ ವೇಳೆಗೆ ಜನಸಂಖ್ಯೆಯು 33.3 ಮಿಲಿಯನ್ ಆಗಿತ್ತು.<ref name="Census 2011" /> ಕೇರಳದ ಕರಾವಳಿ ಪ್ರದೇಶಗಳು 2022 ವ್ಯಕ್ತಿಗಳ ಪ್ರತಿ km<sup>2</sup> ಜನಸಂಖ್ಯೆಯೊಂದಿಗೆ ಅತಿ ಹೆಚ್ಚು ಜನನಿಬಿಡವಾಗಿವೆ, ಇದು ರಾಜ್ಯದ ಒಟ್ಟಾರೆ ಜನಸಂಖ್ಯಾ ಸಾಂದ್ರತೆ 859 ವ್ಯಕ್ತಿಗಳ ಪ್ರತಿ km<sup>2</sup> ಗಿಂತ 2.5 ಪಟ್ಟು ಹೆಚ್ಚಾಗಿದ್ದು, ಪೂರ್ವದ ಬೆಟ್ಟಗಳು ಮತ್ತು ಪರ್ವತಗಳನ್ನು ತುಲನಾತ್ಮಕವಾಗಿ ವಿರಳವಾಗಿ ಜನಸಂಖ್ಯೆ ಹೊಂದಿರುವಂತೆ ಬಿಡುತ್ತದೆ.<ref name="kerala_fact_sheet">{{cite book |url=https://www.ncscm.org/cms/geo/pdf/research/kerala_fact_sheet.pdf |title=Shoreline change assessment for Kerala coast |publisher=National Centre for Sustainable Coastal Management, Ministry of Environment and Forests |author1=R Ramesh |author2=R Purvaja |author3=A Senthil Vel |access-date=30 May 2015 |archive-date=30 May 2015 |archive-url=https://web.archive.org/web/20150530204904/http://www.ncscm.org/cms/geo/pdf/research/kerala_fact_sheet.pdf |url-status=dead }}</ref> ಕೇರಳವು [[2011 ರ ಭಾರತದ ಜನಗಣತಿ]]ಯ ಪ್ರಕಾರ [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ ಪ್ರಮುಖ ರಾಜ್ಯವಾಗಿದ್ದು]] [[ಕೇರಳದಲ್ಲಿನ ನಗರ ಪ್ರದೇಶದ ಬೆಳವಣಿಗೆಯ ಪ್ರಕಾರ ನಗರಗಳ ಪಟ್ಟಿ|47.7% ನಗರ ಜನಸಂಖ್ಯೆಯನ್ನು]] ಹೊಂದಿದೆ.<ref name="ubn">{{Cite web |url=https://mohua.gov.in/cms/level-of-urbanisation.php |title=Level of Urbanisation in Indian States |date= |website=mohua.gov.in |publisher=Ministry of Housing and Urban Affairs, Government of India |access-date=7 February 2022 |archive-date=7 February 2022 |archive-url=https://web.archive.org/web/20220207105118/https://mohua.gov.in/cms/level-of-urbanisation.php |url-status=live }}</ref> ಸುಮಾರು 31.8 ಮಿಲಿಯನ್ ಕೇರಳೀಯರು ಪ್ರಧಾನವಾಗಿ ಮಲಯಾಳಿಗಳಾಗಿದ್ದಾರೆ.<ref name="Census 2011" /> ರಾಜ್ಯದ 321,000 ಸ್ಥಳೀಯ ಬುಡಕಟ್ಟು ''[[ಆದಿವಾಸಿ]]''ಗಳು, ಜನಸಂಖ್ಯೆಯ 1.1%, ಪೂರ್ವದಲ್ಲಿ ಕೇಂದ್ರೀಕೃತವಾಗಿವೆ.<ref name="Kalathil_2004">{{Cite book |author=Kalathil MJ |year=2004 |veditors=Nair PR, Shaji H |title=Withering Valli: Alienation, Degradation, and Enslavement of Tribal Women in Attappady |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621690 |url=https://www.cds.ac.in/krpcds/publication/downloads/66.pdf |access-date=29 December 2008 |archive-date=30 May 2015 |archive-url=https://web.archive.org/web/20150530205641/http://www.cds.ac.in/krpcds/publication/downloads/66.pdf |url-status=live }}</ref>{{rp|10–12}}
=== ಲಿಂಗ ===
ಕೇರಳದಲ್ಲಿ ಮಾತೃವಂಶೀಯ ಅನುವಂಶಿಕತೆಯ ಸಂಪ್ರದಾಯವಿದೆ, ಅಲ್ಲಿ ತಾಯಿ ಮನೆಯ ಮುಖ್ಯಸ್ಥೆಯಾಗಿರುತ್ತಾಳೆ.<ref>{{Cite web |date=5 March 2017 |title=International Women's Day 2017: Kerala and the myth of matriarchy |url=https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |access-date=16 July 2021 |website=Firstpost |archive-date=16 July 2021 |archive-url=https://web.archive.org/web/20210716051101/https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |url-status=live }}</ref> ಪರಿಣಾಮವಾಗಿ, ಕೇರಳದ ಮಹಿಳೆಯರು ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಮತ್ತು ಪ್ರಭಾವವನ್ನು ಹೊಂದಿದ್ದಾರೆ. ಇದು ಕೆಲವು ಪ್ರಭಾವಶಾಲಿ ಜಾತಿಗಳಲ್ಲಿ ಸಾಮಾನ್ಯವಾಗಿತ್ತು ಮತ್ತು ಹೆಣ್ಣು ಮಕ್ಕಳಿಗೆ ನೀಡಲಾಗುವ ಮೌಲ್ಯದಲ್ಲಿ ಒಂದು ಅಂಶವಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಬಡ ಕುಟುಂಬಗಳ ಹುಡುಗಿಯರಿಗೆ ಶಾಲೆಗಳನ್ನು ಪ್ರಾರಂಭಿಸಿದ ಕಾರಣ ಅವರು ಮಲಯಾಳಿ ಮಹಿಳೆಯರ ಮೇಲೆ ಪ್ರಭಾವ ಬೀರಿದರು.<ref>{{cite journal |author1-link=Tomila Lankina|author1=Lankina |author2=Tomila V. |author3=Getachew, Lullit |year=2013 |url=https://researchonline.lse.ac.uk/id/eprint/44929/ |title=Competitive religious entrepreneurs: Christian missionaries and female education in colonial and post-colonial India |journal=British Journal of Political Science |volume=43 |pages=103–31 |doi=10.1017/s0007123412000178 |s2cid=145185494 |archive-date=25 February 2021 |access-date=2 February 2016 |archive-url=https://web.archive.org/web/20210225144811/https://researchonline.lse.ac.uk/id/eprint/44929/ |url-status=live }}</ref> ಶಿಕ್ಷಣ ಮತ್ತು ಲಾಭದಾಯಕ ಉದ್ಯೋಗದಂತಹ ಮಹಿಳೆಯರಿಗೆ ಅವಕಾಶಗಳು ಸಾಮಾನ್ಯವಾಗಿ ಕಡಿಮೆ ಜನನ ದರಕ್ಕೆ ಕಾರಣವಾಗುತ್ತವೆ,<ref>{{Cite web |last=ലേഖകൻ |first=മാധ്യമം |date=10 July 2021 |title=ജനസംഖ്യാദിനം; അറിയാം 21 കാര്യങ്ങൾ|url=https://www.madhyamam.com/velicham/special-stories/july-11-world-population-day-821671 |access-date=16 July 2021 |website=Madhyamam |language=en |archive-date=16 July 2021 |archive-url=https://web.archive.org/web/20210716051106/https://www.madhyamam.com/velicham/special-stories/july-11-world-population-day-821671 |url-status=live }}</ref> ಇದು ಪ್ರತಿಯಾಗಿ, ಶಿಕ್ಷಣ ಮತ್ತು ಉದ್ಯೋಗವನ್ನು ಮಹಿಳೆಯರಿಗೆ ಹೆಚ್ಚು ಪ್ರವೇಶಿಸುವಂತೆ ಮತ್ತು ಹೆಚ್ಚು ಪ್ರಯೋಜನಕಾರಿಯಾಗಿಸುತ್ತದೆ. ಇದು ಸಮುದಾಯದ ಮಹಿಳೆಯರು ಮತ್ತು ಮಕ್ಕಳಿಗಾಗಿ ಮೇಲ್ಮುಖವಾದ ಸುರುಳಿಯನ್ನು ಸೃಷ್ಟಿಸುತ್ತದೆ, ಅದು ಮುಂದಿನ ಪೀಳಿಗೆಗೆ ರವಾನಿಸಲ್ಪಡುತ್ತದೆ. 1996 ರ ಮಾನವ ಅಭಿವೃದ್ಧಿ ವರದಿಯ ಪ್ರಕಾರ, ಕೇರಳದ [[ಲಿಂಗ ಅಭಿವೃದ್ಧಿ ಸೂಚ್ಯಂಕ]] 597 ಆಗಿತ್ತು; ಇದು ಭಾರತದ ಯಾವುದೇ ರಾಜ್ಯಕ್ಕಿಂತ ಹೆಚ್ಚಾಗಿತ್ತು. ಹೆಚ್ಚಿನ ಮಹಿಳಾ ಸಾಕ್ಷರತೆ, ಶಿಕ್ಷಣ, ಕೆಲಸದ ಭಾಗವಹಿಸುವಿಕೆ ಮತ್ತು ಜೀವಿತಾವಧಿಯ ಪ್ರಮಾಣಗಳು, ಅನುಕೂಲಕರ [[ಮಾನವ ಲಿಂಗಾನುಪಾತ|ಲಿಂಗಾನುಪಾತ]]ದ ಜೊತೆಗೆ, ಅದಕ್ಕೆ ಕೊಡುಗೆ ನೀಡಿವೆ.<ref name="Joseph">{{cite book |author=Ammu Joseph |editor=Oommen M.A. |year=1999 |title=Rethinking Development: Kerala's Development Experience |publisher=Concept Publishing Company |isbn=978-8170227656 |url=https://books.google.com/books?id=lzV3bQh-L94C |pages=479–86 |access-date=30 May 2015}}</ref>
ಕೇರಳದ ಲಿಂಗಾನುಪಾತ 1.084 (ಸ್ತ್ರೀಯರು ಪುರುಷರಿಗೆ) ಭಾರತದ ಉಳಿದ ಭಾಗಗಳಿಗಿಂತ ಹೆಚ್ಚಾಗಿದೆ; ಮಹಿಳೆಯರು ಪುರುಷರನ್ನು ಮೀರಿಸುವ ಏಕೈಕ ರಾಜ್ಯವಾಗಿದೆ.<ref name="Tharamangalam_2005" />{{rp|2}} ಶಿಕ್ಷಣವು ಒದಗಿಸುವ ಅವಕಾಶಗಳನ್ನು ಹೊಂದಿರುವಾಗ, ಉದಾಹರಣೆಗೆ ರಾಜಕೀಯ ಭಾಗವಹಿಸುವಿಕೆ, ಪ್ರಸ್ತುತ ಘಟನೆಗಳೊಂದಿಗೆ ನವೀಕೃತವಾಗಿರುವುದು, ಧಾರ್ಮಿಕ ಗ್ರಂಥಗಳನ್ನು ಓದುವುದು ಇತ್ಯಾದಿ, ಈ ಉಪಕರಣಗಳು ಇನ್ನೂ ಕೇರಳದ ಮಹಿಳೆಯರಿಗೆ ಸಂಪೂರ್ಣ, [[ಮಹಿಳೆಯರ ಹಕ್ಕುಗಳು|ಸಮಾನ ಹಕ್ಕುಗಳಾಗಿ]] ಅನುವಾದಗೊಂಡಿಲ್ಲ. ಮಹಿಳೆಯರನ್ನು ಅವರ ಸ್ವಂತ ಪ್ರಯೋಜನಕ್ಕಾಗಿ ನಿರ್ಬಂಧಿಸಬೇಕು ಎಂಬ ಸಾಮಾನ್ಯ ಮನೋಭಾವವಿದೆ. ರಾಜ್ಯದಲ್ಲಿ, ಸಾಮಾಜಿಕ ಪ್ರಗತಿಯ ಹೊರತಾಗಿಯೂ, ಲಿಂಗವು ಇನ್ನೂ [[ಸಾಮಾಜಿಕ ಚಲನಶೀಲತೆ]] ಯ ಮೇಲೆ ಪ್ರಭಾವ ಬೀರುತ್ತದೆ.<ref>Brenda Maddox mentions in: Maddox, Brenda. "A Marxist Paradise For Women?" New Statesman. (London, England: 1996) 128 no4440 30 January 14, 1999.</ref><ref>Antherjanam, Lalithambika. Cast Me Out If You Will. New York: The Feminist Press, 1997.</ref><ref>{{cite journal |last1=Jeffrey |first1=Robin |year=1987 |title=Governments and Culture: How Women Made Kerala Literate |journal=Pacific Affairs |volume=60 |issue=3 |pages=447–72 |doi=10.2307/2758883 |jstor=2758883}}</ref>
==== LGBT ಹಕ್ಕುಗಳು ====
{{Main|ಕೇರಳದಲ್ಲಿ LGBT ಹಕ್ಕುಗಳು}}
ಕೇರಳವು [[ಭಾರತ]]ದಲ್ಲಿ LGBT ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿದೆ.<ref>{{Cite web |url=https://www.huffingtonpost.in/2015/11/12/kerala-government-transge_n_8543410.html |title=Kerala Government Has Unveiled A Policy To Enforce Constitutional Rights Of Transgenders |website=The Huffington Post |date=12 November 2015 |access-date=28 June 2016 |archive-date=10 May 2017 |archive-url=https://web.archive.org/web/20170510075414/http://www.huffingtonpost.in/2015/11/12/kerala-government-transge_n_8543410.html |url-status=live }}</ref> ಕೇರಳವು ಟ್ರಾನ್ಸ್ಜೆಂಡರ್ ಸಮುದಾಯಕ್ಕಾಗಿ ಕಲ್ಯಾಣ ನೀತಿಯನ್ನು ರೂಪಿಸಿದ [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತದ ಮೊದಲ ರಾಜ್ಯಗಳಲ್ಲಿ]] ಒಂದಾಗಿದೆ. 2016 ರಲ್ಲಿ, ಕೇರಳ ಸರ್ಕಾರವು ಸರ್ಕಾರಿ ಆಸ್ಪತ್ರೆಗಳ ಮೂಲಕ ಉಚಿತ [[ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ]]ಯನ್ನು ಪರಿಚಯಿಸಿತು.<ref>{{Cite web |url=https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |title=Why Kerala's free sex-change surgeries will offer a new lifeline for the transgender community |last=Devasia |first=T. K. |website=Scroll.in |date=19 March 2016 |language=en-US |access-date=5 July 2019 |archive-date=29 June 2019 |archive-url=https://web.archive.org/web/20190629061452/https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |url-status=live }}</ref><ref>{{cite news |url=https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |title=After She-Taxi, Kerala to launch G-Taxi for transgenders |work=[[The Times of India]] |date=31 January 2016 |agency=PTI |access-date=25 March 2016 |location=Thiruvananthapuram |archive-date=29 October 2019 |archive-url=https://web.archive.org/web/20191029184249/https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |url-status=live }}</ref><ref>{{Cite web |url=https://www.dnaindia.com/india/report-how-kerala-left-the-country-behind-on-transgender-rights-2145017 |title=How Kerala left the country behind on transgender rights |website=dna |language=en-US |access-date=19 March 2016 |date=14 November 2015 |archive-date=29 June 2019 |archive-url=https://web.archive.org/web/20190629021111/https://www.dnaindia.com/india/report-how-kerala-left-the-country-behind-on-transgender-rights-2145017 |url-status=live }}</ref> [[ಕ್ವೀರಳ]] ಕೇರಳದ ಪ್ರಮುಖ LGBT ಸಂಸ್ಥೆಗಳಲ್ಲಿ ಒಂದಾಗಿದೆ. ಇದು LGBT ಜನರ ಅರಿವನ್ನು ಹೆಚ್ಚಿಸಲು ಮತ್ತು ಆರೋಗ್ಯ ಸೇವೆಗಳು, ಕೆಲಸದ ಸ್ಥಳ ನೀತಿಗಳು ಮತ್ತು ಶೈಕ್ಷಣಿಕ ಪಠ್ಯಕ್ರಮಕ್ಕೆ ಸಂಬಂಧಿಸಿದ ಸಂವೇದನಾಶೀಲತೆಯ ಬಗ್ಗೆ ಪ್ರಚಾರ ಮಾಡುತ್ತದೆ.<ref>{{Cite news |title=Affirming their right, they march with pride |url=https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |date=13 August 2017 |work=The Hindu |language=en-IN |issn=0971-751X |access-date=4 April 2022 |archive-date=28 December 2019 |archive-url=https://web.archive.org/web/20191228100119/https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |url-status=live }}</ref> 2010 ರಿಂದ, [[ಕೇರಳ ಕ್ವೀರ್ ಪ್ರೈಡ್]] ಅನ್ನು ಕೇರಳದ ವಿವಿಧ ನಗರಗಳಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತಿದೆ.<ref>{{cite web |url=https://timesofindia.indiatimes.com/india/Kerala-to-host-its-first-gay-parade/articleshow/6112610.cms |title=Kerala to host its first gay parade |website=The Times of India |date=30 June 2010}}</ref>
ಜೂನ್ 2019 ರಲ್ಲಿ, ಕೇರಳ ಸರ್ಕಾರವು ಟ್ರಾನ್ಸ್ಜೆಂಡರ್ ಸಮುದಾಯದ ಸದಸ್ಯರನ್ನು ಸರ್ಕಾರದ ಸಂವಹನಗಳಲ್ಲಿ "[[ಮೂರನೇ ಲಿಂಗ]]" ಅಥವಾ "ಇತರ ಲಿಂಗ" ಎಂದು ಕರೆಯಬಾರದು ಎಂದು ಹೊಸ ಆದೇಶವನ್ನು ಅಂಗೀಕರಿಸಿತು. ಬದಲಾಗಿ, "ಟ್ರಾನ್ಸ್ಜೆಂಡರ್" ಪದವನ್ನು ಬಳಸಬೇಕು. ಹಿಂದೆ, ಸರ್ಕಾರಿ ನಮೂನೆಗಳು ಮತ್ತು ದಾಖಲೆಗಳಲ್ಲಿ ಒದಗಿಸಲಾದ ಲಿಂಗ ಆಯ್ಕೆಗಳು ಪುರುಷ, ಮಹಿಳೆ ಮತ್ತು ಇತರ/ಮೂರನೇ ಲಿಂಗವನ್ನು ಒಳಗೊಂಡಿದ್ದವು.<ref>{{Cite web |url=https://www.thenewsminute.com/article/kerala-govt-passes-order-use-transgender-instead-thirdother-gender-104584 |website=www.thenewsminute.com |access-date=8 July 2019 |title=Kerala govt passes order to use 'transgender' instead of 'third/other gender' |date=30 June 2019}}</ref><ref>{{Cite news |url=https://www.thehindu.com/news/national/kerala/only-transgender-in-official-communication/article28235748.ece |title=Only 'transgender' in official communication |last=Roshni |first=R. k |date=30 June 2019 |work=The Hindu |access-date=8 July 2019 |language=en-IN |issn=0971-751X}}</ref>
=== ಮಾನವ ಅಭಿವೃದ್ಧಿ ಸೂಚ್ಯಂಕ ===
{{See also|ಕೇರಳ ಮಾದರಿ}}
[[File:2006 Human Development Index for India map by states, HDI data by GoI and UNDP India.svg|thumb|[[ಭಾರತ ಸರ್ಕಾರ]] ಮತ್ತು [[ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮ]]ದಿಂದ ಲೆಕ್ಕಾಚಾರ ಮಾಡಿದಂತೆ 2006 ರಲ್ಲಿ ಭಾರತೀಯ ರಾಜ್ಯಗಳಿಗೆ [[ಮಾನವ ಅಭಿವೃದ್ಧಿ ಸೂಚ್ಯಂಕ]] ನಕ್ಷೆ.<ref>{{cite web |url=https://www.in.undp.org/content/dam/india/docs/gendering_human_development_indices_summary_report.pdf |title=Gendering Human Development Indices |date=March 2009 |publisher=Ministry of Women and Child Development, Government of India with UNDP India}}</ref>]]
ಪ್ರಜಾಪ್ರಭುತ್ವದ ಕಮ್ಯುನಿಸ್ಟ್ ಸ್ಥಳೀಯ ಸರ್ಕಾರದ ಅಡಿಯಲ್ಲಿ, ಕೇರಳವು ಭಾರತೀಯ ಸರಾಸರಿಗಿಂತ ಹೆಚ್ಚು ಮುಂದುವರಿದ ಸಾಮಾಜಿಕ ಅಭಿವೃದ್ಧಿಯ ದಾಖಲೆಯನ್ನು ಸಾಧಿಸಿದೆ.<ref>{{Cite book |last=Lin |first=Chun |title=The transformation of Chinese socialism |date=2006 |publisher=[[Duke University Press]] |isbn=978-0-8223-3785-0 |location=Durham [N.C.] |pages=298 |oclc=63178961}}</ref> {{As of|2015}}, ಕೇರಳವು 0.770 ರ [[ಮಾನವ ಅಭಿವೃದ್ಧಿ ಸೂಚ್ಯಂಕ]] (HDI) ಅನ್ನು ಹೊಂದಿದೆ, ಇದು "ಹೆಚ್ಚಿನ" ವರ್ಗದಲ್ಲಿದೆ, ಇದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.<ref name="snhdi-gdl">{{cite web |title=Sub-national HDI – Area Database |url=https://hdi.globaldatalab.org/areadata/shdi/ |website=Global Data Lab |publisher=Institute for Management Research, Radboud University |access-date=25 September 2018 |language=en}}</ref> ಇದು 2007–08 ರಲ್ಲಿ 0.790 ಆಗಿತ್ತು<ref name="IDHR 2011">{{cite web |title=India Human Development Report 2011: Towards Social Inclusion |url=https://www.im4change.org/docs/340IHDR_Summary.pdf |publisher=Institute of Applied Manpower Research, [[Planning Commission (India)|Planning Commission]], [[Government of India]] |access-date=24 October 2014 |archive-date=21 October 2013 |archive-url=https://web.archive.org/web/20131021081939/http://www.im4change.org/docs/340IHDR_Summary.pdf |url-status=dead }}</ref> ಮತ್ತು ಇದು 0.920 ರ ಬಳಕೆ-ಆಧಾರಿತ HDI ಅನ್ನು ಹೊಂದಿತ್ತು, ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮವಾಗಿದೆ.<ref name="IDHR 2011" /> 19 ನೇ ಶತಮಾನದಿಂದ [[ಪ್ರಾಥಮಿಕ ಶಿಕ್ಷಣ|ಪ್ರಾಥಮಿಕ ಮಟ್ಟದ ಶಿಕ್ಷಣ]], [[ಆರೋಗ್ಯ ರಕ್ಷಣೆ]] ಮತ್ತು [[ಭಾರತದಲ್ಲಿ ಬಡತನ|ಬಡತನ]] ನಿರ್ಮೂಲನೆಗೆ ಸರ್ಕಾರದ ತುಲನಾತ್ಮಕವಾಗಿ ಹೆಚ್ಚಿನ ವೆಚ್ಚವು ರಾಜ್ಯವು ಅಸಾಧಾರಣವಾಗಿ ಹೆಚ್ಚಿನ HDI ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ;<ref name="UNDP2005">{{cite web |title=Kerala HDR 2005 |url=https://hdr.undp.org/en/reports/nationalreports/asiathepacific/india/name,3397,en.html |work=Human Development Report |publisher=United Nations |location=Asia and the Pacific |access-date=30 May 2015}}</ref><ref name="UNDP20054">{{cite web |title=Human Development Report 2005 |url=https://hdr.undp.org/en/media/HDR05_complete.pdf |work=Human Development Report |publisher=United Nations |location=Asia and the Pacific |access-date=14 November 2015 |archive-url=https://web.archive.org/web/20110310193948/https://hdr.undp.org/en/media/HDR05_complete.pdf |archive-date=10 March 2011 |url-status=dead}}</ref> ಈ ವರದಿಯನ್ನು ಕೇಂದ್ರ ಸರ್ಕಾರದ [[ಅನ್ವಯಿಕ ಜನಶಕ್ತಿ ಸಂಶೋಧನಾ ಸಂಸ್ಥೆ]] ತಯಾರಿಸಿತು.<ref name="hdi kerala chart">{{cite web |url=https://www.moneycontrol.com/news/wire-news/human-development-index-rose-21-per-cent-kerala-tops-chart_603650.html |title=Human Development Index rose 21 per cent; Kerala tops chart |date=21 October 2011 |work=[[CNBC]] |access-date=14 November 2015}}</ref><ref name="hdi kerala">{{Cite news |url=https://economictimes.indiatimes.com/news/economy/finance/growth-reforms-lift-living-standards-in-india-human-development-index/articleshow/10447495.cms |title=Growth, reforms lift living standards in India: Human development Index |date=22 October 2011 |access-date=14 November 2015 |work=Economic Times}}</ref> ಆದಾಗ್ಯೂ, ಅಭಿವೃದ್ಧಿ ಅಧ್ಯಯನ ಕೇಂದ್ರವು ತಯಾರಿಸಿದ ಮಾನವ ಅಭಿವೃದ್ಧಿ ವರದಿ 2005, ರಾಜ್ಯದಲ್ಲಿ ಮಾನವ ಅಭಿವೃದ್ಧಿಯ ಪ್ರಗತಿಯು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡಲು ಪ್ರಾರಂಭಿಸಿದ್ದರಿಂದ ರಾಜ್ಯಕ್ಕೆ ಸಮಾವೇಶಕ ಅಭಿವೃದ್ಧಿಯ ಗುಣಾತ್ಮಕ ಹಂತವನ್ನು ಊಹಿಸುತ್ತದೆ.<ref name="UNDP2005" /> ಕೇರಳವು ಭಾರತದಲ್ಲಿ ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರ ರಾಜ್ಯವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ.<ref>{{cite book |author1=Sunil Mani |author2=Anjini Kochar |title=Kerala's Economy: Crouching Tiger, Sacred Cows |url=https://books.google.com/books?id=wKeRAtvXl8oC&pg=PA121 |access-date=24 September 2012 |year=2006 |publisher=D.C. Books |isbn=978-8126413591 |page=121}}</ref>
2011 ರ ಜನಗಣತಿಯ ಪ್ರಕಾರ, ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಹೆಚ್ಚು [[ಸಾಕ್ಷರತಾ ಪ್ರಮಾಣ]] (94%) ಹೊಂದಿದೆ. 2018 ರಲ್ಲಿ, ಭಾರತದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ನಡೆಸಿದ 2018 ರ ಸಾಕ್ಷರತಾ ಸಮೀಕ್ಷೆಯಲ್ಲಿ ಸಾಕ್ಷರತಾ ಪ್ರಮಾಣವನ್ನು 96.2% ಎಂದು ಲೆಕ್ಕಹಾಕಲಾಯಿತು.<ref name="Literacy survey_2018">{{Cite web |date=8 September 2020 |title=Literacy Survey, India (2017–18) |url=https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |access-date=9 September 2020 |publisher=Firstpost |archive-date=2 November 2021 |archive-url=https://web.archive.org/web/20211102214441/https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |url-status=live }}</ref> [[ಕೋಟ್ಟಯಂ ಜಿಲ್ಲೆ]]ಯಲ್ಲಿ, ಸಾಕ್ಷರತಾ ಪ್ರಮಾಣವು 97% ಆಗಿತ್ತು.<ref>{{Cite web |url=https://www.pincodeindia.net/literacy-rate-of-kerala.php |title=Literacy Rate in Kerala – 2018 |access-date=7 February 2022 |archive-date=7 February 2022 |archive-url=https://web.archive.org/web/20220207105113/https://www.pincodeindia.net/literacy-rate-of-kerala.php |url-status=dead }}</ref><ref name="pc-census2011">{{Cite web |title=Census 2011 (Final Data) – Demographic details, Literate Population (Total, Rural & Urban) |url=https://planningcommission.gov.in/data/datatable/data_2312/DatabookDec2014%20307.pdf |url-status=dead |archive-url=https://web.archive.org/web/20180127163347/https://planningcommission.gov.in/data/datatable/data_2312/DatabookDec2014%20307.pdf |archive-date=27 January 2018 |access-date=3 October 2018 |website=planningcommission.gov.in |publisher=Planning Commission, Government of India}}</ref><ref name="IBNLiteracy2013" /> ಕೇರಳದಲ್ಲಿ [[ಜೀವಿತಾವಧಿ]]ಯು 74 ವರ್ಷಗಳು, {{As of|2011|lc=y}} ಭಾರತದಲ್ಲಿ ಅತಿ ಹೆಚ್ಚಿನದಾಗಿದೆ.<ref>{{cite news |url=https://thehindu.com/news/national/kerala/kerala-tops-in-literacy-rate-health-services/article2562589.ece |location=Chennai, India |work=The Hindu |title=Kerala tops in literacy rate, health services |date=22 October 2011 |first=J. |last=Balaji |access-date=30 May 2015}}</ref> ಕೇರಳದ ಗ್ರಾಮೀಣ ಬಡತನ ಪ್ರಮಾಣವು 59% (1973–1974) ರಿಂದ 12% (1999–2010) ಕ್ಕೆ ಇಳಿದಿದೆ; ಒಟ್ಟಾರೆ (ನಗರ ಮತ್ತು ಗ್ರಾಮೀಣ) ಬಡತನ ಪ್ರಮಾಣವು 1970 ಮತ್ತು 2000 ರ ದಶಕಗಳ ನಡುವೆ 47% ರಷ್ಟು ಕಡಿಮೆಯಾಗಿದ್ದು, ಭಾರತದಲ್ಲಿ ಒಟ್ಟಾರೆ ಬಡತನ ಪ್ರಮಾಣದಲ್ಲಿ 29% ರಷ್ಟು ಕುಸಿತಕ್ಕೆ ವಿರುದ್ಧವಾಗಿದೆ.<ref>{{cite book |title=Human Development Report 2005 Kerala |publisher=State Planning Board |author=Centre for Development Studies Thiruvananthapuram |year=2006 |location=Thiruvananthapuram, Kerala}}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6" /> 2013 ರ ಟೆಂಡೂಲ್ಕರ್ ಸಮಿತಿ ವರದಿಯು ಗ್ರಾಮೀಣ ಮತ್ತು ನಗರ ಕೇರಳದಲ್ಲಿ ಬಡತನ ರೇಖೆಯ ಕೆಳಗೆ ವಾಸಿಸುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಕ್ರಮವಾಗಿ 9.1% ಮತ್ತು 5.0% ಎಂದು ಅಂದಾಜಿಸಿದೆ.<ref>{{cite web |title=Press Note on Poverty Estimates, 2011–12 |url=https://planningcommission.nic.in/news/pre_pov2307.pdf |website=planningcommission.gov.in |publisher=Planning Commission, Government of India |access-date=27 November 2018 |archive-url=https://web.archive.org/web/20140628120737/https://planningcommission.nic.in/news/pre_pov2307.pdf |archive-date=28 June 2014 |url-status=dead}}</ref> ಈ ಬದಲಾವಣೆಗಳು ಹೆಚ್ಚಾಗಿ 19 ನೇ ಶತಮಾನದ ಕೊನೆಯಲ್ಲಿ ಕೊಚ್ಚಿ ಮತ್ತು ತಿರುವಾಂಕೂರು ಸಾಮ್ರಾಜ್ಯಗಳು ಸಾಮಾಜಿಕ ಕಲ್ಯಾಣವನ್ನು ಹೆಚ್ಚಿಸಲು ಪ್ರಾರಂಭಿಸಿದ ಪ್ರಯತ್ನಗಳಿಂದ ಉಂಟಾಗಿವೆ.<ref>{{Cite report |title=EFA [Education for All] Global Monitoring Report |url=https://www.unesco.org/education/efa_report/chapter4.pdf |year=2003 |archive-url=https://web.archive.org/web/20040923014605/https://www.unesco.org/education/efa_report/chapter4.pdf |archive-date=23 September 2004 |page=156 |publisher=[[UNESCO]] |access-date=4 April 2022}}</ref><ref>{{Cite journal |author=Kutty VR |year=2000 |title=Historical analysis of the development of health care facilities in Kerala State, India |journal=Health Policy and Planning |volume=15 |issue=1 |pages=103–09 |doi=10.1093/heapol/15.1.103 |pmid=10731241 |s2cid=7634887 |doi-access=free }}</ref> ಈ ಗಮನವನ್ನು ಕೇರಳದ ಸ್ವಾತಂತ್ರ್ಯೋತ್ತರ ಸರ್ಕಾರವು ಉಳಿಸಿಕೊಂಡಿದೆ.<ref name="Brenkert_Malone_2003" /><ref name="Varma_2005">{{Cite news |author=Varma MS |title=Nap on HDI scores may land Kerala in an equilibrium trap |work=The Financial Express |date=4 April 2005 |access-date=12 November 2007 |url=https://www.financialexpress.com/old/print.php?content_id=86925 |archive-url=https://web.archive.org/web/20080617134031/https://www.financialexpress.com/old/print.php?content_id=86925 |archive-date=17 June 2008}}</ref>{{rp|48}} ಕೇರಳವು [[NITI ಆಯೋಗ]]ದ ಸುಸ್ಥಿರ ಅಭಿವೃದ್ಧಿ ಗುರಿಗಳ ಡ್ಯಾಶ್ಬೋರ್ಡ್ ಮತ್ತು [[ಭಾರತೀಯ ರಿಸರ್ವ್ ಬ್ಯಾಂಕ್]]ನ ''ಇಂಡಿಯನ್ ಎಕಾನಮಿಯ ಹ್ಯಾಂಡ್ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್'' ಪ್ರಕಾರ ಭಾರತದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿದೆ]].<ref>{{Cite web |title=SDG India – Index 2021–22 – Partnerships in the Decade of Action |url=https://sdgindiaindex.niti.gov.in/#/ranking |date=2021 |url-status=dead |archive-url=https://web.archive.org/web/20210613021943/https://niti.gov.in/writereaddata/files/SDG_3.0_Final_04.03.2021_Web_Spreads.pdf |archive-date=13 June 2021 |website=[[NITI Aayog]] |access-date=29 September 2024}}</ref><ref>{{Cite web |title=Handbook of Statistics on Indian Economy. Table 154 : Number and Percentage of Population Below Poverty Line. (2011-12) |url=https://www.rbi.org.in/scripts/PublicationsView.aspx?id=19887 |access-date=13 September 2021 |website=Reserve Bank of India |archive-date=13 September 2021 |archive-url=https://web.archive.org/web/20210913133540/https://www.rbi.org.in/scripts/PublicationsView.aspx?id=19887 |url-status=live }}</ref>
ಕೇರಳವು [[ಕೆನಡಾ]], [[ಜಪಾನ್]], ಮತ್ತು [[ನಾರ್ವೆ]] ನಂತಹ [[ಅಭಿವೃದ್ಧಿ ಹೊಂದಿದ ರಾಷ್ಟ್ರಗಳ]] ವಿಶಿಷ್ಟವಾದ "[[ಜನಸಂಖ್ಯಾ ಪರಿವರ್ತನೆ]]" ಯನ್ನು ಅನುಭವಿಸಿದೆ.<ref name="Tharamangalam_2005" />{{rp|1}} 2005 ರಲ್ಲಿ, 11.2% ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು.<ref name="Varma_2005" /> 2023 ರಲ್ಲಿ, ಬಿಬಿಸಿಯು ಕೇರಳದಿಂದ ವಲಸೆಯಿಂದ ಉಂಟಾದ ಸಮಸ್ಯೆಗಳು ಮತ್ತು ಪ್ರಯೋಜನಗಳ ಬಗ್ಗೆ ವರದಿ ಮಾಡಿತು, ಕುಂಬನಾಡ್ ಗ್ರಾಮದ ಮೇಲೆ ಕೇಂದ್ರೀಕರಿಸಿತು.<ref>{{cite web |url=https://www.bbc.co.uk/news/world-asia-india-64936519 |title=Kerala: A ghost town in the world's most populated country |last= |first= |date=26 March 2023 |website=www.bbc.co.uk |publisher=BBC News |access-date=26 March 2023}}</ref>
2004 ರಲ್ಲಿ, ಜನನ ದರವು 18 ಪ್ರತಿ 1,000 ಕ್ಕೆ ಕಡಿಮೆಯಾಗಿತ್ತು.<ref name="Kutty_2004_6">{{Cite book |author=Kutty VR |veditors=Nair PR, Shaji H |year=2004 |title=Why low birth weight (LBW) is still a problem in Kerala: A preliminary exploration |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621607 |access-date=12 November 2007 |url=https://www.cds.ac.in/krpcds/publication/downloads/57.pdf |page=6}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 1.6 ರ ಒಟ್ಟು ಫಲವತ್ತತೆ ಪ್ರಮಾಣವನ್ನು (TFR) ಹೊಂದಿತ್ತು. ಮಲಪ್ಪುರಂ ಜಿಲ್ಲೆಯನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳು 2 ಕ್ಕಿಂತ ಕಡಿಮೆ ಫಲವತ್ತತೆ ಪ್ರಮಾಣವನ್ನು ಹೊಂದಿದ್ದವು. ಫಲವತ್ತತೆ ಪ್ರಮಾಣವು [[ಮಲಪ್ಪುರಂ ಜಿಲ್ಲೆ]]ಯಲ್ಲಿ (2.2) ಅತಿ ಹೆಚ್ಚು ಮತ್ತು [[ಪತ್ತನಂತಿಟ್ಟ ಜಿಲ್ಲೆ]]ಯಲ್ಲಿ (1.3) ಅತಿ ಕಡಿಮೆಯಾಗಿದೆ.<ref>{{cite web |title=Fertility at District Level in India:Lessons from the 2011 Census |url=https://www.ceped.org/IMG/pdf/ceped_wp30.pdf&ved=2ahUKEwio7YjXv9nsAhVJzjgGHUy2BTE4FBAWMAR6BAgJEAE&usg=AOvVaw2PL5xTsjiaBMS96pAhMEX1 |author=Christophe Z Guilmoto and Irudaya Rajan |page=31 |format=PDF |access-date=29 October 2020}}</ref> 2001 ರಲ್ಲಿ, ಮುಸ್ಲಿಮರು 2.6 ರ TFR ಅನ್ನು ಹೊಂದಿದ್ದರು, ಹಿಂದೂಗಳಿಗೆ 1.5 ಮತ್ತು ಕ್ರೈಸ್ತರಿಗೆ 1.7 ರಷ್ಟಿತ್ತು.<ref>{{Cite news |url=https://www.deccanchronicle.com/nation/current-affairs/170316/fertility-rate-to-even-out-in-20-years-in-kerala.html |title=Fertility rate to even out in 20 years in Kerala |website=Deccan Chronicle |access-date=29 October 2020}}</ref> CMS ಇಂಡಿಯನ್ ಕರಪ್ಷನ್ ಸ್ಟಡಿ (CMS-ICS) ನಡೆಸಿದ ಸಮೀಕ್ಷೆಗಳ ಪ್ರಕಾರ ರಾಜ್ಯವು "ಅತ್ಯಂತ ಕಡಿಮೆ ಭ್ರಷ್ಟ ಭಾರತೀಯ ರಾಜ್ಯ" ಎಂದೂ ಪರಿಗಣಿಸಲ್ಪಟ್ಟಿದೆ<ref>{{Cite web |url=https://www.onmanorama.com/news/nation/2017/04/28/kerala-least-corrupt-states-india-karnatak-highest-petty-corruptionkerala-least-corrupt-states-india-karnatak-highest-petty-corruption.html |title=Kerala among the least corrupt states in India, Karnataka tops the list: study |website=OnManorama}}</ref> ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ (2005)<ref>{{cite web |title=India Corruption Study – 2005 |publisher=[[Transparency International]] |date=June 2005 |access-date=11 November 2007 |url=https://archive.transparency.org/regional_pages/asia_pacific/newsroom/news_archive2/india_corruption_study_2005 |archive-url=https://web.archive.org/web/20130413044112/https://archive.transparency.org/regional_pages/asia_pacific/newsroom/news_archive2/india_corruption_study_2005 |url-status=dead |archive-date=13 April 2013}}</ref> ಮತ್ತು ''ಇಂಡಿಯಾ ಟುಡೇ'' (1997).<ref>{{cite book |author1=Jean Dreze |author2=Amartya Sen |title=India: Development and Participation |url=https://books.google.com/books?id=UpOl35r8UHQC&pg=PA368 |access-date=24 September 2012 |year=2002 |publisher=Oxford University Press |isbn=978-0-19-925749-2 |page=368}}</ref> ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಕಡಿಮೆ [[ಕೊಲೆ]] ಪ್ರಮಾಣವನ್ನು ಹೊಂದಿದೆ, 2011 ರಲ್ಲಿ 1.1 ಪ್ರತಿ 100,000 ಕ್ಕೆ.<ref name="ncrb">{{cite web |url=https://ncrb.nic.in/CD-CII2011/cii-2011/Table%203.1.pdf |archive-url=https://web.archive.org/web/20130928024506/https://ncrb.nic.in/CD-CII2011/cii-2011/Table%203.1.pdf |url-status=dead |archive-date=28 September 2013 |date=21 June 2012 |title=Table–3.1 Incidence And Rate Of Violent Crimes During 2011 |access-date=24 September 2014}}</ref> ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ, ಹೆಚ್ಚಿನ [[ಆತ್ಮಹತ್ಯೆ]] ಪ್ರಮಾಣ, ಕಡಿಮೆ [[ಗಳಿಸಿದ ಆದಾಯ]]ದ ಪಾಲು, [[ಬಾಲ್ಯ ವಿವಾಹ]],<ref>{{Cite news |title=Child marriages remain Kerala's secret shame |url=https://www.thehindu.com/news/national/kerala/child-marriages-remain-keralas-secret-shame/article7613216.ece |newspaper=The Hindu |date=4 September 2015 |access-date=4 September 2015 |issn=0971-751X}}</ref> [[ಲೈಂಗಿಕ ಕಿರುಕುಳ]] ದೂರುಗಳು ಮತ್ತು ಸೀಮಿತ ಸ್ವಾತಂತ್ರ್ಯದಂತಹ ಕೆಲವು ನಕಾರಾತ್ಮಕ ಅಂಶಗಳು ವರದಿಯಾಗಿವೆ.<ref name="Joseph" /> ಕೇರಳದಲ್ಲಿ ಬಾಲ್ಯ ವಿವಾಹವು ಕಡಿಮೆಯಾಗಿದೆ. ಮಲಪ್ಪುರಂ ಜಿಲ್ಲೆಯು ಅತಿ ಹೆಚ್ಚು ಬಾಲ್ಯ ವಿವಾಹಗಳನ್ನು ಹೊಂದಿದೆ ಮತ್ತು ಅಂತಹ ಪ್ರಕರಣಗಳ ಸಂಖ್ಯೆಯು ಮಲಪ್ಪುರಂನಲ್ಲಿ ಹೆಚ್ಚುತ್ತಿದೆ. ಬಾಲ್ಯ ವಿವಾಹಗಳು ವಿಶೇಷವಾಗಿ [[ಕೇರಳದಲ್ಲಿ ಮುಸ್ಲಿಮರಲ್ಲಿ ಬಾಲ್ಯ ವಿವಾಹ|ಮುಸ್ಲಿಂ ಸಮುದಾಯದಲ್ಲಿ]] ಹೆಚ್ಚಾಗಿದೆ.<ref>{{cite news |last=Naha |first=Abdul Latheef |title=Child marriage cases go up in Malappuram |url=https://www.thehindu.com/news/national/kerala/child-marriage-cases-go-up-in-malappuram/article22751598.ece |date=18 February 2018 |newspaper=The Hindu |access-date=31 December 2019}}</ref><ref>{{Cite web |url=https://www.onmanorama.com/news/kerala/2018/10/26/child-marriages-shoot-up-in-the-most-unlikely-places-in-kerala.html |title=Child marriages shoot up in the most unlikely places in Kerala |website=OnManorama}}</ref> 2019 ರಲ್ಲಿ, ಕೇರಳವು ಭಾರತದಲ್ಲಿ ಅತಿ ಹೆಚ್ಚು ಮಕ್ಕಳ ಲೈಂಗಿಕ ದುರುಪಯೋಗ ದೂರುಗಳನ್ನು ದಾಖಲಿಸಿತು.<ref>{{cite news |last=Natu |first=Nitasha |title=Kerala No. 1 in child sex abuse complaints; Tamil Nadu, Maharashtra follow |url=https://timesofindia.indiatimes.com/india/kerala-no-1-in-child-sex-abuse-complaints-tamil-nadu-maharashtra-follow/articleshow/72972619.cms |date=25 December 2019 |newspaper=The Time of India |access-date=31 December 2019}}</ref>
2015 ರಲ್ಲಿ, ಕೇರಳವು ಯಾವುದೇ ರಾಜ್ಯದ ಅತಿ ಹೆಚ್ಚು ಶಿಕ್ಷೆಯ ಪ್ರಮಾಣವನ್ನು ಹೊಂದಿತ್ತು, 77% ಕ್ಕಿಂತ ಹೆಚ್ಚು.<ref>{{cite news |url=https://timesofindia.indiatimes.com/india/Conviction-rate-up-Kerala-tops-with-over-77/articleshow/48408220.cms |location=New Delhi, India |work=The Times of India |title=Conviction rate up, Kerala tops with over 77% link |date=9 August 2015 |access-date=14 November 2015}}</ref> ಕೇರಳವು ಗ್ರಾಮೀಣ ಭಾರತದಲ್ಲಿ ಅತಿ ಕಡಿಮೆ ಮನೆಯಿಲ್ಲದ ಜನರ ಪ್ರಮಾಣವನ್ನು ಹೊಂದಿದೆ, <0.1%,<ref>{{cite news |url=https://timesofindia.indiatimes.com/india/Population-of-homeless-in-rural-India-dips/articleshow/26981896.cms |location=India |work=The Times of India |title=Population of homeless in rural India dips |date=7 December 2013 |access-date=14 November 2015}}</ref> ಮತ್ತು ರಾಜ್ಯವು ಮೊದಲ "ಶೂನ್ಯ ಮನೆಯಿಲ್ಲದ ರಾಜ್ಯ" ವಾಗುವ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ, ಇದರ ಜೊತೆಗೆ ಅದರ ಶ್ಲಾಘನೀಯ "ಶೂನ್ಯ ಭೂರಹಿತ ಯೋಜನೆ" ಯನ್ನು ಹೊಂದಿದೆ, ಖಾಸಗಿ ಸಂಸ್ಥೆಗಳು ಮತ್ತು ವಲಸೆ ಮಲಯಾಳಿ ಸಮುದಾಯವು ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸಲು ಯೋಜನೆಗಳಿಗೆ ಹಣಕಾಸು ಒದಗಿಸುತ್ತಿದೆ.<ref>{{cite news |url=https://www.thehindu.com/news/national/kerala/cm-told-to-pursue-zero-homeless-kerala-project/article5309749.ece |location=Pathanamthitta, India |work=The Hindu |title=CM told to pursue Zero Homeless Kerala project link |date=3 November 2013}}</ref> ರಾಜ್ಯವು [[ಭಾರತ ರಾಜ್ಯ ಹಸಿವು ಸೂಚ್ಯಂಕ]]ದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು, ಇದು [[ಪಂಜಾಬ್, ಭಾರತ|ಪಂಜಾಬ್]] ನ ನಂತರದ ಸ್ಥಾನದಲ್ಲಿದೆ. 2015 ರಲ್ಲಿ ಕೇರಳವು ಇ-ಗವರ್ನೆನ್ಸ್ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಮೊದಲ "ಸಂಪೂರ್ಣ ಡಿಜಿಟಲ್ ರಾಜ್ಯ" ವಾಯಿತು.<ref>{{cite news |url=https://timesofindia.indiatimes.com/india/Kerala-becomes-Indias-first-complete-digital-state/articleshow/48494982.cms |location=New Delhi, India |work=The Times of India |title=Kerala-becomes-Indias-first-complete-digital-state link |date=15 August 2015}}</ref>
=== ಆರೋಗ್ಯ ರಕ್ಷಣೆ ===
{{Multiple image
| direction = vertical
| width = 220
| image1 = Regional Cancer Centre, Trivandrum.jpg
| caption1 = [[ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ, ತಿರುವನಂತಪುರ]]
}}
{{See also|ಕೇರಳದ ಸರ್ಕಾರಿ ಆಸ್ಪತ್ರೆಗಳ ಪಟ್ಟಿ}}
ಕೇರಳವು [[ಸಾರ್ವತ್ರಿಕ ಆರೋಗ್ಯ ರಕ್ಷಣೆ]] ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಪ್ರವರ್ತಕವಾಗಿದೆ.<ref>{{cite news |last1=Maya |first1=C |title=The road to universal health care in State |url=https://www.thehindu.com/todays-paper/tp-national/tp-kerala/the-road-to-universal-health-care-in-state/article5450319.ece |access-date=14 November 2015 |work=The Hindu |date=12 December 2013}}</ref> [[ಉಪ-ಬದಲಿ ಫಲವತ್ತತೆ]] ಮಟ್ಟ ಮತ್ತು [[ಶಿಶು ಮರಣ ಪ್ರಮಾಣ]]ವು ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ, ಇದು 12<ref name="Brenkert_Malone_2003" /><ref name="Kutty_2004_6" />{{rp|49}} ರಿಂದ 14<ref name="Krishnaswami_2004">{{Cite book |author=Krishnaswami P |veditors=Neelakantan S, Nair PR, Shaji H |year=2004 |title=Morbidity Study: Incidence, Prevalence, Consequences, and Associates |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621669 |url=https://www.cds.ac.in/krpcds/publication/downloads/63.pdf |access-date=31 December 2008}}</ref>{{rp|5}} ಪ್ರತಿ 1,000 ಜೀವಂತ ಜನನಗಳಿಗೆ ಸಾವುಗಳು ಎಂದು ಅಂದಾಜಿಸಲಾಗಿದೆ; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16 ರ ಪ್ರಕಾರ, ಇದು 6 ಕ್ಕೆ ಇಳಿದಿದೆ.<ref>{{Cite news |url=https://timesofindia.indiatimes.com/india/kerala-as-good-as-us-oecd-in-saving-newborn-children/articleshow/57438366.cms |title=Kerala as good as US, OECD in saving newborn children |work=The Times of India |access-date=9 March 2017}}</ref> [[ಲಿಯಾನ್ ಯಿಂಗ್ ಚೌ|ಲಿಯಾನ್]] ಫೌಂಡೇಶನ್, [[ಸಿಂಗಾಪುರ]]-ಆಧಾರಿತ ಪರೋಪಕಾರಿ ಸಂಸ್ಥೆ, ನಿಯೋಜಿಸಿದ ಅಧ್ಯಯನದ ಪ್ರಕಾರ, ಗಂಭೀರ ಅನಾರೋಗ್ಯದ ರೋಗಿಗಳಿಗೆ ರಾಜ್ಯದ ಉಪಶಮನ ಆರೈಕೆಯನ್ನು ಒದಗಿಸುವ ಆಧಾರದ ಮೇಲೆ ಕೇರಳವನ್ನು ಭಾರತದಲ್ಲಿ ಸಾಯಲು ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗಿದೆ.<ref>{{cite news |last1=Patel |first1=Atish |title=Why Kerala is the best place in India to die |url=https://www.bbc.com/news/world-asia-india-36137285 |date=4 May 2016}}</ref> ಆದಾಗ್ಯೂ, ಕೇರಳದ [[ಅನಾರೋಗ್ಯ ಪ್ರಮಾಣ]]ವು ಯಾವುದೇ ಇತರ ಭಾರತೀಯ ರಾಜ್ಯಕ್ಕಿಂತ ಹೆಚ್ಚಾಗಿದೆ—118 (ಗ್ರಾಮೀಣ) ಮತ್ತು 88 (ನಗರ) ಪ್ರತಿ 1,000 ಜನರಿಗೆ. ಅನುಗುಣವಾದ ಅಂಕಿಅಂಶಗಳು ಅಖಿಲ ಭಾರತಕ್ಕೆ 55 ಮತ್ತು 54 ಪ್ರತಿ 1,000 ಆಗಿತ್ತು {{As of|2005|lc=y}}.<ref name="Krishnaswami_2004" />{{rp|5}} ಕೇರಳದ 13.3% [[ಕಡಿಮೆ ಜನನ ತೂಕ]] [[ಪ್ರಪಂಚದ ಮೊದಲ ರಾಷ್ಟ್ರಗಳಲ್ಲಿ]] ಅನೇಕಕ್ಕಿಂತ ಹೆಚ್ಚಾಗಿದೆ.<ref name="Kutty_2004_6" /> 50% ಕ್ಕಿಂತ ಹೆಚ್ಚು ಜನರು ಅವಲಂಬಿಸಿರುವ 3 ಮಿಲಿಯನ್ [[ನೀರಿನ ಬಾವಿ]]ಗಳ ನಡುವೆ [[ನೀರಿನಿಂದ ಹರಡುವ ರೋಗ]]ಗಳಾದ [[ಅತಿಸಾರ]], [[ಭೇದಿ]], [[ಹೆಪಟೈಟಿಸ್]], ಮತ್ತು [[ಟೈಫಾಯಿಡ್]] ಏಕಾಏಕಿ ಸಮಸ್ಯೆಯು [[ನೈರ್ಮಲ್ಯ ಒಳಚರಂಡಿ|ಒಳಚರಂಡಿ]] ಕೊರತೆಯಿಂದ ಉಲ್ಬಣಗೊಂಡಿದೆ.<ref name="Roy_2004">{{Cite journal |author=Roy MKP |year=2004 |title=Water quality and health status in Kollam Municipality |journal=Centre for Development Studies |url=https://services.iriskf.org/data/articles/Document1168200520.8355524.pdf |access-date=28 December 2008 |archive-date=21 December 2016 |archive-url=https://web.archive.org/web/20161221084934/http://services.iriskf.org/data/articles/Document1168200520.8355524.pdf |url-status=dead }}</ref>{{rp|5–7}} 2017 ರಂತೆ, ರಾಜ್ಯವು ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಮತ್ತು ಭಾರತದಲ್ಲಿ ರೋಗದ ಅತಿ ಹೆಚ್ಚು ಹರಡುವಿಕೆಯ ಪ್ರಮಾಣವನ್ನು ಹೊಂದಿದೆ.<ref>{{Cite web |url=https://timesofindia.indiatimes.com/city/kochi/diabetic-patients-kerala-tops-list-of-indian-states/articleshow/61974164.cms |title=Diabetic patients: Kerala tops list of Indian states |date=8 December 2017 |website=The Times of India |language=en |access-date=28 October 2019}}</ref>
[[ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ]] (UNICEF) ಮತ್ತು [[ವಿಶ್ವ ಆರೋಗ್ಯ ಸಂಸ್ಥೆ]] ಸೂತ್ರಗಳ ಮೇಲೆ ಸ್ತನ್ಯಪಾನದ ಪರಿಣಾಮಕಾರಿ ಪ್ರೋತ್ಸಾಹದಿಂದಾಗಿ ಕೇರಳವನ್ನು ವಿಶ್ವದ ಮೊದಲ "[[ಶಿಶು ಸ್ನೇಹಿ ಆಸ್ಪತ್ರೆ ಉಪಕ್ರಮ|ಶಿಶು-ಸ್ನೇಹಿ]] ರಾಜ್ಯ" ಎಂದು ಗೊತ್ತುಪಡಿಸಿತು.<ref>{{cite web |date=August 2002 |title=Kerala Named World's First WHO-UNICEF "Baby-Friendly State" |work=United Nations Foundation |url=https://www.unwire.org/unwire/20020801/28062_story.asp |archive-url=https://web.archive.org/web/20100306205352/https://www.unwire.org/unwire/20020801/28062_story.asp |archive-date=6 March 2010 |access-date=14 March 2009}}</ref><ref>{{cite news |url=https://news.bbc.co.uk/2/hi/south_asia/2166677.stm |location=Kochi, India |work=BBC News |title=Indian state wins 'baby-friendly' award |date=1 August 2002}}</ref> 95% ಕ್ಕಿಂತ ಹೆಚ್ಚು ಕೇರಳೀಯ ಜನನಗಳು ಆಸ್ಪತ್ರೆಯಲ್ಲಿ ನಡೆಯುತ್ತವೆ ಮತ್ತು ರಾಜ್ಯವು ದೇಶದಲ್ಲಿ ಅತಿ ಕಡಿಮೆ ಶಿಶು ಮರಣ ಪ್ರಮಾಣವನ್ನು ಸಹ ಹೊಂದಿದೆ. ಮೂರನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು 100% ಜನನಗಳು ವೈದ್ಯಕೀಯ ಸೌಲಭ್ಯಗಳಲ್ಲಿ ನಡೆಯುತ್ತಿರುವುದರೊಂದಿಗೆ "ಸಾಂಸ್ಥಿಕ ಪ್ರಸವ" ದಲ್ಲಿ ಕೇರಳವನ್ನು ಮೊದಲ ಸ್ಥಾನದಲ್ಲಿರಿಸುತ್ತದೆ.<ref name="kerala_fact_sheet"/> [[ಆಯುರ್ವೇದ]],<ref name="Unnikrishnan_2004">{{Cite journal |last=Unnikrishnan |first=E |year=2004 |title=''Materia Medica'' of the Local Health Traditions of Payyannur |journal=Centre for Development Studies |url=https://www.cds.ac.in/krpcds/publication/downloads/80.pdf |access-date=22 January 2006}}</ref>{{rp|13}} ''[[ಸಿದ್ಧ]]'', ಮತ್ತು ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯವಾಗಿ ಕಂಡುಬರುವ [[ಸಾಂಪ್ರದಾಯಿಕ ಔಷಧ]] ವಿಧಾನಗಳು, ''ಕಳರಿ'', ''ಮರ್ಮಚಿಕಿತ್ಸ'' ಮತ್ತು ''ವಿಷವೈದ್ಯ'' ಸೇರಿದಂತೆ, ಅಭ್ಯಾಸ ಮಾಡಲಾಗುತ್ತದೆ. [[ಕಣಿಯಾರ್]] ನಂತಹ ಕೆಲವು ವೃತ್ತಿಪರ ಸಮುದಾಯಗಳು ತಮ್ಮ ಸಾಂಪ್ರದಾಯಿಕ ವೃತ್ತಿಯ ಜೊತೆಗೆ ಅಂತಹ ವೈದ್ಯಕೀಯ ವ್ಯವಸ್ಥೆಗಳ ಅಭ್ಯಾಸಕ್ಕೆ ಸಂಬಂಧಿಸಿದಂತೆ ಸ್ಥಳೀಯ ವೈದ್ಯರು ಎಂದು ಕರೆಯಲ್ಪಡುತ್ತಿದ್ದರು.<ref>Angus Stewart, woodburn The Religious attitude: A psychological study of its differentiation, 1927</ref> ಇವುಗಳು ''[[ಗುರುಕುಲ]]'' ಶಿಷ್ಯತ್ವದ ಮೂಲಕ ಪ್ರಚಾರಗೊಳ್ಳುತ್ತವೆ,<ref name="Unnikrishnan_2004" />{{rp|5–6}} ಮತ್ತು ಔಷಧೀಯ ಮತ್ತು ಪರ್ಯಾಯ ಚಿಕಿತ್ಸೆಗಳ ಮಿಶ್ರಣವನ್ನು ಒಳಗೊಂಡಿರುತ್ತವೆ.<ref name="Unnikrishnan_2004" />{{rp|15}} [[ವೈದ್ಯರತ್ನಂ ಪಿ. ಎಸ್. ವಾರಿಯರ್]] 1902 ರಲ್ಲಿ [[ಕೊಟ್ಟಕ್ಕಲ್]] ನಲ್ಲಿ ([[ಮಲಪ್ಪುರಂ]] ನಿಂದ ಸುಮಾರು 10 ಕಿಮೀ) ಸ್ಥಾಪಿಸಿದ ''[[ಆರ್ಯ ವೈದ್ಯ ಸಲಾ]]'' ರಾಜ್ಯದ ಅತಿದೊಡ್ಡ ಆಯುರ್ವೇದ ಔಷಧೀಯ ಜಾಲ ಮತ್ತು ಆರೋಗ್ಯ ಕೇಂದ್ರವಾಗಿದೆ.<ref name="Warrier">{{cite news |url=https://www.thehindu.com/todays-paper/tp-national/pk-warrier-turns-90/article2080601.ece |title=PK Warrier turns 90 |work=The Hindu |date=6 June 2011}}</ref><ref name="Arya Vaidya Sala Kottakkal – Part 1">{{cite AV media |url=https://www.youtube.com/watch?v=nj6YqhsUo0c |archive-url=https://ghostarchive.org/varchive/youtube/20211222/nj6YqhsUo0c |archive-date=22 December 2021 |url-status=live |title=Arya Vaidya Sala Kottakkal – Part 1 |publisher=BBC World – India Business Report |date=30 May 2013 |medium=Documentary}}{{cbignore}}</ref><ref name="mal">{{Cite news |title=അമ്പതിന്റെ നിറവില് മലപ്പുറം; മലപ്പുറത്തിന്റെ മാനവിക മഹാപൈതൃകം |url=https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |last=Leelakrishnan |first=Alamkode |date=17 June 2019 |work=Mathrubhumi |access-date=24 April 2021 |archive-date=7 May 2021 |archive-url=https://web.archive.org/web/20210507091729/https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |url-status=dead}}</ref> ಇದು ವಿಶ್ವದ ಅತಿದೊಡ್ಡ ಆಯುರ್ವೇದ ಔಷಧೀಯ ಬ್ರಾಂಡ್ಗಳಲ್ಲಿ ಒಂದಾಗಿದೆ.<ref name="Warrier" /><ref name="Arya Vaidya Sala Kottakkal – Part 1" /><ref name="mal" />
2014 ರಲ್ಲಿ, ಕೇರಳವು ಸುಕೃತಂ ಎಂಬ ಕಾರ್ಯಕ್ರಮದ ಮೂಲಕ ಬಡವರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುವ ಭಾರತದ ಮೊದಲ ರಾಜ್ಯವಾಯಿತು.<ref>{{cite web |url=https://www.freepressjournal.in/kerala-becomes-first-state-to-provide-free-cancer-treatment/457976 |title=Kerala becomes first state to provide free cancer treatment – Free Press Journal |website=www.freepressjournal.in |access-date=18 May 2016 |date=11 October 2014}}</ref> ಕೇರಳದ ಜನರು [[ಕ್ಯಾನ್ಸರ್]]ಗಳು, [[ಯಕೃತ್ತು]] ಮತ್ತು [[ಮೂತ್ರಪಿಂಡ]] ಕಾಯಿಲೆಗಳ ಹೆಚ್ಚಿನ ಘಟನೆಗಳನ್ನು ಅನುಭವಿಸುತ್ತಾರೆ.<ref>{{Cite web |url=https://www.indushealthplus.com/kerala-health-statistics.html |title=Health Statistics and Public Health issues in Kerala |website=[[Indus Health Plus]] |language=en |access-date=28 October 2019}}</ref> ಏಪ್ರಿಲ್ 2016 ರಲ್ಲಿ, ''ಎಕನಾಮಿಕ್ ಟೈಮ್ಸ್'' 250,000 ನಿವಾಸಿಗಳು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ ಎಂದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 150 ರಿಂದ 200 ಯಕೃತ್ತು ಕಸಿಗಳು ಪ್ರದೇಶದ ಆಸ್ಪತ್ರೆಗಳಲ್ಲಿ ನಡೆಯುತ್ತವೆ ಎಂದು ಸಹ ಇದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 42,000 ಕ್ಯಾನ್ಸರ್ ಪ್ರಕರಣಗಳು ಪ್ರದೇಶದಲ್ಲಿ ವರದಿಯಾಗುತ್ತವೆ. ಖಾಸಗಿ ಆಸ್ಪತ್ರೆಗಳು ತಮ್ಮ ಅಂಕಿಅಂಶಗಳನ್ನು ವರದಿ ಮಾಡದಿರಬಹುದು ಎಂದು ಇದು ಕಡಿಮೆ ಅಂದಾಜು ಎಂದು ನಂಬಲಾಗಿದೆ. ಮೂತ್ರಪಿಂಡ ದಾನಕ್ಕೆ ದೀರ್ಘ ಕಾಯುವ ಪಟ್ಟಿಗಳು ಮಾನವ ಮೂತ್ರಪಿಂಡಗಳ ಅಕ್ರಮ ವ್ಯಾಪಾರವನ್ನು ಉತ್ತೇಜಿಸಿದೆ, ಮತ್ತು ಆರ್ಥಿಕವಾಗಿ ಅನನುಕೂಲಕರ ರೋಗಿಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಕಿಡ್ನಿ ಫೆಡರೇಶನ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣವಾಗಿದೆ.<ref>{{Cite news |url=https://economictimes.indiatimes.com/industry/healthcare/biotech/healthcare/health-crisis-in-kerala-the-increase-in-cancer-kidney-and-liver-diseases/articleshow/51950836.cms?intenttarget=no |title=Health crisis in Kerala: The increase in cancer, kidney and liver diseases – The Economic Times |journal=The Economic Times |access-date=18 May 2016 |date=23 April 2016 |last1=Krishnakumar |first1=P. K. |last2=Sanandakumar |first2=S.}}</ref> 2017–18 ರಂತೆ, [[ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಕೇರಳ)|ಆರೋಗ್ಯ ಸೇವೆಗಳ ಇಲಾಖೆ]]ಯಡಿಯಲ್ಲಿ 6,691 ಆಧುನಿಕ ಔಷಧ ಸಂಸ್ಥೆಗಳಿವೆ, ಅವುಗಳಲ್ಲಿ ಒಟ್ಟು ಹಾಸಿಗೆ ಸಾಮರ್ಥ್ಯ 37,843; 15,780 ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 22,063 ನಗರ ಪ್ರದೇಶಗಳಲ್ಲಿ.<ref name="dhs">{{Cite book |title=List of modern medicine institutions (2017–18) |last=Statistics Wing |first=Health Information Cell |publisher=Directorate of Health Services, Government of Kerala |year=2019 |location=Thiruvananthapuram |pages=1, 7 |url=https://dhs.kerala.gov.in/wp-content/uploads/2020/03/list_10052019.pdf}}</ref>
=== ಭಾಷೆ ===
[[File:Language Map of Kerala (2011 Census).svg|thumb|200px|ಜಿಲ್ಲೆಯ ಪ್ರಕಾರ ಭಾಷೆಗಳು:<br> {{col-begin}}
{{col-2}}
'''ಮಲಯಾಳಂ'''
{{legend|#009deb|80–90%}}
{{legend|#0088cc|90–100%}}
{{col-end}}
]]
[[ಮಲಯಾಳಂ]] ಕೇರಳದ ಅಧಿಕೃತ ಭಾಷೆಯಾಗಿದೆ ಮತ್ತು [[ಭಾರತದ ಭಾಷೆಗಳು|ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ]] ಒಂದಾಗಿದೆ.<ref name="thehindu20130524">{{cite news |url=https://www.thehindu.com/todays-paper/tp-national/classical-status-for-malayalam/article4744630.ece |title='Classical' status for Malayalam |work=[[The Hindu]] |date=24 May 2013 |access-date=25 May 2013 |location=Thiruvananthapuram, India}}</ref><ref>{{Cite web |title=Kerala – Principal Language |url=https://archive.india.gov.in/knowindia/state_uts.php?id=73 |url-status=dead |archive-url=https://web.archive.org/web/20200610111356/https://archive.india.gov.in/knowindia/state_uts.php?id=73 |archive-date=10 June 2020 |access-date=27 November 2018 |website=Government of India}}</ref> [[ಇಡುಕ್ಕಿ ಜಿಲ್ಲೆ]] ಮತ್ತು [[ಪಾಲಕ್ಕಾಡ್ ಜಿಲ್ಲೆ]]ಯಲ್ಲಿ ಗಮನಾರ್ಹವಾದ [[ತಮಿಳು ಭಾಷೆ|ತಮಿಳು]] ಮಾತನಾಡುವ ಜನಸಂಖ್ಯೆಯಿದೆ, ಇದು ಕ್ರಮವಾಗಿ ಎರಡು ಜಿಲ್ಲೆಗಳ ಜನಸಂಖ್ಯೆಯ 17.48% ಮತ್ತು 4.8% ರಷ್ಟಿದೆ.<ref name="lg">{{cite web |title=Census of India – Language |url=https://censusindia.gov.in/2011census/C-16.html |website=censusindia.gov.in}}</ref> [[ತುಳು ಭಾಷೆ|ತುಳು]] ಮತ್ತು [[ಕನ್ನಡ]]ವನ್ನು ಮುಖ್ಯವಾಗಿ [[ಕಾಸರಗೋಡು ಜಿಲ್ಲೆ]]ಯ ಉತ್ತರ ಭಾಗಗಳಲ್ಲಿ ಮಾತನಾಡಲಾಗುತ್ತದೆ, ಪ್ರತಿಯೊಂದೂ ಕ್ರಮವಾಗಿ ಜಿಲ್ಲೆಯ ಒಟ್ಟು ಜನಸಂಖ್ಯೆಯ 8.77% ಮತ್ತು 4.23% ರಷ್ಟಿದೆ.<ref name="lg" /><ref>{{cite news |title=Kerala government to appoint officer to study issues of linguistic minorities |url=https://timesofindia.indiatimes.com/city/thiruvananthapuram/government-to-appoint-officer-to-study-issues-of-linguistic-minorities/articleshow/59892625.cms |date=2 August 2017 |newspaper=The Times of India |department=City: Thiruvananthapuram |agency=TNN |access-date=29 December 2019}}</ref>
=== ಧರ್ಮ ===
{{Main|ಕೇರಳದಲ್ಲಿ ಧರ್ಮ}}
{{multiple image
| direction = vertical
| total_width = 200
| caption_align = left
| image1 = Jain temple, Wayanad IMG 3494 by Joseph Lazer.jpg
| caption1 = [[ಸುಲ್ತಾನ್ ಬತ್ತೇರಿ|ಸುಲ್ತಾನ್ ಬತ್ತೇರಿಯ]] [[ಜೈನ ದೇವಾಲಯ, ಕಿಡಂಗನಾಡ್|ಜೈನ ದೇವಾಲಯ]].
| image3 = Cheraman juma masjid Old.jpg
| caption3 = ಮೂಲ [[ಚೇರಮನ್ ಜುಮಾ ಮಸೀದಿ]]ಯ ಮಾದರಿ.
| image4 = Palayoor St. Thomas Syro-Malabar Church.jpg
| caption4 = [[ಸೇಂಟ್ ತಾಮಸ್ ಸಿರೋ-ಮಲಬಾರ್ ಚರ್ಚ್, ಪಾಲಯೂರು]].
}}
{{Pie chart
|thumb = right
|caption = '''ಕೇರಳದಲ್ಲಿ ಧರ್ಮ''' (2011)<ref name="census_2016_religion">{{cite web |url=https://www.censusindia.gov.in/2011census/C-01/DDW00C-01%20MDDS.XLS |title=Population by religious community – 2011 |publisher=Office of the Registrar General & Census Commissioner |work=[[2011 Census of India]] |access-date=25 August 2015 |archive-url=https://web.archive.org/web/20150825155850/https://www.censusindia.gov.in/2011census/C-01/DDW00C-01%20MDDS.XLS |archive-date=25 August 2015}}</ref>
|label1 = [[ಕೇರಳದಲ್ಲಿ ಹಿಂದೂ ಧರ್ಮ|ಹಿಂದೂ ಧರ್ಮ]]
|value1 = 54.73
|color1 = darkorange
|label2 = [[ಕೇರಳದಲ್ಲಿ ಇಸ್ಲಾಂ|ಇಸ್ಲಾಂ]]
|value2 = 26.56
|color2 = Green
|label3 = [[ಕೇರಳದಲ್ಲಿ ಕ್ರಿಶ್ಚಿಯನ್ ಧರ್ಮ|ಕ್ರಿಶ್ಚಿಯನ್ ಧರ್ಮ]]
|value3 = 18.38
|color3 = dodgerblue
|label4 = ಇತರೆ ಅಥವಾ ಯಾವುದೂ ಅಲ್ಲ
|value4 = 0.32
|color4 = grey
}}
[[File:Kerala religions 2011.png|thumb|ಕೇರಳದ ಪ್ರತಿಯೊಂದು ತಾಲೂಕಿನಲ್ಲಿ ಅತ್ಯಂತ ಜನಪ್ರಿಯ ಧರ್ಮದ ಶೇಕಡಾವಾರು]]
ಕೇರಳವು [[ಹಿಂದೂಗಳು]], [[ಮುಸ್ಲಿಮರು]] ಮತ್ತು [[ಕ್ರೈಸ್ತರು]] ರಾಜ್ಯಾದ್ಯಂತ ಗಮನಾರ್ಹ ಜನಸಂಖ್ಯೆಯನ್ನು ಹೊಂದಿರುವ ಧಾರ್ಮಿಕವಾಗಿ ಬಹಳ ವೈವಿಧ್ಯಮಯವಾಗಿದೆ. ಕೇರಳವನ್ನು ಸಾಮಾನ್ಯವಾಗಿ ಭಾರತದ ಅತ್ಯಂತ ವೈವಿಧ್ಯಮಯ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref>{{cite web |url=https://thegroundtruthproject.org/paradox-indias-religiously-diverse-state/ |title=The paradox of India's most religiously diverse state |date=7 April 2019 |publisher=The Ground Truth Project |access-date=7 April 2019}}</ref><ref>{{cite web |url=https://www.huffpost.com/entry/kerala-religion-gender_b_9577234 |title=There's a Place in India Where Religions Coexist Beautifully and Gender Equality Is Unmatched |date=6 April 2016 |publisher=Huffpost |access-date=6 April 2016}}</ref> [[ಹಿಂದೂ ಧರ್ಮ]]ವು ಕೇರಳದಲ್ಲಿ ಅತಿ ವ್ಯಾಪಕವಾಗಿ ಅನುಸರಿಸಲ್ಪಡುವ ನಂಬಿಕೆಯಾಗಿದ್ದು, [[ಇಸ್ಲಾಂ]] ಮತ್ತು [[ಕ್ರಿಶ್ಚಿಯನ್ ಧರ್ಮ]]ಕ್ಕೆ ಗಮನಾರ್ಹ ಸಂಖ್ಯೆಯ ಅನುಯಾಯಿಗಳಿದ್ದಾರೆ. ಭಾರತದ ಉಳಿದ ಭಾಗಗಳಿಗೆ ಹೋಲಿಸಿದರೆ, ಕೇರಳವು ತುಲನಾತ್ಮಕವಾಗಿ ಕಡಿಮೆ [[ಸಂಪ್ರದಾಯವಾದ]]ವನ್ನು ಅನುಭವಿಸುತ್ತದೆ.<ref>{{Cite journal |last=Heller |first=Patrick |title=Social capital as a product of class mobilization and state intervention: Industrial workers in Kerala, India |journal=[[World Development (journal)|World Development]] |volume=24 |issue=6 |pages=1055–1071 |date=June 1996 |doi=10.1016/0305-750X(96)00015-0 <!-- |access-date=4 April 2022 --> |doi-access=free}}</ref> [[2011 ರ ಭಾರತದ ಜನಗಣತಿ]] ಅಂಕಿಅಂಶಗಳ ಪ್ರಕಾರ, ಕೇರಳದ ನಿವಾಸಿಗಳಲ್ಲಿ 54.7% ಹಿಂದೂಗಳು, 26.6% ಮುಸ್ಲಿಮರು, 18.4% ಕ್ರೈಸ್ತರು, ಮತ್ತು ಉಳಿದ 0.3% ರಷ್ಟು ಜನರು ಇನ್ನೊಂದು ಧರ್ಮವನ್ನು ಅನುಸರಿಸುತ್ತಾರೆ ಅಥವಾ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿಲ್ಲ.<ref name="censusindia2011religion">{{cite web |title=Population by religious communities |work=Census of India |url=https://www.censusindia.gov.in/2011census/C-01.html |publisher=Government of India |access-date=26 August 2015}}</ref> [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂಗಳು ಅತಿದೊಡ್ಡ ಧಾರ್ಮಿಕ ಗುಂಪನ್ನು ಪ್ರತಿನಿಧಿಸುತ್ತಾರೆ, ಅಲ್ಲಿ ಅವರು ಮುಸ್ಲಿಮರಿಂದ ಹಿಂದಿಕ್ಕಲ್ಪಟ್ಟಿದ್ದಾರೆ.<ref name="thehindu1">{{cite news |url=https://www.hindu.com/2004/09/23/stories/2004092306010500.htm |archive-url=https://web.archive.org/web/20041128124211/https://www.hindu.com/2004/09/23/stories/2004092306010500.htm |url-status=dead |archive-date=28 November 2004 |location=Chennai, India |title=Increase in Muslim population in the State |date=23 September 2004 |work=[[The Hindu]] |access-date=13 November 2015}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>{{cite news |url=https://timesofindia.indiatimes.com/india/Kerala-not-Goa-has-maximum-no-of-Christians/articleshow/2649158.cms |title=Kerala, not Goa, has maximum no. of Christians |work=The Times of India |date=25 December 2007 |publisher=The Times Group}}</ref> 2016 ರಂತೆ, ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಇತರರು ರಾಜ್ಯದಲ್ಲಿ ಒಟ್ಟು ಜನನಗಳ ಕ್ರಮವಾಗಿ 41.9%, 42.6%, 15.4% ಮತ್ತು 0.2% ರಷ್ಟಿದ್ದಾರೆ.<ref>{{Cite web |url=https://www.ecostat.kerala.gov.in/images/pdf/publications/Vital_Statistics/data/vital_statistics_2016.pdf |title=Vital Statistics 2016 |website=Ecostat, Kerala Government. |access-date=7 June 2019 |archive-date=11 July 2019 |archive-url=https://web.archive.org/web/20190711011809/http://www.ecostat.kerala.gov.in/images/pdf/publications/Vital_Statistics/data/vital_statistics_2016.pdf |url-status=dead}}</ref>
ಇಸ್ಲಾಂ ಕೇರಳಕ್ಕೆ ಬಂದಿತು, ಇದು ದೊಡ್ಡ [[ಹಿಂದೂ ಮಹಾಸಾಗರ]]ದ ಅಂಚಿನ ಭಾಗವಾಗಿದ್ದು, [[ಮಧ್ಯಪ್ರಾಚ್ಯ]]ದಿಂದ ಮಸಾಲೆ ಮತ್ತು ರೇಷ್ಮೆ ವ್ಯಾಪಾರಿಗಳ ಮೂಲಕ ಬಂದಿತು. ಇತಿಹಾಸಕಾರರು ಇಸ್ಲಾಂನ್ನು ಕೇರಳಕ್ಕೆ 7 ನೇ ಶತಮಾನ CE ಯಷ್ಟು ಹಿಂದೆಯೇ ಪರಿಚಯಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ.<ref name="indiatimes3">{{cite web |url=https://timesofindia.indiatimes.com/india/Trade-not-invasion-brought-Islam-to-India/articleshow/2144414.cms |title=Trade, not invasion brought Islam to India |last=Sethi |first=Atul |date=24 June 2007 |work=[[The Times of India]] |access-date=24 September 2014}}</ref><ref name="autogenerated20002">Katz 2000; Koder 1973; Thomas Puthiakunnel 1973; David de Beth Hillel, 1832; Lord, James Henry 1977.</ref> ಗಮನಾರ್ಹವಾಗಿ [[ಚೇರಮನ್ ಪೆರುಮಾಳ್ ತಾಜುದ್ದೀನ್]] ರ ದಂತಕಥೆಯು ಕಂಡುಬಂದಿದೆ, ಇದು [[ಅರೇಬಿಯಾ]]ಕ್ಕೆ ತೆರಳಿ [[ಮುಹಮ್ಮದ್]] ರನ್ನು ಭೇಟಿಯಾದ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪೌರಾಣಿಕ ಹಿಂದೂ ರಾಜನ ಕಥೆಯಾಗಿದೆ.<ref>{{cite book |last1=Varghese |first1=Theresa |title=Stark World Kerala |year=2006 |publisher=Stark World Pub. |isbn=978-8190250511 |url=https://books.google.com/books?id=lDhuAAAAMAAJ&q=cheraman+perumal+tajuddin |language=en}}</ref><ref>{{cite book |last1=Kumar |first1=Satish |title=India's National Security: Annual Review 2009 |year=2012 |url=https://books.google.com/books?id=x-esAgAAQBAJ&q=cheraman+perumal+tajuddin&pg=PA346 |publisher=Routledge |language=en |isbn=978-1-136-70491-8}}</ref><ref>Minu Ittyipe; [[Solomon]] to Cheraman; Outlook Indian Magazine; 2012</ref> ಕೇರಳ ಮುಸ್ಲಿಮರನ್ನು ಸಾಮಾನ್ಯವಾಗಿ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಎಂದು ಕರೆಯಲಾಗುತ್ತದೆ. ಮಾಪ್ಪಿಲರು ಕೇರಳದ ಮುಸ್ಲಿಂ ಜನಸಂಖ್ಯೆಯನ್ನು ರೂಪಿಸುವ ಅನೇಕ ಸಮುದಾಯಗಳಲ್ಲಿ ಒಂದಾಗಿದೆ.<ref name="KunhaliV2">Kunhali, V. "Muslim Communities in Kerala to 1798" PhD Dissertation Aligarh Muslim University (1986) [https://ir.amu.ac.in/2736/1/T%205242.pdf]</ref><ref name="Divakaruni20112">{{cite book |url=https://books.google.com/books?id=W0wLgfQyvFAC |title=The Palace of Illusions |author=Chitra Divakaruni |year=2011 |publisher=Pan Macmillan |isbn=978-0-330-47865-6 |access-date=18 November 2012}}</ref> [[ಚೇರಮನ್ ಪೆರುಮಾಳ್ಸ್ ದಂತಕಥೆ]]ಯ ಪ್ರಕಾರ, ಮೊದಲ ಭಾರತೀಯ ಮಸೀದಿಯನ್ನು {{CE|624}} ರಲ್ಲಿ [[ಕೊಡುಂಗಲ್ಲೂರು]] ನಲ್ಲಿ [[ಚೇರ ಸಾಮ್ರಾಜ್ಯ]]ದ ಕೊನೆಯ ಆಡಳಿತಗಾರ (ಚೇರಮನ್ ಪೆರುಮಾಳ್) ರ ಆದೇಶದಂತೆ ನಿರ್ಮಿಸಲಾಯಿತು, ಅವರು [[ಮುಹಮ್ಮದ್]] ({{Circa|570}}–632) ರ ಜೀವಿತಾವಧಿಯಲ್ಲಿ ಇಸ್ಲಾಂಗೆ ಮತಾಂತರಗೊಂಡರು.<ref>{{cite book |author=Jonathan Goldstein |title=The Jews of China |publisher=M. E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=Edward Simpson |author2=Kai Kresse |title=Struggling with History: Islam and Cosmopolitanism in the Western Indian Ocean |url=https://books.google.com/books?id=w0qHKA7zEaEC&pg=PA333 |access-date=24 July 2012 |year=2008 |publisher=Columbia University Press |isbn=978-0-231-70024-5 |pages=333}}</ref><ref name="Kupferschmidt1987">{{cite book |author=Uri M. Kupferschmidt |url=https://books.google.com/books?id=ChEVAAAAIAAJ&pg=PA458 |title=The Supreme Muslim Council: Islam Under the British Mandate for Palestine |publisher=Brill |year=1987 |isbn=978-9004079298 |pages=458–59 |access-date=25 July 2012 |archive-url=https://web.archive.org/web/20231125191234/https://books.google.com/books?id=ChEVAAAAIAAJ&pg=PA458 |archive-date=25 November 2023 |url-status=live}}</ref><ref name="Raṇṭattāṇi2007">{{cite book |author=Husain Raṇṭattāṇi |title=Mappila Muslims: A Study on Society and Anti Colonial Struggles |url=https://books.google.com/books?id=xlb5BrabQd8C&pg=PA179 |access-date=25 July 2012 |year=2007 |publisher=Other Books |isbn=978-8190388788 |pages=179–}}</ref>
ಪ್ರಾಚೀನ ಕ್ರಿಶ್ಚಿಯನ್ ಸಂಪ್ರದಾಯವು ಕ್ರಿಶ್ಚಿಯನ್ ಧರ್ಮವು 52 CE ಯಲ್ಲಿ [[ಯೇಸು ಕ್ರಿಸ್ತ]]ನ [[ಹನ್ನೆರಡು ಪ್ರೇರಿತರು|ಹನ್ನೆರಡು ಪ್ರೇರಿತರಲ್ಲಿ]] ಒಬ್ಬರಾದ [[ತಾಮಸ್ ಪ್ರೇರಿತ]]ನ ಆಗಮನದೊಂದಿಗೆ ಕೇರಳದ ತೀರವನ್ನು ತಲುಪಿತು ಎಂದು ಹೇಳುತ್ತದೆ.<ref>[https://books.google.com/books?id=lZUBZlth2qgC&q=Muziris ''The Encyclopedia of Christianity, Volume 5''] {{webarchive|url=https://web.archive.org/web/20161226115908/https://books.google.com/books?id=lZUBZlth2qgC&printsec=frontcover&dq=isbn%3A9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA|date=26 December 2016}} by Erwin Fahlbusch. Wm. B. Eerdmans Publishing – 2008. p. 285. {{ISBN|978-0802824172}}.</ref><ref>{{cite book |chapter-url=https://books.google.com/books?id=qhKGPprbQaYC&pg=PA27 |title=The Jews of India: A Story of Three Communities |editor-first=Orpa |editor-last=Slapak |publisher=The Israel Museum |location=Jerusalem |year=2003 |page=27 |isbn=9652781797 |chapter=The Cochin Jews Of Kerala |first=Barbara C. |last=Johnson}}</ref><ref name="Encyclopædia Britannica">{{cite web |url=https://www.britannica.com/EBchecked/topic/592851/Saint-Thomas |title=Saint Thomas |website=Encyclopædia Britannica |date=1 January 2019}}</ref><ref name="Menachery">Menachery G; 1973, 1998; Mundalan, A. M; 1984; Podipara, Placid J. 1970; Leslie Brown, 1956</ref> [[ಸೇಂಟ್ ತಾಮಸ್ ಕ್ರೈಸ್ತರು]] [[ಸಿರೋ-ಮಲಬಾರ್ ಚರ್ಚ್|ಸಿರೋ-ಮಲಬಾರ್ ಕ್ಯಾಥೋಲಿಕ್]],<ref name="Ponnumuthan1996">{{cite book |author=Selvister Ponnumuthan |title=Authentic Interpretation in Canon Law: Reflections on a Distinctively Canonical Institution |url=https://books.google.com/books?id=zcedqS4jOusC&pg=PA103 |access-date=18 November 2012 |year=1996 |publisher=Gregorian&Biblical BookShop |isbn=978-8876527210 |pages=103–}}</ref> [[ಸಿರೋ-ಮಲಂಕರ ಕ್ಯಾಥೋಲಿಕ್ ಚರ್ಚ್|ಸಿರೋ-ಮಲಂಕರ ಕ್ಯಾಥೋಲಿಕ್]],<ref name="Williams1996">{{cite book |author=Raymond Brady Williams |title=Christian Pluralism in the United States: The Indian Immigrant Experience |url=https://books.google.com/books?id=w1uk6zZQKzAC&pg=PA144 |access-date=18 November 2012 |year=1996 |publisher=Cambridge University Press |isbn=978-0-521-57016-9 |pages=144–}}</ref> [[ಜಾಕೋಬೈಟ್ ಸಿರಿಯನ್ ಕ್ರಿಶ್ಚಿಯನ್ ಚರ್ಚ್]],<ref name="AndersonTang2005">{{cite book |author1=Allan Anderson |author2=Edmond Tang |title=Asian and Pentecostal: The Charismatic Face of Christianity in Asia |url=https://books.google.com/books?id=LDZgKELq7AoC&pg=PA248 |access-date=18 November 2012 |year=2005 |publisher=OCMS |isbn=978-1-870345-43-9 |pages=248–}}</ref> [[ಮಾರ್ ತೋಮಾ ಸಿರಿಯನ್ ಚರ್ಚ್]],<ref>{{Cite book |title=John Anthony McGuckin (15 December 2010). The Encyclopedia of Eastern Orthodox Christianity. pp. 377–. Retrieved 18 November 2012. |publisher=John Wiley & Sons. |isbn=978-1-4443-9254-8 |year=2010}}</ref> [[ಮಲಂಕರ ಓರ್ಥೊಡಾಕ್ಸ್ ಸಿರಿಯನ್ ಚರ್ಚ್]],<ref name="Russell2010">{{cite book |author=Thomas Arthur Russell |title=Comparative Christianity: A Student's Guide to a Religion and Its Diverse Traditions |url=https://books.google.com/books?id=FmMarHDbglgC&pg=PT40 |access-date=18 November 2012 |year=2010 |publisher=Universal-Publishers |isbn=978-1-59942-877-2 |pages=40–}}</ref> [[CSI|CSI]] ಯ [[ಸೇಂಟ್ ತಾಮಸ್ ಆಂಗ್ಲಿಕನ್ನರು|ಸಿರಿಯನ್ ಆಂಗ್ಲಿಕನ್ನರು]]<ref>{{cite book |author=Stephen Neill |title=A History of Christianity in India: 1707–1858 |url=https://books.google.com/books?id=Xi-tvrYbYxMC&pg=PA240 |access-date=31 August 2012 |year=2002 |publisher=Cambridge University Press |isbn=978-0-521-89332-9 |pages=247–251}}</ref> ಮತ್ತು [[ಪೆಂಟೆಕೋಸ್ಟಲ್ ಸೇಂಟ್ ತಾಮಸ್ ಕ್ರೈಸ್ತರು]]<ref>{{cite book |last1=Bergunder |first1=Michael |title=The South Indian Pentecostal Movement in the Twentieth Century |year=2008 |publisher=Wm. B. Eerdmans Publishing |isbn=978-0-8028-2734-0 |pages=15–16, 26–30, 37–57 |url=https://books.google.com/books?id=XGiv3riaunQC&q=Pentecostal+evangelical+saint+thomas+syrian+christian |language=en}}</ref> ಸೇರಿದ್ದಾರೆ. ಕೇರಳದಲ್ಲಿ [[ಲ್ಯಾಟಿನ್ ಚರ್ಚ್|ಲ್ಯಾಟಿನ್ ಕ್ಯಾಥೋಲಿಕ್]] ಕ್ರೈಸ್ತರ ಮೂಲವು 16 ನೇ ಶತಮಾನದಲ್ಲಿ ಪೋರ್ಚುಗೀಸ್ [[ಪಡ್ರೊಡೊ]]ನ ಮಿಷನರಿ ಪ್ರಯತ್ನಗಳ ಪರಿಣಾಮವಾಗಿದೆ.<ref name="autogenerated1">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA192 |access-date=18 November 2012 |year=2007 |publisher=DC Books |isbn=978-8126415786 |pages=192–}}</ref><ref name="RakRaj2008">{{cite book |author1=Knut A. Jacobsen, Selva J. Rak |author2=Selva J. Raj |title=South Asian Christian Diaspora: Invisible Diaspora in Europe and North America |url=https://books.google.com/books?id=6L5MxlMIcG0C&pg=PA172 |access-date=18 November 2012 |year=2008 |publisher=Ashgate Publishing, Ltd. |isbn=978-0-7546-6261-7 |pages=172–}}</ref><ref name="Subramanian2009">{{cite book |author=Ajantha Subramanian |title=Shorelines: Space and Rights in South India |url=https://books.google.com/books?id=lsd55y4KbeYC&pg=PA95 |access-date=18 November 2012 |year=2009 |publisher=Stanford University Press |isbn=978-0-8047-8685-0 |pages=95–}}</ref> ವಸಾಹತುಶಾಹಿ ವಲಸಿಗರೊಂದಿಗೆ ಶತಮಾನಗಳ ಮಿಶ್ರಣದ ಪರಿಣಾಮವಾಗಿ, ಪೋರ್ಚುಗೀಸ್, ಡಚ್, ಫ್ರೆಂಚ್, ಬ್ರಿಟಿಷ್ ಮತ್ತು ಇತರ ಯುರೋಪಿಯನ್ನರಿಂದ ಪ್ರಾರಂಭಿಸಿ, ಕೇರಳದಲ್ಲಿ ಮಿಶ್ರ ಯುರೋಪಿಯನ್ ಮತ್ತು ಭಾರತೀಯ ಪೋಷಕತ್ವ ಅಥವಾ ಪೂರ್ವಜರ ಆಂಗ್ಲೋ-ಇಂಡಿಯನ್ ಸಮುದಾಯವಿದೆ. ಕೇರಳವು ಭಾರತದ ಎಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>Singh, Anjana. "Fort Cochin in Kerala 1750–1830 The Social Condition of a Dutch Community in an Indian Milieu." Brill, Leiden Boston: 2010, 3: 92.</ref>
[[ಯಹೂದಿ ಧರ್ಮ]]ವು 10 ನೇ ಶತಮಾನ BCE ಯಲ್ಲಿ [[ಸೊಲೊಮನ್|ರಾಜ ಸೊಲೊಮನ್]] ಕಾಲದಲ್ಲಿ ಕೇರಳವನ್ನು ತಲುಪಿತು.<ref>Weil, Shalva. "Jews in India." in M.Avrum Erlich (ed.) ''Encyclopedia of the Jewish Diaspora'', Santa Barbara, CA: ABC CLIO. 2008, 3: 1204–12.</ref> ಅವರನ್ನು [[ಕೊಚ್ಚಿ ಯಹೂದಿಗಳು]] ಅಥವಾ ಮಲಬಾರ್ ಯಹೂದಿಗಳು ಎಂದು ಕರೆಯಲಾಗುತ್ತದೆ ಮತ್ತು ಅವರು [[ಭಾರತದಲ್ಲಿ ಯಹೂದಿಗಳ ಇತಿಹಾಸ|ಭಾರತದಲ್ಲಿ ಅತ್ಯಂತ ಹಳೆಯ ಯಹೂದಿಗಳ ಗುಂಪು]] ಆಗಿದ್ದಾರೆ.<ref>[https://books.google.com/books?id=qhKGPprbQaYC&q=two+millennia ''The Israelis (Jews) of India: A Story of Three Communities''] {{webarchive|url=https://web.archive.org/web/20161226115854/https://books.google.com/books?id=qhKGPprbQaYC&printsec=frontcover&dq=isbn%3A9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA|date=26 December 2016}} by Orpa Slapak. The Israel Museum, Jerusalem. 2003. p. 27. {{ISBN|978-9652781796}}.</ref><ref>Weil, Shalva. India's Jewish Heritage: Ritual, Art and Life-Cycle, Mumbai: Marg Publications, 2009. [first published in 2002; 3rd edn.]. Katz 200/*Religion */ 0; Koder 1973; Menachery 1998</ref> 20 ನೇ ಶತಮಾನದವರೆಗೆ ಕೇರಳದಲ್ಲಿ ಗಮನಾರ್ಹವಾದ ಯಹೂದಿ ಸಮುದಾಯವು ಅಸ್ತಿತ್ವದಲ್ಲಿತ್ತು, ಅವರಲ್ಲಿ ಹೆಚ್ಚಿನವರು [[ಅಲಿಯಾ|ಇಸ್ರೇಲ್ಗೆ ವಲಸೆ]] ಹೋದರು.<ref name="Roland1998">{{cite book |author=Joan G. Roland |title=The Jewish Communities of India: Identity in a Colonial Era |url=https://books.google.com/books?id=kHJccZ92IecC&pg=PA283 |access-date=18 November 2012 |year=1998 |publisher=Transaction Publishers |isbn=978-0-7658-0439-6 |pages=283–}}</ref> [[ಕೊಚ್ಚಿ ಸಿನಾಗೋಗ್|ಪರದೇಶಿ ಸಿನಾಗೋಗ್]] [[ಕೊಚ್ಚಿ|ಕೊಚ್ಚಿಯಲ್ಲಿ]] [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಿನಾಗೋಗ್ ಆಗಿದೆ.<ref>{{cite web |title=Paradesi Synagogue – tourist attractions at Mattancherry, Ernakulam Kerala Tourism |url=https://www.keralatourism.org/kochi/paradeso-synagogue-mattancherry.php |website=www.keralatourism.org}}</ref> [[ಕೇರಳದಲ್ಲಿ ಜೈನ ಧರ್ಮ|ಜೈನ ಧರ್ಮ]]ವು [[ವಯನಾಡು ಜಿಲ್ಲೆ]]ಯಲ್ಲಿ ಗಣನೀಯ ಅನುಯಾಯಿಗಳನ್ನು ಹೊಂದಿದೆ.<ref name="LockieCarpenter2012">{{cite book |author1=Stewart Lockie |author2=David Carpenter |title=Agriculture, Biodiversity and Markets: Livelihoods and Agroecology in Comparative Perspective |url=https://books.google.com/books?id=cZvlmpwviuMC&pg=PT258 |access-date=18 November 2012 |year=2012 |publisher=Routledge |isbn=978-1-136-54649-5 |page=258}}</ref><ref name="MathewBaviskar2009">{{cite book |author1=George Mathew |author2=B S Baviskar |title=Inclusion and Exclusion in Local Governance: Field Studies from Rural India |url=https://books.google.com/books?id=DsDOrvROzPEC&pg=PA204 |access-date=18 November 2012 |year=2009 |publisher=Sage Publications |isbn=978-8178298603 |page=204}}</ref>
== ಶಿಕ್ಷಣ ==
{{Main|ಕೇರಳದಲ್ಲಿ ಶಿಕ್ಷಣ}}
{{multiple image
<!-- Layout parameters -->| align = <!-- right (default), left, centre, none -->
| direction = vertical
| width = 225
<!--image1-->| image1 = University of Kerala.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಶ್ವವಿದ್ಯಾಲಯ]]
<!--image 2-->}}
[[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]] 14 ಮತ್ತು 16 ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದಿತು. ಖಗೋಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಕೇರಳ ಶಾಲೆಯು ಸ್ವತಂತ್ರವಾಗಿ ಹಲವಾರು ಪ್ರಮುಖ ಗಣಿತ ಪರಿಕಲ್ಪನೆಗಳನ್ನು ರಚಿಸಿತು, ಇವುಗಳಲ್ಲಿ ತ್ರಿಕೋನಮಿತಿಯ ಕಾರ್ಯಗಳಿಗಾಗಿ [[ಸರಣಿ ವಿಸ್ತರಣೆ]] ಸೇರಿದೆ.<ref name="roy">{{cite journal |last=Roy |first=Ranjan |year=1990 |title=Discovery of the Series Formula for π by Leibniz, Gregory, and Nilakantha |journal=Mathematics Magazine |volume=63 |issue=5 |pages=291–306 |doi=10.2307/2690896 |jstor=2690896}}</ref><ref>{{Citation |last=Pingree |first=David |author-link=David Pingree |title=Hellenophilia versus the History of Science |year=1992 |journal=Isis |volume=83 |issue=4 |pages=554–63 |jstor=234257 |doi=10.1086/356288 |quote=One example I can give you relates to the Indian Mādhava's demonstration, in about 1400 A.D., of the infinite power series of trigonometrical functions using geometrical and algebraic arguments. When this was first described in English by Charles Whish, in the 1830s, it was heralded as the Indians' discovery of the calculus. This claim and Mādhava's achievements were ignored by Western historians, presumably at first because they could not admit that an Indian discovered the calculus, but later because no one read anymore the ''Transactions of the Royal Asiatic Society'', in which Whish's article was published. The matter resurfaced in the 1950s, and now we have the Sanskrit texts properly edited, and we understand the clever way that Mādhava derived the series ''without'' the calculus, but many historians still find it impossible to conceive of the problem and its solution in terms of anything other than the calculus and proclaim that the calculus is what Mādhava found. In this case, the elegance and brilliance of Mādhava's mathematics are being distorted as they are buried under the current mathematical solution to a problem to which he discovered an alternate and powerful solution. |bibcode=1992Isis...83..554P |s2cid=68570164}}</ref> 19 ನೇ ಶತಮಾನದ ಆರಂಭಿಕ ದಶಕಗಳಲ್ಲಿ, ಕೇರಳದ ಆಧುನಿಕ ಶೈಕ್ಷಣಿಕ ಪರಿವರ್ತನೆಯು ಸಾಮೂಹಿಕ ಶಿಕ್ಷಣವನ್ನು ಉತ್ತೇಜಿಸಲು [[ಚರ್ಚ್ ಮಿಷನ್ ಸೊಸೈಟಿ]] ಮಿಷನರಿಗಳ ಪ್ರಯತ್ನಗಳಿಂದ ಪ್ರೇರೇಪಿಸಲ್ಪಟ್ಟಿತು.<ref>{{cite news |title=Missionaries led State to renaissance: Pinarayi |newspaper=The Hindu |date=13 November 2016 |url=https://www.thehindu.com/news/national/kerala/Missionaries-led-State-to-renaissance-Pinarayi/article16444369.ece |quote=Inaugurating on Saturday the valedictory of the bicentenary celebration of the arrival of Church Mission Society (CMS) missionaries to the shores of Kerala, Mr. Vijayan said it was their pioneering work in the fields of education, literature, printing, publishing, women's education, education of the differently-abled and, in general, a new social approach through the inclusion of marginalised sections into the mainstream which brought the idea of 'equality' into the realm of public consciousness. This had raised the standard of public consciousness and paved the way for the emergence of the renaissance movements in the State.}}</ref><ref>{{cite web |title=Kerala to celebrate CMS mission |url=https://churchmissionsociety.org/our-stories/kerala-celebrate-cms-mission |date=9 November 2016 |website=Church Mission Society |access-date=4 April 2022 |quote=Indian President Pranab Mukherjee, visited CMS College in Kerala, the oldest college in India, and laid the foundation stone of the bicentenary block. He said, 'CMS college is a pioneer of modern education in Kerala. It has been the source of strong currents of knowledge and critical inquiry that have moulded the scholastic and socio-cultural landscape of Kerala and propelled the State to the forefront of social development.'{{hsp}} }}</ref><ref>{{Cite journal |last1=Mathew |first1=E. T. |url=https://www.epw.in/journal/1999/39/special-articles/growth-literacy-kerala.html |title=Growth of Literacy in Kerala |date=5 June 2015 |journal=Economic and Political Weekly |volume=34 |issue=1999 |pages=7–8 |via=www.epw.in}}</ref><ref>{{cite book |title=District Handbooks of Kerala |url=https://www.kerala.gov.in/district_handbook/Kottayam.pdf |date=March 2003 |archive-url=https://web.archive.org/web/20090319183020/https://www.kerala.gov.in/district_handbook/Kottayam.pdf |archive-date=19 March 2009 |url-status=dead |pages=19–20 |publisher=Department of Information & Public Relations Government of Kerala |access-date=4 April 2022}}</ref><ref>{{cite book |last=Menon |first=Sreedhara |title=A survey of Kerala History |year=1996 |publisher=S.Viswanathan Printers and Publishers |location=Madras |pages=339, 348–49 |isbn=978-8126415786 |url=https://onlinestore.dcbooks.com/books/a-survey-of-kerala-history |access-date=20 March 2019 |archive-date=24 August 2019 |archive-url=https://web.archive.org/web/20190824143707/https://onlinestore.dcbooks.com/books/a-survey-of-kerala-history |url-status=dead}}</ref> 1854 ರ [[ವುಡ್ಸ್ ಡೆಸ್ಪ್ಯಾಚ್]] ನ ಶಿಫಾರಸುಗಳನ್ನು ಅನುಸರಿಸಿ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು ಮುಖ್ಯವಾಗಿ ಜಾತಿಗಳು ಮತ್ತು ಸಮುದಾಯಗಳ ಆಧಾರದ ಮೇಲೆ ಸಾಮೂಹಿಕ ಶಿಕ್ಷಣ ಅಭಿಯಾನಗಳನ್ನು ಪ್ರಾರಂಭಿಸಿದವು ಮತ್ತು ಹೆಚ್ಚು ಖಾಸಗಿ ಉಪಕ್ರಮಗಳನ್ನು ಆಕರ್ಷಿಸಲು [[ಅನುದಾನ-ಸಹಾಯ]] ವ್ಯವಸ್ಥೆಯನ್ನು ಪರಿಚಯಿಸಿದವು.<ref name="Devrep53-58" /> [[ಸೇಂಟ್ ತಾಮಸ್ ಕಾಲೇಜು, ತೃಶೂರ್|ಸೇಂಟ್ ತಾಮಸ್ ಕಾಲೇಜು ತೃಶೂರ್]] ಮತ್ತು [[ಸೇಂಟ್ ಬರ್ಚ್ಮನ್ಸ್ ಕಾಲೇಜು|ಎಸ್ಬಿ ಕಾಲೇಜು ಚಂಗನಾಶ್ಶೇರಿ]] ನಂತಹ ಕ್ಯಾಥೋಲಿಕ್ ಸಂಸ್ಥೆಗಳನ್ನು ಕ್ಯಾಥೋಲಿಕ್ ಚರ್ಚ್ನ ನೇತೃತ್ವದಲ್ಲಿ ಸ್ಥಾಪಿಸಲಾಯಿತು. [[ಕುರಿಯಾಕೋಸ್ ಎಲಿಯಾಸ್ ಚಾವರ|ಫಾ. ಕುರಿಯಾಕೋಸ್ ಎಲಿಯಾಸ್ ಚಾವರ]], [[ಚಾರ್ಲ್ಸ್ ಲಾವಿಗ್ನೆ|ಮಾರ್ ಚಾರ್ಲ್ಸ್ ಲಾವಿಗ್ನೆ SJ]], [[ಆಯ್ಯಾ ವೈಕುಂಡರ್|ವೈಕುಂಡ ಸ್ವಾಮಿ]], [[ನಾರಾಯಣ ಗುರು]] ಮತ್ತು [[ಅಯ್ಯಂಕಾಳಿ]] ರಂತಹ ನಾಯಕರ ಪ್ರಯತ್ನಗಳು ರಾಜ್ಯದಲ್ಲಿ ಸಾಮಾಜಿಕವಾಗಿ ತಾರತಮ್ಯಕ್ಕೊಳಗಾದ ಜಾತಿಗಳಿಗೆ ಸಹಾಯ ಮಾಡುವಲ್ಲಿ—[[ನಾಯರ್ ಸೇವಾ ಸೊಸೈಟಿ]], [[ಶ್ರೀ ನಾರಾಯಣ ಟ್ರಸ್ಟ್|ಎಸ್ಎನ್ಡಿಪಿ]], [[ಮುಸ್ಲಿಂ ಶೈಕ್ಷಣಿಕ ಸೊಸೈಟಿ]], ಮುಸ್ಲಿಂ ಮಹಾಜನ ಸಭಾ, ಯೋಗ ಕ್ಷೇಮ ಸಭಾ (ನಂಬೂದಿರಿಗಳ) ಮತ್ತು ಕ್ರಿಶ್ಚಿಯನ್ ಚರ್ಚುಗಳ ಸಭೆಗಳಂತಹ ಸಮುದಾಯ-ಆಧಾರಿತ ಸಂಸ್ಥೆಗಳ ಸಹಾಯದಿಂದ—ಕೇರಳದಲ್ಲಿ ಸಾಮೂಹಿಕ ಶಿಕ್ಷಣದ ಮತ್ತಷ್ಟು ಅಭಿವೃದ್ಧಿಗೆ ಕಾರಣವಾಯಿತು.<ref name="Devrep53-58">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=53–58 |access-date=30 May 2015}}</ref>
1991 ರಲ್ಲಿ, ಕೇರಳವು ಸಂಪೂರ್ಣವಾಗಿ ಸಾಕ್ಷರವೆಂದು ಗುರುತಿಸಲ್ಪಟ್ಟ ಭಾರತದ ಮೊದಲ ರಾಜ್ಯವಾಯಿತು, ಆ ಸಮಯದಲ್ಲಿ ಪರಿಣಾಮಕಾರಿ ಸಾಕ್ಷರತಾ ಪ್ರಮಾಣವು ಕೇವಲ 90% ಆಗಿತ್ತು.<ref name="Soundarapandian2000">{{cite book |author=Mookkiah Soundarapandian |title=Literacy Campaign in India |url=https://books.google.com/books?id=KVhHEC449yoC&pg=PA21 |year=2000 |publisher=Discovery Publishing House |isbn=978-8171415533 |page=21}}</ref> 2006–2007 ರಲ್ಲಿ, ರಾಜ್ಯವು ಭಾರತದ 21 ಪ್ರಮುಖ ರಾಜ್ಯಗಳಲ್ಲಿ ಶಿಕ್ಷಣ ಅಭಿವೃದ್ಧಿ ಸೂಚ್ಯಂಕದಲ್ಲಿ (EDI) ಅಗ್ರಸ್ಥಾನದಲ್ಲಿತ್ತು.<ref>{{Cite news |author=D Suresh Kumar |url=https://timesofindia.indiatimes.com/india/Kerala-tops-primary-education-index/articleshow/3587924.cms |title=Kerala tops primary education index |work=The Times of India |date=13 October 2008 |access-date=30 July 2009}}</ref> {{As of|2007}}, ಪ್ರಾಥಮಿಕ ಶಿಕ್ಷಣದಲ್ಲಿ ದಾಖಲಾತಿಯು ಸುಮಾರು 100% ಆಗಿತ್ತು; ಮತ್ತು, ಭಾರತದ ಇತರ ರಾಜ್ಯಗಳಿಗಿಂತ ಭಿನ್ನವಾಗಿ, ಶೈಕ್ಷಣಿಕ ಅವಕಾಶವು ಲಿಂಗಗಳು, ಸಾಮಾಜಿಕ ಗುಂಪುಗಳು ಮತ್ತು ಪ್ರದೇಶಗಳ ನಡುವೆ ಸುಮಾರು ಸಮಾನವಾಗಿ ಹಂಚಿಕೆಯಾಗಿತ್ತು.<ref name="Devrep255-258">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=255–58 |access-date=30 May 2015}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 93.9% ಸಾಕ್ಷರತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸಾಕ್ಷರತಾ ಪ್ರಮಾಣ 74.0% ಕ್ಕೆ ಹೋಲಿಸಿದರೆ.<ref name="IBNLiteracy2013">{{cite news |title=Tripura tops literacy rate with 94.65 per cent, leaves behind Kerala |url=https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |archive-url=https://web.archive.org/web/20130913005546/https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |url-status=dead |archive-date=13 September 2013 |access-date=12 February 2015 |work=IBNLive |date=9 September 2013}}</ref> ಜನವರಿ 2016 ರಲ್ಲಿ, ಕೇರಳವು ತನ್ನ ''ಅಥುಲ್ಯಂ'' ಸಾಕ್ಷರತಾ ಕಾರ್ಯಕ್ರಮದ ಮೂಲಕ 100% ಪ್ರಾಥಮಿಕ ಶಿಕ್ಷಣವನ್ನು ಸಾಧಿಸಿದ ಭಾರತದ ಮೊದಲ ರಾಜ್ಯವಾಯಿತು.<ref>{{cite news |url=https://www.ibtimes.co.in/kerala-becomes-1st-indian-state-achieve-100-primary-education-662878 |title=Kerala becomes 1st Indian state to achieve 100% primary education |date=12 January 2016 |access-date=14 January 2016 |work=International Business Times}}</ref>
ರಾಜ್ಯದ ಶಾಲೆಗಳಲ್ಲಿ ಪ್ರಚಲಿತದಲ್ಲಿರುವ ಶಿಕ್ಷಣ ವ್ಯವಸ್ಥೆಯು 10-ವರ್ಷದ ಅಧ್ಯಯನದ ಆರಂಭಿಕ ಕೋರ್ಸ್ ಅನ್ನು ನಿರ್ದಿಷ್ಟಪಡಿಸುತ್ತದೆ, ಇದನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ: ಕೆಳಗಿನ ಪ್ರಾಥಮಿಕ, ಮೇಲಿನ ಪ್ರಾಥಮಿಕ, ಮತ್ತು ಮಾಧ್ಯಮಿಕ ಶಾಲೆ—''4+3+3'' ಎಂದು ಕರೆಯಲ್ಪಡುತ್ತದೆ, ಇದು ಪ್ರತಿ ಹಂತದ ವರ್ಷಗಳ ಸಂಖ್ಯೆಯನ್ನು ಸೂಚಿಸುತ್ತದೆ.<ref name="Devrep255-258" /> ಮೊದಲ 10 ವರ್ಷಗಳ ಶಾಲಾ ಶಿಕ್ಷಣದ ನಂತರ, ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ಪ್ರಮುಖ ವಿಷಯಗಳಲ್ಲಿ ಒಂದರಲ್ಲಿ—[[ಉದಾರ ಕಲೆಗಳು]], ವಾಣಿಜ್ಯ, ಅಥವಾ ವಿಜ್ಞಾನ—[[ಜೂನಿಯರ್ ಕಾಲೇಜು|ಹೈಯರ್ ಸೆಕೆಂಡರಿ ಶಾಲಾ]] ಶಿಕ್ಷಣಕ್ಕೆ ದಾಖಲಾಗುತ್ತಾರೆ.<ref name="Edu_Ker" /> ಹೆಚ್ಚಿನ ಸರ್ಕಾರಿ ಶಾಲೆಗಳು [[ಕೇರಳ ಬೋರ್ಡ್ ಆಫ್ ಪಬ್ಲಿಕ್ ಎಕ್ಸಾಮಿನೇಷನ್]] ನೊಂದಿಗೆ ಸಂಯೋಜಿತವಾಗಿವೆ.<ref>{{Cite web |url=https://sametham.kite.kerala.gov.in/ |title=Kerala School Data Bank |access-date=5 December 2020 |website=sametham.kite.kerala.gov.in |publisher=Government of Kerala}}</ref> ಇತರ ಶೈಕ್ಷಣಿಕ ಮಂಡಳಿಗಳೆಂದರೆ [[ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ]] (ICSE), [[ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ]] (CBSE), ಮತ್ತು [[ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ]] (NIOS).<ref name="Edu_Ker">{{cite web |title=Education in Kerala |url=https://india.gov.in/knowindia/state_uts.php?id=54 |archive-url=https://web.archive.org/web/20111218082340/https://india.gov.in/knowindia/state_uts.php?id=54 |archive-date=18 December 2011 |publisher=Government of India |access-date=30 May 2015}}</ref>
== ಸಂಸ್ಕೃತಿ ==
{{Main|ಕೇರಳದ ಸಂಸ್ಕೃತಿ}}
{{Multiple image
| direction = vertical
| width = 220
| image1 = Kathakali BNC.jpg
| alt1 = Kathakali Performance
| caption1 = ಒಬ್ಬ [[ಕಥಕ್ಕಳಿ]] ಕಲಾವಿದ
| image4 = 5 image collage of floral arrangement during the Hindu festival of Onam Kerala.jpg
| alt4 = Pookkalam
| caption4 = [[ಓಣಂ]] ಸಮಯದಲ್ಲಿ, ಕೇರಳದ ಅತಿದೊಡ್ಡ ಆಚರಣೆ, ಕೇರಳೀಯರು ತಮ್ಮ ಮನೆಗಳ ಮುಂದೆ ''ಪೂಕ್ಕಲಂ'' (ಹೂವಿನ ಕಾರ್ಪೆಟ್) ವಿನ್ಯಾಸಗಳನ್ನು ರಚಿಸುತ್ತಾರೆ.
| image5 = ThrissurPooram-Kuda.jpg
| alt5 = Thrissur Pooram festival
| caption5 = [[ತೃಶೂರ್ ಪೂರಂ]] ಹಬ್ಬ
| image6 = Mohiniyattam at Kerala School Kalolsavam 2019 02.jpg
| alt6 = Mohiniattam
| caption6 = ಒಂದು ''[[ಮೋಹಿನಿಯಾಟ್ಟಂ]]'' ಪ್ರದರ್ಶನ
| image8 = sadhya DSW.jpg
| caption8 = ಓಣಂ [[ಸಾಧ್ಯ]]
| total_width =
}}
ಕೇರಳದ ಸಂಸ್ಕೃತಿಯು ಮಿಶ್ರ ಮತ್ತು ವಿಶ್ವವ್ಯಾಪಿ ಸ್ವರೂಪದ್ದಾಗಿದೆ ಮತ್ತು ಇದು [[ಭಾರತೀಯ ಸಂಸ್ಕೃತಿ]]ಯ ಅವಿಭಾಜ್ಯ ಅಂಗವಾಗಿದೆ.<ref name="Menon3">{{cite book |title=Cultural Heritage of Kerala |author=A. Sreedhara Menon |publisher=D C Books |year=2008 |isbn=978-8126419036 |pages=13–15 |url=https://books.google.com/books?id=S9RMxjdjUVAC |access-date=30 May 2015}}</ref> ಇದು [[ಇಂಡೋ-ಆರ್ಯನ್ ಜನರು|ಆರ್ಯ]], [[ದಕ್ಷಿಣ ಭಾರತೀಯ ಸಂಸ್ಕೃತಿ|ದ್ರಾವಿಡ]], [[ಅರಬ್ ಸಂಸ್ಕೃತಿ|ಅರಬ್]], ಮತ್ತು [[ಯುರೋಪಿನ ಸಂಸ್ಕೃತಿ|ಯುರೋಪಿಯನ್]] ಸಂಸ್ಕೃತಿಗಳ ಸಮ್ಮಿಳನವಾಗಿದೆ,<ref>{{Cite book |url=https://books.google.com/books?id=FVsw35oEBv4C |title=A Survey Of Kerala History |last=Menon |first=A. Sreedhara |year=2007 |publisher=DC Books |isbn=978-8126415786 |page=55 |language=en}}</ref> ಇದು ಸಹಸ್ರಮಾನಗಳಲ್ಲಿ, ಭಾರತದ ಇತರ ಭಾಗಗಳು ಮತ್ತು ವಿದೇಶಗಳಿಂದ ಪ್ರಭಾವಗಳ ಅಡಿಯಲ್ಲಿ ಅಭಿವೃದ್ಧಿಗೊಂಡಿದೆ.<ref name="Menon1978a">{{cite book |author=A. Sreedhara Menon |title=Cultural Heritage of Kerala: An Introduction |url=https://books.google.com/books?id=px5BAAAAMAAJ |year=1978 |publisher=East-West Publications |page=10}}</ref> ಇದು ಅದರ ಪ್ರಾಚೀನತೆ ಮತ್ತು [[ಮಲಯಾಳಿ ಜನರು]] ನಿರ್ವಹಿಸುವ ಸಾವಯವ ನಿರಂತರತೆಯಿಂದ ವ್ಯಾಖ್ಯಾನಿಸಲ್ಪಟ್ಟಿದೆ.<ref>{{cite book |title=Contribution of Travancore to Karnatic Music |url=https://books.google.com/books?id=VVftZwEACAAJ |year=2004 |publisher=Information & Public Relations Department, Government of Kerala |pages=7–37}}</ref> ಇದು ನೆರೆಯ ಮತ್ತು ವಿದೇಶಿ ಸಂಸ್ಕೃತಿಗಳೊಂದಿಗೆ ಶತಮಾನಗಳ ಸಂಪರ್ಕದ ಮೂಲಕ ವಿಸ್ತರಿಸಲ್ಪಟ್ಟಿದೆ.<ref name="Bhagyalekshmy_2004d_29">{{cite book |author=S. Bhagyalekshmy |title=Contribution of Travancore to Karnatic Music |url=https://books.google.com/books?id=VVftZwEACAAJ |access-date=6 January 2013 |year=2004 |publisher=Information & Public Relations Department, Government of Kerala}}</ref> ಆದಾಗ್ಯೂ, ಕೇರಳದ ದೇಶದ ಉಳಿದ ಭಾಗಗಳಿಂದ ಭೌಗೋಳಿಕ ಪ್ರತ್ಯೇಕತೆಯು ವಿಶಿಷ್ಟವಾದ ಜೀವನಶೈಲಿ, ಕಲೆ, ವಾಸ್ತುಶಿಲ್ಪ, ಭಾಷೆ, ಸಾಹಿತ್ಯ ಮತ್ತು ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿಗೆ ಕಾರಣವಾಗಿದೆ.<ref name="Menon3" /> ರಾಜ್ಯದಲ್ಲಿ ಪ್ರತಿ ವರ್ಷ 10,000 ಕ್ಕೂ ಹೆಚ್ಚು ಹಬ್ಬಗಳನ್ನು ಆಚರಿಸಲಾಗುತ್ತದೆ.<ref name="1000hrs">{{cite news |date=4 March 2010 |title=India's overworked elephants |url=https://news.bbc.co.uk/2/hi/south_asia/8533776.stm |access-date=30 May 2015 |work=BBC}}</ref> ಕೇರಳದಲ್ಲಿ 825 CE ಯಿಂದ ಪ್ರಾರಂಭವಾದ ಸೌರ ನಾಕ್ಷತ್ರಿಕ ಕ್ಯಾಲೆಂಡರ್ ಆಗಿರುವ [[ಮಲಯಾಳಂ ಕ್ಯಾಲೆಂಡರ್]],<ref name="Devika2005">{{cite book |author=J. Devika |title=Her-self: Early Writings on Gender by Malayalee Women, 1898–1938 |url=https://books.google.com/books?id=Xyr6gXmva-gC&pg=PA5 |access-date=17 November 2012 |year=2005 |publisher=Popular Prakashan |isbn=978-8185604749 |page=5}}</ref> ಕೃಷಿ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಯೋಜಿಸುವಲ್ಲಿ ಸಾಮಾನ್ಯ ಬಳಕೆಯನ್ನು ಕಂಡುಕೊಳ್ಳುತ್ತದೆ.<ref name="Singh2004">{{cite book |author=Kumar Suresh Singh |title=People of India: Maharashtra |url=https://books.google.com/books?id=4bfmnmsBfQ4C&pg=PA1524 |access-date=17 November 2012 |year=2004 |publisher=Popular Prakashan |isbn=978-8179911020 |page=1524}}</ref> ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ [[ಮಲಯಾಳಂ]] ಕೇರಳದ [[ಅಧಿಕೃತ ಭಾಷೆ]]ಯಾಗಿದೆ.<ref name="Benedikter2009">{{cite book |author=Thomas Benedikter |title=Language Policy and Linguistic Minorities in India: An Appraisal of the Linguistic Rights of Minorities in India |url=https://books.google.com/books?id=vpZv2GHM7VQC&pg=PA90 |access-date=18 November 2012 |year=2009 |publisher=LIT Verlag Münster |isbn=978-3-643-10231-7 |page=90}}</ref> ಭಾರತದಲ್ಲಿ [[ಅಧಿಕೃತ ಸ್ಥಾನಮಾನ ಹೊಂದಿರುವ ಭಾಷೆಗಳು|ನಿಗದಿತ ಮತ್ತು ಅನಿಗದಿತ]] ಭಾಷೆಗಳಲ್ಲಿ ಒಂದು ಡಜನ್ಗಿಂತಲೂ ಹೆಚ್ಚು ಭಾಷೆಗಳನ್ನು ಮಾತನಾಡಲಾಗುತ್ತದೆ.<ref name="census2011-langreport">{{cite web |title=Language – India, States and Union Territories |url=https://www.censusindia.gov.in/2011Census/C-16_25062018_NEW.pdf |work=Census of India 2011 |publisher=Office of the Registrar General |pages=13–14}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಮದ್ಯ ಸೇವನೆಯನ್ನು ಹೊಂದಿದೆ.<ref>{{Cite news |url=https://www.bbc.co.uk/news/world-asia-india-51372583 |title=Shock after alcohol flows from kitchen taps in Kerala |work=BBC News |date=6 February 2020}}</ref>
=== ಹಬ್ಬಗಳು ===
{{Main|ಕೇರಳದ ದೇವಾಲಯ ಹಬ್ಬಗಳು|ಓಣಂ}}
ಕೇರಳದಲ್ಲಿನ ಅನೇಕ ದೇವಾಲಯಗಳು ವರ್ಷದ ನಿರ್ದಿಷ್ಟ ದಿನಗಳಲ್ಲಿ ಹಬ್ಬಗಳನ್ನು ನಡೆಸುತ್ತವೆ.<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA76 |year=2008 |publisher=D.C. Books |isbn=978-8126419036 |page=76}}</ref> ಈ ಹಬ್ಬಗಳ ಸಾಮಾನ್ಯ ಲಕ್ಷಣವೆಂದರೆ ಪವಿತ್ರ ಧ್ವಜವನ್ನು ಏರಿಸುವುದು, ಅದನ್ನು ಹಬ್ಬದ ಕೊನೆಯ ದಿನದಂದು ದೇವತೆಯನ್ನು ಮುಳುಗಿಸಿದ ನಂತರ ಇಳಿಸಲಾಗುತ್ತದೆ.<ref>{{cite book |title=The Legacy of Kerala |url=https://books.google.com/books?id=S9RMxjdjUVAC&pg=PA34 |year=1982 |publisher=Department of Public Relations, Government of Kerala |isbn=978-8126437986 |page=34}}</ref> ಕೆಲವು ಹಬ್ಬಗಳು ಪೂರಂಗಳನ್ನು ಒಳಗೊಂಡಿವೆ, ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು [[ತೃಶೂರ್ ಪೂರಂ]].<ref>{{cite book |title=World Encyclopaedia of Interfaith Studies: World religions |url=https://books.google.com/books?id=fFwi7qRRgosC |year=2009 |publisher=Jnanada Prakashan |isbn=978-8171392803 |pages=704–10}}</ref> "ಆನೆಗಳು, ಪಟಾಕಿ ಪ್ರದರ್ಶನಗಳು ಮತ್ತು ದೊಡ್ಡ ಗುಂಪುಗಳು" ತೃಶೂರ್ ಪೂರಂನ ಪ್ರಮುಖ ಆಕರ್ಷಣೆಗಳಾಗಿವೆ.<ref>{{Cite news |title=The stars of Pooram show are jumbos |date=26 May 2006 |access-date=11 November 2007 |url=https://www.hindu.com/2006/05/26/stories/2006052610410500.htm |archive-url=https://web.archive.org/web/20071118212644/https://www.hindu.com/2006/05/26/stories/2006052610410500.htm |url-status=dead |archive-date=18 November 2007 |work=[[The Hindu]] |location=Chennai, India}}</ref> ಇತರ ಪ್ರಸಿದ್ಧ ಹಬ್ಬಗಳೆಂದರೆ [[ಮಕರವಿಳಕ್ಕು]],<ref name="Ltd.2013b">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA433 |year=2013 |publisher=Biju Mathew |isbn=978-8192128443 |page=433}}</ref> [[ಚಿನಕ್ಕತ್ತೂರು ಪೂರಂ]], [[ಅಟ್ಟುಕಲ್ ಪೊಂಗಲ]] ಮತ್ತು [[ನೆನ್ಮಾರ ವಲ್ಲಂಗಿ ವೇಳ]]<ref name="Stott2014">{{cite book |author=David Stott |title=Kerala Footprint Focus Guide: Includes Kochi, Alappuzha, Thrissur, Periyar, River Nila |url=https://books.google.com/books?id=-Jx8AwAAQBAJ&pg=PA94 |year=2014 |publisher=Footprint Travel Guides |isbn=978-1-909268-79-1 |page=94}}</ref> ಇವುಗಳ ಜೊತೆಗೆ, ಸ್ಥಳೀಯವಾಗಿ [[ಉತ್ಸವ]]ಗಳು ಎಂದು ಕರೆಯಲ್ಪಡುವ ಹಬ್ಬಗಳನ್ನು ಹೆಚ್ಚಿನ ದೇವಾಲಯಗಳು ವಾರ್ಷಿಕ ಆಧಾರದ ಮೇಲೆ ನಡೆಸುತ್ತವೆ. ಅದನ್ನು ಪಡೆದುಕೊಳ್ಳುವ ದೇವಾಲಯಗಳು ಸಾಮಾನ್ಯವಾಗಿ ಹಬ್ಬದ ಭಾಗವಾಗಿ ಕನಿಷ್ಠ ಒಂದು ಶ್ರೀಮಂತವಾಗಿ ಅಲಂಕರಿಸಿದ ಆನೆಯನ್ನು ಒಳಗೊಳ್ಳುತ್ತವೆ. ದೇವಾಲಯದಲ್ಲಿನ ವಿಗ್ರಹವನ್ನು ಈ ಆನೆಯ ಮೇಲೆ ಗ್ರಾಮಾಂತರದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ಮೆರವಣಿಗೆಯು ದೇವಾಲಯದ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿದಾಗ, ಜನರು ಸಾಮಾನ್ಯವಾಗಿ ಅಕ್ಕಿ, ತೆಂಗಿನಕಾಯಿ ಮತ್ತು ಇತರ ಕಾಣಿಕೆಗಳನ್ನು ನೀಡುತ್ತಾರೆ.<ref name="NarayananKurup1976">{{cite book |author1=M. G. S. Narayanan |author2=K. K. N. Kurup |title=Historical Studies in Kerala |url=https://books.google.com/books?id=mvELAAAAIAAJ |year=1976 |publisher=Department of History, University of Calicut |pages=68–81}}</ref> ಮೆರವಣಿಗೆಗಳು ಹೆಚ್ಚಾಗಿ [[ಪಂಚಾರಿ ಮೇಳಂ]] ಅಥವಾ [[ಪಂಚವಾದ್ಯ]]ದಂತಹ ಸಾಂಪ್ರದಾಯಿಕ ಸಂಗೀತವನ್ನು ಒಳಗೊಂಡಿರುತ್ತವೆ.<ref name="Killius2006">{{cite book |author=Rolf Killius |title=Ritual Music and Hindu Rituals of Kerala |url=https://books.google.com/books?id=c_fZAAAAMAAJ |year=2006 |publisher=B.R. Rhythms |isbn=978-8188827077 |page=61}}</ref> [[ಈದ್ ಅಲ್-ಫಿತರ್]] ಮತ್ತು [[ಈದ್ ಅಲ್-ಅಧಾ]] ಅನ್ನು ರಾಜ್ಯದ ಮುಸ್ಲಿಂ ಸಮುದಾಯವು ಆಚರಿಸುತ್ತದೆ, ಆದರೆ [[ಕ್ರಿಸ್ಮಸ್]] ಮತ್ತು [[ಈಸ್ಟರ್]] ನಂತಹ ಹಬ್ಬಗಳನ್ನು ಕ್ರೈಸ್ತರು ಆಚರಿಸುತ್ತಾರೆ.<ref name="Malabar">{{Cite book |last=Sreedhara Menon |first=A. |url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |title=''Kerala Charitram'' |publisher=DC Books |year=2007 |isbn=978-8126415885 |edition=2007 |location=Kottayam |access-date=19 July 2020 |archive-url=https://web.archive.org/web/20211113141403/https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |archive-date=13 November 2021 |url-status=live}}</ref> ಓಣಂ ಕೇರಳದ ಜನರು ಆಚರಿಸುವ ಸುಗ್ಗಿಯ ಹಬ್ಬವಾಗಿದೆ ಮತ್ತು ಇದು ರಾಜ್ಯದ ಕೃಷಿ ಹಿಂದಿನ ಕಾಲವನ್ನು ನೆನಪಿಸುತ್ತದೆ.<ref name="Choondal1980">{{cite book |author=Chummar Choondal |title=Kerala Folk Literature |year=1980 |url=https://books.google.com/books?id=EnQOAAAAYAAJ |publisher=Kerala Folklore Academy}}</ref><ref name="Menon2007b">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA80 |year=2007 |publisher=DC Books |isbn=978-8126415786 |pages=80–}}</ref> ಇದು ಕೇರಳದ ಸ್ಥಳೀಯ ಹಬ್ಬವಾಗಿದೆ<ref name="Darpan2006b">{{cite book |author=Pratiyogita Darpan |title=Pratiyogita Darpan |url=https://books.google.com/books?id=lugDAAAAMBAJ&pg=PT83 |year=2006 |publisher=Pratiyogita Darpan |page=624}}</ref> ಇದು ನಾಲ್ಕು ದಿನಗಳ ಸಾರ್ವಜನಿಕ ರಜಾದಿನಗಳನ್ನು ಒಳಗೊಂಡಿದೆ; ಓಣಂ ಮುನ್ನಾದಿನದಿಂದ (ಉತ್ತ್ರಾಡಂ) ನಾಲ್ಕನೇ ಓಣಂ ದಿನದವರೆಗೆ.<ref>{{cite book |title=Purāṇam |url=https://books.google.com/books?id=sfxjAAAAMAAJ |year=2004 |publisher=All-India Kasiraja Trust. |page=17}}</ref> ಓಣಂ ಮಲಯಾಳಂ ತಿಂಗಳು ಚಿಂಗಂ (ಆಗಸ್ಟ್–ಸೆಪ್ಟೆಂಬರ್) ನಲ್ಲಿ ಬರುತ್ತದೆ<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA66 |year=2008 |publisher=D.C. Books |isbn=978-8126419036 |page=66}}</ref> ಮತ್ತು ಇದು ರಾಜ [[ಮಹಾಬಲಿ]]ಯ ಮನೆಗೆ ಮರಳುವ ಸ್ಮರಣೆಯನ್ನು ಸೂಚಿಸುತ್ತದೆ.<ref name="MythOnam">{{cite news |last1=Praveen |first1=M. P. |title=Myth, mystique, and traditions of Onam |url=https://www.thehindu.com/todays-paper/tp-features/tp-editorialfeatures/myth-mystique-and-traditions-of-onam/article2433921.ece |access-date=12 November 2015 |work=The Hindu |date=8 September 2011}}</ref> ಓಣಂನ ಒಟ್ಟು ಅವಧಿಯು 10 ದಿನಗಳು ಮತ್ತು ಇದನ್ನು ಕೇರಳದಾದ್ಯಂತ ಆಚರಿಸಲಾಗುತ್ತದೆ. ಇದು [[ವಲ್ಲಂ ಕಳಿ]],<ref>{{Cite web |title=Vallamkali – Resplendent Water Regattas of Kerala {{!}} Kerala Boat Races{{!}} Onam{{!}} Kerala Backwaters {{!}} Kerala |url=https://www.keralatourism.org/kerala-article/2020/vallamkali-resplendent-water-regattas-of-kerala/1017 |access-date=9 June 2021|website=Kerala Tourism |language=en}}</ref> [[ಪುಲಿಕಳಿ]],<ref name="Ltd.2013">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA535 |year=2013 |publisher=Biju Mathew |isbn=978-8192128443 |page=535}}</ref> ಪೂಕ್ಕಲಂ,<ref>{{cite book |title=A Biblical Approach to Indian Traditions and Beliefs |url=https://books.google.com/books?id=f35VH7LrZ1IC&pg=PA90 |year=2008 |publisher=Armour Publishing Pte Ltd |isbn=978-9814222396 |page=90}}</ref> ತುಂಬಿ ತುಳ್ಳಲ್<ref name="Mohapatra2013">{{cite book |author=J Mohapatra |title=Wellness In Indian Festivals & Rituals |url=https://books.google.com/books?id=UdpzAgAAQBAJ&pg=PA142 |year=2013 |publisher=Partridge Pub |isbn=978-1-4828-1690-7 |page=142}}</ref> ಮತ್ತು [[ಓನವಿಲ್ಲು]]<ref name="(Princess.)1998">{{cite book |author=Gouri Lakshmi Bayi (Princess.) |title=Thulasi garland |url=https://books.google.com/books?id=5lcvAAAAYAAJ |year=1998 |publisher=Bharatiya Vidya Bhavan |isbn=978-8172761103}}</ref> ನಂತಹ ಸಾಂಸ್ಕೃತಿಕ ಅಂಶಗಳೊಂದಿಗೆ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ.
### ಸಂಗೀತ ಮತ್ತು ನೃತ್ಯ
{{Main|ಕೇರಳದ ಕಲೆಗಳು|ಕೇರಳದ ಸಂಗೀತ}}
ಕೇರಳವು ಹಲವಾರು [[ಪ್ರದರ್ಶನ ಕಲೆಗಳ]] ನೆಲೆಯಾಗಿದೆ. ಇವುಗಳಲ್ಲಿ ಐದು ಶಾಸ್ತ್ರೀಯ ನೃತ್ಯ ಪ್ರಕಾರಗಳು ಸೇರಿವೆ: [[ಕಥಕ್ಕಳಿ]], [[ಮೋಹಿನಿಯಾಟ್ಟಂ]], [[ಕೂಡಿಯಾಟ್ಟಂ]], [[ಒಟ್ಟನ್ ತುಳ್ಳಲ್|ತುಳ್ಳಲ್]] ಮತ್ತು [[ಕೃಷ್ಣನಾಟ್ಟಂ]], ಇವು ಶಾಸ್ತ್ರೀಯ ಅವಧಿಯಲ್ಲಿ ರಾಜಮನೆತನಗಳ ಆಶ್ರಯದಲ್ಲಿ ದೇವಾಲಯದ ರಂಗಮಂದಿರಗಳಲ್ಲಿ ಹುಟ್ಟಿ ಅಭಿವೃದ್ಧಿಗೊಂಡವು.<ref>{{cite journal |url=https://www.sruti.org/library/sruti%20ranjani/2004/sruti_ranjani_2004.pdf |title=Classical Dance Art Forms of Kerala |author=Kala Menon |journal=Sruti Ranjini |date=November 2004 |volume=14 |issue=1 |page=11 |access-date=7 February 2022 |archive-date=4 March 2016 |archive-url=https://web.archive.org/web/20160304091717/http://www.sruti.org/library/sruti%20ranjani/2004/sruti_ranjani_2004.pdf |url-status=dead }}</ref> [[ಕೇರಳ ನಾಟನಂ]], [[ಥಿರಯಾಟ್ಟಂ]],<ref>"Thirayattam" (Folklore Text-Malayalam), State Institute of language, Kerala {{ISBN|978-8120042940}}</ref> [[ಕಳಿಯಾಟ್ಟಂ]], [[ಥೆಯ್ಯಂ]], [[ಕೂತು]] ಮತ್ತು [[ಪದಯಾನಿ]] ಈ ಪ್ರದೇಶದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಇತರ ನೃತ್ಯ ಪ್ರಕಾರಗಳಾಗಿವೆ.<ref name="Menon2008">{{cite book |author=A Sreedhara Menon |title=Cultural heritage of Kerala |url=https://books.google.com/books?id=R7QNGkZKc5wC&pg=PA106 |access-date=17 November 2012 |year=2008 |publisher=D C Books |isbn=978-8126419036 |page=106}}</ref> [[ಒಪ್ಪನ]] ಮತ್ತು [[ದಫ್ ಮುಟ್ಟು]] ನಂತಹ ಕೆಲವು ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ರಾಜ್ಯದ ಮುಸ್ಲಿಮರಲ್ಲಿ ಜನಪ್ರಿಯವಾಗಿದ್ದವು,<ref name="google19">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA8 |access-date=17 November 2012 |year=2008 |publisher=Sura Books |isbn=978-8174781642 |page=8}}</ref> ಆದರೆ [[ಮಾರ್ಗಂಕಳಿ]] ಮತ್ತು [[ಪರಿಚಮುಟ್ಟುಕಳಿ]] ಸಿರಿಯನ್ ಕ್ರೈಸ್ತರಲ್ಲಿ ಜನಪ್ರಿಯವಾಗಿವೆ ಮತ್ತು [[ಚವಿಟ್ಟು ನಾಟಕಂ]] ಲ್ಯಾಟಿನ್ ಕ್ರೈಸ್ತರಲ್ಲಿ ಜನಪ್ರಿಯವಾಗಿದೆ.<ref name="Nārāyaṇappaṇikkar1991">{{cite book |author=Kāvālaṃ Nārāyaṇappaṇikkar |title=Folklore of Kerala |url=https://books.google.com/books?id=xH6BAAAAMAAJ |access-date=17 November 2012 |year=1991 |publisher=National Book Trust, India |page=146 |isbn=978-8123725932}}</ref><ref name="Kasbekar2006">{{cite book |author=Asha Kasbekar |title=Pop Culture India!: Media, Arts, And Lifestyle |url=https://books.google.com/books?id=Sv7Uk0UcdM8C&pg=PA43 |access-date=17 November 2012 |year=2006 |publisher=ABC-CLIO |isbn=978-1-85109-636-7 |pages=43–44}}</ref> ಕೇರಳದಲ್ಲಿ ಶಾಸ್ತ್ರೀಯ ಸಂಗೀತದ ಅಭಿವೃದ್ಧಿಯು ಕೇರಳದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಸಾಂಪ್ರದಾಯಿಕ ಪ್ರದರ್ಶನ ಕಲೆಗಳು ನೀಡಿದ ಕೊಡುಗೆಗಳಿಗೆ ಕಾರಣವಾಗಿದೆ.<ref name="Menon2">{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |pages=48–51 |url=https://books.google.com/books?id=S9RMxjdjUVAC |access-date=30 May 2015}}</ref> ಸ್ಥಳೀಯ ಶಾಸ್ತ್ರೀಯ ಸಂಗೀತ ಪ್ರಕಾರವಾದ [[ಸೋಪಾನ ಸಂಗೀತ]]ದ ಅಭಿವೃದ್ಧಿಯು ದೇವಾಲಯದ ಸಂಸ್ಕೃತಿಯು ಕೇರಳದ ಕಲೆಗಳಿಗೆ ನೀಡಿದ ಶ್ರೀಮಂತ ಕೊಡುಗೆಯನ್ನು ವಿವರಿಸುತ್ತದೆ.<ref name="Menon2" /> [[ಕರ್ನಾಟಕ ಸಂಗೀತ]]ವು ಕೇರಳೀಯ ಸಾಂಪ್ರದಾಯಿಕ ಸಂಗೀತದಲ್ಲಿ ಪ್ರಾಬಲ್ಯ ಹೊಂದಿದೆ. ಇದು 19 ನೇ ಶತಮಾನದಲ್ಲಿ [[ಸ್ವಾತಿ ತಿರುನಾಳ್ ರಾಮ ವರ್ಮ]] ಅವರು ಈ ಪ್ರಕಾರವನ್ನು ಜನಪ್ರಿಯಗೊಳಿಸಿದ ಪರಿಣಾಮವಾಗಿದೆ.<ref name="Bhagyalekshmy_2004d_29" /> ರಾಗ-ಆಧಾರಿತ ವ್ಯಾಖ್ಯಾನಗಳು ''ಸೋಪಾನಂ'' ಎಂದು ಕರೆಯಲ್ಪಡುತ್ತವೆ, ಇವು ''ಕಥಕ್ಕಳಿ'' ಪ್ರದರ್ಶನಗಳೊಂದಿಗೆ ಸೇರುತ್ತವೆ.<ref name="SchechnerAppel1990">{{cite book |author1=Richard Schechner |author2=Willa Appel |title=By Means of Performance: Intercultural Studies of Theatre and Ritual |url=https://books.google.com/books?id=K5ZuV_nn7KkC&pg=PA145 |access-date=18 November 2012 |year=1990 |publisher=Cambridge University Press |isbn=978-0-521-33915-5 |page=145}}</ref> ''ಮೇಳಂ'', ''ಪಾಂಡಿ'' ಮತ್ತು ''ಪಂಚಾರಿ'' ರೂಪಾಂತರಗಳನ್ನು ಒಳಗೊಂಡಂತೆ, ಹೆಚ್ಚು ತಾಳವಾದ್ಯ ಶೈಲಿಯ ಸಂಗೀತವಾಗಿದೆ;<ref name="BroughtonEllingham2000">{{cite book |author1=Simon Broughton |author2=Mark Ellingham |author3=Richard Trillo |title=World Music Volume 2 Latin and North America, Caribbean, India, Asia and Pacific: The Rough Guide |url=https://books.google.com/books?id=QzX8THIgRjUC&pg=PA97 |access-date=18 November 2012 |year=2000 |publisher=Rough Guides |isbn=978-1-85828-636-5 |page=97}}</ref> ಇದನ್ನು ''[[ಹಿಂದೂ ದೇವಾಲಯ|ಕ್ಷೇತ್ರಮ್]]''-ಕೇಂದ್ರಿತ ಹಬ್ಬಗಳಲ್ಲಿ ''[[ಚೆಂಡ]]'' ಬಳಸಿ ಪ್ರದರ್ಶಿಸಲಾಗುತ್ತದೆ. ''ಪಂಚವಾದ್ಯ'' ತಾಳವಾದ್ಯ ಸಮೂಹದ ಒಂದು ರೂಪವಾಗಿದೆ, ಇದರಲ್ಲಿ ಕಲಾವಿದರು ಐದು ವಿಧದ ತಾಳವಾದ್ಯ ವಾದ್ಯಗಳನ್ನು ಬಳಸುತ್ತಾರೆ.<ref name="BroughtonEllingham2000" /> ಕೇರಳದ ದೃಶ್ಯ ಕಲೆಗಳು [[ಕೇರಳದ ಭಿತ್ತಿಚಿತ್ರಗಳು|ಸಾಂಪ್ರದಾಯಿಕ ಭಿತ್ತಿಚಿತ್ರಗಳಿಂದ]] ರಾಜ್ಯದ ಅತ್ಯಂತ ಪ್ರಸಿದ್ಧ ವರ್ಣಚಿತ್ರಕಾರನಾದ [[ರಾಜಾ ರವಿ ವರ್ಮ]] ಅವರ ಕೃತಿಗಳವರೆಗೆ ವಿಸ್ತರಿಸಿವೆ.<ref name="Menon2" /> ಕೇರಳದ ಹೆಚ್ಚಿನ ಜಾತಿಗಳು ಮತ್ತು ಸಮುದಾಯಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದ ಜಾನಪದ ಗೀತೆಗಳು ಮತ್ತು ಗೀತೆಗಳ ಶ್ರೀಮಂತ ಸಂಗ್ರಹಗಳನ್ನು ಹೊಂದಿವೆ; ''[[ವಡಕ್ಕನ್ ಪಟ್ಟುಕಲ್]]'' (ಉತ್ತರ ಗೀತೆಗಳು), ''ತೆಕ್ಕನ್ ಪಟ್ಟುಕಲ್'' (ದಕ್ಷಿಣ ಗೀತೆಗಳು), ''ವಂಚಿ ಪಟ್ಟುಕಲ್'' (ದೋಣಿ ಹಾಡುಗಳು), ''[[ಮಾಪ್ಪಿಲ ಪಟ್ಟುಕಲ್]]'' (ಮುಸ್ಲಿಂ ಹಾಡುಗಳು) ಮತ್ತು ''ಪಲ್ಲಿಪಟ್ಟುಕಲ್'' (ಚರ್ಚ್ ಹಾಡುಗಳು) ಅವುಗಳಲ್ಲಿ ಕೆಲವು.<ref>{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |page=41 |url=https://books.google.com/books?id=S9RMxjdjUVAC |access-date=30 May 2015}}</ref>
=== ಸಿನಿಮಾ ===
{{Main|ಮಲಯಾಳಂ ಸಿನಿಮಾ}}
[[ಮಲಯಾಳಂ ಸಿನಿಮಾ|ಮಲಯಾಳಂ ಚಲನಚಿತ್ರಗಳು]] ಸಾಮಾಜಿಕ ವಿಷಯಗಳ ಪ್ರಸ್ತುತಿಯೊಂದಿಗೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಸ್ಥಾನವನ್ನು ಕೆತ್ತಿಕೊಂಡಿವೆ.<ref name="Menon">{{cite book |title=Cultural Heritage of Kerala |first=Sreedhara |last=Menon |publisher=D C Books |year=2008 |url=https://books.google.com/books?id=R7QNGkZKc5wC |isbn=978-8126419036 |pages=128–29 |access-date=30 May 2015}}</ref><ref>{{cite book |title=Encyclopaedia of Indian Literature |first=Amaresh |last=Datta |publisher=Sahitya Akademi |year=1987 |url=https://books.google.com/books?id=ObFCT5_taSgC |isbn=978-8126018031 |pages=751–53}}</ref> [[ಅಡೂರ್ ಗೋಪಾಲಕೃಷ್ಣನ್]], [[ಮಂಕಡ ರವಿ ವರ್ಮ]], [[ಜಿ. ಅರವಿಂದನ್]], [[ಭರತನ್]], [[ಪಿ. ಪದ್ಮರಾಜನ್]], [[ಎಂ.ಟಿ. ವಾಸುದೇವನ್ ನಾಯರ್]], [[ಕೆ.ಜಿ. ಜಾರ್ಜ್]], [[ಪ್ರಿಯದರ್ಶನ್]], [[ಜಾನ್ ಅಬ್ರಹಾಂ (ನಿರ್ದೇಶಕ)|ಜಾನ್ ಅಬ್ರಹಾಂ]], [[ರಾಮು ಕಾರ್ಯಾಟ್]], [[ಕೆ ಎಸ್ ಸೇತುಮಾಧವನ್]], [[ಎ. ವಿನ್ಸೆಂಟ್]] ಮತ್ತು [[ಶಾಜಿ ಎನ್ ಕರುಣ್]] ನಂತಹ ಕೇರಳದ ನಿರ್ದೇಶಕರು ಭಾರತೀಯ [[ಸಮಾನಾಂತರ ಸಿನಿಮಾ]]ಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಕೇರಳವು [[ಮೋಹನ್ಲಾಲ್]], [[ಮಮ್ಮೂಟ್ಟಿ]], [[ಸತ್ಯನ್]], [[ಪ್ರೇಮ್ ನಝೀರ್]], [[ಮಧು (ನಟ)|ಮಧು]], [[ಶೀಲಾ]], [[ಶಾರದ (ನಟಿ)|ಶಾರದಾ]], [[ಮಿಸ್ ಕುಮಾರಿ]], [[ಜಯನ್]], [[ಅಡೂರ್ ಭಾಸಿ]], [[ಸೀಮಾ (ನಟಿ)|ಸೀಮಾ]], [[ಭರತ್ ಗೋಪಿ]], [[ತಿಲಕನ್]], [[ವಿಜಯ ರಾಘವನ್]], [[ಕಲಾಭವನ್ ಮಣಿ]], [[ಇಂದ್ರನ್ಸ್]], [[ಶೋಭನಾ]], [[ನಿವಿನ್ ಪೌಲಿ]], [[ಶ್ರೀನಿವಾಸನ್]], [[ಉರ್ವಶಿ (ನಟಿ)|ಉರ್ವಶಿ]], [[ಮಂಜು ವಾರಿಯರ್]], [[ಸುರೇಶ್ ಗೋಪಿ]], [[ಜಯರಾಂ]], [[ಮುರಳಿ (ಮಲಯಾಳಂ ನಟ)|ಮುರಳಿ]], [[ಶಂಕರಾಡಿ]], [[ಕಾವ್ಯ ಮಾಧವನ್]], [[ಭಾವನಾ ಮೇನನ್]], [[ಪೃಥ್ವಿರಾಜ್ ಸುಕುಮಾರನ್|ಪೃಥ್ವಿರಾಜ್]], [[ಪಾರ್ವತಿ ತಿರುವೋತು|ಪಾರ್ವತಿ]], [[ಜಯಸೂರ್ಯ]], [[ದುಲ್ಕರ್ ಸಲ್ಮಾನ್]], [[ಒಡುವಿಲ್ ಉನ್ನಿಕೃಷ್ಣನ್]], [[ಜಗತಿ ಶ್ರೀಕುಮಾರ್]], [[ನೆಡುಮುಡಿ ವೇಣು]], [[ಕೆಪಿಎಸಿ ಲಲಿತಾ]], [[ಇನ್ನೋಸೆಂಟ್ (ನಟ)|ಇನ್ನೋಸೆಂಟ್]] ಮತ್ತು [[ಫಹಾದ್ ಫಾಜಿಲ್]] ನಂತಹ ಅಸಂಖ್ಯಾತ ನಟರಿಗೆ ಜನ್ಮ ನೀಡಿದೆ. ಕೊನೆಯ ಮಲಯಾಳಂ ನಟ ಪ್ರೇಮ್ ನಝೀರ್ 720 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.<ref>{{Cite news |last=Gangadhar |first=V. |title=Magic of Sophia Loren |url=https://www.hindu.com/mag/2003/11/02/stories/2003110200250500.htm |archive-url=https://web.archive.org/web/20031130011344/https://www.hindu.com/mag/2003/11/02/stories/2003110200250500.htm |url-status=dead |archive-date=30 November 2003 |date=2 October 2003 |department=Sunday Magazine |newspaper=[[The Hindu]] |location=Chennai, India |access-date=18 January 2015}}</ref> 1980 ರ ದಶಕದಿಂದ, ನಟರು [[ಮೋಹನ್ಲಾಲ್]] ಮತ್ತು [[ಮಮ್ಮೂಟ್ಟಿ]] ಅವರು ಚಲನಚಿತ್ರ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದಾರೆ; ಮೋಹನ್ಲಾಲ್ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (ನಾಲ್ಕು ಅಭಿನಯಕ್ಕಾಗಿ) ಗೆದ್ದಿದ್ದಾರೆ, ಆದರೆ ಮಮ್ಮೂಟ್ಟಿ ಅವರು ಅಭಿನಯಕ್ಕಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹೊಂದಿದ್ದಾರೆ.<ref>{{cite book |title=Sura's Year Book 2006 |author=Subburaj V.V.K |page=620 |isbn=978-8172541248 |url=https://books.google.com/books?id=Fz2WDD8sB0MC |publisher=Sura Books |access-date=30 May 2015}}</ref> ಮಲಯಾಳಂ ಸಿನಿಮಾ [[ಕೆ. ಜೆ. ಯೇಸುದಾಸ್]], [[ಕೆ.ಎಸ್. ಚಿತ್ರಾ]], [[ಎಂ. ಜಿ. ಶ್ರೀಕುಮಾರ್|ಎಂ.ಜಿ. ಶ್ರೀಕುಮಾರ್]], [[ವಯಲಾರ್ ರಾಮ ವರ್ಮ]], [[ವಿ. ಮಧುಸೂದನನ್ ನಾಯರ್]], [[ಎಂ.ಟಿ. ವಾಸುದೇವನ್ ನಾಯರ್]] ಮತ್ತು [[ಒ.ಎನ್.ವಿ. ಕುರುಪ್]] ನಂತಹ ಕೆಲವು ಹೆಚ್ಚು ಗಮನಾರ್ಹ ವ್ಯಕ್ತಿಗಳನ್ನು ಸಹ ನಿರ್ಮಿಸಿದೆ,<ref name="indiatimes2">{{cite news |url=https://timesofindia.indiatimes.com/india/Jnanpith-Awards-for-ONV-Kurup-Akhlaq-Khan-Shahryar/articleshow/6621243.cms |date=24 September 2014 |title=Jnanpith Awards for ONV Kurup, Akhlaq Khan Shahryar |work=The Times of India |access-date=24 September 2014}}</ref> ಕೊನೆಯಲ್ಲಿ ಉಲ್ಲೇಖಿಸಲಾದ ಇಬ್ಬರು [[ಜ್ಞಾನಪೀಠ ಪ್ರಶಸ್ತಿ]] ಪಡೆದವರು, ಇದು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದೆ.<ref name="upscguide">{{cite web |url=https://upscguide.com/content/jnanpith-award-winners |archive-url=https://web.archive.org/web/20121219193030/https://upscguide.com/content/jnanpith-award-winners |url-status=dead |archive-date=19 December 2012 |title=Jnanpith Award Winners | UPSC Guide |publisher=upscguide.com |access-date=24 September 2014}}</ref> ಕೇರಳದವರಾದ [[ರೆಸುಲ್ ಪೂಕ್ಕುಟ್ಟಿ]] ಅವರು [[ಸ್ಲಮ್ಡಾಗ್ ಮಿಲಿಯನೇರ್]] ಅದ್ಭುತ ಚಿತ್ರಕ್ಕಾಗಿ [[ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್|ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್]] ಗೆದ್ದ ಏಕೈಕ ಭಾರತೀಯರಾಗಿದ್ದಾರೆ. 2018 ರಂತೆ, [[ಮಲಯಾಳಂ ಸಿನಿಮಾ]] [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], [[ಭಾರತ]]ದಲ್ಲಿ ಅತ್ಯುತ್ತಮ ನಟಿಗೆ 14 ಪ್ರಶಸ್ತಿಗಳು, ಅತ್ಯುತ್ತಮ ನಟಿಗೆ 6, ಅತ್ಯುತ್ತಮ ಚಿತ್ರಕ್ಕೆ 11, ಮತ್ತು ಅತ್ಯುತ್ತಮ ಚಲನಚಿತ್ರ ನಿರ್ದೇಶಕರಿಗೆ 13 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.{{sfn|Chandran|2018|p=358-361}}
=== ಸಾಹಿತ್ಯ ===
{{Main|ಮಲಯಾಳಂ ಸಾಹಿತ್ಯ}}
[[ಸಂಗಮ್ ಸಾಹಿತ್ಯ]]ವನ್ನು [[ಮಲಯಾಳಂ]]ನ ಪ್ರಾಚೀನ ಪೂರ್ವವರ್ತಿ ಎಂದು ಪರಿಗಣಿಸಬಹುದು.{{sfn|Chandran|2018|p=450}} [[ಮಲಯಾಳಂ ಸಾಹಿತ್ಯ]]ವು [[ಹಳೆಯ ಮಲಯಾಳಂ]] ಅವಧಿಯಿಂದ (9 ನೇ–13 ನೇ ಶತಮಾನ CE) ಪ್ರಾರಂಭವಾಗುತ್ತದೆ ಮತ್ತು 14 ನೇ ಶತಮಾನದ [[ನಿರಣಂ ಕವಿಗಳು]] (ಮಾಧವ ಪಣಿಕ್ಕರ್, ಶಂಕರ ಪಣಿಕ್ಕರ್ ಮತ್ತು ರಾಮ ಪಣಿಕ್ಕರ್),<ref name="Nair1967">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |page=296}}</ref><ref name="Laet1994">{{cite book |author=Sigfried J. de Laet |title=History of Humanity: From the seventh to the sixteenth century |url=https://books.google.com/books?id=ixCyd2lByggC&pg=PA407 |access-date=18 November 2012 |year=1994 |publisher=UNESCO |isbn=978-9231028137 |page=407}}</ref> ಮತ್ತು 16 ನೇ ಶತಮಾನದ ಕವಿ [[ಎಳುತ್ತಚ್ಚನ್|ತುಂಚತ್ತು ಎಳುತ್ತಚ್ಚನ್]] ಅವರನ್ನು ಒಳಗೊಂಡಿದೆ, ಅವರ ಕೃತಿಗಳು ಆಧುನಿಕ ಮಲಯಾಳಂ ಭಾಷೆ ಮತ್ತು ಅದರ ಕಾವ್ಯದ ಆರಂಭವನ್ನು ಸೂಚಿಸುತ್ತವೆ.<ref name="George1998">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA58 |access-date=18 November 2012 |year=1998 |publisher=Sahitya Akademi |isbn=978-8126004133 |page=58}}</ref> [[ಕೊಲ್ಲಂ ಯುಗ|ಮಲಯಾಳಂ ಕ್ಯಾಲೆಂಡರ್]] ನ ಮೊದಲ 600 ವರ್ಷಗಳಲ್ಲಿ, ಸಾಹಿತ್ಯವು ಮುಖ್ಯವಾಗಿ [[ಉತ್ತರ ಮಲಬಾರ್|ಉತ್ತರ ಮಲಬಾರಿನ]] ''[[ವಡಕ್ಕನ್ ಪಟ್ಟುಕಲ್]]'' ಮತ್ತು [[ದಕ್ಷಿಣ ವಿಭಾಗ (ತಿರುವಾಂಕೂರು)|ದಕ್ಷಿಣ ತಿರುವಾಂಕೂರಿನ]] ''ತೆಕ್ಕನ್ ಪಟ್ಟುಕಲ್'' ನಂತಹ ಮೌಖಿಕ [[ಗೀತೆ]]ಗಳನ್ನು ಒಳಗೊಂಡಿತ್ತು.{{sfn|Chandran|2018|p=453}} 2013 ರಲ್ಲಿ "[[ಭಾರತದಲ್ಲಿ ಶಾಸ್ತ್ರೀಯ ಭಾಷೆ]]" ಎಂದು ಗೊತ್ತುಪಡಿಸಲಾಯಿತು,<ref name="thehindu20130524"/> ಇದು ಪ್ರಸ್ತುತ ರೂಪಕ್ಕೆ ಮುಖ್ಯವಾಗಿ 15 ಮತ್ತು 16 ನೇ ಶತಮಾನಗಳಲ್ಲಿ [[ಸಾಮಾನ್ಯ ಯುಗ]]ದ ಕವಿಗಳಾದ [[ಚೆರುಶ್ಶೇರಿ ನಂಬೂದಿರಿ]],<ref name="Cherussery (Krishnagadha) Malayalam author books">{{Cite web |url=https://keralaliterature.com/old/author.php?authid=1473 |title=Cherussery (Krishnagadha) Malayalam author books |website=keralaliterature.com |archive-url=https://web.archive.org/web/20190407052549/https://keralaliterature.com/old/author.php%3Fauthid%3D1473 |archive-date=7 April 2019 |url-status=dead}}</ref><ref name="mlm" /> [[ತುಂಚತ್ತು ಎಳುತ್ತಚ್ಚನ್]],<ref name="mlm" /> ಮತ್ತು [[ಪೂಂತಾನಂ ನಂಬೂದಿರಿ]]<ref name="mlm" /><ref>{{cite news |url=https://www.thehindu.com/society/history-and-culture/the-charms-of-poonthanam-illam/article25308319.ece/ |title=The Charms of Poonthanam Illam |last=Arun Narayanan |date=25 October 2018 |work=The Hindu}}</ref> ರವರ ಪ್ರಭಾವದಿಂದ ಅಭಿವೃದ್ಧಿಗೊಂಡಿತು.<ref name="mlm">{{cite book |title=A Short History of Malayalam Literature |author=Dr. K. Ayyappa Panicker |url=https://archive.org/details/ASHORTHISTORYOFMALAYALAMLITERATURE |year=2006 |location=Thiruvananthapuram |publisher=Department of Information and Public Relations, Kerala}}</ref><ref>Freeman, Rich (2003). "Genre and Society: The Literary Culture of Premodern Kerala". In Literary Cultures in History: Reconstructions from South Asia</ref> 17/18 ನೇ ಶತಮಾನ CE ಯ ಸಂಭವನೀಯ ಕವಿಯಾದ [[ಉನ್ನಾಯಿ ವರಿಯಾರ್]],<ref name="Attakatha sahithyam">{{Cite book |last=Krishna Kaimal |first=Aymanam |title=Attakatha sahithyam |url=https://mgucat.mgu.ac.in/cgi-bin/koha/opac-detail.pl?biblionumber=133514&shelfbrowse_itemnumber=132435 |date=1989 |publisher=Trivandrum State Institute of Language}}</ref> ಮತ್ತು 18 ನೇ ಶತಮಾನ CE ಯ ಕವಿಯಾದ [[ಕುಂಚನ್ ನಂಬಿಯಾರ್]] ಅವರು ಆಧುನಿಕ ಮಲಯಾಳಂ ಸಾಹಿತ್ಯದ ಬೆಳವಣಿಗೆಯಲ್ಲಿ ತಮ್ಮ ಅಪಕ್ವ ರೂಪದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ.<ref name="mlm" /> [[ಭಾರತಪುಳ]] ನದಿ, ಇದನ್ನು [[ಪೊನ್ನಾನಿ|ಪೊನ್ನಾನಿ ನದಿ]] ಎಂದೂ ಕರೆಯುತ್ತಾರೆ, ಮತ್ತು ಅದರ ಉಪನದಿಗಳು ಆಧುನಿಕ ಮಲಯಾಳಂ ಸಾಹಿತ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.<ref>{{Cite news |title=The river sutra |url=https://www.thehindu.com/society/rivers-have-nurtured-malayalam-literature-and-poetry-since-time-immemorial/article25058214.ece |last=Binoy |first=Rasmi |date=27 September 2018 |access-date=24 January 2021 |work=The Hindu}}</ref>
[[ಪರೆಮ್ಮಕ್ಕಲ್ ತೋಮಾ ಕಥನಾರ್]] ಮತ್ತು [[ಕೇರಳ ವರ್ಮ ವಲಿಯಕೋಯಿ ತಂಪುರಾನ್]] ಮಲಯಾಳಂ ಗದ್ಯಕ್ಕೆ ತಮ್ಮ ಕೊಡುಗೆಗೆ ಹೆಸರುವಾಸಿಯಾಗಿದ್ದಾರೆ.<ref name="google24">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |pages=118–21}}</ref><ref name="Sinhā2009">{{cite book |author=Madhubālā Sinhā |title=Encyclopaedia of South Indian literature |url=https://books.google.com/books?id=8qQpAQAAIAAJ |access-date=18 November 2012 |year=2009 |publisher=Anmol Publ. |isbn=978-8126137404 |page=97}}</ref><ref name="Vilanilam1987">{{cite book |author=John V. Vilanilam |title=Religious communication in India |url=https://books.google.com/books?id=a0UeAAAAMAAJ |access-date=18 November 2012 |year=1987 |publisher=Kairali Books International |page=66}}</ref> "[[ಆಧುನಿಕ ಮಲಯಾಳಂನ ಕವಿತ್ರಯ|ಕವಿಗಳ ತ್ರಿಮೂರ್ತಿಗಳು]]" (''ಕವಿತ್ರಯಂ''): [[ಕುಮಾರನ್ ಆಶಾನ್]], [[ವಳ್ಳತ್ತೋಳ್ ನಾರಾಯಣ ಮೇನನ್]], ಮತ್ತು [[ಉಳ್ಳೂರ್ ಎಸ್. ಪರಮೇಶ್ವರ ಅಯ್ಯರ್]] ಅವರು ಕೇರಳೀಯ ಕಾವ್ಯವನ್ನು ಪ್ರಾಚೀನ ಚಾತುರ್ಯ ಮತ್ತು ಅಧ್ಯಾತ್ಮಶಾಸ್ತ್ರದಿಂದ ಹೆಚ್ಚು [[ಗೀತಾತ್ಮಕ|ಗೀತಾತ್ಮಕ]] ಶೈಲಿಯತ್ತ ತಿರುಗಿಸಿದ್ದಾರೆಂದು ಗುರುತಿಸಲ್ಪಟ್ಟಿದ್ದಾರೆ.<ref name="Al̲ikkōṭȧ1979">{{cite book |author=Sukumār Al̲ikkōṭȧ |title=Mahakavi Ulloor |url=https://books.google.com/books?id=1VkOAAAAYAAJ |access-date=18 November 2012 |year=1979 |publisher=Sahitya Akademi |page=52}}</ref><ref name="Indian and Foreign Review">{{cite book |title=Indian and Foreign Review |url=https://books.google.com/books?id=XaRnAAAAMAAJ |access-date=18 November 2012 |year=1983 |publisher=Publications Division of the Ministry of Information and Broadcasting, Government of India |page=25}}</ref><ref name="Tarakan1990">{{cite book |author=Ke. Eṃ Tarakan |title=A brief survey of Malayalam literature: history of literature |url=https://books.google.com/books?id=3nhkAAAAMAAJ |access-date=18 November 2012 |year=1990 |publisher=K.M. Tharakan |pages=41–52}}</ref> [[ಮೊಯಿಂಕುಟ್ಟಿ ವೈದ್ಯರ್]] ಮತ್ತು [[ಪುಲಿಕ್ಕೋಟ್ಟಿಲ್ ಹೈದರ್]] ನಂತಹ ಕವಿಗಳು [[ಮಾಪ್ಪಿಲ ಹಾಡುಗಳಿಗೆ]] ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ, ಇದು [[ಅರಬಿ ಮಲಯಾಳಂ]] ಸಾಹಿತ್ಯದ ಪ್ರಕಾರವಾಗಿದೆ.<ref>{{cite news |url=https://www.hindu.com/2007/03/31/stories/2007033110250500.htm |archive-url=https://web.archive.org/web/20121108104937/https://www.hindu.com/2007/03/31/stories/2007033110250500.htm |url-status=dead |archive-date=8 November 2012 |title=Mappila songs cultural fountains of a bygone age, says MT |date=31 March 2007 |access-date=15 August 2009 |work=[[The Hindu]] |location=Chennai, India}}</ref><ref>Pg 167, Mappila Muslims: a study on society and anti colonial struggles By Husain Raṇdathaṇi, Other Books, Kozhikode 2007</ref> ಯಾವುದೇ ಭಾರತೀಯ ಭಾಷೆಯಲ್ಲಿ ಮೊದಲ ಪ್ರವಾಸ ಕಥನವು ಮಲಯಾಳಂ ''[[ವರ್ತಮಾನಪುಸ್ತಕಂ]]'' ಆಗಿದೆ, ಇದನ್ನು [[ಪರೆಮ್ಮಕ್ಕಲ್ ತೋಮಾ ಕಥನಾರ್]] 1785 ರಲ್ಲಿ ಬರೆದರು.<ref name="legacy">{{cite book |last=Menon |first=A. Sreedhara |title=The legacy of Kerala |year=2008 |publisher=D C Books |location=Kottayam, Kerala |isbn=978-81-264-2157-2 |edition=1st DCB}}</ref><ref>{{cite web |url=https://nasrani.net/2010/08/23/the-varthamanappusthakam-cathanar-paremmakkal/ |title=August 23, 2010 Archives |url-status=dead |archive-url=https://web.archive.org/web/20130427073541/https://nasrani.net/2010/08/23/the-varthamanappusthakam-cathanar-paremmakkal/ |archive-date=27 April 2013}}</ref> ಗದ್ಯ ಸಾಹಿತ್ಯ, [[ಮಲಯಾಳಂ ಪತ್ರಿಕೋದ್ಯಮ]], ಮತ್ತು ವಿಮರ್ಶೆಯು 18 ನೇ ಶತಮಾನದ ಉತ್ತರಾರ್ಧದ ನಂತರ ಪ್ರಾರಂಭವಾಯಿತು.<ref name="legacy" /> ಸಮಕಾಲೀನ ಮಲಯಾಳಂ ಸಾಹಿತ್ಯವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನದ ಸಂದರ್ಭವನ್ನು ವ್ಯವಹರಿಸುತ್ತದೆ. ಆಧುನಿಕ ಸಾಹಿತ್ಯದ ಪ್ರವೃತ್ತಿಯು ಹೆಚ್ಚಾಗಿ [[ರಾಜಕೀಯ ತೀವ್ರವಾದ]]ದ ಕಡೆಗೆ ಇರುತ್ತದೆ.<ref>{{cite encyclopedia |url=https://www.britannica.com/EBchecked/topic/556016/South-Asian-arts/65212/Tamil#toc65213 |title=South Asian arts |encyclopedia=Encyclopedia Britannica |access-date=15 September 2017}}</ref> [[ಮಲಯಾಳಂ ಸಾಹಿತ್ಯ]]ವು 6 [[ಜ್ಞಾನಪೀಠ ಪ್ರಶಸ್ತಿ|ಜ್ಞಾನಪೀಠ ಪ್ರಶಸ್ತಿಗಳನ್ನು]] ಪಡೆದುಕೊಂಡಿದೆ, ಇದು ಯಾವುದೇ ದ್ರಾವಿಡ ಭಾಷೆಗೆ ಎರಡನೇ ಅತಿ ಹೆಚ್ಚು ಮತ್ತು ಯಾವುದೇ ಭಾರತೀಯ ಭಾಷೆಗೆ ಮೂರನೇ ಅತಿ ಹೆಚ್ಚು.<ref>{{Cite news |title=Jnanpith given to Akkitham |url=https://www.thehindu.com/news/national/kerala/jnanpith-given-to-akkitham/article32685581.ece |last=Naha |first=Abdul Latheef |date=24 September 2020 |access-date=12 June 2021 |work=The Hindu}}</ref><ref>{{Cite news |title=Celebrated Malayalam poet Akkitham wins 2019 Jnanpith Award |url=https://www.business-standard.com/article/news-ani/celebrated-malayalam-poet-akkitham-wins-2019-jnanpith-award-119112900926_1.html |last=ANI |date=29 November 2019 |access-date=12 June 2021 |publisher=Business Standard}}</ref> 20 ನೇ ಶತಮಾನದ ಉತ್ತರಾರ್ಧದಲ್ಲಿ, [[ಜ್ಞಾನಪೀಠ]] ಪ್ರಶಸ್ತಿ ವಿಜೇತ ಕವಿಗಳು ಮತ್ತು ಬರಹಗಾರರಾದ [[ಜಿ. ಶಂಕರ ಕುರುಪ್]], [[ಎಸ್. ಕೆ. ಪೊಟ್ಟೆಕ್ಕಾಟ್]], [[ತಕಳಿ ಶಿವಶಂಕರ ಪಿಳ್ಳೈ]], [[ಎಂ. ಟಿ. ವಾಸುದೇವನ್ ನಾಯರ್]], [[ಒ. ಎನ್. ವಿ. ಕುರುಪ್]], ಮತ್ತು [[ಅಕ್ಕಿತಂ ಅಚ್ಯುತನ್ ನಂಬೂದಿರಿ]] ಅವರು ಆಧುನಿಕ ಮಲಯಾಳಂ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.<ref name="google25">{{cite book |author=Subodh Kapoor |title=The Indian Encyclopaedia: Biographical, Historical, Religious, Administrative, Ethnological, Commercial and Scientific. Mahi-Mewat |url=https://books.google.com/books?id=mc6C5dVHbGAC&pg=PA4542 |access-date=18 November 2012 |year=2002 |publisher=Cosmo |isbn=978-8177552720 |page=4542}}</ref><ref name="Accessions List, South Asia">{{cite book |title=Accessions List, South Asia |url=https://books.google.com/books?id=lPcoAQAAIAAJ |access-date=18 November 2012 |year=1994 |publisher=E.G. Smith for the U.S. Library of Congress Office, New Delhi |page=21}}</ref><ref name="Indian Writing Today">{{cite book |title=Indian Writing Today |url=https://books.google.com/books?id=1wUtAQAAIAAJ |access-date=18 November 2012 |year=1967 |publisher=Nirmala Sadanand Publishers |page=21}}</ref><ref name="DattaAkademi1987">{{cite book |author1=Amaresh Datta |author2=Sahitya Akademi |title=Encyclopaedia of Indian Literature: K to Navalram |url=https://books.google.com/books?id=QaIRAQAAMAAJ |access-date=18 November 2012 |year=1987 |publisher=Sahitya Akademi |page=2394 |isbn=978-0-8364-2423-2}}</ref><ref name="Malayalam Literary Survey">{{cite book |title=Malayalam Literary Survey |url=https://books.google.com/books?id=k5JkAAAAMAAJ |access-date=18 November 2012 |year=1993 |publisher=Kerala Sahitya Akademi |page=19}}</ref> ನಂತರ, [[ಒ. ವಿ. ವಿಜಯನ್]], [[ಕಮಲಾದಾಸ್]], [[ಎಂ. ಮುಕುಂದನ್]], [[ಅರುಂಧತಿ ರಾಯ್]], [[ವೈಕಂ ಮುಹಮ್ಮದ್ ಬಷೀರ್]] ನಂತಹ ಬರಹಗಾರರು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ.<ref name="MukundanPillai2004">{{cite book |author1=Eṃ Mukundan |author2=C. Gopinathan Pillai |title=Eng Adityan Radha And Others |url=https://books.google.com/books?id=1N5QcHakKdoC&pg=PP3 |access-date=18 November 2012 |year=2004 |publisher=Sahitya Akademi |isbn=978-8126018833 |page=3}}</ref><ref name="Maheshwari2002">{{cite book |author=Ed. Vinod Kumar Maheshwari |title=Perspectives On Indian English Literature |url=https://books.google.com/books?id=JcY2-ldWIKsC&pg=PA126 |access-date=18 November 2012 |year=2002 |publisher=Atlantic Publishers & Dist |isbn=978-8126900930 |page=126}}</ref><ref name="Chaudhuri2008">{{cite book |author=Amit Chaudhuri |title=Clearing a Space: Reflections On India, Literature, and Culture |url=https://books.google.com/books?id=AQeN2PoAx2IC&pg=PA44 |access-date=18 November 2012 |year=2008 |publisher=Peter Lang |isbn=978-1-906165-01-7 |pages=44–45}}</ref><ref>{{Cite news |title=Indian's First Novel Wins Booker Prize in Britain |work=[[The New York Times]] |date=15 October 1997 |access-date=11 November 2007 |url=https://query.nytimes.com/gst/fullpage.html?res=9A01E6DD173FF936A25753C1A961958260 |first=Sarah |last=Lyall}}</ref>
=== ಪಾಕಪದ್ಧತಿ ===
{{Main|ಕೇರಳದ ಪಾಕಪದ್ಧತಿ}}
ಕೇರಳದ ಪಾಕಪದ್ಧತಿಯು ಮೀನು, ಕೋಳಿ ಮತ್ತು ಮಾಂಸವನ್ನು ಬಳಸಿ ತಯಾರಿಸಿದ ವಿವಿಧ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿದೆ. ಪಾಕಶಾಸ್ತ್ರದ ಮಸಾಲೆಗಳನ್ನು ಕೇರಳದಲ್ಲಿ ಸಹಸ್ರಮಾನಗಳಿಂದ ಬೆಳೆಯಲಾಗುತ್ತಿದೆ ಮತ್ತು ಅವು ಅದರ ಪಾಕಪದ್ಧತಿಯ ವಿಶಿಷ್ಟ ಲಕ್ಷಣಗಳಾಗಿವೆ.<ref name="google26">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA10 |access-date=17 November 2012 |year=2010 |publisher=Murdoch Books |isbn=978-1-74196-438-7 |page=10}}</ref> ಅಕ್ಕಿಯು ಪ್ರಮುಖ ಪ್ರಧಾನ ಆಹಾರವಾಗಿದ್ದು, ಇದನ್ನು ಎಲ್ಲಾ ಸಮಯದಲ್ಲೂ ಸೇವಿಸಲಾಗುತ್ತದೆ.<ref name="Majumdar2010">{{cite book |author=Majumdar |title=Consumer Behaviour: Insights From Indian Market |url=https://books.google.com/books?id=KF57x1Nrn2UC&pg=RA1-PA79 |access-date=17 November 2012 |year=2010 |publisher=PHI Learning Pvt. Ltd. |isbn=978-8120339637 |page=181}}</ref> ಕೇರಳದಲ್ಲಿ ಹೆಚ್ಚಿನ ಉಪಾಹಾರ ಆಹಾರಗಳನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ, ಒಂದು ರೂಪದಲ್ಲಿ ಅಥವಾ ಇನ್ನೊಂದು ರೂಪದಲ್ಲಿ (''[[ಇಡ್ಲಿ]]'', ''[[ದೋಸೆ (ಆಹಾರ)|ದೋಸೆ]]'', ''[[ಪುಟ್ಟು]]'', ''[[ಪತ್ತಿರಿ]]'', ''[[ಅಪ್ಪಂ]]'', ಅಥವಾ ''[[ಇಡಿಯಪ್ಪಂ]]''), [[ಮರಗೆಣಸು]] ತಯಾರಿಕೆಗಳು, ಅಥವಾ ದ್ವಿದಳ ಧಾನ್ಯ-ಆಧಾರಿತ [[ವಡೆ (ಆಹಾರ)|ವಡೆ]].<ref name="Muthachen1970">{{cite book |author=Rachel Muthachen |title=Regional Indian Recipes |url=https://books.google.com/books?id=h5xXz_UFV7QC&pg=PA1 |access-date=17 November 2012 |year=1970 |publisher=Jaico Publishing House |isbn=978-8172240356 |page=1}}</ref> ಇವುಗಳು [[ಚಟ್ನಿ]], ''[[ಕಡಲೆ]]'', ''[[ಪಾಯಸಂ]]'', ''[[ಹೆಸರು ಕಾಳು|ಪಯರ್]] [[ಪಪ್ಪಡಂ]]'', ''[[ಅಪ್ಪಂ]]'', ಚಿಕನ್ ಕರಿ, ಗೋಮಾಂಸ ಫ್ರೈ, ಎಗ್ ಮಸಾಲಾ ಮತ್ತು ಮೀನು ಕರಿಯೊಂದಿಗೆ ಸೇರಿಕೊಳ್ಳಬಹುದು.<ref name="Newton" /> [[ಪೊರೊಟ್ಟ]] ಮತ್ತು [[ಬಿರಿಯಾನಿ]] ಸಹ ಸಾಮಾನ್ಯವಾಗಿ ಕೇರಳದ ರೆಸ್ಟೋರೆಂಟ್ಗಳಲ್ಲಿ ಕಂಡುಬರುತ್ತವೆ. ತಲಶ್ಶೇರಿ ಬಿರಿಯಾನಿ ಜನಾಂಗೀಯ ಬ್ರ್ಯಾಂಡ್ ಆಗಿ ಜನಪ್ರಿಯವಾಗಿದೆ. ಮಧ್ಯಾಹ್ನದ ಊಟದ ಭಕ್ಷ್ಯಗಳು [[ಅಕ್ಕಿ]] ಮತ್ತು [[ಕರಿ]] ಜೊತೆಗೆ ''[[ರಸಂ (ಭಕ್ಷ್ಯ)|ರಸಂ]]'', ''ಪುಳಿಶ್ಶೇರಿ'' ಮತ್ತು ''[[ಸಾಂಬಾರ್ (ಭಕ್ಷ್ಯ)|ಸಾಂಬಾರ್]]'' ಅನ್ನು ಒಳಗೊಂಡಿವೆ.<ref name="google27">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT4 |access-date=17 November 2012 |publisher=Springwood emedia |isbn=978-1-4761-2308-0 |pages=4–}}</ref> ''[[ಸಾಧ್ಯ]]'' ಸಸ್ಯಾಹಾರಿ ಊಟವಾಗಿದ್ದು, ಇದನ್ನು ಬಾಳೆ ಎಲೆಯಲ್ಲಿ ಬಡಿಸಲಾಗುತ್ತದೆ ಮತ್ತು ನಂತರ ಒಂದು ಕಪ್ ಪಾಯಸಂನೊಂದಿಗೆ ಸೇರಿಸಲಾಗುತ್ತದೆ.<ref name="Kannampilly2003">{{cite book |author=Vijayan Kannampilly |title=Essential Kerala Cook Book |url=https://books.google.com/books?id=pYfOCaAPb3sC&pg=PA11 |access-date=17 November 2012 |year=2003 |publisher=Penguin Books India |isbn=978-0-14-302950-2 |pages=10–11}}</ref> ಜನಪ್ರಿಯ ತಿಂಡಿಗಳಲ್ಲಿ [[ಬಾಳೆಹಣ್ಣಿನ ಚಿಪ್ಸ್]], ಯಾಮ್ ಕ್ರಿಸ್ಪ್ಸ್, [[ಮರಗೆಣಸು ಚಿಪ್ಸ್]], [[ಅಚ್ಚಪ್ಪಂ]], [[ಉನ್ನಿ ಅಪ್ಪಂ]] ಮತ್ತು ''ಕುಳಲಪ್ಪಂ'' ಸೇರಿವೆ.<ref name="Kerala with Lakshadweep">{{cite book |title=Kerala with Lakshadweep |url=https://books.google.com/books?id=yJJuAAAAMAAJ |access-date=17 November 2012 |year=2005 |publisher=Outlook Publishing |page=27 |isbn=978-8189449018}}</ref><ref name="Koilparampil1982">{{cite book |author=George Koilparampil |title=Caste in the Catholic community in Kerala: a study of caste elements in the inter rite relationships of Syrians and Latins |url=https://books.google.com/books?id=nXnaAAAAMAAJ |access-date=17 November 2012 |year=1982 |publisher=Dept. of Sociology, St. Teresa's College |page=233}}</ref><ref name="(Swami.)2000">{{cite book |author=Paramatmananda (Swami.) |title=Talks |url=https://books.google.com/books?id=p77mUECpIjgC |access-date=17 November 2012 |year=2000 |publisher=Mata Amritanandamayi Center |isbn=978-1-879410-79-4 |page=24}}</ref> ಸಮುದ್ರಾಹಾರ ವಿಶೇಷ ಭಕ್ಷ್ಯಗಳಲ್ಲಿ [[ಕರಿಮೀನ್]], ಸೀಗಡಿ, ಏಡಿ ಮತ್ತು ಇತರ ಕಠಿಣಚರ್ಮಿ ಭಕ್ಷ್ಯಗಳು ಸೇರಿವೆ.<ref>{{cite web |title=Kerala Cuisine |url=https://www.ecotours.in/kerala-cuisine.htm |publisher=Ecotours |access-date=30 May 2015 |archive-date=13 August 2015 |archive-url=https://web.archive.org/web/20150813003443/http://ecotours.in/kerala-cuisine.htm |url-status=dead }}</ref> [[ತಲಶ್ಶೇರಿ ಪಾಕಪದ್ಧತಿ]] ವೈವಿಧ್ಯಮಯವಾಗಿದೆ ಮತ್ತು ಇದು ಅನೇಕ ಪ್ರಭಾವಗಳ ಮಿಶ್ರಣವಾಗಿದೆ.
== ಮಾಧ್ಯಮ ==
{{Main|ಕೇರಳದಲ್ಲಿ ಮಾಧ್ಯಮ}}
ಮಾಧ್ಯಮ, ದೂರಸಂಪರ್ಕ, ಪ್ರಸಾರ ಮತ್ತು ಕೇಬಲ್ ಸೇವೆಗಳನ್ನು [[ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ]] (TRAI) ನಿಯಂತ್ರಿಸುತ್ತದೆ.<ref>{{cite book |title=The Telecom Regulatory Authority of India Act, 1997 |url=https://books.google.com/books?id=0gfeQc1ZBqIC&pg=PA112 |publisher=Georg Thieme Verlag |page=112 |id=GGKEY:BJ6HEPE0NRE}}</ref> 2015–16 ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 4, ಕೇರಳವನ್ನು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]] ಹೊಂದಿರುವ ರಾಜ್ಯ ಎಂದು ಶ್ರೇಣೀಕರಿಸಿತು.<ref>{{cite web |title=National Family Health Survey (NFHS-4) |url=https://rchiips.org/nfhs/NFHS-4Reports/Kerala.pdf |website=International Institute for Population SciencesDeonar |access-date=7 February 2022 |archive-date=23 February 2022 |archive-url=https://web.archive.org/web/20220223120050/http://rchiips.org/nfhs/NFHS-4Reports/Kerala.pdf |url-status=dead }}</ref> ಡಜನ್ಗಟ್ಟಲೆ ಪತ್ರಿಕೆಗಳು ಕೇರಳದಲ್ಲಿ ಪ್ರಕಟವಾಗುತ್ತವೆ, ಒಂಬತ್ತು ಪ್ರಮುಖ ಭಾಷೆಗಳಲ್ಲಿ,<ref name=rniindia>{{cite web |url=https://rni.nic.in/pii.htm |archive-url=https://web.archive.org/web/20070927070139/https://rni.nic.in/pii.htm |archive-date=27 September 2007 |url-status=dead |title=General Review |access-date=1 September 2006 |publisher=Registrar of Newspapers for India}}</ref> ಆದರೆ ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್.<ref name="google28">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA186 |access-date=17 November 2012 |year=1998 |publisher=Sahitya Akademi |isbn=978-8126004133 |page=186}}</ref> ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]]ವನ್ನು ಹೊಂದಿದೆ.<ref>{{cite web |title=The DHS Program – India: Standard DHS, 2015–16 |url=https://dhsprogram.com/what-we-do/survey/survey-display-355.cfm |website=dhsprogram.com}}</ref><ref>{{cite web |title=National Family Health Survey |url=https://rchiips.org/nfhs/NFHS-4Report.shtml |website=rchiips.org |access-date=7 February 2022 |archive-date=7 March 2022 |archive-url=https://web.archive.org/web/20220307101917/http://rchiips.org/nfhs/NFHS-4Report.shtml |url-status=dead}}</ref> ಅತಿ ವ್ಯಾಪಕವಾಗಿ ಪ್ರಸಾರವಾಗುವ [[ಮಲಯಾಳಂ ಭಾಷಾ ಪತ್ರಿಕೆಗಳ ಪಟ್ಟಿ|ಮಲಯಾಳಂ-ಭಾಷಾ ಪತ್ರಿಕೆಗಳೆಂದರೆ]] ''[[ಮಲಯಾಳ ಮನೋರಮ]], [[ಮಾತೃಭೂಮಿ]], [[ದೇಶಾಭಿಮಾನಿ]], [[ಮಧ್ಯಮಂ]], [[ಕೇರಳ ಕೌಮುದಿ]], [[ಮಂಗಳಂ ಪಬ್ಲಿಕೇಷನ್ಸ್|ಮಂಗಳಂ]], [[ಚಂದ್ರಿಕಾ (ಮಲಯಾಳಂ ಪತ್ರಿಕೆ)|ಚಂದ್ರಿಕಾ]], [[ದೀಪಿಕಾ (ಪತ್ರಿಕೆ)|ದೀಪಿಕಾ]], [[ಜನಯುಗಂ]], [[ಜನ್ಮಭೂಮಿ]], [[ಸಿರಾಜ್ ಡೈಲಿ]]'' ಮತ್ತು ''[[ಸುಪ್ರಭಾತಂ ಡೈಲಿ|ಸುಪ್ರಭಾತಂ]]''. [[ಮಲಯಾಳಂ ಭಾಷಾ ನಿಯತಕಾಲಿಕೆಗಳ ಪಟ್ಟಿ|ಪ್ರಮುಖ ಮಲಯಾಳಂ ನಿಯತಕಾಲಿಕೆಗಳು]] ''[[ಮಾತೃಭೂಮಿ ಅಳಚಪ್ಪತಿಪ್ಪು]], [[ವನಿತಾ]], [[ಇಂಡಿಯಾ ಟುಡೇ]] ಮಲಯಾಳಂ, [[ಮಧ್ಯಮಂ ವೀಕ್ಲಿ]], [[ಗೃಹಲಕ್ಷ್ಮೀ (ನಿಯತಕಾಲಿಕೆ)|ಗೃಹಲಕ್ಷ್ಮೀ]], [[ಧನಂ (ವ್ಯಾಪಾರ ನಿಯತಕಾಲಿಕೆ)|ಧನಂ]], [[ಚಿತ್ರಭೂಮಿ]]'' ಮತ್ತು ''[[ಭಾಷಾಪೋಷಿಣಿ]]''.
[[File:Malayala Manorama New Press in Kollam-3, Apr 2016.jpg|right|thumb|[[ಕೊಟ್ಟಿಯಂ]], [[ಕೊಲ್ಲಂ|ಕೊಲ್ಲಂನ]] [[ಮಲಯಾಳ ಮನೋರಮ]] ಕಚೇರಿ]]
[[ಡಿಡಿ ಮಲಯಾಳಂ]] ಸರ್ಕಾರಿ-ಸ್ವಾಮ್ಯದ ದೂರದರ್ಶನ ಪ್ರಸಾರಕವಾಗಿದೆ. [[ಬಹು-ವ್ಯವಸ್ಥಾಪಕ ವ್ಯವಸ್ಥೆಗಳು|ಬಹು-ವ್ಯವಸ್ಥಾಪಕ ವ್ಯವಸ್ಥೆಗಳು]] ಮಲಯಾಳಂ, ಇಂಗ್ಲಿಷ್, ಇತರ ಭಾರತೀಯ ಭಾಷೆಗಳು ಮತ್ತು ಅಂತಾರಾಷ್ಟ್ರೀಯ ಚಾನೆಲ್ಗಳ ಮಿಶ್ರಣವನ್ನು ಒದಗಿಸುತ್ತವೆ. ಕೆಲವು ಜನಪ್ರಿಯ ಮಲಯಾಳಂ ದೂರದರ್ಶನ ಚಾನೆಲ್ಗಳು [[ಏಷ್ಯಾನೆಟ್ (ದೂರದರ್ಶನ ಚಾನೆಲ್)|ಏಷ್ಯಾನೆಟ್]], [[ಏಷ್ಯಾನೆಟ್ ನ್ಯೂಸ್]], [[ಏಷ್ಯಾನೆಟ್ ಪ್ಲಸ್]], [[ಏಷ್ಯಾನೆಟ್ ಮೂವೀಸ್]], [[ಸೂರ್ಯ ಟಿವಿ]], [[ಸೂರ್ಯ ಮೂವೀಸ್]], [[ಮಝವಿಲ್ ಮನೋರಮ]], [[ಮನೋರಮ ನ್ಯೂಸ್]], [[ಕೈರಳಿ ಟಿವಿ]], [[ಕೈರಳಿ ಟಿವಿ|ಕೈರಳಿ ನ್ಯೂಸ್]], [[ಫ್ಲವರ್ಸ್ (ದೂರದರ್ಶನ ಚಾನೆಲ್)|ಫ್ಲವರ್ಸ್]], [[ಮೀಡಿಯಾ ವನ್ ಟಿವಿ]], [[ಮಾತೃಭೂಮಿ ನ್ಯೂಸ್]], [[ಕಪ್ಪಾ ಟಿವಿ]], [[ಅಮೃತ ಟಿವಿ]], [[ರಿಪೋರ್ಟರ್ ಟಿವಿ]], [[ಜೈಹಿಂದ್]], [[ಜನಂ ಟಿವಿ]], [[ಜೀವನ್ ಟಿವಿ]], [[ಕೌಮುದಿ ಟಿವಿ]] ಮತ್ತು [[ಶಾಲೋಮ್ (ದೂರದರ್ಶನ ಚಾನೆಲ್)|ಶಾಲೋಮ್ ಟಿವಿ]]. ಭಾರತದಲ್ಲಿ ಎರಡನೇ ಅತಿ ಹೆಚ್ಚು ಇಂಟರ್ನೆಟ್ ಪ್ರವೇಶ ಪ್ರಮಾಣದೊಂದಿಗೆ,<ref>{{Cite web |title=Delhi ranks top in Internet penetration, Kerala comes second |url=https://www.thehindubusinessline.com/info-tech/delhi-ranks-top-in-internet-penetration-kerala-comes-second/article31516751.ece/ |date=6 May 2020 |access-date=27 June 2021 |website=The Hindu Business Line}}</ref> [[ಡಿಜಿಟಲ್ ಮೀಡಿಯಾ]] [[ಸಾಮಾಜಿಕ ಮಾಧ್ಯಮ]] ಮತ್ತು [[ಭಾರತದಲ್ಲಿ ಓವರ್-ದಿ-ಟಾಪ್ ಮೀಡಿಯಾ ಸೇವೆಗಳು|OTT ಸೇವೆಗಳು]] ಸೇರಿದಂತೆ ರಾಜ್ಯದಲ್ಲಿ ಮಾಹಿತಿ ಮತ್ತು ಮನರಂಜನೆಯ ಪ್ರಮುಖ ಮೂಲವಾಗಿದೆ. ರಾಜ್ಯದಲ್ಲಿ ಗಮನಾರ್ಹವಾದ [[ಜನ ವಿಜ್ಞಾನ ಚಳುವಳಿ]] ಬೇರೂರಿದೆ, ಮತ್ತು ಬರಹಗಾರರ ಸಹಕಾರಿ ಸಂಘಗಳಂತಹ ಚಟುವಟಿಕೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ.<ref name="Tharamangalam_2005" /><ref name="Ranjith_2004">{{Cite book |author=Ranjith KS |veditors=Nair PR, Shaji H |year=2004 |title=Rural Libraries of Kerala |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621812 |pages=20–21 |url=https://www.cds.ac.in/krpcds/publication/downloads/78.pdf |access-date=28 December 2008}}</ref> [[ಬಿಎಸ್ಎನ್ಎಲ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ಜಿಯೋ]] ಪ್ರಮುಖ ಸೆಲ್ ಫೋನ್ ಸೇವಾ ಪೂರೈಕೆದಾರರಾಗಿದ್ದಾರೆ.<ref>{{cite web |title=Highlights ofTelecom Subscription Data as on 28thFebruary, 2019 |url=https://main.trai.gov.in/sites/default/files/PR_No.27of2019_0.pdf |access-date=16 May 2019 |archive-date=18 April 2019 |archive-url=https://web.archive.org/web/20190418140404/https://main.trai.gov.in/sites/default/files/PR_No.27of2019_0.pdf |url-status=dead }}</ref> ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಲಭ್ಯವಿವೆ; ಕೆಲವು ಪ್ರಮುಖ [[ಇಂಟರ್ನೆಟ್ ಸೇವಾ ಪೂರೈಕೆದಾರರು]] [[ಬಿಎಸ್ಎನ್ಎಲ್]], [[ಏಷ್ಯಾನೆಟ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ರೈಲ್ಟೆಲ್|ರೈಲ್ವೈರ್]], ಮತ್ತು [[ಟಾಟಾ ಕಮ್ಯುನಿಕೇಷನ್ಸ್]].
== ಕ್ರೀಡೆ ==
{{Main|ಕೇರಳದಲ್ಲಿ ಕ್ರೀಡೆ}}
[[File:Kerala boatrace.jpg|thumb|ವಾರ್ಷಿಕ [[ವಲ್ಲಂ ಕಳಿ|ಹಾವು ದೋಣಿ ಪಂದ್ಯವನ್ನು]] [[ಪಂಬಾ ನದಿ|ಪಂಬಾ ನದಿಯಲ್ಲಿ]] [[ಓಣಂ]] ಸಮಯದಲ್ಲಿ ನಡೆಸಲಾಗುತ್ತದೆ]]21 ನೇ ಶತಮಾನದ ವೇಳೆಗೆ, ಕೇರಳದ ಬಹುತೇಕ ಎಲ್ಲಾ ಸ್ಥಳೀಯ ಕ್ರೀಡೆಗಳು ಮತ್ತು ಆಟಗಳು ಕಣ್ಮರೆಯಾಗಿದ್ದವು ಅಥವಾ ಸ್ಥಳೀಯ ಹಬ್ಬಗಳ ಸಮಯದಲ್ಲಿ ಪ್ರದರ್ಶಿಸಲಾಗುವ ಒಂದು ಕಲಾ ಪ್ರಕಾರವಾಗಿ ಮಾರ್ಪಟ್ಟಿದ್ದವು; ಇವುಗಳಲ್ಲಿ [[ಪೂರಕ್ಕಳಿ]], ಪದಯಾನಿ, ತಲಪ್ಪಂದುಕಳಿ, ಓನತಲ್ಲು, ಪರಿಚಮುಟ್ಟುಕಳಿ, ವೇಳಾಕಳಿ, ಮತ್ತು ಕಿಳಿತತ್ತುಕಳಿ ಸೇರಿವೆ.<ref name="PRD-sports">{{cite web |url=https://www.prd.kerala.gov.in/sportsmain.htm |title=Sports and Games in Kerala |publisher=Public Relations Dept, Kerala |year=2002 |access-date=9 June 2012 |url-status=dead |archive-url=https://web.archive.org/web/20060428081830/https://www.prd.kerala.gov.in/sportsmain.htm |archive-date=28 April 2006}}</ref> ಆದಾಗ್ಯೂ, "ವಿಶ್ವದ ಎಲ್ಲಾ ಸಮರ ಕಲೆಗಳ ತಾಯಿ" ಎಂದು ಪರಿಗಣಿಸಲ್ಪಟ್ಟ ''[[ಕಳರಿಪಯಟ್ಟು]]'' ಒಂದು ಅಪವಾದವಾಗಿದೆ ಮತ್ತು ಇದನ್ನು ಸ್ಥಳೀಯ ಸಮರ ಕ್ರೀಡೆಯಾಗಿ ಅಭ್ಯಾಸ ಮಾಡಲಾಗುತ್ತದೆ.<ref>{{cite book |title=Muay Thai |publisher=Meyer & Meyer Verlag |author=Arnaud Van Der Veere |year=2012 |page=8 |isbn=978-1-84126-328-1}}</ref> ಕೇರಳದ ಮತ್ತೊಂದು ಸಾಂಪ್ರದಾಯಿಕ ಕ್ರೀಡೆಯೆಂದರೆ ದೋಣಿ ಪಂದ್ಯ, ವಿಶೇಷವಾಗಿ [[ಹಾವು ದೋಣಿ]]ಗಳ ಪಂದ್ಯ.<ref name="PRD-sports" />
[[ಕ್ರಿಕೆಟ್]] ಮತ್ತು [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ರಾಜ್ಯದಲ್ಲಿ ಜನಪ್ರಿಯವಾಯಿತು; ಎರಡನ್ನೂ 19 ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಮಲಬಾರ್ನಲ್ಲಿ ಪರಿಚಯಿಸಲಾಯಿತು. [[ಟಿನು ಯೋಹಾನನ್]], [[ಅಬೇ ಕುರುವಿಲ್ಲ]], [[ಚುಂಡಂಗಪೊಯಿಲ್ ರಿಝ್ವಾನ್]], [[ಶ್ರೀಶಾಂತ್]], [[ಸಂಜು ಸ್ಯಾಮ್ಸನ್]] ಮತ್ತು [[ಬಾಸಿಲ್ ತಂಪಿ]] ಅಂತಹ ಕ್ರಿಕೆಟಿಗರು ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದರು. ಕೇರಳದ ಕ್ರಿಕೆಟ್ ಫ್ರ್ಯಾಂಚೈಸಿ, [[ಕೊಚ್ಚಿ ಟಸ್ಕರ್ಸ್ ಕೇರಳ|ಕೊಚ್ಚಿ ಟಸ್ಕರ್ಸ್]], [[ಇಂಡಿಯನ್ ಪ್ರೀಮಿಯರ್ ಲೀಗ್]]ನ [[2011 ಇಂಡಿಯನ್ ಪ್ರೀಮಿಯರ್ ಲೀಗ್|ನಾಲ್ಕನೇ ಸೀಸನ್]] ನಲ್ಲಿ ಆಡಿತು. ಆದಾಗ್ಯೂ, ಅದರ ಫ್ರ್ಯಾಂಚೈಸಿಗಳ ನಡುವಿನ ಹಿತಾಸಕ್ತಿ ಸಂಘರ್ಷದಿಂದಾಗಿ ಸೀಸನ್ ನಂತರ ಈ ತಂಡವನ್ನು ವಿಸರ್ಜಿಸಲಾಯಿತು.<ref name="India Wins World Twenty20 Thriller">{{Cite news |title=India Wins World Twenty20 Thriller |date=25 September 2007 |access-date=11 November 2007 |url=https://www.hindu.com/2007/09/25/stories/2007092559400100.htm |archive-url=https://web.archive.org/web/20131106033222/http://www.hindu.com/2007/09/25/stories/2007092559400100.htm |url-status=dead |archive-date=6 November 2013 |work=[[The Hindu]] |location=Chennai, India }}</ref><ref name="hindu_jul09">{{cite news |url=https://www.hindu.com/2009/07/04/stories/2009070456811800.htm |archive-url=https://web.archive.org/web/20090707015857/https://www.hindu.com/2009/07/04/stories/2009070456811800.htm |url-status=dead |archive-date=7 July 2009 |work=[[The Hindu]] |title=Minister convenes high-level meet |date=4 July 2009}}</ref> ಕೇರಳವು ಇತ್ತೀಚೆಗೆ [[ರಣಜಿ ಟ್ರೋಫಿ]] ಕ್ರಿಕೆಟ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದೆ, 2017–18 ರಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ವಾರ್ಟರ್ಫೈನಲ್ಗೆ ತಲುಪಿದೆ.<ref name="PRD-sports" /><ref>{{cite news |title=Ranji Trophy: In historic first, Kerala join defending champions Gujarat in quarter-finals |url=https://timesofindia.indiatimes.com/sports/cricket/india-domestic/ranji-trophy/ranji-trophy-in-historic-first-kerala-join-defending-champions-gujarat-in-quarter-finals/articleshow/61836301.cms |date=28 November 2017 |newspaper=The Times of India |access-date=19 December 2017}}</ref> ಫುಟ್ಬಾಲ್ ಕ್ಲಬ್ ಮತ್ತು ಜಿಲ್ಲಾ ಮಟ್ಟದ ಪಂದ್ಯಗಳಿಗೆ ಈ ರಾಜ್ಯದಲ್ಲಿ ಅತಿ ಹೆಚ್ಚು ಆಡಲ್ಪಡುವ ಮತ್ತು ವೀಕ್ಷಿಸಲ್ಪಡುವ ಕ್ರೀಡೆಗಳಲ್ಲಿ ಒಂದಾಗಿದೆ. ಕೊಚ್ಚಿ [[ಇಂಡಿಯನ್ ಸೂಪರ್ ಲೀಗ್]] ನಲ್ಲಿ [[ಕೇರಳ ಬ್ಲಾಸ್ಟರ್ಸ್ ಎಫ್ಸಿ]]ಯನ್ನು ಆಯೋಜಿಸುತ್ತದೆ. ಬ್ಲಾಸ್ಟರ್ಸ್ ದೇಶದಲ್ಲಿ ಅತಿ ಹೆಚ್ಚು ಬೆಂಬಲಿತ ಕ್ಲಬ್ಗಳಲ್ಲಿ ಒಂದಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ [[ಏಷ್ಯಾ]]ದಿಂದ ಐದನೇ ಅತಿ ಹೆಚ್ಚು ಅನುಸರಿಸಲ್ಪಡುವ ಫುಟ್ಬಾಲ್ ಕ್ಲಬ್ ಆಗಿದೆ.<ref>{{Cite web |last=Salikha |first=Adelaida |title=Top FIVE Asian Clubs With Highest Social Media Followers, Up to October 2018 {{!}} Seasia.co |url=https://seasia.co/2018/10/31/top-five-asian-clubs-with-highest-social-media-followers-up-to-october-2018 |access-date=17 September 2020|website=Good News from Southeast Asia |language=en}}</ref><ref>{{Cite web |date=18 June 2020 |title=Indian Football: Five most-followed clubs on social media |url=https://khelnow.com/football/indian-football-clubs-social-media-followers/ |access-date=10 September 2020 |website=Khel Now |language=en-US |archive-date=13 November 2021 |archive-url=https://web.archive.org/web/20211113014231/https://khelnow.com/football/indian-football-clubs-social-media-followers |url-status=dead }}</ref><ref>{{Cite web |title=Malayalam News – kerala blasters become fifth Asian club with the biggest social media following {{!}} News18 Kerala, Sports Latest Malayalam News {{!}} ലേറ്റസ്റ്റ് മലയാളം വാർത്ത |url=https://malayalam.news18.com/news/sports/kerala-blasters-become-fifth-asian-club-with-the-biggest-social-media-following-50113.html |access-date=5 December 2020|website=malayalam.news18.com|date=25 October 2018 }}</ref> ಅಲ್ಲದೆ, ಕೋಝಿಕೋಡ್ [[ಐ-ಲೀಗ್]] ನಲ್ಲಿ [[ಗೋಕುಲಂ ಕೇರಳ ಎಫ್ಸಿ]] ಮತ್ತು [[ಸೈಟ್ ನಾಗ್ಜೀ ಫುಟ್ಬಾಲ್ ಟೂರ್ನಮೆಂಟ್]] ಅನ್ನು ಆಯೋಜಿಸುತ್ತದೆ. ಕೇರಳವು ಪಶ್ಚಿಮ ಬಂಗಾಳ ಮತ್ತು ಗೋವಾ ಜೊತೆಗೆ ಭಾರತದ ಪ್ರಮುಖ ಫುಟ್ಬಾಲ್ ರಾಜ್ಯಗಳಲ್ಲಿ ಒಂದಾಗಿದೆ ಮತ್ತು [[ಐ. ಎಂ. ವಿಜಯನ್]], ಸಿ. ವಿ. ಪಪ್ಪಚನ್, [[ವಿ. ಪಿ. ಸತ್ಯನ್]], [[ಯು. ಶರಾಫ್ ಅಲಿ]], [[ಜೋ ಪಾಲ್ ಅಂಚೇರಿ]], [[ಆಶಿಕ್ ಕುರುಣಿಯನ್]], [[ಮೊಹಮ್ಮದ್ ರಫಿ (ಫುಟ್ಬಾಲ್ ಆಟಗಾರ)|ಮುಹಮ್ಮದ್ ರಫಿ]], [[ಜಿಜು ಜಾಕೋಬ್]], [[ಮಶೂರ್ ಶರೀಫ್]], [[ಪಪ್ಪಚನ್ ಪ್ರದೀಪ್]], [[ಸಿ.ಕೆ. ವಿನೀತ್]], [[ಅನಸ್ ಎಡತೋಡಿಕಾ]], [[ಸಹಲ್ ಅಬ್ದುಲ್ ಸಮದ್]], ಮತ್ತು [[ರಿನೊ ಆಂಟೊ]] ನಂತಹ ರಾಷ್ಟ್ರೀಯ ಆಟಗಾರರನ್ನು ಉತ್ಪಾದಿಸಿದೆ.<ref>{{cite web |url=https://www.the-aiff.com/awards.php |archive-url=https://web.archive.org/web/20090217141248/https://the-aiff.com/awards.php |archive-date=17 February 2009 |title=AIFF Award Player of the Year |publisher=All India Football Federation |access-date=15 November 2015 |url-status=dead}}</ref><ref>{{cite web |author1=James Wray |author2=Ulf Stabe |url=https://twocircles.net/2007sep14/viva_marks_resurgence_kerala_football.html |title=Viva marks the resurgence of Kerala football |publisher=Monstersandcritics.com |date=15 September 2007 |access-date=30 July 2009}}</ref><ref name="india">{{cite web |url=https://zeenews.india.com/news/sports/indian-football-team-suffer-humiliating-1-9-defeat-to-kuwait_668128.html |publisher=zeenews.india.com |title=Indian football team suffer humiliating 1–9 defeat to Kuwait |date=14 November 2010 |access-date=13 November 2016}}</ref><ref>{{Cite web |last=Sportstar |first=Team |title=Sahal recalls journey from university football to senior national team |url=https://sportstar.thehindu.com/football/intercontinental-cup-indian-football-sahal-abdul-samad-kerala-blasters-college-university-system/article28436294.ece |access-date=6 June 2020 |website=Sportstar |date=15 July 2019 |language=en}}</ref><ref>{{cite web |url=https://scroll.in/field/988334/india-football-stimac-names-10-new-players-in-35-man-probables-list-for-oman-uae-friendlies |title=Bipin Singh, Ishan Pandita in 35-man probables list for Oman, UAE friendlies |website=thescroll.in |date=2 March 2021}}</ref> ಕೇರಳ ರಾಜ್ಯ ಫುಟ್ಬಾಲ್ ತಂಡವು [[ಸಂತೋಷ್ ಟ್ರೋಫಿ]]ಯನ್ನು ಏಳು ಬಾರಿ ಗೆದ್ದಿದೆ; 1973, 1992, 1993, 2001, 2004, 2018, ಮತ್ತು 2022 ರಲ್ಲಿ. ಅವರು ಎಂಟು ಬಾರಿ ರನ್ನರ್-ಅಪ್ ಆಗಿದ್ದರು.<ref>{{cite web |url=https://www.the-aiff.com/pages/tournament/tournament-history.php?tournamentdetail=22 |archive-url=https://web.archive.org/web/20120524035900/https://www.the-aiff.com/pages/tournament/tournament-history.php?tournamentdetail=22 |archive-date=24 May 2012 |title=Past Winners |publisher=All India Football Federation |access-date=9 June 2012}}</ref>
ರಾಜ್ಯದ ಪ್ರಮುಖ ಕ್ರೀಡಾಪಟುಗಳಲ್ಲಿ [[ಪಿ. ಟಿ. ಉಷಾ]], [[ಶೈನಿ ವಿಲ್ಸನ್]] ಮತ್ತು [[ಎಂ.ಡಿ. ವಾಲ್ಸಮ್ಮ]] ಸೇರಿದ್ದಾರೆ, ಇವರೆಲ್ಲರೂ [[ಪದ್ಮಶ್ರೀ]] ಮತ್ತು [[ಅರ್ಜುನ ಪ್ರಶಸ್ತಿ]] ಪಡೆದವರಾಗಿದ್ದಾರೆ, ಆದರೆ [[ಕೆ. ಎಂ. ಬೀನಾಮೋಲ್]] ಮತ್ತು [[ಅಂಜು ಬಾಬಿ ಜಾರ್ಜ್]] [[ರಾಜೀವ್ ಗಾಂಧಿ ಖೇಲ್ ರತ್ನ]] ಮತ್ತು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ. [[ಟಿ. ಸಿ. ಯೋಹಾನನ್]], [[ಸುರೇಶ್ ಬಾಬು (ಲಾಂಗ್ ಜಂಪರ್)|ಸುರೇಶ್ ಬಾಬು]], [[ಸಿನಿಮೋಲ್ ಪೌಲೋಸ್]], ಏಂಜಲ್ ಮೇರಿ ಜೋಸೆಫ್, [[ಮರ್ಸಿ ಕುಟ್ಟನ್]], ಕೆ. ಸರಮ್ಮ, [[ರೋಸಾ ಕುಟ್ಟಿ|ಕೆ. ಸಿ. ರೋಸಾಕುಟ್ಟಿ]], ಪದ್ಮಿನಿ ಸೆಲ್ವನ್ ಮತ್ತು ಟಿಂಟು ಲುಕಾ ಕೇರಳದ ಇತರ ಅರ್ಜುನ ಪ್ರಶಸ್ತಿ ವಿಜೇತರು.<ref name="PRD-sports" /><ref>{{cite web |url=https://keralaathletics.org/history.html |title=Kerala State Athletics Association: History |publisher=Kerala State Athletics Association |access-date=12 June 2012 |archive-date=24 June 2012 |archive-url=https://web.archive.org/web/20120624082221/http://keralaathletics.org/history.html |url-status=dead }}</ref> ವಾಲಿಬಾಲ್ ಮತ್ತೊಂದು ಜನಪ್ರಿಯ ಕ್ರೀಡೆಯಾಗಿದ್ದು, ಇದನ್ನು ಹೆಚ್ಚಾಗಿ ಕರಾವಳಿಯ ಮರಳು ಕಡಲತೀರಗಳಲ್ಲಿ ತಾತ್ಕಾಲಿಕ ಅಂಗಣಗಳಲ್ಲಿ ಆಡಲಾಗುತ್ತದೆ.<ref>{{cite book |title=The Rough Guide to South India |author1=David Abram |author2=Nick Edwards |publisher=Rough Guides |year=2004 |isbn=978-1-84353-103-6 |page=64}}</ref> [[ಜಿಮ್ಮಿ ಜಾರ್ಜ್]] ಒಬ್ಬ ಪ್ರಮುಖ ಭಾರತೀಯ ವಾಲಿಬಾಲ್ ಆಟಗಾರ, ಅವರ ಪ್ರಧಾನ ಸಮಯದಲ್ಲಿ ವಿಶ್ವದ ಹತ್ತು ಅತ್ಯುತ್ತಮ ಆಟಗಾರರಲ್ಲಿ ಶ್ರೇಣೀಕರಿಸಲ್ಪಟ್ಟಿದ್ದರು.<ref>{{cite web |title=Jimmy George |work=Sports Portal |publisher=Ministry of Youth Affairs and Sports |access-date=11 November 2007 |url=https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-url=https://web.archive.org/web/20080514040141/https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-date=14 May 2008 |url-status=dead}}</ref> ಇತರ ಜನಪ್ರಿಯ ಕ್ರೀಡೆಗಳಲ್ಲಿ [[ಬ್ಯಾಡ್ಮಿಂಟನ್]], [[ಬ್ಯಾಸ್ಕೆಟ್ಬಾಲ್]] ಮತ್ತು [[ಕಬಡ್ಡಿ]] ಸೇರಿವೆ.<ref name="Reddy2005">{{cite book |author=P.A. Reddy |title=Sports Promotion In India |url=https://books.google.com/books?id=T37m8eRAEX0C&pg=PA119 |access-date=17 November 2012 |year=2005 |publisher=Discovery Publishing House |isbn=978-8171419272 |pages=31–42}}</ref> ಭಾರತೀಯ ಹಾಕಿ ತಂಡದ ನಾಯಕ [[ಪಿ. ಆರ್. ಶ್ರೀಜೇಶ್]], ಅಗ್ರ ಗೋಲ್ಕೀಪರ್ ಕೇರಳದವರು. ರಾಜ್ಯದ ಅಂತಾರಾಷ್ಟ್ರೀಯ ವಾಕರ್ಸ್ [[ಕೆ. ಟಿ. ಇರ್ಫಾನ್]] ಸೇರಿದ್ದಾರೆ.<ref>{{cite news |last=Irfan |first=KT |title=KT Irfan, World Athletics Championships, Moscow |url=https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |newspaper=NDTV Sports |archive-url=https://web.archive.org/web/20130814035243/https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |archive-date=14 August 2013 |url-status=dead}}</ref>
[[2017 FIFA U-17 ವಿಶ್ವಕಪ್]] [[ಭಾರತ]]ದಲ್ಲಿ, [[ಜವಾಹರಲಾಲ್ ನೆಹರು ಕ್ರೀಡಾಂಗಣ (ಕೊಚ್ಚಿ)]] ಅನ್ನು [[ಭಾರತ]]ದಲ್ಲಿ ಆಟವನ್ನು ಆಯೋಜಿಸುವ ಆರು ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಯಿತು.<ref>{{cite web |url=https://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |archive-url=https://web.archive.org/web/20160308104258/http://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |url-status=dead |archive-date=8 March 2016 |title=FIFA Event at Kochi: Time is Ticking Away |website=The New Indian Express |access-date=3 April 2016}}</ref> [[ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ]]ವು ತಿರುವನಂತಪುರ ನಗರದ ಕಾರಿಯಾವಟ್ಟಂನಲ್ಲಿದೆ, ಇದು ಭಾರತದ ಮೊದಲ DBOT (ವಿನ್ಯಾಸ, ನಿರ್ಮಿಸಿ, ನಿರ್ವಹಿಸಿ ಮತ್ತು ವರ್ಗಾಯಿಸಿ) ಮಾದರಿಯ ಹೊರಾಂಗಣ ಕ್ರೀಡಾಂಗಣವಾಗಿದ್ದು, ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಮತ್ತು [[2015 SAFF ಚಾಂಪಿಯನ್ಶಿಪ್]] ಸೇರಿದಂತೆ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಿದೆ.<ref name="SAFF Cup Dates">{{cite news |last1=Chaudhuri |first1=Arunava |title=Trivandrum will host upcoming SAFF Cup in December 2015/January 2016 |url=http://www.sportskeeda.com/football/trivandrum-will-host-upcoming-saff-cup-in-december-2015january-2016 |access-date=22 December 2015 |work=SportsKeeda |date=2 July 2015}}</ref>
== ಪ್ರವಾಸೋದ್ಯಮ ==
{{Main|ಕೇರಳದಲ್ಲಿ ಪ್ರವಾಸೋದ್ಯಮ}}
ಕೇರಳದ ಸಂಸ್ಕೃತಿ ಮತ್ತು ಸಂಪ್ರದಾಯಗಳು, ಅದರ ವೈವಿಧ್ಯಮಯ [[ಕೇರಳದ ಜನಸಂಖ್ಯಾಶಾಸ್ತ್ರ|ಜನಸಂಖ್ಯಾಶಾಸ್ತ್ರ]]ದೊಂದಿಗೆ, ರಾಜ್ಯವನ್ನು ಭಾರತದಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ. 2012 ರಲ್ಲಿ, [[ನ್ಯಾಷನಲ್ ಜಿಯಾಗ್ರಫಿಕ್|ನ್ಯಾಷನಲ್ ಜಿಯಾಗ್ರಫಿಕ್]] ನ ''[[ನ್ಯಾಷನಲ್ ಜಿಯಾಗ್ರಫಿಕ್ ಟ್ರಾವೆಲರ್|ಟ್ರಾವೆಲರ್]]'' ನಿಯತಕಾಲಿಕೆಯು ಕೇರಳವನ್ನು "ವಿಶ್ವದ ಹತ್ತು ಸ್ವರ್ಗಗಳಲ್ಲಿ" ಒಂದಾಗಿ<ref name="Kerala Tourism">{{cite web |title=Kerala Tourism: Paradises in the world |url=https://www.hindu.com/edu/2004/05/11/stories/2004051100040100.htm |archive-url=https://web.archive.org/web/20040904094648/https://www.hindu.com/edu/2004/05/11/stories/2004051100040100.htm |url-status=dead |archive-date=4 September 2004 |work=[[The Hindu]] |access-date=20 February 2012}}</ref><ref>{{cite web |url=https://www.pravasikairali.com/Homepage.aspx?p=articles&news=447 |archive-url=https://web.archive.org/web/20141108151228/https://www.pravasikairali.com/Homepage.aspx?p=articles&news=447 |archive-date=8 November 2014 |title=Pravasi KairaLi Home |publisher=Pravasikairali.com |url-status=usurped |access-date=11 January 2014}}</ref><ref>{{Cite news |date=7 February 2014 |title=Kerala: A vacation in paradise |work=[[The Times of India]] |url=https://timesofindia.indiatimes.com/kerala-a-vacation-in-paradise/articleshow/26251595.cms |access-date=17 January 2023 |archive-date=25 November 2023 |archive-url=https://web.archive.org/web/20231125190237/https://timesofindia.indiatimes.com/kerala-a-vacation-in-paradise/articleshow/26251595.cms |url-status=live }}</ref> ಮತ್ತು "ಜೀವಮಾನದಲ್ಲಿ ನೋಡಲೇಬೇಕಾದ 50 ಸ್ಥಳಗಳು" ಎಂದು ಹೆಸರಿಸಿತು.<ref name="Kerala India">{{cite web |title=Kerala – The Gateway of India |url=https://forbesindia.com/printcontent/26162 |work=[[Forbes]] |access-date=3 January 2012}}</ref> ''[[ಟ್ರಾವೆಲ್ ಅಂಡ್ ಲೀಷರ್]]'' ಕೂಡ ಕೇರಳವನ್ನು "21 ನೇ ಶತಮಾನದ 100 ಉತ್ತಮ ಪ್ರವಾಸಗಳಲ್ಲಿ ಒಂದು" ಎಂದು ವಿವರಿಸಿದೆ.<ref name="Kerala Tourism" /><ref>{{Cite news |title=Kerala : National Geographic Traveler selects Kerala as 'one of the 50 must-see destinations of a lifetime' |publisher=Travel Portal of India |date=27 January 2009 |access-date=11 June 2011 |url=https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |url-status=dead |archive-url=https://web.archive.org/web/20110904030433/https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |archive-date=4 September 2011}}</ref> 2012 ರಲ್ಲಿ, ಇದು [[ತಾಜ್ ಮಹಲ್]] ಅನ್ನು ಹಿಂದಿಕ್ಕಿ ಭಾರತಕ್ಕಾಗಿ ಗೂಗಲ್ನ ಹುಡುಕಾಟ ಪ್ರವೃತ್ತಿಗಳಲ್ಲಿ ಪ್ರಥಮ ಪ್ರವಾಸಿ ತಾಣವಾಯಿತು.<ref>{{Cite news |title=Kerala beats Taj in Google Search Trends for 2012 |work=Indian Express |date=28 December 2012 |access-date=11 January 2012 |url=https://www.indianexpress.com/news/tourism-kerala-beats-taj-in-google-search-trends-for-2012/1051412}}</ref> [[CNN ಟ್ರಾವೆಲ್]] ತನ್ನ '2019 ರಲ್ಲಿ ಭೇಟಿ ನೀಡಲು 19 ಅತ್ಯುತ್ತಮ ಸ್ಥಳಗಳ' ಪಟ್ಟಿಯಲ್ಲಿ ಕೇರಳವನ್ನು ಸೇರಿಸಿದೆ.<ref>{{Cite web |title=CNN Travel's 19 places to visit in 2019 |url=https://www.cnn.com/travel/article/places-to-visit-2019/index.html |website=CNN Travel |date=22 May 2019 |language=en |access-date=4 April 2022}}</ref> ಕೇರಳವನ್ನು [[Time (magazine)|''TIME'']] ನಿಯತಕಾಲಿಕೆಯು 2022 ರಲ್ಲಿ ತನ್ನ ವಿಶ್ವದ ಅತ್ಯುತ್ತಮ ಸ್ಥಳಗಳ ಪಟ್ಟಿಯಲ್ಲಿ ಅನ್ವೇಷಿಸಲು 50 ಅಸಾಧಾರಣ ಸ್ಥಳಗಳಲ್ಲಿ ಹೆಸರಿಸಿತು.<ref>{{Cite web |url=https://www.indiatoday.in/lifestyle/travel/story/ahmedabad-and-kerala-on-time-magazine-s-list-of-world-s-greatest-places-of-2022-1975386-2022-07-14 |title=Ahmedabad and Kerala on TIME magazine's list of World's Greatest Places of 2022 |website=India Today|date=14 July 2022 }}</ref> 2025 ರಲ್ಲಿ, ಕೇರಳವನ್ನು [[ರಫ್ ಗೈಡ್ಸ್]] ನ '2026 ರ ವಿಶ್ವದ 26 ಪ್ರಮುಖ ಸ್ಥಳಗಳ' ಪಟ್ಟಿಯಲ್ಲಿ 16 ನೇ ಸ್ಥಾನದಲ್ಲಿ ಶ್ರೇಣೀಕರಿಸಲಾಯಿತು, ಇದು ಅಂತಾರಾಷ್ಟ್ರೀಯ ಪ್ರವಾಸ ಮಾರ್ಗದರ್ಶಿಯ ವಾರ್ಷಿಕ ಜಾಗತಿಕ ಸ್ಥಳಗಳ ಶ್ರೇಯಾಂಕದಲ್ಲಿ ಸೇರಿಸಲ್ಪಟ್ಟ ಏಕೈಕ ಭಾರತೀಯ ರಾಜ್ಯವಾಗಿದೆ.<ref>{{Cite news |date=2025-12-27 |title=This is the only Indian state to make it to the list of 'World's Top 26 Destinations For 2026' |url=https://timesofindia.indiatimes.com/life-style/travel/destinations/this-is-the-only-indian-state-to-make-it-to-the-list-of-worlds-top-26-destinations-for-2026/articleshow/126194678.cms |access-date=2025-12-30 |work=The Times of India |issn=0971-8257}}</ref>
ಕೇರಳದ ಬೀಚ್ಗಳು, ಬ್ಯಾಕ್ವಾಟರ್ಗಳು, ಸರೋವರಗಳು, ಪರ್ವತ ಶ್ರೇಣಿಗಳು, ಜಲಪಾತಗಳು, ಪ್ರಾಚೀನ ಬಂದರುಗಳು, ಅರಮನೆಗಳು, ಧಾರ್ಮಿಕ ಸಂಸ್ಥೆಗಳು<ref name="Ltd.2012">{{cite book |author=Infokerala Communications Pvt. Ltd. |title=Kerala Tradition & Fascinating Destinations |url=https://books.google.com/books?id=vTunBAAAQBAJ&pg=PA314 |year=2012 |publisher=Biju Mathew {{!}} Info Kerala Communications Pvt Ltd |isbn=978-8192128481 |page=314}}</ref> ಮತ್ತು ವನ್ಯಜೀವಿ ಅಭಯಾರಣ್ಯಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಗಳಾಗಿವೆ.<ref name="Tripays">{{cite web |url=https://www.tripays.com/kerala-family-tour-packages/ |date=6 August 2011 |title=Kerala Family Tour Packages |author=Admin |access-date=2 July 2019 |archive-date=21 November 2021 |archive-url=https://web.archive.org/web/20211121233843/https://www.tripays.com/kerala-family-tour-packages/ |url-status=dead }}</ref> ಕೊಚ್ಚಿ ನಗರವು ಕೇರಳದಲ್ಲಿ ಒಟ್ಟು ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.<ref name="keralatourism">{{cite web |url=https://www.keralatourism.org/destination-wise-foreign-2010.pdf |date=6 August 2011 |title=Destination Wise Number of Foreign Tourists Visited Kerala During 2010 |author=Saju |access-date=24 September 2014}}</ref><ref name="Tourism Statistics">{{cite web |publisher=Government of Kerala, Tourism Department |url=https://www.keralatourism.org/tourismstatistics/Tourist-Statistics2008.pdf |title=Tourist statistics – 2008 |access-date=22 October 2010}}</ref> 1980 ರ ದಶಕದ ಆರಂಭದವರೆಗೆ, ಕೇರಳವು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಅಪರಿಚಿತ ತಾಣವಾಗಿತ್ತು.<ref name="HinduTourism">{{Cite news |author=Santhanam K |title=An ideal getaway |date=27 January 2002 |access-date=11 November 2007 |url=https://www.hindu.com/thehindu/mag/2002/01/27/stories/2002012700400800.htm |archive-url=https://web.archive.org/web/20030623124553/https://www.hindu.com/thehindu/mag/2002/01/27/stories/2002012700400800.htm |url-status=dead |archive-date=23 June 2003 |work=[[The Hindu]] |location=Chennai, India}}</ref> 1986 ರಲ್ಲಿ ಕೇರಳ ಸರ್ಕಾರವು ಪ್ರವಾಸೋದ್ಯಮವನ್ನು ಪ್ರಮುಖ ಉದ್ಯಮವೆಂದು ಘೋಷಿಸಿತು ಮತ್ತು ಅದನ್ನು ಹಾಗೆ ಮಾಡಿದ ಭಾರತದ ಮೊದಲ ರಾಜ್ಯವಾಗಿದೆ.<ref name="Kerala Tourism"/> [[ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ]], ರಾಜ್ಯದ ಪ್ರವಾಸೋದ್ಯಮ ನಿರೀಕ್ಷೆಗಳನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಂಸ್ಥೆ, ಪ್ರಾರಂಭಿಸಿದ ಮಾರ್ಕೆಟಿಂಗ್ ಅಭಿಯಾನಗಳು ಪ್ರವಾಸೋದ್ಯಮ ಉದ್ಯಮದ ಬೆಳವಣಿಗೆಗೆ ಕಾರಣವಾಯಿತು.<ref name="Tourism">{{cite book |title=Tourism Marketing |author=Dasgupta Devashish |publisher=Pearson Education India |year=2011 |isbn=978-8131731826 |page=203 |url=https://books.google.com/books?id=oXWAEjcG-FsC |access-date=30 May 2015}}</ref> ಅನೇಕ ಜಾಹೀರಾತುಗಳು ಕೇರಳವನ್ನು ''[[ಗಾಡ್ಸ್ ಓನ್ ಕಂಟ್ರಿ|ಕೇರಳ, ಗಾಡ್ಸ್ ಓನ್ ಕಂಟ್ರಿ]]'' ಎಂಬ ಸ್ಲೋಗನ್ನೊಂದಿಗೆ ಬ್ರಾಂಡ್ ಮಾಡಿದವು.<ref name="Tourism" /> ಕೇರಳ ಪ್ರವಾಸೋದ್ಯಮವು ಜಾಗತಿಕ ಬ್ರ್ಯಾಂಡ್ ಆಗಿದ್ದು, ಅತಿ ಹೆಚ್ಚು ನೆನಪಿನ ಶಕ್ತಿಯನ್ನು ಹೊಂದಿರುವ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref name="Tourism" /> 2006 ರಲ್ಲಿ, ಕೇರಳವು 8.5 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿತು, ಇದು ಹಿಂದಿನ ವರ್ಷಕ್ಕಿಂತ 23.7% ರಷ್ಟು ಹೆಚ್ಚಳವಾಗಿದೆ, ಇದು ರಾಜ್ಯವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜನಪ್ರಿಯ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ.<ref>{{cite web |title=Tourist Statistics – 2006 |work=Department of Tourism |publisher=Government of Kerala |year=2006 |access-date=11 November 2007 |url=https://www.keralatourism.org/php/media/data/tourismstatistics/TS2006.pdf |archive-url=https://web.archive.org/web/20080626195845/https://www.keralatourism.org/php/media/data/tourismstatistics/TS2006.pdf |archive-date=26 June 2008}}</ref> 2011 ರಲ್ಲಿ, ಕೇರಳಕ್ಕೆ ಪ್ರವಾಸಿಗರ ಒಳಹರಿವು 10-ಮಿಲಿಯನ್ ಗಡಿಯನ್ನು ದಾಟಿತು.<ref name="bizstd">{{Cite news |title=Tourist inflow to Kerala crosses 10 million mark |work=Business-Standard |access-date=15 November 2015 |url=https://www.business-standard.com/india/news/tourist-inflow-to-kerala-crosses-10-million-mark/474524/ |date=16 May 2012 |last1=Joseph |first1=George}}</ref>
ಆಯುರ್ವೇದ ಪ್ರವಾಸೋದ್ಯಮವು 1990 ರ ದಶಕದಿಂದಲೂ ಬಹಳ ಜನಪ್ರಿಯವಾಗಿದೆ, ಮತ್ತು ಖಾಸಗಿ ಸಂಸ್ಥೆಗಳು ಪ್ರವಾಸೋದ್ಯಮ ಇಲಾಖೆಯ ಉಪಕ್ರಮಗಳೊಂದಿಗೆ ಗಮನಾರ್ಹ ಪಾತ್ರವನ್ನು ವಹಿಸಿವೆ.<ref name="HinduTourism" /> ಕೇರಳವು ತನ್ನ [[ಪರಿಸರ ಪ್ರವಾಸೋದ್ಯಮ]] ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ, ಇವುಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಪರ್ವತಾರೋಹಣ, ಟ್ರೆಕ್ಕಿಂಗ್ ಮತ್ತು ಪಕ್ಷಿ ವೀಕ್ಷಣಾ ಕಾರ್ಯಕ್ರಮಗಳು ಪ್ರಮುಖ ಚಟುವಟಿಕೆಗಳಾಗಿವೆ.<ref name="Devrep47">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=47 |access-date=30 May 2015}}</ref> ರಾಜ್ಯದ ಪ್ರವಾಸೋದ್ಯಮ ಉದ್ಯಮವು [[ಕೇರಳದ ಆರ್ಥಿಕತೆ|ರಾಜ್ಯದ ಆರ್ಥಿಕತೆಗೆ]] ಪ್ರಮುಖ ಕೊಡುಗೆಯಾಗಿದೆ, 13.3% ದರದಲ್ಲಿ ಬೆಳೆಯುತ್ತಿದೆ.<ref>{{cite web |title=Tourist Statistics – 2005 (Provisional) |work=Department of Tourism |publisher=Government of Kerala |year=2005 |access-date=11 November 2007 |url=https://www.keralatourism.org/php/media/data/tourismstatistics/TOURISTSTATISTICS2005.pdf |archive-url=https://web.archive.org/web/20080626195846/https://www.keralatourism.org/php/media/data/tourismstatistics/TOURISTSTATISTICS2005.pdf |archive-date=26 June 2008}}</ref> ಪ್ರವಾಸೋದ್ಯಮದಿಂದ ಬರುವ ಆದಾಯವು 2001 ಮತ್ತು 2011 ರ ನಡುವೆ ಐದು ಪಟ್ಟು ಹೆಚ್ಚಾಗಿ 2011 ರಲ್ಲಿ {{INR}} 190 ಬಿಲಿಯನ್ ಗಡಿಯನ್ನು ದಾಟಿತು. ಎಕನಾಮಿಕ್ ಟೈಮ್ಸ್ ಪ್ರಕಾರ<ref>{{Cite news |url=https://economictimes.indiatimes.com/industry/services/travel/kerala-records-6-rise-in-tourist-arrivals-despite-floods-and-nipah-virus-scare/articleshow/67995390.cms |title=Kerala records 6% rise in tourist arrivals despite floods and Nipah virus scare |date=14 February 2019 |work=The Economic Times |access-date=14 August 2019}}</ref> ಕೇರಳವು 2018 ರಲ್ಲಿ ಪ್ರವಾಸೋದ್ಯಮ ವಲಯದಿಂದ INR 365280.1 ಮಿಲಿಯನ್ ದಾಖಲೆಯ ಆದಾಯವನ್ನು ಗಳಿಸಿತು, ಇದು ಹಿಂದಿನ ವರ್ಷಕ್ಕಿಂತ Rs 28743.3 ಮಿಲಿಯನ್ ಹೆಚ್ಚಳವಾಗಿದೆ. 2018 ರಲ್ಲಿ 16.7 ಮಿಲಿಯನ್ ಕ್ಕೂ ಹೆಚ್ಚು ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡಿದ್ದಾರೆ, ಇದು ಹಿಂದಿನ ವರ್ಷ 15.76 ಮಿಲಿಯನ್ ಗೆ ಹೋಲಿಸಿದರೆ 5.9% ರಷ್ಟು ಹೆಚ್ಚಳವಾಗಿದೆ. ಈ ಉದ್ಯಮವು ಸರಿಸುಮಾರು 1.2 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ.<ref name="bizstd" />
ರಾಜ್ಯದ ಏಕೈಕ ಡ್ರೈವ್-ಇನ್ ಬೀಚ್, ಕಣ್ಣೂರಿನ [[ಮುಝಪ್ಪಿಲಂಗಡ್ ಬೀಚ್]], ಇದು {{convert|5|km}} ಮರಳಿನಲ್ಲಿ ಹರಡಿದೆ, ಇದನ್ನು ಬಿಬಿಸಿ 2016 ರಲ್ಲಿ ವಿಶ್ವದ ಆರು ಪ್ರಮುಖ ಡ್ರೈವ್-ಇನ್ ಬೀಚ್ಗಳಲ್ಲಿ ಒಂದಾಗಿ ಆಯ್ಕೆ ಮಾಡಿತು.<ref>{{cite web |url=https://www.bbc.com/autos/story/20160617-the-worlds-best-beaches-for-driving |title=The best beaches for driving |first=David K. |last=Gibson |work=BBC Autos |date=11 June 2021}}</ref> [[ಇಡುಕ್ಕಿ ಅಣೆಕಟ್ಟು]], ವಿಶ್ವದ ಎರಡನೇ ಕಮಾನು ಅಣೆಕಟ್ಟು, ಮತ್ತು ಏಷ್ಯಾದ ಮೊದಲನೆಯದು [[ಇಡುಕ್ಕಿ|ಇಡುಕ್ಕಿಯಲ್ಲಿದೆ]]. ಪ್ರಮುಖ ಬೀಚ್ಗಳು [[ಕೋವಳಂ]], [[ವರ್ಕಲ]], [[ಕೋಝಿಕೋಡ್]], [[ಫೋರ್ಟ್ ಕೊಚ್ಚಿ]], [[ಚೇರಾಯಿ]], [[ಆಲಪ್ಪುಳ]], [[ಪೊನ್ನಾನಿ]], [[ಕಡಲುಂಡಿ]], [[ತಾನೂರು, ಮಲಪ್ಪುರಂ|ತಾನೂರು]], [[ಚಾಲಿಯಂ]], [[ಪಾಯ್ಯಂಬಲಂ]], ಕಪ್ಪಾಡ್, [[ಮುಝಪ್ಪಿಲಂಗಡ್ ಬೀಚ್|ಮುಝಪ್ಪಿಲಂಗಡ್]] ಮತ್ತು [[ಬೇಕಲ್]]. ಜನಪ್ರಿಯ [[ಬೆಟ್ಟದ ತಾಣ]]ಗಳೆಂದರೆ [[ಪೊನ್ಮುಡಿ]], [[ವಯನಾಡು]], [[ವಗಮನ್]], [[ಮುನ್ನಾರ್]], [[ಪೀರ್ಮೇಡ್]], [[ರಾಮಕ್ಕಲ್ಮೇಡು]], [[ಅರಿಂಬ್ರ ಬೆಟ್ಟಗಳು, ಮಲಪ್ಪುರಂ|ಅರಿಂಬ್ರ]], [[ಪೈತಲ್ಮಲ]] [[ಇಡುಕ್ಕಿ|ಕಣ್ಣೂರು]] ಜಿಲ್ಲೆಯ, [[ಕೊಡಿಕುತಿಮಲ]], ಮತ್ತು [[ನೆಲ್ಲಿಯಂಪತಿ]].<ref>{{cite book |author=Tapan K Panda |title=Tourism Marketing |publisher=ICFAI Books |year=2007 |isbn=978-8131404690 |url=https://books.google.com/books?id=4A0j6ZlJQfkC |pages=173–77 |access-date=30 May 2015}}</ref> ಮುನ್ನಾರ್ ಸಮುದ್ರ ಮಟ್ಟದಿಂದ 4,500 ಅಡಿ ಎತ್ತರದಲ್ಲಿದೆ ಮತ್ತು ಚಹಾ ತೋಟಗಳು ಮತ್ತು ವಿವಿಧ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ.<ref name="FPJ">{{cite news |title=Kerala: Spellbound by this natural beauty |newspaper=The Free Press Journal |url=https://www.freepressjournal.in/travel/kerala-spellbound-by-this-natural-beauty/636904 |date=2 August 2015 |access-date=27 November 2015}}</ref> ಕೇರಳದ ಪರಿಸರ ಪ್ರವಾಸೋದ್ಯಮ ತಾಣಗಳು 12 ವನ್ಯಜೀವಿ ಅಭಯಾರಣ್ಯಗಳು ಮತ್ತು ಎರಡು ರಾಷ್ಟ್ರೀಯ ಉದ್ಯಾನವನಗಳನ್ನು ಒಳಗೊಂಡಿವೆ: [[ಪೆರಿಯಾರ್ ಹುಲಿ ಮೀಸಲು]], [[ಪರಂಬಿಕುಳಂ ವನ್ಯಜೀವಿ ಅಭಯಾರಣ್ಯ]], [[ಚಿನ್ನಾರ್ ವನ್ಯಜೀವಿ ಅಭಯಾರಣ್ಯ]], [[ಥಟ್ಟೆಕ್ಕಾಡ್ ಪಕ್ಷಿ ಅಭಯಾರಣ್ಯ]], [[ವಯನಾಡು ವನ್ಯಜೀವಿ ಅಭಯಾರಣ್ಯ]], [[ಕಡಲುಂಡಿ ಪಕ್ಷಿ ಅಭಯಾರಣ್ಯ]], [[ಕರಿಂಪುಳ ವನ್ಯಜೀವಿ ಅಭಯಾರಣ್ಯ]], [[ಮುತ್ತಂಗ]] ವನ್ಯಜೀವಿ ಅಭಯಾರಣ್ಯ, [[ಅರಳಂ ವನ್ಯಜೀವಿ ಅಭಯಾರಣ್ಯ]], [[ಎರವಿಕುಳಂ ರಾಷ್ಟ್ರೀಯ ಉದ್ಯಾನವನ]], ಮತ್ತು [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]] ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ.<ref>{{cite book |author=M.R. Biju |title=Sustainable Dimensions Of Tourism Management |publisher=Mittal Publications |year=2006 |isbn=978-8183241298 |url=https://books.google.com/books?id=AkAdvTbg0dEC |pages=151–65 |access-date=30 May 2015}}</ref> ಕೇರಳ ಬ್ಯಾಕ್ವಾಟರ್ಗಳು ಅಂತರ್ಸಂಪರ್ಕಿತ ನದಿಗಳ (41 ಪಶ್ಚಿಮಕ್ಕೆ ಹರಿಯುವ ನದಿಗಳು), ಸರೋವರಗಳು ಮತ್ತು ಕಾಲುವೆಗಳ ವ್ಯಾಪಕ ಜಾಲವಾಗಿದ್ದು, ಇದು ಆಲಪ್ಪುಳ, [[ಕುಮಾರಕೋಂ]], [[ಪೊನ್ನಾನಿ]], [[ನೀಲೇಶ್ವರಂ]], ಮತ್ತು [[ಪುನ್ನಮದ]] (ಅಲ್ಲಿ ವಾರ್ಷಿಕ ನೆಹರು ಟ್ರೋಫಿ ದೋಣಿ ಪಂದ್ಯವನ್ನು ಆಗಸ್ಟ್ನಲ್ಲಿ ನಡೆಸಲಾಗುತ್ತದೆ), [[ಪತ್ತಿರಮಣಲ್]] [[ಮುಹಮ್ಮ]] ದಲ್ಲಿನ ಸಣ್ಣ ದ್ವೀಪವನ್ನು ಕೇಂದ್ರೀಕರಿಸುತ್ತದೆ. [[ಪದ್ಮನಾಭಪುರಂ ಅರಮನೆ]] ಮತ್ತು [[ಮತ್ತಂಚೇರಿ ಅರಮನೆ]] ಎರಡು ಸಮೀಪದ ಪರಂಪರೆಯ ತಾಣಗಳಾಗಿವೆ.<ref>{{cite web |url=https://www.keralatourism.org/destination/padmanabhapuram-palace/244 |title=Padmanabhapuram Palace |publisher=Kerala Tourism |access-date=2 December 2016}}</ref><ref>{{cite web |url=https://www.keralatourism.org/destination/mattancherry-palace-kochi/178 |title=Mattancherry Palace |publisher=Kerala Tourism |access-date=2 December 2016}}</ref>
== ಸಹ ನೋಡಿ ==
{{stack|{{Portal|ಭಾರತ}}}}
* [[ಕೇರಳದ ರೂಪರೇಖೆ]]
* [[ದಕ್ಷಿಣ ಭಾರತ]]
* [[ದ್ರಾವಿಡರು]]
* [[ಕೇರಳದ ನಗರ ನಿಗಮಗಳ ಪಟ್ಟಿ]]
* [[ಕೇರಳದ ತಾಲೂಕುಗಳ ಪಟ್ಟಿ]]
* [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ]]
* [[ಕೇರಳದ ಜಿಲ್ಲೆಗಳ ಪಟ್ಟಿ]]
* [[ಕೇರಳದ ಆದಾಯ ವಿಭಾಗಗಳ ಪಟ್ಟಿ]]
* [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]]
== ಉಲ್ಲೇಖಗಳು ==
{{Reflist}}
==ಟಿಪ್ಪಣಿಗಳು==
{{notelist}}
=== ಮೂಲಗಳು ===
{{refbegin}}
* {{cite book |title=Mathrubhumi Yearbook Plus – 2019 |publisher=Mathrubhumi Printing & Publishing Company Limited |year=2018 |location=[[Kozhikode]] |editor-last=Chandran |editor-first=V. P. |id={{ASIN|8182676444 |country=in}} |language=Malayalam }}
{{refend}}
== ಹೆಚ್ಚಿನ ಓದುವಿಕೆ ==
{{Further|ಕೇರಳದ ಇತಿಹಾಸ#ಹೆಚ್ಚಿನ ಓದುವಿಕೆ}}
* Bose, Satheese Chandra and Varughese, Shiju Sam (eds.) 2015. ''[https://web.archive.org/web/20150102071757/https://www.orientblackswan.com/display.asp?categoryID=0&isbn=978-8125057222 Kerala Modernity: Ideas, Spaces and Practices in Transition]''. Hyderabad: Orient Blackswan.
* {{cite journal |pmc=7510531 |year=2021 |last1=Chathukulam |first1=Jos |last2=Tharamangalam |first2=Joseph |title=The Kerala model in the time of COVID19: Rethinking state, society and democracy |journal=World Development |volume=137 |article-number=105207 |doi=10.1016/j.worlddev.2020.105207 |pmid=32989341}}
* {{cite journal |url=https://journals.sagepub.com/doi/abs/10.1177/0971521516656077 |doi=10.1177/0971521516656077 |title=The 'Kudumbashree Woman' and the Kerala Model Woman: Women and Politics in Contemporary Kerala |year=2016 |last1=Devika |first1=J. |journal=Indian Journal of Gender Studies |volume=23 |issue=3 |pages=393–414 |s2cid=151752480|url-access=subscription }}
* {{cite journal |url=https://openresearch-repository.anu.edu.au/bitstream/1885/19062/2/01_Jeffrey_Legacies_of_Matriliny%3A__the_2005.pdf |jstor=40023536 |title=Legacies of Matriliny: The Place of Women and the "Kerala Model" |last1=Jeffrey |first1=Robin |journal=Pacific Affairs |year=2004 |volume=77 |issue=4 |pages=647–664}}
* {{cite journal |url=http://keralamediaacademy.org/wp-content/uploads/2015/02/Robin-Jeffery.pdf |doi=10.1017/S0021911809000679 |s2cid=146795894 |title=Testing Concepts about Print, Newspapers, and Politics: Kerala, India, 1800–2009 |year=2009 |last1=Jeffrey |first1=Robin |journal=The Journal of Asian Studies |volume=68 |issue=2 |page=465}}
* {{cite book |title=Politics, Women and Well-Being: How Kerala became 'a Model' |isbn=978-1-349-12252-3 |last1=Jeffrey |first1=Robin |date=27 July 2016 |publisher=Springer}}
* {{cite book |last1=Ramanathaiyer |first1=Sundar |first2=Stewart |last2=MacPherson |title=Social Development in Kerala: Illusion or Reality? |edition=2nd |publisher=Routledge |year=2018}}
== ಬಾಹ್ಯ ಕೊಂಡಿಗಳು ==
{{Sister project links|voy=Kerala|Kerala}}
; ಸರ್ಕಾರ
* {{official website|https://www.kerala.gov.in/}} {{Webarchive|url=https://web.archive.org/web/20060118031516/https://www.kerala.gov.in/ |date=18 January 2006 }} ಕೇರಳ ಸರ್ಕಾರದ
* {{official website|https://www.keralatourism.org/}} ಕೇರಳ ಪ್ರವಾಸೋದ್ಯಮದ
; ಸಾಮಾನ್ಯ ಮಾಹಿತಿ
* {{OSM relation|2018151}}
{{Clear}}
{{Kerala |show=show }}
[[ವರ್ಗ:ಕೇರಳ| ]]
[[ವರ್ಗ:ದಕ್ಷಿಣ ಭಾರತ|.]]
[[ವರ್ಗ:1956 ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರದೇಶಗಳು]]
[[ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
elo0c3javn8ky7qj0iwn26xaz36dqku
1378285
1378284
2026-08-03T08:11:40Z
A826
72368
/* ಸರ್ಕಾರ ಮತ್ತು ಆಡಳಿತ */
1378285
wikitext
text/x-wiki
{{databox}}
{{Infobox Indian state or territory
| name = ಕೇರಳ
| official_name =
| type = ರಾಜ್ಯ
| image_seal = Government of Kerala Logo.svg{{!}}class=skin-invert
| image_skyline = <!-- Do not add additional pictures here without discussion, per consensus [[Talk:Kerala/Archive_6#Infobox montage]]--> Boathouse (7063399547).jpg
| image_caption = [[ಕೇರಳದ ಬ್ಯಾಕ್ವಾಟರ್ಗಳು|ಕೇರಳದ ಬ್ಯಾಕ್ವಾಟರ್ಗಳಲ್ಲಿ]] ಒಂದು [[ಹೌಸ್ ಬೋಟ್]]
| nickname = "[[ಗಾಡ್ಸ್ ಓನ್ ಕಂಟ್ರಿ#ಕೇರಳ|ದೇವರ ಸ್ವಂತ ನಾಡು]]"
| image_map = IN-KL.svg
| coordinates = {{coord|10.0|N|76.3|E|region:IN-KL|display=inline,title}}
| region = ದಕ್ಷಿಣ ಭಾರತ
| before_was = [[ತಿರುವಾಂಕೂರು-ಕೊಚ್ಚಿ]]<br>[[ಮಲಬಾರ್ ಜಿಲ್ಲೆ]]<br>[[ದಕ್ಷಿಣ ಕನ್ನಡ]]
| formation_date4 = 1 ನವೆಂಬರ್ 1956
| capital = ತಿರುವನಂತಪುರ
| districts = [[ಕೇರಳದ ಜಿಲ್ಲೆಗಳ ಪಟ್ಟಿ|14]]
| governor = [[ರಾಜೇಂದ್ರ ಅರ್ಲೇಕರ್]]
| chief_minister = [[ವಿ. ಡಿ. ಸತೀಶನ್]]
| party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
| judiciary = [[ಕೇರಳ ಉಚ್ಚ ನ್ಯಾಯಾಲಯ]]
| chief_secretary = ಬಿಶ್ವನಾಥ್ ಸಿನ್ಹಾ I.A.S.
| legislature_type = ಏಕಸಭಾ
| assembly = [[ಕೇರಳ ವಿಧಾನಸಭೆ]]
| assembly_seats = 140 ಸ್ಥಾನಗಳು
| rajya_sabha_seats = 9 ಸ್ಥಾನಗಳು
| lok_sabha_seats = 20 ಸ್ಥಾನಗಳು
| area_total_km2 = 38863
| area_footnotes = <ref>{{Cite web |title=About Kerala
|url=https://kerala.gov.in/subdetail/NTM1ODMxNzQuNDg=/MjA0ODc2ODQuMzY= |access-date=10 March 2025 |language=en-US }}</ref>
| area_rank = 21ನೇ
| length_km = 560
| width_km = 70
| elevation_footnotes = <ref>{{Cite web |title=Kerala Physiography {{!}} Geographical location {{!}} Kerala {{!}} Kerala |url=https://kerala.me/geography |access-date=24 March 2023 |language=en-US |archive-date=24 March 2023 |archive-url=https://web.archive.org/web/20230324220056/https://kerala.me/geography |url-status=live }}</ref>
| elevation_m = 900
| elevation_max_m = 2,695
| elevation_max_point = [[ಅನಮುಡಿ]]<ref>{{Cite web |title=Anamudi – Peakbagger.com |url=https://www.peakbagger.com/peak.aspx?pid=10664 |access-date=24 March 2023 |website=www.peakbagger.com |archive-date=24 March 2023 |archive-url=https://web.archive.org/web/20230324210042/https://www.peakbagger.com/peak.aspx?pid=10664 |url-status=live }}</ref>
| elevation_min_m = −2.7
| elevation_min_point = [[ಕುಟ್ಟನಾಡು]]<ref>{{Cite web |title=Kuttanadan.com : Explore the Rice Bowl of Kerala |url=https://kuttanadan.com/ |access-date=24 March 2023 |website=Kuttanadan Website |language=en-US |archive-date=24 March 2023 |archive-url=https://web.archive.org/web/20230324210043/https://kuttanadan.com/ |url-status=live }}</ref>
| population_footnotes = <ref>{{cite book | url=https://ruralindiaonline.org/en/library/resource/population-projections-for-india-and-states-2011-2036/ | title=Population Projections for India and States, 2011–2036 | date=July 2020 | access-date=25 March 2023 | archive-date=13 March 2023 | archive-url=https://web.archive.org/web/20230313055356/https://ruralindiaonline.org/en/library/resource/population-projections-for-india-and-states-2011-2036/ | url-status=live }}</ref>
| population_total = 36,111,000
| population_as_of = 2025
| population_rank = 13ನೇ
| population_urban = 79.42%
| population_rural = 20.58%
| population_density = 890
| population_demonym = [[ಕೇರಳೀಯ]],<ref>{{Cite web|url=https://www.theguardian.com/world/2026/feb/25/india-state-kerala-to-be-renamed-keralam-malayalam-language|title=Indian state of Kerala to be renamed Keralam to reflect local pronunciation|first=Penelope|last=MacRae|work=The Guardian |date=25 February 2026}}</ref> [[ಮಲಯಾಳಿಗಳು|ಮಲಯಾಳಿ]]
| official_langs = [[ಮಲಯಾಳಂ]]<ref name="OfficialLang">{{cite web |url=https://prsindia.org/files/bills_acts/acts_states/kerala/2026/Act3of2026KL.pdf |title=The Malayalam Language Act, 2025 |publisher=prsindia.org |date=5 March 2026 |access-date=22 April 2026 }}</ref>
| GDP_footnotes = <ref name="MOSPI">{{cite web|url=http://mospi.nic.in/sites/default/files/press_releases_statements/State_wise_SDP_15_03_2021.xls|title=MOSPI State Domestic Product, Ministry of Statistics and Programme Implementation, Government of India|date=15 March 2021|accessdate=28 March 2021}}</ref>
| GDP_total = {{Increase}} $167.90 billion (nominal)<br/>{{Increase}} $707.26 billion (PPP)
| GDP_year = 2025-26
| GDP_rank = 11ನೇ
| GDP_per_capita = {{Increase}} {{INRConvert|317723|lk=r}} (nominal)<br/>{{Increase}} $19,586 (PPP)
| GDP_per_capita_rank = 11ನೇ
| HDI = {{Increase}} 0.804 {{colour|#090|ಅತಿ ಹೆಚ್ಚು}}<ref name="UNDP">{{cite report|title=Subnational HDI|url=https://globaldatalab.org/shdi/table/shdi/IND/?levels=1+4&interpolation=0&extrapolation=0|access-date=1 April 2026|work=Global Data Lab, [[United Nations Development Programme]]}}</ref>
| HDI_year = 2023
| HDI_rank = 2ನೇ
| literacy = 95.3%<ref>{{Cite book |url=https://www.mospi.gov.in/sites/default/files/publication_reports/AnnualReport_PLFS2023-24L2.pdf |title=Annual Report, Periodic Labour Force Survey (PLFS) (July 2023 – June 2024) |date=23 September 2024 |publisher=National Sample Survey Office, Ministry of Statistics and Programme Implementation, Government of India |pages=A-10 |chapter=Appendix-A: Detailed tables, Table (7): Literacy rate (in per cent) of persons of different age groups for each State/UT (persons, age-group (years): 7 & above, rural+urban (column 6))}}</ref>
| literacy_year = 2024
| literacy_rank = 4ನೇ
| sex_ratio = 1084[[female|♀]]/1000 [[male|♂]]<ref name="pc-census2011" />
| sexratio_year = 2025
| sexratio_rank = 17ನೇ
| iso_code = IN-KL
| registration_plate = KL
| website = kerala.gov.in
| foundation_day = 1 ನವೆಂಬರ್
| mammal = [[ಭಾರತೀಯ ಆನೆ]]<ref name="ENVIS">{{Cite web |date=1 December 2017 |title=State Symbols of India |url=http://wiienvis.nic.in/KidsCentre/state_symbols_india_8411.aspx |archive-url=https://web.archive.org/web/20210415100206/http://wiienvis.nic.in/KidsCentre/state_symbols_india_8411.aspx |archive-date=15 April 2021 |access-date=3 June 2022 |publisher=ENVIS Centre on Wildlife & Protected Areas}}</ref>
| bird = [[ಮಹಾಶಿಖಿ]]<ref name="ENVIS" />
| fish = [[ಗ್ರೀನ್ ಕ್ರೋಮೈಡ್]]
| butterfly = [[ಪಾಪಿಲಿಯೋ ಬುದ್ಧ]]<ref>{{Cite news |last=Jacob |first=Aneesh |title='Budha Mayoori' to be named Kerala's state butterfly |language=en |work=Mathrubhumi |url=https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |url-status=dead |access-date=30 March 2019 |archive-url=https://web.archive.org/web/20190330094056/https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |archive-date=30 March 2019}}</ref>
| flower = [[ಕಸ್ಸಿಯಾ ಫಿಸ್ಟುಲಾ|ಸ್ವರ್ಣ ಮರ]]<ref name="ENVIS" />
| tree = [[ತೆಂಗಿನ]] ಮರ<ref name="ENVIS" />
| fruit = [[ಹಲಸು]]<ref>{{Cite news |date=17 March 2018 |title=Jackfruit to be Kerala's state fruit; declaration on March 21 |work=[[The Indian Express]] |agency=[[Press Trust of India|PTI]] |url=https://indianexpress.com/article/india/jackfruit-to-be-keralas-state-fruit-declaration-on-march-21-5101170/ |access-date=22 March 2018 |archive-date=22 March 2018 |archive-url=https://web.archive.org/web/20180322144926/http://indianexpress.com/article/india/jackfruit-to-be-keralas-state-fruit-declaration-on-march-21-5101170/ |url-status=live }}</ref>
| image_highway = SH IN-KL.png
| sh_numbers = [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|SH KL1 – SH KL79]]
}}
'''ಕೇರಳ'''{{efn|[[ಭಾರತೀಯ ಇಂಗ್ಲಿಷ್]]: [[Help:IPA/English|/ˈkɛrələ/]] {{audio|Kerala (English Pronunciation).ogg| }}, {{respell|KERR|ə|lə}} <br/> {{IPA|ml|ˈkeːɾɐɭɐm|lang|Ml-Keralam.ogg}} ''[[ISO 15919|ಕೇರಳಂ]]''}} [[ದಕ್ಷಿಣ ಭಾರತ]]ದ [[ಮಲಬಾರ್ ಕರಾವಳಿ]]ಯಲ್ಲಿರುವ ಒಂದು [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]ವಾಗಿದೆ. ಇದನ್ನು 1 ನವೆಂಬರ್ 1956 ರಂದು [[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ರಚಿಸಲಾಯಿತು, ಇದು ದೇಶದ [[ಮಲಯಾಳಂ]] ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿ ಏಕೀಕರಿಸಿತು. {{cvt|38863|km2|sqmi|0}} ವ್ಯಾಪಿಸಿರುವ ಕೇರಳವು ಪ್ರಾಥಮಿಕವಾಗಿ [[ಪಶ್ಚಿಮ ಘಟ್ಟಗಳು]] ಮತ್ತು [[ಲಕ್ಷದ್ವೀಪ ಸಮುದ್ರ]]ದ ನಡುವೆ ಸ್ಯಾಂಡ್ವಿಚ್ ಆಗಿರುವ [[ಪಶ್ಚಿಮ ಕರಾವಳಿ ಬಯಲು|ಕರಾವಳಿ ಬಯಲು]]ಗಳ ಪಟ್ಟಿಯಾಗಿದ್ದು, ಈಶಾನ್ಯಕ್ಕೆ [[ಕರ್ನಾಟಕ]], ಪೂರ್ವಕ್ಕೆ [[ತಮಿಳುನಾಡು]] ಮತ್ತು ಪಶ್ಚಿಮ ಸಮೀಪದಲ್ಲಿ [[ಲಕ್ಷದ್ವೀಪ]] ದ್ವೀಪಗಳಿಂದ ಸುತ್ತುವರೆದಿದೆ. [[2011 ರ ಭಾರತದ ಜನಗಣತಿ|2011 ರ ಜನಗಣತಿಯ]] ಪ್ರಕಾರ 33 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಕೇರಳವು ಭಾರತದ [[ಜನಸಂಖ್ಯೆಯ ಪ್ರಕಾರ ಭಾರತದ ರಾಜ್ಯಗಳ ಪಟ್ಟಿ|13 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ]]. [[ತಿರುವನಂತಪುರ]]ವು ರಾಜಧಾನಿ ನಗರವಾಗಿದ್ದರೆ [[ಕೊಚ್ಚಿ ಮಹಾನಗರ ಪ್ರದೇಶ]]ವು ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶವಾಗಿದೆ. ಮಲಯಾಳಂ ಅತಿ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದ್ದು, ಇಂಗ್ಲಿಷ್ ಜೊತೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ.
ಕೇರಳವು 3000 [[ಸಾಮಾನ್ಯ ಯುಗ|BCE]] ಯಿಂದಲೂ ಮಸಾಲೆಗಳ ಪ್ರಮುಖ ರಫ್ತುದಾರನಾಗಿದೆ. [[ಚೇರ ಸಾಮ್ರಾಜ್ಯ|ಚೇರ]] ರಾಜವಂಶವು, ಈ ಪ್ರದೇಶದ ಮೊದಲ ಪ್ರಮುಖ ಸಾಮ್ರಾಜ್ಯವು, ಸಮುದ್ರ ವಾಣಿಜ್ಯದ ಮೂಲಕ ಪ್ರಾಮುಖ್ಯತೆಗೆ ಏರಿತು ಆದರೆ ಆಗಾಗ್ಗೆ ನೆರೆಯ [[ಚೋಳ]] ಮತ್ತು [[ಪಾಂಡ್ಯ]] ರಾಜವಂಶಗಳ ದಾಳಿಗಳನ್ನು ಎದುರಿಸಿತು. 15 ನೇ ಶತಮಾನದಲ್ಲಿ, ಮಸಾಲೆ ವ್ಯಾಪಾರವು ಪೋರ್ಚುಗೀಸ್ ವ್ಯಾಪಾರಿಗಳನ್ನು ಕೇರಳಕ್ಕೆ ಆಕರ್ಷಿಸಿತು, ಇದು ಭಾರತದಲ್ಲಿ [[ವಸಾಹತುಶಾಹಿ ಭಾರತ|ಯುರೋಪಿಯನ್ ವಸಾಹತುಶಾಹಿಯನ್ನು]] ಪ್ರಾರಂಭಿಸಿತು. [[ಭಾರತೀಯ ಸ್ವಾತಂತ್ರ್ಯ ಚಳುವಳಿ|1947 ರಲ್ಲಿ ಭಾರತದ ಸ್ವಾತಂತ್ರ್ಯದ]] ನಂತರ, [[ತಿರುವಾಂಕೂರು]] ಮತ್ತು [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿ]] ಸಾಮ್ರಾಜ್ಯಗಳು ಹೊಸದಾಗಿ ರೂಪುಗೊಂಡ ಗಣರಾಜ್ಯಕ್ಕೆ ಸೇರಿಕೊಂಡವು ಮತ್ತು 1949 ರಲ್ಲಿ [[ತಿರುವಾಂಕೂರು-ಕೊಚ್ಚಿ]] ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. 1956 ರಲ್ಲಿ, ಆಧುನಿಕ ಕೇರಳ ರಾಜ್ಯವನ್ನು ಹಿಂದಿನ [[ಮದ್ರಾಸ್ ರಾಜ್ಯ]]ದೊಂದಿಗೆ ಪರಿಧಿಯ ಪ್ರದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸ್ಥಾಪಿಸಲಾಯಿತು; [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡ ಜಿಲ್ಲೆಯ]] [[ಕಾಸರಗೋಡು]] ತಾಲೂಕನ್ನು ಕೇರಳವನ್ನು ರೂಪಿಸಲು ತಿರುವಾಂಕೂರು-ಕೊಚ್ಚಿಯೊಂದಿಗೆ ವಿಲೀನಗೊಳಿಸಲಾಯಿತು, ಆದರೆ [[ಕನ್ಯಾಕುಮಾರಿ ಜಿಲ್ಲೆ]] ಮತ್ತು [[ಶೆಂಕೋಟ್ಟೈ ತಾಲೂಕಿನ]] ಭಾಗಗಳನ್ನು ಮದ್ರಾಸ್ ರಾಜ್ಯಕ್ಕೆ ಸೇರಿಸಲಾಯಿತು. ಕೇರಳವು 1984 ರಿಂದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಒಳಗೊಂಡಿದೆ.
ಕೇರಳವು ಅತ್ಯಧಿಕ [[ಮಾನವ ಅಭಿವೃದ್ಧಿ ಸೂಚ್ಯಂಕ|ಮಾನವ ಅಭಿವೃದ್ಧಿ ಸೂಚ್ಯಂಕವನ್ನು]] ಹೊಂದಿದೆ, 2018 ರಲ್ಲಿ 0.784; ಅತ್ಯಧಿಕ ಸಾಕ್ಷರತಾ ಪ್ರಮಾಣ, 2018 ರಲ್ಲಿ 96.2%; ಅತ್ಯಧಿಕ ಜೀವಿತಾವಧಿ, 77.3 ವರ್ಷಗಳು; ಮತ್ತು ಅತ್ಯಧಿಕ [[ಲಿಂಗಾನುಪಾತ]], 1,000 ಪುರುಷರಿಗೆ 1,084 ಮಹಿಳೆಯರು ಮತ್ತು ಭಾರತದಲ್ಲಿ ಅತ್ಯಂತ ಕಡಿಮೆ ಧನಾತ್ಮಕ ಜನಸಂಖ್ಯಾ ಬೆಳವಣಿಗೆ ದರ (3.44%). ಇದು ದೇಶದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಕಡಿಮೆ ಬಡತನ ಹೊಂದಿರುವ]] ಮತ್ತು [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ]] ರಾಜ್ಯವಾಗಿದೆ. ರಾಜ್ಯವು ಗಮನಾರ್ಹವಾದ ವಲಸೆಯನ್ನು ಕಂಡಿದೆ, ವಿಶೇಷವಾಗಿ 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಿಗೆ]], ಮತ್ತು ಅದರ ಆರ್ಥಿಕತೆಯು ದೊಡ್ಡ [[ಮಲಯಾಳಿ]] ವಲಸೆ ಜನಸಂಖ್ಯೆಯಿಂದ ಸ್ಥಳಾಂತರ ವರ್ಗಾವಣೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. [[ಕೇರಳದಲ್ಲಿ ಧರ್ಮ|ಜನಸಂಖ್ಯೆಯ 54% ಕ್ಕಿಂತ ಹೆಚ್ಚು]] ಜನರು ಹಿಂದೂ ಧರ್ಮವನ್ನು ಆಚರಿಸುತ್ತಾರೆ, ನಂತರ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು. ಸಂಸ್ಕೃತಿಯು [[ಆರ್ಯ]] ಮತ್ತು [[ದ್ರಾವಿಡರು|ದ್ರಾವಿಡ]] ಸಂಪ್ರದಾಯಗಳ ಸಮ್ಮಿಳನವಾಗಿದ್ದು, ಸಹಸ್ರಮಾನಗಳಿಂದ ಭಾರತ ಮತ್ತು ವಿದೇಶಗಳಿಂದ ಪ್ರಭಾವಗಳಿಂದ ರೂಪುಗೊಂಡಿದೆ.
[[ಕರಿ ಮೆಣಸು]] ಮತ್ತು [[ನೈಸರ್ಗಿಕ ರಬ್ಬರ್]] ಉತ್ಪಾದನೆಯು ರಾಷ್ಟ್ರೀಯ ಉತ್ಪಾದನೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಕೃಷಿ ವಲಯದಲ್ಲಿ, ತೆಂಗು, ಚಹಾ, ಕಾಫಿ, ಗೋಡಂಬಿ ಮತ್ತು ಮಸಾಲೆಗಳು ಪ್ರಮುಖ ಬೆಳೆಗಳಾಗಿವೆ. ರಾಜ್ಯವು {{convert|595|km|mi}} ಕರಾವಳಿಯನ್ನು ಹೊಂದಿದೆ, ಮತ್ತು 1.1 ಮಿಲಿಯನ್ ಜನರು ಮೀನುಗಾರಿಕಾ ಉದ್ಯಮವನ್ನು ಅವಲಂಬಿಸಿದ್ದಾರೆ, ಇದು ರಾಜ್ಯದ ಆದಾಯದ ಸುಮಾರು 3% ರಷ್ಟಿದೆ. ಆರ್ಥಿಕತೆಯು ಹೆಚ್ಚಾಗಿ ಸೇವಾ ವಲಯ ಆಧಾರಿತವಾಗಿದ್ದರೆ, ಪ್ರಾಥಮಿಕ ವಲಯವು ತುಲನಾತ್ಮಕವಾಗಿ ಚಿಕ್ಕ ಪಾಲನ್ನು ನೀಡುತ್ತದೆ. ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರವನ್ನು]] ಹೊಂದಿದ್ದು, ಒಂಬತ್ತು ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸುತ್ತದೆ, ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್. ಕೇರಳವು ಭಾರತದ ಪ್ರಮುಖ [[ಕೇರಳದ ಪ್ರವಾಸೋದ್ಯಮ|ಪ್ರವಾಸಿ ತಾಣಗಳಲ್ಲಿ]] ಒಂದಾಗಿದೆ, [[ಕೇರಳದ ಬೀಚ್ಗಳು|ತೆಂಗಿನ ಗಿಡಗಳಿಂದ ಕೂಡಿದ ಮರಳು ಕಡಲತೀರಗಳು]], [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳು]], [[ಬೆಟ್ಟದ ತಾಣ]]ಗಳು, [[ಆಯುರ್ವೇದ|ಆಯುರ್ವೇದ ಪ್ರವಾಸೋದ್ಯಮ]] ಮತ್ತು [[ಉಷ್ಣವಲಯದ]] ಹಸಿರು ಅದರ ಪ್ರಮುಖ ಆಕರ್ಷಣೆಗಳಾಗಿವೆ.
== ಹೆಸರು ==
=== ವ್ಯುತ್ಪತ್ತಿ ===
"ಕೇರಳ" ಪದವನ್ನು ಮೊದಲು "ಕೇರಳಪುಟೊ" ('[[ಚೇರ ಸಾಮ್ರಾಜ್ಯ|ಚೇರ]] ರ ಮಗ[ಗಳು]') ಎಂದು [[ಮೌರ್ಯ ಸಾಮ್ರಾಜ್ಯ|ಮೌರ್ಯ ಚಕ್ರವರ್ತಿ]] [[ಅಶೋಕ]] (274–237 BCE) ಅವರು ತಮ್ಮ [[ಅಶೋಕನ ಶಾಸನಗಳು|ಶಾಸನಗಳಲ್ಲಿ]] ಒಂದಾದ ಕಲ್ಯಾಣಕ್ಕೆ ಸಂಬಂಧಿಸಿದ 3 ನೇ ಶತಮಾನದ BCE ಯ ಬಂಡೆಯ ಕೆತ್ತನೆಯಲ್ಲಿ ದಾಖಲಿಸಲಾಗಿದೆ.<ref>{{Cite book |last=P. C. Alexander |title=Buddhism in Kerala |pages=23}}</ref> ಆ ಸಮಯದಲ್ಲಿ, ಈ ಪ್ರದೇಶದ ಮೂರು ರಾಜ್ಯಗಳಲ್ಲಿ ಒಂದನ್ನು ಶಾಸ್ತ್ರೀಯ ತಮಿಳಿನಲ್ಲಿ [[ಚೇರ ಸಾಮ್ರಾಜ್ಯ|{{transliteration|ta|ISO|Ceralam}}]] (ಚೇರಲಂ) ಎಂದು ಕರೆಯಲಾಗುತ್ತಿತ್ತು: {{transliteration|ta|ISO|Cera}} (ಚೇರ) ಮತ್ತು {{transliteration|ta|ISO|Kera}} (ಕೇರ) ಒಂದೇ ಪದದ ರೂಪಾಂತರಗಳಾಗಿವೆ.<ref name="Sainz1972">{{Cite book |last=Nicasio Silverio Sainz |url=https://books.google.com/books?id=AOEBAAAAMAAJ |title=Cuba y la Casa de Austria |publisher=Ediciones Universal |year=1972 |page=120 |access-date=6 January 2013}}</ref> {{transliteration|ta|ISO|Cer al}} (ಚೇರಲ್) ಪದವು ಕೇರಳ ರಾಜರ ಅತ್ಯಂತ ಹಳೆಯ ರಾಜವಂಶವನ್ನು ಸೂಚಿಸುತ್ತದೆ ಮತ್ತು ಇದು ಹಳೆಯ ತಮಿಳು ಪದದಿಂದ 'ಸರೋವರ' ಎಂದು ಬಂದಿದೆ.<ref name="Marr1985">{{Cite book |last=John R. Marr |url=https://books.google.com/books?id=x3gOAAAAYAAJ |title=The Eight Anthologies: A Study in Early Tamil Literature |publisher=Institute of Asian Studies |year=1985 |page=263}}</ref> {{transliteration|ta|ISO|Keralam}} (ಕೇರಳಂ) ಶಾಸ್ತ್ರೀಯ [[ತಮಿಳು ಭಾಷೆ|ತಮಿಳು]] {{transliteration|ta|ISO|cerive-alam}} (ಚೆರಿವೆ-ಆಲಂ) 'ಗುಡ್ಡ ಅಥವಾ ಬೆಟ್ಟದ ಇಳಿಜಾರು'<ref name="AlexDeborah2014">{{Cite book |last1=Rayson K. Alex |url=https://books.google.com/books?id=1swxBwAAQBAJ&pg=PA226 |title=Culture and Media: Ecocritical Explorations |last2=S. Susan Deborah |last3=Sachindev P.S. |publisher=Cambridge Scholars Publishing |year=2014 |isbn=978-1-4438-6190-8 |page=226}}</ref> ಅಥವಾ {{transliteration|ta|ISO|cera alam}} (ಚೇರ ಆಲಂ) 'ಚೇರರ ಭೂಮಿ' ಎಂಬುದರಿಂದ ಹುಟ್ಟಿಕೊಂಡಿರಬಹುದು. ಒಂದು [[ಜಾನಪದ ವ್ಯುತ್ಪತ್ತಿ]] ''ಕೇರಳ'' ವನ್ನು [[ಮಲಯಾಳಂ]] ಪದ {{transliteration|ml|ISO|kera}} (ಕೇರ) 'ತೆಂಗಿನ ಮರ' ಮತ್ತು {{transliteration|ml|ISO|alam}} (ಆಲಂ) 'ಭೂಮಿ' ಎಂಬುದರಿಂದ ಪಡೆಯುತ್ತದೆ; ಹೀಗೆ, 'ತೆಂಗಿನ ಮರಗಳ ನಾಡು',<ref name="Sadasivan2000">{{Cite book |last=S. N. Sadasivan |url=https://books.google.com/books?id=Be3PCvzf-BYC&pg=PA101 |title=A Social History of India |publisher=APH Publishing |year=2000 |isbn=978-8176481700 |page=101}}</ref> ಇದು ತೆಂಗಿನ ಮರಗಳ ಸಮೃದ್ಧಿಯಿಂದಾಗಿ ಸ್ಥಳೀಯರು ಬಳಸುವ ರಾಜ್ಯದ ಅಡ್ಡಹೆಸರಾಗಿದೆ.<ref name="PreedyWatson2011">{{Cite book |last1=Victor R. Preedy |url=https://books.google.com/books?id=C6lYoH8rwywC&pg=PT400 |title=Nuts and Seeds in Health and Disease Prevention |last2=Ronald Ross Watson |last3=Vinood B. Patel |publisher=Academic Press |year=2011 |isbn=978-0-12-375689-3 |page=400}}</ref> ಕೇರಳವನ್ನು [[ಭಾರತೀಯ ಮಹಾಸಾಗರದ ವ್ಯಾಪಾರ|ವಿದೇಶಿ ವ್ಯಾಪಾರ ವಲಯಗಳಲ್ಲಿ]] ಪರ್ಯಾಯವಾಗಿ ''[[ಮಲಬಾರ್ ಕರಾವಳಿ|ಮಲಬಾರ್]]'' ಎಂದು ಕರೆಯಲಾಗುತ್ತಿತ್ತು. [[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟೆಸ್]] (6 ನೇ ಶತಮಾನ CE) ಕಾಲದಿಂದಲೂ, [[ಅರಬ್ಬರು|ಅರಬ್]] ನಾವಿಕರು ಕೇರಳವನ್ನು ''ಮೇಲ್'' ಎಂದು ಕರೆಯುತ್ತಿದ್ದರು.{{citation needed|date=October 2025}}
=== ಕೇರಳಂ ಎಂದು ಮರುನಾಮಕರಣ ===
ರಾಜ್ಯದ [[ಮಲಯಾಳಂ]] ಹೆಸರಾದ ಕೇರಳಂ ಎಂದು ಹೆಸರನ್ನು ಬದಲಾಯಿಸಲು ದೀರ್ಘಕಾಲದಿಂದ ಬೇಡಿಕೆಗಳಿವೆ. ಅಧಿಕೃತವಾಗಿ, ರಾಜ್ಯದ ಹೆಸರು ಮಲಯಾಳಂನಲ್ಲಿ 'ಕೇರಳಂ' (കേരളം) ಆಗಿದ್ದರೆ, ಅದರ ಇಂಗ್ಲಿಷ್ ಹೆಸರು 'ಕೇರಳ' ಆಗಿದೆ.<ref>{{Cite web |last=Vineeth |first=T. K. |date=2026-03-07 |title=KERALA-M: What's in a name? |url=https://www.newindianexpress.com/explainers/2026/Mar/07/kerala-m-whats-in-a-name |access-date=2026-03-13 |website=The New Indian Express |language=en}}</ref><ref>{{Cite web |title=Renaming Kerala: Modi Hails Kerala's New Name Keralam |url=https://www.deccanherald.com/india/kerala/rightful-name-as-per-malayali-culture-pm-modi-praises-renaming-of-kerala-to-keralam-3927718 |access-date=2026-03-13 |website=Deccan Herald |language=en}}</ref> [[ಕೇರಳ ವಿಧಾನಸಭೆ]]ಯು ಜೂನ್ 2024 ರಲ್ಲಿ ರಾಜ್ಯದ ಹೆಸರನ್ನು 'ಕೇರಳ' ದಿಂದ 'ಕೇರಳಂ' ಗೆ ಬದಲಾಯಿಸಲು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು, ಇದು ಆಗಸ್ಟ್ 2023 ರ ಹಿಂದಿನ ಸರ್ವಾನುಮತದ ನಿರ್ಣಯವನ್ನು ಅನುಸರಿಸಿತು. [[ಕೇರಳದ ಮುಖ್ಯಮಂತ್ರಿ|ಮುಖ್ಯಮಂತ್ರಿ]] [[ಪಿಣರಾಯಿ ವಿಜಯನ್]] ಅವರು ಎರಡೂ ನಿರ್ಣಯಗಳನ್ನು ಮಂಡಿಸಿದ್ದರು, ಇದು ಅದರ [[ಮಲಯಾಳಿ]] ಗುರುತನ್ನು ಪ್ರತಿಬಿಂಬಿಸಲು ಸಂವಿಧಾನದ ಅನುಚ್ಛೇದ 3 ರ ಅಡಿಯಲ್ಲಿ ರಾಜ್ಯದ ಹೆಸರನ್ನು ತಿದ್ದುಪಡಿ ಮಾಡಲು ಪ್ರಯತ್ನಿಸಿತು.<ref name="auto1">{{cite web | last=TNIE online desk | first=Agencies | title=Ahead of polls, Union Cabinet approves Kerala's renaming to 'Keralam' | website=The New Indian Express | date=2026-02-24 | url=https://www.newindianexpress.com/states/kerala/2026/Feb/24/union-cabinet-approves-keralas-renaming-to-keralam-ahead-of-polls | access-date=2026-02-24}}</ref>
[[ಮೂರನೇ ಮೋದಿ ಸಚಿವ ಸಂಪುಟ|ಕೇಂದ್ರ ಸಚಿವ ಸಂಪುಟ]]ವು ಈ ಪ್ರಸ್ತಾಪವನ್ನು ಫೆಬ್ರವರಿ 24, 2026 ರಂದು ಅನುಮೋದಿಸಿತು. ಸಚಿವ ಸಂಪುಟದ ಅನುಮೋದನೆಯ ನಂತರ, [[ಭಾರತದ ರಾಷ್ಟ್ರಪತಿ]]ಗಳು ಕೇರಳ (ಹೆಸರು ಬದಲಾವಣೆ) ಮಸೂದೆ, 2026 ಅನ್ನು ಭಾರತದ ಸಂವಿಧಾನದ ಅನುಚ್ಛೇದ 3 ರ ಷರತ್ತಿನ ಅಡಿಯಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು [[ಕೇರಳ ವಿಧಾನಸಭೆ|ರಾಜ್ಯ ವಿಧಾನಸಭೆಗೆ]] ಉಲ್ಲೇಖಿಸುತ್ತಾರೆ.<ref name="auto">{{cite web | title=Kerala will now be called Keralam | website=India Today | date=2026-02-24 | url=https://www.indiatoday.in/india/story/union-cabinet-approves-proposal-renaming-kerala-to-keralam-2873528-2026-02-24 | access-date=2026-02-24}}</ref>
[[ಕೇರಳ ವಿಧಾನಸಭೆ]]ಯ ಅನುಮೋದನೆಯ ನಂತರ, ಈ ಮಸೂದೆಯನ್ನು [[ಭಾರತದ ಸಂಸತ್ತಿನಲ್ಲಿ]] ಮಂಡಿಸಲಾಗುವುದು ಮತ್ತು ಅಂಗೀಕರಿಸಿದರೆ, ರಾಜ್ಯದ ಹೆಸರು ಅಧಿಕೃತವಾಗಿ ಕೇರಳಂ ಆಗುತ್ತದೆ.
== ಇತಿಹಾಸ ==
{{Main|ಕೇರಳದ ಇತಿಹಾಸ}}
=== ದಂತಕಥೆ ===
[[File:Parshuramsaraswats.jpg|thumb|[[ಪರಶುರಾಮ]]ನನ್ನು ಚಿತ್ರಿಸುವ ವರ್ಣಚಿತ್ರ, ವಸಾಹತುಗಾರರಿಂದ ಸುತ್ತುವರಿದು, [[ವರುಣ]] ([[ಹಿಂದೂ]] ಜಲದೇವತೆ) ನನ್ನು ಸಮುದ್ರಗಳನ್ನು ಬೇರ್ಪಡಿಸಲು ಆಜ್ಞಾಪಿಸುತ್ತಾನೆ]]
[[ಹಿಂದೂ]] ಪುರಾಣಗಳ [[ದಶಾವತಾರ]] ಕಥೆಗಳಲ್ಲಿ, ಕೇರಳದ ಭೂಮಿಯನ್ನು ಕೊಡಲಿ-ಧಾರಿಯ ವೀರ ಋಷಿ [[ಪರಶುರಾಮ]]ನು, [[ವಿಷ್ಣು]]ವಿನ ಆರನೇ [[ಅವತಾರ]] (ಅವತಾರ), ಸಮುದ್ರದಿಂದ ಮರಳಿ ಪಡೆದನು. ಪರಿಣಾಮವಾಗಿ, ಕೇರಳವನ್ನು ಸಾಂಪ್ರದಾಯಿಕವಾಗಿ ''ಪರಶುರಾಮ ಕ್ಷೇತ್ರಂ'' ("ಪರಶುರಾಮನ ನಾಡು") ಎಂದು ಕರೆಯಲಾಗುತ್ತದೆ.<ref>S. C. Bhatt, Gopal K. Bhargava (2006) "Land and People of Indian States and Union Territories: Volume 14.", p.18</ref> ದಂತಕಥೆಯ ಪ್ರಕಾರ, ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರದ ಮೇಲೆ ಎಸೆದನು, ಮತ್ತು ಅದು ಬಿದ್ದ ಸ್ಥಳದವರೆಗೆ ನೀರು ಹಿಂಜರಿಯಿತು. ಈ ರೀತಿ ಹೊರಹೊಮ್ಮಿದ ಭೂಮಿಯು [[ಗೋಕರ್ಣ]]ದಿಂದ [[ಕನ್ಯಾಕುಮಾರಿ]]ಯವರೆಗೆ ವಿಸ್ತರಿಸಿತು.<ref>{{cite book |author=Aiya VN |title=The Travancore State Manual|publisher=Travancore Government Press |pages=210–212 |year=1906 |accessdate=12 November 2007 |url=https://books.google.com/books?id=RdzaPW-kEvQC}}</ref> ಹೊರಹೊಮ್ಮಿದ ಭೂಮಿಯು ಲವಣಯುಕ್ತ ಮತ್ತು ವಾಸಯೋಗ್ಯವಾಗಿರಲಿಲ್ಲ, ಆದ್ದರಿಂದ ಪರಶುರಾಮನು ಸರ್ಪರಾಜ [[ವಾಸುಕಿ]]ಯನ್ನು ಪ್ರಾರ್ಥಿಸಿದನು, ಅವನು ಮಣ್ಣನ್ನು ಶುದ್ಧೀಕರಿಸಲು ಪವಿತ್ರ ವಿಷವನ್ನು ಉಗುಳಿದನು, ಅದನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದನು. ಗೌರವದಿಂದ, ವಾಸುಕಿ ಮತ್ತು ಎಲ್ಲಾ ಹಾವುಗಳನ್ನು ಭೂಮಿಯ ರಕ್ಷಕರಾಗಿ ನೇಮಿಸಲಾಯಿತು. ಈ ದಂತಕಥೆಯನ್ನು 17 ನೇ ಅಥವಾ 18 ನೇ ಶತಮಾನದ ಪಠ್ಯ ''[[ಕೇರಳೋಲ್ಪತ್ತಿ]]'' ಯಲ್ಲಿ ವಿಸ್ತರಿಸಲಾಯಿತು ಮತ್ತು ಸಂಹಿತೆಗೊಳಿಸಲಾಯಿತು. ಇದು ಆರಂಭಿಕ ಕೇರಳ ಸಂಸ್ಥೆಗಳ{{mdash}}ಉದಾಹರಣೆಗೆ ಭೂ ಹಿಡುವಳಿ ಮತ್ತು ಆಡಳಿತ{{mdash}}ಮೂಲವನ್ನು ಪರಶುರಾಮನ ಕಥೆಗೆ ಸಂಪರ್ಕಿಸುತ್ತದೆ.<ref>{{cite book|author=M. T. Narayanan|title=Agrarian Relations in Late Medieval Malabar|url=https://books.google.com/books?id=kHtbkuXruzwC&pg=PA17|accessdate=28 July 2012|date=1 January 2003|publisher=Northern Book Centre|isbn=978-81-7211-135-9|pages=16–18}}</ref> ಮಧ್ಯಕಾಲೀನ ಯುಗದಲ್ಲಿ, [[ಚೇರ]] ರಾಜ [[ಚೆಂಕುಟ್ಟುವನ್]] ತನ್ನ ಈಟಿಯನ್ನು ಸಮುದ್ರಕ್ಕೆ ಎಸೆಯುವ ಮೂಲಕ ಪರಶುರಾಮ ಸಂಪ್ರದಾಯವನ್ನು ಅನುಕರಿಸಿರಬಹುದು, ಅದರ ಮೇಲಿನ ತನ್ನ ಪ್ರಭುತ್ವವನ್ನು ಸಂಕೇತಿಸಲು.<ref>{{Cite book |last=Srinivisa Iyengar |first=P. T. |title=History of the Tamils: From the Earliest Times to 600 A.D. |publisher=Asian Educational Services |year=1929 |isbn=978-8120601451 |location=Madras |page=515}}</ref>
ಕೇರಳದೊಂದಿಗೆ ಸಂಬಂಧಿಸಿದ ಪ್ರಮುಖ [[ಪೌರಾಣಿಕ]] ವ್ಯಕ್ತಿಯೆಂದರೆ [[ಮಹಾಬಲಿ]], ಒಬ್ಬ [[ಅಸುರ]] ಮತ್ತು ಮಾದರಿ ನ್ಯಾಯಪ್ರಿಯ ರಾಜ, ಅವರು ಕೇರಳದಿಂದ ಭೂಮಿಯನ್ನು ಆಳಿದರು ಎಂದು ಹೇಳಲಾಗುತ್ತದೆ. ಅವನು ಯುದ್ಧದಲ್ಲಿ [[ದೇವ (ಹಿಂದೂ ಧರ್ಮ)|ದೇವ]] ಗಳನ್ನು ಸೋಲಿಸಿ, ಅವರನ್ನು ಗಡಿಪಾರು ಮಾಡಿದನು. ಪ್ರತಿಕ್ರಿಯೆಯಾಗಿ, ದೇವರುಗಳು ವಿಷ್ಣುವಿಗೆ ಮನವಿ ಮಾಡಿದರು, ಅವರು [[ವಾಮನ]]ನಾಗಿ ತಮ್ಮ ಐದನೇ ಅವತಾರವನ್ನು ತಾಳಿದರು ಮತ್ತು ಕ್ರಮವನ್ನು ಪುನಃಸ್ಥಾಪಿಸಲು, ಮಹಾಬಲಿಯನ್ನು [[ಪಾತಾಳ]] (ಪಾತಾಳ ಲೋಕ) ಕೆಳಗೆ ತಳ್ಳಿದರು. ಜನಪ್ರಿಯ ನಂಬಿಕೆಯ ಪ್ರಕಾರ, ಮಹಾಬಲಿ ವರ್ಷಕ್ಕೊಮ್ಮೆ ಕೇರಳಕ್ಕೆ ಹಿಂತಿರುಗುತ್ತಾನೆ, ಇದನ್ನು [[ಓಣಂ]] ಹಬ್ಬವಾಗಿ ಆಚರಿಸಲಾಗುತ್ತದೆ.<ref name="Rinehart2004">{{cite book|author=Robin Rinehart|title=Contemporary Hinduism: Ritual, Culture, and Practice|url=https://books.google.com/books?id=hMPYnfS_R90C&pg=PA146|accessdate=28 July 2012|year=2004|publisher=ABC-CLIO|isbn=978-1-57607-905-8|page=146}}</ref> 18 [[ಪುರಾಣಗಳಲ್ಲಿ]] ಅತ್ಯಂತ ಹಳೆಯದಾದ ''[[ಮತ್ಸ್ಯ ಪುರಾಣ]]''ವು,<ref>{{cite book|last=Goldberg|first=Ellen|title=The Lord who is Half Woman: Ardhanārīśvara in Indian and Feminist Perspective|url=https://books.google.com/books?id=xUhlxBozntoC&pg=PA20|year=2002|publisher=SUNY Press|isbn=978-0-7914-5325-4|page=20|accessdate=30 May 2015}}</ref><ref>{{cite book|last=Kemmerer|first=Lisa|title=Animals and World Religions|url=https://books.google.com/books?id=iFEL2yjkbAAC&pg=PA78|year=2011|publisher=Oxford University Press|isbn=978-0-19-991255-1|page=78|accessdate=30 May 2015}}</ref> [[ಮತ್ಸ್ಯ]]ದ{{mdash}}ವಿಷ್ಣುವಿನ ಮೊದಲ ಅವತಾರ{{mdash}}ಮತ್ತು ರಾಜ [[ಮನು (ಹಿಂದೂ ಧರ್ಮ)|ಮನು]]ನ ಕಥೆಯನ್ನು, ಮೊದಲ ಮನುಷ್ಯ ಮತ್ತು ಈ ಪ್ರದೇಶದ ಆಡಳಿತಗಾರ, ಕೇರಳ ಮತ್ತು [[ತಮಿಳುನಾಡಿನ]] [[ಮಲಯ ಪರ್ವತಗಳಲ್ಲಿ]] ಇರಿಸುತ್ತದೆ.<ref>{{cite book|last=Dalal|first=Roshen|title=Hinduism: An Alphabetical Guide|url=https://books.google.com/books?id=DH0vmD8ghdMC&pg=PA250|year=2011|publisher=Penguin Books India|isbn=978-0-14-341421-6|page=250|accessdate=30 May 2015}}</ref><ref>{{cite book|last=Ragozin|first=Zenaide A.|title=Vedic India As Embodied Principally in the Rig-veda|url=https://books.google.com/books?id=T16d-eRG5VkC&pg=PA341|year=2005|publisher=Kessinger Publishing|isbn=978-1-4179-4463-7|page=341|accessdate=21 March 2013}}</ref>
=== ಪ್ರಾಗಿತಿಹಾಸ ===
[[File:MarayoorDolmen.JPG|thumb|[[ಮಾರಯೂರು|ಮಾರಯೂರಿನಲ್ಲಿ]] ನವಶಿಲಾಯುಗದ ಜನರು ನಿರ್ಮಿಸಿದ [[ಡಾಲ್ಮೆನ್]]]]
ಪ್ರಸ್ತುತ ಕೇರಳದ ಗಣನೀಯ ಭಾಗವು ಪ್ರಾಚೀನ ಕಾಲದಲ್ಲಿ ಸಮುದ್ರದ ಅಡಿಯಲ್ಲಿ ಮುಳುಗಿತ್ತು ಎಂದು ನಂಬಲಾಗಿದೆ. ಚಂಗನಾಶ್ಶೇರಿಯ ಬಳಿ ಸಾಗರಿಕ ಪಳೆಯುಳಿಕೆಗಳ ಆವಿಷ್ಕಾರವು ಈ ಊಹೆಯನ್ನು ಬೆಂಬಲಿಸುತ್ತದೆ.<ref name="Menon2007">{{cite book|author=A. Sreedhara Menon|title=A Survey of Kerala History|url=https://books.google.com/books?id=FVsw35oEBv4C&pg=PA20|accessdate=27 July 2012|date=1 January 2007|publisher=DC Books|isbn=978-81-264-1578-6|pages=20–21}}</ref> ಕೇರಳದಲ್ಲಿನ ಪ್ರಾಗೈತಿಹಾಸಿಕ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರಗಳು ಇಡುಕ್ಕಿ ಜಿಲ್ಲೆಯ [[ಮಾರಯೂರು]] ಪ್ರದೇಶದಲ್ಲಿ [[ನವಶಿಲಾಯುಗ]]-ಯುಗದ [[ಡಾಲ್ಮೆನ್]]ಗಳನ್ನು ಒಳಗೊಂಡಿವೆ, ಸ್ಥಳೀಯವಾಗಿ ''ಮುನಿಯಾರ'' ಎಂದು ಕರೆಯಲಾಗುತ್ತದೆ{{mdash}}''ಮುನಿ'' (ಸನ್ಯಾಸಿ ಅಥವಾ ಋಷಿ) ಮತ್ತು ''ಆರ'' (ಡಾಲ್ಮೆನ್) ನಿಂದ ಬಂದಿದೆ.<ref name="Unlocking the secrets of history">{{cite news|url=http://www.hindu.com/2004/12/06/stories/2004120604900300.htm | location=Chennai, India | work=The Hindu | title=Unlocking the secrets of history | date=6 December 2004 | accessdate= 12 November 2015}}</ref> [[ವಯನಾಡಿನ]] [[ಎಡಕ್ಕಲ್ ಗುಹೆಗಳು|ಎಡಕ್ಕಲ್ ಗುಹೆಗಳಲ್ಲಿನ]] ಬಂಡೆಯ ಕೆತ್ತನೆಗಳು ಸುಮಾರು 6000 BCE ಯ ನವಶಿಲಾಯುಗದ ಅವಧಿಯ ಹಿಂದಿನವು.<ref name="Kapoor2002">{{cite book|author=Subodh Kapoor|title=The Indian Encyclopaedia|url=https://books.google.com/books?id=gxIpYtnyzu4C&pg=PA2184|accessdate=1 August 2012|date=1 July 2002|publisher=Cosmo Publications|isbn=978-81-7755-257-7|page=2184}}</ref><ref>{{cite web|title=Travel and Tourism|url=http://www.kerala.gov.in/index.php?option=com_content&view=article&id=3792:travel-and-tourism&catid=271:about-kerala&Itemid=2267|website=kerala.gov.in|publisher=Government of Kerala|accessdate=12 November 2015}}</ref> ಪುರಾತತ್ತ್ವ ಶಾಸ್ತ್ರದ ಅಧ್ಯಯನಗಳು ಈ ಪ್ರದೇಶದಾದ್ಯಂತ [[ಮಧ್ಯಶಿಲಾಯುಗ]], ನವಶಿಲಾಯುಗ ಮತ್ತು [[ಮೆಗಾಲಿಥಿಕ್]] ತಾಣಗಳನ್ನು ಗುರುತಿಸಿವೆ.<ref name="AroraSingh116">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=116}}</ref> ಈ ಆವಿಷ್ಕಾರಗಳು ಆರಂಭಿಕ ಕೇರಳ ಸಮಾಜ ಮತ್ತು ಸಂಸ್ಕೃತಿಯ ಅಭಿವೃದ್ಧಿಯು [[ಪ್ಯಾಲಿಯೋಲಿಥಿಕ್|ಪ್ಯಾಲಿಯೋಲಿಥಿಕ್ ಯುಗದಲ್ಲಿ]] ಪ್ರಾರಂಭವಾಯಿತು ಮತ್ತು ಮಧ್ಯಶಿಲಾಯುಗ, ನವಶಿಲಾಯುಗ ಮತ್ತು ಮೆಗಾಲಿಥಿಕ್ ಅವಧಿಗಳ ಮೂಲಕ ಮುಂದುವರೆಯಿತು ಎಂದು ಸೂಚಿಸುತ್ತವೆ.<ref name="google">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|pages=118, 123}}</ref> ವಿದೇಶಿ ಸಾಂಸ್ಕೃತಿಕ ಸಂವಹನಗಳು ಸಹ ಈ ಅಭಿವೃದ್ಧಿಯನ್ನು ರೂಪಿಸುವಲ್ಲಿ ಪಾತ್ರವಹಿಸಿವೆ;<ref name="AroraSingh1999">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=123}}</ref> ಕೆಲವು ಇತಿಹಾಸಕಾರರು ಕೊನೆಯ [[ಕಂಚಿನ ಯುಗ]] ಮತ್ತು ಆರಂಭಿಕ [[ಕಬ್ಬಿಣ ಯುಗ|ಕಬ್ಬಿಣದ ಯುಗ]]ದಲ್ಲಿ [[ಸಿಂಧೂ ಕಣಿವೆ ನಾಗರಿಕತೆ]]ಯೊಂದಿಗೆ ಸಂಭವನೀಯ ಸಂಪರ್ಕಗಳನ್ನು ಸೂಚಿಸುತ್ತಾರೆ.<ref>{{cite news|url=http://www.thehindu.com/news/states/article26324.ece | work=The Hindu | title=Symbols akin to Indus valley culture discovered in Kerala | date=29 September 2009 |accessdate= 12 November 2015}}</ref>
=== ಪ್ರಾಚೀನ ಇತಿಹಾಸ ===
[[File:Silk route copy.jpg|thumb|225px|[[ರೇಷ್ಮೆ ಮಾರ್ಗ]] ನಕ್ಷೆ. ಮಸಾಲೆ ವ್ಯಾಪಾರವು ಜಲಮಾರ್ಗಗಳಲ್ಲಿತ್ತು (ನೀಲಿ).]]
[[ಸುಮೇರ್|ಸುಮೇರಿಯನ್]] ದಾಖಲೆಗಳ ಪ್ರಕಾರ, ಕೇರಳವು ಕನಿಷ್ಠ 3000 BCE ಯಿಂದಲೂ ಪ್ರಮುಖ ಮಸಾಲೆ ರಫ್ತುದಾರನಾಗಿದೆ ಮತ್ತು ಇದು "ಮಸಾಲೆಗಳ ತೋಟ" ಅಥವಾ "ಭಾರತದ ಮಸಾಲೆ ತೋಟ" ಎಂದು ಉಲ್ಲೇಖಿಸಲ್ಪಡುತ್ತದೆ.<ref>{{cite news|url=http://www.thehindu.com/todays-paper/tp-national/tp-kerala/of-kerala-egypt-and-the-spice-link/article5625620.ece | first = Kaavya | last = Pradeep Kumar | work=The Hindu | title=Of Kerala, Egypt, and the Spice link | date=28 January 2014 | accessdate=12 November 2015}}</ref><ref>[https://books.google.com/books?id=gOrvghLklKoC ''Striving for sustainability, environmental stress and democratic initiatives in Kerala''], p. 79; ISBN 81-8069-294-9, Srikumar Chattopadhyay, Richard W. Franke; Year: 2006.</ref><ref name="spiceHindu">{{Cite news |title=Route it through the seas |newspaper=The Hindu |date=December 2016 |url=https://www.thehindu.com/children/ROUTE-it-through-the-seas/article16735515.ece |access-date=2024-01-08 |archive-date=5 March 2022 |archive-url=https://web.archive.org/web/20220305035957/https://www.thehindu.com/children/ROUTE-it-through-the-seas/article16735515.ece |url-status=live |last1=Subramanian |first1=Archana }}</ref> ಈ ಪ್ರದೇಶದ ಮಸಾಲೆಗಳು 3 ಮತ್ತು 2 ನೇ ಸಹಸ್ರಮಾನ BCE ಯಲ್ಲಿ ಮಲಬಾರ್ ಕರಾವಳಿಗೆ ಪ್ರಾಚೀನ [[ಬ್ಯಾಬಿಲೋನಿಯನ್ನರು]], [[ಅಸಿರಿಯನ್ನರು]] ಮತ್ತು [[ಈಜಿಪ್ಟಿನವರು|ಈಜಿಪ್ಟಿನವರನ್ನು]] ಆಕರ್ಷಿಸಿದವು. [[ಅರಬ್ಬರು]] ಮತ್ತು [[ಫೀನಿಷಿಯನ್ನರು]] ಸಹ ಈ ಅವಧಿಯಲ್ಲಿ ಕೇರಳದೊಂದಿಗೆ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಿದರು.<ref name="Menon57">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA57|accessdate=10 October 2012|date=1 January 2007|publisher=DC Books|isbn=978-81-264-1578-6|pages=57–58}}</ref> ಕೇರಳಪುತ್ರದ ಭೂಮಿಯು ಚಕ್ರವರ್ತಿ ಅಶೋಕನ ಕಾಲದಲ್ಲಿ ದಕ್ಷಿಣ ಭಾರತದ ನಾಲ್ಕು ಸ್ವತಂತ್ರ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು, [[ಚೋಳ ಸಾಮ್ರಾಜ್ಯ|ಚೋಳ]], [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಮತ್ತು [[ಸತಿಯಪುತ್ರರು|ಸತಿಯಪುತ್ರ]] ಸಾಮ್ರಾಜ್ಯಗಳ ಜೊತೆಗೆ.<ref name="SmithJackson2008">{{cite book|author1=Vincent A. Smith|author2=A. V. Williams Jackson|title=History of India, in Nine Volumes: Vol. II – From the Sixth Century BCE to the Mohammedan Conquest, Including the Invasion of Alexander the Great|url=https://books.google.com/books?id=bP7DzXQBoM4C&pg=PA166|accessdate=1 August 2012|date=30 November 2008|publisher=Cosimo, Inc.|isbn=978-1-60520-492-5|page=166}}</ref> ವಿದ್ವಾಂಸರು ಸಾಮಾನ್ಯವಾಗಿ ಕೇರಳಪುತ್ರವನ್ನು [[ಚೇರ ಸಾಮ್ರಾಜ್ಯ|ಚೇರರು]] ಎಂದು ಗುರುತಿಸುತ್ತಾರೆ, ಇದು ಕೇರಳದ ಅತ್ಯಂತ ಹಳೆಯ ಪ್ರಮುಖ ರಾಜವಂಶವಾಗಿದೆ.<ref name="The Cambridge Shorter History of India">{{cite book|title=The Cambridge Shorter History of India|url=https://books.google.com/books?id=9_48AAAAIAAJ&pg=PA193|accessdate=10 October 2012|publisher=CUP Archive|page=193|id=GGKEY:2W0QHXZ7K40}}</ref><ref name="Dwivedi1994">{{cite book|author=Bhanwar Lal Dwivedi|title=Evolution of Education Thought in India|url=https://books.google.com/books?id=idERT6Tg4MMC&pg=PA164|accessdate=10 October 2012|date=1 January 1994|publisher=Northern Book Centre|isbn=978-81-7211-059-8|page=164}}</ref> ಈ ದಕ್ಷಿಣ ಪ್ರದೇಶಗಳು ಒಮ್ಮೆ ಸಾಮಾನ್ಯ ಭಾಷೆ ಮತ್ತು ಸಾಂಸ್ಕೃತಿಕ ಚೌಕಟ್ಟನ್ನು ಹಂಚಿಕೊಂಡಿದ್ದವು, ಇತಿಹಾಸದಲ್ಲಿ [[ತಮಿಳಕಂ]] ಎಂದು ಕರೆಯಲ್ಪಡುವ ಪ್ರದೇಶದೊಳಗೆ.<ref>{{Cite book
| last=Kanakasabhai | first=V.
| title=The Tamils Eighteen Hundred Years Ago
| url=https://books.google.com/books?id=VuvshP5_hg8C
| year=1997
| publisher=Asian Educational Services
| isbn=978-81-206-0150-5
| accessdate=16 June 2009}}</ref> ಚೇರರು ಪ್ರಸ್ತುತ ಕೇರಳದ ಹೆಚ್ಚಿನ ಭಾಗವನ್ನು ಆಳಿದರೆ, ಪ್ರದೇಶದ ದಕ್ಷಿಣ ತುದಿಯು [[ಪಾಂಡ್ಯರ]] ನಿಯಂತ್ರಣಕ್ಕೆ ಒಳಪಟ್ಟಿತ್ತು,<ref name="Singh2008">{{cite book|author=Upinder Singh|title=A History of Ancient and Early Medieval India: From the Stone Age to the 12th Century|url=https://books.google.com/books?id=GW5Gx0HSXKUC&pg=PA385|accessdate=10 October 2012|year=2008|publisher=Pearson Education India|isbn=978-81-317-1677-9|page=385}}</ref> ಅವರ ವ್ಯಾಪಾರ ಬಂದರನ್ನು ಪ್ರಾಚೀನ ಪಾಶ್ಚಾತ್ಯ ಮೂಲಗಳಲ್ಲಿ [[ನೆಲ್ಸಿಂಡಾ]] (ಅಥವಾ ನಿಯಾಸಿಂಡಿ) ಎಂದು ಗುರುತಿಸಲಾಗಿದೆ.<ref name="Books.google.co.in">{{Cite book|url=https://books.google.com/books?id=rQipbjusDyQC&dq=nelcynda&pg=PA301 |title=History of ancient geography – Google Books |author=James Oliver Thomson|publisher=Biblo & Tannen Publishers, 1948|accessdate=30 July 2009|isbn=978-0-8196-0143-8|year=1948}}</ref> ನಂತರ, ಈ ಪ್ರದೇಶದ ನಿಯಂತ್ರಣವು ಪಾಂಡ್ಯರು, ಚೇರರು ಮತ್ತು ಚೋಳರ ನಡುವೆ ಪರ್ಯಾಯವಾಗಿತ್ತು. [[ಆಯ್ ಸಾಮ್ರಾಜ್ಯ|ಆಯ್ಸ್]] ಮತ್ತು [[ಎಝಿಮಲ ಸಾಮ್ರಾಜ್ಯ|ಮುಷಿಕರು]] ಪ್ರಾಚೀನ ಕೇರಳದ ಇತರ ಎರಡು ರಾಜವಂಶಗಳಾಗಿದ್ದು, ಕ್ರಮವಾಗಿ ಚೇರ ಪ್ರದೇಶದ ದಕ್ಷಿಣ ಮತ್ತು ಉತ್ತರಕ್ಕೆ ನೆಲೆಗೊಂಡಿದ್ದವು.<ref name="Shashi1996">{{cite book|author=S. S. Shashi|title=Encyclopaedia Indica: India, Pakistan, Bangladesh|url=https://books.google.com/books?id=lwswAQAAIAAJ|accessdate=10 October 2012|year=1996|publisher=Anmol Publications|isbn=978-81-7041-859-7|page=1207}}</ref><ref name="Ramunny1993">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA3|accessdate=10 October 2012|date=1 January 1993|publisher=Northern Book Centre|isbn=978-81-7211-052-9|page=3}}</ref>
ಕೊನೆಯ ಶತಮಾನಗಳ BCE ಯ ಹೊತ್ತಿಗೆ, ಕರಾವಳಿಯು ಗ್ರೀಕ್ ಮತ್ತು ರೋಮನ್ ವ್ಯಾಪಾರಕ್ಕೆ, ವಿಶೇಷವಾಗಿ [[ಕರಿ ಮೆಣಸು|ಕರಿಮೆಣಸಿನಲ್ಲಿ]] ಪ್ರಮುಖ ಕೇಂದ್ರವಾಗಿತ್ತು. ಚೇರರು [[ಪ್ರಾಚೀನ ಚೀನಾ]], [[ಪಶ್ಚಿಮ ಏಷ್ಯಾ]], ಈಜಿಪ್ಟ್, ಗ್ರೀಸ್ ಮತ್ತು [[ರೋಮನ್ ಸಾಮ್ರಾಜ್ಯ]]ದೊಂದಿಗೆ ವಾಣಿಜ್ಯ ಸಂಪರ್ಕಗಳನ್ನು ಹೊಂದಿದ್ದರು. ವಿದೇಶಿ ವ್ಯಾಪಾರ ದಾಖಲೆಗಳಲ್ಲಿ, ಈ ಪ್ರದೇಶವನ್ನು ಮೇಲ್ ಅಥವಾ [[ಮಲಬಾರ್ ಕರಾವಳಿ|ಮಲಬಾರ್]] ಎಂದು ಕರೆಯಲಾಗುತ್ತಿತ್ತು.<ref>{{cite web | url=http://www.siamese-heritage.org/jsspdf/1961/JSS_054_1c_Minattur_MalayaWhatsInAName.pdf | title=Malaya: What's in the name | publisher=siamese-heritage.org | accessdate=7 August 2012 | author=Joseph Minattur | page=1}}</ref> ಆ ಕಾಲದ ಪ್ರಮುಖ ಬಂದರುಗಳು [[ಮುಝಿರಿಸ್]], ಬೆರ್ಕರೈ ಮತ್ತು ನೆಲ್ಸಿಂಡಾ.<ref name="Kusuman">{{cite book |author=K. K. Kusuman |title=A History of Trade & Commerce in Travancore |publisher=Mittal Publications |year=1987 |isbn=978-81-7099-026-0 |url=https://books.google.com/books?id=qbNuyHswr1cC |pages=1–2 |accessdate=30 May 2015}}</ref> ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವನ್ನು 50 ಮಿಲಿಯನ್ [[ಸೆಸ್ಟರ್ಸಸ್]] ಎಂದು ಅಂದಾಜಿಸಲಾಗಿದೆ.<ref>According to [[Pliny the Elder]], goods from India were sold in the Empire at 100 times their original purchase price. See [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> ಸಮಕಾಲೀನ [[ಸಂಗಮ್ ಸಾಹಿತ್ಯ]]ವು ಮೆಣಸಿನ ಬದಲಿಗೆ ಚಿನ್ನದಿಂದ ತುಂಬಿದ ರೋಮನ್ ಹಡಗುಗಳು ಮುಝಿರಿಸ್ಗೆ ಆಗಮಿಸುವುದನ್ನು ವಿವರಿಸುತ್ತದೆ. ಕೇರಳವನ್ನು ತಲುಪಲು ಮಾನ್ಸೂನ್ ಗಾಳಿಯನ್ನು ನ್ಯಾವಿಗೇಟ್ ಮಾಡಿದ ಮೊದಲ ಪಶ್ಚಿಮ ವ್ಯಾಪಾರಿಗಳಲ್ಲಿ ಒಬ್ಬರು [[ಸೈಜಿಕಸ್ನ ಯುಡೋಕ್ಸಸ್]], ಅವರು ಈಜಿಪ್ಟ್ನ [[ಹೆಲ್ಲೆನಿಸ್ಟಿಕ್ ನಾಗರಿಕತೆ|ಹೆಲ್ಲೆನಿಸ್ಟಿಕ್]] [[ಟಾಲಮಿಕ್ ರಾಜವಂಶ]]ದ ರಾಜ [[ಟಾಲಮಿ VIII ಫಿಸ್ಕಾನ್|ಟಾಲಮಿ VIII]] ರ ಆಶ್ರಯದಲ್ಲಿ ಸುಮಾರು 118 ಅಥವಾ 166 BCE ಯಲ್ಲಿ ಪ್ರಯಾಣ ಮಾಡಿದರು. ಈ ಪ್ರದೇಶದ ಬಂದರು ನಗರಗಳಲ್ಲಿನ ರೋಮನ್ ಸ್ಥಾಪನೆಗಳು{{mdash}}[[ಆಗಸ್ಟಸ್]] ದೇವಾಲಯ ಮತ್ತು ರೋಮನ್ ಸೈನಿಕರಿಗೆ ಬ್ಯಾರಕ್ಗಳು ಸೇರಿದಂತೆ{{mdash}}ರೋಮನ್ ''[[ಕರ್ಸಸ್ ಪಬ್ಲಿಕಸ್]]'' ನ ಏಕೈಕ ಉಳಿದಿರುವ ನಕ್ಷೆಯಾದ ''[[ಟ್ಯಾಬುಲಾ ಪ್ಯೂಟಿಂಗೇರಿಯಾನಾ]]'' ದಲ್ಲಿ ದಾಖಲಿಸಲಾಗಿದೆ.<ref>{{cite book|author=Abraham Eraly|title=The First Spring: The Golden Age of India|url=https://books.google.com/books?id=te1sqTzTxD8C&pg=PA246|accessdate=7 August 2012|date=1 December 2011|publisher=Penguin Books India|isbn=978-0-670-08478-4|pages=246–}}</ref><ref name="Iyengar_2001">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |accessdate=29 December 2008}}</ref>
ಪಶ್ಚಿಮ ಏಷ್ಯಾ ಮತ್ತು ದಕ್ಷಿಣ ಯುರೋಪಿನ ವ್ಯಾಪಾರಿಗಳು ಕೇರಳದಲ್ಲಿ ಕರಾವಳಿ ಠಾಣ್ಯಗಳು ಮತ್ತು ವಸಾಹತುಗಳನ್ನು ಸ್ಥಾಪಿಸಿದರು.<ref name="google2">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |pages=192–195 |accessdate=29 December 2008}}</ref> ಕೇರಳದೊಂದಿಗಿನ ಯಹೂದಿ ಸಂಪರ್ಕವು 573 BCE ಯ ಹಿಂದಿನದು ಎಂದು ನಂಬಲಾಗಿದೆ.<ref name="Orpa Slapak">[https://books.google.co.in/books?id=qhKGPprbQaYC&printsec=frontcover&dq=isbn:9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA#v=onepage&q=two%20millennia&f=true ''The Jews of India: A Story of Three Communities''] by Orpa Slapak. The Israel Museum, Jerusalem. 2003. p. 27. ISBN 965-278-179-7.</ref><ref name="Hillel1832">{{cite book|author=David D'Beth Hillel|title=The Travels of Rabbi David D'Beth Hillel: From Jerusalem, Through Arabia, Koordistan, Part of Persia, and India to Madras|url=https://books.google.com/books?id=j5NeAAAAcAAJ&pg=PR9|year=1832|publisher=author|page=135}}</ref><ref>{{cite book|title=The Jews in India and the Far East|url=https://books.google.com/books?id=w_v-nQEACAAJ|year=1976|publisher=Greenwood Press|pages=24–26 | isbn=978-0-8371-2615-9 }}</ref> ಅರಬ್ ವ್ಯಾಪಾರಿಗಳು ಕನಿಷ್ಠ 4 ನೇ ಶತಮಾನ BCE ಯಿಂದಲೂ ಕೇರಳದೊಂದಿಗೆ ಸಂಪರ್ಕ ಹೊಂದಿದ್ದರು; [[ಹೆರೊಡೋಟಸ್]] (484–413 BCE) ಅರಬ್ಬರು ಕೇರಳದಿಂದ ತಂದ ಸರಕುಗಳನ್ನು ಈಡನ್ನಲ್ಲಿರುವ ಯಹೂದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಗಮನಿಸಿದರು.<ref name="Kusuman"/> ಈ ಅರಬ್ ವ್ಯಾಪಾರಿಗಳು ಸ್ಥಳೀಯ ಸಮುದಾಯಗಳೊಂದಿಗೆ ಮದುವೆಯಾದರು, ಇದು ಮುಸ್ಲಿಂ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಸಮುದಾಯದ ರಚನೆಗೆ ಕಾರಣವಾಯಿತು.<ref name="Dialogue">{{cite book |author=Rolland E. Miller |title=Hindu-Christian Dialogue: Perspectives and Encounters |publisher=Motilal Banarsidass Publications |year=1993 |isbn=978-81-208-1158-4 |url=https://books.google.com/books?id=6eHgNyNimoAC |page=50}}</ref> 4 ನೇ ಶತಮಾನ CE ಯಲ್ಲಿ, ಕೆಲವು ಕ್ರೈಸ್ತರು [[ಪರ್ಷಿಯಾ]]ದಿಂದ ವಲಸೆ ಬಂದರು ಮತ್ತು ಆರಂಭಿಕ [[ಸೇಂಟ್ ತಾಮಸ್ ಕ್ರೈಸ್ತರು|ಸಿರಿಯನ್ ಕ್ರಿಶ್ಚಿಯನ್]] ಸಮುದಾಯಕ್ಕೆ ಸೇರ್ಪಡೆಗೊಂಡರು, ಇದು 1 ನೇ ಶತಮಾನ CE ಯಲ್ಲಿ [[ತಾಮಸ್ ಪ್ರೇರಿತ]]ನ ಪ್ರಚಾರ ಚಟುವಟಿಕೆಗಳಿಂದ ತನ್ನ ಮೂಲವನ್ನು ಪತ್ತೆಹಚ್ಚುತ್ತದೆ.<ref name="Erwin Fahlbusch">[https://books.google.co.in/books?id=lZUBZlth2qgC&printsec=frontcover&dq=isbn:9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA#v=onepage&q=Muziris&f=true ''The Encyclopedia of Christianity, Volume 5''] by Erwin Fahlbusch. Wm. B. Eerdmans Publishing - 2008. p. 285. ISBN 978-0-8028-2417-2.</ref><ref>{{cite book |author=Geoffrey Wainwright |title=The Oxford History Of Christian Worship |publisher=Oxford University Press |year=2006 |isbn=978-0-19-513886-3 |url=https://books.google.com/books?id=h5VQUdZhx1gC |page=666 |accessdate=30 May 2015}}</ref> ಮಾಪ್ಪಿಲ ಎಂಬ ಪದವು{{mdash}}ಮೂಲತಃ ಗೌರವಾನ್ವಿತ ವಿದೇಶಿ ಸಂದರ್ಶಕರಿಗೆ ಅನ್ವಯಿಸುವ ಗೌರವಾರ್ಥ ಪದವಾಗಿದ್ದು{{mdash}}ನಂತರ ಯಹೂದಿ, ಸಿರಿಯನ್ ಕ್ರಿಶ್ಚಿಯನ್ ಮತ್ತು ಮುಸ್ಲಿಂ ವಲಸಿಗರ ವಂಶಸ್ಥರೊಂದಿಗೆ ಸಂಬಂಧ ಹೊಂದಿತು, ಇದು ಕ್ರಮವಾಗಿ [[ಯೆಹೂದ ಮಾಪ್ಪಿಲ]]ಗಳು, [[ಸೇಂಟ್ ತಾಮಸ್ ಕ್ರೈಸ್ತರು|ನಸ್ರಾನಿ ಮಾಪ್ಪಿಲ]]ಗಳು ಮತ್ತು [[ಮಲಬಾರ್ ಮುಸ್ಲಿಮರು|ಮುಸ್ಲಿಂ ಮಾಪ್ಪಿಲ]]ಗಳ ಪದಗಳಿಗೆ ಕಾರಣವಾಯಿತು.<ref name="BMalieckal">* Bindu Malieckal (2005) Muslims, Matriliny, and A Midsummer Night's Dream: European Encounters with the Mappilas of Malabar, India; The Muslim World Volume 95 Issue 2</ref><ref>{{cite book |author=Milton J, Skeat WW, Pollard AW, Brown L |title=The Indian Christians of St Thomas |publisher=Cambridge University Press |date=31 August 1982 |isbn=0-521-21258-8 |page=171}}</ref> ಈ ಸಮುದಾಯಗಳ ಸಂಪ್ರದಾಯಗಳ ಪ್ರಕಾರ, ಭಾರತದಲ್ಲಿನ ಕೆಲವು ಆರಂಭಿಕ ಧಾರ್ಮಿಕ ಸ್ಥಾಪನೆಗಳನ್ನು ಕೇರಳದಲ್ಲಿ ನಿರ್ಮಿಸಲಾಯಿತು.<ref name="Dialogue"/> ಇವುಗಳಲ್ಲಿ [[ಸೇಂಟ್ ತಾಮಸ್ ಕ್ರಿಶ್ಚಿಯನ್ ಚರ್ಚುಗಳು]],<ref>{{cite book |author=Susan Bayly |title=Saints, Goddesses and Kings |publisher=Cambridge University Press |year=2004 |isbn=978-0-521-89103-5 |url=https://books.google.com/books?id=Fxqtx8SflEsC |page=40 |accessdate=30 May 2015}}</ref> [[ಚೇರಮನ್ ಜುಮಾ ಮಸೀದಿ]] (629 CE ಯಲ್ಲಿ ಸ್ಥಾಪಿಸಲಾಯಿತು), ಭಾರತದ ಮೊದಲ ಮಸೀದಿ,<ref>{{cite book |author=Jonathan Goldstein |title=The Jews of China |publisher=M.E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123 |accessdate=30 May 2015}}</ref> ಮತ್ತು [[ಪರದೇಶಿ ಸಿನಾಗೋಗ್]] (1568 CE ಯಲ್ಲಿ ನಿರ್ಮಿಸಲಾಯಿತು), [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಕ್ರಿಯ ಸಿನಾಗೋಗ್ ಸೇರಿವೆ.<ref>{{cite book |author=Nathan Katz |title=Who Are the Jews of India? |publisher=University of California Press |year=2000 |isbn=978-0-520-21323-4 |url=https://books.google.com/books?id=ZWX6pF2PTJwC |page=245 |accessdate=30 May 2015}}</ref>
=== ಮಧ್ಯಕಾಲೀನ ಅವಧಿ ===
[[File:3rd Tiruvalla Copper Plate.jpg|thumb|[[ಸೇಂಟ್ ತಾಮಸ್ ಕ್ರೈಸ್ತರು|ಸೇಂಟ್ ತಾಮಸ್ ಕ್ರೈಸ್ತರಿಗೆ]] ನೀಡಲಾದ [[ಥರಿಸಪಲ್ಲಿ ತಟ್ಟೆಗಳು]] ವ್ಯಾಪಾರಿ ಸಂಘಗಳು ಮತ್ತು ವ್ಯಾಪಾರ ನಿಗಮಗಳು ಕುಲಶೇಖರ ಅವಧಿಯಲ್ಲಿ ಆರ್ಥಿಕತೆ ಮತ್ತು ಸಾಮಾಜಿಕ ಜೀವನದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದವು ಎಂದು ಸಾಕ್ಷ್ಯ ನೀಡುತ್ತವೆ.]]
ಎರಡನೇ ಚೇರ ಸಾಮ್ರಾಜ್ಯ (c. 800–1102), ಇದನ್ನು [[ಮಹೋದಯಪುರಂ]]ನ ಕುಲಶೇಖರ ರಾಜವಂಶ ಎಂದೂ ಕರೆಯುತ್ತಾರೆ, ಇದನ್ನು [[ಕುಲಶೇಖರ ಆಳ್ವಾರ್|ಕುಲಶೇಖರ ವರ್ಮನ್]] ಸ್ಥಾಪಿಸಿದರು ಮತ್ತು ಪ್ರಸ್ತುತ ಕೇರಳದ ಹೆಚ್ಚಿನ ಭಾಗ ಮತ್ತು ಆಧುನಿಕ ತಮಿಳುನಾಡಿನ ಭಾಗಗಳನ್ನು ಒಳಗೊಂಡ ಪ್ರದೇಶವನ್ನು ಆಳಿದರು. ಕುಲಶೇಖರ ಅವಧಿಯ ಆರಂಭಿಕ ಹಂತದಲ್ಲಿ, ದಕ್ಷಿಣ ಪ್ರದೇಶವು{{mdash}}[[ನಾಗರ್ಕೋವಿಲ್]] ನಿಂದ [[ತಿರುವಲ್ಲ]] ವರೆಗೆ{{mdash}}[[ಆಯ್ಸ್ (ಕೇರಳ)|ಆಯ್]] ರಾಜವಂಶದ ನಿಯಂತ್ರಣದಲ್ಲಿತ್ತು. 10 ನೇ ಶತಮಾನದ ವೇಳೆಗೆ, ಆಯ್ಸ್ ತಮ್ಮ ಶಕ್ತಿಯನ್ನು ಕಳೆದುಕೊಂಡರು ಮತ್ತು ಈ ಪ್ರದೇಶವನ್ನು ಕುಲಶೇಖರ ಸಾಮ್ರಾಜ್ಯಕ್ಕೆ ಸೇರಿಸಲಾಯಿತು.<ref name="Balachand">{{cite book|author=K. Balachandran Nayar|title=In quest of Kerala|url=https://books.google.com/books?id=EXIeAAAAMAAJ|accessdate=8 August 2012|year=1974|publisher=Accent Publications|page=86}}</ref><ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|page=97}}</ref> ಕುಲಶೇಖರ ಆಳ್ವಿಕೆಯಲ್ಲಿ, ಕೇರಳವು ಕಲೆ, ಸಾಹಿತ್ಯ, ವ್ಯಾಪಾರ ಮತ್ತು ಹಿಂದೂ ಧರ್ಮದಲ್ಲಿ [[ಭಕ್ತಿ ಚಳುವಳಿ]] ಯಲ್ಲಿ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟ ಒಂದು ಅಭಿವೃದ್ಧಿ ಹೊಂದಿದ ಅವಧಿಯನ್ನು ಅನುಭವಿಸಿತು.<ref name="Sreedhar123">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|pages=123–131}}</ref> ಈ ಸಮಯದಲ್ಲಿ ವಿಶಿಷ್ಟವಾದ ಕೇರಳೀಯ ಗುರುತು ಹೊರಹೊಮ್ಮಲು ಪ್ರಾರಂಭಿಸಿತು, ವಿಶೇಷವಾಗಿ ಭಾಷಾ ವ್ಯತ್ಯಾಸದ ಮೂಲಕ ತಮಿಳು ಸಂಸ್ಕೃತಿಯಿಂದ ಪ್ರತ್ಯೇಕವಾಯಿತು.<ref name="AsherKumari1997">{{cite book|author1=R. E. Asher|author2=T. C. Kumari|title=Malayalam|url=https://books.google.com/books?id=uFQG2DCaIsIC|year=1997|publisher=Psychology Press|isbn=978-0-415-02242-2|pages=24–27}}</ref> ಆಡಳಿತ ಉದ್ದೇಶಗಳಿಗಾಗಿ, ಸಾಮ್ರಾಜ್ಯವನ್ನು [[ನಾಡುವಾಜಿ]]ಗಳು ಎಂದು ಕರೆಯಲ್ಪಡುವ ಸ್ಥಳೀಯ ಮುಖಂಡರು ಆಳುವ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ಪ್ರಾಂತ್ಯವನ್ನು ಮತ್ತಷ್ಟು ''ದೇಶಂ'' ಗಳಾಗಿ ವಿಂಗಡಿಸಲಾಗಿತ್ತು, ಅವುಗಳನ್ನು ದೇಶವಾಝಿಗಳು ಮೇಲ್ವಿಚಾರಣೆ ಮಾಡುತ್ತಿದ್ದರು.<ref name="Sreedhar123"/>
11 ನೇ ಶತಮಾನದಲ್ಲಿ ಚೇರ-ಚೋಳ ಸಂಘರ್ಷಗಳ ಸರಣಿಯು ಕೇರಳದ ಬಂದರುಗಳ ಮೂಲಕ ವಿದೇಶಿ ವ್ಯಾಪಾರಕ್ಕೆ ಅಡ್ಡಿಯಾಯಿತು. ಈ ಅವಧಿಯಲ್ಲಿ, ಹಿಂದೂ ಧರ್ಮದೊಂದಿಗೆ ಹಿಂದೆ ಸಹಬಾಳ್ವೆ ನಡೆಸಿದ್ದ [[ಬೌದ್ಧ]] ಮತ್ತು [[ಜೈನ]] ಧರ್ಮಗಳು ಕ್ಷೀಣಿಸಿದವು ಮತ್ತು ಅಂತಿಮವಾಗಿ ಈ ಪ್ರದೇಶದಿಂದ ಕಣ್ಮರೆಯಾಯಿತು.<ref>{{cite web |url=http://www.kerala.cc/keralahistory/index34.htm |title=The Buddhist History of Kerala |publisher=Kerala.cc |accessdate=25 September 2013 |archive-date=4 March 2016 |archive-url=https://web.archive.org/web/20160304215933/http://www.kerala.cc/keralahistory/index34.htm |url-status=dead }}</ref> ಸಾಮಾಜಿಕ ರಚನೆಗಳು ಹೆಚ್ಚು ಬಿಗಿಯಾದವು, ಮತ್ತು [[ಕೇರಳದಲ್ಲಿ ಜಾತಿ ವ್ಯವಸ್ಥೆ|ಜಾತಿ ವಿಭಾಗಗಳು]] ಆಳವಾದವು.<ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=9 August 2012|date=1 January 2007|publisher=DC Books|isbn=978-81-264-1578-6|page=138}}</ref> ಕುಲಶೇಖರ ರಾಜವಂಶವು ಅಂತಿಮವಾಗಿ 1102 CE ಯಲ್ಲಿ [[ನಂತರದ ಪಾಂಡ್ಯರು]] ಮತ್ತು [[ನಂತರದ ಚೋಳರು]] ನ ಸಂಯೋಜಿತ ದಾಳಿಯ ನಂತರ ಕುಸಿಯಿತು.<ref name="Balachand"/> 14 ನೇ ಶತಮಾನದಲ್ಲಿ, ದಕ್ಷಿಣ [[ವೇಣಾಡ್|ವೇಣಾಡ್ ಸಾಮ್ರಾಜ್ಯ]]ದ ರವಿ ವರ್ಮ ಕುಲಶೇಖರ (r. 1299–1314) ದಕ್ಷಿಣ ಭಾರತದ ಹೆಚ್ಚಿನ ಭಾಗದಲ್ಲಿ ಸಂಕ್ಷಿಪ್ತವಾಗಿ ಅಲ್ಪಕಾಲಿಕ ಪ್ರಾಮುಖ್ಯತೆಯನ್ನು ಸ್ಥಾಪಿಸಿದರು. ಅವರ ಮರಣದ ನಂತರ, ಮತ್ತು ಬಲವಾದ ಕೇಂದ್ರ ಅಧಿಕಾರದ ಅನುಪಸ್ಥಿತಿಯಲ್ಲಿ, ಈ ಪ್ರದೇಶವು ಮೂವತ್ತು ಸಣ್ಣ, ಆಗಾಗ್ಗೆ ಯುದ್ಧ ಮಾಡುವ ಸಂಸ್ಥಾನಗಳಾಗಿ ವಿಭಜನೆಯಾಯಿತು. ಅತ್ಯಂತ ಶಕ್ತಿಶಾಲಿಗಳೆಂದರೆ ಉತ್ತರದಲ್ಲಿ [[ಸಮೂತಿರಿ]] (ಜಾಮೋರಿನ್) ಸಾಮ್ರಾಜ್ಯ, ದಕ್ಷಿಣದಲ್ಲಿ ವೇಣಾಡ್ ಮತ್ತು ಮಧ್ಯ ಪ್ರದೇಶದಲ್ಲಿ ಕೊಚ್ಚಿ. 18 ನೇ ಶತಮಾನದಲ್ಲಿ, ತಿರುವಾಂಕೂರಿನ ರಾಜ [[ಅನಿಝಂ ತಿರುನಾಳ್ ಮಾರ್ತಾಂಡ ವರ್ಮ]] ಅವರು ಸೈನ್ಯದ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಿದರು ಮತ್ತು ಉತ್ತರ ಕೇರಳದವರೆಗೆ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡರು, ಈ ಪ್ರದೇಶದಲ್ಲಿ ತಿರುವಾಂಕೂರನ್ನು ಪ್ರಬಲ ಶಕ್ತಿಯಾಗಿ ಸ್ಥಾಪಿಸಿದರು. ಕೊಚ್ಚಿ ಆಡಳಿತಗಾರನು ಶಾಂತಿಗಾಗಿ ಮೊಕದ್ದಮೆ ಹೂಡಿದನು, ಮತ್ತು ಮಲಬಾರ್ ಪ್ರದೇಶವು ಅಂತಿಮವಾಗಿ [[1947 ರಲ್ಲಿ ಭಾರತದ ಸ್ವಾತಂತ್ರ್ಯ|ಭಾರತದ ಸ್ವಾತಂತ್ರ್ಯ]] ದವರೆಗೆ ನೇರ [[ಬ್ರಿಟಿಷ್ ಆಳ್ವಿಕೆ|ಬ್ರಿಟಿಷ್ ಆಳ್ವಿಕೆ]] ಯ ಅಡಿಯಲ್ಲಿ ಬಂದಿತು.<ref>{{cite book|author=Educational Britannica Educational|title=The Geography of India: Sacred and Historic Places|url=https://books.google.com/books?id=xPUvqtdfjyAC&pg=PA311|accessdate=15 September 2012|date=15 August 2010|publisher=The Rosen Publishing Group|isbn=978-1-61530-202-4|page=311}}</ref><ref>{{cite book |last1=Boland-Crewe |first1=Tara |last2=Lea |first2=David |title=The Territories and States of India |date=2003 |doi=10.4324/9780203402900 |isbn=978-1-135-35625-5 |pages=144–146 }}</ref>
=== ವಸಾಹತುಶಾಹಿ ಆಳ್ವಿಕೆ ===
[[File:Caminho maritimo para a India.png|thumb|ಕೇರಳವನ್ನು ತಲುಪಲು [[ವಾಸ್ಕೋ ಡ ಗಾಮಾ]] ತೆಗೆದುಕೊಂಡ ಮಾರ್ಗ (ಕಪ್ಪು ಬಣ್ಣದಲ್ಲಿ ಸೂಚಿಸಲಾಗಿದೆ)]]
[[ಮಧ್ಯಯುಗ|ಉಚ್ಚ]] ಮತ್ತು [[ಕೊನೆಯ ಮಧ್ಯಯುಗ]]ದಲ್ಲಿ, ಅರಬ್ ವ್ಯಾಪಾರಿಗಳು [[ಹಿಂದೂ ಮಹಾಸಾಗರ]]ದಲ್ಲಿ ಮಸಾಲೆ ವ್ಯಾಪಾರದ ಮೇಲೆ ಸಮುದ್ರ ಏಕಸ್ವಾಮ್ಯವನ್ನು ಹೊಂದಿದ್ದರು. ಯುರೋಪಿಯನ್ [[ಭೌಗೋಳಿಕ ಅನ್ವೇಷಣೆಗಳ ಯುಗ]] ದಲ್ಲಿ ಮಸಾಲೆ ವ್ಯಾಪಾರವು{{mdash}}ವಿಶೇಷವಾಗಿ ಕರಿಮೆಣಸಿನಲ್ಲಿ{{mdash}}ಯುರೋಪಿಯನ್ ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾದಾಗ ಈ ಪ್ರಾಬಲ್ಯವನ್ನು ಸವಾಲು ಮಾಡಲಾಯಿತು.<ref>{{cite book | last = Corn | first = Charles |author2=Glasserman, Debbie | title = The Scents of Eden: A History of the Spice Trade | publisher = Kodansha America |date=March 1999 | isbn = 1-56836-249-8}}</ref> 15 ನೇ ಶತಮಾನದ ವೇಳೆಗೆ, ಪೋರ್ಚುಗೀಸರು ಪೂರ್ವ ಸಮುದ್ರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಾರಂಭಿಸಿದರು, ಇದು 1498 ರಲ್ಲಿ [[ಕೋಝಿಕೋಡ್]] (ಕ್ಯಾಲಿಕಟ್) ಬಳಿಯ [[ಕಪ್ಪಾಡ್]] ನಲ್ಲಿ [[ವಾಸ್ಕೋ ಡ ಗಾಮಾ]] ಆಗಮನದೊಂದಿಗೆ ಕೊನೆಗೊಂಡಿತು.<ref>{{Cite book |author=Ravindran PN |title=Black Pepper: Piper Nigrum |publisher=CRC Press |year=2000 |accessdate=11 November 2007 |url=https://books.google.com/books?id=VaGCgSLrdr4C |page=3 |isbn=978-90-5702-453-5}}</ref><ref name="Curtin1984">{{cite book|author=Philip D. Curtin|title=Cross-Cultural Trade in World History|url=https://books.google.com/books?id=R4IiYFhliv4C|date=25 May 1984|publisher=Cambridge University Press|isbn=978-0-521-26931-5|page=144}}</ref> ಕೋಝಿಕೋಡ್ನ [[ಜಾಮೋರಿನ್]] ಪೋರ್ಚುಗೀಸರಿಗೆ ತನ್ನ ಪ್ರಜೆಗಳೊಂದಿಗೆ ವ್ಯಾಪಾರ ಮಾಡಲು ಅನುಮತಿ ನೀಡಿದರು, ಇದು ಸಮೃದ್ಧ ಪೋರ್ಚುಗೀಸ್ [[ಕಾರ್ಖಾನೆ (ವ್ಯಾಪಾರ ಠಾಣ್ಯ)|ಕಾರ್ಖಾನೆ]] ಮತ್ತು ಕೋಟೆಯ ಸ್ಥಾಪನೆಗೆ ಕಾರಣವಾಯಿತು.<ref name="Mehta2005" />
ಆದಾಗ್ಯೂ, ಪೋರ್ಚುಗೀಸರು ಜಾಮೋರಿನ್ ರಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಬ್ ವ್ಯಾಪಾರಿಗಳ ಮೇಲೆ ದಾಳಿ ಮಾಡಿದಾಗ ಉದ್ವಿಗ್ನತೆಗಳು ಹುಟ್ಟಿಕೊಂಡವು, ಇದು ಸಂಬಂಧಗಳಲ್ಲಿ ಕುಸಿತಕ್ಕೆ ಕಾರಣವಾಯಿತು. ಜಾಮೋರಿನ್ ಮತ್ತು ಕೊಚ್ಚಿ ರಾಜನ ನಡುವಿನ ಪೈಪೋಟಿಯಿಂದ ಪ್ರಯೋಜನ ಪಡೆಯುವ ಅವಕಾಶವನ್ನು ಬಳಸಿಕೊಂಡು, ಪೋರ್ಚುಗೀಸರು ಕೊಚ್ಚಿಯೊಂದಿಗೆ ಮೈತ್ರಿ ಮಾಡಿಕೊಂಡರು. [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] 1505 ರಲ್ಲಿ ಪೋರ್ಚುಗೀಸ್ ಭಾರತದ ವೈಸರಾಯ್ ಆಗಿ ನೇಮಕಗೊಂಡಾಗ, ಅವರು ತಮ್ಮ ಪ್ರಧಾನ ಕಛೇರಿಯನ್ನು ಕೋಝಿಕೋಡ್ನಲ್ಲಿ ಅಲ್ಲ, ಬದಲಿಗೆ [[ಫೋರ್ಟ್ ಕೊಚ್ಚಿ]] ([[ಫೋರ್ಟ್ ಇಮ್ಯಾನುಯೆಲ್]]) ಯಲ್ಲಿ ಸ್ಥಾಪಿಸಿದರು. ಅವರ ಆಡಳಿತದ ಅಡಿಯಲ್ಲಿ, ಪೋರ್ಚುಗೀಸರು ಮಲಬಾರ್ ಕರಾವಳಿಯಲ್ಲಿ ಹಲವಾರು ಕೋಟೆಗಳನ್ನು ನಿರ್ಮಿಸುವ ಮೂಲಕ ತಮ್ಮ ಪ್ರಭಾವವನ್ನು ಬಲಪಡಿಸಿದರು.<ref name="Mehta2005">{{cite book|author=J. L. Mehta|title=Advanced Study in the History of Modern India: Volume One: 1707–1813|url=https://books.google.com/books?id=d1wUgKKzawoC&pg=PA324|accessdate=9 August 2012|date=1 January 2005|publisher=Sterling Publishers Pvt. Ltd|isbn=978-1-932705-54-6|pages=324–327}}</ref> ಈ ಮುನ್ನಡೆಗಳ ಹೊರತಾಗಿಯೂ, ಪೋರ್ಚುಗೀಸರು ಜಾಮೋರಿನ್ನ ನೌಕಾ ಪಡೆಗಳಿಂದ ಗಮನಾರ್ಹ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ ಕೋಝಿಕೋಡ್ನ ಅಡ್ಮಿರಲ್ಗಳಾದ [[ಕುಂಜಲಿ ಮರಕ್ಕರ್]]ರ ಆಜ್ಞೆಯಡಿಯಲ್ಲಿ, ಅವರು ಪರಿಣಾಮಕಾರಿ ಸಮುದ್ರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರು. ಈ ಪ್ರತಿರೋಧವು ಅಂತಿಮವಾಗಿ ಪೋರ್ಚುಗೀಸರನ್ನು ಒಪ್ಪಂದಕ್ಕೆ ಒತ್ತಾಯಿಸಿತು. 1571 ರಲ್ಲಿ, ಜಾಮೋರಿನ್ ಪಡೆಗಳು [[ತಾನೂರ್ ಸಾಮ್ರಾಜ್ಯ#ಚಾಲಿಯಮ್ ಕೋಟೆಯ ಕದನಗಳು|ಚಾಲಿಯಮ್ ಕೋಟೆಯ ಕದನದಲ್ಲಿ]] ಪೋರ್ಚುಗೀಸರನ್ನು ಸೋಲಿಸಿದವು, ಇದು ಈ ಪ್ರದೇಶದಲ್ಲಿ ಪೋರ್ಚುಗೀಸ್ ಮಹತ್ವಾಕಾಂಕ್ಷೆಗಳಿಗೆ ದೊಡ್ಡ ಹಿನ್ನಡೆಯನ್ನು ಗುರುತಿಸಿತು.<ref>{{cite book|author=K. K. N. Kurup|title=India's Naval Traditions: The Role of Kunhali Marakkars|url=https://books.google.com/books?id=HKmXcBCKEcAC&pg=PA51|accessdate=9 August 2012|date=1 January 1997|publisher=Northern Book Centre|isbn=978-81-7211-083-3|pages=37–38}}</ref>
ಪೋರ್ಚುಗೀಸರು ಅಂತಿಮವಾಗಿ [[ಡಚ್ ಈಸ್ಟ್ ಇಂಡಿಯಾ ಕಂಪನಿ]]ಯಿಂದ ಸ್ಥಳಾಂತರಿಸಲ್ಪಟ್ಟರು, ಇದು ಈ ಪ್ರದೇಶದಲ್ಲಿ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲು ಕೋಝಿಕೋಡ್ ಮತ್ತು ಕೊಚ್ಚಿ ನಡುವಿನ ನಡೆಯುತ್ತಿರುವ ಸಂಘರ್ಷಗಳ ಲಾಭವನ್ನು ಪಡೆಯಿತು.<ref name="South Asia 2006">{{cite book|title=South Asia 2006|url=https://books.google.com/books?id=YG8bAQAAMAAJ|accessdate=18 November 2012|date=1 December 2005|publisher=Taylor & Francis|page=289}}</ref> ಆದಾಗ್ಯೂ, ಡಚ್ಚರು ಸಹ ಸೈನ್ಯದ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ [[ತಿರುವಾಂಕೂರು ರಾಜಮನೆತನ]]ದ [[ಮಾರ್ತಾಂಡ ವರ್ಮ]]ರಿಂದ. 1741 ರಲ್ಲಿ [[ಕೊಲಾಚೆಲ್ ಕದನ]]ದಲ್ಲಿ ನಿರ್ಣಾಯಕ ಡಚ್ ಸೋಲಿನ ನಂತರ,<ref name="google3">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA57|accessdate=18 November 2012|date=1 January 1993|publisher=Northern Book Centre|isbn=978-81-7211-052-9|pages=57–70}}</ref> 1753 ರಲ್ಲಿ ಮಾವೆಲಿಕ್ಕರ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಡಚ್ಚರು ಪ್ರಾದೇಶಿಕ ರಾಜಕೀಯ ವ್ಯವಹಾರಗಳಿಂದ ಹಿಂತೆಗೆದುಕೊಳ್ಳಲು ಮತ್ತು ಅವರ ಪಾತ್ರವನ್ನು ವ್ಯಾಪಾರಕ್ಕೆ ಸೀಮಿತಗೊಳಿಸಲು ಒತ್ತಾಯಿಸಲಾಯಿತು.<ref name="Singh2010">{{cite book|author=Anjana Singh|title=Fort Kochi in Kerala, 1750–1830: The Social Condition of a Dutch Community in an Indian Milieu|url=https://books.google.com/books?id=LFy4pWUlnfwC&pg=PA22|accessdate=18 November 2012|date=30 April 2010|publisher=BRILL|isbn=978-90-04-16816-9|pages=22–52}}</ref><ref name="Iyer1995">{{cite book|author=S. Krishna Iyer|title=Travancore Dutch relations, 1729–1741|url=https://books.google.com/books?id=rUtuAAAAMAAJ|accessdate=18 November 2012|year=1995|publisher=CBH Publications|isbn=978-81-85381-42-8|page=49}}</ref><ref name="Lannoy1997">{{cite book|author=Mark de Lannoy|title=The Kulasekhara Perumals of Travancore: history and state formation in Travancore from 1671 to 1758|url=https://books.google.com/books?id=pKjZAAAAMAAJ|accessdate=18 November 2012|year=1997|publisher=Leiden University|isbn=978-90-73782-92-1|page=190}}</ref> ಮಾರ್ತಾಂಡ ವರ್ಮ ತಮ್ಮ ಸೈನ್ಯದ ಕಾರ್ಯಾಚರಣೆಗಳನ್ನು ಮುಂದುವರೆಸಿದರು, ಕೇರಳದಲ್ಲಿ ತಿರುವಾಂಕೂರನ್ನು ಪ್ರಮುಖ ಶಕ್ತಿಯಾಗಿ ಸ್ಥಾಪಿಸಿದರು.<ref>{{cite book|author=A. Sreedhara Menon|title=Political History of Modern Kerala|url=https://books.google.com/books?id=wnAjqjhc1VcC&pg=PA140|accessdate=10 August 2012|year=1987|publisher=D C Books|isbn=978-81-264-2156-5|page=140}}</ref>
1766 ರಲ್ಲಿ, [[ಮೈಸೂರು ಸಾಮ್ರಾಜ್ಯ|ಮೈಸೂರಿನ]] ಆಡಳಿತಗಾರ [[ಹೈದರ್ ಅಲಿ]], [[ಮೈಸೂರಿನ ಕೇರಳ ಆಕ್ರಮಣ#ಹೈದರ್ ಅಲಿಯ ಆಕ್ರಮಣ|ಉತ್ತರ ಕೇರಳವನ್ನು ಆಕ್ರಮಿಸಿದನು]],<ref name="Rai">{{cite book|author=Raghunath Rai|title=History|url=https://books.google.com/books?id=Z4-8Z0gqBkoC&pg=PA14|accessdate=18 November 2012|publisher=FK Publications|isbn=978-81-87139-69-0|pages=14–}}</ref> ಮತ್ತು ಅವನ ಮಗ ಮತ್ತು ಉತ್ತರಾಧಿಕಾರಿ, [[ಟಿಪ್ಪು ಸುಲ್ತಾನ್]], ವಿಸ್ತರಿಸುತ್ತಿರುವ [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]] ವಿರುದ್ಧ [[ಮೈಸೂರಿನ ಕೇರಳ ಆಕ್ರಮಣ#ಟಿಪ್ಪು ಸುಲ್ತಾನನ ಆಕ್ರಮಣಗಳು|ಸೈನ್ಯದ ಕಾರ್ಯಾಚರಣೆಗಳನ್ನು]] ಪ್ರಾರಂಭಿಸಿದರು. ಈ ಮುಖಾಮುಖಿಗಳು ನಾಲ್ಕು [[ಆಂಗ್ಲೋ-ಮೈಸೂರು ಯುದ್ಧಗಳಲ್ಲಿ]] ಎರಡಕ್ಕೆ ಕೊಡುಗೆ ನೀಡಿದವು.<ref name="MuseumDallapiccola2010">{{cite book|author1=British Museum|author2=Anna Libera Dallapiccola|title=South Indian Paintings: A Catalogue of the British Museum Collection|url=https://books.google.com/books?id=FIzWapiacQcC&pg=PA12|accessdate=18 November 2012|date=22 June 2010|publisher=Mapin Publishing Pvt Ltd|isbn=978-0-7141-2424-7|pages=12–}}</ref><ref name="ThorpeEdgar">{{cite book|author1=Edgar Thorpe, Showick Thorpe|author2=Thorpe Edgar|title=The Pearson CSAT Manual 2011|url=https://books.google.com/books?id=WuBFs6yFRwcC&pg=RA1-PA99|accessdate=18 November 2012|publisher=Pearson Education India|isbn=978-81-317-5830-4|page=99}}</ref> 1790 ರ ದಶಕದ ಆರಂಭದ ವೇಳೆಗೆ, ಟಿಪ್ಪು ಸುಲ್ತಾನ್ [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ವನ್ನು ಬ್ರಿಟಿಷರಿಗೆ ಬಿಟ್ಟುಕೊಡಲು ಒತ್ತಾಯಿಸಲಾಯಿತು, ಮತ್ತು ಈ ಪ್ರದೇಶಗಳನ್ನು 1792 ರಲ್ಲಿ [[ಬ್ರಿಟಿಷ್ ಭಾರತ]]ದ [[ಮದ್ರಾಸ್ ಪ್ರೆಸಿಡೆನ್ಸಿ]] ಗೆ ಸೇರಿಸಲಾಯಿತು.<ref name="The Edinburgh Gazetteer: Or, Geographical Dictionary: Containing a Description of the Various Countries, Kingdoms, States, Cities, Towns, Mountains, &c. of the World; an Account of the Government, Customs, and Religion of the Inhabitants; the Boundaries and Natural Productions of Each Country, &c. &c. Forming a Complete Body of Geography, Physical, Political, Statistical, and Commercial with Addenda, Containing the Present State of the New Governments in South America...">{{cite book|title=The Edinburgh Gazetteer|url=https://books.google.com/books?id=xRIyAQAAMAAJ&pg=PA63|accessdate=18 November 2012|year=1827|publisher=Longman, Rees, Orme, Brown, and Green|pages=63–}}</ref><ref name="Kumar1965">{{cite book|author=Dharma Kumar|title=Land and Caste in South India: Agricultural Labor in the Madras Presidency During the Nineteenth Century|url=https://books.google.com/books?id=psw5AAAAIAAJ&pg=PA87|accessdate=18 November 2012|year=1965|publisher=CUP Archive|pages=87–|id=GGKEY:T72DPF9AZDK}}</ref><ref name="Ittaman2003">{{cite book|author=K.P. Ittaman|title=History of Mughal Architecture Volume Ii|url=https://books.google.com/books?id=ZQ5lFywZAqYC&pg=PA30|accessdate=18 November 2012|date=1 June 2003|publisher=Abhinav Publications|isbn=978-81-7017-034-1|pages=30–}}</ref> ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 1791 ರಲ್ಲಿ ಕೊಚ್ಚಿ ಮತ್ತು 1795 ರಲ್ಲಿ ತಿರುವಾಂಕೂರಿನೊಂದಿಗೆ ಸಹಾಯಕ ಮೈತ್ರಿಗಳನ್ನು ಸುರಕ್ಷಿತಗೊಳಿಸಿತು.<ref>{{Cite book |author=Superintendent of Government Printing |title=Imperial Gazetteer of India (Provincial Series): Madras |publisher=Government of India |location=Calcutta |year=1908 |accessdate=11 November 2007 |url=https://books.google.com/books?id=xXglUxeS_WkC |page=22}}</ref> 18 ನೇ ಶತಮಾನದ ಅಂತ್ಯದ ವೇಳೆಗೆ, ಕೇರಳವು ಸಂಪೂರ್ಣವಾಗಿ ಬ್ರಿಟಿಷರಿಂದ ನೇರವಾಗಿ ಆಡಳಿತ ನಡೆಸಲ್ಪಡುತ್ತಿತ್ತು ಅಥವಾ ಅವರ [[ಸಾಮಂತತ್ವ]]ದ ಅಡಿಯಲ್ಲಿತ್ತು.<ref name="RajTharakan1981">{{cite book|author1=Kakkadan Nandanath Raj|author2=Michael Tharakan|title=Agrarian reform in Kerala and its impact on the rural economy: a preliminary assessment|url=https://books.google.com/books?id=JF6FAAAAIAAJ|accessdate=18 November 2012|year=1981|publisher=International Labour Office|pages=2–3}}</ref>
20 ನೇ ಶತಮಾನದಲ್ಲಿ, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಕೇರಳವು ಹಲವಾರು ಪ್ರಮುಖ ದಂಗೆಗಳ ತಾಣವಾಗಿತ್ತು. ಇವುಗಳಲ್ಲಿ ಅತ್ಯಂತ ಗಮನಾರ್ಹವಾದುದು 1921 ರ [[ಮಲಬಾರ್ ದಂಗೆ]], ಇದರಲ್ಲಿ ಮಲಬಾರ್ ಪ್ರದೇಶದ ಮಾಪ್ಪಿಲ ಮುಸ್ಲಿಮರು ಹಿಂದೂ [[ಜಮೀನ್ದಾರ್]]ಗಳು (ಭೂಮಾಲೀಕರು) ಮತ್ತು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳ ವಿರುದ್ಧ ಗಲಭೆ ನಡೆಸಿದರು.<ref name="Qureshi1999">{{cite book|author=M. Naeem Qureshi|title=Pan-Islam in British Indian Politics: A Study of the Khilafat Movement, 1918–1924|url=https://books.google.com/books?id=czKYZPyoyx0C|year=1999|publisher=BRILL|isbn=90-04-11371-1|pages=445–447}}</ref> ಸಾಮಾಜಿಕ ಸುಧಾರಣೆಯ ಕ್ಷಣಗಳು ಸಹ ಈ ಅವಧಿಯಲ್ಲಿ ವೇಗವನ್ನು ಪಡೆದುಕೊಂಡವು, ವಿಶೇಷವಾಗಿ ಜಾತಿ-ಆಧಾರಿತ ತಾರತಮ್ಯವನ್ನು ಸವಾಲು ಮಾಡುವವು. ಒಂದು ಪ್ರಮುಖ ಮೈಲಿಗಲ್ಲು 1936 ರ ತಿರುವಾಂಕೂರಿನ [[ದೇವಾಲಯ ಪ್ರವೇಶ ಘೋಷಣೆ]]ಯಾಗಿದ್ದು, ಇದು ಕೆಳ ಜಾತಿಯ ಹಿಂದೂಗಳಿಗೆ ಹಿಂದೆ ಉನ್ನತ ಜಾತಿಗಳಿಗೆ ಸೀಮಿತವಾಗಿದ್ದ ದೇವಾಲಯಗಳನ್ನು ಪ್ರವೇಶಿಸುವ ಹಕ್ಕನ್ನು ನೀಡಿತು.<ref name="Smith1976">{{cite book|author=Bardwell L. Smith|title=Religion and Social Conflict in South Asia|url=https://books.google.com/books?id=07Y3AAAAIAAJ&pg=PA42|accessdate=31 July 2012|year=1976|publisher=BRILL|isbn=978-90-04-04510-1|pages=35–42}}</ref>
=== ಭಾರತದ ರಾಜ್ಯ ===
1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಸ್ವತಂತ್ರ ಪ್ರಭುತ್ವಗಳಾಗಿ [[ಭಾರತದ ವಿಭಜನೆ]] ಯ ನಂತರ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು [[ಭಾರತದ ಪ್ರಭುತ್ವ|ಭಾರತದ ಒಕ್ಕೂಟಕ್ಕೆ]] ಸೇರಿಕೊಂಡವು. 1 ಜುಲೈ 1949 ರಂದು, ಎರಡೂ ರಾಜ್ಯಗಳನ್ನು ವಿಲೀನಗೊಳಿಸಿ [[ತಿರುವಾಂಕೂರು-ಕೊಚ್ಚಿ]] ರೂಪಿಸಲಾಯಿತು.<ref name="Sabharwal2007">{{cite book|author=Gopa Sabharwal|title=India Since 1947: The Independent Years|url=https://books.google.com/books?id=LKySGJAGVEQC&pg=PA23|accessdate=18 November 2012|year=2007|publisher=Penguin Books India|isbn=978-0-14-310274-8|pages=23–}}</ref> 1 ನವೆಂಬರ್ 1956 ರಂದು, ಮದ್ರಾಸಿನ ದಕ್ಷಿಣ ಕನ್ನಡ ಜಿಲ್ಲೆಯ [[ಕಾಸರಗೋಡು ಜಿಲ್ಲೆ|ಕಾಸರಗೋಡು]] ತಾಲೂಕು, [[ಮದ್ರಾಸ್ ರಾಜ್ಯ]]ದ [[ಮಲಬಾರ್ ಜಿಲ್ಲೆ]] ([[ನೀಲಗಿರಿ ಜಿಲ್ಲೆಯ]] [[ಗುಡಾಲೂರು ತಾಲೂಕು]], [[ಲಕ್ಷದ್ವೀಪ]], [[ಟಾಪ್ಸ್ಲಿಪ್]], ಮತ್ತು ಅನಕಟ್ಟಿಯ ಪೂರ್ವದ [[ಅಟ್ಟಪ್ಪಾಡಿ]] ಕಾಡು ಹೊರತುಪಡಿಸಿ), ಮತ್ತು ತಿರುವಾಂಕೂರು-ಕೊಚ್ಚಿ ರಾಜ್ಯವು{{mdash}}ನಾಲ್ಕು ದಕ್ಷಿಣ ತಾಲೂಕುಗಳನ್ನು ([[ಕನ್ಯಾಕುಮಾರಿ ಜಿಲ್ಲೆ]] ಮತ್ತು ಶೆಂಕೋಟ್ಟೈ ತಾಲೂಕುಗಳು) ಹೊರತುಪಡಿಸಿ, ಅವುಗಳನ್ನು ತಮಿಳುನಾಡಿಗೆ ವರ್ಗಾಯಿಸಲಾಯಿತು{{mdash}}[[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ಕೇರಳ ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು.<ref name="Tmh">{{cite book|author=Tmh|title=General Knowledge Digest 2010|url=https://books.google.com/books?id=RyLmXWTKHXgC&pg=SA3-PA106|accessdate=18 November 2012|publisher=Tata McGraw-Hill Education|isbn=978-0-07-069939-7|page=3}}</ref><ref name="SinghKarafin2009">{{cite book|author1=Sarina Singh|author2=Amy Karafin|author3=Anirban Mahapatra|title=South India|url=https://books.google.com/books?id=8KnLFpjEHpUC|accessdate=6 January 2013|date=1 September 2009|publisher=Lonely Planet|isbn=978-1-74179-155-6}}</ref><ref name="Kerala">{{Cite web |title=The States Reorganisation Act, 1956 |url=https://legislative.gov.in/sites/default/files/A1956-37.pdf |url-status=live |archive-url=https://web.archive.org/web/20211117014954/https://legislative.gov.in/sites/default/files/A1956-37.pdf |archive-date=17 November 2021 |access-date=11 May 2021 |website=legislative.gov.in |publisher=Government of India}}</ref> 1957 ರಲ್ಲಿ ಹೊಸ ಕೇರಳ ವಿಧಾನಸಭೆಗೆ ಮೊದಲ ಚುನಾವಣೆಗಳ ನಂತರ [[ಇ. ಎಂ. ಎಸ್. ನಂಬೂದಿರಿಪಾಡ್]] ನೇತೃತ್ವದ [[ಕಮ್ಯುನಿಸ್ಟ್]] ಸರ್ಕಾರವು ರೂಪುಗೊಂಡಿತು.<ref name="SinghKarafin2009"/> ಇದು 1945 ರಲ್ಲಿ [[ಸ್ಯಾನ್ ಮರಿನೋ ಗಣರಾಜ್ಯ]]ದಲ್ಲಿ ಕಮ್ಯುನಿಸ್ಟ್ ಚುನಾವಣಾ ಯಶಸ್ಸಿನ ನಂತರ ವಿಶ್ವದ ಆರಂಭಿಕ ಪ್ರಜಾಪ್ರಭುತ್ವವಾಗಿ ಚುನಾಯಿತ ಕಮ್ಯುನಿಸ್ಟ್ ಸರ್ಕಾರಗಳಲ್ಲಿ ಒಂದಾಗಿದೆ.<ref name=Hindu>{{cite news|title=50 years of development|url=http://www.thehindubusinessline.com/todays-paper/tp-others/tp-states/50-years-of-development/article1655056.ece?ref=archive|accessdate=30 August 2013|newspaper=The Hindu|date=12 April 2007|author=K.G. Kumar}}</ref><ref name="Desai2006">{{cite book|author=Manali Desai|title=State Formation and Radical Democracy in India|url=https://books.google.com/books?id=60m9znJQmmkC&pg=PA142|accessdate=31 August 2013|date=27 November 2006|publisher=Taylor & Francis|isbn=978-0-203-96774-4|page=142}}</ref><ref name="ChitkaraŚarmā1997">{{cite book|author1=Madan Gopal Chitkara|author2=Baṃśī Rāma Śarmā|title=Indian Republic: Issues and Perspective|url=https://books.google.com/books?id=7YrmNURVoroC&pg=PA134|accessdate=18 November 2012|date=1 January 1997|publisher=APH Publishing|isbn=978-81-7024-836-1|pages=134–}}</ref>
== ಭೌಗೋಳಿಕತೆ ==
{{Main|ಕೇರಳದ ಭೌಗೋಳಿಕತೆ}}
{{Multiple image
| direction = vertical
| width = 220
| image1 = AnaimudiPeak DSC 4834.jpg
| caption1 = [[ಅನಮುಡಿ]], [[ದಕ್ಷಿಣ ಭಾರತ]]ದ ಅತಿ ಎತ್ತರದ ಶಿಖರ.
| image2 = DR0071DSC 9245.jpg
| caption2 = [[ವಯನಾಡು|ವಯನಾಡಿನ]] ಬೆಟ್ಟ ಪ್ರದೇಶಗಳಲ್ಲಿ [[ಚಹಾ]] ಮತ್ತು [[ಕಾಫಿ]] ಉತ್ಪಾದಿಸಲಾಗುತ್ತದೆ.
| image3 = Kumarkom.jpg
| caption3 = [[ವೇಂಬನಾಡು]], [[ಕೇರಳ ಬ್ಯಾಕ್ವಾಟರ್ಗಳ]] ಒಂದು ಭಾಗ, ಭಾರತದ ಅತಿ ಉದ್ದದ ಸರೋವರ.
| image4 = Light house in Ponnani.jpg
| caption4 = [[ಪೊನ್ನಾನಿ]] ಲೈಟ್ ಹೌಸ್ ಬೀಚ್
}}
ರಾಜ್ಯವು [[ಲಕ್ಷದ್ವೀಪ ಸಮುದ್ರ]] ಮತ್ತು [[ಪಶ್ಚಿಮ ಘಟ್ಟಗಳ]] ನಡುವೆ ಸಿಕ್ಕಿಕೊಂಡಿದೆ.<ref>{{Cite web |year=1953 |title=Limits of Oceans and Seas, 3rd edition |url=https://iho.int/uploads/user/pubs/standards/s-23/S-23_Ed3_1953_EN.pdf |archive-url=https://web.archive.org/web/20181005131902/https://www.iho.int/iho_pubs/standard/S-23/S-23_Ed3_1953_EN.pdf |archive-date=5 October 2018 |access-date=28 December 2020 |publisher=International Hydrographic Organization}}</ref> ಉತ್ತರ ಅಕ್ಷಾಂಶ 8°18' ಮತ್ತು 12°48' ಮತ್ತು ಪೂರ್ವ ರೇಖಾಂಶ 74°52' ಮತ್ತು 77°22' ನಡುವೆ ಇದೆ,<ref>{{cite web |title=Physical and Anatomical Characteristic of Wood of Some Less-Known Tree Species of Kerala |url=https://docs.kfri.res.in/KFRI-RR/KFRI-RR096.pdf |work=Kerala Forest Research Institute |publisher=Government of Kerala |access-date=18 November 2012 |archive-date=9 July 2013 |archive-url=https://web.archive.org/web/20130709150101/http://docs.kfri.res.in/KFRI-RR/KFRI-RR096.pdf |url-status=live }}</ref> ಕೇರಳವು ಕೆಲವು ಚಂಡಮಾರುತಗಳೊಂದಿಗೆ ಆರ್ದ್ರ [[ಉಷ್ಣವಲಯದ ಮಳೆಕಾಡು ಹವಾಮಾನ]]ವನ್ನು ಹೊಂದಿದೆ. ರಾಜ್ಯವು {{cvt|590|km|mi}} ಕರಾವಳಿಯನ್ನು ಹೊಂದಿದೆ<ref>{{cite web |title=Marine Fisheries |url=https://www.fisheries.kerala.gov.in/index.php?option=com_content&view=article&id=76&Itemid=44 |website=fisheries.kerala.gov.in |publisher=Department of Fisheries, Government of Kerala |access-date=13 November 2015 |archive-date=17 November 2015 |archive-url=https://web.archive.org/web/20151117021802/http://www.fisheries.kerala.gov.in/index.php?option=com_content&view=article&id=76&Itemid=44 |url-status=live }}</ref> ಮತ್ತು ರಾಜ್ಯದ ಅಗಲವು {{convert|11|and|121|km|mi|0}} ನಡುವೆ ಬದಲಾಗುತ್ತದೆ.<ref name="Nair1994">{{cite book |author=V. Balakrishnan Nair |title=Social Development and Demographic Changes in South India: Focus on Kerala |url=https://books.google.com/books?id=sTS4OO9lcdgC&pg=PA15 |access-date=18 November 2012 |year=1994 |publisher=M.D. Publications Pvt. Ltd. |isbn=978-8185880501 |page=15}}</ref> ಭೌಗೋಳಿಕವಾಗಿ, ಕೇರಳವನ್ನು ಮೂರು ಹವಾಮಾನದ ಪ್ರತ್ಯೇಕ ಪ್ರದೇಶಗಳಾಗಿ ವಿಂಗಡಿಸಬಹುದು: ಪೂರ್ವ ಎತ್ತರದ ಪ್ರದೇಶಗಳು; ಒರಟು ಮತ್ತು ತಂಪಾದ ಪರ್ವತ ಪ್ರದೇಶ, ಮಧ್ಯ ಮಧ್ಯ-ನೆಲಗಳು; ರೋಲಿಂಗ್ ಬೆಟ್ಟಗಳು, ಮತ್ತು ಪಶ್ಚಿಮ ತಗ್ಗು ಪ್ರದೇಶಗಳು; ಕರಾವಳಿ ಬಯಲುಗಳು.<ref name="ChattopadhyayFranke2006">{{cite book |author1=Srikumar Chattopadhyay |author2=Richard W. Franke |title=Striving for Sustainability: Environmental Stress and Democratic Initiatives in Kerala |url=https://books.google.com/books?id=gOrvghLklKoC&pg=PA110 |access-date=19 March 2019 |year=2006 |publisher=Concept Publishing Company |isbn=978-8180692949}}</ref>{{rp|110}} [[ಪೂರ್ವ-ಕೇಂಬ್ರಿಯನ್]] ಮತ್ತು [[ಪ್ಲಿಸ್ಟೊಸೀನ್]] ಭೂವೈಜ್ಞಾನಿಕ ರಚನೆಗಳು ಕೇರಳದ ಭೂಪ್ರದೇಶದ ಬಹುಭಾಗವನ್ನು ರೂಪಿಸುತ್ತವೆ.<ref name="Geological Survey Water-supply Paper">{{cite book |title=Geological Survey Water-supply Paper |url=https://books.google.com/books?id=0qUYAQAAIAAJ&pg=SL4-PA6 |access-date=19 March 2019 |year=1961 |publisher=U.S. Government Printing Office |page=4}}</ref><ref name="SharmaKumari2008">{{cite book |author1=Pradeep Sharma |author2=Y. Dharnai Kumari |author3=Tirunagaram Lakshmamma |title=Status Of Women And Family Planning |url=https://books.google.com/books?id=2b6Ok2EcnBIC&pg=PA217 |access-date=18 November 2012 |year=2008 |publisher=Discovery Publishing House |isbn=978-8183563260 |page=217}}</ref> 1341 CE ಯಲ್ಲಿ ಕೇರಳದಲ್ಲಿ ವಿನಾಶಕಾರಿ ಪ್ರವಾಹವು ಅದರ ಭೂಪ್ರದೇಶವನ್ನು ಆಮೂಲಾಗ್ರವಾಗಿ ಬದಲಾಯಿಸಿತು ಮತ್ತು ಅದರ ಇತಿಹಾಸದ ಮೇಲೆ ಪರಿಣಾಮ ಬೀರಿತು; ಇದು ಮಸಾಲೆ ಸಾಗಣೆಗೆ ನೈಸರ್ಗಿಕ ಬಂದರನ್ನು ಸೃಷ್ಟಿಸಿತು.<ref name="LimitedKitchen2010">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA100 |access-date=18 November 2012 |year=2010 |publisher=Murdoch Books |isbn=978-1-74196-438-7 |page=100}}</ref>
ಕೇರಳದ ಪೂರ್ವ ಪ್ರದೇಶವು ಪಶ್ಚಿಮ ಘಟ್ಟಗಳ [[ಮಳೆ ನೆರಳು]] ಯ ಪಶ್ಚಿಮಕ್ಕೆ ತಕ್ಷಣವೇ ಎತ್ತರದ ಪರ್ವತಗಳು, ಕಮರಿಗಳು ಮತ್ತು ಆಳವಾದ ಕತ್ತರಿಸಿದ ಕಣಿವೆಗಳನ್ನು ಒಳಗೊಂಡಿದೆ.<ref name=ChattopadhyayFranke2006 />{{rp|110}} ಕೇರಳದ ಪಶ್ಚಿಮಕ್ಕೆ ಹರಿಯುವ 41 ನದಿಗಳು,<ref name="Sadasivan2003">{{cite book |author=S. N. Sadasivan |title=River Disputes in India: Kerala Rivers Under Siege |url=https://books.google.com/books?id=hhrRboi5kOcC&pg=PA223 |access-date=18 November 2012 |year=2003 |publisher=Mittal Publications |isbn=978-8170999133 |page=223}}</ref> ಮತ್ತು ಅದರ ಪೂರ್ವಕ್ಕೆ ಹರಿಯುವ 3 ನದಿಗಳು ಈ ಪ್ರದೇಶದಲ್ಲಿ ಹುಟ್ಟುತ್ತವೆ.<ref name="Darpan2006">{{cite book |author=Pratiyogita Darpan |title=Pratiyogita Darpan |url=https://books.google.com/books?id=QegDAAAAMBAJ&pg=PT72 |access-date=18 November 2012 |date=September 2006 |publisher=Pratiyogita Darpan |page=72}}</ref><ref name="India2008">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA11 |access-date=18 November 2012 |year=2008 |publisher=Sura Books |isbn=978-8174781642 |page=11}}</ref> ಪಶ್ಚಿಮ ಘಟ್ಟಗಳು [[ಪಾಲಕ್ಕಾಡ್]] ಬಳಿ ಮಾತ್ರ ಅಡ್ಡಿಪಡಿಸುವ ಪರ್ವತಗಳ ಗೋಡೆಯನ್ನು ರೂಪಿಸುತ್ತವೆ; ಆದ್ದರಿಂದ ಪಾಲ್''ಘಾಟ್'' ಎಂದೂ ಕರೆಯಲ್ಪಡುತ್ತದೆ, ಅಲ್ಲಿ [[ಪಾಲಕ್ಕಾಡ್ ಅಂತರ]]ವು ಮುರಿಯುತ್ತದೆ.<ref>{{cite web |last1=Chandran Nair |first1=Dr.S.Sathis |title=India – Silent Valley Rainforest Under Threat Once More |url=https://www.rainforestinfo.org.au/wrr2004/silentvalley.htm |website=rainforestinfo.org.au |access-date=12 November 2015 |archive-date=24 September 2015 |archive-url=https://web.archive.org/web/20150924084520/http://www.rainforestinfo.org.au/wrr2004/silentvalley.htm |url-status=live }}</ref> ಪಶ್ಚಿಮ ಘಟ್ಟಗಳು ಸರಾಸರಿ {{convert|1500|m|ft|lk=out|abbr=off}} [[ಸಮುದ್ರ ಮಟ್ಟ]]ದವರೆಗೆ ಏರುತ್ತವೆ,<ref name="Biju2006">{{cite book |author=M.R. Biju |title=Sustainable Dimensions Of Tourism Management |url=https://books.google.com/books?id=AkAdvTbg0dEC&pg=PA63 |access-date=18 November 2012 |year=2006 |publisher=Mittal Publications |isbn=978-8183241298 |page=63}}</ref> ಆದರೆ ಅತಿ ಎತ್ತರದ ಶಿಖರಗಳು ಸುಮಾರು {{convert|2500|m|ft|abbr=off}} ತಲುಪುತ್ತವೆ.<ref name="Hussain">{{cite book |author=Hussain |title=Geography Of India For Civil Ser Exam |url=https://books.google.com/books?id=wUzKCZxvNQoC&pg=SA2-PA9 |access-date=18 November 2012 |publisher=Tata McGraw-Hill Education |isbn=978-0-07-066772-3 |page=2}}</ref> [[ಇಡುಕ್ಕಿ]] ಜಿಲ್ಲೆಯ [[ಅನಮುಡಿ]] ದಕ್ಷಿಣ ಭಾರತದ ಅತಿ ಎತ್ತರದ ಶಿಖರವಾಗಿದ್ದು, {{cvt|2,695|m}} ಎತ್ತರದಲ್ಲಿದೆ.<ref name="gazetteer">{{cite book |last1=Frowde |first1=Henry |url=https://dsal.uchicago.edu/reference/gazetteer/ |title=Imperial Gazetteer of India |date=1908–1909 |publisher=Clarendon Press |edition=New |location=Oxford |access-date=2 December 2020 |archive-url=https://web.archive.org/web/20081216124143/http://dsal.uchicago.edu/reference/gazetteer/ |archive-date=16 December 2008 |url-status=live}}</ref> ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯು ವಿಶ್ವದ ಎಂಟು "ಅತ್ಯಂತ ಬಿಸಿಯಾದ ಜೈವಿಕ ವೈವಿಧ್ಯತೆಯ ಹಾಟ್ಸ್ಪಾಟ್ಗಳಲ್ಲಿ" ಒಂದಾಗಿ ಗುರುತಿಸಲ್ಪಟ್ಟಿದೆ ಮತ್ತು [[UNESCO]] [[ವಿಶ್ವ ಪರಂಪರೆಯ ತಾಣ]]ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.<ref name="UNESCO">{{cite news |url=https://timesofindia.indiatimes.com/home/environment/flora-fauna/UN-designates-Western-Ghats-as-world-heritage-site/articleshow/14595602.cms |archive-url=https://web.archive.org/web/20130131192257/https://articles.timesofindia.indiatimes.com/2012-07-02/flora-fauna/32507340_1_world-heritage-list-western-ghats-border-town |url-status=live |archive-date=31 January 2013 |title=UN designates Western Ghats as world heritage site |date=2 July 2012 |newspaper=[[The Times of India]] |access-date=27 November 2018}}</ref> ಈ ಶ್ರೇಣಿಯ ಕಾಡುಗಳು ಹಿಮಾಲಯ ಪರ್ವತಗಳಿಗಿಂತ ಹಳೆಯದು ಎಂದು ಪರಿಗಣಿಸಲಾಗಿದೆ.<ref name="UNESCO" /> ಪಶ್ಚಿಮ ಘಟ್ಟಗಳ ಹಿನ್ನೆಲೆಯಲ್ಲಿ ನೆಲೆಗೊಂಡಿರುವ [[ಅತಿರಪ್ಪಿಲ್ಲಿ ಜಲಪಾತ]]ವನ್ನು ''ಭಾರತದ [[ನಯಾಗರ ಜಲಪಾತ|ನಯಾಗರ]]'' ಎಂದೂ ಕರೆಯಲಾಗುತ್ತದೆ.<ref name="Athirappilly">{{cite news |url=https://articles.timesofindia.indiatimes.com/2013-05-30/travel/33064279_1_palm-trees-trek-coconut-trees |title=The Times of India: Latest News India, World & Business News, Cricket & Sports, Bollywood |access-date=2 July 2013 |archive-url=https://web.archive.org/web/20130621233624/https://articles.timesofindia.indiatimes.com/2013-05-30/travel/33064279_1_palm-trees-trek-coconut-trees |archive-date=21 June 2013 |work=[[The Times of India]] |url-status=dead}}</ref> ಇದು [[ಚಾಲಕ್ಕುಡಿ ನದಿ]]ಯಲ್ಲಿದೆ ಮತ್ತು ರಾಜ್ಯದ ಅತಿ ದೊಡ್ಡ ಜಲಪಾತವಾಗಿದೆ.<ref name="Athirappilly" /> [[ವಯನಾಡು]] ಕೇರಳದ ಏಕೈಕ [[ಪ್ರಸ್ಥಭೂಮಿ]]ಯಾಗಿದೆ.<ref>{{cite book |author=William Logan |year=1887 |title=Malabar Manual (Volume-II) |publisher=Madras Government Press |url=https://archive.org/details/malabar_manual_volume2/mode/2up}}</ref> [[ವಯನಾಡು ಜಿಲ್ಲೆ|ವಯನಾಡು]], [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ([[ನಿಲಂಬೂರು|ನಿಲಂಬೂರಿನ]] [[ಚಾಲಿಯಾರ್]] ಕಣಿವೆ), ಮತ್ತು [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] ([[ಅಟ್ಟಪ್ಪಾಡಿ]] ಕಣಿವೆ) ಜಿಲ್ಲೆಗಳಲ್ಲಿನ ಪೂರ್ವ ಪ್ರದೇಶಗಳು, ಒಟ್ಟಾಗಿ [[ನೀಲಗಿರಿ ಜೀವಗೋಳ ಮೀಸಲು]] ಮತ್ತು [[ಮೈಸೂರು ಪ್ರಸ್ಥಭೂಮಿ]]ಯ ಮುಂದುವರಿಕೆಯ ಭಾಗಗಳಾಗಿವೆ, ಇವು ನೈಸರ್ಗಿಕ [[ಚಿನ್ನ]]ದ ಹೊಲಗಳಿಗೆ ಹೆಸರುವಾಸಿಯಾಗಿದೆ, ಜೊತೆಗೆ [[ಕರ್ನಾಟಕ]]ದ ಪಕ್ಕದ ಜಿಲ್ಲೆಗಳು.<ref>{{Cite web |url=https://dmg.kerala.gov.in/mineral-resources/ |title=Mineral Resources |website=Department of Mining and Geology – Government of Kerala |access-date=4 April 2022 |archive-date=13 May 2022 |archive-url=https://web.archive.org/web/20220513124121/https://dmg.kerala.gov.in/mineral-resources/ |url-status=live }}</ref> [[ಇಲ್ಮೆನೈಟ್]], [[ಮೊನಾಜೈಟ್]], [[ಥೋರಿಯಮ್]], ಮತ್ತು [[ಟೈಟಾನಿಯಮ್]] ಸೇರಿದಂತೆ ಖನಿಜಗಳು ಕೇರಳದ ಕರಾವಳಿ ಪಟ್ಟಿಯಲ್ಲಿ ಕಂಡುಬರುತ್ತವೆ.{{sfn|Chandran|2018|p=343}} ಕೇರಳದ [[ಕರುನಾಗಪ್ಪಳ್ಳಿ]] ಕರಾವಳಿ ಪಟ್ಟಿಯು [[ಥೋರಿಯಮ್]]-ಹೊಂದಿರುವ [[ಮೊನಾಜೈಟ್]] ಮರಳಿನಿಂದ ಹೆಚ್ಚಿನ ಹಿನ್ನೆಲೆ ವಿಕಿರಣಕ್ಕೆ ಹೆಸರುವಾಸಿಯಾಗಿದೆ. ಕೆಲವು ಕರಾವಳಿ ಪಂಚಾಯತ್ಗಳಲ್ಲಿ, ಸರಾಸರಿ ಹೊರಾಂಗಣ ವಿಕಿರಣ ಮಟ್ಟಗಳು 4 [[ಗ್ರೇ (ಘಟಕ)#ದೇಹದ ಮೇಲಿನ ಪರಿಣಾಮ|mGy/yr]] ಗಿಂತ ಹೆಚ್ಚು ಮತ್ತು ಕರಾವಳಿಯ ಕೆಲವು ಸ್ಥಳಗಳಲ್ಲಿ, ಇದು 70 mGy/yr ನಷ್ಟು ಹೆಚ್ಚಾಗಿದೆ.<ref>{{Cite news |vauthors=Nair RR, Rajan B, Akiba S, Jayalekshmi P, Nair MK, Gangadharan P, Koga T, Morishima H, Nakamura S, Sugahara T |title=Background radiation and cancer incidence in Kerala, India-Karanagappally cohort study. |publisher=Health Physics |date=January 2009 |pmid=19066487}}</ref>
ಕೇರಳದ ಪಶ್ಚಿಮ ಕರಾವಳಿ ಪಟ್ಟಿಯು ಪೂರ್ವ ಪ್ರದೇಶಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಸಮತಟ್ಟಾಗಿದೆ,<ref name="ChattopadhyayFranke2006" />{{rp|33}} ಮತ್ತು ಅಂತರ್ಸಂಪರ್ಕಿತ [[ಉಪ್ಪುನೀರಿನ]] ಕಾಲುವೆಗಳು, ಸರೋವರಗಳು, [[ಅಳಿವೆ]]ಗಳು,<ref name="Moss2010">{{cite book |author=Danny Moss |title=Public Relations Cases: International Perspectives |url=https://books.google.com/books?id=s0-CJ3djEdEC&pg=PA41 |access-date=18 November 2012 |year=2010 |publisher=Taylor & Francis |isbn=978-0-415-77336-2 |page=41}}</ref> ಮತ್ತು [[ಕೇರಳ ಬ್ಯಾಕ್ವಾಟರ್ಗಳು]] ಎಂದು ಕರೆಯಲ್ಪಡುವ ನದಿಗಳ ಜಾಲದಿಂದ ಕೂಡಿದೆ.<ref name="Thorpe2012">{{cite book |author=Edgar Thorpe |title=The Pearson CSAT Manual 2012 |url=https://books.google.com/books?id=1cruroSVFoUC&pg=RA3-PA38 |access-date=18 November 2012 |year=2012 |publisher=Pearson Education India |isbn=978-8131767344 |page=3}}</ref> ''ಕೇರಳದ ಅಕ್ಕಿಯ ಬಟ್ಟಲು'' ಎಂದೂ ಕರೆಯಲ್ಪಡುವ [[ಕುಟ್ಟನಾಡು]] ಭಾರತದಲ್ಲಿ [[ಭಾರತದ ತೀವ್ರ ಬಿಂದುಗಳ ಪಟ್ಟಿ#ಎತ್ತರಗಳು|ಅತ್ಯಂತ ಕಡಿಮೆ ಎತ್ತರವನ್ನು]] ಹೊಂದಿದೆ, ಮತ್ತು ಇದು ಸಮುದ್ರ ಮಟ್ಟಕ್ಕಿಂತ ಕೆಳಗೆ ಬೇಸಾಯ ನಡೆಯುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿದೆ.<ref>{{Cite news |title=Kerala Boat Ferries Lone Passenger To Help Her Take Exam |url=https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |last=Press Trust of India |date=1 June 2020 |access-date=17 November 2020 |work=NDTV |archive-date=16 November 2021 |archive-url=https://web.archive.org/web/20211116093316/https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |url-status=live }}</ref><ref>{{Cite web |url=https://www.hindu.com/mag/2003/07/13/stories/2003071300600200.htm |title=Thirst below sea level |last=Suchitra |first=M |date=13 August 2003 |work=[[The Hindu]] |access-date=17 November 2020 |archive-url=https://web.archive.org/web/20190922101804/https://www.thehindu.com/todays-paper/tp-features/tp-sundaymagazine/thirst-below-sea-level/article28523147.ece |archive-date=22 September 2019}}</ref> ದೇಶದ ಅತಿ ಉದ್ದದ ಸರೋವರ [[ವೇಂಬನಾಡು ಸರೋವರ|ವೇಂಬನಾಡು]] ಬ್ಯಾಕ್ವಾಟರ್ಗಳಲ್ಲಿ ಪ್ರಾಬಲ್ಯ ಹೊಂದಿದೆ; ಇದು [[ಆಲಪ್ಪುಳ]] ಮತ್ತು [[ಕೊಚ್ಚಿ]] ನಡುವೆ ಇದೆ ಮತ್ತು ಸುಮಾರು {{cvt|200|km2|sqmi}} ಪ್ರದೇಶದಲ್ಲಿದೆ.<ref name="Husain">{{cite book |author=Majid Husain |title=Understanding: Geographical: Map Entries: for Civil Services Examinations: Second Edition |url=https://books.google.com/books?id=_9VGKfQ-sQsC&pg=RA9-PT18 |access-date=18 November 2012 |publisher=Tata McGraw-Hill Education |isbn=978-0-07-070288-2 |page=9 |year=2011}}</ref> ಭಾರತದ ಸುಮಾರು ಎಂಟು ಪ್ರತಿಶತದಷ್ಟು ಜಲಮಾರ್ಗಗಳು ಕೇರಳದಲ್ಲಿ ಕಂಡುಬರುತ್ತವೆ.<ref name="IWAI_2005">{{Cite journal |author=Inland Waterways Authority of India (IWAI—Ministry of Shipping) |year=2005 |title=Introduction to Inland Water Transport |journal=IWAI (Ministry of Shipping) |url=https://iwai.nic.in/Introduction.html |archive-url=https://archive.today/20050204175110/http://iwai.nic.in/Introduction.html |url-status=dead |archive-date=4 February 2005 |access-date=19 January 2006}}</ref> ಕೇರಳದ [[ಕೇರಳದ ನದಿಗಳ ಪಟ್ಟಿ|44 ನದಿಗಳು]] [[ಪೆರಿಯಾರ್ ನದಿ|ಪೆರಿಯಾರ್]]; {{convert|244|km|mi|0}}, [[ಭಾರತಪುಳ]]; {{convert|209|km|mi|0}}, [[ಪಂಬಾ ನದಿ|ಪಂಬಾ]]; {{convert|176|km|mi|0}}, [[ಚಾಲಿಯಾರ್ ನದಿ|ಚಾಲಿಯಾರ್]]; {{convert|169|km|mi|0}}, [[ಕಡಲುಂಡಿಪುಳ ನದಿ|ಕಡಲುಂಡಿಪುಳ]]; {{convert|130|km|mi|0}}, [[ಚಾಲಕ್ಕುಡಿ ನದಿ|ಚಾಲಕ್ಕುಡಿಪುಳ]]; {{convert|130|km|mi|0}}, [[ವಲಪಟ್ಟಣಂ ನದಿ|ವಲಪಟ್ಟಣಂ]]; {{convert|129|km|mi|0}} ಮತ್ತು [[ಅಚನ್ಕೋವಿಲ್ ನದಿ]]; {{convert|128|km|mi|0}}. ನದಿಗಳ ಸರಾಸರಿ ಉದ್ದ {{convert|64|km|mi|0}}. ಅನೇಕ ನದಿಗಳು ಚಿಕ್ಕದಾಗಿರುತ್ತವೆ ಮತ್ತು ಸಂಪೂರ್ಣವಾಗಿ ಮಳೆಗಾಲದ ಮಳೆಯಿಂದ ಪೋಷಿಸಲ್ಪಡುತ್ತವೆ.<ref name=riverreport>{{cite book |last=India. |first=Planning Commission |title=Kerala Development Report |year=2008 |publisher=Academic Foundation |isbn=978-8171885947 |page=224 |url=https://books.google.com/books?isbn=8171885942}}</ref> ಕೇರಳದ ನದಿಗಳು ಚಿಕ್ಕದಾಗಿರುವುದರಿಂದ ಮತ್ತು [[ನದೀಮುಖಜ ಭೂಮಿ|ಮುಖಜ ಭೂಮಿಯ]] ಕೊರತೆಯಿಂದಾಗಿ, ಅವು ಪರಿಸರ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತವೆ. ನದಿಗಳು ಮರಳು ಗಣಿಗಾರಿಕೆ ಮತ್ತು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತವೆ.<ref name="Padmalal">{{cite journal | url=https://doi.org/10.1007/s00254-007-0870-z | doi=10.1007/s00254-007-0870-z | title=Environmental effects of river sand mining: A case from the river catchments of Vembanad lake, Southwest coast of India | year=2008 | last1=Padmalal | first1=D. | last2=Maya | first2=K. | last3=Sreebha | first3=S. | last4=Sreeja | first4=R. | journal=Environmental Geology | volume=54 | issue=4 | pages=879–889 | bibcode=2008EnGeo..54..879P | s2cid=129312081 | access-date=12 February 2020 | archive-date=25 November 2023 | archive-url=https://web.archive.org/web/20231125191757/https://link.springer.com/article/10.1007/s00254-007-0870-z | url-status=live | issn = 0943-0105 | url-access=subscription }}</ref> ರಾಜ್ಯವು ಭೂಕುಸಿತ, ಪ್ರವಾಹ ಮತ್ತು ಬರಗಾಲದಂತಹ ಹಲವಾರು ನೈಸರ್ಗಿಕ ಅಪಾಯಗಳನ್ನು ಅನುಭವಿಸುತ್ತದೆ. 2004 ರ [[2004 ರ ಹಿಂದೂ ಮಹಾಸಾಗರದ ಭೂಕಂಪ ಮತ್ತು ಸುನಾಮಿ|ಹಿಂದೂ ಮಹಾಸಾಗರದ ಸುನಾಮಿ]] ಯಿಂದ ರಾಜ್ಯವು ಸಹ ಪರಿಣಾಮ ಬೀರಿತು,<ref name="Jha2010">{{cite book |author=M.K. Jha |title=Natural and Anthropogenic Disasters: Vulnerability, Preparedness and Mitigation |url=https://books.google.com/books?id=fICXQSPJwx8C&pg=PA81 |access-date=18 November 2012 |year=2010 |publisher=Springer |isbn=978-9048124978 |page=81}}</ref> ಮತ್ತು 2018 ರಲ್ಲಿ ಸುಮಾರು ಒಂದು ಶತಮಾನದಲ್ಲಿ [[2018 ಕೇರಳ ಪ್ರವಾಹ|ಕೆಟ್ಟ ಪ್ರವಾಹವನ್ನು]] ಅನುಭವಿಸಿತು.<ref>{{Cite news |url=https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |title=Worst floods in nearly a century kill 44 in India's Kerala state amid torrential monsoon rains |last=Baynes |first=Chris |date=15 August 2018 |work=The Independent |access-date=16 August 2018 |archive-date=23 May 2019 |archive-url=https://web.archive.org/web/20190523232643/https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |url-status=live }}</ref> 2024 ರಲ್ಲಿ, ಕೇರಳವು ತನ್ನ ಇತಿಹಾಸದಲ್ಲಿ [[2024 ವಯನಾಡು ಭೂಕುಸಿತ|ಕೆಟ್ಟ ಭೂಕುಸಿತಗಳನ್ನು]] ಅನುಭವಿಸಿತು.<ref>{{Cite news |url=https://www.onmanorama.com/news/kerala/2024/07/30/wayand-landslide-kerala-rain-live.html |title=Wayanad landslides: 133 dead, 481 saved, at least 98 missing |date=30 July 2024 |work=[[Onmanorama]] |access-date=31 July 2024 |archive-date=30 July 2024|archive-url=https://web.archive.org/web/20240730073647/https://www.onmanorama.com/news/kerala/2024/07/30/wayand-landslide-kerala-rain-live.html |url-status=live }}</ref>
=== ಹವಾಮಾನ ===
ವರ್ಷಕ್ಕೆ ಸುಮಾರು 120–140 ಮಳೆಯ ದಿನಗಳೊಂದಿಗೆ,<ref name="Chacko_2002">{{Cite journal |last1=Chacko |first1=T. |last2=Renuka |first2=G. |year=2002 |title=Temperature mapping, thermal diffusivity and subsoil heat flux at Kariavattom, Kerala |journal=Proc Indian Acad Sci (Earth Planet Sci) |volume=111 |issue=1 |pages=79 |title-link=Kariavattom |bibcode=2002InEPS.111...79T |doi=10.1007/BF02702224 |doi-access=free}}</ref>{{rp|80}} ಕೇರಳವು [[ನೈಋತ್ಯ ಮಾನ್ಸೂನ್|ನೈಋತ್ಯ ಬೇಸಿಗೆ ಮಾನ್ಸೂನ್]] ಮತ್ತು [[ಈಶಾನ್ಯ ಮಾನ್ಸೂನ್|ಈಶಾನ್ಯ ಚಳಿಗಾಲದ ಮಾನ್ಸೂನ್]] ನ ಕಾಲಿಕ ಭಾರೀ ಮಳೆಯಿಂದ ಪ್ರಭಾವಿತವಾದ ಆರ್ದ್ರ ಮತ್ತು ಸಮುದ್ರಯಾನ ಉಷ್ಣವಲಯದ ಹವಾಮಾನವನ್ನು ಹೊಂದಿದೆ.<ref name="Devrep">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=223 |access-date=30 May 2015}}</ref> ಸುಮಾರು 65% ಮಳೆಯು ಜೂನ್ ನಿಂದ ಆಗಸ್ಟ್ ವರೆಗೆ ನೈಋತ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ, ಮತ್ತು ಉಳಿದವು ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಈಶಾನ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ.<ref name="Devrep" /> ನೈಋತ್ಯ ಮಾನ್ಸೂನ್ನ ತೇವಾಂಶ-ಹೊತ್ತ ಗಾಳಿಗಳು, [[ಭಾರತೀಯ ಪರ್ಯಾಯ ದ್ವೀಪ]]ದ ಅತ್ಯಂತ ದಕ್ಷಿಣದ ಬಿಂದುವನ್ನು ತಲುಪಿದಾಗ, ಅದರ ಸ್ಥಳಾಕೃತಿಯ ಕಾರಣದಿಂದಾಗಿ, ಎರಡು ಶಾಖೆಗಳಾಗಿ ವಿಭಜನೆಯಾಗುತ್ತವೆ; "ಅರೇಬಿಯನ್ ಸಮುದ್ರ ಶಾಖೆ" ಮತ್ತು "ಬಂಗಾಳ ಕೊಲ್ಲಿಯ ಶಾಖೆ".<ref name="Jain">{{cite book |author=RK Jain |title=Geography 10 |url=https://books.google.com/books?id=7hOybWJeZN0C&pg=PA110 |access-date=18 November 2012 |publisher=Ratna Sagar |isbn=978-8183320818 |page=110}}</ref> ನೈಋತ್ಯ ಮಾನ್ಸೂನ್ನ "ಅರೇಬಿಯನ್ ಸಮುದ್ರ ಶಾಖೆ" ಮೊದಲು ಪಶ್ಚಿಮ ಘಟ್ಟಗಳಿಗೆ ಬಡಿಯುತ್ತದೆ,<ref name="Together with Social Science Term II">{{cite book |title=Together with Social Science Term II |url=https://books.google.com/books?id=oOA1nsSU8JYC&pg=PA112 |access-date=18 November 2012 |publisher=Rachna Sagar |isbn=978-8181373991 |page=112}}</ref> ನೈಋತ್ಯ ಮಾನ್ಸೂನ್ನಿಂದ ಮಳೆಯನ್ನು ಪಡೆಯುವ ಭಾರತದ ಮೊದಲ ರಾಜ್ಯವಾಗಿ ಕೇರಳವನ್ನು ಮಾಡುತ್ತದೆ.<ref name="google6">{{cite book |author1=Edgar Thorpe, Showick Thorpe |author2=Thorpe Edgar |title=The Pearson CSAT Manual 2011 |url=https://books.google.com/books?id=WuBFs6yFRwcC&pg=SL7-PA168 |access-date=18 November 2012 |publisher=Pearson Education India |isbn=978-8131758304 |page=7}}</ref><ref name="Aggarwal">{{cite book |author1=N.N. Kher |author2=Jaideep Aggarwal |title=A Text Book of Social Sciences |url=https://books.google.com/books?id=jV6k0FvIC4sC&pg=RA5-PA16 |access-date=18 November 2012 |publisher=Pitambar Publishing |isbn=978-8120914667 |page=5}}</ref> ಈಶಾನ್ಯ ಮಾನ್ಸೂನ್ನಲ್ಲಿ ಒತ್ತಡದ ಮಾದರಿಗಳ ವಿತರಣೆಯು ಹಿಮ್ಮುಖವಾಗುತ್ತದೆ, ಈ ಋತುವಿನಲ್ಲಿ ಉತ್ತರ ಭಾರತದಿಂದ ತಣ್ಣನೆಯ ಗಾಳಿಗಳು ಬಂಗಾಳ ಕೊಲ್ಲಿಯಿಂದ ತೇವಾಂಶವನ್ನು ಪಡೆದುಕೊಳ್ಳುತ್ತವೆ ಮತ್ತು ಪರ್ಯಾಯ ದ್ವೀಪ ಭಾರತದ ಪೂರ್ವ ಕರಾವಳಿಯಲ್ಲಿ ಅದನ್ನು ಮಳೆಯಾಗಿ ಸುರಿಸುತ್ತವೆ.<ref name="google7">{{cite book |author1=Sarina Singh |author2=Amy Karafin |author3=Anirban Mahapatra |title=South India |url=https://books.google.com/books?id=8KnLFpjEHpUC&pg=PA15 |access-date=18 November 2012 |year=2009 |publisher=Lonely Planet |isbn=978-1-74179-155-6 |page=15}}</ref><ref name="Reddy">{{cite book |author=S.V. Jeevananda Reddy |title=Climate Change: Myths and Realities |url=https://books.google.com/books?id=y_GMTXRtxJ8C&pg=PA71 |access-date=18 November 2012 |publisher=Jeevananda Reddy |page=71 |id=GGKEY:WDFHBL1XHK3}}</ref> ಕೇರಳದಲ್ಲಿ, ಈಶಾನ್ಯ ಮಾನ್ಸೂನ್ನ ಪ್ರಭಾವವು ದಕ್ಷಿಣ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುತ್ತದೆ.<ref>{{Cite book |author=Rao |title=Agricultural Meteorology |url=https://books.google.com/books?id=Kd-3lt-yAtAC&pg=PA173 |publisher=PHI Learning |year=2008 |isbn=978-8120333383 |pages=173–74 |access-date=30 May 2015}}</ref> ಕೇರಳದ ಮಳೆಯು ವಾರ್ಷಿಕವಾಗಿ ಸರಾಸರಿ 2,923 mm (115 in) ಆಗಿದೆ.<ref name="IMD">{{cite web |url=https://www.imd.gov.in/section/hydro/dynamic/rfmaps/updated.html |title=Hydromet Division Updated/Real Time Maps |publisher=[[India Meteorological Department]] |access-date=21 October 2014 |archive-url=https://web.archive.org/web/20160305062728/https://www.imd.gov.in/section/hydro/dynamic/rfmaps/updated.html |archive-date=5 March 2016 |url-status=dead}}</ref> ಕೇರಳದ ಕೆಲವು ಶುಷ್ಕ ತಗ್ಗು ಪ್ರದೇಶಗಳು ಸರಾಸರಿ ಕೇವಲ 1,250 mm (49 in) ಪಡೆಯುತ್ತವೆ; ಪೂರ್ವ [[ಇಡುಕ್ಕಿ ಜಿಲ್ಲೆ]]ಯ ಪರ್ವತಗಳು 5,000 mm (197 in) ಗಿಂತ ಹೆಚ್ಚು [[ಮಳೆ (ಹವಾಮಾನಶಾಸ್ತ್ರ)#ಶಿಲಾವೃಷ್ಟಿ ಮಳೆ|ಶಿಲಾವೃಷ್ಟಿ ಮಳೆಯನ್ನು]] ಪಡೆಯುತ್ತವೆ: ರಾಜ್ಯದಲ್ಲಿ ಅತಿ ಹೆಚ್ಚು. ಪೂರ್ವ ಕೇರಳದಲ್ಲಿ, ಶುಷ್ಕ ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಹವಾಮಾನವು ಪ್ರಚಲಿತವಾಗಿದೆ. ಬೇಸಿಗೆಯಲ್ಲಿ, ರಾಜ್ಯವು ಭಾರಿ ಗಾಳಿ, ಸುಂಟರಗಾಳಿ, ಚಂಡಮಾರುತ-ಸಂಬಂಧಿತ ಧಾರಾಕಾರ ಮಳೆ, ಸಾಂದರ್ಭಿಕ ಬರಗಾಲ ಮತ್ತು ಸಮುದ್ರ ಮಟ್ಟದ ಏರಿಕೆಗೆ ಒಳಗಾಗುತ್ತದೆ.<ref name="Brenkert_Malone_2003">{{Cite journal |last1=Brenkert |first1=A. |last2=Malone |first2=E. |year=2003 |title=Vulnerability and resilience of India and Indian states to climate change: a first-order approximation |journal=Joint Global Change Research Institute}}</ref>{{rp|26, 46, 52}} ಸರಾಸರಿ ದೈನಂದಿನ ತಾಪಮಾನವು 19.8 °C ನಿಂದ 36.7 °C ವರೆಗೆ ಇರುತ್ತದೆ.<ref name="moef">{{cite web |last=Sudha |first=T. M. |title=Opportunities in participatory planning to Evolve a Landuse Policy for Western Ghats Region in Kerala |url=https://moef.nic.in/downloads/public-information/tenth/Annexure%203.pdf |publisher=Department of Town and Country Planning, Kerala |page=14 |access-date=18 January 2015 |archive-url=https://web.archive.org/web/20160325095604/https://www.moef.nic.in/downloads/public-information/tenth/Annexure%203.pdf |archive-date=25 March 2016 |url-status=dead}}</ref> ವಾರ್ಷಿಕ ಸರಾಸರಿ ತಾಪಮಾನವು ಕರಾವಳಿ ತಗ್ಗು ಪ್ರದೇಶಗಳಲ್ಲಿ 25.0 ರಿಂದ 27.5 °C ವರೆಗೆ ಮತ್ತು ಪೂರ್ವ ಎತ್ತರದ ಪ್ರದೇಶಗಳಲ್ಲಿ 20.0–22.5 °C ವರೆಗೆ ಇರುತ್ತದೆ.<ref name="Brenkert_Malone_2003" />{{rp|65}}
=== ಸಸ್ಯ ಮತ್ತು ಪ್ರಾಣಿ ===
{{Main|ಕೇರಳದ ಸಸ್ಯ ಮತ್ತು ಪ್ರಾಣಿ}}
{{Multiple image
| direction = vertical
| width = 220
| image1 = Ichthyaetus ichthyaetus Kadalundi.jpg
| caption1 = [[ಕಡಲುಂಡಿ ಪಕ್ಷಿ ಅಭಯಾರಣ್ಯ|ಕಡಲುಂಡಿ ಪಕ್ಷಿ ಅಭಯಾರಣ್ಯದಲ್ಲಿ]] ಒಂದು ವಲಸೆ ''[[ಇಚ್ಥ್ಯಾಏಟಸ್]]''
| image2 = Highland Grassland Shola of Silent Valley National Park.jpg
| caption2 = [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]]
| image3 = Munnarhills.jpg
| caption3 = [[ಏಲಕ್ಕಿ ಬೆಟ್ಟಗಳು]] ತಮ್ಮ [[ಜೈವಿಕ ವೈವಿಧ್ಯತೆ]]ಗೆ ಹೆಸರುವಾಸಿಯಾಗಿದೆ
}}
ಹೆಚ್ಚಿನ [[ಜೈವಿಕ ವೈವಿಧ್ಯತೆ]]ಯು [[ಪಶ್ಚಿಮ ಘಟ್ಟಗಳಲ್ಲಿ]] ಕೇಂದ್ರೀಕೃತವಾಗಿದೆ ಮತ್ತು ರಕ್ಷಿಸಲ್ಪಟ್ಟಿದೆ. 18 ನೇ ಶತಮಾನದವರೆಗೆ ಕೇರಳದ ಮೂರು-ನಾಲ್ಕು ಭಾಗದಷ್ಟು ಭೂ ಪ್ರದೇಶವು ದಟ್ಟವಾದ ಅರಣ್ಯದ ಅಡಿಯಲ್ಲಿತ್ತು.<ref name="History">{{cite web |url=https://www.forest.kerala.gov.in/index.php?option=com_content&view=article&id=46&Itemid=2 |title=History |access-date=12 August 2015 |publisher=Kerala forests and wildlife department |archive-date=12 September 2015 |archive-url=https://web.archive.org/web/20150912231001/http://www.forest.kerala.gov.in/index.php?option=com_content&view=article&id=46&Itemid=2 |url-status=dead }}</ref> {{As of|2004}}, ಭಾರತದ 15,000 ಸಸ್ಯ ಪ್ರಭೇದಗಳಲ್ಲಿ 25% ಕ್ಕಿಂತ ಹೆಚ್ಚು ಕೇರಳದಲ್ಲಿವೆ. 4,000 [[ಹೂಬಿಡುವ ಸಸ್ಯ]] ಪ್ರಭೇದಗಳಲ್ಲಿ; ಅವುಗಳಲ್ಲಿ 1,272 [[ಸ್ಥಳೀಯ (ಪರಿಸರ ವಿಜ್ಞಾನ)|ಕೇರಳಕ್ಕೆ ಸ್ಥಳೀಯವಾಗಿವೆ]], 900 [[ಸಸ್ಯವೈದ್ಯ|ಔಷಧೀಯವಾಗಿವೆ]], ಮತ್ತು 159 [[ಅಳಿವಿನಂಚಿನಲ್ಲಿರುವ ಪ್ರಭೇದಗಳು|ಬೆದರಿಕೆಗೆ ಒಳಗಾಗಿವೆ]].<ref name="Sreedharan_2004">{{Cite journal |author=Sreedharan TP |year=2004 |title=Biological Diversity of Kerala: A survey of Kalliasseri panchayat, Kannur district |journal=Centre for Development Studies |url=https://krpcds.org/publication/downloads/62.pdf |archive-url=https://web.archive.org/web/20090326054155/https://krpcds.org/publication/downloads/62.pdf |archive-date=26 March 2009 |access-date=28 December 2008}}</ref>{{rp|11}} ಇದರ {{cvt|9,400|km2}} ಕಾಡುಗಳು ಉಷ್ಣವಲಯದ ಆರ್ದ್ರ ನಿತ್ಯಹಸಿರು ಮತ್ತು ಅರೆ-ನಿತ್ಯಹಸಿರು ಕಾಡುಗಳು (ಕೆಳ ಮತ್ತು ಮಧ್ಯಮ ಎತ್ತರಗಳು—3,470 km<sup>2</sup>), ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಪತನಶೀಲ ಕಾಡುಗಳು (ಮಧ್ಯಮ ಎತ್ತರಗಳು—4,100 km<sup>2</sup> ಮತ್ತು {{cvt|100|km2}}, ಕ್ರಮವಾಗಿ), ಮತ್ತು ಪರ್ವತ ಉಪೋಷ್ಣವಲಯ ಮತ್ತು [[ಸಮಶೀತೋಷ್ಣ]] (''ಶೋಲ'') ಕಾಡುಗಳು (ಅತಿ ಎತ್ತರದ ಎತ್ತರಗಳು—100 km<sup>2</sup>) ಒಳಗೊಂಡಿವೆ. ಒಟ್ಟಾರೆಯಾಗಿ, ಕೇರಳದ 24% ಅರಣ್ಯವಾಗಿದೆ.<ref name="Sreedharan_2004" />{{rp|12}} ವಿಶ್ವದ [[ರಾಮ್ಸರ್ ಒಪ್ಪಂದ]]ದಲ್ಲಿ ಪಟ್ಟಿ ಮಾಡಲಾದ ನಾಲ್ಕು [[ಜವುಗು ಪ್ರದೇಶ]]ಗಳು—[[ಶಾಸ್ತಾಂಕೋಟ್ಟ ಸರೋವರ|ಸರೋವರ ಶಾಸ್ತಾಂಕೋಟ್ಟ]], [[ಅಷ್ಟಮುಡಿ ಸರೋವರ]], [[ತೃಶೂರ್-ಪೊನ್ನಾನಿ ಕೋಲ್ ಜವುಗು ಪ್ರದೇಶಗಳು]], ಮತ್ತು ವೇಂಬನಾಡು-ಕೋಲ್ ಜವುಗು ಪ್ರದೇಶಗಳು—ಕೇರಳದಲ್ಲಿವೆ,{{sfn|Chandran|2018|p=342}} ಜೊತೆಗೆ ವಿಶಾಲವಾದ [[ನೀಲಗಿರಿ ಜೀವಗೋಳ ಮೀಸಲು]]ಯ {{cvt|1455.4|km2}} ಮತ್ತು [[ಅಗಸ್ತ್ಯಮಲೈ ಜೀವಗೋಳ ಮೀಸಲು]]ಯ {{cvt|1828|km2}} ಸೇರಿವೆ.{{sfn|Chandran|2018|p=347}} 20 ನೇ ಶತಮಾನದಲ್ಲಿ ಬೇಸಾಯಕ್ಕಾಗಿ ವ್ಯಾಪಕವಾಗಿ ತೆರವುಗೊಳಿಸಲ್ಪಟ್ಟಿದ್ದು,<ref name="Jayarajan_2004">{{Cite journal |author=Jayarajan M |year=2004 |title=Sacred Groves of North Malabar |journal=Centre for Development Studies |url=https://krpcds.org/publication/downloads/92.pdf |archive-url=https://web.archive.org/web/20090326054142/https://krpcds.org/publication/downloads/92.pdf |archive-date=26 March 2009 |access-date=28 December 2008}}</ref>{{rp|6–7}} ಉಳಿದ ಅರಣ್ಯ ಹೊದಿಕೆಯ ಹೆಚ್ಚಿನ ಭಾಗವನ್ನು ಈಗ [[ಸ್ಪಷ್ಟ ಕಡಿತ]]ದಿಂದ ರಕ್ಷಿಸಲಾಗಿದೆ.<ref name="Evans2008">{{cite book |author=Julian Evans |title=The Forests Handbook, Applying Forest Science for Sustainable Management |url=https://books.google.com/books?id=Ol_CCkYQNKIC&pg=PA235 |access-date=18 November 2012 |year=2008 |publisher=John Wiley & Sons |isbn=978-0-470-75683-6 |page=235}}</ref> ಪೂರ್ವ ಕೇರಳದ ಗಾಳಿಗೆ ಮುಖವಾದ ಪರ್ವತಗಳು [[ಉಷ್ಣವಲಯ ಮತ್ತು ಉಪೋಷ್ಣವಲಯದ ಆರ್ದ್ರ ಪರ್ಣಪಾತಿ ಕಾಡುಗಳು|ಉಷ್ಣವಲಯದ ಆರ್ದ್ರ ಕಾಡುಗಳನ್ನು]] ಮತ್ತು [[ಉಷ್ಣವಲಯ ಮತ್ತು ಉಪೋಷ್ಣವಲಯದ ಶುಷ್ಕ ಪರ್ಣಪಾತಿ ಕಾಡುಗಳು|ಉಷ್ಣವಲಯದ ಶುಷ್ಕ ಕಾಡುಗಳನ್ನು]] ಆಶ್ರಯಿಸುತ್ತವೆ, ಇವು ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿವೆ.<ref name="google8">{{cite book |author1=R. P. Singh |author2=Zubairul Islam |title=Environmental Studies |url=https://books.google.com/books?id=gaQptMlw3X8C&pg=PA172 |access-date=18 November 2012 |publisher=Concept Publishing Company |isbn=978-8180697746 |page=172 |year=2012 |archive-date=25 November 2023 |archive-url=https://web.archive.org/web/20231125191749/https://books.google.com/books?id=gaQptMlw3X8C&pg=PA172#v=onepage&q&f=false |url-status=live }}</ref><ref name="Geer2008">{{cite book |author=Alexandra Anna Enrica van der Geer |title=Animals in Stone: Indian Mammals Sculptured Through Time |url=https://books.google.com/books?id=oQ3quxh9gsgC&pg=PA7 |access-date=18 November 2012 |year=2008 |publisher=Brill |isbn=978-9004168190 |page=7}}</ref> ವಿಶ್ವದ ಅತ್ಯಂತ ಹಳೆಯ ತೇಗದ ತೋಟ 'ಕೊನೊಲ್ಲಿಸ್ ಪ್ಲಾಟ್' [[ನಿಲಂಬೂರು|ನಿಲಂಬೂರಿನಲ್ಲಿದೆ]].<ref>{{Cite web |url=https://www.dnaindia.com/india/report-world-s-oldest-teak-trees-dying-in-kerala-1255723 |title=World's oldest teak trees dying in Kerala |date=13 May 2009 |website=DNA India |access-date=25 November 2020 |archive-date=15 April 2021 |archive-url=https://web.archive.org/web/20210415102931/https://www.dnaindia.com/india/report-world-s-oldest-teak-trees-dying-in-kerala-1255723 |url-status=live }}</ref>
ಕೇರಳದ ಪ್ರಾಣಿಗಳು ಅವುಗಳ ವೈವಿಧ್ಯತೆ ಮತ್ತು ಹೆಚ್ಚಿನ ಸ್ಥಳೀಯತೆಯ ಪ್ರಮಾಣಕ್ಕೆ ಗಮನಾರ್ಹವಾಗಿವೆ: ಇದು 118 [[ಸಸ್ತನಿ]] ಪ್ರಭೇದಗಳನ್ನು (1 ಸ್ಥಳೀಯ), [[ಕೇರಳದ ಪಕ್ಷಿಗಳ ಪಟ್ಟಿ|500 ಪಕ್ಷಿ ಪ್ರಭೇದಗಳು]], 189 ಸಿಹಿನೀರಿನ ಮೀನು ಪ್ರಭೇದಗಳು, 173 [[ಸರೀಸೃಪ]] ಪ್ರಭೇದಗಳು (ಅವುಗಳಲ್ಲಿ 10 ಸ್ಥಳೀಯ), ಮತ್ತು 151 [[ಉಭಯಚರ]] ಪ್ರಭೇದಗಳನ್ನು (36 ಸ್ಥಳೀಯ) ಒಳಗೊಂಡಿದೆ.<ref>{{Cite web |url=https://threatenedtaxa.org/index.php/JoTT/article/view/1999/3443 |archive-url=https://web.archive.org/web/20161007224232/https://threatenedtaxa.org/index.php/JoTT/article/view/1999/3443 |url-status=dead |title=View of A checklist of the vertebrates of Kerala State, India | Journal of Threatened Taxa |archive-date=7 October 2016 |website=threatenedtaxa.org}}</ref> ಇವುಗಳು ವ್ಯಾಪಕವಾದ ಆವಾಸಸ್ಥಾನ ನಾಶ, ಮಣ್ಣಿನ ಸವಕಳಿ, ಭೂಕುಸಿತ, [[ಮಣ್ಣಿನ ಲವಣೀಕರಣ|ಉಪ್ಪಿನಂಶ]], ಮತ್ತು ಸಂಪನ್ಮೂಲ ಹೊರತೆಗೆಯುವಿಕೆಯಿಂದ ಬೆದರಿಕೆಗೆ ಒಳಗಾಗಿವೆ. ಕಾಡುಗಳಲ್ಲಿ, ''ಸೋನೋಕೆಲಿಂಗ್'', ''[[ಡಾಲ್ಬರ್ಗಿಯಾ ಲ್ಯಾಟಿಫೋಲಿಯಾ]]'', ''ಅಂಜಿಲಿ'', ''ಮುಲ್ಲುಮುರಿಕ್ಕು'', ''[[ಎರಿಥ್ರಿನಾ]]'', ಮತ್ತು ''[[ಸಿನ್ನಮೋಮಮ್ ಕ್ಯಾಸಿಯಾ|ಕ್ಯಾಸಿಯಾ]]'' ಕೇರಳದ 1,000 ಕ್ಕೂ ಹೆಚ್ಚು ಮರ ಪ್ರಭೇದಗಳಲ್ಲಿ ಸೇರಿವೆ. ಇತರ ಸಸ್ಯಗಳಲ್ಲಿ [[ಬಿದಿರು]], ಕಾಡು ಕರಿಮೆಣಸು, ಕಾಡು [[ಏಲಕ್ಕಿ]], [[ಕ್ಯಾಲಮಸ್ (ತಾಳೆ)|ಕ್ಯಾಲಮಸ್]] [[ರಟ್ಟನ್]] ತಾಳೆ, ಮತ್ತು ಸುಗಂಧಯುಕ್ತ ವೆಟಿವರ್ ಹುಲ್ಲು, ''ವೆಟಿವೇರಿಯಾ ಝಿಝಾನಿಯಾಯ್ಡ್ಸ್'' ಸೇರಿವೆ.<ref name="Sreedharan_2004" />{{rp|12}} [[ಭಾರತೀಯ ಆನೆ]], [[ಬಂಗಾಳ ಹುಲಿ]], [[ಭಾರತೀಯ ಚಿರತೆ]], [[ನೀಲಗಿರಿ ತಾರ್]], [[ಸಾಮಾನ್ಯ ತಾಳೆ ನರಿ]], ಮತ್ತು [[ಬೂದು ದೈತ್ಯ ಅಳಿಲು]]ಗಳು ಸಹ ಕಾಡುಗಳಲ್ಲಿ ಕಂಡುಬರುತ್ತವೆ.<ref name="Sreedharan_2004" />{{rp|12, 174–75}} ಸರೀಸೃಪಗಳಲ್ಲಿ [[ರಾಜ ನಾಗ]], [[ವೈಪೆರಿಡೆ|ಹಾವು]], [[ಪೈಥಾನ್]], ಮತ್ತು [[ಚಿಪ್ಪು ಮೊಸಳೆ]] ಸೇರಿವೆ. ಕೇರಳದ ಪಕ್ಷಿಗಳಲ್ಲಿ [[ಮಲಬಾರ್ ಟ್ರೋಗನ್]], [[ಮಹಾಶಿಖಿ]], [[ಕೇರಳ ಕುಕ್ಕುರ]], [[ಡಾರ್ಟರ್]] ಮತ್ತು [[ದಕ್ಷಿಣ ಬೆಟ್ಟ ಮೈನಾ]] ಸೇರಿವೆ. ಸರೋವರಗಳು, ಜವುಗು ಪ್ರದೇಶಗಳು ಮತ್ತು ಜಲಮಾರ್ಗಗಳಲ್ಲಿ, [[ಹೆಟೆರೋಪ್ನ್ಯೂಸ್ಟಿಸ್ ಫಾಸಿಲಿಸ್|ಕಾಡು]], [[ರೆಡ್ ಲೈನ್ ಟಾರ್ಪಿಡೋ ಬಾರ್ಬ್]] ಮತ್ತು ''ಚೂಟ್ಟಾಚಿ''; [[ಆರೆಂಜ್ ಕ್ರೋಮೈಡ್]]—''ಎಟ್ರೋಪ್ಲಸ್ ಮ್ಯಾಕುಲಾಟಸ್'' ಮುಂತಾದ ಮೀನುಗಳು ಕಂಡುಬರುತ್ತವೆ.<ref>{{cite book |last1=Institute |first1=Kerala Forest Research |title=Biodiversity Documentation for Kerala: Freshwater fishes |year=2003 |publisher=Kerala Forest Research Institute |isbn=978-8185041544 |url=https://books.google.com/books?id=SYcPAQAAMAAJ&q=fishes+in+kerala |language=en |access-date=18 October 2020 |archive-date=25 November 2023 |archive-url=https://web.archive.org/web/20231125192259/https://books.google.com/books?id=SYcPAQAAMAAJ&q=fishes+in+kerala |url-status=live }}</ref><ref name="Sreedharan_2004" />{{rp|163–65}} ಇತ್ತೀಚೆಗೆ, ಕೇರಳದ ವಡಕರಾ ಕರಾವಳಿಯಿಂದ ಸಂಗ್ರಹಿಸಿದ ಹೊಸದಾಗಿ ವಿವರಿಸಲಾದ ಟಾರ್ಡಿಗ್ರೇಡ್ (ನೀರಿನ ಕರಡಿಗಳು) ಪ್ರಭೇದವನ್ನು ಕೇರಳ ರಾಜ್ಯದ ಹೆಸರಿನಿಂದ ಹೆಸರಿಸಲಾಗಿದೆ; ''[[ಸ್ಟೈಗಾರ್ಕ್ಟಸ್ ಕೇರಳೆನ್ಸಿಸ್]]''.<ref>{{cite journal |last1=Vishnudattan |first1=N. K. |display-authors=etal |title=A new Tardigrade species, Stygarctus keralensis sp. nov. (Arthrotardigrada: Stygarctidae) from the intertidal zone of Southwest coast of India |url=https://www.mapress.com/zt/article/view/42726 |date=15 June 2021 |journal=[[Zootaxa]] |volume=4985 |issue=3 |page=381391 |doi=10.11646/zootaxa.4985.3.5 |pmid=34186802 |s2cid=235688035 |access-date=22 June 2021 |archive-date=27 November 2021 |archive-url=https://web.archive.org/web/20211127214807/https://www.mapress.com/zt/article/view/zootaxa.4985.3.5 |url-status=live |url-access=subscription }}</ref>
== ಪ್ರದೇಶಗಳು, ಜಿಲ್ಲೆಗಳು ಮತ್ತು ನಗರಗಳು ==
{{Main|ಕೇರಳದ ಆಡಳಿತ ವಿಭಾಗಗಳು|ಕೇರಳದ ಜಿಲ್ಲೆಗಳು|ಕೇರಳದ ಆದಾಯ ವಿಭಾಗಗಳ ಪಟ್ಟಿ|ಕೇರಳದ ತಾಲೂಕುಗಳ ಪಟ್ಟಿ|ಕೇರಳದ ನಗರಗಳು ಮತ್ತು ಪಟ್ಟಣಗಳ ಪಟ್ಟಿ}}
{{See also|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಆರು ಪ್ರದೇಶಗಳಾಗಿ ವಿತರಿಸಲಾಗಿದೆ: [[ಉತ್ತರ ಮಲಬಾರ್]] (ದೂರದ-ಉತ್ತರ ಕೇರಳ), [[ದಕ್ಷಿಣ ಮಲಬಾರ್]] (ಉತ್ತರ-ಮಧ್ಯ ಕೇರಳ), [[ಕೊಚ್ಚಿ]] (ಮಧ್ಯ ಕೇರಳ), [[ಉತ್ತರ ತಿರುವಾಂಕೂರು]] (ದಕ್ಷಿಣ-ಮಧ್ಯ ಕೇರಳ), [[ಮಧ್ಯ ತಿರುವಾಂಕೂರು]] (ದಕ್ಷಿಣ ಕೇರಳ) ಮತ್ತು [[ದಕ್ಷಿಣ ತಿರುವಾಂಕೂರು]] (ದೂರದ-ದಕ್ಷಿಣ ಕೇರಳ). ತೆರಿಗೆ ಮತ್ತು ಭೂ ಆದಾಯ ಉದ್ದೇಶಗಳಿಗಾಗಿ ಆಡಳಿತ ಪ್ರದೇಶಗಳಾಗಿ ಕಾರ್ಯನಿರ್ವಹಿಸುವ ಜಿಲ್ಲೆಗಳನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳು|27 ಆದಾಯ ವಿಭಾಗಗಳಾಗಿ]] ಮತ್ತು [[ಕೇರಳದ ತಾಲೂಕುಗಳ ಪಟ್ಟಿ|77 ತಾಲೂಕುಗಳಾಗಿ]] ವಿಂಗಡಿಸಲಾಗಿದೆ, ಇವುಗಳು ತಮ್ಮ ಗಡಿಗಳೊಳಗಿನ ವಸಾಹತುಗಳ ಮೇಲೆ ಆಡಳಿತ ಮತ್ತು ಆರ್ಥಿಕ ಅಧಿಕಾರಗಳನ್ನು ಹೊಂದಿವೆ, ಸ್ಥಳೀಯ ಭೂ ದಾಖಲೆಗಳ ನಿರ್ವಹಣೆ ಸೇರಿದಂತೆ. ಕೇರಳದ ತಾಲೂಕುಗಳನ್ನು ಮತ್ತಷ್ಟು 1,674 [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ.<ref>{{cite web |url=https://ildm.kerala.gov.in/wp-content/uploads/2018/01/Revenue-Guide-2018.pdf |title=Revenue Guide 2018 |date= |website=[[Government of Kerala]] |access-date=28 September 2020 |archive-date=20 September 2020 |archive-url=https://web.archive.org/web/20200920133932/https://ildm.kerala.gov.in/wp-content/uploads/2018/01/Revenue-Guide-2018.pdf |url-status=live }}</ref><ref>{{Cite web |url=https://kerala.gov.in/revenue-department |title=Revenue department, government of Kerala |access-date=28 September 2020 |archive-date=17 August 2021 |archive-url=https://web.archive.org/web/20210817225825/https://kerala.gov.in/revenue-department |url-status=dead}}</ref>
[[ಭಾರತದ ಸಂವಿಧಾನದ ತಿದ್ದುಪಡಿಗಳ ಪಟ್ಟಿ|73 ಮತ್ತು 74 ನೇ]] ಸಾಂವಿಧಾನಿಕ ತಿದ್ದುಪಡಿಗಳಿಂದ, ಕೇರಳದಲ್ಲಿ ಸ್ಥಳೀಯ ಸ್ವಯಂ-ಸರ್ಕಾರಿ ಸಂಸ್ಥೆಗಳು ಸರ್ಕಾರದ ಮೂರನೇ ಹಂತವಾಗಿ ಕಾರ್ಯನಿರ್ವಹಿಸುತ್ತವೆ, ಗ್ರಾಮೀಣ ಆಡಳಿತಕ್ಕಾಗಿ 14 [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳು]], 152 [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು 941 [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], ಮತ್ತು ನಗರ ಆಡಳಿತಕ್ಕಾಗಿ 87 [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]], ಆರು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿವೆ.<ref>{{cite web |title=Local Self Governance in Kerala |url=https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |publisher=Government of Kerala |access-date=28 September 2020 |archive-date=28 September 2021 |archive-url=https://web.archive.org/web/20210928223404/https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |url-status=dead}}</ref>
[[ಮಾಹೆ, ಭಾರತ|ಮಾಹೆ]], ಭಾರತೀಯ [[ಕೇಂದ್ರಾಡಳಿತ ಪ್ರದೇಶ]] [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]]ಯ ಒಂದು ಭಾಗವಾಗಿದ್ದು,<ref>{{cite web |url=https://www.censusindia.net/results/town.php?stad=A&state5=999 |archive-url=https://web.archive.org/web/20040616075334/https://www.censusindia.net/results/town.php?stad=A&state5=999 |archive-date=16 June 2004 |title=Census of India 2001: Data from the 2001 Census, including cities, villages and towns (Provisional) |access-date=1 November 2008 |publisher=Census Commission of India}}</ref> ಇದು {{convert|647|km}} ದೂರದಲ್ಲಿದ್ದರೂ,<ref name="ShiraAssociates.2012">{{cite book |author1=Dezan Shira |author2=Associates. |title=Doing Business in India |url=https://books.google.com/books?id=9YjXW41yMwQC&pg=PT313 |access-date=18 November 2012 |year=2012 |publisher=Springer |isbn=978-3-642-27618-7 |pages=313–}}</ref> ಇದು ಕೇರಳದಿಂದ ಅದರ ಎಲ್ಲಾ ಭೂಮುಖ ವಿಧಾನಗಳಲ್ಲಿ ಸುತ್ತುವರೆದಿರುವ ಕರಾವಳಿ ಬಹಿರಂಗವಾಗಿದೆ. [[ಕಣ್ಣೂರು ಜಿಲ್ಲೆ|ಕಣ್ಣೂರು ಜಿಲ್ಲೆಯು]] ಮೂರು ಕಡೆ ಮಾಹೆಯನ್ನು ಸುತ್ತುವರೆದಿದೆ ಮತ್ತು ನಾಲ್ಕನೇ ಕಡೆ [[ಕೋಝಿಕೋಡ್ ಜಿಲ್ಲೆ|ಕೋಝಿಕೋಡ್ ಜಿಲ್ಲೆಯಿದೆ]].<ref name="Menon2002">{{cite book |author1=D Banerjea |author2=N. R. Madhava Menon |title=Criminal Justice India Series, Vol. 20 |url=https://books.google.com/books?id=Axfuc5A8mxMC&pg=PA9 |access-date=18 November 2012 |year=2002 |publisher=Allied Publishers |isbn=978-8177648713 |pages=9–}}</ref>
1664 ರಲ್ಲಿ, [[ಫೋರ್ಟ್ ಕೊಚ್ಚಿ]] ಪುರಸಭೆಯನ್ನು [[ಡಚ್ ಮಲಬಾರ್]] ಸ್ಥಾಪಿಸಿತು, ಇದು [[ಭಾರತೀಯ ಉಪಖಂಡ]]ದ ಮೊದಲ ಪುರಸಭೆಯಾಗಿದೆ, ಇದು 18 ನೇ ಶತಮಾನದಲ್ಲಿ ಡಚ್ ಅಧಿಕಾರವು ದುರ್ಬಲಗೊಂಡಾಗ ವಿಸರ್ಜಿಸಲಾಯಿತು.<ref name="d_1664">{{Cite news |title=50 years on, Kochi still has a long way to go |url=https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |last=M K Sunil Kumar |date=26 September 2017 |access-date=1 June 2021 |work=The Times of India |archive-date=2 June 2021 |archive-url=https://web.archive.org/web/20210602230954/https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |url-status=live }}</ref> [[ಕೋಝಿಕೋಡ್]], [[ಪಾಲಕ್ಕಾಡ್]], [[ಫೋರ್ಟ್ ಕೊಚ್ಚಿ]], [[ಕಣ್ಣೂರು]], ಮತ್ತು [[ತಲಶ್ಶೇರಿ]] ಪುರಸಭೆಗಳನ್ನು 1 ನವೆಂಬರ್ 1866 ರಂದು<ref name="Ref1">{{cite web |title=Chronological List of Central Acts (Updated up to 17-10-2014) |url=https://www.lawmin.nic.in/chronology.doc |url-status=dead |archive-url=https://web.archive.org/web/20180107091128/http://lawmin.nic.in/chronology.doc |archive-date=7 January 2018 |access-date=7 August 2016 |website=Lawmin.nic.in}}</ref><ref name="c1881">{{cite book |last1=Lewis McIver |first1=G. Stokes |url=https://books.google.com/books?id=b_YIAAAAQAAJ |title=Imperial Census of 1881 Operations and Results in the Presidency of Madras |publisher=E.Keys at the Government Press |year=1883 |edition=(Vol II) |location=Madras |page=444 |access-date=5 December 2020 |archive-url=https://web.archive.org/web/20230327063433/https://books.google.com/books?id=b_YIAAAAQAAJ |archive-date=27 March 2023 |url-status=live}}</ref><ref name="google.co.in">{{cite book |last1=Presidency |first1=Madras (India |url=https://books.google.com/books?id=aUEwnQEACAAJ |title=Madras District Gazetteers, Statistical Appendix For Malabar District. |publisher=The Superintendent, Government Press |year=1915 |edition=Vol.2 |location=Madras |page=20 |language=en |access-date=2 December 2020 |archive-url=https://web.archive.org/web/20230327063433/https://books.google.com/books?id=aUEwnQEACAAJ |archive-date=27 March 2023 |url-status=live}}</ref><ref name="gazetteer" /> [[ಬ್ರಿಟಿಷ್ ಭಾರತ ಸಾಮ್ರಾಜ್ಯ]]ದಲ್ಲಿ ಸ್ಥಾಪಿಸಲಾಯಿತು, ಇದು ಕೇರಳ ರಾಜ್ಯದ ಮೊದಲ ಆಧುನಿಕ ಪುರಸಭೆಗಳಾಗಿವೆ. [[ತಿರುವನಂತಪುರ]] ಪುರಸಭೆಯು 1920 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಎರಡು ದಶಕಗಳ ನಂತರ, [[ಶ್ರೀ ಚಿತಿರಾ ತಿರುನಾಳ್]] ರ ಆಳ್ವಿಕೆಯಲ್ಲಿ, ತಿರುವನಂತಪುರ ಪುರಸಭೆಯನ್ನು 30 ಅಕ್ಟೋಬರ್ 1940 ರಂದು ನಿಗಮವಾಗಿ ಪರಿವರ್ತಿಸಲಾಯಿತು, ಇದು ಕೇರಳದ ಅತ್ಯಂತ ಹಳೆಯ ನಗರ ನಿಗಮವಾಗಿದೆ.<ref>{{cite web |title=Thiruvananthapuram |url=https://www.corporationoftrivandrum.org/index.php?option=com_content&view=article&id=158&Itemid=11 |date=2010 |url-status=usurped |archive-url=https://web.archive.org/web/20100918085703/https://www.corporationoftrivandrum.org/index.php?option=com_content&view=article&id=158&Itemid=11 |archive-date=18 September 2010 |access-date=4 April 2022}} Year of becoming a corporation</ref> [[ಭಾರತ]]ದ ಸ್ವಾತಂತ್ರ್ಯದ ನಂತರ ಸ್ಥಾಪಿಸಲಾದ ಮೊದಲ ನಗರ ನಿಗಮ ಮತ್ತು ರಾಜ್ಯದ ಎರಡನೇ ಅತ್ಯಂತ ಹಳೆಯ ನಗರ ನಿಗಮವು 1962 ರಲ್ಲಿ [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]] ನಲ್ಲಿದೆ.<ref>[https://web.archive.org/web/20080209134539/https://www.hindu.com/2008/02/05/stories/2008020561140500.htm Kozhikode Lok Sabha constituency redrawn Delimitation impact], ''The Hindu'' 5 February 2008</ref> ಕೇರಳದಲ್ಲಿ ಆರು [[ಭಾರತದಲ್ಲಿ ನಗರ ನಿಗಮಗಳು|ನಗರ ನಿಗಮಗಳಿವೆ]], ಅವು [[ತಿರುವನಂತಪುರ ನಗರ ನಿಗಮ|ತಿರುವನಂತಪುರ]], [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]], [[ಕೊಚ್ಚಿ ನಗರ ನಿಗಮ|ಕೊಚ್ಚಿ]], [[ಕೊಲ್ಲಂ ನಗರ ನಿಗಮ|ಕೊಲ್ಲಂ]], [[ತೃಶೂರ್ ನಗರ ನಿಗಮ|ತೃಶೂರ್]], ಮತ್ತು [[ಕಣ್ಣೂರು ನಗರ ನಿಗಮ|ಕಣ್ಣೂರು]] ನಗರಗಳನ್ನು ಆಳುತ್ತವೆ.<ref>{{cite web |title=Kerala Sustainable Urban Development Project |url=https://www.ksudp.org/ |publisher=Local Self Government Department |access-date=7 February 2022 |archive-date=20 September 2020 |archive-url=https://web.archive.org/web/20200920051936/http://ksudp.org/ |url-status=dead }}</ref> [[ತಿರುವನಂತಪುರ ನಗರ ನಿಗಮ]]ವು ಕೇರಳದ ಅತಿದೊಡ್ಡ ನಿಗಮವಾಗಿದ್ದರೆ ಕೊಚ್ಚಿ ಮಹಾನಗರ ಪ್ರದೇಶವನ್ನು [[ಕೊಚ್ಚಿ UA]] ಎಂದು ಕರೆಯಲಾಗುತ್ತದೆ, ಇದು ಅತಿದೊಡ್ಡ ನಗರ ಸಮೂಹವಾಗಿದೆ.<ref>{{cite web |title=City Information |url=https://cial.aero/contents/viewcontent.aspx?linkIdLvl2=32&linkid=32 |work=Cochin International Airport |publisher=Government of Kerala |access-date=18 November 2012 |archive-date=10 December 2012 |archive-url=https://web.archive.org/web/20121210070804/http://cial.aero/contents/viewcontent.aspx?linkIdLvl2=32&linkid=32 |url-status=live }}</ref> ಅರ್ಥಶಾಸ್ತ್ರ ಸಂಶೋಧನಾ ಸಂಸ್ಥೆ ಇಂಡಿಕಸ್ ಅನಾಲಿಟಿಕ್ಸ್ 2007 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, [[ತಿರುವನಂತಪುರ]], [[ಕೋಝಿಕೋಡ್]], [[ಕೊಚ್ಚಿ]], [[ಕೊಲ್ಲಂ]], [[ತೃಶೂರ್]] "ಭಾರತದಲ್ಲಿ ವಾಸಿಸಲು ಅತ್ಯುತ್ತಮ ನಗರಗಳಲ್ಲಿ" ಸೇರಿವೆ; ಸಮೀಕ್ಷೆಯು ನಗರಗಳನ್ನು ಶ್ರೇಣೀಕರಿಸಲು ಆರೋಗ್ಯ, ಶಿಕ್ಷಣ, ಪರಿಸರ, ಸುರಕ್ಷತೆ, ಸಾರ್ವಜನಿಕ ಸೌಲಭ್ಯಗಳು ಮತ್ತು ಮನರಂಜನೆಯಂತಹ ನಿಯತಾಂಕಗಳನ್ನು ಬಳಸಿದೆ.<ref>{{cite news |title=Cities best to earn a living are not the best to live: Survey |url=https://articles.economictimes.indiatimes.com/2007-11-26/news/27682663_1_cities-entertainment-indicus-analytics |work=The Times of India |date=26 November 2007 |access-date=7 February 2022 |archive-date=5 March 2016 |archive-url=https://web.archive.org/web/20160305021646/http://articles.economictimes.indiatimes.com/2007-11-26/news/27682663_1_cities-entertainment-indicus-analytics |url-status=dead }}</ref>
== ಸರ್ಕಾರ ಮತ್ತು ಆಡಳಿತ ==
{{Main|ಕೇರಳ ಸರ್ಕಾರ|ಕೇರಳ ವಿಧಾನಸಭೆ|ಕೇರಳದಲ್ಲಿ ಸ್ಥಳೀಯ ಸರ್ಕಾರ|ಕೇರಳ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಪಟ್ಟಿ|ಕೇರಳದ ಆಡಳಿತ ವಿಭಾಗಗಳು|l4 = ಕೇರಳ ಸರ್ಕಾರದ ಇಲಾಖೆಗಳ ಪಟ್ಟಿ}}
{{See also|ಕೇರಳದ ರಾಜಕೀಯ|ಕೇರಳದಲ್ಲಿ ರಾಜಕೀಯ ಪಕ್ಷಗಳು|ಕೇರಳದಲ್ಲಿ ಚುನಾವಣೆಗಳು}}
{{Multiple image
| direction = vertical
| width = 220
| header_align = center
| footer_align = center
| image1 = Kerala Legislative Assembly, Thiruvananthapuram.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಧಾನಸಭೆ]] ಕಟ್ಟಡ
| image2 = Kerala Government Secretariat.jpg
| caption2 = [[ಕೇರಳ ಸರ್ಕಾರದ ಕಚೇರಿ|ಸರ್ಕಾರಿ ಕಚೇರಿ]] [[ತಿರುವನಂತಪುರ|ತಿರುವನಂತಪುರದಲ್ಲಿ]] – ಕೇರಳದ ಕಾರ್ಯನಿರ್ವಾಹಕ ಆಡಳಿತದ ಆಸನ
| image3 = High Court of Kerala Building.jpg
| caption3 = [[ಕೊಚ್ಚಿ|ಕೊಚ್ಚಿಯ]] [[ಕೇರಳ ಉಚ್ಚ ನ್ಯಾಯಾಲಯ]] ಸಂಕೀರ್ಣ
}}
ರಾಜ್ಯವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯಿಂದ ಆಳಲ್ಪಡುತ್ತದೆ. ಕೇರಳವು [[ಏಕಸಭಾ]] ಶಾಸಕಾಂಗವನ್ನು ಹೊಂದಿದೆ. [[ಕೇರಳ ವಿಧಾನಸಭೆ]]ಯು ನಿಯಮಸಭೆ ಎಂದೂ ಕರೆಯಲ್ಪಡುತ್ತದೆ, ಇದು 140 ಸದಸ್ಯರನ್ನು ಒಳಗೊಂಡಿದ್ದು, ಅವರು ಐದು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.<ref>{{cite web |title=History of Kerala Legislature |url=https://kerala.gov.in/index.php?option=com_content&view=article&id=3776&Itemid=3022 |publisher=Government of Kerala |access-date=17 November 2012 |archive-url=https://web.archive.org/web/20120619040353/https://www.kerala.gov.in/index.php?option=com_content&view=article&id=3776&Itemid=3022 |archive-date=19 June 2012 |url-status=dead}}</ref> ರಾಜ್ಯವು [[ಭಾರತದ ಸಂಸತ್ತು|ಭಾರತೀಯ ಸಂಸತ್ತಿನ]] ಕೆಳಮನೆಯಾದ [[ಲೋಕಸಭೆ]]ಗೆ 20 ಸದಸ್ಯರನ್ನು ಮತ್ತು [[ರಾಜ್ಯಸಭೆ]]ಗೆ 9 ಸದಸ್ಯರನ್ನು ಚುನಾಯಿಸುತ್ತದೆ.<ref>{{cite web |url=https://www.parliamentofindia.nic.in/ls/intro/p1.htm |title=Our Parliament |publisher=Parliamentofindia.nic.in |access-date=25 February 2010 |archive-date=10 February 2010 |archive-url=https://web.archive.org/web/20100210043333/http://www.parliamentofindia.nic.in/ls/intro/p1.htm |url-status=live }}</ref>
[[ಕೇರಳ ಸರ್ಕಾರ]]ವು ಭಾರತದಲ್ಲಿ [[ಪ್ರಜಾಪ್ರಭುತ್ವ|ಪ್ರಜಾಪ್ರಭುತ್ವ]] ರೀತಿಯಲ್ಲಿ ಚುನಾಯಿತ ಸಂಸ್ಥೆಯಾಗಿದ್ದು, [[ಕೇರಳದ ರಾಜ್ಯಪಾಲರು|ರಾಜ್ಯಪಾಲರು]] ಇದರ ಸಾಂವಿಧಾನಿಕ ಮುಖ್ಯಸ್ಥರಾಗಿದ್ದಾರೆ ಮತ್ತು [[ಭಾರತದ ರಾಷ್ಟ್ರಪತಿ]]ಗಳಿಂದ ಐದು ವರ್ಷಗಳ ಅವಧಿಗೆ ನೇಮಕಗೊಳ್ಳುತ್ತಾರೆ.<ref name="govern">{{cite web |url=https://www.rajbhavan.kerala.gov.in/index.php?option=com_content&view=article&id=44&Itemid=2 |archive-url=https://web.archive.org/web/20090731095433/https://rajbhavan.kerala.gov.in/index.php?option=com_content&view=article&id=44&Itemid=2 |url-status=dead |archive-date=31 July 2009 |title=Responsibilities |access-date=13 November 2015 |publisher=Kerala Rajbhavan}}</ref> [[ಕೇರಳ ವಿಧಾನಸಭೆ|ವಿಧಾನಸಭೆಯಲ್ಲಿ]] ಬಹುಮತ ಹೊಂದಿರುವ ಪಕ್ಷ ಅಥವಾ ಒಕ್ಕೂಟದ ನಾಯಕನನ್ನು ರಾಜ್ಯಪಾಲರಿಂದ [[ಕೇರಳದ ಮುಖ್ಯಮಂತ್ರಿಗಳ ಪಟ್ಟಿ|ಮುಖ್ಯಮಂತ್ರಿಯಾಗಿ]] ನೇಮಿಸಲಾಗುತ್ತದೆ, ಮತ್ತು [[ಕೇರಳ ಸಚಿವ ಸಂಪುಟ|ಸಚಿವರ ಸಂಪುಟವನ್ನು]] ಮುಖ್ಯಮಂತ್ರಿಯ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಿಸುತ್ತಾರೆ.<ref name=govern /> ರಾಜ್ಯಪಾಲರು ರಾಜ್ಯದ ಆಚಾರಪೂರ್ಣ ಮುಖ್ಯಸ್ಥರಾಗಿ ಉಳಿಯುತ್ತಾರೆ, ಆದರೆ ಮುಖ್ಯಮಂತ್ರಿ ಮತ್ತು ಅವರ ಸಂಪುಟವು ದೈನಂದಿನ ಸರ್ಕಾರಿ ಕಾರ್ಯಗಳಿಗೆ ಜವಾಬ್ದಾರರಾಗಿರುತ್ತಾರೆ. ಸಚಿವರ ಸಂಪುಟವು ಸಚಿವ ಸಂಪುಟದ ಸಚಿವರು ಮತ್ತು ರಾಜ್ಯ ಸಚಿವರನ್ನು (MoS) ಒಳಗೊಂಡಿದೆ. [[ಕೇರಳ ಸರ್ಕಾರದ ಕಚೇರಿ|ಕಾರ್ಯದರ್ಶಿ]] [[ಮುಖ್ಯ ಕಾರ್ಯದರ್ಶಿ (ಭಾರತ)|ಮುಖ್ಯ ಕಾರ್ಯದರ್ಶಿ]] ನೇತೃತ್ವದಲ್ಲಿ, ಸಚಿವ ಸಂಪುಟಕ್ಕೆ ಸರ್ಕಾರಿ ನೀತಿಗಳ ರಚನೆ ಮತ್ತು ಅನುಷ್ಠಾನದಲ್ಲಿ ಸಹಾಯ ಮಾಡುತ್ತದೆ. ಮುಖ್ಯ ಕಾರ್ಯದರ್ಶಿಯು ಹಿರಿಯ [[ನಾಗರಿಕ ಸೇವೆ|ನಾಗರಿಕ ಸೇವಕ]] ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ರಾಜ್ಯ ಸರ್ಕಾರದ ಆಡಳಿತವು 47 ಕಾರ್ಯದರ್ಶಿ ಇಲಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ.<ref name=":0" /> ಪ್ರತಿಯೊಂದು ಸರ್ಕಾರಿ ಇಲಾಖೆಯನ್ನು ರಾಜಕೀಯವಾಗಿ ಸಚಿವರು ಮತ್ತು ಆಡಳಿತಾತ್ಮಕವಾಗಿ ಸರ್ಕಾರದ ಕಾರ್ಯದರ್ಶಿಯು ಮುಖ್ಯಸ್ಥರಾಗಿರುತ್ತಾರೆ, ಇವರು [[ಹೆಚ್ಚುವರಿ ಮುಖ್ಯ ಕಾರ್ಯದರ್ಶಿ|ಹೆಚ್ಚುವರಿ ಮುಖ್ಯ ಕಾರ್ಯದರ್ಶಿ]], [[ಪ್ರಿನ್ಸಿಪಾಲ್ ಕಾರ್ಯದರ್ಶಿ (ಭಾರತ)|ಪ್ರಿನ್ಸಿಪಾಲ್ ಕಾರ್ಯದರ್ಶಿ]], ಅಥವಾ [[ಕಾರ್ಯದರ್ಶಿ]] ಹುದ್ದೆಯಲ್ಲಿರುತ್ತಾರೆ, ಇವರು ಸಾಮಾನ್ಯವಾಗಿ [[ಭಾರತೀಯ ಆಡಳಿತ ಸೇವೆ]] (IAS) ನ ಅಧಿಕಾರಿಯಾಗಿರುತ್ತಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು/ಪ್ರಿನ್ಸಿಪಾಲ್ ಕಾರ್ಯದರ್ಶಿಗಳು ತಮಗೆ ನಿಯೋಜಿಸಲಾದ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರತಿಯೊಂದು ಇಲಾಖೆಯು ವಿಶೇಷ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಂಡರ್ ಸೆಕ್ರೆಟರಿ ಮತ್ತು ಇತರ ಸಹಾಯಕ ಅಧಿಕಾರಿಗಳ ಹುದ್ದೆಗಳನ್ನು ಸಹ ಹೊಂದಿದೆ. ಈ ಕಾರ್ಯದರ್ಶಿ ಇಲಾಖೆಗಳು ನೀತಿ ರಚನೆ ಮತ್ತು ಆಡಳಿತಾತ್ಮಕ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುತ್ತವೆ, ಆದರೆ ರೇಖಾ ಇಲಾಖೆಗಳು ಮತ್ತು ಇತರ ಕಾರ್ಯನಿರ್ವಾಹಕ ಸಂಸ್ಥೆಗಳು ಸರ್ಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಕ್ಷೇತ್ರ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತವೆ.
ಪ್ರತಿಯೊಂದು ಕಾರ್ಯದರ್ಶಿ ಇಲಾಖೆಯು ಒಂದು ಅಥವಾ ಹೆಚ್ಚು ರೇಖಾ ಇಲಾಖೆಗಳು, ನಿರ್ದೇಶನಾಲಯಗಳು, ಆಯುಕ್ತ ಕಚೇರಿಗಳು, ಮಂಡಳಿಗಳು, ಅಥವಾ ಅಂತಹುದೇ ಕಾರ್ಯನಿರ್ವಾಹಕ ಸಂಸ್ಥೆಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಚಲಾಯಿಸುತ್ತದೆ. ಈ ಸಂಸ್ಥೆಗಳು ಸರ್ಕಾರಿ ನೀತಿಗಳನ್ನು ಅನುಷ್ಠಾನಗೊಳಿಸಲು, ನಿಯಂತ್ರಕ ಆಡಳಿತ, ಜಾರಿ, ಸಾರ್ವಜನಿಕ ಸೇವೆಗಳನ್ನು ಒದಗಿಸಲು ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯಗಳನ್ನು ನಿರ್ವಹಿಸಲು ಜವಾಬ್ದಾರರಾಗಿರುತ್ತವೆ. ಅವುಗಳನ್ನು ಸಾಮಾನ್ಯವಾಗಿ ನಿರ್ದೇಶಕರು, ಆಯುಕ್ತರು, ಅಥವಾ ಅಂತಹುದೇ ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ, ಅವರು ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ, ಇದು ಸಂಸ್ಥೆಯ ಸ್ವರೂಪವನ್ನು ಅವಲಂಬಿಸಿರುತ್ತದೆ. ಈ ಪ್ರತಿಯೊಂದು ಇಲಾಖೆಗಳು/ಸಂಸ್ಥೆಗಳು ತಮ್ಮದೇ ಆದ ಆಡಳಿತಾತ್ಮಕ ಉಪವಿಭಾಗಗಳನ್ನು ಹೊಂದಿವೆ.<ref>Rules of Business of [[Government of Kerala]]
PART II
FIRST SCHEDULE
https://gad.kerala.gov.in/sites/default/files/general_attachment/Rules%20of%20Business%20-%20Part%20II.pdf</ref>
ರಾಜ್ಯವನ್ನು ಹದಿನಾಲ್ಕು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದೂ ಜಿಲ್ಲಾ ಆಡಳಿತದ ಪ್ರಧಾನ ಕಚೇರಿಯಾಗಿ ಕಲೆಕ್ಟರೇಟ್ ಅನ್ನು ಹೊಂದಿದೆ. [[ಜಿಲ್ಲಾ ಮ್ಯಾಜಿಸ್ಟ್ರೇಟ್|ಜಿಲ್ಲಾ ಕಲೆಕ್ಟರ್]] ಜಿಲ್ಲಾ ಆಡಳಿತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭೂ ಆದಾಯ ಆಡಳಿತ, ವಿಪತ್ತು ನಿರ್ವಹಣೆ, ಚುನಾವಣೆಗಳು, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಮತ್ತು ಜಿಲ್ಲೆಯೊಳಗಿನ ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯಕ್ಕೆ ಜವಾಬ್ದಾರರಾಗಿರುತ್ತಾರೆ.<ref>{{Cite web |title=Collectorate {{!}} District Thiruvananthapuram, Government of Kerala {{!}} India |url=https://trivandrum.nic.in/en/collectrate/ |access-date=2026-04-04 |language=en-US}}</ref> ಆಡಳಿತಾತ್ಮಕ ಅನುಕೂಲಕ್ಕಾಗಿ, ಪ್ರತಿಯೊಂದು ಜಿಲ್ಲೆಯನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳ ಪಟ್ಟಿ|ಆದಾಯ ವಿಭಾಗಗಳಾಗಿ]], [[ತಹಸೀಲ್ದಾರ್|ತಾಲೂಕುಗಳಾಗಿ]], ಮತ್ತು [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ, ಪ್ರಾಥಮಿಕವಾಗಿ ಭೂ ಆದಾಯ ಆಡಳಿತದ ಉದ್ದೇಶಕ್ಕಾಗಿ.<ref>{{Cite web |last=Admin |date=2025-01-22 |title=Land revenue administration, Government of Kerala |url=https://clr.kerala.gov.in/eng/index.php/department/organisation-structure |access-date=2026-01-01 |website=Department of Land Revenue |language=en-gb}}</ref>
ಕೇರಳದಲ್ಲಿ ಕಾನೂನು ಜಾರಿಯನ್ನು ಪ್ರಾಥಮಿಕವಾಗಿ [[ಕೇರಳ ಪೊಲೀಸ್]] ನಡೆಸುತ್ತದೆ, ಇದು ಕೇರಳ ಸರ್ಕಾರದ [[ಗೃಹ ಇಲಾಖೆ (ಕೇರಳ)|ಗೃಹ ಇಲಾಖೆಯ]] ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇರಳ ಪೊಲೀಸ್ ಅನ್ನು ಎರಡು ಪೊಲೀಸ್ ವಲಯಗಳಾಗಿ (ಉತ್ತರ ಮತ್ತು ದಕ್ಷಿಣ) ರಚಿಸಲಾಗಿದೆ, ಅವುಗಳನ್ನು ಮತ್ತಷ್ಟು ವ್ಯಾಪ್ತಿಗಳು, ಪೊಲೀಸ್ ಜಿಲ್ಲೆಗಳು, ಉಪವಿಭಾಗಗಳು ಮತ್ತು ಪೊಲೀಸ್ ಠಾಣೆಗಳಾಗಿ ವಿಂಗಡಿಸಲಾಗಿದೆ. ಪ್ರಾಥಮಿಕ ಕಾನೂನು ಜಾರಿಗೆ ಜವಾಬ್ದಾರರಾಗಿರುವ 484 ಸ್ಥಳೀಯ ಪೊಲೀಸ್ ಠಾಣೆಗಳಿವೆ.<ref>{{Cite web |title=Official Website of Kerala Police |url=https://keralapolice.gov.in/ |access-date=2026-04-24 |website=keralapolice.gov.in |language=en}}</ref>
[[ನ್ಯಾಯಾಂಗ]]ವು [[ಕೇರಳ ಉಚ್ಚ ನ್ಯಾಯಾಲಯ]] ಮತ್ತು ಕೆಳ ನ್ಯಾಯಾಲಯಗಳ ವ್ಯವಸ್ಥೆಯನ್ನು ಒಳಗೊಂಡಿದೆ.<ref>{{cite web |title=History of Judiciary |url=https://www.allindiajudges.org/Judgment/FNJPC2.htm |publisher=All-India Judges Association |access-date=29 April 2015 |archive-date=1 October 2015 |archive-url=https://web.archive.org/web/20151001072113/http://www.allindiajudges.org/Judgment/FNJPC2.htm |url-status=dead }}</ref> [[ಕೊಚ್ಚಿ|ಕೊಚ್ಚಿಯಲ್ಲಿ]] ನೆಲೆಗೊಂಡಿರುವ ಉಚ್ಚ ನ್ಯಾಯಾಲಯವು,<ref name="Congress (US)2010">{{cite book |author1=U S Congress |author2=Congress (U.S.) |title=Congressional Record, V. 153, Pt. 1, January 4, 2007 to January 17, 2007 |url=https://books.google.com/books?id=M3bLOwbeOZYC&pg=PA1198 |access-date=18 November 2012 |year=2010 |publisher=Government Printing Office |isbn=978-0-16-086824-5 |page=1198}}</ref>as ರಂತೆ ಮುಖ್ಯ ನ್ಯಾಯಮೂರ್ತಿ ಮತ್ತು 35 ಖಾಯಂ ಮತ್ತು ಹನ್ನೆರಡು ಹೆಚ್ಚುವರಿ ''[[ಪ್ರೋ ಟೆಂಪೋರ್]]'' ನ್ಯಾಯಮೂರ್ತಿಗಳನ್ನು ಹೊಂದಿದೆ.<ref>{{cite web |title=High Court of Kerala Profile |url=https://highcourtofkerala.nic.in/profile.html |publisher=High Court of Kerala |access-date=18 November 2012 |archive-date=31 October 2012 |archive-url=https://web.archive.org/web/20121031233641/http://highcourtofkerala.nic.in/profile.html |url-status=live }}</ref> ಉಚ್ಚ ನ್ಯಾಯಾಲಯವು [[ಲಕ್ಷದ್ವೀಪ]] ಕೇಂದ್ರಾಡಳಿತ ಪ್ರದೇಶದ ಪ್ರಕರಣಗಳನ್ನು ಸಹ ವಿಚಾರಣೆಗೆ ತೆಗೆದುಕೊಳ್ಳುತ್ತದೆ.<ref name="Banerjea2002">{{cite book |author=D. Banerjea |title=Criminal Justice India Series, Vol. 21 |url=https://books.google.com/books?id=L6NWL-a14mkC&pg=PA80 |access-date=18 November 2012 |year=2002 |publisher=Allied Publishers |isbn=978-8177648720 |page=80}}</ref><ref name="SharmaB.k.2007">{{cite book |author1=Sharma |author2=Sharma B.k. |title=Intro. to the Constitution of India, 4/e |url=https://books.google.com/books?id=srDytmFE3KMC&pg=PA261 |access-date=18 November 2012 |year=2007 |publisher=PHI Learning Pvt. Ltd. |isbn=978-8120332461 |page=261}}</ref> ರಾಜ್ಯದ ಅಧೀನ ನ್ಯಾಯಾಂಗವು ಪ್ರತಿಯೊಂದು 14 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳನ್ನು ಒಳಗೊಂಡಿದೆ, ಇವುಗಳನ್ನು ಜಿಲ್ಲಾ ನ್ಯಾಯಾಧೀಶರು ಮುಖ್ಯಸ್ಥರಾಗಿರುತ್ತಾರೆ, ಜೊತೆಗೆ ನಾಗರಿಕ ನ್ಯಾಯಾಲಯಗಳು (''ಮುನ್ಸಿಫ್ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು'') ಮತ್ತು ಅಪರಾಧ ನ್ಯಾಯಾಲಯಗಳು (''ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮತ್ತು ಸೆಷನ್ಸ್ ನ್ಯಾಯಾಲಯಗಳು'') ತಮ್ಮ ಅಧಿಕಾರ ವ್ಯಾಪ್ತಿಯ ಪ್ರಕಾರ ಪ್ರಕರಣಗಳನ್ನು ನಿರ್ವಹಿಸುತ್ತವೆ.
=== ಸ್ಥಳೀಯ ಸರ್ಕಾರ ===
{{Main|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ಕೇರಳದಲ್ಲಿ, ಪಂಚಾಯತ್ಗಳು, ಪುರಸಭೆಗಳು ಮತ್ತು ನಿಗಮಗಳಂತಹ ಸ್ಥಳೀಯ ಸರ್ಕಾರಿ ಸಂಸ್ಥೆಗಳು 1959 ರಿಂದಲೂ ಅಸ್ತಿತ್ವದಲ್ಲಿವೆ. ಆದಾಗ್ಯೂ, ಗಮನಾರ್ಹವಾದ ವಿಕೇಂದ್ರೀಕರಣ ಉಪಕ್ರಮವು 1993 ರಲ್ಲಿ ಪ್ರಾರಂಭವಾಯಿತು, ಇದು [[ಭಾರತ ಸರ್ಕಾರ|ಕೇಂದ್ರ ಸರ್ಕಾರ]]ದ ಸಾಂವಿಧಾನಿಕ ತಿದ್ದುಪಡಿಗಳೊಂದಿಗೆ ಹೊಂದಾಣಿಕೆಯಾಯಿತು.<ref name="Capdeck">{{cite web |url=https://www.lenobl.ru/Document/1412700121.pdf |title=An Introduction to local self governments in Kerala |publisher=SDC CAPDECK |access-date=17 November 2012 |author=Mariamma Sanu George |pages=17–20 |archive-date=30 May 2015 |archive-url=https://web.archive.org/web/20150530224012/http://www.lenobl.ru/Document/1412700121.pdf |url-status=live }}</ref><ref name="KILA">{{cite web |url=https://www.kilaonline.org/site_docu/pub200904a.pdf |archive-url=https://web.archive.org/web/20130513015050/https://www.kilaonline.org/site_docu/pub200904a.pdf |archive-date=13 May 2013 |title=Kerala – A Case Study of Classical Democratic Decentralisation |publisher=Kerala Institute of Local Administration |date=April 2009 |access-date=17 November 2012 |author=S M Vijayanand }}</ref>{{rp|page=12}} ಕೇರಳ ಪಂಚಾಯತ್ ರಾಜ್ ಕಾಯ್ದೆ ಮತ್ತು ಕೇರಳ ಪುರಸಭೆ ಕಾಯ್ದೆಯನ್ನು 1994 ರಲ್ಲಿ ಜಾರಿಗೊಳಿಸಲಾಯಿತು, ಇದು ಗ್ರಾಮೀಣ ಆಡಳಿತಕ್ಕಾಗಿ ಮೂರು-ಹಂತದ ವ್ಯವಸ್ಥೆಯನ್ನು ಮತ್ತು ನಗರ ಆಡಳಿತಕ್ಕಾಗಿ ಏಕ-ಹಂತದ ವ್ಯವಸ್ಥೆಯನ್ನು ಸ್ಥಾಪಿಸಿತು.<ref>{{cite act
| title = Kerala Panchayat Raj Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref><ref>{{cite act
| title = Kerala Municipality Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref>
ಗ್ರಾಮೀಣ ಆಡಳಿತದ ಮೂರು-ಹಂತದ ರಚನೆಯು [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳನ್ನು]] ಒಳಗೊಂಡಿದೆ.<ref name="TandonMohanty2006">{{cite book |author1=Rajesh Tandon |author2=Ranjita Mohanty |title=Participatory Citizenship: Identity, Exclusion, Inclusion |url=https://books.google.com/books?id=oPByu7CWoUEC&pg=PA199 |access-date=17 November 2012 |year=2006 |publisher=Sage |isbn=978-0-7619-3467-7 |page=199}}</ref> ಕೇರಳ ಪಂಚಾಯತ್ ರಾಜ್ ಕಾಯ್ದೆ, 1994 ಈ ಸಂಸ್ಥೆಗಳಿಗೆ ಸ್ಪಷ್ಟವಾದ ಅಧಿಕಾರಗಳನ್ನು ವ್ಯಾಖ್ಯಾನಿಸುತ್ತದೆ.<ref name="Capdeck" /> ನಗರ ಪ್ರದೇಶಗಳಿಗೆ, ಕೇರಳ ಪುರಸಭೆ ಕಾಯ್ದೆಯು ಏಕ-ಹಂತದ ವ್ಯವಸ್ಥೆಯನ್ನು ಒದಗಿಸುತ್ತದೆ, ಇದು [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]] ಮತ್ತು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿದೆ, ಅವು ಸ್ಥಳೀಯ ಆಡಳಿತ ಮತ್ತು ನಾಗರಿಕ ಆಡಳಿತಕ್ಕೆ ಜವಾಬ್ದಾರರಾಗಿರುತ್ತವೆ. ಈ ಸಂಸ್ಥೆಗಳನ್ನು ನಿಯಮಿತವಾಗಿ [[ಕೇರಳದಲ್ಲಿ ಚುನಾವಣೆಗಳು|ಸ್ಥಳೀಯ ಸಂಸ್ಥೆಗಳ ಚುನಾವಣೆಗಳ]] ಮೂಲಕ ರಚಿಸಲಾಗುತ್ತದೆ.<ref name="Chaudhary2009">{{cite book |author=Shyam Nandan Chaudhary |title=Tribal Development Since Independence |url=https://books.google.com/books?id=KBX1EJVhjGEC&pg=PA235 |access-date=18 November 2012 |year=2009 |publisher=Concept Publishing Company |isbn=978-8180696220 |page=235}}</ref> ಈ ಸಂಸ್ಥೆಗಳು ಪರಿಣಾಮಕಾರಿ ವಿಕೇಂದ್ರೀಕರಣವನ್ನು ಖಚಿತಪಡಿಸಿಕೊಳ್ಳಲು ಗಣನೀಯ ಆಡಳಿತಾತ್ಮಕ, ಕಾನೂನು ಮತ್ತು ಆರ್ಥಿಕ ಅಧಿಕಾರಗಳನ್ನು ಪಡೆಯುತ್ತವೆ.<ref name="KILA" />{{rp|page=13}} ಪ್ರಸ್ತುತ, ರಾಜ್ಯ ಸರ್ಕಾರವು ರಾಜ್ಯ ಯೋಜನಾ ವಿನಿಯೋಗದ ಸುಮಾರು 40% ಅನ್ನು ಸ್ಥಳೀಯ ಸರ್ಕಾರಗಳಿಗೆ ನಿಯೋಜಿಸುತ್ತದೆ.<ref name="IsaacFranke2002">{{cite book |author1=T. M. Thomas Isaac |author2=Richard W. Franke |title=Local Democracy and Development: The Kerala People's Campaign for Decentralized Planning |url=https://books.google.com/books?id=x6v6F2a3Gs0C&pg=PR13 |year=2002 |publisher=Rowman & Littlefield |isbn=978-0-7425-1607-6 |page=13}}</ref> ಕೇರಳವು 1,200 ಸ್ಥಳೀಯ ಸಂಸ್ಥೆಗಳನ್ನು ಹೊಂದಿದೆ, ಇವುಗಳಲ್ಲಿ 941 ಗ್ರಾಮ ಪಂಚಾಯತ್ಗಳು, 152 ಬ್ಲಾಕ್ ಪಂಚಾಯತ್ಗಳು, 14 ಜಿಲ್ಲಾ ಪಂಚಾಯತ್ಗಳು, 87 ಪುರಸಭೆಗಳು, ಮತ್ತು 6 ನಗರ ನಿಗಮಗಳು ಸೇರಿವೆ.<ref>{{Cite web |title=Local Bodies {{!}} Local Self Government Department |url=https://lsgkerala.gov.in/en/lsgd/localbody-list |access-date=2025-07-08 |website=lsgkerala.gov.in |archive-date=2 June 2023 |archive-url=https://web.archive.org/web/20230602134126/https://lsgkerala.gov.in/en/lsgd/localbody-list |url-status=dead }}</ref>
ಕೇರಳವನ್ನು 2016 ರಲ್ಲಿ ಭಾರತದ ಮೊದಲ ಡಿಜಿಟಲ್ ರಾಜ್ಯವೆಂದು ಘೋಷಿಸಲಾಯಿತು ಮತ್ತು [[ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್]] ನ 2019 ರ ಭಾರತ ಭ್ರಷ್ಟಾಚಾರ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕನಿಷ್ಠ ಭ್ರಷ್ಟ ರಾಜ್ಯವೆಂದು ಪರಿಗಣಿಸಲಾಗಿದೆ.<ref>{{Cite book |title=India Corruption Survey 2019 – Report |last= |publisher=Transparency International India |year=2019 |location= |pages=22 |url=https://transparencyindia.org/wp-content/uploads/2019/11/India-Corruption-Survey-2019.pdf |access-date=18 June 2021 |archive-date=10 July 2021 |archive-url=https://web.archive.org/web/20210710100154/https://transparencyindia.org/wp-content/uploads/2019/11/India-Corruption-Survey-2019.pdf |url-status=live }}</ref><ref>{{Cite news |title=Kerala the first digital State |url=https://www.thehindu.com/news/cities/kozhikode/kerala-the-first-digital-state/article8291466.ece |last=Special currespondent |date=28 February 2016 |access-date=17 November 2020 |work=The Hindu |archive-date=15 April 2021 |archive-url=https://web.archive.org/web/20210415102347/https://www.thehindu.com/news/cities/kozhikode/kerala-the-first-digital-state/article8291466.ece |url-status=live }}</ref> ಪಬ್ಲಿಕ್ ಅಫೇರ್ಸ್ ಇಂಡೆಕ್ಸ್-2020 ಕೇರಳವನ್ನು ಭಾರತದ ಅತ್ಯುತ್ತಮ ಆಡಳಿತ ರಾಜ್ಯವೆಂದು ಗೊತ್ತುಪಡಿಸಿತು.<ref>{{Cite news |title=Kerala, Tamil Nadu and Goa best governed States: report |url=https://www.thehindu.com/news/national/kerala-goa-and-chandigarh-best-governed-states-ut-report/article32985716.ece |last=PTI |date=30 October 2020 |access-date=20 June 2021 |work=The Hindu |archive-date=7 October 2021 |archive-url=https://web.archive.org/web/20211007210542/https://www.thehindu.com/news/national/kerala-goa-and-chandigarh-best-governed-states-ut-report/article32985716.ece |url-status=live }}</ref>
=== ರಾಜಕೀಯ ===
ಕೇರಳವು ತನ್ನ ಬಲವಾದ ಸಾಮಾಜಿಕ ಕಲ್ಯಾಣ ನೀತಿಗಳು, ಭೂ ಸುಧಾರಣೆಗಳು ಮತ್ತು ಉನ್ನತ ಮಾನವ ಅಭಿವೃದ್ಧಿ ಸೂಚಕಗಳಿಂದಾಗಿ ಭಾರತದ ಅತ್ಯಂತ [[ಸಮಾನತಾವಾದ|ಸಮಾನತಾವಾದಿ]] ರಾಜ್ಯಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ.<ref>{{Cite journal |last1=B |first1=Bibimol R. |last2=Seena |first2=Dr Anand Lali |last3=Thanammal |first3=Dr K. K. |date=2023-11-30 |title=C.Achutha Menon's Social Reforms: Paving The Way For A Progressive Kerala |url=https://kuey.net/index.php/kuey/article/view/8887 |journal=Educational Administration: Theory and Practice |language=en |volume=29 |issue=4 |pages=4074–4079 |doi=10.53555/kuey.v29i4.8887 |doi-broken-date=15 June 2026 |issn=2148-2403}}</ref><ref>{{Cite journal |last=Duran |first=Jane |date=April 2025 |title=Egalitarianism and Justice in Kerala |url=https://www.cambridge.org/core/journals/think/article/abs/egalitarianism-and-justice-in-kerala/5B093820090E9266A4852C40F93F5A51 |journal=Think |language=en |volume=24 |issue=70 |pages=23–29 |doi=10.1017/S147717562500017X |issn=1477-1756}}</ref><ref>{{Cite journal |last1=Thiranagama |first1=Sharika |title=Rural Civilities: Caste, Gender and Public Life in Kerala |journal=South Asia: Journal of South Asian Studies |date=2019 |volume=42 |issue=2 |pages=310–327 |doi=10.1080/00856401.2019.1582190}}</ref><ref>{{Cite journal |last=Devika |first=J. |date=August 2010 |title=Egalitarian Developmentalism, Communist Mobilization, and the Question of Caste in Kerala State, India |url=https://www.cambridge.org/core/journals/journal-of-asian-studies/article/abs/egalitarian-developmentalism-communist-mobilization-and-the-question-of-caste-in-kerala-state-india/8F65915C540DB6AC5D3EEE6DE800DB3B? |journal=The Journal of Asian Studies |language=en |volume=69 |issue=3 |pages=799–820 |doi=10.1017/S0021911810001506 |issn=1752-0401}}</ref> ಕೇರಳದ ರಾಜಕೀಯವು ಪ್ರಾಥಮಿಕವಾಗಿ [[ಭಾರತದಲ್ಲಿ ಕಮ್ಯುನಿಸಂ|ಕಮ್ಯುನಿಸಂ]], [[ಪ್ರಜಾಪ್ರಭುತ್ವ ಸಮಾಜವಾದ]], [[ಜಾತ್ಯತೀತತೆ]], [[ಮಧ್ಯಮಾರ್ಗ#ಭಾರತ|ಮಧ್ಯಮಾರ್ಗ]] ಮತ್ತು ಪ್ರಾದೇಶಿಕ ಹಿತಾಸಕ್ತಿಗಳಿಂದ ರೂಪುಗೊಂಡಿದೆ. [[ಬಲಪಂಥೀಯ ರಾಜಕೀಯ#ಭಾರತ|ಬಲಪಂಥೀಯ ರಾಜಕೀಯ]]ವು ತುಲನಾತ್ಮಕವಾಗಿ ಚಿಕ್ಕ ಶಕ್ತಿಯಾಗಿದ್ದು, ಇದನ್ನು ಪ್ರಾಥಮಿಕವಾಗಿ [[ಭಾರತೀಯ ಜನತಾ ಪಕ್ಷ]]-ನೇತೃತ್ವದ [[ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ|NDA]] ಪ್ರತಿನಿಧಿಸುತ್ತದೆ.<ref>{{Cite journal |title=Hindu Nationalism in South India: The Rise of Saffron in Kerala |url=https://www.researchgate.net/publication/381937210_Hindu_Nationalism_in_South_India_The_Rise_of_Saffron_in_Kerala |journal=}}</ref><ref>{{Cite journal |last=Nair |first=A. Balakrishnan |date=1994 |title=The Dynamics of Kerala Politics |url=https://www.jstor.org/stable/41855697 |journal=The Indian Journal of Political Science |volume=55 |issue=3 |pages=251–260 |issn=0019-5510}}</ref>
ಕೇರಳವು ಎರಡು ಪ್ರಮುಖ ರಾಜಕೀಯ ಮೈತ್ರಿಗಳನ್ನು ಹೊಂದಿದೆ: [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ನೇತೃತ್ವದ [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್]] (UDF); ಮತ್ತು [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)]] (CPI(M)) ನೇತೃತ್ವದ [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್]] (LDF). 1980 ರಿಂದ, ಕೇರಳದ ರಾಜಕೀಯವು LDF ಮತ್ತು UDF ನಿಂದ ಪ್ರಾಬಲ್ಯ ಹೊಂದಿದೆ, ಸರ್ಕಾರಗಳು ಹೆಚ್ಚಾಗಿ ಎರಡು ಮೈತ್ರಿಗಳ ನಡುವೆ ಪರ್ಯಾಯವಾಗಿವೆ.<ref>{{Cite news |date=2026-05-22 |title=Kerala election wrap-up: How UDF ended LDF’s 10-year rule |url=https://timesofindia.indiatimes.com/india/kerala-election-wrap-up-how-udf-ended-ldfs-10-year-rule/articleshow/131249440.cms |access-date=2026-06-19 |work=The Times of India |issn=0971-8257}}</ref> [[2026 ಕೇರಳ ವಿಧಾನಸಭಾ ಚುನಾವಣೆ]]ಯ ಪ್ರಕಾರ, UDF ಆಡಳಿತ ಒಕ್ಕೂಟವಾಗಿದೆ, ಮತ್ತು [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್|LDF]] ಅಧಿಕೃತ ವಿರೋಧ ಪಕ್ಷವಾಗಿದೆ.<ref>{{Cite web |title=Pinarayi Vijayan elected as Leader of Opposition in Kerala |url=https://www.deccanherald.com/india/kerala/pinarayi-vijayan-elected-as-leader-of-opposition-in-kerala-4003109 |access-date=2026-05-15 |website=Deccan Herald |language=en}}</ref><ref>{{Cite news |last=Parthasarathy |first=Srinivasan Ramani , Pon Vasanth B. A. , Nitika Francis , Devyanshi Bihani , Areena Arora & Sambavi |date=2026-05-06 |title=UDF's near three-fourths majority marked a historic victory for the Congress-led coalition |url=https://www.thehindu.com/news/national/kerala/udfs-near-three-fourths-majority-marked-a-historicvictory-for-the-congress-led-coalition/article70944163.ece |access-date=2026-05-15 |work=The Hindu |language=en-IN |issn=0971-751X}}</ref>
[[ಭಾರತದ ಸಂವಿಧಾನ]]ದ ಪ್ರಕಾರ, ಕೇರಳವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯನ್ನು ಹೊಂದಿದೆ; [[ಸಾರ್ವತ್ರಿಕ ಮತದಾನ]]ವನ್ನು ನಿವಾಸಿಗಳಿಗೆ ನೀಡಲಾಗಿದೆ.<ref name=":0">{{cite web |url=https://niyamasabha.org/codes/govt_2.htm |title=Kerala Government – Legislature |publisher=Government of Kerala |access-date=19 November 2012 |archive-date=8 December 2012 |archive-url=https://web.archive.org/web/20121208011357/http://www.niyamasabha.org/codes/govt_2.htm |url-status=dead }}</ref>
== ಆರ್ಥಿಕತೆ ==
{{Main|ಕೇರಳದ ಆರ್ಥಿಕತೆ}}
ಸ್ವಾತಂತ್ರ್ಯದ ನಂತರ, ರಾಜ್ಯವನ್ನು [[ಸಾಮಾಜಿಕ ಪ್ರಜಾಪ್ರಭುತ್ವ|ಸಾಮಾಜಿಕ ಪ್ರಜಾಪ್ರಭುತ್ವ]] [[ಕಲ್ಯಾಣ ಆರ್ಥಿಕತೆ]]ಯಾಗಿ ನಿರ್ವಹಿಸಲಾಯಿತು.<ref>{{Cite news |title=A virus, social democracy, and dividends for Kerala |url=https://www.thehindu.com/opinion/lead/a-virus-social-democracy-and-dividends-for-kerala/article31370554.ece |last=Heller |first=Patrick |date=18 April 2020 |access-date=2 February 2021 |work=The Hindu |archive-date=19 November 2021 |archive-url=https://web.archive.org/web/20211119130557/https://www.thehindu.com/opinion/lead/a-virus-social-democracy-and-dividends-for-kerala/article31370554.ece |url-status=live }}</ref> ಅತ್ಯಧಿಕ ಮಾನವ ಅಭಿವೃದ್ಧಿ ಮತ್ತು ತುಲನಾತ್ಮಕವಾಗಿ ಕಡಿಮೆ ಆರ್ಥಿಕ ಅಭಿವೃದ್ಧಿಯ "ಕೇರಳ ವಿದ್ಯಮಾನ" ಅಥವಾ "[[ಕೇರಳ ಮಾದರಿ]]" ಅಭಿವೃದ್ಧಿಯು ಬಲವಾದ ಸೇವಾ ವಲಯದಿಂದ ಉಂಟಾಗಿದೆ.<ref name="Brenkert_Malone_2003" />{{rp|48}}<ref name="Tharamangalam_2005">{{Cite journal |author=Tharamangalam J |year=2005 |title=The Perils of Social Development without Economic Growth: The Development Debacle of Kerala, India |journal=Political Economy for Environmental Planners |url=https://www.infra.kth.se/courses/1H1142/Kerala_Paper_4.pdf |archive-url=https://web.archive.org/web/20131115072025/https://www.infra.kth.se/courses/1H1142/Kerala_Paper_4.pdf |archive-date=15 November 2013 |access-date=28 December 2008}}</ref>{{rp|1}} 2019–20 ರಲ್ಲಿ, ಕೇರಳದ ಆರ್ಥಿಕತೆಯು {{INRConvert|8.55|t}} ಸ್ಥೂಲ ರಾಜ್ಯ ಆಂತರಿಕ ಉತ್ಪನ್ನ (GSDP) ಮತ್ತು {{INRConvert|222|k}} ತಲಾ ನಿವ್ವಳ ರಾಜ್ಯ ಆಂತರಿಕ ಉತ್ಪನ್ನದೊಂದಿಗೆ ಭಾರತದಲ್ಲಿ [[ಸ್ಥೂಲ ರಾಜ್ಯ ಆಂತರಿಕ ಉತ್ಪನ್ನದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|8 ನೇ ಅತಿದೊಡ್ಡದಾಗಿದೆ]].<ref>{{Cite web |date=15 March 2021 |title=MOSPI State Domestic Product, Ministry of Statistics and Programme Implementation, Government of India |url=https://mospi.nic.in/sites/default/files/press_releases_statements/State_wise_SDP_15_03_2021.xls |access-date=23 June 2021 |archive-date=17 June 2021 |archive-url=https://web.archive.org/web/20210617193238/http://mospi.nic.in/sites/default/files/press_releases_statements/State_wise_SDP_15_03_2021.xls |url-status=live }}</ref> 2019–20 ರಲ್ಲಿ, [[ಆರ್ಥಿಕತೆಯ ತೃತೀಯ ವಲಯ|ತೃತೀಯ ವಲಯ]]ವು ರಾಜ್ಯದ [[ಸ್ಥೂಲ ಮೌಲ್ಯವರ್ಧಿತ|GSVA]] ಯ ಸುಮಾರು 63% ಕೊಡುಗೆ ನೀಡಿದೆ, ಇದಕ್ಕೆ [[ಆರ್ಥಿಕತೆಯ ದ್ವಿತೀಯ ವಲಯ|ದ್ವಿತೀಯ ವಲಯ]] 28% ಮತ್ತು [[ಆರ್ಥಿಕತೆಯ ಪ್ರಾಥಮಿಕ ವಲಯ|ಪ್ರಾಥಮಿಕ ವಲಯ]] 8% ಕೊಡುಗೆ ನೀಡಿದೆ.<ref name="eco">{{Cite book |last=Government of Kerala |url=https://spb.kerala.gov.in/sites/default/files/2021-01/English-Vol-1_0.pdf |title=Economic Review 2020 – Volume I |publisher=Kerala State Planning Board |year=2021 |location=Thiruvananthapuram |access-date=18 June 2021 |archive-date=2 May 2021 |archive-url=https://web.archive.org/web/20210502171017/https://spb.kerala.gov.in/sites/default/files/2021-01/English-Vol-1_0.pdf |url-status=live }}</ref> 1960 ಮತ್ತು 2020 ರ ಅವಧಿಯಲ್ಲಿ, ಕೇರಳದ ಆರ್ಥಿಕತೆಯು ಕೃಷಿ ಆರ್ಥಿಕತೆಯಿಂದ ಸೇವಾ ಆಧಾರಿತ ಆರ್ಥಿಕತೆಗೆ ಕ್ರಮೇಣ ಬದಲಾಗುತ್ತಿತ್ತು.<ref name="eco" />
{{multiple image
| direction = vertical
| width = 220
| image1 = Technopark Trivandum Ganga and Yamuna Buildings.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಟೆಕ್ನೋಪಾರ್ಕ್, ತಿರುವನಂತಪುರ|ಟೆಕ್ನೋಪಾರ್ಕ್]], ಭಾರತದ ಮೊದಲ ಮತ್ತು ಅತಿದೊಡ್ಡ [[ಮಾಹಿತಿ ತಂತ್ರಜ್ಞಾನ]] (IT) ಉದ್ಯಾನವನ
| image2 = Container terminal.JPG
| caption2 = [[ಕೊಚ್ಚಿ|ಕೊಚ್ಚಿಯ]] [[ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್, ಕೊಚ್ಚಿ|ವಲ್ಲಾರ್ಪಾಡಂ ಟರ್ಮಿನಲ್]], ಭಾರತದ ಮೊದಲ [[ಕಂಟೇನರ್ ಟರ್ಮಿನಲ್|ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್]]
| image4 = Mappila bay.JPG
| caption4 = [[ಕಣ್ಣೂರು|ಕಣ್ಣೂರಿನ]] [[ಮಾಪ್ಪಿಲ ಕೊಲ್ಲಿ]] ಬಂದರು
}}
ರಾಜ್ಯದ [[ಆರ್ಥಿಕತೆಯ ತೃತೀಯ ವಲಯ|ಸೇವಾ ವಲಯ]]ವು ಅದರ ಆದಾಯದ ಸುಮಾರು 63% ರಷ್ಟಿದ್ದು, ಇದು ಮುಖ್ಯವಾಗಿ [[ಆತಿಥ್ಯ ಉದ್ಯಮ]], [[ಕೇರಳದ ಪ್ರವಾಸೋದ್ಯಮ|ಪ್ರವಾಸೋದ್ಯಮ]], [[ಆಯುರ್ವೇದ]] ಮತ್ತು ವೈದ್ಯಕೀಯ ಸೇವೆಗಳು, ಯಾತ್ರಾ ಸ್ಥಳಗಳು, [[ಮಾಹಿತಿ ತಂತ್ರಜ್ಞಾನ]], [[ಕೇರಳದ ರಸ್ತೆಗಳು|ಸಾರಿಗೆ]], ಹಣಕಾಸು ವಲಯ, ಮತ್ತು [[ಕೇರಳದಲ್ಲಿ ಶಿಕ್ಷಣ|ಶಿಕ್ಷಣ]]ವನ್ನು ಆಧರಿಸಿದೆ.<ref name=":15">{{Cite web |url=https://slbckerala.com/Economy.aspx |title=Economy of Kerala – 2016 |website=slbckerala.com |access-date=7 February 2022 |archive-date=28 March 2022 |archive-url=https://web.archive.org/web/20220328191455/http://slbckerala.com/Economy.aspx |url-status=dead }}</ref> ಕೈಗಾರಿಕಾ ವಲಯದಡಿಯಲ್ಲಿನ ಪ್ರಮುಖ ಉಪಕ್ರಮಗಳಲ್ಲಿ [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ]], ಹಡಗು ನಿರ್ಮಾಣ, ತೈಲ ಸಂಸ್ಕರಣಾಗಾರ, ಸಾಫ್ಟ್ವೇರ್ ಉದ್ಯಮ, ಕರಾವಳಿ ಖನಿಜ ಉದ್ಯಮಗಳು,{{sfn|Chandran|2018|p=343}} ಆಹಾರ ಸಂಸ್ಕರಣೆ, ಸಮುದ್ರ ಉತ್ಪನ್ನಗಳ ಸಂಸ್ಕರಣೆ, ಮತ್ತು ರಬ್ಬರ್ ಆಧಾರಿತ ಉತ್ಪನ್ನಗಳು ಸೇರಿವೆ. ರಾಜ್ಯದ ಪ್ರಾಥಮಿಕ ವಲಯವು ಮುಖ್ಯವಾಗಿ [[ವಾಣಿಜ್ಯ ಬೆಳೆ]]ಗಳನ್ನು ಆಧರಿಸಿದೆ.{{sfn|Chandran|2018|p=409}} ಕೇರಳವು ಭಾರತದಲ್ಲಿ [[ತೆಂಗು]], [[ಚಹಾ]], [[ಕಾಫಿ]], [[ಮಲಬಾರ್ ಮೆಣಸು|ಮೆಣಸು]], [[ನೈಸರ್ಗಿಕ ರಬ್ಬರ್]], [[ಏಲಕ್ಕಿ]], ಮತ್ತು [[ಗೋಡಂಬಿ]] ಮುಂತಾದ ವಾಣಿಜ್ಯ ಬೆಳೆಗಳ ರಾಷ್ಟ್ರೀಯ ಉತ್ಪಾದನೆಯ ಗಮನಾರ್ಹ ಪ್ರಮಾಣವನ್ನು ಉತ್ಪಾದಿಸುತ್ತದೆ.{{sfn|Chandran|2018|p=409}} ಆಹಾರ ಬೆಳೆಗಳ ಕೃಷಿಯು 1950 ರ ದಶಕದಿಂದ ಕಡಿಮೆಯಾಗಲು ಪ್ರಾರಂಭಿಸಿತು.{{sfn|Chandran|2018|p=409}}
ಕೇರಳದ ಆರ್ಥಿಕತೆಯು [[ಕೇರಳ ಗಲ್ಫ್ ವಲಸೆ|ವಿದೇಶಗಳಲ್ಲಿ ಕೆಲಸ ಮಾಡುವ ವಲಸಿಗರ]] ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ, ಮುಖ್ಯವಾಗಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಲ್ಲಿ]], ಮತ್ತು ವಾರ್ಷಿಕ ಸ್ಥಳಾಂತರ ವರ್ಗಾವಣೆಗಳು GSDP ಯ ಐದನೇ ಒಂದು ಭಾಗಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ.<ref name="rem1">{{cite report |author1=K.P. Kannan |author2=K.S. Hari |title=Kerala's Gulf connection: Emigration, remittances and their macroeconomic impact, 1972–2000 |url=https://ideas.repec.org/p/ind/cdswpp/328.html |year=2002 |website=[[Research Papers in Economics]] |access-date=4 April 2022 |archive-date=28 June 2021 |archive-url=https://web.archive.org/web/20210628135450/https://ideas.repec.org/p/ind/cdswpp/328.html |url-status=live }}</ref> 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ ರಾಜ್ಯವು ಗಮನಾರ್ಹ ವಲಸೆಯನ್ನು ಕಂಡಿತು. 2012 ರಲ್ಲಿ, ಕೇರಳವು ಎಲ್ಲಾ ರಾಜ್ಯಗಳ ಅತಿ ಹೆಚ್ಚು ಸ್ಥಳಾಂತರ ವರ್ಗಾವಣೆಗಳನ್ನು ಪಡೆಯಿತು: US$11.3 ಬಿಲಿಯನ್, ಇದು ದೇಶಕ್ಕೆ US$71 ಬಿಲಿಯನ್ ಸ್ಥಳಾಂತರ ವರ್ಗಾವಣೆಗಳಲ್ಲಿ ಸುಮಾರು 16% ಆಗಿತ್ತು.<ref>{{cite news |url=https://in.finance.yahoo.com/news/remittances--kerala-drives-dollar-flows-to-india-053414379.html |title=Remittances: Kerala drives dollar flows to India |work=[[Yahoo! Finance]] |date=5 November 2013 |access-date=8 November 2013 |archive-date=7 November 2013 |archive-url=https://web.archive.org/web/20131107053009/http://in.finance.yahoo.com/news/remittances--kerala-drives-dollar-flows-to-india-053414379.html |url-status=live }}</ref> 2015 ರಲ್ಲಿ, ಕೇರಳದಲ್ಲಿ NRI ಠೇವಣಿಗಳು {{INRConvert|1|lc}} ಕ್ಕಿಂತ ಹೆಚ್ಚಾಗಿದ್ದು, ಇದು NRI ಖಾತೆಗಳಲ್ಲಿ ಠೇವಣಿಯಾದ ಎಲ್ಲಾ ಹಣದ ಆರನೇ ಒಂದು ಭಾಗಕ್ಕೆ ಸಮನಾಗಿರುತ್ತದೆ, ಇದು ಸುಮಾರು {{INRConvert|7|lc}} ಆಗಿದೆ.<ref>{{cite news |url=https://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |title=NRI deposits in Kerala banks cross Rs 1 lakh crore |date=22 June 2015 |access-date=13 November 2015 |work=[[The Times of India]] |archive-date=25 June 2015 |archive-url=https://web.archive.org/web/20150625121200/http://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |url-status=live }}</ref> [[ಮಲಪ್ಪುರಂ ಜಿಲ್ಲೆ]]ಯು ರಾಜ್ಯದಲ್ಲಿ ಅತಿ ಹೆಚ್ಚು ವಲಸೆ ಕುಟುಂಬಗಳ ಪ್ರಮಾಣವನ್ನು ಹೊಂದಿದೆ.<ref name="eco" /> [[ಕೇರಳ ರಾಜ್ಯ ಯೋಜನಾ ಮಂಡಳಿ]]ಯು ನಿಯೋಜಿಸಿದ ಅಧ್ಯಯನವು, ತನ್ನ ವೆಚ್ಚಕ್ಕೆ ಹಣಕಾಸು ಒದಗಿಸಲು ಸ್ಥಳಾಂತರ ವರ್ಗಾವಣೆಗಳ ಮೇಲೆ ಅವಲಂಬಿಸುವ ಬದಲು ರಾಜ್ಯವು ಇತರ ವಿಶ್ವಾಸಾರ್ಹ ಆದಾಯದ ಮೂಲಗಳನ್ನು ಹುಡುಕಬೇಕೆಂದು ಸೂಚಿಸಿದೆ.<ref name="Commission2008b">{{cite book |author=India. Planning Commission |title=Kerala Development Report |url=https://books.google.com/books?id=Ul-OkF5gUJQC&pg=PA457 |year=2008 |publisher=Academic Foundation |isbn=978-8171885947 |page=396}}</ref>
ಮಾರ್ಚ್ 2002 ರಂತೆ, ಕೇರಳದ ಬ್ಯಾಂಕಿಂಗ್ ವಲಯವು 3341 ಸ್ಥಳೀಯ ಶಾಖೆಗಳನ್ನು ಒಳಗೊಂಡಿತ್ತು: ಪ್ರತಿ ಶಾಖೆಯು 10,000 ಜನರಿಗೆ ಸೇವೆ ಸಲ್ಲಿಸಿತು, ಇದು ರಾಷ್ಟ್ರೀಯ ಸರಾಸರಿ 16,000 ಕ್ಕಿಂತ ಕಡಿಮೆಯಾಗಿದೆ; ರಾಜ್ಯವು ಭಾರತೀಯ ರಾಜ್ಯಗಳಲ್ಲಿ ಮೂರನೇ ಅತಿ ಹೆಚ್ಚು ಬ್ಯಾಂಕ್ ಪ್ರವೇಶವನ್ನು ಹೊಂದಿದೆ.<ref name="RBI_2002">{{cite web |url=https://rbidocs.rbi.org.in/rdocs/Publications/PDFs/35585.pdf |title=State/Union Territory-Wise Number of Branches of Scheduled Commercial Banks and Average Population Per Bank Branch |date=March 2002 |work=Reserve Bank of India |access-date=28 December 2008 |url-status=dead |archive-url=https://web.archive.org/web/20070810094850/https://rbidocs.rbi.org.in/rdocs/Publications/PDFs/35585.pdf |archive-date=10 August 2007}}</ref> 1 ಅಕ್ಟೋಬರ್ 2011 ರಂದು, ಕೇರಳವು ಪ್ರತಿ ಗ್ರಾಮದಲ್ಲಿ ಕನಿಷ್ಠ ಒಂದು ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಯಿತು.<ref>{{cite news |url=https://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |work=The Times of India |title=Now, you can bank on every village in Kerala |date=1 October 2011 |access-date=13 November 2015 |archive-date=4 January 2017 |archive-url=https://web.archive.org/web/20170104180910/http://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |url-status=live }}</ref> [[ಕೇರಳದಲ್ಲಿ ನಿರುದ್ಯೋಗ|2007 ರಲ್ಲಿ ನಿರುದ್ಯೋಗವು]] 9.4% ಎಂದು ಅಂದಾಜಿಸಲಾಗಿದೆ;<ref>{{cite news |author=Kumar KG |title=Jobless no more? |newspaper=Business Line |date=8 October 2007 |url=https://www.thehindubusinessline.com/todays-paper/tp-economy/article1671367.ece |quote=A study by K.C. Zacharia and S. Irudaya Rajan, two economists at the Centre for Development Studies (CDS), unemployment in Kerala has dropped from 19.1[%] in 2003 to 9.4[%] in 2007. |access-date=16 November 2012 |archive-date=6 November 2013 |archive-url=https://web.archive.org/web/20131106032604/http://www.thehindubusinessline.com/todays-paper/tp-economy/article1671367.ece |url-status=live }}</ref> ದೀರ್ಘಕಾಲದ ಸಮಸ್ಯೆಗಳೆಂದರೆ [[ನಿರುದ್ಯೋಗ]], ಯುವಜನರ ಕಡಿಮೆ ಉದ್ಯೋಗಸಾಧ್ಯತೆ, ಮತ್ತು ಕೇವಲ 13.5% ರಷ್ಟಿರುವ ಕಡಿಮೆ ಮಹಿಳಾ [[ಕಾರ್ಮಿಕ|ಕಾರ್ಮಿಕ ಭಾಗವಹಿಸುವಿಕೆ ದರ]],<ref name="Nair_2004">{{Cite book |author=Nair NG |veditors=Nair PR, Shaji H |title=Measurement of Employment, Unemployment, and Underemployment |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621751 |url=https://www.cds.ac.in/krpcds/publication/downloads/72.pdf |access-date=31 December 2008 |archive-date=30 May 2015 |archive-url=https://web.archive.org/web/20150530210334/http://www.cds.ac.in/krpcds/publication/downloads/72.pdf |url-status=live }}</ref>{{rp|5, 13}} ಜೊತೆಗೆ ''[[ನೋಕ್ಕು ಕೂಲಿ]]'' ("ನೋಡುವಿಕೆಗೆ ವೇತನ") ಪದ್ಧತಿಯೂ ಇತ್ತು.<ref name="Outlook-2008">{{cite news |url=https://www.outlookindia.com/article.aspx?237419 |first=John |last=Mary |title=Men (Not) At Work |work=[[Outlook (Indian magazine)|Outlook]] |date=12 May 2008 |access-date=13 November 2015 |archive-date=6 November 2013 |archive-url=https://web.archive.org/web/20131106032651/http://www.outlookindia.com/article.aspx?237419 |url-status=live }}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6">{{Cite report |last=Deaton |first=Angus |title=Regional poverty estimates for India, 1999–2000 |url=https://www.princeton.edu/rpds/papers/pdfs/deaton_regionalpovertyindia.pdf |date=22 August 2003 |archive-url=https://web.archive.org/web/20110628193845/https://www.princeton.edu/rpds/papers/pdfs/deaton_regionalpovertyindia.pdf |archive-date=28 June 2011 |url-status=dead |page=10 |access-date=4 April 2022}}</ref>
2020–2021 ರ ರಾಜ್ಯದ ಬಜೆಟ್ {{INRConvert|1.15|lc}} ಆಗಿತ್ತು.<ref name="Budget">{{cite web |url=https://www.finance.kerala.gov.in/bdgtDcs.jsp |title=Budget In Brief |format=PDF |website=finance.kerala.gov.in |publisher=Government of Kerala |access-date=4 December 2020 |archive-date=25 November 2020 |archive-url=https://web.archive.org/web/20201125214731/http://www.finance.kerala.gov.in/bdgtDcs.jsp |url-status=live }}</ref> ರಾಜ್ಯ ಸರ್ಕಾರದ ತೆರಿಗೆ ಆದಾಯವು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–21 ರಲ್ಲಿ {{INRConvert|674|b}} ಆಗಿತ್ತು; 2019–20 ರಲ್ಲಿ {{INRConvert|557|b}} ರಿಂದ ಹೆಚ್ಚಾಗಿದೆ. ಕೇರಳ ಸರ್ಕಾರದ ಅದರ [[ತೆರಿಗೆ-ಅಲ್ಲದ ಆದಾಯ]]ಗಳು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–2021 ರಲ್ಲಿ {{INRConvert|146|b}} ತಲುಪಿದೆ.<ref name="Budget" /> ಆದಾಗ್ಯೂ, ಕೇರಳದ GSDP ಗೆ ತೆರಿಗೆಯ ಹೆಚ್ಚಿನ ಅನುಪಾತವು ದೀರ್ಘಕಾಲದ ಬಜೆಟ್ ಕೊರತೆಗಳು ಮತ್ತು ಸುಸ್ಥಿರವಲ್ಲದ ಮಟ್ಟದ ಸರ್ಕಾರಿ ಸಾಲವನ್ನು ನಿವಾರಿಸಿಲ್ಲ, ಇದು ಸಾಮಾಜಿಕ ಸೇವೆಗಳ ಮೇಲೆ ಪರಿಣಾಮ ಬೀರಿದೆ.<ref>{{cite web |url=https://fincomindia.nic.in/pubsugg/memo_ker.pdf |archive-url=https://web.archive.org/web/20080626195846/https://fincomindia.nic.in/pubsugg/memo_ker.pdf |archive-date=26 June 2008 |title=Memoranda from States: Kerala |website=fincomindia.nic.in |access-date=25 September 2013}}</ref> 2006 ರಲ್ಲಿ ಒಟ್ಟು 223 [[ಹರ್ತಾಲ್]]ಗಳು ನಡೆದಿದ್ದವು, ಇದರ ಪರಿಣಾಮವಾಗಿ {{INRConvert|20|b}} ಕ್ಕಿಂತ ಹೆಚ್ಚು ಆದಾಯ ನಷ್ಟವಾಗಿದೆ.<ref>[https://www.rediff.com/news/2008/jul/06kerala.htm Kerala: Hartals Own Country?] {{webarchive |url=https://web.archive.org/web/20160304043808/https://www.rediff.com/news/2008/jul/06kerala.htm |date=4 March 2016 }} 6 July 2008</ref> ಕೇರಳದ GDP ಯಲ್ಲಿ 10% ಏರಿಕೆಯು ರಾಷ್ಟ್ರೀಯ GDP ಗಿಂತ 3% ಹೆಚ್ಚಾಗಿದೆ. 2013 ರಲ್ಲಿ, ಬಂಡವಾಳ ವೆಚ್ಚವು ರಾಷ್ಟ್ರೀಯ ಸರಾಸರಿ 5% ಕ್ಕೆ ಹೋಲಿಸಿದರೆ 30% ರಷ್ಟು ಏರಿತು, ದ್ವಿಚಕ್ರ ವಾಹನಗಳ ಮಾಲೀಕರು ರಾಷ್ಟ್ರೀಯ ದರ 15% ಕ್ಕೆ ಹೋಲಿಸಿದರೆ 35% ರಷ್ಟು ಏರಿತು, ಮತ್ತು ಶಿಕ್ಷಕ-ವಿದ್ಯಾರ್ಥಿ ಅನುಪಾತವು 2:100 ರಿಂದ 4:100 ಕ್ಕೆ 50% ರಷ್ಟು ಏರಿತು.<ref>{{cite web |url=https://www.keralacm.gov.in/index.php/news2catleist/2443-23-12-2013-india-today |archive-url=https://web.archive.org/web/20131224091613/https://www.keralacm.gov.in/index.php/news2catleist/2443-23-12-2013-india-today |url-status=dead |archive-date=24 December 2013 |title=India Today On Cm |publisher=Keralacm.gov.in |access-date=11 January 2014}}</ref>
[[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ]]ಯು ರಾಜ್ಯದ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು, ರಾಜ್ಯದ ಆದಾಯದ ಹೊರಗಿನಿಂದ ಮೂಲಸೌಕರ್ಯ ಅಭಿವೃದ್ಧಿಗೆ ನಿಧಿಯನ್ನು ಸಜ್ಜುಗೊಳಿಸಲು ರಾಜ್ಯದ ಸರ್ಕಾರಿ-ಸ್ವಾಮ್ಯದ [[ಹಣಕಾಸು ಸಂಸ್ಥೆ]]ಯಾಗಿದೆ.<ref>{{Cite news |url=https://www.thehindu.com/news/national/kerala/big-push-for-infrastructure-in-budget/article17403255.ece |title=Big push for infrastructure in Budget |newspaper=The Hindu |date=3 March 2017 |via=www.thehindu.com |access-date=25 November 2020 |archive-date=29 January 2021 |archive-url=https://web.archive.org/web/20210129210933/https://www.thehindu.com/news/national/kerala/big-push-for-infrastructure-in-budget/article17403255.ece |url-status=live }}</ref><ref>{{Cite web |url=https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |title=Kerala Budget: Infrastructure projects get a major fillip |website=The New Indian Express |date=4 March 2017 |access-date=25 November 2020 |archive-date=30 January 2021 |archive-url=https://web.archive.org/web/20210130030958/https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |url-status=live }}</ref>
ನವೆಂಬರ್ 2015 ರಲ್ಲಿ, [[ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯ|ನಗರಾಭಿವೃದ್ಧಿ ಸಚಿವಾಲಯ]]ವು [[ಅಟಲ್ ನವೀಕರಣ ಮತ್ತು ನಗರ ಪರಿವರ್ತನೆಗಾಗಿ ಮಿಷನ್]] (AMRUT) ಎಂದು ಕರೆಯಲ್ಪಡುವ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಕೇರಳದ ಏಳು ನಗರಗಳನ್ನು ಆಯ್ಕೆ ಮಾಡಿತು.<ref>{{cite news |title=Modi to address heads of civic bodies on urban revamp |url=https://www.thehindu.com/news/national/modi-to-address-heads-of-civic-bodies-on-urban-revamp/article7336851.ece |date=20 June 2015 |newspaper=[[The Hindu]] |access-date=25 June 2015 |archive-date=2 February 2021 |archive-url=https://web.archive.org/web/20210202155935/https://www.thehindu.com/news/national/modi-to-address-heads-of-civic-bodies-on-urban-revamp/article7336851.ece |url-status=live }}</ref> ಸೇವಾ ಮಟ್ಟದ ಸುಧಾರಣಾ ಯೋಜನೆಯನ್ನು (SLIP) ಅಭಿವೃದ್ಧಿಪಡಿಸಲು ಪ್ರತಿ ನಗರಕ್ಕೆ {{INRConvert|2.5|m}} ನ ಪ್ಯಾಕೇಜ್ ಅನ್ನು ಘೋಷಿಸಲಾಯಿತು, ಇದು ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಕೊಚ್ಚಿ, ತೃಶೂರ್, ಕೋಝಿಕೋಡ್, ಮತ್ತು ಪಾಲಕ್ಕಾಡ್ ನಗರಗಳಲ್ಲಿ ಸ್ಥಳೀಯ ನಗರ ಸಂಸ್ಥೆಗಳ ಉತ್ತಮ ಕಾರ್ಯನಿರ್ವಹಣೆಗೆ ಯೋಜನೆಯಾಗಿದೆ.<ref>{{cite news |last=R. Ramabhadran |first=Pillai |title=AMRUT to roll out on a smaller scale |url=https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |access-date=12 November 2015 |work=The Hindu |issue=12 November 2015 |archive-date=7 February 2021 |archive-url=https://web.archive.org/web/20210207052652/https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |url-status=live }}</ref> [[ಗ್ರ್ಯಾಂಡ್ ಕೇರಳ ಶಾಪಿಂಗ್ ಫೆಸ್ಟಿವಲ್]] (GKSF) ಅನ್ನು 2007 ರಲ್ಲಿ ಪ್ರಾರಂಭಿಸಲಾಯಿತು, ಇದು ಕೇರಳದ ಒಂಬತ್ತು ನಗರಗಳಾದ್ಯಂತ 3000 ಕ್ಕೂ ಹೆಚ್ಚು ಮಳಿಗೆಗಳನ್ನು ದೊಡ್ಡ ತೆರಿಗೆ ರಿಯಾಯಿತಿಗಳು, VAT ಮರುಪಾವತಿಗಳು ಮತ್ತು ದೊಡ್ಡ ಪ್ರಮಾಣದ ಬಹುಮಾನಗಳೊಂದಿಗೆ ಒಳಗೊಂಡಿದೆ.<ref name="GKSF begins">{{cite news |title=Shopping festival begins |url=https://www.thehindu.com/todays-paper/tp-national/tp-kerala/shopping-festival-begins/article1959420.ece |work=The Hindu |date=2 December 2007 |access-date=24 January 2013 |archive-date=27 September 2013 |archive-url=https://web.archive.org/web/20130927054507/http://www.thehindu.com/todays-paper/tp-national/tp-kerala/shopping-festival-begins/article1959420.ece |url-status=live }}</ref> [[ತಿರುವನಂತಪುರ|ತಿರುವನಂತಪುರದ]] [[ಲುಲು ಮಾಲ್, ತಿರುವನಂತಪುರ|ಲುಲು ಇಂಟರ್ನ್ಯಾಷನಲ್ ಮಾಲ್]] ಭಾರತದ ಅತಿದೊಡ್ಡ [[ಶಾಪಿಂಗ್ ಮಾಲ್|ಶಾಪಿಂಗ್ ಮಾಲ್]] ಆಗಿದೆ.<ref>{{cite news |title=LuLu Group: Going places |url=https://www.khaleejtimes.com/business/local/lulu-group-going-places |work=[[Khaleej Times]] |access-date=13 November 2020 |archive-date=26 April 2021 |archive-url=https://web.archive.org/web/20210426172244/https://www.khaleejtimes.com/business/local/lulu-group-going-places |url-status=live }}</ref>
ಅನೇಕ ಸಾಧನೆಗಳ ಹೊರತಾಗಿಯೂ, ಕೇರಳವು ವಿದ್ಯಾವಂತ ಮಹಿಳೆಯರ ಮೇಲೆ ಅಸಮಾನವಾಗಿ ಪರಿಣಾಮ ಬೀರುವ ಹೆಚ್ಚಿನ ಮಟ್ಟದ ನಿರುದ್ಯೋಗ, ಹೆಚ್ಚಿನ ಮಟ್ಟದ ಜಾಗತಿಕ ಪ್ರಭಾವ ಮತ್ತು ಅತ್ಯಂತ ಸೂಕ್ಷ್ಮ ಪರಿಸರದಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದೆ.<ref name="Hindu2021">{{cite journal |title=Making sense of Kerala |journal=The Hindu |date=13 December 2021 |last1=Heller |first1=Patrick |last2=Törnquist |first2=Olle |url=https://www.thehindu.com/news/national/kerala/making-sense-of-kerala/article37942860.ece |archive-url=https://web.archive.org/web/20211214151547/https://www.thehindu.com/news/national/kerala/making-sense-of-kerala/article37942860.ece |accessdate=5 March 2022 |archive-date=14 December 2021 |quote=Kerala has specific challenges: persistently high levels of unemployment that disproportionately impact educated women, a high degree of global exposure and a very fragile environment. More broadly, as the 21st century unfolds, it becomes increasingly clearer that the role of the State in supporting development must fundamentally change. First, in highly educated societies like Kerala, industrialisation is no longer the path to economic prosperity.}}</ref>
=== ಕೈಗಾರಿಕೆಗಳು ===
ಸಾಂಪ್ರದಾಯಿಕ ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳು; [[ತೆಂಗಿನ ನಾರು]], [[ಕೈಮಗ್ಗ]]ಗಳು, ಮತ್ತು [[ಕರಕುಶಲ]]ಗಳು ಸುಮಾರು ಒಂದು ಮಿಲಿಯನ್ ಜನರನ್ನು ಉದ್ಯೋಗಿಸುತ್ತವೆ.<ref name="KumarKerala2007">{{cite book |author1=S. Rajitha Kumar |author2=University of Kerala |title=Traditional Industries of India in the Globalised World |url=https://books.google.com/books?id=aBvtAAAAMAAJ |year=2007 |publisher=University of Kerala |isbn=978-8177081435 |page=223}}</ref> ಕೇರಳವು ಬಿಳಿ ತೆಂಗಿನ ನಾರಿನ ನಾರಿನ ಒಟ್ಟು ಜಾಗತಿಕ ಉತ್ಪಾದನೆಯ 60% ಅನ್ನು ಪೂರೈಸುತ್ತದೆ. ಭಾರತದ ಮೊದಲ ತೆಂಗಿನ ನಾರಿನ ಕಾರ್ಖಾನೆಯನ್ನು [[ಆಲಪ್ಪುಳ]]ದಲ್ಲಿ 1859–60 ರಲ್ಲಿ ಸ್ಥಾಪಿಸಲಾಯಿತು.<ref>{{cite web |title=Indian Coir Industry |url=https://www.indianmirror.com/indian-industries/coir.html |work=Indian Mirror |access-date=29 April 2014 |archive-date=2 May 2014 |archive-url=https://web.archive.org/web/20140502033302/http://www.indianmirror.com/indian-industries/coir.html |url-status=live }}</ref> ಕೇಂದ್ರ ತೆಂಗಿನ ನಾರಿನ ಸಂಶೋಧನಾ ಸಂಸ್ಥೆಯನ್ನು ಅಲ್ಲಿ 1959 ರಲ್ಲಿ ಸ್ಥಾಪಿಸಲಾಯಿತು. 2006–2007 ರ [[SIDBI]] ಯ ಜನಗಣತಿಯ ಪ್ರಕಾರ, ಕೇರಳದಲ್ಲಿ {{formatnum:1468104}} [[ಸಣ್ಣ ಮತ್ತು ಮಧ್ಯಮ ಉದ್ಯಮಗಳು#ಭಾರತ|ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿವೆ]], ಇವು {{formatnum:3031272}} ಜನರನ್ನು ಉದ್ಯೋಗಿಸುತ್ತವೆ.<ref name="SIDBI Report 2010">{{cite book |title=SIDBI Report on Micro, Small and Medium Enterprises Sector, 2010 |publisher=Small Industries Development Bank of India |year=2010}}</ref><ref>{{cite journal |title=A Study on the Position of Small and Medium Enterprises in Kerala vis a vis the National Scenario |author=N. Rajeevan |journal=International Journal of Research in Commerce, Economics and Management |date=March 2012 |volume=2 |issue=3}}</ref> [[KSIDC]] ಕೇರಳದಲ್ಲಿ 650 ಕ್ಕೂ ಹೆಚ್ಚು ಮಧ್ಯಮ ಮತ್ತು ದೊಡ್ಡ ಉತ್ಪಾದನಾ ಸಂಸ್ಥೆಗಳನ್ನು ಪ್ರೋತ್ಸಾಹಿಸಿದೆ, 72,500 ಜನರಿಗೆ ಉದ್ಯೋಗವನ್ನು ಸೃಷ್ಟಿಸಿದೆ.<ref>{{cite web |url=https://www.ksidc.org/about-functions.php |archive-url=https://web.archive.org/web/20140709062837/https://www.ksidc.org/about-functions.php |archive-date=9 July 2014 |title=Functions, KSIDC, Thiruvananthapuram |publisher=Kerala State Industrial Development Corporation |access-date=6 December 2013}}</ref> GSDP ಯ 0.3% ರಷ್ಟಿರುವ ಗಣಿಗಾರಿಕಾ ವಲಯವು [[ಇಲ್ಮೆನೈಟ್]], [[ಕಯೋಲಿನ್]], [[ಬಾಕ್ಸೈಟ್]], [[ಸಿಲಿಕಾ]], [[ಕ್ವಾರ್ಟ್ಜ್]], [[ರುಟೈಲ್]], [[ಜಿರ್ಕಾನ್]], ಮತ್ತು [[ಸಿಲ್ಲಿಮನೈಟ್]] ಹೊರತೆಗೆಯುವಿಕೆಯನ್ನು ಒಳಗೊಂಡಿದೆ.<ref name="GOK_2005c">{{Cite journal |author=Government of Kerala |year=2005 |title=Kerala at a Glance |journal=Government of Kerala |url=https://www.kerala.gov.in/ |access-date=22 January 2006 |url-status=dead |archive-url=https://web.archive.org/web/20060118031516/https://www.kerala.gov.in/ |archive-date=18 January 2006}}</ref> ಇತರ ಪ್ರಮುಖ ವಲಯಗಳೆಂದರೆ [[ಕೇರಳದಲ್ಲಿ ಪ್ರವಾಸೋದ್ಯಮ|ಪ್ರವಾಸೋದ್ಯಮ]], ವೈದ್ಯಕೀಯ ವಲಯ, [[ಕೇರಳದಲ್ಲಿ ಶಿಕ್ಷಣ|ಶೈಕ್ಷಣಿಕ ವಲಯ]], ಬ್ಯಾಂಕಿಂಗ್, [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಹಡಗು ನಿರ್ಮಾಣ]], [[ಕೊಚ್ಚಿ ಸಂಸ್ಕರಣಾಗಾರ|ತೈಲ ಸಂಸ್ಕರಣಾಗಾರ]], ಮೂಲಸೌಕರ್ಯ, ಉತ್ಪಾದನೆ, [[ವಸತಿ ಉದ್ಯಾನ|ಮನೆ ತೋಟಗಳು]], ಪಶುಪಾಲನೆ ಮತ್ತು [[ವ್ಯಾಪಾರ ಪ್ರಕ್ರಿಯೆಯ ಹೊರಗುತ್ತಿಗೆ]].{{citation needed|date=October 2025}}
=== ಕೃಷಿ ===
[[File:Tea plantations in Munnar, Kerala.jpg|thumb|[[ಮುನ್ನಾರ್|ಮುನ್ನಾರಿನಲ್ಲಿ]] ಚಹಾ ತೋಟಗಳು, ಕೇರಳ]]
[[File:Nemmara-paddy.jpg|alt=A field|thumb|[[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡಿನ]] ಒಂದು ಭತ್ತದ ಗದ್ದೆ, ಇದನ್ನು ''ಕೇರಳದ ಧಾನ್ಯದ ಬುಟ್ಟಿ'' ಎಂದೂ ಕರೆಯುತ್ತಾರೆ]]
ಕೇರಳದಲ್ಲಿ ಕೃಷಿಯಲ್ಲಿ ಪ್ರಮುಖ ಬದಲಾವಣೆಯು 1970 ರ ದಶಕದಲ್ಲಿ ಸಂಭವಿಸಿತು, ಭಾರತಾದ್ಯಂತ ಅಕ್ಕಿಯ ಲಭ್ಯತೆ ಹೆಚ್ಚಾದ ಕಾರಣ ಮತ್ತು ಕಾರ್ಮಿಕರ ಲಭ್ಯತೆ ಕಡಿಮೆಯಾದ ಕಾರಣ ಅಕ್ಕಿ ಉತ್ಪಾದನೆಯು ಕುಸಿಯಿತು.<ref name="Sinha2003">{{cite book |author=B.R. Sinha |title=Encyclopaedia Of Professional Education (10 Vol.) |url=https://books.google.com/books?id=mdjGoXN3y1AC&pg=PA205 |access-date=18 November 2012 |year=2003 |publisher=Sarup & Sons |isbn=978-8176254106 |pages=204–05}}</ref> ಪರಿಣಾಮವಾಗಿ, ಅಕ್ಕಿ ಉತ್ಪಾದನೆಯಲ್ಲಿ ಹೂಡಿಕೆ ಕಡಿಮೆಯಾಯಿತು ಮತ್ತು ಭೂಮಿಯ ಗಮನಾರ್ಹ ಭಾಗವು ದೀರ್ಘಕಾಲಿಕ ಮರದ ಬೆಳೆಗಳು ಮತ್ತು ಕಾಲಿಕ ಬೆಳೆಗಳ ಕೃಷಿಗೆ ಬದಲಾಯಿತು.<ref name="Remesh2010">{{cite book |author=Babu P. Remesh |title=Dynamics of Rural Labour: A Study of Small Holding Rubber Tappers in Kerala |url=https://books.google.com/books?id=uOyNsKXSa0gC&pg=PA52 |access-date=18 November 2012 |year=2010 |publisher=Concept Publishing Company |isbn=978-8180696602 |pages=52–}}</ref><ref name="Commission2008">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA66 |access-date=18 November 2012 |year=2008 |publisher=Academic Foundation |isbn=978-8171885947 |pages=66–}}</ref> ಕೃಷಿ ಕಾರ್ಮಿಕರ ಕೊರತೆ, ಭೂಮಿಯ ಹೆಚ್ಚಿನ ಬೆಲೆ ಮತ್ತು ಕಾರ್ಯಾಚರಣೆಯ ಹಿಡುವಳಿಗಳ ಅನಾರೋಗ್ಯಕರ ಗಾತ್ರದಿಂದಾಗಿ ಬೆಳೆಗಳ ಲಾಭದಾಯಕತೆಯು ಕುಸಿಯಿತು.<ref name="google9">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=66 |access-date=30 May 2015}}</ref> ಕೇರಳದಲ್ಲಿ ಕೇವಲ 27.3% ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿವೆ, ಇದು ಭಾರತದಲ್ಲಿ ಅತ್ಯಂತ ಕಡಿಮೆ ಪ್ರಮಾಣವಾಗಿದೆ.{{sfn|Chandran|2018|p=406}}
ಕೇರಳವು ಕರಿಮೆಣಸಿನ ರಾಷ್ಟ್ರೀಯ ಉತ್ಪಾದನೆಯ 97% ಅನ್ನು ಉತ್ಪಾದಿಸುತ್ತದೆ<ref name="Limca Book of Records">{{cite book |title=Limca Book of Records |url=https://books.google.com/books?id=Y-JtAAAAMAAJ |access-date=18 November 2012 |year=2001 |publisher=Bisleri Beverages Limited |page=97}}</ref> ಮತ್ತು ದೇಶದ [[ನೈಸರ್ಗಿಕ ರಬ್ಬರ್]]ನ 85% ರಷ್ಟಿದೆ.<ref name="google10">{{cite book |title=South Asia 2006 |url=https://books.google.com/books?id=YG8bAQAAMAAJ |access-date=18 November 2012 |year=2005 |publisher=Taylor & Francis |page=291 |isbn=978-1-85743-318-0}}</ref><ref name="Economic Affairs">{{cite book |title=Economic Affairs |url=https://books.google.com/books?id=StHsAAAAMAAJ |access-date=18 November 2012 |year=1998 |publisher=H. Roy |page=47}}</ref> [[ತೆಂಗು]], [[ಚಹಾ]], [[ಕಾಫಿ]], [[ಗೋಡಂಬಿ]], ಮತ್ತು ಮಸಾಲೆಗಳು—ಏಲಕ್ಕಿ, [[ವೆನಿಲ್ಲಾ]], [[ದಾಲ್ಚಿನ್ನಿ]], ಮತ್ತು [[ಜಾಯಿಕಾಯಿ]] ಪ್ರಮುಖ ಕೃಷಿ ಉತ್ಪನ್ನಗಳಾಗಿವೆ.<ref name="ChattopadhyayFranke2006" />{{rp|74}}<ref name="Newton">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT3 |access-date=18 November 2012 |publisher=Springwood emedia |isbn=978-1-4761-2308-0 |pages=3–}}</ref><ref name="B.L.MarkoseMarkose2007">{{cite book |author1=Rajan, S. & B.L.Markose |author2=Baby Lissy Markose |title=Propagation of Horticultural Crops: Vol.06. Horticulture Science Series |url=https://books.google.com/books?id=19zgbxw-YhYC&pg=PA212 |access-date=18 November 2012 |year=2007 |publisher=New India Publishing |isbn=978-8189422486 |pages=212–}}</ref><ref name="Pradhan2009">{{cite book |author=Pradhan |title=Retailing Management 3E |url=https://books.google.com/books?id=8y7Zb_D-_oYC&pg=PA256 |access-date=18 November 2012 |year=2009 |publisher=Tata McGraw-Hill Education |isbn=978-0-07-015256-4 |pages=256–}}</ref><ref name="PradeepkumarPradeep2008">{{cite book |author1=T. Pradeepkumar |author2=Kumar, Pradeep |title=Management of Horticultural Crops: Vol.11 Horticulture Science Series: In 2 Parts |url=https://books.google.com/books?id=VHmokNZXbHUC&pg=PA509 |access-date=18 November 2012 |year=2008 |publisher=New India Publishing |isbn=978-8189422493 |pages=509–}}</ref><ref name="OsellaOsella2000">{{cite book |author1=Filippo Osella |author2=Caroline Osella |title=Social Mobility In Kerala: Modernity and Identity in Conflict |url=https://books.google.com/books?id=rMRw0gTZSJwC&pg=PA235 |access-date=18 November 2012 |year=2000 |publisher=Pluto Press |isbn=978-0-7453-1693-2 |pages=235–}}</ref> [[ಭಾರತ]]ದ ರಫ್ತು ಗುಣಮಟ್ಟದ ಗೋಡಂಬಿ ಬೀಜಗಳಲ್ಲಿ ಸುಮಾರು 80% ಅನ್ನು [[ಕೊಲ್ಲಂ]]ನಲ್ಲಿ ತಯಾರಿಸಲಾಗುತ್ತದೆ.<ref>{{cite news |url=https://www.thehindu.com/news/national/kerala/cashew-sector-in-a-tailspin/article8767346.ece |title=Cashew sector in a tailspin |newspaper=The Hindu |access-date=24 June 2016 |archive-date=24 June 2016 |archive-url=https://web.archive.org/web/20160624004205/http://www.thehindu.com/news/national/kerala/cashew-sector-in-a-tailspin/article8767346.ece |url-status=live }}</ref> ಪ್ರಮುಖ ವಾಣಿಜ್ಯ ಬೆಳೆ [[ತೆಂಗು]] ಮತ್ತು ಕೇರಳವು ಭಾರತದಲ್ಲಿ ತೆಂಗಿನ ಕೃಷಿ ಪ್ರದೇಶದಲ್ಲಿ ಮೊದಲ ಸ್ಥಾನದಲ್ಲಿದೆ.{{sfn|Chandran|2018|p=407}} ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಏಲಕ್ಕಿ]]ಯಲ್ಲಿ ಸುಮಾರು 90% ಕೇರಳದಿಂದ ಬರುತ್ತದೆ.<ref name="eco" /> ಭಾರತವು ವಿಶ್ವದಲ್ಲಿ ಏಲಕ್ಕಿಯ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ.<ref name="eco" /> ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಕಾಫಿ]]ಯಲ್ಲಿ ಸುಮಾರು 20% ಕೇರಳದಿಂದ ಬರುತ್ತದೆ.{{sfn|Chandran|2018|p=409}} ಪ್ರಮುಖ ಕೃಷಿ ಪ್ರಧಾನ ಆಹಾರವೆಂದರೆ ಅಕ್ಕಿ, ವಿವಿಧ ಪ್ರಭೇದಗಳನ್ನು ವ್ಯಾಪಕವಾದ ಭತ್ತದ ಗದ್ದೆಗಳಲ್ಲಿ ಬೆಳೆಯಲಾಗುತ್ತದೆ.<ref name="VarshneyRzóska1976">{{cite book |author1=C.K. Varshney |author2=J. Rzóska |title=Aquatic Weeds in South East Asia |url=https://books.google.com/books?id=lW3fHiDjHNcC&pg=PA100 |access-date=18 November 2012 |year=1976 |publisher=Springer |isbn=978-9061935568 |pages=100–}}</ref> ಮನೆ ತೋಟಗಳು ಕೃಷಿ ವಲಯದ ಗಮನಾರ್ಹ ಭಾಗವನ್ನು ರೂಪಿಸಿದವು.<ref name="Dobbie2006">{{cite book |author=Aline Dobbie |title=India the Elephants Blessing |url=https://books.google.com/books?id=ckpEd4emnCkC&pg=PA123 |access-date=18 November 2012 |year=2006 |publisher=Melrose Press |isbn=978-1-905226-85-6 |pages=123–}}</ref>
=== ಮೀನುಗಾರಿಕೆ ===
{{convert|590|km|mi|lk=out|abbr=off}} ಕರಾವಳಿ ಪಟ್ಟಿಯೊಂದಿಗೆ,<ref>{{cite web |title=Kerala: Natural Resources |url=https://india.gov.in/knowindia/state_uts.php?id=70 |archive-url=https://web.archive.org/web/20111218084509/https://india.gov.in/knowindia/state_uts.php?id=70 |archive-date=18 December 2011 |publisher=Government of India |access-date=18 November 2012}}</ref> 400,000 ಹೆಕ್ಟೇರ್ ಒಳನಾಡಿನ ಜಲ ಸಂಪನ್ಮೂಲಗಳು<ref>{{cite web |title=Kerala: April 2012 |url=https://www.ibef.org/download/Kerala_060710.pdf |publisher=Indian Brand Equity Fund |access-date=18 November 2012 |archive-date=10 May 2013 |archive-url=https://web.archive.org/web/20130510151146/http://www.ibef.org/download/Kerala_060710.pdf |url-status=live }}</ref> ಮತ್ತು ಸರಿಸುಮಾರು 220,000 ಸಕ್ರಿಯ ಮೀನುಗಾರರು,<ref name="Commission1961">{{cite book |author=India. Planning Commission |title=Third five year plan |url=https://books.google.com/books?id=5_G5AAAAIAAJ |access-date=18 November 2012 |year=1961 |publisher=Manager of Publications |page=359}}</ref> ಕೇರಳವು ಭಾರತದ ಪ್ರಮುಖ ಮೀನು ಉತ್ಪಾದಕರಲ್ಲಿ ಒಂದಾಗಿದೆ.<ref name="google13">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA51 |access-date=18 November 2012 |year=2008 |publisher=Academic Foundation |isbn=978-8171885947 |page=51}}</ref> 2003–04 ರ ವರದಿಗಳ ಪ್ರಕಾರ, ಸುಮಾರು 11 ಲಕ್ಷ (1.1 ಮಿಲಿಯನ್) ಜನರು ಮೀನುಗಾರಿಕೆ ಮತ್ತು ಒಣಗಿಸುವಿಕೆ, ಸಂಸ್ಕರಣೆ, ಪ್ಯಾಕೇಜಿಂಗ್, ರಫ್ತು ಮತ್ತು ಮೀನುಗಾರಿಕೆ ಸಾಗಣೆಯಂತಹ ಸಂಯೋಜಿತ ಚಟುವಟಿಕೆಗಳಿಂದ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ. 2003–04 ರಲ್ಲಿ ವಲಯದ ವಾರ್ಷಿಕ ಇಳುವರಿಯನ್ನು 6,08,000 ಟನ್ ಎಂದು ಅಂದಾಜಿಸಲಾಗಿದೆ.<ref>{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=51 |access-date=30 May 2015}}</ref> ಇದು ರಾಜ್ಯದ ಒಟ್ಟು ಆರ್ಥಿಕತೆಯ ಸುಮಾರು 3% ರಷ್ಟು ಕೊಡುಗೆ ನೀಡುತ್ತದೆ. 2006 ರಲ್ಲಿ, ಒಟ್ಟು ಭಾರತೀಯ ಸಮುದ್ರ ಮೀನುಗಾರಿಕೆ ಇಳುವರಿಯಲ್ಲಿ ಸುಮಾರು 22% ಕೇರಳದಿಂದ ಬಂದಿದೆ.<ref name="Handbook" /> ನೈಋತ್ಯ ಮಾನ್ಸೂನ್ ಸಮಯದಲ್ಲಿ, ತೀರದ ಉದ್ದಕ್ಕೂ ಅಮಾನತುಗೊಂಡ ಮಣ್ಣಿನ ಬ್ಯಾಂಕ್ ಬೆಳೆಯುತ್ತದೆ, ಇದು ಪ್ರಶಾಂತ ಸಮುದ್ರದ ನೀರಿಗೆ ಕಾರಣವಾಗುತ್ತದೆ, ಇದು ಮೀನುಗಾರಿಕಾ ಉದ್ಯಮದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ವಿದ್ಯಮಾನವನ್ನು ಸ್ಥಳೀಯವಾಗಿ ''[[ಚಕರ]]'' ಎಂದು ಕರೆಯಲಾಗುತ್ತದೆ.<ref name="Gulati1984">{{cite book |author=Leela Gulati |title=Fisherwomen on the Kerala Coast: Demographic and Socio-Economic Impact of a Fisheries Development Project |url=https://archive.org/details/fisherwomenonker0000gula |url-access=registration |access-date=18 November 2012 |year=1984 |publisher=International Labour Organization |isbn=978-9221036265 |page=[https://archive.org/details/fisherwomenonker0000gula/page/103 103]}}</ref><ref name="Journal of Kerala Studies">{{cite book |title=Journal of Kerala Studies |url=https://books.google.com/books?id=EgSSAAAAIAAJ |access-date=18 November 2012 |year=1987 |publisher=University of Kerala. |page=201}}</ref> ಜಲಗಳು ವಿವಿಧ ರೀತಿಯ ಮೀನುಗಳನ್ನು ಒದಗಿಸುತ್ತವೆ: [[ಪೆಲಾಜಿಕ್ ಮೀನು|ಪೆಲಾಜಿಕ್ ಪ್ರಭೇದಗಳು]]; 59%, [[ಡೆಮರ್ಸಲ್ ಮೀನು|ಡೆಮರ್ಸಲ್ ಪ್ರಭೇದಗಳು]]; 23%, [[ಕಠಿಣಚರ್ಮಿಗಳು]], [[ಮೃದ್ವಂಗಿಗಳು]] ಮತ್ತು ಇತರವುಗಳು 18% ರಷ್ಟಿವೆ.<ref name="Handbook">{{cite book |title=Handbook of Marine Fisheries Conservation and Management |url=https://archive.org/details/handbookmarinefi00graf |url-access=limited |publisher=Oxford University Press |author1=R. Quentin Grafton |author2=Ray Hilborn |author3=Dale Squires |year=2009 |pages=[https://archive.org/details/handbookmarinefi00graf/page/n24 10]–12 |isbn=978-0-19-537028-7}}</ref> ಸುಮಾರು 1,050,000 (1.050 ಮಿಲಿಯನ್) ಮೀನುಗಾರರು 1999–2000 ರ ಅಂದಾಜಿನಂತೆ 668,000 ಟನ್ ವಾರ್ಷಿಕ ಕ್ಯಾಚ್ ಅನ್ನು ಎಳೆಯುತ್ತಾರೆ; 222 ಮೀನುಗಾರಿಕಾ ಗ್ರಾಮಗಳು {{convert|590|km|adj=on|abbr=off}} ಕರಾವಳಿಯ ಉದ್ದಕ್ಕೂ ಹರಡಿವೆ. ಇನ್ನೂ 113 ಮೀನುಗಾರಿಕಾ ಗ್ರಾಮಗಳು ಒಳನಾಡಿನಲ್ಲಿ ಹರಡಿವೆ.{{citation needed|date=October 2025}}
== ಸಾರಿಗೆ ==
=== ರಸ್ತೆಗಳು ===
{{Main|ಕೇರಳದ ರಸ್ತೆಗಳು}}
{{See also|ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ}}{{multiple image
<!-- Layout parameters -->| align = <!-- right (default), left, centre, none -->
| direction = vertical
| width = 240
| image1 = Thrissur sixlane.jpg
| caption1 = [[ತೃಶೂರ್]] ನಿಂದ [[ವಡಕ್ಕೆಂಚೇರಿ]] ವರೆಗಿನ [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ನ ಆರು ಪಥದ ವಿಭಾಗ
<!--image 2-->}}
ಕೇರಳವು {{convert|331904|km|mi}} ರಸ್ತೆಗಳನ್ನು ಹೊಂದಿದೆ, ಇದು ಭಾರತದ ಒಟ್ಟು ರಸ್ತೆಗಳ 5.6% ರಷ್ಟಿದೆ.<ref name="eco" /><ref name="road">{{Cite book |title=Ministry Annual Report (2019–20) |publisher=Ministry of Road Transport & Highways Transport Research Wing, Government of India |year=2020 |location=New Delhi |url=https://morth.nic.in/sites/default/files/Ministry%20Annual%20Report_2019-20.pdf |archive-date=28 October 2021 |access-date=20 June 2021 |archive-url=https://web.archive.org/web/20211028140933/https://morth.nic.in/sites/default/files/Ministry%20Annual%20Report_2019-20.pdf |url-status=live }}</ref> ಇದು ಪ್ರತಿ ಸಾವಿರ ಜನರಿಗೆ ಸುಮಾರು {{convert|9.94|km|mi|2}} ರಸ್ತೆ ಎಂದು ಅನುವಾದಿಸುತ್ತದೆ, ಇದು ದೇಶದ ಸರಾಸರಿ {{convert|4.87|km|mi|2}} ಗೆ ಹೋಲಿಸಿದರೆ.<ref name="eco" /><ref name="road" /> ಕೇರಳದ ರಸ್ತೆಗಳು {{convert|1812|km|mi}} ರಾಷ್ಟ್ರೀಯ ಹೆದ್ದಾರಿಯನ್ನು ಒಳಗೊಂಡಿವೆ; ರಾಷ್ಟ್ರದ ಒಟ್ಟು 1.6%, {{convert|4342|km|mi}} ರಾಜ್ಯ ಹೆದ್ದಾರಿ; ರಾಷ್ಟ್ರದ ಒಟ್ಟು 2.5%, {{convert|27470|km|mi}} ಜಿಲ್ಲಾ ರಸ್ತೆಗಳು; ರಾಷ್ಟ್ರದ ಒಟ್ಟು 4.7%, {{convert|33201|km|mi}} ನಗರ (ಪುರಸಭೆ) ರಸ್ತೆಗಳು; ರಾಷ್ಟ್ರದ ಒಟ್ಟು 6.3%, ಮತ್ತು {{convert|158775|km|mi}} ಗ್ರಾಮೀಣ ರಸ್ತೆಗಳು; ರಾಷ್ಟ್ರದ ಒಟ್ಟು 3.8%.<ref name=":16-17">{{Cite book |title=Basic Road Statistics of India (2016–17) |publisher=Ministry of Road Transport & Highways Transport Research Wing, Government of India |year=2019 |location=New Delhi |pages=7–18 |url=https://morth.nic.in/sites/default/files/Basic%20_Road_Statics_of_India.pdf |archive-date=28 August 2021 |access-date=25 November 2020 |archive-url=https://web.archive.org/web/20210828082929/https://www.morth.nic.in/sites/default/files/Basic%20_Road_Statics_of_India.pdf |url-status=live }}</ref> [[ಕೋಟ್ಟಯಂ ಜಿಲ್ಲೆ|ಕೋಟ್ಟಯಂ]] [[ಕೇರಳದ ಜಿಲ್ಲೆಗಳ ಪಟ್ಟಿ|ಕೇರಳದ ಜಿಲ್ಲೆಗಳಲ್ಲಿ]] ಅತಿ ಉದ್ದದ ರಸ್ತೆಗಳನ್ನು ಹೊಂದಿದ್ದರೆ, [[ವಯನಾಡು]] ಕಡಿಮೆ ಪ್ರಮಾಣವನ್ನು ಹೊಂದಿದೆ.{{sfn|Chandran|2018|p=422}} ಕೇರಳದ ಪಶ್ಚಿಮ ಕರಾವಳಿಯ ಹೆಚ್ಚಿನ ಭಾಗವು [[ರಾಷ್ಟ್ರೀಯ ಹೆದ್ದಾರಿ 66 (ಭಾರತ)|NH 66]] (ಹಿಂದೆ NH 17 ಮತ್ತು 47) ಮೂಲಕ ಪ್ರವೇಶಿಸಬಹುದು; ಮತ್ತು ಪೂರ್ವ ಭಾಗವು ರಾಜ್ಯ ಹೆದ್ದಾರಿಗಳ ಮೂಲಕ ಪ್ರವೇಶಿಸಬಹುದು.<ref name="Kerala PWD">{{cite web |title=National Highways in Kerala |url=https://www.keralapwd.gov.in/getPage.php%3Fpage%3DNH%2520in%2520Kerala%26pageId%3D301&ved=2ahUKEwjRh7jHod7YAhWFmZQKHWSeAeoQFjAOegQIBxAB&usg=AOvVaw15WM6wG3ueKFD1qj28WEps |work=Kerala Public Works Department |publisher=Government of Kerala}} {{dead link|date=September 2019 |bot=InternetArchiveBot |fix-attempted=yes }}</ref> ಬೆಟ್ಟ ಮತ್ತು ಕರಾವಳಿ ಹೆದ್ದಾರಿಗಳಿಗೆ ಹೊಸ ಯೋಜನೆಗಳನ್ನು ಇತ್ತೀಚೆಗೆ [[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ|KIIFB]] ಅಡಿಯಲ್ಲಿ ಘೋಷಿಸಲಾಯಿತು.<ref>{{cite news |title=Coastal, Hill Highways to become a reality |url=https://www.thehindu.com/news/national/kerala/coastal-hill-highways-to-become-a-reality/article19262450.ece |date=12 July 2017 |newspaper=The Hindu |access-date=12 February 2019 |archive-date=15 April 2021 |archive-url=https://web.archive.org/web/20210415092848/https://www.thehindu.com/news/national/kerala/coastal-hill-highways-to-become-a-reality/article19262450.ece |url-status=live }}</ref> ಅತಿ ಉದ್ದದ ರಸ್ತೆ ({{convert|1622|km|mi}}) ಹೊಂದಿರುವ ರಾಷ್ಟ್ರೀಯ ಹೆದ್ದಾರಿ 66, [[ಕನ್ಯಾಕುಮಾರಿ]]ಯನ್ನು [[ಮುಂಬೈ]]ಗೆ ಸಂಪರ್ಕಿಸುತ್ತದೆ; ಇದು [[ಕಾಸರಗೋಡು|ಕಾಸರಗೋಡಿನ]] [[ತಲಪಾಡಿ]] ಮೂಲಕ ಕೇರಳವನ್ನು ಪ್ರವೇಶಿಸುತ್ತದೆ ಮತ್ತು [[ಕಣ್ಣೂರು]], [[ಕೋಝಿಕೋಡ್]], [[ಮಲಪ್ಪುರಂ]], [[ಗುರುವಾಯೂರು]], [[ಕೊಚ್ಚಿ]], [[ಆಲಪ್ಪುಳ]], [[ಕೊಲ್ಲಂ]], [[ತಿರುವನಂತಪುರ]] ಮೂಲಕ ಹಾದುಹೋಗುವ ಮೊದಲು [[ತಮಿಳುನಾಡು]] ಪ್ರವೇಶಿಸುತ್ತದೆ.<ref name="Kerala PWD" /> [[ಪಾಲಕ್ಕಾಡ್ ಜಿಲ್ಲೆ]]ಯನ್ನು ಸಾಮಾನ್ಯವಾಗಿ ಕೇರಳದ ಪ್ರವೇಶದ್ವಾರ ಎಂದು ಕರೆಯಲಾಗುತ್ತದೆ, ಪಶ್ಚಿಮ ಘಟ್ಟಗಳಲ್ಲಿ ಪಾಲಕ್ಕಾಡ್ ಅಂತರದ ಉಪಸ್ಥಿತಿಯಿಂದಾಗಿ, ಅದರ ಮೂಲಕ ಕೇರಳದ ಉತ್ತರ ([[ಮಲಬಾರ್ ಪ್ರದೇಶ|ಮಲಬಾರ್]]) ಮತ್ತು ದಕ್ಷಿಣ (ತಿರುವಾಂಕೂರು) ಭಾಗಗಳು ರಸ್ತೆ ಮತ್ತು ರೈಲು ಮೂಲಕ ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಿವೆ. ರಾಜ್ಯದ ಅತಿದೊಡ್ಡ ತಪಾಸಣಾ ಕೇಂದ್ರ, [[ವಾಲಯಾರ್]], [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ರಲ್ಲಿದೆ, ಕೇರಳ ಮತ್ತು [[ತಮಿಳುನಾಡು]] ನಡುವಿನ ಗಡಿ ಪಟ್ಟಣದಲ್ಲಿ, ಅದರ ಮೂಲಕ ದೊಡ್ಡ ಪ್ರಮಾಣದ ಸಾರ್ವಜನಿಕ ಮತ್ತು ವಾಣಿಜ್ಯ ಸಾರಿಗೆಯು ಕೇರಳದ ಉತ್ತರ ಮತ್ತು ಮಧ್ಯ ಜಿಲ್ಲೆಗಳನ್ನು ತಲುಪುತ್ತದೆ.<ref>{{cite web |url=https://www.keralatourism.org/districts/palakkad/ |title=District of Palakkad – the granary of Kerala, Silent Valley National Park, Nelliyampathy |publisher=keralatourism.org |access-date=30 May 2015 |archive-date=15 April 2021 |archive-url=https://web.archive.org/web/20210415114106/https://www.keralatourism.org/districts/palakkad/ |url-status=live }}</ref>
[[ಸಾರ್ವಜನಿಕ ಕಾರ್ಯಗಳ ಇಲಾಖೆ (ಕೇರಳ)|ಸಾರ್ವಜನಿಕ ಕಾರ್ಯಗಳ ಇಲಾಖೆ]] [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|ರಾಜ್ಯ ಹೆದ್ದಾರಿ ವ್ಯವಸ್ಥೆ]] ಮತ್ತು ಪ್ರಮುಖ ಜಿಲ್ಲಾ ರಸ್ತೆಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ.<ref>{{cite web |title=About us |url=https://www.keralapwd.gov.in/getPage.php?page=About%20Us&pageId=256&link=About%20PWD |archive-url=https://web.archive.org/web/20101201055142/https://www.keralapwd.gov.in/getPage.php?page=About%20Us&pageId=256&link=About%20PWD |url-status=dead |archive-date=1 December 2010 |work=Kerala Public Works Department |publisher=Government of Kerala |access-date=18 November 2012}}</ref> ಕೇರಳ ರಾಜ್ಯ ಸಾರಿಗೆ ಯೋಜನೆ (KSTP), ಇದು [[GIS]]-ಆಧಾರಿತ ರಸ್ತೆ ಮಾಹಿತಿ ಮತ್ತು ನಿರ್ವಹಣಾ ಯೋಜನೆಯನ್ನು (RIMS) ಒಳಗೊಂಡಿದೆ, ಕೇರಳದ ರಾಜ್ಯ ಹೆದ್ದಾರಿಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಕೆಲವು ಪ್ರಮುಖ ಜಿಲ್ಲಾ ರಸ್ತೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ.<ref>{{Cite news |author=Kumar VS |title=Kerala State transport project second phase to be launched next month |work=The Hindu |date=20 January 2006 |access-date=11 November 2007 |url=https://www.thehindubusinessline.com/2006/01/20/stories/2006012002272100.htm |archive-url=https://web.archive.org/web/20070304181402/https://www.thehindubusinessline.com/2006/01/20/stories/2006012002272100.htm |archive-date=4 March 2007}}</ref><ref>{{cite web |author=Kumar VS |title=Institutional Strengthening Action Plan (ISAP) |work=Kerala Public Works Department |publisher=Government of Kerala |year=2003 |access-date=11 November 2007 |url=https://www.keralapwd.gov.in/pwd/public/isap.jsp |archive-url=https://web.archive.org/web/20080512054304/https://www.keralapwd.gov.in/pwd/public/isap.jsp |archive-date=12 May 2008}}</ref> ಕೇರಳದಲ್ಲಿ ಸಾರಿಗೆಯು ಪ್ರತಿ ವರ್ಷ 10-11% ದರದಲ್ಲಿ ಬೆಳೆಯುತ್ತಿದೆ, ಇದು ಹೆಚ್ಚಿನ ಸಾರಿಗೆ ಮತ್ತು ರಸ್ತೆಗಳ ಮೇಲಿನ ಒತ್ತಡಕ್ಕೆ ಕಾರಣವಾಗಿದೆ. ಸಾರಿಗೆ ಸಾಂದ್ರತೆಯು ರಾಷ್ಟ್ರೀಯ ಸರಾಸರಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ, ಇದು ರಾಜ್ಯದ ಹೆಚ್ಚಿನ ಜನಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ. ಕೇರಳದ ವಾರ್ಷಿಕ ಒಟ್ಟು ರಸ್ತೆ ಅಪಘಾತಗಳು ರಾಷ್ಟ್ರದಲ್ಲಿ ಅತಿ ಹೆಚ್ಚಿನದಾಗಿದೆ. ಅಪಘಾತಗಳು ಮುಖ್ಯವಾಗಿ ಕಿರಿದಾದ ರಸ್ತೆಗಳು ಮತ್ತು ಅಜಾಗರೂಕ ಚಾಲನೆಯ ಪರಿಣಾಮವಾಗಿದೆ.<ref>{{Cite news |author=Kumar KG |title=Accidentally notorious |work=The Hindu |date=22 September 2003 |access-date=11 November 2007 |url=https://www.thehindubusinessline.in/2003/09/22/stories/2003092201111300.htm |archive-date=10 August 2011 |archive-url=https://web.archive.org/web/20110810210809/http://www.thehindubusinessline.in/2003/09/22/stories/2003092201111300.htm |url-status=live }}</ref> ಕೇರಳದ ರಾಷ್ಟ್ರೀಯ ಹೆದ್ದಾರಿಗಳು ದೇಶದಲ್ಲಿ ಅತ್ಯಂತ ಕಿರಿದಾದವುಗಳಲ್ಲಿ ಸೇರಿವೆ ಮತ್ತು ಮುಂದಿನ ಭವಿಷ್ಯಕ್ಕೂ ಹಾಗೆಯೇ ಉಳಿಯುತ್ತವೆ, ಏಕೆಂದರೆ ರಾಜ್ಯ ಸರ್ಕಾರವು ಕಿರಿದಾದ ರಾಷ್ಟ್ರೀಯ ಹೆದ್ದಾರಿಗಳನ್ನು ಅನುಮತಿಸುವ ವಿನಾಯಿತಿಯನ್ನು ಪಡೆದುಕೊಂಡಿದೆ. ಕೇರಳದಲ್ಲಿ, ಹೆದ್ದಾರಿಗಳು {{convert|45|m|abbr=off}} ಅಗಲವಾಗಿವೆ. ಇತರ ರಾಜ್ಯಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ದರ್ಜೆಯಿಂದ ಪ್ರತ್ಯೇಕಿಸಲ್ಪಟ್ಟಿವೆ, {{convert|60|m|abbr=off}} ಅಗಲವಾಗಿದ್ದು ಕನಿಷ್ಠ ನಾಲ್ಕು ಪಥಗಳನ್ನು ಹೊಂದಿವೆ, ಜೊತೆಗೆ 6 ಅಥವಾ 8-ಪಥದ ಪ್ರವೇಶ-ನಿಯಂತ್ರಿತ ಎಕ್ಸ್ಪ್ರೆಸ್ವೇಗಳನ್ನು ಹೊಂದಿವೆ.<ref>{{cite web |url=https://www.indianexpress.com/news/kerala-parties-finally-toe-nhai-line-of-45m-wide-highways/661729/ |title=Kerala parties finally toe NHAI line of 45-m wide highways |work=Indian Express |date=18 August 2010 |access-date=25 September 2013}}</ref><ref>{{cite web |url=https://www.rediff.com/business/slide-show/slide-show-1-indias-13-super-highways/20110705.htm |title=Check out India's 13 super expressways |work=Rediff.com |date=5 July 2011 |access-date=25 September 2013 |archive-date=28 September 2013 |archive-url=https://web.archive.org/web/20130928024436/http://www.rediff.com/business/slide-show/slide-show-1-indias-13-super-highways/20110705.htm |url-status=live }}</ref> ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೇರಳ ಸರ್ಕಾರಕ್ಕೆ, ಕೇರಳದಲ್ಲಿ ಉತ್ತಮ ಹೆದ್ದಾರಿಗಳಿಗೆ ರಾಜಕೀಯ ಬದ್ಧತೆಯ ಕೊರತೆಯಿರುವುದರಿಂದ ಹೆದ್ದಾರಿ ಅಭಿವೃದ್ಧಿಯಲ್ಲಿ ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಬೆದರಿಕೆ ಹಾಕಿದೆ.<ref>{{Cite news |title=Kerala against development of five NHs |url=https://www.thehindu.com/news/national/kerala/kerala-against-development-of-five-nhs/article4555024.ece |url-access=subscription |newspaper=[[The Hindu]] |date=28 March 2013 |access-date=29 September 2024 |archive-date=4 December 2024 |archive-url=https://web.archive.org/web/20241204153945/https://www.thehindu.com/news/national/kerala/kerala-against-development-of-five-nhs/article4555024.ece |url-status=live }}</ref> {{As of|2013}}, ಕೇರಳವು ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ದರವನ್ನು ಹೊಂದಿತ್ತು, ಹೆಚ್ಚಿನ ಮಾರಣಾಂತಿಕ ಅಪಘಾತಗಳು ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ.<ref>{{Cite news |url=https://www.thehindu.com/todays-paper/tp-national/tp-kerala/states-troubled-highways-a-shocking-revelation-for-centre/article4865464.ece |title=State's troubled highways a shocking revelation for Centre |journal=The Hindu |date=30 June 2013 |access-date=25 September 2013 |author=Staff Reporter}}</ref>
=== ರೈಲುಮಾರ್ಗಗಳು ===
{{Main|ಕೇರಳದ ರೈಲು ನಿಲ್ದಾಣಗಳ ಪಟ್ಟಿ}}
{{See also|ಕೊಚ್ಚಿ ಮೆಟ್ರೋ}}
[[ಭಾರತೀಯ ರೈಲ್ವೆ]]ಯ [[ದಕ್ಷಿಣ ರೈಲ್ವೆ]] ವಲಯವು [[ಇಡುಕ್ಕಿ ಜಿಲ್ಲೆ|ಇಡುಕ್ಕಿ]] ಮತ್ತು [[ವಯನಾಡು ಜಿಲ್ಲೆ|ವಯನಾಡು]] ಎತ್ತರದ ಜಿಲ್ಲೆಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರಮುಖ ಪಟ್ಟಣಗಳು ಮತ್ತು ನಗರಗಳನ್ನು ಸಂಪರ್ಕಿಸುವ ರಾಜ್ಯದ ಎಲ್ಲಾ ರೈಲು ಮಾರ್ಗಗಳನ್ನು ನಿರ್ವಹಿಸುತ್ತದೆ.<ref>{{cite web |title=Introduction |url=https://khsrcl.com/downloads/ch-1.pdf |publisher=Delhi Metro Rail Corporation |access-date=18 November 2012 |url-status=dead |archive-url=https://web.archive.org/web/20120906213234/https://khsrcl.com/downloads/ch-1.pdf |archive-date=6 September 2012}}</ref> ರಾಜ್ಯದ ರೈಲು ಜಾಲವು [[ದಕ್ಷಿಣ ರೈಲ್ವೆ ವಲಯ|ದಕ್ಷಿಣ ರೈಲ್ವೆಯ]] ಆರು ವಿಭಾಗಗಳಲ್ಲಿ ಎರಡರ ನಿಯಂತ್ರಣದಲ್ಲಿದೆ; [[ತಿರುವನಂತಪುರ]] ಮೂಲಸ್ಥಾನವನ್ನು ಹೊಂದಿರುವ [[ತಿರುವನಂತಪುರ ರೈಲ್ವೆ ವಿಭಾಗ]] ಮತ್ತು [[ಪಾಲಕ್ಕಾಡ್]] ಮೂಲಸ್ಥಾನವನ್ನು ಹೊಂದಿರುವ [[ಪಾಲಕ್ಕಾಡ್ ರೈಲ್ವೆ ವಿಭಾಗ]].<ref>{{cite web |title=The Zonal Dream Of Railway Kerala |url=https://www.yentha.com/news/view/features/the-zonal-dream-of-railway-kerala |work=yentha.com |access-date=18 November 2012 |archive-url=https://web.archive.org/web/20121025033001/https://www.yentha.com/news/view/features/the-zonal-dream-of-railway-kerala |archive-date=25 October 2012 |url-status=dead}}</ref> [[ತಿರುವನಂತಪುರ ಸೆಂಟ್ರಲ್]] (TVC) ರಾಜ್ಯದ ಅತಿ ಜನನಿಬಿಡ ರೈಲು ನಿಲ್ದಾಣವಾಗಿದೆ.<ref>{{Cite news |url=https://www.thehindu.com/todays-paper/tp-national/tp-kerala/article1807051.ece |title=Thiruvananthapuram Central to be made a world-class station |date=7 March 2007 |newspaper=The Hindu |language=en-IN |issn=0971-751X |access-date=8 May 2016}}</ref> ಕೇರಳದ ಪ್ರಮುಖ ರೈಲು ನಿಲ್ದಾಣಗಳು:
{{columns-list|colwidth=19em|
* [[ತಿರುವನಂತಪುರ ಸೆಂಟ್ರಲ್]] (TVC)
* [[ಎರ್ನಾಕುಳಂ ಜಂಕ್ಷನ್ ರೈಲು ನಿಲ್ದಾಣ|ಎರ್ನಾಕುಳಂ ಜಂಕ್ಷನ್ (ದಕ್ಷಿಣ)]] (ERS)
* [[ಕೋಝಿಕೋಡ್ ರೈಲು ನಿಲ್ದಾಣ|ಕೋಝಿಕೋಡ್]] (CLT)
* [[ಕೊಲ್ಲಂ ಜಂಕ್ಷನ್ ರೈಲು ನಿಲ್ದಾಣ|ಕೊಲ್ಲಂ ಜಂಕ್ಷನ್]] (QLN)
* [[ತೃಶೂರ್ ರೈಲು ನಿಲ್ದಾಣ|ತೃಶೂರ್]] (TCR)
* [[ಪಾಲಕ್ಕಾಡ್ ಜಂಕ್ಷನ್]] (PGT)
* [[ಕಣ್ಣೂರು ರೈಲು ನಿಲ್ದಾಣ|ಕಣ್ಣೂರು]] (CAN)
* [[ಶೊರಾನೂರು ಜಂಕ್ಷನ್]] (SRR)
* [[ಎರ್ನಾಕುಳಂ ಟೌನ್]] (ಉತ್ತರ) (ERN)
* [[ಕೋಟ್ಟಯಂ ರೈಲು ನಿಲ್ದಾಣ|ಕೋಟ್ಟಯಂ]] (KTYM)
* [[ಚೆಂಗನ್ನೂರು ರೈಲು ನಿಲ್ದಾಣ|ಚೆಂಗನ್ನೂರು]] (CNGR)
* [[ಆಲಪ್ಪುಳ ರೈಲು ನಿಲ್ದಾಣ|ಆಲಪ್ಪುಳ]] (ALLP)
* [[ತಿರುವನಂತಪುರ ಉತ್ತರ ರೈಲು ನಿಲ್ದಾಣ|ತಿರುವನಂತಪುರ ಉತ್ತರ]] (TVCN)
* [[ಕಾಯಂಕುಲಂ]] ಜಂಕ್ಷನ್ (KYJ)
* [[ತಿರೂರ್ ರೈಲು ನಿಲ್ದಾಣ|ತಿರೂರ್]] (TIR)
* [[ಕಾಸರಗೋಡು ರೈಲು ನಿಲ್ದಾಣ|ಕಾಸರಗೋಡು]] (KGQ)
* [[ಆಲುವಾ ರೈಲು ನಿಲ್ದಾಣ|ಆಲುವಾ]] (AWY)
* [[ತಲಶ್ಶೇರಿ]] (TLY)}}
=== ವಿಮಾನ ನಿಲ್ದಾಣಗಳು ===
{{Main|ಕೇರಳ ರಾಜ್ಯದ ವಿಮಾನ ನಿಲ್ದಾಣಗಳ ಪಟ್ಟಿ}}
[[File:Cochin International Airport Limited.jpg|right|thumb|[[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]], ರಾಜ್ಯದ ಅತಿ ಜನನಿಬಿಡ ವಿಮಾನ ನಿಲ್ದಾಣವು ಸೌರಶಕ್ತಿಯಿಂದ ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ]]
ಕೇರಳವು ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ: {{Cast listing|
* [[ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
}}
ಮದ್ರಾಸ್ ಪ್ರೆಸಿಡೆನ್ಸಿಯಡಿಯಲ್ಲಿ ಸ್ಥಾಪಿಸಲಾದ [[ಕೊಲ್ಲಂ ವಿಮಾನ ನಿಲ್ದಾಣ]]ವು ನಂತರ ಮುಚ್ಚಲ್ಪಟ್ಟಿತು, ಇದು ಕೇರಳದ ಮೊದಲ ವಿಮಾನ ನಿಲ್ದಾಣವಾಗಿತ್ತು.<ref>{{Cite news |url=https://www.thehindu.com/todays-paper/tp-national/tp-kerala/article252269.ece |title=Aviation school proposal evokes mixed response |journal=The Hindu |date=8 June 2009 |access-date=21 July 2015 |archive-date=20 December 2016 |archive-url=https://web.archive.org/web/20161220075251/http://www.thehindu.com/todays-paper/tp-national/tp-kerala/article252269.ece |url-status=live }}</ref> [[ಕಣ್ಣೂರು]] 1935 ರಷ್ಟು ಹಿಂದೆಯೇ ವಾಣಿಜ್ಯ ವಿಮಾನಯಾನಕ್ಕೆ ಬಳಸಲ್ಪಟ್ಟ ವಿಮಾನ ನಿಲ್ದಾಣವನ್ನು ಹೊಂದಿತ್ತು, [[ಟಾಟಾ ಗ್ರೂಪ್|ಟಾಟಾ]] ಏರ್ಲೈನ್ಸ್ [[ಮುಂಬೈ]] ಮತ್ತು ತಿರುವನಂತಪುರ ನಡುವೆ ಸಾಪ್ತಾಹಿಕ ವಿಮಾನಗಳನ್ನು ನಡೆಸುತ್ತಿತ್ತು – [[ಗೋವಾ]] ಮತ್ತು ಕಣ್ಣೂರಿನಲ್ಲಿ ನಿಲ್ಲುತ್ತಿತ್ತು.<ref>{{cite news |author=Sudhakaran, P |url=https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |title=Kannur flew, way before its first airport |newspaper=The Times of India |date=14 September 2015 |publisher=Timesofindia.indiatimes.com |access-date=13 November 2020 |url-status=live |archive-url=https://web.archive.org/web/20170518022943/https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |archive-date=18 May 2017}}</ref> ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ವಿಮಾನ ನಿಲ್ದಾಣ ಪ್ರಾಧಿಕಾರ]]ದಿಂದ ನಿರ್ವಹಿಸಲ್ಪಡುತ್ತದೆ, ಇದು ದಕ್ಷಿಣ ಭಾರತದ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. 1988 ರಲ್ಲಿ ತೆರೆಯಲ್ಪಟ್ಟ [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ವು ಕೇರಳದ ಎರಡನೇ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣ ಮತ್ತು [[ಮಲಬಾರ್ ಪ್ರದೇಶ|ಮಲಬಾರ್ ಪ್ರದೇಶದಲ್ಲಿ]] ಅತ್ಯಂತ ಹಳೆಯದಾಗಿದೆ.<ref>{{cite news |url=https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |work=The Times of India |title=Silver jubilee does not bring cheer to Karipur airport users |date=2 April 2012 |archive-date=4 June 2021 |access-date=7 February 2022 |archive-url=https://web.archive.org/web/20210604110846/https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಜ್ಯದಲ್ಲಿ ಅತಿ ಜನನಿಬಿಡವಾಗಿದೆ ಮತ್ತು [[ಭಾರತದ ಅತಿ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ|ದೇಶದಲ್ಲಿ ಏಳನೇ ಅತಿ ಜನನಿಬಿಡವಾಗಿದೆ]]. ಇದು [[CIAL ಸೌರಶಕ್ತಿ ಯೋಜನೆ|ಸೌರಶಕ್ತಿಯಿಂದ]] ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ<ref name="BBC">{{cite news |last=Menon |first=Supriya |url=https://www.bbc.com/news/world-asia-india-34421419 |title=How is the world's first solar-powered airport faring? – BBC News |publisher=Bbc.com |date=9 October 2015 |access-date=21 December 2018 |work=BBC News |archive-date=25 May 2023 |archive-url=https://web.archive.org/web/20230525214353/https://www.bbc.com/news/world-asia-india-34421419 |url-status=live }}</ref> ಮತ್ತು [[ಸಂಯುಕ್ತ ರಾಷ್ಟ್ರಗಳು]] ಸ್ಥಾಪಿಸಿದ ಅತ್ಯುನ್ನತ ಪರಿಸರ ಗೌರವವಾದ [[ಚಾಂಪಿಯನ್ಸ್ ಆಫ್ ದಿ ಅರ್ಥ್|ಚಾಂಪಿಯನ್ ಆಫ್ ದಿ ಅರ್ಥ್]] ಪ್ರಶಸ್ತಿಯನ್ನು ಗೆದ್ದುಕೊಂಡಿದೆ.<ref name="UN">{{cite news |url=https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |title=CIAL chosen for UN environmental honour |newspaper=[[The New Indian Express]] |date=26 July 2018 |archive-date=7 April 2023 |access-date=7 February 2022 |archive-url=https://web.archive.org/web/20230407102227/https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಪಬ್ಲಿಕ್ ಲಿಮಿಟೆಡ್ ಕಂಪನಿ]]ಯಾಗಿ ಸೇರಿಸಲ್ಪಟ್ಟ ಮೊದಲ ಭಾರತೀಯ ವಿಮಾನ ನಿಲ್ದಾಣವಾಗಿದೆ; ಇದನ್ನು 30 ದೇಶಗಳ ಸುಮಾರು 10,000 [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಅನಿವಾಸಿ ಭಾರತೀಯರು]] ಹಣಕಾಸು ಒದಗಿಸಿದ್ದಾರೆ.<ref>{{Cite news |title=The three airports in Kerala can be in business without affecting each other |publisher=[[Rediff.com|Rediff]] |date=6 December 1999 |access-date=11 November 2007 |url=https://www.rediff.com/business/1999/dec/06inter.htm |archive-date=20 January 2008 |archive-url=https://web.archive.org/web/20080120015042/http://www.rediff.com/business/1999/dec/06inter.htm |url-status=live }}</ref>
ನಾಗರಿಕ ವಿಮಾನ ನಿಲ್ದಾಣಗಳ ಜೊತೆಗೆ, [[ಕೊಚ್ಚಿ]] [[INS ಗರುಡ]] ಎಂಬ ನೌಕಾ ವಿಮಾನ ನಿಲ್ದಾಣವನ್ನು ಹೊಂದಿದೆ. ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಭಾರತೀಯ ವಾಯುಪಡೆ]]ಯ ದಕ್ಷಿಣ ವಾಯು ಕಮಾಂಡ್ನೊಂದಿಗೆ ನಾಗರಿಕ ಸೌಲಭ್ಯಗಳನ್ನು ಹಂಚಿಕೊಳ್ಳುತ್ತದೆ. ಈ ಸೌಲಭ್ಯಗಳನ್ನು ಹೆಚ್ಚಾಗಿ ಕೇರಳಕ್ಕೆ ಭೇಟಿ ನೀಡುವ ಕೇಂದ್ರ ಸರ್ಕಾರದ VIP ಗಳು ಬಳಸುತ್ತಾರೆ.{{citation needed|date=October 2025}}
=== ಜಲ ಸಾರಿಗೆ ===
{{Main|ಕೇರಳದ ಬಂದರುಗಳು}}
{{See also|ಕೊಚ್ಚಿ ವಾಟರ್ ಮೆಟ್ರೋ}}[[File:Cochin Ship Yard Cranes.JPG|alt=|thumb|230px|[[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಕೊಚ್ಚಿ ಹಡಗು ನಿರ್ಮಾಣ ಕೇಂದ್ರದಲ್ಲಿ]] ಕ್ರೇನ್ಗಳು]]
ಕೇರಳವು [[ಕೇರಳದ ಬಂದರುಗಳು|ಎರಡು ಪ್ರಮುಖ ಬಂದರುಗಳು, ನಾಲ್ಕು ಮಧ್ಯಂತರ ಬಂದರುಗಳು, ಮತ್ತು 13 ಸಣ್ಣ ಬಂದರುಗಳನ್ನು]] ಹೊಂದಿದೆ, ಅವುಗಳಲ್ಲಿ 4 ವಲಸೆ ತಪಾಸಣಾ ಸೌಲಭ್ಯಗಳನ್ನು ಹೊಂದಿವೆ.<ref>{{cite web |url=https://www.thehindu.com/news/national/kerala/kollam-port-gets-icp-clearance/article68293607.ece |date=15 Jun 2024 |title=Kollam port gets ICP clearance |work=The Hindu |access-date=16 Jun 2024 |archive-date=16 June 2024 |archive-url=https://web.archive.org/web/20240616013704/https://www.thehindu.com/news/national/kerala/kollam-port-gets-icp-clearance/article68293607.ece |url-status=live }}</ref><ref>{{cite web |url=https://www.mha.gov.in/sites/default/files/2024-03/ICPList_05032024..pdf |date= |title=LIST OF IMMIGRATION CHECK POSTs |publisher=Ministry of Home Affairs - Govt. of India |access-date=16 Jun 2024 |archive-date=31 July 2024 |archive-url=https://web.archive.org/web/20240731204706/https://www.mha.gov.in/sites/default/files/2024-03/ICPList_05032024..pdf |url-status=live }}</ref> ರಾಜ್ಯದ ಪ್ರಮುಖ ಬಂದರು [[ಕೊಚ್ಚಿ ಬಂದರು|ಕೊಚ್ಚಿಯಲ್ಲಿದೆ]], ಇದು {{cvt|8.27|km2}} ವಿಸ್ತೀರ್ಣವನ್ನು ಹೊಂದಿದೆ.{{sfn|Chandran|2018|p=424}} [[ವಿಝಿನ್ಜಂ ಅಂತಾರಾಷ್ಟ್ರೀಯ ಸಮುದ್ರ ಬಂದರು ತಿರುವನಂತಪುರ]], ಇದನ್ನು ಪ್ರಸ್ತುತ ಪ್ರಮುಖ ಬಂದರಾಗಿ ವರ್ಗೀಕರಿಸಲಾಗಿದೆ, ಇತರೆ ನಿರ್ಮಾಣ ಹಂತದಲ್ಲಿರುವುದರಿಂದ ಹಂತ I ಮಾತ್ರ ಪೂರ್ಣಗೊಂಡಿದೆ.{{sfn|Chandran|2018|p=424}} ಇತರ ಮಧ್ಯಂತರ ಬಂದರುಗಳು [[ಬೇಪುರ]], [[ಕೊಲ್ಲಂ]], ಮತ್ತು [[ಅಝಿಕೋಡ್ ಮತ್ತು ಅಝಿಕ್ಕಲ್|ಅಝೀಕಲ್]].{{sfn|Chandran|2018|p=424}} ಉಳಿದ ಬಂದರುಗಳನ್ನು ಸಣ್ಣ ಬಂದರುಗಳಾಗಿ ವರ್ಗೀಕರಿಸಲಾಗಿದೆ, ಇವುಗಳಲ್ಲಿ [[ಮಂಜೇಶ್ವರಂ]], [[ಕಾಸರಗೋಡು]], [[ನೀಲೇಶ್ವರಂ]], [[ಕಣ್ಣೂರು]], [[ತಲಶ್ಶೇರಿ]], [[ವಡಕರ]], [[ಪೊನ್ನಾನಿ]], [[ಮುನಂಬಂ]], ಮನಕೋಡಂ, [[ಆಲಪ್ಪುಳ]], [[ಕಾಯಂಕುಲಂ]], [[ನೀಂದಕರ]], ಮತ್ತು [[ವಲಿಯತುರ]] ಸೇರಿವೆ.{{sfn|Chandran|2018|p=424}} [[ಕೇರಳ ಸಮುದ್ರ ಸಂಸ್ಥೆ]]ಯ ಪ್ರಧಾನ ಕಛೇರಿಯು [[ನೀಂದಕರ]]ದಲ್ಲಿದೆ, ಇದು [[ಕೊಡುಂಗಲ್ಲೂರು]] ನಲ್ಲಿ ಹೆಚ್ಚುವರಿ ಉಪಕೇಂದ್ರವನ್ನು ಸಹ ಹೊಂದಿದೆ.{{sfn|Chandran|2018|p=424}} ರಾಜ್ಯವು ಹಲವಾರು [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳನ್ನು]] ಹೊಂದಿದೆ, ಅವುಗಳನ್ನು ವಾಣಿಜ್ಯ [[ಒಳನಾಡಿನ ನ್ಯಾವಿಗೇಷನ್]] ಗೆ ಬಳಸಲಾಗುತ್ತದೆ. ಸಾರಿಗೆ ಸೇವೆಗಳನ್ನು ಮುಖ್ಯವಾಗಿ ದೇಶೀಯ ದೋಣಿಗಳು ಮತ್ತು ಪ್ರಯಾಣಿಕ ಹಡಗುಗಳು ಒದಗಿಸುತ್ತವೆ. ರಾಜ್ಯದಲ್ಲಿ 67 ನ್ಯಾವಿಗೇಬಲ್ ನದಿಗಳಿವೆ, ಒಳನಾಡಿನ ಜಲಮಾರ್ಗಗಳ ಒಟ್ಟು ಉದ್ದ {{convert|1687|km}} ಆಗಿದೆ.<ref name="google14">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA207 |access-date=18 November 2012 |year=2008 |publisher=Academic Foundation |isbn=978-8171885947 |page=207}}</ref> ಒಳನಾಡಿನ ನ್ಯಾವಿಗೇಷನ್ ವಿಸ್ತರಣೆಗೆ ಮುಖ್ಯ ಅಡೆತಡೆಗಳೆಂದರೆ; ಮಣ್ಣು ತುಂಬುವಿಕೆಯಿಂದ ಜಲಮಾರ್ಗಗಳಲ್ಲಿ ಆಳದ ಕೊರತೆ, ನ್ಯಾವಿಗೇಷನ್ ವ್ಯವಸ್ಥೆಗಳು ಮತ್ತು ದಂಡೆ ರಕ್ಷಣೆಯ ನಿರ್ವಹಣೆಯ ಕೊರತೆ, [[ನೀರಿನ ಹಯಸಿಂತ್]] ನ ವೇಗವರ್ಧಿತ ಬೆಳವಣಿಗೆ, ಆಧುನಿಕ ಒಳನಾಡಿನ ಕ್ರಾಫ್ಟ್ ಟರ್ಮಿನಲ್ಗಳ ಕೊರತೆ, ಮತ್ತು ಸರಕು ನಿರ್ವಹಣಾ ವ್ಯವಸ್ಥೆಯ ಕೊರತೆ.{{citation needed|date=October 2025}}
ಕೇರಳವು ಭಾರತದ ಮೊದಲ ಜಲ ಮೆಟ್ರೋವನ್ನು ಸಹ ಹೊಂದಿದೆ, ಇದನ್ನು 'ಕೊಚ್ಚಿ ವಾಟರ್ ಮೆಟ್ರೋ' ಎಂದು ಕರೆಯಲಾಗುತ್ತದೆ.<ref>{{Cite web |last=Prabhakaran |first=Aishwarya |date=2024-04-28 |title='Sustainable, scenic': Kochi Water Metro carves niche & new paths |url=https://www.newindianexpress.com/states/kerala/2024/Apr/28/sustainable-scenic-kochi-water-metro-carves-niche-new-paths |access-date=2025-03-08 |website=The New Indian Express |language=en}}</ref> ಕೊಚ್ಚಿ ವಾಟರ್ ಮೆಟ್ರೋ ಯೋಜನೆಯು 15 ಮಾರ್ಗಗಳನ್ನು ಗುರುತಿಸಿದೆ, 10 ದ್ವೀಪಗಳನ್ನು 78 ಕಿಮೀ ವ್ಯಾಪಿಸಿರುವ ಮಾರ್ಗಗಳ ಜಾಲದೊಂದಿಗೆ 78 ವೇಗದ ಮತ್ತು ಸಂಪೂರ್ಣವಾಗಿ ವಿದ್ಯುತ್ ಚಾಲಿತ ಹೈಬ್ರಿಡ್ ದೋಣಿಗಳ ತಂಡದೊಂದಿಗೆ ಸಂಪರ್ಕಿಸುತ್ತದೆ.<ref>{{Cite web |title=Kochi Water Metro {{!}} About Us |url=https://watermetro.co.in/about |access-date=2025-03-08 |website=Kochi Water Metro |language=en}}</ref>
{{convert|616|km}} ಉದ್ದದ ಪಶ್ಚಿಮ-ಕರಾವಳಿ ಕಾಲುವೆಯು [[ಕಾಸರಗೋಡು]]ವನ್ನು [[ಪೂವಾರ್]] ಗೆ ಸಂಪರ್ಕಿಸುವ ರಾಜ್ಯದ ಅತಿ ಉದ್ದದ ಜಲಮಾರ್ಗವಾಗಿದೆ.{{sfn|Chandran|2018|p=423}} ಇದನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ: {{convert|41|km}} ಉದ್ದದ [[ಕಾಸರಗೋಡು]]-[[ನೀಲೇಶ್ವರಂ]] ವ್ಯಾಪ್ತಿ, {{convert|188|km}} ಉದ್ದದ [[ನೀಲೇಶ್ವರಂ]]-[[ಕೋಝಿಕೋಡ್]] ವ್ಯಾಪ್ತಿ, {{convert|160|km}} [[ಕೋಝಿಕೋಡ್]]-[[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]] ವ್ಯಾಪ್ತಿ, {{convert|168|km}} ಉದ್ದದ [[ರಾಷ್ಟ್ರೀಯ ಜಲಮಾರ್ಗ 3]] ([[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]]-[[ಕೊಲ್ಲಂ]] ವ್ಯಾಪ್ತಿ), ಮತ್ತು {{convert|74|km}} ಉದ್ದದ [[ಕೊಲ್ಲಂ]]-[[ವಿಝಿನ್ಜಂ]] ವ್ಯಾಪ್ತಿ.<ref name="eco" /> ಪಶ್ಚಿಮ-ಕರಾವಳಿ ಕಾಲುವೆಯ ಒಂದು ಭಾಗವಾದ [[ಕೊನೊಲ್ಲಿ ಕಾಲುವೆ]]ಯು [[ಕೋಝಿಕೋಡ್]] ನಗರವನ್ನು [[ಪೊನ್ನಾನಿ]] ಮೂಲಕ [[ಕೊಚ್ಚಿ]] ಗೆ ಸಂಪರ್ಕಿಸುತ್ತದೆ, [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಮತ್ತು [[ತೃಶೂರ್ ಜಿಲ್ಲೆ|ತೃಶೂರ್]] ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು [[ವಡಕರ]] ದಲ್ಲಿ ಪ್ರಾರಂಭವಾಗುತ್ತದೆ.<ref name="hindu_jan08" /> ಇದನ್ನು 1848 ರಲ್ಲಿ ಆಗಿನ [[ಮಲಬಾರ್ ಜಿಲ್ಲೆ|ಮಲಬಾರಿನ]] [[ಜಿಲ್ಲಾ ಕಲೆಕ್ಟರ್]] ಎಚ್. ವಿ. ಕೊನೊಲ್ಲಿ ಅವರ ಆದೇಶದಂತೆ ನಿರ್ಮಿಸಲಾಯಿತು, ಆರಂಭದಲ್ಲಿ ಮಲಬಾರಿನ ಒಳನಾಡಿನಿಂದ [[ಕುಟ್ಟಿಯಾಡಿ]] ಮತ್ತು [[ಕೊರಪುಳ]] ನದಿ ವ್ಯವಸ್ಥೆಗಳ ಮೂಲಕ [[ಕಲ್ಲಾಯಿ]] ಬಂದರಿಗೆ ಸರಕುಗಳ ಚಲನೆಯನ್ನು ಸುಗಮಗೊಳಿಸಲು.<ref name="hindu_jan08">{{cite news |url=https://www.hindu.com/pp/2008/01/05/stories/2008010550730300.htm |archive-url=https://web.archive.org/web/20100923092718/https://www.hindu.com/pp/2008/01/05/stories/2008010550730300.htm |url-status=dead |archive-date=23 September 2010 |title=Reviving the historic Canoly Canal |date=5 January 2005 |work=[[The Hindu]] |access-date=16 August 2009}}</ref> ಒಂದು ಶತಮಾನಕ್ಕೂ ಹೆಚ್ಚು ಕಾಲ ಕೋಝಿಕೋಡ್ ಮತ್ತು ಕೊಚ್ಚಿ ನಡುವೆ [[ಪೊನ್ನಾನಿ]] ಮೂಲಕ ಸರಕು ಸಾಗಣೆಗೆ ಇದು ಮುಖ್ಯ ಜಲಮಾರ್ಗವಾಗಿತ್ತು.<ref name="hindu_jan08" /> ಕೇರಳದ ಇತರ ಪ್ರಮುಖ ಜಲಮಾರ್ಗಗಳಲ್ಲಿ [[ಆಲಪ್ಪುಳ]]-[[ಚಂಗನಾಶ್ಶೇರಿ]] ಕಾಲುವೆ, [[ಆಲಪ್ಪುಳ]]-[[ಕೋಟ್ಟಯಂ]]-[[ಅತಿರಂಪುಳ]] ಕಾಲುವೆ, ಮತ್ತು [[ಕೋಟ್ಟಯಂ]]-[[ವೈಕೋಂ]] ಕಾಲುವೆ ಸೇರಿವೆ.{{sfn|Chandran|2018|p=424}}
== ಜನಸಂಖ್ಯಾಶಾಸ್ತ್ರ ==
{{Main|ಕೇರಳದ ಜನಸಂಖ್ಯಾಶಾಸ್ತ್ರ}}
{{See also|ಕೇರಳದ ಜನಾಂಗೀಯ ಗುಂಪುಗಳು|ಕೇರಳದ ಜನರ ಪಟ್ಟಿ}}
[[File:Kerala Population Pyramid in 5-year age groups (2011 census).png|thumbnail|ಕೇರಳದ [[ಜನಸಂಖ್ಯಾ ಪಿರಮಿಡ್]]]]
ಕೇರಳವು ಭಾರತದ ಜನಸಂಖ್ಯೆಯ 2.8% ರಷ್ಟಿದೆ; 859 ವ್ಯಕ್ತಿಗಳ ಪ್ರತಿ km<sup>2</sup> ಸಾಂದ್ರತೆಯೊಂದಿಗೆ, ಅದರ ಭೂಮಿಯು ರಾಷ್ಟ್ರೀಯ ಸರಾಸರಿ 370 ವ್ಯಕ್ತಿಗಳ ಪ್ರತಿ km<sup>2</sup> ಗಿಂತ ಸುಮಾರು ಮೂರು ಪಟ್ಟು ಹೆಚ್ಚು ಜನನಿಬಿಡವಾಗಿದೆ.<ref name="Census 2011">{{cite web |title=Size, Growth Rate and Distribution of Population |url=https://www.censusindia.gov.in/2011-prov-results/data_files/india/Final_PPT_2011_chapter3.pdf |website=Census 2011 |publisher=Government of India |access-date=13 November 2015 |archive-date=23 September 2015 |archive-url=https://web.archive.org/web/20150923224858/http://www.censusindia.gov.in/2011-prov-results/data_files/india/Final_PPT_2011_chapter3.pdf |url-status=live }}</ref> {{As of|2011}}, ತಿರುವನಂತಪುರವು ಕೇರಳದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ.<ref name="Census2011cities">{{cite web|title=Provisional Population Totals, Census of India 2011|url=http://urbanaffairskerala.org/images/downloads/ulb_population2011.pdf|work=Population of the urban local bodies in Kerala (2011)|publisher=Government of Kerala|accessdate=4 December 2020|archive-date=24 September 2020|archive-url=https://web.archive.org/web/20200924173424/http://urbanaffairskerala.org/images/downloads/ulb_population2011.pdf|url-status=dead}}</ref> ರಾಜ್ಯದಲ್ಲಿ, ಜನಸಂಖ್ಯಾ ಬೆಳವಣಿಗೆಯ ಪ್ರಮಾಣವು ಭಾರತದಲ್ಲಿ ಅತ್ಯಂತ ಕಡಿಮೆಯಾಗಿದೆ, ಮತ್ತು 2011 ರಲ್ಲಿ 4.9% ರಷ್ಟಿರುವ ದಶಕೀಯ ಬೆಳವಣಿಗೆಯು ಅಖಿಲ ಭಾರತ ಸರಾಸರಿ 17.6% ರಷ್ಟಕ್ಕಿಂತ ಕಡಿಮೆಯಾಗಿದೆ.<ref name="Census 2011" /> ಕೇರಳದ ಜನಸಂಖ್ಯೆಯು 1951 ಮತ್ತು 1991 ರ ನಡುವೆ ಎರಡು ಪಟ್ಟು ಹೆಚ್ಚಾಗಿ 15.6 ಮಿಲಿಯನ್ ಜನರನ್ನು ಸೇರಿಸಿ 1991 ರಲ್ಲಿ 29.1 ಮಿಲಿಯನ್ ನಿವಾಸಿಗಳನ್ನು ತಲುಪಿತು; 2011 ರ ವೇಳೆಗೆ ಜನಸಂಖ್ಯೆಯು 33.3 ಮಿಲಿಯನ್ ಆಗಿತ್ತು.<ref name="Census 2011" /> ಕೇರಳದ ಕರಾವಳಿ ಪ್ರದೇಶಗಳು 2022 ವ್ಯಕ್ತಿಗಳ ಪ್ರತಿ km<sup>2</sup> ಜನಸಂಖ್ಯೆಯೊಂದಿಗೆ ಅತಿ ಹೆಚ್ಚು ಜನನಿಬಿಡವಾಗಿವೆ, ಇದು ರಾಜ್ಯದ ಒಟ್ಟಾರೆ ಜನಸಂಖ್ಯಾ ಸಾಂದ್ರತೆ 859 ವ್ಯಕ್ತಿಗಳ ಪ್ರತಿ km<sup>2</sup> ಗಿಂತ 2.5 ಪಟ್ಟು ಹೆಚ್ಚಾಗಿದ್ದು, ಪೂರ್ವದ ಬೆಟ್ಟಗಳು ಮತ್ತು ಪರ್ವತಗಳನ್ನು ತುಲನಾತ್ಮಕವಾಗಿ ವಿರಳವಾಗಿ ಜನಸಂಖ್ಯೆ ಹೊಂದಿರುವಂತೆ ಬಿಡುತ್ತದೆ.<ref name="kerala_fact_sheet">{{cite book |url=https://www.ncscm.org/cms/geo/pdf/research/kerala_fact_sheet.pdf |title=Shoreline change assessment for Kerala coast |publisher=National Centre for Sustainable Coastal Management, Ministry of Environment and Forests |author1=R Ramesh |author2=R Purvaja |author3=A Senthil Vel |access-date=30 May 2015 |archive-date=30 May 2015 |archive-url=https://web.archive.org/web/20150530204904/http://www.ncscm.org/cms/geo/pdf/research/kerala_fact_sheet.pdf |url-status=dead }}</ref> ಕೇರಳವು [[2011 ರ ಭಾರತದ ಜನಗಣತಿ]]ಯ ಪ್ರಕಾರ [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ ಪ್ರಮುಖ ರಾಜ್ಯವಾಗಿದ್ದು]] [[ಕೇರಳದಲ್ಲಿನ ನಗರ ಪ್ರದೇಶದ ಬೆಳವಣಿಗೆಯ ಪ್ರಕಾರ ನಗರಗಳ ಪಟ್ಟಿ|47.7% ನಗರ ಜನಸಂಖ್ಯೆಯನ್ನು]] ಹೊಂದಿದೆ.<ref name="ubn">{{Cite web |url=https://mohua.gov.in/cms/level-of-urbanisation.php |title=Level of Urbanisation in Indian States |date= |website=mohua.gov.in |publisher=Ministry of Housing and Urban Affairs, Government of India |access-date=7 February 2022 |archive-date=7 February 2022 |archive-url=https://web.archive.org/web/20220207105118/https://mohua.gov.in/cms/level-of-urbanisation.php |url-status=live }}</ref> ಸುಮಾರು 31.8 ಮಿಲಿಯನ್ ಕೇರಳೀಯರು ಪ್ರಧಾನವಾಗಿ ಮಲಯಾಳಿಗಳಾಗಿದ್ದಾರೆ.<ref name="Census 2011" /> ರಾಜ್ಯದ 321,000 ಸ್ಥಳೀಯ ಬುಡಕಟ್ಟು ''[[ಆದಿವಾಸಿ]]''ಗಳು, ಜನಸಂಖ್ಯೆಯ 1.1%, ಪೂರ್ವದಲ್ಲಿ ಕೇಂದ್ರೀಕೃತವಾಗಿವೆ.<ref name="Kalathil_2004">{{Cite book |author=Kalathil MJ |year=2004 |veditors=Nair PR, Shaji H |title=Withering Valli: Alienation, Degradation, and Enslavement of Tribal Women in Attappady |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621690 |url=https://www.cds.ac.in/krpcds/publication/downloads/66.pdf |access-date=29 December 2008 |archive-date=30 May 2015 |archive-url=https://web.archive.org/web/20150530205641/http://www.cds.ac.in/krpcds/publication/downloads/66.pdf |url-status=live }}</ref>{{rp|10–12}}
=== ಲಿಂಗ ===
ಕೇರಳದಲ್ಲಿ ಮಾತೃವಂಶೀಯ ಅನುವಂಶಿಕತೆಯ ಸಂಪ್ರದಾಯವಿದೆ, ಅಲ್ಲಿ ತಾಯಿ ಮನೆಯ ಮುಖ್ಯಸ್ಥೆಯಾಗಿರುತ್ತಾಳೆ.<ref>{{Cite web |date=5 March 2017 |title=International Women's Day 2017: Kerala and the myth of matriarchy |url=https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |access-date=16 July 2021 |website=Firstpost |archive-date=16 July 2021 |archive-url=https://web.archive.org/web/20210716051101/https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |url-status=live }}</ref> ಪರಿಣಾಮವಾಗಿ, ಕೇರಳದ ಮಹಿಳೆಯರು ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಮತ್ತು ಪ್ರಭಾವವನ್ನು ಹೊಂದಿದ್ದಾರೆ. ಇದು ಕೆಲವು ಪ್ರಭಾವಶಾಲಿ ಜಾತಿಗಳಲ್ಲಿ ಸಾಮಾನ್ಯವಾಗಿತ್ತು ಮತ್ತು ಹೆಣ್ಣು ಮಕ್ಕಳಿಗೆ ನೀಡಲಾಗುವ ಮೌಲ್ಯದಲ್ಲಿ ಒಂದು ಅಂಶವಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಬಡ ಕುಟುಂಬಗಳ ಹುಡುಗಿಯರಿಗೆ ಶಾಲೆಗಳನ್ನು ಪ್ರಾರಂಭಿಸಿದ ಕಾರಣ ಅವರು ಮಲಯಾಳಿ ಮಹಿಳೆಯರ ಮೇಲೆ ಪ್ರಭಾವ ಬೀರಿದರು.<ref>{{cite journal |author1-link=Tomila Lankina|author1=Lankina |author2=Tomila V. |author3=Getachew, Lullit |year=2013 |url=https://researchonline.lse.ac.uk/id/eprint/44929/ |title=Competitive religious entrepreneurs: Christian missionaries and female education in colonial and post-colonial India |journal=British Journal of Political Science |volume=43 |pages=103–31 |doi=10.1017/s0007123412000178 |s2cid=145185494 |archive-date=25 February 2021 |access-date=2 February 2016 |archive-url=https://web.archive.org/web/20210225144811/https://researchonline.lse.ac.uk/id/eprint/44929/ |url-status=live }}</ref> ಶಿಕ್ಷಣ ಮತ್ತು ಲಾಭದಾಯಕ ಉದ್ಯೋಗದಂತಹ ಮಹಿಳೆಯರಿಗೆ ಅವಕಾಶಗಳು ಸಾಮಾನ್ಯವಾಗಿ ಕಡಿಮೆ ಜನನ ದರಕ್ಕೆ ಕಾರಣವಾಗುತ್ತವೆ,<ref>{{Cite web |last=ലേഖകൻ |first=മാധ്യമം |date=10 July 2021 |title=ജനസംഖ്യാദിനം; അറിയാം 21 കാര്യങ്ങൾ|url=https://www.madhyamam.com/velicham/special-stories/july-11-world-population-day-821671 |access-date=16 July 2021 |website=Madhyamam |language=en |archive-date=16 July 2021 |archive-url=https://web.archive.org/web/20210716051106/https://www.madhyamam.com/velicham/special-stories/july-11-world-population-day-821671 |url-status=live }}</ref> ಇದು ಪ್ರತಿಯಾಗಿ, ಶಿಕ್ಷಣ ಮತ್ತು ಉದ್ಯೋಗವನ್ನು ಮಹಿಳೆಯರಿಗೆ ಹೆಚ್ಚು ಪ್ರವೇಶಿಸುವಂತೆ ಮತ್ತು ಹೆಚ್ಚು ಪ್ರಯೋಜನಕಾರಿಯಾಗಿಸುತ್ತದೆ. ಇದು ಸಮುದಾಯದ ಮಹಿಳೆಯರು ಮತ್ತು ಮಕ್ಕಳಿಗಾಗಿ ಮೇಲ್ಮುಖವಾದ ಸುರುಳಿಯನ್ನು ಸೃಷ್ಟಿಸುತ್ತದೆ, ಅದು ಮುಂದಿನ ಪೀಳಿಗೆಗೆ ರವಾನಿಸಲ್ಪಡುತ್ತದೆ. 1996 ರ ಮಾನವ ಅಭಿವೃದ್ಧಿ ವರದಿಯ ಪ್ರಕಾರ, ಕೇರಳದ [[ಲಿಂಗ ಅಭಿವೃದ್ಧಿ ಸೂಚ್ಯಂಕ]] 597 ಆಗಿತ್ತು; ಇದು ಭಾರತದ ಯಾವುದೇ ರಾಜ್ಯಕ್ಕಿಂತ ಹೆಚ್ಚಾಗಿತ್ತು. ಹೆಚ್ಚಿನ ಮಹಿಳಾ ಸಾಕ್ಷರತೆ, ಶಿಕ್ಷಣ, ಕೆಲಸದ ಭಾಗವಹಿಸುವಿಕೆ ಮತ್ತು ಜೀವಿತಾವಧಿಯ ಪ್ರಮಾಣಗಳು, ಅನುಕೂಲಕರ [[ಮಾನವ ಲಿಂಗಾನುಪಾತ|ಲಿಂಗಾನುಪಾತ]]ದ ಜೊತೆಗೆ, ಅದಕ್ಕೆ ಕೊಡುಗೆ ನೀಡಿವೆ.<ref name="Joseph">{{cite book |author=Ammu Joseph |editor=Oommen M.A. |year=1999 |title=Rethinking Development: Kerala's Development Experience |publisher=Concept Publishing Company |isbn=978-8170227656 |url=https://books.google.com/books?id=lzV3bQh-L94C |pages=479–86 |access-date=30 May 2015}}</ref>
ಕೇರಳದ ಲಿಂಗಾನುಪಾತ 1.084 (ಸ್ತ್ರೀಯರು ಪುರುಷರಿಗೆ) ಭಾರತದ ಉಳಿದ ಭಾಗಗಳಿಗಿಂತ ಹೆಚ್ಚಾಗಿದೆ; ಮಹಿಳೆಯರು ಪುರುಷರನ್ನು ಮೀರಿಸುವ ಏಕೈಕ ರಾಜ್ಯವಾಗಿದೆ.<ref name="Tharamangalam_2005" />{{rp|2}} ಶಿಕ್ಷಣವು ಒದಗಿಸುವ ಅವಕಾಶಗಳನ್ನು ಹೊಂದಿರುವಾಗ, ಉದಾಹರಣೆಗೆ ರಾಜಕೀಯ ಭಾಗವಹಿಸುವಿಕೆ, ಪ್ರಸ್ತುತ ಘಟನೆಗಳೊಂದಿಗೆ ನವೀಕೃತವಾಗಿರುವುದು, ಧಾರ್ಮಿಕ ಗ್ರಂಥಗಳನ್ನು ಓದುವುದು ಇತ್ಯಾದಿ, ಈ ಉಪಕರಣಗಳು ಇನ್ನೂ ಕೇರಳದ ಮಹಿಳೆಯರಿಗೆ ಸಂಪೂರ್ಣ, [[ಮಹಿಳೆಯರ ಹಕ್ಕುಗಳು|ಸಮಾನ ಹಕ್ಕುಗಳಾಗಿ]] ಅನುವಾದಗೊಂಡಿಲ್ಲ. ಮಹಿಳೆಯರನ್ನು ಅವರ ಸ್ವಂತ ಪ್ರಯೋಜನಕ್ಕಾಗಿ ನಿರ್ಬಂಧಿಸಬೇಕು ಎಂಬ ಸಾಮಾನ್ಯ ಮನೋಭಾವವಿದೆ. ರಾಜ್ಯದಲ್ಲಿ, ಸಾಮಾಜಿಕ ಪ್ರಗತಿಯ ಹೊರತಾಗಿಯೂ, ಲಿಂಗವು ಇನ್ನೂ [[ಸಾಮಾಜಿಕ ಚಲನಶೀಲತೆ]] ಯ ಮೇಲೆ ಪ್ರಭಾವ ಬೀರುತ್ತದೆ.<ref>Brenda Maddox mentions in: Maddox, Brenda. "A Marxist Paradise For Women?" New Statesman. (London, England: 1996) 128 no4440 30 January 14, 1999.</ref><ref>Antherjanam, Lalithambika. Cast Me Out If You Will. New York: The Feminist Press, 1997.</ref><ref>{{cite journal |last1=Jeffrey |first1=Robin |year=1987 |title=Governments and Culture: How Women Made Kerala Literate |journal=Pacific Affairs |volume=60 |issue=3 |pages=447–72 |doi=10.2307/2758883 |jstor=2758883}}</ref>
==== LGBT ಹಕ್ಕುಗಳು ====
{{Main|ಕೇರಳದಲ್ಲಿ LGBT ಹಕ್ಕುಗಳು}}
ಕೇರಳವು [[ಭಾರತ]]ದಲ್ಲಿ LGBT ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿದೆ.<ref>{{Cite web |url=https://www.huffingtonpost.in/2015/11/12/kerala-government-transge_n_8543410.html |title=Kerala Government Has Unveiled A Policy To Enforce Constitutional Rights Of Transgenders |website=The Huffington Post |date=12 November 2015 |access-date=28 June 2016 |archive-date=10 May 2017 |archive-url=https://web.archive.org/web/20170510075414/http://www.huffingtonpost.in/2015/11/12/kerala-government-transge_n_8543410.html |url-status=live }}</ref> ಕೇರಳವು ಟ್ರಾನ್ಸ್ಜೆಂಡರ್ ಸಮುದಾಯಕ್ಕಾಗಿ ಕಲ್ಯಾಣ ನೀತಿಯನ್ನು ರೂಪಿಸಿದ [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತದ ಮೊದಲ ರಾಜ್ಯಗಳಲ್ಲಿ]] ಒಂದಾಗಿದೆ. 2016 ರಲ್ಲಿ, ಕೇರಳ ಸರ್ಕಾರವು ಸರ್ಕಾರಿ ಆಸ್ಪತ್ರೆಗಳ ಮೂಲಕ ಉಚಿತ [[ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ]]ಯನ್ನು ಪರಿಚಯಿಸಿತು.<ref>{{Cite web |url=https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |title=Why Kerala's free sex-change surgeries will offer a new lifeline for the transgender community |last=Devasia |first=T. K. |website=Scroll.in |date=19 March 2016 |language=en-US |access-date=5 July 2019 |archive-date=29 June 2019 |archive-url=https://web.archive.org/web/20190629061452/https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |url-status=live }}</ref><ref>{{cite news |url=https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |title=After She-Taxi, Kerala to launch G-Taxi for transgenders |work=[[The Times of India]] |date=31 January 2016 |agency=PTI |access-date=25 March 2016 |location=Thiruvananthapuram |archive-date=29 October 2019 |archive-url=https://web.archive.org/web/20191029184249/https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |url-status=live }}</ref><ref>{{Cite web |url=https://www.dnaindia.com/india/report-how-kerala-left-the-country-behind-on-transgender-rights-2145017 |title=How Kerala left the country behind on transgender rights |website=dna |language=en-US |access-date=19 March 2016 |date=14 November 2015 |archive-date=29 June 2019 |archive-url=https://web.archive.org/web/20190629021111/https://www.dnaindia.com/india/report-how-kerala-left-the-country-behind-on-transgender-rights-2145017 |url-status=live }}</ref> [[ಕ್ವೀರಳ]] ಕೇರಳದ ಪ್ರಮುಖ LGBT ಸಂಸ್ಥೆಗಳಲ್ಲಿ ಒಂದಾಗಿದೆ. ಇದು LGBT ಜನರ ಅರಿವನ್ನು ಹೆಚ್ಚಿಸಲು ಮತ್ತು ಆರೋಗ್ಯ ಸೇವೆಗಳು, ಕೆಲಸದ ಸ್ಥಳ ನೀತಿಗಳು ಮತ್ತು ಶೈಕ್ಷಣಿಕ ಪಠ್ಯಕ್ರಮಕ್ಕೆ ಸಂಬಂಧಿಸಿದ ಸಂವೇದನಾಶೀಲತೆಯ ಬಗ್ಗೆ ಪ್ರಚಾರ ಮಾಡುತ್ತದೆ.<ref>{{Cite news |title=Affirming their right, they march with pride |url=https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |date=13 August 2017 |work=The Hindu |language=en-IN |issn=0971-751X |access-date=4 April 2022 |archive-date=28 December 2019 |archive-url=https://web.archive.org/web/20191228100119/https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |url-status=live }}</ref> 2010 ರಿಂದ, [[ಕೇರಳ ಕ್ವೀರ್ ಪ್ರೈಡ್]] ಅನ್ನು ಕೇರಳದ ವಿವಿಧ ನಗರಗಳಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತಿದೆ.<ref>{{cite web |url=https://timesofindia.indiatimes.com/india/Kerala-to-host-its-first-gay-parade/articleshow/6112610.cms |title=Kerala to host its first gay parade |website=The Times of India |date=30 June 2010}}</ref>
ಜೂನ್ 2019 ರಲ್ಲಿ, ಕೇರಳ ಸರ್ಕಾರವು ಟ್ರಾನ್ಸ್ಜೆಂಡರ್ ಸಮುದಾಯದ ಸದಸ್ಯರನ್ನು ಸರ್ಕಾರದ ಸಂವಹನಗಳಲ್ಲಿ "[[ಮೂರನೇ ಲಿಂಗ]]" ಅಥವಾ "ಇತರ ಲಿಂಗ" ಎಂದು ಕರೆಯಬಾರದು ಎಂದು ಹೊಸ ಆದೇಶವನ್ನು ಅಂಗೀಕರಿಸಿತು. ಬದಲಾಗಿ, "ಟ್ರಾನ್ಸ್ಜೆಂಡರ್" ಪದವನ್ನು ಬಳಸಬೇಕು. ಹಿಂದೆ, ಸರ್ಕಾರಿ ನಮೂನೆಗಳು ಮತ್ತು ದಾಖಲೆಗಳಲ್ಲಿ ಒದಗಿಸಲಾದ ಲಿಂಗ ಆಯ್ಕೆಗಳು ಪುರುಷ, ಮಹಿಳೆ ಮತ್ತು ಇತರ/ಮೂರನೇ ಲಿಂಗವನ್ನು ಒಳಗೊಂಡಿದ್ದವು.<ref>{{Cite web |url=https://www.thenewsminute.com/article/kerala-govt-passes-order-use-transgender-instead-thirdother-gender-104584 |website=www.thenewsminute.com |access-date=8 July 2019 |title=Kerala govt passes order to use 'transgender' instead of 'third/other gender' |date=30 June 2019}}</ref><ref>{{Cite news |url=https://www.thehindu.com/news/national/kerala/only-transgender-in-official-communication/article28235748.ece |title=Only 'transgender' in official communication |last=Roshni |first=R. k |date=30 June 2019 |work=The Hindu |access-date=8 July 2019 |language=en-IN |issn=0971-751X}}</ref>
=== ಮಾನವ ಅಭಿವೃದ್ಧಿ ಸೂಚ್ಯಂಕ ===
{{See also|ಕೇರಳ ಮಾದರಿ}}
[[File:2006 Human Development Index for India map by states, HDI data by GoI and UNDP India.svg|thumb|[[ಭಾರತ ಸರ್ಕಾರ]] ಮತ್ತು [[ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮ]]ದಿಂದ ಲೆಕ್ಕಾಚಾರ ಮಾಡಿದಂತೆ 2006 ರಲ್ಲಿ ಭಾರತೀಯ ರಾಜ್ಯಗಳಿಗೆ [[ಮಾನವ ಅಭಿವೃದ್ಧಿ ಸೂಚ್ಯಂಕ]] ನಕ್ಷೆ.<ref>{{cite web |url=https://www.in.undp.org/content/dam/india/docs/gendering_human_development_indices_summary_report.pdf |title=Gendering Human Development Indices |date=March 2009 |publisher=Ministry of Women and Child Development, Government of India with UNDP India}}</ref>]]
ಪ್ರಜಾಪ್ರಭುತ್ವದ ಕಮ್ಯುನಿಸ್ಟ್ ಸ್ಥಳೀಯ ಸರ್ಕಾರದ ಅಡಿಯಲ್ಲಿ, ಕೇರಳವು ಭಾರತೀಯ ಸರಾಸರಿಗಿಂತ ಹೆಚ್ಚು ಮುಂದುವರಿದ ಸಾಮಾಜಿಕ ಅಭಿವೃದ್ಧಿಯ ದಾಖಲೆಯನ್ನು ಸಾಧಿಸಿದೆ.<ref>{{Cite book |last=Lin |first=Chun |title=The transformation of Chinese socialism |date=2006 |publisher=[[Duke University Press]] |isbn=978-0-8223-3785-0 |location=Durham [N.C.] |pages=298 |oclc=63178961}}</ref> {{As of|2015}}, ಕೇರಳವು 0.770 ರ [[ಮಾನವ ಅಭಿವೃದ್ಧಿ ಸೂಚ್ಯಂಕ]] (HDI) ಅನ್ನು ಹೊಂದಿದೆ, ಇದು "ಹೆಚ್ಚಿನ" ವರ್ಗದಲ್ಲಿದೆ, ಇದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.<ref name="snhdi-gdl">{{cite web |title=Sub-national HDI – Area Database |url=https://hdi.globaldatalab.org/areadata/shdi/ |website=Global Data Lab |publisher=Institute for Management Research, Radboud University |access-date=25 September 2018 |language=en}}</ref> ಇದು 2007–08 ರಲ್ಲಿ 0.790 ಆಗಿತ್ತು<ref name="IDHR 2011">{{cite web |title=India Human Development Report 2011: Towards Social Inclusion |url=https://www.im4change.org/docs/340IHDR_Summary.pdf |publisher=Institute of Applied Manpower Research, [[Planning Commission (India)|Planning Commission]], [[Government of India]] |access-date=24 October 2014 |archive-date=21 October 2013 |archive-url=https://web.archive.org/web/20131021081939/http://www.im4change.org/docs/340IHDR_Summary.pdf |url-status=dead }}</ref> ಮತ್ತು ಇದು 0.920 ರ ಬಳಕೆ-ಆಧಾರಿತ HDI ಅನ್ನು ಹೊಂದಿತ್ತು, ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮವಾಗಿದೆ.<ref name="IDHR 2011" /> 19 ನೇ ಶತಮಾನದಿಂದ [[ಪ್ರಾಥಮಿಕ ಶಿಕ್ಷಣ|ಪ್ರಾಥಮಿಕ ಮಟ್ಟದ ಶಿಕ್ಷಣ]], [[ಆರೋಗ್ಯ ರಕ್ಷಣೆ]] ಮತ್ತು [[ಭಾರತದಲ್ಲಿ ಬಡತನ|ಬಡತನ]] ನಿರ್ಮೂಲನೆಗೆ ಸರ್ಕಾರದ ತುಲನಾತ್ಮಕವಾಗಿ ಹೆಚ್ಚಿನ ವೆಚ್ಚವು ರಾಜ್ಯವು ಅಸಾಧಾರಣವಾಗಿ ಹೆಚ್ಚಿನ HDI ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ;<ref name="UNDP2005">{{cite web |title=Kerala HDR 2005 |url=https://hdr.undp.org/en/reports/nationalreports/asiathepacific/india/name,3397,en.html |work=Human Development Report |publisher=United Nations |location=Asia and the Pacific |access-date=30 May 2015}}</ref><ref name="UNDP20054">{{cite web |title=Human Development Report 2005 |url=https://hdr.undp.org/en/media/HDR05_complete.pdf |work=Human Development Report |publisher=United Nations |location=Asia and the Pacific |access-date=14 November 2015 |archive-url=https://web.archive.org/web/20110310193948/https://hdr.undp.org/en/media/HDR05_complete.pdf |archive-date=10 March 2011 |url-status=dead}}</ref> ಈ ವರದಿಯನ್ನು ಕೇಂದ್ರ ಸರ್ಕಾರದ [[ಅನ್ವಯಿಕ ಜನಶಕ್ತಿ ಸಂಶೋಧನಾ ಸಂಸ್ಥೆ]] ತಯಾರಿಸಿತು.<ref name="hdi kerala chart">{{cite web |url=https://www.moneycontrol.com/news/wire-news/human-development-index-rose-21-per-cent-kerala-tops-chart_603650.html |title=Human Development Index rose 21 per cent; Kerala tops chart |date=21 October 2011 |work=[[CNBC]] |access-date=14 November 2015}}</ref><ref name="hdi kerala">{{Cite news |url=https://economictimes.indiatimes.com/news/economy/finance/growth-reforms-lift-living-standards-in-india-human-development-index/articleshow/10447495.cms |title=Growth, reforms lift living standards in India: Human development Index |date=22 October 2011 |access-date=14 November 2015 |work=Economic Times}}</ref> ಆದಾಗ್ಯೂ, ಅಭಿವೃದ್ಧಿ ಅಧ್ಯಯನ ಕೇಂದ್ರವು ತಯಾರಿಸಿದ ಮಾನವ ಅಭಿವೃದ್ಧಿ ವರದಿ 2005, ರಾಜ್ಯದಲ್ಲಿ ಮಾನವ ಅಭಿವೃದ್ಧಿಯ ಪ್ರಗತಿಯು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡಲು ಪ್ರಾರಂಭಿಸಿದ್ದರಿಂದ ರಾಜ್ಯಕ್ಕೆ ಸಮಾವೇಶಕ ಅಭಿವೃದ್ಧಿಯ ಗುಣಾತ್ಮಕ ಹಂತವನ್ನು ಊಹಿಸುತ್ತದೆ.<ref name="UNDP2005" /> ಕೇರಳವು ಭಾರತದಲ್ಲಿ ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರ ರಾಜ್ಯವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ.<ref>{{cite book |author1=Sunil Mani |author2=Anjini Kochar |title=Kerala's Economy: Crouching Tiger, Sacred Cows |url=https://books.google.com/books?id=wKeRAtvXl8oC&pg=PA121 |access-date=24 September 2012 |year=2006 |publisher=D.C. Books |isbn=978-8126413591 |page=121}}</ref>
2011 ರ ಜನಗಣತಿಯ ಪ್ರಕಾರ, ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಹೆಚ್ಚು [[ಸಾಕ್ಷರತಾ ಪ್ರಮಾಣ]] (94%) ಹೊಂದಿದೆ. 2018 ರಲ್ಲಿ, ಭಾರತದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ನಡೆಸಿದ 2018 ರ ಸಾಕ್ಷರತಾ ಸಮೀಕ್ಷೆಯಲ್ಲಿ ಸಾಕ್ಷರತಾ ಪ್ರಮಾಣವನ್ನು 96.2% ಎಂದು ಲೆಕ್ಕಹಾಕಲಾಯಿತು.<ref name="Literacy survey_2018">{{Cite web |date=8 September 2020 |title=Literacy Survey, India (2017–18) |url=https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |access-date=9 September 2020 |publisher=Firstpost |archive-date=2 November 2021 |archive-url=https://web.archive.org/web/20211102214441/https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |url-status=live }}</ref> [[ಕೋಟ್ಟಯಂ ಜಿಲ್ಲೆ]]ಯಲ್ಲಿ, ಸಾಕ್ಷರತಾ ಪ್ರಮಾಣವು 97% ಆಗಿತ್ತು.<ref>{{Cite web |url=https://www.pincodeindia.net/literacy-rate-of-kerala.php |title=Literacy Rate in Kerala – 2018 |access-date=7 February 2022 |archive-date=7 February 2022 |archive-url=https://web.archive.org/web/20220207105113/https://www.pincodeindia.net/literacy-rate-of-kerala.php |url-status=dead }}</ref><ref name="pc-census2011">{{Cite web |title=Census 2011 (Final Data) – Demographic details, Literate Population (Total, Rural & Urban) |url=https://planningcommission.gov.in/data/datatable/data_2312/DatabookDec2014%20307.pdf |url-status=dead |archive-url=https://web.archive.org/web/20180127163347/https://planningcommission.gov.in/data/datatable/data_2312/DatabookDec2014%20307.pdf |archive-date=27 January 2018 |access-date=3 October 2018 |website=planningcommission.gov.in |publisher=Planning Commission, Government of India}}</ref><ref name="IBNLiteracy2013" /> ಕೇರಳದಲ್ಲಿ [[ಜೀವಿತಾವಧಿ]]ಯು 74 ವರ್ಷಗಳು, {{As of|2011|lc=y}} ಭಾರತದಲ್ಲಿ ಅತಿ ಹೆಚ್ಚಿನದಾಗಿದೆ.<ref>{{cite news |url=https://thehindu.com/news/national/kerala/kerala-tops-in-literacy-rate-health-services/article2562589.ece |location=Chennai, India |work=The Hindu |title=Kerala tops in literacy rate, health services |date=22 October 2011 |first=J. |last=Balaji |access-date=30 May 2015}}</ref> ಕೇರಳದ ಗ್ರಾಮೀಣ ಬಡತನ ಪ್ರಮಾಣವು 59% (1973–1974) ರಿಂದ 12% (1999–2010) ಕ್ಕೆ ಇಳಿದಿದೆ; ಒಟ್ಟಾರೆ (ನಗರ ಮತ್ತು ಗ್ರಾಮೀಣ) ಬಡತನ ಪ್ರಮಾಣವು 1970 ಮತ್ತು 2000 ರ ದಶಕಗಳ ನಡುವೆ 47% ರಷ್ಟು ಕಡಿಮೆಯಾಗಿದ್ದು, ಭಾರತದಲ್ಲಿ ಒಟ್ಟಾರೆ ಬಡತನ ಪ್ರಮಾಣದಲ್ಲಿ 29% ರಷ್ಟು ಕುಸಿತಕ್ಕೆ ವಿರುದ್ಧವಾಗಿದೆ.<ref>{{cite book |title=Human Development Report 2005 Kerala |publisher=State Planning Board |author=Centre for Development Studies Thiruvananthapuram |year=2006 |location=Thiruvananthapuram, Kerala}}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6" /> 2013 ರ ಟೆಂಡೂಲ್ಕರ್ ಸಮಿತಿ ವರದಿಯು ಗ್ರಾಮೀಣ ಮತ್ತು ನಗರ ಕೇರಳದಲ್ಲಿ ಬಡತನ ರೇಖೆಯ ಕೆಳಗೆ ವಾಸಿಸುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಕ್ರಮವಾಗಿ 9.1% ಮತ್ತು 5.0% ಎಂದು ಅಂದಾಜಿಸಿದೆ.<ref>{{cite web |title=Press Note on Poverty Estimates, 2011–12 |url=https://planningcommission.nic.in/news/pre_pov2307.pdf |website=planningcommission.gov.in |publisher=Planning Commission, Government of India |access-date=27 November 2018 |archive-url=https://web.archive.org/web/20140628120737/https://planningcommission.nic.in/news/pre_pov2307.pdf |archive-date=28 June 2014 |url-status=dead}}</ref> ಈ ಬದಲಾವಣೆಗಳು ಹೆಚ್ಚಾಗಿ 19 ನೇ ಶತಮಾನದ ಕೊನೆಯಲ್ಲಿ ಕೊಚ್ಚಿ ಮತ್ತು ತಿರುವಾಂಕೂರು ಸಾಮ್ರಾಜ್ಯಗಳು ಸಾಮಾಜಿಕ ಕಲ್ಯಾಣವನ್ನು ಹೆಚ್ಚಿಸಲು ಪ್ರಾರಂಭಿಸಿದ ಪ್ರಯತ್ನಗಳಿಂದ ಉಂಟಾಗಿವೆ.<ref>{{Cite report |title=EFA [Education for All] Global Monitoring Report |url=https://www.unesco.org/education/efa_report/chapter4.pdf |year=2003 |archive-url=https://web.archive.org/web/20040923014605/https://www.unesco.org/education/efa_report/chapter4.pdf |archive-date=23 September 2004 |page=156 |publisher=[[UNESCO]] |access-date=4 April 2022}}</ref><ref>{{Cite journal |author=Kutty VR |year=2000 |title=Historical analysis of the development of health care facilities in Kerala State, India |journal=Health Policy and Planning |volume=15 |issue=1 |pages=103–09 |doi=10.1093/heapol/15.1.103 |pmid=10731241 |s2cid=7634887 |doi-access=free }}</ref> ಈ ಗಮನವನ್ನು ಕೇರಳದ ಸ್ವಾತಂತ್ರ್ಯೋತ್ತರ ಸರ್ಕಾರವು ಉಳಿಸಿಕೊಂಡಿದೆ.<ref name="Brenkert_Malone_2003" /><ref name="Varma_2005">{{Cite news |author=Varma MS |title=Nap on HDI scores may land Kerala in an equilibrium trap |work=The Financial Express |date=4 April 2005 |access-date=12 November 2007 |url=https://www.financialexpress.com/old/print.php?content_id=86925 |archive-url=https://web.archive.org/web/20080617134031/https://www.financialexpress.com/old/print.php?content_id=86925 |archive-date=17 June 2008}}</ref>{{rp|48}} ಕೇರಳವು [[NITI ಆಯೋಗ]]ದ ಸುಸ್ಥಿರ ಅಭಿವೃದ್ಧಿ ಗುರಿಗಳ ಡ್ಯಾಶ್ಬೋರ್ಡ್ ಮತ್ತು [[ಭಾರತೀಯ ರಿಸರ್ವ್ ಬ್ಯಾಂಕ್]]ನ ''ಇಂಡಿಯನ್ ಎಕಾನಮಿಯ ಹ್ಯಾಂಡ್ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್'' ಪ್ರಕಾರ ಭಾರತದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿದೆ]].<ref>{{Cite web |title=SDG India – Index 2021–22 – Partnerships in the Decade of Action |url=https://sdgindiaindex.niti.gov.in/#/ranking |date=2021 |url-status=dead |archive-url=https://web.archive.org/web/20210613021943/https://niti.gov.in/writereaddata/files/SDG_3.0_Final_04.03.2021_Web_Spreads.pdf |archive-date=13 June 2021 |website=[[NITI Aayog]] |access-date=29 September 2024}}</ref><ref>{{Cite web |title=Handbook of Statistics on Indian Economy. Table 154 : Number and Percentage of Population Below Poverty Line. (2011-12) |url=https://www.rbi.org.in/scripts/PublicationsView.aspx?id=19887 |access-date=13 September 2021 |website=Reserve Bank of India |archive-date=13 September 2021 |archive-url=https://web.archive.org/web/20210913133540/https://www.rbi.org.in/scripts/PublicationsView.aspx?id=19887 |url-status=live }}</ref>
ಕೇರಳವು [[ಕೆನಡಾ]], [[ಜಪಾನ್]], ಮತ್ತು [[ನಾರ್ವೆ]] ನಂತಹ [[ಅಭಿವೃದ್ಧಿ ಹೊಂದಿದ ರಾಷ್ಟ್ರಗಳ]] ವಿಶಿಷ್ಟವಾದ "[[ಜನಸಂಖ್ಯಾ ಪರಿವರ್ತನೆ]]" ಯನ್ನು ಅನುಭವಿಸಿದೆ.<ref name="Tharamangalam_2005" />{{rp|1}} 2005 ರಲ್ಲಿ, 11.2% ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು.<ref name="Varma_2005" /> 2023 ರಲ್ಲಿ, ಬಿಬಿಸಿಯು ಕೇರಳದಿಂದ ವಲಸೆಯಿಂದ ಉಂಟಾದ ಸಮಸ್ಯೆಗಳು ಮತ್ತು ಪ್ರಯೋಜನಗಳ ಬಗ್ಗೆ ವರದಿ ಮಾಡಿತು, ಕುಂಬನಾಡ್ ಗ್ರಾಮದ ಮೇಲೆ ಕೇಂದ್ರೀಕರಿಸಿತು.<ref>{{cite web |url=https://www.bbc.co.uk/news/world-asia-india-64936519 |title=Kerala: A ghost town in the world's most populated country |last= |first= |date=26 March 2023 |website=www.bbc.co.uk |publisher=BBC News |access-date=26 March 2023}}</ref>
2004 ರಲ್ಲಿ, ಜನನ ದರವು 18 ಪ್ರತಿ 1,000 ಕ್ಕೆ ಕಡಿಮೆಯಾಗಿತ್ತು.<ref name="Kutty_2004_6">{{Cite book |author=Kutty VR |veditors=Nair PR, Shaji H |year=2004 |title=Why low birth weight (LBW) is still a problem in Kerala: A preliminary exploration |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621607 |access-date=12 November 2007 |url=https://www.cds.ac.in/krpcds/publication/downloads/57.pdf |page=6}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 1.6 ರ ಒಟ್ಟು ಫಲವತ್ತತೆ ಪ್ರಮಾಣವನ್ನು (TFR) ಹೊಂದಿತ್ತು. ಮಲಪ್ಪುರಂ ಜಿಲ್ಲೆಯನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳು 2 ಕ್ಕಿಂತ ಕಡಿಮೆ ಫಲವತ್ತತೆ ಪ್ರಮಾಣವನ್ನು ಹೊಂದಿದ್ದವು. ಫಲವತ್ತತೆ ಪ್ರಮಾಣವು [[ಮಲಪ್ಪುರಂ ಜಿಲ್ಲೆ]]ಯಲ್ಲಿ (2.2) ಅತಿ ಹೆಚ್ಚು ಮತ್ತು [[ಪತ್ತನಂತಿಟ್ಟ ಜಿಲ್ಲೆ]]ಯಲ್ಲಿ (1.3) ಅತಿ ಕಡಿಮೆಯಾಗಿದೆ.<ref>{{cite web |title=Fertility at District Level in India:Lessons from the 2011 Census |url=https://www.ceped.org/IMG/pdf/ceped_wp30.pdf&ved=2ahUKEwio7YjXv9nsAhVJzjgGHUy2BTE4FBAWMAR6BAgJEAE&usg=AOvVaw2PL5xTsjiaBMS96pAhMEX1 |author=Christophe Z Guilmoto and Irudaya Rajan |page=31 |format=PDF |access-date=29 October 2020}}</ref> 2001 ರಲ್ಲಿ, ಮುಸ್ಲಿಮರು 2.6 ರ TFR ಅನ್ನು ಹೊಂದಿದ್ದರು, ಹಿಂದೂಗಳಿಗೆ 1.5 ಮತ್ತು ಕ್ರೈಸ್ತರಿಗೆ 1.7 ರಷ್ಟಿತ್ತು.<ref>{{Cite news |url=https://www.deccanchronicle.com/nation/current-affairs/170316/fertility-rate-to-even-out-in-20-years-in-kerala.html |title=Fertility rate to even out in 20 years in Kerala |website=Deccan Chronicle |access-date=29 October 2020}}</ref> CMS ಇಂಡಿಯನ್ ಕರಪ್ಷನ್ ಸ್ಟಡಿ (CMS-ICS) ನಡೆಸಿದ ಸಮೀಕ್ಷೆಗಳ ಪ್ರಕಾರ ರಾಜ್ಯವು "ಅತ್ಯಂತ ಕಡಿಮೆ ಭ್ರಷ್ಟ ಭಾರತೀಯ ರಾಜ್ಯ" ಎಂದೂ ಪರಿಗಣಿಸಲ್ಪಟ್ಟಿದೆ<ref>{{Cite web |url=https://www.onmanorama.com/news/nation/2017/04/28/kerala-least-corrupt-states-india-karnatak-highest-petty-corruptionkerala-least-corrupt-states-india-karnatak-highest-petty-corruption.html |title=Kerala among the least corrupt states in India, Karnataka tops the list: study |website=OnManorama}}</ref> ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ (2005)<ref>{{cite web |title=India Corruption Study – 2005 |publisher=[[Transparency International]] |date=June 2005 |access-date=11 November 2007 |url=https://archive.transparency.org/regional_pages/asia_pacific/newsroom/news_archive2/india_corruption_study_2005 |archive-url=https://web.archive.org/web/20130413044112/https://archive.transparency.org/regional_pages/asia_pacific/newsroom/news_archive2/india_corruption_study_2005 |url-status=dead |archive-date=13 April 2013}}</ref> ಮತ್ತು ''ಇಂಡಿಯಾ ಟುಡೇ'' (1997).<ref>{{cite book |author1=Jean Dreze |author2=Amartya Sen |title=India: Development and Participation |url=https://books.google.com/books?id=UpOl35r8UHQC&pg=PA368 |access-date=24 September 2012 |year=2002 |publisher=Oxford University Press |isbn=978-0-19-925749-2 |page=368}}</ref> ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಕಡಿಮೆ [[ಕೊಲೆ]] ಪ್ರಮಾಣವನ್ನು ಹೊಂದಿದೆ, 2011 ರಲ್ಲಿ 1.1 ಪ್ರತಿ 100,000 ಕ್ಕೆ.<ref name="ncrb">{{cite web |url=https://ncrb.nic.in/CD-CII2011/cii-2011/Table%203.1.pdf |archive-url=https://web.archive.org/web/20130928024506/https://ncrb.nic.in/CD-CII2011/cii-2011/Table%203.1.pdf |url-status=dead |archive-date=28 September 2013 |date=21 June 2012 |title=Table–3.1 Incidence And Rate Of Violent Crimes During 2011 |access-date=24 September 2014}}</ref> ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ, ಹೆಚ್ಚಿನ [[ಆತ್ಮಹತ್ಯೆ]] ಪ್ರಮಾಣ, ಕಡಿಮೆ [[ಗಳಿಸಿದ ಆದಾಯ]]ದ ಪಾಲು, [[ಬಾಲ್ಯ ವಿವಾಹ]],<ref>{{Cite news |title=Child marriages remain Kerala's secret shame |url=https://www.thehindu.com/news/national/kerala/child-marriages-remain-keralas-secret-shame/article7613216.ece |newspaper=The Hindu |date=4 September 2015 |access-date=4 September 2015 |issn=0971-751X}}</ref> [[ಲೈಂಗಿಕ ಕಿರುಕುಳ]] ದೂರುಗಳು ಮತ್ತು ಸೀಮಿತ ಸ್ವಾತಂತ್ರ್ಯದಂತಹ ಕೆಲವು ನಕಾರಾತ್ಮಕ ಅಂಶಗಳು ವರದಿಯಾಗಿವೆ.<ref name="Joseph" /> ಕೇರಳದಲ್ಲಿ ಬಾಲ್ಯ ವಿವಾಹವು ಕಡಿಮೆಯಾಗಿದೆ. ಮಲಪ್ಪುರಂ ಜಿಲ್ಲೆಯು ಅತಿ ಹೆಚ್ಚು ಬಾಲ್ಯ ವಿವಾಹಗಳನ್ನು ಹೊಂದಿದೆ ಮತ್ತು ಅಂತಹ ಪ್ರಕರಣಗಳ ಸಂಖ್ಯೆಯು ಮಲಪ್ಪುರಂನಲ್ಲಿ ಹೆಚ್ಚುತ್ತಿದೆ. ಬಾಲ್ಯ ವಿವಾಹಗಳು ವಿಶೇಷವಾಗಿ [[ಕೇರಳದಲ್ಲಿ ಮುಸ್ಲಿಮರಲ್ಲಿ ಬಾಲ್ಯ ವಿವಾಹ|ಮುಸ್ಲಿಂ ಸಮುದಾಯದಲ್ಲಿ]] ಹೆಚ್ಚಾಗಿದೆ.<ref>{{cite news |last=Naha |first=Abdul Latheef |title=Child marriage cases go up in Malappuram |url=https://www.thehindu.com/news/national/kerala/child-marriage-cases-go-up-in-malappuram/article22751598.ece |date=18 February 2018 |newspaper=The Hindu |access-date=31 December 2019}}</ref><ref>{{Cite web |url=https://www.onmanorama.com/news/kerala/2018/10/26/child-marriages-shoot-up-in-the-most-unlikely-places-in-kerala.html |title=Child marriages shoot up in the most unlikely places in Kerala |website=OnManorama}}</ref> 2019 ರಲ್ಲಿ, ಕೇರಳವು ಭಾರತದಲ್ಲಿ ಅತಿ ಹೆಚ್ಚು ಮಕ್ಕಳ ಲೈಂಗಿಕ ದುರುಪಯೋಗ ದೂರುಗಳನ್ನು ದಾಖಲಿಸಿತು.<ref>{{cite news |last=Natu |first=Nitasha |title=Kerala No. 1 in child sex abuse complaints; Tamil Nadu, Maharashtra follow |url=https://timesofindia.indiatimes.com/india/kerala-no-1-in-child-sex-abuse-complaints-tamil-nadu-maharashtra-follow/articleshow/72972619.cms |date=25 December 2019 |newspaper=The Time of India |access-date=31 December 2019}}</ref>
2015 ರಲ್ಲಿ, ಕೇರಳವು ಯಾವುದೇ ರಾಜ್ಯದ ಅತಿ ಹೆಚ್ಚು ಶಿಕ್ಷೆಯ ಪ್ರಮಾಣವನ್ನು ಹೊಂದಿತ್ತು, 77% ಕ್ಕಿಂತ ಹೆಚ್ಚು.<ref>{{cite news |url=https://timesofindia.indiatimes.com/india/Conviction-rate-up-Kerala-tops-with-over-77/articleshow/48408220.cms |location=New Delhi, India |work=The Times of India |title=Conviction rate up, Kerala tops with over 77% link |date=9 August 2015 |access-date=14 November 2015}}</ref> ಕೇರಳವು ಗ್ರಾಮೀಣ ಭಾರತದಲ್ಲಿ ಅತಿ ಕಡಿಮೆ ಮನೆಯಿಲ್ಲದ ಜನರ ಪ್ರಮಾಣವನ್ನು ಹೊಂದಿದೆ, <0.1%,<ref>{{cite news |url=https://timesofindia.indiatimes.com/india/Population-of-homeless-in-rural-India-dips/articleshow/26981896.cms |location=India |work=The Times of India |title=Population of homeless in rural India dips |date=7 December 2013 |access-date=14 November 2015}}</ref> ಮತ್ತು ರಾಜ್ಯವು ಮೊದಲ "ಶೂನ್ಯ ಮನೆಯಿಲ್ಲದ ರಾಜ್ಯ" ವಾಗುವ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ, ಇದರ ಜೊತೆಗೆ ಅದರ ಶ್ಲಾಘನೀಯ "ಶೂನ್ಯ ಭೂರಹಿತ ಯೋಜನೆ" ಯನ್ನು ಹೊಂದಿದೆ, ಖಾಸಗಿ ಸಂಸ್ಥೆಗಳು ಮತ್ತು ವಲಸೆ ಮಲಯಾಳಿ ಸಮುದಾಯವು ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸಲು ಯೋಜನೆಗಳಿಗೆ ಹಣಕಾಸು ಒದಗಿಸುತ್ತಿದೆ.<ref>{{cite news |url=https://www.thehindu.com/news/national/kerala/cm-told-to-pursue-zero-homeless-kerala-project/article5309749.ece |location=Pathanamthitta, India |work=The Hindu |title=CM told to pursue Zero Homeless Kerala project link |date=3 November 2013}}</ref> ರಾಜ್ಯವು [[ಭಾರತ ರಾಜ್ಯ ಹಸಿವು ಸೂಚ್ಯಂಕ]]ದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು, ಇದು [[ಪಂಜಾಬ್, ಭಾರತ|ಪಂಜಾಬ್]] ನ ನಂತರದ ಸ್ಥಾನದಲ್ಲಿದೆ. 2015 ರಲ್ಲಿ ಕೇರಳವು ಇ-ಗವರ್ನೆನ್ಸ್ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಮೊದಲ "ಸಂಪೂರ್ಣ ಡಿಜಿಟಲ್ ರಾಜ್ಯ" ವಾಯಿತು.<ref>{{cite news |url=https://timesofindia.indiatimes.com/india/Kerala-becomes-Indias-first-complete-digital-state/articleshow/48494982.cms |location=New Delhi, India |work=The Times of India |title=Kerala-becomes-Indias-first-complete-digital-state link |date=15 August 2015}}</ref>
=== ಆರೋಗ್ಯ ರಕ್ಷಣೆ ===
{{Multiple image
| direction = vertical
| width = 220
| image1 = Regional Cancer Centre, Trivandrum.jpg
| caption1 = [[ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ, ತಿರುವನಂತಪುರ]]
}}
{{See also|ಕೇರಳದ ಸರ್ಕಾರಿ ಆಸ್ಪತ್ರೆಗಳ ಪಟ್ಟಿ}}
ಕೇರಳವು [[ಸಾರ್ವತ್ರಿಕ ಆರೋಗ್ಯ ರಕ್ಷಣೆ]] ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಪ್ರವರ್ತಕವಾಗಿದೆ.<ref>{{cite news |last1=Maya |first1=C |title=The road to universal health care in State |url=https://www.thehindu.com/todays-paper/tp-national/tp-kerala/the-road-to-universal-health-care-in-state/article5450319.ece |access-date=14 November 2015 |work=The Hindu |date=12 December 2013}}</ref> [[ಉಪ-ಬದಲಿ ಫಲವತ್ತತೆ]] ಮಟ್ಟ ಮತ್ತು [[ಶಿಶು ಮರಣ ಪ್ರಮಾಣ]]ವು ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ, ಇದು 12<ref name="Brenkert_Malone_2003" /><ref name="Kutty_2004_6" />{{rp|49}} ರಿಂದ 14<ref name="Krishnaswami_2004">{{Cite book |author=Krishnaswami P |veditors=Neelakantan S, Nair PR, Shaji H |year=2004 |title=Morbidity Study: Incidence, Prevalence, Consequences, and Associates |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621669 |url=https://www.cds.ac.in/krpcds/publication/downloads/63.pdf |access-date=31 December 2008}}</ref>{{rp|5}} ಪ್ರತಿ 1,000 ಜೀವಂತ ಜನನಗಳಿಗೆ ಸಾವುಗಳು ಎಂದು ಅಂದಾಜಿಸಲಾಗಿದೆ; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16 ರ ಪ್ರಕಾರ, ಇದು 6 ಕ್ಕೆ ಇಳಿದಿದೆ.<ref>{{Cite news |url=https://timesofindia.indiatimes.com/india/kerala-as-good-as-us-oecd-in-saving-newborn-children/articleshow/57438366.cms |title=Kerala as good as US, OECD in saving newborn children |work=The Times of India |access-date=9 March 2017}}</ref> [[ಲಿಯಾನ್ ಯಿಂಗ್ ಚೌ|ಲಿಯಾನ್]] ಫೌಂಡೇಶನ್, [[ಸಿಂಗಾಪುರ]]-ಆಧಾರಿತ ಪರೋಪಕಾರಿ ಸಂಸ್ಥೆ, ನಿಯೋಜಿಸಿದ ಅಧ್ಯಯನದ ಪ್ರಕಾರ, ಗಂಭೀರ ಅನಾರೋಗ್ಯದ ರೋಗಿಗಳಿಗೆ ರಾಜ್ಯದ ಉಪಶಮನ ಆರೈಕೆಯನ್ನು ಒದಗಿಸುವ ಆಧಾರದ ಮೇಲೆ ಕೇರಳವನ್ನು ಭಾರತದಲ್ಲಿ ಸಾಯಲು ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗಿದೆ.<ref>{{cite news |last1=Patel |first1=Atish |title=Why Kerala is the best place in India to die |url=https://www.bbc.com/news/world-asia-india-36137285 |date=4 May 2016}}</ref> ಆದಾಗ್ಯೂ, ಕೇರಳದ [[ಅನಾರೋಗ್ಯ ಪ್ರಮಾಣ]]ವು ಯಾವುದೇ ಇತರ ಭಾರತೀಯ ರಾಜ್ಯಕ್ಕಿಂತ ಹೆಚ್ಚಾಗಿದೆ—118 (ಗ್ರಾಮೀಣ) ಮತ್ತು 88 (ನಗರ) ಪ್ರತಿ 1,000 ಜನರಿಗೆ. ಅನುಗುಣವಾದ ಅಂಕಿಅಂಶಗಳು ಅಖಿಲ ಭಾರತಕ್ಕೆ 55 ಮತ್ತು 54 ಪ್ರತಿ 1,000 ಆಗಿತ್ತು {{As of|2005|lc=y}}.<ref name="Krishnaswami_2004" />{{rp|5}} ಕೇರಳದ 13.3% [[ಕಡಿಮೆ ಜನನ ತೂಕ]] [[ಪ್ರಪಂಚದ ಮೊದಲ ರಾಷ್ಟ್ರಗಳಲ್ಲಿ]] ಅನೇಕಕ್ಕಿಂತ ಹೆಚ್ಚಾಗಿದೆ.<ref name="Kutty_2004_6" /> 50% ಕ್ಕಿಂತ ಹೆಚ್ಚು ಜನರು ಅವಲಂಬಿಸಿರುವ 3 ಮಿಲಿಯನ್ [[ನೀರಿನ ಬಾವಿ]]ಗಳ ನಡುವೆ [[ನೀರಿನಿಂದ ಹರಡುವ ರೋಗ]]ಗಳಾದ [[ಅತಿಸಾರ]], [[ಭೇದಿ]], [[ಹೆಪಟೈಟಿಸ್]], ಮತ್ತು [[ಟೈಫಾಯಿಡ್]] ಏಕಾಏಕಿ ಸಮಸ್ಯೆಯು [[ನೈರ್ಮಲ್ಯ ಒಳಚರಂಡಿ|ಒಳಚರಂಡಿ]] ಕೊರತೆಯಿಂದ ಉಲ್ಬಣಗೊಂಡಿದೆ.<ref name="Roy_2004">{{Cite journal |author=Roy MKP |year=2004 |title=Water quality and health status in Kollam Municipality |journal=Centre for Development Studies |url=https://services.iriskf.org/data/articles/Document1168200520.8355524.pdf |access-date=28 December 2008 |archive-date=21 December 2016 |archive-url=https://web.archive.org/web/20161221084934/http://services.iriskf.org/data/articles/Document1168200520.8355524.pdf |url-status=dead }}</ref>{{rp|5–7}} 2017 ರಂತೆ, ರಾಜ್ಯವು ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಮತ್ತು ಭಾರತದಲ್ಲಿ ರೋಗದ ಅತಿ ಹೆಚ್ಚು ಹರಡುವಿಕೆಯ ಪ್ರಮಾಣವನ್ನು ಹೊಂದಿದೆ.<ref>{{Cite web |url=https://timesofindia.indiatimes.com/city/kochi/diabetic-patients-kerala-tops-list-of-indian-states/articleshow/61974164.cms |title=Diabetic patients: Kerala tops list of Indian states |date=8 December 2017 |website=The Times of India |language=en |access-date=28 October 2019}}</ref>
[[ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ]] (UNICEF) ಮತ್ತು [[ವಿಶ್ವ ಆರೋಗ್ಯ ಸಂಸ್ಥೆ]] ಸೂತ್ರಗಳ ಮೇಲೆ ಸ್ತನ್ಯಪಾನದ ಪರಿಣಾಮಕಾರಿ ಪ್ರೋತ್ಸಾಹದಿಂದಾಗಿ ಕೇರಳವನ್ನು ವಿಶ್ವದ ಮೊದಲ "[[ಶಿಶು ಸ್ನೇಹಿ ಆಸ್ಪತ್ರೆ ಉಪಕ್ರಮ|ಶಿಶು-ಸ್ನೇಹಿ]] ರಾಜ್ಯ" ಎಂದು ಗೊತ್ತುಪಡಿಸಿತು.<ref>{{cite web |date=August 2002 |title=Kerala Named World's First WHO-UNICEF "Baby-Friendly State" |work=United Nations Foundation |url=https://www.unwire.org/unwire/20020801/28062_story.asp |archive-url=https://web.archive.org/web/20100306205352/https://www.unwire.org/unwire/20020801/28062_story.asp |archive-date=6 March 2010 |access-date=14 March 2009}}</ref><ref>{{cite news |url=https://news.bbc.co.uk/2/hi/south_asia/2166677.stm |location=Kochi, India |work=BBC News |title=Indian state wins 'baby-friendly' award |date=1 August 2002}}</ref> 95% ಕ್ಕಿಂತ ಹೆಚ್ಚು ಕೇರಳೀಯ ಜನನಗಳು ಆಸ್ಪತ್ರೆಯಲ್ಲಿ ನಡೆಯುತ್ತವೆ ಮತ್ತು ರಾಜ್ಯವು ದೇಶದಲ್ಲಿ ಅತಿ ಕಡಿಮೆ ಶಿಶು ಮರಣ ಪ್ರಮಾಣವನ್ನು ಸಹ ಹೊಂದಿದೆ. ಮೂರನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು 100% ಜನನಗಳು ವೈದ್ಯಕೀಯ ಸೌಲಭ್ಯಗಳಲ್ಲಿ ನಡೆಯುತ್ತಿರುವುದರೊಂದಿಗೆ "ಸಾಂಸ್ಥಿಕ ಪ್ರಸವ" ದಲ್ಲಿ ಕೇರಳವನ್ನು ಮೊದಲ ಸ್ಥಾನದಲ್ಲಿರಿಸುತ್ತದೆ.<ref name="kerala_fact_sheet"/> [[ಆಯುರ್ವೇದ]],<ref name="Unnikrishnan_2004">{{Cite journal |last=Unnikrishnan |first=E |year=2004 |title=''Materia Medica'' of the Local Health Traditions of Payyannur |journal=Centre for Development Studies |url=https://www.cds.ac.in/krpcds/publication/downloads/80.pdf |access-date=22 January 2006}}</ref>{{rp|13}} ''[[ಸಿದ್ಧ]]'', ಮತ್ತು ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯವಾಗಿ ಕಂಡುಬರುವ [[ಸಾಂಪ್ರದಾಯಿಕ ಔಷಧ]] ವಿಧಾನಗಳು, ''ಕಳರಿ'', ''ಮರ್ಮಚಿಕಿತ್ಸ'' ಮತ್ತು ''ವಿಷವೈದ್ಯ'' ಸೇರಿದಂತೆ, ಅಭ್ಯಾಸ ಮಾಡಲಾಗುತ್ತದೆ. [[ಕಣಿಯಾರ್]] ನಂತಹ ಕೆಲವು ವೃತ್ತಿಪರ ಸಮುದಾಯಗಳು ತಮ್ಮ ಸಾಂಪ್ರದಾಯಿಕ ವೃತ್ತಿಯ ಜೊತೆಗೆ ಅಂತಹ ವೈದ್ಯಕೀಯ ವ್ಯವಸ್ಥೆಗಳ ಅಭ್ಯಾಸಕ್ಕೆ ಸಂಬಂಧಿಸಿದಂತೆ ಸ್ಥಳೀಯ ವೈದ್ಯರು ಎಂದು ಕರೆಯಲ್ಪಡುತ್ತಿದ್ದರು.<ref>Angus Stewart, woodburn The Religious attitude: A psychological study of its differentiation, 1927</ref> ಇವುಗಳು ''[[ಗುರುಕುಲ]]'' ಶಿಷ್ಯತ್ವದ ಮೂಲಕ ಪ್ರಚಾರಗೊಳ್ಳುತ್ತವೆ,<ref name="Unnikrishnan_2004" />{{rp|5–6}} ಮತ್ತು ಔಷಧೀಯ ಮತ್ತು ಪರ್ಯಾಯ ಚಿಕಿತ್ಸೆಗಳ ಮಿಶ್ರಣವನ್ನು ಒಳಗೊಂಡಿರುತ್ತವೆ.<ref name="Unnikrishnan_2004" />{{rp|15}} [[ವೈದ್ಯರತ್ನಂ ಪಿ. ಎಸ್. ವಾರಿಯರ್]] 1902 ರಲ್ಲಿ [[ಕೊಟ್ಟಕ್ಕಲ್]] ನಲ್ಲಿ ([[ಮಲಪ್ಪುರಂ]] ನಿಂದ ಸುಮಾರು 10 ಕಿಮೀ) ಸ್ಥಾಪಿಸಿದ ''[[ಆರ್ಯ ವೈದ್ಯ ಸಲಾ]]'' ರಾಜ್ಯದ ಅತಿದೊಡ್ಡ ಆಯುರ್ವೇದ ಔಷಧೀಯ ಜಾಲ ಮತ್ತು ಆರೋಗ್ಯ ಕೇಂದ್ರವಾಗಿದೆ.<ref name="Warrier">{{cite news |url=https://www.thehindu.com/todays-paper/tp-national/pk-warrier-turns-90/article2080601.ece |title=PK Warrier turns 90 |work=The Hindu |date=6 June 2011}}</ref><ref name="Arya Vaidya Sala Kottakkal – Part 1">{{cite AV media |url=https://www.youtube.com/watch?v=nj6YqhsUo0c |archive-url=https://ghostarchive.org/varchive/youtube/20211222/nj6YqhsUo0c |archive-date=22 December 2021 |url-status=live |title=Arya Vaidya Sala Kottakkal – Part 1 |publisher=BBC World – India Business Report |date=30 May 2013 |medium=Documentary}}{{cbignore}}</ref><ref name="mal">{{Cite news |title=അമ്പതിന്റെ നിറവില് മലപ്പുറം; മലപ്പുറത്തിന്റെ മാനവിക മഹാപൈതൃകം |url=https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |last=Leelakrishnan |first=Alamkode |date=17 June 2019 |work=Mathrubhumi |access-date=24 April 2021 |archive-date=7 May 2021 |archive-url=https://web.archive.org/web/20210507091729/https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |url-status=dead}}</ref> ಇದು ವಿಶ್ವದ ಅತಿದೊಡ್ಡ ಆಯುರ್ವೇದ ಔಷಧೀಯ ಬ್ರಾಂಡ್ಗಳಲ್ಲಿ ಒಂದಾಗಿದೆ.<ref name="Warrier" /><ref name="Arya Vaidya Sala Kottakkal – Part 1" /><ref name="mal" />
2014 ರಲ್ಲಿ, ಕೇರಳವು ಸುಕೃತಂ ಎಂಬ ಕಾರ್ಯಕ್ರಮದ ಮೂಲಕ ಬಡವರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುವ ಭಾರತದ ಮೊದಲ ರಾಜ್ಯವಾಯಿತು.<ref>{{cite web |url=https://www.freepressjournal.in/kerala-becomes-first-state-to-provide-free-cancer-treatment/457976 |title=Kerala becomes first state to provide free cancer treatment – Free Press Journal |website=www.freepressjournal.in |access-date=18 May 2016 |date=11 October 2014}}</ref> ಕೇರಳದ ಜನರು [[ಕ್ಯಾನ್ಸರ್]]ಗಳು, [[ಯಕೃತ್ತು]] ಮತ್ತು [[ಮೂತ್ರಪಿಂಡ]] ಕಾಯಿಲೆಗಳ ಹೆಚ್ಚಿನ ಘಟನೆಗಳನ್ನು ಅನುಭವಿಸುತ್ತಾರೆ.<ref>{{Cite web |url=https://www.indushealthplus.com/kerala-health-statistics.html |title=Health Statistics and Public Health issues in Kerala |website=[[Indus Health Plus]] |language=en |access-date=28 October 2019}}</ref> ಏಪ್ರಿಲ್ 2016 ರಲ್ಲಿ, ''ಎಕನಾಮಿಕ್ ಟೈಮ್ಸ್'' 250,000 ನಿವಾಸಿಗಳು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ ಎಂದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 150 ರಿಂದ 200 ಯಕೃತ್ತು ಕಸಿಗಳು ಪ್ರದೇಶದ ಆಸ್ಪತ್ರೆಗಳಲ್ಲಿ ನಡೆಯುತ್ತವೆ ಎಂದು ಸಹ ಇದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 42,000 ಕ್ಯಾನ್ಸರ್ ಪ್ರಕರಣಗಳು ಪ್ರದೇಶದಲ್ಲಿ ವರದಿಯಾಗುತ್ತವೆ. ಖಾಸಗಿ ಆಸ್ಪತ್ರೆಗಳು ತಮ್ಮ ಅಂಕಿಅಂಶಗಳನ್ನು ವರದಿ ಮಾಡದಿರಬಹುದು ಎಂದು ಇದು ಕಡಿಮೆ ಅಂದಾಜು ಎಂದು ನಂಬಲಾಗಿದೆ. ಮೂತ್ರಪಿಂಡ ದಾನಕ್ಕೆ ದೀರ್ಘ ಕಾಯುವ ಪಟ್ಟಿಗಳು ಮಾನವ ಮೂತ್ರಪಿಂಡಗಳ ಅಕ್ರಮ ವ್ಯಾಪಾರವನ್ನು ಉತ್ತೇಜಿಸಿದೆ, ಮತ್ತು ಆರ್ಥಿಕವಾಗಿ ಅನನುಕೂಲಕರ ರೋಗಿಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಕಿಡ್ನಿ ಫೆಡರೇಶನ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣವಾಗಿದೆ.<ref>{{Cite news |url=https://economictimes.indiatimes.com/industry/healthcare/biotech/healthcare/health-crisis-in-kerala-the-increase-in-cancer-kidney-and-liver-diseases/articleshow/51950836.cms?intenttarget=no |title=Health crisis in Kerala: The increase in cancer, kidney and liver diseases – The Economic Times |journal=The Economic Times |access-date=18 May 2016 |date=23 April 2016 |last1=Krishnakumar |first1=P. K. |last2=Sanandakumar |first2=S.}}</ref> 2017–18 ರಂತೆ, [[ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಕೇರಳ)|ಆರೋಗ್ಯ ಸೇವೆಗಳ ಇಲಾಖೆ]]ಯಡಿಯಲ್ಲಿ 6,691 ಆಧುನಿಕ ಔಷಧ ಸಂಸ್ಥೆಗಳಿವೆ, ಅವುಗಳಲ್ಲಿ ಒಟ್ಟು ಹಾಸಿಗೆ ಸಾಮರ್ಥ್ಯ 37,843; 15,780 ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 22,063 ನಗರ ಪ್ರದೇಶಗಳಲ್ಲಿ.<ref name="dhs">{{Cite book |title=List of modern medicine institutions (2017–18) |last=Statistics Wing |first=Health Information Cell |publisher=Directorate of Health Services, Government of Kerala |year=2019 |location=Thiruvananthapuram |pages=1, 7 |url=https://dhs.kerala.gov.in/wp-content/uploads/2020/03/list_10052019.pdf}}</ref>
=== ಭಾಷೆ ===
[[File:Language Map of Kerala (2011 Census).svg|thumb|200px|ಜಿಲ್ಲೆಯ ಪ್ರಕಾರ ಭಾಷೆಗಳು:<br> {{col-begin}}
{{col-2}}
'''ಮಲಯಾಳಂ'''
{{legend|#009deb|80–90%}}
{{legend|#0088cc|90–100%}}
{{col-end}}
]]
[[ಮಲಯಾಳಂ]] ಕೇರಳದ ಅಧಿಕೃತ ಭಾಷೆಯಾಗಿದೆ ಮತ್ತು [[ಭಾರತದ ಭಾಷೆಗಳು|ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ]] ಒಂದಾಗಿದೆ.<ref name="thehindu20130524">{{cite news |url=https://www.thehindu.com/todays-paper/tp-national/classical-status-for-malayalam/article4744630.ece |title='Classical' status for Malayalam |work=[[The Hindu]] |date=24 May 2013 |access-date=25 May 2013 |location=Thiruvananthapuram, India}}</ref><ref>{{Cite web |title=Kerala – Principal Language |url=https://archive.india.gov.in/knowindia/state_uts.php?id=73 |url-status=dead |archive-url=https://web.archive.org/web/20200610111356/https://archive.india.gov.in/knowindia/state_uts.php?id=73 |archive-date=10 June 2020 |access-date=27 November 2018 |website=Government of India}}</ref> [[ಇಡುಕ್ಕಿ ಜಿಲ್ಲೆ]] ಮತ್ತು [[ಪಾಲಕ್ಕಾಡ್ ಜಿಲ್ಲೆ]]ಯಲ್ಲಿ ಗಮನಾರ್ಹವಾದ [[ತಮಿಳು ಭಾಷೆ|ತಮಿಳು]] ಮಾತನಾಡುವ ಜನಸಂಖ್ಯೆಯಿದೆ, ಇದು ಕ್ರಮವಾಗಿ ಎರಡು ಜಿಲ್ಲೆಗಳ ಜನಸಂಖ್ಯೆಯ 17.48% ಮತ್ತು 4.8% ರಷ್ಟಿದೆ.<ref name="lg">{{cite web |title=Census of India – Language |url=https://censusindia.gov.in/2011census/C-16.html |website=censusindia.gov.in}}</ref> [[ತುಳು ಭಾಷೆ|ತುಳು]] ಮತ್ತು [[ಕನ್ನಡ]]ವನ್ನು ಮುಖ್ಯವಾಗಿ [[ಕಾಸರಗೋಡು ಜಿಲ್ಲೆ]]ಯ ಉತ್ತರ ಭಾಗಗಳಲ್ಲಿ ಮಾತನಾಡಲಾಗುತ್ತದೆ, ಪ್ರತಿಯೊಂದೂ ಕ್ರಮವಾಗಿ ಜಿಲ್ಲೆಯ ಒಟ್ಟು ಜನಸಂಖ್ಯೆಯ 8.77% ಮತ್ತು 4.23% ರಷ್ಟಿದೆ.<ref name="lg" /><ref>{{cite news |title=Kerala government to appoint officer to study issues of linguistic minorities |url=https://timesofindia.indiatimes.com/city/thiruvananthapuram/government-to-appoint-officer-to-study-issues-of-linguistic-minorities/articleshow/59892625.cms |date=2 August 2017 |newspaper=The Times of India |department=City: Thiruvananthapuram |agency=TNN |access-date=29 December 2019}}</ref>
=== ಧರ್ಮ ===
{{Main|ಕೇರಳದಲ್ಲಿ ಧರ್ಮ}}
{{multiple image
| direction = vertical
| total_width = 200
| caption_align = left
| image1 = Jain temple, Wayanad IMG 3494 by Joseph Lazer.jpg
| caption1 = [[ಸುಲ್ತಾನ್ ಬತ್ತೇರಿ|ಸುಲ್ತಾನ್ ಬತ್ತೇರಿಯ]] [[ಜೈನ ದೇವಾಲಯ, ಕಿಡಂಗನಾಡ್|ಜೈನ ದೇವಾಲಯ]].
| image3 = Cheraman juma masjid Old.jpg
| caption3 = ಮೂಲ [[ಚೇರಮನ್ ಜುಮಾ ಮಸೀದಿ]]ಯ ಮಾದರಿ.
| image4 = Palayoor St. Thomas Syro-Malabar Church.jpg
| caption4 = [[ಸೇಂಟ್ ತಾಮಸ್ ಸಿರೋ-ಮಲಬಾರ್ ಚರ್ಚ್, ಪಾಲಯೂರು]].
}}
{{Pie chart
|thumb = right
|caption = '''ಕೇರಳದಲ್ಲಿ ಧರ್ಮ''' (2011)<ref name="census_2016_religion">{{cite web |url=https://www.censusindia.gov.in/2011census/C-01/DDW00C-01%20MDDS.XLS |title=Population by religious community – 2011 |publisher=Office of the Registrar General & Census Commissioner |work=[[2011 Census of India]] |access-date=25 August 2015 |archive-url=https://web.archive.org/web/20150825155850/https://www.censusindia.gov.in/2011census/C-01/DDW00C-01%20MDDS.XLS |archive-date=25 August 2015}}</ref>
|label1 = [[ಕೇರಳದಲ್ಲಿ ಹಿಂದೂ ಧರ್ಮ|ಹಿಂದೂ ಧರ್ಮ]]
|value1 = 54.73
|color1 = darkorange
|label2 = [[ಕೇರಳದಲ್ಲಿ ಇಸ್ಲಾಂ|ಇಸ್ಲಾಂ]]
|value2 = 26.56
|color2 = Green
|label3 = [[ಕೇರಳದಲ್ಲಿ ಕ್ರಿಶ್ಚಿಯನ್ ಧರ್ಮ|ಕ್ರಿಶ್ಚಿಯನ್ ಧರ್ಮ]]
|value3 = 18.38
|color3 = dodgerblue
|label4 = ಇತರೆ ಅಥವಾ ಯಾವುದೂ ಅಲ್ಲ
|value4 = 0.32
|color4 = grey
}}
[[File:Kerala religions 2011.png|thumb|ಕೇರಳದ ಪ್ರತಿಯೊಂದು ತಾಲೂಕಿನಲ್ಲಿ ಅತ್ಯಂತ ಜನಪ್ರಿಯ ಧರ್ಮದ ಶೇಕಡಾವಾರು]]
ಕೇರಳವು [[ಹಿಂದೂಗಳು]], [[ಮುಸ್ಲಿಮರು]] ಮತ್ತು [[ಕ್ರೈಸ್ತರು]] ರಾಜ್ಯಾದ್ಯಂತ ಗಮನಾರ್ಹ ಜನಸಂಖ್ಯೆಯನ್ನು ಹೊಂದಿರುವ ಧಾರ್ಮಿಕವಾಗಿ ಬಹಳ ವೈವಿಧ್ಯಮಯವಾಗಿದೆ. ಕೇರಳವನ್ನು ಸಾಮಾನ್ಯವಾಗಿ ಭಾರತದ ಅತ್ಯಂತ ವೈವಿಧ್ಯಮಯ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref>{{cite web |url=https://thegroundtruthproject.org/paradox-indias-religiously-diverse-state/ |title=The paradox of India's most religiously diverse state |date=7 April 2019 |publisher=The Ground Truth Project |access-date=7 April 2019}}</ref><ref>{{cite web |url=https://www.huffpost.com/entry/kerala-religion-gender_b_9577234 |title=There's a Place in India Where Religions Coexist Beautifully and Gender Equality Is Unmatched |date=6 April 2016 |publisher=Huffpost |access-date=6 April 2016}}</ref> [[ಹಿಂದೂ ಧರ್ಮ]]ವು ಕೇರಳದಲ್ಲಿ ಅತಿ ವ್ಯಾಪಕವಾಗಿ ಅನುಸರಿಸಲ್ಪಡುವ ನಂಬಿಕೆಯಾಗಿದ್ದು, [[ಇಸ್ಲಾಂ]] ಮತ್ತು [[ಕ್ರಿಶ್ಚಿಯನ್ ಧರ್ಮ]]ಕ್ಕೆ ಗಮನಾರ್ಹ ಸಂಖ್ಯೆಯ ಅನುಯಾಯಿಗಳಿದ್ದಾರೆ. ಭಾರತದ ಉಳಿದ ಭಾಗಗಳಿಗೆ ಹೋಲಿಸಿದರೆ, ಕೇರಳವು ತುಲನಾತ್ಮಕವಾಗಿ ಕಡಿಮೆ [[ಸಂಪ್ರದಾಯವಾದ]]ವನ್ನು ಅನುಭವಿಸುತ್ತದೆ.<ref>{{Cite journal |last=Heller |first=Patrick |title=Social capital as a product of class mobilization and state intervention: Industrial workers in Kerala, India |journal=[[World Development (journal)|World Development]] |volume=24 |issue=6 |pages=1055–1071 |date=June 1996 |doi=10.1016/0305-750X(96)00015-0 <!-- |access-date=4 April 2022 --> |doi-access=free}}</ref> [[2011 ರ ಭಾರತದ ಜನಗಣತಿ]] ಅಂಕಿಅಂಶಗಳ ಪ್ರಕಾರ, ಕೇರಳದ ನಿವಾಸಿಗಳಲ್ಲಿ 54.7% ಹಿಂದೂಗಳು, 26.6% ಮುಸ್ಲಿಮರು, 18.4% ಕ್ರೈಸ್ತರು, ಮತ್ತು ಉಳಿದ 0.3% ರಷ್ಟು ಜನರು ಇನ್ನೊಂದು ಧರ್ಮವನ್ನು ಅನುಸರಿಸುತ್ತಾರೆ ಅಥವಾ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿಲ್ಲ.<ref name="censusindia2011religion">{{cite web |title=Population by religious communities |work=Census of India |url=https://www.censusindia.gov.in/2011census/C-01.html |publisher=Government of India |access-date=26 August 2015}}</ref> [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂಗಳು ಅತಿದೊಡ್ಡ ಧಾರ್ಮಿಕ ಗುಂಪನ್ನು ಪ್ರತಿನಿಧಿಸುತ್ತಾರೆ, ಅಲ್ಲಿ ಅವರು ಮುಸ್ಲಿಮರಿಂದ ಹಿಂದಿಕ್ಕಲ್ಪಟ್ಟಿದ್ದಾರೆ.<ref name="thehindu1">{{cite news |url=https://www.hindu.com/2004/09/23/stories/2004092306010500.htm |archive-url=https://web.archive.org/web/20041128124211/https://www.hindu.com/2004/09/23/stories/2004092306010500.htm |url-status=dead |archive-date=28 November 2004 |location=Chennai, India |title=Increase in Muslim population in the State |date=23 September 2004 |work=[[The Hindu]] |access-date=13 November 2015}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>{{cite news |url=https://timesofindia.indiatimes.com/india/Kerala-not-Goa-has-maximum-no-of-Christians/articleshow/2649158.cms |title=Kerala, not Goa, has maximum no. of Christians |work=The Times of India |date=25 December 2007 |publisher=The Times Group}}</ref> 2016 ರಂತೆ, ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಇತರರು ರಾಜ್ಯದಲ್ಲಿ ಒಟ್ಟು ಜನನಗಳ ಕ್ರಮವಾಗಿ 41.9%, 42.6%, 15.4% ಮತ್ತು 0.2% ರಷ್ಟಿದ್ದಾರೆ.<ref>{{Cite web |url=https://www.ecostat.kerala.gov.in/images/pdf/publications/Vital_Statistics/data/vital_statistics_2016.pdf |title=Vital Statistics 2016 |website=Ecostat, Kerala Government. |access-date=7 June 2019 |archive-date=11 July 2019 |archive-url=https://web.archive.org/web/20190711011809/http://www.ecostat.kerala.gov.in/images/pdf/publications/Vital_Statistics/data/vital_statistics_2016.pdf |url-status=dead}}</ref>
ಇಸ್ಲಾಂ ಕೇರಳಕ್ಕೆ ಬಂದಿತು, ಇದು ದೊಡ್ಡ [[ಹಿಂದೂ ಮಹಾಸಾಗರ]]ದ ಅಂಚಿನ ಭಾಗವಾಗಿದ್ದು, [[ಮಧ್ಯಪ್ರಾಚ್ಯ]]ದಿಂದ ಮಸಾಲೆ ಮತ್ತು ರೇಷ್ಮೆ ವ್ಯಾಪಾರಿಗಳ ಮೂಲಕ ಬಂದಿತು. ಇತಿಹಾಸಕಾರರು ಇಸ್ಲಾಂನ್ನು ಕೇರಳಕ್ಕೆ 7 ನೇ ಶತಮಾನ CE ಯಷ್ಟು ಹಿಂದೆಯೇ ಪರಿಚಯಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ.<ref name="indiatimes3">{{cite web |url=https://timesofindia.indiatimes.com/india/Trade-not-invasion-brought-Islam-to-India/articleshow/2144414.cms |title=Trade, not invasion brought Islam to India |last=Sethi |first=Atul |date=24 June 2007 |work=[[The Times of India]] |access-date=24 September 2014}}</ref><ref name="autogenerated20002">Katz 2000; Koder 1973; Thomas Puthiakunnel 1973; David de Beth Hillel, 1832; Lord, James Henry 1977.</ref> ಗಮನಾರ್ಹವಾಗಿ [[ಚೇರಮನ್ ಪೆರುಮಾಳ್ ತಾಜುದ್ದೀನ್]] ರ ದಂತಕಥೆಯು ಕಂಡುಬಂದಿದೆ, ಇದು [[ಅರೇಬಿಯಾ]]ಕ್ಕೆ ತೆರಳಿ [[ಮುಹಮ್ಮದ್]] ರನ್ನು ಭೇಟಿಯಾದ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪೌರಾಣಿಕ ಹಿಂದೂ ರಾಜನ ಕಥೆಯಾಗಿದೆ.<ref>{{cite book |last1=Varghese |first1=Theresa |title=Stark World Kerala |year=2006 |publisher=Stark World Pub. |isbn=978-8190250511 |url=https://books.google.com/books?id=lDhuAAAAMAAJ&q=cheraman+perumal+tajuddin |language=en}}</ref><ref>{{cite book |last1=Kumar |first1=Satish |title=India's National Security: Annual Review 2009 |year=2012 |url=https://books.google.com/books?id=x-esAgAAQBAJ&q=cheraman+perumal+tajuddin&pg=PA346 |publisher=Routledge |language=en |isbn=978-1-136-70491-8}}</ref><ref>Minu Ittyipe; [[Solomon]] to Cheraman; Outlook Indian Magazine; 2012</ref> ಕೇರಳ ಮುಸ್ಲಿಮರನ್ನು ಸಾಮಾನ್ಯವಾಗಿ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಎಂದು ಕರೆಯಲಾಗುತ್ತದೆ. ಮಾಪ್ಪಿಲರು ಕೇರಳದ ಮುಸ್ಲಿಂ ಜನಸಂಖ್ಯೆಯನ್ನು ರೂಪಿಸುವ ಅನೇಕ ಸಮುದಾಯಗಳಲ್ಲಿ ಒಂದಾಗಿದೆ.<ref name="KunhaliV2">Kunhali, V. "Muslim Communities in Kerala to 1798" PhD Dissertation Aligarh Muslim University (1986) [https://ir.amu.ac.in/2736/1/T%205242.pdf]</ref><ref name="Divakaruni20112">{{cite book |url=https://books.google.com/books?id=W0wLgfQyvFAC |title=The Palace of Illusions |author=Chitra Divakaruni |year=2011 |publisher=Pan Macmillan |isbn=978-0-330-47865-6 |access-date=18 November 2012}}</ref> [[ಚೇರಮನ್ ಪೆರುಮಾಳ್ಸ್ ದಂತಕಥೆ]]ಯ ಪ್ರಕಾರ, ಮೊದಲ ಭಾರತೀಯ ಮಸೀದಿಯನ್ನು {{CE|624}} ರಲ್ಲಿ [[ಕೊಡುಂಗಲ್ಲೂರು]] ನಲ್ಲಿ [[ಚೇರ ಸಾಮ್ರಾಜ್ಯ]]ದ ಕೊನೆಯ ಆಡಳಿತಗಾರ (ಚೇರಮನ್ ಪೆರುಮಾಳ್) ರ ಆದೇಶದಂತೆ ನಿರ್ಮಿಸಲಾಯಿತು, ಅವರು [[ಮುಹಮ್ಮದ್]] ({{Circa|570}}–632) ರ ಜೀವಿತಾವಧಿಯಲ್ಲಿ ಇಸ್ಲಾಂಗೆ ಮತಾಂತರಗೊಂಡರು.<ref>{{cite book |author=Jonathan Goldstein |title=The Jews of China |publisher=M. E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=Edward Simpson |author2=Kai Kresse |title=Struggling with History: Islam and Cosmopolitanism in the Western Indian Ocean |url=https://books.google.com/books?id=w0qHKA7zEaEC&pg=PA333 |access-date=24 July 2012 |year=2008 |publisher=Columbia University Press |isbn=978-0-231-70024-5 |pages=333}}</ref><ref name="Kupferschmidt1987">{{cite book |author=Uri M. Kupferschmidt |url=https://books.google.com/books?id=ChEVAAAAIAAJ&pg=PA458 |title=The Supreme Muslim Council: Islam Under the British Mandate for Palestine |publisher=Brill |year=1987 |isbn=978-9004079298 |pages=458–59 |access-date=25 July 2012 |archive-url=https://web.archive.org/web/20231125191234/https://books.google.com/books?id=ChEVAAAAIAAJ&pg=PA458 |archive-date=25 November 2023 |url-status=live}}</ref><ref name="Raṇṭattāṇi2007">{{cite book |author=Husain Raṇṭattāṇi |title=Mappila Muslims: A Study on Society and Anti Colonial Struggles |url=https://books.google.com/books?id=xlb5BrabQd8C&pg=PA179 |access-date=25 July 2012 |year=2007 |publisher=Other Books |isbn=978-8190388788 |pages=179–}}</ref>
ಪ್ರಾಚೀನ ಕ್ರಿಶ್ಚಿಯನ್ ಸಂಪ್ರದಾಯವು ಕ್ರಿಶ್ಚಿಯನ್ ಧರ್ಮವು 52 CE ಯಲ್ಲಿ [[ಯೇಸು ಕ್ರಿಸ್ತ]]ನ [[ಹನ್ನೆರಡು ಪ್ರೇರಿತರು|ಹನ್ನೆರಡು ಪ್ರೇರಿತರಲ್ಲಿ]] ಒಬ್ಬರಾದ [[ತಾಮಸ್ ಪ್ರೇರಿತ]]ನ ಆಗಮನದೊಂದಿಗೆ ಕೇರಳದ ತೀರವನ್ನು ತಲುಪಿತು ಎಂದು ಹೇಳುತ್ತದೆ.<ref>[https://books.google.com/books?id=lZUBZlth2qgC&q=Muziris ''The Encyclopedia of Christianity, Volume 5''] {{webarchive|url=https://web.archive.org/web/20161226115908/https://books.google.com/books?id=lZUBZlth2qgC&printsec=frontcover&dq=isbn%3A9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA|date=26 December 2016}} by Erwin Fahlbusch. Wm. B. Eerdmans Publishing – 2008. p. 285. {{ISBN|978-0802824172}}.</ref><ref>{{cite book |chapter-url=https://books.google.com/books?id=qhKGPprbQaYC&pg=PA27 |title=The Jews of India: A Story of Three Communities |editor-first=Orpa |editor-last=Slapak |publisher=The Israel Museum |location=Jerusalem |year=2003 |page=27 |isbn=9652781797 |chapter=The Cochin Jews Of Kerala |first=Barbara C. |last=Johnson}}</ref><ref name="Encyclopædia Britannica">{{cite web |url=https://www.britannica.com/EBchecked/topic/592851/Saint-Thomas |title=Saint Thomas |website=Encyclopædia Britannica |date=1 January 2019}}</ref><ref name="Menachery">Menachery G; 1973, 1998; Mundalan, A. M; 1984; Podipara, Placid J. 1970; Leslie Brown, 1956</ref> [[ಸೇಂಟ್ ತಾಮಸ್ ಕ್ರೈಸ್ತರು]] [[ಸಿರೋ-ಮಲಬಾರ್ ಚರ್ಚ್|ಸಿರೋ-ಮಲಬಾರ್ ಕ್ಯಾಥೋಲಿಕ್]],<ref name="Ponnumuthan1996">{{cite book |author=Selvister Ponnumuthan |title=Authentic Interpretation in Canon Law: Reflections on a Distinctively Canonical Institution |url=https://books.google.com/books?id=zcedqS4jOusC&pg=PA103 |access-date=18 November 2012 |year=1996 |publisher=Gregorian&Biblical BookShop |isbn=978-8876527210 |pages=103–}}</ref> [[ಸಿರೋ-ಮಲಂಕರ ಕ್ಯಾಥೋಲಿಕ್ ಚರ್ಚ್|ಸಿರೋ-ಮಲಂಕರ ಕ್ಯಾಥೋಲಿಕ್]],<ref name="Williams1996">{{cite book |author=Raymond Brady Williams |title=Christian Pluralism in the United States: The Indian Immigrant Experience |url=https://books.google.com/books?id=w1uk6zZQKzAC&pg=PA144 |access-date=18 November 2012 |year=1996 |publisher=Cambridge University Press |isbn=978-0-521-57016-9 |pages=144–}}</ref> [[ಜಾಕೋಬೈಟ್ ಸಿರಿಯನ್ ಕ್ರಿಶ್ಚಿಯನ್ ಚರ್ಚ್]],<ref name="AndersonTang2005">{{cite book |author1=Allan Anderson |author2=Edmond Tang |title=Asian and Pentecostal: The Charismatic Face of Christianity in Asia |url=https://books.google.com/books?id=LDZgKELq7AoC&pg=PA248 |access-date=18 November 2012 |year=2005 |publisher=OCMS |isbn=978-1-870345-43-9 |pages=248–}}</ref> [[ಮಾರ್ ತೋಮಾ ಸಿರಿಯನ್ ಚರ್ಚ್]],<ref>{{Cite book |title=John Anthony McGuckin (15 December 2010). The Encyclopedia of Eastern Orthodox Christianity. pp. 377–. Retrieved 18 November 2012. |publisher=John Wiley & Sons. |isbn=978-1-4443-9254-8 |year=2010}}</ref> [[ಮಲಂಕರ ಓರ್ಥೊಡಾಕ್ಸ್ ಸಿರಿಯನ್ ಚರ್ಚ್]],<ref name="Russell2010">{{cite book |author=Thomas Arthur Russell |title=Comparative Christianity: A Student's Guide to a Religion and Its Diverse Traditions |url=https://books.google.com/books?id=FmMarHDbglgC&pg=PT40 |access-date=18 November 2012 |year=2010 |publisher=Universal-Publishers |isbn=978-1-59942-877-2 |pages=40–}}</ref> [[CSI|CSI]] ಯ [[ಸೇಂಟ್ ತಾಮಸ್ ಆಂಗ್ಲಿಕನ್ನರು|ಸಿರಿಯನ್ ಆಂಗ್ಲಿಕನ್ನರು]]<ref>{{cite book |author=Stephen Neill |title=A History of Christianity in India: 1707–1858 |url=https://books.google.com/books?id=Xi-tvrYbYxMC&pg=PA240 |access-date=31 August 2012 |year=2002 |publisher=Cambridge University Press |isbn=978-0-521-89332-9 |pages=247–251}}</ref> ಮತ್ತು [[ಪೆಂಟೆಕೋಸ್ಟಲ್ ಸೇಂಟ್ ತಾಮಸ್ ಕ್ರೈಸ್ತರು]]<ref>{{cite book |last1=Bergunder |first1=Michael |title=The South Indian Pentecostal Movement in the Twentieth Century |year=2008 |publisher=Wm. B. Eerdmans Publishing |isbn=978-0-8028-2734-0 |pages=15–16, 26–30, 37–57 |url=https://books.google.com/books?id=XGiv3riaunQC&q=Pentecostal+evangelical+saint+thomas+syrian+christian |language=en}}</ref> ಸೇರಿದ್ದಾರೆ. ಕೇರಳದಲ್ಲಿ [[ಲ್ಯಾಟಿನ್ ಚರ್ಚ್|ಲ್ಯಾಟಿನ್ ಕ್ಯಾಥೋಲಿಕ್]] ಕ್ರೈಸ್ತರ ಮೂಲವು 16 ನೇ ಶತಮಾನದಲ್ಲಿ ಪೋರ್ಚುಗೀಸ್ [[ಪಡ್ರೊಡೊ]]ನ ಮಿಷನರಿ ಪ್ರಯತ್ನಗಳ ಪರಿಣಾಮವಾಗಿದೆ.<ref name="autogenerated1">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA192 |access-date=18 November 2012 |year=2007 |publisher=DC Books |isbn=978-8126415786 |pages=192–}}</ref><ref name="RakRaj2008">{{cite book |author1=Knut A. Jacobsen, Selva J. Rak |author2=Selva J. Raj |title=South Asian Christian Diaspora: Invisible Diaspora in Europe and North America |url=https://books.google.com/books?id=6L5MxlMIcG0C&pg=PA172 |access-date=18 November 2012 |year=2008 |publisher=Ashgate Publishing, Ltd. |isbn=978-0-7546-6261-7 |pages=172–}}</ref><ref name="Subramanian2009">{{cite book |author=Ajantha Subramanian |title=Shorelines: Space and Rights in South India |url=https://books.google.com/books?id=lsd55y4KbeYC&pg=PA95 |access-date=18 November 2012 |year=2009 |publisher=Stanford University Press |isbn=978-0-8047-8685-0 |pages=95–}}</ref> ವಸಾಹತುಶಾಹಿ ವಲಸಿಗರೊಂದಿಗೆ ಶತಮಾನಗಳ ಮಿಶ್ರಣದ ಪರಿಣಾಮವಾಗಿ, ಪೋರ್ಚುಗೀಸ್, ಡಚ್, ಫ್ರೆಂಚ್, ಬ್ರಿಟಿಷ್ ಮತ್ತು ಇತರ ಯುರೋಪಿಯನ್ನರಿಂದ ಪ್ರಾರಂಭಿಸಿ, ಕೇರಳದಲ್ಲಿ ಮಿಶ್ರ ಯುರೋಪಿಯನ್ ಮತ್ತು ಭಾರತೀಯ ಪೋಷಕತ್ವ ಅಥವಾ ಪೂರ್ವಜರ ಆಂಗ್ಲೋ-ಇಂಡಿಯನ್ ಸಮುದಾಯವಿದೆ. ಕೇರಳವು ಭಾರತದ ಎಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>Singh, Anjana. "Fort Cochin in Kerala 1750–1830 The Social Condition of a Dutch Community in an Indian Milieu." Brill, Leiden Boston: 2010, 3: 92.</ref>
[[ಯಹೂದಿ ಧರ್ಮ]]ವು 10 ನೇ ಶತಮಾನ BCE ಯಲ್ಲಿ [[ಸೊಲೊಮನ್|ರಾಜ ಸೊಲೊಮನ್]] ಕಾಲದಲ್ಲಿ ಕೇರಳವನ್ನು ತಲುಪಿತು.<ref>Weil, Shalva. "Jews in India." in M.Avrum Erlich (ed.) ''Encyclopedia of the Jewish Diaspora'', Santa Barbara, CA: ABC CLIO. 2008, 3: 1204–12.</ref> ಅವರನ್ನು [[ಕೊಚ್ಚಿ ಯಹೂದಿಗಳು]] ಅಥವಾ ಮಲಬಾರ್ ಯಹೂದಿಗಳು ಎಂದು ಕರೆಯಲಾಗುತ್ತದೆ ಮತ್ತು ಅವರು [[ಭಾರತದಲ್ಲಿ ಯಹೂದಿಗಳ ಇತಿಹಾಸ|ಭಾರತದಲ್ಲಿ ಅತ್ಯಂತ ಹಳೆಯ ಯಹೂದಿಗಳ ಗುಂಪು]] ಆಗಿದ್ದಾರೆ.<ref>[https://books.google.com/books?id=qhKGPprbQaYC&q=two+millennia ''The Israelis (Jews) of India: A Story of Three Communities''] {{webarchive|url=https://web.archive.org/web/20161226115854/https://books.google.com/books?id=qhKGPprbQaYC&printsec=frontcover&dq=isbn%3A9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA|date=26 December 2016}} by Orpa Slapak. The Israel Museum, Jerusalem. 2003. p. 27. {{ISBN|978-9652781796}}.</ref><ref>Weil, Shalva. India's Jewish Heritage: Ritual, Art and Life-Cycle, Mumbai: Marg Publications, 2009. [first published in 2002; 3rd edn.]. Katz 200/*Religion */ 0; Koder 1973; Menachery 1998</ref> 20 ನೇ ಶತಮಾನದವರೆಗೆ ಕೇರಳದಲ್ಲಿ ಗಮನಾರ್ಹವಾದ ಯಹೂದಿ ಸಮುದಾಯವು ಅಸ್ತಿತ್ವದಲ್ಲಿತ್ತು, ಅವರಲ್ಲಿ ಹೆಚ್ಚಿನವರು [[ಅಲಿಯಾ|ಇಸ್ರೇಲ್ಗೆ ವಲಸೆ]] ಹೋದರು.<ref name="Roland1998">{{cite book |author=Joan G. Roland |title=The Jewish Communities of India: Identity in a Colonial Era |url=https://books.google.com/books?id=kHJccZ92IecC&pg=PA283 |access-date=18 November 2012 |year=1998 |publisher=Transaction Publishers |isbn=978-0-7658-0439-6 |pages=283–}}</ref> [[ಕೊಚ್ಚಿ ಸಿನಾಗೋಗ್|ಪರದೇಶಿ ಸಿನಾಗೋಗ್]] [[ಕೊಚ್ಚಿ|ಕೊಚ್ಚಿಯಲ್ಲಿ]] [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಿನಾಗೋಗ್ ಆಗಿದೆ.<ref>{{cite web |title=Paradesi Synagogue – tourist attractions at Mattancherry, Ernakulam Kerala Tourism |url=https://www.keralatourism.org/kochi/paradeso-synagogue-mattancherry.php |website=www.keralatourism.org}}</ref> [[ಕೇರಳದಲ್ಲಿ ಜೈನ ಧರ್ಮ|ಜೈನ ಧರ್ಮ]]ವು [[ವಯನಾಡು ಜಿಲ್ಲೆ]]ಯಲ್ಲಿ ಗಣನೀಯ ಅನುಯಾಯಿಗಳನ್ನು ಹೊಂದಿದೆ.<ref name="LockieCarpenter2012">{{cite book |author1=Stewart Lockie |author2=David Carpenter |title=Agriculture, Biodiversity and Markets: Livelihoods and Agroecology in Comparative Perspective |url=https://books.google.com/books?id=cZvlmpwviuMC&pg=PT258 |access-date=18 November 2012 |year=2012 |publisher=Routledge |isbn=978-1-136-54649-5 |page=258}}</ref><ref name="MathewBaviskar2009">{{cite book |author1=George Mathew |author2=B S Baviskar |title=Inclusion and Exclusion in Local Governance: Field Studies from Rural India |url=https://books.google.com/books?id=DsDOrvROzPEC&pg=PA204 |access-date=18 November 2012 |year=2009 |publisher=Sage Publications |isbn=978-8178298603 |page=204}}</ref>
== ಶಿಕ್ಷಣ ==
{{Main|ಕೇರಳದಲ್ಲಿ ಶಿಕ್ಷಣ}}
{{multiple image
<!-- Layout parameters -->| align = <!-- right (default), left, centre, none -->
| direction = vertical
| width = 225
<!--image1-->| image1 = University of Kerala.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಶ್ವವಿದ್ಯಾಲಯ]]
<!--image 2-->}}
[[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]] 14 ಮತ್ತು 16 ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದಿತು. ಖಗೋಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಕೇರಳ ಶಾಲೆಯು ಸ್ವತಂತ್ರವಾಗಿ ಹಲವಾರು ಪ್ರಮುಖ ಗಣಿತ ಪರಿಕಲ್ಪನೆಗಳನ್ನು ರಚಿಸಿತು, ಇವುಗಳಲ್ಲಿ ತ್ರಿಕೋನಮಿತಿಯ ಕಾರ್ಯಗಳಿಗಾಗಿ [[ಸರಣಿ ವಿಸ್ತರಣೆ]] ಸೇರಿದೆ.<ref name="roy">{{cite journal |last=Roy |first=Ranjan |year=1990 |title=Discovery of the Series Formula for π by Leibniz, Gregory, and Nilakantha |journal=Mathematics Magazine |volume=63 |issue=5 |pages=291–306 |doi=10.2307/2690896 |jstor=2690896}}</ref><ref>{{Citation |last=Pingree |first=David |author-link=David Pingree |title=Hellenophilia versus the History of Science |year=1992 |journal=Isis |volume=83 |issue=4 |pages=554–63 |jstor=234257 |doi=10.1086/356288 |quote=One example I can give you relates to the Indian Mādhava's demonstration, in about 1400 A.D., of the infinite power series of trigonometrical functions using geometrical and algebraic arguments. When this was first described in English by Charles Whish, in the 1830s, it was heralded as the Indians' discovery of the calculus. This claim and Mādhava's achievements were ignored by Western historians, presumably at first because they could not admit that an Indian discovered the calculus, but later because no one read anymore the ''Transactions of the Royal Asiatic Society'', in which Whish's article was published. The matter resurfaced in the 1950s, and now we have the Sanskrit texts properly edited, and we understand the clever way that Mādhava derived the series ''without'' the calculus, but many historians still find it impossible to conceive of the problem and its solution in terms of anything other than the calculus and proclaim that the calculus is what Mādhava found. In this case, the elegance and brilliance of Mādhava's mathematics are being distorted as they are buried under the current mathematical solution to a problem to which he discovered an alternate and powerful solution. |bibcode=1992Isis...83..554P |s2cid=68570164}}</ref> 19 ನೇ ಶತಮಾನದ ಆರಂಭಿಕ ದಶಕಗಳಲ್ಲಿ, ಕೇರಳದ ಆಧುನಿಕ ಶೈಕ್ಷಣಿಕ ಪರಿವರ್ತನೆಯು ಸಾಮೂಹಿಕ ಶಿಕ್ಷಣವನ್ನು ಉತ್ತೇಜಿಸಲು [[ಚರ್ಚ್ ಮಿಷನ್ ಸೊಸೈಟಿ]] ಮಿಷನರಿಗಳ ಪ್ರಯತ್ನಗಳಿಂದ ಪ್ರೇರೇಪಿಸಲ್ಪಟ್ಟಿತು.<ref>{{cite news |title=Missionaries led State to renaissance: Pinarayi |newspaper=The Hindu |date=13 November 2016 |url=https://www.thehindu.com/news/national/kerala/Missionaries-led-State-to-renaissance-Pinarayi/article16444369.ece |quote=Inaugurating on Saturday the valedictory of the bicentenary celebration of the arrival of Church Mission Society (CMS) missionaries to the shores of Kerala, Mr. Vijayan said it was their pioneering work in the fields of education, literature, printing, publishing, women's education, education of the differently-abled and, in general, a new social approach through the inclusion of marginalised sections into the mainstream which brought the idea of 'equality' into the realm of public consciousness. This had raised the standard of public consciousness and paved the way for the emergence of the renaissance movements in the State.}}</ref><ref>{{cite web |title=Kerala to celebrate CMS mission |url=https://churchmissionsociety.org/our-stories/kerala-celebrate-cms-mission |date=9 November 2016 |website=Church Mission Society |access-date=4 April 2022 |quote=Indian President Pranab Mukherjee, visited CMS College in Kerala, the oldest college in India, and laid the foundation stone of the bicentenary block. He said, 'CMS college is a pioneer of modern education in Kerala. It has been the source of strong currents of knowledge and critical inquiry that have moulded the scholastic and socio-cultural landscape of Kerala and propelled the State to the forefront of social development.'{{hsp}} }}</ref><ref>{{Cite journal |last1=Mathew |first1=E. T. |url=https://www.epw.in/journal/1999/39/special-articles/growth-literacy-kerala.html |title=Growth of Literacy in Kerala |date=5 June 2015 |journal=Economic and Political Weekly |volume=34 |issue=1999 |pages=7–8 |via=www.epw.in}}</ref><ref>{{cite book |title=District Handbooks of Kerala |url=https://www.kerala.gov.in/district_handbook/Kottayam.pdf |date=March 2003 |archive-url=https://web.archive.org/web/20090319183020/https://www.kerala.gov.in/district_handbook/Kottayam.pdf |archive-date=19 March 2009 |url-status=dead |pages=19–20 |publisher=Department of Information & Public Relations Government of Kerala |access-date=4 April 2022}}</ref><ref>{{cite book |last=Menon |first=Sreedhara |title=A survey of Kerala History |year=1996 |publisher=S.Viswanathan Printers and Publishers |location=Madras |pages=339, 348–49 |isbn=978-8126415786 |url=https://onlinestore.dcbooks.com/books/a-survey-of-kerala-history |access-date=20 March 2019 |archive-date=24 August 2019 |archive-url=https://web.archive.org/web/20190824143707/https://onlinestore.dcbooks.com/books/a-survey-of-kerala-history |url-status=dead}}</ref> 1854 ರ [[ವುಡ್ಸ್ ಡೆಸ್ಪ್ಯಾಚ್]] ನ ಶಿಫಾರಸುಗಳನ್ನು ಅನುಸರಿಸಿ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು ಮುಖ್ಯವಾಗಿ ಜಾತಿಗಳು ಮತ್ತು ಸಮುದಾಯಗಳ ಆಧಾರದ ಮೇಲೆ ಸಾಮೂಹಿಕ ಶಿಕ್ಷಣ ಅಭಿಯಾನಗಳನ್ನು ಪ್ರಾರಂಭಿಸಿದವು ಮತ್ತು ಹೆಚ್ಚು ಖಾಸಗಿ ಉಪಕ್ರಮಗಳನ್ನು ಆಕರ್ಷಿಸಲು [[ಅನುದಾನ-ಸಹಾಯ]] ವ್ಯವಸ್ಥೆಯನ್ನು ಪರಿಚಯಿಸಿದವು.<ref name="Devrep53-58" /> [[ಸೇಂಟ್ ತಾಮಸ್ ಕಾಲೇಜು, ತೃಶೂರ್|ಸೇಂಟ್ ತಾಮಸ್ ಕಾಲೇಜು ತೃಶೂರ್]] ಮತ್ತು [[ಸೇಂಟ್ ಬರ್ಚ್ಮನ್ಸ್ ಕಾಲೇಜು|ಎಸ್ಬಿ ಕಾಲೇಜು ಚಂಗನಾಶ್ಶೇರಿ]] ನಂತಹ ಕ್ಯಾಥೋಲಿಕ್ ಸಂಸ್ಥೆಗಳನ್ನು ಕ್ಯಾಥೋಲಿಕ್ ಚರ್ಚ್ನ ನೇತೃತ್ವದಲ್ಲಿ ಸ್ಥಾಪಿಸಲಾಯಿತು. [[ಕುರಿಯಾಕೋಸ್ ಎಲಿಯಾಸ್ ಚಾವರ|ಫಾ. ಕುರಿಯಾಕೋಸ್ ಎಲಿಯಾಸ್ ಚಾವರ]], [[ಚಾರ್ಲ್ಸ್ ಲಾವಿಗ್ನೆ|ಮಾರ್ ಚಾರ್ಲ್ಸ್ ಲಾವಿಗ್ನೆ SJ]], [[ಆಯ್ಯಾ ವೈಕುಂಡರ್|ವೈಕುಂಡ ಸ್ವಾಮಿ]], [[ನಾರಾಯಣ ಗುರು]] ಮತ್ತು [[ಅಯ್ಯಂಕಾಳಿ]] ರಂತಹ ನಾಯಕರ ಪ್ರಯತ್ನಗಳು ರಾಜ್ಯದಲ್ಲಿ ಸಾಮಾಜಿಕವಾಗಿ ತಾರತಮ್ಯಕ್ಕೊಳಗಾದ ಜಾತಿಗಳಿಗೆ ಸಹಾಯ ಮಾಡುವಲ್ಲಿ—[[ನಾಯರ್ ಸೇವಾ ಸೊಸೈಟಿ]], [[ಶ್ರೀ ನಾರಾಯಣ ಟ್ರಸ್ಟ್|ಎಸ್ಎನ್ಡಿಪಿ]], [[ಮುಸ್ಲಿಂ ಶೈಕ್ಷಣಿಕ ಸೊಸೈಟಿ]], ಮುಸ್ಲಿಂ ಮಹಾಜನ ಸಭಾ, ಯೋಗ ಕ್ಷೇಮ ಸಭಾ (ನಂಬೂದಿರಿಗಳ) ಮತ್ತು ಕ್ರಿಶ್ಚಿಯನ್ ಚರ್ಚುಗಳ ಸಭೆಗಳಂತಹ ಸಮುದಾಯ-ಆಧಾರಿತ ಸಂಸ್ಥೆಗಳ ಸಹಾಯದಿಂದ—ಕೇರಳದಲ್ಲಿ ಸಾಮೂಹಿಕ ಶಿಕ್ಷಣದ ಮತ್ತಷ್ಟು ಅಭಿವೃದ್ಧಿಗೆ ಕಾರಣವಾಯಿತು.<ref name="Devrep53-58">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=53–58 |access-date=30 May 2015}}</ref>
1991 ರಲ್ಲಿ, ಕೇರಳವು ಸಂಪೂರ್ಣವಾಗಿ ಸಾಕ್ಷರವೆಂದು ಗುರುತಿಸಲ್ಪಟ್ಟ ಭಾರತದ ಮೊದಲ ರಾಜ್ಯವಾಯಿತು, ಆ ಸಮಯದಲ್ಲಿ ಪರಿಣಾಮಕಾರಿ ಸಾಕ್ಷರತಾ ಪ್ರಮಾಣವು ಕೇವಲ 90% ಆಗಿತ್ತು.<ref name="Soundarapandian2000">{{cite book |author=Mookkiah Soundarapandian |title=Literacy Campaign in India |url=https://books.google.com/books?id=KVhHEC449yoC&pg=PA21 |year=2000 |publisher=Discovery Publishing House |isbn=978-8171415533 |page=21}}</ref> 2006–2007 ರಲ್ಲಿ, ರಾಜ್ಯವು ಭಾರತದ 21 ಪ್ರಮುಖ ರಾಜ್ಯಗಳಲ್ಲಿ ಶಿಕ್ಷಣ ಅಭಿವೃದ್ಧಿ ಸೂಚ್ಯಂಕದಲ್ಲಿ (EDI) ಅಗ್ರಸ್ಥಾನದಲ್ಲಿತ್ತು.<ref>{{Cite news |author=D Suresh Kumar |url=https://timesofindia.indiatimes.com/india/Kerala-tops-primary-education-index/articleshow/3587924.cms |title=Kerala tops primary education index |work=The Times of India |date=13 October 2008 |access-date=30 July 2009}}</ref> {{As of|2007}}, ಪ್ರಾಥಮಿಕ ಶಿಕ್ಷಣದಲ್ಲಿ ದಾಖಲಾತಿಯು ಸುಮಾರು 100% ಆಗಿತ್ತು; ಮತ್ತು, ಭಾರತದ ಇತರ ರಾಜ್ಯಗಳಿಗಿಂತ ಭಿನ್ನವಾಗಿ, ಶೈಕ್ಷಣಿಕ ಅವಕಾಶವು ಲಿಂಗಗಳು, ಸಾಮಾಜಿಕ ಗುಂಪುಗಳು ಮತ್ತು ಪ್ರದೇಶಗಳ ನಡುವೆ ಸುಮಾರು ಸಮಾನವಾಗಿ ಹಂಚಿಕೆಯಾಗಿತ್ತು.<ref name="Devrep255-258">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=255–58 |access-date=30 May 2015}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 93.9% ಸಾಕ್ಷರತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸಾಕ್ಷರತಾ ಪ್ರಮಾಣ 74.0% ಕ್ಕೆ ಹೋಲಿಸಿದರೆ.<ref name="IBNLiteracy2013">{{cite news |title=Tripura tops literacy rate with 94.65 per cent, leaves behind Kerala |url=https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |archive-url=https://web.archive.org/web/20130913005546/https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |url-status=dead |archive-date=13 September 2013 |access-date=12 February 2015 |work=IBNLive |date=9 September 2013}}</ref> ಜನವರಿ 2016 ರಲ್ಲಿ, ಕೇರಳವು ತನ್ನ ''ಅಥುಲ್ಯಂ'' ಸಾಕ್ಷರತಾ ಕಾರ್ಯಕ್ರಮದ ಮೂಲಕ 100% ಪ್ರಾಥಮಿಕ ಶಿಕ್ಷಣವನ್ನು ಸಾಧಿಸಿದ ಭಾರತದ ಮೊದಲ ರಾಜ್ಯವಾಯಿತು.<ref>{{cite news |url=https://www.ibtimes.co.in/kerala-becomes-1st-indian-state-achieve-100-primary-education-662878 |title=Kerala becomes 1st Indian state to achieve 100% primary education |date=12 January 2016 |access-date=14 January 2016 |work=International Business Times}}</ref>
ರಾಜ್ಯದ ಶಾಲೆಗಳಲ್ಲಿ ಪ್ರಚಲಿತದಲ್ಲಿರುವ ಶಿಕ್ಷಣ ವ್ಯವಸ್ಥೆಯು 10-ವರ್ಷದ ಅಧ್ಯಯನದ ಆರಂಭಿಕ ಕೋರ್ಸ್ ಅನ್ನು ನಿರ್ದಿಷ್ಟಪಡಿಸುತ್ತದೆ, ಇದನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ: ಕೆಳಗಿನ ಪ್ರಾಥಮಿಕ, ಮೇಲಿನ ಪ್ರಾಥಮಿಕ, ಮತ್ತು ಮಾಧ್ಯಮಿಕ ಶಾಲೆ—''4+3+3'' ಎಂದು ಕರೆಯಲ್ಪಡುತ್ತದೆ, ಇದು ಪ್ರತಿ ಹಂತದ ವರ್ಷಗಳ ಸಂಖ್ಯೆಯನ್ನು ಸೂಚಿಸುತ್ತದೆ.<ref name="Devrep255-258" /> ಮೊದಲ 10 ವರ್ಷಗಳ ಶಾಲಾ ಶಿಕ್ಷಣದ ನಂತರ, ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ಪ್ರಮುಖ ವಿಷಯಗಳಲ್ಲಿ ಒಂದರಲ್ಲಿ—[[ಉದಾರ ಕಲೆಗಳು]], ವಾಣಿಜ್ಯ, ಅಥವಾ ವಿಜ್ಞಾನ—[[ಜೂನಿಯರ್ ಕಾಲೇಜು|ಹೈಯರ್ ಸೆಕೆಂಡರಿ ಶಾಲಾ]] ಶಿಕ್ಷಣಕ್ಕೆ ದಾಖಲಾಗುತ್ತಾರೆ.<ref name="Edu_Ker" /> ಹೆಚ್ಚಿನ ಸರ್ಕಾರಿ ಶಾಲೆಗಳು [[ಕೇರಳ ಬೋರ್ಡ್ ಆಫ್ ಪಬ್ಲಿಕ್ ಎಕ್ಸಾಮಿನೇಷನ್]] ನೊಂದಿಗೆ ಸಂಯೋಜಿತವಾಗಿವೆ.<ref>{{Cite web |url=https://sametham.kite.kerala.gov.in/ |title=Kerala School Data Bank |access-date=5 December 2020 |website=sametham.kite.kerala.gov.in |publisher=Government of Kerala}}</ref> ಇತರ ಶೈಕ್ಷಣಿಕ ಮಂಡಳಿಗಳೆಂದರೆ [[ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ]] (ICSE), [[ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ]] (CBSE), ಮತ್ತು [[ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ]] (NIOS).<ref name="Edu_Ker">{{cite web |title=Education in Kerala |url=https://india.gov.in/knowindia/state_uts.php?id=54 |archive-url=https://web.archive.org/web/20111218082340/https://india.gov.in/knowindia/state_uts.php?id=54 |archive-date=18 December 2011 |publisher=Government of India |access-date=30 May 2015}}</ref>
== ಸಂಸ್ಕೃತಿ ==
{{Main|ಕೇರಳದ ಸಂಸ್ಕೃತಿ}}
{{Multiple image
| direction = vertical
| width = 220
| image1 = Kathakali BNC.jpg
| alt1 = Kathakali Performance
| caption1 = ಒಬ್ಬ [[ಕಥಕ್ಕಳಿ]] ಕಲಾವಿದ
| image4 = 5 image collage of floral arrangement during the Hindu festival of Onam Kerala.jpg
| alt4 = Pookkalam
| caption4 = [[ಓಣಂ]] ಸಮಯದಲ್ಲಿ, ಕೇರಳದ ಅತಿದೊಡ್ಡ ಆಚರಣೆ, ಕೇರಳೀಯರು ತಮ್ಮ ಮನೆಗಳ ಮುಂದೆ ''ಪೂಕ್ಕಲಂ'' (ಹೂವಿನ ಕಾರ್ಪೆಟ್) ವಿನ್ಯಾಸಗಳನ್ನು ರಚಿಸುತ್ತಾರೆ.
| image5 = ThrissurPooram-Kuda.jpg
| alt5 = Thrissur Pooram festival
| caption5 = [[ತೃಶೂರ್ ಪೂರಂ]] ಹಬ್ಬ
| image6 = Mohiniyattam at Kerala School Kalolsavam 2019 02.jpg
| alt6 = Mohiniattam
| caption6 = ಒಂದು ''[[ಮೋಹಿನಿಯಾಟ್ಟಂ]]'' ಪ್ರದರ್ಶನ
| image8 = sadhya DSW.jpg
| caption8 = ಓಣಂ [[ಸಾಧ್ಯ]]
| total_width =
}}
ಕೇರಳದ ಸಂಸ್ಕೃತಿಯು ಮಿಶ್ರ ಮತ್ತು ವಿಶ್ವವ್ಯಾಪಿ ಸ್ವರೂಪದ್ದಾಗಿದೆ ಮತ್ತು ಇದು [[ಭಾರತೀಯ ಸಂಸ್ಕೃತಿ]]ಯ ಅವಿಭಾಜ್ಯ ಅಂಗವಾಗಿದೆ.<ref name="Menon3">{{cite book |title=Cultural Heritage of Kerala |author=A. Sreedhara Menon |publisher=D C Books |year=2008 |isbn=978-8126419036 |pages=13–15 |url=https://books.google.com/books?id=S9RMxjdjUVAC |access-date=30 May 2015}}</ref> ಇದು [[ಇಂಡೋ-ಆರ್ಯನ್ ಜನರು|ಆರ್ಯ]], [[ದಕ್ಷಿಣ ಭಾರತೀಯ ಸಂಸ್ಕೃತಿ|ದ್ರಾವಿಡ]], [[ಅರಬ್ ಸಂಸ್ಕೃತಿ|ಅರಬ್]], ಮತ್ತು [[ಯುರೋಪಿನ ಸಂಸ್ಕೃತಿ|ಯುರೋಪಿಯನ್]] ಸಂಸ್ಕೃತಿಗಳ ಸಮ್ಮಿಳನವಾಗಿದೆ,<ref>{{Cite book |url=https://books.google.com/books?id=FVsw35oEBv4C |title=A Survey Of Kerala History |last=Menon |first=A. Sreedhara |year=2007 |publisher=DC Books |isbn=978-8126415786 |page=55 |language=en}}</ref> ಇದು ಸಹಸ್ರಮಾನಗಳಲ್ಲಿ, ಭಾರತದ ಇತರ ಭಾಗಗಳು ಮತ್ತು ವಿದೇಶಗಳಿಂದ ಪ್ರಭಾವಗಳ ಅಡಿಯಲ್ಲಿ ಅಭಿವೃದ್ಧಿಗೊಂಡಿದೆ.<ref name="Menon1978a">{{cite book |author=A. Sreedhara Menon |title=Cultural Heritage of Kerala: An Introduction |url=https://books.google.com/books?id=px5BAAAAMAAJ |year=1978 |publisher=East-West Publications |page=10}}</ref> ಇದು ಅದರ ಪ್ರಾಚೀನತೆ ಮತ್ತು [[ಮಲಯಾಳಿ ಜನರು]] ನಿರ್ವಹಿಸುವ ಸಾವಯವ ನಿರಂತರತೆಯಿಂದ ವ್ಯಾಖ್ಯಾನಿಸಲ್ಪಟ್ಟಿದೆ.<ref>{{cite book |title=Contribution of Travancore to Karnatic Music |url=https://books.google.com/books?id=VVftZwEACAAJ |year=2004 |publisher=Information & Public Relations Department, Government of Kerala |pages=7–37}}</ref> ಇದು ನೆರೆಯ ಮತ್ತು ವಿದೇಶಿ ಸಂಸ್ಕೃತಿಗಳೊಂದಿಗೆ ಶತಮಾನಗಳ ಸಂಪರ್ಕದ ಮೂಲಕ ವಿಸ್ತರಿಸಲ್ಪಟ್ಟಿದೆ.<ref name="Bhagyalekshmy_2004d_29">{{cite book |author=S. Bhagyalekshmy |title=Contribution of Travancore to Karnatic Music |url=https://books.google.com/books?id=VVftZwEACAAJ |access-date=6 January 2013 |year=2004 |publisher=Information & Public Relations Department, Government of Kerala}}</ref> ಆದಾಗ್ಯೂ, ಕೇರಳದ ದೇಶದ ಉಳಿದ ಭಾಗಗಳಿಂದ ಭೌಗೋಳಿಕ ಪ್ರತ್ಯೇಕತೆಯು ವಿಶಿಷ್ಟವಾದ ಜೀವನಶೈಲಿ, ಕಲೆ, ವಾಸ್ತುಶಿಲ್ಪ, ಭಾಷೆ, ಸಾಹಿತ್ಯ ಮತ್ತು ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿಗೆ ಕಾರಣವಾಗಿದೆ.<ref name="Menon3" /> ರಾಜ್ಯದಲ್ಲಿ ಪ್ರತಿ ವರ್ಷ 10,000 ಕ್ಕೂ ಹೆಚ್ಚು ಹಬ್ಬಗಳನ್ನು ಆಚರಿಸಲಾಗುತ್ತದೆ.<ref name="1000hrs">{{cite news |date=4 March 2010 |title=India's overworked elephants |url=https://news.bbc.co.uk/2/hi/south_asia/8533776.stm |access-date=30 May 2015 |work=BBC}}</ref> ಕೇರಳದಲ್ಲಿ 825 CE ಯಿಂದ ಪ್ರಾರಂಭವಾದ ಸೌರ ನಾಕ್ಷತ್ರಿಕ ಕ್ಯಾಲೆಂಡರ್ ಆಗಿರುವ [[ಮಲಯಾಳಂ ಕ್ಯಾಲೆಂಡರ್]],<ref name="Devika2005">{{cite book |author=J. Devika |title=Her-self: Early Writings on Gender by Malayalee Women, 1898–1938 |url=https://books.google.com/books?id=Xyr6gXmva-gC&pg=PA5 |access-date=17 November 2012 |year=2005 |publisher=Popular Prakashan |isbn=978-8185604749 |page=5}}</ref> ಕೃಷಿ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಯೋಜಿಸುವಲ್ಲಿ ಸಾಮಾನ್ಯ ಬಳಕೆಯನ್ನು ಕಂಡುಕೊಳ್ಳುತ್ತದೆ.<ref name="Singh2004">{{cite book |author=Kumar Suresh Singh |title=People of India: Maharashtra |url=https://books.google.com/books?id=4bfmnmsBfQ4C&pg=PA1524 |access-date=17 November 2012 |year=2004 |publisher=Popular Prakashan |isbn=978-8179911020 |page=1524}}</ref> ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ [[ಮಲಯಾಳಂ]] ಕೇರಳದ [[ಅಧಿಕೃತ ಭಾಷೆ]]ಯಾಗಿದೆ.<ref name="Benedikter2009">{{cite book |author=Thomas Benedikter |title=Language Policy and Linguistic Minorities in India: An Appraisal of the Linguistic Rights of Minorities in India |url=https://books.google.com/books?id=vpZv2GHM7VQC&pg=PA90 |access-date=18 November 2012 |year=2009 |publisher=LIT Verlag Münster |isbn=978-3-643-10231-7 |page=90}}</ref> ಭಾರತದಲ್ಲಿ [[ಅಧಿಕೃತ ಸ್ಥಾನಮಾನ ಹೊಂದಿರುವ ಭಾಷೆಗಳು|ನಿಗದಿತ ಮತ್ತು ಅನಿಗದಿತ]] ಭಾಷೆಗಳಲ್ಲಿ ಒಂದು ಡಜನ್ಗಿಂತಲೂ ಹೆಚ್ಚು ಭಾಷೆಗಳನ್ನು ಮಾತನಾಡಲಾಗುತ್ತದೆ.<ref name="census2011-langreport">{{cite web |title=Language – India, States and Union Territories |url=https://www.censusindia.gov.in/2011Census/C-16_25062018_NEW.pdf |work=Census of India 2011 |publisher=Office of the Registrar General |pages=13–14}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಮದ್ಯ ಸೇವನೆಯನ್ನು ಹೊಂದಿದೆ.<ref>{{Cite news |url=https://www.bbc.co.uk/news/world-asia-india-51372583 |title=Shock after alcohol flows from kitchen taps in Kerala |work=BBC News |date=6 February 2020}}</ref>
=== ಹಬ್ಬಗಳು ===
{{Main|ಕೇರಳದ ದೇವಾಲಯ ಹಬ್ಬಗಳು|ಓಣಂ}}
ಕೇರಳದಲ್ಲಿನ ಅನೇಕ ದೇವಾಲಯಗಳು ವರ್ಷದ ನಿರ್ದಿಷ್ಟ ದಿನಗಳಲ್ಲಿ ಹಬ್ಬಗಳನ್ನು ನಡೆಸುತ್ತವೆ.<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA76 |year=2008 |publisher=D.C. Books |isbn=978-8126419036 |page=76}}</ref> ಈ ಹಬ್ಬಗಳ ಸಾಮಾನ್ಯ ಲಕ್ಷಣವೆಂದರೆ ಪವಿತ್ರ ಧ್ವಜವನ್ನು ಏರಿಸುವುದು, ಅದನ್ನು ಹಬ್ಬದ ಕೊನೆಯ ದಿನದಂದು ದೇವತೆಯನ್ನು ಮುಳುಗಿಸಿದ ನಂತರ ಇಳಿಸಲಾಗುತ್ತದೆ.<ref>{{cite book |title=The Legacy of Kerala |url=https://books.google.com/books?id=S9RMxjdjUVAC&pg=PA34 |year=1982 |publisher=Department of Public Relations, Government of Kerala |isbn=978-8126437986 |page=34}}</ref> ಕೆಲವು ಹಬ್ಬಗಳು ಪೂರಂಗಳನ್ನು ಒಳಗೊಂಡಿವೆ, ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು [[ತೃಶೂರ್ ಪೂರಂ]].<ref>{{cite book |title=World Encyclopaedia of Interfaith Studies: World religions |url=https://books.google.com/books?id=fFwi7qRRgosC |year=2009 |publisher=Jnanada Prakashan |isbn=978-8171392803 |pages=704–10}}</ref> "ಆನೆಗಳು, ಪಟಾಕಿ ಪ್ರದರ್ಶನಗಳು ಮತ್ತು ದೊಡ್ಡ ಗುಂಪುಗಳು" ತೃಶೂರ್ ಪೂರಂನ ಪ್ರಮುಖ ಆಕರ್ಷಣೆಗಳಾಗಿವೆ.<ref>{{Cite news |title=The stars of Pooram show are jumbos |date=26 May 2006 |access-date=11 November 2007 |url=https://www.hindu.com/2006/05/26/stories/2006052610410500.htm |archive-url=https://web.archive.org/web/20071118212644/https://www.hindu.com/2006/05/26/stories/2006052610410500.htm |url-status=dead |archive-date=18 November 2007 |work=[[The Hindu]] |location=Chennai, India}}</ref> ಇತರ ಪ್ರಸಿದ್ಧ ಹಬ್ಬಗಳೆಂದರೆ [[ಮಕರವಿಳಕ್ಕು]],<ref name="Ltd.2013b">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA433 |year=2013 |publisher=Biju Mathew |isbn=978-8192128443 |page=433}}</ref> [[ಚಿನಕ್ಕತ್ತೂರು ಪೂರಂ]], [[ಅಟ್ಟುಕಲ್ ಪೊಂಗಲ]] ಮತ್ತು [[ನೆನ್ಮಾರ ವಲ್ಲಂಗಿ ವೇಳ]]<ref name="Stott2014">{{cite book |author=David Stott |title=Kerala Footprint Focus Guide: Includes Kochi, Alappuzha, Thrissur, Periyar, River Nila |url=https://books.google.com/books?id=-Jx8AwAAQBAJ&pg=PA94 |year=2014 |publisher=Footprint Travel Guides |isbn=978-1-909268-79-1 |page=94}}</ref> ಇವುಗಳ ಜೊತೆಗೆ, ಸ್ಥಳೀಯವಾಗಿ [[ಉತ್ಸವ]]ಗಳು ಎಂದು ಕರೆಯಲ್ಪಡುವ ಹಬ್ಬಗಳನ್ನು ಹೆಚ್ಚಿನ ದೇವಾಲಯಗಳು ವಾರ್ಷಿಕ ಆಧಾರದ ಮೇಲೆ ನಡೆಸುತ್ತವೆ. ಅದನ್ನು ಪಡೆದುಕೊಳ್ಳುವ ದೇವಾಲಯಗಳು ಸಾಮಾನ್ಯವಾಗಿ ಹಬ್ಬದ ಭಾಗವಾಗಿ ಕನಿಷ್ಠ ಒಂದು ಶ್ರೀಮಂತವಾಗಿ ಅಲಂಕರಿಸಿದ ಆನೆಯನ್ನು ಒಳಗೊಳ್ಳುತ್ತವೆ. ದೇವಾಲಯದಲ್ಲಿನ ವಿಗ್ರಹವನ್ನು ಈ ಆನೆಯ ಮೇಲೆ ಗ್ರಾಮಾಂತರದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ಮೆರವಣಿಗೆಯು ದೇವಾಲಯದ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿದಾಗ, ಜನರು ಸಾಮಾನ್ಯವಾಗಿ ಅಕ್ಕಿ, ತೆಂಗಿನಕಾಯಿ ಮತ್ತು ಇತರ ಕಾಣಿಕೆಗಳನ್ನು ನೀಡುತ್ತಾರೆ.<ref name="NarayananKurup1976">{{cite book |author1=M. G. S. Narayanan |author2=K. K. N. Kurup |title=Historical Studies in Kerala |url=https://books.google.com/books?id=mvELAAAAIAAJ |year=1976 |publisher=Department of History, University of Calicut |pages=68–81}}</ref> ಮೆರವಣಿಗೆಗಳು ಹೆಚ್ಚಾಗಿ [[ಪಂಚಾರಿ ಮೇಳಂ]] ಅಥವಾ [[ಪಂಚವಾದ್ಯ]]ದಂತಹ ಸಾಂಪ್ರದಾಯಿಕ ಸಂಗೀತವನ್ನು ಒಳಗೊಂಡಿರುತ್ತವೆ.<ref name="Killius2006">{{cite book |author=Rolf Killius |title=Ritual Music and Hindu Rituals of Kerala |url=https://books.google.com/books?id=c_fZAAAAMAAJ |year=2006 |publisher=B.R. Rhythms |isbn=978-8188827077 |page=61}}</ref> [[ಈದ್ ಅಲ್-ಫಿತರ್]] ಮತ್ತು [[ಈದ್ ಅಲ್-ಅಧಾ]] ಅನ್ನು ರಾಜ್ಯದ ಮುಸ್ಲಿಂ ಸಮುದಾಯವು ಆಚರಿಸುತ್ತದೆ, ಆದರೆ [[ಕ್ರಿಸ್ಮಸ್]] ಮತ್ತು [[ಈಸ್ಟರ್]] ನಂತಹ ಹಬ್ಬಗಳನ್ನು ಕ್ರೈಸ್ತರು ಆಚರಿಸುತ್ತಾರೆ.<ref name="Malabar">{{Cite book |last=Sreedhara Menon |first=A. |url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |title=''Kerala Charitram'' |publisher=DC Books |year=2007 |isbn=978-8126415885 |edition=2007 |location=Kottayam |access-date=19 July 2020 |archive-url=https://web.archive.org/web/20211113141403/https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |archive-date=13 November 2021 |url-status=live}}</ref> ಓಣಂ ಕೇರಳದ ಜನರು ಆಚರಿಸುವ ಸುಗ್ಗಿಯ ಹಬ್ಬವಾಗಿದೆ ಮತ್ತು ಇದು ರಾಜ್ಯದ ಕೃಷಿ ಹಿಂದಿನ ಕಾಲವನ್ನು ನೆನಪಿಸುತ್ತದೆ.<ref name="Choondal1980">{{cite book |author=Chummar Choondal |title=Kerala Folk Literature |year=1980 |url=https://books.google.com/books?id=EnQOAAAAYAAJ |publisher=Kerala Folklore Academy}}</ref><ref name="Menon2007b">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA80 |year=2007 |publisher=DC Books |isbn=978-8126415786 |pages=80–}}</ref> ಇದು ಕೇರಳದ ಸ್ಥಳೀಯ ಹಬ್ಬವಾಗಿದೆ<ref name="Darpan2006b">{{cite book |author=Pratiyogita Darpan |title=Pratiyogita Darpan |url=https://books.google.com/books?id=lugDAAAAMBAJ&pg=PT83 |year=2006 |publisher=Pratiyogita Darpan |page=624}}</ref> ಇದು ನಾಲ್ಕು ದಿನಗಳ ಸಾರ್ವಜನಿಕ ರಜಾದಿನಗಳನ್ನು ಒಳಗೊಂಡಿದೆ; ಓಣಂ ಮುನ್ನಾದಿನದಿಂದ (ಉತ್ತ್ರಾಡಂ) ನಾಲ್ಕನೇ ಓಣಂ ದಿನದವರೆಗೆ.<ref>{{cite book |title=Purāṇam |url=https://books.google.com/books?id=sfxjAAAAMAAJ |year=2004 |publisher=All-India Kasiraja Trust. |page=17}}</ref> ಓಣಂ ಮಲಯಾಳಂ ತಿಂಗಳು ಚಿಂಗಂ (ಆಗಸ್ಟ್–ಸೆಪ್ಟೆಂಬರ್) ನಲ್ಲಿ ಬರುತ್ತದೆ<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA66 |year=2008 |publisher=D.C. Books |isbn=978-8126419036 |page=66}}</ref> ಮತ್ತು ಇದು ರಾಜ [[ಮಹಾಬಲಿ]]ಯ ಮನೆಗೆ ಮರಳುವ ಸ್ಮರಣೆಯನ್ನು ಸೂಚಿಸುತ್ತದೆ.<ref name="MythOnam">{{cite news |last1=Praveen |first1=M. P. |title=Myth, mystique, and traditions of Onam |url=https://www.thehindu.com/todays-paper/tp-features/tp-editorialfeatures/myth-mystique-and-traditions-of-onam/article2433921.ece |access-date=12 November 2015 |work=The Hindu |date=8 September 2011}}</ref> ಓಣಂನ ಒಟ್ಟು ಅವಧಿಯು 10 ದಿನಗಳು ಮತ್ತು ಇದನ್ನು ಕೇರಳದಾದ್ಯಂತ ಆಚರಿಸಲಾಗುತ್ತದೆ. ಇದು [[ವಲ್ಲಂ ಕಳಿ]],<ref>{{Cite web |title=Vallamkali – Resplendent Water Regattas of Kerala {{!}} Kerala Boat Races{{!}} Onam{{!}} Kerala Backwaters {{!}} Kerala |url=https://www.keralatourism.org/kerala-article/2020/vallamkali-resplendent-water-regattas-of-kerala/1017 |access-date=9 June 2021|website=Kerala Tourism |language=en}}</ref> [[ಪುಲಿಕಳಿ]],<ref name="Ltd.2013">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA535 |year=2013 |publisher=Biju Mathew |isbn=978-8192128443 |page=535}}</ref> ಪೂಕ್ಕಲಂ,<ref>{{cite book |title=A Biblical Approach to Indian Traditions and Beliefs |url=https://books.google.com/books?id=f35VH7LrZ1IC&pg=PA90 |year=2008 |publisher=Armour Publishing Pte Ltd |isbn=978-9814222396 |page=90}}</ref> ತುಂಬಿ ತುಳ್ಳಲ್<ref name="Mohapatra2013">{{cite book |author=J Mohapatra |title=Wellness In Indian Festivals & Rituals |url=https://books.google.com/books?id=UdpzAgAAQBAJ&pg=PA142 |year=2013 |publisher=Partridge Pub |isbn=978-1-4828-1690-7 |page=142}}</ref> ಮತ್ತು [[ಓನವಿಲ್ಲು]]<ref name="(Princess.)1998">{{cite book |author=Gouri Lakshmi Bayi (Princess.) |title=Thulasi garland |url=https://books.google.com/books?id=5lcvAAAAYAAJ |year=1998 |publisher=Bharatiya Vidya Bhavan |isbn=978-8172761103}}</ref> ನಂತಹ ಸಾಂಸ್ಕೃತಿಕ ಅಂಶಗಳೊಂದಿಗೆ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ.
### ಸಂಗೀತ ಮತ್ತು ನೃತ್ಯ
{{Main|ಕೇರಳದ ಕಲೆಗಳು|ಕೇರಳದ ಸಂಗೀತ}}
ಕೇರಳವು ಹಲವಾರು [[ಪ್ರದರ್ಶನ ಕಲೆಗಳ]] ನೆಲೆಯಾಗಿದೆ. ಇವುಗಳಲ್ಲಿ ಐದು ಶಾಸ್ತ್ರೀಯ ನೃತ್ಯ ಪ್ರಕಾರಗಳು ಸೇರಿವೆ: [[ಕಥಕ್ಕಳಿ]], [[ಮೋಹಿನಿಯಾಟ್ಟಂ]], [[ಕೂಡಿಯಾಟ್ಟಂ]], [[ಒಟ್ಟನ್ ತುಳ್ಳಲ್|ತುಳ್ಳಲ್]] ಮತ್ತು [[ಕೃಷ್ಣನಾಟ್ಟಂ]], ಇವು ಶಾಸ್ತ್ರೀಯ ಅವಧಿಯಲ್ಲಿ ರಾಜಮನೆತನಗಳ ಆಶ್ರಯದಲ್ಲಿ ದೇವಾಲಯದ ರಂಗಮಂದಿರಗಳಲ್ಲಿ ಹುಟ್ಟಿ ಅಭಿವೃದ್ಧಿಗೊಂಡವು.<ref>{{cite journal |url=https://www.sruti.org/library/sruti%20ranjani/2004/sruti_ranjani_2004.pdf |title=Classical Dance Art Forms of Kerala |author=Kala Menon |journal=Sruti Ranjini |date=November 2004 |volume=14 |issue=1 |page=11 |access-date=7 February 2022 |archive-date=4 March 2016 |archive-url=https://web.archive.org/web/20160304091717/http://www.sruti.org/library/sruti%20ranjani/2004/sruti_ranjani_2004.pdf |url-status=dead }}</ref> [[ಕೇರಳ ನಾಟನಂ]], [[ಥಿರಯಾಟ್ಟಂ]],<ref>"Thirayattam" (Folklore Text-Malayalam), State Institute of language, Kerala {{ISBN|978-8120042940}}</ref> [[ಕಳಿಯಾಟ್ಟಂ]], [[ಥೆಯ್ಯಂ]], [[ಕೂತು]] ಮತ್ತು [[ಪದಯಾನಿ]] ಈ ಪ್ರದೇಶದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಇತರ ನೃತ್ಯ ಪ್ರಕಾರಗಳಾಗಿವೆ.<ref name="Menon2008">{{cite book |author=A Sreedhara Menon |title=Cultural heritage of Kerala |url=https://books.google.com/books?id=R7QNGkZKc5wC&pg=PA106 |access-date=17 November 2012 |year=2008 |publisher=D C Books |isbn=978-8126419036 |page=106}}</ref> [[ಒಪ್ಪನ]] ಮತ್ತು [[ದಫ್ ಮುಟ್ಟು]] ನಂತಹ ಕೆಲವು ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ರಾಜ್ಯದ ಮುಸ್ಲಿಮರಲ್ಲಿ ಜನಪ್ರಿಯವಾಗಿದ್ದವು,<ref name="google19">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA8 |access-date=17 November 2012 |year=2008 |publisher=Sura Books |isbn=978-8174781642 |page=8}}</ref> ಆದರೆ [[ಮಾರ್ಗಂಕಳಿ]] ಮತ್ತು [[ಪರಿಚಮುಟ್ಟುಕಳಿ]] ಸಿರಿಯನ್ ಕ್ರೈಸ್ತರಲ್ಲಿ ಜನಪ್ರಿಯವಾಗಿವೆ ಮತ್ತು [[ಚವಿಟ್ಟು ನಾಟಕಂ]] ಲ್ಯಾಟಿನ್ ಕ್ರೈಸ್ತರಲ್ಲಿ ಜನಪ್ರಿಯವಾಗಿದೆ.<ref name="Nārāyaṇappaṇikkar1991">{{cite book |author=Kāvālaṃ Nārāyaṇappaṇikkar |title=Folklore of Kerala |url=https://books.google.com/books?id=xH6BAAAAMAAJ |access-date=17 November 2012 |year=1991 |publisher=National Book Trust, India |page=146 |isbn=978-8123725932}}</ref><ref name="Kasbekar2006">{{cite book |author=Asha Kasbekar |title=Pop Culture India!: Media, Arts, And Lifestyle |url=https://books.google.com/books?id=Sv7Uk0UcdM8C&pg=PA43 |access-date=17 November 2012 |year=2006 |publisher=ABC-CLIO |isbn=978-1-85109-636-7 |pages=43–44}}</ref> ಕೇರಳದಲ್ಲಿ ಶಾಸ್ತ್ರೀಯ ಸಂಗೀತದ ಅಭಿವೃದ್ಧಿಯು ಕೇರಳದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಸಾಂಪ್ರದಾಯಿಕ ಪ್ರದರ್ಶನ ಕಲೆಗಳು ನೀಡಿದ ಕೊಡುಗೆಗಳಿಗೆ ಕಾರಣವಾಗಿದೆ.<ref name="Menon2">{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |pages=48–51 |url=https://books.google.com/books?id=S9RMxjdjUVAC |access-date=30 May 2015}}</ref> ಸ್ಥಳೀಯ ಶಾಸ್ತ್ರೀಯ ಸಂಗೀತ ಪ್ರಕಾರವಾದ [[ಸೋಪಾನ ಸಂಗೀತ]]ದ ಅಭಿವೃದ್ಧಿಯು ದೇವಾಲಯದ ಸಂಸ್ಕೃತಿಯು ಕೇರಳದ ಕಲೆಗಳಿಗೆ ನೀಡಿದ ಶ್ರೀಮಂತ ಕೊಡುಗೆಯನ್ನು ವಿವರಿಸುತ್ತದೆ.<ref name="Menon2" /> [[ಕರ್ನಾಟಕ ಸಂಗೀತ]]ವು ಕೇರಳೀಯ ಸಾಂಪ್ರದಾಯಿಕ ಸಂಗೀತದಲ್ಲಿ ಪ್ರಾಬಲ್ಯ ಹೊಂದಿದೆ. ಇದು 19 ನೇ ಶತಮಾನದಲ್ಲಿ [[ಸ್ವಾತಿ ತಿರುನಾಳ್ ರಾಮ ವರ್ಮ]] ಅವರು ಈ ಪ್ರಕಾರವನ್ನು ಜನಪ್ರಿಯಗೊಳಿಸಿದ ಪರಿಣಾಮವಾಗಿದೆ.<ref name="Bhagyalekshmy_2004d_29" /> ರಾಗ-ಆಧಾರಿತ ವ್ಯಾಖ್ಯಾನಗಳು ''ಸೋಪಾನಂ'' ಎಂದು ಕರೆಯಲ್ಪಡುತ್ತವೆ, ಇವು ''ಕಥಕ್ಕಳಿ'' ಪ್ರದರ್ಶನಗಳೊಂದಿಗೆ ಸೇರುತ್ತವೆ.<ref name="SchechnerAppel1990">{{cite book |author1=Richard Schechner |author2=Willa Appel |title=By Means of Performance: Intercultural Studies of Theatre and Ritual |url=https://books.google.com/books?id=K5ZuV_nn7KkC&pg=PA145 |access-date=18 November 2012 |year=1990 |publisher=Cambridge University Press |isbn=978-0-521-33915-5 |page=145}}</ref> ''ಮೇಳಂ'', ''ಪಾಂಡಿ'' ಮತ್ತು ''ಪಂಚಾರಿ'' ರೂಪಾಂತರಗಳನ್ನು ಒಳಗೊಂಡಂತೆ, ಹೆಚ್ಚು ತಾಳವಾದ್ಯ ಶೈಲಿಯ ಸಂಗೀತವಾಗಿದೆ;<ref name="BroughtonEllingham2000">{{cite book |author1=Simon Broughton |author2=Mark Ellingham |author3=Richard Trillo |title=World Music Volume 2 Latin and North America, Caribbean, India, Asia and Pacific: The Rough Guide |url=https://books.google.com/books?id=QzX8THIgRjUC&pg=PA97 |access-date=18 November 2012 |year=2000 |publisher=Rough Guides |isbn=978-1-85828-636-5 |page=97}}</ref> ಇದನ್ನು ''[[ಹಿಂದೂ ದೇವಾಲಯ|ಕ್ಷೇತ್ರಮ್]]''-ಕೇಂದ್ರಿತ ಹಬ್ಬಗಳಲ್ಲಿ ''[[ಚೆಂಡ]]'' ಬಳಸಿ ಪ್ರದರ್ಶಿಸಲಾಗುತ್ತದೆ. ''ಪಂಚವಾದ್ಯ'' ತಾಳವಾದ್ಯ ಸಮೂಹದ ಒಂದು ರೂಪವಾಗಿದೆ, ಇದರಲ್ಲಿ ಕಲಾವಿದರು ಐದು ವಿಧದ ತಾಳವಾದ್ಯ ವಾದ್ಯಗಳನ್ನು ಬಳಸುತ್ತಾರೆ.<ref name="BroughtonEllingham2000" /> ಕೇರಳದ ದೃಶ್ಯ ಕಲೆಗಳು [[ಕೇರಳದ ಭಿತ್ತಿಚಿತ್ರಗಳು|ಸಾಂಪ್ರದಾಯಿಕ ಭಿತ್ತಿಚಿತ್ರಗಳಿಂದ]] ರಾಜ್ಯದ ಅತ್ಯಂತ ಪ್ರಸಿದ್ಧ ವರ್ಣಚಿತ್ರಕಾರನಾದ [[ರಾಜಾ ರವಿ ವರ್ಮ]] ಅವರ ಕೃತಿಗಳವರೆಗೆ ವಿಸ್ತರಿಸಿವೆ.<ref name="Menon2" /> ಕೇರಳದ ಹೆಚ್ಚಿನ ಜಾತಿಗಳು ಮತ್ತು ಸಮುದಾಯಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದ ಜಾನಪದ ಗೀತೆಗಳು ಮತ್ತು ಗೀತೆಗಳ ಶ್ರೀಮಂತ ಸಂಗ್ರಹಗಳನ್ನು ಹೊಂದಿವೆ; ''[[ವಡಕ್ಕನ್ ಪಟ್ಟುಕಲ್]]'' (ಉತ್ತರ ಗೀತೆಗಳು), ''ತೆಕ್ಕನ್ ಪಟ್ಟುಕಲ್'' (ದಕ್ಷಿಣ ಗೀತೆಗಳು), ''ವಂಚಿ ಪಟ್ಟುಕಲ್'' (ದೋಣಿ ಹಾಡುಗಳು), ''[[ಮಾಪ್ಪಿಲ ಪಟ್ಟುಕಲ್]]'' (ಮುಸ್ಲಿಂ ಹಾಡುಗಳು) ಮತ್ತು ''ಪಲ್ಲಿಪಟ್ಟುಕಲ್'' (ಚರ್ಚ್ ಹಾಡುಗಳು) ಅವುಗಳಲ್ಲಿ ಕೆಲವು.<ref>{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |page=41 |url=https://books.google.com/books?id=S9RMxjdjUVAC |access-date=30 May 2015}}</ref>
=== ಸಿನಿಮಾ ===
{{Main|ಮಲಯಾಳಂ ಸಿನಿಮಾ}}
[[ಮಲಯಾಳಂ ಸಿನಿಮಾ|ಮಲಯಾಳಂ ಚಲನಚಿತ್ರಗಳು]] ಸಾಮಾಜಿಕ ವಿಷಯಗಳ ಪ್ರಸ್ತುತಿಯೊಂದಿಗೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಸ್ಥಾನವನ್ನು ಕೆತ್ತಿಕೊಂಡಿವೆ.<ref name="Menon">{{cite book |title=Cultural Heritage of Kerala |first=Sreedhara |last=Menon |publisher=D C Books |year=2008 |url=https://books.google.com/books?id=R7QNGkZKc5wC |isbn=978-8126419036 |pages=128–29 |access-date=30 May 2015}}</ref><ref>{{cite book |title=Encyclopaedia of Indian Literature |first=Amaresh |last=Datta |publisher=Sahitya Akademi |year=1987 |url=https://books.google.com/books?id=ObFCT5_taSgC |isbn=978-8126018031 |pages=751–53}}</ref> [[ಅಡೂರ್ ಗೋಪಾಲಕೃಷ್ಣನ್]], [[ಮಂಕಡ ರವಿ ವರ್ಮ]], [[ಜಿ. ಅರವಿಂದನ್]], [[ಭರತನ್]], [[ಪಿ. ಪದ್ಮರಾಜನ್]], [[ಎಂ.ಟಿ. ವಾಸುದೇವನ್ ನಾಯರ್]], [[ಕೆ.ಜಿ. ಜಾರ್ಜ್]], [[ಪ್ರಿಯದರ್ಶನ್]], [[ಜಾನ್ ಅಬ್ರಹಾಂ (ನಿರ್ದೇಶಕ)|ಜಾನ್ ಅಬ್ರಹಾಂ]], [[ರಾಮು ಕಾರ್ಯಾಟ್]], [[ಕೆ ಎಸ್ ಸೇತುಮಾಧವನ್]], [[ಎ. ವಿನ್ಸೆಂಟ್]] ಮತ್ತು [[ಶಾಜಿ ಎನ್ ಕರುಣ್]] ನಂತಹ ಕೇರಳದ ನಿರ್ದೇಶಕರು ಭಾರತೀಯ [[ಸಮಾನಾಂತರ ಸಿನಿಮಾ]]ಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಕೇರಳವು [[ಮೋಹನ್ಲಾಲ್]], [[ಮಮ್ಮೂಟ್ಟಿ]], [[ಸತ್ಯನ್]], [[ಪ್ರೇಮ್ ನಝೀರ್]], [[ಮಧು (ನಟ)|ಮಧು]], [[ಶೀಲಾ]], [[ಶಾರದ (ನಟಿ)|ಶಾರದಾ]], [[ಮಿಸ್ ಕುಮಾರಿ]], [[ಜಯನ್]], [[ಅಡೂರ್ ಭಾಸಿ]], [[ಸೀಮಾ (ನಟಿ)|ಸೀಮಾ]], [[ಭರತ್ ಗೋಪಿ]], [[ತಿಲಕನ್]], [[ವಿಜಯ ರಾಘವನ್]], [[ಕಲಾಭವನ್ ಮಣಿ]], [[ಇಂದ್ರನ್ಸ್]], [[ಶೋಭನಾ]], [[ನಿವಿನ್ ಪೌಲಿ]], [[ಶ್ರೀನಿವಾಸನ್]], [[ಉರ್ವಶಿ (ನಟಿ)|ಉರ್ವಶಿ]], [[ಮಂಜು ವಾರಿಯರ್]], [[ಸುರೇಶ್ ಗೋಪಿ]], [[ಜಯರಾಂ]], [[ಮುರಳಿ (ಮಲಯಾಳಂ ನಟ)|ಮುರಳಿ]], [[ಶಂಕರಾಡಿ]], [[ಕಾವ್ಯ ಮಾಧವನ್]], [[ಭಾವನಾ ಮೇನನ್]], [[ಪೃಥ್ವಿರಾಜ್ ಸುಕುಮಾರನ್|ಪೃಥ್ವಿರಾಜ್]], [[ಪಾರ್ವತಿ ತಿರುವೋತು|ಪಾರ್ವತಿ]], [[ಜಯಸೂರ್ಯ]], [[ದುಲ್ಕರ್ ಸಲ್ಮಾನ್]], [[ಒಡುವಿಲ್ ಉನ್ನಿಕೃಷ್ಣನ್]], [[ಜಗತಿ ಶ್ರೀಕುಮಾರ್]], [[ನೆಡುಮುಡಿ ವೇಣು]], [[ಕೆಪಿಎಸಿ ಲಲಿತಾ]], [[ಇನ್ನೋಸೆಂಟ್ (ನಟ)|ಇನ್ನೋಸೆಂಟ್]] ಮತ್ತು [[ಫಹಾದ್ ಫಾಜಿಲ್]] ನಂತಹ ಅಸಂಖ್ಯಾತ ನಟರಿಗೆ ಜನ್ಮ ನೀಡಿದೆ. ಕೊನೆಯ ಮಲಯಾಳಂ ನಟ ಪ್ರೇಮ್ ನಝೀರ್ 720 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.<ref>{{Cite news |last=Gangadhar |first=V. |title=Magic of Sophia Loren |url=https://www.hindu.com/mag/2003/11/02/stories/2003110200250500.htm |archive-url=https://web.archive.org/web/20031130011344/https://www.hindu.com/mag/2003/11/02/stories/2003110200250500.htm |url-status=dead |archive-date=30 November 2003 |date=2 October 2003 |department=Sunday Magazine |newspaper=[[The Hindu]] |location=Chennai, India |access-date=18 January 2015}}</ref> 1980 ರ ದಶಕದಿಂದ, ನಟರು [[ಮೋಹನ್ಲಾಲ್]] ಮತ್ತು [[ಮಮ್ಮೂಟ್ಟಿ]] ಅವರು ಚಲನಚಿತ್ರ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದಾರೆ; ಮೋಹನ್ಲಾಲ್ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (ನಾಲ್ಕು ಅಭಿನಯಕ್ಕಾಗಿ) ಗೆದ್ದಿದ್ದಾರೆ, ಆದರೆ ಮಮ್ಮೂಟ್ಟಿ ಅವರು ಅಭಿನಯಕ್ಕಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹೊಂದಿದ್ದಾರೆ.<ref>{{cite book |title=Sura's Year Book 2006 |author=Subburaj V.V.K |page=620 |isbn=978-8172541248 |url=https://books.google.com/books?id=Fz2WDD8sB0MC |publisher=Sura Books |access-date=30 May 2015}}</ref> ಮಲಯಾಳಂ ಸಿನಿಮಾ [[ಕೆ. ಜೆ. ಯೇಸುದಾಸ್]], [[ಕೆ.ಎಸ್. ಚಿತ್ರಾ]], [[ಎಂ. ಜಿ. ಶ್ರೀಕುಮಾರ್|ಎಂ.ಜಿ. ಶ್ರೀಕುಮಾರ್]], [[ವಯಲಾರ್ ರಾಮ ವರ್ಮ]], [[ವಿ. ಮಧುಸೂದನನ್ ನಾಯರ್]], [[ಎಂ.ಟಿ. ವಾಸುದೇವನ್ ನಾಯರ್]] ಮತ್ತು [[ಒ.ಎನ್.ವಿ. ಕುರುಪ್]] ನಂತಹ ಕೆಲವು ಹೆಚ್ಚು ಗಮನಾರ್ಹ ವ್ಯಕ್ತಿಗಳನ್ನು ಸಹ ನಿರ್ಮಿಸಿದೆ,<ref name="indiatimes2">{{cite news |url=https://timesofindia.indiatimes.com/india/Jnanpith-Awards-for-ONV-Kurup-Akhlaq-Khan-Shahryar/articleshow/6621243.cms |date=24 September 2014 |title=Jnanpith Awards for ONV Kurup, Akhlaq Khan Shahryar |work=The Times of India |access-date=24 September 2014}}</ref> ಕೊನೆಯಲ್ಲಿ ಉಲ್ಲೇಖಿಸಲಾದ ಇಬ್ಬರು [[ಜ್ಞಾನಪೀಠ ಪ್ರಶಸ್ತಿ]] ಪಡೆದವರು, ಇದು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದೆ.<ref name="upscguide">{{cite web |url=https://upscguide.com/content/jnanpith-award-winners |archive-url=https://web.archive.org/web/20121219193030/https://upscguide.com/content/jnanpith-award-winners |url-status=dead |archive-date=19 December 2012 |title=Jnanpith Award Winners | UPSC Guide |publisher=upscguide.com |access-date=24 September 2014}}</ref> ಕೇರಳದವರಾದ [[ರೆಸುಲ್ ಪೂಕ್ಕುಟ್ಟಿ]] ಅವರು [[ಸ್ಲಮ್ಡಾಗ್ ಮಿಲಿಯನೇರ್]] ಅದ್ಭುತ ಚಿತ್ರಕ್ಕಾಗಿ [[ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್|ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್]] ಗೆದ್ದ ಏಕೈಕ ಭಾರತೀಯರಾಗಿದ್ದಾರೆ. 2018 ರಂತೆ, [[ಮಲಯಾಳಂ ಸಿನಿಮಾ]] [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], [[ಭಾರತ]]ದಲ್ಲಿ ಅತ್ಯುತ್ತಮ ನಟಿಗೆ 14 ಪ್ರಶಸ್ತಿಗಳು, ಅತ್ಯುತ್ತಮ ನಟಿಗೆ 6, ಅತ್ಯುತ್ತಮ ಚಿತ್ರಕ್ಕೆ 11, ಮತ್ತು ಅತ್ಯುತ್ತಮ ಚಲನಚಿತ್ರ ನಿರ್ದೇಶಕರಿಗೆ 13 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.{{sfn|Chandran|2018|p=358-361}}
=== ಸಾಹಿತ್ಯ ===
{{Main|ಮಲಯಾಳಂ ಸಾಹಿತ್ಯ}}
[[ಸಂಗಮ್ ಸಾಹಿತ್ಯ]]ವನ್ನು [[ಮಲಯಾಳಂ]]ನ ಪ್ರಾಚೀನ ಪೂರ್ವವರ್ತಿ ಎಂದು ಪರಿಗಣಿಸಬಹುದು.{{sfn|Chandran|2018|p=450}} [[ಮಲಯಾಳಂ ಸಾಹಿತ್ಯ]]ವು [[ಹಳೆಯ ಮಲಯಾಳಂ]] ಅವಧಿಯಿಂದ (9 ನೇ–13 ನೇ ಶತಮಾನ CE) ಪ್ರಾರಂಭವಾಗುತ್ತದೆ ಮತ್ತು 14 ನೇ ಶತಮಾನದ [[ನಿರಣಂ ಕವಿಗಳು]] (ಮಾಧವ ಪಣಿಕ್ಕರ್, ಶಂಕರ ಪಣಿಕ್ಕರ್ ಮತ್ತು ರಾಮ ಪಣಿಕ್ಕರ್),<ref name="Nair1967">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |page=296}}</ref><ref name="Laet1994">{{cite book |author=Sigfried J. de Laet |title=History of Humanity: From the seventh to the sixteenth century |url=https://books.google.com/books?id=ixCyd2lByggC&pg=PA407 |access-date=18 November 2012 |year=1994 |publisher=UNESCO |isbn=978-9231028137 |page=407}}</ref> ಮತ್ತು 16 ನೇ ಶತಮಾನದ ಕವಿ [[ಎಳುತ್ತಚ್ಚನ್|ತುಂಚತ್ತು ಎಳುತ್ತಚ್ಚನ್]] ಅವರನ್ನು ಒಳಗೊಂಡಿದೆ, ಅವರ ಕೃತಿಗಳು ಆಧುನಿಕ ಮಲಯಾಳಂ ಭಾಷೆ ಮತ್ತು ಅದರ ಕಾವ್ಯದ ಆರಂಭವನ್ನು ಸೂಚಿಸುತ್ತವೆ.<ref name="George1998">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA58 |access-date=18 November 2012 |year=1998 |publisher=Sahitya Akademi |isbn=978-8126004133 |page=58}}</ref> [[ಕೊಲ್ಲಂ ಯುಗ|ಮಲಯಾಳಂ ಕ್ಯಾಲೆಂಡರ್]] ನ ಮೊದಲ 600 ವರ್ಷಗಳಲ್ಲಿ, ಸಾಹಿತ್ಯವು ಮುಖ್ಯವಾಗಿ [[ಉತ್ತರ ಮಲಬಾರ್|ಉತ್ತರ ಮಲಬಾರಿನ]] ''[[ವಡಕ್ಕನ್ ಪಟ್ಟುಕಲ್]]'' ಮತ್ತು [[ದಕ್ಷಿಣ ವಿಭಾಗ (ತಿರುವಾಂಕೂರು)|ದಕ್ಷಿಣ ತಿರುವಾಂಕೂರಿನ]] ''ತೆಕ್ಕನ್ ಪಟ್ಟುಕಲ್'' ನಂತಹ ಮೌಖಿಕ [[ಗೀತೆ]]ಗಳನ್ನು ಒಳಗೊಂಡಿತ್ತು.{{sfn|Chandran|2018|p=453}} 2013 ರಲ್ಲಿ "[[ಭಾರತದಲ್ಲಿ ಶಾಸ್ತ್ರೀಯ ಭಾಷೆ]]" ಎಂದು ಗೊತ್ತುಪಡಿಸಲಾಯಿತು,<ref name="thehindu20130524"/> ಇದು ಪ್ರಸ್ತುತ ರೂಪಕ್ಕೆ ಮುಖ್ಯವಾಗಿ 15 ಮತ್ತು 16 ನೇ ಶತಮಾನಗಳಲ್ಲಿ [[ಸಾಮಾನ್ಯ ಯುಗ]]ದ ಕವಿಗಳಾದ [[ಚೆರುಶ್ಶೇರಿ ನಂಬೂದಿರಿ]],<ref name="Cherussery (Krishnagadha) Malayalam author books">{{Cite web |url=https://keralaliterature.com/old/author.php?authid=1473 |title=Cherussery (Krishnagadha) Malayalam author books |website=keralaliterature.com |archive-url=https://web.archive.org/web/20190407052549/https://keralaliterature.com/old/author.php%3Fauthid%3D1473 |archive-date=7 April 2019 |url-status=dead}}</ref><ref name="mlm" /> [[ತುಂಚತ್ತು ಎಳುತ್ತಚ್ಚನ್]],<ref name="mlm" /> ಮತ್ತು [[ಪೂಂತಾನಂ ನಂಬೂದಿರಿ]]<ref name="mlm" /><ref>{{cite news |url=https://www.thehindu.com/society/history-and-culture/the-charms-of-poonthanam-illam/article25308319.ece/ |title=The Charms of Poonthanam Illam |last=Arun Narayanan |date=25 October 2018 |work=The Hindu}}</ref> ರವರ ಪ್ರಭಾವದಿಂದ ಅಭಿವೃದ್ಧಿಗೊಂಡಿತು.<ref name="mlm">{{cite book |title=A Short History of Malayalam Literature |author=Dr. K. Ayyappa Panicker |url=https://archive.org/details/ASHORTHISTORYOFMALAYALAMLITERATURE |year=2006 |location=Thiruvananthapuram |publisher=Department of Information and Public Relations, Kerala}}</ref><ref>Freeman, Rich (2003). "Genre and Society: The Literary Culture of Premodern Kerala". In Literary Cultures in History: Reconstructions from South Asia</ref> 17/18 ನೇ ಶತಮಾನ CE ಯ ಸಂಭವನೀಯ ಕವಿಯಾದ [[ಉನ್ನಾಯಿ ವರಿಯಾರ್]],<ref name="Attakatha sahithyam">{{Cite book |last=Krishna Kaimal |first=Aymanam |title=Attakatha sahithyam |url=https://mgucat.mgu.ac.in/cgi-bin/koha/opac-detail.pl?biblionumber=133514&shelfbrowse_itemnumber=132435 |date=1989 |publisher=Trivandrum State Institute of Language}}</ref> ಮತ್ತು 18 ನೇ ಶತಮಾನ CE ಯ ಕವಿಯಾದ [[ಕುಂಚನ್ ನಂಬಿಯಾರ್]] ಅವರು ಆಧುನಿಕ ಮಲಯಾಳಂ ಸಾಹಿತ್ಯದ ಬೆಳವಣಿಗೆಯಲ್ಲಿ ತಮ್ಮ ಅಪಕ್ವ ರೂಪದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ.<ref name="mlm" /> [[ಭಾರತಪುಳ]] ನದಿ, ಇದನ್ನು [[ಪೊನ್ನಾನಿ|ಪೊನ್ನಾನಿ ನದಿ]] ಎಂದೂ ಕರೆಯುತ್ತಾರೆ, ಮತ್ತು ಅದರ ಉಪನದಿಗಳು ಆಧುನಿಕ ಮಲಯಾಳಂ ಸಾಹಿತ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.<ref>{{Cite news |title=The river sutra |url=https://www.thehindu.com/society/rivers-have-nurtured-malayalam-literature-and-poetry-since-time-immemorial/article25058214.ece |last=Binoy |first=Rasmi |date=27 September 2018 |access-date=24 January 2021 |work=The Hindu}}</ref>
[[ಪರೆಮ್ಮಕ್ಕಲ್ ತೋಮಾ ಕಥನಾರ್]] ಮತ್ತು [[ಕೇರಳ ವರ್ಮ ವಲಿಯಕೋಯಿ ತಂಪುರಾನ್]] ಮಲಯಾಳಂ ಗದ್ಯಕ್ಕೆ ತಮ್ಮ ಕೊಡುಗೆಗೆ ಹೆಸರುವಾಸಿಯಾಗಿದ್ದಾರೆ.<ref name="google24">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |pages=118–21}}</ref><ref name="Sinhā2009">{{cite book |author=Madhubālā Sinhā |title=Encyclopaedia of South Indian literature |url=https://books.google.com/books?id=8qQpAQAAIAAJ |access-date=18 November 2012 |year=2009 |publisher=Anmol Publ. |isbn=978-8126137404 |page=97}}</ref><ref name="Vilanilam1987">{{cite book |author=John V. Vilanilam |title=Religious communication in India |url=https://books.google.com/books?id=a0UeAAAAMAAJ |access-date=18 November 2012 |year=1987 |publisher=Kairali Books International |page=66}}</ref> "[[ಆಧುನಿಕ ಮಲಯಾಳಂನ ಕವಿತ್ರಯ|ಕವಿಗಳ ತ್ರಿಮೂರ್ತಿಗಳು]]" (''ಕವಿತ್ರಯಂ''): [[ಕುಮಾರನ್ ಆಶಾನ್]], [[ವಳ್ಳತ್ತೋಳ್ ನಾರಾಯಣ ಮೇನನ್]], ಮತ್ತು [[ಉಳ್ಳೂರ್ ಎಸ್. ಪರಮೇಶ್ವರ ಅಯ್ಯರ್]] ಅವರು ಕೇರಳೀಯ ಕಾವ್ಯವನ್ನು ಪ್ರಾಚೀನ ಚಾತುರ್ಯ ಮತ್ತು ಅಧ್ಯಾತ್ಮಶಾಸ್ತ್ರದಿಂದ ಹೆಚ್ಚು [[ಗೀತಾತ್ಮಕ|ಗೀತಾತ್ಮಕ]] ಶೈಲಿಯತ್ತ ತಿರುಗಿಸಿದ್ದಾರೆಂದು ಗುರುತಿಸಲ್ಪಟ್ಟಿದ್ದಾರೆ.<ref name="Al̲ikkōṭȧ1979">{{cite book |author=Sukumār Al̲ikkōṭȧ |title=Mahakavi Ulloor |url=https://books.google.com/books?id=1VkOAAAAYAAJ |access-date=18 November 2012 |year=1979 |publisher=Sahitya Akademi |page=52}}</ref><ref name="Indian and Foreign Review">{{cite book |title=Indian and Foreign Review |url=https://books.google.com/books?id=XaRnAAAAMAAJ |access-date=18 November 2012 |year=1983 |publisher=Publications Division of the Ministry of Information and Broadcasting, Government of India |page=25}}</ref><ref name="Tarakan1990">{{cite book |author=Ke. Eṃ Tarakan |title=A brief survey of Malayalam literature: history of literature |url=https://books.google.com/books?id=3nhkAAAAMAAJ |access-date=18 November 2012 |year=1990 |publisher=K.M. Tharakan |pages=41–52}}</ref> [[ಮೊಯಿಂಕುಟ್ಟಿ ವೈದ್ಯರ್]] ಮತ್ತು [[ಪುಲಿಕ್ಕೋಟ್ಟಿಲ್ ಹೈದರ್]] ನಂತಹ ಕವಿಗಳು [[ಮಾಪ್ಪಿಲ ಹಾಡುಗಳಿಗೆ]] ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ, ಇದು [[ಅರಬಿ ಮಲಯಾಳಂ]] ಸಾಹಿತ್ಯದ ಪ್ರಕಾರವಾಗಿದೆ.<ref>{{cite news |url=https://www.hindu.com/2007/03/31/stories/2007033110250500.htm |archive-url=https://web.archive.org/web/20121108104937/https://www.hindu.com/2007/03/31/stories/2007033110250500.htm |url-status=dead |archive-date=8 November 2012 |title=Mappila songs cultural fountains of a bygone age, says MT |date=31 March 2007 |access-date=15 August 2009 |work=[[The Hindu]] |location=Chennai, India}}</ref><ref>Pg 167, Mappila Muslims: a study on society and anti colonial struggles By Husain Raṇdathaṇi, Other Books, Kozhikode 2007</ref> ಯಾವುದೇ ಭಾರತೀಯ ಭಾಷೆಯಲ್ಲಿ ಮೊದಲ ಪ್ರವಾಸ ಕಥನವು ಮಲಯಾಳಂ ''[[ವರ್ತಮಾನಪುಸ್ತಕಂ]]'' ಆಗಿದೆ, ಇದನ್ನು [[ಪರೆಮ್ಮಕ್ಕಲ್ ತೋಮಾ ಕಥನಾರ್]] 1785 ರಲ್ಲಿ ಬರೆದರು.<ref name="legacy">{{cite book |last=Menon |first=A. Sreedhara |title=The legacy of Kerala |year=2008 |publisher=D C Books |location=Kottayam, Kerala |isbn=978-81-264-2157-2 |edition=1st DCB}}</ref><ref>{{cite web |url=https://nasrani.net/2010/08/23/the-varthamanappusthakam-cathanar-paremmakkal/ |title=August 23, 2010 Archives |url-status=dead |archive-url=https://web.archive.org/web/20130427073541/https://nasrani.net/2010/08/23/the-varthamanappusthakam-cathanar-paremmakkal/ |archive-date=27 April 2013}}</ref> ಗದ್ಯ ಸಾಹಿತ್ಯ, [[ಮಲಯಾಳಂ ಪತ್ರಿಕೋದ್ಯಮ]], ಮತ್ತು ವಿಮರ್ಶೆಯು 18 ನೇ ಶತಮಾನದ ಉತ್ತರಾರ್ಧದ ನಂತರ ಪ್ರಾರಂಭವಾಯಿತು.<ref name="legacy" /> ಸಮಕಾಲೀನ ಮಲಯಾಳಂ ಸಾಹಿತ್ಯವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನದ ಸಂದರ್ಭವನ್ನು ವ್ಯವಹರಿಸುತ್ತದೆ. ಆಧುನಿಕ ಸಾಹಿತ್ಯದ ಪ್ರವೃತ್ತಿಯು ಹೆಚ್ಚಾಗಿ [[ರಾಜಕೀಯ ತೀವ್ರವಾದ]]ದ ಕಡೆಗೆ ಇರುತ್ತದೆ.<ref>{{cite encyclopedia |url=https://www.britannica.com/EBchecked/topic/556016/South-Asian-arts/65212/Tamil#toc65213 |title=South Asian arts |encyclopedia=Encyclopedia Britannica |access-date=15 September 2017}}</ref> [[ಮಲಯಾಳಂ ಸಾಹಿತ್ಯ]]ವು 6 [[ಜ್ಞಾನಪೀಠ ಪ್ರಶಸ್ತಿ|ಜ್ಞಾನಪೀಠ ಪ್ರಶಸ್ತಿಗಳನ್ನು]] ಪಡೆದುಕೊಂಡಿದೆ, ಇದು ಯಾವುದೇ ದ್ರಾವಿಡ ಭಾಷೆಗೆ ಎರಡನೇ ಅತಿ ಹೆಚ್ಚು ಮತ್ತು ಯಾವುದೇ ಭಾರತೀಯ ಭಾಷೆಗೆ ಮೂರನೇ ಅತಿ ಹೆಚ್ಚು.<ref>{{Cite news |title=Jnanpith given to Akkitham |url=https://www.thehindu.com/news/national/kerala/jnanpith-given-to-akkitham/article32685581.ece |last=Naha |first=Abdul Latheef |date=24 September 2020 |access-date=12 June 2021 |work=The Hindu}}</ref><ref>{{Cite news |title=Celebrated Malayalam poet Akkitham wins 2019 Jnanpith Award |url=https://www.business-standard.com/article/news-ani/celebrated-malayalam-poet-akkitham-wins-2019-jnanpith-award-119112900926_1.html |last=ANI |date=29 November 2019 |access-date=12 June 2021 |publisher=Business Standard}}</ref> 20 ನೇ ಶತಮಾನದ ಉತ್ತರಾರ್ಧದಲ್ಲಿ, [[ಜ್ಞಾನಪೀಠ]] ಪ್ರಶಸ್ತಿ ವಿಜೇತ ಕವಿಗಳು ಮತ್ತು ಬರಹಗಾರರಾದ [[ಜಿ. ಶಂಕರ ಕುರುಪ್]], [[ಎಸ್. ಕೆ. ಪೊಟ್ಟೆಕ್ಕಾಟ್]], [[ತಕಳಿ ಶಿವಶಂಕರ ಪಿಳ್ಳೈ]], [[ಎಂ. ಟಿ. ವಾಸುದೇವನ್ ನಾಯರ್]], [[ಒ. ಎನ್. ವಿ. ಕುರುಪ್]], ಮತ್ತು [[ಅಕ್ಕಿತಂ ಅಚ್ಯುತನ್ ನಂಬೂದಿರಿ]] ಅವರು ಆಧುನಿಕ ಮಲಯಾಳಂ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.<ref name="google25">{{cite book |author=Subodh Kapoor |title=The Indian Encyclopaedia: Biographical, Historical, Religious, Administrative, Ethnological, Commercial and Scientific. Mahi-Mewat |url=https://books.google.com/books?id=mc6C5dVHbGAC&pg=PA4542 |access-date=18 November 2012 |year=2002 |publisher=Cosmo |isbn=978-8177552720 |page=4542}}</ref><ref name="Accessions List, South Asia">{{cite book |title=Accessions List, South Asia |url=https://books.google.com/books?id=lPcoAQAAIAAJ |access-date=18 November 2012 |year=1994 |publisher=E.G. Smith for the U.S. Library of Congress Office, New Delhi |page=21}}</ref><ref name="Indian Writing Today">{{cite book |title=Indian Writing Today |url=https://books.google.com/books?id=1wUtAQAAIAAJ |access-date=18 November 2012 |year=1967 |publisher=Nirmala Sadanand Publishers |page=21}}</ref><ref name="DattaAkademi1987">{{cite book |author1=Amaresh Datta |author2=Sahitya Akademi |title=Encyclopaedia of Indian Literature: K to Navalram |url=https://books.google.com/books?id=QaIRAQAAMAAJ |access-date=18 November 2012 |year=1987 |publisher=Sahitya Akademi |page=2394 |isbn=978-0-8364-2423-2}}</ref><ref name="Malayalam Literary Survey">{{cite book |title=Malayalam Literary Survey |url=https://books.google.com/books?id=k5JkAAAAMAAJ |access-date=18 November 2012 |year=1993 |publisher=Kerala Sahitya Akademi |page=19}}</ref> ನಂತರ, [[ಒ. ವಿ. ವಿಜಯನ್]], [[ಕಮಲಾದಾಸ್]], [[ಎಂ. ಮುಕುಂದನ್]], [[ಅರುಂಧತಿ ರಾಯ್]], [[ವೈಕಂ ಮುಹಮ್ಮದ್ ಬಷೀರ್]] ನಂತಹ ಬರಹಗಾರರು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ.<ref name="MukundanPillai2004">{{cite book |author1=Eṃ Mukundan |author2=C. Gopinathan Pillai |title=Eng Adityan Radha And Others |url=https://books.google.com/books?id=1N5QcHakKdoC&pg=PP3 |access-date=18 November 2012 |year=2004 |publisher=Sahitya Akademi |isbn=978-8126018833 |page=3}}</ref><ref name="Maheshwari2002">{{cite book |author=Ed. Vinod Kumar Maheshwari |title=Perspectives On Indian English Literature |url=https://books.google.com/books?id=JcY2-ldWIKsC&pg=PA126 |access-date=18 November 2012 |year=2002 |publisher=Atlantic Publishers & Dist |isbn=978-8126900930 |page=126}}</ref><ref name="Chaudhuri2008">{{cite book |author=Amit Chaudhuri |title=Clearing a Space: Reflections On India, Literature, and Culture |url=https://books.google.com/books?id=AQeN2PoAx2IC&pg=PA44 |access-date=18 November 2012 |year=2008 |publisher=Peter Lang |isbn=978-1-906165-01-7 |pages=44–45}}</ref><ref>{{Cite news |title=Indian's First Novel Wins Booker Prize in Britain |work=[[The New York Times]] |date=15 October 1997 |access-date=11 November 2007 |url=https://query.nytimes.com/gst/fullpage.html?res=9A01E6DD173FF936A25753C1A961958260 |first=Sarah |last=Lyall}}</ref>
=== ಪಾಕಪದ್ಧತಿ ===
{{Main|ಕೇರಳದ ಪಾಕಪದ್ಧತಿ}}
ಕೇರಳದ ಪಾಕಪದ್ಧತಿಯು ಮೀನು, ಕೋಳಿ ಮತ್ತು ಮಾಂಸವನ್ನು ಬಳಸಿ ತಯಾರಿಸಿದ ವಿವಿಧ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿದೆ. ಪಾಕಶಾಸ್ತ್ರದ ಮಸಾಲೆಗಳನ್ನು ಕೇರಳದಲ್ಲಿ ಸಹಸ್ರಮಾನಗಳಿಂದ ಬೆಳೆಯಲಾಗುತ್ತಿದೆ ಮತ್ತು ಅವು ಅದರ ಪಾಕಪದ್ಧತಿಯ ವಿಶಿಷ್ಟ ಲಕ್ಷಣಗಳಾಗಿವೆ.<ref name="google26">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA10 |access-date=17 November 2012 |year=2010 |publisher=Murdoch Books |isbn=978-1-74196-438-7 |page=10}}</ref> ಅಕ್ಕಿಯು ಪ್ರಮುಖ ಪ್ರಧಾನ ಆಹಾರವಾಗಿದ್ದು, ಇದನ್ನು ಎಲ್ಲಾ ಸಮಯದಲ್ಲೂ ಸೇವಿಸಲಾಗುತ್ತದೆ.<ref name="Majumdar2010">{{cite book |author=Majumdar |title=Consumer Behaviour: Insights From Indian Market |url=https://books.google.com/books?id=KF57x1Nrn2UC&pg=RA1-PA79 |access-date=17 November 2012 |year=2010 |publisher=PHI Learning Pvt. Ltd. |isbn=978-8120339637 |page=181}}</ref> ಕೇರಳದಲ್ಲಿ ಹೆಚ್ಚಿನ ಉಪಾಹಾರ ಆಹಾರಗಳನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ, ಒಂದು ರೂಪದಲ್ಲಿ ಅಥವಾ ಇನ್ನೊಂದು ರೂಪದಲ್ಲಿ (''[[ಇಡ್ಲಿ]]'', ''[[ದೋಸೆ (ಆಹಾರ)|ದೋಸೆ]]'', ''[[ಪುಟ್ಟು]]'', ''[[ಪತ್ತಿರಿ]]'', ''[[ಅಪ್ಪಂ]]'', ಅಥವಾ ''[[ಇಡಿಯಪ್ಪಂ]]''), [[ಮರಗೆಣಸು]] ತಯಾರಿಕೆಗಳು, ಅಥವಾ ದ್ವಿದಳ ಧಾನ್ಯ-ಆಧಾರಿತ [[ವಡೆ (ಆಹಾರ)|ವಡೆ]].<ref name="Muthachen1970">{{cite book |author=Rachel Muthachen |title=Regional Indian Recipes |url=https://books.google.com/books?id=h5xXz_UFV7QC&pg=PA1 |access-date=17 November 2012 |year=1970 |publisher=Jaico Publishing House |isbn=978-8172240356 |page=1}}</ref> ಇವುಗಳು [[ಚಟ್ನಿ]], ''[[ಕಡಲೆ]]'', ''[[ಪಾಯಸಂ]]'', ''[[ಹೆಸರು ಕಾಳು|ಪಯರ್]] [[ಪಪ್ಪಡಂ]]'', ''[[ಅಪ್ಪಂ]]'', ಚಿಕನ್ ಕರಿ, ಗೋಮಾಂಸ ಫ್ರೈ, ಎಗ್ ಮಸಾಲಾ ಮತ್ತು ಮೀನು ಕರಿಯೊಂದಿಗೆ ಸೇರಿಕೊಳ್ಳಬಹುದು.<ref name="Newton" /> [[ಪೊರೊಟ್ಟ]] ಮತ್ತು [[ಬಿರಿಯಾನಿ]] ಸಹ ಸಾಮಾನ್ಯವಾಗಿ ಕೇರಳದ ರೆಸ್ಟೋರೆಂಟ್ಗಳಲ್ಲಿ ಕಂಡುಬರುತ್ತವೆ. ತಲಶ್ಶೇರಿ ಬಿರಿಯಾನಿ ಜನಾಂಗೀಯ ಬ್ರ್ಯಾಂಡ್ ಆಗಿ ಜನಪ್ರಿಯವಾಗಿದೆ. ಮಧ್ಯಾಹ್ನದ ಊಟದ ಭಕ್ಷ್ಯಗಳು [[ಅಕ್ಕಿ]] ಮತ್ತು [[ಕರಿ]] ಜೊತೆಗೆ ''[[ರಸಂ (ಭಕ್ಷ್ಯ)|ರಸಂ]]'', ''ಪುಳಿಶ್ಶೇರಿ'' ಮತ್ತು ''[[ಸಾಂಬಾರ್ (ಭಕ್ಷ್ಯ)|ಸಾಂಬಾರ್]]'' ಅನ್ನು ಒಳಗೊಂಡಿವೆ.<ref name="google27">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT4 |access-date=17 November 2012 |publisher=Springwood emedia |isbn=978-1-4761-2308-0 |pages=4–}}</ref> ''[[ಸಾಧ್ಯ]]'' ಸಸ್ಯಾಹಾರಿ ಊಟವಾಗಿದ್ದು, ಇದನ್ನು ಬಾಳೆ ಎಲೆಯಲ್ಲಿ ಬಡಿಸಲಾಗುತ್ತದೆ ಮತ್ತು ನಂತರ ಒಂದು ಕಪ್ ಪಾಯಸಂನೊಂದಿಗೆ ಸೇರಿಸಲಾಗುತ್ತದೆ.<ref name="Kannampilly2003">{{cite book |author=Vijayan Kannampilly |title=Essential Kerala Cook Book |url=https://books.google.com/books?id=pYfOCaAPb3sC&pg=PA11 |access-date=17 November 2012 |year=2003 |publisher=Penguin Books India |isbn=978-0-14-302950-2 |pages=10–11}}</ref> ಜನಪ್ರಿಯ ತಿಂಡಿಗಳಲ್ಲಿ [[ಬಾಳೆಹಣ್ಣಿನ ಚಿಪ್ಸ್]], ಯಾಮ್ ಕ್ರಿಸ್ಪ್ಸ್, [[ಮರಗೆಣಸು ಚಿಪ್ಸ್]], [[ಅಚ್ಚಪ್ಪಂ]], [[ಉನ್ನಿ ಅಪ್ಪಂ]] ಮತ್ತು ''ಕುಳಲಪ್ಪಂ'' ಸೇರಿವೆ.<ref name="Kerala with Lakshadweep">{{cite book |title=Kerala with Lakshadweep |url=https://books.google.com/books?id=yJJuAAAAMAAJ |access-date=17 November 2012 |year=2005 |publisher=Outlook Publishing |page=27 |isbn=978-8189449018}}</ref><ref name="Koilparampil1982">{{cite book |author=George Koilparampil |title=Caste in the Catholic community in Kerala: a study of caste elements in the inter rite relationships of Syrians and Latins |url=https://books.google.com/books?id=nXnaAAAAMAAJ |access-date=17 November 2012 |year=1982 |publisher=Dept. of Sociology, St. Teresa's College |page=233}}</ref><ref name="(Swami.)2000">{{cite book |author=Paramatmananda (Swami.) |title=Talks |url=https://books.google.com/books?id=p77mUECpIjgC |access-date=17 November 2012 |year=2000 |publisher=Mata Amritanandamayi Center |isbn=978-1-879410-79-4 |page=24}}</ref> ಸಮುದ್ರಾಹಾರ ವಿಶೇಷ ಭಕ್ಷ್ಯಗಳಲ್ಲಿ [[ಕರಿಮೀನ್]], ಸೀಗಡಿ, ಏಡಿ ಮತ್ತು ಇತರ ಕಠಿಣಚರ್ಮಿ ಭಕ್ಷ್ಯಗಳು ಸೇರಿವೆ.<ref>{{cite web |title=Kerala Cuisine |url=https://www.ecotours.in/kerala-cuisine.htm |publisher=Ecotours |access-date=30 May 2015 |archive-date=13 August 2015 |archive-url=https://web.archive.org/web/20150813003443/http://ecotours.in/kerala-cuisine.htm |url-status=dead }}</ref> [[ತಲಶ್ಶೇರಿ ಪಾಕಪದ್ಧತಿ]] ವೈವಿಧ್ಯಮಯವಾಗಿದೆ ಮತ್ತು ಇದು ಅನೇಕ ಪ್ರಭಾವಗಳ ಮಿಶ್ರಣವಾಗಿದೆ.
== ಮಾಧ್ಯಮ ==
{{Main|ಕೇರಳದಲ್ಲಿ ಮಾಧ್ಯಮ}}
ಮಾಧ್ಯಮ, ದೂರಸಂಪರ್ಕ, ಪ್ರಸಾರ ಮತ್ತು ಕೇಬಲ್ ಸೇವೆಗಳನ್ನು [[ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ]] (TRAI) ನಿಯಂತ್ರಿಸುತ್ತದೆ.<ref>{{cite book |title=The Telecom Regulatory Authority of India Act, 1997 |url=https://books.google.com/books?id=0gfeQc1ZBqIC&pg=PA112 |publisher=Georg Thieme Verlag |page=112 |id=GGKEY:BJ6HEPE0NRE}}</ref> 2015–16 ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 4, ಕೇರಳವನ್ನು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]] ಹೊಂದಿರುವ ರಾಜ್ಯ ಎಂದು ಶ್ರೇಣೀಕರಿಸಿತು.<ref>{{cite web |title=National Family Health Survey (NFHS-4) |url=https://rchiips.org/nfhs/NFHS-4Reports/Kerala.pdf |website=International Institute for Population SciencesDeonar |access-date=7 February 2022 |archive-date=23 February 2022 |archive-url=https://web.archive.org/web/20220223120050/http://rchiips.org/nfhs/NFHS-4Reports/Kerala.pdf |url-status=dead }}</ref> ಡಜನ್ಗಟ್ಟಲೆ ಪತ್ರಿಕೆಗಳು ಕೇರಳದಲ್ಲಿ ಪ್ರಕಟವಾಗುತ್ತವೆ, ಒಂಬತ್ತು ಪ್ರಮುಖ ಭಾಷೆಗಳಲ್ಲಿ,<ref name=rniindia>{{cite web |url=https://rni.nic.in/pii.htm |archive-url=https://web.archive.org/web/20070927070139/https://rni.nic.in/pii.htm |archive-date=27 September 2007 |url-status=dead |title=General Review |access-date=1 September 2006 |publisher=Registrar of Newspapers for India}}</ref> ಆದರೆ ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್.<ref name="google28">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA186 |access-date=17 November 2012 |year=1998 |publisher=Sahitya Akademi |isbn=978-8126004133 |page=186}}</ref> ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]]ವನ್ನು ಹೊಂದಿದೆ.<ref>{{cite web |title=The DHS Program – India: Standard DHS, 2015–16 |url=https://dhsprogram.com/what-we-do/survey/survey-display-355.cfm |website=dhsprogram.com}}</ref><ref>{{cite web |title=National Family Health Survey |url=https://rchiips.org/nfhs/NFHS-4Report.shtml |website=rchiips.org |access-date=7 February 2022 |archive-date=7 March 2022 |archive-url=https://web.archive.org/web/20220307101917/http://rchiips.org/nfhs/NFHS-4Report.shtml |url-status=dead}}</ref> ಅತಿ ವ್ಯಾಪಕವಾಗಿ ಪ್ರಸಾರವಾಗುವ [[ಮಲಯಾಳಂ ಭಾಷಾ ಪತ್ರಿಕೆಗಳ ಪಟ್ಟಿ|ಮಲಯಾಳಂ-ಭಾಷಾ ಪತ್ರಿಕೆಗಳೆಂದರೆ]] ''[[ಮಲಯಾಳ ಮನೋರಮ]], [[ಮಾತೃಭೂಮಿ]], [[ದೇಶಾಭಿಮಾನಿ]], [[ಮಧ್ಯಮಂ]], [[ಕೇರಳ ಕೌಮುದಿ]], [[ಮಂಗಳಂ ಪಬ್ಲಿಕೇಷನ್ಸ್|ಮಂಗಳಂ]], [[ಚಂದ್ರಿಕಾ (ಮಲಯಾಳಂ ಪತ್ರಿಕೆ)|ಚಂದ್ರಿಕಾ]], [[ದೀಪಿಕಾ (ಪತ್ರಿಕೆ)|ದೀಪಿಕಾ]], [[ಜನಯುಗಂ]], [[ಜನ್ಮಭೂಮಿ]], [[ಸಿರಾಜ್ ಡೈಲಿ]]'' ಮತ್ತು ''[[ಸುಪ್ರಭಾತಂ ಡೈಲಿ|ಸುಪ್ರಭಾತಂ]]''. [[ಮಲಯಾಳಂ ಭಾಷಾ ನಿಯತಕಾಲಿಕೆಗಳ ಪಟ್ಟಿ|ಪ್ರಮುಖ ಮಲಯಾಳಂ ನಿಯತಕಾಲಿಕೆಗಳು]] ''[[ಮಾತೃಭೂಮಿ ಅಳಚಪ್ಪತಿಪ್ಪು]], [[ವನಿತಾ]], [[ಇಂಡಿಯಾ ಟುಡೇ]] ಮಲಯಾಳಂ, [[ಮಧ್ಯಮಂ ವೀಕ್ಲಿ]], [[ಗೃಹಲಕ್ಷ್ಮೀ (ನಿಯತಕಾಲಿಕೆ)|ಗೃಹಲಕ್ಷ್ಮೀ]], [[ಧನಂ (ವ್ಯಾಪಾರ ನಿಯತಕಾಲಿಕೆ)|ಧನಂ]], [[ಚಿತ್ರಭೂಮಿ]]'' ಮತ್ತು ''[[ಭಾಷಾಪೋಷಿಣಿ]]''.
[[File:Malayala Manorama New Press in Kollam-3, Apr 2016.jpg|right|thumb|[[ಕೊಟ್ಟಿಯಂ]], [[ಕೊಲ್ಲಂ|ಕೊಲ್ಲಂನ]] [[ಮಲಯಾಳ ಮನೋರಮ]] ಕಚೇರಿ]]
[[ಡಿಡಿ ಮಲಯಾಳಂ]] ಸರ್ಕಾರಿ-ಸ್ವಾಮ್ಯದ ದೂರದರ್ಶನ ಪ್ರಸಾರಕವಾಗಿದೆ. [[ಬಹು-ವ್ಯವಸ್ಥಾಪಕ ವ್ಯವಸ್ಥೆಗಳು|ಬಹು-ವ್ಯವಸ್ಥಾಪಕ ವ್ಯವಸ್ಥೆಗಳು]] ಮಲಯಾಳಂ, ಇಂಗ್ಲಿಷ್, ಇತರ ಭಾರತೀಯ ಭಾಷೆಗಳು ಮತ್ತು ಅಂತಾರಾಷ್ಟ್ರೀಯ ಚಾನೆಲ್ಗಳ ಮಿಶ್ರಣವನ್ನು ಒದಗಿಸುತ್ತವೆ. ಕೆಲವು ಜನಪ್ರಿಯ ಮಲಯಾಳಂ ದೂರದರ್ಶನ ಚಾನೆಲ್ಗಳು [[ಏಷ್ಯಾನೆಟ್ (ದೂರದರ್ಶನ ಚಾನೆಲ್)|ಏಷ್ಯಾನೆಟ್]], [[ಏಷ್ಯಾನೆಟ್ ನ್ಯೂಸ್]], [[ಏಷ್ಯಾನೆಟ್ ಪ್ಲಸ್]], [[ಏಷ್ಯಾನೆಟ್ ಮೂವೀಸ್]], [[ಸೂರ್ಯ ಟಿವಿ]], [[ಸೂರ್ಯ ಮೂವೀಸ್]], [[ಮಝವಿಲ್ ಮನೋರಮ]], [[ಮನೋರಮ ನ್ಯೂಸ್]], [[ಕೈರಳಿ ಟಿವಿ]], [[ಕೈರಳಿ ಟಿವಿ|ಕೈರಳಿ ನ್ಯೂಸ್]], [[ಫ್ಲವರ್ಸ್ (ದೂರದರ್ಶನ ಚಾನೆಲ್)|ಫ್ಲವರ್ಸ್]], [[ಮೀಡಿಯಾ ವನ್ ಟಿವಿ]], [[ಮಾತೃಭೂಮಿ ನ್ಯೂಸ್]], [[ಕಪ್ಪಾ ಟಿವಿ]], [[ಅಮೃತ ಟಿವಿ]], [[ರಿಪೋರ್ಟರ್ ಟಿವಿ]], [[ಜೈಹಿಂದ್]], [[ಜನಂ ಟಿವಿ]], [[ಜೀವನ್ ಟಿವಿ]], [[ಕೌಮುದಿ ಟಿವಿ]] ಮತ್ತು [[ಶಾಲೋಮ್ (ದೂರದರ್ಶನ ಚಾನೆಲ್)|ಶಾಲೋಮ್ ಟಿವಿ]]. ಭಾರತದಲ್ಲಿ ಎರಡನೇ ಅತಿ ಹೆಚ್ಚು ಇಂಟರ್ನೆಟ್ ಪ್ರವೇಶ ಪ್ರಮಾಣದೊಂದಿಗೆ,<ref>{{Cite web |title=Delhi ranks top in Internet penetration, Kerala comes second |url=https://www.thehindubusinessline.com/info-tech/delhi-ranks-top-in-internet-penetration-kerala-comes-second/article31516751.ece/ |date=6 May 2020 |access-date=27 June 2021 |website=The Hindu Business Line}}</ref> [[ಡಿಜಿಟಲ್ ಮೀಡಿಯಾ]] [[ಸಾಮಾಜಿಕ ಮಾಧ್ಯಮ]] ಮತ್ತು [[ಭಾರತದಲ್ಲಿ ಓವರ್-ದಿ-ಟಾಪ್ ಮೀಡಿಯಾ ಸೇವೆಗಳು|OTT ಸೇವೆಗಳು]] ಸೇರಿದಂತೆ ರಾಜ್ಯದಲ್ಲಿ ಮಾಹಿತಿ ಮತ್ತು ಮನರಂಜನೆಯ ಪ್ರಮುಖ ಮೂಲವಾಗಿದೆ. ರಾಜ್ಯದಲ್ಲಿ ಗಮನಾರ್ಹವಾದ [[ಜನ ವಿಜ್ಞಾನ ಚಳುವಳಿ]] ಬೇರೂರಿದೆ, ಮತ್ತು ಬರಹಗಾರರ ಸಹಕಾರಿ ಸಂಘಗಳಂತಹ ಚಟುವಟಿಕೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ.<ref name="Tharamangalam_2005" /><ref name="Ranjith_2004">{{Cite book |author=Ranjith KS |veditors=Nair PR, Shaji H |year=2004 |title=Rural Libraries of Kerala |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621812 |pages=20–21 |url=https://www.cds.ac.in/krpcds/publication/downloads/78.pdf |access-date=28 December 2008}}</ref> [[ಬಿಎಸ್ಎನ್ಎಲ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ಜಿಯೋ]] ಪ್ರಮುಖ ಸೆಲ್ ಫೋನ್ ಸೇವಾ ಪೂರೈಕೆದಾರರಾಗಿದ್ದಾರೆ.<ref>{{cite web |title=Highlights ofTelecom Subscription Data as on 28thFebruary, 2019 |url=https://main.trai.gov.in/sites/default/files/PR_No.27of2019_0.pdf |access-date=16 May 2019 |archive-date=18 April 2019 |archive-url=https://web.archive.org/web/20190418140404/https://main.trai.gov.in/sites/default/files/PR_No.27of2019_0.pdf |url-status=dead }}</ref> ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಲಭ್ಯವಿವೆ; ಕೆಲವು ಪ್ರಮುಖ [[ಇಂಟರ್ನೆಟ್ ಸೇವಾ ಪೂರೈಕೆದಾರರು]] [[ಬಿಎಸ್ಎನ್ಎಲ್]], [[ಏಷ್ಯಾನೆಟ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ರೈಲ್ಟೆಲ್|ರೈಲ್ವೈರ್]], ಮತ್ತು [[ಟಾಟಾ ಕಮ್ಯುನಿಕೇಷನ್ಸ್]].
== ಕ್ರೀಡೆ ==
{{Main|ಕೇರಳದಲ್ಲಿ ಕ್ರೀಡೆ}}
[[File:Kerala boatrace.jpg|thumb|ವಾರ್ಷಿಕ [[ವಲ್ಲಂ ಕಳಿ|ಹಾವು ದೋಣಿ ಪಂದ್ಯವನ್ನು]] [[ಪಂಬಾ ನದಿ|ಪಂಬಾ ನದಿಯಲ್ಲಿ]] [[ಓಣಂ]] ಸಮಯದಲ್ಲಿ ನಡೆಸಲಾಗುತ್ತದೆ]]21 ನೇ ಶತಮಾನದ ವೇಳೆಗೆ, ಕೇರಳದ ಬಹುತೇಕ ಎಲ್ಲಾ ಸ್ಥಳೀಯ ಕ್ರೀಡೆಗಳು ಮತ್ತು ಆಟಗಳು ಕಣ್ಮರೆಯಾಗಿದ್ದವು ಅಥವಾ ಸ್ಥಳೀಯ ಹಬ್ಬಗಳ ಸಮಯದಲ್ಲಿ ಪ್ರದರ್ಶಿಸಲಾಗುವ ಒಂದು ಕಲಾ ಪ್ರಕಾರವಾಗಿ ಮಾರ್ಪಟ್ಟಿದ್ದವು; ಇವುಗಳಲ್ಲಿ [[ಪೂರಕ್ಕಳಿ]], ಪದಯಾನಿ, ತಲಪ್ಪಂದುಕಳಿ, ಓನತಲ್ಲು, ಪರಿಚಮುಟ್ಟುಕಳಿ, ವೇಳಾಕಳಿ, ಮತ್ತು ಕಿಳಿತತ್ತುಕಳಿ ಸೇರಿವೆ.<ref name="PRD-sports">{{cite web |url=https://www.prd.kerala.gov.in/sportsmain.htm |title=Sports and Games in Kerala |publisher=Public Relations Dept, Kerala |year=2002 |access-date=9 June 2012 |url-status=dead |archive-url=https://web.archive.org/web/20060428081830/https://www.prd.kerala.gov.in/sportsmain.htm |archive-date=28 April 2006}}</ref> ಆದಾಗ್ಯೂ, "ವಿಶ್ವದ ಎಲ್ಲಾ ಸಮರ ಕಲೆಗಳ ತಾಯಿ" ಎಂದು ಪರಿಗಣಿಸಲ್ಪಟ್ಟ ''[[ಕಳರಿಪಯಟ್ಟು]]'' ಒಂದು ಅಪವಾದವಾಗಿದೆ ಮತ್ತು ಇದನ್ನು ಸ್ಥಳೀಯ ಸಮರ ಕ್ರೀಡೆಯಾಗಿ ಅಭ್ಯಾಸ ಮಾಡಲಾಗುತ್ತದೆ.<ref>{{cite book |title=Muay Thai |publisher=Meyer & Meyer Verlag |author=Arnaud Van Der Veere |year=2012 |page=8 |isbn=978-1-84126-328-1}}</ref> ಕೇರಳದ ಮತ್ತೊಂದು ಸಾಂಪ್ರದಾಯಿಕ ಕ್ರೀಡೆಯೆಂದರೆ ದೋಣಿ ಪಂದ್ಯ, ವಿಶೇಷವಾಗಿ [[ಹಾವು ದೋಣಿ]]ಗಳ ಪಂದ್ಯ.<ref name="PRD-sports" />
[[ಕ್ರಿಕೆಟ್]] ಮತ್ತು [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ರಾಜ್ಯದಲ್ಲಿ ಜನಪ್ರಿಯವಾಯಿತು; ಎರಡನ್ನೂ 19 ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಮಲಬಾರ್ನಲ್ಲಿ ಪರಿಚಯಿಸಲಾಯಿತು. [[ಟಿನು ಯೋಹಾನನ್]], [[ಅಬೇ ಕುರುವಿಲ್ಲ]], [[ಚುಂಡಂಗಪೊಯಿಲ್ ರಿಝ್ವಾನ್]], [[ಶ್ರೀಶಾಂತ್]], [[ಸಂಜು ಸ್ಯಾಮ್ಸನ್]] ಮತ್ತು [[ಬಾಸಿಲ್ ತಂಪಿ]] ಅಂತಹ ಕ್ರಿಕೆಟಿಗರು ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದರು. ಕೇರಳದ ಕ್ರಿಕೆಟ್ ಫ್ರ್ಯಾಂಚೈಸಿ, [[ಕೊಚ್ಚಿ ಟಸ್ಕರ್ಸ್ ಕೇರಳ|ಕೊಚ್ಚಿ ಟಸ್ಕರ್ಸ್]], [[ಇಂಡಿಯನ್ ಪ್ರೀಮಿಯರ್ ಲೀಗ್]]ನ [[2011 ಇಂಡಿಯನ್ ಪ್ರೀಮಿಯರ್ ಲೀಗ್|ನಾಲ್ಕನೇ ಸೀಸನ್]] ನಲ್ಲಿ ಆಡಿತು. ಆದಾಗ್ಯೂ, ಅದರ ಫ್ರ್ಯಾಂಚೈಸಿಗಳ ನಡುವಿನ ಹಿತಾಸಕ್ತಿ ಸಂಘರ್ಷದಿಂದಾಗಿ ಸೀಸನ್ ನಂತರ ಈ ತಂಡವನ್ನು ವಿಸರ್ಜಿಸಲಾಯಿತು.<ref name="India Wins World Twenty20 Thriller">{{Cite news |title=India Wins World Twenty20 Thriller |date=25 September 2007 |access-date=11 November 2007 |url=https://www.hindu.com/2007/09/25/stories/2007092559400100.htm |archive-url=https://web.archive.org/web/20131106033222/http://www.hindu.com/2007/09/25/stories/2007092559400100.htm |url-status=dead |archive-date=6 November 2013 |work=[[The Hindu]] |location=Chennai, India }}</ref><ref name="hindu_jul09">{{cite news |url=https://www.hindu.com/2009/07/04/stories/2009070456811800.htm |archive-url=https://web.archive.org/web/20090707015857/https://www.hindu.com/2009/07/04/stories/2009070456811800.htm |url-status=dead |archive-date=7 July 2009 |work=[[The Hindu]] |title=Minister convenes high-level meet |date=4 July 2009}}</ref> ಕೇರಳವು ಇತ್ತೀಚೆಗೆ [[ರಣಜಿ ಟ್ರೋಫಿ]] ಕ್ರಿಕೆಟ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದೆ, 2017–18 ರಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ವಾರ್ಟರ್ಫೈನಲ್ಗೆ ತಲುಪಿದೆ.<ref name="PRD-sports" /><ref>{{cite news |title=Ranji Trophy: In historic first, Kerala join defending champions Gujarat in quarter-finals |url=https://timesofindia.indiatimes.com/sports/cricket/india-domestic/ranji-trophy/ranji-trophy-in-historic-first-kerala-join-defending-champions-gujarat-in-quarter-finals/articleshow/61836301.cms |date=28 November 2017 |newspaper=The Times of India |access-date=19 December 2017}}</ref> ಫುಟ್ಬಾಲ್ ಕ್ಲಬ್ ಮತ್ತು ಜಿಲ್ಲಾ ಮಟ್ಟದ ಪಂದ್ಯಗಳಿಗೆ ಈ ರಾಜ್ಯದಲ್ಲಿ ಅತಿ ಹೆಚ್ಚು ಆಡಲ್ಪಡುವ ಮತ್ತು ವೀಕ್ಷಿಸಲ್ಪಡುವ ಕ್ರೀಡೆಗಳಲ್ಲಿ ಒಂದಾಗಿದೆ. ಕೊಚ್ಚಿ [[ಇಂಡಿಯನ್ ಸೂಪರ್ ಲೀಗ್]] ನಲ್ಲಿ [[ಕೇರಳ ಬ್ಲಾಸ್ಟರ್ಸ್ ಎಫ್ಸಿ]]ಯನ್ನು ಆಯೋಜಿಸುತ್ತದೆ. ಬ್ಲಾಸ್ಟರ್ಸ್ ದೇಶದಲ್ಲಿ ಅತಿ ಹೆಚ್ಚು ಬೆಂಬಲಿತ ಕ್ಲಬ್ಗಳಲ್ಲಿ ಒಂದಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ [[ಏಷ್ಯಾ]]ದಿಂದ ಐದನೇ ಅತಿ ಹೆಚ್ಚು ಅನುಸರಿಸಲ್ಪಡುವ ಫುಟ್ಬಾಲ್ ಕ್ಲಬ್ ಆಗಿದೆ.<ref>{{Cite web |last=Salikha |first=Adelaida |title=Top FIVE Asian Clubs With Highest Social Media Followers, Up to October 2018 {{!}} Seasia.co |url=https://seasia.co/2018/10/31/top-five-asian-clubs-with-highest-social-media-followers-up-to-october-2018 |access-date=17 September 2020|website=Good News from Southeast Asia |language=en}}</ref><ref>{{Cite web |date=18 June 2020 |title=Indian Football: Five most-followed clubs on social media |url=https://khelnow.com/football/indian-football-clubs-social-media-followers/ |access-date=10 September 2020 |website=Khel Now |language=en-US |archive-date=13 November 2021 |archive-url=https://web.archive.org/web/20211113014231/https://khelnow.com/football/indian-football-clubs-social-media-followers |url-status=dead }}</ref><ref>{{Cite web |title=Malayalam News – kerala blasters become fifth Asian club with the biggest social media following {{!}} News18 Kerala, Sports Latest Malayalam News {{!}} ലേറ്റസ്റ്റ് മലയാളം വാർത്ത |url=https://malayalam.news18.com/news/sports/kerala-blasters-become-fifth-asian-club-with-the-biggest-social-media-following-50113.html |access-date=5 December 2020|website=malayalam.news18.com|date=25 October 2018 }}</ref> ಅಲ್ಲದೆ, ಕೋಝಿಕೋಡ್ [[ಐ-ಲೀಗ್]] ನಲ್ಲಿ [[ಗೋಕುಲಂ ಕೇರಳ ಎಫ್ಸಿ]] ಮತ್ತು [[ಸೈಟ್ ನಾಗ್ಜೀ ಫುಟ್ಬಾಲ್ ಟೂರ್ನಮೆಂಟ್]] ಅನ್ನು ಆಯೋಜಿಸುತ್ತದೆ. ಕೇರಳವು ಪಶ್ಚಿಮ ಬಂಗಾಳ ಮತ್ತು ಗೋವಾ ಜೊತೆಗೆ ಭಾರತದ ಪ್ರಮುಖ ಫುಟ್ಬಾಲ್ ರಾಜ್ಯಗಳಲ್ಲಿ ಒಂದಾಗಿದೆ ಮತ್ತು [[ಐ. ಎಂ. ವಿಜಯನ್]], ಸಿ. ವಿ. ಪಪ್ಪಚನ್, [[ವಿ. ಪಿ. ಸತ್ಯನ್]], [[ಯು. ಶರಾಫ್ ಅಲಿ]], [[ಜೋ ಪಾಲ್ ಅಂಚೇರಿ]], [[ಆಶಿಕ್ ಕುರುಣಿಯನ್]], [[ಮೊಹಮ್ಮದ್ ರಫಿ (ಫುಟ್ಬಾಲ್ ಆಟಗಾರ)|ಮುಹಮ್ಮದ್ ರಫಿ]], [[ಜಿಜು ಜಾಕೋಬ್]], [[ಮಶೂರ್ ಶರೀಫ್]], [[ಪಪ್ಪಚನ್ ಪ್ರದೀಪ್]], [[ಸಿ.ಕೆ. ವಿನೀತ್]], [[ಅನಸ್ ಎಡತೋಡಿಕಾ]], [[ಸಹಲ್ ಅಬ್ದುಲ್ ಸಮದ್]], ಮತ್ತು [[ರಿನೊ ಆಂಟೊ]] ನಂತಹ ರಾಷ್ಟ್ರೀಯ ಆಟಗಾರರನ್ನು ಉತ್ಪಾದಿಸಿದೆ.<ref>{{cite web |url=https://www.the-aiff.com/awards.php |archive-url=https://web.archive.org/web/20090217141248/https://the-aiff.com/awards.php |archive-date=17 February 2009 |title=AIFF Award Player of the Year |publisher=All India Football Federation |access-date=15 November 2015 |url-status=dead}}</ref><ref>{{cite web |author1=James Wray |author2=Ulf Stabe |url=https://twocircles.net/2007sep14/viva_marks_resurgence_kerala_football.html |title=Viva marks the resurgence of Kerala football |publisher=Monstersandcritics.com |date=15 September 2007 |access-date=30 July 2009}}</ref><ref name="india">{{cite web |url=https://zeenews.india.com/news/sports/indian-football-team-suffer-humiliating-1-9-defeat-to-kuwait_668128.html |publisher=zeenews.india.com |title=Indian football team suffer humiliating 1–9 defeat to Kuwait |date=14 November 2010 |access-date=13 November 2016}}</ref><ref>{{Cite web |last=Sportstar |first=Team |title=Sahal recalls journey from university football to senior national team |url=https://sportstar.thehindu.com/football/intercontinental-cup-indian-football-sahal-abdul-samad-kerala-blasters-college-university-system/article28436294.ece |access-date=6 June 2020 |website=Sportstar |date=15 July 2019 |language=en}}</ref><ref>{{cite web |url=https://scroll.in/field/988334/india-football-stimac-names-10-new-players-in-35-man-probables-list-for-oman-uae-friendlies |title=Bipin Singh, Ishan Pandita in 35-man probables list for Oman, UAE friendlies |website=thescroll.in |date=2 March 2021}}</ref> ಕೇರಳ ರಾಜ್ಯ ಫುಟ್ಬಾಲ್ ತಂಡವು [[ಸಂತೋಷ್ ಟ್ರೋಫಿ]]ಯನ್ನು ಏಳು ಬಾರಿ ಗೆದ್ದಿದೆ; 1973, 1992, 1993, 2001, 2004, 2018, ಮತ್ತು 2022 ರಲ್ಲಿ. ಅವರು ಎಂಟು ಬಾರಿ ರನ್ನರ್-ಅಪ್ ಆಗಿದ್ದರು.<ref>{{cite web |url=https://www.the-aiff.com/pages/tournament/tournament-history.php?tournamentdetail=22 |archive-url=https://web.archive.org/web/20120524035900/https://www.the-aiff.com/pages/tournament/tournament-history.php?tournamentdetail=22 |archive-date=24 May 2012 |title=Past Winners |publisher=All India Football Federation |access-date=9 June 2012}}</ref>
ರಾಜ್ಯದ ಪ್ರಮುಖ ಕ್ರೀಡಾಪಟುಗಳಲ್ಲಿ [[ಪಿ. ಟಿ. ಉಷಾ]], [[ಶೈನಿ ವಿಲ್ಸನ್]] ಮತ್ತು [[ಎಂ.ಡಿ. ವಾಲ್ಸಮ್ಮ]] ಸೇರಿದ್ದಾರೆ, ಇವರೆಲ್ಲರೂ [[ಪದ್ಮಶ್ರೀ]] ಮತ್ತು [[ಅರ್ಜುನ ಪ್ರಶಸ್ತಿ]] ಪಡೆದವರಾಗಿದ್ದಾರೆ, ಆದರೆ [[ಕೆ. ಎಂ. ಬೀನಾಮೋಲ್]] ಮತ್ತು [[ಅಂಜು ಬಾಬಿ ಜಾರ್ಜ್]] [[ರಾಜೀವ್ ಗಾಂಧಿ ಖೇಲ್ ರತ್ನ]] ಮತ್ತು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ. [[ಟಿ. ಸಿ. ಯೋಹಾನನ್]], [[ಸುರೇಶ್ ಬಾಬು (ಲಾಂಗ್ ಜಂಪರ್)|ಸುರೇಶ್ ಬಾಬು]], [[ಸಿನಿಮೋಲ್ ಪೌಲೋಸ್]], ಏಂಜಲ್ ಮೇರಿ ಜೋಸೆಫ್, [[ಮರ್ಸಿ ಕುಟ್ಟನ್]], ಕೆ. ಸರಮ್ಮ, [[ರೋಸಾ ಕುಟ್ಟಿ|ಕೆ. ಸಿ. ರೋಸಾಕುಟ್ಟಿ]], ಪದ್ಮಿನಿ ಸೆಲ್ವನ್ ಮತ್ತು ಟಿಂಟು ಲುಕಾ ಕೇರಳದ ಇತರ ಅರ್ಜುನ ಪ್ರಶಸ್ತಿ ವಿಜೇತರು.<ref name="PRD-sports" /><ref>{{cite web |url=https://keralaathletics.org/history.html |title=Kerala State Athletics Association: History |publisher=Kerala State Athletics Association |access-date=12 June 2012 |archive-date=24 June 2012 |archive-url=https://web.archive.org/web/20120624082221/http://keralaathletics.org/history.html |url-status=dead }}</ref> ವಾಲಿಬಾಲ್ ಮತ್ತೊಂದು ಜನಪ್ರಿಯ ಕ್ರೀಡೆಯಾಗಿದ್ದು, ಇದನ್ನು ಹೆಚ್ಚಾಗಿ ಕರಾವಳಿಯ ಮರಳು ಕಡಲತೀರಗಳಲ್ಲಿ ತಾತ್ಕಾಲಿಕ ಅಂಗಣಗಳಲ್ಲಿ ಆಡಲಾಗುತ್ತದೆ.<ref>{{cite book |title=The Rough Guide to South India |author1=David Abram |author2=Nick Edwards |publisher=Rough Guides |year=2004 |isbn=978-1-84353-103-6 |page=64}}</ref> [[ಜಿಮ್ಮಿ ಜಾರ್ಜ್]] ಒಬ್ಬ ಪ್ರಮುಖ ಭಾರತೀಯ ವಾಲಿಬಾಲ್ ಆಟಗಾರ, ಅವರ ಪ್ರಧಾನ ಸಮಯದಲ್ಲಿ ವಿಶ್ವದ ಹತ್ತು ಅತ್ಯುತ್ತಮ ಆಟಗಾರರಲ್ಲಿ ಶ್ರೇಣೀಕರಿಸಲ್ಪಟ್ಟಿದ್ದರು.<ref>{{cite web |title=Jimmy George |work=Sports Portal |publisher=Ministry of Youth Affairs and Sports |access-date=11 November 2007 |url=https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-url=https://web.archive.org/web/20080514040141/https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-date=14 May 2008 |url-status=dead}}</ref> ಇತರ ಜನಪ್ರಿಯ ಕ್ರೀಡೆಗಳಲ್ಲಿ [[ಬ್ಯಾಡ್ಮಿಂಟನ್]], [[ಬ್ಯಾಸ್ಕೆಟ್ಬಾಲ್]] ಮತ್ತು [[ಕಬಡ್ಡಿ]] ಸೇರಿವೆ.<ref name="Reddy2005">{{cite book |author=P.A. Reddy |title=Sports Promotion In India |url=https://books.google.com/books?id=T37m8eRAEX0C&pg=PA119 |access-date=17 November 2012 |year=2005 |publisher=Discovery Publishing House |isbn=978-8171419272 |pages=31–42}}</ref> ಭಾರತೀಯ ಹಾಕಿ ತಂಡದ ನಾಯಕ [[ಪಿ. ಆರ್. ಶ್ರೀಜೇಶ್]], ಅಗ್ರ ಗೋಲ್ಕೀಪರ್ ಕೇರಳದವರು. ರಾಜ್ಯದ ಅಂತಾರಾಷ್ಟ್ರೀಯ ವಾಕರ್ಸ್ [[ಕೆ. ಟಿ. ಇರ್ಫಾನ್]] ಸೇರಿದ್ದಾರೆ.<ref>{{cite news |last=Irfan |first=KT |title=KT Irfan, World Athletics Championships, Moscow |url=https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |newspaper=NDTV Sports |archive-url=https://web.archive.org/web/20130814035243/https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |archive-date=14 August 2013 |url-status=dead}}</ref>
[[2017 FIFA U-17 ವಿಶ್ವಕಪ್]] [[ಭಾರತ]]ದಲ್ಲಿ, [[ಜವಾಹರಲಾಲ್ ನೆಹರು ಕ್ರೀಡಾಂಗಣ (ಕೊಚ್ಚಿ)]] ಅನ್ನು [[ಭಾರತ]]ದಲ್ಲಿ ಆಟವನ್ನು ಆಯೋಜಿಸುವ ಆರು ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಯಿತು.<ref>{{cite web |url=https://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |archive-url=https://web.archive.org/web/20160308104258/http://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |url-status=dead |archive-date=8 March 2016 |title=FIFA Event at Kochi: Time is Ticking Away |website=The New Indian Express |access-date=3 April 2016}}</ref> [[ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ]]ವು ತಿರುವನಂತಪುರ ನಗರದ ಕಾರಿಯಾವಟ್ಟಂನಲ್ಲಿದೆ, ಇದು ಭಾರತದ ಮೊದಲ DBOT (ವಿನ್ಯಾಸ, ನಿರ್ಮಿಸಿ, ನಿರ್ವಹಿಸಿ ಮತ್ತು ವರ್ಗಾಯಿಸಿ) ಮಾದರಿಯ ಹೊರಾಂಗಣ ಕ್ರೀಡಾಂಗಣವಾಗಿದ್ದು, ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಮತ್ತು [[2015 SAFF ಚಾಂಪಿಯನ್ಶಿಪ್]] ಸೇರಿದಂತೆ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಿದೆ.<ref name="SAFF Cup Dates">{{cite news |last1=Chaudhuri |first1=Arunava |title=Trivandrum will host upcoming SAFF Cup in December 2015/January 2016 |url=http://www.sportskeeda.com/football/trivandrum-will-host-upcoming-saff-cup-in-december-2015january-2016 |access-date=22 December 2015 |work=SportsKeeda |date=2 July 2015}}</ref>
== ಪ್ರವಾಸೋದ್ಯಮ ==
{{Main|ಕೇರಳದಲ್ಲಿ ಪ್ರವಾಸೋದ್ಯಮ}}
ಕೇರಳದ ಸಂಸ್ಕೃತಿ ಮತ್ತು ಸಂಪ್ರದಾಯಗಳು, ಅದರ ವೈವಿಧ್ಯಮಯ [[ಕೇರಳದ ಜನಸಂಖ್ಯಾಶಾಸ್ತ್ರ|ಜನಸಂಖ್ಯಾಶಾಸ್ತ್ರ]]ದೊಂದಿಗೆ, ರಾಜ್ಯವನ್ನು ಭಾರತದಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ. 2012 ರಲ್ಲಿ, [[ನ್ಯಾಷನಲ್ ಜಿಯಾಗ್ರಫಿಕ್|ನ್ಯಾಷನಲ್ ಜಿಯಾಗ್ರಫಿಕ್]] ನ ''[[ನ್ಯಾಷನಲ್ ಜಿಯಾಗ್ರಫಿಕ್ ಟ್ರಾವೆಲರ್|ಟ್ರಾವೆಲರ್]]'' ನಿಯತಕಾಲಿಕೆಯು ಕೇರಳವನ್ನು "ವಿಶ್ವದ ಹತ್ತು ಸ್ವರ್ಗಗಳಲ್ಲಿ" ಒಂದಾಗಿ<ref name="Kerala Tourism">{{cite web |title=Kerala Tourism: Paradises in the world |url=https://www.hindu.com/edu/2004/05/11/stories/2004051100040100.htm |archive-url=https://web.archive.org/web/20040904094648/https://www.hindu.com/edu/2004/05/11/stories/2004051100040100.htm |url-status=dead |archive-date=4 September 2004 |work=[[The Hindu]] |access-date=20 February 2012}}</ref><ref>{{cite web |url=https://www.pravasikairali.com/Homepage.aspx?p=articles&news=447 |archive-url=https://web.archive.org/web/20141108151228/https://www.pravasikairali.com/Homepage.aspx?p=articles&news=447 |archive-date=8 November 2014 |title=Pravasi KairaLi Home |publisher=Pravasikairali.com |url-status=usurped |access-date=11 January 2014}}</ref><ref>{{Cite news |date=7 February 2014 |title=Kerala: A vacation in paradise |work=[[The Times of India]] |url=https://timesofindia.indiatimes.com/kerala-a-vacation-in-paradise/articleshow/26251595.cms |access-date=17 January 2023 |archive-date=25 November 2023 |archive-url=https://web.archive.org/web/20231125190237/https://timesofindia.indiatimes.com/kerala-a-vacation-in-paradise/articleshow/26251595.cms |url-status=live }}</ref> ಮತ್ತು "ಜೀವಮಾನದಲ್ಲಿ ನೋಡಲೇಬೇಕಾದ 50 ಸ್ಥಳಗಳು" ಎಂದು ಹೆಸರಿಸಿತು.<ref name="Kerala India">{{cite web |title=Kerala – The Gateway of India |url=https://forbesindia.com/printcontent/26162 |work=[[Forbes]] |access-date=3 January 2012}}</ref> ''[[ಟ್ರಾವೆಲ್ ಅಂಡ್ ಲೀಷರ್]]'' ಕೂಡ ಕೇರಳವನ್ನು "21 ನೇ ಶತಮಾನದ 100 ಉತ್ತಮ ಪ್ರವಾಸಗಳಲ್ಲಿ ಒಂದು" ಎಂದು ವಿವರಿಸಿದೆ.<ref name="Kerala Tourism" /><ref>{{Cite news |title=Kerala : National Geographic Traveler selects Kerala as 'one of the 50 must-see destinations of a lifetime' |publisher=Travel Portal of India |date=27 January 2009 |access-date=11 June 2011 |url=https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |url-status=dead |archive-url=https://web.archive.org/web/20110904030433/https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |archive-date=4 September 2011}}</ref> 2012 ರಲ್ಲಿ, ಇದು [[ತಾಜ್ ಮಹಲ್]] ಅನ್ನು ಹಿಂದಿಕ್ಕಿ ಭಾರತಕ್ಕಾಗಿ ಗೂಗಲ್ನ ಹುಡುಕಾಟ ಪ್ರವೃತ್ತಿಗಳಲ್ಲಿ ಪ್ರಥಮ ಪ್ರವಾಸಿ ತಾಣವಾಯಿತು.<ref>{{Cite news |title=Kerala beats Taj in Google Search Trends for 2012 |work=Indian Express |date=28 December 2012 |access-date=11 January 2012 |url=https://www.indianexpress.com/news/tourism-kerala-beats-taj-in-google-search-trends-for-2012/1051412}}</ref> [[CNN ಟ್ರಾವೆಲ್]] ತನ್ನ '2019 ರಲ್ಲಿ ಭೇಟಿ ನೀಡಲು 19 ಅತ್ಯುತ್ತಮ ಸ್ಥಳಗಳ' ಪಟ್ಟಿಯಲ್ಲಿ ಕೇರಳವನ್ನು ಸೇರಿಸಿದೆ.<ref>{{Cite web |title=CNN Travel's 19 places to visit in 2019 |url=https://www.cnn.com/travel/article/places-to-visit-2019/index.html |website=CNN Travel |date=22 May 2019 |language=en |access-date=4 April 2022}}</ref> ಕೇರಳವನ್ನು [[Time (magazine)|''TIME'']] ನಿಯತಕಾಲಿಕೆಯು 2022 ರಲ್ಲಿ ತನ್ನ ವಿಶ್ವದ ಅತ್ಯುತ್ತಮ ಸ್ಥಳಗಳ ಪಟ್ಟಿಯಲ್ಲಿ ಅನ್ವೇಷಿಸಲು 50 ಅಸಾಧಾರಣ ಸ್ಥಳಗಳಲ್ಲಿ ಹೆಸರಿಸಿತು.<ref>{{Cite web |url=https://www.indiatoday.in/lifestyle/travel/story/ahmedabad-and-kerala-on-time-magazine-s-list-of-world-s-greatest-places-of-2022-1975386-2022-07-14 |title=Ahmedabad and Kerala on TIME magazine's list of World's Greatest Places of 2022 |website=India Today|date=14 July 2022 }}</ref> 2025 ರಲ್ಲಿ, ಕೇರಳವನ್ನು [[ರಫ್ ಗೈಡ್ಸ್]] ನ '2026 ರ ವಿಶ್ವದ 26 ಪ್ರಮುಖ ಸ್ಥಳಗಳ' ಪಟ್ಟಿಯಲ್ಲಿ 16 ನೇ ಸ್ಥಾನದಲ್ಲಿ ಶ್ರೇಣೀಕರಿಸಲಾಯಿತು, ಇದು ಅಂತಾರಾಷ್ಟ್ರೀಯ ಪ್ರವಾಸ ಮಾರ್ಗದರ್ಶಿಯ ವಾರ್ಷಿಕ ಜಾಗತಿಕ ಸ್ಥಳಗಳ ಶ್ರೇಯಾಂಕದಲ್ಲಿ ಸೇರಿಸಲ್ಪಟ್ಟ ಏಕೈಕ ಭಾರತೀಯ ರಾಜ್ಯವಾಗಿದೆ.<ref>{{Cite news |date=2025-12-27 |title=This is the only Indian state to make it to the list of 'World's Top 26 Destinations For 2026' |url=https://timesofindia.indiatimes.com/life-style/travel/destinations/this-is-the-only-indian-state-to-make-it-to-the-list-of-worlds-top-26-destinations-for-2026/articleshow/126194678.cms |access-date=2025-12-30 |work=The Times of India |issn=0971-8257}}</ref>
ಕೇರಳದ ಬೀಚ್ಗಳು, ಬ್ಯಾಕ್ವಾಟರ್ಗಳು, ಸರೋವರಗಳು, ಪರ್ವತ ಶ್ರೇಣಿಗಳು, ಜಲಪಾತಗಳು, ಪ್ರಾಚೀನ ಬಂದರುಗಳು, ಅರಮನೆಗಳು, ಧಾರ್ಮಿಕ ಸಂಸ್ಥೆಗಳು<ref name="Ltd.2012">{{cite book |author=Infokerala Communications Pvt. Ltd. |title=Kerala Tradition & Fascinating Destinations |url=https://books.google.com/books?id=vTunBAAAQBAJ&pg=PA314 |year=2012 |publisher=Biju Mathew {{!}} Info Kerala Communications Pvt Ltd |isbn=978-8192128481 |page=314}}</ref> ಮತ್ತು ವನ್ಯಜೀವಿ ಅಭಯಾರಣ್ಯಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಗಳಾಗಿವೆ.<ref name="Tripays">{{cite web |url=https://www.tripays.com/kerala-family-tour-packages/ |date=6 August 2011 |title=Kerala Family Tour Packages |author=Admin |access-date=2 July 2019 |archive-date=21 November 2021 |archive-url=https://web.archive.org/web/20211121233843/https://www.tripays.com/kerala-family-tour-packages/ |url-status=dead }}</ref> ಕೊಚ್ಚಿ ನಗರವು ಕೇರಳದಲ್ಲಿ ಒಟ್ಟು ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.<ref name="keralatourism">{{cite web |url=https://www.keralatourism.org/destination-wise-foreign-2010.pdf |date=6 August 2011 |title=Destination Wise Number of Foreign Tourists Visited Kerala During 2010 |author=Saju |access-date=24 September 2014}}</ref><ref name="Tourism Statistics">{{cite web |publisher=Government of Kerala, Tourism Department |url=https://www.keralatourism.org/tourismstatistics/Tourist-Statistics2008.pdf |title=Tourist statistics – 2008 |access-date=22 October 2010}}</ref> 1980 ರ ದಶಕದ ಆರಂಭದವರೆಗೆ, ಕೇರಳವು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಅಪರಿಚಿತ ತಾಣವಾಗಿತ್ತು.<ref name="HinduTourism">{{Cite news |author=Santhanam K |title=An ideal getaway |date=27 January 2002 |access-date=11 November 2007 |url=https://www.hindu.com/thehindu/mag/2002/01/27/stories/2002012700400800.htm |archive-url=https://web.archive.org/web/20030623124553/https://www.hindu.com/thehindu/mag/2002/01/27/stories/2002012700400800.htm |url-status=dead |archive-date=23 June 2003 |work=[[The Hindu]] |location=Chennai, India}}</ref> 1986 ರಲ್ಲಿ ಕೇರಳ ಸರ್ಕಾರವು ಪ್ರವಾಸೋದ್ಯಮವನ್ನು ಪ್ರಮುಖ ಉದ್ಯಮವೆಂದು ಘೋಷಿಸಿತು ಮತ್ತು ಅದನ್ನು ಹಾಗೆ ಮಾಡಿದ ಭಾರತದ ಮೊದಲ ರಾಜ್ಯವಾಗಿದೆ.<ref name="Kerala Tourism"/> [[ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ]], ರಾಜ್ಯದ ಪ್ರವಾಸೋದ್ಯಮ ನಿರೀಕ್ಷೆಗಳನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಂಸ್ಥೆ, ಪ್ರಾರಂಭಿಸಿದ ಮಾರ್ಕೆಟಿಂಗ್ ಅಭಿಯಾನಗಳು ಪ್ರವಾಸೋದ್ಯಮ ಉದ್ಯಮದ ಬೆಳವಣಿಗೆಗೆ ಕಾರಣವಾಯಿತು.<ref name="Tourism">{{cite book |title=Tourism Marketing |author=Dasgupta Devashish |publisher=Pearson Education India |year=2011 |isbn=978-8131731826 |page=203 |url=https://books.google.com/books?id=oXWAEjcG-FsC |access-date=30 May 2015}}</ref> ಅನೇಕ ಜಾಹೀರಾತುಗಳು ಕೇರಳವನ್ನು ''[[ಗಾಡ್ಸ್ ಓನ್ ಕಂಟ್ರಿ|ಕೇರಳ, ಗಾಡ್ಸ್ ಓನ್ ಕಂಟ್ರಿ]]'' ಎಂಬ ಸ್ಲೋಗನ್ನೊಂದಿಗೆ ಬ್ರಾಂಡ್ ಮಾಡಿದವು.<ref name="Tourism" /> ಕೇರಳ ಪ್ರವಾಸೋದ್ಯಮವು ಜಾಗತಿಕ ಬ್ರ್ಯಾಂಡ್ ಆಗಿದ್ದು, ಅತಿ ಹೆಚ್ಚು ನೆನಪಿನ ಶಕ್ತಿಯನ್ನು ಹೊಂದಿರುವ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref name="Tourism" /> 2006 ರಲ್ಲಿ, ಕೇರಳವು 8.5 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿತು, ಇದು ಹಿಂದಿನ ವರ್ಷಕ್ಕಿಂತ 23.7% ರಷ್ಟು ಹೆಚ್ಚಳವಾಗಿದೆ, ಇದು ರಾಜ್ಯವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜನಪ್ರಿಯ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ.<ref>{{cite web |title=Tourist Statistics – 2006 |work=Department of Tourism |publisher=Government of Kerala |year=2006 |access-date=11 November 2007 |url=https://www.keralatourism.org/php/media/data/tourismstatistics/TS2006.pdf |archive-url=https://web.archive.org/web/20080626195845/https://www.keralatourism.org/php/media/data/tourismstatistics/TS2006.pdf |archive-date=26 June 2008}}</ref> 2011 ರಲ್ಲಿ, ಕೇರಳಕ್ಕೆ ಪ್ರವಾಸಿಗರ ಒಳಹರಿವು 10-ಮಿಲಿಯನ್ ಗಡಿಯನ್ನು ದಾಟಿತು.<ref name="bizstd">{{Cite news |title=Tourist inflow to Kerala crosses 10 million mark |work=Business-Standard |access-date=15 November 2015 |url=https://www.business-standard.com/india/news/tourist-inflow-to-kerala-crosses-10-million-mark/474524/ |date=16 May 2012 |last1=Joseph |first1=George}}</ref>
ಆಯುರ್ವೇದ ಪ್ರವಾಸೋದ್ಯಮವು 1990 ರ ದಶಕದಿಂದಲೂ ಬಹಳ ಜನಪ್ರಿಯವಾಗಿದೆ, ಮತ್ತು ಖಾಸಗಿ ಸಂಸ್ಥೆಗಳು ಪ್ರವಾಸೋದ್ಯಮ ಇಲಾಖೆಯ ಉಪಕ್ರಮಗಳೊಂದಿಗೆ ಗಮನಾರ್ಹ ಪಾತ್ರವನ್ನು ವಹಿಸಿವೆ.<ref name="HinduTourism" /> ಕೇರಳವು ತನ್ನ [[ಪರಿಸರ ಪ್ರವಾಸೋದ್ಯಮ]] ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ, ಇವುಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಪರ್ವತಾರೋಹಣ, ಟ್ರೆಕ್ಕಿಂಗ್ ಮತ್ತು ಪಕ್ಷಿ ವೀಕ್ಷಣಾ ಕಾರ್ಯಕ್ರಮಗಳು ಪ್ರಮುಖ ಚಟುವಟಿಕೆಗಳಾಗಿವೆ.<ref name="Devrep47">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=47 |access-date=30 May 2015}}</ref> ರಾಜ್ಯದ ಪ್ರವಾಸೋದ್ಯಮ ಉದ್ಯಮವು [[ಕೇರಳದ ಆರ್ಥಿಕತೆ|ರಾಜ್ಯದ ಆರ್ಥಿಕತೆಗೆ]] ಪ್ರಮುಖ ಕೊಡುಗೆಯಾಗಿದೆ, 13.3% ದರದಲ್ಲಿ ಬೆಳೆಯುತ್ತಿದೆ.<ref>{{cite web |title=Tourist Statistics – 2005 (Provisional) |work=Department of Tourism |publisher=Government of Kerala |year=2005 |access-date=11 November 2007 |url=https://www.keralatourism.org/php/media/data/tourismstatistics/TOURISTSTATISTICS2005.pdf |archive-url=https://web.archive.org/web/20080626195846/https://www.keralatourism.org/php/media/data/tourismstatistics/TOURISTSTATISTICS2005.pdf |archive-date=26 June 2008}}</ref> ಪ್ರವಾಸೋದ್ಯಮದಿಂದ ಬರುವ ಆದಾಯವು 2001 ಮತ್ತು 2011 ರ ನಡುವೆ ಐದು ಪಟ್ಟು ಹೆಚ್ಚಾಗಿ 2011 ರಲ್ಲಿ {{INR}} 190 ಬಿಲಿಯನ್ ಗಡಿಯನ್ನು ದಾಟಿತು. ಎಕನಾಮಿಕ್ ಟೈಮ್ಸ್ ಪ್ರಕಾರ<ref>{{Cite news |url=https://economictimes.indiatimes.com/industry/services/travel/kerala-records-6-rise-in-tourist-arrivals-despite-floods-and-nipah-virus-scare/articleshow/67995390.cms |title=Kerala records 6% rise in tourist arrivals despite floods and Nipah virus scare |date=14 February 2019 |work=The Economic Times |access-date=14 August 2019}}</ref> ಕೇರಳವು 2018 ರಲ್ಲಿ ಪ್ರವಾಸೋದ್ಯಮ ವಲಯದಿಂದ INR 365280.1 ಮಿಲಿಯನ್ ದಾಖಲೆಯ ಆದಾಯವನ್ನು ಗಳಿಸಿತು, ಇದು ಹಿಂದಿನ ವರ್ಷಕ್ಕಿಂತ Rs 28743.3 ಮಿಲಿಯನ್ ಹೆಚ್ಚಳವಾಗಿದೆ. 2018 ರಲ್ಲಿ 16.7 ಮಿಲಿಯನ್ ಕ್ಕೂ ಹೆಚ್ಚು ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡಿದ್ದಾರೆ, ಇದು ಹಿಂದಿನ ವರ್ಷ 15.76 ಮಿಲಿಯನ್ ಗೆ ಹೋಲಿಸಿದರೆ 5.9% ರಷ್ಟು ಹೆಚ್ಚಳವಾಗಿದೆ. ಈ ಉದ್ಯಮವು ಸರಿಸುಮಾರು 1.2 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ.<ref name="bizstd" />
ರಾಜ್ಯದ ಏಕೈಕ ಡ್ರೈವ್-ಇನ್ ಬೀಚ್, ಕಣ್ಣೂರಿನ [[ಮುಝಪ್ಪಿಲಂಗಡ್ ಬೀಚ್]], ಇದು {{convert|5|km}} ಮರಳಿನಲ್ಲಿ ಹರಡಿದೆ, ಇದನ್ನು ಬಿಬಿಸಿ 2016 ರಲ್ಲಿ ವಿಶ್ವದ ಆರು ಪ್ರಮುಖ ಡ್ರೈವ್-ಇನ್ ಬೀಚ್ಗಳಲ್ಲಿ ಒಂದಾಗಿ ಆಯ್ಕೆ ಮಾಡಿತು.<ref>{{cite web |url=https://www.bbc.com/autos/story/20160617-the-worlds-best-beaches-for-driving |title=The best beaches for driving |first=David K. |last=Gibson |work=BBC Autos |date=11 June 2021}}</ref> [[ಇಡುಕ್ಕಿ ಅಣೆಕಟ್ಟು]], ವಿಶ್ವದ ಎರಡನೇ ಕಮಾನು ಅಣೆಕಟ್ಟು, ಮತ್ತು ಏಷ್ಯಾದ ಮೊದಲನೆಯದು [[ಇಡುಕ್ಕಿ|ಇಡುಕ್ಕಿಯಲ್ಲಿದೆ]]. ಪ್ರಮುಖ ಬೀಚ್ಗಳು [[ಕೋವಳಂ]], [[ವರ್ಕಲ]], [[ಕೋಝಿಕೋಡ್]], [[ಫೋರ್ಟ್ ಕೊಚ್ಚಿ]], [[ಚೇರಾಯಿ]], [[ಆಲಪ್ಪುಳ]], [[ಪೊನ್ನಾನಿ]], [[ಕಡಲುಂಡಿ]], [[ತಾನೂರು, ಮಲಪ್ಪುರಂ|ತಾನೂರು]], [[ಚಾಲಿಯಂ]], [[ಪಾಯ್ಯಂಬಲಂ]], ಕಪ್ಪಾಡ್, [[ಮುಝಪ್ಪಿಲಂಗಡ್ ಬೀಚ್|ಮುಝಪ್ಪಿಲಂಗಡ್]] ಮತ್ತು [[ಬೇಕಲ್]]. ಜನಪ್ರಿಯ [[ಬೆಟ್ಟದ ತಾಣ]]ಗಳೆಂದರೆ [[ಪೊನ್ಮುಡಿ]], [[ವಯನಾಡು]], [[ವಗಮನ್]], [[ಮುನ್ನಾರ್]], [[ಪೀರ್ಮೇಡ್]], [[ರಾಮಕ್ಕಲ್ಮೇಡು]], [[ಅರಿಂಬ್ರ ಬೆಟ್ಟಗಳು, ಮಲಪ್ಪುರಂ|ಅರಿಂಬ್ರ]], [[ಪೈತಲ್ಮಲ]] [[ಇಡುಕ್ಕಿ|ಕಣ್ಣೂರು]] ಜಿಲ್ಲೆಯ, [[ಕೊಡಿಕುತಿಮಲ]], ಮತ್ತು [[ನೆಲ್ಲಿಯಂಪತಿ]].<ref>{{cite book |author=Tapan K Panda |title=Tourism Marketing |publisher=ICFAI Books |year=2007 |isbn=978-8131404690 |url=https://books.google.com/books?id=4A0j6ZlJQfkC |pages=173–77 |access-date=30 May 2015}}</ref> ಮುನ್ನಾರ್ ಸಮುದ್ರ ಮಟ್ಟದಿಂದ 4,500 ಅಡಿ ಎತ್ತರದಲ್ಲಿದೆ ಮತ್ತು ಚಹಾ ತೋಟಗಳು ಮತ್ತು ವಿವಿಧ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ.<ref name="FPJ">{{cite news |title=Kerala: Spellbound by this natural beauty |newspaper=The Free Press Journal |url=https://www.freepressjournal.in/travel/kerala-spellbound-by-this-natural-beauty/636904 |date=2 August 2015 |access-date=27 November 2015}}</ref> ಕೇರಳದ ಪರಿಸರ ಪ್ರವಾಸೋದ್ಯಮ ತಾಣಗಳು 12 ವನ್ಯಜೀವಿ ಅಭಯಾರಣ್ಯಗಳು ಮತ್ತು ಎರಡು ರಾಷ್ಟ್ರೀಯ ಉದ್ಯಾನವನಗಳನ್ನು ಒಳಗೊಂಡಿವೆ: [[ಪೆರಿಯಾರ್ ಹುಲಿ ಮೀಸಲು]], [[ಪರಂಬಿಕುಳಂ ವನ್ಯಜೀವಿ ಅಭಯಾರಣ್ಯ]], [[ಚಿನ್ನಾರ್ ವನ್ಯಜೀವಿ ಅಭಯಾರಣ್ಯ]], [[ಥಟ್ಟೆಕ್ಕಾಡ್ ಪಕ್ಷಿ ಅಭಯಾರಣ್ಯ]], [[ವಯನಾಡು ವನ್ಯಜೀವಿ ಅಭಯಾರಣ್ಯ]], [[ಕಡಲುಂಡಿ ಪಕ್ಷಿ ಅಭಯಾರಣ್ಯ]], [[ಕರಿಂಪುಳ ವನ್ಯಜೀವಿ ಅಭಯಾರಣ್ಯ]], [[ಮುತ್ತಂಗ]] ವನ್ಯಜೀವಿ ಅಭಯಾರಣ್ಯ, [[ಅರಳಂ ವನ್ಯಜೀವಿ ಅಭಯಾರಣ್ಯ]], [[ಎರವಿಕುಳಂ ರಾಷ್ಟ್ರೀಯ ಉದ್ಯಾನವನ]], ಮತ್ತು [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]] ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ.<ref>{{cite book |author=M.R. Biju |title=Sustainable Dimensions Of Tourism Management |publisher=Mittal Publications |year=2006 |isbn=978-8183241298 |url=https://books.google.com/books?id=AkAdvTbg0dEC |pages=151–65 |access-date=30 May 2015}}</ref> ಕೇರಳ ಬ್ಯಾಕ್ವಾಟರ್ಗಳು ಅಂತರ್ಸಂಪರ್ಕಿತ ನದಿಗಳ (41 ಪಶ್ಚಿಮಕ್ಕೆ ಹರಿಯುವ ನದಿಗಳು), ಸರೋವರಗಳು ಮತ್ತು ಕಾಲುವೆಗಳ ವ್ಯಾಪಕ ಜಾಲವಾಗಿದ್ದು, ಇದು ಆಲಪ್ಪುಳ, [[ಕುಮಾರಕೋಂ]], [[ಪೊನ್ನಾನಿ]], [[ನೀಲೇಶ್ವರಂ]], ಮತ್ತು [[ಪುನ್ನಮದ]] (ಅಲ್ಲಿ ವಾರ್ಷಿಕ ನೆಹರು ಟ್ರೋಫಿ ದೋಣಿ ಪಂದ್ಯವನ್ನು ಆಗಸ್ಟ್ನಲ್ಲಿ ನಡೆಸಲಾಗುತ್ತದೆ), [[ಪತ್ತಿರಮಣಲ್]] [[ಮುಹಮ್ಮ]] ದಲ್ಲಿನ ಸಣ್ಣ ದ್ವೀಪವನ್ನು ಕೇಂದ್ರೀಕರಿಸುತ್ತದೆ. [[ಪದ್ಮನಾಭಪುರಂ ಅರಮನೆ]] ಮತ್ತು [[ಮತ್ತಂಚೇರಿ ಅರಮನೆ]] ಎರಡು ಸಮೀಪದ ಪರಂಪರೆಯ ತಾಣಗಳಾಗಿವೆ.<ref>{{cite web |url=https://www.keralatourism.org/destination/padmanabhapuram-palace/244 |title=Padmanabhapuram Palace |publisher=Kerala Tourism |access-date=2 December 2016}}</ref><ref>{{cite web |url=https://www.keralatourism.org/destination/mattancherry-palace-kochi/178 |title=Mattancherry Palace |publisher=Kerala Tourism |access-date=2 December 2016}}</ref>
== ಸಹ ನೋಡಿ ==
{{stack|{{Portal|ಭಾರತ}}}}
* [[ಕೇರಳದ ರೂಪರೇಖೆ]]
* [[ದಕ್ಷಿಣ ಭಾರತ]]
* [[ದ್ರಾವಿಡರು]]
* [[ಕೇರಳದ ನಗರ ನಿಗಮಗಳ ಪಟ್ಟಿ]]
* [[ಕೇರಳದ ತಾಲೂಕುಗಳ ಪಟ್ಟಿ]]
* [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ]]
* [[ಕೇರಳದ ಜಿಲ್ಲೆಗಳ ಪಟ್ಟಿ]]
* [[ಕೇರಳದ ಆದಾಯ ವಿಭಾಗಗಳ ಪಟ್ಟಿ]]
* [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]]
== ಉಲ್ಲೇಖಗಳು ==
{{Reflist}}
==ಟಿಪ್ಪಣಿಗಳು==
{{notelist}}
=== ಮೂಲಗಳು ===
{{refbegin}}
* {{cite book |title=Mathrubhumi Yearbook Plus – 2019 |publisher=Mathrubhumi Printing & Publishing Company Limited |year=2018 |location=[[Kozhikode]] |editor-last=Chandran |editor-first=V. P. |id={{ASIN|8182676444 |country=in}} |language=Malayalam }}
{{refend}}
== ಹೆಚ್ಚಿನ ಓದುವಿಕೆ ==
{{Further|ಕೇರಳದ ಇತಿಹಾಸ#ಹೆಚ್ಚಿನ ಓದುವಿಕೆ}}
* Bose, Satheese Chandra and Varughese, Shiju Sam (eds.) 2015. ''[https://web.archive.org/web/20150102071757/https://www.orientblackswan.com/display.asp?categoryID=0&isbn=978-8125057222 Kerala Modernity: Ideas, Spaces and Practices in Transition]''. Hyderabad: Orient Blackswan.
* {{cite journal |pmc=7510531 |year=2021 |last1=Chathukulam |first1=Jos |last2=Tharamangalam |first2=Joseph |title=The Kerala model in the time of COVID19: Rethinking state, society and democracy |journal=World Development |volume=137 |article-number=105207 |doi=10.1016/j.worlddev.2020.105207 |pmid=32989341}}
* {{cite journal |url=https://journals.sagepub.com/doi/abs/10.1177/0971521516656077 |doi=10.1177/0971521516656077 |title=The 'Kudumbashree Woman' and the Kerala Model Woman: Women and Politics in Contemporary Kerala |year=2016 |last1=Devika |first1=J. |journal=Indian Journal of Gender Studies |volume=23 |issue=3 |pages=393–414 |s2cid=151752480|url-access=subscription }}
* {{cite journal |url=https://openresearch-repository.anu.edu.au/bitstream/1885/19062/2/01_Jeffrey_Legacies_of_Matriliny%3A__the_2005.pdf |jstor=40023536 |title=Legacies of Matriliny: The Place of Women and the "Kerala Model" |last1=Jeffrey |first1=Robin |journal=Pacific Affairs |year=2004 |volume=77 |issue=4 |pages=647–664}}
* {{cite journal |url=http://keralamediaacademy.org/wp-content/uploads/2015/02/Robin-Jeffery.pdf |doi=10.1017/S0021911809000679 |s2cid=146795894 |title=Testing Concepts about Print, Newspapers, and Politics: Kerala, India, 1800–2009 |year=2009 |last1=Jeffrey |first1=Robin |journal=The Journal of Asian Studies |volume=68 |issue=2 |page=465}}
* {{cite book |title=Politics, Women and Well-Being: How Kerala became 'a Model' |isbn=978-1-349-12252-3 |last1=Jeffrey |first1=Robin |date=27 July 2016 |publisher=Springer}}
* {{cite book |last1=Ramanathaiyer |first1=Sundar |first2=Stewart |last2=MacPherson |title=Social Development in Kerala: Illusion or Reality? |edition=2nd |publisher=Routledge |year=2018}}
== ಬಾಹ್ಯ ಕೊಂಡಿಗಳು ==
{{Sister project links|voy=Kerala|Kerala}}
; ಸರ್ಕಾರ
* {{official website|https://www.kerala.gov.in/}} {{Webarchive|url=https://web.archive.org/web/20060118031516/https://www.kerala.gov.in/ |date=18 January 2006 }} ಕೇರಳ ಸರ್ಕಾರದ
* {{official website|https://www.keralatourism.org/}} ಕೇರಳ ಪ್ರವಾಸೋದ್ಯಮದ
; ಸಾಮಾನ್ಯ ಮಾಹಿತಿ
* {{OSM relation|2018151}}
{{Clear}}
{{Kerala |show=show }}
[[ವರ್ಗ:ಕೇರಳ| ]]
[[ವರ್ಗ:ದಕ್ಷಿಣ ಭಾರತ|.]]
[[ವರ್ಗ:1956 ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರದೇಶಗಳು]]
[[ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
6vfznyy7bah5oyi34bmufor38nz3lce
1378288
1378285
2026-08-03T08:21:09Z
A826
72368
/* ರಸ್ತೆಗಳು */
1378288
wikitext
text/x-wiki
{{databox}}
{{Infobox Indian state or territory
| name = ಕೇರಳ
| official_name =
| type = ರಾಜ್ಯ
| image_seal = Government of Kerala Logo.svg{{!}}class=skin-invert
| image_skyline = <!-- Do not add additional pictures here without discussion, per consensus [[Talk:Kerala/Archive_6#Infobox montage]]--> Boathouse (7063399547).jpg
| image_caption = [[ಕೇರಳದ ಬ್ಯಾಕ್ವಾಟರ್ಗಳು|ಕೇರಳದ ಬ್ಯಾಕ್ವಾಟರ್ಗಳಲ್ಲಿ]] ಒಂದು [[ಹೌಸ್ ಬೋಟ್]]
| nickname = "[[ಗಾಡ್ಸ್ ಓನ್ ಕಂಟ್ರಿ#ಕೇರಳ|ದೇವರ ಸ್ವಂತ ನಾಡು]]"
| image_map = IN-KL.svg
| coordinates = {{coord|10.0|N|76.3|E|region:IN-KL|display=inline,title}}
| region = ದಕ್ಷಿಣ ಭಾರತ
| before_was = [[ತಿರುವಾಂಕೂರು-ಕೊಚ್ಚಿ]]<br>[[ಮಲಬಾರ್ ಜಿಲ್ಲೆ]]<br>[[ದಕ್ಷಿಣ ಕನ್ನಡ]]
| formation_date4 = 1 ನವೆಂಬರ್ 1956
| capital = ತಿರುವನಂತಪುರ
| districts = [[ಕೇರಳದ ಜಿಲ್ಲೆಗಳ ಪಟ್ಟಿ|14]]
| governor = [[ರಾಜೇಂದ್ರ ಅರ್ಲೇಕರ್]]
| chief_minister = [[ವಿ. ಡಿ. ಸತೀಶನ್]]
| party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
| judiciary = [[ಕೇರಳ ಉಚ್ಚ ನ್ಯಾಯಾಲಯ]]
| chief_secretary = ಬಿಶ್ವನಾಥ್ ಸಿನ್ಹಾ I.A.S.
| legislature_type = ಏಕಸಭಾ
| assembly = [[ಕೇರಳ ವಿಧಾನಸಭೆ]]
| assembly_seats = 140 ಸ್ಥಾನಗಳು
| rajya_sabha_seats = 9 ಸ್ಥಾನಗಳು
| lok_sabha_seats = 20 ಸ್ಥಾನಗಳು
| area_total_km2 = 38863
| area_footnotes = <ref>{{Cite web |title=About Kerala
|url=https://kerala.gov.in/subdetail/NTM1ODMxNzQuNDg=/MjA0ODc2ODQuMzY= |access-date=10 March 2025 |language=en-US }}</ref>
| area_rank = 21ನೇ
| length_km = 560
| width_km = 70
| elevation_footnotes = <ref>{{Cite web |title=Kerala Physiography {{!}} Geographical location {{!}} Kerala {{!}} Kerala |url=https://kerala.me/geography |access-date=24 March 2023 |language=en-US |archive-date=24 March 2023 |archive-url=https://web.archive.org/web/20230324220056/https://kerala.me/geography |url-status=live }}</ref>
| elevation_m = 900
| elevation_max_m = 2,695
| elevation_max_point = [[ಅನಮುಡಿ]]<ref>{{Cite web |title=Anamudi – Peakbagger.com |url=https://www.peakbagger.com/peak.aspx?pid=10664 |access-date=24 March 2023 |website=www.peakbagger.com |archive-date=24 March 2023 |archive-url=https://web.archive.org/web/20230324210042/https://www.peakbagger.com/peak.aspx?pid=10664 |url-status=live }}</ref>
| elevation_min_m = −2.7
| elevation_min_point = [[ಕುಟ್ಟನಾಡು]]<ref>{{Cite web |title=Kuttanadan.com : Explore the Rice Bowl of Kerala |url=https://kuttanadan.com/ |access-date=24 March 2023 |website=Kuttanadan Website |language=en-US |archive-date=24 March 2023 |archive-url=https://web.archive.org/web/20230324210043/https://kuttanadan.com/ |url-status=live }}</ref>
| population_footnotes = <ref>{{cite book | url=https://ruralindiaonline.org/en/library/resource/population-projections-for-india-and-states-2011-2036/ | title=Population Projections for India and States, 2011–2036 | date=July 2020 | access-date=25 March 2023 | archive-date=13 March 2023 | archive-url=https://web.archive.org/web/20230313055356/https://ruralindiaonline.org/en/library/resource/population-projections-for-india-and-states-2011-2036/ | url-status=live }}</ref>
| population_total = 36,111,000
| population_as_of = 2025
| population_rank = 13ನೇ
| population_urban = 79.42%
| population_rural = 20.58%
| population_density = 890
| population_demonym = [[ಕೇರಳೀಯ]],<ref>{{Cite web|url=https://www.theguardian.com/world/2026/feb/25/india-state-kerala-to-be-renamed-keralam-malayalam-language|title=Indian state of Kerala to be renamed Keralam to reflect local pronunciation|first=Penelope|last=MacRae|work=The Guardian |date=25 February 2026}}</ref> [[ಮಲಯಾಳಿಗಳು|ಮಲಯಾಳಿ]]
| official_langs = [[ಮಲಯಾಳಂ]]<ref name="OfficialLang">{{cite web |url=https://prsindia.org/files/bills_acts/acts_states/kerala/2026/Act3of2026KL.pdf |title=The Malayalam Language Act, 2025 |publisher=prsindia.org |date=5 March 2026 |access-date=22 April 2026 }}</ref>
| GDP_footnotes = <ref name="MOSPI">{{cite web|url=http://mospi.nic.in/sites/default/files/press_releases_statements/State_wise_SDP_15_03_2021.xls|title=MOSPI State Domestic Product, Ministry of Statistics and Programme Implementation, Government of India|date=15 March 2021|accessdate=28 March 2021}}</ref>
| GDP_total = {{Increase}} $167.90 billion (nominal)<br/>{{Increase}} $707.26 billion (PPP)
| GDP_year = 2025-26
| GDP_rank = 11ನೇ
| GDP_per_capita = {{Increase}} {{INRConvert|317723|lk=r}} (nominal)<br/>{{Increase}} $19,586 (PPP)
| GDP_per_capita_rank = 11ನೇ
| HDI = {{Increase}} 0.804 {{colour|#090|ಅತಿ ಹೆಚ್ಚು}}<ref name="UNDP">{{cite report|title=Subnational HDI|url=https://globaldatalab.org/shdi/table/shdi/IND/?levels=1+4&interpolation=0&extrapolation=0|access-date=1 April 2026|work=Global Data Lab, [[United Nations Development Programme]]}}</ref>
| HDI_year = 2023
| HDI_rank = 2ನೇ
| literacy = 95.3%<ref>{{Cite book |url=https://www.mospi.gov.in/sites/default/files/publication_reports/AnnualReport_PLFS2023-24L2.pdf |title=Annual Report, Periodic Labour Force Survey (PLFS) (July 2023 – June 2024) |date=23 September 2024 |publisher=National Sample Survey Office, Ministry of Statistics and Programme Implementation, Government of India |pages=A-10 |chapter=Appendix-A: Detailed tables, Table (7): Literacy rate (in per cent) of persons of different age groups for each State/UT (persons, age-group (years): 7 & above, rural+urban (column 6))}}</ref>
| literacy_year = 2024
| literacy_rank = 4ನೇ
| sex_ratio = 1084[[female|♀]]/1000 [[male|♂]]<ref name="pc-census2011" />
| sexratio_year = 2025
| sexratio_rank = 17ನೇ
| iso_code = IN-KL
| registration_plate = KL
| website = kerala.gov.in
| foundation_day = 1 ನವೆಂಬರ್
| mammal = [[ಭಾರತೀಯ ಆನೆ]]<ref name="ENVIS">{{Cite web |date=1 December 2017 |title=State Symbols of India |url=http://wiienvis.nic.in/KidsCentre/state_symbols_india_8411.aspx |archive-url=https://web.archive.org/web/20210415100206/http://wiienvis.nic.in/KidsCentre/state_symbols_india_8411.aspx |archive-date=15 April 2021 |access-date=3 June 2022 |publisher=ENVIS Centre on Wildlife & Protected Areas}}</ref>
| bird = [[ಮಹಾಶಿಖಿ]]<ref name="ENVIS" />
| fish = [[ಗ್ರೀನ್ ಕ್ರೋಮೈಡ್]]
| butterfly = [[ಪಾಪಿಲಿಯೋ ಬುದ್ಧ]]<ref>{{Cite news |last=Jacob |first=Aneesh |title='Budha Mayoori' to be named Kerala's state butterfly |language=en |work=Mathrubhumi |url=https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |url-status=dead |access-date=30 March 2019 |archive-url=https://web.archive.org/web/20190330094056/https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |archive-date=30 March 2019}}</ref>
| flower = [[ಕಸ್ಸಿಯಾ ಫಿಸ್ಟುಲಾ|ಸ್ವರ್ಣ ಮರ]]<ref name="ENVIS" />
| tree = [[ತೆಂಗಿನ]] ಮರ<ref name="ENVIS" />
| fruit = [[ಹಲಸು]]<ref>{{Cite news |date=17 March 2018 |title=Jackfruit to be Kerala's state fruit; declaration on March 21 |work=[[The Indian Express]] |agency=[[Press Trust of India|PTI]] |url=https://indianexpress.com/article/india/jackfruit-to-be-keralas-state-fruit-declaration-on-march-21-5101170/ |access-date=22 March 2018 |archive-date=22 March 2018 |archive-url=https://web.archive.org/web/20180322144926/http://indianexpress.com/article/india/jackfruit-to-be-keralas-state-fruit-declaration-on-march-21-5101170/ |url-status=live }}</ref>
| image_highway = SH IN-KL.png
| sh_numbers = [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|SH KL1 – SH KL79]]
}}
'''ಕೇರಳ'''{{efn|[[ಭಾರತೀಯ ಇಂಗ್ಲಿಷ್]]: [[Help:IPA/English|/ˈkɛrələ/]] {{audio|Kerala (English Pronunciation).ogg| }}, {{respell|KERR|ə|lə}} <br/> {{IPA|ml|ˈkeːɾɐɭɐm|lang|Ml-Keralam.ogg}} ''[[ISO 15919|ಕೇರಳಂ]]''}} [[ದಕ್ಷಿಣ ಭಾರತ]]ದ [[ಮಲಬಾರ್ ಕರಾವಳಿ]]ಯಲ್ಲಿರುವ ಒಂದು [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]ವಾಗಿದೆ. ಇದನ್ನು 1 ನವೆಂಬರ್ 1956 ರಂದು [[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ರಚಿಸಲಾಯಿತು, ಇದು ದೇಶದ [[ಮಲಯಾಳಂ]] ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿ ಏಕೀಕರಿಸಿತು. {{cvt|38863|km2|sqmi|0}} ವ್ಯಾಪಿಸಿರುವ ಕೇರಳವು ಪ್ರಾಥಮಿಕವಾಗಿ [[ಪಶ್ಚಿಮ ಘಟ್ಟಗಳು]] ಮತ್ತು [[ಲಕ್ಷದ್ವೀಪ ಸಮುದ್ರ]]ದ ನಡುವೆ ಸ್ಯಾಂಡ್ವಿಚ್ ಆಗಿರುವ [[ಪಶ್ಚಿಮ ಕರಾವಳಿ ಬಯಲು|ಕರಾವಳಿ ಬಯಲು]]ಗಳ ಪಟ್ಟಿಯಾಗಿದ್ದು, ಈಶಾನ್ಯಕ್ಕೆ [[ಕರ್ನಾಟಕ]], ಪೂರ್ವಕ್ಕೆ [[ತಮಿಳುನಾಡು]] ಮತ್ತು ಪಶ್ಚಿಮ ಸಮೀಪದಲ್ಲಿ [[ಲಕ್ಷದ್ವೀಪ]] ದ್ವೀಪಗಳಿಂದ ಸುತ್ತುವರೆದಿದೆ. [[2011 ರ ಭಾರತದ ಜನಗಣತಿ|2011 ರ ಜನಗಣತಿಯ]] ಪ್ರಕಾರ 33 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಕೇರಳವು ಭಾರತದ [[ಜನಸಂಖ್ಯೆಯ ಪ್ರಕಾರ ಭಾರತದ ರಾಜ್ಯಗಳ ಪಟ್ಟಿ|13 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ]]. [[ತಿರುವನಂತಪುರ]]ವು ರಾಜಧಾನಿ ನಗರವಾಗಿದ್ದರೆ [[ಕೊಚ್ಚಿ ಮಹಾನಗರ ಪ್ರದೇಶ]]ವು ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶವಾಗಿದೆ. ಮಲಯಾಳಂ ಅತಿ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದ್ದು, ಇಂಗ್ಲಿಷ್ ಜೊತೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ.
ಕೇರಳವು 3000 [[ಸಾಮಾನ್ಯ ಯುಗ|BCE]] ಯಿಂದಲೂ ಮಸಾಲೆಗಳ ಪ್ರಮುಖ ರಫ್ತುದಾರನಾಗಿದೆ. [[ಚೇರ ಸಾಮ್ರಾಜ್ಯ|ಚೇರ]] ರಾಜವಂಶವು, ಈ ಪ್ರದೇಶದ ಮೊದಲ ಪ್ರಮುಖ ಸಾಮ್ರಾಜ್ಯವು, ಸಮುದ್ರ ವಾಣಿಜ್ಯದ ಮೂಲಕ ಪ್ರಾಮುಖ್ಯತೆಗೆ ಏರಿತು ಆದರೆ ಆಗಾಗ್ಗೆ ನೆರೆಯ [[ಚೋಳ]] ಮತ್ತು [[ಪಾಂಡ್ಯ]] ರಾಜವಂಶಗಳ ದಾಳಿಗಳನ್ನು ಎದುರಿಸಿತು. 15 ನೇ ಶತಮಾನದಲ್ಲಿ, ಮಸಾಲೆ ವ್ಯಾಪಾರವು ಪೋರ್ಚುಗೀಸ್ ವ್ಯಾಪಾರಿಗಳನ್ನು ಕೇರಳಕ್ಕೆ ಆಕರ್ಷಿಸಿತು, ಇದು ಭಾರತದಲ್ಲಿ [[ವಸಾಹತುಶಾಹಿ ಭಾರತ|ಯುರೋಪಿಯನ್ ವಸಾಹತುಶಾಹಿಯನ್ನು]] ಪ್ರಾರಂಭಿಸಿತು. [[ಭಾರತೀಯ ಸ್ವಾತಂತ್ರ್ಯ ಚಳುವಳಿ|1947 ರಲ್ಲಿ ಭಾರತದ ಸ್ವಾತಂತ್ರ್ಯದ]] ನಂತರ, [[ತಿರುವಾಂಕೂರು]] ಮತ್ತು [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿ]] ಸಾಮ್ರಾಜ್ಯಗಳು ಹೊಸದಾಗಿ ರೂಪುಗೊಂಡ ಗಣರಾಜ್ಯಕ್ಕೆ ಸೇರಿಕೊಂಡವು ಮತ್ತು 1949 ರಲ್ಲಿ [[ತಿರುವಾಂಕೂರು-ಕೊಚ್ಚಿ]] ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. 1956 ರಲ್ಲಿ, ಆಧುನಿಕ ಕೇರಳ ರಾಜ್ಯವನ್ನು ಹಿಂದಿನ [[ಮದ್ರಾಸ್ ರಾಜ್ಯ]]ದೊಂದಿಗೆ ಪರಿಧಿಯ ಪ್ರದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸ್ಥಾಪಿಸಲಾಯಿತು; [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡ ಜಿಲ್ಲೆಯ]] [[ಕಾಸರಗೋಡು]] ತಾಲೂಕನ್ನು ಕೇರಳವನ್ನು ರೂಪಿಸಲು ತಿರುವಾಂಕೂರು-ಕೊಚ್ಚಿಯೊಂದಿಗೆ ವಿಲೀನಗೊಳಿಸಲಾಯಿತು, ಆದರೆ [[ಕನ್ಯಾಕುಮಾರಿ ಜಿಲ್ಲೆ]] ಮತ್ತು [[ಶೆಂಕೋಟ್ಟೈ ತಾಲೂಕಿನ]] ಭಾಗಗಳನ್ನು ಮದ್ರಾಸ್ ರಾಜ್ಯಕ್ಕೆ ಸೇರಿಸಲಾಯಿತು. ಕೇರಳವು 1984 ರಿಂದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಒಳಗೊಂಡಿದೆ.
ಕೇರಳವು ಅತ್ಯಧಿಕ [[ಮಾನವ ಅಭಿವೃದ್ಧಿ ಸೂಚ್ಯಂಕ|ಮಾನವ ಅಭಿವೃದ್ಧಿ ಸೂಚ್ಯಂಕವನ್ನು]] ಹೊಂದಿದೆ, 2018 ರಲ್ಲಿ 0.784; ಅತ್ಯಧಿಕ ಸಾಕ್ಷರತಾ ಪ್ರಮಾಣ, 2018 ರಲ್ಲಿ 96.2%; ಅತ್ಯಧಿಕ ಜೀವಿತಾವಧಿ, 77.3 ವರ್ಷಗಳು; ಮತ್ತು ಅತ್ಯಧಿಕ [[ಲಿಂಗಾನುಪಾತ]], 1,000 ಪುರುಷರಿಗೆ 1,084 ಮಹಿಳೆಯರು ಮತ್ತು ಭಾರತದಲ್ಲಿ ಅತ್ಯಂತ ಕಡಿಮೆ ಧನಾತ್ಮಕ ಜನಸಂಖ್ಯಾ ಬೆಳವಣಿಗೆ ದರ (3.44%). ಇದು ದೇಶದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಕಡಿಮೆ ಬಡತನ ಹೊಂದಿರುವ]] ಮತ್ತು [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ]] ರಾಜ್ಯವಾಗಿದೆ. ರಾಜ್ಯವು ಗಮನಾರ್ಹವಾದ ವಲಸೆಯನ್ನು ಕಂಡಿದೆ, ವಿಶೇಷವಾಗಿ 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಿಗೆ]], ಮತ್ತು ಅದರ ಆರ್ಥಿಕತೆಯು ದೊಡ್ಡ [[ಮಲಯಾಳಿ]] ವಲಸೆ ಜನಸಂಖ್ಯೆಯಿಂದ ಸ್ಥಳಾಂತರ ವರ್ಗಾವಣೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. [[ಕೇರಳದಲ್ಲಿ ಧರ್ಮ|ಜನಸಂಖ್ಯೆಯ 54% ಕ್ಕಿಂತ ಹೆಚ್ಚು]] ಜನರು ಹಿಂದೂ ಧರ್ಮವನ್ನು ಆಚರಿಸುತ್ತಾರೆ, ನಂತರ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು. ಸಂಸ್ಕೃತಿಯು [[ಆರ್ಯ]] ಮತ್ತು [[ದ್ರಾವಿಡರು|ದ್ರಾವಿಡ]] ಸಂಪ್ರದಾಯಗಳ ಸಮ್ಮಿಳನವಾಗಿದ್ದು, ಸಹಸ್ರಮಾನಗಳಿಂದ ಭಾರತ ಮತ್ತು ವಿದೇಶಗಳಿಂದ ಪ್ರಭಾವಗಳಿಂದ ರೂಪುಗೊಂಡಿದೆ.
[[ಕರಿ ಮೆಣಸು]] ಮತ್ತು [[ನೈಸರ್ಗಿಕ ರಬ್ಬರ್]] ಉತ್ಪಾದನೆಯು ರಾಷ್ಟ್ರೀಯ ಉತ್ಪಾದನೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಕೃಷಿ ವಲಯದಲ್ಲಿ, ತೆಂಗು, ಚಹಾ, ಕಾಫಿ, ಗೋಡಂಬಿ ಮತ್ತು ಮಸಾಲೆಗಳು ಪ್ರಮುಖ ಬೆಳೆಗಳಾಗಿವೆ. ರಾಜ್ಯವು {{convert|595|km|mi}} ಕರಾವಳಿಯನ್ನು ಹೊಂದಿದೆ, ಮತ್ತು 1.1 ಮಿಲಿಯನ್ ಜನರು ಮೀನುಗಾರಿಕಾ ಉದ್ಯಮವನ್ನು ಅವಲಂಬಿಸಿದ್ದಾರೆ, ಇದು ರಾಜ್ಯದ ಆದಾಯದ ಸುಮಾರು 3% ರಷ್ಟಿದೆ. ಆರ್ಥಿಕತೆಯು ಹೆಚ್ಚಾಗಿ ಸೇವಾ ವಲಯ ಆಧಾರಿತವಾಗಿದ್ದರೆ, ಪ್ರಾಥಮಿಕ ವಲಯವು ತುಲನಾತ್ಮಕವಾಗಿ ಚಿಕ್ಕ ಪಾಲನ್ನು ನೀಡುತ್ತದೆ. ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರವನ್ನು]] ಹೊಂದಿದ್ದು, ಒಂಬತ್ತು ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸುತ್ತದೆ, ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್. ಕೇರಳವು ಭಾರತದ ಪ್ರಮುಖ [[ಕೇರಳದ ಪ್ರವಾಸೋದ್ಯಮ|ಪ್ರವಾಸಿ ತಾಣಗಳಲ್ಲಿ]] ಒಂದಾಗಿದೆ, [[ಕೇರಳದ ಬೀಚ್ಗಳು|ತೆಂಗಿನ ಗಿಡಗಳಿಂದ ಕೂಡಿದ ಮರಳು ಕಡಲತೀರಗಳು]], [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳು]], [[ಬೆಟ್ಟದ ತಾಣ]]ಗಳು, [[ಆಯುರ್ವೇದ|ಆಯುರ್ವೇದ ಪ್ರವಾಸೋದ್ಯಮ]] ಮತ್ತು [[ಉಷ್ಣವಲಯದ]] ಹಸಿರು ಅದರ ಪ್ರಮುಖ ಆಕರ್ಷಣೆಗಳಾಗಿವೆ.
== ಹೆಸರು ==
=== ವ್ಯುತ್ಪತ್ತಿ ===
"ಕೇರಳ" ಪದವನ್ನು ಮೊದಲು "ಕೇರಳಪುಟೊ" ('[[ಚೇರ ಸಾಮ್ರಾಜ್ಯ|ಚೇರ]] ರ ಮಗ[ಗಳು]') ಎಂದು [[ಮೌರ್ಯ ಸಾಮ್ರಾಜ್ಯ|ಮೌರ್ಯ ಚಕ್ರವರ್ತಿ]] [[ಅಶೋಕ]] (274–237 BCE) ಅವರು ತಮ್ಮ [[ಅಶೋಕನ ಶಾಸನಗಳು|ಶಾಸನಗಳಲ್ಲಿ]] ಒಂದಾದ ಕಲ್ಯಾಣಕ್ಕೆ ಸಂಬಂಧಿಸಿದ 3 ನೇ ಶತಮಾನದ BCE ಯ ಬಂಡೆಯ ಕೆತ್ತನೆಯಲ್ಲಿ ದಾಖಲಿಸಲಾಗಿದೆ.<ref>{{Cite book |last=P. C. Alexander |title=Buddhism in Kerala |pages=23}}</ref> ಆ ಸಮಯದಲ್ಲಿ, ಈ ಪ್ರದೇಶದ ಮೂರು ರಾಜ್ಯಗಳಲ್ಲಿ ಒಂದನ್ನು ಶಾಸ್ತ್ರೀಯ ತಮಿಳಿನಲ್ಲಿ [[ಚೇರ ಸಾಮ್ರಾಜ್ಯ|{{transliteration|ta|ISO|Ceralam}}]] (ಚೇರಲಂ) ಎಂದು ಕರೆಯಲಾಗುತ್ತಿತ್ತು: {{transliteration|ta|ISO|Cera}} (ಚೇರ) ಮತ್ತು {{transliteration|ta|ISO|Kera}} (ಕೇರ) ಒಂದೇ ಪದದ ರೂಪಾಂತರಗಳಾಗಿವೆ.<ref name="Sainz1972">{{Cite book |last=Nicasio Silverio Sainz |url=https://books.google.com/books?id=AOEBAAAAMAAJ |title=Cuba y la Casa de Austria |publisher=Ediciones Universal |year=1972 |page=120 |access-date=6 January 2013}}</ref> {{transliteration|ta|ISO|Cer al}} (ಚೇರಲ್) ಪದವು ಕೇರಳ ರಾಜರ ಅತ್ಯಂತ ಹಳೆಯ ರಾಜವಂಶವನ್ನು ಸೂಚಿಸುತ್ತದೆ ಮತ್ತು ಇದು ಹಳೆಯ ತಮಿಳು ಪದದಿಂದ 'ಸರೋವರ' ಎಂದು ಬಂದಿದೆ.<ref name="Marr1985">{{Cite book |last=John R. Marr |url=https://books.google.com/books?id=x3gOAAAAYAAJ |title=The Eight Anthologies: A Study in Early Tamil Literature |publisher=Institute of Asian Studies |year=1985 |page=263}}</ref> {{transliteration|ta|ISO|Keralam}} (ಕೇರಳಂ) ಶಾಸ್ತ್ರೀಯ [[ತಮಿಳು ಭಾಷೆ|ತಮಿಳು]] {{transliteration|ta|ISO|cerive-alam}} (ಚೆರಿವೆ-ಆಲಂ) 'ಗುಡ್ಡ ಅಥವಾ ಬೆಟ್ಟದ ಇಳಿಜಾರು'<ref name="AlexDeborah2014">{{Cite book |last1=Rayson K. Alex |url=https://books.google.com/books?id=1swxBwAAQBAJ&pg=PA226 |title=Culture and Media: Ecocritical Explorations |last2=S. Susan Deborah |last3=Sachindev P.S. |publisher=Cambridge Scholars Publishing |year=2014 |isbn=978-1-4438-6190-8 |page=226}}</ref> ಅಥವಾ {{transliteration|ta|ISO|cera alam}} (ಚೇರ ಆಲಂ) 'ಚೇರರ ಭೂಮಿ' ಎಂಬುದರಿಂದ ಹುಟ್ಟಿಕೊಂಡಿರಬಹುದು. ಒಂದು [[ಜಾನಪದ ವ್ಯುತ್ಪತ್ತಿ]] ''ಕೇರಳ'' ವನ್ನು [[ಮಲಯಾಳಂ]] ಪದ {{transliteration|ml|ISO|kera}} (ಕೇರ) 'ತೆಂಗಿನ ಮರ' ಮತ್ತು {{transliteration|ml|ISO|alam}} (ಆಲಂ) 'ಭೂಮಿ' ಎಂಬುದರಿಂದ ಪಡೆಯುತ್ತದೆ; ಹೀಗೆ, 'ತೆಂಗಿನ ಮರಗಳ ನಾಡು',<ref name="Sadasivan2000">{{Cite book |last=S. N. Sadasivan |url=https://books.google.com/books?id=Be3PCvzf-BYC&pg=PA101 |title=A Social History of India |publisher=APH Publishing |year=2000 |isbn=978-8176481700 |page=101}}</ref> ಇದು ತೆಂಗಿನ ಮರಗಳ ಸಮೃದ್ಧಿಯಿಂದಾಗಿ ಸ್ಥಳೀಯರು ಬಳಸುವ ರಾಜ್ಯದ ಅಡ್ಡಹೆಸರಾಗಿದೆ.<ref name="PreedyWatson2011">{{Cite book |last1=Victor R. Preedy |url=https://books.google.com/books?id=C6lYoH8rwywC&pg=PT400 |title=Nuts and Seeds in Health and Disease Prevention |last2=Ronald Ross Watson |last3=Vinood B. Patel |publisher=Academic Press |year=2011 |isbn=978-0-12-375689-3 |page=400}}</ref> ಕೇರಳವನ್ನು [[ಭಾರತೀಯ ಮಹಾಸಾಗರದ ವ್ಯಾಪಾರ|ವಿದೇಶಿ ವ್ಯಾಪಾರ ವಲಯಗಳಲ್ಲಿ]] ಪರ್ಯಾಯವಾಗಿ ''[[ಮಲಬಾರ್ ಕರಾವಳಿ|ಮಲಬಾರ್]]'' ಎಂದು ಕರೆಯಲಾಗುತ್ತಿತ್ತು. [[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟೆಸ್]] (6 ನೇ ಶತಮಾನ CE) ಕಾಲದಿಂದಲೂ, [[ಅರಬ್ಬರು|ಅರಬ್]] ನಾವಿಕರು ಕೇರಳವನ್ನು ''ಮೇಲ್'' ಎಂದು ಕರೆಯುತ್ತಿದ್ದರು.{{citation needed|date=October 2025}}
=== ಕೇರಳಂ ಎಂದು ಮರುನಾಮಕರಣ ===
ರಾಜ್ಯದ [[ಮಲಯಾಳಂ]] ಹೆಸರಾದ ಕೇರಳಂ ಎಂದು ಹೆಸರನ್ನು ಬದಲಾಯಿಸಲು ದೀರ್ಘಕಾಲದಿಂದ ಬೇಡಿಕೆಗಳಿವೆ. ಅಧಿಕೃತವಾಗಿ, ರಾಜ್ಯದ ಹೆಸರು ಮಲಯಾಳಂನಲ್ಲಿ 'ಕೇರಳಂ' (കേരളം) ಆಗಿದ್ದರೆ, ಅದರ ಇಂಗ್ಲಿಷ್ ಹೆಸರು 'ಕೇರಳ' ಆಗಿದೆ.<ref>{{Cite web |last=Vineeth |first=T. K. |date=2026-03-07 |title=KERALA-M: What's in a name? |url=https://www.newindianexpress.com/explainers/2026/Mar/07/kerala-m-whats-in-a-name |access-date=2026-03-13 |website=The New Indian Express |language=en}}</ref><ref>{{Cite web |title=Renaming Kerala: Modi Hails Kerala's New Name Keralam |url=https://www.deccanherald.com/india/kerala/rightful-name-as-per-malayali-culture-pm-modi-praises-renaming-of-kerala-to-keralam-3927718 |access-date=2026-03-13 |website=Deccan Herald |language=en}}</ref> [[ಕೇರಳ ವಿಧಾನಸಭೆ]]ಯು ಜೂನ್ 2024 ರಲ್ಲಿ ರಾಜ್ಯದ ಹೆಸರನ್ನು 'ಕೇರಳ' ದಿಂದ 'ಕೇರಳಂ' ಗೆ ಬದಲಾಯಿಸಲು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು, ಇದು ಆಗಸ್ಟ್ 2023 ರ ಹಿಂದಿನ ಸರ್ವಾನುಮತದ ನಿರ್ಣಯವನ್ನು ಅನುಸರಿಸಿತು. [[ಕೇರಳದ ಮುಖ್ಯಮಂತ್ರಿ|ಮುಖ್ಯಮಂತ್ರಿ]] [[ಪಿಣರಾಯಿ ವಿಜಯನ್]] ಅವರು ಎರಡೂ ನಿರ್ಣಯಗಳನ್ನು ಮಂಡಿಸಿದ್ದರು, ಇದು ಅದರ [[ಮಲಯಾಳಿ]] ಗುರುತನ್ನು ಪ್ರತಿಬಿಂಬಿಸಲು ಸಂವಿಧಾನದ ಅನುಚ್ಛೇದ 3 ರ ಅಡಿಯಲ್ಲಿ ರಾಜ್ಯದ ಹೆಸರನ್ನು ತಿದ್ದುಪಡಿ ಮಾಡಲು ಪ್ರಯತ್ನಿಸಿತು.<ref name="auto1">{{cite web | last=TNIE online desk | first=Agencies | title=Ahead of polls, Union Cabinet approves Kerala's renaming to 'Keralam' | website=The New Indian Express | date=2026-02-24 | url=https://www.newindianexpress.com/states/kerala/2026/Feb/24/union-cabinet-approves-keralas-renaming-to-keralam-ahead-of-polls | access-date=2026-02-24}}</ref>
[[ಮೂರನೇ ಮೋದಿ ಸಚಿವ ಸಂಪುಟ|ಕೇಂದ್ರ ಸಚಿವ ಸಂಪುಟ]]ವು ಈ ಪ್ರಸ್ತಾಪವನ್ನು ಫೆಬ್ರವರಿ 24, 2026 ರಂದು ಅನುಮೋದಿಸಿತು. ಸಚಿವ ಸಂಪುಟದ ಅನುಮೋದನೆಯ ನಂತರ, [[ಭಾರತದ ರಾಷ್ಟ್ರಪತಿ]]ಗಳು ಕೇರಳ (ಹೆಸರು ಬದಲಾವಣೆ) ಮಸೂದೆ, 2026 ಅನ್ನು ಭಾರತದ ಸಂವಿಧಾನದ ಅನುಚ್ಛೇದ 3 ರ ಷರತ್ತಿನ ಅಡಿಯಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು [[ಕೇರಳ ವಿಧಾನಸಭೆ|ರಾಜ್ಯ ವಿಧಾನಸಭೆಗೆ]] ಉಲ್ಲೇಖಿಸುತ್ತಾರೆ.<ref name="auto">{{cite web | title=Kerala will now be called Keralam | website=India Today | date=2026-02-24 | url=https://www.indiatoday.in/india/story/union-cabinet-approves-proposal-renaming-kerala-to-keralam-2873528-2026-02-24 | access-date=2026-02-24}}</ref>
[[ಕೇರಳ ವಿಧಾನಸಭೆ]]ಯ ಅನುಮೋದನೆಯ ನಂತರ, ಈ ಮಸೂದೆಯನ್ನು [[ಭಾರತದ ಸಂಸತ್ತಿನಲ್ಲಿ]] ಮಂಡಿಸಲಾಗುವುದು ಮತ್ತು ಅಂಗೀಕರಿಸಿದರೆ, ರಾಜ್ಯದ ಹೆಸರು ಅಧಿಕೃತವಾಗಿ ಕೇರಳಂ ಆಗುತ್ತದೆ.
== ಇತಿಹಾಸ ==
{{Main|ಕೇರಳದ ಇತಿಹಾಸ}}
=== ದಂತಕಥೆ ===
[[File:Parshuramsaraswats.jpg|thumb|[[ಪರಶುರಾಮ]]ನನ್ನು ಚಿತ್ರಿಸುವ ವರ್ಣಚಿತ್ರ, ವಸಾಹತುಗಾರರಿಂದ ಸುತ್ತುವರಿದು, [[ವರುಣ]] ([[ಹಿಂದೂ]] ಜಲದೇವತೆ) ನನ್ನು ಸಮುದ್ರಗಳನ್ನು ಬೇರ್ಪಡಿಸಲು ಆಜ್ಞಾಪಿಸುತ್ತಾನೆ]]
[[ಹಿಂದೂ]] ಪುರಾಣಗಳ [[ದಶಾವತಾರ]] ಕಥೆಗಳಲ್ಲಿ, ಕೇರಳದ ಭೂಮಿಯನ್ನು ಕೊಡಲಿ-ಧಾರಿಯ ವೀರ ಋಷಿ [[ಪರಶುರಾಮ]]ನು, [[ವಿಷ್ಣು]]ವಿನ ಆರನೇ [[ಅವತಾರ]] (ಅವತಾರ), ಸಮುದ್ರದಿಂದ ಮರಳಿ ಪಡೆದನು. ಪರಿಣಾಮವಾಗಿ, ಕೇರಳವನ್ನು ಸಾಂಪ್ರದಾಯಿಕವಾಗಿ ''ಪರಶುರಾಮ ಕ್ಷೇತ್ರಂ'' ("ಪರಶುರಾಮನ ನಾಡು") ಎಂದು ಕರೆಯಲಾಗುತ್ತದೆ.<ref>S. C. Bhatt, Gopal K. Bhargava (2006) "Land and People of Indian States and Union Territories: Volume 14.", p.18</ref> ದಂತಕಥೆಯ ಪ್ರಕಾರ, ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರದ ಮೇಲೆ ಎಸೆದನು, ಮತ್ತು ಅದು ಬಿದ್ದ ಸ್ಥಳದವರೆಗೆ ನೀರು ಹಿಂಜರಿಯಿತು. ಈ ರೀತಿ ಹೊರಹೊಮ್ಮಿದ ಭೂಮಿಯು [[ಗೋಕರ್ಣ]]ದಿಂದ [[ಕನ್ಯಾಕುಮಾರಿ]]ಯವರೆಗೆ ವಿಸ್ತರಿಸಿತು.<ref>{{cite book |author=Aiya VN |title=The Travancore State Manual|publisher=Travancore Government Press |pages=210–212 |year=1906 |accessdate=12 November 2007 |url=https://books.google.com/books?id=RdzaPW-kEvQC}}</ref> ಹೊರಹೊಮ್ಮಿದ ಭೂಮಿಯು ಲವಣಯುಕ್ತ ಮತ್ತು ವಾಸಯೋಗ್ಯವಾಗಿರಲಿಲ್ಲ, ಆದ್ದರಿಂದ ಪರಶುರಾಮನು ಸರ್ಪರಾಜ [[ವಾಸುಕಿ]]ಯನ್ನು ಪ್ರಾರ್ಥಿಸಿದನು, ಅವನು ಮಣ್ಣನ್ನು ಶುದ್ಧೀಕರಿಸಲು ಪವಿತ್ರ ವಿಷವನ್ನು ಉಗುಳಿದನು, ಅದನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದನು. ಗೌರವದಿಂದ, ವಾಸುಕಿ ಮತ್ತು ಎಲ್ಲಾ ಹಾವುಗಳನ್ನು ಭೂಮಿಯ ರಕ್ಷಕರಾಗಿ ನೇಮಿಸಲಾಯಿತು. ಈ ದಂತಕಥೆಯನ್ನು 17 ನೇ ಅಥವಾ 18 ನೇ ಶತಮಾನದ ಪಠ್ಯ ''[[ಕೇರಳೋಲ್ಪತ್ತಿ]]'' ಯಲ್ಲಿ ವಿಸ್ತರಿಸಲಾಯಿತು ಮತ್ತು ಸಂಹಿತೆಗೊಳಿಸಲಾಯಿತು. ಇದು ಆರಂಭಿಕ ಕೇರಳ ಸಂಸ್ಥೆಗಳ{{mdash}}ಉದಾಹರಣೆಗೆ ಭೂ ಹಿಡುವಳಿ ಮತ್ತು ಆಡಳಿತ{{mdash}}ಮೂಲವನ್ನು ಪರಶುರಾಮನ ಕಥೆಗೆ ಸಂಪರ್ಕಿಸುತ್ತದೆ.<ref>{{cite book|author=M. T. Narayanan|title=Agrarian Relations in Late Medieval Malabar|url=https://books.google.com/books?id=kHtbkuXruzwC&pg=PA17|accessdate=28 July 2012|date=1 January 2003|publisher=Northern Book Centre|isbn=978-81-7211-135-9|pages=16–18}}</ref> ಮಧ್ಯಕಾಲೀನ ಯುಗದಲ್ಲಿ, [[ಚೇರ]] ರಾಜ [[ಚೆಂಕುಟ್ಟುವನ್]] ತನ್ನ ಈಟಿಯನ್ನು ಸಮುದ್ರಕ್ಕೆ ಎಸೆಯುವ ಮೂಲಕ ಪರಶುರಾಮ ಸಂಪ್ರದಾಯವನ್ನು ಅನುಕರಿಸಿರಬಹುದು, ಅದರ ಮೇಲಿನ ತನ್ನ ಪ್ರಭುತ್ವವನ್ನು ಸಂಕೇತಿಸಲು.<ref>{{Cite book |last=Srinivisa Iyengar |first=P. T. |title=History of the Tamils: From the Earliest Times to 600 A.D. |publisher=Asian Educational Services |year=1929 |isbn=978-8120601451 |location=Madras |page=515}}</ref>
ಕೇರಳದೊಂದಿಗೆ ಸಂಬಂಧಿಸಿದ ಪ್ರಮುಖ [[ಪೌರಾಣಿಕ]] ವ್ಯಕ್ತಿಯೆಂದರೆ [[ಮಹಾಬಲಿ]], ಒಬ್ಬ [[ಅಸುರ]] ಮತ್ತು ಮಾದರಿ ನ್ಯಾಯಪ್ರಿಯ ರಾಜ, ಅವರು ಕೇರಳದಿಂದ ಭೂಮಿಯನ್ನು ಆಳಿದರು ಎಂದು ಹೇಳಲಾಗುತ್ತದೆ. ಅವನು ಯುದ್ಧದಲ್ಲಿ [[ದೇವ (ಹಿಂದೂ ಧರ್ಮ)|ದೇವ]] ಗಳನ್ನು ಸೋಲಿಸಿ, ಅವರನ್ನು ಗಡಿಪಾರು ಮಾಡಿದನು. ಪ್ರತಿಕ್ರಿಯೆಯಾಗಿ, ದೇವರುಗಳು ವಿಷ್ಣುವಿಗೆ ಮನವಿ ಮಾಡಿದರು, ಅವರು [[ವಾಮನ]]ನಾಗಿ ತಮ್ಮ ಐದನೇ ಅವತಾರವನ್ನು ತಾಳಿದರು ಮತ್ತು ಕ್ರಮವನ್ನು ಪುನಃಸ್ಥಾಪಿಸಲು, ಮಹಾಬಲಿಯನ್ನು [[ಪಾತಾಳ]] (ಪಾತಾಳ ಲೋಕ) ಕೆಳಗೆ ತಳ್ಳಿದರು. ಜನಪ್ರಿಯ ನಂಬಿಕೆಯ ಪ್ರಕಾರ, ಮಹಾಬಲಿ ವರ್ಷಕ್ಕೊಮ್ಮೆ ಕೇರಳಕ್ಕೆ ಹಿಂತಿರುಗುತ್ತಾನೆ, ಇದನ್ನು [[ಓಣಂ]] ಹಬ್ಬವಾಗಿ ಆಚರಿಸಲಾಗುತ್ತದೆ.<ref name="Rinehart2004">{{cite book|author=Robin Rinehart|title=Contemporary Hinduism: Ritual, Culture, and Practice|url=https://books.google.com/books?id=hMPYnfS_R90C&pg=PA146|accessdate=28 July 2012|year=2004|publisher=ABC-CLIO|isbn=978-1-57607-905-8|page=146}}</ref> 18 [[ಪುರಾಣಗಳಲ್ಲಿ]] ಅತ್ಯಂತ ಹಳೆಯದಾದ ''[[ಮತ್ಸ್ಯ ಪುರಾಣ]]''ವು,<ref>{{cite book|last=Goldberg|first=Ellen|title=The Lord who is Half Woman: Ardhanārīśvara in Indian and Feminist Perspective|url=https://books.google.com/books?id=xUhlxBozntoC&pg=PA20|year=2002|publisher=SUNY Press|isbn=978-0-7914-5325-4|page=20|accessdate=30 May 2015}}</ref><ref>{{cite book|last=Kemmerer|first=Lisa|title=Animals and World Religions|url=https://books.google.com/books?id=iFEL2yjkbAAC&pg=PA78|year=2011|publisher=Oxford University Press|isbn=978-0-19-991255-1|page=78|accessdate=30 May 2015}}</ref> [[ಮತ್ಸ್ಯ]]ದ{{mdash}}ವಿಷ್ಣುವಿನ ಮೊದಲ ಅವತಾರ{{mdash}}ಮತ್ತು ರಾಜ [[ಮನು (ಹಿಂದೂ ಧರ್ಮ)|ಮನು]]ನ ಕಥೆಯನ್ನು, ಮೊದಲ ಮನುಷ್ಯ ಮತ್ತು ಈ ಪ್ರದೇಶದ ಆಡಳಿತಗಾರ, ಕೇರಳ ಮತ್ತು [[ತಮಿಳುನಾಡಿನ]] [[ಮಲಯ ಪರ್ವತಗಳಲ್ಲಿ]] ಇರಿಸುತ್ತದೆ.<ref>{{cite book|last=Dalal|first=Roshen|title=Hinduism: An Alphabetical Guide|url=https://books.google.com/books?id=DH0vmD8ghdMC&pg=PA250|year=2011|publisher=Penguin Books India|isbn=978-0-14-341421-6|page=250|accessdate=30 May 2015}}</ref><ref>{{cite book|last=Ragozin|first=Zenaide A.|title=Vedic India As Embodied Principally in the Rig-veda|url=https://books.google.com/books?id=T16d-eRG5VkC&pg=PA341|year=2005|publisher=Kessinger Publishing|isbn=978-1-4179-4463-7|page=341|accessdate=21 March 2013}}</ref>
=== ಪ್ರಾಗಿತಿಹಾಸ ===
[[File:MarayoorDolmen.JPG|thumb|[[ಮಾರಯೂರು|ಮಾರಯೂರಿನಲ್ಲಿ]] ನವಶಿಲಾಯುಗದ ಜನರು ನಿರ್ಮಿಸಿದ [[ಡಾಲ್ಮೆನ್]]]]
ಪ್ರಸ್ತುತ ಕೇರಳದ ಗಣನೀಯ ಭಾಗವು ಪ್ರಾಚೀನ ಕಾಲದಲ್ಲಿ ಸಮುದ್ರದ ಅಡಿಯಲ್ಲಿ ಮುಳುಗಿತ್ತು ಎಂದು ನಂಬಲಾಗಿದೆ. ಚಂಗನಾಶ್ಶೇರಿಯ ಬಳಿ ಸಾಗರಿಕ ಪಳೆಯುಳಿಕೆಗಳ ಆವಿಷ್ಕಾರವು ಈ ಊಹೆಯನ್ನು ಬೆಂಬಲಿಸುತ್ತದೆ.<ref name="Menon2007">{{cite book|author=A. Sreedhara Menon|title=A Survey of Kerala History|url=https://books.google.com/books?id=FVsw35oEBv4C&pg=PA20|accessdate=27 July 2012|date=1 January 2007|publisher=DC Books|isbn=978-81-264-1578-6|pages=20–21}}</ref> ಕೇರಳದಲ್ಲಿನ ಪ್ರಾಗೈತಿಹಾಸಿಕ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರಗಳು ಇಡುಕ್ಕಿ ಜಿಲ್ಲೆಯ [[ಮಾರಯೂರು]] ಪ್ರದೇಶದಲ್ಲಿ [[ನವಶಿಲಾಯುಗ]]-ಯುಗದ [[ಡಾಲ್ಮೆನ್]]ಗಳನ್ನು ಒಳಗೊಂಡಿವೆ, ಸ್ಥಳೀಯವಾಗಿ ''ಮುನಿಯಾರ'' ಎಂದು ಕರೆಯಲಾಗುತ್ತದೆ{{mdash}}''ಮುನಿ'' (ಸನ್ಯಾಸಿ ಅಥವಾ ಋಷಿ) ಮತ್ತು ''ಆರ'' (ಡಾಲ್ಮೆನ್) ನಿಂದ ಬಂದಿದೆ.<ref name="Unlocking the secrets of history">{{cite news|url=http://www.hindu.com/2004/12/06/stories/2004120604900300.htm | location=Chennai, India | work=The Hindu | title=Unlocking the secrets of history | date=6 December 2004 | accessdate= 12 November 2015}}</ref> [[ವಯನಾಡಿನ]] [[ಎಡಕ್ಕಲ್ ಗುಹೆಗಳು|ಎಡಕ್ಕಲ್ ಗುಹೆಗಳಲ್ಲಿನ]] ಬಂಡೆಯ ಕೆತ್ತನೆಗಳು ಸುಮಾರು 6000 BCE ಯ ನವಶಿಲಾಯುಗದ ಅವಧಿಯ ಹಿಂದಿನವು.<ref name="Kapoor2002">{{cite book|author=Subodh Kapoor|title=The Indian Encyclopaedia|url=https://books.google.com/books?id=gxIpYtnyzu4C&pg=PA2184|accessdate=1 August 2012|date=1 July 2002|publisher=Cosmo Publications|isbn=978-81-7755-257-7|page=2184}}</ref><ref>{{cite web|title=Travel and Tourism|url=http://www.kerala.gov.in/index.php?option=com_content&view=article&id=3792:travel-and-tourism&catid=271:about-kerala&Itemid=2267|website=kerala.gov.in|publisher=Government of Kerala|accessdate=12 November 2015}}</ref> ಪುರಾತತ್ತ್ವ ಶಾಸ್ತ್ರದ ಅಧ್ಯಯನಗಳು ಈ ಪ್ರದೇಶದಾದ್ಯಂತ [[ಮಧ್ಯಶಿಲಾಯುಗ]], ನವಶಿಲಾಯುಗ ಮತ್ತು [[ಮೆಗಾಲಿಥಿಕ್]] ತಾಣಗಳನ್ನು ಗುರುತಿಸಿವೆ.<ref name="AroraSingh116">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=116}}</ref> ಈ ಆವಿಷ್ಕಾರಗಳು ಆರಂಭಿಕ ಕೇರಳ ಸಮಾಜ ಮತ್ತು ಸಂಸ್ಕೃತಿಯ ಅಭಿವೃದ್ಧಿಯು [[ಪ್ಯಾಲಿಯೋಲಿಥಿಕ್|ಪ್ಯಾಲಿಯೋಲಿಥಿಕ್ ಯುಗದಲ್ಲಿ]] ಪ್ರಾರಂಭವಾಯಿತು ಮತ್ತು ಮಧ್ಯಶಿಲಾಯುಗ, ನವಶಿಲಾಯುಗ ಮತ್ತು ಮೆಗಾಲಿಥಿಕ್ ಅವಧಿಗಳ ಮೂಲಕ ಮುಂದುವರೆಯಿತು ಎಂದು ಸೂಚಿಸುತ್ತವೆ.<ref name="google">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|pages=118, 123}}</ref> ವಿದೇಶಿ ಸಾಂಸ್ಕೃತಿಕ ಸಂವಹನಗಳು ಸಹ ಈ ಅಭಿವೃದ್ಧಿಯನ್ನು ರೂಪಿಸುವಲ್ಲಿ ಪಾತ್ರವಹಿಸಿವೆ;<ref name="AroraSingh1999">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=123}}</ref> ಕೆಲವು ಇತಿಹಾಸಕಾರರು ಕೊನೆಯ [[ಕಂಚಿನ ಯುಗ]] ಮತ್ತು ಆರಂಭಿಕ [[ಕಬ್ಬಿಣ ಯುಗ|ಕಬ್ಬಿಣದ ಯುಗ]]ದಲ್ಲಿ [[ಸಿಂಧೂ ಕಣಿವೆ ನಾಗರಿಕತೆ]]ಯೊಂದಿಗೆ ಸಂಭವನೀಯ ಸಂಪರ್ಕಗಳನ್ನು ಸೂಚಿಸುತ್ತಾರೆ.<ref>{{cite news|url=http://www.thehindu.com/news/states/article26324.ece | work=The Hindu | title=Symbols akin to Indus valley culture discovered in Kerala | date=29 September 2009 |accessdate= 12 November 2015}}</ref>
=== ಪ್ರಾಚೀನ ಇತಿಹಾಸ ===
[[File:Silk route copy.jpg|thumb|225px|[[ರೇಷ್ಮೆ ಮಾರ್ಗ]] ನಕ್ಷೆ. ಮಸಾಲೆ ವ್ಯಾಪಾರವು ಜಲಮಾರ್ಗಗಳಲ್ಲಿತ್ತು (ನೀಲಿ).]]
[[ಸುಮೇರ್|ಸುಮೇರಿಯನ್]] ದಾಖಲೆಗಳ ಪ್ರಕಾರ, ಕೇರಳವು ಕನಿಷ್ಠ 3000 BCE ಯಿಂದಲೂ ಪ್ರಮುಖ ಮಸಾಲೆ ರಫ್ತುದಾರನಾಗಿದೆ ಮತ್ತು ಇದು "ಮಸಾಲೆಗಳ ತೋಟ" ಅಥವಾ "ಭಾರತದ ಮಸಾಲೆ ತೋಟ" ಎಂದು ಉಲ್ಲೇಖಿಸಲ್ಪಡುತ್ತದೆ.<ref>{{cite news|url=http://www.thehindu.com/todays-paper/tp-national/tp-kerala/of-kerala-egypt-and-the-spice-link/article5625620.ece | first = Kaavya | last = Pradeep Kumar | work=The Hindu | title=Of Kerala, Egypt, and the Spice link | date=28 January 2014 | accessdate=12 November 2015}}</ref><ref>[https://books.google.com/books?id=gOrvghLklKoC ''Striving for sustainability, environmental stress and democratic initiatives in Kerala''], p. 79; ISBN 81-8069-294-9, Srikumar Chattopadhyay, Richard W. Franke; Year: 2006.</ref><ref name="spiceHindu">{{Cite news |title=Route it through the seas |newspaper=The Hindu |date=December 2016 |url=https://www.thehindu.com/children/ROUTE-it-through-the-seas/article16735515.ece |access-date=2024-01-08 |archive-date=5 March 2022 |archive-url=https://web.archive.org/web/20220305035957/https://www.thehindu.com/children/ROUTE-it-through-the-seas/article16735515.ece |url-status=live |last1=Subramanian |first1=Archana }}</ref> ಈ ಪ್ರದೇಶದ ಮಸಾಲೆಗಳು 3 ಮತ್ತು 2 ನೇ ಸಹಸ್ರಮಾನ BCE ಯಲ್ಲಿ ಮಲಬಾರ್ ಕರಾವಳಿಗೆ ಪ್ರಾಚೀನ [[ಬ್ಯಾಬಿಲೋನಿಯನ್ನರು]], [[ಅಸಿರಿಯನ್ನರು]] ಮತ್ತು [[ಈಜಿಪ್ಟಿನವರು|ಈಜಿಪ್ಟಿನವರನ್ನು]] ಆಕರ್ಷಿಸಿದವು. [[ಅರಬ್ಬರು]] ಮತ್ತು [[ಫೀನಿಷಿಯನ್ನರು]] ಸಹ ಈ ಅವಧಿಯಲ್ಲಿ ಕೇರಳದೊಂದಿಗೆ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಿದರು.<ref name="Menon57">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA57|accessdate=10 October 2012|date=1 January 2007|publisher=DC Books|isbn=978-81-264-1578-6|pages=57–58}}</ref> ಕೇರಳಪುತ್ರದ ಭೂಮಿಯು ಚಕ್ರವರ್ತಿ ಅಶೋಕನ ಕಾಲದಲ್ಲಿ ದಕ್ಷಿಣ ಭಾರತದ ನಾಲ್ಕು ಸ್ವತಂತ್ರ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು, [[ಚೋಳ ಸಾಮ್ರಾಜ್ಯ|ಚೋಳ]], [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಮತ್ತು [[ಸತಿಯಪುತ್ರರು|ಸತಿಯಪುತ್ರ]] ಸಾಮ್ರಾಜ್ಯಗಳ ಜೊತೆಗೆ.<ref name="SmithJackson2008">{{cite book|author1=Vincent A. Smith|author2=A. V. Williams Jackson|title=History of India, in Nine Volumes: Vol. II – From the Sixth Century BCE to the Mohammedan Conquest, Including the Invasion of Alexander the Great|url=https://books.google.com/books?id=bP7DzXQBoM4C&pg=PA166|accessdate=1 August 2012|date=30 November 2008|publisher=Cosimo, Inc.|isbn=978-1-60520-492-5|page=166}}</ref> ವಿದ್ವಾಂಸರು ಸಾಮಾನ್ಯವಾಗಿ ಕೇರಳಪುತ್ರವನ್ನು [[ಚೇರ ಸಾಮ್ರಾಜ್ಯ|ಚೇರರು]] ಎಂದು ಗುರುತಿಸುತ್ತಾರೆ, ಇದು ಕೇರಳದ ಅತ್ಯಂತ ಹಳೆಯ ಪ್ರಮುಖ ರಾಜವಂಶವಾಗಿದೆ.<ref name="The Cambridge Shorter History of India">{{cite book|title=The Cambridge Shorter History of India|url=https://books.google.com/books?id=9_48AAAAIAAJ&pg=PA193|accessdate=10 October 2012|publisher=CUP Archive|page=193|id=GGKEY:2W0QHXZ7K40}}</ref><ref name="Dwivedi1994">{{cite book|author=Bhanwar Lal Dwivedi|title=Evolution of Education Thought in India|url=https://books.google.com/books?id=idERT6Tg4MMC&pg=PA164|accessdate=10 October 2012|date=1 January 1994|publisher=Northern Book Centre|isbn=978-81-7211-059-8|page=164}}</ref> ಈ ದಕ್ಷಿಣ ಪ್ರದೇಶಗಳು ಒಮ್ಮೆ ಸಾಮಾನ್ಯ ಭಾಷೆ ಮತ್ತು ಸಾಂಸ್ಕೃತಿಕ ಚೌಕಟ್ಟನ್ನು ಹಂಚಿಕೊಂಡಿದ್ದವು, ಇತಿಹಾಸದಲ್ಲಿ [[ತಮಿಳಕಂ]] ಎಂದು ಕರೆಯಲ್ಪಡುವ ಪ್ರದೇಶದೊಳಗೆ.<ref>{{Cite book
| last=Kanakasabhai | first=V.
| title=The Tamils Eighteen Hundred Years Ago
| url=https://books.google.com/books?id=VuvshP5_hg8C
| year=1997
| publisher=Asian Educational Services
| isbn=978-81-206-0150-5
| accessdate=16 June 2009}}</ref> ಚೇರರು ಪ್ರಸ್ತುತ ಕೇರಳದ ಹೆಚ್ಚಿನ ಭಾಗವನ್ನು ಆಳಿದರೆ, ಪ್ರದೇಶದ ದಕ್ಷಿಣ ತುದಿಯು [[ಪಾಂಡ್ಯರ]] ನಿಯಂತ್ರಣಕ್ಕೆ ಒಳಪಟ್ಟಿತ್ತು,<ref name="Singh2008">{{cite book|author=Upinder Singh|title=A History of Ancient and Early Medieval India: From the Stone Age to the 12th Century|url=https://books.google.com/books?id=GW5Gx0HSXKUC&pg=PA385|accessdate=10 October 2012|year=2008|publisher=Pearson Education India|isbn=978-81-317-1677-9|page=385}}</ref> ಅವರ ವ್ಯಾಪಾರ ಬಂದರನ್ನು ಪ್ರಾಚೀನ ಪಾಶ್ಚಾತ್ಯ ಮೂಲಗಳಲ್ಲಿ [[ನೆಲ್ಸಿಂಡಾ]] (ಅಥವಾ ನಿಯಾಸಿಂಡಿ) ಎಂದು ಗುರುತಿಸಲಾಗಿದೆ.<ref name="Books.google.co.in">{{Cite book|url=https://books.google.com/books?id=rQipbjusDyQC&dq=nelcynda&pg=PA301 |title=History of ancient geography – Google Books |author=James Oliver Thomson|publisher=Biblo & Tannen Publishers, 1948|accessdate=30 July 2009|isbn=978-0-8196-0143-8|year=1948}}</ref> ನಂತರ, ಈ ಪ್ರದೇಶದ ನಿಯಂತ್ರಣವು ಪಾಂಡ್ಯರು, ಚೇರರು ಮತ್ತು ಚೋಳರ ನಡುವೆ ಪರ್ಯಾಯವಾಗಿತ್ತು. [[ಆಯ್ ಸಾಮ್ರಾಜ್ಯ|ಆಯ್ಸ್]] ಮತ್ತು [[ಎಝಿಮಲ ಸಾಮ್ರಾಜ್ಯ|ಮುಷಿಕರು]] ಪ್ರಾಚೀನ ಕೇರಳದ ಇತರ ಎರಡು ರಾಜವಂಶಗಳಾಗಿದ್ದು, ಕ್ರಮವಾಗಿ ಚೇರ ಪ್ರದೇಶದ ದಕ್ಷಿಣ ಮತ್ತು ಉತ್ತರಕ್ಕೆ ನೆಲೆಗೊಂಡಿದ್ದವು.<ref name="Shashi1996">{{cite book|author=S. S. Shashi|title=Encyclopaedia Indica: India, Pakistan, Bangladesh|url=https://books.google.com/books?id=lwswAQAAIAAJ|accessdate=10 October 2012|year=1996|publisher=Anmol Publications|isbn=978-81-7041-859-7|page=1207}}</ref><ref name="Ramunny1993">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA3|accessdate=10 October 2012|date=1 January 1993|publisher=Northern Book Centre|isbn=978-81-7211-052-9|page=3}}</ref>
ಕೊನೆಯ ಶತಮಾನಗಳ BCE ಯ ಹೊತ್ತಿಗೆ, ಕರಾವಳಿಯು ಗ್ರೀಕ್ ಮತ್ತು ರೋಮನ್ ವ್ಯಾಪಾರಕ್ಕೆ, ವಿಶೇಷವಾಗಿ [[ಕರಿ ಮೆಣಸು|ಕರಿಮೆಣಸಿನಲ್ಲಿ]] ಪ್ರಮುಖ ಕೇಂದ್ರವಾಗಿತ್ತು. ಚೇರರು [[ಪ್ರಾಚೀನ ಚೀನಾ]], [[ಪಶ್ಚಿಮ ಏಷ್ಯಾ]], ಈಜಿಪ್ಟ್, ಗ್ರೀಸ್ ಮತ್ತು [[ರೋಮನ್ ಸಾಮ್ರಾಜ್ಯ]]ದೊಂದಿಗೆ ವಾಣಿಜ್ಯ ಸಂಪರ್ಕಗಳನ್ನು ಹೊಂದಿದ್ದರು. ವಿದೇಶಿ ವ್ಯಾಪಾರ ದಾಖಲೆಗಳಲ್ಲಿ, ಈ ಪ್ರದೇಶವನ್ನು ಮೇಲ್ ಅಥವಾ [[ಮಲಬಾರ್ ಕರಾವಳಿ|ಮಲಬಾರ್]] ಎಂದು ಕರೆಯಲಾಗುತ್ತಿತ್ತು.<ref>{{cite web | url=http://www.siamese-heritage.org/jsspdf/1961/JSS_054_1c_Minattur_MalayaWhatsInAName.pdf | title=Malaya: What's in the name | publisher=siamese-heritage.org | accessdate=7 August 2012 | author=Joseph Minattur | page=1}}</ref> ಆ ಕಾಲದ ಪ್ರಮುಖ ಬಂದರುಗಳು [[ಮುಝಿರಿಸ್]], ಬೆರ್ಕರೈ ಮತ್ತು ನೆಲ್ಸಿಂಡಾ.<ref name="Kusuman">{{cite book |author=K. K. Kusuman |title=A History of Trade & Commerce in Travancore |publisher=Mittal Publications |year=1987 |isbn=978-81-7099-026-0 |url=https://books.google.com/books?id=qbNuyHswr1cC |pages=1–2 |accessdate=30 May 2015}}</ref> ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವನ್ನು 50 ಮಿಲಿಯನ್ [[ಸೆಸ್ಟರ್ಸಸ್]] ಎಂದು ಅಂದಾಜಿಸಲಾಗಿದೆ.<ref>According to [[Pliny the Elder]], goods from India were sold in the Empire at 100 times their original purchase price. See [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> ಸಮಕಾಲೀನ [[ಸಂಗಮ್ ಸಾಹಿತ್ಯ]]ವು ಮೆಣಸಿನ ಬದಲಿಗೆ ಚಿನ್ನದಿಂದ ತುಂಬಿದ ರೋಮನ್ ಹಡಗುಗಳು ಮುಝಿರಿಸ್ಗೆ ಆಗಮಿಸುವುದನ್ನು ವಿವರಿಸುತ್ತದೆ. ಕೇರಳವನ್ನು ತಲುಪಲು ಮಾನ್ಸೂನ್ ಗಾಳಿಯನ್ನು ನ್ಯಾವಿಗೇಟ್ ಮಾಡಿದ ಮೊದಲ ಪಶ್ಚಿಮ ವ್ಯಾಪಾರಿಗಳಲ್ಲಿ ಒಬ್ಬರು [[ಸೈಜಿಕಸ್ನ ಯುಡೋಕ್ಸಸ್]], ಅವರು ಈಜಿಪ್ಟ್ನ [[ಹೆಲ್ಲೆನಿಸ್ಟಿಕ್ ನಾಗರಿಕತೆ|ಹೆಲ್ಲೆನಿಸ್ಟಿಕ್]] [[ಟಾಲಮಿಕ್ ರಾಜವಂಶ]]ದ ರಾಜ [[ಟಾಲಮಿ VIII ಫಿಸ್ಕಾನ್|ಟಾಲಮಿ VIII]] ರ ಆಶ್ರಯದಲ್ಲಿ ಸುಮಾರು 118 ಅಥವಾ 166 BCE ಯಲ್ಲಿ ಪ್ರಯಾಣ ಮಾಡಿದರು. ಈ ಪ್ರದೇಶದ ಬಂದರು ನಗರಗಳಲ್ಲಿನ ರೋಮನ್ ಸ್ಥಾಪನೆಗಳು{{mdash}}[[ಆಗಸ್ಟಸ್]] ದೇವಾಲಯ ಮತ್ತು ರೋಮನ್ ಸೈನಿಕರಿಗೆ ಬ್ಯಾರಕ್ಗಳು ಸೇರಿದಂತೆ{{mdash}}ರೋಮನ್ ''[[ಕರ್ಸಸ್ ಪಬ್ಲಿಕಸ್]]'' ನ ಏಕೈಕ ಉಳಿದಿರುವ ನಕ್ಷೆಯಾದ ''[[ಟ್ಯಾಬುಲಾ ಪ್ಯೂಟಿಂಗೇರಿಯಾನಾ]]'' ದಲ್ಲಿ ದಾಖಲಿಸಲಾಗಿದೆ.<ref>{{cite book|author=Abraham Eraly|title=The First Spring: The Golden Age of India|url=https://books.google.com/books?id=te1sqTzTxD8C&pg=PA246|accessdate=7 August 2012|date=1 December 2011|publisher=Penguin Books India|isbn=978-0-670-08478-4|pages=246–}}</ref><ref name="Iyengar_2001">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |accessdate=29 December 2008}}</ref>
ಪಶ್ಚಿಮ ಏಷ್ಯಾ ಮತ್ತು ದಕ್ಷಿಣ ಯುರೋಪಿನ ವ್ಯಾಪಾರಿಗಳು ಕೇರಳದಲ್ಲಿ ಕರಾವಳಿ ಠಾಣ್ಯಗಳು ಮತ್ತು ವಸಾಹತುಗಳನ್ನು ಸ್ಥಾಪಿಸಿದರು.<ref name="google2">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |pages=192–195 |accessdate=29 December 2008}}</ref> ಕೇರಳದೊಂದಿಗಿನ ಯಹೂದಿ ಸಂಪರ್ಕವು 573 BCE ಯ ಹಿಂದಿನದು ಎಂದು ನಂಬಲಾಗಿದೆ.<ref name="Orpa Slapak">[https://books.google.co.in/books?id=qhKGPprbQaYC&printsec=frontcover&dq=isbn:9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA#v=onepage&q=two%20millennia&f=true ''The Jews of India: A Story of Three Communities''] by Orpa Slapak. The Israel Museum, Jerusalem. 2003. p. 27. ISBN 965-278-179-7.</ref><ref name="Hillel1832">{{cite book|author=David D'Beth Hillel|title=The Travels of Rabbi David D'Beth Hillel: From Jerusalem, Through Arabia, Koordistan, Part of Persia, and India to Madras|url=https://books.google.com/books?id=j5NeAAAAcAAJ&pg=PR9|year=1832|publisher=author|page=135}}</ref><ref>{{cite book|title=The Jews in India and the Far East|url=https://books.google.com/books?id=w_v-nQEACAAJ|year=1976|publisher=Greenwood Press|pages=24–26 | isbn=978-0-8371-2615-9 }}</ref> ಅರಬ್ ವ್ಯಾಪಾರಿಗಳು ಕನಿಷ್ಠ 4 ನೇ ಶತಮಾನ BCE ಯಿಂದಲೂ ಕೇರಳದೊಂದಿಗೆ ಸಂಪರ್ಕ ಹೊಂದಿದ್ದರು; [[ಹೆರೊಡೋಟಸ್]] (484–413 BCE) ಅರಬ್ಬರು ಕೇರಳದಿಂದ ತಂದ ಸರಕುಗಳನ್ನು ಈಡನ್ನಲ್ಲಿರುವ ಯಹೂದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಗಮನಿಸಿದರು.<ref name="Kusuman"/> ಈ ಅರಬ್ ವ್ಯಾಪಾರಿಗಳು ಸ್ಥಳೀಯ ಸಮುದಾಯಗಳೊಂದಿಗೆ ಮದುವೆಯಾದರು, ಇದು ಮುಸ್ಲಿಂ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಸಮುದಾಯದ ರಚನೆಗೆ ಕಾರಣವಾಯಿತು.<ref name="Dialogue">{{cite book |author=Rolland E. Miller |title=Hindu-Christian Dialogue: Perspectives and Encounters |publisher=Motilal Banarsidass Publications |year=1993 |isbn=978-81-208-1158-4 |url=https://books.google.com/books?id=6eHgNyNimoAC |page=50}}</ref> 4 ನೇ ಶತಮಾನ CE ಯಲ್ಲಿ, ಕೆಲವು ಕ್ರೈಸ್ತರು [[ಪರ್ಷಿಯಾ]]ದಿಂದ ವಲಸೆ ಬಂದರು ಮತ್ತು ಆರಂಭಿಕ [[ಸೇಂಟ್ ತಾಮಸ್ ಕ್ರೈಸ್ತರು|ಸಿರಿಯನ್ ಕ್ರಿಶ್ಚಿಯನ್]] ಸಮುದಾಯಕ್ಕೆ ಸೇರ್ಪಡೆಗೊಂಡರು, ಇದು 1 ನೇ ಶತಮಾನ CE ಯಲ್ಲಿ [[ತಾಮಸ್ ಪ್ರೇರಿತ]]ನ ಪ್ರಚಾರ ಚಟುವಟಿಕೆಗಳಿಂದ ತನ್ನ ಮೂಲವನ್ನು ಪತ್ತೆಹಚ್ಚುತ್ತದೆ.<ref name="Erwin Fahlbusch">[https://books.google.co.in/books?id=lZUBZlth2qgC&printsec=frontcover&dq=isbn:9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA#v=onepage&q=Muziris&f=true ''The Encyclopedia of Christianity, Volume 5''] by Erwin Fahlbusch. Wm. B. Eerdmans Publishing - 2008. p. 285. ISBN 978-0-8028-2417-2.</ref><ref>{{cite book |author=Geoffrey Wainwright |title=The Oxford History Of Christian Worship |publisher=Oxford University Press |year=2006 |isbn=978-0-19-513886-3 |url=https://books.google.com/books?id=h5VQUdZhx1gC |page=666 |accessdate=30 May 2015}}</ref> ಮಾಪ್ಪಿಲ ಎಂಬ ಪದವು{{mdash}}ಮೂಲತಃ ಗೌರವಾನ್ವಿತ ವಿದೇಶಿ ಸಂದರ್ಶಕರಿಗೆ ಅನ್ವಯಿಸುವ ಗೌರವಾರ್ಥ ಪದವಾಗಿದ್ದು{{mdash}}ನಂತರ ಯಹೂದಿ, ಸಿರಿಯನ್ ಕ್ರಿಶ್ಚಿಯನ್ ಮತ್ತು ಮುಸ್ಲಿಂ ವಲಸಿಗರ ವಂಶಸ್ಥರೊಂದಿಗೆ ಸಂಬಂಧ ಹೊಂದಿತು, ಇದು ಕ್ರಮವಾಗಿ [[ಯೆಹೂದ ಮಾಪ್ಪಿಲ]]ಗಳು, [[ಸೇಂಟ್ ತಾಮಸ್ ಕ್ರೈಸ್ತರು|ನಸ್ರಾನಿ ಮಾಪ್ಪಿಲ]]ಗಳು ಮತ್ತು [[ಮಲಬಾರ್ ಮುಸ್ಲಿಮರು|ಮುಸ್ಲಿಂ ಮಾಪ್ಪಿಲ]]ಗಳ ಪದಗಳಿಗೆ ಕಾರಣವಾಯಿತು.<ref name="BMalieckal">* Bindu Malieckal (2005) Muslims, Matriliny, and A Midsummer Night's Dream: European Encounters with the Mappilas of Malabar, India; The Muslim World Volume 95 Issue 2</ref><ref>{{cite book |author=Milton J, Skeat WW, Pollard AW, Brown L |title=The Indian Christians of St Thomas |publisher=Cambridge University Press |date=31 August 1982 |isbn=0-521-21258-8 |page=171}}</ref> ಈ ಸಮುದಾಯಗಳ ಸಂಪ್ರದಾಯಗಳ ಪ್ರಕಾರ, ಭಾರತದಲ್ಲಿನ ಕೆಲವು ಆರಂಭಿಕ ಧಾರ್ಮಿಕ ಸ್ಥಾಪನೆಗಳನ್ನು ಕೇರಳದಲ್ಲಿ ನಿರ್ಮಿಸಲಾಯಿತು.<ref name="Dialogue"/> ಇವುಗಳಲ್ಲಿ [[ಸೇಂಟ್ ತಾಮಸ್ ಕ್ರಿಶ್ಚಿಯನ್ ಚರ್ಚುಗಳು]],<ref>{{cite book |author=Susan Bayly |title=Saints, Goddesses and Kings |publisher=Cambridge University Press |year=2004 |isbn=978-0-521-89103-5 |url=https://books.google.com/books?id=Fxqtx8SflEsC |page=40 |accessdate=30 May 2015}}</ref> [[ಚೇರಮನ್ ಜುಮಾ ಮಸೀದಿ]] (629 CE ಯಲ್ಲಿ ಸ್ಥಾಪಿಸಲಾಯಿತು), ಭಾರತದ ಮೊದಲ ಮಸೀದಿ,<ref>{{cite book |author=Jonathan Goldstein |title=The Jews of China |publisher=M.E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123 |accessdate=30 May 2015}}</ref> ಮತ್ತು [[ಪರದೇಶಿ ಸಿನಾಗೋಗ್]] (1568 CE ಯಲ್ಲಿ ನಿರ್ಮಿಸಲಾಯಿತು), [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಕ್ರಿಯ ಸಿನಾಗೋಗ್ ಸೇರಿವೆ.<ref>{{cite book |author=Nathan Katz |title=Who Are the Jews of India? |publisher=University of California Press |year=2000 |isbn=978-0-520-21323-4 |url=https://books.google.com/books?id=ZWX6pF2PTJwC |page=245 |accessdate=30 May 2015}}</ref>
=== ಮಧ್ಯಕಾಲೀನ ಅವಧಿ ===
[[File:3rd Tiruvalla Copper Plate.jpg|thumb|[[ಸೇಂಟ್ ತಾಮಸ್ ಕ್ರೈಸ್ತರು|ಸೇಂಟ್ ತಾಮಸ್ ಕ್ರೈಸ್ತರಿಗೆ]] ನೀಡಲಾದ [[ಥರಿಸಪಲ್ಲಿ ತಟ್ಟೆಗಳು]] ವ್ಯಾಪಾರಿ ಸಂಘಗಳು ಮತ್ತು ವ್ಯಾಪಾರ ನಿಗಮಗಳು ಕುಲಶೇಖರ ಅವಧಿಯಲ್ಲಿ ಆರ್ಥಿಕತೆ ಮತ್ತು ಸಾಮಾಜಿಕ ಜೀವನದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದವು ಎಂದು ಸಾಕ್ಷ್ಯ ನೀಡುತ್ತವೆ.]]
ಎರಡನೇ ಚೇರ ಸಾಮ್ರಾಜ್ಯ (c. 800–1102), ಇದನ್ನು [[ಮಹೋದಯಪುರಂ]]ನ ಕುಲಶೇಖರ ರಾಜವಂಶ ಎಂದೂ ಕರೆಯುತ್ತಾರೆ, ಇದನ್ನು [[ಕುಲಶೇಖರ ಆಳ್ವಾರ್|ಕುಲಶೇಖರ ವರ್ಮನ್]] ಸ್ಥಾಪಿಸಿದರು ಮತ್ತು ಪ್ರಸ್ತುತ ಕೇರಳದ ಹೆಚ್ಚಿನ ಭಾಗ ಮತ್ತು ಆಧುನಿಕ ತಮಿಳುನಾಡಿನ ಭಾಗಗಳನ್ನು ಒಳಗೊಂಡ ಪ್ರದೇಶವನ್ನು ಆಳಿದರು. ಕುಲಶೇಖರ ಅವಧಿಯ ಆರಂಭಿಕ ಹಂತದಲ್ಲಿ, ದಕ್ಷಿಣ ಪ್ರದೇಶವು{{mdash}}[[ನಾಗರ್ಕೋವಿಲ್]] ನಿಂದ [[ತಿರುವಲ್ಲ]] ವರೆಗೆ{{mdash}}[[ಆಯ್ಸ್ (ಕೇರಳ)|ಆಯ್]] ರಾಜವಂಶದ ನಿಯಂತ್ರಣದಲ್ಲಿತ್ತು. 10 ನೇ ಶತಮಾನದ ವೇಳೆಗೆ, ಆಯ್ಸ್ ತಮ್ಮ ಶಕ್ತಿಯನ್ನು ಕಳೆದುಕೊಂಡರು ಮತ್ತು ಈ ಪ್ರದೇಶವನ್ನು ಕುಲಶೇಖರ ಸಾಮ್ರಾಜ್ಯಕ್ಕೆ ಸೇರಿಸಲಾಯಿತು.<ref name="Balachand">{{cite book|author=K. Balachandran Nayar|title=In quest of Kerala|url=https://books.google.com/books?id=EXIeAAAAMAAJ|accessdate=8 August 2012|year=1974|publisher=Accent Publications|page=86}}</ref><ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|page=97}}</ref> ಕುಲಶೇಖರ ಆಳ್ವಿಕೆಯಲ್ಲಿ, ಕೇರಳವು ಕಲೆ, ಸಾಹಿತ್ಯ, ವ್ಯಾಪಾರ ಮತ್ತು ಹಿಂದೂ ಧರ್ಮದಲ್ಲಿ [[ಭಕ್ತಿ ಚಳುವಳಿ]] ಯಲ್ಲಿ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟ ಒಂದು ಅಭಿವೃದ್ಧಿ ಹೊಂದಿದ ಅವಧಿಯನ್ನು ಅನುಭವಿಸಿತು.<ref name="Sreedhar123">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|pages=123–131}}</ref> ಈ ಸಮಯದಲ್ಲಿ ವಿಶಿಷ್ಟವಾದ ಕೇರಳೀಯ ಗುರುತು ಹೊರಹೊಮ್ಮಲು ಪ್ರಾರಂಭಿಸಿತು, ವಿಶೇಷವಾಗಿ ಭಾಷಾ ವ್ಯತ್ಯಾಸದ ಮೂಲಕ ತಮಿಳು ಸಂಸ್ಕೃತಿಯಿಂದ ಪ್ರತ್ಯೇಕವಾಯಿತು.<ref name="AsherKumari1997">{{cite book|author1=R. E. Asher|author2=T. C. Kumari|title=Malayalam|url=https://books.google.com/books?id=uFQG2DCaIsIC|year=1997|publisher=Psychology Press|isbn=978-0-415-02242-2|pages=24–27}}</ref> ಆಡಳಿತ ಉದ್ದೇಶಗಳಿಗಾಗಿ, ಸಾಮ್ರಾಜ್ಯವನ್ನು [[ನಾಡುವಾಜಿ]]ಗಳು ಎಂದು ಕರೆಯಲ್ಪಡುವ ಸ್ಥಳೀಯ ಮುಖಂಡರು ಆಳುವ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ಪ್ರಾಂತ್ಯವನ್ನು ಮತ್ತಷ್ಟು ''ದೇಶಂ'' ಗಳಾಗಿ ವಿಂಗಡಿಸಲಾಗಿತ್ತು, ಅವುಗಳನ್ನು ದೇಶವಾಝಿಗಳು ಮೇಲ್ವಿಚಾರಣೆ ಮಾಡುತ್ತಿದ್ದರು.<ref name="Sreedhar123"/>
11 ನೇ ಶತಮಾನದಲ್ಲಿ ಚೇರ-ಚೋಳ ಸಂಘರ್ಷಗಳ ಸರಣಿಯು ಕೇರಳದ ಬಂದರುಗಳ ಮೂಲಕ ವಿದೇಶಿ ವ್ಯಾಪಾರಕ್ಕೆ ಅಡ್ಡಿಯಾಯಿತು. ಈ ಅವಧಿಯಲ್ಲಿ, ಹಿಂದೂ ಧರ್ಮದೊಂದಿಗೆ ಹಿಂದೆ ಸಹಬಾಳ್ವೆ ನಡೆಸಿದ್ದ [[ಬೌದ್ಧ]] ಮತ್ತು [[ಜೈನ]] ಧರ್ಮಗಳು ಕ್ಷೀಣಿಸಿದವು ಮತ್ತು ಅಂತಿಮವಾಗಿ ಈ ಪ್ರದೇಶದಿಂದ ಕಣ್ಮರೆಯಾಯಿತು.<ref>{{cite web |url=http://www.kerala.cc/keralahistory/index34.htm |title=The Buddhist History of Kerala |publisher=Kerala.cc |accessdate=25 September 2013 |archive-date=4 March 2016 |archive-url=https://web.archive.org/web/20160304215933/http://www.kerala.cc/keralahistory/index34.htm |url-status=dead }}</ref> ಸಾಮಾಜಿಕ ರಚನೆಗಳು ಹೆಚ್ಚು ಬಿಗಿಯಾದವು, ಮತ್ತು [[ಕೇರಳದಲ್ಲಿ ಜಾತಿ ವ್ಯವಸ್ಥೆ|ಜಾತಿ ವಿಭಾಗಗಳು]] ಆಳವಾದವು.<ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=9 August 2012|date=1 January 2007|publisher=DC Books|isbn=978-81-264-1578-6|page=138}}</ref> ಕುಲಶೇಖರ ರಾಜವಂಶವು ಅಂತಿಮವಾಗಿ 1102 CE ಯಲ್ಲಿ [[ನಂತರದ ಪಾಂಡ್ಯರು]] ಮತ್ತು [[ನಂತರದ ಚೋಳರು]] ನ ಸಂಯೋಜಿತ ದಾಳಿಯ ನಂತರ ಕುಸಿಯಿತು.<ref name="Balachand"/> 14 ನೇ ಶತಮಾನದಲ್ಲಿ, ದಕ್ಷಿಣ [[ವೇಣಾಡ್|ವೇಣಾಡ್ ಸಾಮ್ರಾಜ್ಯ]]ದ ರವಿ ವರ್ಮ ಕುಲಶೇಖರ (r. 1299–1314) ದಕ್ಷಿಣ ಭಾರತದ ಹೆಚ್ಚಿನ ಭಾಗದಲ್ಲಿ ಸಂಕ್ಷಿಪ್ತವಾಗಿ ಅಲ್ಪಕಾಲಿಕ ಪ್ರಾಮುಖ್ಯತೆಯನ್ನು ಸ್ಥಾಪಿಸಿದರು. ಅವರ ಮರಣದ ನಂತರ, ಮತ್ತು ಬಲವಾದ ಕೇಂದ್ರ ಅಧಿಕಾರದ ಅನುಪಸ್ಥಿತಿಯಲ್ಲಿ, ಈ ಪ್ರದೇಶವು ಮೂವತ್ತು ಸಣ್ಣ, ಆಗಾಗ್ಗೆ ಯುದ್ಧ ಮಾಡುವ ಸಂಸ್ಥಾನಗಳಾಗಿ ವಿಭಜನೆಯಾಯಿತು. ಅತ್ಯಂತ ಶಕ್ತಿಶಾಲಿಗಳೆಂದರೆ ಉತ್ತರದಲ್ಲಿ [[ಸಮೂತಿರಿ]] (ಜಾಮೋರಿನ್) ಸಾಮ್ರಾಜ್ಯ, ದಕ್ಷಿಣದಲ್ಲಿ ವೇಣಾಡ್ ಮತ್ತು ಮಧ್ಯ ಪ್ರದೇಶದಲ್ಲಿ ಕೊಚ್ಚಿ. 18 ನೇ ಶತಮಾನದಲ್ಲಿ, ತಿರುವಾಂಕೂರಿನ ರಾಜ [[ಅನಿಝಂ ತಿರುನಾಳ್ ಮಾರ್ತಾಂಡ ವರ್ಮ]] ಅವರು ಸೈನ್ಯದ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಿದರು ಮತ್ತು ಉತ್ತರ ಕೇರಳದವರೆಗೆ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡರು, ಈ ಪ್ರದೇಶದಲ್ಲಿ ತಿರುವಾಂಕೂರನ್ನು ಪ್ರಬಲ ಶಕ್ತಿಯಾಗಿ ಸ್ಥಾಪಿಸಿದರು. ಕೊಚ್ಚಿ ಆಡಳಿತಗಾರನು ಶಾಂತಿಗಾಗಿ ಮೊಕದ್ದಮೆ ಹೂಡಿದನು, ಮತ್ತು ಮಲಬಾರ್ ಪ್ರದೇಶವು ಅಂತಿಮವಾಗಿ [[1947 ರಲ್ಲಿ ಭಾರತದ ಸ್ವಾತಂತ್ರ್ಯ|ಭಾರತದ ಸ್ವಾತಂತ್ರ್ಯ]] ದವರೆಗೆ ನೇರ [[ಬ್ರಿಟಿಷ್ ಆಳ್ವಿಕೆ|ಬ್ರಿಟಿಷ್ ಆಳ್ವಿಕೆ]] ಯ ಅಡಿಯಲ್ಲಿ ಬಂದಿತು.<ref>{{cite book|author=Educational Britannica Educational|title=The Geography of India: Sacred and Historic Places|url=https://books.google.com/books?id=xPUvqtdfjyAC&pg=PA311|accessdate=15 September 2012|date=15 August 2010|publisher=The Rosen Publishing Group|isbn=978-1-61530-202-4|page=311}}</ref><ref>{{cite book |last1=Boland-Crewe |first1=Tara |last2=Lea |first2=David |title=The Territories and States of India |date=2003 |doi=10.4324/9780203402900 |isbn=978-1-135-35625-5 |pages=144–146 }}</ref>
=== ವಸಾಹತುಶಾಹಿ ಆಳ್ವಿಕೆ ===
[[File:Caminho maritimo para a India.png|thumb|ಕೇರಳವನ್ನು ತಲುಪಲು [[ವಾಸ್ಕೋ ಡ ಗಾಮಾ]] ತೆಗೆದುಕೊಂಡ ಮಾರ್ಗ (ಕಪ್ಪು ಬಣ್ಣದಲ್ಲಿ ಸೂಚಿಸಲಾಗಿದೆ)]]
[[ಮಧ್ಯಯುಗ|ಉಚ್ಚ]] ಮತ್ತು [[ಕೊನೆಯ ಮಧ್ಯಯುಗ]]ದಲ್ಲಿ, ಅರಬ್ ವ್ಯಾಪಾರಿಗಳು [[ಹಿಂದೂ ಮಹಾಸಾಗರ]]ದಲ್ಲಿ ಮಸಾಲೆ ವ್ಯಾಪಾರದ ಮೇಲೆ ಸಮುದ್ರ ಏಕಸ್ವಾಮ್ಯವನ್ನು ಹೊಂದಿದ್ದರು. ಯುರೋಪಿಯನ್ [[ಭೌಗೋಳಿಕ ಅನ್ವೇಷಣೆಗಳ ಯುಗ]] ದಲ್ಲಿ ಮಸಾಲೆ ವ್ಯಾಪಾರವು{{mdash}}ವಿಶೇಷವಾಗಿ ಕರಿಮೆಣಸಿನಲ್ಲಿ{{mdash}}ಯುರೋಪಿಯನ್ ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾದಾಗ ಈ ಪ್ರಾಬಲ್ಯವನ್ನು ಸವಾಲು ಮಾಡಲಾಯಿತು.<ref>{{cite book | last = Corn | first = Charles |author2=Glasserman, Debbie | title = The Scents of Eden: A History of the Spice Trade | publisher = Kodansha America |date=March 1999 | isbn = 1-56836-249-8}}</ref> 15 ನೇ ಶತಮಾನದ ವೇಳೆಗೆ, ಪೋರ್ಚುಗೀಸರು ಪೂರ್ವ ಸಮುದ್ರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಾರಂಭಿಸಿದರು, ಇದು 1498 ರಲ್ಲಿ [[ಕೋಝಿಕೋಡ್]] (ಕ್ಯಾಲಿಕಟ್) ಬಳಿಯ [[ಕಪ್ಪಾಡ್]] ನಲ್ಲಿ [[ವಾಸ್ಕೋ ಡ ಗಾಮಾ]] ಆಗಮನದೊಂದಿಗೆ ಕೊನೆಗೊಂಡಿತು.<ref>{{Cite book |author=Ravindran PN |title=Black Pepper: Piper Nigrum |publisher=CRC Press |year=2000 |accessdate=11 November 2007 |url=https://books.google.com/books?id=VaGCgSLrdr4C |page=3 |isbn=978-90-5702-453-5}}</ref><ref name="Curtin1984">{{cite book|author=Philip D. Curtin|title=Cross-Cultural Trade in World History|url=https://books.google.com/books?id=R4IiYFhliv4C|date=25 May 1984|publisher=Cambridge University Press|isbn=978-0-521-26931-5|page=144}}</ref> ಕೋಝಿಕೋಡ್ನ [[ಜಾಮೋರಿನ್]] ಪೋರ್ಚುಗೀಸರಿಗೆ ತನ್ನ ಪ್ರಜೆಗಳೊಂದಿಗೆ ವ್ಯಾಪಾರ ಮಾಡಲು ಅನುಮತಿ ನೀಡಿದರು, ಇದು ಸಮೃದ್ಧ ಪೋರ್ಚುಗೀಸ್ [[ಕಾರ್ಖಾನೆ (ವ್ಯಾಪಾರ ಠಾಣ್ಯ)|ಕಾರ್ಖಾನೆ]] ಮತ್ತು ಕೋಟೆಯ ಸ್ಥಾಪನೆಗೆ ಕಾರಣವಾಯಿತು.<ref name="Mehta2005" />
ಆದಾಗ್ಯೂ, ಪೋರ್ಚುಗೀಸರು ಜಾಮೋರಿನ್ ರಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಬ್ ವ್ಯಾಪಾರಿಗಳ ಮೇಲೆ ದಾಳಿ ಮಾಡಿದಾಗ ಉದ್ವಿಗ್ನತೆಗಳು ಹುಟ್ಟಿಕೊಂಡವು, ಇದು ಸಂಬಂಧಗಳಲ್ಲಿ ಕುಸಿತಕ್ಕೆ ಕಾರಣವಾಯಿತು. ಜಾಮೋರಿನ್ ಮತ್ತು ಕೊಚ್ಚಿ ರಾಜನ ನಡುವಿನ ಪೈಪೋಟಿಯಿಂದ ಪ್ರಯೋಜನ ಪಡೆಯುವ ಅವಕಾಶವನ್ನು ಬಳಸಿಕೊಂಡು, ಪೋರ್ಚುಗೀಸರು ಕೊಚ್ಚಿಯೊಂದಿಗೆ ಮೈತ್ರಿ ಮಾಡಿಕೊಂಡರು. [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] 1505 ರಲ್ಲಿ ಪೋರ್ಚುಗೀಸ್ ಭಾರತದ ವೈಸರಾಯ್ ಆಗಿ ನೇಮಕಗೊಂಡಾಗ, ಅವರು ತಮ್ಮ ಪ್ರಧಾನ ಕಛೇರಿಯನ್ನು ಕೋಝಿಕೋಡ್ನಲ್ಲಿ ಅಲ್ಲ, ಬದಲಿಗೆ [[ಫೋರ್ಟ್ ಕೊಚ್ಚಿ]] ([[ಫೋರ್ಟ್ ಇಮ್ಯಾನುಯೆಲ್]]) ಯಲ್ಲಿ ಸ್ಥಾಪಿಸಿದರು. ಅವರ ಆಡಳಿತದ ಅಡಿಯಲ್ಲಿ, ಪೋರ್ಚುಗೀಸರು ಮಲಬಾರ್ ಕರಾವಳಿಯಲ್ಲಿ ಹಲವಾರು ಕೋಟೆಗಳನ್ನು ನಿರ್ಮಿಸುವ ಮೂಲಕ ತಮ್ಮ ಪ್ರಭಾವವನ್ನು ಬಲಪಡಿಸಿದರು.<ref name="Mehta2005">{{cite book|author=J. L. Mehta|title=Advanced Study in the History of Modern India: Volume One: 1707–1813|url=https://books.google.com/books?id=d1wUgKKzawoC&pg=PA324|accessdate=9 August 2012|date=1 January 2005|publisher=Sterling Publishers Pvt. Ltd|isbn=978-1-932705-54-6|pages=324–327}}</ref> ಈ ಮುನ್ನಡೆಗಳ ಹೊರತಾಗಿಯೂ, ಪೋರ್ಚುಗೀಸರು ಜಾಮೋರಿನ್ನ ನೌಕಾ ಪಡೆಗಳಿಂದ ಗಮನಾರ್ಹ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ ಕೋಝಿಕೋಡ್ನ ಅಡ್ಮಿರಲ್ಗಳಾದ [[ಕುಂಜಲಿ ಮರಕ್ಕರ್]]ರ ಆಜ್ಞೆಯಡಿಯಲ್ಲಿ, ಅವರು ಪರಿಣಾಮಕಾರಿ ಸಮುದ್ರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರು. ಈ ಪ್ರತಿರೋಧವು ಅಂತಿಮವಾಗಿ ಪೋರ್ಚುಗೀಸರನ್ನು ಒಪ್ಪಂದಕ್ಕೆ ಒತ್ತಾಯಿಸಿತು. 1571 ರಲ್ಲಿ, ಜಾಮೋರಿನ್ ಪಡೆಗಳು [[ತಾನೂರ್ ಸಾಮ್ರಾಜ್ಯ#ಚಾಲಿಯಮ್ ಕೋಟೆಯ ಕದನಗಳು|ಚಾಲಿಯಮ್ ಕೋಟೆಯ ಕದನದಲ್ಲಿ]] ಪೋರ್ಚುಗೀಸರನ್ನು ಸೋಲಿಸಿದವು, ಇದು ಈ ಪ್ರದೇಶದಲ್ಲಿ ಪೋರ್ಚುಗೀಸ್ ಮಹತ್ವಾಕಾಂಕ್ಷೆಗಳಿಗೆ ದೊಡ್ಡ ಹಿನ್ನಡೆಯನ್ನು ಗುರುತಿಸಿತು.<ref>{{cite book|author=K. K. N. Kurup|title=India's Naval Traditions: The Role of Kunhali Marakkars|url=https://books.google.com/books?id=HKmXcBCKEcAC&pg=PA51|accessdate=9 August 2012|date=1 January 1997|publisher=Northern Book Centre|isbn=978-81-7211-083-3|pages=37–38}}</ref>
ಪೋರ್ಚುಗೀಸರು ಅಂತಿಮವಾಗಿ [[ಡಚ್ ಈಸ್ಟ್ ಇಂಡಿಯಾ ಕಂಪನಿ]]ಯಿಂದ ಸ್ಥಳಾಂತರಿಸಲ್ಪಟ್ಟರು, ಇದು ಈ ಪ್ರದೇಶದಲ್ಲಿ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲು ಕೋಝಿಕೋಡ್ ಮತ್ತು ಕೊಚ್ಚಿ ನಡುವಿನ ನಡೆಯುತ್ತಿರುವ ಸಂಘರ್ಷಗಳ ಲಾಭವನ್ನು ಪಡೆಯಿತು.<ref name="South Asia 2006">{{cite book|title=South Asia 2006|url=https://books.google.com/books?id=YG8bAQAAMAAJ|accessdate=18 November 2012|date=1 December 2005|publisher=Taylor & Francis|page=289}}</ref> ಆದಾಗ್ಯೂ, ಡಚ್ಚರು ಸಹ ಸೈನ್ಯದ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ [[ತಿರುವಾಂಕೂರು ರಾಜಮನೆತನ]]ದ [[ಮಾರ್ತಾಂಡ ವರ್ಮ]]ರಿಂದ. 1741 ರಲ್ಲಿ [[ಕೊಲಾಚೆಲ್ ಕದನ]]ದಲ್ಲಿ ನಿರ್ಣಾಯಕ ಡಚ್ ಸೋಲಿನ ನಂತರ,<ref name="google3">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA57|accessdate=18 November 2012|date=1 January 1993|publisher=Northern Book Centre|isbn=978-81-7211-052-9|pages=57–70}}</ref> 1753 ರಲ್ಲಿ ಮಾವೆಲಿಕ್ಕರ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಡಚ್ಚರು ಪ್ರಾದೇಶಿಕ ರಾಜಕೀಯ ವ್ಯವಹಾರಗಳಿಂದ ಹಿಂತೆಗೆದುಕೊಳ್ಳಲು ಮತ್ತು ಅವರ ಪಾತ್ರವನ್ನು ವ್ಯಾಪಾರಕ್ಕೆ ಸೀಮಿತಗೊಳಿಸಲು ಒತ್ತಾಯಿಸಲಾಯಿತು.<ref name="Singh2010">{{cite book|author=Anjana Singh|title=Fort Kochi in Kerala, 1750–1830: The Social Condition of a Dutch Community in an Indian Milieu|url=https://books.google.com/books?id=LFy4pWUlnfwC&pg=PA22|accessdate=18 November 2012|date=30 April 2010|publisher=BRILL|isbn=978-90-04-16816-9|pages=22–52}}</ref><ref name="Iyer1995">{{cite book|author=S. Krishna Iyer|title=Travancore Dutch relations, 1729–1741|url=https://books.google.com/books?id=rUtuAAAAMAAJ|accessdate=18 November 2012|year=1995|publisher=CBH Publications|isbn=978-81-85381-42-8|page=49}}</ref><ref name="Lannoy1997">{{cite book|author=Mark de Lannoy|title=The Kulasekhara Perumals of Travancore: history and state formation in Travancore from 1671 to 1758|url=https://books.google.com/books?id=pKjZAAAAMAAJ|accessdate=18 November 2012|year=1997|publisher=Leiden University|isbn=978-90-73782-92-1|page=190}}</ref> ಮಾರ್ತಾಂಡ ವರ್ಮ ತಮ್ಮ ಸೈನ್ಯದ ಕಾರ್ಯಾಚರಣೆಗಳನ್ನು ಮುಂದುವರೆಸಿದರು, ಕೇರಳದಲ್ಲಿ ತಿರುವಾಂಕೂರನ್ನು ಪ್ರಮುಖ ಶಕ್ತಿಯಾಗಿ ಸ್ಥಾಪಿಸಿದರು.<ref>{{cite book|author=A. Sreedhara Menon|title=Political History of Modern Kerala|url=https://books.google.com/books?id=wnAjqjhc1VcC&pg=PA140|accessdate=10 August 2012|year=1987|publisher=D C Books|isbn=978-81-264-2156-5|page=140}}</ref>
1766 ರಲ್ಲಿ, [[ಮೈಸೂರು ಸಾಮ್ರಾಜ್ಯ|ಮೈಸೂರಿನ]] ಆಡಳಿತಗಾರ [[ಹೈದರ್ ಅಲಿ]], [[ಮೈಸೂರಿನ ಕೇರಳ ಆಕ್ರಮಣ#ಹೈದರ್ ಅಲಿಯ ಆಕ್ರಮಣ|ಉತ್ತರ ಕೇರಳವನ್ನು ಆಕ್ರಮಿಸಿದನು]],<ref name="Rai">{{cite book|author=Raghunath Rai|title=History|url=https://books.google.com/books?id=Z4-8Z0gqBkoC&pg=PA14|accessdate=18 November 2012|publisher=FK Publications|isbn=978-81-87139-69-0|pages=14–}}</ref> ಮತ್ತು ಅವನ ಮಗ ಮತ್ತು ಉತ್ತರಾಧಿಕಾರಿ, [[ಟಿಪ್ಪು ಸುಲ್ತಾನ್]], ವಿಸ್ತರಿಸುತ್ತಿರುವ [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]] ವಿರುದ್ಧ [[ಮೈಸೂರಿನ ಕೇರಳ ಆಕ್ರಮಣ#ಟಿಪ್ಪು ಸುಲ್ತಾನನ ಆಕ್ರಮಣಗಳು|ಸೈನ್ಯದ ಕಾರ್ಯಾಚರಣೆಗಳನ್ನು]] ಪ್ರಾರಂಭಿಸಿದರು. ಈ ಮುಖಾಮುಖಿಗಳು ನಾಲ್ಕು [[ಆಂಗ್ಲೋ-ಮೈಸೂರು ಯುದ್ಧಗಳಲ್ಲಿ]] ಎರಡಕ್ಕೆ ಕೊಡುಗೆ ನೀಡಿದವು.<ref name="MuseumDallapiccola2010">{{cite book|author1=British Museum|author2=Anna Libera Dallapiccola|title=South Indian Paintings: A Catalogue of the British Museum Collection|url=https://books.google.com/books?id=FIzWapiacQcC&pg=PA12|accessdate=18 November 2012|date=22 June 2010|publisher=Mapin Publishing Pvt Ltd|isbn=978-0-7141-2424-7|pages=12–}}</ref><ref name="ThorpeEdgar">{{cite book|author1=Edgar Thorpe, Showick Thorpe|author2=Thorpe Edgar|title=The Pearson CSAT Manual 2011|url=https://books.google.com/books?id=WuBFs6yFRwcC&pg=RA1-PA99|accessdate=18 November 2012|publisher=Pearson Education India|isbn=978-81-317-5830-4|page=99}}</ref> 1790 ರ ದಶಕದ ಆರಂಭದ ವೇಳೆಗೆ, ಟಿಪ್ಪು ಸುಲ್ತಾನ್ [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ವನ್ನು ಬ್ರಿಟಿಷರಿಗೆ ಬಿಟ್ಟುಕೊಡಲು ಒತ್ತಾಯಿಸಲಾಯಿತು, ಮತ್ತು ಈ ಪ್ರದೇಶಗಳನ್ನು 1792 ರಲ್ಲಿ [[ಬ್ರಿಟಿಷ್ ಭಾರತ]]ದ [[ಮದ್ರಾಸ್ ಪ್ರೆಸಿಡೆನ್ಸಿ]] ಗೆ ಸೇರಿಸಲಾಯಿತು.<ref name="The Edinburgh Gazetteer: Or, Geographical Dictionary: Containing a Description of the Various Countries, Kingdoms, States, Cities, Towns, Mountains, &c. of the World; an Account of the Government, Customs, and Religion of the Inhabitants; the Boundaries and Natural Productions of Each Country, &c. &c. Forming a Complete Body of Geography, Physical, Political, Statistical, and Commercial with Addenda, Containing the Present State of the New Governments in South America...">{{cite book|title=The Edinburgh Gazetteer|url=https://books.google.com/books?id=xRIyAQAAMAAJ&pg=PA63|accessdate=18 November 2012|year=1827|publisher=Longman, Rees, Orme, Brown, and Green|pages=63–}}</ref><ref name="Kumar1965">{{cite book|author=Dharma Kumar|title=Land and Caste in South India: Agricultural Labor in the Madras Presidency During the Nineteenth Century|url=https://books.google.com/books?id=psw5AAAAIAAJ&pg=PA87|accessdate=18 November 2012|year=1965|publisher=CUP Archive|pages=87–|id=GGKEY:T72DPF9AZDK}}</ref><ref name="Ittaman2003">{{cite book|author=K.P. Ittaman|title=History of Mughal Architecture Volume Ii|url=https://books.google.com/books?id=ZQ5lFywZAqYC&pg=PA30|accessdate=18 November 2012|date=1 June 2003|publisher=Abhinav Publications|isbn=978-81-7017-034-1|pages=30–}}</ref> ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 1791 ರಲ್ಲಿ ಕೊಚ್ಚಿ ಮತ್ತು 1795 ರಲ್ಲಿ ತಿರುವಾಂಕೂರಿನೊಂದಿಗೆ ಸಹಾಯಕ ಮೈತ್ರಿಗಳನ್ನು ಸುರಕ್ಷಿತಗೊಳಿಸಿತು.<ref>{{Cite book |author=Superintendent of Government Printing |title=Imperial Gazetteer of India (Provincial Series): Madras |publisher=Government of India |location=Calcutta |year=1908 |accessdate=11 November 2007 |url=https://books.google.com/books?id=xXglUxeS_WkC |page=22}}</ref> 18 ನೇ ಶತಮಾನದ ಅಂತ್ಯದ ವೇಳೆಗೆ, ಕೇರಳವು ಸಂಪೂರ್ಣವಾಗಿ ಬ್ರಿಟಿಷರಿಂದ ನೇರವಾಗಿ ಆಡಳಿತ ನಡೆಸಲ್ಪಡುತ್ತಿತ್ತು ಅಥವಾ ಅವರ [[ಸಾಮಂತತ್ವ]]ದ ಅಡಿಯಲ್ಲಿತ್ತು.<ref name="RajTharakan1981">{{cite book|author1=Kakkadan Nandanath Raj|author2=Michael Tharakan|title=Agrarian reform in Kerala and its impact on the rural economy: a preliminary assessment|url=https://books.google.com/books?id=JF6FAAAAIAAJ|accessdate=18 November 2012|year=1981|publisher=International Labour Office|pages=2–3}}</ref>
20 ನೇ ಶತಮಾನದಲ್ಲಿ, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಕೇರಳವು ಹಲವಾರು ಪ್ರಮುಖ ದಂಗೆಗಳ ತಾಣವಾಗಿತ್ತು. ಇವುಗಳಲ್ಲಿ ಅತ್ಯಂತ ಗಮನಾರ್ಹವಾದುದು 1921 ರ [[ಮಲಬಾರ್ ದಂಗೆ]], ಇದರಲ್ಲಿ ಮಲಬಾರ್ ಪ್ರದೇಶದ ಮಾಪ್ಪಿಲ ಮುಸ್ಲಿಮರು ಹಿಂದೂ [[ಜಮೀನ್ದಾರ್]]ಗಳು (ಭೂಮಾಲೀಕರು) ಮತ್ತು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳ ವಿರುದ್ಧ ಗಲಭೆ ನಡೆಸಿದರು.<ref name="Qureshi1999">{{cite book|author=M. Naeem Qureshi|title=Pan-Islam in British Indian Politics: A Study of the Khilafat Movement, 1918–1924|url=https://books.google.com/books?id=czKYZPyoyx0C|year=1999|publisher=BRILL|isbn=90-04-11371-1|pages=445–447}}</ref> ಸಾಮಾಜಿಕ ಸುಧಾರಣೆಯ ಕ್ಷಣಗಳು ಸಹ ಈ ಅವಧಿಯಲ್ಲಿ ವೇಗವನ್ನು ಪಡೆದುಕೊಂಡವು, ವಿಶೇಷವಾಗಿ ಜಾತಿ-ಆಧಾರಿತ ತಾರತಮ್ಯವನ್ನು ಸವಾಲು ಮಾಡುವವು. ಒಂದು ಪ್ರಮುಖ ಮೈಲಿಗಲ್ಲು 1936 ರ ತಿರುವಾಂಕೂರಿನ [[ದೇವಾಲಯ ಪ್ರವೇಶ ಘೋಷಣೆ]]ಯಾಗಿದ್ದು, ಇದು ಕೆಳ ಜಾತಿಯ ಹಿಂದೂಗಳಿಗೆ ಹಿಂದೆ ಉನ್ನತ ಜಾತಿಗಳಿಗೆ ಸೀಮಿತವಾಗಿದ್ದ ದೇವಾಲಯಗಳನ್ನು ಪ್ರವೇಶಿಸುವ ಹಕ್ಕನ್ನು ನೀಡಿತು.<ref name="Smith1976">{{cite book|author=Bardwell L. Smith|title=Religion and Social Conflict in South Asia|url=https://books.google.com/books?id=07Y3AAAAIAAJ&pg=PA42|accessdate=31 July 2012|year=1976|publisher=BRILL|isbn=978-90-04-04510-1|pages=35–42}}</ref>
=== ಭಾರತದ ರಾಜ್ಯ ===
1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಸ್ವತಂತ್ರ ಪ್ರಭುತ್ವಗಳಾಗಿ [[ಭಾರತದ ವಿಭಜನೆ]] ಯ ನಂತರ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು [[ಭಾರತದ ಪ್ರಭುತ್ವ|ಭಾರತದ ಒಕ್ಕೂಟಕ್ಕೆ]] ಸೇರಿಕೊಂಡವು. 1 ಜುಲೈ 1949 ರಂದು, ಎರಡೂ ರಾಜ್ಯಗಳನ್ನು ವಿಲೀನಗೊಳಿಸಿ [[ತಿರುವಾಂಕೂರು-ಕೊಚ್ಚಿ]] ರೂಪಿಸಲಾಯಿತು.<ref name="Sabharwal2007">{{cite book|author=Gopa Sabharwal|title=India Since 1947: The Independent Years|url=https://books.google.com/books?id=LKySGJAGVEQC&pg=PA23|accessdate=18 November 2012|year=2007|publisher=Penguin Books India|isbn=978-0-14-310274-8|pages=23–}}</ref> 1 ನವೆಂಬರ್ 1956 ರಂದು, ಮದ್ರಾಸಿನ ದಕ್ಷಿಣ ಕನ್ನಡ ಜಿಲ್ಲೆಯ [[ಕಾಸರಗೋಡು ಜಿಲ್ಲೆ|ಕಾಸರಗೋಡು]] ತಾಲೂಕು, [[ಮದ್ರಾಸ್ ರಾಜ್ಯ]]ದ [[ಮಲಬಾರ್ ಜಿಲ್ಲೆ]] ([[ನೀಲಗಿರಿ ಜಿಲ್ಲೆಯ]] [[ಗುಡಾಲೂರು ತಾಲೂಕು]], [[ಲಕ್ಷದ್ವೀಪ]], [[ಟಾಪ್ಸ್ಲಿಪ್]], ಮತ್ತು ಅನಕಟ್ಟಿಯ ಪೂರ್ವದ [[ಅಟ್ಟಪ್ಪಾಡಿ]] ಕಾಡು ಹೊರತುಪಡಿಸಿ), ಮತ್ತು ತಿರುವಾಂಕೂರು-ಕೊಚ್ಚಿ ರಾಜ್ಯವು{{mdash}}ನಾಲ್ಕು ದಕ್ಷಿಣ ತಾಲೂಕುಗಳನ್ನು ([[ಕನ್ಯಾಕುಮಾರಿ ಜಿಲ್ಲೆ]] ಮತ್ತು ಶೆಂಕೋಟ್ಟೈ ತಾಲೂಕುಗಳು) ಹೊರತುಪಡಿಸಿ, ಅವುಗಳನ್ನು ತಮಿಳುನಾಡಿಗೆ ವರ್ಗಾಯಿಸಲಾಯಿತು{{mdash}}[[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ಕೇರಳ ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು.<ref name="Tmh">{{cite book|author=Tmh|title=General Knowledge Digest 2010|url=https://books.google.com/books?id=RyLmXWTKHXgC&pg=SA3-PA106|accessdate=18 November 2012|publisher=Tata McGraw-Hill Education|isbn=978-0-07-069939-7|page=3}}</ref><ref name="SinghKarafin2009">{{cite book|author1=Sarina Singh|author2=Amy Karafin|author3=Anirban Mahapatra|title=South India|url=https://books.google.com/books?id=8KnLFpjEHpUC|accessdate=6 January 2013|date=1 September 2009|publisher=Lonely Planet|isbn=978-1-74179-155-6}}</ref><ref name="Kerala">{{Cite web |title=The States Reorganisation Act, 1956 |url=https://legislative.gov.in/sites/default/files/A1956-37.pdf |url-status=live |archive-url=https://web.archive.org/web/20211117014954/https://legislative.gov.in/sites/default/files/A1956-37.pdf |archive-date=17 November 2021 |access-date=11 May 2021 |website=legislative.gov.in |publisher=Government of India}}</ref> 1957 ರಲ್ಲಿ ಹೊಸ ಕೇರಳ ವಿಧಾನಸಭೆಗೆ ಮೊದಲ ಚುನಾವಣೆಗಳ ನಂತರ [[ಇ. ಎಂ. ಎಸ್. ನಂಬೂದಿರಿಪಾಡ್]] ನೇತೃತ್ವದ [[ಕಮ್ಯುನಿಸ್ಟ್]] ಸರ್ಕಾರವು ರೂಪುಗೊಂಡಿತು.<ref name="SinghKarafin2009"/> ಇದು 1945 ರಲ್ಲಿ [[ಸ್ಯಾನ್ ಮರಿನೋ ಗಣರಾಜ್ಯ]]ದಲ್ಲಿ ಕಮ್ಯುನಿಸ್ಟ್ ಚುನಾವಣಾ ಯಶಸ್ಸಿನ ನಂತರ ವಿಶ್ವದ ಆರಂಭಿಕ ಪ್ರಜಾಪ್ರಭುತ್ವವಾಗಿ ಚುನಾಯಿತ ಕಮ್ಯುನಿಸ್ಟ್ ಸರ್ಕಾರಗಳಲ್ಲಿ ಒಂದಾಗಿದೆ.<ref name=Hindu>{{cite news|title=50 years of development|url=http://www.thehindubusinessline.com/todays-paper/tp-others/tp-states/50-years-of-development/article1655056.ece?ref=archive|accessdate=30 August 2013|newspaper=The Hindu|date=12 April 2007|author=K.G. Kumar}}</ref><ref name="Desai2006">{{cite book|author=Manali Desai|title=State Formation and Radical Democracy in India|url=https://books.google.com/books?id=60m9znJQmmkC&pg=PA142|accessdate=31 August 2013|date=27 November 2006|publisher=Taylor & Francis|isbn=978-0-203-96774-4|page=142}}</ref><ref name="ChitkaraŚarmā1997">{{cite book|author1=Madan Gopal Chitkara|author2=Baṃśī Rāma Śarmā|title=Indian Republic: Issues and Perspective|url=https://books.google.com/books?id=7YrmNURVoroC&pg=PA134|accessdate=18 November 2012|date=1 January 1997|publisher=APH Publishing|isbn=978-81-7024-836-1|pages=134–}}</ref>
== ಭೌಗೋಳಿಕತೆ ==
{{Main|ಕೇರಳದ ಭೌಗೋಳಿಕತೆ}}
{{Multiple image
| direction = vertical
| width = 220
| image1 = AnaimudiPeak DSC 4834.jpg
| caption1 = [[ಅನಮುಡಿ]], [[ದಕ್ಷಿಣ ಭಾರತ]]ದ ಅತಿ ಎತ್ತರದ ಶಿಖರ.
| image2 = DR0071DSC 9245.jpg
| caption2 = [[ವಯನಾಡು|ವಯನಾಡಿನ]] ಬೆಟ್ಟ ಪ್ರದೇಶಗಳಲ್ಲಿ [[ಚಹಾ]] ಮತ್ತು [[ಕಾಫಿ]] ಉತ್ಪಾದಿಸಲಾಗುತ್ತದೆ.
| image3 = Kumarkom.jpg
| caption3 = [[ವೇಂಬನಾಡು]], [[ಕೇರಳ ಬ್ಯಾಕ್ವಾಟರ್ಗಳ]] ಒಂದು ಭಾಗ, ಭಾರತದ ಅತಿ ಉದ್ದದ ಸರೋವರ.
| image4 = Light house in Ponnani.jpg
| caption4 = [[ಪೊನ್ನಾನಿ]] ಲೈಟ್ ಹೌಸ್ ಬೀಚ್
}}
ರಾಜ್ಯವು [[ಲಕ್ಷದ್ವೀಪ ಸಮುದ್ರ]] ಮತ್ತು [[ಪಶ್ಚಿಮ ಘಟ್ಟಗಳ]] ನಡುವೆ ಸಿಕ್ಕಿಕೊಂಡಿದೆ.<ref>{{Cite web |year=1953 |title=Limits of Oceans and Seas, 3rd edition |url=https://iho.int/uploads/user/pubs/standards/s-23/S-23_Ed3_1953_EN.pdf |archive-url=https://web.archive.org/web/20181005131902/https://www.iho.int/iho_pubs/standard/S-23/S-23_Ed3_1953_EN.pdf |archive-date=5 October 2018 |access-date=28 December 2020 |publisher=International Hydrographic Organization}}</ref> ಉತ್ತರ ಅಕ್ಷಾಂಶ 8°18' ಮತ್ತು 12°48' ಮತ್ತು ಪೂರ್ವ ರೇಖಾಂಶ 74°52' ಮತ್ತು 77°22' ನಡುವೆ ಇದೆ,<ref>{{cite web |title=Physical and Anatomical Characteristic of Wood of Some Less-Known Tree Species of Kerala |url=https://docs.kfri.res.in/KFRI-RR/KFRI-RR096.pdf |work=Kerala Forest Research Institute |publisher=Government of Kerala |access-date=18 November 2012 |archive-date=9 July 2013 |archive-url=https://web.archive.org/web/20130709150101/http://docs.kfri.res.in/KFRI-RR/KFRI-RR096.pdf |url-status=live }}</ref> ಕೇರಳವು ಕೆಲವು ಚಂಡಮಾರುತಗಳೊಂದಿಗೆ ಆರ್ದ್ರ [[ಉಷ್ಣವಲಯದ ಮಳೆಕಾಡು ಹವಾಮಾನ]]ವನ್ನು ಹೊಂದಿದೆ. ರಾಜ್ಯವು {{cvt|590|km|mi}} ಕರಾವಳಿಯನ್ನು ಹೊಂದಿದೆ<ref>{{cite web |title=Marine Fisheries |url=https://www.fisheries.kerala.gov.in/index.php?option=com_content&view=article&id=76&Itemid=44 |website=fisheries.kerala.gov.in |publisher=Department of Fisheries, Government of Kerala |access-date=13 November 2015 |archive-date=17 November 2015 |archive-url=https://web.archive.org/web/20151117021802/http://www.fisheries.kerala.gov.in/index.php?option=com_content&view=article&id=76&Itemid=44 |url-status=live }}</ref> ಮತ್ತು ರಾಜ್ಯದ ಅಗಲವು {{convert|11|and|121|km|mi|0}} ನಡುವೆ ಬದಲಾಗುತ್ತದೆ.<ref name="Nair1994">{{cite book |author=V. Balakrishnan Nair |title=Social Development and Demographic Changes in South India: Focus on Kerala |url=https://books.google.com/books?id=sTS4OO9lcdgC&pg=PA15 |access-date=18 November 2012 |year=1994 |publisher=M.D. Publications Pvt. Ltd. |isbn=978-8185880501 |page=15}}</ref> ಭೌಗೋಳಿಕವಾಗಿ, ಕೇರಳವನ್ನು ಮೂರು ಹವಾಮಾನದ ಪ್ರತ್ಯೇಕ ಪ್ರದೇಶಗಳಾಗಿ ವಿಂಗಡಿಸಬಹುದು: ಪೂರ್ವ ಎತ್ತರದ ಪ್ರದೇಶಗಳು; ಒರಟು ಮತ್ತು ತಂಪಾದ ಪರ್ವತ ಪ್ರದೇಶ, ಮಧ್ಯ ಮಧ್ಯ-ನೆಲಗಳು; ರೋಲಿಂಗ್ ಬೆಟ್ಟಗಳು, ಮತ್ತು ಪಶ್ಚಿಮ ತಗ್ಗು ಪ್ರದೇಶಗಳು; ಕರಾವಳಿ ಬಯಲುಗಳು.<ref name="ChattopadhyayFranke2006">{{cite book |author1=Srikumar Chattopadhyay |author2=Richard W. Franke |title=Striving for Sustainability: Environmental Stress and Democratic Initiatives in Kerala |url=https://books.google.com/books?id=gOrvghLklKoC&pg=PA110 |access-date=19 March 2019 |year=2006 |publisher=Concept Publishing Company |isbn=978-8180692949}}</ref>{{rp|110}} [[ಪೂರ್ವ-ಕೇಂಬ್ರಿಯನ್]] ಮತ್ತು [[ಪ್ಲಿಸ್ಟೊಸೀನ್]] ಭೂವೈಜ್ಞಾನಿಕ ರಚನೆಗಳು ಕೇರಳದ ಭೂಪ್ರದೇಶದ ಬಹುಭಾಗವನ್ನು ರೂಪಿಸುತ್ತವೆ.<ref name="Geological Survey Water-supply Paper">{{cite book |title=Geological Survey Water-supply Paper |url=https://books.google.com/books?id=0qUYAQAAIAAJ&pg=SL4-PA6 |access-date=19 March 2019 |year=1961 |publisher=U.S. Government Printing Office |page=4}}</ref><ref name="SharmaKumari2008">{{cite book |author1=Pradeep Sharma |author2=Y. Dharnai Kumari |author3=Tirunagaram Lakshmamma |title=Status Of Women And Family Planning |url=https://books.google.com/books?id=2b6Ok2EcnBIC&pg=PA217 |access-date=18 November 2012 |year=2008 |publisher=Discovery Publishing House |isbn=978-8183563260 |page=217}}</ref> 1341 CE ಯಲ್ಲಿ ಕೇರಳದಲ್ಲಿ ವಿನಾಶಕಾರಿ ಪ್ರವಾಹವು ಅದರ ಭೂಪ್ರದೇಶವನ್ನು ಆಮೂಲಾಗ್ರವಾಗಿ ಬದಲಾಯಿಸಿತು ಮತ್ತು ಅದರ ಇತಿಹಾಸದ ಮೇಲೆ ಪರಿಣಾಮ ಬೀರಿತು; ಇದು ಮಸಾಲೆ ಸಾಗಣೆಗೆ ನೈಸರ್ಗಿಕ ಬಂದರನ್ನು ಸೃಷ್ಟಿಸಿತು.<ref name="LimitedKitchen2010">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA100 |access-date=18 November 2012 |year=2010 |publisher=Murdoch Books |isbn=978-1-74196-438-7 |page=100}}</ref>
ಕೇರಳದ ಪೂರ್ವ ಪ್ರದೇಶವು ಪಶ್ಚಿಮ ಘಟ್ಟಗಳ [[ಮಳೆ ನೆರಳು]] ಯ ಪಶ್ಚಿಮಕ್ಕೆ ತಕ್ಷಣವೇ ಎತ್ತರದ ಪರ್ವತಗಳು, ಕಮರಿಗಳು ಮತ್ತು ಆಳವಾದ ಕತ್ತರಿಸಿದ ಕಣಿವೆಗಳನ್ನು ಒಳಗೊಂಡಿದೆ.<ref name=ChattopadhyayFranke2006 />{{rp|110}} ಕೇರಳದ ಪಶ್ಚಿಮಕ್ಕೆ ಹರಿಯುವ 41 ನದಿಗಳು,<ref name="Sadasivan2003">{{cite book |author=S. N. Sadasivan |title=River Disputes in India: Kerala Rivers Under Siege |url=https://books.google.com/books?id=hhrRboi5kOcC&pg=PA223 |access-date=18 November 2012 |year=2003 |publisher=Mittal Publications |isbn=978-8170999133 |page=223}}</ref> ಮತ್ತು ಅದರ ಪೂರ್ವಕ್ಕೆ ಹರಿಯುವ 3 ನದಿಗಳು ಈ ಪ್ರದೇಶದಲ್ಲಿ ಹುಟ್ಟುತ್ತವೆ.<ref name="Darpan2006">{{cite book |author=Pratiyogita Darpan |title=Pratiyogita Darpan |url=https://books.google.com/books?id=QegDAAAAMBAJ&pg=PT72 |access-date=18 November 2012 |date=September 2006 |publisher=Pratiyogita Darpan |page=72}}</ref><ref name="India2008">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA11 |access-date=18 November 2012 |year=2008 |publisher=Sura Books |isbn=978-8174781642 |page=11}}</ref> ಪಶ್ಚಿಮ ಘಟ್ಟಗಳು [[ಪಾಲಕ್ಕಾಡ್]] ಬಳಿ ಮಾತ್ರ ಅಡ್ಡಿಪಡಿಸುವ ಪರ್ವತಗಳ ಗೋಡೆಯನ್ನು ರೂಪಿಸುತ್ತವೆ; ಆದ್ದರಿಂದ ಪಾಲ್''ಘಾಟ್'' ಎಂದೂ ಕರೆಯಲ್ಪಡುತ್ತದೆ, ಅಲ್ಲಿ [[ಪಾಲಕ್ಕಾಡ್ ಅಂತರ]]ವು ಮುರಿಯುತ್ತದೆ.<ref>{{cite web |last1=Chandran Nair |first1=Dr.S.Sathis |title=India – Silent Valley Rainforest Under Threat Once More |url=https://www.rainforestinfo.org.au/wrr2004/silentvalley.htm |website=rainforestinfo.org.au |access-date=12 November 2015 |archive-date=24 September 2015 |archive-url=https://web.archive.org/web/20150924084520/http://www.rainforestinfo.org.au/wrr2004/silentvalley.htm |url-status=live }}</ref> ಪಶ್ಚಿಮ ಘಟ್ಟಗಳು ಸರಾಸರಿ {{convert|1500|m|ft|lk=out|abbr=off}} [[ಸಮುದ್ರ ಮಟ್ಟ]]ದವರೆಗೆ ಏರುತ್ತವೆ,<ref name="Biju2006">{{cite book |author=M.R. Biju |title=Sustainable Dimensions Of Tourism Management |url=https://books.google.com/books?id=AkAdvTbg0dEC&pg=PA63 |access-date=18 November 2012 |year=2006 |publisher=Mittal Publications |isbn=978-8183241298 |page=63}}</ref> ಆದರೆ ಅತಿ ಎತ್ತರದ ಶಿಖರಗಳು ಸುಮಾರು {{convert|2500|m|ft|abbr=off}} ತಲುಪುತ್ತವೆ.<ref name="Hussain">{{cite book |author=Hussain |title=Geography Of India For Civil Ser Exam |url=https://books.google.com/books?id=wUzKCZxvNQoC&pg=SA2-PA9 |access-date=18 November 2012 |publisher=Tata McGraw-Hill Education |isbn=978-0-07-066772-3 |page=2}}</ref> [[ಇಡುಕ್ಕಿ]] ಜಿಲ್ಲೆಯ [[ಅನಮುಡಿ]] ದಕ್ಷಿಣ ಭಾರತದ ಅತಿ ಎತ್ತರದ ಶಿಖರವಾಗಿದ್ದು, {{cvt|2,695|m}} ಎತ್ತರದಲ್ಲಿದೆ.<ref name="gazetteer">{{cite book |last1=Frowde |first1=Henry |url=https://dsal.uchicago.edu/reference/gazetteer/ |title=Imperial Gazetteer of India |date=1908–1909 |publisher=Clarendon Press |edition=New |location=Oxford |access-date=2 December 2020 |archive-url=https://web.archive.org/web/20081216124143/http://dsal.uchicago.edu/reference/gazetteer/ |archive-date=16 December 2008 |url-status=live}}</ref> ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯು ವಿಶ್ವದ ಎಂಟು "ಅತ್ಯಂತ ಬಿಸಿಯಾದ ಜೈವಿಕ ವೈವಿಧ್ಯತೆಯ ಹಾಟ್ಸ್ಪಾಟ್ಗಳಲ್ಲಿ" ಒಂದಾಗಿ ಗುರುತಿಸಲ್ಪಟ್ಟಿದೆ ಮತ್ತು [[UNESCO]] [[ವಿಶ್ವ ಪರಂಪರೆಯ ತಾಣ]]ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.<ref name="UNESCO">{{cite news |url=https://timesofindia.indiatimes.com/home/environment/flora-fauna/UN-designates-Western-Ghats-as-world-heritage-site/articleshow/14595602.cms |archive-url=https://web.archive.org/web/20130131192257/https://articles.timesofindia.indiatimes.com/2012-07-02/flora-fauna/32507340_1_world-heritage-list-western-ghats-border-town |url-status=live |archive-date=31 January 2013 |title=UN designates Western Ghats as world heritage site |date=2 July 2012 |newspaper=[[The Times of India]] |access-date=27 November 2018}}</ref> ಈ ಶ್ರೇಣಿಯ ಕಾಡುಗಳು ಹಿಮಾಲಯ ಪರ್ವತಗಳಿಗಿಂತ ಹಳೆಯದು ಎಂದು ಪರಿಗಣಿಸಲಾಗಿದೆ.<ref name="UNESCO" /> ಪಶ್ಚಿಮ ಘಟ್ಟಗಳ ಹಿನ್ನೆಲೆಯಲ್ಲಿ ನೆಲೆಗೊಂಡಿರುವ [[ಅತಿರಪ್ಪಿಲ್ಲಿ ಜಲಪಾತ]]ವನ್ನು ''ಭಾರತದ [[ನಯಾಗರ ಜಲಪಾತ|ನಯಾಗರ]]'' ಎಂದೂ ಕರೆಯಲಾಗುತ್ತದೆ.<ref name="Athirappilly">{{cite news |url=https://articles.timesofindia.indiatimes.com/2013-05-30/travel/33064279_1_palm-trees-trek-coconut-trees |title=The Times of India: Latest News India, World & Business News, Cricket & Sports, Bollywood |access-date=2 July 2013 |archive-url=https://web.archive.org/web/20130621233624/https://articles.timesofindia.indiatimes.com/2013-05-30/travel/33064279_1_palm-trees-trek-coconut-trees |archive-date=21 June 2013 |work=[[The Times of India]] |url-status=dead}}</ref> ಇದು [[ಚಾಲಕ್ಕುಡಿ ನದಿ]]ಯಲ್ಲಿದೆ ಮತ್ತು ರಾಜ್ಯದ ಅತಿ ದೊಡ್ಡ ಜಲಪಾತವಾಗಿದೆ.<ref name="Athirappilly" /> [[ವಯನಾಡು]] ಕೇರಳದ ಏಕೈಕ [[ಪ್ರಸ್ಥಭೂಮಿ]]ಯಾಗಿದೆ.<ref>{{cite book |author=William Logan |year=1887 |title=Malabar Manual (Volume-II) |publisher=Madras Government Press |url=https://archive.org/details/malabar_manual_volume2/mode/2up}}</ref> [[ವಯನಾಡು ಜಿಲ್ಲೆ|ವಯನಾಡು]], [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ([[ನಿಲಂಬೂರು|ನಿಲಂಬೂರಿನ]] [[ಚಾಲಿಯಾರ್]] ಕಣಿವೆ), ಮತ್ತು [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] ([[ಅಟ್ಟಪ್ಪಾಡಿ]] ಕಣಿವೆ) ಜಿಲ್ಲೆಗಳಲ್ಲಿನ ಪೂರ್ವ ಪ್ರದೇಶಗಳು, ಒಟ್ಟಾಗಿ [[ನೀಲಗಿರಿ ಜೀವಗೋಳ ಮೀಸಲು]] ಮತ್ತು [[ಮೈಸೂರು ಪ್ರಸ್ಥಭೂಮಿ]]ಯ ಮುಂದುವರಿಕೆಯ ಭಾಗಗಳಾಗಿವೆ, ಇವು ನೈಸರ್ಗಿಕ [[ಚಿನ್ನ]]ದ ಹೊಲಗಳಿಗೆ ಹೆಸರುವಾಸಿಯಾಗಿದೆ, ಜೊತೆಗೆ [[ಕರ್ನಾಟಕ]]ದ ಪಕ್ಕದ ಜಿಲ್ಲೆಗಳು.<ref>{{Cite web |url=https://dmg.kerala.gov.in/mineral-resources/ |title=Mineral Resources |website=Department of Mining and Geology – Government of Kerala |access-date=4 April 2022 |archive-date=13 May 2022 |archive-url=https://web.archive.org/web/20220513124121/https://dmg.kerala.gov.in/mineral-resources/ |url-status=live }}</ref> [[ಇಲ್ಮೆನೈಟ್]], [[ಮೊನಾಜೈಟ್]], [[ಥೋರಿಯಮ್]], ಮತ್ತು [[ಟೈಟಾನಿಯಮ್]] ಸೇರಿದಂತೆ ಖನಿಜಗಳು ಕೇರಳದ ಕರಾವಳಿ ಪಟ್ಟಿಯಲ್ಲಿ ಕಂಡುಬರುತ್ತವೆ.{{sfn|Chandran|2018|p=343}} ಕೇರಳದ [[ಕರುನಾಗಪ್ಪಳ್ಳಿ]] ಕರಾವಳಿ ಪಟ್ಟಿಯು [[ಥೋರಿಯಮ್]]-ಹೊಂದಿರುವ [[ಮೊನಾಜೈಟ್]] ಮರಳಿನಿಂದ ಹೆಚ್ಚಿನ ಹಿನ್ನೆಲೆ ವಿಕಿರಣಕ್ಕೆ ಹೆಸರುವಾಸಿಯಾಗಿದೆ. ಕೆಲವು ಕರಾವಳಿ ಪಂಚಾಯತ್ಗಳಲ್ಲಿ, ಸರಾಸರಿ ಹೊರಾಂಗಣ ವಿಕಿರಣ ಮಟ್ಟಗಳು 4 [[ಗ್ರೇ (ಘಟಕ)#ದೇಹದ ಮೇಲಿನ ಪರಿಣಾಮ|mGy/yr]] ಗಿಂತ ಹೆಚ್ಚು ಮತ್ತು ಕರಾವಳಿಯ ಕೆಲವು ಸ್ಥಳಗಳಲ್ಲಿ, ಇದು 70 mGy/yr ನಷ್ಟು ಹೆಚ್ಚಾಗಿದೆ.<ref>{{Cite news |vauthors=Nair RR, Rajan B, Akiba S, Jayalekshmi P, Nair MK, Gangadharan P, Koga T, Morishima H, Nakamura S, Sugahara T |title=Background radiation and cancer incidence in Kerala, India-Karanagappally cohort study. |publisher=Health Physics |date=January 2009 |pmid=19066487}}</ref>
ಕೇರಳದ ಪಶ್ಚಿಮ ಕರಾವಳಿ ಪಟ್ಟಿಯು ಪೂರ್ವ ಪ್ರದೇಶಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಸಮತಟ್ಟಾಗಿದೆ,<ref name="ChattopadhyayFranke2006" />{{rp|33}} ಮತ್ತು ಅಂತರ್ಸಂಪರ್ಕಿತ [[ಉಪ್ಪುನೀರಿನ]] ಕಾಲುವೆಗಳು, ಸರೋವರಗಳು, [[ಅಳಿವೆ]]ಗಳು,<ref name="Moss2010">{{cite book |author=Danny Moss |title=Public Relations Cases: International Perspectives |url=https://books.google.com/books?id=s0-CJ3djEdEC&pg=PA41 |access-date=18 November 2012 |year=2010 |publisher=Taylor & Francis |isbn=978-0-415-77336-2 |page=41}}</ref> ಮತ್ತು [[ಕೇರಳ ಬ್ಯಾಕ್ವಾಟರ್ಗಳು]] ಎಂದು ಕರೆಯಲ್ಪಡುವ ನದಿಗಳ ಜಾಲದಿಂದ ಕೂಡಿದೆ.<ref name="Thorpe2012">{{cite book |author=Edgar Thorpe |title=The Pearson CSAT Manual 2012 |url=https://books.google.com/books?id=1cruroSVFoUC&pg=RA3-PA38 |access-date=18 November 2012 |year=2012 |publisher=Pearson Education India |isbn=978-8131767344 |page=3}}</ref> ''ಕೇರಳದ ಅಕ್ಕಿಯ ಬಟ್ಟಲು'' ಎಂದೂ ಕರೆಯಲ್ಪಡುವ [[ಕುಟ್ಟನಾಡು]] ಭಾರತದಲ್ಲಿ [[ಭಾರತದ ತೀವ್ರ ಬಿಂದುಗಳ ಪಟ್ಟಿ#ಎತ್ತರಗಳು|ಅತ್ಯಂತ ಕಡಿಮೆ ಎತ್ತರವನ್ನು]] ಹೊಂದಿದೆ, ಮತ್ತು ಇದು ಸಮುದ್ರ ಮಟ್ಟಕ್ಕಿಂತ ಕೆಳಗೆ ಬೇಸಾಯ ನಡೆಯುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿದೆ.<ref>{{Cite news |title=Kerala Boat Ferries Lone Passenger To Help Her Take Exam |url=https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |last=Press Trust of India |date=1 June 2020 |access-date=17 November 2020 |work=NDTV |archive-date=16 November 2021 |archive-url=https://web.archive.org/web/20211116093316/https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |url-status=live }}</ref><ref>{{Cite web |url=https://www.hindu.com/mag/2003/07/13/stories/2003071300600200.htm |title=Thirst below sea level |last=Suchitra |first=M |date=13 August 2003 |work=[[The Hindu]] |access-date=17 November 2020 |archive-url=https://web.archive.org/web/20190922101804/https://www.thehindu.com/todays-paper/tp-features/tp-sundaymagazine/thirst-below-sea-level/article28523147.ece |archive-date=22 September 2019}}</ref> ದೇಶದ ಅತಿ ಉದ್ದದ ಸರೋವರ [[ವೇಂಬನಾಡು ಸರೋವರ|ವೇಂಬನಾಡು]] ಬ್ಯಾಕ್ವಾಟರ್ಗಳಲ್ಲಿ ಪ್ರಾಬಲ್ಯ ಹೊಂದಿದೆ; ಇದು [[ಆಲಪ್ಪುಳ]] ಮತ್ತು [[ಕೊಚ್ಚಿ]] ನಡುವೆ ಇದೆ ಮತ್ತು ಸುಮಾರು {{cvt|200|km2|sqmi}} ಪ್ರದೇಶದಲ್ಲಿದೆ.<ref name="Husain">{{cite book |author=Majid Husain |title=Understanding: Geographical: Map Entries: for Civil Services Examinations: Second Edition |url=https://books.google.com/books?id=_9VGKfQ-sQsC&pg=RA9-PT18 |access-date=18 November 2012 |publisher=Tata McGraw-Hill Education |isbn=978-0-07-070288-2 |page=9 |year=2011}}</ref> ಭಾರತದ ಸುಮಾರು ಎಂಟು ಪ್ರತಿಶತದಷ್ಟು ಜಲಮಾರ್ಗಗಳು ಕೇರಳದಲ್ಲಿ ಕಂಡುಬರುತ್ತವೆ.<ref name="IWAI_2005">{{Cite journal |author=Inland Waterways Authority of India (IWAI—Ministry of Shipping) |year=2005 |title=Introduction to Inland Water Transport |journal=IWAI (Ministry of Shipping) |url=https://iwai.nic.in/Introduction.html |archive-url=https://archive.today/20050204175110/http://iwai.nic.in/Introduction.html |url-status=dead |archive-date=4 February 2005 |access-date=19 January 2006}}</ref> ಕೇರಳದ [[ಕೇರಳದ ನದಿಗಳ ಪಟ್ಟಿ|44 ನದಿಗಳು]] [[ಪೆರಿಯಾರ್ ನದಿ|ಪೆರಿಯಾರ್]]; {{convert|244|km|mi|0}}, [[ಭಾರತಪುಳ]]; {{convert|209|km|mi|0}}, [[ಪಂಬಾ ನದಿ|ಪಂಬಾ]]; {{convert|176|km|mi|0}}, [[ಚಾಲಿಯಾರ್ ನದಿ|ಚಾಲಿಯಾರ್]]; {{convert|169|km|mi|0}}, [[ಕಡಲುಂಡಿಪುಳ ನದಿ|ಕಡಲುಂಡಿಪುಳ]]; {{convert|130|km|mi|0}}, [[ಚಾಲಕ್ಕುಡಿ ನದಿ|ಚಾಲಕ್ಕುಡಿಪುಳ]]; {{convert|130|km|mi|0}}, [[ವಲಪಟ್ಟಣಂ ನದಿ|ವಲಪಟ್ಟಣಂ]]; {{convert|129|km|mi|0}} ಮತ್ತು [[ಅಚನ್ಕೋವಿಲ್ ನದಿ]]; {{convert|128|km|mi|0}}. ನದಿಗಳ ಸರಾಸರಿ ಉದ್ದ {{convert|64|km|mi|0}}. ಅನೇಕ ನದಿಗಳು ಚಿಕ್ಕದಾಗಿರುತ್ತವೆ ಮತ್ತು ಸಂಪೂರ್ಣವಾಗಿ ಮಳೆಗಾಲದ ಮಳೆಯಿಂದ ಪೋಷಿಸಲ್ಪಡುತ್ತವೆ.<ref name=riverreport>{{cite book |last=India. |first=Planning Commission |title=Kerala Development Report |year=2008 |publisher=Academic Foundation |isbn=978-8171885947 |page=224 |url=https://books.google.com/books?isbn=8171885942}}</ref> ಕೇರಳದ ನದಿಗಳು ಚಿಕ್ಕದಾಗಿರುವುದರಿಂದ ಮತ್ತು [[ನದೀಮುಖಜ ಭೂಮಿ|ಮುಖಜ ಭೂಮಿಯ]] ಕೊರತೆಯಿಂದಾಗಿ, ಅವು ಪರಿಸರ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತವೆ. ನದಿಗಳು ಮರಳು ಗಣಿಗಾರಿಕೆ ಮತ್ತು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತವೆ.<ref name="Padmalal">{{cite journal | url=https://doi.org/10.1007/s00254-007-0870-z | doi=10.1007/s00254-007-0870-z | title=Environmental effects of river sand mining: A case from the river catchments of Vembanad lake, Southwest coast of India | year=2008 | last1=Padmalal | first1=D. | last2=Maya | first2=K. | last3=Sreebha | first3=S. | last4=Sreeja | first4=R. | journal=Environmental Geology | volume=54 | issue=4 | pages=879–889 | bibcode=2008EnGeo..54..879P | s2cid=129312081 | access-date=12 February 2020 | archive-date=25 November 2023 | archive-url=https://web.archive.org/web/20231125191757/https://link.springer.com/article/10.1007/s00254-007-0870-z | url-status=live | issn = 0943-0105 | url-access=subscription }}</ref> ರಾಜ್ಯವು ಭೂಕುಸಿತ, ಪ್ರವಾಹ ಮತ್ತು ಬರಗಾಲದಂತಹ ಹಲವಾರು ನೈಸರ್ಗಿಕ ಅಪಾಯಗಳನ್ನು ಅನುಭವಿಸುತ್ತದೆ. 2004 ರ [[2004 ರ ಹಿಂದೂ ಮಹಾಸಾಗರದ ಭೂಕಂಪ ಮತ್ತು ಸುನಾಮಿ|ಹಿಂದೂ ಮಹಾಸಾಗರದ ಸುನಾಮಿ]] ಯಿಂದ ರಾಜ್ಯವು ಸಹ ಪರಿಣಾಮ ಬೀರಿತು,<ref name="Jha2010">{{cite book |author=M.K. Jha |title=Natural and Anthropogenic Disasters: Vulnerability, Preparedness and Mitigation |url=https://books.google.com/books?id=fICXQSPJwx8C&pg=PA81 |access-date=18 November 2012 |year=2010 |publisher=Springer |isbn=978-9048124978 |page=81}}</ref> ಮತ್ತು 2018 ರಲ್ಲಿ ಸುಮಾರು ಒಂದು ಶತಮಾನದಲ್ಲಿ [[2018 ಕೇರಳ ಪ್ರವಾಹ|ಕೆಟ್ಟ ಪ್ರವಾಹವನ್ನು]] ಅನುಭವಿಸಿತು.<ref>{{Cite news |url=https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |title=Worst floods in nearly a century kill 44 in India's Kerala state amid torrential monsoon rains |last=Baynes |first=Chris |date=15 August 2018 |work=The Independent |access-date=16 August 2018 |archive-date=23 May 2019 |archive-url=https://web.archive.org/web/20190523232643/https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |url-status=live }}</ref> 2024 ರಲ್ಲಿ, ಕೇರಳವು ತನ್ನ ಇತಿಹಾಸದಲ್ಲಿ [[2024 ವಯನಾಡು ಭೂಕುಸಿತ|ಕೆಟ್ಟ ಭೂಕುಸಿತಗಳನ್ನು]] ಅನುಭವಿಸಿತು.<ref>{{Cite news |url=https://www.onmanorama.com/news/kerala/2024/07/30/wayand-landslide-kerala-rain-live.html |title=Wayanad landslides: 133 dead, 481 saved, at least 98 missing |date=30 July 2024 |work=[[Onmanorama]] |access-date=31 July 2024 |archive-date=30 July 2024|archive-url=https://web.archive.org/web/20240730073647/https://www.onmanorama.com/news/kerala/2024/07/30/wayand-landslide-kerala-rain-live.html |url-status=live }}</ref>
=== ಹವಾಮಾನ ===
ವರ್ಷಕ್ಕೆ ಸುಮಾರು 120–140 ಮಳೆಯ ದಿನಗಳೊಂದಿಗೆ,<ref name="Chacko_2002">{{Cite journal |last1=Chacko |first1=T. |last2=Renuka |first2=G. |year=2002 |title=Temperature mapping, thermal diffusivity and subsoil heat flux at Kariavattom, Kerala |journal=Proc Indian Acad Sci (Earth Planet Sci) |volume=111 |issue=1 |pages=79 |title-link=Kariavattom |bibcode=2002InEPS.111...79T |doi=10.1007/BF02702224 |doi-access=free}}</ref>{{rp|80}} ಕೇರಳವು [[ನೈಋತ್ಯ ಮಾನ್ಸೂನ್|ನೈಋತ್ಯ ಬೇಸಿಗೆ ಮಾನ್ಸೂನ್]] ಮತ್ತು [[ಈಶಾನ್ಯ ಮಾನ್ಸೂನ್|ಈಶಾನ್ಯ ಚಳಿಗಾಲದ ಮಾನ್ಸೂನ್]] ನ ಕಾಲಿಕ ಭಾರೀ ಮಳೆಯಿಂದ ಪ್ರಭಾವಿತವಾದ ಆರ್ದ್ರ ಮತ್ತು ಸಮುದ್ರಯಾನ ಉಷ್ಣವಲಯದ ಹವಾಮಾನವನ್ನು ಹೊಂದಿದೆ.<ref name="Devrep">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=223 |access-date=30 May 2015}}</ref> ಸುಮಾರು 65% ಮಳೆಯು ಜೂನ್ ನಿಂದ ಆಗಸ್ಟ್ ವರೆಗೆ ನೈಋತ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ, ಮತ್ತು ಉಳಿದವು ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಈಶಾನ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ.<ref name="Devrep" /> ನೈಋತ್ಯ ಮಾನ್ಸೂನ್ನ ತೇವಾಂಶ-ಹೊತ್ತ ಗಾಳಿಗಳು, [[ಭಾರತೀಯ ಪರ್ಯಾಯ ದ್ವೀಪ]]ದ ಅತ್ಯಂತ ದಕ್ಷಿಣದ ಬಿಂದುವನ್ನು ತಲುಪಿದಾಗ, ಅದರ ಸ್ಥಳಾಕೃತಿಯ ಕಾರಣದಿಂದಾಗಿ, ಎರಡು ಶಾಖೆಗಳಾಗಿ ವಿಭಜನೆಯಾಗುತ್ತವೆ; "ಅರೇಬಿಯನ್ ಸಮುದ್ರ ಶಾಖೆ" ಮತ್ತು "ಬಂಗಾಳ ಕೊಲ್ಲಿಯ ಶಾಖೆ".<ref name="Jain">{{cite book |author=RK Jain |title=Geography 10 |url=https://books.google.com/books?id=7hOybWJeZN0C&pg=PA110 |access-date=18 November 2012 |publisher=Ratna Sagar |isbn=978-8183320818 |page=110}}</ref> ನೈಋತ್ಯ ಮಾನ್ಸೂನ್ನ "ಅರೇಬಿಯನ್ ಸಮುದ್ರ ಶಾಖೆ" ಮೊದಲು ಪಶ್ಚಿಮ ಘಟ್ಟಗಳಿಗೆ ಬಡಿಯುತ್ತದೆ,<ref name="Together with Social Science Term II">{{cite book |title=Together with Social Science Term II |url=https://books.google.com/books?id=oOA1nsSU8JYC&pg=PA112 |access-date=18 November 2012 |publisher=Rachna Sagar |isbn=978-8181373991 |page=112}}</ref> ನೈಋತ್ಯ ಮಾನ್ಸೂನ್ನಿಂದ ಮಳೆಯನ್ನು ಪಡೆಯುವ ಭಾರತದ ಮೊದಲ ರಾಜ್ಯವಾಗಿ ಕೇರಳವನ್ನು ಮಾಡುತ್ತದೆ.<ref name="google6">{{cite book |author1=Edgar Thorpe, Showick Thorpe |author2=Thorpe Edgar |title=The Pearson CSAT Manual 2011 |url=https://books.google.com/books?id=WuBFs6yFRwcC&pg=SL7-PA168 |access-date=18 November 2012 |publisher=Pearson Education India |isbn=978-8131758304 |page=7}}</ref><ref name="Aggarwal">{{cite book |author1=N.N. Kher |author2=Jaideep Aggarwal |title=A Text Book of Social Sciences |url=https://books.google.com/books?id=jV6k0FvIC4sC&pg=RA5-PA16 |access-date=18 November 2012 |publisher=Pitambar Publishing |isbn=978-8120914667 |page=5}}</ref> ಈಶಾನ್ಯ ಮಾನ್ಸೂನ್ನಲ್ಲಿ ಒತ್ತಡದ ಮಾದರಿಗಳ ವಿತರಣೆಯು ಹಿಮ್ಮುಖವಾಗುತ್ತದೆ, ಈ ಋತುವಿನಲ್ಲಿ ಉತ್ತರ ಭಾರತದಿಂದ ತಣ್ಣನೆಯ ಗಾಳಿಗಳು ಬಂಗಾಳ ಕೊಲ್ಲಿಯಿಂದ ತೇವಾಂಶವನ್ನು ಪಡೆದುಕೊಳ್ಳುತ್ತವೆ ಮತ್ತು ಪರ್ಯಾಯ ದ್ವೀಪ ಭಾರತದ ಪೂರ್ವ ಕರಾವಳಿಯಲ್ಲಿ ಅದನ್ನು ಮಳೆಯಾಗಿ ಸುರಿಸುತ್ತವೆ.<ref name="google7">{{cite book |author1=Sarina Singh |author2=Amy Karafin |author3=Anirban Mahapatra |title=South India |url=https://books.google.com/books?id=8KnLFpjEHpUC&pg=PA15 |access-date=18 November 2012 |year=2009 |publisher=Lonely Planet |isbn=978-1-74179-155-6 |page=15}}</ref><ref name="Reddy">{{cite book |author=S.V. Jeevananda Reddy |title=Climate Change: Myths and Realities |url=https://books.google.com/books?id=y_GMTXRtxJ8C&pg=PA71 |access-date=18 November 2012 |publisher=Jeevananda Reddy |page=71 |id=GGKEY:WDFHBL1XHK3}}</ref> ಕೇರಳದಲ್ಲಿ, ಈಶಾನ್ಯ ಮಾನ್ಸೂನ್ನ ಪ್ರಭಾವವು ದಕ್ಷಿಣ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುತ್ತದೆ.<ref>{{Cite book |author=Rao |title=Agricultural Meteorology |url=https://books.google.com/books?id=Kd-3lt-yAtAC&pg=PA173 |publisher=PHI Learning |year=2008 |isbn=978-8120333383 |pages=173–74 |access-date=30 May 2015}}</ref> ಕೇರಳದ ಮಳೆಯು ವಾರ್ಷಿಕವಾಗಿ ಸರಾಸರಿ 2,923 mm (115 in) ಆಗಿದೆ.<ref name="IMD">{{cite web |url=https://www.imd.gov.in/section/hydro/dynamic/rfmaps/updated.html |title=Hydromet Division Updated/Real Time Maps |publisher=[[India Meteorological Department]] |access-date=21 October 2014 |archive-url=https://web.archive.org/web/20160305062728/https://www.imd.gov.in/section/hydro/dynamic/rfmaps/updated.html |archive-date=5 March 2016 |url-status=dead}}</ref> ಕೇರಳದ ಕೆಲವು ಶುಷ್ಕ ತಗ್ಗು ಪ್ರದೇಶಗಳು ಸರಾಸರಿ ಕೇವಲ 1,250 mm (49 in) ಪಡೆಯುತ್ತವೆ; ಪೂರ್ವ [[ಇಡುಕ್ಕಿ ಜಿಲ್ಲೆ]]ಯ ಪರ್ವತಗಳು 5,000 mm (197 in) ಗಿಂತ ಹೆಚ್ಚು [[ಮಳೆ (ಹವಾಮಾನಶಾಸ್ತ್ರ)#ಶಿಲಾವೃಷ್ಟಿ ಮಳೆ|ಶಿಲಾವೃಷ್ಟಿ ಮಳೆಯನ್ನು]] ಪಡೆಯುತ್ತವೆ: ರಾಜ್ಯದಲ್ಲಿ ಅತಿ ಹೆಚ್ಚು. ಪೂರ್ವ ಕೇರಳದಲ್ಲಿ, ಶುಷ್ಕ ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಹವಾಮಾನವು ಪ್ರಚಲಿತವಾಗಿದೆ. ಬೇಸಿಗೆಯಲ್ಲಿ, ರಾಜ್ಯವು ಭಾರಿ ಗಾಳಿ, ಸುಂಟರಗಾಳಿ, ಚಂಡಮಾರುತ-ಸಂಬಂಧಿತ ಧಾರಾಕಾರ ಮಳೆ, ಸಾಂದರ್ಭಿಕ ಬರಗಾಲ ಮತ್ತು ಸಮುದ್ರ ಮಟ್ಟದ ಏರಿಕೆಗೆ ಒಳಗಾಗುತ್ತದೆ.<ref name="Brenkert_Malone_2003">{{Cite journal |last1=Brenkert |first1=A. |last2=Malone |first2=E. |year=2003 |title=Vulnerability and resilience of India and Indian states to climate change: a first-order approximation |journal=Joint Global Change Research Institute}}</ref>{{rp|26, 46, 52}} ಸರಾಸರಿ ದೈನಂದಿನ ತಾಪಮಾನವು 19.8 °C ನಿಂದ 36.7 °C ವರೆಗೆ ಇರುತ್ತದೆ.<ref name="moef">{{cite web |last=Sudha |first=T. M. |title=Opportunities in participatory planning to Evolve a Landuse Policy for Western Ghats Region in Kerala |url=https://moef.nic.in/downloads/public-information/tenth/Annexure%203.pdf |publisher=Department of Town and Country Planning, Kerala |page=14 |access-date=18 January 2015 |archive-url=https://web.archive.org/web/20160325095604/https://www.moef.nic.in/downloads/public-information/tenth/Annexure%203.pdf |archive-date=25 March 2016 |url-status=dead}}</ref> ವಾರ್ಷಿಕ ಸರಾಸರಿ ತಾಪಮಾನವು ಕರಾವಳಿ ತಗ್ಗು ಪ್ರದೇಶಗಳಲ್ಲಿ 25.0 ರಿಂದ 27.5 °C ವರೆಗೆ ಮತ್ತು ಪೂರ್ವ ಎತ್ತರದ ಪ್ರದೇಶಗಳಲ್ಲಿ 20.0–22.5 °C ವರೆಗೆ ಇರುತ್ತದೆ.<ref name="Brenkert_Malone_2003" />{{rp|65}}
=== ಸಸ್ಯ ಮತ್ತು ಪ್ರಾಣಿ ===
{{Main|ಕೇರಳದ ಸಸ್ಯ ಮತ್ತು ಪ್ರಾಣಿ}}
{{Multiple image
| direction = vertical
| width = 220
| image1 = Ichthyaetus ichthyaetus Kadalundi.jpg
| caption1 = [[ಕಡಲುಂಡಿ ಪಕ್ಷಿ ಅಭಯಾರಣ್ಯ|ಕಡಲುಂಡಿ ಪಕ್ಷಿ ಅಭಯಾರಣ್ಯದಲ್ಲಿ]] ಒಂದು ವಲಸೆ ''[[ಇಚ್ಥ್ಯಾಏಟಸ್]]''
| image2 = Highland Grassland Shola of Silent Valley National Park.jpg
| caption2 = [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]]
| image3 = Munnarhills.jpg
| caption3 = [[ಏಲಕ್ಕಿ ಬೆಟ್ಟಗಳು]] ತಮ್ಮ [[ಜೈವಿಕ ವೈವಿಧ್ಯತೆ]]ಗೆ ಹೆಸರುವಾಸಿಯಾಗಿದೆ
}}
ಹೆಚ್ಚಿನ [[ಜೈವಿಕ ವೈವಿಧ್ಯತೆ]]ಯು [[ಪಶ್ಚಿಮ ಘಟ್ಟಗಳಲ್ಲಿ]] ಕೇಂದ್ರೀಕೃತವಾಗಿದೆ ಮತ್ತು ರಕ್ಷಿಸಲ್ಪಟ್ಟಿದೆ. 18 ನೇ ಶತಮಾನದವರೆಗೆ ಕೇರಳದ ಮೂರು-ನಾಲ್ಕು ಭಾಗದಷ್ಟು ಭೂ ಪ್ರದೇಶವು ದಟ್ಟವಾದ ಅರಣ್ಯದ ಅಡಿಯಲ್ಲಿತ್ತು.<ref name="History">{{cite web |url=https://www.forest.kerala.gov.in/index.php?option=com_content&view=article&id=46&Itemid=2 |title=History |access-date=12 August 2015 |publisher=Kerala forests and wildlife department |archive-date=12 September 2015 |archive-url=https://web.archive.org/web/20150912231001/http://www.forest.kerala.gov.in/index.php?option=com_content&view=article&id=46&Itemid=2 |url-status=dead }}</ref> {{As of|2004}}, ಭಾರತದ 15,000 ಸಸ್ಯ ಪ್ರಭೇದಗಳಲ್ಲಿ 25% ಕ್ಕಿಂತ ಹೆಚ್ಚು ಕೇರಳದಲ್ಲಿವೆ. 4,000 [[ಹೂಬಿಡುವ ಸಸ್ಯ]] ಪ್ರಭೇದಗಳಲ್ಲಿ; ಅವುಗಳಲ್ಲಿ 1,272 [[ಸ್ಥಳೀಯ (ಪರಿಸರ ವಿಜ್ಞಾನ)|ಕೇರಳಕ್ಕೆ ಸ್ಥಳೀಯವಾಗಿವೆ]], 900 [[ಸಸ್ಯವೈದ್ಯ|ಔಷಧೀಯವಾಗಿವೆ]], ಮತ್ತು 159 [[ಅಳಿವಿನಂಚಿನಲ್ಲಿರುವ ಪ್ರಭೇದಗಳು|ಬೆದರಿಕೆಗೆ ಒಳಗಾಗಿವೆ]].<ref name="Sreedharan_2004">{{Cite journal |author=Sreedharan TP |year=2004 |title=Biological Diversity of Kerala: A survey of Kalliasseri panchayat, Kannur district |journal=Centre for Development Studies |url=https://krpcds.org/publication/downloads/62.pdf |archive-url=https://web.archive.org/web/20090326054155/https://krpcds.org/publication/downloads/62.pdf |archive-date=26 March 2009 |access-date=28 December 2008}}</ref>{{rp|11}} ಇದರ {{cvt|9,400|km2}} ಕಾಡುಗಳು ಉಷ್ಣವಲಯದ ಆರ್ದ್ರ ನಿತ್ಯಹಸಿರು ಮತ್ತು ಅರೆ-ನಿತ್ಯಹಸಿರು ಕಾಡುಗಳು (ಕೆಳ ಮತ್ತು ಮಧ್ಯಮ ಎತ್ತರಗಳು—3,470 km<sup>2</sup>), ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಪತನಶೀಲ ಕಾಡುಗಳು (ಮಧ್ಯಮ ಎತ್ತರಗಳು—4,100 km<sup>2</sup> ಮತ್ತು {{cvt|100|km2}}, ಕ್ರಮವಾಗಿ), ಮತ್ತು ಪರ್ವತ ಉಪೋಷ್ಣವಲಯ ಮತ್ತು [[ಸಮಶೀತೋಷ್ಣ]] (''ಶೋಲ'') ಕಾಡುಗಳು (ಅತಿ ಎತ್ತರದ ಎತ್ತರಗಳು—100 km<sup>2</sup>) ಒಳಗೊಂಡಿವೆ. ಒಟ್ಟಾರೆಯಾಗಿ, ಕೇರಳದ 24% ಅರಣ್ಯವಾಗಿದೆ.<ref name="Sreedharan_2004" />{{rp|12}} ವಿಶ್ವದ [[ರಾಮ್ಸರ್ ಒಪ್ಪಂದ]]ದಲ್ಲಿ ಪಟ್ಟಿ ಮಾಡಲಾದ ನಾಲ್ಕು [[ಜವುಗು ಪ್ರದೇಶ]]ಗಳು—[[ಶಾಸ್ತಾಂಕೋಟ್ಟ ಸರೋವರ|ಸರೋವರ ಶಾಸ್ತಾಂಕೋಟ್ಟ]], [[ಅಷ್ಟಮುಡಿ ಸರೋವರ]], [[ತೃಶೂರ್-ಪೊನ್ನಾನಿ ಕೋಲ್ ಜವುಗು ಪ್ರದೇಶಗಳು]], ಮತ್ತು ವೇಂಬನಾಡು-ಕೋಲ್ ಜವುಗು ಪ್ರದೇಶಗಳು—ಕೇರಳದಲ್ಲಿವೆ,{{sfn|Chandran|2018|p=342}} ಜೊತೆಗೆ ವಿಶಾಲವಾದ [[ನೀಲಗಿರಿ ಜೀವಗೋಳ ಮೀಸಲು]]ಯ {{cvt|1455.4|km2}} ಮತ್ತು [[ಅಗಸ್ತ್ಯಮಲೈ ಜೀವಗೋಳ ಮೀಸಲು]]ಯ {{cvt|1828|km2}} ಸೇರಿವೆ.{{sfn|Chandran|2018|p=347}} 20 ನೇ ಶತಮಾನದಲ್ಲಿ ಬೇಸಾಯಕ್ಕಾಗಿ ವ್ಯಾಪಕವಾಗಿ ತೆರವುಗೊಳಿಸಲ್ಪಟ್ಟಿದ್ದು,<ref name="Jayarajan_2004">{{Cite journal |author=Jayarajan M |year=2004 |title=Sacred Groves of North Malabar |journal=Centre for Development Studies |url=https://krpcds.org/publication/downloads/92.pdf |archive-url=https://web.archive.org/web/20090326054142/https://krpcds.org/publication/downloads/92.pdf |archive-date=26 March 2009 |access-date=28 December 2008}}</ref>{{rp|6–7}} ಉಳಿದ ಅರಣ್ಯ ಹೊದಿಕೆಯ ಹೆಚ್ಚಿನ ಭಾಗವನ್ನು ಈಗ [[ಸ್ಪಷ್ಟ ಕಡಿತ]]ದಿಂದ ರಕ್ಷಿಸಲಾಗಿದೆ.<ref name="Evans2008">{{cite book |author=Julian Evans |title=The Forests Handbook, Applying Forest Science for Sustainable Management |url=https://books.google.com/books?id=Ol_CCkYQNKIC&pg=PA235 |access-date=18 November 2012 |year=2008 |publisher=John Wiley & Sons |isbn=978-0-470-75683-6 |page=235}}</ref> ಪೂರ್ವ ಕೇರಳದ ಗಾಳಿಗೆ ಮುಖವಾದ ಪರ್ವತಗಳು [[ಉಷ್ಣವಲಯ ಮತ್ತು ಉಪೋಷ್ಣವಲಯದ ಆರ್ದ್ರ ಪರ್ಣಪಾತಿ ಕಾಡುಗಳು|ಉಷ್ಣವಲಯದ ಆರ್ದ್ರ ಕಾಡುಗಳನ್ನು]] ಮತ್ತು [[ಉಷ್ಣವಲಯ ಮತ್ತು ಉಪೋಷ್ಣವಲಯದ ಶುಷ್ಕ ಪರ್ಣಪಾತಿ ಕಾಡುಗಳು|ಉಷ್ಣವಲಯದ ಶುಷ್ಕ ಕಾಡುಗಳನ್ನು]] ಆಶ್ರಯಿಸುತ್ತವೆ, ಇವು ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿವೆ.<ref name="google8">{{cite book |author1=R. P. Singh |author2=Zubairul Islam |title=Environmental Studies |url=https://books.google.com/books?id=gaQptMlw3X8C&pg=PA172 |access-date=18 November 2012 |publisher=Concept Publishing Company |isbn=978-8180697746 |page=172 |year=2012 |archive-date=25 November 2023 |archive-url=https://web.archive.org/web/20231125191749/https://books.google.com/books?id=gaQptMlw3X8C&pg=PA172#v=onepage&q&f=false |url-status=live }}</ref><ref name="Geer2008">{{cite book |author=Alexandra Anna Enrica van der Geer |title=Animals in Stone: Indian Mammals Sculptured Through Time |url=https://books.google.com/books?id=oQ3quxh9gsgC&pg=PA7 |access-date=18 November 2012 |year=2008 |publisher=Brill |isbn=978-9004168190 |page=7}}</ref> ವಿಶ್ವದ ಅತ್ಯಂತ ಹಳೆಯ ತೇಗದ ತೋಟ 'ಕೊನೊಲ್ಲಿಸ್ ಪ್ಲಾಟ್' [[ನಿಲಂಬೂರು|ನಿಲಂಬೂರಿನಲ್ಲಿದೆ]].<ref>{{Cite web |url=https://www.dnaindia.com/india/report-world-s-oldest-teak-trees-dying-in-kerala-1255723 |title=World's oldest teak trees dying in Kerala |date=13 May 2009 |website=DNA India |access-date=25 November 2020 |archive-date=15 April 2021 |archive-url=https://web.archive.org/web/20210415102931/https://www.dnaindia.com/india/report-world-s-oldest-teak-trees-dying-in-kerala-1255723 |url-status=live }}</ref>
ಕೇರಳದ ಪ್ರಾಣಿಗಳು ಅವುಗಳ ವೈವಿಧ್ಯತೆ ಮತ್ತು ಹೆಚ್ಚಿನ ಸ್ಥಳೀಯತೆಯ ಪ್ರಮಾಣಕ್ಕೆ ಗಮನಾರ್ಹವಾಗಿವೆ: ಇದು 118 [[ಸಸ್ತನಿ]] ಪ್ರಭೇದಗಳನ್ನು (1 ಸ್ಥಳೀಯ), [[ಕೇರಳದ ಪಕ್ಷಿಗಳ ಪಟ್ಟಿ|500 ಪಕ್ಷಿ ಪ್ರಭೇದಗಳು]], 189 ಸಿಹಿನೀರಿನ ಮೀನು ಪ್ರಭೇದಗಳು, 173 [[ಸರೀಸೃಪ]] ಪ್ರಭೇದಗಳು (ಅವುಗಳಲ್ಲಿ 10 ಸ್ಥಳೀಯ), ಮತ್ತು 151 [[ಉಭಯಚರ]] ಪ್ರಭೇದಗಳನ್ನು (36 ಸ್ಥಳೀಯ) ಒಳಗೊಂಡಿದೆ.<ref>{{Cite web |url=https://threatenedtaxa.org/index.php/JoTT/article/view/1999/3443 |archive-url=https://web.archive.org/web/20161007224232/https://threatenedtaxa.org/index.php/JoTT/article/view/1999/3443 |url-status=dead |title=View of A checklist of the vertebrates of Kerala State, India | Journal of Threatened Taxa |archive-date=7 October 2016 |website=threatenedtaxa.org}}</ref> ಇವುಗಳು ವ್ಯಾಪಕವಾದ ಆವಾಸಸ್ಥಾನ ನಾಶ, ಮಣ್ಣಿನ ಸವಕಳಿ, ಭೂಕುಸಿತ, [[ಮಣ್ಣಿನ ಲವಣೀಕರಣ|ಉಪ್ಪಿನಂಶ]], ಮತ್ತು ಸಂಪನ್ಮೂಲ ಹೊರತೆಗೆಯುವಿಕೆಯಿಂದ ಬೆದರಿಕೆಗೆ ಒಳಗಾಗಿವೆ. ಕಾಡುಗಳಲ್ಲಿ, ''ಸೋನೋಕೆಲಿಂಗ್'', ''[[ಡಾಲ್ಬರ್ಗಿಯಾ ಲ್ಯಾಟಿಫೋಲಿಯಾ]]'', ''ಅಂಜಿಲಿ'', ''ಮುಲ್ಲುಮುರಿಕ್ಕು'', ''[[ಎರಿಥ್ರಿನಾ]]'', ಮತ್ತು ''[[ಸಿನ್ನಮೋಮಮ್ ಕ್ಯಾಸಿಯಾ|ಕ್ಯಾಸಿಯಾ]]'' ಕೇರಳದ 1,000 ಕ್ಕೂ ಹೆಚ್ಚು ಮರ ಪ್ರಭೇದಗಳಲ್ಲಿ ಸೇರಿವೆ. ಇತರ ಸಸ್ಯಗಳಲ್ಲಿ [[ಬಿದಿರು]], ಕಾಡು ಕರಿಮೆಣಸು, ಕಾಡು [[ಏಲಕ್ಕಿ]], [[ಕ್ಯಾಲಮಸ್ (ತಾಳೆ)|ಕ್ಯಾಲಮಸ್]] [[ರಟ್ಟನ್]] ತಾಳೆ, ಮತ್ತು ಸುಗಂಧಯುಕ್ತ ವೆಟಿವರ್ ಹುಲ್ಲು, ''ವೆಟಿವೇರಿಯಾ ಝಿಝಾನಿಯಾಯ್ಡ್ಸ್'' ಸೇರಿವೆ.<ref name="Sreedharan_2004" />{{rp|12}} [[ಭಾರತೀಯ ಆನೆ]], [[ಬಂಗಾಳ ಹುಲಿ]], [[ಭಾರತೀಯ ಚಿರತೆ]], [[ನೀಲಗಿರಿ ತಾರ್]], [[ಸಾಮಾನ್ಯ ತಾಳೆ ನರಿ]], ಮತ್ತು [[ಬೂದು ದೈತ್ಯ ಅಳಿಲು]]ಗಳು ಸಹ ಕಾಡುಗಳಲ್ಲಿ ಕಂಡುಬರುತ್ತವೆ.<ref name="Sreedharan_2004" />{{rp|12, 174–75}} ಸರೀಸೃಪಗಳಲ್ಲಿ [[ರಾಜ ನಾಗ]], [[ವೈಪೆರಿಡೆ|ಹಾವು]], [[ಪೈಥಾನ್]], ಮತ್ತು [[ಚಿಪ್ಪು ಮೊಸಳೆ]] ಸೇರಿವೆ. ಕೇರಳದ ಪಕ್ಷಿಗಳಲ್ಲಿ [[ಮಲಬಾರ್ ಟ್ರೋಗನ್]], [[ಮಹಾಶಿಖಿ]], [[ಕೇರಳ ಕುಕ್ಕುರ]], [[ಡಾರ್ಟರ್]] ಮತ್ತು [[ದಕ್ಷಿಣ ಬೆಟ್ಟ ಮೈನಾ]] ಸೇರಿವೆ. ಸರೋವರಗಳು, ಜವುಗು ಪ್ರದೇಶಗಳು ಮತ್ತು ಜಲಮಾರ್ಗಗಳಲ್ಲಿ, [[ಹೆಟೆರೋಪ್ನ್ಯೂಸ್ಟಿಸ್ ಫಾಸಿಲಿಸ್|ಕಾಡು]], [[ರೆಡ್ ಲೈನ್ ಟಾರ್ಪಿಡೋ ಬಾರ್ಬ್]] ಮತ್ತು ''ಚೂಟ್ಟಾಚಿ''; [[ಆರೆಂಜ್ ಕ್ರೋಮೈಡ್]]—''ಎಟ್ರೋಪ್ಲಸ್ ಮ್ಯಾಕುಲಾಟಸ್'' ಮುಂತಾದ ಮೀನುಗಳು ಕಂಡುಬರುತ್ತವೆ.<ref>{{cite book |last1=Institute |first1=Kerala Forest Research |title=Biodiversity Documentation for Kerala: Freshwater fishes |year=2003 |publisher=Kerala Forest Research Institute |isbn=978-8185041544 |url=https://books.google.com/books?id=SYcPAQAAMAAJ&q=fishes+in+kerala |language=en |access-date=18 October 2020 |archive-date=25 November 2023 |archive-url=https://web.archive.org/web/20231125192259/https://books.google.com/books?id=SYcPAQAAMAAJ&q=fishes+in+kerala |url-status=live }}</ref><ref name="Sreedharan_2004" />{{rp|163–65}} ಇತ್ತೀಚೆಗೆ, ಕೇರಳದ ವಡಕರಾ ಕರಾವಳಿಯಿಂದ ಸಂಗ್ರಹಿಸಿದ ಹೊಸದಾಗಿ ವಿವರಿಸಲಾದ ಟಾರ್ಡಿಗ್ರೇಡ್ (ನೀರಿನ ಕರಡಿಗಳು) ಪ್ರಭೇದವನ್ನು ಕೇರಳ ರಾಜ್ಯದ ಹೆಸರಿನಿಂದ ಹೆಸರಿಸಲಾಗಿದೆ; ''[[ಸ್ಟೈಗಾರ್ಕ್ಟಸ್ ಕೇರಳೆನ್ಸಿಸ್]]''.<ref>{{cite journal |last1=Vishnudattan |first1=N. K. |display-authors=etal |title=A new Tardigrade species, Stygarctus keralensis sp. nov. (Arthrotardigrada: Stygarctidae) from the intertidal zone of Southwest coast of India |url=https://www.mapress.com/zt/article/view/42726 |date=15 June 2021 |journal=[[Zootaxa]] |volume=4985 |issue=3 |page=381391 |doi=10.11646/zootaxa.4985.3.5 |pmid=34186802 |s2cid=235688035 |access-date=22 June 2021 |archive-date=27 November 2021 |archive-url=https://web.archive.org/web/20211127214807/https://www.mapress.com/zt/article/view/zootaxa.4985.3.5 |url-status=live |url-access=subscription }}</ref>
== ಪ್ರದೇಶಗಳು, ಜಿಲ್ಲೆಗಳು ಮತ್ತು ನಗರಗಳು ==
{{Main|ಕೇರಳದ ಆಡಳಿತ ವಿಭಾಗಗಳು|ಕೇರಳದ ಜಿಲ್ಲೆಗಳು|ಕೇರಳದ ಆದಾಯ ವಿಭಾಗಗಳ ಪಟ್ಟಿ|ಕೇರಳದ ತಾಲೂಕುಗಳ ಪಟ್ಟಿ|ಕೇರಳದ ನಗರಗಳು ಮತ್ತು ಪಟ್ಟಣಗಳ ಪಟ್ಟಿ}}
{{See also|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಆರು ಪ್ರದೇಶಗಳಾಗಿ ವಿತರಿಸಲಾಗಿದೆ: [[ಉತ್ತರ ಮಲಬಾರ್]] (ದೂರದ-ಉತ್ತರ ಕೇರಳ), [[ದಕ್ಷಿಣ ಮಲಬಾರ್]] (ಉತ್ತರ-ಮಧ್ಯ ಕೇರಳ), [[ಕೊಚ್ಚಿ]] (ಮಧ್ಯ ಕೇರಳ), [[ಉತ್ತರ ತಿರುವಾಂಕೂರು]] (ದಕ್ಷಿಣ-ಮಧ್ಯ ಕೇರಳ), [[ಮಧ್ಯ ತಿರುವಾಂಕೂರು]] (ದಕ್ಷಿಣ ಕೇರಳ) ಮತ್ತು [[ದಕ್ಷಿಣ ತಿರುವಾಂಕೂರು]] (ದೂರದ-ದಕ್ಷಿಣ ಕೇರಳ). ತೆರಿಗೆ ಮತ್ತು ಭೂ ಆದಾಯ ಉದ್ದೇಶಗಳಿಗಾಗಿ ಆಡಳಿತ ಪ್ರದೇಶಗಳಾಗಿ ಕಾರ್ಯನಿರ್ವಹಿಸುವ ಜಿಲ್ಲೆಗಳನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳು|27 ಆದಾಯ ವಿಭಾಗಗಳಾಗಿ]] ಮತ್ತು [[ಕೇರಳದ ತಾಲೂಕುಗಳ ಪಟ್ಟಿ|77 ತಾಲೂಕುಗಳಾಗಿ]] ವಿಂಗಡಿಸಲಾಗಿದೆ, ಇವುಗಳು ತಮ್ಮ ಗಡಿಗಳೊಳಗಿನ ವಸಾಹತುಗಳ ಮೇಲೆ ಆಡಳಿತ ಮತ್ತು ಆರ್ಥಿಕ ಅಧಿಕಾರಗಳನ್ನು ಹೊಂದಿವೆ, ಸ್ಥಳೀಯ ಭೂ ದಾಖಲೆಗಳ ನಿರ್ವಹಣೆ ಸೇರಿದಂತೆ. ಕೇರಳದ ತಾಲೂಕುಗಳನ್ನು ಮತ್ತಷ್ಟು 1,674 [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ.<ref>{{cite web |url=https://ildm.kerala.gov.in/wp-content/uploads/2018/01/Revenue-Guide-2018.pdf |title=Revenue Guide 2018 |date= |website=[[Government of Kerala]] |access-date=28 September 2020 |archive-date=20 September 2020 |archive-url=https://web.archive.org/web/20200920133932/https://ildm.kerala.gov.in/wp-content/uploads/2018/01/Revenue-Guide-2018.pdf |url-status=live }}</ref><ref>{{Cite web |url=https://kerala.gov.in/revenue-department |title=Revenue department, government of Kerala |access-date=28 September 2020 |archive-date=17 August 2021 |archive-url=https://web.archive.org/web/20210817225825/https://kerala.gov.in/revenue-department |url-status=dead}}</ref>
[[ಭಾರತದ ಸಂವಿಧಾನದ ತಿದ್ದುಪಡಿಗಳ ಪಟ್ಟಿ|73 ಮತ್ತು 74 ನೇ]] ಸಾಂವಿಧಾನಿಕ ತಿದ್ದುಪಡಿಗಳಿಂದ, ಕೇರಳದಲ್ಲಿ ಸ್ಥಳೀಯ ಸ್ವಯಂ-ಸರ್ಕಾರಿ ಸಂಸ್ಥೆಗಳು ಸರ್ಕಾರದ ಮೂರನೇ ಹಂತವಾಗಿ ಕಾರ್ಯನಿರ್ವಹಿಸುತ್ತವೆ, ಗ್ರಾಮೀಣ ಆಡಳಿತಕ್ಕಾಗಿ 14 [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳು]], 152 [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು 941 [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], ಮತ್ತು ನಗರ ಆಡಳಿತಕ್ಕಾಗಿ 87 [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]], ಆರು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿವೆ.<ref>{{cite web |title=Local Self Governance in Kerala |url=https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |publisher=Government of Kerala |access-date=28 September 2020 |archive-date=28 September 2021 |archive-url=https://web.archive.org/web/20210928223404/https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |url-status=dead}}</ref>
[[ಮಾಹೆ, ಭಾರತ|ಮಾಹೆ]], ಭಾರತೀಯ [[ಕೇಂದ್ರಾಡಳಿತ ಪ್ರದೇಶ]] [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]]ಯ ಒಂದು ಭಾಗವಾಗಿದ್ದು,<ref>{{cite web |url=https://www.censusindia.net/results/town.php?stad=A&state5=999 |archive-url=https://web.archive.org/web/20040616075334/https://www.censusindia.net/results/town.php?stad=A&state5=999 |archive-date=16 June 2004 |title=Census of India 2001: Data from the 2001 Census, including cities, villages and towns (Provisional) |access-date=1 November 2008 |publisher=Census Commission of India}}</ref> ಇದು {{convert|647|km}} ದೂರದಲ್ಲಿದ್ದರೂ,<ref name="ShiraAssociates.2012">{{cite book |author1=Dezan Shira |author2=Associates. |title=Doing Business in India |url=https://books.google.com/books?id=9YjXW41yMwQC&pg=PT313 |access-date=18 November 2012 |year=2012 |publisher=Springer |isbn=978-3-642-27618-7 |pages=313–}}</ref> ಇದು ಕೇರಳದಿಂದ ಅದರ ಎಲ್ಲಾ ಭೂಮುಖ ವಿಧಾನಗಳಲ್ಲಿ ಸುತ್ತುವರೆದಿರುವ ಕರಾವಳಿ ಬಹಿರಂಗವಾಗಿದೆ. [[ಕಣ್ಣೂರು ಜಿಲ್ಲೆ|ಕಣ್ಣೂರು ಜಿಲ್ಲೆಯು]] ಮೂರು ಕಡೆ ಮಾಹೆಯನ್ನು ಸುತ್ತುವರೆದಿದೆ ಮತ್ತು ನಾಲ್ಕನೇ ಕಡೆ [[ಕೋಝಿಕೋಡ್ ಜಿಲ್ಲೆ|ಕೋಝಿಕೋಡ್ ಜಿಲ್ಲೆಯಿದೆ]].<ref name="Menon2002">{{cite book |author1=D Banerjea |author2=N. R. Madhava Menon |title=Criminal Justice India Series, Vol. 20 |url=https://books.google.com/books?id=Axfuc5A8mxMC&pg=PA9 |access-date=18 November 2012 |year=2002 |publisher=Allied Publishers |isbn=978-8177648713 |pages=9–}}</ref>
1664 ರಲ್ಲಿ, [[ಫೋರ್ಟ್ ಕೊಚ್ಚಿ]] ಪುರಸಭೆಯನ್ನು [[ಡಚ್ ಮಲಬಾರ್]] ಸ್ಥಾಪಿಸಿತು, ಇದು [[ಭಾರತೀಯ ಉಪಖಂಡ]]ದ ಮೊದಲ ಪುರಸಭೆಯಾಗಿದೆ, ಇದು 18 ನೇ ಶತಮಾನದಲ್ಲಿ ಡಚ್ ಅಧಿಕಾರವು ದುರ್ಬಲಗೊಂಡಾಗ ವಿಸರ್ಜಿಸಲಾಯಿತು.<ref name="d_1664">{{Cite news |title=50 years on, Kochi still has a long way to go |url=https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |last=M K Sunil Kumar |date=26 September 2017 |access-date=1 June 2021 |work=The Times of India |archive-date=2 June 2021 |archive-url=https://web.archive.org/web/20210602230954/https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |url-status=live }}</ref> [[ಕೋಝಿಕೋಡ್]], [[ಪಾಲಕ್ಕಾಡ್]], [[ಫೋರ್ಟ್ ಕೊಚ್ಚಿ]], [[ಕಣ್ಣೂರು]], ಮತ್ತು [[ತಲಶ್ಶೇರಿ]] ಪುರಸಭೆಗಳನ್ನು 1 ನವೆಂಬರ್ 1866 ರಂದು<ref name="Ref1">{{cite web |title=Chronological List of Central Acts (Updated up to 17-10-2014) |url=https://www.lawmin.nic.in/chronology.doc |url-status=dead |archive-url=https://web.archive.org/web/20180107091128/http://lawmin.nic.in/chronology.doc |archive-date=7 January 2018 |access-date=7 August 2016 |website=Lawmin.nic.in}}</ref><ref name="c1881">{{cite book |last1=Lewis McIver |first1=G. Stokes |url=https://books.google.com/books?id=b_YIAAAAQAAJ |title=Imperial Census of 1881 Operations and Results in the Presidency of Madras |publisher=E.Keys at the Government Press |year=1883 |edition=(Vol II) |location=Madras |page=444 |access-date=5 December 2020 |archive-url=https://web.archive.org/web/20230327063433/https://books.google.com/books?id=b_YIAAAAQAAJ |archive-date=27 March 2023 |url-status=live}}</ref><ref name="google.co.in">{{cite book |last1=Presidency |first1=Madras (India |url=https://books.google.com/books?id=aUEwnQEACAAJ |title=Madras District Gazetteers, Statistical Appendix For Malabar District. |publisher=The Superintendent, Government Press |year=1915 |edition=Vol.2 |location=Madras |page=20 |language=en |access-date=2 December 2020 |archive-url=https://web.archive.org/web/20230327063433/https://books.google.com/books?id=aUEwnQEACAAJ |archive-date=27 March 2023 |url-status=live}}</ref><ref name="gazetteer" /> [[ಬ್ರಿಟಿಷ್ ಭಾರತ ಸಾಮ್ರಾಜ್ಯ]]ದಲ್ಲಿ ಸ್ಥಾಪಿಸಲಾಯಿತು, ಇದು ಕೇರಳ ರಾಜ್ಯದ ಮೊದಲ ಆಧುನಿಕ ಪುರಸಭೆಗಳಾಗಿವೆ. [[ತಿರುವನಂತಪುರ]] ಪುರಸಭೆಯು 1920 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಎರಡು ದಶಕಗಳ ನಂತರ, [[ಶ್ರೀ ಚಿತಿರಾ ತಿರುನಾಳ್]] ರ ಆಳ್ವಿಕೆಯಲ್ಲಿ, ತಿರುವನಂತಪುರ ಪುರಸಭೆಯನ್ನು 30 ಅಕ್ಟೋಬರ್ 1940 ರಂದು ನಿಗಮವಾಗಿ ಪರಿವರ್ತಿಸಲಾಯಿತು, ಇದು ಕೇರಳದ ಅತ್ಯಂತ ಹಳೆಯ ನಗರ ನಿಗಮವಾಗಿದೆ.<ref>{{cite web |title=Thiruvananthapuram |url=https://www.corporationoftrivandrum.org/index.php?option=com_content&view=article&id=158&Itemid=11 |date=2010 |url-status=usurped |archive-url=https://web.archive.org/web/20100918085703/https://www.corporationoftrivandrum.org/index.php?option=com_content&view=article&id=158&Itemid=11 |archive-date=18 September 2010 |access-date=4 April 2022}} Year of becoming a corporation</ref> [[ಭಾರತ]]ದ ಸ್ವಾತಂತ್ರ್ಯದ ನಂತರ ಸ್ಥಾಪಿಸಲಾದ ಮೊದಲ ನಗರ ನಿಗಮ ಮತ್ತು ರಾಜ್ಯದ ಎರಡನೇ ಅತ್ಯಂತ ಹಳೆಯ ನಗರ ನಿಗಮವು 1962 ರಲ್ಲಿ [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]] ನಲ್ಲಿದೆ.<ref>[https://web.archive.org/web/20080209134539/https://www.hindu.com/2008/02/05/stories/2008020561140500.htm Kozhikode Lok Sabha constituency redrawn Delimitation impact], ''The Hindu'' 5 February 2008</ref> ಕೇರಳದಲ್ಲಿ ಆರು [[ಭಾರತದಲ್ಲಿ ನಗರ ನಿಗಮಗಳು|ನಗರ ನಿಗಮಗಳಿವೆ]], ಅವು [[ತಿರುವನಂತಪುರ ನಗರ ನಿಗಮ|ತಿರುವನಂತಪುರ]], [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]], [[ಕೊಚ್ಚಿ ನಗರ ನಿಗಮ|ಕೊಚ್ಚಿ]], [[ಕೊಲ್ಲಂ ನಗರ ನಿಗಮ|ಕೊಲ್ಲಂ]], [[ತೃಶೂರ್ ನಗರ ನಿಗಮ|ತೃಶೂರ್]], ಮತ್ತು [[ಕಣ್ಣೂರು ನಗರ ನಿಗಮ|ಕಣ್ಣೂರು]] ನಗರಗಳನ್ನು ಆಳುತ್ತವೆ.<ref>{{cite web |title=Kerala Sustainable Urban Development Project |url=https://www.ksudp.org/ |publisher=Local Self Government Department |access-date=7 February 2022 |archive-date=20 September 2020 |archive-url=https://web.archive.org/web/20200920051936/http://ksudp.org/ |url-status=dead }}</ref> [[ತಿರುವನಂತಪುರ ನಗರ ನಿಗಮ]]ವು ಕೇರಳದ ಅತಿದೊಡ್ಡ ನಿಗಮವಾಗಿದ್ದರೆ ಕೊಚ್ಚಿ ಮಹಾನಗರ ಪ್ರದೇಶವನ್ನು [[ಕೊಚ್ಚಿ UA]] ಎಂದು ಕರೆಯಲಾಗುತ್ತದೆ, ಇದು ಅತಿದೊಡ್ಡ ನಗರ ಸಮೂಹವಾಗಿದೆ.<ref>{{cite web |title=City Information |url=https://cial.aero/contents/viewcontent.aspx?linkIdLvl2=32&linkid=32 |work=Cochin International Airport |publisher=Government of Kerala |access-date=18 November 2012 |archive-date=10 December 2012 |archive-url=https://web.archive.org/web/20121210070804/http://cial.aero/contents/viewcontent.aspx?linkIdLvl2=32&linkid=32 |url-status=live }}</ref> ಅರ್ಥಶಾಸ್ತ್ರ ಸಂಶೋಧನಾ ಸಂಸ್ಥೆ ಇಂಡಿಕಸ್ ಅನಾಲಿಟಿಕ್ಸ್ 2007 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, [[ತಿರುವನಂತಪುರ]], [[ಕೋಝಿಕೋಡ್]], [[ಕೊಚ್ಚಿ]], [[ಕೊಲ್ಲಂ]], [[ತೃಶೂರ್]] "ಭಾರತದಲ್ಲಿ ವಾಸಿಸಲು ಅತ್ಯುತ್ತಮ ನಗರಗಳಲ್ಲಿ" ಸೇರಿವೆ; ಸಮೀಕ್ಷೆಯು ನಗರಗಳನ್ನು ಶ್ರೇಣೀಕರಿಸಲು ಆರೋಗ್ಯ, ಶಿಕ್ಷಣ, ಪರಿಸರ, ಸುರಕ್ಷತೆ, ಸಾರ್ವಜನಿಕ ಸೌಲಭ್ಯಗಳು ಮತ್ತು ಮನರಂಜನೆಯಂತಹ ನಿಯತಾಂಕಗಳನ್ನು ಬಳಸಿದೆ.<ref>{{cite news |title=Cities best to earn a living are not the best to live: Survey |url=https://articles.economictimes.indiatimes.com/2007-11-26/news/27682663_1_cities-entertainment-indicus-analytics |work=The Times of India |date=26 November 2007 |access-date=7 February 2022 |archive-date=5 March 2016 |archive-url=https://web.archive.org/web/20160305021646/http://articles.economictimes.indiatimes.com/2007-11-26/news/27682663_1_cities-entertainment-indicus-analytics |url-status=dead }}</ref>
== ಸರ್ಕಾರ ಮತ್ತು ಆಡಳಿತ ==
{{Main|ಕೇರಳ ಸರ್ಕಾರ|ಕೇರಳ ವಿಧಾನಸಭೆ|ಕೇರಳದಲ್ಲಿ ಸ್ಥಳೀಯ ಸರ್ಕಾರ|ಕೇರಳ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಪಟ್ಟಿ|ಕೇರಳದ ಆಡಳಿತ ವಿಭಾಗಗಳು|l4 = ಕೇರಳ ಸರ್ಕಾರದ ಇಲಾಖೆಗಳ ಪಟ್ಟಿ}}
{{See also|ಕೇರಳದ ರಾಜಕೀಯ|ಕೇರಳದಲ್ಲಿ ರಾಜಕೀಯ ಪಕ್ಷಗಳು|ಕೇರಳದಲ್ಲಿ ಚುನಾವಣೆಗಳು}}
{{Multiple image
| direction = vertical
| width = 220
| header_align = center
| footer_align = center
| image1 = Kerala Legislative Assembly, Thiruvananthapuram.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಧಾನಸಭೆ]] ಕಟ್ಟಡ
| image2 = Kerala Government Secretariat.jpg
| caption2 = [[ಕೇರಳ ಸರ್ಕಾರದ ಕಚೇರಿ|ಸರ್ಕಾರಿ ಕಚೇರಿ]] [[ತಿರುವನಂತಪುರ|ತಿರುವನಂತಪುರದಲ್ಲಿ]] – ಕೇರಳದ ಕಾರ್ಯನಿರ್ವಾಹಕ ಆಡಳಿತದ ಆಸನ
| image3 = High Court of Kerala Building.jpg
| caption3 = [[ಕೊಚ್ಚಿ|ಕೊಚ್ಚಿಯ]] [[ಕೇರಳ ಉಚ್ಚ ನ್ಯಾಯಾಲಯ]] ಸಂಕೀರ್ಣ
}}
ರಾಜ್ಯವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯಿಂದ ಆಳಲ್ಪಡುತ್ತದೆ. ಕೇರಳವು [[ಏಕಸಭಾ]] ಶಾಸಕಾಂಗವನ್ನು ಹೊಂದಿದೆ. [[ಕೇರಳ ವಿಧಾನಸಭೆ]]ಯು ನಿಯಮಸಭೆ ಎಂದೂ ಕರೆಯಲ್ಪಡುತ್ತದೆ, ಇದು 140 ಸದಸ್ಯರನ್ನು ಒಳಗೊಂಡಿದ್ದು, ಅವರು ಐದು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.<ref>{{cite web |title=History of Kerala Legislature |url=https://kerala.gov.in/index.php?option=com_content&view=article&id=3776&Itemid=3022 |publisher=Government of Kerala |access-date=17 November 2012 |archive-url=https://web.archive.org/web/20120619040353/https://www.kerala.gov.in/index.php?option=com_content&view=article&id=3776&Itemid=3022 |archive-date=19 June 2012 |url-status=dead}}</ref> ರಾಜ್ಯವು [[ಭಾರತದ ಸಂಸತ್ತು|ಭಾರತೀಯ ಸಂಸತ್ತಿನ]] ಕೆಳಮನೆಯಾದ [[ಲೋಕಸಭೆ]]ಗೆ 20 ಸದಸ್ಯರನ್ನು ಮತ್ತು [[ರಾಜ್ಯಸಭೆ]]ಗೆ 9 ಸದಸ್ಯರನ್ನು ಚುನಾಯಿಸುತ್ತದೆ.<ref>{{cite web |url=https://www.parliamentofindia.nic.in/ls/intro/p1.htm |title=Our Parliament |publisher=Parliamentofindia.nic.in |access-date=25 February 2010 |archive-date=10 February 2010 |archive-url=https://web.archive.org/web/20100210043333/http://www.parliamentofindia.nic.in/ls/intro/p1.htm |url-status=live }}</ref>
[[ಕೇರಳ ಸರ್ಕಾರ]]ವು ಭಾರತದಲ್ಲಿ [[ಪ್ರಜಾಪ್ರಭುತ್ವ|ಪ್ರಜಾಪ್ರಭುತ್ವ]] ರೀತಿಯಲ್ಲಿ ಚುನಾಯಿತ ಸಂಸ್ಥೆಯಾಗಿದ್ದು, [[ಕೇರಳದ ರಾಜ್ಯಪಾಲರು|ರಾಜ್ಯಪಾಲರು]] ಇದರ ಸಾಂವಿಧಾನಿಕ ಮುಖ್ಯಸ್ಥರಾಗಿದ್ದಾರೆ ಮತ್ತು [[ಭಾರತದ ರಾಷ್ಟ್ರಪತಿ]]ಗಳಿಂದ ಐದು ವರ್ಷಗಳ ಅವಧಿಗೆ ನೇಮಕಗೊಳ್ಳುತ್ತಾರೆ.<ref name="govern">{{cite web |url=https://www.rajbhavan.kerala.gov.in/index.php?option=com_content&view=article&id=44&Itemid=2 |archive-url=https://web.archive.org/web/20090731095433/https://rajbhavan.kerala.gov.in/index.php?option=com_content&view=article&id=44&Itemid=2 |url-status=dead |archive-date=31 July 2009 |title=Responsibilities |access-date=13 November 2015 |publisher=Kerala Rajbhavan}}</ref> [[ಕೇರಳ ವಿಧಾನಸಭೆ|ವಿಧಾನಸಭೆಯಲ್ಲಿ]] ಬಹುಮತ ಹೊಂದಿರುವ ಪಕ್ಷ ಅಥವಾ ಒಕ್ಕೂಟದ ನಾಯಕನನ್ನು ರಾಜ್ಯಪಾಲರಿಂದ [[ಕೇರಳದ ಮುಖ್ಯಮಂತ್ರಿಗಳ ಪಟ್ಟಿ|ಮುಖ್ಯಮಂತ್ರಿಯಾಗಿ]] ನೇಮಿಸಲಾಗುತ್ತದೆ, ಮತ್ತು [[ಕೇರಳ ಸಚಿವ ಸಂಪುಟ|ಸಚಿವರ ಸಂಪುಟವನ್ನು]] ಮುಖ್ಯಮಂತ್ರಿಯ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಿಸುತ್ತಾರೆ.<ref name=govern /> ರಾಜ್ಯಪಾಲರು ರಾಜ್ಯದ ಆಚಾರಪೂರ್ಣ ಮುಖ್ಯಸ್ಥರಾಗಿ ಉಳಿಯುತ್ತಾರೆ, ಆದರೆ ಮುಖ್ಯಮಂತ್ರಿ ಮತ್ತು ಅವರ ಸಂಪುಟವು ದೈನಂದಿನ ಸರ್ಕಾರಿ ಕಾರ್ಯಗಳಿಗೆ ಜವಾಬ್ದಾರರಾಗಿರುತ್ತಾರೆ. ಸಚಿವರ ಸಂಪುಟವು ಸಚಿವ ಸಂಪುಟದ ಸಚಿವರು ಮತ್ತು ರಾಜ್ಯ ಸಚಿವರನ್ನು (MoS) ಒಳಗೊಂಡಿದೆ. [[ಕೇರಳ ಸರ್ಕಾರದ ಕಚೇರಿ|ಕಾರ್ಯದರ್ಶಿ]] [[ಮುಖ್ಯ ಕಾರ್ಯದರ್ಶಿ (ಭಾರತ)|ಮುಖ್ಯ ಕಾರ್ಯದರ್ಶಿ]] ನೇತೃತ್ವದಲ್ಲಿ, ಸಚಿವ ಸಂಪುಟಕ್ಕೆ ಸರ್ಕಾರಿ ನೀತಿಗಳ ರಚನೆ ಮತ್ತು ಅನುಷ್ಠಾನದಲ್ಲಿ ಸಹಾಯ ಮಾಡುತ್ತದೆ. ಮುಖ್ಯ ಕಾರ್ಯದರ್ಶಿಯು ಹಿರಿಯ [[ನಾಗರಿಕ ಸೇವೆ|ನಾಗರಿಕ ಸೇವಕ]] ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ರಾಜ್ಯ ಸರ್ಕಾರದ ಆಡಳಿತವು 47 ಕಾರ್ಯದರ್ಶಿ ಇಲಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ.<ref name=":0" /> ಪ್ರತಿಯೊಂದು ಸರ್ಕಾರಿ ಇಲಾಖೆಯನ್ನು ರಾಜಕೀಯವಾಗಿ ಸಚಿವರು ಮತ್ತು ಆಡಳಿತಾತ್ಮಕವಾಗಿ ಸರ್ಕಾರದ ಕಾರ್ಯದರ್ಶಿಯು ಮುಖ್ಯಸ್ಥರಾಗಿರುತ್ತಾರೆ, ಇವರು [[ಹೆಚ್ಚುವರಿ ಮುಖ್ಯ ಕಾರ್ಯದರ್ಶಿ|ಹೆಚ್ಚುವರಿ ಮುಖ್ಯ ಕಾರ್ಯದರ್ಶಿ]], [[ಪ್ರಿನ್ಸಿಪಾಲ್ ಕಾರ್ಯದರ್ಶಿ (ಭಾರತ)|ಪ್ರಿನ್ಸಿಪಾಲ್ ಕಾರ್ಯದರ್ಶಿ]], ಅಥವಾ [[ಕಾರ್ಯದರ್ಶಿ]] ಹುದ್ದೆಯಲ್ಲಿರುತ್ತಾರೆ, ಇವರು ಸಾಮಾನ್ಯವಾಗಿ [[ಭಾರತೀಯ ಆಡಳಿತ ಸೇವೆ]] (IAS) ನ ಅಧಿಕಾರಿಯಾಗಿರುತ್ತಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು/ಪ್ರಿನ್ಸಿಪಾಲ್ ಕಾರ್ಯದರ್ಶಿಗಳು ತಮಗೆ ನಿಯೋಜಿಸಲಾದ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರತಿಯೊಂದು ಇಲಾಖೆಯು ವಿಶೇಷ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಂಡರ್ ಸೆಕ್ರೆಟರಿ ಮತ್ತು ಇತರ ಸಹಾಯಕ ಅಧಿಕಾರಿಗಳ ಹುದ್ದೆಗಳನ್ನು ಸಹ ಹೊಂದಿದೆ. ಈ ಕಾರ್ಯದರ್ಶಿ ಇಲಾಖೆಗಳು ನೀತಿ ರಚನೆ ಮತ್ತು ಆಡಳಿತಾತ್ಮಕ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುತ್ತವೆ, ಆದರೆ ರೇಖಾ ಇಲಾಖೆಗಳು ಮತ್ತು ಇತರ ಕಾರ್ಯನಿರ್ವಾಹಕ ಸಂಸ್ಥೆಗಳು ಸರ್ಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಕ್ಷೇತ್ರ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತವೆ.
ಪ್ರತಿಯೊಂದು ಕಾರ್ಯದರ್ಶಿ ಇಲಾಖೆಯು ಒಂದು ಅಥವಾ ಹೆಚ್ಚು ರೇಖಾ ಇಲಾಖೆಗಳು, ನಿರ್ದೇಶನಾಲಯಗಳು, ಆಯುಕ್ತ ಕಚೇರಿಗಳು, ಮಂಡಳಿಗಳು, ಅಥವಾ ಅಂತಹುದೇ ಕಾರ್ಯನಿರ್ವಾಹಕ ಸಂಸ್ಥೆಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಚಲಾಯಿಸುತ್ತದೆ. ಈ ಸಂಸ್ಥೆಗಳು ಸರ್ಕಾರಿ ನೀತಿಗಳನ್ನು ಅನುಷ್ಠಾನಗೊಳಿಸಲು, ನಿಯಂತ್ರಕ ಆಡಳಿತ, ಜಾರಿ, ಸಾರ್ವಜನಿಕ ಸೇವೆಗಳನ್ನು ಒದಗಿಸಲು ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯಗಳನ್ನು ನಿರ್ವಹಿಸಲು ಜವಾಬ್ದಾರರಾಗಿರುತ್ತವೆ. ಅವುಗಳನ್ನು ಸಾಮಾನ್ಯವಾಗಿ ನಿರ್ದೇಶಕರು, ಆಯುಕ್ತರು, ಅಥವಾ ಅಂತಹುದೇ ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ, ಅವರು ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ, ಇದು ಸಂಸ್ಥೆಯ ಸ್ವರೂಪವನ್ನು ಅವಲಂಬಿಸಿರುತ್ತದೆ. ಈ ಪ್ರತಿಯೊಂದು ಇಲಾಖೆಗಳು/ಸಂಸ್ಥೆಗಳು ತಮ್ಮದೇ ಆದ ಆಡಳಿತಾತ್ಮಕ ಉಪವಿಭಾಗಗಳನ್ನು ಹೊಂದಿವೆ.<ref>Rules of Business of [[Government of Kerala]]
PART II
FIRST SCHEDULE
https://gad.kerala.gov.in/sites/default/files/general_attachment/Rules%20of%20Business%20-%20Part%20II.pdf</ref>
ರಾಜ್ಯವನ್ನು ಹದಿನಾಲ್ಕು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದೂ ಜಿಲ್ಲಾ ಆಡಳಿತದ ಪ್ರಧಾನ ಕಚೇರಿಯಾಗಿ ಕಲೆಕ್ಟರೇಟ್ ಅನ್ನು ಹೊಂದಿದೆ. [[ಜಿಲ್ಲಾ ಮ್ಯಾಜಿಸ್ಟ್ರೇಟ್|ಜಿಲ್ಲಾ ಕಲೆಕ್ಟರ್]] ಜಿಲ್ಲಾ ಆಡಳಿತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭೂ ಆದಾಯ ಆಡಳಿತ, ವಿಪತ್ತು ನಿರ್ವಹಣೆ, ಚುನಾವಣೆಗಳು, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಮತ್ತು ಜಿಲ್ಲೆಯೊಳಗಿನ ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯಕ್ಕೆ ಜವಾಬ್ದಾರರಾಗಿರುತ್ತಾರೆ.<ref>{{Cite web |title=Collectorate {{!}} District Thiruvananthapuram, Government of Kerala {{!}} India |url=https://trivandrum.nic.in/en/collectrate/ |access-date=2026-04-04 |language=en-US}}</ref> ಆಡಳಿತಾತ್ಮಕ ಅನುಕೂಲಕ್ಕಾಗಿ, ಪ್ರತಿಯೊಂದು ಜಿಲ್ಲೆಯನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳ ಪಟ್ಟಿ|ಆದಾಯ ವಿಭಾಗಗಳಾಗಿ]], [[ತಹಸೀಲ್ದಾರ್|ತಾಲೂಕುಗಳಾಗಿ]], ಮತ್ತು [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ, ಪ್ರಾಥಮಿಕವಾಗಿ ಭೂ ಆದಾಯ ಆಡಳಿತದ ಉದ್ದೇಶಕ್ಕಾಗಿ.<ref>{{Cite web |last=Admin |date=2025-01-22 |title=Land revenue administration, Government of Kerala |url=https://clr.kerala.gov.in/eng/index.php/department/organisation-structure |access-date=2026-01-01 |website=Department of Land Revenue |language=en-gb}}</ref>
ಕೇರಳದಲ್ಲಿ ಕಾನೂನು ಜಾರಿಯನ್ನು ಪ್ರಾಥಮಿಕವಾಗಿ [[ಕೇರಳ ಪೊಲೀಸ್]] ನಡೆಸುತ್ತದೆ, ಇದು ಕೇರಳ ಸರ್ಕಾರದ [[ಗೃಹ ಇಲಾಖೆ (ಕೇರಳ)|ಗೃಹ ಇಲಾಖೆಯ]] ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇರಳ ಪೊಲೀಸ್ ಅನ್ನು ಎರಡು ಪೊಲೀಸ್ ವಲಯಗಳಾಗಿ (ಉತ್ತರ ಮತ್ತು ದಕ್ಷಿಣ) ರಚಿಸಲಾಗಿದೆ, ಅವುಗಳನ್ನು ಮತ್ತಷ್ಟು ವ್ಯಾಪ್ತಿಗಳು, ಪೊಲೀಸ್ ಜಿಲ್ಲೆಗಳು, ಉಪವಿಭಾಗಗಳು ಮತ್ತು ಪೊಲೀಸ್ ಠಾಣೆಗಳಾಗಿ ವಿಂಗಡಿಸಲಾಗಿದೆ. ಪ್ರಾಥಮಿಕ ಕಾನೂನು ಜಾರಿಗೆ ಜವಾಬ್ದಾರರಾಗಿರುವ 484 ಸ್ಥಳೀಯ ಪೊಲೀಸ್ ಠಾಣೆಗಳಿವೆ.<ref>{{Cite web |title=Official Website of Kerala Police |url=https://keralapolice.gov.in/ |access-date=2026-04-24 |website=keralapolice.gov.in |language=en}}</ref>
[[ನ್ಯಾಯಾಂಗ]]ವು [[ಕೇರಳ ಉಚ್ಚ ನ್ಯಾಯಾಲಯ]] ಮತ್ತು ಕೆಳ ನ್ಯಾಯಾಲಯಗಳ ವ್ಯವಸ್ಥೆಯನ್ನು ಒಳಗೊಂಡಿದೆ.<ref>{{cite web |title=History of Judiciary |url=https://www.allindiajudges.org/Judgment/FNJPC2.htm |publisher=All-India Judges Association |access-date=29 April 2015 |archive-date=1 October 2015 |archive-url=https://web.archive.org/web/20151001072113/http://www.allindiajudges.org/Judgment/FNJPC2.htm |url-status=dead }}</ref> [[ಕೊಚ್ಚಿ|ಕೊಚ್ಚಿಯಲ್ಲಿ]] ನೆಲೆಗೊಂಡಿರುವ ಉಚ್ಚ ನ್ಯಾಯಾಲಯವು,<ref name="Congress (US)2010">{{cite book |author1=U S Congress |author2=Congress (U.S.) |title=Congressional Record, V. 153, Pt. 1, January 4, 2007 to January 17, 2007 |url=https://books.google.com/books?id=M3bLOwbeOZYC&pg=PA1198 |access-date=18 November 2012 |year=2010 |publisher=Government Printing Office |isbn=978-0-16-086824-5 |page=1198}}</ref>as ರಂತೆ ಮುಖ್ಯ ನ್ಯಾಯಮೂರ್ತಿ ಮತ್ತು 35 ಖಾಯಂ ಮತ್ತು ಹನ್ನೆರಡು ಹೆಚ್ಚುವರಿ ''[[ಪ್ರೋ ಟೆಂಪೋರ್]]'' ನ್ಯಾಯಮೂರ್ತಿಗಳನ್ನು ಹೊಂದಿದೆ.<ref>{{cite web |title=High Court of Kerala Profile |url=https://highcourtofkerala.nic.in/profile.html |publisher=High Court of Kerala |access-date=18 November 2012 |archive-date=31 October 2012 |archive-url=https://web.archive.org/web/20121031233641/http://highcourtofkerala.nic.in/profile.html |url-status=live }}</ref> ಉಚ್ಚ ನ್ಯಾಯಾಲಯವು [[ಲಕ್ಷದ್ವೀಪ]] ಕೇಂದ್ರಾಡಳಿತ ಪ್ರದೇಶದ ಪ್ರಕರಣಗಳನ್ನು ಸಹ ವಿಚಾರಣೆಗೆ ತೆಗೆದುಕೊಳ್ಳುತ್ತದೆ.<ref name="Banerjea2002">{{cite book |author=D. Banerjea |title=Criminal Justice India Series, Vol. 21 |url=https://books.google.com/books?id=L6NWL-a14mkC&pg=PA80 |access-date=18 November 2012 |year=2002 |publisher=Allied Publishers |isbn=978-8177648720 |page=80}}</ref><ref name="SharmaB.k.2007">{{cite book |author1=Sharma |author2=Sharma B.k. |title=Intro. to the Constitution of India, 4/e |url=https://books.google.com/books?id=srDytmFE3KMC&pg=PA261 |access-date=18 November 2012 |year=2007 |publisher=PHI Learning Pvt. Ltd. |isbn=978-8120332461 |page=261}}</ref> ರಾಜ್ಯದ ಅಧೀನ ನ್ಯಾಯಾಂಗವು ಪ್ರತಿಯೊಂದು 14 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳನ್ನು ಒಳಗೊಂಡಿದೆ, ಇವುಗಳನ್ನು ಜಿಲ್ಲಾ ನ್ಯಾಯಾಧೀಶರು ಮುಖ್ಯಸ್ಥರಾಗಿರುತ್ತಾರೆ, ಜೊತೆಗೆ ನಾಗರಿಕ ನ್ಯಾಯಾಲಯಗಳು (''ಮುನ್ಸಿಫ್ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು'') ಮತ್ತು ಅಪರಾಧ ನ್ಯಾಯಾಲಯಗಳು (''ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮತ್ತು ಸೆಷನ್ಸ್ ನ್ಯಾಯಾಲಯಗಳು'') ತಮ್ಮ ಅಧಿಕಾರ ವ್ಯಾಪ್ತಿಯ ಪ್ರಕಾರ ಪ್ರಕರಣಗಳನ್ನು ನಿರ್ವಹಿಸುತ್ತವೆ.
=== ಸ್ಥಳೀಯ ಸರ್ಕಾರ ===
{{Main|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ಕೇರಳದಲ್ಲಿ, ಪಂಚಾಯತ್ಗಳು, ಪುರಸಭೆಗಳು ಮತ್ತು ನಿಗಮಗಳಂತಹ ಸ್ಥಳೀಯ ಸರ್ಕಾರಿ ಸಂಸ್ಥೆಗಳು 1959 ರಿಂದಲೂ ಅಸ್ತಿತ್ವದಲ್ಲಿವೆ. ಆದಾಗ್ಯೂ, ಗಮನಾರ್ಹವಾದ ವಿಕೇಂದ್ರೀಕರಣ ಉಪಕ್ರಮವು 1993 ರಲ್ಲಿ ಪ್ರಾರಂಭವಾಯಿತು, ಇದು [[ಭಾರತ ಸರ್ಕಾರ|ಕೇಂದ್ರ ಸರ್ಕಾರ]]ದ ಸಾಂವಿಧಾನಿಕ ತಿದ್ದುಪಡಿಗಳೊಂದಿಗೆ ಹೊಂದಾಣಿಕೆಯಾಯಿತು.<ref name="Capdeck">{{cite web |url=https://www.lenobl.ru/Document/1412700121.pdf |title=An Introduction to local self governments in Kerala |publisher=SDC CAPDECK |access-date=17 November 2012 |author=Mariamma Sanu George |pages=17–20 |archive-date=30 May 2015 |archive-url=https://web.archive.org/web/20150530224012/http://www.lenobl.ru/Document/1412700121.pdf |url-status=live }}</ref><ref name="KILA">{{cite web |url=https://www.kilaonline.org/site_docu/pub200904a.pdf |archive-url=https://web.archive.org/web/20130513015050/https://www.kilaonline.org/site_docu/pub200904a.pdf |archive-date=13 May 2013 |title=Kerala – A Case Study of Classical Democratic Decentralisation |publisher=Kerala Institute of Local Administration |date=April 2009 |access-date=17 November 2012 |author=S M Vijayanand }}</ref>{{rp|page=12}} ಕೇರಳ ಪಂಚಾಯತ್ ರಾಜ್ ಕಾಯ್ದೆ ಮತ್ತು ಕೇರಳ ಪುರಸಭೆ ಕಾಯ್ದೆಯನ್ನು 1994 ರಲ್ಲಿ ಜಾರಿಗೊಳಿಸಲಾಯಿತು, ಇದು ಗ್ರಾಮೀಣ ಆಡಳಿತಕ್ಕಾಗಿ ಮೂರು-ಹಂತದ ವ್ಯವಸ್ಥೆಯನ್ನು ಮತ್ತು ನಗರ ಆಡಳಿತಕ್ಕಾಗಿ ಏಕ-ಹಂತದ ವ್ಯವಸ್ಥೆಯನ್ನು ಸ್ಥಾಪಿಸಿತು.<ref>{{cite act
| title = Kerala Panchayat Raj Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref><ref>{{cite act
| title = Kerala Municipality Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref>
ಗ್ರಾಮೀಣ ಆಡಳಿತದ ಮೂರು-ಹಂತದ ರಚನೆಯು [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳನ್ನು]] ಒಳಗೊಂಡಿದೆ.<ref name="TandonMohanty2006">{{cite book |author1=Rajesh Tandon |author2=Ranjita Mohanty |title=Participatory Citizenship: Identity, Exclusion, Inclusion |url=https://books.google.com/books?id=oPByu7CWoUEC&pg=PA199 |access-date=17 November 2012 |year=2006 |publisher=Sage |isbn=978-0-7619-3467-7 |page=199}}</ref> ಕೇರಳ ಪಂಚಾಯತ್ ರಾಜ್ ಕಾಯ್ದೆ, 1994 ಈ ಸಂಸ್ಥೆಗಳಿಗೆ ಸ್ಪಷ್ಟವಾದ ಅಧಿಕಾರಗಳನ್ನು ವ್ಯಾಖ್ಯಾನಿಸುತ್ತದೆ.<ref name="Capdeck" /> ನಗರ ಪ್ರದೇಶಗಳಿಗೆ, ಕೇರಳ ಪುರಸಭೆ ಕಾಯ್ದೆಯು ಏಕ-ಹಂತದ ವ್ಯವಸ್ಥೆಯನ್ನು ಒದಗಿಸುತ್ತದೆ, ಇದು [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]] ಮತ್ತು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿದೆ, ಅವು ಸ್ಥಳೀಯ ಆಡಳಿತ ಮತ್ತು ನಾಗರಿಕ ಆಡಳಿತಕ್ಕೆ ಜವಾಬ್ದಾರರಾಗಿರುತ್ತವೆ. ಈ ಸಂಸ್ಥೆಗಳನ್ನು ನಿಯಮಿತವಾಗಿ [[ಕೇರಳದಲ್ಲಿ ಚುನಾವಣೆಗಳು|ಸ್ಥಳೀಯ ಸಂಸ್ಥೆಗಳ ಚುನಾವಣೆಗಳ]] ಮೂಲಕ ರಚಿಸಲಾಗುತ್ತದೆ.<ref name="Chaudhary2009">{{cite book |author=Shyam Nandan Chaudhary |title=Tribal Development Since Independence |url=https://books.google.com/books?id=KBX1EJVhjGEC&pg=PA235 |access-date=18 November 2012 |year=2009 |publisher=Concept Publishing Company |isbn=978-8180696220 |page=235}}</ref> ಈ ಸಂಸ್ಥೆಗಳು ಪರಿಣಾಮಕಾರಿ ವಿಕೇಂದ್ರೀಕರಣವನ್ನು ಖಚಿತಪಡಿಸಿಕೊಳ್ಳಲು ಗಣನೀಯ ಆಡಳಿತಾತ್ಮಕ, ಕಾನೂನು ಮತ್ತು ಆರ್ಥಿಕ ಅಧಿಕಾರಗಳನ್ನು ಪಡೆಯುತ್ತವೆ.<ref name="KILA" />{{rp|page=13}} ಪ್ರಸ್ತುತ, ರಾಜ್ಯ ಸರ್ಕಾರವು ರಾಜ್ಯ ಯೋಜನಾ ವಿನಿಯೋಗದ ಸುಮಾರು 40% ಅನ್ನು ಸ್ಥಳೀಯ ಸರ್ಕಾರಗಳಿಗೆ ನಿಯೋಜಿಸುತ್ತದೆ.<ref name="IsaacFranke2002">{{cite book |author1=T. M. Thomas Isaac |author2=Richard W. Franke |title=Local Democracy and Development: The Kerala People's Campaign for Decentralized Planning |url=https://books.google.com/books?id=x6v6F2a3Gs0C&pg=PR13 |year=2002 |publisher=Rowman & Littlefield |isbn=978-0-7425-1607-6 |page=13}}</ref> ಕೇರಳವು 1,200 ಸ್ಥಳೀಯ ಸಂಸ್ಥೆಗಳನ್ನು ಹೊಂದಿದೆ, ಇವುಗಳಲ್ಲಿ 941 ಗ್ರಾಮ ಪಂಚಾಯತ್ಗಳು, 152 ಬ್ಲಾಕ್ ಪಂಚಾಯತ್ಗಳು, 14 ಜಿಲ್ಲಾ ಪಂಚಾಯತ್ಗಳು, 87 ಪುರಸಭೆಗಳು, ಮತ್ತು 6 ನಗರ ನಿಗಮಗಳು ಸೇರಿವೆ.<ref>{{Cite web |title=Local Bodies {{!}} Local Self Government Department |url=https://lsgkerala.gov.in/en/lsgd/localbody-list |access-date=2025-07-08 |website=lsgkerala.gov.in |archive-date=2 June 2023 |archive-url=https://web.archive.org/web/20230602134126/https://lsgkerala.gov.in/en/lsgd/localbody-list |url-status=dead }}</ref>
ಕೇರಳವನ್ನು 2016 ರಲ್ಲಿ ಭಾರತದ ಮೊದಲ ಡಿಜಿಟಲ್ ರಾಜ್ಯವೆಂದು ಘೋಷಿಸಲಾಯಿತು ಮತ್ತು [[ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್]] ನ 2019 ರ ಭಾರತ ಭ್ರಷ್ಟಾಚಾರ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕನಿಷ್ಠ ಭ್ರಷ್ಟ ರಾಜ್ಯವೆಂದು ಪರಿಗಣಿಸಲಾಗಿದೆ.<ref>{{Cite book |title=India Corruption Survey 2019 – Report |last= |publisher=Transparency International India |year=2019 |location= |pages=22 |url=https://transparencyindia.org/wp-content/uploads/2019/11/India-Corruption-Survey-2019.pdf |access-date=18 June 2021 |archive-date=10 July 2021 |archive-url=https://web.archive.org/web/20210710100154/https://transparencyindia.org/wp-content/uploads/2019/11/India-Corruption-Survey-2019.pdf |url-status=live }}</ref><ref>{{Cite news |title=Kerala the first digital State |url=https://www.thehindu.com/news/cities/kozhikode/kerala-the-first-digital-state/article8291466.ece |last=Special currespondent |date=28 February 2016 |access-date=17 November 2020 |work=The Hindu |archive-date=15 April 2021 |archive-url=https://web.archive.org/web/20210415102347/https://www.thehindu.com/news/cities/kozhikode/kerala-the-first-digital-state/article8291466.ece |url-status=live }}</ref> ಪಬ್ಲಿಕ್ ಅಫೇರ್ಸ್ ಇಂಡೆಕ್ಸ್-2020 ಕೇರಳವನ್ನು ಭಾರತದ ಅತ್ಯುತ್ತಮ ಆಡಳಿತ ರಾಜ್ಯವೆಂದು ಗೊತ್ತುಪಡಿಸಿತು.<ref>{{Cite news |title=Kerala, Tamil Nadu and Goa best governed States: report |url=https://www.thehindu.com/news/national/kerala-goa-and-chandigarh-best-governed-states-ut-report/article32985716.ece |last=PTI |date=30 October 2020 |access-date=20 June 2021 |work=The Hindu |archive-date=7 October 2021 |archive-url=https://web.archive.org/web/20211007210542/https://www.thehindu.com/news/national/kerala-goa-and-chandigarh-best-governed-states-ut-report/article32985716.ece |url-status=live }}</ref>
=== ರಾಜಕೀಯ ===
ಕೇರಳವು ತನ್ನ ಬಲವಾದ ಸಾಮಾಜಿಕ ಕಲ್ಯಾಣ ನೀತಿಗಳು, ಭೂ ಸುಧಾರಣೆಗಳು ಮತ್ತು ಉನ್ನತ ಮಾನವ ಅಭಿವೃದ್ಧಿ ಸೂಚಕಗಳಿಂದಾಗಿ ಭಾರತದ ಅತ್ಯಂತ [[ಸಮಾನತಾವಾದ|ಸಮಾನತಾವಾದಿ]] ರಾಜ್ಯಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ.<ref>{{Cite journal |last1=B |first1=Bibimol R. |last2=Seena |first2=Dr Anand Lali |last3=Thanammal |first3=Dr K. K. |date=2023-11-30 |title=C.Achutha Menon's Social Reforms: Paving The Way For A Progressive Kerala |url=https://kuey.net/index.php/kuey/article/view/8887 |journal=Educational Administration: Theory and Practice |language=en |volume=29 |issue=4 |pages=4074–4079 |doi=10.53555/kuey.v29i4.8887 |doi-broken-date=15 June 2026 |issn=2148-2403}}</ref><ref>{{Cite journal |last=Duran |first=Jane |date=April 2025 |title=Egalitarianism and Justice in Kerala |url=https://www.cambridge.org/core/journals/think/article/abs/egalitarianism-and-justice-in-kerala/5B093820090E9266A4852C40F93F5A51 |journal=Think |language=en |volume=24 |issue=70 |pages=23–29 |doi=10.1017/S147717562500017X |issn=1477-1756}}</ref><ref>{{Cite journal |last1=Thiranagama |first1=Sharika |title=Rural Civilities: Caste, Gender and Public Life in Kerala |journal=South Asia: Journal of South Asian Studies |date=2019 |volume=42 |issue=2 |pages=310–327 |doi=10.1080/00856401.2019.1582190}}</ref><ref>{{Cite journal |last=Devika |first=J. |date=August 2010 |title=Egalitarian Developmentalism, Communist Mobilization, and the Question of Caste in Kerala State, India |url=https://www.cambridge.org/core/journals/journal-of-asian-studies/article/abs/egalitarian-developmentalism-communist-mobilization-and-the-question-of-caste-in-kerala-state-india/8F65915C540DB6AC5D3EEE6DE800DB3B? |journal=The Journal of Asian Studies |language=en |volume=69 |issue=3 |pages=799–820 |doi=10.1017/S0021911810001506 |issn=1752-0401}}</ref> ಕೇರಳದ ರಾಜಕೀಯವು ಪ್ರಾಥಮಿಕವಾಗಿ [[ಭಾರತದಲ್ಲಿ ಕಮ್ಯುನಿಸಂ|ಕಮ್ಯುನಿಸಂ]], [[ಪ್ರಜಾಪ್ರಭುತ್ವ ಸಮಾಜವಾದ]], [[ಜಾತ್ಯತೀತತೆ]], [[ಮಧ್ಯಮಾರ್ಗ#ಭಾರತ|ಮಧ್ಯಮಾರ್ಗ]] ಮತ್ತು ಪ್ರಾದೇಶಿಕ ಹಿತಾಸಕ್ತಿಗಳಿಂದ ರೂಪುಗೊಂಡಿದೆ. [[ಬಲಪಂಥೀಯ ರಾಜಕೀಯ#ಭಾರತ|ಬಲಪಂಥೀಯ ರಾಜಕೀಯ]]ವು ತುಲನಾತ್ಮಕವಾಗಿ ಚಿಕ್ಕ ಶಕ್ತಿಯಾಗಿದ್ದು, ಇದನ್ನು ಪ್ರಾಥಮಿಕವಾಗಿ [[ಭಾರತೀಯ ಜನತಾ ಪಕ್ಷ]]-ನೇತೃತ್ವದ [[ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ|NDA]] ಪ್ರತಿನಿಧಿಸುತ್ತದೆ.<ref>{{Cite journal |title=Hindu Nationalism in South India: The Rise of Saffron in Kerala |url=https://www.researchgate.net/publication/381937210_Hindu_Nationalism_in_South_India_The_Rise_of_Saffron_in_Kerala |journal=}}</ref><ref>{{Cite journal |last=Nair |first=A. Balakrishnan |date=1994 |title=The Dynamics of Kerala Politics |url=https://www.jstor.org/stable/41855697 |journal=The Indian Journal of Political Science |volume=55 |issue=3 |pages=251–260 |issn=0019-5510}}</ref>
ಕೇರಳವು ಎರಡು ಪ್ರಮುಖ ರಾಜಕೀಯ ಮೈತ್ರಿಗಳನ್ನು ಹೊಂದಿದೆ: [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ನೇತೃತ್ವದ [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್]] (UDF); ಮತ್ತು [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)]] (CPI(M)) ನೇತೃತ್ವದ [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್]] (LDF). 1980 ರಿಂದ, ಕೇರಳದ ರಾಜಕೀಯವು LDF ಮತ್ತು UDF ನಿಂದ ಪ್ರಾಬಲ್ಯ ಹೊಂದಿದೆ, ಸರ್ಕಾರಗಳು ಹೆಚ್ಚಾಗಿ ಎರಡು ಮೈತ್ರಿಗಳ ನಡುವೆ ಪರ್ಯಾಯವಾಗಿವೆ.<ref>{{Cite news |date=2026-05-22 |title=Kerala election wrap-up: How UDF ended LDF’s 10-year rule |url=https://timesofindia.indiatimes.com/india/kerala-election-wrap-up-how-udf-ended-ldfs-10-year-rule/articleshow/131249440.cms |access-date=2026-06-19 |work=The Times of India |issn=0971-8257}}</ref> [[2026 ಕೇರಳ ವಿಧಾನಸಭಾ ಚುನಾವಣೆ]]ಯ ಪ್ರಕಾರ, UDF ಆಡಳಿತ ಒಕ್ಕೂಟವಾಗಿದೆ, ಮತ್ತು [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್|LDF]] ಅಧಿಕೃತ ವಿರೋಧ ಪಕ್ಷವಾಗಿದೆ.<ref>{{Cite web |title=Pinarayi Vijayan elected as Leader of Opposition in Kerala |url=https://www.deccanherald.com/india/kerala/pinarayi-vijayan-elected-as-leader-of-opposition-in-kerala-4003109 |access-date=2026-05-15 |website=Deccan Herald |language=en}}</ref><ref>{{Cite news |last=Parthasarathy |first=Srinivasan Ramani , Pon Vasanth B. A. , Nitika Francis , Devyanshi Bihani , Areena Arora & Sambavi |date=2026-05-06 |title=UDF's near three-fourths majority marked a historic victory for the Congress-led coalition |url=https://www.thehindu.com/news/national/kerala/udfs-near-three-fourths-majority-marked-a-historicvictory-for-the-congress-led-coalition/article70944163.ece |access-date=2026-05-15 |work=The Hindu |language=en-IN |issn=0971-751X}}</ref>
[[ಭಾರತದ ಸಂವಿಧಾನ]]ದ ಪ್ರಕಾರ, ಕೇರಳವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯನ್ನು ಹೊಂದಿದೆ; [[ಸಾರ್ವತ್ರಿಕ ಮತದಾನ]]ವನ್ನು ನಿವಾಸಿಗಳಿಗೆ ನೀಡಲಾಗಿದೆ.<ref name=":0">{{cite web |url=https://niyamasabha.org/codes/govt_2.htm |title=Kerala Government – Legislature |publisher=Government of Kerala |access-date=19 November 2012 |archive-date=8 December 2012 |archive-url=https://web.archive.org/web/20121208011357/http://www.niyamasabha.org/codes/govt_2.htm |url-status=dead }}</ref>
== ಆರ್ಥಿಕತೆ ==
{{Main|ಕೇರಳದ ಆರ್ಥಿಕತೆ}}
ಸ್ವಾತಂತ್ರ್ಯದ ನಂತರ, ರಾಜ್ಯವನ್ನು [[ಸಾಮಾಜಿಕ ಪ್ರಜಾಪ್ರಭುತ್ವ|ಸಾಮಾಜಿಕ ಪ್ರಜಾಪ್ರಭುತ್ವ]] [[ಕಲ್ಯಾಣ ಆರ್ಥಿಕತೆ]]ಯಾಗಿ ನಿರ್ವಹಿಸಲಾಯಿತು.<ref>{{Cite news |title=A virus, social democracy, and dividends for Kerala |url=https://www.thehindu.com/opinion/lead/a-virus-social-democracy-and-dividends-for-kerala/article31370554.ece |last=Heller |first=Patrick |date=18 April 2020 |access-date=2 February 2021 |work=The Hindu |archive-date=19 November 2021 |archive-url=https://web.archive.org/web/20211119130557/https://www.thehindu.com/opinion/lead/a-virus-social-democracy-and-dividends-for-kerala/article31370554.ece |url-status=live }}</ref> ಅತ್ಯಧಿಕ ಮಾನವ ಅಭಿವೃದ್ಧಿ ಮತ್ತು ತುಲನಾತ್ಮಕವಾಗಿ ಕಡಿಮೆ ಆರ್ಥಿಕ ಅಭಿವೃದ್ಧಿಯ "ಕೇರಳ ವಿದ್ಯಮಾನ" ಅಥವಾ "[[ಕೇರಳ ಮಾದರಿ]]" ಅಭಿವೃದ್ಧಿಯು ಬಲವಾದ ಸೇವಾ ವಲಯದಿಂದ ಉಂಟಾಗಿದೆ.<ref name="Brenkert_Malone_2003" />{{rp|48}}<ref name="Tharamangalam_2005">{{Cite journal |author=Tharamangalam J |year=2005 |title=The Perils of Social Development without Economic Growth: The Development Debacle of Kerala, India |journal=Political Economy for Environmental Planners |url=https://www.infra.kth.se/courses/1H1142/Kerala_Paper_4.pdf |archive-url=https://web.archive.org/web/20131115072025/https://www.infra.kth.se/courses/1H1142/Kerala_Paper_4.pdf |archive-date=15 November 2013 |access-date=28 December 2008}}</ref>{{rp|1}} 2019–20 ರಲ್ಲಿ, ಕೇರಳದ ಆರ್ಥಿಕತೆಯು {{INRConvert|8.55|t}} ಸ್ಥೂಲ ರಾಜ್ಯ ಆಂತರಿಕ ಉತ್ಪನ್ನ (GSDP) ಮತ್ತು {{INRConvert|222|k}} ತಲಾ ನಿವ್ವಳ ರಾಜ್ಯ ಆಂತರಿಕ ಉತ್ಪನ್ನದೊಂದಿಗೆ ಭಾರತದಲ್ಲಿ [[ಸ್ಥೂಲ ರಾಜ್ಯ ಆಂತರಿಕ ಉತ್ಪನ್ನದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|8 ನೇ ಅತಿದೊಡ್ಡದಾಗಿದೆ]].<ref>{{Cite web |date=15 March 2021 |title=MOSPI State Domestic Product, Ministry of Statistics and Programme Implementation, Government of India |url=https://mospi.nic.in/sites/default/files/press_releases_statements/State_wise_SDP_15_03_2021.xls |access-date=23 June 2021 |archive-date=17 June 2021 |archive-url=https://web.archive.org/web/20210617193238/http://mospi.nic.in/sites/default/files/press_releases_statements/State_wise_SDP_15_03_2021.xls |url-status=live }}</ref> 2019–20 ರಲ್ಲಿ, [[ಆರ್ಥಿಕತೆಯ ತೃತೀಯ ವಲಯ|ತೃತೀಯ ವಲಯ]]ವು ರಾಜ್ಯದ [[ಸ್ಥೂಲ ಮೌಲ್ಯವರ್ಧಿತ|GSVA]] ಯ ಸುಮಾರು 63% ಕೊಡುಗೆ ನೀಡಿದೆ, ಇದಕ್ಕೆ [[ಆರ್ಥಿಕತೆಯ ದ್ವಿತೀಯ ವಲಯ|ದ್ವಿತೀಯ ವಲಯ]] 28% ಮತ್ತು [[ಆರ್ಥಿಕತೆಯ ಪ್ರಾಥಮಿಕ ವಲಯ|ಪ್ರಾಥಮಿಕ ವಲಯ]] 8% ಕೊಡುಗೆ ನೀಡಿದೆ.<ref name="eco">{{Cite book |last=Government of Kerala |url=https://spb.kerala.gov.in/sites/default/files/2021-01/English-Vol-1_0.pdf |title=Economic Review 2020 – Volume I |publisher=Kerala State Planning Board |year=2021 |location=Thiruvananthapuram |access-date=18 June 2021 |archive-date=2 May 2021 |archive-url=https://web.archive.org/web/20210502171017/https://spb.kerala.gov.in/sites/default/files/2021-01/English-Vol-1_0.pdf |url-status=live }}</ref> 1960 ಮತ್ತು 2020 ರ ಅವಧಿಯಲ್ಲಿ, ಕೇರಳದ ಆರ್ಥಿಕತೆಯು ಕೃಷಿ ಆರ್ಥಿಕತೆಯಿಂದ ಸೇವಾ ಆಧಾರಿತ ಆರ್ಥಿಕತೆಗೆ ಕ್ರಮೇಣ ಬದಲಾಗುತ್ತಿತ್ತು.<ref name="eco" />
{{multiple image
| direction = vertical
| width = 220
| image1 = Technopark Trivandum Ganga and Yamuna Buildings.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಟೆಕ್ನೋಪಾರ್ಕ್, ತಿರುವನಂತಪುರ|ಟೆಕ್ನೋಪಾರ್ಕ್]], ಭಾರತದ ಮೊದಲ ಮತ್ತು ಅತಿದೊಡ್ಡ [[ಮಾಹಿತಿ ತಂತ್ರಜ್ಞಾನ]] (IT) ಉದ್ಯಾನವನ
| image2 = Container terminal.JPG
| caption2 = [[ಕೊಚ್ಚಿ|ಕೊಚ್ಚಿಯ]] [[ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್, ಕೊಚ್ಚಿ|ವಲ್ಲಾರ್ಪಾಡಂ ಟರ್ಮಿನಲ್]], ಭಾರತದ ಮೊದಲ [[ಕಂಟೇನರ್ ಟರ್ಮಿನಲ್|ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್]]
| image4 = Mappila bay.JPG
| caption4 = [[ಕಣ್ಣೂರು|ಕಣ್ಣೂರಿನ]] [[ಮಾಪ್ಪಿಲ ಕೊಲ್ಲಿ]] ಬಂದರು
}}
ರಾಜ್ಯದ [[ಆರ್ಥಿಕತೆಯ ತೃತೀಯ ವಲಯ|ಸೇವಾ ವಲಯ]]ವು ಅದರ ಆದಾಯದ ಸುಮಾರು 63% ರಷ್ಟಿದ್ದು, ಇದು ಮುಖ್ಯವಾಗಿ [[ಆತಿಥ್ಯ ಉದ್ಯಮ]], [[ಕೇರಳದ ಪ್ರವಾಸೋದ್ಯಮ|ಪ್ರವಾಸೋದ್ಯಮ]], [[ಆಯುರ್ವೇದ]] ಮತ್ತು ವೈದ್ಯಕೀಯ ಸೇವೆಗಳು, ಯಾತ್ರಾ ಸ್ಥಳಗಳು, [[ಮಾಹಿತಿ ತಂತ್ರಜ್ಞಾನ]], [[ಕೇರಳದ ರಸ್ತೆಗಳು|ಸಾರಿಗೆ]], ಹಣಕಾಸು ವಲಯ, ಮತ್ತು [[ಕೇರಳದಲ್ಲಿ ಶಿಕ್ಷಣ|ಶಿಕ್ಷಣ]]ವನ್ನು ಆಧರಿಸಿದೆ.<ref name=":15">{{Cite web |url=https://slbckerala.com/Economy.aspx |title=Economy of Kerala – 2016 |website=slbckerala.com |access-date=7 February 2022 |archive-date=28 March 2022 |archive-url=https://web.archive.org/web/20220328191455/http://slbckerala.com/Economy.aspx |url-status=dead }}</ref> ಕೈಗಾರಿಕಾ ವಲಯದಡಿಯಲ್ಲಿನ ಪ್ರಮುಖ ಉಪಕ್ರಮಗಳಲ್ಲಿ [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ]], ಹಡಗು ನಿರ್ಮಾಣ, ತೈಲ ಸಂಸ್ಕರಣಾಗಾರ, ಸಾಫ್ಟ್ವೇರ್ ಉದ್ಯಮ, ಕರಾವಳಿ ಖನಿಜ ಉದ್ಯಮಗಳು,{{sfn|Chandran|2018|p=343}} ಆಹಾರ ಸಂಸ್ಕರಣೆ, ಸಮುದ್ರ ಉತ್ಪನ್ನಗಳ ಸಂಸ್ಕರಣೆ, ಮತ್ತು ರಬ್ಬರ್ ಆಧಾರಿತ ಉತ್ಪನ್ನಗಳು ಸೇರಿವೆ. ರಾಜ್ಯದ ಪ್ರಾಥಮಿಕ ವಲಯವು ಮುಖ್ಯವಾಗಿ [[ವಾಣಿಜ್ಯ ಬೆಳೆ]]ಗಳನ್ನು ಆಧರಿಸಿದೆ.{{sfn|Chandran|2018|p=409}} ಕೇರಳವು ಭಾರತದಲ್ಲಿ [[ತೆಂಗು]], [[ಚಹಾ]], [[ಕಾಫಿ]], [[ಮಲಬಾರ್ ಮೆಣಸು|ಮೆಣಸು]], [[ನೈಸರ್ಗಿಕ ರಬ್ಬರ್]], [[ಏಲಕ್ಕಿ]], ಮತ್ತು [[ಗೋಡಂಬಿ]] ಮುಂತಾದ ವಾಣಿಜ್ಯ ಬೆಳೆಗಳ ರಾಷ್ಟ್ರೀಯ ಉತ್ಪಾದನೆಯ ಗಮನಾರ್ಹ ಪ್ರಮಾಣವನ್ನು ಉತ್ಪಾದಿಸುತ್ತದೆ.{{sfn|Chandran|2018|p=409}} ಆಹಾರ ಬೆಳೆಗಳ ಕೃಷಿಯು 1950 ರ ದಶಕದಿಂದ ಕಡಿಮೆಯಾಗಲು ಪ್ರಾರಂಭಿಸಿತು.{{sfn|Chandran|2018|p=409}}
ಕೇರಳದ ಆರ್ಥಿಕತೆಯು [[ಕೇರಳ ಗಲ್ಫ್ ವಲಸೆ|ವಿದೇಶಗಳಲ್ಲಿ ಕೆಲಸ ಮಾಡುವ ವಲಸಿಗರ]] ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ, ಮುಖ್ಯವಾಗಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಲ್ಲಿ]], ಮತ್ತು ವಾರ್ಷಿಕ ಸ್ಥಳಾಂತರ ವರ್ಗಾವಣೆಗಳು GSDP ಯ ಐದನೇ ಒಂದು ಭಾಗಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ.<ref name="rem1">{{cite report |author1=K.P. Kannan |author2=K.S. Hari |title=Kerala's Gulf connection: Emigration, remittances and their macroeconomic impact, 1972–2000 |url=https://ideas.repec.org/p/ind/cdswpp/328.html |year=2002 |website=[[Research Papers in Economics]] |access-date=4 April 2022 |archive-date=28 June 2021 |archive-url=https://web.archive.org/web/20210628135450/https://ideas.repec.org/p/ind/cdswpp/328.html |url-status=live }}</ref> 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ ರಾಜ್ಯವು ಗಮನಾರ್ಹ ವಲಸೆಯನ್ನು ಕಂಡಿತು. 2012 ರಲ್ಲಿ, ಕೇರಳವು ಎಲ್ಲಾ ರಾಜ್ಯಗಳ ಅತಿ ಹೆಚ್ಚು ಸ್ಥಳಾಂತರ ವರ್ಗಾವಣೆಗಳನ್ನು ಪಡೆಯಿತು: US$11.3 ಬಿಲಿಯನ್, ಇದು ದೇಶಕ್ಕೆ US$71 ಬಿಲಿಯನ್ ಸ್ಥಳಾಂತರ ವರ್ಗಾವಣೆಗಳಲ್ಲಿ ಸುಮಾರು 16% ಆಗಿತ್ತು.<ref>{{cite news |url=https://in.finance.yahoo.com/news/remittances--kerala-drives-dollar-flows-to-india-053414379.html |title=Remittances: Kerala drives dollar flows to India |work=[[Yahoo! Finance]] |date=5 November 2013 |access-date=8 November 2013 |archive-date=7 November 2013 |archive-url=https://web.archive.org/web/20131107053009/http://in.finance.yahoo.com/news/remittances--kerala-drives-dollar-flows-to-india-053414379.html |url-status=live }}</ref> 2015 ರಲ್ಲಿ, ಕೇರಳದಲ್ಲಿ NRI ಠೇವಣಿಗಳು {{INRConvert|1|lc}} ಕ್ಕಿಂತ ಹೆಚ್ಚಾಗಿದ್ದು, ಇದು NRI ಖಾತೆಗಳಲ್ಲಿ ಠೇವಣಿಯಾದ ಎಲ್ಲಾ ಹಣದ ಆರನೇ ಒಂದು ಭಾಗಕ್ಕೆ ಸಮನಾಗಿರುತ್ತದೆ, ಇದು ಸುಮಾರು {{INRConvert|7|lc}} ಆಗಿದೆ.<ref>{{cite news |url=https://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |title=NRI deposits in Kerala banks cross Rs 1 lakh crore |date=22 June 2015 |access-date=13 November 2015 |work=[[The Times of India]] |archive-date=25 June 2015 |archive-url=https://web.archive.org/web/20150625121200/http://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |url-status=live }}</ref> [[ಮಲಪ್ಪುರಂ ಜಿಲ್ಲೆ]]ಯು ರಾಜ್ಯದಲ್ಲಿ ಅತಿ ಹೆಚ್ಚು ವಲಸೆ ಕುಟುಂಬಗಳ ಪ್ರಮಾಣವನ್ನು ಹೊಂದಿದೆ.<ref name="eco" /> [[ಕೇರಳ ರಾಜ್ಯ ಯೋಜನಾ ಮಂಡಳಿ]]ಯು ನಿಯೋಜಿಸಿದ ಅಧ್ಯಯನವು, ತನ್ನ ವೆಚ್ಚಕ್ಕೆ ಹಣಕಾಸು ಒದಗಿಸಲು ಸ್ಥಳಾಂತರ ವರ್ಗಾವಣೆಗಳ ಮೇಲೆ ಅವಲಂಬಿಸುವ ಬದಲು ರಾಜ್ಯವು ಇತರ ವಿಶ್ವಾಸಾರ್ಹ ಆದಾಯದ ಮೂಲಗಳನ್ನು ಹುಡುಕಬೇಕೆಂದು ಸೂಚಿಸಿದೆ.<ref name="Commission2008b">{{cite book |author=India. Planning Commission |title=Kerala Development Report |url=https://books.google.com/books?id=Ul-OkF5gUJQC&pg=PA457 |year=2008 |publisher=Academic Foundation |isbn=978-8171885947 |page=396}}</ref>
ಮಾರ್ಚ್ 2002 ರಂತೆ, ಕೇರಳದ ಬ್ಯಾಂಕಿಂಗ್ ವಲಯವು 3341 ಸ್ಥಳೀಯ ಶಾಖೆಗಳನ್ನು ಒಳಗೊಂಡಿತ್ತು: ಪ್ರತಿ ಶಾಖೆಯು 10,000 ಜನರಿಗೆ ಸೇವೆ ಸಲ್ಲಿಸಿತು, ಇದು ರಾಷ್ಟ್ರೀಯ ಸರಾಸರಿ 16,000 ಕ್ಕಿಂತ ಕಡಿಮೆಯಾಗಿದೆ; ರಾಜ್ಯವು ಭಾರತೀಯ ರಾಜ್ಯಗಳಲ್ಲಿ ಮೂರನೇ ಅತಿ ಹೆಚ್ಚು ಬ್ಯಾಂಕ್ ಪ್ರವೇಶವನ್ನು ಹೊಂದಿದೆ.<ref name="RBI_2002">{{cite web |url=https://rbidocs.rbi.org.in/rdocs/Publications/PDFs/35585.pdf |title=State/Union Territory-Wise Number of Branches of Scheduled Commercial Banks and Average Population Per Bank Branch |date=March 2002 |work=Reserve Bank of India |access-date=28 December 2008 |url-status=dead |archive-url=https://web.archive.org/web/20070810094850/https://rbidocs.rbi.org.in/rdocs/Publications/PDFs/35585.pdf |archive-date=10 August 2007}}</ref> 1 ಅಕ್ಟೋಬರ್ 2011 ರಂದು, ಕೇರಳವು ಪ್ರತಿ ಗ್ರಾಮದಲ್ಲಿ ಕನಿಷ್ಠ ಒಂದು ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಯಿತು.<ref>{{cite news |url=https://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |work=The Times of India |title=Now, you can bank on every village in Kerala |date=1 October 2011 |access-date=13 November 2015 |archive-date=4 January 2017 |archive-url=https://web.archive.org/web/20170104180910/http://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |url-status=live }}</ref> [[ಕೇರಳದಲ್ಲಿ ನಿರುದ್ಯೋಗ|2007 ರಲ್ಲಿ ನಿರುದ್ಯೋಗವು]] 9.4% ಎಂದು ಅಂದಾಜಿಸಲಾಗಿದೆ;<ref>{{cite news |author=Kumar KG |title=Jobless no more? |newspaper=Business Line |date=8 October 2007 |url=https://www.thehindubusinessline.com/todays-paper/tp-economy/article1671367.ece |quote=A study by K.C. Zacharia and S. Irudaya Rajan, two economists at the Centre for Development Studies (CDS), unemployment in Kerala has dropped from 19.1[%] in 2003 to 9.4[%] in 2007. |access-date=16 November 2012 |archive-date=6 November 2013 |archive-url=https://web.archive.org/web/20131106032604/http://www.thehindubusinessline.com/todays-paper/tp-economy/article1671367.ece |url-status=live }}</ref> ದೀರ್ಘಕಾಲದ ಸಮಸ್ಯೆಗಳೆಂದರೆ [[ನಿರುದ್ಯೋಗ]], ಯುವಜನರ ಕಡಿಮೆ ಉದ್ಯೋಗಸಾಧ್ಯತೆ, ಮತ್ತು ಕೇವಲ 13.5% ರಷ್ಟಿರುವ ಕಡಿಮೆ ಮಹಿಳಾ [[ಕಾರ್ಮಿಕ|ಕಾರ್ಮಿಕ ಭಾಗವಹಿಸುವಿಕೆ ದರ]],<ref name="Nair_2004">{{Cite book |author=Nair NG |veditors=Nair PR, Shaji H |title=Measurement of Employment, Unemployment, and Underemployment |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621751 |url=https://www.cds.ac.in/krpcds/publication/downloads/72.pdf |access-date=31 December 2008 |archive-date=30 May 2015 |archive-url=https://web.archive.org/web/20150530210334/http://www.cds.ac.in/krpcds/publication/downloads/72.pdf |url-status=live }}</ref>{{rp|5, 13}} ಜೊತೆಗೆ ''[[ನೋಕ್ಕು ಕೂಲಿ]]'' ("ನೋಡುವಿಕೆಗೆ ವೇತನ") ಪದ್ಧತಿಯೂ ಇತ್ತು.<ref name="Outlook-2008">{{cite news |url=https://www.outlookindia.com/article.aspx?237419 |first=John |last=Mary |title=Men (Not) At Work |work=[[Outlook (Indian magazine)|Outlook]] |date=12 May 2008 |access-date=13 November 2015 |archive-date=6 November 2013 |archive-url=https://web.archive.org/web/20131106032651/http://www.outlookindia.com/article.aspx?237419 |url-status=live }}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6">{{Cite report |last=Deaton |first=Angus |title=Regional poverty estimates for India, 1999–2000 |url=https://www.princeton.edu/rpds/papers/pdfs/deaton_regionalpovertyindia.pdf |date=22 August 2003 |archive-url=https://web.archive.org/web/20110628193845/https://www.princeton.edu/rpds/papers/pdfs/deaton_regionalpovertyindia.pdf |archive-date=28 June 2011 |url-status=dead |page=10 |access-date=4 April 2022}}</ref>
2020–2021 ರ ರಾಜ್ಯದ ಬಜೆಟ್ {{INRConvert|1.15|lc}} ಆಗಿತ್ತು.<ref name="Budget">{{cite web |url=https://www.finance.kerala.gov.in/bdgtDcs.jsp |title=Budget In Brief |format=PDF |website=finance.kerala.gov.in |publisher=Government of Kerala |access-date=4 December 2020 |archive-date=25 November 2020 |archive-url=https://web.archive.org/web/20201125214731/http://www.finance.kerala.gov.in/bdgtDcs.jsp |url-status=live }}</ref> ರಾಜ್ಯ ಸರ್ಕಾರದ ತೆರಿಗೆ ಆದಾಯವು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–21 ರಲ್ಲಿ {{INRConvert|674|b}} ಆಗಿತ್ತು; 2019–20 ರಲ್ಲಿ {{INRConvert|557|b}} ರಿಂದ ಹೆಚ್ಚಾಗಿದೆ. ಕೇರಳ ಸರ್ಕಾರದ ಅದರ [[ತೆರಿಗೆ-ಅಲ್ಲದ ಆದಾಯ]]ಗಳು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–2021 ರಲ್ಲಿ {{INRConvert|146|b}} ತಲುಪಿದೆ.<ref name="Budget" /> ಆದಾಗ್ಯೂ, ಕೇರಳದ GSDP ಗೆ ತೆರಿಗೆಯ ಹೆಚ್ಚಿನ ಅನುಪಾತವು ದೀರ್ಘಕಾಲದ ಬಜೆಟ್ ಕೊರತೆಗಳು ಮತ್ತು ಸುಸ್ಥಿರವಲ್ಲದ ಮಟ್ಟದ ಸರ್ಕಾರಿ ಸಾಲವನ್ನು ನಿವಾರಿಸಿಲ್ಲ, ಇದು ಸಾಮಾಜಿಕ ಸೇವೆಗಳ ಮೇಲೆ ಪರಿಣಾಮ ಬೀರಿದೆ.<ref>{{cite web |url=https://fincomindia.nic.in/pubsugg/memo_ker.pdf |archive-url=https://web.archive.org/web/20080626195846/https://fincomindia.nic.in/pubsugg/memo_ker.pdf |archive-date=26 June 2008 |title=Memoranda from States: Kerala |website=fincomindia.nic.in |access-date=25 September 2013}}</ref> 2006 ರಲ್ಲಿ ಒಟ್ಟು 223 [[ಹರ್ತಾಲ್]]ಗಳು ನಡೆದಿದ್ದವು, ಇದರ ಪರಿಣಾಮವಾಗಿ {{INRConvert|20|b}} ಕ್ಕಿಂತ ಹೆಚ್ಚು ಆದಾಯ ನಷ್ಟವಾಗಿದೆ.<ref>[https://www.rediff.com/news/2008/jul/06kerala.htm Kerala: Hartals Own Country?] {{webarchive |url=https://web.archive.org/web/20160304043808/https://www.rediff.com/news/2008/jul/06kerala.htm |date=4 March 2016 }} 6 July 2008</ref> ಕೇರಳದ GDP ಯಲ್ಲಿ 10% ಏರಿಕೆಯು ರಾಷ್ಟ್ರೀಯ GDP ಗಿಂತ 3% ಹೆಚ್ಚಾಗಿದೆ. 2013 ರಲ್ಲಿ, ಬಂಡವಾಳ ವೆಚ್ಚವು ರಾಷ್ಟ್ರೀಯ ಸರಾಸರಿ 5% ಕ್ಕೆ ಹೋಲಿಸಿದರೆ 30% ರಷ್ಟು ಏರಿತು, ದ್ವಿಚಕ್ರ ವಾಹನಗಳ ಮಾಲೀಕರು ರಾಷ್ಟ್ರೀಯ ದರ 15% ಕ್ಕೆ ಹೋಲಿಸಿದರೆ 35% ರಷ್ಟು ಏರಿತು, ಮತ್ತು ಶಿಕ್ಷಕ-ವಿದ್ಯಾರ್ಥಿ ಅನುಪಾತವು 2:100 ರಿಂದ 4:100 ಕ್ಕೆ 50% ರಷ್ಟು ಏರಿತು.<ref>{{cite web |url=https://www.keralacm.gov.in/index.php/news2catleist/2443-23-12-2013-india-today |archive-url=https://web.archive.org/web/20131224091613/https://www.keralacm.gov.in/index.php/news2catleist/2443-23-12-2013-india-today |url-status=dead |archive-date=24 December 2013 |title=India Today On Cm |publisher=Keralacm.gov.in |access-date=11 January 2014}}</ref>
[[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ]]ಯು ರಾಜ್ಯದ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು, ರಾಜ್ಯದ ಆದಾಯದ ಹೊರಗಿನಿಂದ ಮೂಲಸೌಕರ್ಯ ಅಭಿವೃದ್ಧಿಗೆ ನಿಧಿಯನ್ನು ಸಜ್ಜುಗೊಳಿಸಲು ರಾಜ್ಯದ ಸರ್ಕಾರಿ-ಸ್ವಾಮ್ಯದ [[ಹಣಕಾಸು ಸಂಸ್ಥೆ]]ಯಾಗಿದೆ.<ref>{{Cite news |url=https://www.thehindu.com/news/national/kerala/big-push-for-infrastructure-in-budget/article17403255.ece |title=Big push for infrastructure in Budget |newspaper=The Hindu |date=3 March 2017 |via=www.thehindu.com |access-date=25 November 2020 |archive-date=29 January 2021 |archive-url=https://web.archive.org/web/20210129210933/https://www.thehindu.com/news/national/kerala/big-push-for-infrastructure-in-budget/article17403255.ece |url-status=live }}</ref><ref>{{Cite web |url=https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |title=Kerala Budget: Infrastructure projects get a major fillip |website=The New Indian Express |date=4 March 2017 |access-date=25 November 2020 |archive-date=30 January 2021 |archive-url=https://web.archive.org/web/20210130030958/https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |url-status=live }}</ref>
ನವೆಂಬರ್ 2015 ರಲ್ಲಿ, [[ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯ|ನಗರಾಭಿವೃದ್ಧಿ ಸಚಿವಾಲಯ]]ವು [[ಅಟಲ್ ನವೀಕರಣ ಮತ್ತು ನಗರ ಪರಿವರ್ತನೆಗಾಗಿ ಮಿಷನ್]] (AMRUT) ಎಂದು ಕರೆಯಲ್ಪಡುವ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಕೇರಳದ ಏಳು ನಗರಗಳನ್ನು ಆಯ್ಕೆ ಮಾಡಿತು.<ref>{{cite news |title=Modi to address heads of civic bodies on urban revamp |url=https://www.thehindu.com/news/national/modi-to-address-heads-of-civic-bodies-on-urban-revamp/article7336851.ece |date=20 June 2015 |newspaper=[[The Hindu]] |access-date=25 June 2015 |archive-date=2 February 2021 |archive-url=https://web.archive.org/web/20210202155935/https://www.thehindu.com/news/national/modi-to-address-heads-of-civic-bodies-on-urban-revamp/article7336851.ece |url-status=live }}</ref> ಸೇವಾ ಮಟ್ಟದ ಸುಧಾರಣಾ ಯೋಜನೆಯನ್ನು (SLIP) ಅಭಿವೃದ್ಧಿಪಡಿಸಲು ಪ್ರತಿ ನಗರಕ್ಕೆ {{INRConvert|2.5|m}} ನ ಪ್ಯಾಕೇಜ್ ಅನ್ನು ಘೋಷಿಸಲಾಯಿತು, ಇದು ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಕೊಚ್ಚಿ, ತೃಶೂರ್, ಕೋಝಿಕೋಡ್, ಮತ್ತು ಪಾಲಕ್ಕಾಡ್ ನಗರಗಳಲ್ಲಿ ಸ್ಥಳೀಯ ನಗರ ಸಂಸ್ಥೆಗಳ ಉತ್ತಮ ಕಾರ್ಯನಿರ್ವಹಣೆಗೆ ಯೋಜನೆಯಾಗಿದೆ.<ref>{{cite news |last=R. Ramabhadran |first=Pillai |title=AMRUT to roll out on a smaller scale |url=https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |access-date=12 November 2015 |work=The Hindu |issue=12 November 2015 |archive-date=7 February 2021 |archive-url=https://web.archive.org/web/20210207052652/https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |url-status=live }}</ref> [[ಗ್ರ್ಯಾಂಡ್ ಕೇರಳ ಶಾಪಿಂಗ್ ಫೆಸ್ಟಿವಲ್]] (GKSF) ಅನ್ನು 2007 ರಲ್ಲಿ ಪ್ರಾರಂಭಿಸಲಾಯಿತು, ಇದು ಕೇರಳದ ಒಂಬತ್ತು ನಗರಗಳಾದ್ಯಂತ 3000 ಕ್ಕೂ ಹೆಚ್ಚು ಮಳಿಗೆಗಳನ್ನು ದೊಡ್ಡ ತೆರಿಗೆ ರಿಯಾಯಿತಿಗಳು, VAT ಮರುಪಾವತಿಗಳು ಮತ್ತು ದೊಡ್ಡ ಪ್ರಮಾಣದ ಬಹುಮಾನಗಳೊಂದಿಗೆ ಒಳಗೊಂಡಿದೆ.<ref name="GKSF begins">{{cite news |title=Shopping festival begins |url=https://www.thehindu.com/todays-paper/tp-national/tp-kerala/shopping-festival-begins/article1959420.ece |work=The Hindu |date=2 December 2007 |access-date=24 January 2013 |archive-date=27 September 2013 |archive-url=https://web.archive.org/web/20130927054507/http://www.thehindu.com/todays-paper/tp-national/tp-kerala/shopping-festival-begins/article1959420.ece |url-status=live }}</ref> [[ತಿರುವನಂತಪುರ|ತಿರುವನಂತಪುರದ]] [[ಲುಲು ಮಾಲ್, ತಿರುವನಂತಪುರ|ಲುಲು ಇಂಟರ್ನ್ಯಾಷನಲ್ ಮಾಲ್]] ಭಾರತದ ಅತಿದೊಡ್ಡ [[ಶಾಪಿಂಗ್ ಮಾಲ್|ಶಾಪಿಂಗ್ ಮಾಲ್]] ಆಗಿದೆ.<ref>{{cite news |title=LuLu Group: Going places |url=https://www.khaleejtimes.com/business/local/lulu-group-going-places |work=[[Khaleej Times]] |access-date=13 November 2020 |archive-date=26 April 2021 |archive-url=https://web.archive.org/web/20210426172244/https://www.khaleejtimes.com/business/local/lulu-group-going-places |url-status=live }}</ref>
ಅನೇಕ ಸಾಧನೆಗಳ ಹೊರತಾಗಿಯೂ, ಕೇರಳವು ವಿದ್ಯಾವಂತ ಮಹಿಳೆಯರ ಮೇಲೆ ಅಸಮಾನವಾಗಿ ಪರಿಣಾಮ ಬೀರುವ ಹೆಚ್ಚಿನ ಮಟ್ಟದ ನಿರುದ್ಯೋಗ, ಹೆಚ್ಚಿನ ಮಟ್ಟದ ಜಾಗತಿಕ ಪ್ರಭಾವ ಮತ್ತು ಅತ್ಯಂತ ಸೂಕ್ಷ್ಮ ಪರಿಸರದಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದೆ.<ref name="Hindu2021">{{cite journal |title=Making sense of Kerala |journal=The Hindu |date=13 December 2021 |last1=Heller |first1=Patrick |last2=Törnquist |first2=Olle |url=https://www.thehindu.com/news/national/kerala/making-sense-of-kerala/article37942860.ece |archive-url=https://web.archive.org/web/20211214151547/https://www.thehindu.com/news/national/kerala/making-sense-of-kerala/article37942860.ece |accessdate=5 March 2022 |archive-date=14 December 2021 |quote=Kerala has specific challenges: persistently high levels of unemployment that disproportionately impact educated women, a high degree of global exposure and a very fragile environment. More broadly, as the 21st century unfolds, it becomes increasingly clearer that the role of the State in supporting development must fundamentally change. First, in highly educated societies like Kerala, industrialisation is no longer the path to economic prosperity.}}</ref>
=== ಕೈಗಾರಿಕೆಗಳು ===
ಸಾಂಪ್ರದಾಯಿಕ ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳು; [[ತೆಂಗಿನ ನಾರು]], [[ಕೈಮಗ್ಗ]]ಗಳು, ಮತ್ತು [[ಕರಕುಶಲ]]ಗಳು ಸುಮಾರು ಒಂದು ಮಿಲಿಯನ್ ಜನರನ್ನು ಉದ್ಯೋಗಿಸುತ್ತವೆ.<ref name="KumarKerala2007">{{cite book |author1=S. Rajitha Kumar |author2=University of Kerala |title=Traditional Industries of India in the Globalised World |url=https://books.google.com/books?id=aBvtAAAAMAAJ |year=2007 |publisher=University of Kerala |isbn=978-8177081435 |page=223}}</ref> ಕೇರಳವು ಬಿಳಿ ತೆಂಗಿನ ನಾರಿನ ನಾರಿನ ಒಟ್ಟು ಜಾಗತಿಕ ಉತ್ಪಾದನೆಯ 60% ಅನ್ನು ಪೂರೈಸುತ್ತದೆ. ಭಾರತದ ಮೊದಲ ತೆಂಗಿನ ನಾರಿನ ಕಾರ್ಖಾನೆಯನ್ನು [[ಆಲಪ್ಪುಳ]]ದಲ್ಲಿ 1859–60 ರಲ್ಲಿ ಸ್ಥಾಪಿಸಲಾಯಿತು.<ref>{{cite web |title=Indian Coir Industry |url=https://www.indianmirror.com/indian-industries/coir.html |work=Indian Mirror |access-date=29 April 2014 |archive-date=2 May 2014 |archive-url=https://web.archive.org/web/20140502033302/http://www.indianmirror.com/indian-industries/coir.html |url-status=live }}</ref> ಕೇಂದ್ರ ತೆಂಗಿನ ನಾರಿನ ಸಂಶೋಧನಾ ಸಂಸ್ಥೆಯನ್ನು ಅಲ್ಲಿ 1959 ರಲ್ಲಿ ಸ್ಥಾಪಿಸಲಾಯಿತು. 2006–2007 ರ [[SIDBI]] ಯ ಜನಗಣತಿಯ ಪ್ರಕಾರ, ಕೇರಳದಲ್ಲಿ {{formatnum:1468104}} [[ಸಣ್ಣ ಮತ್ತು ಮಧ್ಯಮ ಉದ್ಯಮಗಳು#ಭಾರತ|ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿವೆ]], ಇವು {{formatnum:3031272}} ಜನರನ್ನು ಉದ್ಯೋಗಿಸುತ್ತವೆ.<ref name="SIDBI Report 2010">{{cite book |title=SIDBI Report on Micro, Small and Medium Enterprises Sector, 2010 |publisher=Small Industries Development Bank of India |year=2010}}</ref><ref>{{cite journal |title=A Study on the Position of Small and Medium Enterprises in Kerala vis a vis the National Scenario |author=N. Rajeevan |journal=International Journal of Research in Commerce, Economics and Management |date=March 2012 |volume=2 |issue=3}}</ref> [[KSIDC]] ಕೇರಳದಲ್ಲಿ 650 ಕ್ಕೂ ಹೆಚ್ಚು ಮಧ್ಯಮ ಮತ್ತು ದೊಡ್ಡ ಉತ್ಪಾದನಾ ಸಂಸ್ಥೆಗಳನ್ನು ಪ್ರೋತ್ಸಾಹಿಸಿದೆ, 72,500 ಜನರಿಗೆ ಉದ್ಯೋಗವನ್ನು ಸೃಷ್ಟಿಸಿದೆ.<ref>{{cite web |url=https://www.ksidc.org/about-functions.php |archive-url=https://web.archive.org/web/20140709062837/https://www.ksidc.org/about-functions.php |archive-date=9 July 2014 |title=Functions, KSIDC, Thiruvananthapuram |publisher=Kerala State Industrial Development Corporation |access-date=6 December 2013}}</ref> GSDP ಯ 0.3% ರಷ್ಟಿರುವ ಗಣಿಗಾರಿಕಾ ವಲಯವು [[ಇಲ್ಮೆನೈಟ್]], [[ಕಯೋಲಿನ್]], [[ಬಾಕ್ಸೈಟ್]], [[ಸಿಲಿಕಾ]], [[ಕ್ವಾರ್ಟ್ಜ್]], [[ರುಟೈಲ್]], [[ಜಿರ್ಕಾನ್]], ಮತ್ತು [[ಸಿಲ್ಲಿಮನೈಟ್]] ಹೊರತೆಗೆಯುವಿಕೆಯನ್ನು ಒಳಗೊಂಡಿದೆ.<ref name="GOK_2005c">{{Cite journal |author=Government of Kerala |year=2005 |title=Kerala at a Glance |journal=Government of Kerala |url=https://www.kerala.gov.in/ |access-date=22 January 2006 |url-status=dead |archive-url=https://web.archive.org/web/20060118031516/https://www.kerala.gov.in/ |archive-date=18 January 2006}}</ref> ಇತರ ಪ್ರಮುಖ ವಲಯಗಳೆಂದರೆ [[ಕೇರಳದಲ್ಲಿ ಪ್ರವಾಸೋದ್ಯಮ|ಪ್ರವಾಸೋದ್ಯಮ]], ವೈದ್ಯಕೀಯ ವಲಯ, [[ಕೇರಳದಲ್ಲಿ ಶಿಕ್ಷಣ|ಶೈಕ್ಷಣಿಕ ವಲಯ]], ಬ್ಯಾಂಕಿಂಗ್, [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಹಡಗು ನಿರ್ಮಾಣ]], [[ಕೊಚ್ಚಿ ಸಂಸ್ಕರಣಾಗಾರ|ತೈಲ ಸಂಸ್ಕರಣಾಗಾರ]], ಮೂಲಸೌಕರ್ಯ, ಉತ್ಪಾದನೆ, [[ವಸತಿ ಉದ್ಯಾನ|ಮನೆ ತೋಟಗಳು]], ಪಶುಪಾಲನೆ ಮತ್ತು [[ವ್ಯಾಪಾರ ಪ್ರಕ್ರಿಯೆಯ ಹೊರಗುತ್ತಿಗೆ]].{{citation needed|date=October 2025}}
=== ಕೃಷಿ ===
[[File:Tea plantations in Munnar, Kerala.jpg|thumb|[[ಮುನ್ನಾರ್|ಮುನ್ನಾರಿನಲ್ಲಿ]] ಚಹಾ ತೋಟಗಳು, ಕೇರಳ]]
[[File:Nemmara-paddy.jpg|alt=A field|thumb|[[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡಿನ]] ಒಂದು ಭತ್ತದ ಗದ್ದೆ, ಇದನ್ನು ''ಕೇರಳದ ಧಾನ್ಯದ ಬುಟ್ಟಿ'' ಎಂದೂ ಕರೆಯುತ್ತಾರೆ]]
ಕೇರಳದಲ್ಲಿ ಕೃಷಿಯಲ್ಲಿ ಪ್ರಮುಖ ಬದಲಾವಣೆಯು 1970 ರ ದಶಕದಲ್ಲಿ ಸಂಭವಿಸಿತು, ಭಾರತಾದ್ಯಂತ ಅಕ್ಕಿಯ ಲಭ್ಯತೆ ಹೆಚ್ಚಾದ ಕಾರಣ ಮತ್ತು ಕಾರ್ಮಿಕರ ಲಭ್ಯತೆ ಕಡಿಮೆಯಾದ ಕಾರಣ ಅಕ್ಕಿ ಉತ್ಪಾದನೆಯು ಕುಸಿಯಿತು.<ref name="Sinha2003">{{cite book |author=B.R. Sinha |title=Encyclopaedia Of Professional Education (10 Vol.) |url=https://books.google.com/books?id=mdjGoXN3y1AC&pg=PA205 |access-date=18 November 2012 |year=2003 |publisher=Sarup & Sons |isbn=978-8176254106 |pages=204–05}}</ref> ಪರಿಣಾಮವಾಗಿ, ಅಕ್ಕಿ ಉತ್ಪಾದನೆಯಲ್ಲಿ ಹೂಡಿಕೆ ಕಡಿಮೆಯಾಯಿತು ಮತ್ತು ಭೂಮಿಯ ಗಮನಾರ್ಹ ಭಾಗವು ದೀರ್ಘಕಾಲಿಕ ಮರದ ಬೆಳೆಗಳು ಮತ್ತು ಕಾಲಿಕ ಬೆಳೆಗಳ ಕೃಷಿಗೆ ಬದಲಾಯಿತು.<ref name="Remesh2010">{{cite book |author=Babu P. Remesh |title=Dynamics of Rural Labour: A Study of Small Holding Rubber Tappers in Kerala |url=https://books.google.com/books?id=uOyNsKXSa0gC&pg=PA52 |access-date=18 November 2012 |year=2010 |publisher=Concept Publishing Company |isbn=978-8180696602 |pages=52–}}</ref><ref name="Commission2008">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA66 |access-date=18 November 2012 |year=2008 |publisher=Academic Foundation |isbn=978-8171885947 |pages=66–}}</ref> ಕೃಷಿ ಕಾರ್ಮಿಕರ ಕೊರತೆ, ಭೂಮಿಯ ಹೆಚ್ಚಿನ ಬೆಲೆ ಮತ್ತು ಕಾರ್ಯಾಚರಣೆಯ ಹಿಡುವಳಿಗಳ ಅನಾರೋಗ್ಯಕರ ಗಾತ್ರದಿಂದಾಗಿ ಬೆಳೆಗಳ ಲಾಭದಾಯಕತೆಯು ಕುಸಿಯಿತು.<ref name="google9">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=66 |access-date=30 May 2015}}</ref> ಕೇರಳದಲ್ಲಿ ಕೇವಲ 27.3% ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿವೆ, ಇದು ಭಾರತದಲ್ಲಿ ಅತ್ಯಂತ ಕಡಿಮೆ ಪ್ರಮಾಣವಾಗಿದೆ.{{sfn|Chandran|2018|p=406}}
ಕೇರಳವು ಕರಿಮೆಣಸಿನ ರಾಷ್ಟ್ರೀಯ ಉತ್ಪಾದನೆಯ 97% ಅನ್ನು ಉತ್ಪಾದಿಸುತ್ತದೆ<ref name="Limca Book of Records">{{cite book |title=Limca Book of Records |url=https://books.google.com/books?id=Y-JtAAAAMAAJ |access-date=18 November 2012 |year=2001 |publisher=Bisleri Beverages Limited |page=97}}</ref> ಮತ್ತು ದೇಶದ [[ನೈಸರ್ಗಿಕ ರಬ್ಬರ್]]ನ 85% ರಷ್ಟಿದೆ.<ref name="google10">{{cite book |title=South Asia 2006 |url=https://books.google.com/books?id=YG8bAQAAMAAJ |access-date=18 November 2012 |year=2005 |publisher=Taylor & Francis |page=291 |isbn=978-1-85743-318-0}}</ref><ref name="Economic Affairs">{{cite book |title=Economic Affairs |url=https://books.google.com/books?id=StHsAAAAMAAJ |access-date=18 November 2012 |year=1998 |publisher=H. Roy |page=47}}</ref> [[ತೆಂಗು]], [[ಚಹಾ]], [[ಕಾಫಿ]], [[ಗೋಡಂಬಿ]], ಮತ್ತು ಮಸಾಲೆಗಳು—ಏಲಕ್ಕಿ, [[ವೆನಿಲ್ಲಾ]], [[ದಾಲ್ಚಿನ್ನಿ]], ಮತ್ತು [[ಜಾಯಿಕಾಯಿ]] ಪ್ರಮುಖ ಕೃಷಿ ಉತ್ಪನ್ನಗಳಾಗಿವೆ.<ref name="ChattopadhyayFranke2006" />{{rp|74}}<ref name="Newton">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT3 |access-date=18 November 2012 |publisher=Springwood emedia |isbn=978-1-4761-2308-0 |pages=3–}}</ref><ref name="B.L.MarkoseMarkose2007">{{cite book |author1=Rajan, S. & B.L.Markose |author2=Baby Lissy Markose |title=Propagation of Horticultural Crops: Vol.06. Horticulture Science Series |url=https://books.google.com/books?id=19zgbxw-YhYC&pg=PA212 |access-date=18 November 2012 |year=2007 |publisher=New India Publishing |isbn=978-8189422486 |pages=212–}}</ref><ref name="Pradhan2009">{{cite book |author=Pradhan |title=Retailing Management 3E |url=https://books.google.com/books?id=8y7Zb_D-_oYC&pg=PA256 |access-date=18 November 2012 |year=2009 |publisher=Tata McGraw-Hill Education |isbn=978-0-07-015256-4 |pages=256–}}</ref><ref name="PradeepkumarPradeep2008">{{cite book |author1=T. Pradeepkumar |author2=Kumar, Pradeep |title=Management of Horticultural Crops: Vol.11 Horticulture Science Series: In 2 Parts |url=https://books.google.com/books?id=VHmokNZXbHUC&pg=PA509 |access-date=18 November 2012 |year=2008 |publisher=New India Publishing |isbn=978-8189422493 |pages=509–}}</ref><ref name="OsellaOsella2000">{{cite book |author1=Filippo Osella |author2=Caroline Osella |title=Social Mobility In Kerala: Modernity and Identity in Conflict |url=https://books.google.com/books?id=rMRw0gTZSJwC&pg=PA235 |access-date=18 November 2012 |year=2000 |publisher=Pluto Press |isbn=978-0-7453-1693-2 |pages=235–}}</ref> [[ಭಾರತ]]ದ ರಫ್ತು ಗುಣಮಟ್ಟದ ಗೋಡಂಬಿ ಬೀಜಗಳಲ್ಲಿ ಸುಮಾರು 80% ಅನ್ನು [[ಕೊಲ್ಲಂ]]ನಲ್ಲಿ ತಯಾರಿಸಲಾಗುತ್ತದೆ.<ref>{{cite news |url=https://www.thehindu.com/news/national/kerala/cashew-sector-in-a-tailspin/article8767346.ece |title=Cashew sector in a tailspin |newspaper=The Hindu |access-date=24 June 2016 |archive-date=24 June 2016 |archive-url=https://web.archive.org/web/20160624004205/http://www.thehindu.com/news/national/kerala/cashew-sector-in-a-tailspin/article8767346.ece |url-status=live }}</ref> ಪ್ರಮುಖ ವಾಣಿಜ್ಯ ಬೆಳೆ [[ತೆಂಗು]] ಮತ್ತು ಕೇರಳವು ಭಾರತದಲ್ಲಿ ತೆಂಗಿನ ಕೃಷಿ ಪ್ರದೇಶದಲ್ಲಿ ಮೊದಲ ಸ್ಥಾನದಲ್ಲಿದೆ.{{sfn|Chandran|2018|p=407}} ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಏಲಕ್ಕಿ]]ಯಲ್ಲಿ ಸುಮಾರು 90% ಕೇರಳದಿಂದ ಬರುತ್ತದೆ.<ref name="eco" /> ಭಾರತವು ವಿಶ್ವದಲ್ಲಿ ಏಲಕ್ಕಿಯ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ.<ref name="eco" /> ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಕಾಫಿ]]ಯಲ್ಲಿ ಸುಮಾರು 20% ಕೇರಳದಿಂದ ಬರುತ್ತದೆ.{{sfn|Chandran|2018|p=409}} ಪ್ರಮುಖ ಕೃಷಿ ಪ್ರಧಾನ ಆಹಾರವೆಂದರೆ ಅಕ್ಕಿ, ವಿವಿಧ ಪ್ರಭೇದಗಳನ್ನು ವ್ಯಾಪಕವಾದ ಭತ್ತದ ಗದ್ದೆಗಳಲ್ಲಿ ಬೆಳೆಯಲಾಗುತ್ತದೆ.<ref name="VarshneyRzóska1976">{{cite book |author1=C.K. Varshney |author2=J. Rzóska |title=Aquatic Weeds in South East Asia |url=https://books.google.com/books?id=lW3fHiDjHNcC&pg=PA100 |access-date=18 November 2012 |year=1976 |publisher=Springer |isbn=978-9061935568 |pages=100–}}</ref> ಮನೆ ತೋಟಗಳು ಕೃಷಿ ವಲಯದ ಗಮನಾರ್ಹ ಭಾಗವನ್ನು ರೂಪಿಸಿದವು.<ref name="Dobbie2006">{{cite book |author=Aline Dobbie |title=India the Elephants Blessing |url=https://books.google.com/books?id=ckpEd4emnCkC&pg=PA123 |access-date=18 November 2012 |year=2006 |publisher=Melrose Press |isbn=978-1-905226-85-6 |pages=123–}}</ref>
=== ಮೀನುಗಾರಿಕೆ ===
{{convert|590|km|mi|lk=out|abbr=off}} ಕರಾವಳಿ ಪಟ್ಟಿಯೊಂದಿಗೆ,<ref>{{cite web |title=Kerala: Natural Resources |url=https://india.gov.in/knowindia/state_uts.php?id=70 |archive-url=https://web.archive.org/web/20111218084509/https://india.gov.in/knowindia/state_uts.php?id=70 |archive-date=18 December 2011 |publisher=Government of India |access-date=18 November 2012}}</ref> 400,000 ಹೆಕ್ಟೇರ್ ಒಳನಾಡಿನ ಜಲ ಸಂಪನ್ಮೂಲಗಳು<ref>{{cite web |title=Kerala: April 2012 |url=https://www.ibef.org/download/Kerala_060710.pdf |publisher=Indian Brand Equity Fund |access-date=18 November 2012 |archive-date=10 May 2013 |archive-url=https://web.archive.org/web/20130510151146/http://www.ibef.org/download/Kerala_060710.pdf |url-status=live }}</ref> ಮತ್ತು ಸರಿಸುಮಾರು 220,000 ಸಕ್ರಿಯ ಮೀನುಗಾರರು,<ref name="Commission1961">{{cite book |author=India. Planning Commission |title=Third five year plan |url=https://books.google.com/books?id=5_G5AAAAIAAJ |access-date=18 November 2012 |year=1961 |publisher=Manager of Publications |page=359}}</ref> ಕೇರಳವು ಭಾರತದ ಪ್ರಮುಖ ಮೀನು ಉತ್ಪಾದಕರಲ್ಲಿ ಒಂದಾಗಿದೆ.<ref name="google13">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA51 |access-date=18 November 2012 |year=2008 |publisher=Academic Foundation |isbn=978-8171885947 |page=51}}</ref> 2003–04 ರ ವರದಿಗಳ ಪ್ರಕಾರ, ಸುಮಾರು 11 ಲಕ್ಷ (1.1 ಮಿಲಿಯನ್) ಜನರು ಮೀನುಗಾರಿಕೆ ಮತ್ತು ಒಣಗಿಸುವಿಕೆ, ಸಂಸ್ಕರಣೆ, ಪ್ಯಾಕೇಜಿಂಗ್, ರಫ್ತು ಮತ್ತು ಮೀನುಗಾರಿಕೆ ಸಾಗಣೆಯಂತಹ ಸಂಯೋಜಿತ ಚಟುವಟಿಕೆಗಳಿಂದ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ. 2003–04 ರಲ್ಲಿ ವಲಯದ ವಾರ್ಷಿಕ ಇಳುವರಿಯನ್ನು 6,08,000 ಟನ್ ಎಂದು ಅಂದಾಜಿಸಲಾಗಿದೆ.<ref>{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=51 |access-date=30 May 2015}}</ref> ಇದು ರಾಜ್ಯದ ಒಟ್ಟು ಆರ್ಥಿಕತೆಯ ಸುಮಾರು 3% ರಷ್ಟು ಕೊಡುಗೆ ನೀಡುತ್ತದೆ. 2006 ರಲ್ಲಿ, ಒಟ್ಟು ಭಾರತೀಯ ಸಮುದ್ರ ಮೀನುಗಾರಿಕೆ ಇಳುವರಿಯಲ್ಲಿ ಸುಮಾರು 22% ಕೇರಳದಿಂದ ಬಂದಿದೆ.<ref name="Handbook" /> ನೈಋತ್ಯ ಮಾನ್ಸೂನ್ ಸಮಯದಲ್ಲಿ, ತೀರದ ಉದ್ದಕ್ಕೂ ಅಮಾನತುಗೊಂಡ ಮಣ್ಣಿನ ಬ್ಯಾಂಕ್ ಬೆಳೆಯುತ್ತದೆ, ಇದು ಪ್ರಶಾಂತ ಸಮುದ್ರದ ನೀರಿಗೆ ಕಾರಣವಾಗುತ್ತದೆ, ಇದು ಮೀನುಗಾರಿಕಾ ಉದ್ಯಮದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ವಿದ್ಯಮಾನವನ್ನು ಸ್ಥಳೀಯವಾಗಿ ''[[ಚಕರ]]'' ಎಂದು ಕರೆಯಲಾಗುತ್ತದೆ.<ref name="Gulati1984">{{cite book |author=Leela Gulati |title=Fisherwomen on the Kerala Coast: Demographic and Socio-Economic Impact of a Fisheries Development Project |url=https://archive.org/details/fisherwomenonker0000gula |url-access=registration |access-date=18 November 2012 |year=1984 |publisher=International Labour Organization |isbn=978-9221036265 |page=[https://archive.org/details/fisherwomenonker0000gula/page/103 103]}}</ref><ref name="Journal of Kerala Studies">{{cite book |title=Journal of Kerala Studies |url=https://books.google.com/books?id=EgSSAAAAIAAJ |access-date=18 November 2012 |year=1987 |publisher=University of Kerala. |page=201}}</ref> ಜಲಗಳು ವಿವಿಧ ರೀತಿಯ ಮೀನುಗಳನ್ನು ಒದಗಿಸುತ್ತವೆ: [[ಪೆಲಾಜಿಕ್ ಮೀನು|ಪೆಲಾಜಿಕ್ ಪ್ರಭೇದಗಳು]]; 59%, [[ಡೆಮರ್ಸಲ್ ಮೀನು|ಡೆಮರ್ಸಲ್ ಪ್ರಭೇದಗಳು]]; 23%, [[ಕಠಿಣಚರ್ಮಿಗಳು]], [[ಮೃದ್ವಂಗಿಗಳು]] ಮತ್ತು ಇತರವುಗಳು 18% ರಷ್ಟಿವೆ.<ref name="Handbook">{{cite book |title=Handbook of Marine Fisheries Conservation and Management |url=https://archive.org/details/handbookmarinefi00graf |url-access=limited |publisher=Oxford University Press |author1=R. Quentin Grafton |author2=Ray Hilborn |author3=Dale Squires |year=2009 |pages=[https://archive.org/details/handbookmarinefi00graf/page/n24 10]–12 |isbn=978-0-19-537028-7}}</ref> ಸುಮಾರು 1,050,000 (1.050 ಮಿಲಿಯನ್) ಮೀನುಗಾರರು 1999–2000 ರ ಅಂದಾಜಿನಂತೆ 668,000 ಟನ್ ವಾರ್ಷಿಕ ಕ್ಯಾಚ್ ಅನ್ನು ಎಳೆಯುತ್ತಾರೆ; 222 ಮೀನುಗಾರಿಕಾ ಗ್ರಾಮಗಳು {{convert|590|km|adj=on|abbr=off}} ಕರಾವಳಿಯ ಉದ್ದಕ್ಕೂ ಹರಡಿವೆ. ಇನ್ನೂ 113 ಮೀನುಗಾರಿಕಾ ಗ್ರಾಮಗಳು ಒಳನಾಡಿನಲ್ಲಿ ಹರಡಿವೆ.{{citation needed|date=October 2025}}
== ಸಾರಿಗೆ ==
=== ರಸ್ತೆಗಳು ===
{{Main|ಕೇರಳದ ರಸ್ತೆಗಳು}}
{{See also|ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ}}{{multiple image
<!-- Layout parameters -->| align = <!-- right (default), left, centre, none -->
| direction = vertical
| width = 240
| image1 = Thrissur sixlane.jpg
| caption1 = [[ತೃಶೂರ್]] ನಿಂದ [[ವಡಕ್ಕೆಂಚೇರಿ]] ವರೆಗಿನ [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ನ ಆರು ಪಥದ ವಿಭಾಗ
<!--image 2-->}}
ಕೇರಳವು {{convert|331904|km|mi}} ರಸ್ತೆಗಳನ್ನು ಹೊಂದಿದೆ, ಇದು ಭಾರತದ ಒಟ್ಟು ರಸ್ತೆಗಳ 5.6% ರಷ್ಟಿದೆ.<ref name="eco" /><ref name="road">{{Cite book |title=Ministry Annual Report (2019–20) |publisher=Ministry of Road Transport & Highways Transport Research Wing, Government of India |year=2020 |location=New Delhi |url=https://morth.nic.in/sites/default/files/Ministry%20Annual%20Report_2019-20.pdf |archive-date=28 October 2021 |access-date=20 June 2021 |archive-url=https://web.archive.org/web/20211028140933/https://morth.nic.in/sites/default/files/Ministry%20Annual%20Report_2019-20.pdf |url-status=live }}</ref> ಇದು ಪ್ರತಿ ಸಾವಿರ ಜನರಿಗೆ ಸುಮಾರು {{convert|9.94|km|mi|2}} ರಸ್ತೆ ಎಂದು ಅನುವಾದಿಸುತ್ತದೆ, ಇದು ದೇಶದ ಸರಾಸರಿ {{convert|4.87|km|mi|2}} ಗೆ ಹೋಲಿಸಿದರೆ.<ref name="eco" /><ref name="road" /> ಕೇರಳದ ರಸ್ತೆಗಳು {{convert|1812|km|mi}} ರಾಷ್ಟ್ರೀಯ ಹೆದ್ದಾರಿಯನ್ನು ಒಳಗೊಂಡಿವೆ; ರಾಷ್ಟ್ರದ ಒಟ್ಟು 1.6%, {{convert|4342|km|mi}} ರಾಜ್ಯ ಹೆದ್ದಾರಿ; ರಾಷ್ಟ್ರದ ಒಟ್ಟು 2.5%, {{convert|27470|km|mi}} ಜಿಲ್ಲಾ ರಸ್ತೆಗಳು; ರಾಷ್ಟ್ರದ ಒಟ್ಟು 4.7%, {{convert|33201|km|mi}} ನಗರ (ಪುರಸಭೆ) ರಸ್ತೆಗಳು; ರಾಷ್ಟ್ರದ ಒಟ್ಟು 6.3%, ಮತ್ತು {{convert|158775|km|mi}} ಗ್ರಾಮೀಣ ರಸ್ತೆಗಳು; ರಾಷ್ಟ್ರದ ಒಟ್ಟು 3.8%.<ref name=":16-17">{{Cite book |title=Basic Road Statistics of India (2016–17) |publisher=Ministry of Road Transport & Highways Transport Research Wing, Government of India |year=2019 |location=New Delhi |pages=7–18 |url=https://morth.nic.in/sites/default/files/Basic%20_Road_Statics_of_India.pdf |archive-date=28 August 2021 |access-date=25 November 2020 |archive-url=https://web.archive.org/web/20210828082929/https://www.morth.nic.in/sites/default/files/Basic%20_Road_Statics_of_India.pdf |url-status=live }}</ref> [[ಕೋಟ್ಟಯಂ ಜಿಲ್ಲೆ|ಕೋಟ್ಟಯಂ]] [[ಕೇರಳದ ಜಿಲ್ಲೆಗಳ ಪಟ್ಟಿ|ಕೇರಳದ ಜಿಲ್ಲೆಗಳಲ್ಲಿ]] ಅತಿ ಉದ್ದದ ರಸ್ತೆಗಳನ್ನು ಹೊಂದಿದ್ದರೆ, [[ವಯನಾಡು]] ಕಡಿಮೆ ಪ್ರಮಾಣವನ್ನು ಹೊಂದಿದೆ.{{sfn|Chandran|2018|p=422}} ಕೇರಳದ ಪಶ್ಚಿಮ ಕರಾವಳಿಯ ಹೆಚ್ಚಿನ ಭಾಗವು [[ರಾಷ್ಟ್ರೀಯ ಹೆದ್ದಾರಿ 66 (ಭಾರತ)|NH 66]] (ಹಿಂದೆ NH 17 ಮತ್ತು 47) ಮೂಲಕ ಪ್ರವೇಶಿಸಬಹುದು; ಮತ್ತು ಪೂರ್ವ ಭಾಗವು ರಾಜ್ಯ ಹೆದ್ದಾರಿಗಳ ಮೂಲಕ ಪ್ರವೇಶಿಸಬಹುದು.<ref name="Kerala PWD">{{cite web |title=National Highways in Kerala |url=https://www.keralapwd.gov.in/getPage.php%3Fpage%3DNH%2520in%2520Kerala%26pageId%3D301&ved=2ahUKEwjRh7jHod7YAhWFmZQKHWSeAeoQFjAOegQIBxAB&usg=AOvVaw15WM6wG3ueKFD1qj28WEps |work=Kerala Public Works Department |publisher=Government of Kerala}} {{dead link|date=September 2019 |bot=InternetArchiveBot |fix-attempted=yes }}</ref> ಬೆಟ್ಟ ಮತ್ತು ಕರಾವಳಿ ಹೆದ್ದಾರಿಗಳಿಗೆ ಹೊಸ ಯೋಜನೆಗಳನ್ನು ಇತ್ತೀಚೆಗೆ [[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ|KIIFB]] ಅಡಿಯಲ್ಲಿ ಘೋಷಿಸಲಾಯಿತು.<ref>{{cite news |title=Coastal, Hill Highways to become a reality |url=https://www.thehindu.com/news/national/kerala/coastal-hill-highways-to-become-a-reality/article19262450.ece |date=12 July 2017 |newspaper=The Hindu |access-date=12 February 2019 |archive-date=15 April 2021 |archive-url=https://web.archive.org/web/20210415092848/https://www.thehindu.com/news/national/kerala/coastal-hill-highways-to-become-a-reality/article19262450.ece |url-status=live }}</ref> ಅತಿ ಉದ್ದದ ರಸ್ತೆ ({{convert|1622|km|mi}}) ಹೊಂದಿರುವ ರಾಷ್ಟ್ರೀಯ ಹೆದ್ದಾರಿ 66, [[ಕನ್ಯಾಕುಮಾರಿ]]ಯನ್ನು [[ಮುಂಬೈ]]ಗೆ ಸಂಪರ್ಕಿಸುತ್ತದೆ; ಇದು [[ಕಾಸರಗೋಡು|ಕಾಸರಗೋಡಿನ]] [[ತಲಪಾಡಿ]] ಮೂಲಕ ಕೇರಳವನ್ನು ಪ್ರವೇಶಿಸುತ್ತದೆ ಮತ್ತು [[ಕಣ್ಣೂರು]], [[ಕೋಝಿಕೋಡ್]], [[ಮಲಪ್ಪುರಂ]], [[ಗುರುವಾಯೂರು]], [[ಕೊಚ್ಚಿ]], [[ಆಲಪ್ಪುಳ]], [[ಕೊಲ್ಲಂ]], [[ತಿರುವನಂತಪುರ]] ಮೂಲಕ ಹಾದುಹೋಗುವ ಮೊದಲು [[ತಮಿಳುನಾಡು]] ಪ್ರವೇಶಿಸುತ್ತದೆ.<ref name="Kerala PWD" /> [[ಪಾಲಕ್ಕಾಡ್ ಜಿಲ್ಲೆ]]ಯನ್ನು ಸಾಮಾನ್ಯವಾಗಿ ಕೇರಳದ ಪ್ರವೇಶದ್ವಾರ ಎಂದು ಕರೆಯಲಾಗುತ್ತದೆ, ಪಶ್ಚಿಮ ಘಟ್ಟಗಳಲ್ಲಿ ಪಾಲಕ್ಕಾಡ್ ಅಂತರದ ಉಪಸ್ಥಿತಿಯಿಂದಾಗಿ, ಅದರ ಮೂಲಕ ಕೇರಳದ ಉತ್ತರ ([[ಮಲಬಾರ್ ಪ್ರದೇಶ|ಮಲಬಾರ್]]) ಮತ್ತು ದಕ್ಷಿಣ (ತಿರುವಾಂಕೂರು) ಭಾಗಗಳು ರಸ್ತೆ ಮತ್ತು ರೈಲು ಮೂಲಕ ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಿವೆ. ರಾಜ್ಯದ ಅತಿದೊಡ್ಡ ತಪಾಸಣಾ ಕೇಂದ್ರ, [[ವಾಲಯಾರ್]], [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ರಲ್ಲಿದೆ, ಕೇರಳ ಮತ್ತು [[ತಮಿಳುನಾಡು]] ನಡುವಿನ ಗಡಿ ಪಟ್ಟಣದಲ್ಲಿ, ಅದರ ಮೂಲಕ ದೊಡ್ಡ ಪ್ರಮಾಣದ ಸಾರ್ವಜನಿಕ ಮತ್ತು ವಾಣಿಜ್ಯ ಸಾರಿಗೆಯು ಕೇರಳದ ಉತ್ತರ ಮತ್ತು ಮಧ್ಯ ಜಿಲ್ಲೆಗಳನ್ನು ತಲುಪುತ್ತದೆ.<ref>{{cite web |url=https://www.keralatourism.org/districts/palakkad/ |title=District of Palakkad – the granary of Kerala, Silent Valley National Park, Nelliyampathy |publisher=keralatourism.org |access-date=30 May 2015 |archive-date=15 April 2021 |archive-url=https://web.archive.org/web/20210415114106/https://www.keralatourism.org/districts/palakkad/ |url-status=live }}</ref>
[[ಸಾರ್ವಜನಿಕ ಕಾರ್ಯಗಳ ಇಲಾಖೆ (ಕೇರಳ)|ಸಾರ್ವಜನಿಕ ಕಾರ್ಯಗಳ ಇಲಾಖೆ]] [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|ರಾಜ್ಯ ಹೆದ್ದಾರಿ ವ್ಯವಸ್ಥೆ]] ಮತ್ತು ಪ್ರಮುಖ ಜಿಲ್ಲಾ ರಸ್ತೆಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ.<ref>{{cite web |title=About us |url=https://www.keralapwd.gov.in/getPage.php?page=About%20Us&pageId=256&link=About%20PWD |archive-url=https://web.archive.org/web/20101201055142/https://www.keralapwd.gov.in/getPage.php?page=About%20Us&pageId=256&link=About%20PWD |url-status=dead |archive-date=1 December 2010 |work=Kerala Public Works Department |publisher=Government of Kerala |access-date=18 November 2012}}</ref> ಕೇರಳ ರಾಜ್ಯ ಸಾರಿಗೆ ಯೋಜನೆ (KSTP), ಇದು [[GIS]]-ಆಧಾರಿತ ರಸ್ತೆ ಮಾಹಿತಿ ಮತ್ತು ನಿರ್ವಹಣಾ ಯೋಜನೆಯನ್ನು (RIMS) ಒಳಗೊಂಡಿದೆ, ಕೇರಳದ ರಾಜ್ಯ ಹೆದ್ದಾರಿಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಕೆಲವು ಪ್ರಮುಖ ಜಿಲ್ಲಾ ರಸ್ತೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ.<ref>{{Cite news |author=Kumar VS |title=Kerala State transport project second phase to be launched next month |work=The Hindu |date=20 January 2006 |access-date=11 November 2007 |url=https://www.thehindubusinessline.com/2006/01/20/stories/2006012002272100.htm |archive-url=https://web.archive.org/web/20070304181402/https://www.thehindubusinessline.com/2006/01/20/stories/2006012002272100.htm |archive-date=4 March 2007}}</ref><ref>{{cite web |author=Kumar VS |title=Institutional Strengthening Action Plan (ISAP) |work=Kerala Public Works Department |publisher=Government of Kerala |year=2003 |access-date=11 November 2007 |url=https://www.keralapwd.gov.in/pwd/public/isap.jsp |archive-url=https://web.archive.org/web/20080512054304/https://www.keralapwd.gov.in/pwd/public/isap.jsp |archive-date=12 May 2008}}</ref> ಕೇರಳದಲ್ಲಿ ಸಾರಿಗೆಯು ಪ್ರತಿ ವರ್ಷ 10-11% ದರದಲ್ಲಿ ಬೆಳೆಯುತ್ತಿದೆ, ಇದು ಹೆಚ್ಚಿನ ಸಾರಿಗೆ ಮತ್ತು ರಸ್ತೆಗಳ ಮೇಲಿನ ಒತ್ತಡಕ್ಕೆ ಕಾರಣವಾಗಿದೆ. ಸಾರಿಗೆ ಸಾಂದ್ರತೆಯು ರಾಷ್ಟ್ರೀಯ ಸರಾಸರಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ, ಇದು ರಾಜ್ಯದ ಹೆಚ್ಚಿನ ಜನಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ. ಕೇರಳದ ವಾರ್ಷಿಕ ಒಟ್ಟು ರಸ್ತೆ ಅಪಘಾತಗಳು ರಾಷ್ಟ್ರದಲ್ಲಿ ಅತಿ ಹೆಚ್ಚಿನದಾಗಿದೆ. ಅಪಘಾತಗಳು ಮುಖ್ಯವಾಗಿ ಕಿರಿದಾದ ರಸ್ತೆಗಳು ಮತ್ತು ಅಜಾಗರೂಕ ಚಾಲನೆಯ ಪರಿಣಾಮವಾಗಿದೆ.<ref>{{Cite news |author=Kumar KG |title=Accidentally notorious |work=The Hindu |date=22 September 2003 |access-date=11 November 2007 |url=https://www.thehindubusinessline.in/2003/09/22/stories/2003092201111300.htm |archive-date=10 August 2011 |archive-url=https://web.archive.org/web/20110810210809/http://www.thehindubusinessline.in/2003/09/22/stories/2003092201111300.htm |url-status=live }}</ref> ಕೇರಳದ ರಾಷ್ಟ್ರೀಯ ಹೆದ್ದಾರಿಗಳು ದೇಶದಲ್ಲಿ ಅತ್ಯಂತ ಕಿರಿದಾದವುಗಳಲ್ಲಿ ಸೇರಿವೆ ಮತ್ತು ಮುಂದಿನ ಭವಿಷ್ಯಕ್ಕೂ ಹಾಗೆಯೇ ಉಳಿಯುತ್ತವೆ, ಏಕೆಂದರೆ ರಾಜ್ಯ ಸರ್ಕಾರವು ಕಿರಿದಾದ ರಾಷ್ಟ್ರೀಯ ಹೆದ್ದಾರಿಗಳನ್ನು ಅನುಮತಿಸುವ ವಿನಾಯಿತಿಯನ್ನು ಪಡೆದುಕೊಂಡಿದೆ. ಕೇರಳದಲ್ಲಿ, ಹೆದ್ದಾರಿಗಳು {{convert|45|m|abbr=off}} ಅಗಲವಾಗಿವೆ. ಇತರ ರಾಜ್ಯಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ದರ್ಜೆಯಿಂದ ಪ್ರತ್ಯೇಕಿಸಲ್ಪಟ್ಟಿವೆ, {{convert|60|m|abbr=off}} ಅಗಲವಾಗಿದ್ದು ಕನಿಷ್ಠ ನಾಲ್ಕು ಪಥಗಳನ್ನು ಹೊಂದಿವೆ, ಜೊತೆಗೆ 6 ಅಥವಾ 8-ಪಥದ ಪ್ರವೇಶ-ನಿಯಂತ್ರಿತ ಎಕ್ಸ್ಪ್ರೆಸ್ವೇಗಳನ್ನು ಹೊಂದಿವೆ.<ref>{{cite web |url=https://www.indianexpress.com/news/kerala-parties-finally-toe-nhai-line-of-45m-wide-highways/661729/ |title=Kerala parties finally toe NHAI line of 45-m wide highways |work=Indian Express |date=18 August 2010 |access-date=25 September 2013}}</ref><ref>{{cite web |url=https://www.rediff.com/business/slide-show/slide-show-1-indias-13-super-highways/20110705.htm |title=Check out India's 13 super expressways |work=Rediff.com |date=5 July 2011 |access-date=25 September 2013 |archive-date=28 September 2013 |archive-url=https://web.archive.org/web/20130928024436/http://www.rediff.com/business/slide-show/slide-show-1-indias-13-super-highways/20110705.htm |url-status=live }}</ref> ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೇರಳ ಸರ್ಕಾರಕ್ಕೆ, ಕೇರಳದಲ್ಲಿ ಉತ್ತಮ ಹೆದ್ದಾರಿಗಳಿಗೆ ರಾಜಕೀಯ ಬದ್ಧತೆಯ ಕೊರತೆಯಿರುವುದರಿಂದ ಹೆದ್ದಾರಿ ಅಭಿವೃದ್ಧಿಯಲ್ಲಿ ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಬೆದರಿಕೆ ಹಾಕಿದೆ.<ref>{{Cite news |title=Kerala against development of five NHs |url=https://www.thehindu.com/news/national/kerala/kerala-against-development-of-five-nhs/article4555024.ece |url-access=subscription |newspaper=[[The Hindu]] |date=28 March 2013 |access-date=29 September 2024 |archive-date=4 December 2024 |archive-url=https://web.archive.org/web/20241204153945/https://www.thehindu.com/news/national/kerala/kerala-against-development-of-five-nhs/article4555024.ece |url-status=live }}</ref> ೨೦೧೩ ರಂತೆ, ಕೇರಳವು ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ದರವನ್ನು ಹೊಂದಿತ್ತು, ಹೆಚ್ಚಿನ ಮಾರಣಾಂತಿಕ ಅಪಘಾತಗಳು ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ.<ref>{{Cite news |url=https://www.thehindu.com/todays-paper/tp-national/tp-kerala/states-troubled-highways-a-shocking-revelation-for-centre/article4865464.ece |title=State's troubled highways a shocking revelation for Centre |journal=The Hindu |date=30 June 2013 |access-date=25 September 2013 |author=Staff Reporter}}</ref>
=== ರೈಲುಮಾರ್ಗಗಳು ===
{{Main|ಕೇರಳದ ರೈಲು ನಿಲ್ದಾಣಗಳ ಪಟ್ಟಿ}}
{{See also|ಕೊಚ್ಚಿ ಮೆಟ್ರೋ}}
[[ಭಾರತೀಯ ರೈಲ್ವೆ]]ಯ [[ದಕ್ಷಿಣ ರೈಲ್ವೆ]] ವಲಯವು [[ಇಡುಕ್ಕಿ ಜಿಲ್ಲೆ|ಇಡುಕ್ಕಿ]] ಮತ್ತು [[ವಯನಾಡು ಜಿಲ್ಲೆ|ವಯನಾಡು]] ಎತ್ತರದ ಜಿಲ್ಲೆಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರಮುಖ ಪಟ್ಟಣಗಳು ಮತ್ತು ನಗರಗಳನ್ನು ಸಂಪರ್ಕಿಸುವ ರಾಜ್ಯದ ಎಲ್ಲಾ ರೈಲು ಮಾರ್ಗಗಳನ್ನು ನಿರ್ವಹಿಸುತ್ತದೆ.<ref>{{cite web |title=Introduction |url=https://khsrcl.com/downloads/ch-1.pdf |publisher=Delhi Metro Rail Corporation |access-date=18 November 2012 |url-status=dead |archive-url=https://web.archive.org/web/20120906213234/https://khsrcl.com/downloads/ch-1.pdf |archive-date=6 September 2012}}</ref> ರಾಜ್ಯದ ರೈಲು ಜಾಲವು [[ದಕ್ಷಿಣ ರೈಲ್ವೆ ವಲಯ|ದಕ್ಷಿಣ ರೈಲ್ವೆಯ]] ಆರು ವಿಭಾಗಗಳಲ್ಲಿ ಎರಡರ ನಿಯಂತ್ರಣದಲ್ಲಿದೆ; [[ತಿರುವನಂತಪುರ]] ಮೂಲಸ್ಥಾನವನ್ನು ಹೊಂದಿರುವ [[ತಿರುವನಂತಪುರ ರೈಲ್ವೆ ವಿಭಾಗ]] ಮತ್ತು [[ಪಾಲಕ್ಕಾಡ್]] ಮೂಲಸ್ಥಾನವನ್ನು ಹೊಂದಿರುವ [[ಪಾಲಕ್ಕಾಡ್ ರೈಲ್ವೆ ವಿಭಾಗ]].<ref>{{cite web |title=The Zonal Dream Of Railway Kerala |url=https://www.yentha.com/news/view/features/the-zonal-dream-of-railway-kerala |work=yentha.com |access-date=18 November 2012 |archive-url=https://web.archive.org/web/20121025033001/https://www.yentha.com/news/view/features/the-zonal-dream-of-railway-kerala |archive-date=25 October 2012 |url-status=dead}}</ref> [[ತಿರುವನಂತಪುರ ಸೆಂಟ್ರಲ್]] (TVC) ರಾಜ್ಯದ ಅತಿ ಜನನಿಬಿಡ ರೈಲು ನಿಲ್ದಾಣವಾಗಿದೆ.<ref>{{Cite news |url=https://www.thehindu.com/todays-paper/tp-national/tp-kerala/article1807051.ece |title=Thiruvananthapuram Central to be made a world-class station |date=7 March 2007 |newspaper=The Hindu |language=en-IN |issn=0971-751X |access-date=8 May 2016}}</ref> ಕೇರಳದ ಪ್ರಮುಖ ರೈಲು ನಿಲ್ದಾಣಗಳು:
{{columns-list|colwidth=19em|
* [[ತಿರುವನಂತಪುರ ಸೆಂಟ್ರಲ್]] (TVC)
* [[ಎರ್ನಾಕುಳಂ ಜಂಕ್ಷನ್ ರೈಲು ನಿಲ್ದಾಣ|ಎರ್ನಾಕುಳಂ ಜಂಕ್ಷನ್ (ದಕ್ಷಿಣ)]] (ERS)
* [[ಕೋಝಿಕೋಡ್ ರೈಲು ನಿಲ್ದಾಣ|ಕೋಝಿಕೋಡ್]] (CLT)
* [[ಕೊಲ್ಲಂ ಜಂಕ್ಷನ್ ರೈಲು ನಿಲ್ದಾಣ|ಕೊಲ್ಲಂ ಜಂಕ್ಷನ್]] (QLN)
* [[ತೃಶೂರ್ ರೈಲು ನಿಲ್ದಾಣ|ತೃಶೂರ್]] (TCR)
* [[ಪಾಲಕ್ಕಾಡ್ ಜಂಕ್ಷನ್]] (PGT)
* [[ಕಣ್ಣೂರು ರೈಲು ನಿಲ್ದಾಣ|ಕಣ್ಣೂರು]] (CAN)
* [[ಶೊರಾನೂರು ಜಂಕ್ಷನ್]] (SRR)
* [[ಎರ್ನಾಕುಳಂ ಟೌನ್]] (ಉತ್ತರ) (ERN)
* [[ಕೋಟ್ಟಯಂ ರೈಲು ನಿಲ್ದಾಣ|ಕೋಟ್ಟಯಂ]] (KTYM)
* [[ಚೆಂಗನ್ನೂರು ರೈಲು ನಿಲ್ದಾಣ|ಚೆಂಗನ್ನೂರು]] (CNGR)
* [[ಆಲಪ್ಪುಳ ರೈಲು ನಿಲ್ದಾಣ|ಆಲಪ್ಪುಳ]] (ALLP)
* [[ತಿರುವನಂತಪುರ ಉತ್ತರ ರೈಲು ನಿಲ್ದಾಣ|ತಿರುವನಂತಪುರ ಉತ್ತರ]] (TVCN)
* [[ಕಾಯಂಕುಲಂ]] ಜಂಕ್ಷನ್ (KYJ)
* [[ತಿರೂರ್ ರೈಲು ನಿಲ್ದಾಣ|ತಿರೂರ್]] (TIR)
* [[ಕಾಸರಗೋಡು ರೈಲು ನಿಲ್ದಾಣ|ಕಾಸರಗೋಡು]] (KGQ)
* [[ಆಲುವಾ ರೈಲು ನಿಲ್ದಾಣ|ಆಲುವಾ]] (AWY)
* [[ತಲಶ್ಶೇರಿ]] (TLY)}}
=== ವಿಮಾನ ನಿಲ್ದಾಣಗಳು ===
{{Main|ಕೇರಳ ರಾಜ್ಯದ ವಿಮಾನ ನಿಲ್ದಾಣಗಳ ಪಟ್ಟಿ}}
[[File:Cochin International Airport Limited.jpg|right|thumb|[[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]], ರಾಜ್ಯದ ಅತಿ ಜನನಿಬಿಡ ವಿಮಾನ ನಿಲ್ದಾಣವು ಸೌರಶಕ್ತಿಯಿಂದ ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ]]
ಕೇರಳವು ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ: {{Cast listing|
* [[ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
}}
ಮದ್ರಾಸ್ ಪ್ರೆಸಿಡೆನ್ಸಿಯಡಿಯಲ್ಲಿ ಸ್ಥಾಪಿಸಲಾದ [[ಕೊಲ್ಲಂ ವಿಮಾನ ನಿಲ್ದಾಣ]]ವು ನಂತರ ಮುಚ್ಚಲ್ಪಟ್ಟಿತು, ಇದು ಕೇರಳದ ಮೊದಲ ವಿಮಾನ ನಿಲ್ದಾಣವಾಗಿತ್ತು.<ref>{{Cite news |url=https://www.thehindu.com/todays-paper/tp-national/tp-kerala/article252269.ece |title=Aviation school proposal evokes mixed response |journal=The Hindu |date=8 June 2009 |access-date=21 July 2015 |archive-date=20 December 2016 |archive-url=https://web.archive.org/web/20161220075251/http://www.thehindu.com/todays-paper/tp-national/tp-kerala/article252269.ece |url-status=live }}</ref> [[ಕಣ್ಣೂರು]] 1935 ರಷ್ಟು ಹಿಂದೆಯೇ ವಾಣಿಜ್ಯ ವಿಮಾನಯಾನಕ್ಕೆ ಬಳಸಲ್ಪಟ್ಟ ವಿಮಾನ ನಿಲ್ದಾಣವನ್ನು ಹೊಂದಿತ್ತು, [[ಟಾಟಾ ಗ್ರೂಪ್|ಟಾಟಾ]] ಏರ್ಲೈನ್ಸ್ [[ಮುಂಬೈ]] ಮತ್ತು ತಿರುವನಂತಪುರ ನಡುವೆ ಸಾಪ್ತಾಹಿಕ ವಿಮಾನಗಳನ್ನು ನಡೆಸುತ್ತಿತ್ತು – [[ಗೋವಾ]] ಮತ್ತು ಕಣ್ಣೂರಿನಲ್ಲಿ ನಿಲ್ಲುತ್ತಿತ್ತು.<ref>{{cite news |author=Sudhakaran, P |url=https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |title=Kannur flew, way before its first airport |newspaper=The Times of India |date=14 September 2015 |publisher=Timesofindia.indiatimes.com |access-date=13 November 2020 |url-status=live |archive-url=https://web.archive.org/web/20170518022943/https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |archive-date=18 May 2017}}</ref> ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ವಿಮಾನ ನಿಲ್ದಾಣ ಪ್ರಾಧಿಕಾರ]]ದಿಂದ ನಿರ್ವಹಿಸಲ್ಪಡುತ್ತದೆ, ಇದು ದಕ್ಷಿಣ ಭಾರತದ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. 1988 ರಲ್ಲಿ ತೆರೆಯಲ್ಪಟ್ಟ [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ವು ಕೇರಳದ ಎರಡನೇ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣ ಮತ್ತು [[ಮಲಬಾರ್ ಪ್ರದೇಶ|ಮಲಬಾರ್ ಪ್ರದೇಶದಲ್ಲಿ]] ಅತ್ಯಂತ ಹಳೆಯದಾಗಿದೆ.<ref>{{cite news |url=https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |work=The Times of India |title=Silver jubilee does not bring cheer to Karipur airport users |date=2 April 2012 |archive-date=4 June 2021 |access-date=7 February 2022 |archive-url=https://web.archive.org/web/20210604110846/https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಜ್ಯದಲ್ಲಿ ಅತಿ ಜನನಿಬಿಡವಾಗಿದೆ ಮತ್ತು [[ಭಾರತದ ಅತಿ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ|ದೇಶದಲ್ಲಿ ಏಳನೇ ಅತಿ ಜನನಿಬಿಡವಾಗಿದೆ]]. ಇದು [[CIAL ಸೌರಶಕ್ತಿ ಯೋಜನೆ|ಸೌರಶಕ್ತಿಯಿಂದ]] ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ<ref name="BBC">{{cite news |last=Menon |first=Supriya |url=https://www.bbc.com/news/world-asia-india-34421419 |title=How is the world's first solar-powered airport faring? – BBC News |publisher=Bbc.com |date=9 October 2015 |access-date=21 December 2018 |work=BBC News |archive-date=25 May 2023 |archive-url=https://web.archive.org/web/20230525214353/https://www.bbc.com/news/world-asia-india-34421419 |url-status=live }}</ref> ಮತ್ತು [[ಸಂಯುಕ್ತ ರಾಷ್ಟ್ರಗಳು]] ಸ್ಥಾಪಿಸಿದ ಅತ್ಯುನ್ನತ ಪರಿಸರ ಗೌರವವಾದ [[ಚಾಂಪಿಯನ್ಸ್ ಆಫ್ ದಿ ಅರ್ಥ್|ಚಾಂಪಿಯನ್ ಆಫ್ ದಿ ಅರ್ಥ್]] ಪ್ರಶಸ್ತಿಯನ್ನು ಗೆದ್ದುಕೊಂಡಿದೆ.<ref name="UN">{{cite news |url=https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |title=CIAL chosen for UN environmental honour |newspaper=[[The New Indian Express]] |date=26 July 2018 |archive-date=7 April 2023 |access-date=7 February 2022 |archive-url=https://web.archive.org/web/20230407102227/https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಪಬ್ಲಿಕ್ ಲಿಮಿಟೆಡ್ ಕಂಪನಿ]]ಯಾಗಿ ಸೇರಿಸಲ್ಪಟ್ಟ ಮೊದಲ ಭಾರತೀಯ ವಿಮಾನ ನಿಲ್ದಾಣವಾಗಿದೆ; ಇದನ್ನು 30 ದೇಶಗಳ ಸುಮಾರು 10,000 [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಅನಿವಾಸಿ ಭಾರತೀಯರು]] ಹಣಕಾಸು ಒದಗಿಸಿದ್ದಾರೆ.<ref>{{Cite news |title=The three airports in Kerala can be in business without affecting each other |publisher=[[Rediff.com|Rediff]] |date=6 December 1999 |access-date=11 November 2007 |url=https://www.rediff.com/business/1999/dec/06inter.htm |archive-date=20 January 2008 |archive-url=https://web.archive.org/web/20080120015042/http://www.rediff.com/business/1999/dec/06inter.htm |url-status=live }}</ref>
ನಾಗರಿಕ ವಿಮಾನ ನಿಲ್ದಾಣಗಳ ಜೊತೆಗೆ, [[ಕೊಚ್ಚಿ]] [[INS ಗರುಡ]] ಎಂಬ ನೌಕಾ ವಿಮಾನ ನಿಲ್ದಾಣವನ್ನು ಹೊಂದಿದೆ. ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಭಾರತೀಯ ವಾಯುಪಡೆ]]ಯ ದಕ್ಷಿಣ ವಾಯು ಕಮಾಂಡ್ನೊಂದಿಗೆ ನಾಗರಿಕ ಸೌಲಭ್ಯಗಳನ್ನು ಹಂಚಿಕೊಳ್ಳುತ್ತದೆ. ಈ ಸೌಲಭ್ಯಗಳನ್ನು ಹೆಚ್ಚಾಗಿ ಕೇರಳಕ್ಕೆ ಭೇಟಿ ನೀಡುವ ಕೇಂದ್ರ ಸರ್ಕಾರದ VIP ಗಳು ಬಳಸುತ್ತಾರೆ.{{citation needed|date=October 2025}}
=== ಜಲ ಸಾರಿಗೆ ===
{{Main|ಕೇರಳದ ಬಂದರುಗಳು}}
{{See also|ಕೊಚ್ಚಿ ವಾಟರ್ ಮೆಟ್ರೋ}}[[File:Cochin Ship Yard Cranes.JPG|alt=|thumb|230px|[[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಕೊಚ್ಚಿ ಹಡಗು ನಿರ್ಮಾಣ ಕೇಂದ್ರದಲ್ಲಿ]] ಕ್ರೇನ್ಗಳು]]
ಕೇರಳವು [[ಕೇರಳದ ಬಂದರುಗಳು|ಎರಡು ಪ್ರಮುಖ ಬಂದರುಗಳು, ನಾಲ್ಕು ಮಧ್ಯಂತರ ಬಂದರುಗಳು, ಮತ್ತು 13 ಸಣ್ಣ ಬಂದರುಗಳನ್ನು]] ಹೊಂದಿದೆ, ಅವುಗಳಲ್ಲಿ 4 ವಲಸೆ ತಪಾಸಣಾ ಸೌಲಭ್ಯಗಳನ್ನು ಹೊಂದಿವೆ.<ref>{{cite web |url=https://www.thehindu.com/news/national/kerala/kollam-port-gets-icp-clearance/article68293607.ece |date=15 Jun 2024 |title=Kollam port gets ICP clearance |work=The Hindu |access-date=16 Jun 2024 |archive-date=16 June 2024 |archive-url=https://web.archive.org/web/20240616013704/https://www.thehindu.com/news/national/kerala/kollam-port-gets-icp-clearance/article68293607.ece |url-status=live }}</ref><ref>{{cite web |url=https://www.mha.gov.in/sites/default/files/2024-03/ICPList_05032024..pdf |date= |title=LIST OF IMMIGRATION CHECK POSTs |publisher=Ministry of Home Affairs - Govt. of India |access-date=16 Jun 2024 |archive-date=31 July 2024 |archive-url=https://web.archive.org/web/20240731204706/https://www.mha.gov.in/sites/default/files/2024-03/ICPList_05032024..pdf |url-status=live }}</ref> ರಾಜ್ಯದ ಪ್ರಮುಖ ಬಂದರು [[ಕೊಚ್ಚಿ ಬಂದರು|ಕೊಚ್ಚಿಯಲ್ಲಿದೆ]], ಇದು {{cvt|8.27|km2}} ವಿಸ್ತೀರ್ಣವನ್ನು ಹೊಂದಿದೆ.{{sfn|Chandran|2018|p=424}} [[ವಿಝಿನ್ಜಂ ಅಂತಾರಾಷ್ಟ್ರೀಯ ಸಮುದ್ರ ಬಂದರು ತಿರುವನಂತಪುರ]], ಇದನ್ನು ಪ್ರಸ್ತುತ ಪ್ರಮುಖ ಬಂದರಾಗಿ ವರ್ಗೀಕರಿಸಲಾಗಿದೆ, ಇತರೆ ನಿರ್ಮಾಣ ಹಂತದಲ್ಲಿರುವುದರಿಂದ ಹಂತ I ಮಾತ್ರ ಪೂರ್ಣಗೊಂಡಿದೆ.{{sfn|Chandran|2018|p=424}} ಇತರ ಮಧ್ಯಂತರ ಬಂದರುಗಳು [[ಬೇಪುರ]], [[ಕೊಲ್ಲಂ]], ಮತ್ತು [[ಅಝಿಕೋಡ್ ಮತ್ತು ಅಝಿಕ್ಕಲ್|ಅಝೀಕಲ್]].{{sfn|Chandran|2018|p=424}} ಉಳಿದ ಬಂದರುಗಳನ್ನು ಸಣ್ಣ ಬಂದರುಗಳಾಗಿ ವರ್ಗೀಕರಿಸಲಾಗಿದೆ, ಇವುಗಳಲ್ಲಿ [[ಮಂಜೇಶ್ವರಂ]], [[ಕಾಸರಗೋಡು]], [[ನೀಲೇಶ್ವರಂ]], [[ಕಣ್ಣೂರು]], [[ತಲಶ್ಶೇರಿ]], [[ವಡಕರ]], [[ಪೊನ್ನಾನಿ]], [[ಮುನಂಬಂ]], ಮನಕೋಡಂ, [[ಆಲಪ್ಪುಳ]], [[ಕಾಯಂಕುಲಂ]], [[ನೀಂದಕರ]], ಮತ್ತು [[ವಲಿಯತುರ]] ಸೇರಿವೆ.{{sfn|Chandran|2018|p=424}} [[ಕೇರಳ ಸಮುದ್ರ ಸಂಸ್ಥೆ]]ಯ ಪ್ರಧಾನ ಕಛೇರಿಯು [[ನೀಂದಕರ]]ದಲ್ಲಿದೆ, ಇದು [[ಕೊಡುಂಗಲ್ಲೂರು]] ನಲ್ಲಿ ಹೆಚ್ಚುವರಿ ಉಪಕೇಂದ್ರವನ್ನು ಸಹ ಹೊಂದಿದೆ.{{sfn|Chandran|2018|p=424}} ರಾಜ್ಯವು ಹಲವಾರು [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳನ್ನು]] ಹೊಂದಿದೆ, ಅವುಗಳನ್ನು ವಾಣಿಜ್ಯ [[ಒಳನಾಡಿನ ನ್ಯಾವಿಗೇಷನ್]] ಗೆ ಬಳಸಲಾಗುತ್ತದೆ. ಸಾರಿಗೆ ಸೇವೆಗಳನ್ನು ಮುಖ್ಯವಾಗಿ ದೇಶೀಯ ದೋಣಿಗಳು ಮತ್ತು ಪ್ರಯಾಣಿಕ ಹಡಗುಗಳು ಒದಗಿಸುತ್ತವೆ. ರಾಜ್ಯದಲ್ಲಿ 67 ನ್ಯಾವಿಗೇಬಲ್ ನದಿಗಳಿವೆ, ಒಳನಾಡಿನ ಜಲಮಾರ್ಗಗಳ ಒಟ್ಟು ಉದ್ದ {{convert|1687|km}} ಆಗಿದೆ.<ref name="google14">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA207 |access-date=18 November 2012 |year=2008 |publisher=Academic Foundation |isbn=978-8171885947 |page=207}}</ref> ಒಳನಾಡಿನ ನ್ಯಾವಿಗೇಷನ್ ವಿಸ್ತರಣೆಗೆ ಮುಖ್ಯ ಅಡೆತಡೆಗಳೆಂದರೆ; ಮಣ್ಣು ತುಂಬುವಿಕೆಯಿಂದ ಜಲಮಾರ್ಗಗಳಲ್ಲಿ ಆಳದ ಕೊರತೆ, ನ್ಯಾವಿಗೇಷನ್ ವ್ಯವಸ್ಥೆಗಳು ಮತ್ತು ದಂಡೆ ರಕ್ಷಣೆಯ ನಿರ್ವಹಣೆಯ ಕೊರತೆ, [[ನೀರಿನ ಹಯಸಿಂತ್]] ನ ವೇಗವರ್ಧಿತ ಬೆಳವಣಿಗೆ, ಆಧುನಿಕ ಒಳನಾಡಿನ ಕ್ರಾಫ್ಟ್ ಟರ್ಮಿನಲ್ಗಳ ಕೊರತೆ, ಮತ್ತು ಸರಕು ನಿರ್ವಹಣಾ ವ್ಯವಸ್ಥೆಯ ಕೊರತೆ.{{citation needed|date=October 2025}}
ಕೇರಳವು ಭಾರತದ ಮೊದಲ ಜಲ ಮೆಟ್ರೋವನ್ನು ಸಹ ಹೊಂದಿದೆ, ಇದನ್ನು 'ಕೊಚ್ಚಿ ವಾಟರ್ ಮೆಟ್ರೋ' ಎಂದು ಕರೆಯಲಾಗುತ್ತದೆ.<ref>{{Cite web |last=Prabhakaran |first=Aishwarya |date=2024-04-28 |title='Sustainable, scenic': Kochi Water Metro carves niche & new paths |url=https://www.newindianexpress.com/states/kerala/2024/Apr/28/sustainable-scenic-kochi-water-metro-carves-niche-new-paths |access-date=2025-03-08 |website=The New Indian Express |language=en}}</ref> ಕೊಚ್ಚಿ ವಾಟರ್ ಮೆಟ್ರೋ ಯೋಜನೆಯು 15 ಮಾರ್ಗಗಳನ್ನು ಗುರುತಿಸಿದೆ, 10 ದ್ವೀಪಗಳನ್ನು 78 ಕಿಮೀ ವ್ಯಾಪಿಸಿರುವ ಮಾರ್ಗಗಳ ಜಾಲದೊಂದಿಗೆ 78 ವೇಗದ ಮತ್ತು ಸಂಪೂರ್ಣವಾಗಿ ವಿದ್ಯುತ್ ಚಾಲಿತ ಹೈಬ್ರಿಡ್ ದೋಣಿಗಳ ತಂಡದೊಂದಿಗೆ ಸಂಪರ್ಕಿಸುತ್ತದೆ.<ref>{{Cite web |title=Kochi Water Metro {{!}} About Us |url=https://watermetro.co.in/about |access-date=2025-03-08 |website=Kochi Water Metro |language=en}}</ref>
{{convert|616|km}} ಉದ್ದದ ಪಶ್ಚಿಮ-ಕರಾವಳಿ ಕಾಲುವೆಯು [[ಕಾಸರಗೋಡು]]ವನ್ನು [[ಪೂವಾರ್]] ಗೆ ಸಂಪರ್ಕಿಸುವ ರಾಜ್ಯದ ಅತಿ ಉದ್ದದ ಜಲಮಾರ್ಗವಾಗಿದೆ.{{sfn|Chandran|2018|p=423}} ಇದನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ: {{convert|41|km}} ಉದ್ದದ [[ಕಾಸರಗೋಡು]]-[[ನೀಲೇಶ್ವರಂ]] ವ್ಯಾಪ್ತಿ, {{convert|188|km}} ಉದ್ದದ [[ನೀಲೇಶ್ವರಂ]]-[[ಕೋಝಿಕೋಡ್]] ವ್ಯಾಪ್ತಿ, {{convert|160|km}} [[ಕೋಝಿಕೋಡ್]]-[[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]] ವ್ಯಾಪ್ತಿ, {{convert|168|km}} ಉದ್ದದ [[ರಾಷ್ಟ್ರೀಯ ಜಲಮಾರ್ಗ 3]] ([[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]]-[[ಕೊಲ್ಲಂ]] ವ್ಯಾಪ್ತಿ), ಮತ್ತು {{convert|74|km}} ಉದ್ದದ [[ಕೊಲ್ಲಂ]]-[[ವಿಝಿನ್ಜಂ]] ವ್ಯಾಪ್ತಿ.<ref name="eco" /> ಪಶ್ಚಿಮ-ಕರಾವಳಿ ಕಾಲುವೆಯ ಒಂದು ಭಾಗವಾದ [[ಕೊನೊಲ್ಲಿ ಕಾಲುವೆ]]ಯು [[ಕೋಝಿಕೋಡ್]] ನಗರವನ್ನು [[ಪೊನ್ನಾನಿ]] ಮೂಲಕ [[ಕೊಚ್ಚಿ]] ಗೆ ಸಂಪರ್ಕಿಸುತ್ತದೆ, [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಮತ್ತು [[ತೃಶೂರ್ ಜಿಲ್ಲೆ|ತೃಶೂರ್]] ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು [[ವಡಕರ]] ದಲ್ಲಿ ಪ್ರಾರಂಭವಾಗುತ್ತದೆ.<ref name="hindu_jan08" /> ಇದನ್ನು 1848 ರಲ್ಲಿ ಆಗಿನ [[ಮಲಬಾರ್ ಜಿಲ್ಲೆ|ಮಲಬಾರಿನ]] [[ಜಿಲ್ಲಾ ಕಲೆಕ್ಟರ್]] ಎಚ್. ವಿ. ಕೊನೊಲ್ಲಿ ಅವರ ಆದೇಶದಂತೆ ನಿರ್ಮಿಸಲಾಯಿತು, ಆರಂಭದಲ್ಲಿ ಮಲಬಾರಿನ ಒಳನಾಡಿನಿಂದ [[ಕುಟ್ಟಿಯಾಡಿ]] ಮತ್ತು [[ಕೊರಪುಳ]] ನದಿ ವ್ಯವಸ್ಥೆಗಳ ಮೂಲಕ [[ಕಲ್ಲಾಯಿ]] ಬಂದರಿಗೆ ಸರಕುಗಳ ಚಲನೆಯನ್ನು ಸುಗಮಗೊಳಿಸಲು.<ref name="hindu_jan08">{{cite news |url=https://www.hindu.com/pp/2008/01/05/stories/2008010550730300.htm |archive-url=https://web.archive.org/web/20100923092718/https://www.hindu.com/pp/2008/01/05/stories/2008010550730300.htm |url-status=dead |archive-date=23 September 2010 |title=Reviving the historic Canoly Canal |date=5 January 2005 |work=[[The Hindu]] |access-date=16 August 2009}}</ref> ಒಂದು ಶತಮಾನಕ್ಕೂ ಹೆಚ್ಚು ಕಾಲ ಕೋಝಿಕೋಡ್ ಮತ್ತು ಕೊಚ್ಚಿ ನಡುವೆ [[ಪೊನ್ನಾನಿ]] ಮೂಲಕ ಸರಕು ಸಾಗಣೆಗೆ ಇದು ಮುಖ್ಯ ಜಲಮಾರ್ಗವಾಗಿತ್ತು.<ref name="hindu_jan08" /> ಕೇರಳದ ಇತರ ಪ್ರಮುಖ ಜಲಮಾರ್ಗಗಳಲ್ಲಿ [[ಆಲಪ್ಪುಳ]]-[[ಚಂಗನಾಶ್ಶೇರಿ]] ಕಾಲುವೆ, [[ಆಲಪ್ಪುಳ]]-[[ಕೋಟ್ಟಯಂ]]-[[ಅತಿರಂಪುಳ]] ಕಾಲುವೆ, ಮತ್ತು [[ಕೋಟ್ಟಯಂ]]-[[ವೈಕೋಂ]] ಕಾಲುವೆ ಸೇರಿವೆ.{{sfn|Chandran|2018|p=424}}
== ಜನಸಂಖ್ಯಾಶಾಸ್ತ್ರ ==
{{Main|ಕೇರಳದ ಜನಸಂಖ್ಯಾಶಾಸ್ತ್ರ}}
{{See also|ಕೇರಳದ ಜನಾಂಗೀಯ ಗುಂಪುಗಳು|ಕೇರಳದ ಜನರ ಪಟ್ಟಿ}}
[[File:Kerala Population Pyramid in 5-year age groups (2011 census).png|thumbnail|ಕೇರಳದ [[ಜನಸಂಖ್ಯಾ ಪಿರಮಿಡ್]]]]
ಕೇರಳವು ಭಾರತದ ಜನಸಂಖ್ಯೆಯ 2.8% ರಷ್ಟಿದೆ; 859 ವ್ಯಕ್ತಿಗಳ ಪ್ರತಿ km<sup>2</sup> ಸಾಂದ್ರತೆಯೊಂದಿಗೆ, ಅದರ ಭೂಮಿಯು ರಾಷ್ಟ್ರೀಯ ಸರಾಸರಿ 370 ವ್ಯಕ್ತಿಗಳ ಪ್ರತಿ km<sup>2</sup> ಗಿಂತ ಸುಮಾರು ಮೂರು ಪಟ್ಟು ಹೆಚ್ಚು ಜನನಿಬಿಡವಾಗಿದೆ.<ref name="Census 2011">{{cite web |title=Size, Growth Rate and Distribution of Population |url=https://www.censusindia.gov.in/2011-prov-results/data_files/india/Final_PPT_2011_chapter3.pdf |website=Census 2011 |publisher=Government of India |access-date=13 November 2015 |archive-date=23 September 2015 |archive-url=https://web.archive.org/web/20150923224858/http://www.censusindia.gov.in/2011-prov-results/data_files/india/Final_PPT_2011_chapter3.pdf |url-status=live }}</ref> {{As of|2011}}, ತಿರುವನಂತಪುರವು ಕೇರಳದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ.<ref name="Census2011cities">{{cite web|title=Provisional Population Totals, Census of India 2011|url=http://urbanaffairskerala.org/images/downloads/ulb_population2011.pdf|work=Population of the urban local bodies in Kerala (2011)|publisher=Government of Kerala|accessdate=4 December 2020|archive-date=24 September 2020|archive-url=https://web.archive.org/web/20200924173424/http://urbanaffairskerala.org/images/downloads/ulb_population2011.pdf|url-status=dead}}</ref> ರಾಜ್ಯದಲ್ಲಿ, ಜನಸಂಖ್ಯಾ ಬೆಳವಣಿಗೆಯ ಪ್ರಮಾಣವು ಭಾರತದಲ್ಲಿ ಅತ್ಯಂತ ಕಡಿಮೆಯಾಗಿದೆ, ಮತ್ತು 2011 ರಲ್ಲಿ 4.9% ರಷ್ಟಿರುವ ದಶಕೀಯ ಬೆಳವಣಿಗೆಯು ಅಖಿಲ ಭಾರತ ಸರಾಸರಿ 17.6% ರಷ್ಟಕ್ಕಿಂತ ಕಡಿಮೆಯಾಗಿದೆ.<ref name="Census 2011" /> ಕೇರಳದ ಜನಸಂಖ್ಯೆಯು 1951 ಮತ್ತು 1991 ರ ನಡುವೆ ಎರಡು ಪಟ್ಟು ಹೆಚ್ಚಾಗಿ 15.6 ಮಿಲಿಯನ್ ಜನರನ್ನು ಸೇರಿಸಿ 1991 ರಲ್ಲಿ 29.1 ಮಿಲಿಯನ್ ನಿವಾಸಿಗಳನ್ನು ತಲುಪಿತು; 2011 ರ ವೇಳೆಗೆ ಜನಸಂಖ್ಯೆಯು 33.3 ಮಿಲಿಯನ್ ಆಗಿತ್ತು.<ref name="Census 2011" /> ಕೇರಳದ ಕರಾವಳಿ ಪ್ರದೇಶಗಳು 2022 ವ್ಯಕ್ತಿಗಳ ಪ್ರತಿ km<sup>2</sup> ಜನಸಂಖ್ಯೆಯೊಂದಿಗೆ ಅತಿ ಹೆಚ್ಚು ಜನನಿಬಿಡವಾಗಿವೆ, ಇದು ರಾಜ್ಯದ ಒಟ್ಟಾರೆ ಜನಸಂಖ್ಯಾ ಸಾಂದ್ರತೆ 859 ವ್ಯಕ್ತಿಗಳ ಪ್ರತಿ km<sup>2</sup> ಗಿಂತ 2.5 ಪಟ್ಟು ಹೆಚ್ಚಾಗಿದ್ದು, ಪೂರ್ವದ ಬೆಟ್ಟಗಳು ಮತ್ತು ಪರ್ವತಗಳನ್ನು ತುಲನಾತ್ಮಕವಾಗಿ ವಿರಳವಾಗಿ ಜನಸಂಖ್ಯೆ ಹೊಂದಿರುವಂತೆ ಬಿಡುತ್ತದೆ.<ref name="kerala_fact_sheet">{{cite book |url=https://www.ncscm.org/cms/geo/pdf/research/kerala_fact_sheet.pdf |title=Shoreline change assessment for Kerala coast |publisher=National Centre for Sustainable Coastal Management, Ministry of Environment and Forests |author1=R Ramesh |author2=R Purvaja |author3=A Senthil Vel |access-date=30 May 2015 |archive-date=30 May 2015 |archive-url=https://web.archive.org/web/20150530204904/http://www.ncscm.org/cms/geo/pdf/research/kerala_fact_sheet.pdf |url-status=dead }}</ref> ಕೇರಳವು [[2011 ರ ಭಾರತದ ಜನಗಣತಿ]]ಯ ಪ್ರಕಾರ [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ ಪ್ರಮುಖ ರಾಜ್ಯವಾಗಿದ್ದು]] [[ಕೇರಳದಲ್ಲಿನ ನಗರ ಪ್ರದೇಶದ ಬೆಳವಣಿಗೆಯ ಪ್ರಕಾರ ನಗರಗಳ ಪಟ್ಟಿ|47.7% ನಗರ ಜನಸಂಖ್ಯೆಯನ್ನು]] ಹೊಂದಿದೆ.<ref name="ubn">{{Cite web |url=https://mohua.gov.in/cms/level-of-urbanisation.php |title=Level of Urbanisation in Indian States |date= |website=mohua.gov.in |publisher=Ministry of Housing and Urban Affairs, Government of India |access-date=7 February 2022 |archive-date=7 February 2022 |archive-url=https://web.archive.org/web/20220207105118/https://mohua.gov.in/cms/level-of-urbanisation.php |url-status=live }}</ref> ಸುಮಾರು 31.8 ಮಿಲಿಯನ್ ಕೇರಳೀಯರು ಪ್ರಧಾನವಾಗಿ ಮಲಯಾಳಿಗಳಾಗಿದ್ದಾರೆ.<ref name="Census 2011" /> ರಾಜ್ಯದ 321,000 ಸ್ಥಳೀಯ ಬುಡಕಟ್ಟು ''[[ಆದಿವಾಸಿ]]''ಗಳು, ಜನಸಂಖ್ಯೆಯ 1.1%, ಪೂರ್ವದಲ್ಲಿ ಕೇಂದ್ರೀಕೃತವಾಗಿವೆ.<ref name="Kalathil_2004">{{Cite book |author=Kalathil MJ |year=2004 |veditors=Nair PR, Shaji H |title=Withering Valli: Alienation, Degradation, and Enslavement of Tribal Women in Attappady |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621690 |url=https://www.cds.ac.in/krpcds/publication/downloads/66.pdf |access-date=29 December 2008 |archive-date=30 May 2015 |archive-url=https://web.archive.org/web/20150530205641/http://www.cds.ac.in/krpcds/publication/downloads/66.pdf |url-status=live }}</ref>{{rp|10–12}}
=== ಲಿಂಗ ===
ಕೇರಳದಲ್ಲಿ ಮಾತೃವಂಶೀಯ ಅನುವಂಶಿಕತೆಯ ಸಂಪ್ರದಾಯವಿದೆ, ಅಲ್ಲಿ ತಾಯಿ ಮನೆಯ ಮುಖ್ಯಸ್ಥೆಯಾಗಿರುತ್ತಾಳೆ.<ref>{{Cite web |date=5 March 2017 |title=International Women's Day 2017: Kerala and the myth of matriarchy |url=https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |access-date=16 July 2021 |website=Firstpost |archive-date=16 July 2021 |archive-url=https://web.archive.org/web/20210716051101/https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |url-status=live }}</ref> ಪರಿಣಾಮವಾಗಿ, ಕೇರಳದ ಮಹಿಳೆಯರು ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಮತ್ತು ಪ್ರಭಾವವನ್ನು ಹೊಂದಿದ್ದಾರೆ. ಇದು ಕೆಲವು ಪ್ರಭಾವಶಾಲಿ ಜಾತಿಗಳಲ್ಲಿ ಸಾಮಾನ್ಯವಾಗಿತ್ತು ಮತ್ತು ಹೆಣ್ಣು ಮಕ್ಕಳಿಗೆ ನೀಡಲಾಗುವ ಮೌಲ್ಯದಲ್ಲಿ ಒಂದು ಅಂಶವಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಬಡ ಕುಟುಂಬಗಳ ಹುಡುಗಿಯರಿಗೆ ಶಾಲೆಗಳನ್ನು ಪ್ರಾರಂಭಿಸಿದ ಕಾರಣ ಅವರು ಮಲಯಾಳಿ ಮಹಿಳೆಯರ ಮೇಲೆ ಪ್ರಭಾವ ಬೀರಿದರು.<ref>{{cite journal |author1-link=Tomila Lankina|author1=Lankina |author2=Tomila V. |author3=Getachew, Lullit |year=2013 |url=https://researchonline.lse.ac.uk/id/eprint/44929/ |title=Competitive religious entrepreneurs: Christian missionaries and female education in colonial and post-colonial India |journal=British Journal of Political Science |volume=43 |pages=103–31 |doi=10.1017/s0007123412000178 |s2cid=145185494 |archive-date=25 February 2021 |access-date=2 February 2016 |archive-url=https://web.archive.org/web/20210225144811/https://researchonline.lse.ac.uk/id/eprint/44929/ |url-status=live }}</ref> ಶಿಕ್ಷಣ ಮತ್ತು ಲಾಭದಾಯಕ ಉದ್ಯೋಗದಂತಹ ಮಹಿಳೆಯರಿಗೆ ಅವಕಾಶಗಳು ಸಾಮಾನ್ಯವಾಗಿ ಕಡಿಮೆ ಜನನ ದರಕ್ಕೆ ಕಾರಣವಾಗುತ್ತವೆ,<ref>{{Cite web |last=ലേഖകൻ |first=മാധ്യമം |date=10 July 2021 |title=ജനസംഖ്യാദിനം; അറിയാം 21 കാര്യങ്ങൾ|url=https://www.madhyamam.com/velicham/special-stories/july-11-world-population-day-821671 |access-date=16 July 2021 |website=Madhyamam |language=en |archive-date=16 July 2021 |archive-url=https://web.archive.org/web/20210716051106/https://www.madhyamam.com/velicham/special-stories/july-11-world-population-day-821671 |url-status=live }}</ref> ಇದು ಪ್ರತಿಯಾಗಿ, ಶಿಕ್ಷಣ ಮತ್ತು ಉದ್ಯೋಗವನ್ನು ಮಹಿಳೆಯರಿಗೆ ಹೆಚ್ಚು ಪ್ರವೇಶಿಸುವಂತೆ ಮತ್ತು ಹೆಚ್ಚು ಪ್ರಯೋಜನಕಾರಿಯಾಗಿಸುತ್ತದೆ. ಇದು ಸಮುದಾಯದ ಮಹಿಳೆಯರು ಮತ್ತು ಮಕ್ಕಳಿಗಾಗಿ ಮೇಲ್ಮುಖವಾದ ಸುರುಳಿಯನ್ನು ಸೃಷ್ಟಿಸುತ್ತದೆ, ಅದು ಮುಂದಿನ ಪೀಳಿಗೆಗೆ ರವಾನಿಸಲ್ಪಡುತ್ತದೆ. 1996 ರ ಮಾನವ ಅಭಿವೃದ್ಧಿ ವರದಿಯ ಪ್ರಕಾರ, ಕೇರಳದ [[ಲಿಂಗ ಅಭಿವೃದ್ಧಿ ಸೂಚ್ಯಂಕ]] 597 ಆಗಿತ್ತು; ಇದು ಭಾರತದ ಯಾವುದೇ ರಾಜ್ಯಕ್ಕಿಂತ ಹೆಚ್ಚಾಗಿತ್ತು. ಹೆಚ್ಚಿನ ಮಹಿಳಾ ಸಾಕ್ಷರತೆ, ಶಿಕ್ಷಣ, ಕೆಲಸದ ಭಾಗವಹಿಸುವಿಕೆ ಮತ್ತು ಜೀವಿತಾವಧಿಯ ಪ್ರಮಾಣಗಳು, ಅನುಕೂಲಕರ [[ಮಾನವ ಲಿಂಗಾನುಪಾತ|ಲಿಂಗಾನುಪಾತ]]ದ ಜೊತೆಗೆ, ಅದಕ್ಕೆ ಕೊಡುಗೆ ನೀಡಿವೆ.<ref name="Joseph">{{cite book |author=Ammu Joseph |editor=Oommen M.A. |year=1999 |title=Rethinking Development: Kerala's Development Experience |publisher=Concept Publishing Company |isbn=978-8170227656 |url=https://books.google.com/books?id=lzV3bQh-L94C |pages=479–86 |access-date=30 May 2015}}</ref>
ಕೇರಳದ ಲಿಂಗಾನುಪಾತ 1.084 (ಸ್ತ್ರೀಯರು ಪುರುಷರಿಗೆ) ಭಾರತದ ಉಳಿದ ಭಾಗಗಳಿಗಿಂತ ಹೆಚ್ಚಾಗಿದೆ; ಮಹಿಳೆಯರು ಪುರುಷರನ್ನು ಮೀರಿಸುವ ಏಕೈಕ ರಾಜ್ಯವಾಗಿದೆ.<ref name="Tharamangalam_2005" />{{rp|2}} ಶಿಕ್ಷಣವು ಒದಗಿಸುವ ಅವಕಾಶಗಳನ್ನು ಹೊಂದಿರುವಾಗ, ಉದಾಹರಣೆಗೆ ರಾಜಕೀಯ ಭಾಗವಹಿಸುವಿಕೆ, ಪ್ರಸ್ತುತ ಘಟನೆಗಳೊಂದಿಗೆ ನವೀಕೃತವಾಗಿರುವುದು, ಧಾರ್ಮಿಕ ಗ್ರಂಥಗಳನ್ನು ಓದುವುದು ಇತ್ಯಾದಿ, ಈ ಉಪಕರಣಗಳು ಇನ್ನೂ ಕೇರಳದ ಮಹಿಳೆಯರಿಗೆ ಸಂಪೂರ್ಣ, [[ಮಹಿಳೆಯರ ಹಕ್ಕುಗಳು|ಸಮಾನ ಹಕ್ಕುಗಳಾಗಿ]] ಅನುವಾದಗೊಂಡಿಲ್ಲ. ಮಹಿಳೆಯರನ್ನು ಅವರ ಸ್ವಂತ ಪ್ರಯೋಜನಕ್ಕಾಗಿ ನಿರ್ಬಂಧಿಸಬೇಕು ಎಂಬ ಸಾಮಾನ್ಯ ಮನೋಭಾವವಿದೆ. ರಾಜ್ಯದಲ್ಲಿ, ಸಾಮಾಜಿಕ ಪ್ರಗತಿಯ ಹೊರತಾಗಿಯೂ, ಲಿಂಗವು ಇನ್ನೂ [[ಸಾಮಾಜಿಕ ಚಲನಶೀಲತೆ]] ಯ ಮೇಲೆ ಪ್ರಭಾವ ಬೀರುತ್ತದೆ.<ref>Brenda Maddox mentions in: Maddox, Brenda. "A Marxist Paradise For Women?" New Statesman. (London, England: 1996) 128 no4440 30 January 14, 1999.</ref><ref>Antherjanam, Lalithambika. Cast Me Out If You Will. New York: The Feminist Press, 1997.</ref><ref>{{cite journal |last1=Jeffrey |first1=Robin |year=1987 |title=Governments and Culture: How Women Made Kerala Literate |journal=Pacific Affairs |volume=60 |issue=3 |pages=447–72 |doi=10.2307/2758883 |jstor=2758883}}</ref>
==== LGBT ಹಕ್ಕುಗಳು ====
{{Main|ಕೇರಳದಲ್ಲಿ LGBT ಹಕ್ಕುಗಳು}}
ಕೇರಳವು [[ಭಾರತ]]ದಲ್ಲಿ LGBT ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿದೆ.<ref>{{Cite web |url=https://www.huffingtonpost.in/2015/11/12/kerala-government-transge_n_8543410.html |title=Kerala Government Has Unveiled A Policy To Enforce Constitutional Rights Of Transgenders |website=The Huffington Post |date=12 November 2015 |access-date=28 June 2016 |archive-date=10 May 2017 |archive-url=https://web.archive.org/web/20170510075414/http://www.huffingtonpost.in/2015/11/12/kerala-government-transge_n_8543410.html |url-status=live }}</ref> ಕೇರಳವು ಟ್ರಾನ್ಸ್ಜೆಂಡರ್ ಸಮುದಾಯಕ್ಕಾಗಿ ಕಲ್ಯಾಣ ನೀತಿಯನ್ನು ರೂಪಿಸಿದ [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತದ ಮೊದಲ ರಾಜ್ಯಗಳಲ್ಲಿ]] ಒಂದಾಗಿದೆ. 2016 ರಲ್ಲಿ, ಕೇರಳ ಸರ್ಕಾರವು ಸರ್ಕಾರಿ ಆಸ್ಪತ್ರೆಗಳ ಮೂಲಕ ಉಚಿತ [[ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ]]ಯನ್ನು ಪರಿಚಯಿಸಿತು.<ref>{{Cite web |url=https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |title=Why Kerala's free sex-change surgeries will offer a new lifeline for the transgender community |last=Devasia |first=T. K. |website=Scroll.in |date=19 March 2016 |language=en-US |access-date=5 July 2019 |archive-date=29 June 2019 |archive-url=https://web.archive.org/web/20190629061452/https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |url-status=live }}</ref><ref>{{cite news |url=https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |title=After She-Taxi, Kerala to launch G-Taxi for transgenders |work=[[The Times of India]] |date=31 January 2016 |agency=PTI |access-date=25 March 2016 |location=Thiruvananthapuram |archive-date=29 October 2019 |archive-url=https://web.archive.org/web/20191029184249/https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |url-status=live }}</ref><ref>{{Cite web |url=https://www.dnaindia.com/india/report-how-kerala-left-the-country-behind-on-transgender-rights-2145017 |title=How Kerala left the country behind on transgender rights |website=dna |language=en-US |access-date=19 March 2016 |date=14 November 2015 |archive-date=29 June 2019 |archive-url=https://web.archive.org/web/20190629021111/https://www.dnaindia.com/india/report-how-kerala-left-the-country-behind-on-transgender-rights-2145017 |url-status=live }}</ref> [[ಕ್ವೀರಳ]] ಕೇರಳದ ಪ್ರಮುಖ LGBT ಸಂಸ್ಥೆಗಳಲ್ಲಿ ಒಂದಾಗಿದೆ. ಇದು LGBT ಜನರ ಅರಿವನ್ನು ಹೆಚ್ಚಿಸಲು ಮತ್ತು ಆರೋಗ್ಯ ಸೇವೆಗಳು, ಕೆಲಸದ ಸ್ಥಳ ನೀತಿಗಳು ಮತ್ತು ಶೈಕ್ಷಣಿಕ ಪಠ್ಯಕ್ರಮಕ್ಕೆ ಸಂಬಂಧಿಸಿದ ಸಂವೇದನಾಶೀಲತೆಯ ಬಗ್ಗೆ ಪ್ರಚಾರ ಮಾಡುತ್ತದೆ.<ref>{{Cite news |title=Affirming their right, they march with pride |url=https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |date=13 August 2017 |work=The Hindu |language=en-IN |issn=0971-751X |access-date=4 April 2022 |archive-date=28 December 2019 |archive-url=https://web.archive.org/web/20191228100119/https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |url-status=live }}</ref> 2010 ರಿಂದ, [[ಕೇರಳ ಕ್ವೀರ್ ಪ್ರೈಡ್]] ಅನ್ನು ಕೇರಳದ ವಿವಿಧ ನಗರಗಳಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತಿದೆ.<ref>{{cite web |url=https://timesofindia.indiatimes.com/india/Kerala-to-host-its-first-gay-parade/articleshow/6112610.cms |title=Kerala to host its first gay parade |website=The Times of India |date=30 June 2010}}</ref>
ಜೂನ್ 2019 ರಲ್ಲಿ, ಕೇರಳ ಸರ್ಕಾರವು ಟ್ರಾನ್ಸ್ಜೆಂಡರ್ ಸಮುದಾಯದ ಸದಸ್ಯರನ್ನು ಸರ್ಕಾರದ ಸಂವಹನಗಳಲ್ಲಿ "[[ಮೂರನೇ ಲಿಂಗ]]" ಅಥವಾ "ಇತರ ಲಿಂಗ" ಎಂದು ಕರೆಯಬಾರದು ಎಂದು ಹೊಸ ಆದೇಶವನ್ನು ಅಂಗೀಕರಿಸಿತು. ಬದಲಾಗಿ, "ಟ್ರಾನ್ಸ್ಜೆಂಡರ್" ಪದವನ್ನು ಬಳಸಬೇಕು. ಹಿಂದೆ, ಸರ್ಕಾರಿ ನಮೂನೆಗಳು ಮತ್ತು ದಾಖಲೆಗಳಲ್ಲಿ ಒದಗಿಸಲಾದ ಲಿಂಗ ಆಯ್ಕೆಗಳು ಪುರುಷ, ಮಹಿಳೆ ಮತ್ತು ಇತರ/ಮೂರನೇ ಲಿಂಗವನ್ನು ಒಳಗೊಂಡಿದ್ದವು.<ref>{{Cite web |url=https://www.thenewsminute.com/article/kerala-govt-passes-order-use-transgender-instead-thirdother-gender-104584 |website=www.thenewsminute.com |access-date=8 July 2019 |title=Kerala govt passes order to use 'transgender' instead of 'third/other gender' |date=30 June 2019}}</ref><ref>{{Cite news |url=https://www.thehindu.com/news/national/kerala/only-transgender-in-official-communication/article28235748.ece |title=Only 'transgender' in official communication |last=Roshni |first=R. k |date=30 June 2019 |work=The Hindu |access-date=8 July 2019 |language=en-IN |issn=0971-751X}}</ref>
=== ಮಾನವ ಅಭಿವೃದ್ಧಿ ಸೂಚ್ಯಂಕ ===
{{See also|ಕೇರಳ ಮಾದರಿ}}
[[File:2006 Human Development Index for India map by states, HDI data by GoI and UNDP India.svg|thumb|[[ಭಾರತ ಸರ್ಕಾರ]] ಮತ್ತು [[ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮ]]ದಿಂದ ಲೆಕ್ಕಾಚಾರ ಮಾಡಿದಂತೆ 2006 ರಲ್ಲಿ ಭಾರತೀಯ ರಾಜ್ಯಗಳಿಗೆ [[ಮಾನವ ಅಭಿವೃದ್ಧಿ ಸೂಚ್ಯಂಕ]] ನಕ್ಷೆ.<ref>{{cite web |url=https://www.in.undp.org/content/dam/india/docs/gendering_human_development_indices_summary_report.pdf |title=Gendering Human Development Indices |date=March 2009 |publisher=Ministry of Women and Child Development, Government of India with UNDP India}}</ref>]]
ಪ್ರಜಾಪ್ರಭುತ್ವದ ಕಮ್ಯುನಿಸ್ಟ್ ಸ್ಥಳೀಯ ಸರ್ಕಾರದ ಅಡಿಯಲ್ಲಿ, ಕೇರಳವು ಭಾರತೀಯ ಸರಾಸರಿಗಿಂತ ಹೆಚ್ಚು ಮುಂದುವರಿದ ಸಾಮಾಜಿಕ ಅಭಿವೃದ್ಧಿಯ ದಾಖಲೆಯನ್ನು ಸಾಧಿಸಿದೆ.<ref>{{Cite book |last=Lin |first=Chun |title=The transformation of Chinese socialism |date=2006 |publisher=[[Duke University Press]] |isbn=978-0-8223-3785-0 |location=Durham [N.C.] |pages=298 |oclc=63178961}}</ref> {{As of|2015}}, ಕೇರಳವು 0.770 ರ [[ಮಾನವ ಅಭಿವೃದ್ಧಿ ಸೂಚ್ಯಂಕ]] (HDI) ಅನ್ನು ಹೊಂದಿದೆ, ಇದು "ಹೆಚ್ಚಿನ" ವರ್ಗದಲ್ಲಿದೆ, ಇದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.<ref name="snhdi-gdl">{{cite web |title=Sub-national HDI – Area Database |url=https://hdi.globaldatalab.org/areadata/shdi/ |website=Global Data Lab |publisher=Institute for Management Research, Radboud University |access-date=25 September 2018 |language=en}}</ref> ಇದು 2007–08 ರಲ್ಲಿ 0.790 ಆಗಿತ್ತು<ref name="IDHR 2011">{{cite web |title=India Human Development Report 2011: Towards Social Inclusion |url=https://www.im4change.org/docs/340IHDR_Summary.pdf |publisher=Institute of Applied Manpower Research, [[Planning Commission (India)|Planning Commission]], [[Government of India]] |access-date=24 October 2014 |archive-date=21 October 2013 |archive-url=https://web.archive.org/web/20131021081939/http://www.im4change.org/docs/340IHDR_Summary.pdf |url-status=dead }}</ref> ಮತ್ತು ಇದು 0.920 ರ ಬಳಕೆ-ಆಧಾರಿತ HDI ಅನ್ನು ಹೊಂದಿತ್ತು, ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮವಾಗಿದೆ.<ref name="IDHR 2011" /> 19 ನೇ ಶತಮಾನದಿಂದ [[ಪ್ರಾಥಮಿಕ ಶಿಕ್ಷಣ|ಪ್ರಾಥಮಿಕ ಮಟ್ಟದ ಶಿಕ್ಷಣ]], [[ಆರೋಗ್ಯ ರಕ್ಷಣೆ]] ಮತ್ತು [[ಭಾರತದಲ್ಲಿ ಬಡತನ|ಬಡತನ]] ನಿರ್ಮೂಲನೆಗೆ ಸರ್ಕಾರದ ತುಲನಾತ್ಮಕವಾಗಿ ಹೆಚ್ಚಿನ ವೆಚ್ಚವು ರಾಜ್ಯವು ಅಸಾಧಾರಣವಾಗಿ ಹೆಚ್ಚಿನ HDI ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ;<ref name="UNDP2005">{{cite web |title=Kerala HDR 2005 |url=https://hdr.undp.org/en/reports/nationalreports/asiathepacific/india/name,3397,en.html |work=Human Development Report |publisher=United Nations |location=Asia and the Pacific |access-date=30 May 2015}}</ref><ref name="UNDP20054">{{cite web |title=Human Development Report 2005 |url=https://hdr.undp.org/en/media/HDR05_complete.pdf |work=Human Development Report |publisher=United Nations |location=Asia and the Pacific |access-date=14 November 2015 |archive-url=https://web.archive.org/web/20110310193948/https://hdr.undp.org/en/media/HDR05_complete.pdf |archive-date=10 March 2011 |url-status=dead}}</ref> ಈ ವರದಿಯನ್ನು ಕೇಂದ್ರ ಸರ್ಕಾರದ [[ಅನ್ವಯಿಕ ಜನಶಕ್ತಿ ಸಂಶೋಧನಾ ಸಂಸ್ಥೆ]] ತಯಾರಿಸಿತು.<ref name="hdi kerala chart">{{cite web |url=https://www.moneycontrol.com/news/wire-news/human-development-index-rose-21-per-cent-kerala-tops-chart_603650.html |title=Human Development Index rose 21 per cent; Kerala tops chart |date=21 October 2011 |work=[[CNBC]] |access-date=14 November 2015}}</ref><ref name="hdi kerala">{{Cite news |url=https://economictimes.indiatimes.com/news/economy/finance/growth-reforms-lift-living-standards-in-india-human-development-index/articleshow/10447495.cms |title=Growth, reforms lift living standards in India: Human development Index |date=22 October 2011 |access-date=14 November 2015 |work=Economic Times}}</ref> ಆದಾಗ್ಯೂ, ಅಭಿವೃದ್ಧಿ ಅಧ್ಯಯನ ಕೇಂದ್ರವು ತಯಾರಿಸಿದ ಮಾನವ ಅಭಿವೃದ್ಧಿ ವರದಿ 2005, ರಾಜ್ಯದಲ್ಲಿ ಮಾನವ ಅಭಿವೃದ್ಧಿಯ ಪ್ರಗತಿಯು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡಲು ಪ್ರಾರಂಭಿಸಿದ್ದರಿಂದ ರಾಜ್ಯಕ್ಕೆ ಸಮಾವೇಶಕ ಅಭಿವೃದ್ಧಿಯ ಗುಣಾತ್ಮಕ ಹಂತವನ್ನು ಊಹಿಸುತ್ತದೆ.<ref name="UNDP2005" /> ಕೇರಳವು ಭಾರತದಲ್ಲಿ ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರ ರಾಜ್ಯವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ.<ref>{{cite book |author1=Sunil Mani |author2=Anjini Kochar |title=Kerala's Economy: Crouching Tiger, Sacred Cows |url=https://books.google.com/books?id=wKeRAtvXl8oC&pg=PA121 |access-date=24 September 2012 |year=2006 |publisher=D.C. Books |isbn=978-8126413591 |page=121}}</ref>
2011 ರ ಜನಗಣತಿಯ ಪ್ರಕಾರ, ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಹೆಚ್ಚು [[ಸಾಕ್ಷರತಾ ಪ್ರಮಾಣ]] (94%) ಹೊಂದಿದೆ. 2018 ರಲ್ಲಿ, ಭಾರತದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ನಡೆಸಿದ 2018 ರ ಸಾಕ್ಷರತಾ ಸಮೀಕ್ಷೆಯಲ್ಲಿ ಸಾಕ್ಷರತಾ ಪ್ರಮಾಣವನ್ನು 96.2% ಎಂದು ಲೆಕ್ಕಹಾಕಲಾಯಿತು.<ref name="Literacy survey_2018">{{Cite web |date=8 September 2020 |title=Literacy Survey, India (2017–18) |url=https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |access-date=9 September 2020 |publisher=Firstpost |archive-date=2 November 2021 |archive-url=https://web.archive.org/web/20211102214441/https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |url-status=live }}</ref> [[ಕೋಟ್ಟಯಂ ಜಿಲ್ಲೆ]]ಯಲ್ಲಿ, ಸಾಕ್ಷರತಾ ಪ್ರಮಾಣವು 97% ಆಗಿತ್ತು.<ref>{{Cite web |url=https://www.pincodeindia.net/literacy-rate-of-kerala.php |title=Literacy Rate in Kerala – 2018 |access-date=7 February 2022 |archive-date=7 February 2022 |archive-url=https://web.archive.org/web/20220207105113/https://www.pincodeindia.net/literacy-rate-of-kerala.php |url-status=dead }}</ref><ref name="pc-census2011">{{Cite web |title=Census 2011 (Final Data) – Demographic details, Literate Population (Total, Rural & Urban) |url=https://planningcommission.gov.in/data/datatable/data_2312/DatabookDec2014%20307.pdf |url-status=dead |archive-url=https://web.archive.org/web/20180127163347/https://planningcommission.gov.in/data/datatable/data_2312/DatabookDec2014%20307.pdf |archive-date=27 January 2018 |access-date=3 October 2018 |website=planningcommission.gov.in |publisher=Planning Commission, Government of India}}</ref><ref name="IBNLiteracy2013" /> ಕೇರಳದಲ್ಲಿ [[ಜೀವಿತಾವಧಿ]]ಯು 74 ವರ್ಷಗಳು, {{As of|2011|lc=y}} ಭಾರತದಲ್ಲಿ ಅತಿ ಹೆಚ್ಚಿನದಾಗಿದೆ.<ref>{{cite news |url=https://thehindu.com/news/national/kerala/kerala-tops-in-literacy-rate-health-services/article2562589.ece |location=Chennai, India |work=The Hindu |title=Kerala tops in literacy rate, health services |date=22 October 2011 |first=J. |last=Balaji |access-date=30 May 2015}}</ref> ಕೇರಳದ ಗ್ರಾಮೀಣ ಬಡತನ ಪ್ರಮಾಣವು 59% (1973–1974) ರಿಂದ 12% (1999–2010) ಕ್ಕೆ ಇಳಿದಿದೆ; ಒಟ್ಟಾರೆ (ನಗರ ಮತ್ತು ಗ್ರಾಮೀಣ) ಬಡತನ ಪ್ರಮಾಣವು 1970 ಮತ್ತು 2000 ರ ದಶಕಗಳ ನಡುವೆ 47% ರಷ್ಟು ಕಡಿಮೆಯಾಗಿದ್ದು, ಭಾರತದಲ್ಲಿ ಒಟ್ಟಾರೆ ಬಡತನ ಪ್ರಮಾಣದಲ್ಲಿ 29% ರಷ್ಟು ಕುಸಿತಕ್ಕೆ ವಿರುದ್ಧವಾಗಿದೆ.<ref>{{cite book |title=Human Development Report 2005 Kerala |publisher=State Planning Board |author=Centre for Development Studies Thiruvananthapuram |year=2006 |location=Thiruvananthapuram, Kerala}}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6" /> 2013 ರ ಟೆಂಡೂಲ್ಕರ್ ಸಮಿತಿ ವರದಿಯು ಗ್ರಾಮೀಣ ಮತ್ತು ನಗರ ಕೇರಳದಲ್ಲಿ ಬಡತನ ರೇಖೆಯ ಕೆಳಗೆ ವಾಸಿಸುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಕ್ರಮವಾಗಿ 9.1% ಮತ್ತು 5.0% ಎಂದು ಅಂದಾಜಿಸಿದೆ.<ref>{{cite web |title=Press Note on Poverty Estimates, 2011–12 |url=https://planningcommission.nic.in/news/pre_pov2307.pdf |website=planningcommission.gov.in |publisher=Planning Commission, Government of India |access-date=27 November 2018 |archive-url=https://web.archive.org/web/20140628120737/https://planningcommission.nic.in/news/pre_pov2307.pdf |archive-date=28 June 2014 |url-status=dead}}</ref> ಈ ಬದಲಾವಣೆಗಳು ಹೆಚ್ಚಾಗಿ 19 ನೇ ಶತಮಾನದ ಕೊನೆಯಲ್ಲಿ ಕೊಚ್ಚಿ ಮತ್ತು ತಿರುವಾಂಕೂರು ಸಾಮ್ರಾಜ್ಯಗಳು ಸಾಮಾಜಿಕ ಕಲ್ಯಾಣವನ್ನು ಹೆಚ್ಚಿಸಲು ಪ್ರಾರಂಭಿಸಿದ ಪ್ರಯತ್ನಗಳಿಂದ ಉಂಟಾಗಿವೆ.<ref>{{Cite report |title=EFA [Education for All] Global Monitoring Report |url=https://www.unesco.org/education/efa_report/chapter4.pdf |year=2003 |archive-url=https://web.archive.org/web/20040923014605/https://www.unesco.org/education/efa_report/chapter4.pdf |archive-date=23 September 2004 |page=156 |publisher=[[UNESCO]] |access-date=4 April 2022}}</ref><ref>{{Cite journal |author=Kutty VR |year=2000 |title=Historical analysis of the development of health care facilities in Kerala State, India |journal=Health Policy and Planning |volume=15 |issue=1 |pages=103–09 |doi=10.1093/heapol/15.1.103 |pmid=10731241 |s2cid=7634887 |doi-access=free }}</ref> ಈ ಗಮನವನ್ನು ಕೇರಳದ ಸ್ವಾತಂತ್ರ್ಯೋತ್ತರ ಸರ್ಕಾರವು ಉಳಿಸಿಕೊಂಡಿದೆ.<ref name="Brenkert_Malone_2003" /><ref name="Varma_2005">{{Cite news |author=Varma MS |title=Nap on HDI scores may land Kerala in an equilibrium trap |work=The Financial Express |date=4 April 2005 |access-date=12 November 2007 |url=https://www.financialexpress.com/old/print.php?content_id=86925 |archive-url=https://web.archive.org/web/20080617134031/https://www.financialexpress.com/old/print.php?content_id=86925 |archive-date=17 June 2008}}</ref>{{rp|48}} ಕೇರಳವು [[NITI ಆಯೋಗ]]ದ ಸುಸ್ಥಿರ ಅಭಿವೃದ್ಧಿ ಗುರಿಗಳ ಡ್ಯಾಶ್ಬೋರ್ಡ್ ಮತ್ತು [[ಭಾರತೀಯ ರಿಸರ್ವ್ ಬ್ಯಾಂಕ್]]ನ ''ಇಂಡಿಯನ್ ಎಕಾನಮಿಯ ಹ್ಯಾಂಡ್ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್'' ಪ್ರಕಾರ ಭಾರತದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿದೆ]].<ref>{{Cite web |title=SDG India – Index 2021–22 – Partnerships in the Decade of Action |url=https://sdgindiaindex.niti.gov.in/#/ranking |date=2021 |url-status=dead |archive-url=https://web.archive.org/web/20210613021943/https://niti.gov.in/writereaddata/files/SDG_3.0_Final_04.03.2021_Web_Spreads.pdf |archive-date=13 June 2021 |website=[[NITI Aayog]] |access-date=29 September 2024}}</ref><ref>{{Cite web |title=Handbook of Statistics on Indian Economy. Table 154 : Number and Percentage of Population Below Poverty Line. (2011-12) |url=https://www.rbi.org.in/scripts/PublicationsView.aspx?id=19887 |access-date=13 September 2021 |website=Reserve Bank of India |archive-date=13 September 2021 |archive-url=https://web.archive.org/web/20210913133540/https://www.rbi.org.in/scripts/PublicationsView.aspx?id=19887 |url-status=live }}</ref>
ಕೇರಳವು [[ಕೆನಡಾ]], [[ಜಪಾನ್]], ಮತ್ತು [[ನಾರ್ವೆ]] ನಂತಹ [[ಅಭಿವೃದ್ಧಿ ಹೊಂದಿದ ರಾಷ್ಟ್ರಗಳ]] ವಿಶಿಷ್ಟವಾದ "[[ಜನಸಂಖ್ಯಾ ಪರಿವರ್ತನೆ]]" ಯನ್ನು ಅನುಭವಿಸಿದೆ.<ref name="Tharamangalam_2005" />{{rp|1}} 2005 ರಲ್ಲಿ, 11.2% ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು.<ref name="Varma_2005" /> 2023 ರಲ್ಲಿ, ಬಿಬಿಸಿಯು ಕೇರಳದಿಂದ ವಲಸೆಯಿಂದ ಉಂಟಾದ ಸಮಸ್ಯೆಗಳು ಮತ್ತು ಪ್ರಯೋಜನಗಳ ಬಗ್ಗೆ ವರದಿ ಮಾಡಿತು, ಕುಂಬನಾಡ್ ಗ್ರಾಮದ ಮೇಲೆ ಕೇಂದ್ರೀಕರಿಸಿತು.<ref>{{cite web |url=https://www.bbc.co.uk/news/world-asia-india-64936519 |title=Kerala: A ghost town in the world's most populated country |last= |first= |date=26 March 2023 |website=www.bbc.co.uk |publisher=BBC News |access-date=26 March 2023}}</ref>
2004 ರಲ್ಲಿ, ಜನನ ದರವು 18 ಪ್ರತಿ 1,000 ಕ್ಕೆ ಕಡಿಮೆಯಾಗಿತ್ತು.<ref name="Kutty_2004_6">{{Cite book |author=Kutty VR |veditors=Nair PR, Shaji H |year=2004 |title=Why low birth weight (LBW) is still a problem in Kerala: A preliminary exploration |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621607 |access-date=12 November 2007 |url=https://www.cds.ac.in/krpcds/publication/downloads/57.pdf |page=6}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 1.6 ರ ಒಟ್ಟು ಫಲವತ್ತತೆ ಪ್ರಮಾಣವನ್ನು (TFR) ಹೊಂದಿತ್ತು. ಮಲಪ್ಪುರಂ ಜಿಲ್ಲೆಯನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳು 2 ಕ್ಕಿಂತ ಕಡಿಮೆ ಫಲವತ್ತತೆ ಪ್ರಮಾಣವನ್ನು ಹೊಂದಿದ್ದವು. ಫಲವತ್ತತೆ ಪ್ರಮಾಣವು [[ಮಲಪ್ಪುರಂ ಜಿಲ್ಲೆ]]ಯಲ್ಲಿ (2.2) ಅತಿ ಹೆಚ್ಚು ಮತ್ತು [[ಪತ್ತನಂತಿಟ್ಟ ಜಿಲ್ಲೆ]]ಯಲ್ಲಿ (1.3) ಅತಿ ಕಡಿಮೆಯಾಗಿದೆ.<ref>{{cite web |title=Fertility at District Level in India:Lessons from the 2011 Census |url=https://www.ceped.org/IMG/pdf/ceped_wp30.pdf&ved=2ahUKEwio7YjXv9nsAhVJzjgGHUy2BTE4FBAWMAR6BAgJEAE&usg=AOvVaw2PL5xTsjiaBMS96pAhMEX1 |author=Christophe Z Guilmoto and Irudaya Rajan |page=31 |format=PDF |access-date=29 October 2020}}</ref> 2001 ರಲ್ಲಿ, ಮುಸ್ಲಿಮರು 2.6 ರ TFR ಅನ್ನು ಹೊಂದಿದ್ದರು, ಹಿಂದೂಗಳಿಗೆ 1.5 ಮತ್ತು ಕ್ರೈಸ್ತರಿಗೆ 1.7 ರಷ್ಟಿತ್ತು.<ref>{{Cite news |url=https://www.deccanchronicle.com/nation/current-affairs/170316/fertility-rate-to-even-out-in-20-years-in-kerala.html |title=Fertility rate to even out in 20 years in Kerala |website=Deccan Chronicle |access-date=29 October 2020}}</ref> CMS ಇಂಡಿಯನ್ ಕರಪ್ಷನ್ ಸ್ಟಡಿ (CMS-ICS) ನಡೆಸಿದ ಸಮೀಕ್ಷೆಗಳ ಪ್ರಕಾರ ರಾಜ್ಯವು "ಅತ್ಯಂತ ಕಡಿಮೆ ಭ್ರಷ್ಟ ಭಾರತೀಯ ರಾಜ್ಯ" ಎಂದೂ ಪರಿಗಣಿಸಲ್ಪಟ್ಟಿದೆ<ref>{{Cite web |url=https://www.onmanorama.com/news/nation/2017/04/28/kerala-least-corrupt-states-india-karnatak-highest-petty-corruptionkerala-least-corrupt-states-india-karnatak-highest-petty-corruption.html |title=Kerala among the least corrupt states in India, Karnataka tops the list: study |website=OnManorama}}</ref> ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ (2005)<ref>{{cite web |title=India Corruption Study – 2005 |publisher=[[Transparency International]] |date=June 2005 |access-date=11 November 2007 |url=https://archive.transparency.org/regional_pages/asia_pacific/newsroom/news_archive2/india_corruption_study_2005 |archive-url=https://web.archive.org/web/20130413044112/https://archive.transparency.org/regional_pages/asia_pacific/newsroom/news_archive2/india_corruption_study_2005 |url-status=dead |archive-date=13 April 2013}}</ref> ಮತ್ತು ''ಇಂಡಿಯಾ ಟುಡೇ'' (1997).<ref>{{cite book |author1=Jean Dreze |author2=Amartya Sen |title=India: Development and Participation |url=https://books.google.com/books?id=UpOl35r8UHQC&pg=PA368 |access-date=24 September 2012 |year=2002 |publisher=Oxford University Press |isbn=978-0-19-925749-2 |page=368}}</ref> ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಕಡಿಮೆ [[ಕೊಲೆ]] ಪ್ರಮಾಣವನ್ನು ಹೊಂದಿದೆ, 2011 ರಲ್ಲಿ 1.1 ಪ್ರತಿ 100,000 ಕ್ಕೆ.<ref name="ncrb">{{cite web |url=https://ncrb.nic.in/CD-CII2011/cii-2011/Table%203.1.pdf |archive-url=https://web.archive.org/web/20130928024506/https://ncrb.nic.in/CD-CII2011/cii-2011/Table%203.1.pdf |url-status=dead |archive-date=28 September 2013 |date=21 June 2012 |title=Table–3.1 Incidence And Rate Of Violent Crimes During 2011 |access-date=24 September 2014}}</ref> ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ, ಹೆಚ್ಚಿನ [[ಆತ್ಮಹತ್ಯೆ]] ಪ್ರಮಾಣ, ಕಡಿಮೆ [[ಗಳಿಸಿದ ಆದಾಯ]]ದ ಪಾಲು, [[ಬಾಲ್ಯ ವಿವಾಹ]],<ref>{{Cite news |title=Child marriages remain Kerala's secret shame |url=https://www.thehindu.com/news/national/kerala/child-marriages-remain-keralas-secret-shame/article7613216.ece |newspaper=The Hindu |date=4 September 2015 |access-date=4 September 2015 |issn=0971-751X}}</ref> [[ಲೈಂಗಿಕ ಕಿರುಕುಳ]] ದೂರುಗಳು ಮತ್ತು ಸೀಮಿತ ಸ್ವಾತಂತ್ರ್ಯದಂತಹ ಕೆಲವು ನಕಾರಾತ್ಮಕ ಅಂಶಗಳು ವರದಿಯಾಗಿವೆ.<ref name="Joseph" /> ಕೇರಳದಲ್ಲಿ ಬಾಲ್ಯ ವಿವಾಹವು ಕಡಿಮೆಯಾಗಿದೆ. ಮಲಪ್ಪುರಂ ಜಿಲ್ಲೆಯು ಅತಿ ಹೆಚ್ಚು ಬಾಲ್ಯ ವಿವಾಹಗಳನ್ನು ಹೊಂದಿದೆ ಮತ್ತು ಅಂತಹ ಪ್ರಕರಣಗಳ ಸಂಖ್ಯೆಯು ಮಲಪ್ಪುರಂನಲ್ಲಿ ಹೆಚ್ಚುತ್ತಿದೆ. ಬಾಲ್ಯ ವಿವಾಹಗಳು ವಿಶೇಷವಾಗಿ [[ಕೇರಳದಲ್ಲಿ ಮುಸ್ಲಿಮರಲ್ಲಿ ಬಾಲ್ಯ ವಿವಾಹ|ಮುಸ್ಲಿಂ ಸಮುದಾಯದಲ್ಲಿ]] ಹೆಚ್ಚಾಗಿದೆ.<ref>{{cite news |last=Naha |first=Abdul Latheef |title=Child marriage cases go up in Malappuram |url=https://www.thehindu.com/news/national/kerala/child-marriage-cases-go-up-in-malappuram/article22751598.ece |date=18 February 2018 |newspaper=The Hindu |access-date=31 December 2019}}</ref><ref>{{Cite web |url=https://www.onmanorama.com/news/kerala/2018/10/26/child-marriages-shoot-up-in-the-most-unlikely-places-in-kerala.html |title=Child marriages shoot up in the most unlikely places in Kerala |website=OnManorama}}</ref> 2019 ರಲ್ಲಿ, ಕೇರಳವು ಭಾರತದಲ್ಲಿ ಅತಿ ಹೆಚ್ಚು ಮಕ್ಕಳ ಲೈಂಗಿಕ ದುರುಪಯೋಗ ದೂರುಗಳನ್ನು ದಾಖಲಿಸಿತು.<ref>{{cite news |last=Natu |first=Nitasha |title=Kerala No. 1 in child sex abuse complaints; Tamil Nadu, Maharashtra follow |url=https://timesofindia.indiatimes.com/india/kerala-no-1-in-child-sex-abuse-complaints-tamil-nadu-maharashtra-follow/articleshow/72972619.cms |date=25 December 2019 |newspaper=The Time of India |access-date=31 December 2019}}</ref>
2015 ರಲ್ಲಿ, ಕೇರಳವು ಯಾವುದೇ ರಾಜ್ಯದ ಅತಿ ಹೆಚ್ಚು ಶಿಕ್ಷೆಯ ಪ್ರಮಾಣವನ್ನು ಹೊಂದಿತ್ತು, 77% ಕ್ಕಿಂತ ಹೆಚ್ಚು.<ref>{{cite news |url=https://timesofindia.indiatimes.com/india/Conviction-rate-up-Kerala-tops-with-over-77/articleshow/48408220.cms |location=New Delhi, India |work=The Times of India |title=Conviction rate up, Kerala tops with over 77% link |date=9 August 2015 |access-date=14 November 2015}}</ref> ಕೇರಳವು ಗ್ರಾಮೀಣ ಭಾರತದಲ್ಲಿ ಅತಿ ಕಡಿಮೆ ಮನೆಯಿಲ್ಲದ ಜನರ ಪ್ರಮಾಣವನ್ನು ಹೊಂದಿದೆ, <0.1%,<ref>{{cite news |url=https://timesofindia.indiatimes.com/india/Population-of-homeless-in-rural-India-dips/articleshow/26981896.cms |location=India |work=The Times of India |title=Population of homeless in rural India dips |date=7 December 2013 |access-date=14 November 2015}}</ref> ಮತ್ತು ರಾಜ್ಯವು ಮೊದಲ "ಶೂನ್ಯ ಮನೆಯಿಲ್ಲದ ರಾಜ್ಯ" ವಾಗುವ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ, ಇದರ ಜೊತೆಗೆ ಅದರ ಶ್ಲಾಘನೀಯ "ಶೂನ್ಯ ಭೂರಹಿತ ಯೋಜನೆ" ಯನ್ನು ಹೊಂದಿದೆ, ಖಾಸಗಿ ಸಂಸ್ಥೆಗಳು ಮತ್ತು ವಲಸೆ ಮಲಯಾಳಿ ಸಮುದಾಯವು ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸಲು ಯೋಜನೆಗಳಿಗೆ ಹಣಕಾಸು ಒದಗಿಸುತ್ತಿದೆ.<ref>{{cite news |url=https://www.thehindu.com/news/national/kerala/cm-told-to-pursue-zero-homeless-kerala-project/article5309749.ece |location=Pathanamthitta, India |work=The Hindu |title=CM told to pursue Zero Homeless Kerala project link |date=3 November 2013}}</ref> ರಾಜ್ಯವು [[ಭಾರತ ರಾಜ್ಯ ಹಸಿವು ಸೂಚ್ಯಂಕ]]ದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು, ಇದು [[ಪಂಜಾಬ್, ಭಾರತ|ಪಂಜಾಬ್]] ನ ನಂತರದ ಸ್ಥಾನದಲ್ಲಿದೆ. 2015 ರಲ್ಲಿ ಕೇರಳವು ಇ-ಗವರ್ನೆನ್ಸ್ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಮೊದಲ "ಸಂಪೂರ್ಣ ಡಿಜಿಟಲ್ ರಾಜ್ಯ" ವಾಯಿತು.<ref>{{cite news |url=https://timesofindia.indiatimes.com/india/Kerala-becomes-Indias-first-complete-digital-state/articleshow/48494982.cms |location=New Delhi, India |work=The Times of India |title=Kerala-becomes-Indias-first-complete-digital-state link |date=15 August 2015}}</ref>
=== ಆರೋಗ್ಯ ರಕ್ಷಣೆ ===
{{Multiple image
| direction = vertical
| width = 220
| image1 = Regional Cancer Centre, Trivandrum.jpg
| caption1 = [[ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ, ತಿರುವನಂತಪುರ]]
}}
{{See also|ಕೇರಳದ ಸರ್ಕಾರಿ ಆಸ್ಪತ್ರೆಗಳ ಪಟ್ಟಿ}}
ಕೇರಳವು [[ಸಾರ್ವತ್ರಿಕ ಆರೋಗ್ಯ ರಕ್ಷಣೆ]] ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಪ್ರವರ್ತಕವಾಗಿದೆ.<ref>{{cite news |last1=Maya |first1=C |title=The road to universal health care in State |url=https://www.thehindu.com/todays-paper/tp-national/tp-kerala/the-road-to-universal-health-care-in-state/article5450319.ece |access-date=14 November 2015 |work=The Hindu |date=12 December 2013}}</ref> [[ಉಪ-ಬದಲಿ ಫಲವತ್ತತೆ]] ಮಟ್ಟ ಮತ್ತು [[ಶಿಶು ಮರಣ ಪ್ರಮಾಣ]]ವು ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ, ಇದು 12<ref name="Brenkert_Malone_2003" /><ref name="Kutty_2004_6" />{{rp|49}} ರಿಂದ 14<ref name="Krishnaswami_2004">{{Cite book |author=Krishnaswami P |veditors=Neelakantan S, Nair PR, Shaji H |year=2004 |title=Morbidity Study: Incidence, Prevalence, Consequences, and Associates |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621669 |url=https://www.cds.ac.in/krpcds/publication/downloads/63.pdf |access-date=31 December 2008}}</ref>{{rp|5}} ಪ್ರತಿ 1,000 ಜೀವಂತ ಜನನಗಳಿಗೆ ಸಾವುಗಳು ಎಂದು ಅಂದಾಜಿಸಲಾಗಿದೆ; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16 ರ ಪ್ರಕಾರ, ಇದು 6 ಕ್ಕೆ ಇಳಿದಿದೆ.<ref>{{Cite news |url=https://timesofindia.indiatimes.com/india/kerala-as-good-as-us-oecd-in-saving-newborn-children/articleshow/57438366.cms |title=Kerala as good as US, OECD in saving newborn children |work=The Times of India |access-date=9 March 2017}}</ref> [[ಲಿಯಾನ್ ಯಿಂಗ್ ಚೌ|ಲಿಯಾನ್]] ಫೌಂಡೇಶನ್, [[ಸಿಂಗಾಪುರ]]-ಆಧಾರಿತ ಪರೋಪಕಾರಿ ಸಂಸ್ಥೆ, ನಿಯೋಜಿಸಿದ ಅಧ್ಯಯನದ ಪ್ರಕಾರ, ಗಂಭೀರ ಅನಾರೋಗ್ಯದ ರೋಗಿಗಳಿಗೆ ರಾಜ್ಯದ ಉಪಶಮನ ಆರೈಕೆಯನ್ನು ಒದಗಿಸುವ ಆಧಾರದ ಮೇಲೆ ಕೇರಳವನ್ನು ಭಾರತದಲ್ಲಿ ಸಾಯಲು ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗಿದೆ.<ref>{{cite news |last1=Patel |first1=Atish |title=Why Kerala is the best place in India to die |url=https://www.bbc.com/news/world-asia-india-36137285 |date=4 May 2016}}</ref> ಆದಾಗ್ಯೂ, ಕೇರಳದ [[ಅನಾರೋಗ್ಯ ಪ್ರಮಾಣ]]ವು ಯಾವುದೇ ಇತರ ಭಾರತೀಯ ರಾಜ್ಯಕ್ಕಿಂತ ಹೆಚ್ಚಾಗಿದೆ—118 (ಗ್ರಾಮೀಣ) ಮತ್ತು 88 (ನಗರ) ಪ್ರತಿ 1,000 ಜನರಿಗೆ. ಅನುಗುಣವಾದ ಅಂಕಿಅಂಶಗಳು ಅಖಿಲ ಭಾರತಕ್ಕೆ 55 ಮತ್ತು 54 ಪ್ರತಿ 1,000 ಆಗಿತ್ತು {{As of|2005|lc=y}}.<ref name="Krishnaswami_2004" />{{rp|5}} ಕೇರಳದ 13.3% [[ಕಡಿಮೆ ಜನನ ತೂಕ]] [[ಪ್ರಪಂಚದ ಮೊದಲ ರಾಷ್ಟ್ರಗಳಲ್ಲಿ]] ಅನೇಕಕ್ಕಿಂತ ಹೆಚ್ಚಾಗಿದೆ.<ref name="Kutty_2004_6" /> 50% ಕ್ಕಿಂತ ಹೆಚ್ಚು ಜನರು ಅವಲಂಬಿಸಿರುವ 3 ಮಿಲಿಯನ್ [[ನೀರಿನ ಬಾವಿ]]ಗಳ ನಡುವೆ [[ನೀರಿನಿಂದ ಹರಡುವ ರೋಗ]]ಗಳಾದ [[ಅತಿಸಾರ]], [[ಭೇದಿ]], [[ಹೆಪಟೈಟಿಸ್]], ಮತ್ತು [[ಟೈಫಾಯಿಡ್]] ಏಕಾಏಕಿ ಸಮಸ್ಯೆಯು [[ನೈರ್ಮಲ್ಯ ಒಳಚರಂಡಿ|ಒಳಚರಂಡಿ]] ಕೊರತೆಯಿಂದ ಉಲ್ಬಣಗೊಂಡಿದೆ.<ref name="Roy_2004">{{Cite journal |author=Roy MKP |year=2004 |title=Water quality and health status in Kollam Municipality |journal=Centre for Development Studies |url=https://services.iriskf.org/data/articles/Document1168200520.8355524.pdf |access-date=28 December 2008 |archive-date=21 December 2016 |archive-url=https://web.archive.org/web/20161221084934/http://services.iriskf.org/data/articles/Document1168200520.8355524.pdf |url-status=dead }}</ref>{{rp|5–7}} 2017 ರಂತೆ, ರಾಜ್ಯವು ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಮತ್ತು ಭಾರತದಲ್ಲಿ ರೋಗದ ಅತಿ ಹೆಚ್ಚು ಹರಡುವಿಕೆಯ ಪ್ರಮಾಣವನ್ನು ಹೊಂದಿದೆ.<ref>{{Cite web |url=https://timesofindia.indiatimes.com/city/kochi/diabetic-patients-kerala-tops-list-of-indian-states/articleshow/61974164.cms |title=Diabetic patients: Kerala tops list of Indian states |date=8 December 2017 |website=The Times of India |language=en |access-date=28 October 2019}}</ref>
[[ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ]] (UNICEF) ಮತ್ತು [[ವಿಶ್ವ ಆರೋಗ್ಯ ಸಂಸ್ಥೆ]] ಸೂತ್ರಗಳ ಮೇಲೆ ಸ್ತನ್ಯಪಾನದ ಪರಿಣಾಮಕಾರಿ ಪ್ರೋತ್ಸಾಹದಿಂದಾಗಿ ಕೇರಳವನ್ನು ವಿಶ್ವದ ಮೊದಲ "[[ಶಿಶು ಸ್ನೇಹಿ ಆಸ್ಪತ್ರೆ ಉಪಕ್ರಮ|ಶಿಶು-ಸ್ನೇಹಿ]] ರಾಜ್ಯ" ಎಂದು ಗೊತ್ತುಪಡಿಸಿತು.<ref>{{cite web |date=August 2002 |title=Kerala Named World's First WHO-UNICEF "Baby-Friendly State" |work=United Nations Foundation |url=https://www.unwire.org/unwire/20020801/28062_story.asp |archive-url=https://web.archive.org/web/20100306205352/https://www.unwire.org/unwire/20020801/28062_story.asp |archive-date=6 March 2010 |access-date=14 March 2009}}</ref><ref>{{cite news |url=https://news.bbc.co.uk/2/hi/south_asia/2166677.stm |location=Kochi, India |work=BBC News |title=Indian state wins 'baby-friendly' award |date=1 August 2002}}</ref> 95% ಕ್ಕಿಂತ ಹೆಚ್ಚು ಕೇರಳೀಯ ಜನನಗಳು ಆಸ್ಪತ್ರೆಯಲ್ಲಿ ನಡೆಯುತ್ತವೆ ಮತ್ತು ರಾಜ್ಯವು ದೇಶದಲ್ಲಿ ಅತಿ ಕಡಿಮೆ ಶಿಶು ಮರಣ ಪ್ರಮಾಣವನ್ನು ಸಹ ಹೊಂದಿದೆ. ಮೂರನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು 100% ಜನನಗಳು ವೈದ್ಯಕೀಯ ಸೌಲಭ್ಯಗಳಲ್ಲಿ ನಡೆಯುತ್ತಿರುವುದರೊಂದಿಗೆ "ಸಾಂಸ್ಥಿಕ ಪ್ರಸವ" ದಲ್ಲಿ ಕೇರಳವನ್ನು ಮೊದಲ ಸ್ಥಾನದಲ್ಲಿರಿಸುತ್ತದೆ.<ref name="kerala_fact_sheet"/> [[ಆಯುರ್ವೇದ]],<ref name="Unnikrishnan_2004">{{Cite journal |last=Unnikrishnan |first=E |year=2004 |title=''Materia Medica'' of the Local Health Traditions of Payyannur |journal=Centre for Development Studies |url=https://www.cds.ac.in/krpcds/publication/downloads/80.pdf |access-date=22 January 2006}}</ref>{{rp|13}} ''[[ಸಿದ್ಧ]]'', ಮತ್ತು ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯವಾಗಿ ಕಂಡುಬರುವ [[ಸಾಂಪ್ರದಾಯಿಕ ಔಷಧ]] ವಿಧಾನಗಳು, ''ಕಳರಿ'', ''ಮರ್ಮಚಿಕಿತ್ಸ'' ಮತ್ತು ''ವಿಷವೈದ್ಯ'' ಸೇರಿದಂತೆ, ಅಭ್ಯಾಸ ಮಾಡಲಾಗುತ್ತದೆ. [[ಕಣಿಯಾರ್]] ನಂತಹ ಕೆಲವು ವೃತ್ತಿಪರ ಸಮುದಾಯಗಳು ತಮ್ಮ ಸಾಂಪ್ರದಾಯಿಕ ವೃತ್ತಿಯ ಜೊತೆಗೆ ಅಂತಹ ವೈದ್ಯಕೀಯ ವ್ಯವಸ್ಥೆಗಳ ಅಭ್ಯಾಸಕ್ಕೆ ಸಂಬಂಧಿಸಿದಂತೆ ಸ್ಥಳೀಯ ವೈದ್ಯರು ಎಂದು ಕರೆಯಲ್ಪಡುತ್ತಿದ್ದರು.<ref>Angus Stewart, woodburn The Religious attitude: A psychological study of its differentiation, 1927</ref> ಇವುಗಳು ''[[ಗುರುಕುಲ]]'' ಶಿಷ್ಯತ್ವದ ಮೂಲಕ ಪ್ರಚಾರಗೊಳ್ಳುತ್ತವೆ,<ref name="Unnikrishnan_2004" />{{rp|5–6}} ಮತ್ತು ಔಷಧೀಯ ಮತ್ತು ಪರ್ಯಾಯ ಚಿಕಿತ್ಸೆಗಳ ಮಿಶ್ರಣವನ್ನು ಒಳಗೊಂಡಿರುತ್ತವೆ.<ref name="Unnikrishnan_2004" />{{rp|15}} [[ವೈದ್ಯರತ್ನಂ ಪಿ. ಎಸ್. ವಾರಿಯರ್]] 1902 ರಲ್ಲಿ [[ಕೊಟ್ಟಕ್ಕಲ್]] ನಲ್ಲಿ ([[ಮಲಪ್ಪುರಂ]] ನಿಂದ ಸುಮಾರು 10 ಕಿಮೀ) ಸ್ಥಾಪಿಸಿದ ''[[ಆರ್ಯ ವೈದ್ಯ ಸಲಾ]]'' ರಾಜ್ಯದ ಅತಿದೊಡ್ಡ ಆಯುರ್ವೇದ ಔಷಧೀಯ ಜಾಲ ಮತ್ತು ಆರೋಗ್ಯ ಕೇಂದ್ರವಾಗಿದೆ.<ref name="Warrier">{{cite news |url=https://www.thehindu.com/todays-paper/tp-national/pk-warrier-turns-90/article2080601.ece |title=PK Warrier turns 90 |work=The Hindu |date=6 June 2011}}</ref><ref name="Arya Vaidya Sala Kottakkal – Part 1">{{cite AV media |url=https://www.youtube.com/watch?v=nj6YqhsUo0c |archive-url=https://ghostarchive.org/varchive/youtube/20211222/nj6YqhsUo0c |archive-date=22 December 2021 |url-status=live |title=Arya Vaidya Sala Kottakkal – Part 1 |publisher=BBC World – India Business Report |date=30 May 2013 |medium=Documentary}}{{cbignore}}</ref><ref name="mal">{{Cite news |title=അമ്പതിന്റെ നിറവില് മലപ്പുറം; മലപ്പുറത്തിന്റെ മാനവിക മഹാപൈതൃകം |url=https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |last=Leelakrishnan |first=Alamkode |date=17 June 2019 |work=Mathrubhumi |access-date=24 April 2021 |archive-date=7 May 2021 |archive-url=https://web.archive.org/web/20210507091729/https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |url-status=dead}}</ref> ಇದು ವಿಶ್ವದ ಅತಿದೊಡ್ಡ ಆಯುರ್ವೇದ ಔಷಧೀಯ ಬ್ರಾಂಡ್ಗಳಲ್ಲಿ ಒಂದಾಗಿದೆ.<ref name="Warrier" /><ref name="Arya Vaidya Sala Kottakkal – Part 1" /><ref name="mal" />
2014 ರಲ್ಲಿ, ಕೇರಳವು ಸುಕೃತಂ ಎಂಬ ಕಾರ್ಯಕ್ರಮದ ಮೂಲಕ ಬಡವರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುವ ಭಾರತದ ಮೊದಲ ರಾಜ್ಯವಾಯಿತು.<ref>{{cite web |url=https://www.freepressjournal.in/kerala-becomes-first-state-to-provide-free-cancer-treatment/457976 |title=Kerala becomes first state to provide free cancer treatment – Free Press Journal |website=www.freepressjournal.in |access-date=18 May 2016 |date=11 October 2014}}</ref> ಕೇರಳದ ಜನರು [[ಕ್ಯಾನ್ಸರ್]]ಗಳು, [[ಯಕೃತ್ತು]] ಮತ್ತು [[ಮೂತ್ರಪಿಂಡ]] ಕಾಯಿಲೆಗಳ ಹೆಚ್ಚಿನ ಘಟನೆಗಳನ್ನು ಅನುಭವಿಸುತ್ತಾರೆ.<ref>{{Cite web |url=https://www.indushealthplus.com/kerala-health-statistics.html |title=Health Statistics and Public Health issues in Kerala |website=[[Indus Health Plus]] |language=en |access-date=28 October 2019}}</ref> ಏಪ್ರಿಲ್ 2016 ರಲ್ಲಿ, ''ಎಕನಾಮಿಕ್ ಟೈಮ್ಸ್'' 250,000 ನಿವಾಸಿಗಳು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ ಎಂದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 150 ರಿಂದ 200 ಯಕೃತ್ತು ಕಸಿಗಳು ಪ್ರದೇಶದ ಆಸ್ಪತ್ರೆಗಳಲ್ಲಿ ನಡೆಯುತ್ತವೆ ಎಂದು ಸಹ ಇದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 42,000 ಕ್ಯಾನ್ಸರ್ ಪ್ರಕರಣಗಳು ಪ್ರದೇಶದಲ್ಲಿ ವರದಿಯಾಗುತ್ತವೆ. ಖಾಸಗಿ ಆಸ್ಪತ್ರೆಗಳು ತಮ್ಮ ಅಂಕಿಅಂಶಗಳನ್ನು ವರದಿ ಮಾಡದಿರಬಹುದು ಎಂದು ಇದು ಕಡಿಮೆ ಅಂದಾಜು ಎಂದು ನಂಬಲಾಗಿದೆ. ಮೂತ್ರಪಿಂಡ ದಾನಕ್ಕೆ ದೀರ್ಘ ಕಾಯುವ ಪಟ್ಟಿಗಳು ಮಾನವ ಮೂತ್ರಪಿಂಡಗಳ ಅಕ್ರಮ ವ್ಯಾಪಾರವನ್ನು ಉತ್ತೇಜಿಸಿದೆ, ಮತ್ತು ಆರ್ಥಿಕವಾಗಿ ಅನನುಕೂಲಕರ ರೋಗಿಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಕಿಡ್ನಿ ಫೆಡರೇಶನ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣವಾಗಿದೆ.<ref>{{Cite news |url=https://economictimes.indiatimes.com/industry/healthcare/biotech/healthcare/health-crisis-in-kerala-the-increase-in-cancer-kidney-and-liver-diseases/articleshow/51950836.cms?intenttarget=no |title=Health crisis in Kerala: The increase in cancer, kidney and liver diseases – The Economic Times |journal=The Economic Times |access-date=18 May 2016 |date=23 April 2016 |last1=Krishnakumar |first1=P. K. |last2=Sanandakumar |first2=S.}}</ref> 2017–18 ರಂತೆ, [[ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಕೇರಳ)|ಆರೋಗ್ಯ ಸೇವೆಗಳ ಇಲಾಖೆ]]ಯಡಿಯಲ್ಲಿ 6,691 ಆಧುನಿಕ ಔಷಧ ಸಂಸ್ಥೆಗಳಿವೆ, ಅವುಗಳಲ್ಲಿ ಒಟ್ಟು ಹಾಸಿಗೆ ಸಾಮರ್ಥ್ಯ 37,843; 15,780 ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 22,063 ನಗರ ಪ್ರದೇಶಗಳಲ್ಲಿ.<ref name="dhs">{{Cite book |title=List of modern medicine institutions (2017–18) |last=Statistics Wing |first=Health Information Cell |publisher=Directorate of Health Services, Government of Kerala |year=2019 |location=Thiruvananthapuram |pages=1, 7 |url=https://dhs.kerala.gov.in/wp-content/uploads/2020/03/list_10052019.pdf}}</ref>
=== ಭಾಷೆ ===
[[File:Language Map of Kerala (2011 Census).svg|thumb|200px|ಜಿಲ್ಲೆಯ ಪ್ರಕಾರ ಭಾಷೆಗಳು:<br> {{col-begin}}
{{col-2}}
'''ಮಲಯಾಳಂ'''
{{legend|#009deb|80–90%}}
{{legend|#0088cc|90–100%}}
{{col-end}}
]]
[[ಮಲಯಾಳಂ]] ಕೇರಳದ ಅಧಿಕೃತ ಭಾಷೆಯಾಗಿದೆ ಮತ್ತು [[ಭಾರತದ ಭಾಷೆಗಳು|ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ]] ಒಂದಾಗಿದೆ.<ref name="thehindu20130524">{{cite news |url=https://www.thehindu.com/todays-paper/tp-national/classical-status-for-malayalam/article4744630.ece |title='Classical' status for Malayalam |work=[[The Hindu]] |date=24 May 2013 |access-date=25 May 2013 |location=Thiruvananthapuram, India}}</ref><ref>{{Cite web |title=Kerala – Principal Language |url=https://archive.india.gov.in/knowindia/state_uts.php?id=73 |url-status=dead |archive-url=https://web.archive.org/web/20200610111356/https://archive.india.gov.in/knowindia/state_uts.php?id=73 |archive-date=10 June 2020 |access-date=27 November 2018 |website=Government of India}}</ref> [[ಇಡುಕ್ಕಿ ಜಿಲ್ಲೆ]] ಮತ್ತು [[ಪಾಲಕ್ಕಾಡ್ ಜಿಲ್ಲೆ]]ಯಲ್ಲಿ ಗಮನಾರ್ಹವಾದ [[ತಮಿಳು ಭಾಷೆ|ತಮಿಳು]] ಮಾತನಾಡುವ ಜನಸಂಖ್ಯೆಯಿದೆ, ಇದು ಕ್ರಮವಾಗಿ ಎರಡು ಜಿಲ್ಲೆಗಳ ಜನಸಂಖ್ಯೆಯ 17.48% ಮತ್ತು 4.8% ರಷ್ಟಿದೆ.<ref name="lg">{{cite web |title=Census of India – Language |url=https://censusindia.gov.in/2011census/C-16.html |website=censusindia.gov.in}}</ref> [[ತುಳು ಭಾಷೆ|ತುಳು]] ಮತ್ತು [[ಕನ್ನಡ]]ವನ್ನು ಮುಖ್ಯವಾಗಿ [[ಕಾಸರಗೋಡು ಜಿಲ್ಲೆ]]ಯ ಉತ್ತರ ಭಾಗಗಳಲ್ಲಿ ಮಾತನಾಡಲಾಗುತ್ತದೆ, ಪ್ರತಿಯೊಂದೂ ಕ್ರಮವಾಗಿ ಜಿಲ್ಲೆಯ ಒಟ್ಟು ಜನಸಂಖ್ಯೆಯ 8.77% ಮತ್ತು 4.23% ರಷ್ಟಿದೆ.<ref name="lg" /><ref>{{cite news |title=Kerala government to appoint officer to study issues of linguistic minorities |url=https://timesofindia.indiatimes.com/city/thiruvananthapuram/government-to-appoint-officer-to-study-issues-of-linguistic-minorities/articleshow/59892625.cms |date=2 August 2017 |newspaper=The Times of India |department=City: Thiruvananthapuram |agency=TNN |access-date=29 December 2019}}</ref>
=== ಧರ್ಮ ===
{{Main|ಕೇರಳದಲ್ಲಿ ಧರ್ಮ}}
{{multiple image
| direction = vertical
| total_width = 200
| caption_align = left
| image1 = Jain temple, Wayanad IMG 3494 by Joseph Lazer.jpg
| caption1 = [[ಸುಲ್ತಾನ್ ಬತ್ತೇರಿ|ಸುಲ್ತಾನ್ ಬತ್ತೇರಿಯ]] [[ಜೈನ ದೇವಾಲಯ, ಕಿಡಂಗನಾಡ್|ಜೈನ ದೇವಾಲಯ]].
| image3 = Cheraman juma masjid Old.jpg
| caption3 = ಮೂಲ [[ಚೇರಮನ್ ಜುಮಾ ಮಸೀದಿ]]ಯ ಮಾದರಿ.
| image4 = Palayoor St. Thomas Syro-Malabar Church.jpg
| caption4 = [[ಸೇಂಟ್ ತಾಮಸ್ ಸಿರೋ-ಮಲಬಾರ್ ಚರ್ಚ್, ಪಾಲಯೂರು]].
}}
{{Pie chart
|thumb = right
|caption = '''ಕೇರಳದಲ್ಲಿ ಧರ್ಮ''' (2011)<ref name="census_2016_religion">{{cite web |url=https://www.censusindia.gov.in/2011census/C-01/DDW00C-01%20MDDS.XLS |title=Population by religious community – 2011 |publisher=Office of the Registrar General & Census Commissioner |work=[[2011 Census of India]] |access-date=25 August 2015 |archive-url=https://web.archive.org/web/20150825155850/https://www.censusindia.gov.in/2011census/C-01/DDW00C-01%20MDDS.XLS |archive-date=25 August 2015}}</ref>
|label1 = [[ಕೇರಳದಲ್ಲಿ ಹಿಂದೂ ಧರ್ಮ|ಹಿಂದೂ ಧರ್ಮ]]
|value1 = 54.73
|color1 = darkorange
|label2 = [[ಕೇರಳದಲ್ಲಿ ಇಸ್ಲಾಂ|ಇಸ್ಲಾಂ]]
|value2 = 26.56
|color2 = Green
|label3 = [[ಕೇರಳದಲ್ಲಿ ಕ್ರಿಶ್ಚಿಯನ್ ಧರ್ಮ|ಕ್ರಿಶ್ಚಿಯನ್ ಧರ್ಮ]]
|value3 = 18.38
|color3 = dodgerblue
|label4 = ಇತರೆ ಅಥವಾ ಯಾವುದೂ ಅಲ್ಲ
|value4 = 0.32
|color4 = grey
}}
[[File:Kerala religions 2011.png|thumb|ಕೇರಳದ ಪ್ರತಿಯೊಂದು ತಾಲೂಕಿನಲ್ಲಿ ಅತ್ಯಂತ ಜನಪ್ರಿಯ ಧರ್ಮದ ಶೇಕಡಾವಾರು]]
ಕೇರಳವು [[ಹಿಂದೂಗಳು]], [[ಮುಸ್ಲಿಮರು]] ಮತ್ತು [[ಕ್ರೈಸ್ತರು]] ರಾಜ್ಯಾದ್ಯಂತ ಗಮನಾರ್ಹ ಜನಸಂಖ್ಯೆಯನ್ನು ಹೊಂದಿರುವ ಧಾರ್ಮಿಕವಾಗಿ ಬಹಳ ವೈವಿಧ್ಯಮಯವಾಗಿದೆ. ಕೇರಳವನ್ನು ಸಾಮಾನ್ಯವಾಗಿ ಭಾರತದ ಅತ್ಯಂತ ವೈವಿಧ್ಯಮಯ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref>{{cite web |url=https://thegroundtruthproject.org/paradox-indias-religiously-diverse-state/ |title=The paradox of India's most religiously diverse state |date=7 April 2019 |publisher=The Ground Truth Project |access-date=7 April 2019}}</ref><ref>{{cite web |url=https://www.huffpost.com/entry/kerala-religion-gender_b_9577234 |title=There's a Place in India Where Religions Coexist Beautifully and Gender Equality Is Unmatched |date=6 April 2016 |publisher=Huffpost |access-date=6 April 2016}}</ref> [[ಹಿಂದೂ ಧರ್ಮ]]ವು ಕೇರಳದಲ್ಲಿ ಅತಿ ವ್ಯಾಪಕವಾಗಿ ಅನುಸರಿಸಲ್ಪಡುವ ನಂಬಿಕೆಯಾಗಿದ್ದು, [[ಇಸ್ಲಾಂ]] ಮತ್ತು [[ಕ್ರಿಶ್ಚಿಯನ್ ಧರ್ಮ]]ಕ್ಕೆ ಗಮನಾರ್ಹ ಸಂಖ್ಯೆಯ ಅನುಯಾಯಿಗಳಿದ್ದಾರೆ. ಭಾರತದ ಉಳಿದ ಭಾಗಗಳಿಗೆ ಹೋಲಿಸಿದರೆ, ಕೇರಳವು ತುಲನಾತ್ಮಕವಾಗಿ ಕಡಿಮೆ [[ಸಂಪ್ರದಾಯವಾದ]]ವನ್ನು ಅನುಭವಿಸುತ್ತದೆ.<ref>{{Cite journal |last=Heller |first=Patrick |title=Social capital as a product of class mobilization and state intervention: Industrial workers in Kerala, India |journal=[[World Development (journal)|World Development]] |volume=24 |issue=6 |pages=1055–1071 |date=June 1996 |doi=10.1016/0305-750X(96)00015-0 <!-- |access-date=4 April 2022 --> |doi-access=free}}</ref> [[2011 ರ ಭಾರತದ ಜನಗಣತಿ]] ಅಂಕಿಅಂಶಗಳ ಪ್ರಕಾರ, ಕೇರಳದ ನಿವಾಸಿಗಳಲ್ಲಿ 54.7% ಹಿಂದೂಗಳು, 26.6% ಮುಸ್ಲಿಮರು, 18.4% ಕ್ರೈಸ್ತರು, ಮತ್ತು ಉಳಿದ 0.3% ರಷ್ಟು ಜನರು ಇನ್ನೊಂದು ಧರ್ಮವನ್ನು ಅನುಸರಿಸುತ್ತಾರೆ ಅಥವಾ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿಲ್ಲ.<ref name="censusindia2011religion">{{cite web |title=Population by religious communities |work=Census of India |url=https://www.censusindia.gov.in/2011census/C-01.html |publisher=Government of India |access-date=26 August 2015}}</ref> [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂಗಳು ಅತಿದೊಡ್ಡ ಧಾರ್ಮಿಕ ಗುಂಪನ್ನು ಪ್ರತಿನಿಧಿಸುತ್ತಾರೆ, ಅಲ್ಲಿ ಅವರು ಮುಸ್ಲಿಮರಿಂದ ಹಿಂದಿಕ್ಕಲ್ಪಟ್ಟಿದ್ದಾರೆ.<ref name="thehindu1">{{cite news |url=https://www.hindu.com/2004/09/23/stories/2004092306010500.htm |archive-url=https://web.archive.org/web/20041128124211/https://www.hindu.com/2004/09/23/stories/2004092306010500.htm |url-status=dead |archive-date=28 November 2004 |location=Chennai, India |title=Increase in Muslim population in the State |date=23 September 2004 |work=[[The Hindu]] |access-date=13 November 2015}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>{{cite news |url=https://timesofindia.indiatimes.com/india/Kerala-not-Goa-has-maximum-no-of-Christians/articleshow/2649158.cms |title=Kerala, not Goa, has maximum no. of Christians |work=The Times of India |date=25 December 2007 |publisher=The Times Group}}</ref> 2016 ರಂತೆ, ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಇತರರು ರಾಜ್ಯದಲ್ಲಿ ಒಟ್ಟು ಜನನಗಳ ಕ್ರಮವಾಗಿ 41.9%, 42.6%, 15.4% ಮತ್ತು 0.2% ರಷ್ಟಿದ್ದಾರೆ.<ref>{{Cite web |url=https://www.ecostat.kerala.gov.in/images/pdf/publications/Vital_Statistics/data/vital_statistics_2016.pdf |title=Vital Statistics 2016 |website=Ecostat, Kerala Government. |access-date=7 June 2019 |archive-date=11 July 2019 |archive-url=https://web.archive.org/web/20190711011809/http://www.ecostat.kerala.gov.in/images/pdf/publications/Vital_Statistics/data/vital_statistics_2016.pdf |url-status=dead}}</ref>
ಇಸ್ಲಾಂ ಕೇರಳಕ್ಕೆ ಬಂದಿತು, ಇದು ದೊಡ್ಡ [[ಹಿಂದೂ ಮಹಾಸಾಗರ]]ದ ಅಂಚಿನ ಭಾಗವಾಗಿದ್ದು, [[ಮಧ್ಯಪ್ರಾಚ್ಯ]]ದಿಂದ ಮಸಾಲೆ ಮತ್ತು ರೇಷ್ಮೆ ವ್ಯಾಪಾರಿಗಳ ಮೂಲಕ ಬಂದಿತು. ಇತಿಹಾಸಕಾರರು ಇಸ್ಲಾಂನ್ನು ಕೇರಳಕ್ಕೆ 7 ನೇ ಶತಮಾನ CE ಯಷ್ಟು ಹಿಂದೆಯೇ ಪರಿಚಯಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ.<ref name="indiatimes3">{{cite web |url=https://timesofindia.indiatimes.com/india/Trade-not-invasion-brought-Islam-to-India/articleshow/2144414.cms |title=Trade, not invasion brought Islam to India |last=Sethi |first=Atul |date=24 June 2007 |work=[[The Times of India]] |access-date=24 September 2014}}</ref><ref name="autogenerated20002">Katz 2000; Koder 1973; Thomas Puthiakunnel 1973; David de Beth Hillel, 1832; Lord, James Henry 1977.</ref> ಗಮನಾರ್ಹವಾಗಿ [[ಚೇರಮನ್ ಪೆರುಮಾಳ್ ತಾಜುದ್ದೀನ್]] ರ ದಂತಕಥೆಯು ಕಂಡುಬಂದಿದೆ, ಇದು [[ಅರೇಬಿಯಾ]]ಕ್ಕೆ ತೆರಳಿ [[ಮುಹಮ್ಮದ್]] ರನ್ನು ಭೇಟಿಯಾದ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪೌರಾಣಿಕ ಹಿಂದೂ ರಾಜನ ಕಥೆಯಾಗಿದೆ.<ref>{{cite book |last1=Varghese |first1=Theresa |title=Stark World Kerala |year=2006 |publisher=Stark World Pub. |isbn=978-8190250511 |url=https://books.google.com/books?id=lDhuAAAAMAAJ&q=cheraman+perumal+tajuddin |language=en}}</ref><ref>{{cite book |last1=Kumar |first1=Satish |title=India's National Security: Annual Review 2009 |year=2012 |url=https://books.google.com/books?id=x-esAgAAQBAJ&q=cheraman+perumal+tajuddin&pg=PA346 |publisher=Routledge |language=en |isbn=978-1-136-70491-8}}</ref><ref>Minu Ittyipe; [[Solomon]] to Cheraman; Outlook Indian Magazine; 2012</ref> ಕೇರಳ ಮುಸ್ಲಿಮರನ್ನು ಸಾಮಾನ್ಯವಾಗಿ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಎಂದು ಕರೆಯಲಾಗುತ್ತದೆ. ಮಾಪ್ಪಿಲರು ಕೇರಳದ ಮುಸ್ಲಿಂ ಜನಸಂಖ್ಯೆಯನ್ನು ರೂಪಿಸುವ ಅನೇಕ ಸಮುದಾಯಗಳಲ್ಲಿ ಒಂದಾಗಿದೆ.<ref name="KunhaliV2">Kunhali, V. "Muslim Communities in Kerala to 1798" PhD Dissertation Aligarh Muslim University (1986) [https://ir.amu.ac.in/2736/1/T%205242.pdf]</ref><ref name="Divakaruni20112">{{cite book |url=https://books.google.com/books?id=W0wLgfQyvFAC |title=The Palace of Illusions |author=Chitra Divakaruni |year=2011 |publisher=Pan Macmillan |isbn=978-0-330-47865-6 |access-date=18 November 2012}}</ref> [[ಚೇರಮನ್ ಪೆರುಮಾಳ್ಸ್ ದಂತಕಥೆ]]ಯ ಪ್ರಕಾರ, ಮೊದಲ ಭಾರತೀಯ ಮಸೀದಿಯನ್ನು {{CE|624}} ರಲ್ಲಿ [[ಕೊಡುಂಗಲ್ಲೂರು]] ನಲ್ಲಿ [[ಚೇರ ಸಾಮ್ರಾಜ್ಯ]]ದ ಕೊನೆಯ ಆಡಳಿತಗಾರ (ಚೇರಮನ್ ಪೆರುಮಾಳ್) ರ ಆದೇಶದಂತೆ ನಿರ್ಮಿಸಲಾಯಿತು, ಅವರು [[ಮುಹಮ್ಮದ್]] ({{Circa|570}}–632) ರ ಜೀವಿತಾವಧಿಯಲ್ಲಿ ಇಸ್ಲಾಂಗೆ ಮತಾಂತರಗೊಂಡರು.<ref>{{cite book |author=Jonathan Goldstein |title=The Jews of China |publisher=M. E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=Edward Simpson |author2=Kai Kresse |title=Struggling with History: Islam and Cosmopolitanism in the Western Indian Ocean |url=https://books.google.com/books?id=w0qHKA7zEaEC&pg=PA333 |access-date=24 July 2012 |year=2008 |publisher=Columbia University Press |isbn=978-0-231-70024-5 |pages=333}}</ref><ref name="Kupferschmidt1987">{{cite book |author=Uri M. Kupferschmidt |url=https://books.google.com/books?id=ChEVAAAAIAAJ&pg=PA458 |title=The Supreme Muslim Council: Islam Under the British Mandate for Palestine |publisher=Brill |year=1987 |isbn=978-9004079298 |pages=458–59 |access-date=25 July 2012 |archive-url=https://web.archive.org/web/20231125191234/https://books.google.com/books?id=ChEVAAAAIAAJ&pg=PA458 |archive-date=25 November 2023 |url-status=live}}</ref><ref name="Raṇṭattāṇi2007">{{cite book |author=Husain Raṇṭattāṇi |title=Mappila Muslims: A Study on Society and Anti Colonial Struggles |url=https://books.google.com/books?id=xlb5BrabQd8C&pg=PA179 |access-date=25 July 2012 |year=2007 |publisher=Other Books |isbn=978-8190388788 |pages=179–}}</ref>
ಪ್ರಾಚೀನ ಕ್ರಿಶ್ಚಿಯನ್ ಸಂಪ್ರದಾಯವು ಕ್ರಿಶ್ಚಿಯನ್ ಧರ್ಮವು 52 CE ಯಲ್ಲಿ [[ಯೇಸು ಕ್ರಿಸ್ತ]]ನ [[ಹನ್ನೆರಡು ಪ್ರೇರಿತರು|ಹನ್ನೆರಡು ಪ್ರೇರಿತರಲ್ಲಿ]] ಒಬ್ಬರಾದ [[ತಾಮಸ್ ಪ್ರೇರಿತ]]ನ ಆಗಮನದೊಂದಿಗೆ ಕೇರಳದ ತೀರವನ್ನು ತಲುಪಿತು ಎಂದು ಹೇಳುತ್ತದೆ.<ref>[https://books.google.com/books?id=lZUBZlth2qgC&q=Muziris ''The Encyclopedia of Christianity, Volume 5''] {{webarchive|url=https://web.archive.org/web/20161226115908/https://books.google.com/books?id=lZUBZlth2qgC&printsec=frontcover&dq=isbn%3A9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA|date=26 December 2016}} by Erwin Fahlbusch. Wm. B. Eerdmans Publishing – 2008. p. 285. {{ISBN|978-0802824172}}.</ref><ref>{{cite book |chapter-url=https://books.google.com/books?id=qhKGPprbQaYC&pg=PA27 |title=The Jews of India: A Story of Three Communities |editor-first=Orpa |editor-last=Slapak |publisher=The Israel Museum |location=Jerusalem |year=2003 |page=27 |isbn=9652781797 |chapter=The Cochin Jews Of Kerala |first=Barbara C. |last=Johnson}}</ref><ref name="Encyclopædia Britannica">{{cite web |url=https://www.britannica.com/EBchecked/topic/592851/Saint-Thomas |title=Saint Thomas |website=Encyclopædia Britannica |date=1 January 2019}}</ref><ref name="Menachery">Menachery G; 1973, 1998; Mundalan, A. M; 1984; Podipara, Placid J. 1970; Leslie Brown, 1956</ref> [[ಸೇಂಟ್ ತಾಮಸ್ ಕ್ರೈಸ್ತರು]] [[ಸಿರೋ-ಮಲಬಾರ್ ಚರ್ಚ್|ಸಿರೋ-ಮಲಬಾರ್ ಕ್ಯಾಥೋಲಿಕ್]],<ref name="Ponnumuthan1996">{{cite book |author=Selvister Ponnumuthan |title=Authentic Interpretation in Canon Law: Reflections on a Distinctively Canonical Institution |url=https://books.google.com/books?id=zcedqS4jOusC&pg=PA103 |access-date=18 November 2012 |year=1996 |publisher=Gregorian&Biblical BookShop |isbn=978-8876527210 |pages=103–}}</ref> [[ಸಿರೋ-ಮಲಂಕರ ಕ್ಯಾಥೋಲಿಕ್ ಚರ್ಚ್|ಸಿರೋ-ಮಲಂಕರ ಕ್ಯಾಥೋಲಿಕ್]],<ref name="Williams1996">{{cite book |author=Raymond Brady Williams |title=Christian Pluralism in the United States: The Indian Immigrant Experience |url=https://books.google.com/books?id=w1uk6zZQKzAC&pg=PA144 |access-date=18 November 2012 |year=1996 |publisher=Cambridge University Press |isbn=978-0-521-57016-9 |pages=144–}}</ref> [[ಜಾಕೋಬೈಟ್ ಸಿರಿಯನ್ ಕ್ರಿಶ್ಚಿಯನ್ ಚರ್ಚ್]],<ref name="AndersonTang2005">{{cite book |author1=Allan Anderson |author2=Edmond Tang |title=Asian and Pentecostal: The Charismatic Face of Christianity in Asia |url=https://books.google.com/books?id=LDZgKELq7AoC&pg=PA248 |access-date=18 November 2012 |year=2005 |publisher=OCMS |isbn=978-1-870345-43-9 |pages=248–}}</ref> [[ಮಾರ್ ತೋಮಾ ಸಿರಿಯನ್ ಚರ್ಚ್]],<ref>{{Cite book |title=John Anthony McGuckin (15 December 2010). The Encyclopedia of Eastern Orthodox Christianity. pp. 377–. Retrieved 18 November 2012. |publisher=John Wiley & Sons. |isbn=978-1-4443-9254-8 |year=2010}}</ref> [[ಮಲಂಕರ ಓರ್ಥೊಡಾಕ್ಸ್ ಸಿರಿಯನ್ ಚರ್ಚ್]],<ref name="Russell2010">{{cite book |author=Thomas Arthur Russell |title=Comparative Christianity: A Student's Guide to a Religion and Its Diverse Traditions |url=https://books.google.com/books?id=FmMarHDbglgC&pg=PT40 |access-date=18 November 2012 |year=2010 |publisher=Universal-Publishers |isbn=978-1-59942-877-2 |pages=40–}}</ref> [[CSI|CSI]] ಯ [[ಸೇಂಟ್ ತಾಮಸ್ ಆಂಗ್ಲಿಕನ್ನರು|ಸಿರಿಯನ್ ಆಂಗ್ಲಿಕನ್ನರು]]<ref>{{cite book |author=Stephen Neill |title=A History of Christianity in India: 1707–1858 |url=https://books.google.com/books?id=Xi-tvrYbYxMC&pg=PA240 |access-date=31 August 2012 |year=2002 |publisher=Cambridge University Press |isbn=978-0-521-89332-9 |pages=247–251}}</ref> ಮತ್ತು [[ಪೆಂಟೆಕೋಸ್ಟಲ್ ಸೇಂಟ್ ತಾಮಸ್ ಕ್ರೈಸ್ತರು]]<ref>{{cite book |last1=Bergunder |first1=Michael |title=The South Indian Pentecostal Movement in the Twentieth Century |year=2008 |publisher=Wm. B. Eerdmans Publishing |isbn=978-0-8028-2734-0 |pages=15–16, 26–30, 37–57 |url=https://books.google.com/books?id=XGiv3riaunQC&q=Pentecostal+evangelical+saint+thomas+syrian+christian |language=en}}</ref> ಸೇರಿದ್ದಾರೆ. ಕೇರಳದಲ್ಲಿ [[ಲ್ಯಾಟಿನ್ ಚರ್ಚ್|ಲ್ಯಾಟಿನ್ ಕ್ಯಾಥೋಲಿಕ್]] ಕ್ರೈಸ್ತರ ಮೂಲವು 16 ನೇ ಶತಮಾನದಲ್ಲಿ ಪೋರ್ಚುಗೀಸ್ [[ಪಡ್ರೊಡೊ]]ನ ಮಿಷನರಿ ಪ್ರಯತ್ನಗಳ ಪರಿಣಾಮವಾಗಿದೆ.<ref name="autogenerated1">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA192 |access-date=18 November 2012 |year=2007 |publisher=DC Books |isbn=978-8126415786 |pages=192–}}</ref><ref name="RakRaj2008">{{cite book |author1=Knut A. Jacobsen, Selva J. Rak |author2=Selva J. Raj |title=South Asian Christian Diaspora: Invisible Diaspora in Europe and North America |url=https://books.google.com/books?id=6L5MxlMIcG0C&pg=PA172 |access-date=18 November 2012 |year=2008 |publisher=Ashgate Publishing, Ltd. |isbn=978-0-7546-6261-7 |pages=172–}}</ref><ref name="Subramanian2009">{{cite book |author=Ajantha Subramanian |title=Shorelines: Space and Rights in South India |url=https://books.google.com/books?id=lsd55y4KbeYC&pg=PA95 |access-date=18 November 2012 |year=2009 |publisher=Stanford University Press |isbn=978-0-8047-8685-0 |pages=95–}}</ref> ವಸಾಹತುಶಾಹಿ ವಲಸಿಗರೊಂದಿಗೆ ಶತಮಾನಗಳ ಮಿಶ್ರಣದ ಪರಿಣಾಮವಾಗಿ, ಪೋರ್ಚುಗೀಸ್, ಡಚ್, ಫ್ರೆಂಚ್, ಬ್ರಿಟಿಷ್ ಮತ್ತು ಇತರ ಯುರೋಪಿಯನ್ನರಿಂದ ಪ್ರಾರಂಭಿಸಿ, ಕೇರಳದಲ್ಲಿ ಮಿಶ್ರ ಯುರೋಪಿಯನ್ ಮತ್ತು ಭಾರತೀಯ ಪೋಷಕತ್ವ ಅಥವಾ ಪೂರ್ವಜರ ಆಂಗ್ಲೋ-ಇಂಡಿಯನ್ ಸಮುದಾಯವಿದೆ. ಕೇರಳವು ಭಾರತದ ಎಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>Singh, Anjana. "Fort Cochin in Kerala 1750–1830 The Social Condition of a Dutch Community in an Indian Milieu." Brill, Leiden Boston: 2010, 3: 92.</ref>
[[ಯಹೂದಿ ಧರ್ಮ]]ವು 10 ನೇ ಶತಮಾನ BCE ಯಲ್ಲಿ [[ಸೊಲೊಮನ್|ರಾಜ ಸೊಲೊಮನ್]] ಕಾಲದಲ್ಲಿ ಕೇರಳವನ್ನು ತಲುಪಿತು.<ref>Weil, Shalva. "Jews in India." in M.Avrum Erlich (ed.) ''Encyclopedia of the Jewish Diaspora'', Santa Barbara, CA: ABC CLIO. 2008, 3: 1204–12.</ref> ಅವರನ್ನು [[ಕೊಚ್ಚಿ ಯಹೂದಿಗಳು]] ಅಥವಾ ಮಲಬಾರ್ ಯಹೂದಿಗಳು ಎಂದು ಕರೆಯಲಾಗುತ್ತದೆ ಮತ್ತು ಅವರು [[ಭಾರತದಲ್ಲಿ ಯಹೂದಿಗಳ ಇತಿಹಾಸ|ಭಾರತದಲ್ಲಿ ಅತ್ಯಂತ ಹಳೆಯ ಯಹೂದಿಗಳ ಗುಂಪು]] ಆಗಿದ್ದಾರೆ.<ref>[https://books.google.com/books?id=qhKGPprbQaYC&q=two+millennia ''The Israelis (Jews) of India: A Story of Three Communities''] {{webarchive|url=https://web.archive.org/web/20161226115854/https://books.google.com/books?id=qhKGPprbQaYC&printsec=frontcover&dq=isbn%3A9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA|date=26 December 2016}} by Orpa Slapak. The Israel Museum, Jerusalem. 2003. p. 27. {{ISBN|978-9652781796}}.</ref><ref>Weil, Shalva. India's Jewish Heritage: Ritual, Art and Life-Cycle, Mumbai: Marg Publications, 2009. [first published in 2002; 3rd edn.]. Katz 200/*Religion */ 0; Koder 1973; Menachery 1998</ref> 20 ನೇ ಶತಮಾನದವರೆಗೆ ಕೇರಳದಲ್ಲಿ ಗಮನಾರ್ಹವಾದ ಯಹೂದಿ ಸಮುದಾಯವು ಅಸ್ತಿತ್ವದಲ್ಲಿತ್ತು, ಅವರಲ್ಲಿ ಹೆಚ್ಚಿನವರು [[ಅಲಿಯಾ|ಇಸ್ರೇಲ್ಗೆ ವಲಸೆ]] ಹೋದರು.<ref name="Roland1998">{{cite book |author=Joan G. Roland |title=The Jewish Communities of India: Identity in a Colonial Era |url=https://books.google.com/books?id=kHJccZ92IecC&pg=PA283 |access-date=18 November 2012 |year=1998 |publisher=Transaction Publishers |isbn=978-0-7658-0439-6 |pages=283–}}</ref> [[ಕೊಚ್ಚಿ ಸಿನಾಗೋಗ್|ಪರದೇಶಿ ಸಿನಾಗೋಗ್]] [[ಕೊಚ್ಚಿ|ಕೊಚ್ಚಿಯಲ್ಲಿ]] [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಿನಾಗೋಗ್ ಆಗಿದೆ.<ref>{{cite web |title=Paradesi Synagogue – tourist attractions at Mattancherry, Ernakulam Kerala Tourism |url=https://www.keralatourism.org/kochi/paradeso-synagogue-mattancherry.php |website=www.keralatourism.org}}</ref> [[ಕೇರಳದಲ್ಲಿ ಜೈನ ಧರ್ಮ|ಜೈನ ಧರ್ಮ]]ವು [[ವಯನಾಡು ಜಿಲ್ಲೆ]]ಯಲ್ಲಿ ಗಣನೀಯ ಅನುಯಾಯಿಗಳನ್ನು ಹೊಂದಿದೆ.<ref name="LockieCarpenter2012">{{cite book |author1=Stewart Lockie |author2=David Carpenter |title=Agriculture, Biodiversity and Markets: Livelihoods and Agroecology in Comparative Perspective |url=https://books.google.com/books?id=cZvlmpwviuMC&pg=PT258 |access-date=18 November 2012 |year=2012 |publisher=Routledge |isbn=978-1-136-54649-5 |page=258}}</ref><ref name="MathewBaviskar2009">{{cite book |author1=George Mathew |author2=B S Baviskar |title=Inclusion and Exclusion in Local Governance: Field Studies from Rural India |url=https://books.google.com/books?id=DsDOrvROzPEC&pg=PA204 |access-date=18 November 2012 |year=2009 |publisher=Sage Publications |isbn=978-8178298603 |page=204}}</ref>
== ಶಿಕ್ಷಣ ==
{{Main|ಕೇರಳದಲ್ಲಿ ಶಿಕ್ಷಣ}}
{{multiple image
<!-- Layout parameters -->| align = <!-- right (default), left, centre, none -->
| direction = vertical
| width = 225
<!--image1-->| image1 = University of Kerala.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಶ್ವವಿದ್ಯಾಲಯ]]
<!--image 2-->}}
[[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]] 14 ಮತ್ತು 16 ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದಿತು. ಖಗೋಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಕೇರಳ ಶಾಲೆಯು ಸ್ವತಂತ್ರವಾಗಿ ಹಲವಾರು ಪ್ರಮುಖ ಗಣಿತ ಪರಿಕಲ್ಪನೆಗಳನ್ನು ರಚಿಸಿತು, ಇವುಗಳಲ್ಲಿ ತ್ರಿಕೋನಮಿತಿಯ ಕಾರ್ಯಗಳಿಗಾಗಿ [[ಸರಣಿ ವಿಸ್ತರಣೆ]] ಸೇರಿದೆ.<ref name="roy">{{cite journal |last=Roy |first=Ranjan |year=1990 |title=Discovery of the Series Formula for π by Leibniz, Gregory, and Nilakantha |journal=Mathematics Magazine |volume=63 |issue=5 |pages=291–306 |doi=10.2307/2690896 |jstor=2690896}}</ref><ref>{{Citation |last=Pingree |first=David |author-link=David Pingree |title=Hellenophilia versus the History of Science |year=1992 |journal=Isis |volume=83 |issue=4 |pages=554–63 |jstor=234257 |doi=10.1086/356288 |quote=One example I can give you relates to the Indian Mādhava's demonstration, in about 1400 A.D., of the infinite power series of trigonometrical functions using geometrical and algebraic arguments. When this was first described in English by Charles Whish, in the 1830s, it was heralded as the Indians' discovery of the calculus. This claim and Mādhava's achievements were ignored by Western historians, presumably at first because they could not admit that an Indian discovered the calculus, but later because no one read anymore the ''Transactions of the Royal Asiatic Society'', in which Whish's article was published. The matter resurfaced in the 1950s, and now we have the Sanskrit texts properly edited, and we understand the clever way that Mādhava derived the series ''without'' the calculus, but many historians still find it impossible to conceive of the problem and its solution in terms of anything other than the calculus and proclaim that the calculus is what Mādhava found. In this case, the elegance and brilliance of Mādhava's mathematics are being distorted as they are buried under the current mathematical solution to a problem to which he discovered an alternate and powerful solution. |bibcode=1992Isis...83..554P |s2cid=68570164}}</ref> 19 ನೇ ಶತಮಾನದ ಆರಂಭಿಕ ದಶಕಗಳಲ್ಲಿ, ಕೇರಳದ ಆಧುನಿಕ ಶೈಕ್ಷಣಿಕ ಪರಿವರ್ತನೆಯು ಸಾಮೂಹಿಕ ಶಿಕ್ಷಣವನ್ನು ಉತ್ತೇಜಿಸಲು [[ಚರ್ಚ್ ಮಿಷನ್ ಸೊಸೈಟಿ]] ಮಿಷನರಿಗಳ ಪ್ರಯತ್ನಗಳಿಂದ ಪ್ರೇರೇಪಿಸಲ್ಪಟ್ಟಿತು.<ref>{{cite news |title=Missionaries led State to renaissance: Pinarayi |newspaper=The Hindu |date=13 November 2016 |url=https://www.thehindu.com/news/national/kerala/Missionaries-led-State-to-renaissance-Pinarayi/article16444369.ece |quote=Inaugurating on Saturday the valedictory of the bicentenary celebration of the arrival of Church Mission Society (CMS) missionaries to the shores of Kerala, Mr. Vijayan said it was their pioneering work in the fields of education, literature, printing, publishing, women's education, education of the differently-abled and, in general, a new social approach through the inclusion of marginalised sections into the mainstream which brought the idea of 'equality' into the realm of public consciousness. This had raised the standard of public consciousness and paved the way for the emergence of the renaissance movements in the State.}}</ref><ref>{{cite web |title=Kerala to celebrate CMS mission |url=https://churchmissionsociety.org/our-stories/kerala-celebrate-cms-mission |date=9 November 2016 |website=Church Mission Society |access-date=4 April 2022 |quote=Indian President Pranab Mukherjee, visited CMS College in Kerala, the oldest college in India, and laid the foundation stone of the bicentenary block. He said, 'CMS college is a pioneer of modern education in Kerala. It has been the source of strong currents of knowledge and critical inquiry that have moulded the scholastic and socio-cultural landscape of Kerala and propelled the State to the forefront of social development.'{{hsp}} }}</ref><ref>{{Cite journal |last1=Mathew |first1=E. T. |url=https://www.epw.in/journal/1999/39/special-articles/growth-literacy-kerala.html |title=Growth of Literacy in Kerala |date=5 June 2015 |journal=Economic and Political Weekly |volume=34 |issue=1999 |pages=7–8 |via=www.epw.in}}</ref><ref>{{cite book |title=District Handbooks of Kerala |url=https://www.kerala.gov.in/district_handbook/Kottayam.pdf |date=March 2003 |archive-url=https://web.archive.org/web/20090319183020/https://www.kerala.gov.in/district_handbook/Kottayam.pdf |archive-date=19 March 2009 |url-status=dead |pages=19–20 |publisher=Department of Information & Public Relations Government of Kerala |access-date=4 April 2022}}</ref><ref>{{cite book |last=Menon |first=Sreedhara |title=A survey of Kerala History |year=1996 |publisher=S.Viswanathan Printers and Publishers |location=Madras |pages=339, 348–49 |isbn=978-8126415786 |url=https://onlinestore.dcbooks.com/books/a-survey-of-kerala-history |access-date=20 March 2019 |archive-date=24 August 2019 |archive-url=https://web.archive.org/web/20190824143707/https://onlinestore.dcbooks.com/books/a-survey-of-kerala-history |url-status=dead}}</ref> 1854 ರ [[ವುಡ್ಸ್ ಡೆಸ್ಪ್ಯಾಚ್]] ನ ಶಿಫಾರಸುಗಳನ್ನು ಅನುಸರಿಸಿ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು ಮುಖ್ಯವಾಗಿ ಜಾತಿಗಳು ಮತ್ತು ಸಮುದಾಯಗಳ ಆಧಾರದ ಮೇಲೆ ಸಾಮೂಹಿಕ ಶಿಕ್ಷಣ ಅಭಿಯಾನಗಳನ್ನು ಪ್ರಾರಂಭಿಸಿದವು ಮತ್ತು ಹೆಚ್ಚು ಖಾಸಗಿ ಉಪಕ್ರಮಗಳನ್ನು ಆಕರ್ಷಿಸಲು [[ಅನುದಾನ-ಸಹಾಯ]] ವ್ಯವಸ್ಥೆಯನ್ನು ಪರಿಚಯಿಸಿದವು.<ref name="Devrep53-58" /> [[ಸೇಂಟ್ ತಾಮಸ್ ಕಾಲೇಜು, ತೃಶೂರ್|ಸೇಂಟ್ ತಾಮಸ್ ಕಾಲೇಜು ತೃಶೂರ್]] ಮತ್ತು [[ಸೇಂಟ್ ಬರ್ಚ್ಮನ್ಸ್ ಕಾಲೇಜು|ಎಸ್ಬಿ ಕಾಲೇಜು ಚಂಗನಾಶ್ಶೇರಿ]] ನಂತಹ ಕ್ಯಾಥೋಲಿಕ್ ಸಂಸ್ಥೆಗಳನ್ನು ಕ್ಯಾಥೋಲಿಕ್ ಚರ್ಚ್ನ ನೇತೃತ್ವದಲ್ಲಿ ಸ್ಥಾಪಿಸಲಾಯಿತು. [[ಕುರಿಯಾಕೋಸ್ ಎಲಿಯಾಸ್ ಚಾವರ|ಫಾ. ಕುರಿಯಾಕೋಸ್ ಎಲಿಯಾಸ್ ಚಾವರ]], [[ಚಾರ್ಲ್ಸ್ ಲಾವಿಗ್ನೆ|ಮಾರ್ ಚಾರ್ಲ್ಸ್ ಲಾವಿಗ್ನೆ SJ]], [[ಆಯ್ಯಾ ವೈಕುಂಡರ್|ವೈಕುಂಡ ಸ್ವಾಮಿ]], [[ನಾರಾಯಣ ಗುರು]] ಮತ್ತು [[ಅಯ್ಯಂಕಾಳಿ]] ರಂತಹ ನಾಯಕರ ಪ್ರಯತ್ನಗಳು ರಾಜ್ಯದಲ್ಲಿ ಸಾಮಾಜಿಕವಾಗಿ ತಾರತಮ್ಯಕ್ಕೊಳಗಾದ ಜಾತಿಗಳಿಗೆ ಸಹಾಯ ಮಾಡುವಲ್ಲಿ—[[ನಾಯರ್ ಸೇವಾ ಸೊಸೈಟಿ]], [[ಶ್ರೀ ನಾರಾಯಣ ಟ್ರಸ್ಟ್|ಎಸ್ಎನ್ಡಿಪಿ]], [[ಮುಸ್ಲಿಂ ಶೈಕ್ಷಣಿಕ ಸೊಸೈಟಿ]], ಮುಸ್ಲಿಂ ಮಹಾಜನ ಸಭಾ, ಯೋಗ ಕ್ಷೇಮ ಸಭಾ (ನಂಬೂದಿರಿಗಳ) ಮತ್ತು ಕ್ರಿಶ್ಚಿಯನ್ ಚರ್ಚುಗಳ ಸಭೆಗಳಂತಹ ಸಮುದಾಯ-ಆಧಾರಿತ ಸಂಸ್ಥೆಗಳ ಸಹಾಯದಿಂದ—ಕೇರಳದಲ್ಲಿ ಸಾಮೂಹಿಕ ಶಿಕ್ಷಣದ ಮತ್ತಷ್ಟು ಅಭಿವೃದ್ಧಿಗೆ ಕಾರಣವಾಯಿತು.<ref name="Devrep53-58">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=53–58 |access-date=30 May 2015}}</ref>
1991 ರಲ್ಲಿ, ಕೇರಳವು ಸಂಪೂರ್ಣವಾಗಿ ಸಾಕ್ಷರವೆಂದು ಗುರುತಿಸಲ್ಪಟ್ಟ ಭಾರತದ ಮೊದಲ ರಾಜ್ಯವಾಯಿತು, ಆ ಸಮಯದಲ್ಲಿ ಪರಿಣಾಮಕಾರಿ ಸಾಕ್ಷರತಾ ಪ್ರಮಾಣವು ಕೇವಲ 90% ಆಗಿತ್ತು.<ref name="Soundarapandian2000">{{cite book |author=Mookkiah Soundarapandian |title=Literacy Campaign in India |url=https://books.google.com/books?id=KVhHEC449yoC&pg=PA21 |year=2000 |publisher=Discovery Publishing House |isbn=978-8171415533 |page=21}}</ref> 2006–2007 ರಲ್ಲಿ, ರಾಜ್ಯವು ಭಾರತದ 21 ಪ್ರಮುಖ ರಾಜ್ಯಗಳಲ್ಲಿ ಶಿಕ್ಷಣ ಅಭಿವೃದ್ಧಿ ಸೂಚ್ಯಂಕದಲ್ಲಿ (EDI) ಅಗ್ರಸ್ಥಾನದಲ್ಲಿತ್ತು.<ref>{{Cite news |author=D Suresh Kumar |url=https://timesofindia.indiatimes.com/india/Kerala-tops-primary-education-index/articleshow/3587924.cms |title=Kerala tops primary education index |work=The Times of India |date=13 October 2008 |access-date=30 July 2009}}</ref> {{As of|2007}}, ಪ್ರಾಥಮಿಕ ಶಿಕ್ಷಣದಲ್ಲಿ ದಾಖಲಾತಿಯು ಸುಮಾರು 100% ಆಗಿತ್ತು; ಮತ್ತು, ಭಾರತದ ಇತರ ರಾಜ್ಯಗಳಿಗಿಂತ ಭಿನ್ನವಾಗಿ, ಶೈಕ್ಷಣಿಕ ಅವಕಾಶವು ಲಿಂಗಗಳು, ಸಾಮಾಜಿಕ ಗುಂಪುಗಳು ಮತ್ತು ಪ್ರದೇಶಗಳ ನಡುವೆ ಸುಮಾರು ಸಮಾನವಾಗಿ ಹಂಚಿಕೆಯಾಗಿತ್ತು.<ref name="Devrep255-258">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=255–58 |access-date=30 May 2015}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 93.9% ಸಾಕ್ಷರತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸಾಕ್ಷರತಾ ಪ್ರಮಾಣ 74.0% ಕ್ಕೆ ಹೋಲಿಸಿದರೆ.<ref name="IBNLiteracy2013">{{cite news |title=Tripura tops literacy rate with 94.65 per cent, leaves behind Kerala |url=https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |archive-url=https://web.archive.org/web/20130913005546/https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |url-status=dead |archive-date=13 September 2013 |access-date=12 February 2015 |work=IBNLive |date=9 September 2013}}</ref> ಜನವರಿ 2016 ರಲ್ಲಿ, ಕೇರಳವು ತನ್ನ ''ಅಥುಲ್ಯಂ'' ಸಾಕ್ಷರತಾ ಕಾರ್ಯಕ್ರಮದ ಮೂಲಕ 100% ಪ್ರಾಥಮಿಕ ಶಿಕ್ಷಣವನ್ನು ಸಾಧಿಸಿದ ಭಾರತದ ಮೊದಲ ರಾಜ್ಯವಾಯಿತು.<ref>{{cite news |url=https://www.ibtimes.co.in/kerala-becomes-1st-indian-state-achieve-100-primary-education-662878 |title=Kerala becomes 1st Indian state to achieve 100% primary education |date=12 January 2016 |access-date=14 January 2016 |work=International Business Times}}</ref>
ರಾಜ್ಯದ ಶಾಲೆಗಳಲ್ಲಿ ಪ್ರಚಲಿತದಲ್ಲಿರುವ ಶಿಕ್ಷಣ ವ್ಯವಸ್ಥೆಯು 10-ವರ್ಷದ ಅಧ್ಯಯನದ ಆರಂಭಿಕ ಕೋರ್ಸ್ ಅನ್ನು ನಿರ್ದಿಷ್ಟಪಡಿಸುತ್ತದೆ, ಇದನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ: ಕೆಳಗಿನ ಪ್ರಾಥಮಿಕ, ಮೇಲಿನ ಪ್ರಾಥಮಿಕ, ಮತ್ತು ಮಾಧ್ಯಮಿಕ ಶಾಲೆ—''4+3+3'' ಎಂದು ಕರೆಯಲ್ಪಡುತ್ತದೆ, ಇದು ಪ್ರತಿ ಹಂತದ ವರ್ಷಗಳ ಸಂಖ್ಯೆಯನ್ನು ಸೂಚಿಸುತ್ತದೆ.<ref name="Devrep255-258" /> ಮೊದಲ 10 ವರ್ಷಗಳ ಶಾಲಾ ಶಿಕ್ಷಣದ ನಂತರ, ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ಪ್ರಮುಖ ವಿಷಯಗಳಲ್ಲಿ ಒಂದರಲ್ಲಿ—[[ಉದಾರ ಕಲೆಗಳು]], ವಾಣಿಜ್ಯ, ಅಥವಾ ವಿಜ್ಞಾನ—[[ಜೂನಿಯರ್ ಕಾಲೇಜು|ಹೈಯರ್ ಸೆಕೆಂಡರಿ ಶಾಲಾ]] ಶಿಕ್ಷಣಕ್ಕೆ ದಾಖಲಾಗುತ್ತಾರೆ.<ref name="Edu_Ker" /> ಹೆಚ್ಚಿನ ಸರ್ಕಾರಿ ಶಾಲೆಗಳು [[ಕೇರಳ ಬೋರ್ಡ್ ಆಫ್ ಪಬ್ಲಿಕ್ ಎಕ್ಸಾಮಿನೇಷನ್]] ನೊಂದಿಗೆ ಸಂಯೋಜಿತವಾಗಿವೆ.<ref>{{Cite web |url=https://sametham.kite.kerala.gov.in/ |title=Kerala School Data Bank |access-date=5 December 2020 |website=sametham.kite.kerala.gov.in |publisher=Government of Kerala}}</ref> ಇತರ ಶೈಕ್ಷಣಿಕ ಮಂಡಳಿಗಳೆಂದರೆ [[ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ]] (ICSE), [[ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ]] (CBSE), ಮತ್ತು [[ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ]] (NIOS).<ref name="Edu_Ker">{{cite web |title=Education in Kerala |url=https://india.gov.in/knowindia/state_uts.php?id=54 |archive-url=https://web.archive.org/web/20111218082340/https://india.gov.in/knowindia/state_uts.php?id=54 |archive-date=18 December 2011 |publisher=Government of India |access-date=30 May 2015}}</ref>
== ಸಂಸ್ಕೃತಿ ==
{{Main|ಕೇರಳದ ಸಂಸ್ಕೃತಿ}}
{{Multiple image
| direction = vertical
| width = 220
| image1 = Kathakali BNC.jpg
| alt1 = Kathakali Performance
| caption1 = ಒಬ್ಬ [[ಕಥಕ್ಕಳಿ]] ಕಲಾವಿದ
| image4 = 5 image collage of floral arrangement during the Hindu festival of Onam Kerala.jpg
| alt4 = Pookkalam
| caption4 = [[ಓಣಂ]] ಸಮಯದಲ್ಲಿ, ಕೇರಳದ ಅತಿದೊಡ್ಡ ಆಚರಣೆ, ಕೇರಳೀಯರು ತಮ್ಮ ಮನೆಗಳ ಮುಂದೆ ''ಪೂಕ್ಕಲಂ'' (ಹೂವಿನ ಕಾರ್ಪೆಟ್) ವಿನ್ಯಾಸಗಳನ್ನು ರಚಿಸುತ್ತಾರೆ.
| image5 = ThrissurPooram-Kuda.jpg
| alt5 = Thrissur Pooram festival
| caption5 = [[ತೃಶೂರ್ ಪೂರಂ]] ಹಬ್ಬ
| image6 = Mohiniyattam at Kerala School Kalolsavam 2019 02.jpg
| alt6 = Mohiniattam
| caption6 = ಒಂದು ''[[ಮೋಹಿನಿಯಾಟ್ಟಂ]]'' ಪ್ರದರ್ಶನ
| image8 = sadhya DSW.jpg
| caption8 = ಓಣಂ [[ಸಾಧ್ಯ]]
| total_width =
}}
ಕೇರಳದ ಸಂಸ್ಕೃತಿಯು ಮಿಶ್ರ ಮತ್ತು ವಿಶ್ವವ್ಯಾಪಿ ಸ್ವರೂಪದ್ದಾಗಿದೆ ಮತ್ತು ಇದು [[ಭಾರತೀಯ ಸಂಸ್ಕೃತಿ]]ಯ ಅವಿಭಾಜ್ಯ ಅಂಗವಾಗಿದೆ.<ref name="Menon3">{{cite book |title=Cultural Heritage of Kerala |author=A. Sreedhara Menon |publisher=D C Books |year=2008 |isbn=978-8126419036 |pages=13–15 |url=https://books.google.com/books?id=S9RMxjdjUVAC |access-date=30 May 2015}}</ref> ಇದು [[ಇಂಡೋ-ಆರ್ಯನ್ ಜನರು|ಆರ್ಯ]], [[ದಕ್ಷಿಣ ಭಾರತೀಯ ಸಂಸ್ಕೃತಿ|ದ್ರಾವಿಡ]], [[ಅರಬ್ ಸಂಸ್ಕೃತಿ|ಅರಬ್]], ಮತ್ತು [[ಯುರೋಪಿನ ಸಂಸ್ಕೃತಿ|ಯುರೋಪಿಯನ್]] ಸಂಸ್ಕೃತಿಗಳ ಸಮ್ಮಿಳನವಾಗಿದೆ,<ref>{{Cite book |url=https://books.google.com/books?id=FVsw35oEBv4C |title=A Survey Of Kerala History |last=Menon |first=A. Sreedhara |year=2007 |publisher=DC Books |isbn=978-8126415786 |page=55 |language=en}}</ref> ಇದು ಸಹಸ್ರಮಾನಗಳಲ್ಲಿ, ಭಾರತದ ಇತರ ಭಾಗಗಳು ಮತ್ತು ವಿದೇಶಗಳಿಂದ ಪ್ರಭಾವಗಳ ಅಡಿಯಲ್ಲಿ ಅಭಿವೃದ್ಧಿಗೊಂಡಿದೆ.<ref name="Menon1978a">{{cite book |author=A. Sreedhara Menon |title=Cultural Heritage of Kerala: An Introduction |url=https://books.google.com/books?id=px5BAAAAMAAJ |year=1978 |publisher=East-West Publications |page=10}}</ref> ಇದು ಅದರ ಪ್ರಾಚೀನತೆ ಮತ್ತು [[ಮಲಯಾಳಿ ಜನರು]] ನಿರ್ವಹಿಸುವ ಸಾವಯವ ನಿರಂತರತೆಯಿಂದ ವ್ಯಾಖ್ಯಾನಿಸಲ್ಪಟ್ಟಿದೆ.<ref>{{cite book |title=Contribution of Travancore to Karnatic Music |url=https://books.google.com/books?id=VVftZwEACAAJ |year=2004 |publisher=Information & Public Relations Department, Government of Kerala |pages=7–37}}</ref> ಇದು ನೆರೆಯ ಮತ್ತು ವಿದೇಶಿ ಸಂಸ್ಕೃತಿಗಳೊಂದಿಗೆ ಶತಮಾನಗಳ ಸಂಪರ್ಕದ ಮೂಲಕ ವಿಸ್ತರಿಸಲ್ಪಟ್ಟಿದೆ.<ref name="Bhagyalekshmy_2004d_29">{{cite book |author=S. Bhagyalekshmy |title=Contribution of Travancore to Karnatic Music |url=https://books.google.com/books?id=VVftZwEACAAJ |access-date=6 January 2013 |year=2004 |publisher=Information & Public Relations Department, Government of Kerala}}</ref> ಆದಾಗ್ಯೂ, ಕೇರಳದ ದೇಶದ ಉಳಿದ ಭಾಗಗಳಿಂದ ಭೌಗೋಳಿಕ ಪ್ರತ್ಯೇಕತೆಯು ವಿಶಿಷ್ಟವಾದ ಜೀವನಶೈಲಿ, ಕಲೆ, ವಾಸ್ತುಶಿಲ್ಪ, ಭಾಷೆ, ಸಾಹಿತ್ಯ ಮತ್ತು ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿಗೆ ಕಾರಣವಾಗಿದೆ.<ref name="Menon3" /> ರಾಜ್ಯದಲ್ಲಿ ಪ್ರತಿ ವರ್ಷ 10,000 ಕ್ಕೂ ಹೆಚ್ಚು ಹಬ್ಬಗಳನ್ನು ಆಚರಿಸಲಾಗುತ್ತದೆ.<ref name="1000hrs">{{cite news |date=4 March 2010 |title=India's overworked elephants |url=https://news.bbc.co.uk/2/hi/south_asia/8533776.stm |access-date=30 May 2015 |work=BBC}}</ref> ಕೇರಳದಲ್ಲಿ 825 CE ಯಿಂದ ಪ್ರಾರಂಭವಾದ ಸೌರ ನಾಕ್ಷತ್ರಿಕ ಕ್ಯಾಲೆಂಡರ್ ಆಗಿರುವ [[ಮಲಯಾಳಂ ಕ್ಯಾಲೆಂಡರ್]],<ref name="Devika2005">{{cite book |author=J. Devika |title=Her-self: Early Writings on Gender by Malayalee Women, 1898–1938 |url=https://books.google.com/books?id=Xyr6gXmva-gC&pg=PA5 |access-date=17 November 2012 |year=2005 |publisher=Popular Prakashan |isbn=978-8185604749 |page=5}}</ref> ಕೃಷಿ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಯೋಜಿಸುವಲ್ಲಿ ಸಾಮಾನ್ಯ ಬಳಕೆಯನ್ನು ಕಂಡುಕೊಳ್ಳುತ್ತದೆ.<ref name="Singh2004">{{cite book |author=Kumar Suresh Singh |title=People of India: Maharashtra |url=https://books.google.com/books?id=4bfmnmsBfQ4C&pg=PA1524 |access-date=17 November 2012 |year=2004 |publisher=Popular Prakashan |isbn=978-8179911020 |page=1524}}</ref> ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ [[ಮಲಯಾಳಂ]] ಕೇರಳದ [[ಅಧಿಕೃತ ಭಾಷೆ]]ಯಾಗಿದೆ.<ref name="Benedikter2009">{{cite book |author=Thomas Benedikter |title=Language Policy and Linguistic Minorities in India: An Appraisal of the Linguistic Rights of Minorities in India |url=https://books.google.com/books?id=vpZv2GHM7VQC&pg=PA90 |access-date=18 November 2012 |year=2009 |publisher=LIT Verlag Münster |isbn=978-3-643-10231-7 |page=90}}</ref> ಭಾರತದಲ್ಲಿ [[ಅಧಿಕೃತ ಸ್ಥಾನಮಾನ ಹೊಂದಿರುವ ಭಾಷೆಗಳು|ನಿಗದಿತ ಮತ್ತು ಅನಿಗದಿತ]] ಭಾಷೆಗಳಲ್ಲಿ ಒಂದು ಡಜನ್ಗಿಂತಲೂ ಹೆಚ್ಚು ಭಾಷೆಗಳನ್ನು ಮಾತನಾಡಲಾಗುತ್ತದೆ.<ref name="census2011-langreport">{{cite web |title=Language – India, States and Union Territories |url=https://www.censusindia.gov.in/2011Census/C-16_25062018_NEW.pdf |work=Census of India 2011 |publisher=Office of the Registrar General |pages=13–14}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಮದ್ಯ ಸೇವನೆಯನ್ನು ಹೊಂದಿದೆ.<ref>{{Cite news |url=https://www.bbc.co.uk/news/world-asia-india-51372583 |title=Shock after alcohol flows from kitchen taps in Kerala |work=BBC News |date=6 February 2020}}</ref>
=== ಹಬ್ಬಗಳು ===
{{Main|ಕೇರಳದ ದೇವಾಲಯ ಹಬ್ಬಗಳು|ಓಣಂ}}
ಕೇರಳದಲ್ಲಿನ ಅನೇಕ ದೇವಾಲಯಗಳು ವರ್ಷದ ನಿರ್ದಿಷ್ಟ ದಿನಗಳಲ್ಲಿ ಹಬ್ಬಗಳನ್ನು ನಡೆಸುತ್ತವೆ.<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA76 |year=2008 |publisher=D.C. Books |isbn=978-8126419036 |page=76}}</ref> ಈ ಹಬ್ಬಗಳ ಸಾಮಾನ್ಯ ಲಕ್ಷಣವೆಂದರೆ ಪವಿತ್ರ ಧ್ವಜವನ್ನು ಏರಿಸುವುದು, ಅದನ್ನು ಹಬ್ಬದ ಕೊನೆಯ ದಿನದಂದು ದೇವತೆಯನ್ನು ಮುಳುಗಿಸಿದ ನಂತರ ಇಳಿಸಲಾಗುತ್ತದೆ.<ref>{{cite book |title=The Legacy of Kerala |url=https://books.google.com/books?id=S9RMxjdjUVAC&pg=PA34 |year=1982 |publisher=Department of Public Relations, Government of Kerala |isbn=978-8126437986 |page=34}}</ref> ಕೆಲವು ಹಬ್ಬಗಳು ಪೂರಂಗಳನ್ನು ಒಳಗೊಂಡಿವೆ, ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು [[ತೃಶೂರ್ ಪೂರಂ]].<ref>{{cite book |title=World Encyclopaedia of Interfaith Studies: World religions |url=https://books.google.com/books?id=fFwi7qRRgosC |year=2009 |publisher=Jnanada Prakashan |isbn=978-8171392803 |pages=704–10}}</ref> "ಆನೆಗಳು, ಪಟಾಕಿ ಪ್ರದರ್ಶನಗಳು ಮತ್ತು ದೊಡ್ಡ ಗುಂಪುಗಳು" ತೃಶೂರ್ ಪೂರಂನ ಪ್ರಮುಖ ಆಕರ್ಷಣೆಗಳಾಗಿವೆ.<ref>{{Cite news |title=The stars of Pooram show are jumbos |date=26 May 2006 |access-date=11 November 2007 |url=https://www.hindu.com/2006/05/26/stories/2006052610410500.htm |archive-url=https://web.archive.org/web/20071118212644/https://www.hindu.com/2006/05/26/stories/2006052610410500.htm |url-status=dead |archive-date=18 November 2007 |work=[[The Hindu]] |location=Chennai, India}}</ref> ಇತರ ಪ್ರಸಿದ್ಧ ಹಬ್ಬಗಳೆಂದರೆ [[ಮಕರವಿಳಕ್ಕು]],<ref name="Ltd.2013b">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA433 |year=2013 |publisher=Biju Mathew |isbn=978-8192128443 |page=433}}</ref> [[ಚಿನಕ್ಕತ್ತೂರು ಪೂರಂ]], [[ಅಟ್ಟುಕಲ್ ಪೊಂಗಲ]] ಮತ್ತು [[ನೆನ್ಮಾರ ವಲ್ಲಂಗಿ ವೇಳ]]<ref name="Stott2014">{{cite book |author=David Stott |title=Kerala Footprint Focus Guide: Includes Kochi, Alappuzha, Thrissur, Periyar, River Nila |url=https://books.google.com/books?id=-Jx8AwAAQBAJ&pg=PA94 |year=2014 |publisher=Footprint Travel Guides |isbn=978-1-909268-79-1 |page=94}}</ref> ಇವುಗಳ ಜೊತೆಗೆ, ಸ್ಥಳೀಯವಾಗಿ [[ಉತ್ಸವ]]ಗಳು ಎಂದು ಕರೆಯಲ್ಪಡುವ ಹಬ್ಬಗಳನ್ನು ಹೆಚ್ಚಿನ ದೇವಾಲಯಗಳು ವಾರ್ಷಿಕ ಆಧಾರದ ಮೇಲೆ ನಡೆಸುತ್ತವೆ. ಅದನ್ನು ಪಡೆದುಕೊಳ್ಳುವ ದೇವಾಲಯಗಳು ಸಾಮಾನ್ಯವಾಗಿ ಹಬ್ಬದ ಭಾಗವಾಗಿ ಕನಿಷ್ಠ ಒಂದು ಶ್ರೀಮಂತವಾಗಿ ಅಲಂಕರಿಸಿದ ಆನೆಯನ್ನು ಒಳಗೊಳ್ಳುತ್ತವೆ. ದೇವಾಲಯದಲ್ಲಿನ ವಿಗ್ರಹವನ್ನು ಈ ಆನೆಯ ಮೇಲೆ ಗ್ರಾಮಾಂತರದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ಮೆರವಣಿಗೆಯು ದೇವಾಲಯದ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿದಾಗ, ಜನರು ಸಾಮಾನ್ಯವಾಗಿ ಅಕ್ಕಿ, ತೆಂಗಿನಕಾಯಿ ಮತ್ತು ಇತರ ಕಾಣಿಕೆಗಳನ್ನು ನೀಡುತ್ತಾರೆ.<ref name="NarayananKurup1976">{{cite book |author1=M. G. S. Narayanan |author2=K. K. N. Kurup |title=Historical Studies in Kerala |url=https://books.google.com/books?id=mvELAAAAIAAJ |year=1976 |publisher=Department of History, University of Calicut |pages=68–81}}</ref> ಮೆರವಣಿಗೆಗಳು ಹೆಚ್ಚಾಗಿ [[ಪಂಚಾರಿ ಮೇಳಂ]] ಅಥವಾ [[ಪಂಚವಾದ್ಯ]]ದಂತಹ ಸಾಂಪ್ರದಾಯಿಕ ಸಂಗೀತವನ್ನು ಒಳಗೊಂಡಿರುತ್ತವೆ.<ref name="Killius2006">{{cite book |author=Rolf Killius |title=Ritual Music and Hindu Rituals of Kerala |url=https://books.google.com/books?id=c_fZAAAAMAAJ |year=2006 |publisher=B.R. Rhythms |isbn=978-8188827077 |page=61}}</ref> [[ಈದ್ ಅಲ್-ಫಿತರ್]] ಮತ್ತು [[ಈದ್ ಅಲ್-ಅಧಾ]] ಅನ್ನು ರಾಜ್ಯದ ಮುಸ್ಲಿಂ ಸಮುದಾಯವು ಆಚರಿಸುತ್ತದೆ, ಆದರೆ [[ಕ್ರಿಸ್ಮಸ್]] ಮತ್ತು [[ಈಸ್ಟರ್]] ನಂತಹ ಹಬ್ಬಗಳನ್ನು ಕ್ರೈಸ್ತರು ಆಚರಿಸುತ್ತಾರೆ.<ref name="Malabar">{{Cite book |last=Sreedhara Menon |first=A. |url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |title=''Kerala Charitram'' |publisher=DC Books |year=2007 |isbn=978-8126415885 |edition=2007 |location=Kottayam |access-date=19 July 2020 |archive-url=https://web.archive.org/web/20211113141403/https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |archive-date=13 November 2021 |url-status=live}}</ref> ಓಣಂ ಕೇರಳದ ಜನರು ಆಚರಿಸುವ ಸುಗ್ಗಿಯ ಹಬ್ಬವಾಗಿದೆ ಮತ್ತು ಇದು ರಾಜ್ಯದ ಕೃಷಿ ಹಿಂದಿನ ಕಾಲವನ್ನು ನೆನಪಿಸುತ್ತದೆ.<ref name="Choondal1980">{{cite book |author=Chummar Choondal |title=Kerala Folk Literature |year=1980 |url=https://books.google.com/books?id=EnQOAAAAYAAJ |publisher=Kerala Folklore Academy}}</ref><ref name="Menon2007b">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA80 |year=2007 |publisher=DC Books |isbn=978-8126415786 |pages=80–}}</ref> ಇದು ಕೇರಳದ ಸ್ಥಳೀಯ ಹಬ್ಬವಾಗಿದೆ<ref name="Darpan2006b">{{cite book |author=Pratiyogita Darpan |title=Pratiyogita Darpan |url=https://books.google.com/books?id=lugDAAAAMBAJ&pg=PT83 |year=2006 |publisher=Pratiyogita Darpan |page=624}}</ref> ಇದು ನಾಲ್ಕು ದಿನಗಳ ಸಾರ್ವಜನಿಕ ರಜಾದಿನಗಳನ್ನು ಒಳಗೊಂಡಿದೆ; ಓಣಂ ಮುನ್ನಾದಿನದಿಂದ (ಉತ್ತ್ರಾಡಂ) ನಾಲ್ಕನೇ ಓಣಂ ದಿನದವರೆಗೆ.<ref>{{cite book |title=Purāṇam |url=https://books.google.com/books?id=sfxjAAAAMAAJ |year=2004 |publisher=All-India Kasiraja Trust. |page=17}}</ref> ಓಣಂ ಮಲಯಾಳಂ ತಿಂಗಳು ಚಿಂಗಂ (ಆಗಸ್ಟ್–ಸೆಪ್ಟೆಂಬರ್) ನಲ್ಲಿ ಬರುತ್ತದೆ<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA66 |year=2008 |publisher=D.C. Books |isbn=978-8126419036 |page=66}}</ref> ಮತ್ತು ಇದು ರಾಜ [[ಮಹಾಬಲಿ]]ಯ ಮನೆಗೆ ಮರಳುವ ಸ್ಮರಣೆಯನ್ನು ಸೂಚಿಸುತ್ತದೆ.<ref name="MythOnam">{{cite news |last1=Praveen |first1=M. P. |title=Myth, mystique, and traditions of Onam |url=https://www.thehindu.com/todays-paper/tp-features/tp-editorialfeatures/myth-mystique-and-traditions-of-onam/article2433921.ece |access-date=12 November 2015 |work=The Hindu |date=8 September 2011}}</ref> ಓಣಂನ ಒಟ್ಟು ಅವಧಿಯು 10 ದಿನಗಳು ಮತ್ತು ಇದನ್ನು ಕೇರಳದಾದ್ಯಂತ ಆಚರಿಸಲಾಗುತ್ತದೆ. ಇದು [[ವಲ್ಲಂ ಕಳಿ]],<ref>{{Cite web |title=Vallamkali – Resplendent Water Regattas of Kerala {{!}} Kerala Boat Races{{!}} Onam{{!}} Kerala Backwaters {{!}} Kerala |url=https://www.keralatourism.org/kerala-article/2020/vallamkali-resplendent-water-regattas-of-kerala/1017 |access-date=9 June 2021|website=Kerala Tourism |language=en}}</ref> [[ಪುಲಿಕಳಿ]],<ref name="Ltd.2013">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA535 |year=2013 |publisher=Biju Mathew |isbn=978-8192128443 |page=535}}</ref> ಪೂಕ್ಕಲಂ,<ref>{{cite book |title=A Biblical Approach to Indian Traditions and Beliefs |url=https://books.google.com/books?id=f35VH7LrZ1IC&pg=PA90 |year=2008 |publisher=Armour Publishing Pte Ltd |isbn=978-9814222396 |page=90}}</ref> ತುಂಬಿ ತುಳ್ಳಲ್<ref name="Mohapatra2013">{{cite book |author=J Mohapatra |title=Wellness In Indian Festivals & Rituals |url=https://books.google.com/books?id=UdpzAgAAQBAJ&pg=PA142 |year=2013 |publisher=Partridge Pub |isbn=978-1-4828-1690-7 |page=142}}</ref> ಮತ್ತು [[ಓನವಿಲ್ಲು]]<ref name="(Princess.)1998">{{cite book |author=Gouri Lakshmi Bayi (Princess.) |title=Thulasi garland |url=https://books.google.com/books?id=5lcvAAAAYAAJ |year=1998 |publisher=Bharatiya Vidya Bhavan |isbn=978-8172761103}}</ref> ನಂತಹ ಸಾಂಸ್ಕೃತಿಕ ಅಂಶಗಳೊಂದಿಗೆ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ.
### ಸಂಗೀತ ಮತ್ತು ನೃತ್ಯ
{{Main|ಕೇರಳದ ಕಲೆಗಳು|ಕೇರಳದ ಸಂಗೀತ}}
ಕೇರಳವು ಹಲವಾರು [[ಪ್ರದರ್ಶನ ಕಲೆಗಳ]] ನೆಲೆಯಾಗಿದೆ. ಇವುಗಳಲ್ಲಿ ಐದು ಶಾಸ್ತ್ರೀಯ ನೃತ್ಯ ಪ್ರಕಾರಗಳು ಸೇರಿವೆ: [[ಕಥಕ್ಕಳಿ]], [[ಮೋಹಿನಿಯಾಟ್ಟಂ]], [[ಕೂಡಿಯಾಟ್ಟಂ]], [[ಒಟ್ಟನ್ ತುಳ್ಳಲ್|ತುಳ್ಳಲ್]] ಮತ್ತು [[ಕೃಷ್ಣನಾಟ್ಟಂ]], ಇವು ಶಾಸ್ತ್ರೀಯ ಅವಧಿಯಲ್ಲಿ ರಾಜಮನೆತನಗಳ ಆಶ್ರಯದಲ್ಲಿ ದೇವಾಲಯದ ರಂಗಮಂದಿರಗಳಲ್ಲಿ ಹುಟ್ಟಿ ಅಭಿವೃದ್ಧಿಗೊಂಡವು.<ref>{{cite journal |url=https://www.sruti.org/library/sruti%20ranjani/2004/sruti_ranjani_2004.pdf |title=Classical Dance Art Forms of Kerala |author=Kala Menon |journal=Sruti Ranjini |date=November 2004 |volume=14 |issue=1 |page=11 |access-date=7 February 2022 |archive-date=4 March 2016 |archive-url=https://web.archive.org/web/20160304091717/http://www.sruti.org/library/sruti%20ranjani/2004/sruti_ranjani_2004.pdf |url-status=dead }}</ref> [[ಕೇರಳ ನಾಟನಂ]], [[ಥಿರಯಾಟ್ಟಂ]],<ref>"Thirayattam" (Folklore Text-Malayalam), State Institute of language, Kerala {{ISBN|978-8120042940}}</ref> [[ಕಳಿಯಾಟ್ಟಂ]], [[ಥೆಯ್ಯಂ]], [[ಕೂತು]] ಮತ್ತು [[ಪದಯಾನಿ]] ಈ ಪ್ರದೇಶದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಇತರ ನೃತ್ಯ ಪ್ರಕಾರಗಳಾಗಿವೆ.<ref name="Menon2008">{{cite book |author=A Sreedhara Menon |title=Cultural heritage of Kerala |url=https://books.google.com/books?id=R7QNGkZKc5wC&pg=PA106 |access-date=17 November 2012 |year=2008 |publisher=D C Books |isbn=978-8126419036 |page=106}}</ref> [[ಒಪ್ಪನ]] ಮತ್ತು [[ದಫ್ ಮುಟ್ಟು]] ನಂತಹ ಕೆಲವು ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ರಾಜ್ಯದ ಮುಸ್ಲಿಮರಲ್ಲಿ ಜನಪ್ರಿಯವಾಗಿದ್ದವು,<ref name="google19">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA8 |access-date=17 November 2012 |year=2008 |publisher=Sura Books |isbn=978-8174781642 |page=8}}</ref> ಆದರೆ [[ಮಾರ್ಗಂಕಳಿ]] ಮತ್ತು [[ಪರಿಚಮುಟ್ಟುಕಳಿ]] ಸಿರಿಯನ್ ಕ್ರೈಸ್ತರಲ್ಲಿ ಜನಪ್ರಿಯವಾಗಿವೆ ಮತ್ತು [[ಚವಿಟ್ಟು ನಾಟಕಂ]] ಲ್ಯಾಟಿನ್ ಕ್ರೈಸ್ತರಲ್ಲಿ ಜನಪ್ರಿಯವಾಗಿದೆ.<ref name="Nārāyaṇappaṇikkar1991">{{cite book |author=Kāvālaṃ Nārāyaṇappaṇikkar |title=Folklore of Kerala |url=https://books.google.com/books?id=xH6BAAAAMAAJ |access-date=17 November 2012 |year=1991 |publisher=National Book Trust, India |page=146 |isbn=978-8123725932}}</ref><ref name="Kasbekar2006">{{cite book |author=Asha Kasbekar |title=Pop Culture India!: Media, Arts, And Lifestyle |url=https://books.google.com/books?id=Sv7Uk0UcdM8C&pg=PA43 |access-date=17 November 2012 |year=2006 |publisher=ABC-CLIO |isbn=978-1-85109-636-7 |pages=43–44}}</ref> ಕೇರಳದಲ್ಲಿ ಶಾಸ್ತ್ರೀಯ ಸಂಗೀತದ ಅಭಿವೃದ್ಧಿಯು ಕೇರಳದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಸಾಂಪ್ರದಾಯಿಕ ಪ್ರದರ್ಶನ ಕಲೆಗಳು ನೀಡಿದ ಕೊಡುಗೆಗಳಿಗೆ ಕಾರಣವಾಗಿದೆ.<ref name="Menon2">{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |pages=48–51 |url=https://books.google.com/books?id=S9RMxjdjUVAC |access-date=30 May 2015}}</ref> ಸ್ಥಳೀಯ ಶಾಸ್ತ್ರೀಯ ಸಂಗೀತ ಪ್ರಕಾರವಾದ [[ಸೋಪಾನ ಸಂಗೀತ]]ದ ಅಭಿವೃದ್ಧಿಯು ದೇವಾಲಯದ ಸಂಸ್ಕೃತಿಯು ಕೇರಳದ ಕಲೆಗಳಿಗೆ ನೀಡಿದ ಶ್ರೀಮಂತ ಕೊಡುಗೆಯನ್ನು ವಿವರಿಸುತ್ತದೆ.<ref name="Menon2" /> [[ಕರ್ನಾಟಕ ಸಂಗೀತ]]ವು ಕೇರಳೀಯ ಸಾಂಪ್ರದಾಯಿಕ ಸಂಗೀತದಲ್ಲಿ ಪ್ರಾಬಲ್ಯ ಹೊಂದಿದೆ. ಇದು 19 ನೇ ಶತಮಾನದಲ್ಲಿ [[ಸ್ವಾತಿ ತಿರುನಾಳ್ ರಾಮ ವರ್ಮ]] ಅವರು ಈ ಪ್ರಕಾರವನ್ನು ಜನಪ್ರಿಯಗೊಳಿಸಿದ ಪರಿಣಾಮವಾಗಿದೆ.<ref name="Bhagyalekshmy_2004d_29" /> ರಾಗ-ಆಧಾರಿತ ವ್ಯಾಖ್ಯಾನಗಳು ''ಸೋಪಾನಂ'' ಎಂದು ಕರೆಯಲ್ಪಡುತ್ತವೆ, ಇವು ''ಕಥಕ್ಕಳಿ'' ಪ್ರದರ್ಶನಗಳೊಂದಿಗೆ ಸೇರುತ್ತವೆ.<ref name="SchechnerAppel1990">{{cite book |author1=Richard Schechner |author2=Willa Appel |title=By Means of Performance: Intercultural Studies of Theatre and Ritual |url=https://books.google.com/books?id=K5ZuV_nn7KkC&pg=PA145 |access-date=18 November 2012 |year=1990 |publisher=Cambridge University Press |isbn=978-0-521-33915-5 |page=145}}</ref> ''ಮೇಳಂ'', ''ಪಾಂಡಿ'' ಮತ್ತು ''ಪಂಚಾರಿ'' ರೂಪಾಂತರಗಳನ್ನು ಒಳಗೊಂಡಂತೆ, ಹೆಚ್ಚು ತಾಳವಾದ್ಯ ಶೈಲಿಯ ಸಂಗೀತವಾಗಿದೆ;<ref name="BroughtonEllingham2000">{{cite book |author1=Simon Broughton |author2=Mark Ellingham |author3=Richard Trillo |title=World Music Volume 2 Latin and North America, Caribbean, India, Asia and Pacific: The Rough Guide |url=https://books.google.com/books?id=QzX8THIgRjUC&pg=PA97 |access-date=18 November 2012 |year=2000 |publisher=Rough Guides |isbn=978-1-85828-636-5 |page=97}}</ref> ಇದನ್ನು ''[[ಹಿಂದೂ ದೇವಾಲಯ|ಕ್ಷೇತ್ರಮ್]]''-ಕೇಂದ್ರಿತ ಹಬ್ಬಗಳಲ್ಲಿ ''[[ಚೆಂಡ]]'' ಬಳಸಿ ಪ್ರದರ್ಶಿಸಲಾಗುತ್ತದೆ. ''ಪಂಚವಾದ್ಯ'' ತಾಳವಾದ್ಯ ಸಮೂಹದ ಒಂದು ರೂಪವಾಗಿದೆ, ಇದರಲ್ಲಿ ಕಲಾವಿದರು ಐದು ವಿಧದ ತಾಳವಾದ್ಯ ವಾದ್ಯಗಳನ್ನು ಬಳಸುತ್ತಾರೆ.<ref name="BroughtonEllingham2000" /> ಕೇರಳದ ದೃಶ್ಯ ಕಲೆಗಳು [[ಕೇರಳದ ಭಿತ್ತಿಚಿತ್ರಗಳು|ಸಾಂಪ್ರದಾಯಿಕ ಭಿತ್ತಿಚಿತ್ರಗಳಿಂದ]] ರಾಜ್ಯದ ಅತ್ಯಂತ ಪ್ರಸಿದ್ಧ ವರ್ಣಚಿತ್ರಕಾರನಾದ [[ರಾಜಾ ರವಿ ವರ್ಮ]] ಅವರ ಕೃತಿಗಳವರೆಗೆ ವಿಸ್ತರಿಸಿವೆ.<ref name="Menon2" /> ಕೇರಳದ ಹೆಚ್ಚಿನ ಜಾತಿಗಳು ಮತ್ತು ಸಮುದಾಯಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದ ಜಾನಪದ ಗೀತೆಗಳು ಮತ್ತು ಗೀತೆಗಳ ಶ್ರೀಮಂತ ಸಂಗ್ರಹಗಳನ್ನು ಹೊಂದಿವೆ; ''[[ವಡಕ್ಕನ್ ಪಟ್ಟುಕಲ್]]'' (ಉತ್ತರ ಗೀತೆಗಳು), ''ತೆಕ್ಕನ್ ಪಟ್ಟುಕಲ್'' (ದಕ್ಷಿಣ ಗೀತೆಗಳು), ''ವಂಚಿ ಪಟ್ಟುಕಲ್'' (ದೋಣಿ ಹಾಡುಗಳು), ''[[ಮಾಪ್ಪಿಲ ಪಟ್ಟುಕಲ್]]'' (ಮುಸ್ಲಿಂ ಹಾಡುಗಳು) ಮತ್ತು ''ಪಲ್ಲಿಪಟ್ಟುಕಲ್'' (ಚರ್ಚ್ ಹಾಡುಗಳು) ಅವುಗಳಲ್ಲಿ ಕೆಲವು.<ref>{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |page=41 |url=https://books.google.com/books?id=S9RMxjdjUVAC |access-date=30 May 2015}}</ref>
=== ಸಿನಿಮಾ ===
{{Main|ಮಲಯಾಳಂ ಸಿನಿಮಾ}}
[[ಮಲಯಾಳಂ ಸಿನಿಮಾ|ಮಲಯಾಳಂ ಚಲನಚಿತ್ರಗಳು]] ಸಾಮಾಜಿಕ ವಿಷಯಗಳ ಪ್ರಸ್ತುತಿಯೊಂದಿಗೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಸ್ಥಾನವನ್ನು ಕೆತ್ತಿಕೊಂಡಿವೆ.<ref name="Menon">{{cite book |title=Cultural Heritage of Kerala |first=Sreedhara |last=Menon |publisher=D C Books |year=2008 |url=https://books.google.com/books?id=R7QNGkZKc5wC |isbn=978-8126419036 |pages=128–29 |access-date=30 May 2015}}</ref><ref>{{cite book |title=Encyclopaedia of Indian Literature |first=Amaresh |last=Datta |publisher=Sahitya Akademi |year=1987 |url=https://books.google.com/books?id=ObFCT5_taSgC |isbn=978-8126018031 |pages=751–53}}</ref> [[ಅಡೂರ್ ಗೋಪಾಲಕೃಷ್ಣನ್]], [[ಮಂಕಡ ರವಿ ವರ್ಮ]], [[ಜಿ. ಅರವಿಂದನ್]], [[ಭರತನ್]], [[ಪಿ. ಪದ್ಮರಾಜನ್]], [[ಎಂ.ಟಿ. ವಾಸುದೇವನ್ ನಾಯರ್]], [[ಕೆ.ಜಿ. ಜಾರ್ಜ್]], [[ಪ್ರಿಯದರ್ಶನ್]], [[ಜಾನ್ ಅಬ್ರಹಾಂ (ನಿರ್ದೇಶಕ)|ಜಾನ್ ಅಬ್ರಹಾಂ]], [[ರಾಮು ಕಾರ್ಯಾಟ್]], [[ಕೆ ಎಸ್ ಸೇತುಮಾಧವನ್]], [[ಎ. ವಿನ್ಸೆಂಟ್]] ಮತ್ತು [[ಶಾಜಿ ಎನ್ ಕರುಣ್]] ನಂತಹ ಕೇರಳದ ನಿರ್ದೇಶಕರು ಭಾರತೀಯ [[ಸಮಾನಾಂತರ ಸಿನಿಮಾ]]ಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಕೇರಳವು [[ಮೋಹನ್ಲಾಲ್]], [[ಮಮ್ಮೂಟ್ಟಿ]], [[ಸತ್ಯನ್]], [[ಪ್ರೇಮ್ ನಝೀರ್]], [[ಮಧು (ನಟ)|ಮಧು]], [[ಶೀಲಾ]], [[ಶಾರದ (ನಟಿ)|ಶಾರದಾ]], [[ಮಿಸ್ ಕುಮಾರಿ]], [[ಜಯನ್]], [[ಅಡೂರ್ ಭಾಸಿ]], [[ಸೀಮಾ (ನಟಿ)|ಸೀಮಾ]], [[ಭರತ್ ಗೋಪಿ]], [[ತಿಲಕನ್]], [[ವಿಜಯ ರಾಘವನ್]], [[ಕಲಾಭವನ್ ಮಣಿ]], [[ಇಂದ್ರನ್ಸ್]], [[ಶೋಭನಾ]], [[ನಿವಿನ್ ಪೌಲಿ]], [[ಶ್ರೀನಿವಾಸನ್]], [[ಉರ್ವಶಿ (ನಟಿ)|ಉರ್ವಶಿ]], [[ಮಂಜು ವಾರಿಯರ್]], [[ಸುರೇಶ್ ಗೋಪಿ]], [[ಜಯರಾಂ]], [[ಮುರಳಿ (ಮಲಯಾಳಂ ನಟ)|ಮುರಳಿ]], [[ಶಂಕರಾಡಿ]], [[ಕಾವ್ಯ ಮಾಧವನ್]], [[ಭಾವನಾ ಮೇನನ್]], [[ಪೃಥ್ವಿರಾಜ್ ಸುಕುಮಾರನ್|ಪೃಥ್ವಿರಾಜ್]], [[ಪಾರ್ವತಿ ತಿರುವೋತು|ಪಾರ್ವತಿ]], [[ಜಯಸೂರ್ಯ]], [[ದುಲ್ಕರ್ ಸಲ್ಮಾನ್]], [[ಒಡುವಿಲ್ ಉನ್ನಿಕೃಷ್ಣನ್]], [[ಜಗತಿ ಶ್ರೀಕುಮಾರ್]], [[ನೆಡುಮುಡಿ ವೇಣು]], [[ಕೆಪಿಎಸಿ ಲಲಿತಾ]], [[ಇನ್ನೋಸೆಂಟ್ (ನಟ)|ಇನ್ನೋಸೆಂಟ್]] ಮತ್ತು [[ಫಹಾದ್ ಫಾಜಿಲ್]] ನಂತಹ ಅಸಂಖ್ಯಾತ ನಟರಿಗೆ ಜನ್ಮ ನೀಡಿದೆ. ಕೊನೆಯ ಮಲಯಾಳಂ ನಟ ಪ್ರೇಮ್ ನಝೀರ್ 720 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.<ref>{{Cite news |last=Gangadhar |first=V. |title=Magic of Sophia Loren |url=https://www.hindu.com/mag/2003/11/02/stories/2003110200250500.htm |archive-url=https://web.archive.org/web/20031130011344/https://www.hindu.com/mag/2003/11/02/stories/2003110200250500.htm |url-status=dead |archive-date=30 November 2003 |date=2 October 2003 |department=Sunday Magazine |newspaper=[[The Hindu]] |location=Chennai, India |access-date=18 January 2015}}</ref> 1980 ರ ದಶಕದಿಂದ, ನಟರು [[ಮೋಹನ್ಲಾಲ್]] ಮತ್ತು [[ಮಮ್ಮೂಟ್ಟಿ]] ಅವರು ಚಲನಚಿತ್ರ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದಾರೆ; ಮೋಹನ್ಲಾಲ್ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (ನಾಲ್ಕು ಅಭಿನಯಕ್ಕಾಗಿ) ಗೆದ್ದಿದ್ದಾರೆ, ಆದರೆ ಮಮ್ಮೂಟ್ಟಿ ಅವರು ಅಭಿನಯಕ್ಕಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹೊಂದಿದ್ದಾರೆ.<ref>{{cite book |title=Sura's Year Book 2006 |author=Subburaj V.V.K |page=620 |isbn=978-8172541248 |url=https://books.google.com/books?id=Fz2WDD8sB0MC |publisher=Sura Books |access-date=30 May 2015}}</ref> ಮಲಯಾಳಂ ಸಿನಿಮಾ [[ಕೆ. ಜೆ. ಯೇಸುದಾಸ್]], [[ಕೆ.ಎಸ್. ಚಿತ್ರಾ]], [[ಎಂ. ಜಿ. ಶ್ರೀಕುಮಾರ್|ಎಂ.ಜಿ. ಶ್ರೀಕುಮಾರ್]], [[ವಯಲಾರ್ ರಾಮ ವರ್ಮ]], [[ವಿ. ಮಧುಸೂದನನ್ ನಾಯರ್]], [[ಎಂ.ಟಿ. ವಾಸುದೇವನ್ ನಾಯರ್]] ಮತ್ತು [[ಒ.ಎನ್.ವಿ. ಕುರುಪ್]] ನಂತಹ ಕೆಲವು ಹೆಚ್ಚು ಗಮನಾರ್ಹ ವ್ಯಕ್ತಿಗಳನ್ನು ಸಹ ನಿರ್ಮಿಸಿದೆ,<ref name="indiatimes2">{{cite news |url=https://timesofindia.indiatimes.com/india/Jnanpith-Awards-for-ONV-Kurup-Akhlaq-Khan-Shahryar/articleshow/6621243.cms |date=24 September 2014 |title=Jnanpith Awards for ONV Kurup, Akhlaq Khan Shahryar |work=The Times of India |access-date=24 September 2014}}</ref> ಕೊನೆಯಲ್ಲಿ ಉಲ್ಲೇಖಿಸಲಾದ ಇಬ್ಬರು [[ಜ್ಞಾನಪೀಠ ಪ್ರಶಸ್ತಿ]] ಪಡೆದವರು, ಇದು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದೆ.<ref name="upscguide">{{cite web |url=https://upscguide.com/content/jnanpith-award-winners |archive-url=https://web.archive.org/web/20121219193030/https://upscguide.com/content/jnanpith-award-winners |url-status=dead |archive-date=19 December 2012 |title=Jnanpith Award Winners | UPSC Guide |publisher=upscguide.com |access-date=24 September 2014}}</ref> ಕೇರಳದವರಾದ [[ರೆಸುಲ್ ಪೂಕ್ಕುಟ್ಟಿ]] ಅವರು [[ಸ್ಲಮ್ಡಾಗ್ ಮಿಲಿಯನೇರ್]] ಅದ್ಭುತ ಚಿತ್ರಕ್ಕಾಗಿ [[ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್|ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್]] ಗೆದ್ದ ಏಕೈಕ ಭಾರತೀಯರಾಗಿದ್ದಾರೆ. 2018 ರಂತೆ, [[ಮಲಯಾಳಂ ಸಿನಿಮಾ]] [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], [[ಭಾರತ]]ದಲ್ಲಿ ಅತ್ಯುತ್ತಮ ನಟಿಗೆ 14 ಪ್ರಶಸ್ತಿಗಳು, ಅತ್ಯುತ್ತಮ ನಟಿಗೆ 6, ಅತ್ಯುತ್ತಮ ಚಿತ್ರಕ್ಕೆ 11, ಮತ್ತು ಅತ್ಯುತ್ತಮ ಚಲನಚಿತ್ರ ನಿರ್ದೇಶಕರಿಗೆ 13 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.{{sfn|Chandran|2018|p=358-361}}
=== ಸಾಹಿತ್ಯ ===
{{Main|ಮಲಯಾಳಂ ಸಾಹಿತ್ಯ}}
[[ಸಂಗಮ್ ಸಾಹಿತ್ಯ]]ವನ್ನು [[ಮಲಯಾಳಂ]]ನ ಪ್ರಾಚೀನ ಪೂರ್ವವರ್ತಿ ಎಂದು ಪರಿಗಣಿಸಬಹುದು.{{sfn|Chandran|2018|p=450}} [[ಮಲಯಾಳಂ ಸಾಹಿತ್ಯ]]ವು [[ಹಳೆಯ ಮಲಯಾಳಂ]] ಅವಧಿಯಿಂದ (9 ನೇ–13 ನೇ ಶತಮಾನ CE) ಪ್ರಾರಂಭವಾಗುತ್ತದೆ ಮತ್ತು 14 ನೇ ಶತಮಾನದ [[ನಿರಣಂ ಕವಿಗಳು]] (ಮಾಧವ ಪಣಿಕ್ಕರ್, ಶಂಕರ ಪಣಿಕ್ಕರ್ ಮತ್ತು ರಾಮ ಪಣಿಕ್ಕರ್),<ref name="Nair1967">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |page=296}}</ref><ref name="Laet1994">{{cite book |author=Sigfried J. de Laet |title=History of Humanity: From the seventh to the sixteenth century |url=https://books.google.com/books?id=ixCyd2lByggC&pg=PA407 |access-date=18 November 2012 |year=1994 |publisher=UNESCO |isbn=978-9231028137 |page=407}}</ref> ಮತ್ತು 16 ನೇ ಶತಮಾನದ ಕವಿ [[ಎಳುತ್ತಚ್ಚನ್|ತುಂಚತ್ತು ಎಳುತ್ತಚ್ಚನ್]] ಅವರನ್ನು ಒಳಗೊಂಡಿದೆ, ಅವರ ಕೃತಿಗಳು ಆಧುನಿಕ ಮಲಯಾಳಂ ಭಾಷೆ ಮತ್ತು ಅದರ ಕಾವ್ಯದ ಆರಂಭವನ್ನು ಸೂಚಿಸುತ್ತವೆ.<ref name="George1998">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA58 |access-date=18 November 2012 |year=1998 |publisher=Sahitya Akademi |isbn=978-8126004133 |page=58}}</ref> [[ಕೊಲ್ಲಂ ಯುಗ|ಮಲಯಾಳಂ ಕ್ಯಾಲೆಂಡರ್]] ನ ಮೊದಲ 600 ವರ್ಷಗಳಲ್ಲಿ, ಸಾಹಿತ್ಯವು ಮುಖ್ಯವಾಗಿ [[ಉತ್ತರ ಮಲಬಾರ್|ಉತ್ತರ ಮಲಬಾರಿನ]] ''[[ವಡಕ್ಕನ್ ಪಟ್ಟುಕಲ್]]'' ಮತ್ತು [[ದಕ್ಷಿಣ ವಿಭಾಗ (ತಿರುವಾಂಕೂರು)|ದಕ್ಷಿಣ ತಿರುವಾಂಕೂರಿನ]] ''ತೆಕ್ಕನ್ ಪಟ್ಟುಕಲ್'' ನಂತಹ ಮೌಖಿಕ [[ಗೀತೆ]]ಗಳನ್ನು ಒಳಗೊಂಡಿತ್ತು.{{sfn|Chandran|2018|p=453}} 2013 ರಲ್ಲಿ "[[ಭಾರತದಲ್ಲಿ ಶಾಸ್ತ್ರೀಯ ಭಾಷೆ]]" ಎಂದು ಗೊತ್ತುಪಡಿಸಲಾಯಿತು,<ref name="thehindu20130524"/> ಇದು ಪ್ರಸ್ತುತ ರೂಪಕ್ಕೆ ಮುಖ್ಯವಾಗಿ 15 ಮತ್ತು 16 ನೇ ಶತಮಾನಗಳಲ್ಲಿ [[ಸಾಮಾನ್ಯ ಯುಗ]]ದ ಕವಿಗಳಾದ [[ಚೆರುಶ್ಶೇರಿ ನಂಬೂದಿರಿ]],<ref name="Cherussery (Krishnagadha) Malayalam author books">{{Cite web |url=https://keralaliterature.com/old/author.php?authid=1473 |title=Cherussery (Krishnagadha) Malayalam author books |website=keralaliterature.com |archive-url=https://web.archive.org/web/20190407052549/https://keralaliterature.com/old/author.php%3Fauthid%3D1473 |archive-date=7 April 2019 |url-status=dead}}</ref><ref name="mlm" /> [[ತುಂಚತ್ತು ಎಳುತ್ತಚ್ಚನ್]],<ref name="mlm" /> ಮತ್ತು [[ಪೂಂತಾನಂ ನಂಬೂದಿರಿ]]<ref name="mlm" /><ref>{{cite news |url=https://www.thehindu.com/society/history-and-culture/the-charms-of-poonthanam-illam/article25308319.ece/ |title=The Charms of Poonthanam Illam |last=Arun Narayanan |date=25 October 2018 |work=The Hindu}}</ref> ರವರ ಪ್ರಭಾವದಿಂದ ಅಭಿವೃದ್ಧಿಗೊಂಡಿತು.<ref name="mlm">{{cite book |title=A Short History of Malayalam Literature |author=Dr. K. Ayyappa Panicker |url=https://archive.org/details/ASHORTHISTORYOFMALAYALAMLITERATURE |year=2006 |location=Thiruvananthapuram |publisher=Department of Information and Public Relations, Kerala}}</ref><ref>Freeman, Rich (2003). "Genre and Society: The Literary Culture of Premodern Kerala". In Literary Cultures in History: Reconstructions from South Asia</ref> 17/18 ನೇ ಶತಮಾನ CE ಯ ಸಂಭವನೀಯ ಕವಿಯಾದ [[ಉನ್ನಾಯಿ ವರಿಯಾರ್]],<ref name="Attakatha sahithyam">{{Cite book |last=Krishna Kaimal |first=Aymanam |title=Attakatha sahithyam |url=https://mgucat.mgu.ac.in/cgi-bin/koha/opac-detail.pl?biblionumber=133514&shelfbrowse_itemnumber=132435 |date=1989 |publisher=Trivandrum State Institute of Language}}</ref> ಮತ್ತು 18 ನೇ ಶತಮಾನ CE ಯ ಕವಿಯಾದ [[ಕುಂಚನ್ ನಂಬಿಯಾರ್]] ಅವರು ಆಧುನಿಕ ಮಲಯಾಳಂ ಸಾಹಿತ್ಯದ ಬೆಳವಣಿಗೆಯಲ್ಲಿ ತಮ್ಮ ಅಪಕ್ವ ರೂಪದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ.<ref name="mlm" /> [[ಭಾರತಪುಳ]] ನದಿ, ಇದನ್ನು [[ಪೊನ್ನಾನಿ|ಪೊನ್ನಾನಿ ನದಿ]] ಎಂದೂ ಕರೆಯುತ್ತಾರೆ, ಮತ್ತು ಅದರ ಉಪನದಿಗಳು ಆಧುನಿಕ ಮಲಯಾಳಂ ಸಾಹಿತ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.<ref>{{Cite news |title=The river sutra |url=https://www.thehindu.com/society/rivers-have-nurtured-malayalam-literature-and-poetry-since-time-immemorial/article25058214.ece |last=Binoy |first=Rasmi |date=27 September 2018 |access-date=24 January 2021 |work=The Hindu}}</ref>
[[ಪರೆಮ್ಮಕ್ಕಲ್ ತೋಮಾ ಕಥನಾರ್]] ಮತ್ತು [[ಕೇರಳ ವರ್ಮ ವಲಿಯಕೋಯಿ ತಂಪುರಾನ್]] ಮಲಯಾಳಂ ಗದ್ಯಕ್ಕೆ ತಮ್ಮ ಕೊಡುಗೆಗೆ ಹೆಸರುವಾಸಿಯಾಗಿದ್ದಾರೆ.<ref name="google24">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |pages=118–21}}</ref><ref name="Sinhā2009">{{cite book |author=Madhubālā Sinhā |title=Encyclopaedia of South Indian literature |url=https://books.google.com/books?id=8qQpAQAAIAAJ |access-date=18 November 2012 |year=2009 |publisher=Anmol Publ. |isbn=978-8126137404 |page=97}}</ref><ref name="Vilanilam1987">{{cite book |author=John V. Vilanilam |title=Religious communication in India |url=https://books.google.com/books?id=a0UeAAAAMAAJ |access-date=18 November 2012 |year=1987 |publisher=Kairali Books International |page=66}}</ref> "[[ಆಧುನಿಕ ಮಲಯಾಳಂನ ಕವಿತ್ರಯ|ಕವಿಗಳ ತ್ರಿಮೂರ್ತಿಗಳು]]" (''ಕವಿತ್ರಯಂ''): [[ಕುಮಾರನ್ ಆಶಾನ್]], [[ವಳ್ಳತ್ತೋಳ್ ನಾರಾಯಣ ಮೇನನ್]], ಮತ್ತು [[ಉಳ್ಳೂರ್ ಎಸ್. ಪರಮೇಶ್ವರ ಅಯ್ಯರ್]] ಅವರು ಕೇರಳೀಯ ಕಾವ್ಯವನ್ನು ಪ್ರಾಚೀನ ಚಾತುರ್ಯ ಮತ್ತು ಅಧ್ಯಾತ್ಮಶಾಸ್ತ್ರದಿಂದ ಹೆಚ್ಚು [[ಗೀತಾತ್ಮಕ|ಗೀತಾತ್ಮಕ]] ಶೈಲಿಯತ್ತ ತಿರುಗಿಸಿದ್ದಾರೆಂದು ಗುರುತಿಸಲ್ಪಟ್ಟಿದ್ದಾರೆ.<ref name="Al̲ikkōṭȧ1979">{{cite book |author=Sukumār Al̲ikkōṭȧ |title=Mahakavi Ulloor |url=https://books.google.com/books?id=1VkOAAAAYAAJ |access-date=18 November 2012 |year=1979 |publisher=Sahitya Akademi |page=52}}</ref><ref name="Indian and Foreign Review">{{cite book |title=Indian and Foreign Review |url=https://books.google.com/books?id=XaRnAAAAMAAJ |access-date=18 November 2012 |year=1983 |publisher=Publications Division of the Ministry of Information and Broadcasting, Government of India |page=25}}</ref><ref name="Tarakan1990">{{cite book |author=Ke. Eṃ Tarakan |title=A brief survey of Malayalam literature: history of literature |url=https://books.google.com/books?id=3nhkAAAAMAAJ |access-date=18 November 2012 |year=1990 |publisher=K.M. Tharakan |pages=41–52}}</ref> [[ಮೊಯಿಂಕುಟ್ಟಿ ವೈದ್ಯರ್]] ಮತ್ತು [[ಪುಲಿಕ್ಕೋಟ್ಟಿಲ್ ಹೈದರ್]] ನಂತಹ ಕವಿಗಳು [[ಮಾಪ್ಪಿಲ ಹಾಡುಗಳಿಗೆ]] ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ, ಇದು [[ಅರಬಿ ಮಲಯಾಳಂ]] ಸಾಹಿತ್ಯದ ಪ್ರಕಾರವಾಗಿದೆ.<ref>{{cite news |url=https://www.hindu.com/2007/03/31/stories/2007033110250500.htm |archive-url=https://web.archive.org/web/20121108104937/https://www.hindu.com/2007/03/31/stories/2007033110250500.htm |url-status=dead |archive-date=8 November 2012 |title=Mappila songs cultural fountains of a bygone age, says MT |date=31 March 2007 |access-date=15 August 2009 |work=[[The Hindu]] |location=Chennai, India}}</ref><ref>Pg 167, Mappila Muslims: a study on society and anti colonial struggles By Husain Raṇdathaṇi, Other Books, Kozhikode 2007</ref> ಯಾವುದೇ ಭಾರತೀಯ ಭಾಷೆಯಲ್ಲಿ ಮೊದಲ ಪ್ರವಾಸ ಕಥನವು ಮಲಯಾಳಂ ''[[ವರ್ತಮಾನಪುಸ್ತಕಂ]]'' ಆಗಿದೆ, ಇದನ್ನು [[ಪರೆಮ್ಮಕ್ಕಲ್ ತೋಮಾ ಕಥನಾರ್]] 1785 ರಲ್ಲಿ ಬರೆದರು.<ref name="legacy">{{cite book |last=Menon |first=A. Sreedhara |title=The legacy of Kerala |year=2008 |publisher=D C Books |location=Kottayam, Kerala |isbn=978-81-264-2157-2 |edition=1st DCB}}</ref><ref>{{cite web |url=https://nasrani.net/2010/08/23/the-varthamanappusthakam-cathanar-paremmakkal/ |title=August 23, 2010 Archives |url-status=dead |archive-url=https://web.archive.org/web/20130427073541/https://nasrani.net/2010/08/23/the-varthamanappusthakam-cathanar-paremmakkal/ |archive-date=27 April 2013}}</ref> ಗದ್ಯ ಸಾಹಿತ್ಯ, [[ಮಲಯಾಳಂ ಪತ್ರಿಕೋದ್ಯಮ]], ಮತ್ತು ವಿಮರ್ಶೆಯು 18 ನೇ ಶತಮಾನದ ಉತ್ತರಾರ್ಧದ ನಂತರ ಪ್ರಾರಂಭವಾಯಿತು.<ref name="legacy" /> ಸಮಕಾಲೀನ ಮಲಯಾಳಂ ಸಾಹಿತ್ಯವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನದ ಸಂದರ್ಭವನ್ನು ವ್ಯವಹರಿಸುತ್ತದೆ. ಆಧುನಿಕ ಸಾಹಿತ್ಯದ ಪ್ರವೃತ್ತಿಯು ಹೆಚ್ಚಾಗಿ [[ರಾಜಕೀಯ ತೀವ್ರವಾದ]]ದ ಕಡೆಗೆ ಇರುತ್ತದೆ.<ref>{{cite encyclopedia |url=https://www.britannica.com/EBchecked/topic/556016/South-Asian-arts/65212/Tamil#toc65213 |title=South Asian arts |encyclopedia=Encyclopedia Britannica |access-date=15 September 2017}}</ref> [[ಮಲಯಾಳಂ ಸಾಹಿತ್ಯ]]ವು 6 [[ಜ್ಞಾನಪೀಠ ಪ್ರಶಸ್ತಿ|ಜ್ಞಾನಪೀಠ ಪ್ರಶಸ್ತಿಗಳನ್ನು]] ಪಡೆದುಕೊಂಡಿದೆ, ಇದು ಯಾವುದೇ ದ್ರಾವಿಡ ಭಾಷೆಗೆ ಎರಡನೇ ಅತಿ ಹೆಚ್ಚು ಮತ್ತು ಯಾವುದೇ ಭಾರತೀಯ ಭಾಷೆಗೆ ಮೂರನೇ ಅತಿ ಹೆಚ್ಚು.<ref>{{Cite news |title=Jnanpith given to Akkitham |url=https://www.thehindu.com/news/national/kerala/jnanpith-given-to-akkitham/article32685581.ece |last=Naha |first=Abdul Latheef |date=24 September 2020 |access-date=12 June 2021 |work=The Hindu}}</ref><ref>{{Cite news |title=Celebrated Malayalam poet Akkitham wins 2019 Jnanpith Award |url=https://www.business-standard.com/article/news-ani/celebrated-malayalam-poet-akkitham-wins-2019-jnanpith-award-119112900926_1.html |last=ANI |date=29 November 2019 |access-date=12 June 2021 |publisher=Business Standard}}</ref> 20 ನೇ ಶತಮಾನದ ಉತ್ತರಾರ್ಧದಲ್ಲಿ, [[ಜ್ಞಾನಪೀಠ]] ಪ್ರಶಸ್ತಿ ವಿಜೇತ ಕವಿಗಳು ಮತ್ತು ಬರಹಗಾರರಾದ [[ಜಿ. ಶಂಕರ ಕುರುಪ್]], [[ಎಸ್. ಕೆ. ಪೊಟ್ಟೆಕ್ಕಾಟ್]], [[ತಕಳಿ ಶಿವಶಂಕರ ಪಿಳ್ಳೈ]], [[ಎಂ. ಟಿ. ವಾಸುದೇವನ್ ನಾಯರ್]], [[ಒ. ಎನ್. ವಿ. ಕುರುಪ್]], ಮತ್ತು [[ಅಕ್ಕಿತಂ ಅಚ್ಯುತನ್ ನಂಬೂದಿರಿ]] ಅವರು ಆಧುನಿಕ ಮಲಯಾಳಂ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.<ref name="google25">{{cite book |author=Subodh Kapoor |title=The Indian Encyclopaedia: Biographical, Historical, Religious, Administrative, Ethnological, Commercial and Scientific. Mahi-Mewat |url=https://books.google.com/books?id=mc6C5dVHbGAC&pg=PA4542 |access-date=18 November 2012 |year=2002 |publisher=Cosmo |isbn=978-8177552720 |page=4542}}</ref><ref name="Accessions List, South Asia">{{cite book |title=Accessions List, South Asia |url=https://books.google.com/books?id=lPcoAQAAIAAJ |access-date=18 November 2012 |year=1994 |publisher=E.G. Smith for the U.S. Library of Congress Office, New Delhi |page=21}}</ref><ref name="Indian Writing Today">{{cite book |title=Indian Writing Today |url=https://books.google.com/books?id=1wUtAQAAIAAJ |access-date=18 November 2012 |year=1967 |publisher=Nirmala Sadanand Publishers |page=21}}</ref><ref name="DattaAkademi1987">{{cite book |author1=Amaresh Datta |author2=Sahitya Akademi |title=Encyclopaedia of Indian Literature: K to Navalram |url=https://books.google.com/books?id=QaIRAQAAMAAJ |access-date=18 November 2012 |year=1987 |publisher=Sahitya Akademi |page=2394 |isbn=978-0-8364-2423-2}}</ref><ref name="Malayalam Literary Survey">{{cite book |title=Malayalam Literary Survey |url=https://books.google.com/books?id=k5JkAAAAMAAJ |access-date=18 November 2012 |year=1993 |publisher=Kerala Sahitya Akademi |page=19}}</ref> ನಂತರ, [[ಒ. ವಿ. ವಿಜಯನ್]], [[ಕಮಲಾದಾಸ್]], [[ಎಂ. ಮುಕುಂದನ್]], [[ಅರುಂಧತಿ ರಾಯ್]], [[ವೈಕಂ ಮುಹಮ್ಮದ್ ಬಷೀರ್]] ನಂತಹ ಬರಹಗಾರರು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ.<ref name="MukundanPillai2004">{{cite book |author1=Eṃ Mukundan |author2=C. Gopinathan Pillai |title=Eng Adityan Radha And Others |url=https://books.google.com/books?id=1N5QcHakKdoC&pg=PP3 |access-date=18 November 2012 |year=2004 |publisher=Sahitya Akademi |isbn=978-8126018833 |page=3}}</ref><ref name="Maheshwari2002">{{cite book |author=Ed. Vinod Kumar Maheshwari |title=Perspectives On Indian English Literature |url=https://books.google.com/books?id=JcY2-ldWIKsC&pg=PA126 |access-date=18 November 2012 |year=2002 |publisher=Atlantic Publishers & Dist |isbn=978-8126900930 |page=126}}</ref><ref name="Chaudhuri2008">{{cite book |author=Amit Chaudhuri |title=Clearing a Space: Reflections On India, Literature, and Culture |url=https://books.google.com/books?id=AQeN2PoAx2IC&pg=PA44 |access-date=18 November 2012 |year=2008 |publisher=Peter Lang |isbn=978-1-906165-01-7 |pages=44–45}}</ref><ref>{{Cite news |title=Indian's First Novel Wins Booker Prize in Britain |work=[[The New York Times]] |date=15 October 1997 |access-date=11 November 2007 |url=https://query.nytimes.com/gst/fullpage.html?res=9A01E6DD173FF936A25753C1A961958260 |first=Sarah |last=Lyall}}</ref>
=== ಪಾಕಪದ್ಧತಿ ===
{{Main|ಕೇರಳದ ಪಾಕಪದ್ಧತಿ}}
ಕೇರಳದ ಪಾಕಪದ್ಧತಿಯು ಮೀನು, ಕೋಳಿ ಮತ್ತು ಮಾಂಸವನ್ನು ಬಳಸಿ ತಯಾರಿಸಿದ ವಿವಿಧ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿದೆ. ಪಾಕಶಾಸ್ತ್ರದ ಮಸಾಲೆಗಳನ್ನು ಕೇರಳದಲ್ಲಿ ಸಹಸ್ರಮಾನಗಳಿಂದ ಬೆಳೆಯಲಾಗುತ್ತಿದೆ ಮತ್ತು ಅವು ಅದರ ಪಾಕಪದ್ಧತಿಯ ವಿಶಿಷ್ಟ ಲಕ್ಷಣಗಳಾಗಿವೆ.<ref name="google26">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA10 |access-date=17 November 2012 |year=2010 |publisher=Murdoch Books |isbn=978-1-74196-438-7 |page=10}}</ref> ಅಕ್ಕಿಯು ಪ್ರಮುಖ ಪ್ರಧಾನ ಆಹಾರವಾಗಿದ್ದು, ಇದನ್ನು ಎಲ್ಲಾ ಸಮಯದಲ್ಲೂ ಸೇವಿಸಲಾಗುತ್ತದೆ.<ref name="Majumdar2010">{{cite book |author=Majumdar |title=Consumer Behaviour: Insights From Indian Market |url=https://books.google.com/books?id=KF57x1Nrn2UC&pg=RA1-PA79 |access-date=17 November 2012 |year=2010 |publisher=PHI Learning Pvt. Ltd. |isbn=978-8120339637 |page=181}}</ref> ಕೇರಳದಲ್ಲಿ ಹೆಚ್ಚಿನ ಉಪಾಹಾರ ಆಹಾರಗಳನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ, ಒಂದು ರೂಪದಲ್ಲಿ ಅಥವಾ ಇನ್ನೊಂದು ರೂಪದಲ್ಲಿ (''[[ಇಡ್ಲಿ]]'', ''[[ದೋಸೆ (ಆಹಾರ)|ದೋಸೆ]]'', ''[[ಪುಟ್ಟು]]'', ''[[ಪತ್ತಿರಿ]]'', ''[[ಅಪ್ಪಂ]]'', ಅಥವಾ ''[[ಇಡಿಯಪ್ಪಂ]]''), [[ಮರಗೆಣಸು]] ತಯಾರಿಕೆಗಳು, ಅಥವಾ ದ್ವಿದಳ ಧಾನ್ಯ-ಆಧಾರಿತ [[ವಡೆ (ಆಹಾರ)|ವಡೆ]].<ref name="Muthachen1970">{{cite book |author=Rachel Muthachen |title=Regional Indian Recipes |url=https://books.google.com/books?id=h5xXz_UFV7QC&pg=PA1 |access-date=17 November 2012 |year=1970 |publisher=Jaico Publishing House |isbn=978-8172240356 |page=1}}</ref> ಇವುಗಳು [[ಚಟ್ನಿ]], ''[[ಕಡಲೆ]]'', ''[[ಪಾಯಸಂ]]'', ''[[ಹೆಸರು ಕಾಳು|ಪಯರ್]] [[ಪಪ್ಪಡಂ]]'', ''[[ಅಪ್ಪಂ]]'', ಚಿಕನ್ ಕರಿ, ಗೋಮಾಂಸ ಫ್ರೈ, ಎಗ್ ಮಸಾಲಾ ಮತ್ತು ಮೀನು ಕರಿಯೊಂದಿಗೆ ಸೇರಿಕೊಳ್ಳಬಹುದು.<ref name="Newton" /> [[ಪೊರೊಟ್ಟ]] ಮತ್ತು [[ಬಿರಿಯಾನಿ]] ಸಹ ಸಾಮಾನ್ಯವಾಗಿ ಕೇರಳದ ರೆಸ್ಟೋರೆಂಟ್ಗಳಲ್ಲಿ ಕಂಡುಬರುತ್ತವೆ. ತಲಶ್ಶೇರಿ ಬಿರಿಯಾನಿ ಜನಾಂಗೀಯ ಬ್ರ್ಯಾಂಡ್ ಆಗಿ ಜನಪ್ರಿಯವಾಗಿದೆ. ಮಧ್ಯಾಹ್ನದ ಊಟದ ಭಕ್ಷ್ಯಗಳು [[ಅಕ್ಕಿ]] ಮತ್ತು [[ಕರಿ]] ಜೊತೆಗೆ ''[[ರಸಂ (ಭಕ್ಷ್ಯ)|ರಸಂ]]'', ''ಪುಳಿಶ್ಶೇರಿ'' ಮತ್ತು ''[[ಸಾಂಬಾರ್ (ಭಕ್ಷ್ಯ)|ಸಾಂಬಾರ್]]'' ಅನ್ನು ಒಳಗೊಂಡಿವೆ.<ref name="google27">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT4 |access-date=17 November 2012 |publisher=Springwood emedia |isbn=978-1-4761-2308-0 |pages=4–}}</ref> ''[[ಸಾಧ್ಯ]]'' ಸಸ್ಯಾಹಾರಿ ಊಟವಾಗಿದ್ದು, ಇದನ್ನು ಬಾಳೆ ಎಲೆಯಲ್ಲಿ ಬಡಿಸಲಾಗುತ್ತದೆ ಮತ್ತು ನಂತರ ಒಂದು ಕಪ್ ಪಾಯಸಂನೊಂದಿಗೆ ಸೇರಿಸಲಾಗುತ್ತದೆ.<ref name="Kannampilly2003">{{cite book |author=Vijayan Kannampilly |title=Essential Kerala Cook Book |url=https://books.google.com/books?id=pYfOCaAPb3sC&pg=PA11 |access-date=17 November 2012 |year=2003 |publisher=Penguin Books India |isbn=978-0-14-302950-2 |pages=10–11}}</ref> ಜನಪ್ರಿಯ ತಿಂಡಿಗಳಲ್ಲಿ [[ಬಾಳೆಹಣ್ಣಿನ ಚಿಪ್ಸ್]], ಯಾಮ್ ಕ್ರಿಸ್ಪ್ಸ್, [[ಮರಗೆಣಸು ಚಿಪ್ಸ್]], [[ಅಚ್ಚಪ್ಪಂ]], [[ಉನ್ನಿ ಅಪ್ಪಂ]] ಮತ್ತು ''ಕುಳಲಪ್ಪಂ'' ಸೇರಿವೆ.<ref name="Kerala with Lakshadweep">{{cite book |title=Kerala with Lakshadweep |url=https://books.google.com/books?id=yJJuAAAAMAAJ |access-date=17 November 2012 |year=2005 |publisher=Outlook Publishing |page=27 |isbn=978-8189449018}}</ref><ref name="Koilparampil1982">{{cite book |author=George Koilparampil |title=Caste in the Catholic community in Kerala: a study of caste elements in the inter rite relationships of Syrians and Latins |url=https://books.google.com/books?id=nXnaAAAAMAAJ |access-date=17 November 2012 |year=1982 |publisher=Dept. of Sociology, St. Teresa's College |page=233}}</ref><ref name="(Swami.)2000">{{cite book |author=Paramatmananda (Swami.) |title=Talks |url=https://books.google.com/books?id=p77mUECpIjgC |access-date=17 November 2012 |year=2000 |publisher=Mata Amritanandamayi Center |isbn=978-1-879410-79-4 |page=24}}</ref> ಸಮುದ್ರಾಹಾರ ವಿಶೇಷ ಭಕ್ಷ್ಯಗಳಲ್ಲಿ [[ಕರಿಮೀನ್]], ಸೀಗಡಿ, ಏಡಿ ಮತ್ತು ಇತರ ಕಠಿಣಚರ್ಮಿ ಭಕ್ಷ್ಯಗಳು ಸೇರಿವೆ.<ref>{{cite web |title=Kerala Cuisine |url=https://www.ecotours.in/kerala-cuisine.htm |publisher=Ecotours |access-date=30 May 2015 |archive-date=13 August 2015 |archive-url=https://web.archive.org/web/20150813003443/http://ecotours.in/kerala-cuisine.htm |url-status=dead }}</ref> [[ತಲಶ್ಶೇರಿ ಪಾಕಪದ್ಧತಿ]] ವೈವಿಧ್ಯಮಯವಾಗಿದೆ ಮತ್ತು ಇದು ಅನೇಕ ಪ್ರಭಾವಗಳ ಮಿಶ್ರಣವಾಗಿದೆ.
== ಮಾಧ್ಯಮ ==
{{Main|ಕೇರಳದಲ್ಲಿ ಮಾಧ್ಯಮ}}
ಮಾಧ್ಯಮ, ದೂರಸಂಪರ್ಕ, ಪ್ರಸಾರ ಮತ್ತು ಕೇಬಲ್ ಸೇವೆಗಳನ್ನು [[ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ]] (TRAI) ನಿಯಂತ್ರಿಸುತ್ತದೆ.<ref>{{cite book |title=The Telecom Regulatory Authority of India Act, 1997 |url=https://books.google.com/books?id=0gfeQc1ZBqIC&pg=PA112 |publisher=Georg Thieme Verlag |page=112 |id=GGKEY:BJ6HEPE0NRE}}</ref> 2015–16 ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 4, ಕೇರಳವನ್ನು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]] ಹೊಂದಿರುವ ರಾಜ್ಯ ಎಂದು ಶ್ರೇಣೀಕರಿಸಿತು.<ref>{{cite web |title=National Family Health Survey (NFHS-4) |url=https://rchiips.org/nfhs/NFHS-4Reports/Kerala.pdf |website=International Institute for Population SciencesDeonar |access-date=7 February 2022 |archive-date=23 February 2022 |archive-url=https://web.archive.org/web/20220223120050/http://rchiips.org/nfhs/NFHS-4Reports/Kerala.pdf |url-status=dead }}</ref> ಡಜನ್ಗಟ್ಟಲೆ ಪತ್ರಿಕೆಗಳು ಕೇರಳದಲ್ಲಿ ಪ್ರಕಟವಾಗುತ್ತವೆ, ಒಂಬತ್ತು ಪ್ರಮುಖ ಭಾಷೆಗಳಲ್ಲಿ,<ref name=rniindia>{{cite web |url=https://rni.nic.in/pii.htm |archive-url=https://web.archive.org/web/20070927070139/https://rni.nic.in/pii.htm |archive-date=27 September 2007 |url-status=dead |title=General Review |access-date=1 September 2006 |publisher=Registrar of Newspapers for India}}</ref> ಆದರೆ ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್.<ref name="google28">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA186 |access-date=17 November 2012 |year=1998 |publisher=Sahitya Akademi |isbn=978-8126004133 |page=186}}</ref> ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]]ವನ್ನು ಹೊಂದಿದೆ.<ref>{{cite web |title=The DHS Program – India: Standard DHS, 2015–16 |url=https://dhsprogram.com/what-we-do/survey/survey-display-355.cfm |website=dhsprogram.com}}</ref><ref>{{cite web |title=National Family Health Survey |url=https://rchiips.org/nfhs/NFHS-4Report.shtml |website=rchiips.org |access-date=7 February 2022 |archive-date=7 March 2022 |archive-url=https://web.archive.org/web/20220307101917/http://rchiips.org/nfhs/NFHS-4Report.shtml |url-status=dead}}</ref> ಅತಿ ವ್ಯಾಪಕವಾಗಿ ಪ್ರಸಾರವಾಗುವ [[ಮಲಯಾಳಂ ಭಾಷಾ ಪತ್ರಿಕೆಗಳ ಪಟ್ಟಿ|ಮಲಯಾಳಂ-ಭಾಷಾ ಪತ್ರಿಕೆಗಳೆಂದರೆ]] ''[[ಮಲಯಾಳ ಮನೋರಮ]], [[ಮಾತೃಭೂಮಿ]], [[ದೇಶಾಭಿಮಾನಿ]], [[ಮಧ್ಯಮಂ]], [[ಕೇರಳ ಕೌಮುದಿ]], [[ಮಂಗಳಂ ಪಬ್ಲಿಕೇಷನ್ಸ್|ಮಂಗಳಂ]], [[ಚಂದ್ರಿಕಾ (ಮಲಯಾಳಂ ಪತ್ರಿಕೆ)|ಚಂದ್ರಿಕಾ]], [[ದೀಪಿಕಾ (ಪತ್ರಿಕೆ)|ದೀಪಿಕಾ]], [[ಜನಯುಗಂ]], [[ಜನ್ಮಭೂಮಿ]], [[ಸಿರಾಜ್ ಡೈಲಿ]]'' ಮತ್ತು ''[[ಸುಪ್ರಭಾತಂ ಡೈಲಿ|ಸುಪ್ರಭಾತಂ]]''. [[ಮಲಯಾಳಂ ಭಾಷಾ ನಿಯತಕಾಲಿಕೆಗಳ ಪಟ್ಟಿ|ಪ್ರಮುಖ ಮಲಯಾಳಂ ನಿಯತಕಾಲಿಕೆಗಳು]] ''[[ಮಾತೃಭೂಮಿ ಅಳಚಪ್ಪತಿಪ್ಪು]], [[ವನಿತಾ]], [[ಇಂಡಿಯಾ ಟುಡೇ]] ಮಲಯಾಳಂ, [[ಮಧ್ಯಮಂ ವೀಕ್ಲಿ]], [[ಗೃಹಲಕ್ಷ್ಮೀ (ನಿಯತಕಾಲಿಕೆ)|ಗೃಹಲಕ್ಷ್ಮೀ]], [[ಧನಂ (ವ್ಯಾಪಾರ ನಿಯತಕಾಲಿಕೆ)|ಧನಂ]], [[ಚಿತ್ರಭೂಮಿ]]'' ಮತ್ತು ''[[ಭಾಷಾಪೋಷಿಣಿ]]''.
[[File:Malayala Manorama New Press in Kollam-3, Apr 2016.jpg|right|thumb|[[ಕೊಟ್ಟಿಯಂ]], [[ಕೊಲ್ಲಂ|ಕೊಲ್ಲಂನ]] [[ಮಲಯಾಳ ಮನೋರಮ]] ಕಚೇರಿ]]
[[ಡಿಡಿ ಮಲಯಾಳಂ]] ಸರ್ಕಾರಿ-ಸ್ವಾಮ್ಯದ ದೂರದರ್ಶನ ಪ್ರಸಾರಕವಾಗಿದೆ. [[ಬಹು-ವ್ಯವಸ್ಥಾಪಕ ವ್ಯವಸ್ಥೆಗಳು|ಬಹು-ವ್ಯವಸ್ಥಾಪಕ ವ್ಯವಸ್ಥೆಗಳು]] ಮಲಯಾಳಂ, ಇಂಗ್ಲಿಷ್, ಇತರ ಭಾರತೀಯ ಭಾಷೆಗಳು ಮತ್ತು ಅಂತಾರಾಷ್ಟ್ರೀಯ ಚಾನೆಲ್ಗಳ ಮಿಶ್ರಣವನ್ನು ಒದಗಿಸುತ್ತವೆ. ಕೆಲವು ಜನಪ್ರಿಯ ಮಲಯಾಳಂ ದೂರದರ್ಶನ ಚಾನೆಲ್ಗಳು [[ಏಷ್ಯಾನೆಟ್ (ದೂರದರ್ಶನ ಚಾನೆಲ್)|ಏಷ್ಯಾನೆಟ್]], [[ಏಷ್ಯಾನೆಟ್ ನ್ಯೂಸ್]], [[ಏಷ್ಯಾನೆಟ್ ಪ್ಲಸ್]], [[ಏಷ್ಯಾನೆಟ್ ಮೂವೀಸ್]], [[ಸೂರ್ಯ ಟಿವಿ]], [[ಸೂರ್ಯ ಮೂವೀಸ್]], [[ಮಝವಿಲ್ ಮನೋರಮ]], [[ಮನೋರಮ ನ್ಯೂಸ್]], [[ಕೈರಳಿ ಟಿವಿ]], [[ಕೈರಳಿ ಟಿವಿ|ಕೈರಳಿ ನ್ಯೂಸ್]], [[ಫ್ಲವರ್ಸ್ (ದೂರದರ್ಶನ ಚಾನೆಲ್)|ಫ್ಲವರ್ಸ್]], [[ಮೀಡಿಯಾ ವನ್ ಟಿವಿ]], [[ಮಾತೃಭೂಮಿ ನ್ಯೂಸ್]], [[ಕಪ್ಪಾ ಟಿವಿ]], [[ಅಮೃತ ಟಿವಿ]], [[ರಿಪೋರ್ಟರ್ ಟಿವಿ]], [[ಜೈಹಿಂದ್]], [[ಜನಂ ಟಿವಿ]], [[ಜೀವನ್ ಟಿವಿ]], [[ಕೌಮುದಿ ಟಿವಿ]] ಮತ್ತು [[ಶಾಲೋಮ್ (ದೂರದರ್ಶನ ಚಾನೆಲ್)|ಶಾಲೋಮ್ ಟಿವಿ]]. ಭಾರತದಲ್ಲಿ ಎರಡನೇ ಅತಿ ಹೆಚ್ಚು ಇಂಟರ್ನೆಟ್ ಪ್ರವೇಶ ಪ್ರಮಾಣದೊಂದಿಗೆ,<ref>{{Cite web |title=Delhi ranks top in Internet penetration, Kerala comes second |url=https://www.thehindubusinessline.com/info-tech/delhi-ranks-top-in-internet-penetration-kerala-comes-second/article31516751.ece/ |date=6 May 2020 |access-date=27 June 2021 |website=The Hindu Business Line}}</ref> [[ಡಿಜಿಟಲ್ ಮೀಡಿಯಾ]] [[ಸಾಮಾಜಿಕ ಮಾಧ್ಯಮ]] ಮತ್ತು [[ಭಾರತದಲ್ಲಿ ಓವರ್-ದಿ-ಟಾಪ್ ಮೀಡಿಯಾ ಸೇವೆಗಳು|OTT ಸೇವೆಗಳು]] ಸೇರಿದಂತೆ ರಾಜ್ಯದಲ್ಲಿ ಮಾಹಿತಿ ಮತ್ತು ಮನರಂಜನೆಯ ಪ್ರಮುಖ ಮೂಲವಾಗಿದೆ. ರಾಜ್ಯದಲ್ಲಿ ಗಮನಾರ್ಹವಾದ [[ಜನ ವಿಜ್ಞಾನ ಚಳುವಳಿ]] ಬೇರೂರಿದೆ, ಮತ್ತು ಬರಹಗಾರರ ಸಹಕಾರಿ ಸಂಘಗಳಂತಹ ಚಟುವಟಿಕೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ.<ref name="Tharamangalam_2005" /><ref name="Ranjith_2004">{{Cite book |author=Ranjith KS |veditors=Nair PR, Shaji H |year=2004 |title=Rural Libraries of Kerala |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621812 |pages=20–21 |url=https://www.cds.ac.in/krpcds/publication/downloads/78.pdf |access-date=28 December 2008}}</ref> [[ಬಿಎಸ್ಎನ್ಎಲ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ಜಿಯೋ]] ಪ್ರಮುಖ ಸೆಲ್ ಫೋನ್ ಸೇವಾ ಪೂರೈಕೆದಾರರಾಗಿದ್ದಾರೆ.<ref>{{cite web |title=Highlights ofTelecom Subscription Data as on 28thFebruary, 2019 |url=https://main.trai.gov.in/sites/default/files/PR_No.27of2019_0.pdf |access-date=16 May 2019 |archive-date=18 April 2019 |archive-url=https://web.archive.org/web/20190418140404/https://main.trai.gov.in/sites/default/files/PR_No.27of2019_0.pdf |url-status=dead }}</ref> ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಲಭ್ಯವಿವೆ; ಕೆಲವು ಪ್ರಮುಖ [[ಇಂಟರ್ನೆಟ್ ಸೇವಾ ಪೂರೈಕೆದಾರರು]] [[ಬಿಎಸ್ಎನ್ಎಲ್]], [[ಏಷ್ಯಾನೆಟ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ರೈಲ್ಟೆಲ್|ರೈಲ್ವೈರ್]], ಮತ್ತು [[ಟಾಟಾ ಕಮ್ಯುನಿಕೇಷನ್ಸ್]].
== ಕ್ರೀಡೆ ==
{{Main|ಕೇರಳದಲ್ಲಿ ಕ್ರೀಡೆ}}
[[File:Kerala boatrace.jpg|thumb|ವಾರ್ಷಿಕ [[ವಲ್ಲಂ ಕಳಿ|ಹಾವು ದೋಣಿ ಪಂದ್ಯವನ್ನು]] [[ಪಂಬಾ ನದಿ|ಪಂಬಾ ನದಿಯಲ್ಲಿ]] [[ಓಣಂ]] ಸಮಯದಲ್ಲಿ ನಡೆಸಲಾಗುತ್ತದೆ]]21 ನೇ ಶತಮಾನದ ವೇಳೆಗೆ, ಕೇರಳದ ಬಹುತೇಕ ಎಲ್ಲಾ ಸ್ಥಳೀಯ ಕ್ರೀಡೆಗಳು ಮತ್ತು ಆಟಗಳು ಕಣ್ಮರೆಯಾಗಿದ್ದವು ಅಥವಾ ಸ್ಥಳೀಯ ಹಬ್ಬಗಳ ಸಮಯದಲ್ಲಿ ಪ್ರದರ್ಶಿಸಲಾಗುವ ಒಂದು ಕಲಾ ಪ್ರಕಾರವಾಗಿ ಮಾರ್ಪಟ್ಟಿದ್ದವು; ಇವುಗಳಲ್ಲಿ [[ಪೂರಕ್ಕಳಿ]], ಪದಯಾನಿ, ತಲಪ್ಪಂದುಕಳಿ, ಓನತಲ್ಲು, ಪರಿಚಮುಟ್ಟುಕಳಿ, ವೇಳಾಕಳಿ, ಮತ್ತು ಕಿಳಿತತ್ತುಕಳಿ ಸೇರಿವೆ.<ref name="PRD-sports">{{cite web |url=https://www.prd.kerala.gov.in/sportsmain.htm |title=Sports and Games in Kerala |publisher=Public Relations Dept, Kerala |year=2002 |access-date=9 June 2012 |url-status=dead |archive-url=https://web.archive.org/web/20060428081830/https://www.prd.kerala.gov.in/sportsmain.htm |archive-date=28 April 2006}}</ref> ಆದಾಗ್ಯೂ, "ವಿಶ್ವದ ಎಲ್ಲಾ ಸಮರ ಕಲೆಗಳ ತಾಯಿ" ಎಂದು ಪರಿಗಣಿಸಲ್ಪಟ್ಟ ''[[ಕಳರಿಪಯಟ್ಟು]]'' ಒಂದು ಅಪವಾದವಾಗಿದೆ ಮತ್ತು ಇದನ್ನು ಸ್ಥಳೀಯ ಸಮರ ಕ್ರೀಡೆಯಾಗಿ ಅಭ್ಯಾಸ ಮಾಡಲಾಗುತ್ತದೆ.<ref>{{cite book |title=Muay Thai |publisher=Meyer & Meyer Verlag |author=Arnaud Van Der Veere |year=2012 |page=8 |isbn=978-1-84126-328-1}}</ref> ಕೇರಳದ ಮತ್ತೊಂದು ಸಾಂಪ್ರದಾಯಿಕ ಕ್ರೀಡೆಯೆಂದರೆ ದೋಣಿ ಪಂದ್ಯ, ವಿಶೇಷವಾಗಿ [[ಹಾವು ದೋಣಿ]]ಗಳ ಪಂದ್ಯ.<ref name="PRD-sports" />
[[ಕ್ರಿಕೆಟ್]] ಮತ್ತು [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ರಾಜ್ಯದಲ್ಲಿ ಜನಪ್ರಿಯವಾಯಿತು; ಎರಡನ್ನೂ 19 ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಮಲಬಾರ್ನಲ್ಲಿ ಪರಿಚಯಿಸಲಾಯಿತು. [[ಟಿನು ಯೋಹಾನನ್]], [[ಅಬೇ ಕುರುವಿಲ್ಲ]], [[ಚುಂಡಂಗಪೊಯಿಲ್ ರಿಝ್ವಾನ್]], [[ಶ್ರೀಶಾಂತ್]], [[ಸಂಜು ಸ್ಯಾಮ್ಸನ್]] ಮತ್ತು [[ಬಾಸಿಲ್ ತಂಪಿ]] ಅಂತಹ ಕ್ರಿಕೆಟಿಗರು ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದರು. ಕೇರಳದ ಕ್ರಿಕೆಟ್ ಫ್ರ್ಯಾಂಚೈಸಿ, [[ಕೊಚ್ಚಿ ಟಸ್ಕರ್ಸ್ ಕೇರಳ|ಕೊಚ್ಚಿ ಟಸ್ಕರ್ಸ್]], [[ಇಂಡಿಯನ್ ಪ್ರೀಮಿಯರ್ ಲೀಗ್]]ನ [[2011 ಇಂಡಿಯನ್ ಪ್ರೀಮಿಯರ್ ಲೀಗ್|ನಾಲ್ಕನೇ ಸೀಸನ್]] ನಲ್ಲಿ ಆಡಿತು. ಆದಾಗ್ಯೂ, ಅದರ ಫ್ರ್ಯಾಂಚೈಸಿಗಳ ನಡುವಿನ ಹಿತಾಸಕ್ತಿ ಸಂಘರ್ಷದಿಂದಾಗಿ ಸೀಸನ್ ನಂತರ ಈ ತಂಡವನ್ನು ವಿಸರ್ಜಿಸಲಾಯಿತು.<ref name="India Wins World Twenty20 Thriller">{{Cite news |title=India Wins World Twenty20 Thriller |date=25 September 2007 |access-date=11 November 2007 |url=https://www.hindu.com/2007/09/25/stories/2007092559400100.htm |archive-url=https://web.archive.org/web/20131106033222/http://www.hindu.com/2007/09/25/stories/2007092559400100.htm |url-status=dead |archive-date=6 November 2013 |work=[[The Hindu]] |location=Chennai, India }}</ref><ref name="hindu_jul09">{{cite news |url=https://www.hindu.com/2009/07/04/stories/2009070456811800.htm |archive-url=https://web.archive.org/web/20090707015857/https://www.hindu.com/2009/07/04/stories/2009070456811800.htm |url-status=dead |archive-date=7 July 2009 |work=[[The Hindu]] |title=Minister convenes high-level meet |date=4 July 2009}}</ref> ಕೇರಳವು ಇತ್ತೀಚೆಗೆ [[ರಣಜಿ ಟ್ರೋಫಿ]] ಕ್ರಿಕೆಟ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದೆ, 2017–18 ರಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ವಾರ್ಟರ್ಫೈನಲ್ಗೆ ತಲುಪಿದೆ.<ref name="PRD-sports" /><ref>{{cite news |title=Ranji Trophy: In historic first, Kerala join defending champions Gujarat in quarter-finals |url=https://timesofindia.indiatimes.com/sports/cricket/india-domestic/ranji-trophy/ranji-trophy-in-historic-first-kerala-join-defending-champions-gujarat-in-quarter-finals/articleshow/61836301.cms |date=28 November 2017 |newspaper=The Times of India |access-date=19 December 2017}}</ref> ಫುಟ್ಬಾಲ್ ಕ್ಲಬ್ ಮತ್ತು ಜಿಲ್ಲಾ ಮಟ್ಟದ ಪಂದ್ಯಗಳಿಗೆ ಈ ರಾಜ್ಯದಲ್ಲಿ ಅತಿ ಹೆಚ್ಚು ಆಡಲ್ಪಡುವ ಮತ್ತು ವೀಕ್ಷಿಸಲ್ಪಡುವ ಕ್ರೀಡೆಗಳಲ್ಲಿ ಒಂದಾಗಿದೆ. ಕೊಚ್ಚಿ [[ಇಂಡಿಯನ್ ಸೂಪರ್ ಲೀಗ್]] ನಲ್ಲಿ [[ಕೇರಳ ಬ್ಲಾಸ್ಟರ್ಸ್ ಎಫ್ಸಿ]]ಯನ್ನು ಆಯೋಜಿಸುತ್ತದೆ. ಬ್ಲಾಸ್ಟರ್ಸ್ ದೇಶದಲ್ಲಿ ಅತಿ ಹೆಚ್ಚು ಬೆಂಬಲಿತ ಕ್ಲಬ್ಗಳಲ್ಲಿ ಒಂದಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ [[ಏಷ್ಯಾ]]ದಿಂದ ಐದನೇ ಅತಿ ಹೆಚ್ಚು ಅನುಸರಿಸಲ್ಪಡುವ ಫುಟ್ಬಾಲ್ ಕ್ಲಬ್ ಆಗಿದೆ.<ref>{{Cite web |last=Salikha |first=Adelaida |title=Top FIVE Asian Clubs With Highest Social Media Followers, Up to October 2018 {{!}} Seasia.co |url=https://seasia.co/2018/10/31/top-five-asian-clubs-with-highest-social-media-followers-up-to-october-2018 |access-date=17 September 2020|website=Good News from Southeast Asia |language=en}}</ref><ref>{{Cite web |date=18 June 2020 |title=Indian Football: Five most-followed clubs on social media |url=https://khelnow.com/football/indian-football-clubs-social-media-followers/ |access-date=10 September 2020 |website=Khel Now |language=en-US |archive-date=13 November 2021 |archive-url=https://web.archive.org/web/20211113014231/https://khelnow.com/football/indian-football-clubs-social-media-followers |url-status=dead }}</ref><ref>{{Cite web |title=Malayalam News – kerala blasters become fifth Asian club with the biggest social media following {{!}} News18 Kerala, Sports Latest Malayalam News {{!}} ലേറ്റസ്റ്റ് മലയാളം വാർത്ത |url=https://malayalam.news18.com/news/sports/kerala-blasters-become-fifth-asian-club-with-the-biggest-social-media-following-50113.html |access-date=5 December 2020|website=malayalam.news18.com|date=25 October 2018 }}</ref> ಅಲ್ಲದೆ, ಕೋಝಿಕೋಡ್ [[ಐ-ಲೀಗ್]] ನಲ್ಲಿ [[ಗೋಕುಲಂ ಕೇರಳ ಎಫ್ಸಿ]] ಮತ್ತು [[ಸೈಟ್ ನಾಗ್ಜೀ ಫುಟ್ಬಾಲ್ ಟೂರ್ನಮೆಂಟ್]] ಅನ್ನು ಆಯೋಜಿಸುತ್ತದೆ. ಕೇರಳವು ಪಶ್ಚಿಮ ಬಂಗಾಳ ಮತ್ತು ಗೋವಾ ಜೊತೆಗೆ ಭಾರತದ ಪ್ರಮುಖ ಫುಟ್ಬಾಲ್ ರಾಜ್ಯಗಳಲ್ಲಿ ಒಂದಾಗಿದೆ ಮತ್ತು [[ಐ. ಎಂ. ವಿಜಯನ್]], ಸಿ. ವಿ. ಪಪ್ಪಚನ್, [[ವಿ. ಪಿ. ಸತ್ಯನ್]], [[ಯು. ಶರಾಫ್ ಅಲಿ]], [[ಜೋ ಪಾಲ್ ಅಂಚೇರಿ]], [[ಆಶಿಕ್ ಕುರುಣಿಯನ್]], [[ಮೊಹಮ್ಮದ್ ರಫಿ (ಫುಟ್ಬಾಲ್ ಆಟಗಾರ)|ಮುಹಮ್ಮದ್ ರಫಿ]], [[ಜಿಜು ಜಾಕೋಬ್]], [[ಮಶೂರ್ ಶರೀಫ್]], [[ಪಪ್ಪಚನ್ ಪ್ರದೀಪ್]], [[ಸಿ.ಕೆ. ವಿನೀತ್]], [[ಅನಸ್ ಎಡತೋಡಿಕಾ]], [[ಸಹಲ್ ಅಬ್ದುಲ್ ಸಮದ್]], ಮತ್ತು [[ರಿನೊ ಆಂಟೊ]] ನಂತಹ ರಾಷ್ಟ್ರೀಯ ಆಟಗಾರರನ್ನು ಉತ್ಪಾದಿಸಿದೆ.<ref>{{cite web |url=https://www.the-aiff.com/awards.php |archive-url=https://web.archive.org/web/20090217141248/https://the-aiff.com/awards.php |archive-date=17 February 2009 |title=AIFF Award Player of the Year |publisher=All India Football Federation |access-date=15 November 2015 |url-status=dead}}</ref><ref>{{cite web |author1=James Wray |author2=Ulf Stabe |url=https://twocircles.net/2007sep14/viva_marks_resurgence_kerala_football.html |title=Viva marks the resurgence of Kerala football |publisher=Monstersandcritics.com |date=15 September 2007 |access-date=30 July 2009}}</ref><ref name="india">{{cite web |url=https://zeenews.india.com/news/sports/indian-football-team-suffer-humiliating-1-9-defeat-to-kuwait_668128.html |publisher=zeenews.india.com |title=Indian football team suffer humiliating 1–9 defeat to Kuwait |date=14 November 2010 |access-date=13 November 2016}}</ref><ref>{{Cite web |last=Sportstar |first=Team |title=Sahal recalls journey from university football to senior national team |url=https://sportstar.thehindu.com/football/intercontinental-cup-indian-football-sahal-abdul-samad-kerala-blasters-college-university-system/article28436294.ece |access-date=6 June 2020 |website=Sportstar |date=15 July 2019 |language=en}}</ref><ref>{{cite web |url=https://scroll.in/field/988334/india-football-stimac-names-10-new-players-in-35-man-probables-list-for-oman-uae-friendlies |title=Bipin Singh, Ishan Pandita in 35-man probables list for Oman, UAE friendlies |website=thescroll.in |date=2 March 2021}}</ref> ಕೇರಳ ರಾಜ್ಯ ಫುಟ್ಬಾಲ್ ತಂಡವು [[ಸಂತೋಷ್ ಟ್ರೋಫಿ]]ಯನ್ನು ಏಳು ಬಾರಿ ಗೆದ್ದಿದೆ; 1973, 1992, 1993, 2001, 2004, 2018, ಮತ್ತು 2022 ರಲ್ಲಿ. ಅವರು ಎಂಟು ಬಾರಿ ರನ್ನರ್-ಅಪ್ ಆಗಿದ್ದರು.<ref>{{cite web |url=https://www.the-aiff.com/pages/tournament/tournament-history.php?tournamentdetail=22 |archive-url=https://web.archive.org/web/20120524035900/https://www.the-aiff.com/pages/tournament/tournament-history.php?tournamentdetail=22 |archive-date=24 May 2012 |title=Past Winners |publisher=All India Football Federation |access-date=9 June 2012}}</ref>
ರಾಜ್ಯದ ಪ್ರಮುಖ ಕ್ರೀಡಾಪಟುಗಳಲ್ಲಿ [[ಪಿ. ಟಿ. ಉಷಾ]], [[ಶೈನಿ ವಿಲ್ಸನ್]] ಮತ್ತು [[ಎಂ.ಡಿ. ವಾಲ್ಸಮ್ಮ]] ಸೇರಿದ್ದಾರೆ, ಇವರೆಲ್ಲರೂ [[ಪದ್ಮಶ್ರೀ]] ಮತ್ತು [[ಅರ್ಜುನ ಪ್ರಶಸ್ತಿ]] ಪಡೆದವರಾಗಿದ್ದಾರೆ, ಆದರೆ [[ಕೆ. ಎಂ. ಬೀನಾಮೋಲ್]] ಮತ್ತು [[ಅಂಜು ಬಾಬಿ ಜಾರ್ಜ್]] [[ರಾಜೀವ್ ಗಾಂಧಿ ಖೇಲ್ ರತ್ನ]] ಮತ್ತು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ. [[ಟಿ. ಸಿ. ಯೋಹಾನನ್]], [[ಸುರೇಶ್ ಬಾಬು (ಲಾಂಗ್ ಜಂಪರ್)|ಸುರೇಶ್ ಬಾಬು]], [[ಸಿನಿಮೋಲ್ ಪೌಲೋಸ್]], ಏಂಜಲ್ ಮೇರಿ ಜೋಸೆಫ್, [[ಮರ್ಸಿ ಕುಟ್ಟನ್]], ಕೆ. ಸರಮ್ಮ, [[ರೋಸಾ ಕುಟ್ಟಿ|ಕೆ. ಸಿ. ರೋಸಾಕುಟ್ಟಿ]], ಪದ್ಮಿನಿ ಸೆಲ್ವನ್ ಮತ್ತು ಟಿಂಟು ಲುಕಾ ಕೇರಳದ ಇತರ ಅರ್ಜುನ ಪ್ರಶಸ್ತಿ ವಿಜೇತರು.<ref name="PRD-sports" /><ref>{{cite web |url=https://keralaathletics.org/history.html |title=Kerala State Athletics Association: History |publisher=Kerala State Athletics Association |access-date=12 June 2012 |archive-date=24 June 2012 |archive-url=https://web.archive.org/web/20120624082221/http://keralaathletics.org/history.html |url-status=dead }}</ref> ವಾಲಿಬಾಲ್ ಮತ್ತೊಂದು ಜನಪ್ರಿಯ ಕ್ರೀಡೆಯಾಗಿದ್ದು, ಇದನ್ನು ಹೆಚ್ಚಾಗಿ ಕರಾವಳಿಯ ಮರಳು ಕಡಲತೀರಗಳಲ್ಲಿ ತಾತ್ಕಾಲಿಕ ಅಂಗಣಗಳಲ್ಲಿ ಆಡಲಾಗುತ್ತದೆ.<ref>{{cite book |title=The Rough Guide to South India |author1=David Abram |author2=Nick Edwards |publisher=Rough Guides |year=2004 |isbn=978-1-84353-103-6 |page=64}}</ref> [[ಜಿಮ್ಮಿ ಜಾರ್ಜ್]] ಒಬ್ಬ ಪ್ರಮುಖ ಭಾರತೀಯ ವಾಲಿಬಾಲ್ ಆಟಗಾರ, ಅವರ ಪ್ರಧಾನ ಸಮಯದಲ್ಲಿ ವಿಶ್ವದ ಹತ್ತು ಅತ್ಯುತ್ತಮ ಆಟಗಾರರಲ್ಲಿ ಶ್ರೇಣೀಕರಿಸಲ್ಪಟ್ಟಿದ್ದರು.<ref>{{cite web |title=Jimmy George |work=Sports Portal |publisher=Ministry of Youth Affairs and Sports |access-date=11 November 2007 |url=https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-url=https://web.archive.org/web/20080514040141/https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-date=14 May 2008 |url-status=dead}}</ref> ಇತರ ಜನಪ್ರಿಯ ಕ್ರೀಡೆಗಳಲ್ಲಿ [[ಬ್ಯಾಡ್ಮಿಂಟನ್]], [[ಬ್ಯಾಸ್ಕೆಟ್ಬಾಲ್]] ಮತ್ತು [[ಕಬಡ್ಡಿ]] ಸೇರಿವೆ.<ref name="Reddy2005">{{cite book |author=P.A. Reddy |title=Sports Promotion In India |url=https://books.google.com/books?id=T37m8eRAEX0C&pg=PA119 |access-date=17 November 2012 |year=2005 |publisher=Discovery Publishing House |isbn=978-8171419272 |pages=31–42}}</ref> ಭಾರತೀಯ ಹಾಕಿ ತಂಡದ ನಾಯಕ [[ಪಿ. ಆರ್. ಶ್ರೀಜೇಶ್]], ಅಗ್ರ ಗೋಲ್ಕೀಪರ್ ಕೇರಳದವರು. ರಾಜ್ಯದ ಅಂತಾರಾಷ್ಟ್ರೀಯ ವಾಕರ್ಸ್ [[ಕೆ. ಟಿ. ಇರ್ಫಾನ್]] ಸೇರಿದ್ದಾರೆ.<ref>{{cite news |last=Irfan |first=KT |title=KT Irfan, World Athletics Championships, Moscow |url=https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |newspaper=NDTV Sports |archive-url=https://web.archive.org/web/20130814035243/https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |archive-date=14 August 2013 |url-status=dead}}</ref>
[[2017 FIFA U-17 ವಿಶ್ವಕಪ್]] [[ಭಾರತ]]ದಲ್ಲಿ, [[ಜವಾಹರಲಾಲ್ ನೆಹರು ಕ್ರೀಡಾಂಗಣ (ಕೊಚ್ಚಿ)]] ಅನ್ನು [[ಭಾರತ]]ದಲ್ಲಿ ಆಟವನ್ನು ಆಯೋಜಿಸುವ ಆರು ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಯಿತು.<ref>{{cite web |url=https://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |archive-url=https://web.archive.org/web/20160308104258/http://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |url-status=dead |archive-date=8 March 2016 |title=FIFA Event at Kochi: Time is Ticking Away |website=The New Indian Express |access-date=3 April 2016}}</ref> [[ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ]]ವು ತಿರುವನಂತಪುರ ನಗರದ ಕಾರಿಯಾವಟ್ಟಂನಲ್ಲಿದೆ, ಇದು ಭಾರತದ ಮೊದಲ DBOT (ವಿನ್ಯಾಸ, ನಿರ್ಮಿಸಿ, ನಿರ್ವಹಿಸಿ ಮತ್ತು ವರ್ಗಾಯಿಸಿ) ಮಾದರಿಯ ಹೊರಾಂಗಣ ಕ್ರೀಡಾಂಗಣವಾಗಿದ್ದು, ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಮತ್ತು [[2015 SAFF ಚಾಂಪಿಯನ್ಶಿಪ್]] ಸೇರಿದಂತೆ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಿದೆ.<ref name="SAFF Cup Dates">{{cite news |last1=Chaudhuri |first1=Arunava |title=Trivandrum will host upcoming SAFF Cup in December 2015/January 2016 |url=http://www.sportskeeda.com/football/trivandrum-will-host-upcoming-saff-cup-in-december-2015january-2016 |access-date=22 December 2015 |work=SportsKeeda |date=2 July 2015}}</ref>
== ಪ್ರವಾಸೋದ್ಯಮ ==
{{Main|ಕೇರಳದಲ್ಲಿ ಪ್ರವಾಸೋದ್ಯಮ}}
ಕೇರಳದ ಸಂಸ್ಕೃತಿ ಮತ್ತು ಸಂಪ್ರದಾಯಗಳು, ಅದರ ವೈವಿಧ್ಯಮಯ [[ಕೇರಳದ ಜನಸಂಖ್ಯಾಶಾಸ್ತ್ರ|ಜನಸಂಖ್ಯಾಶಾಸ್ತ್ರ]]ದೊಂದಿಗೆ, ರಾಜ್ಯವನ್ನು ಭಾರತದಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ. 2012 ರಲ್ಲಿ, [[ನ್ಯಾಷನಲ್ ಜಿಯಾಗ್ರಫಿಕ್|ನ್ಯಾಷನಲ್ ಜಿಯಾಗ್ರಫಿಕ್]] ನ ''[[ನ್ಯಾಷನಲ್ ಜಿಯಾಗ್ರಫಿಕ್ ಟ್ರಾವೆಲರ್|ಟ್ರಾವೆಲರ್]]'' ನಿಯತಕಾಲಿಕೆಯು ಕೇರಳವನ್ನು "ವಿಶ್ವದ ಹತ್ತು ಸ್ವರ್ಗಗಳಲ್ಲಿ" ಒಂದಾಗಿ<ref name="Kerala Tourism">{{cite web |title=Kerala Tourism: Paradises in the world |url=https://www.hindu.com/edu/2004/05/11/stories/2004051100040100.htm |archive-url=https://web.archive.org/web/20040904094648/https://www.hindu.com/edu/2004/05/11/stories/2004051100040100.htm |url-status=dead |archive-date=4 September 2004 |work=[[The Hindu]] |access-date=20 February 2012}}</ref><ref>{{cite web |url=https://www.pravasikairali.com/Homepage.aspx?p=articles&news=447 |archive-url=https://web.archive.org/web/20141108151228/https://www.pravasikairali.com/Homepage.aspx?p=articles&news=447 |archive-date=8 November 2014 |title=Pravasi KairaLi Home |publisher=Pravasikairali.com |url-status=usurped |access-date=11 January 2014}}</ref><ref>{{Cite news |date=7 February 2014 |title=Kerala: A vacation in paradise |work=[[The Times of India]] |url=https://timesofindia.indiatimes.com/kerala-a-vacation-in-paradise/articleshow/26251595.cms |access-date=17 January 2023 |archive-date=25 November 2023 |archive-url=https://web.archive.org/web/20231125190237/https://timesofindia.indiatimes.com/kerala-a-vacation-in-paradise/articleshow/26251595.cms |url-status=live }}</ref> ಮತ್ತು "ಜೀವಮಾನದಲ್ಲಿ ನೋಡಲೇಬೇಕಾದ 50 ಸ್ಥಳಗಳು" ಎಂದು ಹೆಸರಿಸಿತು.<ref name="Kerala India">{{cite web |title=Kerala – The Gateway of India |url=https://forbesindia.com/printcontent/26162 |work=[[Forbes]] |access-date=3 January 2012}}</ref> ''[[ಟ್ರಾವೆಲ್ ಅಂಡ್ ಲೀಷರ್]]'' ಕೂಡ ಕೇರಳವನ್ನು "21 ನೇ ಶತಮಾನದ 100 ಉತ್ತಮ ಪ್ರವಾಸಗಳಲ್ಲಿ ಒಂದು" ಎಂದು ವಿವರಿಸಿದೆ.<ref name="Kerala Tourism" /><ref>{{Cite news |title=Kerala : National Geographic Traveler selects Kerala as 'one of the 50 must-see destinations of a lifetime' |publisher=Travel Portal of India |date=27 January 2009 |access-date=11 June 2011 |url=https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |url-status=dead |archive-url=https://web.archive.org/web/20110904030433/https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |archive-date=4 September 2011}}</ref> 2012 ರಲ್ಲಿ, ಇದು [[ತಾಜ್ ಮಹಲ್]] ಅನ್ನು ಹಿಂದಿಕ್ಕಿ ಭಾರತಕ್ಕಾಗಿ ಗೂಗಲ್ನ ಹುಡುಕಾಟ ಪ್ರವೃತ್ತಿಗಳಲ್ಲಿ ಪ್ರಥಮ ಪ್ರವಾಸಿ ತಾಣವಾಯಿತು.<ref>{{Cite news |title=Kerala beats Taj in Google Search Trends for 2012 |work=Indian Express |date=28 December 2012 |access-date=11 January 2012 |url=https://www.indianexpress.com/news/tourism-kerala-beats-taj-in-google-search-trends-for-2012/1051412}}</ref> [[CNN ಟ್ರಾವೆಲ್]] ತನ್ನ '2019 ರಲ್ಲಿ ಭೇಟಿ ನೀಡಲು 19 ಅತ್ಯುತ್ತಮ ಸ್ಥಳಗಳ' ಪಟ್ಟಿಯಲ್ಲಿ ಕೇರಳವನ್ನು ಸೇರಿಸಿದೆ.<ref>{{Cite web |title=CNN Travel's 19 places to visit in 2019 |url=https://www.cnn.com/travel/article/places-to-visit-2019/index.html |website=CNN Travel |date=22 May 2019 |language=en |access-date=4 April 2022}}</ref> ಕೇರಳವನ್ನು [[Time (magazine)|''TIME'']] ನಿಯತಕಾಲಿಕೆಯು 2022 ರಲ್ಲಿ ತನ್ನ ವಿಶ್ವದ ಅತ್ಯುತ್ತಮ ಸ್ಥಳಗಳ ಪಟ್ಟಿಯಲ್ಲಿ ಅನ್ವೇಷಿಸಲು 50 ಅಸಾಧಾರಣ ಸ್ಥಳಗಳಲ್ಲಿ ಹೆಸರಿಸಿತು.<ref>{{Cite web |url=https://www.indiatoday.in/lifestyle/travel/story/ahmedabad-and-kerala-on-time-magazine-s-list-of-world-s-greatest-places-of-2022-1975386-2022-07-14 |title=Ahmedabad and Kerala on TIME magazine's list of World's Greatest Places of 2022 |website=India Today|date=14 July 2022 }}</ref> 2025 ರಲ್ಲಿ, ಕೇರಳವನ್ನು [[ರಫ್ ಗೈಡ್ಸ್]] ನ '2026 ರ ವಿಶ್ವದ 26 ಪ್ರಮುಖ ಸ್ಥಳಗಳ' ಪಟ್ಟಿಯಲ್ಲಿ 16 ನೇ ಸ್ಥಾನದಲ್ಲಿ ಶ್ರೇಣೀಕರಿಸಲಾಯಿತು, ಇದು ಅಂತಾರಾಷ್ಟ್ರೀಯ ಪ್ರವಾಸ ಮಾರ್ಗದರ್ಶಿಯ ವಾರ್ಷಿಕ ಜಾಗತಿಕ ಸ್ಥಳಗಳ ಶ್ರೇಯಾಂಕದಲ್ಲಿ ಸೇರಿಸಲ್ಪಟ್ಟ ಏಕೈಕ ಭಾರತೀಯ ರಾಜ್ಯವಾಗಿದೆ.<ref>{{Cite news |date=2025-12-27 |title=This is the only Indian state to make it to the list of 'World's Top 26 Destinations For 2026' |url=https://timesofindia.indiatimes.com/life-style/travel/destinations/this-is-the-only-indian-state-to-make-it-to-the-list-of-worlds-top-26-destinations-for-2026/articleshow/126194678.cms |access-date=2025-12-30 |work=The Times of India |issn=0971-8257}}</ref>
ಕೇರಳದ ಬೀಚ್ಗಳು, ಬ್ಯಾಕ್ವಾಟರ್ಗಳು, ಸರೋವರಗಳು, ಪರ್ವತ ಶ್ರೇಣಿಗಳು, ಜಲಪಾತಗಳು, ಪ್ರಾಚೀನ ಬಂದರುಗಳು, ಅರಮನೆಗಳು, ಧಾರ್ಮಿಕ ಸಂಸ್ಥೆಗಳು<ref name="Ltd.2012">{{cite book |author=Infokerala Communications Pvt. Ltd. |title=Kerala Tradition & Fascinating Destinations |url=https://books.google.com/books?id=vTunBAAAQBAJ&pg=PA314 |year=2012 |publisher=Biju Mathew {{!}} Info Kerala Communications Pvt Ltd |isbn=978-8192128481 |page=314}}</ref> ಮತ್ತು ವನ್ಯಜೀವಿ ಅಭಯಾರಣ್ಯಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಗಳಾಗಿವೆ.<ref name="Tripays">{{cite web |url=https://www.tripays.com/kerala-family-tour-packages/ |date=6 August 2011 |title=Kerala Family Tour Packages |author=Admin |access-date=2 July 2019 |archive-date=21 November 2021 |archive-url=https://web.archive.org/web/20211121233843/https://www.tripays.com/kerala-family-tour-packages/ |url-status=dead }}</ref> ಕೊಚ್ಚಿ ನಗರವು ಕೇರಳದಲ್ಲಿ ಒಟ್ಟು ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.<ref name="keralatourism">{{cite web |url=https://www.keralatourism.org/destination-wise-foreign-2010.pdf |date=6 August 2011 |title=Destination Wise Number of Foreign Tourists Visited Kerala During 2010 |author=Saju |access-date=24 September 2014}}</ref><ref name="Tourism Statistics">{{cite web |publisher=Government of Kerala, Tourism Department |url=https://www.keralatourism.org/tourismstatistics/Tourist-Statistics2008.pdf |title=Tourist statistics – 2008 |access-date=22 October 2010}}</ref> 1980 ರ ದಶಕದ ಆರಂಭದವರೆಗೆ, ಕೇರಳವು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಅಪರಿಚಿತ ತಾಣವಾಗಿತ್ತು.<ref name="HinduTourism">{{Cite news |author=Santhanam K |title=An ideal getaway |date=27 January 2002 |access-date=11 November 2007 |url=https://www.hindu.com/thehindu/mag/2002/01/27/stories/2002012700400800.htm |archive-url=https://web.archive.org/web/20030623124553/https://www.hindu.com/thehindu/mag/2002/01/27/stories/2002012700400800.htm |url-status=dead |archive-date=23 June 2003 |work=[[The Hindu]] |location=Chennai, India}}</ref> 1986 ರಲ್ಲಿ ಕೇರಳ ಸರ್ಕಾರವು ಪ್ರವಾಸೋದ್ಯಮವನ್ನು ಪ್ರಮುಖ ಉದ್ಯಮವೆಂದು ಘೋಷಿಸಿತು ಮತ್ತು ಅದನ್ನು ಹಾಗೆ ಮಾಡಿದ ಭಾರತದ ಮೊದಲ ರಾಜ್ಯವಾಗಿದೆ.<ref name="Kerala Tourism"/> [[ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ]], ರಾಜ್ಯದ ಪ್ರವಾಸೋದ್ಯಮ ನಿರೀಕ್ಷೆಗಳನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಂಸ್ಥೆ, ಪ್ರಾರಂಭಿಸಿದ ಮಾರ್ಕೆಟಿಂಗ್ ಅಭಿಯಾನಗಳು ಪ್ರವಾಸೋದ್ಯಮ ಉದ್ಯಮದ ಬೆಳವಣಿಗೆಗೆ ಕಾರಣವಾಯಿತು.<ref name="Tourism">{{cite book |title=Tourism Marketing |author=Dasgupta Devashish |publisher=Pearson Education India |year=2011 |isbn=978-8131731826 |page=203 |url=https://books.google.com/books?id=oXWAEjcG-FsC |access-date=30 May 2015}}</ref> ಅನೇಕ ಜಾಹೀರಾತುಗಳು ಕೇರಳವನ್ನು ''[[ಗಾಡ್ಸ್ ಓನ್ ಕಂಟ್ರಿ|ಕೇರಳ, ಗಾಡ್ಸ್ ಓನ್ ಕಂಟ್ರಿ]]'' ಎಂಬ ಸ್ಲೋಗನ್ನೊಂದಿಗೆ ಬ್ರಾಂಡ್ ಮಾಡಿದವು.<ref name="Tourism" /> ಕೇರಳ ಪ್ರವಾಸೋದ್ಯಮವು ಜಾಗತಿಕ ಬ್ರ್ಯಾಂಡ್ ಆಗಿದ್ದು, ಅತಿ ಹೆಚ್ಚು ನೆನಪಿನ ಶಕ್ತಿಯನ್ನು ಹೊಂದಿರುವ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref name="Tourism" /> 2006 ರಲ್ಲಿ, ಕೇರಳವು 8.5 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿತು, ಇದು ಹಿಂದಿನ ವರ್ಷಕ್ಕಿಂತ 23.7% ರಷ್ಟು ಹೆಚ್ಚಳವಾಗಿದೆ, ಇದು ರಾಜ್ಯವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜನಪ್ರಿಯ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ.<ref>{{cite web |title=Tourist Statistics – 2006 |work=Department of Tourism |publisher=Government of Kerala |year=2006 |access-date=11 November 2007 |url=https://www.keralatourism.org/php/media/data/tourismstatistics/TS2006.pdf |archive-url=https://web.archive.org/web/20080626195845/https://www.keralatourism.org/php/media/data/tourismstatistics/TS2006.pdf |archive-date=26 June 2008}}</ref> 2011 ರಲ್ಲಿ, ಕೇರಳಕ್ಕೆ ಪ್ರವಾಸಿಗರ ಒಳಹರಿವು 10-ಮಿಲಿಯನ್ ಗಡಿಯನ್ನು ದಾಟಿತು.<ref name="bizstd">{{Cite news |title=Tourist inflow to Kerala crosses 10 million mark |work=Business-Standard |access-date=15 November 2015 |url=https://www.business-standard.com/india/news/tourist-inflow-to-kerala-crosses-10-million-mark/474524/ |date=16 May 2012 |last1=Joseph |first1=George}}</ref>
ಆಯುರ್ವೇದ ಪ್ರವಾಸೋದ್ಯಮವು 1990 ರ ದಶಕದಿಂದಲೂ ಬಹಳ ಜನಪ್ರಿಯವಾಗಿದೆ, ಮತ್ತು ಖಾಸಗಿ ಸಂಸ್ಥೆಗಳು ಪ್ರವಾಸೋದ್ಯಮ ಇಲಾಖೆಯ ಉಪಕ್ರಮಗಳೊಂದಿಗೆ ಗಮನಾರ್ಹ ಪಾತ್ರವನ್ನು ವಹಿಸಿವೆ.<ref name="HinduTourism" /> ಕೇರಳವು ತನ್ನ [[ಪರಿಸರ ಪ್ರವಾಸೋದ್ಯಮ]] ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ, ಇವುಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಪರ್ವತಾರೋಹಣ, ಟ್ರೆಕ್ಕಿಂಗ್ ಮತ್ತು ಪಕ್ಷಿ ವೀಕ್ಷಣಾ ಕಾರ್ಯಕ್ರಮಗಳು ಪ್ರಮುಖ ಚಟುವಟಿಕೆಗಳಾಗಿವೆ.<ref name="Devrep47">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=47 |access-date=30 May 2015}}</ref> ರಾಜ್ಯದ ಪ್ರವಾಸೋದ್ಯಮ ಉದ್ಯಮವು [[ಕೇರಳದ ಆರ್ಥಿಕತೆ|ರಾಜ್ಯದ ಆರ್ಥಿಕತೆಗೆ]] ಪ್ರಮುಖ ಕೊಡುಗೆಯಾಗಿದೆ, 13.3% ದರದಲ್ಲಿ ಬೆಳೆಯುತ್ತಿದೆ.<ref>{{cite web |title=Tourist Statistics – 2005 (Provisional) |work=Department of Tourism |publisher=Government of Kerala |year=2005 |access-date=11 November 2007 |url=https://www.keralatourism.org/php/media/data/tourismstatistics/TOURISTSTATISTICS2005.pdf |archive-url=https://web.archive.org/web/20080626195846/https://www.keralatourism.org/php/media/data/tourismstatistics/TOURISTSTATISTICS2005.pdf |archive-date=26 June 2008}}</ref> ಪ್ರವಾಸೋದ್ಯಮದಿಂದ ಬರುವ ಆದಾಯವು 2001 ಮತ್ತು 2011 ರ ನಡುವೆ ಐದು ಪಟ್ಟು ಹೆಚ್ಚಾಗಿ 2011 ರಲ್ಲಿ {{INR}} 190 ಬಿಲಿಯನ್ ಗಡಿಯನ್ನು ದಾಟಿತು. ಎಕನಾಮಿಕ್ ಟೈಮ್ಸ್ ಪ್ರಕಾರ<ref>{{Cite news |url=https://economictimes.indiatimes.com/industry/services/travel/kerala-records-6-rise-in-tourist-arrivals-despite-floods-and-nipah-virus-scare/articleshow/67995390.cms |title=Kerala records 6% rise in tourist arrivals despite floods and Nipah virus scare |date=14 February 2019 |work=The Economic Times |access-date=14 August 2019}}</ref> ಕೇರಳವು 2018 ರಲ್ಲಿ ಪ್ರವಾಸೋದ್ಯಮ ವಲಯದಿಂದ INR 365280.1 ಮಿಲಿಯನ್ ದಾಖಲೆಯ ಆದಾಯವನ್ನು ಗಳಿಸಿತು, ಇದು ಹಿಂದಿನ ವರ್ಷಕ್ಕಿಂತ Rs 28743.3 ಮಿಲಿಯನ್ ಹೆಚ್ಚಳವಾಗಿದೆ. 2018 ರಲ್ಲಿ 16.7 ಮಿಲಿಯನ್ ಕ್ಕೂ ಹೆಚ್ಚು ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡಿದ್ದಾರೆ, ಇದು ಹಿಂದಿನ ವರ್ಷ 15.76 ಮಿಲಿಯನ್ ಗೆ ಹೋಲಿಸಿದರೆ 5.9% ರಷ್ಟು ಹೆಚ್ಚಳವಾಗಿದೆ. ಈ ಉದ್ಯಮವು ಸರಿಸುಮಾರು 1.2 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ.<ref name="bizstd" />
ರಾಜ್ಯದ ಏಕೈಕ ಡ್ರೈವ್-ಇನ್ ಬೀಚ್, ಕಣ್ಣೂರಿನ [[ಮುಝಪ್ಪಿಲಂಗಡ್ ಬೀಚ್]], ಇದು {{convert|5|km}} ಮರಳಿನಲ್ಲಿ ಹರಡಿದೆ, ಇದನ್ನು ಬಿಬಿಸಿ 2016 ರಲ್ಲಿ ವಿಶ್ವದ ಆರು ಪ್ರಮುಖ ಡ್ರೈವ್-ಇನ್ ಬೀಚ್ಗಳಲ್ಲಿ ಒಂದಾಗಿ ಆಯ್ಕೆ ಮಾಡಿತು.<ref>{{cite web |url=https://www.bbc.com/autos/story/20160617-the-worlds-best-beaches-for-driving |title=The best beaches for driving |first=David K. |last=Gibson |work=BBC Autos |date=11 June 2021}}</ref> [[ಇಡುಕ್ಕಿ ಅಣೆಕಟ್ಟು]], ವಿಶ್ವದ ಎರಡನೇ ಕಮಾನು ಅಣೆಕಟ್ಟು, ಮತ್ತು ಏಷ್ಯಾದ ಮೊದಲನೆಯದು [[ಇಡುಕ್ಕಿ|ಇಡುಕ್ಕಿಯಲ್ಲಿದೆ]]. ಪ್ರಮುಖ ಬೀಚ್ಗಳು [[ಕೋವಳಂ]], [[ವರ್ಕಲ]], [[ಕೋಝಿಕೋಡ್]], [[ಫೋರ್ಟ್ ಕೊಚ್ಚಿ]], [[ಚೇರಾಯಿ]], [[ಆಲಪ್ಪುಳ]], [[ಪೊನ್ನಾನಿ]], [[ಕಡಲುಂಡಿ]], [[ತಾನೂರು, ಮಲಪ್ಪುರಂ|ತಾನೂರು]], [[ಚಾಲಿಯಂ]], [[ಪಾಯ್ಯಂಬಲಂ]], ಕಪ್ಪಾಡ್, [[ಮುಝಪ್ಪಿಲಂಗಡ್ ಬೀಚ್|ಮುಝಪ್ಪಿಲಂಗಡ್]] ಮತ್ತು [[ಬೇಕಲ್]]. ಜನಪ್ರಿಯ [[ಬೆಟ್ಟದ ತಾಣ]]ಗಳೆಂದರೆ [[ಪೊನ್ಮುಡಿ]], [[ವಯನಾಡು]], [[ವಗಮನ್]], [[ಮುನ್ನಾರ್]], [[ಪೀರ್ಮೇಡ್]], [[ರಾಮಕ್ಕಲ್ಮೇಡು]], [[ಅರಿಂಬ್ರ ಬೆಟ್ಟಗಳು, ಮಲಪ್ಪುರಂ|ಅರಿಂಬ್ರ]], [[ಪೈತಲ್ಮಲ]] [[ಇಡುಕ್ಕಿ|ಕಣ್ಣೂರು]] ಜಿಲ್ಲೆಯ, [[ಕೊಡಿಕುತಿಮಲ]], ಮತ್ತು [[ನೆಲ್ಲಿಯಂಪತಿ]].<ref>{{cite book |author=Tapan K Panda |title=Tourism Marketing |publisher=ICFAI Books |year=2007 |isbn=978-8131404690 |url=https://books.google.com/books?id=4A0j6ZlJQfkC |pages=173–77 |access-date=30 May 2015}}</ref> ಮುನ್ನಾರ್ ಸಮುದ್ರ ಮಟ್ಟದಿಂದ 4,500 ಅಡಿ ಎತ್ತರದಲ್ಲಿದೆ ಮತ್ತು ಚಹಾ ತೋಟಗಳು ಮತ್ತು ವಿವಿಧ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ.<ref name="FPJ">{{cite news |title=Kerala: Spellbound by this natural beauty |newspaper=The Free Press Journal |url=https://www.freepressjournal.in/travel/kerala-spellbound-by-this-natural-beauty/636904 |date=2 August 2015 |access-date=27 November 2015}}</ref> ಕೇರಳದ ಪರಿಸರ ಪ್ರವಾಸೋದ್ಯಮ ತಾಣಗಳು 12 ವನ್ಯಜೀವಿ ಅಭಯಾರಣ್ಯಗಳು ಮತ್ತು ಎರಡು ರಾಷ್ಟ್ರೀಯ ಉದ್ಯಾನವನಗಳನ್ನು ಒಳಗೊಂಡಿವೆ: [[ಪೆರಿಯಾರ್ ಹುಲಿ ಮೀಸಲು]], [[ಪರಂಬಿಕುಳಂ ವನ್ಯಜೀವಿ ಅಭಯಾರಣ್ಯ]], [[ಚಿನ್ನಾರ್ ವನ್ಯಜೀವಿ ಅಭಯಾರಣ್ಯ]], [[ಥಟ್ಟೆಕ್ಕಾಡ್ ಪಕ್ಷಿ ಅಭಯಾರಣ್ಯ]], [[ವಯನಾಡು ವನ್ಯಜೀವಿ ಅಭಯಾರಣ್ಯ]], [[ಕಡಲುಂಡಿ ಪಕ್ಷಿ ಅಭಯಾರಣ್ಯ]], [[ಕರಿಂಪುಳ ವನ್ಯಜೀವಿ ಅಭಯಾರಣ್ಯ]], [[ಮುತ್ತಂಗ]] ವನ್ಯಜೀವಿ ಅಭಯಾರಣ್ಯ, [[ಅರಳಂ ವನ್ಯಜೀವಿ ಅಭಯಾರಣ್ಯ]], [[ಎರವಿಕುಳಂ ರಾಷ್ಟ್ರೀಯ ಉದ್ಯಾನವನ]], ಮತ್ತು [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]] ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ.<ref>{{cite book |author=M.R. Biju |title=Sustainable Dimensions Of Tourism Management |publisher=Mittal Publications |year=2006 |isbn=978-8183241298 |url=https://books.google.com/books?id=AkAdvTbg0dEC |pages=151–65 |access-date=30 May 2015}}</ref> ಕೇರಳ ಬ್ಯಾಕ್ವಾಟರ್ಗಳು ಅಂತರ್ಸಂಪರ್ಕಿತ ನದಿಗಳ (41 ಪಶ್ಚಿಮಕ್ಕೆ ಹರಿಯುವ ನದಿಗಳು), ಸರೋವರಗಳು ಮತ್ತು ಕಾಲುವೆಗಳ ವ್ಯಾಪಕ ಜಾಲವಾಗಿದ್ದು, ಇದು ಆಲಪ್ಪುಳ, [[ಕುಮಾರಕೋಂ]], [[ಪೊನ್ನಾನಿ]], [[ನೀಲೇಶ್ವರಂ]], ಮತ್ತು [[ಪುನ್ನಮದ]] (ಅಲ್ಲಿ ವಾರ್ಷಿಕ ನೆಹರು ಟ್ರೋಫಿ ದೋಣಿ ಪಂದ್ಯವನ್ನು ಆಗಸ್ಟ್ನಲ್ಲಿ ನಡೆಸಲಾಗುತ್ತದೆ), [[ಪತ್ತಿರಮಣಲ್]] [[ಮುಹಮ್ಮ]] ದಲ್ಲಿನ ಸಣ್ಣ ದ್ವೀಪವನ್ನು ಕೇಂದ್ರೀಕರಿಸುತ್ತದೆ. [[ಪದ್ಮನಾಭಪುರಂ ಅರಮನೆ]] ಮತ್ತು [[ಮತ್ತಂಚೇರಿ ಅರಮನೆ]] ಎರಡು ಸಮೀಪದ ಪರಂಪರೆಯ ತಾಣಗಳಾಗಿವೆ.<ref>{{cite web |url=https://www.keralatourism.org/destination/padmanabhapuram-palace/244 |title=Padmanabhapuram Palace |publisher=Kerala Tourism |access-date=2 December 2016}}</ref><ref>{{cite web |url=https://www.keralatourism.org/destination/mattancherry-palace-kochi/178 |title=Mattancherry Palace |publisher=Kerala Tourism |access-date=2 December 2016}}</ref>
== ಸಹ ನೋಡಿ ==
{{stack|{{Portal|ಭಾರತ}}}}
* [[ಕೇರಳದ ರೂಪರೇಖೆ]]
* [[ದಕ್ಷಿಣ ಭಾರತ]]
* [[ದ್ರಾವಿಡರು]]
* [[ಕೇರಳದ ನಗರ ನಿಗಮಗಳ ಪಟ್ಟಿ]]
* [[ಕೇರಳದ ತಾಲೂಕುಗಳ ಪಟ್ಟಿ]]
* [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ]]
* [[ಕೇರಳದ ಜಿಲ್ಲೆಗಳ ಪಟ್ಟಿ]]
* [[ಕೇರಳದ ಆದಾಯ ವಿಭಾಗಗಳ ಪಟ್ಟಿ]]
* [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]]
== ಉಲ್ಲೇಖಗಳು ==
{{Reflist}}
==ಟಿಪ್ಪಣಿಗಳು==
{{notelist}}
=== ಮೂಲಗಳು ===
{{refbegin}}
* {{cite book |title=Mathrubhumi Yearbook Plus – 2019 |publisher=Mathrubhumi Printing & Publishing Company Limited |year=2018 |location=[[Kozhikode]] |editor-last=Chandran |editor-first=V. P. |id={{ASIN|8182676444 |country=in}} |language=Malayalam }}
{{refend}}
== ಹೆಚ್ಚಿನ ಓದುವಿಕೆ ==
{{Further|ಕೇರಳದ ಇತಿಹಾಸ#ಹೆಚ್ಚಿನ ಓದುವಿಕೆ}}
* Bose, Satheese Chandra and Varughese, Shiju Sam (eds.) 2015. ''[https://web.archive.org/web/20150102071757/https://www.orientblackswan.com/display.asp?categoryID=0&isbn=978-8125057222 Kerala Modernity: Ideas, Spaces and Practices in Transition]''. Hyderabad: Orient Blackswan.
* {{cite journal |pmc=7510531 |year=2021 |last1=Chathukulam |first1=Jos |last2=Tharamangalam |first2=Joseph |title=The Kerala model in the time of COVID19: Rethinking state, society and democracy |journal=World Development |volume=137 |article-number=105207 |doi=10.1016/j.worlddev.2020.105207 |pmid=32989341}}
* {{cite journal |url=https://journals.sagepub.com/doi/abs/10.1177/0971521516656077 |doi=10.1177/0971521516656077 |title=The 'Kudumbashree Woman' and the Kerala Model Woman: Women and Politics in Contemporary Kerala |year=2016 |last1=Devika |first1=J. |journal=Indian Journal of Gender Studies |volume=23 |issue=3 |pages=393–414 |s2cid=151752480|url-access=subscription }}
* {{cite journal |url=https://openresearch-repository.anu.edu.au/bitstream/1885/19062/2/01_Jeffrey_Legacies_of_Matriliny%3A__the_2005.pdf |jstor=40023536 |title=Legacies of Matriliny: The Place of Women and the "Kerala Model" |last1=Jeffrey |first1=Robin |journal=Pacific Affairs |year=2004 |volume=77 |issue=4 |pages=647–664}}
* {{cite journal |url=http://keralamediaacademy.org/wp-content/uploads/2015/02/Robin-Jeffery.pdf |doi=10.1017/S0021911809000679 |s2cid=146795894 |title=Testing Concepts about Print, Newspapers, and Politics: Kerala, India, 1800–2009 |year=2009 |last1=Jeffrey |first1=Robin |journal=The Journal of Asian Studies |volume=68 |issue=2 |page=465}}
* {{cite book |title=Politics, Women and Well-Being: How Kerala became 'a Model' |isbn=978-1-349-12252-3 |last1=Jeffrey |first1=Robin |date=27 July 2016 |publisher=Springer}}
* {{cite book |last1=Ramanathaiyer |first1=Sundar |first2=Stewart |last2=MacPherson |title=Social Development in Kerala: Illusion or Reality? |edition=2nd |publisher=Routledge |year=2018}}
== ಬಾಹ್ಯ ಕೊಂಡಿಗಳು ==
{{Sister project links|voy=Kerala|Kerala}}
; ಸರ್ಕಾರ
* {{official website|https://www.kerala.gov.in/}} {{Webarchive|url=https://web.archive.org/web/20060118031516/https://www.kerala.gov.in/ |date=18 January 2006 }} ಕೇರಳ ಸರ್ಕಾರದ
* {{official website|https://www.keralatourism.org/}} ಕೇರಳ ಪ್ರವಾಸೋದ್ಯಮದ
; ಸಾಮಾನ್ಯ ಮಾಹಿತಿ
* {{OSM relation|2018151}}
{{Clear}}
{{Kerala |show=show }}
[[ವರ್ಗ:ಕೇರಳ| ]]
[[ವರ್ಗ:ದಕ್ಷಿಣ ಭಾರತ|.]]
[[ವರ್ಗ:1956 ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರದೇಶಗಳು]]
[[ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
828bjdy69ktmaa60keh4t39ifwdth0g
1378290
1378288
2026-08-03T08:25:31Z
A826
72368
/* ಸಸ್ಯ ಮತ್ತು ಪ್ರಾಣಿ */
1378290
wikitext
text/x-wiki
{{databox}}
{{Infobox Indian state or territory
| name = ಕೇರಳ
| official_name =
| type = ರಾಜ್ಯ
| image_seal = Government of Kerala Logo.svg{{!}}class=skin-invert
| image_skyline = <!-- Do not add additional pictures here without discussion, per consensus [[Talk:Kerala/Archive_6#Infobox montage]]--> Boathouse (7063399547).jpg
| image_caption = [[ಕೇರಳದ ಬ್ಯಾಕ್ವಾಟರ್ಗಳು|ಕೇರಳದ ಬ್ಯಾಕ್ವಾಟರ್ಗಳಲ್ಲಿ]] ಒಂದು [[ಹೌಸ್ ಬೋಟ್]]
| nickname = "[[ಗಾಡ್ಸ್ ಓನ್ ಕಂಟ್ರಿ#ಕೇರಳ|ದೇವರ ಸ್ವಂತ ನಾಡು]]"
| image_map = IN-KL.svg
| coordinates = {{coord|10.0|N|76.3|E|region:IN-KL|display=inline,title}}
| region = ದಕ್ಷಿಣ ಭಾರತ
| before_was = [[ತಿರುವಾಂಕೂರು-ಕೊಚ್ಚಿ]]<br>[[ಮಲಬಾರ್ ಜಿಲ್ಲೆ]]<br>[[ದಕ್ಷಿಣ ಕನ್ನಡ]]
| formation_date4 = 1 ನವೆಂಬರ್ 1956
| capital = ತಿರುವನಂತಪುರ
| districts = [[ಕೇರಳದ ಜಿಲ್ಲೆಗಳ ಪಟ್ಟಿ|14]]
| governor = [[ರಾಜೇಂದ್ರ ಅರ್ಲೇಕರ್]]
| chief_minister = [[ವಿ. ಡಿ. ಸತೀಶನ್]]
| party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
| judiciary = [[ಕೇರಳ ಉಚ್ಚ ನ್ಯಾಯಾಲಯ]]
| chief_secretary = ಬಿಶ್ವನಾಥ್ ಸಿನ್ಹಾ I.A.S.
| legislature_type = ಏಕಸಭಾ
| assembly = [[ಕೇರಳ ವಿಧಾನಸಭೆ]]
| assembly_seats = 140 ಸ್ಥಾನಗಳು
| rajya_sabha_seats = 9 ಸ್ಥಾನಗಳು
| lok_sabha_seats = 20 ಸ್ಥಾನಗಳು
| area_total_km2 = 38863
| area_footnotes = <ref>{{Cite web |title=About Kerala
|url=https://kerala.gov.in/subdetail/NTM1ODMxNzQuNDg=/MjA0ODc2ODQuMzY= |access-date=10 March 2025 |language=en-US }}</ref>
| area_rank = 21ನೇ
| length_km = 560
| width_km = 70
| elevation_footnotes = <ref>{{Cite web |title=Kerala Physiography {{!}} Geographical location {{!}} Kerala {{!}} Kerala |url=https://kerala.me/geography |access-date=24 March 2023 |language=en-US |archive-date=24 March 2023 |archive-url=https://web.archive.org/web/20230324220056/https://kerala.me/geography |url-status=live }}</ref>
| elevation_m = 900
| elevation_max_m = 2,695
| elevation_max_point = [[ಅನಮುಡಿ]]<ref>{{Cite web |title=Anamudi – Peakbagger.com |url=https://www.peakbagger.com/peak.aspx?pid=10664 |access-date=24 March 2023 |website=www.peakbagger.com |archive-date=24 March 2023 |archive-url=https://web.archive.org/web/20230324210042/https://www.peakbagger.com/peak.aspx?pid=10664 |url-status=live }}</ref>
| elevation_min_m = −2.7
| elevation_min_point = [[ಕುಟ್ಟನಾಡು]]<ref>{{Cite web |title=Kuttanadan.com : Explore the Rice Bowl of Kerala |url=https://kuttanadan.com/ |access-date=24 March 2023 |website=Kuttanadan Website |language=en-US |archive-date=24 March 2023 |archive-url=https://web.archive.org/web/20230324210043/https://kuttanadan.com/ |url-status=live }}</ref>
| population_footnotes = <ref>{{cite book | url=https://ruralindiaonline.org/en/library/resource/population-projections-for-india-and-states-2011-2036/ | title=Population Projections for India and States, 2011–2036 | date=July 2020 | access-date=25 March 2023 | archive-date=13 March 2023 | archive-url=https://web.archive.org/web/20230313055356/https://ruralindiaonline.org/en/library/resource/population-projections-for-india-and-states-2011-2036/ | url-status=live }}</ref>
| population_total = 36,111,000
| population_as_of = 2025
| population_rank = 13ನೇ
| population_urban = 79.42%
| population_rural = 20.58%
| population_density = 890
| population_demonym = [[ಕೇರಳೀಯ]],<ref>{{Cite web|url=https://www.theguardian.com/world/2026/feb/25/india-state-kerala-to-be-renamed-keralam-malayalam-language|title=Indian state of Kerala to be renamed Keralam to reflect local pronunciation|first=Penelope|last=MacRae|work=The Guardian |date=25 February 2026}}</ref> [[ಮಲಯಾಳಿಗಳು|ಮಲಯಾಳಿ]]
| official_langs = [[ಮಲಯಾಳಂ]]<ref name="OfficialLang">{{cite web |url=https://prsindia.org/files/bills_acts/acts_states/kerala/2026/Act3of2026KL.pdf |title=The Malayalam Language Act, 2025 |publisher=prsindia.org |date=5 March 2026 |access-date=22 April 2026 }}</ref>
| GDP_footnotes = <ref name="MOSPI">{{cite web|url=http://mospi.nic.in/sites/default/files/press_releases_statements/State_wise_SDP_15_03_2021.xls|title=MOSPI State Domestic Product, Ministry of Statistics and Programme Implementation, Government of India|date=15 March 2021|accessdate=28 March 2021}}</ref>
| GDP_total = {{Increase}} $167.90 billion (nominal)<br/>{{Increase}} $707.26 billion (PPP)
| GDP_year = 2025-26
| GDP_rank = 11ನೇ
| GDP_per_capita = {{Increase}} {{INRConvert|317723|lk=r}} (nominal)<br/>{{Increase}} $19,586 (PPP)
| GDP_per_capita_rank = 11ನೇ
| HDI = {{Increase}} 0.804 {{colour|#090|ಅತಿ ಹೆಚ್ಚು}}<ref name="UNDP">{{cite report|title=Subnational HDI|url=https://globaldatalab.org/shdi/table/shdi/IND/?levels=1+4&interpolation=0&extrapolation=0|access-date=1 April 2026|work=Global Data Lab, [[United Nations Development Programme]]}}</ref>
| HDI_year = 2023
| HDI_rank = 2ನೇ
| literacy = 95.3%<ref>{{Cite book |url=https://www.mospi.gov.in/sites/default/files/publication_reports/AnnualReport_PLFS2023-24L2.pdf |title=Annual Report, Periodic Labour Force Survey (PLFS) (July 2023 – June 2024) |date=23 September 2024 |publisher=National Sample Survey Office, Ministry of Statistics and Programme Implementation, Government of India |pages=A-10 |chapter=Appendix-A: Detailed tables, Table (7): Literacy rate (in per cent) of persons of different age groups for each State/UT (persons, age-group (years): 7 & above, rural+urban (column 6))}}</ref>
| literacy_year = 2024
| literacy_rank = 4ನೇ
| sex_ratio = 1084[[female|♀]]/1000 [[male|♂]]<ref name="pc-census2011" />
| sexratio_year = 2025
| sexratio_rank = 17ನೇ
| iso_code = IN-KL
| registration_plate = KL
| website = kerala.gov.in
| foundation_day = 1 ನವೆಂಬರ್
| mammal = [[ಭಾರತೀಯ ಆನೆ]]<ref name="ENVIS">{{Cite web |date=1 December 2017 |title=State Symbols of India |url=http://wiienvis.nic.in/KidsCentre/state_symbols_india_8411.aspx |archive-url=https://web.archive.org/web/20210415100206/http://wiienvis.nic.in/KidsCentre/state_symbols_india_8411.aspx |archive-date=15 April 2021 |access-date=3 June 2022 |publisher=ENVIS Centre on Wildlife & Protected Areas}}</ref>
| bird = [[ಮಹಾಶಿಖಿ]]<ref name="ENVIS" />
| fish = [[ಗ್ರೀನ್ ಕ್ರೋಮೈಡ್]]
| butterfly = [[ಪಾಪಿಲಿಯೋ ಬುದ್ಧ]]<ref>{{Cite news |last=Jacob |first=Aneesh |title='Budha Mayoori' to be named Kerala's state butterfly |language=en |work=Mathrubhumi |url=https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |url-status=dead |access-date=30 March 2019 |archive-url=https://web.archive.org/web/20190330094056/https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |archive-date=30 March 2019}}</ref>
| flower = [[ಕಸ್ಸಿಯಾ ಫಿಸ್ಟುಲಾ|ಸ್ವರ್ಣ ಮರ]]<ref name="ENVIS" />
| tree = [[ತೆಂಗಿನ]] ಮರ<ref name="ENVIS" />
| fruit = [[ಹಲಸು]]<ref>{{Cite news |date=17 March 2018 |title=Jackfruit to be Kerala's state fruit; declaration on March 21 |work=[[The Indian Express]] |agency=[[Press Trust of India|PTI]] |url=https://indianexpress.com/article/india/jackfruit-to-be-keralas-state-fruit-declaration-on-march-21-5101170/ |access-date=22 March 2018 |archive-date=22 March 2018 |archive-url=https://web.archive.org/web/20180322144926/http://indianexpress.com/article/india/jackfruit-to-be-keralas-state-fruit-declaration-on-march-21-5101170/ |url-status=live }}</ref>
| image_highway = SH IN-KL.png
| sh_numbers = [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|SH KL1 – SH KL79]]
}}
'''ಕೇರಳ'''{{efn|[[ಭಾರತೀಯ ಇಂಗ್ಲಿಷ್]]: [[Help:IPA/English|/ˈkɛrələ/]] {{audio|Kerala (English Pronunciation).ogg| }}, {{respell|KERR|ə|lə}} <br/> {{IPA|ml|ˈkeːɾɐɭɐm|lang|Ml-Keralam.ogg}} ''[[ISO 15919|ಕೇರಳಂ]]''}} [[ದಕ್ಷಿಣ ಭಾರತ]]ದ [[ಮಲಬಾರ್ ಕರಾವಳಿ]]ಯಲ್ಲಿರುವ ಒಂದು [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]ವಾಗಿದೆ. ಇದನ್ನು 1 ನವೆಂಬರ್ 1956 ರಂದು [[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ರಚಿಸಲಾಯಿತು, ಇದು ದೇಶದ [[ಮಲಯಾಳಂ]] ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿ ಏಕೀಕರಿಸಿತು. {{cvt|38863|km2|sqmi|0}} ವ್ಯಾಪಿಸಿರುವ ಕೇರಳವು ಪ್ರಾಥಮಿಕವಾಗಿ [[ಪಶ್ಚಿಮ ಘಟ್ಟಗಳು]] ಮತ್ತು [[ಲಕ್ಷದ್ವೀಪ ಸಮುದ್ರ]]ದ ನಡುವೆ ಸ್ಯಾಂಡ್ವಿಚ್ ಆಗಿರುವ [[ಪಶ್ಚಿಮ ಕರಾವಳಿ ಬಯಲು|ಕರಾವಳಿ ಬಯಲು]]ಗಳ ಪಟ್ಟಿಯಾಗಿದ್ದು, ಈಶಾನ್ಯಕ್ಕೆ [[ಕರ್ನಾಟಕ]], ಪೂರ್ವಕ್ಕೆ [[ತಮಿಳುನಾಡು]] ಮತ್ತು ಪಶ್ಚಿಮ ಸಮೀಪದಲ್ಲಿ [[ಲಕ್ಷದ್ವೀಪ]] ದ್ವೀಪಗಳಿಂದ ಸುತ್ತುವರೆದಿದೆ. [[2011 ರ ಭಾರತದ ಜನಗಣತಿ|2011 ರ ಜನಗಣತಿಯ]] ಪ್ರಕಾರ 33 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಕೇರಳವು ಭಾರತದ [[ಜನಸಂಖ್ಯೆಯ ಪ್ರಕಾರ ಭಾರತದ ರಾಜ್ಯಗಳ ಪಟ್ಟಿ|13 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ]]. [[ತಿರುವನಂತಪುರ]]ವು ರಾಜಧಾನಿ ನಗರವಾಗಿದ್ದರೆ [[ಕೊಚ್ಚಿ ಮಹಾನಗರ ಪ್ರದೇಶ]]ವು ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶವಾಗಿದೆ. ಮಲಯಾಳಂ ಅತಿ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದ್ದು, ಇಂಗ್ಲಿಷ್ ಜೊತೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ.
ಕೇರಳವು 3000 [[ಸಾಮಾನ್ಯ ಯುಗ|BCE]] ಯಿಂದಲೂ ಮಸಾಲೆಗಳ ಪ್ರಮುಖ ರಫ್ತುದಾರನಾಗಿದೆ. [[ಚೇರ ಸಾಮ್ರಾಜ್ಯ|ಚೇರ]] ರಾಜವಂಶವು, ಈ ಪ್ರದೇಶದ ಮೊದಲ ಪ್ರಮುಖ ಸಾಮ್ರಾಜ್ಯವು, ಸಮುದ್ರ ವಾಣಿಜ್ಯದ ಮೂಲಕ ಪ್ರಾಮುಖ್ಯತೆಗೆ ಏರಿತು ಆದರೆ ಆಗಾಗ್ಗೆ ನೆರೆಯ [[ಚೋಳ]] ಮತ್ತು [[ಪಾಂಡ್ಯ]] ರಾಜವಂಶಗಳ ದಾಳಿಗಳನ್ನು ಎದುರಿಸಿತು. 15 ನೇ ಶತಮಾನದಲ್ಲಿ, ಮಸಾಲೆ ವ್ಯಾಪಾರವು ಪೋರ್ಚುಗೀಸ್ ವ್ಯಾಪಾರಿಗಳನ್ನು ಕೇರಳಕ್ಕೆ ಆಕರ್ಷಿಸಿತು, ಇದು ಭಾರತದಲ್ಲಿ [[ವಸಾಹತುಶಾಹಿ ಭಾರತ|ಯುರೋಪಿಯನ್ ವಸಾಹತುಶಾಹಿಯನ್ನು]] ಪ್ರಾರಂಭಿಸಿತು. [[ಭಾರತೀಯ ಸ್ವಾತಂತ್ರ್ಯ ಚಳುವಳಿ|1947 ರಲ್ಲಿ ಭಾರತದ ಸ್ವಾತಂತ್ರ್ಯದ]] ನಂತರ, [[ತಿರುವಾಂಕೂರು]] ಮತ್ತು [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿ]] ಸಾಮ್ರಾಜ್ಯಗಳು ಹೊಸದಾಗಿ ರೂಪುಗೊಂಡ ಗಣರಾಜ್ಯಕ್ಕೆ ಸೇರಿಕೊಂಡವು ಮತ್ತು 1949 ರಲ್ಲಿ [[ತಿರುವಾಂಕೂರು-ಕೊಚ್ಚಿ]] ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. 1956 ರಲ್ಲಿ, ಆಧುನಿಕ ಕೇರಳ ರಾಜ್ಯವನ್ನು ಹಿಂದಿನ [[ಮದ್ರಾಸ್ ರಾಜ್ಯ]]ದೊಂದಿಗೆ ಪರಿಧಿಯ ಪ್ರದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸ್ಥಾಪಿಸಲಾಯಿತು; [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡ ಜಿಲ್ಲೆಯ]] [[ಕಾಸರಗೋಡು]] ತಾಲೂಕನ್ನು ಕೇರಳವನ್ನು ರೂಪಿಸಲು ತಿರುವಾಂಕೂರು-ಕೊಚ್ಚಿಯೊಂದಿಗೆ ವಿಲೀನಗೊಳಿಸಲಾಯಿತು, ಆದರೆ [[ಕನ್ಯಾಕುಮಾರಿ ಜಿಲ್ಲೆ]] ಮತ್ತು [[ಶೆಂಕೋಟ್ಟೈ ತಾಲೂಕಿನ]] ಭಾಗಗಳನ್ನು ಮದ್ರಾಸ್ ರಾಜ್ಯಕ್ಕೆ ಸೇರಿಸಲಾಯಿತು. ಕೇರಳವು 1984 ರಿಂದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಒಳಗೊಂಡಿದೆ.
ಕೇರಳವು ಅತ್ಯಧಿಕ [[ಮಾನವ ಅಭಿವೃದ್ಧಿ ಸೂಚ್ಯಂಕ|ಮಾನವ ಅಭಿವೃದ್ಧಿ ಸೂಚ್ಯಂಕವನ್ನು]] ಹೊಂದಿದೆ, 2018 ರಲ್ಲಿ 0.784; ಅತ್ಯಧಿಕ ಸಾಕ್ಷರತಾ ಪ್ರಮಾಣ, 2018 ರಲ್ಲಿ 96.2%; ಅತ್ಯಧಿಕ ಜೀವಿತಾವಧಿ, 77.3 ವರ್ಷಗಳು; ಮತ್ತು ಅತ್ಯಧಿಕ [[ಲಿಂಗಾನುಪಾತ]], 1,000 ಪುರುಷರಿಗೆ 1,084 ಮಹಿಳೆಯರು ಮತ್ತು ಭಾರತದಲ್ಲಿ ಅತ್ಯಂತ ಕಡಿಮೆ ಧನಾತ್ಮಕ ಜನಸಂಖ್ಯಾ ಬೆಳವಣಿಗೆ ದರ (3.44%). ಇದು ದೇಶದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಕಡಿಮೆ ಬಡತನ ಹೊಂದಿರುವ]] ಮತ್ತು [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ]] ರಾಜ್ಯವಾಗಿದೆ. ರಾಜ್ಯವು ಗಮನಾರ್ಹವಾದ ವಲಸೆಯನ್ನು ಕಂಡಿದೆ, ವಿಶೇಷವಾಗಿ 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಿಗೆ]], ಮತ್ತು ಅದರ ಆರ್ಥಿಕತೆಯು ದೊಡ್ಡ [[ಮಲಯಾಳಿ]] ವಲಸೆ ಜನಸಂಖ್ಯೆಯಿಂದ ಸ್ಥಳಾಂತರ ವರ್ಗಾವಣೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. [[ಕೇರಳದಲ್ಲಿ ಧರ್ಮ|ಜನಸಂಖ್ಯೆಯ 54% ಕ್ಕಿಂತ ಹೆಚ್ಚು]] ಜನರು ಹಿಂದೂ ಧರ್ಮವನ್ನು ಆಚರಿಸುತ್ತಾರೆ, ನಂತರ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು. ಸಂಸ್ಕೃತಿಯು [[ಆರ್ಯ]] ಮತ್ತು [[ದ್ರಾವಿಡರು|ದ್ರಾವಿಡ]] ಸಂಪ್ರದಾಯಗಳ ಸಮ್ಮಿಳನವಾಗಿದ್ದು, ಸಹಸ್ರಮಾನಗಳಿಂದ ಭಾರತ ಮತ್ತು ವಿದೇಶಗಳಿಂದ ಪ್ರಭಾವಗಳಿಂದ ರೂಪುಗೊಂಡಿದೆ.
[[ಕರಿ ಮೆಣಸು]] ಮತ್ತು [[ನೈಸರ್ಗಿಕ ರಬ್ಬರ್]] ಉತ್ಪಾದನೆಯು ರಾಷ್ಟ್ರೀಯ ಉತ್ಪಾದನೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಕೃಷಿ ವಲಯದಲ್ಲಿ, ತೆಂಗು, ಚಹಾ, ಕಾಫಿ, ಗೋಡಂಬಿ ಮತ್ತು ಮಸಾಲೆಗಳು ಪ್ರಮುಖ ಬೆಳೆಗಳಾಗಿವೆ. ರಾಜ್ಯವು {{convert|595|km|mi}} ಕರಾವಳಿಯನ್ನು ಹೊಂದಿದೆ, ಮತ್ತು 1.1 ಮಿಲಿಯನ್ ಜನರು ಮೀನುಗಾರಿಕಾ ಉದ್ಯಮವನ್ನು ಅವಲಂಬಿಸಿದ್ದಾರೆ, ಇದು ರಾಜ್ಯದ ಆದಾಯದ ಸುಮಾರು 3% ರಷ್ಟಿದೆ. ಆರ್ಥಿಕತೆಯು ಹೆಚ್ಚಾಗಿ ಸೇವಾ ವಲಯ ಆಧಾರಿತವಾಗಿದ್ದರೆ, ಪ್ರಾಥಮಿಕ ವಲಯವು ತುಲನಾತ್ಮಕವಾಗಿ ಚಿಕ್ಕ ಪಾಲನ್ನು ನೀಡುತ್ತದೆ. ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರವನ್ನು]] ಹೊಂದಿದ್ದು, ಒಂಬತ್ತು ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸುತ್ತದೆ, ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್. ಕೇರಳವು ಭಾರತದ ಪ್ರಮುಖ [[ಕೇರಳದ ಪ್ರವಾಸೋದ್ಯಮ|ಪ್ರವಾಸಿ ತಾಣಗಳಲ್ಲಿ]] ಒಂದಾಗಿದೆ, [[ಕೇರಳದ ಬೀಚ್ಗಳು|ತೆಂಗಿನ ಗಿಡಗಳಿಂದ ಕೂಡಿದ ಮರಳು ಕಡಲತೀರಗಳು]], [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳು]], [[ಬೆಟ್ಟದ ತಾಣ]]ಗಳು, [[ಆಯುರ್ವೇದ|ಆಯುರ್ವೇದ ಪ್ರವಾಸೋದ್ಯಮ]] ಮತ್ತು [[ಉಷ್ಣವಲಯದ]] ಹಸಿರು ಅದರ ಪ್ರಮುಖ ಆಕರ್ಷಣೆಗಳಾಗಿವೆ.
== ಹೆಸರು ==
=== ವ್ಯುತ್ಪತ್ತಿ ===
"ಕೇರಳ" ಪದವನ್ನು ಮೊದಲು "ಕೇರಳಪುಟೊ" ('[[ಚೇರ ಸಾಮ್ರಾಜ್ಯ|ಚೇರ]] ರ ಮಗ[ಗಳು]') ಎಂದು [[ಮೌರ್ಯ ಸಾಮ್ರಾಜ್ಯ|ಮೌರ್ಯ ಚಕ್ರವರ್ತಿ]] [[ಅಶೋಕ]] (274–237 BCE) ಅವರು ತಮ್ಮ [[ಅಶೋಕನ ಶಾಸನಗಳು|ಶಾಸನಗಳಲ್ಲಿ]] ಒಂದಾದ ಕಲ್ಯಾಣಕ್ಕೆ ಸಂಬಂಧಿಸಿದ 3 ನೇ ಶತಮಾನದ BCE ಯ ಬಂಡೆಯ ಕೆತ್ತನೆಯಲ್ಲಿ ದಾಖಲಿಸಲಾಗಿದೆ.<ref>{{Cite book |last=P. C. Alexander |title=Buddhism in Kerala |pages=23}}</ref> ಆ ಸಮಯದಲ್ಲಿ, ಈ ಪ್ರದೇಶದ ಮೂರು ರಾಜ್ಯಗಳಲ್ಲಿ ಒಂದನ್ನು ಶಾಸ್ತ್ರೀಯ ತಮಿಳಿನಲ್ಲಿ [[ಚೇರ ಸಾಮ್ರಾಜ್ಯ|{{transliteration|ta|ISO|Ceralam}}]] (ಚೇರಲಂ) ಎಂದು ಕರೆಯಲಾಗುತ್ತಿತ್ತು: {{transliteration|ta|ISO|Cera}} (ಚೇರ) ಮತ್ತು {{transliteration|ta|ISO|Kera}} (ಕೇರ) ಒಂದೇ ಪದದ ರೂಪಾಂತರಗಳಾಗಿವೆ.<ref name="Sainz1972">{{Cite book |last=Nicasio Silverio Sainz |url=https://books.google.com/books?id=AOEBAAAAMAAJ |title=Cuba y la Casa de Austria |publisher=Ediciones Universal |year=1972 |page=120 |access-date=6 January 2013}}</ref> {{transliteration|ta|ISO|Cer al}} (ಚೇರಲ್) ಪದವು ಕೇರಳ ರಾಜರ ಅತ್ಯಂತ ಹಳೆಯ ರಾಜವಂಶವನ್ನು ಸೂಚಿಸುತ್ತದೆ ಮತ್ತು ಇದು ಹಳೆಯ ತಮಿಳು ಪದದಿಂದ 'ಸರೋವರ' ಎಂದು ಬಂದಿದೆ.<ref name="Marr1985">{{Cite book |last=John R. Marr |url=https://books.google.com/books?id=x3gOAAAAYAAJ |title=The Eight Anthologies: A Study in Early Tamil Literature |publisher=Institute of Asian Studies |year=1985 |page=263}}</ref> {{transliteration|ta|ISO|Keralam}} (ಕೇರಳಂ) ಶಾಸ್ತ್ರೀಯ [[ತಮಿಳು ಭಾಷೆ|ತಮಿಳು]] {{transliteration|ta|ISO|cerive-alam}} (ಚೆರಿವೆ-ಆಲಂ) 'ಗುಡ್ಡ ಅಥವಾ ಬೆಟ್ಟದ ಇಳಿಜಾರು'<ref name="AlexDeborah2014">{{Cite book |last1=Rayson K. Alex |url=https://books.google.com/books?id=1swxBwAAQBAJ&pg=PA226 |title=Culture and Media: Ecocritical Explorations |last2=S. Susan Deborah |last3=Sachindev P.S. |publisher=Cambridge Scholars Publishing |year=2014 |isbn=978-1-4438-6190-8 |page=226}}</ref> ಅಥವಾ {{transliteration|ta|ISO|cera alam}} (ಚೇರ ಆಲಂ) 'ಚೇರರ ಭೂಮಿ' ಎಂಬುದರಿಂದ ಹುಟ್ಟಿಕೊಂಡಿರಬಹುದು. ಒಂದು [[ಜಾನಪದ ವ್ಯುತ್ಪತ್ತಿ]] ''ಕೇರಳ'' ವನ್ನು [[ಮಲಯಾಳಂ]] ಪದ {{transliteration|ml|ISO|kera}} (ಕೇರ) 'ತೆಂಗಿನ ಮರ' ಮತ್ತು {{transliteration|ml|ISO|alam}} (ಆಲಂ) 'ಭೂಮಿ' ಎಂಬುದರಿಂದ ಪಡೆಯುತ್ತದೆ; ಹೀಗೆ, 'ತೆಂಗಿನ ಮರಗಳ ನಾಡು',<ref name="Sadasivan2000">{{Cite book |last=S. N. Sadasivan |url=https://books.google.com/books?id=Be3PCvzf-BYC&pg=PA101 |title=A Social History of India |publisher=APH Publishing |year=2000 |isbn=978-8176481700 |page=101}}</ref> ಇದು ತೆಂಗಿನ ಮರಗಳ ಸಮೃದ್ಧಿಯಿಂದಾಗಿ ಸ್ಥಳೀಯರು ಬಳಸುವ ರಾಜ್ಯದ ಅಡ್ಡಹೆಸರಾಗಿದೆ.<ref name="PreedyWatson2011">{{Cite book |last1=Victor R. Preedy |url=https://books.google.com/books?id=C6lYoH8rwywC&pg=PT400 |title=Nuts and Seeds in Health and Disease Prevention |last2=Ronald Ross Watson |last3=Vinood B. Patel |publisher=Academic Press |year=2011 |isbn=978-0-12-375689-3 |page=400}}</ref> ಕೇರಳವನ್ನು [[ಭಾರತೀಯ ಮಹಾಸಾಗರದ ವ್ಯಾಪಾರ|ವಿದೇಶಿ ವ್ಯಾಪಾರ ವಲಯಗಳಲ್ಲಿ]] ಪರ್ಯಾಯವಾಗಿ ''[[ಮಲಬಾರ್ ಕರಾವಳಿ|ಮಲಬಾರ್]]'' ಎಂದು ಕರೆಯಲಾಗುತ್ತಿತ್ತು. [[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟೆಸ್]] (6 ನೇ ಶತಮಾನ CE) ಕಾಲದಿಂದಲೂ, [[ಅರಬ್ಬರು|ಅರಬ್]] ನಾವಿಕರು ಕೇರಳವನ್ನು ''ಮೇಲ್'' ಎಂದು ಕರೆಯುತ್ತಿದ್ದರು.{{citation needed|date=October 2025}}
=== ಕೇರಳಂ ಎಂದು ಮರುನಾಮಕರಣ ===
ರಾಜ್ಯದ [[ಮಲಯಾಳಂ]] ಹೆಸರಾದ ಕೇರಳಂ ಎಂದು ಹೆಸರನ್ನು ಬದಲಾಯಿಸಲು ದೀರ್ಘಕಾಲದಿಂದ ಬೇಡಿಕೆಗಳಿವೆ. ಅಧಿಕೃತವಾಗಿ, ರಾಜ್ಯದ ಹೆಸರು ಮಲಯಾಳಂನಲ್ಲಿ 'ಕೇರಳಂ' (കേരളം) ಆಗಿದ್ದರೆ, ಅದರ ಇಂಗ್ಲಿಷ್ ಹೆಸರು 'ಕೇರಳ' ಆಗಿದೆ.<ref>{{Cite web |last=Vineeth |first=T. K. |date=2026-03-07 |title=KERALA-M: What's in a name? |url=https://www.newindianexpress.com/explainers/2026/Mar/07/kerala-m-whats-in-a-name |access-date=2026-03-13 |website=The New Indian Express |language=en}}</ref><ref>{{Cite web |title=Renaming Kerala: Modi Hails Kerala's New Name Keralam |url=https://www.deccanherald.com/india/kerala/rightful-name-as-per-malayali-culture-pm-modi-praises-renaming-of-kerala-to-keralam-3927718 |access-date=2026-03-13 |website=Deccan Herald |language=en}}</ref> [[ಕೇರಳ ವಿಧಾನಸಭೆ]]ಯು ಜೂನ್ 2024 ರಲ್ಲಿ ರಾಜ್ಯದ ಹೆಸರನ್ನು 'ಕೇರಳ' ದಿಂದ 'ಕೇರಳಂ' ಗೆ ಬದಲಾಯಿಸಲು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು, ಇದು ಆಗಸ್ಟ್ 2023 ರ ಹಿಂದಿನ ಸರ್ವಾನುಮತದ ನಿರ್ಣಯವನ್ನು ಅನುಸರಿಸಿತು. [[ಕೇರಳದ ಮುಖ್ಯಮಂತ್ರಿ|ಮುಖ್ಯಮಂತ್ರಿ]] [[ಪಿಣರಾಯಿ ವಿಜಯನ್]] ಅವರು ಎರಡೂ ನಿರ್ಣಯಗಳನ್ನು ಮಂಡಿಸಿದ್ದರು, ಇದು ಅದರ [[ಮಲಯಾಳಿ]] ಗುರುತನ್ನು ಪ್ರತಿಬಿಂಬಿಸಲು ಸಂವಿಧಾನದ ಅನುಚ್ಛೇದ 3 ರ ಅಡಿಯಲ್ಲಿ ರಾಜ್ಯದ ಹೆಸರನ್ನು ತಿದ್ದುಪಡಿ ಮಾಡಲು ಪ್ರಯತ್ನಿಸಿತು.<ref name="auto1">{{cite web | last=TNIE online desk | first=Agencies | title=Ahead of polls, Union Cabinet approves Kerala's renaming to 'Keralam' | website=The New Indian Express | date=2026-02-24 | url=https://www.newindianexpress.com/states/kerala/2026/Feb/24/union-cabinet-approves-keralas-renaming-to-keralam-ahead-of-polls | access-date=2026-02-24}}</ref>
[[ಮೂರನೇ ಮೋದಿ ಸಚಿವ ಸಂಪುಟ|ಕೇಂದ್ರ ಸಚಿವ ಸಂಪುಟ]]ವು ಈ ಪ್ರಸ್ತಾಪವನ್ನು ಫೆಬ್ರವರಿ 24, 2026 ರಂದು ಅನುಮೋದಿಸಿತು. ಸಚಿವ ಸಂಪುಟದ ಅನುಮೋದನೆಯ ನಂತರ, [[ಭಾರತದ ರಾಷ್ಟ್ರಪತಿ]]ಗಳು ಕೇರಳ (ಹೆಸರು ಬದಲಾವಣೆ) ಮಸೂದೆ, 2026 ಅನ್ನು ಭಾರತದ ಸಂವಿಧಾನದ ಅನುಚ್ಛೇದ 3 ರ ಷರತ್ತಿನ ಅಡಿಯಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು [[ಕೇರಳ ವಿಧಾನಸಭೆ|ರಾಜ್ಯ ವಿಧಾನಸಭೆಗೆ]] ಉಲ್ಲೇಖಿಸುತ್ತಾರೆ.<ref name="auto">{{cite web | title=Kerala will now be called Keralam | website=India Today | date=2026-02-24 | url=https://www.indiatoday.in/india/story/union-cabinet-approves-proposal-renaming-kerala-to-keralam-2873528-2026-02-24 | access-date=2026-02-24}}</ref>
[[ಕೇರಳ ವಿಧಾನಸಭೆ]]ಯ ಅನುಮೋದನೆಯ ನಂತರ, ಈ ಮಸೂದೆಯನ್ನು [[ಭಾರತದ ಸಂಸತ್ತಿನಲ್ಲಿ]] ಮಂಡಿಸಲಾಗುವುದು ಮತ್ತು ಅಂಗೀಕರಿಸಿದರೆ, ರಾಜ್ಯದ ಹೆಸರು ಅಧಿಕೃತವಾಗಿ ಕೇರಳಂ ಆಗುತ್ತದೆ.
== ಇತಿಹಾಸ ==
{{Main|ಕೇರಳದ ಇತಿಹಾಸ}}
=== ದಂತಕಥೆ ===
[[File:Parshuramsaraswats.jpg|thumb|[[ಪರಶುರಾಮ]]ನನ್ನು ಚಿತ್ರಿಸುವ ವರ್ಣಚಿತ್ರ, ವಸಾಹತುಗಾರರಿಂದ ಸುತ್ತುವರಿದು, [[ವರುಣ]] ([[ಹಿಂದೂ]] ಜಲದೇವತೆ) ನನ್ನು ಸಮುದ್ರಗಳನ್ನು ಬೇರ್ಪಡಿಸಲು ಆಜ್ಞಾಪಿಸುತ್ತಾನೆ]]
[[ಹಿಂದೂ]] ಪುರಾಣಗಳ [[ದಶಾವತಾರ]] ಕಥೆಗಳಲ್ಲಿ, ಕೇರಳದ ಭೂಮಿಯನ್ನು ಕೊಡಲಿ-ಧಾರಿಯ ವೀರ ಋಷಿ [[ಪರಶುರಾಮ]]ನು, [[ವಿಷ್ಣು]]ವಿನ ಆರನೇ [[ಅವತಾರ]] (ಅವತಾರ), ಸಮುದ್ರದಿಂದ ಮರಳಿ ಪಡೆದನು. ಪರಿಣಾಮವಾಗಿ, ಕೇರಳವನ್ನು ಸಾಂಪ್ರದಾಯಿಕವಾಗಿ ''ಪರಶುರಾಮ ಕ್ಷೇತ್ರಂ'' ("ಪರಶುರಾಮನ ನಾಡು") ಎಂದು ಕರೆಯಲಾಗುತ್ತದೆ.<ref>S. C. Bhatt, Gopal K. Bhargava (2006) "Land and People of Indian States and Union Territories: Volume 14.", p.18</ref> ದಂತಕಥೆಯ ಪ್ರಕಾರ, ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರದ ಮೇಲೆ ಎಸೆದನು, ಮತ್ತು ಅದು ಬಿದ್ದ ಸ್ಥಳದವರೆಗೆ ನೀರು ಹಿಂಜರಿಯಿತು. ಈ ರೀತಿ ಹೊರಹೊಮ್ಮಿದ ಭೂಮಿಯು [[ಗೋಕರ್ಣ]]ದಿಂದ [[ಕನ್ಯಾಕುಮಾರಿ]]ಯವರೆಗೆ ವಿಸ್ತರಿಸಿತು.<ref>{{cite book |author=Aiya VN |title=The Travancore State Manual|publisher=Travancore Government Press |pages=210–212 |year=1906 |accessdate=12 November 2007 |url=https://books.google.com/books?id=RdzaPW-kEvQC}}</ref> ಹೊರಹೊಮ್ಮಿದ ಭೂಮಿಯು ಲವಣಯುಕ್ತ ಮತ್ತು ವಾಸಯೋಗ್ಯವಾಗಿರಲಿಲ್ಲ, ಆದ್ದರಿಂದ ಪರಶುರಾಮನು ಸರ್ಪರಾಜ [[ವಾಸುಕಿ]]ಯನ್ನು ಪ್ರಾರ್ಥಿಸಿದನು, ಅವನು ಮಣ್ಣನ್ನು ಶುದ್ಧೀಕರಿಸಲು ಪವಿತ್ರ ವಿಷವನ್ನು ಉಗುಳಿದನು, ಅದನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದನು. ಗೌರವದಿಂದ, ವಾಸುಕಿ ಮತ್ತು ಎಲ್ಲಾ ಹಾವುಗಳನ್ನು ಭೂಮಿಯ ರಕ್ಷಕರಾಗಿ ನೇಮಿಸಲಾಯಿತು. ಈ ದಂತಕಥೆಯನ್ನು 17 ನೇ ಅಥವಾ 18 ನೇ ಶತಮಾನದ ಪಠ್ಯ ''[[ಕೇರಳೋಲ್ಪತ್ತಿ]]'' ಯಲ್ಲಿ ವಿಸ್ತರಿಸಲಾಯಿತು ಮತ್ತು ಸಂಹಿತೆಗೊಳಿಸಲಾಯಿತು. ಇದು ಆರಂಭಿಕ ಕೇರಳ ಸಂಸ್ಥೆಗಳ{{mdash}}ಉದಾಹರಣೆಗೆ ಭೂ ಹಿಡುವಳಿ ಮತ್ತು ಆಡಳಿತ{{mdash}}ಮೂಲವನ್ನು ಪರಶುರಾಮನ ಕಥೆಗೆ ಸಂಪರ್ಕಿಸುತ್ತದೆ.<ref>{{cite book|author=M. T. Narayanan|title=Agrarian Relations in Late Medieval Malabar|url=https://books.google.com/books?id=kHtbkuXruzwC&pg=PA17|accessdate=28 July 2012|date=1 January 2003|publisher=Northern Book Centre|isbn=978-81-7211-135-9|pages=16–18}}</ref> ಮಧ್ಯಕಾಲೀನ ಯುಗದಲ್ಲಿ, [[ಚೇರ]] ರಾಜ [[ಚೆಂಕುಟ್ಟುವನ್]] ತನ್ನ ಈಟಿಯನ್ನು ಸಮುದ್ರಕ್ಕೆ ಎಸೆಯುವ ಮೂಲಕ ಪರಶುರಾಮ ಸಂಪ್ರದಾಯವನ್ನು ಅನುಕರಿಸಿರಬಹುದು, ಅದರ ಮೇಲಿನ ತನ್ನ ಪ್ರಭುತ್ವವನ್ನು ಸಂಕೇತಿಸಲು.<ref>{{Cite book |last=Srinivisa Iyengar |first=P. T. |title=History of the Tamils: From the Earliest Times to 600 A.D. |publisher=Asian Educational Services |year=1929 |isbn=978-8120601451 |location=Madras |page=515}}</ref>
ಕೇರಳದೊಂದಿಗೆ ಸಂಬಂಧಿಸಿದ ಪ್ರಮುಖ [[ಪೌರಾಣಿಕ]] ವ್ಯಕ್ತಿಯೆಂದರೆ [[ಮಹಾಬಲಿ]], ಒಬ್ಬ [[ಅಸುರ]] ಮತ್ತು ಮಾದರಿ ನ್ಯಾಯಪ್ರಿಯ ರಾಜ, ಅವರು ಕೇರಳದಿಂದ ಭೂಮಿಯನ್ನು ಆಳಿದರು ಎಂದು ಹೇಳಲಾಗುತ್ತದೆ. ಅವನು ಯುದ್ಧದಲ್ಲಿ [[ದೇವ (ಹಿಂದೂ ಧರ್ಮ)|ದೇವ]] ಗಳನ್ನು ಸೋಲಿಸಿ, ಅವರನ್ನು ಗಡಿಪಾರು ಮಾಡಿದನು. ಪ್ರತಿಕ್ರಿಯೆಯಾಗಿ, ದೇವರುಗಳು ವಿಷ್ಣುವಿಗೆ ಮನವಿ ಮಾಡಿದರು, ಅವರು [[ವಾಮನ]]ನಾಗಿ ತಮ್ಮ ಐದನೇ ಅವತಾರವನ್ನು ತಾಳಿದರು ಮತ್ತು ಕ್ರಮವನ್ನು ಪುನಃಸ್ಥಾಪಿಸಲು, ಮಹಾಬಲಿಯನ್ನು [[ಪಾತಾಳ]] (ಪಾತಾಳ ಲೋಕ) ಕೆಳಗೆ ತಳ್ಳಿದರು. ಜನಪ್ರಿಯ ನಂಬಿಕೆಯ ಪ್ರಕಾರ, ಮಹಾಬಲಿ ವರ್ಷಕ್ಕೊಮ್ಮೆ ಕೇರಳಕ್ಕೆ ಹಿಂತಿರುಗುತ್ತಾನೆ, ಇದನ್ನು [[ಓಣಂ]] ಹಬ್ಬವಾಗಿ ಆಚರಿಸಲಾಗುತ್ತದೆ.<ref name="Rinehart2004">{{cite book|author=Robin Rinehart|title=Contemporary Hinduism: Ritual, Culture, and Practice|url=https://books.google.com/books?id=hMPYnfS_R90C&pg=PA146|accessdate=28 July 2012|year=2004|publisher=ABC-CLIO|isbn=978-1-57607-905-8|page=146}}</ref> 18 [[ಪುರಾಣಗಳಲ್ಲಿ]] ಅತ್ಯಂತ ಹಳೆಯದಾದ ''[[ಮತ್ಸ್ಯ ಪುರಾಣ]]''ವು,<ref>{{cite book|last=Goldberg|first=Ellen|title=The Lord who is Half Woman: Ardhanārīśvara in Indian and Feminist Perspective|url=https://books.google.com/books?id=xUhlxBozntoC&pg=PA20|year=2002|publisher=SUNY Press|isbn=978-0-7914-5325-4|page=20|accessdate=30 May 2015}}</ref><ref>{{cite book|last=Kemmerer|first=Lisa|title=Animals and World Religions|url=https://books.google.com/books?id=iFEL2yjkbAAC&pg=PA78|year=2011|publisher=Oxford University Press|isbn=978-0-19-991255-1|page=78|accessdate=30 May 2015}}</ref> [[ಮತ್ಸ್ಯ]]ದ{{mdash}}ವಿಷ್ಣುವಿನ ಮೊದಲ ಅವತಾರ{{mdash}}ಮತ್ತು ರಾಜ [[ಮನು (ಹಿಂದೂ ಧರ್ಮ)|ಮನು]]ನ ಕಥೆಯನ್ನು, ಮೊದಲ ಮನುಷ್ಯ ಮತ್ತು ಈ ಪ್ರದೇಶದ ಆಡಳಿತಗಾರ, ಕೇರಳ ಮತ್ತು [[ತಮಿಳುನಾಡಿನ]] [[ಮಲಯ ಪರ್ವತಗಳಲ್ಲಿ]] ಇರಿಸುತ್ತದೆ.<ref>{{cite book|last=Dalal|first=Roshen|title=Hinduism: An Alphabetical Guide|url=https://books.google.com/books?id=DH0vmD8ghdMC&pg=PA250|year=2011|publisher=Penguin Books India|isbn=978-0-14-341421-6|page=250|accessdate=30 May 2015}}</ref><ref>{{cite book|last=Ragozin|first=Zenaide A.|title=Vedic India As Embodied Principally in the Rig-veda|url=https://books.google.com/books?id=T16d-eRG5VkC&pg=PA341|year=2005|publisher=Kessinger Publishing|isbn=978-1-4179-4463-7|page=341|accessdate=21 March 2013}}</ref>
=== ಪ್ರಾಗಿತಿಹಾಸ ===
[[File:MarayoorDolmen.JPG|thumb|[[ಮಾರಯೂರು|ಮಾರಯೂರಿನಲ್ಲಿ]] ನವಶಿಲಾಯುಗದ ಜನರು ನಿರ್ಮಿಸಿದ [[ಡಾಲ್ಮೆನ್]]]]
ಪ್ರಸ್ತುತ ಕೇರಳದ ಗಣನೀಯ ಭಾಗವು ಪ್ರಾಚೀನ ಕಾಲದಲ್ಲಿ ಸಮುದ್ರದ ಅಡಿಯಲ್ಲಿ ಮುಳುಗಿತ್ತು ಎಂದು ನಂಬಲಾಗಿದೆ. ಚಂಗನಾಶ್ಶೇರಿಯ ಬಳಿ ಸಾಗರಿಕ ಪಳೆಯುಳಿಕೆಗಳ ಆವಿಷ್ಕಾರವು ಈ ಊಹೆಯನ್ನು ಬೆಂಬಲಿಸುತ್ತದೆ.<ref name="Menon2007">{{cite book|author=A. Sreedhara Menon|title=A Survey of Kerala History|url=https://books.google.com/books?id=FVsw35oEBv4C&pg=PA20|accessdate=27 July 2012|date=1 January 2007|publisher=DC Books|isbn=978-81-264-1578-6|pages=20–21}}</ref> ಕೇರಳದಲ್ಲಿನ ಪ್ರಾಗೈತಿಹಾಸಿಕ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರಗಳು ಇಡುಕ್ಕಿ ಜಿಲ್ಲೆಯ [[ಮಾರಯೂರು]] ಪ್ರದೇಶದಲ್ಲಿ [[ನವಶಿಲಾಯುಗ]]-ಯುಗದ [[ಡಾಲ್ಮೆನ್]]ಗಳನ್ನು ಒಳಗೊಂಡಿವೆ, ಸ್ಥಳೀಯವಾಗಿ ''ಮುನಿಯಾರ'' ಎಂದು ಕರೆಯಲಾಗುತ್ತದೆ{{mdash}}''ಮುನಿ'' (ಸನ್ಯಾಸಿ ಅಥವಾ ಋಷಿ) ಮತ್ತು ''ಆರ'' (ಡಾಲ್ಮೆನ್) ನಿಂದ ಬಂದಿದೆ.<ref name="Unlocking the secrets of history">{{cite news|url=http://www.hindu.com/2004/12/06/stories/2004120604900300.htm | location=Chennai, India | work=The Hindu | title=Unlocking the secrets of history | date=6 December 2004 | accessdate= 12 November 2015}}</ref> [[ವಯನಾಡಿನ]] [[ಎಡಕ್ಕಲ್ ಗುಹೆಗಳು|ಎಡಕ್ಕಲ್ ಗುಹೆಗಳಲ್ಲಿನ]] ಬಂಡೆಯ ಕೆತ್ತನೆಗಳು ಸುಮಾರು 6000 BCE ಯ ನವಶಿಲಾಯುಗದ ಅವಧಿಯ ಹಿಂದಿನವು.<ref name="Kapoor2002">{{cite book|author=Subodh Kapoor|title=The Indian Encyclopaedia|url=https://books.google.com/books?id=gxIpYtnyzu4C&pg=PA2184|accessdate=1 August 2012|date=1 July 2002|publisher=Cosmo Publications|isbn=978-81-7755-257-7|page=2184}}</ref><ref>{{cite web|title=Travel and Tourism|url=http://www.kerala.gov.in/index.php?option=com_content&view=article&id=3792:travel-and-tourism&catid=271:about-kerala&Itemid=2267|website=kerala.gov.in|publisher=Government of Kerala|accessdate=12 November 2015}}</ref> ಪುರಾತತ್ತ್ವ ಶಾಸ್ತ್ರದ ಅಧ್ಯಯನಗಳು ಈ ಪ್ರದೇಶದಾದ್ಯಂತ [[ಮಧ್ಯಶಿಲಾಯುಗ]], ನವಶಿಲಾಯುಗ ಮತ್ತು [[ಮೆಗಾಲಿಥಿಕ್]] ತಾಣಗಳನ್ನು ಗುರುತಿಸಿವೆ.<ref name="AroraSingh116">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=116}}</ref> ಈ ಆವಿಷ್ಕಾರಗಳು ಆರಂಭಿಕ ಕೇರಳ ಸಮಾಜ ಮತ್ತು ಸಂಸ್ಕೃತಿಯ ಅಭಿವೃದ್ಧಿಯು [[ಪ್ಯಾಲಿಯೋಲಿಥಿಕ್|ಪ್ಯಾಲಿಯೋಲಿಥಿಕ್ ಯುಗದಲ್ಲಿ]] ಪ್ರಾರಂಭವಾಯಿತು ಮತ್ತು ಮಧ್ಯಶಿಲಾಯುಗ, ನವಶಿಲಾಯುಗ ಮತ್ತು ಮೆಗಾಲಿಥಿಕ್ ಅವಧಿಗಳ ಮೂಲಕ ಮುಂದುವರೆಯಿತು ಎಂದು ಸೂಚಿಸುತ್ತವೆ.<ref name="google">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|pages=118, 123}}</ref> ವಿದೇಶಿ ಸಾಂಸ್ಕೃತಿಕ ಸಂವಹನಗಳು ಸಹ ಈ ಅಭಿವೃದ್ಧಿಯನ್ನು ರೂಪಿಸುವಲ್ಲಿ ಪಾತ್ರವಹಿಸಿವೆ;<ref name="AroraSingh1999">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=123}}</ref> ಕೆಲವು ಇತಿಹಾಸಕಾರರು ಕೊನೆಯ [[ಕಂಚಿನ ಯುಗ]] ಮತ್ತು ಆರಂಭಿಕ [[ಕಬ್ಬಿಣ ಯುಗ|ಕಬ್ಬಿಣದ ಯುಗ]]ದಲ್ಲಿ [[ಸಿಂಧೂ ಕಣಿವೆ ನಾಗರಿಕತೆ]]ಯೊಂದಿಗೆ ಸಂಭವನೀಯ ಸಂಪರ್ಕಗಳನ್ನು ಸೂಚಿಸುತ್ತಾರೆ.<ref>{{cite news|url=http://www.thehindu.com/news/states/article26324.ece | work=The Hindu | title=Symbols akin to Indus valley culture discovered in Kerala | date=29 September 2009 |accessdate= 12 November 2015}}</ref>
=== ಪ್ರಾಚೀನ ಇತಿಹಾಸ ===
[[File:Silk route copy.jpg|thumb|225px|[[ರೇಷ್ಮೆ ಮಾರ್ಗ]] ನಕ್ಷೆ. ಮಸಾಲೆ ವ್ಯಾಪಾರವು ಜಲಮಾರ್ಗಗಳಲ್ಲಿತ್ತು (ನೀಲಿ).]]
[[ಸುಮೇರ್|ಸುಮೇರಿಯನ್]] ದಾಖಲೆಗಳ ಪ್ರಕಾರ, ಕೇರಳವು ಕನಿಷ್ಠ 3000 BCE ಯಿಂದಲೂ ಪ್ರಮುಖ ಮಸಾಲೆ ರಫ್ತುದಾರನಾಗಿದೆ ಮತ್ತು ಇದು "ಮಸಾಲೆಗಳ ತೋಟ" ಅಥವಾ "ಭಾರತದ ಮಸಾಲೆ ತೋಟ" ಎಂದು ಉಲ್ಲೇಖಿಸಲ್ಪಡುತ್ತದೆ.<ref>{{cite news|url=http://www.thehindu.com/todays-paper/tp-national/tp-kerala/of-kerala-egypt-and-the-spice-link/article5625620.ece | first = Kaavya | last = Pradeep Kumar | work=The Hindu | title=Of Kerala, Egypt, and the Spice link | date=28 January 2014 | accessdate=12 November 2015}}</ref><ref>[https://books.google.com/books?id=gOrvghLklKoC ''Striving for sustainability, environmental stress and democratic initiatives in Kerala''], p. 79; ISBN 81-8069-294-9, Srikumar Chattopadhyay, Richard W. Franke; Year: 2006.</ref><ref name="spiceHindu">{{Cite news |title=Route it through the seas |newspaper=The Hindu |date=December 2016 |url=https://www.thehindu.com/children/ROUTE-it-through-the-seas/article16735515.ece |access-date=2024-01-08 |archive-date=5 March 2022 |archive-url=https://web.archive.org/web/20220305035957/https://www.thehindu.com/children/ROUTE-it-through-the-seas/article16735515.ece |url-status=live |last1=Subramanian |first1=Archana }}</ref> ಈ ಪ್ರದೇಶದ ಮಸಾಲೆಗಳು 3 ಮತ್ತು 2 ನೇ ಸಹಸ್ರಮಾನ BCE ಯಲ್ಲಿ ಮಲಬಾರ್ ಕರಾವಳಿಗೆ ಪ್ರಾಚೀನ [[ಬ್ಯಾಬಿಲೋನಿಯನ್ನರು]], [[ಅಸಿರಿಯನ್ನರು]] ಮತ್ತು [[ಈಜಿಪ್ಟಿನವರು|ಈಜಿಪ್ಟಿನವರನ್ನು]] ಆಕರ್ಷಿಸಿದವು. [[ಅರಬ್ಬರು]] ಮತ್ತು [[ಫೀನಿಷಿಯನ್ನರು]] ಸಹ ಈ ಅವಧಿಯಲ್ಲಿ ಕೇರಳದೊಂದಿಗೆ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಿದರು.<ref name="Menon57">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA57|accessdate=10 October 2012|date=1 January 2007|publisher=DC Books|isbn=978-81-264-1578-6|pages=57–58}}</ref> ಕೇರಳಪುತ್ರದ ಭೂಮಿಯು ಚಕ್ರವರ್ತಿ ಅಶೋಕನ ಕಾಲದಲ್ಲಿ ದಕ್ಷಿಣ ಭಾರತದ ನಾಲ್ಕು ಸ್ವತಂತ್ರ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು, [[ಚೋಳ ಸಾಮ್ರಾಜ್ಯ|ಚೋಳ]], [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಮತ್ತು [[ಸತಿಯಪುತ್ರರು|ಸತಿಯಪುತ್ರ]] ಸಾಮ್ರಾಜ್ಯಗಳ ಜೊತೆಗೆ.<ref name="SmithJackson2008">{{cite book|author1=Vincent A. Smith|author2=A. V. Williams Jackson|title=History of India, in Nine Volumes: Vol. II – From the Sixth Century BCE to the Mohammedan Conquest, Including the Invasion of Alexander the Great|url=https://books.google.com/books?id=bP7DzXQBoM4C&pg=PA166|accessdate=1 August 2012|date=30 November 2008|publisher=Cosimo, Inc.|isbn=978-1-60520-492-5|page=166}}</ref> ವಿದ್ವಾಂಸರು ಸಾಮಾನ್ಯವಾಗಿ ಕೇರಳಪುತ್ರವನ್ನು [[ಚೇರ ಸಾಮ್ರಾಜ್ಯ|ಚೇರರು]] ಎಂದು ಗುರುತಿಸುತ್ತಾರೆ, ಇದು ಕೇರಳದ ಅತ್ಯಂತ ಹಳೆಯ ಪ್ರಮುಖ ರಾಜವಂಶವಾಗಿದೆ.<ref name="The Cambridge Shorter History of India">{{cite book|title=The Cambridge Shorter History of India|url=https://books.google.com/books?id=9_48AAAAIAAJ&pg=PA193|accessdate=10 October 2012|publisher=CUP Archive|page=193|id=GGKEY:2W0QHXZ7K40}}</ref><ref name="Dwivedi1994">{{cite book|author=Bhanwar Lal Dwivedi|title=Evolution of Education Thought in India|url=https://books.google.com/books?id=idERT6Tg4MMC&pg=PA164|accessdate=10 October 2012|date=1 January 1994|publisher=Northern Book Centre|isbn=978-81-7211-059-8|page=164}}</ref> ಈ ದಕ್ಷಿಣ ಪ್ರದೇಶಗಳು ಒಮ್ಮೆ ಸಾಮಾನ್ಯ ಭಾಷೆ ಮತ್ತು ಸಾಂಸ್ಕೃತಿಕ ಚೌಕಟ್ಟನ್ನು ಹಂಚಿಕೊಂಡಿದ್ದವು, ಇತಿಹಾಸದಲ್ಲಿ [[ತಮಿಳಕಂ]] ಎಂದು ಕರೆಯಲ್ಪಡುವ ಪ್ರದೇಶದೊಳಗೆ.<ref>{{Cite book
| last=Kanakasabhai | first=V.
| title=The Tamils Eighteen Hundred Years Ago
| url=https://books.google.com/books?id=VuvshP5_hg8C
| year=1997
| publisher=Asian Educational Services
| isbn=978-81-206-0150-5
| accessdate=16 June 2009}}</ref> ಚೇರರು ಪ್ರಸ್ತುತ ಕೇರಳದ ಹೆಚ್ಚಿನ ಭಾಗವನ್ನು ಆಳಿದರೆ, ಪ್ರದೇಶದ ದಕ್ಷಿಣ ತುದಿಯು [[ಪಾಂಡ್ಯರ]] ನಿಯಂತ್ರಣಕ್ಕೆ ಒಳಪಟ್ಟಿತ್ತು,<ref name="Singh2008">{{cite book|author=Upinder Singh|title=A History of Ancient and Early Medieval India: From the Stone Age to the 12th Century|url=https://books.google.com/books?id=GW5Gx0HSXKUC&pg=PA385|accessdate=10 October 2012|year=2008|publisher=Pearson Education India|isbn=978-81-317-1677-9|page=385}}</ref> ಅವರ ವ್ಯಾಪಾರ ಬಂದರನ್ನು ಪ್ರಾಚೀನ ಪಾಶ್ಚಾತ್ಯ ಮೂಲಗಳಲ್ಲಿ [[ನೆಲ್ಸಿಂಡಾ]] (ಅಥವಾ ನಿಯಾಸಿಂಡಿ) ಎಂದು ಗುರುತಿಸಲಾಗಿದೆ.<ref name="Books.google.co.in">{{Cite book|url=https://books.google.com/books?id=rQipbjusDyQC&dq=nelcynda&pg=PA301 |title=History of ancient geography – Google Books |author=James Oliver Thomson|publisher=Biblo & Tannen Publishers, 1948|accessdate=30 July 2009|isbn=978-0-8196-0143-8|year=1948}}</ref> ನಂತರ, ಈ ಪ್ರದೇಶದ ನಿಯಂತ್ರಣವು ಪಾಂಡ್ಯರು, ಚೇರರು ಮತ್ತು ಚೋಳರ ನಡುವೆ ಪರ್ಯಾಯವಾಗಿತ್ತು. [[ಆಯ್ ಸಾಮ್ರಾಜ್ಯ|ಆಯ್ಸ್]] ಮತ್ತು [[ಎಝಿಮಲ ಸಾಮ್ರಾಜ್ಯ|ಮುಷಿಕರು]] ಪ್ರಾಚೀನ ಕೇರಳದ ಇತರ ಎರಡು ರಾಜವಂಶಗಳಾಗಿದ್ದು, ಕ್ರಮವಾಗಿ ಚೇರ ಪ್ರದೇಶದ ದಕ್ಷಿಣ ಮತ್ತು ಉತ್ತರಕ್ಕೆ ನೆಲೆಗೊಂಡಿದ್ದವು.<ref name="Shashi1996">{{cite book|author=S. S. Shashi|title=Encyclopaedia Indica: India, Pakistan, Bangladesh|url=https://books.google.com/books?id=lwswAQAAIAAJ|accessdate=10 October 2012|year=1996|publisher=Anmol Publications|isbn=978-81-7041-859-7|page=1207}}</ref><ref name="Ramunny1993">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA3|accessdate=10 October 2012|date=1 January 1993|publisher=Northern Book Centre|isbn=978-81-7211-052-9|page=3}}</ref>
ಕೊನೆಯ ಶತಮಾನಗಳ BCE ಯ ಹೊತ್ತಿಗೆ, ಕರಾವಳಿಯು ಗ್ರೀಕ್ ಮತ್ತು ರೋಮನ್ ವ್ಯಾಪಾರಕ್ಕೆ, ವಿಶೇಷವಾಗಿ [[ಕರಿ ಮೆಣಸು|ಕರಿಮೆಣಸಿನಲ್ಲಿ]] ಪ್ರಮುಖ ಕೇಂದ್ರವಾಗಿತ್ತು. ಚೇರರು [[ಪ್ರಾಚೀನ ಚೀನಾ]], [[ಪಶ್ಚಿಮ ಏಷ್ಯಾ]], ಈಜಿಪ್ಟ್, ಗ್ರೀಸ್ ಮತ್ತು [[ರೋಮನ್ ಸಾಮ್ರಾಜ್ಯ]]ದೊಂದಿಗೆ ವಾಣಿಜ್ಯ ಸಂಪರ್ಕಗಳನ್ನು ಹೊಂದಿದ್ದರು. ವಿದೇಶಿ ವ್ಯಾಪಾರ ದಾಖಲೆಗಳಲ್ಲಿ, ಈ ಪ್ರದೇಶವನ್ನು ಮೇಲ್ ಅಥವಾ [[ಮಲಬಾರ್ ಕರಾವಳಿ|ಮಲಬಾರ್]] ಎಂದು ಕರೆಯಲಾಗುತ್ತಿತ್ತು.<ref>{{cite web | url=http://www.siamese-heritage.org/jsspdf/1961/JSS_054_1c_Minattur_MalayaWhatsInAName.pdf | title=Malaya: What's in the name | publisher=siamese-heritage.org | accessdate=7 August 2012 | author=Joseph Minattur | page=1}}</ref> ಆ ಕಾಲದ ಪ್ರಮುಖ ಬಂದರುಗಳು [[ಮುಝಿರಿಸ್]], ಬೆರ್ಕರೈ ಮತ್ತು ನೆಲ್ಸಿಂಡಾ.<ref name="Kusuman">{{cite book |author=K. K. Kusuman |title=A History of Trade & Commerce in Travancore |publisher=Mittal Publications |year=1987 |isbn=978-81-7099-026-0 |url=https://books.google.com/books?id=qbNuyHswr1cC |pages=1–2 |accessdate=30 May 2015}}</ref> ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವನ್ನು 50 ಮಿಲಿಯನ್ [[ಸೆಸ್ಟರ್ಸಸ್]] ಎಂದು ಅಂದಾಜಿಸಲಾಗಿದೆ.<ref>According to [[Pliny the Elder]], goods from India were sold in the Empire at 100 times their original purchase price. See [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> ಸಮಕಾಲೀನ [[ಸಂಗಮ್ ಸಾಹಿತ್ಯ]]ವು ಮೆಣಸಿನ ಬದಲಿಗೆ ಚಿನ್ನದಿಂದ ತುಂಬಿದ ರೋಮನ್ ಹಡಗುಗಳು ಮುಝಿರಿಸ್ಗೆ ಆಗಮಿಸುವುದನ್ನು ವಿವರಿಸುತ್ತದೆ. ಕೇರಳವನ್ನು ತಲುಪಲು ಮಾನ್ಸೂನ್ ಗಾಳಿಯನ್ನು ನ್ಯಾವಿಗೇಟ್ ಮಾಡಿದ ಮೊದಲ ಪಶ್ಚಿಮ ವ್ಯಾಪಾರಿಗಳಲ್ಲಿ ಒಬ್ಬರು [[ಸೈಜಿಕಸ್ನ ಯುಡೋಕ್ಸಸ್]], ಅವರು ಈಜಿಪ್ಟ್ನ [[ಹೆಲ್ಲೆನಿಸ್ಟಿಕ್ ನಾಗರಿಕತೆ|ಹೆಲ್ಲೆನಿಸ್ಟಿಕ್]] [[ಟಾಲಮಿಕ್ ರಾಜವಂಶ]]ದ ರಾಜ [[ಟಾಲಮಿ VIII ಫಿಸ್ಕಾನ್|ಟಾಲಮಿ VIII]] ರ ಆಶ್ರಯದಲ್ಲಿ ಸುಮಾರು 118 ಅಥವಾ 166 BCE ಯಲ್ಲಿ ಪ್ರಯಾಣ ಮಾಡಿದರು. ಈ ಪ್ರದೇಶದ ಬಂದರು ನಗರಗಳಲ್ಲಿನ ರೋಮನ್ ಸ್ಥಾಪನೆಗಳು{{mdash}}[[ಆಗಸ್ಟಸ್]] ದೇವಾಲಯ ಮತ್ತು ರೋಮನ್ ಸೈನಿಕರಿಗೆ ಬ್ಯಾರಕ್ಗಳು ಸೇರಿದಂತೆ{{mdash}}ರೋಮನ್ ''[[ಕರ್ಸಸ್ ಪಬ್ಲಿಕಸ್]]'' ನ ಏಕೈಕ ಉಳಿದಿರುವ ನಕ್ಷೆಯಾದ ''[[ಟ್ಯಾಬುಲಾ ಪ್ಯೂಟಿಂಗೇರಿಯಾನಾ]]'' ದಲ್ಲಿ ದಾಖಲಿಸಲಾಗಿದೆ.<ref>{{cite book|author=Abraham Eraly|title=The First Spring: The Golden Age of India|url=https://books.google.com/books?id=te1sqTzTxD8C&pg=PA246|accessdate=7 August 2012|date=1 December 2011|publisher=Penguin Books India|isbn=978-0-670-08478-4|pages=246–}}</ref><ref name="Iyengar_2001">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |accessdate=29 December 2008}}</ref>
ಪಶ್ಚಿಮ ಏಷ್ಯಾ ಮತ್ತು ದಕ್ಷಿಣ ಯುರೋಪಿನ ವ್ಯಾಪಾರಿಗಳು ಕೇರಳದಲ್ಲಿ ಕರಾವಳಿ ಠಾಣ್ಯಗಳು ಮತ್ತು ವಸಾಹತುಗಳನ್ನು ಸ್ಥಾಪಿಸಿದರು.<ref name="google2">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |pages=192–195 |accessdate=29 December 2008}}</ref> ಕೇರಳದೊಂದಿಗಿನ ಯಹೂದಿ ಸಂಪರ್ಕವು 573 BCE ಯ ಹಿಂದಿನದು ಎಂದು ನಂಬಲಾಗಿದೆ.<ref name="Orpa Slapak">[https://books.google.co.in/books?id=qhKGPprbQaYC&printsec=frontcover&dq=isbn:9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA#v=onepage&q=two%20millennia&f=true ''The Jews of India: A Story of Three Communities''] by Orpa Slapak. The Israel Museum, Jerusalem. 2003. p. 27. ISBN 965-278-179-7.</ref><ref name="Hillel1832">{{cite book|author=David D'Beth Hillel|title=The Travels of Rabbi David D'Beth Hillel: From Jerusalem, Through Arabia, Koordistan, Part of Persia, and India to Madras|url=https://books.google.com/books?id=j5NeAAAAcAAJ&pg=PR9|year=1832|publisher=author|page=135}}</ref><ref>{{cite book|title=The Jews in India and the Far East|url=https://books.google.com/books?id=w_v-nQEACAAJ|year=1976|publisher=Greenwood Press|pages=24–26 | isbn=978-0-8371-2615-9 }}</ref> ಅರಬ್ ವ್ಯಾಪಾರಿಗಳು ಕನಿಷ್ಠ 4 ನೇ ಶತಮಾನ BCE ಯಿಂದಲೂ ಕೇರಳದೊಂದಿಗೆ ಸಂಪರ್ಕ ಹೊಂದಿದ್ದರು; [[ಹೆರೊಡೋಟಸ್]] (484–413 BCE) ಅರಬ್ಬರು ಕೇರಳದಿಂದ ತಂದ ಸರಕುಗಳನ್ನು ಈಡನ್ನಲ್ಲಿರುವ ಯಹೂದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಗಮನಿಸಿದರು.<ref name="Kusuman"/> ಈ ಅರಬ್ ವ್ಯಾಪಾರಿಗಳು ಸ್ಥಳೀಯ ಸಮುದಾಯಗಳೊಂದಿಗೆ ಮದುವೆಯಾದರು, ಇದು ಮುಸ್ಲಿಂ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಸಮುದಾಯದ ರಚನೆಗೆ ಕಾರಣವಾಯಿತು.<ref name="Dialogue">{{cite book |author=Rolland E. Miller |title=Hindu-Christian Dialogue: Perspectives and Encounters |publisher=Motilal Banarsidass Publications |year=1993 |isbn=978-81-208-1158-4 |url=https://books.google.com/books?id=6eHgNyNimoAC |page=50}}</ref> 4 ನೇ ಶತಮಾನ CE ಯಲ್ಲಿ, ಕೆಲವು ಕ್ರೈಸ್ತರು [[ಪರ್ಷಿಯಾ]]ದಿಂದ ವಲಸೆ ಬಂದರು ಮತ್ತು ಆರಂಭಿಕ [[ಸೇಂಟ್ ತಾಮಸ್ ಕ್ರೈಸ್ತರು|ಸಿರಿಯನ್ ಕ್ರಿಶ್ಚಿಯನ್]] ಸಮುದಾಯಕ್ಕೆ ಸೇರ್ಪಡೆಗೊಂಡರು, ಇದು 1 ನೇ ಶತಮಾನ CE ಯಲ್ಲಿ [[ತಾಮಸ್ ಪ್ರೇರಿತ]]ನ ಪ್ರಚಾರ ಚಟುವಟಿಕೆಗಳಿಂದ ತನ್ನ ಮೂಲವನ್ನು ಪತ್ತೆಹಚ್ಚುತ್ತದೆ.<ref name="Erwin Fahlbusch">[https://books.google.co.in/books?id=lZUBZlth2qgC&printsec=frontcover&dq=isbn:9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA#v=onepage&q=Muziris&f=true ''The Encyclopedia of Christianity, Volume 5''] by Erwin Fahlbusch. Wm. B. Eerdmans Publishing - 2008. p. 285. ISBN 978-0-8028-2417-2.</ref><ref>{{cite book |author=Geoffrey Wainwright |title=The Oxford History Of Christian Worship |publisher=Oxford University Press |year=2006 |isbn=978-0-19-513886-3 |url=https://books.google.com/books?id=h5VQUdZhx1gC |page=666 |accessdate=30 May 2015}}</ref> ಮಾಪ್ಪಿಲ ಎಂಬ ಪದವು{{mdash}}ಮೂಲತಃ ಗೌರವಾನ್ವಿತ ವಿದೇಶಿ ಸಂದರ್ಶಕರಿಗೆ ಅನ್ವಯಿಸುವ ಗೌರವಾರ್ಥ ಪದವಾಗಿದ್ದು{{mdash}}ನಂತರ ಯಹೂದಿ, ಸಿರಿಯನ್ ಕ್ರಿಶ್ಚಿಯನ್ ಮತ್ತು ಮುಸ್ಲಿಂ ವಲಸಿಗರ ವಂಶಸ್ಥರೊಂದಿಗೆ ಸಂಬಂಧ ಹೊಂದಿತು, ಇದು ಕ್ರಮವಾಗಿ [[ಯೆಹೂದ ಮಾಪ್ಪಿಲ]]ಗಳು, [[ಸೇಂಟ್ ತಾಮಸ್ ಕ್ರೈಸ್ತರು|ನಸ್ರಾನಿ ಮಾಪ್ಪಿಲ]]ಗಳು ಮತ್ತು [[ಮಲಬಾರ್ ಮುಸ್ಲಿಮರು|ಮುಸ್ಲಿಂ ಮಾಪ್ಪಿಲ]]ಗಳ ಪದಗಳಿಗೆ ಕಾರಣವಾಯಿತು.<ref name="BMalieckal">* Bindu Malieckal (2005) Muslims, Matriliny, and A Midsummer Night's Dream: European Encounters with the Mappilas of Malabar, India; The Muslim World Volume 95 Issue 2</ref><ref>{{cite book |author=Milton J, Skeat WW, Pollard AW, Brown L |title=The Indian Christians of St Thomas |publisher=Cambridge University Press |date=31 August 1982 |isbn=0-521-21258-8 |page=171}}</ref> ಈ ಸಮುದಾಯಗಳ ಸಂಪ್ರದಾಯಗಳ ಪ್ರಕಾರ, ಭಾರತದಲ್ಲಿನ ಕೆಲವು ಆರಂಭಿಕ ಧಾರ್ಮಿಕ ಸ್ಥಾಪನೆಗಳನ್ನು ಕೇರಳದಲ್ಲಿ ನಿರ್ಮಿಸಲಾಯಿತು.<ref name="Dialogue"/> ಇವುಗಳಲ್ಲಿ [[ಸೇಂಟ್ ತಾಮಸ್ ಕ್ರಿಶ್ಚಿಯನ್ ಚರ್ಚುಗಳು]],<ref>{{cite book |author=Susan Bayly |title=Saints, Goddesses and Kings |publisher=Cambridge University Press |year=2004 |isbn=978-0-521-89103-5 |url=https://books.google.com/books?id=Fxqtx8SflEsC |page=40 |accessdate=30 May 2015}}</ref> [[ಚೇರಮನ್ ಜುಮಾ ಮಸೀದಿ]] (629 CE ಯಲ್ಲಿ ಸ್ಥಾಪಿಸಲಾಯಿತು), ಭಾರತದ ಮೊದಲ ಮಸೀದಿ,<ref>{{cite book |author=Jonathan Goldstein |title=The Jews of China |publisher=M.E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123 |accessdate=30 May 2015}}</ref> ಮತ್ತು [[ಪರದೇಶಿ ಸಿನಾಗೋಗ್]] (1568 CE ಯಲ್ಲಿ ನಿರ್ಮಿಸಲಾಯಿತು), [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಕ್ರಿಯ ಸಿನಾಗೋಗ್ ಸೇರಿವೆ.<ref>{{cite book |author=Nathan Katz |title=Who Are the Jews of India? |publisher=University of California Press |year=2000 |isbn=978-0-520-21323-4 |url=https://books.google.com/books?id=ZWX6pF2PTJwC |page=245 |accessdate=30 May 2015}}</ref>
=== ಮಧ್ಯಕಾಲೀನ ಅವಧಿ ===
[[File:3rd Tiruvalla Copper Plate.jpg|thumb|[[ಸೇಂಟ್ ತಾಮಸ್ ಕ್ರೈಸ್ತರು|ಸೇಂಟ್ ತಾಮಸ್ ಕ್ರೈಸ್ತರಿಗೆ]] ನೀಡಲಾದ [[ಥರಿಸಪಲ್ಲಿ ತಟ್ಟೆಗಳು]] ವ್ಯಾಪಾರಿ ಸಂಘಗಳು ಮತ್ತು ವ್ಯಾಪಾರ ನಿಗಮಗಳು ಕುಲಶೇಖರ ಅವಧಿಯಲ್ಲಿ ಆರ್ಥಿಕತೆ ಮತ್ತು ಸಾಮಾಜಿಕ ಜೀವನದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದವು ಎಂದು ಸಾಕ್ಷ್ಯ ನೀಡುತ್ತವೆ.]]
ಎರಡನೇ ಚೇರ ಸಾಮ್ರಾಜ್ಯ (c. 800–1102), ಇದನ್ನು [[ಮಹೋದಯಪುರಂ]]ನ ಕುಲಶೇಖರ ರಾಜವಂಶ ಎಂದೂ ಕರೆಯುತ್ತಾರೆ, ಇದನ್ನು [[ಕುಲಶೇಖರ ಆಳ್ವಾರ್|ಕುಲಶೇಖರ ವರ್ಮನ್]] ಸ್ಥಾಪಿಸಿದರು ಮತ್ತು ಪ್ರಸ್ತುತ ಕೇರಳದ ಹೆಚ್ಚಿನ ಭಾಗ ಮತ್ತು ಆಧುನಿಕ ತಮಿಳುನಾಡಿನ ಭಾಗಗಳನ್ನು ಒಳಗೊಂಡ ಪ್ರದೇಶವನ್ನು ಆಳಿದರು. ಕುಲಶೇಖರ ಅವಧಿಯ ಆರಂಭಿಕ ಹಂತದಲ್ಲಿ, ದಕ್ಷಿಣ ಪ್ರದೇಶವು{{mdash}}[[ನಾಗರ್ಕೋವಿಲ್]] ನಿಂದ [[ತಿರುವಲ್ಲ]] ವರೆಗೆ{{mdash}}[[ಆಯ್ಸ್ (ಕೇರಳ)|ಆಯ್]] ರಾಜವಂಶದ ನಿಯಂತ್ರಣದಲ್ಲಿತ್ತು. 10 ನೇ ಶತಮಾನದ ವೇಳೆಗೆ, ಆಯ್ಸ್ ತಮ್ಮ ಶಕ್ತಿಯನ್ನು ಕಳೆದುಕೊಂಡರು ಮತ್ತು ಈ ಪ್ರದೇಶವನ್ನು ಕುಲಶೇಖರ ಸಾಮ್ರಾಜ್ಯಕ್ಕೆ ಸೇರಿಸಲಾಯಿತು.<ref name="Balachand">{{cite book|author=K. Balachandran Nayar|title=In quest of Kerala|url=https://books.google.com/books?id=EXIeAAAAMAAJ|accessdate=8 August 2012|year=1974|publisher=Accent Publications|page=86}}</ref><ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|page=97}}</ref> ಕುಲಶೇಖರ ಆಳ್ವಿಕೆಯಲ್ಲಿ, ಕೇರಳವು ಕಲೆ, ಸಾಹಿತ್ಯ, ವ್ಯಾಪಾರ ಮತ್ತು ಹಿಂದೂ ಧರ್ಮದಲ್ಲಿ [[ಭಕ್ತಿ ಚಳುವಳಿ]] ಯಲ್ಲಿ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟ ಒಂದು ಅಭಿವೃದ್ಧಿ ಹೊಂದಿದ ಅವಧಿಯನ್ನು ಅನುಭವಿಸಿತು.<ref name="Sreedhar123">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|pages=123–131}}</ref> ಈ ಸಮಯದಲ್ಲಿ ವಿಶಿಷ್ಟವಾದ ಕೇರಳೀಯ ಗುರುತು ಹೊರಹೊಮ್ಮಲು ಪ್ರಾರಂಭಿಸಿತು, ವಿಶೇಷವಾಗಿ ಭಾಷಾ ವ್ಯತ್ಯಾಸದ ಮೂಲಕ ತಮಿಳು ಸಂಸ್ಕೃತಿಯಿಂದ ಪ್ರತ್ಯೇಕವಾಯಿತು.<ref name="AsherKumari1997">{{cite book|author1=R. E. Asher|author2=T. C. Kumari|title=Malayalam|url=https://books.google.com/books?id=uFQG2DCaIsIC|year=1997|publisher=Psychology Press|isbn=978-0-415-02242-2|pages=24–27}}</ref> ಆಡಳಿತ ಉದ್ದೇಶಗಳಿಗಾಗಿ, ಸಾಮ್ರಾಜ್ಯವನ್ನು [[ನಾಡುವಾಜಿ]]ಗಳು ಎಂದು ಕರೆಯಲ್ಪಡುವ ಸ್ಥಳೀಯ ಮುಖಂಡರು ಆಳುವ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ಪ್ರಾಂತ್ಯವನ್ನು ಮತ್ತಷ್ಟು ''ದೇಶಂ'' ಗಳಾಗಿ ವಿಂಗಡಿಸಲಾಗಿತ್ತು, ಅವುಗಳನ್ನು ದೇಶವಾಝಿಗಳು ಮೇಲ್ವಿಚಾರಣೆ ಮಾಡುತ್ತಿದ್ದರು.<ref name="Sreedhar123"/>
11 ನೇ ಶತಮಾನದಲ್ಲಿ ಚೇರ-ಚೋಳ ಸಂಘರ್ಷಗಳ ಸರಣಿಯು ಕೇರಳದ ಬಂದರುಗಳ ಮೂಲಕ ವಿದೇಶಿ ವ್ಯಾಪಾರಕ್ಕೆ ಅಡ್ಡಿಯಾಯಿತು. ಈ ಅವಧಿಯಲ್ಲಿ, ಹಿಂದೂ ಧರ್ಮದೊಂದಿಗೆ ಹಿಂದೆ ಸಹಬಾಳ್ವೆ ನಡೆಸಿದ್ದ [[ಬೌದ್ಧ]] ಮತ್ತು [[ಜೈನ]] ಧರ್ಮಗಳು ಕ್ಷೀಣಿಸಿದವು ಮತ್ತು ಅಂತಿಮವಾಗಿ ಈ ಪ್ರದೇಶದಿಂದ ಕಣ್ಮರೆಯಾಯಿತು.<ref>{{cite web |url=http://www.kerala.cc/keralahistory/index34.htm |title=The Buddhist History of Kerala |publisher=Kerala.cc |accessdate=25 September 2013 |archive-date=4 March 2016 |archive-url=https://web.archive.org/web/20160304215933/http://www.kerala.cc/keralahistory/index34.htm |url-status=dead }}</ref> ಸಾಮಾಜಿಕ ರಚನೆಗಳು ಹೆಚ್ಚು ಬಿಗಿಯಾದವು, ಮತ್ತು [[ಕೇರಳದಲ್ಲಿ ಜಾತಿ ವ್ಯವಸ್ಥೆ|ಜಾತಿ ವಿಭಾಗಗಳು]] ಆಳವಾದವು.<ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=9 August 2012|date=1 January 2007|publisher=DC Books|isbn=978-81-264-1578-6|page=138}}</ref> ಕುಲಶೇಖರ ರಾಜವಂಶವು ಅಂತಿಮವಾಗಿ 1102 CE ಯಲ್ಲಿ [[ನಂತರದ ಪಾಂಡ್ಯರು]] ಮತ್ತು [[ನಂತರದ ಚೋಳರು]] ನ ಸಂಯೋಜಿತ ದಾಳಿಯ ನಂತರ ಕುಸಿಯಿತು.<ref name="Balachand"/> 14 ನೇ ಶತಮಾನದಲ್ಲಿ, ದಕ್ಷಿಣ [[ವೇಣಾಡ್|ವೇಣಾಡ್ ಸಾಮ್ರಾಜ್ಯ]]ದ ರವಿ ವರ್ಮ ಕುಲಶೇಖರ (r. 1299–1314) ದಕ್ಷಿಣ ಭಾರತದ ಹೆಚ್ಚಿನ ಭಾಗದಲ್ಲಿ ಸಂಕ್ಷಿಪ್ತವಾಗಿ ಅಲ್ಪಕಾಲಿಕ ಪ್ರಾಮುಖ್ಯತೆಯನ್ನು ಸ್ಥಾಪಿಸಿದರು. ಅವರ ಮರಣದ ನಂತರ, ಮತ್ತು ಬಲವಾದ ಕೇಂದ್ರ ಅಧಿಕಾರದ ಅನುಪಸ್ಥಿತಿಯಲ್ಲಿ, ಈ ಪ್ರದೇಶವು ಮೂವತ್ತು ಸಣ್ಣ, ಆಗಾಗ್ಗೆ ಯುದ್ಧ ಮಾಡುವ ಸಂಸ್ಥಾನಗಳಾಗಿ ವಿಭಜನೆಯಾಯಿತು. ಅತ್ಯಂತ ಶಕ್ತಿಶಾಲಿಗಳೆಂದರೆ ಉತ್ತರದಲ್ಲಿ [[ಸಮೂತಿರಿ]] (ಜಾಮೋರಿನ್) ಸಾಮ್ರಾಜ್ಯ, ದಕ್ಷಿಣದಲ್ಲಿ ವೇಣಾಡ್ ಮತ್ತು ಮಧ್ಯ ಪ್ರದೇಶದಲ್ಲಿ ಕೊಚ್ಚಿ. 18 ನೇ ಶತಮಾನದಲ್ಲಿ, ತಿರುವಾಂಕೂರಿನ ರಾಜ [[ಅನಿಝಂ ತಿರುನಾಳ್ ಮಾರ್ತಾಂಡ ವರ್ಮ]] ಅವರು ಸೈನ್ಯದ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಿದರು ಮತ್ತು ಉತ್ತರ ಕೇರಳದವರೆಗೆ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡರು, ಈ ಪ್ರದೇಶದಲ್ಲಿ ತಿರುವಾಂಕೂರನ್ನು ಪ್ರಬಲ ಶಕ್ತಿಯಾಗಿ ಸ್ಥಾಪಿಸಿದರು. ಕೊಚ್ಚಿ ಆಡಳಿತಗಾರನು ಶಾಂತಿಗಾಗಿ ಮೊಕದ್ದಮೆ ಹೂಡಿದನು, ಮತ್ತು ಮಲಬಾರ್ ಪ್ರದೇಶವು ಅಂತಿಮವಾಗಿ [[1947 ರಲ್ಲಿ ಭಾರತದ ಸ್ವಾತಂತ್ರ್ಯ|ಭಾರತದ ಸ್ವಾತಂತ್ರ್ಯ]] ದವರೆಗೆ ನೇರ [[ಬ್ರಿಟಿಷ್ ಆಳ್ವಿಕೆ|ಬ್ರಿಟಿಷ್ ಆಳ್ವಿಕೆ]] ಯ ಅಡಿಯಲ್ಲಿ ಬಂದಿತು.<ref>{{cite book|author=Educational Britannica Educational|title=The Geography of India: Sacred and Historic Places|url=https://books.google.com/books?id=xPUvqtdfjyAC&pg=PA311|accessdate=15 September 2012|date=15 August 2010|publisher=The Rosen Publishing Group|isbn=978-1-61530-202-4|page=311}}</ref><ref>{{cite book |last1=Boland-Crewe |first1=Tara |last2=Lea |first2=David |title=The Territories and States of India |date=2003 |doi=10.4324/9780203402900 |isbn=978-1-135-35625-5 |pages=144–146 }}</ref>
=== ವಸಾಹತುಶಾಹಿ ಆಳ್ವಿಕೆ ===
[[File:Caminho maritimo para a India.png|thumb|ಕೇರಳವನ್ನು ತಲುಪಲು [[ವಾಸ್ಕೋ ಡ ಗಾಮಾ]] ತೆಗೆದುಕೊಂಡ ಮಾರ್ಗ (ಕಪ್ಪು ಬಣ್ಣದಲ್ಲಿ ಸೂಚಿಸಲಾಗಿದೆ)]]
[[ಮಧ್ಯಯುಗ|ಉಚ್ಚ]] ಮತ್ತು [[ಕೊನೆಯ ಮಧ್ಯಯುಗ]]ದಲ್ಲಿ, ಅರಬ್ ವ್ಯಾಪಾರಿಗಳು [[ಹಿಂದೂ ಮಹಾಸಾಗರ]]ದಲ್ಲಿ ಮಸಾಲೆ ವ್ಯಾಪಾರದ ಮೇಲೆ ಸಮುದ್ರ ಏಕಸ್ವಾಮ್ಯವನ್ನು ಹೊಂದಿದ್ದರು. ಯುರೋಪಿಯನ್ [[ಭೌಗೋಳಿಕ ಅನ್ವೇಷಣೆಗಳ ಯುಗ]] ದಲ್ಲಿ ಮಸಾಲೆ ವ್ಯಾಪಾರವು{{mdash}}ವಿಶೇಷವಾಗಿ ಕರಿಮೆಣಸಿನಲ್ಲಿ{{mdash}}ಯುರೋಪಿಯನ್ ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾದಾಗ ಈ ಪ್ರಾಬಲ್ಯವನ್ನು ಸವಾಲು ಮಾಡಲಾಯಿತು.<ref>{{cite book | last = Corn | first = Charles |author2=Glasserman, Debbie | title = The Scents of Eden: A History of the Spice Trade | publisher = Kodansha America |date=March 1999 | isbn = 1-56836-249-8}}</ref> 15 ನೇ ಶತಮಾನದ ವೇಳೆಗೆ, ಪೋರ್ಚುಗೀಸರು ಪೂರ್ವ ಸಮುದ್ರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಾರಂಭಿಸಿದರು, ಇದು 1498 ರಲ್ಲಿ [[ಕೋಝಿಕೋಡ್]] (ಕ್ಯಾಲಿಕಟ್) ಬಳಿಯ [[ಕಪ್ಪಾಡ್]] ನಲ್ಲಿ [[ವಾಸ್ಕೋ ಡ ಗಾಮಾ]] ಆಗಮನದೊಂದಿಗೆ ಕೊನೆಗೊಂಡಿತು.<ref>{{Cite book |author=Ravindran PN |title=Black Pepper: Piper Nigrum |publisher=CRC Press |year=2000 |accessdate=11 November 2007 |url=https://books.google.com/books?id=VaGCgSLrdr4C |page=3 |isbn=978-90-5702-453-5}}</ref><ref name="Curtin1984">{{cite book|author=Philip D. Curtin|title=Cross-Cultural Trade in World History|url=https://books.google.com/books?id=R4IiYFhliv4C|date=25 May 1984|publisher=Cambridge University Press|isbn=978-0-521-26931-5|page=144}}</ref> ಕೋಝಿಕೋಡ್ನ [[ಜಾಮೋರಿನ್]] ಪೋರ್ಚುಗೀಸರಿಗೆ ತನ್ನ ಪ್ರಜೆಗಳೊಂದಿಗೆ ವ್ಯಾಪಾರ ಮಾಡಲು ಅನುಮತಿ ನೀಡಿದರು, ಇದು ಸಮೃದ್ಧ ಪೋರ್ಚುಗೀಸ್ [[ಕಾರ್ಖಾನೆ (ವ್ಯಾಪಾರ ಠಾಣ್ಯ)|ಕಾರ್ಖಾನೆ]] ಮತ್ತು ಕೋಟೆಯ ಸ್ಥಾಪನೆಗೆ ಕಾರಣವಾಯಿತು.<ref name="Mehta2005" />
ಆದಾಗ್ಯೂ, ಪೋರ್ಚುಗೀಸರು ಜಾಮೋರಿನ್ ರಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಬ್ ವ್ಯಾಪಾರಿಗಳ ಮೇಲೆ ದಾಳಿ ಮಾಡಿದಾಗ ಉದ್ವಿಗ್ನತೆಗಳು ಹುಟ್ಟಿಕೊಂಡವು, ಇದು ಸಂಬಂಧಗಳಲ್ಲಿ ಕುಸಿತಕ್ಕೆ ಕಾರಣವಾಯಿತು. ಜಾಮೋರಿನ್ ಮತ್ತು ಕೊಚ್ಚಿ ರಾಜನ ನಡುವಿನ ಪೈಪೋಟಿಯಿಂದ ಪ್ರಯೋಜನ ಪಡೆಯುವ ಅವಕಾಶವನ್ನು ಬಳಸಿಕೊಂಡು, ಪೋರ್ಚುಗೀಸರು ಕೊಚ್ಚಿಯೊಂದಿಗೆ ಮೈತ್ರಿ ಮಾಡಿಕೊಂಡರು. [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] 1505 ರಲ್ಲಿ ಪೋರ್ಚುಗೀಸ್ ಭಾರತದ ವೈಸರಾಯ್ ಆಗಿ ನೇಮಕಗೊಂಡಾಗ, ಅವರು ತಮ್ಮ ಪ್ರಧಾನ ಕಛೇರಿಯನ್ನು ಕೋಝಿಕೋಡ್ನಲ್ಲಿ ಅಲ್ಲ, ಬದಲಿಗೆ [[ಫೋರ್ಟ್ ಕೊಚ್ಚಿ]] ([[ಫೋರ್ಟ್ ಇಮ್ಯಾನುಯೆಲ್]]) ಯಲ್ಲಿ ಸ್ಥಾಪಿಸಿದರು. ಅವರ ಆಡಳಿತದ ಅಡಿಯಲ್ಲಿ, ಪೋರ್ಚುಗೀಸರು ಮಲಬಾರ್ ಕರಾವಳಿಯಲ್ಲಿ ಹಲವಾರು ಕೋಟೆಗಳನ್ನು ನಿರ್ಮಿಸುವ ಮೂಲಕ ತಮ್ಮ ಪ್ರಭಾವವನ್ನು ಬಲಪಡಿಸಿದರು.<ref name="Mehta2005">{{cite book|author=J. L. Mehta|title=Advanced Study in the History of Modern India: Volume One: 1707–1813|url=https://books.google.com/books?id=d1wUgKKzawoC&pg=PA324|accessdate=9 August 2012|date=1 January 2005|publisher=Sterling Publishers Pvt. Ltd|isbn=978-1-932705-54-6|pages=324–327}}</ref> ಈ ಮುನ್ನಡೆಗಳ ಹೊರತಾಗಿಯೂ, ಪೋರ್ಚುಗೀಸರು ಜಾಮೋರಿನ್ನ ನೌಕಾ ಪಡೆಗಳಿಂದ ಗಮನಾರ್ಹ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ ಕೋಝಿಕೋಡ್ನ ಅಡ್ಮಿರಲ್ಗಳಾದ [[ಕುಂಜಲಿ ಮರಕ್ಕರ್]]ರ ಆಜ್ಞೆಯಡಿಯಲ್ಲಿ, ಅವರು ಪರಿಣಾಮಕಾರಿ ಸಮುದ್ರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರು. ಈ ಪ್ರತಿರೋಧವು ಅಂತಿಮವಾಗಿ ಪೋರ್ಚುಗೀಸರನ್ನು ಒಪ್ಪಂದಕ್ಕೆ ಒತ್ತಾಯಿಸಿತು. 1571 ರಲ್ಲಿ, ಜಾಮೋರಿನ್ ಪಡೆಗಳು [[ತಾನೂರ್ ಸಾಮ್ರಾಜ್ಯ#ಚಾಲಿಯಮ್ ಕೋಟೆಯ ಕದನಗಳು|ಚಾಲಿಯಮ್ ಕೋಟೆಯ ಕದನದಲ್ಲಿ]] ಪೋರ್ಚುಗೀಸರನ್ನು ಸೋಲಿಸಿದವು, ಇದು ಈ ಪ್ರದೇಶದಲ್ಲಿ ಪೋರ್ಚುಗೀಸ್ ಮಹತ್ವಾಕಾಂಕ್ಷೆಗಳಿಗೆ ದೊಡ್ಡ ಹಿನ್ನಡೆಯನ್ನು ಗುರುತಿಸಿತು.<ref>{{cite book|author=K. K. N. Kurup|title=India's Naval Traditions: The Role of Kunhali Marakkars|url=https://books.google.com/books?id=HKmXcBCKEcAC&pg=PA51|accessdate=9 August 2012|date=1 January 1997|publisher=Northern Book Centre|isbn=978-81-7211-083-3|pages=37–38}}</ref>
ಪೋರ್ಚುಗೀಸರು ಅಂತಿಮವಾಗಿ [[ಡಚ್ ಈಸ್ಟ್ ಇಂಡಿಯಾ ಕಂಪನಿ]]ಯಿಂದ ಸ್ಥಳಾಂತರಿಸಲ್ಪಟ್ಟರು, ಇದು ಈ ಪ್ರದೇಶದಲ್ಲಿ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲು ಕೋಝಿಕೋಡ್ ಮತ್ತು ಕೊಚ್ಚಿ ನಡುವಿನ ನಡೆಯುತ್ತಿರುವ ಸಂಘರ್ಷಗಳ ಲಾಭವನ್ನು ಪಡೆಯಿತು.<ref name="South Asia 2006">{{cite book|title=South Asia 2006|url=https://books.google.com/books?id=YG8bAQAAMAAJ|accessdate=18 November 2012|date=1 December 2005|publisher=Taylor & Francis|page=289}}</ref> ಆದಾಗ್ಯೂ, ಡಚ್ಚರು ಸಹ ಸೈನ್ಯದ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ [[ತಿರುವಾಂಕೂರು ರಾಜಮನೆತನ]]ದ [[ಮಾರ್ತಾಂಡ ವರ್ಮ]]ರಿಂದ. 1741 ರಲ್ಲಿ [[ಕೊಲಾಚೆಲ್ ಕದನ]]ದಲ್ಲಿ ನಿರ್ಣಾಯಕ ಡಚ್ ಸೋಲಿನ ನಂತರ,<ref name="google3">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA57|accessdate=18 November 2012|date=1 January 1993|publisher=Northern Book Centre|isbn=978-81-7211-052-9|pages=57–70}}</ref> 1753 ರಲ್ಲಿ ಮಾವೆಲಿಕ್ಕರ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಡಚ್ಚರು ಪ್ರಾದೇಶಿಕ ರಾಜಕೀಯ ವ್ಯವಹಾರಗಳಿಂದ ಹಿಂತೆಗೆದುಕೊಳ್ಳಲು ಮತ್ತು ಅವರ ಪಾತ್ರವನ್ನು ವ್ಯಾಪಾರಕ್ಕೆ ಸೀಮಿತಗೊಳಿಸಲು ಒತ್ತಾಯಿಸಲಾಯಿತು.<ref name="Singh2010">{{cite book|author=Anjana Singh|title=Fort Kochi in Kerala, 1750–1830: The Social Condition of a Dutch Community in an Indian Milieu|url=https://books.google.com/books?id=LFy4pWUlnfwC&pg=PA22|accessdate=18 November 2012|date=30 April 2010|publisher=BRILL|isbn=978-90-04-16816-9|pages=22–52}}</ref><ref name="Iyer1995">{{cite book|author=S. Krishna Iyer|title=Travancore Dutch relations, 1729–1741|url=https://books.google.com/books?id=rUtuAAAAMAAJ|accessdate=18 November 2012|year=1995|publisher=CBH Publications|isbn=978-81-85381-42-8|page=49}}</ref><ref name="Lannoy1997">{{cite book|author=Mark de Lannoy|title=The Kulasekhara Perumals of Travancore: history and state formation in Travancore from 1671 to 1758|url=https://books.google.com/books?id=pKjZAAAAMAAJ|accessdate=18 November 2012|year=1997|publisher=Leiden University|isbn=978-90-73782-92-1|page=190}}</ref> ಮಾರ್ತಾಂಡ ವರ್ಮ ತಮ್ಮ ಸೈನ್ಯದ ಕಾರ್ಯಾಚರಣೆಗಳನ್ನು ಮುಂದುವರೆಸಿದರು, ಕೇರಳದಲ್ಲಿ ತಿರುವಾಂಕೂರನ್ನು ಪ್ರಮುಖ ಶಕ್ತಿಯಾಗಿ ಸ್ಥಾಪಿಸಿದರು.<ref>{{cite book|author=A. Sreedhara Menon|title=Political History of Modern Kerala|url=https://books.google.com/books?id=wnAjqjhc1VcC&pg=PA140|accessdate=10 August 2012|year=1987|publisher=D C Books|isbn=978-81-264-2156-5|page=140}}</ref>
1766 ರಲ್ಲಿ, [[ಮೈಸೂರು ಸಾಮ್ರಾಜ್ಯ|ಮೈಸೂರಿನ]] ಆಡಳಿತಗಾರ [[ಹೈದರ್ ಅಲಿ]], [[ಮೈಸೂರಿನ ಕೇರಳ ಆಕ್ರಮಣ#ಹೈದರ್ ಅಲಿಯ ಆಕ್ರಮಣ|ಉತ್ತರ ಕೇರಳವನ್ನು ಆಕ್ರಮಿಸಿದನು]],<ref name="Rai">{{cite book|author=Raghunath Rai|title=History|url=https://books.google.com/books?id=Z4-8Z0gqBkoC&pg=PA14|accessdate=18 November 2012|publisher=FK Publications|isbn=978-81-87139-69-0|pages=14–}}</ref> ಮತ್ತು ಅವನ ಮಗ ಮತ್ತು ಉತ್ತರಾಧಿಕಾರಿ, [[ಟಿಪ್ಪು ಸುಲ್ತಾನ್]], ವಿಸ್ತರಿಸುತ್ತಿರುವ [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]] ವಿರುದ್ಧ [[ಮೈಸೂರಿನ ಕೇರಳ ಆಕ್ರಮಣ#ಟಿಪ್ಪು ಸುಲ್ತಾನನ ಆಕ್ರಮಣಗಳು|ಸೈನ್ಯದ ಕಾರ್ಯಾಚರಣೆಗಳನ್ನು]] ಪ್ರಾರಂಭಿಸಿದರು. ಈ ಮುಖಾಮುಖಿಗಳು ನಾಲ್ಕು [[ಆಂಗ್ಲೋ-ಮೈಸೂರು ಯುದ್ಧಗಳಲ್ಲಿ]] ಎರಡಕ್ಕೆ ಕೊಡುಗೆ ನೀಡಿದವು.<ref name="MuseumDallapiccola2010">{{cite book|author1=British Museum|author2=Anna Libera Dallapiccola|title=South Indian Paintings: A Catalogue of the British Museum Collection|url=https://books.google.com/books?id=FIzWapiacQcC&pg=PA12|accessdate=18 November 2012|date=22 June 2010|publisher=Mapin Publishing Pvt Ltd|isbn=978-0-7141-2424-7|pages=12–}}</ref><ref name="ThorpeEdgar">{{cite book|author1=Edgar Thorpe, Showick Thorpe|author2=Thorpe Edgar|title=The Pearson CSAT Manual 2011|url=https://books.google.com/books?id=WuBFs6yFRwcC&pg=RA1-PA99|accessdate=18 November 2012|publisher=Pearson Education India|isbn=978-81-317-5830-4|page=99}}</ref> 1790 ರ ದಶಕದ ಆರಂಭದ ವೇಳೆಗೆ, ಟಿಪ್ಪು ಸುಲ್ತಾನ್ [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ವನ್ನು ಬ್ರಿಟಿಷರಿಗೆ ಬಿಟ್ಟುಕೊಡಲು ಒತ್ತಾಯಿಸಲಾಯಿತು, ಮತ್ತು ಈ ಪ್ರದೇಶಗಳನ್ನು 1792 ರಲ್ಲಿ [[ಬ್ರಿಟಿಷ್ ಭಾರತ]]ದ [[ಮದ್ರಾಸ್ ಪ್ರೆಸಿಡೆನ್ಸಿ]] ಗೆ ಸೇರಿಸಲಾಯಿತು.<ref name="The Edinburgh Gazetteer: Or, Geographical Dictionary: Containing a Description of the Various Countries, Kingdoms, States, Cities, Towns, Mountains, &c. of the World; an Account of the Government, Customs, and Religion of the Inhabitants; the Boundaries and Natural Productions of Each Country, &c. &c. Forming a Complete Body of Geography, Physical, Political, Statistical, and Commercial with Addenda, Containing the Present State of the New Governments in South America...">{{cite book|title=The Edinburgh Gazetteer|url=https://books.google.com/books?id=xRIyAQAAMAAJ&pg=PA63|accessdate=18 November 2012|year=1827|publisher=Longman, Rees, Orme, Brown, and Green|pages=63–}}</ref><ref name="Kumar1965">{{cite book|author=Dharma Kumar|title=Land and Caste in South India: Agricultural Labor in the Madras Presidency During the Nineteenth Century|url=https://books.google.com/books?id=psw5AAAAIAAJ&pg=PA87|accessdate=18 November 2012|year=1965|publisher=CUP Archive|pages=87–|id=GGKEY:T72DPF9AZDK}}</ref><ref name="Ittaman2003">{{cite book|author=K.P. Ittaman|title=History of Mughal Architecture Volume Ii|url=https://books.google.com/books?id=ZQ5lFywZAqYC&pg=PA30|accessdate=18 November 2012|date=1 June 2003|publisher=Abhinav Publications|isbn=978-81-7017-034-1|pages=30–}}</ref> ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 1791 ರಲ್ಲಿ ಕೊಚ್ಚಿ ಮತ್ತು 1795 ರಲ್ಲಿ ತಿರುವಾಂಕೂರಿನೊಂದಿಗೆ ಸಹಾಯಕ ಮೈತ್ರಿಗಳನ್ನು ಸುರಕ್ಷಿತಗೊಳಿಸಿತು.<ref>{{Cite book |author=Superintendent of Government Printing |title=Imperial Gazetteer of India (Provincial Series): Madras |publisher=Government of India |location=Calcutta |year=1908 |accessdate=11 November 2007 |url=https://books.google.com/books?id=xXglUxeS_WkC |page=22}}</ref> 18 ನೇ ಶತಮಾನದ ಅಂತ್ಯದ ವೇಳೆಗೆ, ಕೇರಳವು ಸಂಪೂರ್ಣವಾಗಿ ಬ್ರಿಟಿಷರಿಂದ ನೇರವಾಗಿ ಆಡಳಿತ ನಡೆಸಲ್ಪಡುತ್ತಿತ್ತು ಅಥವಾ ಅವರ [[ಸಾಮಂತತ್ವ]]ದ ಅಡಿಯಲ್ಲಿತ್ತು.<ref name="RajTharakan1981">{{cite book|author1=Kakkadan Nandanath Raj|author2=Michael Tharakan|title=Agrarian reform in Kerala and its impact on the rural economy: a preliminary assessment|url=https://books.google.com/books?id=JF6FAAAAIAAJ|accessdate=18 November 2012|year=1981|publisher=International Labour Office|pages=2–3}}</ref>
20 ನೇ ಶತಮಾನದಲ್ಲಿ, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಕೇರಳವು ಹಲವಾರು ಪ್ರಮುಖ ದಂಗೆಗಳ ತಾಣವಾಗಿತ್ತು. ಇವುಗಳಲ್ಲಿ ಅತ್ಯಂತ ಗಮನಾರ್ಹವಾದುದು 1921 ರ [[ಮಲಬಾರ್ ದಂಗೆ]], ಇದರಲ್ಲಿ ಮಲಬಾರ್ ಪ್ರದೇಶದ ಮಾಪ್ಪಿಲ ಮುಸ್ಲಿಮರು ಹಿಂದೂ [[ಜಮೀನ್ದಾರ್]]ಗಳು (ಭೂಮಾಲೀಕರು) ಮತ್ತು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳ ವಿರುದ್ಧ ಗಲಭೆ ನಡೆಸಿದರು.<ref name="Qureshi1999">{{cite book|author=M. Naeem Qureshi|title=Pan-Islam in British Indian Politics: A Study of the Khilafat Movement, 1918–1924|url=https://books.google.com/books?id=czKYZPyoyx0C|year=1999|publisher=BRILL|isbn=90-04-11371-1|pages=445–447}}</ref> ಸಾಮಾಜಿಕ ಸುಧಾರಣೆಯ ಕ್ಷಣಗಳು ಸಹ ಈ ಅವಧಿಯಲ್ಲಿ ವೇಗವನ್ನು ಪಡೆದುಕೊಂಡವು, ವಿಶೇಷವಾಗಿ ಜಾತಿ-ಆಧಾರಿತ ತಾರತಮ್ಯವನ್ನು ಸವಾಲು ಮಾಡುವವು. ಒಂದು ಪ್ರಮುಖ ಮೈಲಿಗಲ್ಲು 1936 ರ ತಿರುವಾಂಕೂರಿನ [[ದೇವಾಲಯ ಪ್ರವೇಶ ಘೋಷಣೆ]]ಯಾಗಿದ್ದು, ಇದು ಕೆಳ ಜಾತಿಯ ಹಿಂದೂಗಳಿಗೆ ಹಿಂದೆ ಉನ್ನತ ಜಾತಿಗಳಿಗೆ ಸೀಮಿತವಾಗಿದ್ದ ದೇವಾಲಯಗಳನ್ನು ಪ್ರವೇಶಿಸುವ ಹಕ್ಕನ್ನು ನೀಡಿತು.<ref name="Smith1976">{{cite book|author=Bardwell L. Smith|title=Religion and Social Conflict in South Asia|url=https://books.google.com/books?id=07Y3AAAAIAAJ&pg=PA42|accessdate=31 July 2012|year=1976|publisher=BRILL|isbn=978-90-04-04510-1|pages=35–42}}</ref>
=== ಭಾರತದ ರಾಜ್ಯ ===
1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಸ್ವತಂತ್ರ ಪ್ರಭುತ್ವಗಳಾಗಿ [[ಭಾರತದ ವಿಭಜನೆ]] ಯ ನಂತರ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು [[ಭಾರತದ ಪ್ರಭುತ್ವ|ಭಾರತದ ಒಕ್ಕೂಟಕ್ಕೆ]] ಸೇರಿಕೊಂಡವು. 1 ಜುಲೈ 1949 ರಂದು, ಎರಡೂ ರಾಜ್ಯಗಳನ್ನು ವಿಲೀನಗೊಳಿಸಿ [[ತಿರುವಾಂಕೂರು-ಕೊಚ್ಚಿ]] ರೂಪಿಸಲಾಯಿತು.<ref name="Sabharwal2007">{{cite book|author=Gopa Sabharwal|title=India Since 1947: The Independent Years|url=https://books.google.com/books?id=LKySGJAGVEQC&pg=PA23|accessdate=18 November 2012|year=2007|publisher=Penguin Books India|isbn=978-0-14-310274-8|pages=23–}}</ref> 1 ನವೆಂಬರ್ 1956 ರಂದು, ಮದ್ರಾಸಿನ ದಕ್ಷಿಣ ಕನ್ನಡ ಜಿಲ್ಲೆಯ [[ಕಾಸರಗೋಡು ಜಿಲ್ಲೆ|ಕಾಸರಗೋಡು]] ತಾಲೂಕು, [[ಮದ್ರಾಸ್ ರಾಜ್ಯ]]ದ [[ಮಲಬಾರ್ ಜಿಲ್ಲೆ]] ([[ನೀಲಗಿರಿ ಜಿಲ್ಲೆಯ]] [[ಗುಡಾಲೂರು ತಾಲೂಕು]], [[ಲಕ್ಷದ್ವೀಪ]], [[ಟಾಪ್ಸ್ಲಿಪ್]], ಮತ್ತು ಅನಕಟ್ಟಿಯ ಪೂರ್ವದ [[ಅಟ್ಟಪ್ಪಾಡಿ]] ಕಾಡು ಹೊರತುಪಡಿಸಿ), ಮತ್ತು ತಿರುವಾಂಕೂರು-ಕೊಚ್ಚಿ ರಾಜ್ಯವು{{mdash}}ನಾಲ್ಕು ದಕ್ಷಿಣ ತಾಲೂಕುಗಳನ್ನು ([[ಕನ್ಯಾಕುಮಾರಿ ಜಿಲ್ಲೆ]] ಮತ್ತು ಶೆಂಕೋಟ್ಟೈ ತಾಲೂಕುಗಳು) ಹೊರತುಪಡಿಸಿ, ಅವುಗಳನ್ನು ತಮಿಳುನಾಡಿಗೆ ವರ್ಗಾಯಿಸಲಾಯಿತು{{mdash}}[[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ಕೇರಳ ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು.<ref name="Tmh">{{cite book|author=Tmh|title=General Knowledge Digest 2010|url=https://books.google.com/books?id=RyLmXWTKHXgC&pg=SA3-PA106|accessdate=18 November 2012|publisher=Tata McGraw-Hill Education|isbn=978-0-07-069939-7|page=3}}</ref><ref name="SinghKarafin2009">{{cite book|author1=Sarina Singh|author2=Amy Karafin|author3=Anirban Mahapatra|title=South India|url=https://books.google.com/books?id=8KnLFpjEHpUC|accessdate=6 January 2013|date=1 September 2009|publisher=Lonely Planet|isbn=978-1-74179-155-6}}</ref><ref name="Kerala">{{Cite web |title=The States Reorganisation Act, 1956 |url=https://legislative.gov.in/sites/default/files/A1956-37.pdf |url-status=live |archive-url=https://web.archive.org/web/20211117014954/https://legislative.gov.in/sites/default/files/A1956-37.pdf |archive-date=17 November 2021 |access-date=11 May 2021 |website=legislative.gov.in |publisher=Government of India}}</ref> 1957 ರಲ್ಲಿ ಹೊಸ ಕೇರಳ ವಿಧಾನಸಭೆಗೆ ಮೊದಲ ಚುನಾವಣೆಗಳ ನಂತರ [[ಇ. ಎಂ. ಎಸ್. ನಂಬೂದಿರಿಪಾಡ್]] ನೇತೃತ್ವದ [[ಕಮ್ಯುನಿಸ್ಟ್]] ಸರ್ಕಾರವು ರೂಪುಗೊಂಡಿತು.<ref name="SinghKarafin2009"/> ಇದು 1945 ರಲ್ಲಿ [[ಸ್ಯಾನ್ ಮರಿನೋ ಗಣರಾಜ್ಯ]]ದಲ್ಲಿ ಕಮ್ಯುನಿಸ್ಟ್ ಚುನಾವಣಾ ಯಶಸ್ಸಿನ ನಂತರ ವಿಶ್ವದ ಆರಂಭಿಕ ಪ್ರಜಾಪ್ರಭುತ್ವವಾಗಿ ಚುನಾಯಿತ ಕಮ್ಯುನಿಸ್ಟ್ ಸರ್ಕಾರಗಳಲ್ಲಿ ಒಂದಾಗಿದೆ.<ref name=Hindu>{{cite news|title=50 years of development|url=http://www.thehindubusinessline.com/todays-paper/tp-others/tp-states/50-years-of-development/article1655056.ece?ref=archive|accessdate=30 August 2013|newspaper=The Hindu|date=12 April 2007|author=K.G. Kumar}}</ref><ref name="Desai2006">{{cite book|author=Manali Desai|title=State Formation and Radical Democracy in India|url=https://books.google.com/books?id=60m9znJQmmkC&pg=PA142|accessdate=31 August 2013|date=27 November 2006|publisher=Taylor & Francis|isbn=978-0-203-96774-4|page=142}}</ref><ref name="ChitkaraŚarmā1997">{{cite book|author1=Madan Gopal Chitkara|author2=Baṃśī Rāma Śarmā|title=Indian Republic: Issues and Perspective|url=https://books.google.com/books?id=7YrmNURVoroC&pg=PA134|accessdate=18 November 2012|date=1 January 1997|publisher=APH Publishing|isbn=978-81-7024-836-1|pages=134–}}</ref>
== ಭೌಗೋಳಿಕತೆ ==
{{Main|ಕೇರಳದ ಭೌಗೋಳಿಕತೆ}}
{{Multiple image
| direction = vertical
| width = 220
| image1 = AnaimudiPeak DSC 4834.jpg
| caption1 = [[ಅನಮುಡಿ]], [[ದಕ್ಷಿಣ ಭಾರತ]]ದ ಅತಿ ಎತ್ತರದ ಶಿಖರ.
| image2 = DR0071DSC 9245.jpg
| caption2 = [[ವಯನಾಡು|ವಯನಾಡಿನ]] ಬೆಟ್ಟ ಪ್ರದೇಶಗಳಲ್ಲಿ [[ಚಹಾ]] ಮತ್ತು [[ಕಾಫಿ]] ಉತ್ಪಾದಿಸಲಾಗುತ್ತದೆ.
| image3 = Kumarkom.jpg
| caption3 = [[ವೇಂಬನಾಡು]], [[ಕೇರಳ ಬ್ಯಾಕ್ವಾಟರ್ಗಳ]] ಒಂದು ಭಾಗ, ಭಾರತದ ಅತಿ ಉದ್ದದ ಸರೋವರ.
| image4 = Light house in Ponnani.jpg
| caption4 = [[ಪೊನ್ನಾನಿ]] ಲೈಟ್ ಹೌಸ್ ಬೀಚ್
}}
ರಾಜ್ಯವು [[ಲಕ್ಷದ್ವೀಪ ಸಮುದ್ರ]] ಮತ್ತು [[ಪಶ್ಚಿಮ ಘಟ್ಟಗಳ]] ನಡುವೆ ಸಿಕ್ಕಿಕೊಂಡಿದೆ.<ref>{{Cite web |year=1953 |title=Limits of Oceans and Seas, 3rd edition |url=https://iho.int/uploads/user/pubs/standards/s-23/S-23_Ed3_1953_EN.pdf |archive-url=https://web.archive.org/web/20181005131902/https://www.iho.int/iho_pubs/standard/S-23/S-23_Ed3_1953_EN.pdf |archive-date=5 October 2018 |access-date=28 December 2020 |publisher=International Hydrographic Organization}}</ref> ಉತ್ತರ ಅಕ್ಷಾಂಶ 8°18' ಮತ್ತು 12°48' ಮತ್ತು ಪೂರ್ವ ರೇಖಾಂಶ 74°52' ಮತ್ತು 77°22' ನಡುವೆ ಇದೆ,<ref>{{cite web |title=Physical and Anatomical Characteristic of Wood of Some Less-Known Tree Species of Kerala |url=https://docs.kfri.res.in/KFRI-RR/KFRI-RR096.pdf |work=Kerala Forest Research Institute |publisher=Government of Kerala |access-date=18 November 2012 |archive-date=9 July 2013 |archive-url=https://web.archive.org/web/20130709150101/http://docs.kfri.res.in/KFRI-RR/KFRI-RR096.pdf |url-status=live }}</ref> ಕೇರಳವು ಕೆಲವು ಚಂಡಮಾರುತಗಳೊಂದಿಗೆ ಆರ್ದ್ರ [[ಉಷ್ಣವಲಯದ ಮಳೆಕಾಡು ಹವಾಮಾನ]]ವನ್ನು ಹೊಂದಿದೆ. ರಾಜ್ಯವು {{cvt|590|km|mi}} ಕರಾವಳಿಯನ್ನು ಹೊಂದಿದೆ<ref>{{cite web |title=Marine Fisheries |url=https://www.fisheries.kerala.gov.in/index.php?option=com_content&view=article&id=76&Itemid=44 |website=fisheries.kerala.gov.in |publisher=Department of Fisheries, Government of Kerala |access-date=13 November 2015 |archive-date=17 November 2015 |archive-url=https://web.archive.org/web/20151117021802/http://www.fisheries.kerala.gov.in/index.php?option=com_content&view=article&id=76&Itemid=44 |url-status=live }}</ref> ಮತ್ತು ರಾಜ್ಯದ ಅಗಲವು {{convert|11|and|121|km|mi|0}} ನಡುವೆ ಬದಲಾಗುತ್ತದೆ.<ref name="Nair1994">{{cite book |author=V. Balakrishnan Nair |title=Social Development and Demographic Changes in South India: Focus on Kerala |url=https://books.google.com/books?id=sTS4OO9lcdgC&pg=PA15 |access-date=18 November 2012 |year=1994 |publisher=M.D. Publications Pvt. Ltd. |isbn=978-8185880501 |page=15}}</ref> ಭೌಗೋಳಿಕವಾಗಿ, ಕೇರಳವನ್ನು ಮೂರು ಹವಾಮಾನದ ಪ್ರತ್ಯೇಕ ಪ್ರದೇಶಗಳಾಗಿ ವಿಂಗಡಿಸಬಹುದು: ಪೂರ್ವ ಎತ್ತರದ ಪ್ರದೇಶಗಳು; ಒರಟು ಮತ್ತು ತಂಪಾದ ಪರ್ವತ ಪ್ರದೇಶ, ಮಧ್ಯ ಮಧ್ಯ-ನೆಲಗಳು; ರೋಲಿಂಗ್ ಬೆಟ್ಟಗಳು, ಮತ್ತು ಪಶ್ಚಿಮ ತಗ್ಗು ಪ್ರದೇಶಗಳು; ಕರಾವಳಿ ಬಯಲುಗಳು.<ref name="ChattopadhyayFranke2006">{{cite book |author1=Srikumar Chattopadhyay |author2=Richard W. Franke |title=Striving for Sustainability: Environmental Stress and Democratic Initiatives in Kerala |url=https://books.google.com/books?id=gOrvghLklKoC&pg=PA110 |access-date=19 March 2019 |year=2006 |publisher=Concept Publishing Company |isbn=978-8180692949}}</ref>{{rp|110}} [[ಪೂರ್ವ-ಕೇಂಬ್ರಿಯನ್]] ಮತ್ತು [[ಪ್ಲಿಸ್ಟೊಸೀನ್]] ಭೂವೈಜ್ಞಾನಿಕ ರಚನೆಗಳು ಕೇರಳದ ಭೂಪ್ರದೇಶದ ಬಹುಭಾಗವನ್ನು ರೂಪಿಸುತ್ತವೆ.<ref name="Geological Survey Water-supply Paper">{{cite book |title=Geological Survey Water-supply Paper |url=https://books.google.com/books?id=0qUYAQAAIAAJ&pg=SL4-PA6 |access-date=19 March 2019 |year=1961 |publisher=U.S. Government Printing Office |page=4}}</ref><ref name="SharmaKumari2008">{{cite book |author1=Pradeep Sharma |author2=Y. Dharnai Kumari |author3=Tirunagaram Lakshmamma |title=Status Of Women And Family Planning |url=https://books.google.com/books?id=2b6Ok2EcnBIC&pg=PA217 |access-date=18 November 2012 |year=2008 |publisher=Discovery Publishing House |isbn=978-8183563260 |page=217}}</ref> 1341 CE ಯಲ್ಲಿ ಕೇರಳದಲ್ಲಿ ವಿನಾಶಕಾರಿ ಪ್ರವಾಹವು ಅದರ ಭೂಪ್ರದೇಶವನ್ನು ಆಮೂಲಾಗ್ರವಾಗಿ ಬದಲಾಯಿಸಿತು ಮತ್ತು ಅದರ ಇತಿಹಾಸದ ಮೇಲೆ ಪರಿಣಾಮ ಬೀರಿತು; ಇದು ಮಸಾಲೆ ಸಾಗಣೆಗೆ ನೈಸರ್ಗಿಕ ಬಂದರನ್ನು ಸೃಷ್ಟಿಸಿತು.<ref name="LimitedKitchen2010">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA100 |access-date=18 November 2012 |year=2010 |publisher=Murdoch Books |isbn=978-1-74196-438-7 |page=100}}</ref>
ಕೇರಳದ ಪೂರ್ವ ಪ್ರದೇಶವು ಪಶ್ಚಿಮ ಘಟ್ಟಗಳ [[ಮಳೆ ನೆರಳು]] ಯ ಪಶ್ಚಿಮಕ್ಕೆ ತಕ್ಷಣವೇ ಎತ್ತರದ ಪರ್ವತಗಳು, ಕಮರಿಗಳು ಮತ್ತು ಆಳವಾದ ಕತ್ತರಿಸಿದ ಕಣಿವೆಗಳನ್ನು ಒಳಗೊಂಡಿದೆ.<ref name=ChattopadhyayFranke2006 />{{rp|110}} ಕೇರಳದ ಪಶ್ಚಿಮಕ್ಕೆ ಹರಿಯುವ 41 ನದಿಗಳು,<ref name="Sadasivan2003">{{cite book |author=S. N. Sadasivan |title=River Disputes in India: Kerala Rivers Under Siege |url=https://books.google.com/books?id=hhrRboi5kOcC&pg=PA223 |access-date=18 November 2012 |year=2003 |publisher=Mittal Publications |isbn=978-8170999133 |page=223}}</ref> ಮತ್ತು ಅದರ ಪೂರ್ವಕ್ಕೆ ಹರಿಯುವ 3 ನದಿಗಳು ಈ ಪ್ರದೇಶದಲ್ಲಿ ಹುಟ್ಟುತ್ತವೆ.<ref name="Darpan2006">{{cite book |author=Pratiyogita Darpan |title=Pratiyogita Darpan |url=https://books.google.com/books?id=QegDAAAAMBAJ&pg=PT72 |access-date=18 November 2012 |date=September 2006 |publisher=Pratiyogita Darpan |page=72}}</ref><ref name="India2008">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA11 |access-date=18 November 2012 |year=2008 |publisher=Sura Books |isbn=978-8174781642 |page=11}}</ref> ಪಶ್ಚಿಮ ಘಟ್ಟಗಳು [[ಪಾಲಕ್ಕಾಡ್]] ಬಳಿ ಮಾತ್ರ ಅಡ್ಡಿಪಡಿಸುವ ಪರ್ವತಗಳ ಗೋಡೆಯನ್ನು ರೂಪಿಸುತ್ತವೆ; ಆದ್ದರಿಂದ ಪಾಲ್''ಘಾಟ್'' ಎಂದೂ ಕರೆಯಲ್ಪಡುತ್ತದೆ, ಅಲ್ಲಿ [[ಪಾಲಕ್ಕಾಡ್ ಅಂತರ]]ವು ಮುರಿಯುತ್ತದೆ.<ref>{{cite web |last1=Chandran Nair |first1=Dr.S.Sathis |title=India – Silent Valley Rainforest Under Threat Once More |url=https://www.rainforestinfo.org.au/wrr2004/silentvalley.htm |website=rainforestinfo.org.au |access-date=12 November 2015 |archive-date=24 September 2015 |archive-url=https://web.archive.org/web/20150924084520/http://www.rainforestinfo.org.au/wrr2004/silentvalley.htm |url-status=live }}</ref> ಪಶ್ಚಿಮ ಘಟ್ಟಗಳು ಸರಾಸರಿ {{convert|1500|m|ft|lk=out|abbr=off}} [[ಸಮುದ್ರ ಮಟ್ಟ]]ದವರೆಗೆ ಏರುತ್ತವೆ,<ref name="Biju2006">{{cite book |author=M.R. Biju |title=Sustainable Dimensions Of Tourism Management |url=https://books.google.com/books?id=AkAdvTbg0dEC&pg=PA63 |access-date=18 November 2012 |year=2006 |publisher=Mittal Publications |isbn=978-8183241298 |page=63}}</ref> ಆದರೆ ಅತಿ ಎತ್ತರದ ಶಿಖರಗಳು ಸುಮಾರು {{convert|2500|m|ft|abbr=off}} ತಲುಪುತ್ತವೆ.<ref name="Hussain">{{cite book |author=Hussain |title=Geography Of India For Civil Ser Exam |url=https://books.google.com/books?id=wUzKCZxvNQoC&pg=SA2-PA9 |access-date=18 November 2012 |publisher=Tata McGraw-Hill Education |isbn=978-0-07-066772-3 |page=2}}</ref> [[ಇಡುಕ್ಕಿ]] ಜಿಲ್ಲೆಯ [[ಅನಮುಡಿ]] ದಕ್ಷಿಣ ಭಾರತದ ಅತಿ ಎತ್ತರದ ಶಿಖರವಾಗಿದ್ದು, {{cvt|2,695|m}} ಎತ್ತರದಲ್ಲಿದೆ.<ref name="gazetteer">{{cite book |last1=Frowde |first1=Henry |url=https://dsal.uchicago.edu/reference/gazetteer/ |title=Imperial Gazetteer of India |date=1908–1909 |publisher=Clarendon Press |edition=New |location=Oxford |access-date=2 December 2020 |archive-url=https://web.archive.org/web/20081216124143/http://dsal.uchicago.edu/reference/gazetteer/ |archive-date=16 December 2008 |url-status=live}}</ref> ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯು ವಿಶ್ವದ ಎಂಟು "ಅತ್ಯಂತ ಬಿಸಿಯಾದ ಜೈವಿಕ ವೈವಿಧ್ಯತೆಯ ಹಾಟ್ಸ್ಪಾಟ್ಗಳಲ್ಲಿ" ಒಂದಾಗಿ ಗುರುತಿಸಲ್ಪಟ್ಟಿದೆ ಮತ್ತು [[UNESCO]] [[ವಿಶ್ವ ಪರಂಪರೆಯ ತಾಣ]]ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.<ref name="UNESCO">{{cite news |url=https://timesofindia.indiatimes.com/home/environment/flora-fauna/UN-designates-Western-Ghats-as-world-heritage-site/articleshow/14595602.cms |archive-url=https://web.archive.org/web/20130131192257/https://articles.timesofindia.indiatimes.com/2012-07-02/flora-fauna/32507340_1_world-heritage-list-western-ghats-border-town |url-status=live |archive-date=31 January 2013 |title=UN designates Western Ghats as world heritage site |date=2 July 2012 |newspaper=[[The Times of India]] |access-date=27 November 2018}}</ref> ಈ ಶ್ರೇಣಿಯ ಕಾಡುಗಳು ಹಿಮಾಲಯ ಪರ್ವತಗಳಿಗಿಂತ ಹಳೆಯದು ಎಂದು ಪರಿಗಣಿಸಲಾಗಿದೆ.<ref name="UNESCO" /> ಪಶ್ಚಿಮ ಘಟ್ಟಗಳ ಹಿನ್ನೆಲೆಯಲ್ಲಿ ನೆಲೆಗೊಂಡಿರುವ [[ಅತಿರಪ್ಪಿಲ್ಲಿ ಜಲಪಾತ]]ವನ್ನು ''ಭಾರತದ [[ನಯಾಗರ ಜಲಪಾತ|ನಯಾಗರ]]'' ಎಂದೂ ಕರೆಯಲಾಗುತ್ತದೆ.<ref name="Athirappilly">{{cite news |url=https://articles.timesofindia.indiatimes.com/2013-05-30/travel/33064279_1_palm-trees-trek-coconut-trees |title=The Times of India: Latest News India, World & Business News, Cricket & Sports, Bollywood |access-date=2 July 2013 |archive-url=https://web.archive.org/web/20130621233624/https://articles.timesofindia.indiatimes.com/2013-05-30/travel/33064279_1_palm-trees-trek-coconut-trees |archive-date=21 June 2013 |work=[[The Times of India]] |url-status=dead}}</ref> ಇದು [[ಚಾಲಕ್ಕುಡಿ ನದಿ]]ಯಲ್ಲಿದೆ ಮತ್ತು ರಾಜ್ಯದ ಅತಿ ದೊಡ್ಡ ಜಲಪಾತವಾಗಿದೆ.<ref name="Athirappilly" /> [[ವಯನಾಡು]] ಕೇರಳದ ಏಕೈಕ [[ಪ್ರಸ್ಥಭೂಮಿ]]ಯಾಗಿದೆ.<ref>{{cite book |author=William Logan |year=1887 |title=Malabar Manual (Volume-II) |publisher=Madras Government Press |url=https://archive.org/details/malabar_manual_volume2/mode/2up}}</ref> [[ವಯನಾಡು ಜಿಲ್ಲೆ|ವಯನಾಡು]], [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ([[ನಿಲಂಬೂರು|ನಿಲಂಬೂರಿನ]] [[ಚಾಲಿಯಾರ್]] ಕಣಿವೆ), ಮತ್ತು [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] ([[ಅಟ್ಟಪ್ಪಾಡಿ]] ಕಣಿವೆ) ಜಿಲ್ಲೆಗಳಲ್ಲಿನ ಪೂರ್ವ ಪ್ರದೇಶಗಳು, ಒಟ್ಟಾಗಿ [[ನೀಲಗಿರಿ ಜೀವಗೋಳ ಮೀಸಲು]] ಮತ್ತು [[ಮೈಸೂರು ಪ್ರಸ್ಥಭೂಮಿ]]ಯ ಮುಂದುವರಿಕೆಯ ಭಾಗಗಳಾಗಿವೆ, ಇವು ನೈಸರ್ಗಿಕ [[ಚಿನ್ನ]]ದ ಹೊಲಗಳಿಗೆ ಹೆಸರುವಾಸಿಯಾಗಿದೆ, ಜೊತೆಗೆ [[ಕರ್ನಾಟಕ]]ದ ಪಕ್ಕದ ಜಿಲ್ಲೆಗಳು.<ref>{{Cite web |url=https://dmg.kerala.gov.in/mineral-resources/ |title=Mineral Resources |website=Department of Mining and Geology – Government of Kerala |access-date=4 April 2022 |archive-date=13 May 2022 |archive-url=https://web.archive.org/web/20220513124121/https://dmg.kerala.gov.in/mineral-resources/ |url-status=live }}</ref> [[ಇಲ್ಮೆನೈಟ್]], [[ಮೊನಾಜೈಟ್]], [[ಥೋರಿಯಮ್]], ಮತ್ತು [[ಟೈಟಾನಿಯಮ್]] ಸೇರಿದಂತೆ ಖನಿಜಗಳು ಕೇರಳದ ಕರಾವಳಿ ಪಟ್ಟಿಯಲ್ಲಿ ಕಂಡುಬರುತ್ತವೆ.{{sfn|Chandran|2018|p=343}} ಕೇರಳದ [[ಕರುನಾಗಪ್ಪಳ್ಳಿ]] ಕರಾವಳಿ ಪಟ್ಟಿಯು [[ಥೋರಿಯಮ್]]-ಹೊಂದಿರುವ [[ಮೊನಾಜೈಟ್]] ಮರಳಿನಿಂದ ಹೆಚ್ಚಿನ ಹಿನ್ನೆಲೆ ವಿಕಿರಣಕ್ಕೆ ಹೆಸರುವಾಸಿಯಾಗಿದೆ. ಕೆಲವು ಕರಾವಳಿ ಪಂಚಾಯತ್ಗಳಲ್ಲಿ, ಸರಾಸರಿ ಹೊರಾಂಗಣ ವಿಕಿರಣ ಮಟ್ಟಗಳು 4 [[ಗ್ರೇ (ಘಟಕ)#ದೇಹದ ಮೇಲಿನ ಪರಿಣಾಮ|mGy/yr]] ಗಿಂತ ಹೆಚ್ಚು ಮತ್ತು ಕರಾವಳಿಯ ಕೆಲವು ಸ್ಥಳಗಳಲ್ಲಿ, ಇದು 70 mGy/yr ನಷ್ಟು ಹೆಚ್ಚಾಗಿದೆ.<ref>{{Cite news |vauthors=Nair RR, Rajan B, Akiba S, Jayalekshmi P, Nair MK, Gangadharan P, Koga T, Morishima H, Nakamura S, Sugahara T |title=Background radiation and cancer incidence in Kerala, India-Karanagappally cohort study. |publisher=Health Physics |date=January 2009 |pmid=19066487}}</ref>
ಕೇರಳದ ಪಶ್ಚಿಮ ಕರಾವಳಿ ಪಟ್ಟಿಯು ಪೂರ್ವ ಪ್ರದೇಶಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಸಮತಟ್ಟಾಗಿದೆ,<ref name="ChattopadhyayFranke2006" />{{rp|33}} ಮತ್ತು ಅಂತರ್ಸಂಪರ್ಕಿತ [[ಉಪ್ಪುನೀರಿನ]] ಕಾಲುವೆಗಳು, ಸರೋವರಗಳು, [[ಅಳಿವೆ]]ಗಳು,<ref name="Moss2010">{{cite book |author=Danny Moss |title=Public Relations Cases: International Perspectives |url=https://books.google.com/books?id=s0-CJ3djEdEC&pg=PA41 |access-date=18 November 2012 |year=2010 |publisher=Taylor & Francis |isbn=978-0-415-77336-2 |page=41}}</ref> ಮತ್ತು [[ಕೇರಳ ಬ್ಯಾಕ್ವಾಟರ್ಗಳು]] ಎಂದು ಕರೆಯಲ್ಪಡುವ ನದಿಗಳ ಜಾಲದಿಂದ ಕೂಡಿದೆ.<ref name="Thorpe2012">{{cite book |author=Edgar Thorpe |title=The Pearson CSAT Manual 2012 |url=https://books.google.com/books?id=1cruroSVFoUC&pg=RA3-PA38 |access-date=18 November 2012 |year=2012 |publisher=Pearson Education India |isbn=978-8131767344 |page=3}}</ref> ''ಕೇರಳದ ಅಕ್ಕಿಯ ಬಟ್ಟಲು'' ಎಂದೂ ಕರೆಯಲ್ಪಡುವ [[ಕುಟ್ಟನಾಡು]] ಭಾರತದಲ್ಲಿ [[ಭಾರತದ ತೀವ್ರ ಬಿಂದುಗಳ ಪಟ್ಟಿ#ಎತ್ತರಗಳು|ಅತ್ಯಂತ ಕಡಿಮೆ ಎತ್ತರವನ್ನು]] ಹೊಂದಿದೆ, ಮತ್ತು ಇದು ಸಮುದ್ರ ಮಟ್ಟಕ್ಕಿಂತ ಕೆಳಗೆ ಬೇಸಾಯ ನಡೆಯುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿದೆ.<ref>{{Cite news |title=Kerala Boat Ferries Lone Passenger To Help Her Take Exam |url=https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |last=Press Trust of India |date=1 June 2020 |access-date=17 November 2020 |work=NDTV |archive-date=16 November 2021 |archive-url=https://web.archive.org/web/20211116093316/https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |url-status=live }}</ref><ref>{{Cite web |url=https://www.hindu.com/mag/2003/07/13/stories/2003071300600200.htm |title=Thirst below sea level |last=Suchitra |first=M |date=13 August 2003 |work=[[The Hindu]] |access-date=17 November 2020 |archive-url=https://web.archive.org/web/20190922101804/https://www.thehindu.com/todays-paper/tp-features/tp-sundaymagazine/thirst-below-sea-level/article28523147.ece |archive-date=22 September 2019}}</ref> ದೇಶದ ಅತಿ ಉದ್ದದ ಸರೋವರ [[ವೇಂಬನಾಡು ಸರೋವರ|ವೇಂಬನಾಡು]] ಬ್ಯಾಕ್ವಾಟರ್ಗಳಲ್ಲಿ ಪ್ರಾಬಲ್ಯ ಹೊಂದಿದೆ; ಇದು [[ಆಲಪ್ಪುಳ]] ಮತ್ತು [[ಕೊಚ್ಚಿ]] ನಡುವೆ ಇದೆ ಮತ್ತು ಸುಮಾರು {{cvt|200|km2|sqmi}} ಪ್ರದೇಶದಲ್ಲಿದೆ.<ref name="Husain">{{cite book |author=Majid Husain |title=Understanding: Geographical: Map Entries: for Civil Services Examinations: Second Edition |url=https://books.google.com/books?id=_9VGKfQ-sQsC&pg=RA9-PT18 |access-date=18 November 2012 |publisher=Tata McGraw-Hill Education |isbn=978-0-07-070288-2 |page=9 |year=2011}}</ref> ಭಾರತದ ಸುಮಾರು ಎಂಟು ಪ್ರತಿಶತದಷ್ಟು ಜಲಮಾರ್ಗಗಳು ಕೇರಳದಲ್ಲಿ ಕಂಡುಬರುತ್ತವೆ.<ref name="IWAI_2005">{{Cite journal |author=Inland Waterways Authority of India (IWAI—Ministry of Shipping) |year=2005 |title=Introduction to Inland Water Transport |journal=IWAI (Ministry of Shipping) |url=https://iwai.nic.in/Introduction.html |archive-url=https://archive.today/20050204175110/http://iwai.nic.in/Introduction.html |url-status=dead |archive-date=4 February 2005 |access-date=19 January 2006}}</ref> ಕೇರಳದ [[ಕೇರಳದ ನದಿಗಳ ಪಟ್ಟಿ|44 ನದಿಗಳು]] [[ಪೆರಿಯಾರ್ ನದಿ|ಪೆರಿಯಾರ್]]; {{convert|244|km|mi|0}}, [[ಭಾರತಪುಳ]]; {{convert|209|km|mi|0}}, [[ಪಂಬಾ ನದಿ|ಪಂಬಾ]]; {{convert|176|km|mi|0}}, [[ಚಾಲಿಯಾರ್ ನದಿ|ಚಾಲಿಯಾರ್]]; {{convert|169|km|mi|0}}, [[ಕಡಲುಂಡಿಪುಳ ನದಿ|ಕಡಲುಂಡಿಪುಳ]]; {{convert|130|km|mi|0}}, [[ಚಾಲಕ್ಕುಡಿ ನದಿ|ಚಾಲಕ್ಕುಡಿಪುಳ]]; {{convert|130|km|mi|0}}, [[ವಲಪಟ್ಟಣಂ ನದಿ|ವಲಪಟ್ಟಣಂ]]; {{convert|129|km|mi|0}} ಮತ್ತು [[ಅಚನ್ಕೋವಿಲ್ ನದಿ]]; {{convert|128|km|mi|0}}. ನದಿಗಳ ಸರಾಸರಿ ಉದ್ದ {{convert|64|km|mi|0}}. ಅನೇಕ ನದಿಗಳು ಚಿಕ್ಕದಾಗಿರುತ್ತವೆ ಮತ್ತು ಸಂಪೂರ್ಣವಾಗಿ ಮಳೆಗಾಲದ ಮಳೆಯಿಂದ ಪೋಷಿಸಲ್ಪಡುತ್ತವೆ.<ref name=riverreport>{{cite book |last=India. |first=Planning Commission |title=Kerala Development Report |year=2008 |publisher=Academic Foundation |isbn=978-8171885947 |page=224 |url=https://books.google.com/books?isbn=8171885942}}</ref> ಕೇರಳದ ನದಿಗಳು ಚಿಕ್ಕದಾಗಿರುವುದರಿಂದ ಮತ್ತು [[ನದೀಮುಖಜ ಭೂಮಿ|ಮುಖಜ ಭೂಮಿಯ]] ಕೊರತೆಯಿಂದಾಗಿ, ಅವು ಪರಿಸರ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತವೆ. ನದಿಗಳು ಮರಳು ಗಣಿಗಾರಿಕೆ ಮತ್ತು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತವೆ.<ref name="Padmalal">{{cite journal | url=https://doi.org/10.1007/s00254-007-0870-z | doi=10.1007/s00254-007-0870-z | title=Environmental effects of river sand mining: A case from the river catchments of Vembanad lake, Southwest coast of India | year=2008 | last1=Padmalal | first1=D. | last2=Maya | first2=K. | last3=Sreebha | first3=S. | last4=Sreeja | first4=R. | journal=Environmental Geology | volume=54 | issue=4 | pages=879–889 | bibcode=2008EnGeo..54..879P | s2cid=129312081 | access-date=12 February 2020 | archive-date=25 November 2023 | archive-url=https://web.archive.org/web/20231125191757/https://link.springer.com/article/10.1007/s00254-007-0870-z | url-status=live | issn = 0943-0105 | url-access=subscription }}</ref> ರಾಜ್ಯವು ಭೂಕುಸಿತ, ಪ್ರವಾಹ ಮತ್ತು ಬರಗಾಲದಂತಹ ಹಲವಾರು ನೈಸರ್ಗಿಕ ಅಪಾಯಗಳನ್ನು ಅನುಭವಿಸುತ್ತದೆ. 2004 ರ [[2004 ರ ಹಿಂದೂ ಮಹಾಸಾಗರದ ಭೂಕಂಪ ಮತ್ತು ಸುನಾಮಿ|ಹಿಂದೂ ಮಹಾಸಾಗರದ ಸುನಾಮಿ]] ಯಿಂದ ರಾಜ್ಯವು ಸಹ ಪರಿಣಾಮ ಬೀರಿತು,<ref name="Jha2010">{{cite book |author=M.K. Jha |title=Natural and Anthropogenic Disasters: Vulnerability, Preparedness and Mitigation |url=https://books.google.com/books?id=fICXQSPJwx8C&pg=PA81 |access-date=18 November 2012 |year=2010 |publisher=Springer |isbn=978-9048124978 |page=81}}</ref> ಮತ್ತು 2018 ರಲ್ಲಿ ಸುಮಾರು ಒಂದು ಶತಮಾನದಲ್ಲಿ [[2018 ಕೇರಳ ಪ್ರವಾಹ|ಕೆಟ್ಟ ಪ್ರವಾಹವನ್ನು]] ಅನುಭವಿಸಿತು.<ref>{{Cite news |url=https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |title=Worst floods in nearly a century kill 44 in India's Kerala state amid torrential monsoon rains |last=Baynes |first=Chris |date=15 August 2018 |work=The Independent |access-date=16 August 2018 |archive-date=23 May 2019 |archive-url=https://web.archive.org/web/20190523232643/https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |url-status=live }}</ref> 2024 ರಲ್ಲಿ, ಕೇರಳವು ತನ್ನ ಇತಿಹಾಸದಲ್ಲಿ [[2024 ವಯನಾಡು ಭೂಕುಸಿತ|ಕೆಟ್ಟ ಭೂಕುಸಿತಗಳನ್ನು]] ಅನುಭವಿಸಿತು.<ref>{{Cite news |url=https://www.onmanorama.com/news/kerala/2024/07/30/wayand-landslide-kerala-rain-live.html |title=Wayanad landslides: 133 dead, 481 saved, at least 98 missing |date=30 July 2024 |work=[[Onmanorama]] |access-date=31 July 2024 |archive-date=30 July 2024|archive-url=https://web.archive.org/web/20240730073647/https://www.onmanorama.com/news/kerala/2024/07/30/wayand-landslide-kerala-rain-live.html |url-status=live }}</ref>
=== ಹವಾಮಾನ ===
ವರ್ಷಕ್ಕೆ ಸುಮಾರು 120–140 ಮಳೆಯ ದಿನಗಳೊಂದಿಗೆ,<ref name="Chacko_2002">{{Cite journal |last1=Chacko |first1=T. |last2=Renuka |first2=G. |year=2002 |title=Temperature mapping, thermal diffusivity and subsoil heat flux at Kariavattom, Kerala |journal=Proc Indian Acad Sci (Earth Planet Sci) |volume=111 |issue=1 |pages=79 |title-link=Kariavattom |bibcode=2002InEPS.111...79T |doi=10.1007/BF02702224 |doi-access=free}}</ref>{{rp|80}} ಕೇರಳವು [[ನೈಋತ್ಯ ಮಾನ್ಸೂನ್|ನೈಋತ್ಯ ಬೇಸಿಗೆ ಮಾನ್ಸೂನ್]] ಮತ್ತು [[ಈಶಾನ್ಯ ಮಾನ್ಸೂನ್|ಈಶಾನ್ಯ ಚಳಿಗಾಲದ ಮಾನ್ಸೂನ್]] ನ ಕಾಲಿಕ ಭಾರೀ ಮಳೆಯಿಂದ ಪ್ರಭಾವಿತವಾದ ಆರ್ದ್ರ ಮತ್ತು ಸಮುದ್ರಯಾನ ಉಷ್ಣವಲಯದ ಹವಾಮಾನವನ್ನು ಹೊಂದಿದೆ.<ref name="Devrep">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=223 |access-date=30 May 2015}}</ref> ಸುಮಾರು 65% ಮಳೆಯು ಜೂನ್ ನಿಂದ ಆಗಸ್ಟ್ ವರೆಗೆ ನೈಋತ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ, ಮತ್ತು ಉಳಿದವು ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಈಶಾನ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ.<ref name="Devrep" /> ನೈಋತ್ಯ ಮಾನ್ಸೂನ್ನ ತೇವಾಂಶ-ಹೊತ್ತ ಗಾಳಿಗಳು, [[ಭಾರತೀಯ ಪರ್ಯಾಯ ದ್ವೀಪ]]ದ ಅತ್ಯಂತ ದಕ್ಷಿಣದ ಬಿಂದುವನ್ನು ತಲುಪಿದಾಗ, ಅದರ ಸ್ಥಳಾಕೃತಿಯ ಕಾರಣದಿಂದಾಗಿ, ಎರಡು ಶಾಖೆಗಳಾಗಿ ವಿಭಜನೆಯಾಗುತ್ತವೆ; "ಅರೇಬಿಯನ್ ಸಮುದ್ರ ಶಾಖೆ" ಮತ್ತು "ಬಂಗಾಳ ಕೊಲ್ಲಿಯ ಶಾಖೆ".<ref name="Jain">{{cite book |author=RK Jain |title=Geography 10 |url=https://books.google.com/books?id=7hOybWJeZN0C&pg=PA110 |access-date=18 November 2012 |publisher=Ratna Sagar |isbn=978-8183320818 |page=110}}</ref> ನೈಋತ್ಯ ಮಾನ್ಸೂನ್ನ "ಅರೇಬಿಯನ್ ಸಮುದ್ರ ಶಾಖೆ" ಮೊದಲು ಪಶ್ಚಿಮ ಘಟ್ಟಗಳಿಗೆ ಬಡಿಯುತ್ತದೆ,<ref name="Together with Social Science Term II">{{cite book |title=Together with Social Science Term II |url=https://books.google.com/books?id=oOA1nsSU8JYC&pg=PA112 |access-date=18 November 2012 |publisher=Rachna Sagar |isbn=978-8181373991 |page=112}}</ref> ನೈಋತ್ಯ ಮಾನ್ಸೂನ್ನಿಂದ ಮಳೆಯನ್ನು ಪಡೆಯುವ ಭಾರತದ ಮೊದಲ ರಾಜ್ಯವಾಗಿ ಕೇರಳವನ್ನು ಮಾಡುತ್ತದೆ.<ref name="google6">{{cite book |author1=Edgar Thorpe, Showick Thorpe |author2=Thorpe Edgar |title=The Pearson CSAT Manual 2011 |url=https://books.google.com/books?id=WuBFs6yFRwcC&pg=SL7-PA168 |access-date=18 November 2012 |publisher=Pearson Education India |isbn=978-8131758304 |page=7}}</ref><ref name="Aggarwal">{{cite book |author1=N.N. Kher |author2=Jaideep Aggarwal |title=A Text Book of Social Sciences |url=https://books.google.com/books?id=jV6k0FvIC4sC&pg=RA5-PA16 |access-date=18 November 2012 |publisher=Pitambar Publishing |isbn=978-8120914667 |page=5}}</ref> ಈಶಾನ್ಯ ಮಾನ್ಸೂನ್ನಲ್ಲಿ ಒತ್ತಡದ ಮಾದರಿಗಳ ವಿತರಣೆಯು ಹಿಮ್ಮುಖವಾಗುತ್ತದೆ, ಈ ಋತುವಿನಲ್ಲಿ ಉತ್ತರ ಭಾರತದಿಂದ ತಣ್ಣನೆಯ ಗಾಳಿಗಳು ಬಂಗಾಳ ಕೊಲ್ಲಿಯಿಂದ ತೇವಾಂಶವನ್ನು ಪಡೆದುಕೊಳ್ಳುತ್ತವೆ ಮತ್ತು ಪರ್ಯಾಯ ದ್ವೀಪ ಭಾರತದ ಪೂರ್ವ ಕರಾವಳಿಯಲ್ಲಿ ಅದನ್ನು ಮಳೆಯಾಗಿ ಸುರಿಸುತ್ತವೆ.<ref name="google7">{{cite book |author1=Sarina Singh |author2=Amy Karafin |author3=Anirban Mahapatra |title=South India |url=https://books.google.com/books?id=8KnLFpjEHpUC&pg=PA15 |access-date=18 November 2012 |year=2009 |publisher=Lonely Planet |isbn=978-1-74179-155-6 |page=15}}</ref><ref name="Reddy">{{cite book |author=S.V. Jeevananda Reddy |title=Climate Change: Myths and Realities |url=https://books.google.com/books?id=y_GMTXRtxJ8C&pg=PA71 |access-date=18 November 2012 |publisher=Jeevananda Reddy |page=71 |id=GGKEY:WDFHBL1XHK3}}</ref> ಕೇರಳದಲ್ಲಿ, ಈಶಾನ್ಯ ಮಾನ್ಸೂನ್ನ ಪ್ರಭಾವವು ದಕ್ಷಿಣ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುತ್ತದೆ.<ref>{{Cite book |author=Rao |title=Agricultural Meteorology |url=https://books.google.com/books?id=Kd-3lt-yAtAC&pg=PA173 |publisher=PHI Learning |year=2008 |isbn=978-8120333383 |pages=173–74 |access-date=30 May 2015}}</ref> ಕೇರಳದ ಮಳೆಯು ವಾರ್ಷಿಕವಾಗಿ ಸರಾಸರಿ 2,923 mm (115 in) ಆಗಿದೆ.<ref name="IMD">{{cite web |url=https://www.imd.gov.in/section/hydro/dynamic/rfmaps/updated.html |title=Hydromet Division Updated/Real Time Maps |publisher=[[India Meteorological Department]] |access-date=21 October 2014 |archive-url=https://web.archive.org/web/20160305062728/https://www.imd.gov.in/section/hydro/dynamic/rfmaps/updated.html |archive-date=5 March 2016 |url-status=dead}}</ref> ಕೇರಳದ ಕೆಲವು ಶುಷ್ಕ ತಗ್ಗು ಪ್ರದೇಶಗಳು ಸರಾಸರಿ ಕೇವಲ 1,250 mm (49 in) ಪಡೆಯುತ್ತವೆ; ಪೂರ್ವ [[ಇಡುಕ್ಕಿ ಜಿಲ್ಲೆ]]ಯ ಪರ್ವತಗಳು 5,000 mm (197 in) ಗಿಂತ ಹೆಚ್ಚು [[ಮಳೆ (ಹವಾಮಾನಶಾಸ್ತ್ರ)#ಶಿಲಾವೃಷ್ಟಿ ಮಳೆ|ಶಿಲಾವೃಷ್ಟಿ ಮಳೆಯನ್ನು]] ಪಡೆಯುತ್ತವೆ: ರಾಜ್ಯದಲ್ಲಿ ಅತಿ ಹೆಚ್ಚು. ಪೂರ್ವ ಕೇರಳದಲ್ಲಿ, ಶುಷ್ಕ ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಹವಾಮಾನವು ಪ್ರಚಲಿತವಾಗಿದೆ. ಬೇಸಿಗೆಯಲ್ಲಿ, ರಾಜ್ಯವು ಭಾರಿ ಗಾಳಿ, ಸುಂಟರಗಾಳಿ, ಚಂಡಮಾರುತ-ಸಂಬಂಧಿತ ಧಾರಾಕಾರ ಮಳೆ, ಸಾಂದರ್ಭಿಕ ಬರಗಾಲ ಮತ್ತು ಸಮುದ್ರ ಮಟ್ಟದ ಏರಿಕೆಗೆ ಒಳಗಾಗುತ್ತದೆ.<ref name="Brenkert_Malone_2003">{{Cite journal |last1=Brenkert |first1=A. |last2=Malone |first2=E. |year=2003 |title=Vulnerability and resilience of India and Indian states to climate change: a first-order approximation |journal=Joint Global Change Research Institute}}</ref>{{rp|26, 46, 52}} ಸರಾಸರಿ ದೈನಂದಿನ ತಾಪಮಾನವು 19.8 °C ನಿಂದ 36.7 °C ವರೆಗೆ ಇರುತ್ತದೆ.<ref name="moef">{{cite web |last=Sudha |first=T. M. |title=Opportunities in participatory planning to Evolve a Landuse Policy for Western Ghats Region in Kerala |url=https://moef.nic.in/downloads/public-information/tenth/Annexure%203.pdf |publisher=Department of Town and Country Planning, Kerala |page=14 |access-date=18 January 2015 |archive-url=https://web.archive.org/web/20160325095604/https://www.moef.nic.in/downloads/public-information/tenth/Annexure%203.pdf |archive-date=25 March 2016 |url-status=dead}}</ref> ವಾರ್ಷಿಕ ಸರಾಸರಿ ತಾಪಮಾನವು ಕರಾವಳಿ ತಗ್ಗು ಪ್ರದೇಶಗಳಲ್ಲಿ 25.0 ರಿಂದ 27.5 °C ವರೆಗೆ ಮತ್ತು ಪೂರ್ವ ಎತ್ತರದ ಪ್ರದೇಶಗಳಲ್ಲಿ 20.0–22.5 °C ವರೆಗೆ ಇರುತ್ತದೆ.<ref name="Brenkert_Malone_2003" />{{rp|65}}
=== ಸಸ್ಯ ಮತ್ತು ಪ್ರಾಣಿ ===
{{Main|ಕೇರಳದ ಸಸ್ಯ ಮತ್ತು ಪ್ರಾಣಿ}}
{{Multiple image
| direction = vertical
| width = 220
| image1 = Ichthyaetus ichthyaetus Kadalundi.jpg
| caption1 = [[ಕಡಲುಂಡಿ ಪಕ್ಷಿ ಅಭಯಾರಣ್ಯ|ಕಡಲುಂಡಿ ಪಕ್ಷಿ ಅಭಯಾರಣ್ಯದಲ್ಲಿ]] ಒಂದು ವಲಸೆ ''[[ಇಚ್ಥ್ಯಾಏಟಸ್]]''
| image2 = Highland Grassland Shola of Silent Valley National Park.jpg
| caption2 = [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]]
| image3 = Munnarhills.jpg
| caption3 = [[ಏಲಕ್ಕಿ ಬೆಟ್ಟಗಳು]] ತಮ್ಮ [[ಜೈವಿಕ ವೈವಿಧ್ಯತೆ]]ಗೆ ಹೆಸರುವಾಸಿಯಾಗಿದೆ
}}
ಹೆಚ್ಚಿನ [[ಜೈವಿಕ ವೈವಿಧ್ಯತೆ]]ಯು [[ಪಶ್ಚಿಮ ಘಟ್ಟಗಳಲ್ಲಿ]] ಕೇಂದ್ರೀಕೃತವಾಗಿದೆ ಮತ್ತು ರಕ್ಷಿಸಲ್ಪಟ್ಟಿದೆ. 18 ನೇ ಶತಮಾನದವರೆಗೆ ಕೇರಳದ ಮೂರು-ನಾಲ್ಕು ಭಾಗದಷ್ಟು ಭೂ ಪ್ರದೇಶವು ದಟ್ಟವಾದ ಅರಣ್ಯದ ಅಡಿಯಲ್ಲಿತ್ತು.<ref name="History">{{cite web |url=https://www.forest.kerala.gov.in/index.php?option=com_content&view=article&id=46&Itemid=2 |title=History |access-date=12 August 2015 |publisher=Kerala forests and wildlife department |archive-date=12 September 2015 |archive-url=https://web.archive.org/web/20150912231001/http://www.forest.kerala.gov.in/index.php?option=com_content&view=article&id=46&Itemid=2 |url-status=dead }}</ref> 2004 ರಂತೆ, ಭಾರತದ 15,000 ಸಸ್ಯ ಪ್ರಭೇದಗಳಲ್ಲಿ 25% ಕ್ಕಿಂತ ಹೆಚ್ಚು ಕೇರಳದಲ್ಲಿವೆ. 4,000 [[ಹೂಬಿಡುವ ಸಸ್ಯ]] ಪ್ರಭೇದಗಳಲ್ಲಿ; ಅವುಗಳಲ್ಲಿ 1,272 [[ಸ್ಥಳೀಯ (ಪರಿಸರ ವಿಜ್ಞಾನ)|ಕೇರಳಕ್ಕೆ ಸ್ಥಳೀಯವಾಗಿವೆ]], 900 [[ಸಸ್ಯವೈದ್ಯ|ಔಷಧೀಯವಾಗಿವೆ]], ಮತ್ತು 159 [[ಅಳಿವಿನಂಚಿನಲ್ಲಿರುವ ಪ್ರಭೇದಗಳು|ಬೆದರಿಕೆಗೆ ಒಳಗಾಗಿವೆ]].<ref name="Sreedharan_2004">{{Cite journal |author=Sreedharan TP |year=2004 |title=Biological Diversity of Kerala: A survey of Kalliasseri panchayat, Kannur district |journal=Centre for Development Studies |url=https://krpcds.org/publication/downloads/62.pdf |archive-url=https://web.archive.org/web/20090326054155/https://krpcds.org/publication/downloads/62.pdf |archive-date=26 March 2009 |access-date=28 December 2008}}</ref>{{rp|11}} ಇದರ {{cvt|9,400|km2}} ಕಾಡುಗಳು ಉಷ್ಣವಲಯದ ಆರ್ದ್ರ ನಿತ್ಯಹಸಿರು ಮತ್ತು ಅರೆ-ನಿತ್ಯಹಸಿರು ಕಾಡುಗಳು (ಕೆಳ ಮತ್ತು ಮಧ್ಯಮ ಎತ್ತರಗಳು—3,470 km<sup>2</sup>), ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಪತನಶೀಲ ಕಾಡುಗಳು (ಮಧ್ಯಮ ಎತ್ತರಗಳು—4,100 km<sup>2</sup> ಮತ್ತು {{cvt|100|km2}}, ಕ್ರಮವಾಗಿ), ಮತ್ತು ಪರ್ವತ ಉಪೋಷ್ಣವಲಯ ಮತ್ತು [[ಸಮಶೀತೋಷ್ಣ]] (''ಶೋಲ'') ಕಾಡುಗಳು (ಅತಿ ಎತ್ತರದ ಎತ್ತರಗಳು—100 km<sup>2</sup>) ಒಳಗೊಂಡಿವೆ. ಒಟ್ಟಾರೆಯಾಗಿ, ಕೇರಳದ 24% ಅರಣ್ಯವಾಗಿದೆ.<ref name="Sreedharan_2004" />{{rp|12}} ವಿಶ್ವದ [[ರಾಮ್ಸರ್ ಒಪ್ಪಂದ]]ದಲ್ಲಿ ಪಟ್ಟಿ ಮಾಡಲಾದ ನಾಲ್ಕು [[ಜವುಗು ಪ್ರದೇಶ]]ಗಳು—[[ಶಾಸ್ತಾಂಕೋಟ್ಟ ಸರೋವರ|ಸರೋವರ ಶಾಸ್ತಾಂಕೋಟ್ಟ]], [[ಅಷ್ಟಮುಡಿ ಸರೋವರ]], [[ತೃಶೂರ್-ಪೊನ್ನಾನಿ ಕೋಲ್ ಜವುಗು ಪ್ರದೇಶಗಳು]], ಮತ್ತು ವೇಂಬನಾಡು-ಕೋಲ್ ಜವುಗು ಪ್ರದೇಶಗಳು—ಕೇರಳದಲ್ಲಿವೆ,{{sfn|Chandran|2018|p=342}} ಜೊತೆಗೆ ವಿಶಾಲವಾದ [[ನೀಲಗಿರಿ ಜೀವಗೋಳ ಮೀಸಲು]]ಯ {{cvt|1455.4|km2}} ಮತ್ತು [[ಅಗಸ್ತ್ಯಮಲೈ ಜೀವಗೋಳ ಮೀಸಲು]]ಯ {{cvt|1828|km2}} ಸೇರಿವೆ.{{sfn|Chandran|2018|p=347}} 20 ನೇ ಶತಮಾನದಲ್ಲಿ ಬೇಸಾಯಕ್ಕಾಗಿ ವ್ಯಾಪಕವಾಗಿ ತೆರವುಗೊಳಿಸಲ್ಪಟ್ಟಿದ್ದು,<ref name="Jayarajan_2004">{{Cite journal |author=Jayarajan M |year=2004 |title=Sacred Groves of North Malabar |journal=Centre for Development Studies |url=https://krpcds.org/publication/downloads/92.pdf |archive-url=https://web.archive.org/web/20090326054142/https://krpcds.org/publication/downloads/92.pdf |archive-date=26 March 2009 |access-date=28 December 2008}}</ref>{{rp|6–7}} ಉಳಿದ ಅರಣ್ಯ ಹೊದಿಕೆಯ ಹೆಚ್ಚಿನ ಭಾಗವನ್ನು ಈಗ [[ಸ್ಪಷ್ಟ ಕಡಿತ]]ದಿಂದ ರಕ್ಷಿಸಲಾಗಿದೆ.<ref name="Evans2008">{{cite book |author=Julian Evans |title=The Forests Handbook, Applying Forest Science for Sustainable Management |url=https://books.google.com/books?id=Ol_CCkYQNKIC&pg=PA235 |access-date=18 November 2012 |year=2008 |publisher=John Wiley & Sons |isbn=978-0-470-75683-6 |page=235}}</ref> ಪೂರ್ವ ಕೇರಳದ ಗಾಳಿಗೆ ಮುಖವಾದ ಪರ್ವತಗಳು [[ಉಷ್ಣವಲಯ ಮತ್ತು ಉಪೋಷ್ಣವಲಯದ ಆರ್ದ್ರ ಪರ್ಣಪಾತಿ ಕಾಡುಗಳು|ಉಷ್ಣವಲಯದ ಆರ್ದ್ರ ಕಾಡುಗಳನ್ನು]] ಮತ್ತು [[ಉಷ್ಣವಲಯ ಮತ್ತು ಉಪೋಷ್ಣವಲಯದ ಶುಷ್ಕ ಪರ್ಣಪಾತಿ ಕಾಡುಗಳು|ಉಷ್ಣವಲಯದ ಶುಷ್ಕ ಕಾಡುಗಳನ್ನು]] ಆಶ್ರಯಿಸುತ್ತವೆ, ಇವು ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿವೆ.<ref name="google8">{{cite book |author1=R. P. Singh |author2=Zubairul Islam |title=Environmental Studies |url=https://books.google.com/books?id=gaQptMlw3X8C&pg=PA172 |access-date=18 November 2012 |publisher=Concept Publishing Company |isbn=978-8180697746 |page=172 |year=2012 |archive-date=25 November 2023 |archive-url=https://web.archive.org/web/20231125191749/https://books.google.com/books?id=gaQptMlw3X8C&pg=PA172#v=onepage&q&f=false |url-status=live }}</ref><ref name="Geer2008">{{cite book |author=Alexandra Anna Enrica van der Geer |title=Animals in Stone: Indian Mammals Sculptured Through Time |url=https://books.google.com/books?id=oQ3quxh9gsgC&pg=PA7 |access-date=18 November 2012 |year=2008 |publisher=Brill |isbn=978-9004168190 |page=7}}</ref> ವಿಶ್ವದ ಅತ್ಯಂತ ಹಳೆಯ ತೇಗದ ತೋಟ 'ಕೊನೊಲ್ಲಿಸ್ ಪ್ಲಾಟ್' [[ನಿಲಂಬೂರು|ನಿಲಂಬೂರಿನಲ್ಲಿದೆ]].<ref>{{Cite web |url=https://www.dnaindia.com/india/report-world-s-oldest-teak-trees-dying-in-kerala-1255723 |title=World's oldest teak trees dying in Kerala |date=13 May 2009 |website=DNA India |access-date=25 November 2020 |archive-date=15 April 2021 |archive-url=https://web.archive.org/web/20210415102931/https://www.dnaindia.com/india/report-world-s-oldest-teak-trees-dying-in-kerala-1255723 |url-status=live }}</ref>
ಕೇರಳದ ಪ್ರಾಣಿಗಳು ಅವುಗಳ ವೈವಿಧ್ಯತೆ ಮತ್ತು ಹೆಚ್ಚಿನ ಸ್ಥಳೀಯತೆಯ ಪ್ರಮಾಣಕ್ಕೆ ಗಮನಾರ್ಹವಾಗಿವೆ: ಇದು 118 [[ಸಸ್ತನಿ]] ಪ್ರಭೇದಗಳನ್ನು (1 ಸ್ಥಳೀಯ), [[ಕೇರಳದ ಪಕ್ಷಿಗಳ ಪಟ್ಟಿ|500 ಪಕ್ಷಿ ಪ್ರಭೇದಗಳು]], 189 ಸಿಹಿನೀರಿನ ಮೀನು ಪ್ರಭೇದಗಳು, 173 [[ಸರೀಸೃಪ]] ಪ್ರಭೇದಗಳು (ಅವುಗಳಲ್ಲಿ 10 ಸ್ಥಳೀಯ), ಮತ್ತು 151 [[ಉಭಯಚರ]] ಪ್ರಭೇದಗಳನ್ನು (36 ಸ್ಥಳೀಯ) ಒಳಗೊಂಡಿದೆ.<ref>{{Cite web |url=https://threatenedtaxa.org/index.php/JoTT/article/view/1999/3443 |archive-url=https://web.archive.org/web/20161007224232/https://threatenedtaxa.org/index.php/JoTT/article/view/1999/3443 |url-status=dead |title=View of A checklist of the vertebrates of Kerala State, India | Journal of Threatened Taxa |archive-date=7 October 2016 |website=threatenedtaxa.org}}</ref> ಇವುಗಳು ವ್ಯಾಪಕವಾದ ಆವಾಸಸ್ಥಾನ ನಾಶ, ಮಣ್ಣಿನ ಸವಕಳಿ, ಭೂಕುಸಿತ, [[ಮಣ್ಣಿನ ಲವಣೀಕರಣ|ಉಪ್ಪಿನಂಶ]], ಮತ್ತು ಸಂಪನ್ಮೂಲ ಹೊರತೆಗೆಯುವಿಕೆಯಿಂದ ಬೆದರಿಕೆಗೆ ಒಳಗಾಗಿವೆ. ಕಾಡುಗಳಲ್ಲಿ, ''ಸೋನೋಕೆಲಿಂಗ್'', ''[[ಡಾಲ್ಬರ್ಗಿಯಾ ಲ್ಯಾಟಿಫೋಲಿಯಾ]]'', ''ಅಂಜಿಲಿ'', ''ಮುಲ್ಲುಮುರಿಕ್ಕು'', ''[[ಎರಿಥ್ರಿನಾ]]'', ಮತ್ತು ''[[ಸಿನ್ನಮೋಮಮ್ ಕ್ಯಾಸಿಯಾ|ಕ್ಯಾಸಿಯಾ]]'' ಕೇರಳದ 1,000 ಕ್ಕೂ ಹೆಚ್ಚು ಮರ ಪ್ರಭೇದಗಳಲ್ಲಿ ಸೇರಿವೆ. ಇತರ ಸಸ್ಯಗಳಲ್ಲಿ [[ಬಿದಿರು]], ಕಾಡು ಕರಿಮೆಣಸು, ಕಾಡು [[ಏಲಕ್ಕಿ]], [[ಕ್ಯಾಲಮಸ್ (ತಾಳೆ)|ಕ್ಯಾಲಮಸ್]] [[ರಟ್ಟನ್]] ತಾಳೆ, ಮತ್ತು ಸುಗಂಧಯುಕ್ತ ವೆಟಿವರ್ ಹುಲ್ಲು, ''ವೆಟಿವೇರಿಯಾ ಝಿಝಾನಿಯಾಯ್ಡ್ಸ್'' ಸೇರಿವೆ.<ref name="Sreedharan_2004" />{{rp|12}} [[ಭಾರತೀಯ ಆನೆ]], [[ಬಂಗಾಳ ಹುಲಿ]], [[ಭಾರತೀಯ ಚಿರತೆ]], [[ನೀಲಗಿರಿ ತಾರ್]], [[ಸಾಮಾನ್ಯ ತಾಳೆ ನರಿ]], ಮತ್ತು [[ಬೂದು ದೈತ್ಯ ಅಳಿಲು]]ಗಳು ಸಹ ಕಾಡುಗಳಲ್ಲಿ ಕಂಡುಬರುತ್ತವೆ.<ref name="Sreedharan_2004" />{{rp|12, 174–75}} ಸರೀಸೃಪಗಳಲ್ಲಿ [[ರಾಜ ನಾಗ]], [[ವೈಪೆರಿಡೆ|ಹಾವು]], [[ಪೈಥಾನ್]], ಮತ್ತು [[ಚಿಪ್ಪು ಮೊಸಳೆ]] ಸೇರಿವೆ. ಕೇರಳದ ಪಕ್ಷಿಗಳಲ್ಲಿ [[ಮಲಬಾರ್ ಟ್ರೋಗನ್]], [[ಮಹಾಶಿಖಿ]], [[ಕೇರಳ ಕುಕ್ಕುರ]], [[ಡಾರ್ಟರ್]] ಮತ್ತು [[ದಕ್ಷಿಣ ಬೆಟ್ಟ ಮೈನಾ]] ಸೇರಿವೆ. ಸರೋವರಗಳು, ಜವುಗು ಪ್ರದೇಶಗಳು ಮತ್ತು ಜಲಮಾರ್ಗಗಳಲ್ಲಿ, [[ಹೆಟೆರೋಪ್ನ್ಯೂಸ್ಟಿಸ್ ಫಾಸಿಲಿಸ್|ಕಾಡು]], [[ರೆಡ್ ಲೈನ್ ಟಾರ್ಪಿಡೋ ಬಾರ್ಬ್]] ಮತ್ತು ''ಚೂಟ್ಟಾಚಿ''; [[ಆರೆಂಜ್ ಕ್ರೋಮೈಡ್]]—''ಎಟ್ರೋಪ್ಲಸ್ ಮ್ಯಾಕುಲಾಟಸ್'' ಮುಂತಾದ ಮೀನುಗಳು ಕಂಡುಬರುತ್ತವೆ.<ref>{{cite book |last1=Institute |first1=Kerala Forest Research |title=Biodiversity Documentation for Kerala: Freshwater fishes |year=2003 |publisher=Kerala Forest Research Institute |isbn=978-8185041544 |url=https://books.google.com/books?id=SYcPAQAAMAAJ&q=fishes+in+kerala |language=en |access-date=18 October 2020 |archive-date=25 November 2023 |archive-url=https://web.archive.org/web/20231125192259/https://books.google.com/books?id=SYcPAQAAMAAJ&q=fishes+in+kerala |url-status=live }}</ref><ref name="Sreedharan_2004" />{{rp|163–65}} ಇತ್ತೀಚೆಗೆ, ಕೇರಳದ ವಡಕರಾ ಕರಾವಳಿಯಿಂದ ಸಂಗ್ರಹಿಸಿದ ಹೊಸದಾಗಿ ವಿವರಿಸಲಾದ ಟಾರ್ಡಿಗ್ರೇಡ್ (ನೀರಿನ ಕರಡಿಗಳು) ಪ್ರಭೇದವನ್ನು ಕೇರಳ ರಾಜ್ಯದ ಹೆಸರಿನಿಂದ ಹೆಸರಿಸಲಾಗಿದೆ; ''[[ಸ್ಟೈಗಾರ್ಕ್ಟಸ್ ಕೇರಳೆನ್ಸಿಸ್]]''.<ref>{{cite journal |last1=Vishnudattan |first1=N. K. |display-authors=etal |title=A new Tardigrade species, Stygarctus keralensis sp. nov. (Arthrotardigrada: Stygarctidae) from the intertidal zone of Southwest coast of India |url=https://www.mapress.com/zt/article/view/42726 |date=15 June 2021 |journal=[[Zootaxa]] |volume=4985 |issue=3 |page=381391 |doi=10.11646/zootaxa.4985.3.5 |pmid=34186802 |s2cid=235688035 |access-date=22 June 2021 |archive-date=27 November 2021 |archive-url=https://web.archive.org/web/20211127214807/https://www.mapress.com/zt/article/view/zootaxa.4985.3.5 |url-status=live |url-access=subscription }}</ref>
== ಪ್ರದೇಶಗಳು, ಜಿಲ್ಲೆಗಳು ಮತ್ತು ನಗರಗಳು ==
{{Main|ಕೇರಳದ ಆಡಳಿತ ವಿಭಾಗಗಳು|ಕೇರಳದ ಜಿಲ್ಲೆಗಳು|ಕೇರಳದ ಆದಾಯ ವಿಭಾಗಗಳ ಪಟ್ಟಿ|ಕೇರಳದ ತಾಲೂಕುಗಳ ಪಟ್ಟಿ|ಕೇರಳದ ನಗರಗಳು ಮತ್ತು ಪಟ್ಟಣಗಳ ಪಟ್ಟಿ}}
{{See also|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಆರು ಪ್ರದೇಶಗಳಾಗಿ ವಿತರಿಸಲಾಗಿದೆ: [[ಉತ್ತರ ಮಲಬಾರ್]] (ದೂರದ-ಉತ್ತರ ಕೇರಳ), [[ದಕ್ಷಿಣ ಮಲಬಾರ್]] (ಉತ್ತರ-ಮಧ್ಯ ಕೇರಳ), [[ಕೊಚ್ಚಿ]] (ಮಧ್ಯ ಕೇರಳ), [[ಉತ್ತರ ತಿರುವಾಂಕೂರು]] (ದಕ್ಷಿಣ-ಮಧ್ಯ ಕೇರಳ), [[ಮಧ್ಯ ತಿರುವಾಂಕೂರು]] (ದಕ್ಷಿಣ ಕೇರಳ) ಮತ್ತು [[ದಕ್ಷಿಣ ತಿರುವಾಂಕೂರು]] (ದೂರದ-ದಕ್ಷಿಣ ಕೇರಳ). ತೆರಿಗೆ ಮತ್ತು ಭೂ ಆದಾಯ ಉದ್ದೇಶಗಳಿಗಾಗಿ ಆಡಳಿತ ಪ್ರದೇಶಗಳಾಗಿ ಕಾರ್ಯನಿರ್ವಹಿಸುವ ಜಿಲ್ಲೆಗಳನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳು|27 ಆದಾಯ ವಿಭಾಗಗಳಾಗಿ]] ಮತ್ತು [[ಕೇರಳದ ತಾಲೂಕುಗಳ ಪಟ್ಟಿ|77 ತಾಲೂಕುಗಳಾಗಿ]] ವಿಂಗಡಿಸಲಾಗಿದೆ, ಇವುಗಳು ತಮ್ಮ ಗಡಿಗಳೊಳಗಿನ ವಸಾಹತುಗಳ ಮೇಲೆ ಆಡಳಿತ ಮತ್ತು ಆರ್ಥಿಕ ಅಧಿಕಾರಗಳನ್ನು ಹೊಂದಿವೆ, ಸ್ಥಳೀಯ ಭೂ ದಾಖಲೆಗಳ ನಿರ್ವಹಣೆ ಸೇರಿದಂತೆ. ಕೇರಳದ ತಾಲೂಕುಗಳನ್ನು ಮತ್ತಷ್ಟು 1,674 [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ.<ref>{{cite web |url=https://ildm.kerala.gov.in/wp-content/uploads/2018/01/Revenue-Guide-2018.pdf |title=Revenue Guide 2018 |date= |website=[[Government of Kerala]] |access-date=28 September 2020 |archive-date=20 September 2020 |archive-url=https://web.archive.org/web/20200920133932/https://ildm.kerala.gov.in/wp-content/uploads/2018/01/Revenue-Guide-2018.pdf |url-status=live }}</ref><ref>{{Cite web |url=https://kerala.gov.in/revenue-department |title=Revenue department, government of Kerala |access-date=28 September 2020 |archive-date=17 August 2021 |archive-url=https://web.archive.org/web/20210817225825/https://kerala.gov.in/revenue-department |url-status=dead}}</ref>
[[ಭಾರತದ ಸಂವಿಧಾನದ ತಿದ್ದುಪಡಿಗಳ ಪಟ್ಟಿ|73 ಮತ್ತು 74 ನೇ]] ಸಾಂವಿಧಾನಿಕ ತಿದ್ದುಪಡಿಗಳಿಂದ, ಕೇರಳದಲ್ಲಿ ಸ್ಥಳೀಯ ಸ್ವಯಂ-ಸರ್ಕಾರಿ ಸಂಸ್ಥೆಗಳು ಸರ್ಕಾರದ ಮೂರನೇ ಹಂತವಾಗಿ ಕಾರ್ಯನಿರ್ವಹಿಸುತ್ತವೆ, ಗ್ರಾಮೀಣ ಆಡಳಿತಕ್ಕಾಗಿ 14 [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳು]], 152 [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು 941 [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], ಮತ್ತು ನಗರ ಆಡಳಿತಕ್ಕಾಗಿ 87 [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]], ಆರು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿವೆ.<ref>{{cite web |title=Local Self Governance in Kerala |url=https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |publisher=Government of Kerala |access-date=28 September 2020 |archive-date=28 September 2021 |archive-url=https://web.archive.org/web/20210928223404/https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |url-status=dead}}</ref>
[[ಮಾಹೆ, ಭಾರತ|ಮಾಹೆ]], ಭಾರತೀಯ [[ಕೇಂದ್ರಾಡಳಿತ ಪ್ರದೇಶ]] [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]]ಯ ಒಂದು ಭಾಗವಾಗಿದ್ದು,<ref>{{cite web |url=https://www.censusindia.net/results/town.php?stad=A&state5=999 |archive-url=https://web.archive.org/web/20040616075334/https://www.censusindia.net/results/town.php?stad=A&state5=999 |archive-date=16 June 2004 |title=Census of India 2001: Data from the 2001 Census, including cities, villages and towns (Provisional) |access-date=1 November 2008 |publisher=Census Commission of India}}</ref> ಇದು {{convert|647|km}} ದೂರದಲ್ಲಿದ್ದರೂ,<ref name="ShiraAssociates.2012">{{cite book |author1=Dezan Shira |author2=Associates. |title=Doing Business in India |url=https://books.google.com/books?id=9YjXW41yMwQC&pg=PT313 |access-date=18 November 2012 |year=2012 |publisher=Springer |isbn=978-3-642-27618-7 |pages=313–}}</ref> ಇದು ಕೇರಳದಿಂದ ಅದರ ಎಲ್ಲಾ ಭೂಮುಖ ವಿಧಾನಗಳಲ್ಲಿ ಸುತ್ತುವರೆದಿರುವ ಕರಾವಳಿ ಬಹಿರಂಗವಾಗಿದೆ. [[ಕಣ್ಣೂರು ಜಿಲ್ಲೆ|ಕಣ್ಣೂರು ಜಿಲ್ಲೆಯು]] ಮೂರು ಕಡೆ ಮಾಹೆಯನ್ನು ಸುತ್ತುವರೆದಿದೆ ಮತ್ತು ನಾಲ್ಕನೇ ಕಡೆ [[ಕೋಝಿಕೋಡ್ ಜಿಲ್ಲೆ|ಕೋಝಿಕೋಡ್ ಜಿಲ್ಲೆಯಿದೆ]].<ref name="Menon2002">{{cite book |author1=D Banerjea |author2=N. R. Madhava Menon |title=Criminal Justice India Series, Vol. 20 |url=https://books.google.com/books?id=Axfuc5A8mxMC&pg=PA9 |access-date=18 November 2012 |year=2002 |publisher=Allied Publishers |isbn=978-8177648713 |pages=9–}}</ref>
1664 ರಲ್ಲಿ, [[ಫೋರ್ಟ್ ಕೊಚ್ಚಿ]] ಪುರಸಭೆಯನ್ನು [[ಡಚ್ ಮಲಬಾರ್]] ಸ್ಥಾಪಿಸಿತು, ಇದು [[ಭಾರತೀಯ ಉಪಖಂಡ]]ದ ಮೊದಲ ಪುರಸಭೆಯಾಗಿದೆ, ಇದು 18 ನೇ ಶತಮಾನದಲ್ಲಿ ಡಚ್ ಅಧಿಕಾರವು ದುರ್ಬಲಗೊಂಡಾಗ ವಿಸರ್ಜಿಸಲಾಯಿತು.<ref name="d_1664">{{Cite news |title=50 years on, Kochi still has a long way to go |url=https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |last=M K Sunil Kumar |date=26 September 2017 |access-date=1 June 2021 |work=The Times of India |archive-date=2 June 2021 |archive-url=https://web.archive.org/web/20210602230954/https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |url-status=live }}</ref> [[ಕೋಝಿಕೋಡ್]], [[ಪಾಲಕ್ಕಾಡ್]], [[ಫೋರ್ಟ್ ಕೊಚ್ಚಿ]], [[ಕಣ್ಣೂರು]], ಮತ್ತು [[ತಲಶ್ಶೇರಿ]] ಪುರಸಭೆಗಳನ್ನು 1 ನವೆಂಬರ್ 1866 ರಂದು<ref name="Ref1">{{cite web |title=Chronological List of Central Acts (Updated up to 17-10-2014) |url=https://www.lawmin.nic.in/chronology.doc |url-status=dead |archive-url=https://web.archive.org/web/20180107091128/http://lawmin.nic.in/chronology.doc |archive-date=7 January 2018 |access-date=7 August 2016 |website=Lawmin.nic.in}}</ref><ref name="c1881">{{cite book |last1=Lewis McIver |first1=G. Stokes |url=https://books.google.com/books?id=b_YIAAAAQAAJ |title=Imperial Census of 1881 Operations and Results in the Presidency of Madras |publisher=E.Keys at the Government Press |year=1883 |edition=(Vol II) |location=Madras |page=444 |access-date=5 December 2020 |archive-url=https://web.archive.org/web/20230327063433/https://books.google.com/books?id=b_YIAAAAQAAJ |archive-date=27 March 2023 |url-status=live}}</ref><ref name="google.co.in">{{cite book |last1=Presidency |first1=Madras (India |url=https://books.google.com/books?id=aUEwnQEACAAJ |title=Madras District Gazetteers, Statistical Appendix For Malabar District. |publisher=The Superintendent, Government Press |year=1915 |edition=Vol.2 |location=Madras |page=20 |language=en |access-date=2 December 2020 |archive-url=https://web.archive.org/web/20230327063433/https://books.google.com/books?id=aUEwnQEACAAJ |archive-date=27 March 2023 |url-status=live}}</ref><ref name="gazetteer" /> [[ಬ್ರಿಟಿಷ್ ಭಾರತ ಸಾಮ್ರಾಜ್ಯ]]ದಲ್ಲಿ ಸ್ಥಾಪಿಸಲಾಯಿತು, ಇದು ಕೇರಳ ರಾಜ್ಯದ ಮೊದಲ ಆಧುನಿಕ ಪುರಸಭೆಗಳಾಗಿವೆ. [[ತಿರುವನಂತಪುರ]] ಪುರಸಭೆಯು 1920 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಎರಡು ದಶಕಗಳ ನಂತರ, [[ಶ್ರೀ ಚಿತಿರಾ ತಿರುನಾಳ್]] ರ ಆಳ್ವಿಕೆಯಲ್ಲಿ, ತಿರುವನಂತಪುರ ಪುರಸಭೆಯನ್ನು 30 ಅಕ್ಟೋಬರ್ 1940 ರಂದು ನಿಗಮವಾಗಿ ಪರಿವರ್ತಿಸಲಾಯಿತು, ಇದು ಕೇರಳದ ಅತ್ಯಂತ ಹಳೆಯ ನಗರ ನಿಗಮವಾಗಿದೆ.<ref>{{cite web |title=Thiruvananthapuram |url=https://www.corporationoftrivandrum.org/index.php?option=com_content&view=article&id=158&Itemid=11 |date=2010 |url-status=usurped |archive-url=https://web.archive.org/web/20100918085703/https://www.corporationoftrivandrum.org/index.php?option=com_content&view=article&id=158&Itemid=11 |archive-date=18 September 2010 |access-date=4 April 2022}} Year of becoming a corporation</ref> [[ಭಾರತ]]ದ ಸ್ವಾತಂತ್ರ್ಯದ ನಂತರ ಸ್ಥಾಪಿಸಲಾದ ಮೊದಲ ನಗರ ನಿಗಮ ಮತ್ತು ರಾಜ್ಯದ ಎರಡನೇ ಅತ್ಯಂತ ಹಳೆಯ ನಗರ ನಿಗಮವು 1962 ರಲ್ಲಿ [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]] ನಲ್ಲಿದೆ.<ref>[https://web.archive.org/web/20080209134539/https://www.hindu.com/2008/02/05/stories/2008020561140500.htm Kozhikode Lok Sabha constituency redrawn Delimitation impact], ''The Hindu'' 5 February 2008</ref> ಕೇರಳದಲ್ಲಿ ಆರು [[ಭಾರತದಲ್ಲಿ ನಗರ ನಿಗಮಗಳು|ನಗರ ನಿಗಮಗಳಿವೆ]], ಅವು [[ತಿರುವನಂತಪುರ ನಗರ ನಿಗಮ|ತಿರುವನಂತಪುರ]], [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]], [[ಕೊಚ್ಚಿ ನಗರ ನಿಗಮ|ಕೊಚ್ಚಿ]], [[ಕೊಲ್ಲಂ ನಗರ ನಿಗಮ|ಕೊಲ್ಲಂ]], [[ತೃಶೂರ್ ನಗರ ನಿಗಮ|ತೃಶೂರ್]], ಮತ್ತು [[ಕಣ್ಣೂರು ನಗರ ನಿಗಮ|ಕಣ್ಣೂರು]] ನಗರಗಳನ್ನು ಆಳುತ್ತವೆ.<ref>{{cite web |title=Kerala Sustainable Urban Development Project |url=https://www.ksudp.org/ |publisher=Local Self Government Department |access-date=7 February 2022 |archive-date=20 September 2020 |archive-url=https://web.archive.org/web/20200920051936/http://ksudp.org/ |url-status=dead }}</ref> [[ತಿರುವನಂತಪುರ ನಗರ ನಿಗಮ]]ವು ಕೇರಳದ ಅತಿದೊಡ್ಡ ನಿಗಮವಾಗಿದ್ದರೆ ಕೊಚ್ಚಿ ಮಹಾನಗರ ಪ್ರದೇಶವನ್ನು [[ಕೊಚ್ಚಿ UA]] ಎಂದು ಕರೆಯಲಾಗುತ್ತದೆ, ಇದು ಅತಿದೊಡ್ಡ ನಗರ ಸಮೂಹವಾಗಿದೆ.<ref>{{cite web |title=City Information |url=https://cial.aero/contents/viewcontent.aspx?linkIdLvl2=32&linkid=32 |work=Cochin International Airport |publisher=Government of Kerala |access-date=18 November 2012 |archive-date=10 December 2012 |archive-url=https://web.archive.org/web/20121210070804/http://cial.aero/contents/viewcontent.aspx?linkIdLvl2=32&linkid=32 |url-status=live }}</ref> ಅರ್ಥಶಾಸ್ತ್ರ ಸಂಶೋಧನಾ ಸಂಸ್ಥೆ ಇಂಡಿಕಸ್ ಅನಾಲಿಟಿಕ್ಸ್ 2007 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, [[ತಿರುವನಂತಪುರ]], [[ಕೋಝಿಕೋಡ್]], [[ಕೊಚ್ಚಿ]], [[ಕೊಲ್ಲಂ]], [[ತೃಶೂರ್]] "ಭಾರತದಲ್ಲಿ ವಾಸಿಸಲು ಅತ್ಯುತ್ತಮ ನಗರಗಳಲ್ಲಿ" ಸೇರಿವೆ; ಸಮೀಕ್ಷೆಯು ನಗರಗಳನ್ನು ಶ್ರೇಣೀಕರಿಸಲು ಆರೋಗ್ಯ, ಶಿಕ್ಷಣ, ಪರಿಸರ, ಸುರಕ್ಷತೆ, ಸಾರ್ವಜನಿಕ ಸೌಲಭ್ಯಗಳು ಮತ್ತು ಮನರಂಜನೆಯಂತಹ ನಿಯತಾಂಕಗಳನ್ನು ಬಳಸಿದೆ.<ref>{{cite news |title=Cities best to earn a living are not the best to live: Survey |url=https://articles.economictimes.indiatimes.com/2007-11-26/news/27682663_1_cities-entertainment-indicus-analytics |work=The Times of India |date=26 November 2007 |access-date=7 February 2022 |archive-date=5 March 2016 |archive-url=https://web.archive.org/web/20160305021646/http://articles.economictimes.indiatimes.com/2007-11-26/news/27682663_1_cities-entertainment-indicus-analytics |url-status=dead }}</ref>
== ಸರ್ಕಾರ ಮತ್ತು ಆಡಳಿತ ==
{{Main|ಕೇರಳ ಸರ್ಕಾರ|ಕೇರಳ ವಿಧಾನಸಭೆ|ಕೇರಳದಲ್ಲಿ ಸ್ಥಳೀಯ ಸರ್ಕಾರ|ಕೇರಳ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಪಟ್ಟಿ|ಕೇರಳದ ಆಡಳಿತ ವಿಭಾಗಗಳು|l4 = ಕೇರಳ ಸರ್ಕಾರದ ಇಲಾಖೆಗಳ ಪಟ್ಟಿ}}
{{See also|ಕೇರಳದ ರಾಜಕೀಯ|ಕೇರಳದಲ್ಲಿ ರಾಜಕೀಯ ಪಕ್ಷಗಳು|ಕೇರಳದಲ್ಲಿ ಚುನಾವಣೆಗಳು}}
{{Multiple image
| direction = vertical
| width = 220
| header_align = center
| footer_align = center
| image1 = Kerala Legislative Assembly, Thiruvananthapuram.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಧಾನಸಭೆ]] ಕಟ್ಟಡ
| image2 = Kerala Government Secretariat.jpg
| caption2 = [[ಕೇರಳ ಸರ್ಕಾರದ ಕಚೇರಿ|ಸರ್ಕಾರಿ ಕಚೇರಿ]] [[ತಿರುವನಂತಪುರ|ತಿರುವನಂತಪುರದಲ್ಲಿ]] – ಕೇರಳದ ಕಾರ್ಯನಿರ್ವಾಹಕ ಆಡಳಿತದ ಆಸನ
| image3 = High Court of Kerala Building.jpg
| caption3 = [[ಕೊಚ್ಚಿ|ಕೊಚ್ಚಿಯ]] [[ಕೇರಳ ಉಚ್ಚ ನ್ಯಾಯಾಲಯ]] ಸಂಕೀರ್ಣ
}}
ರಾಜ್ಯವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯಿಂದ ಆಳಲ್ಪಡುತ್ತದೆ. ಕೇರಳವು [[ಏಕಸಭಾ]] ಶಾಸಕಾಂಗವನ್ನು ಹೊಂದಿದೆ. [[ಕೇರಳ ವಿಧಾನಸಭೆ]]ಯು ನಿಯಮಸಭೆ ಎಂದೂ ಕರೆಯಲ್ಪಡುತ್ತದೆ, ಇದು 140 ಸದಸ್ಯರನ್ನು ಒಳಗೊಂಡಿದ್ದು, ಅವರು ಐದು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.<ref>{{cite web |title=History of Kerala Legislature |url=https://kerala.gov.in/index.php?option=com_content&view=article&id=3776&Itemid=3022 |publisher=Government of Kerala |access-date=17 November 2012 |archive-url=https://web.archive.org/web/20120619040353/https://www.kerala.gov.in/index.php?option=com_content&view=article&id=3776&Itemid=3022 |archive-date=19 June 2012 |url-status=dead}}</ref> ರಾಜ್ಯವು [[ಭಾರತದ ಸಂಸತ್ತು|ಭಾರತೀಯ ಸಂಸತ್ತಿನ]] ಕೆಳಮನೆಯಾದ [[ಲೋಕಸಭೆ]]ಗೆ 20 ಸದಸ್ಯರನ್ನು ಮತ್ತು [[ರಾಜ್ಯಸಭೆ]]ಗೆ 9 ಸದಸ್ಯರನ್ನು ಚುನಾಯಿಸುತ್ತದೆ.<ref>{{cite web |url=https://www.parliamentofindia.nic.in/ls/intro/p1.htm |title=Our Parliament |publisher=Parliamentofindia.nic.in |access-date=25 February 2010 |archive-date=10 February 2010 |archive-url=https://web.archive.org/web/20100210043333/http://www.parliamentofindia.nic.in/ls/intro/p1.htm |url-status=live }}</ref>
[[ಕೇರಳ ಸರ್ಕಾರ]]ವು ಭಾರತದಲ್ಲಿ [[ಪ್ರಜಾಪ್ರಭುತ್ವ|ಪ್ರಜಾಪ್ರಭುತ್ವ]] ರೀತಿಯಲ್ಲಿ ಚುನಾಯಿತ ಸಂಸ್ಥೆಯಾಗಿದ್ದು, [[ಕೇರಳದ ರಾಜ್ಯಪಾಲರು|ರಾಜ್ಯಪಾಲರು]] ಇದರ ಸಾಂವಿಧಾನಿಕ ಮುಖ್ಯಸ್ಥರಾಗಿದ್ದಾರೆ ಮತ್ತು [[ಭಾರತದ ರಾಷ್ಟ್ರಪತಿ]]ಗಳಿಂದ ಐದು ವರ್ಷಗಳ ಅವಧಿಗೆ ನೇಮಕಗೊಳ್ಳುತ್ತಾರೆ.<ref name="govern">{{cite web |url=https://www.rajbhavan.kerala.gov.in/index.php?option=com_content&view=article&id=44&Itemid=2 |archive-url=https://web.archive.org/web/20090731095433/https://rajbhavan.kerala.gov.in/index.php?option=com_content&view=article&id=44&Itemid=2 |url-status=dead |archive-date=31 July 2009 |title=Responsibilities |access-date=13 November 2015 |publisher=Kerala Rajbhavan}}</ref> [[ಕೇರಳ ವಿಧಾನಸಭೆ|ವಿಧಾನಸಭೆಯಲ್ಲಿ]] ಬಹುಮತ ಹೊಂದಿರುವ ಪಕ್ಷ ಅಥವಾ ಒಕ್ಕೂಟದ ನಾಯಕನನ್ನು ರಾಜ್ಯಪಾಲರಿಂದ [[ಕೇರಳದ ಮುಖ್ಯಮಂತ್ರಿಗಳ ಪಟ್ಟಿ|ಮುಖ್ಯಮಂತ್ರಿಯಾಗಿ]] ನೇಮಿಸಲಾಗುತ್ತದೆ, ಮತ್ತು [[ಕೇರಳ ಸಚಿವ ಸಂಪುಟ|ಸಚಿವರ ಸಂಪುಟವನ್ನು]] ಮುಖ್ಯಮಂತ್ರಿಯ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಿಸುತ್ತಾರೆ.<ref name=govern /> ರಾಜ್ಯಪಾಲರು ರಾಜ್ಯದ ಆಚಾರಪೂರ್ಣ ಮುಖ್ಯಸ್ಥರಾಗಿ ಉಳಿಯುತ್ತಾರೆ, ಆದರೆ ಮುಖ್ಯಮಂತ್ರಿ ಮತ್ತು ಅವರ ಸಂಪುಟವು ದೈನಂದಿನ ಸರ್ಕಾರಿ ಕಾರ್ಯಗಳಿಗೆ ಜವಾಬ್ದಾರರಾಗಿರುತ್ತಾರೆ. ಸಚಿವರ ಸಂಪುಟವು ಸಚಿವ ಸಂಪುಟದ ಸಚಿವರು ಮತ್ತು ರಾಜ್ಯ ಸಚಿವರನ್ನು (MoS) ಒಳಗೊಂಡಿದೆ. [[ಕೇರಳ ಸರ್ಕಾರದ ಕಚೇರಿ|ಕಾರ್ಯದರ್ಶಿ]] [[ಮುಖ್ಯ ಕಾರ್ಯದರ್ಶಿ (ಭಾರತ)|ಮುಖ್ಯ ಕಾರ್ಯದರ್ಶಿ]] ನೇತೃತ್ವದಲ್ಲಿ, ಸಚಿವ ಸಂಪುಟಕ್ಕೆ ಸರ್ಕಾರಿ ನೀತಿಗಳ ರಚನೆ ಮತ್ತು ಅನುಷ್ಠಾನದಲ್ಲಿ ಸಹಾಯ ಮಾಡುತ್ತದೆ. ಮುಖ್ಯ ಕಾರ್ಯದರ್ಶಿಯು ಹಿರಿಯ [[ನಾಗರಿಕ ಸೇವೆ|ನಾಗರಿಕ ಸೇವಕ]] ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ರಾಜ್ಯ ಸರ್ಕಾರದ ಆಡಳಿತವು 47 ಕಾರ್ಯದರ್ಶಿ ಇಲಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ.<ref name=":0" /> ಪ್ರತಿಯೊಂದು ಸರ್ಕಾರಿ ಇಲಾಖೆಯನ್ನು ರಾಜಕೀಯವಾಗಿ ಸಚಿವರು ಮತ್ತು ಆಡಳಿತಾತ್ಮಕವಾಗಿ ಸರ್ಕಾರದ ಕಾರ್ಯದರ್ಶಿಯು ಮುಖ್ಯಸ್ಥರಾಗಿರುತ್ತಾರೆ, ಇವರು [[ಹೆಚ್ಚುವರಿ ಮುಖ್ಯ ಕಾರ್ಯದರ್ಶಿ|ಹೆಚ್ಚುವರಿ ಮುಖ್ಯ ಕಾರ್ಯದರ್ಶಿ]], [[ಪ್ರಿನ್ಸಿಪಾಲ್ ಕಾರ್ಯದರ್ಶಿ (ಭಾರತ)|ಪ್ರಿನ್ಸಿಪಾಲ್ ಕಾರ್ಯದರ್ಶಿ]], ಅಥವಾ [[ಕಾರ್ಯದರ್ಶಿ]] ಹುದ್ದೆಯಲ್ಲಿರುತ್ತಾರೆ, ಇವರು ಸಾಮಾನ್ಯವಾಗಿ [[ಭಾರತೀಯ ಆಡಳಿತ ಸೇವೆ]] (IAS) ನ ಅಧಿಕಾರಿಯಾಗಿರುತ್ತಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು/ಪ್ರಿನ್ಸಿಪಾಲ್ ಕಾರ್ಯದರ್ಶಿಗಳು ತಮಗೆ ನಿಯೋಜಿಸಲಾದ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರತಿಯೊಂದು ಇಲಾಖೆಯು ವಿಶೇಷ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಂಡರ್ ಸೆಕ್ರೆಟರಿ ಮತ್ತು ಇತರ ಸಹಾಯಕ ಅಧಿಕಾರಿಗಳ ಹುದ್ದೆಗಳನ್ನು ಸಹ ಹೊಂದಿದೆ. ಈ ಕಾರ್ಯದರ್ಶಿ ಇಲಾಖೆಗಳು ನೀತಿ ರಚನೆ ಮತ್ತು ಆಡಳಿತಾತ್ಮಕ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುತ್ತವೆ, ಆದರೆ ರೇಖಾ ಇಲಾಖೆಗಳು ಮತ್ತು ಇತರ ಕಾರ್ಯನಿರ್ವಾಹಕ ಸಂಸ್ಥೆಗಳು ಸರ್ಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಕ್ಷೇತ್ರ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತವೆ.
ಪ್ರತಿಯೊಂದು ಕಾರ್ಯದರ್ಶಿ ಇಲಾಖೆಯು ಒಂದು ಅಥವಾ ಹೆಚ್ಚು ರೇಖಾ ಇಲಾಖೆಗಳು, ನಿರ್ದೇಶನಾಲಯಗಳು, ಆಯುಕ್ತ ಕಚೇರಿಗಳು, ಮಂಡಳಿಗಳು, ಅಥವಾ ಅಂತಹುದೇ ಕಾರ್ಯನಿರ್ವಾಹಕ ಸಂಸ್ಥೆಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಚಲಾಯಿಸುತ್ತದೆ. ಈ ಸಂಸ್ಥೆಗಳು ಸರ್ಕಾರಿ ನೀತಿಗಳನ್ನು ಅನುಷ್ಠಾನಗೊಳಿಸಲು, ನಿಯಂತ್ರಕ ಆಡಳಿತ, ಜಾರಿ, ಸಾರ್ವಜನಿಕ ಸೇವೆಗಳನ್ನು ಒದಗಿಸಲು ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯಗಳನ್ನು ನಿರ್ವಹಿಸಲು ಜವಾಬ್ದಾರರಾಗಿರುತ್ತವೆ. ಅವುಗಳನ್ನು ಸಾಮಾನ್ಯವಾಗಿ ನಿರ್ದೇಶಕರು, ಆಯುಕ್ತರು, ಅಥವಾ ಅಂತಹುದೇ ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ, ಅವರು ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ, ಇದು ಸಂಸ್ಥೆಯ ಸ್ವರೂಪವನ್ನು ಅವಲಂಬಿಸಿರುತ್ತದೆ. ಈ ಪ್ರತಿಯೊಂದು ಇಲಾಖೆಗಳು/ಸಂಸ್ಥೆಗಳು ತಮ್ಮದೇ ಆದ ಆಡಳಿತಾತ್ಮಕ ಉಪವಿಭಾಗಗಳನ್ನು ಹೊಂದಿವೆ.<ref>Rules of Business of [[Government of Kerala]]
PART II
FIRST SCHEDULE
https://gad.kerala.gov.in/sites/default/files/general_attachment/Rules%20of%20Business%20-%20Part%20II.pdf</ref>
ರಾಜ್ಯವನ್ನು ಹದಿನಾಲ್ಕು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದೂ ಜಿಲ್ಲಾ ಆಡಳಿತದ ಪ್ರಧಾನ ಕಚೇರಿಯಾಗಿ ಕಲೆಕ್ಟರೇಟ್ ಅನ್ನು ಹೊಂದಿದೆ. [[ಜಿಲ್ಲಾ ಮ್ಯಾಜಿಸ್ಟ್ರೇಟ್|ಜಿಲ್ಲಾ ಕಲೆಕ್ಟರ್]] ಜಿಲ್ಲಾ ಆಡಳಿತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭೂ ಆದಾಯ ಆಡಳಿತ, ವಿಪತ್ತು ನಿರ್ವಹಣೆ, ಚುನಾವಣೆಗಳು, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಮತ್ತು ಜಿಲ್ಲೆಯೊಳಗಿನ ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯಕ್ಕೆ ಜವಾಬ್ದಾರರಾಗಿರುತ್ತಾರೆ.<ref>{{Cite web |title=Collectorate {{!}} District Thiruvananthapuram, Government of Kerala {{!}} India |url=https://trivandrum.nic.in/en/collectrate/ |access-date=2026-04-04 |language=en-US}}</ref> ಆಡಳಿತಾತ್ಮಕ ಅನುಕೂಲಕ್ಕಾಗಿ, ಪ್ರತಿಯೊಂದು ಜಿಲ್ಲೆಯನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳ ಪಟ್ಟಿ|ಆದಾಯ ವಿಭಾಗಗಳಾಗಿ]], [[ತಹಸೀಲ್ದಾರ್|ತಾಲೂಕುಗಳಾಗಿ]], ಮತ್ತು [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ, ಪ್ರಾಥಮಿಕವಾಗಿ ಭೂ ಆದಾಯ ಆಡಳಿತದ ಉದ್ದೇಶಕ್ಕಾಗಿ.<ref>{{Cite web |last=Admin |date=2025-01-22 |title=Land revenue administration, Government of Kerala |url=https://clr.kerala.gov.in/eng/index.php/department/organisation-structure |access-date=2026-01-01 |website=Department of Land Revenue |language=en-gb}}</ref>
ಕೇರಳದಲ್ಲಿ ಕಾನೂನು ಜಾರಿಯನ್ನು ಪ್ರಾಥಮಿಕವಾಗಿ [[ಕೇರಳ ಪೊಲೀಸ್]] ನಡೆಸುತ್ತದೆ, ಇದು ಕೇರಳ ಸರ್ಕಾರದ [[ಗೃಹ ಇಲಾಖೆ (ಕೇರಳ)|ಗೃಹ ಇಲಾಖೆಯ]] ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇರಳ ಪೊಲೀಸ್ ಅನ್ನು ಎರಡು ಪೊಲೀಸ್ ವಲಯಗಳಾಗಿ (ಉತ್ತರ ಮತ್ತು ದಕ್ಷಿಣ) ರಚಿಸಲಾಗಿದೆ, ಅವುಗಳನ್ನು ಮತ್ತಷ್ಟು ವ್ಯಾಪ್ತಿಗಳು, ಪೊಲೀಸ್ ಜಿಲ್ಲೆಗಳು, ಉಪವಿಭಾಗಗಳು ಮತ್ತು ಪೊಲೀಸ್ ಠಾಣೆಗಳಾಗಿ ವಿಂಗಡಿಸಲಾಗಿದೆ. ಪ್ರಾಥಮಿಕ ಕಾನೂನು ಜಾರಿಗೆ ಜವಾಬ್ದಾರರಾಗಿರುವ 484 ಸ್ಥಳೀಯ ಪೊಲೀಸ್ ಠಾಣೆಗಳಿವೆ.<ref>{{Cite web |title=Official Website of Kerala Police |url=https://keralapolice.gov.in/ |access-date=2026-04-24 |website=keralapolice.gov.in |language=en}}</ref>
[[ನ್ಯಾಯಾಂಗ]]ವು [[ಕೇರಳ ಉಚ್ಚ ನ್ಯಾಯಾಲಯ]] ಮತ್ತು ಕೆಳ ನ್ಯಾಯಾಲಯಗಳ ವ್ಯವಸ್ಥೆಯನ್ನು ಒಳಗೊಂಡಿದೆ.<ref>{{cite web |title=History of Judiciary |url=https://www.allindiajudges.org/Judgment/FNJPC2.htm |publisher=All-India Judges Association |access-date=29 April 2015 |archive-date=1 October 2015 |archive-url=https://web.archive.org/web/20151001072113/http://www.allindiajudges.org/Judgment/FNJPC2.htm |url-status=dead }}</ref> [[ಕೊಚ್ಚಿ|ಕೊಚ್ಚಿಯಲ್ಲಿ]] ನೆಲೆಗೊಂಡಿರುವ ಉಚ್ಚ ನ್ಯಾಯಾಲಯವು,<ref name="Congress (US)2010">{{cite book |author1=U S Congress |author2=Congress (U.S.) |title=Congressional Record, V. 153, Pt. 1, January 4, 2007 to January 17, 2007 |url=https://books.google.com/books?id=M3bLOwbeOZYC&pg=PA1198 |access-date=18 November 2012 |year=2010 |publisher=Government Printing Office |isbn=978-0-16-086824-5 |page=1198}}</ref>as ರಂತೆ ಮುಖ್ಯ ನ್ಯಾಯಮೂರ್ತಿ ಮತ್ತು 35 ಖಾಯಂ ಮತ್ತು ಹನ್ನೆರಡು ಹೆಚ್ಚುವರಿ ''[[ಪ್ರೋ ಟೆಂಪೋರ್]]'' ನ್ಯಾಯಮೂರ್ತಿಗಳನ್ನು ಹೊಂದಿದೆ.<ref>{{cite web |title=High Court of Kerala Profile |url=https://highcourtofkerala.nic.in/profile.html |publisher=High Court of Kerala |access-date=18 November 2012 |archive-date=31 October 2012 |archive-url=https://web.archive.org/web/20121031233641/http://highcourtofkerala.nic.in/profile.html |url-status=live }}</ref> ಉಚ್ಚ ನ್ಯಾಯಾಲಯವು [[ಲಕ್ಷದ್ವೀಪ]] ಕೇಂದ್ರಾಡಳಿತ ಪ್ರದೇಶದ ಪ್ರಕರಣಗಳನ್ನು ಸಹ ವಿಚಾರಣೆಗೆ ತೆಗೆದುಕೊಳ್ಳುತ್ತದೆ.<ref name="Banerjea2002">{{cite book |author=D. Banerjea |title=Criminal Justice India Series, Vol. 21 |url=https://books.google.com/books?id=L6NWL-a14mkC&pg=PA80 |access-date=18 November 2012 |year=2002 |publisher=Allied Publishers |isbn=978-8177648720 |page=80}}</ref><ref name="SharmaB.k.2007">{{cite book |author1=Sharma |author2=Sharma B.k. |title=Intro. to the Constitution of India, 4/e |url=https://books.google.com/books?id=srDytmFE3KMC&pg=PA261 |access-date=18 November 2012 |year=2007 |publisher=PHI Learning Pvt. Ltd. |isbn=978-8120332461 |page=261}}</ref> ರಾಜ್ಯದ ಅಧೀನ ನ್ಯಾಯಾಂಗವು ಪ್ರತಿಯೊಂದು 14 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳನ್ನು ಒಳಗೊಂಡಿದೆ, ಇವುಗಳನ್ನು ಜಿಲ್ಲಾ ನ್ಯಾಯಾಧೀಶರು ಮುಖ್ಯಸ್ಥರಾಗಿರುತ್ತಾರೆ, ಜೊತೆಗೆ ನಾಗರಿಕ ನ್ಯಾಯಾಲಯಗಳು (''ಮುನ್ಸಿಫ್ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು'') ಮತ್ತು ಅಪರಾಧ ನ್ಯಾಯಾಲಯಗಳು (''ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮತ್ತು ಸೆಷನ್ಸ್ ನ್ಯಾಯಾಲಯಗಳು'') ತಮ್ಮ ಅಧಿಕಾರ ವ್ಯಾಪ್ತಿಯ ಪ್ರಕಾರ ಪ್ರಕರಣಗಳನ್ನು ನಿರ್ವಹಿಸುತ್ತವೆ.
=== ಸ್ಥಳೀಯ ಸರ್ಕಾರ ===
{{Main|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ಕೇರಳದಲ್ಲಿ, ಪಂಚಾಯತ್ಗಳು, ಪುರಸಭೆಗಳು ಮತ್ತು ನಿಗಮಗಳಂತಹ ಸ್ಥಳೀಯ ಸರ್ಕಾರಿ ಸಂಸ್ಥೆಗಳು 1959 ರಿಂದಲೂ ಅಸ್ತಿತ್ವದಲ್ಲಿವೆ. ಆದಾಗ್ಯೂ, ಗಮನಾರ್ಹವಾದ ವಿಕೇಂದ್ರೀಕರಣ ಉಪಕ್ರಮವು 1993 ರಲ್ಲಿ ಪ್ರಾರಂಭವಾಯಿತು, ಇದು [[ಭಾರತ ಸರ್ಕಾರ|ಕೇಂದ್ರ ಸರ್ಕಾರ]]ದ ಸಾಂವಿಧಾನಿಕ ತಿದ್ದುಪಡಿಗಳೊಂದಿಗೆ ಹೊಂದಾಣಿಕೆಯಾಯಿತು.<ref name="Capdeck">{{cite web |url=https://www.lenobl.ru/Document/1412700121.pdf |title=An Introduction to local self governments in Kerala |publisher=SDC CAPDECK |access-date=17 November 2012 |author=Mariamma Sanu George |pages=17–20 |archive-date=30 May 2015 |archive-url=https://web.archive.org/web/20150530224012/http://www.lenobl.ru/Document/1412700121.pdf |url-status=live }}</ref><ref name="KILA">{{cite web |url=https://www.kilaonline.org/site_docu/pub200904a.pdf |archive-url=https://web.archive.org/web/20130513015050/https://www.kilaonline.org/site_docu/pub200904a.pdf |archive-date=13 May 2013 |title=Kerala – A Case Study of Classical Democratic Decentralisation |publisher=Kerala Institute of Local Administration |date=April 2009 |access-date=17 November 2012 |author=S M Vijayanand }}</ref>{{rp|page=12}} ಕೇರಳ ಪಂಚಾಯತ್ ರಾಜ್ ಕಾಯ್ದೆ ಮತ್ತು ಕೇರಳ ಪುರಸಭೆ ಕಾಯ್ದೆಯನ್ನು 1994 ರಲ್ಲಿ ಜಾರಿಗೊಳಿಸಲಾಯಿತು, ಇದು ಗ್ರಾಮೀಣ ಆಡಳಿತಕ್ಕಾಗಿ ಮೂರು-ಹಂತದ ವ್ಯವಸ್ಥೆಯನ್ನು ಮತ್ತು ನಗರ ಆಡಳಿತಕ್ಕಾಗಿ ಏಕ-ಹಂತದ ವ್ಯವಸ್ಥೆಯನ್ನು ಸ್ಥಾಪಿಸಿತು.<ref>{{cite act
| title = Kerala Panchayat Raj Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref><ref>{{cite act
| title = Kerala Municipality Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref>
ಗ್ರಾಮೀಣ ಆಡಳಿತದ ಮೂರು-ಹಂತದ ರಚನೆಯು [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳನ್ನು]] ಒಳಗೊಂಡಿದೆ.<ref name="TandonMohanty2006">{{cite book |author1=Rajesh Tandon |author2=Ranjita Mohanty |title=Participatory Citizenship: Identity, Exclusion, Inclusion |url=https://books.google.com/books?id=oPByu7CWoUEC&pg=PA199 |access-date=17 November 2012 |year=2006 |publisher=Sage |isbn=978-0-7619-3467-7 |page=199}}</ref> ಕೇರಳ ಪಂಚಾಯತ್ ರಾಜ್ ಕಾಯ್ದೆ, 1994 ಈ ಸಂಸ್ಥೆಗಳಿಗೆ ಸ್ಪಷ್ಟವಾದ ಅಧಿಕಾರಗಳನ್ನು ವ್ಯಾಖ್ಯಾನಿಸುತ್ತದೆ.<ref name="Capdeck" /> ನಗರ ಪ್ರದೇಶಗಳಿಗೆ, ಕೇರಳ ಪುರಸಭೆ ಕಾಯ್ದೆಯು ಏಕ-ಹಂತದ ವ್ಯವಸ್ಥೆಯನ್ನು ಒದಗಿಸುತ್ತದೆ, ಇದು [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]] ಮತ್ತು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿದೆ, ಅವು ಸ್ಥಳೀಯ ಆಡಳಿತ ಮತ್ತು ನಾಗರಿಕ ಆಡಳಿತಕ್ಕೆ ಜವಾಬ್ದಾರರಾಗಿರುತ್ತವೆ. ಈ ಸಂಸ್ಥೆಗಳನ್ನು ನಿಯಮಿತವಾಗಿ [[ಕೇರಳದಲ್ಲಿ ಚುನಾವಣೆಗಳು|ಸ್ಥಳೀಯ ಸಂಸ್ಥೆಗಳ ಚುನಾವಣೆಗಳ]] ಮೂಲಕ ರಚಿಸಲಾಗುತ್ತದೆ.<ref name="Chaudhary2009">{{cite book |author=Shyam Nandan Chaudhary |title=Tribal Development Since Independence |url=https://books.google.com/books?id=KBX1EJVhjGEC&pg=PA235 |access-date=18 November 2012 |year=2009 |publisher=Concept Publishing Company |isbn=978-8180696220 |page=235}}</ref> ಈ ಸಂಸ್ಥೆಗಳು ಪರಿಣಾಮಕಾರಿ ವಿಕೇಂದ್ರೀಕರಣವನ್ನು ಖಚಿತಪಡಿಸಿಕೊಳ್ಳಲು ಗಣನೀಯ ಆಡಳಿತಾತ್ಮಕ, ಕಾನೂನು ಮತ್ತು ಆರ್ಥಿಕ ಅಧಿಕಾರಗಳನ್ನು ಪಡೆಯುತ್ತವೆ.<ref name="KILA" />{{rp|page=13}} ಪ್ರಸ್ತುತ, ರಾಜ್ಯ ಸರ್ಕಾರವು ರಾಜ್ಯ ಯೋಜನಾ ವಿನಿಯೋಗದ ಸುಮಾರು 40% ಅನ್ನು ಸ್ಥಳೀಯ ಸರ್ಕಾರಗಳಿಗೆ ನಿಯೋಜಿಸುತ್ತದೆ.<ref name="IsaacFranke2002">{{cite book |author1=T. M. Thomas Isaac |author2=Richard W. Franke |title=Local Democracy and Development: The Kerala People's Campaign for Decentralized Planning |url=https://books.google.com/books?id=x6v6F2a3Gs0C&pg=PR13 |year=2002 |publisher=Rowman & Littlefield |isbn=978-0-7425-1607-6 |page=13}}</ref> ಕೇರಳವು 1,200 ಸ್ಥಳೀಯ ಸಂಸ್ಥೆಗಳನ್ನು ಹೊಂದಿದೆ, ಇವುಗಳಲ್ಲಿ 941 ಗ್ರಾಮ ಪಂಚಾಯತ್ಗಳು, 152 ಬ್ಲಾಕ್ ಪಂಚಾಯತ್ಗಳು, 14 ಜಿಲ್ಲಾ ಪಂಚಾಯತ್ಗಳು, 87 ಪುರಸಭೆಗಳು, ಮತ್ತು 6 ನಗರ ನಿಗಮಗಳು ಸೇರಿವೆ.<ref>{{Cite web |title=Local Bodies {{!}} Local Self Government Department |url=https://lsgkerala.gov.in/en/lsgd/localbody-list |access-date=2025-07-08 |website=lsgkerala.gov.in |archive-date=2 June 2023 |archive-url=https://web.archive.org/web/20230602134126/https://lsgkerala.gov.in/en/lsgd/localbody-list |url-status=dead }}</ref>
ಕೇರಳವನ್ನು 2016 ರಲ್ಲಿ ಭಾರತದ ಮೊದಲ ಡಿಜಿಟಲ್ ರಾಜ್ಯವೆಂದು ಘೋಷಿಸಲಾಯಿತು ಮತ್ತು [[ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್]] ನ 2019 ರ ಭಾರತ ಭ್ರಷ್ಟಾಚಾರ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕನಿಷ್ಠ ಭ್ರಷ್ಟ ರಾಜ್ಯವೆಂದು ಪರಿಗಣಿಸಲಾಗಿದೆ.<ref>{{Cite book |title=India Corruption Survey 2019 – Report |last= |publisher=Transparency International India |year=2019 |location= |pages=22 |url=https://transparencyindia.org/wp-content/uploads/2019/11/India-Corruption-Survey-2019.pdf |access-date=18 June 2021 |archive-date=10 July 2021 |archive-url=https://web.archive.org/web/20210710100154/https://transparencyindia.org/wp-content/uploads/2019/11/India-Corruption-Survey-2019.pdf |url-status=live }}</ref><ref>{{Cite news |title=Kerala the first digital State |url=https://www.thehindu.com/news/cities/kozhikode/kerala-the-first-digital-state/article8291466.ece |last=Special currespondent |date=28 February 2016 |access-date=17 November 2020 |work=The Hindu |archive-date=15 April 2021 |archive-url=https://web.archive.org/web/20210415102347/https://www.thehindu.com/news/cities/kozhikode/kerala-the-first-digital-state/article8291466.ece |url-status=live }}</ref> ಪಬ್ಲಿಕ್ ಅಫೇರ್ಸ್ ಇಂಡೆಕ್ಸ್-2020 ಕೇರಳವನ್ನು ಭಾರತದ ಅತ್ಯುತ್ತಮ ಆಡಳಿತ ರಾಜ್ಯವೆಂದು ಗೊತ್ತುಪಡಿಸಿತು.<ref>{{Cite news |title=Kerala, Tamil Nadu and Goa best governed States: report |url=https://www.thehindu.com/news/national/kerala-goa-and-chandigarh-best-governed-states-ut-report/article32985716.ece |last=PTI |date=30 October 2020 |access-date=20 June 2021 |work=The Hindu |archive-date=7 October 2021 |archive-url=https://web.archive.org/web/20211007210542/https://www.thehindu.com/news/national/kerala-goa-and-chandigarh-best-governed-states-ut-report/article32985716.ece |url-status=live }}</ref>
=== ರಾಜಕೀಯ ===
ಕೇರಳವು ತನ್ನ ಬಲವಾದ ಸಾಮಾಜಿಕ ಕಲ್ಯಾಣ ನೀತಿಗಳು, ಭೂ ಸುಧಾರಣೆಗಳು ಮತ್ತು ಉನ್ನತ ಮಾನವ ಅಭಿವೃದ್ಧಿ ಸೂಚಕಗಳಿಂದಾಗಿ ಭಾರತದ ಅತ್ಯಂತ [[ಸಮಾನತಾವಾದ|ಸಮಾನತಾವಾದಿ]] ರಾಜ್ಯಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ.<ref>{{Cite journal |last1=B |first1=Bibimol R. |last2=Seena |first2=Dr Anand Lali |last3=Thanammal |first3=Dr K. K. |date=2023-11-30 |title=C.Achutha Menon's Social Reforms: Paving The Way For A Progressive Kerala |url=https://kuey.net/index.php/kuey/article/view/8887 |journal=Educational Administration: Theory and Practice |language=en |volume=29 |issue=4 |pages=4074–4079 |doi=10.53555/kuey.v29i4.8887 |doi-broken-date=15 June 2026 |issn=2148-2403}}</ref><ref>{{Cite journal |last=Duran |first=Jane |date=April 2025 |title=Egalitarianism and Justice in Kerala |url=https://www.cambridge.org/core/journals/think/article/abs/egalitarianism-and-justice-in-kerala/5B093820090E9266A4852C40F93F5A51 |journal=Think |language=en |volume=24 |issue=70 |pages=23–29 |doi=10.1017/S147717562500017X |issn=1477-1756}}</ref><ref>{{Cite journal |last1=Thiranagama |first1=Sharika |title=Rural Civilities: Caste, Gender and Public Life in Kerala |journal=South Asia: Journal of South Asian Studies |date=2019 |volume=42 |issue=2 |pages=310–327 |doi=10.1080/00856401.2019.1582190}}</ref><ref>{{Cite journal |last=Devika |first=J. |date=August 2010 |title=Egalitarian Developmentalism, Communist Mobilization, and the Question of Caste in Kerala State, India |url=https://www.cambridge.org/core/journals/journal-of-asian-studies/article/abs/egalitarian-developmentalism-communist-mobilization-and-the-question-of-caste-in-kerala-state-india/8F65915C540DB6AC5D3EEE6DE800DB3B? |journal=The Journal of Asian Studies |language=en |volume=69 |issue=3 |pages=799–820 |doi=10.1017/S0021911810001506 |issn=1752-0401}}</ref> ಕೇರಳದ ರಾಜಕೀಯವು ಪ್ರಾಥಮಿಕವಾಗಿ [[ಭಾರತದಲ್ಲಿ ಕಮ್ಯುನಿಸಂ|ಕಮ್ಯುನಿಸಂ]], [[ಪ್ರಜಾಪ್ರಭುತ್ವ ಸಮಾಜವಾದ]], [[ಜಾತ್ಯತೀತತೆ]], [[ಮಧ್ಯಮಾರ್ಗ#ಭಾರತ|ಮಧ್ಯಮಾರ್ಗ]] ಮತ್ತು ಪ್ರಾದೇಶಿಕ ಹಿತಾಸಕ್ತಿಗಳಿಂದ ರೂಪುಗೊಂಡಿದೆ. [[ಬಲಪಂಥೀಯ ರಾಜಕೀಯ#ಭಾರತ|ಬಲಪಂಥೀಯ ರಾಜಕೀಯ]]ವು ತುಲನಾತ್ಮಕವಾಗಿ ಚಿಕ್ಕ ಶಕ್ತಿಯಾಗಿದ್ದು, ಇದನ್ನು ಪ್ರಾಥಮಿಕವಾಗಿ [[ಭಾರತೀಯ ಜನತಾ ಪಕ್ಷ]]-ನೇತೃತ್ವದ [[ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ|NDA]] ಪ್ರತಿನಿಧಿಸುತ್ತದೆ.<ref>{{Cite journal |title=Hindu Nationalism in South India: The Rise of Saffron in Kerala |url=https://www.researchgate.net/publication/381937210_Hindu_Nationalism_in_South_India_The_Rise_of_Saffron_in_Kerala |journal=}}</ref><ref>{{Cite journal |last=Nair |first=A. Balakrishnan |date=1994 |title=The Dynamics of Kerala Politics |url=https://www.jstor.org/stable/41855697 |journal=The Indian Journal of Political Science |volume=55 |issue=3 |pages=251–260 |issn=0019-5510}}</ref>
ಕೇರಳವು ಎರಡು ಪ್ರಮುಖ ರಾಜಕೀಯ ಮೈತ್ರಿಗಳನ್ನು ಹೊಂದಿದೆ: [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ನೇತೃತ್ವದ [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್]] (UDF); ಮತ್ತು [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)]] (CPI(M)) ನೇತೃತ್ವದ [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್]] (LDF). 1980 ರಿಂದ, ಕೇರಳದ ರಾಜಕೀಯವು LDF ಮತ್ತು UDF ನಿಂದ ಪ್ರಾಬಲ್ಯ ಹೊಂದಿದೆ, ಸರ್ಕಾರಗಳು ಹೆಚ್ಚಾಗಿ ಎರಡು ಮೈತ್ರಿಗಳ ನಡುವೆ ಪರ್ಯಾಯವಾಗಿವೆ.<ref>{{Cite news |date=2026-05-22 |title=Kerala election wrap-up: How UDF ended LDF’s 10-year rule |url=https://timesofindia.indiatimes.com/india/kerala-election-wrap-up-how-udf-ended-ldfs-10-year-rule/articleshow/131249440.cms |access-date=2026-06-19 |work=The Times of India |issn=0971-8257}}</ref> [[2026 ಕೇರಳ ವಿಧಾನಸಭಾ ಚುನಾವಣೆ]]ಯ ಪ್ರಕಾರ, UDF ಆಡಳಿತ ಒಕ್ಕೂಟವಾಗಿದೆ, ಮತ್ತು [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್|LDF]] ಅಧಿಕೃತ ವಿರೋಧ ಪಕ್ಷವಾಗಿದೆ.<ref>{{Cite web |title=Pinarayi Vijayan elected as Leader of Opposition in Kerala |url=https://www.deccanherald.com/india/kerala/pinarayi-vijayan-elected-as-leader-of-opposition-in-kerala-4003109 |access-date=2026-05-15 |website=Deccan Herald |language=en}}</ref><ref>{{Cite news |last=Parthasarathy |first=Srinivasan Ramani , Pon Vasanth B. A. , Nitika Francis , Devyanshi Bihani , Areena Arora & Sambavi |date=2026-05-06 |title=UDF's near three-fourths majority marked a historic victory for the Congress-led coalition |url=https://www.thehindu.com/news/national/kerala/udfs-near-three-fourths-majority-marked-a-historicvictory-for-the-congress-led-coalition/article70944163.ece |access-date=2026-05-15 |work=The Hindu |language=en-IN |issn=0971-751X}}</ref>
[[ಭಾರತದ ಸಂವಿಧಾನ]]ದ ಪ್ರಕಾರ, ಕೇರಳವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯನ್ನು ಹೊಂದಿದೆ; [[ಸಾರ್ವತ್ರಿಕ ಮತದಾನ]]ವನ್ನು ನಿವಾಸಿಗಳಿಗೆ ನೀಡಲಾಗಿದೆ.<ref name=":0">{{cite web |url=https://niyamasabha.org/codes/govt_2.htm |title=Kerala Government – Legislature |publisher=Government of Kerala |access-date=19 November 2012 |archive-date=8 December 2012 |archive-url=https://web.archive.org/web/20121208011357/http://www.niyamasabha.org/codes/govt_2.htm |url-status=dead }}</ref>
== ಆರ್ಥಿಕತೆ ==
{{Main|ಕೇರಳದ ಆರ್ಥಿಕತೆ}}
ಸ್ವಾತಂತ್ರ್ಯದ ನಂತರ, ರಾಜ್ಯವನ್ನು [[ಸಾಮಾಜಿಕ ಪ್ರಜಾಪ್ರಭುತ್ವ|ಸಾಮಾಜಿಕ ಪ್ರಜಾಪ್ರಭುತ್ವ]] [[ಕಲ್ಯಾಣ ಆರ್ಥಿಕತೆ]]ಯಾಗಿ ನಿರ್ವಹಿಸಲಾಯಿತು.<ref>{{Cite news |title=A virus, social democracy, and dividends for Kerala |url=https://www.thehindu.com/opinion/lead/a-virus-social-democracy-and-dividends-for-kerala/article31370554.ece |last=Heller |first=Patrick |date=18 April 2020 |access-date=2 February 2021 |work=The Hindu |archive-date=19 November 2021 |archive-url=https://web.archive.org/web/20211119130557/https://www.thehindu.com/opinion/lead/a-virus-social-democracy-and-dividends-for-kerala/article31370554.ece |url-status=live }}</ref> ಅತ್ಯಧಿಕ ಮಾನವ ಅಭಿವೃದ್ಧಿ ಮತ್ತು ತುಲನಾತ್ಮಕವಾಗಿ ಕಡಿಮೆ ಆರ್ಥಿಕ ಅಭಿವೃದ್ಧಿಯ "ಕೇರಳ ವಿದ್ಯಮಾನ" ಅಥವಾ "[[ಕೇರಳ ಮಾದರಿ]]" ಅಭಿವೃದ್ಧಿಯು ಬಲವಾದ ಸೇವಾ ವಲಯದಿಂದ ಉಂಟಾಗಿದೆ.<ref name="Brenkert_Malone_2003" />{{rp|48}}<ref name="Tharamangalam_2005">{{Cite journal |author=Tharamangalam J |year=2005 |title=The Perils of Social Development without Economic Growth: The Development Debacle of Kerala, India |journal=Political Economy for Environmental Planners |url=https://www.infra.kth.se/courses/1H1142/Kerala_Paper_4.pdf |archive-url=https://web.archive.org/web/20131115072025/https://www.infra.kth.se/courses/1H1142/Kerala_Paper_4.pdf |archive-date=15 November 2013 |access-date=28 December 2008}}</ref>{{rp|1}} 2019–20 ರಲ್ಲಿ, ಕೇರಳದ ಆರ್ಥಿಕತೆಯು {{INRConvert|8.55|t}} ಸ್ಥೂಲ ರಾಜ್ಯ ಆಂತರಿಕ ಉತ್ಪನ್ನ (GSDP) ಮತ್ತು {{INRConvert|222|k}} ತಲಾ ನಿವ್ವಳ ರಾಜ್ಯ ಆಂತರಿಕ ಉತ್ಪನ್ನದೊಂದಿಗೆ ಭಾರತದಲ್ಲಿ [[ಸ್ಥೂಲ ರಾಜ್ಯ ಆಂತರಿಕ ಉತ್ಪನ್ನದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|8 ನೇ ಅತಿದೊಡ್ಡದಾಗಿದೆ]].<ref>{{Cite web |date=15 March 2021 |title=MOSPI State Domestic Product, Ministry of Statistics and Programme Implementation, Government of India |url=https://mospi.nic.in/sites/default/files/press_releases_statements/State_wise_SDP_15_03_2021.xls |access-date=23 June 2021 |archive-date=17 June 2021 |archive-url=https://web.archive.org/web/20210617193238/http://mospi.nic.in/sites/default/files/press_releases_statements/State_wise_SDP_15_03_2021.xls |url-status=live }}</ref> 2019–20 ರಲ್ಲಿ, [[ಆರ್ಥಿಕತೆಯ ತೃತೀಯ ವಲಯ|ತೃತೀಯ ವಲಯ]]ವು ರಾಜ್ಯದ [[ಸ್ಥೂಲ ಮೌಲ್ಯವರ್ಧಿತ|GSVA]] ಯ ಸುಮಾರು 63% ಕೊಡುಗೆ ನೀಡಿದೆ, ಇದಕ್ಕೆ [[ಆರ್ಥಿಕತೆಯ ದ್ವಿತೀಯ ವಲಯ|ದ್ವಿತೀಯ ವಲಯ]] 28% ಮತ್ತು [[ಆರ್ಥಿಕತೆಯ ಪ್ರಾಥಮಿಕ ವಲಯ|ಪ್ರಾಥಮಿಕ ವಲಯ]] 8% ಕೊಡುಗೆ ನೀಡಿದೆ.<ref name="eco">{{Cite book |last=Government of Kerala |url=https://spb.kerala.gov.in/sites/default/files/2021-01/English-Vol-1_0.pdf |title=Economic Review 2020 – Volume I |publisher=Kerala State Planning Board |year=2021 |location=Thiruvananthapuram |access-date=18 June 2021 |archive-date=2 May 2021 |archive-url=https://web.archive.org/web/20210502171017/https://spb.kerala.gov.in/sites/default/files/2021-01/English-Vol-1_0.pdf |url-status=live }}</ref> 1960 ಮತ್ತು 2020 ರ ಅವಧಿಯಲ್ಲಿ, ಕೇರಳದ ಆರ್ಥಿಕತೆಯು ಕೃಷಿ ಆರ್ಥಿಕತೆಯಿಂದ ಸೇವಾ ಆಧಾರಿತ ಆರ್ಥಿಕತೆಗೆ ಕ್ರಮೇಣ ಬದಲಾಗುತ್ತಿತ್ತು.<ref name="eco" />
{{multiple image
| direction = vertical
| width = 220
| image1 = Technopark Trivandum Ganga and Yamuna Buildings.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಟೆಕ್ನೋಪಾರ್ಕ್, ತಿರುವನಂತಪುರ|ಟೆಕ್ನೋಪಾರ್ಕ್]], ಭಾರತದ ಮೊದಲ ಮತ್ತು ಅತಿದೊಡ್ಡ [[ಮಾಹಿತಿ ತಂತ್ರಜ್ಞಾನ]] (IT) ಉದ್ಯಾನವನ
| image2 = Container terminal.JPG
| caption2 = [[ಕೊಚ್ಚಿ|ಕೊಚ್ಚಿಯ]] [[ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್, ಕೊಚ್ಚಿ|ವಲ್ಲಾರ್ಪಾಡಂ ಟರ್ಮಿನಲ್]], ಭಾರತದ ಮೊದಲ [[ಕಂಟೇನರ್ ಟರ್ಮಿನಲ್|ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್]]
| image4 = Mappila bay.JPG
| caption4 = [[ಕಣ್ಣೂರು|ಕಣ್ಣೂರಿನ]] [[ಮಾಪ್ಪಿಲ ಕೊಲ್ಲಿ]] ಬಂದರು
}}
ರಾಜ್ಯದ [[ಆರ್ಥಿಕತೆಯ ತೃತೀಯ ವಲಯ|ಸೇವಾ ವಲಯ]]ವು ಅದರ ಆದಾಯದ ಸುಮಾರು 63% ರಷ್ಟಿದ್ದು, ಇದು ಮುಖ್ಯವಾಗಿ [[ಆತಿಥ್ಯ ಉದ್ಯಮ]], [[ಕೇರಳದ ಪ್ರವಾಸೋದ್ಯಮ|ಪ್ರವಾಸೋದ್ಯಮ]], [[ಆಯುರ್ವೇದ]] ಮತ್ತು ವೈದ್ಯಕೀಯ ಸೇವೆಗಳು, ಯಾತ್ರಾ ಸ್ಥಳಗಳು, [[ಮಾಹಿತಿ ತಂತ್ರಜ್ಞಾನ]], [[ಕೇರಳದ ರಸ್ತೆಗಳು|ಸಾರಿಗೆ]], ಹಣಕಾಸು ವಲಯ, ಮತ್ತು [[ಕೇರಳದಲ್ಲಿ ಶಿಕ್ಷಣ|ಶಿಕ್ಷಣ]]ವನ್ನು ಆಧರಿಸಿದೆ.<ref name=":15">{{Cite web |url=https://slbckerala.com/Economy.aspx |title=Economy of Kerala – 2016 |website=slbckerala.com |access-date=7 February 2022 |archive-date=28 March 2022 |archive-url=https://web.archive.org/web/20220328191455/http://slbckerala.com/Economy.aspx |url-status=dead }}</ref> ಕೈಗಾರಿಕಾ ವಲಯದಡಿಯಲ್ಲಿನ ಪ್ರಮುಖ ಉಪಕ್ರಮಗಳಲ್ಲಿ [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ]], ಹಡಗು ನಿರ್ಮಾಣ, ತೈಲ ಸಂಸ್ಕರಣಾಗಾರ, ಸಾಫ್ಟ್ವೇರ್ ಉದ್ಯಮ, ಕರಾವಳಿ ಖನಿಜ ಉದ್ಯಮಗಳು,{{sfn|Chandran|2018|p=343}} ಆಹಾರ ಸಂಸ್ಕರಣೆ, ಸಮುದ್ರ ಉತ್ಪನ್ನಗಳ ಸಂಸ್ಕರಣೆ, ಮತ್ತು ರಬ್ಬರ್ ಆಧಾರಿತ ಉತ್ಪನ್ನಗಳು ಸೇರಿವೆ. ರಾಜ್ಯದ ಪ್ರಾಥಮಿಕ ವಲಯವು ಮುಖ್ಯವಾಗಿ [[ವಾಣಿಜ್ಯ ಬೆಳೆ]]ಗಳನ್ನು ಆಧರಿಸಿದೆ.{{sfn|Chandran|2018|p=409}} ಕೇರಳವು ಭಾರತದಲ್ಲಿ [[ತೆಂಗು]], [[ಚಹಾ]], [[ಕಾಫಿ]], [[ಮಲಬಾರ್ ಮೆಣಸು|ಮೆಣಸು]], [[ನೈಸರ್ಗಿಕ ರಬ್ಬರ್]], [[ಏಲಕ್ಕಿ]], ಮತ್ತು [[ಗೋಡಂಬಿ]] ಮುಂತಾದ ವಾಣಿಜ್ಯ ಬೆಳೆಗಳ ರಾಷ್ಟ್ರೀಯ ಉತ್ಪಾದನೆಯ ಗಮನಾರ್ಹ ಪ್ರಮಾಣವನ್ನು ಉತ್ಪಾದಿಸುತ್ತದೆ.{{sfn|Chandran|2018|p=409}} ಆಹಾರ ಬೆಳೆಗಳ ಕೃಷಿಯು 1950 ರ ದಶಕದಿಂದ ಕಡಿಮೆಯಾಗಲು ಪ್ರಾರಂಭಿಸಿತು.{{sfn|Chandran|2018|p=409}}
ಕೇರಳದ ಆರ್ಥಿಕತೆಯು [[ಕೇರಳ ಗಲ್ಫ್ ವಲಸೆ|ವಿದೇಶಗಳಲ್ಲಿ ಕೆಲಸ ಮಾಡುವ ವಲಸಿಗರ]] ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ, ಮುಖ್ಯವಾಗಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಲ್ಲಿ]], ಮತ್ತು ವಾರ್ಷಿಕ ಸ್ಥಳಾಂತರ ವರ್ಗಾವಣೆಗಳು GSDP ಯ ಐದನೇ ಒಂದು ಭಾಗಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ.<ref name="rem1">{{cite report |author1=K.P. Kannan |author2=K.S. Hari |title=Kerala's Gulf connection: Emigration, remittances and their macroeconomic impact, 1972–2000 |url=https://ideas.repec.org/p/ind/cdswpp/328.html |year=2002 |website=[[Research Papers in Economics]] |access-date=4 April 2022 |archive-date=28 June 2021 |archive-url=https://web.archive.org/web/20210628135450/https://ideas.repec.org/p/ind/cdswpp/328.html |url-status=live }}</ref> 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ ರಾಜ್ಯವು ಗಮನಾರ್ಹ ವಲಸೆಯನ್ನು ಕಂಡಿತು. 2012 ರಲ್ಲಿ, ಕೇರಳವು ಎಲ್ಲಾ ರಾಜ್ಯಗಳ ಅತಿ ಹೆಚ್ಚು ಸ್ಥಳಾಂತರ ವರ್ಗಾವಣೆಗಳನ್ನು ಪಡೆಯಿತು: US$11.3 ಬಿಲಿಯನ್, ಇದು ದೇಶಕ್ಕೆ US$71 ಬಿಲಿಯನ್ ಸ್ಥಳಾಂತರ ವರ್ಗಾವಣೆಗಳಲ್ಲಿ ಸುಮಾರು 16% ಆಗಿತ್ತು.<ref>{{cite news |url=https://in.finance.yahoo.com/news/remittances--kerala-drives-dollar-flows-to-india-053414379.html |title=Remittances: Kerala drives dollar flows to India |work=[[Yahoo! Finance]] |date=5 November 2013 |access-date=8 November 2013 |archive-date=7 November 2013 |archive-url=https://web.archive.org/web/20131107053009/http://in.finance.yahoo.com/news/remittances--kerala-drives-dollar-flows-to-india-053414379.html |url-status=live }}</ref> 2015 ರಲ್ಲಿ, ಕೇರಳದಲ್ಲಿ NRI ಠೇವಣಿಗಳು {{INRConvert|1|lc}} ಕ್ಕಿಂತ ಹೆಚ್ಚಾಗಿದ್ದು, ಇದು NRI ಖಾತೆಗಳಲ್ಲಿ ಠೇವಣಿಯಾದ ಎಲ್ಲಾ ಹಣದ ಆರನೇ ಒಂದು ಭಾಗಕ್ಕೆ ಸಮನಾಗಿರುತ್ತದೆ, ಇದು ಸುಮಾರು {{INRConvert|7|lc}} ಆಗಿದೆ.<ref>{{cite news |url=https://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |title=NRI deposits in Kerala banks cross Rs 1 lakh crore |date=22 June 2015 |access-date=13 November 2015 |work=[[The Times of India]] |archive-date=25 June 2015 |archive-url=https://web.archive.org/web/20150625121200/http://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |url-status=live }}</ref> [[ಮಲಪ್ಪುರಂ ಜಿಲ್ಲೆ]]ಯು ರಾಜ್ಯದಲ್ಲಿ ಅತಿ ಹೆಚ್ಚು ವಲಸೆ ಕುಟುಂಬಗಳ ಪ್ರಮಾಣವನ್ನು ಹೊಂದಿದೆ.<ref name="eco" /> [[ಕೇರಳ ರಾಜ್ಯ ಯೋಜನಾ ಮಂಡಳಿ]]ಯು ನಿಯೋಜಿಸಿದ ಅಧ್ಯಯನವು, ತನ್ನ ವೆಚ್ಚಕ್ಕೆ ಹಣಕಾಸು ಒದಗಿಸಲು ಸ್ಥಳಾಂತರ ವರ್ಗಾವಣೆಗಳ ಮೇಲೆ ಅವಲಂಬಿಸುವ ಬದಲು ರಾಜ್ಯವು ಇತರ ವಿಶ್ವಾಸಾರ್ಹ ಆದಾಯದ ಮೂಲಗಳನ್ನು ಹುಡುಕಬೇಕೆಂದು ಸೂಚಿಸಿದೆ.<ref name="Commission2008b">{{cite book |author=India. Planning Commission |title=Kerala Development Report |url=https://books.google.com/books?id=Ul-OkF5gUJQC&pg=PA457 |year=2008 |publisher=Academic Foundation |isbn=978-8171885947 |page=396}}</ref>
ಮಾರ್ಚ್ 2002 ರಂತೆ, ಕೇರಳದ ಬ್ಯಾಂಕಿಂಗ್ ವಲಯವು 3341 ಸ್ಥಳೀಯ ಶಾಖೆಗಳನ್ನು ಒಳಗೊಂಡಿತ್ತು: ಪ್ರತಿ ಶಾಖೆಯು 10,000 ಜನರಿಗೆ ಸೇವೆ ಸಲ್ಲಿಸಿತು, ಇದು ರಾಷ್ಟ್ರೀಯ ಸರಾಸರಿ 16,000 ಕ್ಕಿಂತ ಕಡಿಮೆಯಾಗಿದೆ; ರಾಜ್ಯವು ಭಾರತೀಯ ರಾಜ್ಯಗಳಲ್ಲಿ ಮೂರನೇ ಅತಿ ಹೆಚ್ಚು ಬ್ಯಾಂಕ್ ಪ್ರವೇಶವನ್ನು ಹೊಂದಿದೆ.<ref name="RBI_2002">{{cite web |url=https://rbidocs.rbi.org.in/rdocs/Publications/PDFs/35585.pdf |title=State/Union Territory-Wise Number of Branches of Scheduled Commercial Banks and Average Population Per Bank Branch |date=March 2002 |work=Reserve Bank of India |access-date=28 December 2008 |url-status=dead |archive-url=https://web.archive.org/web/20070810094850/https://rbidocs.rbi.org.in/rdocs/Publications/PDFs/35585.pdf |archive-date=10 August 2007}}</ref> 1 ಅಕ್ಟೋಬರ್ 2011 ರಂದು, ಕೇರಳವು ಪ್ರತಿ ಗ್ರಾಮದಲ್ಲಿ ಕನಿಷ್ಠ ಒಂದು ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಯಿತು.<ref>{{cite news |url=https://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |work=The Times of India |title=Now, you can bank on every village in Kerala |date=1 October 2011 |access-date=13 November 2015 |archive-date=4 January 2017 |archive-url=https://web.archive.org/web/20170104180910/http://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |url-status=live }}</ref> [[ಕೇರಳದಲ್ಲಿ ನಿರುದ್ಯೋಗ|2007 ರಲ್ಲಿ ನಿರುದ್ಯೋಗವು]] 9.4% ಎಂದು ಅಂದಾಜಿಸಲಾಗಿದೆ;<ref>{{cite news |author=Kumar KG |title=Jobless no more? |newspaper=Business Line |date=8 October 2007 |url=https://www.thehindubusinessline.com/todays-paper/tp-economy/article1671367.ece |quote=A study by K.C. Zacharia and S. Irudaya Rajan, two economists at the Centre for Development Studies (CDS), unemployment in Kerala has dropped from 19.1[%] in 2003 to 9.4[%] in 2007. |access-date=16 November 2012 |archive-date=6 November 2013 |archive-url=https://web.archive.org/web/20131106032604/http://www.thehindubusinessline.com/todays-paper/tp-economy/article1671367.ece |url-status=live }}</ref> ದೀರ್ಘಕಾಲದ ಸಮಸ್ಯೆಗಳೆಂದರೆ [[ನಿರುದ್ಯೋಗ]], ಯುವಜನರ ಕಡಿಮೆ ಉದ್ಯೋಗಸಾಧ್ಯತೆ, ಮತ್ತು ಕೇವಲ 13.5% ರಷ್ಟಿರುವ ಕಡಿಮೆ ಮಹಿಳಾ [[ಕಾರ್ಮಿಕ|ಕಾರ್ಮಿಕ ಭಾಗವಹಿಸುವಿಕೆ ದರ]],<ref name="Nair_2004">{{Cite book |author=Nair NG |veditors=Nair PR, Shaji H |title=Measurement of Employment, Unemployment, and Underemployment |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621751 |url=https://www.cds.ac.in/krpcds/publication/downloads/72.pdf |access-date=31 December 2008 |archive-date=30 May 2015 |archive-url=https://web.archive.org/web/20150530210334/http://www.cds.ac.in/krpcds/publication/downloads/72.pdf |url-status=live }}</ref>{{rp|5, 13}} ಜೊತೆಗೆ ''[[ನೋಕ್ಕು ಕೂಲಿ]]'' ("ನೋಡುವಿಕೆಗೆ ವೇತನ") ಪದ್ಧತಿಯೂ ಇತ್ತು.<ref name="Outlook-2008">{{cite news |url=https://www.outlookindia.com/article.aspx?237419 |first=John |last=Mary |title=Men (Not) At Work |work=[[Outlook (Indian magazine)|Outlook]] |date=12 May 2008 |access-date=13 November 2015 |archive-date=6 November 2013 |archive-url=https://web.archive.org/web/20131106032651/http://www.outlookindia.com/article.aspx?237419 |url-status=live }}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6">{{Cite report |last=Deaton |first=Angus |title=Regional poverty estimates for India, 1999–2000 |url=https://www.princeton.edu/rpds/papers/pdfs/deaton_regionalpovertyindia.pdf |date=22 August 2003 |archive-url=https://web.archive.org/web/20110628193845/https://www.princeton.edu/rpds/papers/pdfs/deaton_regionalpovertyindia.pdf |archive-date=28 June 2011 |url-status=dead |page=10 |access-date=4 April 2022}}</ref>
2020–2021 ರ ರಾಜ್ಯದ ಬಜೆಟ್ {{INRConvert|1.15|lc}} ಆಗಿತ್ತು.<ref name="Budget">{{cite web |url=https://www.finance.kerala.gov.in/bdgtDcs.jsp |title=Budget In Brief |format=PDF |website=finance.kerala.gov.in |publisher=Government of Kerala |access-date=4 December 2020 |archive-date=25 November 2020 |archive-url=https://web.archive.org/web/20201125214731/http://www.finance.kerala.gov.in/bdgtDcs.jsp |url-status=live }}</ref> ರಾಜ್ಯ ಸರ್ಕಾರದ ತೆರಿಗೆ ಆದಾಯವು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–21 ರಲ್ಲಿ {{INRConvert|674|b}} ಆಗಿತ್ತು; 2019–20 ರಲ್ಲಿ {{INRConvert|557|b}} ರಿಂದ ಹೆಚ್ಚಾಗಿದೆ. ಕೇರಳ ಸರ್ಕಾರದ ಅದರ [[ತೆರಿಗೆ-ಅಲ್ಲದ ಆದಾಯ]]ಗಳು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–2021 ರಲ್ಲಿ {{INRConvert|146|b}} ತಲುಪಿದೆ.<ref name="Budget" /> ಆದಾಗ್ಯೂ, ಕೇರಳದ GSDP ಗೆ ತೆರಿಗೆಯ ಹೆಚ್ಚಿನ ಅನುಪಾತವು ದೀರ್ಘಕಾಲದ ಬಜೆಟ್ ಕೊರತೆಗಳು ಮತ್ತು ಸುಸ್ಥಿರವಲ್ಲದ ಮಟ್ಟದ ಸರ್ಕಾರಿ ಸಾಲವನ್ನು ನಿವಾರಿಸಿಲ್ಲ, ಇದು ಸಾಮಾಜಿಕ ಸೇವೆಗಳ ಮೇಲೆ ಪರಿಣಾಮ ಬೀರಿದೆ.<ref>{{cite web |url=https://fincomindia.nic.in/pubsugg/memo_ker.pdf |archive-url=https://web.archive.org/web/20080626195846/https://fincomindia.nic.in/pubsugg/memo_ker.pdf |archive-date=26 June 2008 |title=Memoranda from States: Kerala |website=fincomindia.nic.in |access-date=25 September 2013}}</ref> 2006 ರಲ್ಲಿ ಒಟ್ಟು 223 [[ಹರ್ತಾಲ್]]ಗಳು ನಡೆದಿದ್ದವು, ಇದರ ಪರಿಣಾಮವಾಗಿ {{INRConvert|20|b}} ಕ್ಕಿಂತ ಹೆಚ್ಚು ಆದಾಯ ನಷ್ಟವಾಗಿದೆ.<ref>[https://www.rediff.com/news/2008/jul/06kerala.htm Kerala: Hartals Own Country?] {{webarchive |url=https://web.archive.org/web/20160304043808/https://www.rediff.com/news/2008/jul/06kerala.htm |date=4 March 2016 }} 6 July 2008</ref> ಕೇರಳದ GDP ಯಲ್ಲಿ 10% ಏರಿಕೆಯು ರಾಷ್ಟ್ರೀಯ GDP ಗಿಂತ 3% ಹೆಚ್ಚಾಗಿದೆ. 2013 ರಲ್ಲಿ, ಬಂಡವಾಳ ವೆಚ್ಚವು ರಾಷ್ಟ್ರೀಯ ಸರಾಸರಿ 5% ಕ್ಕೆ ಹೋಲಿಸಿದರೆ 30% ರಷ್ಟು ಏರಿತು, ದ್ವಿಚಕ್ರ ವಾಹನಗಳ ಮಾಲೀಕರು ರಾಷ್ಟ್ರೀಯ ದರ 15% ಕ್ಕೆ ಹೋಲಿಸಿದರೆ 35% ರಷ್ಟು ಏರಿತು, ಮತ್ತು ಶಿಕ್ಷಕ-ವಿದ್ಯಾರ್ಥಿ ಅನುಪಾತವು 2:100 ರಿಂದ 4:100 ಕ್ಕೆ 50% ರಷ್ಟು ಏರಿತು.<ref>{{cite web |url=https://www.keralacm.gov.in/index.php/news2catleist/2443-23-12-2013-india-today |archive-url=https://web.archive.org/web/20131224091613/https://www.keralacm.gov.in/index.php/news2catleist/2443-23-12-2013-india-today |url-status=dead |archive-date=24 December 2013 |title=India Today On Cm |publisher=Keralacm.gov.in |access-date=11 January 2014}}</ref>
[[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ]]ಯು ರಾಜ್ಯದ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು, ರಾಜ್ಯದ ಆದಾಯದ ಹೊರಗಿನಿಂದ ಮೂಲಸೌಕರ್ಯ ಅಭಿವೃದ್ಧಿಗೆ ನಿಧಿಯನ್ನು ಸಜ್ಜುಗೊಳಿಸಲು ರಾಜ್ಯದ ಸರ್ಕಾರಿ-ಸ್ವಾಮ್ಯದ [[ಹಣಕಾಸು ಸಂಸ್ಥೆ]]ಯಾಗಿದೆ.<ref>{{Cite news |url=https://www.thehindu.com/news/national/kerala/big-push-for-infrastructure-in-budget/article17403255.ece |title=Big push for infrastructure in Budget |newspaper=The Hindu |date=3 March 2017 |via=www.thehindu.com |access-date=25 November 2020 |archive-date=29 January 2021 |archive-url=https://web.archive.org/web/20210129210933/https://www.thehindu.com/news/national/kerala/big-push-for-infrastructure-in-budget/article17403255.ece |url-status=live }}</ref><ref>{{Cite web |url=https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |title=Kerala Budget: Infrastructure projects get a major fillip |website=The New Indian Express |date=4 March 2017 |access-date=25 November 2020 |archive-date=30 January 2021 |archive-url=https://web.archive.org/web/20210130030958/https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |url-status=live }}</ref>
ನವೆಂಬರ್ 2015 ರಲ್ಲಿ, [[ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯ|ನಗರಾಭಿವೃದ್ಧಿ ಸಚಿವಾಲಯ]]ವು [[ಅಟಲ್ ನವೀಕರಣ ಮತ್ತು ನಗರ ಪರಿವರ್ತನೆಗಾಗಿ ಮಿಷನ್]] (AMRUT) ಎಂದು ಕರೆಯಲ್ಪಡುವ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಕೇರಳದ ಏಳು ನಗರಗಳನ್ನು ಆಯ್ಕೆ ಮಾಡಿತು.<ref>{{cite news |title=Modi to address heads of civic bodies on urban revamp |url=https://www.thehindu.com/news/national/modi-to-address-heads-of-civic-bodies-on-urban-revamp/article7336851.ece |date=20 June 2015 |newspaper=[[The Hindu]] |access-date=25 June 2015 |archive-date=2 February 2021 |archive-url=https://web.archive.org/web/20210202155935/https://www.thehindu.com/news/national/modi-to-address-heads-of-civic-bodies-on-urban-revamp/article7336851.ece |url-status=live }}</ref> ಸೇವಾ ಮಟ್ಟದ ಸುಧಾರಣಾ ಯೋಜನೆಯನ್ನು (SLIP) ಅಭಿವೃದ್ಧಿಪಡಿಸಲು ಪ್ರತಿ ನಗರಕ್ಕೆ {{INRConvert|2.5|m}} ನ ಪ್ಯಾಕೇಜ್ ಅನ್ನು ಘೋಷಿಸಲಾಯಿತು, ಇದು ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಕೊಚ್ಚಿ, ತೃಶೂರ್, ಕೋಝಿಕೋಡ್, ಮತ್ತು ಪಾಲಕ್ಕಾಡ್ ನಗರಗಳಲ್ಲಿ ಸ್ಥಳೀಯ ನಗರ ಸಂಸ್ಥೆಗಳ ಉತ್ತಮ ಕಾರ್ಯನಿರ್ವಹಣೆಗೆ ಯೋಜನೆಯಾಗಿದೆ.<ref>{{cite news |last=R. Ramabhadran |first=Pillai |title=AMRUT to roll out on a smaller scale |url=https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |access-date=12 November 2015 |work=The Hindu |issue=12 November 2015 |archive-date=7 February 2021 |archive-url=https://web.archive.org/web/20210207052652/https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |url-status=live }}</ref> [[ಗ್ರ್ಯಾಂಡ್ ಕೇರಳ ಶಾಪಿಂಗ್ ಫೆಸ್ಟಿವಲ್]] (GKSF) ಅನ್ನು 2007 ರಲ್ಲಿ ಪ್ರಾರಂಭಿಸಲಾಯಿತು, ಇದು ಕೇರಳದ ಒಂಬತ್ತು ನಗರಗಳಾದ್ಯಂತ 3000 ಕ್ಕೂ ಹೆಚ್ಚು ಮಳಿಗೆಗಳನ್ನು ದೊಡ್ಡ ತೆರಿಗೆ ರಿಯಾಯಿತಿಗಳು, VAT ಮರುಪಾವತಿಗಳು ಮತ್ತು ದೊಡ್ಡ ಪ್ರಮಾಣದ ಬಹುಮಾನಗಳೊಂದಿಗೆ ಒಳಗೊಂಡಿದೆ.<ref name="GKSF begins">{{cite news |title=Shopping festival begins |url=https://www.thehindu.com/todays-paper/tp-national/tp-kerala/shopping-festival-begins/article1959420.ece |work=The Hindu |date=2 December 2007 |access-date=24 January 2013 |archive-date=27 September 2013 |archive-url=https://web.archive.org/web/20130927054507/http://www.thehindu.com/todays-paper/tp-national/tp-kerala/shopping-festival-begins/article1959420.ece |url-status=live }}</ref> [[ತಿರುವನಂತಪುರ|ತಿರುವನಂತಪುರದ]] [[ಲುಲು ಮಾಲ್, ತಿರುವನಂತಪುರ|ಲುಲು ಇಂಟರ್ನ್ಯಾಷನಲ್ ಮಾಲ್]] ಭಾರತದ ಅತಿದೊಡ್ಡ [[ಶಾಪಿಂಗ್ ಮಾಲ್|ಶಾಪಿಂಗ್ ಮಾಲ್]] ಆಗಿದೆ.<ref>{{cite news |title=LuLu Group: Going places |url=https://www.khaleejtimes.com/business/local/lulu-group-going-places |work=[[Khaleej Times]] |access-date=13 November 2020 |archive-date=26 April 2021 |archive-url=https://web.archive.org/web/20210426172244/https://www.khaleejtimes.com/business/local/lulu-group-going-places |url-status=live }}</ref>
ಅನೇಕ ಸಾಧನೆಗಳ ಹೊರತಾಗಿಯೂ, ಕೇರಳವು ವಿದ್ಯಾವಂತ ಮಹಿಳೆಯರ ಮೇಲೆ ಅಸಮಾನವಾಗಿ ಪರಿಣಾಮ ಬೀರುವ ಹೆಚ್ಚಿನ ಮಟ್ಟದ ನಿರುದ್ಯೋಗ, ಹೆಚ್ಚಿನ ಮಟ್ಟದ ಜಾಗತಿಕ ಪ್ರಭಾವ ಮತ್ತು ಅತ್ಯಂತ ಸೂಕ್ಷ್ಮ ಪರಿಸರದಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದೆ.<ref name="Hindu2021">{{cite journal |title=Making sense of Kerala |journal=The Hindu |date=13 December 2021 |last1=Heller |first1=Patrick |last2=Törnquist |first2=Olle |url=https://www.thehindu.com/news/national/kerala/making-sense-of-kerala/article37942860.ece |archive-url=https://web.archive.org/web/20211214151547/https://www.thehindu.com/news/national/kerala/making-sense-of-kerala/article37942860.ece |accessdate=5 March 2022 |archive-date=14 December 2021 |quote=Kerala has specific challenges: persistently high levels of unemployment that disproportionately impact educated women, a high degree of global exposure and a very fragile environment. More broadly, as the 21st century unfolds, it becomes increasingly clearer that the role of the State in supporting development must fundamentally change. First, in highly educated societies like Kerala, industrialisation is no longer the path to economic prosperity.}}</ref>
=== ಕೈಗಾರಿಕೆಗಳು ===
ಸಾಂಪ್ರದಾಯಿಕ ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳು; [[ತೆಂಗಿನ ನಾರು]], [[ಕೈಮಗ್ಗ]]ಗಳು, ಮತ್ತು [[ಕರಕುಶಲ]]ಗಳು ಸುಮಾರು ಒಂದು ಮಿಲಿಯನ್ ಜನರನ್ನು ಉದ್ಯೋಗಿಸುತ್ತವೆ.<ref name="KumarKerala2007">{{cite book |author1=S. Rajitha Kumar |author2=University of Kerala |title=Traditional Industries of India in the Globalised World |url=https://books.google.com/books?id=aBvtAAAAMAAJ |year=2007 |publisher=University of Kerala |isbn=978-8177081435 |page=223}}</ref> ಕೇರಳವು ಬಿಳಿ ತೆಂಗಿನ ನಾರಿನ ನಾರಿನ ಒಟ್ಟು ಜಾಗತಿಕ ಉತ್ಪಾದನೆಯ 60% ಅನ್ನು ಪೂರೈಸುತ್ತದೆ. ಭಾರತದ ಮೊದಲ ತೆಂಗಿನ ನಾರಿನ ಕಾರ್ಖಾನೆಯನ್ನು [[ಆಲಪ್ಪುಳ]]ದಲ್ಲಿ 1859–60 ರಲ್ಲಿ ಸ್ಥಾಪಿಸಲಾಯಿತು.<ref>{{cite web |title=Indian Coir Industry |url=https://www.indianmirror.com/indian-industries/coir.html |work=Indian Mirror |access-date=29 April 2014 |archive-date=2 May 2014 |archive-url=https://web.archive.org/web/20140502033302/http://www.indianmirror.com/indian-industries/coir.html |url-status=live }}</ref> ಕೇಂದ್ರ ತೆಂಗಿನ ನಾರಿನ ಸಂಶೋಧನಾ ಸಂಸ್ಥೆಯನ್ನು ಅಲ್ಲಿ 1959 ರಲ್ಲಿ ಸ್ಥಾಪಿಸಲಾಯಿತು. 2006–2007 ರ [[SIDBI]] ಯ ಜನಗಣತಿಯ ಪ್ರಕಾರ, ಕೇರಳದಲ್ಲಿ {{formatnum:1468104}} [[ಸಣ್ಣ ಮತ್ತು ಮಧ್ಯಮ ಉದ್ಯಮಗಳು#ಭಾರತ|ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿವೆ]], ಇವು {{formatnum:3031272}} ಜನರನ್ನು ಉದ್ಯೋಗಿಸುತ್ತವೆ.<ref name="SIDBI Report 2010">{{cite book |title=SIDBI Report on Micro, Small and Medium Enterprises Sector, 2010 |publisher=Small Industries Development Bank of India |year=2010}}</ref><ref>{{cite journal |title=A Study on the Position of Small and Medium Enterprises in Kerala vis a vis the National Scenario |author=N. Rajeevan |journal=International Journal of Research in Commerce, Economics and Management |date=March 2012 |volume=2 |issue=3}}</ref> [[KSIDC]] ಕೇರಳದಲ್ಲಿ 650 ಕ್ಕೂ ಹೆಚ್ಚು ಮಧ್ಯಮ ಮತ್ತು ದೊಡ್ಡ ಉತ್ಪಾದನಾ ಸಂಸ್ಥೆಗಳನ್ನು ಪ್ರೋತ್ಸಾಹಿಸಿದೆ, 72,500 ಜನರಿಗೆ ಉದ್ಯೋಗವನ್ನು ಸೃಷ್ಟಿಸಿದೆ.<ref>{{cite web |url=https://www.ksidc.org/about-functions.php |archive-url=https://web.archive.org/web/20140709062837/https://www.ksidc.org/about-functions.php |archive-date=9 July 2014 |title=Functions, KSIDC, Thiruvananthapuram |publisher=Kerala State Industrial Development Corporation |access-date=6 December 2013}}</ref> GSDP ಯ 0.3% ರಷ್ಟಿರುವ ಗಣಿಗಾರಿಕಾ ವಲಯವು [[ಇಲ್ಮೆನೈಟ್]], [[ಕಯೋಲಿನ್]], [[ಬಾಕ್ಸೈಟ್]], [[ಸಿಲಿಕಾ]], [[ಕ್ವಾರ್ಟ್ಜ್]], [[ರುಟೈಲ್]], [[ಜಿರ್ಕಾನ್]], ಮತ್ತು [[ಸಿಲ್ಲಿಮನೈಟ್]] ಹೊರತೆಗೆಯುವಿಕೆಯನ್ನು ಒಳಗೊಂಡಿದೆ.<ref name="GOK_2005c">{{Cite journal |author=Government of Kerala |year=2005 |title=Kerala at a Glance |journal=Government of Kerala |url=https://www.kerala.gov.in/ |access-date=22 January 2006 |url-status=dead |archive-url=https://web.archive.org/web/20060118031516/https://www.kerala.gov.in/ |archive-date=18 January 2006}}</ref> ಇತರ ಪ್ರಮುಖ ವಲಯಗಳೆಂದರೆ [[ಕೇರಳದಲ್ಲಿ ಪ್ರವಾಸೋದ್ಯಮ|ಪ್ರವಾಸೋದ್ಯಮ]], ವೈದ್ಯಕೀಯ ವಲಯ, [[ಕೇರಳದಲ್ಲಿ ಶಿಕ್ಷಣ|ಶೈಕ್ಷಣಿಕ ವಲಯ]], ಬ್ಯಾಂಕಿಂಗ್, [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಹಡಗು ನಿರ್ಮಾಣ]], [[ಕೊಚ್ಚಿ ಸಂಸ್ಕರಣಾಗಾರ|ತೈಲ ಸಂಸ್ಕರಣಾಗಾರ]], ಮೂಲಸೌಕರ್ಯ, ಉತ್ಪಾದನೆ, [[ವಸತಿ ಉದ್ಯಾನ|ಮನೆ ತೋಟಗಳು]], ಪಶುಪಾಲನೆ ಮತ್ತು [[ವ್ಯಾಪಾರ ಪ್ರಕ್ರಿಯೆಯ ಹೊರಗುತ್ತಿಗೆ]].{{citation needed|date=October 2025}}
=== ಕೃಷಿ ===
[[File:Tea plantations in Munnar, Kerala.jpg|thumb|[[ಮುನ್ನಾರ್|ಮುನ್ನಾರಿನಲ್ಲಿ]] ಚಹಾ ತೋಟಗಳು, ಕೇರಳ]]
[[File:Nemmara-paddy.jpg|alt=A field|thumb|[[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡಿನ]] ಒಂದು ಭತ್ತದ ಗದ್ದೆ, ಇದನ್ನು ''ಕೇರಳದ ಧಾನ್ಯದ ಬುಟ್ಟಿ'' ಎಂದೂ ಕರೆಯುತ್ತಾರೆ]]
ಕೇರಳದಲ್ಲಿ ಕೃಷಿಯಲ್ಲಿ ಪ್ರಮುಖ ಬದಲಾವಣೆಯು 1970 ರ ದಶಕದಲ್ಲಿ ಸಂಭವಿಸಿತು, ಭಾರತಾದ್ಯಂತ ಅಕ್ಕಿಯ ಲಭ್ಯತೆ ಹೆಚ್ಚಾದ ಕಾರಣ ಮತ್ತು ಕಾರ್ಮಿಕರ ಲಭ್ಯತೆ ಕಡಿಮೆಯಾದ ಕಾರಣ ಅಕ್ಕಿ ಉತ್ಪಾದನೆಯು ಕುಸಿಯಿತು.<ref name="Sinha2003">{{cite book |author=B.R. Sinha |title=Encyclopaedia Of Professional Education (10 Vol.) |url=https://books.google.com/books?id=mdjGoXN3y1AC&pg=PA205 |access-date=18 November 2012 |year=2003 |publisher=Sarup & Sons |isbn=978-8176254106 |pages=204–05}}</ref> ಪರಿಣಾಮವಾಗಿ, ಅಕ್ಕಿ ಉತ್ಪಾದನೆಯಲ್ಲಿ ಹೂಡಿಕೆ ಕಡಿಮೆಯಾಯಿತು ಮತ್ತು ಭೂಮಿಯ ಗಮನಾರ್ಹ ಭಾಗವು ದೀರ್ಘಕಾಲಿಕ ಮರದ ಬೆಳೆಗಳು ಮತ್ತು ಕಾಲಿಕ ಬೆಳೆಗಳ ಕೃಷಿಗೆ ಬದಲಾಯಿತು.<ref name="Remesh2010">{{cite book |author=Babu P. Remesh |title=Dynamics of Rural Labour: A Study of Small Holding Rubber Tappers in Kerala |url=https://books.google.com/books?id=uOyNsKXSa0gC&pg=PA52 |access-date=18 November 2012 |year=2010 |publisher=Concept Publishing Company |isbn=978-8180696602 |pages=52–}}</ref><ref name="Commission2008">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA66 |access-date=18 November 2012 |year=2008 |publisher=Academic Foundation |isbn=978-8171885947 |pages=66–}}</ref> ಕೃಷಿ ಕಾರ್ಮಿಕರ ಕೊರತೆ, ಭೂಮಿಯ ಹೆಚ್ಚಿನ ಬೆಲೆ ಮತ್ತು ಕಾರ್ಯಾಚರಣೆಯ ಹಿಡುವಳಿಗಳ ಅನಾರೋಗ್ಯಕರ ಗಾತ್ರದಿಂದಾಗಿ ಬೆಳೆಗಳ ಲಾಭದಾಯಕತೆಯು ಕುಸಿಯಿತು.<ref name="google9">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=66 |access-date=30 May 2015}}</ref> ಕೇರಳದಲ್ಲಿ ಕೇವಲ 27.3% ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿವೆ, ಇದು ಭಾರತದಲ್ಲಿ ಅತ್ಯಂತ ಕಡಿಮೆ ಪ್ರಮಾಣವಾಗಿದೆ.{{sfn|Chandran|2018|p=406}}
ಕೇರಳವು ಕರಿಮೆಣಸಿನ ರಾಷ್ಟ್ರೀಯ ಉತ್ಪಾದನೆಯ 97% ಅನ್ನು ಉತ್ಪಾದಿಸುತ್ತದೆ<ref name="Limca Book of Records">{{cite book |title=Limca Book of Records |url=https://books.google.com/books?id=Y-JtAAAAMAAJ |access-date=18 November 2012 |year=2001 |publisher=Bisleri Beverages Limited |page=97}}</ref> ಮತ್ತು ದೇಶದ [[ನೈಸರ್ಗಿಕ ರಬ್ಬರ್]]ನ 85% ರಷ್ಟಿದೆ.<ref name="google10">{{cite book |title=South Asia 2006 |url=https://books.google.com/books?id=YG8bAQAAMAAJ |access-date=18 November 2012 |year=2005 |publisher=Taylor & Francis |page=291 |isbn=978-1-85743-318-0}}</ref><ref name="Economic Affairs">{{cite book |title=Economic Affairs |url=https://books.google.com/books?id=StHsAAAAMAAJ |access-date=18 November 2012 |year=1998 |publisher=H. Roy |page=47}}</ref> [[ತೆಂಗು]], [[ಚಹಾ]], [[ಕಾಫಿ]], [[ಗೋಡಂಬಿ]], ಮತ್ತು ಮಸಾಲೆಗಳು—ಏಲಕ್ಕಿ, [[ವೆನಿಲ್ಲಾ]], [[ದಾಲ್ಚಿನ್ನಿ]], ಮತ್ತು [[ಜಾಯಿಕಾಯಿ]] ಪ್ರಮುಖ ಕೃಷಿ ಉತ್ಪನ್ನಗಳಾಗಿವೆ.<ref name="ChattopadhyayFranke2006" />{{rp|74}}<ref name="Newton">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT3 |access-date=18 November 2012 |publisher=Springwood emedia |isbn=978-1-4761-2308-0 |pages=3–}}</ref><ref name="B.L.MarkoseMarkose2007">{{cite book |author1=Rajan, S. & B.L.Markose |author2=Baby Lissy Markose |title=Propagation of Horticultural Crops: Vol.06. Horticulture Science Series |url=https://books.google.com/books?id=19zgbxw-YhYC&pg=PA212 |access-date=18 November 2012 |year=2007 |publisher=New India Publishing |isbn=978-8189422486 |pages=212–}}</ref><ref name="Pradhan2009">{{cite book |author=Pradhan |title=Retailing Management 3E |url=https://books.google.com/books?id=8y7Zb_D-_oYC&pg=PA256 |access-date=18 November 2012 |year=2009 |publisher=Tata McGraw-Hill Education |isbn=978-0-07-015256-4 |pages=256–}}</ref><ref name="PradeepkumarPradeep2008">{{cite book |author1=T. Pradeepkumar |author2=Kumar, Pradeep |title=Management of Horticultural Crops: Vol.11 Horticulture Science Series: In 2 Parts |url=https://books.google.com/books?id=VHmokNZXbHUC&pg=PA509 |access-date=18 November 2012 |year=2008 |publisher=New India Publishing |isbn=978-8189422493 |pages=509–}}</ref><ref name="OsellaOsella2000">{{cite book |author1=Filippo Osella |author2=Caroline Osella |title=Social Mobility In Kerala: Modernity and Identity in Conflict |url=https://books.google.com/books?id=rMRw0gTZSJwC&pg=PA235 |access-date=18 November 2012 |year=2000 |publisher=Pluto Press |isbn=978-0-7453-1693-2 |pages=235–}}</ref> [[ಭಾರತ]]ದ ರಫ್ತು ಗುಣಮಟ್ಟದ ಗೋಡಂಬಿ ಬೀಜಗಳಲ್ಲಿ ಸುಮಾರು 80% ಅನ್ನು [[ಕೊಲ್ಲಂ]]ನಲ್ಲಿ ತಯಾರಿಸಲಾಗುತ್ತದೆ.<ref>{{cite news |url=https://www.thehindu.com/news/national/kerala/cashew-sector-in-a-tailspin/article8767346.ece |title=Cashew sector in a tailspin |newspaper=The Hindu |access-date=24 June 2016 |archive-date=24 June 2016 |archive-url=https://web.archive.org/web/20160624004205/http://www.thehindu.com/news/national/kerala/cashew-sector-in-a-tailspin/article8767346.ece |url-status=live }}</ref> ಪ್ರಮುಖ ವಾಣಿಜ್ಯ ಬೆಳೆ [[ತೆಂಗು]] ಮತ್ತು ಕೇರಳವು ಭಾರತದಲ್ಲಿ ತೆಂಗಿನ ಕೃಷಿ ಪ್ರದೇಶದಲ್ಲಿ ಮೊದಲ ಸ್ಥಾನದಲ್ಲಿದೆ.{{sfn|Chandran|2018|p=407}} ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಏಲಕ್ಕಿ]]ಯಲ್ಲಿ ಸುಮಾರು 90% ಕೇರಳದಿಂದ ಬರುತ್ತದೆ.<ref name="eco" /> ಭಾರತವು ವಿಶ್ವದಲ್ಲಿ ಏಲಕ್ಕಿಯ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ.<ref name="eco" /> ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಕಾಫಿ]]ಯಲ್ಲಿ ಸುಮಾರು 20% ಕೇರಳದಿಂದ ಬರುತ್ತದೆ.{{sfn|Chandran|2018|p=409}} ಪ್ರಮುಖ ಕೃಷಿ ಪ್ರಧಾನ ಆಹಾರವೆಂದರೆ ಅಕ್ಕಿ, ವಿವಿಧ ಪ್ರಭೇದಗಳನ್ನು ವ್ಯಾಪಕವಾದ ಭತ್ತದ ಗದ್ದೆಗಳಲ್ಲಿ ಬೆಳೆಯಲಾಗುತ್ತದೆ.<ref name="VarshneyRzóska1976">{{cite book |author1=C.K. Varshney |author2=J. Rzóska |title=Aquatic Weeds in South East Asia |url=https://books.google.com/books?id=lW3fHiDjHNcC&pg=PA100 |access-date=18 November 2012 |year=1976 |publisher=Springer |isbn=978-9061935568 |pages=100–}}</ref> ಮನೆ ತೋಟಗಳು ಕೃಷಿ ವಲಯದ ಗಮನಾರ್ಹ ಭಾಗವನ್ನು ರೂಪಿಸಿದವು.<ref name="Dobbie2006">{{cite book |author=Aline Dobbie |title=India the Elephants Blessing |url=https://books.google.com/books?id=ckpEd4emnCkC&pg=PA123 |access-date=18 November 2012 |year=2006 |publisher=Melrose Press |isbn=978-1-905226-85-6 |pages=123–}}</ref>
=== ಮೀನುಗಾರಿಕೆ ===
{{convert|590|km|mi|lk=out|abbr=off}} ಕರಾವಳಿ ಪಟ್ಟಿಯೊಂದಿಗೆ,<ref>{{cite web |title=Kerala: Natural Resources |url=https://india.gov.in/knowindia/state_uts.php?id=70 |archive-url=https://web.archive.org/web/20111218084509/https://india.gov.in/knowindia/state_uts.php?id=70 |archive-date=18 December 2011 |publisher=Government of India |access-date=18 November 2012}}</ref> 400,000 ಹೆಕ್ಟೇರ್ ಒಳನಾಡಿನ ಜಲ ಸಂಪನ್ಮೂಲಗಳು<ref>{{cite web |title=Kerala: April 2012 |url=https://www.ibef.org/download/Kerala_060710.pdf |publisher=Indian Brand Equity Fund |access-date=18 November 2012 |archive-date=10 May 2013 |archive-url=https://web.archive.org/web/20130510151146/http://www.ibef.org/download/Kerala_060710.pdf |url-status=live }}</ref> ಮತ್ತು ಸರಿಸುಮಾರು 220,000 ಸಕ್ರಿಯ ಮೀನುಗಾರರು,<ref name="Commission1961">{{cite book |author=India. Planning Commission |title=Third five year plan |url=https://books.google.com/books?id=5_G5AAAAIAAJ |access-date=18 November 2012 |year=1961 |publisher=Manager of Publications |page=359}}</ref> ಕೇರಳವು ಭಾರತದ ಪ್ರಮುಖ ಮೀನು ಉತ್ಪಾದಕರಲ್ಲಿ ಒಂದಾಗಿದೆ.<ref name="google13">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA51 |access-date=18 November 2012 |year=2008 |publisher=Academic Foundation |isbn=978-8171885947 |page=51}}</ref> 2003–04 ರ ವರದಿಗಳ ಪ್ರಕಾರ, ಸುಮಾರು 11 ಲಕ್ಷ (1.1 ಮಿಲಿಯನ್) ಜನರು ಮೀನುಗಾರಿಕೆ ಮತ್ತು ಒಣಗಿಸುವಿಕೆ, ಸಂಸ್ಕರಣೆ, ಪ್ಯಾಕೇಜಿಂಗ್, ರಫ್ತು ಮತ್ತು ಮೀನುಗಾರಿಕೆ ಸಾಗಣೆಯಂತಹ ಸಂಯೋಜಿತ ಚಟುವಟಿಕೆಗಳಿಂದ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ. 2003–04 ರಲ್ಲಿ ವಲಯದ ವಾರ್ಷಿಕ ಇಳುವರಿಯನ್ನು 6,08,000 ಟನ್ ಎಂದು ಅಂದಾಜಿಸಲಾಗಿದೆ.<ref>{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=51 |access-date=30 May 2015}}</ref> ಇದು ರಾಜ್ಯದ ಒಟ್ಟು ಆರ್ಥಿಕತೆಯ ಸುಮಾರು 3% ರಷ್ಟು ಕೊಡುಗೆ ನೀಡುತ್ತದೆ. 2006 ರಲ್ಲಿ, ಒಟ್ಟು ಭಾರತೀಯ ಸಮುದ್ರ ಮೀನುಗಾರಿಕೆ ಇಳುವರಿಯಲ್ಲಿ ಸುಮಾರು 22% ಕೇರಳದಿಂದ ಬಂದಿದೆ.<ref name="Handbook" /> ನೈಋತ್ಯ ಮಾನ್ಸೂನ್ ಸಮಯದಲ್ಲಿ, ತೀರದ ಉದ್ದಕ್ಕೂ ಅಮಾನತುಗೊಂಡ ಮಣ್ಣಿನ ಬ್ಯಾಂಕ್ ಬೆಳೆಯುತ್ತದೆ, ಇದು ಪ್ರಶಾಂತ ಸಮುದ್ರದ ನೀರಿಗೆ ಕಾರಣವಾಗುತ್ತದೆ, ಇದು ಮೀನುಗಾರಿಕಾ ಉದ್ಯಮದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ವಿದ್ಯಮಾನವನ್ನು ಸ್ಥಳೀಯವಾಗಿ ''[[ಚಕರ]]'' ಎಂದು ಕರೆಯಲಾಗುತ್ತದೆ.<ref name="Gulati1984">{{cite book |author=Leela Gulati |title=Fisherwomen on the Kerala Coast: Demographic and Socio-Economic Impact of a Fisheries Development Project |url=https://archive.org/details/fisherwomenonker0000gula |url-access=registration |access-date=18 November 2012 |year=1984 |publisher=International Labour Organization |isbn=978-9221036265 |page=[https://archive.org/details/fisherwomenonker0000gula/page/103 103]}}</ref><ref name="Journal of Kerala Studies">{{cite book |title=Journal of Kerala Studies |url=https://books.google.com/books?id=EgSSAAAAIAAJ |access-date=18 November 2012 |year=1987 |publisher=University of Kerala. |page=201}}</ref> ಜಲಗಳು ವಿವಿಧ ರೀತಿಯ ಮೀನುಗಳನ್ನು ಒದಗಿಸುತ್ತವೆ: [[ಪೆಲಾಜಿಕ್ ಮೀನು|ಪೆಲಾಜಿಕ್ ಪ್ರಭೇದಗಳು]]; 59%, [[ಡೆಮರ್ಸಲ್ ಮೀನು|ಡೆಮರ್ಸಲ್ ಪ್ರಭೇದಗಳು]]; 23%, [[ಕಠಿಣಚರ್ಮಿಗಳು]], [[ಮೃದ್ವಂಗಿಗಳು]] ಮತ್ತು ಇತರವುಗಳು 18% ರಷ್ಟಿವೆ.<ref name="Handbook">{{cite book |title=Handbook of Marine Fisheries Conservation and Management |url=https://archive.org/details/handbookmarinefi00graf |url-access=limited |publisher=Oxford University Press |author1=R. Quentin Grafton |author2=Ray Hilborn |author3=Dale Squires |year=2009 |pages=[https://archive.org/details/handbookmarinefi00graf/page/n24 10]–12 |isbn=978-0-19-537028-7}}</ref> ಸುಮಾರು 1,050,000 (1.050 ಮಿಲಿಯನ್) ಮೀನುಗಾರರು 1999–2000 ರ ಅಂದಾಜಿನಂತೆ 668,000 ಟನ್ ವಾರ್ಷಿಕ ಕ್ಯಾಚ್ ಅನ್ನು ಎಳೆಯುತ್ತಾರೆ; 222 ಮೀನುಗಾರಿಕಾ ಗ್ರಾಮಗಳು {{convert|590|km|adj=on|abbr=off}} ಕರಾವಳಿಯ ಉದ್ದಕ್ಕೂ ಹರಡಿವೆ. ಇನ್ನೂ 113 ಮೀನುಗಾರಿಕಾ ಗ್ರಾಮಗಳು ಒಳನಾಡಿನಲ್ಲಿ ಹರಡಿವೆ.{{citation needed|date=October 2025}}
== ಸಾರಿಗೆ ==
=== ರಸ್ತೆಗಳು ===
{{Main|ಕೇರಳದ ರಸ್ತೆಗಳು}}
{{See also|ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ}}{{multiple image
<!-- Layout parameters -->| align = <!-- right (default), left, centre, none -->
| direction = vertical
| width = 240
| image1 = Thrissur sixlane.jpg
| caption1 = [[ತೃಶೂರ್]] ನಿಂದ [[ವಡಕ್ಕೆಂಚೇರಿ]] ವರೆಗಿನ [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ನ ಆರು ಪಥದ ವಿಭಾಗ
<!--image 2-->}}
ಕೇರಳವು {{convert|331904|km|mi}} ರಸ್ತೆಗಳನ್ನು ಹೊಂದಿದೆ, ಇದು ಭಾರತದ ಒಟ್ಟು ರಸ್ತೆಗಳ 5.6% ರಷ್ಟಿದೆ.<ref name="eco" /><ref name="road">{{Cite book |title=Ministry Annual Report (2019–20) |publisher=Ministry of Road Transport & Highways Transport Research Wing, Government of India |year=2020 |location=New Delhi |url=https://morth.nic.in/sites/default/files/Ministry%20Annual%20Report_2019-20.pdf |archive-date=28 October 2021 |access-date=20 June 2021 |archive-url=https://web.archive.org/web/20211028140933/https://morth.nic.in/sites/default/files/Ministry%20Annual%20Report_2019-20.pdf |url-status=live }}</ref> ಇದು ಪ್ರತಿ ಸಾವಿರ ಜನರಿಗೆ ಸುಮಾರು {{convert|9.94|km|mi|2}} ರಸ್ತೆ ಎಂದು ಅನುವಾದಿಸುತ್ತದೆ, ಇದು ದೇಶದ ಸರಾಸರಿ {{convert|4.87|km|mi|2}} ಗೆ ಹೋಲಿಸಿದರೆ.<ref name="eco" /><ref name="road" /> ಕೇರಳದ ರಸ್ತೆಗಳು {{convert|1812|km|mi}} ರಾಷ್ಟ್ರೀಯ ಹೆದ್ದಾರಿಯನ್ನು ಒಳಗೊಂಡಿವೆ; ರಾಷ್ಟ್ರದ ಒಟ್ಟು 1.6%, {{convert|4342|km|mi}} ರಾಜ್ಯ ಹೆದ್ದಾರಿ; ರಾಷ್ಟ್ರದ ಒಟ್ಟು 2.5%, {{convert|27470|km|mi}} ಜಿಲ್ಲಾ ರಸ್ತೆಗಳು; ರಾಷ್ಟ್ರದ ಒಟ್ಟು 4.7%, {{convert|33201|km|mi}} ನಗರ (ಪುರಸಭೆ) ರಸ್ತೆಗಳು; ರಾಷ್ಟ್ರದ ಒಟ್ಟು 6.3%, ಮತ್ತು {{convert|158775|km|mi}} ಗ್ರಾಮೀಣ ರಸ್ತೆಗಳು; ರಾಷ್ಟ್ರದ ಒಟ್ಟು 3.8%.<ref name=":16-17">{{Cite book |title=Basic Road Statistics of India (2016–17) |publisher=Ministry of Road Transport & Highways Transport Research Wing, Government of India |year=2019 |location=New Delhi |pages=7–18 |url=https://morth.nic.in/sites/default/files/Basic%20_Road_Statics_of_India.pdf |archive-date=28 August 2021 |access-date=25 November 2020 |archive-url=https://web.archive.org/web/20210828082929/https://www.morth.nic.in/sites/default/files/Basic%20_Road_Statics_of_India.pdf |url-status=live }}</ref> [[ಕೋಟ್ಟಯಂ ಜಿಲ್ಲೆ|ಕೋಟ್ಟಯಂ]] [[ಕೇರಳದ ಜಿಲ್ಲೆಗಳ ಪಟ್ಟಿ|ಕೇರಳದ ಜಿಲ್ಲೆಗಳಲ್ಲಿ]] ಅತಿ ಉದ್ದದ ರಸ್ತೆಗಳನ್ನು ಹೊಂದಿದ್ದರೆ, [[ವಯನಾಡು]] ಕಡಿಮೆ ಪ್ರಮಾಣವನ್ನು ಹೊಂದಿದೆ.{{sfn|Chandran|2018|p=422}} ಕೇರಳದ ಪಶ್ಚಿಮ ಕರಾವಳಿಯ ಹೆಚ್ಚಿನ ಭಾಗವು [[ರಾಷ್ಟ್ರೀಯ ಹೆದ್ದಾರಿ 66 (ಭಾರತ)|NH 66]] (ಹಿಂದೆ NH 17 ಮತ್ತು 47) ಮೂಲಕ ಪ್ರವೇಶಿಸಬಹುದು; ಮತ್ತು ಪೂರ್ವ ಭಾಗವು ರಾಜ್ಯ ಹೆದ್ದಾರಿಗಳ ಮೂಲಕ ಪ್ರವೇಶಿಸಬಹುದು.<ref name="Kerala PWD">{{cite web |title=National Highways in Kerala |url=https://www.keralapwd.gov.in/getPage.php%3Fpage%3DNH%2520in%2520Kerala%26pageId%3D301&ved=2ahUKEwjRh7jHod7YAhWFmZQKHWSeAeoQFjAOegQIBxAB&usg=AOvVaw15WM6wG3ueKFD1qj28WEps |work=Kerala Public Works Department |publisher=Government of Kerala}} {{dead link|date=September 2019 |bot=InternetArchiveBot |fix-attempted=yes }}</ref> ಬೆಟ್ಟ ಮತ್ತು ಕರಾವಳಿ ಹೆದ್ದಾರಿಗಳಿಗೆ ಹೊಸ ಯೋಜನೆಗಳನ್ನು ಇತ್ತೀಚೆಗೆ [[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ|KIIFB]] ಅಡಿಯಲ್ಲಿ ಘೋಷಿಸಲಾಯಿತು.<ref>{{cite news |title=Coastal, Hill Highways to become a reality |url=https://www.thehindu.com/news/national/kerala/coastal-hill-highways-to-become-a-reality/article19262450.ece |date=12 July 2017 |newspaper=The Hindu |access-date=12 February 2019 |archive-date=15 April 2021 |archive-url=https://web.archive.org/web/20210415092848/https://www.thehindu.com/news/national/kerala/coastal-hill-highways-to-become-a-reality/article19262450.ece |url-status=live }}</ref> ಅತಿ ಉದ್ದದ ರಸ್ತೆ ({{convert|1622|km|mi}}) ಹೊಂದಿರುವ ರಾಷ್ಟ್ರೀಯ ಹೆದ್ದಾರಿ 66, [[ಕನ್ಯಾಕುಮಾರಿ]]ಯನ್ನು [[ಮುಂಬೈ]]ಗೆ ಸಂಪರ್ಕಿಸುತ್ತದೆ; ಇದು [[ಕಾಸರಗೋಡು|ಕಾಸರಗೋಡಿನ]] [[ತಲಪಾಡಿ]] ಮೂಲಕ ಕೇರಳವನ್ನು ಪ್ರವೇಶಿಸುತ್ತದೆ ಮತ್ತು [[ಕಣ್ಣೂರು]], [[ಕೋಝಿಕೋಡ್]], [[ಮಲಪ್ಪುರಂ]], [[ಗುರುವಾಯೂರು]], [[ಕೊಚ್ಚಿ]], [[ಆಲಪ್ಪುಳ]], [[ಕೊಲ್ಲಂ]], [[ತಿರುವನಂತಪುರ]] ಮೂಲಕ ಹಾದುಹೋಗುವ ಮೊದಲು [[ತಮಿಳುನಾಡು]] ಪ್ರವೇಶಿಸುತ್ತದೆ.<ref name="Kerala PWD" /> [[ಪಾಲಕ್ಕಾಡ್ ಜಿಲ್ಲೆ]]ಯನ್ನು ಸಾಮಾನ್ಯವಾಗಿ ಕೇರಳದ ಪ್ರವೇಶದ್ವಾರ ಎಂದು ಕರೆಯಲಾಗುತ್ತದೆ, ಪಶ್ಚಿಮ ಘಟ್ಟಗಳಲ್ಲಿ ಪಾಲಕ್ಕಾಡ್ ಅಂತರದ ಉಪಸ್ಥಿತಿಯಿಂದಾಗಿ, ಅದರ ಮೂಲಕ ಕೇರಳದ ಉತ್ತರ ([[ಮಲಬಾರ್ ಪ್ರದೇಶ|ಮಲಬಾರ್]]) ಮತ್ತು ದಕ್ಷಿಣ (ತಿರುವಾಂಕೂರು) ಭಾಗಗಳು ರಸ್ತೆ ಮತ್ತು ರೈಲು ಮೂಲಕ ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಿವೆ. ರಾಜ್ಯದ ಅತಿದೊಡ್ಡ ತಪಾಸಣಾ ಕೇಂದ್ರ, [[ವಾಲಯಾರ್]], [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ರಲ್ಲಿದೆ, ಕೇರಳ ಮತ್ತು [[ತಮಿಳುನಾಡು]] ನಡುವಿನ ಗಡಿ ಪಟ್ಟಣದಲ್ಲಿ, ಅದರ ಮೂಲಕ ದೊಡ್ಡ ಪ್ರಮಾಣದ ಸಾರ್ವಜನಿಕ ಮತ್ತು ವಾಣಿಜ್ಯ ಸಾರಿಗೆಯು ಕೇರಳದ ಉತ್ತರ ಮತ್ತು ಮಧ್ಯ ಜಿಲ್ಲೆಗಳನ್ನು ತಲುಪುತ್ತದೆ.<ref>{{cite web |url=https://www.keralatourism.org/districts/palakkad/ |title=District of Palakkad – the granary of Kerala, Silent Valley National Park, Nelliyampathy |publisher=keralatourism.org |access-date=30 May 2015 |archive-date=15 April 2021 |archive-url=https://web.archive.org/web/20210415114106/https://www.keralatourism.org/districts/palakkad/ |url-status=live }}</ref>
[[ಸಾರ್ವಜನಿಕ ಕಾರ್ಯಗಳ ಇಲಾಖೆ (ಕೇರಳ)|ಸಾರ್ವಜನಿಕ ಕಾರ್ಯಗಳ ಇಲಾಖೆ]] [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|ರಾಜ್ಯ ಹೆದ್ದಾರಿ ವ್ಯವಸ್ಥೆ]] ಮತ್ತು ಪ್ರಮುಖ ಜಿಲ್ಲಾ ರಸ್ತೆಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ.<ref>{{cite web |title=About us |url=https://www.keralapwd.gov.in/getPage.php?page=About%20Us&pageId=256&link=About%20PWD |archive-url=https://web.archive.org/web/20101201055142/https://www.keralapwd.gov.in/getPage.php?page=About%20Us&pageId=256&link=About%20PWD |url-status=dead |archive-date=1 December 2010 |work=Kerala Public Works Department |publisher=Government of Kerala |access-date=18 November 2012}}</ref> ಕೇರಳ ರಾಜ್ಯ ಸಾರಿಗೆ ಯೋಜನೆ (KSTP), ಇದು [[GIS]]-ಆಧಾರಿತ ರಸ್ತೆ ಮಾಹಿತಿ ಮತ್ತು ನಿರ್ವಹಣಾ ಯೋಜನೆಯನ್ನು (RIMS) ಒಳಗೊಂಡಿದೆ, ಕೇರಳದ ರಾಜ್ಯ ಹೆದ್ದಾರಿಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಕೆಲವು ಪ್ರಮುಖ ಜಿಲ್ಲಾ ರಸ್ತೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ.<ref>{{Cite news |author=Kumar VS |title=Kerala State transport project second phase to be launched next month |work=The Hindu |date=20 January 2006 |access-date=11 November 2007 |url=https://www.thehindubusinessline.com/2006/01/20/stories/2006012002272100.htm |archive-url=https://web.archive.org/web/20070304181402/https://www.thehindubusinessline.com/2006/01/20/stories/2006012002272100.htm |archive-date=4 March 2007}}</ref><ref>{{cite web |author=Kumar VS |title=Institutional Strengthening Action Plan (ISAP) |work=Kerala Public Works Department |publisher=Government of Kerala |year=2003 |access-date=11 November 2007 |url=https://www.keralapwd.gov.in/pwd/public/isap.jsp |archive-url=https://web.archive.org/web/20080512054304/https://www.keralapwd.gov.in/pwd/public/isap.jsp |archive-date=12 May 2008}}</ref> ಕೇರಳದಲ್ಲಿ ಸಾರಿಗೆಯು ಪ್ರತಿ ವರ್ಷ 10-11% ದರದಲ್ಲಿ ಬೆಳೆಯುತ್ತಿದೆ, ಇದು ಹೆಚ್ಚಿನ ಸಾರಿಗೆ ಮತ್ತು ರಸ್ತೆಗಳ ಮೇಲಿನ ಒತ್ತಡಕ್ಕೆ ಕಾರಣವಾಗಿದೆ. ಸಾರಿಗೆ ಸಾಂದ್ರತೆಯು ರಾಷ್ಟ್ರೀಯ ಸರಾಸರಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ, ಇದು ರಾಜ್ಯದ ಹೆಚ್ಚಿನ ಜನಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ. ಕೇರಳದ ವಾರ್ಷಿಕ ಒಟ್ಟು ರಸ್ತೆ ಅಪಘಾತಗಳು ರಾಷ್ಟ್ರದಲ್ಲಿ ಅತಿ ಹೆಚ್ಚಿನದಾಗಿದೆ. ಅಪಘಾತಗಳು ಮುಖ್ಯವಾಗಿ ಕಿರಿದಾದ ರಸ್ತೆಗಳು ಮತ್ತು ಅಜಾಗರೂಕ ಚಾಲನೆಯ ಪರಿಣಾಮವಾಗಿದೆ.<ref>{{Cite news |author=Kumar KG |title=Accidentally notorious |work=The Hindu |date=22 September 2003 |access-date=11 November 2007 |url=https://www.thehindubusinessline.in/2003/09/22/stories/2003092201111300.htm |archive-date=10 August 2011 |archive-url=https://web.archive.org/web/20110810210809/http://www.thehindubusinessline.in/2003/09/22/stories/2003092201111300.htm |url-status=live }}</ref> ಕೇರಳದ ರಾಷ್ಟ್ರೀಯ ಹೆದ್ದಾರಿಗಳು ದೇಶದಲ್ಲಿ ಅತ್ಯಂತ ಕಿರಿದಾದವುಗಳಲ್ಲಿ ಸೇರಿವೆ ಮತ್ತು ಮುಂದಿನ ಭವಿಷ್ಯಕ್ಕೂ ಹಾಗೆಯೇ ಉಳಿಯುತ್ತವೆ, ಏಕೆಂದರೆ ರಾಜ್ಯ ಸರ್ಕಾರವು ಕಿರಿದಾದ ರಾಷ್ಟ್ರೀಯ ಹೆದ್ದಾರಿಗಳನ್ನು ಅನುಮತಿಸುವ ವಿನಾಯಿತಿಯನ್ನು ಪಡೆದುಕೊಂಡಿದೆ. ಕೇರಳದಲ್ಲಿ, ಹೆದ್ದಾರಿಗಳು {{convert|45|m|abbr=off}} ಅಗಲವಾಗಿವೆ. ಇತರ ರಾಜ್ಯಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ದರ್ಜೆಯಿಂದ ಪ್ರತ್ಯೇಕಿಸಲ್ಪಟ್ಟಿವೆ, {{convert|60|m|abbr=off}} ಅಗಲವಾಗಿದ್ದು ಕನಿಷ್ಠ ನಾಲ್ಕು ಪಥಗಳನ್ನು ಹೊಂದಿವೆ, ಜೊತೆಗೆ 6 ಅಥವಾ 8-ಪಥದ ಪ್ರವೇಶ-ನಿಯಂತ್ರಿತ ಎಕ್ಸ್ಪ್ರೆಸ್ವೇಗಳನ್ನು ಹೊಂದಿವೆ.<ref>{{cite web |url=https://www.indianexpress.com/news/kerala-parties-finally-toe-nhai-line-of-45m-wide-highways/661729/ |title=Kerala parties finally toe NHAI line of 45-m wide highways |work=Indian Express |date=18 August 2010 |access-date=25 September 2013}}</ref><ref>{{cite web |url=https://www.rediff.com/business/slide-show/slide-show-1-indias-13-super-highways/20110705.htm |title=Check out India's 13 super expressways |work=Rediff.com |date=5 July 2011 |access-date=25 September 2013 |archive-date=28 September 2013 |archive-url=https://web.archive.org/web/20130928024436/http://www.rediff.com/business/slide-show/slide-show-1-indias-13-super-highways/20110705.htm |url-status=live }}</ref> ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೇರಳ ಸರ್ಕಾರಕ್ಕೆ, ಕೇರಳದಲ್ಲಿ ಉತ್ತಮ ಹೆದ್ದಾರಿಗಳಿಗೆ ರಾಜಕೀಯ ಬದ್ಧತೆಯ ಕೊರತೆಯಿರುವುದರಿಂದ ಹೆದ್ದಾರಿ ಅಭಿವೃದ್ಧಿಯಲ್ಲಿ ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಬೆದರಿಕೆ ಹಾಕಿದೆ.<ref>{{Cite news |title=Kerala against development of five NHs |url=https://www.thehindu.com/news/national/kerala/kerala-against-development-of-five-nhs/article4555024.ece |url-access=subscription |newspaper=[[The Hindu]] |date=28 March 2013 |access-date=29 September 2024 |archive-date=4 December 2024 |archive-url=https://web.archive.org/web/20241204153945/https://www.thehindu.com/news/national/kerala/kerala-against-development-of-five-nhs/article4555024.ece |url-status=live }}</ref> ೨೦೧೩ ರಂತೆ, ಕೇರಳವು ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ದರವನ್ನು ಹೊಂದಿತ್ತು, ಹೆಚ್ಚಿನ ಮಾರಣಾಂತಿಕ ಅಪಘಾತಗಳು ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ.<ref>{{Cite news |url=https://www.thehindu.com/todays-paper/tp-national/tp-kerala/states-troubled-highways-a-shocking-revelation-for-centre/article4865464.ece |title=State's troubled highways a shocking revelation for Centre |journal=The Hindu |date=30 June 2013 |access-date=25 September 2013 |author=Staff Reporter}}</ref>
=== ರೈಲುಮಾರ್ಗಗಳು ===
{{Main|ಕೇರಳದ ರೈಲು ನಿಲ್ದಾಣಗಳ ಪಟ್ಟಿ}}
{{See also|ಕೊಚ್ಚಿ ಮೆಟ್ರೋ}}
[[ಭಾರತೀಯ ರೈಲ್ವೆ]]ಯ [[ದಕ್ಷಿಣ ರೈಲ್ವೆ]] ವಲಯವು [[ಇಡುಕ್ಕಿ ಜಿಲ್ಲೆ|ಇಡುಕ್ಕಿ]] ಮತ್ತು [[ವಯನಾಡು ಜಿಲ್ಲೆ|ವಯನಾಡು]] ಎತ್ತರದ ಜಿಲ್ಲೆಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರಮುಖ ಪಟ್ಟಣಗಳು ಮತ್ತು ನಗರಗಳನ್ನು ಸಂಪರ್ಕಿಸುವ ರಾಜ್ಯದ ಎಲ್ಲಾ ರೈಲು ಮಾರ್ಗಗಳನ್ನು ನಿರ್ವಹಿಸುತ್ತದೆ.<ref>{{cite web |title=Introduction |url=https://khsrcl.com/downloads/ch-1.pdf |publisher=Delhi Metro Rail Corporation |access-date=18 November 2012 |url-status=dead |archive-url=https://web.archive.org/web/20120906213234/https://khsrcl.com/downloads/ch-1.pdf |archive-date=6 September 2012}}</ref> ರಾಜ್ಯದ ರೈಲು ಜಾಲವು [[ದಕ್ಷಿಣ ರೈಲ್ವೆ ವಲಯ|ದಕ್ಷಿಣ ರೈಲ್ವೆಯ]] ಆರು ವಿಭಾಗಗಳಲ್ಲಿ ಎರಡರ ನಿಯಂತ್ರಣದಲ್ಲಿದೆ; [[ತಿರುವನಂತಪುರ]] ಮೂಲಸ್ಥಾನವನ್ನು ಹೊಂದಿರುವ [[ತಿರುವನಂತಪುರ ರೈಲ್ವೆ ವಿಭಾಗ]] ಮತ್ತು [[ಪಾಲಕ್ಕಾಡ್]] ಮೂಲಸ್ಥಾನವನ್ನು ಹೊಂದಿರುವ [[ಪಾಲಕ್ಕಾಡ್ ರೈಲ್ವೆ ವಿಭಾಗ]].<ref>{{cite web |title=The Zonal Dream Of Railway Kerala |url=https://www.yentha.com/news/view/features/the-zonal-dream-of-railway-kerala |work=yentha.com |access-date=18 November 2012 |archive-url=https://web.archive.org/web/20121025033001/https://www.yentha.com/news/view/features/the-zonal-dream-of-railway-kerala |archive-date=25 October 2012 |url-status=dead}}</ref> [[ತಿರುವನಂತಪುರ ಸೆಂಟ್ರಲ್]] (TVC) ರಾಜ್ಯದ ಅತಿ ಜನನಿಬಿಡ ರೈಲು ನಿಲ್ದಾಣವಾಗಿದೆ.<ref>{{Cite news |url=https://www.thehindu.com/todays-paper/tp-national/tp-kerala/article1807051.ece |title=Thiruvananthapuram Central to be made a world-class station |date=7 March 2007 |newspaper=The Hindu |language=en-IN |issn=0971-751X |access-date=8 May 2016}}</ref> ಕೇರಳದ ಪ್ರಮುಖ ರೈಲು ನಿಲ್ದಾಣಗಳು:
{{columns-list|colwidth=19em|
* [[ತಿರುವನಂತಪುರ ಸೆಂಟ್ರಲ್]] (TVC)
* [[ಎರ್ನಾಕುಳಂ ಜಂಕ್ಷನ್ ರೈಲು ನಿಲ್ದಾಣ|ಎರ್ನಾಕುಳಂ ಜಂಕ್ಷನ್ (ದಕ್ಷಿಣ)]] (ERS)
* [[ಕೋಝಿಕೋಡ್ ರೈಲು ನಿಲ್ದಾಣ|ಕೋಝಿಕೋಡ್]] (CLT)
* [[ಕೊಲ್ಲಂ ಜಂಕ್ಷನ್ ರೈಲು ನಿಲ್ದಾಣ|ಕೊಲ್ಲಂ ಜಂಕ್ಷನ್]] (QLN)
* [[ತೃಶೂರ್ ರೈಲು ನಿಲ್ದಾಣ|ತೃಶೂರ್]] (TCR)
* [[ಪಾಲಕ್ಕಾಡ್ ಜಂಕ್ಷನ್]] (PGT)
* [[ಕಣ್ಣೂರು ರೈಲು ನಿಲ್ದಾಣ|ಕಣ್ಣೂರು]] (CAN)
* [[ಶೊರಾನೂರು ಜಂಕ್ಷನ್]] (SRR)
* [[ಎರ್ನಾಕುಳಂ ಟೌನ್]] (ಉತ್ತರ) (ERN)
* [[ಕೋಟ್ಟಯಂ ರೈಲು ನಿಲ್ದಾಣ|ಕೋಟ್ಟಯಂ]] (KTYM)
* [[ಚೆಂಗನ್ನೂರು ರೈಲು ನಿಲ್ದಾಣ|ಚೆಂಗನ್ನೂರು]] (CNGR)
* [[ಆಲಪ್ಪುಳ ರೈಲು ನಿಲ್ದಾಣ|ಆಲಪ್ಪುಳ]] (ALLP)
* [[ತಿರುವನಂತಪುರ ಉತ್ತರ ರೈಲು ನಿಲ್ದಾಣ|ತಿರುವನಂತಪುರ ಉತ್ತರ]] (TVCN)
* [[ಕಾಯಂಕುಲಂ]] ಜಂಕ್ಷನ್ (KYJ)
* [[ತಿರೂರ್ ರೈಲು ನಿಲ್ದಾಣ|ತಿರೂರ್]] (TIR)
* [[ಕಾಸರಗೋಡು ರೈಲು ನಿಲ್ದಾಣ|ಕಾಸರಗೋಡು]] (KGQ)
* [[ಆಲುವಾ ರೈಲು ನಿಲ್ದಾಣ|ಆಲುವಾ]] (AWY)
* [[ತಲಶ್ಶೇರಿ]] (TLY)}}
=== ವಿಮಾನ ನಿಲ್ದಾಣಗಳು ===
{{Main|ಕೇರಳ ರಾಜ್ಯದ ವಿಮಾನ ನಿಲ್ದಾಣಗಳ ಪಟ್ಟಿ}}
[[File:Cochin International Airport Limited.jpg|right|thumb|[[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]], ರಾಜ್ಯದ ಅತಿ ಜನನಿಬಿಡ ವಿಮಾನ ನಿಲ್ದಾಣವು ಸೌರಶಕ್ತಿಯಿಂದ ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ]]
ಕೇರಳವು ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ: {{Cast listing|
* [[ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
}}
ಮದ್ರಾಸ್ ಪ್ರೆಸಿಡೆನ್ಸಿಯಡಿಯಲ್ಲಿ ಸ್ಥಾಪಿಸಲಾದ [[ಕೊಲ್ಲಂ ವಿಮಾನ ನಿಲ್ದಾಣ]]ವು ನಂತರ ಮುಚ್ಚಲ್ಪಟ್ಟಿತು, ಇದು ಕೇರಳದ ಮೊದಲ ವಿಮಾನ ನಿಲ್ದಾಣವಾಗಿತ್ತು.<ref>{{Cite news |url=https://www.thehindu.com/todays-paper/tp-national/tp-kerala/article252269.ece |title=Aviation school proposal evokes mixed response |journal=The Hindu |date=8 June 2009 |access-date=21 July 2015 |archive-date=20 December 2016 |archive-url=https://web.archive.org/web/20161220075251/http://www.thehindu.com/todays-paper/tp-national/tp-kerala/article252269.ece |url-status=live }}</ref> [[ಕಣ್ಣೂರು]] 1935 ರಷ್ಟು ಹಿಂದೆಯೇ ವಾಣಿಜ್ಯ ವಿಮಾನಯಾನಕ್ಕೆ ಬಳಸಲ್ಪಟ್ಟ ವಿಮಾನ ನಿಲ್ದಾಣವನ್ನು ಹೊಂದಿತ್ತು, [[ಟಾಟಾ ಗ್ರೂಪ್|ಟಾಟಾ]] ಏರ್ಲೈನ್ಸ್ [[ಮುಂಬೈ]] ಮತ್ತು ತಿರುವನಂತಪುರ ನಡುವೆ ಸಾಪ್ತಾಹಿಕ ವಿಮಾನಗಳನ್ನು ನಡೆಸುತ್ತಿತ್ತು – [[ಗೋವಾ]] ಮತ್ತು ಕಣ್ಣೂರಿನಲ್ಲಿ ನಿಲ್ಲುತ್ತಿತ್ತು.<ref>{{cite news |author=Sudhakaran, P |url=https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |title=Kannur flew, way before its first airport |newspaper=The Times of India |date=14 September 2015 |publisher=Timesofindia.indiatimes.com |access-date=13 November 2020 |url-status=live |archive-url=https://web.archive.org/web/20170518022943/https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |archive-date=18 May 2017}}</ref> ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ವಿಮಾನ ನಿಲ್ದಾಣ ಪ್ರಾಧಿಕಾರ]]ದಿಂದ ನಿರ್ವಹಿಸಲ್ಪಡುತ್ತದೆ, ಇದು ದಕ್ಷಿಣ ಭಾರತದ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. 1988 ರಲ್ಲಿ ತೆರೆಯಲ್ಪಟ್ಟ [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ವು ಕೇರಳದ ಎರಡನೇ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣ ಮತ್ತು [[ಮಲಬಾರ್ ಪ್ರದೇಶ|ಮಲಬಾರ್ ಪ್ರದೇಶದಲ್ಲಿ]] ಅತ್ಯಂತ ಹಳೆಯದಾಗಿದೆ.<ref>{{cite news |url=https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |work=The Times of India |title=Silver jubilee does not bring cheer to Karipur airport users |date=2 April 2012 |archive-date=4 June 2021 |access-date=7 February 2022 |archive-url=https://web.archive.org/web/20210604110846/https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಜ್ಯದಲ್ಲಿ ಅತಿ ಜನನಿಬಿಡವಾಗಿದೆ ಮತ್ತು [[ಭಾರತದ ಅತಿ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ|ದೇಶದಲ್ಲಿ ಏಳನೇ ಅತಿ ಜನನಿಬಿಡವಾಗಿದೆ]]. ಇದು [[CIAL ಸೌರಶಕ್ತಿ ಯೋಜನೆ|ಸೌರಶಕ್ತಿಯಿಂದ]] ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ<ref name="BBC">{{cite news |last=Menon |first=Supriya |url=https://www.bbc.com/news/world-asia-india-34421419 |title=How is the world's first solar-powered airport faring? – BBC News |publisher=Bbc.com |date=9 October 2015 |access-date=21 December 2018 |work=BBC News |archive-date=25 May 2023 |archive-url=https://web.archive.org/web/20230525214353/https://www.bbc.com/news/world-asia-india-34421419 |url-status=live }}</ref> ಮತ್ತು [[ಸಂಯುಕ್ತ ರಾಷ್ಟ್ರಗಳು]] ಸ್ಥಾಪಿಸಿದ ಅತ್ಯುನ್ನತ ಪರಿಸರ ಗೌರವವಾದ [[ಚಾಂಪಿಯನ್ಸ್ ಆಫ್ ದಿ ಅರ್ಥ್|ಚಾಂಪಿಯನ್ ಆಫ್ ದಿ ಅರ್ಥ್]] ಪ್ರಶಸ್ತಿಯನ್ನು ಗೆದ್ದುಕೊಂಡಿದೆ.<ref name="UN">{{cite news |url=https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |title=CIAL chosen for UN environmental honour |newspaper=[[The New Indian Express]] |date=26 July 2018 |archive-date=7 April 2023 |access-date=7 February 2022 |archive-url=https://web.archive.org/web/20230407102227/https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಪಬ್ಲಿಕ್ ಲಿಮಿಟೆಡ್ ಕಂಪನಿ]]ಯಾಗಿ ಸೇರಿಸಲ್ಪಟ್ಟ ಮೊದಲ ಭಾರತೀಯ ವಿಮಾನ ನಿಲ್ದಾಣವಾಗಿದೆ; ಇದನ್ನು 30 ದೇಶಗಳ ಸುಮಾರು 10,000 [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಅನಿವಾಸಿ ಭಾರತೀಯರು]] ಹಣಕಾಸು ಒದಗಿಸಿದ್ದಾರೆ.<ref>{{Cite news |title=The three airports in Kerala can be in business without affecting each other |publisher=[[Rediff.com|Rediff]] |date=6 December 1999 |access-date=11 November 2007 |url=https://www.rediff.com/business/1999/dec/06inter.htm |archive-date=20 January 2008 |archive-url=https://web.archive.org/web/20080120015042/http://www.rediff.com/business/1999/dec/06inter.htm |url-status=live }}</ref>
ನಾಗರಿಕ ವಿಮಾನ ನಿಲ್ದಾಣಗಳ ಜೊತೆಗೆ, [[ಕೊಚ್ಚಿ]] [[INS ಗರುಡ]] ಎಂಬ ನೌಕಾ ವಿಮಾನ ನಿಲ್ದಾಣವನ್ನು ಹೊಂದಿದೆ. ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಭಾರತೀಯ ವಾಯುಪಡೆ]]ಯ ದಕ್ಷಿಣ ವಾಯು ಕಮಾಂಡ್ನೊಂದಿಗೆ ನಾಗರಿಕ ಸೌಲಭ್ಯಗಳನ್ನು ಹಂಚಿಕೊಳ್ಳುತ್ತದೆ. ಈ ಸೌಲಭ್ಯಗಳನ್ನು ಹೆಚ್ಚಾಗಿ ಕೇರಳಕ್ಕೆ ಭೇಟಿ ನೀಡುವ ಕೇಂದ್ರ ಸರ್ಕಾರದ VIP ಗಳು ಬಳಸುತ್ತಾರೆ.{{citation needed|date=October 2025}}
=== ಜಲ ಸಾರಿಗೆ ===
{{Main|ಕೇರಳದ ಬಂದರುಗಳು}}
{{See also|ಕೊಚ್ಚಿ ವಾಟರ್ ಮೆಟ್ರೋ}}[[File:Cochin Ship Yard Cranes.JPG|alt=|thumb|230px|[[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಕೊಚ್ಚಿ ಹಡಗು ನಿರ್ಮಾಣ ಕೇಂದ್ರದಲ್ಲಿ]] ಕ್ರೇನ್ಗಳು]]
ಕೇರಳವು [[ಕೇರಳದ ಬಂದರುಗಳು|ಎರಡು ಪ್ರಮುಖ ಬಂದರುಗಳು, ನಾಲ್ಕು ಮಧ್ಯಂತರ ಬಂದರುಗಳು, ಮತ್ತು 13 ಸಣ್ಣ ಬಂದರುಗಳನ್ನು]] ಹೊಂದಿದೆ, ಅವುಗಳಲ್ಲಿ 4 ವಲಸೆ ತಪಾಸಣಾ ಸೌಲಭ್ಯಗಳನ್ನು ಹೊಂದಿವೆ.<ref>{{cite web |url=https://www.thehindu.com/news/national/kerala/kollam-port-gets-icp-clearance/article68293607.ece |date=15 Jun 2024 |title=Kollam port gets ICP clearance |work=The Hindu |access-date=16 Jun 2024 |archive-date=16 June 2024 |archive-url=https://web.archive.org/web/20240616013704/https://www.thehindu.com/news/national/kerala/kollam-port-gets-icp-clearance/article68293607.ece |url-status=live }}</ref><ref>{{cite web |url=https://www.mha.gov.in/sites/default/files/2024-03/ICPList_05032024..pdf |date= |title=LIST OF IMMIGRATION CHECK POSTs |publisher=Ministry of Home Affairs - Govt. of India |access-date=16 Jun 2024 |archive-date=31 July 2024 |archive-url=https://web.archive.org/web/20240731204706/https://www.mha.gov.in/sites/default/files/2024-03/ICPList_05032024..pdf |url-status=live }}</ref> ರಾಜ್ಯದ ಪ್ರಮುಖ ಬಂದರು [[ಕೊಚ್ಚಿ ಬಂದರು|ಕೊಚ್ಚಿಯಲ್ಲಿದೆ]], ಇದು {{cvt|8.27|km2}} ವಿಸ್ತೀರ್ಣವನ್ನು ಹೊಂದಿದೆ.{{sfn|Chandran|2018|p=424}} [[ವಿಝಿನ್ಜಂ ಅಂತಾರಾಷ್ಟ್ರೀಯ ಸಮುದ್ರ ಬಂದರು ತಿರುವನಂತಪುರ]], ಇದನ್ನು ಪ್ರಸ್ತುತ ಪ್ರಮುಖ ಬಂದರಾಗಿ ವರ್ಗೀಕರಿಸಲಾಗಿದೆ, ಇತರೆ ನಿರ್ಮಾಣ ಹಂತದಲ್ಲಿರುವುದರಿಂದ ಹಂತ I ಮಾತ್ರ ಪೂರ್ಣಗೊಂಡಿದೆ.{{sfn|Chandran|2018|p=424}} ಇತರ ಮಧ್ಯಂತರ ಬಂದರುಗಳು [[ಬೇಪುರ]], [[ಕೊಲ್ಲಂ]], ಮತ್ತು [[ಅಝಿಕೋಡ್ ಮತ್ತು ಅಝಿಕ್ಕಲ್|ಅಝೀಕಲ್]].{{sfn|Chandran|2018|p=424}} ಉಳಿದ ಬಂದರುಗಳನ್ನು ಸಣ್ಣ ಬಂದರುಗಳಾಗಿ ವರ್ಗೀಕರಿಸಲಾಗಿದೆ, ಇವುಗಳಲ್ಲಿ [[ಮಂಜೇಶ್ವರಂ]], [[ಕಾಸರಗೋಡು]], [[ನೀಲೇಶ್ವರಂ]], [[ಕಣ್ಣೂರು]], [[ತಲಶ್ಶೇರಿ]], [[ವಡಕರ]], [[ಪೊನ್ನಾನಿ]], [[ಮುನಂಬಂ]], ಮನಕೋಡಂ, [[ಆಲಪ್ಪುಳ]], [[ಕಾಯಂಕುಲಂ]], [[ನೀಂದಕರ]], ಮತ್ತು [[ವಲಿಯತುರ]] ಸೇರಿವೆ.{{sfn|Chandran|2018|p=424}} [[ಕೇರಳ ಸಮುದ್ರ ಸಂಸ್ಥೆ]]ಯ ಪ್ರಧಾನ ಕಛೇರಿಯು [[ನೀಂದಕರ]]ದಲ್ಲಿದೆ, ಇದು [[ಕೊಡುಂಗಲ್ಲೂರು]] ನಲ್ಲಿ ಹೆಚ್ಚುವರಿ ಉಪಕೇಂದ್ರವನ್ನು ಸಹ ಹೊಂದಿದೆ.{{sfn|Chandran|2018|p=424}} ರಾಜ್ಯವು ಹಲವಾರು [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳನ್ನು]] ಹೊಂದಿದೆ, ಅವುಗಳನ್ನು ವಾಣಿಜ್ಯ [[ಒಳನಾಡಿನ ನ್ಯಾವಿಗೇಷನ್]] ಗೆ ಬಳಸಲಾಗುತ್ತದೆ. ಸಾರಿಗೆ ಸೇವೆಗಳನ್ನು ಮುಖ್ಯವಾಗಿ ದೇಶೀಯ ದೋಣಿಗಳು ಮತ್ತು ಪ್ರಯಾಣಿಕ ಹಡಗುಗಳು ಒದಗಿಸುತ್ತವೆ. ರಾಜ್ಯದಲ್ಲಿ 67 ನ್ಯಾವಿಗೇಬಲ್ ನದಿಗಳಿವೆ, ಒಳನಾಡಿನ ಜಲಮಾರ್ಗಗಳ ಒಟ್ಟು ಉದ್ದ {{convert|1687|km}} ಆಗಿದೆ.<ref name="google14">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA207 |access-date=18 November 2012 |year=2008 |publisher=Academic Foundation |isbn=978-8171885947 |page=207}}</ref> ಒಳನಾಡಿನ ನ್ಯಾವಿಗೇಷನ್ ವಿಸ್ತರಣೆಗೆ ಮುಖ್ಯ ಅಡೆತಡೆಗಳೆಂದರೆ; ಮಣ್ಣು ತುಂಬುವಿಕೆಯಿಂದ ಜಲಮಾರ್ಗಗಳಲ್ಲಿ ಆಳದ ಕೊರತೆ, ನ್ಯಾವಿಗೇಷನ್ ವ್ಯವಸ್ಥೆಗಳು ಮತ್ತು ದಂಡೆ ರಕ್ಷಣೆಯ ನಿರ್ವಹಣೆಯ ಕೊರತೆ, [[ನೀರಿನ ಹಯಸಿಂತ್]] ನ ವೇಗವರ್ಧಿತ ಬೆಳವಣಿಗೆ, ಆಧುನಿಕ ಒಳನಾಡಿನ ಕ್ರಾಫ್ಟ್ ಟರ್ಮಿನಲ್ಗಳ ಕೊರತೆ, ಮತ್ತು ಸರಕು ನಿರ್ವಹಣಾ ವ್ಯವಸ್ಥೆಯ ಕೊರತೆ.{{citation needed|date=October 2025}}
ಕೇರಳವು ಭಾರತದ ಮೊದಲ ಜಲ ಮೆಟ್ರೋವನ್ನು ಸಹ ಹೊಂದಿದೆ, ಇದನ್ನು 'ಕೊಚ್ಚಿ ವಾಟರ್ ಮೆಟ್ರೋ' ಎಂದು ಕರೆಯಲಾಗುತ್ತದೆ.<ref>{{Cite web |last=Prabhakaran |first=Aishwarya |date=2024-04-28 |title='Sustainable, scenic': Kochi Water Metro carves niche & new paths |url=https://www.newindianexpress.com/states/kerala/2024/Apr/28/sustainable-scenic-kochi-water-metro-carves-niche-new-paths |access-date=2025-03-08 |website=The New Indian Express |language=en}}</ref> ಕೊಚ್ಚಿ ವಾಟರ್ ಮೆಟ್ರೋ ಯೋಜನೆಯು 15 ಮಾರ್ಗಗಳನ್ನು ಗುರುತಿಸಿದೆ, 10 ದ್ವೀಪಗಳನ್ನು 78 ಕಿಮೀ ವ್ಯಾಪಿಸಿರುವ ಮಾರ್ಗಗಳ ಜಾಲದೊಂದಿಗೆ 78 ವೇಗದ ಮತ್ತು ಸಂಪೂರ್ಣವಾಗಿ ವಿದ್ಯುತ್ ಚಾಲಿತ ಹೈಬ್ರಿಡ್ ದೋಣಿಗಳ ತಂಡದೊಂದಿಗೆ ಸಂಪರ್ಕಿಸುತ್ತದೆ.<ref>{{Cite web |title=Kochi Water Metro {{!}} About Us |url=https://watermetro.co.in/about |access-date=2025-03-08 |website=Kochi Water Metro |language=en}}</ref>
{{convert|616|km}} ಉದ್ದದ ಪಶ್ಚಿಮ-ಕರಾವಳಿ ಕಾಲುವೆಯು [[ಕಾಸರಗೋಡು]]ವನ್ನು [[ಪೂವಾರ್]] ಗೆ ಸಂಪರ್ಕಿಸುವ ರಾಜ್ಯದ ಅತಿ ಉದ್ದದ ಜಲಮಾರ್ಗವಾಗಿದೆ.{{sfn|Chandran|2018|p=423}} ಇದನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ: {{convert|41|km}} ಉದ್ದದ [[ಕಾಸರಗೋಡು]]-[[ನೀಲೇಶ್ವರಂ]] ವ್ಯಾಪ್ತಿ, {{convert|188|km}} ಉದ್ದದ [[ನೀಲೇಶ್ವರಂ]]-[[ಕೋಝಿಕೋಡ್]] ವ್ಯಾಪ್ತಿ, {{convert|160|km}} [[ಕೋಝಿಕೋಡ್]]-[[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]] ವ್ಯಾಪ್ತಿ, {{convert|168|km}} ಉದ್ದದ [[ರಾಷ್ಟ್ರೀಯ ಜಲಮಾರ್ಗ 3]] ([[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]]-[[ಕೊಲ್ಲಂ]] ವ್ಯಾಪ್ತಿ), ಮತ್ತು {{convert|74|km}} ಉದ್ದದ [[ಕೊಲ್ಲಂ]]-[[ವಿಝಿನ್ಜಂ]] ವ್ಯಾಪ್ತಿ.<ref name="eco" /> ಪಶ್ಚಿಮ-ಕರಾವಳಿ ಕಾಲುವೆಯ ಒಂದು ಭಾಗವಾದ [[ಕೊನೊಲ್ಲಿ ಕಾಲುವೆ]]ಯು [[ಕೋಝಿಕೋಡ್]] ನಗರವನ್ನು [[ಪೊನ್ನಾನಿ]] ಮೂಲಕ [[ಕೊಚ್ಚಿ]] ಗೆ ಸಂಪರ್ಕಿಸುತ್ತದೆ, [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಮತ್ತು [[ತೃಶೂರ್ ಜಿಲ್ಲೆ|ತೃಶೂರ್]] ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು [[ವಡಕರ]] ದಲ್ಲಿ ಪ್ರಾರಂಭವಾಗುತ್ತದೆ.<ref name="hindu_jan08" /> ಇದನ್ನು 1848 ರಲ್ಲಿ ಆಗಿನ [[ಮಲಬಾರ್ ಜಿಲ್ಲೆ|ಮಲಬಾರಿನ]] [[ಜಿಲ್ಲಾ ಕಲೆಕ್ಟರ್]] ಎಚ್. ವಿ. ಕೊನೊಲ್ಲಿ ಅವರ ಆದೇಶದಂತೆ ನಿರ್ಮಿಸಲಾಯಿತು, ಆರಂಭದಲ್ಲಿ ಮಲಬಾರಿನ ಒಳನಾಡಿನಿಂದ [[ಕುಟ್ಟಿಯಾಡಿ]] ಮತ್ತು [[ಕೊರಪುಳ]] ನದಿ ವ್ಯವಸ್ಥೆಗಳ ಮೂಲಕ [[ಕಲ್ಲಾಯಿ]] ಬಂದರಿಗೆ ಸರಕುಗಳ ಚಲನೆಯನ್ನು ಸುಗಮಗೊಳಿಸಲು.<ref name="hindu_jan08">{{cite news |url=https://www.hindu.com/pp/2008/01/05/stories/2008010550730300.htm |archive-url=https://web.archive.org/web/20100923092718/https://www.hindu.com/pp/2008/01/05/stories/2008010550730300.htm |url-status=dead |archive-date=23 September 2010 |title=Reviving the historic Canoly Canal |date=5 January 2005 |work=[[The Hindu]] |access-date=16 August 2009}}</ref> ಒಂದು ಶತಮಾನಕ್ಕೂ ಹೆಚ್ಚು ಕಾಲ ಕೋಝಿಕೋಡ್ ಮತ್ತು ಕೊಚ್ಚಿ ನಡುವೆ [[ಪೊನ್ನಾನಿ]] ಮೂಲಕ ಸರಕು ಸಾಗಣೆಗೆ ಇದು ಮುಖ್ಯ ಜಲಮಾರ್ಗವಾಗಿತ್ತು.<ref name="hindu_jan08" /> ಕೇರಳದ ಇತರ ಪ್ರಮುಖ ಜಲಮಾರ್ಗಗಳಲ್ಲಿ [[ಆಲಪ್ಪುಳ]]-[[ಚಂಗನಾಶ್ಶೇರಿ]] ಕಾಲುವೆ, [[ಆಲಪ್ಪುಳ]]-[[ಕೋಟ್ಟಯಂ]]-[[ಅತಿರಂಪುಳ]] ಕಾಲುವೆ, ಮತ್ತು [[ಕೋಟ್ಟಯಂ]]-[[ವೈಕೋಂ]] ಕಾಲುವೆ ಸೇರಿವೆ.{{sfn|Chandran|2018|p=424}}
== ಜನಸಂಖ್ಯಾಶಾಸ್ತ್ರ ==
{{Main|ಕೇರಳದ ಜನಸಂಖ್ಯಾಶಾಸ್ತ್ರ}}
{{See also|ಕೇರಳದ ಜನಾಂಗೀಯ ಗುಂಪುಗಳು|ಕೇರಳದ ಜನರ ಪಟ್ಟಿ}}
[[File:Kerala Population Pyramid in 5-year age groups (2011 census).png|thumbnail|ಕೇರಳದ [[ಜನಸಂಖ್ಯಾ ಪಿರಮಿಡ್]]]]
ಕೇರಳವು ಭಾರತದ ಜನಸಂಖ್ಯೆಯ 2.8% ರಷ್ಟಿದೆ; 859 ವ್ಯಕ್ತಿಗಳ ಪ್ರತಿ km<sup>2</sup> ಸಾಂದ್ರತೆಯೊಂದಿಗೆ, ಅದರ ಭೂಮಿಯು ರಾಷ್ಟ್ರೀಯ ಸರಾಸರಿ 370 ವ್ಯಕ್ತಿಗಳ ಪ್ರತಿ km<sup>2</sup> ಗಿಂತ ಸುಮಾರು ಮೂರು ಪಟ್ಟು ಹೆಚ್ಚು ಜನನಿಬಿಡವಾಗಿದೆ.<ref name="Census 2011">{{cite web |title=Size, Growth Rate and Distribution of Population |url=https://www.censusindia.gov.in/2011-prov-results/data_files/india/Final_PPT_2011_chapter3.pdf |website=Census 2011 |publisher=Government of India |access-date=13 November 2015 |archive-date=23 September 2015 |archive-url=https://web.archive.org/web/20150923224858/http://www.censusindia.gov.in/2011-prov-results/data_files/india/Final_PPT_2011_chapter3.pdf |url-status=live }}</ref> {{As of|2011}}, ತಿರುವನಂತಪುರವು ಕೇರಳದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ.<ref name="Census2011cities">{{cite web|title=Provisional Population Totals, Census of India 2011|url=http://urbanaffairskerala.org/images/downloads/ulb_population2011.pdf|work=Population of the urban local bodies in Kerala (2011)|publisher=Government of Kerala|accessdate=4 December 2020|archive-date=24 September 2020|archive-url=https://web.archive.org/web/20200924173424/http://urbanaffairskerala.org/images/downloads/ulb_population2011.pdf|url-status=dead}}</ref> ರಾಜ್ಯದಲ್ಲಿ, ಜನಸಂಖ್ಯಾ ಬೆಳವಣಿಗೆಯ ಪ್ರಮಾಣವು ಭಾರತದಲ್ಲಿ ಅತ್ಯಂತ ಕಡಿಮೆಯಾಗಿದೆ, ಮತ್ತು 2011 ರಲ್ಲಿ 4.9% ರಷ್ಟಿರುವ ದಶಕೀಯ ಬೆಳವಣಿಗೆಯು ಅಖಿಲ ಭಾರತ ಸರಾಸರಿ 17.6% ರಷ್ಟಕ್ಕಿಂತ ಕಡಿಮೆಯಾಗಿದೆ.<ref name="Census 2011" /> ಕೇರಳದ ಜನಸಂಖ್ಯೆಯು 1951 ಮತ್ತು 1991 ರ ನಡುವೆ ಎರಡು ಪಟ್ಟು ಹೆಚ್ಚಾಗಿ 15.6 ಮಿಲಿಯನ್ ಜನರನ್ನು ಸೇರಿಸಿ 1991 ರಲ್ಲಿ 29.1 ಮಿಲಿಯನ್ ನಿವಾಸಿಗಳನ್ನು ತಲುಪಿತು; 2011 ರ ವೇಳೆಗೆ ಜನಸಂಖ್ಯೆಯು 33.3 ಮಿಲಿಯನ್ ಆಗಿತ್ತು.<ref name="Census 2011" /> ಕೇರಳದ ಕರಾವಳಿ ಪ್ರದೇಶಗಳು 2022 ವ್ಯಕ್ತಿಗಳ ಪ್ರತಿ km<sup>2</sup> ಜನಸಂಖ್ಯೆಯೊಂದಿಗೆ ಅತಿ ಹೆಚ್ಚು ಜನನಿಬಿಡವಾಗಿವೆ, ಇದು ರಾಜ್ಯದ ಒಟ್ಟಾರೆ ಜನಸಂಖ್ಯಾ ಸಾಂದ್ರತೆ 859 ವ್ಯಕ್ತಿಗಳ ಪ್ರತಿ km<sup>2</sup> ಗಿಂತ 2.5 ಪಟ್ಟು ಹೆಚ್ಚಾಗಿದ್ದು, ಪೂರ್ವದ ಬೆಟ್ಟಗಳು ಮತ್ತು ಪರ್ವತಗಳನ್ನು ತುಲನಾತ್ಮಕವಾಗಿ ವಿರಳವಾಗಿ ಜನಸಂಖ್ಯೆ ಹೊಂದಿರುವಂತೆ ಬಿಡುತ್ತದೆ.<ref name="kerala_fact_sheet">{{cite book |url=https://www.ncscm.org/cms/geo/pdf/research/kerala_fact_sheet.pdf |title=Shoreline change assessment for Kerala coast |publisher=National Centre for Sustainable Coastal Management, Ministry of Environment and Forests |author1=R Ramesh |author2=R Purvaja |author3=A Senthil Vel |access-date=30 May 2015 |archive-date=30 May 2015 |archive-url=https://web.archive.org/web/20150530204904/http://www.ncscm.org/cms/geo/pdf/research/kerala_fact_sheet.pdf |url-status=dead }}</ref> ಕೇರಳವು [[2011 ರ ಭಾರತದ ಜನಗಣತಿ]]ಯ ಪ್ರಕಾರ [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ ಪ್ರಮುಖ ರಾಜ್ಯವಾಗಿದ್ದು]] [[ಕೇರಳದಲ್ಲಿನ ನಗರ ಪ್ರದೇಶದ ಬೆಳವಣಿಗೆಯ ಪ್ರಕಾರ ನಗರಗಳ ಪಟ್ಟಿ|47.7% ನಗರ ಜನಸಂಖ್ಯೆಯನ್ನು]] ಹೊಂದಿದೆ.<ref name="ubn">{{Cite web |url=https://mohua.gov.in/cms/level-of-urbanisation.php |title=Level of Urbanisation in Indian States |date= |website=mohua.gov.in |publisher=Ministry of Housing and Urban Affairs, Government of India |access-date=7 February 2022 |archive-date=7 February 2022 |archive-url=https://web.archive.org/web/20220207105118/https://mohua.gov.in/cms/level-of-urbanisation.php |url-status=live }}</ref> ಸುಮಾರು 31.8 ಮಿಲಿಯನ್ ಕೇರಳೀಯರು ಪ್ರಧಾನವಾಗಿ ಮಲಯಾಳಿಗಳಾಗಿದ್ದಾರೆ.<ref name="Census 2011" /> ರಾಜ್ಯದ 321,000 ಸ್ಥಳೀಯ ಬುಡಕಟ್ಟು ''[[ಆದಿವಾಸಿ]]''ಗಳು, ಜನಸಂಖ್ಯೆಯ 1.1%, ಪೂರ್ವದಲ್ಲಿ ಕೇಂದ್ರೀಕೃತವಾಗಿವೆ.<ref name="Kalathil_2004">{{Cite book |author=Kalathil MJ |year=2004 |veditors=Nair PR, Shaji H |title=Withering Valli: Alienation, Degradation, and Enslavement of Tribal Women in Attappady |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621690 |url=https://www.cds.ac.in/krpcds/publication/downloads/66.pdf |access-date=29 December 2008 |archive-date=30 May 2015 |archive-url=https://web.archive.org/web/20150530205641/http://www.cds.ac.in/krpcds/publication/downloads/66.pdf |url-status=live }}</ref>{{rp|10–12}}
=== ಲಿಂಗ ===
ಕೇರಳದಲ್ಲಿ ಮಾತೃವಂಶೀಯ ಅನುವಂಶಿಕತೆಯ ಸಂಪ್ರದಾಯವಿದೆ, ಅಲ್ಲಿ ತಾಯಿ ಮನೆಯ ಮುಖ್ಯಸ್ಥೆಯಾಗಿರುತ್ತಾಳೆ.<ref>{{Cite web |date=5 March 2017 |title=International Women's Day 2017: Kerala and the myth of matriarchy |url=https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |access-date=16 July 2021 |website=Firstpost |archive-date=16 July 2021 |archive-url=https://web.archive.org/web/20210716051101/https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |url-status=live }}</ref> ಪರಿಣಾಮವಾಗಿ, ಕೇರಳದ ಮಹಿಳೆಯರು ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಮತ್ತು ಪ್ರಭಾವವನ್ನು ಹೊಂದಿದ್ದಾರೆ. ಇದು ಕೆಲವು ಪ್ರಭಾವಶಾಲಿ ಜಾತಿಗಳಲ್ಲಿ ಸಾಮಾನ್ಯವಾಗಿತ್ತು ಮತ್ತು ಹೆಣ್ಣು ಮಕ್ಕಳಿಗೆ ನೀಡಲಾಗುವ ಮೌಲ್ಯದಲ್ಲಿ ಒಂದು ಅಂಶವಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಬಡ ಕುಟುಂಬಗಳ ಹುಡುಗಿಯರಿಗೆ ಶಾಲೆಗಳನ್ನು ಪ್ರಾರಂಭಿಸಿದ ಕಾರಣ ಅವರು ಮಲಯಾಳಿ ಮಹಿಳೆಯರ ಮೇಲೆ ಪ್ರಭಾವ ಬೀರಿದರು.<ref>{{cite journal |author1-link=Tomila Lankina|author1=Lankina |author2=Tomila V. |author3=Getachew, Lullit |year=2013 |url=https://researchonline.lse.ac.uk/id/eprint/44929/ |title=Competitive religious entrepreneurs: Christian missionaries and female education in colonial and post-colonial India |journal=British Journal of Political Science |volume=43 |pages=103–31 |doi=10.1017/s0007123412000178 |s2cid=145185494 |archive-date=25 February 2021 |access-date=2 February 2016 |archive-url=https://web.archive.org/web/20210225144811/https://researchonline.lse.ac.uk/id/eprint/44929/ |url-status=live }}</ref> ಶಿಕ್ಷಣ ಮತ್ತು ಲಾಭದಾಯಕ ಉದ್ಯೋಗದಂತಹ ಮಹಿಳೆಯರಿಗೆ ಅವಕಾಶಗಳು ಸಾಮಾನ್ಯವಾಗಿ ಕಡಿಮೆ ಜನನ ದರಕ್ಕೆ ಕಾರಣವಾಗುತ್ತವೆ,<ref>{{Cite web |last=ലേഖകൻ |first=മാധ്യമം |date=10 July 2021 |title=ജനസംഖ്യാദിനം; അറിയാം 21 കാര്യങ്ങൾ|url=https://www.madhyamam.com/velicham/special-stories/july-11-world-population-day-821671 |access-date=16 July 2021 |website=Madhyamam |language=en |archive-date=16 July 2021 |archive-url=https://web.archive.org/web/20210716051106/https://www.madhyamam.com/velicham/special-stories/july-11-world-population-day-821671 |url-status=live }}</ref> ಇದು ಪ್ರತಿಯಾಗಿ, ಶಿಕ್ಷಣ ಮತ್ತು ಉದ್ಯೋಗವನ್ನು ಮಹಿಳೆಯರಿಗೆ ಹೆಚ್ಚು ಪ್ರವೇಶಿಸುವಂತೆ ಮತ್ತು ಹೆಚ್ಚು ಪ್ರಯೋಜನಕಾರಿಯಾಗಿಸುತ್ತದೆ. ಇದು ಸಮುದಾಯದ ಮಹಿಳೆಯರು ಮತ್ತು ಮಕ್ಕಳಿಗಾಗಿ ಮೇಲ್ಮುಖವಾದ ಸುರುಳಿಯನ್ನು ಸೃಷ್ಟಿಸುತ್ತದೆ, ಅದು ಮುಂದಿನ ಪೀಳಿಗೆಗೆ ರವಾನಿಸಲ್ಪಡುತ್ತದೆ. 1996 ರ ಮಾನವ ಅಭಿವೃದ್ಧಿ ವರದಿಯ ಪ್ರಕಾರ, ಕೇರಳದ [[ಲಿಂಗ ಅಭಿವೃದ್ಧಿ ಸೂಚ್ಯಂಕ]] 597 ಆಗಿತ್ತು; ಇದು ಭಾರತದ ಯಾವುದೇ ರಾಜ್ಯಕ್ಕಿಂತ ಹೆಚ್ಚಾಗಿತ್ತು. ಹೆಚ್ಚಿನ ಮಹಿಳಾ ಸಾಕ್ಷರತೆ, ಶಿಕ್ಷಣ, ಕೆಲಸದ ಭಾಗವಹಿಸುವಿಕೆ ಮತ್ತು ಜೀವಿತಾವಧಿಯ ಪ್ರಮಾಣಗಳು, ಅನುಕೂಲಕರ [[ಮಾನವ ಲಿಂಗಾನುಪಾತ|ಲಿಂಗಾನುಪಾತ]]ದ ಜೊತೆಗೆ, ಅದಕ್ಕೆ ಕೊಡುಗೆ ನೀಡಿವೆ.<ref name="Joseph">{{cite book |author=Ammu Joseph |editor=Oommen M.A. |year=1999 |title=Rethinking Development: Kerala's Development Experience |publisher=Concept Publishing Company |isbn=978-8170227656 |url=https://books.google.com/books?id=lzV3bQh-L94C |pages=479–86 |access-date=30 May 2015}}</ref>
ಕೇರಳದ ಲಿಂಗಾನುಪಾತ 1.084 (ಸ್ತ್ರೀಯರು ಪುರುಷರಿಗೆ) ಭಾರತದ ಉಳಿದ ಭಾಗಗಳಿಗಿಂತ ಹೆಚ್ಚಾಗಿದೆ; ಮಹಿಳೆಯರು ಪುರುಷರನ್ನು ಮೀರಿಸುವ ಏಕೈಕ ರಾಜ್ಯವಾಗಿದೆ.<ref name="Tharamangalam_2005" />{{rp|2}} ಶಿಕ್ಷಣವು ಒದಗಿಸುವ ಅವಕಾಶಗಳನ್ನು ಹೊಂದಿರುವಾಗ, ಉದಾಹರಣೆಗೆ ರಾಜಕೀಯ ಭಾಗವಹಿಸುವಿಕೆ, ಪ್ರಸ್ತುತ ಘಟನೆಗಳೊಂದಿಗೆ ನವೀಕೃತವಾಗಿರುವುದು, ಧಾರ್ಮಿಕ ಗ್ರಂಥಗಳನ್ನು ಓದುವುದು ಇತ್ಯಾದಿ, ಈ ಉಪಕರಣಗಳು ಇನ್ನೂ ಕೇರಳದ ಮಹಿಳೆಯರಿಗೆ ಸಂಪೂರ್ಣ, [[ಮಹಿಳೆಯರ ಹಕ್ಕುಗಳು|ಸಮಾನ ಹಕ್ಕುಗಳಾಗಿ]] ಅನುವಾದಗೊಂಡಿಲ್ಲ. ಮಹಿಳೆಯರನ್ನು ಅವರ ಸ್ವಂತ ಪ್ರಯೋಜನಕ್ಕಾಗಿ ನಿರ್ಬಂಧಿಸಬೇಕು ಎಂಬ ಸಾಮಾನ್ಯ ಮನೋಭಾವವಿದೆ. ರಾಜ್ಯದಲ್ಲಿ, ಸಾಮಾಜಿಕ ಪ್ರಗತಿಯ ಹೊರತಾಗಿಯೂ, ಲಿಂಗವು ಇನ್ನೂ [[ಸಾಮಾಜಿಕ ಚಲನಶೀಲತೆ]] ಯ ಮೇಲೆ ಪ್ರಭಾವ ಬೀರುತ್ತದೆ.<ref>Brenda Maddox mentions in: Maddox, Brenda. "A Marxist Paradise For Women?" New Statesman. (London, England: 1996) 128 no4440 30 January 14, 1999.</ref><ref>Antherjanam, Lalithambika. Cast Me Out If You Will. New York: The Feminist Press, 1997.</ref><ref>{{cite journal |last1=Jeffrey |first1=Robin |year=1987 |title=Governments and Culture: How Women Made Kerala Literate |journal=Pacific Affairs |volume=60 |issue=3 |pages=447–72 |doi=10.2307/2758883 |jstor=2758883}}</ref>
==== LGBT ಹಕ್ಕುಗಳು ====
{{Main|ಕೇರಳದಲ್ಲಿ LGBT ಹಕ್ಕುಗಳು}}
ಕೇರಳವು [[ಭಾರತ]]ದಲ್ಲಿ LGBT ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿದೆ.<ref>{{Cite web |url=https://www.huffingtonpost.in/2015/11/12/kerala-government-transge_n_8543410.html |title=Kerala Government Has Unveiled A Policy To Enforce Constitutional Rights Of Transgenders |website=The Huffington Post |date=12 November 2015 |access-date=28 June 2016 |archive-date=10 May 2017 |archive-url=https://web.archive.org/web/20170510075414/http://www.huffingtonpost.in/2015/11/12/kerala-government-transge_n_8543410.html |url-status=live }}</ref> ಕೇರಳವು ಟ್ರಾನ್ಸ್ಜೆಂಡರ್ ಸಮುದಾಯಕ್ಕಾಗಿ ಕಲ್ಯಾಣ ನೀತಿಯನ್ನು ರೂಪಿಸಿದ [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತದ ಮೊದಲ ರಾಜ್ಯಗಳಲ್ಲಿ]] ಒಂದಾಗಿದೆ. 2016 ರಲ್ಲಿ, ಕೇರಳ ಸರ್ಕಾರವು ಸರ್ಕಾರಿ ಆಸ್ಪತ್ರೆಗಳ ಮೂಲಕ ಉಚಿತ [[ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ]]ಯನ್ನು ಪರಿಚಯಿಸಿತು.<ref>{{Cite web |url=https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |title=Why Kerala's free sex-change surgeries will offer a new lifeline for the transgender community |last=Devasia |first=T. K. |website=Scroll.in |date=19 March 2016 |language=en-US |access-date=5 July 2019 |archive-date=29 June 2019 |archive-url=https://web.archive.org/web/20190629061452/https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |url-status=live }}</ref><ref>{{cite news |url=https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |title=After She-Taxi, Kerala to launch G-Taxi for transgenders |work=[[The Times of India]] |date=31 January 2016 |agency=PTI |access-date=25 March 2016 |location=Thiruvananthapuram |archive-date=29 October 2019 |archive-url=https://web.archive.org/web/20191029184249/https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |url-status=live }}</ref><ref>{{Cite web |url=https://www.dnaindia.com/india/report-how-kerala-left-the-country-behind-on-transgender-rights-2145017 |title=How Kerala left the country behind on transgender rights |website=dna |language=en-US |access-date=19 March 2016 |date=14 November 2015 |archive-date=29 June 2019 |archive-url=https://web.archive.org/web/20190629021111/https://www.dnaindia.com/india/report-how-kerala-left-the-country-behind-on-transgender-rights-2145017 |url-status=live }}</ref> [[ಕ್ವೀರಳ]] ಕೇರಳದ ಪ್ರಮುಖ LGBT ಸಂಸ್ಥೆಗಳಲ್ಲಿ ಒಂದಾಗಿದೆ. ಇದು LGBT ಜನರ ಅರಿವನ್ನು ಹೆಚ್ಚಿಸಲು ಮತ್ತು ಆರೋಗ್ಯ ಸೇವೆಗಳು, ಕೆಲಸದ ಸ್ಥಳ ನೀತಿಗಳು ಮತ್ತು ಶೈಕ್ಷಣಿಕ ಪಠ್ಯಕ್ರಮಕ್ಕೆ ಸಂಬಂಧಿಸಿದ ಸಂವೇದನಾಶೀಲತೆಯ ಬಗ್ಗೆ ಪ್ರಚಾರ ಮಾಡುತ್ತದೆ.<ref>{{Cite news |title=Affirming their right, they march with pride |url=https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |date=13 August 2017 |work=The Hindu |language=en-IN |issn=0971-751X |access-date=4 April 2022 |archive-date=28 December 2019 |archive-url=https://web.archive.org/web/20191228100119/https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |url-status=live }}</ref> 2010 ರಿಂದ, [[ಕೇರಳ ಕ್ವೀರ್ ಪ್ರೈಡ್]] ಅನ್ನು ಕೇರಳದ ವಿವಿಧ ನಗರಗಳಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತಿದೆ.<ref>{{cite web |url=https://timesofindia.indiatimes.com/india/Kerala-to-host-its-first-gay-parade/articleshow/6112610.cms |title=Kerala to host its first gay parade |website=The Times of India |date=30 June 2010}}</ref>
ಜೂನ್ 2019 ರಲ್ಲಿ, ಕೇರಳ ಸರ್ಕಾರವು ಟ್ರಾನ್ಸ್ಜೆಂಡರ್ ಸಮುದಾಯದ ಸದಸ್ಯರನ್ನು ಸರ್ಕಾರದ ಸಂವಹನಗಳಲ್ಲಿ "[[ಮೂರನೇ ಲಿಂಗ]]" ಅಥವಾ "ಇತರ ಲಿಂಗ" ಎಂದು ಕರೆಯಬಾರದು ಎಂದು ಹೊಸ ಆದೇಶವನ್ನು ಅಂಗೀಕರಿಸಿತು. ಬದಲಾಗಿ, "ಟ್ರಾನ್ಸ್ಜೆಂಡರ್" ಪದವನ್ನು ಬಳಸಬೇಕು. ಹಿಂದೆ, ಸರ್ಕಾರಿ ನಮೂನೆಗಳು ಮತ್ತು ದಾಖಲೆಗಳಲ್ಲಿ ಒದಗಿಸಲಾದ ಲಿಂಗ ಆಯ್ಕೆಗಳು ಪುರುಷ, ಮಹಿಳೆ ಮತ್ತು ಇತರ/ಮೂರನೇ ಲಿಂಗವನ್ನು ಒಳಗೊಂಡಿದ್ದವು.<ref>{{Cite web |url=https://www.thenewsminute.com/article/kerala-govt-passes-order-use-transgender-instead-thirdother-gender-104584 |website=www.thenewsminute.com |access-date=8 July 2019 |title=Kerala govt passes order to use 'transgender' instead of 'third/other gender' |date=30 June 2019}}</ref><ref>{{Cite news |url=https://www.thehindu.com/news/national/kerala/only-transgender-in-official-communication/article28235748.ece |title=Only 'transgender' in official communication |last=Roshni |first=R. k |date=30 June 2019 |work=The Hindu |access-date=8 July 2019 |language=en-IN |issn=0971-751X}}</ref>
=== ಮಾನವ ಅಭಿವೃದ್ಧಿ ಸೂಚ್ಯಂಕ ===
{{See also|ಕೇರಳ ಮಾದರಿ}}
[[File:2006 Human Development Index for India map by states, HDI data by GoI and UNDP India.svg|thumb|[[ಭಾರತ ಸರ್ಕಾರ]] ಮತ್ತು [[ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮ]]ದಿಂದ ಲೆಕ್ಕಾಚಾರ ಮಾಡಿದಂತೆ 2006 ರಲ್ಲಿ ಭಾರತೀಯ ರಾಜ್ಯಗಳಿಗೆ [[ಮಾನವ ಅಭಿವೃದ್ಧಿ ಸೂಚ್ಯಂಕ]] ನಕ್ಷೆ.<ref>{{cite web |url=https://www.in.undp.org/content/dam/india/docs/gendering_human_development_indices_summary_report.pdf |title=Gendering Human Development Indices |date=March 2009 |publisher=Ministry of Women and Child Development, Government of India with UNDP India}}</ref>]]
ಪ್ರಜಾಪ್ರಭುತ್ವದ ಕಮ್ಯುನಿಸ್ಟ್ ಸ್ಥಳೀಯ ಸರ್ಕಾರದ ಅಡಿಯಲ್ಲಿ, ಕೇರಳವು ಭಾರತೀಯ ಸರಾಸರಿಗಿಂತ ಹೆಚ್ಚು ಮುಂದುವರಿದ ಸಾಮಾಜಿಕ ಅಭಿವೃದ್ಧಿಯ ದಾಖಲೆಯನ್ನು ಸಾಧಿಸಿದೆ.<ref>{{Cite book |last=Lin |first=Chun |title=The transformation of Chinese socialism |date=2006 |publisher=[[Duke University Press]] |isbn=978-0-8223-3785-0 |location=Durham [N.C.] |pages=298 |oclc=63178961}}</ref> {{As of|2015}}, ಕೇರಳವು 0.770 ರ [[ಮಾನವ ಅಭಿವೃದ್ಧಿ ಸೂಚ್ಯಂಕ]] (HDI) ಅನ್ನು ಹೊಂದಿದೆ, ಇದು "ಹೆಚ್ಚಿನ" ವರ್ಗದಲ್ಲಿದೆ, ಇದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.<ref name="snhdi-gdl">{{cite web |title=Sub-national HDI – Area Database |url=https://hdi.globaldatalab.org/areadata/shdi/ |website=Global Data Lab |publisher=Institute for Management Research, Radboud University |access-date=25 September 2018 |language=en}}</ref> ಇದು 2007–08 ರಲ್ಲಿ 0.790 ಆಗಿತ್ತು<ref name="IDHR 2011">{{cite web |title=India Human Development Report 2011: Towards Social Inclusion |url=https://www.im4change.org/docs/340IHDR_Summary.pdf |publisher=Institute of Applied Manpower Research, [[Planning Commission (India)|Planning Commission]], [[Government of India]] |access-date=24 October 2014 |archive-date=21 October 2013 |archive-url=https://web.archive.org/web/20131021081939/http://www.im4change.org/docs/340IHDR_Summary.pdf |url-status=dead }}</ref> ಮತ್ತು ಇದು 0.920 ರ ಬಳಕೆ-ಆಧಾರಿತ HDI ಅನ್ನು ಹೊಂದಿತ್ತು, ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮವಾಗಿದೆ.<ref name="IDHR 2011" /> 19 ನೇ ಶತಮಾನದಿಂದ [[ಪ್ರಾಥಮಿಕ ಶಿಕ್ಷಣ|ಪ್ರಾಥಮಿಕ ಮಟ್ಟದ ಶಿಕ್ಷಣ]], [[ಆರೋಗ್ಯ ರಕ್ಷಣೆ]] ಮತ್ತು [[ಭಾರತದಲ್ಲಿ ಬಡತನ|ಬಡತನ]] ನಿರ್ಮೂಲನೆಗೆ ಸರ್ಕಾರದ ತುಲನಾತ್ಮಕವಾಗಿ ಹೆಚ್ಚಿನ ವೆಚ್ಚವು ರಾಜ್ಯವು ಅಸಾಧಾರಣವಾಗಿ ಹೆಚ್ಚಿನ HDI ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ;<ref name="UNDP2005">{{cite web |title=Kerala HDR 2005 |url=https://hdr.undp.org/en/reports/nationalreports/asiathepacific/india/name,3397,en.html |work=Human Development Report |publisher=United Nations |location=Asia and the Pacific |access-date=30 May 2015}}</ref><ref name="UNDP20054">{{cite web |title=Human Development Report 2005 |url=https://hdr.undp.org/en/media/HDR05_complete.pdf |work=Human Development Report |publisher=United Nations |location=Asia and the Pacific |access-date=14 November 2015 |archive-url=https://web.archive.org/web/20110310193948/https://hdr.undp.org/en/media/HDR05_complete.pdf |archive-date=10 March 2011 |url-status=dead}}</ref> ಈ ವರದಿಯನ್ನು ಕೇಂದ್ರ ಸರ್ಕಾರದ [[ಅನ್ವಯಿಕ ಜನಶಕ್ತಿ ಸಂಶೋಧನಾ ಸಂಸ್ಥೆ]] ತಯಾರಿಸಿತು.<ref name="hdi kerala chart">{{cite web |url=https://www.moneycontrol.com/news/wire-news/human-development-index-rose-21-per-cent-kerala-tops-chart_603650.html |title=Human Development Index rose 21 per cent; Kerala tops chart |date=21 October 2011 |work=[[CNBC]] |access-date=14 November 2015}}</ref><ref name="hdi kerala">{{Cite news |url=https://economictimes.indiatimes.com/news/economy/finance/growth-reforms-lift-living-standards-in-india-human-development-index/articleshow/10447495.cms |title=Growth, reforms lift living standards in India: Human development Index |date=22 October 2011 |access-date=14 November 2015 |work=Economic Times}}</ref> ಆದಾಗ್ಯೂ, ಅಭಿವೃದ್ಧಿ ಅಧ್ಯಯನ ಕೇಂದ್ರವು ತಯಾರಿಸಿದ ಮಾನವ ಅಭಿವೃದ್ಧಿ ವರದಿ 2005, ರಾಜ್ಯದಲ್ಲಿ ಮಾನವ ಅಭಿವೃದ್ಧಿಯ ಪ್ರಗತಿಯು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡಲು ಪ್ರಾರಂಭಿಸಿದ್ದರಿಂದ ರಾಜ್ಯಕ್ಕೆ ಸಮಾವೇಶಕ ಅಭಿವೃದ್ಧಿಯ ಗುಣಾತ್ಮಕ ಹಂತವನ್ನು ಊಹಿಸುತ್ತದೆ.<ref name="UNDP2005" /> ಕೇರಳವು ಭಾರತದಲ್ಲಿ ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರ ರಾಜ್ಯವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ.<ref>{{cite book |author1=Sunil Mani |author2=Anjini Kochar |title=Kerala's Economy: Crouching Tiger, Sacred Cows |url=https://books.google.com/books?id=wKeRAtvXl8oC&pg=PA121 |access-date=24 September 2012 |year=2006 |publisher=D.C. Books |isbn=978-8126413591 |page=121}}</ref>
2011 ರ ಜನಗಣತಿಯ ಪ್ರಕಾರ, ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಹೆಚ್ಚು [[ಸಾಕ್ಷರತಾ ಪ್ರಮಾಣ]] (94%) ಹೊಂದಿದೆ. 2018 ರಲ್ಲಿ, ಭಾರತದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ನಡೆಸಿದ 2018 ರ ಸಾಕ್ಷರತಾ ಸಮೀಕ್ಷೆಯಲ್ಲಿ ಸಾಕ್ಷರತಾ ಪ್ರಮಾಣವನ್ನು 96.2% ಎಂದು ಲೆಕ್ಕಹಾಕಲಾಯಿತು.<ref name="Literacy survey_2018">{{Cite web |date=8 September 2020 |title=Literacy Survey, India (2017–18) |url=https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |access-date=9 September 2020 |publisher=Firstpost |archive-date=2 November 2021 |archive-url=https://web.archive.org/web/20211102214441/https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |url-status=live }}</ref> [[ಕೋಟ್ಟಯಂ ಜಿಲ್ಲೆ]]ಯಲ್ಲಿ, ಸಾಕ್ಷರತಾ ಪ್ರಮಾಣವು 97% ಆಗಿತ್ತು.<ref>{{Cite web |url=https://www.pincodeindia.net/literacy-rate-of-kerala.php |title=Literacy Rate in Kerala – 2018 |access-date=7 February 2022 |archive-date=7 February 2022 |archive-url=https://web.archive.org/web/20220207105113/https://www.pincodeindia.net/literacy-rate-of-kerala.php |url-status=dead }}</ref><ref name="pc-census2011">{{Cite web |title=Census 2011 (Final Data) – Demographic details, Literate Population (Total, Rural & Urban) |url=https://planningcommission.gov.in/data/datatable/data_2312/DatabookDec2014%20307.pdf |url-status=dead |archive-url=https://web.archive.org/web/20180127163347/https://planningcommission.gov.in/data/datatable/data_2312/DatabookDec2014%20307.pdf |archive-date=27 January 2018 |access-date=3 October 2018 |website=planningcommission.gov.in |publisher=Planning Commission, Government of India}}</ref><ref name="IBNLiteracy2013" /> ಕೇರಳದಲ್ಲಿ [[ಜೀವಿತಾವಧಿ]]ಯು 74 ವರ್ಷಗಳು, {{As of|2011|lc=y}} ಭಾರತದಲ್ಲಿ ಅತಿ ಹೆಚ್ಚಿನದಾಗಿದೆ.<ref>{{cite news |url=https://thehindu.com/news/national/kerala/kerala-tops-in-literacy-rate-health-services/article2562589.ece |location=Chennai, India |work=The Hindu |title=Kerala tops in literacy rate, health services |date=22 October 2011 |first=J. |last=Balaji |access-date=30 May 2015}}</ref> ಕೇರಳದ ಗ್ರಾಮೀಣ ಬಡತನ ಪ್ರಮಾಣವು 59% (1973–1974) ರಿಂದ 12% (1999–2010) ಕ್ಕೆ ಇಳಿದಿದೆ; ಒಟ್ಟಾರೆ (ನಗರ ಮತ್ತು ಗ್ರಾಮೀಣ) ಬಡತನ ಪ್ರಮಾಣವು 1970 ಮತ್ತು 2000 ರ ದಶಕಗಳ ನಡುವೆ 47% ರಷ್ಟು ಕಡಿಮೆಯಾಗಿದ್ದು, ಭಾರತದಲ್ಲಿ ಒಟ್ಟಾರೆ ಬಡತನ ಪ್ರಮಾಣದಲ್ಲಿ 29% ರಷ್ಟು ಕುಸಿತಕ್ಕೆ ವಿರುದ್ಧವಾಗಿದೆ.<ref>{{cite book |title=Human Development Report 2005 Kerala |publisher=State Planning Board |author=Centre for Development Studies Thiruvananthapuram |year=2006 |location=Thiruvananthapuram, Kerala}}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6" /> 2013 ರ ಟೆಂಡೂಲ್ಕರ್ ಸಮಿತಿ ವರದಿಯು ಗ್ರಾಮೀಣ ಮತ್ತು ನಗರ ಕೇರಳದಲ್ಲಿ ಬಡತನ ರೇಖೆಯ ಕೆಳಗೆ ವಾಸಿಸುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಕ್ರಮವಾಗಿ 9.1% ಮತ್ತು 5.0% ಎಂದು ಅಂದಾಜಿಸಿದೆ.<ref>{{cite web |title=Press Note on Poverty Estimates, 2011–12 |url=https://planningcommission.nic.in/news/pre_pov2307.pdf |website=planningcommission.gov.in |publisher=Planning Commission, Government of India |access-date=27 November 2018 |archive-url=https://web.archive.org/web/20140628120737/https://planningcommission.nic.in/news/pre_pov2307.pdf |archive-date=28 June 2014 |url-status=dead}}</ref> ಈ ಬದಲಾವಣೆಗಳು ಹೆಚ್ಚಾಗಿ 19 ನೇ ಶತಮಾನದ ಕೊನೆಯಲ್ಲಿ ಕೊಚ್ಚಿ ಮತ್ತು ತಿರುವಾಂಕೂರು ಸಾಮ್ರಾಜ್ಯಗಳು ಸಾಮಾಜಿಕ ಕಲ್ಯಾಣವನ್ನು ಹೆಚ್ಚಿಸಲು ಪ್ರಾರಂಭಿಸಿದ ಪ್ರಯತ್ನಗಳಿಂದ ಉಂಟಾಗಿವೆ.<ref>{{Cite report |title=EFA [Education for All] Global Monitoring Report |url=https://www.unesco.org/education/efa_report/chapter4.pdf |year=2003 |archive-url=https://web.archive.org/web/20040923014605/https://www.unesco.org/education/efa_report/chapter4.pdf |archive-date=23 September 2004 |page=156 |publisher=[[UNESCO]] |access-date=4 April 2022}}</ref><ref>{{Cite journal |author=Kutty VR |year=2000 |title=Historical analysis of the development of health care facilities in Kerala State, India |journal=Health Policy and Planning |volume=15 |issue=1 |pages=103–09 |doi=10.1093/heapol/15.1.103 |pmid=10731241 |s2cid=7634887 |doi-access=free }}</ref> ಈ ಗಮನವನ್ನು ಕೇರಳದ ಸ್ವಾತಂತ್ರ್ಯೋತ್ತರ ಸರ್ಕಾರವು ಉಳಿಸಿಕೊಂಡಿದೆ.<ref name="Brenkert_Malone_2003" /><ref name="Varma_2005">{{Cite news |author=Varma MS |title=Nap on HDI scores may land Kerala in an equilibrium trap |work=The Financial Express |date=4 April 2005 |access-date=12 November 2007 |url=https://www.financialexpress.com/old/print.php?content_id=86925 |archive-url=https://web.archive.org/web/20080617134031/https://www.financialexpress.com/old/print.php?content_id=86925 |archive-date=17 June 2008}}</ref>{{rp|48}} ಕೇರಳವು [[NITI ಆಯೋಗ]]ದ ಸುಸ್ಥಿರ ಅಭಿವೃದ್ಧಿ ಗುರಿಗಳ ಡ್ಯಾಶ್ಬೋರ್ಡ್ ಮತ್ತು [[ಭಾರತೀಯ ರಿಸರ್ವ್ ಬ್ಯಾಂಕ್]]ನ ''ಇಂಡಿಯನ್ ಎಕಾನಮಿಯ ಹ್ಯಾಂಡ್ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್'' ಪ್ರಕಾರ ಭಾರತದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿದೆ]].<ref>{{Cite web |title=SDG India – Index 2021–22 – Partnerships in the Decade of Action |url=https://sdgindiaindex.niti.gov.in/#/ranking |date=2021 |url-status=dead |archive-url=https://web.archive.org/web/20210613021943/https://niti.gov.in/writereaddata/files/SDG_3.0_Final_04.03.2021_Web_Spreads.pdf |archive-date=13 June 2021 |website=[[NITI Aayog]] |access-date=29 September 2024}}</ref><ref>{{Cite web |title=Handbook of Statistics on Indian Economy. Table 154 : Number and Percentage of Population Below Poverty Line. (2011-12) |url=https://www.rbi.org.in/scripts/PublicationsView.aspx?id=19887 |access-date=13 September 2021 |website=Reserve Bank of India |archive-date=13 September 2021 |archive-url=https://web.archive.org/web/20210913133540/https://www.rbi.org.in/scripts/PublicationsView.aspx?id=19887 |url-status=live }}</ref>
ಕೇರಳವು [[ಕೆನಡಾ]], [[ಜಪಾನ್]], ಮತ್ತು [[ನಾರ್ವೆ]] ನಂತಹ [[ಅಭಿವೃದ್ಧಿ ಹೊಂದಿದ ರಾಷ್ಟ್ರಗಳ]] ವಿಶಿಷ್ಟವಾದ "[[ಜನಸಂಖ್ಯಾ ಪರಿವರ್ತನೆ]]" ಯನ್ನು ಅನುಭವಿಸಿದೆ.<ref name="Tharamangalam_2005" />{{rp|1}} 2005 ರಲ್ಲಿ, 11.2% ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು.<ref name="Varma_2005" /> 2023 ರಲ್ಲಿ, ಬಿಬಿಸಿಯು ಕೇರಳದಿಂದ ವಲಸೆಯಿಂದ ಉಂಟಾದ ಸಮಸ್ಯೆಗಳು ಮತ್ತು ಪ್ರಯೋಜನಗಳ ಬಗ್ಗೆ ವರದಿ ಮಾಡಿತು, ಕುಂಬನಾಡ್ ಗ್ರಾಮದ ಮೇಲೆ ಕೇಂದ್ರೀಕರಿಸಿತು.<ref>{{cite web |url=https://www.bbc.co.uk/news/world-asia-india-64936519 |title=Kerala: A ghost town in the world's most populated country |last= |first= |date=26 March 2023 |website=www.bbc.co.uk |publisher=BBC News |access-date=26 March 2023}}</ref>
2004 ರಲ್ಲಿ, ಜನನ ದರವು 18 ಪ್ರತಿ 1,000 ಕ್ಕೆ ಕಡಿಮೆಯಾಗಿತ್ತು.<ref name="Kutty_2004_6">{{Cite book |author=Kutty VR |veditors=Nair PR, Shaji H |year=2004 |title=Why low birth weight (LBW) is still a problem in Kerala: A preliminary exploration |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621607 |access-date=12 November 2007 |url=https://www.cds.ac.in/krpcds/publication/downloads/57.pdf |page=6}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 1.6 ರ ಒಟ್ಟು ಫಲವತ್ತತೆ ಪ್ರಮಾಣವನ್ನು (TFR) ಹೊಂದಿತ್ತು. ಮಲಪ್ಪುರಂ ಜಿಲ್ಲೆಯನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳು 2 ಕ್ಕಿಂತ ಕಡಿಮೆ ಫಲವತ್ತತೆ ಪ್ರಮಾಣವನ್ನು ಹೊಂದಿದ್ದವು. ಫಲವತ್ತತೆ ಪ್ರಮಾಣವು [[ಮಲಪ್ಪುರಂ ಜಿಲ್ಲೆ]]ಯಲ್ಲಿ (2.2) ಅತಿ ಹೆಚ್ಚು ಮತ್ತು [[ಪತ್ತನಂತಿಟ್ಟ ಜಿಲ್ಲೆ]]ಯಲ್ಲಿ (1.3) ಅತಿ ಕಡಿಮೆಯಾಗಿದೆ.<ref>{{cite web |title=Fertility at District Level in India:Lessons from the 2011 Census |url=https://www.ceped.org/IMG/pdf/ceped_wp30.pdf&ved=2ahUKEwio7YjXv9nsAhVJzjgGHUy2BTE4FBAWMAR6BAgJEAE&usg=AOvVaw2PL5xTsjiaBMS96pAhMEX1 |author=Christophe Z Guilmoto and Irudaya Rajan |page=31 |format=PDF |access-date=29 October 2020}}</ref> 2001 ರಲ್ಲಿ, ಮುಸ್ಲಿಮರು 2.6 ರ TFR ಅನ್ನು ಹೊಂದಿದ್ದರು, ಹಿಂದೂಗಳಿಗೆ 1.5 ಮತ್ತು ಕ್ರೈಸ್ತರಿಗೆ 1.7 ರಷ್ಟಿತ್ತು.<ref>{{Cite news |url=https://www.deccanchronicle.com/nation/current-affairs/170316/fertility-rate-to-even-out-in-20-years-in-kerala.html |title=Fertility rate to even out in 20 years in Kerala |website=Deccan Chronicle |access-date=29 October 2020}}</ref> CMS ಇಂಡಿಯನ್ ಕರಪ್ಷನ್ ಸ್ಟಡಿ (CMS-ICS) ನಡೆಸಿದ ಸಮೀಕ್ಷೆಗಳ ಪ್ರಕಾರ ರಾಜ್ಯವು "ಅತ್ಯಂತ ಕಡಿಮೆ ಭ್ರಷ್ಟ ಭಾರತೀಯ ರಾಜ್ಯ" ಎಂದೂ ಪರಿಗಣಿಸಲ್ಪಟ್ಟಿದೆ<ref>{{Cite web |url=https://www.onmanorama.com/news/nation/2017/04/28/kerala-least-corrupt-states-india-karnatak-highest-petty-corruptionkerala-least-corrupt-states-india-karnatak-highest-petty-corruption.html |title=Kerala among the least corrupt states in India, Karnataka tops the list: study |website=OnManorama}}</ref> ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ (2005)<ref>{{cite web |title=India Corruption Study – 2005 |publisher=[[Transparency International]] |date=June 2005 |access-date=11 November 2007 |url=https://archive.transparency.org/regional_pages/asia_pacific/newsroom/news_archive2/india_corruption_study_2005 |archive-url=https://web.archive.org/web/20130413044112/https://archive.transparency.org/regional_pages/asia_pacific/newsroom/news_archive2/india_corruption_study_2005 |url-status=dead |archive-date=13 April 2013}}</ref> ಮತ್ತು ''ಇಂಡಿಯಾ ಟುಡೇ'' (1997).<ref>{{cite book |author1=Jean Dreze |author2=Amartya Sen |title=India: Development and Participation |url=https://books.google.com/books?id=UpOl35r8UHQC&pg=PA368 |access-date=24 September 2012 |year=2002 |publisher=Oxford University Press |isbn=978-0-19-925749-2 |page=368}}</ref> ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಕಡಿಮೆ [[ಕೊಲೆ]] ಪ್ರಮಾಣವನ್ನು ಹೊಂದಿದೆ, 2011 ರಲ್ಲಿ 1.1 ಪ್ರತಿ 100,000 ಕ್ಕೆ.<ref name="ncrb">{{cite web |url=https://ncrb.nic.in/CD-CII2011/cii-2011/Table%203.1.pdf |archive-url=https://web.archive.org/web/20130928024506/https://ncrb.nic.in/CD-CII2011/cii-2011/Table%203.1.pdf |url-status=dead |archive-date=28 September 2013 |date=21 June 2012 |title=Table–3.1 Incidence And Rate Of Violent Crimes During 2011 |access-date=24 September 2014}}</ref> ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ, ಹೆಚ್ಚಿನ [[ಆತ್ಮಹತ್ಯೆ]] ಪ್ರಮಾಣ, ಕಡಿಮೆ [[ಗಳಿಸಿದ ಆದಾಯ]]ದ ಪಾಲು, [[ಬಾಲ್ಯ ವಿವಾಹ]],<ref>{{Cite news |title=Child marriages remain Kerala's secret shame |url=https://www.thehindu.com/news/national/kerala/child-marriages-remain-keralas-secret-shame/article7613216.ece |newspaper=The Hindu |date=4 September 2015 |access-date=4 September 2015 |issn=0971-751X}}</ref> [[ಲೈಂಗಿಕ ಕಿರುಕುಳ]] ದೂರುಗಳು ಮತ್ತು ಸೀಮಿತ ಸ್ವಾತಂತ್ರ್ಯದಂತಹ ಕೆಲವು ನಕಾರಾತ್ಮಕ ಅಂಶಗಳು ವರದಿಯಾಗಿವೆ.<ref name="Joseph" /> ಕೇರಳದಲ್ಲಿ ಬಾಲ್ಯ ವಿವಾಹವು ಕಡಿಮೆಯಾಗಿದೆ. ಮಲಪ್ಪುರಂ ಜಿಲ್ಲೆಯು ಅತಿ ಹೆಚ್ಚು ಬಾಲ್ಯ ವಿವಾಹಗಳನ್ನು ಹೊಂದಿದೆ ಮತ್ತು ಅಂತಹ ಪ್ರಕರಣಗಳ ಸಂಖ್ಯೆಯು ಮಲಪ್ಪುರಂನಲ್ಲಿ ಹೆಚ್ಚುತ್ತಿದೆ. ಬಾಲ್ಯ ವಿವಾಹಗಳು ವಿಶೇಷವಾಗಿ [[ಕೇರಳದಲ್ಲಿ ಮುಸ್ಲಿಮರಲ್ಲಿ ಬಾಲ್ಯ ವಿವಾಹ|ಮುಸ್ಲಿಂ ಸಮುದಾಯದಲ್ಲಿ]] ಹೆಚ್ಚಾಗಿದೆ.<ref>{{cite news |last=Naha |first=Abdul Latheef |title=Child marriage cases go up in Malappuram |url=https://www.thehindu.com/news/national/kerala/child-marriage-cases-go-up-in-malappuram/article22751598.ece |date=18 February 2018 |newspaper=The Hindu |access-date=31 December 2019}}</ref><ref>{{Cite web |url=https://www.onmanorama.com/news/kerala/2018/10/26/child-marriages-shoot-up-in-the-most-unlikely-places-in-kerala.html |title=Child marriages shoot up in the most unlikely places in Kerala |website=OnManorama}}</ref> 2019 ರಲ್ಲಿ, ಕೇರಳವು ಭಾರತದಲ್ಲಿ ಅತಿ ಹೆಚ್ಚು ಮಕ್ಕಳ ಲೈಂಗಿಕ ದುರುಪಯೋಗ ದೂರುಗಳನ್ನು ದಾಖಲಿಸಿತು.<ref>{{cite news |last=Natu |first=Nitasha |title=Kerala No. 1 in child sex abuse complaints; Tamil Nadu, Maharashtra follow |url=https://timesofindia.indiatimes.com/india/kerala-no-1-in-child-sex-abuse-complaints-tamil-nadu-maharashtra-follow/articleshow/72972619.cms |date=25 December 2019 |newspaper=The Time of India |access-date=31 December 2019}}</ref>
2015 ರಲ್ಲಿ, ಕೇರಳವು ಯಾವುದೇ ರಾಜ್ಯದ ಅತಿ ಹೆಚ್ಚು ಶಿಕ್ಷೆಯ ಪ್ರಮಾಣವನ್ನು ಹೊಂದಿತ್ತು, 77% ಕ್ಕಿಂತ ಹೆಚ್ಚು.<ref>{{cite news |url=https://timesofindia.indiatimes.com/india/Conviction-rate-up-Kerala-tops-with-over-77/articleshow/48408220.cms |location=New Delhi, India |work=The Times of India |title=Conviction rate up, Kerala tops with over 77% link |date=9 August 2015 |access-date=14 November 2015}}</ref> ಕೇರಳವು ಗ್ರಾಮೀಣ ಭಾರತದಲ್ಲಿ ಅತಿ ಕಡಿಮೆ ಮನೆಯಿಲ್ಲದ ಜನರ ಪ್ರಮಾಣವನ್ನು ಹೊಂದಿದೆ, <0.1%,<ref>{{cite news |url=https://timesofindia.indiatimes.com/india/Population-of-homeless-in-rural-India-dips/articleshow/26981896.cms |location=India |work=The Times of India |title=Population of homeless in rural India dips |date=7 December 2013 |access-date=14 November 2015}}</ref> ಮತ್ತು ರಾಜ್ಯವು ಮೊದಲ "ಶೂನ್ಯ ಮನೆಯಿಲ್ಲದ ರಾಜ್ಯ" ವಾಗುವ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ, ಇದರ ಜೊತೆಗೆ ಅದರ ಶ್ಲಾಘನೀಯ "ಶೂನ್ಯ ಭೂರಹಿತ ಯೋಜನೆ" ಯನ್ನು ಹೊಂದಿದೆ, ಖಾಸಗಿ ಸಂಸ್ಥೆಗಳು ಮತ್ತು ವಲಸೆ ಮಲಯಾಳಿ ಸಮುದಾಯವು ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸಲು ಯೋಜನೆಗಳಿಗೆ ಹಣಕಾಸು ಒದಗಿಸುತ್ತಿದೆ.<ref>{{cite news |url=https://www.thehindu.com/news/national/kerala/cm-told-to-pursue-zero-homeless-kerala-project/article5309749.ece |location=Pathanamthitta, India |work=The Hindu |title=CM told to pursue Zero Homeless Kerala project link |date=3 November 2013}}</ref> ರಾಜ್ಯವು [[ಭಾರತ ರಾಜ್ಯ ಹಸಿವು ಸೂಚ್ಯಂಕ]]ದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು, ಇದು [[ಪಂಜಾಬ್, ಭಾರತ|ಪಂಜಾಬ್]] ನ ನಂತರದ ಸ್ಥಾನದಲ್ಲಿದೆ. 2015 ರಲ್ಲಿ ಕೇರಳವು ಇ-ಗವರ್ನೆನ್ಸ್ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಮೊದಲ "ಸಂಪೂರ್ಣ ಡಿಜಿಟಲ್ ರಾಜ್ಯ" ವಾಯಿತು.<ref>{{cite news |url=https://timesofindia.indiatimes.com/india/Kerala-becomes-Indias-first-complete-digital-state/articleshow/48494982.cms |location=New Delhi, India |work=The Times of India |title=Kerala-becomes-Indias-first-complete-digital-state link |date=15 August 2015}}</ref>
=== ಆರೋಗ್ಯ ರಕ್ಷಣೆ ===
{{Multiple image
| direction = vertical
| width = 220
| image1 = Regional Cancer Centre, Trivandrum.jpg
| caption1 = [[ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ, ತಿರುವನಂತಪುರ]]
}}
{{See also|ಕೇರಳದ ಸರ್ಕಾರಿ ಆಸ್ಪತ್ರೆಗಳ ಪಟ್ಟಿ}}
ಕೇರಳವು [[ಸಾರ್ವತ್ರಿಕ ಆರೋಗ್ಯ ರಕ್ಷಣೆ]] ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಪ್ರವರ್ತಕವಾಗಿದೆ.<ref>{{cite news |last1=Maya |first1=C |title=The road to universal health care in State |url=https://www.thehindu.com/todays-paper/tp-national/tp-kerala/the-road-to-universal-health-care-in-state/article5450319.ece |access-date=14 November 2015 |work=The Hindu |date=12 December 2013}}</ref> [[ಉಪ-ಬದಲಿ ಫಲವತ್ತತೆ]] ಮಟ್ಟ ಮತ್ತು [[ಶಿಶು ಮರಣ ಪ್ರಮಾಣ]]ವು ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ, ಇದು 12<ref name="Brenkert_Malone_2003" /><ref name="Kutty_2004_6" />{{rp|49}} ರಿಂದ 14<ref name="Krishnaswami_2004">{{Cite book |author=Krishnaswami P |veditors=Neelakantan S, Nair PR, Shaji H |year=2004 |title=Morbidity Study: Incidence, Prevalence, Consequences, and Associates |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621669 |url=https://www.cds.ac.in/krpcds/publication/downloads/63.pdf |access-date=31 December 2008}}</ref>{{rp|5}} ಪ್ರತಿ 1,000 ಜೀವಂತ ಜನನಗಳಿಗೆ ಸಾವುಗಳು ಎಂದು ಅಂದಾಜಿಸಲಾಗಿದೆ; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16 ರ ಪ್ರಕಾರ, ಇದು 6 ಕ್ಕೆ ಇಳಿದಿದೆ.<ref>{{Cite news |url=https://timesofindia.indiatimes.com/india/kerala-as-good-as-us-oecd-in-saving-newborn-children/articleshow/57438366.cms |title=Kerala as good as US, OECD in saving newborn children |work=The Times of India |access-date=9 March 2017}}</ref> [[ಲಿಯಾನ್ ಯಿಂಗ್ ಚೌ|ಲಿಯಾನ್]] ಫೌಂಡೇಶನ್, [[ಸಿಂಗಾಪುರ]]-ಆಧಾರಿತ ಪರೋಪಕಾರಿ ಸಂಸ್ಥೆ, ನಿಯೋಜಿಸಿದ ಅಧ್ಯಯನದ ಪ್ರಕಾರ, ಗಂಭೀರ ಅನಾರೋಗ್ಯದ ರೋಗಿಗಳಿಗೆ ರಾಜ್ಯದ ಉಪಶಮನ ಆರೈಕೆಯನ್ನು ಒದಗಿಸುವ ಆಧಾರದ ಮೇಲೆ ಕೇರಳವನ್ನು ಭಾರತದಲ್ಲಿ ಸಾಯಲು ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗಿದೆ.<ref>{{cite news |last1=Patel |first1=Atish |title=Why Kerala is the best place in India to die |url=https://www.bbc.com/news/world-asia-india-36137285 |date=4 May 2016}}</ref> ಆದಾಗ್ಯೂ, ಕೇರಳದ [[ಅನಾರೋಗ್ಯ ಪ್ರಮಾಣ]]ವು ಯಾವುದೇ ಇತರ ಭಾರತೀಯ ರಾಜ್ಯಕ್ಕಿಂತ ಹೆಚ್ಚಾಗಿದೆ—118 (ಗ್ರಾಮೀಣ) ಮತ್ತು 88 (ನಗರ) ಪ್ರತಿ 1,000 ಜನರಿಗೆ. ಅನುಗುಣವಾದ ಅಂಕಿಅಂಶಗಳು ಅಖಿಲ ಭಾರತಕ್ಕೆ 55 ಮತ್ತು 54 ಪ್ರತಿ 1,000 ಆಗಿತ್ತು {{As of|2005|lc=y}}.<ref name="Krishnaswami_2004" />{{rp|5}} ಕೇರಳದ 13.3% [[ಕಡಿಮೆ ಜನನ ತೂಕ]] [[ಪ್ರಪಂಚದ ಮೊದಲ ರಾಷ್ಟ್ರಗಳಲ್ಲಿ]] ಅನೇಕಕ್ಕಿಂತ ಹೆಚ್ಚಾಗಿದೆ.<ref name="Kutty_2004_6" /> 50% ಕ್ಕಿಂತ ಹೆಚ್ಚು ಜನರು ಅವಲಂಬಿಸಿರುವ 3 ಮಿಲಿಯನ್ [[ನೀರಿನ ಬಾವಿ]]ಗಳ ನಡುವೆ [[ನೀರಿನಿಂದ ಹರಡುವ ರೋಗ]]ಗಳಾದ [[ಅತಿಸಾರ]], [[ಭೇದಿ]], [[ಹೆಪಟೈಟಿಸ್]], ಮತ್ತು [[ಟೈಫಾಯಿಡ್]] ಏಕಾಏಕಿ ಸಮಸ್ಯೆಯು [[ನೈರ್ಮಲ್ಯ ಒಳಚರಂಡಿ|ಒಳಚರಂಡಿ]] ಕೊರತೆಯಿಂದ ಉಲ್ಬಣಗೊಂಡಿದೆ.<ref name="Roy_2004">{{Cite journal |author=Roy MKP |year=2004 |title=Water quality and health status in Kollam Municipality |journal=Centre for Development Studies |url=https://services.iriskf.org/data/articles/Document1168200520.8355524.pdf |access-date=28 December 2008 |archive-date=21 December 2016 |archive-url=https://web.archive.org/web/20161221084934/http://services.iriskf.org/data/articles/Document1168200520.8355524.pdf |url-status=dead }}</ref>{{rp|5–7}} 2017 ರಂತೆ, ರಾಜ್ಯವು ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಮತ್ತು ಭಾರತದಲ್ಲಿ ರೋಗದ ಅತಿ ಹೆಚ್ಚು ಹರಡುವಿಕೆಯ ಪ್ರಮಾಣವನ್ನು ಹೊಂದಿದೆ.<ref>{{Cite web |url=https://timesofindia.indiatimes.com/city/kochi/diabetic-patients-kerala-tops-list-of-indian-states/articleshow/61974164.cms |title=Diabetic patients: Kerala tops list of Indian states |date=8 December 2017 |website=The Times of India |language=en |access-date=28 October 2019}}</ref>
[[ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ]] (UNICEF) ಮತ್ತು [[ವಿಶ್ವ ಆರೋಗ್ಯ ಸಂಸ್ಥೆ]] ಸೂತ್ರಗಳ ಮೇಲೆ ಸ್ತನ್ಯಪಾನದ ಪರಿಣಾಮಕಾರಿ ಪ್ರೋತ್ಸಾಹದಿಂದಾಗಿ ಕೇರಳವನ್ನು ವಿಶ್ವದ ಮೊದಲ "[[ಶಿಶು ಸ್ನೇಹಿ ಆಸ್ಪತ್ರೆ ಉಪಕ್ರಮ|ಶಿಶು-ಸ್ನೇಹಿ]] ರಾಜ್ಯ" ಎಂದು ಗೊತ್ತುಪಡಿಸಿತು.<ref>{{cite web |date=August 2002 |title=Kerala Named World's First WHO-UNICEF "Baby-Friendly State" |work=United Nations Foundation |url=https://www.unwire.org/unwire/20020801/28062_story.asp |archive-url=https://web.archive.org/web/20100306205352/https://www.unwire.org/unwire/20020801/28062_story.asp |archive-date=6 March 2010 |access-date=14 March 2009}}</ref><ref>{{cite news |url=https://news.bbc.co.uk/2/hi/south_asia/2166677.stm |location=Kochi, India |work=BBC News |title=Indian state wins 'baby-friendly' award |date=1 August 2002}}</ref> 95% ಕ್ಕಿಂತ ಹೆಚ್ಚು ಕೇರಳೀಯ ಜನನಗಳು ಆಸ್ಪತ್ರೆಯಲ್ಲಿ ನಡೆಯುತ್ತವೆ ಮತ್ತು ರಾಜ್ಯವು ದೇಶದಲ್ಲಿ ಅತಿ ಕಡಿಮೆ ಶಿಶು ಮರಣ ಪ್ರಮಾಣವನ್ನು ಸಹ ಹೊಂದಿದೆ. ಮೂರನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು 100% ಜನನಗಳು ವೈದ್ಯಕೀಯ ಸೌಲಭ್ಯಗಳಲ್ಲಿ ನಡೆಯುತ್ತಿರುವುದರೊಂದಿಗೆ "ಸಾಂಸ್ಥಿಕ ಪ್ರಸವ" ದಲ್ಲಿ ಕೇರಳವನ್ನು ಮೊದಲ ಸ್ಥಾನದಲ್ಲಿರಿಸುತ್ತದೆ.<ref name="kerala_fact_sheet"/> [[ಆಯುರ್ವೇದ]],<ref name="Unnikrishnan_2004">{{Cite journal |last=Unnikrishnan |first=E |year=2004 |title=''Materia Medica'' of the Local Health Traditions of Payyannur |journal=Centre for Development Studies |url=https://www.cds.ac.in/krpcds/publication/downloads/80.pdf |access-date=22 January 2006}}</ref>{{rp|13}} ''[[ಸಿದ್ಧ]]'', ಮತ್ತು ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯವಾಗಿ ಕಂಡುಬರುವ [[ಸಾಂಪ್ರದಾಯಿಕ ಔಷಧ]] ವಿಧಾನಗಳು, ''ಕಳರಿ'', ''ಮರ್ಮಚಿಕಿತ್ಸ'' ಮತ್ತು ''ವಿಷವೈದ್ಯ'' ಸೇರಿದಂತೆ, ಅಭ್ಯಾಸ ಮಾಡಲಾಗುತ್ತದೆ. [[ಕಣಿಯಾರ್]] ನಂತಹ ಕೆಲವು ವೃತ್ತಿಪರ ಸಮುದಾಯಗಳು ತಮ್ಮ ಸಾಂಪ್ರದಾಯಿಕ ವೃತ್ತಿಯ ಜೊತೆಗೆ ಅಂತಹ ವೈದ್ಯಕೀಯ ವ್ಯವಸ್ಥೆಗಳ ಅಭ್ಯಾಸಕ್ಕೆ ಸಂಬಂಧಿಸಿದಂತೆ ಸ್ಥಳೀಯ ವೈದ್ಯರು ಎಂದು ಕರೆಯಲ್ಪಡುತ್ತಿದ್ದರು.<ref>Angus Stewart, woodburn The Religious attitude: A psychological study of its differentiation, 1927</ref> ಇವುಗಳು ''[[ಗುರುಕುಲ]]'' ಶಿಷ್ಯತ್ವದ ಮೂಲಕ ಪ್ರಚಾರಗೊಳ್ಳುತ್ತವೆ,<ref name="Unnikrishnan_2004" />{{rp|5–6}} ಮತ್ತು ಔಷಧೀಯ ಮತ್ತು ಪರ್ಯಾಯ ಚಿಕಿತ್ಸೆಗಳ ಮಿಶ್ರಣವನ್ನು ಒಳಗೊಂಡಿರುತ್ತವೆ.<ref name="Unnikrishnan_2004" />{{rp|15}} [[ವೈದ್ಯರತ್ನಂ ಪಿ. ಎಸ್. ವಾರಿಯರ್]] 1902 ರಲ್ಲಿ [[ಕೊಟ್ಟಕ್ಕಲ್]] ನಲ್ಲಿ ([[ಮಲಪ್ಪುರಂ]] ನಿಂದ ಸುಮಾರು 10 ಕಿಮೀ) ಸ್ಥಾಪಿಸಿದ ''[[ಆರ್ಯ ವೈದ್ಯ ಸಲಾ]]'' ರಾಜ್ಯದ ಅತಿದೊಡ್ಡ ಆಯುರ್ವೇದ ಔಷಧೀಯ ಜಾಲ ಮತ್ತು ಆರೋಗ್ಯ ಕೇಂದ್ರವಾಗಿದೆ.<ref name="Warrier">{{cite news |url=https://www.thehindu.com/todays-paper/tp-national/pk-warrier-turns-90/article2080601.ece |title=PK Warrier turns 90 |work=The Hindu |date=6 June 2011}}</ref><ref name="Arya Vaidya Sala Kottakkal – Part 1">{{cite AV media |url=https://www.youtube.com/watch?v=nj6YqhsUo0c |archive-url=https://ghostarchive.org/varchive/youtube/20211222/nj6YqhsUo0c |archive-date=22 December 2021 |url-status=live |title=Arya Vaidya Sala Kottakkal – Part 1 |publisher=BBC World – India Business Report |date=30 May 2013 |medium=Documentary}}{{cbignore}}</ref><ref name="mal">{{Cite news |title=അമ്പതിന്റെ നിറവില് മലപ്പുറം; മലപ്പുറത്തിന്റെ മാനവിക മഹാപൈതൃകം |url=https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |last=Leelakrishnan |first=Alamkode |date=17 June 2019 |work=Mathrubhumi |access-date=24 April 2021 |archive-date=7 May 2021 |archive-url=https://web.archive.org/web/20210507091729/https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |url-status=dead}}</ref> ಇದು ವಿಶ್ವದ ಅತಿದೊಡ್ಡ ಆಯುರ್ವೇದ ಔಷಧೀಯ ಬ್ರಾಂಡ್ಗಳಲ್ಲಿ ಒಂದಾಗಿದೆ.<ref name="Warrier" /><ref name="Arya Vaidya Sala Kottakkal – Part 1" /><ref name="mal" />
2014 ರಲ್ಲಿ, ಕೇರಳವು ಸುಕೃತಂ ಎಂಬ ಕಾರ್ಯಕ್ರಮದ ಮೂಲಕ ಬಡವರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುವ ಭಾರತದ ಮೊದಲ ರಾಜ್ಯವಾಯಿತು.<ref>{{cite web |url=https://www.freepressjournal.in/kerala-becomes-first-state-to-provide-free-cancer-treatment/457976 |title=Kerala becomes first state to provide free cancer treatment – Free Press Journal |website=www.freepressjournal.in |access-date=18 May 2016 |date=11 October 2014}}</ref> ಕೇರಳದ ಜನರು [[ಕ್ಯಾನ್ಸರ್]]ಗಳು, [[ಯಕೃತ್ತು]] ಮತ್ತು [[ಮೂತ್ರಪಿಂಡ]] ಕಾಯಿಲೆಗಳ ಹೆಚ್ಚಿನ ಘಟನೆಗಳನ್ನು ಅನುಭವಿಸುತ್ತಾರೆ.<ref>{{Cite web |url=https://www.indushealthplus.com/kerala-health-statistics.html |title=Health Statistics and Public Health issues in Kerala |website=[[Indus Health Plus]] |language=en |access-date=28 October 2019}}</ref> ಏಪ್ರಿಲ್ 2016 ರಲ್ಲಿ, ''ಎಕನಾಮಿಕ್ ಟೈಮ್ಸ್'' 250,000 ನಿವಾಸಿಗಳು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ ಎಂದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 150 ರಿಂದ 200 ಯಕೃತ್ತು ಕಸಿಗಳು ಪ್ರದೇಶದ ಆಸ್ಪತ್ರೆಗಳಲ್ಲಿ ನಡೆಯುತ್ತವೆ ಎಂದು ಸಹ ಇದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 42,000 ಕ್ಯಾನ್ಸರ್ ಪ್ರಕರಣಗಳು ಪ್ರದೇಶದಲ್ಲಿ ವರದಿಯಾಗುತ್ತವೆ. ಖಾಸಗಿ ಆಸ್ಪತ್ರೆಗಳು ತಮ್ಮ ಅಂಕಿಅಂಶಗಳನ್ನು ವರದಿ ಮಾಡದಿರಬಹುದು ಎಂದು ಇದು ಕಡಿಮೆ ಅಂದಾಜು ಎಂದು ನಂಬಲಾಗಿದೆ. ಮೂತ್ರಪಿಂಡ ದಾನಕ್ಕೆ ದೀರ್ಘ ಕಾಯುವ ಪಟ್ಟಿಗಳು ಮಾನವ ಮೂತ್ರಪಿಂಡಗಳ ಅಕ್ರಮ ವ್ಯಾಪಾರವನ್ನು ಉತ್ತೇಜಿಸಿದೆ, ಮತ್ತು ಆರ್ಥಿಕವಾಗಿ ಅನನುಕೂಲಕರ ರೋಗಿಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಕಿಡ್ನಿ ಫೆಡರೇಶನ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣವಾಗಿದೆ.<ref>{{Cite news |url=https://economictimes.indiatimes.com/industry/healthcare/biotech/healthcare/health-crisis-in-kerala-the-increase-in-cancer-kidney-and-liver-diseases/articleshow/51950836.cms?intenttarget=no |title=Health crisis in Kerala: The increase in cancer, kidney and liver diseases – The Economic Times |journal=The Economic Times |access-date=18 May 2016 |date=23 April 2016 |last1=Krishnakumar |first1=P. K. |last2=Sanandakumar |first2=S.}}</ref> 2017–18 ರಂತೆ, [[ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಕೇರಳ)|ಆರೋಗ್ಯ ಸೇವೆಗಳ ಇಲಾಖೆ]]ಯಡಿಯಲ್ಲಿ 6,691 ಆಧುನಿಕ ಔಷಧ ಸಂಸ್ಥೆಗಳಿವೆ, ಅವುಗಳಲ್ಲಿ ಒಟ್ಟು ಹಾಸಿಗೆ ಸಾಮರ್ಥ್ಯ 37,843; 15,780 ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 22,063 ನಗರ ಪ್ರದೇಶಗಳಲ್ಲಿ.<ref name="dhs">{{Cite book |title=List of modern medicine institutions (2017–18) |last=Statistics Wing |first=Health Information Cell |publisher=Directorate of Health Services, Government of Kerala |year=2019 |location=Thiruvananthapuram |pages=1, 7 |url=https://dhs.kerala.gov.in/wp-content/uploads/2020/03/list_10052019.pdf}}</ref>
=== ಭಾಷೆ ===
[[File:Language Map of Kerala (2011 Census).svg|thumb|200px|ಜಿಲ್ಲೆಯ ಪ್ರಕಾರ ಭಾಷೆಗಳು:<br> {{col-begin}}
{{col-2}}
'''ಮಲಯಾಳಂ'''
{{legend|#009deb|80–90%}}
{{legend|#0088cc|90–100%}}
{{col-end}}
]]
[[ಮಲಯಾಳಂ]] ಕೇರಳದ ಅಧಿಕೃತ ಭಾಷೆಯಾಗಿದೆ ಮತ್ತು [[ಭಾರತದ ಭಾಷೆಗಳು|ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ]] ಒಂದಾಗಿದೆ.<ref name="thehindu20130524">{{cite news |url=https://www.thehindu.com/todays-paper/tp-national/classical-status-for-malayalam/article4744630.ece |title='Classical' status for Malayalam |work=[[The Hindu]] |date=24 May 2013 |access-date=25 May 2013 |location=Thiruvananthapuram, India}}</ref><ref>{{Cite web |title=Kerala – Principal Language |url=https://archive.india.gov.in/knowindia/state_uts.php?id=73 |url-status=dead |archive-url=https://web.archive.org/web/20200610111356/https://archive.india.gov.in/knowindia/state_uts.php?id=73 |archive-date=10 June 2020 |access-date=27 November 2018 |website=Government of India}}</ref> [[ಇಡುಕ್ಕಿ ಜಿಲ್ಲೆ]] ಮತ್ತು [[ಪಾಲಕ್ಕಾಡ್ ಜಿಲ್ಲೆ]]ಯಲ್ಲಿ ಗಮನಾರ್ಹವಾದ [[ತಮಿಳು ಭಾಷೆ|ತಮಿಳು]] ಮಾತನಾಡುವ ಜನಸಂಖ್ಯೆಯಿದೆ, ಇದು ಕ್ರಮವಾಗಿ ಎರಡು ಜಿಲ್ಲೆಗಳ ಜನಸಂಖ್ಯೆಯ 17.48% ಮತ್ತು 4.8% ರಷ್ಟಿದೆ.<ref name="lg">{{cite web |title=Census of India – Language |url=https://censusindia.gov.in/2011census/C-16.html |website=censusindia.gov.in}}</ref> [[ತುಳು ಭಾಷೆ|ತುಳು]] ಮತ್ತು [[ಕನ್ನಡ]]ವನ್ನು ಮುಖ್ಯವಾಗಿ [[ಕಾಸರಗೋಡು ಜಿಲ್ಲೆ]]ಯ ಉತ್ತರ ಭಾಗಗಳಲ್ಲಿ ಮಾತನಾಡಲಾಗುತ್ತದೆ, ಪ್ರತಿಯೊಂದೂ ಕ್ರಮವಾಗಿ ಜಿಲ್ಲೆಯ ಒಟ್ಟು ಜನಸಂಖ್ಯೆಯ 8.77% ಮತ್ತು 4.23% ರಷ್ಟಿದೆ.<ref name="lg" /><ref>{{cite news |title=Kerala government to appoint officer to study issues of linguistic minorities |url=https://timesofindia.indiatimes.com/city/thiruvananthapuram/government-to-appoint-officer-to-study-issues-of-linguistic-minorities/articleshow/59892625.cms |date=2 August 2017 |newspaper=The Times of India |department=City: Thiruvananthapuram |agency=TNN |access-date=29 December 2019}}</ref>
=== ಧರ್ಮ ===
{{Main|ಕೇರಳದಲ್ಲಿ ಧರ್ಮ}}
{{multiple image
| direction = vertical
| total_width = 200
| caption_align = left
| image1 = Jain temple, Wayanad IMG 3494 by Joseph Lazer.jpg
| caption1 = [[ಸುಲ್ತಾನ್ ಬತ್ತೇರಿ|ಸುಲ್ತಾನ್ ಬತ್ತೇರಿಯ]] [[ಜೈನ ದೇವಾಲಯ, ಕಿಡಂಗನಾಡ್|ಜೈನ ದೇವಾಲಯ]].
| image3 = Cheraman juma masjid Old.jpg
| caption3 = ಮೂಲ [[ಚೇರಮನ್ ಜುಮಾ ಮಸೀದಿ]]ಯ ಮಾದರಿ.
| image4 = Palayoor St. Thomas Syro-Malabar Church.jpg
| caption4 = [[ಸೇಂಟ್ ತಾಮಸ್ ಸಿರೋ-ಮಲಬಾರ್ ಚರ್ಚ್, ಪಾಲಯೂರು]].
}}
{{Pie chart
|thumb = right
|caption = '''ಕೇರಳದಲ್ಲಿ ಧರ್ಮ''' (2011)<ref name="census_2016_religion">{{cite web |url=https://www.censusindia.gov.in/2011census/C-01/DDW00C-01%20MDDS.XLS |title=Population by religious community – 2011 |publisher=Office of the Registrar General & Census Commissioner |work=[[2011 Census of India]] |access-date=25 August 2015 |archive-url=https://web.archive.org/web/20150825155850/https://www.censusindia.gov.in/2011census/C-01/DDW00C-01%20MDDS.XLS |archive-date=25 August 2015}}</ref>
|label1 = [[ಕೇರಳದಲ್ಲಿ ಹಿಂದೂ ಧರ್ಮ|ಹಿಂದೂ ಧರ್ಮ]]
|value1 = 54.73
|color1 = darkorange
|label2 = [[ಕೇರಳದಲ್ಲಿ ಇಸ್ಲಾಂ|ಇಸ್ಲಾಂ]]
|value2 = 26.56
|color2 = Green
|label3 = [[ಕೇರಳದಲ್ಲಿ ಕ್ರಿಶ್ಚಿಯನ್ ಧರ್ಮ|ಕ್ರಿಶ್ಚಿಯನ್ ಧರ್ಮ]]
|value3 = 18.38
|color3 = dodgerblue
|label4 = ಇತರೆ ಅಥವಾ ಯಾವುದೂ ಅಲ್ಲ
|value4 = 0.32
|color4 = grey
}}
[[File:Kerala religions 2011.png|thumb|ಕೇರಳದ ಪ್ರತಿಯೊಂದು ತಾಲೂಕಿನಲ್ಲಿ ಅತ್ಯಂತ ಜನಪ್ರಿಯ ಧರ್ಮದ ಶೇಕಡಾವಾರು]]
ಕೇರಳವು [[ಹಿಂದೂಗಳು]], [[ಮುಸ್ಲಿಮರು]] ಮತ್ತು [[ಕ್ರೈಸ್ತರು]] ರಾಜ್ಯಾದ್ಯಂತ ಗಮನಾರ್ಹ ಜನಸಂಖ್ಯೆಯನ್ನು ಹೊಂದಿರುವ ಧಾರ್ಮಿಕವಾಗಿ ಬಹಳ ವೈವಿಧ್ಯಮಯವಾಗಿದೆ. ಕೇರಳವನ್ನು ಸಾಮಾನ್ಯವಾಗಿ ಭಾರತದ ಅತ್ಯಂತ ವೈವಿಧ್ಯಮಯ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref>{{cite web |url=https://thegroundtruthproject.org/paradox-indias-religiously-diverse-state/ |title=The paradox of India's most religiously diverse state |date=7 April 2019 |publisher=The Ground Truth Project |access-date=7 April 2019}}</ref><ref>{{cite web |url=https://www.huffpost.com/entry/kerala-religion-gender_b_9577234 |title=There's a Place in India Where Religions Coexist Beautifully and Gender Equality Is Unmatched |date=6 April 2016 |publisher=Huffpost |access-date=6 April 2016}}</ref> [[ಹಿಂದೂ ಧರ್ಮ]]ವು ಕೇರಳದಲ್ಲಿ ಅತಿ ವ್ಯಾಪಕವಾಗಿ ಅನುಸರಿಸಲ್ಪಡುವ ನಂಬಿಕೆಯಾಗಿದ್ದು, [[ಇಸ್ಲಾಂ]] ಮತ್ತು [[ಕ್ರಿಶ್ಚಿಯನ್ ಧರ್ಮ]]ಕ್ಕೆ ಗಮನಾರ್ಹ ಸಂಖ್ಯೆಯ ಅನುಯಾಯಿಗಳಿದ್ದಾರೆ. ಭಾರತದ ಉಳಿದ ಭಾಗಗಳಿಗೆ ಹೋಲಿಸಿದರೆ, ಕೇರಳವು ತುಲನಾತ್ಮಕವಾಗಿ ಕಡಿಮೆ [[ಸಂಪ್ರದಾಯವಾದ]]ವನ್ನು ಅನುಭವಿಸುತ್ತದೆ.<ref>{{Cite journal |last=Heller |first=Patrick |title=Social capital as a product of class mobilization and state intervention: Industrial workers in Kerala, India |journal=[[World Development (journal)|World Development]] |volume=24 |issue=6 |pages=1055–1071 |date=June 1996 |doi=10.1016/0305-750X(96)00015-0 <!-- |access-date=4 April 2022 --> |doi-access=free}}</ref> [[2011 ರ ಭಾರತದ ಜನಗಣತಿ]] ಅಂಕಿಅಂಶಗಳ ಪ್ರಕಾರ, ಕೇರಳದ ನಿವಾಸಿಗಳಲ್ಲಿ 54.7% ಹಿಂದೂಗಳು, 26.6% ಮುಸ್ಲಿಮರು, 18.4% ಕ್ರೈಸ್ತರು, ಮತ್ತು ಉಳಿದ 0.3% ರಷ್ಟು ಜನರು ಇನ್ನೊಂದು ಧರ್ಮವನ್ನು ಅನುಸರಿಸುತ್ತಾರೆ ಅಥವಾ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿಲ್ಲ.<ref name="censusindia2011religion">{{cite web |title=Population by religious communities |work=Census of India |url=https://www.censusindia.gov.in/2011census/C-01.html |publisher=Government of India |access-date=26 August 2015}}</ref> [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂಗಳು ಅತಿದೊಡ್ಡ ಧಾರ್ಮಿಕ ಗುಂಪನ್ನು ಪ್ರತಿನಿಧಿಸುತ್ತಾರೆ, ಅಲ್ಲಿ ಅವರು ಮುಸ್ಲಿಮರಿಂದ ಹಿಂದಿಕ್ಕಲ್ಪಟ್ಟಿದ್ದಾರೆ.<ref name="thehindu1">{{cite news |url=https://www.hindu.com/2004/09/23/stories/2004092306010500.htm |archive-url=https://web.archive.org/web/20041128124211/https://www.hindu.com/2004/09/23/stories/2004092306010500.htm |url-status=dead |archive-date=28 November 2004 |location=Chennai, India |title=Increase in Muslim population in the State |date=23 September 2004 |work=[[The Hindu]] |access-date=13 November 2015}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>{{cite news |url=https://timesofindia.indiatimes.com/india/Kerala-not-Goa-has-maximum-no-of-Christians/articleshow/2649158.cms |title=Kerala, not Goa, has maximum no. of Christians |work=The Times of India |date=25 December 2007 |publisher=The Times Group}}</ref> 2016 ರಂತೆ, ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಇತರರು ರಾಜ್ಯದಲ್ಲಿ ಒಟ್ಟು ಜನನಗಳ ಕ್ರಮವಾಗಿ 41.9%, 42.6%, 15.4% ಮತ್ತು 0.2% ರಷ್ಟಿದ್ದಾರೆ.<ref>{{Cite web |url=https://www.ecostat.kerala.gov.in/images/pdf/publications/Vital_Statistics/data/vital_statistics_2016.pdf |title=Vital Statistics 2016 |website=Ecostat, Kerala Government. |access-date=7 June 2019 |archive-date=11 July 2019 |archive-url=https://web.archive.org/web/20190711011809/http://www.ecostat.kerala.gov.in/images/pdf/publications/Vital_Statistics/data/vital_statistics_2016.pdf |url-status=dead}}</ref>
ಇಸ್ಲಾಂ ಕೇರಳಕ್ಕೆ ಬಂದಿತು, ಇದು ದೊಡ್ಡ [[ಹಿಂದೂ ಮಹಾಸಾಗರ]]ದ ಅಂಚಿನ ಭಾಗವಾಗಿದ್ದು, [[ಮಧ್ಯಪ್ರಾಚ್ಯ]]ದಿಂದ ಮಸಾಲೆ ಮತ್ತು ರೇಷ್ಮೆ ವ್ಯಾಪಾರಿಗಳ ಮೂಲಕ ಬಂದಿತು. ಇತಿಹಾಸಕಾರರು ಇಸ್ಲಾಂನ್ನು ಕೇರಳಕ್ಕೆ 7 ನೇ ಶತಮಾನ CE ಯಷ್ಟು ಹಿಂದೆಯೇ ಪರಿಚಯಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ.<ref name="indiatimes3">{{cite web |url=https://timesofindia.indiatimes.com/india/Trade-not-invasion-brought-Islam-to-India/articleshow/2144414.cms |title=Trade, not invasion brought Islam to India |last=Sethi |first=Atul |date=24 June 2007 |work=[[The Times of India]] |access-date=24 September 2014}}</ref><ref name="autogenerated20002">Katz 2000; Koder 1973; Thomas Puthiakunnel 1973; David de Beth Hillel, 1832; Lord, James Henry 1977.</ref> ಗಮನಾರ್ಹವಾಗಿ [[ಚೇರಮನ್ ಪೆರುಮಾಳ್ ತಾಜುದ್ದೀನ್]] ರ ದಂತಕಥೆಯು ಕಂಡುಬಂದಿದೆ, ಇದು [[ಅರೇಬಿಯಾ]]ಕ್ಕೆ ತೆರಳಿ [[ಮುಹಮ್ಮದ್]] ರನ್ನು ಭೇಟಿಯಾದ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪೌರಾಣಿಕ ಹಿಂದೂ ರಾಜನ ಕಥೆಯಾಗಿದೆ.<ref>{{cite book |last1=Varghese |first1=Theresa |title=Stark World Kerala |year=2006 |publisher=Stark World Pub. |isbn=978-8190250511 |url=https://books.google.com/books?id=lDhuAAAAMAAJ&q=cheraman+perumal+tajuddin |language=en}}</ref><ref>{{cite book |last1=Kumar |first1=Satish |title=India's National Security: Annual Review 2009 |year=2012 |url=https://books.google.com/books?id=x-esAgAAQBAJ&q=cheraman+perumal+tajuddin&pg=PA346 |publisher=Routledge |language=en |isbn=978-1-136-70491-8}}</ref><ref>Minu Ittyipe; [[Solomon]] to Cheraman; Outlook Indian Magazine; 2012</ref> ಕೇರಳ ಮುಸ್ಲಿಮರನ್ನು ಸಾಮಾನ್ಯವಾಗಿ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಎಂದು ಕರೆಯಲಾಗುತ್ತದೆ. ಮಾಪ್ಪಿಲರು ಕೇರಳದ ಮುಸ್ಲಿಂ ಜನಸಂಖ್ಯೆಯನ್ನು ರೂಪಿಸುವ ಅನೇಕ ಸಮುದಾಯಗಳಲ್ಲಿ ಒಂದಾಗಿದೆ.<ref name="KunhaliV2">Kunhali, V. "Muslim Communities in Kerala to 1798" PhD Dissertation Aligarh Muslim University (1986) [https://ir.amu.ac.in/2736/1/T%205242.pdf]</ref><ref name="Divakaruni20112">{{cite book |url=https://books.google.com/books?id=W0wLgfQyvFAC |title=The Palace of Illusions |author=Chitra Divakaruni |year=2011 |publisher=Pan Macmillan |isbn=978-0-330-47865-6 |access-date=18 November 2012}}</ref> [[ಚೇರಮನ್ ಪೆರುಮಾಳ್ಸ್ ದಂತಕಥೆ]]ಯ ಪ್ರಕಾರ, ಮೊದಲ ಭಾರತೀಯ ಮಸೀದಿಯನ್ನು {{CE|624}} ರಲ್ಲಿ [[ಕೊಡುಂಗಲ್ಲೂರು]] ನಲ್ಲಿ [[ಚೇರ ಸಾಮ್ರಾಜ್ಯ]]ದ ಕೊನೆಯ ಆಡಳಿತಗಾರ (ಚೇರಮನ್ ಪೆರುಮಾಳ್) ರ ಆದೇಶದಂತೆ ನಿರ್ಮಿಸಲಾಯಿತು, ಅವರು [[ಮುಹಮ್ಮದ್]] ({{Circa|570}}–632) ರ ಜೀವಿತಾವಧಿಯಲ್ಲಿ ಇಸ್ಲಾಂಗೆ ಮತಾಂತರಗೊಂಡರು.<ref>{{cite book |author=Jonathan Goldstein |title=The Jews of China |publisher=M. E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=Edward Simpson |author2=Kai Kresse |title=Struggling with History: Islam and Cosmopolitanism in the Western Indian Ocean |url=https://books.google.com/books?id=w0qHKA7zEaEC&pg=PA333 |access-date=24 July 2012 |year=2008 |publisher=Columbia University Press |isbn=978-0-231-70024-5 |pages=333}}</ref><ref name="Kupferschmidt1987">{{cite book |author=Uri M. Kupferschmidt |url=https://books.google.com/books?id=ChEVAAAAIAAJ&pg=PA458 |title=The Supreme Muslim Council: Islam Under the British Mandate for Palestine |publisher=Brill |year=1987 |isbn=978-9004079298 |pages=458–59 |access-date=25 July 2012 |archive-url=https://web.archive.org/web/20231125191234/https://books.google.com/books?id=ChEVAAAAIAAJ&pg=PA458 |archive-date=25 November 2023 |url-status=live}}</ref><ref name="Raṇṭattāṇi2007">{{cite book |author=Husain Raṇṭattāṇi |title=Mappila Muslims: A Study on Society and Anti Colonial Struggles |url=https://books.google.com/books?id=xlb5BrabQd8C&pg=PA179 |access-date=25 July 2012 |year=2007 |publisher=Other Books |isbn=978-8190388788 |pages=179–}}</ref>
ಪ್ರಾಚೀನ ಕ್ರಿಶ್ಚಿಯನ್ ಸಂಪ್ರದಾಯವು ಕ್ರಿಶ್ಚಿಯನ್ ಧರ್ಮವು 52 CE ಯಲ್ಲಿ [[ಯೇಸು ಕ್ರಿಸ್ತ]]ನ [[ಹನ್ನೆರಡು ಪ್ರೇರಿತರು|ಹನ್ನೆರಡು ಪ್ರೇರಿತರಲ್ಲಿ]] ಒಬ್ಬರಾದ [[ತಾಮಸ್ ಪ್ರೇರಿತ]]ನ ಆಗಮನದೊಂದಿಗೆ ಕೇರಳದ ತೀರವನ್ನು ತಲುಪಿತು ಎಂದು ಹೇಳುತ್ತದೆ.<ref>[https://books.google.com/books?id=lZUBZlth2qgC&q=Muziris ''The Encyclopedia of Christianity, Volume 5''] {{webarchive|url=https://web.archive.org/web/20161226115908/https://books.google.com/books?id=lZUBZlth2qgC&printsec=frontcover&dq=isbn%3A9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA|date=26 December 2016}} by Erwin Fahlbusch. Wm. B. Eerdmans Publishing – 2008. p. 285. {{ISBN|978-0802824172}}.</ref><ref>{{cite book |chapter-url=https://books.google.com/books?id=qhKGPprbQaYC&pg=PA27 |title=The Jews of India: A Story of Three Communities |editor-first=Orpa |editor-last=Slapak |publisher=The Israel Museum |location=Jerusalem |year=2003 |page=27 |isbn=9652781797 |chapter=The Cochin Jews Of Kerala |first=Barbara C. |last=Johnson}}</ref><ref name="Encyclopædia Britannica">{{cite web |url=https://www.britannica.com/EBchecked/topic/592851/Saint-Thomas |title=Saint Thomas |website=Encyclopædia Britannica |date=1 January 2019}}</ref><ref name="Menachery">Menachery G; 1973, 1998; Mundalan, A. M; 1984; Podipara, Placid J. 1970; Leslie Brown, 1956</ref> [[ಸೇಂಟ್ ತಾಮಸ್ ಕ್ರೈಸ್ತರು]] [[ಸಿರೋ-ಮಲಬಾರ್ ಚರ್ಚ್|ಸಿರೋ-ಮಲಬಾರ್ ಕ್ಯಾಥೋಲಿಕ್]],<ref name="Ponnumuthan1996">{{cite book |author=Selvister Ponnumuthan |title=Authentic Interpretation in Canon Law: Reflections on a Distinctively Canonical Institution |url=https://books.google.com/books?id=zcedqS4jOusC&pg=PA103 |access-date=18 November 2012 |year=1996 |publisher=Gregorian&Biblical BookShop |isbn=978-8876527210 |pages=103–}}</ref> [[ಸಿರೋ-ಮಲಂಕರ ಕ್ಯಾಥೋಲಿಕ್ ಚರ್ಚ್|ಸಿರೋ-ಮಲಂಕರ ಕ್ಯಾಥೋಲಿಕ್]],<ref name="Williams1996">{{cite book |author=Raymond Brady Williams |title=Christian Pluralism in the United States: The Indian Immigrant Experience |url=https://books.google.com/books?id=w1uk6zZQKzAC&pg=PA144 |access-date=18 November 2012 |year=1996 |publisher=Cambridge University Press |isbn=978-0-521-57016-9 |pages=144–}}</ref> [[ಜಾಕೋಬೈಟ್ ಸಿರಿಯನ್ ಕ್ರಿಶ್ಚಿಯನ್ ಚರ್ಚ್]],<ref name="AndersonTang2005">{{cite book |author1=Allan Anderson |author2=Edmond Tang |title=Asian and Pentecostal: The Charismatic Face of Christianity in Asia |url=https://books.google.com/books?id=LDZgKELq7AoC&pg=PA248 |access-date=18 November 2012 |year=2005 |publisher=OCMS |isbn=978-1-870345-43-9 |pages=248–}}</ref> [[ಮಾರ್ ತೋಮಾ ಸಿರಿಯನ್ ಚರ್ಚ್]],<ref>{{Cite book |title=John Anthony McGuckin (15 December 2010). The Encyclopedia of Eastern Orthodox Christianity. pp. 377–. Retrieved 18 November 2012. |publisher=John Wiley & Sons. |isbn=978-1-4443-9254-8 |year=2010}}</ref> [[ಮಲಂಕರ ಓರ್ಥೊಡಾಕ್ಸ್ ಸಿರಿಯನ್ ಚರ್ಚ್]],<ref name="Russell2010">{{cite book |author=Thomas Arthur Russell |title=Comparative Christianity: A Student's Guide to a Religion and Its Diverse Traditions |url=https://books.google.com/books?id=FmMarHDbglgC&pg=PT40 |access-date=18 November 2012 |year=2010 |publisher=Universal-Publishers |isbn=978-1-59942-877-2 |pages=40–}}</ref> [[CSI|CSI]] ಯ [[ಸೇಂಟ್ ತಾಮಸ್ ಆಂಗ್ಲಿಕನ್ನರು|ಸಿರಿಯನ್ ಆಂಗ್ಲಿಕನ್ನರು]]<ref>{{cite book |author=Stephen Neill |title=A History of Christianity in India: 1707–1858 |url=https://books.google.com/books?id=Xi-tvrYbYxMC&pg=PA240 |access-date=31 August 2012 |year=2002 |publisher=Cambridge University Press |isbn=978-0-521-89332-9 |pages=247–251}}</ref> ಮತ್ತು [[ಪೆಂಟೆಕೋಸ್ಟಲ್ ಸೇಂಟ್ ತಾಮಸ್ ಕ್ರೈಸ್ತರು]]<ref>{{cite book |last1=Bergunder |first1=Michael |title=The South Indian Pentecostal Movement in the Twentieth Century |year=2008 |publisher=Wm. B. Eerdmans Publishing |isbn=978-0-8028-2734-0 |pages=15–16, 26–30, 37–57 |url=https://books.google.com/books?id=XGiv3riaunQC&q=Pentecostal+evangelical+saint+thomas+syrian+christian |language=en}}</ref> ಸೇರಿದ್ದಾರೆ. ಕೇರಳದಲ್ಲಿ [[ಲ್ಯಾಟಿನ್ ಚರ್ಚ್|ಲ್ಯಾಟಿನ್ ಕ್ಯಾಥೋಲಿಕ್]] ಕ್ರೈಸ್ತರ ಮೂಲವು 16 ನೇ ಶತಮಾನದಲ್ಲಿ ಪೋರ್ಚುಗೀಸ್ [[ಪಡ್ರೊಡೊ]]ನ ಮಿಷನರಿ ಪ್ರಯತ್ನಗಳ ಪರಿಣಾಮವಾಗಿದೆ.<ref name="autogenerated1">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA192 |access-date=18 November 2012 |year=2007 |publisher=DC Books |isbn=978-8126415786 |pages=192–}}</ref><ref name="RakRaj2008">{{cite book |author1=Knut A. Jacobsen, Selva J. Rak |author2=Selva J. Raj |title=South Asian Christian Diaspora: Invisible Diaspora in Europe and North America |url=https://books.google.com/books?id=6L5MxlMIcG0C&pg=PA172 |access-date=18 November 2012 |year=2008 |publisher=Ashgate Publishing, Ltd. |isbn=978-0-7546-6261-7 |pages=172–}}</ref><ref name="Subramanian2009">{{cite book |author=Ajantha Subramanian |title=Shorelines: Space and Rights in South India |url=https://books.google.com/books?id=lsd55y4KbeYC&pg=PA95 |access-date=18 November 2012 |year=2009 |publisher=Stanford University Press |isbn=978-0-8047-8685-0 |pages=95–}}</ref> ವಸಾಹತುಶಾಹಿ ವಲಸಿಗರೊಂದಿಗೆ ಶತಮಾನಗಳ ಮಿಶ್ರಣದ ಪರಿಣಾಮವಾಗಿ, ಪೋರ್ಚುಗೀಸ್, ಡಚ್, ಫ್ರೆಂಚ್, ಬ್ರಿಟಿಷ್ ಮತ್ತು ಇತರ ಯುರೋಪಿಯನ್ನರಿಂದ ಪ್ರಾರಂಭಿಸಿ, ಕೇರಳದಲ್ಲಿ ಮಿಶ್ರ ಯುರೋಪಿಯನ್ ಮತ್ತು ಭಾರತೀಯ ಪೋಷಕತ್ವ ಅಥವಾ ಪೂರ್ವಜರ ಆಂಗ್ಲೋ-ಇಂಡಿಯನ್ ಸಮುದಾಯವಿದೆ. ಕೇರಳವು ಭಾರತದ ಎಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>Singh, Anjana. "Fort Cochin in Kerala 1750–1830 The Social Condition of a Dutch Community in an Indian Milieu." Brill, Leiden Boston: 2010, 3: 92.</ref>
[[ಯಹೂದಿ ಧರ್ಮ]]ವು 10 ನೇ ಶತಮಾನ BCE ಯಲ್ಲಿ [[ಸೊಲೊಮನ್|ರಾಜ ಸೊಲೊಮನ್]] ಕಾಲದಲ್ಲಿ ಕೇರಳವನ್ನು ತಲುಪಿತು.<ref>Weil, Shalva. "Jews in India." in M.Avrum Erlich (ed.) ''Encyclopedia of the Jewish Diaspora'', Santa Barbara, CA: ABC CLIO. 2008, 3: 1204–12.</ref> ಅವರನ್ನು [[ಕೊಚ್ಚಿ ಯಹೂದಿಗಳು]] ಅಥವಾ ಮಲಬಾರ್ ಯಹೂದಿಗಳು ಎಂದು ಕರೆಯಲಾಗುತ್ತದೆ ಮತ್ತು ಅವರು [[ಭಾರತದಲ್ಲಿ ಯಹೂದಿಗಳ ಇತಿಹಾಸ|ಭಾರತದಲ್ಲಿ ಅತ್ಯಂತ ಹಳೆಯ ಯಹೂದಿಗಳ ಗುಂಪು]] ಆಗಿದ್ದಾರೆ.<ref>[https://books.google.com/books?id=qhKGPprbQaYC&q=two+millennia ''The Israelis (Jews) of India: A Story of Three Communities''] {{webarchive|url=https://web.archive.org/web/20161226115854/https://books.google.com/books?id=qhKGPprbQaYC&printsec=frontcover&dq=isbn%3A9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA|date=26 December 2016}} by Orpa Slapak. The Israel Museum, Jerusalem. 2003. p. 27. {{ISBN|978-9652781796}}.</ref><ref>Weil, Shalva. India's Jewish Heritage: Ritual, Art and Life-Cycle, Mumbai: Marg Publications, 2009. [first published in 2002; 3rd edn.]. Katz 200/*Religion */ 0; Koder 1973; Menachery 1998</ref> 20 ನೇ ಶತಮಾನದವರೆಗೆ ಕೇರಳದಲ್ಲಿ ಗಮನಾರ್ಹವಾದ ಯಹೂದಿ ಸಮುದಾಯವು ಅಸ್ತಿತ್ವದಲ್ಲಿತ್ತು, ಅವರಲ್ಲಿ ಹೆಚ್ಚಿನವರು [[ಅಲಿಯಾ|ಇಸ್ರೇಲ್ಗೆ ವಲಸೆ]] ಹೋದರು.<ref name="Roland1998">{{cite book |author=Joan G. Roland |title=The Jewish Communities of India: Identity in a Colonial Era |url=https://books.google.com/books?id=kHJccZ92IecC&pg=PA283 |access-date=18 November 2012 |year=1998 |publisher=Transaction Publishers |isbn=978-0-7658-0439-6 |pages=283–}}</ref> [[ಕೊಚ್ಚಿ ಸಿನಾಗೋಗ್|ಪರದೇಶಿ ಸಿನಾಗೋಗ್]] [[ಕೊಚ್ಚಿ|ಕೊಚ್ಚಿಯಲ್ಲಿ]] [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಿನಾಗೋಗ್ ಆಗಿದೆ.<ref>{{cite web |title=Paradesi Synagogue – tourist attractions at Mattancherry, Ernakulam Kerala Tourism |url=https://www.keralatourism.org/kochi/paradeso-synagogue-mattancherry.php |website=www.keralatourism.org}}</ref> [[ಕೇರಳದಲ್ಲಿ ಜೈನ ಧರ್ಮ|ಜೈನ ಧರ್ಮ]]ವು [[ವಯನಾಡು ಜಿಲ್ಲೆ]]ಯಲ್ಲಿ ಗಣನೀಯ ಅನುಯಾಯಿಗಳನ್ನು ಹೊಂದಿದೆ.<ref name="LockieCarpenter2012">{{cite book |author1=Stewart Lockie |author2=David Carpenter |title=Agriculture, Biodiversity and Markets: Livelihoods and Agroecology in Comparative Perspective |url=https://books.google.com/books?id=cZvlmpwviuMC&pg=PT258 |access-date=18 November 2012 |year=2012 |publisher=Routledge |isbn=978-1-136-54649-5 |page=258}}</ref><ref name="MathewBaviskar2009">{{cite book |author1=George Mathew |author2=B S Baviskar |title=Inclusion and Exclusion in Local Governance: Field Studies from Rural India |url=https://books.google.com/books?id=DsDOrvROzPEC&pg=PA204 |access-date=18 November 2012 |year=2009 |publisher=Sage Publications |isbn=978-8178298603 |page=204}}</ref>
== ಶಿಕ್ಷಣ ==
{{Main|ಕೇರಳದಲ್ಲಿ ಶಿಕ್ಷಣ}}
{{multiple image
<!-- Layout parameters -->| align = <!-- right (default), left, centre, none -->
| direction = vertical
| width = 225
<!--image1-->| image1 = University of Kerala.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಶ್ವವಿದ್ಯಾಲಯ]]
<!--image 2-->}}
[[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]] 14 ಮತ್ತು 16 ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದಿತು. ಖಗೋಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಕೇರಳ ಶಾಲೆಯು ಸ್ವತಂತ್ರವಾಗಿ ಹಲವಾರು ಪ್ರಮುಖ ಗಣಿತ ಪರಿಕಲ್ಪನೆಗಳನ್ನು ರಚಿಸಿತು, ಇವುಗಳಲ್ಲಿ ತ್ರಿಕೋನಮಿತಿಯ ಕಾರ್ಯಗಳಿಗಾಗಿ [[ಸರಣಿ ವಿಸ್ತರಣೆ]] ಸೇರಿದೆ.<ref name="roy">{{cite journal |last=Roy |first=Ranjan |year=1990 |title=Discovery of the Series Formula for π by Leibniz, Gregory, and Nilakantha |journal=Mathematics Magazine |volume=63 |issue=5 |pages=291–306 |doi=10.2307/2690896 |jstor=2690896}}</ref><ref>{{Citation |last=Pingree |first=David |author-link=David Pingree |title=Hellenophilia versus the History of Science |year=1992 |journal=Isis |volume=83 |issue=4 |pages=554–63 |jstor=234257 |doi=10.1086/356288 |quote=One example I can give you relates to the Indian Mādhava's demonstration, in about 1400 A.D., of the infinite power series of trigonometrical functions using geometrical and algebraic arguments. When this was first described in English by Charles Whish, in the 1830s, it was heralded as the Indians' discovery of the calculus. This claim and Mādhava's achievements were ignored by Western historians, presumably at first because they could not admit that an Indian discovered the calculus, but later because no one read anymore the ''Transactions of the Royal Asiatic Society'', in which Whish's article was published. The matter resurfaced in the 1950s, and now we have the Sanskrit texts properly edited, and we understand the clever way that Mādhava derived the series ''without'' the calculus, but many historians still find it impossible to conceive of the problem and its solution in terms of anything other than the calculus and proclaim that the calculus is what Mādhava found. In this case, the elegance and brilliance of Mādhava's mathematics are being distorted as they are buried under the current mathematical solution to a problem to which he discovered an alternate and powerful solution. |bibcode=1992Isis...83..554P |s2cid=68570164}}</ref> 19 ನೇ ಶತಮಾನದ ಆರಂಭಿಕ ದಶಕಗಳಲ್ಲಿ, ಕೇರಳದ ಆಧುನಿಕ ಶೈಕ್ಷಣಿಕ ಪರಿವರ್ತನೆಯು ಸಾಮೂಹಿಕ ಶಿಕ್ಷಣವನ್ನು ಉತ್ತೇಜಿಸಲು [[ಚರ್ಚ್ ಮಿಷನ್ ಸೊಸೈಟಿ]] ಮಿಷನರಿಗಳ ಪ್ರಯತ್ನಗಳಿಂದ ಪ್ರೇರೇಪಿಸಲ್ಪಟ್ಟಿತು.<ref>{{cite news |title=Missionaries led State to renaissance: Pinarayi |newspaper=The Hindu |date=13 November 2016 |url=https://www.thehindu.com/news/national/kerala/Missionaries-led-State-to-renaissance-Pinarayi/article16444369.ece |quote=Inaugurating on Saturday the valedictory of the bicentenary celebration of the arrival of Church Mission Society (CMS) missionaries to the shores of Kerala, Mr. Vijayan said it was their pioneering work in the fields of education, literature, printing, publishing, women's education, education of the differently-abled and, in general, a new social approach through the inclusion of marginalised sections into the mainstream which brought the idea of 'equality' into the realm of public consciousness. This had raised the standard of public consciousness and paved the way for the emergence of the renaissance movements in the State.}}</ref><ref>{{cite web |title=Kerala to celebrate CMS mission |url=https://churchmissionsociety.org/our-stories/kerala-celebrate-cms-mission |date=9 November 2016 |website=Church Mission Society |access-date=4 April 2022 |quote=Indian President Pranab Mukherjee, visited CMS College in Kerala, the oldest college in India, and laid the foundation stone of the bicentenary block. He said, 'CMS college is a pioneer of modern education in Kerala. It has been the source of strong currents of knowledge and critical inquiry that have moulded the scholastic and socio-cultural landscape of Kerala and propelled the State to the forefront of social development.'{{hsp}} }}</ref><ref>{{Cite journal |last1=Mathew |first1=E. T. |url=https://www.epw.in/journal/1999/39/special-articles/growth-literacy-kerala.html |title=Growth of Literacy in Kerala |date=5 June 2015 |journal=Economic and Political Weekly |volume=34 |issue=1999 |pages=7–8 |via=www.epw.in}}</ref><ref>{{cite book |title=District Handbooks of Kerala |url=https://www.kerala.gov.in/district_handbook/Kottayam.pdf |date=March 2003 |archive-url=https://web.archive.org/web/20090319183020/https://www.kerala.gov.in/district_handbook/Kottayam.pdf |archive-date=19 March 2009 |url-status=dead |pages=19–20 |publisher=Department of Information & Public Relations Government of Kerala |access-date=4 April 2022}}</ref><ref>{{cite book |last=Menon |first=Sreedhara |title=A survey of Kerala History |year=1996 |publisher=S.Viswanathan Printers and Publishers |location=Madras |pages=339, 348–49 |isbn=978-8126415786 |url=https://onlinestore.dcbooks.com/books/a-survey-of-kerala-history |access-date=20 March 2019 |archive-date=24 August 2019 |archive-url=https://web.archive.org/web/20190824143707/https://onlinestore.dcbooks.com/books/a-survey-of-kerala-history |url-status=dead}}</ref> 1854 ರ [[ವುಡ್ಸ್ ಡೆಸ್ಪ್ಯಾಚ್]] ನ ಶಿಫಾರಸುಗಳನ್ನು ಅನುಸರಿಸಿ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು ಮುಖ್ಯವಾಗಿ ಜಾತಿಗಳು ಮತ್ತು ಸಮುದಾಯಗಳ ಆಧಾರದ ಮೇಲೆ ಸಾಮೂಹಿಕ ಶಿಕ್ಷಣ ಅಭಿಯಾನಗಳನ್ನು ಪ್ರಾರಂಭಿಸಿದವು ಮತ್ತು ಹೆಚ್ಚು ಖಾಸಗಿ ಉಪಕ್ರಮಗಳನ್ನು ಆಕರ್ಷಿಸಲು [[ಅನುದಾನ-ಸಹಾಯ]] ವ್ಯವಸ್ಥೆಯನ್ನು ಪರಿಚಯಿಸಿದವು.<ref name="Devrep53-58" /> [[ಸೇಂಟ್ ತಾಮಸ್ ಕಾಲೇಜು, ತೃಶೂರ್|ಸೇಂಟ್ ತಾಮಸ್ ಕಾಲೇಜು ತೃಶೂರ್]] ಮತ್ತು [[ಸೇಂಟ್ ಬರ್ಚ್ಮನ್ಸ್ ಕಾಲೇಜು|ಎಸ್ಬಿ ಕಾಲೇಜು ಚಂಗನಾಶ್ಶೇರಿ]] ನಂತಹ ಕ್ಯಾಥೋಲಿಕ್ ಸಂಸ್ಥೆಗಳನ್ನು ಕ್ಯಾಥೋಲಿಕ್ ಚರ್ಚ್ನ ನೇತೃತ್ವದಲ್ಲಿ ಸ್ಥಾಪಿಸಲಾಯಿತು. [[ಕುರಿಯಾಕೋಸ್ ಎಲಿಯಾಸ್ ಚಾವರ|ಫಾ. ಕುರಿಯಾಕೋಸ್ ಎಲಿಯಾಸ್ ಚಾವರ]], [[ಚಾರ್ಲ್ಸ್ ಲಾವಿಗ್ನೆ|ಮಾರ್ ಚಾರ್ಲ್ಸ್ ಲಾವಿಗ್ನೆ SJ]], [[ಆಯ್ಯಾ ವೈಕುಂಡರ್|ವೈಕುಂಡ ಸ್ವಾಮಿ]], [[ನಾರಾಯಣ ಗುರು]] ಮತ್ತು [[ಅಯ್ಯಂಕಾಳಿ]] ರಂತಹ ನಾಯಕರ ಪ್ರಯತ್ನಗಳು ರಾಜ್ಯದಲ್ಲಿ ಸಾಮಾಜಿಕವಾಗಿ ತಾರತಮ್ಯಕ್ಕೊಳಗಾದ ಜಾತಿಗಳಿಗೆ ಸಹಾಯ ಮಾಡುವಲ್ಲಿ—[[ನಾಯರ್ ಸೇವಾ ಸೊಸೈಟಿ]], [[ಶ್ರೀ ನಾರಾಯಣ ಟ್ರಸ್ಟ್|ಎಸ್ಎನ್ಡಿಪಿ]], [[ಮುಸ್ಲಿಂ ಶೈಕ್ಷಣಿಕ ಸೊಸೈಟಿ]], ಮುಸ್ಲಿಂ ಮಹಾಜನ ಸಭಾ, ಯೋಗ ಕ್ಷೇಮ ಸಭಾ (ನಂಬೂದಿರಿಗಳ) ಮತ್ತು ಕ್ರಿಶ್ಚಿಯನ್ ಚರ್ಚುಗಳ ಸಭೆಗಳಂತಹ ಸಮುದಾಯ-ಆಧಾರಿತ ಸಂಸ್ಥೆಗಳ ಸಹಾಯದಿಂದ—ಕೇರಳದಲ್ಲಿ ಸಾಮೂಹಿಕ ಶಿಕ್ಷಣದ ಮತ್ತಷ್ಟು ಅಭಿವೃದ್ಧಿಗೆ ಕಾರಣವಾಯಿತು.<ref name="Devrep53-58">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=53–58 |access-date=30 May 2015}}</ref>
1991 ರಲ್ಲಿ, ಕೇರಳವು ಸಂಪೂರ್ಣವಾಗಿ ಸಾಕ್ಷರವೆಂದು ಗುರುತಿಸಲ್ಪಟ್ಟ ಭಾರತದ ಮೊದಲ ರಾಜ್ಯವಾಯಿತು, ಆ ಸಮಯದಲ್ಲಿ ಪರಿಣಾಮಕಾರಿ ಸಾಕ್ಷರತಾ ಪ್ರಮಾಣವು ಕೇವಲ 90% ಆಗಿತ್ತು.<ref name="Soundarapandian2000">{{cite book |author=Mookkiah Soundarapandian |title=Literacy Campaign in India |url=https://books.google.com/books?id=KVhHEC449yoC&pg=PA21 |year=2000 |publisher=Discovery Publishing House |isbn=978-8171415533 |page=21}}</ref> 2006–2007 ರಲ್ಲಿ, ರಾಜ್ಯವು ಭಾರತದ 21 ಪ್ರಮುಖ ರಾಜ್ಯಗಳಲ್ಲಿ ಶಿಕ್ಷಣ ಅಭಿವೃದ್ಧಿ ಸೂಚ್ಯಂಕದಲ್ಲಿ (EDI) ಅಗ್ರಸ್ಥಾನದಲ್ಲಿತ್ತು.<ref>{{Cite news |author=D Suresh Kumar |url=https://timesofindia.indiatimes.com/india/Kerala-tops-primary-education-index/articleshow/3587924.cms |title=Kerala tops primary education index |work=The Times of India |date=13 October 2008 |access-date=30 July 2009}}</ref> {{As of|2007}}, ಪ್ರಾಥಮಿಕ ಶಿಕ್ಷಣದಲ್ಲಿ ದಾಖಲಾತಿಯು ಸುಮಾರು 100% ಆಗಿತ್ತು; ಮತ್ತು, ಭಾರತದ ಇತರ ರಾಜ್ಯಗಳಿಗಿಂತ ಭಿನ್ನವಾಗಿ, ಶೈಕ್ಷಣಿಕ ಅವಕಾಶವು ಲಿಂಗಗಳು, ಸಾಮಾಜಿಕ ಗುಂಪುಗಳು ಮತ್ತು ಪ್ರದೇಶಗಳ ನಡುವೆ ಸುಮಾರು ಸಮಾನವಾಗಿ ಹಂಚಿಕೆಯಾಗಿತ್ತು.<ref name="Devrep255-258">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=255–58 |access-date=30 May 2015}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 93.9% ಸಾಕ್ಷರತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸಾಕ್ಷರತಾ ಪ್ರಮಾಣ 74.0% ಕ್ಕೆ ಹೋಲಿಸಿದರೆ.<ref name="IBNLiteracy2013">{{cite news |title=Tripura tops literacy rate with 94.65 per cent, leaves behind Kerala |url=https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |archive-url=https://web.archive.org/web/20130913005546/https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |url-status=dead |archive-date=13 September 2013 |access-date=12 February 2015 |work=IBNLive |date=9 September 2013}}</ref> ಜನವರಿ 2016 ರಲ್ಲಿ, ಕೇರಳವು ತನ್ನ ''ಅಥುಲ್ಯಂ'' ಸಾಕ್ಷರತಾ ಕಾರ್ಯಕ್ರಮದ ಮೂಲಕ 100% ಪ್ರಾಥಮಿಕ ಶಿಕ್ಷಣವನ್ನು ಸಾಧಿಸಿದ ಭಾರತದ ಮೊದಲ ರಾಜ್ಯವಾಯಿತು.<ref>{{cite news |url=https://www.ibtimes.co.in/kerala-becomes-1st-indian-state-achieve-100-primary-education-662878 |title=Kerala becomes 1st Indian state to achieve 100% primary education |date=12 January 2016 |access-date=14 January 2016 |work=International Business Times}}</ref>
ರಾಜ್ಯದ ಶಾಲೆಗಳಲ್ಲಿ ಪ್ರಚಲಿತದಲ್ಲಿರುವ ಶಿಕ್ಷಣ ವ್ಯವಸ್ಥೆಯು 10-ವರ್ಷದ ಅಧ್ಯಯನದ ಆರಂಭಿಕ ಕೋರ್ಸ್ ಅನ್ನು ನಿರ್ದಿಷ್ಟಪಡಿಸುತ್ತದೆ, ಇದನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ: ಕೆಳಗಿನ ಪ್ರಾಥಮಿಕ, ಮೇಲಿನ ಪ್ರಾಥಮಿಕ, ಮತ್ತು ಮಾಧ್ಯಮಿಕ ಶಾಲೆ—''4+3+3'' ಎಂದು ಕರೆಯಲ್ಪಡುತ್ತದೆ, ಇದು ಪ್ರತಿ ಹಂತದ ವರ್ಷಗಳ ಸಂಖ್ಯೆಯನ್ನು ಸೂಚಿಸುತ್ತದೆ.<ref name="Devrep255-258" /> ಮೊದಲ 10 ವರ್ಷಗಳ ಶಾಲಾ ಶಿಕ್ಷಣದ ನಂತರ, ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ಪ್ರಮುಖ ವಿಷಯಗಳಲ್ಲಿ ಒಂದರಲ್ಲಿ—[[ಉದಾರ ಕಲೆಗಳು]], ವಾಣಿಜ್ಯ, ಅಥವಾ ವಿಜ್ಞಾನ—[[ಜೂನಿಯರ್ ಕಾಲೇಜು|ಹೈಯರ್ ಸೆಕೆಂಡರಿ ಶಾಲಾ]] ಶಿಕ್ಷಣಕ್ಕೆ ದಾಖಲಾಗುತ್ತಾರೆ.<ref name="Edu_Ker" /> ಹೆಚ್ಚಿನ ಸರ್ಕಾರಿ ಶಾಲೆಗಳು [[ಕೇರಳ ಬೋರ್ಡ್ ಆಫ್ ಪಬ್ಲಿಕ್ ಎಕ್ಸಾಮಿನೇಷನ್]] ನೊಂದಿಗೆ ಸಂಯೋಜಿತವಾಗಿವೆ.<ref>{{Cite web |url=https://sametham.kite.kerala.gov.in/ |title=Kerala School Data Bank |access-date=5 December 2020 |website=sametham.kite.kerala.gov.in |publisher=Government of Kerala}}</ref> ಇತರ ಶೈಕ್ಷಣಿಕ ಮಂಡಳಿಗಳೆಂದರೆ [[ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ]] (ICSE), [[ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ]] (CBSE), ಮತ್ತು [[ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ]] (NIOS).<ref name="Edu_Ker">{{cite web |title=Education in Kerala |url=https://india.gov.in/knowindia/state_uts.php?id=54 |archive-url=https://web.archive.org/web/20111218082340/https://india.gov.in/knowindia/state_uts.php?id=54 |archive-date=18 December 2011 |publisher=Government of India |access-date=30 May 2015}}</ref>
== ಸಂಸ್ಕೃತಿ ==
{{Main|ಕೇರಳದ ಸಂಸ್ಕೃತಿ}}
{{Multiple image
| direction = vertical
| width = 220
| image1 = Kathakali BNC.jpg
| alt1 = Kathakali Performance
| caption1 = ಒಬ್ಬ [[ಕಥಕ್ಕಳಿ]] ಕಲಾವಿದ
| image4 = 5 image collage of floral arrangement during the Hindu festival of Onam Kerala.jpg
| alt4 = Pookkalam
| caption4 = [[ಓಣಂ]] ಸಮಯದಲ್ಲಿ, ಕೇರಳದ ಅತಿದೊಡ್ಡ ಆಚರಣೆ, ಕೇರಳೀಯರು ತಮ್ಮ ಮನೆಗಳ ಮುಂದೆ ''ಪೂಕ್ಕಲಂ'' (ಹೂವಿನ ಕಾರ್ಪೆಟ್) ವಿನ್ಯಾಸಗಳನ್ನು ರಚಿಸುತ್ತಾರೆ.
| image5 = ThrissurPooram-Kuda.jpg
| alt5 = Thrissur Pooram festival
| caption5 = [[ತೃಶೂರ್ ಪೂರಂ]] ಹಬ್ಬ
| image6 = Mohiniyattam at Kerala School Kalolsavam 2019 02.jpg
| alt6 = Mohiniattam
| caption6 = ಒಂದು ''[[ಮೋಹಿನಿಯಾಟ್ಟಂ]]'' ಪ್ರದರ್ಶನ
| image8 = sadhya DSW.jpg
| caption8 = ಓಣಂ [[ಸಾಧ್ಯ]]
| total_width =
}}
ಕೇರಳದ ಸಂಸ್ಕೃತಿಯು ಮಿಶ್ರ ಮತ್ತು ವಿಶ್ವವ್ಯಾಪಿ ಸ್ವರೂಪದ್ದಾಗಿದೆ ಮತ್ತು ಇದು [[ಭಾರತೀಯ ಸಂಸ್ಕೃತಿ]]ಯ ಅವಿಭಾಜ್ಯ ಅಂಗವಾಗಿದೆ.<ref name="Menon3">{{cite book |title=Cultural Heritage of Kerala |author=A. Sreedhara Menon |publisher=D C Books |year=2008 |isbn=978-8126419036 |pages=13–15 |url=https://books.google.com/books?id=S9RMxjdjUVAC |access-date=30 May 2015}}</ref> ಇದು [[ಇಂಡೋ-ಆರ್ಯನ್ ಜನರು|ಆರ್ಯ]], [[ದಕ್ಷಿಣ ಭಾರತೀಯ ಸಂಸ್ಕೃತಿ|ದ್ರಾವಿಡ]], [[ಅರಬ್ ಸಂಸ್ಕೃತಿ|ಅರಬ್]], ಮತ್ತು [[ಯುರೋಪಿನ ಸಂಸ್ಕೃತಿ|ಯುರೋಪಿಯನ್]] ಸಂಸ್ಕೃತಿಗಳ ಸಮ್ಮಿಳನವಾಗಿದೆ,<ref>{{Cite book |url=https://books.google.com/books?id=FVsw35oEBv4C |title=A Survey Of Kerala History |last=Menon |first=A. Sreedhara |year=2007 |publisher=DC Books |isbn=978-8126415786 |page=55 |language=en}}</ref> ಇದು ಸಹಸ್ರಮಾನಗಳಲ್ಲಿ, ಭಾರತದ ಇತರ ಭಾಗಗಳು ಮತ್ತು ವಿದೇಶಗಳಿಂದ ಪ್ರಭಾವಗಳ ಅಡಿಯಲ್ಲಿ ಅಭಿವೃದ್ಧಿಗೊಂಡಿದೆ.<ref name="Menon1978a">{{cite book |author=A. Sreedhara Menon |title=Cultural Heritage of Kerala: An Introduction |url=https://books.google.com/books?id=px5BAAAAMAAJ |year=1978 |publisher=East-West Publications |page=10}}</ref> ಇದು ಅದರ ಪ್ರಾಚೀನತೆ ಮತ್ತು [[ಮಲಯಾಳಿ ಜನರು]] ನಿರ್ವಹಿಸುವ ಸಾವಯವ ನಿರಂತರತೆಯಿಂದ ವ್ಯಾಖ್ಯಾನಿಸಲ್ಪಟ್ಟಿದೆ.<ref>{{cite book |title=Contribution of Travancore to Karnatic Music |url=https://books.google.com/books?id=VVftZwEACAAJ |year=2004 |publisher=Information & Public Relations Department, Government of Kerala |pages=7–37}}</ref> ಇದು ನೆರೆಯ ಮತ್ತು ವಿದೇಶಿ ಸಂಸ್ಕೃತಿಗಳೊಂದಿಗೆ ಶತಮಾನಗಳ ಸಂಪರ್ಕದ ಮೂಲಕ ವಿಸ್ತರಿಸಲ್ಪಟ್ಟಿದೆ.<ref name="Bhagyalekshmy_2004d_29">{{cite book |author=S. Bhagyalekshmy |title=Contribution of Travancore to Karnatic Music |url=https://books.google.com/books?id=VVftZwEACAAJ |access-date=6 January 2013 |year=2004 |publisher=Information & Public Relations Department, Government of Kerala}}</ref> ಆದಾಗ್ಯೂ, ಕೇರಳದ ದೇಶದ ಉಳಿದ ಭಾಗಗಳಿಂದ ಭೌಗೋಳಿಕ ಪ್ರತ್ಯೇಕತೆಯು ವಿಶಿಷ್ಟವಾದ ಜೀವನಶೈಲಿ, ಕಲೆ, ವಾಸ್ತುಶಿಲ್ಪ, ಭಾಷೆ, ಸಾಹಿತ್ಯ ಮತ್ತು ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿಗೆ ಕಾರಣವಾಗಿದೆ.<ref name="Menon3" /> ರಾಜ್ಯದಲ್ಲಿ ಪ್ರತಿ ವರ್ಷ 10,000 ಕ್ಕೂ ಹೆಚ್ಚು ಹಬ್ಬಗಳನ್ನು ಆಚರಿಸಲಾಗುತ್ತದೆ.<ref name="1000hrs">{{cite news |date=4 March 2010 |title=India's overworked elephants |url=https://news.bbc.co.uk/2/hi/south_asia/8533776.stm |access-date=30 May 2015 |work=BBC}}</ref> ಕೇರಳದಲ್ಲಿ 825 CE ಯಿಂದ ಪ್ರಾರಂಭವಾದ ಸೌರ ನಾಕ್ಷತ್ರಿಕ ಕ್ಯಾಲೆಂಡರ್ ಆಗಿರುವ [[ಮಲಯಾಳಂ ಕ್ಯಾಲೆಂಡರ್]],<ref name="Devika2005">{{cite book |author=J. Devika |title=Her-self: Early Writings on Gender by Malayalee Women, 1898–1938 |url=https://books.google.com/books?id=Xyr6gXmva-gC&pg=PA5 |access-date=17 November 2012 |year=2005 |publisher=Popular Prakashan |isbn=978-8185604749 |page=5}}</ref> ಕೃಷಿ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಯೋಜಿಸುವಲ್ಲಿ ಸಾಮಾನ್ಯ ಬಳಕೆಯನ್ನು ಕಂಡುಕೊಳ್ಳುತ್ತದೆ.<ref name="Singh2004">{{cite book |author=Kumar Suresh Singh |title=People of India: Maharashtra |url=https://books.google.com/books?id=4bfmnmsBfQ4C&pg=PA1524 |access-date=17 November 2012 |year=2004 |publisher=Popular Prakashan |isbn=978-8179911020 |page=1524}}</ref> ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ [[ಮಲಯಾಳಂ]] ಕೇರಳದ [[ಅಧಿಕೃತ ಭಾಷೆ]]ಯಾಗಿದೆ.<ref name="Benedikter2009">{{cite book |author=Thomas Benedikter |title=Language Policy and Linguistic Minorities in India: An Appraisal of the Linguistic Rights of Minorities in India |url=https://books.google.com/books?id=vpZv2GHM7VQC&pg=PA90 |access-date=18 November 2012 |year=2009 |publisher=LIT Verlag Münster |isbn=978-3-643-10231-7 |page=90}}</ref> ಭಾರತದಲ್ಲಿ [[ಅಧಿಕೃತ ಸ್ಥಾನಮಾನ ಹೊಂದಿರುವ ಭಾಷೆಗಳು|ನಿಗದಿತ ಮತ್ತು ಅನಿಗದಿತ]] ಭಾಷೆಗಳಲ್ಲಿ ಒಂದು ಡಜನ್ಗಿಂತಲೂ ಹೆಚ್ಚು ಭಾಷೆಗಳನ್ನು ಮಾತನಾಡಲಾಗುತ್ತದೆ.<ref name="census2011-langreport">{{cite web |title=Language – India, States and Union Territories |url=https://www.censusindia.gov.in/2011Census/C-16_25062018_NEW.pdf |work=Census of India 2011 |publisher=Office of the Registrar General |pages=13–14}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಮದ್ಯ ಸೇವನೆಯನ್ನು ಹೊಂದಿದೆ.<ref>{{Cite news |url=https://www.bbc.co.uk/news/world-asia-india-51372583 |title=Shock after alcohol flows from kitchen taps in Kerala |work=BBC News |date=6 February 2020}}</ref>
=== ಹಬ್ಬಗಳು ===
{{Main|ಕೇರಳದ ದೇವಾಲಯ ಹಬ್ಬಗಳು|ಓಣಂ}}
ಕೇರಳದಲ್ಲಿನ ಅನೇಕ ದೇವಾಲಯಗಳು ವರ್ಷದ ನಿರ್ದಿಷ್ಟ ದಿನಗಳಲ್ಲಿ ಹಬ್ಬಗಳನ್ನು ನಡೆಸುತ್ತವೆ.<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA76 |year=2008 |publisher=D.C. Books |isbn=978-8126419036 |page=76}}</ref> ಈ ಹಬ್ಬಗಳ ಸಾಮಾನ್ಯ ಲಕ್ಷಣವೆಂದರೆ ಪವಿತ್ರ ಧ್ವಜವನ್ನು ಏರಿಸುವುದು, ಅದನ್ನು ಹಬ್ಬದ ಕೊನೆಯ ದಿನದಂದು ದೇವತೆಯನ್ನು ಮುಳುಗಿಸಿದ ನಂತರ ಇಳಿಸಲಾಗುತ್ತದೆ.<ref>{{cite book |title=The Legacy of Kerala |url=https://books.google.com/books?id=S9RMxjdjUVAC&pg=PA34 |year=1982 |publisher=Department of Public Relations, Government of Kerala |isbn=978-8126437986 |page=34}}</ref> ಕೆಲವು ಹಬ್ಬಗಳು ಪೂರಂಗಳನ್ನು ಒಳಗೊಂಡಿವೆ, ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು [[ತೃಶೂರ್ ಪೂರಂ]].<ref>{{cite book |title=World Encyclopaedia of Interfaith Studies: World religions |url=https://books.google.com/books?id=fFwi7qRRgosC |year=2009 |publisher=Jnanada Prakashan |isbn=978-8171392803 |pages=704–10}}</ref> "ಆನೆಗಳು, ಪಟಾಕಿ ಪ್ರದರ್ಶನಗಳು ಮತ್ತು ದೊಡ್ಡ ಗುಂಪುಗಳು" ತೃಶೂರ್ ಪೂರಂನ ಪ್ರಮುಖ ಆಕರ್ಷಣೆಗಳಾಗಿವೆ.<ref>{{Cite news |title=The stars of Pooram show are jumbos |date=26 May 2006 |access-date=11 November 2007 |url=https://www.hindu.com/2006/05/26/stories/2006052610410500.htm |archive-url=https://web.archive.org/web/20071118212644/https://www.hindu.com/2006/05/26/stories/2006052610410500.htm |url-status=dead |archive-date=18 November 2007 |work=[[The Hindu]] |location=Chennai, India}}</ref> ಇತರ ಪ್ರಸಿದ್ಧ ಹಬ್ಬಗಳೆಂದರೆ [[ಮಕರವಿಳಕ್ಕು]],<ref name="Ltd.2013b">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA433 |year=2013 |publisher=Biju Mathew |isbn=978-8192128443 |page=433}}</ref> [[ಚಿನಕ್ಕತ್ತೂರು ಪೂರಂ]], [[ಅಟ್ಟುಕಲ್ ಪೊಂಗಲ]] ಮತ್ತು [[ನೆನ್ಮಾರ ವಲ್ಲಂಗಿ ವೇಳ]]<ref name="Stott2014">{{cite book |author=David Stott |title=Kerala Footprint Focus Guide: Includes Kochi, Alappuzha, Thrissur, Periyar, River Nila |url=https://books.google.com/books?id=-Jx8AwAAQBAJ&pg=PA94 |year=2014 |publisher=Footprint Travel Guides |isbn=978-1-909268-79-1 |page=94}}</ref> ಇವುಗಳ ಜೊತೆಗೆ, ಸ್ಥಳೀಯವಾಗಿ [[ಉತ್ಸವ]]ಗಳು ಎಂದು ಕರೆಯಲ್ಪಡುವ ಹಬ್ಬಗಳನ್ನು ಹೆಚ್ಚಿನ ದೇವಾಲಯಗಳು ವಾರ್ಷಿಕ ಆಧಾರದ ಮೇಲೆ ನಡೆಸುತ್ತವೆ. ಅದನ್ನು ಪಡೆದುಕೊಳ್ಳುವ ದೇವಾಲಯಗಳು ಸಾಮಾನ್ಯವಾಗಿ ಹಬ್ಬದ ಭಾಗವಾಗಿ ಕನಿಷ್ಠ ಒಂದು ಶ್ರೀಮಂತವಾಗಿ ಅಲಂಕರಿಸಿದ ಆನೆಯನ್ನು ಒಳಗೊಳ್ಳುತ್ತವೆ. ದೇವಾಲಯದಲ್ಲಿನ ವಿಗ್ರಹವನ್ನು ಈ ಆನೆಯ ಮೇಲೆ ಗ್ರಾಮಾಂತರದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ಮೆರವಣಿಗೆಯು ದೇವಾಲಯದ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿದಾಗ, ಜನರು ಸಾಮಾನ್ಯವಾಗಿ ಅಕ್ಕಿ, ತೆಂಗಿನಕಾಯಿ ಮತ್ತು ಇತರ ಕಾಣಿಕೆಗಳನ್ನು ನೀಡುತ್ತಾರೆ.<ref name="NarayananKurup1976">{{cite book |author1=M. G. S. Narayanan |author2=K. K. N. Kurup |title=Historical Studies in Kerala |url=https://books.google.com/books?id=mvELAAAAIAAJ |year=1976 |publisher=Department of History, University of Calicut |pages=68–81}}</ref> ಮೆರವಣಿಗೆಗಳು ಹೆಚ್ಚಾಗಿ [[ಪಂಚಾರಿ ಮೇಳಂ]] ಅಥವಾ [[ಪಂಚವಾದ್ಯ]]ದಂತಹ ಸಾಂಪ್ರದಾಯಿಕ ಸಂಗೀತವನ್ನು ಒಳಗೊಂಡಿರುತ್ತವೆ.<ref name="Killius2006">{{cite book |author=Rolf Killius |title=Ritual Music and Hindu Rituals of Kerala |url=https://books.google.com/books?id=c_fZAAAAMAAJ |year=2006 |publisher=B.R. Rhythms |isbn=978-8188827077 |page=61}}</ref> [[ಈದ್ ಅಲ್-ಫಿತರ್]] ಮತ್ತು [[ಈದ್ ಅಲ್-ಅಧಾ]] ಅನ್ನು ರಾಜ್ಯದ ಮುಸ್ಲಿಂ ಸಮುದಾಯವು ಆಚರಿಸುತ್ತದೆ, ಆದರೆ [[ಕ್ರಿಸ್ಮಸ್]] ಮತ್ತು [[ಈಸ್ಟರ್]] ನಂತಹ ಹಬ್ಬಗಳನ್ನು ಕ್ರೈಸ್ತರು ಆಚರಿಸುತ್ತಾರೆ.<ref name="Malabar">{{Cite book |last=Sreedhara Menon |first=A. |url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |title=''Kerala Charitram'' |publisher=DC Books |year=2007 |isbn=978-8126415885 |edition=2007 |location=Kottayam |access-date=19 July 2020 |archive-url=https://web.archive.org/web/20211113141403/https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |archive-date=13 November 2021 |url-status=live}}</ref> ಓಣಂ ಕೇರಳದ ಜನರು ಆಚರಿಸುವ ಸುಗ್ಗಿಯ ಹಬ್ಬವಾಗಿದೆ ಮತ್ತು ಇದು ರಾಜ್ಯದ ಕೃಷಿ ಹಿಂದಿನ ಕಾಲವನ್ನು ನೆನಪಿಸುತ್ತದೆ.<ref name="Choondal1980">{{cite book |author=Chummar Choondal |title=Kerala Folk Literature |year=1980 |url=https://books.google.com/books?id=EnQOAAAAYAAJ |publisher=Kerala Folklore Academy}}</ref><ref name="Menon2007b">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA80 |year=2007 |publisher=DC Books |isbn=978-8126415786 |pages=80–}}</ref> ಇದು ಕೇರಳದ ಸ್ಥಳೀಯ ಹಬ್ಬವಾಗಿದೆ<ref name="Darpan2006b">{{cite book |author=Pratiyogita Darpan |title=Pratiyogita Darpan |url=https://books.google.com/books?id=lugDAAAAMBAJ&pg=PT83 |year=2006 |publisher=Pratiyogita Darpan |page=624}}</ref> ಇದು ನಾಲ್ಕು ದಿನಗಳ ಸಾರ್ವಜನಿಕ ರಜಾದಿನಗಳನ್ನು ಒಳಗೊಂಡಿದೆ; ಓಣಂ ಮುನ್ನಾದಿನದಿಂದ (ಉತ್ತ್ರಾಡಂ) ನಾಲ್ಕನೇ ಓಣಂ ದಿನದವರೆಗೆ.<ref>{{cite book |title=Purāṇam |url=https://books.google.com/books?id=sfxjAAAAMAAJ |year=2004 |publisher=All-India Kasiraja Trust. |page=17}}</ref> ಓಣಂ ಮಲಯಾಳಂ ತಿಂಗಳು ಚಿಂಗಂ (ಆಗಸ್ಟ್–ಸೆಪ್ಟೆಂಬರ್) ನಲ್ಲಿ ಬರುತ್ತದೆ<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA66 |year=2008 |publisher=D.C. Books |isbn=978-8126419036 |page=66}}</ref> ಮತ್ತು ಇದು ರಾಜ [[ಮಹಾಬಲಿ]]ಯ ಮನೆಗೆ ಮರಳುವ ಸ್ಮರಣೆಯನ್ನು ಸೂಚಿಸುತ್ತದೆ.<ref name="MythOnam">{{cite news |last1=Praveen |first1=M. P. |title=Myth, mystique, and traditions of Onam |url=https://www.thehindu.com/todays-paper/tp-features/tp-editorialfeatures/myth-mystique-and-traditions-of-onam/article2433921.ece |access-date=12 November 2015 |work=The Hindu |date=8 September 2011}}</ref> ಓಣಂನ ಒಟ್ಟು ಅವಧಿಯು 10 ದಿನಗಳು ಮತ್ತು ಇದನ್ನು ಕೇರಳದಾದ್ಯಂತ ಆಚರಿಸಲಾಗುತ್ತದೆ. ಇದು [[ವಲ್ಲಂ ಕಳಿ]],<ref>{{Cite web |title=Vallamkali – Resplendent Water Regattas of Kerala {{!}} Kerala Boat Races{{!}} Onam{{!}} Kerala Backwaters {{!}} Kerala |url=https://www.keralatourism.org/kerala-article/2020/vallamkali-resplendent-water-regattas-of-kerala/1017 |access-date=9 June 2021|website=Kerala Tourism |language=en}}</ref> [[ಪುಲಿಕಳಿ]],<ref name="Ltd.2013">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA535 |year=2013 |publisher=Biju Mathew |isbn=978-8192128443 |page=535}}</ref> ಪೂಕ್ಕಲಂ,<ref>{{cite book |title=A Biblical Approach to Indian Traditions and Beliefs |url=https://books.google.com/books?id=f35VH7LrZ1IC&pg=PA90 |year=2008 |publisher=Armour Publishing Pte Ltd |isbn=978-9814222396 |page=90}}</ref> ತುಂಬಿ ತುಳ್ಳಲ್<ref name="Mohapatra2013">{{cite book |author=J Mohapatra |title=Wellness In Indian Festivals & Rituals |url=https://books.google.com/books?id=UdpzAgAAQBAJ&pg=PA142 |year=2013 |publisher=Partridge Pub |isbn=978-1-4828-1690-7 |page=142}}</ref> ಮತ್ತು [[ಓನವಿಲ್ಲು]]<ref name="(Princess.)1998">{{cite book |author=Gouri Lakshmi Bayi (Princess.) |title=Thulasi garland |url=https://books.google.com/books?id=5lcvAAAAYAAJ |year=1998 |publisher=Bharatiya Vidya Bhavan |isbn=978-8172761103}}</ref> ನಂತಹ ಸಾಂಸ್ಕೃತಿಕ ಅಂಶಗಳೊಂದಿಗೆ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ.
### ಸಂಗೀತ ಮತ್ತು ನೃತ್ಯ
{{Main|ಕೇರಳದ ಕಲೆಗಳು|ಕೇರಳದ ಸಂಗೀತ}}
ಕೇರಳವು ಹಲವಾರು [[ಪ್ರದರ್ಶನ ಕಲೆಗಳ]] ನೆಲೆಯಾಗಿದೆ. ಇವುಗಳಲ್ಲಿ ಐದು ಶಾಸ್ತ್ರೀಯ ನೃತ್ಯ ಪ್ರಕಾರಗಳು ಸೇರಿವೆ: [[ಕಥಕ್ಕಳಿ]], [[ಮೋಹಿನಿಯಾಟ್ಟಂ]], [[ಕೂಡಿಯಾಟ್ಟಂ]], [[ಒಟ್ಟನ್ ತುಳ್ಳಲ್|ತುಳ್ಳಲ್]] ಮತ್ತು [[ಕೃಷ್ಣನಾಟ್ಟಂ]], ಇವು ಶಾಸ್ತ್ರೀಯ ಅವಧಿಯಲ್ಲಿ ರಾಜಮನೆತನಗಳ ಆಶ್ರಯದಲ್ಲಿ ದೇವಾಲಯದ ರಂಗಮಂದಿರಗಳಲ್ಲಿ ಹುಟ್ಟಿ ಅಭಿವೃದ್ಧಿಗೊಂಡವು.<ref>{{cite journal |url=https://www.sruti.org/library/sruti%20ranjani/2004/sruti_ranjani_2004.pdf |title=Classical Dance Art Forms of Kerala |author=Kala Menon |journal=Sruti Ranjini |date=November 2004 |volume=14 |issue=1 |page=11 |access-date=7 February 2022 |archive-date=4 March 2016 |archive-url=https://web.archive.org/web/20160304091717/http://www.sruti.org/library/sruti%20ranjani/2004/sruti_ranjani_2004.pdf |url-status=dead }}</ref> [[ಕೇರಳ ನಾಟನಂ]], [[ಥಿರಯಾಟ್ಟಂ]],<ref>"Thirayattam" (Folklore Text-Malayalam), State Institute of language, Kerala {{ISBN|978-8120042940}}</ref> [[ಕಳಿಯಾಟ್ಟಂ]], [[ಥೆಯ್ಯಂ]], [[ಕೂತು]] ಮತ್ತು [[ಪದಯಾನಿ]] ಈ ಪ್ರದೇಶದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಇತರ ನೃತ್ಯ ಪ್ರಕಾರಗಳಾಗಿವೆ.<ref name="Menon2008">{{cite book |author=A Sreedhara Menon |title=Cultural heritage of Kerala |url=https://books.google.com/books?id=R7QNGkZKc5wC&pg=PA106 |access-date=17 November 2012 |year=2008 |publisher=D C Books |isbn=978-8126419036 |page=106}}</ref> [[ಒಪ್ಪನ]] ಮತ್ತು [[ದಫ್ ಮುಟ್ಟು]] ನಂತಹ ಕೆಲವು ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ರಾಜ್ಯದ ಮುಸ್ಲಿಮರಲ್ಲಿ ಜನಪ್ರಿಯವಾಗಿದ್ದವು,<ref name="google19">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA8 |access-date=17 November 2012 |year=2008 |publisher=Sura Books |isbn=978-8174781642 |page=8}}</ref> ಆದರೆ [[ಮಾರ್ಗಂಕಳಿ]] ಮತ್ತು [[ಪರಿಚಮುಟ್ಟುಕಳಿ]] ಸಿರಿಯನ್ ಕ್ರೈಸ್ತರಲ್ಲಿ ಜನಪ್ರಿಯವಾಗಿವೆ ಮತ್ತು [[ಚವಿಟ್ಟು ನಾಟಕಂ]] ಲ್ಯಾಟಿನ್ ಕ್ರೈಸ್ತರಲ್ಲಿ ಜನಪ್ರಿಯವಾಗಿದೆ.<ref name="Nārāyaṇappaṇikkar1991">{{cite book |author=Kāvālaṃ Nārāyaṇappaṇikkar |title=Folklore of Kerala |url=https://books.google.com/books?id=xH6BAAAAMAAJ |access-date=17 November 2012 |year=1991 |publisher=National Book Trust, India |page=146 |isbn=978-8123725932}}</ref><ref name="Kasbekar2006">{{cite book |author=Asha Kasbekar |title=Pop Culture India!: Media, Arts, And Lifestyle |url=https://books.google.com/books?id=Sv7Uk0UcdM8C&pg=PA43 |access-date=17 November 2012 |year=2006 |publisher=ABC-CLIO |isbn=978-1-85109-636-7 |pages=43–44}}</ref> ಕೇರಳದಲ್ಲಿ ಶಾಸ್ತ್ರೀಯ ಸಂಗೀತದ ಅಭಿವೃದ್ಧಿಯು ಕೇರಳದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಸಾಂಪ್ರದಾಯಿಕ ಪ್ರದರ್ಶನ ಕಲೆಗಳು ನೀಡಿದ ಕೊಡುಗೆಗಳಿಗೆ ಕಾರಣವಾಗಿದೆ.<ref name="Menon2">{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |pages=48–51 |url=https://books.google.com/books?id=S9RMxjdjUVAC |access-date=30 May 2015}}</ref> ಸ್ಥಳೀಯ ಶಾಸ್ತ್ರೀಯ ಸಂಗೀತ ಪ್ರಕಾರವಾದ [[ಸೋಪಾನ ಸಂಗೀತ]]ದ ಅಭಿವೃದ್ಧಿಯು ದೇವಾಲಯದ ಸಂಸ್ಕೃತಿಯು ಕೇರಳದ ಕಲೆಗಳಿಗೆ ನೀಡಿದ ಶ್ರೀಮಂತ ಕೊಡುಗೆಯನ್ನು ವಿವರಿಸುತ್ತದೆ.<ref name="Menon2" /> [[ಕರ್ನಾಟಕ ಸಂಗೀತ]]ವು ಕೇರಳೀಯ ಸಾಂಪ್ರದಾಯಿಕ ಸಂಗೀತದಲ್ಲಿ ಪ್ರಾಬಲ್ಯ ಹೊಂದಿದೆ. ಇದು 19 ನೇ ಶತಮಾನದಲ್ಲಿ [[ಸ್ವಾತಿ ತಿರುನಾಳ್ ರಾಮ ವರ್ಮ]] ಅವರು ಈ ಪ್ರಕಾರವನ್ನು ಜನಪ್ರಿಯಗೊಳಿಸಿದ ಪರಿಣಾಮವಾಗಿದೆ.<ref name="Bhagyalekshmy_2004d_29" /> ರಾಗ-ಆಧಾರಿತ ವ್ಯಾಖ್ಯಾನಗಳು ''ಸೋಪಾನಂ'' ಎಂದು ಕರೆಯಲ್ಪಡುತ್ತವೆ, ಇವು ''ಕಥಕ್ಕಳಿ'' ಪ್ರದರ್ಶನಗಳೊಂದಿಗೆ ಸೇರುತ್ತವೆ.<ref name="SchechnerAppel1990">{{cite book |author1=Richard Schechner |author2=Willa Appel |title=By Means of Performance: Intercultural Studies of Theatre and Ritual |url=https://books.google.com/books?id=K5ZuV_nn7KkC&pg=PA145 |access-date=18 November 2012 |year=1990 |publisher=Cambridge University Press |isbn=978-0-521-33915-5 |page=145}}</ref> ''ಮೇಳಂ'', ''ಪಾಂಡಿ'' ಮತ್ತು ''ಪಂಚಾರಿ'' ರೂಪಾಂತರಗಳನ್ನು ಒಳಗೊಂಡಂತೆ, ಹೆಚ್ಚು ತಾಳವಾದ್ಯ ಶೈಲಿಯ ಸಂಗೀತವಾಗಿದೆ;<ref name="BroughtonEllingham2000">{{cite book |author1=Simon Broughton |author2=Mark Ellingham |author3=Richard Trillo |title=World Music Volume 2 Latin and North America, Caribbean, India, Asia and Pacific: The Rough Guide |url=https://books.google.com/books?id=QzX8THIgRjUC&pg=PA97 |access-date=18 November 2012 |year=2000 |publisher=Rough Guides |isbn=978-1-85828-636-5 |page=97}}</ref> ಇದನ್ನು ''[[ಹಿಂದೂ ದೇವಾಲಯ|ಕ್ಷೇತ್ರಮ್]]''-ಕೇಂದ್ರಿತ ಹಬ್ಬಗಳಲ್ಲಿ ''[[ಚೆಂಡ]]'' ಬಳಸಿ ಪ್ರದರ್ಶಿಸಲಾಗುತ್ತದೆ. ''ಪಂಚವಾದ್ಯ'' ತಾಳವಾದ್ಯ ಸಮೂಹದ ಒಂದು ರೂಪವಾಗಿದೆ, ಇದರಲ್ಲಿ ಕಲಾವಿದರು ಐದು ವಿಧದ ತಾಳವಾದ್ಯ ವಾದ್ಯಗಳನ್ನು ಬಳಸುತ್ತಾರೆ.<ref name="BroughtonEllingham2000" /> ಕೇರಳದ ದೃಶ್ಯ ಕಲೆಗಳು [[ಕೇರಳದ ಭಿತ್ತಿಚಿತ್ರಗಳು|ಸಾಂಪ್ರದಾಯಿಕ ಭಿತ್ತಿಚಿತ್ರಗಳಿಂದ]] ರಾಜ್ಯದ ಅತ್ಯಂತ ಪ್ರಸಿದ್ಧ ವರ್ಣಚಿತ್ರಕಾರನಾದ [[ರಾಜಾ ರವಿ ವರ್ಮ]] ಅವರ ಕೃತಿಗಳವರೆಗೆ ವಿಸ್ತರಿಸಿವೆ.<ref name="Menon2" /> ಕೇರಳದ ಹೆಚ್ಚಿನ ಜಾತಿಗಳು ಮತ್ತು ಸಮುದಾಯಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದ ಜಾನಪದ ಗೀತೆಗಳು ಮತ್ತು ಗೀತೆಗಳ ಶ್ರೀಮಂತ ಸಂಗ್ರಹಗಳನ್ನು ಹೊಂದಿವೆ; ''[[ವಡಕ್ಕನ್ ಪಟ್ಟುಕಲ್]]'' (ಉತ್ತರ ಗೀತೆಗಳು), ''ತೆಕ್ಕನ್ ಪಟ್ಟುಕಲ್'' (ದಕ್ಷಿಣ ಗೀತೆಗಳು), ''ವಂಚಿ ಪಟ್ಟುಕಲ್'' (ದೋಣಿ ಹಾಡುಗಳು), ''[[ಮಾಪ್ಪಿಲ ಪಟ್ಟುಕಲ್]]'' (ಮುಸ್ಲಿಂ ಹಾಡುಗಳು) ಮತ್ತು ''ಪಲ್ಲಿಪಟ್ಟುಕಲ್'' (ಚರ್ಚ್ ಹಾಡುಗಳು) ಅವುಗಳಲ್ಲಿ ಕೆಲವು.<ref>{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |page=41 |url=https://books.google.com/books?id=S9RMxjdjUVAC |access-date=30 May 2015}}</ref>
=== ಸಿನಿಮಾ ===
{{Main|ಮಲಯಾಳಂ ಸಿನಿಮಾ}}
[[ಮಲಯಾಳಂ ಸಿನಿಮಾ|ಮಲಯಾಳಂ ಚಲನಚಿತ್ರಗಳು]] ಸಾಮಾಜಿಕ ವಿಷಯಗಳ ಪ್ರಸ್ತುತಿಯೊಂದಿಗೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಸ್ಥಾನವನ್ನು ಕೆತ್ತಿಕೊಂಡಿವೆ.<ref name="Menon">{{cite book |title=Cultural Heritage of Kerala |first=Sreedhara |last=Menon |publisher=D C Books |year=2008 |url=https://books.google.com/books?id=R7QNGkZKc5wC |isbn=978-8126419036 |pages=128–29 |access-date=30 May 2015}}</ref><ref>{{cite book |title=Encyclopaedia of Indian Literature |first=Amaresh |last=Datta |publisher=Sahitya Akademi |year=1987 |url=https://books.google.com/books?id=ObFCT5_taSgC |isbn=978-8126018031 |pages=751–53}}</ref> [[ಅಡೂರ್ ಗೋಪಾಲಕೃಷ್ಣನ್]], [[ಮಂಕಡ ರವಿ ವರ್ಮ]], [[ಜಿ. ಅರವಿಂದನ್]], [[ಭರತನ್]], [[ಪಿ. ಪದ್ಮರಾಜನ್]], [[ಎಂ.ಟಿ. ವಾಸುದೇವನ್ ನಾಯರ್]], [[ಕೆ.ಜಿ. ಜಾರ್ಜ್]], [[ಪ್ರಿಯದರ್ಶನ್]], [[ಜಾನ್ ಅಬ್ರಹಾಂ (ನಿರ್ದೇಶಕ)|ಜಾನ್ ಅಬ್ರಹಾಂ]], [[ರಾಮು ಕಾರ್ಯಾಟ್]], [[ಕೆ ಎಸ್ ಸೇತುಮಾಧವನ್]], [[ಎ. ವಿನ್ಸೆಂಟ್]] ಮತ್ತು [[ಶಾಜಿ ಎನ್ ಕರುಣ್]] ನಂತಹ ಕೇರಳದ ನಿರ್ದೇಶಕರು ಭಾರತೀಯ [[ಸಮಾನಾಂತರ ಸಿನಿಮಾ]]ಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಕೇರಳವು [[ಮೋಹನ್ಲಾಲ್]], [[ಮಮ್ಮೂಟ್ಟಿ]], [[ಸತ್ಯನ್]], [[ಪ್ರೇಮ್ ನಝೀರ್]], [[ಮಧು (ನಟ)|ಮಧು]], [[ಶೀಲಾ]], [[ಶಾರದ (ನಟಿ)|ಶಾರದಾ]], [[ಮಿಸ್ ಕುಮಾರಿ]], [[ಜಯನ್]], [[ಅಡೂರ್ ಭಾಸಿ]], [[ಸೀಮಾ (ನಟಿ)|ಸೀಮಾ]], [[ಭರತ್ ಗೋಪಿ]], [[ತಿಲಕನ್]], [[ವಿಜಯ ರಾಘವನ್]], [[ಕಲಾಭವನ್ ಮಣಿ]], [[ಇಂದ್ರನ್ಸ್]], [[ಶೋಭನಾ]], [[ನಿವಿನ್ ಪೌಲಿ]], [[ಶ್ರೀನಿವಾಸನ್]], [[ಉರ್ವಶಿ (ನಟಿ)|ಉರ್ವಶಿ]], [[ಮಂಜು ವಾರಿಯರ್]], [[ಸುರೇಶ್ ಗೋಪಿ]], [[ಜಯರಾಂ]], [[ಮುರಳಿ (ಮಲಯಾಳಂ ನಟ)|ಮುರಳಿ]], [[ಶಂಕರಾಡಿ]], [[ಕಾವ್ಯ ಮಾಧವನ್]], [[ಭಾವನಾ ಮೇನನ್]], [[ಪೃಥ್ವಿರಾಜ್ ಸುಕುಮಾರನ್|ಪೃಥ್ವಿರಾಜ್]], [[ಪಾರ್ವತಿ ತಿರುವೋತು|ಪಾರ್ವತಿ]], [[ಜಯಸೂರ್ಯ]], [[ದುಲ್ಕರ್ ಸಲ್ಮಾನ್]], [[ಒಡುವಿಲ್ ಉನ್ನಿಕೃಷ್ಣನ್]], [[ಜಗತಿ ಶ್ರೀಕುಮಾರ್]], [[ನೆಡುಮುಡಿ ವೇಣು]], [[ಕೆಪಿಎಸಿ ಲಲಿತಾ]], [[ಇನ್ನೋಸೆಂಟ್ (ನಟ)|ಇನ್ನೋಸೆಂಟ್]] ಮತ್ತು [[ಫಹಾದ್ ಫಾಜಿಲ್]] ನಂತಹ ಅಸಂಖ್ಯಾತ ನಟರಿಗೆ ಜನ್ಮ ನೀಡಿದೆ. ಕೊನೆಯ ಮಲಯಾಳಂ ನಟ ಪ್ರೇಮ್ ನಝೀರ್ 720 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.<ref>{{Cite news |last=Gangadhar |first=V. |title=Magic of Sophia Loren |url=https://www.hindu.com/mag/2003/11/02/stories/2003110200250500.htm |archive-url=https://web.archive.org/web/20031130011344/https://www.hindu.com/mag/2003/11/02/stories/2003110200250500.htm |url-status=dead |archive-date=30 November 2003 |date=2 October 2003 |department=Sunday Magazine |newspaper=[[The Hindu]] |location=Chennai, India |access-date=18 January 2015}}</ref> 1980 ರ ದಶಕದಿಂದ, ನಟರು [[ಮೋಹನ್ಲಾಲ್]] ಮತ್ತು [[ಮಮ್ಮೂಟ್ಟಿ]] ಅವರು ಚಲನಚಿತ್ರ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದಾರೆ; ಮೋಹನ್ಲಾಲ್ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (ನಾಲ್ಕು ಅಭಿನಯಕ್ಕಾಗಿ) ಗೆದ್ದಿದ್ದಾರೆ, ಆದರೆ ಮಮ್ಮೂಟ್ಟಿ ಅವರು ಅಭಿನಯಕ್ಕಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹೊಂದಿದ್ದಾರೆ.<ref>{{cite book |title=Sura's Year Book 2006 |author=Subburaj V.V.K |page=620 |isbn=978-8172541248 |url=https://books.google.com/books?id=Fz2WDD8sB0MC |publisher=Sura Books |access-date=30 May 2015}}</ref> ಮಲಯಾಳಂ ಸಿನಿಮಾ [[ಕೆ. ಜೆ. ಯೇಸುದಾಸ್]], [[ಕೆ.ಎಸ್. ಚಿತ್ರಾ]], [[ಎಂ. ಜಿ. ಶ್ರೀಕುಮಾರ್|ಎಂ.ಜಿ. ಶ್ರೀಕುಮಾರ್]], [[ವಯಲಾರ್ ರಾಮ ವರ್ಮ]], [[ವಿ. ಮಧುಸೂದನನ್ ನಾಯರ್]], [[ಎಂ.ಟಿ. ವಾಸುದೇವನ್ ನಾಯರ್]] ಮತ್ತು [[ಒ.ಎನ್.ವಿ. ಕುರುಪ್]] ನಂತಹ ಕೆಲವು ಹೆಚ್ಚು ಗಮನಾರ್ಹ ವ್ಯಕ್ತಿಗಳನ್ನು ಸಹ ನಿರ್ಮಿಸಿದೆ,<ref name="indiatimes2">{{cite news |url=https://timesofindia.indiatimes.com/india/Jnanpith-Awards-for-ONV-Kurup-Akhlaq-Khan-Shahryar/articleshow/6621243.cms |date=24 September 2014 |title=Jnanpith Awards for ONV Kurup, Akhlaq Khan Shahryar |work=The Times of India |access-date=24 September 2014}}</ref> ಕೊನೆಯಲ್ಲಿ ಉಲ್ಲೇಖಿಸಲಾದ ಇಬ್ಬರು [[ಜ್ಞಾನಪೀಠ ಪ್ರಶಸ್ತಿ]] ಪಡೆದವರು, ಇದು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದೆ.<ref name="upscguide">{{cite web |url=https://upscguide.com/content/jnanpith-award-winners |archive-url=https://web.archive.org/web/20121219193030/https://upscguide.com/content/jnanpith-award-winners |url-status=dead |archive-date=19 December 2012 |title=Jnanpith Award Winners | UPSC Guide |publisher=upscguide.com |access-date=24 September 2014}}</ref> ಕೇರಳದವರಾದ [[ರೆಸುಲ್ ಪೂಕ್ಕುಟ್ಟಿ]] ಅವರು [[ಸ್ಲಮ್ಡಾಗ್ ಮಿಲಿಯನೇರ್]] ಅದ್ಭುತ ಚಿತ್ರಕ್ಕಾಗಿ [[ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್|ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್]] ಗೆದ್ದ ಏಕೈಕ ಭಾರತೀಯರಾಗಿದ್ದಾರೆ. 2018 ರಂತೆ, [[ಮಲಯಾಳಂ ಸಿನಿಮಾ]] [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], [[ಭಾರತ]]ದಲ್ಲಿ ಅತ್ಯುತ್ತಮ ನಟಿಗೆ 14 ಪ್ರಶಸ್ತಿಗಳು, ಅತ್ಯುತ್ತಮ ನಟಿಗೆ 6, ಅತ್ಯುತ್ತಮ ಚಿತ್ರಕ್ಕೆ 11, ಮತ್ತು ಅತ್ಯುತ್ತಮ ಚಲನಚಿತ್ರ ನಿರ್ದೇಶಕರಿಗೆ 13 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.{{sfn|Chandran|2018|p=358-361}}
=== ಸಾಹಿತ್ಯ ===
{{Main|ಮಲಯಾಳಂ ಸಾಹಿತ್ಯ}}
[[ಸಂಗಮ್ ಸಾಹಿತ್ಯ]]ವನ್ನು [[ಮಲಯಾಳಂ]]ನ ಪ್ರಾಚೀನ ಪೂರ್ವವರ್ತಿ ಎಂದು ಪರಿಗಣಿಸಬಹುದು.{{sfn|Chandran|2018|p=450}} [[ಮಲಯಾಳಂ ಸಾಹಿತ್ಯ]]ವು [[ಹಳೆಯ ಮಲಯಾಳಂ]] ಅವಧಿಯಿಂದ (9 ನೇ–13 ನೇ ಶತಮಾನ CE) ಪ್ರಾರಂಭವಾಗುತ್ತದೆ ಮತ್ತು 14 ನೇ ಶತಮಾನದ [[ನಿರಣಂ ಕವಿಗಳು]] (ಮಾಧವ ಪಣಿಕ್ಕರ್, ಶಂಕರ ಪಣಿಕ್ಕರ್ ಮತ್ತು ರಾಮ ಪಣಿಕ್ಕರ್),<ref name="Nair1967">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |page=296}}</ref><ref name="Laet1994">{{cite book |author=Sigfried J. de Laet |title=History of Humanity: From the seventh to the sixteenth century |url=https://books.google.com/books?id=ixCyd2lByggC&pg=PA407 |access-date=18 November 2012 |year=1994 |publisher=UNESCO |isbn=978-9231028137 |page=407}}</ref> ಮತ್ತು 16 ನೇ ಶತಮಾನದ ಕವಿ [[ಎಳುತ್ತಚ್ಚನ್|ತುಂಚತ್ತು ಎಳುತ್ತಚ್ಚನ್]] ಅವರನ್ನು ಒಳಗೊಂಡಿದೆ, ಅವರ ಕೃತಿಗಳು ಆಧುನಿಕ ಮಲಯಾಳಂ ಭಾಷೆ ಮತ್ತು ಅದರ ಕಾವ್ಯದ ಆರಂಭವನ್ನು ಸೂಚಿಸುತ್ತವೆ.<ref name="George1998">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA58 |access-date=18 November 2012 |year=1998 |publisher=Sahitya Akademi |isbn=978-8126004133 |page=58}}</ref> [[ಕೊಲ್ಲಂ ಯುಗ|ಮಲಯಾಳಂ ಕ್ಯಾಲೆಂಡರ್]] ನ ಮೊದಲ 600 ವರ್ಷಗಳಲ್ಲಿ, ಸಾಹಿತ್ಯವು ಮುಖ್ಯವಾಗಿ [[ಉತ್ತರ ಮಲಬಾರ್|ಉತ್ತರ ಮಲಬಾರಿನ]] ''[[ವಡಕ್ಕನ್ ಪಟ್ಟುಕಲ್]]'' ಮತ್ತು [[ದಕ್ಷಿಣ ವಿಭಾಗ (ತಿರುವಾಂಕೂರು)|ದಕ್ಷಿಣ ತಿರುವಾಂಕೂರಿನ]] ''ತೆಕ್ಕನ್ ಪಟ್ಟುಕಲ್'' ನಂತಹ ಮೌಖಿಕ [[ಗೀತೆ]]ಗಳನ್ನು ಒಳಗೊಂಡಿತ್ತು.{{sfn|Chandran|2018|p=453}} 2013 ರಲ್ಲಿ "[[ಭಾರತದಲ್ಲಿ ಶಾಸ್ತ್ರೀಯ ಭಾಷೆ]]" ಎಂದು ಗೊತ್ತುಪಡಿಸಲಾಯಿತು,<ref name="thehindu20130524"/> ಇದು ಪ್ರಸ್ತುತ ರೂಪಕ್ಕೆ ಮುಖ್ಯವಾಗಿ 15 ಮತ್ತು 16 ನೇ ಶತಮಾನಗಳಲ್ಲಿ [[ಸಾಮಾನ್ಯ ಯುಗ]]ದ ಕವಿಗಳಾದ [[ಚೆರುಶ್ಶೇರಿ ನಂಬೂದಿರಿ]],<ref name="Cherussery (Krishnagadha) Malayalam author books">{{Cite web |url=https://keralaliterature.com/old/author.php?authid=1473 |title=Cherussery (Krishnagadha) Malayalam author books |website=keralaliterature.com |archive-url=https://web.archive.org/web/20190407052549/https://keralaliterature.com/old/author.php%3Fauthid%3D1473 |archive-date=7 April 2019 |url-status=dead}}</ref><ref name="mlm" /> [[ತುಂಚತ್ತು ಎಳುತ್ತಚ್ಚನ್]],<ref name="mlm" /> ಮತ್ತು [[ಪೂಂತಾನಂ ನಂಬೂದಿರಿ]]<ref name="mlm" /><ref>{{cite news |url=https://www.thehindu.com/society/history-and-culture/the-charms-of-poonthanam-illam/article25308319.ece/ |title=The Charms of Poonthanam Illam |last=Arun Narayanan |date=25 October 2018 |work=The Hindu}}</ref> ರವರ ಪ್ರಭಾವದಿಂದ ಅಭಿವೃದ್ಧಿಗೊಂಡಿತು.<ref name="mlm">{{cite book |title=A Short History of Malayalam Literature |author=Dr. K. Ayyappa Panicker |url=https://archive.org/details/ASHORTHISTORYOFMALAYALAMLITERATURE |year=2006 |location=Thiruvananthapuram |publisher=Department of Information and Public Relations, Kerala}}</ref><ref>Freeman, Rich (2003). "Genre and Society: The Literary Culture of Premodern Kerala". In Literary Cultures in History: Reconstructions from South Asia</ref> 17/18 ನೇ ಶತಮಾನ CE ಯ ಸಂಭವನೀಯ ಕವಿಯಾದ [[ಉನ್ನಾಯಿ ವರಿಯಾರ್]],<ref name="Attakatha sahithyam">{{Cite book |last=Krishna Kaimal |first=Aymanam |title=Attakatha sahithyam |url=https://mgucat.mgu.ac.in/cgi-bin/koha/opac-detail.pl?biblionumber=133514&shelfbrowse_itemnumber=132435 |date=1989 |publisher=Trivandrum State Institute of Language}}</ref> ಮತ್ತು 18 ನೇ ಶತಮಾನ CE ಯ ಕವಿಯಾದ [[ಕುಂಚನ್ ನಂಬಿಯಾರ್]] ಅವರು ಆಧುನಿಕ ಮಲಯಾಳಂ ಸಾಹಿತ್ಯದ ಬೆಳವಣಿಗೆಯಲ್ಲಿ ತಮ್ಮ ಅಪಕ್ವ ರೂಪದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ.<ref name="mlm" /> [[ಭಾರತಪುಳ]] ನದಿ, ಇದನ್ನು [[ಪೊನ್ನಾನಿ|ಪೊನ್ನಾನಿ ನದಿ]] ಎಂದೂ ಕರೆಯುತ್ತಾರೆ, ಮತ್ತು ಅದರ ಉಪನದಿಗಳು ಆಧುನಿಕ ಮಲಯಾಳಂ ಸಾಹಿತ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.<ref>{{Cite news |title=The river sutra |url=https://www.thehindu.com/society/rivers-have-nurtured-malayalam-literature-and-poetry-since-time-immemorial/article25058214.ece |last=Binoy |first=Rasmi |date=27 September 2018 |access-date=24 January 2021 |work=The Hindu}}</ref>
[[ಪರೆಮ್ಮಕ್ಕಲ್ ತೋಮಾ ಕಥನಾರ್]] ಮತ್ತು [[ಕೇರಳ ವರ್ಮ ವಲಿಯಕೋಯಿ ತಂಪುರಾನ್]] ಮಲಯಾಳಂ ಗದ್ಯಕ್ಕೆ ತಮ್ಮ ಕೊಡುಗೆಗೆ ಹೆಸರುವಾಸಿಯಾಗಿದ್ದಾರೆ.<ref name="google24">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |pages=118–21}}</ref><ref name="Sinhā2009">{{cite book |author=Madhubālā Sinhā |title=Encyclopaedia of South Indian literature |url=https://books.google.com/books?id=8qQpAQAAIAAJ |access-date=18 November 2012 |year=2009 |publisher=Anmol Publ. |isbn=978-8126137404 |page=97}}</ref><ref name="Vilanilam1987">{{cite book |author=John V. Vilanilam |title=Religious communication in India |url=https://books.google.com/books?id=a0UeAAAAMAAJ |access-date=18 November 2012 |year=1987 |publisher=Kairali Books International |page=66}}</ref> "[[ಆಧುನಿಕ ಮಲಯಾಳಂನ ಕವಿತ್ರಯ|ಕವಿಗಳ ತ್ರಿಮೂರ್ತಿಗಳು]]" (''ಕವಿತ್ರಯಂ''): [[ಕುಮಾರನ್ ಆಶಾನ್]], [[ವಳ್ಳತ್ತೋಳ್ ನಾರಾಯಣ ಮೇನನ್]], ಮತ್ತು [[ಉಳ್ಳೂರ್ ಎಸ್. ಪರಮೇಶ್ವರ ಅಯ್ಯರ್]] ಅವರು ಕೇರಳೀಯ ಕಾವ್ಯವನ್ನು ಪ್ರಾಚೀನ ಚಾತುರ್ಯ ಮತ್ತು ಅಧ್ಯಾತ್ಮಶಾಸ್ತ್ರದಿಂದ ಹೆಚ್ಚು [[ಗೀತಾತ್ಮಕ|ಗೀತಾತ್ಮಕ]] ಶೈಲಿಯತ್ತ ತಿರುಗಿಸಿದ್ದಾರೆಂದು ಗುರುತಿಸಲ್ಪಟ್ಟಿದ್ದಾರೆ.<ref name="Al̲ikkōṭȧ1979">{{cite book |author=Sukumār Al̲ikkōṭȧ |title=Mahakavi Ulloor |url=https://books.google.com/books?id=1VkOAAAAYAAJ |access-date=18 November 2012 |year=1979 |publisher=Sahitya Akademi |page=52}}</ref><ref name="Indian and Foreign Review">{{cite book |title=Indian and Foreign Review |url=https://books.google.com/books?id=XaRnAAAAMAAJ |access-date=18 November 2012 |year=1983 |publisher=Publications Division of the Ministry of Information and Broadcasting, Government of India |page=25}}</ref><ref name="Tarakan1990">{{cite book |author=Ke. Eṃ Tarakan |title=A brief survey of Malayalam literature: history of literature |url=https://books.google.com/books?id=3nhkAAAAMAAJ |access-date=18 November 2012 |year=1990 |publisher=K.M. Tharakan |pages=41–52}}</ref> [[ಮೊಯಿಂಕುಟ್ಟಿ ವೈದ್ಯರ್]] ಮತ್ತು [[ಪುಲಿಕ್ಕೋಟ್ಟಿಲ್ ಹೈದರ್]] ನಂತಹ ಕವಿಗಳು [[ಮಾಪ್ಪಿಲ ಹಾಡುಗಳಿಗೆ]] ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ, ಇದು [[ಅರಬಿ ಮಲಯಾಳಂ]] ಸಾಹಿತ್ಯದ ಪ್ರಕಾರವಾಗಿದೆ.<ref>{{cite news |url=https://www.hindu.com/2007/03/31/stories/2007033110250500.htm |archive-url=https://web.archive.org/web/20121108104937/https://www.hindu.com/2007/03/31/stories/2007033110250500.htm |url-status=dead |archive-date=8 November 2012 |title=Mappila songs cultural fountains of a bygone age, says MT |date=31 March 2007 |access-date=15 August 2009 |work=[[The Hindu]] |location=Chennai, India}}</ref><ref>Pg 167, Mappila Muslims: a study on society and anti colonial struggles By Husain Raṇdathaṇi, Other Books, Kozhikode 2007</ref> ಯಾವುದೇ ಭಾರತೀಯ ಭಾಷೆಯಲ್ಲಿ ಮೊದಲ ಪ್ರವಾಸ ಕಥನವು ಮಲಯಾಳಂ ''[[ವರ್ತಮಾನಪುಸ್ತಕಂ]]'' ಆಗಿದೆ, ಇದನ್ನು [[ಪರೆಮ್ಮಕ್ಕಲ್ ತೋಮಾ ಕಥನಾರ್]] 1785 ರಲ್ಲಿ ಬರೆದರು.<ref name="legacy">{{cite book |last=Menon |first=A. Sreedhara |title=The legacy of Kerala |year=2008 |publisher=D C Books |location=Kottayam, Kerala |isbn=978-81-264-2157-2 |edition=1st DCB}}</ref><ref>{{cite web |url=https://nasrani.net/2010/08/23/the-varthamanappusthakam-cathanar-paremmakkal/ |title=August 23, 2010 Archives |url-status=dead |archive-url=https://web.archive.org/web/20130427073541/https://nasrani.net/2010/08/23/the-varthamanappusthakam-cathanar-paremmakkal/ |archive-date=27 April 2013}}</ref> ಗದ್ಯ ಸಾಹಿತ್ಯ, [[ಮಲಯಾಳಂ ಪತ್ರಿಕೋದ್ಯಮ]], ಮತ್ತು ವಿಮರ್ಶೆಯು 18 ನೇ ಶತಮಾನದ ಉತ್ತರಾರ್ಧದ ನಂತರ ಪ್ರಾರಂಭವಾಯಿತು.<ref name="legacy" /> ಸಮಕಾಲೀನ ಮಲಯಾಳಂ ಸಾಹಿತ್ಯವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನದ ಸಂದರ್ಭವನ್ನು ವ್ಯವಹರಿಸುತ್ತದೆ. ಆಧುನಿಕ ಸಾಹಿತ್ಯದ ಪ್ರವೃತ್ತಿಯು ಹೆಚ್ಚಾಗಿ [[ರಾಜಕೀಯ ತೀವ್ರವಾದ]]ದ ಕಡೆಗೆ ಇರುತ್ತದೆ.<ref>{{cite encyclopedia |url=https://www.britannica.com/EBchecked/topic/556016/South-Asian-arts/65212/Tamil#toc65213 |title=South Asian arts |encyclopedia=Encyclopedia Britannica |access-date=15 September 2017}}</ref> [[ಮಲಯಾಳಂ ಸಾಹಿತ್ಯ]]ವು 6 [[ಜ್ಞಾನಪೀಠ ಪ್ರಶಸ್ತಿ|ಜ್ಞಾನಪೀಠ ಪ್ರಶಸ್ತಿಗಳನ್ನು]] ಪಡೆದುಕೊಂಡಿದೆ, ಇದು ಯಾವುದೇ ದ್ರಾವಿಡ ಭಾಷೆಗೆ ಎರಡನೇ ಅತಿ ಹೆಚ್ಚು ಮತ್ತು ಯಾವುದೇ ಭಾರತೀಯ ಭಾಷೆಗೆ ಮೂರನೇ ಅತಿ ಹೆಚ್ಚು.<ref>{{Cite news |title=Jnanpith given to Akkitham |url=https://www.thehindu.com/news/national/kerala/jnanpith-given-to-akkitham/article32685581.ece |last=Naha |first=Abdul Latheef |date=24 September 2020 |access-date=12 June 2021 |work=The Hindu}}</ref><ref>{{Cite news |title=Celebrated Malayalam poet Akkitham wins 2019 Jnanpith Award |url=https://www.business-standard.com/article/news-ani/celebrated-malayalam-poet-akkitham-wins-2019-jnanpith-award-119112900926_1.html |last=ANI |date=29 November 2019 |access-date=12 June 2021 |publisher=Business Standard}}</ref> 20 ನೇ ಶತಮಾನದ ಉತ್ತರಾರ್ಧದಲ್ಲಿ, [[ಜ್ಞಾನಪೀಠ]] ಪ್ರಶಸ್ತಿ ವಿಜೇತ ಕವಿಗಳು ಮತ್ತು ಬರಹಗಾರರಾದ [[ಜಿ. ಶಂಕರ ಕುರುಪ್]], [[ಎಸ್. ಕೆ. ಪೊಟ್ಟೆಕ್ಕಾಟ್]], [[ತಕಳಿ ಶಿವಶಂಕರ ಪಿಳ್ಳೈ]], [[ಎಂ. ಟಿ. ವಾಸುದೇವನ್ ನಾಯರ್]], [[ಒ. ಎನ್. ವಿ. ಕುರುಪ್]], ಮತ್ತು [[ಅಕ್ಕಿತಂ ಅಚ್ಯುತನ್ ನಂಬೂದಿರಿ]] ಅವರು ಆಧುನಿಕ ಮಲಯಾಳಂ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.<ref name="google25">{{cite book |author=Subodh Kapoor |title=The Indian Encyclopaedia: Biographical, Historical, Religious, Administrative, Ethnological, Commercial and Scientific. Mahi-Mewat |url=https://books.google.com/books?id=mc6C5dVHbGAC&pg=PA4542 |access-date=18 November 2012 |year=2002 |publisher=Cosmo |isbn=978-8177552720 |page=4542}}</ref><ref name="Accessions List, South Asia">{{cite book |title=Accessions List, South Asia |url=https://books.google.com/books?id=lPcoAQAAIAAJ |access-date=18 November 2012 |year=1994 |publisher=E.G. Smith for the U.S. Library of Congress Office, New Delhi |page=21}}</ref><ref name="Indian Writing Today">{{cite book |title=Indian Writing Today |url=https://books.google.com/books?id=1wUtAQAAIAAJ |access-date=18 November 2012 |year=1967 |publisher=Nirmala Sadanand Publishers |page=21}}</ref><ref name="DattaAkademi1987">{{cite book |author1=Amaresh Datta |author2=Sahitya Akademi |title=Encyclopaedia of Indian Literature: K to Navalram |url=https://books.google.com/books?id=QaIRAQAAMAAJ |access-date=18 November 2012 |year=1987 |publisher=Sahitya Akademi |page=2394 |isbn=978-0-8364-2423-2}}</ref><ref name="Malayalam Literary Survey">{{cite book |title=Malayalam Literary Survey |url=https://books.google.com/books?id=k5JkAAAAMAAJ |access-date=18 November 2012 |year=1993 |publisher=Kerala Sahitya Akademi |page=19}}</ref> ನಂತರ, [[ಒ. ವಿ. ವಿಜಯನ್]], [[ಕಮಲಾದಾಸ್]], [[ಎಂ. ಮುಕುಂದನ್]], [[ಅರುಂಧತಿ ರಾಯ್]], [[ವೈಕಂ ಮುಹಮ್ಮದ್ ಬಷೀರ್]] ನಂತಹ ಬರಹಗಾರರು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ.<ref name="MukundanPillai2004">{{cite book |author1=Eṃ Mukundan |author2=C. Gopinathan Pillai |title=Eng Adityan Radha And Others |url=https://books.google.com/books?id=1N5QcHakKdoC&pg=PP3 |access-date=18 November 2012 |year=2004 |publisher=Sahitya Akademi |isbn=978-8126018833 |page=3}}</ref><ref name="Maheshwari2002">{{cite book |author=Ed. Vinod Kumar Maheshwari |title=Perspectives On Indian English Literature |url=https://books.google.com/books?id=JcY2-ldWIKsC&pg=PA126 |access-date=18 November 2012 |year=2002 |publisher=Atlantic Publishers & Dist |isbn=978-8126900930 |page=126}}</ref><ref name="Chaudhuri2008">{{cite book |author=Amit Chaudhuri |title=Clearing a Space: Reflections On India, Literature, and Culture |url=https://books.google.com/books?id=AQeN2PoAx2IC&pg=PA44 |access-date=18 November 2012 |year=2008 |publisher=Peter Lang |isbn=978-1-906165-01-7 |pages=44–45}}</ref><ref>{{Cite news |title=Indian's First Novel Wins Booker Prize in Britain |work=[[The New York Times]] |date=15 October 1997 |access-date=11 November 2007 |url=https://query.nytimes.com/gst/fullpage.html?res=9A01E6DD173FF936A25753C1A961958260 |first=Sarah |last=Lyall}}</ref>
=== ಪಾಕಪದ್ಧತಿ ===
{{Main|ಕೇರಳದ ಪಾಕಪದ್ಧತಿ}}
ಕೇರಳದ ಪಾಕಪದ್ಧತಿಯು ಮೀನು, ಕೋಳಿ ಮತ್ತು ಮಾಂಸವನ್ನು ಬಳಸಿ ತಯಾರಿಸಿದ ವಿವಿಧ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿದೆ. ಪಾಕಶಾಸ್ತ್ರದ ಮಸಾಲೆಗಳನ್ನು ಕೇರಳದಲ್ಲಿ ಸಹಸ್ರಮಾನಗಳಿಂದ ಬೆಳೆಯಲಾಗುತ್ತಿದೆ ಮತ್ತು ಅವು ಅದರ ಪಾಕಪದ್ಧತಿಯ ವಿಶಿಷ್ಟ ಲಕ್ಷಣಗಳಾಗಿವೆ.<ref name="google26">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA10 |access-date=17 November 2012 |year=2010 |publisher=Murdoch Books |isbn=978-1-74196-438-7 |page=10}}</ref> ಅಕ್ಕಿಯು ಪ್ರಮುಖ ಪ್ರಧಾನ ಆಹಾರವಾಗಿದ್ದು, ಇದನ್ನು ಎಲ್ಲಾ ಸಮಯದಲ್ಲೂ ಸೇವಿಸಲಾಗುತ್ತದೆ.<ref name="Majumdar2010">{{cite book |author=Majumdar |title=Consumer Behaviour: Insights From Indian Market |url=https://books.google.com/books?id=KF57x1Nrn2UC&pg=RA1-PA79 |access-date=17 November 2012 |year=2010 |publisher=PHI Learning Pvt. Ltd. |isbn=978-8120339637 |page=181}}</ref> ಕೇರಳದಲ್ಲಿ ಹೆಚ್ಚಿನ ಉಪಾಹಾರ ಆಹಾರಗಳನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ, ಒಂದು ರೂಪದಲ್ಲಿ ಅಥವಾ ಇನ್ನೊಂದು ರೂಪದಲ್ಲಿ (''[[ಇಡ್ಲಿ]]'', ''[[ದೋಸೆ (ಆಹಾರ)|ದೋಸೆ]]'', ''[[ಪುಟ್ಟು]]'', ''[[ಪತ್ತಿರಿ]]'', ''[[ಅಪ್ಪಂ]]'', ಅಥವಾ ''[[ಇಡಿಯಪ್ಪಂ]]''), [[ಮರಗೆಣಸು]] ತಯಾರಿಕೆಗಳು, ಅಥವಾ ದ್ವಿದಳ ಧಾನ್ಯ-ಆಧಾರಿತ [[ವಡೆ (ಆಹಾರ)|ವಡೆ]].<ref name="Muthachen1970">{{cite book |author=Rachel Muthachen |title=Regional Indian Recipes |url=https://books.google.com/books?id=h5xXz_UFV7QC&pg=PA1 |access-date=17 November 2012 |year=1970 |publisher=Jaico Publishing House |isbn=978-8172240356 |page=1}}</ref> ಇವುಗಳು [[ಚಟ್ನಿ]], ''[[ಕಡಲೆ]]'', ''[[ಪಾಯಸಂ]]'', ''[[ಹೆಸರು ಕಾಳು|ಪಯರ್]] [[ಪಪ್ಪಡಂ]]'', ''[[ಅಪ್ಪಂ]]'', ಚಿಕನ್ ಕರಿ, ಗೋಮಾಂಸ ಫ್ರೈ, ಎಗ್ ಮಸಾಲಾ ಮತ್ತು ಮೀನು ಕರಿಯೊಂದಿಗೆ ಸೇರಿಕೊಳ್ಳಬಹುದು.<ref name="Newton" /> [[ಪೊರೊಟ್ಟ]] ಮತ್ತು [[ಬಿರಿಯಾನಿ]] ಸಹ ಸಾಮಾನ್ಯವಾಗಿ ಕೇರಳದ ರೆಸ್ಟೋರೆಂಟ್ಗಳಲ್ಲಿ ಕಂಡುಬರುತ್ತವೆ. ತಲಶ್ಶೇರಿ ಬಿರಿಯಾನಿ ಜನಾಂಗೀಯ ಬ್ರ್ಯಾಂಡ್ ಆಗಿ ಜನಪ್ರಿಯವಾಗಿದೆ. ಮಧ್ಯಾಹ್ನದ ಊಟದ ಭಕ್ಷ್ಯಗಳು [[ಅಕ್ಕಿ]] ಮತ್ತು [[ಕರಿ]] ಜೊತೆಗೆ ''[[ರಸಂ (ಭಕ್ಷ್ಯ)|ರಸಂ]]'', ''ಪುಳಿಶ್ಶೇರಿ'' ಮತ್ತು ''[[ಸಾಂಬಾರ್ (ಭಕ್ಷ್ಯ)|ಸಾಂಬಾರ್]]'' ಅನ್ನು ಒಳಗೊಂಡಿವೆ.<ref name="google27">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT4 |access-date=17 November 2012 |publisher=Springwood emedia |isbn=978-1-4761-2308-0 |pages=4–}}</ref> ''[[ಸಾಧ್ಯ]]'' ಸಸ್ಯಾಹಾರಿ ಊಟವಾಗಿದ್ದು, ಇದನ್ನು ಬಾಳೆ ಎಲೆಯಲ್ಲಿ ಬಡಿಸಲಾಗುತ್ತದೆ ಮತ್ತು ನಂತರ ಒಂದು ಕಪ್ ಪಾಯಸಂನೊಂದಿಗೆ ಸೇರಿಸಲಾಗುತ್ತದೆ.<ref name="Kannampilly2003">{{cite book |author=Vijayan Kannampilly |title=Essential Kerala Cook Book |url=https://books.google.com/books?id=pYfOCaAPb3sC&pg=PA11 |access-date=17 November 2012 |year=2003 |publisher=Penguin Books India |isbn=978-0-14-302950-2 |pages=10–11}}</ref> ಜನಪ್ರಿಯ ತಿಂಡಿಗಳಲ್ಲಿ [[ಬಾಳೆಹಣ್ಣಿನ ಚಿಪ್ಸ್]], ಯಾಮ್ ಕ್ರಿಸ್ಪ್ಸ್, [[ಮರಗೆಣಸು ಚಿಪ್ಸ್]], [[ಅಚ್ಚಪ್ಪಂ]], [[ಉನ್ನಿ ಅಪ್ಪಂ]] ಮತ್ತು ''ಕುಳಲಪ್ಪಂ'' ಸೇರಿವೆ.<ref name="Kerala with Lakshadweep">{{cite book |title=Kerala with Lakshadweep |url=https://books.google.com/books?id=yJJuAAAAMAAJ |access-date=17 November 2012 |year=2005 |publisher=Outlook Publishing |page=27 |isbn=978-8189449018}}</ref><ref name="Koilparampil1982">{{cite book |author=George Koilparampil |title=Caste in the Catholic community in Kerala: a study of caste elements in the inter rite relationships of Syrians and Latins |url=https://books.google.com/books?id=nXnaAAAAMAAJ |access-date=17 November 2012 |year=1982 |publisher=Dept. of Sociology, St. Teresa's College |page=233}}</ref><ref name="(Swami.)2000">{{cite book |author=Paramatmananda (Swami.) |title=Talks |url=https://books.google.com/books?id=p77mUECpIjgC |access-date=17 November 2012 |year=2000 |publisher=Mata Amritanandamayi Center |isbn=978-1-879410-79-4 |page=24}}</ref> ಸಮುದ್ರಾಹಾರ ವಿಶೇಷ ಭಕ್ಷ್ಯಗಳಲ್ಲಿ [[ಕರಿಮೀನ್]], ಸೀಗಡಿ, ಏಡಿ ಮತ್ತು ಇತರ ಕಠಿಣಚರ್ಮಿ ಭಕ್ಷ್ಯಗಳು ಸೇರಿವೆ.<ref>{{cite web |title=Kerala Cuisine |url=https://www.ecotours.in/kerala-cuisine.htm |publisher=Ecotours |access-date=30 May 2015 |archive-date=13 August 2015 |archive-url=https://web.archive.org/web/20150813003443/http://ecotours.in/kerala-cuisine.htm |url-status=dead }}</ref> [[ತಲಶ್ಶೇರಿ ಪಾಕಪದ್ಧತಿ]] ವೈವಿಧ್ಯಮಯವಾಗಿದೆ ಮತ್ತು ಇದು ಅನೇಕ ಪ್ರಭಾವಗಳ ಮಿಶ್ರಣವಾಗಿದೆ.
== ಮಾಧ್ಯಮ ==
{{Main|ಕೇರಳದಲ್ಲಿ ಮಾಧ್ಯಮ}}
ಮಾಧ್ಯಮ, ದೂರಸಂಪರ್ಕ, ಪ್ರಸಾರ ಮತ್ತು ಕೇಬಲ್ ಸೇವೆಗಳನ್ನು [[ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ]] (TRAI) ನಿಯಂತ್ರಿಸುತ್ತದೆ.<ref>{{cite book |title=The Telecom Regulatory Authority of India Act, 1997 |url=https://books.google.com/books?id=0gfeQc1ZBqIC&pg=PA112 |publisher=Georg Thieme Verlag |page=112 |id=GGKEY:BJ6HEPE0NRE}}</ref> 2015–16 ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 4, ಕೇರಳವನ್ನು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]] ಹೊಂದಿರುವ ರಾಜ್ಯ ಎಂದು ಶ್ರೇಣೀಕರಿಸಿತು.<ref>{{cite web |title=National Family Health Survey (NFHS-4) |url=https://rchiips.org/nfhs/NFHS-4Reports/Kerala.pdf |website=International Institute for Population SciencesDeonar |access-date=7 February 2022 |archive-date=23 February 2022 |archive-url=https://web.archive.org/web/20220223120050/http://rchiips.org/nfhs/NFHS-4Reports/Kerala.pdf |url-status=dead }}</ref> ಡಜನ್ಗಟ್ಟಲೆ ಪತ್ರಿಕೆಗಳು ಕೇರಳದಲ್ಲಿ ಪ್ರಕಟವಾಗುತ್ತವೆ, ಒಂಬತ್ತು ಪ್ರಮುಖ ಭಾಷೆಗಳಲ್ಲಿ,<ref name=rniindia>{{cite web |url=https://rni.nic.in/pii.htm |archive-url=https://web.archive.org/web/20070927070139/https://rni.nic.in/pii.htm |archive-date=27 September 2007 |url-status=dead |title=General Review |access-date=1 September 2006 |publisher=Registrar of Newspapers for India}}</ref> ಆದರೆ ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್.<ref name="google28">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA186 |access-date=17 November 2012 |year=1998 |publisher=Sahitya Akademi |isbn=978-8126004133 |page=186}}</ref> ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]]ವನ್ನು ಹೊಂದಿದೆ.<ref>{{cite web |title=The DHS Program – India: Standard DHS, 2015–16 |url=https://dhsprogram.com/what-we-do/survey/survey-display-355.cfm |website=dhsprogram.com}}</ref><ref>{{cite web |title=National Family Health Survey |url=https://rchiips.org/nfhs/NFHS-4Report.shtml |website=rchiips.org |access-date=7 February 2022 |archive-date=7 March 2022 |archive-url=https://web.archive.org/web/20220307101917/http://rchiips.org/nfhs/NFHS-4Report.shtml |url-status=dead}}</ref> ಅತಿ ವ್ಯಾಪಕವಾಗಿ ಪ್ರಸಾರವಾಗುವ [[ಮಲಯಾಳಂ ಭಾಷಾ ಪತ್ರಿಕೆಗಳ ಪಟ್ಟಿ|ಮಲಯಾಳಂ-ಭಾಷಾ ಪತ್ರಿಕೆಗಳೆಂದರೆ]] ''[[ಮಲಯಾಳ ಮನೋರಮ]], [[ಮಾತೃಭೂಮಿ]], [[ದೇಶಾಭಿಮಾನಿ]], [[ಮಧ್ಯಮಂ]], [[ಕೇರಳ ಕೌಮುದಿ]], [[ಮಂಗಳಂ ಪಬ್ಲಿಕೇಷನ್ಸ್|ಮಂಗಳಂ]], [[ಚಂದ್ರಿಕಾ (ಮಲಯಾಳಂ ಪತ್ರಿಕೆ)|ಚಂದ್ರಿಕಾ]], [[ದೀಪಿಕಾ (ಪತ್ರಿಕೆ)|ದೀಪಿಕಾ]], [[ಜನಯುಗಂ]], [[ಜನ್ಮಭೂಮಿ]], [[ಸಿರಾಜ್ ಡೈಲಿ]]'' ಮತ್ತು ''[[ಸುಪ್ರಭಾತಂ ಡೈಲಿ|ಸುಪ್ರಭಾತಂ]]''. [[ಮಲಯಾಳಂ ಭಾಷಾ ನಿಯತಕಾಲಿಕೆಗಳ ಪಟ್ಟಿ|ಪ್ರಮುಖ ಮಲಯಾಳಂ ನಿಯತಕಾಲಿಕೆಗಳು]] ''[[ಮಾತೃಭೂಮಿ ಅಳಚಪ್ಪತಿಪ್ಪು]], [[ವನಿತಾ]], [[ಇಂಡಿಯಾ ಟುಡೇ]] ಮಲಯಾಳಂ, [[ಮಧ್ಯಮಂ ವೀಕ್ಲಿ]], [[ಗೃಹಲಕ್ಷ್ಮೀ (ನಿಯತಕಾಲಿಕೆ)|ಗೃಹಲಕ್ಷ್ಮೀ]], [[ಧನಂ (ವ್ಯಾಪಾರ ನಿಯತಕಾಲಿಕೆ)|ಧನಂ]], [[ಚಿತ್ರಭೂಮಿ]]'' ಮತ್ತು ''[[ಭಾಷಾಪೋಷಿಣಿ]]''.
[[File:Malayala Manorama New Press in Kollam-3, Apr 2016.jpg|right|thumb|[[ಕೊಟ್ಟಿಯಂ]], [[ಕೊಲ್ಲಂ|ಕೊಲ್ಲಂನ]] [[ಮಲಯಾಳ ಮನೋರಮ]] ಕಚೇರಿ]]
[[ಡಿಡಿ ಮಲಯಾಳಂ]] ಸರ್ಕಾರಿ-ಸ್ವಾಮ್ಯದ ದೂರದರ್ಶನ ಪ್ರಸಾರಕವಾಗಿದೆ. [[ಬಹು-ವ್ಯವಸ್ಥಾಪಕ ವ್ಯವಸ್ಥೆಗಳು|ಬಹು-ವ್ಯವಸ್ಥಾಪಕ ವ್ಯವಸ್ಥೆಗಳು]] ಮಲಯಾಳಂ, ಇಂಗ್ಲಿಷ್, ಇತರ ಭಾರತೀಯ ಭಾಷೆಗಳು ಮತ್ತು ಅಂತಾರಾಷ್ಟ್ರೀಯ ಚಾನೆಲ್ಗಳ ಮಿಶ್ರಣವನ್ನು ಒದಗಿಸುತ್ತವೆ. ಕೆಲವು ಜನಪ್ರಿಯ ಮಲಯಾಳಂ ದೂರದರ್ಶನ ಚಾನೆಲ್ಗಳು [[ಏಷ್ಯಾನೆಟ್ (ದೂರದರ್ಶನ ಚಾನೆಲ್)|ಏಷ್ಯಾನೆಟ್]], [[ಏಷ್ಯಾನೆಟ್ ನ್ಯೂಸ್]], [[ಏಷ್ಯಾನೆಟ್ ಪ್ಲಸ್]], [[ಏಷ್ಯಾನೆಟ್ ಮೂವೀಸ್]], [[ಸೂರ್ಯ ಟಿವಿ]], [[ಸೂರ್ಯ ಮೂವೀಸ್]], [[ಮಝವಿಲ್ ಮನೋರಮ]], [[ಮನೋರಮ ನ್ಯೂಸ್]], [[ಕೈರಳಿ ಟಿವಿ]], [[ಕೈರಳಿ ಟಿವಿ|ಕೈರಳಿ ನ್ಯೂಸ್]], [[ಫ್ಲವರ್ಸ್ (ದೂರದರ್ಶನ ಚಾನೆಲ್)|ಫ್ಲವರ್ಸ್]], [[ಮೀಡಿಯಾ ವನ್ ಟಿವಿ]], [[ಮಾತೃಭೂಮಿ ನ್ಯೂಸ್]], [[ಕಪ್ಪಾ ಟಿವಿ]], [[ಅಮೃತ ಟಿವಿ]], [[ರಿಪೋರ್ಟರ್ ಟಿವಿ]], [[ಜೈಹಿಂದ್]], [[ಜನಂ ಟಿವಿ]], [[ಜೀವನ್ ಟಿವಿ]], [[ಕೌಮುದಿ ಟಿವಿ]] ಮತ್ತು [[ಶಾಲೋಮ್ (ದೂರದರ್ಶನ ಚಾನೆಲ್)|ಶಾಲೋಮ್ ಟಿವಿ]]. ಭಾರತದಲ್ಲಿ ಎರಡನೇ ಅತಿ ಹೆಚ್ಚು ಇಂಟರ್ನೆಟ್ ಪ್ರವೇಶ ಪ್ರಮಾಣದೊಂದಿಗೆ,<ref>{{Cite web |title=Delhi ranks top in Internet penetration, Kerala comes second |url=https://www.thehindubusinessline.com/info-tech/delhi-ranks-top-in-internet-penetration-kerala-comes-second/article31516751.ece/ |date=6 May 2020 |access-date=27 June 2021 |website=The Hindu Business Line}}</ref> [[ಡಿಜಿಟಲ್ ಮೀಡಿಯಾ]] [[ಸಾಮಾಜಿಕ ಮಾಧ್ಯಮ]] ಮತ್ತು [[ಭಾರತದಲ್ಲಿ ಓವರ್-ದಿ-ಟಾಪ್ ಮೀಡಿಯಾ ಸೇವೆಗಳು|OTT ಸೇವೆಗಳು]] ಸೇರಿದಂತೆ ರಾಜ್ಯದಲ್ಲಿ ಮಾಹಿತಿ ಮತ್ತು ಮನರಂಜನೆಯ ಪ್ರಮುಖ ಮೂಲವಾಗಿದೆ. ರಾಜ್ಯದಲ್ಲಿ ಗಮನಾರ್ಹವಾದ [[ಜನ ವಿಜ್ಞಾನ ಚಳುವಳಿ]] ಬೇರೂರಿದೆ, ಮತ್ತು ಬರಹಗಾರರ ಸಹಕಾರಿ ಸಂಘಗಳಂತಹ ಚಟುವಟಿಕೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ.<ref name="Tharamangalam_2005" /><ref name="Ranjith_2004">{{Cite book |author=Ranjith KS |veditors=Nair PR, Shaji H |year=2004 |title=Rural Libraries of Kerala |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621812 |pages=20–21 |url=https://www.cds.ac.in/krpcds/publication/downloads/78.pdf |access-date=28 December 2008}}</ref> [[ಬಿಎಸ್ಎನ್ಎಲ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ಜಿಯೋ]] ಪ್ರಮುಖ ಸೆಲ್ ಫೋನ್ ಸೇವಾ ಪೂರೈಕೆದಾರರಾಗಿದ್ದಾರೆ.<ref>{{cite web |title=Highlights ofTelecom Subscription Data as on 28thFebruary, 2019 |url=https://main.trai.gov.in/sites/default/files/PR_No.27of2019_0.pdf |access-date=16 May 2019 |archive-date=18 April 2019 |archive-url=https://web.archive.org/web/20190418140404/https://main.trai.gov.in/sites/default/files/PR_No.27of2019_0.pdf |url-status=dead }}</ref> ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಲಭ್ಯವಿವೆ; ಕೆಲವು ಪ್ರಮುಖ [[ಇಂಟರ್ನೆಟ್ ಸೇವಾ ಪೂರೈಕೆದಾರರು]] [[ಬಿಎಸ್ಎನ್ಎಲ್]], [[ಏಷ್ಯಾನೆಟ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ರೈಲ್ಟೆಲ್|ರೈಲ್ವೈರ್]], ಮತ್ತು [[ಟಾಟಾ ಕಮ್ಯುನಿಕೇಷನ್ಸ್]].
== ಕ್ರೀಡೆ ==
{{Main|ಕೇರಳದಲ್ಲಿ ಕ್ರೀಡೆ}}
[[File:Kerala boatrace.jpg|thumb|ವಾರ್ಷಿಕ [[ವಲ್ಲಂ ಕಳಿ|ಹಾವು ದೋಣಿ ಪಂದ್ಯವನ್ನು]] [[ಪಂಬಾ ನದಿ|ಪಂಬಾ ನದಿಯಲ್ಲಿ]] [[ಓಣಂ]] ಸಮಯದಲ್ಲಿ ನಡೆಸಲಾಗುತ್ತದೆ]]21 ನೇ ಶತಮಾನದ ವೇಳೆಗೆ, ಕೇರಳದ ಬಹುತೇಕ ಎಲ್ಲಾ ಸ್ಥಳೀಯ ಕ್ರೀಡೆಗಳು ಮತ್ತು ಆಟಗಳು ಕಣ್ಮರೆಯಾಗಿದ್ದವು ಅಥವಾ ಸ್ಥಳೀಯ ಹಬ್ಬಗಳ ಸಮಯದಲ್ಲಿ ಪ್ರದರ್ಶಿಸಲಾಗುವ ಒಂದು ಕಲಾ ಪ್ರಕಾರವಾಗಿ ಮಾರ್ಪಟ್ಟಿದ್ದವು; ಇವುಗಳಲ್ಲಿ [[ಪೂರಕ್ಕಳಿ]], ಪದಯಾನಿ, ತಲಪ್ಪಂದುಕಳಿ, ಓನತಲ್ಲು, ಪರಿಚಮುಟ್ಟುಕಳಿ, ವೇಳಾಕಳಿ, ಮತ್ತು ಕಿಳಿತತ್ತುಕಳಿ ಸೇರಿವೆ.<ref name="PRD-sports">{{cite web |url=https://www.prd.kerala.gov.in/sportsmain.htm |title=Sports and Games in Kerala |publisher=Public Relations Dept, Kerala |year=2002 |access-date=9 June 2012 |url-status=dead |archive-url=https://web.archive.org/web/20060428081830/https://www.prd.kerala.gov.in/sportsmain.htm |archive-date=28 April 2006}}</ref> ಆದಾಗ್ಯೂ, "ವಿಶ್ವದ ಎಲ್ಲಾ ಸಮರ ಕಲೆಗಳ ತಾಯಿ" ಎಂದು ಪರಿಗಣಿಸಲ್ಪಟ್ಟ ''[[ಕಳರಿಪಯಟ್ಟು]]'' ಒಂದು ಅಪವಾದವಾಗಿದೆ ಮತ್ತು ಇದನ್ನು ಸ್ಥಳೀಯ ಸಮರ ಕ್ರೀಡೆಯಾಗಿ ಅಭ್ಯಾಸ ಮಾಡಲಾಗುತ್ತದೆ.<ref>{{cite book |title=Muay Thai |publisher=Meyer & Meyer Verlag |author=Arnaud Van Der Veere |year=2012 |page=8 |isbn=978-1-84126-328-1}}</ref> ಕೇರಳದ ಮತ್ತೊಂದು ಸಾಂಪ್ರದಾಯಿಕ ಕ್ರೀಡೆಯೆಂದರೆ ದೋಣಿ ಪಂದ್ಯ, ವಿಶೇಷವಾಗಿ [[ಹಾವು ದೋಣಿ]]ಗಳ ಪಂದ್ಯ.<ref name="PRD-sports" />
[[ಕ್ರಿಕೆಟ್]] ಮತ್ತು [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ರಾಜ್ಯದಲ್ಲಿ ಜನಪ್ರಿಯವಾಯಿತು; ಎರಡನ್ನೂ 19 ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಮಲಬಾರ್ನಲ್ಲಿ ಪರಿಚಯಿಸಲಾಯಿತು. [[ಟಿನು ಯೋಹಾನನ್]], [[ಅಬೇ ಕುರುವಿಲ್ಲ]], [[ಚುಂಡಂಗಪೊಯಿಲ್ ರಿಝ್ವಾನ್]], [[ಶ್ರೀಶಾಂತ್]], [[ಸಂಜು ಸ್ಯಾಮ್ಸನ್]] ಮತ್ತು [[ಬಾಸಿಲ್ ತಂಪಿ]] ಅಂತಹ ಕ್ರಿಕೆಟಿಗರು ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದರು. ಕೇರಳದ ಕ್ರಿಕೆಟ್ ಫ್ರ್ಯಾಂಚೈಸಿ, [[ಕೊಚ್ಚಿ ಟಸ್ಕರ್ಸ್ ಕೇರಳ|ಕೊಚ್ಚಿ ಟಸ್ಕರ್ಸ್]], [[ಇಂಡಿಯನ್ ಪ್ರೀಮಿಯರ್ ಲೀಗ್]]ನ [[2011 ಇಂಡಿಯನ್ ಪ್ರೀಮಿಯರ್ ಲೀಗ್|ನಾಲ್ಕನೇ ಸೀಸನ್]] ನಲ್ಲಿ ಆಡಿತು. ಆದಾಗ್ಯೂ, ಅದರ ಫ್ರ್ಯಾಂಚೈಸಿಗಳ ನಡುವಿನ ಹಿತಾಸಕ್ತಿ ಸಂಘರ್ಷದಿಂದಾಗಿ ಸೀಸನ್ ನಂತರ ಈ ತಂಡವನ್ನು ವಿಸರ್ಜಿಸಲಾಯಿತು.<ref name="India Wins World Twenty20 Thriller">{{Cite news |title=India Wins World Twenty20 Thriller |date=25 September 2007 |access-date=11 November 2007 |url=https://www.hindu.com/2007/09/25/stories/2007092559400100.htm |archive-url=https://web.archive.org/web/20131106033222/http://www.hindu.com/2007/09/25/stories/2007092559400100.htm |url-status=dead |archive-date=6 November 2013 |work=[[The Hindu]] |location=Chennai, India }}</ref><ref name="hindu_jul09">{{cite news |url=https://www.hindu.com/2009/07/04/stories/2009070456811800.htm |archive-url=https://web.archive.org/web/20090707015857/https://www.hindu.com/2009/07/04/stories/2009070456811800.htm |url-status=dead |archive-date=7 July 2009 |work=[[The Hindu]] |title=Minister convenes high-level meet |date=4 July 2009}}</ref> ಕೇರಳವು ಇತ್ತೀಚೆಗೆ [[ರಣಜಿ ಟ್ರೋಫಿ]] ಕ್ರಿಕೆಟ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದೆ, 2017–18 ರಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ವಾರ್ಟರ್ಫೈನಲ್ಗೆ ತಲುಪಿದೆ.<ref name="PRD-sports" /><ref>{{cite news |title=Ranji Trophy: In historic first, Kerala join defending champions Gujarat in quarter-finals |url=https://timesofindia.indiatimes.com/sports/cricket/india-domestic/ranji-trophy/ranji-trophy-in-historic-first-kerala-join-defending-champions-gujarat-in-quarter-finals/articleshow/61836301.cms |date=28 November 2017 |newspaper=The Times of India |access-date=19 December 2017}}</ref> ಫುಟ್ಬಾಲ್ ಕ್ಲಬ್ ಮತ್ತು ಜಿಲ್ಲಾ ಮಟ್ಟದ ಪಂದ್ಯಗಳಿಗೆ ಈ ರಾಜ್ಯದಲ್ಲಿ ಅತಿ ಹೆಚ್ಚು ಆಡಲ್ಪಡುವ ಮತ್ತು ವೀಕ್ಷಿಸಲ್ಪಡುವ ಕ್ರೀಡೆಗಳಲ್ಲಿ ಒಂದಾಗಿದೆ. ಕೊಚ್ಚಿ [[ಇಂಡಿಯನ್ ಸೂಪರ್ ಲೀಗ್]] ನಲ್ಲಿ [[ಕೇರಳ ಬ್ಲಾಸ್ಟರ್ಸ್ ಎಫ್ಸಿ]]ಯನ್ನು ಆಯೋಜಿಸುತ್ತದೆ. ಬ್ಲಾಸ್ಟರ್ಸ್ ದೇಶದಲ್ಲಿ ಅತಿ ಹೆಚ್ಚು ಬೆಂಬಲಿತ ಕ್ಲಬ್ಗಳಲ್ಲಿ ಒಂದಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ [[ಏಷ್ಯಾ]]ದಿಂದ ಐದನೇ ಅತಿ ಹೆಚ್ಚು ಅನುಸರಿಸಲ್ಪಡುವ ಫುಟ್ಬಾಲ್ ಕ್ಲಬ್ ಆಗಿದೆ.<ref>{{Cite web |last=Salikha |first=Adelaida |title=Top FIVE Asian Clubs With Highest Social Media Followers, Up to October 2018 {{!}} Seasia.co |url=https://seasia.co/2018/10/31/top-five-asian-clubs-with-highest-social-media-followers-up-to-october-2018 |access-date=17 September 2020|website=Good News from Southeast Asia |language=en}}</ref><ref>{{Cite web |date=18 June 2020 |title=Indian Football: Five most-followed clubs on social media |url=https://khelnow.com/football/indian-football-clubs-social-media-followers/ |access-date=10 September 2020 |website=Khel Now |language=en-US |archive-date=13 November 2021 |archive-url=https://web.archive.org/web/20211113014231/https://khelnow.com/football/indian-football-clubs-social-media-followers |url-status=dead }}</ref><ref>{{Cite web |title=Malayalam News – kerala blasters become fifth Asian club with the biggest social media following {{!}} News18 Kerala, Sports Latest Malayalam News {{!}} ലേറ്റസ്റ്റ് മലയാളം വാർത്ത |url=https://malayalam.news18.com/news/sports/kerala-blasters-become-fifth-asian-club-with-the-biggest-social-media-following-50113.html |access-date=5 December 2020|website=malayalam.news18.com|date=25 October 2018 }}</ref> ಅಲ್ಲದೆ, ಕೋಝಿಕೋಡ್ [[ಐ-ಲೀಗ್]] ನಲ್ಲಿ [[ಗೋಕುಲಂ ಕೇರಳ ಎಫ್ಸಿ]] ಮತ್ತು [[ಸೈಟ್ ನಾಗ್ಜೀ ಫುಟ್ಬಾಲ್ ಟೂರ್ನಮೆಂಟ್]] ಅನ್ನು ಆಯೋಜಿಸುತ್ತದೆ. ಕೇರಳವು ಪಶ್ಚಿಮ ಬಂಗಾಳ ಮತ್ತು ಗೋವಾ ಜೊತೆಗೆ ಭಾರತದ ಪ್ರಮುಖ ಫುಟ್ಬಾಲ್ ರಾಜ್ಯಗಳಲ್ಲಿ ಒಂದಾಗಿದೆ ಮತ್ತು [[ಐ. ಎಂ. ವಿಜಯನ್]], ಸಿ. ವಿ. ಪಪ್ಪಚನ್, [[ವಿ. ಪಿ. ಸತ್ಯನ್]], [[ಯು. ಶರಾಫ್ ಅಲಿ]], [[ಜೋ ಪಾಲ್ ಅಂಚೇರಿ]], [[ಆಶಿಕ್ ಕುರುಣಿಯನ್]], [[ಮೊಹಮ್ಮದ್ ರಫಿ (ಫುಟ್ಬಾಲ್ ಆಟಗಾರ)|ಮುಹಮ್ಮದ್ ರಫಿ]], [[ಜಿಜು ಜಾಕೋಬ್]], [[ಮಶೂರ್ ಶರೀಫ್]], [[ಪಪ್ಪಚನ್ ಪ್ರದೀಪ್]], [[ಸಿ.ಕೆ. ವಿನೀತ್]], [[ಅನಸ್ ಎಡತೋಡಿಕಾ]], [[ಸಹಲ್ ಅಬ್ದುಲ್ ಸಮದ್]], ಮತ್ತು [[ರಿನೊ ಆಂಟೊ]] ನಂತಹ ರಾಷ್ಟ್ರೀಯ ಆಟಗಾರರನ್ನು ಉತ್ಪಾದಿಸಿದೆ.<ref>{{cite web |url=https://www.the-aiff.com/awards.php |archive-url=https://web.archive.org/web/20090217141248/https://the-aiff.com/awards.php |archive-date=17 February 2009 |title=AIFF Award Player of the Year |publisher=All India Football Federation |access-date=15 November 2015 |url-status=dead}}</ref><ref>{{cite web |author1=James Wray |author2=Ulf Stabe |url=https://twocircles.net/2007sep14/viva_marks_resurgence_kerala_football.html |title=Viva marks the resurgence of Kerala football |publisher=Monstersandcritics.com |date=15 September 2007 |access-date=30 July 2009}}</ref><ref name="india">{{cite web |url=https://zeenews.india.com/news/sports/indian-football-team-suffer-humiliating-1-9-defeat-to-kuwait_668128.html |publisher=zeenews.india.com |title=Indian football team suffer humiliating 1–9 defeat to Kuwait |date=14 November 2010 |access-date=13 November 2016}}</ref><ref>{{Cite web |last=Sportstar |first=Team |title=Sahal recalls journey from university football to senior national team |url=https://sportstar.thehindu.com/football/intercontinental-cup-indian-football-sahal-abdul-samad-kerala-blasters-college-university-system/article28436294.ece |access-date=6 June 2020 |website=Sportstar |date=15 July 2019 |language=en}}</ref><ref>{{cite web |url=https://scroll.in/field/988334/india-football-stimac-names-10-new-players-in-35-man-probables-list-for-oman-uae-friendlies |title=Bipin Singh, Ishan Pandita in 35-man probables list for Oman, UAE friendlies |website=thescroll.in |date=2 March 2021}}</ref> ಕೇರಳ ರಾಜ್ಯ ಫುಟ್ಬಾಲ್ ತಂಡವು [[ಸಂತೋಷ್ ಟ್ರೋಫಿ]]ಯನ್ನು ಏಳು ಬಾರಿ ಗೆದ್ದಿದೆ; 1973, 1992, 1993, 2001, 2004, 2018, ಮತ್ತು 2022 ರಲ್ಲಿ. ಅವರು ಎಂಟು ಬಾರಿ ರನ್ನರ್-ಅಪ್ ಆಗಿದ್ದರು.<ref>{{cite web |url=https://www.the-aiff.com/pages/tournament/tournament-history.php?tournamentdetail=22 |archive-url=https://web.archive.org/web/20120524035900/https://www.the-aiff.com/pages/tournament/tournament-history.php?tournamentdetail=22 |archive-date=24 May 2012 |title=Past Winners |publisher=All India Football Federation |access-date=9 June 2012}}</ref>
ರಾಜ್ಯದ ಪ್ರಮುಖ ಕ್ರೀಡಾಪಟುಗಳಲ್ಲಿ [[ಪಿ. ಟಿ. ಉಷಾ]], [[ಶೈನಿ ವಿಲ್ಸನ್]] ಮತ್ತು [[ಎಂ.ಡಿ. ವಾಲ್ಸಮ್ಮ]] ಸೇರಿದ್ದಾರೆ, ಇವರೆಲ್ಲರೂ [[ಪದ್ಮಶ್ರೀ]] ಮತ್ತು [[ಅರ್ಜುನ ಪ್ರಶಸ್ತಿ]] ಪಡೆದವರಾಗಿದ್ದಾರೆ, ಆದರೆ [[ಕೆ. ಎಂ. ಬೀನಾಮೋಲ್]] ಮತ್ತು [[ಅಂಜು ಬಾಬಿ ಜಾರ್ಜ್]] [[ರಾಜೀವ್ ಗಾಂಧಿ ಖೇಲ್ ರತ್ನ]] ಮತ್ತು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ. [[ಟಿ. ಸಿ. ಯೋಹಾನನ್]], [[ಸುರೇಶ್ ಬಾಬು (ಲಾಂಗ್ ಜಂಪರ್)|ಸುರೇಶ್ ಬಾಬು]], [[ಸಿನಿಮೋಲ್ ಪೌಲೋಸ್]], ಏಂಜಲ್ ಮೇರಿ ಜೋಸೆಫ್, [[ಮರ್ಸಿ ಕುಟ್ಟನ್]], ಕೆ. ಸರಮ್ಮ, [[ರೋಸಾ ಕುಟ್ಟಿ|ಕೆ. ಸಿ. ರೋಸಾಕುಟ್ಟಿ]], ಪದ್ಮಿನಿ ಸೆಲ್ವನ್ ಮತ್ತು ಟಿಂಟು ಲುಕಾ ಕೇರಳದ ಇತರ ಅರ್ಜುನ ಪ್ರಶಸ್ತಿ ವಿಜೇತರು.<ref name="PRD-sports" /><ref>{{cite web |url=https://keralaathletics.org/history.html |title=Kerala State Athletics Association: History |publisher=Kerala State Athletics Association |access-date=12 June 2012 |archive-date=24 June 2012 |archive-url=https://web.archive.org/web/20120624082221/http://keralaathletics.org/history.html |url-status=dead }}</ref> ವಾಲಿಬಾಲ್ ಮತ್ತೊಂದು ಜನಪ್ರಿಯ ಕ್ರೀಡೆಯಾಗಿದ್ದು, ಇದನ್ನು ಹೆಚ್ಚಾಗಿ ಕರಾವಳಿಯ ಮರಳು ಕಡಲತೀರಗಳಲ್ಲಿ ತಾತ್ಕಾಲಿಕ ಅಂಗಣಗಳಲ್ಲಿ ಆಡಲಾಗುತ್ತದೆ.<ref>{{cite book |title=The Rough Guide to South India |author1=David Abram |author2=Nick Edwards |publisher=Rough Guides |year=2004 |isbn=978-1-84353-103-6 |page=64}}</ref> [[ಜಿಮ್ಮಿ ಜಾರ್ಜ್]] ಒಬ್ಬ ಪ್ರಮುಖ ಭಾರತೀಯ ವಾಲಿಬಾಲ್ ಆಟಗಾರ, ಅವರ ಪ್ರಧಾನ ಸಮಯದಲ್ಲಿ ವಿಶ್ವದ ಹತ್ತು ಅತ್ಯುತ್ತಮ ಆಟಗಾರರಲ್ಲಿ ಶ್ರೇಣೀಕರಿಸಲ್ಪಟ್ಟಿದ್ದರು.<ref>{{cite web |title=Jimmy George |work=Sports Portal |publisher=Ministry of Youth Affairs and Sports |access-date=11 November 2007 |url=https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-url=https://web.archive.org/web/20080514040141/https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-date=14 May 2008 |url-status=dead}}</ref> ಇತರ ಜನಪ್ರಿಯ ಕ್ರೀಡೆಗಳಲ್ಲಿ [[ಬ್ಯಾಡ್ಮಿಂಟನ್]], [[ಬ್ಯಾಸ್ಕೆಟ್ಬಾಲ್]] ಮತ್ತು [[ಕಬಡ್ಡಿ]] ಸೇರಿವೆ.<ref name="Reddy2005">{{cite book |author=P.A. Reddy |title=Sports Promotion In India |url=https://books.google.com/books?id=T37m8eRAEX0C&pg=PA119 |access-date=17 November 2012 |year=2005 |publisher=Discovery Publishing House |isbn=978-8171419272 |pages=31–42}}</ref> ಭಾರತೀಯ ಹಾಕಿ ತಂಡದ ನಾಯಕ [[ಪಿ. ಆರ್. ಶ್ರೀಜೇಶ್]], ಅಗ್ರ ಗೋಲ್ಕೀಪರ್ ಕೇರಳದವರು. ರಾಜ್ಯದ ಅಂತಾರಾಷ್ಟ್ರೀಯ ವಾಕರ್ಸ್ [[ಕೆ. ಟಿ. ಇರ್ಫಾನ್]] ಸೇರಿದ್ದಾರೆ.<ref>{{cite news |last=Irfan |first=KT |title=KT Irfan, World Athletics Championships, Moscow |url=https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |newspaper=NDTV Sports |archive-url=https://web.archive.org/web/20130814035243/https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |archive-date=14 August 2013 |url-status=dead}}</ref>
[[2017 FIFA U-17 ವಿಶ್ವಕಪ್]] [[ಭಾರತ]]ದಲ್ಲಿ, [[ಜವಾಹರಲಾಲ್ ನೆಹರು ಕ್ರೀಡಾಂಗಣ (ಕೊಚ್ಚಿ)]] ಅನ್ನು [[ಭಾರತ]]ದಲ್ಲಿ ಆಟವನ್ನು ಆಯೋಜಿಸುವ ಆರು ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಯಿತು.<ref>{{cite web |url=https://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |archive-url=https://web.archive.org/web/20160308104258/http://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |url-status=dead |archive-date=8 March 2016 |title=FIFA Event at Kochi: Time is Ticking Away |website=The New Indian Express |access-date=3 April 2016}}</ref> [[ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ]]ವು ತಿರುವನಂತಪುರ ನಗರದ ಕಾರಿಯಾವಟ್ಟಂನಲ್ಲಿದೆ, ಇದು ಭಾರತದ ಮೊದಲ DBOT (ವಿನ್ಯಾಸ, ನಿರ್ಮಿಸಿ, ನಿರ್ವಹಿಸಿ ಮತ್ತು ವರ್ಗಾಯಿಸಿ) ಮಾದರಿಯ ಹೊರಾಂಗಣ ಕ್ರೀಡಾಂಗಣವಾಗಿದ್ದು, ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಮತ್ತು [[2015 SAFF ಚಾಂಪಿಯನ್ಶಿಪ್]] ಸೇರಿದಂತೆ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಿದೆ.<ref name="SAFF Cup Dates">{{cite news |last1=Chaudhuri |first1=Arunava |title=Trivandrum will host upcoming SAFF Cup in December 2015/January 2016 |url=http://www.sportskeeda.com/football/trivandrum-will-host-upcoming-saff-cup-in-december-2015january-2016 |access-date=22 December 2015 |work=SportsKeeda |date=2 July 2015}}</ref>
== ಪ್ರವಾಸೋದ್ಯಮ ==
{{Main|ಕೇರಳದಲ್ಲಿ ಪ್ರವಾಸೋದ್ಯಮ}}
ಕೇರಳದ ಸಂಸ್ಕೃತಿ ಮತ್ತು ಸಂಪ್ರದಾಯಗಳು, ಅದರ ವೈವಿಧ್ಯಮಯ [[ಕೇರಳದ ಜನಸಂಖ್ಯಾಶಾಸ್ತ್ರ|ಜನಸಂಖ್ಯಾಶಾಸ್ತ್ರ]]ದೊಂದಿಗೆ, ರಾಜ್ಯವನ್ನು ಭಾರತದಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ. 2012 ರಲ್ಲಿ, [[ನ್ಯಾಷನಲ್ ಜಿಯಾಗ್ರಫಿಕ್|ನ್ಯಾಷನಲ್ ಜಿಯಾಗ್ರಫಿಕ್]] ನ ''[[ನ್ಯಾಷನಲ್ ಜಿಯಾಗ್ರಫಿಕ್ ಟ್ರಾವೆಲರ್|ಟ್ರಾವೆಲರ್]]'' ನಿಯತಕಾಲಿಕೆಯು ಕೇರಳವನ್ನು "ವಿಶ್ವದ ಹತ್ತು ಸ್ವರ್ಗಗಳಲ್ಲಿ" ಒಂದಾಗಿ<ref name="Kerala Tourism">{{cite web |title=Kerala Tourism: Paradises in the world |url=https://www.hindu.com/edu/2004/05/11/stories/2004051100040100.htm |archive-url=https://web.archive.org/web/20040904094648/https://www.hindu.com/edu/2004/05/11/stories/2004051100040100.htm |url-status=dead |archive-date=4 September 2004 |work=[[The Hindu]] |access-date=20 February 2012}}</ref><ref>{{cite web |url=https://www.pravasikairali.com/Homepage.aspx?p=articles&news=447 |archive-url=https://web.archive.org/web/20141108151228/https://www.pravasikairali.com/Homepage.aspx?p=articles&news=447 |archive-date=8 November 2014 |title=Pravasi KairaLi Home |publisher=Pravasikairali.com |url-status=usurped |access-date=11 January 2014}}</ref><ref>{{Cite news |date=7 February 2014 |title=Kerala: A vacation in paradise |work=[[The Times of India]] |url=https://timesofindia.indiatimes.com/kerala-a-vacation-in-paradise/articleshow/26251595.cms |access-date=17 January 2023 |archive-date=25 November 2023 |archive-url=https://web.archive.org/web/20231125190237/https://timesofindia.indiatimes.com/kerala-a-vacation-in-paradise/articleshow/26251595.cms |url-status=live }}</ref> ಮತ್ತು "ಜೀವಮಾನದಲ್ಲಿ ನೋಡಲೇಬೇಕಾದ 50 ಸ್ಥಳಗಳು" ಎಂದು ಹೆಸರಿಸಿತು.<ref name="Kerala India">{{cite web |title=Kerala – The Gateway of India |url=https://forbesindia.com/printcontent/26162 |work=[[Forbes]] |access-date=3 January 2012}}</ref> ''[[ಟ್ರಾವೆಲ್ ಅಂಡ್ ಲೀಷರ್]]'' ಕೂಡ ಕೇರಳವನ್ನು "21 ನೇ ಶತಮಾನದ 100 ಉತ್ತಮ ಪ್ರವಾಸಗಳಲ್ಲಿ ಒಂದು" ಎಂದು ವಿವರಿಸಿದೆ.<ref name="Kerala Tourism" /><ref>{{Cite news |title=Kerala : National Geographic Traveler selects Kerala as 'one of the 50 must-see destinations of a lifetime' |publisher=Travel Portal of India |date=27 January 2009 |access-date=11 June 2011 |url=https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |url-status=dead |archive-url=https://web.archive.org/web/20110904030433/https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |archive-date=4 September 2011}}</ref> 2012 ರಲ್ಲಿ, ಇದು [[ತಾಜ್ ಮಹಲ್]] ಅನ್ನು ಹಿಂದಿಕ್ಕಿ ಭಾರತಕ್ಕಾಗಿ ಗೂಗಲ್ನ ಹುಡುಕಾಟ ಪ್ರವೃತ್ತಿಗಳಲ್ಲಿ ಪ್ರಥಮ ಪ್ರವಾಸಿ ತಾಣವಾಯಿತು.<ref>{{Cite news |title=Kerala beats Taj in Google Search Trends for 2012 |work=Indian Express |date=28 December 2012 |access-date=11 January 2012 |url=https://www.indianexpress.com/news/tourism-kerala-beats-taj-in-google-search-trends-for-2012/1051412}}</ref> [[CNN ಟ್ರಾವೆಲ್]] ತನ್ನ '2019 ರಲ್ಲಿ ಭೇಟಿ ನೀಡಲು 19 ಅತ್ಯುತ್ತಮ ಸ್ಥಳಗಳ' ಪಟ್ಟಿಯಲ್ಲಿ ಕೇರಳವನ್ನು ಸೇರಿಸಿದೆ.<ref>{{Cite web |title=CNN Travel's 19 places to visit in 2019 |url=https://www.cnn.com/travel/article/places-to-visit-2019/index.html |website=CNN Travel |date=22 May 2019 |language=en |access-date=4 April 2022}}</ref> ಕೇರಳವನ್ನು [[Time (magazine)|''TIME'']] ನಿಯತಕಾಲಿಕೆಯು 2022 ರಲ್ಲಿ ತನ್ನ ವಿಶ್ವದ ಅತ್ಯುತ್ತಮ ಸ್ಥಳಗಳ ಪಟ್ಟಿಯಲ್ಲಿ ಅನ್ವೇಷಿಸಲು 50 ಅಸಾಧಾರಣ ಸ್ಥಳಗಳಲ್ಲಿ ಹೆಸರಿಸಿತು.<ref>{{Cite web |url=https://www.indiatoday.in/lifestyle/travel/story/ahmedabad-and-kerala-on-time-magazine-s-list-of-world-s-greatest-places-of-2022-1975386-2022-07-14 |title=Ahmedabad and Kerala on TIME magazine's list of World's Greatest Places of 2022 |website=India Today|date=14 July 2022 }}</ref> 2025 ರಲ್ಲಿ, ಕೇರಳವನ್ನು [[ರಫ್ ಗೈಡ್ಸ್]] ನ '2026 ರ ವಿಶ್ವದ 26 ಪ್ರಮುಖ ಸ್ಥಳಗಳ' ಪಟ್ಟಿಯಲ್ಲಿ 16 ನೇ ಸ್ಥಾನದಲ್ಲಿ ಶ್ರೇಣೀಕರಿಸಲಾಯಿತು, ಇದು ಅಂತಾರಾಷ್ಟ್ರೀಯ ಪ್ರವಾಸ ಮಾರ್ಗದರ್ಶಿಯ ವಾರ್ಷಿಕ ಜಾಗತಿಕ ಸ್ಥಳಗಳ ಶ್ರೇಯಾಂಕದಲ್ಲಿ ಸೇರಿಸಲ್ಪಟ್ಟ ಏಕೈಕ ಭಾರತೀಯ ರಾಜ್ಯವಾಗಿದೆ.<ref>{{Cite news |date=2025-12-27 |title=This is the only Indian state to make it to the list of 'World's Top 26 Destinations For 2026' |url=https://timesofindia.indiatimes.com/life-style/travel/destinations/this-is-the-only-indian-state-to-make-it-to-the-list-of-worlds-top-26-destinations-for-2026/articleshow/126194678.cms |access-date=2025-12-30 |work=The Times of India |issn=0971-8257}}</ref>
ಕೇರಳದ ಬೀಚ್ಗಳು, ಬ್ಯಾಕ್ವಾಟರ್ಗಳು, ಸರೋವರಗಳು, ಪರ್ವತ ಶ್ರೇಣಿಗಳು, ಜಲಪಾತಗಳು, ಪ್ರಾಚೀನ ಬಂದರುಗಳು, ಅರಮನೆಗಳು, ಧಾರ್ಮಿಕ ಸಂಸ್ಥೆಗಳು<ref name="Ltd.2012">{{cite book |author=Infokerala Communications Pvt. Ltd. |title=Kerala Tradition & Fascinating Destinations |url=https://books.google.com/books?id=vTunBAAAQBAJ&pg=PA314 |year=2012 |publisher=Biju Mathew {{!}} Info Kerala Communications Pvt Ltd |isbn=978-8192128481 |page=314}}</ref> ಮತ್ತು ವನ್ಯಜೀವಿ ಅಭಯಾರಣ್ಯಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಗಳಾಗಿವೆ.<ref name="Tripays">{{cite web |url=https://www.tripays.com/kerala-family-tour-packages/ |date=6 August 2011 |title=Kerala Family Tour Packages |author=Admin |access-date=2 July 2019 |archive-date=21 November 2021 |archive-url=https://web.archive.org/web/20211121233843/https://www.tripays.com/kerala-family-tour-packages/ |url-status=dead }}</ref> ಕೊಚ್ಚಿ ನಗರವು ಕೇರಳದಲ್ಲಿ ಒಟ್ಟು ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.<ref name="keralatourism">{{cite web |url=https://www.keralatourism.org/destination-wise-foreign-2010.pdf |date=6 August 2011 |title=Destination Wise Number of Foreign Tourists Visited Kerala During 2010 |author=Saju |access-date=24 September 2014}}</ref><ref name="Tourism Statistics">{{cite web |publisher=Government of Kerala, Tourism Department |url=https://www.keralatourism.org/tourismstatistics/Tourist-Statistics2008.pdf |title=Tourist statistics – 2008 |access-date=22 October 2010}}</ref> 1980 ರ ದಶಕದ ಆರಂಭದವರೆಗೆ, ಕೇರಳವು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಅಪರಿಚಿತ ತಾಣವಾಗಿತ್ತು.<ref name="HinduTourism">{{Cite news |author=Santhanam K |title=An ideal getaway |date=27 January 2002 |access-date=11 November 2007 |url=https://www.hindu.com/thehindu/mag/2002/01/27/stories/2002012700400800.htm |archive-url=https://web.archive.org/web/20030623124553/https://www.hindu.com/thehindu/mag/2002/01/27/stories/2002012700400800.htm |url-status=dead |archive-date=23 June 2003 |work=[[The Hindu]] |location=Chennai, India}}</ref> 1986 ರಲ್ಲಿ ಕೇರಳ ಸರ್ಕಾರವು ಪ್ರವಾಸೋದ್ಯಮವನ್ನು ಪ್ರಮುಖ ಉದ್ಯಮವೆಂದು ಘೋಷಿಸಿತು ಮತ್ತು ಅದನ್ನು ಹಾಗೆ ಮಾಡಿದ ಭಾರತದ ಮೊದಲ ರಾಜ್ಯವಾಗಿದೆ.<ref name="Kerala Tourism"/> [[ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ]], ರಾಜ್ಯದ ಪ್ರವಾಸೋದ್ಯಮ ನಿರೀಕ್ಷೆಗಳನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಂಸ್ಥೆ, ಪ್ರಾರಂಭಿಸಿದ ಮಾರ್ಕೆಟಿಂಗ್ ಅಭಿಯಾನಗಳು ಪ್ರವಾಸೋದ್ಯಮ ಉದ್ಯಮದ ಬೆಳವಣಿಗೆಗೆ ಕಾರಣವಾಯಿತು.<ref name="Tourism">{{cite book |title=Tourism Marketing |author=Dasgupta Devashish |publisher=Pearson Education India |year=2011 |isbn=978-8131731826 |page=203 |url=https://books.google.com/books?id=oXWAEjcG-FsC |access-date=30 May 2015}}</ref> ಅನೇಕ ಜಾಹೀರಾತುಗಳು ಕೇರಳವನ್ನು ''[[ಗಾಡ್ಸ್ ಓನ್ ಕಂಟ್ರಿ|ಕೇರಳ, ಗಾಡ್ಸ್ ಓನ್ ಕಂಟ್ರಿ]]'' ಎಂಬ ಸ್ಲೋಗನ್ನೊಂದಿಗೆ ಬ್ರಾಂಡ್ ಮಾಡಿದವು.<ref name="Tourism" /> ಕೇರಳ ಪ್ರವಾಸೋದ್ಯಮವು ಜಾಗತಿಕ ಬ್ರ್ಯಾಂಡ್ ಆಗಿದ್ದು, ಅತಿ ಹೆಚ್ಚು ನೆನಪಿನ ಶಕ್ತಿಯನ್ನು ಹೊಂದಿರುವ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref name="Tourism" /> 2006 ರಲ್ಲಿ, ಕೇರಳವು 8.5 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿತು, ಇದು ಹಿಂದಿನ ವರ್ಷಕ್ಕಿಂತ 23.7% ರಷ್ಟು ಹೆಚ್ಚಳವಾಗಿದೆ, ಇದು ರಾಜ್ಯವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜನಪ್ರಿಯ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ.<ref>{{cite web |title=Tourist Statistics – 2006 |work=Department of Tourism |publisher=Government of Kerala |year=2006 |access-date=11 November 2007 |url=https://www.keralatourism.org/php/media/data/tourismstatistics/TS2006.pdf |archive-url=https://web.archive.org/web/20080626195845/https://www.keralatourism.org/php/media/data/tourismstatistics/TS2006.pdf |archive-date=26 June 2008}}</ref> 2011 ರಲ್ಲಿ, ಕೇರಳಕ್ಕೆ ಪ್ರವಾಸಿಗರ ಒಳಹರಿವು 10-ಮಿಲಿಯನ್ ಗಡಿಯನ್ನು ದಾಟಿತು.<ref name="bizstd">{{Cite news |title=Tourist inflow to Kerala crosses 10 million mark |work=Business-Standard |access-date=15 November 2015 |url=https://www.business-standard.com/india/news/tourist-inflow-to-kerala-crosses-10-million-mark/474524/ |date=16 May 2012 |last1=Joseph |first1=George}}</ref>
ಆಯುರ್ವೇದ ಪ್ರವಾಸೋದ್ಯಮವು 1990 ರ ದಶಕದಿಂದಲೂ ಬಹಳ ಜನಪ್ರಿಯವಾಗಿದೆ, ಮತ್ತು ಖಾಸಗಿ ಸಂಸ್ಥೆಗಳು ಪ್ರವಾಸೋದ್ಯಮ ಇಲಾಖೆಯ ಉಪಕ್ರಮಗಳೊಂದಿಗೆ ಗಮನಾರ್ಹ ಪಾತ್ರವನ್ನು ವಹಿಸಿವೆ.<ref name="HinduTourism" /> ಕೇರಳವು ತನ್ನ [[ಪರಿಸರ ಪ್ರವಾಸೋದ್ಯಮ]] ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ, ಇವುಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಪರ್ವತಾರೋಹಣ, ಟ್ರೆಕ್ಕಿಂಗ್ ಮತ್ತು ಪಕ್ಷಿ ವೀಕ್ಷಣಾ ಕಾರ್ಯಕ್ರಮಗಳು ಪ್ರಮುಖ ಚಟುವಟಿಕೆಗಳಾಗಿವೆ.<ref name="Devrep47">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=47 |access-date=30 May 2015}}</ref> ರಾಜ್ಯದ ಪ್ರವಾಸೋದ್ಯಮ ಉದ್ಯಮವು [[ಕೇರಳದ ಆರ್ಥಿಕತೆ|ರಾಜ್ಯದ ಆರ್ಥಿಕತೆಗೆ]] ಪ್ರಮುಖ ಕೊಡುಗೆಯಾಗಿದೆ, 13.3% ದರದಲ್ಲಿ ಬೆಳೆಯುತ್ತಿದೆ.<ref>{{cite web |title=Tourist Statistics – 2005 (Provisional) |work=Department of Tourism |publisher=Government of Kerala |year=2005 |access-date=11 November 2007 |url=https://www.keralatourism.org/php/media/data/tourismstatistics/TOURISTSTATISTICS2005.pdf |archive-url=https://web.archive.org/web/20080626195846/https://www.keralatourism.org/php/media/data/tourismstatistics/TOURISTSTATISTICS2005.pdf |archive-date=26 June 2008}}</ref> ಪ್ರವಾಸೋದ್ಯಮದಿಂದ ಬರುವ ಆದಾಯವು 2001 ಮತ್ತು 2011 ರ ನಡುವೆ ಐದು ಪಟ್ಟು ಹೆಚ್ಚಾಗಿ 2011 ರಲ್ಲಿ {{INR}} 190 ಬಿಲಿಯನ್ ಗಡಿಯನ್ನು ದಾಟಿತು. ಎಕನಾಮಿಕ್ ಟೈಮ್ಸ್ ಪ್ರಕಾರ<ref>{{Cite news |url=https://economictimes.indiatimes.com/industry/services/travel/kerala-records-6-rise-in-tourist-arrivals-despite-floods-and-nipah-virus-scare/articleshow/67995390.cms |title=Kerala records 6% rise in tourist arrivals despite floods and Nipah virus scare |date=14 February 2019 |work=The Economic Times |access-date=14 August 2019}}</ref> ಕೇರಳವು 2018 ರಲ್ಲಿ ಪ್ರವಾಸೋದ್ಯಮ ವಲಯದಿಂದ INR 365280.1 ಮಿಲಿಯನ್ ದಾಖಲೆಯ ಆದಾಯವನ್ನು ಗಳಿಸಿತು, ಇದು ಹಿಂದಿನ ವರ್ಷಕ್ಕಿಂತ Rs 28743.3 ಮಿಲಿಯನ್ ಹೆಚ್ಚಳವಾಗಿದೆ. 2018 ರಲ್ಲಿ 16.7 ಮಿಲಿಯನ್ ಕ್ಕೂ ಹೆಚ್ಚು ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡಿದ್ದಾರೆ, ಇದು ಹಿಂದಿನ ವರ್ಷ 15.76 ಮಿಲಿಯನ್ ಗೆ ಹೋಲಿಸಿದರೆ 5.9% ರಷ್ಟು ಹೆಚ್ಚಳವಾಗಿದೆ. ಈ ಉದ್ಯಮವು ಸರಿಸುಮಾರು 1.2 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ.<ref name="bizstd" />
ರಾಜ್ಯದ ಏಕೈಕ ಡ್ರೈವ್-ಇನ್ ಬೀಚ್, ಕಣ್ಣೂರಿನ [[ಮುಝಪ್ಪಿಲಂಗಡ್ ಬೀಚ್]], ಇದು {{convert|5|km}} ಮರಳಿನಲ್ಲಿ ಹರಡಿದೆ, ಇದನ್ನು ಬಿಬಿಸಿ 2016 ರಲ್ಲಿ ವಿಶ್ವದ ಆರು ಪ್ರಮುಖ ಡ್ರೈವ್-ಇನ್ ಬೀಚ್ಗಳಲ್ಲಿ ಒಂದಾಗಿ ಆಯ್ಕೆ ಮಾಡಿತು.<ref>{{cite web |url=https://www.bbc.com/autos/story/20160617-the-worlds-best-beaches-for-driving |title=The best beaches for driving |first=David K. |last=Gibson |work=BBC Autos |date=11 June 2021}}</ref> [[ಇಡುಕ್ಕಿ ಅಣೆಕಟ್ಟು]], ವಿಶ್ವದ ಎರಡನೇ ಕಮಾನು ಅಣೆಕಟ್ಟು, ಮತ್ತು ಏಷ್ಯಾದ ಮೊದಲನೆಯದು [[ಇಡುಕ್ಕಿ|ಇಡುಕ್ಕಿಯಲ್ಲಿದೆ]]. ಪ್ರಮುಖ ಬೀಚ್ಗಳು [[ಕೋವಳಂ]], [[ವರ್ಕಲ]], [[ಕೋಝಿಕೋಡ್]], [[ಫೋರ್ಟ್ ಕೊಚ್ಚಿ]], [[ಚೇರಾಯಿ]], [[ಆಲಪ್ಪುಳ]], [[ಪೊನ್ನಾನಿ]], [[ಕಡಲುಂಡಿ]], [[ತಾನೂರು, ಮಲಪ್ಪುರಂ|ತಾನೂರು]], [[ಚಾಲಿಯಂ]], [[ಪಾಯ್ಯಂಬಲಂ]], ಕಪ್ಪಾಡ್, [[ಮುಝಪ್ಪಿಲಂಗಡ್ ಬೀಚ್|ಮುಝಪ್ಪಿಲಂಗಡ್]] ಮತ್ತು [[ಬೇಕಲ್]]. ಜನಪ್ರಿಯ [[ಬೆಟ್ಟದ ತಾಣ]]ಗಳೆಂದರೆ [[ಪೊನ್ಮುಡಿ]], [[ವಯನಾಡು]], [[ವಗಮನ್]], [[ಮುನ್ನಾರ್]], [[ಪೀರ್ಮೇಡ್]], [[ರಾಮಕ್ಕಲ್ಮೇಡು]], [[ಅರಿಂಬ್ರ ಬೆಟ್ಟಗಳು, ಮಲಪ್ಪುರಂ|ಅರಿಂಬ್ರ]], [[ಪೈತಲ್ಮಲ]] [[ಇಡುಕ್ಕಿ|ಕಣ್ಣೂರು]] ಜಿಲ್ಲೆಯ, [[ಕೊಡಿಕುತಿಮಲ]], ಮತ್ತು [[ನೆಲ್ಲಿಯಂಪತಿ]].<ref>{{cite book |author=Tapan K Panda |title=Tourism Marketing |publisher=ICFAI Books |year=2007 |isbn=978-8131404690 |url=https://books.google.com/books?id=4A0j6ZlJQfkC |pages=173–77 |access-date=30 May 2015}}</ref> ಮುನ್ನಾರ್ ಸಮುದ್ರ ಮಟ್ಟದಿಂದ 4,500 ಅಡಿ ಎತ್ತರದಲ್ಲಿದೆ ಮತ್ತು ಚಹಾ ತೋಟಗಳು ಮತ್ತು ವಿವಿಧ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ.<ref name="FPJ">{{cite news |title=Kerala: Spellbound by this natural beauty |newspaper=The Free Press Journal |url=https://www.freepressjournal.in/travel/kerala-spellbound-by-this-natural-beauty/636904 |date=2 August 2015 |access-date=27 November 2015}}</ref> ಕೇರಳದ ಪರಿಸರ ಪ್ರವಾಸೋದ್ಯಮ ತಾಣಗಳು 12 ವನ್ಯಜೀವಿ ಅಭಯಾರಣ್ಯಗಳು ಮತ್ತು ಎರಡು ರಾಷ್ಟ್ರೀಯ ಉದ್ಯಾನವನಗಳನ್ನು ಒಳಗೊಂಡಿವೆ: [[ಪೆರಿಯಾರ್ ಹುಲಿ ಮೀಸಲು]], [[ಪರಂಬಿಕುಳಂ ವನ್ಯಜೀವಿ ಅಭಯಾರಣ್ಯ]], [[ಚಿನ್ನಾರ್ ವನ್ಯಜೀವಿ ಅಭಯಾರಣ್ಯ]], [[ಥಟ್ಟೆಕ್ಕಾಡ್ ಪಕ್ಷಿ ಅಭಯಾರಣ್ಯ]], [[ವಯನಾಡು ವನ್ಯಜೀವಿ ಅಭಯಾರಣ್ಯ]], [[ಕಡಲುಂಡಿ ಪಕ್ಷಿ ಅಭಯಾರಣ್ಯ]], [[ಕರಿಂಪುಳ ವನ್ಯಜೀವಿ ಅಭಯಾರಣ್ಯ]], [[ಮುತ್ತಂಗ]] ವನ್ಯಜೀವಿ ಅಭಯಾರಣ್ಯ, [[ಅರಳಂ ವನ್ಯಜೀವಿ ಅಭಯಾರಣ್ಯ]], [[ಎರವಿಕುಳಂ ರಾಷ್ಟ್ರೀಯ ಉದ್ಯಾನವನ]], ಮತ್ತು [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]] ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ.<ref>{{cite book |author=M.R. Biju |title=Sustainable Dimensions Of Tourism Management |publisher=Mittal Publications |year=2006 |isbn=978-8183241298 |url=https://books.google.com/books?id=AkAdvTbg0dEC |pages=151–65 |access-date=30 May 2015}}</ref> ಕೇರಳ ಬ್ಯಾಕ್ವಾಟರ್ಗಳು ಅಂತರ್ಸಂಪರ್ಕಿತ ನದಿಗಳ (41 ಪಶ್ಚಿಮಕ್ಕೆ ಹರಿಯುವ ನದಿಗಳು), ಸರೋವರಗಳು ಮತ್ತು ಕಾಲುವೆಗಳ ವ್ಯಾಪಕ ಜಾಲವಾಗಿದ್ದು, ಇದು ಆಲಪ್ಪುಳ, [[ಕುಮಾರಕೋಂ]], [[ಪೊನ್ನಾನಿ]], [[ನೀಲೇಶ್ವರಂ]], ಮತ್ತು [[ಪುನ್ನಮದ]] (ಅಲ್ಲಿ ವಾರ್ಷಿಕ ನೆಹರು ಟ್ರೋಫಿ ದೋಣಿ ಪಂದ್ಯವನ್ನು ಆಗಸ್ಟ್ನಲ್ಲಿ ನಡೆಸಲಾಗುತ್ತದೆ), [[ಪತ್ತಿರಮಣಲ್]] [[ಮುಹಮ್ಮ]] ದಲ್ಲಿನ ಸಣ್ಣ ದ್ವೀಪವನ್ನು ಕೇಂದ್ರೀಕರಿಸುತ್ತದೆ. [[ಪದ್ಮನಾಭಪುರಂ ಅರಮನೆ]] ಮತ್ತು [[ಮತ್ತಂಚೇರಿ ಅರಮನೆ]] ಎರಡು ಸಮೀಪದ ಪರಂಪರೆಯ ತಾಣಗಳಾಗಿವೆ.<ref>{{cite web |url=https://www.keralatourism.org/destination/padmanabhapuram-palace/244 |title=Padmanabhapuram Palace |publisher=Kerala Tourism |access-date=2 December 2016}}</ref><ref>{{cite web |url=https://www.keralatourism.org/destination/mattancherry-palace-kochi/178 |title=Mattancherry Palace |publisher=Kerala Tourism |access-date=2 December 2016}}</ref>
== ಸಹ ನೋಡಿ ==
{{stack|{{Portal|ಭಾರತ}}}}
* [[ಕೇರಳದ ರೂಪರೇಖೆ]]
* [[ದಕ್ಷಿಣ ಭಾರತ]]
* [[ದ್ರಾವಿಡರು]]
* [[ಕೇರಳದ ನಗರ ನಿಗಮಗಳ ಪಟ್ಟಿ]]
* [[ಕೇರಳದ ತಾಲೂಕುಗಳ ಪಟ್ಟಿ]]
* [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ]]
* [[ಕೇರಳದ ಜಿಲ್ಲೆಗಳ ಪಟ್ಟಿ]]
* [[ಕೇರಳದ ಆದಾಯ ವಿಭಾಗಗಳ ಪಟ್ಟಿ]]
* [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]]
== ಉಲ್ಲೇಖಗಳು ==
{{Reflist}}
==ಟಿಪ್ಪಣಿಗಳು==
{{notelist}}
=== ಮೂಲಗಳು ===
{{refbegin}}
* {{cite book |title=Mathrubhumi Yearbook Plus – 2019 |publisher=Mathrubhumi Printing & Publishing Company Limited |year=2018 |location=[[Kozhikode]] |editor-last=Chandran |editor-first=V. P. |id={{ASIN|8182676444 |country=in}} |language=Malayalam }}
{{refend}}
== ಹೆಚ್ಚಿನ ಓದುವಿಕೆ ==
{{Further|ಕೇರಳದ ಇತಿಹಾಸ#ಹೆಚ್ಚಿನ ಓದುವಿಕೆ}}
* Bose, Satheese Chandra and Varughese, Shiju Sam (eds.) 2015. ''[https://web.archive.org/web/20150102071757/https://www.orientblackswan.com/display.asp?categoryID=0&isbn=978-8125057222 Kerala Modernity: Ideas, Spaces and Practices in Transition]''. Hyderabad: Orient Blackswan.
* {{cite journal |pmc=7510531 |year=2021 |last1=Chathukulam |first1=Jos |last2=Tharamangalam |first2=Joseph |title=The Kerala model in the time of COVID19: Rethinking state, society and democracy |journal=World Development |volume=137 |article-number=105207 |doi=10.1016/j.worlddev.2020.105207 |pmid=32989341}}
* {{cite journal |url=https://journals.sagepub.com/doi/abs/10.1177/0971521516656077 |doi=10.1177/0971521516656077 |title=The 'Kudumbashree Woman' and the Kerala Model Woman: Women and Politics in Contemporary Kerala |year=2016 |last1=Devika |first1=J. |journal=Indian Journal of Gender Studies |volume=23 |issue=3 |pages=393–414 |s2cid=151752480|url-access=subscription }}
* {{cite journal |url=https://openresearch-repository.anu.edu.au/bitstream/1885/19062/2/01_Jeffrey_Legacies_of_Matriliny%3A__the_2005.pdf |jstor=40023536 |title=Legacies of Matriliny: The Place of Women and the "Kerala Model" |last1=Jeffrey |first1=Robin |journal=Pacific Affairs |year=2004 |volume=77 |issue=4 |pages=647–664}}
* {{cite journal |url=http://keralamediaacademy.org/wp-content/uploads/2015/02/Robin-Jeffery.pdf |doi=10.1017/S0021911809000679 |s2cid=146795894 |title=Testing Concepts about Print, Newspapers, and Politics: Kerala, India, 1800–2009 |year=2009 |last1=Jeffrey |first1=Robin |journal=The Journal of Asian Studies |volume=68 |issue=2 |page=465}}
* {{cite book |title=Politics, Women and Well-Being: How Kerala became 'a Model' |isbn=978-1-349-12252-3 |last1=Jeffrey |first1=Robin |date=27 July 2016 |publisher=Springer}}
* {{cite book |last1=Ramanathaiyer |first1=Sundar |first2=Stewart |last2=MacPherson |title=Social Development in Kerala: Illusion or Reality? |edition=2nd |publisher=Routledge |year=2018}}
== ಬಾಹ್ಯ ಕೊಂಡಿಗಳು ==
{{Sister project links|voy=Kerala|Kerala}}
; ಸರ್ಕಾರ
* {{official website|https://www.kerala.gov.in/}} {{Webarchive|url=https://web.archive.org/web/20060118031516/https://www.kerala.gov.in/ |date=18 January 2006 }} ಕೇರಳ ಸರ್ಕಾರದ
* {{official website|https://www.keralatourism.org/}} ಕೇರಳ ಪ್ರವಾಸೋದ್ಯಮದ
; ಸಾಮಾನ್ಯ ಮಾಹಿತಿ
* {{OSM relation|2018151}}
{{Clear}}
{{Kerala |show=show }}
[[ವರ್ಗ:ಕೇರಳ| ]]
[[ವರ್ಗ:ದಕ್ಷಿಣ ಭಾರತ|.]]
[[ವರ್ಗ:1956 ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರದೇಶಗಳು]]
[[ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
phidhbqaqvqjwq80z3vl510x4bnehvs
1378291
1378290
2026-08-03T08:26:34Z
A826
72368
1378291
wikitext
text/x-wiki
{{databox}}
{{Infobox Indian state or territory
| name = ಕೇರಳ
| official_name =
| type = ರಾಜ್ಯ
| image_seal = Government of Kerala Logo.svg{{!}}class=skin-invert
| image_skyline = <!-- Do not add additional pictures here without discussion, per consensus [[Talk:Kerala/Archive_6#Infobox montage]]--> Boathouse (7063399547).jpg
| image_caption = [[ಕೇರಳದ ಬ್ಯಾಕ್ವಾಟರ್ಗಳು|ಕೇರಳದ ಬ್ಯಾಕ್ವಾಟರ್ಗಳಲ್ಲಿ]] ಒಂದು [[ಹೌಸ್ ಬೋಟ್]]
| nickname = "[[ಗಾಡ್ಸ್ ಓನ್ ಕಂಟ್ರಿ#ಕೇರಳ|ದೇವರ ಸ್ವಂತ ನಾಡು]]"
| image_map = IN-KL.svg
| coordinates = {{coord|10.0|N|76.3|E|region:IN-KL|display=inline,title}}
| region = ದಕ್ಷಿಣ ಭಾರತ
| before_was = [[ತಿರುವಾಂಕೂರು-ಕೊಚ್ಚಿ]]<br>[[ಮಲಬಾರ್ ಜಿಲ್ಲೆ]]<br>[[ದಕ್ಷಿಣ ಕನ್ನಡ]]
| formation_date4 = 1 ನವೆಂಬರ್ 1956
| capital = ತಿರುವನಂತಪುರ
| districts = [[ಕೇರಳದ ಜಿಲ್ಲೆಗಳ ಪಟ್ಟಿ|14]]
| governor = [[ರಾಜೇಂದ್ರ ಅರ್ಲೇಕರ್]]
| chief_minister = [[ವಿ. ಡಿ. ಸತೀಶನ್]]
| party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
| judiciary = [[ಕೇರಳ ಉಚ್ಚ ನ್ಯಾಯಾಲಯ]]
| chief_secretary = ಬಿಶ್ವನಾಥ್ ಸಿನ್ಹಾ I.A.S.
| legislature_type = ಏಕಸಭಾ
| assembly = [[ಕೇರಳ ವಿಧಾನಸಭೆ]]
| assembly_seats = 140 ಸ್ಥಾನಗಳು
| rajya_sabha_seats = 9 ಸ್ಥಾನಗಳು
| lok_sabha_seats = 20 ಸ್ಥಾನಗಳು
| area_total_km2 = 38863
| area_footnotes = <ref>{{Cite web |title=About Kerala
|url=https://kerala.gov.in/subdetail/NTM1ODMxNzQuNDg=/MjA0ODc2ODQuMzY= |access-date=10 March 2025 |language=en-US }}</ref>
| area_rank = 21ನೇ
| length_km = 560
| width_km = 70
| elevation_footnotes = <ref>{{Cite web |title=Kerala Physiography {{!}} Geographical location {{!}} Kerala {{!}} Kerala |url=https://kerala.me/geography |access-date=24 March 2023 |language=en-US |archive-date=24 March 2023 |archive-url=https://web.archive.org/web/20230324220056/https://kerala.me/geography |url-status=live }}</ref>
| elevation_m = 900
| elevation_max_m = 2,695
| elevation_max_point = [[ಅನಮುಡಿ]]<ref>{{Cite web |title=Anamudi – Peakbagger.com |url=https://www.peakbagger.com/peak.aspx?pid=10664 |access-date=24 March 2023 |website=www.peakbagger.com |archive-date=24 March 2023 |archive-url=https://web.archive.org/web/20230324210042/https://www.peakbagger.com/peak.aspx?pid=10664 |url-status=live }}</ref>
| elevation_min_m = −2.7
| elevation_min_point = [[ಕುಟ್ಟನಾಡು]]<ref>{{Cite web |title=Kuttanadan.com : Explore the Rice Bowl of Kerala |url=https://kuttanadan.com/ |access-date=24 March 2023 |website=Kuttanadan Website |language=en-US |archive-date=24 March 2023 |archive-url=https://web.archive.org/web/20230324210043/https://kuttanadan.com/ |url-status=live }}</ref>
| population_footnotes = <ref>{{cite book | url=https://ruralindiaonline.org/en/library/resource/population-projections-for-india-and-states-2011-2036/ | title=Population Projections for India and States, 2011–2036 | date=July 2020 | access-date=25 March 2023 | archive-date=13 March 2023 | archive-url=https://web.archive.org/web/20230313055356/https://ruralindiaonline.org/en/library/resource/population-projections-for-india-and-states-2011-2036/ | url-status=live }}</ref>
| population_total = 36,111,000
| population_as_of = 2025
| population_rank = 13ನೇ
| population_urban = 79.42%
| population_rural = 20.58%
| population_density = 890
| population_demonym = [[ಕೇರಳೀಯ]],<ref>{{Cite web|url=https://www.theguardian.com/world/2026/feb/25/india-state-kerala-to-be-renamed-keralam-malayalam-language|title=Indian state of Kerala to be renamed Keralam to reflect local pronunciation|first=Penelope|last=MacRae|work=The Guardian |date=25 February 2026}}</ref> [[ಮಲಯಾಳಿಗಳು|ಮಲಯಾಳಿ]]
| official_langs = [[ಮಲಯಾಳಂ]]<ref name="OfficialLang">{{cite web |url=https://prsindia.org/files/bills_acts/acts_states/kerala/2026/Act3of2026KL.pdf |title=The Malayalam Language Act, 2025 |publisher=prsindia.org |date=5 March 2026 |access-date=22 April 2026 }}</ref>
| GDP_footnotes = <ref name="MOSPI">{{cite web|url=http://mospi.nic.in/sites/default/files/press_releases_statements/State_wise_SDP_15_03_2021.xls|title=MOSPI State Domestic Product, Ministry of Statistics and Programme Implementation, Government of India|date=15 March 2021|accessdate=28 March 2021}}</ref>
| GDP_total = {{Increase}} $167.90 billion (nominal)<br/>{{Increase}} $707.26 billion (PPP)
| GDP_year = 2025-26
| GDP_rank = 11ನೇ
| GDP_per_capita = {{Increase}} {{INRConvert|317723|lk=r}} (nominal)<br/>{{Increase}} $19,586 (PPP)
| GDP_per_capita_rank = 11ನೇ
| HDI = {{Increase}} 0.804 {{colour|#090|ಅತಿ ಹೆಚ್ಚು}}<ref name="UNDP">{{cite report|title=Subnational HDI|url=https://globaldatalab.org/shdi/table/shdi/IND/?levels=1+4&interpolation=0&extrapolation=0|access-date=1 April 2026|work=Global Data Lab, [[United Nations Development Programme]]}}</ref>
| HDI_year = 2023
| HDI_rank = 2ನೇ
| literacy = 95.3%<ref>{{Cite book |url=https://www.mospi.gov.in/sites/default/files/publication_reports/AnnualReport_PLFS2023-24L2.pdf |title=Annual Report, Periodic Labour Force Survey (PLFS) (July 2023 – June 2024) |date=23 September 2024 |publisher=National Sample Survey Office, Ministry of Statistics and Programme Implementation, Government of India |pages=A-10 |chapter=Appendix-A: Detailed tables, Table (7): Literacy rate (in per cent) of persons of different age groups for each State/UT (persons, age-group (years): 7 & above, rural+urban (column 6))}}</ref>
| literacy_year = 2024
| literacy_rank = 4ನೇ
| sex_ratio = 1084[[female|♀]]/1000 [[male|♂]]<ref name="pc-census2011" />
| sexratio_year = 2025
| sexratio_rank = 17ನೇ
| iso_code = IN-KL
| registration_plate = KL
| website = kerala.gov.in
| foundation_day = 1 ನವೆಂಬರ್
| mammal = [[ಭಾರತೀಯ ಆನೆ]]<ref name="ENVIS">{{Cite web |date=1 December 2017 |title=State Symbols of India |url=http://wiienvis.nic.in/KidsCentre/state_symbols_india_8411.aspx |archive-url=https://web.archive.org/web/20210415100206/http://wiienvis.nic.in/KidsCentre/state_symbols_india_8411.aspx |archive-date=15 April 2021 |access-date=3 June 2022 |publisher=ENVIS Centre on Wildlife & Protected Areas}}</ref>
| bird = [[ಮಹಾಶಿಖಿ]]<ref name="ENVIS" />
| fish = [[ಗ್ರೀನ್ ಕ್ರೋಮೈಡ್]]
| butterfly = [[ಪಾಪಿಲಿಯೋ ಬುದ್ಧ]]<ref>{{Cite news |last=Jacob |first=Aneesh |title='Budha Mayoori' to be named Kerala's state butterfly |language=en |work=Mathrubhumi |url=https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |url-status=dead |access-date=30 March 2019 |archive-url=https://web.archive.org/web/20190330094056/https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |archive-date=30 March 2019}}</ref>
| flower = [[ಕಸ್ಸಿಯಾ ಫಿಸ್ಟುಲಾ|ಸ್ವರ್ಣ ಮರ]]<ref name="ENVIS" />
| tree = [[ತೆಂಗಿನ]] ಮರ<ref name="ENVIS" />
| fruit = [[ಹಲಸು]]<ref>{{Cite news |date=17 March 2018 |title=Jackfruit to be Kerala's state fruit; declaration on March 21 |work=[[The Indian Express]] |agency=[[Press Trust of India|PTI]] |url=https://indianexpress.com/article/india/jackfruit-to-be-keralas-state-fruit-declaration-on-march-21-5101170/ |access-date=22 March 2018 |archive-date=22 March 2018 |archive-url=https://web.archive.org/web/20180322144926/http://indianexpress.com/article/india/jackfruit-to-be-keralas-state-fruit-declaration-on-march-21-5101170/ |url-status=live }}</ref>
| image_highway = SH IN-KL.png
| sh_numbers = [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|SH KL1 – SH KL79]]
}}
'''ಕೇರಳ'''{{efn|[[ಭಾರತೀಯ ಇಂಗ್ಲಿಷ್]]: [[Help:IPA/English|/ˈkɛrələ/]] {{audio|Kerala (English Pronunciation).ogg| }}, {{respell|KERR|ə|lə}} <br/> {{IPA|ml|ˈkeːɾɐɭɐm|lang|Ml-Keralam.ogg}} ''[[ISO 15919|ಕೇರಳಂ]]''}} [[ದಕ್ಷಿಣ ಭಾರತ]]ದ [[ಮಲಬಾರ್ ಕರಾವಳಿ]]ಯಲ್ಲಿರುವ ಒಂದು [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]ವಾಗಿದೆ. ಇದನ್ನು 1 ನವೆಂಬರ್ 1956 ರಂದು [[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ರಚಿಸಲಾಯಿತು, ಇದು ದೇಶದ [[ಮಲಯಾಳಂ]] ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿ ಏಕೀಕರಿಸಿತು. {{cvt|38863|km2|sqmi|0}} ವ್ಯಾಪಿಸಿರುವ ಕೇರಳವು ಪ್ರಾಥಮಿಕವಾಗಿ [[ಪಶ್ಚಿಮ ಘಟ್ಟಗಳು]] ಮತ್ತು [[ಲಕ್ಷದ್ವೀಪ ಸಮುದ್ರ]]ದ ನಡುವೆ ಸ್ಯಾಂಡ್ವಿಚ್ ಆಗಿರುವ [[ಪಶ್ಚಿಮ ಕರಾವಳಿ ಬಯಲು|ಕರಾವಳಿ ಬಯಲು]]ಗಳ ಪಟ್ಟಿಯಾಗಿದ್ದು, ಈಶಾನ್ಯಕ್ಕೆ [[ಕರ್ನಾಟಕ]], ಪೂರ್ವಕ್ಕೆ [[ತಮಿಳುನಾಡು]] ಮತ್ತು ಪಶ್ಚಿಮ ಸಮೀಪದಲ್ಲಿ [[ಲಕ್ಷದ್ವೀಪ]] ದ್ವೀಪಗಳಿಂದ ಸುತ್ತುವರೆದಿದೆ. [[2011 ರ ಭಾರತದ ಜನಗಣತಿ|2011 ರ ಜನಗಣತಿಯ]] ಪ್ರಕಾರ 33 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಕೇರಳವು ಭಾರತದ [[ಜನಸಂಖ್ಯೆಯ ಪ್ರಕಾರ ಭಾರತದ ರಾಜ್ಯಗಳ ಪಟ್ಟಿ|13 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ]]. [[ತಿರುವನಂತಪುರ]]ವು ರಾಜಧಾನಿ ನಗರವಾಗಿದ್ದರೆ [[ಕೊಚ್ಚಿ ಮಹಾನಗರ ಪ್ರದೇಶ]]ವು ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶವಾಗಿದೆ. ಮಲಯಾಳಂ ಅತಿ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದ್ದು, ಇಂಗ್ಲಿಷ್ ಜೊತೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ.
ಕೇರಳವು 3000 [[ಸಾಮಾನ್ಯ ಯುಗ|BCE]] ಯಿಂದಲೂ ಮಸಾಲೆಗಳ ಪ್ರಮುಖ ರಫ್ತುದಾರನಾಗಿದೆ. [[ಚೇರ ಸಾಮ್ರಾಜ್ಯ|ಚೇರ]] ರಾಜವಂಶವು, ಈ ಪ್ರದೇಶದ ಮೊದಲ ಪ್ರಮುಖ ಸಾಮ್ರಾಜ್ಯವು, ಸಮುದ್ರ ವಾಣಿಜ್ಯದ ಮೂಲಕ ಪ್ರಾಮುಖ್ಯತೆಗೆ ಏರಿತು ಆದರೆ ಆಗಾಗ್ಗೆ ನೆರೆಯ [[ಚೋಳ]] ಮತ್ತು [[ಪಾಂಡ್ಯ]] ರಾಜವಂಶಗಳ ದಾಳಿಗಳನ್ನು ಎದುರಿಸಿತು. 15 ನೇ ಶತಮಾನದಲ್ಲಿ, ಮಸಾಲೆ ವ್ಯಾಪಾರವು ಪೋರ್ಚುಗೀಸ್ ವ್ಯಾಪಾರಿಗಳನ್ನು ಕೇರಳಕ್ಕೆ ಆಕರ್ಷಿಸಿತು, ಇದು ಭಾರತದಲ್ಲಿ [[ವಸಾಹತುಶಾಹಿ ಭಾರತ|ಯುರೋಪಿಯನ್ ವಸಾಹತುಶಾಹಿಯನ್ನು]] ಪ್ರಾರಂಭಿಸಿತು. [[ಭಾರತೀಯ ಸ್ವಾತಂತ್ರ್ಯ ಚಳುವಳಿ|1947 ರಲ್ಲಿ ಭಾರತದ ಸ್ವಾತಂತ್ರ್ಯದ]] ನಂತರ, [[ತಿರುವಾಂಕೂರು]] ಮತ್ತು [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿ]] ಸಾಮ್ರಾಜ್ಯಗಳು ಹೊಸದಾಗಿ ರೂಪುಗೊಂಡ ಗಣರಾಜ್ಯಕ್ಕೆ ಸೇರಿಕೊಂಡವು ಮತ್ತು 1949 ರಲ್ಲಿ [[ತಿರುವಾಂಕೂರು-ಕೊಚ್ಚಿ]] ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. 1956 ರಲ್ಲಿ, ಆಧುನಿಕ ಕೇರಳ ರಾಜ್ಯವನ್ನು ಹಿಂದಿನ [[ಮದ್ರಾಸ್ ರಾಜ್ಯ]]ದೊಂದಿಗೆ ಪರಿಧಿಯ ಪ್ರದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸ್ಥಾಪಿಸಲಾಯಿತು; [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡ ಜಿಲ್ಲೆಯ]] [[ಕಾಸರಗೋಡು]] ತಾಲೂಕನ್ನು ಕೇರಳವನ್ನು ರೂಪಿಸಲು ತಿರುವಾಂಕೂರು-ಕೊಚ್ಚಿಯೊಂದಿಗೆ ವಿಲೀನಗೊಳಿಸಲಾಯಿತು, ಆದರೆ [[ಕನ್ಯಾಕುಮಾರಿ ಜಿಲ್ಲೆ]] ಮತ್ತು [[ಶೆಂಕೋಟ್ಟೈ ತಾಲೂಕಿನ]] ಭಾಗಗಳನ್ನು ಮದ್ರಾಸ್ ರಾಜ್ಯಕ್ಕೆ ಸೇರಿಸಲಾಯಿತು. ಕೇರಳವು 1984 ರಿಂದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಒಳಗೊಂಡಿದೆ.
ಕೇರಳವು ಅತ್ಯಧಿಕ [[ಮಾನವ ಅಭಿವೃದ್ಧಿ ಸೂಚ್ಯಂಕ|ಮಾನವ ಅಭಿವೃದ್ಧಿ ಸೂಚ್ಯಂಕವನ್ನು]] ಹೊಂದಿದೆ, 2018 ರಲ್ಲಿ 0.784; ಅತ್ಯಧಿಕ ಸಾಕ್ಷರತಾ ಪ್ರಮಾಣ, 2018 ರಲ್ಲಿ 96.2%; ಅತ್ಯಧಿಕ ಜೀವಿತಾವಧಿ, 77.3 ವರ್ಷಗಳು; ಮತ್ತು ಅತ್ಯಧಿಕ [[ಲಿಂಗಾನುಪಾತ]], 1,000 ಪುರುಷರಿಗೆ 1,084 ಮಹಿಳೆಯರು ಮತ್ತು ಭಾರತದಲ್ಲಿ ಅತ್ಯಂತ ಕಡಿಮೆ ಧನಾತ್ಮಕ ಜನಸಂಖ್ಯಾ ಬೆಳವಣಿಗೆ ದರ (3.44%). ಇದು ದೇಶದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಕಡಿಮೆ ಬಡತನ ಹೊಂದಿರುವ]] ಮತ್ತು [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ]] ರಾಜ್ಯವಾಗಿದೆ. ರಾಜ್ಯವು ಗಮನಾರ್ಹವಾದ ವಲಸೆಯನ್ನು ಕಂಡಿದೆ, ವಿಶೇಷವಾಗಿ 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಿಗೆ]], ಮತ್ತು ಅದರ ಆರ್ಥಿಕತೆಯು ದೊಡ್ಡ [[ಮಲಯಾಳಿ]] ವಲಸೆ ಜನಸಂಖ್ಯೆಯಿಂದ ಸ್ಥಳಾಂತರ ವರ್ಗಾವಣೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. [[ಕೇರಳದಲ್ಲಿ ಧರ್ಮ|ಜನಸಂಖ್ಯೆಯ 54% ಕ್ಕಿಂತ ಹೆಚ್ಚು]] ಜನರು ಹಿಂದೂ ಧರ್ಮವನ್ನು ಆಚರಿಸುತ್ತಾರೆ, ನಂತರ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು. ಸಂಸ್ಕೃತಿಯು [[ಆರ್ಯ]] ಮತ್ತು [[ದ್ರಾವಿಡರು|ದ್ರಾವಿಡ]] ಸಂಪ್ರದಾಯಗಳ ಸಮ್ಮಿಳನವಾಗಿದ್ದು, ಸಹಸ್ರಮಾನಗಳಿಂದ ಭಾರತ ಮತ್ತು ವಿದೇಶಗಳಿಂದ ಪ್ರಭಾವಗಳಿಂದ ರೂಪುಗೊಂಡಿದೆ.
[[ಕರಿ ಮೆಣಸು]] ಮತ್ತು [[ನೈಸರ್ಗಿಕ ರಬ್ಬರ್]] ಉತ್ಪಾದನೆಯು ರಾಷ್ಟ್ರೀಯ ಉತ್ಪಾದನೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಕೃಷಿ ವಲಯದಲ್ಲಿ, ತೆಂಗು, ಚಹಾ, ಕಾಫಿ, ಗೋಡಂಬಿ ಮತ್ತು ಮಸಾಲೆಗಳು ಪ್ರಮುಖ ಬೆಳೆಗಳಾಗಿವೆ. ರಾಜ್ಯವು {{convert|595|km|mi}} ಕರಾವಳಿಯನ್ನು ಹೊಂದಿದೆ, ಮತ್ತು 1.1 ಮಿಲಿಯನ್ ಜನರು ಮೀನುಗಾರಿಕಾ ಉದ್ಯಮವನ್ನು ಅವಲಂಬಿಸಿದ್ದಾರೆ, ಇದು ರಾಜ್ಯದ ಆದಾಯದ ಸುಮಾರು 3% ರಷ್ಟಿದೆ. ಆರ್ಥಿಕತೆಯು ಹೆಚ್ಚಾಗಿ ಸೇವಾ ವಲಯ ಆಧಾರಿತವಾಗಿದ್ದರೆ, ಪ್ರಾಥಮಿಕ ವಲಯವು ತುಲನಾತ್ಮಕವಾಗಿ ಚಿಕ್ಕ ಪಾಲನ್ನು ನೀಡುತ್ತದೆ. ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರವನ್ನು]] ಹೊಂದಿದ್ದು, ಒಂಬತ್ತು ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸುತ್ತದೆ, ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್. ಕೇರಳವು ಭಾರತದ ಪ್ರಮುಖ [[ಕೇರಳದ ಪ್ರವಾಸೋದ್ಯಮ|ಪ್ರವಾಸಿ ತಾಣಗಳಲ್ಲಿ]] ಒಂದಾಗಿದೆ, [[ಕೇರಳದ ಬೀಚ್ಗಳು|ತೆಂಗಿನ ಗಿಡಗಳಿಂದ ಕೂಡಿದ ಮರಳು ಕಡಲತೀರಗಳು]], [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳು]], [[ಬೆಟ್ಟದ ತಾಣ]]ಗಳು, [[ಆಯುರ್ವೇದ|ಆಯುರ್ವೇದ ಪ್ರವಾಸೋದ್ಯಮ]] ಮತ್ತು [[ಉಷ್ಣವಲಯದ]] ಹಸಿರು ಅದರ ಪ್ರಮುಖ ಆಕರ್ಷಣೆಗಳಾಗಿವೆ.
== ಹೆಸರು ==
=== ವ್ಯುತ್ಪತ್ತಿ ===
"ಕೇರಳ" ಪದವನ್ನು ಮೊದಲು "ಕೇರಳಪುಟೊ" ('[[ಚೇರ ಸಾಮ್ರಾಜ್ಯ|ಚೇರ]] ರ ಮಗ[ಗಳು]') ಎಂದು [[ಮೌರ್ಯ ಸಾಮ್ರಾಜ್ಯ|ಮೌರ್ಯ ಚಕ್ರವರ್ತಿ]] [[ಅಶೋಕ]] (274–237 BCE) ಅವರು ತಮ್ಮ [[ಅಶೋಕನ ಶಾಸನಗಳು|ಶಾಸನಗಳಲ್ಲಿ]] ಒಂದಾದ ಕಲ್ಯಾಣಕ್ಕೆ ಸಂಬಂಧಿಸಿದ 3 ನೇ ಶತಮಾನದ BCE ಯ ಬಂಡೆಯ ಕೆತ್ತನೆಯಲ್ಲಿ ದಾಖಲಿಸಲಾಗಿದೆ.<ref>{{Cite book |last=P. C. Alexander |title=Buddhism in Kerala |pages=23}}</ref> ಆ ಸಮಯದಲ್ಲಿ, ಈ ಪ್ರದೇಶದ ಮೂರು ರಾಜ್ಯಗಳಲ್ಲಿ ಒಂದನ್ನು ಶಾಸ್ತ್ರೀಯ ತಮಿಳಿನಲ್ಲಿ [[ಚೇರ ಸಾಮ್ರಾಜ್ಯ|{{transliteration|ta|ISO|Ceralam}}]] (ಚೇರಲಂ) ಎಂದು ಕರೆಯಲಾಗುತ್ತಿತ್ತು: {{transliteration|ta|ISO|Cera}} (ಚೇರ) ಮತ್ತು {{transliteration|ta|ISO|Kera}} (ಕೇರ) ಒಂದೇ ಪದದ ರೂಪಾಂತರಗಳಾಗಿವೆ.<ref name="Sainz1972">{{Cite book |last=Nicasio Silverio Sainz |url=https://books.google.com/books?id=AOEBAAAAMAAJ |title=Cuba y la Casa de Austria |publisher=Ediciones Universal |year=1972 |page=120 |access-date=6 January 2013}}</ref> {{transliteration|ta|ISO|Cer al}} (ಚೇರಲ್) ಪದವು ಕೇರಳ ರಾಜರ ಅತ್ಯಂತ ಹಳೆಯ ರಾಜವಂಶವನ್ನು ಸೂಚಿಸುತ್ತದೆ ಮತ್ತು ಇದು ಹಳೆಯ ತಮಿಳು ಪದದಿಂದ 'ಸರೋವರ' ಎಂದು ಬಂದಿದೆ.<ref name="Marr1985">{{Cite book |last=John R. Marr |url=https://books.google.com/books?id=x3gOAAAAYAAJ |title=The Eight Anthologies: A Study in Early Tamil Literature |publisher=Institute of Asian Studies |year=1985 |page=263}}</ref> {{transliteration|ta|ISO|Keralam}} (ಕೇರಳಂ) ಶಾಸ್ತ್ರೀಯ [[ತಮಿಳು ಭಾಷೆ|ತಮಿಳು]] {{transliteration|ta|ISO|cerive-alam}} (ಚೆರಿವೆ-ಆಲಂ) 'ಗುಡ್ಡ ಅಥವಾ ಬೆಟ್ಟದ ಇಳಿಜಾರು'<ref name="AlexDeborah2014">{{Cite book |last1=Rayson K. Alex |url=https://books.google.com/books?id=1swxBwAAQBAJ&pg=PA226 |title=Culture and Media: Ecocritical Explorations |last2=S. Susan Deborah |last3=Sachindev P.S. |publisher=Cambridge Scholars Publishing |year=2014 |isbn=978-1-4438-6190-8 |page=226}}</ref> ಅಥವಾ {{transliteration|ta|ISO|cera alam}} (ಚೇರ ಆಲಂ) 'ಚೇರರ ಭೂಮಿ' ಎಂಬುದರಿಂದ ಹುಟ್ಟಿಕೊಂಡಿರಬಹುದು. ಒಂದು [[ಜಾನಪದ ವ್ಯುತ್ಪತ್ತಿ]] ''ಕೇರಳ'' ವನ್ನು [[ಮಲಯಾಳಂ]] ಪದ {{transliteration|ml|ISO|kera}} (ಕೇರ) 'ತೆಂಗಿನ ಮರ' ಮತ್ತು {{transliteration|ml|ISO|alam}} (ಆಲಂ) 'ಭೂಮಿ' ಎಂಬುದರಿಂದ ಪಡೆಯುತ್ತದೆ; ಹೀಗೆ, 'ತೆಂಗಿನ ಮರಗಳ ನಾಡು',<ref name="Sadasivan2000">{{Cite book |last=S. N. Sadasivan |url=https://books.google.com/books?id=Be3PCvzf-BYC&pg=PA101 |title=A Social History of India |publisher=APH Publishing |year=2000 |isbn=978-8176481700 |page=101}}</ref> ಇದು ತೆಂಗಿನ ಮರಗಳ ಸಮೃದ್ಧಿಯಿಂದಾಗಿ ಸ್ಥಳೀಯರು ಬಳಸುವ ರಾಜ್ಯದ ಅಡ್ಡಹೆಸರಾಗಿದೆ.<ref name="PreedyWatson2011">{{Cite book |last1=Victor R. Preedy |url=https://books.google.com/books?id=C6lYoH8rwywC&pg=PT400 |title=Nuts and Seeds in Health and Disease Prevention |last2=Ronald Ross Watson |last3=Vinood B. Patel |publisher=Academic Press |year=2011 |isbn=978-0-12-375689-3 |page=400}}</ref> ಕೇರಳವನ್ನು [[ಭಾರತೀಯ ಮಹಾಸಾಗರದ ವ್ಯಾಪಾರ|ವಿದೇಶಿ ವ್ಯಾಪಾರ ವಲಯಗಳಲ್ಲಿ]] ಪರ್ಯಾಯವಾಗಿ ''[[ಮಲಬಾರ್ ಕರಾವಳಿ|ಮಲಬಾರ್]]'' ಎಂದು ಕರೆಯಲಾಗುತ್ತಿತ್ತು. [[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟೆಸ್]] (6 ನೇ ಶತಮಾನ CE) ಕಾಲದಿಂದಲೂ, [[ಅರಬ್ಬರು|ಅರಬ್]] ನಾವಿಕರು ಕೇರಳವನ್ನು ''ಮೇಲ್'' ಎಂದು ಕರೆಯುತ್ತಿದ್ದರು.{{citation needed|date=October 2025}}
=== ಕೇರಳಂ ಎಂದು ಮರುನಾಮಕರಣ ===
ರಾಜ್ಯದ [[ಮಲಯಾಳಂ]] ಹೆಸರಾದ ಕೇರಳಂ ಎಂದು ಹೆಸರನ್ನು ಬದಲಾಯಿಸಲು ದೀರ್ಘಕಾಲದಿಂದ ಬೇಡಿಕೆಗಳಿವೆ. ಅಧಿಕೃತವಾಗಿ, ರಾಜ್ಯದ ಹೆಸರು ಮಲಯಾಳಂನಲ್ಲಿ 'ಕೇರಳಂ' (കേരളം) ಆಗಿದ್ದರೆ, ಅದರ ಇಂಗ್ಲಿಷ್ ಹೆಸರು 'ಕೇರಳ' ಆಗಿದೆ.<ref>{{Cite web |last=Vineeth |first=T. K. |date=2026-03-07 |title=KERALA-M: What's in a name? |url=https://www.newindianexpress.com/explainers/2026/Mar/07/kerala-m-whats-in-a-name |access-date=2026-03-13 |website=The New Indian Express |language=en}}</ref><ref>{{Cite web |title=Renaming Kerala: Modi Hails Kerala's New Name Keralam |url=https://www.deccanherald.com/india/kerala/rightful-name-as-per-malayali-culture-pm-modi-praises-renaming-of-kerala-to-keralam-3927718 |access-date=2026-03-13 |website=Deccan Herald |language=en}}</ref> [[ಕೇರಳ ವಿಧಾನಸಭೆ]]ಯು ಜೂನ್ 2024 ರಲ್ಲಿ ರಾಜ್ಯದ ಹೆಸರನ್ನು 'ಕೇರಳ' ದಿಂದ 'ಕೇರಳಂ' ಗೆ ಬದಲಾಯಿಸಲು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು, ಇದು ಆಗಸ್ಟ್ 2023 ರ ಹಿಂದಿನ ಸರ್ವಾನುಮತದ ನಿರ್ಣಯವನ್ನು ಅನುಸರಿಸಿತು. [[ಕೇರಳದ ಮುಖ್ಯಮಂತ್ರಿ|ಮುಖ್ಯಮಂತ್ರಿ]] [[ಪಿಣರಾಯಿ ವಿಜಯನ್]] ಅವರು ಎರಡೂ ನಿರ್ಣಯಗಳನ್ನು ಮಂಡಿಸಿದ್ದರು, ಇದು ಅದರ [[ಮಲಯಾಳಿ]] ಗುರುತನ್ನು ಪ್ರತಿಬಿಂಬಿಸಲು ಸಂವಿಧಾನದ ಅನುಚ್ಛೇದ 3 ರ ಅಡಿಯಲ್ಲಿ ರಾಜ್ಯದ ಹೆಸರನ್ನು ತಿದ್ದುಪಡಿ ಮಾಡಲು ಪ್ರಯತ್ನಿಸಿತು.<ref name="auto1">{{cite web | last=TNIE online desk | first=Agencies | title=Ahead of polls, Union Cabinet approves Kerala's renaming to 'Keralam' | website=The New Indian Express | date=2026-02-24 | url=https://www.newindianexpress.com/states/kerala/2026/Feb/24/union-cabinet-approves-keralas-renaming-to-keralam-ahead-of-polls | access-date=2026-02-24}}</ref>
[[ಮೂರನೇ ಮೋದಿ ಸಚಿವ ಸಂಪುಟ|ಕೇಂದ್ರ ಸಚಿವ ಸಂಪುಟ]]ವು ಈ ಪ್ರಸ್ತಾಪವನ್ನು ಫೆಬ್ರವರಿ 24, 2026 ರಂದು ಅನುಮೋದಿಸಿತು. ಸಚಿವ ಸಂಪುಟದ ಅನುಮೋದನೆಯ ನಂತರ, [[ಭಾರತದ ರಾಷ್ಟ್ರಪತಿ]]ಗಳು ಕೇರಳ (ಹೆಸರು ಬದಲಾವಣೆ) ಮಸೂದೆ, 2026 ಅನ್ನು ಭಾರತದ ಸಂವಿಧಾನದ ಅನುಚ್ಛೇದ 3 ರ ಷರತ್ತಿನ ಅಡಿಯಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು [[ಕೇರಳ ವಿಧಾನಸಭೆ|ರಾಜ್ಯ ವಿಧಾನಸಭೆಗೆ]] ಉಲ್ಲೇಖಿಸುತ್ತಾರೆ.<ref name="auto">{{cite web | title=Kerala will now be called Keralam | website=India Today | date=2026-02-24 | url=https://www.indiatoday.in/india/story/union-cabinet-approves-proposal-renaming-kerala-to-keralam-2873528-2026-02-24 | access-date=2026-02-24}}</ref>
[[ಕೇರಳ ವಿಧಾನಸಭೆ]]ಯ ಅನುಮೋದನೆಯ ನಂತರ, ಈ ಮಸೂದೆಯನ್ನು [[ಭಾರತದ ಸಂಸತ್ತಿನಲ್ಲಿ]] ಮಂಡಿಸಲಾಗುವುದು ಮತ್ತು ಅಂಗೀಕರಿಸಿದರೆ, ರಾಜ್ಯದ ಹೆಸರು ಅಧಿಕೃತವಾಗಿ ಕೇರಳಂ ಆಗುತ್ತದೆ.
== ಇತಿಹಾಸ ==
{{Main|ಕೇರಳದ ಇತಿಹಾಸ}}
=== ದಂತಕಥೆ ===
[[File:Parshuramsaraswats.jpg|thumb|[[ಪರಶುರಾಮ]]ನನ್ನು ಚಿತ್ರಿಸುವ ವರ್ಣಚಿತ್ರ, ವಸಾಹತುಗಾರರಿಂದ ಸುತ್ತುವರಿದು, [[ವರುಣ]] ([[ಹಿಂದೂ]] ಜಲದೇವತೆ) ನನ್ನು ಸಮುದ್ರಗಳನ್ನು ಬೇರ್ಪಡಿಸಲು ಆಜ್ಞಾಪಿಸುತ್ತಾನೆ]]
[[ಹಿಂದೂ]] ಪುರಾಣಗಳ [[ದಶಾವತಾರ]] ಕಥೆಗಳಲ್ಲಿ, ಕೇರಳದ ಭೂಮಿಯನ್ನು ಕೊಡಲಿ-ಧಾರಿಯ ವೀರ ಋಷಿ [[ಪರಶುರಾಮ]]ನು, [[ವಿಷ್ಣು]]ವಿನ ಆರನೇ [[ಅವತಾರ]] (ಅವತಾರ), ಸಮುದ್ರದಿಂದ ಮರಳಿ ಪಡೆದನು. ಪರಿಣಾಮವಾಗಿ, ಕೇರಳವನ್ನು ಸಾಂಪ್ರದಾಯಿಕವಾಗಿ ''ಪರಶುರಾಮ ಕ್ಷೇತ್ರಂ'' ("ಪರಶುರಾಮನ ನಾಡು") ಎಂದು ಕರೆಯಲಾಗುತ್ತದೆ.<ref>S. C. Bhatt, Gopal K. Bhargava (2006) "Land and People of Indian States and Union Territories: Volume 14.", p.18</ref> ದಂತಕಥೆಯ ಪ್ರಕಾರ, ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರದ ಮೇಲೆ ಎಸೆದನು, ಮತ್ತು ಅದು ಬಿದ್ದ ಸ್ಥಳದವರೆಗೆ ನೀರು ಹಿಂಜರಿಯಿತು. ಈ ರೀತಿ ಹೊರಹೊಮ್ಮಿದ ಭೂಮಿಯು [[ಗೋಕರ್ಣ]]ದಿಂದ [[ಕನ್ಯಾಕುಮಾರಿ]]ಯವರೆಗೆ ವಿಸ್ತರಿಸಿತು.<ref>{{cite book |author=Aiya VN |title=The Travancore State Manual|publisher=Travancore Government Press |pages=210–212 |year=1906 |accessdate=12 November 2007 |url=https://books.google.com/books?id=RdzaPW-kEvQC}}</ref> ಹೊರಹೊಮ್ಮಿದ ಭೂಮಿಯು ಲವಣಯುಕ್ತ ಮತ್ತು ವಾಸಯೋಗ್ಯವಾಗಿರಲಿಲ್ಲ, ಆದ್ದರಿಂದ ಪರಶುರಾಮನು ಸರ್ಪರಾಜ [[ವಾಸುಕಿ]]ಯನ್ನು ಪ್ರಾರ್ಥಿಸಿದನು, ಅವನು ಮಣ್ಣನ್ನು ಶುದ್ಧೀಕರಿಸಲು ಪವಿತ್ರ ವಿಷವನ್ನು ಉಗುಳಿದನು, ಅದನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದನು. ಗೌರವದಿಂದ, ವಾಸುಕಿ ಮತ್ತು ಎಲ್ಲಾ ಹಾವುಗಳನ್ನು ಭೂಮಿಯ ರಕ್ಷಕರಾಗಿ ನೇಮಿಸಲಾಯಿತು. ಈ ದಂತಕಥೆಯನ್ನು 17 ನೇ ಅಥವಾ 18 ನೇ ಶತಮಾನದ ಪಠ್ಯ ''[[ಕೇರಳೋಲ್ಪತ್ತಿ]]'' ಯಲ್ಲಿ ವಿಸ್ತರಿಸಲಾಯಿತು ಮತ್ತು ಸಂಹಿತೆಗೊಳಿಸಲಾಯಿತು. ಇದು ಆರಂಭಿಕ ಕೇರಳ ಸಂಸ್ಥೆಗಳ{{mdash}}ಉದಾಹರಣೆಗೆ ಭೂ ಹಿಡುವಳಿ ಮತ್ತು ಆಡಳಿತ{{mdash}}ಮೂಲವನ್ನು ಪರಶುರಾಮನ ಕಥೆಗೆ ಸಂಪರ್ಕಿಸುತ್ತದೆ.<ref>{{cite book|author=M. T. Narayanan|title=Agrarian Relations in Late Medieval Malabar|url=https://books.google.com/books?id=kHtbkuXruzwC&pg=PA17|accessdate=28 July 2012|date=1 January 2003|publisher=Northern Book Centre|isbn=978-81-7211-135-9|pages=16–18}}</ref> ಮಧ್ಯಕಾಲೀನ ಯುಗದಲ್ಲಿ, [[ಚೇರ]] ರಾಜ [[ಚೆಂಕುಟ್ಟುವನ್]] ತನ್ನ ಈಟಿಯನ್ನು ಸಮುದ್ರಕ್ಕೆ ಎಸೆಯುವ ಮೂಲಕ ಪರಶುರಾಮ ಸಂಪ್ರದಾಯವನ್ನು ಅನುಕರಿಸಿರಬಹುದು, ಅದರ ಮೇಲಿನ ತನ್ನ ಪ್ರಭುತ್ವವನ್ನು ಸಂಕೇತಿಸಲು.<ref>{{Cite book |last=Srinivisa Iyengar |first=P. T. |title=History of the Tamils: From the Earliest Times to 600 A.D. |publisher=Asian Educational Services |year=1929 |isbn=978-8120601451 |location=Madras |page=515}}</ref>
ಕೇರಳದೊಂದಿಗೆ ಸಂಬಂಧಿಸಿದ ಪ್ರಮುಖ [[ಪೌರಾಣಿಕ]] ವ್ಯಕ್ತಿಯೆಂದರೆ [[ಮಹಾಬಲಿ]], ಒಬ್ಬ [[ಅಸುರ]] ಮತ್ತು ಮಾದರಿ ನ್ಯಾಯಪ್ರಿಯ ರಾಜ, ಅವರು ಕೇರಳದಿಂದ ಭೂಮಿಯನ್ನು ಆಳಿದರು ಎಂದು ಹೇಳಲಾಗುತ್ತದೆ. ಅವನು ಯುದ್ಧದಲ್ಲಿ [[ದೇವ (ಹಿಂದೂ ಧರ್ಮ)|ದೇವ]] ಗಳನ್ನು ಸೋಲಿಸಿ, ಅವರನ್ನು ಗಡಿಪಾರು ಮಾಡಿದನು. ಪ್ರತಿಕ್ರಿಯೆಯಾಗಿ, ದೇವರುಗಳು ವಿಷ್ಣುವಿಗೆ ಮನವಿ ಮಾಡಿದರು, ಅವರು [[ವಾಮನ]]ನಾಗಿ ತಮ್ಮ ಐದನೇ ಅವತಾರವನ್ನು ತಾಳಿದರು ಮತ್ತು ಕ್ರಮವನ್ನು ಪುನಃಸ್ಥಾಪಿಸಲು, ಮಹಾಬಲಿಯನ್ನು [[ಪಾತಾಳ]] (ಪಾತಾಳ ಲೋಕ) ಕೆಳಗೆ ತಳ್ಳಿದರು. ಜನಪ್ರಿಯ ನಂಬಿಕೆಯ ಪ್ರಕಾರ, ಮಹಾಬಲಿ ವರ್ಷಕ್ಕೊಮ್ಮೆ ಕೇರಳಕ್ಕೆ ಹಿಂತಿರುಗುತ್ತಾನೆ, ಇದನ್ನು [[ಓಣಂ]] ಹಬ್ಬವಾಗಿ ಆಚರಿಸಲಾಗುತ್ತದೆ.<ref name="Rinehart2004">{{cite book|author=Robin Rinehart|title=Contemporary Hinduism: Ritual, Culture, and Practice|url=https://books.google.com/books?id=hMPYnfS_R90C&pg=PA146|accessdate=28 July 2012|year=2004|publisher=ABC-CLIO|isbn=978-1-57607-905-8|page=146}}</ref> 18 [[ಪುರಾಣಗಳಲ್ಲಿ]] ಅತ್ಯಂತ ಹಳೆಯದಾದ ''[[ಮತ್ಸ್ಯ ಪುರಾಣ]]''ವು,<ref>{{cite book|last=Goldberg|first=Ellen|title=The Lord who is Half Woman: Ardhanārīśvara in Indian and Feminist Perspective|url=https://books.google.com/books?id=xUhlxBozntoC&pg=PA20|year=2002|publisher=SUNY Press|isbn=978-0-7914-5325-4|page=20|accessdate=30 May 2015}}</ref><ref>{{cite book|last=Kemmerer|first=Lisa|title=Animals and World Religions|url=https://books.google.com/books?id=iFEL2yjkbAAC&pg=PA78|year=2011|publisher=Oxford University Press|isbn=978-0-19-991255-1|page=78|accessdate=30 May 2015}}</ref> [[ಮತ್ಸ್ಯ]]ದ{{mdash}}ವಿಷ್ಣುವಿನ ಮೊದಲ ಅವತಾರ{{mdash}}ಮತ್ತು ರಾಜ [[ಮನು (ಹಿಂದೂ ಧರ್ಮ)|ಮನು]]ನ ಕಥೆಯನ್ನು, ಮೊದಲ ಮನುಷ್ಯ ಮತ್ತು ಈ ಪ್ರದೇಶದ ಆಡಳಿತಗಾರ, ಕೇರಳ ಮತ್ತು [[ತಮಿಳುನಾಡಿನ]] [[ಮಲಯ ಪರ್ವತಗಳಲ್ಲಿ]] ಇರಿಸುತ್ತದೆ.<ref>{{cite book|last=Dalal|first=Roshen|title=Hinduism: An Alphabetical Guide|url=https://books.google.com/books?id=DH0vmD8ghdMC&pg=PA250|year=2011|publisher=Penguin Books India|isbn=978-0-14-341421-6|page=250|accessdate=30 May 2015}}</ref><ref>{{cite book|last=Ragozin|first=Zenaide A.|title=Vedic India As Embodied Principally in the Rig-veda|url=https://books.google.com/books?id=T16d-eRG5VkC&pg=PA341|year=2005|publisher=Kessinger Publishing|isbn=978-1-4179-4463-7|page=341|accessdate=21 March 2013}}</ref>
=== ಪ್ರಾಗಿತಿಹಾಸ ===
[[File:MarayoorDolmen.JPG|thumb|[[ಮಾರಯೂರು|ಮಾರಯೂರಿನಲ್ಲಿ]] ನವಶಿಲಾಯುಗದ ಜನರು ನಿರ್ಮಿಸಿದ [[ಡಾಲ್ಮೆನ್]]]]
ಪ್ರಸ್ತುತ ಕೇರಳದ ಗಣನೀಯ ಭಾಗವು ಪ್ರಾಚೀನ ಕಾಲದಲ್ಲಿ ಸಮುದ್ರದ ಅಡಿಯಲ್ಲಿ ಮುಳುಗಿತ್ತು ಎಂದು ನಂಬಲಾಗಿದೆ. ಚಂಗನಾಶ್ಶೇರಿಯ ಬಳಿ ಸಾಗರಿಕ ಪಳೆಯುಳಿಕೆಗಳ ಆವಿಷ್ಕಾರವು ಈ ಊಹೆಯನ್ನು ಬೆಂಬಲಿಸುತ್ತದೆ.<ref name="Menon2007">{{cite book|author=A. Sreedhara Menon|title=A Survey of Kerala History|url=https://books.google.com/books?id=FVsw35oEBv4C&pg=PA20|accessdate=27 July 2012|date=1 January 2007|publisher=DC Books|isbn=978-81-264-1578-6|pages=20–21}}</ref> ಕೇರಳದಲ್ಲಿನ ಪ್ರಾಗೈತಿಹಾಸಿಕ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರಗಳು ಇಡುಕ್ಕಿ ಜಿಲ್ಲೆಯ [[ಮಾರಯೂರು]] ಪ್ರದೇಶದಲ್ಲಿ [[ನವಶಿಲಾಯುಗ]]-ಯುಗದ [[ಡಾಲ್ಮೆನ್]]ಗಳನ್ನು ಒಳಗೊಂಡಿವೆ, ಸ್ಥಳೀಯವಾಗಿ ''ಮುನಿಯಾರ'' ಎಂದು ಕರೆಯಲಾಗುತ್ತದೆ{{mdash}}''ಮುನಿ'' (ಸನ್ಯಾಸಿ ಅಥವಾ ಋಷಿ) ಮತ್ತು ''ಆರ'' (ಡಾಲ್ಮೆನ್) ನಿಂದ ಬಂದಿದೆ.<ref name="Unlocking the secrets of history">{{cite news|url=http://www.hindu.com/2004/12/06/stories/2004120604900300.htm | location=Chennai, India | work=The Hindu | title=Unlocking the secrets of history | date=6 December 2004 | accessdate= 12 November 2015}}</ref> [[ವಯನಾಡಿನ]] [[ಎಡಕ್ಕಲ್ ಗುಹೆಗಳು|ಎಡಕ್ಕಲ್ ಗುಹೆಗಳಲ್ಲಿನ]] ಬಂಡೆಯ ಕೆತ್ತನೆಗಳು ಸುಮಾರು 6000 BCE ಯ ನವಶಿಲಾಯುಗದ ಅವಧಿಯ ಹಿಂದಿನವು.<ref name="Kapoor2002">{{cite book|author=Subodh Kapoor|title=The Indian Encyclopaedia|url=https://books.google.com/books?id=gxIpYtnyzu4C&pg=PA2184|accessdate=1 August 2012|date=1 July 2002|publisher=Cosmo Publications|isbn=978-81-7755-257-7|page=2184}}</ref><ref>{{cite web|title=Travel and Tourism|url=http://www.kerala.gov.in/index.php?option=com_content&view=article&id=3792:travel-and-tourism&catid=271:about-kerala&Itemid=2267|website=kerala.gov.in|publisher=Government of Kerala|accessdate=12 November 2015}}</ref> ಪುರಾತತ್ತ್ವ ಶಾಸ್ತ್ರದ ಅಧ್ಯಯನಗಳು ಈ ಪ್ರದೇಶದಾದ್ಯಂತ [[ಮಧ್ಯಶಿಲಾಯುಗ]], ನವಶಿಲಾಯುಗ ಮತ್ತು [[ಮೆಗಾಲಿಥಿಕ್]] ತಾಣಗಳನ್ನು ಗುರುತಿಸಿವೆ.<ref name="AroraSingh116">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=116}}</ref> ಈ ಆವಿಷ್ಕಾರಗಳು ಆರಂಭಿಕ ಕೇರಳ ಸಮಾಜ ಮತ್ತು ಸಂಸ್ಕೃತಿಯ ಅಭಿವೃದ್ಧಿಯು [[ಪ್ಯಾಲಿಯೋಲಿಥಿಕ್|ಪ್ಯಾಲಿಯೋಲಿಥಿಕ್ ಯುಗದಲ್ಲಿ]] ಪ್ರಾರಂಭವಾಯಿತು ಮತ್ತು ಮಧ್ಯಶಿಲಾಯುಗ, ನವಶಿಲಾಯುಗ ಮತ್ತು ಮೆಗಾಲಿಥಿಕ್ ಅವಧಿಗಳ ಮೂಲಕ ಮುಂದುವರೆಯಿತು ಎಂದು ಸೂಚಿಸುತ್ತವೆ.<ref name="google">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|pages=118, 123}}</ref> ವಿದೇಶಿ ಸಾಂಸ್ಕೃತಿಕ ಸಂವಹನಗಳು ಸಹ ಈ ಅಭಿವೃದ್ಧಿಯನ್ನು ರೂಪಿಸುವಲ್ಲಿ ಪಾತ್ರವಹಿಸಿವೆ;<ref name="AroraSingh1999">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=123}}</ref> ಕೆಲವು ಇತಿಹಾಸಕಾರರು ಕೊನೆಯ [[ಕಂಚಿನ ಯುಗ]] ಮತ್ತು ಆರಂಭಿಕ [[ಕಬ್ಬಿಣ ಯುಗ|ಕಬ್ಬಿಣದ ಯುಗ]]ದಲ್ಲಿ [[ಸಿಂಧೂ ಕಣಿವೆ ನಾಗರಿಕತೆ]]ಯೊಂದಿಗೆ ಸಂಭವನೀಯ ಸಂಪರ್ಕಗಳನ್ನು ಸೂಚಿಸುತ್ತಾರೆ.<ref>{{cite news|url=http://www.thehindu.com/news/states/article26324.ece | work=The Hindu | title=Symbols akin to Indus valley culture discovered in Kerala | date=29 September 2009 |accessdate= 12 November 2015}}</ref>
=== ಪ್ರಾಚೀನ ಇತಿಹಾಸ ===
[[File:Silk route copy.jpg|thumb|225px|[[ರೇಷ್ಮೆ ಮಾರ್ಗ]] ನಕ್ಷೆ. ಮಸಾಲೆ ವ್ಯಾಪಾರವು ಜಲಮಾರ್ಗಗಳಲ್ಲಿತ್ತು (ನೀಲಿ).]]
[[ಸುಮೇರ್|ಸುಮೇರಿಯನ್]] ದಾಖಲೆಗಳ ಪ್ರಕಾರ, ಕೇರಳವು ಕನಿಷ್ಠ 3000 BCE ಯಿಂದಲೂ ಪ್ರಮುಖ ಮಸಾಲೆ ರಫ್ತುದಾರನಾಗಿದೆ ಮತ್ತು ಇದು "ಮಸಾಲೆಗಳ ತೋಟ" ಅಥವಾ "ಭಾರತದ ಮಸಾಲೆ ತೋಟ" ಎಂದು ಉಲ್ಲೇಖಿಸಲ್ಪಡುತ್ತದೆ.<ref>{{cite news|url=http://www.thehindu.com/todays-paper/tp-national/tp-kerala/of-kerala-egypt-and-the-spice-link/article5625620.ece | first = Kaavya | last = Pradeep Kumar | work=The Hindu | title=Of Kerala, Egypt, and the Spice link | date=28 January 2014 | accessdate=12 November 2015}}</ref><ref>[https://books.google.com/books?id=gOrvghLklKoC ''Striving for sustainability, environmental stress and democratic initiatives in Kerala''], p. 79; ISBN 81-8069-294-9, Srikumar Chattopadhyay, Richard W. Franke; Year: 2006.</ref><ref name="spiceHindu">{{Cite news |title=Route it through the seas |newspaper=The Hindu |date=December 2016 |url=https://www.thehindu.com/children/ROUTE-it-through-the-seas/article16735515.ece |access-date=2024-01-08 |archive-date=5 March 2022 |archive-url=https://web.archive.org/web/20220305035957/https://www.thehindu.com/children/ROUTE-it-through-the-seas/article16735515.ece |url-status=live |last1=Subramanian |first1=Archana }}</ref> ಈ ಪ್ರದೇಶದ ಮಸಾಲೆಗಳು 3 ಮತ್ತು 2 ನೇ ಸಹಸ್ರಮಾನ BCE ಯಲ್ಲಿ ಮಲಬಾರ್ ಕರಾವಳಿಗೆ ಪ್ರಾಚೀನ [[ಬ್ಯಾಬಿಲೋನಿಯನ್ನರು]], [[ಅಸಿರಿಯನ್ನರು]] ಮತ್ತು [[ಈಜಿಪ್ಟಿನವರು|ಈಜಿಪ್ಟಿನವರನ್ನು]] ಆಕರ್ಷಿಸಿದವು. [[ಅರಬ್ಬರು]] ಮತ್ತು [[ಫೀನಿಷಿಯನ್ನರು]] ಸಹ ಈ ಅವಧಿಯಲ್ಲಿ ಕೇರಳದೊಂದಿಗೆ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಿದರು.<ref name="Menon57">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA57|accessdate=10 October 2012|date=1 January 2007|publisher=DC Books|isbn=978-81-264-1578-6|pages=57–58}}</ref> ಕೇರಳಪುತ್ರದ ಭೂಮಿಯು ಚಕ್ರವರ್ತಿ ಅಶೋಕನ ಕಾಲದಲ್ಲಿ ದಕ್ಷಿಣ ಭಾರತದ ನಾಲ್ಕು ಸ್ವತಂತ್ರ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು, [[ಚೋಳ ಸಾಮ್ರಾಜ್ಯ|ಚೋಳ]], [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಮತ್ತು [[ಸತಿಯಪುತ್ರರು|ಸತಿಯಪುತ್ರ]] ಸಾಮ್ರಾಜ್ಯಗಳ ಜೊತೆಗೆ.<ref name="SmithJackson2008">{{cite book|author1=Vincent A. Smith|author2=A. V. Williams Jackson|title=History of India, in Nine Volumes: Vol. II – From the Sixth Century BCE to the Mohammedan Conquest, Including the Invasion of Alexander the Great|url=https://books.google.com/books?id=bP7DzXQBoM4C&pg=PA166|accessdate=1 August 2012|date=30 November 2008|publisher=Cosimo, Inc.|isbn=978-1-60520-492-5|page=166}}</ref> ವಿದ್ವಾಂಸರು ಸಾಮಾನ್ಯವಾಗಿ ಕೇರಳಪುತ್ರವನ್ನು [[ಚೇರ ಸಾಮ್ರಾಜ್ಯ|ಚೇರರು]] ಎಂದು ಗುರುತಿಸುತ್ತಾರೆ, ಇದು ಕೇರಳದ ಅತ್ಯಂತ ಹಳೆಯ ಪ್ರಮುಖ ರಾಜವಂಶವಾಗಿದೆ.<ref name="The Cambridge Shorter History of India">{{cite book|title=The Cambridge Shorter History of India|url=https://books.google.com/books?id=9_48AAAAIAAJ&pg=PA193|accessdate=10 October 2012|publisher=CUP Archive|page=193|id=GGKEY:2W0QHXZ7K40}}</ref><ref name="Dwivedi1994">{{cite book|author=Bhanwar Lal Dwivedi|title=Evolution of Education Thought in India|url=https://books.google.com/books?id=idERT6Tg4MMC&pg=PA164|accessdate=10 October 2012|date=1 January 1994|publisher=Northern Book Centre|isbn=978-81-7211-059-8|page=164}}</ref> ಈ ದಕ್ಷಿಣ ಪ್ರದೇಶಗಳು ಒಮ್ಮೆ ಸಾಮಾನ್ಯ ಭಾಷೆ ಮತ್ತು ಸಾಂಸ್ಕೃತಿಕ ಚೌಕಟ್ಟನ್ನು ಹಂಚಿಕೊಂಡಿದ್ದವು, ಇತಿಹಾಸದಲ್ಲಿ [[ತಮಿಳಕಂ]] ಎಂದು ಕರೆಯಲ್ಪಡುವ ಪ್ರದೇಶದೊಳಗೆ.<ref>{{Cite book
| last=Kanakasabhai | first=V.
| title=The Tamils Eighteen Hundred Years Ago
| url=https://books.google.com/books?id=VuvshP5_hg8C
| year=1997
| publisher=Asian Educational Services
| isbn=978-81-206-0150-5
| accessdate=16 June 2009}}</ref> ಚೇರರು ಪ್ರಸ್ತುತ ಕೇರಳದ ಹೆಚ್ಚಿನ ಭಾಗವನ್ನು ಆಳಿದರೆ, ಪ್ರದೇಶದ ದಕ್ಷಿಣ ತುದಿಯು [[ಪಾಂಡ್ಯರ]] ನಿಯಂತ್ರಣಕ್ಕೆ ಒಳಪಟ್ಟಿತ್ತು,<ref name="Singh2008">{{cite book|author=Upinder Singh|title=A History of Ancient and Early Medieval India: From the Stone Age to the 12th Century|url=https://books.google.com/books?id=GW5Gx0HSXKUC&pg=PA385|accessdate=10 October 2012|year=2008|publisher=Pearson Education India|isbn=978-81-317-1677-9|page=385}}</ref> ಅವರ ವ್ಯಾಪಾರ ಬಂದರನ್ನು ಪ್ರಾಚೀನ ಪಾಶ್ಚಾತ್ಯ ಮೂಲಗಳಲ್ಲಿ [[ನೆಲ್ಸಿಂಡಾ]] (ಅಥವಾ ನಿಯಾಸಿಂಡಿ) ಎಂದು ಗುರುತಿಸಲಾಗಿದೆ.<ref name="Books.google.co.in">{{Cite book|url=https://books.google.com/books?id=rQipbjusDyQC&dq=nelcynda&pg=PA301 |title=History of ancient geography – Google Books |author=James Oliver Thomson|publisher=Biblo & Tannen Publishers, 1948|accessdate=30 July 2009|isbn=978-0-8196-0143-8|year=1948}}</ref> ನಂತರ, ಈ ಪ್ರದೇಶದ ನಿಯಂತ್ರಣವು ಪಾಂಡ್ಯರು, ಚೇರರು ಮತ್ತು ಚೋಳರ ನಡುವೆ ಪರ್ಯಾಯವಾಗಿತ್ತು. [[ಆಯ್ ಸಾಮ್ರಾಜ್ಯ|ಆಯ್ಸ್]] ಮತ್ತು [[ಎಝಿಮಲ ಸಾಮ್ರಾಜ್ಯ|ಮುಷಿಕರು]] ಪ್ರಾಚೀನ ಕೇರಳದ ಇತರ ಎರಡು ರಾಜವಂಶಗಳಾಗಿದ್ದು, ಕ್ರಮವಾಗಿ ಚೇರ ಪ್ರದೇಶದ ದಕ್ಷಿಣ ಮತ್ತು ಉತ್ತರಕ್ಕೆ ನೆಲೆಗೊಂಡಿದ್ದವು.<ref name="Shashi1996">{{cite book|author=S. S. Shashi|title=Encyclopaedia Indica: India, Pakistan, Bangladesh|url=https://books.google.com/books?id=lwswAQAAIAAJ|accessdate=10 October 2012|year=1996|publisher=Anmol Publications|isbn=978-81-7041-859-7|page=1207}}</ref><ref name="Ramunny1993">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA3|accessdate=10 October 2012|date=1 January 1993|publisher=Northern Book Centre|isbn=978-81-7211-052-9|page=3}}</ref>
ಕೊನೆಯ ಶತಮಾನಗಳ BCE ಯ ಹೊತ್ತಿಗೆ, ಕರಾವಳಿಯು ಗ್ರೀಕ್ ಮತ್ತು ರೋಮನ್ ವ್ಯಾಪಾರಕ್ಕೆ, ವಿಶೇಷವಾಗಿ [[ಕರಿ ಮೆಣಸು|ಕರಿಮೆಣಸಿನಲ್ಲಿ]] ಪ್ರಮುಖ ಕೇಂದ್ರವಾಗಿತ್ತು. ಚೇರರು [[ಪ್ರಾಚೀನ ಚೀನಾ]], [[ಪಶ್ಚಿಮ ಏಷ್ಯಾ]], ಈಜಿಪ್ಟ್, ಗ್ರೀಸ್ ಮತ್ತು [[ರೋಮನ್ ಸಾಮ್ರಾಜ್ಯ]]ದೊಂದಿಗೆ ವಾಣಿಜ್ಯ ಸಂಪರ್ಕಗಳನ್ನು ಹೊಂದಿದ್ದರು. ವಿದೇಶಿ ವ್ಯಾಪಾರ ದಾಖಲೆಗಳಲ್ಲಿ, ಈ ಪ್ರದೇಶವನ್ನು ಮೇಲ್ ಅಥವಾ [[ಮಲಬಾರ್ ಕರಾವಳಿ|ಮಲಬಾರ್]] ಎಂದು ಕರೆಯಲಾಗುತ್ತಿತ್ತು.<ref>{{cite web | url=http://www.siamese-heritage.org/jsspdf/1961/JSS_054_1c_Minattur_MalayaWhatsInAName.pdf | title=Malaya: What's in the name | publisher=siamese-heritage.org | accessdate=7 August 2012 | author=Joseph Minattur | page=1}}</ref> ಆ ಕಾಲದ ಪ್ರಮುಖ ಬಂದರುಗಳು [[ಮುಝಿರಿಸ್]], ಬೆರ್ಕರೈ ಮತ್ತು ನೆಲ್ಸಿಂಡಾ.<ref name="Kusuman">{{cite book |author=K. K. Kusuman |title=A History of Trade & Commerce in Travancore |publisher=Mittal Publications |year=1987 |isbn=978-81-7099-026-0 |url=https://books.google.com/books?id=qbNuyHswr1cC |pages=1–2 |accessdate=30 May 2015}}</ref> ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವನ್ನು 50 ಮಿಲಿಯನ್ [[ಸೆಸ್ಟರ್ಸಸ್]] ಎಂದು ಅಂದಾಜಿಸಲಾಗಿದೆ.<ref>According to [[Pliny the Elder]], goods from India were sold in the Empire at 100 times their original purchase price. See [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> ಸಮಕಾಲೀನ [[ಸಂಗಮ್ ಸಾಹಿತ್ಯ]]ವು ಮೆಣಸಿನ ಬದಲಿಗೆ ಚಿನ್ನದಿಂದ ತುಂಬಿದ ರೋಮನ್ ಹಡಗುಗಳು ಮುಝಿರಿಸ್ಗೆ ಆಗಮಿಸುವುದನ್ನು ವಿವರಿಸುತ್ತದೆ. ಕೇರಳವನ್ನು ತಲುಪಲು ಮಾನ್ಸೂನ್ ಗಾಳಿಯನ್ನು ನ್ಯಾವಿಗೇಟ್ ಮಾಡಿದ ಮೊದಲ ಪಶ್ಚಿಮ ವ್ಯಾಪಾರಿಗಳಲ್ಲಿ ಒಬ್ಬರು [[ಸೈಜಿಕಸ್ನ ಯುಡೋಕ್ಸಸ್]], ಅವರು ಈಜಿಪ್ಟ್ನ [[ಹೆಲ್ಲೆನಿಸ್ಟಿಕ್ ನಾಗರಿಕತೆ|ಹೆಲ್ಲೆನಿಸ್ಟಿಕ್]] [[ಟಾಲಮಿಕ್ ರಾಜವಂಶ]]ದ ರಾಜ [[ಟಾಲಮಿ VIII ಫಿಸ್ಕಾನ್|ಟಾಲಮಿ VIII]] ರ ಆಶ್ರಯದಲ್ಲಿ ಸುಮಾರು 118 ಅಥವಾ 166 BCE ಯಲ್ಲಿ ಪ್ರಯಾಣ ಮಾಡಿದರು. ಈ ಪ್ರದೇಶದ ಬಂದರು ನಗರಗಳಲ್ಲಿನ ರೋಮನ್ ಸ್ಥಾಪನೆಗಳು{{mdash}}[[ಆಗಸ್ಟಸ್]] ದೇವಾಲಯ ಮತ್ತು ರೋಮನ್ ಸೈನಿಕರಿಗೆ ಬ್ಯಾರಕ್ಗಳು ಸೇರಿದಂತೆ{{mdash}}ರೋಮನ್ ''[[ಕರ್ಸಸ್ ಪಬ್ಲಿಕಸ್]]'' ನ ಏಕೈಕ ಉಳಿದಿರುವ ನಕ್ಷೆಯಾದ ''[[ಟ್ಯಾಬುಲಾ ಪ್ಯೂಟಿಂಗೇರಿಯಾನಾ]]'' ದಲ್ಲಿ ದಾಖಲಿಸಲಾಗಿದೆ.<ref>{{cite book|author=Abraham Eraly|title=The First Spring: The Golden Age of India|url=https://books.google.com/books?id=te1sqTzTxD8C&pg=PA246|accessdate=7 August 2012|date=1 December 2011|publisher=Penguin Books India|isbn=978-0-670-08478-4|pages=246–}}</ref><ref name="Iyengar_2001">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |accessdate=29 December 2008}}</ref>
ಪಶ್ಚಿಮ ಏಷ್ಯಾ ಮತ್ತು ದಕ್ಷಿಣ ಯುರೋಪಿನ ವ್ಯಾಪಾರಿಗಳು ಕೇರಳದಲ್ಲಿ ಕರಾವಳಿ ಠಾಣ್ಯಗಳು ಮತ್ತು ವಸಾಹತುಗಳನ್ನು ಸ್ಥಾಪಿಸಿದರು.<ref name="google2">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |pages=192–195 |accessdate=29 December 2008}}</ref> ಕೇರಳದೊಂದಿಗಿನ ಯಹೂದಿ ಸಂಪರ್ಕವು 573 BCE ಯ ಹಿಂದಿನದು ಎಂದು ನಂಬಲಾಗಿದೆ.<ref name="Orpa Slapak">[https://books.google.co.in/books?id=qhKGPprbQaYC&printsec=frontcover&dq=isbn:9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA#v=onepage&q=two%20millennia&f=true ''The Jews of India: A Story of Three Communities''] by Orpa Slapak. The Israel Museum, Jerusalem. 2003. p. 27. ISBN 965-278-179-7.</ref><ref name="Hillel1832">{{cite book|author=David D'Beth Hillel|title=The Travels of Rabbi David D'Beth Hillel: From Jerusalem, Through Arabia, Koordistan, Part of Persia, and India to Madras|url=https://books.google.com/books?id=j5NeAAAAcAAJ&pg=PR9|year=1832|publisher=author|page=135}}</ref><ref>{{cite book|title=The Jews in India and the Far East|url=https://books.google.com/books?id=w_v-nQEACAAJ|year=1976|publisher=Greenwood Press|pages=24–26 | isbn=978-0-8371-2615-9 }}</ref> ಅರಬ್ ವ್ಯಾಪಾರಿಗಳು ಕನಿಷ್ಠ 4 ನೇ ಶತಮಾನ BCE ಯಿಂದಲೂ ಕೇರಳದೊಂದಿಗೆ ಸಂಪರ್ಕ ಹೊಂದಿದ್ದರು; [[ಹೆರೊಡೋಟಸ್]] (484–413 BCE) ಅರಬ್ಬರು ಕೇರಳದಿಂದ ತಂದ ಸರಕುಗಳನ್ನು ಈಡನ್ನಲ್ಲಿರುವ ಯಹೂದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಗಮನಿಸಿದರು.<ref name="Kusuman"/> ಈ ಅರಬ್ ವ್ಯಾಪಾರಿಗಳು ಸ್ಥಳೀಯ ಸಮುದಾಯಗಳೊಂದಿಗೆ ಮದುವೆಯಾದರು, ಇದು ಮುಸ್ಲಿಂ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಸಮುದಾಯದ ರಚನೆಗೆ ಕಾರಣವಾಯಿತು.<ref name="Dialogue">{{cite book |author=Rolland E. Miller |title=Hindu-Christian Dialogue: Perspectives and Encounters |publisher=Motilal Banarsidass Publications |year=1993 |isbn=978-81-208-1158-4 |url=https://books.google.com/books?id=6eHgNyNimoAC |page=50}}</ref> 4 ನೇ ಶತಮಾನ CE ಯಲ್ಲಿ, ಕೆಲವು ಕ್ರೈಸ್ತರು [[ಪರ್ಷಿಯಾ]]ದಿಂದ ವಲಸೆ ಬಂದರು ಮತ್ತು ಆರಂಭಿಕ [[ಸೇಂಟ್ ತಾಮಸ್ ಕ್ರೈಸ್ತರು|ಸಿರಿಯನ್ ಕ್ರಿಶ್ಚಿಯನ್]] ಸಮುದಾಯಕ್ಕೆ ಸೇರ್ಪಡೆಗೊಂಡರು, ಇದು 1 ನೇ ಶತಮಾನ CE ಯಲ್ಲಿ [[ತಾಮಸ್ ಪ್ರೇರಿತ]]ನ ಪ್ರಚಾರ ಚಟುವಟಿಕೆಗಳಿಂದ ತನ್ನ ಮೂಲವನ್ನು ಪತ್ತೆಹಚ್ಚುತ್ತದೆ.<ref name="Erwin Fahlbusch">[https://books.google.co.in/books?id=lZUBZlth2qgC&printsec=frontcover&dq=isbn:9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA#v=onepage&q=Muziris&f=true ''The Encyclopedia of Christianity, Volume 5''] by Erwin Fahlbusch. Wm. B. Eerdmans Publishing - 2008. p. 285. ISBN 978-0-8028-2417-2.</ref><ref>{{cite book |author=Geoffrey Wainwright |title=The Oxford History Of Christian Worship |publisher=Oxford University Press |year=2006 |isbn=978-0-19-513886-3 |url=https://books.google.com/books?id=h5VQUdZhx1gC |page=666 |accessdate=30 May 2015}}</ref> ಮಾಪ್ಪಿಲ ಎಂಬ ಪದವು{{mdash}}ಮೂಲತಃ ಗೌರವಾನ್ವಿತ ವಿದೇಶಿ ಸಂದರ್ಶಕರಿಗೆ ಅನ್ವಯಿಸುವ ಗೌರವಾರ್ಥ ಪದವಾಗಿದ್ದು{{mdash}}ನಂತರ ಯಹೂದಿ, ಸಿರಿಯನ್ ಕ್ರಿಶ್ಚಿಯನ್ ಮತ್ತು ಮುಸ್ಲಿಂ ವಲಸಿಗರ ವಂಶಸ್ಥರೊಂದಿಗೆ ಸಂಬಂಧ ಹೊಂದಿತು, ಇದು ಕ್ರಮವಾಗಿ [[ಯೆಹೂದ ಮಾಪ್ಪಿಲ]]ಗಳು, [[ಸೇಂಟ್ ತಾಮಸ್ ಕ್ರೈಸ್ತರು|ನಸ್ರಾನಿ ಮಾಪ್ಪಿಲ]]ಗಳು ಮತ್ತು [[ಮಲಬಾರ್ ಮುಸ್ಲಿಮರು|ಮುಸ್ಲಿಂ ಮಾಪ್ಪಿಲ]]ಗಳ ಪದಗಳಿಗೆ ಕಾರಣವಾಯಿತು.<ref name="BMalieckal">* Bindu Malieckal (2005) Muslims, Matriliny, and A Midsummer Night's Dream: European Encounters with the Mappilas of Malabar, India; The Muslim World Volume 95 Issue 2</ref><ref>{{cite book |author=Milton J, Skeat WW, Pollard AW, Brown L |title=The Indian Christians of St Thomas |publisher=Cambridge University Press |date=31 August 1982 |isbn=0-521-21258-8 |page=171}}</ref> ಈ ಸಮುದಾಯಗಳ ಸಂಪ್ರದಾಯಗಳ ಪ್ರಕಾರ, ಭಾರತದಲ್ಲಿನ ಕೆಲವು ಆರಂಭಿಕ ಧಾರ್ಮಿಕ ಸ್ಥಾಪನೆಗಳನ್ನು ಕೇರಳದಲ್ಲಿ ನಿರ್ಮಿಸಲಾಯಿತು.<ref name="Dialogue"/> ಇವುಗಳಲ್ಲಿ [[ಸೇಂಟ್ ತಾಮಸ್ ಕ್ರಿಶ್ಚಿಯನ್ ಚರ್ಚುಗಳು]],<ref>{{cite book |author=Susan Bayly |title=Saints, Goddesses and Kings |publisher=Cambridge University Press |year=2004 |isbn=978-0-521-89103-5 |url=https://books.google.com/books?id=Fxqtx8SflEsC |page=40 |accessdate=30 May 2015}}</ref> [[ಚೇರಮನ್ ಜುಮಾ ಮಸೀದಿ]] (629 CE ಯಲ್ಲಿ ಸ್ಥಾಪಿಸಲಾಯಿತು), ಭಾರತದ ಮೊದಲ ಮಸೀದಿ,<ref>{{cite book |author=Jonathan Goldstein |title=The Jews of China |publisher=M.E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123 |accessdate=30 May 2015}}</ref> ಮತ್ತು [[ಪರದೇಶಿ ಸಿನಾಗೋಗ್]] (1568 CE ಯಲ್ಲಿ ನಿರ್ಮಿಸಲಾಯಿತು), [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಕ್ರಿಯ ಸಿನಾಗೋಗ್ ಸೇರಿವೆ.<ref>{{cite book |author=Nathan Katz |title=Who Are the Jews of India? |publisher=University of California Press |year=2000 |isbn=978-0-520-21323-4 |url=https://books.google.com/books?id=ZWX6pF2PTJwC |page=245 |accessdate=30 May 2015}}</ref>
=== ಮಧ್ಯಕಾಲೀನ ಅವಧಿ ===
[[File:3rd Tiruvalla Copper Plate.jpg|thumb|[[ಸೇಂಟ್ ತಾಮಸ್ ಕ್ರೈಸ್ತರು|ಸೇಂಟ್ ತಾಮಸ್ ಕ್ರೈಸ್ತರಿಗೆ]] ನೀಡಲಾದ [[ಥರಿಸಪಲ್ಲಿ ತಟ್ಟೆಗಳು]] ವ್ಯಾಪಾರಿ ಸಂಘಗಳು ಮತ್ತು ವ್ಯಾಪಾರ ನಿಗಮಗಳು ಕುಲಶೇಖರ ಅವಧಿಯಲ್ಲಿ ಆರ್ಥಿಕತೆ ಮತ್ತು ಸಾಮಾಜಿಕ ಜೀವನದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದವು ಎಂದು ಸಾಕ್ಷ್ಯ ನೀಡುತ್ತವೆ.]]
ಎರಡನೇ ಚೇರ ಸಾಮ್ರಾಜ್ಯ (c. 800–1102), ಇದನ್ನು [[ಮಹೋದಯಪುರಂ]]ನ ಕುಲಶೇಖರ ರಾಜವಂಶ ಎಂದೂ ಕರೆಯುತ್ತಾರೆ, ಇದನ್ನು [[ಕುಲಶೇಖರ ಆಳ್ವಾರ್|ಕುಲಶೇಖರ ವರ್ಮನ್]] ಸ್ಥಾಪಿಸಿದರು ಮತ್ತು ಪ್ರಸ್ತುತ ಕೇರಳದ ಹೆಚ್ಚಿನ ಭಾಗ ಮತ್ತು ಆಧುನಿಕ ತಮಿಳುನಾಡಿನ ಭಾಗಗಳನ್ನು ಒಳಗೊಂಡ ಪ್ರದೇಶವನ್ನು ಆಳಿದರು. ಕುಲಶೇಖರ ಅವಧಿಯ ಆರಂಭಿಕ ಹಂತದಲ್ಲಿ, ದಕ್ಷಿಣ ಪ್ರದೇಶವು{{mdash}}[[ನಾಗರ್ಕೋವಿಲ್]] ನಿಂದ [[ತಿರುವಲ್ಲ]] ವರೆಗೆ{{mdash}}[[ಆಯ್ಸ್ (ಕೇರಳ)|ಆಯ್]] ರಾಜವಂಶದ ನಿಯಂತ್ರಣದಲ್ಲಿತ್ತು. 10 ನೇ ಶತಮಾನದ ವೇಳೆಗೆ, ಆಯ್ಸ್ ತಮ್ಮ ಶಕ್ತಿಯನ್ನು ಕಳೆದುಕೊಂಡರು ಮತ್ತು ಈ ಪ್ರದೇಶವನ್ನು ಕುಲಶೇಖರ ಸಾಮ್ರಾಜ್ಯಕ್ಕೆ ಸೇರಿಸಲಾಯಿತು.<ref name="Balachand">{{cite book|author=K. Balachandran Nayar|title=In quest of Kerala|url=https://books.google.com/books?id=EXIeAAAAMAAJ|accessdate=8 August 2012|year=1974|publisher=Accent Publications|page=86}}</ref><ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|page=97}}</ref> ಕುಲಶೇಖರ ಆಳ್ವಿಕೆಯಲ್ಲಿ, ಕೇರಳವು ಕಲೆ, ಸಾಹಿತ್ಯ, ವ್ಯಾಪಾರ ಮತ್ತು ಹಿಂದೂ ಧರ್ಮದಲ್ಲಿ [[ಭಕ್ತಿ ಚಳುವಳಿ]] ಯಲ್ಲಿ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟ ಒಂದು ಅಭಿವೃದ್ಧಿ ಹೊಂದಿದ ಅವಧಿಯನ್ನು ಅನುಭವಿಸಿತು.<ref name="Sreedhar123">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|pages=123–131}}</ref> ಈ ಸಮಯದಲ್ಲಿ ವಿಶಿಷ್ಟವಾದ ಕೇರಳೀಯ ಗುರುತು ಹೊರಹೊಮ್ಮಲು ಪ್ರಾರಂಭಿಸಿತು, ವಿಶೇಷವಾಗಿ ಭಾಷಾ ವ್ಯತ್ಯಾಸದ ಮೂಲಕ ತಮಿಳು ಸಂಸ್ಕೃತಿಯಿಂದ ಪ್ರತ್ಯೇಕವಾಯಿತು.<ref name="AsherKumari1997">{{cite book|author1=R. E. Asher|author2=T. C. Kumari|title=Malayalam|url=https://books.google.com/books?id=uFQG2DCaIsIC|year=1997|publisher=Psychology Press|isbn=978-0-415-02242-2|pages=24–27}}</ref> ಆಡಳಿತ ಉದ್ದೇಶಗಳಿಗಾಗಿ, ಸಾಮ್ರಾಜ್ಯವನ್ನು [[ನಾಡುವಾಜಿ]]ಗಳು ಎಂದು ಕರೆಯಲ್ಪಡುವ ಸ್ಥಳೀಯ ಮುಖಂಡರು ಆಳುವ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ಪ್ರಾಂತ್ಯವನ್ನು ಮತ್ತಷ್ಟು ''ದೇಶಂ'' ಗಳಾಗಿ ವಿಂಗಡಿಸಲಾಗಿತ್ತು, ಅವುಗಳನ್ನು ದೇಶವಾಝಿಗಳು ಮೇಲ್ವಿಚಾರಣೆ ಮಾಡುತ್ತಿದ್ದರು.<ref name="Sreedhar123"/>
11 ನೇ ಶತಮಾನದಲ್ಲಿ ಚೇರ-ಚೋಳ ಸಂಘರ್ಷಗಳ ಸರಣಿಯು ಕೇರಳದ ಬಂದರುಗಳ ಮೂಲಕ ವಿದೇಶಿ ವ್ಯಾಪಾರಕ್ಕೆ ಅಡ್ಡಿಯಾಯಿತು. ಈ ಅವಧಿಯಲ್ಲಿ, ಹಿಂದೂ ಧರ್ಮದೊಂದಿಗೆ ಹಿಂದೆ ಸಹಬಾಳ್ವೆ ನಡೆಸಿದ್ದ [[ಬೌದ್ಧ]] ಮತ್ತು [[ಜೈನ]] ಧರ್ಮಗಳು ಕ್ಷೀಣಿಸಿದವು ಮತ್ತು ಅಂತಿಮವಾಗಿ ಈ ಪ್ರದೇಶದಿಂದ ಕಣ್ಮರೆಯಾಯಿತು.<ref>{{cite web |url=http://www.kerala.cc/keralahistory/index34.htm |title=The Buddhist History of Kerala |publisher=Kerala.cc |accessdate=25 September 2013 |archive-date=4 March 2016 |archive-url=https://web.archive.org/web/20160304215933/http://www.kerala.cc/keralahistory/index34.htm |url-status=dead }}</ref> ಸಾಮಾಜಿಕ ರಚನೆಗಳು ಹೆಚ್ಚು ಬಿಗಿಯಾದವು, ಮತ್ತು [[ಕೇರಳದಲ್ಲಿ ಜಾತಿ ವ್ಯವಸ್ಥೆ|ಜಾತಿ ವಿಭಾಗಗಳು]] ಆಳವಾದವು.<ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=9 August 2012|date=1 January 2007|publisher=DC Books|isbn=978-81-264-1578-6|page=138}}</ref> ಕುಲಶೇಖರ ರಾಜವಂಶವು ಅಂತಿಮವಾಗಿ 1102 CE ಯಲ್ಲಿ [[ನಂತರದ ಪಾಂಡ್ಯರು]] ಮತ್ತು [[ನಂತರದ ಚೋಳರು]] ನ ಸಂಯೋಜಿತ ದಾಳಿಯ ನಂತರ ಕುಸಿಯಿತು.<ref name="Balachand"/> 14 ನೇ ಶತಮಾನದಲ್ಲಿ, ದಕ್ಷಿಣ [[ವೇಣಾಡ್|ವೇಣಾಡ್ ಸಾಮ್ರಾಜ್ಯ]]ದ ರವಿ ವರ್ಮ ಕುಲಶೇಖರ (r. 1299–1314) ದಕ್ಷಿಣ ಭಾರತದ ಹೆಚ್ಚಿನ ಭಾಗದಲ್ಲಿ ಸಂಕ್ಷಿಪ್ತವಾಗಿ ಅಲ್ಪಕಾಲಿಕ ಪ್ರಾಮುಖ್ಯತೆಯನ್ನು ಸ್ಥಾಪಿಸಿದರು. ಅವರ ಮರಣದ ನಂತರ, ಮತ್ತು ಬಲವಾದ ಕೇಂದ್ರ ಅಧಿಕಾರದ ಅನುಪಸ್ಥಿತಿಯಲ್ಲಿ, ಈ ಪ್ರದೇಶವು ಮೂವತ್ತು ಸಣ್ಣ, ಆಗಾಗ್ಗೆ ಯುದ್ಧ ಮಾಡುವ ಸಂಸ್ಥಾನಗಳಾಗಿ ವಿಭಜನೆಯಾಯಿತು. ಅತ್ಯಂತ ಶಕ್ತಿಶಾಲಿಗಳೆಂದರೆ ಉತ್ತರದಲ್ಲಿ [[ಸಮೂತಿರಿ]] (ಜಾಮೋರಿನ್) ಸಾಮ್ರಾಜ್ಯ, ದಕ್ಷಿಣದಲ್ಲಿ ವೇಣಾಡ್ ಮತ್ತು ಮಧ್ಯ ಪ್ರದೇಶದಲ್ಲಿ ಕೊಚ್ಚಿ. 18 ನೇ ಶತಮಾನದಲ್ಲಿ, ತಿರುವಾಂಕೂರಿನ ರಾಜ [[ಅನಿಝಂ ತಿರುನಾಳ್ ಮಾರ್ತಾಂಡ ವರ್ಮ]] ಅವರು ಸೈನ್ಯದ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಿದರು ಮತ್ತು ಉತ್ತರ ಕೇರಳದವರೆಗೆ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡರು, ಈ ಪ್ರದೇಶದಲ್ಲಿ ತಿರುವಾಂಕೂರನ್ನು ಪ್ರಬಲ ಶಕ್ತಿಯಾಗಿ ಸ್ಥಾಪಿಸಿದರು. ಕೊಚ್ಚಿ ಆಡಳಿತಗಾರನು ಶಾಂತಿಗಾಗಿ ಮೊಕದ್ದಮೆ ಹೂಡಿದನು, ಮತ್ತು ಮಲಬಾರ್ ಪ್ರದೇಶವು ಅಂತಿಮವಾಗಿ [[1947 ರಲ್ಲಿ ಭಾರತದ ಸ್ವಾತಂತ್ರ್ಯ|ಭಾರತದ ಸ್ವಾತಂತ್ರ್ಯ]] ದವರೆಗೆ ನೇರ [[ಬ್ರಿಟಿಷ್ ಆಳ್ವಿಕೆ|ಬ್ರಿಟಿಷ್ ಆಳ್ವಿಕೆ]] ಯ ಅಡಿಯಲ್ಲಿ ಬಂದಿತು.<ref>{{cite book|author=Educational Britannica Educational|title=The Geography of India: Sacred and Historic Places|url=https://books.google.com/books?id=xPUvqtdfjyAC&pg=PA311|accessdate=15 September 2012|date=15 August 2010|publisher=The Rosen Publishing Group|isbn=978-1-61530-202-4|page=311}}</ref><ref>{{cite book |last1=Boland-Crewe |first1=Tara |last2=Lea |first2=David |title=The Territories and States of India |date=2003 |doi=10.4324/9780203402900 |isbn=978-1-135-35625-5 |pages=144–146 }}</ref>
=== ವಸಾಹತುಶಾಹಿ ಆಳ್ವಿಕೆ ===
[[File:Caminho maritimo para a India.png|thumb|ಕೇರಳವನ್ನು ತಲುಪಲು [[ವಾಸ್ಕೋ ಡ ಗಾಮಾ]] ತೆಗೆದುಕೊಂಡ ಮಾರ್ಗ (ಕಪ್ಪು ಬಣ್ಣದಲ್ಲಿ ಸೂಚಿಸಲಾಗಿದೆ)]]
[[ಮಧ್ಯಯುಗ|ಉಚ್ಚ]] ಮತ್ತು [[ಕೊನೆಯ ಮಧ್ಯಯುಗ]]ದಲ್ಲಿ, ಅರಬ್ ವ್ಯಾಪಾರಿಗಳು [[ಹಿಂದೂ ಮಹಾಸಾಗರ]]ದಲ್ಲಿ ಮಸಾಲೆ ವ್ಯಾಪಾರದ ಮೇಲೆ ಸಮುದ್ರ ಏಕಸ್ವಾಮ್ಯವನ್ನು ಹೊಂದಿದ್ದರು. ಯುರೋಪಿಯನ್ [[ಭೌಗೋಳಿಕ ಅನ್ವೇಷಣೆಗಳ ಯುಗ]] ದಲ್ಲಿ ಮಸಾಲೆ ವ್ಯಾಪಾರವು{{mdash}}ವಿಶೇಷವಾಗಿ ಕರಿಮೆಣಸಿನಲ್ಲಿ{{mdash}}ಯುರೋಪಿಯನ್ ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾದಾಗ ಈ ಪ್ರಾಬಲ್ಯವನ್ನು ಸವಾಲು ಮಾಡಲಾಯಿತು.<ref>{{cite book | last = Corn | first = Charles |author2=Glasserman, Debbie | title = The Scents of Eden: A History of the Spice Trade | publisher = Kodansha America |date=March 1999 | isbn = 1-56836-249-8}}</ref> 15 ನೇ ಶತಮಾನದ ವೇಳೆಗೆ, ಪೋರ್ಚುಗೀಸರು ಪೂರ್ವ ಸಮುದ್ರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಾರಂಭಿಸಿದರು, ಇದು 1498 ರಲ್ಲಿ [[ಕೋಝಿಕೋಡ್]] (ಕ್ಯಾಲಿಕಟ್) ಬಳಿಯ [[ಕಪ್ಪಾಡ್]] ನಲ್ಲಿ [[ವಾಸ್ಕೋ ಡ ಗಾಮಾ]] ಆಗಮನದೊಂದಿಗೆ ಕೊನೆಗೊಂಡಿತು.<ref>{{Cite book |author=Ravindran PN |title=Black Pepper: Piper Nigrum |publisher=CRC Press |year=2000 |accessdate=11 November 2007 |url=https://books.google.com/books?id=VaGCgSLrdr4C |page=3 |isbn=978-90-5702-453-5}}</ref><ref name="Curtin1984">{{cite book|author=Philip D. Curtin|title=Cross-Cultural Trade in World History|url=https://books.google.com/books?id=R4IiYFhliv4C|date=25 May 1984|publisher=Cambridge University Press|isbn=978-0-521-26931-5|page=144}}</ref> ಕೋಝಿಕೋಡ್ನ [[ಜಾಮೋರಿನ್]] ಪೋರ್ಚುಗೀಸರಿಗೆ ತನ್ನ ಪ್ರಜೆಗಳೊಂದಿಗೆ ವ್ಯಾಪಾರ ಮಾಡಲು ಅನುಮತಿ ನೀಡಿದರು, ಇದು ಸಮೃದ್ಧ ಪೋರ್ಚುಗೀಸ್ [[ಕಾರ್ಖಾನೆ (ವ್ಯಾಪಾರ ಠಾಣ್ಯ)|ಕಾರ್ಖಾನೆ]] ಮತ್ತು ಕೋಟೆಯ ಸ್ಥಾಪನೆಗೆ ಕಾರಣವಾಯಿತು.<ref name="Mehta2005" />
ಆದಾಗ್ಯೂ, ಪೋರ್ಚುಗೀಸರು ಜಾಮೋರಿನ್ ರಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಬ್ ವ್ಯಾಪಾರಿಗಳ ಮೇಲೆ ದಾಳಿ ಮಾಡಿದಾಗ ಉದ್ವಿಗ್ನತೆಗಳು ಹುಟ್ಟಿಕೊಂಡವು, ಇದು ಸಂಬಂಧಗಳಲ್ಲಿ ಕುಸಿತಕ್ಕೆ ಕಾರಣವಾಯಿತು. ಜಾಮೋರಿನ್ ಮತ್ತು ಕೊಚ್ಚಿ ರಾಜನ ನಡುವಿನ ಪೈಪೋಟಿಯಿಂದ ಪ್ರಯೋಜನ ಪಡೆಯುವ ಅವಕಾಶವನ್ನು ಬಳಸಿಕೊಂಡು, ಪೋರ್ಚುಗೀಸರು ಕೊಚ್ಚಿಯೊಂದಿಗೆ ಮೈತ್ರಿ ಮಾಡಿಕೊಂಡರು. [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] 1505 ರಲ್ಲಿ ಪೋರ್ಚುಗೀಸ್ ಭಾರತದ ವೈಸರಾಯ್ ಆಗಿ ನೇಮಕಗೊಂಡಾಗ, ಅವರು ತಮ್ಮ ಪ್ರಧಾನ ಕಛೇರಿಯನ್ನು ಕೋಝಿಕೋಡ್ನಲ್ಲಿ ಅಲ್ಲ, ಬದಲಿಗೆ [[ಫೋರ್ಟ್ ಕೊಚ್ಚಿ]] ([[ಫೋರ್ಟ್ ಇಮ್ಯಾನುಯೆಲ್]]) ಯಲ್ಲಿ ಸ್ಥಾಪಿಸಿದರು. ಅವರ ಆಡಳಿತದ ಅಡಿಯಲ್ಲಿ, ಪೋರ್ಚುಗೀಸರು ಮಲಬಾರ್ ಕರಾವಳಿಯಲ್ಲಿ ಹಲವಾರು ಕೋಟೆಗಳನ್ನು ನಿರ್ಮಿಸುವ ಮೂಲಕ ತಮ್ಮ ಪ್ರಭಾವವನ್ನು ಬಲಪಡಿಸಿದರು.<ref name="Mehta2005">{{cite book|author=J. L. Mehta|title=Advanced Study in the History of Modern India: Volume One: 1707–1813|url=https://books.google.com/books?id=d1wUgKKzawoC&pg=PA324|accessdate=9 August 2012|date=1 January 2005|publisher=Sterling Publishers Pvt. Ltd|isbn=978-1-932705-54-6|pages=324–327}}</ref> ಈ ಮುನ್ನಡೆಗಳ ಹೊರತಾಗಿಯೂ, ಪೋರ್ಚುಗೀಸರು ಜಾಮೋರಿನ್ನ ನೌಕಾ ಪಡೆಗಳಿಂದ ಗಮನಾರ್ಹ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ ಕೋಝಿಕೋಡ್ನ ಅಡ್ಮಿರಲ್ಗಳಾದ [[ಕುಂಜಲಿ ಮರಕ್ಕರ್]]ರ ಆಜ್ಞೆಯಡಿಯಲ್ಲಿ, ಅವರು ಪರಿಣಾಮಕಾರಿ ಸಮುದ್ರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರು. ಈ ಪ್ರತಿರೋಧವು ಅಂತಿಮವಾಗಿ ಪೋರ್ಚುಗೀಸರನ್ನು ಒಪ್ಪಂದಕ್ಕೆ ಒತ್ತಾಯಿಸಿತು. 1571 ರಲ್ಲಿ, ಜಾಮೋರಿನ್ ಪಡೆಗಳು [[ತಾನೂರ್ ಸಾಮ್ರಾಜ್ಯ#ಚಾಲಿಯಮ್ ಕೋಟೆಯ ಕದನಗಳು|ಚಾಲಿಯಮ್ ಕೋಟೆಯ ಕದನದಲ್ಲಿ]] ಪೋರ್ಚುಗೀಸರನ್ನು ಸೋಲಿಸಿದವು, ಇದು ಈ ಪ್ರದೇಶದಲ್ಲಿ ಪೋರ್ಚುಗೀಸ್ ಮಹತ್ವಾಕಾಂಕ್ಷೆಗಳಿಗೆ ದೊಡ್ಡ ಹಿನ್ನಡೆಯನ್ನು ಗುರುತಿಸಿತು.<ref>{{cite book|author=K. K. N. Kurup|title=India's Naval Traditions: The Role of Kunhali Marakkars|url=https://books.google.com/books?id=HKmXcBCKEcAC&pg=PA51|accessdate=9 August 2012|date=1 January 1997|publisher=Northern Book Centre|isbn=978-81-7211-083-3|pages=37–38}}</ref>
ಪೋರ್ಚುಗೀಸರು ಅಂತಿಮವಾಗಿ [[ಡಚ್ ಈಸ್ಟ್ ಇಂಡಿಯಾ ಕಂಪನಿ]]ಯಿಂದ ಸ್ಥಳಾಂತರಿಸಲ್ಪಟ್ಟರು, ಇದು ಈ ಪ್ರದೇಶದಲ್ಲಿ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲು ಕೋಝಿಕೋಡ್ ಮತ್ತು ಕೊಚ್ಚಿ ನಡುವಿನ ನಡೆಯುತ್ತಿರುವ ಸಂಘರ್ಷಗಳ ಲಾಭವನ್ನು ಪಡೆಯಿತು.<ref name="South Asia 2006">{{cite book|title=South Asia 2006|url=https://books.google.com/books?id=YG8bAQAAMAAJ|accessdate=18 November 2012|date=1 December 2005|publisher=Taylor & Francis|page=289}}</ref> ಆದಾಗ್ಯೂ, ಡಚ್ಚರು ಸಹ ಸೈನ್ಯದ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ [[ತಿರುವಾಂಕೂರು ರಾಜಮನೆತನ]]ದ [[ಮಾರ್ತಾಂಡ ವರ್ಮ]]ರಿಂದ. 1741 ರಲ್ಲಿ [[ಕೊಲಾಚೆಲ್ ಕದನ]]ದಲ್ಲಿ ನಿರ್ಣಾಯಕ ಡಚ್ ಸೋಲಿನ ನಂತರ,<ref name="google3">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA57|accessdate=18 November 2012|date=1 January 1993|publisher=Northern Book Centre|isbn=978-81-7211-052-9|pages=57–70}}</ref> 1753 ರಲ್ಲಿ ಮಾವೆಲಿಕ್ಕರ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಡಚ್ಚರು ಪ್ರಾದೇಶಿಕ ರಾಜಕೀಯ ವ್ಯವಹಾರಗಳಿಂದ ಹಿಂತೆಗೆದುಕೊಳ್ಳಲು ಮತ್ತು ಅವರ ಪಾತ್ರವನ್ನು ವ್ಯಾಪಾರಕ್ಕೆ ಸೀಮಿತಗೊಳಿಸಲು ಒತ್ತಾಯಿಸಲಾಯಿತು.<ref name="Singh2010">{{cite book|author=Anjana Singh|title=Fort Kochi in Kerala, 1750–1830: The Social Condition of a Dutch Community in an Indian Milieu|url=https://books.google.com/books?id=LFy4pWUlnfwC&pg=PA22|accessdate=18 November 2012|date=30 April 2010|publisher=BRILL|isbn=978-90-04-16816-9|pages=22–52}}</ref><ref name="Iyer1995">{{cite book|author=S. Krishna Iyer|title=Travancore Dutch relations, 1729–1741|url=https://books.google.com/books?id=rUtuAAAAMAAJ|accessdate=18 November 2012|year=1995|publisher=CBH Publications|isbn=978-81-85381-42-8|page=49}}</ref><ref name="Lannoy1997">{{cite book|author=Mark de Lannoy|title=The Kulasekhara Perumals of Travancore: history and state formation in Travancore from 1671 to 1758|url=https://books.google.com/books?id=pKjZAAAAMAAJ|accessdate=18 November 2012|year=1997|publisher=Leiden University|isbn=978-90-73782-92-1|page=190}}</ref> ಮಾರ್ತಾಂಡ ವರ್ಮ ತಮ್ಮ ಸೈನ್ಯದ ಕಾರ್ಯಾಚರಣೆಗಳನ್ನು ಮುಂದುವರೆಸಿದರು, ಕೇರಳದಲ್ಲಿ ತಿರುವಾಂಕೂರನ್ನು ಪ್ರಮುಖ ಶಕ್ತಿಯಾಗಿ ಸ್ಥಾಪಿಸಿದರು.<ref>{{cite book|author=A. Sreedhara Menon|title=Political History of Modern Kerala|url=https://books.google.com/books?id=wnAjqjhc1VcC&pg=PA140|accessdate=10 August 2012|year=1987|publisher=D C Books|isbn=978-81-264-2156-5|page=140}}</ref>
1766 ರಲ್ಲಿ, [[ಮೈಸೂರು ಸಾಮ್ರಾಜ್ಯ|ಮೈಸೂರಿನ]] ಆಡಳಿತಗಾರ [[ಹೈದರ್ ಅಲಿ]], [[ಮೈಸೂರಿನ ಕೇರಳ ಆಕ್ರಮಣ#ಹೈದರ್ ಅಲಿಯ ಆಕ್ರಮಣ|ಉತ್ತರ ಕೇರಳವನ್ನು ಆಕ್ರಮಿಸಿದನು]],<ref name="Rai">{{cite book|author=Raghunath Rai|title=History|url=https://books.google.com/books?id=Z4-8Z0gqBkoC&pg=PA14|accessdate=18 November 2012|publisher=FK Publications|isbn=978-81-87139-69-0|pages=14–}}</ref> ಮತ್ತು ಅವನ ಮಗ ಮತ್ತು ಉತ್ತರಾಧಿಕಾರಿ, [[ಟಿಪ್ಪು ಸುಲ್ತಾನ್]], ವಿಸ್ತರಿಸುತ್ತಿರುವ [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]] ವಿರುದ್ಧ [[ಮೈಸೂರಿನ ಕೇರಳ ಆಕ್ರಮಣ#ಟಿಪ್ಪು ಸುಲ್ತಾನನ ಆಕ್ರಮಣಗಳು|ಸೈನ್ಯದ ಕಾರ್ಯಾಚರಣೆಗಳನ್ನು]] ಪ್ರಾರಂಭಿಸಿದರು. ಈ ಮುಖಾಮುಖಿಗಳು ನಾಲ್ಕು [[ಆಂಗ್ಲೋ-ಮೈಸೂರು ಯುದ್ಧಗಳಲ್ಲಿ]] ಎರಡಕ್ಕೆ ಕೊಡುಗೆ ನೀಡಿದವು.<ref name="MuseumDallapiccola2010">{{cite book|author1=British Museum|author2=Anna Libera Dallapiccola|title=South Indian Paintings: A Catalogue of the British Museum Collection|url=https://books.google.com/books?id=FIzWapiacQcC&pg=PA12|accessdate=18 November 2012|date=22 June 2010|publisher=Mapin Publishing Pvt Ltd|isbn=978-0-7141-2424-7|pages=12–}}</ref><ref name="ThorpeEdgar">{{cite book|author1=Edgar Thorpe, Showick Thorpe|author2=Thorpe Edgar|title=The Pearson CSAT Manual 2011|url=https://books.google.com/books?id=WuBFs6yFRwcC&pg=RA1-PA99|accessdate=18 November 2012|publisher=Pearson Education India|isbn=978-81-317-5830-4|page=99}}</ref> 1790 ರ ದಶಕದ ಆರಂಭದ ವೇಳೆಗೆ, ಟಿಪ್ಪು ಸುಲ್ತಾನ್ [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ವನ್ನು ಬ್ರಿಟಿಷರಿಗೆ ಬಿಟ್ಟುಕೊಡಲು ಒತ್ತಾಯಿಸಲಾಯಿತು, ಮತ್ತು ಈ ಪ್ರದೇಶಗಳನ್ನು 1792 ರಲ್ಲಿ [[ಬ್ರಿಟಿಷ್ ಭಾರತ]]ದ [[ಮದ್ರಾಸ್ ಪ್ರೆಸಿಡೆನ್ಸಿ]] ಗೆ ಸೇರಿಸಲಾಯಿತು.<ref name="The Edinburgh Gazetteer: Or, Geographical Dictionary: Containing a Description of the Various Countries, Kingdoms, States, Cities, Towns, Mountains, &c. of the World; an Account of the Government, Customs, and Religion of the Inhabitants; the Boundaries and Natural Productions of Each Country, &c. &c. Forming a Complete Body of Geography, Physical, Political, Statistical, and Commercial with Addenda, Containing the Present State of the New Governments in South America...">{{cite book|title=The Edinburgh Gazetteer|url=https://books.google.com/books?id=xRIyAQAAMAAJ&pg=PA63|accessdate=18 November 2012|year=1827|publisher=Longman, Rees, Orme, Brown, and Green|pages=63–}}</ref><ref name="Kumar1965">{{cite book|author=Dharma Kumar|title=Land and Caste in South India: Agricultural Labor in the Madras Presidency During the Nineteenth Century|url=https://books.google.com/books?id=psw5AAAAIAAJ&pg=PA87|accessdate=18 November 2012|year=1965|publisher=CUP Archive|pages=87–|id=GGKEY:T72DPF9AZDK}}</ref><ref name="Ittaman2003">{{cite book|author=K.P. Ittaman|title=History of Mughal Architecture Volume Ii|url=https://books.google.com/books?id=ZQ5lFywZAqYC&pg=PA30|accessdate=18 November 2012|date=1 June 2003|publisher=Abhinav Publications|isbn=978-81-7017-034-1|pages=30–}}</ref> ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 1791 ರಲ್ಲಿ ಕೊಚ್ಚಿ ಮತ್ತು 1795 ರಲ್ಲಿ ತಿರುವಾಂಕೂರಿನೊಂದಿಗೆ ಸಹಾಯಕ ಮೈತ್ರಿಗಳನ್ನು ಸುರಕ್ಷಿತಗೊಳಿಸಿತು.<ref>{{Cite book |author=Superintendent of Government Printing |title=Imperial Gazetteer of India (Provincial Series): Madras |publisher=Government of India |location=Calcutta |year=1908 |accessdate=11 November 2007 |url=https://books.google.com/books?id=xXglUxeS_WkC |page=22}}</ref> 18 ನೇ ಶತಮಾನದ ಅಂತ್ಯದ ವೇಳೆಗೆ, ಕೇರಳವು ಸಂಪೂರ್ಣವಾಗಿ ಬ್ರಿಟಿಷರಿಂದ ನೇರವಾಗಿ ಆಡಳಿತ ನಡೆಸಲ್ಪಡುತ್ತಿತ್ತು ಅಥವಾ ಅವರ [[ಸಾಮಂತತ್ವ]]ದ ಅಡಿಯಲ್ಲಿತ್ತು.<ref name="RajTharakan1981">{{cite book|author1=Kakkadan Nandanath Raj|author2=Michael Tharakan|title=Agrarian reform in Kerala and its impact on the rural economy: a preliminary assessment|url=https://books.google.com/books?id=JF6FAAAAIAAJ|accessdate=18 November 2012|year=1981|publisher=International Labour Office|pages=2–3}}</ref>
20 ನೇ ಶತಮಾನದಲ್ಲಿ, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಕೇರಳವು ಹಲವಾರು ಪ್ರಮುಖ ದಂಗೆಗಳ ತಾಣವಾಗಿತ್ತು. ಇವುಗಳಲ್ಲಿ ಅತ್ಯಂತ ಗಮನಾರ್ಹವಾದುದು 1921 ರ [[ಮಲಬಾರ್ ದಂಗೆ]], ಇದರಲ್ಲಿ ಮಲಬಾರ್ ಪ್ರದೇಶದ ಮಾಪ್ಪಿಲ ಮುಸ್ಲಿಮರು ಹಿಂದೂ [[ಜಮೀನ್ದಾರ್]]ಗಳು (ಭೂಮಾಲೀಕರು) ಮತ್ತು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳ ವಿರುದ್ಧ ಗಲಭೆ ನಡೆಸಿದರು.<ref name="Qureshi1999">{{cite book|author=M. Naeem Qureshi|title=Pan-Islam in British Indian Politics: A Study of the Khilafat Movement, 1918–1924|url=https://books.google.com/books?id=czKYZPyoyx0C|year=1999|publisher=BRILL|isbn=90-04-11371-1|pages=445–447}}</ref> ಸಾಮಾಜಿಕ ಸುಧಾರಣೆಯ ಕ್ಷಣಗಳು ಸಹ ಈ ಅವಧಿಯಲ್ಲಿ ವೇಗವನ್ನು ಪಡೆದುಕೊಂಡವು, ವಿಶೇಷವಾಗಿ ಜಾತಿ-ಆಧಾರಿತ ತಾರತಮ್ಯವನ್ನು ಸವಾಲು ಮಾಡುವವು. ಒಂದು ಪ್ರಮುಖ ಮೈಲಿಗಲ್ಲು 1936 ರ ತಿರುವಾಂಕೂರಿನ [[ದೇವಾಲಯ ಪ್ರವೇಶ ಘೋಷಣೆ]]ಯಾಗಿದ್ದು, ಇದು ಕೆಳ ಜಾತಿಯ ಹಿಂದೂಗಳಿಗೆ ಹಿಂದೆ ಉನ್ನತ ಜಾತಿಗಳಿಗೆ ಸೀಮಿತವಾಗಿದ್ದ ದೇವಾಲಯಗಳನ್ನು ಪ್ರವೇಶಿಸುವ ಹಕ್ಕನ್ನು ನೀಡಿತು.<ref name="Smith1976">{{cite book|author=Bardwell L. Smith|title=Religion and Social Conflict in South Asia|url=https://books.google.com/books?id=07Y3AAAAIAAJ&pg=PA42|accessdate=31 July 2012|year=1976|publisher=BRILL|isbn=978-90-04-04510-1|pages=35–42}}</ref>
=== ಭಾರತದ ರಾಜ್ಯ ===
1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಸ್ವತಂತ್ರ ಪ್ರಭುತ್ವಗಳಾಗಿ [[ಭಾರತದ ವಿಭಜನೆ]] ಯ ನಂತರ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು [[ಭಾರತದ ಪ್ರಭುತ್ವ|ಭಾರತದ ಒಕ್ಕೂಟಕ್ಕೆ]] ಸೇರಿಕೊಂಡವು. 1 ಜುಲೈ 1949 ರಂದು, ಎರಡೂ ರಾಜ್ಯಗಳನ್ನು ವಿಲೀನಗೊಳಿಸಿ [[ತಿರುವಾಂಕೂರು-ಕೊಚ್ಚಿ]] ರೂಪಿಸಲಾಯಿತು.<ref name="Sabharwal2007">{{cite book|author=Gopa Sabharwal|title=India Since 1947: The Independent Years|url=https://books.google.com/books?id=LKySGJAGVEQC&pg=PA23|accessdate=18 November 2012|year=2007|publisher=Penguin Books India|isbn=978-0-14-310274-8|pages=23–}}</ref> 1 ನವೆಂಬರ್ 1956 ರಂದು, ಮದ್ರಾಸಿನ ದಕ್ಷಿಣ ಕನ್ನಡ ಜಿಲ್ಲೆಯ [[ಕಾಸರಗೋಡು ಜಿಲ್ಲೆ|ಕಾಸರಗೋಡು]] ತಾಲೂಕು, [[ಮದ್ರಾಸ್ ರಾಜ್ಯ]]ದ [[ಮಲಬಾರ್ ಜಿಲ್ಲೆ]] ([[ನೀಲಗಿರಿ ಜಿಲ್ಲೆಯ]] [[ಗುಡಾಲೂರು ತಾಲೂಕು]], [[ಲಕ್ಷದ್ವೀಪ]], [[ಟಾಪ್ಸ್ಲಿಪ್]], ಮತ್ತು ಅನಕಟ್ಟಿಯ ಪೂರ್ವದ [[ಅಟ್ಟಪ್ಪಾಡಿ]] ಕಾಡು ಹೊರತುಪಡಿಸಿ), ಮತ್ತು ತಿರುವಾಂಕೂರು-ಕೊಚ್ಚಿ ರಾಜ್ಯವು{{mdash}}ನಾಲ್ಕು ದಕ್ಷಿಣ ತಾಲೂಕುಗಳನ್ನು ([[ಕನ್ಯಾಕುಮಾರಿ ಜಿಲ್ಲೆ]] ಮತ್ತು ಶೆಂಕೋಟ್ಟೈ ತಾಲೂಕುಗಳು) ಹೊರತುಪಡಿಸಿ, ಅವುಗಳನ್ನು ತಮಿಳುನಾಡಿಗೆ ವರ್ಗಾಯಿಸಲಾಯಿತು{{mdash}}[[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ಕೇರಳ ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು.<ref name="Tmh">{{cite book|author=Tmh|title=General Knowledge Digest 2010|url=https://books.google.com/books?id=RyLmXWTKHXgC&pg=SA3-PA106|accessdate=18 November 2012|publisher=Tata McGraw-Hill Education|isbn=978-0-07-069939-7|page=3}}</ref><ref name="SinghKarafin2009">{{cite book|author1=Sarina Singh|author2=Amy Karafin|author3=Anirban Mahapatra|title=South India|url=https://books.google.com/books?id=8KnLFpjEHpUC|accessdate=6 January 2013|date=1 September 2009|publisher=Lonely Planet|isbn=978-1-74179-155-6}}</ref><ref name="Kerala">{{Cite web |title=The States Reorganisation Act, 1956 |url=https://legislative.gov.in/sites/default/files/A1956-37.pdf |url-status=live |archive-url=https://web.archive.org/web/20211117014954/https://legislative.gov.in/sites/default/files/A1956-37.pdf |archive-date=17 November 2021 |access-date=11 May 2021 |website=legislative.gov.in |publisher=Government of India}}</ref> 1957 ರಲ್ಲಿ ಹೊಸ ಕೇರಳ ವಿಧಾನಸಭೆಗೆ ಮೊದಲ ಚುನಾವಣೆಗಳ ನಂತರ [[ಇ. ಎಂ. ಎಸ್. ನಂಬೂದಿರಿಪಾಡ್]] ನೇತೃತ್ವದ [[ಕಮ್ಯುನಿಸ್ಟ್]] ಸರ್ಕಾರವು ರೂಪುಗೊಂಡಿತು.<ref name="SinghKarafin2009"/> ಇದು 1945 ರಲ್ಲಿ [[ಸ್ಯಾನ್ ಮರಿನೋ ಗಣರಾಜ್ಯ]]ದಲ್ಲಿ ಕಮ್ಯುನಿಸ್ಟ್ ಚುನಾವಣಾ ಯಶಸ್ಸಿನ ನಂತರ ವಿಶ್ವದ ಆರಂಭಿಕ ಪ್ರಜಾಪ್ರಭುತ್ವವಾಗಿ ಚುನಾಯಿತ ಕಮ್ಯುನಿಸ್ಟ್ ಸರ್ಕಾರಗಳಲ್ಲಿ ಒಂದಾಗಿದೆ.<ref name=Hindu>{{cite news|title=50 years of development|url=http://www.thehindubusinessline.com/todays-paper/tp-others/tp-states/50-years-of-development/article1655056.ece?ref=archive|accessdate=30 August 2013|newspaper=The Hindu|date=12 April 2007|author=K.G. Kumar}}</ref><ref name="Desai2006">{{cite book|author=Manali Desai|title=State Formation and Radical Democracy in India|url=https://books.google.com/books?id=60m9znJQmmkC&pg=PA142|accessdate=31 August 2013|date=27 November 2006|publisher=Taylor & Francis|isbn=978-0-203-96774-4|page=142}}</ref><ref name="ChitkaraŚarmā1997">{{cite book|author1=Madan Gopal Chitkara|author2=Baṃśī Rāma Śarmā|title=Indian Republic: Issues and Perspective|url=https://books.google.com/books?id=7YrmNURVoroC&pg=PA134|accessdate=18 November 2012|date=1 January 1997|publisher=APH Publishing|isbn=978-81-7024-836-1|pages=134–}}</ref>
== ಭೌಗೋಳಿಕತೆ ==
{{Main|ಕೇರಳದ ಭೌಗೋಳಿಕತೆ}}
{{Multiple image
| direction = vertical
| width = 220
| image1 = AnaimudiPeak DSC 4834.jpg
| caption1 = [[ಅನಮುಡಿ]], [[ದಕ್ಷಿಣ ಭಾರತ]]ದ ಅತಿ ಎತ್ತರದ ಶಿಖರ.
| image2 = DR0071DSC 9245.jpg
| caption2 = [[ವಯನಾಡು|ವಯನಾಡಿನ]] ಬೆಟ್ಟ ಪ್ರದೇಶಗಳಲ್ಲಿ [[ಚಹಾ]] ಮತ್ತು [[ಕಾಫಿ]] ಉತ್ಪಾದಿಸಲಾಗುತ್ತದೆ.
| image3 = Kumarkom.jpg
| caption3 = [[ವೇಂಬನಾಡು]], [[ಕೇರಳ ಬ್ಯಾಕ್ವಾಟರ್ಗಳ]] ಒಂದು ಭಾಗ, ಭಾರತದ ಅತಿ ಉದ್ದದ ಸರೋವರ.
| image4 = Light house in Ponnani.jpg
| caption4 = [[ಪೊನ್ನಾನಿ]] ಲೈಟ್ ಹೌಸ್ ಬೀಚ್
}}
ರಾಜ್ಯವು [[ಲಕ್ಷದ್ವೀಪ ಸಮುದ್ರ]] ಮತ್ತು [[ಪಶ್ಚಿಮ ಘಟ್ಟಗಳ]] ನಡುವೆ ಸಿಕ್ಕಿಕೊಂಡಿದೆ.<ref>{{Cite web |year=1953 |title=Limits of Oceans and Seas, 3rd edition |url=https://iho.int/uploads/user/pubs/standards/s-23/S-23_Ed3_1953_EN.pdf |archive-url=https://web.archive.org/web/20181005131902/https://www.iho.int/iho_pubs/standard/S-23/S-23_Ed3_1953_EN.pdf |archive-date=5 October 2018 |access-date=28 December 2020 |publisher=International Hydrographic Organization}}</ref> ಉತ್ತರ ಅಕ್ಷಾಂಶ 8°18' ಮತ್ತು 12°48' ಮತ್ತು ಪೂರ್ವ ರೇಖಾಂಶ 74°52' ಮತ್ತು 77°22' ನಡುವೆ ಇದೆ,<ref>{{cite web |title=Physical and Anatomical Characteristic of Wood of Some Less-Known Tree Species of Kerala |url=https://docs.kfri.res.in/KFRI-RR/KFRI-RR096.pdf |work=Kerala Forest Research Institute |publisher=Government of Kerala |access-date=18 November 2012 |archive-date=9 July 2013 |archive-url=https://web.archive.org/web/20130709150101/http://docs.kfri.res.in/KFRI-RR/KFRI-RR096.pdf |url-status=live }}</ref> ಕೇರಳವು ಕೆಲವು ಚಂಡಮಾರುತಗಳೊಂದಿಗೆ ಆರ್ದ್ರ [[ಉಷ್ಣವಲಯದ ಮಳೆಕಾಡು ಹವಾಮಾನ]]ವನ್ನು ಹೊಂದಿದೆ. ರಾಜ್ಯವು {{cvt|590|km|mi}} ಕರಾವಳಿಯನ್ನು ಹೊಂದಿದೆ<ref>{{cite web |title=Marine Fisheries |url=https://www.fisheries.kerala.gov.in/index.php?option=com_content&view=article&id=76&Itemid=44 |website=fisheries.kerala.gov.in |publisher=Department of Fisheries, Government of Kerala |access-date=13 November 2015 |archive-date=17 November 2015 |archive-url=https://web.archive.org/web/20151117021802/http://www.fisheries.kerala.gov.in/index.php?option=com_content&view=article&id=76&Itemid=44 |url-status=live }}</ref> ಮತ್ತು ರಾಜ್ಯದ ಅಗಲವು {{convert|11|and|121|km|mi|0}} ನಡುವೆ ಬದಲಾಗುತ್ತದೆ.<ref name="Nair1994">{{cite book |author=V. Balakrishnan Nair |title=Social Development and Demographic Changes in South India: Focus on Kerala |url=https://books.google.com/books?id=sTS4OO9lcdgC&pg=PA15 |access-date=18 November 2012 |year=1994 |publisher=M.D. Publications Pvt. Ltd. |isbn=978-8185880501 |page=15}}</ref> ಭೌಗೋಳಿಕವಾಗಿ, ಕೇರಳವನ್ನು ಮೂರು ಹವಾಮಾನದ ಪ್ರತ್ಯೇಕ ಪ್ರದೇಶಗಳಾಗಿ ವಿಂಗಡಿಸಬಹುದು: ಪೂರ್ವ ಎತ್ತರದ ಪ್ರದೇಶಗಳು; ಒರಟು ಮತ್ತು ತಂಪಾದ ಪರ್ವತ ಪ್ರದೇಶ, ಮಧ್ಯ ಮಧ್ಯ-ನೆಲಗಳು; ರೋಲಿಂಗ್ ಬೆಟ್ಟಗಳು, ಮತ್ತು ಪಶ್ಚಿಮ ತಗ್ಗು ಪ್ರದೇಶಗಳು; ಕರಾವಳಿ ಬಯಲುಗಳು.<ref name="ChattopadhyayFranke2006">{{cite book |author1=Srikumar Chattopadhyay |author2=Richard W. Franke |title=Striving for Sustainability: Environmental Stress and Democratic Initiatives in Kerala |url=https://books.google.com/books?id=gOrvghLklKoC&pg=PA110 |access-date=19 March 2019 |year=2006 |publisher=Concept Publishing Company |isbn=978-8180692949}}</ref>{{rp|110}} [[ಪೂರ್ವ-ಕೇಂಬ್ರಿಯನ್]] ಮತ್ತು [[ಪ್ಲಿಸ್ಟೊಸೀನ್]] ಭೂವೈಜ್ಞಾನಿಕ ರಚನೆಗಳು ಕೇರಳದ ಭೂಪ್ರದೇಶದ ಬಹುಭಾಗವನ್ನು ರೂಪಿಸುತ್ತವೆ.<ref name="Geological Survey Water-supply Paper">{{cite book |title=Geological Survey Water-supply Paper |url=https://books.google.com/books?id=0qUYAQAAIAAJ&pg=SL4-PA6 |access-date=19 March 2019 |year=1961 |publisher=U.S. Government Printing Office |page=4}}</ref><ref name="SharmaKumari2008">{{cite book |author1=Pradeep Sharma |author2=Y. Dharnai Kumari |author3=Tirunagaram Lakshmamma |title=Status Of Women And Family Planning |url=https://books.google.com/books?id=2b6Ok2EcnBIC&pg=PA217 |access-date=18 November 2012 |year=2008 |publisher=Discovery Publishing House |isbn=978-8183563260 |page=217}}</ref> 1341 CE ಯಲ್ಲಿ ಕೇರಳದಲ್ಲಿ ವಿನಾಶಕಾರಿ ಪ್ರವಾಹವು ಅದರ ಭೂಪ್ರದೇಶವನ್ನು ಆಮೂಲಾಗ್ರವಾಗಿ ಬದಲಾಯಿಸಿತು ಮತ್ತು ಅದರ ಇತಿಹಾಸದ ಮೇಲೆ ಪರಿಣಾಮ ಬೀರಿತು; ಇದು ಮಸಾಲೆ ಸಾಗಣೆಗೆ ನೈಸರ್ಗಿಕ ಬಂದರನ್ನು ಸೃಷ್ಟಿಸಿತು.<ref name="LimitedKitchen2010">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA100 |access-date=18 November 2012 |year=2010 |publisher=Murdoch Books |isbn=978-1-74196-438-7 |page=100}}</ref>
ಕೇರಳದ ಪೂರ್ವ ಪ್ರದೇಶವು ಪಶ್ಚಿಮ ಘಟ್ಟಗಳ [[ಮಳೆ ನೆರಳು]] ಯ ಪಶ್ಚಿಮಕ್ಕೆ ತಕ್ಷಣವೇ ಎತ್ತರದ ಪರ್ವತಗಳು, ಕಮರಿಗಳು ಮತ್ತು ಆಳವಾದ ಕತ್ತರಿಸಿದ ಕಣಿವೆಗಳನ್ನು ಒಳಗೊಂಡಿದೆ.<ref name=ChattopadhyayFranke2006 />{{rp|110}} ಕೇರಳದ ಪಶ್ಚಿಮಕ್ಕೆ ಹರಿಯುವ 41 ನದಿಗಳು,<ref name="Sadasivan2003">{{cite book |author=S. N. Sadasivan |title=River Disputes in India: Kerala Rivers Under Siege |url=https://books.google.com/books?id=hhrRboi5kOcC&pg=PA223 |access-date=18 November 2012 |year=2003 |publisher=Mittal Publications |isbn=978-8170999133 |page=223}}</ref> ಮತ್ತು ಅದರ ಪೂರ್ವಕ್ಕೆ ಹರಿಯುವ 3 ನದಿಗಳು ಈ ಪ್ರದೇಶದಲ್ಲಿ ಹುಟ್ಟುತ್ತವೆ.<ref name="Darpan2006">{{cite book |author=Pratiyogita Darpan |title=Pratiyogita Darpan |url=https://books.google.com/books?id=QegDAAAAMBAJ&pg=PT72 |access-date=18 November 2012 |date=September 2006 |publisher=Pratiyogita Darpan |page=72}}</ref><ref name="India2008">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA11 |access-date=18 November 2012 |year=2008 |publisher=Sura Books |isbn=978-8174781642 |page=11}}</ref> ಪಶ್ಚಿಮ ಘಟ್ಟಗಳು [[ಪಾಲಕ್ಕಾಡ್]] ಬಳಿ ಮಾತ್ರ ಅಡ್ಡಿಪಡಿಸುವ ಪರ್ವತಗಳ ಗೋಡೆಯನ್ನು ರೂಪಿಸುತ್ತವೆ; ಆದ್ದರಿಂದ ಪಾಲ್''ಘಾಟ್'' ಎಂದೂ ಕರೆಯಲ್ಪಡುತ್ತದೆ, ಅಲ್ಲಿ [[ಪಾಲಕ್ಕಾಡ್ ಅಂತರ]]ವು ಮುರಿಯುತ್ತದೆ.<ref>{{cite web |last1=Chandran Nair |first1=Dr.S.Sathis |title=India – Silent Valley Rainforest Under Threat Once More |url=https://www.rainforestinfo.org.au/wrr2004/silentvalley.htm |website=rainforestinfo.org.au |access-date=12 November 2015 |archive-date=24 September 2015 |archive-url=https://web.archive.org/web/20150924084520/http://www.rainforestinfo.org.au/wrr2004/silentvalley.htm |url-status=live }}</ref> ಪಶ್ಚಿಮ ಘಟ್ಟಗಳು ಸರಾಸರಿ {{convert|1500|m|ft|lk=out|abbr=off}} [[ಸಮುದ್ರ ಮಟ್ಟ]]ದವರೆಗೆ ಏರುತ್ತವೆ,<ref name="Biju2006">{{cite book |author=M.R. Biju |title=Sustainable Dimensions Of Tourism Management |url=https://books.google.com/books?id=AkAdvTbg0dEC&pg=PA63 |access-date=18 November 2012 |year=2006 |publisher=Mittal Publications |isbn=978-8183241298 |page=63}}</ref> ಆದರೆ ಅತಿ ಎತ್ತರದ ಶಿಖರಗಳು ಸುಮಾರು {{convert|2500|m|ft|abbr=off}} ತಲುಪುತ್ತವೆ.<ref name="Hussain">{{cite book |author=Hussain |title=Geography Of India For Civil Ser Exam |url=https://books.google.com/books?id=wUzKCZxvNQoC&pg=SA2-PA9 |access-date=18 November 2012 |publisher=Tata McGraw-Hill Education |isbn=978-0-07-066772-3 |page=2}}</ref> [[ಇಡುಕ್ಕಿ]] ಜಿಲ್ಲೆಯ [[ಅನಮುಡಿ]] ದಕ್ಷಿಣ ಭಾರತದ ಅತಿ ಎತ್ತರದ ಶಿಖರವಾಗಿದ್ದು, {{cvt|2,695|m}} ಎತ್ತರದಲ್ಲಿದೆ.<ref name="gazetteer">{{cite book |last1=Frowde |first1=Henry |url=https://dsal.uchicago.edu/reference/gazetteer/ |title=Imperial Gazetteer of India |date=1908–1909 |publisher=Clarendon Press |edition=New |location=Oxford |access-date=2 December 2020 |archive-url=https://web.archive.org/web/20081216124143/http://dsal.uchicago.edu/reference/gazetteer/ |archive-date=16 December 2008 |url-status=live}}</ref> ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯು ವಿಶ್ವದ ಎಂಟು "ಅತ್ಯಂತ ಬಿಸಿಯಾದ ಜೈವಿಕ ವೈವಿಧ್ಯತೆಯ ಹಾಟ್ಸ್ಪಾಟ್ಗಳಲ್ಲಿ" ಒಂದಾಗಿ ಗುರುತಿಸಲ್ಪಟ್ಟಿದೆ ಮತ್ತು [[UNESCO]] [[ವಿಶ್ವ ಪರಂಪರೆಯ ತಾಣ]]ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.<ref name="UNESCO">{{cite news |url=https://timesofindia.indiatimes.com/home/environment/flora-fauna/UN-designates-Western-Ghats-as-world-heritage-site/articleshow/14595602.cms |archive-url=https://web.archive.org/web/20130131192257/https://articles.timesofindia.indiatimes.com/2012-07-02/flora-fauna/32507340_1_world-heritage-list-western-ghats-border-town |url-status=live |archive-date=31 January 2013 |title=UN designates Western Ghats as world heritage site |date=2 July 2012 |newspaper=[[The Times of India]] |access-date=27 November 2018}}</ref> ಈ ಶ್ರೇಣಿಯ ಕಾಡುಗಳು ಹಿಮಾಲಯ ಪರ್ವತಗಳಿಗಿಂತ ಹಳೆಯದು ಎಂದು ಪರಿಗಣಿಸಲಾಗಿದೆ.<ref name="UNESCO" /> ಪಶ್ಚಿಮ ಘಟ್ಟಗಳ ಹಿನ್ನೆಲೆಯಲ್ಲಿ ನೆಲೆಗೊಂಡಿರುವ [[ಅತಿರಪ್ಪಿಲ್ಲಿ ಜಲಪಾತ]]ವನ್ನು ''ಭಾರತದ [[ನಯಾಗರ ಜಲಪಾತ|ನಯಾಗರ]]'' ಎಂದೂ ಕರೆಯಲಾಗುತ್ತದೆ.<ref name="Athirappilly">{{cite news |url=https://articles.timesofindia.indiatimes.com/2013-05-30/travel/33064279_1_palm-trees-trek-coconut-trees |title=The Times of India: Latest News India, World & Business News, Cricket & Sports, Bollywood |access-date=2 July 2013 |archive-url=https://web.archive.org/web/20130621233624/https://articles.timesofindia.indiatimes.com/2013-05-30/travel/33064279_1_palm-trees-trek-coconut-trees |archive-date=21 June 2013 |work=[[The Times of India]] |url-status=dead}}</ref> ಇದು [[ಚಾಲಕ್ಕುಡಿ ನದಿ]]ಯಲ್ಲಿದೆ ಮತ್ತು ರಾಜ್ಯದ ಅತಿ ದೊಡ್ಡ ಜಲಪಾತವಾಗಿದೆ.<ref name="Athirappilly" /> [[ವಯನಾಡು]] ಕೇರಳದ ಏಕೈಕ [[ಪ್ರಸ್ಥಭೂಮಿ]]ಯಾಗಿದೆ.<ref>{{cite book |author=William Logan |year=1887 |title=Malabar Manual (Volume-II) |publisher=Madras Government Press |url=https://archive.org/details/malabar_manual_volume2/mode/2up}}</ref> [[ವಯನಾಡು ಜಿಲ್ಲೆ|ವಯನಾಡು]], [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ([[ನಿಲಂಬೂರು|ನಿಲಂಬೂರಿನ]] [[ಚಾಲಿಯಾರ್]] ಕಣಿವೆ), ಮತ್ತು [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] ([[ಅಟ್ಟಪ್ಪಾಡಿ]] ಕಣಿವೆ) ಜಿಲ್ಲೆಗಳಲ್ಲಿನ ಪೂರ್ವ ಪ್ರದೇಶಗಳು, ಒಟ್ಟಾಗಿ [[ನೀಲಗಿರಿ ಜೀವಗೋಳ ಮೀಸಲು]] ಮತ್ತು [[ಮೈಸೂರು ಪ್ರಸ್ಥಭೂಮಿ]]ಯ ಮುಂದುವರಿಕೆಯ ಭಾಗಗಳಾಗಿವೆ, ಇವು ನೈಸರ್ಗಿಕ [[ಚಿನ್ನ]]ದ ಹೊಲಗಳಿಗೆ ಹೆಸರುವಾಸಿಯಾಗಿದೆ, ಜೊತೆಗೆ [[ಕರ್ನಾಟಕ]]ದ ಪಕ್ಕದ ಜಿಲ್ಲೆಗಳು.<ref>{{Cite web |url=https://dmg.kerala.gov.in/mineral-resources/ |title=Mineral Resources |website=Department of Mining and Geology – Government of Kerala |access-date=4 April 2022 |archive-date=13 May 2022 |archive-url=https://web.archive.org/web/20220513124121/https://dmg.kerala.gov.in/mineral-resources/ |url-status=live }}</ref> [[ಇಲ್ಮೆನೈಟ್]], [[ಮೊನಾಜೈಟ್]], [[ಥೋರಿಯಮ್]], ಮತ್ತು [[ಟೈಟಾನಿಯಮ್]] ಸೇರಿದಂತೆ ಖನಿಜಗಳು ಕೇರಳದ ಕರಾವಳಿ ಪಟ್ಟಿಯಲ್ಲಿ ಕಂಡುಬರುತ್ತವೆ.{{sfn|Chandran|2018|p=343}} ಕೇರಳದ [[ಕರುನಾಗಪ್ಪಳ್ಳಿ]] ಕರಾವಳಿ ಪಟ್ಟಿಯು [[ಥೋರಿಯಮ್]]-ಹೊಂದಿರುವ [[ಮೊನಾಜೈಟ್]] ಮರಳಿನಿಂದ ಹೆಚ್ಚಿನ ಹಿನ್ನೆಲೆ ವಿಕಿರಣಕ್ಕೆ ಹೆಸರುವಾಸಿಯಾಗಿದೆ. ಕೆಲವು ಕರಾವಳಿ ಪಂಚಾಯತ್ಗಳಲ್ಲಿ, ಸರಾಸರಿ ಹೊರಾಂಗಣ ವಿಕಿರಣ ಮಟ್ಟಗಳು 4 [[ಗ್ರೇ (ಘಟಕ)#ದೇಹದ ಮೇಲಿನ ಪರಿಣಾಮ|mGy/yr]] ಗಿಂತ ಹೆಚ್ಚು ಮತ್ತು ಕರಾವಳಿಯ ಕೆಲವು ಸ್ಥಳಗಳಲ್ಲಿ, ಇದು 70 mGy/yr ನಷ್ಟು ಹೆಚ್ಚಾಗಿದೆ.<ref>{{Cite news |vauthors=Nair RR, Rajan B, Akiba S, Jayalekshmi P, Nair MK, Gangadharan P, Koga T, Morishima H, Nakamura S, Sugahara T |title=Background radiation and cancer incidence in Kerala, India-Karanagappally cohort study. |publisher=Health Physics |date=January 2009 |pmid=19066487}}</ref>
ಕೇರಳದ ಪಶ್ಚಿಮ ಕರಾವಳಿ ಪಟ್ಟಿಯು ಪೂರ್ವ ಪ್ರದೇಶಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಸಮತಟ್ಟಾಗಿದೆ,<ref name="ChattopadhyayFranke2006" />{{rp|33}} ಮತ್ತು ಅಂತರ್ಸಂಪರ್ಕಿತ [[ಉಪ್ಪುನೀರಿನ]] ಕಾಲುವೆಗಳು, ಸರೋವರಗಳು, [[ಅಳಿವೆ]]ಗಳು,<ref name="Moss2010">{{cite book |author=Danny Moss |title=Public Relations Cases: International Perspectives |url=https://books.google.com/books?id=s0-CJ3djEdEC&pg=PA41 |access-date=18 November 2012 |year=2010 |publisher=Taylor & Francis |isbn=978-0-415-77336-2 |page=41}}</ref> ಮತ್ತು [[ಕೇರಳ ಬ್ಯಾಕ್ವಾಟರ್ಗಳು]] ಎಂದು ಕರೆಯಲ್ಪಡುವ ನದಿಗಳ ಜಾಲದಿಂದ ಕೂಡಿದೆ.<ref name="Thorpe2012">{{cite book |author=Edgar Thorpe |title=The Pearson CSAT Manual 2012 |url=https://books.google.com/books?id=1cruroSVFoUC&pg=RA3-PA38 |access-date=18 November 2012 |year=2012 |publisher=Pearson Education India |isbn=978-8131767344 |page=3}}</ref> ''ಕೇರಳದ ಅಕ್ಕಿಯ ಬಟ್ಟಲು'' ಎಂದೂ ಕರೆಯಲ್ಪಡುವ [[ಕುಟ್ಟನಾಡು]] ಭಾರತದಲ್ಲಿ [[ಭಾರತದ ತೀವ್ರ ಬಿಂದುಗಳ ಪಟ್ಟಿ#ಎತ್ತರಗಳು|ಅತ್ಯಂತ ಕಡಿಮೆ ಎತ್ತರವನ್ನು]] ಹೊಂದಿದೆ, ಮತ್ತು ಇದು ಸಮುದ್ರ ಮಟ್ಟಕ್ಕಿಂತ ಕೆಳಗೆ ಬೇಸಾಯ ನಡೆಯುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿದೆ.<ref>{{Cite news |title=Kerala Boat Ferries Lone Passenger To Help Her Take Exam |url=https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |last=Press Trust of India |date=1 June 2020 |access-date=17 November 2020 |work=NDTV |archive-date=16 November 2021 |archive-url=https://web.archive.org/web/20211116093316/https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |url-status=live }}</ref><ref>{{Cite web |url=https://www.hindu.com/mag/2003/07/13/stories/2003071300600200.htm |title=Thirst below sea level |last=Suchitra |first=M |date=13 August 2003 |work=[[The Hindu]] |access-date=17 November 2020 |archive-url=https://web.archive.org/web/20190922101804/https://www.thehindu.com/todays-paper/tp-features/tp-sundaymagazine/thirst-below-sea-level/article28523147.ece |archive-date=22 September 2019}}</ref> ದೇಶದ ಅತಿ ಉದ್ದದ ಸರೋವರ [[ವೇಂಬನಾಡು ಸರೋವರ|ವೇಂಬನಾಡು]] ಬ್ಯಾಕ್ವಾಟರ್ಗಳಲ್ಲಿ ಪ್ರಾಬಲ್ಯ ಹೊಂದಿದೆ; ಇದು [[ಆಲಪ್ಪುಳ]] ಮತ್ತು [[ಕೊಚ್ಚಿ]] ನಡುವೆ ಇದೆ ಮತ್ತು ಸುಮಾರು {{cvt|200|km2|sqmi}} ಪ್ರದೇಶದಲ್ಲಿದೆ.<ref name="Husain">{{cite book |author=Majid Husain |title=Understanding: Geographical: Map Entries: for Civil Services Examinations: Second Edition |url=https://books.google.com/books?id=_9VGKfQ-sQsC&pg=RA9-PT18 |access-date=18 November 2012 |publisher=Tata McGraw-Hill Education |isbn=978-0-07-070288-2 |page=9 |year=2011}}</ref> ಭಾರತದ ಸುಮಾರು ಎಂಟು ಪ್ರತಿಶತದಷ್ಟು ಜಲಮಾರ್ಗಗಳು ಕೇರಳದಲ್ಲಿ ಕಂಡುಬರುತ್ತವೆ.<ref name="IWAI_2005">{{Cite journal |author=Inland Waterways Authority of India (IWAI—Ministry of Shipping) |year=2005 |title=Introduction to Inland Water Transport |journal=IWAI (Ministry of Shipping) |url=https://iwai.nic.in/Introduction.html |archive-url=https://archive.today/20050204175110/http://iwai.nic.in/Introduction.html |url-status=dead |archive-date=4 February 2005 |access-date=19 January 2006}}</ref> ಕೇರಳದ [[ಕೇರಳದ ನದಿಗಳ ಪಟ್ಟಿ|44 ನದಿಗಳು]] [[ಪೆರಿಯಾರ್ ನದಿ|ಪೆರಿಯಾರ್]]; {{convert|244|km|mi|0}}, [[ಭಾರತಪುಳ]]; {{convert|209|km|mi|0}}, [[ಪಂಬಾ ನದಿ|ಪಂಬಾ]]; {{convert|176|km|mi|0}}, [[ಚಾಲಿಯಾರ್ ನದಿ|ಚಾಲಿಯಾರ್]]; {{convert|169|km|mi|0}}, [[ಕಡಲುಂಡಿಪುಳ ನದಿ|ಕಡಲುಂಡಿಪುಳ]]; {{convert|130|km|mi|0}}, [[ಚಾಲಕ್ಕುಡಿ ನದಿ|ಚಾಲಕ್ಕುಡಿಪುಳ]]; {{convert|130|km|mi|0}}, [[ವಲಪಟ್ಟಣಂ ನದಿ|ವಲಪಟ್ಟಣಂ]]; {{convert|129|km|mi|0}} ಮತ್ತು [[ಅಚನ್ಕೋವಿಲ್ ನದಿ]]; {{convert|128|km|mi|0}}. ನದಿಗಳ ಸರಾಸರಿ ಉದ್ದ {{convert|64|km|mi|0}}. ಅನೇಕ ನದಿಗಳು ಚಿಕ್ಕದಾಗಿರುತ್ತವೆ ಮತ್ತು ಸಂಪೂರ್ಣವಾಗಿ ಮಳೆಗಾಲದ ಮಳೆಯಿಂದ ಪೋಷಿಸಲ್ಪಡುತ್ತವೆ.<ref name=riverreport>{{cite book |last=India. |first=Planning Commission |title=Kerala Development Report |year=2008 |publisher=Academic Foundation |isbn=978-8171885947 |page=224 |url=https://books.google.com/books?isbn=8171885942}}</ref> ಕೇರಳದ ನದಿಗಳು ಚಿಕ್ಕದಾಗಿರುವುದರಿಂದ ಮತ್ತು [[ನದೀಮುಖಜ ಭೂಮಿ|ಮುಖಜ ಭೂಮಿಯ]] ಕೊರತೆಯಿಂದಾಗಿ, ಅವು ಪರಿಸರ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತವೆ. ನದಿಗಳು ಮರಳು ಗಣಿಗಾರಿಕೆ ಮತ್ತು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತವೆ.<ref name="Padmalal">{{cite journal | url=https://doi.org/10.1007/s00254-007-0870-z | doi=10.1007/s00254-007-0870-z | title=Environmental effects of river sand mining: A case from the river catchments of Vembanad lake, Southwest coast of India | year=2008 | last1=Padmalal | first1=D. | last2=Maya | first2=K. | last3=Sreebha | first3=S. | last4=Sreeja | first4=R. | journal=Environmental Geology | volume=54 | issue=4 | pages=879–889 | bibcode=2008EnGeo..54..879P | s2cid=129312081 | access-date=12 February 2020 | archive-date=25 November 2023 | archive-url=https://web.archive.org/web/20231125191757/https://link.springer.com/article/10.1007/s00254-007-0870-z | url-status=live | issn = 0943-0105 | url-access=subscription }}</ref> ರಾಜ್ಯವು ಭೂಕುಸಿತ, ಪ್ರವಾಹ ಮತ್ತು ಬರಗಾಲದಂತಹ ಹಲವಾರು ನೈಸರ್ಗಿಕ ಅಪಾಯಗಳನ್ನು ಅನುಭವಿಸುತ್ತದೆ. 2004 ರ [[2004 ರ ಹಿಂದೂ ಮಹಾಸಾಗರದ ಭೂಕಂಪ ಮತ್ತು ಸುನಾಮಿ|ಹಿಂದೂ ಮಹಾಸಾಗರದ ಸುನಾಮಿ]] ಯಿಂದ ರಾಜ್ಯವು ಸಹ ಪರಿಣಾಮ ಬೀರಿತು,<ref name="Jha2010">{{cite book |author=M.K. Jha |title=Natural and Anthropogenic Disasters: Vulnerability, Preparedness and Mitigation |url=https://books.google.com/books?id=fICXQSPJwx8C&pg=PA81 |access-date=18 November 2012 |year=2010 |publisher=Springer |isbn=978-9048124978 |page=81}}</ref> ಮತ್ತು 2018 ರಲ್ಲಿ ಸುಮಾರು ಒಂದು ಶತಮಾನದಲ್ಲಿ [[2018 ಕೇರಳ ಪ್ರವಾಹ|ಕೆಟ್ಟ ಪ್ರವಾಹವನ್ನು]] ಅನುಭವಿಸಿತು.<ref>{{Cite news |url=https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |title=Worst floods in nearly a century kill 44 in India's Kerala state amid torrential monsoon rains |last=Baynes |first=Chris |date=15 August 2018 |work=The Independent |access-date=16 August 2018 |archive-date=23 May 2019 |archive-url=https://web.archive.org/web/20190523232643/https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |url-status=live }}</ref> 2024 ರಲ್ಲಿ, ಕೇರಳವು ತನ್ನ ಇತಿಹಾಸದಲ್ಲಿ [[2024 ವಯನಾಡು ಭೂಕುಸಿತ|ಕೆಟ್ಟ ಭೂಕುಸಿತಗಳನ್ನು]] ಅನುಭವಿಸಿತು.<ref>{{Cite news |url=https://www.onmanorama.com/news/kerala/2024/07/30/wayand-landslide-kerala-rain-live.html |title=Wayanad landslides: 133 dead, 481 saved, at least 98 missing |date=30 July 2024 |work=[[Onmanorama]] |access-date=31 July 2024 |archive-date=30 July 2024|archive-url=https://web.archive.org/web/20240730073647/https://www.onmanorama.com/news/kerala/2024/07/30/wayand-landslide-kerala-rain-live.html |url-status=live }}</ref>
=== ಹವಾಮಾನ ===
ವರ್ಷಕ್ಕೆ ಸುಮಾರು 120–140 ಮಳೆಯ ದಿನಗಳೊಂದಿಗೆ,<ref name="Chacko_2002">{{Cite journal |last1=Chacko |first1=T. |last2=Renuka |first2=G. |year=2002 |title=Temperature mapping, thermal diffusivity and subsoil heat flux at Kariavattom, Kerala |journal=Proc Indian Acad Sci (Earth Planet Sci) |volume=111 |issue=1 |pages=79 |title-link=Kariavattom |bibcode=2002InEPS.111...79T |doi=10.1007/BF02702224 |doi-access=free}}</ref>{{rp|80}} ಕೇರಳವು [[ನೈಋತ್ಯ ಮಾನ್ಸೂನ್|ನೈಋತ್ಯ ಬೇಸಿಗೆ ಮಾನ್ಸೂನ್]] ಮತ್ತು [[ಈಶಾನ್ಯ ಮಾನ್ಸೂನ್|ಈಶಾನ್ಯ ಚಳಿಗಾಲದ ಮಾನ್ಸೂನ್]] ನ ಕಾಲಿಕ ಭಾರೀ ಮಳೆಯಿಂದ ಪ್ರಭಾವಿತವಾದ ಆರ್ದ್ರ ಮತ್ತು ಸಮುದ್ರಯಾನ ಉಷ್ಣವಲಯದ ಹವಾಮಾನವನ್ನು ಹೊಂದಿದೆ.<ref name="Devrep">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=223 |access-date=30 May 2015}}</ref> ಸುಮಾರು 65% ಮಳೆಯು ಜೂನ್ ನಿಂದ ಆಗಸ್ಟ್ ವರೆಗೆ ನೈಋತ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ, ಮತ್ತು ಉಳಿದವು ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಈಶಾನ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ.<ref name="Devrep" /> ನೈಋತ್ಯ ಮಾನ್ಸೂನ್ನ ತೇವಾಂಶ-ಹೊತ್ತ ಗಾಳಿಗಳು, [[ಭಾರತೀಯ ಪರ್ಯಾಯ ದ್ವೀಪ]]ದ ಅತ್ಯಂತ ದಕ್ಷಿಣದ ಬಿಂದುವನ್ನು ತಲುಪಿದಾಗ, ಅದರ ಸ್ಥಳಾಕೃತಿಯ ಕಾರಣದಿಂದಾಗಿ, ಎರಡು ಶಾಖೆಗಳಾಗಿ ವಿಭಜನೆಯಾಗುತ್ತವೆ; "ಅರೇಬಿಯನ್ ಸಮುದ್ರ ಶಾಖೆ" ಮತ್ತು "ಬಂಗಾಳ ಕೊಲ್ಲಿಯ ಶಾಖೆ".<ref name="Jain">{{cite book |author=RK Jain |title=Geography 10 |url=https://books.google.com/books?id=7hOybWJeZN0C&pg=PA110 |access-date=18 November 2012 |publisher=Ratna Sagar |isbn=978-8183320818 |page=110}}</ref> ನೈಋತ್ಯ ಮಾನ್ಸೂನ್ನ "ಅರೇಬಿಯನ್ ಸಮುದ್ರ ಶಾಖೆ" ಮೊದಲು ಪಶ್ಚಿಮ ಘಟ್ಟಗಳಿಗೆ ಬಡಿಯುತ್ತದೆ,<ref name="Together with Social Science Term II">{{cite book |title=Together with Social Science Term II |url=https://books.google.com/books?id=oOA1nsSU8JYC&pg=PA112 |access-date=18 November 2012 |publisher=Rachna Sagar |isbn=978-8181373991 |page=112}}</ref> ನೈಋತ್ಯ ಮಾನ್ಸೂನ್ನಿಂದ ಮಳೆಯನ್ನು ಪಡೆಯುವ ಭಾರತದ ಮೊದಲ ರಾಜ್ಯವಾಗಿ ಕೇರಳವನ್ನು ಮಾಡುತ್ತದೆ.<ref name="google6">{{cite book |author1=Edgar Thorpe, Showick Thorpe |author2=Thorpe Edgar |title=The Pearson CSAT Manual 2011 |url=https://books.google.com/books?id=WuBFs6yFRwcC&pg=SL7-PA168 |access-date=18 November 2012 |publisher=Pearson Education India |isbn=978-8131758304 |page=7}}</ref><ref name="Aggarwal">{{cite book |author1=N.N. Kher |author2=Jaideep Aggarwal |title=A Text Book of Social Sciences |url=https://books.google.com/books?id=jV6k0FvIC4sC&pg=RA5-PA16 |access-date=18 November 2012 |publisher=Pitambar Publishing |isbn=978-8120914667 |page=5}}</ref> ಈಶಾನ್ಯ ಮಾನ್ಸೂನ್ನಲ್ಲಿ ಒತ್ತಡದ ಮಾದರಿಗಳ ವಿತರಣೆಯು ಹಿಮ್ಮುಖವಾಗುತ್ತದೆ, ಈ ಋತುವಿನಲ್ಲಿ ಉತ್ತರ ಭಾರತದಿಂದ ತಣ್ಣನೆಯ ಗಾಳಿಗಳು ಬಂಗಾಳ ಕೊಲ್ಲಿಯಿಂದ ತೇವಾಂಶವನ್ನು ಪಡೆದುಕೊಳ್ಳುತ್ತವೆ ಮತ್ತು ಪರ್ಯಾಯ ದ್ವೀಪ ಭಾರತದ ಪೂರ್ವ ಕರಾವಳಿಯಲ್ಲಿ ಅದನ್ನು ಮಳೆಯಾಗಿ ಸುರಿಸುತ್ತವೆ.<ref name="google7">{{cite book |author1=Sarina Singh |author2=Amy Karafin |author3=Anirban Mahapatra |title=South India |url=https://books.google.com/books?id=8KnLFpjEHpUC&pg=PA15 |access-date=18 November 2012 |year=2009 |publisher=Lonely Planet |isbn=978-1-74179-155-6 |page=15}}</ref><ref name="Reddy">{{cite book |author=S.V. Jeevananda Reddy |title=Climate Change: Myths and Realities |url=https://books.google.com/books?id=y_GMTXRtxJ8C&pg=PA71 |access-date=18 November 2012 |publisher=Jeevananda Reddy |page=71 |id=GGKEY:WDFHBL1XHK3}}</ref> ಕೇರಳದಲ್ಲಿ, ಈಶಾನ್ಯ ಮಾನ್ಸೂನ್ನ ಪ್ರಭಾವವು ದಕ್ಷಿಣ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುತ್ತದೆ.<ref>{{Cite book |author=Rao |title=Agricultural Meteorology |url=https://books.google.com/books?id=Kd-3lt-yAtAC&pg=PA173 |publisher=PHI Learning |year=2008 |isbn=978-8120333383 |pages=173–74 |access-date=30 May 2015}}</ref> ಕೇರಳದ ಮಳೆಯು ವಾರ್ಷಿಕವಾಗಿ ಸರಾಸರಿ 2,923 mm (115 in) ಆಗಿದೆ.<ref name="IMD">{{cite web |url=https://www.imd.gov.in/section/hydro/dynamic/rfmaps/updated.html |title=Hydromet Division Updated/Real Time Maps |publisher=[[India Meteorological Department]] |access-date=21 October 2014 |archive-url=https://web.archive.org/web/20160305062728/https://www.imd.gov.in/section/hydro/dynamic/rfmaps/updated.html |archive-date=5 March 2016 |url-status=dead}}</ref> ಕೇರಳದ ಕೆಲವು ಶುಷ್ಕ ತಗ್ಗು ಪ್ರದೇಶಗಳು ಸರಾಸರಿ ಕೇವಲ 1,250 mm (49 in) ಪಡೆಯುತ್ತವೆ; ಪೂರ್ವ [[ಇಡುಕ್ಕಿ ಜಿಲ್ಲೆ]]ಯ ಪರ್ವತಗಳು 5,000 mm (197 in) ಗಿಂತ ಹೆಚ್ಚು [[ಮಳೆ (ಹವಾಮಾನಶಾಸ್ತ್ರ)#ಶಿಲಾವೃಷ್ಟಿ ಮಳೆ|ಶಿಲಾವೃಷ್ಟಿ ಮಳೆಯನ್ನು]] ಪಡೆಯುತ್ತವೆ: ರಾಜ್ಯದಲ್ಲಿ ಅತಿ ಹೆಚ್ಚು. ಪೂರ್ವ ಕೇರಳದಲ್ಲಿ, ಶುಷ್ಕ ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಹವಾಮಾನವು ಪ್ರಚಲಿತವಾಗಿದೆ. ಬೇಸಿಗೆಯಲ್ಲಿ, ರಾಜ್ಯವು ಭಾರಿ ಗಾಳಿ, ಸುಂಟರಗಾಳಿ, ಚಂಡಮಾರುತ-ಸಂಬಂಧಿತ ಧಾರಾಕಾರ ಮಳೆ, ಸಾಂದರ್ಭಿಕ ಬರಗಾಲ ಮತ್ತು ಸಮುದ್ರ ಮಟ್ಟದ ಏರಿಕೆಗೆ ಒಳಗಾಗುತ್ತದೆ.<ref name="Brenkert_Malone_2003">{{Cite journal |last1=Brenkert |first1=A. |last2=Malone |first2=E. |year=2003 |title=Vulnerability and resilience of India and Indian states to climate change: a first-order approximation |journal=Joint Global Change Research Institute}}</ref>{{rp|26, 46, 52}} ಸರಾಸರಿ ದೈನಂದಿನ ತಾಪಮಾನವು 19.8 °C ನಿಂದ 36.7 °C ವರೆಗೆ ಇರುತ್ತದೆ.<ref name="moef">{{cite web |last=Sudha |first=T. M. |title=Opportunities in participatory planning to Evolve a Landuse Policy for Western Ghats Region in Kerala |url=https://moef.nic.in/downloads/public-information/tenth/Annexure%203.pdf |publisher=Department of Town and Country Planning, Kerala |page=14 |access-date=18 January 2015 |archive-url=https://web.archive.org/web/20160325095604/https://www.moef.nic.in/downloads/public-information/tenth/Annexure%203.pdf |archive-date=25 March 2016 |url-status=dead}}</ref> ವಾರ್ಷಿಕ ಸರಾಸರಿ ತಾಪಮಾನವು ಕರಾವಳಿ ತಗ್ಗು ಪ್ರದೇಶಗಳಲ್ಲಿ 25.0 ರಿಂದ 27.5 °C ವರೆಗೆ ಮತ್ತು ಪೂರ್ವ ಎತ್ತರದ ಪ್ರದೇಶಗಳಲ್ಲಿ 20.0–22.5 °C ವರೆಗೆ ಇರುತ್ತದೆ.<ref name="Brenkert_Malone_2003" />{{rp|65}}
=== ಸಸ್ಯ ಮತ್ತು ಪ್ರಾಣಿ ===
{{Main|ಕೇರಳದ ಸಸ್ಯ ಮತ್ತು ಪ್ರಾಣಿ}}
{{Multiple image
| direction = vertical
| width = 220
| image1 = Ichthyaetus ichthyaetus Kadalundi.jpg
| caption1 = [[ಕಡಲುಂಡಿ ಪಕ್ಷಿ ಅಭಯಾರಣ್ಯ|ಕಡಲುಂಡಿ ಪಕ್ಷಿ ಅಭಯಾರಣ್ಯದಲ್ಲಿ]] ಒಂದು ವಲಸೆ ''[[ಇಚ್ಥ್ಯಾಏಟಸ್]]''
| image2 = Highland Grassland Shola of Silent Valley National Park.jpg
| caption2 = [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]]
| image3 = Munnarhills.jpg
| caption3 = [[ಏಲಕ್ಕಿ ಬೆಟ್ಟಗಳು]] ತಮ್ಮ [[ಜೈವಿಕ ವೈವಿಧ್ಯತೆ]]ಗೆ ಹೆಸರುವಾಸಿಯಾಗಿದೆ
}}
ಹೆಚ್ಚಿನ [[ಜೈವಿಕ ವೈವಿಧ್ಯತೆ]]ಯು [[ಪಶ್ಚಿಮ ಘಟ್ಟಗಳಲ್ಲಿ]] ಕೇಂದ್ರೀಕೃತವಾಗಿದೆ ಮತ್ತು ರಕ್ಷಿಸಲ್ಪಟ್ಟಿದೆ. 18 ನೇ ಶತಮಾನದವರೆಗೆ ಕೇರಳದ ಮೂರು-ನಾಲ್ಕು ಭಾಗದಷ್ಟು ಭೂ ಪ್ರದೇಶವು ದಟ್ಟವಾದ ಅರಣ್ಯದ ಅಡಿಯಲ್ಲಿತ್ತು.<ref name="History">{{cite web |url=https://www.forest.kerala.gov.in/index.php?option=com_content&view=article&id=46&Itemid=2 |title=History |access-date=12 August 2015 |publisher=Kerala forests and wildlife department |archive-date=12 September 2015 |archive-url=https://web.archive.org/web/20150912231001/http://www.forest.kerala.gov.in/index.php?option=com_content&view=article&id=46&Itemid=2 |url-status=dead }}</ref> 2004 ರಂತೆ, ಭಾರತದ 15,000 ಸಸ್ಯ ಪ್ರಭೇದಗಳಲ್ಲಿ 25% ಕ್ಕಿಂತ ಹೆಚ್ಚು ಕೇರಳದಲ್ಲಿವೆ. 4,000 [[ಹೂಬಿಡುವ ಸಸ್ಯ]] ಪ್ರಭೇದಗಳಲ್ಲಿ; ಅವುಗಳಲ್ಲಿ 1,272 [[ಸ್ಥಳೀಯ (ಪರಿಸರ ವಿಜ್ಞಾನ)|ಕೇರಳಕ್ಕೆ ಸ್ಥಳೀಯವಾಗಿವೆ]], 900 [[ಸಸ್ಯವೈದ್ಯ|ಔಷಧೀಯವಾಗಿವೆ]], ಮತ್ತು 159 [[ಅಳಿವಿನಂಚಿನಲ್ಲಿರುವ ಪ್ರಭೇದಗಳು|ಬೆದರಿಕೆಗೆ ಒಳಗಾಗಿವೆ]].<ref name="Sreedharan_2004">{{Cite journal |author=Sreedharan TP |year=2004 |title=Biological Diversity of Kerala: A survey of Kalliasseri panchayat, Kannur district |journal=Centre for Development Studies |url=https://krpcds.org/publication/downloads/62.pdf |archive-url=https://web.archive.org/web/20090326054155/https://krpcds.org/publication/downloads/62.pdf |archive-date=26 March 2009 |access-date=28 December 2008}}</ref>{{rp|11}} ಇದರ {{cvt|9,400|km2}} ಕಾಡುಗಳು ಉಷ್ಣವಲಯದ ಆರ್ದ್ರ ನಿತ್ಯಹಸಿರು ಮತ್ತು ಅರೆ-ನಿತ್ಯಹಸಿರು ಕಾಡುಗಳು (ಕೆಳ ಮತ್ತು ಮಧ್ಯಮ ಎತ್ತರಗಳು—3,470 km<sup>2</sup>), ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಪತನಶೀಲ ಕಾಡುಗಳು (ಮಧ್ಯಮ ಎತ್ತರಗಳು—4,100 km<sup>2</sup> ಮತ್ತು {{cvt|100|km2}}, ಕ್ರಮವಾಗಿ), ಮತ್ತು ಪರ್ವತ ಉಪೋಷ್ಣವಲಯ ಮತ್ತು [[ಸಮಶೀತೋಷ್ಣ]] (''ಶೋಲ'') ಕಾಡುಗಳು (ಅತಿ ಎತ್ತರದ ಎತ್ತರಗಳು—100 km<sup>2</sup>) ಒಳಗೊಂಡಿವೆ. ಒಟ್ಟಾರೆಯಾಗಿ, ಕೇರಳದ 24% ಅರಣ್ಯವಾಗಿದೆ.<ref name="Sreedharan_2004" />{{rp|12}} ವಿಶ್ವದ [[ರಾಮ್ಸರ್ ಒಪ್ಪಂದ]]ದಲ್ಲಿ ಪಟ್ಟಿ ಮಾಡಲಾದ ನಾಲ್ಕು [[ಜವುಗು ಪ್ರದೇಶ]]ಗಳು—[[ಶಾಸ್ತಾಂಕೋಟ್ಟ ಸರೋವರ|ಸರೋವರ ಶಾಸ್ತಾಂಕೋಟ್ಟ]], [[ಅಷ್ಟಮುಡಿ ಸರೋವರ]], [[ತೃಶೂರ್-ಪೊನ್ನಾನಿ ಕೋಲ್ ಜವುಗು ಪ್ರದೇಶಗಳು]], ಮತ್ತು ವೇಂಬನಾಡು-ಕೋಲ್ ಜವುಗು ಪ್ರದೇಶಗಳು—ಕೇರಳದಲ್ಲಿವೆ,{{sfn|Chandran|2018|p=342}} ಜೊತೆಗೆ ವಿಶಾಲವಾದ [[ನೀಲಗಿರಿ ಜೀವಗೋಳ ಮೀಸಲು]]ಯ {{cvt|1455.4|km2}} ಮತ್ತು [[ಅಗಸ್ತ್ಯಮಲೈ ಜೀವಗೋಳ ಮೀಸಲು]]ಯ {{cvt|1828|km2}} ಸೇರಿವೆ.{{sfn|Chandran|2018|p=347}} 20 ನೇ ಶತಮಾನದಲ್ಲಿ ಬೇಸಾಯಕ್ಕಾಗಿ ವ್ಯಾಪಕವಾಗಿ ತೆರವುಗೊಳಿಸಲ್ಪಟ್ಟಿದ್ದು,<ref name="Jayarajan_2004">{{Cite journal |author=Jayarajan M |year=2004 |title=Sacred Groves of North Malabar |journal=Centre for Development Studies |url=https://krpcds.org/publication/downloads/92.pdf |archive-url=https://web.archive.org/web/20090326054142/https://krpcds.org/publication/downloads/92.pdf |archive-date=26 March 2009 |access-date=28 December 2008}}</ref>{{rp|6–7}} ಉಳಿದ ಅರಣ್ಯ ಹೊದಿಕೆಯ ಹೆಚ್ಚಿನ ಭಾಗವನ್ನು ಈಗ [[ಸ್ಪಷ್ಟ ಕಡಿತ]]ದಿಂದ ರಕ್ಷಿಸಲಾಗಿದೆ.<ref name="Evans2008">{{cite book |author=Julian Evans |title=The Forests Handbook, Applying Forest Science for Sustainable Management |url=https://books.google.com/books?id=Ol_CCkYQNKIC&pg=PA235 |access-date=18 November 2012 |year=2008 |publisher=John Wiley & Sons |isbn=978-0-470-75683-6 |page=235}}</ref> ಪೂರ್ವ ಕೇರಳದ ಗಾಳಿಗೆ ಮುಖವಾದ ಪರ್ವತಗಳು [[ಉಷ್ಣವಲಯ ಮತ್ತು ಉಪೋಷ್ಣವಲಯದ ಆರ್ದ್ರ ಪರ್ಣಪಾತಿ ಕಾಡುಗಳು|ಉಷ್ಣವಲಯದ ಆರ್ದ್ರ ಕಾಡುಗಳನ್ನು]] ಮತ್ತು [[ಉಷ್ಣವಲಯ ಮತ್ತು ಉಪೋಷ್ಣವಲಯದ ಶುಷ್ಕ ಪರ್ಣಪಾತಿ ಕಾಡುಗಳು|ಉಷ್ಣವಲಯದ ಶುಷ್ಕ ಕಾಡುಗಳನ್ನು]] ಆಶ್ರಯಿಸುತ್ತವೆ, ಇವು ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿವೆ.<ref name="google8">{{cite book |author1=R. P. Singh |author2=Zubairul Islam |title=Environmental Studies |url=https://books.google.com/books?id=gaQptMlw3X8C&pg=PA172 |access-date=18 November 2012 |publisher=Concept Publishing Company |isbn=978-8180697746 |page=172 |year=2012 |archive-date=25 November 2023 |archive-url=https://web.archive.org/web/20231125191749/https://books.google.com/books?id=gaQptMlw3X8C&pg=PA172#v=onepage&q&f=false |url-status=live }}</ref><ref name="Geer2008">{{cite book |author=Alexandra Anna Enrica van der Geer |title=Animals in Stone: Indian Mammals Sculptured Through Time |url=https://books.google.com/books?id=oQ3quxh9gsgC&pg=PA7 |access-date=18 November 2012 |year=2008 |publisher=Brill |isbn=978-9004168190 |page=7}}</ref> ವಿಶ್ವದ ಅತ್ಯಂತ ಹಳೆಯ ತೇಗದ ತೋಟ 'ಕೊನೊಲ್ಲಿಸ್ ಪ್ಲಾಟ್' [[ನಿಲಂಬೂರು|ನಿಲಂಬೂರಿನಲ್ಲಿದೆ]].<ref>{{Cite web |url=https://www.dnaindia.com/india/report-world-s-oldest-teak-trees-dying-in-kerala-1255723 |title=World's oldest teak trees dying in Kerala |date=13 May 2009 |website=DNA India |access-date=25 November 2020 |archive-date=15 April 2021 |archive-url=https://web.archive.org/web/20210415102931/https://www.dnaindia.com/india/report-world-s-oldest-teak-trees-dying-in-kerala-1255723 |url-status=live }}</ref>
ಕೇರಳದ ಪ್ರಾಣಿಗಳು ಅವುಗಳ ವೈವಿಧ್ಯತೆ ಮತ್ತು ಹೆಚ್ಚಿನ ಸ್ಥಳೀಯತೆಯ ಪ್ರಮಾಣಕ್ಕೆ ಗಮನಾರ್ಹವಾಗಿವೆ: ಇದು 118 [[ಸಸ್ತನಿ]] ಪ್ರಭೇದಗಳನ್ನು (1 ಸ್ಥಳೀಯ), [[ಕೇರಳದ ಪಕ್ಷಿಗಳ ಪಟ್ಟಿ|500 ಪಕ್ಷಿ ಪ್ರಭೇದಗಳು]], 189 ಸಿಹಿನೀರಿನ ಮೀನು ಪ್ರಭೇದಗಳು, 173 [[ಸರೀಸೃಪ]] ಪ್ರಭೇದಗಳು (ಅವುಗಳಲ್ಲಿ 10 ಸ್ಥಳೀಯ), ಮತ್ತು 151 [[ಉಭಯಚರ]] ಪ್ರಭೇದಗಳನ್ನು (36 ಸ್ಥಳೀಯ) ಒಳಗೊಂಡಿದೆ.<ref>{{Cite web |url=https://threatenedtaxa.org/index.php/JoTT/article/view/1999/3443 |archive-url=https://web.archive.org/web/20161007224232/https://threatenedtaxa.org/index.php/JoTT/article/view/1999/3443 |url-status=dead |title=View of A checklist of the vertebrates of Kerala State, India | Journal of Threatened Taxa |archive-date=7 October 2016 |website=threatenedtaxa.org}}</ref> ಇವುಗಳು ವ್ಯಾಪಕವಾದ ಆವಾಸಸ್ಥಾನ ನಾಶ, ಮಣ್ಣಿನ ಸವಕಳಿ, ಭೂಕುಸಿತ, [[ಮಣ್ಣಿನ ಲವಣೀಕರಣ|ಉಪ್ಪಿನಂಶ]], ಮತ್ತು ಸಂಪನ್ಮೂಲ ಹೊರತೆಗೆಯುವಿಕೆಯಿಂದ ಬೆದರಿಕೆಗೆ ಒಳಗಾಗಿವೆ. ಕಾಡುಗಳಲ್ಲಿ, ''ಸೋನೋಕೆಲಿಂಗ್'', ''[[ಡಾಲ್ಬರ್ಗಿಯಾ ಲ್ಯಾಟಿಫೋಲಿಯಾ]]'', ''ಅಂಜಿಲಿ'', ''ಮುಲ್ಲುಮುರಿಕ್ಕು'', ''[[ಎರಿಥ್ರಿನಾ]]'', ಮತ್ತು ''[[ಸಿನ್ನಮೋಮಮ್ ಕ್ಯಾಸಿಯಾ|ಕ್ಯಾಸಿಯಾ]]'' ಕೇರಳದ 1,000 ಕ್ಕೂ ಹೆಚ್ಚು ಮರ ಪ್ರಭೇದಗಳಲ್ಲಿ ಸೇರಿವೆ. ಇತರ ಸಸ್ಯಗಳಲ್ಲಿ [[ಬಿದಿರು]], ಕಾಡು ಕರಿಮೆಣಸು, ಕಾಡು [[ಏಲಕ್ಕಿ]], [[ಕ್ಯಾಲಮಸ್ (ತಾಳೆ)|ಕ್ಯಾಲಮಸ್]] [[ರಟ್ಟನ್]] ತಾಳೆ, ಮತ್ತು ಸುಗಂಧಯುಕ್ತ ವೆಟಿವರ್ ಹುಲ್ಲು, ''ವೆಟಿವೇರಿಯಾ ಝಿಝಾನಿಯಾಯ್ಡ್ಸ್'' ಸೇರಿವೆ.<ref name="Sreedharan_2004" />{{rp|12}} [[ಭಾರತೀಯ ಆನೆ]], [[ಬಂಗಾಳ ಹುಲಿ]], [[ಭಾರತೀಯ ಚಿರತೆ]], [[ನೀಲಗಿರಿ ತಾರ್]], [[ಸಾಮಾನ್ಯ ತಾಳೆ ನರಿ]], ಮತ್ತು [[ಬೂದು ದೈತ್ಯ ಅಳಿಲು]]ಗಳು ಸಹ ಕಾಡುಗಳಲ್ಲಿ ಕಂಡುಬರುತ್ತವೆ.<ref name="Sreedharan_2004" />{{rp|12, 174–75}} ಸರೀಸೃಪಗಳಲ್ಲಿ [[ರಾಜ ನಾಗ]], [[ವೈಪೆರಿಡೆ|ಹಾವು]], [[ಪೈಥಾನ್]], ಮತ್ತು [[ಚಿಪ್ಪು ಮೊಸಳೆ]] ಸೇರಿವೆ. ಕೇರಳದ ಪಕ್ಷಿಗಳಲ್ಲಿ [[ಮಲಬಾರ್ ಟ್ರೋಗನ್]], [[ಮಹಾಶಿಖಿ]], [[ಕೇರಳ ಕುಕ್ಕುರ]], [[ಡಾರ್ಟರ್]] ಮತ್ತು [[ದಕ್ಷಿಣ ಬೆಟ್ಟ ಮೈನಾ]] ಸೇರಿವೆ. ಸರೋವರಗಳು, ಜವುಗು ಪ್ರದೇಶಗಳು ಮತ್ತು ಜಲಮಾರ್ಗಗಳಲ್ಲಿ, [[ಹೆಟೆರೋಪ್ನ್ಯೂಸ್ಟಿಸ್ ಫಾಸಿಲಿಸ್|ಕಾಡು]], [[ರೆಡ್ ಲೈನ್ ಟಾರ್ಪಿಡೋ ಬಾರ್ಬ್]] ಮತ್ತು ''ಚೂಟ್ಟಾಚಿ''; [[ಆರೆಂಜ್ ಕ್ರೋಮೈಡ್]]—''ಎಟ್ರೋಪ್ಲಸ್ ಮ್ಯಾಕುಲಾಟಸ್'' ಮುಂತಾದ ಮೀನುಗಳು ಕಂಡುಬರುತ್ತವೆ.<ref>{{cite book |last1=Institute |first1=Kerala Forest Research |title=Biodiversity Documentation for Kerala: Freshwater fishes |year=2003 |publisher=Kerala Forest Research Institute |isbn=978-8185041544 |url=https://books.google.com/books?id=SYcPAQAAMAAJ&q=fishes+in+kerala |language=en |access-date=18 October 2020 |archive-date=25 November 2023 |archive-url=https://web.archive.org/web/20231125192259/https://books.google.com/books?id=SYcPAQAAMAAJ&q=fishes+in+kerala |url-status=live }}</ref><ref name="Sreedharan_2004" />{{rp|163–65}} ಇತ್ತೀಚೆಗೆ, ಕೇರಳದ ವಡಕರಾ ಕರಾವಳಿಯಿಂದ ಸಂಗ್ರಹಿಸಿದ ಹೊಸದಾಗಿ ವಿವರಿಸಲಾದ ಟಾರ್ಡಿಗ್ರೇಡ್ (ನೀರಿನ ಕರಡಿಗಳು) ಪ್ರಭೇದವನ್ನು ಕೇರಳ ರಾಜ್ಯದ ಹೆಸರಿನಿಂದ ಹೆಸರಿಸಲಾಗಿದೆ; ''[[ಸ್ಟೈಗಾರ್ಕ್ಟಸ್ ಕೇರಳೆನ್ಸಿಸ್]]''.<ref>{{cite journal |last1=Vishnudattan |first1=N. K. |display-authors=etal |title=A new Tardigrade species, Stygarctus keralensis sp. nov. (Arthrotardigrada: Stygarctidae) from the intertidal zone of Southwest coast of India |url=https://www.mapress.com/zt/article/view/42726 |date=15 June 2021 |journal=[[Zootaxa]] |volume=4985 |issue=3 |page=381391 |doi=10.11646/zootaxa.4985.3.5 |pmid=34186802 |s2cid=235688035 |access-date=22 June 2021 |archive-date=27 November 2021 |archive-url=https://web.archive.org/web/20211127214807/https://www.mapress.com/zt/article/view/zootaxa.4985.3.5 |url-status=live |url-access=subscription }}</ref>
== ಪ್ರದೇಶಗಳು, ಜಿಲ್ಲೆಗಳು ಮತ್ತು ನಗರಗಳು ==
{{Main|ಕೇರಳದ ಆಡಳಿತ ವಿಭಾಗಗಳು|ಕೇರಳದ ಜಿಲ್ಲೆಗಳು|ಕೇರಳದ ಆದಾಯ ವಿಭಾಗಗಳ ಪಟ್ಟಿ|ಕೇರಳದ ತಾಲೂಕುಗಳ ಪಟ್ಟಿ|ಕೇರಳದ ನಗರಗಳು ಮತ್ತು ಪಟ್ಟಣಗಳ ಪಟ್ಟಿ}}
{{See also|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಆರು ಪ್ರದೇಶಗಳಾಗಿ ವಿತರಿಸಲಾಗಿದೆ: [[ಉತ್ತರ ಮಲಬಾರ್]] (ದೂರದ-ಉತ್ತರ ಕೇರಳ), [[ದಕ್ಷಿಣ ಮಲಬಾರ್]] (ಉತ್ತರ-ಮಧ್ಯ ಕೇರಳ), [[ಕೊಚ್ಚಿ]] (ಮಧ್ಯ ಕೇರಳ), [[ಉತ್ತರ ತಿರುವಾಂಕೂರು]] (ದಕ್ಷಿಣ-ಮಧ್ಯ ಕೇರಳ), [[ಮಧ್ಯ ತಿರುವಾಂಕೂರು]] (ದಕ್ಷಿಣ ಕೇರಳ) ಮತ್ತು [[ದಕ್ಷಿಣ ತಿರುವಾಂಕೂರು]] (ದೂರದ-ದಕ್ಷಿಣ ಕೇರಳ). ತೆರಿಗೆ ಮತ್ತು ಭೂ ಆದಾಯ ಉದ್ದೇಶಗಳಿಗಾಗಿ ಆಡಳಿತ ಪ್ರದೇಶಗಳಾಗಿ ಕಾರ್ಯನಿರ್ವಹಿಸುವ ಜಿಲ್ಲೆಗಳನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳು|27 ಆದಾಯ ವಿಭಾಗಗಳಾಗಿ]] ಮತ್ತು [[ಕೇರಳದ ತಾಲೂಕುಗಳ ಪಟ್ಟಿ|77 ತಾಲೂಕುಗಳಾಗಿ]] ವಿಂಗಡಿಸಲಾಗಿದೆ, ಇವುಗಳು ತಮ್ಮ ಗಡಿಗಳೊಳಗಿನ ವಸಾಹತುಗಳ ಮೇಲೆ ಆಡಳಿತ ಮತ್ತು ಆರ್ಥಿಕ ಅಧಿಕಾರಗಳನ್ನು ಹೊಂದಿವೆ, ಸ್ಥಳೀಯ ಭೂ ದಾಖಲೆಗಳ ನಿರ್ವಹಣೆ ಸೇರಿದಂತೆ. ಕೇರಳದ ತಾಲೂಕುಗಳನ್ನು ಮತ್ತಷ್ಟು 1,674 [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ.<ref>{{cite web |url=https://ildm.kerala.gov.in/wp-content/uploads/2018/01/Revenue-Guide-2018.pdf |title=Revenue Guide 2018 |date= |website=[[Government of Kerala]] |access-date=28 September 2020 |archive-date=20 September 2020 |archive-url=https://web.archive.org/web/20200920133932/https://ildm.kerala.gov.in/wp-content/uploads/2018/01/Revenue-Guide-2018.pdf |url-status=live }}</ref><ref>{{Cite web |url=https://kerala.gov.in/revenue-department |title=Revenue department, government of Kerala |access-date=28 September 2020 |archive-date=17 August 2021 |archive-url=https://web.archive.org/web/20210817225825/https://kerala.gov.in/revenue-department |url-status=dead}}</ref>
[[ಭಾರತದ ಸಂವಿಧಾನದ ತಿದ್ದುಪಡಿಗಳ ಪಟ್ಟಿ|73 ಮತ್ತು 74 ನೇ]] ಸಾಂವಿಧಾನಿಕ ತಿದ್ದುಪಡಿಗಳಿಂದ, ಕೇರಳದಲ್ಲಿ ಸ್ಥಳೀಯ ಸ್ವಯಂ-ಸರ್ಕಾರಿ ಸಂಸ್ಥೆಗಳು ಸರ್ಕಾರದ ಮೂರನೇ ಹಂತವಾಗಿ ಕಾರ್ಯನಿರ್ವಹಿಸುತ್ತವೆ, ಗ್ರಾಮೀಣ ಆಡಳಿತಕ್ಕಾಗಿ 14 [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳು]], 152 [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು 941 [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], ಮತ್ತು ನಗರ ಆಡಳಿತಕ್ಕಾಗಿ 87 [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]], ಆರು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿವೆ.<ref>{{cite web |title=Local Self Governance in Kerala |url=https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |publisher=Government of Kerala |access-date=28 September 2020 |archive-date=28 September 2021 |archive-url=https://web.archive.org/web/20210928223404/https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |url-status=dead}}</ref>
[[ಮಾಹೆ, ಭಾರತ|ಮಾಹೆ]], ಭಾರತೀಯ [[ಕೇಂದ್ರಾಡಳಿತ ಪ್ರದೇಶ]] [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]]ಯ ಒಂದು ಭಾಗವಾಗಿದ್ದು,<ref>{{cite web |url=https://www.censusindia.net/results/town.php?stad=A&state5=999 |archive-url=https://web.archive.org/web/20040616075334/https://www.censusindia.net/results/town.php?stad=A&state5=999 |archive-date=16 June 2004 |title=Census of India 2001: Data from the 2001 Census, including cities, villages and towns (Provisional) |access-date=1 November 2008 |publisher=Census Commission of India}}</ref> ಇದು {{convert|647|km}} ದೂರದಲ್ಲಿದ್ದರೂ,<ref name="ShiraAssociates.2012">{{cite book |author1=Dezan Shira |author2=Associates. |title=Doing Business in India |url=https://books.google.com/books?id=9YjXW41yMwQC&pg=PT313 |access-date=18 November 2012 |year=2012 |publisher=Springer |isbn=978-3-642-27618-7 |pages=313–}}</ref> ಇದು ಕೇರಳದಿಂದ ಅದರ ಎಲ್ಲಾ ಭೂಮುಖ ವಿಧಾನಗಳಲ್ಲಿ ಸುತ್ತುವರೆದಿರುವ ಕರಾವಳಿ ಬಹಿರಂಗವಾಗಿದೆ. [[ಕಣ್ಣೂರು ಜಿಲ್ಲೆ|ಕಣ್ಣೂರು ಜಿಲ್ಲೆಯು]] ಮೂರು ಕಡೆ ಮಾಹೆಯನ್ನು ಸುತ್ತುವರೆದಿದೆ ಮತ್ತು ನಾಲ್ಕನೇ ಕಡೆ [[ಕೋಝಿಕೋಡ್ ಜಿಲ್ಲೆ|ಕೋಝಿಕೋಡ್ ಜಿಲ್ಲೆಯಿದೆ]].<ref name="Menon2002">{{cite book |author1=D Banerjea |author2=N. R. Madhava Menon |title=Criminal Justice India Series, Vol. 20 |url=https://books.google.com/books?id=Axfuc5A8mxMC&pg=PA9 |access-date=18 November 2012 |year=2002 |publisher=Allied Publishers |isbn=978-8177648713 |pages=9–}}</ref>
1664 ರಲ್ಲಿ, [[ಫೋರ್ಟ್ ಕೊಚ್ಚಿ]] ಪುರಸಭೆಯನ್ನು [[ಡಚ್ ಮಲಬಾರ್]] ಸ್ಥಾಪಿಸಿತು, ಇದು [[ಭಾರತೀಯ ಉಪಖಂಡ]]ದ ಮೊದಲ ಪುರಸಭೆಯಾಗಿದೆ, ಇದು 18 ನೇ ಶತಮಾನದಲ್ಲಿ ಡಚ್ ಅಧಿಕಾರವು ದುರ್ಬಲಗೊಂಡಾಗ ವಿಸರ್ಜಿಸಲಾಯಿತು.<ref name="d_1664">{{Cite news |title=50 years on, Kochi still has a long way to go |url=https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |last=M K Sunil Kumar |date=26 September 2017 |access-date=1 June 2021 |work=The Times of India |archive-date=2 June 2021 |archive-url=https://web.archive.org/web/20210602230954/https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |url-status=live }}</ref> [[ಕೋಝಿಕೋಡ್]], [[ಪಾಲಕ್ಕಾಡ್]], [[ಫೋರ್ಟ್ ಕೊಚ್ಚಿ]], [[ಕಣ್ಣೂರು]], ಮತ್ತು [[ತಲಶ್ಶೇರಿ]] ಪುರಸಭೆಗಳನ್ನು 1 ನವೆಂಬರ್ 1866 ರಂದು<ref name="Ref1">{{cite web |title=Chronological List of Central Acts (Updated up to 17-10-2014) |url=https://www.lawmin.nic.in/chronology.doc |url-status=dead |archive-url=https://web.archive.org/web/20180107091128/http://lawmin.nic.in/chronology.doc |archive-date=7 January 2018 |access-date=7 August 2016 |website=Lawmin.nic.in}}</ref><ref name="c1881">{{cite book |last1=Lewis McIver |first1=G. Stokes |url=https://books.google.com/books?id=b_YIAAAAQAAJ |title=Imperial Census of 1881 Operations and Results in the Presidency of Madras |publisher=E.Keys at the Government Press |year=1883 |edition=(Vol II) |location=Madras |page=444 |access-date=5 December 2020 |archive-url=https://web.archive.org/web/20230327063433/https://books.google.com/books?id=b_YIAAAAQAAJ |archive-date=27 March 2023 |url-status=live}}</ref><ref name="google.co.in">{{cite book |last1=Presidency |first1=Madras (India |url=https://books.google.com/books?id=aUEwnQEACAAJ |title=Madras District Gazetteers, Statistical Appendix For Malabar District. |publisher=The Superintendent, Government Press |year=1915 |edition=Vol.2 |location=Madras |page=20 |language=en |access-date=2 December 2020 |archive-url=https://web.archive.org/web/20230327063433/https://books.google.com/books?id=aUEwnQEACAAJ |archive-date=27 March 2023 |url-status=live}}</ref><ref name="gazetteer" /> [[ಬ್ರಿಟಿಷ್ ಭಾರತ ಸಾಮ್ರಾಜ್ಯ]]ದಲ್ಲಿ ಸ್ಥಾಪಿಸಲಾಯಿತು, ಇದು ಕೇರಳ ರಾಜ್ಯದ ಮೊದಲ ಆಧುನಿಕ ಪುರಸಭೆಗಳಾಗಿವೆ. [[ತಿರುವನಂತಪುರ]] ಪುರಸಭೆಯು 1920 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಎರಡು ದಶಕಗಳ ನಂತರ, [[ಶ್ರೀ ಚಿತಿರಾ ತಿರುನಾಳ್]] ರ ಆಳ್ವಿಕೆಯಲ್ಲಿ, ತಿರುವನಂತಪುರ ಪುರಸಭೆಯನ್ನು 30 ಅಕ್ಟೋಬರ್ 1940 ರಂದು ನಿಗಮವಾಗಿ ಪರಿವರ್ತಿಸಲಾಯಿತು, ಇದು ಕೇರಳದ ಅತ್ಯಂತ ಹಳೆಯ ನಗರ ನಿಗಮವಾಗಿದೆ.<ref>{{cite web |title=Thiruvananthapuram |url=https://www.corporationoftrivandrum.org/index.php?option=com_content&view=article&id=158&Itemid=11 |date=2010 |url-status=usurped |archive-url=https://web.archive.org/web/20100918085703/https://www.corporationoftrivandrum.org/index.php?option=com_content&view=article&id=158&Itemid=11 |archive-date=18 September 2010 |access-date=4 April 2022}} Year of becoming a corporation</ref> [[ಭಾರತ]]ದ ಸ್ವಾತಂತ್ರ್ಯದ ನಂತರ ಸ್ಥಾಪಿಸಲಾದ ಮೊದಲ ನಗರ ನಿಗಮ ಮತ್ತು ರಾಜ್ಯದ ಎರಡನೇ ಅತ್ಯಂತ ಹಳೆಯ ನಗರ ನಿಗಮವು 1962 ರಲ್ಲಿ [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]] ನಲ್ಲಿದೆ.<ref>[https://web.archive.org/web/20080209134539/https://www.hindu.com/2008/02/05/stories/2008020561140500.htm Kozhikode Lok Sabha constituency redrawn Delimitation impact], ''The Hindu'' 5 February 2008</ref> ಕೇರಳದಲ್ಲಿ ಆರು [[ಭಾರತದಲ್ಲಿ ನಗರ ನಿಗಮಗಳು|ನಗರ ನಿಗಮಗಳಿವೆ]], ಅವು [[ತಿರುವನಂತಪುರ ನಗರ ನಿಗಮ|ತಿರುವನಂತಪುರ]], [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]], [[ಕೊಚ್ಚಿ ನಗರ ನಿಗಮ|ಕೊಚ್ಚಿ]], [[ಕೊಲ್ಲಂ ನಗರ ನಿಗಮ|ಕೊಲ್ಲಂ]], [[ತೃಶೂರ್ ನಗರ ನಿಗಮ|ತೃಶೂರ್]], ಮತ್ತು [[ಕಣ್ಣೂರು ನಗರ ನಿಗಮ|ಕಣ್ಣೂರು]] ನಗರಗಳನ್ನು ಆಳುತ್ತವೆ.<ref>{{cite web |title=Kerala Sustainable Urban Development Project |url=https://www.ksudp.org/ |publisher=Local Self Government Department |access-date=7 February 2022 |archive-date=20 September 2020 |archive-url=https://web.archive.org/web/20200920051936/http://ksudp.org/ |url-status=dead }}</ref> [[ತಿರುವನಂತಪುರ ನಗರ ನಿಗಮ]]ವು ಕೇರಳದ ಅತಿದೊಡ್ಡ ನಿಗಮವಾಗಿದ್ದರೆ ಕೊಚ್ಚಿ ಮಹಾನಗರ ಪ್ರದೇಶವನ್ನು [[ಕೊಚ್ಚಿ UA]] ಎಂದು ಕರೆಯಲಾಗುತ್ತದೆ, ಇದು ಅತಿದೊಡ್ಡ ನಗರ ಸಮೂಹವಾಗಿದೆ.<ref>{{cite web |title=City Information |url=https://cial.aero/contents/viewcontent.aspx?linkIdLvl2=32&linkid=32 |work=Cochin International Airport |publisher=Government of Kerala |access-date=18 November 2012 |archive-date=10 December 2012 |archive-url=https://web.archive.org/web/20121210070804/http://cial.aero/contents/viewcontent.aspx?linkIdLvl2=32&linkid=32 |url-status=live }}</ref> ಅರ್ಥಶಾಸ್ತ್ರ ಸಂಶೋಧನಾ ಸಂಸ್ಥೆ ಇಂಡಿಕಸ್ ಅನಾಲಿಟಿಕ್ಸ್ 2007 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, [[ತಿರುವನಂತಪುರ]], [[ಕೋಝಿಕೋಡ್]], [[ಕೊಚ್ಚಿ]], [[ಕೊಲ್ಲಂ]], [[ತೃಶೂರ್]] "ಭಾರತದಲ್ಲಿ ವಾಸಿಸಲು ಅತ್ಯುತ್ತಮ ನಗರಗಳಲ್ಲಿ" ಸೇರಿವೆ; ಸಮೀಕ್ಷೆಯು ನಗರಗಳನ್ನು ಶ್ರೇಣೀಕರಿಸಲು ಆರೋಗ್ಯ, ಶಿಕ್ಷಣ, ಪರಿಸರ, ಸುರಕ್ಷತೆ, ಸಾರ್ವಜನಿಕ ಸೌಲಭ್ಯಗಳು ಮತ್ತು ಮನರಂಜನೆಯಂತಹ ನಿಯತಾಂಕಗಳನ್ನು ಬಳಸಿದೆ.<ref>{{cite news |title=Cities best to earn a living are not the best to live: Survey |url=https://articles.economictimes.indiatimes.com/2007-11-26/news/27682663_1_cities-entertainment-indicus-analytics |work=The Times of India |date=26 November 2007 |access-date=7 February 2022 |archive-date=5 March 2016 |archive-url=https://web.archive.org/web/20160305021646/http://articles.economictimes.indiatimes.com/2007-11-26/news/27682663_1_cities-entertainment-indicus-analytics |url-status=dead }}</ref>
== ಸರ್ಕಾರ ಮತ್ತು ಆಡಳಿತ ==
{{Main|ಕೇರಳ ಸರ್ಕಾರ|ಕೇರಳ ವಿಧಾನಸಭೆ|ಕೇರಳದಲ್ಲಿ ಸ್ಥಳೀಯ ಸರ್ಕಾರ|ಕೇರಳ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಪಟ್ಟಿ|ಕೇರಳದ ಆಡಳಿತ ವಿಭಾಗಗಳು|l4 = ಕೇರಳ ಸರ್ಕಾರದ ಇಲಾಖೆಗಳ ಪಟ್ಟಿ}}
{{See also|ಕೇರಳದ ರಾಜಕೀಯ|ಕೇರಳದಲ್ಲಿ ರಾಜಕೀಯ ಪಕ್ಷಗಳು|ಕೇರಳದಲ್ಲಿ ಚುನಾವಣೆಗಳು}}
{{Multiple image
| direction = vertical
| width = 220
| header_align = center
| footer_align = center
| image1 = Kerala Legislative Assembly, Thiruvananthapuram.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಧಾನಸಭೆ]] ಕಟ್ಟಡ
| image2 = Kerala Government Secretariat.jpg
| caption2 = [[ಕೇರಳ ಸರ್ಕಾರದ ಕಚೇರಿ|ಸರ್ಕಾರಿ ಕಚೇರಿ]] [[ತಿರುವನಂತಪುರ|ತಿರುವನಂತಪುರದಲ್ಲಿ]] – ಕೇರಳದ ಕಾರ್ಯನಿರ್ವಾಹಕ ಆಡಳಿತದ ಆಸನ
| image3 = High Court of Kerala Building.jpg
| caption3 = [[ಕೊಚ್ಚಿ|ಕೊಚ್ಚಿಯ]] [[ಕೇರಳ ಉಚ್ಚ ನ್ಯಾಯಾಲಯ]] ಸಂಕೀರ್ಣ
}}
ರಾಜ್ಯವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯಿಂದ ಆಳಲ್ಪಡುತ್ತದೆ. ಕೇರಳವು [[ಏಕಸಭಾ]] ಶಾಸಕಾಂಗವನ್ನು ಹೊಂದಿದೆ. [[ಕೇರಳ ವಿಧಾನಸಭೆ]]ಯು ನಿಯಮಸಭೆ ಎಂದೂ ಕರೆಯಲ್ಪಡುತ್ತದೆ, ಇದು 140 ಸದಸ್ಯರನ್ನು ಒಳಗೊಂಡಿದ್ದು, ಅವರು ಐದು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.<ref>{{cite web |title=History of Kerala Legislature |url=https://kerala.gov.in/index.php?option=com_content&view=article&id=3776&Itemid=3022 |publisher=Government of Kerala |access-date=17 November 2012 |archive-url=https://web.archive.org/web/20120619040353/https://www.kerala.gov.in/index.php?option=com_content&view=article&id=3776&Itemid=3022 |archive-date=19 June 2012 |url-status=dead}}</ref> ರಾಜ್ಯವು [[ಭಾರತದ ಸಂಸತ್ತು|ಭಾರತೀಯ ಸಂಸತ್ತಿನ]] ಕೆಳಮನೆಯಾದ [[ಲೋಕಸಭೆ]]ಗೆ 20 ಸದಸ್ಯರನ್ನು ಮತ್ತು [[ರಾಜ್ಯಸಭೆ]]ಗೆ 9 ಸದಸ್ಯರನ್ನು ಚುನಾಯಿಸುತ್ತದೆ.<ref>{{cite web |url=https://www.parliamentofindia.nic.in/ls/intro/p1.htm |title=Our Parliament |publisher=Parliamentofindia.nic.in |access-date=25 February 2010 |archive-date=10 February 2010 |archive-url=https://web.archive.org/web/20100210043333/http://www.parliamentofindia.nic.in/ls/intro/p1.htm |url-status=live }}</ref>
[[ಕೇರಳ ಸರ್ಕಾರ]]ವು ಭಾರತದಲ್ಲಿ [[ಪ್ರಜಾಪ್ರಭುತ್ವ|ಪ್ರಜಾಪ್ರಭುತ್ವ]] ರೀತಿಯಲ್ಲಿ ಚುನಾಯಿತ ಸಂಸ್ಥೆಯಾಗಿದ್ದು, [[ಕೇರಳದ ರಾಜ್ಯಪಾಲರು|ರಾಜ್ಯಪಾಲರು]] ಇದರ ಸಾಂವಿಧಾನಿಕ ಮುಖ್ಯಸ್ಥರಾಗಿದ್ದಾರೆ ಮತ್ತು [[ಭಾರತದ ರಾಷ್ಟ್ರಪತಿ]]ಗಳಿಂದ ಐದು ವರ್ಷಗಳ ಅವಧಿಗೆ ನೇಮಕಗೊಳ್ಳುತ್ತಾರೆ.<ref name="govern">{{cite web |url=https://www.rajbhavan.kerala.gov.in/index.php?option=com_content&view=article&id=44&Itemid=2 |archive-url=https://web.archive.org/web/20090731095433/https://rajbhavan.kerala.gov.in/index.php?option=com_content&view=article&id=44&Itemid=2 |url-status=dead |archive-date=31 July 2009 |title=Responsibilities |access-date=13 November 2015 |publisher=Kerala Rajbhavan}}</ref> [[ಕೇರಳ ವಿಧಾನಸಭೆ|ವಿಧಾನಸಭೆಯಲ್ಲಿ]] ಬಹುಮತ ಹೊಂದಿರುವ ಪಕ್ಷ ಅಥವಾ ಒಕ್ಕೂಟದ ನಾಯಕನನ್ನು ರಾಜ್ಯಪಾಲರಿಂದ [[ಕೇರಳದ ಮುಖ್ಯಮಂತ್ರಿಗಳ ಪಟ್ಟಿ|ಮುಖ್ಯಮಂತ್ರಿಯಾಗಿ]] ನೇಮಿಸಲಾಗುತ್ತದೆ, ಮತ್ತು [[ಕೇರಳ ಸಚಿವ ಸಂಪುಟ|ಸಚಿವರ ಸಂಪುಟವನ್ನು]] ಮುಖ್ಯಮಂತ್ರಿಯ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಿಸುತ್ತಾರೆ.<ref name=govern /> ರಾಜ್ಯಪಾಲರು ರಾಜ್ಯದ ಆಚಾರಪೂರ್ಣ ಮುಖ್ಯಸ್ಥರಾಗಿ ಉಳಿಯುತ್ತಾರೆ, ಆದರೆ ಮುಖ್ಯಮಂತ್ರಿ ಮತ್ತು ಅವರ ಸಂಪುಟವು ದೈನಂದಿನ ಸರ್ಕಾರಿ ಕಾರ್ಯಗಳಿಗೆ ಜವಾಬ್ದಾರರಾಗಿರುತ್ತಾರೆ. ಸಚಿವರ ಸಂಪುಟವು ಸಚಿವ ಸಂಪುಟದ ಸಚಿವರು ಮತ್ತು ರಾಜ್ಯ ಸಚಿವರನ್ನು (MoS) ಒಳಗೊಂಡಿದೆ. [[ಕೇರಳ ಸರ್ಕಾರದ ಕಚೇರಿ|ಕಾರ್ಯದರ್ಶಿ]] [[ಮುಖ್ಯ ಕಾರ್ಯದರ್ಶಿ (ಭಾರತ)|ಮುಖ್ಯ ಕಾರ್ಯದರ್ಶಿ]] ನೇತೃತ್ವದಲ್ಲಿ, ಸಚಿವ ಸಂಪುಟಕ್ಕೆ ಸರ್ಕಾರಿ ನೀತಿಗಳ ರಚನೆ ಮತ್ತು ಅನುಷ್ಠಾನದಲ್ಲಿ ಸಹಾಯ ಮಾಡುತ್ತದೆ. ಮುಖ್ಯ ಕಾರ್ಯದರ್ಶಿಯು ಹಿರಿಯ [[ನಾಗರಿಕ ಸೇವೆ|ನಾಗರಿಕ ಸೇವಕ]] ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ರಾಜ್ಯ ಸರ್ಕಾರದ ಆಡಳಿತವು 47 ಕಾರ್ಯದರ್ಶಿ ಇಲಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ.<ref name=":0" /> ಪ್ರತಿಯೊಂದು ಸರ್ಕಾರಿ ಇಲಾಖೆಯನ್ನು ರಾಜಕೀಯವಾಗಿ ಸಚಿವರು ಮತ್ತು ಆಡಳಿತಾತ್ಮಕವಾಗಿ ಸರ್ಕಾರದ ಕಾರ್ಯದರ್ಶಿಯು ಮುಖ್ಯಸ್ಥರಾಗಿರುತ್ತಾರೆ, ಇವರು [[ಹೆಚ್ಚುವರಿ ಮುಖ್ಯ ಕಾರ್ಯದರ್ಶಿ|ಹೆಚ್ಚುವರಿ ಮುಖ್ಯ ಕಾರ್ಯದರ್ಶಿ]], [[ಪ್ರಿನ್ಸಿಪಾಲ್ ಕಾರ್ಯದರ್ಶಿ (ಭಾರತ)|ಪ್ರಿನ್ಸಿಪಾಲ್ ಕಾರ್ಯದರ್ಶಿ]], ಅಥವಾ [[ಕಾರ್ಯದರ್ಶಿ]] ಹುದ್ದೆಯಲ್ಲಿರುತ್ತಾರೆ, ಇವರು ಸಾಮಾನ್ಯವಾಗಿ [[ಭಾರತೀಯ ಆಡಳಿತ ಸೇವೆ]] (IAS) ನ ಅಧಿಕಾರಿಯಾಗಿರುತ್ತಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು/ಪ್ರಿನ್ಸಿಪಾಲ್ ಕಾರ್ಯದರ್ಶಿಗಳು ತಮಗೆ ನಿಯೋಜಿಸಲಾದ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರತಿಯೊಂದು ಇಲಾಖೆಯು ವಿಶೇಷ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಂಡರ್ ಸೆಕ್ರೆಟರಿ ಮತ್ತು ಇತರ ಸಹಾಯಕ ಅಧಿಕಾರಿಗಳ ಹುದ್ದೆಗಳನ್ನು ಸಹ ಹೊಂದಿದೆ. ಈ ಕಾರ್ಯದರ್ಶಿ ಇಲಾಖೆಗಳು ನೀತಿ ರಚನೆ ಮತ್ತು ಆಡಳಿತಾತ್ಮಕ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುತ್ತವೆ, ಆದರೆ ರೇಖಾ ಇಲಾಖೆಗಳು ಮತ್ತು ಇತರ ಕಾರ್ಯನಿರ್ವಾಹಕ ಸಂಸ್ಥೆಗಳು ಸರ್ಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಕ್ಷೇತ್ರ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತವೆ.
ಪ್ರತಿಯೊಂದು ಕಾರ್ಯದರ್ಶಿ ಇಲಾಖೆಯು ಒಂದು ಅಥವಾ ಹೆಚ್ಚು ರೇಖಾ ಇಲಾಖೆಗಳು, ನಿರ್ದೇಶನಾಲಯಗಳು, ಆಯುಕ್ತ ಕಚೇರಿಗಳು, ಮಂಡಳಿಗಳು, ಅಥವಾ ಅಂತಹುದೇ ಕಾರ್ಯನಿರ್ವಾಹಕ ಸಂಸ್ಥೆಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಚಲಾಯಿಸುತ್ತದೆ. ಈ ಸಂಸ್ಥೆಗಳು ಸರ್ಕಾರಿ ನೀತಿಗಳನ್ನು ಅನುಷ್ಠಾನಗೊಳಿಸಲು, ನಿಯಂತ್ರಕ ಆಡಳಿತ, ಜಾರಿ, ಸಾರ್ವಜನಿಕ ಸೇವೆಗಳನ್ನು ಒದಗಿಸಲು ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯಗಳನ್ನು ನಿರ್ವಹಿಸಲು ಜವಾಬ್ದಾರರಾಗಿರುತ್ತವೆ. ಅವುಗಳನ್ನು ಸಾಮಾನ್ಯವಾಗಿ ನಿರ್ದೇಶಕರು, ಆಯುಕ್ತರು, ಅಥವಾ ಅಂತಹುದೇ ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ, ಅವರು ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ, ಇದು ಸಂಸ್ಥೆಯ ಸ್ವರೂಪವನ್ನು ಅವಲಂಬಿಸಿರುತ್ತದೆ. ಈ ಪ್ರತಿಯೊಂದು ಇಲಾಖೆಗಳು/ಸಂಸ್ಥೆಗಳು ತಮ್ಮದೇ ಆದ ಆಡಳಿತಾತ್ಮಕ ಉಪವಿಭಾಗಗಳನ್ನು ಹೊಂದಿವೆ.<ref>Rules of Business of [[Government of Kerala]]
PART II
FIRST SCHEDULE
https://gad.kerala.gov.in/sites/default/files/general_attachment/Rules%20of%20Business%20-%20Part%20II.pdf</ref>
ರಾಜ್ಯವನ್ನು ಹದಿನಾಲ್ಕು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದೂ ಜಿಲ್ಲಾ ಆಡಳಿತದ ಪ್ರಧಾನ ಕಚೇರಿಯಾಗಿ ಕಲೆಕ್ಟರೇಟ್ ಅನ್ನು ಹೊಂದಿದೆ. [[ಜಿಲ್ಲಾ ಮ್ಯಾಜಿಸ್ಟ್ರೇಟ್|ಜಿಲ್ಲಾ ಕಲೆಕ್ಟರ್]] ಜಿಲ್ಲಾ ಆಡಳಿತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭೂ ಆದಾಯ ಆಡಳಿತ, ವಿಪತ್ತು ನಿರ್ವಹಣೆ, ಚುನಾವಣೆಗಳು, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಮತ್ತು ಜಿಲ್ಲೆಯೊಳಗಿನ ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯಕ್ಕೆ ಜವಾಬ್ದಾರರಾಗಿರುತ್ತಾರೆ.<ref>{{Cite web |title=Collectorate {{!}} District Thiruvananthapuram, Government of Kerala {{!}} India |url=https://trivandrum.nic.in/en/collectrate/ |access-date=2026-04-04 |language=en-US}}</ref> ಆಡಳಿತಾತ್ಮಕ ಅನುಕೂಲಕ್ಕಾಗಿ, ಪ್ರತಿಯೊಂದು ಜಿಲ್ಲೆಯನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳ ಪಟ್ಟಿ|ಆದಾಯ ವಿಭಾಗಗಳಾಗಿ]], [[ತಹಸೀಲ್ದಾರ್|ತಾಲೂಕುಗಳಾಗಿ]], ಮತ್ತು [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ, ಪ್ರಾಥಮಿಕವಾಗಿ ಭೂ ಆದಾಯ ಆಡಳಿತದ ಉದ್ದೇಶಕ್ಕಾಗಿ.<ref>{{Cite web |last=Admin |date=2025-01-22 |title=Land revenue administration, Government of Kerala |url=https://clr.kerala.gov.in/eng/index.php/department/organisation-structure |access-date=2026-01-01 |website=Department of Land Revenue |language=en-gb}}</ref>
ಕೇರಳದಲ್ಲಿ ಕಾನೂನು ಜಾರಿಯನ್ನು ಪ್ರಾಥಮಿಕವಾಗಿ [[ಕೇರಳ ಪೊಲೀಸ್]] ನಡೆಸುತ್ತದೆ, ಇದು ಕೇರಳ ಸರ್ಕಾರದ [[ಗೃಹ ಇಲಾಖೆ (ಕೇರಳ)|ಗೃಹ ಇಲಾಖೆಯ]] ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇರಳ ಪೊಲೀಸ್ ಅನ್ನು ಎರಡು ಪೊಲೀಸ್ ವಲಯಗಳಾಗಿ (ಉತ್ತರ ಮತ್ತು ದಕ್ಷಿಣ) ರಚಿಸಲಾಗಿದೆ, ಅವುಗಳನ್ನು ಮತ್ತಷ್ಟು ವ್ಯಾಪ್ತಿಗಳು, ಪೊಲೀಸ್ ಜಿಲ್ಲೆಗಳು, ಉಪವಿಭಾಗಗಳು ಮತ್ತು ಪೊಲೀಸ್ ಠಾಣೆಗಳಾಗಿ ವಿಂಗಡಿಸಲಾಗಿದೆ. ಪ್ರಾಥಮಿಕ ಕಾನೂನು ಜಾರಿಗೆ ಜವಾಬ್ದಾರರಾಗಿರುವ 484 ಸ್ಥಳೀಯ ಪೊಲೀಸ್ ಠಾಣೆಗಳಿವೆ.<ref>{{Cite web |title=Official Website of Kerala Police |url=https://keralapolice.gov.in/ |access-date=2026-04-24 |website=keralapolice.gov.in |language=en}}</ref>
[[ನ್ಯಾಯಾಂಗ]]ವು [[ಕೇರಳ ಉಚ್ಚ ನ್ಯಾಯಾಲಯ]] ಮತ್ತು ಕೆಳ ನ್ಯಾಯಾಲಯಗಳ ವ್ಯವಸ್ಥೆಯನ್ನು ಒಳಗೊಂಡಿದೆ.<ref>{{cite web |title=History of Judiciary |url=https://www.allindiajudges.org/Judgment/FNJPC2.htm |publisher=All-India Judges Association |access-date=29 April 2015 |archive-date=1 October 2015 |archive-url=https://web.archive.org/web/20151001072113/http://www.allindiajudges.org/Judgment/FNJPC2.htm |url-status=dead }}</ref> [[ಕೊಚ್ಚಿ|ಕೊಚ್ಚಿಯಲ್ಲಿ]] ನೆಲೆಗೊಂಡಿರುವ ಉಚ್ಚ ನ್ಯಾಯಾಲಯವು,<ref name="Congress (US)2010">{{cite book |author1=U S Congress |author2=Congress (U.S.) |title=Congressional Record, V. 153, Pt. 1, January 4, 2007 to January 17, 2007 |url=https://books.google.com/books?id=M3bLOwbeOZYC&pg=PA1198 |access-date=18 November 2012 |year=2010 |publisher=Government Printing Office |isbn=978-0-16-086824-5 |page=1198}}</ref>as ರಂತೆ ಮುಖ್ಯ ನ್ಯಾಯಮೂರ್ತಿ ಮತ್ತು 35 ಖಾಯಂ ಮತ್ತು ಹನ್ನೆರಡು ಹೆಚ್ಚುವರಿ ''[[ಪ್ರೋ ಟೆಂಪೋರ್]]'' ನ್ಯಾಯಮೂರ್ತಿಗಳನ್ನು ಹೊಂದಿದೆ.<ref>{{cite web |title=High Court of Kerala Profile |url=https://highcourtofkerala.nic.in/profile.html |publisher=High Court of Kerala |access-date=18 November 2012 |archive-date=31 October 2012 |archive-url=https://web.archive.org/web/20121031233641/http://highcourtofkerala.nic.in/profile.html |url-status=live }}</ref> ಉಚ್ಚ ನ್ಯಾಯಾಲಯವು [[ಲಕ್ಷದ್ವೀಪ]] ಕೇಂದ್ರಾಡಳಿತ ಪ್ರದೇಶದ ಪ್ರಕರಣಗಳನ್ನು ಸಹ ವಿಚಾರಣೆಗೆ ತೆಗೆದುಕೊಳ್ಳುತ್ತದೆ.<ref name="Banerjea2002">{{cite book |author=D. Banerjea |title=Criminal Justice India Series, Vol. 21 |url=https://books.google.com/books?id=L6NWL-a14mkC&pg=PA80 |access-date=18 November 2012 |year=2002 |publisher=Allied Publishers |isbn=978-8177648720 |page=80}}</ref><ref name="SharmaB.k.2007">{{cite book |author1=Sharma |author2=Sharma B.k. |title=Intro. to the Constitution of India, 4/e |url=https://books.google.com/books?id=srDytmFE3KMC&pg=PA261 |access-date=18 November 2012 |year=2007 |publisher=PHI Learning Pvt. Ltd. |isbn=978-8120332461 |page=261}}</ref> ರಾಜ್ಯದ ಅಧೀನ ನ್ಯಾಯಾಂಗವು ಪ್ರತಿಯೊಂದು 14 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳನ್ನು ಒಳಗೊಂಡಿದೆ, ಇವುಗಳನ್ನು ಜಿಲ್ಲಾ ನ್ಯಾಯಾಧೀಶರು ಮುಖ್ಯಸ್ಥರಾಗಿರುತ್ತಾರೆ, ಜೊತೆಗೆ ನಾಗರಿಕ ನ್ಯಾಯಾಲಯಗಳು (''ಮುನ್ಸಿಫ್ ಮತ್ತು ಹಿರಿಯ ಸ
322ht0f0r520enc4pe145sggi1cowkw
1378292
1378291
2026-08-03T08:30:15Z
A826
72368
[[Special:Diff/1378291|1378291]] ಪರಿಷ್ಕರಣೆಯನ್ನು [[Special:Contributions/A826|A826]] ([[User talk:A826|ಚರ್ಚೆ]]) ಅವರ ಮೂಲಕ ರದ್ದುಪಡಿಸಲಾಗಿದೆ.
1378292
wikitext
text/x-wiki
{{databox}}
{{Infobox Indian state or territory
| name = ಕೇರಳ
| official_name =
| type = ರಾಜ್ಯ
| image_seal = Government of Kerala Logo.svg{{!}}class=skin-invert
| image_skyline = <!-- Do not add additional pictures here without discussion, per consensus [[Talk:Kerala/Archive_6#Infobox montage]]--> Boathouse (7063399547).jpg
| image_caption = [[ಕೇರಳದ ಬ್ಯಾಕ್ವಾಟರ್ಗಳು|ಕೇರಳದ ಬ್ಯಾಕ್ವಾಟರ್ಗಳಲ್ಲಿ]] ಒಂದು [[ಹೌಸ್ ಬೋಟ್]]
| nickname = "[[ಗಾಡ್ಸ್ ಓನ್ ಕಂಟ್ರಿ#ಕೇರಳ|ದೇವರ ಸ್ವಂತ ನಾಡು]]"
| image_map = IN-KL.svg
| coordinates = {{coord|10.0|N|76.3|E|region:IN-KL|display=inline,title}}
| region = ದಕ್ಷಿಣ ಭಾರತ
| before_was = [[ತಿರುವಾಂಕೂರು-ಕೊಚ್ಚಿ]]<br>[[ಮಲಬಾರ್ ಜಿಲ್ಲೆ]]<br>[[ದಕ್ಷಿಣ ಕನ್ನಡ]]
| formation_date4 = 1 ನವೆಂಬರ್ 1956
| capital = ತಿರುವನಂತಪುರ
| districts = [[ಕೇರಳದ ಜಿಲ್ಲೆಗಳ ಪಟ್ಟಿ|14]]
| governor = [[ರಾಜೇಂದ್ರ ಅರ್ಲೇಕರ್]]
| chief_minister = [[ವಿ. ಡಿ. ಸತೀಶನ್]]
| party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
| judiciary = [[ಕೇರಳ ಉಚ್ಚ ನ್ಯಾಯಾಲಯ]]
| chief_secretary = ಬಿಶ್ವನಾಥ್ ಸಿನ್ಹಾ I.A.S.
| legislature_type = ಏಕಸಭಾ
| assembly = [[ಕೇರಳ ವಿಧಾನಸಭೆ]]
| assembly_seats = 140 ಸ್ಥಾನಗಳು
| rajya_sabha_seats = 9 ಸ್ಥಾನಗಳು
| lok_sabha_seats = 20 ಸ್ಥಾನಗಳು
| area_total_km2 = 38863
| area_footnotes = <ref>{{Cite web |title=About Kerala
|url=https://kerala.gov.in/subdetail/NTM1ODMxNzQuNDg=/MjA0ODc2ODQuMzY= |access-date=10 March 2025 |language=en-US }}</ref>
| area_rank = 21ನೇ
| length_km = 560
| width_km = 70
| elevation_footnotes = <ref>{{Cite web |title=Kerala Physiography {{!}} Geographical location {{!}} Kerala {{!}} Kerala |url=https://kerala.me/geography |access-date=24 March 2023 |language=en-US |archive-date=24 March 2023 |archive-url=https://web.archive.org/web/20230324220056/https://kerala.me/geography |url-status=live }}</ref>
| elevation_m = 900
| elevation_max_m = 2,695
| elevation_max_point = [[ಅನಮುಡಿ]]<ref>{{Cite web |title=Anamudi – Peakbagger.com |url=https://www.peakbagger.com/peak.aspx?pid=10664 |access-date=24 March 2023 |website=www.peakbagger.com |archive-date=24 March 2023 |archive-url=https://web.archive.org/web/20230324210042/https://www.peakbagger.com/peak.aspx?pid=10664 |url-status=live }}</ref>
| elevation_min_m = −2.7
| elevation_min_point = [[ಕುಟ್ಟನಾಡು]]<ref>{{Cite web |title=Kuttanadan.com : Explore the Rice Bowl of Kerala |url=https://kuttanadan.com/ |access-date=24 March 2023 |website=Kuttanadan Website |language=en-US |archive-date=24 March 2023 |archive-url=https://web.archive.org/web/20230324210043/https://kuttanadan.com/ |url-status=live }}</ref>
| population_footnotes = <ref>{{cite book | url=https://ruralindiaonline.org/en/library/resource/population-projections-for-india-and-states-2011-2036/ | title=Population Projections for India and States, 2011–2036 | date=July 2020 | access-date=25 March 2023 | archive-date=13 March 2023 | archive-url=https://web.archive.org/web/20230313055356/https://ruralindiaonline.org/en/library/resource/population-projections-for-india-and-states-2011-2036/ | url-status=live }}</ref>
| population_total = 36,111,000
| population_as_of = 2025
| population_rank = 13ನೇ
| population_urban = 79.42%
| population_rural = 20.58%
| population_density = 890
| population_demonym = [[ಕೇರಳೀಯ]],<ref>{{Cite web|url=https://www.theguardian.com/world/2026/feb/25/india-state-kerala-to-be-renamed-keralam-malayalam-language|title=Indian state of Kerala to be renamed Keralam to reflect local pronunciation|first=Penelope|last=MacRae|work=The Guardian |date=25 February 2026}}</ref> [[ಮಲಯಾಳಿಗಳು|ಮಲಯಾಳಿ]]
| official_langs = [[ಮಲಯಾಳಂ]]<ref name="OfficialLang">{{cite web |url=https://prsindia.org/files/bills_acts/acts_states/kerala/2026/Act3of2026KL.pdf |title=The Malayalam Language Act, 2025 |publisher=prsindia.org |date=5 March 2026 |access-date=22 April 2026 }}</ref>
| GDP_footnotes = <ref name="MOSPI">{{cite web|url=http://mospi.nic.in/sites/default/files/press_releases_statements/State_wise_SDP_15_03_2021.xls|title=MOSPI State Domestic Product, Ministry of Statistics and Programme Implementation, Government of India|date=15 March 2021|accessdate=28 March 2021}}</ref>
| GDP_total = {{Increase}} $167.90 billion (nominal)<br/>{{Increase}} $707.26 billion (PPP)
| GDP_year = 2025-26
| GDP_rank = 11ನೇ
| GDP_per_capita = {{Increase}} {{INRConvert|317723|lk=r}} (nominal)<br/>{{Increase}} $19,586 (PPP)
| GDP_per_capita_rank = 11ನೇ
| HDI = {{Increase}} 0.804 {{colour|#090|ಅತಿ ಹೆಚ್ಚು}}<ref name="UNDP">{{cite report|title=Subnational HDI|url=https://globaldatalab.org/shdi/table/shdi/IND/?levels=1+4&interpolation=0&extrapolation=0|access-date=1 April 2026|work=Global Data Lab, [[United Nations Development Programme]]}}</ref>
| HDI_year = 2023
| HDI_rank = 2ನೇ
| literacy = 95.3%<ref>{{Cite book |url=https://www.mospi.gov.in/sites/default/files/publication_reports/AnnualReport_PLFS2023-24L2.pdf |title=Annual Report, Periodic Labour Force Survey (PLFS) (July 2023 – June 2024) |date=23 September 2024 |publisher=National Sample Survey Office, Ministry of Statistics and Programme Implementation, Government of India |pages=A-10 |chapter=Appendix-A: Detailed tables, Table (7): Literacy rate (in per cent) of persons of different age groups for each State/UT (persons, age-group (years): 7 & above, rural+urban (column 6))}}</ref>
| literacy_year = 2024
| literacy_rank = 4ನೇ
| sex_ratio = 1084[[female|♀]]/1000 [[male|♂]]<ref name="pc-census2011" />
| sexratio_year = 2025
| sexratio_rank = 17ನೇ
| iso_code = IN-KL
| registration_plate = KL
| website = kerala.gov.in
| foundation_day = 1 ನವೆಂಬರ್
| mammal = [[ಭಾರತೀಯ ಆನೆ]]<ref name="ENVIS">{{Cite web |date=1 December 2017 |title=State Symbols of India |url=http://wiienvis.nic.in/KidsCentre/state_symbols_india_8411.aspx |archive-url=https://web.archive.org/web/20210415100206/http://wiienvis.nic.in/KidsCentre/state_symbols_india_8411.aspx |archive-date=15 April 2021 |access-date=3 June 2022 |publisher=ENVIS Centre on Wildlife & Protected Areas}}</ref>
| bird = [[ಮಹಾಶಿಖಿ]]<ref name="ENVIS" />
| fish = [[ಗ್ರೀನ್ ಕ್ರೋಮೈಡ್]]
| butterfly = [[ಪಾಪಿಲಿಯೋ ಬುದ್ಧ]]<ref>{{Cite news |last=Jacob |first=Aneesh |title='Budha Mayoori' to be named Kerala's state butterfly |language=en |work=Mathrubhumi |url=https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |url-status=dead |access-date=30 March 2019 |archive-url=https://web.archive.org/web/20190330094056/https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |archive-date=30 March 2019}}</ref>
| flower = [[ಕಸ್ಸಿಯಾ ಫಿಸ್ಟುಲಾ|ಸ್ವರ್ಣ ಮರ]]<ref name="ENVIS" />
| tree = [[ತೆಂಗಿನ]] ಮರ<ref name="ENVIS" />
| fruit = [[ಹಲಸು]]<ref>{{Cite news |date=17 March 2018 |title=Jackfruit to be Kerala's state fruit; declaration on March 21 |work=[[The Indian Express]] |agency=[[Press Trust of India|PTI]] |url=https://indianexpress.com/article/india/jackfruit-to-be-keralas-state-fruit-declaration-on-march-21-5101170/ |access-date=22 March 2018 |archive-date=22 March 2018 |archive-url=https://web.archive.org/web/20180322144926/http://indianexpress.com/article/india/jackfruit-to-be-keralas-state-fruit-declaration-on-march-21-5101170/ |url-status=live }}</ref>
| image_highway = SH IN-KL.png
| sh_numbers = [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|SH KL1 – SH KL79]]
}}
'''ಕೇರಳ'''{{efn|[[ಭಾರತೀಯ ಇಂಗ್ಲಿಷ್]]: [[Help:IPA/English|/ˈkɛrələ/]] {{audio|Kerala (English Pronunciation).ogg| }}, {{respell|KERR|ə|lə}} <br/> {{IPA|ml|ˈkeːɾɐɭɐm|lang|Ml-Keralam.ogg}} ''[[ISO 15919|ಕೇರಳಂ]]''}} [[ದಕ್ಷಿಣ ಭಾರತ]]ದ [[ಮಲಬಾರ್ ಕರಾವಳಿ]]ಯಲ್ಲಿರುವ ಒಂದು [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]ವಾಗಿದೆ. ಇದನ್ನು 1 ನವೆಂಬರ್ 1956 ರಂದು [[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ರಚಿಸಲಾಯಿತು, ಇದು ದೇಶದ [[ಮಲಯಾಳಂ]] ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿ ಏಕೀಕರಿಸಿತು. {{cvt|38863|km2|sqmi|0}} ವ್ಯಾಪಿಸಿರುವ ಕೇರಳವು ಪ್ರಾಥಮಿಕವಾಗಿ [[ಪಶ್ಚಿಮ ಘಟ್ಟಗಳು]] ಮತ್ತು [[ಲಕ್ಷದ್ವೀಪ ಸಮುದ್ರ]]ದ ನಡುವೆ ಸ್ಯಾಂಡ್ವಿಚ್ ಆಗಿರುವ [[ಪಶ್ಚಿಮ ಕರಾವಳಿ ಬಯಲು|ಕರಾವಳಿ ಬಯಲು]]ಗಳ ಪಟ್ಟಿಯಾಗಿದ್ದು, ಈಶಾನ್ಯಕ್ಕೆ [[ಕರ್ನಾಟಕ]], ಪೂರ್ವಕ್ಕೆ [[ತಮಿಳುನಾಡು]] ಮತ್ತು ಪಶ್ಚಿಮ ಸಮೀಪದಲ್ಲಿ [[ಲಕ್ಷದ್ವೀಪ]] ದ್ವೀಪಗಳಿಂದ ಸುತ್ತುವರೆದಿದೆ. [[2011 ರ ಭಾರತದ ಜನಗಣತಿ|2011 ರ ಜನಗಣತಿಯ]] ಪ್ರಕಾರ 33 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಕೇರಳವು ಭಾರತದ [[ಜನಸಂಖ್ಯೆಯ ಪ್ರಕಾರ ಭಾರತದ ರಾಜ್ಯಗಳ ಪಟ್ಟಿ|13 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ]]. [[ತಿರುವನಂತಪುರ]]ವು ರಾಜಧಾನಿ ನಗರವಾಗಿದ್ದರೆ [[ಕೊಚ್ಚಿ ಮಹಾನಗರ ಪ್ರದೇಶ]]ವು ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶವಾಗಿದೆ. ಮಲಯಾಳಂ ಅತಿ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದ್ದು, ಇಂಗ್ಲಿಷ್ ಜೊತೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ.
ಕೇರಳವು 3000 [[ಸಾಮಾನ್ಯ ಯುಗ|BCE]] ಯಿಂದಲೂ ಮಸಾಲೆಗಳ ಪ್ರಮುಖ ರಫ್ತುದಾರನಾಗಿದೆ. [[ಚೇರ ಸಾಮ್ರಾಜ್ಯ|ಚೇರ]] ರಾಜವಂಶವು, ಈ ಪ್ರದೇಶದ ಮೊದಲ ಪ್ರಮುಖ ಸಾಮ್ರಾಜ್ಯವು, ಸಮುದ್ರ ವಾಣಿಜ್ಯದ ಮೂಲಕ ಪ್ರಾಮುಖ್ಯತೆಗೆ ಏರಿತು ಆದರೆ ಆಗಾಗ್ಗೆ ನೆರೆಯ [[ಚೋಳ]] ಮತ್ತು [[ಪಾಂಡ್ಯ]] ರಾಜವಂಶಗಳ ದಾಳಿಗಳನ್ನು ಎದುರಿಸಿತು. 15 ನೇ ಶತಮಾನದಲ್ಲಿ, ಮಸಾಲೆ ವ್ಯಾಪಾರವು ಪೋರ್ಚುಗೀಸ್ ವ್ಯಾಪಾರಿಗಳನ್ನು ಕೇರಳಕ್ಕೆ ಆಕರ್ಷಿಸಿತು, ಇದು ಭಾರತದಲ್ಲಿ [[ವಸಾಹತುಶಾಹಿ ಭಾರತ|ಯುರೋಪಿಯನ್ ವಸಾಹತುಶಾಹಿಯನ್ನು]] ಪ್ರಾರಂಭಿಸಿತು. [[ಭಾರತೀಯ ಸ್ವಾತಂತ್ರ್ಯ ಚಳುವಳಿ|1947 ರಲ್ಲಿ ಭಾರತದ ಸ್ವಾತಂತ್ರ್ಯದ]] ನಂತರ, [[ತಿರುವಾಂಕೂರು]] ಮತ್ತು [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿ]] ಸಾಮ್ರಾಜ್ಯಗಳು ಹೊಸದಾಗಿ ರೂಪುಗೊಂಡ ಗಣರಾಜ್ಯಕ್ಕೆ ಸೇರಿಕೊಂಡವು ಮತ್ತು 1949 ರಲ್ಲಿ [[ತಿರುವಾಂಕೂರು-ಕೊಚ್ಚಿ]] ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. 1956 ರಲ್ಲಿ, ಆಧುನಿಕ ಕೇರಳ ರಾಜ್ಯವನ್ನು ಹಿಂದಿನ [[ಮದ್ರಾಸ್ ರಾಜ್ಯ]]ದೊಂದಿಗೆ ಪರಿಧಿಯ ಪ್ರದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸ್ಥಾಪಿಸಲಾಯಿತು; [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡ ಜಿಲ್ಲೆಯ]] [[ಕಾಸರಗೋಡು]] ತಾಲೂಕನ್ನು ಕೇರಳವನ್ನು ರೂಪಿಸಲು ತಿರುವಾಂಕೂರು-ಕೊಚ್ಚಿಯೊಂದಿಗೆ ವಿಲೀನಗೊಳಿಸಲಾಯಿತು, ಆದರೆ [[ಕನ್ಯಾಕುಮಾರಿ ಜಿಲ್ಲೆ]] ಮತ್ತು [[ಶೆಂಕೋಟ್ಟೈ ತಾಲೂಕಿನ]] ಭಾಗಗಳನ್ನು ಮದ್ರಾಸ್ ರಾಜ್ಯಕ್ಕೆ ಸೇರಿಸಲಾಯಿತು. ಕೇರಳವು 1984 ರಿಂದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಒಳಗೊಂಡಿದೆ.
ಕೇರಳವು ಅತ್ಯಧಿಕ [[ಮಾನವ ಅಭಿವೃದ್ಧಿ ಸೂಚ್ಯಂಕ|ಮಾನವ ಅಭಿವೃದ್ಧಿ ಸೂಚ್ಯಂಕವನ್ನು]] ಹೊಂದಿದೆ, 2018 ರಲ್ಲಿ 0.784; ಅತ್ಯಧಿಕ ಸಾಕ್ಷರತಾ ಪ್ರಮಾಣ, 2018 ರಲ್ಲಿ 96.2%; ಅತ್ಯಧಿಕ ಜೀವಿತಾವಧಿ, 77.3 ವರ್ಷಗಳು; ಮತ್ತು ಅತ್ಯಧಿಕ [[ಲಿಂಗಾನುಪಾತ]], 1,000 ಪುರುಷರಿಗೆ 1,084 ಮಹಿಳೆಯರು ಮತ್ತು ಭಾರತದಲ್ಲಿ ಅತ್ಯಂತ ಕಡಿಮೆ ಧನಾತ್ಮಕ ಜನಸಂಖ್ಯಾ ಬೆಳವಣಿಗೆ ದರ (3.44%). ಇದು ದೇಶದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಕಡಿಮೆ ಬಡತನ ಹೊಂದಿರುವ]] ಮತ್ತು [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ]] ರಾಜ್ಯವಾಗಿದೆ. ರಾಜ್ಯವು ಗಮನಾರ್ಹವಾದ ವಲಸೆಯನ್ನು ಕಂಡಿದೆ, ವಿಶೇಷವಾಗಿ 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಿಗೆ]], ಮತ್ತು ಅದರ ಆರ್ಥಿಕತೆಯು ದೊಡ್ಡ [[ಮಲಯಾಳಿ]] ವಲಸೆ ಜನಸಂಖ್ಯೆಯಿಂದ ಸ್ಥಳಾಂತರ ವರ್ಗಾವಣೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. [[ಕೇರಳದಲ್ಲಿ ಧರ್ಮ|ಜನಸಂಖ್ಯೆಯ 54% ಕ್ಕಿಂತ ಹೆಚ್ಚು]] ಜನರು ಹಿಂದೂ ಧರ್ಮವನ್ನು ಆಚರಿಸುತ್ತಾರೆ, ನಂತರ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು. ಸಂಸ್ಕೃತಿಯು [[ಆರ್ಯ]] ಮತ್ತು [[ದ್ರಾವಿಡರು|ದ್ರಾವಿಡ]] ಸಂಪ್ರದಾಯಗಳ ಸಮ್ಮಿಳನವಾಗಿದ್ದು, ಸಹಸ್ರಮಾನಗಳಿಂದ ಭಾರತ ಮತ್ತು ವಿದೇಶಗಳಿಂದ ಪ್ರಭಾವಗಳಿಂದ ರೂಪುಗೊಂಡಿದೆ.
[[ಕರಿ ಮೆಣಸು]] ಮತ್ತು [[ನೈಸರ್ಗಿಕ ರಬ್ಬರ್]] ಉತ್ಪಾದನೆಯು ರಾಷ್ಟ್ರೀಯ ಉತ್ಪಾದನೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಕೃಷಿ ವಲಯದಲ್ಲಿ, ತೆಂಗು, ಚಹಾ, ಕಾಫಿ, ಗೋಡಂಬಿ ಮತ್ತು ಮಸಾಲೆಗಳು ಪ್ರಮುಖ ಬೆಳೆಗಳಾಗಿವೆ. ರಾಜ್ಯವು {{convert|595|km|mi}} ಕರಾವಳಿಯನ್ನು ಹೊಂದಿದೆ, ಮತ್ತು 1.1 ಮಿಲಿಯನ್ ಜನರು ಮೀನುಗಾರಿಕಾ ಉದ್ಯಮವನ್ನು ಅವಲಂಬಿಸಿದ್ದಾರೆ, ಇದು ರಾಜ್ಯದ ಆದಾಯದ ಸುಮಾರು 3% ರಷ್ಟಿದೆ. ಆರ್ಥಿಕತೆಯು ಹೆಚ್ಚಾಗಿ ಸೇವಾ ವಲಯ ಆಧಾರಿತವಾಗಿದ್ದರೆ, ಪ್ರಾಥಮಿಕ ವಲಯವು ತುಲನಾತ್ಮಕವಾಗಿ ಚಿಕ್ಕ ಪಾಲನ್ನು ನೀಡುತ್ತದೆ. ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರವನ್ನು]] ಹೊಂದಿದ್ದು, ಒಂಬತ್ತು ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸುತ್ತದೆ, ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್. ಕೇರಳವು ಭಾರತದ ಪ್ರಮುಖ [[ಕೇರಳದ ಪ್ರವಾಸೋದ್ಯಮ|ಪ್ರವಾಸಿ ತಾಣಗಳಲ್ಲಿ]] ಒಂದಾಗಿದೆ, [[ಕೇರಳದ ಬೀಚ್ಗಳು|ತೆಂಗಿನ ಗಿಡಗಳಿಂದ ಕೂಡಿದ ಮರಳು ಕಡಲತೀರಗಳು]], [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳು]], [[ಬೆಟ್ಟದ ತಾಣ]]ಗಳು, [[ಆಯುರ್ವೇದ|ಆಯುರ್ವೇದ ಪ್ರವಾಸೋದ್ಯಮ]] ಮತ್ತು [[ಉಷ್ಣವಲಯದ]] ಹಸಿರು ಅದರ ಪ್ರಮುಖ ಆಕರ್ಷಣೆಗಳಾಗಿವೆ.
== ಹೆಸರು ==
=== ವ್ಯುತ್ಪತ್ತಿ ===
"ಕೇರಳ" ಪದವನ್ನು ಮೊದಲು "ಕೇರಳಪುಟೊ" ('[[ಚೇರ ಸಾಮ್ರಾಜ್ಯ|ಚೇರ]] ರ ಮಗ[ಗಳು]') ಎಂದು [[ಮೌರ್ಯ ಸಾಮ್ರಾಜ್ಯ|ಮೌರ್ಯ ಚಕ್ರವರ್ತಿ]] [[ಅಶೋಕ]] (274–237 BCE) ಅವರು ತಮ್ಮ [[ಅಶೋಕನ ಶಾಸನಗಳು|ಶಾಸನಗಳಲ್ಲಿ]] ಒಂದಾದ ಕಲ್ಯಾಣಕ್ಕೆ ಸಂಬಂಧಿಸಿದ 3 ನೇ ಶತಮಾನದ BCE ಯ ಬಂಡೆಯ ಕೆತ್ತನೆಯಲ್ಲಿ ದಾಖಲಿಸಲಾಗಿದೆ.<ref>{{Cite book |last=P. C. Alexander |title=Buddhism in Kerala |pages=23}}</ref> ಆ ಸಮಯದಲ್ಲಿ, ಈ ಪ್ರದೇಶದ ಮೂರು ರಾಜ್ಯಗಳಲ್ಲಿ ಒಂದನ್ನು ಶಾಸ್ತ್ರೀಯ ತಮಿಳಿನಲ್ಲಿ [[ಚೇರ ಸಾಮ್ರಾಜ್ಯ|{{transliteration|ta|ISO|Ceralam}}]] (ಚೇರಲಂ) ಎಂದು ಕರೆಯಲಾಗುತ್ತಿತ್ತು: {{transliteration|ta|ISO|Cera}} (ಚೇರ) ಮತ್ತು {{transliteration|ta|ISO|Kera}} (ಕೇರ) ಒಂದೇ ಪದದ ರೂಪಾಂತರಗಳಾಗಿವೆ.<ref name="Sainz1972">{{Cite book |last=Nicasio Silverio Sainz |url=https://books.google.com/books?id=AOEBAAAAMAAJ |title=Cuba y la Casa de Austria |publisher=Ediciones Universal |year=1972 |page=120 |access-date=6 January 2013}}</ref> {{transliteration|ta|ISO|Cer al}} (ಚೇರಲ್) ಪದವು ಕೇರಳ ರಾಜರ ಅತ್ಯಂತ ಹಳೆಯ ರಾಜವಂಶವನ್ನು ಸೂಚಿಸುತ್ತದೆ ಮತ್ತು ಇದು ಹಳೆಯ ತಮಿಳು ಪದದಿಂದ 'ಸರೋವರ' ಎಂದು ಬಂದಿದೆ.<ref name="Marr1985">{{Cite book |last=John R. Marr |url=https://books.google.com/books?id=x3gOAAAAYAAJ |title=The Eight Anthologies: A Study in Early Tamil Literature |publisher=Institute of Asian Studies |year=1985 |page=263}}</ref> {{transliteration|ta|ISO|Keralam}} (ಕೇರಳಂ) ಶಾಸ್ತ್ರೀಯ [[ತಮಿಳು ಭಾಷೆ|ತಮಿಳು]] {{transliteration|ta|ISO|cerive-alam}} (ಚೆರಿವೆ-ಆಲಂ) 'ಗುಡ್ಡ ಅಥವಾ ಬೆಟ್ಟದ ಇಳಿಜಾರು'<ref name="AlexDeborah2014">{{Cite book |last1=Rayson K. Alex |url=https://books.google.com/books?id=1swxBwAAQBAJ&pg=PA226 |title=Culture and Media: Ecocritical Explorations |last2=S. Susan Deborah |last3=Sachindev P.S. |publisher=Cambridge Scholars Publishing |year=2014 |isbn=978-1-4438-6190-8 |page=226}}</ref> ಅಥವಾ {{transliteration|ta|ISO|cera alam}} (ಚೇರ ಆಲಂ) 'ಚೇರರ ಭೂಮಿ' ಎಂಬುದರಿಂದ ಹುಟ್ಟಿಕೊಂಡಿರಬಹುದು. ಒಂದು [[ಜಾನಪದ ವ್ಯುತ್ಪತ್ತಿ]] ''ಕೇರಳ'' ವನ್ನು [[ಮಲಯಾಳಂ]] ಪದ {{transliteration|ml|ISO|kera}} (ಕೇರ) 'ತೆಂಗಿನ ಮರ' ಮತ್ತು {{transliteration|ml|ISO|alam}} (ಆಲಂ) 'ಭೂಮಿ' ಎಂಬುದರಿಂದ ಪಡೆಯುತ್ತದೆ; ಹೀಗೆ, 'ತೆಂಗಿನ ಮರಗಳ ನಾಡು',<ref name="Sadasivan2000">{{Cite book |last=S. N. Sadasivan |url=https://books.google.com/books?id=Be3PCvzf-BYC&pg=PA101 |title=A Social History of India |publisher=APH Publishing |year=2000 |isbn=978-8176481700 |page=101}}</ref> ಇದು ತೆಂಗಿನ ಮರಗಳ ಸಮೃದ್ಧಿಯಿಂದಾಗಿ ಸ್ಥಳೀಯರು ಬಳಸುವ ರಾಜ್ಯದ ಅಡ್ಡಹೆಸರಾಗಿದೆ.<ref name="PreedyWatson2011">{{Cite book |last1=Victor R. Preedy |url=https://books.google.com/books?id=C6lYoH8rwywC&pg=PT400 |title=Nuts and Seeds in Health and Disease Prevention |last2=Ronald Ross Watson |last3=Vinood B. Patel |publisher=Academic Press |year=2011 |isbn=978-0-12-375689-3 |page=400}}</ref> ಕೇರಳವನ್ನು [[ಭಾರತೀಯ ಮಹಾಸಾಗರದ ವ್ಯಾಪಾರ|ವಿದೇಶಿ ವ್ಯಾಪಾರ ವಲಯಗಳಲ್ಲಿ]] ಪರ್ಯಾಯವಾಗಿ ''[[ಮಲಬಾರ್ ಕರಾವಳಿ|ಮಲಬಾರ್]]'' ಎಂದು ಕರೆಯಲಾಗುತ್ತಿತ್ತು. [[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟೆಸ್]] (6 ನೇ ಶತಮಾನ CE) ಕಾಲದಿಂದಲೂ, [[ಅರಬ್ಬರು|ಅರಬ್]] ನಾವಿಕರು ಕೇರಳವನ್ನು ''ಮೇಲ್'' ಎಂದು ಕರೆಯುತ್ತಿದ್ದರು.{{citation needed|date=October 2025}}
=== ಕೇರಳಂ ಎಂದು ಮರುನಾಮಕರಣ ===
ರಾಜ್ಯದ [[ಮಲಯಾಳಂ]] ಹೆಸರಾದ ಕೇರಳಂ ಎಂದು ಹೆಸರನ್ನು ಬದಲಾಯಿಸಲು ದೀರ್ಘಕಾಲದಿಂದ ಬೇಡಿಕೆಗಳಿವೆ. ಅಧಿಕೃತವಾಗಿ, ರಾಜ್ಯದ ಹೆಸರು ಮಲಯಾಳಂನಲ್ಲಿ 'ಕೇರಳಂ' (കേരളം) ಆಗಿದ್ದರೆ, ಅದರ ಇಂಗ್ಲಿಷ್ ಹೆಸರು 'ಕೇರಳ' ಆಗಿದೆ.<ref>{{Cite web |last=Vineeth |first=T. K. |date=2026-03-07 |title=KERALA-M: What's in a name? |url=https://www.newindianexpress.com/explainers/2026/Mar/07/kerala-m-whats-in-a-name |access-date=2026-03-13 |website=The New Indian Express |language=en}}</ref><ref>{{Cite web |title=Renaming Kerala: Modi Hails Kerala's New Name Keralam |url=https://www.deccanherald.com/india/kerala/rightful-name-as-per-malayali-culture-pm-modi-praises-renaming-of-kerala-to-keralam-3927718 |access-date=2026-03-13 |website=Deccan Herald |language=en}}</ref> [[ಕೇರಳ ವಿಧಾನಸಭೆ]]ಯು ಜೂನ್ 2024 ರಲ್ಲಿ ರಾಜ್ಯದ ಹೆಸರನ್ನು 'ಕೇರಳ' ದಿಂದ 'ಕೇರಳಂ' ಗೆ ಬದಲಾಯಿಸಲು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು, ಇದು ಆಗಸ್ಟ್ 2023 ರ ಹಿಂದಿನ ಸರ್ವಾನುಮತದ ನಿರ್ಣಯವನ್ನು ಅನುಸರಿಸಿತು. [[ಕೇರಳದ ಮುಖ್ಯಮಂತ್ರಿ|ಮುಖ್ಯಮಂತ್ರಿ]] [[ಪಿಣರಾಯಿ ವಿಜಯನ್]] ಅವರು ಎರಡೂ ನಿರ್ಣಯಗಳನ್ನು ಮಂಡಿಸಿದ್ದರು, ಇದು ಅದರ [[ಮಲಯಾಳಿ]] ಗುರುತನ್ನು ಪ್ರತಿಬಿಂಬಿಸಲು ಸಂವಿಧಾನದ ಅನುಚ್ಛೇದ 3 ರ ಅಡಿಯಲ್ಲಿ ರಾಜ್ಯದ ಹೆಸರನ್ನು ತಿದ್ದುಪಡಿ ಮಾಡಲು ಪ್ರಯತ್ನಿಸಿತು.<ref name="auto1">{{cite web | last=TNIE online desk | first=Agencies | title=Ahead of polls, Union Cabinet approves Kerala's renaming to 'Keralam' | website=The New Indian Express | date=2026-02-24 | url=https://www.newindianexpress.com/states/kerala/2026/Feb/24/union-cabinet-approves-keralas-renaming-to-keralam-ahead-of-polls | access-date=2026-02-24}}</ref>
[[ಮೂರನೇ ಮೋದಿ ಸಚಿವ ಸಂಪುಟ|ಕೇಂದ್ರ ಸಚಿವ ಸಂಪುಟ]]ವು ಈ ಪ್ರಸ್ತಾಪವನ್ನು ಫೆಬ್ರವರಿ 24, 2026 ರಂದು ಅನುಮೋದಿಸಿತು. ಸಚಿವ ಸಂಪುಟದ ಅನುಮೋದನೆಯ ನಂತರ, [[ಭಾರತದ ರಾಷ್ಟ್ರಪತಿ]]ಗಳು ಕೇರಳ (ಹೆಸರು ಬದಲಾವಣೆ) ಮಸೂದೆ, 2026 ಅನ್ನು ಭಾರತದ ಸಂವಿಧಾನದ ಅನುಚ್ಛೇದ 3 ರ ಷರತ್ತಿನ ಅಡಿಯಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು [[ಕೇರಳ ವಿಧಾನಸಭೆ|ರಾಜ್ಯ ವಿಧಾನಸಭೆಗೆ]] ಉಲ್ಲೇಖಿಸುತ್ತಾರೆ.<ref name="auto">{{cite web | title=Kerala will now be called Keralam | website=India Today | date=2026-02-24 | url=https://www.indiatoday.in/india/story/union-cabinet-approves-proposal-renaming-kerala-to-keralam-2873528-2026-02-24 | access-date=2026-02-24}}</ref>
[[ಕೇರಳ ವಿಧಾನಸಭೆ]]ಯ ಅನುಮೋದನೆಯ ನಂತರ, ಈ ಮಸೂದೆಯನ್ನು [[ಭಾರತದ ಸಂಸತ್ತಿನಲ್ಲಿ]] ಮಂಡಿಸಲಾಗುವುದು ಮತ್ತು ಅಂಗೀಕರಿಸಿದರೆ, ರಾಜ್ಯದ ಹೆಸರು ಅಧಿಕೃತವಾಗಿ ಕೇರಳಂ ಆಗುತ್ತದೆ.
== ಇತಿಹಾಸ ==
{{Main|ಕೇರಳದ ಇತಿಹಾಸ}}
=== ದಂತಕಥೆ ===
[[File:Parshuramsaraswats.jpg|thumb|[[ಪರಶುರಾಮ]]ನನ್ನು ಚಿತ್ರಿಸುವ ವರ್ಣಚಿತ್ರ, ವಸಾಹತುಗಾರರಿಂದ ಸುತ್ತುವರಿದು, [[ವರುಣ]] ([[ಹಿಂದೂ]] ಜಲದೇವತೆ) ನನ್ನು ಸಮುದ್ರಗಳನ್ನು ಬೇರ್ಪಡಿಸಲು ಆಜ್ಞಾಪಿಸುತ್ತಾನೆ]]
[[ಹಿಂದೂ]] ಪುರಾಣಗಳ [[ದಶಾವತಾರ]] ಕಥೆಗಳಲ್ಲಿ, ಕೇರಳದ ಭೂಮಿಯನ್ನು ಕೊಡಲಿ-ಧಾರಿಯ ವೀರ ಋಷಿ [[ಪರಶುರಾಮ]]ನು, [[ವಿಷ್ಣು]]ವಿನ ಆರನೇ [[ಅವತಾರ]] (ಅವತಾರ), ಸಮುದ್ರದಿಂದ ಮರಳಿ ಪಡೆದನು. ಪರಿಣಾಮವಾಗಿ, ಕೇರಳವನ್ನು ಸಾಂಪ್ರದಾಯಿಕವಾಗಿ ''ಪರಶುರಾಮ ಕ್ಷೇತ್ರಂ'' ("ಪರಶುರಾಮನ ನಾಡು") ಎಂದು ಕರೆಯಲಾಗುತ್ತದೆ.<ref>S. C. Bhatt, Gopal K. Bhargava (2006) "Land and People of Indian States and Union Territories: Volume 14.", p.18</ref> ದಂತಕಥೆಯ ಪ್ರಕಾರ, ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರದ ಮೇಲೆ ಎಸೆದನು, ಮತ್ತು ಅದು ಬಿದ್ದ ಸ್ಥಳದವರೆಗೆ ನೀರು ಹಿಂಜರಿಯಿತು. ಈ ರೀತಿ ಹೊರಹೊಮ್ಮಿದ ಭೂಮಿಯು [[ಗೋಕರ್ಣ]]ದಿಂದ [[ಕನ್ಯಾಕುಮಾರಿ]]ಯವರೆಗೆ ವಿಸ್ತರಿಸಿತು.<ref>{{cite book |author=Aiya VN |title=The Travancore State Manual|publisher=Travancore Government Press |pages=210–212 |year=1906 |accessdate=12 November 2007 |url=https://books.google.com/books?id=RdzaPW-kEvQC}}</ref> ಹೊರಹೊಮ್ಮಿದ ಭೂಮಿಯು ಲವಣಯುಕ್ತ ಮತ್ತು ವಾಸಯೋಗ್ಯವಾಗಿರಲಿಲ್ಲ, ಆದ್ದರಿಂದ ಪರಶುರಾಮನು ಸರ್ಪರಾಜ [[ವಾಸುಕಿ]]ಯನ್ನು ಪ್ರಾರ್ಥಿಸಿದನು, ಅವನು ಮಣ್ಣನ್ನು ಶುದ್ಧೀಕರಿಸಲು ಪವಿತ್ರ ವಿಷವನ್ನು ಉಗುಳಿದನು, ಅದನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದನು. ಗೌರವದಿಂದ, ವಾಸುಕಿ ಮತ್ತು ಎಲ್ಲಾ ಹಾವುಗಳನ್ನು ಭೂಮಿಯ ರಕ್ಷಕರಾಗಿ ನೇಮಿಸಲಾಯಿತು. ಈ ದಂತಕಥೆಯನ್ನು 17 ನೇ ಅಥವಾ 18 ನೇ ಶತಮಾನದ ಪಠ್ಯ ''[[ಕೇರಳೋಲ್ಪತ್ತಿ]]'' ಯಲ್ಲಿ ವಿಸ್ತರಿಸಲಾಯಿತು ಮತ್ತು ಸಂಹಿತೆಗೊಳಿಸಲಾಯಿತು. ಇದು ಆರಂಭಿಕ ಕೇರಳ ಸಂಸ್ಥೆಗಳ{{mdash}}ಉದಾಹರಣೆಗೆ ಭೂ ಹಿಡುವಳಿ ಮತ್ತು ಆಡಳಿತ{{mdash}}ಮೂಲವನ್ನು ಪರಶುರಾಮನ ಕಥೆಗೆ ಸಂಪರ್ಕಿಸುತ್ತದೆ.<ref>{{cite book|author=M. T. Narayanan|title=Agrarian Relations in Late Medieval Malabar|url=https://books.google.com/books?id=kHtbkuXruzwC&pg=PA17|accessdate=28 July 2012|date=1 January 2003|publisher=Northern Book Centre|isbn=978-81-7211-135-9|pages=16–18}}</ref> ಮಧ್ಯಕಾಲೀನ ಯುಗದಲ್ಲಿ, [[ಚೇರ]] ರಾಜ [[ಚೆಂಕುಟ್ಟುವನ್]] ತನ್ನ ಈಟಿಯನ್ನು ಸಮುದ್ರಕ್ಕೆ ಎಸೆಯುವ ಮೂಲಕ ಪರಶುರಾಮ ಸಂಪ್ರದಾಯವನ್ನು ಅನುಕರಿಸಿರಬಹುದು, ಅದರ ಮೇಲಿನ ತನ್ನ ಪ್ರಭುತ್ವವನ್ನು ಸಂಕೇತಿಸಲು.<ref>{{Cite book |last=Srinivisa Iyengar |first=P. T. |title=History of the Tamils: From the Earliest Times to 600 A.D. |publisher=Asian Educational Services |year=1929 |isbn=978-8120601451 |location=Madras |page=515}}</ref>
ಕೇರಳದೊಂದಿಗೆ ಸಂಬಂಧಿಸಿದ ಪ್ರಮುಖ [[ಪೌರಾಣಿಕ]] ವ್ಯಕ್ತಿಯೆಂದರೆ [[ಮಹಾಬಲಿ]], ಒಬ್ಬ [[ಅಸುರ]] ಮತ್ತು ಮಾದರಿ ನ್ಯಾಯಪ್ರಿಯ ರಾಜ, ಅವರು ಕೇರಳದಿಂದ ಭೂಮಿಯನ್ನು ಆಳಿದರು ಎಂದು ಹೇಳಲಾಗುತ್ತದೆ. ಅವನು ಯುದ್ಧದಲ್ಲಿ [[ದೇವ (ಹಿಂದೂ ಧರ್ಮ)|ದೇವ]] ಗಳನ್ನು ಸೋಲಿಸಿ, ಅವರನ್ನು ಗಡಿಪಾರು ಮಾಡಿದನು. ಪ್ರತಿಕ್ರಿಯೆಯಾಗಿ, ದೇವರುಗಳು ವಿಷ್ಣುವಿಗೆ ಮನವಿ ಮಾಡಿದರು, ಅವರು [[ವಾಮನ]]ನಾಗಿ ತಮ್ಮ ಐದನೇ ಅವತಾರವನ್ನು ತಾಳಿದರು ಮತ್ತು ಕ್ರಮವನ್ನು ಪುನಃಸ್ಥಾಪಿಸಲು, ಮಹಾಬಲಿಯನ್ನು [[ಪಾತಾಳ]] (ಪಾತಾಳ ಲೋಕ) ಕೆಳಗೆ ತಳ್ಳಿದರು. ಜನಪ್ರಿಯ ನಂಬಿಕೆಯ ಪ್ರಕಾರ, ಮಹಾಬಲಿ ವರ್ಷಕ್ಕೊಮ್ಮೆ ಕೇರಳಕ್ಕೆ ಹಿಂತಿರುಗುತ್ತಾನೆ, ಇದನ್ನು [[ಓಣಂ]] ಹಬ್ಬವಾಗಿ ಆಚರಿಸಲಾಗುತ್ತದೆ.<ref name="Rinehart2004">{{cite book|author=Robin Rinehart|title=Contemporary Hinduism: Ritual, Culture, and Practice|url=https://books.google.com/books?id=hMPYnfS_R90C&pg=PA146|accessdate=28 July 2012|year=2004|publisher=ABC-CLIO|isbn=978-1-57607-905-8|page=146}}</ref> 18 [[ಪುರಾಣಗಳಲ್ಲಿ]] ಅತ್ಯಂತ ಹಳೆಯದಾದ ''[[ಮತ್ಸ್ಯ ಪುರಾಣ]]''ವು,<ref>{{cite book|last=Goldberg|first=Ellen|title=The Lord who is Half Woman: Ardhanārīśvara in Indian and Feminist Perspective|url=https://books.google.com/books?id=xUhlxBozntoC&pg=PA20|year=2002|publisher=SUNY Press|isbn=978-0-7914-5325-4|page=20|accessdate=30 May 2015}}</ref><ref>{{cite book|last=Kemmerer|first=Lisa|title=Animals and World Religions|url=https://books.google.com/books?id=iFEL2yjkbAAC&pg=PA78|year=2011|publisher=Oxford University Press|isbn=978-0-19-991255-1|page=78|accessdate=30 May 2015}}</ref> [[ಮತ್ಸ್ಯ]]ದ{{mdash}}ವಿಷ್ಣುವಿನ ಮೊದಲ ಅವತಾರ{{mdash}}ಮತ್ತು ರಾಜ [[ಮನು (ಹಿಂದೂ ಧರ್ಮ)|ಮನು]]ನ ಕಥೆಯನ್ನು, ಮೊದಲ ಮನುಷ್ಯ ಮತ್ತು ಈ ಪ್ರದೇಶದ ಆಡಳಿತಗಾರ, ಕೇರಳ ಮತ್ತು [[ತಮಿಳುನಾಡಿನ]] [[ಮಲಯ ಪರ್ವತಗಳಲ್ಲಿ]] ಇರಿಸುತ್ತದೆ.<ref>{{cite book|last=Dalal|first=Roshen|title=Hinduism: An Alphabetical Guide|url=https://books.google.com/books?id=DH0vmD8ghdMC&pg=PA250|year=2011|publisher=Penguin Books India|isbn=978-0-14-341421-6|page=250|accessdate=30 May 2015}}</ref><ref>{{cite book|last=Ragozin|first=Zenaide A.|title=Vedic India As Embodied Principally in the Rig-veda|url=https://books.google.com/books?id=T16d-eRG5VkC&pg=PA341|year=2005|publisher=Kessinger Publishing|isbn=978-1-4179-4463-7|page=341|accessdate=21 March 2013}}</ref>
=== ಪ್ರಾಗಿತಿಹಾಸ ===
[[File:MarayoorDolmen.JPG|thumb|[[ಮಾರಯೂರು|ಮಾರಯೂರಿನಲ್ಲಿ]] ನವಶಿಲಾಯುಗದ ಜನರು ನಿರ್ಮಿಸಿದ [[ಡಾಲ್ಮೆನ್]]]]
ಪ್ರಸ್ತುತ ಕೇರಳದ ಗಣನೀಯ ಭಾಗವು ಪ್ರಾಚೀನ ಕಾಲದಲ್ಲಿ ಸಮುದ್ರದ ಅಡಿಯಲ್ಲಿ ಮುಳುಗಿತ್ತು ಎಂದು ನಂಬಲಾಗಿದೆ. ಚಂಗನಾಶ್ಶೇರಿಯ ಬಳಿ ಸಾಗರಿಕ ಪಳೆಯುಳಿಕೆಗಳ ಆವಿಷ್ಕಾರವು ಈ ಊಹೆಯನ್ನು ಬೆಂಬಲಿಸುತ್ತದೆ.<ref name="Menon2007">{{cite book|author=A. Sreedhara Menon|title=A Survey of Kerala History|url=https://books.google.com/books?id=FVsw35oEBv4C&pg=PA20|accessdate=27 July 2012|date=1 January 2007|publisher=DC Books|isbn=978-81-264-1578-6|pages=20–21}}</ref> ಕೇರಳದಲ್ಲಿನ ಪ್ರಾಗೈತಿಹಾಸಿಕ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರಗಳು ಇಡುಕ್ಕಿ ಜಿಲ್ಲೆಯ [[ಮಾರಯೂರು]] ಪ್ರದೇಶದಲ್ಲಿ [[ನವಶಿಲಾಯುಗ]]-ಯುಗದ [[ಡಾಲ್ಮೆನ್]]ಗಳನ್ನು ಒಳಗೊಂಡಿವೆ, ಸ್ಥಳೀಯವಾಗಿ ''ಮುನಿಯಾರ'' ಎಂದು ಕರೆಯಲಾಗುತ್ತದೆ{{mdash}}''ಮುನಿ'' (ಸನ್ಯಾಸಿ ಅಥವಾ ಋಷಿ) ಮತ್ತು ''ಆರ'' (ಡಾಲ್ಮೆನ್) ನಿಂದ ಬಂದಿದೆ.<ref name="Unlocking the secrets of history">{{cite news|url=http://www.hindu.com/2004/12/06/stories/2004120604900300.htm | location=Chennai, India | work=The Hindu | title=Unlocking the secrets of history | date=6 December 2004 | accessdate= 12 November 2015}}</ref> [[ವಯನಾಡಿನ]] [[ಎಡಕ್ಕಲ್ ಗುಹೆಗಳು|ಎಡಕ್ಕಲ್ ಗುಹೆಗಳಲ್ಲಿನ]] ಬಂಡೆಯ ಕೆತ್ತನೆಗಳು ಸುಮಾರು 6000 BCE ಯ ನವಶಿಲಾಯುಗದ ಅವಧಿಯ ಹಿಂದಿನವು.<ref name="Kapoor2002">{{cite book|author=Subodh Kapoor|title=The Indian Encyclopaedia|url=https://books.google.com/books?id=gxIpYtnyzu4C&pg=PA2184|accessdate=1 August 2012|date=1 July 2002|publisher=Cosmo Publications|isbn=978-81-7755-257-7|page=2184}}</ref><ref>{{cite web|title=Travel and Tourism|url=http://www.kerala.gov.in/index.php?option=com_content&view=article&id=3792:travel-and-tourism&catid=271:about-kerala&Itemid=2267|website=kerala.gov.in|publisher=Government of Kerala|accessdate=12 November 2015}}</ref> ಪುರಾತತ್ತ್ವ ಶಾಸ್ತ್ರದ ಅಧ್ಯಯನಗಳು ಈ ಪ್ರದೇಶದಾದ್ಯಂತ [[ಮಧ್ಯಶಿಲಾಯುಗ]], ನವಶಿಲಾಯುಗ ಮತ್ತು [[ಮೆಗಾಲಿಥಿಕ್]] ತಾಣಗಳನ್ನು ಗುರುತಿಸಿವೆ.<ref name="AroraSingh116">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=116}}</ref> ಈ ಆವಿಷ್ಕಾರಗಳು ಆರಂಭಿಕ ಕೇರಳ ಸಮಾಜ ಮತ್ತು ಸಂಸ್ಕೃತಿಯ ಅಭಿವೃದ್ಧಿಯು [[ಪ್ಯಾಲಿಯೋಲಿಥಿಕ್|ಪ್ಯಾಲಿಯೋಲಿಥಿಕ್ ಯುಗದಲ್ಲಿ]] ಪ್ರಾರಂಭವಾಯಿತು ಮತ್ತು ಮಧ್ಯಶಿಲಾಯುಗ, ನವಶಿಲಾಯುಗ ಮತ್ತು ಮೆಗಾಲಿಥಿಕ್ ಅವಧಿಗಳ ಮೂಲಕ ಮುಂದುವರೆಯಿತು ಎಂದು ಸೂಚಿಸುತ್ತವೆ.<ref name="google">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|pages=118, 123}}</ref> ವಿದೇಶಿ ಸಾಂಸ್ಕೃತಿಕ ಸಂವಹನಗಳು ಸಹ ಈ ಅಭಿವೃದ್ಧಿಯನ್ನು ರೂಪಿಸುವಲ್ಲಿ ಪಾತ್ರವಹಿಸಿವೆ;<ref name="AroraSingh1999">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=123}}</ref> ಕೆಲವು ಇತಿಹಾಸಕಾರರು ಕೊನೆಯ [[ಕಂಚಿನ ಯುಗ]] ಮತ್ತು ಆರಂಭಿಕ [[ಕಬ್ಬಿಣ ಯುಗ|ಕಬ್ಬಿಣದ ಯುಗ]]ದಲ್ಲಿ [[ಸಿಂಧೂ ಕಣಿವೆ ನಾಗರಿಕತೆ]]ಯೊಂದಿಗೆ ಸಂಭವನೀಯ ಸಂಪರ್ಕಗಳನ್ನು ಸೂಚಿಸುತ್ತಾರೆ.<ref>{{cite news|url=http://www.thehindu.com/news/states/article26324.ece | work=The Hindu | title=Symbols akin to Indus valley culture discovered in Kerala | date=29 September 2009 |accessdate= 12 November 2015}}</ref>
=== ಪ್ರಾಚೀನ ಇತಿಹಾಸ ===
[[File:Silk route copy.jpg|thumb|225px|[[ರೇಷ್ಮೆ ಮಾರ್ಗ]] ನಕ್ಷೆ. ಮಸಾಲೆ ವ್ಯಾಪಾರವು ಜಲಮಾರ್ಗಗಳಲ್ಲಿತ್ತು (ನೀಲಿ).]]
[[ಸುಮೇರ್|ಸುಮೇರಿಯನ್]] ದಾಖಲೆಗಳ ಪ್ರಕಾರ, ಕೇರಳವು ಕನಿಷ್ಠ 3000 BCE ಯಿಂದಲೂ ಪ್ರಮುಖ ಮಸಾಲೆ ರಫ್ತುದಾರನಾಗಿದೆ ಮತ್ತು ಇದು "ಮಸಾಲೆಗಳ ತೋಟ" ಅಥವಾ "ಭಾರತದ ಮಸಾಲೆ ತೋಟ" ಎಂದು ಉಲ್ಲೇಖಿಸಲ್ಪಡುತ್ತದೆ.<ref>{{cite news|url=http://www.thehindu.com/todays-paper/tp-national/tp-kerala/of-kerala-egypt-and-the-spice-link/article5625620.ece | first = Kaavya | last = Pradeep Kumar | work=The Hindu | title=Of Kerala, Egypt, and the Spice link | date=28 January 2014 | accessdate=12 November 2015}}</ref><ref>[https://books.google.com/books?id=gOrvghLklKoC ''Striving for sustainability, environmental stress and democratic initiatives in Kerala''], p. 79; ISBN 81-8069-294-9, Srikumar Chattopadhyay, Richard W. Franke; Year: 2006.</ref><ref name="spiceHindu">{{Cite news |title=Route it through the seas |newspaper=The Hindu |date=December 2016 |url=https://www.thehindu.com/children/ROUTE-it-through-the-seas/article16735515.ece |access-date=2024-01-08 |archive-date=5 March 2022 |archive-url=https://web.archive.org/web/20220305035957/https://www.thehindu.com/children/ROUTE-it-through-the-seas/article16735515.ece |url-status=live |last1=Subramanian |first1=Archana }}</ref> ಈ ಪ್ರದೇಶದ ಮಸಾಲೆಗಳು 3 ಮತ್ತು 2 ನೇ ಸಹಸ್ರಮಾನ BCE ಯಲ್ಲಿ ಮಲಬಾರ್ ಕರಾವಳಿಗೆ ಪ್ರಾಚೀನ [[ಬ್ಯಾಬಿಲೋನಿಯನ್ನರು]], [[ಅಸಿರಿಯನ್ನರು]] ಮತ್ತು [[ಈಜಿಪ್ಟಿನವರು|ಈಜಿಪ್ಟಿನವರನ್ನು]] ಆಕರ್ಷಿಸಿದವು. [[ಅರಬ್ಬರು]] ಮತ್ತು [[ಫೀನಿಷಿಯನ್ನರು]] ಸಹ ಈ ಅವಧಿಯಲ್ಲಿ ಕೇರಳದೊಂದಿಗೆ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಿದರು.<ref name="Menon57">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA57|accessdate=10 October 2012|date=1 January 2007|publisher=DC Books|isbn=978-81-264-1578-6|pages=57–58}}</ref> ಕೇರಳಪುತ್ರದ ಭೂಮಿಯು ಚಕ್ರವರ್ತಿ ಅಶೋಕನ ಕಾಲದಲ್ಲಿ ದಕ್ಷಿಣ ಭಾರತದ ನಾಲ್ಕು ಸ್ವತಂತ್ರ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು, [[ಚೋಳ ಸಾಮ್ರಾಜ್ಯ|ಚೋಳ]], [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಮತ್ತು [[ಸತಿಯಪುತ್ರರು|ಸತಿಯಪುತ್ರ]] ಸಾಮ್ರಾಜ್ಯಗಳ ಜೊತೆಗೆ.<ref name="SmithJackson2008">{{cite book|author1=Vincent A. Smith|author2=A. V. Williams Jackson|title=History of India, in Nine Volumes: Vol. II – From the Sixth Century BCE to the Mohammedan Conquest, Including the Invasion of Alexander the Great|url=https://books.google.com/books?id=bP7DzXQBoM4C&pg=PA166|accessdate=1 August 2012|date=30 November 2008|publisher=Cosimo, Inc.|isbn=978-1-60520-492-5|page=166}}</ref> ವಿದ್ವಾಂಸರು ಸಾಮಾನ್ಯವಾಗಿ ಕೇರಳಪುತ್ರವನ್ನು [[ಚೇರ ಸಾಮ್ರಾಜ್ಯ|ಚೇರರು]] ಎಂದು ಗುರುತಿಸುತ್ತಾರೆ, ಇದು ಕೇರಳದ ಅತ್ಯಂತ ಹಳೆಯ ಪ್ರಮುಖ ರಾಜವಂಶವಾಗಿದೆ.<ref name="The Cambridge Shorter History of India">{{cite book|title=The Cambridge Shorter History of India|url=https://books.google.com/books?id=9_48AAAAIAAJ&pg=PA193|accessdate=10 October 2012|publisher=CUP Archive|page=193|id=GGKEY:2W0QHXZ7K40}}</ref><ref name="Dwivedi1994">{{cite book|author=Bhanwar Lal Dwivedi|title=Evolution of Education Thought in India|url=https://books.google.com/books?id=idERT6Tg4MMC&pg=PA164|accessdate=10 October 2012|date=1 January 1994|publisher=Northern Book Centre|isbn=978-81-7211-059-8|page=164}}</ref> ಈ ದಕ್ಷಿಣ ಪ್ರದೇಶಗಳು ಒಮ್ಮೆ ಸಾಮಾನ್ಯ ಭಾಷೆ ಮತ್ತು ಸಾಂಸ್ಕೃತಿಕ ಚೌಕಟ್ಟನ್ನು ಹಂಚಿಕೊಂಡಿದ್ದವು, ಇತಿಹಾಸದಲ್ಲಿ [[ತಮಿಳಕಂ]] ಎಂದು ಕರೆಯಲ್ಪಡುವ ಪ್ರದೇಶದೊಳಗೆ.<ref>{{Cite book
| last=Kanakasabhai | first=V.
| title=The Tamils Eighteen Hundred Years Ago
| url=https://books.google.com/books?id=VuvshP5_hg8C
| year=1997
| publisher=Asian Educational Services
| isbn=978-81-206-0150-5
| accessdate=16 June 2009}}</ref> ಚೇರರು ಪ್ರಸ್ತುತ ಕೇರಳದ ಹೆಚ್ಚಿನ ಭಾಗವನ್ನು ಆಳಿದರೆ, ಪ್ರದೇಶದ ದಕ್ಷಿಣ ತುದಿಯು [[ಪಾಂಡ್ಯರ]] ನಿಯಂತ್ರಣಕ್ಕೆ ಒಳಪಟ್ಟಿತ್ತು,<ref name="Singh2008">{{cite book|author=Upinder Singh|title=A History of Ancient and Early Medieval India: From the Stone Age to the 12th Century|url=https://books.google.com/books?id=GW5Gx0HSXKUC&pg=PA385|accessdate=10 October 2012|year=2008|publisher=Pearson Education India|isbn=978-81-317-1677-9|page=385}}</ref> ಅವರ ವ್ಯಾಪಾರ ಬಂದರನ್ನು ಪ್ರಾಚೀನ ಪಾಶ್ಚಾತ್ಯ ಮೂಲಗಳಲ್ಲಿ [[ನೆಲ್ಸಿಂಡಾ]] (ಅಥವಾ ನಿಯಾಸಿಂಡಿ) ಎಂದು ಗುರುತಿಸಲಾಗಿದೆ.<ref name="Books.google.co.in">{{Cite book|url=https://books.google.com/books?id=rQipbjusDyQC&dq=nelcynda&pg=PA301 |title=History of ancient geography – Google Books |author=James Oliver Thomson|publisher=Biblo & Tannen Publishers, 1948|accessdate=30 July 2009|isbn=978-0-8196-0143-8|year=1948}}</ref> ನಂತರ, ಈ ಪ್ರದೇಶದ ನಿಯಂತ್ರಣವು ಪಾಂಡ್ಯರು, ಚೇರರು ಮತ್ತು ಚೋಳರ ನಡುವೆ ಪರ್ಯಾಯವಾಗಿತ್ತು. [[ಆಯ್ ಸಾಮ್ರಾಜ್ಯ|ಆಯ್ಸ್]] ಮತ್ತು [[ಎಝಿಮಲ ಸಾಮ್ರಾಜ್ಯ|ಮುಷಿಕರು]] ಪ್ರಾಚೀನ ಕೇರಳದ ಇತರ ಎರಡು ರಾಜವಂಶಗಳಾಗಿದ್ದು, ಕ್ರಮವಾಗಿ ಚೇರ ಪ್ರದೇಶದ ದಕ್ಷಿಣ ಮತ್ತು ಉತ್ತರಕ್ಕೆ ನೆಲೆಗೊಂಡಿದ್ದವು.<ref name="Shashi1996">{{cite book|author=S. S. Shashi|title=Encyclopaedia Indica: India, Pakistan, Bangladesh|url=https://books.google.com/books?id=lwswAQAAIAAJ|accessdate=10 October 2012|year=1996|publisher=Anmol Publications|isbn=978-81-7041-859-7|page=1207}}</ref><ref name="Ramunny1993">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA3|accessdate=10 October 2012|date=1 January 1993|publisher=Northern Book Centre|isbn=978-81-7211-052-9|page=3}}</ref>
ಕೊನೆಯ ಶತಮಾನಗಳ BCE ಯ ಹೊತ್ತಿಗೆ, ಕರಾವಳಿಯು ಗ್ರೀಕ್ ಮತ್ತು ರೋಮನ್ ವ್ಯಾಪಾರಕ್ಕೆ, ವಿಶೇಷವಾಗಿ [[ಕರಿ ಮೆಣಸು|ಕರಿಮೆಣಸಿನಲ್ಲಿ]] ಪ್ರಮುಖ ಕೇಂದ್ರವಾಗಿತ್ತು. ಚೇರರು [[ಪ್ರಾಚೀನ ಚೀನಾ]], [[ಪಶ್ಚಿಮ ಏಷ್ಯಾ]], ಈಜಿಪ್ಟ್, ಗ್ರೀಸ್ ಮತ್ತು [[ರೋಮನ್ ಸಾಮ್ರಾಜ್ಯ]]ದೊಂದಿಗೆ ವಾಣಿಜ್ಯ ಸಂಪರ್ಕಗಳನ್ನು ಹೊಂದಿದ್ದರು. ವಿದೇಶಿ ವ್ಯಾಪಾರ ದಾಖಲೆಗಳಲ್ಲಿ, ಈ ಪ್ರದೇಶವನ್ನು ಮೇಲ್ ಅಥವಾ [[ಮಲಬಾರ್ ಕರಾವಳಿ|ಮಲಬಾರ್]] ಎಂದು ಕರೆಯಲಾಗುತ್ತಿತ್ತು.<ref>{{cite web | url=http://www.siamese-heritage.org/jsspdf/1961/JSS_054_1c_Minattur_MalayaWhatsInAName.pdf | title=Malaya: What's in the name | publisher=siamese-heritage.org | accessdate=7 August 2012 | author=Joseph Minattur | page=1}}</ref> ಆ ಕಾಲದ ಪ್ರಮುಖ ಬಂದರುಗಳು [[ಮುಝಿರಿಸ್]], ಬೆರ್ಕರೈ ಮತ್ತು ನೆಲ್ಸಿಂಡಾ.<ref name="Kusuman">{{cite book |author=K. K. Kusuman |title=A History of Trade & Commerce in Travancore |publisher=Mittal Publications |year=1987 |isbn=978-81-7099-026-0 |url=https://books.google.com/books?id=qbNuyHswr1cC |pages=1–2 |accessdate=30 May 2015}}</ref> ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವನ್ನು 50 ಮಿಲಿಯನ್ [[ಸೆಸ್ಟರ್ಸಸ್]] ಎಂದು ಅಂದಾಜಿಸಲಾಗಿದೆ.<ref>According to [[Pliny the Elder]], goods from India were sold in the Empire at 100 times their original purchase price. See [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> ಸಮಕಾಲೀನ [[ಸಂಗಮ್ ಸಾಹಿತ್ಯ]]ವು ಮೆಣಸಿನ ಬದಲಿಗೆ ಚಿನ್ನದಿಂದ ತುಂಬಿದ ರೋಮನ್ ಹಡಗುಗಳು ಮುಝಿರಿಸ್ಗೆ ಆಗಮಿಸುವುದನ್ನು ವಿವರಿಸುತ್ತದೆ. ಕೇರಳವನ್ನು ತಲುಪಲು ಮಾನ್ಸೂನ್ ಗಾಳಿಯನ್ನು ನ್ಯಾವಿಗೇಟ್ ಮಾಡಿದ ಮೊದಲ ಪಶ್ಚಿಮ ವ್ಯಾಪಾರಿಗಳಲ್ಲಿ ಒಬ್ಬರು [[ಸೈಜಿಕಸ್ನ ಯುಡೋಕ್ಸಸ್]], ಅವರು ಈಜಿಪ್ಟ್ನ [[ಹೆಲ್ಲೆನಿಸ್ಟಿಕ್ ನಾಗರಿಕತೆ|ಹೆಲ್ಲೆನಿಸ್ಟಿಕ್]] [[ಟಾಲಮಿಕ್ ರಾಜವಂಶ]]ದ ರಾಜ [[ಟಾಲಮಿ VIII ಫಿಸ್ಕಾನ್|ಟಾಲಮಿ VIII]] ರ ಆಶ್ರಯದಲ್ಲಿ ಸುಮಾರು 118 ಅಥವಾ 166 BCE ಯಲ್ಲಿ ಪ್ರಯಾಣ ಮಾಡಿದರು. ಈ ಪ್ರದೇಶದ ಬಂದರು ನಗರಗಳಲ್ಲಿನ ರೋಮನ್ ಸ್ಥಾಪನೆಗಳು{{mdash}}[[ಆಗಸ್ಟಸ್]] ದೇವಾಲಯ ಮತ್ತು ರೋಮನ್ ಸೈನಿಕರಿಗೆ ಬ್ಯಾರಕ್ಗಳು ಸೇರಿದಂತೆ{{mdash}}ರೋಮನ್ ''[[ಕರ್ಸಸ್ ಪಬ್ಲಿಕಸ್]]'' ನ ಏಕೈಕ ಉಳಿದಿರುವ ನಕ್ಷೆಯಾದ ''[[ಟ್ಯಾಬುಲಾ ಪ್ಯೂಟಿಂಗೇರಿಯಾನಾ]]'' ದಲ್ಲಿ ದಾಖಲಿಸಲಾಗಿದೆ.<ref>{{cite book|author=Abraham Eraly|title=The First Spring: The Golden Age of India|url=https://books.google.com/books?id=te1sqTzTxD8C&pg=PA246|accessdate=7 August 2012|date=1 December 2011|publisher=Penguin Books India|isbn=978-0-670-08478-4|pages=246–}}</ref><ref name="Iyengar_2001">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |accessdate=29 December 2008}}</ref>
ಪಶ್ಚಿಮ ಏಷ್ಯಾ ಮತ್ತು ದಕ್ಷಿಣ ಯುರೋಪಿನ ವ್ಯಾಪಾರಿಗಳು ಕೇರಳದಲ್ಲಿ ಕರಾವಳಿ ಠಾಣ್ಯಗಳು ಮತ್ತು ವಸಾಹತುಗಳನ್ನು ಸ್ಥಾಪಿಸಿದರು.<ref name="google2">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |pages=192–195 |accessdate=29 December 2008}}</ref> ಕೇರಳದೊಂದಿಗಿನ ಯಹೂದಿ ಸಂಪರ್ಕವು 573 BCE ಯ ಹಿಂದಿನದು ಎಂದು ನಂಬಲಾಗಿದೆ.<ref name="Orpa Slapak">[https://books.google.co.in/books?id=qhKGPprbQaYC&printsec=frontcover&dq=isbn:9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA#v=onepage&q=two%20millennia&f=true ''The Jews of India: A Story of Three Communities''] by Orpa Slapak. The Israel Museum, Jerusalem. 2003. p. 27. ISBN 965-278-179-7.</ref><ref name="Hillel1832">{{cite book|author=David D'Beth Hillel|title=The Travels of Rabbi David D'Beth Hillel: From Jerusalem, Through Arabia, Koordistan, Part of Persia, and India to Madras|url=https://books.google.com/books?id=j5NeAAAAcAAJ&pg=PR9|year=1832|publisher=author|page=135}}</ref><ref>{{cite book|title=The Jews in India and the Far East|url=https://books.google.com/books?id=w_v-nQEACAAJ|year=1976|publisher=Greenwood Press|pages=24–26 | isbn=978-0-8371-2615-9 }}</ref> ಅರಬ್ ವ್ಯಾಪಾರಿಗಳು ಕನಿಷ್ಠ 4 ನೇ ಶತಮಾನ BCE ಯಿಂದಲೂ ಕೇರಳದೊಂದಿಗೆ ಸಂಪರ್ಕ ಹೊಂದಿದ್ದರು; [[ಹೆರೊಡೋಟಸ್]] (484–413 BCE) ಅರಬ್ಬರು ಕೇರಳದಿಂದ ತಂದ ಸರಕುಗಳನ್ನು ಈಡನ್ನಲ್ಲಿರುವ ಯಹೂದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಗಮನಿಸಿದರು.<ref name="Kusuman"/> ಈ ಅರಬ್ ವ್ಯಾಪಾರಿಗಳು ಸ್ಥಳೀಯ ಸಮುದಾಯಗಳೊಂದಿಗೆ ಮದುವೆಯಾದರು, ಇದು ಮುಸ್ಲಿಂ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಸಮುದಾಯದ ರಚನೆಗೆ ಕಾರಣವಾಯಿತು.<ref name="Dialogue">{{cite book |author=Rolland E. Miller |title=Hindu-Christian Dialogue: Perspectives and Encounters |publisher=Motilal Banarsidass Publications |year=1993 |isbn=978-81-208-1158-4 |url=https://books.google.com/books?id=6eHgNyNimoAC |page=50}}</ref> 4 ನೇ ಶತಮಾನ CE ಯಲ್ಲಿ, ಕೆಲವು ಕ್ರೈಸ್ತರು [[ಪರ್ಷಿಯಾ]]ದಿಂದ ವಲಸೆ ಬಂದರು ಮತ್ತು ಆರಂಭಿಕ [[ಸೇಂಟ್ ತಾಮಸ್ ಕ್ರೈಸ್ತರು|ಸಿರಿಯನ್ ಕ್ರಿಶ್ಚಿಯನ್]] ಸಮುದಾಯಕ್ಕೆ ಸೇರ್ಪಡೆಗೊಂಡರು, ಇದು 1 ನೇ ಶತಮಾನ CE ಯಲ್ಲಿ [[ತಾಮಸ್ ಪ್ರೇರಿತ]]ನ ಪ್ರಚಾರ ಚಟುವಟಿಕೆಗಳಿಂದ ತನ್ನ ಮೂಲವನ್ನು ಪತ್ತೆಹಚ್ಚುತ್ತದೆ.<ref name="Erwin Fahlbusch">[https://books.google.co.in/books?id=lZUBZlth2qgC&printsec=frontcover&dq=isbn:9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA#v=onepage&q=Muziris&f=true ''The Encyclopedia of Christianity, Volume 5''] by Erwin Fahlbusch. Wm. B. Eerdmans Publishing - 2008. p. 285. ISBN 978-0-8028-2417-2.</ref><ref>{{cite book |author=Geoffrey Wainwright |title=The Oxford History Of Christian Worship |publisher=Oxford University Press |year=2006 |isbn=978-0-19-513886-3 |url=https://books.google.com/books?id=h5VQUdZhx1gC |page=666 |accessdate=30 May 2015}}</ref> ಮಾಪ್ಪಿಲ ಎಂಬ ಪದವು{{mdash}}ಮೂಲತಃ ಗೌರವಾನ್ವಿತ ವಿದೇಶಿ ಸಂದರ್ಶಕರಿಗೆ ಅನ್ವಯಿಸುವ ಗೌರವಾರ್ಥ ಪದವಾಗಿದ್ದು{{mdash}}ನಂತರ ಯಹೂದಿ, ಸಿರಿಯನ್ ಕ್ರಿಶ್ಚಿಯನ್ ಮತ್ತು ಮುಸ್ಲಿಂ ವಲಸಿಗರ ವಂಶಸ್ಥರೊಂದಿಗೆ ಸಂಬಂಧ ಹೊಂದಿತು, ಇದು ಕ್ರಮವಾಗಿ [[ಯೆಹೂದ ಮಾಪ್ಪಿಲ]]ಗಳು, [[ಸೇಂಟ್ ತಾಮಸ್ ಕ್ರೈಸ್ತರು|ನಸ್ರಾನಿ ಮಾಪ್ಪಿಲ]]ಗಳು ಮತ್ತು [[ಮಲಬಾರ್ ಮುಸ್ಲಿಮರು|ಮುಸ್ಲಿಂ ಮಾಪ್ಪಿಲ]]ಗಳ ಪದಗಳಿಗೆ ಕಾರಣವಾಯಿತು.<ref name="BMalieckal">* Bindu Malieckal (2005) Muslims, Matriliny, and A Midsummer Night's Dream: European Encounters with the Mappilas of Malabar, India; The Muslim World Volume 95 Issue 2</ref><ref>{{cite book |author=Milton J, Skeat WW, Pollard AW, Brown L |title=The Indian Christians of St Thomas |publisher=Cambridge University Press |date=31 August 1982 |isbn=0-521-21258-8 |page=171}}</ref> ಈ ಸಮುದಾಯಗಳ ಸಂಪ್ರದಾಯಗಳ ಪ್ರಕಾರ, ಭಾರತದಲ್ಲಿನ ಕೆಲವು ಆರಂಭಿಕ ಧಾರ್ಮಿಕ ಸ್ಥಾಪನೆಗಳನ್ನು ಕೇರಳದಲ್ಲಿ ನಿರ್ಮಿಸಲಾಯಿತು.<ref name="Dialogue"/> ಇವುಗಳಲ್ಲಿ [[ಸೇಂಟ್ ತಾಮಸ್ ಕ್ರಿಶ್ಚಿಯನ್ ಚರ್ಚುಗಳು]],<ref>{{cite book |author=Susan Bayly |title=Saints, Goddesses and Kings |publisher=Cambridge University Press |year=2004 |isbn=978-0-521-89103-5 |url=https://books.google.com/books?id=Fxqtx8SflEsC |page=40 |accessdate=30 May 2015}}</ref> [[ಚೇರಮನ್ ಜುಮಾ ಮಸೀದಿ]] (629 CE ಯಲ್ಲಿ ಸ್ಥಾಪಿಸಲಾಯಿತು), ಭಾರತದ ಮೊದಲ ಮಸೀದಿ,<ref>{{cite book |author=Jonathan Goldstein |title=The Jews of China |publisher=M.E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123 |accessdate=30 May 2015}}</ref> ಮತ್ತು [[ಪರದೇಶಿ ಸಿನಾಗೋಗ್]] (1568 CE ಯಲ್ಲಿ ನಿರ್ಮಿಸಲಾಯಿತು), [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಕ್ರಿಯ ಸಿನಾಗೋಗ್ ಸೇರಿವೆ.<ref>{{cite book |author=Nathan Katz |title=Who Are the Jews of India? |publisher=University of California Press |year=2000 |isbn=978-0-520-21323-4 |url=https://books.google.com/books?id=ZWX6pF2PTJwC |page=245 |accessdate=30 May 2015}}</ref>
=== ಮಧ್ಯಕಾಲೀನ ಅವಧಿ ===
[[File:3rd Tiruvalla Copper Plate.jpg|thumb|[[ಸೇಂಟ್ ತಾಮಸ್ ಕ್ರೈಸ್ತರು|ಸೇಂಟ್ ತಾಮಸ್ ಕ್ರೈಸ್ತರಿಗೆ]] ನೀಡಲಾದ [[ಥರಿಸಪಲ್ಲಿ ತಟ್ಟೆಗಳು]] ವ್ಯಾಪಾರಿ ಸಂಘಗಳು ಮತ್ತು ವ್ಯಾಪಾರ ನಿಗಮಗಳು ಕುಲಶೇಖರ ಅವಧಿಯಲ್ಲಿ ಆರ್ಥಿಕತೆ ಮತ್ತು ಸಾಮಾಜಿಕ ಜೀವನದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದವು ಎಂದು ಸಾಕ್ಷ್ಯ ನೀಡುತ್ತವೆ.]]
ಎರಡನೇ ಚೇರ ಸಾಮ್ರಾಜ್ಯ (c. 800–1102), ಇದನ್ನು [[ಮಹೋದಯಪುರಂ]]ನ ಕುಲಶೇಖರ ರಾಜವಂಶ ಎಂದೂ ಕರೆಯುತ್ತಾರೆ, ಇದನ್ನು [[ಕುಲಶೇಖರ ಆಳ್ವಾರ್|ಕುಲಶೇಖರ ವರ್ಮನ್]] ಸ್ಥಾಪಿಸಿದರು ಮತ್ತು ಪ್ರಸ್ತುತ ಕೇರಳದ ಹೆಚ್ಚಿನ ಭಾಗ ಮತ್ತು ಆಧುನಿಕ ತಮಿಳುನಾಡಿನ ಭಾಗಗಳನ್ನು ಒಳಗೊಂಡ ಪ್ರದೇಶವನ್ನು ಆಳಿದರು. ಕುಲಶೇಖರ ಅವಧಿಯ ಆರಂಭಿಕ ಹಂತದಲ್ಲಿ, ದಕ್ಷಿಣ ಪ್ರದೇಶವು{{mdash}}[[ನಾಗರ್ಕೋವಿಲ್]] ನಿಂದ [[ತಿರುವಲ್ಲ]] ವರೆಗೆ{{mdash}}[[ಆಯ್ಸ್ (ಕೇರಳ)|ಆಯ್]] ರಾಜವಂಶದ ನಿಯಂತ್ರಣದಲ್ಲಿತ್ತು. 10 ನೇ ಶತಮಾನದ ವೇಳೆಗೆ, ಆಯ್ಸ್ ತಮ್ಮ ಶಕ್ತಿಯನ್ನು ಕಳೆದುಕೊಂಡರು ಮತ್ತು ಈ ಪ್ರದೇಶವನ್ನು ಕುಲಶೇಖರ ಸಾಮ್ರಾಜ್ಯಕ್ಕೆ ಸೇರಿಸಲಾಯಿತು.<ref name="Balachand">{{cite book|author=K. Balachandran Nayar|title=In quest of Kerala|url=https://books.google.com/books?id=EXIeAAAAMAAJ|accessdate=8 August 2012|year=1974|publisher=Accent Publications|page=86}}</ref><ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|page=97}}</ref> ಕುಲಶೇಖರ ಆಳ್ವಿಕೆಯಲ್ಲಿ, ಕೇರಳವು ಕಲೆ, ಸಾಹಿತ್ಯ, ವ್ಯಾಪಾರ ಮತ್ತು ಹಿಂದೂ ಧರ್ಮದಲ್ಲಿ [[ಭಕ್ತಿ ಚಳುವಳಿ]] ಯಲ್ಲಿ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟ ಒಂದು ಅಭಿವೃದ್ಧಿ ಹೊಂದಿದ ಅವಧಿಯನ್ನು ಅನುಭವಿಸಿತು.<ref name="Sreedhar123">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|pages=123–131}}</ref> ಈ ಸಮಯದಲ್ಲಿ ವಿಶಿಷ್ಟವಾದ ಕೇರಳೀಯ ಗುರುತು ಹೊರಹೊಮ್ಮಲು ಪ್ರಾರಂಭಿಸಿತು, ವಿಶೇಷವಾಗಿ ಭಾಷಾ ವ್ಯತ್ಯಾಸದ ಮೂಲಕ ತಮಿಳು ಸಂಸ್ಕೃತಿಯಿಂದ ಪ್ರತ್ಯೇಕವಾಯಿತು.<ref name="AsherKumari1997">{{cite book|author1=R. E. Asher|author2=T. C. Kumari|title=Malayalam|url=https://books.google.com/books?id=uFQG2DCaIsIC|year=1997|publisher=Psychology Press|isbn=978-0-415-02242-2|pages=24–27}}</ref> ಆಡಳಿತ ಉದ್ದೇಶಗಳಿಗಾಗಿ, ಸಾಮ್ರಾಜ್ಯವನ್ನು [[ನಾಡುವಾಜಿ]]ಗಳು ಎಂದು ಕರೆಯಲ್ಪಡುವ ಸ್ಥಳೀಯ ಮುಖಂಡರು ಆಳುವ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ಪ್ರಾಂತ್ಯವನ್ನು ಮತ್ತಷ್ಟು ''ದೇಶಂ'' ಗಳಾಗಿ ವಿಂಗಡಿಸಲಾಗಿತ್ತು, ಅವುಗಳನ್ನು ದೇಶವಾಝಿಗಳು ಮೇಲ್ವಿಚಾರಣೆ ಮಾಡುತ್ತಿದ್ದರು.<ref name="Sreedhar123"/>
11 ನೇ ಶತಮಾನದಲ್ಲಿ ಚೇರ-ಚೋಳ ಸಂಘರ್ಷಗಳ ಸರಣಿಯು ಕೇರಳದ ಬಂದರುಗಳ ಮೂಲಕ ವಿದೇಶಿ ವ್ಯಾಪಾರಕ್ಕೆ ಅಡ್ಡಿಯಾಯಿತು. ಈ ಅವಧಿಯಲ್ಲಿ, ಹಿಂದೂ ಧರ್ಮದೊಂದಿಗೆ ಹಿಂದೆ ಸಹಬಾಳ್ವೆ ನಡೆಸಿದ್ದ [[ಬೌದ್ಧ]] ಮತ್ತು [[ಜೈನ]] ಧರ್ಮಗಳು ಕ್ಷೀಣಿಸಿದವು ಮತ್ತು ಅಂತಿಮವಾಗಿ ಈ ಪ್ರದೇಶದಿಂದ ಕಣ್ಮರೆಯಾಯಿತು.<ref>{{cite web |url=http://www.kerala.cc/keralahistory/index34.htm |title=The Buddhist History of Kerala |publisher=Kerala.cc |accessdate=25 September 2013 |archive-date=4 March 2016 |archive-url=https://web.archive.org/web/20160304215933/http://www.kerala.cc/keralahistory/index34.htm |url-status=dead }}</ref> ಸಾಮಾಜಿಕ ರಚನೆಗಳು ಹೆಚ್ಚು ಬಿಗಿಯಾದವು, ಮತ್ತು [[ಕೇರಳದಲ್ಲಿ ಜಾತಿ ವ್ಯವಸ್ಥೆ|ಜಾತಿ ವಿಭಾಗಗಳು]] ಆಳವಾದವು.<ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=9 August 2012|date=1 January 2007|publisher=DC Books|isbn=978-81-264-1578-6|page=138}}</ref> ಕುಲಶೇಖರ ರಾಜವಂಶವು ಅಂತಿಮವಾಗಿ 1102 CE ಯಲ್ಲಿ [[ನಂತರದ ಪಾಂಡ್ಯರು]] ಮತ್ತು [[ನಂತರದ ಚೋಳರು]] ನ ಸಂಯೋಜಿತ ದಾಳಿಯ ನಂತರ ಕುಸಿಯಿತು.<ref name="Balachand"/> 14 ನೇ ಶತಮಾನದಲ್ಲಿ, ದಕ್ಷಿಣ [[ವೇಣಾಡ್|ವೇಣಾಡ್ ಸಾಮ್ರಾಜ್ಯ]]ದ ರವಿ ವರ್ಮ ಕುಲಶೇಖರ (r. 1299–1314) ದಕ್ಷಿಣ ಭಾರತದ ಹೆಚ್ಚಿನ ಭಾಗದಲ್ಲಿ ಸಂಕ್ಷಿಪ್ತವಾಗಿ ಅಲ್ಪಕಾಲಿಕ ಪ್ರಾಮುಖ್ಯತೆಯನ್ನು ಸ್ಥಾಪಿಸಿದರು. ಅವರ ಮರಣದ ನಂತರ, ಮತ್ತು ಬಲವಾದ ಕೇಂದ್ರ ಅಧಿಕಾರದ ಅನುಪಸ್ಥಿತಿಯಲ್ಲಿ, ಈ ಪ್ರದೇಶವು ಮೂವತ್ತು ಸಣ್ಣ, ಆಗಾಗ್ಗೆ ಯುದ್ಧ ಮಾಡುವ ಸಂಸ್ಥಾನಗಳಾಗಿ ವಿಭಜನೆಯಾಯಿತು. ಅತ್ಯಂತ ಶಕ್ತಿಶಾಲಿಗಳೆಂದರೆ ಉತ್ತರದಲ್ಲಿ [[ಸಮೂತಿರಿ]] (ಜಾಮೋರಿನ್) ಸಾಮ್ರಾಜ್ಯ, ದಕ್ಷಿಣದಲ್ಲಿ ವೇಣಾಡ್ ಮತ್ತು ಮಧ್ಯ ಪ್ರದೇಶದಲ್ಲಿ ಕೊಚ್ಚಿ. 18 ನೇ ಶತಮಾನದಲ್ಲಿ, ತಿರುವಾಂಕೂರಿನ ರಾಜ [[ಅನಿಝಂ ತಿರುನಾಳ್ ಮಾರ್ತಾಂಡ ವರ್ಮ]] ಅವರು ಸೈನ್ಯದ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಿದರು ಮತ್ತು ಉತ್ತರ ಕೇರಳದವರೆಗೆ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡರು, ಈ ಪ್ರದೇಶದಲ್ಲಿ ತಿರುವಾಂಕೂರನ್ನು ಪ್ರಬಲ ಶಕ್ತಿಯಾಗಿ ಸ್ಥಾಪಿಸಿದರು. ಕೊಚ್ಚಿ ಆಡಳಿತಗಾರನು ಶಾಂತಿಗಾಗಿ ಮೊಕದ್ದಮೆ ಹೂಡಿದನು, ಮತ್ತು ಮಲಬಾರ್ ಪ್ರದೇಶವು ಅಂತಿಮವಾಗಿ [[1947 ರಲ್ಲಿ ಭಾರತದ ಸ್ವಾತಂತ್ರ್ಯ|ಭಾರತದ ಸ್ವಾತಂತ್ರ್ಯ]] ದವರೆಗೆ ನೇರ [[ಬ್ರಿಟಿಷ್ ಆಳ್ವಿಕೆ|ಬ್ರಿಟಿಷ್ ಆಳ್ವಿಕೆ]] ಯ ಅಡಿಯಲ್ಲಿ ಬಂದಿತು.<ref>{{cite book|author=Educational Britannica Educational|title=The Geography of India: Sacred and Historic Places|url=https://books.google.com/books?id=xPUvqtdfjyAC&pg=PA311|accessdate=15 September 2012|date=15 August 2010|publisher=The Rosen Publishing Group|isbn=978-1-61530-202-4|page=311}}</ref><ref>{{cite book |last1=Boland-Crewe |first1=Tara |last2=Lea |first2=David |title=The Territories and States of India |date=2003 |doi=10.4324/9780203402900 |isbn=978-1-135-35625-5 |pages=144–146 }}</ref>
=== ವಸಾಹತುಶಾಹಿ ಆಳ್ವಿಕೆ ===
[[File:Caminho maritimo para a India.png|thumb|ಕೇರಳವನ್ನು ತಲುಪಲು [[ವಾಸ್ಕೋ ಡ ಗಾಮಾ]] ತೆಗೆದುಕೊಂಡ ಮಾರ್ಗ (ಕಪ್ಪು ಬಣ್ಣದಲ್ಲಿ ಸೂಚಿಸಲಾಗಿದೆ)]]
[[ಮಧ್ಯಯುಗ|ಉಚ್ಚ]] ಮತ್ತು [[ಕೊನೆಯ ಮಧ್ಯಯುಗ]]ದಲ್ಲಿ, ಅರಬ್ ವ್ಯಾಪಾರಿಗಳು [[ಹಿಂದೂ ಮಹಾಸಾಗರ]]ದಲ್ಲಿ ಮಸಾಲೆ ವ್ಯಾಪಾರದ ಮೇಲೆ ಸಮುದ್ರ ಏಕಸ್ವಾಮ್ಯವನ್ನು ಹೊಂದಿದ್ದರು. ಯುರೋಪಿಯನ್ [[ಭೌಗೋಳಿಕ ಅನ್ವೇಷಣೆಗಳ ಯುಗ]] ದಲ್ಲಿ ಮಸಾಲೆ ವ್ಯಾಪಾರವು{{mdash}}ವಿಶೇಷವಾಗಿ ಕರಿಮೆಣಸಿನಲ್ಲಿ{{mdash}}ಯುರೋಪಿಯನ್ ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾದಾಗ ಈ ಪ್ರಾಬಲ್ಯವನ್ನು ಸವಾಲು ಮಾಡಲಾಯಿತು.<ref>{{cite book | last = Corn | first = Charles |author2=Glasserman, Debbie | title = The Scents of Eden: A History of the Spice Trade | publisher = Kodansha America |date=March 1999 | isbn = 1-56836-249-8}}</ref> 15 ನೇ ಶತಮಾನದ ವೇಳೆಗೆ, ಪೋರ್ಚುಗೀಸರು ಪೂರ್ವ ಸಮುದ್ರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಾರಂಭಿಸಿದರು, ಇದು 1498 ರಲ್ಲಿ [[ಕೋಝಿಕೋಡ್]] (ಕ್ಯಾಲಿಕಟ್) ಬಳಿಯ [[ಕಪ್ಪಾಡ್]] ನಲ್ಲಿ [[ವಾಸ್ಕೋ ಡ ಗಾಮಾ]] ಆಗಮನದೊಂದಿಗೆ ಕೊನೆಗೊಂಡಿತು.<ref>{{Cite book |author=Ravindran PN |title=Black Pepper: Piper Nigrum |publisher=CRC Press |year=2000 |accessdate=11 November 2007 |url=https://books.google.com/books?id=VaGCgSLrdr4C |page=3 |isbn=978-90-5702-453-5}}</ref><ref name="Curtin1984">{{cite book|author=Philip D. Curtin|title=Cross-Cultural Trade in World History|url=https://books.google.com/books?id=R4IiYFhliv4C|date=25 May 1984|publisher=Cambridge University Press|isbn=978-0-521-26931-5|page=144}}</ref> ಕೋಝಿಕೋಡ್ನ [[ಜಾಮೋರಿನ್]] ಪೋರ್ಚುಗೀಸರಿಗೆ ತನ್ನ ಪ್ರಜೆಗಳೊಂದಿಗೆ ವ್ಯಾಪಾರ ಮಾಡಲು ಅನುಮತಿ ನೀಡಿದರು, ಇದು ಸಮೃದ್ಧ ಪೋರ್ಚುಗೀಸ್ [[ಕಾರ್ಖಾನೆ (ವ್ಯಾಪಾರ ಠಾಣ್ಯ)|ಕಾರ್ಖಾನೆ]] ಮತ್ತು ಕೋಟೆಯ ಸ್ಥಾಪನೆಗೆ ಕಾರಣವಾಯಿತು.<ref name="Mehta2005" />
ಆದಾಗ್ಯೂ, ಪೋರ್ಚುಗೀಸರು ಜಾಮೋರಿನ್ ರಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಬ್ ವ್ಯಾಪಾರಿಗಳ ಮೇಲೆ ದಾಳಿ ಮಾಡಿದಾಗ ಉದ್ವಿಗ್ನತೆಗಳು ಹುಟ್ಟಿಕೊಂಡವು, ಇದು ಸಂಬಂಧಗಳಲ್ಲಿ ಕುಸಿತಕ್ಕೆ ಕಾರಣವಾಯಿತು. ಜಾಮೋರಿನ್ ಮತ್ತು ಕೊಚ್ಚಿ ರಾಜನ ನಡುವಿನ ಪೈಪೋಟಿಯಿಂದ ಪ್ರಯೋಜನ ಪಡೆಯುವ ಅವಕಾಶವನ್ನು ಬಳಸಿಕೊಂಡು, ಪೋರ್ಚುಗೀಸರು ಕೊಚ್ಚಿಯೊಂದಿಗೆ ಮೈತ್ರಿ ಮಾಡಿಕೊಂಡರು. [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] 1505 ರಲ್ಲಿ ಪೋರ್ಚುಗೀಸ್ ಭಾರತದ ವೈಸರಾಯ್ ಆಗಿ ನೇಮಕಗೊಂಡಾಗ, ಅವರು ತಮ್ಮ ಪ್ರಧಾನ ಕಛೇರಿಯನ್ನು ಕೋಝಿಕೋಡ್ನಲ್ಲಿ ಅಲ್ಲ, ಬದಲಿಗೆ [[ಫೋರ್ಟ್ ಕೊಚ್ಚಿ]] ([[ಫೋರ್ಟ್ ಇಮ್ಯಾನುಯೆಲ್]]) ಯಲ್ಲಿ ಸ್ಥಾಪಿಸಿದರು. ಅವರ ಆಡಳಿತದ ಅಡಿಯಲ್ಲಿ, ಪೋರ್ಚುಗೀಸರು ಮಲಬಾರ್ ಕರಾವಳಿಯಲ್ಲಿ ಹಲವಾರು ಕೋಟೆಗಳನ್ನು ನಿರ್ಮಿಸುವ ಮೂಲಕ ತಮ್ಮ ಪ್ರಭಾವವನ್ನು ಬಲಪಡಿಸಿದರು.<ref name="Mehta2005">{{cite book|author=J. L. Mehta|title=Advanced Study in the History of Modern India: Volume One: 1707–1813|url=https://books.google.com/books?id=d1wUgKKzawoC&pg=PA324|accessdate=9 August 2012|date=1 January 2005|publisher=Sterling Publishers Pvt. Ltd|isbn=978-1-932705-54-6|pages=324–327}}</ref> ಈ ಮುನ್ನಡೆಗಳ ಹೊರತಾಗಿಯೂ, ಪೋರ್ಚುಗೀಸರು ಜಾಮೋರಿನ್ನ ನೌಕಾ ಪಡೆಗಳಿಂದ ಗಮನಾರ್ಹ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ ಕೋಝಿಕೋಡ್ನ ಅಡ್ಮಿರಲ್ಗಳಾದ [[ಕುಂಜಲಿ ಮರಕ್ಕರ್]]ರ ಆಜ್ಞೆಯಡಿಯಲ್ಲಿ, ಅವರು ಪರಿಣಾಮಕಾರಿ ಸಮುದ್ರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರು. ಈ ಪ್ರತಿರೋಧವು ಅಂತಿಮವಾಗಿ ಪೋರ್ಚುಗೀಸರನ್ನು ಒಪ್ಪಂದಕ್ಕೆ ಒತ್ತಾಯಿಸಿತು. 1571 ರಲ್ಲಿ, ಜಾಮೋರಿನ್ ಪಡೆಗಳು [[ತಾನೂರ್ ಸಾಮ್ರಾಜ್ಯ#ಚಾಲಿಯಮ್ ಕೋಟೆಯ ಕದನಗಳು|ಚಾಲಿಯಮ್ ಕೋಟೆಯ ಕದನದಲ್ಲಿ]] ಪೋರ್ಚುಗೀಸರನ್ನು ಸೋಲಿಸಿದವು, ಇದು ಈ ಪ್ರದೇಶದಲ್ಲಿ ಪೋರ್ಚುಗೀಸ್ ಮಹತ್ವಾಕಾಂಕ್ಷೆಗಳಿಗೆ ದೊಡ್ಡ ಹಿನ್ನಡೆಯನ್ನು ಗುರುತಿಸಿತು.<ref>{{cite book|author=K. K. N. Kurup|title=India's Naval Traditions: The Role of Kunhali Marakkars|url=https://books.google.com/books?id=HKmXcBCKEcAC&pg=PA51|accessdate=9 August 2012|date=1 January 1997|publisher=Northern Book Centre|isbn=978-81-7211-083-3|pages=37–38}}</ref>
ಪೋರ್ಚುಗೀಸರು ಅಂತಿಮವಾಗಿ [[ಡಚ್ ಈಸ್ಟ್ ಇಂಡಿಯಾ ಕಂಪನಿ]]ಯಿಂದ ಸ್ಥಳಾಂತರಿಸಲ್ಪಟ್ಟರು, ಇದು ಈ ಪ್ರದೇಶದಲ್ಲಿ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲು ಕೋಝಿಕೋಡ್ ಮತ್ತು ಕೊಚ್ಚಿ ನಡುವಿನ ನಡೆಯುತ್ತಿರುವ ಸಂಘರ್ಷಗಳ ಲಾಭವನ್ನು ಪಡೆಯಿತು.<ref name="South Asia 2006">{{cite book|title=South Asia 2006|url=https://books.google.com/books?id=YG8bAQAAMAAJ|accessdate=18 November 2012|date=1 December 2005|publisher=Taylor & Francis|page=289}}</ref> ಆದಾಗ್ಯೂ, ಡಚ್ಚರು ಸಹ ಸೈನ್ಯದ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ [[ತಿರುವಾಂಕೂರು ರಾಜಮನೆತನ]]ದ [[ಮಾರ್ತಾಂಡ ವರ್ಮ]]ರಿಂದ. 1741 ರಲ್ಲಿ [[ಕೊಲಾಚೆಲ್ ಕದನ]]ದಲ್ಲಿ ನಿರ್ಣಾಯಕ ಡಚ್ ಸೋಲಿನ ನಂತರ,<ref name="google3">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA57|accessdate=18 November 2012|date=1 January 1993|publisher=Northern Book Centre|isbn=978-81-7211-052-9|pages=57–70}}</ref> 1753 ರಲ್ಲಿ ಮಾವೆಲಿಕ್ಕರ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಡಚ್ಚರು ಪ್ರಾದೇಶಿಕ ರಾಜಕೀಯ ವ್ಯವಹಾರಗಳಿಂದ ಹಿಂತೆಗೆದುಕೊಳ್ಳಲು ಮತ್ತು ಅವರ ಪಾತ್ರವನ್ನು ವ್ಯಾಪಾರಕ್ಕೆ ಸೀಮಿತಗೊಳಿಸಲು ಒತ್ತಾಯಿಸಲಾಯಿತು.<ref name="Singh2010">{{cite book|author=Anjana Singh|title=Fort Kochi in Kerala, 1750–1830: The Social Condition of a Dutch Community in an Indian Milieu|url=https://books.google.com/books?id=LFy4pWUlnfwC&pg=PA22|accessdate=18 November 2012|date=30 April 2010|publisher=BRILL|isbn=978-90-04-16816-9|pages=22–52}}</ref><ref name="Iyer1995">{{cite book|author=S. Krishna Iyer|title=Travancore Dutch relations, 1729–1741|url=https://books.google.com/books?id=rUtuAAAAMAAJ|accessdate=18 November 2012|year=1995|publisher=CBH Publications|isbn=978-81-85381-42-8|page=49}}</ref><ref name="Lannoy1997">{{cite book|author=Mark de Lannoy|title=The Kulasekhara Perumals of Travancore: history and state formation in Travancore from 1671 to 1758|url=https://books.google.com/books?id=pKjZAAAAMAAJ|accessdate=18 November 2012|year=1997|publisher=Leiden University|isbn=978-90-73782-92-1|page=190}}</ref> ಮಾರ್ತಾಂಡ ವರ್ಮ ತಮ್ಮ ಸೈನ್ಯದ ಕಾರ್ಯಾಚರಣೆಗಳನ್ನು ಮುಂದುವರೆಸಿದರು, ಕೇರಳದಲ್ಲಿ ತಿರುವಾಂಕೂರನ್ನು ಪ್ರಮುಖ ಶಕ್ತಿಯಾಗಿ ಸ್ಥಾಪಿಸಿದರು.<ref>{{cite book|author=A. Sreedhara Menon|title=Political History of Modern Kerala|url=https://books.google.com/books?id=wnAjqjhc1VcC&pg=PA140|accessdate=10 August 2012|year=1987|publisher=D C Books|isbn=978-81-264-2156-5|page=140}}</ref>
1766 ರಲ್ಲಿ, [[ಮೈಸೂರು ಸಾಮ್ರಾಜ್ಯ|ಮೈಸೂರಿನ]] ಆಡಳಿತಗಾರ [[ಹೈದರ್ ಅಲಿ]], [[ಮೈಸೂರಿನ ಕೇರಳ ಆಕ್ರಮಣ#ಹೈದರ್ ಅಲಿಯ ಆಕ್ರಮಣ|ಉತ್ತರ ಕೇರಳವನ್ನು ಆಕ್ರಮಿಸಿದನು]],<ref name="Rai">{{cite book|author=Raghunath Rai|title=History|url=https://books.google.com/books?id=Z4-8Z0gqBkoC&pg=PA14|accessdate=18 November 2012|publisher=FK Publications|isbn=978-81-87139-69-0|pages=14–}}</ref> ಮತ್ತು ಅವನ ಮಗ ಮತ್ತು ಉತ್ತರಾಧಿಕಾರಿ, [[ಟಿಪ್ಪು ಸುಲ್ತಾನ್]], ವಿಸ್ತರಿಸುತ್ತಿರುವ [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]] ವಿರುದ್ಧ [[ಮೈಸೂರಿನ ಕೇರಳ ಆಕ್ರಮಣ#ಟಿಪ್ಪು ಸುಲ್ತಾನನ ಆಕ್ರಮಣಗಳು|ಸೈನ್ಯದ ಕಾರ್ಯಾಚರಣೆಗಳನ್ನು]] ಪ್ರಾರಂಭಿಸಿದರು. ಈ ಮುಖಾಮುಖಿಗಳು ನಾಲ್ಕು [[ಆಂಗ್ಲೋ-ಮೈಸೂರು ಯುದ್ಧಗಳಲ್ಲಿ]] ಎರಡಕ್ಕೆ ಕೊಡುಗೆ ನೀಡಿದವು.<ref name="MuseumDallapiccola2010">{{cite book|author1=British Museum|author2=Anna Libera Dallapiccola|title=South Indian Paintings: A Catalogue of the British Museum Collection|url=https://books.google.com/books?id=FIzWapiacQcC&pg=PA12|accessdate=18 November 2012|date=22 June 2010|publisher=Mapin Publishing Pvt Ltd|isbn=978-0-7141-2424-7|pages=12–}}</ref><ref name="ThorpeEdgar">{{cite book|author1=Edgar Thorpe, Showick Thorpe|author2=Thorpe Edgar|title=The Pearson CSAT Manual 2011|url=https://books.google.com/books?id=WuBFs6yFRwcC&pg=RA1-PA99|accessdate=18 November 2012|publisher=Pearson Education India|isbn=978-81-317-5830-4|page=99}}</ref> 1790 ರ ದಶಕದ ಆರಂಭದ ವೇಳೆಗೆ, ಟಿಪ್ಪು ಸುಲ್ತಾನ್ [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ವನ್ನು ಬ್ರಿಟಿಷರಿಗೆ ಬಿಟ್ಟುಕೊಡಲು ಒತ್ತಾಯಿಸಲಾಯಿತು, ಮತ್ತು ಈ ಪ್ರದೇಶಗಳನ್ನು 1792 ರಲ್ಲಿ [[ಬ್ರಿಟಿಷ್ ಭಾರತ]]ದ [[ಮದ್ರಾಸ್ ಪ್ರೆಸಿಡೆನ್ಸಿ]] ಗೆ ಸೇರಿಸಲಾಯಿತು.<ref name="The Edinburgh Gazetteer: Or, Geographical Dictionary: Containing a Description of the Various Countries, Kingdoms, States, Cities, Towns, Mountains, &c. of the World; an Account of the Government, Customs, and Religion of the Inhabitants; the Boundaries and Natural Productions of Each Country, &c. &c. Forming a Complete Body of Geography, Physical, Political, Statistical, and Commercial with Addenda, Containing the Present State of the New Governments in South America...">{{cite book|title=The Edinburgh Gazetteer|url=https://books.google.com/books?id=xRIyAQAAMAAJ&pg=PA63|accessdate=18 November 2012|year=1827|publisher=Longman, Rees, Orme, Brown, and Green|pages=63–}}</ref><ref name="Kumar1965">{{cite book|author=Dharma Kumar|title=Land and Caste in South India: Agricultural Labor in the Madras Presidency During the Nineteenth Century|url=https://books.google.com/books?id=psw5AAAAIAAJ&pg=PA87|accessdate=18 November 2012|year=1965|publisher=CUP Archive|pages=87–|id=GGKEY:T72DPF9AZDK}}</ref><ref name="Ittaman2003">{{cite book|author=K.P. Ittaman|title=History of Mughal Architecture Volume Ii|url=https://books.google.com/books?id=ZQ5lFywZAqYC&pg=PA30|accessdate=18 November 2012|date=1 June 2003|publisher=Abhinav Publications|isbn=978-81-7017-034-1|pages=30–}}</ref> ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 1791 ರಲ್ಲಿ ಕೊಚ್ಚಿ ಮತ್ತು 1795 ರಲ್ಲಿ ತಿರುವಾಂಕೂರಿನೊಂದಿಗೆ ಸಹಾಯಕ ಮೈತ್ರಿಗಳನ್ನು ಸುರಕ್ಷಿತಗೊಳಿಸಿತು.<ref>{{Cite book |author=Superintendent of Government Printing |title=Imperial Gazetteer of India (Provincial Series): Madras |publisher=Government of India |location=Calcutta |year=1908 |accessdate=11 November 2007 |url=https://books.google.com/books?id=xXglUxeS_WkC |page=22}}</ref> 18 ನೇ ಶತಮಾನದ ಅಂತ್ಯದ ವೇಳೆಗೆ, ಕೇರಳವು ಸಂಪೂರ್ಣವಾಗಿ ಬ್ರಿಟಿಷರಿಂದ ನೇರವಾಗಿ ಆಡಳಿತ ನಡೆಸಲ್ಪಡುತ್ತಿತ್ತು ಅಥವಾ ಅವರ [[ಸಾಮಂತತ್ವ]]ದ ಅಡಿಯಲ್ಲಿತ್ತು.<ref name="RajTharakan1981">{{cite book|author1=Kakkadan Nandanath Raj|author2=Michael Tharakan|title=Agrarian reform in Kerala and its impact on the rural economy: a preliminary assessment|url=https://books.google.com/books?id=JF6FAAAAIAAJ|accessdate=18 November 2012|year=1981|publisher=International Labour Office|pages=2–3}}</ref>
20 ನೇ ಶತಮಾನದಲ್ಲಿ, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಕೇರಳವು ಹಲವಾರು ಪ್ರಮುಖ ದಂಗೆಗಳ ತಾಣವಾಗಿತ್ತು. ಇವುಗಳಲ್ಲಿ ಅತ್ಯಂತ ಗಮನಾರ್ಹವಾದುದು 1921 ರ [[ಮಲಬಾರ್ ದಂಗೆ]], ಇದರಲ್ಲಿ ಮಲಬಾರ್ ಪ್ರದೇಶದ ಮಾಪ್ಪಿಲ ಮುಸ್ಲಿಮರು ಹಿಂದೂ [[ಜಮೀನ್ದಾರ್]]ಗಳು (ಭೂಮಾಲೀಕರು) ಮತ್ತು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳ ವಿರುದ್ಧ ಗಲಭೆ ನಡೆಸಿದರು.<ref name="Qureshi1999">{{cite book|author=M. Naeem Qureshi|title=Pan-Islam in British Indian Politics: A Study of the Khilafat Movement, 1918–1924|url=https://books.google.com/books?id=czKYZPyoyx0C|year=1999|publisher=BRILL|isbn=90-04-11371-1|pages=445–447}}</ref> ಸಾಮಾಜಿಕ ಸುಧಾರಣೆಯ ಕ್ಷಣಗಳು ಸಹ ಈ ಅವಧಿಯಲ್ಲಿ ವೇಗವನ್ನು ಪಡೆದುಕೊಂಡವು, ವಿಶೇಷವಾಗಿ ಜಾತಿ-ಆಧಾರಿತ ತಾರತಮ್ಯವನ್ನು ಸವಾಲು ಮಾಡುವವು. ಒಂದು ಪ್ರಮುಖ ಮೈಲಿಗಲ್ಲು 1936 ರ ತಿರುವಾಂಕೂರಿನ [[ದೇವಾಲಯ ಪ್ರವೇಶ ಘೋಷಣೆ]]ಯಾಗಿದ್ದು, ಇದು ಕೆಳ ಜಾತಿಯ ಹಿಂದೂಗಳಿಗೆ ಹಿಂದೆ ಉನ್ನತ ಜಾತಿಗಳಿಗೆ ಸೀಮಿತವಾಗಿದ್ದ ದೇವಾಲಯಗಳನ್ನು ಪ್ರವೇಶಿಸುವ ಹಕ್ಕನ್ನು ನೀಡಿತು.<ref name="Smith1976">{{cite book|author=Bardwell L. Smith|title=Religion and Social Conflict in South Asia|url=https://books.google.com/books?id=07Y3AAAAIAAJ&pg=PA42|accessdate=31 July 2012|year=1976|publisher=BRILL|isbn=978-90-04-04510-1|pages=35–42}}</ref>
=== ಭಾರತದ ರಾಜ್ಯ ===
1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಸ್ವತಂತ್ರ ಪ್ರಭುತ್ವಗಳಾಗಿ [[ಭಾರತದ ವಿಭಜನೆ]] ಯ ನಂತರ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು [[ಭಾರತದ ಪ್ರಭುತ್ವ|ಭಾರತದ ಒಕ್ಕೂಟಕ್ಕೆ]] ಸೇರಿಕೊಂಡವು. 1 ಜುಲೈ 1949 ರಂದು, ಎರಡೂ ರಾಜ್ಯಗಳನ್ನು ವಿಲೀನಗೊಳಿಸಿ [[ತಿರುವಾಂಕೂರು-ಕೊಚ್ಚಿ]] ರೂಪಿಸಲಾಯಿತು.<ref name="Sabharwal2007">{{cite book|author=Gopa Sabharwal|title=India Since 1947: The Independent Years|url=https://books.google.com/books?id=LKySGJAGVEQC&pg=PA23|accessdate=18 November 2012|year=2007|publisher=Penguin Books India|isbn=978-0-14-310274-8|pages=23–}}</ref> 1 ನವೆಂಬರ್ 1956 ರಂದು, ಮದ್ರಾಸಿನ ದಕ್ಷಿಣ ಕನ್ನಡ ಜಿಲ್ಲೆಯ [[ಕಾಸರಗೋಡು ಜಿಲ್ಲೆ|ಕಾಸರಗೋಡು]] ತಾಲೂಕು, [[ಮದ್ರಾಸ್ ರಾಜ್ಯ]]ದ [[ಮಲಬಾರ್ ಜಿಲ್ಲೆ]] ([[ನೀಲಗಿರಿ ಜಿಲ್ಲೆಯ]] [[ಗುಡಾಲೂರು ತಾಲೂಕು]], [[ಲಕ್ಷದ್ವೀಪ]], [[ಟಾಪ್ಸ್ಲಿಪ್]], ಮತ್ತು ಅನಕಟ್ಟಿಯ ಪೂರ್ವದ [[ಅಟ್ಟಪ್ಪಾಡಿ]] ಕಾಡು ಹೊರತುಪಡಿಸಿ), ಮತ್ತು ತಿರುವಾಂಕೂರು-ಕೊಚ್ಚಿ ರಾಜ್ಯವು{{mdash}}ನಾಲ್ಕು ದಕ್ಷಿಣ ತಾಲೂಕುಗಳನ್ನು ([[ಕನ್ಯಾಕುಮಾರಿ ಜಿಲ್ಲೆ]] ಮತ್ತು ಶೆಂಕೋಟ್ಟೈ ತಾಲೂಕುಗಳು) ಹೊರತುಪಡಿಸಿ, ಅವುಗಳನ್ನು ತಮಿಳುನಾಡಿಗೆ ವರ್ಗಾಯಿಸಲಾಯಿತು{{mdash}}[[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ಕೇರಳ ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು.<ref name="Tmh">{{cite book|author=Tmh|title=General Knowledge Digest 2010|url=https://books.google.com/books?id=RyLmXWTKHXgC&pg=SA3-PA106|accessdate=18 November 2012|publisher=Tata McGraw-Hill Education|isbn=978-0-07-069939-7|page=3}}</ref><ref name="SinghKarafin2009">{{cite book|author1=Sarina Singh|author2=Amy Karafin|author3=Anirban Mahapatra|title=South India|url=https://books.google.com/books?id=8KnLFpjEHpUC|accessdate=6 January 2013|date=1 September 2009|publisher=Lonely Planet|isbn=978-1-74179-155-6}}</ref><ref name="Kerala">{{Cite web |title=The States Reorganisation Act, 1956 |url=https://legislative.gov.in/sites/default/files/A1956-37.pdf |url-status=live |archive-url=https://web.archive.org/web/20211117014954/https://legislative.gov.in/sites/default/files/A1956-37.pdf |archive-date=17 November 2021 |access-date=11 May 2021 |website=legislative.gov.in |publisher=Government of India}}</ref> 1957 ರಲ್ಲಿ ಹೊಸ ಕೇರಳ ವಿಧಾನಸಭೆಗೆ ಮೊದಲ ಚುನಾವಣೆಗಳ ನಂತರ [[ಇ. ಎಂ. ಎಸ್. ನಂಬೂದಿರಿಪಾಡ್]] ನೇತೃತ್ವದ [[ಕಮ್ಯುನಿಸ್ಟ್]] ಸರ್ಕಾರವು ರೂಪುಗೊಂಡಿತು.<ref name="SinghKarafin2009"/> ಇದು 1945 ರಲ್ಲಿ [[ಸ್ಯಾನ್ ಮರಿನೋ ಗಣರಾಜ್ಯ]]ದಲ್ಲಿ ಕಮ್ಯುನಿಸ್ಟ್ ಚುನಾವಣಾ ಯಶಸ್ಸಿನ ನಂತರ ವಿಶ್ವದ ಆರಂಭಿಕ ಪ್ರಜಾಪ್ರಭುತ್ವವಾಗಿ ಚುನಾಯಿತ ಕಮ್ಯುನಿಸ್ಟ್ ಸರ್ಕಾರಗಳಲ್ಲಿ ಒಂದಾಗಿದೆ.<ref name=Hindu>{{cite news|title=50 years of development|url=http://www.thehindubusinessline.com/todays-paper/tp-others/tp-states/50-years-of-development/article1655056.ece?ref=archive|accessdate=30 August 2013|newspaper=The Hindu|date=12 April 2007|author=K.G. Kumar}}</ref><ref name="Desai2006">{{cite book|author=Manali Desai|title=State Formation and Radical Democracy in India|url=https://books.google.com/books?id=60m9znJQmmkC&pg=PA142|accessdate=31 August 2013|date=27 November 2006|publisher=Taylor & Francis|isbn=978-0-203-96774-4|page=142}}</ref><ref name="ChitkaraŚarmā1997">{{cite book|author1=Madan Gopal Chitkara|author2=Baṃśī Rāma Śarmā|title=Indian Republic: Issues and Perspective|url=https://books.google.com/books?id=7YrmNURVoroC&pg=PA134|accessdate=18 November 2012|date=1 January 1997|publisher=APH Publishing|isbn=978-81-7024-836-1|pages=134–}}</ref>
== ಭೌಗೋಳಿಕತೆ ==
{{Main|ಕೇರಳದ ಭೌಗೋಳಿಕತೆ}}
{{Multiple image
| direction = vertical
| width = 220
| image1 = AnaimudiPeak DSC 4834.jpg
| caption1 = [[ಅನಮುಡಿ]], [[ದಕ್ಷಿಣ ಭಾರತ]]ದ ಅತಿ ಎತ್ತರದ ಶಿಖರ.
| image2 = DR0071DSC 9245.jpg
| caption2 = [[ವಯನಾಡು|ವಯನಾಡಿನ]] ಬೆಟ್ಟ ಪ್ರದೇಶಗಳಲ್ಲಿ [[ಚಹಾ]] ಮತ್ತು [[ಕಾಫಿ]] ಉತ್ಪಾದಿಸಲಾಗುತ್ತದೆ.
| image3 = Kumarkom.jpg
| caption3 = [[ವೇಂಬನಾಡು]], [[ಕೇರಳ ಬ್ಯಾಕ್ವಾಟರ್ಗಳ]] ಒಂದು ಭಾಗ, ಭಾರತದ ಅತಿ ಉದ್ದದ ಸರೋವರ.
| image4 = Light house in Ponnani.jpg
| caption4 = [[ಪೊನ್ನಾನಿ]] ಲೈಟ್ ಹೌಸ್ ಬೀಚ್
}}
ರಾಜ್ಯವು [[ಲಕ್ಷದ್ವೀಪ ಸಮುದ್ರ]] ಮತ್ತು [[ಪಶ್ಚಿಮ ಘಟ್ಟಗಳ]] ನಡುವೆ ಸಿಕ್ಕಿಕೊಂಡಿದೆ.<ref>{{Cite web |year=1953 |title=Limits of Oceans and Seas, 3rd edition |url=https://iho.int/uploads/user/pubs/standards/s-23/S-23_Ed3_1953_EN.pdf |archive-url=https://web.archive.org/web/20181005131902/https://www.iho.int/iho_pubs/standard/S-23/S-23_Ed3_1953_EN.pdf |archive-date=5 October 2018 |access-date=28 December 2020 |publisher=International Hydrographic Organization}}</ref> ಉತ್ತರ ಅಕ್ಷಾಂಶ 8°18' ಮತ್ತು 12°48' ಮತ್ತು ಪೂರ್ವ ರೇಖಾಂಶ 74°52' ಮತ್ತು 77°22' ನಡುವೆ ಇದೆ,<ref>{{cite web |title=Physical and Anatomical Characteristic of Wood of Some Less-Known Tree Species of Kerala |url=https://docs.kfri.res.in/KFRI-RR/KFRI-RR096.pdf |work=Kerala Forest Research Institute |publisher=Government of Kerala |access-date=18 November 2012 |archive-date=9 July 2013 |archive-url=https://web.archive.org/web/20130709150101/http://docs.kfri.res.in/KFRI-RR/KFRI-RR096.pdf |url-status=live }}</ref> ಕೇರಳವು ಕೆಲವು ಚಂಡಮಾರುತಗಳೊಂದಿಗೆ ಆರ್ದ್ರ [[ಉಷ್ಣವಲಯದ ಮಳೆಕಾಡು ಹವಾಮಾನ]]ವನ್ನು ಹೊಂದಿದೆ. ರಾಜ್ಯವು {{cvt|590|km|mi}} ಕರಾವಳಿಯನ್ನು ಹೊಂದಿದೆ<ref>{{cite web |title=Marine Fisheries |url=https://www.fisheries.kerala.gov.in/index.php?option=com_content&view=article&id=76&Itemid=44 |website=fisheries.kerala.gov.in |publisher=Department of Fisheries, Government of Kerala |access-date=13 November 2015 |archive-date=17 November 2015 |archive-url=https://web.archive.org/web/20151117021802/http://www.fisheries.kerala.gov.in/index.php?option=com_content&view=article&id=76&Itemid=44 |url-status=live }}</ref> ಮತ್ತು ರಾಜ್ಯದ ಅಗಲವು {{convert|11|and|121|km|mi|0}} ನಡುವೆ ಬದಲಾಗುತ್ತದೆ.<ref name="Nair1994">{{cite book |author=V. Balakrishnan Nair |title=Social Development and Demographic Changes in South India: Focus on Kerala |url=https://books.google.com/books?id=sTS4OO9lcdgC&pg=PA15 |access-date=18 November 2012 |year=1994 |publisher=M.D. Publications Pvt. Ltd. |isbn=978-8185880501 |page=15}}</ref> ಭೌಗೋಳಿಕವಾಗಿ, ಕೇರಳವನ್ನು ಮೂರು ಹವಾಮಾನದ ಪ್ರತ್ಯೇಕ ಪ್ರದೇಶಗಳಾಗಿ ವಿಂಗಡಿಸಬಹುದು: ಪೂರ್ವ ಎತ್ತರದ ಪ್ರದೇಶಗಳು; ಒರಟು ಮತ್ತು ತಂಪಾದ ಪರ್ವತ ಪ್ರದೇಶ, ಮಧ್ಯ ಮಧ್ಯ-ನೆಲಗಳು; ರೋಲಿಂಗ್ ಬೆಟ್ಟಗಳು, ಮತ್ತು ಪಶ್ಚಿಮ ತಗ್ಗು ಪ್ರದೇಶಗಳು; ಕರಾವಳಿ ಬಯಲುಗಳು.<ref name="ChattopadhyayFranke2006">{{cite book |author1=Srikumar Chattopadhyay |author2=Richard W. Franke |title=Striving for Sustainability: Environmental Stress and Democratic Initiatives in Kerala |url=https://books.google.com/books?id=gOrvghLklKoC&pg=PA110 |access-date=19 March 2019 |year=2006 |publisher=Concept Publishing Company |isbn=978-8180692949}}</ref>{{rp|110}} [[ಪೂರ್ವ-ಕೇಂಬ್ರಿಯನ್]] ಮತ್ತು [[ಪ್ಲಿಸ್ಟೊಸೀನ್]] ಭೂವೈಜ್ಞಾನಿಕ ರಚನೆಗಳು ಕೇರಳದ ಭೂಪ್ರದೇಶದ ಬಹುಭಾಗವನ್ನು ರೂಪಿಸುತ್ತವೆ.<ref name="Geological Survey Water-supply Paper">{{cite book |title=Geological Survey Water-supply Paper |url=https://books.google.com/books?id=0qUYAQAAIAAJ&pg=SL4-PA6 |access-date=19 March 2019 |year=1961 |publisher=U.S. Government Printing Office |page=4}}</ref><ref name="SharmaKumari2008">{{cite book |author1=Pradeep Sharma |author2=Y. Dharnai Kumari |author3=Tirunagaram Lakshmamma |title=Status Of Women And Family Planning |url=https://books.google.com/books?id=2b6Ok2EcnBIC&pg=PA217 |access-date=18 November 2012 |year=2008 |publisher=Discovery Publishing House |isbn=978-8183563260 |page=217}}</ref> 1341 CE ಯಲ್ಲಿ ಕೇರಳದಲ್ಲಿ ವಿನಾಶಕಾರಿ ಪ್ರವಾಹವು ಅದರ ಭೂಪ್ರದೇಶವನ್ನು ಆಮೂಲಾಗ್ರವಾಗಿ ಬದಲಾಯಿಸಿತು ಮತ್ತು ಅದರ ಇತಿಹಾಸದ ಮೇಲೆ ಪರಿಣಾಮ ಬೀರಿತು; ಇದು ಮಸಾಲೆ ಸಾಗಣೆಗೆ ನೈಸರ್ಗಿಕ ಬಂದರನ್ನು ಸೃಷ್ಟಿಸಿತು.<ref name="LimitedKitchen2010">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA100 |access-date=18 November 2012 |year=2010 |publisher=Murdoch Books |isbn=978-1-74196-438-7 |page=100}}</ref>
ಕೇರಳದ ಪೂರ್ವ ಪ್ರದೇಶವು ಪಶ್ಚಿಮ ಘಟ್ಟಗಳ [[ಮಳೆ ನೆರಳು]] ಯ ಪಶ್ಚಿಮಕ್ಕೆ ತಕ್ಷಣವೇ ಎತ್ತರದ ಪರ್ವತಗಳು, ಕಮರಿಗಳು ಮತ್ತು ಆಳವಾದ ಕತ್ತರಿಸಿದ ಕಣಿವೆಗಳನ್ನು ಒಳಗೊಂಡಿದೆ.<ref name=ChattopadhyayFranke2006 />{{rp|110}} ಕೇರಳದ ಪಶ್ಚಿಮಕ್ಕೆ ಹರಿಯುವ 41 ನದಿಗಳು,<ref name="Sadasivan2003">{{cite book |author=S. N. Sadasivan |title=River Disputes in India: Kerala Rivers Under Siege |url=https://books.google.com/books?id=hhrRboi5kOcC&pg=PA223 |access-date=18 November 2012 |year=2003 |publisher=Mittal Publications |isbn=978-8170999133 |page=223}}</ref> ಮತ್ತು ಅದರ ಪೂರ್ವಕ್ಕೆ ಹರಿಯುವ 3 ನದಿಗಳು ಈ ಪ್ರದೇಶದಲ್ಲಿ ಹುಟ್ಟುತ್ತವೆ.<ref name="Darpan2006">{{cite book |author=Pratiyogita Darpan |title=Pratiyogita Darpan |url=https://books.google.com/books?id=QegDAAAAMBAJ&pg=PT72 |access-date=18 November 2012 |date=September 2006 |publisher=Pratiyogita Darpan |page=72}}</ref><ref name="India2008">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA11 |access-date=18 November 2012 |year=2008 |publisher=Sura Books |isbn=978-8174781642 |page=11}}</ref> ಪಶ್ಚಿಮ ಘಟ್ಟಗಳು [[ಪಾಲಕ್ಕಾಡ್]] ಬಳಿ ಮಾತ್ರ ಅಡ್ಡಿಪಡಿಸುವ ಪರ್ವತಗಳ ಗೋಡೆಯನ್ನು ರೂಪಿಸುತ್ತವೆ; ಆದ್ದರಿಂದ ಪಾಲ್''ಘಾಟ್'' ಎಂದೂ ಕರೆಯಲ್ಪಡುತ್ತದೆ, ಅಲ್ಲಿ [[ಪಾಲಕ್ಕಾಡ್ ಅಂತರ]]ವು ಮುರಿಯುತ್ತದೆ.<ref>{{cite web |last1=Chandran Nair |first1=Dr.S.Sathis |title=India – Silent Valley Rainforest Under Threat Once More |url=https://www.rainforestinfo.org.au/wrr2004/silentvalley.htm |website=rainforestinfo.org.au |access-date=12 November 2015 |archive-date=24 September 2015 |archive-url=https://web.archive.org/web/20150924084520/http://www.rainforestinfo.org.au/wrr2004/silentvalley.htm |url-status=live }}</ref> ಪಶ್ಚಿಮ ಘಟ್ಟಗಳು ಸರಾಸರಿ {{convert|1500|m|ft|lk=out|abbr=off}} [[ಸಮುದ್ರ ಮಟ್ಟ]]ದವರೆಗೆ ಏರುತ್ತವೆ,<ref name="Biju2006">{{cite book |author=M.R. Biju |title=Sustainable Dimensions Of Tourism Management |url=https://books.google.com/books?id=AkAdvTbg0dEC&pg=PA63 |access-date=18 November 2012 |year=2006 |publisher=Mittal Publications |isbn=978-8183241298 |page=63}}</ref> ಆದರೆ ಅತಿ ಎತ್ತರದ ಶಿಖರಗಳು ಸುಮಾರು {{convert|2500|m|ft|abbr=off}} ತಲುಪುತ್ತವೆ.<ref name="Hussain">{{cite book |author=Hussain |title=Geography Of India For Civil Ser Exam |url=https://books.google.com/books?id=wUzKCZxvNQoC&pg=SA2-PA9 |access-date=18 November 2012 |publisher=Tata McGraw-Hill Education |isbn=978-0-07-066772-3 |page=2}}</ref> [[ಇಡುಕ್ಕಿ]] ಜಿಲ್ಲೆಯ [[ಅನಮುಡಿ]] ದಕ್ಷಿಣ ಭಾರತದ ಅತಿ ಎತ್ತರದ ಶಿಖರವಾಗಿದ್ದು, {{cvt|2,695|m}} ಎತ್ತರದಲ್ಲಿದೆ.<ref name="gazetteer">{{cite book |last1=Frowde |first1=Henry |url=https://dsal.uchicago.edu/reference/gazetteer/ |title=Imperial Gazetteer of India |date=1908–1909 |publisher=Clarendon Press |edition=New |location=Oxford |access-date=2 December 2020 |archive-url=https://web.archive.org/web/20081216124143/http://dsal.uchicago.edu/reference/gazetteer/ |archive-date=16 December 2008 |url-status=live}}</ref> ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯು ವಿಶ್ವದ ಎಂಟು "ಅತ್ಯಂತ ಬಿಸಿಯಾದ ಜೈವಿಕ ವೈವಿಧ್ಯತೆಯ ಹಾಟ್ಸ್ಪಾಟ್ಗಳಲ್ಲಿ" ಒಂದಾಗಿ ಗುರುತಿಸಲ್ಪಟ್ಟಿದೆ ಮತ್ತು [[UNESCO]] [[ವಿಶ್ವ ಪರಂಪರೆಯ ತಾಣ]]ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.<ref name="UNESCO">{{cite news |url=https://timesofindia.indiatimes.com/home/environment/flora-fauna/UN-designates-Western-Ghats-as-world-heritage-site/articleshow/14595602.cms |archive-url=https://web.archive.org/web/20130131192257/https://articles.timesofindia.indiatimes.com/2012-07-02/flora-fauna/32507340_1_world-heritage-list-western-ghats-border-town |url-status=live |archive-date=31 January 2013 |title=UN designates Western Ghats as world heritage site |date=2 July 2012 |newspaper=[[The Times of India]] |access-date=27 November 2018}}</ref> ಈ ಶ್ರೇಣಿಯ ಕಾಡುಗಳು ಹಿಮಾಲಯ ಪರ್ವತಗಳಿಗಿಂತ ಹಳೆಯದು ಎಂದು ಪರಿಗಣಿಸಲಾಗಿದೆ.<ref name="UNESCO" /> ಪಶ್ಚಿಮ ಘಟ್ಟಗಳ ಹಿನ್ನೆಲೆಯಲ್ಲಿ ನೆಲೆಗೊಂಡಿರುವ [[ಅತಿರಪ್ಪಿಲ್ಲಿ ಜಲಪಾತ]]ವನ್ನು ''ಭಾರತದ [[ನಯಾಗರ ಜಲಪಾತ|ನಯಾಗರ]]'' ಎಂದೂ ಕರೆಯಲಾಗುತ್ತದೆ.<ref name="Athirappilly">{{cite news |url=https://articles.timesofindia.indiatimes.com/2013-05-30/travel/33064279_1_palm-trees-trek-coconut-trees |title=The Times of India: Latest News India, World & Business News, Cricket & Sports, Bollywood |access-date=2 July 2013 |archive-url=https://web.archive.org/web/20130621233624/https://articles.timesofindia.indiatimes.com/2013-05-30/travel/33064279_1_palm-trees-trek-coconut-trees |archive-date=21 June 2013 |work=[[The Times of India]] |url-status=dead}}</ref> ಇದು [[ಚಾಲಕ್ಕುಡಿ ನದಿ]]ಯಲ್ಲಿದೆ ಮತ್ತು ರಾಜ್ಯದ ಅತಿ ದೊಡ್ಡ ಜಲಪಾತವಾಗಿದೆ.<ref name="Athirappilly" /> [[ವಯನಾಡು]] ಕೇರಳದ ಏಕೈಕ [[ಪ್ರಸ್ಥಭೂಮಿ]]ಯಾಗಿದೆ.<ref>{{cite book |author=William Logan |year=1887 |title=Malabar Manual (Volume-II) |publisher=Madras Government Press |url=https://archive.org/details/malabar_manual_volume2/mode/2up}}</ref> [[ವಯನಾಡು ಜಿಲ್ಲೆ|ವಯನಾಡು]], [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ([[ನಿಲಂಬೂರು|ನಿಲಂಬೂರಿನ]] [[ಚಾಲಿಯಾರ್]] ಕಣಿವೆ), ಮತ್ತು [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] ([[ಅಟ್ಟಪ್ಪಾಡಿ]] ಕಣಿವೆ) ಜಿಲ್ಲೆಗಳಲ್ಲಿನ ಪೂರ್ವ ಪ್ರದೇಶಗಳು, ಒಟ್ಟಾಗಿ [[ನೀಲಗಿರಿ ಜೀವಗೋಳ ಮೀಸಲು]] ಮತ್ತು [[ಮೈಸೂರು ಪ್ರಸ್ಥಭೂಮಿ]]ಯ ಮುಂದುವರಿಕೆಯ ಭಾಗಗಳಾಗಿವೆ, ಇವು ನೈಸರ್ಗಿಕ [[ಚಿನ್ನ]]ದ ಹೊಲಗಳಿಗೆ ಹೆಸರುವಾಸಿಯಾಗಿದೆ, ಜೊತೆಗೆ [[ಕರ್ನಾಟಕ]]ದ ಪಕ್ಕದ ಜಿಲ್ಲೆಗಳು.<ref>{{Cite web |url=https://dmg.kerala.gov.in/mineral-resources/ |title=Mineral Resources |website=Department of Mining and Geology – Government of Kerala |access-date=4 April 2022 |archive-date=13 May 2022 |archive-url=https://web.archive.org/web/20220513124121/https://dmg.kerala.gov.in/mineral-resources/ |url-status=live }}</ref> [[ಇಲ್ಮೆನೈಟ್]], [[ಮೊನಾಜೈಟ್]], [[ಥೋರಿಯಮ್]], ಮತ್ತು [[ಟೈಟಾನಿಯಮ್]] ಸೇರಿದಂತೆ ಖನಿಜಗಳು ಕೇರಳದ ಕರಾವಳಿ ಪಟ್ಟಿಯಲ್ಲಿ ಕಂಡುಬರುತ್ತವೆ.{{sfn|Chandran|2018|p=343}} ಕೇರಳದ [[ಕರುನಾಗಪ್ಪಳ್ಳಿ]] ಕರಾವಳಿ ಪಟ್ಟಿಯು [[ಥೋರಿಯಮ್]]-ಹೊಂದಿರುವ [[ಮೊನಾಜೈಟ್]] ಮರಳಿನಿಂದ ಹೆಚ್ಚಿನ ಹಿನ್ನೆಲೆ ವಿಕಿರಣಕ್ಕೆ ಹೆಸರುವಾಸಿಯಾಗಿದೆ. ಕೆಲವು ಕರಾವಳಿ ಪಂಚಾಯತ್ಗಳಲ್ಲಿ, ಸರಾಸರಿ ಹೊರಾಂಗಣ ವಿಕಿರಣ ಮಟ್ಟಗಳು 4 [[ಗ್ರೇ (ಘಟಕ)#ದೇಹದ ಮೇಲಿನ ಪರಿಣಾಮ|mGy/yr]] ಗಿಂತ ಹೆಚ್ಚು ಮತ್ತು ಕರಾವಳಿಯ ಕೆಲವು ಸ್ಥಳಗಳಲ್ಲಿ, ಇದು 70 mGy/yr ನಷ್ಟು ಹೆಚ್ಚಾಗಿದೆ.<ref>{{Cite news |vauthors=Nair RR, Rajan B, Akiba S, Jayalekshmi P, Nair MK, Gangadharan P, Koga T, Morishima H, Nakamura S, Sugahara T |title=Background radiation and cancer incidence in Kerala, India-Karanagappally cohort study. |publisher=Health Physics |date=January 2009 |pmid=19066487}}</ref>
ಕೇರಳದ ಪಶ್ಚಿಮ ಕರಾವಳಿ ಪಟ್ಟಿಯು ಪೂರ್ವ ಪ್ರದೇಶಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಸಮತಟ್ಟಾಗಿದೆ,<ref name="ChattopadhyayFranke2006" />{{rp|33}} ಮತ್ತು ಅಂತರ್ಸಂಪರ್ಕಿತ [[ಉಪ್ಪುನೀರಿನ]] ಕಾಲುವೆಗಳು, ಸರೋವರಗಳು, [[ಅಳಿವೆ]]ಗಳು,<ref name="Moss2010">{{cite book |author=Danny Moss |title=Public Relations Cases: International Perspectives |url=https://books.google.com/books?id=s0-CJ3djEdEC&pg=PA41 |access-date=18 November 2012 |year=2010 |publisher=Taylor & Francis |isbn=978-0-415-77336-2 |page=41}}</ref> ಮತ್ತು [[ಕೇರಳ ಬ್ಯಾಕ್ವಾಟರ್ಗಳು]] ಎಂದು ಕರೆಯಲ್ಪಡುವ ನದಿಗಳ ಜಾಲದಿಂದ ಕೂಡಿದೆ.<ref name="Thorpe2012">{{cite book |author=Edgar Thorpe |title=The Pearson CSAT Manual 2012 |url=https://books.google.com/books?id=1cruroSVFoUC&pg=RA3-PA38 |access-date=18 November 2012 |year=2012 |publisher=Pearson Education India |isbn=978-8131767344 |page=3}}</ref> ''ಕೇರಳದ ಅಕ್ಕಿಯ ಬಟ್ಟಲು'' ಎಂದೂ ಕರೆಯಲ್ಪಡುವ [[ಕುಟ್ಟನಾಡು]] ಭಾರತದಲ್ಲಿ [[ಭಾರತದ ತೀವ್ರ ಬಿಂದುಗಳ ಪಟ್ಟಿ#ಎತ್ತರಗಳು|ಅತ್ಯಂತ ಕಡಿಮೆ ಎತ್ತರವನ್ನು]] ಹೊಂದಿದೆ, ಮತ್ತು ಇದು ಸಮುದ್ರ ಮಟ್ಟಕ್ಕಿಂತ ಕೆಳಗೆ ಬೇಸಾಯ ನಡೆಯುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿದೆ.<ref>{{Cite news |title=Kerala Boat Ferries Lone Passenger To Help Her Take Exam |url=https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |last=Press Trust of India |date=1 June 2020 |access-date=17 November 2020 |work=NDTV |archive-date=16 November 2021 |archive-url=https://web.archive.org/web/20211116093316/https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |url-status=live }}</ref><ref>{{Cite web |url=https://www.hindu.com/mag/2003/07/13/stories/2003071300600200.htm |title=Thirst below sea level |last=Suchitra |first=M |date=13 August 2003 |work=[[The Hindu]] |access-date=17 November 2020 |archive-url=https://web.archive.org/web/20190922101804/https://www.thehindu.com/todays-paper/tp-features/tp-sundaymagazine/thirst-below-sea-level/article28523147.ece |archive-date=22 September 2019}}</ref> ದೇಶದ ಅತಿ ಉದ್ದದ ಸರೋವರ [[ವೇಂಬನಾಡು ಸರೋವರ|ವೇಂಬನಾಡು]] ಬ್ಯಾಕ್ವಾಟರ್ಗಳಲ್ಲಿ ಪ್ರಾಬಲ್ಯ ಹೊಂದಿದೆ; ಇದು [[ಆಲಪ್ಪುಳ]] ಮತ್ತು [[ಕೊಚ್ಚಿ]] ನಡುವೆ ಇದೆ ಮತ್ತು ಸುಮಾರು {{cvt|200|km2|sqmi}} ಪ್ರದೇಶದಲ್ಲಿದೆ.<ref name="Husain">{{cite book |author=Majid Husain |title=Understanding: Geographical: Map Entries: for Civil Services Examinations: Second Edition |url=https://books.google.com/books?id=_9VGKfQ-sQsC&pg=RA9-PT18 |access-date=18 November 2012 |publisher=Tata McGraw-Hill Education |isbn=978-0-07-070288-2 |page=9 |year=2011}}</ref> ಭಾರತದ ಸುಮಾರು ಎಂಟು ಪ್ರತಿಶತದಷ್ಟು ಜಲಮಾರ್ಗಗಳು ಕೇರಳದಲ್ಲಿ ಕಂಡುಬರುತ್ತವೆ.<ref name="IWAI_2005">{{Cite journal |author=Inland Waterways Authority of India (IWAI—Ministry of Shipping) |year=2005 |title=Introduction to Inland Water Transport |journal=IWAI (Ministry of Shipping) |url=https://iwai.nic.in/Introduction.html |archive-url=https://archive.today/20050204175110/http://iwai.nic.in/Introduction.html |url-status=dead |archive-date=4 February 2005 |access-date=19 January 2006}}</ref> ಕೇರಳದ [[ಕೇರಳದ ನದಿಗಳ ಪಟ್ಟಿ|44 ನದಿಗಳು]] [[ಪೆರಿಯಾರ್ ನದಿ|ಪೆರಿಯಾರ್]]; {{convert|244|km|mi|0}}, [[ಭಾರತಪುಳ]]; {{convert|209|km|mi|0}}, [[ಪಂಬಾ ನದಿ|ಪಂಬಾ]]; {{convert|176|km|mi|0}}, [[ಚಾಲಿಯಾರ್ ನದಿ|ಚಾಲಿಯಾರ್]]; {{convert|169|km|mi|0}}, [[ಕಡಲುಂಡಿಪುಳ ನದಿ|ಕಡಲುಂಡಿಪುಳ]]; {{convert|130|km|mi|0}}, [[ಚಾಲಕ್ಕುಡಿ ನದಿ|ಚಾಲಕ್ಕುಡಿಪುಳ]]; {{convert|130|km|mi|0}}, [[ವಲಪಟ್ಟಣಂ ನದಿ|ವಲಪಟ್ಟಣಂ]]; {{convert|129|km|mi|0}} ಮತ್ತು [[ಅಚನ್ಕೋವಿಲ್ ನದಿ]]; {{convert|128|km|mi|0}}. ನದಿಗಳ ಸರಾಸರಿ ಉದ್ದ {{convert|64|km|mi|0}}. ಅನೇಕ ನದಿಗಳು ಚಿಕ್ಕದಾಗಿರುತ್ತವೆ ಮತ್ತು ಸಂಪೂರ್ಣವಾಗಿ ಮಳೆಗಾಲದ ಮಳೆಯಿಂದ ಪೋಷಿಸಲ್ಪಡುತ್ತವೆ.<ref name=riverreport>{{cite book |last=India. |first=Planning Commission |title=Kerala Development Report |year=2008 |publisher=Academic Foundation |isbn=978-8171885947 |page=224 |url=https://books.google.com/books?isbn=8171885942}}</ref> ಕೇರಳದ ನದಿಗಳು ಚಿಕ್ಕದಾಗಿರುವುದರಿಂದ ಮತ್ತು [[ನದೀಮುಖಜ ಭೂಮಿ|ಮುಖಜ ಭೂಮಿಯ]] ಕೊರತೆಯಿಂದಾಗಿ, ಅವು ಪರಿಸರ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತವೆ. ನದಿಗಳು ಮರಳು ಗಣಿಗಾರಿಕೆ ಮತ್ತು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತವೆ.<ref name="Padmalal">{{cite journal | url=https://doi.org/10.1007/s00254-007-0870-z | doi=10.1007/s00254-007-0870-z | title=Environmental effects of river sand mining: A case from the river catchments of Vembanad lake, Southwest coast of India | year=2008 | last1=Padmalal | first1=D. | last2=Maya | first2=K. | last3=Sreebha | first3=S. | last4=Sreeja | first4=R. | journal=Environmental Geology | volume=54 | issue=4 | pages=879–889 | bibcode=2008EnGeo..54..879P | s2cid=129312081 | access-date=12 February 2020 | archive-date=25 November 2023 | archive-url=https://web.archive.org/web/20231125191757/https://link.springer.com/article/10.1007/s00254-007-0870-z | url-status=live | issn = 0943-0105 | url-access=subscription }}</ref> ರಾಜ್ಯವು ಭೂಕುಸಿತ, ಪ್ರವಾಹ ಮತ್ತು ಬರಗಾಲದಂತಹ ಹಲವಾರು ನೈಸರ್ಗಿಕ ಅಪಾಯಗಳನ್ನು ಅನುಭವಿಸುತ್ತದೆ. 2004 ರ [[2004 ರ ಹಿಂದೂ ಮಹಾಸಾಗರದ ಭೂಕಂಪ ಮತ್ತು ಸುನಾಮಿ|ಹಿಂದೂ ಮಹಾಸಾಗರದ ಸುನಾಮಿ]] ಯಿಂದ ರಾಜ್ಯವು ಸಹ ಪರಿಣಾಮ ಬೀರಿತು,<ref name="Jha2010">{{cite book |author=M.K. Jha |title=Natural and Anthropogenic Disasters: Vulnerability, Preparedness and Mitigation |url=https://books.google.com/books?id=fICXQSPJwx8C&pg=PA81 |access-date=18 November 2012 |year=2010 |publisher=Springer |isbn=978-9048124978 |page=81}}</ref> ಮತ್ತು 2018 ರಲ್ಲಿ ಸುಮಾರು ಒಂದು ಶತಮಾನದಲ್ಲಿ [[2018 ಕೇರಳ ಪ್ರವಾಹ|ಕೆಟ್ಟ ಪ್ರವಾಹವನ್ನು]] ಅನುಭವಿಸಿತು.<ref>{{Cite news |url=https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |title=Worst floods in nearly a century kill 44 in India's Kerala state amid torrential monsoon rains |last=Baynes |first=Chris |date=15 August 2018 |work=The Independent |access-date=16 August 2018 |archive-date=23 May 2019 |archive-url=https://web.archive.org/web/20190523232643/https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |url-status=live }}</ref> 2024 ರಲ್ಲಿ, ಕೇರಳವು ತನ್ನ ಇತಿಹಾಸದಲ್ಲಿ [[2024 ವಯನಾಡು ಭೂಕುಸಿತ|ಕೆಟ್ಟ ಭೂಕುಸಿತಗಳನ್ನು]] ಅನುಭವಿಸಿತು.<ref>{{Cite news |url=https://www.onmanorama.com/news/kerala/2024/07/30/wayand-landslide-kerala-rain-live.html |title=Wayanad landslides: 133 dead, 481 saved, at least 98 missing |date=30 July 2024 |work=[[Onmanorama]] |access-date=31 July 2024 |archive-date=30 July 2024|archive-url=https://web.archive.org/web/20240730073647/https://www.onmanorama.com/news/kerala/2024/07/30/wayand-landslide-kerala-rain-live.html |url-status=live }}</ref>
=== ಹವಾಮಾನ ===
ವರ್ಷಕ್ಕೆ ಸುಮಾರು 120–140 ಮಳೆಯ ದಿನಗಳೊಂದಿಗೆ,<ref name="Chacko_2002">{{Cite journal |last1=Chacko |first1=T. |last2=Renuka |first2=G. |year=2002 |title=Temperature mapping, thermal diffusivity and subsoil heat flux at Kariavattom, Kerala |journal=Proc Indian Acad Sci (Earth Planet Sci) |volume=111 |issue=1 |pages=79 |title-link=Kariavattom |bibcode=2002InEPS.111...79T |doi=10.1007/BF02702224 |doi-access=free}}</ref>{{rp|80}} ಕೇರಳವು [[ನೈಋತ್ಯ ಮಾನ್ಸೂನ್|ನೈಋತ್ಯ ಬೇಸಿಗೆ ಮಾನ್ಸೂನ್]] ಮತ್ತು [[ಈಶಾನ್ಯ ಮಾನ್ಸೂನ್|ಈಶಾನ್ಯ ಚಳಿಗಾಲದ ಮಾನ್ಸೂನ್]] ನ ಕಾಲಿಕ ಭಾರೀ ಮಳೆಯಿಂದ ಪ್ರಭಾವಿತವಾದ ಆರ್ದ್ರ ಮತ್ತು ಸಮುದ್ರಯಾನ ಉಷ್ಣವಲಯದ ಹವಾಮಾನವನ್ನು ಹೊಂದಿದೆ.<ref name="Devrep">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=223 |access-date=30 May 2015}}</ref> ಸುಮಾರು 65% ಮಳೆಯು ಜೂನ್ ನಿಂದ ಆಗಸ್ಟ್ ವರೆಗೆ ನೈಋತ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ, ಮತ್ತು ಉಳಿದವು ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಈಶಾನ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ.<ref name="Devrep" /> ನೈಋತ್ಯ ಮಾನ್ಸೂನ್ನ ತೇವಾಂಶ-ಹೊತ್ತ ಗಾಳಿಗಳು, [[ಭಾರತೀಯ ಪರ್ಯಾಯ ದ್ವೀಪ]]ದ ಅತ್ಯಂತ ದಕ್ಷಿಣದ ಬಿಂದುವನ್ನು ತಲುಪಿದಾಗ, ಅದರ ಸ್ಥಳಾಕೃತಿಯ ಕಾರಣದಿಂದಾಗಿ, ಎರಡು ಶಾಖೆಗಳಾಗಿ ವಿಭಜನೆಯಾಗುತ್ತವೆ; "ಅರೇಬಿಯನ್ ಸಮುದ್ರ ಶಾಖೆ" ಮತ್ತು "ಬಂಗಾಳ ಕೊಲ್ಲಿಯ ಶಾಖೆ".<ref name="Jain">{{cite book |author=RK Jain |title=Geography 10 |url=https://books.google.com/books?id=7hOybWJeZN0C&pg=PA110 |access-date=18 November 2012 |publisher=Ratna Sagar |isbn=978-8183320818 |page=110}}</ref> ನೈಋತ್ಯ ಮಾನ್ಸೂನ್ನ "ಅರೇಬಿಯನ್ ಸಮುದ್ರ ಶಾಖೆ" ಮೊದಲು ಪಶ್ಚಿಮ ಘಟ್ಟಗಳಿಗೆ ಬಡಿಯುತ್ತದೆ,<ref name="Together with Social Science Term II">{{cite book |title=Together with Social Science Term II |url=https://books.google.com/books?id=oOA1nsSU8JYC&pg=PA112 |access-date=18 November 2012 |publisher=Rachna Sagar |isbn=978-8181373991 |page=112}}</ref> ನೈಋತ್ಯ ಮಾನ್ಸೂನ್ನಿಂದ ಮಳೆಯನ್ನು ಪಡೆಯುವ ಭಾರತದ ಮೊದಲ ರಾಜ್ಯವಾಗಿ ಕೇರಳವನ್ನು ಮಾಡುತ್ತದೆ.<ref name="google6">{{cite book |author1=Edgar Thorpe, Showick Thorpe |author2=Thorpe Edgar |title=The Pearson CSAT Manual 2011 |url=https://books.google.com/books?id=WuBFs6yFRwcC&pg=SL7-PA168 |access-date=18 November 2012 |publisher=Pearson Education India |isbn=978-8131758304 |page=7}}</ref><ref name="Aggarwal">{{cite book |author1=N.N. Kher |author2=Jaideep Aggarwal |title=A Text Book of Social Sciences |url=https://books.google.com/books?id=jV6k0FvIC4sC&pg=RA5-PA16 |access-date=18 November 2012 |publisher=Pitambar Publishing |isbn=978-8120914667 |page=5}}</ref> ಈಶಾನ್ಯ ಮಾನ್ಸೂನ್ನಲ್ಲಿ ಒತ್ತಡದ ಮಾದರಿಗಳ ವಿತರಣೆಯು ಹಿಮ್ಮುಖವಾಗುತ್ತದೆ, ಈ ಋತುವಿನಲ್ಲಿ ಉತ್ತರ ಭಾರತದಿಂದ ತಣ್ಣನೆಯ ಗಾಳಿಗಳು ಬಂಗಾಳ ಕೊಲ್ಲಿಯಿಂದ ತೇವಾಂಶವನ್ನು ಪಡೆದುಕೊಳ್ಳುತ್ತವೆ ಮತ್ತು ಪರ್ಯಾಯ ದ್ವೀಪ ಭಾರತದ ಪೂರ್ವ ಕರಾವಳಿಯಲ್ಲಿ ಅದನ್ನು ಮಳೆಯಾಗಿ ಸುರಿಸುತ್ತವೆ.<ref name="google7">{{cite book |author1=Sarina Singh |author2=Amy Karafin |author3=Anirban Mahapatra |title=South India |url=https://books.google.com/books?id=8KnLFpjEHpUC&pg=PA15 |access-date=18 November 2012 |year=2009 |publisher=Lonely Planet |isbn=978-1-74179-155-6 |page=15}}</ref><ref name="Reddy">{{cite book |author=S.V. Jeevananda Reddy |title=Climate Change: Myths and Realities |url=https://books.google.com/books?id=y_GMTXRtxJ8C&pg=PA71 |access-date=18 November 2012 |publisher=Jeevananda Reddy |page=71 |id=GGKEY:WDFHBL1XHK3}}</ref> ಕೇರಳದಲ್ಲಿ, ಈಶಾನ್ಯ ಮಾನ್ಸೂನ್ನ ಪ್ರಭಾವವು ದಕ್ಷಿಣ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುತ್ತದೆ.<ref>{{Cite book |author=Rao |title=Agricultural Meteorology |url=https://books.google.com/books?id=Kd-3lt-yAtAC&pg=PA173 |publisher=PHI Learning |year=2008 |isbn=978-8120333383 |pages=173–74 |access-date=30 May 2015}}</ref> ಕೇರಳದ ಮಳೆಯು ವಾರ್ಷಿಕವಾಗಿ ಸರಾಸರಿ 2,923 mm (115 in) ಆಗಿದೆ.<ref name="IMD">{{cite web |url=https://www.imd.gov.in/section/hydro/dynamic/rfmaps/updated.html |title=Hydromet Division Updated/Real Time Maps |publisher=[[India Meteorological Department]] |access-date=21 October 2014 |archive-url=https://web.archive.org/web/20160305062728/https://www.imd.gov.in/section/hydro/dynamic/rfmaps/updated.html |archive-date=5 March 2016 |url-status=dead}}</ref> ಕೇರಳದ ಕೆಲವು ಶುಷ್ಕ ತಗ್ಗು ಪ್ರದೇಶಗಳು ಸರಾಸರಿ ಕೇವಲ 1,250 mm (49 in) ಪಡೆಯುತ್ತವೆ; ಪೂರ್ವ [[ಇಡುಕ್ಕಿ ಜಿಲ್ಲೆ]]ಯ ಪರ್ವತಗಳು 5,000 mm (197 in) ಗಿಂತ ಹೆಚ್ಚು [[ಮಳೆ (ಹವಾಮಾನಶಾಸ್ತ್ರ)#ಶಿಲಾವೃಷ್ಟಿ ಮಳೆ|ಶಿಲಾವೃಷ್ಟಿ ಮಳೆಯನ್ನು]] ಪಡೆಯುತ್ತವೆ: ರಾಜ್ಯದಲ್ಲಿ ಅತಿ ಹೆಚ್ಚು. ಪೂರ್ವ ಕೇರಳದಲ್ಲಿ, ಶುಷ್ಕ ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಹವಾಮಾನವು ಪ್ರಚಲಿತವಾಗಿದೆ. ಬೇಸಿಗೆಯಲ್ಲಿ, ರಾಜ್ಯವು ಭಾರಿ ಗಾಳಿ, ಸುಂಟರಗಾಳಿ, ಚಂಡಮಾರುತ-ಸಂಬಂಧಿತ ಧಾರಾಕಾರ ಮಳೆ, ಸಾಂದರ್ಭಿಕ ಬರಗಾಲ ಮತ್ತು ಸಮುದ್ರ ಮಟ್ಟದ ಏರಿಕೆಗೆ ಒಳಗಾಗುತ್ತದೆ.<ref name="Brenkert_Malone_2003">{{Cite journal |last1=Brenkert |first1=A. |last2=Malone |first2=E. |year=2003 |title=Vulnerability and resilience of India and Indian states to climate change: a first-order approximation |journal=Joint Global Change Research Institute}}</ref>{{rp|26, 46, 52}} ಸರಾಸರಿ ದೈನಂದಿನ ತಾಪಮಾನವು 19.8 °C ನಿಂದ 36.7 °C ವರೆಗೆ ಇರುತ್ತದೆ.<ref name="moef">{{cite web |last=Sudha |first=T. M. |title=Opportunities in participatory planning to Evolve a Landuse Policy for Western Ghats Region in Kerala |url=https://moef.nic.in/downloads/public-information/tenth/Annexure%203.pdf |publisher=Department of Town and Country Planning, Kerala |page=14 |access-date=18 January 2015 |archive-url=https://web.archive.org/web/20160325095604/https://www.moef.nic.in/downloads/public-information/tenth/Annexure%203.pdf |archive-date=25 March 2016 |url-status=dead}}</ref> ವಾರ್ಷಿಕ ಸರಾಸರಿ ತಾಪಮಾನವು ಕರಾವಳಿ ತಗ್ಗು ಪ್ರದೇಶಗಳಲ್ಲಿ 25.0 ರಿಂದ 27.5 °C ವರೆಗೆ ಮತ್ತು ಪೂರ್ವ ಎತ್ತರದ ಪ್ರದೇಶಗಳಲ್ಲಿ 20.0–22.5 °C ವರೆಗೆ ಇರುತ್ತದೆ.<ref name="Brenkert_Malone_2003" />{{rp|65}}
=== ಸಸ್ಯ ಮತ್ತು ಪ್ರಾಣಿ ===
{{Main|ಕೇರಳದ ಸಸ್ಯ ಮತ್ತು ಪ್ರಾಣಿ}}
{{Multiple image
| direction = vertical
| width = 220
| image1 = Ichthyaetus ichthyaetus Kadalundi.jpg
| caption1 = [[ಕಡಲುಂಡಿ ಪಕ್ಷಿ ಅಭಯಾರಣ್ಯ|ಕಡಲುಂಡಿ ಪಕ್ಷಿ ಅಭಯಾರಣ್ಯದಲ್ಲಿ]] ಒಂದು ವಲಸೆ ''[[ಇಚ್ಥ್ಯಾಏಟಸ್]]''
| image2 = Highland Grassland Shola of Silent Valley National Park.jpg
| caption2 = [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]]
| image3 = Munnarhills.jpg
| caption3 = [[ಏಲಕ್ಕಿ ಬೆಟ್ಟಗಳು]] ತಮ್ಮ [[ಜೈವಿಕ ವೈವಿಧ್ಯತೆ]]ಗೆ ಹೆಸರುವಾಸಿಯಾಗಿದೆ
}}
ಹೆಚ್ಚಿನ [[ಜೈವಿಕ ವೈವಿಧ್ಯತೆ]]ಯು [[ಪಶ್ಚಿಮ ಘಟ್ಟಗಳಲ್ಲಿ]] ಕೇಂದ್ರೀಕೃತವಾಗಿದೆ ಮತ್ತು ರಕ್ಷಿಸಲ್ಪಟ್ಟಿದೆ. 18 ನೇ ಶತಮಾನದವರೆಗೆ ಕೇರಳದ ಮೂರು-ನಾಲ್ಕು ಭಾಗದಷ್ಟು ಭೂ ಪ್ರದೇಶವು ದಟ್ಟವಾದ ಅರಣ್ಯದ ಅಡಿಯಲ್ಲಿತ್ತು.<ref name="History">{{cite web |url=https://www.forest.kerala.gov.in/index.php?option=com_content&view=article&id=46&Itemid=2 |title=History |access-date=12 August 2015 |publisher=Kerala forests and wildlife department |archive-date=12 September 2015 |archive-url=https://web.archive.org/web/20150912231001/http://www.forest.kerala.gov.in/index.php?option=com_content&view=article&id=46&Itemid=2 |url-status=dead }}</ref> 2004 ರಂತೆ, ಭಾರತದ 15,000 ಸಸ್ಯ ಪ್ರಭೇದಗಳಲ್ಲಿ 25% ಕ್ಕಿಂತ ಹೆಚ್ಚು ಕೇರಳದಲ್ಲಿವೆ. 4,000 [[ಹೂಬಿಡುವ ಸಸ್ಯ]] ಪ್ರಭೇದಗಳಲ್ಲಿ; ಅವುಗಳಲ್ಲಿ 1,272 [[ಸ್ಥಳೀಯ (ಪರಿಸರ ವಿಜ್ಞಾನ)|ಕೇರಳಕ್ಕೆ ಸ್ಥಳೀಯವಾಗಿವೆ]], 900 [[ಸಸ್ಯವೈದ್ಯ|ಔಷಧೀಯವಾಗಿವೆ]], ಮತ್ತು 159 [[ಅಳಿವಿನಂಚಿನಲ್ಲಿರುವ ಪ್ರಭೇದಗಳು|ಬೆದರಿಕೆಗೆ ಒಳಗಾಗಿವೆ]].<ref name="Sreedharan_2004">{{Cite journal |author=Sreedharan TP |year=2004 |title=Biological Diversity of Kerala: A survey of Kalliasseri panchayat, Kannur district |journal=Centre for Development Studies |url=https://krpcds.org/publication/downloads/62.pdf |archive-url=https://web.archive.org/web/20090326054155/https://krpcds.org/publication/downloads/62.pdf |archive-date=26 March 2009 |access-date=28 December 2008}}</ref>{{rp|11}} ಇದರ {{cvt|9,400|km2}} ಕಾಡುಗಳು ಉಷ್ಣವಲಯದ ಆರ್ದ್ರ ನಿತ್ಯಹಸಿರು ಮತ್ತು ಅರೆ-ನಿತ್ಯಹಸಿರು ಕಾಡುಗಳು (ಕೆಳ ಮತ್ತು ಮಧ್ಯಮ ಎತ್ತರಗಳು—3,470 km<sup>2</sup>), ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಪತನಶೀಲ ಕಾಡುಗಳು (ಮಧ್ಯಮ ಎತ್ತರಗಳು—4,100 km<sup>2</sup> ಮತ್ತು {{cvt|100|km2}}, ಕ್ರಮವಾಗಿ), ಮತ್ತು ಪರ್ವತ ಉಪೋಷ್ಣವಲಯ ಮತ್ತು [[ಸಮಶೀತೋಷ್ಣ]] (''ಶೋಲ'') ಕಾಡುಗಳು (ಅತಿ ಎತ್ತರದ ಎತ್ತರಗಳು—100 km<sup>2</sup>) ಒಳಗೊಂಡಿವೆ. ಒಟ್ಟಾರೆಯಾಗಿ, ಕೇರಳದ 24% ಅರಣ್ಯವಾಗಿದೆ.<ref name="Sreedharan_2004" />{{rp|12}} ವಿಶ್ವದ [[ರಾಮ್ಸರ್ ಒಪ್ಪಂದ]]ದಲ್ಲಿ ಪಟ್ಟಿ ಮಾಡಲಾದ ನಾಲ್ಕು [[ಜವುಗು ಪ್ರದೇಶ]]ಗಳು—[[ಶಾಸ್ತಾಂಕೋಟ್ಟ ಸರೋವರ|ಸರೋವರ ಶಾಸ್ತಾಂಕೋಟ್ಟ]], [[ಅಷ್ಟಮುಡಿ ಸರೋವರ]], [[ತೃಶೂರ್-ಪೊನ್ನಾನಿ ಕೋಲ್ ಜವುಗು ಪ್ರದೇಶಗಳು]], ಮತ್ತು ವೇಂಬನಾಡು-ಕೋಲ್ ಜವುಗು ಪ್ರದೇಶಗಳು—ಕೇರಳದಲ್ಲಿವೆ,{{sfn|Chandran|2018|p=342}} ಜೊತೆಗೆ ವಿಶಾಲವಾದ [[ನೀಲಗಿರಿ ಜೀವಗೋಳ ಮೀಸಲು]]ಯ {{cvt|1455.4|km2}} ಮತ್ತು [[ಅಗಸ್ತ್ಯಮಲೈ ಜೀವಗೋಳ ಮೀಸಲು]]ಯ {{cvt|1828|km2}} ಸೇರಿವೆ.{{sfn|Chandran|2018|p=347}} 20 ನೇ ಶತಮಾನದಲ್ಲಿ ಬೇಸಾಯಕ್ಕಾಗಿ ವ್ಯಾಪಕವಾಗಿ ತೆರವುಗೊಳಿಸಲ್ಪಟ್ಟಿದ್ದು,<ref name="Jayarajan_2004">{{Cite journal |author=Jayarajan M |year=2004 |title=Sacred Groves of North Malabar |journal=Centre for Development Studies |url=https://krpcds.org/publication/downloads/92.pdf |archive-url=https://web.archive.org/web/20090326054142/https://krpcds.org/publication/downloads/92.pdf |archive-date=26 March 2009 |access-date=28 December 2008}}</ref>{{rp|6–7}} ಉಳಿದ ಅರಣ್ಯ ಹೊದಿಕೆಯ ಹೆಚ್ಚಿನ ಭಾಗವನ್ನು ಈಗ [[ಸ್ಪಷ್ಟ ಕಡಿತ]]ದಿಂದ ರಕ್ಷಿಸಲಾಗಿದೆ.<ref name="Evans2008">{{cite book |author=Julian Evans |title=The Forests Handbook, Applying Forest Science for Sustainable Management |url=https://books.google.com/books?id=Ol_CCkYQNKIC&pg=PA235 |access-date=18 November 2012 |year=2008 |publisher=John Wiley & Sons |isbn=978-0-470-75683-6 |page=235}}</ref> ಪೂರ್ವ ಕೇರಳದ ಗಾಳಿಗೆ ಮುಖವಾದ ಪರ್ವತಗಳು [[ಉಷ್ಣವಲಯ ಮತ್ತು ಉಪೋಷ್ಣವಲಯದ ಆರ್ದ್ರ ಪರ್ಣಪಾತಿ ಕಾಡುಗಳು|ಉಷ್ಣವಲಯದ ಆರ್ದ್ರ ಕಾಡುಗಳನ್ನು]] ಮತ್ತು [[ಉಷ್ಣವಲಯ ಮತ್ತು ಉಪೋಷ್ಣವಲಯದ ಶುಷ್ಕ ಪರ್ಣಪಾತಿ ಕಾಡುಗಳು|ಉಷ್ಣವಲಯದ ಶುಷ್ಕ ಕಾಡುಗಳನ್ನು]] ಆಶ್ರಯಿಸುತ್ತವೆ, ಇವು ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿವೆ.<ref name="google8">{{cite book |author1=R. P. Singh |author2=Zubairul Islam |title=Environmental Studies |url=https://books.google.com/books?id=gaQptMlw3X8C&pg=PA172 |access-date=18 November 2012 |publisher=Concept Publishing Company |isbn=978-8180697746 |page=172 |year=2012 |archive-date=25 November 2023 |archive-url=https://web.archive.org/web/20231125191749/https://books.google.com/books?id=gaQptMlw3X8C&pg=PA172#v=onepage&q&f=false |url-status=live }}</ref><ref name="Geer2008">{{cite book |author=Alexandra Anna Enrica van der Geer |title=Animals in Stone: Indian Mammals Sculptured Through Time |url=https://books.google.com/books?id=oQ3quxh9gsgC&pg=PA7 |access-date=18 November 2012 |year=2008 |publisher=Brill |isbn=978-9004168190 |page=7}}</ref> ವಿಶ್ವದ ಅತ್ಯಂತ ಹಳೆಯ ತೇಗದ ತೋಟ 'ಕೊನೊಲ್ಲಿಸ್ ಪ್ಲಾಟ್' [[ನಿಲಂಬೂರು|ನಿಲಂಬೂರಿನಲ್ಲಿದೆ]].<ref>{{Cite web |url=https://www.dnaindia.com/india/report-world-s-oldest-teak-trees-dying-in-kerala-1255723 |title=World's oldest teak trees dying in Kerala |date=13 May 2009 |website=DNA India |access-date=25 November 2020 |archive-date=15 April 2021 |archive-url=https://web.archive.org/web/20210415102931/https://www.dnaindia.com/india/report-world-s-oldest-teak-trees-dying-in-kerala-1255723 |url-status=live }}</ref>
ಕೇರಳದ ಪ್ರಾಣಿಗಳು ಅವುಗಳ ವೈವಿಧ್ಯತೆ ಮತ್ತು ಹೆಚ್ಚಿನ ಸ್ಥಳೀಯತೆಯ ಪ್ರಮಾಣಕ್ಕೆ ಗಮನಾರ್ಹವಾಗಿವೆ: ಇದು 118 [[ಸಸ್ತನಿ]] ಪ್ರಭೇದಗಳನ್ನು (1 ಸ್ಥಳೀಯ), [[ಕೇರಳದ ಪಕ್ಷಿಗಳ ಪಟ್ಟಿ|500 ಪಕ್ಷಿ ಪ್ರಭೇದಗಳು]], 189 ಸಿಹಿನೀರಿನ ಮೀನು ಪ್ರಭೇದಗಳು, 173 [[ಸರೀಸೃಪ]] ಪ್ರಭೇದಗಳು (ಅವುಗಳಲ್ಲಿ 10 ಸ್ಥಳೀಯ), ಮತ್ತು 151 [[ಉಭಯಚರ]] ಪ್ರಭೇದಗಳನ್ನು (36 ಸ್ಥಳೀಯ) ಒಳಗೊಂಡಿದೆ.<ref>{{Cite web |url=https://threatenedtaxa.org/index.php/JoTT/article/view/1999/3443 |archive-url=https://web.archive.org/web/20161007224232/https://threatenedtaxa.org/index.php/JoTT/article/view/1999/3443 |url-status=dead |title=View of A checklist of the vertebrates of Kerala State, India | Journal of Threatened Taxa |archive-date=7 October 2016 |website=threatenedtaxa.org}}</ref> ಇವುಗಳು ವ್ಯಾಪಕವಾದ ಆವಾಸಸ್ಥಾನ ನಾಶ, ಮಣ್ಣಿನ ಸವಕಳಿ, ಭೂಕುಸಿತ, [[ಮಣ್ಣಿನ ಲವಣೀಕರಣ|ಉಪ್ಪಿನಂಶ]], ಮತ್ತು ಸಂಪನ್ಮೂಲ ಹೊರತೆಗೆಯುವಿಕೆಯಿಂದ ಬೆದರಿಕೆಗೆ ಒಳಗಾಗಿವೆ. ಕಾಡುಗಳಲ್ಲಿ, ''ಸೋನೋಕೆಲಿಂಗ್'', ''[[ಡಾಲ್ಬರ್ಗಿಯಾ ಲ್ಯಾಟಿಫೋಲಿಯಾ]]'', ''ಅಂಜಿಲಿ'', ''ಮುಲ್ಲುಮುರಿಕ್ಕು'', ''[[ಎರಿಥ್ರಿನಾ]]'', ಮತ್ತು ''[[ಸಿನ್ನಮೋಮಮ್ ಕ್ಯಾಸಿಯಾ|ಕ್ಯಾಸಿಯಾ]]'' ಕೇರಳದ 1,000 ಕ್ಕೂ ಹೆಚ್ಚು ಮರ ಪ್ರಭೇದಗಳಲ್ಲಿ ಸೇರಿವೆ. ಇತರ ಸಸ್ಯಗಳಲ್ಲಿ [[ಬಿದಿರು]], ಕಾಡು ಕರಿಮೆಣಸು, ಕಾಡು [[ಏಲಕ್ಕಿ]], [[ಕ್ಯಾಲಮಸ್ (ತಾಳೆ)|ಕ್ಯಾಲಮಸ್]] [[ರಟ್ಟನ್]] ತಾಳೆ, ಮತ್ತು ಸುಗಂಧಯುಕ್ತ ವೆಟಿವರ್ ಹುಲ್ಲು, ''ವೆಟಿವೇರಿಯಾ ಝಿಝಾನಿಯಾಯ್ಡ್ಸ್'' ಸೇರಿವೆ.<ref name="Sreedharan_2004" />{{rp|12}} [[ಭಾರತೀಯ ಆನೆ]], [[ಬಂಗಾಳ ಹುಲಿ]], [[ಭಾರತೀಯ ಚಿರತೆ]], [[ನೀಲಗಿರಿ ತಾರ್]], [[ಸಾಮಾನ್ಯ ತಾಳೆ ನರಿ]], ಮತ್ತು [[ಬೂದು ದೈತ್ಯ ಅಳಿಲು]]ಗಳು ಸಹ ಕಾಡುಗಳಲ್ಲಿ ಕಂಡುಬರುತ್ತವೆ.<ref name="Sreedharan_2004" />{{rp|12, 174–75}} ಸರೀಸೃಪಗಳಲ್ಲಿ [[ರಾಜ ನಾಗ]], [[ವೈಪೆರಿಡೆ|ಹಾವು]], [[ಪೈಥಾನ್]], ಮತ್ತು [[ಚಿಪ್ಪು ಮೊಸಳೆ]] ಸೇರಿವೆ. ಕೇರಳದ ಪಕ್ಷಿಗಳಲ್ಲಿ [[ಮಲಬಾರ್ ಟ್ರೋಗನ್]], [[ಮಹಾಶಿಖಿ]], [[ಕೇರಳ ಕುಕ್ಕುರ]], [[ಡಾರ್ಟರ್]] ಮತ್ತು [[ದಕ್ಷಿಣ ಬೆಟ್ಟ ಮೈನಾ]] ಸೇರಿವೆ. ಸರೋವರಗಳು, ಜವುಗು ಪ್ರದೇಶಗಳು ಮತ್ತು ಜಲಮಾರ್ಗಗಳಲ್ಲಿ, [[ಹೆಟೆರೋಪ್ನ್ಯೂಸ್ಟಿಸ್ ಫಾಸಿಲಿಸ್|ಕಾಡು]], [[ರೆಡ್ ಲೈನ್ ಟಾರ್ಪಿಡೋ ಬಾರ್ಬ್]] ಮತ್ತು ''ಚೂಟ್ಟಾಚಿ''; [[ಆರೆಂಜ್ ಕ್ರೋಮೈಡ್]]—''ಎಟ್ರೋಪ್ಲಸ್ ಮ್ಯಾಕುಲಾಟಸ್'' ಮುಂತಾದ ಮೀನುಗಳು ಕಂಡುಬರುತ್ತವೆ.<ref>{{cite book |last1=Institute |first1=Kerala Forest Research |title=Biodiversity Documentation for Kerala: Freshwater fishes |year=2003 |publisher=Kerala Forest Research Institute |isbn=978-8185041544 |url=https://books.google.com/books?id=SYcPAQAAMAAJ&q=fishes+in+kerala |language=en |access-date=18 October 2020 |archive-date=25 November 2023 |archive-url=https://web.archive.org/web/20231125192259/https://books.google.com/books?id=SYcPAQAAMAAJ&q=fishes+in+kerala |url-status=live }}</ref><ref name="Sreedharan_2004" />{{rp|163–65}} ಇತ್ತೀಚೆಗೆ, ಕೇರಳದ ವಡಕರಾ ಕರಾವಳಿಯಿಂದ ಸಂಗ್ರಹಿಸಿದ ಹೊಸದಾಗಿ ವಿವರಿಸಲಾದ ಟಾರ್ಡಿಗ್ರೇಡ್ (ನೀರಿನ ಕರಡಿಗಳು) ಪ್ರಭೇದವನ್ನು ಕೇರಳ ರಾಜ್ಯದ ಹೆಸರಿನಿಂದ ಹೆಸರಿಸಲಾಗಿದೆ; ''[[ಸ್ಟೈಗಾರ್ಕ್ಟಸ್ ಕೇರಳೆನ್ಸಿಸ್]]''.<ref>{{cite journal |last1=Vishnudattan |first1=N. K. |display-authors=etal |title=A new Tardigrade species, Stygarctus keralensis sp. nov. (Arthrotardigrada: Stygarctidae) from the intertidal zone of Southwest coast of India |url=https://www.mapress.com/zt/article/view/42726 |date=15 June 2021 |journal=[[Zootaxa]] |volume=4985 |issue=3 |page=381391 |doi=10.11646/zootaxa.4985.3.5 |pmid=34186802 |s2cid=235688035 |access-date=22 June 2021 |archive-date=27 November 2021 |archive-url=https://web.archive.org/web/20211127214807/https://www.mapress.com/zt/article/view/zootaxa.4985.3.5 |url-status=live |url-access=subscription }}</ref>
== ಪ್ರದೇಶಗಳು, ಜಿಲ್ಲೆಗಳು ಮತ್ತು ನಗರಗಳು ==
{{Main|ಕೇರಳದ ಆಡಳಿತ ವಿಭಾಗಗಳು|ಕೇರಳದ ಜಿಲ್ಲೆಗಳು|ಕೇರಳದ ಆದಾಯ ವಿಭಾಗಗಳ ಪಟ್ಟಿ|ಕೇರಳದ ತಾಲೂಕುಗಳ ಪಟ್ಟಿ|ಕೇರಳದ ನಗರಗಳು ಮತ್ತು ಪಟ್ಟಣಗಳ ಪಟ್ಟಿ}}
{{See also|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಆರು ಪ್ರದೇಶಗಳಾಗಿ ವಿತರಿಸಲಾಗಿದೆ: [[ಉತ್ತರ ಮಲಬಾರ್]] (ದೂರದ-ಉತ್ತರ ಕೇರಳ), [[ದಕ್ಷಿಣ ಮಲಬಾರ್]] (ಉತ್ತರ-ಮಧ್ಯ ಕೇರಳ), [[ಕೊಚ್ಚಿ]] (ಮಧ್ಯ ಕೇರಳ), [[ಉತ್ತರ ತಿರುವಾಂಕೂರು]] (ದಕ್ಷಿಣ-ಮಧ್ಯ ಕೇರಳ), [[ಮಧ್ಯ ತಿರುವಾಂಕೂರು]] (ದಕ್ಷಿಣ ಕೇರಳ) ಮತ್ತು [[ದಕ್ಷಿಣ ತಿರುವಾಂಕೂರು]] (ದೂರದ-ದಕ್ಷಿಣ ಕೇರಳ). ತೆರಿಗೆ ಮತ್ತು ಭೂ ಆದಾಯ ಉದ್ದೇಶಗಳಿಗಾಗಿ ಆಡಳಿತ ಪ್ರದೇಶಗಳಾಗಿ ಕಾರ್ಯನಿರ್ವಹಿಸುವ ಜಿಲ್ಲೆಗಳನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳು|27 ಆದಾಯ ವಿಭಾಗಗಳಾಗಿ]] ಮತ್ತು [[ಕೇರಳದ ತಾಲೂಕುಗಳ ಪಟ್ಟಿ|77 ತಾಲೂಕುಗಳಾಗಿ]] ವಿಂಗಡಿಸಲಾಗಿದೆ, ಇವುಗಳು ತಮ್ಮ ಗಡಿಗಳೊಳಗಿನ ವಸಾಹತುಗಳ ಮೇಲೆ ಆಡಳಿತ ಮತ್ತು ಆರ್ಥಿಕ ಅಧಿಕಾರಗಳನ್ನು ಹೊಂದಿವೆ, ಸ್ಥಳೀಯ ಭೂ ದಾಖಲೆಗಳ ನಿರ್ವಹಣೆ ಸೇರಿದಂತೆ. ಕೇರಳದ ತಾಲೂಕುಗಳನ್ನು ಮತ್ತಷ್ಟು 1,674 [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ.<ref>{{cite web |url=https://ildm.kerala.gov.in/wp-content/uploads/2018/01/Revenue-Guide-2018.pdf |title=Revenue Guide 2018 |date= |website=[[Government of Kerala]] |access-date=28 September 2020 |archive-date=20 September 2020 |archive-url=https://web.archive.org/web/20200920133932/https://ildm.kerala.gov.in/wp-content/uploads/2018/01/Revenue-Guide-2018.pdf |url-status=live }}</ref><ref>{{Cite web |url=https://kerala.gov.in/revenue-department |title=Revenue department, government of Kerala |access-date=28 September 2020 |archive-date=17 August 2021 |archive-url=https://web.archive.org/web/20210817225825/https://kerala.gov.in/revenue-department |url-status=dead}}</ref>
[[ಭಾರತದ ಸಂವಿಧಾನದ ತಿದ್ದುಪಡಿಗಳ ಪಟ್ಟಿ|73 ಮತ್ತು 74 ನೇ]] ಸಾಂವಿಧಾನಿಕ ತಿದ್ದುಪಡಿಗಳಿಂದ, ಕೇರಳದಲ್ಲಿ ಸ್ಥಳೀಯ ಸ್ವಯಂ-ಸರ್ಕಾರಿ ಸಂಸ್ಥೆಗಳು ಸರ್ಕಾರದ ಮೂರನೇ ಹಂತವಾಗಿ ಕಾರ್ಯನಿರ್ವಹಿಸುತ್ತವೆ, ಗ್ರಾಮೀಣ ಆಡಳಿತಕ್ಕಾಗಿ 14 [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳು]], 152 [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು 941 [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], ಮತ್ತು ನಗರ ಆಡಳಿತಕ್ಕಾಗಿ 87 [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]], ಆರು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿವೆ.<ref>{{cite web |title=Local Self Governance in Kerala |url=https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |publisher=Government of Kerala |access-date=28 September 2020 |archive-date=28 September 2021 |archive-url=https://web.archive.org/web/20210928223404/https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |url-status=dead}}</ref>
[[ಮಾಹೆ, ಭಾರತ|ಮಾಹೆ]], ಭಾರತೀಯ [[ಕೇಂದ್ರಾಡಳಿತ ಪ್ರದೇಶ]] [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]]ಯ ಒಂದು ಭಾಗವಾಗಿದ್ದು,<ref>{{cite web |url=https://www.censusindia.net/results/town.php?stad=A&state5=999 |archive-url=https://web.archive.org/web/20040616075334/https://www.censusindia.net/results/town.php?stad=A&state5=999 |archive-date=16 June 2004 |title=Census of India 2001: Data from the 2001 Census, including cities, villages and towns (Provisional) |access-date=1 November 2008 |publisher=Census Commission of India}}</ref> ಇದು {{convert|647|km}} ದೂರದಲ್ಲಿದ್ದರೂ,<ref name="ShiraAssociates.2012">{{cite book |author1=Dezan Shira |author2=Associates. |title=Doing Business in India |url=https://books.google.com/books?id=9YjXW41yMwQC&pg=PT313 |access-date=18 November 2012 |year=2012 |publisher=Springer |isbn=978-3-642-27618-7 |pages=313–}}</ref> ಇದು ಕೇರಳದಿಂದ ಅದರ ಎಲ್ಲಾ ಭೂಮುಖ ವಿಧಾನಗಳಲ್ಲಿ ಸುತ್ತುವರೆದಿರುವ ಕರಾವಳಿ ಬಹಿರಂಗವಾಗಿದೆ. [[ಕಣ್ಣೂರು ಜಿಲ್ಲೆ|ಕಣ್ಣೂರು ಜಿಲ್ಲೆಯು]] ಮೂರು ಕಡೆ ಮಾಹೆಯನ್ನು ಸುತ್ತುವರೆದಿದೆ ಮತ್ತು ನಾಲ್ಕನೇ ಕಡೆ [[ಕೋಝಿಕೋಡ್ ಜಿಲ್ಲೆ|ಕೋಝಿಕೋಡ್ ಜಿಲ್ಲೆಯಿದೆ]].<ref name="Menon2002">{{cite book |author1=D Banerjea |author2=N. R. Madhava Menon |title=Criminal Justice India Series, Vol. 20 |url=https://books.google.com/books?id=Axfuc5A8mxMC&pg=PA9 |access-date=18 November 2012 |year=2002 |publisher=Allied Publishers |isbn=978-8177648713 |pages=9–}}</ref>
1664 ರಲ್ಲಿ, [[ಫೋರ್ಟ್ ಕೊಚ್ಚಿ]] ಪುರಸಭೆಯನ್ನು [[ಡಚ್ ಮಲಬಾರ್]] ಸ್ಥಾಪಿಸಿತು, ಇದು [[ಭಾರತೀಯ ಉಪಖಂಡ]]ದ ಮೊದಲ ಪುರಸಭೆಯಾಗಿದೆ, ಇದು 18 ನೇ ಶತಮಾನದಲ್ಲಿ ಡಚ್ ಅಧಿಕಾರವು ದುರ್ಬಲಗೊಂಡಾಗ ವಿಸರ್ಜಿಸಲಾಯಿತು.<ref name="d_1664">{{Cite news |title=50 years on, Kochi still has a long way to go |url=https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |last=M K Sunil Kumar |date=26 September 2017 |access-date=1 June 2021 |work=The Times of India |archive-date=2 June 2021 |archive-url=https://web.archive.org/web/20210602230954/https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |url-status=live }}</ref> [[ಕೋಝಿಕೋಡ್]], [[ಪಾಲಕ್ಕಾಡ್]], [[ಫೋರ್ಟ್ ಕೊಚ್ಚಿ]], [[ಕಣ್ಣೂರು]], ಮತ್ತು [[ತಲಶ್ಶೇರಿ]] ಪುರಸಭೆಗಳನ್ನು 1 ನವೆಂಬರ್ 1866 ರಂದು<ref name="Ref1">{{cite web |title=Chronological List of Central Acts (Updated up to 17-10-2014) |url=https://www.lawmin.nic.in/chronology.doc |url-status=dead |archive-url=https://web.archive.org/web/20180107091128/http://lawmin.nic.in/chronology.doc |archive-date=7 January 2018 |access-date=7 August 2016 |website=Lawmin.nic.in}}</ref><ref name="c1881">{{cite book |last1=Lewis McIver |first1=G. Stokes |url=https://books.google.com/books?id=b_YIAAAAQAAJ |title=Imperial Census of 1881 Operations and Results in the Presidency of Madras |publisher=E.Keys at the Government Press |year=1883 |edition=(Vol II) |location=Madras |page=444 |access-date=5 December 2020 |archive-url=https://web.archive.org/web/20230327063433/https://books.google.com/books?id=b_YIAAAAQAAJ |archive-date=27 March 2023 |url-status=live}}</ref><ref name="google.co.in">{{cite book |last1=Presidency |first1=Madras (India |url=https://books.google.com/books?id=aUEwnQEACAAJ |title=Madras District Gazetteers, Statistical Appendix For Malabar District. |publisher=The Superintendent, Government Press |year=1915 |edition=Vol.2 |location=Madras |page=20 |language=en |access-date=2 December 2020 |archive-url=https://web.archive.org/web/20230327063433/https://books.google.com/books?id=aUEwnQEACAAJ |archive-date=27 March 2023 |url-status=live}}</ref><ref name="gazetteer" /> [[ಬ್ರಿಟಿಷ್ ಭಾರತ ಸಾಮ್ರಾಜ್ಯ]]ದಲ್ಲಿ ಸ್ಥಾಪಿಸಲಾಯಿತು, ಇದು ಕೇರಳ ರಾಜ್ಯದ ಮೊದಲ ಆಧುನಿಕ ಪುರಸಭೆಗಳಾಗಿವೆ. [[ತಿರುವನಂತಪುರ]] ಪುರಸಭೆಯು 1920 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಎರಡು ದಶಕಗಳ ನಂತರ, [[ಶ್ರೀ ಚಿತಿರಾ ತಿರುನಾಳ್]] ರ ಆಳ್ವಿಕೆಯಲ್ಲಿ, ತಿರುವನಂತಪುರ ಪುರಸಭೆಯನ್ನು 30 ಅಕ್ಟೋಬರ್ 1940 ರಂದು ನಿಗಮವಾಗಿ ಪರಿವರ್ತಿಸಲಾಯಿತು, ಇದು ಕೇರಳದ ಅತ್ಯಂತ ಹಳೆಯ ನಗರ ನಿಗಮವಾಗಿದೆ.<ref>{{cite web |title=Thiruvananthapuram |url=https://www.corporationoftrivandrum.org/index.php?option=com_content&view=article&id=158&Itemid=11 |date=2010 |url-status=usurped |archive-url=https://web.archive.org/web/20100918085703/https://www.corporationoftrivandrum.org/index.php?option=com_content&view=article&id=158&Itemid=11 |archive-date=18 September 2010 |access-date=4 April 2022}} Year of becoming a corporation</ref> [[ಭಾರತ]]ದ ಸ್ವಾತಂತ್ರ್ಯದ ನಂತರ ಸ್ಥಾಪಿಸಲಾದ ಮೊದಲ ನಗರ ನಿಗಮ ಮತ್ತು ರಾಜ್ಯದ ಎರಡನೇ ಅತ್ಯಂತ ಹಳೆಯ ನಗರ ನಿಗಮವು 1962 ರಲ್ಲಿ [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]] ನಲ್ಲಿದೆ.<ref>[https://web.archive.org/web/20080209134539/https://www.hindu.com/2008/02/05/stories/2008020561140500.htm Kozhikode Lok Sabha constituency redrawn Delimitation impact], ''The Hindu'' 5 February 2008</ref> ಕೇರಳದಲ್ಲಿ ಆರು [[ಭಾರತದಲ್ಲಿ ನಗರ ನಿಗಮಗಳು|ನಗರ ನಿಗಮಗಳಿವೆ]], ಅವು [[ತಿರುವನಂತಪುರ ನಗರ ನಿಗಮ|ತಿರುವನಂತಪುರ]], [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]], [[ಕೊಚ್ಚಿ ನಗರ ನಿಗಮ|ಕೊಚ್ಚಿ]], [[ಕೊಲ್ಲಂ ನಗರ ನಿಗಮ|ಕೊಲ್ಲಂ]], [[ತೃಶೂರ್ ನಗರ ನಿಗಮ|ತೃಶೂರ್]], ಮತ್ತು [[ಕಣ್ಣೂರು ನಗರ ನಿಗಮ|ಕಣ್ಣೂರು]] ನಗರಗಳನ್ನು ಆಳುತ್ತವೆ.<ref>{{cite web |title=Kerala Sustainable Urban Development Project |url=https://www.ksudp.org/ |publisher=Local Self Government Department |access-date=7 February 2022 |archive-date=20 September 2020 |archive-url=https://web.archive.org/web/20200920051936/http://ksudp.org/ |url-status=dead }}</ref> [[ತಿರುವನಂತಪುರ ನಗರ ನಿಗಮ]]ವು ಕೇರಳದ ಅತಿದೊಡ್ಡ ನಿಗಮವಾಗಿದ್ದರೆ ಕೊಚ್ಚಿ ಮಹಾನಗರ ಪ್ರದೇಶವನ್ನು [[ಕೊಚ್ಚಿ UA]] ಎಂದು ಕರೆಯಲಾಗುತ್ತದೆ, ಇದು ಅತಿದೊಡ್ಡ ನಗರ ಸಮೂಹವಾಗಿದೆ.<ref>{{cite web |title=City Information |url=https://cial.aero/contents/viewcontent.aspx?linkIdLvl2=32&linkid=32 |work=Cochin International Airport |publisher=Government of Kerala |access-date=18 November 2012 |archive-date=10 December 2012 |archive-url=https://web.archive.org/web/20121210070804/http://cial.aero/contents/viewcontent.aspx?linkIdLvl2=32&linkid=32 |url-status=live }}</ref> ಅರ್ಥಶಾಸ್ತ್ರ ಸಂಶೋಧನಾ ಸಂಸ್ಥೆ ಇಂಡಿಕಸ್ ಅನಾಲಿಟಿಕ್ಸ್ 2007 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, [[ತಿರುವನಂತಪುರ]], [[ಕೋಝಿಕೋಡ್]], [[ಕೊಚ್ಚಿ]], [[ಕೊಲ್ಲಂ]], [[ತೃಶೂರ್]] "ಭಾರತದಲ್ಲಿ ವಾಸಿಸಲು ಅತ್ಯುತ್ತಮ ನಗರಗಳಲ್ಲಿ" ಸೇರಿವೆ; ಸಮೀಕ್ಷೆಯು ನಗರಗಳನ್ನು ಶ್ರೇಣೀಕರಿಸಲು ಆರೋಗ್ಯ, ಶಿಕ್ಷಣ, ಪರಿಸರ, ಸುರಕ್ಷತೆ, ಸಾರ್ವಜನಿಕ ಸೌಲಭ್ಯಗಳು ಮತ್ತು ಮನರಂಜನೆಯಂತಹ ನಿಯತಾಂಕಗಳನ್ನು ಬಳಸಿದೆ.<ref>{{cite news |title=Cities best to earn a living are not the best to live: Survey |url=https://articles.economictimes.indiatimes.com/2007-11-26/news/27682663_1_cities-entertainment-indicus-analytics |work=The Times of India |date=26 November 2007 |access-date=7 February 2022 |archive-date=5 March 2016 |archive-url=https://web.archive.org/web/20160305021646/http://articles.economictimes.indiatimes.com/2007-11-26/news/27682663_1_cities-entertainment-indicus-analytics |url-status=dead }}</ref>
== ಸರ್ಕಾರ ಮತ್ತು ಆಡಳಿತ ==
{{Main|ಕೇರಳ ಸರ್ಕಾರ|ಕೇರಳ ವಿಧಾನಸಭೆ|ಕೇರಳದಲ್ಲಿ ಸ್ಥಳೀಯ ಸರ್ಕಾರ|ಕೇರಳ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಪಟ್ಟಿ|ಕೇರಳದ ಆಡಳಿತ ವಿಭಾಗಗಳು|l4 = ಕೇರಳ ಸರ್ಕಾರದ ಇಲಾಖೆಗಳ ಪಟ್ಟಿ}}
{{See also|ಕೇರಳದ ರಾಜಕೀಯ|ಕೇರಳದಲ್ಲಿ ರಾಜಕೀಯ ಪಕ್ಷಗಳು|ಕೇರಳದಲ್ಲಿ ಚುನಾವಣೆಗಳು}}
{{Multiple image
| direction = vertical
| width = 220
| header_align = center
| footer_align = center
| image1 = Kerala Legislative Assembly, Thiruvananthapuram.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಧಾನಸಭೆ]] ಕಟ್ಟಡ
| image2 = Kerala Government Secretariat.jpg
| caption2 = [[ಕೇರಳ ಸರ್ಕಾರದ ಕಚೇರಿ|ಸರ್ಕಾರಿ ಕಚೇರಿ]] [[ತಿರುವನಂತಪುರ|ತಿರುವನಂತಪುರದಲ್ಲಿ]] – ಕೇರಳದ ಕಾರ್ಯನಿರ್ವಾಹಕ ಆಡಳಿತದ ಆಸನ
| image3 = High Court of Kerala Building.jpg
| caption3 = [[ಕೊಚ್ಚಿ|ಕೊಚ್ಚಿಯ]] [[ಕೇರಳ ಉಚ್ಚ ನ್ಯಾಯಾಲಯ]] ಸಂಕೀರ್ಣ
}}
ರಾಜ್ಯವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯಿಂದ ಆಳಲ್ಪಡುತ್ತದೆ. ಕೇರಳವು [[ಏಕಸಭಾ]] ಶಾಸಕಾಂಗವನ್ನು ಹೊಂದಿದೆ. [[ಕೇರಳ ವಿಧಾನಸಭೆ]]ಯು ನಿಯಮಸಭೆ ಎಂದೂ ಕರೆಯಲ್ಪಡುತ್ತದೆ, ಇದು 140 ಸದಸ್ಯರನ್ನು ಒಳಗೊಂಡಿದ್ದು, ಅವರು ಐದು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.<ref>{{cite web |title=History of Kerala Legislature |url=https://kerala.gov.in/index.php?option=com_content&view=article&id=3776&Itemid=3022 |publisher=Government of Kerala |access-date=17 November 2012 |archive-url=https://web.archive.org/web/20120619040353/https://www.kerala.gov.in/index.php?option=com_content&view=article&id=3776&Itemid=3022 |archive-date=19 June 2012 |url-status=dead}}</ref> ರಾಜ್ಯವು [[ಭಾರತದ ಸಂಸತ್ತು|ಭಾರತೀಯ ಸಂಸತ್ತಿನ]] ಕೆಳಮನೆಯಾದ [[ಲೋಕಸಭೆ]]ಗೆ 20 ಸದಸ್ಯರನ್ನು ಮತ್ತು [[ರಾಜ್ಯಸಭೆ]]ಗೆ 9 ಸದಸ್ಯರನ್ನು ಚುನಾಯಿಸುತ್ತದೆ.<ref>{{cite web |url=https://www.parliamentofindia.nic.in/ls/intro/p1.htm |title=Our Parliament |publisher=Parliamentofindia.nic.in |access-date=25 February 2010 |archive-date=10 February 2010 |archive-url=https://web.archive.org/web/20100210043333/http://www.parliamentofindia.nic.in/ls/intro/p1.htm |url-status=live }}</ref>
[[ಕೇರಳ ಸರ್ಕಾರ]]ವು ಭಾರತದಲ್ಲಿ [[ಪ್ರಜಾಪ್ರಭುತ್ವ|ಪ್ರಜಾಪ್ರಭುತ್ವ]] ರೀತಿಯಲ್ಲಿ ಚುನಾಯಿತ ಸಂಸ್ಥೆಯಾಗಿದ್ದು, [[ಕೇರಳದ ರಾಜ್ಯಪಾಲರು|ರಾಜ್ಯಪಾಲರು]] ಇದರ ಸಾಂವಿಧಾನಿಕ ಮುಖ್ಯಸ್ಥರಾಗಿದ್ದಾರೆ ಮತ್ತು [[ಭಾರತದ ರಾಷ್ಟ್ರಪತಿ]]ಗಳಿಂದ ಐದು ವರ್ಷಗಳ ಅವಧಿಗೆ ನೇಮಕಗೊಳ್ಳುತ್ತಾರೆ.<ref name="govern">{{cite web |url=https://www.rajbhavan.kerala.gov.in/index.php?option=com_content&view=article&id=44&Itemid=2 |archive-url=https://web.archive.org/web/20090731095433/https://rajbhavan.kerala.gov.in/index.php?option=com_content&view=article&id=44&Itemid=2 |url-status=dead |archive-date=31 July 2009 |title=Responsibilities |access-date=13 November 2015 |publisher=Kerala Rajbhavan}}</ref> [[ಕೇರಳ ವಿಧಾನಸಭೆ|ವಿಧಾನಸಭೆಯಲ್ಲಿ]] ಬಹುಮತ ಹೊಂದಿರುವ ಪಕ್ಷ ಅಥವಾ ಒಕ್ಕೂಟದ ನಾಯಕನನ್ನು ರಾಜ್ಯಪಾಲರಿಂದ [[ಕೇರಳದ ಮುಖ್ಯಮಂತ್ರಿಗಳ ಪಟ್ಟಿ|ಮುಖ್ಯಮಂತ್ರಿಯಾಗಿ]] ನೇಮಿಸಲಾಗುತ್ತದೆ, ಮತ್ತು [[ಕೇರಳ ಸಚಿವ ಸಂಪುಟ|ಸಚಿವರ ಸಂಪುಟವನ್ನು]] ಮುಖ್ಯಮಂತ್ರಿಯ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಿಸುತ್ತಾರೆ.<ref name=govern /> ರಾಜ್ಯಪಾಲರು ರಾಜ್ಯದ ಆಚಾರಪೂರ್ಣ ಮುಖ್ಯಸ್ಥರಾಗಿ ಉಳಿಯುತ್ತಾರೆ, ಆದರೆ ಮುಖ್ಯಮಂತ್ರಿ ಮತ್ತು ಅವರ ಸಂಪುಟವು ದೈನಂದಿನ ಸರ್ಕಾರಿ ಕಾರ್ಯಗಳಿಗೆ ಜವಾಬ್ದಾರರಾಗಿರುತ್ತಾರೆ. ಸಚಿವರ ಸಂಪುಟವು ಸಚಿವ ಸಂಪುಟದ ಸಚಿವರು ಮತ್ತು ರಾಜ್ಯ ಸಚಿವರನ್ನು (MoS) ಒಳಗೊಂಡಿದೆ. [[ಕೇರಳ ಸರ್ಕಾರದ ಕಚೇರಿ|ಕಾರ್ಯದರ್ಶಿ]] [[ಮುಖ್ಯ ಕಾರ್ಯದರ್ಶಿ (ಭಾರತ)|ಮುಖ್ಯ ಕಾರ್ಯದರ್ಶಿ]] ನೇತೃತ್ವದಲ್ಲಿ, ಸಚಿವ ಸಂಪುಟಕ್ಕೆ ಸರ್ಕಾರಿ ನೀತಿಗಳ ರಚನೆ ಮತ್ತು ಅನುಷ್ಠಾನದಲ್ಲಿ ಸಹಾಯ ಮಾಡುತ್ತದೆ. ಮುಖ್ಯ ಕಾರ್ಯದರ್ಶಿಯು ಹಿರಿಯ [[ನಾಗರಿಕ ಸೇವೆ|ನಾಗರಿಕ ಸೇವಕ]] ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ರಾಜ್ಯ ಸರ್ಕಾರದ ಆಡಳಿತವು 47 ಕಾರ್ಯದರ್ಶಿ ಇಲಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ.<ref name=":0" /> ಪ್ರತಿಯೊಂದು ಸರ್ಕಾರಿ ಇಲಾಖೆಯನ್ನು ರಾಜಕೀಯವಾಗಿ ಸಚಿವರು ಮತ್ತು ಆಡಳಿತಾತ್ಮಕವಾಗಿ ಸರ್ಕಾರದ ಕಾರ್ಯದರ್ಶಿಯು ಮುಖ್ಯಸ್ಥರಾಗಿರುತ್ತಾರೆ, ಇವರು [[ಹೆಚ್ಚುವರಿ ಮುಖ್ಯ ಕಾರ್ಯದರ್ಶಿ|ಹೆಚ್ಚುವರಿ ಮುಖ್ಯ ಕಾರ್ಯದರ್ಶಿ]], [[ಪ್ರಿನ್ಸಿಪಾಲ್ ಕಾರ್ಯದರ್ಶಿ (ಭಾರತ)|ಪ್ರಿನ್ಸಿಪಾಲ್ ಕಾರ್ಯದರ್ಶಿ]], ಅಥವಾ [[ಕಾರ್ಯದರ್ಶಿ]] ಹುದ್ದೆಯಲ್ಲಿರುತ್ತಾರೆ, ಇವರು ಸಾಮಾನ್ಯವಾಗಿ [[ಭಾರತೀಯ ಆಡಳಿತ ಸೇವೆ]] (IAS) ನ ಅಧಿಕಾರಿಯಾಗಿರುತ್ತಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು/ಪ್ರಿನ್ಸಿಪಾಲ್ ಕಾರ್ಯದರ್ಶಿಗಳು ತಮಗೆ ನಿಯೋಜಿಸಲಾದ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರತಿಯೊಂದು ಇಲಾಖೆಯು ವಿಶೇಷ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಂಡರ್ ಸೆಕ್ರೆಟರಿ ಮತ್ತು ಇತರ ಸಹಾಯಕ ಅಧಿಕಾರಿಗಳ ಹುದ್ದೆಗಳನ್ನು ಸಹ ಹೊಂದಿದೆ. ಈ ಕಾರ್ಯದರ್ಶಿ ಇಲಾಖೆಗಳು ನೀತಿ ರಚನೆ ಮತ್ತು ಆಡಳಿತಾತ್ಮಕ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುತ್ತವೆ, ಆದರೆ ರೇಖಾ ಇಲಾಖೆಗಳು ಮತ್ತು ಇತರ ಕಾರ್ಯನಿರ್ವಾಹಕ ಸಂಸ್ಥೆಗಳು ಸರ್ಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಕ್ಷೇತ್ರ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತವೆ.
ಪ್ರತಿಯೊಂದು ಕಾರ್ಯದರ್ಶಿ ಇಲಾಖೆಯು ಒಂದು ಅಥವಾ ಹೆಚ್ಚು ರೇಖಾ ಇಲಾಖೆಗಳು, ನಿರ್ದೇಶನಾಲಯಗಳು, ಆಯುಕ್ತ ಕಚೇರಿಗಳು, ಮಂಡಳಿಗಳು, ಅಥವಾ ಅಂತಹುದೇ ಕಾರ್ಯನಿರ್ವಾಹಕ ಸಂಸ್ಥೆಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಚಲಾಯಿಸುತ್ತದೆ. ಈ ಸಂಸ್ಥೆಗಳು ಸರ್ಕಾರಿ ನೀತಿಗಳನ್ನು ಅನುಷ್ಠಾನಗೊಳಿಸಲು, ನಿಯಂತ್ರಕ ಆಡಳಿತ, ಜಾರಿ, ಸಾರ್ವಜನಿಕ ಸೇವೆಗಳನ್ನು ಒದಗಿಸಲು ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯಗಳನ್ನು ನಿರ್ವಹಿಸಲು ಜವಾಬ್ದಾರರಾಗಿರುತ್ತವೆ. ಅವುಗಳನ್ನು ಸಾಮಾನ್ಯವಾಗಿ ನಿರ್ದೇಶಕರು, ಆಯುಕ್ತರು, ಅಥವಾ ಅಂತಹುದೇ ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ, ಅವರು ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ, ಇದು ಸಂಸ್ಥೆಯ ಸ್ವರೂಪವನ್ನು ಅವಲಂಬಿಸಿರುತ್ತದೆ. ಈ ಪ್ರತಿಯೊಂದು ಇಲಾಖೆಗಳು/ಸಂಸ್ಥೆಗಳು ತಮ್ಮದೇ ಆದ ಆಡಳಿತಾತ್ಮಕ ಉಪವಿಭಾಗಗಳನ್ನು ಹೊಂದಿವೆ.<ref>Rules of Business of [[Government of Kerala]]
PART II
FIRST SCHEDULE
https://gad.kerala.gov.in/sites/default/files/general_attachment/Rules%20of%20Business%20-%20Part%20II.pdf</ref>
ರಾಜ್ಯವನ್ನು ಹದಿನಾಲ್ಕು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದೂ ಜಿಲ್ಲಾ ಆಡಳಿತದ ಪ್ರಧಾನ ಕಚೇರಿಯಾಗಿ ಕಲೆಕ್ಟರೇಟ್ ಅನ್ನು ಹೊಂದಿದೆ. [[ಜಿಲ್ಲಾ ಮ್ಯಾಜಿಸ್ಟ್ರೇಟ್|ಜಿಲ್ಲಾ ಕಲೆಕ್ಟರ್]] ಜಿಲ್ಲಾ ಆಡಳಿತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭೂ ಆದಾಯ ಆಡಳಿತ, ವಿಪತ್ತು ನಿರ್ವಹಣೆ, ಚುನಾವಣೆಗಳು, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಮತ್ತು ಜಿಲ್ಲೆಯೊಳಗಿನ ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯಕ್ಕೆ ಜವಾಬ್ದಾರರಾಗಿರುತ್ತಾರೆ.<ref>{{Cite web |title=Collectorate {{!}} District Thiruvananthapuram, Government of Kerala {{!}} India |url=https://trivandrum.nic.in/en/collectrate/ |access-date=2026-04-04 |language=en-US}}</ref> ಆಡಳಿತಾತ್ಮಕ ಅನುಕೂಲಕ್ಕಾಗಿ, ಪ್ರತಿಯೊಂದು ಜಿಲ್ಲೆಯನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳ ಪಟ್ಟಿ|ಆದಾಯ ವಿಭಾಗಗಳಾಗಿ]], [[ತಹಸೀಲ್ದಾರ್|ತಾಲೂಕುಗಳಾಗಿ]], ಮತ್ತು [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ, ಪ್ರಾಥಮಿಕವಾಗಿ ಭೂ ಆದಾಯ ಆಡಳಿತದ ಉದ್ದೇಶಕ್ಕಾಗಿ.<ref>{{Cite web |last=Admin |date=2025-01-22 |title=Land revenue administration, Government of Kerala |url=https://clr.kerala.gov.in/eng/index.php/department/organisation-structure |access-date=2026-01-01 |website=Department of Land Revenue |language=en-gb}}</ref>
ಕೇರಳದಲ್ಲಿ ಕಾನೂನು ಜಾರಿಯನ್ನು ಪ್ರಾಥಮಿಕವಾಗಿ [[ಕೇರಳ ಪೊಲೀಸ್]] ನಡೆಸುತ್ತದೆ, ಇದು ಕೇರಳ ಸರ್ಕಾರದ [[ಗೃಹ ಇಲಾಖೆ (ಕೇರಳ)|ಗೃಹ ಇಲಾಖೆಯ]] ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇರಳ ಪೊಲೀಸ್ ಅನ್ನು ಎರಡು ಪೊಲೀಸ್ ವಲಯಗಳಾಗಿ (ಉತ್ತರ ಮತ್ತು ದಕ್ಷಿಣ) ರಚಿಸಲಾಗಿದೆ, ಅವುಗಳನ್ನು ಮತ್ತಷ್ಟು ವ್ಯಾಪ್ತಿಗಳು, ಪೊಲೀಸ್ ಜಿಲ್ಲೆಗಳು, ಉಪವಿಭಾಗಗಳು ಮತ್ತು ಪೊಲೀಸ್ ಠಾಣೆಗಳಾಗಿ ವಿಂಗಡಿಸಲಾಗಿದೆ. ಪ್ರಾಥಮಿಕ ಕಾನೂನು ಜಾರಿಗೆ ಜವಾಬ್ದಾರರಾಗಿರುವ 484 ಸ್ಥಳೀಯ ಪೊಲೀಸ್ ಠಾಣೆಗಳಿವೆ.<ref>{{Cite web |title=Official Website of Kerala Police |url=https://keralapolice.gov.in/ |access-date=2026-04-24 |website=keralapolice.gov.in |language=en}}</ref>
[[ನ್ಯಾಯಾಂಗ]]ವು [[ಕೇರಳ ಉಚ್ಚ ನ್ಯಾಯಾಲಯ]] ಮತ್ತು ಕೆಳ ನ್ಯಾಯಾಲಯಗಳ ವ್ಯವಸ್ಥೆಯನ್ನು ಒಳಗೊಂಡಿದೆ.<ref>{{cite web |title=History of Judiciary |url=https://www.allindiajudges.org/Judgment/FNJPC2.htm |publisher=All-India Judges Association |access-date=29 April 2015 |archive-date=1 October 2015 |archive-url=https://web.archive.org/web/20151001072113/http://www.allindiajudges.org/Judgment/FNJPC2.htm |url-status=dead }}</ref> [[ಕೊಚ್ಚಿ|ಕೊಚ್ಚಿಯಲ್ಲಿ]] ನೆಲೆಗೊಂಡಿರುವ ಉಚ್ಚ ನ್ಯಾಯಾಲಯವು,<ref name="Congress (US)2010">{{cite book |author1=U S Congress |author2=Congress (U.S.) |title=Congressional Record, V. 153, Pt. 1, January 4, 2007 to January 17, 2007 |url=https://books.google.com/books?id=M3bLOwbeOZYC&pg=PA1198 |access-date=18 November 2012 |year=2010 |publisher=Government Printing Office |isbn=978-0-16-086824-5 |page=1198}}</ref>as ರಂತೆ ಮುಖ್ಯ ನ್ಯಾಯಮೂರ್ತಿ ಮತ್ತು 35 ಖಾಯಂ ಮತ್ತು ಹನ್ನೆರಡು ಹೆಚ್ಚುವರಿ ''[[ಪ್ರೋ ಟೆಂಪೋರ್]]'' ನ್ಯಾಯಮೂರ್ತಿಗಳನ್ನು ಹೊಂದಿದೆ.<ref>{{cite web |title=High Court of Kerala Profile |url=https://highcourtofkerala.nic.in/profile.html |publisher=High Court of Kerala |access-date=18 November 2012 |archive-date=31 October 2012 |archive-url=https://web.archive.org/web/20121031233641/http://highcourtofkerala.nic.in/profile.html |url-status=live }}</ref> ಉಚ್ಚ ನ್ಯಾಯಾಲಯವು [[ಲಕ್ಷದ್ವೀಪ]] ಕೇಂದ್ರಾಡಳಿತ ಪ್ರದೇಶದ ಪ್ರಕರಣಗಳನ್ನು ಸಹ ವಿಚಾರಣೆಗೆ ತೆಗೆದುಕೊಳ್ಳುತ್ತದೆ.<ref name="Banerjea2002">{{cite book |author=D. Banerjea |title=Criminal Justice India Series, Vol. 21 |url=https://books.google.com/books?id=L6NWL-a14mkC&pg=PA80 |access-date=18 November 2012 |year=2002 |publisher=Allied Publishers |isbn=978-8177648720 |page=80}}</ref><ref name="SharmaB.k.2007">{{cite book |author1=Sharma |author2=Sharma B.k. |title=Intro. to the Constitution of India, 4/e |url=https://books.google.com/books?id=srDytmFE3KMC&pg=PA261 |access-date=18 November 2012 |year=2007 |publisher=PHI Learning Pvt. Ltd. |isbn=978-8120332461 |page=261}}</ref> ರಾಜ್ಯದ ಅಧೀನ ನ್ಯಾಯಾಂಗವು ಪ್ರತಿಯೊಂದು 14 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳನ್ನು ಒಳಗೊಂಡಿದೆ, ಇವುಗಳನ್ನು ಜಿಲ್ಲಾ ನ್ಯಾಯಾಧೀಶರು ಮುಖ್ಯಸ್ಥರಾಗಿರುತ್ತಾರೆ, ಜೊತೆಗೆ ನಾಗರಿಕ ನ್ಯಾಯಾಲಯಗಳು (''ಮುನ್ಸಿಫ್ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು'') ಮತ್ತು ಅಪರಾಧ ನ್ಯಾಯಾಲಯಗಳು (''ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮತ್ತು ಸೆಷನ್ಸ್ ನ್ಯಾಯಾಲಯಗಳು'') ತಮ್ಮ ಅಧಿಕಾರ ವ್ಯಾಪ್ತಿಯ ಪ್ರಕಾರ ಪ್ರಕರಣಗಳನ್ನು ನಿರ್ವಹಿಸುತ್ತವೆ.
=== ಸ್ಥಳೀಯ ಸರ್ಕಾರ ===
{{Main|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ಕೇರಳದಲ್ಲಿ, ಪಂಚಾಯತ್ಗಳು, ಪುರಸಭೆಗಳು ಮತ್ತು ನಿಗಮಗಳಂತಹ ಸ್ಥಳೀಯ ಸರ್ಕಾರಿ ಸಂಸ್ಥೆಗಳು 1959 ರಿಂದಲೂ ಅಸ್ತಿತ್ವದಲ್ಲಿವೆ. ಆದಾಗ್ಯೂ, ಗಮನಾರ್ಹವಾದ ವಿಕೇಂದ್ರೀಕರಣ ಉಪಕ್ರಮವು 1993 ರಲ್ಲಿ ಪ್ರಾರಂಭವಾಯಿತು, ಇದು [[ಭಾರತ ಸರ್ಕಾರ|ಕೇಂದ್ರ ಸರ್ಕಾರ]]ದ ಸಾಂವಿಧಾನಿಕ ತಿದ್ದುಪಡಿಗಳೊಂದಿಗೆ ಹೊಂದಾಣಿಕೆಯಾಯಿತು.<ref name="Capdeck">{{cite web |url=https://www.lenobl.ru/Document/1412700121.pdf |title=An Introduction to local self governments in Kerala |publisher=SDC CAPDECK |access-date=17 November 2012 |author=Mariamma Sanu George |pages=17–20 |archive-date=30 May 2015 |archive-url=https://web.archive.org/web/20150530224012/http://www.lenobl.ru/Document/1412700121.pdf |url-status=live }}</ref><ref name="KILA">{{cite web |url=https://www.kilaonline.org/site_docu/pub200904a.pdf |archive-url=https://web.archive.org/web/20130513015050/https://www.kilaonline.org/site_docu/pub200904a.pdf |archive-date=13 May 2013 |title=Kerala – A Case Study of Classical Democratic Decentralisation |publisher=Kerala Institute of Local Administration |date=April 2009 |access-date=17 November 2012 |author=S M Vijayanand }}</ref>{{rp|page=12}} ಕೇರಳ ಪಂಚಾಯತ್ ರಾಜ್ ಕಾಯ್ದೆ ಮತ್ತು ಕೇರಳ ಪುರಸಭೆ ಕಾಯ್ದೆಯನ್ನು 1994 ರಲ್ಲಿ ಜಾರಿಗೊಳಿಸಲಾಯಿತು, ಇದು ಗ್ರಾಮೀಣ ಆಡಳಿತಕ್ಕಾಗಿ ಮೂರು-ಹಂತದ ವ್ಯವಸ್ಥೆಯನ್ನು ಮತ್ತು ನಗರ ಆಡಳಿತಕ್ಕಾಗಿ ಏಕ-ಹಂತದ ವ್ಯವಸ್ಥೆಯನ್ನು ಸ್ಥಾಪಿಸಿತು.<ref>{{cite act
| title = Kerala Panchayat Raj Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref><ref>{{cite act
| title = Kerala Municipality Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref>
ಗ್ರಾಮೀಣ ಆಡಳಿತದ ಮೂರು-ಹಂತದ ರಚನೆಯು [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳನ್ನು]] ಒಳಗೊಂಡಿದೆ.<ref name="TandonMohanty2006">{{cite book |author1=Rajesh Tandon |author2=Ranjita Mohanty |title=Participatory Citizenship: Identity, Exclusion, Inclusion |url=https://books.google.com/books?id=oPByu7CWoUEC&pg=PA199 |access-date=17 November 2012 |year=2006 |publisher=Sage |isbn=978-0-7619-3467-7 |page=199}}</ref> ಕೇರಳ ಪಂಚಾಯತ್ ರಾಜ್ ಕಾಯ್ದೆ, 1994 ಈ ಸಂಸ್ಥೆಗಳಿಗೆ ಸ್ಪಷ್ಟವಾದ ಅಧಿಕಾರಗಳನ್ನು ವ್ಯಾಖ್ಯಾನಿಸುತ್ತದೆ.<ref name="Capdeck" /> ನಗರ ಪ್ರದೇಶಗಳಿಗೆ, ಕೇರಳ ಪುರಸಭೆ ಕಾಯ್ದೆಯು ಏಕ-ಹಂತದ ವ್ಯವಸ್ಥೆಯನ್ನು ಒದಗಿಸುತ್ತದೆ, ಇದು [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]] ಮತ್ತು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿದೆ, ಅವು ಸ್ಥಳೀಯ ಆಡಳಿತ ಮತ್ತು ನಾಗರಿಕ ಆಡಳಿತಕ್ಕೆ ಜವಾಬ್ದಾರರಾಗಿರುತ್ತವೆ. ಈ ಸಂಸ್ಥೆಗಳನ್ನು ನಿಯಮಿತವಾಗಿ [[ಕೇರಳದಲ್ಲಿ ಚುನಾವಣೆಗಳು|ಸ್ಥಳೀಯ ಸಂಸ್ಥೆಗಳ ಚುನಾವಣೆಗಳ]] ಮೂಲಕ ರಚಿಸಲಾಗುತ್ತದೆ.<ref name="Chaudhary2009">{{cite book |author=Shyam Nandan Chaudhary |title=Tribal Development Since Independence |url=https://books.google.com/books?id=KBX1EJVhjGEC&pg=PA235 |access-date=18 November 2012 |year=2009 |publisher=Concept Publishing Company |isbn=978-8180696220 |page=235}}</ref> ಈ ಸಂಸ್ಥೆಗಳು ಪರಿಣಾಮಕಾರಿ ವಿಕೇಂದ್ರೀಕರಣವನ್ನು ಖಚಿತಪಡಿಸಿಕೊಳ್ಳಲು ಗಣನೀಯ ಆಡಳಿತಾತ್ಮಕ, ಕಾನೂನು ಮತ್ತು ಆರ್ಥಿಕ ಅಧಿಕಾರಗಳನ್ನು ಪಡೆಯುತ್ತವೆ.<ref name="KILA" />{{rp|page=13}} ಪ್ರಸ್ತುತ, ರಾಜ್ಯ ಸರ್ಕಾರವು ರಾಜ್ಯ ಯೋಜನಾ ವಿನಿಯೋಗದ ಸುಮಾರು 40% ಅನ್ನು ಸ್ಥಳೀಯ ಸರ್ಕಾರಗಳಿಗೆ ನಿಯೋಜಿಸುತ್ತದೆ.<ref name="IsaacFranke2002">{{cite book |author1=T. M. Thomas Isaac |author2=Richard W. Franke |title=Local Democracy and Development: The Kerala People's Campaign for Decentralized Planning |url=https://books.google.com/books?id=x6v6F2a3Gs0C&pg=PR13 |year=2002 |publisher=Rowman & Littlefield |isbn=978-0-7425-1607-6 |page=13}}</ref> ಕೇರಳವು 1,200 ಸ್ಥಳೀಯ ಸಂಸ್ಥೆಗಳನ್ನು ಹೊಂದಿದೆ, ಇವುಗಳಲ್ಲಿ 941 ಗ್ರಾಮ ಪಂಚಾಯತ್ಗಳು, 152 ಬ್ಲಾಕ್ ಪಂಚಾಯತ್ಗಳು, 14 ಜಿಲ್ಲಾ ಪಂಚಾಯತ್ಗಳು, 87 ಪುರಸಭೆಗಳು, ಮತ್ತು 6 ನಗರ ನಿಗಮಗಳು ಸೇರಿವೆ.<ref>{{Cite web |title=Local Bodies {{!}} Local Self Government Department |url=https://lsgkerala.gov.in/en/lsgd/localbody-list |access-date=2025-07-08 |website=lsgkerala.gov.in |archive-date=2 June 2023 |archive-url=https://web.archive.org/web/20230602134126/https://lsgkerala.gov.in/en/lsgd/localbody-list |url-status=dead }}</ref>
ಕೇರಳವನ್ನು 2016 ರಲ್ಲಿ ಭಾರತದ ಮೊದಲ ಡಿಜಿಟಲ್ ರಾಜ್ಯವೆಂದು ಘೋಷಿಸಲಾಯಿತು ಮತ್ತು [[ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್]] ನ 2019 ರ ಭಾರತ ಭ್ರಷ್ಟಾಚಾರ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕನಿಷ್ಠ ಭ್ರಷ್ಟ ರಾಜ್ಯವೆಂದು ಪರಿಗಣಿಸಲಾಗಿದೆ.<ref>{{Cite book |title=India Corruption Survey 2019 – Report |last= |publisher=Transparency International India |year=2019 |location= |pages=22 |url=https://transparencyindia.org/wp-content/uploads/2019/11/India-Corruption-Survey-2019.pdf |access-date=18 June 2021 |archive-date=10 July 2021 |archive-url=https://web.archive.org/web/20210710100154/https://transparencyindia.org/wp-content/uploads/2019/11/India-Corruption-Survey-2019.pdf |url-status=live }}</ref><ref>{{Cite news |title=Kerala the first digital State |url=https://www.thehindu.com/news/cities/kozhikode/kerala-the-first-digital-state/article8291466.ece |last=Special currespondent |date=28 February 2016 |access-date=17 November 2020 |work=The Hindu |archive-date=15 April 2021 |archive-url=https://web.archive.org/web/20210415102347/https://www.thehindu.com/news/cities/kozhikode/kerala-the-first-digital-state/article8291466.ece |url-status=live }}</ref> ಪಬ್ಲಿಕ್ ಅಫೇರ್ಸ್ ಇಂಡೆಕ್ಸ್-2020 ಕೇರಳವನ್ನು ಭಾರತದ ಅತ್ಯುತ್ತಮ ಆಡಳಿತ ರಾಜ್ಯವೆಂದು ಗೊತ್ತುಪಡಿಸಿತು.<ref>{{Cite news |title=Kerala, Tamil Nadu and Goa best governed States: report |url=https://www.thehindu.com/news/national/kerala-goa-and-chandigarh-best-governed-states-ut-report/article32985716.ece |last=PTI |date=30 October 2020 |access-date=20 June 2021 |work=The Hindu |archive-date=7 October 2021 |archive-url=https://web.archive.org/web/20211007210542/https://www.thehindu.com/news/national/kerala-goa-and-chandigarh-best-governed-states-ut-report/article32985716.ece |url-status=live }}</ref>
=== ರಾಜಕೀಯ ===
ಕೇರಳವು ತನ್ನ ಬಲವಾದ ಸಾಮಾಜಿಕ ಕಲ್ಯಾಣ ನೀತಿಗಳು, ಭೂ ಸುಧಾರಣೆಗಳು ಮತ್ತು ಉನ್ನತ ಮಾನವ ಅಭಿವೃದ್ಧಿ ಸೂಚಕಗಳಿಂದಾಗಿ ಭಾರತದ ಅತ್ಯಂತ [[ಸಮಾನತಾವಾದ|ಸಮಾನತಾವಾದಿ]] ರಾಜ್ಯಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ.<ref>{{Cite journal |last1=B |first1=Bibimol R. |last2=Seena |first2=Dr Anand Lali |last3=Thanammal |first3=Dr K. K. |date=2023-11-30 |title=C.Achutha Menon's Social Reforms: Paving The Way For A Progressive Kerala |url=https://kuey.net/index.php/kuey/article/view/8887 |journal=Educational Administration: Theory and Practice |language=en |volume=29 |issue=4 |pages=4074–4079 |doi=10.53555/kuey.v29i4.8887 |doi-broken-date=15 June 2026 |issn=2148-2403}}</ref><ref>{{Cite journal |last=Duran |first=Jane |date=April 2025 |title=Egalitarianism and Justice in Kerala |url=https://www.cambridge.org/core/journals/think/article/abs/egalitarianism-and-justice-in-kerala/5B093820090E9266A4852C40F93F5A51 |journal=Think |language=en |volume=24 |issue=70 |pages=23–29 |doi=10.1017/S147717562500017X |issn=1477-1756}}</ref><ref>{{Cite journal |last1=Thiranagama |first1=Sharika |title=Rural Civilities: Caste, Gender and Public Life in Kerala |journal=South Asia: Journal of South Asian Studies |date=2019 |volume=42 |issue=2 |pages=310–327 |doi=10.1080/00856401.2019.1582190}}</ref><ref>{{Cite journal |last=Devika |first=J. |date=August 2010 |title=Egalitarian Developmentalism, Communist Mobilization, and the Question of Caste in Kerala State, India |url=https://www.cambridge.org/core/journals/journal-of-asian-studies/article/abs/egalitarian-developmentalism-communist-mobilization-and-the-question-of-caste-in-kerala-state-india/8F65915C540DB6AC5D3EEE6DE800DB3B? |journal=The Journal of Asian Studies |language=en |volume=69 |issue=3 |pages=799–820 |doi=10.1017/S0021911810001506 |issn=1752-0401}}</ref> ಕೇರಳದ ರಾಜಕೀಯವು ಪ್ರಾಥಮಿಕವಾಗಿ [[ಭಾರತದಲ್ಲಿ ಕಮ್ಯುನಿಸಂ|ಕಮ್ಯುನಿಸಂ]], [[ಪ್ರಜಾಪ್ರಭುತ್ವ ಸಮಾಜವಾದ]], [[ಜಾತ್ಯತೀತತೆ]], [[ಮಧ್ಯಮಾರ್ಗ#ಭಾರತ|ಮಧ್ಯಮಾರ್ಗ]] ಮತ್ತು ಪ್ರಾದೇಶಿಕ ಹಿತಾಸಕ್ತಿಗಳಿಂದ ರೂಪುಗೊಂಡಿದೆ. [[ಬಲಪಂಥೀಯ ರಾಜಕೀಯ#ಭಾರತ|ಬಲಪಂಥೀಯ ರಾಜಕೀಯ]]ವು ತುಲನಾತ್ಮಕವಾಗಿ ಚಿಕ್ಕ ಶಕ್ತಿಯಾಗಿದ್ದು, ಇದನ್ನು ಪ್ರಾಥಮಿಕವಾಗಿ [[ಭಾರತೀಯ ಜನತಾ ಪಕ್ಷ]]-ನೇತೃತ್ವದ [[ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ|NDA]] ಪ್ರತಿನಿಧಿಸುತ್ತದೆ.<ref>{{Cite journal |title=Hindu Nationalism in South India: The Rise of Saffron in Kerala |url=https://www.researchgate.net/publication/381937210_Hindu_Nationalism_in_South_India_The_Rise_of_Saffron_in_Kerala |journal=}}</ref><ref>{{Cite journal |last=Nair |first=A. Balakrishnan |date=1994 |title=The Dynamics of Kerala Politics |url=https://www.jstor.org/stable/41855697 |journal=The Indian Journal of Political Science |volume=55 |issue=3 |pages=251–260 |issn=0019-5510}}</ref>
ಕೇರಳವು ಎರಡು ಪ್ರಮುಖ ರಾಜಕೀಯ ಮೈತ್ರಿಗಳನ್ನು ಹೊಂದಿದೆ: [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ನೇತೃತ್ವದ [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್]] (UDF); ಮತ್ತು [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)]] (CPI(M)) ನೇತೃತ್ವದ [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್]] (LDF). 1980 ರಿಂದ, ಕೇರಳದ ರಾಜಕೀಯವು LDF ಮತ್ತು UDF ನಿಂದ ಪ್ರಾಬಲ್ಯ ಹೊಂದಿದೆ, ಸರ್ಕಾರಗಳು ಹೆಚ್ಚಾಗಿ ಎರಡು ಮೈತ್ರಿಗಳ ನಡುವೆ ಪರ್ಯಾಯವಾಗಿವೆ.<ref>{{Cite news |date=2026-05-22 |title=Kerala election wrap-up: How UDF ended LDF’s 10-year rule |url=https://timesofindia.indiatimes.com/india/kerala-election-wrap-up-how-udf-ended-ldfs-10-year-rule/articleshow/131249440.cms |access-date=2026-06-19 |work=The Times of India |issn=0971-8257}}</ref> [[2026 ಕೇರಳ ವಿಧಾನಸಭಾ ಚುನಾವಣೆ]]ಯ ಪ್ರಕಾರ, UDF ಆಡಳಿತ ಒಕ್ಕೂಟವಾಗಿದೆ, ಮತ್ತು [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್|LDF]] ಅಧಿಕೃತ ವಿರೋಧ ಪಕ್ಷವಾಗಿದೆ.<ref>{{Cite web |title=Pinarayi Vijayan elected as Leader of Opposition in Kerala |url=https://www.deccanherald.com/india/kerala/pinarayi-vijayan-elected-as-leader-of-opposition-in-kerala-4003109 |access-date=2026-05-15 |website=Deccan Herald |language=en}}</ref><ref>{{Cite news |last=Parthasarathy |first=Srinivasan Ramani , Pon Vasanth B. A. , Nitika Francis , Devyanshi Bihani , Areena Arora & Sambavi |date=2026-05-06 |title=UDF's near three-fourths majority marked a historic victory for the Congress-led coalition |url=https://www.thehindu.com/news/national/kerala/udfs-near-three-fourths-majority-marked-a-historicvictory-for-the-congress-led-coalition/article70944163.ece |access-date=2026-05-15 |work=The Hindu |language=en-IN |issn=0971-751X}}</ref>
[[ಭಾರತದ ಸಂವಿಧಾನ]]ದ ಪ್ರಕಾರ, ಕೇರಳವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯನ್ನು ಹೊಂದಿದೆ; [[ಸಾರ್ವತ್ರಿಕ ಮತದಾನ]]ವನ್ನು ನಿವಾಸಿಗಳಿಗೆ ನೀಡಲಾಗಿದೆ.<ref name=":0">{{cite web |url=https://niyamasabha.org/codes/govt_2.htm |title=Kerala Government – Legislature |publisher=Government of Kerala |access-date=19 November 2012 |archive-date=8 December 2012 |archive-url=https://web.archive.org/web/20121208011357/http://www.niyamasabha.org/codes/govt_2.htm |url-status=dead }}</ref>
== ಆರ್ಥಿಕತೆ ==
{{Main|ಕೇರಳದ ಆರ್ಥಿಕತೆ}}
ಸ್ವಾತಂತ್ರ್ಯದ ನಂತರ, ರಾಜ್ಯವನ್ನು [[ಸಾಮಾಜಿಕ ಪ್ರಜಾಪ್ರಭುತ್ವ|ಸಾಮಾಜಿಕ ಪ್ರಜಾಪ್ರಭುತ್ವ]] [[ಕಲ್ಯಾಣ ಆರ್ಥಿಕತೆ]]ಯಾಗಿ ನಿರ್ವಹಿಸಲಾಯಿತು.<ref>{{Cite news |title=A virus, social democracy, and dividends for Kerala |url=https://www.thehindu.com/opinion/lead/a-virus-social-democracy-and-dividends-for-kerala/article31370554.ece |last=Heller |first=Patrick |date=18 April 2020 |access-date=2 February 2021 |work=The Hindu |archive-date=19 November 2021 |archive-url=https://web.archive.org/web/20211119130557/https://www.thehindu.com/opinion/lead/a-virus-social-democracy-and-dividends-for-kerala/article31370554.ece |url-status=live }}</ref> ಅತ್ಯಧಿಕ ಮಾನವ ಅಭಿವೃದ್ಧಿ ಮತ್ತು ತುಲನಾತ್ಮಕವಾಗಿ ಕಡಿಮೆ ಆರ್ಥಿಕ ಅಭಿವೃದ್ಧಿಯ "ಕೇರಳ ವಿದ್ಯಮಾನ" ಅಥವಾ "[[ಕೇರಳ ಮಾದರಿ]]" ಅಭಿವೃದ್ಧಿಯು ಬಲವಾದ ಸೇವಾ ವಲಯದಿಂದ ಉಂಟಾಗಿದೆ.<ref name="Brenkert_Malone_2003" />{{rp|48}}<ref name="Tharamangalam_2005">{{Cite journal |author=Tharamangalam J |year=2005 |title=The Perils of Social Development without Economic Growth: The Development Debacle of Kerala, India |journal=Political Economy for Environmental Planners |url=https://www.infra.kth.se/courses/1H1142/Kerala_Paper_4.pdf |archive-url=https://web.archive.org/web/20131115072025/https://www.infra.kth.se/courses/1H1142/Kerala_Paper_4.pdf |archive-date=15 November 2013 |access-date=28 December 2008}}</ref>{{rp|1}} 2019–20 ರಲ್ಲಿ, ಕೇರಳದ ಆರ್ಥಿಕತೆಯು {{INRConvert|8.55|t}} ಸ್ಥೂಲ ರಾಜ್ಯ ಆಂತರಿಕ ಉತ್ಪನ್ನ (GSDP) ಮತ್ತು {{INRConvert|222|k}} ತಲಾ ನಿವ್ವಳ ರಾಜ್ಯ ಆಂತರಿಕ ಉತ್ಪನ್ನದೊಂದಿಗೆ ಭಾರತದಲ್ಲಿ [[ಸ್ಥೂಲ ರಾಜ್ಯ ಆಂತರಿಕ ಉತ್ಪನ್ನದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|8 ನೇ ಅತಿದೊಡ್ಡದಾಗಿದೆ]].<ref>{{Cite web |date=15 March 2021 |title=MOSPI State Domestic Product, Ministry of Statistics and Programme Implementation, Government of India |url=https://mospi.nic.in/sites/default/files/press_releases_statements/State_wise_SDP_15_03_2021.xls |access-date=23 June 2021 |archive-date=17 June 2021 |archive-url=https://web.archive.org/web/20210617193238/http://mospi.nic.in/sites/default/files/press_releases_statements/State_wise_SDP_15_03_2021.xls |url-status=live }}</ref> 2019–20 ರಲ್ಲಿ, [[ಆರ್ಥಿಕತೆಯ ತೃತೀಯ ವಲಯ|ತೃತೀಯ ವಲಯ]]ವು ರಾಜ್ಯದ [[ಸ್ಥೂಲ ಮೌಲ್ಯವರ್ಧಿತ|GSVA]] ಯ ಸುಮಾರು 63% ಕೊಡುಗೆ ನೀಡಿದೆ, ಇದಕ್ಕೆ [[ಆರ್ಥಿಕತೆಯ ದ್ವಿತೀಯ ವಲಯ|ದ್ವಿತೀಯ ವಲಯ]] 28% ಮತ್ತು [[ಆರ್ಥಿಕತೆಯ ಪ್ರಾಥಮಿಕ ವಲಯ|ಪ್ರಾಥಮಿಕ ವಲಯ]] 8% ಕೊಡುಗೆ ನೀಡಿದೆ.<ref name="eco">{{Cite book |last=Government of Kerala |url=https://spb.kerala.gov.in/sites/default/files/2021-01/English-Vol-1_0.pdf |title=Economic Review 2020 – Volume I |publisher=Kerala State Planning Board |year=2021 |location=Thiruvananthapuram |access-date=18 June 2021 |archive-date=2 May 2021 |archive-url=https://web.archive.org/web/20210502171017/https://spb.kerala.gov.in/sites/default/files/2021-01/English-Vol-1_0.pdf |url-status=live }}</ref> 1960 ಮತ್ತು 2020 ರ ಅವಧಿಯಲ್ಲಿ, ಕೇರಳದ ಆರ್ಥಿಕತೆಯು ಕೃಷಿ ಆರ್ಥಿಕತೆಯಿಂದ ಸೇವಾ ಆಧಾರಿತ ಆರ್ಥಿಕತೆಗೆ ಕ್ರಮೇಣ ಬದಲಾಗುತ್ತಿತ್ತು.<ref name="eco" />
{{multiple image
| direction = vertical
| width = 220
| image1 = Technopark Trivandum Ganga and Yamuna Buildings.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಟೆಕ್ನೋಪಾರ್ಕ್, ತಿರುವನಂತಪುರ|ಟೆಕ್ನೋಪಾರ್ಕ್]], ಭಾರತದ ಮೊದಲ ಮತ್ತು ಅತಿದೊಡ್ಡ [[ಮಾಹಿತಿ ತಂತ್ರಜ್ಞಾನ]] (IT) ಉದ್ಯಾನವನ
| image2 = Container terminal.JPG
| caption2 = [[ಕೊಚ್ಚಿ|ಕೊಚ್ಚಿಯ]] [[ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್, ಕೊಚ್ಚಿ|ವಲ್ಲಾರ್ಪಾಡಂ ಟರ್ಮಿನಲ್]], ಭಾರತದ ಮೊದಲ [[ಕಂಟೇನರ್ ಟರ್ಮಿನಲ್|ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್]]
| image4 = Mappila bay.JPG
| caption4 = [[ಕಣ್ಣೂರು|ಕಣ್ಣೂರಿನ]] [[ಮಾಪ್ಪಿಲ ಕೊಲ್ಲಿ]] ಬಂದರು
}}
ರಾಜ್ಯದ [[ಆರ್ಥಿಕತೆಯ ತೃತೀಯ ವಲಯ|ಸೇವಾ ವಲಯ]]ವು ಅದರ ಆದಾಯದ ಸುಮಾರು 63% ರಷ್ಟಿದ್ದು, ಇದು ಮುಖ್ಯವಾಗಿ [[ಆತಿಥ್ಯ ಉದ್ಯಮ]], [[ಕೇರಳದ ಪ್ರವಾಸೋದ್ಯಮ|ಪ್ರವಾಸೋದ್ಯಮ]], [[ಆಯುರ್ವೇದ]] ಮತ್ತು ವೈದ್ಯಕೀಯ ಸೇವೆಗಳು, ಯಾತ್ರಾ ಸ್ಥಳಗಳು, [[ಮಾಹಿತಿ ತಂತ್ರಜ್ಞಾನ]], [[ಕೇರಳದ ರಸ್ತೆಗಳು|ಸಾರಿಗೆ]], ಹಣಕಾಸು ವಲಯ, ಮತ್ತು [[ಕೇರಳದಲ್ಲಿ ಶಿಕ್ಷಣ|ಶಿಕ್ಷಣ]]ವನ್ನು ಆಧರಿಸಿದೆ.<ref name=":15">{{Cite web |url=https://slbckerala.com/Economy.aspx |title=Economy of Kerala – 2016 |website=slbckerala.com |access-date=7 February 2022 |archive-date=28 March 2022 |archive-url=https://web.archive.org/web/20220328191455/http://slbckerala.com/Economy.aspx |url-status=dead }}</ref> ಕೈಗಾರಿಕಾ ವಲಯದಡಿಯಲ್ಲಿನ ಪ್ರಮುಖ ಉಪಕ್ರಮಗಳಲ್ಲಿ [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ]], ಹಡಗು ನಿರ್ಮಾಣ, ತೈಲ ಸಂಸ್ಕರಣಾಗಾರ, ಸಾಫ್ಟ್ವೇರ್ ಉದ್ಯಮ, ಕರಾವಳಿ ಖನಿಜ ಉದ್ಯಮಗಳು,{{sfn|Chandran|2018|p=343}} ಆಹಾರ ಸಂಸ್ಕರಣೆ, ಸಮುದ್ರ ಉತ್ಪನ್ನಗಳ ಸಂಸ್ಕರಣೆ, ಮತ್ತು ರಬ್ಬರ್ ಆಧಾರಿತ ಉತ್ಪನ್ನಗಳು ಸೇರಿವೆ. ರಾಜ್ಯದ ಪ್ರಾಥಮಿಕ ವಲಯವು ಮುಖ್ಯವಾಗಿ [[ವಾಣಿಜ್ಯ ಬೆಳೆ]]ಗಳನ್ನು ಆಧರಿಸಿದೆ.{{sfn|Chandran|2018|p=409}} ಕೇರಳವು ಭಾರತದಲ್ಲಿ [[ತೆಂಗು]], [[ಚಹಾ]], [[ಕಾಫಿ]], [[ಮಲಬಾರ್ ಮೆಣಸು|ಮೆಣಸು]], [[ನೈಸರ್ಗಿಕ ರಬ್ಬರ್]], [[ಏಲಕ್ಕಿ]], ಮತ್ತು [[ಗೋಡಂಬಿ]] ಮುಂತಾದ ವಾಣಿಜ್ಯ ಬೆಳೆಗಳ ರಾಷ್ಟ್ರೀಯ ಉತ್ಪಾದನೆಯ ಗಮನಾರ್ಹ ಪ್ರಮಾಣವನ್ನು ಉತ್ಪಾದಿಸುತ್ತದೆ.{{sfn|Chandran|2018|p=409}} ಆಹಾರ ಬೆಳೆಗಳ ಕೃಷಿಯು 1950 ರ ದಶಕದಿಂದ ಕಡಿಮೆಯಾಗಲು ಪ್ರಾರಂಭಿಸಿತು.{{sfn|Chandran|2018|p=409}}
ಕೇರಳದ ಆರ್ಥಿಕತೆಯು [[ಕೇರಳ ಗಲ್ಫ್ ವಲಸೆ|ವಿದೇಶಗಳಲ್ಲಿ ಕೆಲಸ ಮಾಡುವ ವಲಸಿಗರ]] ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ, ಮುಖ್ಯವಾಗಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಲ್ಲಿ]], ಮತ್ತು ವಾರ್ಷಿಕ ಸ್ಥಳಾಂತರ ವರ್ಗಾವಣೆಗಳು GSDP ಯ ಐದನೇ ಒಂದು ಭಾಗಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ.<ref name="rem1">{{cite report |author1=K.P. Kannan |author2=K.S. Hari |title=Kerala's Gulf connection: Emigration, remittances and their macroeconomic impact, 1972–2000 |url=https://ideas.repec.org/p/ind/cdswpp/328.html |year=2002 |website=[[Research Papers in Economics]] |access-date=4 April 2022 |archive-date=28 June 2021 |archive-url=https://web.archive.org/web/20210628135450/https://ideas.repec.org/p/ind/cdswpp/328.html |url-status=live }}</ref> 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ ರಾಜ್ಯವು ಗಮನಾರ್ಹ ವಲಸೆಯನ್ನು ಕಂಡಿತು. 2012 ರಲ್ಲಿ, ಕೇರಳವು ಎಲ್ಲಾ ರಾಜ್ಯಗಳ ಅತಿ ಹೆಚ್ಚು ಸ್ಥಳಾಂತರ ವರ್ಗಾವಣೆಗಳನ್ನು ಪಡೆಯಿತು: US$11.3 ಬಿಲಿಯನ್, ಇದು ದೇಶಕ್ಕೆ US$71 ಬಿಲಿಯನ್ ಸ್ಥಳಾಂತರ ವರ್ಗಾವಣೆಗಳಲ್ಲಿ ಸುಮಾರು 16% ಆಗಿತ್ತು.<ref>{{cite news |url=https://in.finance.yahoo.com/news/remittances--kerala-drives-dollar-flows-to-india-053414379.html |title=Remittances: Kerala drives dollar flows to India |work=[[Yahoo! Finance]] |date=5 November 2013 |access-date=8 November 2013 |archive-date=7 November 2013 |archive-url=https://web.archive.org/web/20131107053009/http://in.finance.yahoo.com/news/remittances--kerala-drives-dollar-flows-to-india-053414379.html |url-status=live }}</ref> 2015 ರಲ್ಲಿ, ಕೇರಳದಲ್ಲಿ NRI ಠೇವಣಿಗಳು {{INRConvert|1|lc}} ಕ್ಕಿಂತ ಹೆಚ್ಚಾಗಿದ್ದು, ಇದು NRI ಖಾತೆಗಳಲ್ಲಿ ಠೇವಣಿಯಾದ ಎಲ್ಲಾ ಹಣದ ಆರನೇ ಒಂದು ಭಾಗಕ್ಕೆ ಸಮನಾಗಿರುತ್ತದೆ, ಇದು ಸುಮಾರು {{INRConvert|7|lc}} ಆಗಿದೆ.<ref>{{cite news |url=https://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |title=NRI deposits in Kerala banks cross Rs 1 lakh crore |date=22 June 2015 |access-date=13 November 2015 |work=[[The Times of India]] |archive-date=25 June 2015 |archive-url=https://web.archive.org/web/20150625121200/http://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |url-status=live }}</ref> [[ಮಲಪ್ಪುರಂ ಜಿಲ್ಲೆ]]ಯು ರಾಜ್ಯದಲ್ಲಿ ಅತಿ ಹೆಚ್ಚು ವಲಸೆ ಕುಟುಂಬಗಳ ಪ್ರಮಾಣವನ್ನು ಹೊಂದಿದೆ.<ref name="eco" /> [[ಕೇರಳ ರಾಜ್ಯ ಯೋಜನಾ ಮಂಡಳಿ]]ಯು ನಿಯೋಜಿಸಿದ ಅಧ್ಯಯನವು, ತನ್ನ ವೆಚ್ಚಕ್ಕೆ ಹಣಕಾಸು ಒದಗಿಸಲು ಸ್ಥಳಾಂತರ ವರ್ಗಾವಣೆಗಳ ಮೇಲೆ ಅವಲಂಬಿಸುವ ಬದಲು ರಾಜ್ಯವು ಇತರ ವಿಶ್ವಾಸಾರ್ಹ ಆದಾಯದ ಮೂಲಗಳನ್ನು ಹುಡುಕಬೇಕೆಂದು ಸೂಚಿಸಿದೆ.<ref name="Commission2008b">{{cite book |author=India. Planning Commission |title=Kerala Development Report |url=https://books.google.com/books?id=Ul-OkF5gUJQC&pg=PA457 |year=2008 |publisher=Academic Foundation |isbn=978-8171885947 |page=396}}</ref>
ಮಾರ್ಚ್ 2002 ರಂತೆ, ಕೇರಳದ ಬ್ಯಾಂಕಿಂಗ್ ವಲಯವು 3341 ಸ್ಥಳೀಯ ಶಾಖೆಗಳನ್ನು ಒಳಗೊಂಡಿತ್ತು: ಪ್ರತಿ ಶಾಖೆಯು 10,000 ಜನರಿಗೆ ಸೇವೆ ಸಲ್ಲಿಸಿತು, ಇದು ರಾಷ್ಟ್ರೀಯ ಸರಾಸರಿ 16,000 ಕ್ಕಿಂತ ಕಡಿಮೆಯಾಗಿದೆ; ರಾಜ್ಯವು ಭಾರತೀಯ ರಾಜ್ಯಗಳಲ್ಲಿ ಮೂರನೇ ಅತಿ ಹೆಚ್ಚು ಬ್ಯಾಂಕ್ ಪ್ರವೇಶವನ್ನು ಹೊಂದಿದೆ.<ref name="RBI_2002">{{cite web |url=https://rbidocs.rbi.org.in/rdocs/Publications/PDFs/35585.pdf |title=State/Union Territory-Wise Number of Branches of Scheduled Commercial Banks and Average Population Per Bank Branch |date=March 2002 |work=Reserve Bank of India |access-date=28 December 2008 |url-status=dead |archive-url=https://web.archive.org/web/20070810094850/https://rbidocs.rbi.org.in/rdocs/Publications/PDFs/35585.pdf |archive-date=10 August 2007}}</ref> 1 ಅಕ್ಟೋಬರ್ 2011 ರಂದು, ಕೇರಳವು ಪ್ರತಿ ಗ್ರಾಮದಲ್ಲಿ ಕನಿಷ್ಠ ಒಂದು ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಯಿತು.<ref>{{cite news |url=https://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |work=The Times of India |title=Now, you can bank on every village in Kerala |date=1 October 2011 |access-date=13 November 2015 |archive-date=4 January 2017 |archive-url=https://web.archive.org/web/20170104180910/http://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |url-status=live }}</ref> [[ಕೇರಳದಲ್ಲಿ ನಿರುದ್ಯೋಗ|2007 ರಲ್ಲಿ ನಿರುದ್ಯೋಗವು]] 9.4% ಎಂದು ಅಂದಾಜಿಸಲಾಗಿದೆ;<ref>{{cite news |author=Kumar KG |title=Jobless no more? |newspaper=Business Line |date=8 October 2007 |url=https://www.thehindubusinessline.com/todays-paper/tp-economy/article1671367.ece |quote=A study by K.C. Zacharia and S. Irudaya Rajan, two economists at the Centre for Development Studies (CDS), unemployment in Kerala has dropped from 19.1[%] in 2003 to 9.4[%] in 2007. |access-date=16 November 2012 |archive-date=6 November 2013 |archive-url=https://web.archive.org/web/20131106032604/http://www.thehindubusinessline.com/todays-paper/tp-economy/article1671367.ece |url-status=live }}</ref> ದೀರ್ಘಕಾಲದ ಸಮಸ್ಯೆಗಳೆಂದರೆ [[ನಿರುದ್ಯೋಗ]], ಯುವಜನರ ಕಡಿಮೆ ಉದ್ಯೋಗಸಾಧ್ಯತೆ, ಮತ್ತು ಕೇವಲ 13.5% ರಷ್ಟಿರುವ ಕಡಿಮೆ ಮಹಿಳಾ [[ಕಾರ್ಮಿಕ|ಕಾರ್ಮಿಕ ಭಾಗವಹಿಸುವಿಕೆ ದರ]],<ref name="Nair_2004">{{Cite book |author=Nair NG |veditors=Nair PR, Shaji H |title=Measurement of Employment, Unemployment, and Underemployment |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621751 |url=https://www.cds.ac.in/krpcds/publication/downloads/72.pdf |access-date=31 December 2008 |archive-date=30 May 2015 |archive-url=https://web.archive.org/web/20150530210334/http://www.cds.ac.in/krpcds/publication/downloads/72.pdf |url-status=live }}</ref>{{rp|5, 13}} ಜೊತೆಗೆ ''[[ನೋಕ್ಕು ಕೂಲಿ]]'' ("ನೋಡುವಿಕೆಗೆ ವೇತನ") ಪದ್ಧತಿಯೂ ಇತ್ತು.<ref name="Outlook-2008">{{cite news |url=https://www.outlookindia.com/article.aspx?237419 |first=John |last=Mary |title=Men (Not) At Work |work=[[Outlook (Indian magazine)|Outlook]] |date=12 May 2008 |access-date=13 November 2015 |archive-date=6 November 2013 |archive-url=https://web.archive.org/web/20131106032651/http://www.outlookindia.com/article.aspx?237419 |url-status=live }}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6">{{Cite report |last=Deaton |first=Angus |title=Regional poverty estimates for India, 1999–2000 |url=https://www.princeton.edu/rpds/papers/pdfs/deaton_regionalpovertyindia.pdf |date=22 August 2003 |archive-url=https://web.archive.org/web/20110628193845/https://www.princeton.edu/rpds/papers/pdfs/deaton_regionalpovertyindia.pdf |archive-date=28 June 2011 |url-status=dead |page=10 |access-date=4 April 2022}}</ref>
2020–2021 ರ ರಾಜ್ಯದ ಬಜೆಟ್ {{INRConvert|1.15|lc}} ಆಗಿತ್ತು.<ref name="Budget">{{cite web |url=https://www.finance.kerala.gov.in/bdgtDcs.jsp |title=Budget In Brief |format=PDF |website=finance.kerala.gov.in |publisher=Government of Kerala |access-date=4 December 2020 |archive-date=25 November 2020 |archive-url=https://web.archive.org/web/20201125214731/http://www.finance.kerala.gov.in/bdgtDcs.jsp |url-status=live }}</ref> ರಾಜ್ಯ ಸರ್ಕಾರದ ತೆರಿಗೆ ಆದಾಯವು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–21 ರಲ್ಲಿ {{INRConvert|674|b}} ಆಗಿತ್ತು; 2019–20 ರಲ್ಲಿ {{INRConvert|557|b}} ರಿಂದ ಹೆಚ್ಚಾಗಿದೆ. ಕೇರಳ ಸರ್ಕಾರದ ಅದರ [[ತೆರಿಗೆ-ಅಲ್ಲದ ಆದಾಯ]]ಗಳು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–2021 ರಲ್ಲಿ {{INRConvert|146|b}} ತಲುಪಿದೆ.<ref name="Budget" /> ಆದಾಗ್ಯೂ, ಕೇರಳದ GSDP ಗೆ ತೆರಿಗೆಯ ಹೆಚ್ಚಿನ ಅನುಪಾತವು ದೀರ್ಘಕಾಲದ ಬಜೆಟ್ ಕೊರತೆಗಳು ಮತ್ತು ಸುಸ್ಥಿರವಲ್ಲದ ಮಟ್ಟದ ಸರ್ಕಾರಿ ಸಾಲವನ್ನು ನಿವಾರಿಸಿಲ್ಲ, ಇದು ಸಾಮಾಜಿಕ ಸೇವೆಗಳ ಮೇಲೆ ಪರಿಣಾಮ ಬೀರಿದೆ.<ref>{{cite web |url=https://fincomindia.nic.in/pubsugg/memo_ker.pdf |archive-url=https://web.archive.org/web/20080626195846/https://fincomindia.nic.in/pubsugg/memo_ker.pdf |archive-date=26 June 2008 |title=Memoranda from States: Kerala |website=fincomindia.nic.in |access-date=25 September 2013}}</ref> 2006 ರಲ್ಲಿ ಒಟ್ಟು 223 [[ಹರ್ತಾಲ್]]ಗಳು ನಡೆದಿದ್ದವು, ಇದರ ಪರಿಣಾಮವಾಗಿ {{INRConvert|20|b}} ಕ್ಕಿಂತ ಹೆಚ್ಚು ಆದಾಯ ನಷ್ಟವಾಗಿದೆ.<ref>[https://www.rediff.com/news/2008/jul/06kerala.htm Kerala: Hartals Own Country?] {{webarchive |url=https://web.archive.org/web/20160304043808/https://www.rediff.com/news/2008/jul/06kerala.htm |date=4 March 2016 }} 6 July 2008</ref> ಕೇರಳದ GDP ಯಲ್ಲಿ 10% ಏರಿಕೆಯು ರಾಷ್ಟ್ರೀಯ GDP ಗಿಂತ 3% ಹೆಚ್ಚಾಗಿದೆ. 2013 ರಲ್ಲಿ, ಬಂಡವಾಳ ವೆಚ್ಚವು ರಾಷ್ಟ್ರೀಯ ಸರಾಸರಿ 5% ಕ್ಕೆ ಹೋಲಿಸಿದರೆ 30% ರಷ್ಟು ಏರಿತು, ದ್ವಿಚಕ್ರ ವಾಹನಗಳ ಮಾಲೀಕರು ರಾಷ್ಟ್ರೀಯ ದರ 15% ಕ್ಕೆ ಹೋಲಿಸಿದರೆ 35% ರಷ್ಟು ಏರಿತು, ಮತ್ತು ಶಿಕ್ಷಕ-ವಿದ್ಯಾರ್ಥಿ ಅನುಪಾತವು 2:100 ರಿಂದ 4:100 ಕ್ಕೆ 50% ರಷ್ಟು ಏರಿತು.<ref>{{cite web |url=https://www.keralacm.gov.in/index.php/news2catleist/2443-23-12-2013-india-today |archive-url=https://web.archive.org/web/20131224091613/https://www.keralacm.gov.in/index.php/news2catleist/2443-23-12-2013-india-today |url-status=dead |archive-date=24 December 2013 |title=India Today On Cm |publisher=Keralacm.gov.in |access-date=11 January 2014}}</ref>
[[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ]]ಯು ರಾಜ್ಯದ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು, ರಾಜ್ಯದ ಆದಾಯದ ಹೊರಗಿನಿಂದ ಮೂಲಸೌಕರ್ಯ ಅಭಿವೃದ್ಧಿಗೆ ನಿಧಿಯನ್ನು ಸಜ್ಜುಗೊಳಿಸಲು ರಾಜ್ಯದ ಸರ್ಕಾರಿ-ಸ್ವಾಮ್ಯದ [[ಹಣಕಾಸು ಸಂಸ್ಥೆ]]ಯಾಗಿದೆ.<ref>{{Cite news |url=https://www.thehindu.com/news/national/kerala/big-push-for-infrastructure-in-budget/article17403255.ece |title=Big push for infrastructure in Budget |newspaper=The Hindu |date=3 March 2017 |via=www.thehindu.com |access-date=25 November 2020 |archive-date=29 January 2021 |archive-url=https://web.archive.org/web/20210129210933/https://www.thehindu.com/news/national/kerala/big-push-for-infrastructure-in-budget/article17403255.ece |url-status=live }}</ref><ref>{{Cite web |url=https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |title=Kerala Budget: Infrastructure projects get a major fillip |website=The New Indian Express |date=4 March 2017 |access-date=25 November 2020 |archive-date=30 January 2021 |archive-url=https://web.archive.org/web/20210130030958/https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |url-status=live }}</ref>
ನವೆಂಬರ್ 2015 ರಲ್ಲಿ, [[ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯ|ನಗರಾಭಿವೃದ್ಧಿ ಸಚಿವಾಲಯ]]ವು [[ಅಟಲ್ ನವೀಕರಣ ಮತ್ತು ನಗರ ಪರಿವರ್ತನೆಗಾಗಿ ಮಿಷನ್]] (AMRUT) ಎಂದು ಕರೆಯಲ್ಪಡುವ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಕೇರಳದ ಏಳು ನಗರಗಳನ್ನು ಆಯ್ಕೆ ಮಾಡಿತು.<ref>{{cite news |title=Modi to address heads of civic bodies on urban revamp |url=https://www.thehindu.com/news/national/modi-to-address-heads-of-civic-bodies-on-urban-revamp/article7336851.ece |date=20 June 2015 |newspaper=[[The Hindu]] |access-date=25 June 2015 |archive-date=2 February 2021 |archive-url=https://web.archive.org/web/20210202155935/https://www.thehindu.com/news/national/modi-to-address-heads-of-civic-bodies-on-urban-revamp/article7336851.ece |url-status=live }}</ref> ಸೇವಾ ಮಟ್ಟದ ಸುಧಾರಣಾ ಯೋಜನೆಯನ್ನು (SLIP) ಅಭಿವೃದ್ಧಿಪಡಿಸಲು ಪ್ರತಿ ನಗರಕ್ಕೆ {{INRConvert|2.5|m}} ನ ಪ್ಯಾಕೇಜ್ ಅನ್ನು ಘೋಷಿಸಲಾಯಿತು, ಇದು ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಕೊಚ್ಚಿ, ತೃಶೂರ್, ಕೋಝಿಕೋಡ್, ಮತ್ತು ಪಾಲಕ್ಕಾಡ್ ನಗರಗಳಲ್ಲಿ ಸ್ಥಳೀಯ ನಗರ ಸಂಸ್ಥೆಗಳ ಉತ್ತಮ ಕಾರ್ಯನಿರ್ವಹಣೆಗೆ ಯೋಜನೆಯಾಗಿದೆ.<ref>{{cite news |last=R. Ramabhadran |first=Pillai |title=AMRUT to roll out on a smaller scale |url=https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |access-date=12 November 2015 |work=The Hindu |issue=12 November 2015 |archive-date=7 February 2021 |archive-url=https://web.archive.org/web/20210207052652/https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |url-status=live }}</ref> [[ಗ್ರ್ಯಾಂಡ್ ಕೇರಳ ಶಾಪಿಂಗ್ ಫೆಸ್ಟಿವಲ್]] (GKSF) ಅನ್ನು 2007 ರಲ್ಲಿ ಪ್ರಾರಂಭಿಸಲಾಯಿತು, ಇದು ಕೇರಳದ ಒಂಬತ್ತು ನಗರಗಳಾದ್ಯಂತ 3000 ಕ್ಕೂ ಹೆಚ್ಚು ಮಳಿಗೆಗಳನ್ನು ದೊಡ್ಡ ತೆರಿಗೆ ರಿಯಾಯಿತಿಗಳು, VAT ಮರುಪಾವತಿಗಳು ಮತ್ತು ದೊಡ್ಡ ಪ್ರಮಾಣದ ಬಹುಮಾನಗಳೊಂದಿಗೆ ಒಳಗೊಂಡಿದೆ.<ref name="GKSF begins">{{cite news |title=Shopping festival begins |url=https://www.thehindu.com/todays-paper/tp-national/tp-kerala/shopping-festival-begins/article1959420.ece |work=The Hindu |date=2 December 2007 |access-date=24 January 2013 |archive-date=27 September 2013 |archive-url=https://web.archive.org/web/20130927054507/http://www.thehindu.com/todays-paper/tp-national/tp-kerala/shopping-festival-begins/article1959420.ece |url-status=live }}</ref> [[ತಿರುವನಂತಪುರ|ತಿರುವನಂತಪುರದ]] [[ಲುಲು ಮಾಲ್, ತಿರುವನಂತಪುರ|ಲುಲು ಇಂಟರ್ನ್ಯಾಷನಲ್ ಮಾಲ್]] ಭಾರತದ ಅತಿದೊಡ್ಡ [[ಶಾಪಿಂಗ್ ಮಾಲ್|ಶಾಪಿಂಗ್ ಮಾಲ್]] ಆಗಿದೆ.<ref>{{cite news |title=LuLu Group: Going places |url=https://www.khaleejtimes.com/business/local/lulu-group-going-places |work=[[Khaleej Times]] |access-date=13 November 2020 |archive-date=26 April 2021 |archive-url=https://web.archive.org/web/20210426172244/https://www.khaleejtimes.com/business/local/lulu-group-going-places |url-status=live }}</ref>
ಅನೇಕ ಸಾಧನೆಗಳ ಹೊರತಾಗಿಯೂ, ಕೇರಳವು ವಿದ್ಯಾವಂತ ಮಹಿಳೆಯರ ಮೇಲೆ ಅಸಮಾನವಾಗಿ ಪರಿಣಾಮ ಬೀರುವ ಹೆಚ್ಚಿನ ಮಟ್ಟದ ನಿರುದ್ಯೋಗ, ಹೆಚ್ಚಿನ ಮಟ್ಟದ ಜಾಗತಿಕ ಪ್ರಭಾವ ಮತ್ತು ಅತ್ಯಂತ ಸೂಕ್ಷ್ಮ ಪರಿಸರದಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದೆ.<ref name="Hindu2021">{{cite journal |title=Making sense of Kerala |journal=The Hindu |date=13 December 2021 |last1=Heller |first1=Patrick |last2=Törnquist |first2=Olle |url=https://www.thehindu.com/news/national/kerala/making-sense-of-kerala/article37942860.ece |archive-url=https://web.archive.org/web/20211214151547/https://www.thehindu.com/news/national/kerala/making-sense-of-kerala/article37942860.ece |accessdate=5 March 2022 |archive-date=14 December 2021 |quote=Kerala has specific challenges: persistently high levels of unemployment that disproportionately impact educated women, a high degree of global exposure and a very fragile environment. More broadly, as the 21st century unfolds, it becomes increasingly clearer that the role of the State in supporting development must fundamentally change. First, in highly educated societies like Kerala, industrialisation is no longer the path to economic prosperity.}}</ref>
=== ಕೈಗಾರಿಕೆಗಳು ===
ಸಾಂಪ್ರದಾಯಿಕ ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳು; [[ತೆಂಗಿನ ನಾರು]], [[ಕೈಮಗ್ಗ]]ಗಳು, ಮತ್ತು [[ಕರಕುಶಲ]]ಗಳು ಸುಮಾರು ಒಂದು ಮಿಲಿಯನ್ ಜನರನ್ನು ಉದ್ಯೋಗಿಸುತ್ತವೆ.<ref name="KumarKerala2007">{{cite book |author1=S. Rajitha Kumar |author2=University of Kerala |title=Traditional Industries of India in the Globalised World |url=https://books.google.com/books?id=aBvtAAAAMAAJ |year=2007 |publisher=University of Kerala |isbn=978-8177081435 |page=223}}</ref> ಕೇರಳವು ಬಿಳಿ ತೆಂಗಿನ ನಾರಿನ ನಾರಿನ ಒಟ್ಟು ಜಾಗತಿಕ ಉತ್ಪಾದನೆಯ 60% ಅನ್ನು ಪೂರೈಸುತ್ತದೆ. ಭಾರತದ ಮೊದಲ ತೆಂಗಿನ ನಾರಿನ ಕಾರ್ಖಾನೆಯನ್ನು [[ಆಲಪ್ಪುಳ]]ದಲ್ಲಿ 1859–60 ರಲ್ಲಿ ಸ್ಥಾಪಿಸಲಾಯಿತು.<ref>{{cite web |title=Indian Coir Industry |url=https://www.indianmirror.com/indian-industries/coir.html |work=Indian Mirror |access-date=29 April 2014 |archive-date=2 May 2014 |archive-url=https://web.archive.org/web/20140502033302/http://www.indianmirror.com/indian-industries/coir.html |url-status=live }}</ref> ಕೇಂದ್ರ ತೆಂಗಿನ ನಾರಿನ ಸಂಶೋಧನಾ ಸಂಸ್ಥೆಯನ್ನು ಅಲ್ಲಿ 1959 ರಲ್ಲಿ ಸ್ಥಾಪಿಸಲಾಯಿತು. 2006–2007 ರ [[SIDBI]] ಯ ಜನಗಣತಿಯ ಪ್ರಕಾರ, ಕೇರಳದಲ್ಲಿ {{formatnum:1468104}} [[ಸಣ್ಣ ಮತ್ತು ಮಧ್ಯಮ ಉದ್ಯಮಗಳು#ಭಾರತ|ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿವೆ]], ಇವು {{formatnum:3031272}} ಜನರನ್ನು ಉದ್ಯೋಗಿಸುತ್ತವೆ.<ref name="SIDBI Report 2010">{{cite book |title=SIDBI Report on Micro, Small and Medium Enterprises Sector, 2010 |publisher=Small Industries Development Bank of India |year=2010}}</ref><ref>{{cite journal |title=A Study on the Position of Small and Medium Enterprises in Kerala vis a vis the National Scenario |author=N. Rajeevan |journal=International Journal of Research in Commerce, Economics and Management |date=March 2012 |volume=2 |issue=3}}</ref> [[KSIDC]] ಕೇರಳದಲ್ಲಿ 650 ಕ್ಕೂ ಹೆಚ್ಚು ಮಧ್ಯಮ ಮತ್ತು ದೊಡ್ಡ ಉತ್ಪಾದನಾ ಸಂಸ್ಥೆಗಳನ್ನು ಪ್ರೋತ್ಸಾಹಿಸಿದೆ, 72,500 ಜನರಿಗೆ ಉದ್ಯೋಗವನ್ನು ಸೃಷ್ಟಿಸಿದೆ.<ref>{{cite web |url=https://www.ksidc.org/about-functions.php |archive-url=https://web.archive.org/web/20140709062837/https://www.ksidc.org/about-functions.php |archive-date=9 July 2014 |title=Functions, KSIDC, Thiruvananthapuram |publisher=Kerala State Industrial Development Corporation |access-date=6 December 2013}}</ref> GSDP ಯ 0.3% ರಷ್ಟಿರುವ ಗಣಿಗಾರಿಕಾ ವಲಯವು [[ಇಲ್ಮೆನೈಟ್]], [[ಕಯೋಲಿನ್]], [[ಬಾಕ್ಸೈಟ್]], [[ಸಿಲಿಕಾ]], [[ಕ್ವಾರ್ಟ್ಜ್]], [[ರುಟೈಲ್]], [[ಜಿರ್ಕಾನ್]], ಮತ್ತು [[ಸಿಲ್ಲಿಮನೈಟ್]] ಹೊರತೆಗೆಯುವಿಕೆಯನ್ನು ಒಳಗೊಂಡಿದೆ.<ref name="GOK_2005c">{{Cite journal |author=Government of Kerala |year=2005 |title=Kerala at a Glance |journal=Government of Kerala |url=https://www.kerala.gov.in/ |access-date=22 January 2006 |url-status=dead |archive-url=https://web.archive.org/web/20060118031516/https://www.kerala.gov.in/ |archive-date=18 January 2006}}</ref> ಇತರ ಪ್ರಮುಖ ವಲಯಗಳೆಂದರೆ [[ಕೇರಳದಲ್ಲಿ ಪ್ರವಾಸೋದ್ಯಮ|ಪ್ರವಾಸೋದ್ಯಮ]], ವೈದ್ಯಕೀಯ ವಲಯ, [[ಕೇರಳದಲ್ಲಿ ಶಿಕ್ಷಣ|ಶೈಕ್ಷಣಿಕ ವಲಯ]], ಬ್ಯಾಂಕಿಂಗ್, [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಹಡಗು ನಿರ್ಮಾಣ]], [[ಕೊಚ್ಚಿ ಸಂಸ್ಕರಣಾಗಾರ|ತೈಲ ಸಂಸ್ಕರಣಾಗಾರ]], ಮೂಲಸೌಕರ್ಯ, ಉತ್ಪಾದನೆ, [[ವಸತಿ ಉದ್ಯಾನ|ಮನೆ ತೋಟಗಳು]], ಪಶುಪಾಲನೆ ಮತ್ತು [[ವ್ಯಾಪಾರ ಪ್ರಕ್ರಿಯೆಯ ಹೊರಗುತ್ತಿಗೆ]].{{citation needed|date=October 2025}}
=== ಕೃಷಿ ===
[[File:Tea plantations in Munnar, Kerala.jpg|thumb|[[ಮುನ್ನಾರ್|ಮುನ್ನಾರಿನಲ್ಲಿ]] ಚಹಾ ತೋಟಗಳು, ಕೇರಳ]]
[[File:Nemmara-paddy.jpg|alt=A field|thumb|[[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡಿನ]] ಒಂದು ಭತ್ತದ ಗದ್ದೆ, ಇದನ್ನು ''ಕೇರಳದ ಧಾನ್ಯದ ಬುಟ್ಟಿ'' ಎಂದೂ ಕರೆಯುತ್ತಾರೆ]]
ಕೇರಳದಲ್ಲಿ ಕೃಷಿಯಲ್ಲಿ ಪ್ರಮುಖ ಬದಲಾವಣೆಯು 1970 ರ ದಶಕದಲ್ಲಿ ಸಂಭವಿಸಿತು, ಭಾರತಾದ್ಯಂತ ಅಕ್ಕಿಯ ಲಭ್ಯತೆ ಹೆಚ್ಚಾದ ಕಾರಣ ಮತ್ತು ಕಾರ್ಮಿಕರ ಲಭ್ಯತೆ ಕಡಿಮೆಯಾದ ಕಾರಣ ಅಕ್ಕಿ ಉತ್ಪಾದನೆಯು ಕುಸಿಯಿತು.<ref name="Sinha2003">{{cite book |author=B.R. Sinha |title=Encyclopaedia Of Professional Education (10 Vol.) |url=https://books.google.com/books?id=mdjGoXN3y1AC&pg=PA205 |access-date=18 November 2012 |year=2003 |publisher=Sarup & Sons |isbn=978-8176254106 |pages=204–05}}</ref> ಪರಿಣಾಮವಾಗಿ, ಅಕ್ಕಿ ಉತ್ಪಾದನೆಯಲ್ಲಿ ಹೂಡಿಕೆ ಕಡಿಮೆಯಾಯಿತು ಮತ್ತು ಭೂಮಿಯ ಗಮನಾರ್ಹ ಭಾಗವು ದೀರ್ಘಕಾಲಿಕ ಮರದ ಬೆಳೆಗಳು ಮತ್ತು ಕಾಲಿಕ ಬೆಳೆಗಳ ಕೃಷಿಗೆ ಬದಲಾಯಿತು.<ref name="Remesh2010">{{cite book |author=Babu P. Remesh |title=Dynamics of Rural Labour: A Study of Small Holding Rubber Tappers in Kerala |url=https://books.google.com/books?id=uOyNsKXSa0gC&pg=PA52 |access-date=18 November 2012 |year=2010 |publisher=Concept Publishing Company |isbn=978-8180696602 |pages=52–}}</ref><ref name="Commission2008">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA66 |access-date=18 November 2012 |year=2008 |publisher=Academic Foundation |isbn=978-8171885947 |pages=66–}}</ref> ಕೃಷಿ ಕಾರ್ಮಿಕರ ಕೊರತೆ, ಭೂಮಿಯ ಹೆಚ್ಚಿನ ಬೆಲೆ ಮತ್ತು ಕಾರ್ಯಾಚರಣೆಯ ಹಿಡುವಳಿಗಳ ಅನಾರೋಗ್ಯಕರ ಗಾತ್ರದಿಂದಾಗಿ ಬೆಳೆಗಳ ಲಾಭದಾಯಕತೆಯು ಕುಸಿಯಿತು.<ref name="google9">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=66 |access-date=30 May 2015}}</ref> ಕೇರಳದಲ್ಲಿ ಕೇವಲ 27.3% ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿವೆ, ಇದು ಭಾರತದಲ್ಲಿ ಅತ್ಯಂತ ಕಡಿಮೆ ಪ್ರಮಾಣವಾಗಿದೆ.{{sfn|Chandran|2018|p=406}}
ಕೇರಳವು ಕರಿಮೆಣಸಿನ ರಾಷ್ಟ್ರೀಯ ಉತ್ಪಾದನೆಯ 97% ಅನ್ನು ಉತ್ಪಾದಿಸುತ್ತದೆ<ref name="Limca Book of Records">{{cite book |title=Limca Book of Records |url=https://books.google.com/books?id=Y-JtAAAAMAAJ |access-date=18 November 2012 |year=2001 |publisher=Bisleri Beverages Limited |page=97}}</ref> ಮತ್ತು ದೇಶದ [[ನೈಸರ್ಗಿಕ ರಬ್ಬರ್]]ನ 85% ರಷ್ಟಿದೆ.<ref name="google10">{{cite book |title=South Asia 2006 |url=https://books.google.com/books?id=YG8bAQAAMAAJ |access-date=18 November 2012 |year=2005 |publisher=Taylor & Francis |page=291 |isbn=978-1-85743-318-0}}</ref><ref name="Economic Affairs">{{cite book |title=Economic Affairs |url=https://books.google.com/books?id=StHsAAAAMAAJ |access-date=18 November 2012 |year=1998 |publisher=H. Roy |page=47}}</ref> [[ತೆಂಗು]], [[ಚಹಾ]], [[ಕಾಫಿ]], [[ಗೋಡಂಬಿ]], ಮತ್ತು ಮಸಾಲೆಗಳು—ಏಲಕ್ಕಿ, [[ವೆನಿಲ್ಲಾ]], [[ದಾಲ್ಚಿನ್ನಿ]], ಮತ್ತು [[ಜಾಯಿಕಾಯಿ]] ಪ್ರಮುಖ ಕೃಷಿ ಉತ್ಪನ್ನಗಳಾಗಿವೆ.<ref name="ChattopadhyayFranke2006" />{{rp|74}}<ref name="Newton">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT3 |access-date=18 November 2012 |publisher=Springwood emedia |isbn=978-1-4761-2308-0 |pages=3–}}</ref><ref name="B.L.MarkoseMarkose2007">{{cite book |author1=Rajan, S. & B.L.Markose |author2=Baby Lissy Markose |title=Propagation of Horticultural Crops: Vol.06. Horticulture Science Series |url=https://books.google.com/books?id=19zgbxw-YhYC&pg=PA212 |access-date=18 November 2012 |year=2007 |publisher=New India Publishing |isbn=978-8189422486 |pages=212–}}</ref><ref name="Pradhan2009">{{cite book |author=Pradhan |title=Retailing Management 3E |url=https://books.google.com/books?id=8y7Zb_D-_oYC&pg=PA256 |access-date=18 November 2012 |year=2009 |publisher=Tata McGraw-Hill Education |isbn=978-0-07-015256-4 |pages=256–}}</ref><ref name="PradeepkumarPradeep2008">{{cite book |author1=T. Pradeepkumar |author2=Kumar, Pradeep |title=Management of Horticultural Crops: Vol.11 Horticulture Science Series: In 2 Parts |url=https://books.google.com/books?id=VHmokNZXbHUC&pg=PA509 |access-date=18 November 2012 |year=2008 |publisher=New India Publishing |isbn=978-8189422493 |pages=509–}}</ref><ref name="OsellaOsella2000">{{cite book |author1=Filippo Osella |author2=Caroline Osella |title=Social Mobility In Kerala: Modernity and Identity in Conflict |url=https://books.google.com/books?id=rMRw0gTZSJwC&pg=PA235 |access-date=18 November 2012 |year=2000 |publisher=Pluto Press |isbn=978-0-7453-1693-2 |pages=235–}}</ref> [[ಭಾರತ]]ದ ರಫ್ತು ಗುಣಮಟ್ಟದ ಗೋಡಂಬಿ ಬೀಜಗಳಲ್ಲಿ ಸುಮಾರು 80% ಅನ್ನು [[ಕೊಲ್ಲಂ]]ನಲ್ಲಿ ತಯಾರಿಸಲಾಗುತ್ತದೆ.<ref>{{cite news |url=https://www.thehindu.com/news/national/kerala/cashew-sector-in-a-tailspin/article8767346.ece |title=Cashew sector in a tailspin |newspaper=The Hindu |access-date=24 June 2016 |archive-date=24 June 2016 |archive-url=https://web.archive.org/web/20160624004205/http://www.thehindu.com/news/national/kerala/cashew-sector-in-a-tailspin/article8767346.ece |url-status=live }}</ref> ಪ್ರಮುಖ ವಾಣಿಜ್ಯ ಬೆಳೆ [[ತೆಂಗು]] ಮತ್ತು ಕೇರಳವು ಭಾರತದಲ್ಲಿ ತೆಂಗಿನ ಕೃಷಿ ಪ್ರದೇಶದಲ್ಲಿ ಮೊದಲ ಸ್ಥಾನದಲ್ಲಿದೆ.{{sfn|Chandran|2018|p=407}} ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಏಲಕ್ಕಿ]]ಯಲ್ಲಿ ಸುಮಾರು 90% ಕೇರಳದಿಂದ ಬರುತ್ತದೆ.<ref name="eco" /> ಭಾರತವು ವಿಶ್ವದಲ್ಲಿ ಏಲಕ್ಕಿಯ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ.<ref name="eco" /> ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಕಾಫಿ]]ಯಲ್ಲಿ ಸುಮಾರು 20% ಕೇರಳದಿಂದ ಬರುತ್ತದೆ.{{sfn|Chandran|2018|p=409}} ಪ್ರಮುಖ ಕೃಷಿ ಪ್ರಧಾನ ಆಹಾರವೆಂದರೆ ಅಕ್ಕಿ, ವಿವಿಧ ಪ್ರಭೇದಗಳನ್ನು ವ್ಯಾಪಕವಾದ ಭತ್ತದ ಗದ್ದೆಗಳಲ್ಲಿ ಬೆಳೆಯಲಾಗುತ್ತದೆ.<ref name="VarshneyRzóska1976">{{cite book |author1=C.K. Varshney |author2=J. Rzóska |title=Aquatic Weeds in South East Asia |url=https://books.google.com/books?id=lW3fHiDjHNcC&pg=PA100 |access-date=18 November 2012 |year=1976 |publisher=Springer |isbn=978-9061935568 |pages=100–}}</ref> ಮನೆ ತೋಟಗಳು ಕೃಷಿ ವಲಯದ ಗಮನಾರ್ಹ ಭಾಗವನ್ನು ರೂಪಿಸಿದವು.<ref name="Dobbie2006">{{cite book |author=Aline Dobbie |title=India the Elephants Blessing |url=https://books.google.com/books?id=ckpEd4emnCkC&pg=PA123 |access-date=18 November 2012 |year=2006 |publisher=Melrose Press |isbn=978-1-905226-85-6 |pages=123–}}</ref>
=== ಮೀನುಗಾರಿಕೆ ===
{{convert|590|km|mi|lk=out|abbr=off}} ಕರಾವಳಿ ಪಟ್ಟಿಯೊಂದಿಗೆ,<ref>{{cite web |title=Kerala: Natural Resources |url=https://india.gov.in/knowindia/state_uts.php?id=70 |archive-url=https://web.archive.org/web/20111218084509/https://india.gov.in/knowindia/state_uts.php?id=70 |archive-date=18 December 2011 |publisher=Government of India |access-date=18 November 2012}}</ref> 400,000 ಹೆಕ್ಟೇರ್ ಒಳನಾಡಿನ ಜಲ ಸಂಪನ್ಮೂಲಗಳು<ref>{{cite web |title=Kerala: April 2012 |url=https://www.ibef.org/download/Kerala_060710.pdf |publisher=Indian Brand Equity Fund |access-date=18 November 2012 |archive-date=10 May 2013 |archive-url=https://web.archive.org/web/20130510151146/http://www.ibef.org/download/Kerala_060710.pdf |url-status=live }}</ref> ಮತ್ತು ಸರಿಸುಮಾರು 220,000 ಸಕ್ರಿಯ ಮೀನುಗಾರರು,<ref name="Commission1961">{{cite book |author=India. Planning Commission |title=Third five year plan |url=https://books.google.com/books?id=5_G5AAAAIAAJ |access-date=18 November 2012 |year=1961 |publisher=Manager of Publications |page=359}}</ref> ಕೇರಳವು ಭಾರತದ ಪ್ರಮುಖ ಮೀನು ಉತ್ಪಾದಕರಲ್ಲಿ ಒಂದಾಗಿದೆ.<ref name="google13">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA51 |access-date=18 November 2012 |year=2008 |publisher=Academic Foundation |isbn=978-8171885947 |page=51}}</ref> 2003–04 ರ ವರದಿಗಳ ಪ್ರಕಾರ, ಸುಮಾರು 11 ಲಕ್ಷ (1.1 ಮಿಲಿಯನ್) ಜನರು ಮೀನುಗಾರಿಕೆ ಮತ್ತು ಒಣಗಿಸುವಿಕೆ, ಸಂಸ್ಕರಣೆ, ಪ್ಯಾಕೇಜಿಂಗ್, ರಫ್ತು ಮತ್ತು ಮೀನುಗಾರಿಕೆ ಸಾಗಣೆಯಂತಹ ಸಂಯೋಜಿತ ಚಟುವಟಿಕೆಗಳಿಂದ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ. 2003–04 ರಲ್ಲಿ ವಲಯದ ವಾರ್ಷಿಕ ಇಳುವರಿಯನ್ನು 6,08,000 ಟನ್ ಎಂದು ಅಂದಾಜಿಸಲಾಗಿದೆ.<ref>{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=51 |access-date=30 May 2015}}</ref> ಇದು ರಾಜ್ಯದ ಒಟ್ಟು ಆರ್ಥಿಕತೆಯ ಸುಮಾರು 3% ರಷ್ಟು ಕೊಡುಗೆ ನೀಡುತ್ತದೆ. 2006 ರಲ್ಲಿ, ಒಟ್ಟು ಭಾರತೀಯ ಸಮುದ್ರ ಮೀನುಗಾರಿಕೆ ಇಳುವರಿಯಲ್ಲಿ ಸುಮಾರು 22% ಕೇರಳದಿಂದ ಬಂದಿದೆ.<ref name="Handbook" /> ನೈಋತ್ಯ ಮಾನ್ಸೂನ್ ಸಮಯದಲ್ಲಿ, ತೀರದ ಉದ್ದಕ್ಕೂ ಅಮಾನತುಗೊಂಡ ಮಣ್ಣಿನ ಬ್ಯಾಂಕ್ ಬೆಳೆಯುತ್ತದೆ, ಇದು ಪ್ರಶಾಂತ ಸಮುದ್ರದ ನೀರಿಗೆ ಕಾರಣವಾಗುತ್ತದೆ, ಇದು ಮೀನುಗಾರಿಕಾ ಉದ್ಯಮದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ವಿದ್ಯಮಾನವನ್ನು ಸ್ಥಳೀಯವಾಗಿ ''[[ಚಕರ]]'' ಎಂದು ಕರೆಯಲಾಗುತ್ತದೆ.<ref name="Gulati1984">{{cite book |author=Leela Gulati |title=Fisherwomen on the Kerala Coast: Demographic and Socio-Economic Impact of a Fisheries Development Project |url=https://archive.org/details/fisherwomenonker0000gula |url-access=registration |access-date=18 November 2012 |year=1984 |publisher=International Labour Organization |isbn=978-9221036265 |page=[https://archive.org/details/fisherwomenonker0000gula/page/103 103]}}</ref><ref name="Journal of Kerala Studies">{{cite book |title=Journal of Kerala Studies |url=https://books.google.com/books?id=EgSSAAAAIAAJ |access-date=18 November 2012 |year=1987 |publisher=University of Kerala. |page=201}}</ref> ಜಲಗಳು ವಿವಿಧ ರೀತಿಯ ಮೀನುಗಳನ್ನು ಒದಗಿಸುತ್ತವೆ: [[ಪೆಲಾಜಿಕ್ ಮೀನು|ಪೆಲಾಜಿಕ್ ಪ್ರಭೇದಗಳು]]; 59%, [[ಡೆಮರ್ಸಲ್ ಮೀನು|ಡೆಮರ್ಸಲ್ ಪ್ರಭೇದಗಳು]]; 23%, [[ಕಠಿಣಚರ್ಮಿಗಳು]], [[ಮೃದ್ವಂಗಿಗಳು]] ಮತ್ತು ಇತರವುಗಳು 18% ರಷ್ಟಿವೆ.<ref name="Handbook">{{cite book |title=Handbook of Marine Fisheries Conservation and Management |url=https://archive.org/details/handbookmarinefi00graf |url-access=limited |publisher=Oxford University Press |author1=R. Quentin Grafton |author2=Ray Hilborn |author3=Dale Squires |year=2009 |pages=[https://archive.org/details/handbookmarinefi00graf/page/n24 10]–12 |isbn=978-0-19-537028-7}}</ref> ಸುಮಾರು 1,050,000 (1.050 ಮಿಲಿಯನ್) ಮೀನುಗಾರರು 1999–2000 ರ ಅಂದಾಜಿನಂತೆ 668,000 ಟನ್ ವಾರ್ಷಿಕ ಕ್ಯಾಚ್ ಅನ್ನು ಎಳೆಯುತ್ತಾರೆ; 222 ಮೀನುಗಾರಿಕಾ ಗ್ರಾಮಗಳು {{convert|590|km|adj=on|abbr=off}} ಕರಾವಳಿಯ ಉದ್ದಕ್ಕೂ ಹರಡಿವೆ. ಇನ್ನೂ 113 ಮೀನುಗಾರಿಕಾ ಗ್ರಾಮಗಳು ಒಳನಾಡಿನಲ್ಲಿ ಹರಡಿವೆ.{{citation needed|date=October 2025}}
== ಸಾರಿಗೆ ==
=== ರಸ್ತೆಗಳು ===
{{Main|ಕೇರಳದ ರಸ್ತೆಗಳು}}
{{See also|ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ}}{{multiple image
<!-- Layout parameters -->| align = <!-- right (default), left, centre, none -->
| direction = vertical
| width = 240
| image1 = Thrissur sixlane.jpg
| caption1 = [[ತೃಶೂರ್]] ನಿಂದ [[ವಡಕ್ಕೆಂಚೇರಿ]] ವರೆಗಿನ [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ನ ಆರು ಪಥದ ವಿಭಾಗ
<!--image 2-->}}
ಕೇರಳವು {{convert|331904|km|mi}} ರಸ್ತೆಗಳನ್ನು ಹೊಂದಿದೆ, ಇದು ಭಾರತದ ಒಟ್ಟು ರಸ್ತೆಗಳ 5.6% ರಷ್ಟಿದೆ.<ref name="eco" /><ref name="road">{{Cite book |title=Ministry Annual Report (2019–20) |publisher=Ministry of Road Transport & Highways Transport Research Wing, Government of India |year=2020 |location=New Delhi |url=https://morth.nic.in/sites/default/files/Ministry%20Annual%20Report_2019-20.pdf |archive-date=28 October 2021 |access-date=20 June 2021 |archive-url=https://web.archive.org/web/20211028140933/https://morth.nic.in/sites/default/files/Ministry%20Annual%20Report_2019-20.pdf |url-status=live }}</ref> ಇದು ಪ್ರತಿ ಸಾವಿರ ಜನರಿಗೆ ಸುಮಾರು {{convert|9.94|km|mi|2}} ರಸ್ತೆ ಎಂದು ಅನುವಾದಿಸುತ್ತದೆ, ಇದು ದೇಶದ ಸರಾಸರಿ {{convert|4.87|km|mi|2}} ಗೆ ಹೋಲಿಸಿದರೆ.<ref name="eco" /><ref name="road" /> ಕೇರಳದ ರಸ್ತೆಗಳು {{convert|1812|km|mi}} ರಾಷ್ಟ್ರೀಯ ಹೆದ್ದಾರಿಯನ್ನು ಒಳಗೊಂಡಿವೆ; ರಾಷ್ಟ್ರದ ಒಟ್ಟು 1.6%, {{convert|4342|km|mi}} ರಾಜ್ಯ ಹೆದ್ದಾರಿ; ರಾಷ್ಟ್ರದ ಒಟ್ಟು 2.5%, {{convert|27470|km|mi}} ಜಿಲ್ಲಾ ರಸ್ತೆಗಳು; ರಾಷ್ಟ್ರದ ಒಟ್ಟು 4.7%, {{convert|33201|km|mi}} ನಗರ (ಪುರಸಭೆ) ರಸ್ತೆಗಳು; ರಾಷ್ಟ್ರದ ಒಟ್ಟು 6.3%, ಮತ್ತು {{convert|158775|km|mi}} ಗ್ರಾಮೀಣ ರಸ್ತೆಗಳು; ರಾಷ್ಟ್ರದ ಒಟ್ಟು 3.8%.<ref name=":16-17">{{Cite book |title=Basic Road Statistics of India (2016–17) |publisher=Ministry of Road Transport & Highways Transport Research Wing, Government of India |year=2019 |location=New Delhi |pages=7–18 |url=https://morth.nic.in/sites/default/files/Basic%20_Road_Statics_of_India.pdf |archive-date=28 August 2021 |access-date=25 November 2020 |archive-url=https://web.archive.org/web/20210828082929/https://www.morth.nic.in/sites/default/files/Basic%20_Road_Statics_of_India.pdf |url-status=live }}</ref> [[ಕೋಟ್ಟಯಂ ಜಿಲ್ಲೆ|ಕೋಟ್ಟಯಂ]] [[ಕೇರಳದ ಜಿಲ್ಲೆಗಳ ಪಟ್ಟಿ|ಕೇರಳದ ಜಿಲ್ಲೆಗಳಲ್ಲಿ]] ಅತಿ ಉದ್ದದ ರಸ್ತೆಗಳನ್ನು ಹೊಂದಿದ್ದರೆ, [[ವಯನಾಡು]] ಕಡಿಮೆ ಪ್ರಮಾಣವನ್ನು ಹೊಂದಿದೆ.{{sfn|Chandran|2018|p=422}} ಕೇರಳದ ಪಶ್ಚಿಮ ಕರಾವಳಿಯ ಹೆಚ್ಚಿನ ಭಾಗವು [[ರಾಷ್ಟ್ರೀಯ ಹೆದ್ದಾರಿ 66 (ಭಾರತ)|NH 66]] (ಹಿಂದೆ NH 17 ಮತ್ತು 47) ಮೂಲಕ ಪ್ರವೇಶಿಸಬಹುದು; ಮತ್ತು ಪೂರ್ವ ಭಾಗವು ರಾಜ್ಯ ಹೆದ್ದಾರಿಗಳ ಮೂಲಕ ಪ್ರವೇಶಿಸಬಹುದು.<ref name="Kerala PWD">{{cite web |title=National Highways in Kerala |url=https://www.keralapwd.gov.in/getPage.php%3Fpage%3DNH%2520in%2520Kerala%26pageId%3D301&ved=2ahUKEwjRh7jHod7YAhWFmZQKHWSeAeoQFjAOegQIBxAB&usg=AOvVaw15WM6wG3ueKFD1qj28WEps |work=Kerala Public Works Department |publisher=Government of Kerala}} {{dead link|date=September 2019 |bot=InternetArchiveBot |fix-attempted=yes }}</ref> ಬೆಟ್ಟ ಮತ್ತು ಕರಾವಳಿ ಹೆದ್ದಾರಿಗಳಿಗೆ ಹೊಸ ಯೋಜನೆಗಳನ್ನು ಇತ್ತೀಚೆಗೆ [[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ|KIIFB]] ಅಡಿಯಲ್ಲಿ ಘೋಷಿಸಲಾಯಿತು.<ref>{{cite news |title=Coastal, Hill Highways to become a reality |url=https://www.thehindu.com/news/national/kerala/coastal-hill-highways-to-become-a-reality/article19262450.ece |date=12 July 2017 |newspaper=The Hindu |access-date=12 February 2019 |archive-date=15 April 2021 |archive-url=https://web.archive.org/web/20210415092848/https://www.thehindu.com/news/national/kerala/coastal-hill-highways-to-become-a-reality/article19262450.ece |url-status=live }}</ref> ಅತಿ ಉದ್ದದ ರಸ್ತೆ ({{convert|1622|km|mi}}) ಹೊಂದಿರುವ ರಾಷ್ಟ್ರೀಯ ಹೆದ್ದಾರಿ 66, [[ಕನ್ಯಾಕುಮಾರಿ]]ಯನ್ನು [[ಮುಂಬೈ]]ಗೆ ಸಂಪರ್ಕಿಸುತ್ತದೆ; ಇದು [[ಕಾಸರಗೋಡು|ಕಾಸರಗೋಡಿನ]] [[ತಲಪಾಡಿ]] ಮೂಲಕ ಕೇರಳವನ್ನು ಪ್ರವೇಶಿಸುತ್ತದೆ ಮತ್ತು [[ಕಣ್ಣೂರು]], [[ಕೋಝಿಕೋಡ್]], [[ಮಲಪ್ಪುರಂ]], [[ಗುರುವಾಯೂರು]], [[ಕೊಚ್ಚಿ]], [[ಆಲಪ್ಪುಳ]], [[ಕೊಲ್ಲಂ]], [[ತಿರುವನಂತಪುರ]] ಮೂಲಕ ಹಾದುಹೋಗುವ ಮೊದಲು [[ತಮಿಳುನಾಡು]] ಪ್ರವೇಶಿಸುತ್ತದೆ.<ref name="Kerala PWD" /> [[ಪಾಲಕ್ಕಾಡ್ ಜಿಲ್ಲೆ]]ಯನ್ನು ಸಾಮಾನ್ಯವಾಗಿ ಕೇರಳದ ಪ್ರವೇಶದ್ವಾರ ಎಂದು ಕರೆಯಲಾಗುತ್ತದೆ, ಪಶ್ಚಿಮ ಘಟ್ಟಗಳಲ್ಲಿ ಪಾಲಕ್ಕಾಡ್ ಅಂತರದ ಉಪಸ್ಥಿತಿಯಿಂದಾಗಿ, ಅದರ ಮೂಲಕ ಕೇರಳದ ಉತ್ತರ ([[ಮಲಬಾರ್ ಪ್ರದೇಶ|ಮಲಬಾರ್]]) ಮತ್ತು ದಕ್ಷಿಣ (ತಿರುವಾಂಕೂರು) ಭಾಗಗಳು ರಸ್ತೆ ಮತ್ತು ರೈಲು ಮೂಲಕ ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಿವೆ. ರಾಜ್ಯದ ಅತಿದೊಡ್ಡ ತಪಾಸಣಾ ಕೇಂದ್ರ, [[ವಾಲಯಾರ್]], [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ರಲ್ಲಿದೆ, ಕೇರಳ ಮತ್ತು [[ತಮಿಳುನಾಡು]] ನಡುವಿನ ಗಡಿ ಪಟ್ಟಣದಲ್ಲಿ, ಅದರ ಮೂಲಕ ದೊಡ್ಡ ಪ್ರಮಾಣದ ಸಾರ್ವಜನಿಕ ಮತ್ತು ವಾಣಿಜ್ಯ ಸಾರಿಗೆಯು ಕೇರಳದ ಉತ್ತರ ಮತ್ತು ಮಧ್ಯ ಜಿಲ್ಲೆಗಳನ್ನು ತಲುಪುತ್ತದೆ.<ref>{{cite web |url=https://www.keralatourism.org/districts/palakkad/ |title=District of Palakkad – the granary of Kerala, Silent Valley National Park, Nelliyampathy |publisher=keralatourism.org |access-date=30 May 2015 |archive-date=15 April 2021 |archive-url=https://web.archive.org/web/20210415114106/https://www.keralatourism.org/districts/palakkad/ |url-status=live }}</ref>
[[ಸಾರ್ವಜನಿಕ ಕಾರ್ಯಗಳ ಇಲಾಖೆ (ಕೇರಳ)|ಸಾರ್ವಜನಿಕ ಕಾರ್ಯಗಳ ಇಲಾಖೆ]] [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|ರಾಜ್ಯ ಹೆದ್ದಾರಿ ವ್ಯವಸ್ಥೆ]] ಮತ್ತು ಪ್ರಮುಖ ಜಿಲ್ಲಾ ರಸ್ತೆಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ.<ref>{{cite web |title=About us |url=https://www.keralapwd.gov.in/getPage.php?page=About%20Us&pageId=256&link=About%20PWD |archive-url=https://web.archive.org/web/20101201055142/https://www.keralapwd.gov.in/getPage.php?page=About%20Us&pageId=256&link=About%20PWD |url-status=dead |archive-date=1 December 2010 |work=Kerala Public Works Department |publisher=Government of Kerala |access-date=18 November 2012}}</ref> ಕೇರಳ ರಾಜ್ಯ ಸಾರಿಗೆ ಯೋಜನೆ (KSTP), ಇದು [[GIS]]-ಆಧಾರಿತ ರಸ್ತೆ ಮಾಹಿತಿ ಮತ್ತು ನಿರ್ವಹಣಾ ಯೋಜನೆಯನ್ನು (RIMS) ಒಳಗೊಂಡಿದೆ, ಕೇರಳದ ರಾಜ್ಯ ಹೆದ್ದಾರಿಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಕೆಲವು ಪ್ರಮುಖ ಜಿಲ್ಲಾ ರಸ್ತೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ.<ref>{{Cite news |author=Kumar VS |title=Kerala State transport project second phase to be launched next month |work=The Hindu |date=20 January 2006 |access-date=11 November 2007 |url=https://www.thehindubusinessline.com/2006/01/20/stories/2006012002272100.htm |archive-url=https://web.archive.org/web/20070304181402/https://www.thehindubusinessline.com/2006/01/20/stories/2006012002272100.htm |archive-date=4 March 2007}}</ref><ref>{{cite web |author=Kumar VS |title=Institutional Strengthening Action Plan (ISAP) |work=Kerala Public Works Department |publisher=Government of Kerala |year=2003 |access-date=11 November 2007 |url=https://www.keralapwd.gov.in/pwd/public/isap.jsp |archive-url=https://web.archive.org/web/20080512054304/https://www.keralapwd.gov.in/pwd/public/isap.jsp |archive-date=12 May 2008}}</ref> ಕೇರಳದಲ್ಲಿ ಸಾರಿಗೆಯು ಪ್ರತಿ ವರ್ಷ 10-11% ದರದಲ್ಲಿ ಬೆಳೆಯುತ್ತಿದೆ, ಇದು ಹೆಚ್ಚಿನ ಸಾರಿಗೆ ಮತ್ತು ರಸ್ತೆಗಳ ಮೇಲಿನ ಒತ್ತಡಕ್ಕೆ ಕಾರಣವಾಗಿದೆ. ಸಾರಿಗೆ ಸಾಂದ್ರತೆಯು ರಾಷ್ಟ್ರೀಯ ಸರಾಸರಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ, ಇದು ರಾಜ್ಯದ ಹೆಚ್ಚಿನ ಜನಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ. ಕೇರಳದ ವಾರ್ಷಿಕ ಒಟ್ಟು ರಸ್ತೆ ಅಪಘಾತಗಳು ರಾಷ್ಟ್ರದಲ್ಲಿ ಅತಿ ಹೆಚ್ಚಿನದಾಗಿದೆ. ಅಪಘಾತಗಳು ಮುಖ್ಯವಾಗಿ ಕಿರಿದಾದ ರಸ್ತೆಗಳು ಮತ್ತು ಅಜಾಗರೂಕ ಚಾಲನೆಯ ಪರಿಣಾಮವಾಗಿದೆ.<ref>{{Cite news |author=Kumar KG |title=Accidentally notorious |work=The Hindu |date=22 September 2003 |access-date=11 November 2007 |url=https://www.thehindubusinessline.in/2003/09/22/stories/2003092201111300.htm |archive-date=10 August 2011 |archive-url=https://web.archive.org/web/20110810210809/http://www.thehindubusinessline.in/2003/09/22/stories/2003092201111300.htm |url-status=live }}</ref> ಕೇರಳದ ರಾಷ್ಟ್ರೀಯ ಹೆದ್ದಾರಿಗಳು ದೇಶದಲ್ಲಿ ಅತ್ಯಂತ ಕಿರಿದಾದವುಗಳಲ್ಲಿ ಸೇರಿವೆ ಮತ್ತು ಮುಂದಿನ ಭವಿಷ್ಯಕ್ಕೂ ಹಾಗೆಯೇ ಉಳಿಯುತ್ತವೆ, ಏಕೆಂದರೆ ರಾಜ್ಯ ಸರ್ಕಾರವು ಕಿರಿದಾದ ರಾಷ್ಟ್ರೀಯ ಹೆದ್ದಾರಿಗಳನ್ನು ಅನುಮತಿಸುವ ವಿನಾಯಿತಿಯನ್ನು ಪಡೆದುಕೊಂಡಿದೆ. ಕೇರಳದಲ್ಲಿ, ಹೆದ್ದಾರಿಗಳು {{convert|45|m|abbr=off}} ಅಗಲವಾಗಿವೆ. ಇತರ ರಾಜ್ಯಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ದರ್ಜೆಯಿಂದ ಪ್ರತ್ಯೇಕಿಸಲ್ಪಟ್ಟಿವೆ, {{convert|60|m|abbr=off}} ಅಗಲವಾಗಿದ್ದು ಕನಿಷ್ಠ ನಾಲ್ಕು ಪಥಗಳನ್ನು ಹೊಂದಿವೆ, ಜೊತೆಗೆ 6 ಅಥವಾ 8-ಪಥದ ಪ್ರವೇಶ-ನಿಯಂತ್ರಿತ ಎಕ್ಸ್ಪ್ರೆಸ್ವೇಗಳನ್ನು ಹೊಂದಿವೆ.<ref>{{cite web |url=https://www.indianexpress.com/news/kerala-parties-finally-toe-nhai-line-of-45m-wide-highways/661729/ |title=Kerala parties finally toe NHAI line of 45-m wide highways |work=Indian Express |date=18 August 2010 |access-date=25 September 2013}}</ref><ref>{{cite web |url=https://www.rediff.com/business/slide-show/slide-show-1-indias-13-super-highways/20110705.htm |title=Check out India's 13 super expressways |work=Rediff.com |date=5 July 2011 |access-date=25 September 2013 |archive-date=28 September 2013 |archive-url=https://web.archive.org/web/20130928024436/http://www.rediff.com/business/slide-show/slide-show-1-indias-13-super-highways/20110705.htm |url-status=live }}</ref> ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೇರಳ ಸರ್ಕಾರಕ್ಕೆ, ಕೇರಳದಲ್ಲಿ ಉತ್ತಮ ಹೆದ್ದಾರಿಗಳಿಗೆ ರಾಜಕೀಯ ಬದ್ಧತೆಯ ಕೊರತೆಯಿರುವುದರಿಂದ ಹೆದ್ದಾರಿ ಅಭಿವೃದ್ಧಿಯಲ್ಲಿ ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಬೆದರಿಕೆ ಹಾಕಿದೆ.<ref>{{Cite news |title=Kerala against development of five NHs |url=https://www.thehindu.com/news/national/kerala/kerala-against-development-of-five-nhs/article4555024.ece |url-access=subscription |newspaper=[[The Hindu]] |date=28 March 2013 |access-date=29 September 2024 |archive-date=4 December 2024 |archive-url=https://web.archive.org/web/20241204153945/https://www.thehindu.com/news/national/kerala/kerala-against-development-of-five-nhs/article4555024.ece |url-status=live }}</ref> ೨೦೧೩ ರಂತೆ, ಕೇರಳವು ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ದರವನ್ನು ಹೊಂದಿತ್ತು, ಹೆಚ್ಚಿನ ಮಾರಣಾಂತಿಕ ಅಪಘಾತಗಳು ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ.<ref>{{Cite news |url=https://www.thehindu.com/todays-paper/tp-national/tp-kerala/states-troubled-highways-a-shocking-revelation-for-centre/article4865464.ece |title=State's troubled highways a shocking revelation for Centre |journal=The Hindu |date=30 June 2013 |access-date=25 September 2013 |author=Staff Reporter}}</ref>
=== ರೈಲುಮಾರ್ಗಗಳು ===
{{Main|ಕೇರಳದ ರೈಲು ನಿಲ್ದಾಣಗಳ ಪಟ್ಟಿ}}
{{See also|ಕೊಚ್ಚಿ ಮೆಟ್ರೋ}}
[[ಭಾರತೀಯ ರೈಲ್ವೆ]]ಯ [[ದಕ್ಷಿಣ ರೈಲ್ವೆ]] ವಲಯವು [[ಇಡುಕ್ಕಿ ಜಿಲ್ಲೆ|ಇಡುಕ್ಕಿ]] ಮತ್ತು [[ವಯನಾಡು ಜಿಲ್ಲೆ|ವಯನಾಡು]] ಎತ್ತರದ ಜಿಲ್ಲೆಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರಮುಖ ಪಟ್ಟಣಗಳು ಮತ್ತು ನಗರಗಳನ್ನು ಸಂಪರ್ಕಿಸುವ ರಾಜ್ಯದ ಎಲ್ಲಾ ರೈಲು ಮಾರ್ಗಗಳನ್ನು ನಿರ್ವಹಿಸುತ್ತದೆ.<ref>{{cite web |title=Introduction |url=https://khsrcl.com/downloads/ch-1.pdf |publisher=Delhi Metro Rail Corporation |access-date=18 November 2012 |url-status=dead |archive-url=https://web.archive.org/web/20120906213234/https://khsrcl.com/downloads/ch-1.pdf |archive-date=6 September 2012}}</ref> ರಾಜ್ಯದ ರೈಲು ಜಾಲವು [[ದಕ್ಷಿಣ ರೈಲ್ವೆ ವಲಯ|ದಕ್ಷಿಣ ರೈಲ್ವೆಯ]] ಆರು ವಿಭಾಗಗಳಲ್ಲಿ ಎರಡರ ನಿಯಂತ್ರಣದಲ್ಲಿದೆ; [[ತಿರುವನಂತಪುರ]] ಮೂಲಸ್ಥಾನವನ್ನು ಹೊಂದಿರುವ [[ತಿರುವನಂತಪುರ ರೈಲ್ವೆ ವಿಭಾಗ]] ಮತ್ತು [[ಪಾಲಕ್ಕಾಡ್]] ಮೂಲಸ್ಥಾನವನ್ನು ಹೊಂದಿರುವ [[ಪಾಲಕ್ಕಾಡ್ ರೈಲ್ವೆ ವಿಭಾಗ]].<ref>{{cite web |title=The Zonal Dream Of Railway Kerala |url=https://www.yentha.com/news/view/features/the-zonal-dream-of-railway-kerala |work=yentha.com |access-date=18 November 2012 |archive-url=https://web.archive.org/web/20121025033001/https://www.yentha.com/news/view/features/the-zonal-dream-of-railway-kerala |archive-date=25 October 2012 |url-status=dead}}</ref> [[ತಿರುವನಂತಪುರ ಸೆಂಟ್ರಲ್]] (TVC) ರಾಜ್ಯದ ಅತಿ ಜನನಿಬಿಡ ರೈಲು ನಿಲ್ದಾಣವಾಗಿದೆ.<ref>{{Cite news |url=https://www.thehindu.com/todays-paper/tp-national/tp-kerala/article1807051.ece |title=Thiruvananthapuram Central to be made a world-class station |date=7 March 2007 |newspaper=The Hindu |language=en-IN |issn=0971-751X |access-date=8 May 2016}}</ref> ಕೇರಳದ ಪ್ರಮುಖ ರೈಲು ನಿಲ್ದಾಣಗಳು:
{{columns-list|colwidth=19em|
* [[ತಿರುವನಂತಪುರ ಸೆಂಟ್ರಲ್]] (TVC)
* [[ಎರ್ನಾಕುಳಂ ಜಂಕ್ಷನ್ ರೈಲು ನಿಲ್ದಾಣ|ಎರ್ನಾಕುಳಂ ಜಂಕ್ಷನ್ (ದಕ್ಷಿಣ)]] (ERS)
* [[ಕೋಝಿಕೋಡ್ ರೈಲು ನಿಲ್ದಾಣ|ಕೋಝಿಕೋಡ್]] (CLT)
* [[ಕೊಲ್ಲಂ ಜಂಕ್ಷನ್ ರೈಲು ನಿಲ್ದಾಣ|ಕೊಲ್ಲಂ ಜಂಕ್ಷನ್]] (QLN)
* [[ತೃಶೂರ್ ರೈಲು ನಿಲ್ದಾಣ|ತೃಶೂರ್]] (TCR)
* [[ಪಾಲಕ್ಕಾಡ್ ಜಂಕ್ಷನ್]] (PGT)
* [[ಕಣ್ಣೂರು ರೈಲು ನಿಲ್ದಾಣ|ಕಣ್ಣೂರು]] (CAN)
* [[ಶೊರಾನೂರು ಜಂಕ್ಷನ್]] (SRR)
* [[ಎರ್ನಾಕುಳಂ ಟೌನ್]] (ಉತ್ತರ) (ERN)
* [[ಕೋಟ್ಟಯಂ ರೈಲು ನಿಲ್ದಾಣ|ಕೋಟ್ಟಯಂ]] (KTYM)
* [[ಚೆಂಗನ್ನೂರು ರೈಲು ನಿಲ್ದಾಣ|ಚೆಂಗನ್ನೂರು]] (CNGR)
* [[ಆಲಪ್ಪುಳ ರೈಲು ನಿಲ್ದಾಣ|ಆಲಪ್ಪುಳ]] (ALLP)
* [[ತಿರುವನಂತಪುರ ಉತ್ತರ ರೈಲು ನಿಲ್ದಾಣ|ತಿರುವನಂತಪುರ ಉತ್ತರ]] (TVCN)
* [[ಕಾಯಂಕುಲಂ]] ಜಂಕ್ಷನ್ (KYJ)
* [[ತಿರೂರ್ ರೈಲು ನಿಲ್ದಾಣ|ತಿರೂರ್]] (TIR)
* [[ಕಾಸರಗೋಡು ರೈಲು ನಿಲ್ದಾಣ|ಕಾಸರಗೋಡು]] (KGQ)
* [[ಆಲುವಾ ರೈಲು ನಿಲ್ದಾಣ|ಆಲುವಾ]] (AWY)
* [[ತಲಶ್ಶೇರಿ]] (TLY)}}
=== ವಿಮಾನ ನಿಲ್ದಾಣಗಳು ===
{{Main|ಕೇರಳ ರಾಜ್ಯದ ವಿಮಾನ ನಿಲ್ದಾಣಗಳ ಪಟ್ಟಿ}}
[[File:Cochin International Airport Limited.jpg|right|thumb|[[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]], ರಾಜ್ಯದ ಅತಿ ಜನನಿಬಿಡ ವಿಮಾನ ನಿಲ್ದಾಣವು ಸೌರಶಕ್ತಿಯಿಂದ ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ]]
ಕೇರಳವು ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ: {{Cast listing|
* [[ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
}}
ಮದ್ರಾಸ್ ಪ್ರೆಸಿಡೆನ್ಸಿಯಡಿಯಲ್ಲಿ ಸ್ಥಾಪಿಸಲಾದ [[ಕೊಲ್ಲಂ ವಿಮಾನ ನಿಲ್ದಾಣ]]ವು ನಂತರ ಮುಚ್ಚಲ್ಪಟ್ಟಿತು, ಇದು ಕೇರಳದ ಮೊದಲ ವಿಮಾನ ನಿಲ್ದಾಣವಾಗಿತ್ತು.<ref>{{Cite news |url=https://www.thehindu.com/todays-paper/tp-national/tp-kerala/article252269.ece |title=Aviation school proposal evokes mixed response |journal=The Hindu |date=8 June 2009 |access-date=21 July 2015 |archive-date=20 December 2016 |archive-url=https://web.archive.org/web/20161220075251/http://www.thehindu.com/todays-paper/tp-national/tp-kerala/article252269.ece |url-status=live }}</ref> [[ಕಣ್ಣೂರು]] 1935 ರಷ್ಟು ಹಿಂದೆಯೇ ವಾಣಿಜ್ಯ ವಿಮಾನಯಾನಕ್ಕೆ ಬಳಸಲ್ಪಟ್ಟ ವಿಮಾನ ನಿಲ್ದಾಣವನ್ನು ಹೊಂದಿತ್ತು, [[ಟಾಟಾ ಗ್ರೂಪ್|ಟಾಟಾ]] ಏರ್ಲೈನ್ಸ್ [[ಮುಂಬೈ]] ಮತ್ತು ತಿರುವನಂತಪುರ ನಡುವೆ ಸಾಪ್ತಾಹಿಕ ವಿಮಾನಗಳನ್ನು ನಡೆಸುತ್ತಿತ್ತು – [[ಗೋವಾ]] ಮತ್ತು ಕಣ್ಣೂರಿನಲ್ಲಿ ನಿಲ್ಲುತ್ತಿತ್ತು.<ref>{{cite news |author=Sudhakaran, P |url=https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |title=Kannur flew, way before its first airport |newspaper=The Times of India |date=14 September 2015 |publisher=Timesofindia.indiatimes.com |access-date=13 November 2020 |url-status=live |archive-url=https://web.archive.org/web/20170518022943/https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |archive-date=18 May 2017}}</ref> ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ವಿಮಾನ ನಿಲ್ದಾಣ ಪ್ರಾಧಿಕಾರ]]ದಿಂದ ನಿರ್ವಹಿಸಲ್ಪಡುತ್ತದೆ, ಇದು ದಕ್ಷಿಣ ಭಾರತದ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. 1988 ರಲ್ಲಿ ತೆರೆಯಲ್ಪಟ್ಟ [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ವು ಕೇರಳದ ಎರಡನೇ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣ ಮತ್ತು [[ಮಲಬಾರ್ ಪ್ರದೇಶ|ಮಲಬಾರ್ ಪ್ರದೇಶದಲ್ಲಿ]] ಅತ್ಯಂತ ಹಳೆಯದಾಗಿದೆ.<ref>{{cite news |url=https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |work=The Times of India |title=Silver jubilee does not bring cheer to Karipur airport users |date=2 April 2012 |archive-date=4 June 2021 |access-date=7 February 2022 |archive-url=https://web.archive.org/web/20210604110846/https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಜ್ಯದಲ್ಲಿ ಅತಿ ಜನನಿಬಿಡವಾಗಿದೆ ಮತ್ತು [[ಭಾರತದ ಅತಿ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ|ದೇಶದಲ್ಲಿ ಏಳನೇ ಅತಿ ಜನನಿಬಿಡವಾಗಿದೆ]]. ಇದು [[CIAL ಸೌರಶಕ್ತಿ ಯೋಜನೆ|ಸೌರಶಕ್ತಿಯಿಂದ]] ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ<ref name="BBC">{{cite news |last=Menon |first=Supriya |url=https://www.bbc.com/news/world-asia-india-34421419 |title=How is the world's first solar-powered airport faring? – BBC News |publisher=Bbc.com |date=9 October 2015 |access-date=21 December 2018 |work=BBC News |archive-date=25 May 2023 |archive-url=https://web.archive.org/web/20230525214353/https://www.bbc.com/news/world-asia-india-34421419 |url-status=live }}</ref> ಮತ್ತು [[ಸಂಯುಕ್ತ ರಾಷ್ಟ್ರಗಳು]] ಸ್ಥಾಪಿಸಿದ ಅತ್ಯುನ್ನತ ಪರಿಸರ ಗೌರವವಾದ [[ಚಾಂಪಿಯನ್ಸ್ ಆಫ್ ದಿ ಅರ್ಥ್|ಚಾಂಪಿಯನ್ ಆಫ್ ದಿ ಅರ್ಥ್]] ಪ್ರಶಸ್ತಿಯನ್ನು ಗೆದ್ದುಕೊಂಡಿದೆ.<ref name="UN">{{cite news |url=https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |title=CIAL chosen for UN environmental honour |newspaper=[[The New Indian Express]] |date=26 July 2018 |archive-date=7 April 2023 |access-date=7 February 2022 |archive-url=https://web.archive.org/web/20230407102227/https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಪಬ್ಲಿಕ್ ಲಿಮಿಟೆಡ್ ಕಂಪನಿ]]ಯಾಗಿ ಸೇರಿಸಲ್ಪಟ್ಟ ಮೊದಲ ಭಾರತೀಯ ವಿಮಾನ ನಿಲ್ದಾಣವಾಗಿದೆ; ಇದನ್ನು 30 ದೇಶಗಳ ಸುಮಾರು 10,000 [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಅನಿವಾಸಿ ಭಾರತೀಯರು]] ಹಣಕಾಸು ಒದಗಿಸಿದ್ದಾರೆ.<ref>{{Cite news |title=The three airports in Kerala can be in business without affecting each other |publisher=[[Rediff.com|Rediff]] |date=6 December 1999 |access-date=11 November 2007 |url=https://www.rediff.com/business/1999/dec/06inter.htm |archive-date=20 January 2008 |archive-url=https://web.archive.org/web/20080120015042/http://www.rediff.com/business/1999/dec/06inter.htm |url-status=live }}</ref>
ನಾಗರಿಕ ವಿಮಾನ ನಿಲ್ದಾಣಗಳ ಜೊತೆಗೆ, [[ಕೊಚ್ಚಿ]] [[INS ಗರುಡ]] ಎಂಬ ನೌಕಾ ವಿಮಾನ ನಿಲ್ದಾಣವನ್ನು ಹೊಂದಿದೆ. ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಭಾರತೀಯ ವಾಯುಪಡೆ]]ಯ ದಕ್ಷಿಣ ವಾಯು ಕಮಾಂಡ್ನೊಂದಿಗೆ ನಾಗರಿಕ ಸೌಲಭ್ಯಗಳನ್ನು ಹಂಚಿಕೊಳ್ಳುತ್ತದೆ. ಈ ಸೌಲಭ್ಯಗಳನ್ನು ಹೆಚ್ಚಾಗಿ ಕೇರಳಕ್ಕೆ ಭೇಟಿ ನೀಡುವ ಕೇಂದ್ರ ಸರ್ಕಾರದ VIP ಗಳು ಬಳಸುತ್ತಾರೆ.{{citation needed|date=October 2025}}
=== ಜಲ ಸಾರಿಗೆ ===
{{Main|ಕೇರಳದ ಬಂದರುಗಳು}}
{{See also|ಕೊಚ್ಚಿ ವಾಟರ್ ಮೆಟ್ರೋ}}[[File:Cochin Ship Yard Cranes.JPG|alt=|thumb|230px|[[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಕೊಚ್ಚಿ ಹಡಗು ನಿರ್ಮಾಣ ಕೇಂದ್ರದಲ್ಲಿ]] ಕ್ರೇನ್ಗಳು]]
ಕೇರಳವು [[ಕೇರಳದ ಬಂದರುಗಳು|ಎರಡು ಪ್ರಮುಖ ಬಂದರುಗಳು, ನಾಲ್ಕು ಮಧ್ಯಂತರ ಬಂದರುಗಳು, ಮತ್ತು 13 ಸಣ್ಣ ಬಂದರುಗಳನ್ನು]] ಹೊಂದಿದೆ, ಅವುಗಳಲ್ಲಿ 4 ವಲಸೆ ತಪಾಸಣಾ ಸೌಲಭ್ಯಗಳನ್ನು ಹೊಂದಿವೆ.<ref>{{cite web |url=https://www.thehindu.com/news/national/kerala/kollam-port-gets-icp-clearance/article68293607.ece |date=15 Jun 2024 |title=Kollam port gets ICP clearance |work=The Hindu |access-date=16 Jun 2024 |archive-date=16 June 2024 |archive-url=https://web.archive.org/web/20240616013704/https://www.thehindu.com/news/national/kerala/kollam-port-gets-icp-clearance/article68293607.ece |url-status=live }}</ref><ref>{{cite web |url=https://www.mha.gov.in/sites/default/files/2024-03/ICPList_05032024..pdf |date= |title=LIST OF IMMIGRATION CHECK POSTs |publisher=Ministry of Home Affairs - Govt. of India |access-date=16 Jun 2024 |archive-date=31 July 2024 |archive-url=https://web.archive.org/web/20240731204706/https://www.mha.gov.in/sites/default/files/2024-03/ICPList_05032024..pdf |url-status=live }}</ref> ರಾಜ್ಯದ ಪ್ರಮುಖ ಬಂದರು [[ಕೊಚ್ಚಿ ಬಂದರು|ಕೊಚ್ಚಿಯಲ್ಲಿದೆ]], ಇದು {{cvt|8.27|km2}} ವಿಸ್ತೀರ್ಣವನ್ನು ಹೊಂದಿದೆ.{{sfn|Chandran|2018|p=424}} [[ವಿಝಿನ್ಜಂ ಅಂತಾರಾಷ್ಟ್ರೀಯ ಸಮುದ್ರ ಬಂದರು ತಿರುವನಂತಪುರ]], ಇದನ್ನು ಪ್ರಸ್ತುತ ಪ್ರಮುಖ ಬಂದರಾಗಿ ವರ್ಗೀಕರಿಸಲಾಗಿದೆ, ಇತರೆ ನಿರ್ಮಾಣ ಹಂತದಲ್ಲಿರುವುದರಿಂದ ಹಂತ I ಮಾತ್ರ ಪೂರ್ಣಗೊಂಡಿದೆ.{{sfn|Chandran|2018|p=424}} ಇತರ ಮಧ್ಯಂತರ ಬಂದರುಗಳು [[ಬೇಪುರ]], [[ಕೊಲ್ಲಂ]], ಮತ್ತು [[ಅಝಿಕೋಡ್ ಮತ್ತು ಅಝಿಕ್ಕಲ್|ಅಝೀಕಲ್]].{{sfn|Chandran|2018|p=424}} ಉಳಿದ ಬಂದರುಗಳನ್ನು ಸಣ್ಣ ಬಂದರುಗಳಾಗಿ ವರ್ಗೀಕರಿಸಲಾಗಿದೆ, ಇವುಗಳಲ್ಲಿ [[ಮಂಜೇಶ್ವರಂ]], [[ಕಾಸರಗೋಡು]], [[ನೀಲೇಶ್ವರಂ]], [[ಕಣ್ಣೂರು]], [[ತಲಶ್ಶೇರಿ]], [[ವಡಕರ]], [[ಪೊನ್ನಾನಿ]], [[ಮುನಂಬಂ]], ಮನಕೋಡಂ, [[ಆಲಪ್ಪುಳ]], [[ಕಾಯಂಕುಲಂ]], [[ನೀಂದಕರ]], ಮತ್ತು [[ವಲಿಯತುರ]] ಸೇರಿವೆ.{{sfn|Chandran|2018|p=424}} [[ಕೇರಳ ಸಮುದ್ರ ಸಂಸ್ಥೆ]]ಯ ಪ್ರಧಾನ ಕಛೇರಿಯು [[ನೀಂದಕರ]]ದಲ್ಲಿದೆ, ಇದು [[ಕೊಡುಂಗಲ್ಲೂರು]] ನಲ್ಲಿ ಹೆಚ್ಚುವರಿ ಉಪಕೇಂದ್ರವನ್ನು ಸಹ ಹೊಂದಿದೆ.{{sfn|Chandran|2018|p=424}} ರಾಜ್ಯವು ಹಲವಾರು [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳನ್ನು]] ಹೊಂದಿದೆ, ಅವುಗಳನ್ನು ವಾಣಿಜ್ಯ [[ಒಳನಾಡಿನ ನ್ಯಾವಿಗೇಷನ್]] ಗೆ ಬಳಸಲಾಗುತ್ತದೆ. ಸಾರಿಗೆ ಸೇವೆಗಳನ್ನು ಮುಖ್ಯವಾಗಿ ದೇಶೀಯ ದೋಣಿಗಳು ಮತ್ತು ಪ್ರಯಾಣಿಕ ಹಡಗುಗಳು ಒದಗಿಸುತ್ತವೆ. ರಾಜ್ಯದಲ್ಲಿ 67 ನ್ಯಾವಿಗೇಬಲ್ ನದಿಗಳಿವೆ, ಒಳನಾಡಿನ ಜಲಮಾರ್ಗಗಳ ಒಟ್ಟು ಉದ್ದ {{convert|1687|km}} ಆಗಿದೆ.<ref name="google14">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA207 |access-date=18 November 2012 |year=2008 |publisher=Academic Foundation |isbn=978-8171885947 |page=207}}</ref> ಒಳನಾಡಿನ ನ್ಯಾವಿಗೇಷನ್ ವಿಸ್ತರಣೆಗೆ ಮುಖ್ಯ ಅಡೆತಡೆಗಳೆಂದರೆ; ಮಣ್ಣು ತುಂಬುವಿಕೆಯಿಂದ ಜಲಮಾರ್ಗಗಳಲ್ಲಿ ಆಳದ ಕೊರತೆ, ನ್ಯಾವಿಗೇಷನ್ ವ್ಯವಸ್ಥೆಗಳು ಮತ್ತು ದಂಡೆ ರಕ್ಷಣೆಯ ನಿರ್ವಹಣೆಯ ಕೊರತೆ, [[ನೀರಿನ ಹಯಸಿಂತ್]] ನ ವೇಗವರ್ಧಿತ ಬೆಳವಣಿಗೆ, ಆಧುನಿಕ ಒಳನಾಡಿನ ಕ್ರಾಫ್ಟ್ ಟರ್ಮಿನಲ್ಗಳ ಕೊರತೆ, ಮತ್ತು ಸರಕು ನಿರ್ವಹಣಾ ವ್ಯವಸ್ಥೆಯ ಕೊರತೆ.{{citation needed|date=October 2025}}
ಕೇರಳವು ಭಾರತದ ಮೊದಲ ಜಲ ಮೆಟ್ರೋವನ್ನು ಸಹ ಹೊಂದಿದೆ, ಇದನ್ನು 'ಕೊಚ್ಚಿ ವಾಟರ್ ಮೆಟ್ರೋ' ಎಂದು ಕರೆಯಲಾಗುತ್ತದೆ.<ref>{{Cite web |last=Prabhakaran |first=Aishwarya |date=2024-04-28 |title='Sustainable, scenic': Kochi Water Metro carves niche & new paths |url=https://www.newindianexpress.com/states/kerala/2024/Apr/28/sustainable-scenic-kochi-water-metro-carves-niche-new-paths |access-date=2025-03-08 |website=The New Indian Express |language=en}}</ref> ಕೊಚ್ಚಿ ವಾಟರ್ ಮೆಟ್ರೋ ಯೋಜನೆಯು 15 ಮಾರ್ಗಗಳನ್ನು ಗುರುತಿಸಿದೆ, 10 ದ್ವೀಪಗಳನ್ನು 78 ಕಿಮೀ ವ್ಯಾಪಿಸಿರುವ ಮಾರ್ಗಗಳ ಜಾಲದೊಂದಿಗೆ 78 ವೇಗದ ಮತ್ತು ಸಂಪೂರ್ಣವಾಗಿ ವಿದ್ಯುತ್ ಚಾಲಿತ ಹೈಬ್ರಿಡ್ ದೋಣಿಗಳ ತಂಡದೊಂದಿಗೆ ಸಂಪರ್ಕಿಸುತ್ತದೆ.<ref>{{Cite web |title=Kochi Water Metro {{!}} About Us |url=https://watermetro.co.in/about |access-date=2025-03-08 |website=Kochi Water Metro |language=en}}</ref>
{{convert|616|km}} ಉದ್ದದ ಪಶ್ಚಿಮ-ಕರಾವಳಿ ಕಾಲುವೆಯು [[ಕಾಸರಗೋಡು]]ವನ್ನು [[ಪೂವಾರ್]] ಗೆ ಸಂಪರ್ಕಿಸುವ ರಾಜ್ಯದ ಅತಿ ಉದ್ದದ ಜಲಮಾರ್ಗವಾಗಿದೆ.{{sfn|Chandran|2018|p=423}} ಇದನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ: {{convert|41|km}} ಉದ್ದದ [[ಕಾಸರಗೋಡು]]-[[ನೀಲೇಶ್ವರಂ]] ವ್ಯಾಪ್ತಿ, {{convert|188|km}} ಉದ್ದದ [[ನೀಲೇಶ್ವರಂ]]-[[ಕೋಝಿಕೋಡ್]] ವ್ಯಾಪ್ತಿ, {{convert|160|km}} [[ಕೋಝಿಕೋಡ್]]-[[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]] ವ್ಯಾಪ್ತಿ, {{convert|168|km}} ಉದ್ದದ [[ರಾಷ್ಟ್ರೀಯ ಜಲಮಾರ್ಗ 3]] ([[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]]-[[ಕೊಲ್ಲಂ]] ವ್ಯಾಪ್ತಿ), ಮತ್ತು {{convert|74|km}} ಉದ್ದದ [[ಕೊಲ್ಲಂ]]-[[ವಿಝಿನ್ಜಂ]] ವ್ಯಾಪ್ತಿ.<ref name="eco" /> ಪಶ್ಚಿಮ-ಕರಾವಳಿ ಕಾಲುವೆಯ ಒಂದು ಭಾಗವಾದ [[ಕೊನೊಲ್ಲಿ ಕಾಲುವೆ]]ಯು [[ಕೋಝಿಕೋಡ್]] ನಗರವನ್ನು [[ಪೊನ್ನಾನಿ]] ಮೂಲಕ [[ಕೊಚ್ಚಿ]] ಗೆ ಸಂಪರ್ಕಿಸುತ್ತದೆ, [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಮತ್ತು [[ತೃಶೂರ್ ಜಿಲ್ಲೆ|ತೃಶೂರ್]] ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು [[ವಡಕರ]] ದಲ್ಲಿ ಪ್ರಾರಂಭವಾಗುತ್ತದೆ.<ref name="hindu_jan08" /> ಇದನ್ನು 1848 ರಲ್ಲಿ ಆಗಿನ [[ಮಲಬಾರ್ ಜಿಲ್ಲೆ|ಮಲಬಾರಿನ]] [[ಜಿಲ್ಲಾ ಕಲೆಕ್ಟರ್]] ಎಚ್. ವಿ. ಕೊನೊಲ್ಲಿ ಅವರ ಆದೇಶದಂತೆ ನಿರ್ಮಿಸಲಾಯಿತು, ಆರಂಭದಲ್ಲಿ ಮಲಬಾರಿನ ಒಳನಾಡಿನಿಂದ [[ಕುಟ್ಟಿಯಾಡಿ]] ಮತ್ತು [[ಕೊರಪುಳ]] ನದಿ ವ್ಯವಸ್ಥೆಗಳ ಮೂಲಕ [[ಕಲ್ಲಾಯಿ]] ಬಂದರಿಗೆ ಸರಕುಗಳ ಚಲನೆಯನ್ನು ಸುಗಮಗೊಳಿಸಲು.<ref name="hindu_jan08">{{cite news |url=https://www.hindu.com/pp/2008/01/05/stories/2008010550730300.htm |archive-url=https://web.archive.org/web/20100923092718/https://www.hindu.com/pp/2008/01/05/stories/2008010550730300.htm |url-status=dead |archive-date=23 September 2010 |title=Reviving the historic Canoly Canal |date=5 January 2005 |work=[[The Hindu]] |access-date=16 August 2009}}</ref> ಒಂದು ಶತಮಾನಕ್ಕೂ ಹೆಚ್ಚು ಕಾಲ ಕೋಝಿಕೋಡ್ ಮತ್ತು ಕೊಚ್ಚಿ ನಡುವೆ [[ಪೊನ್ನಾನಿ]] ಮೂಲಕ ಸರಕು ಸಾಗಣೆಗೆ ಇದು ಮುಖ್ಯ ಜಲಮಾರ್ಗವಾಗಿತ್ತು.<ref name="hindu_jan08" /> ಕೇರಳದ ಇತರ ಪ್ರಮುಖ ಜಲಮಾರ್ಗಗಳಲ್ಲಿ [[ಆಲಪ್ಪುಳ]]-[[ಚಂಗನಾಶ್ಶೇರಿ]] ಕಾಲುವೆ, [[ಆಲಪ್ಪುಳ]]-[[ಕೋಟ್ಟಯಂ]]-[[ಅತಿರಂಪುಳ]] ಕಾಲುವೆ, ಮತ್ತು [[ಕೋಟ್ಟಯಂ]]-[[ವೈಕೋಂ]] ಕಾಲುವೆ ಸೇರಿವೆ.{{sfn|Chandran|2018|p=424}}
== ಜನಸಂಖ್ಯಾಶಾಸ್ತ್ರ ==
{{Main|ಕೇರಳದ ಜನಸಂಖ್ಯಾಶಾಸ್ತ್ರ}}
{{See also|ಕೇರಳದ ಜನಾಂಗೀಯ ಗುಂಪುಗಳು|ಕೇರಳದ ಜನರ ಪಟ್ಟಿ}}
[[File:Kerala Population Pyramid in 5-year age groups (2011 census).png|thumbnail|ಕೇರಳದ [[ಜನಸಂಖ್ಯಾ ಪಿರಮಿಡ್]]]]
ಕೇರಳವು ಭಾರತದ ಜನಸಂಖ್ಯೆಯ 2.8% ರಷ್ಟಿದೆ; 859 ವ್ಯಕ್ತಿಗಳ ಪ್ರತಿ km<sup>2</sup> ಸಾಂದ್ರತೆಯೊಂದಿಗೆ, ಅದರ ಭೂಮಿಯು ರಾಷ್ಟ್ರೀಯ ಸರಾಸರಿ 370 ವ್ಯಕ್ತಿಗಳ ಪ್ರತಿ km<sup>2</sup> ಗಿಂತ ಸುಮಾರು ಮೂರು ಪಟ್ಟು ಹೆಚ್ಚು ಜನನಿಬಿಡವಾಗಿದೆ.<ref name="Census 2011">{{cite web |title=Size, Growth Rate and Distribution of Population |url=https://www.censusindia.gov.in/2011-prov-results/data_files/india/Final_PPT_2011_chapter3.pdf |website=Census 2011 |publisher=Government of India |access-date=13 November 2015 |archive-date=23 September 2015 |archive-url=https://web.archive.org/web/20150923224858/http://www.censusindia.gov.in/2011-prov-results/data_files/india/Final_PPT_2011_chapter3.pdf |url-status=live }}</ref> 2011 ರಂತೆ, ತಿರುವನಂತಪುರವು ಕೇರಳದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ.<ref name="Census2011cities">{{cite web|title=Provisional Population Totals, Census of India 2011|url=http://urbanaffairskerala.org/images/downloads/ulb_population2011.pdf|work=Population of the urban local bodies in Kerala (2011)|publisher=Government of Kerala|accessdate=4 December 2020|archive-date=24 September 2020|archive-url=https://web.archive.org/web/20200924173424/http://urbanaffairskerala.org/images/downloads/ulb_population2011.pdf|url-status=dead}}</ref> ರಾಜ್ಯದಲ್ಲಿ, ಜನಸಂಖ್ಯಾ ಬೆಳವಣಿಗೆಯ ಪ್ರಮಾಣವು ಭಾರತದಲ್ಲಿ ಅತ್ಯಂತ ಕಡಿಮೆಯಾಗಿದೆ, ಮತ್ತು 2011 ರಲ್ಲಿ 4.9% ರಷ್ಟಿರುವ ದಶಕೀಯ ಬೆಳವಣಿಗೆಯು ಅಖಿಲ ಭಾರತ ಸರಾಸರಿ 17.6% ರಷ್ಟಕ್ಕಿಂತ ಕಡಿಮೆಯಾಗಿದೆ.<ref name="Census 2011" /> ಕೇರಳದ ಜನಸಂಖ್ಯೆಯು 1951 ಮತ್ತು 1991 ರ ನಡುವೆ ಎರಡು ಪಟ್ಟು ಹೆಚ್ಚಾಗಿ 15.6 ಮಿಲಿಯನ್ ಜನರನ್ನು ಸೇರಿಸಿ 1991 ರಲ್ಲಿ 29.1 ಮಿಲಿಯನ್ ನಿವಾಸಿಗಳನ್ನು ತಲುಪಿತು; 2011 ರ ವೇಳೆಗೆ ಜನಸಂಖ್ಯೆಯು 33.3 ಮಿಲಿಯನ್ ಆಗಿತ್ತು.<ref name="Census 2011" /> ಕೇರಳದ ಕರಾವಳಿ ಪ್ರದೇಶಗಳು 2022 ವ್ಯಕ್ತಿಗಳ ಪ್ರತಿ km<sup>2</sup> ಜನಸಂಖ್ಯೆಯೊಂದಿಗೆ ಅತಿ ಹೆಚ್ಚು ಜನನಿಬಿಡವಾಗಿವೆ, ಇದು ರಾಜ್ಯದ ಒಟ್ಟಾರೆ ಜನಸಂಖ್ಯಾ ಸಾಂದ್ರತೆ 859 ವ್ಯಕ್ತಿಗಳ ಪ್ರತಿ km<sup>2</sup> ಗಿಂತ 2.5 ಪಟ್ಟು ಹೆಚ್ಚಾಗಿದ್ದು, ಪೂರ್ವದ ಬೆಟ್ಟಗಳು ಮತ್ತು ಪರ್ವತಗಳನ್ನು ತುಲನಾತ್ಮಕವಾಗಿ ವಿರಳವಾಗಿ ಜನಸಂಖ್ಯೆ ಹೊಂದಿರುವಂತೆ ಬಿಡುತ್ತದೆ.<ref name="kerala_fact_sheet">{{cite book |url=https://www.ncscm.org/cms/geo/pdf/research/kerala_fact_sheet.pdf |title=Shoreline change assessment for Kerala coast |publisher=National Centre for Sustainable Coastal Management, Ministry of Environment and Forests |author1=R Ramesh |author2=R Purvaja |author3=A Senthil Vel |access-date=30 May 2015 |archive-date=30 May 2015 |archive-url=https://web.archive.org/web/20150530204904/http://www.ncscm.org/cms/geo/pdf/research/kerala_fact_sheet.pdf |url-status=dead }}</ref> ಕೇರಳವು [[2011 ರ ಭಾರತದ ಜನಗಣತಿ]]ಯ ಪ್ರಕಾರ [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ ಪ್ರಮುಖ ರಾಜ್ಯವಾಗಿದ್ದು]] [[ಕೇರಳದಲ್ಲಿನ ನಗರ ಪ್ರದೇಶದ ಬೆಳವಣಿಗೆಯ ಪ್ರಕಾರ ನಗರಗಳ ಪಟ್ಟಿ|47.7% ನಗರ ಜನಸಂಖ್ಯೆಯನ್ನು]] ಹೊಂದಿದೆ.<ref name="ubn">{{Cite web |url=https://mohua.gov.in/cms/level-of-urbanisation.php |title=Level of Urbanisation in Indian States |date= |website=mohua.gov.in |publisher=Ministry of Housing and Urban Affairs, Government of India |access-date=7 February 2022 |archive-date=7 February 2022 |archive-url=https://web.archive.org/web/20220207105118/https://mohua.gov.in/cms/level-of-urbanisation.php |url-status=live }}</ref> ಸುಮಾರು 31.8 ಮಿಲಿಯನ್ ಕೇರಳೀಯರು ಪ್ರಧಾನವಾಗಿ ಮಲಯಾಳಿಗಳಾಗಿದ್ದಾರೆ.<ref name="Census 2011" /> ರಾಜ್ಯದ 321,000 ಸ್ಥಳೀಯ ಬುಡಕಟ್ಟು ''[[ಆದಿವಾಸಿ]]''ಗಳು, ಜನಸಂಖ್ಯೆಯ 1.1%, ಪೂರ್ವದಲ್ಲಿ ಕೇಂದ್ರೀಕೃತವಾಗಿವೆ.<ref name="Kalathil_2004">{{Cite book |author=Kalathil MJ |year=2004 |veditors=Nair PR, Shaji H |title=Withering Valli: Alienation, Degradation, and Enslavement of Tribal Women in Attappady |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621690 |url=https://www.cds.ac.in/krpcds/publication/downloads/66.pdf |access-date=29 December 2008 |archive-date=30 May 2015 |archive-url=https://web.archive.org/web/20150530205641/http://www.cds.ac.in/krpcds/publication/downloads/66.pdf |url-status=live }}</ref>{{rp|10–12}}
=== ಲಿಂಗ ===
ಕೇರಳದಲ್ಲಿ ಮಾತೃವಂಶೀಯ ಅನುವಂಶಿಕತೆಯ ಸಂಪ್ರದಾಯವಿದೆ, ಅಲ್ಲಿ ತಾಯಿ ಮನೆಯ ಮುಖ್ಯಸ್ಥೆಯಾಗಿರುತ್ತಾಳೆ.<ref>{{Cite web |date=5 March 2017 |title=International Women's Day 2017: Kerala and the myth of matriarchy |url=https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |access-date=16 July 2021 |website=Firstpost |archive-date=16 July 2021 |archive-url=https://web.archive.org/web/20210716051101/https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |url-status=live }}</ref> ಪರಿಣಾಮವಾಗಿ, ಕೇರಳದ ಮಹಿಳೆಯರು ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಮತ್ತು ಪ್ರಭಾವವನ್ನು ಹೊಂದಿದ್ದಾರೆ. ಇದು ಕೆಲವು ಪ್ರಭಾವಶಾಲಿ ಜಾತಿಗಳಲ್ಲಿ ಸಾಮಾನ್ಯವಾಗಿತ್ತು ಮತ್ತು ಹೆಣ್ಣು ಮಕ್ಕಳಿಗೆ ನೀಡಲಾಗುವ ಮೌಲ್ಯದಲ್ಲಿ ಒಂದು ಅಂಶವಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಬಡ ಕುಟುಂಬಗಳ ಹುಡುಗಿಯರಿಗೆ ಶಾಲೆಗಳನ್ನು ಪ್ರಾರಂಭಿಸಿದ ಕಾರಣ ಅವರು ಮಲಯಾಳಿ ಮಹಿಳೆಯರ ಮೇಲೆ ಪ್ರಭಾವ ಬೀರಿದರು.<ref>{{cite journal |author1-link=Tomila Lankina|author1=Lankina |author2=Tomila V. |author3=Getachew, Lullit |year=2013 |url=https://researchonline.lse.ac.uk/id/eprint/44929/ |title=Competitive religious entrepreneurs: Christian missionaries and female education in colonial and post-colonial India |journal=British Journal of Political Science |volume=43 |pages=103–31 |doi=10.1017/s0007123412000178 |s2cid=145185494 |archive-date=25 February 2021 |access-date=2 February 2016 |archive-url=https://web.archive.org/web/20210225144811/https://researchonline.lse.ac.uk/id/eprint/44929/ |url-status=live }}</ref> ಶಿಕ್ಷಣ ಮತ್ತು ಲಾಭದಾಯಕ ಉದ್ಯೋಗದಂತಹ ಮಹಿಳೆಯರಿಗೆ ಅವಕಾಶಗಳು ಸಾಮಾನ್ಯವಾಗಿ ಕಡಿಮೆ ಜನನ ದರಕ್ಕೆ ಕಾರಣವಾಗುತ್ತವೆ,<ref>{{Cite web |last=ലേഖകൻ |first=മാധ്യമം |date=10 July 2021 |title=ജനസംഖ്യാദിനം; അറിയാം 21 കാര്യങ്ങൾ|url=https://www.madhyamam.com/velicham/special-stories/july-11-world-population-day-821671 |access-date=16 July 2021 |website=Madhyamam |language=en |archive-date=16 July 2021 |archive-url=https://web.archive.org/web/20210716051106/https://www.madhyamam.com/velicham/special-stories/july-11-world-population-day-821671 |url-status=live }}</ref> ಇದು ಪ್ರತಿಯಾಗಿ, ಶಿಕ್ಷಣ ಮತ್ತು ಉದ್ಯೋಗವನ್ನು ಮಹಿಳೆಯರಿಗೆ ಹೆಚ್ಚು ಪ್ರವೇಶಿಸುವಂತೆ ಮತ್ತು ಹೆಚ್ಚು ಪ್ರಯೋಜನಕಾರಿಯಾಗಿಸುತ್ತದೆ. ಇದು ಸಮುದಾಯದ ಮಹಿಳೆಯರು ಮತ್ತು ಮಕ್ಕಳಿಗಾಗಿ ಮೇಲ್ಮುಖವಾದ ಸುರುಳಿಯನ್ನು ಸೃಷ್ಟಿಸುತ್ತದೆ, ಅದು ಮುಂದಿನ ಪೀಳಿಗೆಗೆ ರವಾನಿಸಲ್ಪಡುತ್ತದೆ. 1996 ರ ಮಾನವ ಅಭಿವೃದ್ಧಿ ವರದಿಯ ಪ್ರಕಾರ, ಕೇರಳದ [[ಲಿಂಗ ಅಭಿವೃದ್ಧಿ ಸೂಚ್ಯಂಕ]] 597 ಆಗಿತ್ತು; ಇದು ಭಾರತದ ಯಾವುದೇ ರಾಜ್ಯಕ್ಕಿಂತ ಹೆಚ್ಚಾಗಿತ್ತು. ಹೆಚ್ಚಿನ ಮಹಿಳಾ ಸಾಕ್ಷರತೆ, ಶಿಕ್ಷಣ, ಕೆಲಸದ ಭಾಗವಹಿಸುವಿಕೆ ಮತ್ತು ಜೀವಿತಾವಧಿಯ ಪ್ರಮಾಣಗಳು, ಅನುಕೂಲಕರ [[ಮಾನವ ಲಿಂಗಾನುಪಾತ|ಲಿಂಗಾನುಪಾತ]]ದ ಜೊತೆಗೆ, ಅದಕ್ಕೆ ಕೊಡುಗೆ ನೀಡಿವೆ.<ref name="Joseph">{{cite book |author=Ammu Joseph |editor=Oommen M.A. |year=1999 |title=Rethinking Development: Kerala's Development Experience |publisher=Concept Publishing Company |isbn=978-8170227656 |url=https://books.google.com/books?id=lzV3bQh-L94C |pages=479–86 |access-date=30 May 2015}}</ref>
ಕೇರಳದ ಲಿಂಗಾನುಪಾತ 1.084 (ಸ್ತ್ರೀಯರು ಪುರುಷರಿಗೆ) ಭಾರತದ ಉಳಿದ ಭಾಗಗಳಿಗಿಂತ ಹೆಚ್ಚಾಗಿದೆ; ಮಹಿಳೆಯರು ಪುರುಷರನ್ನು ಮೀರಿಸುವ ಏಕೈಕ ರಾಜ್ಯವಾಗಿದೆ.<ref name="Tharamangalam_2005" />{{rp|2}} ಶಿಕ್ಷಣವು ಒದಗಿಸುವ ಅವಕಾಶಗಳನ್ನು ಹೊಂದಿರುವಾಗ, ಉದಾಹರಣೆಗೆ ರಾಜಕೀಯ ಭಾಗವಹಿಸುವಿಕೆ, ಪ್ರಸ್ತುತ ಘಟನೆಗಳೊಂದಿಗೆ ನವೀಕೃತವಾಗಿರುವುದು, ಧಾರ್ಮಿಕ ಗ್ರಂಥಗಳನ್ನು ಓದುವುದು ಇತ್ಯಾದಿ, ಈ ಉಪಕರಣಗಳು ಇನ್ನೂ ಕೇರಳದ ಮಹಿಳೆಯರಿಗೆ ಸಂಪೂರ್ಣ, [[ಮಹಿಳೆಯರ ಹಕ್ಕುಗಳು|ಸಮಾನ ಹಕ್ಕುಗಳಾಗಿ]] ಅನುವಾದಗೊಂಡಿಲ್ಲ. ಮಹಿಳೆಯರನ್ನು ಅವರ ಸ್ವಂತ ಪ್ರಯೋಜನಕ್ಕಾಗಿ ನಿರ್ಬಂಧಿಸಬೇಕು ಎಂಬ ಸಾಮಾನ್ಯ ಮನೋಭಾವವಿದೆ. ರಾಜ್ಯದಲ್ಲಿ, ಸಾಮಾಜಿಕ ಪ್ರಗತಿಯ ಹೊರತಾಗಿಯೂ, ಲಿಂಗವು ಇನ್ನೂ [[ಸಾಮಾಜಿಕ ಚಲನಶೀಲತೆ]] ಯ ಮೇಲೆ ಪ್ರಭಾವ ಬೀರುತ್ತದೆ.<ref>Brenda Maddox mentions in: Maddox, Brenda. "A Marxist Paradise For Women?" New Statesman. (London, England: 1996) 128 no4440 30 January 14, 1999.</ref><ref>Antherjanam, Lalithambika. Cast Me Out If You Will. New York: The Feminist Press, 1997.</ref><ref>{{cite journal |last1=Jeffrey |first1=Robin |year=1987 |title=Governments and Culture: How Women Made Kerala Literate |journal=Pacific Affairs |volume=60 |issue=3 |pages=447–72 |doi=10.2307/2758883 |jstor=2758883}}</ref>
==== LGBT ಹಕ್ಕುಗಳು ====
{{Main|ಕೇರಳದಲ್ಲಿ LGBT ಹಕ್ಕುಗಳು}}
ಕೇರಳವು [[ಭಾರತ]]ದಲ್ಲಿ LGBT ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿದೆ.<ref>{{Cite web |url=https://www.huffingtonpost.in/2015/11/12/kerala-government-transge_n_8543410.html |title=Kerala Government Has Unveiled A Policy To Enforce Constitutional Rights Of Transgenders |website=The Huffington Post |date=12 November 2015 |access-date=28 June 2016 |archive-date=10 May 2017 |archive-url=https://web.archive.org/web/20170510075414/http://www.huffingtonpost.in/2015/11/12/kerala-government-transge_n_8543410.html |url-status=live }}</ref> ಕೇರಳವು ಟ್ರಾನ್ಸ್ಜೆಂಡರ್ ಸಮುದಾಯಕ್ಕಾಗಿ ಕಲ್ಯಾಣ ನೀತಿಯನ್ನು ರೂಪಿಸಿದ [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತದ ಮೊದಲ ರಾಜ್ಯಗಳಲ್ಲಿ]] ಒಂದಾಗಿದೆ. 2016 ರಲ್ಲಿ, ಕೇರಳ ಸರ್ಕಾರವು ಸರ್ಕಾರಿ ಆಸ್ಪತ್ರೆಗಳ ಮೂಲಕ ಉಚಿತ [[ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ]]ಯನ್ನು ಪರಿಚಯಿಸಿತು.<ref>{{Cite web |url=https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |title=Why Kerala's free sex-change surgeries will offer a new lifeline for the transgender community |last=Devasia |first=T. K. |website=Scroll.in |date=19 March 2016 |language=en-US |access-date=5 July 2019 |archive-date=29 June 2019 |archive-url=https://web.archive.org/web/20190629061452/https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |url-status=live }}</ref><ref>{{cite news |url=https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |title=After She-Taxi, Kerala to launch G-Taxi for transgenders |work=[[The Times of India]] |date=31 January 2016 |agency=PTI |access-date=25 March 2016 |location=Thiruvananthapuram |archive-date=29 October 2019 |archive-url=https://web.archive.org/web/20191029184249/https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |url-status=live }}</ref><ref>{{Cite web |url=https://www.dnaindia.com/india/report-how-kerala-left-the-country-behind-on-transgender-rights-2145017 |title=How Kerala left the country behind on transgender rights |website=dna |language=en-US |access-date=19 March 2016 |date=14 November 2015 |archive-date=29 June 2019 |archive-url=https://web.archive.org/web/20190629021111/https://www.dnaindia.com/india/report-how-kerala-left-the-country-behind-on-transgender-rights-2145017 |url-status=live }}</ref> [[ಕ್ವೀರಳ]] ಕೇರಳದ ಪ್ರಮುಖ LGBT ಸಂಸ್ಥೆಗಳಲ್ಲಿ ಒಂದಾಗಿದೆ. ಇದು LGBT ಜನರ ಅರಿವನ್ನು ಹೆಚ್ಚಿಸಲು ಮತ್ತು ಆರೋಗ್ಯ ಸೇವೆಗಳು, ಕೆಲಸದ ಸ್ಥಳ ನೀತಿಗಳು ಮತ್ತು ಶೈಕ್ಷಣಿಕ ಪಠ್ಯಕ್ರಮಕ್ಕೆ ಸಂಬಂಧಿಸಿದ ಸಂವೇದನಾಶೀಲತೆಯ ಬಗ್ಗೆ ಪ್ರಚಾರ ಮಾಡುತ್ತದೆ.<ref>{{Cite news |title=Affirming their right, they march with pride |url=https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |date=13 August 2017 |work=The Hindu |language=en-IN |issn=0971-751X |access-date=4 April 2022 |archive-date=28 December 2019 |archive-url=https://web.archive.org/web/20191228100119/https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |url-status=live }}</ref> 2010 ರಿಂದ, [[ಕೇರಳ ಕ್ವೀರ್ ಪ್ರೈಡ್]] ಅನ್ನು ಕೇರಳದ ವಿವಿಧ ನಗರಗಳಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತಿದೆ.<ref>{{cite web |url=https://timesofindia.indiatimes.com/india/Kerala-to-host-its-first-gay-parade/articleshow/6112610.cms |title=Kerala to host its first gay parade |website=The Times of India |date=30 June 2010}}</ref>
ಜೂನ್ 2019 ರಲ್ಲಿ, ಕೇರಳ ಸರ್ಕಾರವು ಟ್ರಾನ್ಸ್ಜೆಂಡರ್ ಸಮುದಾಯದ ಸದಸ್ಯರನ್ನು ಸರ್ಕಾರದ ಸಂವಹನಗಳಲ್ಲಿ "[[ಮೂರನೇ ಲಿಂಗ]]" ಅಥವಾ "ಇತರ ಲಿಂಗ" ಎಂದು ಕರೆಯಬಾರದು ಎಂದು ಹೊಸ ಆದೇಶವನ್ನು ಅಂಗೀಕರಿಸಿತು. ಬದಲಾಗಿ, "ಟ್ರಾನ್ಸ್ಜೆಂಡರ್" ಪದವನ್ನು ಬಳಸಬೇಕು. ಹಿಂದೆ, ಸರ್ಕಾರಿ ನಮೂನೆಗಳು ಮತ್ತು ದಾಖಲೆಗಳಲ್ಲಿ ಒದಗಿಸಲಾದ ಲಿಂಗ ಆಯ್ಕೆಗಳು ಪುರುಷ, ಮಹಿಳೆ ಮತ್ತು ಇತರ/ಮೂರನೇ ಲಿಂಗವನ್ನು ಒಳಗೊಂಡಿದ್ದವು.<ref>{{Cite web |url=https://www.thenewsminute.com/article/kerala-govt-passes-order-use-transgender-instead-thirdother-gender-104584 |website=www.thenewsminute.com |access-date=8 July 2019 |title=Kerala govt passes order to use 'transgender' instead of 'third/other gender' |date=30 June 2019}}</ref><ref>{{Cite news |url=https://www.thehindu.com/news/national/kerala/only-transgender-in-official-communication/article28235748.ece |title=Only 'transgender' in official communication |last=Roshni |first=R. k |date=30 June 2019 |work=The Hindu |access-date=8 July 2019 |language=en-IN |issn=0971-751X}}</ref>
=== ಮಾನವ ಅಭಿವೃದ್ಧಿ ಸೂಚ್ಯಂಕ ===
{{See also|ಕೇರಳ ಮಾದರಿ}}
[[File:2006 Human Development Index for India map by states, HDI data by GoI and UNDP India.svg|thumb|[[ಭಾರತ ಸರ್ಕಾರ]] ಮತ್ತು [[ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮ]]ದಿಂದ ಲೆಕ್ಕಾಚಾರ ಮಾಡಿದಂತೆ 2006 ರಲ್ಲಿ ಭಾರತೀಯ ರಾಜ್ಯಗಳಿಗೆ [[ಮಾನವ ಅಭಿವೃದ್ಧಿ ಸೂಚ್ಯಂಕ]] ನಕ್ಷೆ.<ref>{{cite web |url=https://www.in.undp.org/content/dam/india/docs/gendering_human_development_indices_summary_report.pdf |title=Gendering Human Development Indices |date=March 2009 |publisher=Ministry of Women and Child Development, Government of India with UNDP India}}</ref>]]
ಪ್ರಜಾಪ್ರಭುತ್ವದ ಕಮ್ಯುನಿಸ್ಟ್ ಸ್ಥಳೀಯ ಸರ್ಕಾರದ ಅಡಿಯಲ್ಲಿ, ಕೇರಳವು ಭಾರತೀಯ ಸರಾಸರಿಗಿಂತ ಹೆಚ್ಚು ಮುಂದುವರಿದ ಸಾಮಾಜಿಕ ಅಭಿವೃದ್ಧಿಯ ದಾಖಲೆಯನ್ನು ಸಾಧಿಸಿದೆ.<ref>{{Cite book |last=Lin |first=Chun |title=The transformation of Chinese socialism |date=2006 |publisher=[[Duke University Press]] |isbn=978-0-8223-3785-0 |location=Durham [N.C.] |pages=298 |oclc=63178961}}</ref> 2015 ರಂತೆ, ಕೇರಳವು 0.770 ರ [[ಮಾನವ ಅಭಿವೃದ್ಧಿ ಸೂಚ್ಯಂಕ]] (HDI) ಅನ್ನು ಹೊಂದಿದೆ, ಇದು "ಹೆಚ್ಚಿನ" ವರ್ಗದಲ್ಲಿದೆ, ಇದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.<ref name="snhdi-gdl">{{cite web |title=Sub-national HDI – Area Database |url=https://hdi.globaldatalab.org/areadata/shdi/ |website=Global Data Lab |publisher=Institute for Management Research, Radboud University |access-date=25 September 2018 |language=en}}</ref> ಇದು 2007–08 ರಲ್ಲಿ 0.790 ಆಗಿತ್ತು<ref name="IDHR 2011">{{cite web |title=India Human Development Report 2011: Towards Social Inclusion |url=https://www.im4change.org/docs/340IHDR_Summary.pdf |publisher=Institute of Applied Manpower Research, [[Planning Commission (India)|Planning Commission]], [[Government of India]] |access-date=24 October 2014 |archive-date=21 October 2013 |archive-url=https://web.archive.org/web/20131021081939/http://www.im4change.org/docs/340IHDR_Summary.pdf |url-status=dead }}</ref> ಮತ್ತು ಇದು 0.920 ರ ಬಳಕೆ-ಆಧಾರಿತ HDI ಅನ್ನು ಹೊಂದಿತ್ತು, ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮವಾಗಿದೆ.<ref name="IDHR 2011" /> 19 ನೇ ಶತಮಾನದಿಂದ [[ಪ್ರಾಥಮಿಕ ಶಿಕ್ಷಣ|ಪ್ರಾಥಮಿಕ ಮಟ್ಟದ ಶಿಕ್ಷಣ]], [[ಆರೋಗ್ಯ ರಕ್ಷಣೆ]] ಮತ್ತು [[ಭಾರತದಲ್ಲಿ ಬಡತನ|ಬಡತನ]] ನಿರ್ಮೂಲನೆಗೆ ಸರ್ಕಾರದ ತುಲನಾತ್ಮಕವಾಗಿ ಹೆಚ್ಚಿನ ವೆಚ್ಚವು ರಾಜ್ಯವು ಅಸಾಧಾರಣವಾಗಿ ಹೆಚ್ಚಿನ HDI ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ;<ref name="UNDP2005">{{cite web |title=Kerala HDR 2005 |url=https://hdr.undp.org/en/reports/nationalreports/asiathepacific/india/name,3397,en.html |work=Human Development Report |publisher=United Nations |location=Asia and the Pacific |access-date=30 May 2015}}</ref><ref name="UNDP20054">{{cite web |title=Human Development Report 2005 |url=https://hdr.undp.org/en/media/HDR05_complete.pdf |work=Human Development Report |publisher=United Nations |location=Asia and the Pacific |access-date=14 November 2015 |archive-url=https://web.archive.org/web/20110310193948/https://hdr.undp.org/en/media/HDR05_complete.pdf |archive-date=10 March 2011 |url-status=dead}}</ref> ಈ ವರದಿಯನ್ನು ಕೇಂದ್ರ ಸರ್ಕಾರದ [[ಅನ್ವಯಿಕ ಜನಶಕ್ತಿ ಸಂಶೋಧನಾ ಸಂಸ್ಥೆ]] ತಯಾರಿಸಿತು.<ref name="hdi kerala chart">{{cite web |url=https://www.moneycontrol.com/news/wire-news/human-development-index-rose-21-per-cent-kerala-tops-chart_603650.html |title=Human Development Index rose 21 per cent; Kerala tops chart |date=21 October 2011 |work=[[CNBC]] |access-date=14 November 2015}}</ref><ref name="hdi kerala">{{Cite news |url=https://economictimes.indiatimes.com/news/economy/finance/growth-reforms-lift-living-standards-in-india-human-development-index/articleshow/10447495.cms |title=Growth, reforms lift living standards in India: Human development Index |date=22 October 2011 |access-date=14 November 2015 |work=Economic Times}}</ref> ಆದಾಗ್ಯೂ, ಅಭಿವೃದ್ಧಿ ಅಧ್ಯಯನ ಕೇಂದ್ರವು ತಯಾರಿಸಿದ ಮಾನವ ಅಭಿವೃದ್ಧಿ ವರದಿ 2005, ರಾಜ್ಯದಲ್ಲಿ ಮಾನವ ಅಭಿವೃದ್ಧಿಯ ಪ್ರಗತಿಯು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡಲು ಪ್ರಾರಂಭಿಸಿದ್ದರಿಂದ ರಾಜ್ಯಕ್ಕೆ ಸಮಾವೇಶಕ ಅಭಿವೃದ್ಧಿಯ ಗುಣಾತ್ಮಕ ಹಂತವನ್ನು ಊಹಿಸುತ್ತದೆ.<ref name="UNDP2005" /> ಕೇರಳವು ಭಾರತದಲ್ಲಿ ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರ ರಾಜ್ಯವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ.<ref>{{cite book |author1=Sunil Mani |author2=Anjini Kochar |title=Kerala's Economy: Crouching Tiger, Sacred Cows |url=https://books.google.com/books?id=wKeRAtvXl8oC&pg=PA121 |access-date=24 September 2012 |year=2006 |publisher=D.C. Books |isbn=978-8126413591 |page=121}}</ref>
2011 ರ ಜನಗಣತಿಯ ಪ್ರಕಾರ, ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಹೆಚ್ಚು [[ಸಾಕ್ಷರತಾ ಪ್ರಮಾಣ]] (94%) ಹೊಂದಿದೆ. 2018 ರಲ್ಲಿ, ಭಾರತದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ನಡೆಸಿದ 2018 ರ ಸಾಕ್ಷರತಾ ಸಮೀಕ್ಷೆಯಲ್ಲಿ ಸಾಕ್ಷರತಾ ಪ್ರಮಾಣವನ್ನು 96.2% ಎಂದು ಲೆಕ್ಕಹಾಕಲಾಯಿತು.<ref name="Literacy survey_2018">{{Cite web |date=8 September 2020 |title=Literacy Survey, India (2017–18) |url=https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |access-date=9 September 2020 |publisher=Firstpost |archive-date=2 November 2021 |archive-url=https://web.archive.org/web/20211102214441/https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |url-status=live }}</ref> [[ಕೋಟ್ಟಯಂ ಜಿಲ್ಲೆ]]ಯಲ್ಲಿ, ಸಾಕ್ಷರತಾ ಪ್ರಮಾಣವು 97% ಆಗಿತ್ತು.<ref>{{Cite web |url=https://www.pincodeindia.net/literacy-rate-of-kerala.php |title=Literacy Rate in Kerala – 2018 |access-date=7 February 2022 |archive-date=7 February 2022 |archive-url=https://web.archive.org/web/20220207105113/https://www.pincodeindia.net/literacy-rate-of-kerala.php |url-status=dead }}</ref><ref name="pc-census2011">{{Cite web |title=Census 2011 (Final Data) – Demographic details, Literate Population (Total, Rural & Urban) |url=https://planningcommission.gov.in/data/datatable/data_2312/DatabookDec2014%20307.pdf |url-status=dead |archive-url=https://web.archive.org/web/20180127163347/https://planningcommission.gov.in/data/datatable/data_2312/DatabookDec2014%20307.pdf |archive-date=27 January 2018 |access-date=3 October 2018 |website=planningcommission.gov.in |publisher=Planning Commission, Government of India}}</ref><ref name="IBNLiteracy2013" /> ಕೇರಳದಲ್ಲಿ [[ಜೀವಿತಾವಧಿ]]ಯು 74 ವರ್ಷಗಳು, 2011 ರಂತೆ ಭಾರತದಲ್ಲಿ ಅತಿ ಹೆಚ್ಚಿನದಾಗಿದೆ.<ref>{{cite news |url=https://thehindu.com/news/national/kerala/kerala-tops-in-literacy-rate-health-services/article2562589.ece |location=Chennai, India |work=The Hindu |title=Kerala tops in literacy rate, health services |date=22 October 2011 |first=J. |last=Balaji |access-date=30 May 2015}}</ref> ಕೇರಳದ ಗ್ರಾಮೀಣ ಬಡತನ ಪ್ರಮಾಣವು 59% (1973–1974) ರಿಂದ 12% (1999–2010) ಕ್ಕೆ ಇಳಿದಿದೆ; ಒಟ್ಟಾರೆ (ನಗರ ಮತ್ತು ಗ್ರಾಮೀಣ) ಬಡತನ ಪ್ರಮಾಣವು 1970 ಮತ್ತು 2000 ರ ದಶಕಗಳ ನಡುವೆ 47% ರಷ್ಟು ಕಡಿಮೆಯಾಗಿದ್ದು, ಭಾರತದಲ್ಲಿ ಒಟ್ಟಾರೆ ಬಡತನ ಪ್ರಮಾಣದಲ್ಲಿ 29% ರಷ್ಟು ಕುಸಿತಕ್ಕೆ ವಿರುದ್ಧವಾಗಿದೆ.<ref>{{cite book |title=Human Development Report 2005 Kerala |publisher=State Planning Board |author=Centre for Development Studies Thiruvananthapuram |year=2006 |location=Thiruvananthapuram, Kerala}}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6" /> 2013 ರ ಟೆಂಡೂಲ್ಕರ್ ಸಮಿತಿ ವರದಿಯು ಗ್ರಾಮೀಣ ಮತ್ತು ನಗರ ಕೇರಳದಲ್ಲಿ ಬಡತನ ರೇಖೆಯ ಕೆಳಗೆ ವಾಸಿಸುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಕ್ರಮವಾಗಿ 9.1% ಮತ್ತು 5.0% ಎಂದು ಅಂದಾಜಿಸಿದೆ.<ref>{{cite web |title=Press Note on Poverty Estimates, 2011–12 |url=https://planningcommission.nic.in/news/pre_pov2307.pdf |website=planningcommission.gov.in |publisher=Planning Commission, Government of India |access-date=27 November 2018 |archive-url=https://web.archive.org/web/20140628120737/https://planningcommission.nic.in/news/pre_pov2307.pdf |archive-date=28 June 2014 |url-status=dead}}</ref> ಈ ಬದಲಾವಣೆಗಳು ಹೆಚ್ಚಾಗಿ 19 ನೇ ಶತಮಾನದ ಕೊನೆಯಲ್ಲಿ ಕೊಚ್ಚಿ ಮತ್ತು ತಿರುವಾಂಕೂರು ಸಾಮ್ರಾಜ್ಯಗಳು ಸಾಮಾಜಿಕ ಕಲ್ಯಾಣವನ್ನು ಹೆಚ್ಚಿಸಲು ಪ್ರಾರಂಭಿಸಿದ ಪ್ರಯತ್ನಗಳಿಂದ ಉಂಟಾಗಿವೆ.<ref>{{Cite report |title=EFA [Education for All] Global Monitoring Report |url=https://www.unesco.org/education/efa_report/chapter4.pdf |year=2003 |archive-url=https://web.archive.org/web/20040923014605/https://www.unesco.org/education/efa_report/chapter4.pdf |archive-date=23 September 2004 |page=156 |publisher=[[UNESCO]] |access-date=4 April 2022}}</ref><ref>{{Cite journal |author=Kutty VR |year=2000 |title=Historical analysis of the development of health care facilities in Kerala State, India |journal=Health Policy and Planning |volume=15 |issue=1 |pages=103–09 |doi=10.1093/heapol/15.1.103 |pmid=10731241 |s2cid=7634887 |doi-access=free }}</ref> ಈ ಗಮನವನ್ನು ಕೇರಳದ ಸ್ವಾತಂತ್ರ್ಯೋತ್ತರ ಸರ್ಕಾರವು ಉಳಿಸಿಕೊಂಡಿದೆ.<ref name="Brenkert_Malone_2003" /><ref name="Varma_2005">{{Cite news |author=Varma MS |title=Nap on HDI scores may land Kerala in an equilibrium trap |work=The Financial Express |date=4 April 2005 |access-date=12 November 2007 |url=https://www.financialexpress.com/old/print.php?content_id=86925 |archive-url=https://web.archive.org/web/20080617134031/https://www.financialexpress.com/old/print.php?content_id=86925 |archive-date=17 June 2008}}</ref>{{rp|48}} ಕೇರಳವು [[NITI ಆಯೋಗ]]ದ ಸುಸ್ಥಿರ ಅಭಿವೃದ್ಧಿ ಗುರಿಗಳ ಡ್ಯಾಶ್ಬೋರ್ಡ್ ಮತ್ತು [[ಭಾರತೀಯ ರಿಸರ್ವ್ ಬ್ಯಾಂಕ್]]ನ ''ಇಂಡಿಯನ್ ಎಕಾನಮಿಯ ಹ್ಯಾಂಡ್ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್'' ಪ್ರಕಾರ ಭಾರತದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿದೆ]].<ref>{{Cite web |title=SDG India – Index 2021–22 – Partnerships in the Decade of Action |url=https://sdgindiaindex.niti.gov.in/#/ranking |date=2021 |url-status=dead |archive-url=https://web.archive.org/web/20210613021943/https://niti.gov.in/writereaddata/files/SDG_3.0_Final_04.03.2021_Web_Spreads.pdf |archive-date=13 June 2021 |website=[[NITI Aayog]] |access-date=29 September 2024}}</ref><ref>{{Cite web |title=Handbook of Statistics on Indian Economy. Table 154 : Number and Percentage of Population Below Poverty Line. (2011-12) |url=https://www.rbi.org.in/scripts/PublicationsView.aspx?id=19887 |access-date=13 September 2021 |website=Reserve Bank of India |archive-date=13 September 2021 |archive-url=https://web.archive.org/web/20210913133540/https://www.rbi.org.in/scripts/PublicationsView.aspx?id=19887 |url-status=live }}</ref>
ಕೇರಳವು [[ಕೆನಡಾ]], [[ಜಪಾನ್]], ಮತ್ತು [[ನಾರ್ವೆ]] ನಂತಹ [[ಅಭಿವೃದ್ಧಿ ಹೊಂದಿದ ರಾಷ್ಟ್ರಗಳ]] ವಿಶಿಷ್ಟವಾದ "[[ಜನಸಂಖ್ಯಾ ಪರಿವರ್ತನೆ]]" ಯನ್ನು ಅನುಭವಿಸಿದೆ.<ref name="Tharamangalam_2005" />{{rp|1}} 2005 ರಲ್ಲಿ, 11.2% ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು.<ref name="Varma_2005" /> 2023 ರಲ್ಲಿ, ಬಿಬಿಸಿಯು ಕೇರಳದಿಂದ ವಲಸೆಯಿಂದ ಉಂಟಾದ ಸಮಸ್ಯೆಗಳು ಮತ್ತು ಪ್ರಯೋಜನಗಳ ಬಗ್ಗೆ ವರದಿ ಮಾಡಿತು, ಕುಂಬನಾಡ್ ಗ್ರಾಮದ ಮೇಲೆ ಕೇಂದ್ರೀಕರಿಸಿತು.<ref>{{cite web |url=https://www.bbc.co.uk/news/world-asia-india-64936519 |title=Kerala: A ghost town in the world's most populated country |last= |first= |date=26 March 2023 |website=www.bbc.co.uk |publisher=BBC News |access-date=26 March 2023}}</ref>
2004 ರಲ್ಲಿ, ಜನನ ದರವು 18 ಪ್ರತಿ 1,000 ಕ್ಕೆ ಕಡಿಮೆಯಾಗಿತ್ತು.<ref name="Kutty_2004_6">{{Cite book |author=Kutty VR |veditors=Nair PR, Shaji H |year=2004 |title=Why low birth weight (LBW) is still a problem in Kerala: A preliminary exploration |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621607 |access-date=12 November 2007 |url=https://www.cds.ac.in/krpcds/publication/downloads/57.pdf |page=6}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 1.6 ರ ಒಟ್ಟು ಫಲವತ್ತತೆ ಪ್ರಮಾಣವನ್ನು (TFR) ಹೊಂದಿತ್ತು. ಮಲಪ್ಪುರಂ ಜಿಲ್ಲೆಯನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳು 2 ಕ್ಕಿಂತ ಕಡಿಮೆ ಫಲವತ್ತತೆ ಪ್ರಮಾಣವನ್ನು ಹೊಂದಿದ್ದವು. ಫಲವತ್ತತೆ ಪ್ರಮಾಣವು [[ಮಲಪ್ಪುರಂ ಜಿಲ್ಲೆ]]ಯಲ್ಲಿ (2.2) ಅತಿ ಹೆಚ್ಚು ಮತ್ತು [[ಪತ್ತನಂತಿಟ್ಟ ಜಿಲ್ಲೆ]]ಯಲ್ಲಿ (1.3) ಅತಿ ಕಡಿಮೆಯಾಗಿದೆ.<ref>{{cite web |title=Fertility at District Level in India:Lessons from the 2011 Census |url=https://www.ceped.org/IMG/pdf/ceped_wp30.pdf&ved=2ahUKEwio7YjXv9nsAhVJzjgGHUy2BTE4FBAWMAR6BAgJEAE&usg=AOvVaw2PL5xTsjiaBMS96pAhMEX1 |author=Christophe Z Guilmoto and Irudaya Rajan |page=31 |format=PDF |access-date=29 October 2020}}</ref> 2001 ರಲ್ಲಿ, ಮುಸ್ಲಿಮರು 2.6 ರ TFR ಅನ್ನು ಹೊಂದಿದ್ದರು, ಹಿಂದೂಗಳಿಗೆ 1.5 ಮತ್ತು ಕ್ರೈಸ್ತರಿಗೆ 1.7 ರಷ್ಟಿತ್ತು.<ref>{{Cite news |url=https://www.deccanchronicle.com/nation/current-affairs/170316/fertility-rate-to-even-out-in-20-years-in-kerala.html |title=Fertility rate to even out in 20 years in Kerala |website=Deccan Chronicle |access-date=29 October 2020}}</ref> CMS ಇಂಡಿಯನ್ ಕರಪ್ಷನ್ ಸ್ಟಡಿ (CMS-ICS) ನಡೆಸಿದ ಸಮೀಕ್ಷೆಗಳ ಪ್ರಕಾರ ರಾಜ್ಯವು "ಅತ್ಯಂತ ಕಡಿಮೆ ಭ್ರಷ್ಟ ಭಾರತೀಯ ರಾಜ್ಯ" ಎಂದೂ ಪರಿಗಣಿಸಲ್ಪಟ್ಟಿದೆ<ref>{{Cite web |url=https://www.onmanorama.com/news/nation/2017/04/28/kerala-least-corrupt-states-india-karnatak-highest-petty-corruptionkerala-least-corrupt-states-india-karnatak-highest-petty-corruption.html |title=Kerala among the least corrupt states in India, Karnataka tops the list: study |website=OnManorama}}</ref> ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ (2005)<ref>{{cite web |title=India Corruption Study – 2005 |publisher=[[Transparency International]] |date=June 2005 |access-date=11 November 2007 |url=https://archive.transparency.org/regional_pages/asia_pacific/newsroom/news_archive2/india_corruption_study_2005 |archive-url=https://web.archive.org/web/20130413044112/https://archive.transparency.org/regional_pages/asia_pacific/newsroom/news_archive2/india_corruption_study_2005 |url-status=dead |archive-date=13 April 2013}}</ref> ಮತ್ತು ''ಇಂಡಿಯಾ ಟುಡೇ'' (1997).<ref>{{cite book |author1=Jean Dreze |author2=Amartya Sen |title=India: Development and Participation |url=https://books.google.com/books?id=UpOl35r8UHQC&pg=PA368 |access-date=24 September 2012 |year=2002 |publisher=Oxford University Press |isbn=978-0-19-925749-2 |page=368}}</ref> ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಕಡಿಮೆ [[ಕೊಲೆ]] ಪ್ರಮಾಣವನ್ನು ಹೊಂದಿದೆ, 2011 ರಲ್ಲಿ 1.1 ಪ್ರತಿ 100,000 ಕ್ಕೆ.<ref name="ncrb">{{cite web |url=https://ncrb.nic.in/CD-CII2011/cii-2011/Table%203.1.pdf |archive-url=https://web.archive.org/web/20130928024506/https://ncrb.nic.in/CD-CII2011/cii-2011/Table%203.1.pdf |url-status=dead |archive-date=28 September 2013 |date=21 June 2012 |title=Table–3.1 Incidence And Rate Of Violent Crimes During 2011 |access-date=24 September 2014}}</ref> ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ, ಹೆಚ್ಚಿನ [[ಆತ್ಮಹತ್ಯೆ]] ಪ್ರಮಾಣ, ಕಡಿಮೆ [[ಗಳಿಸಿದ ಆದಾಯ]]ದ ಪಾಲು, [[ಬಾಲ್ಯ ವಿವಾಹ]],<ref>{{Cite news |title=Child marriages remain Kerala's secret shame |url=https://www.thehindu.com/news/national/kerala/child-marriages-remain-keralas-secret-shame/article7613216.ece |newspaper=The Hindu |date=4 September 2015 |access-date=4 September 2015 |issn=0971-751X}}</ref> [[ಲೈಂಗಿಕ ಕಿರುಕುಳ]] ದೂರುಗಳು ಮತ್ತು ಸೀಮಿತ ಸ್ವಾತಂತ್ರ್ಯದಂತಹ ಕೆಲವು ನಕಾರಾತ್ಮಕ ಅಂಶಗಳು ವರದಿಯಾಗಿವೆ.<ref name="Joseph" /> ಕೇರಳದಲ್ಲಿ ಬಾಲ್ಯ ವಿವಾಹವು ಕಡಿಮೆಯಾಗಿದೆ. ಮಲಪ್ಪುರಂ ಜಿಲ್ಲೆಯು ಅತಿ ಹೆಚ್ಚು ಬಾಲ್ಯ ವಿವಾಹಗಳನ್ನು ಹೊಂದಿದೆ ಮತ್ತು ಅಂತಹ ಪ್ರಕರಣಗಳ ಸಂಖ್ಯೆಯು ಮಲಪ್ಪುರಂನಲ್ಲಿ ಹೆಚ್ಚುತ್ತಿದೆ. ಬಾಲ್ಯ ವಿವಾಹಗಳು ವಿಶೇಷವಾಗಿ [[ಕೇರಳದಲ್ಲಿ ಮುಸ್ಲಿಮರಲ್ಲಿ ಬಾಲ್ಯ ವಿವಾಹ|ಮುಸ್ಲಿಂ ಸಮುದಾಯದಲ್ಲಿ]] ಹೆಚ್ಚಾಗಿದೆ.<ref>{{cite news |last=Naha |first=Abdul Latheef |title=Child marriage cases go up in Malappuram |url=https://www.thehindu.com/news/national/kerala/child-marriage-cases-go-up-in-malappuram/article22751598.ece |date=18 February 2018 |newspaper=The Hindu |access-date=31 December 2019}}</ref><ref>{{Cite web |url=https://www.onmanorama.com/news/kerala/2018/10/26/child-marriages-shoot-up-in-the-most-unlikely-places-in-kerala.html |title=Child marriages shoot up in the most unlikely places in Kerala |website=OnManorama}}</ref> 2019 ರಲ್ಲಿ, ಕೇರಳವು ಭಾರತದಲ್ಲಿ ಅತಿ ಹೆಚ್ಚು ಮಕ್ಕಳ ಲೈಂಗಿಕ ದುರುಪಯೋಗ ದೂರುಗಳನ್ನು ದಾಖಲಿಸಿತು.<ref>{{cite news |last=Natu |first=Nitasha |title=Kerala No. 1 in child sex abuse complaints; Tamil Nadu, Maharashtra follow |url=https://timesofindia.indiatimes.com/india/kerala-no-1-in-child-sex-abuse-complaints-tamil-nadu-maharashtra-follow/articleshow/72972619.cms |date=25 December 2019 |newspaper=The Time of India |access-date=31 December 2019}}</ref>
2015 ರಲ್ಲಿ, ಕೇರಳವು ಯಾವುದೇ ರಾಜ್ಯದ ಅತಿ ಹೆಚ್ಚು ಶಿಕ್ಷೆಯ ಪ್ರಮಾಣವನ್ನು ಹೊಂದಿತ್ತು, 77% ಕ್ಕಿಂತ ಹೆಚ್ಚು.<ref>{{cite news |url=https://timesofindia.indiatimes.com/india/Conviction-rate-up-Kerala-tops-with-over-77/articleshow/48408220.cms |location=New Delhi, India |work=The Times of India |title=Conviction rate up, Kerala tops with over 77% link |date=9 August 2015 |access-date=14 November 2015}}</ref> ಕೇರಳವು ಗ್ರಾಮೀಣ ಭಾರತದಲ್ಲಿ ಅತಿ ಕಡಿಮೆ ಮನೆಯಿಲ್ಲದ ಜನರ ಪ್ರಮಾಣವನ್ನು ಹೊಂದಿದೆ, <0.1%,<ref>{{cite news |url=https://timesofindia.indiatimes.com/india/Population-of-homeless-in-rural-India-dips/articleshow/26981896.cms |location=India |work=The Times of India |title=Population of homeless in rural India dips |date=7 December 2013 |access-date=14 November 2015}}</ref> ಮತ್ತು ರಾಜ್ಯವು ಮೊದಲ "ಶೂನ್ಯ ಮನೆಯಿಲ್ಲದ ರಾಜ್ಯ" ವಾಗುವ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ, ಇದರ ಜೊತೆಗೆ ಅದರ ಶ್ಲಾಘನೀಯ "ಶೂನ್ಯ ಭೂರಹಿತ ಯೋಜನೆ" ಯನ್ನು ಹೊಂದಿದೆ, ಖಾಸಗಿ ಸಂಸ್ಥೆಗಳು ಮತ್ತು ವಲಸೆ ಮಲಯಾಳಿ ಸಮುದಾಯವು ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸಲು ಯೋಜನೆಗಳಿಗೆ ಹಣಕಾಸು ಒದಗಿಸುತ್ತಿದೆ.<ref>{{cite news |url=https://www.thehindu.com/news/national/kerala/cm-told-to-pursue-zero-homeless-kerala-project/article5309749.ece |location=Pathanamthitta, India |work=The Hindu |title=CM told to pursue Zero Homeless Kerala project link |date=3 November 2013}}</ref> ರಾಜ್ಯವು [[ಭಾರತ ರಾಜ್ಯ ಹಸಿವು ಸೂಚ್ಯಂಕ]]ದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು, ಇದು [[ಪಂಜಾಬ್, ಭಾರತ|ಪಂಜಾಬ್]] ನ ನಂತರದ ಸ್ಥಾನದಲ್ಲಿದೆ. 2015 ರಲ್ಲಿ ಕೇರಳವು ಇ-ಗವರ್ನೆನ್ಸ್ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಮೊದಲ "ಸಂಪೂರ್ಣ ಡಿಜಿಟಲ್ ರಾಜ್ಯ" ವಾಯಿತು.<ref>{{cite news |url=https://timesofindia.indiatimes.com/india/Kerala-becomes-Indias-first-complete-digital-state/articleshow/48494982.cms |location=New Delhi, India |work=The Times of India |title=Kerala-becomes-Indias-first-complete-digital-state link |date=15 August 2015}}</ref>
=== ಆರೋಗ್ಯ ರಕ್ಷಣೆ ===
{{Multiple image
| direction = vertical
| width = 220
| image1 = Regional Cancer Centre, Trivandrum.jpg
| caption1 = [[ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ, ತಿರುವನಂತಪುರ]]
}}
{{See also|ಕೇರಳದ ಸರ್ಕಾರಿ ಆಸ್ಪತ್ರೆಗಳ ಪಟ್ಟಿ}}
ಕೇರಳವು [[ಸಾರ್ವತ್ರಿಕ ಆರೋಗ್ಯ ರಕ್ಷಣೆ]] ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಪ್ರವರ್ತಕವಾಗಿದೆ.<ref>{{cite news |last1=Maya |first1=C |title=The road to universal health care in State |url=https://www.thehindu.com/todays-paper/tp-national/tp-kerala/the-road-to-universal-health-care-in-state/article5450319.ece |access-date=14 November 2015 |work=The Hindu |date=12 December 2013}}</ref> [[ಉಪ-ಬದಲಿ ಫಲವತ್ತತೆ]] ಮಟ್ಟ ಮತ್ತು [[ಶಿಶು ಮರಣ ಪ್ರಮಾಣ]]ವು ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ, ಇದು 12<ref name="Brenkert_Malone_2003" /><ref name="Kutty_2004_6" />{{rp|49}} ರಿಂದ 14<ref name="Krishnaswami_2004">{{Cite book |author=Krishnaswami P |veditors=Neelakantan S, Nair PR, Shaji H |year=2004 |title=Morbidity Study: Incidence, Prevalence, Consequences, and Associates |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621669 |url=https://www.cds.ac.in/krpcds/publication/downloads/63.pdf |access-date=31 December 2008}}</ref>{{rp|5}} ಪ್ರತಿ 1,000 ಜೀವಂತ ಜನನಗಳಿಗೆ ಸಾವುಗಳು ಎಂದು ಅಂದಾಜಿಸಲಾಗಿದೆ; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16 ರ ಪ್ರಕಾರ, ಇದು 6 ಕ್ಕೆ ಇಳಿದಿದೆ.<ref>{{Cite news |url=https://timesofindia.indiatimes.com/india/kerala-as-good-as-us-oecd-in-saving-newborn-children/articleshow/57438366.cms |title=Kerala as good as US, OECD in saving newborn children |work=The Times of India |access-date=9 March 2017}}</ref> [[ಲಿಯಾನ್ ಯಿಂಗ್ ಚೌ|ಲಿಯಾನ್]] ಫೌಂಡೇಶನ್, [[ಸಿಂಗಾಪುರ]]-ಆಧಾರಿತ ಪರೋಪಕಾರಿ ಸಂಸ್ಥೆ, ನಿಯೋಜಿಸಿದ ಅಧ್ಯಯನದ ಪ್ರಕಾರ, ಗಂಭೀರ ಅನಾರೋಗ್ಯದ ರೋಗಿಗಳಿಗೆ ರಾಜ್ಯದ ಉಪಶಮನ ಆರೈಕೆಯನ್ನು ಒದಗಿಸುವ ಆಧಾರದ ಮೇಲೆ ಕೇರಳವನ್ನು ಭಾರತದಲ್ಲಿ ಸಾಯಲು ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗಿದೆ.<ref>{{cite news |last1=Patel |first1=Atish |title=Why Kerala is the best place in India to die |url=https://www.bbc.com/news/world-asia-india-36137285 |date=4 May 2016}}</ref> ಆದಾಗ್ಯೂ, ಕೇರಳದ [[ಅನಾರೋಗ್ಯ ಪ್ರಮಾಣ]]ವು ಯಾವುದೇ ಇತರ ಭಾರತೀಯ ರಾಜ್ಯಕ್ಕಿಂತ ಹೆಚ್ಚಾಗಿದೆ—118 (ಗ್ರಾಮೀಣ) ಮತ್ತು 88 (ನಗರ) ಪ್ರತಿ 1,000 ಜನರಿಗೆ. ಅನುಗುಣವಾದ ಅಂಕಿಅಂಶಗಳು ಅಖಿಲ ಭಾರತಕ್ಕೆ 55 ಮತ್ತು 54 ಪ್ರತಿ 1,000 ಆಗಿತ್ತು 2005ರಂತೆ.<ref name="Krishnaswami_2004" />{{rp|5}} ಕೇರಳದ 13.3% [[ಕಡಿಮೆ ಜನನ ತೂಕ]] [[ಪ್ರಪಂಚದ ಮೊದಲ ರಾಷ್ಟ್ರಗಳಲ್ಲಿ]] ಅನೇಕಕ್ಕಿಂತ ಹೆಚ್ಚಾಗಿದೆ.<ref name="Kutty_2004_6" /> 50% ಕ್ಕಿಂತ ಹೆಚ್ಚು ಜನರು ಅವಲಂಬಿಸಿರುವ 3 ಮಿಲಿಯನ್ [[ನೀರಿನ ಬಾವಿ]]ಗಳ ನಡುವೆ [[ನೀರಿನಿಂದ ಹರಡುವ ರೋಗ]]ಗಳಾದ [[ಅತಿಸಾರ]], [[ಭೇದಿ]], [[ಹೆಪಟೈಟಿಸ್]], ಮತ್ತು [[ಟೈಫಾಯಿಡ್]] ಏಕಾಏಕಿ ಸಮಸ್ಯೆಯು [[ನೈರ್ಮಲ್ಯ ಒಳಚರಂಡಿ|ಒಳಚರಂಡಿ]] ಕೊರತೆಯಿಂದ ಉಲ್ಬಣಗೊಂಡಿದೆ.<ref name="Roy_2004">{{Cite journal |author=Roy MKP |year=2004 |title=Water quality and health status in Kollam Municipality |journal=Centre for Development Studies |url=https://services.iriskf.org/data/articles/Document1168200520.8355524.pdf |access-date=28 December 2008 |archive-date=21 December 2016 |archive-url=https://web.archive.org/web/20161221084934/http://services.iriskf.org/data/articles/Document1168200520.8355524.pdf |url-status=dead }}</ref>{{rp|5–7}} 2017 ರಂತೆ, ರಾಜ್ಯವು ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಮತ್ತು ಭಾರತದಲ್ಲಿ ರೋಗದ ಅತಿ ಹೆಚ್ಚು ಹರಡುವಿಕೆಯ ಪ್ರಮಾಣವನ್ನು ಹೊಂದಿದೆ.<ref>{{Cite web |url=https://timesofindia.indiatimes.com/city/kochi/diabetic-patients-kerala-tops-list-of-indian-states/articleshow/61974164.cms |title=Diabetic patients: Kerala tops list of Indian states |date=8 December 2017 |website=The Times of India |language=en |access-date=28 October 2019}}</ref>
[[ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ]] (UNICEF) ಮತ್ತು [[ವಿಶ್ವ ಆರೋಗ್ಯ ಸಂಸ್ಥೆ]] ಸೂತ್ರಗಳ ಮೇಲೆ ಸ್ತನ್ಯಪಾನದ ಪರಿಣಾಮಕಾರಿ ಪ್ರೋತ್ಸಾಹದಿಂದಾಗಿ ಕೇರಳವನ್ನು ವಿಶ್ವದ ಮೊದಲ "[[ಶಿಶು ಸ್ನೇಹಿ ಆಸ್ಪತ್ರೆ ಉಪಕ್ರಮ|ಶಿಶು-ಸ್ನೇಹಿ]] ರಾಜ್ಯ" ಎಂದು ಗೊತ್ತುಪಡಿಸಿತು.<ref>{{cite web |date=August 2002 |title=Kerala Named World's First WHO-UNICEF "Baby-Friendly State" |work=United Nations Foundation |url=https://www.unwire.org/unwire/20020801/28062_story.asp |archive-url=https://web.archive.org/web/20100306205352/https://www.unwire.org/unwire/20020801/28062_story.asp |archive-date=6 March 2010 |access-date=14 March 2009}}</ref><ref>{{cite news |url=https://news.bbc.co.uk/2/hi/south_asia/2166677.stm |location=Kochi, India |work=BBC News |title=Indian state wins 'baby-friendly' award |date=1 August 2002}}</ref> 95% ಕ್ಕಿಂತ ಹೆಚ್ಚು ಕೇರಳೀಯ ಜನನಗಳು ಆಸ್ಪತ್ರೆಯಲ್ಲಿ ನಡೆಯುತ್ತವೆ ಮತ್ತು ರಾಜ್ಯವು ದೇಶದಲ್ಲಿ ಅತಿ ಕಡಿಮೆ ಶಿಶು ಮರಣ ಪ್ರಮಾಣವನ್ನು ಸಹ ಹೊಂದಿದೆ. ಮೂರನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು 100% ಜನನಗಳು ವೈದ್ಯಕೀಯ ಸೌಲಭ್ಯಗಳಲ್ಲಿ ನಡೆಯುತ್ತಿರುವುದರೊಂದಿಗೆ "ಸಾಂಸ್ಥಿಕ ಪ್ರಸವ" ದಲ್ಲಿ ಕೇರಳವನ್ನು ಮೊದಲ ಸ್ಥಾನದಲ್ಲಿರಿಸುತ್ತದೆ.<ref name="kerala_fact_sheet"/> [[ಆಯುರ್ವೇದ]],<ref name="Unnikrishnan_2004">{{Cite journal |last=Unnikrishnan |first=E |year=2004 |title=''Materia Medica'' of the Local Health Traditions of Payyannur |journal=Centre for Development Studies |url=https://www.cds.ac.in/krpcds/publication/downloads/80.pdf |access-date=22 January 2006}}</ref>{{rp|13}} ''[[ಸಿದ್ಧ]]'', ಮತ್ತು ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯವಾಗಿ ಕಂಡುಬರುವ [[ಸಾಂಪ್ರದಾಯಿಕ ಔಷಧ]] ವಿಧಾನಗಳು, ''ಕಳರಿ'', ''ಮರ್ಮಚಿಕಿತ್ಸ'' ಮತ್ತು ''ವಿಷವೈದ್ಯ'' ಸೇರಿದಂತೆ, ಅಭ್ಯಾಸ ಮಾಡಲಾಗುತ್ತದೆ. [[ಕಣಿಯಾರ್]] ನಂತಹ ಕೆಲವು ವೃತ್ತಿಪರ ಸಮುದಾಯಗಳು ತಮ್ಮ ಸಾಂಪ್ರದಾಯಿಕ ವೃತ್ತಿಯ ಜೊತೆಗೆ ಅಂತಹ ವೈದ್ಯಕೀಯ ವ್ಯವಸ್ಥೆಗಳ ಅಭ್ಯಾಸಕ್ಕೆ ಸಂಬಂಧಿಸಿದಂತೆ ಸ್ಥಳೀಯ ವೈದ್ಯರು ಎಂದು ಕರೆಯಲ್ಪಡುತ್ತಿದ್ದರು.<ref>Angus Stewart, woodburn The Religious attitude: A psychological study of its differentiation, 1927</ref> ಇವುಗಳು ''[[ಗುರುಕುಲ]]'' ಶಿಷ್ಯತ್ವದ ಮೂಲಕ ಪ್ರಚಾರಗೊಳ್ಳುತ್ತವೆ,<ref name="Unnikrishnan_2004" />{{rp|5–6}} ಮತ್ತು ಔಷಧೀಯ ಮತ್ತು ಪರ್ಯಾಯ ಚಿಕಿತ್ಸೆಗಳ ಮಿಶ್ರಣವನ್ನು ಒಳಗೊಂಡಿರುತ್ತವೆ.<ref name="Unnikrishnan_2004" />{{rp|15}} [[ವೈದ್ಯರತ್ನಂ ಪಿ. ಎಸ್. ವಾರಿಯರ್]] 1902 ರಲ್ಲಿ [[ಕೊಟ್ಟಕ್ಕಲ್]] ನಲ್ಲಿ ([[ಮಲಪ್ಪುರಂ]] ನಿಂದ ಸುಮಾರು 10 ಕಿಮೀ) ಸ್ಥಾಪಿಸಿದ ''[[ಆರ್ಯ ವೈದ್ಯ ಸಲಾ]]'' ರಾಜ್ಯದ ಅತಿದೊಡ್ಡ ಆಯುರ್ವೇದ ಔಷಧೀಯ ಜಾಲ ಮತ್ತು ಆರೋಗ್ಯ ಕೇಂದ್ರವಾಗಿದೆ.<ref name="Warrier">{{cite news |url=https://www.thehindu.com/todays-paper/tp-national/pk-warrier-turns-90/article2080601.ece |title=PK Warrier turns 90 |work=The Hindu |date=6 June 2011}}</ref><ref name="Arya Vaidya Sala Kottakkal – Part 1">{{cite AV media |url=https://www.youtube.com/watch?v=nj6YqhsUo0c |archive-url=https://ghostarchive.org/varchive/youtube/20211222/nj6YqhsUo0c |archive-date=22 December 2021 |url-status=live |title=Arya Vaidya Sala Kottakkal – Part 1 |publisher=BBC World – India Business Report |date=30 May 2013 |medium=Documentary}}{{cbignore}}</ref><ref name="mal">{{Cite news |title=അമ്പതിന്റെ നിറവില് മലപ്പുറം; മലപ്പുറത്തിന്റെ മാനവിക മഹാപൈതൃകം |url=https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |last=Leelakrishnan |first=Alamkode |date=17 June 2019 |work=Mathrubhumi |access-date=24 April 2021 |archive-date=7 May 2021 |archive-url=https://web.archive.org/web/20210507091729/https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |url-status=dead}}</ref> ಇದು ವಿಶ್ವದ ಅತಿದೊಡ್ಡ ಆಯುರ್ವೇದ ಔಷಧೀಯ ಬ್ರಾಂಡ್ಗಳಲ್ಲಿ ಒಂದಾಗಿದೆ.<ref name="Warrier" /><ref name="Arya Vaidya Sala Kottakkal – Part 1" /><ref name="mal" />
2014 ರಲ್ಲಿ, ಕೇರಳವು ಸುಕೃತಂ ಎಂಬ ಕಾರ್ಯಕ್ರಮದ ಮೂಲಕ ಬಡವರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುವ ಭಾರತದ ಮೊದಲ ರಾಜ್ಯವಾಯಿತು.<ref>{{cite web |url=https://www.freepressjournal.in/kerala-becomes-first-state-to-provide-free-cancer-treatment/457976 |title=Kerala becomes first state to provide free cancer treatment – Free Press Journal |website=www.freepressjournal.in |access-date=18 May 2016 |date=11 October 2014}}</ref> ಕೇರಳದ ಜನರು [[ಕ್ಯಾನ್ಸರ್]]ಗಳು, [[ಯಕೃತ್ತು]] ಮತ್ತು [[ಮೂತ್ರಪಿಂಡ]] ಕಾಯಿಲೆಗಳ ಹೆಚ್ಚಿನ ಘಟನೆಗಳನ್ನು ಅನುಭವಿಸುತ್ತಾರೆ.<ref>{{Cite web |url=https://www.indushealthplus.com/kerala-health-statistics.html |title=Health Statistics and Public Health issues in Kerala |website=[[Indus Health Plus]] |language=en |access-date=28 October 2019}}</ref> ಏಪ್ರಿಲ್ 2016 ರಲ್ಲಿ, ''ಎಕನಾಮಿಕ್ ಟೈಮ್ಸ್'' 250,000 ನಿವಾಸಿಗಳು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ ಎಂದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 150 ರಿಂದ 200 ಯಕೃತ್ತು ಕಸಿಗಳು ಪ್ರದೇಶದ ಆಸ್ಪತ್ರೆಗಳಲ್ಲಿ ನಡೆಯುತ್ತವೆ ಎಂದು ಸಹ ಇದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 42,000 ಕ್ಯಾನ್ಸರ್ ಪ್ರಕರಣಗಳು ಪ್ರದೇಶದಲ್ಲಿ ವರದಿಯಾಗುತ್ತವೆ. ಖಾಸಗಿ ಆಸ್ಪತ್ರೆಗಳು ತಮ್ಮ ಅಂಕಿಅಂಶಗಳನ್ನು ವರದಿ ಮಾಡದಿರಬಹುದು ಎಂದು ಇದು ಕಡಿಮೆ ಅಂದಾಜು ಎಂದು ನಂಬಲಾಗಿದೆ. ಮೂತ್ರಪಿಂಡ ದಾನಕ್ಕೆ ದೀರ್ಘ ಕಾಯುವ ಪಟ್ಟಿಗಳು ಮಾನವ ಮೂತ್ರಪಿಂಡಗಳ ಅಕ್ರಮ ವ್ಯಾಪಾರವನ್ನು ಉತ್ತೇಜಿಸಿದೆ, ಮತ್ತು ಆರ್ಥಿಕವಾಗಿ ಅನನುಕೂಲಕರ ರೋಗಿಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಕಿಡ್ನಿ ಫೆಡರೇಶನ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣವಾಗಿದೆ.<ref>{{Cite news |url=https://economictimes.indiatimes.com/industry/healthcare/biotech/healthcare/health-crisis-in-kerala-the-increase-in-cancer-kidney-and-liver-diseases/articleshow/51950836.cms?intenttarget=no |title=Health crisis in Kerala: The increase in cancer, kidney and liver diseases – The Economic Times |journal=The Economic Times |access-date=18 May 2016 |date=23 April 2016 |last1=Krishnakumar |first1=P. K. |last2=Sanandakumar |first2=S.}}</ref> 2017–18 ರಂತೆ, [[ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಕೇರಳ)|ಆರೋಗ್ಯ ಸೇವೆಗಳ ಇಲಾಖೆ]]ಯಡಿಯಲ್ಲಿ 6,691 ಆಧುನಿಕ ಔಷಧ ಸಂಸ್ಥೆಗಳಿವೆ, ಅವುಗಳಲ್ಲಿ ಒಟ್ಟು ಹಾಸಿಗೆ ಸಾಮರ್ಥ್ಯ 37,843; 15,780 ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 22,063 ನಗರ ಪ್ರದೇಶಗಳಲ್ಲಿ.<ref name="dhs">{{Cite book |title=List of modern medicine institutions (2017–18) |last=Statistics Wing |first=Health Information Cell |publisher=Directorate of Health Services, Government of Kerala |year=2019 |location=Thiruvananthapuram |pages=1, 7 |url=https://dhs.kerala.gov.in/wp-content/uploads/2020/03/list_10052019.pdf}}</ref>
=== ಭಾಷೆ ===
[[File:Language Map of Kerala (2011 Census).svg|thumb|200px|ಜಿಲ್ಲೆಯ ಪ್ರಕಾರ ಭಾಷೆಗಳು:<br> {{col-begin}}
{{col-2}}
'''ಮಲಯಾಳಂ'''
{{legend|#009deb|80–90%}}
{{legend|#0088cc|90–100%}}
{{col-end}}
]]
[[ಮಲಯಾಳಂ]] ಕೇರಳದ ಅಧಿಕೃತ ಭಾಷೆಯಾಗಿದೆ ಮತ್ತು [[ಭಾರತದ ಭಾಷೆಗಳು|ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ]] ಒಂದಾಗಿದೆ.<ref name="thehindu20130524">{{cite news |url=https://www.thehindu.com/todays-paper/tp-national/classical-status-for-malayalam/article4744630.ece |title='Classical' status for Malayalam |work=[[The Hindu]] |date=24 May 2013 |access-date=25 May 2013 |location=Thiruvananthapuram, India}}</ref><ref>{{Cite web |title=Kerala – Principal Language |url=https://archive.india.gov.in/knowindia/state_uts.php?id=73 |url-status=dead |archive-url=https://web.archive.org/web/20200610111356/https://archive.india.gov.in/knowindia/state_uts.php?id=73 |archive-date=10 June 2020 |access-date=27 November 2018 |website=Government of India}}</ref> [[ಇಡುಕ್ಕಿ ಜಿಲ್ಲೆ]] ಮತ್ತು [[ಪಾಲಕ್ಕಾಡ್ ಜಿಲ್ಲೆ]]ಯಲ್ಲಿ ಗಮನಾರ್ಹವಾದ [[ತಮಿಳು ಭಾಷೆ|ತಮಿಳು]] ಮಾತನಾಡುವ ಜನಸಂಖ್ಯೆಯಿದೆ, ಇದು ಕ್ರಮವಾಗಿ ಎರಡು ಜಿಲ್ಲೆಗಳ ಜನಸಂಖ್ಯೆಯ 17.48% ಮತ್ತು 4.8% ರಷ್ಟಿದೆ.<ref name="lg">{{cite web |title=Census of India – Language |url=https://censusindia.gov.in/2011census/C-16.html |website=censusindia.gov.in}}</ref> [[ತುಳು ಭಾಷೆ|ತುಳು]] ಮತ್ತು [[ಕನ್ನಡ]]ವನ್ನು ಮುಖ್ಯವಾಗಿ [[ಕಾಸರಗೋಡು ಜಿಲ್ಲೆ]]ಯ ಉತ್ತರ ಭಾಗಗಳಲ್ಲಿ ಮಾತನಾಡಲಾಗುತ್ತದೆ, ಪ್ರತಿಯೊಂದೂ ಕ್ರಮವಾಗಿ ಜಿಲ್ಲೆಯ ಒಟ್ಟು ಜನಸಂಖ್ಯೆಯ 8.77% ಮತ್ತು 4.23% ರಷ್ಟಿದೆ.<ref name="lg" /><ref>{{cite news |title=Kerala government to appoint officer to study issues of linguistic minorities |url=https://timesofindia.indiatimes.com/city/thiruvananthapuram/government-to-appoint-officer-to-study-issues-of-linguistic-minorities/articleshow/59892625.cms |date=2 August 2017 |newspaper=The Times of India |department=City: Thiruvananthapuram |agency=TNN |access-date=29 December 2019}}</ref>
=== ಧರ್ಮ ===
{{Main|ಕೇರಳದಲ್ಲಿ ಧರ್ಮ}}
{{multiple image
| direction = vertical
| total_width = 200
| caption_align = left
| image1 = Jain temple, Wayanad IMG 3494 by Joseph Lazer.jpg
| caption1 = [[ಸುಲ್ತಾನ್ ಬತ್ತೇರಿ|ಸುಲ್ತಾನ್ ಬತ್ತೇರಿಯ]] [[ಜೈನ ದೇವಾಲಯ, ಕಿಡಂಗನಾಡ್|ಜೈನ ದೇವಾಲಯ]].
| image3 = Cheraman juma masjid Old.jpg
| caption3 = ಮೂಲ [[ಚೇರಮನ್ ಜುಮಾ ಮಸೀದಿ]]ಯ ಮಾದರಿ.
| image4 = Palayoor St. Thomas Syro-Malabar Church.jpg
| caption4 = [[ಸೇಂಟ್ ತಾಮಸ್ ಸಿರೋ-ಮಲಬಾರ್ ಚರ್ಚ್, ಪಾಲಯೂರು]].
}}
{{Pie chart
|thumb = right
|caption = '''ಕೇರಳದಲ್ಲಿ ಧರ್ಮ''' (2011)<ref name="census_2016_religion">{{cite web |url=https://www.censusindia.gov.in/2011census/C-01/DDW00C-01%20MDDS.XLS |title=Population by religious community – 2011 |publisher=Office of the Registrar General & Census Commissioner |work=[[2011 Census of India]] |access-date=25 August 2015 |archive-url=https://web.archive.org/web/20150825155850/https://www.censusindia.gov.in/2011census/C-01/DDW00C-01%20MDDS.XLS |archive-date=25 August 2015}}</ref>
|label1 = [[ಕೇರಳದಲ್ಲಿ ಹಿಂದೂ ಧರ್ಮ|ಹಿಂದೂ ಧರ್ಮ]]
|value1 = 54.73
|color1 = darkorange
|label2 = [[ಕೇರಳದಲ್ಲಿ ಇಸ್ಲಾಂ|ಇಸ್ಲಾಂ]]
|value2 = 26.56
|color2 = Green
|label3 = [[ಕೇರಳದಲ್ಲಿ ಕ್ರಿಶ್ಚಿಯನ್ ಧರ್ಮ|ಕ್ರಿಶ್ಚಿಯನ್ ಧರ್ಮ]]
|value3 = 18.38
|color3 = dodgerblue
|label4 = ಇತರೆ ಅಥವಾ ಯಾವುದೂ ಅಲ್ಲ
|value4 = 0.32
|color4 = grey
}}
[[File:Kerala religions 2011.png|thumb|ಕೇರಳದ ಪ್ರತಿಯೊಂದು ತಾಲೂಕಿನಲ್ಲಿ ಅತ್ಯಂತ ಜನಪ್ರಿಯ ಧರ್ಮದ ಶೇಕಡಾವಾರು]]
ಕೇರಳವು [[ಹಿಂದೂಗಳು]], [[ಮುಸ್ಲಿಮರು]] ಮತ್ತು [[ಕ್ರೈಸ್ತರು]] ರಾಜ್ಯಾದ್ಯಂತ ಗಮನಾರ್ಹ ಜನಸಂಖ್ಯೆಯನ್ನು ಹೊಂದಿರುವ ಧಾರ್ಮಿಕವಾಗಿ ಬಹಳ ವೈವಿಧ್ಯಮಯವಾಗಿದೆ. ಕೇರಳವನ್ನು ಸಾಮಾನ್ಯವಾಗಿ ಭಾರತದ ಅತ್ಯಂತ ವೈವಿಧ್ಯಮಯ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref>{{cite web |url=https://thegroundtruthproject.org/paradox-indias-religiously-diverse-state/ |title=The paradox of India's most religiously diverse state |date=7 April 2019 |publisher=The Ground Truth Project |access-date=7 April 2019}}</ref><ref>{{cite web |url=https://www.huffpost.com/entry/kerala-religion-gender_b_9577234 |title=There's a Place in India Where Religions Coexist Beautifully and Gender Equality Is Unmatched |date=6 April 2016 |publisher=Huffpost |access-date=6 April 2016}}</ref> [[ಹಿಂದೂ ಧರ್ಮ]]ವು ಕೇರಳದಲ್ಲಿ ಅತಿ ವ್ಯಾಪಕವಾಗಿ ಅನುಸರಿಸಲ್ಪಡುವ ನಂಬಿಕೆಯಾಗಿದ್ದು, [[ಇಸ್ಲಾಂ]] ಮತ್ತು [[ಕ್ರಿಶ್ಚಿಯನ್ ಧರ್ಮ]]ಕ್ಕೆ ಗಮನಾರ್ಹ ಸಂಖ್ಯೆಯ ಅನುಯಾಯಿಗಳಿದ್ದಾರೆ. ಭಾರತದ ಉಳಿದ ಭಾಗಗಳಿಗೆ ಹೋಲಿಸಿದರೆ, ಕೇರಳವು ತುಲನಾತ್ಮಕವಾಗಿ ಕಡಿಮೆ [[ಸಂಪ್ರದಾಯವಾದ]]ವನ್ನು ಅನುಭವಿಸುತ್ತದೆ.<ref>{{Cite journal |last=Heller |first=Patrick |title=Social capital as a product of class mobilization and state intervention: Industrial workers in Kerala, India |journal=[[World Development (journal)|World Development]] |volume=24 |issue=6 |pages=1055–1071 |date=June 1996 |doi=10.1016/0305-750X(96)00015-0 <!-- |access-date=4 April 2022 --> |doi-access=free}}</ref> [[2011 ರ ಭಾರತದ ಜನಗಣತಿ]] ಅಂಕಿಅಂಶಗಳ ಪ್ರಕಾರ, ಕೇರಳದ ನಿವಾಸಿಗಳಲ್ಲಿ 54.7% ಹಿಂದೂಗಳು, 26.6% ಮುಸ್ಲಿಮರು, 18.4% ಕ್ರೈಸ್ತರು, ಮತ್ತು ಉಳಿದ 0.3% ರಷ್ಟು ಜನರು ಇನ್ನೊಂದು ಧರ್ಮವನ್ನು ಅನುಸರಿಸುತ್ತಾರೆ ಅಥವಾ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿಲ್ಲ.<ref name="censusindia2011religion">{{cite web |title=Population by religious communities |work=Census of India |url=https://www.censusindia.gov.in/2011census/C-01.html |publisher=Government of India |access-date=26 August 2015}}</ref> [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂಗಳು ಅತಿದೊಡ್ಡ ಧಾರ್ಮಿಕ ಗುಂಪನ್ನು ಪ್ರತಿನಿಧಿಸುತ್ತಾರೆ, ಅಲ್ಲಿ ಅವರು ಮುಸ್ಲಿಮರಿಂದ ಹಿಂದಿಕ್ಕಲ್ಪಟ್ಟಿದ್ದಾರೆ.<ref name="thehindu1">{{cite news |url=https://www.hindu.com/2004/09/23/stories/2004092306010500.htm |archive-url=https://web.archive.org/web/20041128124211/https://www.hindu.com/2004/09/23/stories/2004092306010500.htm |url-status=dead |archive-date=28 November 2004 |location=Chennai, India |title=Increase in Muslim population in the State |date=23 September 2004 |work=[[The Hindu]] |access-date=13 November 2015}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>{{cite news |url=https://timesofindia.indiatimes.com/india/Kerala-not-Goa-has-maximum-no-of-Christians/articleshow/2649158.cms |title=Kerala, not Goa, has maximum no. of Christians |work=The Times of India |date=25 December 2007 |publisher=The Times Group}}</ref> 2016 ರಂತೆ, ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಇತರರು ರಾಜ್ಯದಲ್ಲಿ ಒಟ್ಟು ಜನನಗಳ ಕ್ರಮವಾಗಿ 41.9%, 42.6%, 15.4% ಮತ್ತು 0.2% ರಷ್ಟಿದ್ದಾರೆ.<ref>{{Cite web |url=https://www.ecostat.kerala.gov.in/images/pdf/publications/Vital_Statistics/data/vital_statistics_2016.pdf |title=Vital Statistics 2016 |website=Ecostat, Kerala Government. |access-date=7 June 2019 |archive-date=11 July 2019 |archive-url=https://web.archive.org/web/20190711011809/http://www.ecostat.kerala.gov.in/images/pdf/publications/Vital_Statistics/data/vital_statistics_2016.pdf |url-status=dead}}</ref>
ಇಸ್ಲಾಂ ಕೇರಳಕ್ಕೆ ಬಂದಿತು, ಇದು ದೊಡ್ಡ [[ಹಿಂದೂ ಮಹಾಸಾಗರ]]ದ ಅಂಚಿನ ಭಾಗವಾಗಿದ್ದು, [[ಮಧ್ಯಪ್ರಾಚ್ಯ]]ದಿಂದ ಮಸಾಲೆ ಮತ್ತು ರೇಷ್ಮೆ ವ್ಯಾಪಾರಿಗಳ ಮೂಲಕ ಬಂದಿತು. ಇತಿಹಾಸಕಾರರು ಇಸ್ಲಾಂನ್ನು ಕೇರಳಕ್ಕೆ 7 ನೇ ಶತಮಾನ CE ಯಷ್ಟು ಹಿಂದೆಯೇ ಪರಿಚಯಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ.<ref name="indiatimes3">{{cite web |url=https://timesofindia.indiatimes.com/india/Trade-not-invasion-brought-Islam-to-India/articleshow/2144414.cms |title=Trade, not invasion brought Islam to India |last=Sethi |first=Atul |date=24 June 2007 |work=[[The Times of India]] |access-date=24 September 2014}}</ref><ref name="autogenerated20002">Katz 2000; Koder 1973; Thomas Puthiakunnel 1973; David de Beth Hillel, 1832; Lord, James Henry 1977.</ref> ಗಮನಾರ್ಹವಾಗಿ [[ಚೇರಮನ್ ಪೆರುಮಾಳ್ ತಾಜುದ್ದೀನ್]] ರ ದಂತಕಥೆಯು ಕಂಡುಬಂದಿದೆ, ಇದು [[ಅರೇಬಿಯಾ]]ಕ್ಕೆ ತೆರಳಿ [[ಮುಹಮ್ಮದ್]] ರನ್ನು ಭೇಟಿಯಾದ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪೌರಾಣಿಕ ಹಿಂದೂ ರಾಜನ ಕಥೆಯಾಗಿದೆ.<ref>{{cite book |last1=Varghese |first1=Theresa |title=Stark World Kerala |year=2006 |publisher=Stark World Pub. |isbn=978-8190250511 |url=https://books.google.com/books?id=lDhuAAAAMAAJ&q=cheraman+perumal+tajuddin |language=en}}</ref><ref>{{cite book |last1=Kumar |first1=Satish |title=India's National Security: Annual Review 2009 |year=2012 |url=https://books.google.com/books?id=x-esAgAAQBAJ&q=cheraman+perumal+tajuddin&pg=PA346 |publisher=Routledge |language=en |isbn=978-1-136-70491-8}}</ref><ref>Minu Ittyipe; [[Solomon]] to Cheraman; Outlook Indian Magazine; 2012</ref> ಕೇರಳ ಮುಸ್ಲಿಮರನ್ನು ಸಾಮಾನ್ಯವಾಗಿ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಎಂದು ಕರೆಯಲಾಗುತ್ತದೆ. ಮಾಪ್ಪಿಲರು ಕೇರಳದ ಮುಸ್ಲಿಂ ಜನಸಂಖ್ಯೆಯನ್ನು ರೂಪಿಸುವ ಅನೇಕ ಸಮುದಾಯಗಳಲ್ಲಿ ಒಂದಾಗಿದೆ.<ref name="KunhaliV2">Kunhali, V. "Muslim Communities in Kerala to 1798" PhD Dissertation Aligarh Muslim University (1986) [https://ir.amu.ac.in/2736/1/T%205242.pdf]</ref><ref name="Divakaruni20112">{{cite book |url=https://books.google.com/books?id=W0wLgfQyvFAC |title=The Palace of Illusions |author=Chitra Divakaruni |year=2011 |publisher=Pan Macmillan |isbn=978-0-330-47865-6 |access-date=18 November 2012}}</ref> [[ಚೇರಮನ್ ಪೆರುಮಾಳ್ಸ್ ದಂತಕಥೆ]]ಯ ಪ್ರಕಾರ, ಮೊದಲ ಭಾರತೀಯ ಮಸೀದಿಯನ್ನು {{CE|624}} ರಲ್ಲಿ [[ಕೊಡುಂಗಲ್ಲೂರು]] ನಲ್ಲಿ [[ಚೇರ ಸಾಮ್ರಾಜ್ಯ]]ದ ಕೊನೆಯ ಆಡಳಿತಗಾರ (ಚೇರಮನ್ ಪೆರುಮಾಳ್) ರ ಆದೇಶದಂತೆ ನಿರ್ಮಿಸಲಾಯಿತು, ಅವರು [[ಮುಹಮ್ಮದ್]] ({{Circa|570}}–632) ರ ಜೀವಿತಾವಧಿಯಲ್ಲಿ ಇಸ್ಲಾಂಗೆ ಮತಾಂತರಗೊಂಡರು.<ref>{{cite book |author=Jonathan Goldstein |title=The Jews of China |publisher=M. E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=Edward Simpson |author2=Kai Kresse |title=Struggling with History: Islam and Cosmopolitanism in the Western Indian Ocean |url=https://books.google.com/books?id=w0qHKA7zEaEC&pg=PA333 |access-date=24 July 2012 |year=2008 |publisher=Columbia University Press |isbn=978-0-231-70024-5 |pages=333}}</ref><ref name="Kupferschmidt1987">{{cite book |author=Uri M. Kupferschmidt |url=https://books.google.com/books?id=ChEVAAAAIAAJ&pg=PA458 |title=The Supreme Muslim Council: Islam Under the British Mandate for Palestine |publisher=Brill |year=1987 |isbn=978-9004079298 |pages=458–59 |access-date=25 July 2012 |archive-url=https://web.archive.org/web/20231125191234/https://books.google.com/books?id=ChEVAAAAIAAJ&pg=PA458 |archive-date=25 November 2023 |url-status=live}}</ref><ref name="Raṇṭattāṇi2007">{{cite book |author=Husain Raṇṭattāṇi |title=Mappila Muslims: A Study on Society and Anti Colonial Struggles |url=https://books.google.com/books?id=xlb5BrabQd8C&pg=PA179 |access-date=25 July 2012 |year=2007 |publisher=Other Books |isbn=978-8190388788 |pages=179–}}</ref>
ಪ್ರಾಚೀನ ಕ್ರಿಶ್ಚಿಯನ್ ಸಂಪ್ರದಾಯವು ಕ್ರಿಶ್ಚಿಯನ್ ಧರ್ಮವು 52 CE ಯಲ್ಲಿ [[ಯೇಸು ಕ್ರಿಸ್ತ]]ನ [[ಹನ್ನೆರಡು ಪ್ರೇರಿತರು|ಹನ್ನೆರಡು ಪ್ರೇರಿತರಲ್ಲಿ]] ಒಬ್ಬರಾದ [[ತಾಮಸ್ ಪ್ರೇರಿತ]]ನ ಆಗಮನದೊಂದಿಗೆ ಕೇರಳದ ತೀರವನ್ನು ತಲುಪಿತು ಎಂದು ಹೇಳುತ್ತದೆ.<ref>[https://books.google.com/books?id=lZUBZlth2qgC&q=Muziris ''The Encyclopedia of Christianity, Volume 5''] {{webarchive|url=https://web.archive.org/web/20161226115908/https://books.google.com/books?id=lZUBZlth2qgC&printsec=frontcover&dq=isbn%3A9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA|date=26 December 2016}} by Erwin Fahlbusch. Wm. B. Eerdmans Publishing – 2008. p. 285. {{ISBN|978-0802824172}}.</ref><ref>{{cite book |chapter-url=https://books.google.com/books?id=qhKGPprbQaYC&pg=PA27 |title=The Jews of India: A Story of Three Communities |editor-first=Orpa |editor-last=Slapak |publisher=The Israel Museum |location=Jerusalem |year=2003 |page=27 |isbn=9652781797 |chapter=The Cochin Jews Of Kerala |first=Barbara C. |last=Johnson}}</ref><ref name="Encyclopædia Britannica">{{cite web |url=https://www.britannica.com/EBchecked/topic/592851/Saint-Thomas |title=Saint Thomas |website=Encyclopædia Britannica |date=1 January 2019}}</ref><ref name="Menachery">Menachery G; 1973, 1998; Mundalan, A. M; 1984; Podipara, Placid J. 1970; Leslie Brown, 1956</ref> [[ಸೇಂಟ್ ತಾಮಸ್ ಕ್ರೈಸ್ತರು]] [[ಸಿರೋ-ಮಲಬಾರ್ ಚರ್ಚ್|ಸಿರೋ-ಮಲಬಾರ್ ಕ್ಯಾಥೋಲಿಕ್]],<ref name="Ponnumuthan1996">{{cite book |author=Selvister Ponnumuthan |title=Authentic Interpretation in Canon Law: Reflections on a Distinctively Canonical Institution |url=https://books.google.com/books?id=zcedqS4jOusC&pg=PA103 |access-date=18 November 2012 |year=1996 |publisher=Gregorian&Biblical BookShop |isbn=978-8876527210 |pages=103–}}</ref> [[ಸಿರೋ-ಮಲಂಕರ ಕ್ಯಾಥೋಲಿಕ್ ಚರ್ಚ್|ಸಿರೋ-ಮಲಂಕರ ಕ್ಯಾಥೋಲಿಕ್]],<ref name="Williams1996">{{cite book |author=Raymond Brady Williams |title=Christian Pluralism in the United States: The Indian Immigrant Experience |url=https://books.google.com/books?id=w1uk6zZQKzAC&pg=PA144 |access-date=18 November 2012 |year=1996 |publisher=Cambridge University Press |isbn=978-0-521-57016-9 |pages=144–}}</ref> [[ಜಾಕೋಬೈಟ್ ಸಿರಿಯನ್ ಕ್ರಿಶ್ಚಿಯನ್ ಚರ್ಚ್]],<ref name="AndersonTang2005">{{cite book |author1=Allan Anderson |author2=Edmond Tang |title=Asian and Pentecostal: The Charismatic Face of Christianity in Asia |url=https://books.google.com/books?id=LDZgKELq7AoC&pg=PA248 |access-date=18 November 2012 |year=2005 |publisher=OCMS |isbn=978-1-870345-43-9 |pages=248–}}</ref> [[ಮಾರ್ ತೋಮಾ ಸಿರಿಯನ್ ಚರ್ಚ್]],<ref>{{Cite book |title=John Anthony McGuckin (15 December 2010). The Encyclopedia of Eastern Orthodox Christianity. pp. 377–. Retrieved 18 November 2012. |publisher=John Wiley & Sons. |isbn=978-1-4443-9254-8 |year=2010}}</ref> [[ಮಲಂಕರ ಓರ್ಥೊಡಾಕ್ಸ್ ಸಿರಿಯನ್ ಚರ್ಚ್]],<ref name="Russell2010">{{cite book |author=Thomas Arthur Russell |title=Comparative Christianity: A Student's Guide to a Religion and Its Diverse Traditions |url=https://books.google.com/books?id=FmMarHDbglgC&pg=PT40 |access-date=18 November 2012 |year=2010 |publisher=Universal-Publishers |isbn=978-1-59942-877-2 |pages=40–}}</ref> [[CSI|CSI]] ಯ [[ಸೇಂಟ್ ತಾಮಸ್ ಆಂಗ್ಲಿಕನ್ನರು|ಸಿರಿಯನ್ ಆಂಗ್ಲಿಕನ್ನರು]]<ref>{{cite book |author=Stephen Neill |title=A History of Christianity in India: 1707–1858 |url=https://books.google.com/books?id=Xi-tvrYbYxMC&pg=PA240 |access-date=31 August 2012 |year=2002 |publisher=Cambridge University Press |isbn=978-0-521-89332-9 |pages=247–251}}</ref> ಮತ್ತು [[ಪೆಂಟೆಕೋಸ್ಟಲ್ ಸೇಂಟ್ ತಾಮಸ್ ಕ್ರೈಸ್ತರು]]<ref>{{cite book |last1=Bergunder |first1=Michael |title=The South Indian Pentecostal Movement in the Twentieth Century |year=2008 |publisher=Wm. B. Eerdmans Publishing |isbn=978-0-8028-2734-0 |pages=15–16, 26–30, 37–57 |url=https://books.google.com/books?id=XGiv3riaunQC&q=Pentecostal+evangelical+saint+thomas+syrian+christian |language=en}}</ref> ಸೇರಿದ್ದಾರೆ. ಕೇರಳದಲ್ಲಿ [[ಲ್ಯಾಟಿನ್ ಚರ್ಚ್|ಲ್ಯಾಟಿನ್ ಕ್ಯಾಥೋಲಿಕ್]] ಕ್ರೈಸ್ತರ ಮೂಲವು 16 ನೇ ಶತಮಾನದಲ್ಲಿ ಪೋರ್ಚುಗೀಸ್ [[ಪಡ್ರೊಡೊ]]ನ ಮಿಷನರಿ ಪ್ರಯತ್ನಗಳ ಪರಿಣಾಮವಾಗಿದೆ.<ref name="autogenerated1">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA192 |access-date=18 November 2012 |year=2007 |publisher=DC Books |isbn=978-8126415786 |pages=192–}}</ref><ref name="RakRaj2008">{{cite book |author1=Knut A. Jacobsen, Selva J. Rak |author2=Selva J. Raj |title=South Asian Christian Diaspora: Invisible Diaspora in Europe and North America |url=https://books.google.com/books?id=6L5MxlMIcG0C&pg=PA172 |access-date=18 November 2012 |year=2008 |publisher=Ashgate Publishing, Ltd. |isbn=978-0-7546-6261-7 |pages=172–}}</ref><ref name="Subramanian2009">{{cite book |author=Ajantha Subramanian |title=Shorelines: Space and Rights in South India |url=https://books.google.com/books?id=lsd55y4KbeYC&pg=PA95 |access-date=18 November 2012 |year=2009 |publisher=Stanford University Press |isbn=978-0-8047-8685-0 |pages=95–}}</ref> ವಸಾಹತುಶಾಹಿ ವಲಸಿಗರೊಂದಿಗೆ ಶತಮಾನಗಳ ಮಿಶ್ರಣದ ಪರಿಣಾಮವಾಗಿ, ಪೋರ್ಚುಗೀಸ್, ಡಚ್, ಫ್ರೆಂಚ್, ಬ್ರಿಟಿಷ್ ಮತ್ತು ಇತರ ಯುರೋಪಿಯನ್ನರಿಂದ ಪ್ರಾರಂಭಿಸಿ, ಕೇರಳದಲ್ಲಿ ಮಿಶ್ರ ಯುರೋಪಿಯನ್ ಮತ್ತು ಭಾರತೀಯ ಪೋಷಕತ್ವ ಅಥವಾ ಪೂರ್ವಜರ ಆಂಗ್ಲೋ-ಇಂಡಿಯನ್ ಸಮುದಾಯವಿದೆ. ಕೇರಳವು ಭಾರತದ ಎಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>Singh, Anjana. "Fort Cochin in Kerala 1750–1830 The Social Condition of a Dutch Community in an Indian Milieu." Brill, Leiden Boston: 2010, 3: 92.</ref>
[[ಯಹೂದಿ ಧರ್ಮ]]ವು 10 ನೇ ಶತಮಾನ BCE ಯಲ್ಲಿ [[ಸೊಲೊಮನ್|ರಾಜ ಸೊಲೊಮನ್]] ಕಾಲದಲ್ಲಿ ಕೇರಳವನ್ನು ತಲುಪಿತು.<ref>Weil, Shalva. "Jews in India." in M.Avrum Erlich (ed.) ''Encyclopedia of the Jewish Diaspora'', Santa Barbara, CA: ABC CLIO. 2008, 3: 1204–12.</ref> ಅವರನ್ನು [[ಕೊಚ್ಚಿ ಯಹೂದಿಗಳು]] ಅಥವಾ ಮಲಬಾರ್ ಯಹೂದಿಗಳು ಎಂದು ಕರೆಯಲಾಗುತ್ತದೆ ಮತ್ತು ಅವರು [[ಭಾರತದಲ್ಲಿ ಯಹೂದಿಗಳ ಇತಿಹಾಸ|ಭಾರತದಲ್ಲಿ ಅತ್ಯಂತ ಹಳೆಯ ಯಹೂದಿಗಳ ಗುಂಪು]] ಆಗಿದ್ದಾರೆ.<ref>[https://books.google.com/books?id=qhKGPprbQaYC&q=two+millennia ''The Israelis (Jews) of India: A Story of Three Communities''] {{webarchive|url=https://web.archive.org/web/20161226115854/https://books.google.com/books?id=qhKGPprbQaYC&printsec=frontcover&dq=isbn%3A9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA|date=26 December 2016}} by Orpa Slapak. The Israel Museum, Jerusalem. 2003. p. 27. {{ISBN|978-9652781796}}.</ref><ref>Weil, Shalva. India's Jewish Heritage: Ritual, Art and Life-Cycle, Mumbai: Marg Publications, 2009. [first published in 2002; 3rd edn.]. Katz 200/*Religion */ 0; Koder 1973; Menachery 1998</ref> 20 ನೇ ಶತಮಾನದವರೆಗೆ ಕೇರಳದಲ್ಲಿ ಗಮನಾರ್ಹವಾದ ಯಹೂದಿ ಸಮುದಾಯವು ಅಸ್ತಿತ್ವದಲ್ಲಿತ್ತು, ಅವರಲ್ಲಿ ಹೆಚ್ಚಿನವರು [[ಅಲಿಯಾ|ಇಸ್ರೇಲ್ಗೆ ವಲಸೆ]] ಹೋದರು.<ref name="Roland1998">{{cite book |author=Joan G. Roland |title=The Jewish Communities of India: Identity in a Colonial Era |url=https://books.google.com/books?id=kHJccZ92IecC&pg=PA283 |access-date=18 November 2012 |year=1998 |publisher=Transaction Publishers |isbn=978-0-7658-0439-6 |pages=283–}}</ref> [[ಕೊಚ್ಚಿ ಸಿನಾಗೋಗ್|ಪರದೇಶಿ ಸಿನಾಗೋಗ್]] [[ಕೊಚ್ಚಿ|ಕೊಚ್ಚಿಯಲ್ಲಿ]] [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಿನಾಗೋಗ್ ಆಗಿದೆ.<ref>{{cite web |title=Paradesi Synagogue – tourist attractions at Mattancherry, Ernakulam Kerala Tourism |url=https://www.keralatourism.org/kochi/paradeso-synagogue-mattancherry.php |website=www.keralatourism.org}}</ref> [[ಕೇರಳದಲ್ಲಿ ಜೈನ ಧರ್ಮ|ಜೈನ ಧರ್ಮ]]ವು [[ವಯನಾಡು ಜಿಲ್ಲೆ]]ಯಲ್ಲಿ ಗಣನೀಯ ಅನುಯಾಯಿಗಳನ್ನು ಹೊಂದಿದೆ.<ref name="LockieCarpenter2012">{{cite book |author1=Stewart Lockie |author2=David Carpenter |title=Agriculture, Biodiversity and Markets: Livelihoods and Agroecology in Comparative Perspective |url=https://books.google.com/books?id=cZvlmpwviuMC&pg=PT258 |access-date=18 November 2012 |year=2012 |publisher=Routledge |isbn=978-1-136-54649-5 |page=258}}</ref><ref name="MathewBaviskar2009">{{cite book |author1=George Mathew |author2=B S Baviskar |title=Inclusion and Exclusion in Local Governance: Field Studies from Rural India |url=https://books.google.com/books?id=DsDOrvROzPEC&pg=PA204 |access-date=18 November 2012 |year=2009 |publisher=Sage Publications |isbn=978-8178298603 |page=204}}</ref>
== ಶಿಕ್ಷಣ ==
{{Main|ಕೇರಳದಲ್ಲಿ ಶಿಕ್ಷಣ}}
{{multiple image
<!-- Layout parameters -->| align = <!-- right (default), left, centre, none -->
| direction = vertical
| width = 225
<!--image1-->| image1 = University of Kerala.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಶ್ವವಿದ್ಯಾಲಯ]]
<!--image 2-->}}
[[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]] 14 ಮತ್ತು 16 ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದಿತು. ಖಗೋಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಕೇರಳ ಶಾಲೆಯು ಸ್ವತಂತ್ರವಾಗಿ ಹಲವಾರು ಪ್ರಮುಖ ಗಣಿತ ಪರಿಕಲ್ಪನೆಗಳನ್ನು ರಚಿಸಿತು, ಇವುಗಳಲ್ಲಿ ತ್ರಿಕೋನಮಿತಿಯ ಕಾರ್ಯಗಳಿಗಾಗಿ [[ಸರಣಿ ವಿಸ್ತರಣೆ]] ಸೇರಿದೆ.<ref name="roy">{{cite journal |last=Roy |first=Ranjan |year=1990 |title=Discovery of the Series Formula for π by Leibniz, Gregory, and Nilakantha |journal=Mathematics Magazine |volume=63 |issue=5 |pages=291–306 |doi=10.2307/2690896 |jstor=2690896}}</ref><ref>{{Citation |last=Pingree |first=David |author-link=David Pingree |title=Hellenophilia versus the History of Science |year=1992 |journal=Isis |volume=83 |issue=4 |pages=554–63 |jstor=234257 |doi=10.1086/356288 |quote=One example I can give you relates to the Indian Mādhava's demonstration, in about 1400 A.D., of the infinite power series of trigonometrical functions using geometrical and algebraic arguments. When this was first described in English by Charles Whish, in the 1830s, it was heralded as the Indians' discovery of the calculus. This claim and Mādhava's achievements were ignored by Western historians, presumably at first because they could not admit that an Indian discovered the calculus, but later because no one read anymore the ''Transactions of the Royal Asiatic Society'', in which Whish's article was published. The matter resurfaced in the 1950s, and now we have the Sanskrit texts properly edited, and we understand the clever way that Mādhava derived the series ''without'' the calculus, but many historians still find it impossible to conceive of the problem and its solution in terms of anything other than the calculus and proclaim that the calculus is what Mādhava found. In this case, the elegance and brilliance of Mādhava's mathematics are being distorted as they are buried under the current mathematical solution to a problem to which he discovered an alternate and powerful solution. |bibcode=1992Isis...83..554P |s2cid=68570164}}</ref> 19 ನೇ ಶತಮಾನದ ಆರಂಭಿಕ ದಶಕಗಳಲ್ಲಿ, ಕೇರಳದ ಆಧುನಿಕ ಶೈಕ್ಷಣಿಕ ಪರಿವರ್ತನೆಯು ಸಾಮೂಹಿಕ ಶಿಕ್ಷಣವನ್ನು ಉತ್ತೇಜಿಸಲು [[ಚರ್ಚ್ ಮಿಷನ್ ಸೊಸೈಟಿ]] ಮಿಷನರಿಗಳ ಪ್ರಯತ್ನಗಳಿಂದ ಪ್ರೇರೇಪಿಸಲ್ಪಟ್ಟಿತು.<ref>{{cite news |title=Missionaries led State to renaissance: Pinarayi |newspaper=The Hindu |date=13 November 2016 |url=https://www.thehindu.com/news/national/kerala/Missionaries-led-State-to-renaissance-Pinarayi/article16444369.ece |quote=Inaugurating on Saturday the valedictory of the bicentenary celebration of the arrival of Church Mission Society (CMS) missionaries to the shores of Kerala, Mr. Vijayan said it was their pioneering work in the fields of education, literature, printing, publishing, women's education, education of the differently-abled and, in general, a new social approach through the inclusion of marginalised sections into the mainstream which brought the idea of 'equality' into the realm of public consciousness. This had raised the standard of public consciousness and paved the way for the emergence of the renaissance movements in the State.}}</ref><ref>{{cite web |title=Kerala to celebrate CMS mission |url=https://churchmissionsociety.org/our-stories/kerala-celebrate-cms-mission |date=9 November 2016 |website=Church Mission Society |access-date=4 April 2022 |quote=Indian President Pranab Mukherjee, visited CMS College in Kerala, the oldest college in India, and laid the foundation stone of the bicentenary block. He said, 'CMS college is a pioneer of modern education in Kerala. It has been the source of strong currents of knowledge and critical inquiry that have moulded the scholastic and socio-cultural landscape of Kerala and propelled the State to the forefront of social development.'{{hsp}} }}</ref><ref>{{Cite journal |last1=Mathew |first1=E. T. |url=https://www.epw.in/journal/1999/39/special-articles/growth-literacy-kerala.html |title=Growth of Literacy in Kerala |date=5 June 2015 |journal=Economic and Political Weekly |volume=34 |issue=1999 |pages=7–8 |via=www.epw.in}}</ref><ref>{{cite book |title=District Handbooks of Kerala |url=https://www.kerala.gov.in/district_handbook/Kottayam.pdf |date=March 2003 |archive-url=https://web.archive.org/web/20090319183020/https://www.kerala.gov.in/district_handbook/Kottayam.pdf |archive-date=19 March 2009 |url-status=dead |pages=19–20 |publisher=Department of Information & Public Relations Government of Kerala |access-date=4 April 2022}}</ref><ref>{{cite book |last=Menon |first=Sreedhara |title=A survey of Kerala History |year=1996 |publisher=S.Viswanathan Printers and Publishers |location=Madras |pages=339, 348–49 |isbn=978-8126415786 |url=https://onlinestore.dcbooks.com/books/a-survey-of-kerala-history |access-date=20 March 2019 |archive-date=24 August 2019 |archive-url=https://web.archive.org/web/20190824143707/https://onlinestore.dcbooks.com/books/a-survey-of-kerala-history |url-status=dead}}</ref> 1854 ರ [[ವುಡ್ಸ್ ಡೆಸ್ಪ್ಯಾಚ್]] ನ ಶಿಫಾರಸುಗಳನ್ನು ಅನುಸರಿಸಿ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು ಮುಖ್ಯವಾಗಿ ಜಾತಿಗಳು ಮತ್ತು ಸಮುದಾಯಗಳ ಆಧಾರದ ಮೇಲೆ ಸಾಮೂಹಿಕ ಶಿಕ್ಷಣ ಅಭಿಯಾನಗಳನ್ನು ಪ್ರಾರಂಭಿಸಿದವು ಮತ್ತು ಹೆಚ್ಚು ಖಾಸಗಿ ಉಪಕ್ರಮಗಳನ್ನು ಆಕರ್ಷಿಸಲು [[ಅನುದಾನ-ಸಹಾಯ]] ವ್ಯವಸ್ಥೆಯನ್ನು ಪರಿಚಯಿಸಿದವು.<ref name="Devrep53-58" /> [[ಸೇಂಟ್ ತಾಮಸ್ ಕಾಲೇಜು, ತೃಶೂರ್|ಸೇಂಟ್ ತಾಮಸ್ ಕಾಲೇಜು ತೃಶೂರ್]] ಮತ್ತು [[ಸೇಂಟ್ ಬರ್ಚ್ಮನ್ಸ್ ಕಾಲೇಜು|ಎಸ್ಬಿ ಕಾಲೇಜು ಚಂಗನಾಶ್ಶೇರಿ]] ನಂತಹ ಕ್ಯಾಥೋಲಿಕ್ ಸಂಸ್ಥೆಗಳನ್ನು ಕ್ಯಾಥೋಲಿಕ್ ಚರ್ಚ್ನ ನೇತೃತ್ವದಲ್ಲಿ ಸ್ಥಾಪಿಸಲಾಯಿತು. [[ಕುರಿಯಾಕೋಸ್ ಎಲಿಯಾಸ್ ಚಾವರ|ಫಾ. ಕುರಿಯಾಕೋಸ್ ಎಲಿಯಾಸ್ ಚಾವರ]], [[ಚಾರ್ಲ್ಸ್ ಲಾವಿಗ್ನೆ|ಮಾರ್ ಚಾರ್ಲ್ಸ್ ಲಾವಿಗ್ನೆ SJ]], [[ಆಯ್ಯಾ ವೈಕುಂಡರ್|ವೈಕುಂಡ ಸ್ವಾಮಿ]], [[ನಾರಾಯಣ ಗುರು]] ಮತ್ತು [[ಅಯ್ಯಂಕಾಳಿ]] ರಂತಹ ನಾಯಕರ ಪ್ರಯತ್ನಗಳು ರಾಜ್ಯದಲ್ಲಿ ಸಾಮಾಜಿಕವಾಗಿ ತಾರತಮ್ಯಕ್ಕೊಳಗಾದ ಜಾತಿಗಳಿಗೆ ಸಹಾಯ ಮಾಡುವಲ್ಲಿ—[[ನಾಯರ್ ಸೇವಾ ಸೊಸೈಟಿ]], [[ಶ್ರೀ ನಾರಾಯಣ ಟ್ರಸ್ಟ್|ಎಸ್ಎನ್ಡಿಪಿ]], [[ಮುಸ್ಲಿಂ ಶೈಕ್ಷಣಿಕ ಸೊಸೈಟಿ]], ಮುಸ್ಲಿಂ ಮಹಾಜನ ಸಭಾ, ಯೋಗ ಕ್ಷೇಮ ಸಭಾ (ನಂಬೂದಿರಿಗಳ) ಮತ್ತು ಕ್ರಿಶ್ಚಿಯನ್ ಚರ್ಚುಗಳ ಸಭೆಗಳಂತಹ ಸಮುದಾಯ-ಆಧಾರಿತ ಸಂಸ್ಥೆಗಳ ಸಹಾಯದಿಂದ—ಕೇರಳದಲ್ಲಿ ಸಾಮೂಹಿಕ ಶಿಕ್ಷಣದ ಮತ್ತಷ್ಟು ಅಭಿವೃದ್ಧಿಗೆ ಕಾರಣವಾಯಿತು.<ref name="Devrep53-58">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=53–58 |access-date=30 May 2015}}</ref>
1991 ರಲ್ಲಿ, ಕೇರಳವು ಸಂಪೂರ್ಣವಾಗಿ ಸಾಕ್ಷರವೆಂದು ಗುರುತಿಸಲ್ಪಟ್ಟ ಭಾರತದ ಮೊದಲ ರಾಜ್ಯವಾಯಿತು, ಆ ಸಮಯದಲ್ಲಿ ಪರಿಣಾಮಕಾರಿ ಸಾಕ್ಷರತಾ ಪ್ರಮಾಣವು ಕೇವಲ 90% ಆಗಿತ್ತು.<ref name="Soundarapandian2000">{{cite book |author=Mookkiah Soundarapandian |title=Literacy Campaign in India |url=https://books.google.com/books?id=KVhHEC449yoC&pg=PA21 |year=2000 |publisher=Discovery Publishing House |isbn=978-8171415533 |page=21}}</ref> 2006–2007 ರಲ್ಲಿ, ರಾಜ್ಯವು ಭಾರತದ 21 ಪ್ರಮುಖ ರಾಜ್ಯಗಳಲ್ಲಿ ಶಿಕ್ಷಣ ಅಭಿವೃದ್ಧಿ ಸೂಚ್ಯಂಕದಲ್ಲಿ (EDI) ಅಗ್ರಸ್ಥಾನದಲ್ಲಿತ್ತು.<ref>{{Cite news |author=D Suresh Kumar |url=https://timesofindia.indiatimes.com/india/Kerala-tops-primary-education-index/articleshow/3587924.cms |title=Kerala tops primary education index |work=The Times of India |date=13 October 2008 |access-date=30 July 2009}}</ref> ೨೦೦೭ ರಂತೆ, ಪ್ರಾಥಮಿಕ ಶಿಕ್ಷಣದಲ್ಲಿ ದಾಖಲಾತಿಯು ಸುಮಾರು 100% ಆಗಿತ್ತು; ಮತ್ತು, ಭಾರತದ ಇತರ ರಾಜ್ಯಗಳಿಗಿಂತ ಭಿನ್ನವಾಗಿ, ಶೈಕ್ಷಣಿಕ ಅವಕಾಶವು ಲಿಂಗಗಳು, ಸಾಮಾಜಿಕ ಗುಂಪುಗಳು ಮತ್ತು ಪ್ರದೇಶಗಳ ನಡುವೆ ಸುಮಾರು ಸಮಾನವಾಗಿ ಹಂಚಿಕೆಯಾಗಿತ್ತು.<ref name="Devrep255-258">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=255–58 |access-date=30 May 2015}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 93.9% ಸಾಕ್ಷರತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸಾಕ್ಷರತಾ ಪ್ರಮಾಣ 74.0% ಕ್ಕೆ ಹೋಲಿಸಿದರೆ.<ref name="IBNLiteracy2013">{{cite news |title=Tripura tops literacy rate with 94.65 per cent, leaves behind Kerala |url=https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |archive-url=https://web.archive.org/web/20130913005546/https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |url-status=dead |archive-date=13 September 2013 |access-date=12 February 2015 |work=IBNLive |date=9 September 2013}}</ref> ಜನವರಿ 2016 ರಲ್ಲಿ, ಕೇರಳವು ತನ್ನ ''ಅಥುಲ್ಯಂ'' ಸಾಕ್ಷರತಾ ಕಾರ್ಯಕ್ರಮದ ಮೂಲಕ 100% ಪ್ರಾಥಮಿಕ ಶಿಕ್ಷಣವನ್ನು ಸಾಧಿಸಿದ ಭಾರತದ ಮೊದಲ ರಾಜ್ಯವಾಯಿತು.<ref>{{cite news |url=https://www.ibtimes.co.in/kerala-becomes-1st-indian-state-achieve-100-primary-education-662878 |title=Kerala becomes 1st Indian state to achieve 100% primary education |date=12 January 2016 |access-date=14 January 2016 |work=International Business Times}}</ref>
ರಾಜ್ಯದ ಶಾಲೆಗಳಲ್ಲಿ ಪ್ರಚಲಿತದಲ್ಲಿರುವ ಶಿಕ್ಷಣ ವ್ಯವಸ್ಥೆಯು 10-ವರ್ಷದ ಅಧ್ಯಯನದ ಆರಂಭಿಕ ಕೋರ್ಸ್ ಅನ್ನು ನಿರ್ದಿಷ್ಟಪಡಿಸುತ್ತದೆ, ಇದನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ: ಕೆಳಗಿನ ಪ್ರಾಥಮಿಕ, ಮೇಲಿನ ಪ್ರಾಥಮಿಕ, ಮತ್ತು ಮಾಧ್ಯಮಿಕ ಶಾಲೆ—''4+3+3'' ಎಂದು ಕರೆಯಲ್ಪಡುತ್ತದೆ, ಇದು ಪ್ರತಿ ಹಂತದ ವರ್ಷಗಳ ಸಂಖ್ಯೆಯನ್ನು ಸೂಚಿಸುತ್ತದೆ.<ref name="Devrep255-258" /> ಮೊದಲ 10 ವರ್ಷಗಳ ಶಾಲಾ ಶಿಕ್ಷಣದ ನಂತರ, ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ಪ್ರಮುಖ ವಿಷಯಗಳಲ್ಲಿ ಒಂದರಲ್ಲಿ—[[ಉದಾರ ಕಲೆಗಳು]], ವಾಣಿಜ್ಯ, ಅಥವಾ ವಿಜ್ಞಾನ—[[ಜೂನಿಯರ್ ಕಾಲೇಜು|ಹೈಯರ್ ಸೆಕೆಂಡರಿ ಶಾಲಾ]] ಶಿಕ್ಷಣಕ್ಕೆ ದಾಖಲಾಗುತ್ತಾರೆ.<ref name="Edu_Ker" /> ಹೆಚ್ಚಿನ ಸರ್ಕಾರಿ ಶಾಲೆಗಳು [[ಕೇರಳ ಬೋರ್ಡ್ ಆಫ್ ಪಬ್ಲಿಕ್ ಎಕ್ಸಾಮಿನೇಷನ್]] ನೊಂದಿಗೆ ಸಂಯೋಜಿತವಾಗಿವೆ.<ref>{{Cite web |url=https://sametham.kite.kerala.gov.in/ |title=Kerala School Data Bank |access-date=5 December 2020 |website=sametham.kite.kerala.gov.in |publisher=Government of Kerala}}</ref> ಇತರ ಶೈಕ್ಷಣಿಕ ಮಂಡಳಿಗಳೆಂದರೆ [[ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ]] (ICSE), [[ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ]] (CBSE), ಮತ್ತು [[ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ]] (NIOS).<ref name="Edu_Ker">{{cite web |title=Education in Kerala |url=https://india.gov.in/knowindia/state_uts.php?id=54 |archive-url=https://web.archive.org/web/20111218082340/https://india.gov.in/knowindia/state_uts.php?id=54 |archive-date=18 December 2011 |publisher=Government of India |access-date=30 May 2015}}</ref>
== ಸಂಸ್ಕೃತಿ ==
{{Main|ಕೇರಳದ ಸಂಸ್ಕೃತಿ}}
{{Multiple image
| direction = vertical
| width = 220
| image1 = Kathakali BNC.jpg
| alt1 = Kathakali Performance
| caption1 = ಒಬ್ಬ [[ಕಥಕ್ಕಳಿ]] ಕಲಾವಿದ
| image4 = 5 image collage of floral arrangement during the Hindu festival of Onam Kerala.jpg
| alt4 = Pookkalam
| caption4 = [[ಓಣಂ]] ಸಮಯದಲ್ಲಿ, ಕೇರಳದ ಅತಿದೊಡ್ಡ ಆಚರಣೆ, ಕೇರಳೀಯರು ತಮ್ಮ ಮನೆಗಳ ಮುಂದೆ ''ಪೂಕ್ಕಲಂ'' (ಹೂವಿನ ಕಾರ್ಪೆಟ್) ವಿನ್ಯಾಸಗಳನ್ನು ರಚಿಸುತ್ತಾರೆ.
| image5 = ThrissurPooram-Kuda.jpg
| alt5 = Thrissur Pooram festival
| caption5 = [[ತೃಶೂರ್ ಪೂರಂ]] ಹಬ್ಬ
| image6 = Mohiniyattam at Kerala School Kalolsavam 2019 02.jpg
| alt6 = Mohiniattam
| caption6 = ಒಂದು ''[[ಮೋಹಿನಿಯಾಟ್ಟಂ]]'' ಪ್ರದರ್ಶನ
| image8 = sadhya DSW.jpg
| caption8 = ಓಣಂ [[ಸಾಧ್ಯ]]
| total_width =
}}
ಕೇರಳದ ಸಂಸ್ಕೃತಿಯು ಮಿಶ್ರ ಮತ್ತು ವಿಶ್ವವ್ಯಾಪಿ ಸ್ವರೂಪದ್ದಾಗಿದೆ ಮತ್ತು ಇದು [[ಭಾರತೀಯ ಸಂಸ್ಕೃತಿ]]ಯ ಅವಿಭಾಜ್ಯ ಅಂಗವಾಗಿದೆ.<ref name="Menon3">{{cite book |title=Cultural Heritage of Kerala |author=A. Sreedhara Menon |publisher=D C Books |year=2008 |isbn=978-8126419036 |pages=13–15 |url=https://books.google.com/books?id=S9RMxjdjUVAC |access-date=30 May 2015}}</ref> ಇದು [[ಇಂಡೋ-ಆರ್ಯನ್ ಜನರು|ಆರ್ಯ]], [[ದಕ್ಷಿಣ ಭಾರತೀಯ ಸಂಸ್ಕೃತಿ|ದ್ರಾವಿಡ]], [[ಅರಬ್ ಸಂಸ್ಕೃತಿ|ಅರಬ್]], ಮತ್ತು [[ಯುರೋಪಿನ ಸಂಸ್ಕೃತಿ|ಯುರೋಪಿಯನ್]] ಸಂಸ್ಕೃತಿಗಳ ಸಮ್ಮಿಳನವಾಗಿದೆ,<ref>{{Cite book |url=https://books.google.com/books?id=FVsw35oEBv4C |title=A Survey Of Kerala History |last=Menon |first=A. Sreedhara |year=2007 |publisher=DC Books |isbn=978-8126415786 |page=55 |language=en}}</ref> ಇದು ಸಹಸ್ರಮಾನಗಳಲ್ಲಿ, ಭಾರತದ ಇತರ ಭಾಗಗಳು ಮತ್ತು ವಿದೇಶಗಳಿಂದ ಪ್ರಭಾವಗಳ ಅಡಿಯಲ್ಲಿ ಅಭಿವೃದ್ಧಿಗೊಂಡಿದೆ.<ref name="Menon1978a">{{cite book |author=A. Sreedhara Menon |title=Cultural Heritage of Kerala: An Introduction |url=https://books.google.com/books?id=px5BAAAAMAAJ |year=1978 |publisher=East-West Publications |page=10}}</ref> ಇದು ಅದರ ಪ್ರಾಚೀನತೆ ಮತ್ತು [[ಮಲಯಾಳಿ ಜನರು]] ನಿರ್ವಹಿಸುವ ಸಾವಯವ ನಿರಂತರತೆಯಿಂದ ವ್ಯಾಖ್ಯಾನಿಸಲ್ಪಟ್ಟಿದೆ.<ref>{{cite book |title=Contribution of Travancore to Karnatic Music |url=https://books.google.com/books?id=VVftZwEACAAJ |year=2004 |publisher=Information & Public Relations Department, Government of Kerala |pages=7–37}}</ref> ಇದು ನೆರೆಯ ಮತ್ತು ವಿದೇಶಿ ಸಂಸ್ಕೃತಿಗಳೊಂದಿಗೆ ಶತಮಾನಗಳ ಸಂಪರ್ಕದ ಮೂಲಕ ವಿಸ್ತರಿಸಲ್ಪಟ್ಟಿದೆ.<ref name="Bhagyalekshmy_2004d_29">{{cite book |author=S. Bhagyalekshmy |title=Contribution of Travancore to Karnatic Music |url=https://books.google.com/books?id=VVftZwEACAAJ |access-date=6 January 2013 |year=2004 |publisher=Information & Public Relations Department, Government of Kerala}}</ref> ಆದಾಗ್ಯೂ, ಕೇರಳದ ದೇಶದ ಉಳಿದ ಭಾಗಗಳಿಂದ ಭೌಗೋಳಿಕ ಪ್ರತ್ಯೇಕತೆಯು ವಿಶಿಷ್ಟವಾದ ಜೀವನಶೈಲಿ, ಕಲೆ, ವಾಸ್ತುಶಿಲ್ಪ, ಭಾಷೆ, ಸಾಹಿತ್ಯ ಮತ್ತು ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿಗೆ ಕಾರಣವಾಗಿದೆ.<ref name="Menon3" /> ರಾಜ್ಯದಲ್ಲಿ ಪ್ರತಿ ವರ್ಷ 10,000 ಕ್ಕೂ ಹೆಚ್ಚು ಹಬ್ಬಗಳನ್ನು ಆಚರಿಸಲಾಗುತ್ತದೆ.<ref name="1000hrs">{{cite news |date=4 March 2010 |title=India's overworked elephants |url=https://news.bbc.co.uk/2/hi/south_asia/8533776.stm |access-date=30 May 2015 |work=BBC}}</ref> ಕೇರಳದಲ್ಲಿ 825 CE ಯಿಂದ ಪ್ರಾರಂಭವಾದ ಸೌರ ನಾಕ್ಷತ್ರಿಕ ಕ್ಯಾಲೆಂಡರ್ ಆಗಿರುವ [[ಮಲಯಾಳಂ ಕ್ಯಾಲೆಂಡರ್]],<ref name="Devika2005">{{cite book |author=J. Devika |title=Her-self: Early Writings on Gender by Malayalee Women, 1898–1938 |url=https://books.google.com/books?id=Xyr6gXmva-gC&pg=PA5 |access-date=17 November 2012 |year=2005 |publisher=Popular Prakashan |isbn=978-8185604749 |page=5}}</ref> ಕೃಷಿ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಯೋಜಿಸುವಲ್ಲಿ ಸಾಮಾನ್ಯ ಬಳಕೆಯನ್ನು ಕಂಡುಕೊಳ್ಳುತ್ತದೆ.<ref name="Singh2004">{{cite book |author=Kumar Suresh Singh |title=People of India: Maharashtra |url=https://books.google.com/books?id=4bfmnmsBfQ4C&pg=PA1524 |access-date=17 November 2012 |year=2004 |publisher=Popular Prakashan |isbn=978-8179911020 |page=1524}}</ref> ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ [[ಮಲಯಾಳಂ]] ಕೇರಳದ [[ಅಧಿಕೃತ ಭಾಷೆ]]ಯಾಗಿದೆ.<ref name="Benedikter2009">{{cite book |author=Thomas Benedikter |title=Language Policy and Linguistic Minorities in India: An Appraisal of the Linguistic Rights of Minorities in India |url=https://books.google.com/books?id=vpZv2GHM7VQC&pg=PA90 |access-date=18 November 2012 |year=2009 |publisher=LIT Verlag Münster |isbn=978-3-643-10231-7 |page=90}}</ref> ಭಾರತದಲ್ಲಿ [[ಅಧಿಕೃತ ಸ್ಥಾನಮಾನ ಹೊಂದಿರುವ ಭಾಷೆಗಳು|ನಿಗದಿತ ಮತ್ತು ಅನಿಗದಿತ]] ಭಾಷೆಗಳಲ್ಲಿ ಒಂದು ಡಜನ್ಗಿಂತಲೂ ಹೆಚ್ಚು ಭಾಷೆಗಳನ್ನು ಮಾತನಾಡಲಾಗುತ್ತದೆ.<ref name="census2011-langreport">{{cite web |title=Language – India, States and Union Territories |url=https://www.censusindia.gov.in/2011Census/C-16_25062018_NEW.pdf |work=Census of India 2011 |publisher=Office of the Registrar General |pages=13–14}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಮದ್ಯ ಸೇವನೆಯನ್ನು ಹೊಂದಿದೆ.<ref>{{Cite news |url=https://www.bbc.co.uk/news/world-asia-india-51372583 |title=Shock after alcohol flows from kitchen taps in Kerala |work=BBC News |date=6 February 2020}}</ref>
=== ಹಬ್ಬಗಳು ===
{{Main|ಕೇರಳದ ದೇವಾಲಯ ಹಬ್ಬಗಳು|ಓಣಂ}}
ಕೇರಳದಲ್ಲಿನ ಅನೇಕ ದೇವಾಲಯಗಳು ವರ್ಷದ ನಿರ್ದಿಷ್ಟ ದಿನಗಳಲ್ಲಿ ಹಬ್ಬಗಳನ್ನು ನಡೆಸುತ್ತವೆ.<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA76 |year=2008 |publisher=D.C. Books |isbn=978-8126419036 |page=76}}</ref> ಈ ಹಬ್ಬಗಳ ಸಾಮಾನ್ಯ ಲಕ್ಷಣವೆಂದರೆ ಪವಿತ್ರ ಧ್ವಜವನ್ನು ಏರಿಸುವುದು, ಅದನ್ನು ಹಬ್ಬದ ಕೊನೆಯ ದಿನದಂದು ದೇವತೆಯನ್ನು ಮುಳುಗಿಸಿದ ನಂತರ ಇಳಿಸಲಾಗುತ್ತದೆ.<ref>{{cite book |title=The Legacy of Kerala |url=https://books.google.com/books?id=S9RMxjdjUVAC&pg=PA34 |year=1982 |publisher=Department of Public Relations, Government of Kerala |isbn=978-8126437986 |page=34}}</ref> ಕೆಲವು ಹಬ್ಬಗಳು ಪೂರಂಗಳನ್ನು ಒಳಗೊಂಡಿವೆ, ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು [[ತೃಶೂರ್ ಪೂರಂ]].<ref>{{cite book |title=World Encyclopaedia of Interfaith Studies: World religions |url=https://books.google.com/books?id=fFwi7qRRgosC |year=2009 |publisher=Jnanada Prakashan |isbn=978-8171392803 |pages=704–10}}</ref> "ಆನೆಗಳು, ಪಟಾಕಿ ಪ್ರದರ್ಶನಗಳು ಮತ್ತು ದೊಡ್ಡ ಗುಂಪುಗಳು" ತೃಶೂರ್ ಪೂರಂನ ಪ್ರಮುಖ ಆಕರ್ಷಣೆಗಳಾಗಿವೆ.<ref>{{Cite news |title=The stars of Pooram show are jumbos |date=26 May 2006 |access-date=11 November 2007 |url=https://www.hindu.com/2006/05/26/stories/2006052610410500.htm |archive-url=https://web.archive.org/web/20071118212644/https://www.hindu.com/2006/05/26/stories/2006052610410500.htm |url-status=dead |archive-date=18 November 2007 |work=[[The Hindu]] |location=Chennai, India}}</ref> ಇತರ ಪ್ರಸಿದ್ಧ ಹಬ್ಬಗಳೆಂದರೆ [[ಮಕರವಿಳಕ್ಕು]],<ref name="Ltd.2013b">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA433 |year=2013 |publisher=Biju Mathew |isbn=978-8192128443 |page=433}}</ref> [[ಚಿನಕ್ಕತ್ತೂರು ಪೂರಂ]], [[ಅಟ್ಟುಕಲ್ ಪೊಂಗಲ]] ಮತ್ತು [[ನೆನ್ಮಾರ ವಲ್ಲಂಗಿ ವೇಳ]]<ref name="Stott2014">{{cite book |author=David Stott |title=Kerala Footprint Focus Guide: Includes Kochi, Alappuzha, Thrissur, Periyar, River Nila |url=https://books.google.com/books?id=-Jx8AwAAQBAJ&pg=PA94 |year=2014 |publisher=Footprint Travel Guides |isbn=978-1-909268-79-1 |page=94}}</ref> ಇವುಗಳ ಜೊತೆಗೆ, ಸ್ಥಳೀಯವಾಗಿ [[ಉತ್ಸವ]]ಗಳು ಎಂದು ಕರೆಯಲ್ಪಡುವ ಹಬ್ಬಗಳನ್ನು ಹೆಚ್ಚಿನ ದೇವಾಲಯಗಳು ವಾರ್ಷಿಕ ಆಧಾರದ ಮೇಲೆ ನಡೆಸುತ್ತವೆ. ಅದನ್ನು ಪಡೆದುಕೊಳ್ಳುವ ದೇವಾಲಯಗಳು ಸಾಮಾನ್ಯವಾಗಿ ಹಬ್ಬದ ಭಾಗವಾಗಿ ಕನಿಷ್ಠ ಒಂದು ಶ್ರೀಮಂತವಾಗಿ ಅಲಂಕರಿಸಿದ ಆನೆಯನ್ನು ಒಳಗೊಳ್ಳುತ್ತವೆ. ದೇವಾಲಯದಲ್ಲಿನ ವಿಗ್ರಹವನ್ನು ಈ ಆನೆಯ ಮೇಲೆ ಗ್ರಾಮಾಂತರದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ಮೆರವಣಿಗೆಯು ದೇವಾಲಯದ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿದಾಗ, ಜನರು ಸಾಮಾನ್ಯವಾಗಿ ಅಕ್ಕಿ, ತೆಂಗಿನಕಾಯಿ ಮತ್ತು ಇತರ ಕಾಣಿಕೆಗಳನ್ನು ನೀಡುತ್ತಾರೆ.<ref name="NarayananKurup1976">{{cite book |author1=M. G. S. Narayanan |author2=K. K. N. Kurup |title=Historical Studies in Kerala |url=https://books.google.com/books?id=mvELAAAAIAAJ |year=1976 |publisher=Department of History, University of Calicut |pages=68–81}}</ref> ಮೆರವಣಿಗೆಗಳು ಹೆಚ್ಚಾಗಿ [[ಪಂಚಾರಿ ಮೇಳಂ]] ಅಥವಾ [[ಪಂಚವಾದ್ಯ]]ದಂತಹ ಸಾಂಪ್ರದಾಯಿಕ ಸಂಗೀತವನ್ನು ಒಳಗೊಂಡಿರುತ್ತವೆ.<ref name="Killius2006">{{cite book |author=Rolf Killius |title=Ritual Music and Hindu Rituals of Kerala |url=https://books.google.com/books?id=c_fZAAAAMAAJ |year=2006 |publisher=B.R. Rhythms |isbn=978-8188827077 |page=61}}</ref> [[ಈದ್ ಅಲ್-ಫಿತರ್]] ಮತ್ತು [[ಈದ್ ಅಲ್-ಅಧಾ]] ಅನ್ನು ರಾಜ್ಯದ ಮುಸ್ಲಿಂ ಸಮುದಾಯವು ಆಚರಿಸುತ್ತದೆ, ಆದರೆ [[ಕ್ರಿಸ್ಮಸ್]] ಮತ್ತು [[ಈಸ್ಟರ್]] ನಂತಹ ಹಬ್ಬಗಳನ್ನು ಕ್ರೈಸ್ತರು ಆಚರಿಸುತ್ತಾರೆ.<ref name="Malabar">{{Cite book |last=Sreedhara Menon |first=A. |url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |title=''Kerala Charitram'' |publisher=DC Books |year=2007 |isbn=978-8126415885 |edition=2007 |location=Kottayam |access-date=19 July 2020 |archive-url=https://web.archive.org/web/20211113141403/https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |archive-date=13 November 2021 |url-status=live}}</ref> ಓಣಂ ಕೇರಳದ ಜನರು ಆಚರಿಸುವ ಸುಗ್ಗಿಯ ಹಬ್ಬವಾಗಿದೆ ಮತ್ತು ಇದು ರಾಜ್ಯದ ಕೃಷಿ ಹಿಂದಿನ ಕಾಲವನ್ನು ನೆನಪಿಸುತ್ತದೆ.<ref name="Choondal1980">{{cite book |author=Chummar Choondal |title=Kerala Folk Literature |year=1980 |url=https://books.google.com/books?id=EnQOAAAAYAAJ |publisher=Kerala Folklore Academy}}</ref><ref name="Menon2007b">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA80 |year=2007 |publisher=DC Books |isbn=978-8126415786 |pages=80–}}</ref> ಇದು ಕೇರಳದ ಸ್ಥಳೀಯ ಹಬ್ಬವಾಗಿದೆ<ref name="Darpan2006b">{{cite book |author=Pratiyogita Darpan |title=Pratiyogita Darpan |url=https://books.google.com/books?id=lugDAAAAMBAJ&pg=PT83 |year=2006 |publisher=Pratiyogita Darpan |page=624}}</ref> ಇದು ನಾಲ್ಕು ದಿನಗಳ ಸಾರ್ವಜನಿಕ ರಜಾದಿನಗಳನ್ನು ಒಳಗೊಂಡಿದೆ; ಓಣಂ ಮುನ್ನಾದಿನದಿಂದ (ಉತ್ತ್ರಾಡಂ) ನಾಲ್ಕನೇ ಓಣಂ ದಿನದವರೆಗೆ.<ref>{{cite book |title=Purāṇam |url=https://books.google.com/books?id=sfxjAAAAMAAJ |year=2004 |publisher=All-India Kasiraja Trust. |page=17}}</ref> ಓಣಂ ಮಲಯಾಳಂ ತಿಂಗಳು ಚಿಂಗಂ (ಆಗಸ್ಟ್–ಸೆಪ್ಟೆಂಬರ್) ನಲ್ಲಿ ಬರುತ್ತದೆ<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA66 |year=2008 |publisher=D.C. Books |isbn=978-8126419036 |page=66}}</ref> ಮತ್ತು ಇದು ರಾಜ [[ಮಹಾಬಲಿ]]ಯ ಮನೆಗೆ ಮರಳುವ ಸ್ಮರಣೆಯನ್ನು ಸೂಚಿಸುತ್ತದೆ.<ref name="MythOnam">{{cite news |last1=Praveen |first1=M. P. |title=Myth, mystique, and traditions of Onam |url=https://www.thehindu.com/todays-paper/tp-features/tp-editorialfeatures/myth-mystique-and-traditions-of-onam/article2433921.ece |access-date=12 November 2015 |work=The Hindu |date=8 September 2011}}</ref> ಓಣಂನ ಒಟ್ಟು ಅವಧಿಯು 10 ದಿನಗಳು ಮತ್ತು ಇದನ್ನು ಕೇರಳದಾದ್ಯಂತ ಆಚರಿಸಲಾಗುತ್ತದೆ. ಇದು [[ವಲ್ಲಂ ಕಳಿ]],<ref>{{Cite web |title=Vallamkali – Resplendent Water Regattas of Kerala {{!}} Kerala Boat Races{{!}} Onam{{!}} Kerala Backwaters {{!}} Kerala |url=https://www.keralatourism.org/kerala-article/2020/vallamkali-resplendent-water-regattas-of-kerala/1017 |access-date=9 June 2021|website=Kerala Tourism |language=en}}</ref> [[ಪುಲಿಕಳಿ]],<ref name="Ltd.2013">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA535 |year=2013 |publisher=Biju Mathew |isbn=978-8192128443 |page=535}}</ref> ಪೂಕ್ಕಲಂ,<ref>{{cite book |title=A Biblical Approach to Indian Traditions and Beliefs |url=https://books.google.com/books?id=f35VH7LrZ1IC&pg=PA90 |year=2008 |publisher=Armour Publishing Pte Ltd |isbn=978-9814222396 |page=90}}</ref> ತುಂಬಿ ತುಳ್ಳಲ್<ref name="Mohapatra2013">{{cite book |author=J Mohapatra |title=Wellness In Indian Festivals & Rituals |url=https://books.google.com/books?id=UdpzAgAAQBAJ&pg=PA142 |year=2013 |publisher=Partridge Pub |isbn=978-1-4828-1690-7 |page=142}}</ref> ಮತ್ತು [[ಓನವಿಲ್ಲು]]<ref name="(Princess.)1998">{{cite book |author=Gouri Lakshmi Bayi (Princess.) |title=Thulasi garland |url=https://books.google.com/books?id=5lcvAAAAYAAJ |year=1998 |publisher=Bharatiya Vidya Bhavan |isbn=978-8172761103}}</ref> ನಂತಹ ಸಾಂಸ್ಕೃತಿಕ ಅಂಶಗಳೊಂದಿಗೆ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ.
### ಸಂಗೀತ ಮತ್ತು ನೃತ್ಯ
{{Main|ಕೇರಳದ ಕಲೆಗಳು|ಕೇರಳದ ಸಂಗೀತ}}
ಕೇರಳವು ಹಲವಾರು [[ಪ್ರದರ್ಶನ ಕಲೆಗಳ]] ನೆಲೆಯಾಗಿದೆ. ಇವುಗಳಲ್ಲಿ ಐದು ಶಾಸ್ತ್ರೀಯ ನೃತ್ಯ ಪ್ರಕಾರಗಳು ಸೇರಿವೆ: [[ಕಥಕ್ಕಳಿ]], [[ಮೋಹಿನಿಯಾಟ್ಟಂ]], [[ಕೂಡಿಯಾಟ್ಟಂ]], [[ಒಟ್ಟನ್ ತುಳ್ಳಲ್|ತುಳ್ಳಲ್]] ಮತ್ತು [[ಕೃಷ್ಣನಾಟ್ಟಂ]], ಇವು ಶಾಸ್ತ್ರೀಯ ಅವಧಿಯಲ್ಲಿ ರಾಜಮನೆತನಗಳ ಆಶ್ರಯದಲ್ಲಿ ದೇವಾಲಯದ ರಂಗಮಂದಿರಗಳಲ್ಲಿ ಹುಟ್ಟಿ ಅಭಿವೃದ್ಧಿಗೊಂಡವು.<ref>{{cite journal |url=https://www.sruti.org/library/sruti%20ranjani/2004/sruti_ranjani_2004.pdf |title=Classical Dance Art Forms of Kerala |author=Kala Menon |journal=Sruti Ranjini |date=November 2004 |volume=14 |issue=1 |page=11 |access-date=7 February 2022 |archive-date=4 March 2016 |archive-url=https://web.archive.org/web/20160304091717/http://www.sruti.org/library/sruti%20ranjani/2004/sruti_ranjani_2004.pdf |url-status=dead }}</ref> [[ಕೇರಳ ನಾಟನಂ]], [[ಥಿರಯಾಟ್ಟಂ]],<ref>"Thirayattam" (Folklore Text-Malayalam), State Institute of language, Kerala {{ISBN|978-8120042940}}</ref> [[ಕಳಿಯಾಟ್ಟಂ]], [[ಥೆಯ್ಯಂ]], [[ಕೂತು]] ಮತ್ತು [[ಪದಯಾನಿ]] ಈ ಪ್ರದೇಶದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಇತರ ನೃತ್ಯ ಪ್ರಕಾರಗಳಾಗಿವೆ.<ref name="Menon2008">{{cite book |author=A Sreedhara Menon |title=Cultural heritage of Kerala |url=https://books.google.com/books?id=R7QNGkZKc5wC&pg=PA106 |access-date=17 November 2012 |year=2008 |publisher=D C Books |isbn=978-8126419036 |page=106}}</ref> [[ಒಪ್ಪನ]] ಮತ್ತು [[ದಫ್ ಮುಟ್ಟು]] ನಂತಹ ಕೆಲವು ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ರಾಜ್ಯದ ಮುಸ್ಲಿಮರಲ್ಲಿ ಜನಪ್ರಿಯವಾಗಿದ್ದವು,<ref name="google19">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA8 |access-date=17 November 2012 |year=2008 |publisher=Sura Books |isbn=978-8174781642 |page=8}}</ref> ಆದರೆ [[ಮಾರ್ಗಂಕಳಿ]] ಮತ್ತು [[ಪರಿಚಮುಟ್ಟುಕಳಿ]] ಸಿರಿಯನ್ ಕ್ರೈಸ್ತರಲ್ಲಿ ಜನಪ್ರಿಯವಾಗಿವೆ ಮತ್ತು [[ಚವಿಟ್ಟು ನಾಟಕಂ]] ಲ್ಯಾಟಿನ್ ಕ್ರೈಸ್ತರಲ್ಲಿ ಜನಪ್ರಿಯವಾಗಿದೆ.<ref name="Nārāyaṇappaṇikkar1991">{{cite book |author=Kāvālaṃ Nārāyaṇappaṇikkar |title=Folklore of Kerala |url=https://books.google.com/books?id=xH6BAAAAMAAJ |access-date=17 November 2012 |year=1991 |publisher=National Book Trust, India |page=146 |isbn=978-8123725932}}</ref><ref name="Kasbekar2006">{{cite book |author=Asha Kasbekar |title=Pop Culture India!: Media, Arts, And Lifestyle |url=https://books.google.com/books?id=Sv7Uk0UcdM8C&pg=PA43 |access-date=17 November 2012 |year=2006 |publisher=ABC-CLIO |isbn=978-1-85109-636-7 |pages=43–44}}</ref> ಕೇರಳದಲ್ಲಿ ಶಾಸ್ತ್ರೀಯ ಸಂಗೀತದ ಅಭಿವೃದ್ಧಿಯು ಕೇರಳದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಸಾಂಪ್ರದಾಯಿಕ ಪ್ರದರ್ಶನ ಕಲೆಗಳು ನೀಡಿದ ಕೊಡುಗೆಗಳಿಗೆ ಕಾರಣವಾಗಿದೆ.<ref name="Menon2">{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |pages=48–51 |url=https://books.google.com/books?id=S9RMxjdjUVAC |access-date=30 May 2015}}</ref> ಸ್ಥಳೀಯ ಶಾಸ್ತ್ರೀಯ ಸಂಗೀತ ಪ್ರಕಾರವಾದ [[ಸೋಪಾನ ಸಂಗೀತ]]ದ ಅಭಿವೃದ್ಧಿಯು ದೇವಾಲಯದ ಸಂಸ್ಕೃತಿಯು ಕೇರಳದ ಕಲೆಗಳಿಗೆ ನೀಡಿದ ಶ್ರೀಮಂತ ಕೊಡುಗೆಯನ್ನು ವಿವರಿಸುತ್ತದೆ.<ref name="Menon2" /> [[ಕರ್ನಾಟಕ ಸಂಗೀತ]]ವು ಕೇರಳೀಯ ಸಾಂಪ್ರದಾಯಿಕ ಸಂಗೀತದಲ್ಲಿ ಪ್ರಾಬಲ್ಯ ಹೊಂದಿದೆ. ಇದು 19 ನೇ ಶತಮಾನದಲ್ಲಿ [[ಸ್ವಾತಿ ತಿರುನಾಳ್ ರಾಮ ವರ್ಮ]] ಅವರು ಈ ಪ್ರಕಾರವನ್ನು ಜನಪ್ರಿಯಗೊಳಿಸಿದ ಪರಿಣಾಮವಾಗಿದೆ.<ref name="Bhagyalekshmy_2004d_29" /> ರಾಗ-ಆಧಾರಿತ ವ್ಯಾಖ್ಯಾನಗಳು ''ಸೋಪಾನಂ'' ಎಂದು ಕರೆಯಲ್ಪಡುತ್ತವೆ, ಇವು ''ಕಥಕ್ಕಳಿ'' ಪ್ರದರ್ಶನಗಳೊಂದಿಗೆ ಸೇರುತ್ತವೆ.<ref name="SchechnerAppel1990">{{cite book |author1=Richard Schechner |author2=Willa Appel |title=By Means of Performance: Intercultural Studies of Theatre and Ritual |url=https://books.google.com/books?id=K5ZuV_nn7KkC&pg=PA145 |access-date=18 November 2012 |year=1990 |publisher=Cambridge University Press |isbn=978-0-521-33915-5 |page=145}}</ref> ''ಮೇಳಂ'', ''ಪಾಂಡಿ'' ಮತ್ತು ''ಪಂಚಾರಿ'' ರೂಪಾಂತರಗಳನ್ನು ಒಳಗೊಂಡಂತೆ, ಹೆಚ್ಚು ತಾಳವಾದ್ಯ ಶೈಲಿಯ ಸಂಗೀತವಾಗಿದೆ;<ref name="BroughtonEllingham2000">{{cite book |author1=Simon Broughton |author2=Mark Ellingham |author3=Richard Trillo |title=World Music Volume 2 Latin and North America, Caribbean, India, Asia and Pacific: The Rough Guide |url=https://books.google.com/books?id=QzX8THIgRjUC&pg=PA97 |access-date=18 November 2012 |year=2000 |publisher=Rough Guides |isbn=978-1-85828-636-5 |page=97}}</ref> ಇದನ್ನು ''[[ಹಿಂದೂ ದೇವಾಲಯ|ಕ್ಷೇತ್ರಮ್]]''-ಕೇಂದ್ರಿತ ಹಬ್ಬಗಳಲ್ಲಿ ''[[ಚೆಂಡ]]'' ಬಳಸಿ ಪ್ರದರ್ಶಿಸಲಾಗುತ್ತದೆ. ''ಪಂಚವಾದ್ಯ'' ತಾಳವಾದ್ಯ ಸಮೂಹದ ಒಂದು ರೂಪವಾಗಿದೆ, ಇದರಲ್ಲಿ ಕಲಾವಿದರು ಐದು ವಿಧದ ತಾಳವಾದ್ಯ ವಾದ್ಯಗಳನ್ನು ಬಳಸುತ್ತಾರೆ.<ref name="BroughtonEllingham2000" /> ಕೇರಳದ ದೃಶ್ಯ ಕಲೆಗಳು [[ಕೇರಳದ ಭಿತ್ತಿಚಿತ್ರಗಳು|ಸಾಂಪ್ರದಾಯಿಕ ಭಿತ್ತಿಚಿತ್ರಗಳಿಂದ]] ರಾಜ್ಯದ ಅತ್ಯಂತ ಪ್ರಸಿದ್ಧ ವರ್ಣಚಿತ್ರಕಾರನಾದ [[ರಾಜಾ ರವಿ ವರ್ಮ]] ಅವರ ಕೃತಿಗಳವರೆಗೆ ವಿಸ್ತರಿಸಿವೆ.<ref name="Menon2" /> ಕೇರಳದ ಹೆಚ್ಚಿನ ಜಾತಿಗಳು ಮತ್ತು ಸಮುದಾಯಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದ ಜಾನಪದ ಗೀತೆಗಳು ಮತ್ತು ಗೀತೆಗಳ ಶ್ರೀಮಂತ ಸಂಗ್ರಹಗಳನ್ನು ಹೊಂದಿವೆ; ''[[ವಡಕ್ಕನ್ ಪಟ್ಟುಕಲ್]]'' (ಉತ್ತರ ಗೀತೆಗಳು), ''ತೆಕ್ಕನ್ ಪಟ್ಟುಕಲ್'' (ದಕ್ಷಿಣ ಗೀತೆಗಳು), ''ವಂಚಿ ಪಟ್ಟುಕಲ್'' (ದೋಣಿ ಹಾಡುಗಳು), ''[[ಮಾಪ್ಪಿಲ ಪಟ್ಟುಕಲ್]]'' (ಮುಸ್ಲಿಂ ಹಾಡುಗಳು) ಮತ್ತು ''ಪಲ್ಲಿಪಟ್ಟುಕಲ್'' (ಚರ್ಚ್ ಹಾಡುಗಳು) ಅವುಗಳಲ್ಲಿ ಕೆಲವು.<ref>{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |page=41 |url=https://books.google.com/books?id=S9RMxjdjUVAC |access-date=30 May 2015}}</ref>
=== ಸಿನಿಮಾ ===
{{Main|ಮಲಯಾಳಂ ಸಿನಿಮಾ}}
[[ಮಲಯಾಳಂ ಸಿನಿಮಾ|ಮಲಯಾಳಂ ಚಲನಚಿತ್ರಗಳು]] ಸಾಮಾಜಿಕ ವಿಷಯಗಳ ಪ್ರಸ್ತುತಿಯೊಂದಿಗೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಸ್ಥಾನವನ್ನು ಕೆತ್ತಿಕೊಂಡಿವೆ.<ref name="Menon">{{cite book |title=Cultural Heritage of Kerala |first=Sreedhara |last=Menon |publisher=D C Books |year=2008 |url=https://books.google.com/books?id=R7QNGkZKc5wC |isbn=978-8126419036 |pages=128–29 |access-date=30 May 2015}}</ref><ref>{{cite book |title=Encyclopaedia of Indian Literature |first=Amaresh |last=Datta |publisher=Sahitya Akademi |year=1987 |url=https://books.google.com/books?id=ObFCT5_taSgC |isbn=978-8126018031 |pages=751–53}}</ref> [[ಅಡೂರ್ ಗೋಪಾಲಕೃಷ್ಣನ್]], [[ಮಂಕಡ ರವಿ ವರ್ಮ]], [[ಜಿ. ಅರವಿಂದನ್]], [[ಭರತನ್]], [[ಪಿ. ಪದ್ಮರಾಜನ್]], [[ಎಂ.ಟಿ. ವಾಸುದೇವನ್ ನಾಯರ್]], [[ಕೆ.ಜಿ. ಜಾರ್ಜ್]], [[ಪ್ರಿಯದರ್ಶನ್]], [[ಜಾನ್ ಅಬ್ರಹಾಂ (ನಿರ್ದೇಶಕ)|ಜಾನ್ ಅಬ್ರಹಾಂ]], [[ರಾಮು ಕಾರ್ಯಾಟ್]], [[ಕೆ ಎಸ್ ಸೇತುಮಾಧವನ್]], [[ಎ. ವಿನ್ಸೆಂಟ್]] ಮತ್ತು [[ಶಾಜಿ ಎನ್ ಕರುಣ್]] ನಂತಹ ಕೇರಳದ ನಿರ್ದೇಶಕರು ಭಾರತೀಯ [[ಸಮಾನಾಂತರ ಸಿನಿಮಾ]]ಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಕೇರಳವು [[ಮೋಹನ್ಲಾಲ್]], [[ಮಮ್ಮೂಟ್ಟಿ]], [[ಸತ್ಯನ್]], [[ಪ್ರೇಮ್ ನಝೀರ್]], [[ಮಧು (ನಟ)|ಮಧು]], [[ಶೀಲಾ]], [[ಶಾರದ (ನಟಿ)|ಶಾರದಾ]], [[ಮಿಸ್ ಕುಮಾರಿ]], [[ಜಯನ್]], [[ಅಡೂರ್ ಭಾಸಿ]], [[ಸೀಮಾ (ನಟಿ)|ಸೀಮಾ]], [[ಭರತ್ ಗೋಪಿ]], [[ತಿಲಕನ್]], [[ವಿಜಯ ರಾಘವನ್]], [[ಕಲಾಭವನ್ ಮಣಿ]], [[ಇಂದ್ರನ್ಸ್]], [[ಶೋಭನಾ]], [[ನಿವಿನ್ ಪೌಲಿ]], [[ಶ್ರೀನಿವಾಸನ್]], [[ಉರ್ವಶಿ (ನಟಿ)|ಉರ್ವಶಿ]], [[ಮಂಜು ವಾರಿಯರ್]], [[ಸುರೇಶ್ ಗೋಪಿ]], [[ಜಯರಾಂ]], [[ಮುರಳಿ (ಮಲಯಾಳಂ ನಟ)|ಮುರಳಿ]], [[ಶಂಕರಾಡಿ]], [[ಕಾವ್ಯ ಮಾಧವನ್]], [[ಭಾವನಾ ಮೇನನ್]], [[ಪೃಥ್ವಿರಾಜ್ ಸುಕುಮಾರನ್|ಪೃಥ್ವಿರಾಜ್]], [[ಪಾರ್ವತಿ ತಿರುವೋತು|ಪಾರ್ವತಿ]], [[ಜಯಸೂರ್ಯ]], [[ದುಲ್ಕರ್ ಸಲ್ಮಾನ್]], [[ಒಡುವಿಲ್ ಉನ್ನಿಕೃಷ್ಣನ್]], [[ಜಗತಿ ಶ್ರೀಕುಮಾರ್]], [[ನೆಡುಮುಡಿ ವೇಣು]], [[ಕೆಪಿಎಸಿ ಲಲಿತಾ]], [[ಇನ್ನೋಸೆಂಟ್ (ನಟ)|ಇನ್ನೋಸೆಂಟ್]] ಮತ್ತು [[ಫಹಾದ್ ಫಾಜಿಲ್]] ನಂತಹ ಅಸಂಖ್ಯಾತ ನಟರಿಗೆ ಜನ್ಮ ನೀಡಿದೆ. ಕೊನೆಯ ಮಲಯಾಳಂ ನಟ ಪ್ರೇಮ್ ನಝೀರ್ 720 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.<ref>{{Cite news |last=Gangadhar |first=V. |title=Magic of Sophia Loren |url=https://www.hindu.com/mag/2003/11/02/stories/2003110200250500.htm |archive-url=https://web.archive.org/web/20031130011344/https://www.hindu.com/mag/2003/11/02/stories/2003110200250500.htm |url-status=dead |archive-date=30 November 2003 |date=2 October 2003 |department=Sunday Magazine |newspaper=[[The Hindu]] |location=Chennai, India |access-date=18 January 2015}}</ref> 1980 ರ ದಶಕದಿಂದ, ನಟರು [[ಮೋಹನ್ಲಾಲ್]] ಮತ್ತು [[ಮಮ್ಮೂಟ್ಟಿ]] ಅವರು ಚಲನಚಿತ್ರ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದಾರೆ; ಮೋಹನ್ಲಾಲ್ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (ನಾಲ್ಕು ಅಭಿನಯಕ್ಕಾಗಿ) ಗೆದ್ದಿದ್ದಾರೆ, ಆದರೆ ಮಮ್ಮೂಟ್ಟಿ ಅವರು ಅಭಿನಯಕ್ಕಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹೊಂದಿದ್ದಾರೆ.<ref>{{cite book |title=Sura's Year Book 2006 |author=Subburaj V.V.K |page=620 |isbn=978-8172541248 |url=https://books.google.com/books?id=Fz2WDD8sB0MC |publisher=Sura Books |access-date=30 May 2015}}</ref> ಮಲಯಾಳಂ ಸಿನಿಮಾ [[ಕೆ. ಜೆ. ಯೇಸುದಾಸ್]], [[ಕೆ.ಎಸ್. ಚಿತ್ರಾ]], [[ಎಂ. ಜಿ. ಶ್ರೀಕುಮಾರ್|ಎಂ.ಜಿ. ಶ್ರೀಕುಮಾರ್]], [[ವಯಲಾರ್ ರಾಮ ವರ್ಮ]], [[ವಿ. ಮಧುಸೂದನನ್ ನಾಯರ್]], [[ಎಂ.ಟಿ. ವಾಸುದೇವನ್ ನಾಯರ್]] ಮತ್ತು [[ಒ.ಎನ್.ವಿ. ಕುರುಪ್]] ನಂತಹ ಕೆಲವು ಹೆಚ್ಚು ಗಮನಾರ್ಹ ವ್ಯಕ್ತಿಗಳನ್ನು ಸಹ ನಿರ್ಮಿಸಿದೆ,<ref name="indiatimes2">{{cite news |url=https://timesofindia.indiatimes.com/india/Jnanpith-Awards-for-ONV-Kurup-Akhlaq-Khan-Shahryar/articleshow/6621243.cms |date=24 September 2014 |title=Jnanpith Awards for ONV Kurup, Akhlaq Khan Shahryar |work=The Times of India |access-date=24 September 2014}}</ref> ಕೊನೆಯಲ್ಲಿ ಉಲ್ಲೇಖಿಸಲಾದ ಇಬ್ಬರು [[ಜ್ಞಾನಪೀಠ ಪ್ರಶಸ್ತಿ]] ಪಡೆದವರು, ಇದು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದೆ.<ref name="upscguide">{{cite web |url=https://upscguide.com/content/jnanpith-award-winners |archive-url=https://web.archive.org/web/20121219193030/https://upscguide.com/content/jnanpith-award-winners |url-status=dead |archive-date=19 December 2012 |title=Jnanpith Award Winners | UPSC Guide |publisher=upscguide.com |access-date=24 September 2014}}</ref> ಕೇರಳದವರಾದ [[ರೆಸುಲ್ ಪೂಕ್ಕುಟ್ಟಿ]] ಅವರು [[ಸ್ಲಮ್ಡಾಗ್ ಮಿಲಿಯನೇರ್]] ಅದ್ಭುತ ಚಿತ್ರಕ್ಕಾಗಿ [[ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್|ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್]] ಗೆದ್ದ ಏಕೈಕ ಭಾರತೀಯರಾಗಿದ್ದಾರೆ. 2018 ರಂತೆ, [[ಮಲಯಾಳಂ ಸಿನಿಮಾ]] [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], [[ಭಾರತ]]ದಲ್ಲಿ ಅತ್ಯುತ್ತಮ ನಟಿಗೆ 14 ಪ್ರಶಸ್ತಿಗಳು, ಅತ್ಯುತ್ತಮ ನಟಿಗೆ 6, ಅತ್ಯುತ್ತಮ ಚಿತ್ರಕ್ಕೆ 11, ಮತ್ತು ಅತ್ಯುತ್ತಮ ಚಲನಚಿತ್ರ ನಿರ್ದೇಶಕರಿಗೆ 13 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.{{sfn|Chandran|2018|p=358-361}}
=== ಸಾಹಿತ್ಯ ===
{{Main|ಮಲಯಾಳಂ ಸಾಹಿತ್ಯ}}
[[ಸಂಗಮ್ ಸಾಹಿತ್ಯ]]ವನ್ನು [[ಮಲಯಾಳಂ]]ನ ಪ್ರಾಚೀನ ಪೂರ್ವವರ್ತಿ ಎಂದು ಪರಿಗಣಿಸಬಹುದು.{{sfn|Chandran|2018|p=450}} [[ಮಲಯಾಳಂ ಸಾಹಿತ್ಯ]]ವು [[ಹಳೆಯ ಮಲಯಾಳಂ]] ಅವಧಿಯಿಂದ (9 ನೇ–13 ನೇ ಶತಮಾನ CE) ಪ್ರಾರಂಭವಾಗುತ್ತದೆ ಮತ್ತು 14 ನೇ ಶತಮಾನದ [[ನಿರಣಂ ಕವಿಗಳು]] (ಮಾಧವ ಪಣಿಕ್ಕರ್, ಶಂಕರ ಪಣಿಕ್ಕರ್ ಮತ್ತು ರಾಮ ಪಣಿಕ್ಕರ್),<ref name="Nair1967">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |page=296}}</ref><ref name="Laet1994">{{cite book |author=Sigfried J. de Laet |title=History of Humanity: From the seventh to the sixteenth century |url=https://books.google.com/books?id=ixCyd2lByggC&pg=PA407 |access-date=18 November 2012 |year=1994 |publisher=UNESCO |isbn=978-9231028137 |page=407}}</ref> ಮತ್ತು 16 ನೇ ಶತಮಾನದ ಕವಿ [[ಎಳುತ್ತಚ್ಚನ್|ತುಂಚತ್ತು ಎಳುತ್ತಚ್ಚನ್]] ಅವರನ್ನು ಒಳಗೊಂಡಿದೆ, ಅವರ ಕೃತಿಗಳು ಆಧುನಿಕ ಮಲಯಾಳಂ ಭಾಷೆ ಮತ್ತು ಅದರ ಕಾವ್ಯದ ಆರಂಭವನ್ನು ಸೂಚಿಸುತ್ತವೆ.<ref name="George1998">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA58 |access-date=18 November 2012 |year=1998 |publisher=Sahitya Akademi |isbn=978-8126004133 |page=58}}</ref> [[ಕೊಲ್ಲಂ ಯುಗ|ಮಲಯಾಳಂ ಕ್ಯಾಲೆಂಡರ್]] ನ ಮೊದಲ 600 ವರ್ಷಗಳಲ್ಲಿ, ಸಾಹಿತ್ಯವು ಮುಖ್ಯವಾಗಿ [[ಉತ್ತರ ಮಲಬಾರ್|ಉತ್ತರ ಮಲಬಾರಿನ]] ''[[ವಡಕ್ಕನ್ ಪಟ್ಟುಕಲ್]]'' ಮತ್ತು [[ದಕ್ಷಿಣ ವಿಭಾಗ (ತಿರುವಾಂಕೂರು)|ದಕ್ಷಿಣ ತಿರುವಾಂಕೂರಿನ]] ''ತೆಕ್ಕನ್ ಪಟ್ಟುಕಲ್'' ನಂತಹ ಮೌಖಿಕ [[ಗೀತೆ]]ಗಳನ್ನು ಒಳಗೊಂಡಿತ್ತು.{{sfn|Chandran|2018|p=453}} 2013 ರಲ್ಲಿ "[[ಭಾರತದಲ್ಲಿ ಶಾಸ್ತ್ರೀಯ ಭಾಷೆ]]" ಎಂದು ಗೊತ್ತುಪಡಿಸಲಾಯಿತು,<ref name="thehindu20130524"/> ಇದು ಪ್ರಸ್ತುತ ರೂಪಕ್ಕೆ ಮುಖ್ಯವಾಗಿ 15 ಮತ್ತು 16 ನೇ ಶತಮಾನಗಳಲ್ಲಿ [[ಸಾಮಾನ್ಯ ಯುಗ]]ದ ಕವಿಗಳಾದ [[ಚೆರುಶ್ಶೇರಿ ನಂಬೂದಿರಿ]],<ref name="Cherussery (Krishnagadha) Malayalam author books">{{Cite web |url=https://keralaliterature.com/old/author.php?authid=1473 |title=Cherussery (Krishnagadha) Malayalam author books |website=keralaliterature.com |archive-url=https://web.archive.org/web/20190407052549/https://keralaliterature.com/old/author.php%3Fauthid%3D1473 |archive-date=7 April 2019 |url-status=dead}}</ref><ref name="mlm" /> [[ತುಂಚತ್ತು ಎಳುತ್ತಚ್ಚನ್]],<ref name="mlm" /> ಮತ್ತು [[ಪೂಂತಾನಂ ನಂಬೂದಿರಿ]]<ref name="mlm" /><ref>{{cite news |url=https://www.thehindu.com/society/history-and-culture/the-charms-of-poonthanam-illam/article25308319.ece/ |title=The Charms of Poonthanam Illam |last=Arun Narayanan |date=25 October 2018 |work=The Hindu}}</ref> ರವರ ಪ್ರಭಾವದಿಂದ ಅಭಿವೃದ್ಧಿಗೊಂಡಿತು.<ref name="mlm">{{cite book |title=A Short History of Malayalam Literature |author=Dr. K. Ayyappa Panicker |url=https://archive.org/details/ASHORTHISTORYOFMALAYALAMLITERATURE |year=2006 |location=Thiruvananthapuram |publisher=Department of Information and Public Relations, Kerala}}</ref><ref>Freeman, Rich (2003). "Genre and Society: The Literary Culture of Premodern Kerala". In Literary Cultures in History: Reconstructions from South Asia</ref> 17/18 ನೇ ಶತಮಾನ CE ಯ ಸಂಭವನೀಯ ಕವಿಯಾದ [[ಉನ್ನಾಯಿ ವರಿಯಾರ್]],<ref name="Attakatha sahithyam">{{Cite book |last=Krishna Kaimal |first=Aymanam |title=Attakatha sahithyam |url=https://mgucat.mgu.ac.in/cgi-bin/koha/opac-detail.pl?biblionumber=133514&shelfbrowse_itemnumber=132435 |date=1989 |publisher=Trivandrum State Institute of Language}}</ref> ಮತ್ತು 18 ನೇ ಶತಮಾನ CE ಯ ಕವಿಯಾದ [[ಕುಂಚನ್ ನಂಬಿಯಾರ್]] ಅವರು ಆಧುನಿಕ ಮಲಯಾಳಂ ಸಾಹಿತ್ಯದ ಬೆಳವಣಿಗೆಯಲ್ಲಿ ತಮ್ಮ ಅಪಕ್ವ ರೂಪದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ.<ref name="mlm" /> [[ಭಾರತಪುಳ]] ನದಿ, ಇದನ್ನು [[ಪೊನ್ನಾನಿ|ಪೊನ್ನಾನಿ ನದಿ]] ಎಂದೂ ಕರೆಯುತ್ತಾರೆ, ಮತ್ತು ಅದರ ಉಪನದಿಗಳು ಆಧುನಿಕ ಮಲಯಾಳಂ ಸಾಹಿತ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.<ref>{{Cite news |title=The river sutra |url=https://www.thehindu.com/society/rivers-have-nurtured-malayalam-literature-and-poetry-since-time-immemorial/article25058214.ece |last=Binoy |first=Rasmi |date=27 September 2018 |access-date=24 January 2021 |work=The Hindu}}</ref>
[[ಪರೆಮ್ಮಕ್ಕಲ್ ತೋಮಾ ಕಥನಾರ್]] ಮತ್ತು [[ಕೇರಳ ವರ್ಮ ವಲಿಯಕೋಯಿ ತಂಪುರಾನ್]] ಮಲಯಾಳಂ ಗದ್ಯಕ್ಕೆ ತಮ್ಮ ಕೊಡುಗೆಗೆ ಹೆಸರುವಾಸಿಯಾಗಿದ್ದಾರೆ.<ref name="google24">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |pages=118–21}}</ref><ref name="Sinhā2009">{{cite book |author=Madhubālā Sinhā |title=Encyclopaedia of South Indian literature |url=https://books.google.com/books?id=8qQpAQAAIAAJ |access-date=18 November 2012 |year=2009 |publisher=Anmol Publ. |isbn=978-8126137404 |page=97}}</ref><ref name="Vilanilam1987">{{cite book |author=John V. Vilanilam |title=Religious communication in India |url=https://books.google.com/books?id=a0UeAAAAMAAJ |access-date=18 November 2012 |year=1987 |publisher=Kairali Books International |page=66}}</ref> "[[ಆಧುನಿಕ ಮಲಯಾಳಂನ ಕವಿತ್ರಯ|ಕವಿಗಳ ತ್ರಿಮೂರ್ತಿಗಳು]]" (''ಕವಿತ್ರಯಂ''): [[ಕುಮಾರನ್ ಆಶಾನ್]], [[ವಳ್ಳತ್ತೋಳ್ ನಾರಾಯಣ ಮೇನನ್]], ಮತ್ತು [[ಉಳ್ಳೂರ್ ಎಸ್. ಪರಮೇಶ್ವರ ಅಯ್ಯರ್]] ಅವರು ಕೇರಳೀಯ ಕಾವ್ಯವನ್ನು ಪ್ರಾಚೀನ ಚಾತುರ್ಯ ಮತ್ತು ಅಧ್ಯಾತ್ಮಶಾಸ್ತ್ರದಿಂದ ಹೆಚ್ಚು [[ಗೀತಾತ್ಮಕ|ಗೀತಾತ್ಮಕ]] ಶೈಲಿಯತ್ತ ತಿರುಗಿಸಿದ್ದಾರೆಂದು ಗುರುತಿಸಲ್ಪಟ್ಟಿದ್ದಾರೆ.<ref name="Al̲ikkōṭȧ1979">{{cite book |author=Sukumār Al̲ikkōṭȧ |title=Mahakavi Ulloor |url=https://books.google.com/books?id=1VkOAAAAYAAJ |access-date=18 November 2012 |year=1979 |publisher=Sahitya Akademi |page=52}}</ref><ref name="Indian and Foreign Review">{{cite book |title=Indian and Foreign Review |url=https://books.google.com/books?id=XaRnAAAAMAAJ |access-date=18 November 2012 |year=1983 |publisher=Publications Division of the Ministry of Information and Broadcasting, Government of India |page=25}}</ref><ref name="Tarakan1990">{{cite book |author=Ke. Eṃ Tarakan |title=A brief survey of Malayalam literature: history of literature |url=https://books.google.com/books?id=3nhkAAAAMAAJ |access-date=18 November 2012 |year=1990 |publisher=K.M. Tharakan |pages=41–52}}</ref> [[ಮೊಯಿಂಕುಟ್ಟಿ ವೈದ್ಯರ್]] ಮತ್ತು [[ಪುಲಿಕ್ಕೋಟ್ಟಿಲ್ ಹೈದರ್]] ನಂತಹ ಕವಿಗಳು [[ಮಾಪ್ಪಿಲ ಹಾಡುಗಳಿಗೆ]] ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ, ಇದು [[ಅರಬಿ ಮಲಯಾಳಂ]] ಸಾಹಿತ್ಯದ ಪ್ರಕಾರವಾಗಿದೆ.<ref>{{cite news |url=https://www.hindu.com/2007/03/31/stories/2007033110250500.htm |archive-url=https://web.archive.org/web/20121108104937/https://www.hindu.com/2007/03/31/stories/2007033110250500.htm |url-status=dead |archive-date=8 November 2012 |title=Mappila songs cultural fountains of a bygone age, says MT |date=31 March 2007 |access-date=15 August 2009 |work=[[The Hindu]] |location=Chennai, India}}</ref><ref>Pg 167, Mappila Muslims: a study on society and anti colonial struggles By Husain Raṇdathaṇi, Other Books, Kozhikode 2007</ref> ಯಾವುದೇ ಭಾರತೀಯ ಭಾಷೆಯಲ್ಲಿ ಮೊದಲ ಪ್ರವಾಸ ಕಥನವು ಮಲಯಾಳಂ ''[[ವರ್ತಮಾನಪುಸ್ತಕಂ]]'' ಆಗಿದೆ, ಇದನ್ನು [[ಪರೆಮ್ಮಕ್ಕಲ್ ತೋಮಾ ಕಥನಾರ್]] 1785 ರಲ್ಲಿ ಬರೆದರು.<ref name="legacy">{{cite book |last=Menon |first=A. Sreedhara |title=The legacy of Kerala |year=2008 |publisher=D C Books |location=Kottayam, Kerala |isbn=978-81-264-2157-2 |edition=1st DCB}}</ref><ref>{{cite web |url=https://nasrani.net/2010/08/23/the-varthamanappusthakam-cathanar-paremmakkal/ |title=August 23, 2010 Archives |url-status=dead |archive-url=https://web.archive.org/web/20130427073541/https://nasrani.net/2010/08/23/the-varthamanappusthakam-cathanar-paremmakkal/ |archive-date=27 April 2013}}</ref> ಗದ್ಯ ಸಾಹಿತ್ಯ, [[ಮಲಯಾಳಂ ಪತ್ರಿಕೋದ್ಯಮ]], ಮತ್ತು ವಿಮರ್ಶೆಯು 18 ನೇ ಶತಮಾನದ ಉತ್ತರಾರ್ಧದ ನಂತರ ಪ್ರಾರಂಭವಾಯಿತು.<ref name="legacy" /> ಸಮಕಾಲೀನ ಮಲಯಾಳಂ ಸಾಹಿತ್ಯವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನದ ಸಂದರ್ಭವನ್ನು ವ್ಯವಹರಿಸುತ್ತದೆ. ಆಧುನಿಕ ಸಾಹಿತ್ಯದ ಪ್ರವೃತ್ತಿಯು ಹೆಚ್ಚಾಗಿ [[ರಾಜಕೀಯ ತೀವ್ರವಾದ]]ದ ಕಡೆಗೆ ಇರುತ್ತದೆ.<ref>{{cite encyclopedia |url=https://www.britannica.com/EBchecked/topic/556016/South-Asian-arts/65212/Tamil#toc65213 |title=South Asian arts |encyclopedia=Encyclopedia Britannica |access-date=15 September 2017}}</ref> [[ಮಲಯಾಳಂ ಸಾಹಿತ್ಯ]]ವು 6 [[ಜ್ಞಾನಪೀಠ ಪ್ರಶಸ್ತಿ|ಜ್ಞಾನಪೀಠ ಪ್ರಶಸ್ತಿಗಳನ್ನು]] ಪಡೆದುಕೊಂಡಿದೆ, ಇದು ಯಾವುದೇ ದ್ರಾವಿಡ ಭಾಷೆಗೆ ಎರಡನೇ ಅತಿ ಹೆಚ್ಚು ಮತ್ತು ಯಾವುದೇ ಭಾರತೀಯ ಭಾಷೆಗೆ ಮೂರನೇ ಅತಿ ಹೆಚ್ಚು.<ref>{{Cite news |title=Jnanpith given to Akkitham |url=https://www.thehindu.com/news/national/kerala/jnanpith-given-to-akkitham/article32685581.ece |last=Naha |first=Abdul Latheef |date=24 September 2020 |access-date=12 June 2021 |work=The Hindu}}</ref><ref>{{Cite news |title=Celebrated Malayalam poet Akkitham wins 2019 Jnanpith Award |url=https://www.business-standard.com/article/news-ani/celebrated-malayalam-poet-akkitham-wins-2019-jnanpith-award-119112900926_1.html |last=ANI |date=29 November 2019 |access-date=12 June 2021 |publisher=Business Standard}}</ref> 20 ನೇ ಶತಮಾನದ ಉತ್ತರಾರ್ಧದಲ್ಲಿ, [[ಜ್ಞಾನಪೀಠ]] ಪ್ರಶಸ್ತಿ ವಿಜೇತ ಕವಿಗಳು ಮತ್ತು ಬರಹಗಾರರಾದ [[ಜಿ. ಶಂಕರ ಕುರುಪ್]], [[ಎಸ್. ಕೆ. ಪೊಟ್ಟೆಕ್ಕಾಟ್]], [[ತಕಳಿ ಶಿವಶಂಕರ ಪಿಳ್ಳೈ]], [[ಎಂ. ಟಿ. ವಾಸುದೇವನ್ ನಾಯರ್]], [[ಒ. ಎನ್. ವಿ. ಕುರುಪ್]], ಮತ್ತು [[ಅಕ್ಕಿತಂ ಅಚ್ಯುತನ್ ನಂಬೂದಿರಿ]] ಅವರು ಆಧುನಿಕ ಮಲಯಾಳಂ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.<ref name="google25">{{cite book |author=Subodh Kapoor |title=The Indian Encyclopaedia: Biographical, Historical, Religious, Administrative, Ethnological, Commercial and Scientific. Mahi-Mewat |url=https://books.google.com/books?id=mc6C5dVHbGAC&pg=PA4542 |access-date=18 November 2012 |year=2002 |publisher=Cosmo |isbn=978-8177552720 |page=4542}}</ref><ref name="Accessions List, South Asia">{{cite book |title=Accessions List, South Asia |url=https://books.google.com/books?id=lPcoAQAAIAAJ |access-date=18 November 2012 |year=1994 |publisher=E.G. Smith for the U.S. Library of Congress Office, New Delhi |page=21}}</ref><ref name="Indian Writing Today">{{cite book |title=Indian Writing Today |url=https://books.google.com/books?id=1wUtAQAAIAAJ |access-date=18 November 2012 |year=1967 |publisher=Nirmala Sadanand Publishers |page=21}}</ref><ref name="DattaAkademi1987">{{cite book |author1=Amaresh Datta |author2=Sahitya Akademi |title=Encyclopaedia of Indian Literature: K to Navalram |url=https://books.google.com/books?id=QaIRAQAAMAAJ |access-date=18 November 2012 |year=1987 |publisher=Sahitya Akademi |page=2394 |isbn=978-0-8364-2423-2}}</ref><ref name="Malayalam Literary Survey">{{cite book |title=Malayalam Literary Survey |url=https://books.google.com/books?id=k5JkAAAAMAAJ |access-date=18 November 2012 |year=1993 |publisher=Kerala Sahitya Akademi |page=19}}</ref> ನಂತರ, [[ಒ. ವಿ. ವಿಜಯನ್]], [[ಕಮಲಾದಾಸ್]], [[ಎಂ. ಮುಕುಂದನ್]], [[ಅರುಂಧತಿ ರಾಯ್]], [[ವೈಕಂ ಮುಹಮ್ಮದ್ ಬಷೀರ್]] ನಂತಹ ಬರಹಗಾರರು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ.<ref name="MukundanPillai2004">{{cite book |author1=Eṃ Mukundan |author2=C. Gopinathan Pillai |title=Eng Adityan Radha And Others |url=https://books.google.com/books?id=1N5QcHakKdoC&pg=PP3 |access-date=18 November 2012 |year=2004 |publisher=Sahitya Akademi |isbn=978-8126018833 |page=3}}</ref><ref name="Maheshwari2002">{{cite book |author=Ed. Vinod Kumar Maheshwari |title=Perspectives On Indian English Literature |url=https://books.google.com/books?id=JcY2-ldWIKsC&pg=PA126 |access-date=18 November 2012 |year=2002 |publisher=Atlantic Publishers & Dist |isbn=978-8126900930 |page=126}}</ref><ref name="Chaudhuri2008">{{cite book |author=Amit Chaudhuri |title=Clearing a Space: Reflections On India, Literature, and Culture |url=https://books.google.com/books?id=AQeN2PoAx2IC&pg=PA44 |access-date=18 November 2012 |year=2008 |publisher=Peter Lang |isbn=978-1-906165-01-7 |pages=44–45}}</ref><ref>{{Cite news |title=Indian's First Novel Wins Booker Prize in Britain |work=[[The New York Times]] |date=15 October 1997 |access-date=11 November 2007 |url=https://query.nytimes.com/gst/fullpage.html?res=9A01E6DD173FF936A25753C1A961958260 |first=Sarah |last=Lyall}}</ref>
=== ಪಾಕಪದ್ಧತಿ ===
{{Main|ಕೇರಳದ ಪಾಕಪದ್ಧತಿ}}
ಕೇರಳದ ಪಾಕಪದ್ಧತಿಯು ಮೀನು, ಕೋಳಿ ಮತ್ತು ಮಾಂಸವನ್ನು ಬಳಸಿ ತಯಾರಿಸಿದ ವಿವಿಧ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿದೆ. ಪಾಕಶಾಸ್ತ್ರದ ಮಸಾಲೆಗಳನ್ನು ಕೇರಳದಲ್ಲಿ ಸಹಸ್ರಮಾನಗಳಿಂದ ಬೆಳೆಯಲಾಗುತ್ತಿದೆ ಮತ್ತು ಅವು ಅದರ ಪಾಕಪದ್ಧತಿಯ ವಿಶಿಷ್ಟ ಲಕ್ಷಣಗಳಾಗಿವೆ.<ref name="google26">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA10 |access-date=17 November 2012 |year=2010 |publisher=Murdoch Books |isbn=978-1-74196-438-7 |page=10}}</ref> ಅಕ್ಕಿಯು ಪ್ರಮುಖ ಪ್ರಧಾನ ಆಹಾರವಾಗಿದ್ದು, ಇದನ್ನು ಎಲ್ಲಾ ಸಮಯದಲ್ಲೂ ಸೇವಿಸಲಾಗುತ್ತದೆ.<ref name="Majumdar2010">{{cite book |author=Majumdar |title=Consumer Behaviour: Insights From Indian Market |url=https://books.google.com/books?id=KF57x1Nrn2UC&pg=RA1-PA79 |access-date=17 November 2012 |year=2010 |publisher=PHI Learning Pvt. Ltd. |isbn=978-8120339637 |page=181}}</ref> ಕೇರಳದಲ್ಲಿ ಹೆಚ್ಚಿನ ಉಪಾಹಾರ ಆಹಾರಗಳನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ, ಒಂದು ರೂಪದಲ್ಲಿ ಅಥವಾ ಇನ್ನೊಂದು ರೂಪದಲ್ಲಿ (''[[ಇಡ್ಲಿ]]'', ''[[ದೋಸೆ (ಆಹಾರ)|ದೋಸೆ]]'', ''[[ಪುಟ್ಟು]]'', ''[[ಪತ್ತಿರಿ]]'', ''[[ಅಪ್ಪಂ]]'', ಅಥವಾ ''[[ಇಡಿಯಪ್ಪಂ]]''), [[ಮರಗೆಣಸು]] ತಯಾರಿಕೆಗಳು, ಅಥವಾ ದ್ವಿದಳ ಧಾನ್ಯ-ಆಧಾರಿತ [[ವಡೆ (ಆಹಾರ)|ವಡೆ]].<ref name="Muthachen1970">{{cite book |author=Rachel Muthachen |title=Regional Indian Recipes |url=https://books.google.com/books?id=h5xXz_UFV7QC&pg=PA1 |access-date=17 November 2012 |year=1970 |publisher=Jaico Publishing House |isbn=978-8172240356 |page=1}}</ref> ಇವುಗಳು [[ಚಟ್ನಿ]], ''[[ಕಡಲೆ]]'', ''[[ಪಾಯಸಂ]]'', ''[[ಹೆಸರು ಕಾಳು|ಪಯರ್]] [[ಪಪ್ಪಡಂ]]'', ''[[ಅಪ್ಪಂ]]'', ಚಿಕನ್ ಕರಿ, ಗೋಮಾಂಸ ಫ್ರೈ, ಎಗ್ ಮಸಾಲಾ ಮತ್ತು ಮೀನು ಕರಿಯೊಂದಿಗೆ ಸೇರಿಕೊಳ್ಳಬಹುದು.<ref name="Newton" /> [[ಪೊರೊಟ್ಟ]] ಮತ್ತು [[ಬಿರಿಯಾನಿ]] ಸಹ ಸಾಮಾನ್ಯವಾಗಿ ಕೇರಳದ ರೆಸ್ಟೋರೆಂಟ್ಗಳಲ್ಲಿ ಕಂಡುಬರುತ್ತವೆ. ತಲಶ್ಶೇರಿ ಬಿರಿಯಾನಿ ಜನಾಂಗೀಯ ಬ್ರ್ಯಾಂಡ್ ಆಗಿ ಜನಪ್ರಿಯವಾಗಿದೆ. ಮಧ್ಯಾಹ್ನದ ಊಟದ ಭಕ್ಷ್ಯಗಳು [[ಅಕ್ಕಿ]] ಮತ್ತು [[ಕರಿ]] ಜೊತೆಗೆ ''[[ರಸಂ (ಭಕ್ಷ್ಯ)|ರಸಂ]]'', ''ಪುಳಿಶ್ಶೇರಿ'' ಮತ್ತು ''[[ಸಾಂಬಾರ್ (ಭಕ್ಷ್ಯ)|ಸಾಂಬಾರ್]]'' ಅನ್ನು ಒಳಗೊಂಡಿವೆ.<ref name="google27">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT4 |access-date=17 November 2012 |publisher=Springwood emedia |isbn=978-1-4761-2308-0 |pages=4–}}</ref> ''[[ಸಾಧ್ಯ]]'' ಸಸ್ಯಾಹಾರಿ ಊಟವಾಗಿದ್ದು, ಇದನ್ನು ಬಾಳೆ ಎಲೆಯಲ್ಲಿ ಬಡಿಸಲಾಗುತ್ತದೆ ಮತ್ತು ನಂತರ ಒಂದು ಕಪ್ ಪಾಯಸಂನೊಂದಿಗೆ ಸೇರಿಸಲಾಗುತ್ತದೆ.<ref name="Kannampilly2003">{{cite book |author=Vijayan Kannampilly |title=Essential Kerala Cook Book |url=https://books.google.com/books?id=pYfOCaAPb3sC&pg=PA11 |access-date=17 November 2012 |year=2003 |publisher=Penguin Books India |isbn=978-0-14-302950-2 |pages=10–11}}</ref> ಜನಪ್ರಿಯ ತಿಂಡಿಗಳಲ್ಲಿ [[ಬಾಳೆಹಣ್ಣಿನ ಚಿಪ್ಸ್]], ಯಾಮ್ ಕ್ರಿಸ್ಪ್ಸ್, [[ಮರಗೆಣಸು ಚಿಪ್ಸ್]], [[ಅಚ್ಚಪ್ಪಂ]], [[ಉನ್ನಿ ಅಪ್ಪಂ]] ಮತ್ತು ''ಕುಳಲಪ್ಪಂ'' ಸೇರಿವೆ.<ref name="Kerala with Lakshadweep">{{cite book |title=Kerala with Lakshadweep |url=https://books.google.com/books?id=yJJuAAAAMAAJ |access-date=17 November 2012 |year=2005 |publisher=Outlook Publishing |page=27 |isbn=978-8189449018}}</ref><ref name="Koilparampil1982">{{cite book |author=George Koilparampil |title=Caste in the Catholic community in Kerala: a study of caste elements in the inter rite relationships of Syrians and Latins |url=https://books.google.com/books?id=nXnaAAAAMAAJ |access-date=17 November 2012 |year=1982 |publisher=Dept. of Sociology, St. Teresa's College |page=233}}</ref><ref name="(Swami.)2000">{{cite book |author=Paramatmananda (Swami.) |title=Talks |url=https://books.google.com/books?id=p77mUECpIjgC |access-date=17 November 2012 |year=2000 |publisher=Mata Amritanandamayi Center |isbn=978-1-879410-79-4 |page=24}}</ref> ಸಮುದ್ರಾಹಾರ ವಿಶೇಷ ಭಕ್ಷ್ಯಗಳಲ್ಲಿ [[ಕರಿಮೀನ್]], ಸೀಗಡಿ, ಏಡಿ ಮತ್ತು ಇತರ ಕಠಿಣಚರ್ಮಿ ಭಕ್ಷ್ಯಗಳು ಸೇರಿವೆ.<ref>{{cite web |title=Kerala Cuisine |url=https://www.ecotours.in/kerala-cuisine.htm |publisher=Ecotours |access-date=30 May 2015 |archive-date=13 August 2015 |archive-url=https://web.archive.org/web/20150813003443/http://ecotours.in/kerala-cuisine.htm |url-status=dead }}</ref> [[ತಲಶ್ಶೇರಿ ಪಾಕಪದ್ಧತಿ]] ವೈವಿಧ್ಯಮಯವಾಗಿದೆ ಮತ್ತು ಇದು ಅನೇಕ ಪ್ರಭಾವಗಳ ಮಿಶ್ರಣವಾಗಿದೆ.
== ಮಾಧ್ಯಮ ==
{{Main|ಕೇರಳದಲ್ಲಿ ಮಾಧ್ಯಮ}}
ಮಾಧ್ಯಮ, ದೂರಸಂಪರ್ಕ, ಪ್ರಸಾರ ಮತ್ತು ಕೇಬಲ್ ಸೇವೆಗಳನ್ನು [[ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ]] (TRAI) ನಿಯಂತ್ರಿಸುತ್ತದೆ.<ref>{{cite book |title=The Telecom Regulatory Authority of India Act, 1997 |url=https://books.google.com/books?id=0gfeQc1ZBqIC&pg=PA112 |publisher=Georg Thieme Verlag |page=112 |id=GGKEY:BJ6HEPE0NRE}}</ref> 2015–16 ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 4, ಕೇರಳವನ್ನು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]] ಹೊಂದಿರುವ ರಾಜ್ಯ ಎಂದು ಶ್ರೇಣೀಕರಿಸಿತು.<ref>{{cite web |title=National Family Health Survey (NFHS-4) |url=https://rchiips.org/nfhs/NFHS-4Reports/Kerala.pdf |website=International Institute for Population SciencesDeonar |access-date=7 February 2022 |archive-date=23 February 2022 |archive-url=https://web.archive.org/web/20220223120050/http://rchiips.org/nfhs/NFHS-4Reports/Kerala.pdf |url-status=dead }}</ref> ಡಜನ್ಗಟ್ಟಲೆ ಪತ್ರಿಕೆಗಳು ಕೇರಳದಲ್ಲಿ ಪ್ರಕಟವಾಗುತ್ತವೆ, ಒಂಬತ್ತು ಪ್ರಮುಖ ಭಾಷೆಗಳಲ್ಲಿ,<ref name=rniindia>{{cite web |url=https://rni.nic.in/pii.htm |archive-url=https://web.archive.org/web/20070927070139/https://rni.nic.in/pii.htm |archive-date=27 September 2007 |url-status=dead |title=General Review |access-date=1 September 2006 |publisher=Registrar of Newspapers for India}}</ref> ಆದರೆ ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್.<ref name="google28">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA186 |access-date=17 November 2012 |year=1998 |publisher=Sahitya Akademi |isbn=978-8126004133 |page=186}}</ref> ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]]ವನ್ನು ಹೊಂದಿದೆ.<ref>{{cite web |title=The DHS Program – India: Standard DHS, 2015–16 |url=https://dhsprogram.com/what-we-do/survey/survey-display-355.cfm |website=dhsprogram.com}}</ref><ref>{{cite web |title=National Family Health Survey |url=https://rchiips.org/nfhs/NFHS-4Report.shtml |website=rchiips.org |access-date=7 February 2022 |archive-date=7 March 2022 |archive-url=https://web.archive.org/web/20220307101917/http://rchiips.org/nfhs/NFHS-4Report.shtml |url-status=dead}}</ref> ಅತಿ ವ್ಯಾಪಕವಾಗಿ ಪ್ರಸಾರವಾಗುವ [[ಮಲಯಾಳಂ ಭಾಷಾ ಪತ್ರಿಕೆಗಳ ಪಟ್ಟಿ|ಮಲಯಾಳಂ-ಭಾಷಾ ಪತ್ರಿಕೆಗಳೆಂದರೆ]] ''[[ಮಲಯಾಳ ಮನೋರಮ]], [[ಮಾತೃಭೂಮಿ]], [[ದೇಶಾಭಿಮಾನಿ]], [[ಮಧ್ಯಮಂ]], [[ಕೇರಳ ಕೌಮುದಿ]], [[ಮಂಗಳಂ ಪಬ್ಲಿಕೇಷನ್ಸ್|ಮಂಗಳಂ]], [[ಚಂದ್ರಿಕಾ (ಮಲಯಾಳಂ ಪತ್ರಿಕೆ)|ಚಂದ್ರಿಕಾ]], [[ದೀಪಿಕಾ (ಪತ್ರಿಕೆ)|ದೀಪಿಕಾ]], [[ಜನಯುಗಂ]], [[ಜನ್ಮಭೂಮಿ]], [[ಸಿರಾಜ್ ಡೈಲಿ]]'' ಮತ್ತು ''[[ಸುಪ್ರಭಾತಂ ಡೈಲಿ|ಸುಪ್ರಭಾತಂ]]''. [[ಮಲಯಾಳಂ ಭಾಷಾ ನಿಯತಕಾಲಿಕೆಗಳ ಪಟ್ಟಿ|ಪ್ರಮುಖ ಮಲಯಾಳಂ ನಿಯತಕಾಲಿಕೆಗಳು]] ''[[ಮಾತೃಭೂಮಿ ಅಳಚಪ್ಪತಿಪ್ಪು]], [[ವನಿತಾ]], [[ಇಂಡಿಯಾ ಟುಡೇ]] ಮಲಯಾಳಂ, [[ಮಧ್ಯಮಂ ವೀಕ್ಲಿ]], [[ಗೃಹಲಕ್ಷ್ಮೀ (ನಿಯತಕಾಲಿಕೆ)|ಗೃಹಲಕ್ಷ್ಮೀ]], [[ಧನಂ (ವ್ಯಾಪಾರ ನಿಯತಕಾಲಿಕೆ)|ಧನಂ]], [[ಚಿತ್ರಭೂಮಿ]]'' ಮತ್ತು ''[[ಭಾಷಾಪೋಷಿಣಿ]]''.
[[File:Malayala Manorama New Press in Kollam-3, Apr 2016.jpg|right|thumb|[[ಕೊಟ್ಟಿಯಂ]], [[ಕೊಲ್ಲಂ|ಕೊಲ್ಲಂನ]] [[ಮಲಯಾಳ ಮನೋರಮ]] ಕಚೇರಿ]]
[[ಡಿಡಿ ಮಲಯಾಳಂ]] ಸರ್ಕಾರಿ-ಸ್ವಾಮ್ಯದ ದೂರದರ್ಶನ ಪ್ರಸಾರಕವಾಗಿದೆ. [[ಬಹು-ವ್ಯವಸ್ಥಾಪಕ ವ್ಯವಸ್ಥೆಗಳು|ಬಹು-ವ್ಯವಸ್ಥಾಪಕ ವ್ಯವಸ್ಥೆಗಳು]] ಮಲಯಾಳಂ, ಇಂಗ್ಲಿಷ್, ಇತರ ಭಾರತೀಯ ಭಾಷೆಗಳು ಮತ್ತು ಅಂತಾರಾಷ್ಟ್ರೀಯ ಚಾನೆಲ್ಗಳ ಮಿಶ್ರಣವನ್ನು ಒದಗಿಸುತ್ತವೆ. ಕೆಲವು ಜನಪ್ರಿಯ ಮಲಯಾಳಂ ದೂರದರ್ಶನ ಚಾನೆಲ್ಗಳು [[ಏಷ್ಯಾನೆಟ್ (ದೂರದರ್ಶನ ಚಾನೆಲ್)|ಏಷ್ಯಾನೆಟ್]], [[ಏಷ್ಯಾನೆಟ್ ನ್ಯೂಸ್]], [[ಏಷ್ಯಾನೆಟ್ ಪ್ಲಸ್]], [[ಏಷ್ಯಾನೆಟ್ ಮೂವೀಸ್]], [[ಸೂರ್ಯ ಟಿವಿ]], [[ಸೂರ್ಯ ಮೂವೀಸ್]], [[ಮಝವಿಲ್ ಮನೋರಮ]], [[ಮನೋರಮ ನ್ಯೂಸ್]], [[ಕೈರಳಿ ಟಿವಿ]], [[ಕೈರಳಿ ಟಿವಿ|ಕೈರಳಿ ನ್ಯೂಸ್]], [[ಫ್ಲವರ್ಸ್ (ದೂರದರ್ಶನ ಚಾನೆಲ್)|ಫ್ಲವರ್ಸ್]], [[ಮೀಡಿಯಾ ವನ್ ಟಿವಿ]], [[ಮಾತೃಭೂಮಿ ನ್ಯೂಸ್]], [[ಕಪ್ಪಾ ಟಿವಿ]], [[ಅಮೃತ ಟಿವಿ]], [[ರಿಪೋರ್ಟರ್ ಟಿವಿ]], [[ಜೈಹಿಂದ್]], [[ಜನಂ ಟಿವಿ]], [[ಜೀವನ್ ಟಿವಿ]], [[ಕೌಮುದಿ ಟಿವಿ]] ಮತ್ತು [[ಶಾಲೋಮ್ (ದೂರದರ್ಶನ ಚಾನೆಲ್)|ಶಾಲೋಮ್ ಟಿವಿ]]. ಭಾರತದಲ್ಲಿ ಎರಡನೇ ಅತಿ ಹೆಚ್ಚು ಇಂಟರ್ನೆಟ್ ಪ್ರವೇಶ ಪ್ರಮಾಣದೊಂದಿಗೆ,<ref>{{Cite web |title=Delhi ranks top in Internet penetration, Kerala comes second |url=https://www.thehindubusinessline.com/info-tech/delhi-ranks-top-in-internet-penetration-kerala-comes-second/article31516751.ece/ |date=6 May 2020 |access-date=27 June 2021 |website=The Hindu Business Line}}</ref> [[ಡಿಜಿಟಲ್ ಮೀಡಿಯಾ]] [[ಸಾಮಾಜಿಕ ಮಾಧ್ಯಮ]] ಮತ್ತು [[ಭಾರತದಲ್ಲಿ ಓವರ್-ದಿ-ಟಾಪ್ ಮೀಡಿಯಾ ಸೇವೆಗಳು|OTT ಸೇವೆಗಳು]] ಸೇರಿದಂತೆ ರಾಜ್ಯದಲ್ಲಿ ಮಾಹಿತಿ ಮತ್ತು ಮನರಂಜನೆಯ ಪ್ರಮುಖ ಮೂಲವಾಗಿದೆ. ರಾಜ್ಯದಲ್ಲಿ ಗಮನಾರ್ಹವಾದ [[ಜನ ವಿಜ್ಞಾನ ಚಳುವಳಿ]] ಬೇರೂರಿದೆ, ಮತ್ತು ಬರಹಗಾರರ ಸಹಕಾರಿ ಸಂಘಗಳಂತಹ ಚಟುವಟಿಕೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ.<ref name="Tharamangalam_2005" /><ref name="Ranjith_2004">{{Cite book |author=Ranjith KS |veditors=Nair PR, Shaji H |year=2004 |title=Rural Libraries of Kerala |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621812 |pages=20–21 |url=https://www.cds.ac.in/krpcds/publication/downloads/78.pdf |access-date=28 December 2008}}</ref> [[ಬಿಎಸ್ಎನ್ಎಲ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ಜಿಯೋ]] ಪ್ರಮುಖ ಸೆಲ್ ಫೋನ್ ಸೇವಾ ಪೂರೈಕೆದಾರರಾಗಿದ್ದಾರೆ.<ref>{{cite web |title=Highlights ofTelecom Subscription Data as on 28thFebruary, 2019 |url=https://main.trai.gov.in/sites/default/files/PR_No.27of2019_0.pdf |access-date=16 May 2019 |archive-date=18 April 2019 |archive-url=https://web.archive.org/web/20190418140404/https://main.trai.gov.in/sites/default/files/PR_No.27of2019_0.pdf |url-status=dead }}</ref> ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಲಭ್ಯವಿವೆ; ಕೆಲವು ಪ್ರಮುಖ [[ಇಂಟರ್ನೆಟ್ ಸೇವಾ ಪೂರೈಕೆದಾರರು]] [[ಬಿಎಸ್ಎನ್ಎಲ್]], [[ಏಷ್ಯಾನೆಟ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ರೈಲ್ಟೆಲ್|ರೈಲ್ವೈರ್]], ಮತ್ತು [[ಟಾಟಾ ಕಮ್ಯುನಿಕೇಷನ್ಸ್]].
== ಕ್ರೀಡೆ ==
{{Main|ಕೇರಳದಲ್ಲಿ ಕ್ರೀಡೆ}}
[[File:Kerala boatrace.jpg|thumb|ವಾರ್ಷಿಕ [[ವಲ್ಲಂ ಕಳಿ|ಹಾವು ದೋಣಿ ಪಂದ್ಯವನ್ನು]] [[ಪಂಬಾ ನದಿ|ಪಂಬಾ ನದಿಯಲ್ಲಿ]] [[ಓಣಂ]] ಸಮಯದಲ್ಲಿ ನಡೆಸಲಾಗುತ್ತದೆ]]21 ನೇ ಶತಮಾನದ ವೇಳೆಗೆ, ಕೇರಳದ ಬಹುತೇಕ ಎಲ್ಲಾ ಸ್ಥಳೀಯ ಕ್ರೀಡೆಗಳು ಮತ್ತು ಆಟಗಳು ಕಣ್ಮರೆಯಾಗಿದ್ದವು ಅಥವಾ ಸ್ಥಳೀಯ ಹಬ್ಬಗಳ ಸಮಯದಲ್ಲಿ ಪ್ರದರ್ಶಿಸಲಾಗುವ ಒಂದು ಕಲಾ ಪ್ರಕಾರವಾಗಿ ಮಾರ್ಪಟ್ಟಿದ್ದವು; ಇವುಗಳಲ್ಲಿ [[ಪೂರಕ್ಕಳಿ]], ಪದಯಾನಿ, ತಲಪ್ಪಂದುಕಳಿ, ಓನತಲ್ಲು, ಪರಿಚಮುಟ್ಟುಕಳಿ, ವೇಳಾಕಳಿ, ಮತ್ತು ಕಿಳಿತತ್ತುಕಳಿ ಸೇರಿವೆ.<ref name="PRD-sports">{{cite web |url=https://www.prd.kerala.gov.in/sportsmain.htm |title=Sports and Games in Kerala |publisher=Public Relations Dept, Kerala |year=2002 |access-date=9 June 2012 |url-status=dead |archive-url=https://web.archive.org/web/20060428081830/https://www.prd.kerala.gov.in/sportsmain.htm |archive-date=28 April 2006}}</ref> ಆದಾಗ್ಯೂ, "ವಿಶ್ವದ ಎಲ್ಲಾ ಸಮರ ಕಲೆಗಳ ತಾಯಿ" ಎಂದು ಪರಿಗಣಿಸಲ್ಪಟ್ಟ ''[[ಕಳರಿಪಯಟ್ಟು]]'' ಒಂದು ಅಪವಾದವಾಗಿದೆ ಮತ್ತು ಇದನ್ನು ಸ್ಥಳೀಯ ಸಮರ ಕ್ರೀಡೆಯಾಗಿ ಅಭ್ಯಾಸ ಮಾಡಲಾಗುತ್ತದೆ.<ref>{{cite book |title=Muay Thai |publisher=Meyer & Meyer Verlag |author=Arnaud Van Der Veere |year=2012 |page=8 |isbn=978-1-84126-328-1}}</ref> ಕೇರಳದ ಮತ್ತೊಂದು ಸಾಂಪ್ರದಾಯಿಕ ಕ್ರೀಡೆಯೆಂದರೆ ದೋಣಿ ಪಂದ್ಯ, ವಿಶೇಷವಾಗಿ [[ಹಾವು ದೋಣಿ]]ಗಳ ಪಂದ್ಯ.<ref name="PRD-sports" />
[[ಕ್ರಿಕೆಟ್]] ಮತ್ತು [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ರಾಜ್ಯದಲ್ಲಿ ಜನಪ್ರಿಯವಾಯಿತು; ಎರಡನ್ನೂ 19 ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಮಲಬಾರ್ನಲ್ಲಿ ಪರಿಚಯಿಸಲಾಯಿತು. [[ಟಿನು ಯೋಹಾನನ್]], [[ಅಬೇ ಕುರುವಿಲ್ಲ]], [[ಚುಂಡಂಗಪೊಯಿಲ್ ರಿಝ್ವಾನ್]], [[ಶ್ರೀಶಾಂತ್]], [[ಸಂಜು ಸ್ಯಾಮ್ಸನ್]] ಮತ್ತು [[ಬಾಸಿಲ್ ತಂಪಿ]] ಅಂತಹ ಕ್ರಿಕೆಟಿಗರು ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದರು. ಕೇರಳದ ಕ್ರಿಕೆಟ್ ಫ್ರ್ಯಾಂಚೈಸಿ, [[ಕೊಚ್ಚಿ ಟಸ್ಕರ್ಸ್ ಕೇರಳ|ಕೊಚ್ಚಿ ಟಸ್ಕರ್ಸ್]], [[ಇಂಡಿಯನ್ ಪ್ರೀಮಿಯರ್ ಲೀಗ್]]ನ [[2011 ಇಂಡಿಯನ್ ಪ್ರೀಮಿಯರ್ ಲೀಗ್|ನಾಲ್ಕನೇ ಸೀಸನ್]] ನಲ್ಲಿ ಆಡಿತು. ಆದಾಗ್ಯೂ, ಅದರ ಫ್ರ್ಯಾಂಚೈಸಿಗಳ ನಡುವಿನ ಹಿತಾಸಕ್ತಿ ಸಂಘರ್ಷದಿಂದಾಗಿ ಸೀಸನ್ ನಂತರ ಈ ತಂಡವನ್ನು ವಿಸರ್ಜಿಸಲಾಯಿತು.<ref name="India Wins World Twenty20 Thriller">{{Cite news |title=India Wins World Twenty20 Thriller |date=25 September 2007 |access-date=11 November 2007 |url=https://www.hindu.com/2007/09/25/stories/2007092559400100.htm |archive-url=https://web.archive.org/web/20131106033222/http://www.hindu.com/2007/09/25/stories/2007092559400100.htm |url-status=dead |archive-date=6 November 2013 |work=[[The Hindu]] |location=Chennai, India }}</ref><ref name="hindu_jul09">{{cite news |url=https://www.hindu.com/2009/07/04/stories/2009070456811800.htm |archive-url=https://web.archive.org/web/20090707015857/https://www.hindu.com/2009/07/04/stories/2009070456811800.htm |url-status=dead |archive-date=7 July 2009 |work=[[The Hindu]] |title=Minister convenes high-level meet |date=4 July 2009}}</ref> ಕೇರಳವು ಇತ್ತೀಚೆಗೆ [[ರಣಜಿ ಟ್ರೋಫಿ]] ಕ್ರಿಕೆಟ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದೆ, 2017–18 ರಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ವಾರ್ಟರ್ಫೈನಲ್ಗೆ ತಲುಪಿದೆ.<ref name="PRD-sports" /><ref>{{cite news |title=Ranji Trophy: In historic first, Kerala join defending champions Gujarat in quarter-finals |url=https://timesofindia.indiatimes.com/sports/cricket/india-domestic/ranji-trophy/ranji-trophy-in-historic-first-kerala-join-defending-champions-gujarat-in-quarter-finals/articleshow/61836301.cms |date=28 November 2017 |newspaper=The Times of India |access-date=19 December 2017}}</ref> ಫುಟ್ಬಾಲ್ ಕ್ಲಬ್ ಮತ್ತು ಜಿಲ್ಲಾ ಮಟ್ಟದ ಪಂದ್ಯಗಳಿಗೆ ಈ ರಾಜ್ಯದಲ್ಲಿ ಅತಿ ಹೆಚ್ಚು ಆಡಲ್ಪಡುವ ಮತ್ತು ವೀಕ್ಷಿಸಲ್ಪಡುವ ಕ್ರೀಡೆಗಳಲ್ಲಿ ಒಂದಾಗಿದೆ. ಕೊಚ್ಚಿ [[ಇಂಡಿಯನ್ ಸೂಪರ್ ಲೀಗ್]] ನಲ್ಲಿ [[ಕೇರಳ ಬ್ಲಾಸ್ಟರ್ಸ್ ಎಫ್ಸಿ]]ಯನ್ನು ಆಯೋಜಿಸುತ್ತದೆ. ಬ್ಲಾಸ್ಟರ್ಸ್ ದೇಶದಲ್ಲಿ ಅತಿ ಹೆಚ್ಚು ಬೆಂಬಲಿತ ಕ್ಲಬ್ಗಳಲ್ಲಿ ಒಂದಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ [[ಏಷ್ಯಾ]]ದಿಂದ ಐದನೇ ಅತಿ ಹೆಚ್ಚು ಅನುಸರಿಸಲ್ಪಡುವ ಫುಟ್ಬಾಲ್ ಕ್ಲಬ್ ಆಗಿದೆ.<ref>{{Cite web |last=Salikha |first=Adelaida |title=Top FIVE Asian Clubs With Highest Social Media Followers, Up to October 2018 {{!}} Seasia.co |url=https://seasia.co/2018/10/31/top-five-asian-clubs-with-highest-social-media-followers-up-to-october-2018 |access-date=17 September 2020|website=Good News from Southeast Asia |language=en}}</ref><ref>{{Cite web |date=18 June 2020 |title=Indian Football: Five most-followed clubs on social media |url=https://khelnow.com/football/indian-football-clubs-social-media-followers/ |access-date=10 September 2020 |website=Khel Now |language=en-US |archive-date=13 November 2021 |archive-url=https://web.archive.org/web/20211113014231/https://khelnow.com/football/indian-football-clubs-social-media-followers |url-status=dead }}</ref><ref>{{Cite web |title=Malayalam News – kerala blasters become fifth Asian club with the biggest social media following {{!}} News18 Kerala, Sports Latest Malayalam News {{!}} ലേറ്റസ്റ്റ് മലയാളം വാർത്ത |url=https://malayalam.news18.com/news/sports/kerala-blasters-become-fifth-asian-club-with-the-biggest-social-media-following-50113.html |access-date=5 December 2020|website=malayalam.news18.com|date=25 October 2018 }}</ref> ಅಲ್ಲದೆ, ಕೋಝಿಕೋಡ್ [[ಐ-ಲೀಗ್]] ನಲ್ಲಿ [[ಗೋಕುಲಂ ಕೇರಳ ಎಫ್ಸಿ]] ಮತ್ತು [[ಸೈಟ್ ನಾಗ್ಜೀ ಫುಟ್ಬಾಲ್ ಟೂರ್ನಮೆಂಟ್]] ಅನ್ನು ಆಯೋಜಿಸುತ್ತದೆ. ಕೇರಳವು ಪಶ್ಚಿಮ ಬಂಗಾಳ ಮತ್ತು ಗೋವಾ ಜೊತೆಗೆ ಭಾರತದ ಪ್ರಮುಖ ಫುಟ್ಬಾಲ್ ರಾಜ್ಯಗಳಲ್ಲಿ ಒಂದಾಗಿದೆ ಮತ್ತು [[ಐ. ಎಂ. ವಿಜಯನ್]], ಸಿ. ವಿ. ಪಪ್ಪಚನ್, [[ವಿ. ಪಿ. ಸತ್ಯನ್]], [[ಯು. ಶರಾಫ್ ಅಲಿ]], [[ಜೋ ಪಾಲ್ ಅಂಚೇರಿ]], [[ಆಶಿಕ್ ಕುರುಣಿಯನ್]], [[ಮೊಹಮ್ಮದ್ ರಫಿ (ಫುಟ್ಬಾಲ್ ಆಟಗಾರ)|ಮುಹಮ್ಮದ್ ರಫಿ]], [[ಜಿಜು ಜಾಕೋಬ್]], [[ಮಶೂರ್ ಶರೀಫ್]], [[ಪಪ್ಪಚನ್ ಪ್ರದೀಪ್]], [[ಸಿ.ಕೆ. ವಿನೀತ್]], [[ಅನಸ್ ಎಡತೋಡಿಕಾ]], [[ಸಹಲ್ ಅಬ್ದುಲ್ ಸಮದ್]], ಮತ್ತು [[ರಿನೊ ಆಂಟೊ]] ನಂತಹ ರಾಷ್ಟ್ರೀಯ ಆಟಗಾರರನ್ನು ಉತ್ಪಾದಿಸಿದೆ.<ref>{{cite web |url=https://www.the-aiff.com/awards.php |archive-url=https://web.archive.org/web/20090217141248/https://the-aiff.com/awards.php |archive-date=17 February 2009 |title=AIFF Award Player of the Year |publisher=All India Football Federation |access-date=15 November 2015 |url-status=dead}}</ref><ref>{{cite web |author1=James Wray |author2=Ulf Stabe |url=https://twocircles.net/2007sep14/viva_marks_resurgence_kerala_football.html |title=Viva marks the resurgence of Kerala football |publisher=Monstersandcritics.com |date=15 September 2007 |access-date=30 July 2009}}</ref><ref name="india">{{cite web |url=https://zeenews.india.com/news/sports/indian-football-team-suffer-humiliating-1-9-defeat-to-kuwait_668128.html |publisher=zeenews.india.com |title=Indian football team suffer humiliating 1–9 defeat to Kuwait |date=14 November 2010 |access-date=13 November 2016}}</ref><ref>{{Cite web |last=Sportstar |first=Team |title=Sahal recalls journey from university football to senior national team |url=https://sportstar.thehindu.com/football/intercontinental-cup-indian-football-sahal-abdul-samad-kerala-blasters-college-university-system/article28436294.ece |access-date=6 June 2020 |website=Sportstar |date=15 July 2019 |language=en}}</ref><ref>{{cite web |url=https://scroll.in/field/988334/india-football-stimac-names-10-new-players-in-35-man-probables-list-for-oman-uae-friendlies |title=Bipin Singh, Ishan Pandita in 35-man probables list for Oman, UAE friendlies |website=thescroll.in |date=2 March 2021}}</ref> ಕೇರಳ ರಾಜ್ಯ ಫುಟ್ಬಾಲ್ ತಂಡವು [[ಸಂತೋಷ್ ಟ್ರೋಫಿ]]ಯನ್ನು ಏಳು ಬಾರಿ ಗೆದ್ದಿದೆ; 1973, 1992, 1993, 2001, 2004, 2018, ಮತ್ತು 2022 ರಲ್ಲಿ. ಅವರು ಎಂಟು ಬಾರಿ ರನ್ನರ್-ಅಪ್ ಆಗಿದ್ದರು.<ref>{{cite web |url=https://www.the-aiff.com/pages/tournament/tournament-history.php?tournamentdetail=22 |archive-url=https://web.archive.org/web/20120524035900/https://www.the-aiff.com/pages/tournament/tournament-history.php?tournamentdetail=22 |archive-date=24 May 2012 |title=Past Winners |publisher=All India Football Federation |access-date=9 June 2012}}</ref>
ರಾಜ್ಯದ ಪ್ರಮುಖ ಕ್ರೀಡಾಪಟುಗಳಲ್ಲಿ [[ಪಿ. ಟಿ. ಉಷಾ]], [[ಶೈನಿ ವಿಲ್ಸನ್]] ಮತ್ತು [[ಎಂ.ಡಿ. ವಾಲ್ಸಮ್ಮ]] ಸೇರಿದ್ದಾರೆ, ಇವರೆಲ್ಲರೂ [[ಪದ್ಮಶ್ರೀ]] ಮತ್ತು [[ಅರ್ಜುನ ಪ್ರಶಸ್ತಿ]] ಪಡೆದವರಾಗಿದ್ದಾರೆ, ಆದರೆ [[ಕೆ. ಎಂ. ಬೀನಾಮೋಲ್]] ಮತ್ತು [[ಅಂಜು ಬಾಬಿ ಜಾರ್ಜ್]] [[ರಾಜೀವ್ ಗಾಂಧಿ ಖೇಲ್ ರತ್ನ]] ಮತ್ತು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ. [[ಟಿ. ಸಿ. ಯೋಹಾನನ್]], [[ಸುರೇಶ್ ಬಾಬು (ಲಾಂಗ್ ಜಂಪರ್)|ಸುರೇಶ್ ಬಾಬು]], [[ಸಿನಿಮೋಲ್ ಪೌಲೋಸ್]], ಏಂಜಲ್ ಮೇರಿ ಜೋಸೆಫ್, [[ಮರ್ಸಿ ಕುಟ್ಟನ್]], ಕೆ. ಸರಮ್ಮ, [[ರೋಸಾ ಕುಟ್ಟಿ|ಕೆ. ಸಿ. ರೋಸಾಕುಟ್ಟಿ]], ಪದ್ಮಿನಿ ಸೆಲ್ವನ್ ಮತ್ತು ಟಿಂಟು ಲುಕಾ ಕೇರಳದ ಇತರ ಅರ್ಜುನ ಪ್ರಶಸ್ತಿ ವಿಜೇತರು.<ref name="PRD-sports" /><ref>{{cite web |url=https://keralaathletics.org/history.html |title=Kerala State Athletics Association: History |publisher=Kerala State Athletics Association |access-date=12 June 2012 |archive-date=24 June 2012 |archive-url=https://web.archive.org/web/20120624082221/http://keralaathletics.org/history.html |url-status=dead }}</ref> ವಾಲಿಬಾಲ್ ಮತ್ತೊಂದು ಜನಪ್ರಿಯ ಕ್ರೀಡೆಯಾಗಿದ್ದು, ಇದನ್ನು ಹೆಚ್ಚಾಗಿ ಕರಾವಳಿಯ ಮರಳು ಕಡಲತೀರಗಳಲ್ಲಿ ತಾತ್ಕಾಲಿಕ ಅಂಗಣಗಳಲ್ಲಿ ಆಡಲಾಗುತ್ತದೆ.<ref>{{cite book |title=The Rough Guide to South India |author1=David Abram |author2=Nick Edwards |publisher=Rough Guides |year=2004 |isbn=978-1-84353-103-6 |page=64}}</ref> [[ಜಿಮ್ಮಿ ಜಾರ್ಜ್]] ಒಬ್ಬ ಪ್ರಮುಖ ಭಾರತೀಯ ವಾಲಿಬಾಲ್ ಆಟಗಾರ, ಅವರ ಪ್ರಧಾನ ಸಮಯದಲ್ಲಿ ವಿಶ್ವದ ಹತ್ತು ಅತ್ಯುತ್ತಮ ಆಟಗಾರರಲ್ಲಿ ಶ್ರೇಣೀಕರಿಸಲ್ಪಟ್ಟಿದ್ದರು.<ref>{{cite web |title=Jimmy George |work=Sports Portal |publisher=Ministry of Youth Affairs and Sports |access-date=11 November 2007 |url=https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-url=https://web.archive.org/web/20080514040141/https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-date=14 May 2008 |url-status=dead}}</ref> ಇತರ ಜನಪ್ರಿಯ ಕ್ರೀಡೆಗಳಲ್ಲಿ [[ಬ್ಯಾಡ್ಮಿಂಟನ್]], [[ಬ್ಯಾಸ್ಕೆಟ್ಬಾಲ್]] ಮತ್ತು [[ಕಬಡ್ಡಿ]] ಸೇರಿವೆ.<ref name="Reddy2005">{{cite book |author=P.A. Reddy |title=Sports Promotion In India |url=https://books.google.com/books?id=T37m8eRAEX0C&pg=PA119 |access-date=17 November 2012 |year=2005 |publisher=Discovery Publishing House |isbn=978-8171419272 |pages=31–42}}</ref> ಭಾರತೀಯ ಹಾಕಿ ತಂಡದ ನಾಯಕ [[ಪಿ. ಆರ್. ಶ್ರೀಜೇಶ್]], ಅಗ್ರ ಗೋಲ್ಕೀಪರ್ ಕೇರಳದವರು. ರಾಜ್ಯದ ಅಂತಾರಾಷ್ಟ್ರೀಯ ವಾಕರ್ಸ್ [[ಕೆ. ಟಿ. ಇರ್ಫಾನ್]] ಸೇರಿದ್ದಾರೆ.<ref>{{cite news |last=Irfan |first=KT |title=KT Irfan, World Athletics Championships, Moscow |url=https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |newspaper=NDTV Sports |archive-url=https://web.archive.org/web/20130814035243/https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |archive-date=14 August 2013 |url-status=dead}}</ref>
[[2017 FIFA U-17 ವಿಶ್ವಕಪ್]] [[ಭಾರತ]]ದಲ್ಲಿ, [[ಜವಾಹರಲಾಲ್ ನೆಹರು ಕ್ರೀಡಾಂಗಣ (ಕೊಚ್ಚಿ)]] ಅನ್ನು [[ಭಾರತ]]ದಲ್ಲಿ ಆಟವನ್ನು ಆಯೋಜಿಸುವ ಆರು ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಯಿತು.<ref>{{cite web |url=https://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |archive-url=https://web.archive.org/web/20160308104258/http://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |url-status=dead |archive-date=8 March 2016 |title=FIFA Event at Kochi: Time is Ticking Away |website=The New Indian Express |access-date=3 April 2016}}</ref> [[ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ]]ವು ತಿರುವನಂತಪುರ ನಗರದ ಕಾರಿಯಾವಟ್ಟಂನಲ್ಲಿದೆ, ಇದು ಭಾರತದ ಮೊದಲ DBOT (ವಿನ್ಯಾಸ, ನಿರ್ಮಿಸಿ, ನಿರ್ವಹಿಸಿ ಮತ್ತು ವರ್ಗಾಯಿಸಿ) ಮಾದರಿಯ ಹೊರಾಂಗಣ ಕ್ರೀಡಾಂಗಣವಾಗಿದ್ದು, ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಮತ್ತು [[2015 SAFF ಚಾಂಪಿಯನ್ಶಿಪ್]] ಸೇರಿದಂತೆ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಿದೆ.<ref name="SAFF Cup Dates">{{cite news |last1=Chaudhuri |first1=Arunava |title=Trivandrum will host upcoming SAFF Cup in December 2015/January 2016 |url=http://www.sportskeeda.com/football/trivandrum-will-host-upcoming-saff-cup-in-december-2015january-2016 |access-date=22 December 2015 |work=SportsKeeda |date=2 July 2015}}</ref>
== ಪ್ರವಾಸೋದ್ಯಮ ==
{{Main|ಕೇರಳದಲ್ಲಿ ಪ್ರವಾಸೋದ್ಯಮ}}
ಕೇರಳದ ಸಂಸ್ಕೃತಿ ಮತ್ತು ಸಂಪ್ರದಾಯಗಳು, ಅದರ ವೈವಿಧ್ಯಮಯ [[ಕೇರಳದ ಜನಸಂಖ್ಯಾಶಾಸ್ತ್ರ|ಜನಸಂಖ್ಯಾಶಾಸ್ತ್ರ]]ದೊಂದಿಗೆ, ರಾಜ್ಯವನ್ನು ಭಾರತದಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ. 2012 ರಲ್ಲಿ, [[ನ್ಯಾಷನಲ್ ಜಿಯಾಗ್ರಫಿಕ್|ನ್ಯಾಷನಲ್ ಜಿಯಾಗ್ರಫಿಕ್]] ನ ''[[ನ್ಯಾಷನಲ್ ಜಿಯಾಗ್ರಫಿಕ್ ಟ್ರಾವೆಲರ್|ಟ್ರಾವೆಲರ್]]'' ನಿಯತಕಾಲಿಕೆಯು ಕೇರಳವನ್ನು "ವಿಶ್ವದ ಹತ್ತು ಸ್ವರ್ಗಗಳಲ್ಲಿ" ಒಂದಾಗಿ<ref name="Kerala Tourism">{{cite web |title=Kerala Tourism: Paradises in the world |url=https://www.hindu.com/edu/2004/05/11/stories/2004051100040100.htm |archive-url=https://web.archive.org/web/20040904094648/https://www.hindu.com/edu/2004/05/11/stories/2004051100040100.htm |url-status=dead |archive-date=4 September 2004 |work=[[The Hindu]] |access-date=20 February 2012}}</ref><ref>{{cite web |url=https://www.pravasikairali.com/Homepage.aspx?p=articles&news=447 |archive-url=https://web.archive.org/web/20141108151228/https://www.pravasikairali.com/Homepage.aspx?p=articles&news=447 |archive-date=8 November 2014 |title=Pravasi KairaLi Home |publisher=Pravasikairali.com |url-status=usurped |access-date=11 January 2014}}</ref><ref>{{Cite news |date=7 February 2014 |title=Kerala: A vacation in paradise |work=[[The Times of India]] |url=https://timesofindia.indiatimes.com/kerala-a-vacation-in-paradise/articleshow/26251595.cms |access-date=17 January 2023 |archive-date=25 November 2023 |archive-url=https://web.archive.org/web/20231125190237/https://timesofindia.indiatimes.com/kerala-a-vacation-in-paradise/articleshow/26251595.cms |url-status=live }}</ref> ಮತ್ತು "ಜೀವಮಾನದಲ್ಲಿ ನೋಡಲೇಬೇಕಾದ 50 ಸ್ಥಳಗಳು" ಎಂದು ಹೆಸರಿಸಿತು.<ref name="Kerala India">{{cite web |title=Kerala – The Gateway of India |url=https://forbesindia.com/printcontent/26162 |work=[[Forbes]] |access-date=3 January 2012}}</ref> ''[[ಟ್ರಾವೆಲ್ ಅಂಡ್ ಲೀಷರ್]]'' ಕೂಡ ಕೇರಳವನ್ನು "21 ನೇ ಶತಮಾನದ 100 ಉತ್ತಮ ಪ್ರವಾಸಗಳಲ್ಲಿ ಒಂದು" ಎಂದು ವಿವರಿಸಿದೆ.<ref name="Kerala Tourism" /><ref>{{Cite news |title=Kerala : National Geographic Traveler selects Kerala as 'one of the 50 must-see destinations of a lifetime' |publisher=Travel Portal of India |date=27 January 2009 |access-date=11 June 2011 |url=https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |url-status=dead |archive-url=https://web.archive.org/web/20110904030433/https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |archive-date=4 September 2011}}</ref> 2012 ರಲ್ಲಿ, ಇದು [[ತಾಜ್ ಮಹಲ್]] ಅನ್ನು ಹಿಂದಿಕ್ಕಿ ಭಾರತಕ್ಕಾಗಿ ಗೂಗಲ್ನ ಹುಡುಕಾಟ ಪ್ರವೃತ್ತಿಗಳಲ್ಲಿ ಪ್ರಥಮ ಪ್ರವಾಸಿ ತಾಣವಾಯಿತು.<ref>{{Cite news |title=Kerala beats Taj in Google Search Trends for 2012 |work=Indian Express |date=28 December 2012 |access-date=11 January 2012 |url=https://www.indianexpress.com/news/tourism-kerala-beats-taj-in-google-search-trends-for-2012/1051412}}</ref> [[CNN ಟ್ರಾವೆಲ್]] ತನ್ನ '2019 ರಲ್ಲಿ ಭೇಟಿ ನೀಡಲು 19 ಅತ್ಯುತ್ತಮ ಸ್ಥಳಗಳ' ಪಟ್ಟಿಯಲ್ಲಿ ಕೇರಳವನ್ನು ಸೇರಿಸಿದೆ.<ref>{{Cite web |title=CNN Travel's 19 places to visit in 2019 |url=https://www.cnn.com/travel/article/places-to-visit-2019/index.html |website=CNN Travel |date=22 May 2019 |language=en |access-date=4 April 2022}}</ref> ಕೇರಳವನ್ನು [[Time (magazine)|''TIME'']] ನಿಯತಕಾಲಿಕೆಯು 2022 ರಲ್ಲಿ ತನ್ನ ವಿಶ್ವದ ಅತ್ಯುತ್ತಮ ಸ್ಥಳಗಳ ಪಟ್ಟಿಯಲ್ಲಿ ಅನ್ವೇಷಿಸಲು 50 ಅಸಾಧಾರಣ ಸ್ಥಳಗಳಲ್ಲಿ ಹೆಸರಿಸಿತು.<ref>{{Cite web |url=https://www.indiatoday.in/lifestyle/travel/story/ahmedabad-and-kerala-on-time-magazine-s-list-of-world-s-greatest-places-of-2022-1975386-2022-07-14 |title=Ahmedabad and Kerala on TIME magazine's list of World's Greatest Places of 2022 |website=India Today|date=14 July 2022 }}</ref> 2025 ರಲ್ಲಿ, ಕೇರಳವನ್ನು [[ರಫ್ ಗೈಡ್ಸ್]] ನ '2026 ರ ವಿಶ್ವದ 26 ಪ್ರಮುಖ ಸ್ಥಳಗಳ' ಪಟ್ಟಿಯಲ್ಲಿ 16 ನೇ ಸ್ಥಾನದಲ್ಲಿ ಶ್ರೇಣೀಕರಿಸಲಾಯಿತು, ಇದು ಅಂತಾರಾಷ್ಟ್ರೀಯ ಪ್ರವಾಸ ಮಾರ್ಗದರ್ಶಿಯ ವಾರ್ಷಿಕ ಜಾಗತಿಕ ಸ್ಥಳಗಳ ಶ್ರೇಯಾಂಕದಲ್ಲಿ ಸೇರಿಸಲ್ಪಟ್ಟ ಏಕೈಕ ಭಾರತೀಯ ರಾಜ್ಯವಾಗಿದೆ.<ref>{{Cite news |date=2025-12-27 |title=This is the only Indian state to make it to the list of 'World's Top 26 Destinations For 2026' |url=https://timesofindia.indiatimes.com/life-style/travel/destinations/this-is-the-only-indian-state-to-make-it-to-the-list-of-worlds-top-26-destinations-for-2026/articleshow/126194678.cms |access-date=2025-12-30 |work=The Times of India |issn=0971-8257}}</ref>
ಕೇರಳದ ಬೀಚ್ಗಳು, ಬ್ಯಾಕ್ವಾಟರ್ಗಳು, ಸರೋವರಗಳು, ಪರ್ವತ ಶ್ರೇಣಿಗಳು, ಜಲಪಾತಗಳು, ಪ್ರಾಚೀನ ಬಂದರುಗಳು, ಅರಮನೆಗಳು, ಧಾರ್ಮಿಕ ಸಂಸ್ಥೆಗಳು<ref name="Ltd.2012">{{cite book |author=Infokerala Communications Pvt. Ltd. |title=Kerala Tradition & Fascinating Destinations |url=https://books.google.com/books?id=vTunBAAAQBAJ&pg=PA314 |year=2012 |publisher=Biju Mathew {{!}} Info Kerala Communications Pvt Ltd |isbn=978-8192128481 |page=314}}</ref> ಮತ್ತು ವನ್ಯಜೀವಿ ಅಭಯಾರಣ್ಯಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಗಳಾಗಿವೆ.<ref name="Tripays">{{cite web |url=https://www.tripays.com/kerala-family-tour-packages/ |date=6 August 2011 |title=Kerala Family Tour Packages |author=Admin |access-date=2 July 2019 |archive-date=21 November 2021 |archive-url=https://web.archive.org/web/20211121233843/https://www.tripays.com/kerala-family-tour-packages/ |url-status=dead }}</ref> ಕೊಚ್ಚಿ ನಗರವು ಕೇರಳದಲ್ಲಿ ಒಟ್ಟು ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.<ref name="keralatourism">{{cite web |url=https://www.keralatourism.org/destination-wise-foreign-2010.pdf |date=6 August 2011 |title=Destination Wise Number of Foreign Tourists Visited Kerala During 2010 |author=Saju |access-date=24 September 2014}}</ref><ref name="Tourism Statistics">{{cite web |publisher=Government of Kerala, Tourism Department |url=https://www.keralatourism.org/tourismstatistics/Tourist-Statistics2008.pdf |title=Tourist statistics – 2008 |access-date=22 October 2010}}</ref> 1980 ರ ದಶಕದ ಆರಂಭದವರೆಗೆ, ಕೇರಳವು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಅಪರಿಚಿತ ತಾಣವಾಗಿತ್ತು.<ref name="HinduTourism">{{Cite news |author=Santhanam K |title=An ideal getaway |date=27 January 2002 |access-date=11 November 2007 |url=https://www.hindu.com/thehindu/mag/2002/01/27/stories/2002012700400800.htm |archive-url=https://web.archive.org/web/20030623124553/https://www.hindu.com/thehindu/mag/2002/01/27/stories/2002012700400800.htm |url-status=dead |archive-date=23 June 2003 |work=[[The Hindu]] |location=Chennai, India}}</ref> 1986 ರಲ್ಲಿ ಕೇರಳ ಸರ್ಕಾರವು ಪ್ರವಾಸೋದ್ಯಮವನ್ನು ಪ್ರಮುಖ ಉದ್ಯಮವೆಂದು ಘೋಷಿಸಿತು ಮತ್ತು ಅದನ್ನು ಹಾಗೆ ಮಾಡಿದ ಭಾರತದ ಮೊದಲ ರಾಜ್ಯವಾಗಿದೆ.<ref name="Kerala Tourism"/> [[ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ]], ರಾಜ್ಯದ ಪ್ರವಾಸೋದ್ಯಮ ನಿರೀಕ್ಷೆಗಳನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಂಸ್ಥೆ, ಪ್ರಾರಂಭಿಸಿದ ಮಾರ್ಕೆಟಿಂಗ್ ಅಭಿಯಾನಗಳು ಪ್ರವಾಸೋದ್ಯಮ ಉದ್ಯಮದ ಬೆಳವಣಿಗೆಗೆ ಕಾರಣವಾಯಿತು.<ref name="Tourism">{{cite book |title=Tourism Marketing |author=Dasgupta Devashish |publisher=Pearson Education India |year=2011 |isbn=978-8131731826 |page=203 |url=https://books.google.com/books?id=oXWAEjcG-FsC |access-date=30 May 2015}}</ref> ಅನೇಕ ಜಾಹೀರಾತುಗಳು ಕೇರಳವನ್ನು ''[[ಗಾಡ್ಸ್ ಓನ್ ಕಂಟ್ರಿ|ಕೇರಳ, ಗಾಡ್ಸ್ ಓನ್ ಕಂಟ್ರಿ]]'' ಎಂಬ ಸ್ಲೋಗನ್ನೊಂದಿಗೆ ಬ್ರಾಂಡ್ ಮಾಡಿದವು.<ref name="Tourism" /> ಕೇರಳ ಪ್ರವಾಸೋದ್ಯಮವು ಜಾಗತಿಕ ಬ್ರ್ಯಾಂಡ್ ಆಗಿದ್ದು, ಅತಿ ಹೆಚ್ಚು ನೆನಪಿನ ಶಕ್ತಿಯನ್ನು ಹೊಂದಿರುವ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref name="Tourism" /> 2006 ರಲ್ಲಿ, ಕೇರಳವು 8.5 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿತು, ಇದು ಹಿಂದಿನ ವರ್ಷಕ್ಕಿಂತ 23.7% ರಷ್ಟು ಹೆಚ್ಚಳವಾಗಿದೆ, ಇದು ರಾಜ್ಯವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜನಪ್ರಿಯ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ.<ref>{{cite web |title=Tourist Statistics – 2006 |work=Department of Tourism |publisher=Government of Kerala |year=2006 |access-date=11 November 2007 |url=https://www.keralatourism.org/php/media/data/tourismstatistics/TS2006.pdf |archive-url=https://web.archive.org/web/20080626195845/https://www.keralatourism.org/php/media/data/tourismstatistics/TS2006.pdf |archive-date=26 June 2008}}</ref> 2011 ರಲ್ಲಿ, ಕೇರಳಕ್ಕೆ ಪ್ರವಾಸಿಗರ ಒಳಹರಿವು 10-ಮಿಲಿಯನ್ ಗಡಿಯನ್ನು ದಾಟಿತು.<ref name="bizstd">{{Cite news |title=Tourist inflow to Kerala crosses 10 million mark |work=Business-Standard |access-date=15 November 2015 |url=https://www.business-standard.com/india/news/tourist-inflow-to-kerala-crosses-10-million-mark/474524/ |date=16 May 2012 |last1=Joseph |first1=George}}</ref>
ಆಯುರ್ವೇದ ಪ್ರವಾಸೋದ್ಯಮವು 1990 ರ ದಶಕದಿಂದಲೂ ಬಹಳ ಜನಪ್ರಿಯವಾಗಿದೆ, ಮತ್ತು ಖಾಸಗಿ ಸಂಸ್ಥೆಗಳು ಪ್ರವಾಸೋದ್ಯಮ ಇಲಾಖೆಯ ಉಪಕ್ರಮಗಳೊಂದಿಗೆ ಗಮನಾರ್ಹ ಪಾತ್ರವನ್ನು ವಹಿಸಿವೆ.<ref name="HinduTourism" /> ಕೇರಳವು ತನ್ನ [[ಪರಿಸರ ಪ್ರವಾಸೋದ್ಯಮ]] ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ, ಇವುಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಪರ್ವತಾರೋಹಣ, ಟ್ರೆಕ್ಕಿಂಗ್ ಮತ್ತು ಪಕ್ಷಿ ವೀಕ್ಷಣಾ ಕಾರ್ಯಕ್ರಮಗಳು ಪ್ರಮುಖ ಚಟುವಟಿಕೆಗಳಾಗಿವೆ.<ref name="Devrep47">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=47 |access-date=30 May 2015}}</ref> ರಾಜ್ಯದ ಪ್ರವಾಸೋದ್ಯಮ ಉದ್ಯಮವು [[ಕೇರಳದ ಆರ್ಥಿಕತೆ|ರಾಜ್ಯದ ಆರ್ಥಿಕತೆಗೆ]] ಪ್ರಮುಖ ಕೊಡುಗೆಯಾಗಿದೆ, 13.3% ದರದಲ್ಲಿ ಬೆಳೆಯುತ್ತಿದೆ.<ref>{{cite web |title=Tourist Statistics – 2005 (Provisional) |work=Department of Tourism |publisher=Government of Kerala |year=2005 |access-date=11 November 2007 |url=https://www.keralatourism.org/php/media/data/tourismstatistics/TOURISTSTATISTICS2005.pdf |archive-url=https://web.archive.org/web/20080626195846/https://www.keralatourism.org/php/media/data/tourismstatistics/TOURISTSTATISTICS2005.pdf |archive-date=26 June 2008}}</ref> ಪ್ರವಾಸೋದ್ಯಮದಿಂದ ಬರುವ ಆದಾಯವು 2001 ಮತ್ತು 2011 ರ ನಡುವೆ ಐದು ಪಟ್ಟು ಹೆಚ್ಚಾಗಿ 2011 ರಲ್ಲಿ {{INR}} 190 ಬಿಲಿಯನ್ ಗಡಿಯನ್ನು ದಾಟಿತು. ಎಕನಾಮಿಕ್ ಟೈಮ್ಸ್ ಪ್ರಕಾರ<ref>{{Cite news |url=https://economictimes.indiatimes.com/industry/services/travel/kerala-records-6-rise-in-tourist-arrivals-despite-floods-and-nipah-virus-scare/articleshow/67995390.cms |title=Kerala records 6% rise in tourist arrivals despite floods and Nipah virus scare |date=14 February 2019 |work=The Economic Times |access-date=14 August 2019}}</ref> ಕೇರಳವು 2018 ರಲ್ಲಿ ಪ್ರವಾಸೋದ್ಯಮ ವಲಯದಿಂದ INR 365280.1 ಮಿಲಿಯನ್ ದಾಖಲೆಯ ಆದಾಯವನ್ನು ಗಳಿಸಿತು, ಇದು ಹಿಂದಿನ ವರ್ಷಕ್ಕಿಂತ Rs 28743.3 ಮಿಲಿಯನ್ ಹೆಚ್ಚಳವಾಗಿದೆ. 2018 ರಲ್ಲಿ 16.7 ಮಿಲಿಯನ್ ಕ್ಕೂ ಹೆಚ್ಚು ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡಿದ್ದಾರೆ, ಇದು ಹಿಂದಿನ ವರ್ಷ 15.76 ಮಿಲಿಯನ್ ಗೆ ಹೋಲಿಸಿದರೆ 5.9% ರಷ್ಟು ಹೆಚ್ಚಳವಾಗಿದೆ. ಈ ಉದ್ಯಮವು ಸರಿಸುಮಾರು 1.2 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ.<ref name="bizstd" />
ರಾಜ್ಯದ ಏಕೈಕ ಡ್ರೈವ್-ಇನ್ ಬೀಚ್, ಕಣ್ಣೂರಿನ [[ಮುಝಪ್ಪಿಲಂಗಡ್ ಬೀಚ್]], ಇದು {{convert|5|km}} ಮರಳಿನಲ್ಲಿ ಹರಡಿದೆ, ಇದನ್ನು ಬಿಬಿಸಿ 2016 ರಲ್ಲಿ ವಿಶ್ವದ ಆರು ಪ್ರಮುಖ ಡ್ರೈವ್-ಇನ್ ಬೀಚ್ಗಳಲ್ಲಿ ಒಂದಾಗಿ ಆಯ್ಕೆ ಮಾಡಿತು.<ref>{{cite web |url=https://www.bbc.com/autos/story/20160617-the-worlds-best-beaches-for-driving |title=The best beaches for driving |first=David K. |last=Gibson |work=BBC Autos |date=11 June 2021}}</ref> [[ಇಡುಕ್ಕಿ ಅಣೆಕಟ್ಟು]], ವಿಶ್ವದ ಎರಡನೇ ಕಮಾನು ಅಣೆಕಟ್ಟು, ಮತ್ತು ಏಷ್ಯಾದ ಮೊದಲನೆಯದು [[ಇಡುಕ್ಕಿ|ಇಡುಕ್ಕಿಯಲ್ಲಿದೆ]]. ಪ್ರಮುಖ ಬೀಚ್ಗಳು [[ಕೋವಳಂ]], [[ವರ್ಕಲ]], [[ಕೋಝಿಕೋಡ್]], [[ಫೋರ್ಟ್ ಕೊಚ್ಚಿ]], [[ಚೇರಾಯಿ]], [[ಆಲಪ್ಪುಳ]], [[ಪೊನ್ನಾನಿ]], [[ಕಡಲುಂಡಿ]], [[ತಾನೂರು, ಮಲಪ್ಪುರಂ|ತಾನೂರು]], [[ಚಾಲಿಯಂ]], [[ಪಾಯ್ಯಂಬಲಂ]], ಕಪ್ಪಾಡ್, [[ಮುಝಪ್ಪಿಲಂಗಡ್ ಬೀಚ್|ಮುಝಪ್ಪಿಲಂಗಡ್]] ಮತ್ತು [[ಬೇಕಲ್]]. ಜನಪ್ರಿಯ [[ಬೆಟ್ಟದ ತಾಣ]]ಗಳೆಂದರೆ [[ಪೊನ್ಮುಡಿ]], [[ವಯನಾಡು]], [[ವಗಮನ್]], [[ಮುನ್ನಾರ್]], [[ಪೀರ್ಮೇಡ್]], [[ರಾಮಕ್ಕಲ್ಮೇಡು]], [[ಅರಿಂಬ್ರ ಬೆಟ್ಟಗಳು, ಮಲಪ್ಪುರಂ|ಅರಿಂಬ್ರ]], [[ಪೈತಲ್ಮಲ]] [[ಇಡುಕ್ಕಿ|ಕಣ್ಣೂರು]] ಜಿಲ್ಲೆಯ, [[ಕೊಡಿಕುತಿಮಲ]], ಮತ್ತು [[ನೆಲ್ಲಿಯಂಪತಿ]].<ref>{{cite book |author=Tapan K Panda |title=Tourism Marketing |publisher=ICFAI Books |year=2007 |isbn=978-8131404690 |url=https://books.google.com/books?id=4A0j6ZlJQfkC |pages=173–77 |access-date=30 May 2015}}</ref> ಮುನ್ನಾರ್ ಸಮುದ್ರ ಮಟ್ಟದಿಂದ 4,500 ಅಡಿ ಎತ್ತರದಲ್ಲಿದೆ ಮತ್ತು ಚಹಾ ತೋಟಗಳು ಮತ್ತು ವಿವಿಧ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ.<ref name="FPJ">{{cite news |title=Kerala: Spellbound by this natural beauty |newspaper=The Free Press Journal |url=https://www.freepressjournal.in/travel/kerala-spellbound-by-this-natural-beauty/636904 |date=2 August 2015 |access-date=27 November 2015}}</ref> ಕೇರಳದ ಪರಿಸರ ಪ್ರವಾಸೋದ್ಯಮ ತಾಣಗಳು 12 ವನ್ಯಜೀವಿ ಅಭಯಾರಣ್ಯಗಳು ಮತ್ತು ಎರಡು ರಾಷ್ಟ್ರೀಯ ಉದ್ಯಾನವನಗಳನ್ನು ಒಳಗೊಂಡಿವೆ: [[ಪೆರಿಯಾರ್ ಹುಲಿ ಮೀಸಲು]], [[ಪರಂಬಿಕುಳಂ ವನ್ಯಜೀವಿ ಅಭಯಾರಣ್ಯ]], [[ಚಿನ್ನಾರ್ ವನ್ಯಜೀವಿ ಅಭಯಾರಣ್ಯ]], [[ಥಟ್ಟೆಕ್ಕಾಡ್ ಪಕ್ಷಿ ಅಭಯಾರಣ್ಯ]], [[ವಯನಾಡು ವನ್ಯಜೀವಿ ಅಭಯಾರಣ್ಯ]], [[ಕಡಲುಂಡಿ ಪಕ್ಷಿ ಅಭಯಾರಣ್ಯ]], [[ಕರಿಂಪುಳ ವನ್ಯಜೀವಿ ಅಭಯಾರಣ್ಯ]], [[ಮುತ್ತಂಗ]] ವನ್ಯಜೀವಿ ಅಭಯಾರಣ್ಯ, [[ಅರಳಂ ವನ್ಯಜೀವಿ ಅಭಯಾರಣ್ಯ]], [[ಎರವಿಕುಳಂ ರಾಷ್ಟ್ರೀಯ ಉದ್ಯಾನವನ]], ಮತ್ತು [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]] ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ.<ref>{{cite book |author=M.R. Biju |title=Sustainable Dimensions Of Tourism Management |publisher=Mittal Publications |year=2006 |isbn=978-8183241298 |url=https://books.google.com/books?id=AkAdvTbg0dEC |pages=151–65 |access-date=30 May 2015}}</ref> ಕೇರಳ ಬ್ಯಾಕ್ವಾಟರ್ಗಳು ಅಂತರ್ಸಂಪರ್ಕಿತ ನದಿಗಳ (41 ಪಶ್ಚಿಮಕ್ಕೆ ಹರಿಯುವ ನದಿಗಳು), ಸರೋವರಗಳು ಮತ್ತು ಕಾಲುವೆಗಳ ವ್ಯಾಪಕ ಜಾಲವಾಗಿದ್ದು, ಇದು ಆಲಪ್ಪುಳ, [[ಕುಮಾರಕೋಂ]], [[ಪೊನ್ನಾನಿ]], [[ನೀಲೇಶ್ವರಂ]], ಮತ್ತು [[ಪುನ್ನಮದ]] (ಅಲ್ಲಿ ವಾರ್ಷಿಕ ನೆಹರು ಟ್ರೋಫಿ ದೋಣಿ ಪಂದ್ಯವನ್ನು ಆಗಸ್ಟ್ನಲ್ಲಿ ನಡೆಸಲಾಗುತ್ತದೆ), [[ಪತ್ತಿರಮಣಲ್]] [[ಮುಹಮ್ಮ]] ದಲ್ಲಿನ ಸಣ್ಣ ದ್ವೀಪವನ್ನು ಕೇಂದ್ರೀಕರಿಸುತ್ತದೆ. [[ಪದ್ಮನಾಭಪುರಂ ಅರಮನೆ]] ಮತ್ತು [[ಮತ್ತಂಚೇರಿ ಅರಮನೆ]] ಎರಡು ಸಮೀಪದ ಪರಂಪರೆಯ ತಾಣಗಳಾಗಿವೆ.<ref>{{cite web |url=https://www.keralatourism.org/destination/padmanabhapuram-palace/244 |title=Padmanabhapuram Palace |publisher=Kerala Tourism |access-date=2 December 2016}}</ref><ref>{{cite web |url=https://www.keralatourism.org/destination/mattancherry-palace-kochi/178 |title=Mattancherry Palace |publisher=Kerala Tourism |access-date=2 December 2016}}</ref>
== ಸಹ ನೋಡಿ ==
{{stack|{{Portal|ಭಾರತ}}}}
* [[ಕೇರಳದ ರೂಪರೇಖೆ]]
* [[ದಕ್ಷಿಣ ಭಾರತ]]
* [[ದ್ರಾವಿಡರು]]
* [[ಕೇರಳದ ನಗರ ನಿಗಮಗಳ ಪಟ್ಟಿ]]
* [[ಕೇರಳದ ತಾಲೂಕುಗಳ ಪಟ್ಟಿ]]
* [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ]]
* [[ಕೇರಳದ ಜಿಲ್ಲೆಗಳ ಪಟ್ಟಿ]]
* [[ಕೇರಳದ ಆದಾಯ ವಿಭಾಗಗಳ ಪಟ್ಟಿ]]
* [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]]
== ಉಲ್ಲೇಖಗಳು ==
{{Reflist}}
==ಟಿಪ್ಪಣಿಗಳು==
{{notelist}}
=== ಮೂಲಗಳು ===
{{refbegin}}
* {{cite book |title=Mathrubhumi Yearbook Plus – 2019 |publisher=Mathrubhumi Printing & Publishing Company Limited |year=2018 |location=[[Kozhikode]] |editor-last=Chandran |editor-first=V. P. |id={{ASIN|8182676444 |country=in}} |language=Malayalam }}
{{refend}}
== ಹೆಚ್ಚಿನ ಓದುವಿಕೆ ==
{{Further|ಕೇರಳದ ಇತಿಹಾಸ#ಹೆಚ್ಚಿನ ಓದುವಿಕೆ}}
* Bose, Satheese Chandra and Varughese, Shiju Sam (eds.) 2015. ''[https://web.archive.org/web/20150102071757/https://www.orientblackswan.com/display.asp?categoryID=0&isbn=978-8125057222 Kerala Modernity: Ideas, Spaces and Practices in Transition]''. Hyderabad: Orient Blackswan.
* {{cite journal |pmc=7510531 |year=2021 |last1=Chathukulam |first1=Jos |last2=Tharamangalam |first2=Joseph |title=The Kerala model in the time of COVID19: Rethinking state, society and democracy |journal=World Development |volume=137 |article-number=105207 |doi=10.1016/j.worlddev.2020.105207 |pmid=32989341}}
* {{cite journal |url=https://journals.sagepub.com/doi/abs/10.1177/0971521516656077 |doi=10.1177/0971521516656077 |title=The 'Kudumbashree Woman' and the Kerala Model Woman: Women and Politics in Contemporary Kerala |year=2016 |last1=Devika |first1=J. |journal=Indian Journal of Gender Studies |volume=23 |issue=3 |pages=393–414 |s2cid=151752480|url-access=subscription }}
* {{cite journal |url=https://openresearch-repository.anu.edu.au/bitstream/1885/19062/2/01_Jeffrey_Legacies_of_Matriliny%3A__the_2005.pdf |jstor=40023536 |title=Legacies of Matriliny: The Place of Women and the "Kerala Model" |last1=Jeffrey |first1=Robin |journal=Pacific Affairs |year=2004 |volume=77 |issue=4 |pages=647–664}}
* {{cite journal |url=http://keralamediaacademy.org/wp-content/uploads/2015/02/Robin-Jeffery.pdf |doi=10.1017/S0021911809000679 |s2cid=146795894 |title=Testing Concepts about Print, Newspapers, and Politics: Kerala, India, 1800–2009 |year=2009 |last1=Jeffrey |first1=Robin |journal=The Journal of Asian Studies |volume=68 |issue=2 |page=465}}
* {{cite book |title=Politics, Women and Well-Being: How Kerala became 'a Model' |isbn=978-1-349-12252-3 |last1=Jeffrey |first1=Robin |date=27 July 2016 |publisher=Springer}}
* {{cite book |last1=Ramanathaiyer |first1=Sundar |first2=Stewart |last2=MacPherson |title=Social Development in Kerala: Illusion or Reality? |edition=2nd |publisher=Routledge |year=2018}}
== ಬಾಹ್ಯ ಕೊಂಡಿಗಳು ==
{{Sister project links|voy=Kerala|Kerala}}
; ಸರ್ಕಾರ
* {{official website|https://www.kerala.gov.in/}} {{Webarchive|url=https://web.archive.org/web/20060118031516/https://www.kerala.gov.in/ |date=18 January 2006 }} ಕೇರಳ ಸರ್ಕಾರದ
* {{official website|https://www.keralatourism.org/}} ಕೇರಳ ಪ್ರವಾಸೋದ್ಯಮದ
; ಸಾಮಾನ್ಯ ಮಾಹಿತಿ
* {{OSM relation|2018151}}
{{Clear}}
{{Kerala |show=show }}
[[ವರ್ಗ:ಕೇರಳ| ]]
[[ವರ್ಗ:ದಕ್ಷಿಣ ಭಾರತ|.]]
[[ವರ್ಗ:1956 ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರದೇಶಗಳು]]
[[ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
63bb8r3h4920t3d5o8gc4zt34qnyz59
ಸದಸ್ಯರ ಚರ್ಚೆಪುಟ:Duraga share
3
180020
1378294
2026-08-03T10:49:32Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1378294
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Duraga share}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೬:೧೯, ೩ ಆಗಸ್ಟ್ ೨೦೨೬ (IST)
a7r343fbh6ld2zyi064ourtq4k36z27