ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.14
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಕೆ. ಚಿನ್ನಪ್ಪ ಗೌಡ
0
20358
1379548
1377507
2026-08-09T00:45:46Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1379548
wikitext
text/x-wiki
{{Infobox Writer
| name = '''ಡಾ.ಕೆ.ಚಿನ್ನಪ್ಪ ಗೌಡ'''
| image = Chinnppa Gowda 1.jpg
| imagesize = 220px
| caption = '''ಕೆ.ಚಿನ್ನಪ್ಪ ಗೌಡ'''
| pseudonym =
| birth_date = 01 ಸಪ್ಟಂಬರ್ 1955
| birth_place = [[ದಕ್ಷಿಣ ಕನ್ನಡ|ದಕ್ಷಿಣಕನ್ನಡ]] ಜಿಲ್ಲೆಯ ಬಂಟ್ವಾಳ ತಾಲೂಕು ವಿಟ್ಲದ ಕೂಡೂರು
| occupation = ವಿಶ್ರಾಂತ ಸಾಹಿತಿ, ಪ್ರೊಫೆಸರ್, ಉಪಕುಲಪತಿ
| nationality = [[ಭಾರತೀಯ]]
| period =
| genre = [[ಜಾನಪದ|ಜನಪದ]]
| subject = ಕನ್ನಡ ಸಾಹಿತ್ಯ ಮತ್ತು ಜಾನಪದ
| movement = ಸಮಾಜವಾದ ಹಾಗೂ ಶಿಕ್ಷಣ ಕ್ಷೇತ್ರ
| debut_works = ಜಾನಪದ ಅಧ್ಯಯನ
}}
'''ಡಾ. ಕೆ. ಚಿನ್ನಪ್ಪ ಗೌಡ'''ರು ಕರ್ನಾಟಕದ ಪ್ರಮುಖ ಜಾನಪದ ವಿದ್ವಾಂಸರು, ಸಂಶೋಧಕರು, ಮತ್ತು ಲೇಖಕರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.<ref>{{cite web |title=Dr. K. Chinnappa Gowda |url=https://mangaloreuniversity.ac.in/dr-k-chinnappa-gowda |website=mangaloreuniversity.ac.in |accessdate=28 March 2021}}</ref> ಇಂಗ್ಲಿಷ್, [[ಕನ್ನಡ]] ಮತ್ತು [[ತುಳು]] ಮೂರು ಭಾಷೆಯಲ್ಲಿ ಸಾಹಿತ್ಯ, ಸಂಶೋಧನೆ ಹಾಗು ಅನುವಾದ ರಚನೆ ಮಾಡಿದ್ದಾರೆ.<ref>{{cite news |title=ತುಳು ಭಾಷಾ ಸಂಸ್ಕೃತಿ ಅನನ್ಯವಾದುದು: ಡಾ.{{!}}ಕೆ.ಚಿನ್ನಪ್ಪ ಗೌಡ |url=https://m.udayavani.com/article/tulu-language-culture-is-unique-dr-k-cinnappa-gowda/669025 |accessdate=28 March 2021 |work=www.udayavani.com }}{{Dead link|date=ಮೇ 2025 |bot=InternetArchiveBot |fix-attempted=yes }}</ref> ನಂತರ ಹಾವೇರಿ ಜಿಲ್ಲೆಯ ಗೋಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಯಾಗಿ ಕೆಲಸ ಮಾಡಿದ್ದಾರೆ.<ref>{{cite web |title=Janapada University|url=http://janapadauni.in/kannada/|website=janapadauni.in |access-date=2025-09-01|archive-date=2016-07-16 |archive-url=https://web.archive.org/web/20160716063824/http://janapadauni.in/kannada/|url-status=bot: unknown }}</ref> ಕನ್ನಡ, ತುಳು, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರ ಆಳವಾದ ಜ್ಞಾನವಿದೆ. ಈ ಮೂರು ಭಾಷೆಗಳಲ್ಲಿ ಅವರು ಸಾಹಿತ್ಯ, ಸಂಶೋಧನಾ ಲೇಖನಗಳು ಮತ್ತು ಅನುವಾದ ಕೃತಿಗಳನ್ನು ರಚಿಸಿದ್ದಾರೆ. ಡಾ. ಕೆ. ಚಿನ್ನಪ್ಪ ಗೌಡರು ಮುಖ್ಯವಾಗಿ ಭೂತಾರಾಧನೆ ಮತ್ತು ಜಾನಪದ ಅಧ್ಯಯನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಭೂತಾರಾಧನೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಅವರು ನಡೆಸಿದ ಸಂಶೋಧನೆಗಳು ಬಹಳ ಮುಖ್ಯವಾದವು. ಚಿನ್ನಪ್ಪ ಗೌಡರು ತುಳುನಾಡಿನ ಸಂಸ್ಕೃತಿ ಮತ್ತು ಜಾನಪದದ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅವರ ಬಹುತೇಕ ಕೃತಿಗಳು ತುಳು ಜಾನಪದ, ಅದರಲ್ಲೂ ವಿಶೇಷವಾಗಿ ಭೂತಾರಾಧನೆ ಮತ್ತು ಕೋಲದಂತಹ ವಿಶಿಷ್ಟ ಆಚರಣೆಗಳ ಮೇಲೆ ಕೇಂದ್ರೀಕೃತವಾಗಿವೆ. ಈ ವಿಷಯಗಳಲ್ಲಿ ಅವರು ಮಾಡಿದ ಸಂಶೋಧನೆಗಳು ಜಾನಪದ ಕ್ಷೇತ್ರದಲ್ಲಿ ಬಹಳ ಮಹತ್ವ ಪಡೆದಿವೆ. ತುಳುನಾಡಿನ ಭೂತಾರಾಧನೆ ಮತ್ತು ಪ್ರಾದೇಶಿಕ ನಂಬಿಕೆಗಳ ಬಗ್ಗೆ ಇವರು ಬರೆದ ಕೃತಿಗಳು ಈ ವಿಷಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಕನ್ನಡ, ತುಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನುವಾದ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ, ಹಲವಾರು ಸಂಶೋಧನಾ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಜಾನಪದ ಸೇವೆಗಾಗಿ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ಹಾಗೂ ವಿವಿಧ ಸಾಹಿತ್ಯ ಸಂಸ್ಥೆಗಳಿಂದಲೂ ಅವರು ಸನ್ಮಾನಿಸಲ್ಪಟ್ಟಿದ್ದಾರೆ. ಕನ್ನಡ ಜಾನಪದ ಲೋಕದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ಬರವಣಿಗೆಗಳು ಮತ್ತು ಸಂಶೋಧನೆಗಳು ಕನ್ನಡ ಜಾನಪದಕ್ಕೆ ಒಂದು ಹೊಸ ಆಯಾಮ ತಂದುಕೊಟ್ಟಿವೆ.
[[File:Chinnappa Gowda.JPG|thumb|ಪ್ರೊ.ಕೆ.ಚಿನ್ನಪ್ಪ ಗೌಡ]]
==ಹುಟ್ಟು==
[[ದಕ್ಷಿಣ ಕನ್ನಡ|ದಕ್ಷಿಣಕನ್ನಡ]] ಜಿಲ್ಲೆಯ [[ಬಂಟ್ವಾಳ]] ತಾಲೂಕು [[ವಿಟ್ಲ]] ಕಸಬಾ ಗ್ರಾವದ [[ಕೂಡೂರು]] ಎಂಬ ಊರಿನಲ್ಲಿ ಸಪ್ಟಂಬರ್ 01, 1955ರಂದು ಜನಿಸಿದರು.<ref>{{Cite web|url=https://archive.org/details/prof-chinnappa-gowda-biodata-english/Prof%20Chinnappa%20Gowda%20Biodata%20English/|title=Prof Chinnappa Gowda Biodata English : Free Download, Borrow, and Streaming : Internet Archive}}</ref> ಪ್ರಸ್ತುತ [[ದಕ್ಷಿಣ ಕನ್ನಡ|ದಕ್ಷಿಣಕನ್ನಡ]] ಜಿಲ್ಲೆಯ ಮಂಗಳೂರು ತಾಲೋಕಿನ
[[ಕೊಣಾಜೆ]] ಗ್ರಾಮದ ಅಸೈಗೋಳಿ ಎಂಬ ಸ್ಥಳದಲ್ಲಿ ವಾಸವಿದ್ದಾರೆ.
==ವಿದ್ಯಾಭ್ಯಾಸ==
ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ, [[ಪುತ್ತೂರು]] ತಾಲೂಕಿನ ವಿವೇಕಾನಂದ ಕಾಲೇಜಿನಲ್ಲಿ 1976ರಲ್ಲಿ ಬಿ.ಎ. ಪದವಿ, 1978ರಲ್ಲಿ ಮದರಾಸ್ ವಿಶ್ವವಿದ್ಯಾನಿಲಯಡ್ ಎಂ.ಎ. ಕನ್ನಡ(ಓ ಗ್ರೇಡ್) ಪದವಿ, 1988ರಲ್ಲಿ [[ಮಂಗಳೂರು]] ವಿಶ್ವವಿದ್ಯಾನಿಲಯದ ಡಾ.[[ಬಿ.ಎ.ವಿವೇಕ ರೈ|ಬಿ.ಎ. ವಿವೇಕ ರೈ]]ಯವರ ಮಾರ್ಗದರ್ಶನದಲ್ಲಿ ಭೂತಾರಾಧನೆ:ಜಾನಪದೀಯ ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿರುತ್ತಾರೆ.<ref>{{Cite web|url=https://mangaloreuniversity.ac.in/dr-k-chinnappa-gowda|title=Dr. K. Chinnappa Gowda | Mangalore University|website=www.mangaloreuniversity.ac.in}}</ref>
== ನಿರ್ವಹಿಸಿರುವ ಉದ್ಯೋಗ ಮತ್ತು ಜವಾಬ್ದಾರಿಗಳು ==
ಎಸ್.ಡಿ.ಎಂ. ಪದವಿ ಕಾಲೇಜಿನ ಉಪನ್ಯಾಸಕರು, ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ರೀಡರ್<ref>https://mangaloreuniversity.ac.in/kannada-dept</ref>, ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರು, ಕಲಾನಿಕಾಯದ ಡೀನ್, ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರು, ಪ್ರಸಾರಾಂಗ, [[ಶಿವರಾಮ ಕಾರಂತ]] ಪೀಠದ ನಿರ್ದೇಶಕರು, ದಯಾನಂದ ಪೈ, ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಶ್ರೀ ಧರ್ಮಸ್ಥಳ ತುಳು ಅಧ್ಯಯನ ಕೇಂದ್ರದ ನಿರ್ದೇಶಕರು, [[ಕರ್ನಾಟಕ ಜಾನಪದ ವಿಶ್ವವಿದ್ಯಾಲಯ|ಕರ್ನಾಟಕ ಜಾನಪದ ವಿಶ್ವವಿದ್ಯಾಲಯ]]ದ ಉಪಕುಲಪತಿ.<ref>https://dn720700.ca.archive.org/0/items/prof-chinnappa-gowda-biodata-english/Prof%20Chinnappa%20Gowda%20Biodata%20Kannada.pdf</ref>, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿ ಸದಸ್ಯರು, ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಅಧಿಕಾರಿ, ಕರ್ನಾಟಕ ಸರಕಾರದ [[ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ]]ಯ ಸದಸ್ಯರು, ಕರ್ನಾಟಕ ಸರಕಾರದ [[ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ]]ದ ಸದಸ್ಯರು, ಎಸ್.ಡಿ.ಎಂ.ಸ್ವಾಯತ್ತ ಕಾಲೇಜು, [[ಉಜಿರೆ]]ಯ ಆಡಳಿತ ಮಂಡಳಿ ಸದಸ್ಯರು, ಮಂಗಳೂರು ವಿಶ್ವವಿದ್ಯಾನಿಲಯದ ಮಾಹಿತಿ ಕೈಪಿಡಿ ಯೋಜನೆಯ ಅಧ್ಯಕ್ಷರು, [[ಮಂಗಳೂರು]] [[ಪಿಲಿಕುಳ ನಿಸರ್ಗಧಾಮ|ಪಿಲಿಕುಳ ಸಂಸ್ಕೃತಿ ಗ್ರಾಮ]]ದ ನಿರ್ದೇಶಕರು, ಉಡುಪಿಯ [[ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ]]ದ ಸಲಹಾ ಸಮಿತಿ ಸದಸ್ಯರು - ಹೀಗೆ ಬೇರೆಬೇರೆ ಸ್ಥಳಗಳಲ್ಲಿ ಶೈಕ್ಷನಿಕ ಹಾಗೂ ಆಡಳಿತಾತ್ಮಕ ಜವಾಬ್ದಾರಿ ನಿರ್ವಹಿಸಿದವರು.
== ಪರಿಣತಿಯ ಕ್ಷೇತ್ರಗಳು ==
ಆಧುನಿಕ ಕನ್ನಡ ಸಾಹಿತ್ಯ ಮತ್ತು ಜಾನಪದ ಅಧ್ಯಯನದ ಬಗ್ಗೆ ವಿಶೇಷ ಪರಿಣತಿ ಪಡೆದವರು. ಜಾನಪದ, ತುಳು ಮೌಖಿಕ ಕಥನ ಮತ್ತು ಸಾಂಸ್ಕೃತಿಕ ಅಧ್ಯಯನದಲ್ಲೂ ಪರಿಣತರು. 10 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಅಧ್ಯಯನ ಹಾಗೂ 5 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಎಂ.ಫಿಲ್. ಅಧ್ಯಯನ ಮಾಡಲು ಮಾರ್ಗದರ್ಶನ ನೀಡಿರುತ್ತಾರೆ.
== ಶೈಕ್ಷಣಿಕ ಸಾಧನೆ ==
1994-95ರಲ್ಲಿ [[:en:Finland|ಫಿನ್ಲೆಂಡ್]]ನ [https://www.utu.fi/en ತುರ್ಕು ವಿಶ್ವವಿದ್ಯಾನಿಲಯ]ದಲ್ಲಿ ಪೋಸ್ಟ್ ಡಾಕ್ಟ್ರಲ್ ಫೆಲೊಶಿಪ್, 2002-2003ಗ್ [[ಜಪಾನ್|ಜಪಾನ್]]ನ ವಸೆದಾ ವಿಶ್ವವಿದ್ಯಾನಿಲಯದಲ್ಲಿ<ref>[[https://www.waseda.jp/top/en/</ref> ಜಪಾನ್ ಫೌಂಡೇಶನ್ ಫೆಲೊಸಿಪ್, 2008-2009ಗ್ [[ಜರ್ಮನಿ]]ಯ ವೂರ್ಸ್ಬರ್ಗ್ ಮ್ಯಾಕ್ಸ್ಮಿಲ್ಲನ್ಸ್ ವಿಶ್ವವಿದ್ಯಾನಿಲಯಕ್ಕೆ ಭಾರತ ಸರ್ಕಾರದ ಭಾರತೀಯ ಕೌನ್ಸಿಲ್ನಿಂದ ಸಾಂಸ್ಕೃತಿಕ ರಾಯಭಾರಿಯಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕ, 2012ಕ್ಕೆ ತುರ್ಕಿ ವಿಶ್ವವಿದ್ಯಾಲಯ, ಫಿನ್ಲೆಂಡ್ ತ್ಯುಬಿಂಗೆನ್ ವಿಶ್ವವಿದ್ಯಾನಿಲಯ [[ಜರ್ಮನಿ]]ಯ [[:en:University of Würzburg|ವೂರ್ಸ್ಬರ್ಗ್]] ಮ್ಯಾಕ್ಸ್ಮಿಲ್ಲನ್ಸ್ ವಿಶ್ವವಿದ್ಯಾನಿಲಯ, ಜರ್ಮನಿ ಮತ್ತು [[:en:Waseda University Tsubouchi Memorial Theatre Museum|ವಾಸೆದ ಯೂನಿವರ್ಸಿಟಿ ತ್ಸುಬೌಚಿ ಮೆಮೋರಿಯಲ್ ಥೀಯೇಟರ್ ಮೂಸೆಯಂ]], [[:en:Waseda University|ವಾಸ್ದಾ ವಿಶ್ವವಿದ್ಯಾನಿಲಯ ಟೋಕಿಯೋ]] ಜಪಾನ್ ಇಂತಹ ದೇಶಗಳ ವಿಶ್ವವಿದ್ಯಾನಿಲಯಕ್ಕೆ ಜಾನಪದ ಮತ್ತು ಕಂಪೇರಿಟಿವ್ಹ್ ರಿಲಿಜಿಯಸ್ ಸಂದರ್ಶಕರಾಗಿ ಆಯ್ಕೆಯಾಗಿರುತ್ತಾರೆ. 2017ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿರುತ್ತಾರೆ.
==ಬರೆದ ಪುಸ್ತಕಗಳು==
ಚಿನ್ನಪ ಗೌಡರು ಬರೆದ ಕನ್ನಡ, ಇಂಗ್ಲಿಷ್ ಪುಸ್ತಕಗಳು ಮತ್ತು ಅನುವಾದಗಳು, ಸಂಪಾದನಾ ಪುಸ್ತಕಗಳು
# ಭೂತಾರಾಧನೆ – ಕೆಲವು ಅಧ್ಯಯನಗಳು (ಕರಾವಳಿ ಜಾನಪದ ಸಂಶೋಧನ ಲೇಖನಗಳು)
# ಜಾಲಾಟ (ಜಾನಪದ ಮತ್ತು ಸಂಸ್ಕೃತಿ ಸಂಶೋಧನ ಲೇಖನಗಳು)
# ಭೂತಾರಾಧನೆ:ಜಾನಪದೀಯ ಅಧ್ಯಯನ - ಪಿಎಚ್.ಡಿ. ಅಧ್ಯಯನ ಮಹಾಪ್ರಬಂಧ
# ಸಂಸ್ಕೃತಿ ಸಿರಿ (ತುಳು ಸಂಸ್ಕೃತಿ ಮತ್ತು ಜಾನಪದ ಸಂಶೋಧನ ಲೇಖನಗಳ ಸಂಪುಟ)
# ಕರಾವಳಿ ಕಥನಗಳು-2022 (ತುಳು ಜಾನಪದ, ತುಳು ಸಾಹಿತ್ಯ, ಯಕ್ಷಗಾನ ಬುಕ್ಕೊ ಅನುವಾದ ವಿಷಯಗಳಿಗೆ ಸಂಬಂಧಿಸಿದ ಸಂಶೋಧನ ಲೇಖನಗಳ ಸಂಪುಟ)<ref>{{cite web|title=ಕೆ. ಚಿನ್ನಪ್ಪ ಗೌಡ ಅವರ 'ಕರಾವಳಿ ಕಥನಗಳು' ಕೃತಿ ಲೋಕಾರ್ಪಣೆ|url=https://www.bookbrahma.com/news/k-cinnappa-gowda-avara-karavali-kathanagalu-kruti-lokarpane-|website=www.bookbrahma.com|language=en}}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
# ಮಾಚಾರು ಗೋಪಾಲ ನಾಯ್ಕ ಹೇಳಿದ ‘ಸಿರಿ ಸಂಧಿ’-ಕನ್ನಡ ಪ್ರಸ್ತಾವನೆ ಮತ್ತು ತುಳು ಪಠ್ಯ<ref>{{cite web|title=ಡಾ. ಕೆ. ಚಿನ್ನಪ್ಪ ಗೌಡ ಇವರ ‘ಸಿರಿಸಂಧಿ’ ಕೃತಿ ಬಿಡುಗಡೆ {{!}} ಫೆಬ್ರವರಿ 10|url=https://roovari.com/sirisandhi-book-release-at-mgm-college-udupi-upcoming-feb2024/|website=Roovari|date=9 February 2024}}{{Dead link|date=ಮಾರ್ಚ್ 2026 |bot=InternetArchiveBot |fix-attempted=yes }}</ref>
# ಕಿತ್ತಳೆ ಹಣ್ಣಲ್ಲ 2019 (ಕನ್ನಡ ಕವನ ಸಂಕಲನ)<ref>cite web|last1=ವಾರ್ತೆ|first1=ಪ್ರಜಾವಾಣಿ|title=ಕಿತ್ತಳೆ ಹಣ್ಣಲ್ಲ, ನೆಲದ ಪ್ರತಿಫಲನ|url=https://www.prajavani.net/district/dakshina-kannada/chinnappa-gowdas-book-released-653892.html|website=Prajavani|language=kn{{Dead link|date=ಸೆಪ್ಟೆಂಬರ್ 2025 |bot=InternetArchiveBot |fix-attempted=yes }}</ref>
# ಕೆಲೆಪು ಪೆರಡೆ ಕೆಲೆಪು (ತುಳು ಕವನ ಸಂಕಲನ)
# ಬೇಲಿಯೊಳಗಿನ ಬೆಳೆ (ಪ್ರಬಂಧ ಸಂಕಲನ)<ref>{{cite web|title=ಬೇಲಿಯೊಳಗಿನ ಬೆಳೆ – -|url=https://sangaati.in/?p=15723|date=3 January 2021}}</ref>
# ಹಿರಿಯ ಕವಿ ಅ.ಗೌ.ಕಿನ್ನಿಗೋಳಿ : ಬದುಕು ಬರಹ
# ಮೂಂಕು ಸಂಬಳೊ (ತುಳು ಜನಪದ ಕತೆಗಳು)
# ತುಳುಮಾನ್ಯ (ತುಳುಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ರಂಗಗಳಿಗೆ ಧರ್ಮಸ್ಥಳ ನೀಡಿರುವ ಕೊಡುಗೆ)
=== ಇಂಗ್ಲಿಷ್ ಪುಸ್ತಕಗಳು ===
# The Mask and the Message (A Collection of research papers on various aspects of Tulu Culture and Folklore)<ref>{{cite web|last1=Gowda|first1=K. Chinnappa|title=The mask and the message|url=https://libraryopac.ignou.ac.in/cgi-bin/koha/opac-detail.pl?biblionumber=12137&shelfbrowse_itemnumber=12136|publisher=Madipu Prakashana|date=2005}}</ref>
# The Siri Epic as Performed by Gopala Naika ( 2 Volumes)- Co-Editor<ref>{{cite web|title=The Siri epic as performed by Gopala Naika|url=https://archive.org/details/the-siri-epic|date=1998}}</ref><ref>{{cite web|last1=Bender|first1=Mark|title=Textualising the Siri Epic, and: The Siri Epic as Performed by Gopala Naika (review)|url=https://muse.jhu.edu/pub/34/article/14708/pdf#:~:text=The%20Siri%20Epic%20as%20Performed%20by%20Gopala%20Naika%20(Parts%201,by%20male%20singer%20Gopala%20Naika.|website=Journal of American Folklore|pages=381–384|date=2001}}</ref>
# The Retrieved Acre-Nature and Culture in the World of Tuluva (Co-editor): A Collection of research papers on various aspects of the culture and the history of Tulunadu
# Ladle in a Golden Bowl (Translation of modern Tulu Poems) (With Prof.B.Surendra Rao)<ref>cite web|last1=Correspondent|first1=Special|title=In a first, Tulu poems translated into English|url=https://www.thehindu.com/news/cities/Mangalore/in-a-first-tulu-poems-translated-into-english/article17409251.ece|website=The Hindu|language=en-IN|date=4 March 2017</ref>
# Mittabail Yamunakka - Tale of a Guttu household by D.K Chowta(Translation of a Tulu Novel) (With Prof.B. Surendra Rao)<ref>cite web|url=https://media.neliti.com/media/publications/619845-alternative-geographies-and-bioregional-c442c413.pdf</ref>
# The Rainboy (Collection, Selection and Translation of Sixty Tulu Folktales) (With Prof.B. Surendra Rao)<ref>{{cite web|last1=Bhasthi|first1=Deepa|title=How K Chinnappa Gowda and B Surendra Rao translated the oral language Tulu for the world|url=https://scroll.in/article/1075091/how-k-chinnappa-gowda-and-b-surendra-rao-translated-the-oral-language-tulu-for-the-world|website=Scroll.in|language=en|date=3 November 2024}}</ref>
# When Moonlight is very Hot (Selection and Translation of Tulu Work songs and Dance songs) (With Prof.B. Surendra Rao)<ref>{{cite web|title=When Moonlight is Very Hot: Selection and English Translation of Tulu Work Songs and Dance Songs|url=https://books.google.co.in/books/about/When_Moonlight_is_Very_Hot.html?id=tNY4zgEACAAJ&redir_esc=y|publisher=Karnataka Tulu Sahitya Academy|language=en|date=2018}}</ref>
# Sati Kamale by S. U. Paniyadi (Translation of the first Tulu Novel) (With Prof.B. Surendra Rao)<ref>{{cite web|last1=Paniyadi|first1=S. U.|title=Sati Kamale: , published by Manipal Universal Press|url=https://books.google.co.in/books/about/Sati_Kamale.html?id=xanXDwAAQBAJ&redir_esc=y|publisher=Manipal Universal Press|language=en|date=1 December 2018}}</ref>
# Tale of Narayana the Impostor – An early modern Tulu Story by Polali Sheenappa Heggade (Translation of Mittaya Narayana Kathe (With Prof.B. Surendra Rao)<ref>{{cite web|title=Sati Kamale {{!}} Exotic India Art|url=https://www.exoticindiaart.com/book/details/sati-kamale-naz679/?srsltid=AfmBOopr1XNWuGDVzr4WHzS7auusJ8b8-MivrwEi9nZo95X56HwkJo-q|website=www.exoticindiaart.com|language=en}}</ref>
# Heartbeats - Fifty Tulu Short Stories (Selection, Translation and Introduction ) (With Prof.B. Surendra Rao)<ref>cite web|last1=Correspondent|first1=Special|title=English translation of 50 Tulu short stories released|url=https://www.thehindu.com/news/cities/Mangalore/english-translation-of-50-tulu-short-stories-released/article34041004.ece|website=The Hindu|language=en-IN|date=10 March 2021</ref>
=== ಸಂಪಾದನೆ ಮಾಡಿರುವ ಪುಸ್ತಕಗಳು ===
# ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು (ಸಹ ಸಂಪಾದಕ)
# ಅ. ಗೌ. ಕಿನ್ನಿಗೋಳಿ - ಸಾಹಿತ್ಯ ಸಂಚಯ (ಸಹ ಸಂಪಾದಕ)
# ಸೇರಿಗೆ (ತುಳು ಜಾನಪದ ಅಧ್ಯಯನ ಲೇಖಗಳು)
# ಗೌಡ ಜನಾಂಗ – ಇತಿಹಾಸ ಮತ್ತು ಸಂಸ್ಕೃತಿ (ಜನಾಂಗೀಯ ಅಧ್ಯಯನ)<ref>{{cite web|title=ಗೌಡ ಜನಾಂಗ-ಇತಿಹಾಸ ಮತ್ತು ಸಂಸ್ಕೃತಿ – Kanaja – e-book|url=https://kanaja.karnataka.gov.in/ebook/ಗೌಡ-ಜನಾಂಗ-ಇತಿಹಾಸ-ಮತ್ತು-ಸಂ/|website=kanaja.karnataka.gov.in}}</ref>
# ಪನಿಯಾರ (ವಿಶ್ವ ತುಳು ಸಮ್ಮೇಳನ, ಸ್ಮರಣ ಸಂಪುಟ)
# ಧರ್ಮಯಾನ - ಶ್ರೀ ಡಿ. ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಅಭಿನಂದನ ಸಂಪುಟ<ref>{{cite web|title=ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನಾ ಗ್ರಂಥ 'ಧರ್ಮಯಾನ' ಅರ್ಪಣೆ|url=https://vijaykarnataka.com/news/mangaluru/dharmayana-book-offering-to-veerendra-hegde-by-d-harshendra-kumar/articleshow/77722222.cms|website=Vijay Karnataka|language=kn}}</ref>
# ನುಡಿ ಒಸಗೆ (ಪ್ರೊ.ಕೆ.ಕುಶಾಲಪ್ಪ ಗೌಡ ಅಭಿನಂದನಾ ಸಂಪುಟ)
# ಅನನ್ಯ (ಪ್ರೊ.ಶ್ರೀಕೃಷ್ಣ ಭಟ್ ಅರ್ತಿಕಜೆ ಅಭಿನಂದನಾ ಸಂಪುಟ)
# ಅಯನ (ಪ್ರೊ.ತಾಳ್ತಜೆ ವಸಂತಕುಮಾರ ಅಭಿನಂದನಾ ಸಂಪುಟ)
# ತಿಬಾರ ಉಳ್ಳಾಯ, ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳು
# ಕರಾವಳಿಯ ಕತೆಗಳು (1930ರಿಂದ 1947 ವರೆಗೆ ಪತ್ರಿಕೆಳಿಂದ ಆಯ್ದ ಕತೆಗಳೂ)
# ಕರಾವಳಿಯ ಪ್ರಬಂಧಗಳು (ಪ್ರಾಚೀನ ಪತ್ರಿಕೆಳಿಂದ ಆಯ್ದ ಪ್ರಬಂಧಗಳು)
# ಕನ್ನಡ ಪತ್ರಿಕೆ ಮತ್ತು ಮಹಿಳೆ
# ಯಕ್ಷಗಾನ ಪ್ರಸಂಗ ಸಂಚಯ
# ಕೊಡವ ರಂಗಭೂಮಿ
# ರತ್ನಮಾನಸ – ಧರ್ಮಸ್ಥಳ ಬಾಹುಬಲಿ ಪ್ರತಿಷ್ಠಾಪನಾ ಮಹೋತ್ಸವ ಸ್ಮರಣ ಸಂಪುಟ
# ಆರೋಹಣ - ಧರ್ಮಸ್ಥಳ ಬಾಹುಬಲಿ ಪ್ರತಿಷ್ಠಾಪನಾ ಮಹೋತ್ಸವ ಸ್ಮರಣ ಸಂಪುಟ
# ತ್ಯಾಗ ಸಂದೇಶ - ಧರ್ಮಸ್ಥಳ ಬಾಹುಬಲಿ ಪ್ರತಿಷ್ಠಾಪನಾ ಮಹೋತ್ಸವ ಸ್ಮರಣ ಸಂಪುಟ
# ಪ್ರತಿಷ್ಠಾಪನಾ - ಧರ್ಮಸ್ಥಳ ಬಾಹುಬಲಿ ಪ್ರತಿಷ್ಠಾಪನಾ ಮಹೋತ್ಸವ ಸ್ಮರಣ ಸಂಪುಟ
=== ಪ್ರಸಾರಾಂಗದ ಪ್ರಚಾರೋಪನ್ಯಾಸ ಮಾಲಿಕೆ ಸಂಪಾದನೆ ===
28 ಪುಸ್ತಕಗಳಿಗೆ ಪ್ರಧಾನ ಸಂಪಾದಕೆರಾಗಿ ಕೆಲಸ ಮಾಡಿದ್ದಾರೆ.
ಮುದ್ದಣ - ಬದುಕುಬರಹ, ಸಮೂಹಮಾಧ್ಯಮ ಮತ್ತು ಸಮಾಜ, ಸೇಡಿಯಾಪು ಕೃಷ್ಣಭಟ್ಟರ ಬದುಕು ಮತ್ತು ಬರಹ, ಎಸ್.ಯು.ಪಣಿಯಾಡಿ: ಬದುಕುಬರಹ, ಮುಳಿಯ ತಿಮ್ಮಪ್ಪಯ್ಯನವರ ಬದುಕುಬರಹ,
ವಿಶುಕುಮಾರ್: ಬದುಕುಬರಹ, ಮೂಕಜ್ಜಿ, ಗ್ರಾಮೀಣ ಅಭಿವೃದ್ಧಿ ಕೆಲವು ಚಿಂತನೆಗಳು, ತಾಳಮದ್ದಳೆ - ಪಠ್ಯ ಮತ್ತು ಪ್ರದರ್ಶನ, ಕೈಯಾರರ ಕಾವ್ಯ, ದಕ್ಷಿಣ ಕನ್ನಡದ ರೈತ ಹೋರಾಟಗಳು, ಜಾಹಿರಾತು ಮತ್ತು ಆಧುನಿಕ
ಸಮಾಜ
=== ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಕಟಣೆಗಳ ಸಂಪಾದನೆ ===
11 ಪುಸ್ತಕಗಳಿಗೆ ಪ್ರಧಾನ ಸಂಪಾದಕೆರಾಗಿ ಕೆಲಸ ಮಾಡಿದ್ದಾರೆ.
# ಯಕ್ಷಭಂಡಾರಿ
# ಯಕ್ಷಮುಡಿ
# ಯಕ್ಷಸಿರಿ
# ಯಕ್ಷಸ್ತ್ರೀ
# ಯಕ್ಷತರು
# ಯಕ್ಷಕೇದಗೆ
# ಜಿನ ಯಕ್ಷಗಾನ ಸಂಪುಟ
# ಕೋಟ ಶಿವರಾಮ ಕಾರಂತರು:ಯಕ್ಷಗಾನ ಚಿಂತನೆ ಮತ್ತು ಪ್ರಯೋಗ
# ಬಲಿಪ ಗಾನ ಯಾನ
# ಯಕ್ಷಗಾನ ಸ್ಥಿತಿಗತಿ
# ಯಕ್ಷಗಾನ ಪ್ರಸಂಗ ಸಂಪುಟ
=== ಮಂಗಳ ಪಠ್ಯ ಪುಸ್ತಕ ಮಾಲಿಕೆ ===
ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮಟ್ಟದ ಓದುವ ಕನ್ನಡ ಪುಸ್ತಕಗಳ ಪ್ರಧಾನ ಸಂಪಾದಕೆರಾಗಿ ಕೆಲಸ ಮಾಡಿದ್ದಾರೆ.
# ಪೊಚ್ಚಪೊಸ ಕಾವ್ಯಕದಿರು
# ಕಡಲಸಿರಿ
# ಬನದಸಿರಿ
# ಹಳಗನ್ನಡ ಕಾವ್ಯಕದಿಕೆ
# ನಡುಗನ್ನಡಕಾವ್ಯ
# ಕಣಜ
# ಇಂಗಡಲು
# ಇನಿದನಿ
# ಇಂಚರ
# ಪುಷ್ಪಗಿರಿ
# ಕೊಡಚಾದ್ರಿ
# ನುಡಿಗಡಲು
# ನುಡಿಸಿಂಗಾರ
# ನುಡಿಸಂಚಯ
# ನುಡಿಲಹರಿ
# ಇನಿಜೇನು
# ಒಳ್ನುಡಿ
# ಮೆಲ್ನುಡಿ
# ಬೆಡಗು
== ವಿದೇಶ ಪ್ರಯಾಣ ==
# ಜಾನಪದ ಮತ್ತು ತೌಲನಿಕ ಮತ ಧರ್ಮಗಳ ಅಧ್ಯಯನ ವಿಭಾಗ, ತುರ್ಕು ವಿಶ್ವವಿದ್ಯಾನಿಲಯ, ಫಿನ್ಲೆಂಡ್ (ಐದು ಬಾರಿ)
# ಭಾರತೀಯ ಪ್ರಾಚ್ಯಶಾಸ್ತ್ರ ಅಧ್ಯಯನ ವಿಭಾಗ, ಟ್ಯುಬಿಂಗೆನ್ ವಿಶ್ವವಿದ್ಯಾನಿಲಯ, ಜರ್ಮನಿ
# ಭಾರತೀಯ ಪ್ರಾಚ್ಯಶಾಸ್ತ್ರ ಅಧ್ಯಯನ ವಿಭಾಗ, ಜೂಲಿಯಸ್ ಮ್ಯಾಕ್ಸ್ಮಿಲಿಯನ್ಸ್ ವಿಶ್ವವಿದ್ಯಾನಿಲಯ, ವೂರ್ಸ್ಬರ್ಗ್, ಜರ್ಮನಿ (ಎರಡು ಬಾರಿ)
# ತ್ಸುಬೌಚಿ ಥಿಯೇಟರ್ ಮ್ಯೂಸಿಯಂ, ವಸೆದಾ ವಿಶ್ವವಿದ್ಯಾನಿಲಯ, ಟೊಕಿಯೋ, ಜಪಾನ್
== ಪ್ರಶಸ್ತಿ ಮತ್ತು ಗೌರವ ==
# 2024ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ – ತುಳು ಸಾಹಿತ್ಯ, ಜಾನಪದ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಕೊಟ್ಟಿರುವ ವಿಶೇಷ ಕೊಡುಗೆಗಾಗಿ<ref>{{cite web|last1=Puttur|first1=TEAM News|title=ಡಾ.ಕೆ.ಚಿನ್ನಪ್ಪ ಗೌಡರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪ್ರದಾನ|url=https://newsputtur.com/2025/03/24/dr-k-chinnappa-gowda-was-conferred-with-an-honorary-award-by-the-karnataka-tulu-sahitya-academy/|website=News Puttur|date=24 March 2025}}</ref>
# 2024ರಲ್ಲಿ 2023ನೇ ವರ್ಷದ ಡಾ.ಜೀ.ಶಂ.ಪರಮಶಿವಯ್ಯ ಜಾನಪದ ತಜ್ಞ ಪ್ರಶಸ್ತಿ – ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು<ref>{{cite web|title=Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ {{!}} Udayavani – Latest Kannada News, Udayavani Newspaper|url=https://udayavani.com/district-news/udupi-news/udupi-dakshina-kannada-karnataka-folklore-award-announced|website=Udayavani|language=kn|date=4 November 2024}}</ref>
# ಡಾ.ಕೋಟ ಶಿವರಾಮ ಕಾರಂತ ಪ್ರಶಸ್ತಿ - ಭೂತಾರಾಧನೆ ಜಾನಪದೀಯ ಅಧ್ಯಯನ ಪಿಎಚ್.ಡಿ. ಸಂಶೋಧನ ಪುಸ್ತಕಕ್ಕೆ
# ಸಂದೇಶ ರಾಜ್ಯ ಪ್ರಶಸ್ತಿ - ಸಿರಿ ಮಹಾಕಾವ್ಯ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣಾ ಯೋಜನೆಗೆ
# 2003ರಲ್ಲಿ ಪ್ರೊ.ಕು.ಶಿ. ಹರಿದಾಸ ಭಟ್ಟ ಜಾನಪದ ಪ್ರಶಸ್ತಿ, ಉಡುಪಿ
# 2017ಕ್ಕೆ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ<ref>{{cite web|title=ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಗೆ ಡಾ.ಚಿನ್ನಪ್ಪ ಗೌಡ, ಸಯ್ಯದ್ ಹಿದಾಯತುಲ್ಲ ಆಯ್ಕೆ|url=https://vijaykarnataka.com/news/udupi/udupi-news-in-kannada/articleshow/57226372.cms|website=Vijay Karnataka|language=kn}}</ref>
# 2022ಡ್ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಗಡೆ ಸಂಸ್ಕೃತಿ ಅಧ್ಯಯನ ಪ್ರಶಸ್ತಿ, ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ <ref>cite web|last1=ವಾರ್ತೆ|first1=ಪ್ರಜಾವಾಣಿ|title=ಜಾನಪದ ತಜ್ಞ ಡಾ.ಕೆ.ಚಿನ್ನಪ್ಪ ಗೌಡರಿಗೆ ಪ್ರಶಸ್ತಿ|url=https://www.prajavani.net/district/udupi/chinnappa-gowda-984517.html|website=Prajavani|language=kn{{Dead link|date=ಸೆಪ್ಟೆಂಬರ್ 2025 |bot=InternetArchiveBot |fix-attempted=yes }}</ref>
# ಸಂದೇಶ ಪ್ರಶಸ್ತಿ – ತುಳು ಸಾಹಿತ್ಯ ರಂಗದ ಕೊಡುಗೆಗಾಗಿ
# ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ‘ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು’ ಸಂಶೋಧನ ಕೃತಿಗೆ
# ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ – ‘ಭೂತಾರಾಧನೆ ಕೆಲವು ಅಧ್ಯಯನಗಳು’ ಸಂಶೋಧನ ಕೃತಿಗೆ
# ವಸುದೇವ ಭೂಪಾಳಂ ದತ್ತಿನಿಧಿ ಪ್ರಶಸ್ತಿ -‘ಜಾಲಾಟ’ ಕೃತಿಗೆ
# 2021ನೇ ವರ್ಷದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ – ‘ಕೆಲೆಪು ಪೆರಡೆ ಕೆಲೆಪು’ ತುಳು ಕಾವ್ಯ ಪ್ರಶಸ್ತಿ<ref>cite web|url=https://tuluacademy.karnataka.gov.in/storage/pdf-files/pressnote%2019.pdf{{Dead link|date=ಸೆಪ್ಟೆಂಬರ್ 2025 |bot=InternetArchiveBot |fix-attempted=yes }}</ref>
# ಬಿ.ಎ. ಪ್ರಭಾಕರ ರೈ ದತ್ತಿ ನಿಧಿ ಪ್ರಶಸ್ತಿ – ಕರಾವಳಿ ಕಥನಗಳು ಕೃತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
# ಕರಾವಳಿ ರತ್ನ ಪ್ರಶಸ್ತಿ –ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠ ರಜತ ಮಹೋತ್ಸವ, ಮಂಗಳೂರು
# ಯಕ್ಷಗಾನ ಸಾಹಿತ್ಯ ಸಾಂಸ್ಕೃತಿಕ ಜಾನಪದ ಪ್ರಶಸ್ತಿ – ರಂಗಭೂಮಿ ಉಡುಪಿ, ಕರ್ನಾಟಕ ಜಾನಪದ ಪರಿಷತ್ತು ಉಡುಪಿ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ
# ಆರ್ಯಭಟ ಸಾಹಿತ್ಯ/ಶಿಕ್ಷಣ ಪ್ರಶಸ್ತಿ, ಬೆಂಗಳೂರು 2016 <ref>{{cite web|title=ಆರ್ಯಭಟ ಪ್ರಶಸ್ತಿಗೆ ಪ್ರೊ.ಕೆ.ಚಿನ್ನಪ್ಪ ಗೌಡ ಆಯ್ಕೆ|url=https://www.varthabharati.in/article/2016_04_25/19138|website=www.varthabharati.in|language=kn|date=25 April 2016}}</ref>
# ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ, ಕಾಸರಗೋಡು
# ಕುವೆಂಪು ದೀಪ ಪ್ರಶಸ್ತಿ, ಹೊನ್ನಾವರ
# ಶ್ರೀಮಯ ಯಕ್ಷತ್ರಿವೇಣಿ ಪ್ರಶಸ್ತಿ, ಮಂಗಳೂರು
# ಜಾನಪದ ಸಾಹಿತ್ಯ ಅಕಾಡೆಮಿ ಮಂಜುನಾಥ ಬೇವಿನಕಟ್ಟೆ ಜಾನಪದ ತಜ್ಞ ಪ್ರಶಸ್ತಿ<ref>cite web|last1=ವಾರ್ತೆ|first1=ಪ್ರಜಾವಾಣಿ|title=ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ|url=https://www.prajavani.net/news/karnataka-news/karnataka-janapada-academy-annual-award-30-artists-from-30-districts-k-chinnappa-gowda-manjunatha-bevinakatte-and-others-3035107|website=Prajavani|language=kn{{Dead link|date=ಸೆಪ್ಟೆಂಬರ್ 2025 |bot=InternetArchiveBot |fix-attempted=yes }}</ref>
# 2017ಡ್ 21ನೇ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಲನೊದ ಗುರ್ಕಾರ್ಮೆ<ref>{{cite web|title=ಡಾ.ಕೆ.ಚಿನ್ನಪ್ಪ ಗೌಡ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ|url=https://bantwalnews.com/2017/01/04/ಡಾ-ಕೆ-ಚಿನ್ನಪ್ಪ-ಗೌಡ-21ನೇ-ಜಿಲ್/|website=Bantwalnews.com|date=4 January 2017}}</ref>
# ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಪ್ರಶಸ್ತಿ 2025 <ref>cite web|last1=ವಾರ್ತೆ|first1=ಪ್ರಜಾವಾಣಿ|title=ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ: ದಾಮೋದರ ಶೆಟ್ಟಿ, ಚಿನ್ನಪ್ಪ ಗೌಡಗೆ ಪ್ರಶಸ್ತಿ|url=https://www.prajavani.net/district/bengaluru-city/lakshminarayana-alva-centenary-awards-damodar-shetty-chinnappa-gowda-3488607|website=Prajavani|language=kn{{Dead link|date=ಸೆಪ್ಟೆಂಬರ್ 2025 |bot=InternetArchiveBot |fix-attempted=yes }}</ref>
== ಉಲ್ಲೇಖಗಳು ==
{{reflist}}
{{Interwikineeded}}
[[ವರ್ಗ:ತುಳು ನಾಡು]]
[[ವರ್ಗ:ಜಾನಪದ]]
[[ವರ್ಗ:ಪ್ರಾಧ್ಯಾಪಕರು]]
[[ವರ್ಗ:ತುಳು ಲೇಖಕರು]]
qrzi4u17mgl67hz1jv5lhfe57v0vva5
ಜಲ ಮೂಲಗಳು
0
21642
1379582
1329590
2026-08-09T08:36:51Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379582
wikitext
text/x-wiki
'''ಜಲ ಮೂಲಗಳು''' : [[ಮಾನವ]]ನ ಬಳಕೆಗೆಗಾಗಿ ಬೇಕಿರುವ [[ನೀರನ್ನು]] ಒದಗಿಸುವ ಮೂಲವೇ ಜಲಮೂಲ. [[ಕೃಷಿ]], [[ಉದ್ಯಮ]], [[ಮನೆ]], [[ಮನರಂಜನೆ]] ಮತ್ತು [[ಪರಿಸರಾತ್ಮಕ]] ಚಟುವಟಿಕೆಗಳಿಗಾಗಿ ಬೇಕಿರುವ ಸಾಧನ ಈ ನೀರು. ಮಾನವನ ಈ ಎಲ್ಲ ಚಟುವಟಿಕೆಗಳಿಗೂ ವಾಸ್ತವವಾಗಿ [[ಸಿಹಿ ನೀರು]] ಅವಶ್ಯವಾಗಿ ಬೇಕು.
==ಜಲ ಮೂಲಗಳು==
*[[ಭೂಮಿಯ ಮೇಲಿರುವ]] ಒಟ್ಟು ನೀರಿನಲ್ಲಿ 97% ಉಪ್ಪು ನೀರು, ಮಿಕ್ಕ 3% ಮಾತ್ರ ಸಿಹಿ ನೀರಾಗಿದ್ದು ಇದರಲ್ಲಿನ ಮೂರನೆ ಎರಡರಷ್ಟು ಭಾಗ [[ಧ್ರುವ ಪ್ರದೇಶ]]ದಲ್ಲಿ ಹೆಪ್ಪುಗಟ್ಟಿರುವ [[ನೀರ್ಗಲ್ಲಾ]]ಗಿದೆ.<ref name="USGS dist">{{cite web|url=http: // ga. water.usgs.gov/edu/waterdistribution.html|title=Earth's water distribution|publisher=United States Geological Survey|accessdate=2009-05-13}}</ref> ಮಿಕ್ಕದ್ದು ದ್ರವ ರೂಪದಲ್ಲಿರುವ ಅಂತರ್ಜಲ ವಾಗಿದ್ದು ಇದರಲ್ಲಿನ ಅತ್ಯಲ್ಪ ಪ್ರಮಾಣದ ನೀರು ಭೂಮಿಯ ಮೇಲೆ ಹಾಗೂ ವಾತಾವರಣದಲ್ಲಿ ಕಾಣಬರುತ್ತದೆ.<ref>{{cite web | title=Scientific Facts on Water: State of the Resource | publisher=GreenFacts Website | accessdate=2008-01-31 | url=http://www.greenfacts.org/en/water-resources/index.htm#2 | archive-date=2018-07-24 | archive-url=https://web.archive.org/web/20180724032145/http://www.greenfacts.org/en/water-resources/index.htm#2 | url-status=dead }}</ref>
*ಸಿಹಿ ನೀರಿನ ಮೂಲ [[ಮರುಪೂರಣ]] ಗುಣವುಳ್ಳದ್ದಾದರೂ, ಜಗತ್ತಿಗೆ ಪೂರೈಕೆಯಾಗುತ್ತಿರುವ ಶುದ್ಧ ಸಿಹಿ ನೀರಿನ ಪ್ರಮಾಣ ಕ್ರಮೇಣ ಕುಸಿಯುತ್ತಿದೆ. ಜಗತ್ತಿನ ಅನೇಕ ಭಾಗಗಳಲ್ಲಿ ನೀರಿನ ಬೇಡಿಕೆ ಈಗಾಗಲೇ [[ಪೂರೈಕೆಯನ್ನು ಮೀರಿದ್ದು]]; [[ಪ್ರಪಂಚದ ಜನ ಸಂಖ್ಯೆ]] ಏರಿದಂತೆಲ್ಲಾ ನೀರಿನ ಬೇಡಿಕೆ ಹೆಚ್ಚುತ್ತಿದೆ. ಜಗತ್ತಿನ ಅರ್ಧ ಭಾಗದಷ್ಟು ನೀರ್ಬಸಿಯುವ (=[[ಜೌಗು ಭೂಮಿ]]) ಜಮೀನು ಮತ್ತು [[ಪರಿಸರ ವ್ಯವಸ್ಥೆ]] 20ನೇ ಶತಮಾನದಲ್ಲಿ ಇಲ್ಲವಾಯಿತು. ಇದಾದ ನಂತರ ಪರಿಸರ ವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ [[ಜಲ]] ಸಂರಕ್ಷಣೆಯ ಜಾಗೃತಿ ಹೊಮ್ಮಿದ್ದು ತೀರಾ ಇತ್ತೀಚಿನ ಸಂಗತಿ.
*[[ಕಡಲು]] ಅಥವಾ ಭೂಮಿಯಲ್ಲಿನ [[ಪರಿಸರ ವ್ಯವಸ್ಥೆ]]ಗಿಂತಲೂ [[ಸಿಹಿ ನೀರಿನ]] [[ಜೀವ ವೈವಿಧ್ಯ]] ಪರಿಸರ ವ್ಯವಸ್ಥೆ ಈಗ ಶೀಘ್ರ ಗತಿಯಲ್ಲಿ ಕ್ಷೀಣಿಸುತ್ತಿದೆ. ಹೊಯೆಕ್ಸತ್ರ, A.Y. 2006. ನೀರು ಆಡಳಿತದ ಬಗ್ಗೆ ಜಾಗತಿಕ ಆಯಾಮ: ಸ್ಥಳೀಯ ಸಮಸ್ಯೆಗಳನ್ನು ನಿಭಾಯಿ ಸುವ ನಿಟ್ಟಿನ ಜಾಗತಿಕ ವ್ಯವಸ್ಥೆಗೆ ಒಂಭತ್ತು ಕಾರಣಗಳು ''ವ್ಯಾಲ್ಯೂ ಆಫ್ ವಾಟರ್ ರಿಸರ್ಚ್ ರಿಪೋರ್ಟ್ ಸೀರಿಸ್'' ನಂ. 20 UNESCO-IHE ಇನ್ಸ್ಟಿಟ್ಯೂಟ್ ಫಾರ್ ವಾಟರ್ ಎಜುಕೇಷನ್.</ref> ನೀರನ್ನು ಬಳಕೆ ಮಾಡುವವರಿಗಾಗಿ ನಿಯಮಾವಳಿಯನ್ನು ರೂಪಿಸಿ(ನಿಯಮಾವಳಿ ಇದ್ದಲ್ಲಿ) ಅದನ್ನು [[ನೀರಿನ ಹಕ್ಕು]] ಎಂದು ಕರೆದಿದ್ದೇವೆ.
==ಸಿಹಿ ನೀರಿನ ಮೂಲಗಳು ==
===ಮೇಲ್ಮೈ ನೀರು ===
*ನದೀ, [[ಸರೋವರ]] ಮತ್ತು [[ಜೌಗು ಭೂಮಿ]]ದಲ್ಲಿರುವ ಸಿಹಿ ಜಲ ಸಂಪತ್ತಿಗೆ [[ಮೇಲ್ಮೈ ನೀರು]] ಎನ್ನಲಾಗಿದೆ. [[ಮಳೆ ಬೀಳು]]ವುದರಿಂದ ಭರ್ತಿಯಾಗುವ ಭೂಮಿಯ ಮೇಲ್ಮೈ ನೀರು ಹರಿದು [[ಕಡಲ]]ನ್ನೂ, [[ಆವಿಯಾಗಿ]] ವಾತಾವರಣವನ್ನೂ ಸೇರುವುದರಿಂದ ಅದರ ಪ್ರಮಾಣ ಕಡಿಮೆಯಾಗುವುದು ನೈಸರ್ಗಿಕ. ಮೇಲ್ಮೈ ನೀರು ಸಂಗ್ರಹವಾಗಲು ಪ್ರಾಕೃತಿಕವಾಗಿ [[ಜಲಾನಯನ]] ಪ್ರದೇಶದಲ್ಲಿ ಬೀಳುವ ಮಳೆಯೊಂದರಿಂದಲೇ ಸಾಧ್ಯವಾಗುವುದಾದರೂ, ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಪ್ರಮಾಣದ ನೀರು ವ್ಯವಸ್ಥೆಯಲ್ಲಿ ಇರಬೇಕೆಂಬ ನಿರೀಕ್ಷೆ ಅನ್ಯ ಕಾರಣಗಳನ್ನೂ ಅವಲಂಬಿಸಿದೆ.
*ಸರೋವರ, ಜೌಗು ಭೂಮಿ ಮತ್ತು [[ಅಣೆಕಟ್ಟು]]ಗಳಿಗಿರುವ ಜಲ ಸಂಗ್ರಹಣಾ ಸಾಮರ್ಥ್ಯ, ಇವುಗಳ ತಳದಲ್ಲಿನ [[ಮಣ್ಣಿ]]ಗಿರುವ ಅಂತರ್ವ್ಯಾಪಕತೆಯ ಗುಣ, ಜಲ ಸಂಗ್ರಹಾಗಾರಗಳ ಅಡಿಯ ಮಣ್ಣಿಗಿರುವ ನೀರ್ಬಸಿಯುವ ಲಕ್ಷಣ, [[ಮಳೆ ಬೀಳುವ ಅವಧಿ]] ಮತ್ತು ಆವಿಯಾಗಲು ಹಿಡಿಯುವ ಸಮಯ- ಈ ಎಲ್ಲ ಅಂಶಗಳ ಮೇಲೆ ಅದು ಅವಲಂಬಿತ. ಲಭ್ಯವಾಗದೇ ಕಳೆದು ಹೋಗುವ ನೀರಿನ ಮೇಲೂ ಈ ಎಲ್ಲ ಅಂಶಗಳು ಪ್ರಭಾವ ಬೀರುತ್ತದೆ.
*ಈ ಎಲ್ಲ ಅಂಶಗಳ ಮೇಲೆ ಮಾನವನ ಚಟುವಟಿಕೆಗಳು ಭಾರೀ ಪ್ರಭಾವವನ್ನು ಬೀರುತ್ತವೆ, ಕೆಲವೊಮ್ಮೆ ಅದು ವಿಪರೀತ ಹಾನಿಕಾರಕವಾಗಿರುವುದೂ ಉಂಟು. ಅಣೆಕಟ್ಟುಗಳನ್ನು ಕಟ್ಟುವ ಮೂಲಕ ಜಲ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವ ಮಾನವ ಜೌಗು ಜಮೀನಿನಿಂದ ನೀರೆಳೆದು ಅದರ ಪ್ರಮಾಣವನ್ನು ಕುಗ್ಗಿಸುತ್ತಾನೆ. ಕಾಲುವೆಗಳ ಮೂಲಕ ಅಧಿಕ ಪ್ರಮಾಣದಲ್ಲಿ ಹಾಗೂ ವೇಗವಾಗಿ ನೀರನ್ನು ಹರಿ ಬಿಡುವ ಕಾಯಕದಲ್ಲಿ ಮಾನವ ಆಗಾಗ ತೊಡಗುತ್ತಾನೆ.
*ಯಾವುದಾದರೂ ನಿರ್ದಿಷ್ಟ ಅವಧಿಯಲ್ಲಿ ದೊರೆಯುವ ನೀರಿನ ಪ್ರಮಾಣ ಎಷ್ಟು ಎಂಬುದು ಗಮನಾರ್ಹ ಸಂಗತಿ. ಆಗಾಗ್ಗೆ ವಿರಾಮಕೊಟ್ಟು ನೀರನ್ನು ಉಪಯೋಗಿಸುವುದು ಮಾನವನ ಅಗತ್ಯ. ಉದಾಹರಣೆಗೆ, ವಸಂತ ಋತುವಿನಲ್ಲಿ ಬಹುಪಾಲು [[ಹೊಲಗದ್ದೆ]]ಗಳು ಹೆಚ್ಚಿನ ಪ್ರಮಾಣ ದಲ್ಲಿ ನೀರನ್ನು ಬೇಡಿದರೆ ಚಳಿಗಾಲದಲ್ಲಿ ಅವಕ್ಕೆ ನೀರೇ ಬೇಡ. ಅಲ್ಪಾವಧಿಯಲ್ಲೇ ಹೊಲ ಗದ್ದೆಗಳಿಗೆ ಭಾರೀ ಪ್ರಮಾಣದಲ್ಲಿ ನೀರನ್ನು ಪೂರೈಕೆ ಮಾಡಬೇಕೆಂದರೆ ವರ್ಷವಿಡೀ ಸಮೃದ್ಧವಾಗಿ ನೀರು ಸಂಗ್ರಹಿಸುವ ಮೇಲ್ಮೈ ನೀರಿನ ವ್ಯವಸ್ಥೆ ಇರಬೇಕು.
*[[ವಿದ್ಯುತ್ ಪೂರೈಸುವ ಘಟಕ]]ಗಳಂಥ ಕೆಲವಕ್ಕೆ ನಿರಂತರ ನೀರಿನ ಅವಶ್ಯವಿದೆ.ತಂಪಾಗಿರಿಸುವುದಕ್ಕಾಗಿ ಅವಕ್ಕೆ ನೀರು ಬೇಕೇ ಬೇಕು. ನೀರಿನ ಸಹಜ ಹರಿವು ವಿದ್ಯುತ್ ಪೂರೈಸುವ ಘಟಕಗಳ ಅಗತ್ಯಕ್ಕಿಂತಲೂ ಕೆಳ ಮಟ್ಟಕ್ಕಿಳಿದಾಗ ಅವುಗಳಿಗಾಗಿ ನೀರಿನ ಪೂರೈಕೆ ಮಾಡಬೇಕಾ ದ ಅಗತ್ಯ ಬೀಳುತ್ತದೆ, ಇಂಥ ಸನ್ನಿವೇಶಗಳನ್ನು ಎದುರಿಸಲು ಸಾಕಷ್ಟು ಮೇಲ್ಮೈ ನೀರಿನ ಸಂಗ್ರಹಣೆಯ ಅವಶ್ಯವಿದೆ.
*ದೀರ್ಘಾವಧಿಯಲ್ಲಿ, ನಿಸರ್ಗ ದತ್ತವಾದ ಮೇಲ್ಮೈ ಜಲಾನಯನದಲ್ಲಾಗುವ ಸರಾಸರಿ ನೀರಿನ ಬಳಕೆ ಆ ನಿರ್ದಿಷ್ಟ ಜಲಾನಯನದಲ್ಲಿ ಬೀಳುವ ಸರಾಸರಿ ಮಳೆಯ ಪ್ರಮಾಣವನ್ನು ಅವಲಂಬಿಸಿದೆ. [[ಕಾಲುವೆ]] ಅಥವಾ [[ಕೊಳವೆ]] ಮೂಲಕ ಬೇರೊಂದು ಜಲಾನಯನ ಪ್ರದೇಶದಿಂದ ನೀರು ಹಾಯಿಸಿಕೊಂಡು ಮತ್ತೊಂದು ಜಲಾನಯನ ಪ್ರದೇಶದಲ್ಲಿ ಜಲವರ್ಧನೆ ಮಾಡುವುದು ಸಾಧ್ಯವಿದೆ.
*ಕೆಳಗೆ ತಿಳಿಸಲಾಗಿರುವ ಯಾವುದೇ ಮೂಲದಿಂದ ನೀರನ್ನು ಹಾಯಿಸಿಕೊಂಡು ಜಲ ವರ್ಧನೆ ಮಾಡುವುದು ಸಾಧ್ಯವಿದೆಯಾದರೂ, ವಾಸ್ತವವಾಗಿ ಹೀಗೆ ಮಾಡುವುದರ ಪ್ರಮಾಣ ನಗಣ್ಯ. ನೀರನ್ನು [[ಮಲಿನ]]ಗೊಳಿಸುವ ಮಾನವನು ಒಂದಷ್ಟು ಪ್ರಮಾಣದ ಮೇಲ್ಮೈ ನೀರನ್ನು "ಕಳೆದು ಕೊಳ್ಳುತ್ತಾನೆ"(ಅಂದರೆ ಉಪಯೋಗಕ್ಕೆ ಬಾರದಂತೆ ಮಾಡುತ್ತಾನೆ). ಜಗತ್ತಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿಹಿ ನೀರನ್ನು ಪೂರೈಸುವ ರಾಷ್ಟ್ರವೆಂದರೆ [[ಬ್ರೆಜಿಲ್]].ನಂತರದ ಸ್ಥಾನ [[ರಷ್ಯ]] ಮತ್ತು [[ಕೆನಡಾ]] ಪಾಲಿನದ್ದು.
===ನದಿಗಳ ಭೂಗತ ಹರಿವು===
*ನದಿಯ ತಳದೊಳಗಿರುವ(=ಉಪ ಮೇಲ್ಮೈ) ಬಂಡೆ ಮತ್ತು ಜಲ್ಲಿಸ್ತರದ ನಡುವಿನಿಂದ ನುಗ್ಗಿ ಬರುವ ಗಣನೀಯ ಪ್ರಮಾಣದ ನೀರು ಕಣ್ಣಿಗೆ ಕಾಣದಂತೆ ನದಿಯ ಕೆಳ ಹರಿವಿಗೆ ಸಾಗಲ್ಪಡುವ ನೀರಿನ ಒಟ್ಟು ಪ್ರಮಾಣದ ಜೊತೆಗೆ ಮಿಳಿತವಾಗುತ್ತದೆ; ಪ್ರವಾಹೋಪಾದಿಯಲ್ಲಿ ಹೀಗೆ ಹರಿಯುವ ನೀರಿನ ಮೊತ್ತಕ್ಕೆ [[ನೆಲಜಲ ವಲಯ]] ಎನ್ನಲಾಗಿದೆ. ಬೃಹತ್ ಕಣಿವೆಗಳ ನಡುವೆ ಹರಿಯುವ ನದಿಗಳಲ್ಲಿ ನೀರಿನ ಸಂಗಡ ಅಗೋಚರವಾಗಿ ಮಿಳಿತವಾಗುವ ಇಂಥ ನೀರಿನ ಪ್ರಮಾಣ ಗೋಚರಿಸಿ ಹರಿಯುವ ಪ್ರಮಾಣವನ್ನು ಮೀರಿರುತ್ತದೆ.
*ನೆಲಜಲ ವಲಯವು ಮೇಲ್ಮೈ ಜಲ ಮತ್ತು ನೈಜ ಅಂತರ್ಜಲದ ನಡುವಿನ ಕ್ರಿಯಾಶೀಲ ಸಂಪರ್ಕ ಸೇತುವಿನಂತೆ ಅನೇಕ ವೇಳೆ ಕಾರ್ಯ ನಿರ್ವಹಿಸುತ್ತದೆ, ಮತ್ತು ಅಂತರ್ಜಲ ಕ್ಷೀಣಿಸಿದಾಗ ಇದೇ ತೆರನಾಗಿ ಅಲ್ಲಿಗೆ ನೀರೊದಗಿಸುತ್ತದೆ. [[ನೆಲದಡಿ ಕಲ್ಲು ಕರಗಿ ಆದ ಪೊಟರೆ]]ಗಳಲ್ಲಿ ಮತ್ತು ಭೂಗತ ನದಿಗಳ ಹರಿವಿನಲ್ಲಿ ಈ ಪ್ರಕ್ರಿಯೆಗೆ ವಿಶೇಷ ಮಹತ್ವ.
===ಅಂತರ್ಜಲ===
*ರಂಧ್ರಗಳನ್ನುಳ್ಳ [[ಬಂಡೆ]] ಮತ್ತು [[ಸೂಕ್ಷ್ಮ ರಂಧ್ರಿತ]] ನೆಲದಲ್ಲಿರುವಂಥ ಉಪಮೇಲ್ಮೈ ನೀರು ಅಥವಾ [[ಅಂತರ್ಜಲ]]ವು ಸಿಹಿ ನೀರು ಎನಿಸಿಕೊಳ್ಳುತ್ತದೆ. [[ನೀರಿನ ಮಟ್ಟ]]ದ ಕೆಳಗಿರುವ [[ಜಲಕುಹರ]]ದೊಳಗೆ ಹರಿಯುವ ನೀರೂ ಸಹ ಸಿಹಿ ನೀರೇ. ಉಪಮೇಲ್ಮೈ ನೀರಿನೊಂದಿಗೆ ಅತಿ ನಿಕಟತೆಯುಳ್ಳ ಮೇಲ್ಮೈ ನೀರು ಮತ್ತು ಜಲಕುಹರದ(=ನೀರ್ಪೊಟರೆ) ಆಳದಲ್ಲಿರುವ ನೀರಿನ ನಡುವೆ ಪ್ರತ್ಯೇಕತೆಯನ್ನು ಗುರುತಿಸುವುದು ಕೆಲವೊಮ್ಮೆ ಉಪಯುಕ್ತವಾಗುತ್ತದೆ.("ಭೂಸ್ತರದಲ್ಲೇ ಉಳಿದ ನೀರಿನ ಅವಶೇಷ"ಎಂದು ಕೆಲವೊಮ್ಮೆ ಹೇಳಲಾಗಿದೆ)
*ಒಳಹರಿವು, ಹೊರಹವು ಮತ್ತು ಸಂಗ್ರಹವಾಗುವುದು :ಈ ಎಲ್ಲ ದೃಷ್ಟಿಯಿಂದಲೂ ಉಪಮೇಲ್ಮೈ ನೀರನ್ನು ಮೇಲ್ಮೈ ನೀರಿನಂತೆಯೇ ಪರಿಗಣಿಸಬಹುದು. ಉಪಮೇಲ್ಮೈ ನೀರಿನ ಸಂಗ್ರಹ ಸಾಮರ್ಥ್ಯ ಮೇಲ್ಮೈ ನೀರಿಗೆ ಇರುವುದಕ್ಕಿಂತಲೂ ಅತ್ಯಂತ ಅಧಿಕ. ಮೇಲ್ಮೈ ನೀರಿಗಿರುವ ಒಟ್ಟಾರೆ ಯ ಒಳ-ಹೊರ ಹರಿವು, ಕೊಡು-ಕೂಡುವಿಕೆಯ ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಈ ಪ್ರಕ್ರಿಯೆಯಿಂದ ಯಾವುದೇ ಘೋರ ಪರಿಣಾಮ ಇಲ್ಲದಿರುವುದರಿಂದ ಉಪಮೇಲ್ಮೈ ನೀರನ್ನು ದೀರ್ಘಾವಧೀ ಉಪಯೋಗಿಸುವುದು ಮಾನವನಿಗೆ ಸುಲಭ ಸಾಧ್ಯ.
*ಉಪಮೇಲ್ಮೈ ನೀರಿನ ಮಟ್ಟದ ಮೇಲ್ಪದರಿನಲ್ಲಿ ಒಸರುವ ನೀರಿನ ಮೂಲ ಸಾಧಾರಣವಾಗಿ ಬಳಸಲು ಯೋಗ್ಯವಾದ ನೀರಿನ ಒಂದು ಎಲ್ಲೆ ಎನ್ನಬಹುದಾಗಿದೆ. ಮೇಲ್ಮೈ ನೀರಿನ ಸೆಳವು ಉಪಮೇಲ್ಮೈ ನೀರಿಗೆ ಸೇರಿಕೊಳ್ಳುವುದೇ ಅದರ ಒಳ ಹರಿವಿನ ಮೂಲ. [[ಬುಗ್ಗೆ]]ಗಳೇಳುವುದು ಮತ್ತು ಸಾಗರಗಳಿಗೆ ನೀರು ಸೇರುವುದು ಉಪಮೇಲ್ಮೈ ನೀರಿನ ನೈಸರ್ಗಿಕ ಹೊರ ಹರಿವು. ಮೇಲ್ಮೈ ನೀರಿನ ಮೂಲ ಗಣನೀಯ ಪ್ರಮಾಣದಲ್ಲಿ ಆವಿಯಾಗುವ ಪ್ರಕ್ರಿಯೆಗೆ ಒಳಪಟ್ಟರೆ ಉಪಮೇಲ್ಮೈ ನೀರಿನ ಮೂಲ [[ಲವಣಾಂಶ]] ಭರಿತವಾಗುತ್ತದೆ.
*[[ನೀರಾವರಿ]] ಜಮೀನನ್ನಾಗಿ ಪರಿವರ್ತಿಸಿ ಕೃತಕವಾಗಿಯೂ ಅಥವಾ [[ನೀರ್ಬತ್ತುವು]]ದರಿಂದಾಗಿ ನೈಸರ್ಗಿಕವಾಗಿಯೂ ಇಂಥ ಪರಿಸ್ಥಿತಿ ಉದ್ಭವಿಸುತ್ತದೆ. ಉಪಮೇಲ್ಮೈ ಜಲ ಮೂಲವನ್ನು ಕರಾವಳಿ ಪ್ರದೇಶದಲ್ಲಿ ಮಾನವನು ಉಪಯೋಗಿಸಲು ತೊಡಗಿದಾಗ ಸಾಗರಕ್ಕೆ ನೀರ್ಬಸಿದು [[ಮಣ್ಣು ಉಪ್ಪಾಗಲು]] ಕಾರಣವಾಗುತ್ತದೆ. ಜಲ ಮಾಲಿನ್ಯ ಮಾಡುವ ಮೂಲಕ ಮಾನವನು ಉಪಮೇಲ್ಮೈ ನೀರನ್ನು ಕಳೆದುಕೊಳ್ಳಲು ಕಾರಣಕರ್ತನಾಗುತ್ತಾನೆ(ಅಂದರೆ ಉಪಯೋಗಕ್ಕೆ ಬಾರದಂತೆ ಮಾಡುತ್ತಾನೆ). ಅಣೆಕಟ್ಟುಗಳನ್ನು ಕಟ್ಟುವುದರಿಂದ ಅಥವಾ ಒಡ್ಡುಗಳನ್ನು ಹಾಕಿಕೊಳ್ಳ ಗಳನ್ನು ನಿರ್ಮಿಸುವುದರಿಂದ ಉಪಮೇಲ್ಮೈ ಜಲ ಮೂಲಕ್ಕೆ ಮಾನವನು ನೀರಿನ ಒಳ ಹರಿವನ್ನು ರೂಪಿಸುವುದು ಸಾಧ್ಯವಿದೆ.
===ನಿರ್ಲವಣೀಯ ಪ್ರಕ್ರಿಯೆ===
*ಕ್ಷಾರ ಭರಿತ ನೀರಿನಿಂದ (ಸಾಮಾನ್ಯವಾಗಿ [[ಸಮುದ್ರದ ನೀರು]]) [[ಲವಣಾಂಶ]]ವನ್ನು ಬೇರ್ಪಡಿಸಿ ಸಿಹಿ ನೀರನ್ನಾಗಿ ಪರಿವರ್ತಿಸುವ ಕ್ರಮಕ್ಕೆ [[ನಿರ್ಲವಣೀಯ]] ಪ್ರಕ್ರಿಯೆ ಎನ್ನಲಾಗಿದೆ. ಬಟ್ಟಿ ಇಳಿಸುವಿಕೆ ಮತ್ತು [[ವಿಲೋಮ ಪರಾಸರಣ]](=ಅರೆ ಪಾರಕ ಪೊರೆಯ ಮೂಲಕ ಹರಿದು ಹೆಚ್ಚು ಸಾರಯುತ ದ್ರಾವಣವನ್ನು ಸೇರುವುದರ ವಿರುದ್ಧದ ಕ್ರಮ)-ಇವು ಬಹುವಾಗಿ ಬಳಕೆಯಲ್ಲಿರುವ ನಿರ್ಲವಣೀಯ ಪ್ರಕ್ರಿಯೆ.
*ಇರುವ ವಿವಿಧ ಜಲ ಮೂಲಗಳಿಗೆ ಹೋಲಿಸಿದಲ್ಲಿ ನಿರ್ಲವಣೀಯ ಪ್ರಕ್ರಿಯೆ ಸದ್ಯಕ್ಕಂತೂ ಭಾರೀ ವೆಚ್ಚದಾಯಕ, ಮತ್ತು ಈ ಕ್ರಮದಿಂದ ದೊರಕುವ ನೀರು ಮಾನವನ ಅತಿ ಕನಿಷ್ಠ ಮಟ್ಟದ ಬಳಕೆಯನ್ನು ಮಾತ್ರ ನೀಗಿಸಬಲ್ಲದು. [[ನಿರಾರ್ದ್ರ]] ಪ್ರದೇಶಗಳಲ್ಲಿ ಭಾರೀ ಬೆಲೆ ತೆತ್ತು ಬಳಸುವಂಥವರಿಗೆ(ಮನೆ ಮತ್ತು ಉದ್ಯಮ ಬಳಕೆದಾರರು) ಮಾತ್ರ ಇದು ಆರ್ಥಿಕವಾಗಿ ಸಾಧ್ಯವಾಗುವಂಥದ್ದು. ಪ್ರಸ್ತುತ [[ಪರ್ಷಿಯಾ ಕೊಲ್ಲಿ]] ರಾಷ್ಟ್ರದಲ್ಲಿ ಇದರ ಬಳಕೆ ವ್ಯಾಪಕವಾಗಿದೆ.
===ಘನೀಕೃತ ನೀರು===
*[[ನೀರ್ಗಲ್ಲು]]ಗಳನ್ನು ಜಲಮೂಲವನ್ನಾಗಿ ಬಳಸಿಕೊಳ್ಳಬೇಕು ಎಂಬ ಹಲವಾರು ಯೋಜನೆಗಳನ್ನು ಪ್ರಸ್ತಾಪಿಲ್ಪಟ್ಟಿವೆಯಾದರೂ ಈ ತನಕ ನವೀನ ಮಾದರಿ ಎಂಬುದಕ್ಕಷ್ಟೇ ಇದು ಸೀಮಿತವಾಗಿದೆ. ನೀರ್ಗಲ್ಲಿನ ಕೆಳಗಿನಿಂದ ಹರಿದು ಬರುವ ನೀರನ್ನು ಮೇಲ್ಮೈ ನೀರು ಎಂದೇ ಪರಿಗಣಿಸಲಾಗಿದೆ. ಪೃಥ್ವಿಯ ಮೇಲಿರುವ ಅತ್ಯುನ್ನತ ಶಿಖರಗಳಲ್ಲಿ ಒಂದಾದ "ಜಗತ್ತಿನ ಮೇಲ್ಚಾವಣಿ" ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಮಾಲಯ, ಉತ್ತರ ಧ್ರುವ ಪ್ರದೇಶದಲ್ಲಿ ಘನೀಕೃತಗೊಳ್ಳುವ ಹಿಮಕ್ಕೂ ಮಿಗಿಲಾದ ತಂಪನ್ನು ಹೊಂದಿರುವ ಭಾರೀ ಪ್ರಮಾಣದ ನೀರ್ಗಲ್ಲು ಪ್ರದೇಶವನ್ನು ಒಳಗೊಂಡಿದೆ.
*ಏಷ್ಯದ ಹತ್ತು ಬೃಹತ್ ನದಿಗಳ ಉಗಮ ಸ್ಥಾನ ಇದಾಗಿದ್ದು, ಒಂದು ಶತಕೋಟಿಗೂ ಅಧಿಕ ಮಂದಿಯ ಬದುಕು ಈ ನದಿಗಳ ಮೇಲೆ ಅವಲಂಬಿಸಿದೆ. ಜಾಗತಿಕ ಮಟ್ಟದಲ್ಲಿ ಇರುವುದಕ್ಕಿಂಲೂ ಹೆಚ್ಚಿನ ವೇಗದಲ್ಲಿ ಇಲ್ಲಿಯ ಉಷ್ಣತೆ ಏರುತ್ತಿರುವುದೊಂದು ಕಳವಳದ ಸಂಗತಿ. ಜಾಗತಿಕ ಮಟ್ಟದ ಉಷ್ಣತೆಯ ಹೆಚ್ಚಳ ಈಚಿನ ಶತಕದಲ್ಲಿ 0.7 ಡಿಗ್ರಿ ಸುತ್ತಮುತ್ತ ಇದ್ದರೆ ನೇಪಾಳದಲ್ಲಿ ಅದು ಈಚಿನ ದಶಕದಲ್ಲೇ 0.6 ಡಿಗ್ರಿಯಷ್ಟು ಏರಿದೆ.
==ಸಿಹಿ ನೀರಿನ ಉಪಯೋಗಗಳು==
*ಎರಡು ಬಗೆಯಾಗಿ ಸಿಹಿ ನೀರಿನ ಉಪಯೋಗವನ್ನು ವಿಂಗಡಿಸಲಾಗಿದೆ. ಒಂದು ವ್ಯಯಿಸಬಹುದಾದ್ದು ಮತ್ತೊಂದು ವ್ಯಯಿಸಲಾಗದ್ದು ("ಮರು ಬಳಕೆಗೆ ಯೋಗ್ಯ"ವಾದದ್ದು ಎಂದು ಕೆಲವೊಮ್ಮೆ ಹೇಳಲಾಗುತ್ತದೆ). ಬೇರೊಂದು ಬಳಕೆಗಾಗಿ ಕೂಡಲೇ ದೊರಕದಿರುವ ನೀರು ವ್ಯಯಿಸ ಬಹುದಾದ ವರ್ಗಕ್ಕೆ ಸೇರಿದೆ. ನೀರನ್ನು ಒಂದು ಉತ್ಪನ್ನ ಎಂದು ಬಗೆದರೆ(ಉದಾ: ಕೃಷಿ ಉತ್ಪನ್ನ), ಉಪಮೇಲ್ಮೈ ಪದರಿಗೆ ನುಸುಳುವ ಮತ್ತು ಆವಿಯಾಗಿ ಹೋಗುವ ನೀರು ವ್ಯಯಿಸಬಹುದಾದದ್ದು ಎಂಬ ವರ್ಗಕ್ಕೆ ಸೇರುತ್ತದೆ.
*ಕೊಳಚೆ ನೀರು ಅಥವಾ ಹೀಗೆ ಕಲುಶಿತಗೊಂಡಿರುವ ನೀರನ್ನು ಶುದ್ಧೀಕರಣ ಪ್ರಕ್ರಿಯೆಗೆ [[ಒಳಪಡಿಸಿ]] ಮೇಲ್ಮೈ ನೀರಿಗೆ ಹರಿ ಬಿಟ್ಟು, ಆ ನೀರನ್ನು ಅನ್ಯೋಪಯೋಗ ಮಾಡಿದರೆ ಆಗ ಆ ನೀರು ವ್ಯಯಿಸಲಾಗದ್ದು ಎಂಬ ವರ್ಗಕ್ಕೆ ಸೇರುತ್ತದೆ.
===ಸಿಹಿ ನೀರಿನ ಮೂಲಗಳು===
*ನೀರಾವರಿ ಚಟುವಟಿಕೆಗಾಗಿ ಜಗತ್ತಿನಾದ್ಯಂತ 69% ನೀರನ್ನು ಬಳಸಲಾಗುತ್ತದೆ ಎಂಬುದೊಂದು ಅಂದಾಜಿದೆ. ಇದರಲ್ಲಿ 15-35% ನಷ್ಟು ನೀರು ವ್ಯರ್ಥವಾದದ್ದೂ, ಸಮರ್ಥನೀಯವಲ್ಲದ್ದೂ ಆಗಿದೆ.<ref name="WBCSD Water Facts & Trends">{{cite web |url= http://www.wbcsd.org/includes/getTarget.asp?type=d&id=MTYyNTA |title= WBCSD Water Facts & Trends |date= |accessdate= 2009-03-12 |archive-date= 2012-03-01 |archive-url= https://web.archive.org/web/20120301011840/http://www.wbcsd.org/includes/getTarget.asp?type=d&id=MTYyNTA |url-status= dead }}</ref> ಯಾವುದೇ ಬೆಳೆಯನ್ನು ಬೆಳೆಯಲು ಪ್ರಪಂಚದ ಕೆಲವೆಡೆ ನೀರಾವರಿ ಸೌಕರ್ಯದ ಅಗತ್ಯವಿದ್ದರೆ ಇನ್ನು ಕೆಲವು ಪ್ರದೇಶಗಳಲ್ಲಿ ಲಾಭದಾಯಕ ಬೆಳೆಗಾಗಿಯೋ ಅಥವಾ ಇಳುವರಿಯನ್ನು ವೃದ್ಧಿಸಲೋ ನೀರಾವರಿ ಬೇಕೆನಿಸಿದೆ.
*ಬೆಳೆ ಇಳುವರಿ, ನೀರಿನ ಬಳಕೆ, ಮೂಲ ಸೌಲಭ್ಯ ಮತ್ತು ಉಪಕರಣಗಳ ಮೇಲೆ ಹೂಡಲಾದ ಬಂಡವಾಳ ಇವೆಲ್ಲವುಗಳ ಜೊತೆ ಬೇರೆ ಬೇರೆ ನೀರಾವರಿ ವಿಧಾನಗಳು ರಾಜಿ ವಿನಿಮಯ ಮಾಡಿಕೊಳ್ಳುತ್ತವೆ. [[ಉಳುಮೆಯ ಸಾಲಿನ]] ಗುಂಟ ನೀರು ಹಾಯಿಸುವುದು ಮತ್ತು [[ಸಿಂಪರ ಣೆ]] ಎಂಬ ನೀರಾವರಿ ವಿಧಾನಗಳಿಗೆ ತಗಲುವ ವೆಚ್ಚ ಹೇಗೆ ಕಡಿಮೆಯೋ ಹಾಗೇ ಅವಕ್ಕಿರುವ ಸಾಮರ್ಥ್ಯ ಕೂಡಾ ಅಲ್ಪ.
*ಯಾಕೆಂದರೆ ಹೆಚ್ಚಿನ ಪ್ರಮಾಣದ ನೀರು ಆವಿಯಾಗುವುದರಿಂದ, ಹರಿದು ಹೋಗುವುದರಿಂದ ಮತ್ತು ಬೇರು ಮಟ್ಟದಿಂದ ಕೆಳಕ್ಕಿಳಿಯುವುದರಿಂದ ನೀರು ಕೈ ತಪ್ಪಿ ಹೋಗುತ್ತದೆ. [[ಹನಿ ನೀರಾವರಿ]], [[ಹಾಯಿ ನೀರಾವರಿ]] ಮತ್ತು ನೆಲ ಮಟ್ಟದಲ್ಲೇ ಕಾರ್ಯನಿರ್ವಹಿಸುವ ಸಿಂಪರಣಾ ವ್ಯವಸ್ಥೆಯ ನೀರಾವರಿಯು ಇನ್ನುಕೆಲವು ಸಮರ್ಥ ವಿಧಾನಗಳಾಗಿವೆ. ಈ ವ್ಯವಸ್ಥೆಗಳು ಕೊಂಚ ವೆಚ್ಚದಾಯಕ ಎನಿಸಿದರೂ ಹರಿದು ಹೋಗುವ, ಇಳಿದು ಕಾಣೆಯಾಗುವ ಮತ್ತು ಆವಿಯಾಗಿ ವಾತಾವರಣದಲ್ಲಿ ಐಕ್ಯವಾಗುವುದನ್ನು ಕನಿಷ್ಠ ಪ್ರಮಾಣಕ್ಕೆ ತಗ್ಗಿಸುತ್ತದೆ.
*ಸೂಕ್ತ ನಿರ್ವಹಣೆ ಇಲ್ಲದ ಯಾವುದೇ ನೀರಾವರಿ ವ್ಯವಸ್ಥೆಯು ಹೇಗೆ ನಿಷ್ಪ್ರಯೋಜಕವೋ ಹಾಗೆಯೇ ಸನ್ನಿವೇಶಕ್ಕೆ ತಕ್ಕಂತೆ ಸಕಾಲದಲ್ಲಿ ನೀರೊದಗಿಸುವಂಥ ಜವಾಬ್ದಾರಿಯುತವಾದ ಯಾವುದೇ ಬಗೆಯ ನೀರಾವರಿ ವ್ಯವಸ್ಥೆಗೆ ತನ್ನದೇ ಆದ ಗರಿಷ್ಠ ಸಾಮರ್ಥ್ಯ ಇರುತ್ತದೆ. ಉಪಮೇಲ್ಮೈ ನೀರಿನ ಕ್ಷಾರ ಗುಣ ಮಾತ್ರ ಅಷ್ಟಾಗಿ ಪರಿಗಣನೆಗೆ ಬಂದಿಲ್ಲ.
*[[ಜಲ ಕೃಷಿ]](=ಮಣ್ಣಿನಲ್ಲಿ ಪೌಷ್ಟಿಕಾಂಶ ಕರಗಿರುವ ನೀರಿನಲ್ಲಿ ಬೇಸಾಯ)ಎಂಬುದು ಪುಟ್ಟದಾದರೂ ಸಹಾ ವಿಕಸನ ಹೊಂದುತ್ತಿರುವ ನೀರಿನ ಮತ್ತೊಂದು ಉಪಯೋಗ. ಮತ್ಸ್ಯೋದ್ಯಮಕ್ಕಾಗಿ ಬಳಸಲಾಗುವ ಸಿಹಿ ನೀರನ್ನು(=ಮೀನು ಸಾಕಾಣಿಕೆ) ಕೃಷಿಗಾಗಿ ಬಳಸಲಾಗುವ ನೀರು ಎಂದು ಪರಿಗಣಿಸಲಾಗಿದೆ. ಆದರೆ ನೀರಾವರಿಗೆ ಕೊಟ್ಟಿರುವ ಆದ್ಯತೆಯನ್ನು ಇದಕ್ಕೆ ನೀಡಿಲ್ಲ.(ನೋಡಿ: [[ಅರಳ್ ಸೀ]] ಮತ್ತು [[ಪಿರಮಿಡ್ ಲೇಕ್]]).
*ಜಾಗತಿಕ ಮಟ್ಟದಲ್ಲಿನ ಜನ ಸಂಖ್ಯಾ ಸ್ಫೋಟ ಆಹಾರ ಪದಾರ್ಥಗಳ ಬೇಡಿಕೆಯನ್ನು ಹೆಚ್ಚಿಸಿದೆ, ಸರಬರಾಜಾಗುವ ನೀರಿನ ಪ್ರಮಾಣ ಮಾತ್ರ ಸ್ಥಿರವಾಗಿದೆ.ಹೀಗಾಗಿ ಸುಧಾರಿತ ಬೇಸಾಯ ಪದ್ಧತಿ ಮತ್ತು [[ತಂತ್ರಜ್ಞಾನ]], ಕೃಷಿ ನೀರಿನ<ref>{{cite web|url=http://www.fao.org/nr/water/topics_irrigation.html |title=Water Development and Management Unit - Topics - Irrigation |publisher=FAO |date= |accessdate=2009-03-12}}</ref> ಸಮರ್ಥ ನಿರ್ವಹಣೆ, ಬೆಳೆ ವೈವಿಧ್ಯ,[[ನೀರನ್ನು ನಿಭಾಯಿಸುವಿಕೆ]]-ಇವೆಲ್ಲವನ್ನೂ ಅಳವಡಿಸಿಕೊಂಡು ಅಲ್ಪ ನೀರಿನಲ್ಲಿ ಅಧಿಕ ಇಳುವರಿ ತೆಗೆಯುವ ವಿಧಾನ<ref>{{cite web|url=http://www.fao.org/nr/water/news/masscote.html |title=FAO Water Unit | Water News: water scarcity |publisher=Fao.org |date= |accessdate=2009-03-12}}</ref> ವನ್ನು ಅರಸಲಾಗುತ್ತಿದೆ.
===ಕೈಗಾರಿಕಾ ಕ್ರಾಂತಿ ===
*ಜಗತ್ತಿನಾದ್ಯಂತ ಕೈಗಾರಿಕಾ ರಂಗಕ್ಕೆಂದು ಬಳಸಲಾಗುವ ನೀರಿನ ಪ್ರಮಾಣ 15% ಎಂಬುದೊಂದು ಅಂದಾಜು. ವಿದ್ಯುತ್ ಉತ್ಪಾದನೆಗಾಗಿಯೂ([[ಜಲ ವಿದ್ಯುತ್ ಘಟಕ]]),ವಿದ್ಯುತ್ ಪೂರೈಕಾ ಘಟಕಗಳಿಂದ ಶೈತ್ಯಾ ಸಾಧನವಾಗಿಯೂ,[[ಅದಿರು]] ಮತ್ತು [[ತೈಲ]] ಸಂಸ್ಕರಣೆ ಯಲ್ಲಿ ರಾಸಾಯನಿಕ ಪ್ರಕ್ರಿಯೆಗಾಗಿಯೂ ಹಾಗೂ ಉತ್ಪಾದನಾ ಘಟಕಗಳೂ ದ್ರಾವಣವಾಗಿ ನೀರನ್ನು ಭಾರೀ ಪ್ರಮಾಣದಲ್ಲಿ ಉಪಯೋಗಿಸುತ್ತವೆ.
*ಕೈಗಾರಿಕಾ ಕ್ಷೇತ್ರದಲ್ಲಿನ ನೀರಿನ ಬಳಕೆ ಭಾರೀ ವ್ಯತ್ಯಾಸಕ್ಕೆ ಒಳಪಟ್ಟಿರುತ್ತದೆಯಾದರೂ ಅದರ ಒಟ್ಟಾರೆ ಉಪಯೋಗ ಬೇಸಾಯಕ್ಕೆ ಬೇಕಾಗುವ ಪ್ರಮಾಣಕ್ಕಿಂತಲೂ ಅಲ್ಪದ್ದು. {{-}}ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ನೀರಿನ ಬಳಕೆಯಾಗುತ್ತದೆ. ಜಲ ವಿದ್ಯುತ್ತನ್ನು ಜಲ ಶಕ್ತಿಯಿಂದ ಪಡೆಯಲಾಗುತ್ತದೆ. ಉತ್ಪಾದನಾ ಸಾಧನವೊಂದಕ್ಕೆ ಜೋಡಿಸಲಾದ ರೆಕ್ಕೆಗಳುಳ್ಳ ಜಲ ಚಕ್ರಕ್ಕೆ ರಭಸದಿಂದ ನೀರು ಹಾಯಿಸಿದಾಗ ವಿದ್ಯುತ್ ಉತ್ಪಾದನೆಯಾಗುತ್ತದೆ. ಜಲ ವಿದ್ಯುತ್ತು ಮಿತ ವ್ಯಯದ,ಮಲಿನ ಮಾಡದ,ಪುನರ್ಬಳಕೆ ಮಾಡಬಹುದಾದ ಶಕ್ತಿ ಮೂಲ.
*ಸೂರ್ಯನಿಂದ ಶಕ್ತಿ ಪೂರೈಕೆಯಾಗುತ್ತದೆ. ಸೂರ್ಯ ಬಿಡುವ ಉಷ್ಣದಿಂದ ನೀರು ಆವಿಯಾಗುತ್ತದೆ. ಹೀಗೆ ಆವಿಯಾದ ನೀರು ಬಾಷ್ಪೀಕರಣ ಪ್ರಕ್ರಿಯೆಗೆ ಒಳಪಟ್ಟು ಎತ್ತರದ ಪ್ರದೇಶದಲ್ಲಿ ಹನಿ ಹನಿಯಾಗಿ ಬೀಳುವುದೇ ಮಳೆ,ಅಲ್ಲಿ ಬಿದ್ದ ಮಳೆ ಕೆಳಕ್ಕೆ ಹರಿದು ಬರುತ್ತದೆ. ತ್ರೀ ಜಾರ್ಜ್ಸ್ ಡ್ಯಾಮ್ ಅತ್ಯಂತ ಬೃಹತ್ ಜಲ ವಿದ್ಯುತ್ ಉತ್ಪಾದನಾ ಕೇಂದ್ರ. ಪ್ರಚಂಡ ಒತ್ತಡದಲ್ಲಿ, ಅಂದರೆ ಜಲಸ್ಫೋಟದ ರೀತಿಯಲ್ಲಿ ನೀರನ್ನು ಹರಿಬಿಡಲಾಗುವುದು. ನೀರುಗನ್ನುಗಳ ಮೂಲಕ ಭಾರೀ ಒತ್ತಡದಲ್ಲಿ ನೀರು ಬಿಡುವ ಮತ್ತು ನೀರು ನಿಲ್ಲಿಸುವ ವ್ಯವಸ್ಥೆಯನ್ನೂ ದುಡಿಸಿಕೊಳ್ಳಲಾಗುವುದು. *ಸುರಕ್ಷಿತ ಕ್ರಮದಲ್ಲೂ, ಮತ್ತು ಪರಿಸರಕ್ಕೆ ಹಾನಿಯಾಗದಂತೆಯೂ ಇದು ಕಾರ್ಯ ನಿರ್ವಹಿಸುತ್ತದೆ. ಯಂತ್ರೋಪಕರಣಗಳು ಅನಪೇಕ್ಷಿತ ಉಷ್ಣಕ್ಕೆ ಏರದಂತೆಯೂ, ಗರಗಸ ಅತ್ಯುಷ್ಣತೆಯ ಮಿತಿ ಮೀರದಂತೆ ನೋಡಿಕೊಳ್ಳಲೂ ಇದನ್ನು ಬಳಸಲಾಗುತ್ತದೆ. ರಾಸಾಯನಿಕ ದ್ರಾವಣವನ್ನಾಗಿ ಉಪಯೋಗಿಸುವುದರ ಜೊತೆಗೆ ಹಬೆಯಿಂದ ಜಲಚಕ್ರ ತಿರುಗಿಸಲು ಮತ್ತು ಉಷ್ಣತೆಯನ್ನು ತಗ್ಗಿಸುವಂಥ ಅನೇಕ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ನೀರನ್ನು ಬಳಸಲಾಗುತ್ತದೆ.
*ಶುದ್ಧೀಕರಣ ಪ್ರಕ್ರಿಯೆಗೆ ಒಳಪಡಿಸದೆ ಕೈಗಾರಿಕಾ ಘಟಕಗಳಿಂದ ಹೊರ ಬಿಡುವ ನೀರು ಮಾಲಿನ್ಯವನ್ನು ಉಂಟು ಮಾಡುತ್ತದೆ. ಹೀಗೆ ಹೊರ ಚೆಲ್ಲಲಾದ ದ್ರವ (ರಾಸಾಯನಿಕ ಮಾಲಿನ್ಯ)ಮತ್ತು ಉಷ್ಣ ನಿವಾರಕ ತ್ಯಾಜ್ಯ(ಶಾಖ ಮಾಲಿನ್ಯ)ವನ್ನು ಒಳಗೊಂಡಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಉಪಯೋಗಿಸುವುದಕ್ಕಾಗಿ ಶುದ್ಧ ನೀರಿನ ಅಗತ್ಯವಿದೆ.ಇದಕ್ಕಾಗಿ ಅವು ನೀರಿನ ಶುದ್ಧೀಕರಣಕ್ಕಾಗಿ ಹಲವಾರು ತಂತ್ರೋಪಾಯಗಳನ್ನು ಬಳಸುತ್ತವೆ, ಪೂರೈಕೆ ಹಾಗೂ ಹೊರ ಬಿಡುವುದು-ಎರಡಕ್ಕೂ ಇದು ಅನ್ವಯ.
===ಮನೆಯಲ್ಲಿ ನೀರಿನ ಬಳಕೆ===
*ಅಂದಾಜೊಂದರ ಪ್ರಕಾರ ಪ್ರಪಂಚದಾದ್ಯಂತ ಮನೆಗೆಂದು ಬಳಸುವ ಒಟ್ಟು ನೀರಿನ ಪ್ರಮಾಣ 15%. [[ಕುಡಿಯಲು]],[[ಸ್ನಾನ ಮಾಡಲು]],[[ಅಡಿಗೆ ತಯಾರಿಸಲು]],ನಿರ್ಮಲಿನೀಕರಣಕ್ಕಾಗಿ ಮತ್ತು [[ತೋಟಗಾರಿಕೆ]]ಗಾಗಿ ಬಳಸಲಾಗುವ ಒಟ್ಟು ನೀರು ಇದರಲ್ಲಿ ಸೇರಿದೆ. ತೋಟಗಾರಿಕೆಯನ್ನು ಹೊರತು ಪಡಿಸಿ ಮನೆ ಬಳಕೆಗಾಗಿ ಪ್ರತಿ ಮನುಷ್ಯನ ಪ್ರತಿ ದಿನದ ಮೂಲಭೂತ ನೀರಿನ ಅವಶ್ಯಕತೆ ಸರಿಸುಸಮಾರು 50 ಲೀಟರ್ ಎಂದು [[ಪೀಟರ್ ಗ್ಲೀಕ್]] ಎಂಬುವರು ಅಂದಾಜಿಸಿದ್ದಾರೆ.
*ಸೇವಿಸುವುದರಿಂದ ಅಥವಾ ಬಳಸುವುದರಿಂದ ತತ್ಕ್ಷಣದಲ್ಲಾಗಲೀ ಅಥವಾ ಕೆಲವು ದಿನಗಳ ನಂತರವಾಗಲೀ ಅಡ್ಡ ಪರಿಣಾಮ ಬೀರದಂಥ ಉತ್ಕೃಷ್ಟ ಗುಣ ಮಟ್ಟದ ನೀರೇ ಕುಡಿಯುವ ನೀರು. ಇಂಥ ನೀರನ್ನು ಕುಡಿಯಲು ಯೋಗ್ಯವಾದ ನೀರು ಎನ್ನಲಾಗಿದೆ. ಸೇವಿಸಲು ಮತ್ತು ಅಡಿಗೆ ಮಾಡಲು ವಾಸ್ತವವಾಗಿ ಕನಿಷ್ಠ ಪ್ರಮಾಣದ ನೀರು ಬಳಕೆಯಾಗುವುದಾದರೂ ಅಭಿವೃದ್ಧಿ ಹೊಂದಿದ ಬಹುಪಾಲು ದೇಶಗಳಲ್ಲಿ ಮನೆ ಬಳಕೆ, ವಾಣಿಜ್ಯ ಮತ್ತು ಕೈಗಾರಿಕೆಗಳಲ್ಲಿನ ಉಪಯೋಗಕ್ಕೂ ಕುಡಿಯುವ ನೀರಿನ ಗುಣ ಮಟ್ಟದ ನೀರನ್ನೇ ಪೂರೈಕೆ ಮಾಡಲಾಗುತ್ತದೆ.
===ಮನರಂಜನೆ===
[[File:Whitewater.jpg|thumb|left|ನದಿಯ ಕಡಿದಾದ ಇಳಿಜಾರಿನಲ್ಲಿ ಜಲ ಸಾಹಸ]]
*ಮನರಂಜನೆಯ ಉದ್ದೇಶಕ್ಕಾಗಿ ಬಳಸಲಾಗುವ ನೀರಿನ ಪ್ರಮಾಣ ಕಡಿಮೆಯೇ ಆದರೂ ಶೇಖಡಾವಾರು ಲೆಕ್ಕದಲ್ಲಿ ಅದರ ಬಳಕೆ ಏರುಮುಖದಲ್ಲಿದೆ. ಮನರಂಜನೆಯ ಉದ್ದೇಶಕ್ಕೆ ಬಳಸಲಾಗುವ ನೀರಿನ ನೆಂಟಸ್ತಿಕೆ ಹೆಚ್ಚಾಗಿ ಅಣೆಕಟ್ಟುಗಳ ಹಿನ್ನೀರಿನ ಜೊತೆ ಇರುತ್ತದೆ. ಜಲಾನಯನ ಗಳಲ್ಲಿನ ನೀರು ಭರ್ತಿ ಇದ್ದಾಗಲೂ ಹರಿ ಬಿಡದೇ ಅದನ್ನು ಹಿಡಿದಿಟ್ಟರೆ ಅಂಥದ್ದನ್ನು ಮನರಂಜನೋದ್ದೇಶದ ನೀರು ಎಂದು ವರ್ಗಿಕರಿಸಬಹುದು.
*ಕೆಲವು ಜಲಾನಯನಗಳಿಂದ ನೀರನ್ನು ಬಿಡುಗಡೆ ಮಾಡಿದಾಗ [[ಸಾಹಸಮಯ ದೋಣಿ ಕ್ರೀಡೆ|<span class="goog-gtc-fnr-highlight">ಸಾಹಸಮಯ ದೋಣಿ ಕ್ರೀಡೆ</span>]]ಯನ್ನು ಅದು ಉತ್ತೇಜಿಸುತ್ತದೆ.ಇದು ಕೂಡಾ ಮನರಂಜನೆಯ ಉದ್ದೇಶದ್ದೇ. ಗಾಳಹಾಕಿ ಮೀನು ಹಿಡಿಯುವುದು,ವಾಟರ್ ಸ್ಕೀಯಿಂಗ್ ಕ್ರೀಡೆಯಲ್ಲಿ ತೊಡಗುವುದು,ನಿಸರ್ಗೋತ್ಸಾಹ ಮತ್ತು ಈಜುವುದು ಇನ್ಕೆಲವು ಉದಾಹರಣೆಗಳು.
*ಮನರಂಜನೆಗಾಗಿ ಬಳಸುವ ನೀರು ಸಾಮಾನ್ಯವಾಗಿ ಸೇರುವುದು ವ್ಯಯಿಸಲಾಗದ ವರ್ಗಕ್ಕೆ. [[ಗಾಲ್ಫ್ ಆಟದ ಮೈದಾನ]] ಅತಿ ಹೆಚ್ಚು ಪ್ರಮಾಣದ ನೀರನ್ನು ಕುಡಿಯುತ್ತದೆ, ವಿಶೇಷವಾಗಿ ಒಣ ಪ್ರದೇಶಕ್ಕೆ ಇದು ಅನ್ವಯ. ಮೋಜಿನ ತೋಟಗಾರಿಕೆಗಾಗಿ(ಖಾಸಗಿಯದನ್ನೂ ಒಳಗೊಂಡು) ಹಾಯಿಸಲಾಗುವ ನೀರು, ಜಲ ಮೂಲದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ವಿಶ್ವಾಸನೀಯ ದತ್ತಾಂಶ ದೊರಕದಿರುವುದೇ ಇದಕ್ಕೆ ಕಾರಣ.
*ನೀರು ಪೋಲಾಗುತ್ತಿದೆ ಎಂಬ [[ಪರಿಸರವಾದಿ]]ಗಳ ಕೂಗನ್ನು ದಿಕ್ಚ್ಯುತಗೊಳಿಸುವ ಉದ್ದೇಶದಿಂದ ಕ್ಯಾಲಿಫೋರ್ನಿಯಾ ಸರಕಾರವೂ ಸೇರಿದಂತೆ ಕೆಲವು ಸರಕಾರಗಳು ಗಾಲ್ಫ್ ಮೈದಾನಕ್ಕೆ ಹರಿಸಲಾಗುವ ನೀರು ಕೃಷಿ ಉದ್ದೇಶದ್ದೆಂಬ ಹಣೆ ಪಟ್ಟಿ ಹಚ್ಚಿ ಕಾಯಿದೆ ರೂಪಿಸಿವೆ. ಮೇಲಿನ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕಿದರೆ ಪುನರ್ವಿತರಣೆಯ ನೈಜ ಅಂಕಿಅಂಶ ಶೂನ್ಯದ ಸಮೀಪಕ್ಕೆ ಬರಬಹುದು.
*ನಿಗದಿತ ಸಮಯ ಮತ್ತು ಸ್ಥಳದಲ್ಲಿ ಅನ್ಯ ಬಳಕೆದಾರರಿಗೆ ದೊರಕಬೇಕಾದ ನೀರಿನ ಪ್ರಮಾಣ ಮನರಂಜನಾ ಬಳಕೆಯಿಂದಾಗಿ ಕಡಿಮೆಯಾಗಬಹುದು. ಉದಾಹರಣಗೆ: ನಾಟಿ ಮಾಡುವ ಚೈತ್ರ ಮಾಸದ ಸಂದರ್ಭದಲ್ಲಿ ರೈತರಿಗೆ ಸಿಗಬೇಕಾದ ನೀರು, ಬೇಸಿಗೆಯ ಅಂತ್ಯದಲ್ಲಿ ದೋಣಿ ವಿಹಾರಕ್ಕೆಂದು ನೀರನ್ನು ಅಣೆಕಟ್ಟೆಗಳಲ್ಲಿ ಹಿಡಿದಿಡುವುದರಿಂದಾಗಿ ರೈತರಿಗೆ ದೊರಕದಿರಬಹುದು. ವಿದ್ಯುತ್ ಶಕ್ತಿಯ ತೀವ್ರ ಬೇಡಿಕೆ ಇರುವಾಗ ಜಲ ಸಾಹಸ ಕ್ರೀಡೆಗೆಂದು ನೀರನ್ನು ಹರಿ ಬಿಟ್ಟರೆ ಆ ನೀರು ಜಲ ವಿದ್ಯುತ್ ಉತ್ಪಾದನೆಗೆ ಲಭ್ಯವಾಗದಿರಬಹುದು.
{{-}}
===ಪರಿಸರೀಯ===
*ಶೇಕಡಾ ವಾರು ಪ್ರಮಾಣದಲ್ಲಿ ವೃದ್ಧಿಯಾಗುತ್ತಿರುವುದನ್ನು ಬಿಟ್ಟರೆ ಪರಿಸರಕ್ಕೆಂದೇ ಖಚಿತವಾಗಿ ಬಳಸಲಾಗುವ ನೀರಿನ ಪ್ರಮಾಣ ಅತ್ಯಲ್ಪ. ಕೃತಕ ಜೌಗು ಭೂಮಿಯ ನಿರ್ಮಾಣ, ವನ್ಯ ಮೃಗಗಳು ವಾಸಿಸಲು ಅನುವಾಗುವಂತೆ ನಿರ್ಮಾಣ ಮಾಡಲಾಗುವ ಸರೋವರಗಳು, [[ಜಲಾನ ಯನ]] ಪ್ರದೇಶದ ಸುತ್ತ ಕಟ್ಟಲಾಗುವ [[ಮೀನು ಸಾಕಣೆ]] ಸೋಪಾನಗಳು, ಮೀನು ಮೊದಲಾದ ಜಲಚರಗಳು ಮೊಟ್ಟೆ ಒಡೆದು ಹೊರ ಬರುವಂತೆ ಸಂದರ್ಭೋಚಿತವಾಗಿ ನೀರು ಬಿಡುವುದು-ಇವೆಲ್ಲಾ ಪರಿಸರಕ್ಕಾಗಿ ನೀರನ್ನು ಬಳಸುವುದರಲ್ಲಿ ಸೇರಿವೆ.
*ಪರಿಸರಕ್ಕಾಗಿ ಬಳಸುವ ನೀರು ಕೂಡಾ ಮನರಂಜನೆ ಉದ್ದೇಶಕ್ಕೆ ಬಳಸುವ ನೀರಿನಂತೆ ವ್ಯಯವಾಗದ ವರ್ಗಕ್ಕೆ ಸೇರಿದೆ.ಆದರೂ ನಿಗದಿತ ಸ್ಥಳ ಹಾಗೂ ಸಮಯದಲ್ಲಿ ಅನ್ಯರ ಬಳಕೆಗಾಗಿ ದಕ್ಕುವುದರ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಉದಾಹರಣೆಗೆ: ಮೀನು ಮೊಟ್ಟೆ ಒಡೆಯಲೆಂದು ಅಣೆಕಟ್ಟೆಯಿಂದ ನೀರು ಹೊರ ಬಿಟ್ಟರೆ ಮೇಲ್ದಂಡೆಯಲ್ಲಿರುವ ಹೊಲಗಳಿಗೆ ನೀರು ದೊರೆಯದೇ ಇರಬಹುದು.
{{-}}
==ನೀರಿನ ಬಿಕ್ಕಟ್ಟು==
[[File:Access to drinking water in third world.svg|thumb|309px|1970–2000ರ ಅವಧಿಯಲ್ಲಿ ಅಭಿವೃದ್ಧಿಶೀಲ ದೇಶಗಳಲ್ಲಿ ಜನರ ನಡುವೆ ಕುಡಿಯುವ ನೀರು ಹಂಚಿಕೆಯ ಅತ್ಯುತ್ತಮ ಅಂದಾಜು.]]
{{Main|ನೀರಿನ ಬಿಕ್ಕಟ್ಟು|water stress}}
*ನೀರಿನ ಬಿಕ್ಕಟ್ಟು ಎಂಬುದು ಸಾಪೇಕ್ಷವೂ ಹಾಗೂ ಸರಳವೂ ಆದ ಒಂದು ಕಲ್ಪನೆ: ಕೃಷಿ, ಕೈಗಾರಿಕೆ ಅಥವಾ ಮನೆ ಬಳಕೆಗಾಗಿ ಸಾಕಷ್ಟು ನೀರು ದೊರೆಯದಂಥ ಒಂದು ಸನ್ನಿವೇಶ ಉದ್ಭವಿಸಿದಾಗಿನ ಸ್ಥಿತಿಯೇ ನೀರಿನ ಒತ್ತಡ ಎಂದು ವರ್ಲ್ಡ್ ಬ್ಯುಸಿನೆಸ್ ಕೌನ್ಸಿಲ್(=ವಿಶ್ವ ವಾಣಿಜ್ಯ ಪರಿಷತ್ತು)ಅಭಿಪ್ರಾಯ ಪಟ್ಟಿದೆ. ನೀರಿನ ಬಳಕೆ ಹಾಗೂ ಅದರ ಗುಣ ಮಟ್ಟದ ಊಹಾಫೋಹ ಏನೇ ಇರಲಿ ಲಭ್ಯವಿರುವ ನೀರನ್ನು [[ಪ್ರತಿಯೊಬ್ಬರಿಗೂ]] ತಲಪಿಸುವಂಥ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂದು ವಿವರಿಸುವುದು ಜಟಿಲ.
*ವಾರ್ಷಿಕವಾಗಿ ತಲಾ ದೊರೆಯುವ ಸಿಹಿ ನೀರಿನ ಪ್ರಮಾಣ 1,700 ಕ್ಯುಬಿಕ್ ಮೀಟರ್ಗೂ ಕಡಿಮೆ ಇದ್ದರೆ ಆಗ ಆ ದೇಶ ನೀರಿನ ಬಿಕ್ಕಟ್ಟಿಗೆ ಸಿಕ್ಕಿ ಬೀಳುತ್ತದೆ. 1,000 ಕ್ಯುಬಿಕ್ ಮೀಟರ್ಗೂ ಕೆಳಕ್ಕಿಳಿದರೆ ನೀರಿನ ಕೊರತೆಯ ಬಿಸಿ ತಟ್ಟಿ ಆರ್ಥಿಕ ಅಭಿವೃದ್ಧಿಯ ಮೇಲೆ ಮತ್ತು ಮಾನವನ ಆರೋಗ್ಯದ ಮೇಲೆ ದುಃಪರಿಣಾಮ ಬೀರುತ್ತದೆ.
===ಏರಿದ ಜನಸಂಖ್ಯೆ===
ವರ್ಷ 2000ದಲ್ಲಿ, ವಿಶ್ವ ಜನಸಂಖ್ಯೆ 6.2 ಶತ ಕೋಟಿ ಇತ್ತು. ಈಗಾಗಲೇ ನೀರಿನ ಬಿಕ್ಕಟ್ಟಿಗೆ ಸಿಕ್ಕಿ ನರಳುತ್ತಿರುವ [[ಅಭಿವೃದ್ಧಿಶೀಲ ರಾಷ್ಟ್ರ]]ಗಳಲ್ಲಿ 2050ರ ಹೊತ್ತಿಗೆ ಈಗಿರುವ ಸಂಖ್ಯೆಗೆ 3.5 ಶತ ಕೋಟಿ ಜನ ಸೇರುತ್ತಾರೆ ಎಂದು UN ಅಂದಾಜು ಮಾಡಿದೆ.<ref>{{cite web|url=https://www.un.org/apps/news/story.asp?NewsID=13451&Cr=population&Cr1 |title=World population to reach 9.1 billion in 2050, UN projects |publisher=Un.org |date=2005-02-24 |accessdate=2009-03-12}}</ref> ಜೀವನಾಧಾರವೂ, ಅತಿ ಮುಖ್ಯವೂ ಆದ [[ಜಲ ಮೂಲದ ಸಂರಕ್ಷಣೆ]] ಹಾಗೂ [[ಮರುಪೂರಣ]] ವ್ಯವಸ್ಥೆಯೂ ಜೊತೆಜೊತೆಗೆ ನೆರವೇರದಿದ್ದಲ್ಲಿ ನೀರಿನ ಹಪಾಹಪಿ ಶುರುವಾಗುತ್ತದೆ.
===ಏರಿದ ಮಹಾಪೂರ===
ಚೀನಾ ಮತ್ತು ಭಾರತ ಎಂಬೆರಡು ಜನಸಂಖ್ಯಾ ದೈತ್ಯ ದೇಶಗಳಲ್ಲಿ [[ಬಡತನ]] ತಗ್ಗಿಸುವ ಪ್ರಕ್ರಿಯೆ ಭರದಿಂದ ಸಾಗಿದೆ. ಜನಸಂಖ್ಯಾ ಪ್ರವಾಹ [[ಏರು]]ತ್ತಿದೆ ಎಂದರೆ ನೀರಿನ ಬಳಕೆ ಹೆಚ್ಚುತ್ತಿದೆ ಎಂದೇ ಅರ್ಥ: ಶೌಚೋಪಯೋಗಕ್ಕೆ, ಗಿಡಗಳಿಗೆ, ಕಾರು ತೊಳೆಯಲಿಕ್ಕೆ, ಸ್ನಾನದ ನೀರಿನ ತೊಟ್ಟಿಗೆ ಅಥವಾ ಖಾಸಗಿ ಈಜು ಕೊಳಗಳಿಗೆ ವಾರದ 7 ದಿನ ಮತ್ತು ಮೂಲ [[ನೈರ್ಮಲ್ಯ]]ಕ್ಕೆ, ನಿತ್ಯದ 24 ಘಂಟೆ ಶುದ್ಧ ನೀರು ಬೇಕಾಗಿದೆ.
===ವಾಣಿಜ್ಯ ಚಟುವಟಿಕೆಯ ವಿಸ್ತರಣೆ===
ಪ್ರವಾಸೋದ್ಯಮ ಮತ್ತು ಮನರಂಜನೆಯಂಥ ಉದ್ದಿಮೆ ಅಥವಾ ಸೇವಾ ಕ್ಷೇತ್ರದ ವಿಸ್ತರಣೆ ಕ್ಷಿಪ್ರ ಗತಿಯಲ್ಲಿ ಸಾಗುತ್ತಲೇ ಇದೆ. ಇಂಥ ವಿಸ್ತರಣೆಗೆ ಯತೇಚ್ಛ ನೀರಿನ ಅವಶ್ಯವಿದೆ; ನೈರ್ಮಲ್ಯ ಪಾಲನೆಗೂ ಬೇಕು,[[ಪೂರೈಕೆ]] ಗೂ ಬೇಕು.ಇದು ಜಲ ಮೂಲದ ಮೇಲೆ ಮತ್ತು [[ನೈಸರ್ಗಿಕ ವ್ಯವಸ್ಥೆ]]ಯ ಮೇಲೆ ಗಾಢ ಒತ್ತಡ ಹೇರುತ್ತದೆ.
===ಕ್ಷಿಪ್ರಗತಿಯ ನಗರೀಕರಣ===
*[[ನಗರೀಕರಣ]]ದ ಮೇಲಿನ ವ್ಯಾಮೋಹ ವೇಗೋತ್ಕರ್ಷಕ್ಕೆ ಒಳಗಾಗಿದೆ. ಜನ ಸಾಂದ್ರತೆ ಹೆಚ್ಚಿಲ್ಲದ ಪ್ರದೇಶಗಳಲ್ಲಿ ಸಾಕಾಗುವಂಥ ಪುಟ್ಟದೊಂದು [[ಬಾವಿ]] ಮತ್ತು [[ಇಂಗು ಗುಂಡಿ]] ಜನ ದಟ್ಟಣೆ ಹೆಚ್ಚಿರುವ [[ನಗರ ಪ್ರದೇಶ]]ಗಳಿಗೆ ಒಗ್ಗುವುದಿಲ್ಲ. ಪ್ರತಿ ವ್ಯಕ್ತಿಗೂ ನೀರು ತಲಪುವ ವ್ಯವಸ್ಥೆ ಮಾಡಬೇಕಿರುವುದರಿಂದ ನಗರೀಕರಣವು ನೀರಿನ [[ಮೂಲ ಸೌಲಭ್ಯ]] ಕಲ್ಪಿಸಲು ಭಾರೀ ಬಂಡವಾಳವನ್ನು ಬೇಡುತ್ತದೆ. ಇದಲ್ಲದೆ,ವ್ಯಕ್ತಿಗಳಿಂದ ಹಾಗೂ ವಾಣಿಜ್ಯೋದ್ಯಮಿಗಳಿಂದ ಬಿಡುಗಡೆಯಾದ ತ್ಯಾಜ್ಯ ನೀರಿನ ಸಂಸ್ಕರಣೆಯೂ ಆಗಬೇಕಿದೆ.
*ಹೀಗೆ ಕಲುಶಿತಗೊಂಡ ನೀರಿನ ಸಂಸ್ಕರಣೆ ಮಾಡದಿದ್ದಲ್ಲಿ ಜನ ಸಮುದಾಯದ ಆರೋಗ್ಯದ ಮೇಲೆ ಅನಪೇಕ್ಷಿತ ಗಂಡಾಂತರವನ್ನು ಅದು ತಂದೊಡ್ಡುತ್ತದೆ. 100,000 ಕ್ಕೂ ಅಧಿಕ ಜನಸಂಖ್ಯೆಯುಳ್ಳ 60% ಯುರೋಪ್ ನಗರಗಳಲ್ಲಿ ಮರುಪೂರಣಕ್ಕೆ ತಗಲುವ ಅವಧಿಗಿಂತಲೂ ಅಧಿಕ ವೇಗದಲ್ಲಿ ಅಂತರ್ಜಲವನ್ನು ಬಳಕೆ ಮಾಡಲಾಗುತ್ತಿದೆ.<ref>{{cite web |url=http://reports.eea.europa.eu/92-826-5409-5/en |title=Europe’s Environment: The Dobris Assessment |publisher=Reports. eea.europa. eu |date=1995-05-20 |accessdate=2009-03-12 |archive-date=2008-09-22 |archive-url=https://web.archive.org/web/20080922204930/http://reports.eea.europa.eu/92-826-5409-5/en |url-status=dead }}</ref> ಒಂದು ವೇಳೆ ನೀರು ದೊರೆಯುವಂತಿದ್ದರೂ ಕೈಗೆಟಗುವಂತಾಗಲು [[ಹೆಚ್ಚು ವೆಚ್ಚ ಭ]]ರಿಸಬೇಕಾಗುತ್ತದೆ.
===ಹವಾಮಾನ ಬದಲಾವಣೆ===
*[[ಜಲ ಚಕ್ರ]] ಮತ್ತು [[ಹವಾಮಾನ]]ದ ನಡುವೆ ನಿಕಟ ಸಂಬಂಧ ಇರುವುದರಿಂದ ಜಗತ್ತಿನ ಜಲ ಮೂಲಗಳ ಮೇಲೆ ಹವಾಮಾನದ ಪ್ರಭಾವ ತೀವ್ರ ಗಾಢವಾದದ್ದಾಗಿದೆ. [[ಮಳೆ ಬೀಳು]]ವ ಪ್ರಮಾಣ ಪ್ರದೇಶವಾರು ಲೆಕ್ಕದಲ್ಲಿ ವ್ಯತ್ಯಾಸ ಇರುವುದಾದರೂ,ಉಷ್ಣತೆ ಏರಿದಂತೆಲ್ಲಾ [[ಆವಿ]]ಯಾಗುವ ಪ್ರಕ್ರಿಯೆ ಅಧಿಕಗೊಳ್ಳುತ್ತದೆ ಮತ್ತು ಇದು ಮಳೆ ಪ್ರಮಾಣವನ್ನೂ ಹೆಚ್ಚಿಸುತ್ತದೆ. ಒಟ್ಟಾರೆ ಸಿಹಿ ನೀರಿನ ಜಾಗತಿಕ ಪೂರೈಕೆಯನ್ನು ವರ್ಧಿಸುತ್ತದೆ.
* [[ಕ್ಷಾಮಡಾಮರ]]ವಾಗಲಿ ಅಥವಾ [[ಪ್ರವಾಹ]]ವಾಗಲಿ ಸಂದರ್ಭ ಸನ್ನಿವೇಶಕ್ಕೆ ತಕ್ಕಂತೆ ಕೆಲವೊಮ್ಮೆ ಮೇಲಿಂದ ಮೇಲೆ ಒದ್ದುಕೊಂಡು ಬರುವುದುಂಟು.ಇದೇ ರೀತಿಯಲ್ಲಿ ಪರ್ವತ ಪ್ರದೇಶಗಳಲ್ಲಿ [[ಹಿಮಪಾತ]] ಮತ್ತು [[ಮೇಘ ಕರಗುವಿಕೆ]] ಸಂಭವಿಸುತ್ತಿರುತ್ತದೆ. ಅತ್ಯುಷ್ಣತೆ ನೀರಿನ ಗುಣ ಮಟ್ಟದ ಮೇಲೆ ಪ್ರಭಾವ ಬೀರುತ್ತದೆಯಾದರೂ, ಅದು ಹೇಗೆ ಎಂತು ಎಂಬ ಬಗ್ಗೆ ನಿಖರವಾಗಿ ತಿಳಿಯಲಾಗಿಲ್ಲ.
*ಸಸ್ಯಗಳು ಸಮೃದ್ಧವಾಗಿ ಬೆಳೆಯುವಷ್ಟರ ಮಟ್ಟಿಗೆ ನೀರು ಫಲವತ್ತಾಗುವುದರಿಂದ, [[ಜಲಚರಗಳು ಆಮ್ಲಜನಕವಿಲ್ಲದೇ ಸಾಯುವಂಥ ಸನ್ನಿವೇಶ]] ಉದ್ಭವವಾಗುವುದೂ ಸಾಧ್ಯತೆಗಳಲ್ಲಿ ಒಂದು. ನೀರಾವರಿ ಜಮೀನು,ತೋಟಗಾರಿಕೆಯ ಸಿಂಪರಣಾ ವ್ಯವಸ್ಥೆ ಜೊತೆಗೆ ಈಜುಗೊಳಗಳು ಕೂಡಾ ಬದಲಾದ ಹವಾಮಾನದಿಂದಾಗಿ ಹೆಚ್ಚು ನೀರನ್ನು ಬೇಡುತ್ತವೆ.
===ಜಲ ಕುಹರಗಳ ಬತ್ತುವಿಕೆ===
*ಒಂದೆಡೆ [[ಜನಸಂಖ್ಯಾ ಸ್ಫೋಟ]] ಇನ್ನೊಂದೆಡೆ ಅಧಿಕ ನೀರಿಗಾಗಿ ಪೈಪೋಟಿ-ಇವೆರಡರ ಮಧ್ಯೆ ಪ್ರಪಂಚದ ಪ್ರಧಾನ ಜಲ ಕುಹರಗಳು ಬತ್ತಿ ಹೋಗುತ್ತಿವೆ. ನೀರನ್ನು ಮಾನವನು ನೇರವಾಗಿ ಬಳಕೆ ಮಾಡುತ್ತಿರುವುದು ಮತ್ತು ಬೇಸಾಯಕ್ಕಾಗಿ ಅಂತರ್ಜಲವನ್ನು ದುಡಿಸಿಕೊಳ್ಳುತ್ತಿರುವುದು ಇದಕ್ಕೆ ಕಾರಣವಾಗಿದೆ. ಜಗತ್ತಿನಾದ್ಯಂತ ಸದ್ಯಕ್ಕೆ ಲಕ್ಷಾಂತರ ಪಂಪುಗಳು ಅಂತರ್ಜಲವನ್ನು ಎತ್ತುವ ಕಾಯಕದಲ್ಲಿ ತೊಡಗಿವೆ.
*ಚೀನಾ ಮತ್ತು ಭಾರತದಂಥ ದೇಶಗಳಲ್ಲಿ ತಡೆಯಲಸಾಧ್ಯವಾದ ವೇಗದಲ್ಲಿ ಅಂತರ್ಜಲವನ್ನು ತೆಗೆದು ನೀರಾವರಿ ಉದ್ದೇಶಕ್ಕೆಂದು ಪುರೈಸಲಾಗುತ್ತಿದೆ. ಮೆಕ್ಸಿಕೊ ನಗರ, ಬ್ಯಾಂಕಾಕ್, ಮನಿಲಾ, ಬೀಜಿಂಗ್, ಮಡ್ರಾಸ್ ಮತ್ತು ಶಾಂಘೈ-ಇವುಗಳೆಲ್ಲಾ 10 ರಿಂದ 50 ಮೀಟರ್ ಜಲ ಕುಹರ ಬತ್ತುವಿಕೆಯಿಂದ ಬಳಲುತ್ತಿರುವ ಪಟ್ಟಣಗಳು.
=== ಜಲ ಮಾಲಿನ್ಯ ಮತ್ತು ಜಲ ಸಂರಕ್ಷಣೆ ===
jalasmarakshane
{{Main|ಜಲ ಮಾಲಿನ್ಯ}}
*ಇಂದಿನ ಜಗತ್ತಿಗೆ ಭಾರೀ ತಳಮಳದ ಸಂಗತಿ ಎಂದರೆ [[ಜಲ ಮಾಲಿನ್ಯ]]. ಈ ಜಲ ಮಾಲಿನ್ಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅನೇಕ ರಾಷ್ಟ್ರಗಳ ಸರಕಾರಗಳು ಹೆಣಗಾಡುತ್ತಿವೆ. ಹಲವಾರು ಮಲಿನ ಪದಾರ್ಥಗಳು ನೀರಿನ ಪೂರೈಕೆ ಮಾಡುವಲ್ಲಿ ಬೆದರಿಕೆಯನ್ನೇ ಒಡ್ಡುತ್ತಿವೆ. ಮಲ ಮೂತ್ರಾದಿಯಾಗಿ ಊರಿನ ರೊಚ್ಚನ್ನು ಯಾವ ಸಂಸ್ಕರಣೆಗೂ ಒಳಪಡಿಸದೇ ನಿಸರ್ಗ ದತ್ತ ಸ್ವಚ್ಛ ನೀರಿಗೆ ಹರಿ ಬಿಡುವುದು ಇವುಗಳಲ್ಲೆಲ್ಲಾ ಅತ್ಯಂತ ಭಯಾನಕ.
*ಅತಿಯಾಗಿ ವ್ಯಾಪಿಸಿಕೊಂಡಿರುವ ಈ ಭೀಕರ ಸಮಸ್ಯೆ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಂಡುಬರುವುದು ಹೆಚ್ಚು.ಅಭಿವೃದ್ಧಿ ಹೊಂದದ ದೇಶಗಳಲ್ಲಂತೂ ಊರಿನ [[ಹೊಲಸ]]ನ್ನು ಈ ರೀತಿಯಾಗಿ ಬಿಡುಗಡೆ ಮಾಡುವುದು ಸರ್ವೇಸಾಮಾನ್ಯ; ಈ ಬಗೆಯಲ್ಲಿ ತ್ಯಾಜ್ಯ ಬಿಡುಗಡೆ ಮಾಡುವುದನ್ನು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಚೀನಾ,ಭಾರತ ಮತ್ತು ಇರಾನ್ಗಳೂ ರೂಢಿಸಿಕೊಂಡಿವೆ.
{{-}}
*ಊರಿನ ಹೊಲಸು, ಜಿಗುಟು ರಾಡಿ, ಕಸ ಮತ್ತು ವಿಷಯುಕ್ತ ಪದಾರ್ಥಗಳನ್ನೂ ನೀರಿಗೆ ಎಸೆಯಲಾಗುತ್ತದೆ. ಊರಿನ ಹೊಲಸನ್ನು ಸಂಸ್ಕರಿಸಿದರೂ ಸಮಸ್ಯೆ ಮತ್ತೆ ಉದ್ಭವಿಸುತ್ತದೆ. ಸಂಸ್ಕರಣೆಯ ನಂತರ ದೊರೆಯುವ ಹೊಲಸು ಗಟ್ಟಿಗಳು ಅಥವಾ ಪುಡಿ ಪದಾರ್ಥವನ್ನು ಗುಂಡಿಗಳಲ್ಲಿ ತುಂಬಬೇಕು, ಇಲ್ಲವೇ ನೆಲದ ಮೇಲೆ ಹರಡ ಬೇಕು ಅಥವಾ ಸಮುದ್ರಕ್ಕೆ ಎಸೆಯಬೇಕು.<ref>ಸಾಗರದಲ್ಲಿ ಜಿಡ್ಡುಗಟ್ಟಿದ ಹೊಲಸು ಹಾಕುವುದನ್ನು ಅಮೆರಿಕ ಸಂಯುಕ್ತ ಸಂಸ್ಥಾನದ [[ಮೆರೈನ್ ಪ್ರೊಟೆಕ್ಷನ್ ರಿಸರ್ಚ್, ಅಂಡ್ ಸ್ಯಾಂಕ್ಚುವರೀಸ್ ಆಕ್ಟ್ ನಿಷೇಧಿಸಿದೆ]] (MPRSA).
</ref>
*ಊರಿನ ಹೊಲಸಷ್ಟೇ ಅಲ್ಲದೇ [[ಜಮೀನುಗಳಿಂದ]] ಕೊಚ್ಚಿ ಹರಿದು ಬರುವ ಮಾಲಿನ್ಯ,[[ಚಂಡಮಾರುತ]]ದಿಂದ ಅಪ್ಪಳಿಸುವ ಭಾರೀ ಮಳೆಯಿಂದ ಹರಿದು ಬರುವ ಮಲಿನ ಪದಾರ್ಥ, ಮತ್ತು ಸರಕಾರ ಹಾಗೂ ಕೈಗಾರಿಕೆಗಳಿಂದ [[ರಾಸಾಯನಿಕ ತ್ಯಾಜ್ಯ]]ದ ಸುರಿತ-ಇವೆಲ್ಲವೂ ಜಲ ಮೂಲಿನ್ಯಕ್ಕೆ ಕಾರಣವಾಗುವ ಪ್ರಮುಖ ಅಂಶಗಳು.
===ನೀರು ಮತ್ತು ಸಂಘರ್ಷ===
*2500-2350 BCಯಲ್ಲಿ [[ಸುಮೇರಿಯಾ]]ದ ರಾಜ್ಯಗಳಾದ [[ಲಗಾಷ್]] ಮತ್ತು [[ಉಮ್ಮಾ]] ರಾಜ್ಯಗಳ ನಡುವೆ ನಡೆದ ಅಂತಾರಾಜ್ಯ ಜಲ ಸಂಘರ್ಷವೇ ತಿಳಿಯಲಾಗಿರುವ ಏಕೈಕ ನಿದರ್ಶನ.<ref>ರಾಸ್ಲೆರ್, ಕರೆನ್ A. ಮತ್ತು W. R. ಥಾಪ್ಸನ್. "ಕಂಟೆಸ್ಟೆಡ್ ಟೆರ್ರಿಟರಿ, ಸ್ಟ್ರೇಟಜಿಕ್ ರೈವಲ್ರೀಸ್, ಮತ್ತು ಕಾನ್ಫ್ಲಿಕ್ಟ್ ಎಸ್ಕಲೇಷನ್." ಇಂಟರ್ನ್ಯಾಷನಲ್ ಸ್ಟಡೀಸ್ ಕ್ವಾರ್ಟರ್ಲಿ.
*[50] ^ ಇಪಿಎ. " 1. (2006): 145-168.</ref> ನೀರಿಗಾಗಿಯೇ ನಡೆದಿರಬಹುದಾದ ಕಾದಾಟದ ವಿವರಗಳ ಆಧಾರಗಳು ಅಂತಾರಾಷ್ಟ್ರೀಯ [[ಯುದ್ಧ]]ದಿಂದಾಗಿ ಅಲಭ್ಯವಾದರೂ ಇತಿಹಾಸದುದ್ದಕ್ಕೂ ನೀರಿನ ಮೂಲಕ್ಕಾಗಿ ಹೋರಾಟಗಳು ನಡೆದಿರುವುದು ದಿಟ. ಜಲ [[ಅಭಾವ]]ದಿಂದ ರಾಜಕೀಯ ಬಿಕ್ಕಟ್ಟು ತಲೆ ಎತ್ತುವಂಥ ಪರಿಸ್ಥಿತಿ ನಿರ್ಮಾಣವಾದರೆ ಅಂಥ ಸ್ಥಿತಿಯನ್ನು ನೀರಿನ ಬಿಕ್ಕಟ್ಟು ಎಂದು ಉಲ್ಲೇಖಿಸಲಾಗುತ್ತದೆ. ಅನೇಕ ವೇಳೆ ಈ ನೀರಿನ ಬಿಕ್ಕಟ್ಟು ಸ್ಥಳೀಯ ಮತ್ತು ಪ್ರಾದೇಶಿಕ ಮಟ್ಟದ ಸಂಘರ್ಷಗಳನ್ನು ಹುಟ್ಟಿ ಹಾಕುತ್ತದೆ.<ref>
*ವೋಲ್ಫ್, ಆರನ್ T. “ವಾಟರ್ ಮತ್ತು ಹ್ಯೂಮನ್ ಭದ್ರತೆ.” ಸಮಕಾಲೀನ ನೀರು ಸಂಶೋಧನೆ ಮತ್ತು ಶಿಕ್ಷಣ ಕುರಿತ ಪತ್ರಿಕೆ 118. (2001): 29</ref> ನೀರಿನ ಕೊರತೆ ಮತ್ತು ಲಭ್ಯವಿರುವ ಕೃಷಿಯೋಗ್ಯ ಜಮೀನಿನ ಮಧ್ಯೆ ಪರಸ್ಪರ ಸಂಬಂಧ ಕಲ್ಪಿಸಿ, ಶುದ್ಧಾಂಗ ಪರಿಮಾಣಾತ್ಮಕ ವಿಧಾನವನ್ನು ಅನುಸರಿಸಿರುವ ಥಾಮಸ್ ಹೋಮರ್-ಡಿಕ್ಸನ್, ಹಿಂಸಾತ್ಮಕ ಸಂಘರ್ಷಣೆ ಹೆಚ್ಚಾಗಲು ಈ ಸ್ಥಿತಿ ಹೇಗೆ ಇಂಬು ನೀಡುತ್ತದೆ ಎಂಬುದನ್ನು ನಿರೂಪಿಸಿದ್ದಾನೆ.<ref name="Homer-Dixon">ಹೊಮರ್-ಡಿಕ್ಸನ್,.
*"ಎನ್ವಯರ್ನ್ಮೆಂಟ್ ಸ್ಕೇರ್ಸಿಟಿ, ಮತ್ತು ವಯೊಲೆನ್ಸ್." ಪ್ರಿನ್ಸ್ಟನ್, ಎನ್ಜೆ: ಪ್ರಿನ್ಸ್ಟನ್ ಯುನಿವರ್ಸಿಟಿ ಪ್ರೆಸ್. (1999).</ref> ನೀರು ನೇರವಾಗಿ ಕಾರಣವಾಗಿರದಿದ್ದರೂ [[ರಾಜಕೀಯ]] ಬಿಕ್ಕಟ್ಟನ್ನು ಉಂಟು ಮಾಡುವ ಮತ್ತು ಸಂಘರ್ಷಣೆಯನ್ನು ಉಲ್ಬಣಿಸುವ ಶಕ್ತಿ ನೀರಿನ ಬಿಕ್ಕಟ್ಟಿಗಿದೆ. ಸಿಹಿ ನೀರಿನ ಗುಣ ಮಟ್ಟ ಹಾಗೂ ಪ್ರಮಾಣ ಕ್ರಮೇಣವಾಗಿ ಕಡಿಮೆ ಆದಂತೆಲ್ಲಾ ಅಲ್ಲಿನ ನಿವಾಸಿಗಳ ಆರೋಗ್ಯವನ್ನು ಹಾಳುಗೆಡವುತ್ತದೆ,[[ಆರ್ಥಿಕ ಅಭಿವೃದ್ಧಿ]]ಯನ್ನು ಕುಂಠಿತಗೊಳಿಸುತ್ತದೆ.
* ಸಂಘರ್ಷದ ಕೋಪೋದ್ರಿಕ್ತತೆಯನ್ನು ಕೆರಳಿಸಿ ಆ ಪ್ರದೇಶದ ಸ್ಥಿರತೆಯನ್ನು ಅಲುಗಾಡಿಸುತ್ತದೆ.<ref name="Postel">ಪೋಸ್ಟಲ್,. L. ಮತ್ತು A. T. ವೋಲ್ಫ್. “ಡಿಹೈಡ್ರೇಟಿಂಗ್ ಕಾನ್ಫ್ಲಿಕ್ಟ್.” ವಿದೇಶೀ ಕಾರ್ಯನೀತಿ ಆಫ್ರಿಕಾ XI[126] (2001): 60-67.</ref>
ದೇಶದ ಗಡಿ ಭಾಗದಲ್ಲಿರುವ [[ನದಿ]]ಯ ಕೆಳ ದಂಡೆ ಪ್ರದೇಶಗಳು ದುರ್ದೆಸೆಗೆ ತುತ್ತಾದಾಗ ನೀರಿನ ಹಾಹಾಕರ ಉಲ್ಭಣಿಸಿ ಆ ಪ್ರದೇಶಗಳಲ್ಲಿ ಬಿಕ್ಕಟ್ಟು, ಸಂಘರ್ಷ ತಲೆ ಎತ್ತುತ್ತವೆ.
*[[ಚೀನಾ]]ದ [[ಎಲ್ಲೋ ನದಿ]] ಅಥವಾ [[ಥಾಯ್ಲೆಂಡಿ]]ನ [[ಚವೋ ಫ್ರಯಾ ನದಿ]] ಅನೇಕ ವರ್ಷಗಳಿಂದ ಇಂಥ ಬಿಕ್ಕಟ್ಟಿಗೆ ಸಿಲುಕಿ ನರಳುತ್ತಿರುವುದೊಂದು ನಿದರ್ಶನ. ನೀರಾವರಿ ಸೌಕರ್ಯಕ್ಕಾಗಿ ನೀರಿನ ಮೇಲೆ ಭಾರೀ ಅವಲಂಬಿತವಾಗಿರುವ ಚೀನಾ,[[ಭಾರತ]],[[ಇರಾನ್]] ಮತ್ತು [[ಪಾಕಿಸ್ತಾನ]]ದಂಥ ಕೆಲವು ನಿರಾರ್ದ್ರ ದೇಶಗಳು ಜಲ-ಸಂಬಂಧೀ ಸಂಘರ್ಷದ ಗಂಡಾಂತರದಲ್ಲಿವೆ.<ref name="Postel" /> [[ನೀರನ್ನು ಖಾಸಗೀಕರಣ]] ಮಾಡಲು ಹೊರಟರೆ ಅದಕ್ಕೆ ಪ್ರತಿಯಾಗಿ ರಾಜಕೀಯ ಬಿಕ್ಕಟ್ಟು,ಪೌರರ ಪ್ರತಿಭಟನೆ ಮತ್ತು ಹಿಂಸಾಚಾರ ವ್ಯಕ್ತವಾಗಬಹುದು. ವರ್ಷ [[2000ದಲ್ಲಿ ನಡೆದ ಬೊಲೀವಿಯನ್ ಜಲ ಸಮರ]] ಇದಕ್ಕೊಂದು ಉದಾಹರಣೆ.
==ವಿಶ್ವಕ್ಕೆ ಜಲ ಪೂರೈಕೆ ಮತ್ತು ವಿತರಣೆ==
ಆಹಾರ ಮತ್ತು ನೀರು ಮಾನವನ ತಳ ಮಟ್ಟದ ಅವಶ್ಯಕತೆ. ವರ್ಷ 2002ರಿಂದ ಜಾಗತಿಕ ಮಟ್ಟದಲ್ಲಿ ಕಲೆಹಾಕಲಾಗಿರುವ ಅಂಕಿಅಂಶದ ಪ್ರಕಾರ ಪ್ರತಿ 10 ಮಂದಿಯಲ್ಲಿ:
* ಅಂದಾಜು 5 ಜನರು ನೀರಿನ ಸಂಪರ್ಕ ಪಡೆದಿದ್ದಾರೆ (ತಮ್ಮ ಮನೆಯಲ್ಲಿ,ಅಂಗಳದಲ್ಲಿ ಅಥವಾ ಹೊಲದಲ್ಲಿ)
* 3 ಮಂದಿ ಸಂರಕ್ಷಿಸಲ್ಪಟ್ಟ ಬಾವಿ ಅಥವಾ ಬೀದಿ ನಲ್ಲಿಯಲ್ಲಿ ದೊರೆಯುವಂಥ ಇತರ ಸುಧಾರಿತ ಜಲ ಮೂಲವನ್ನು ಆಶ್ರಯಿಸಿದ್ದಾರೆ;
* 2 ಜನಕ್ಕೆ ಇಂಥ ಯಾವುದೇ ಸೇವೆ ಇಲ್ಲದೇ ವಂಚಿತರಾಗಿದ್ದಾರೆ;
* 10 ರಲ್ಲಿ 4 ಮಂದಿ ಸುಧಾರಿತ ಶೌಚಾಲಯ ಸೌಲಭ್ಯವಿಲ್ಲದೇ ಬದುಕುತ್ತಿದ್ದಾರೆ.<ref name="WBCSD Water Facts & Trends" />
ವರ್ಷ 2002ರ [[ಭೂಶೃಂಗ]]ದಲ್ಲಿ ಪಾಲ್ಗೊಂಡ ಸರಕಾರಗಳು ಈ ಕೆಳಗಿನ ಕ್ರಿಯಾ ಯೋಜನೆಗೆ ಅಂಗೀಕಾರ ನೀಡಿದವು:
* ವರ್ಷ 2015ರ ವೇಳೆಗೆ ಕುಡಿಯುವ ನೀರು ಸಿಕ್ಕದೇ ಪರದಾಡುತ್ತಿರುವ ಮಂದಿಗೆ ಸಮಪಾಲು ನೀಡುವುದು. ವಿಶ್ವ ಜಲ ಪೂರೈಕೆ ಮತ್ತು ಶುಚಿತ್ವದ ಮೌಲ್ಯ ಮಾಪನ ವರದಿ-2000 ([http:// www.who.int /water_sanitation _health/monitoring / globalassess/en/ ಗ್ಲೋಬಲ್ ವಾಟರ್ ಸಪ್ಲೈ ಅಂಡ್ ಸ್ಯಾನಿಟೇಷನ್ ರಿಪೋರ್ಟ್ ೨೦೦೦ = GWSSAR]) ಬಳಕೆದಾರನ ಮನೆ ಹಾಗೂ ಜಲ ಮೂಲದ ನಡುವಿನ ಅಂತರ ಒಂದು ಕಿಲೋಮೀಟರ್ ಒಳಗಿದ್ದು ಪ್ರತಿ ವ್ಯಕ್ತಿಗೆ ನಿತ್ಯವೂ ಕನಿಷ್ಠ 20 ಲೀಟರ್ ನೀರು "ಸಿಕ್ಕುವಂತಿರುವುದು ನ್ಯಾಯೋಚಿತ" ಎಂದು ವರದಿಯಲ್ಲಿ ವಿವರಿಸಲಾಗಿದೆ.
* ಶೌಚಾಲಯದ ಮೂಲ ಸೌಕರ್ಯವಿಲ್ಲದ ಜನಕ್ಕೆ ಅದನ್ನು ಒದಗಿಸುವುದು. "ಶೌಚಾಲಯದ ಮೂಲ ಸೌಕರ್ಯ" ಖಾಸಗಿಯದೇ ಇರಬಹುದು ಅಥವಾ ಪಾಲುದಾರಿಕೆಯದ್ದೇ ಆಗಿರಬಹುದು, ಆದರೆ ಅದು ಮಾನವನ ಶರೀರದಿಂದ ಹೊರಬಂದಿರುವ ತ್ಯಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ.
ಸಂಪನ್ಮೂಲದ ಕೊರತೆ ಹಾಗೂ ಕ್ಷಿಪ್ರಗತಿಯಲ್ಲಿ ಏರುತ್ತಿರುವ ಜನಸಂಖ್ಯೆ ಸಮಸ್ಯೆಯನ್ನು ಎದುರಿಸುತ್ತಿರುವ [[ಮಧ್ಯ ಪ್ರಾಚ್ಯ]],[[ಆಫ್ರಿಕ]], ಮತ್ತು [[ಏಷ್ಯ]]ದಂಥ ಕೆಲ ಭಾಗದ ಬಡದೇಶಗಳು 2025ರ ವೇಳೆಗೆ ನೀರಿನ ಕೊರತೆಯಿಂದ ನರಳುವ ಚಿತ್ರ ಕಣ್ಣಿಗೆ ಕಟ್ಟುತ್ತಿದೆ.
*ಬೃಹತ್ ನಗರ ಮತ್ತು ನಗರ ಎಂದು ಗುರುತಿಸಿಕೊಳ್ಳುವುದಕ್ಕೆ ಅತಿ ಸಮೀಪಕ್ಕೆ ಬಂದ ಪ್ರದೇಶಗಳಿಗಾಗಿ 2025ರ ವೇಳೆಗೆ ಸುರಕ್ಷಿತ ನೀರು ಒದಗಿಸುವುದು ಹಾಗೂ ಸಾಕಷ್ಟು ಶೌಚಾಲಯಗಳ ನವೀನ ಮೂಲ ಸೌಕರ್ಯ ಕಲ್ಪಿಸುವುದು ಅಗತ್ಯವೆನಿಸಿದೆ. ಮಾನವನು ಬಳಸುತ್ತಿರುವ ನೀರಿನ ಸಿಂಹ ಪಾಲು ಪ್ರಸ್ತುತ ಕೃಷಿ ಕ್ಷೇತ್ರದ್ದಾಗಿದ್ದು,ಇದು ಇತರ ಉದ್ದೇಶದ ಬಳಕೆದಾರರೊಂದಿಗೆ ಏರುಗತಿಯಲ್ಲಿರುವ ಸಂಘರ್ಷವನ್ನು ಸೂಚಿಸುತ್ತದೆ.
*ಅಭಿವೃದ್ಧಿ ಹೊಂದಿರುವ ದೇಶಗಳಾದ [[ಉತ್ತರ ಅಮೆರಿಕ]], [[ಯುರೋಪ್]] ಮತ್ತು [[ರಷ್ಯ]] 2025ರ ಹೊತ್ತಿಗೆ ತೀರ ಗಂಭೀರ ಸ್ವರೂಪದ ಜಲ ಕೊರತೆಯನ್ನು ಎದುರಿಸುವಂಥ ಸ್ಥಿತಿ ನಿರ್ಮಾಣವಾಗುವುದಿಲ್ಲ. ಇದಕ್ಕೆ ಕಾರಣ ಅವು ಸಂಪದ್ಭರಿತ ರಾಷ್ಟ್ರಗಳೆಂದಲ್ಲ,ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಜನಸಂಖ್ಯೆಯನ್ನು ಕಾಪಾಡಿಕೊಳ್ಳುತ್ತಿರುವುದೇ ಇಲ್ಲಿ ಅಡಗಿರುವ ಪ್ರಮುಖ ಅಂಶ.
*ನೀರಿನ ಪೂರೈಕೆಗೆ ಅನುಗುಣವಾಗಿಲ್ಲದ ಜನ ದಟ್ಟಣೆ ಮತ್ತು [[ಜಲಾಭಾವದ]] ಕಾರಣದಿಂದಾಗಿ ಉತ್ತರ ಆಫ್ರಿಕ, ಮಧ್ಯ ಪ್ರಾಚ್ಯ,[[ದಕ್ಷಿಣ ಆಪ್ರಿಕ]] ಮತ್ತು ಉತ್ತರ ಚೀನಾ ತೀವ್ರ ಸ್ವರೂಪದ ಜಲ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. [[ದಕ್ಷಿಣ ಅಮೆರಿಕ]],ಆಫ್ರಿಕದ [[ಉಪ-ಸಹರಾ]] ಪ್ರದೇಶ,ದಕ್ಷಿಣ ಚೀನಾ ಮತ್ತು ಭಾರತ 2025ರ ಹೊತ್ತಿಗೆ ಭಾರೀ ಪ್ರಮಾಣದಲ್ಲಿ ನೀರಿನ ಕೊರತೆಯನ್ನು ಎದುರಿಸಬೇಕಾದ ಸನ್ನಿವೇಶ ಉದ್ಭವಿಸುತ್ತದೆ.
*[[ಅತ್ಯಧಿಕ ಪ್ರಮಾಣದ ಜನಸಂಖ್ಯೆ]] ಮತ್ತು ಸುರಕ್ಷಿತ ಕುಡಿಯುವ ನೀರನ್ನು ಪೂರೈಸಲು ಇರುವ ಆರ್ಥಿಕ ಅಡಚಣೆ ಯಿಂದಾಗಿ ಮೇಲೆ ಹೇಳಿದ ಕೊನೆಯ ಎರಡು ದೇಶಗಳು ತತ್ತರಿಸಲಿವೆ. 1990ರಿಂದ 1.6 ಶತಕೋಟಿ ಜನ ಸುರಕ್ಷಿತ ನೀರಿನ ಸಂಪರ್ಕ ಪಡೆದಿದ್ದಾರೆ. [http://mdgs.un.org/unsd/mdg/Resources/Static/Products/Progress2008/MDG_Report_2008_En.pdf#page=44 ] {{Webarchive|url=https://web.archive.org/web/20100827045721/http://mdgs.un.org/unsd/mdg/Resources/Static/Products/Progress2008/MDG_Report_2008_En.pdf#page=44 |date=2010-08-27 }} ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಜನತೆಯ ನೀರಿನ ಸಂಪರ್ಕ ಸಾಧನೆ ಪ್ರಗತಿ ಪಥದಲ್ಲಿದೆ.1970<ref>ಬ್ಜೋರ್ನ್ ಲಾಂಬರ್ಗ್ (2001), ''ದಿ ಸ್ಕೆಪ್ಟಿಕಲ್ ಎನ್ವಯರ್ನ್ಮೆಂಟಲಿಸ್ಟ್'' (ಕ್ಯಾಂಬ್ರಿಡ್ಸ್ ಯುನಿವರ್ಸಿಟಿ ಪ್ರೆಸ್), ISBN 0521010683, [http://www.lomborg.com/dyn/files/basic_items/69-file/skeptenvironChap1.pdf p. 22] {{Webarchive|url=https://web.archive.org/web/20130725173040/http://www.lomborg.com/dyn/files/basic_items/69-file/skeptenvironChap1.pdf |date=2013-07-25 }}</ref> ರಲ್ಲಿ 30% ಇದ್ದದ್ದು 1990ರಲ್ಲಿ 71%ಕ್ಕೆ ಏರಿತು,2000ದಲ್ಲಿ 79%ಇದ್ದದ್ದು 2004ಕ್ಕೆ 84%ಗೆ ತಲಪಿತು. ಇದೇ ರೀತಿಯ ಬೆಳವಣಿಗೆ ಮುಂದುವರಿಯುವ ಸಾಧ್ಯತೆ ಗೋಚರಿಸುತ್ತಿದೆ.<ref>{{Cite web |url=http://mdgs.un.org/unsd/mdg/Resources/Static/Products/Progress2008/MDG_Report_2008_En.pdf#page=44 |title=ಆರ್ಕೈವ್ ನಕಲು |access-date=2009-11-17 |archive-date=2010-08-27 |archive-url=https://web.archive.org/web/20100827045721/http://mdgs.un.org/unsd/mdg/Resources/Static/Products/Progress2008/MDG_Report_2008_En.pdf#page=44 |url-status=dead }}</ref>
==ಆರ್ಥಿಕ ಪರಿಗಣನೆಗಳು==
*ನೀರು ಪೂರೈಕೆ ಮತ್ತು ಊರಿನ ಹೊಲಸನ್ನು ಹೊರದಬ್ಬುವ ವ್ಯವಸ್ಥೆಗಾಗಿ ಕೊಳವೆಗಳ ಜಾಲ ನಿರ್ಮಾಣ, ನೀರೆತ್ತುವ ಸ್ಥಾವರಗಳ ಸ್ಥಾಪನೆ ಮತ್ತು ಜಲ ಸಂಸ್ಕರಣೆಯಂಥ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಾಗುತ್ತದೆ,ಇದಕ್ಕೆ ಭಾರೀ [[ಬಂಡವಾಳ]]ದ ಅಗತ್ಯ ಬೀಳುತ್ತದೆ. ನೀರಿನ ಗುಣಮಟ್ಟ ಕಾಪಾಡಲು,ಸೋರಿಕೆಯನ್ನು ತಪ್ಪಿಸಲು ಮತ್ತು ಪೂರೈಕೆಯನ್ನು ಖಾತರಿಪಡಿಸಲು, ಮುಪ್ಪಡರಿ ಸವಕಲಾಗಿರುವ ಜಲ ಸಂಪರ್ಕ ಸಾಧನಗಳ ನವೀಕರಣಕ್ಕಾಗಿ ಸದಸ್ಯ ರಾಷ್ಟ್ರಗಳು ವಾರ್ಷಿಕವಾಗಿ 200 ಶತಕೋಟಿ ಡಾಲರ್ ಅನ್ನು ಹೂಡಿಕೆ ಮಾಡಬೇಕೆಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ(=[[ಆರ್ಗನೈಸೇಷನ್ ಫಾರ್ ಇಕಾನಾಮಿಕ್ ಕೋಪರೇಷನ್ ಅಂಡ್ ಡೆವಲಪ್ಮೆಂಟ್ ]]= OECD)ಅಂದಾಜು ಮಾಡಿದೆ.<ref>{{cite web |url=http://www.water-academy.org/article.php3?id_article=27 |title=The cost of meeting the Johannesburg targets for drinking water |publisher=Water-academy.org |date=2004-06-22 |accessdate=2009-03-12 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
*ಅಭಿವೃದ್ಧಿಶೀಲ ದೇಶಗಳ ಈ ಅಗತ್ಯವನ್ನು ಅಂತಾರಾಷ್ಟ್ರೀಯ ಮಟ್ಟದ ಗಮನವನ್ನು ಸೆಳೆದಿದೆ. ವರ್ಷ 2015ರ ವೇಳೆಗೆ ಕೈಗೆಟುಕುವಂತೆ ಸುರಕ್ಷಿತ ನೀರು ಒದಗಿಸುವುದು ಮತ್ತು ಹೊಲಸು ಹೊರ ದಬ್ಬಲು ಬೇಕಿರುವ ಮೂಲಸೌಕರ್ಯ ಕಲ್ಪಿಸುವುದು ಈ [[ಸಹಸ್ರಮಾನದ ಅಭಿವೃದ್ಧಿಯ ಗುರಿ]]ಯಾಗಿದೆ.ಈಗ ವಾರ್ಷಿಕವಾಗಿ ಹೂಡಲಾಗುತ್ತಿರುವ 10 ರಿಂದ 15 USD ಶತಕೋಟಿ ದುಪ್ಪಟ್ಟಾಗಬೇಕಿರುವ ಅಗತ್ಯವನ್ನೂ ಅದು ಹೇಳಿದೆ. ಚಾಲ್ತಿಯಲ್ಲಿರುವ ಮೂಲಸೌಕರ್ಯಕ್ಕೆ ಬೇಕಿರುವ ನಿರ್ವಹಣಾ ಬಂಡವಾಳವನ್ನು ಇದು ಒಳಗೊಂಡಿಲ್ಲ.<ref>{{Cite web |url=http://www.financingwaterforall.org/fileadmin/wwc/Library/Publications_and_reports/CamdessusSummary.pdf |title=ಫಿನಾನ್ಸಿಂಗ್ ವಾಟರ್ ಫಾರ್ ಅಲ್ |access-date=2009-11-17 |archive-date=2009-03-19 |archive-url=https://web.archive.org/web/20090319213609/http://www.financingwaterforall.org/fileadmin/wwc/Library/Publications_and_reports/CamdessusSummary.pdf |url-status=dead }}</ref>
*ನೀರು ಪೂರೈಕೆ ಮತ್ತು ಚರಂಡಿಯಂಥ ಮೂಲ ಸೌಕರ್ಯಗಳು ಒಮ್ಮೆ ಸ್ಥಾಪಿತವಾದರೆ ಅದನ್ನು ನಿಭಾಯಿಸಲು ಬೇಕಾದ ಸಿಬ್ಬಂದಿ,ವಿದ್ಯುತ್ ಶಕ್ತಿ,ರಾಸಾಯನಿಕ ಪದಾರ್ಥ ಮತ್ತು ನಿರ್ವಹಣೆಯಂಥ ಮೊದಲಾದ ವೆಚ್ಚಗಳನ್ನು ನಿರಂತರ ಭರಿಸಬೇಕಾಗುತ್ತದೆ. ಇದಕ್ಕಾಗಿ ಹೂಡಲಾದ ಬಂಡವಾಳ ಮತ್ತು ಕಾರ್ಯಾಚರಣೆಗಾಗಿ ಮಾಡಲಾಗುವ ವೆಚ್ಚವನ್ನು ಬಳಕೆದಾರನು ಶುಲ್ಕದ ರೂಪದಲ್ಲಿಯೋ, ಸಾರ್ವಜನಿಕ ನಿಧಿಯಿಂದಲೋ ಅಥವಾ ಈ ಎರಡರ ಸಮ್ಮಿಶ್ರಣದಿಂದಲೋ ಭರಿಸಬೇಕಾಗುತ್ತದೆ. ಇಲ್ಲಿ ಎದುರಾಗುತ್ತದೆ ನೀರಿನ ನಿರ್ವಹಣೆಯ ಆರ್ಥಿಕ ಸಮಸ್ಯೆ.
*ಸಾರ್ವಜನಿಕ ಮತ್ತು ವಿಶಾಲ ಆರ್ಥಿಕ ನೀತಿ-ಇವುಗಳಿಗೆ ಅಡ್ಡ ಬರುವ ಜಲ ನಿರ್ವಹಣೆಯ ಉಸ್ತುವಾರಿಕೆಯ ನಿಭಾವಣೆ ತೀವ್ರ ಜಟಿಲವಾಗುತ್ತದೆ. ನೀರಿನ ಲಭ್ಯತೆ ಮತ್ತು ಉಪಯೋಗದಂಥ ಮೂಲಭೂತ ಮಾಹಿತಿಯ ಮೇಲಷ್ಟೇ ಕೇಂದ್ರೀಕರಿಸಲಾಗಿರುವುದರಿಂದ ನೀತಿ ನಿಯಮಾವಳಿಯ ಪ್ರಶ್ನೆ ಈ ಲೇಖನದ ವ್ಯಾಪ್ತಿಯ ಹೊರಗೆ ಉಳಿಯುತ್ತದೆ. ವಾಣಿಜ್ಯ ಮತ್ತು ವ್ಯವಹಾರದ ಮೇಲೆ ಅವಕಾಶ ಮತ್ತು ಆಪತ್ತುಗಳೆಂಬ ಎರಡು ಅಂಶಗಳಿಂದಲೂ ನೀರು ಎಷ್ಟರ ಮಟ್ಟಿಗೆ ಪರಿಣಾಮ ಬೀರಬಲ್ಲದು ಎಂಬುದನ್ನು ಸಮಗ್ರವಾಗಿ ಅರಿಯಲು ಎಲ್ಲ ಸಂಗತಿಗಳ ತಿಳಿವೂ ಅತ್ಯವಶ್ಯ.
===ವಾಣಿಜ್ಯೋದ್ಯಮದ ಪ್ರತಿಕ್ರಿಯೆ===
ಮುಂಬರುವ ಘಟನಾವಳಿಗಳ [http://www.wbcsd.org/includes/getTarget.asp?type=d&id=MTk5Nzc ದೃಶ್ಯವನ್ನು ಕಟ್ಟಿಕೊಡುವ] {{Webarchive|url=https://web.archive.org/web/20120111130925/http://www.wbcsd.org/includes/getTarget.asp?type=d&id=MTk5Nzc |date=2012-01-11 }} ಪ್ರಕ್ರಿಯೆಯಲ್ಲಿ [[ದಿ ವರ್ಲ್ಡ್ ಬ್ಯುಸಿನೆಸ್ ಕೌನ್ಸಿಲ್ ಫಾರ್ ಸಸ್ಟೇನಬಲ್ ಡೆವಲಪ್ಮೆಂಟ್]] ಸಂಸ್ಥೆ ತನ್ನ [http://www.wbcsd.org/includes/getTarget.asp?type=d&id=MTk5Nzc H2Oಸಿನಾರಿಯೋಸ್] {{Webarchive|url=https://web.archive.org/web/20120111130925/http://www.wbcsd.org/includes/getTarget.asp?type=d&id=MTk5Nzc |date=2012-01-11 }} ಎಂಬ ಯೋಜನೆಯಲ್ಲಿ ತೊಡಗಿದೆ. ಅದರಲ್ಲಿ ಅಡಕವಾಗಿರುವ ಅಂಶಗಳು ಹೀಗಿವೆ:
* ನೀರಿನ ಹರಿವಿಗೆ ಸಂಬಂಧ ಪಟ್ಟ ಮುಖ್ಯಾಂಶಗಳ ವ್ಯಾವಹಾರಿಕ ಜ್ಞಾನಾಭಿವೃ ದ್ಧಿ ಮತ್ತು ಸ್ಪಷ್ಟೀಕರಣ.
* ನೀರಿನ ನಿರ್ವಹಣೆ ಕುರಿತಂತೆ ವಾಣಿಜ್ಯ ಮತ್ತು ವಾಣಿಜ್ಯೇತರರ ನಡುವೆ ಪರಸ್ಪರ ತಿಳುವಳಿಕೆಯ ವರ್ಧನೆ.
* ತಡೆದುಕೊಳ್ಳಬಹುದಾದ ನೀರಿನ ನಿರ್ವಹಣೆಯ ಅಂಗವಾಗಿ ಪರಿಣಾಮಕಾರಿಯಾಗಿ ಕ್ರಿಯಾತ್ಮಕ ಬೆಂಬಲ ನೀಡುವುದು.
ಅದು ಇವುಗಳನ್ನು ಒಳಗೊಂಡಿದೆ:
* ಬಾಯಾರಿದ ಸಮಾಜದಲ್ಲಿ ವ್ಯವಹಾರ ಏಳಿಗೆಯಾಗದು.
* ಯಾರೂ ಜಲ ವ್ಯವಹಾರದಲ್ಲಿ ತೊಡಗಬಾರದು, ತೊಡಗಿದರೆ [[ನೀರಿನ ಅಭಾವ]] ಕಟ್ಟಿಟ್ಟ ಬುತ್ತಿ.
* ವ್ಯವಹಾರ ಎಂಬುದೊಂದು ಪರಿಹಾರದ ಅಂಶ, ಅದನ್ನು ಮುನ್ನಡೆಸುವುದರಲ್ಲಿ ಅದರ ಶಕ್ತಿ ಅಡಗಿದೆ.
* ನೀರಿನ ಸಂಗತಿ ಮತ್ತು ಸಂಕೀರ್ಣತೆ ವೆಚ್ಚವನ್ನು ಹೆಚ್ಚಿಸುತ್ತದೆ.
==ಚಿತ್ರಗಳು==
<gallery>
File:Earth's_water_distribution.png|350px|ಭೂಮಿ ಮೇಲಿನ ನೀರಿರುವ ಸ್ಥಳಗಳ ಬಗ್ಗೆ ರೇಖಾಚಿತ್ರ
File:Carlb-newfoundland-iceberg-2002.jpg|150px|ನ್ಯೂಫೌಂಡ್ಲ್ಯಾಂಡ್ನಿಂದ ನೋಡಬಹುದಾದ ನಿರ್ಗಲ್ಲ ಬಂಡೆ
File:Ontario farm.jpg|ಒಂಟಾರಿಯೋದ ತೋಟ
File:Drinking water.jpg|ಕುಡಿಯುವ ನೀರು
File:Poland Solina dam.jpg|ಪೋಲ್ಯಾಂಡ್ನ ವಿದ್ಯುತ್ ಸ್ಥಾವರ
File:Parinacota.jpg|ಉತ್ತರ ಚಿಲಿಯಲ್ಲಿ ಚುಂಗಾರಾ ಸರೋವರ ಮತ್ತು ಪರಿನಕೋಟಾ ವಾಲ್ಕೆನೊ
File:Shipot.jpg|ಶಿಪಾಟ್, ಉಕ್ರೇನ್ ಗ್ರಾಮಗಳಲ್ಲಿ ನೀರಿನ ಸಾಮಾನ್ಯ ಮೂಲಗಳು
File:Water pollution.jpg|ಮಲಿನಗೊಂಡ ನೀರು
</gallery>
==ಇದನ್ನೂ ನೋಡಿರಿ==
* [[ಪರಿಸರ ನೈರ್ಮಲ್ಯ]]
* [[ನೀರಾವರಿ ಕೊರತೆ]]
* [[ಬೇಸಾಯಕ್ಕೆ ಅಗತ್ಯವಿರುವ ಗರಿಷ್ಠ ನೀರಿನ ಪ್ರಮಾಣ]]
* [[ನೀರಿನ ಗರಿಷ್ಠ ಸ್ಥಿತಿ]]
* [[ಶೇರ್ಡ್ ವಿಷನ್ ಪ್ಲ್ಯಾನಿಂಗ್]]
* [[ಕೊಳಾಯಿ ನೀರು]]
* [[ಶುದ್ಧ ನೀರು]]
* [[ನೀರಿನ ಆವರ್ತನ]]
* [[ಭೂಮಿ ಮೇಲೆ ನೀರಿನ ಹಂಚಿಕೆ]]
* [[ನೀರು ಕಾನೂನು]]
{{Orphan|date=Aug 2017}}
== ಹೆಚ್ಚಿನ ಓದಿಗಾಗಿ ==
* [[ಪೀಯರ್ಸ್, ಫ್ರೆಡ್]] ''ವೆನ್ ದಿ ರಿವರ್ಸ್ ರನ್ ಡ್ರೈ: ವಾಟರ್—ದಿ ಡಿಫೈನಿಂಗ್ ಕ್ರೈಸಿಸ್ ಆಫ್ ದಿ ಟ್ವೆಂಟಿ-ಫರ್ಸ್ಟ್ ಸೆಂಚುರಿ'' ಬೀಕಾನ್ ಪ್ರೆಸ್, 2006, ISBN 0807085723 ISBN 978-0807085721
== ಟಿಪ್ಪಣಿಗಳು ==
{{reflist|2}}
==ಆಕರಗಳು==
{{refbegin|2}}
{{External links|date=October 2009}}
* [http://www.unesco.org/water/wwap/wwdr UN ವಿಶ್ವ ಜಲ ಅಭಿವೃದ್ಧಿ ವರದಿ]
* [http://water.usgs.gov/ ಅಮೆರಿಕ ಸಂಯುಕ್ತ ಸಂಸ್ಥಾನದ ನೀರಿನ ಮೂಲಗಳು]
* [http://www.iwra.siu.edu/ ಅಂತರರಾಷ್ಟ್ರೀಯ ಜಲ ಸಂಪನ್ಮೂಲಗಳ ಸಂಸ್ಥೆ] {{Webarchive|url=https://web.archive.org/web/20061211100012/http://www.iwra.siu.edu/ |date=2006-12-11 }}
* [http://www.cwra.org/ ಕೆನಡಾ ಜಲ ಸಂಪನ್ಮೂಲ ಸಂಸ್ಥೆ]
* [http://www.awra.org/ ಅಮೆರಿಕಾ ಜಲ ಸಂಪನ್ಮೂಲ ಸಂಸ್ಥೆ] {{Webarchive|url=https://web.archive.org/web/20180324205603/http://awra.org/ |date=2018-03-24 }}
* [http://www.water-resources.us/ ಜಲ ಸಂಪನ್ಮೂಲ ಇನ್ಸ್ಟಿಟ್ಯೂಟ್- USACE] {{Webarchive|url=https://web.archive.org/web/20151118214314/http://water-resources.us/ |date=2015-11-18 }}
* [http://ag.arizona.edu/AZWATER/ ಜಲ ಸಂಪನ್ಮೂಲ ಸಂಶೋಧನೆ ಕೇಂದ್ರ] {{Webarchive|url=https://web.archive.org/web/20090224011838/http://ag.arizona.edu/AZWATER/ |date=2009-02-24 }}
* [http://www.environment-agency.gov.uk/yourenv/639312/641094/642206/642375/642736/?lang=_e "ತ್ರೆಟ್ಸ್ ಟು ವಾಟರ್ ರಿಸೋರ್ಸಸ್"] {{Webarchive|url=https://web.archive.org/web/20090224122736/http://www.environment-agency.gov.uk/yourenv/639312/641094/642206/642375/642736/?lang=_e |date=2009-02-24 }} - ''ಎನ್ವಯರ್ನ್ಮೆಂಟ್ ಏಜೆನ್ಸಿ'' ದಿಂದ
* [http://www.geology.ucdavis.edu/~cowen/~GEL115/115CH17oldirrigation.html ಏನ್ಶಿಯಂಟ್ ಇರಿಗೇಷನ್] {{Webarchive|url=https://web.archive.org/web/20080502213946/http://www.geology.ucdavis.edu/~cowen/~GEL115/115CH17oldirrigation.html |date=2008-05-02 }} -''ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಭೂವಿಜ್ಞಾನ ವಿಭಾಗ'' ದಿಂದ
* [http://www.geology.ucdavis.edu/~cowen/~GEL115/115CH18miningwater.html ಮೈನಿಂಗ್ ವಾಟರ್] {{Webarchive|url=https://web.archive.org/web/20070502013122/http://www.geology.ucdavis.edu/~cowen/~GEL115/115CH18miningwater.html |date=2007-05-02 }} ''ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಭೂವಿಜ್ಞಾನ ವಿಭಾಗ'' ದಿಂದ
* [http://www.worldwater.org/data.html ಆಯ್ದ ವಿಶ್ವ ಜಲ ವಿವರ]
* [http://www.uleth.ca/vft/Oldman_River/WaterUses.html ನೀರಿನ ಬಳಕೆ...] {{Webarchive|url=https://web.archive.org/web/20090218134452/http://uleth.ca/vft/Oldman_River/WaterUses.html |date=2009-02-18 }}
* [http://www.galileo.org/schools/crowther/science/blueplanet/future.html ಶುದ್ಧ ನೀರಿನ ಭವಿಷ್ಯದ ಮೂಲಗಳು]
* [http://www.iwmi.cgiar.org/pubs/WWVisn/WWSDHtml.htm ವಿಶ್ವ ನೀರು ಪೂರೈಕೆ ಮತ್ತು ಬೇಡಿಕೆ: 1995 ರಿಂದ 2025] {{Webarchive|url=https://web.archive.org/web/20070715233447/http://www.iwmi.cgiar.org/pubs/WWVisn/WWSDHtml.htm |date=2007-07-15 }} [[ಇಂಟರ್ನ್ಯಾಷನಲ್ ವಾಟರ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್]]
* {{PDFlink|[http://www.sandia.gov/water/docs/CSIS-SNL_OGWF_9-28-05.PDF Addressing Our Global Water Future]|3.71 MB}} [[ಸೆಂಟರ್ ಫಾರ್ ಸ್ಟ್ರೇಟಜಿಕ್ ಮತ್ತು ಇಂಟರ್ನ್ಯಾಷನಲ್ ಸ್ಟಡೀಸ್]] (CSIS)/[[ಸಾಂಡಿಯಾ ನ್ಯಾಷನಲ್ ಲ್ಯಾಬೊರೇಟರೀಸ್]]
* [http://www.corporateknights.ca/content/page.asp?name=water_innovation ಪೊರಸ್ ಸಿಟೀಸ್] {{Webarchive|url=https://web.archive.org/web/20080507055652/http://www.corporateknights.ca/content/page.asp?name=water_innovation |date=2008-05-07 }}, ನ್ಯೂ ಡೈರೆಕ್ಷನ್ಸ್ ಇನ್ ಅರ್ಬನ್ ವಾಟರ್ ಯೂಸೇಜ್.
*http://www.techstart.org/docs/ogpc_payment.pdf {{Webarchive|url=https://web.archive.org/web/20090319213609/http://www.techstart.org/docs/ogpc_payment.pdf |date=2009-03-19 }}
*[http://www.sfu.ca/cstudies/science/water.htm ನೀರು ಮತ್ತು ಭೂಮಿಯಲ್ಲಿನ ಜೀವರಾಶಿಯ ಭವಿಷ್ಯ] {{Webarchive|url=https://web.archive.org/web/20080922140254/http://www.sfu.ca/cstudies/science/water.htm |date=2008-09-22 }}
*[http://www.sfu.ca/cstudies/science/waterandcities.htm ವಾಟರ್ ಅಂಡ್ ಸಿಟೀಸ್: ಆಕ್ಟಿಂಗ್ ಆನ್ ದಿ ವಿಷನ್] {{Webarchive|url=https://web.archive.org/web/20081226053022/http://www.sfu.ca/cstudies/science/waterandcities.htm |date=2008-12-26 }}
* [http://www.fao.org/nr/water FAO ವಾಟರ್ ಪೋರ್ಟಲ್] ಫುಡ್ ಅಂಡ್ ಎಗ್ರಿಕಲ್ಚರ್ ಆರ್ಗನೈಸೇಷನ್ ಆಫ್ ದಿ ಯುನೈಟೆಡ್ ನೇಷನ್ಸ್.
{{refend}}
==ಹೊರಗಿನ ಕೊಂಡಿಗಳು==
*[http://www.unep.org/themes/freshwater/ ಯುನೈಟೆಡ್ ನೇಷನ್ಸ್ ಎನ್ವಯರ್ನ್ಮೆಂಟ್ ಪ್ರೋಗ್ರಾಂ - ಫ್ರೆಶ್ವಾಟರ್] {{Webarchive|url=https://web.archive.org/web/20090224212038/http://www.unep.org/themes/freshwater/ |date=2009-02-24 }}
*[http://www.cdc.gov/healthywater/ U.S. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC) ಹೆಲ್ತಿ ವಾಟರ್] ಕುಡಿಯುವ ನೀರು, ಜಾಗತಿಕ ನೀರು, ಮತ್ತು ಜಲ ಸಂಪನ್ಮೂಲಗಳು(ಕೃಷಿ, ಕೈಗಾರಿಕೆ, ವೈದ್ಯಕೀಯ) ಇತ್ಯಾದಿ ಕುರಿತ ಮಾಹಿತಿ ಒಂದೇ ಕಡೆ ಲಭ್ಯ.
*[http://www.fao.org/ag/agl/aglw/aquastat/water_res/waterres_tab.htm ದೇಶಾನುಸಾರವಾಗಿ ಪುನರುಜ್ಜೀವನಗೊಳಿಸಬಹುದಾದ ವಿಶ್ವದ ಜಲ ಸಂಪನ್ಮೂಲಗಳು]
*[https://www.un.org/events/water/brochure.htm 'ಕ್ವಿಕ್ ಫ್ಯಾಕ್ಟ್ಸ್' ಬ್ರೋಚರ್ ಫ್ರಂ ದಿ ಇಂಟರ್ನ್ಯಾಷನಲ್ ಈಯರ್ ಆಫ್ ವಾಟರ್(2003)]
*[http://www.igrac.net IGRAC ಇಂಟರ್ನ್ಯಾಷನಲ್ ಗ್ರೌಂಡ್ವಾಟರ್ ರಿಸೋರ್ಸಸ್ ಎಸ್ಸೆಸ್ಮೆಂಟ್ ಸೆಂಟರ್] {{Webarchive|url=https://web.archive.org/web/20110723153248/http://www.igrac.net/ |date=2011-07-23 }}
*[http://www.transboundarywaters.orst.edu/ ದಿ ಟ್ರಾನ್ಸ್ಬೌಂಡರಿ ಫ್ರೆಶ್ ವಾಟರ್ ಡಿಸ್ಪ್ಯೂಟ್ ಡಾಟಾಬೇಸ್] {{Webarchive|url=https://web.archive.org/web/20090311014135/http://www.transboundarywaters.orst.edu/ |date=2009-03-11 }}
*[http://www.unwater.org/flashindex.html UN-ನೀರು] {{Webarchive|url=https://web.archive.org/web/20070927210152/http://www.unwater.org/flashindex.html |date=2007-09-27 }}
*[http://www.amnh.org/exhibitions/water/ ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ - ''ವಾಟರ್: H<sub>2</sub>O=Life'']
*[http://www.iwmi.org/ ಇಂಟರ್ನ್ಯಾಷನಲ್ ವಾಟರ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ (IWMI)]
*[http://www.ewatercrc.com.au ಇ ವಾಟರ್ ಕೋಪರೇಟಿವ್ ರಿಸರ್ಚ್ ಸೆಂಟರ್] {{Webarchive|url=https://web.archive.org/web/20190610005959/https://www.ewatercrc.com.au/ |date=2019-06-10 }} - ಇದೊಂದು ಆಸ್ಟ್ರೇಲಿಯಾ ಸರ್ಕಾರದ ಅನುದಾನದಿಂದ ನಡೆಯುವ ಕಾರ್ಯಕ್ರಮವಾಗಿದ್ದು ನೀರು ನಿರ್ವಹಣೆ ಕುರಿತ ತೀರ್ಮಾನಗಳನ್ನು ಬೆಂಬಲಿಸುವ ಉಪಕರಣಗಳನ್ನು ಬೆಂಬಲಿಸುತ್ತದೆ.
*ಜಲ ಮೂಲಗಳ ಮತ್ತು ಅಂತರರಾಷ್ಟ್ರೀಯ ಕಾನೂನಿನ ಗ್ರಂಥ ಸೂಚಿ - ಪೀಸ್ ಪ್ಯಾಲೇಸ್ ಲೈಬ್ರರಿ (ನೆದರ್ಲ್ಯಾಂಡ್ಸ್)
*[http://www.agc.army.mil/ US ಆರ್ಮಿ ಜಿಯೋಸ್ಪಾಷಿಯಲ್ ಸೆಂಟರ್]{{Dead link|date=ಮಾರ್ಚ್ 2025 |bot=InternetArchiveBot |fix-attempted=yes }} — ಒಕಾನುಸ್ ಮೇಲ್ಮೈ ನೀರು ಮತ್ತು ಅಂತರ್ಜಲ ಕುರಿತ ಮಾಹಿತಿ
*[http://pulitzercenter.org/showproject.cfm?id=106 ಸೌತ್ ಏಷಿಯಾಸ್ ಟ್ರಬಲ್ಡ್ ವಾಟರ್ಸ್] {{Webarchive|url=https://web.archive.org/web/20090723050437/http://pulitzercenter.org/showproject.cfm?id=106 |date=2009-07-23 }} - ಬಿಕ್ಕಟ್ಟು ವರದಿ ಕುರಿತ ಪುಲಿಟ್ಜರ್ ಕೇಂದ್ರದಲ್ಲಿ ದಕ್ಷಿಣ ಏಷ್ಯಾದಲ್ಲಿ ನೀರು ಎಂಬ ಪತ್ರಿಕಾ ಸಂಬಂಧಿತ ಪ್ರಾಜೆಕ್ಟ್.
[[ವರ್ಗ:ಜಲ ಪೂರೈಕೆ]]
[[ವರ್ಗ:ನೀರು]]
[[ವರ್ಗ:ನೀರು ನಿರ್ವಹಣೆ]]
[[ವರ್ಗ:ಜಲಶಾಸ್ತ್ರ]]
[[ವರ್ಗ:ಗೋದಾವರಿ ನದಿಮುಖಜ ಭೂಮಿಯ ನೀರಾವರಿ ಯೋಜನೆಗಳು]]
[[ವರ್ಗ:ಜಲಚರ ಪರಿಸರ ವಿಜ್ಞಾನ]]
[[ar:موارد المياه]]
[[bn:জলসম্পদ]]
[[en:Water resources]]
[[es:Recurso hídrico]]
[[fa:منابع آب]]
[[fi:Vesivarat]]
[[fr:Géopolitique de l'eau]]
[[hi:जल संसाधन]]
[[it:Risorse idriche]]
[[no:Vannressurser]]
[[pl:Zasoby wodne]]
[[pt:Recursos hídricos]]
[[ru:Водные ресурсы]]
[[th:ทรัพยากรน้ำ]]
[[uk:Водні ресурси]]
[[vi:Tài nguyên nước]]
[[zh:水资源]]
s3ehi41rlc4dzk4ck4umt9p4y8j8y97
ಐಪಾಡ್
0
22032
1379539
1375280
2026-08-08T19:44:11Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379539
wikitext
text/x-wiki
{{Infobox Information appliance
|name = iPod
|image = [[ಚಿತ್ರ:IPod family.png|300px]]
|caption = The current iPod line. From left to right: [[iPod Shuffle]], [[iPod Nano]], [[iPod Classic]], [[iPod Touch]].</small>
|manufacturer = [[Apple Inc.]]
|type = [[Portable Media Player]] (PMP)
|service = [[iTunes Store]] (iPod touch only)<br />[[App Store]] (iPod touch only)
|unitssold = Over 220,000,000 worldwide<br />as of September 2009
|cpu = [[Samsung]] [[ARM architecture|ARM]]
}}
'''ಐಪಾಡ್''' ಎಂಬುದು [[ಒಯ್ಯಬಹುದಾದ ಸಂಗೀತ ಸಾಧನ]]ಗಳ ಒಂದು ಬ್ರಾಂಡ್ ಆಗಿದ್ದು, ಇದನ್ನು [[ಆಪಲ್]] ಕಂಪನಿಯು ವಿನ್ಯಾಸಗೊಳಿಸಿ, ಮಾರುಕಟ್ಟೆ ಮಾಡಿದೆ ಹಾಗೂ ಪರಿಚಯಿಸಿದೆ{{start date|2001|10|23}}. ಉತ್ಪನ್ನ ಶ್ರೇಣಿಯಲ್ಲಿ ಹಾರ್ಡ್ ಡ್ರೈವ್-ಆಧರಿತ [[ಐಪಾಡ್ ಕ್ಲಾಸಿಕ್]], ಸ್ಪರ್ಶಪರದೆ ಶೈಲಿಯ [[ಐಪಾಡ್ ಟಚ್]], ವಿಡಿಯೊ-ವೀಕ್ಷಿಸಬಹುದಾದ [[ಐಪಾಡ್ ನ್ಯಾನೊ]], ಮತ್ತು ಅಡಕ ಗಾತ್ರದ [[ಐಪಾಡ್ ಷಫಲ್]] ಇವೇ ಮೊದಲಾದ ಬಗೆಗಳು ಸೇರಿವೆ.
[[ಐಫೋನ್]] ಉತ್ಪನ್ನವು ಒಂದು ಐಪಾಡ್ನಂತೆಯೇ ಕಾರ್ಯನಿರ್ವಹಿಸಬಲ್ಲುದಾದರೂ, ಇದನ್ನು ಒಂದು ಪ್ರತ್ಯೇಕ ಉತ್ಪನ್ನದಂತೆಯೇ ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಹಿಂದಿದ್ದ ಐಪಾಡ್ ಮಾದರಿಗಳಲ್ಲಿ ಇವು ಸೇರಿವೆ: [[ಐಪಾಡ್ ಮಿನಿ]] ಮತ್ತು ಉಪ-ಉತ್ಪನ್ನವಾದ [[ಐಪಾಡ್ ಫೋಟೋ]] (ಐಪಾಡ್ ಕ್ಲಾಸಿಕ್ನ ಮುಖ್ಯ ಶ್ರೇಣಿಯೊಳಗೆ ಮರುಸೇರ್ಪಡೆ ಮಾಡಿದಾಗಿನಿಂದ). ಐಪಾಡ್ ಕ್ಲಾಸಿಕ್ ಮಾದರಿಗಳು ಆಂತರಿಕವಾದ [[ಹಾರ್ಡ್ ಡ್ರೈವ್]] ಒಂದರಲ್ಲಿ [[ಸಂಗೀತ]]ವನ್ನು ಶೇಖರಿಸಿದರೆ, ಇತರೆಲ್ಲಾ ಮಾದರಿಗಳು ತಮ್ಮ ಚಿಕ್ಕದಾದ ಗಾತ್ರಕ್ಕೆ ಅನುಸಾರವಾಗಿ [[ಫ್ಲಾಶ್ ಮೆಮರಿ]]ಯನ್ನು ಇದಕ್ಕಾಗಿ ಬಳಸುತ್ತವೆ (ಸ್ಥಗಿತಗೊಳಿಸಲಾದ ಮಿನಿ ಮಾದರಿಯು [[ಮೈಕ್ರೋಡ್ರೈವ್]] ಮಿನಿಯೇಚರ್ ಹಾರ್ಡ್ ಡ್ರೈವ್ ಒಂದನ್ನು ಬಳಸಿತ್ತು). ಇತರ ಅನೇಕ ಡಿಜಿಟಲ್ ಸಂಗೀತ ಸಾಧನಗಳಂತೆ, ಐಪಾಡ್ಗಳು ಬಾಹ್ಯ [[ದತ್ತಾಂಶ ಸಂಗ್ರಾಹಕ ಉಪಕರಣಗಳ]] ರೀತಿಯಲ್ಲಿಯೂ ಕಾರ್ಯ ನಿರ್ವಹಿಸಬಲ್ಲವು. ಮಾದರಿಯಿಂದ ಮಾದರಿಗೆ ಇವುಗಳ ಶೇಖರಣಾ ಸಾಮರ್ಥ್ಯವು ಬದಲಾಗುತ್ತಾ ಹೋಗುತ್ತದೆ.
ಕಂಪ್ಯೂಟರ್ಗಳಿಂದ ಉಪಕರಣಗಳಿಗೆ ಸಂಗೀತವನ್ನು ವರ್ಗಾಯಿಸಲು ಆಪಲ್ ಕಂಪನಿಯ [[ಐಟ್ಯೂನ್ಸ್]] ತಂತ್ರಾಂಶವನ್ನು ಬಳಸಿಕೊಳ್ಳಬಹುದು. ಇದಕ್ಕಾಗಿ ಆಪಲ್ [[ಮೆಕಿಂಟೋಶ್]] ಮತ್ತು [[ಮೈಕ್ರೊಸಾಫ್ಟ್]] [[ವಿಂಡೋಸ್]] ಕಾರ್ಯಾಚರಣಾ ವ್ಯವಸ್ಥೆಗಳ (ಆಪರೇಟಿಂಗ್ ಸಿಸ್ಟಂಗಳ) ನಿರ್ದಿಷ್ಟ ಆವೃತ್ತಿಗಳನ್ನು ಬಳಸಿಕೊಳ್ಳಬೇಕಾಗುತ್ತದೆ.<ref>{{cite web | url=http://www.apple.com/itunes/download/ | title=iTunes system requirements. Apple iTunes software currently runs on Mac OS X 10.3.9 or OS X 10.4.9 or later and on Microsoft Windows XP (Service Pack 2) or Vista | author=Apple Inc. | accessdate=2008-05-28}}</ref> ಯಾರು ಆಪಲ್ನ ತಂತ್ರಾಂಶವನ್ನು ಬಳಸಲು ಬಯಸುವುದಿಲ್ಲವೋ ಅಥವಾ ಯಾರ ಕಂಪ್ಯೂಟರ್ಗಳು ಐಟ್ಯೂನ್ಸ್ ತಂತ್ರಾಂಶವನ್ನು ಚಲಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿಲ್ಲವೋ, ಅಂಥವರಿಗೆ ಐಟ್ಯೂನ್ಸ್ಗೆ ಪರ್ಯಾಯವಾಗಿರುವ ಹಲವಾರು ಮುಕ್ತಮೂಲಗಳೂ ಲಭ್ಯವಿವೆ.<ref>{{cite web | url=http://www.simplehelp.net/2007/07/08/10-alternatives-to-itunes-for-managing-your-ipod/ | title=Alternatives to iTunes for managing your iPod | author=Ross McKillop, simplehelp.net | accessdate=2008-05-28}}</ref> ಛಾಯಾಚಿತ್ರಗಳು, ವಿಡಿಯೋಗಳು, [[ಆಟಗಳು]], ಸಂಪರ್ಕ ಮಾಹಿತಿ, [[ಇ-ಮೇಲ್]] ವ್ಯವಸ್ಥೆಗಳು, ವೆಬ್ ಓದುಗುರುತುಗಳು, ಹಾಗೂ ದಿನಚರಿಗಳನ್ನು, ಅವುಗಳ ಗುಣಲಕ್ಷಣಗಳನ್ನು ಬೆಂಬಲಿಸುವ ಐಪಾಡ್ ಮಾದರಿಗಳಿಗೆ ಐಟ್ಯೂನ್ಸ್ ಮತ್ತು ಇದರ ಪರ್ಯಾಯ ಆಯ್ಕೆಗಳು ವರ್ಗಾಯಿಸಲೂಬಹುದು. [[ಆರ್ಕೋಸ್]] ಕಂಪನಿಯ ಆಯ್ದ ಉಪಕರಣಗಳು ಐಟ್ಯೂನ್ಸ್ ತಂತ್ರಾಂಶದೊಂದಿಗೆ ಹೊಂದಿಕೊಳ್ಳುತ್ತವೆಯಾದರೂ, ಆಪಲ್ ಐಪಾಡ್ ಮಾದರಿಯು ಐಟ್ಯೂನ್ಸ್ನೊಂದಿಗೆ ಸಮರ್ಥವಾಗಿ ಹೊಂದಿಕೊಳ್ಳುವ ಏಕೈಕ ಉಪಕರಣವಾಗಿದೆ. 2009ರ ಸೆಪ್ಟೆಂಬರ್ 9ರಲ್ಲಿದ್ದಂತೆ, 220,000,000ಗೂ ಹೆಚ್ಚಿನ ಐಪಾಡ್ಗಳು ವಿಶ್ವಾದ್ಯಂತ ಮಾರಾಟವಾಗಿದ್ದು, ಇದನ್ನು ಇತಿಹಾಸದ ಪುಟಗಳಲ್ಲಿ ಅತ್ಯುತ್ತಮ-ಮಾರಾಟದ [[ಡಿಜಿಟಲ್ ಶ್ರವಣ ಸಾಧನ]] ಶ್ರೇಣಿಯನ್ನಾಗಿಸಿದೆ.<ref>{{cite web | url=https://arstechnica.com/apple/news/2009/09/liveblog-rock-and-roll-apple-ipod-event.ars | title=Liveblog: "Rock and Roll" Apple iPod Event | date=9 September 2009 | publisher=[[Ars Technica]] | accessdate=2009-09-09}}</ref>
== ಇತಿಹಾಸ ಮತ್ತು ವಿನ್ಯಾಸ ==
[[ಚಿತ್ರ:IPod 5-6 Gen side-by-side.jpg|thumb|ಐಪಾಡ್ ಕ್ಲಾಸಿಕ್ 5G (ಬಲಭಾಗ) ಮತ್ತು 6G (ಎಡಭಾಗ) ಸುಧಾರಿತ ಸಂಪುಟದ ದೃಶ್ಯವನ್ನು ತೋರಿಸುತ್ತಿರುವುದು]]
ವೈಯಕ್ತಿಕ ಬಳಕೆಯ ಡಿಜಿಟಲ್ ಉಪಕರಣಗಳ ಬೆಳೆಯುತ್ತಿರುವ ಮಾರುಕಟ್ಟೆಗಾಗಿ ಆಪಲ್ ಕಂಪನಿಯು ತಂತ್ರಾಂಶವನ್ನು ರೂಪಿಸಲು ಪ್ರಾರಂಭಿಸಿದಾಗ, ಅದರ "ಡಿಜಿಟಲ್ ಹಬ್" ವರ್ಗದಿಂದ ಐಪಾಡ್ ಸರಣಿಯು ಹೊರಹೊಮ್ಮಿತು.<ref name="straight">ಕಾಹ್ನೆ, ಲಿಯಾಂಡರ್.[https://www.wired.com/news/columns/cultofmac/0,71956-0.html ಸ್ಟ್ರೈಟ್ ಡೋಪ್ ಆನ್ ದಿ ಐಪಾಡ್'ಸ್ ಬರ್ತ್], ''[[ವೈರ್ಡ್ ನ್ಯೂಸ್]]'', 2006-10-17. 2006-10-30ರಂದು ಮರುಸಂಪಾದಿಸಿದ್ದು.</ref> ಮುಖ್ಯವಾಹಿನಿ ಮಾರುಕಟ್ಟೆಗಳಲ್ಲಿ ಡಿಜಿಟಲ್ ಕ್ಯಾಮೆರಾಗಳು, ಕಾಮ್ಕಾರ್ಡರ್ಗಳು ಹಾಗೂ ಆರ್ಗನೈಜರ್ಗಳಾಗಲೇ ಚೆನ್ನಾಗಿ ಬೇರೂರಿದ್ದವು. ಆದರೆ, ಅಸ್ತಿತ್ವದಲ್ಲಿದ್ದ ಡಿಜಿಟಲ್ ಸಂಗೀತ ಸಾಧನಗಳು ಬಳಕೆದಾರ ಇಂಟರ್ಫೇಸ್ಗಳೊಂದಿಗೆ "ದೊಡ್ಡದಾಗಿದ್ದು ಒಡ್ಡೊಡ್ಡಾಗಿರುವ, ಇಲ್ಲವೇ ಚಿಕ್ಕದಾಗಿದ್ದು ಪ್ರಯೋಜನವಿಲ್ಲದ" ರೀತಿಯಲ್ಲಿದ್ದು, ಅವು "ನಂಬಲಸಾಧ್ಯವಾದ ರೀತಿಯಲ್ಲಿ ಅಸಹನೀಯವಾಗಿದ್ದವು" ಎಂಬುದನ್ನು ಕಂಪನಿಯು ಕಂಡುಕೊಂಡಿತ್ತು.<ref name="straight"/> ಆದ್ದರಿಂದಲೇ ತನ್ನದೇ ಆದ ಉತ್ಪನ್ನವೊಂದನ್ನು ಅಭಿವೃದ್ಧಿಪಡಿಸಲು ಆಪಲ್ ಕಂಪನಿ ನಿರ್ಧರಿಸಿತು.
ಕಂಪನಿಯ CEO [[ಸ್ಟೀವ್ ಜಾಬ್ಸ್]]ರ ಆದೇಶದಂತೆ, ಆಪಲ್ನ ಯಂತ್ರಾಂಶ ಎಂಜಿನಿಯರಿಂಗ್ ಮುಖ್ಯಸ್ಥ [[ಜಾನ್ ರೂಬಿನ್ಸ್ಟೀನ್]], ಐಪಾಡ್ ಶ್ರೇಣಿಯನ್ನು ವಿನ್ಯಾಸಗೊಳಿಸಲು ಎಂಜಿನಿಯರುಗಳ ಒಂದು ತಂಡವನ್ನು ಒಟ್ಟುಮಾಡಿದರು. ಯಂತ್ರಾಂಶ ಎಂಜಿನಿಯರುಗಳಾದ [[ಟೋನಿ ಫೆಡೆಲ್]] ಮತ್ತು [[ಮೈಕೇಲ್ ಧುಯೆ]],<ref>"[http://www.designnews.com/article/CA6478178.html 2007 ಎಂಜಿನಿಯರ್ ಆಫ್ ದಿ ಇಯರ್ ಫೈನಲಿಸ್ಟ್ ಮೈಕೇಲ್ ದುಹೆ’ಸ್ ಹಾರ್ಡ್ವೇರ್ ನಾಲೆಜ್ ಹೆಲ್ಪ್ಸ್ ಬ್ರೀದ್ ಲೈಫ್ ಇನ್ಟು ಐಪಾಡ್, ಟೆಲಿಪ್ರೆಸೆನ್ಸ್] {{Webarchive|url=https://web.archive.org/web/20071012084944/http://www.designnews.com/article/CA6478178.html |date=2007-10-12 }}", ''ಡಿಸೈನ್ ನ್ಯೂಸ್'', 2007ರ ಸೆಪ್ಟೆಂಬರ್ 24.</ref> ಮತ್ತು ವಿನ್ಯಾಸದ ಎಂಜಿನಿಯರ್ [[ಜೋನಾಥನ್ ಐವ್]] ಮೊದಲಾದವರು ತಂಡದಲ್ಲಿದ್ದರು.<ref name="straight"/>
ಒಂದು ವರ್ಷಕ್ಕೂ ಕಡಿಮೆಯ ಅವಧಿಯಲ್ಲಿ ಉತ್ಪನ್ನವನ್ನು ಅಭಿವೃದ್ಧಿಪಡಿಸಲಾಯಿತು ಮತ್ತು 2001ರ ಅಕ್ಟೋಬರ್ 23ರಂದು ಉತ್ಪನ್ನವನ್ನು ಅನಾವರಣಗೊಳಿಸಲಾಯಿತು. ಇದೊಂದು ಮ್ಯಾಕ್-ಜೊತೆಗೆ ಹೊಂದಿಕೊಳ್ಳಬಲ್ಲ ಉತ್ಪನ್ನವಾಗಿದ್ದು 5 GBಯಷ್ಟು ಹಾರ್ಡ್ಡ್ರೈವ್ನ್ನು ಒಳಗೊಂಡಿದೆ ಎಂದು ಪ್ರಕಟಿಸಿದ ಜಾನ್, "1,000 ಹಾಡುಗಳನ್ನು ನಿಮ್ಮ ಕಿಸೆಯಲ್ಲಿಟ್ಟುಕೊಳ್ಳಲು ಇದು ಅವಕಾಶ ಮಾಡಿಕೊಡಲಿದೆ" ಎಂದು ತಿಳಿಸಿದ.<ref>{{Cite web |url=http://lowendmac.com/orchard/05/origin-of-the-ipod.html |title=ಎ ಹಿಸ್ಟರಿ ಆಫ್ ದಿ ಐಪಾಡ್: 2000 ಟು 2004 |access-date=2009-12-21 |archive-date=2010-02-05 |archive-url=https://web.archive.org/web/20100205111724/http://lowendmac.com/orchard/05/origin-of-the-ipod.html |url-status=dead }}</ref> ಐಪಾಡ್ ತಂತ್ರಾಂಶವನ್ನು ಆಪಲ್ ಕಂಪನಿಯು ಸಂಪೂರ್ಣವಾಗಿ ಆಂತರಿಕವಾಗಿಯೇ ಅಭಿವೃದ್ಧಿಪಡಿಸಲಿಲ್ಲ. ಅದರ ಬದಲಿಗೆ, 2 [[ARM]] ಮುಖ್ಯಾಂಶಗಳನ್ನು ಆಧರಿಸಿದ [[ಪೋರ್ಟಲ್ ಪ್ಲೇಯರ್]]ನ ಅನುರೂಪತೆಯ ವೇದಿಕೆಯನ್ನು ಬಳಸಿತು. ಈ ವೇದಿಕೆಯು ಸೂಕ್ಷ್ಮ ತಿರುಳನ್ನು ಅಳವಡಿಸಲಾಗಿದ್ದ ವಾಣಿಜ್ಯ ಸ್ವರೂಪದ ಕಾರ್ಯಾಚರಣಾ ವ್ಯವಸ್ಥೆಯೊಂದರ ಮೇಲೆ ಓಡುತ್ತಿದ್ದ ಅಪೂರ್ಣಾವಸ್ಥೆಯ ತಂತ್ರಾಂಶವನ್ನು ಹೊಂದಿತ್ತು. ಫೋರ್ಟಲ್ ಪ್ಲೇಯರ್ ಕಂಪನಿಯು ಇದಕ್ಕೂ ಮುಂಚೆ [[ಬ್ಲೂಟೂತ್]] ಹೆಡ್ಫೋನ್ಗಳನ್ನು ಹೊಂದಿದ್ದ IBM-ಹಣೆಪಟ್ಟಿಯ MP3 ಸಾಧನವೊಂದರ ಕುರಿತು ಕಾರ್ಯದಲ್ಲಿ ಅಥವಾ ಸಂಶೋಧನೆಯಲ್ಲಿ ತೊಡಗಿತ್ತು.<ref name="straight"/> ಸ್ಟೀವ್ ಜಾಬ್ಸ್ನ ನೇರ ಮೇಲ್ವಿಚಾರಣೆಯಡಿಯಲ್ಲಿನ ಬಳಕೆದಾರ ಇಂಟರ್ಫೇಸ್ನ ವಿನ್ಯಾಸ ಹಾಗೂ ಅನುಷ್ಠಾನದ ಕಾರ್ಯಕ್ಕೆ ನೆರವಾಗಲು ಆಪಲ್ ಕಂಪನಿಯು [[ಪಿಕ್ಸೊ]] ಎಂಬ ಮತ್ತೊಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತು.<ref name="straight"/> ಅಭಿವೃದ್ಧಿಯು ಸಾಗುತ್ತಿದ್ದಂತೆ, ತಂತ್ರಾಂಶಗಳ ಲಕ್ಷಣ ಹಾಗೂ ಸಹಜಶಕ್ತಿಯನ್ನು ಆಪಲ್ ಕಂಪನಿಯು ಮತ್ತಷ್ಟು ಪರಿಷ್ಕರಿಸುತ್ತಲೇ ಅಥವಾ ನಾಜೂಕುಗೊಳಿಸುತ್ತಲೇ ಹೋಯಿತು. [[ಐಪಾಡ್ ಮಿನಿ]]ಯೊಂದಿಗೆ ಆರಂಭಿಸಿ, [[ಚಿಕಾಗೋ]] ಅಕ್ಷರ ಮಾದರಿಯನ್ನು [[ಎಸ್ಪಿ ಸ್ಯಾನ್ಸ್]]ನೊಂದಿಗೆ ಬದಲಾಯಿಸಲಾಯಿತು. ನಂತರದ ಐಪಾಡ್ಗಳು [[ಪೋಡಿಯಂ ಸ್ಯಾನ್ಸ್]] ಸ್ವರೂಪಕ್ಕೆ ಅಕ್ಷರ ಮಾದರಿಗಳನ್ನು ಬದಲಾಯಿಸಿದವು. ಇದು ಆಪಲ್ ಕಂಪನಿಯ ಸಾಂಸ್ಥಿಕ ಅಕ್ಷರ ಮಾದರಿಯಾದ [[ಮಿರಿಯಡ್]]ನ್ನು ಹೋಲುವ ರೀತಿಯಲ್ಲಿತ್ತು. ಆಕ್ವಾ ಪ್ರೋಗ್ರೆಸ್ ಬಾರ್ಗಳು, ಮತ್ತು ತಿಜೋರಿಯ [[ಸಂಕೀರ್ಣ ಬೀಗ]]ದ ನೆನಪನ್ನು ತರುವ [[ಬ್ರಷ್ಡ್ ಮೆಟಲ್]]ನಂತಹ ಕೆಲವೊಂದು [[Mac OS X]] ವಸ್ತು-ವಿಷಯಗಳನ್ನು ಬಣ್ಣದ ಪ್ರದರ್ಶಿಕೆಗಳನ್ನು ಹೊಂದಿದ್ದ ಐಪಾಡ್ಗಳು ನಂತರ ಅಳವಡಿಸಿಕೊಂಡವು.
2007ರಲ್ಲಿ, ಆರನೇ-ಪೀಳಿಗೆಯ [[ಐಪಾಡ್ ಕ್ಲಾಸಿಕ್]] ಮತ್ತು ಮೂರನೇ-ಪೀಳಿಗೆಯ [[ಐಪಾಡ್ ನ್ಯಾನೋ]] ಉತ್ಪನ್ನಗಳನ್ನು ಪರಿಚಯಿಸುವುದರೊಂದಿಗೆ, ಆಪಲ್ ಕಂಪನಿಯು ಐಪಾಡ್ ಇಂಟರ್ಫೇಸ್ನ್ನು ಮತ್ತೊಮ್ಮೆ ಮಾರ್ಪಡಿಸಿತು. ಇವುಗಳ ಅಕ್ಷರ ಮಾದರಿಯು [[ಹೆಲ್ವೆಟಿಕಾ]]ಗೆ ಬದಲಾಗಿತ್ತು ಮತ್ತು, ಬಹುತೇಕ ನಿದರ್ಶನಗಳಲ್ಲಿ, ತೆರೆಯನ್ನು ಅರ್ಧಕ್ಕೆ ವಿಭಜಿಸಿ, ಲಭ್ಯವಿರುವ ಸೇವೆಗಳ ಪಟ್ಟಿಗಳನ್ನು ಎಡಭಾಗದಲ್ಲೂ, ಸಂಗೀತ ಸಂಪುಟದ ಕಲಾಕೃತಿ, ಛಾಯಾಚಿತ್ರಗಳು, ಅಥವಾ ವಿಡಿಯೋಗಳನ್ನು ಬಲಭಾಗದಲ್ಲೂ ಪ್ರದರ್ಶಿಸುವ ಲಕ್ಷಣಗಳನ್ನು (ಆಯ್ದುಕೊಂಡ ಮಾದರಿಗೆ ಯಾವುದು ಸೂಕ್ತ ಎನಿಸುತ್ತದೋ ಆ ರೀತಿಯ ಲಕ್ಷಣಗಳನ್ನು) ಈ ಮಾದರಿಗಳು ಹೊಂದಿದ್ದವು.
2007ರ ಸೆಪ್ಟೆಂಬರ್ನಲ್ಲಿ, [[ಹಕ್ಕುಪತ್ರ ಹಿಡುವಳಿ ಕಂಪನಿ]]ಯಾದ Burst.comನೊಂದಿಗಿನ ಒಂದು ಕಾನೂನು ದಾವೆಯ ಸಂದರ್ಭದಲ್ಲಿ, 1979ರಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಇದೇ ಥರದ ಉಪಕರಣವೊಂದಕ್ಕಾಗಿರುವ ಹಕ್ಕುಪತ್ರದ ಕಡೆಗೆ ಆಪಲ್ ಕಂಪನಿಯು ಗಮನಹರಿಸಿತು. 1979ರಲ್ಲಿ "ಪ್ಲಾಸ್ಟಿಕ್ ಸಂಗೀತ ಪೆಟ್ಟಿಗೆ"ಯೊಂದರ ಪರಿಕಲ್ಪನೆಗೆ [[ಕೇನ್ ಕ್ರಾಮರ್]] ಎಂಬಾತ ಹಕ್ಕುಪತ್ರವನ್ನು ಪಡೆದುಕೊಂಡು, ಅದಕ್ಕೆ IXI ಎಂಬ ಹೆಸರಿಟ್ಟಿದ್ದ.<ref name="DailyMail">ಬೊಫೆ, ಡೇನಿಯಲ್ [http://www.dailymail.co.uk/news/article-1053152/Apple-admit-Briton-DID-invent-iPod-hes-getting-money.html ಆಪಲ್ ಅಡ್ಮಿಟ್ ಬ್ರಿಟನ್ DID ಇನ್ವೆಂಟ್ ಐಪಾಡ್, ಬಟ್ ಹಿ ಈಸ್ ಸ್ಟಿಲ್ ನಾಟ್ ಗೆಟಿಂಗ್ ಎನಿ ಮನಿ] ''[[ಡೇಲಿ ಮೇಲ್]]'', 2008-09-08. 2008-09-08ರಂದು ಮರುಸಂಪಾದಿಸಿದ್ದು.</ref> ವಿಶ್ವಾದ್ಯಂತದ ಹಕ್ಕುಪತ್ರವನ್ನು ನವೀಕರಿಸಲು ಅಗತ್ಯವಾಗಿದ್ದ 120,000 [[US$]] ಮೊತ್ತವನ್ನು ಒಟ್ಟುಗೂಡಿಸಲು ಆತ ಅಸಮರ್ಥನಾಗಿದ್ದರಿಂದಾಗಿ, ಅದು ಆತನ ಕೈತಪ್ಪಿಹೋಗಿತ್ತು ಮತ್ತು ತನ್ನ ಈ ಪರಿಕಲ್ಪನೆಯಿಂದ ಕ್ರಾಮರ್ ಎಂದಿಗೂ ಲಾಭಗಳಿಸಲಾಗಿರಲಿಲ್ಲ.<ref name="DailyMail"/>
=== ಸರಕುಮುದ್ರೆ ===
''ಐಪಾಡ್'' ಎಂಬ ಹೆಸರನ್ನು ವಿನ್ನೀ ಚೀಕೋ ಎಂಬ ಒಬ್ಬ ಸ್ವತಂತ್ರ-ವೃತ್ತಿಗ ಜಾಹೀರಾತು ಬರಹಗಾರ ಸೂಚಿಸಿದ. ಹೊಸ ಸಾಧನವನ್ನು ಸಾರ್ವಜನಿಕರಿಗೆ ಪರಿಚಯಿಸುವುದು ಹೇಗೆ ಎಂಬುದರ ರೂಪರೇಖೆಯನ್ನು ರೂಪಿಸಲೆಂದು ಆತನನ್ನು (ಇತರರೊಂದಿಗೆ) ಆಪಲ್ ಕಂಪನಿಯು ಕರೆದಿತ್ತು.
ಮೂಲಮಾದರಿಯೊಂದನ್ನು ಚೀಕೋ ಕಂಡ ನಂತರ, ಅವನಿಗೆ ''[[2001: A Space Odyssey (film)|2001: ಎ ಸ್ಪೇಸ್ ಒಡಿಸ್ಸಿ]]'' ಚಲನಚಿತ್ರವು ನೆನಪಾಯಿತು. ಅದರಲ್ಲಿ [[ಡಿಸ್ಕವರಿ ಒನ್]] ಬಾಹ್ಯಾಕಾಶ ನೌಕೆಯ ಬಿಳಿಯ [[EVA ಪಾಡ್]]ಗಳನ್ನುದ್ದೇಶಿಸಿ ಹೇಳಲಾಗುವ, "ಓಪನ್ ದಿ ಪಾಡ್ ಬೇ ಡೋರ್, [[ಹಾಲ್]]!" ಎಂಬ ಮಾತುಗಳು ಅವನ ನೆನಪಿಗೆ ಬಂದವು.<ref name="straight"/> ಸರಕುಮುದ್ರೆಯನ್ನು ಸಂಶೋಧಿಸಿದ ಆಪಲ್ ಕಂಪನಿಗೆ ಅದು ಈಗಾಗಲೇ ಬಳಕೆಯಲ್ಲಿರುವುದು ಕಂಡುಬಂತು. [[ನ್ಯೂಜೆರ್ಸಿ]]ಯ ಜೋಸೆಫ್ ಎನ್. ಗ್ರಾಸ್ಸೊ ಎಂಬಾತ, [[ಅಂತರ್ಜಾಲದ ಪೆಟ್ಟಿಗೆಗೂಡು]]ಗಳಿಗಾಗಿ (ಇಂಟರ್ನೆಟ್ ಕಿಯಾಸ್ಕ್ಗಳಿಗಾಗಿ) 2000ದ ಜುಲೈನಲ್ಲಿ [[U.S. ಹಕ್ಕುಪತ್ರ ಮತ್ತು ಸರಕುಮುದ್ರೆ ಕಚೇರಿ]]ಯಲ್ಲಿ "ಐಪಾಡ್" ಸರಕುಮುದ್ರೆಯೊಂದನ್ನು ಮೊದಲು ದಾಖಲಿಸಿದ್ದ. 1998ರ ಮಾರ್ಚ್ನಲ್ಲಿ ನ್ಯೂಜೆರ್ಸಿಯಲ್ಲಿ ಮೊಟ್ಟಮೊದಲ ಐಪಾಡ್ ಪೆಟ್ಟಿಗೆಗೂಡುಗಳನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಲಾಯಿತು, ಮತ್ತು 2000ರ ಜನವರಿಯಲ್ಲಿ ವಾಣಿಜ್ಯೋದ್ದೇಶದ ಬಳಕೆ ಪ್ರಾರಂಭವಾಯಿತು. ಆದರೆ, 2001ರ ಹೊತ್ತಿಗೆ ಮೇಲುನೋಟಕ್ಕೆ ಕಾಣುವಂತೆ ಅವುಗಳನ್ನು ನಿಲ್ಲಿಸಲಾಯಿತು. 2003ರ ನವೆಂಬರ್ನಲ್ಲಿ USPTOನಿಂದ ಸರಕುಮುದ್ರೆಯು ನೋಂದಾಯಿಸಲ್ಪಟ್ಟಿತು, ಮತ್ತು ಇದನ್ನು ಆಪಲ್ ಕಂಪ್ಯೂಟರ್ ಸಂಘಟಿತ ಸಂಸ್ಥೆಗೆ 2005ರಲ್ಲಿ ಗ್ರಾಸ್ಸೋ ಬಿಟ್ಟುಕೊಟ್ಟ.<ref>ಅನುಕ್ರಮ ಸಂಖ್ಯೆ. 78018061, ನೋಂದಣಿ ಸಂಖ್ಯೆ. 2781793, U.S. ಹಕ್ಕುಪತ್ರ ಮತ್ತು ಸರಕುಮುದ್ರೆ ಕಚೇರಿಯ ದಾಖಲೆಪತ್ರಗಳು. ಇನ್ಪಬ್, LLC, "ಕಂಪ್ಯೂಟರ್ ತಂತ್ರಾಂಶ ಮತ್ತು ಯಂತ್ರಾಂಶ"ಕ್ಕಾಗಿ ಒಂದು "IPOD" ಸರಕುಮುದ್ರೆಯನ್ನು 1999ರ ಜೂನ್ 1ರಂದು ಸಲ್ಲಿಸಿತು. 2000ರ ಮೇ 18ರಂದು, ಯಾವುದೇ ವಾಣಿಜ್ಯ ಬಳಕೆಯಿಲ್ಲದೆಯೇ ಸರಕುಮುದ್ರೆಯನ್ನು ಬಿಟ್ಟುಬಿಡಲಾಯಿತು.</ref>
== ತಂತ್ರಾಂಶ ==
ಐಪಾಡ್ ಸರಣಿಯು ಹಲವಾರು [[ಶ್ರವಣ ಕಡತ ಸ್ವರೂಪ]]ಗಳನ್ನು ನುಡಿಸಬಲ್ಲದು ಅಥವಾ ಚಾಲನೆಗೊಳಿಸಬಲ್ಲದು. ಅವುಗಳಲ್ಲಿ ಈ ಸ್ವರೂಪಗಳು ಸೇರಿವೆ: [[MP3]], [[AAC]]/[[M4A]], [[ಸಂರಕ್ಷಿತ AAC]], [[AIFF]], [[WAV]], [[ಶ್ರವಣಗೋಚರ]] [[ಶ್ರವ್ಯ ಪುಸ್ತಕ]], ಮತ್ತು [[ಆಪಲ್ ಲಾಸ್ಲೆಸ್]]. [[JPEG]], [[BMP]], [[GIF]], [[TIFF]], ಮತ್ತು [[PNG]] ಬಿಂಬದ ಕಡತ ಸ್ವರೂಪಗಳನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ಐಪಾಡ್ ಫೋಟೋ ಪರಿಚಯಿಸಿದೆ. ಐದನೇ ಮತ್ತು ಆರನೇ ಪೀಳಿಗೆಯ ಐಪಾಡ್ ಕ್ಲಾಸಿಕ್ಗಳಷ್ಟೇ ಅಲ್ಲದೇ ಮೂರನೇ ಪೀಳಿಗೆಯ ಐಪಾಡ್ ನ್ಯಾನೋಗಳು ಹೆಚ್ಚುವರಿಯಾಗಿ [[MPEG-4]] ([[H.264/MPEG-4 AVC]]) ಮತ್ತು [[ಕ್ವಿಕ್ಟೈಮ್]] [[ವಿಡಿಯೋ ಸ್ವರೂಪಗಳನ್ನು]] ನುಡಿಸಬಲ್ಲವು ಅಥವಾ ಚಾಲನೆಗೊಳಿಸಬಲ್ಲವು. ವಿಡಿಯೋ ಆಯಾಮಗಳು, ಸಂಕೇತಭಾಷೆಯ ಕೌಶಲಗಳು ಮತ್ತು ದತ್ತಾಂಶ-ವೇಗಗಳ ಮೇಲಿನ ನಿಯಂತ್ರಣಗಳೊಂದಿಗೆ ಅವು ಈ ಕಾರ್ಯವನ್ನು ನಿರ್ವಹಿಸಬಲ್ಲವು.<ref>[http://www.apple.com/ipodclassic/specs.html ಐಪಾಡ್ ಕ್ಲಾಸಿಕ್ ಟೆಕ್ನಿಕಲ್ ಸ್ಪೆಕ್ಸ್]</ref> ಐಪಾಡ್ ತಂತ್ರಾಂಶವು ಮೂಲತಃ [[ಮ್ಯಾಕ್ OS]]ನೊಂದಿಗೆ ಮಾತ್ರವೇ ಕಾರ್ಯನಿರ್ವಹಿಸುತ್ತಿತ್ತು; [[ಮೈಕ್ರೋಸಾಫ್ಟ್ ವಿಂಡೋಸ್]]ಗೆ ಮೀಸಲಾದ ಐಪಾಡ್ ತಂತ್ರಾಂಶವನ್ನು ಎರಡನೇ ಪೀಳಿಗೆಯ ಮಾದರಿಯೊಂದಿಗೆ ಬಿಡುಗಡೆಮಾಡಲಾಯಿತು.<ref>[http://www.apple.com/itunes/download/ ಐಟ್ಯೂನ್ಸ್ ಡೌನ್ಲೋಡ್ಗಳು]</ref> ಇತರ ಬಹುತೇಕ ಸಂಗೀತ ಸಾಧನಗಳಿಗಿಂತ ಭಿನ್ನವಾಗಿರುವ ಆಪಲ್, [[ಮೈಕ್ರೋಸಾಫ್ಟ್]]ನ [[WMA]] ಶ್ರವ್ಯ ಸ್ವರೂಪವನ್ನು ಬೆಂಬಲಿಸುವುದಿಲ್ಲ. ಆದರೆ, [[ಡಿಜಿಟಲ್ ರೈಟ್ಸ್ ಮ್ಯಾನೇಜ್ಮೆಂಟ್]]ನೊಂದಿಗೆ (DRM) ಇರದ WMA ಕಡತಗಳಿಗಾಗಿ ಪರಿವರ್ತಕವೊಂದನ್ನು ಐಟ್ಯೂನ್ಸ್ನ [[ವಿಂಡೋಸ್]] ಆವೃತ್ತಿಯೊಂದಿಗೆ ಒದಗಿಸಲಾಗುತ್ತದೆ.
[[MIDI]] ಕಡತಗಳನ್ನೂ ಸಹ ಇದರಲ್ಲಿ ಚಾಲನೆ ಮಾಡಲಾಗುವುದಿಲ್ಲ, ಆದರೆ ಐಟ್ಯೂನ್ಸ್ನಲ್ಲಿನ "ಅಡ್ವಾನ್ಸ್ಡ್" ಸೇವಾಪಟ್ಟಿಯನ್ನು ಬಳಸುವ ಮೂಲಕ ಸದರಿ ಕಡತಗಳನ್ನು ಶ್ರವ್ಯ ಕಡತಗಳನ್ನಾಗಿ ಪರಿವರ್ತಿಸಬಹುದು.
ಐಪಾಡ್ವೊಂದರಲ್ಲಿ ಕಸ್ಟಮ್ ಫೈರ್ವೇರ್ನ್ನು (ಉದಾಹರಣೆಗೆ [[ರಾಕ್ಬಾಕ್ಸ್]]) ಅಳವಡಿಸದಿದ್ದರೆ ಅಥವಾ ಸ್ಥಾಪಿಸದಿದ್ದರೆ, [[ಓಗ್ ವೋರ್ಬಿಸ್]] ಮತ್ತು [[FLAC]]ನಂತಹ ಪರ್ಯಾಯ, ಮುಕ್ತ-ಮೂಲದ ಶ್ರವ್ಯ ಸ್ವರೂಪಗಳನ್ನು ಅದು ಬೆಂಬಲಿಸುವುದಿಲ್ಲ.
ಅಳವಡಿಸುವ ಅವಧಿಯಲ್ಲಿ ಒಂದು ಅತಿಥೇಯ ಕಂಪ್ಯೂಟರ್ನೊಂದಿಗೆ ಐಪಾಡ್ವೊಂದು ಜೊತೆಗೂಡಿರುತ್ತದೆ. ತನ್ನ ಅತಿಥೇಯ ಕಂಪ್ಯೂಟರ್ಗೆ ಐಪಾಡ್ವೊಂದು ಪ್ರತಿಬಾರಿ ಸಂಪರ್ಕಹೊಂದಿದಾಗಲೂ, ಸ್ವಯಂಚಾಲಿತವಾಗಿ ಅಥವಾ ಕೈಯಿಂದ ಚಾಲಿಸುವ ಮೂಲಕ ಸಮಗ್ರ ಸಂಗೀತ ಸಂಗ್ರಹಗಳು ಅಥವಾ ಸಂಗೀತದ ಚಾಲನಾಪಟ್ಟಿಗಳನ್ನು ಐಟ್ಯೂನ್ಸ್ ಸಮನ್ವಯಿಸಬಲ್ಲದು. ಹಾಡಿನ ಶ್ರೇಯಾಂಕಗಳನ್ನು ಐಪಾಡ್ವೊಂದರ ಮೇಲೆ ವ್ಯವಸ್ಥೆಗೊಳಿಸಬಹುದು ಮತ್ತು ನಂತರ ಐಟ್ಯೂನ್ಸ್ ಸಂಗ್ರಹಗಳಿಗೆ ಅದನ್ನು ಸಮನ್ವಯಗೊಳಿಸಬಹುದು. ಈ ಪ್ರಕ್ರಿಯೆಯನ್ನು ಹಿಮ್ಮುಖವಾಗಿಯೂ ನಡೆಸಲು ಅವಕಾಶವಿದೆ. ಐಪಾಡ್ವೊಂದನ್ನು ಸ್ವಯಂಚಾಲಿತ ಸಮನ್ವಯದ ಆಯ್ಕೆಯ ಬದಲಿಗೆ ಕೈಯಿಂದ ಚಾಲಿಸುವ ಆಯ್ಕೆಗೆ ವ್ಯವಸ್ಥೆಗೊಳಿಸಿದ್ದಲ್ಲಿ, ಎರಡನೇ ಕಂಪ್ಯೂಟರ್ ಒಂದರ ಮೇಲೆ ಬಳಕೆದಾರನು ಸಂಗೀತದ ಪಟ್ಟಿಯನ್ನು ಪ್ರವೇಶಿಸಲು, ಚಾಲಿಸಲು, ಮತ್ತು ಸಂಗೀತವನ್ನು ಸೇರಿಸಲು ಸಾಧ್ಯವಿದೆ. ಆದರೆ, ಮುಖ್ಯ ಕಂಪ್ಯೂಟರ್ನೊಂದಿಗೆ ಮತ್ತು ಅದರ ಸಂಗೀತ ಸಂಗ್ರಹದೊಂದಿಗೆ ಸಂಪರ್ಕ ಕಲ್ಪಿಸುವುದರಿಂದ ಮತ್ತು ಸಮನ್ವಯಗೊಳಿಸುವುದರಿಂದ, ಸೇರಿಸಲಾದ ಅಥವಾ ಕಿತ್ತುಹಾಕಲಾದ ಯಾವುದೇ ಭಾಗವು ರದ್ದಾಗುತ್ತದೆ. ಒಂದು ವೇಳೆ ಬಳಕೆದಾರನು ಮತ್ತೊಂದು ಕಂಪ್ಯೂಟರ್ನೊಂದಿಗೆ ಸಂಗೀತವನ್ನು ಸ್ವಯಂಚಾಲಿತವಾಗಿ ಸಮನ್ವಯಿಸಲು ಬಯಸಿದರೆ, ಐಪಾಡ್ವೊಂದರ ಸಂಗೀತ ಸಂಗ್ರಹವು ಸಂಪೂರ್ಣವಾಗಿ ನಶಿಸಿಹೋಗುತ್ತದೆ ಮತ್ತು ಮತ್ತೊಂದು ಕಂಪ್ಯೂಟರ್ನ ಸಂಗೀತ ಸಂಗ್ರಹದೊಂದಿಗೆ ಬದಲಾಯಿಸಲ್ಪಡುತ್ತದೆ.
=== ಬಳಕೆದಾರ ಇಂಟರ್ಫೇಸ್ ===
[[ಚಿತ್ರ:IPod_wheel.svg|thumb|ಐಪಾಡ್ ಶ್ರೇಣಿಯ ಕುರುಹಾದ ಕ್ಲಿಕ್ ಚಕ್ರ]]
ಬಣ್ಣದ ಪ್ರದರ್ಶಿಕೆಗಳೊಂದಿಗಿನ ಐಪಾಡ್ಗಳು ಜಾರುವ ಅನಿಮೇಷನ್ಗಳೊಂದಿಗಿನ [[ಆಂಟಿ-ಅಲಿಯಾಸ್ಡ್]] ಶೈಲಿಯ ಗ್ರಾಫಿಕ್ಗಳು ಮತ್ತು ಪಠ್ಯಗಳನ್ನು ಬಳಸುತ್ತವೆ. ಎಲ್ಲಾ ಐಪಾಡ್ಗಳು ([[ಐಪಾಡ್ ಷಫಲ್]] ಮತ್ತು [[ಐಪಾಡ್ ಟಚ್]] ಮಾದರಿಗಳನ್ನು ಹೊರತುಪಡಿಸಿ) ಐದು ಗುಂಡಿಗಳನ್ನು ಹೊಂದಿರುತ್ತವೆ. ನಂತರದ ಪೀಳಿಗೆಯಲ್ಲಿ ಬಂದ ಐಪಾಡ್ಗಳಲ್ಲಿ ಕ್ಲಿಕ್ ಚಕ್ರದೊಳಗೆ ಗುಂಡಿಗಳನ್ನು ಸಂಯೋಜಿಸಲಾಗಿದೆ. ಈ ನಾವೀನ್ಯತೆಯಿಂದಾಗಿ [[ಇಂಟರ್ಫೇಸ್]]ಗೆ ಅಡ್ಡಾದಿಡ್ಡಿಯಾಗಿಲ್ಲದ, ಕನಿಷ್ಟಗಾತ್ರದ ಸ್ವರೂಪ ಸಿಕ್ಕಿದೆ ಎಂದು ಹೇಳಬಹುದು. ಸೇವಾಪಟ್ಟಿ, ಚಾಲನೆ, ತಾತ್ಕಾಲಿಕ ಬಿಡುವು, ಮುಂದಿನ ಪಥ, ಮತ್ತು ಹಿಂದಿನ ಪಥ ಇವೇ ಮೊದಲಾದ ಆಯ್ಕೆಗಳ ಸ್ವರೂಪದ ಪ್ರಾಥಮಿಕ ಕ್ರಿಯೆಗಳನ್ನು ಗುಂಡಿಗಳು ನಡೆಸುತ್ತವೆ. ಕ್ಲಿಕ್ ಚಕ್ರವನ್ನು ಆವರ್ತನೀಯ ವಿಧಾನದಲ್ಲಿ ಬಳಸುವ ಮೂಲಕ, ಸೇವಾಪಟ್ಟಿಯಲ್ಲಿನ ಅಂಶಗಳ ಮೂಲಕ ಸುರುಳಿ ಶೈಲಿಯಲ್ಲಿ ಚಲಿಸುವುದು ಮತ್ತು ಧ್ವನಿಪ್ರಮಾಣವನ್ನು ನಿಯಂತ್ರಿಸುವುದು ಇವೇ ಮೊದಲಾದ ಇತರ ಕ್ರಿಯೆಗಳನ್ನು ನಡೆಸಬಹುದು. [[ಐಪಾಡ್ ಷಫಲ್]] ಮಾದರಿಯು ವಾಸ್ತವಿಕ ಸಾಧನದ ಮೇಲೆ ಯಾವುದೇ ನಿಯಂತ್ರಕಗಳನ್ನು ಹೊಂದಿರುವುದಿಲ್ಲ; ಅವುಗಳ ಬದಲಿಗೆ, ಅದರ ಕರ್ಣವಾಣಿಯ ಸೂಕ್ಷ್ಮತಂತಿಯ ಮೇಲೆ (ಇಯರ್ಫೋನ್ ಕೇಬಲ್ ಮೇಲೆ) ಒಂದು ಪುಟ್ಟ ನಿಯಂತ್ರಕವಿದ್ದು, ಧ್ವನಿಯ ಪ್ರಮಾಣವನ್ನು ಹೆಚ್ಚಿಸುವ ಮತ್ತು ತಗ್ಗಿಸುವ ಗುಂಡಿಗಳು ಹಾಗೂ ಚಾಲಿಸುವಿಕೆ/ತಾತ್ಕಾಲಿಕ ವಿರಾಮ, ಮುಂದಿನ ಪಥ ಇತ್ಯಾದಿಗಳನ್ನು ಆಯ್ಕೆಮಾಡಲು ಇರುವ ಒಂದು ಏಕ ಗುಂಡಿ ಆ ನಿಯಂತ್ರಕದಲ್ಲಿ ಅಡಕವಾಗಿರುತ್ತವೆ. [[ಐಪಾಡ್ ಟಚ್]] ಮಾದರಿಯು ಯಾವುದೇ ಕ್ಲಿಕ್-ಚಕ್ರವನ್ನು ಹೊಂದಿರುವುದಿಲ್ಲ; ಅದರ ಬದಲಿಗೆ, ವಿಶ್ರಾಂತ/ಜಾಗ್ರತ ಸ್ಥಿತಿಯ ಗುಂಡಿ ಮತ್ತು (ಐಪಾಡ್ ಟಚ್ನ ಎರಡನೇ ಮತ್ತು ಮೂರನೇ ಪೀಳಿಗೆಗಳ ಮಾದರಿಯ ಮೇಲೆ) ಧ್ವನಿಯ ಪ್ರಮಾಣ ಹೆಚ್ಚಿಸುವ ಹಾಗೂ ತಗ್ಗಿಸುವ ಗುಂಡಿಗಳಿಗೆ ಹೆಚ್ಚುವರಿಯಾಗಿ ಇದು 3.5" ಅಳತೆಯ ಸ್ಪರ್ಶಪರದೆಯೊಂದನ್ನು ಬಳಸುತ್ತದೆ. ಐಪಾಡ್ ಟಚ್ಗಾಗಿರುವ ಬಳಕೆದಾರ ಇಂಟರ್ಫೇಸ್, [[ಐಫೋನ್]]ನ ಬಳಕೆದಾರ ಇಂಟರ್ಫೇಸ್ಗೆ ವಸ್ತುತಃ ಹೋಲುವಂತಿರುತ್ತದೆ. ಎರಡೂ ಉಪಕರಣಗಳು [[ಐಫೋನ್ OS]]ನ್ನು ಬಳಸುತ್ತವೆ.
=== ಐಟ್ಯೂನ್ಸ್ ಮಳಿಗೆ ===
{{Main|iTunes|iTunes Store}}
ಐಟ್ಯೂನ್ಸ್ ಮಳಿಗೆಯು (2003ರ ಏಪ್ರಿಲ್ 29ರಂದು ಇದನ್ನು ಪರಿಚಯಿಸಲಾಯಿತು) ಆಪಲ್ ಕಂಪನಿಯಿಂದ ನಡೆಸಲ್ಪಡುತ್ತಿರುವ ಒಂದು ಆನ್ಲೈನ್ ಸಂಗೀತ ಮಳಿಗೆಯಾಗಿದ್ದು, ಐಟ್ಯೂನ್ಸ್ ಮೂಲಕ ಇದಕ್ಕೆ ಪ್ರವೇಶಾವಕಾಶವಿರುತ್ತದೆ. ಒಯ್ಯಬಹುದಾದ ಇನ್ನಾವುದೇ ಸಂಗೀತ ಸಾಧನವು ಇಲ್ಲಿ ಬಳಸಲಾಗಿರುವ [[DRM]]ನ್ನು ಬೆಂಬಲಿಸುವುದಿಲ್ಲವಾದ್ದರಿಂದ, ಐಟ್ಯೂನ್ಸ್ ಮಳಿಗೆಯಿಂದ ಪಡೆದ ಸಂರಕ್ಷಿತ ಸಂಗೀತವಸ್ತುವನ್ನು ಕೇವಲ ಐಪಾಡ್ಗಳು ಮಾತ್ರವೇ ಕೇಳಿಸಬಲ್ಲವಾಗಿರುತ್ತವೆ. ಮಾರುಕಟ್ಟೆಗೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಐಟ್ಯೂನ್ ಮಳಿಗೆಯು ಮಾರುಕಟ್ಟೆಯ ಅಗ್ರಗಣ್ಯನಾಯಿತು<ref>[http://www.apple.com/pr/library/2004/aug/10itms.html ಐಟ್ಯೂನ್ಸ್ ಮ್ಯೂಸಿಕ್ ಸ್ಟೋರ್ ಕೆಟಲಾಗ್ ಟಾಪ್ಸ್ ಒನ್ ಮಿಲಿಯನ್ ಸಾಂಗ್ಸ್], ''[[ಆಪಲ್ ಇಂಕ್.]]'', 2004-08-10. 2006-12-28ರಂದು ಮರುಸಂಪಾದಿಸಿದ್ದು.</ref> ಮತ್ತು ಈ ಮಳಿಗೆಯ ಮೂಲಕ ವಿಡಿಯೋಗಳ ಮಾರಾಟವೂ ಇರುವುದರ ಕುರಿತು ಆಪಲ್ ಕಂಪನಿಯು 2005ರ ಅಕ್ಟೋಬರ್ 12ರಂದು ಘೋಷಿತು. ಸಂಪೂರ್ಣ ಭಾಗದೊಂದಿಗಿನ ಚಲನಚಿತ್ರಗಳು 2006ರ ಸೆಪ್ಟೆಂಬರ್ 12ರಂದು ಲಭ್ಯವಾದವು.<ref>ಸ್ಕಾಟ್-ಜಾಯ್ನ್ಟ್, ಜೆರೆಮಿ. [http://news.bbc.co.uk/1/hi/business/5339470.stm ಆಪಲ್ ಟಾರ್ಗೆಟ್ಸ್ TV ಅಂಡ್ ಫಿಲ್ಮ್ ಮಾರ್ಕೆಟ್], ''[[BBC ನ್ಯೂಸ್]]'', 2006-09-12. 2006-09-12ರಂದು ಮರುಸಂಪಾದಿಸಿದ್ದು.</ref>
ಖರೀದಿಸಲಾದ ಶ್ರವ್ಯ ಕಡತಗಳು, ಸೇರಿಸಲಾದ ಎನ್ಕ್ರಿಪ್ಷನ್ನೊಂದಿಗಿನ AAC ವ್ಯವಸ್ಥೆ ಅಥವಾ ಸ್ವರೂಪವನ್ನು ಬಳಸುತ್ತವೆ. [[ಫೇರ್ಪ್ಲೇ]] DRM ವ್ಯವಸ್ಥೆಯನ್ನು ಎನ್ಕ್ರಿಪ್ಷನ್ ಆಧರಿಸಿರುತ್ತದೆ. ಐದರವರೆಗಿನ ಅಧಿಕೃತವಾದ ಕಂಪ್ಯೂಟರ್ಗಳು ಮತ್ತು ಅನಿಯಮಿತ ಸಂಖ್ಯೆಯ ಐಪಾಡ್ಗಳು ಈ ಕಡತಗಳನ್ನು ಬಳಸಿ ಸಂಗೀತ ಕೇಳಿಸಬಲ್ಲವು. ಶ್ರವ್ಯ CDಯ ಮೇಲೆ ಈ ಸಂಗೀತ ಕಡತಗಳನ್ನು ಬರೆಯುವುದರಿಂದ, ನಂತರ ಮತ್ತೆ-ಸಂಕ್ಷೇಪಿಸುವುದರಿಂದ, DRM ರಹಿತ ಸಂಗೀತ ಕಡತಗಳು ಸೃಷ್ಟಿಯಾಗುತ್ತವೆ ಮತ್ತು ಇದರಿಂದಾಗಿ [[ಗುಣಮಟ್ಟದ ಕುಸಿತ]] ಕಂಡುಬರುತ್ತದೆ. ಅನ್ಯ ಕಂಪನಿಯ ತಂತ್ರಾಂಶವನ್ನು ಬಳಸುವ ಮೂಲಕವೂ DRMನ್ನು ತೆಗೆದುಹಾಕಲು ಸಾಧ್ಯವಿದೆ. ಆದಾಗ್ಯೂ, ಆಪಲ್ನೊಂದಿಗಿನ ಒಂದು ವ್ಯವಹಾರದಲ್ಲಿ, ಐಟ್ಯೂನ್ಸ್ ಮಳಿಗೆಗಳಲ್ಲಿನ "ಐಟ್ಯೂನ್ಸ್ ಪ್ಲಸ್" ಎಂದು ಕರೆಯಲಾದ ವರ್ಗವೊಂದರಲ್ಲಿ DRM-ಮುಕ್ತ, ಉನ್ನತ-ಗುಣಮಟ್ಟದ ಹಾಡುಗಳನ್ನು [[EMI]] ಕಂಪನಿಯು ಮಾರಾಟಮಾಡಲು ಪ್ರಾರಂಭಿಸಿತು. ಒಂದು ಕ್ರಮಬದ್ಧವಾದ DRM ಹಾಡಿನ ವೆಚ್ಚಕ್ಕಿಂತ ಹೆಚ್ಚಿನದಾಗಿರುವ 1.29 US$, 30¢ ವೆಚ್ಚದಲ್ಲಿ ಪ್ರತ್ಯೇಕ ಹಾಡುಗಳು ಲಭ್ಯವಾದರೆ, ಸಂಪೂರ್ಣ ಸಂಪುಟಗಳು ಅದೇ ಬೆಲೆಗೆ, ಅಂದರೆ 9.99 US$ಗೆ, DRM ಸಂಕೇತಭಾಷೆಯಲ್ಲಿನ ಸಂಪುಟಗಳಾಗಿ ಲಭ್ಯವಾದವು. 2007ರ ಅಕ್ಟೋಬರ್ 17ರಂದು, ಪ್ರತಿ ಹಾಡಿಗೆ 0.99 US$ ದರದಂತೆ, ಐಟ್ಯೂನ್ಸ್ ಪ್ಲಸ್ನ ಪ್ರತ್ಯೇಕ ಹಾಡುಗಳ ವೆಚ್ಚವನ್ನು ಆಪಲ್ ಕಂಪನಿಯು ತಗ್ಗಿಸಿತು. ಇದರಿಂದಾಗಿ DRM ಸಂಕೇತಭಾಷೆಯಲ್ಲಿನ ಸಂಗೀತ ಪಥಗಳ ದರದಲ್ಲೇ ಹಾಡುಗಳು ದೊರೆಯುವಂತಾಯಿತು. 2009ರ ಜನವರಿ 6ರಂದು, ಸಂಗೀತದ ಪೂರ್ಣಪಟ್ಟಿಯ 80%ನಷ್ಟು ಭಾಗದಿಂದ DRMನ್ನು ತೆಗೆಯಲಾಗಿದೆ, ಮತ್ತು 2009ರ ಏಪ್ರಿಲ್ ವೇಳೆಗೆ ಎಲ್ಲಾ ಸಂಗೀತ ವಿಭಾಗಗಳಿಂದ ಅದನ್ನು ಕಿತ್ತುಹಾಕಲಾಗುವುದು ಎಂದು ಆಪಲ್ ಕಂಪನಿಯು ಘೋಷಿಸಿತು.
[[ಮೈಕ್ರೋಸಾಫ್ಟ್]]ನ [[ಸಂರಕ್ಷಿತ WMA]] ಅಥವಾ [[ರಿಯಲ್ ನೆಟ್ವರ್ಕ್ಸ್]]ನ [[ಹೆಲಿಕ್ಸ್]] DRMನಂತಹ ಪ್ರತಿಸ್ಪರ್ಧಿ-DRM ತಂತ್ರಜ್ಞಾನಗಳನ್ನು ಬಳಸುವ ಪ್ರತಿಸ್ಪರ್ಧಿ ಸಂಗೀತ ಮಳಿಗೆಗಳಿಂದ ಬರುವ ಸಂಗೀತದ ಕಡತಗಳನ್ನು ಐಪಾಡ್ಗಳು ಕೇಳಿಸಲಾರವು. ಇಂಥ ಮಳಿಗೆಗಳ ಉದಾಹರಣೆಗಳಲ್ಲಿ [[ನ್ಯಾಪ್ಸ್ಟರ್]] ಮತ್ತು [[MSN ಮ್ಯೂಸಿಕ್]] ಸೇರಿವೆ.
ಫೇರ್ಪ್ಲೇ ವ್ಯವಸ್ಥೆಯನ್ನು ಬಳಸಿಕೊಂಡು ಬಳಕೆದಾರರು ಐಟ್ಯೂನ್ಸ್ ಮಳಿಗೆಯನ್ನು ಮಾತ್ರವೇ ಬಳಸುವಂತೆ ಬಂಧಿಸಿಡುವ ಮೂಲಕ, ಆಪಲ್ ಕಂಪನಿಯು ತನಗೆ ತಾನೇ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುತ್ತಿದೆ<ref>ಕನೆಲ್ಲೊಸ್, ಮೈಕೇಲ್. [https://web.archive.org/web/20081007151429/http://news.com.com/2100-1025_3-5177914.html ರಿಯಲ್'ಸ್ ಗ್ಲೇಸರ್ ಎಗ್ಸಾರ್ಟ್ಸ್ ಆಪಲ್ ಟು ಓಪನ್ ಐಪಾಡ್], ''[[CNet ನ್ಯೂಸ್]]'', 2004-03-23. 2006-06-20ರಂದು ಮರುಸಂಪಾದಿಸಿದ್ದು.</ref> ಎಂದು ರಿಯಲ್ ನೆಟ್ವರ್ಕ್ಸ್ ಕಂಪನಿಯು ವಾದಿಸುತ್ತದೆ. ಐಪಾಡ್ ಮಾರಾಟಗಳನ್ನು ಉತ್ತೇಜಿಸಲು ಆಪಲ್ ಕಂಪನಿಯು ಮಳಿಗೆಯನ್ನು ಬಳಸುತ್ತದೆಯಾದರೂ, ಹಾಡುಗಳ ಮಾರಾಟದಿಂದ ಆಪಲ್ ಕಂಪನಿಯು ಅತ್ಯಲ್ಪ ಪ್ರಮಾಣದ ಲಾಭವನ್ನು ಗಳಿಸುತ್ತಿದೆ ಎಂದು ಸ್ಟೀವ್ ಜಾಬ್ಸ್ ಹೇಳಿಕೆ ನೀಡಿದ್ದಾರೆ.<ref>ಒರ್ಲೋವ್ಸ್ಕಿ, ಆಂಡ್ರೂ. [http://www.theregister.co.uk/2003/11/07/your_99c_belong/ ಯುವರ್ 99c ಬಿಲಾಂಗ್ ಟು ದಿ RIAA – ಸ್ಟೀವ್ ಜಾಬ್ಸ್], ''[[ದಿ ರಿಜಿಸ್ಟರ್]]'', 2003-11-07. 2006-06-20ರಂದು ಮರುಸಂಪಾದಿಸಿದ್ದು.</ref> DRMನ್ನು ಬಳಸದ ಆನ್ಲೈನ್ ಮಳಿಗೆಗಳಿಂದ ಬರುವ, [[ಇ-ಮ್ಯೂಸಿಕ್]] ಅಥವಾ [[ಅಮೀ ಸ್ಟ್ರೀಟ್]]ನಂತಹ ಸಂಗೀತದ ಕಡತಗಳನ್ನೂ ಸಹ ಐಪಾಡ್ಗಳು ಕೇಳಿಸಬಲ್ಲವಾಗಿವೆ.
ಐಟ್ಯೂನ್ಸ್ ಸಂಗೀತ ಮಳಿಗೆಯೊಂದಿಗಿನ ತಮ್ಮ ಒಪ್ಪಂದವನ್ನು ನವೀಕರಿಸುವುದು ಬೇಡ ಎಂದು [[ಯುನಿವರ್ಸಲ್ ಮ್ಯೂಸಿಕ್ ಗ್ರೂಪ್]] ಕಂಪನಿಯು 2007ರ ಜುಲೈ 3ರಂದು ನಿರ್ಧರಿಸಿತು. ಯುನಿವರ್ಸಲ್ ಕಂಪನಿಯು ಒಂದು 'ಇಚ್ಛಾನುಸಾರದ' ಸಾಮರ್ಥ್ಯದಲ್ಲಿ ಈಗ ಐಟ್ಯೂನ್ಸ್ನ್ನು ಸರಬರಾಜು ಮಾಡಲಿದೆ.<ref>ಎವಾನ್ಸ್, ಜಾನಿ. [http://www.macworld.co.uk/ipod-itunes/news/index.cfm?newsid=18459 ಯುನಿವರ್ಸಲ್ ಕನ್ಫರ್ಮ್ಸ್ ಐಟ್ಯೂನ್ಸ್ ಕಾಂಟ್ರಾಕ್ಟ್ ಛೇಂಜ್] {{Webarchive|url=https://web.archive.org/web/20090916064440/http://www.macworld.co.uk/ipod-itunes/news/index.cfm?newsid=18459 |date=2009-09-16 }}, ''[[ಮ್ಯಾಕ್ವರ್ಲ್ಡ್ UK]]'', 2007-07-04. 2007-07-05ರಂದು ಮರುಸಂಪಾದಿಸಿದ್ದು.</ref> 2007ರ ಸೆಪ್ಟೆಂಬರ್ 5ರಂದು ನಡೆದ "ದಿ ಬೀಟ್ ಗೋಸ್ ಆನ್..." ಎಂಬ ಶೀರ್ಷಿಕೆ ಹೊತ್ತ ಸಂಗೀತ ಸಮಾರಂಭದಲ್ಲಿ [[ಐಟ್ಯೂನ್ಸ್ ವೈ-ಫೈ ಸಂಗೀತ ಮಳಿಗೆ]]ಯನ್ನು ಆಪಲ್ ಕಂಪನಿಯು ಪರಿಚಯಿಸಿತು. ಐಫೋನ್ನಿಂದಾಗಲೀ ಅಥವಾ ಒಂದು ಐಪಾಡ್ ಟಚ್ನ ನೆರವಿನಿಂದಾಗಲೀ ಸಂಗೀತದ ಮಳಿಗೆಗೆ ಬಳಕೆದಾರರು ಪ್ರವೇಶಾವಕಾಶ ಪಡೆಯುವಲ್ಲಿ ಈ ಸೇವೆಯು ಅನುವು ಮಾಡಿಕೊಡುವುದರ ಜೊತೆಗೆ, ಬಳಕೆದಾರರ ಐಟ್ಯೂನ್ಸ್ ಸಂಗ್ರಹದೊಂದಿಗೆ ಸಮನ್ವಯ ಸಾಧಿಸಬಲ್ಲ ಉಪಕರಣವೊಂದಕ್ಕೆ ಹಾಡುಗಳನ್ನು ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಲೂ ಸಹ ಅವಕಾಶ ಕಲ್ಪಿಸುತ್ತದೆ.
==== ಆಟಗಳು ====
{{Main|iPod game|App Store}}
ಐಪಾಡ್ಗಳ ವಿವಿಧ ಆವೃತ್ತಿಗಳ ಮೇಲೆ [[ವಿಡಿಯೋ ಆಟ]]ಗಳನ್ನು ಆಡಬಹುದು. ''[[ಬ್ರಿಕ್]]'' ಆಟವನ್ನು (ಮೂಲತಃ ಈ ಅಟವನ್ನು ಕಂಡುಹಿಡಿದದ್ದು ಆಪಲ್ನ ಸಹ-ಸಂಸ್ಥಾಪಕನಾದ [[ಸ್ಟೀವ್ ವೊಝ್ನಿಯಾಕ್]]) ಮೂಲ ಐಪಾಡ್ ಒಳಗೊಂಡಿದ್ದು, [[ಈಸ್ಟರ್ ಮೊಟ್ಟೆ]] ಮುಚ್ಚಿಡಲಾದ ಲಕ್ಷಣದಂತೆ ಇದನ್ನು ಸೇರಿಸಲಾಗಿತ್ತು; ನಂತರದ [[ಫರ್ಮ್ವೇರ್]] ಆವೃತ್ತಿಗಳು ಇದನ್ನೊಂದು ಸೇವಾಪಟ್ಟಿಯ ಆಯ್ಕೆಯಾಗಿ ಸೇರಿಸಿದವು.
ಐಪಾಡ್ನ ನಂತರದ ಆವೃತ್ತಿಗಳು ''ಬ್ರಿಕ್'' ನ ಜೊತೆಗೆ ಇನ್ನೂ ಮೂರು ಆಟಗಳನ್ನು ಸೇರಿಸಿದವು. ಅವುಗಳೆಂದರೆ: ''[[ಪ್ಯಾರಾಶೂಟ್]]'', ''[[ಸಾಲಿಟೇರ್]]'', ಮತ್ತು ''ಮ್ಯೂಸಿಕ್ ಕ್ವಿಝ್''.
2006ರ ಸೆಪ್ಟೆಂಬರ್ನಲ್ಲಿ [[ಐಟ್ಯೂನ್ಸ್ 7]]ರ ಬಿಡುಗಡೆಯ ಸಂದರ್ಭದಲ್ಲಿ ನಡೆಯುವ ಖರೀದಿಯ ಜೊತೆಗೆ ಹೆಚ್ಚುವರಿ ಆಟಗಳನ್ನು ನೀಡಲು [[ಐಟ್ಯೂನ್ಸ್ ಮಳಿಗೆ]]ಯು ಪ್ರಾರಂಭಿಸಿತು. ಐಪಾಡ್ ತಂತ್ರಾಂಶ 1.2 ಅಥವಾ ನಂತರದ ಆವೃತ್ತಿಯೊಂದಿಗಿನ [[ಐದನೇ ಪೀಳಿಗೆಯ ಐಪಾಡ್]]ನೊಂದಿಗೆ ಅವು ಹೊಂದಿಕೊಳ್ಳುತ್ತಿದ್ದವು. ಆ ಆಟಗಳೆಂದರೆ: ''[[ಬೆಜೆವೆಲೆಡ್]]'', ''ಕ್ಯುಬಿಸ್ 2'', ''[[ಮಹ್ಜಾಂಗ್]]'', ''[[ಮಿನಿ]] [[ಗಾಲ್ಫ್]]'', ''[[ಪ್ಯಾಕ್-ಮನ್]]'', ''[[ಟೆಟ್ರಿಸ್]]'', ''[[ಟೆಕ್ಸಾಸ್ ಹೋಲ್ಡ್ ’ಎಮ್]]'', ''[[ವರ್ಟೆಕ್ಸ್]]'', ಮತ್ತು ''[[ಝುಮಾ]]''. ಅಲ್ಲಿಂದೀಚೆಗೆ ಹೆಚ್ಚುವರಿ ಆಟಗಳನ್ನು ಸೇರಿಸಲಾಗಿದೆ. ಐಪಾಡ್ ನ್ಯಾನೋ ಮತ್ತು ಐಪಾಡ್ ಕ್ಲಾಸಿಕ್ನ ಪ್ರಸಕ್ತ ಮತ್ತು ಸ್ವಲ್ಪವೇ ಹಿಂದಿನ ಪೀಳಿಗೆಯ ಮೇಲೆ ಈ ಆಟಗಳು ಕಾರ್ಯನಿರ್ವಹಿಸುತ್ತವೆ.
ಐಪಾಡ್ಗಾಗಿ ಆಟಗಳನ್ನು ರೂಪಿಸುವ [[ನ್ಯಾಮ್ಕೋ]], [[ಸ್ಕ್ವೇರ್ ಎನಿಕ್ಸ್]], [[ಇಲೆಕ್ಟ್ರಾನಿಕ್ ಆರ್ಟ್ಸ್]], [[ಸೇಗಾ]], ಮತ್ತು [[ಹಡ್ಸನ್ ಸಾಫ್ಟ್]]ನಂತಹ ಇತರ ಕಂಪನಿಗಳ ಜೊತೆಗೆ, ವಿಡಿಯೋ ಆಟದ ಕೈನಲ್ಲಿ ಹಿಡಿಯುವ ಕನ್ಸೋಲ್ ಮಾರುಕಟ್ಟೆಯನ್ನು ಪ್ರವೇಶಿಸುವುದರ ಕಡೆಗೆ ಆಪಲ್ನ MP3 ಸಾಧನವು ಮಹೋನ್ನತವಾದ ಹೆಜ್ಜೆಗಳನ್ನಿರಿಸಿದೆ.{{POV-statement|date=January 2009}} [[ಗೇಮ್ಪ್ರೊ]] ಮತ್ತು [[EGM]]ನಂತಹ ವಿಡಿಯೋ ನಿಯತಕಾಲಿಕೆಗಳೂ ಸಹ ಅವುಗಳ ಇತ್ತೀಚಿನ ಬಹುತೇಕ ಆಟಗಳನ್ನು ವಿಮರ್ಶೆಮಾಡಿವೆ ಮತ್ತು ಶ್ರೇಯಾಂಕವನ್ನು ನೀಡಿವೆ.<ref>{{Cite web |url=http://www.gamepro.com/article/features/81588/ipod-games-review-roundup/ |title=ಐಪಾಡ್ ಗೇಮ್ಸ್ ರಿವ್ಯೂ ರೌಂಡಪ್ |access-date=2009-12-21 |archive-date=2011-06-07 |archive-url=https://web.archive.org/web/20110607151141/http://www.gamepro.com/article/features/81588/ipod-games-review-roundup/ |url-status=dead }}</ref>
ಆಟಗಳು [[.ipg]] ಕಡತಗಳ ಸ್ವರೂಪದಲ್ಲಿದ್ದು, ಅವು ವಾಸ್ತವವಾಗಿ ಮರೆಮಾಚಲಾಗಿರುವ [[.zip]] ಸಂಗ್ರಹಾಗಾರಗಳಾಗಿವೆ. ಅವನ್ನು ಹಿಗ್ಗಲಿಸಿದಾಗ, ಸಾಮಾನ್ಯವಾದ ಶ್ರವ್ಯ ಮತ್ತು ಬಿಂಬದ ಕಡತಗಳ ಜೊತೆಗೆ, ಕಾರ್ಯಸಾಧ್ಯವಾದ ಕಡತಗಳನ್ನೂ ಅವು ಬಹಿರಂಗಪಡಿಸುವುದರಿಂದ, [[ತೃತೀಯ ಕಂಪನಿಗಳ ಆಟಗಳ]] ಸಾಧ್ಯತೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಐಪಾಡ್-ಉದ್ದೇಶಿತ ಅಭಿವೃದ್ಧಿಗಾಗಿ ಆಪಲ್ ಕಂಪನಿಯು [[ತಂತ್ರಾಂಶ ಅಭಿವೃದ್ಧಿ ಕಿಟ್]] (ಸಾಫ್ಟ್ವೇರ್ ಡೆವಲಪ್ಮೆಂಟ್ ಕಿಟ್-SDK) ಒಂದನ್ನು ಸಾರ್ವಜನಿಕವಾಗಿ ಬಿಡುಗಡೆಮಾಡಿಲ್ಲ.<ref>[http://www.bensinclair.com/article/whats-inside-an-ipod-game "ವಾಟ್ ಈಸ್ ಇನ್ಸೈಡ್ ಆನ್ ಐಪಾಡ್ ಗೇಮ್?"] {{Webarchive|url=https://web.archive.org/web/20080907165721/http://bensinclair.com/article/whats-inside-an-ipod-game |date=2008-09-07 }} bensinclair.com, 2006ರ ಸೆಪ್ಟೆಂಬರ್ 14.</ref> [[ಐಫೋನ್ SDK]]ಯೊಂದಿಗೆ ತಯಾರಾದ ಆಪಲ್ ಉತ್ಪನ್ನಗಳು ಐಪಾಡ್ ಟಚ್ ಮತ್ತು ಐಫೋನ್ ಮೇಲಿನ [[ಐಫೋನ್ OS]]ನೊಂದಿಗೆ ಮಾತ್ರವೇ ಹೊಂದಿಕೊಳ್ಳುವಂತಿದ್ದು, ಅದು ಕ್ಲಿಕ್-ಚಕ್ರ ಆಧರಿತ ಆಟಗಳನ್ನು ಚಾಲಿಸಲಾರದು.
=== ಕಡತ ಶೇಖರಣೆ ಮತ್ತು ವರ್ಗಾವಣೆ ===
ಐಪಾಡ್ ಟಚ್ನ್ನು ಹೊರತುಪಡಿಸಿ ಉಳಿದೆಲ್ಲಾ ಐಪಾಡ್ಗಳು ದತ್ತಾಂಶದ ಕಡತಗಳನ್ನು ಶೇಖರಿಸಲಿಕ್ಕಾಗಿ "ಡಿಸ್ಕ್ ಮೋಡ್"ನಲ್ಲಿ [[ಮಾಸ್ ಸ್ಟೋರೇಜ್ ಉಪಕರಣಗಳ]] ರೀತಿಯಲ್ಲಿ ಕಾರ್ಯನಿರ್ವಹಿಸಬಲ್ಲವು.<ref>{{Cite web |url=http://docs.info.apple.com/article.html?artnum=306414 |title=ಐಪಾಡ್ ಟಚ್: ಅಪಿಯರ್ಸ್ ಇನ್ ಐಟ್ಯೂನ್ಸ್ ಬಟ್ ನಾಟ್ ಇನ್ ಫೈಂಡರ್ ಆರ್ ವಿಂಡೋಸ್ ಡೆಸ್ಕ್ಟಾಪ್ |access-date=2009-12-21 |archive-date=2008-04-18 |archive-url=https://web.archive.org/web/20080418104003/http://docs.info.apple.com/article.html?artnum=306414 |url-status=dead }}</ref> ಮ್ಯಾಕ್ OS X ಕಂಪ್ಯೂಟರ್ ಒಂದರ ಮೇಲೆ ಐಪಾಡ್ವೊಂದನ್ನು ಫಾರ್ಮ್ಯಾಟ್ ಮಾಡಿದರೆ, ಅದು [[HFS+]] ಕಡತ ವ್ಯವಸ್ಥೆಯ ಸ್ವರೂಪವನ್ನು ಬಳಸುತ್ತದೆ. ಒಂದು ಮ್ಯಾಕ್ ಕಂಪ್ಯೂಟರ್ಗೆ ಒಂದು [[ಬೂಟ್ ಡಿಸ್ಕ್]]ನಂತೆ ಕಾರ್ಯನಿರ್ವಹಿಸಲು ಈ ವ್ಯವಸ್ಥೆಯು ಐಪಾಡ್ಗೆ ಅವಕಾಶ ನೀಡುತ್ತದೆ.<ref>{{Cite web |url=http://lifehacker.com/software/how-to/boot-up-your-mac-from-your-ipod-260157.php |title=ಹೌ ಟು: ಬೂಟ್ ಅಪ್ ಯುವರ್ ಮ್ಯಾಕ್ ಫ್ರಂ ಯುವರ್ ಐಪಾಡ್ |access-date=2009-12-21 |archive-date=2009-02-22 |archive-url=https://web.archive.org/web/20090222011051/http://lifehacker.com/software/how-to/boot-up-your-mac-from-your-ipod-260157.php |url-status=dead }}</ref> ವಿಂಡೋಸ್ ಮೇಲೆ ಇದನ್ನು ಫಾರ್ಮ್ಯಾಟ್ ಮಾಡಿದರೆ, [[FAT32]] ಸ್ವರೂಪವು ಬಳಸಲ್ಪಡುತ್ತದೆ. ವಿಂಡೋಸ್ನೊಂದಿಗೆ-ಹೊಂದಿಕೊಳ್ಳುವ ಐಪಾಡ್ನ ಉದಯವಾಗುವುದರೊಂದಿಗೆ, ಐಪಾಡ್ ಶ್ರೇಣಿಯಲ್ಲಿ ಬಳಸಲಾಗುವ ಡಿಫಾಲ್ಟ್ ಕಡತ ವ್ಯವಸ್ಥೆಯು HFS+ ನಿಂದ FAT32ಗೆ ಬದಲಾವಣೆಯಾಯಿತು. ಆದರೂ ಅದನ್ನು ಎರಡೂ ಕಡತ ವ್ಯವಸ್ಥೆಗೆ (ಕಟ್ಟುನಿಟ್ಟಾಗಿ FAT32ಆಗಿರುವ ಐಪಾಡ್ ಷಫಲ್ನ್ನು ಹೊರತುಪಡಿಸಿ) ಮರು-ಫಾರ್ಮ್ಯಾಟ್ ಮಾಡಬಹುದಾಗಿದೆ.
ಸಾಮಾನ್ಯವಾಗಿ, ಒಂದು ವೇಳೆ ಹೊಸ ಐಪಾಡ್ವೊಂದನ್ನು (ಐಪಾಡ್ ಷಫಲ್ ಹೊರತುಪಡಿಸಿ) ವಿಂಡೋಸ್ನ್ನು ಒಳಗೊಂಡಿರುವ ಕಂಪ್ಯೂಟರ್ ಒಂದಕ್ಕೆ ಆರಂಭದಲ್ಲಿ ಸಂಪರ್ಕ ಕಲ್ಪಿಸಿದರೆ, ಅದು FAT32ನೊಂದಿಗೆ ಫಾರ್ಮ್ಯಾಟ್ ಆಗುತ್ತದೆ, ಮತ್ತು ಮ್ಯಾಕ್ OS Xನ್ನು ಒಳಗೊಂಡಿರುವ ಮ್ಯಾಕ್ ಕಂಪ್ಯೂಟರ್ ಒಂದಕ್ಕೆ ಆರಂಭದಲ್ಲಿ ಸಂಪರ್ಕ ಕಲ್ಪಿಸಿದರೆ, ಅದು HFS+ನೊಂದಿಗೆ ಫಾರ್ಮ್ಯಾಟ್ ಆಗುತ್ತದೆ.<ref>{{Cite web |url=http://ipod.about.com/od/restoreandreformatipod/a/ipod_format_a.htm |title=ಆರ್ಕೈವ್ ನಕಲು |access-date=2009-12-21 |archive-date=2009-01-08 |archive-url=https://web.archive.org/web/20090108053753/http://ipod.about.com/od/restoreandreformatipod/a/ipod_format_a.htm |url-status=dead }}</ref> ಇತರ ಅನೇಕ MP3 ಸಂಗೀತ ಸಾಧನಗಳಿಗಿಂತ ಭಿನ್ನವಾಗಿ, ಶ್ರವ್ಯ ಅಥವಾ ದೃಶ್ಯ ಕಡತಗಳನ್ನು ಒಂದು ವಿಶಿಷ್ಟವಾದ [[ಕಡತ ನಿರ್ವಹಣಾ]] ಅನ್ವಯಿಕ ತಂತ್ರಾಂಶದೊಂದಿಗಿನ ಡ್ರೈವ್ಗೆ ಕೇವಲ ನಕಲು ಮಾಡುವುದರಿಂದ, ಅವುಗಳನ್ನು ಸೂಕ್ತವಾಗಿ ತಲುಪಲು ಐಪಾಡ್ ಒಂದಕ್ಕೆ ಅವಕಾಶವಾಗುವುದಿಲ್ಲ.
ಸಂಗೀತದ ಕಡತಗಳನ್ನು ಐಪಾಡ್ಗಳಿಗೆ ವರ್ಗಾಯಿಸಲೆಂದೇ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿರುವ ತಂತ್ರಾಂಶವನ್ನು ಬಳಕೆದಾರನು ಬಳಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ಮಾತ್ರವೇ ಸದರಿ ಕಡತಗಳನ್ನು ಆಲಿಸಲು ಅಥವಾ ವೀಕ್ಷಿಸಲು ಸಾಧ್ಯವಾಗುತ್ತದೆ. ಅಸಂಖ್ಯಾತ ವೈವಿಧ್ಯಮಯ ತಂತ್ರಾಂಶ ವೇದಿಕೆಗಳ ಮೇಲೆ ರೂಪುಗೊಂಡ [[ಹಲವಾರು ಪರ್ಯಾಯ ತೃತೀಯ ಅನ್ವಯಿಕ ತಂತ್ರಾಂಶಗಳು]] ಲಭ್ಯವಿವೆಯಾದರೂ, ಐಪಾಡ್ವೊಂದಕ್ಕೆ ಸಂಗೀತವನ್ನು ವರ್ಗಾಯಿಸಲು ಐಟ್ಯೂನ್ಸ್ನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
ಐಟ್ಯೂನ್ಸ್ ಮಳಿಗೆಯ ಖರೀದಿಸಿದ ಸಂಗೀತ ಕಡತವನ್ನು ಒಂದು ಐಪಾಡ್ನಿಂದ ಒಂದು ಕಂಪ್ಯೂಟರ್ಗೆ ಐಟ್ಯೂನ್ಸ್ನ 7 ಮತ್ತು ನಂತರದ ಆವೃತ್ತಿಗಳು ವರ್ಗಾಯಿಸಬಲ್ಲವು. ಆದರೆ, ಆ ಕಂಪ್ಯೂಟರ್ ಒಳಗೊಂಡಿರುವ DRM ಸಂರಕ್ಷಿತ ಮಾಧ್ಯಮವು ಈ ಸಂಗೀತ ಕಡತವನ್ನು ಚಾಲಿಸುವ ಅನುಜ್ಞೆ ಅಥವಾ ಅಧಿಕೃತತೆಯನ್ನು ಹೊಂದಿರಬೇಕು. ಐಪಾಡ್ವೊಂದರಲ್ಲಿನ ಒಂದು ಅಗೋಚರ ಅಥವಾ ಗುಪ್ತ ಫೋಲ್ಡರಿನಲ್ಲಿ, ಸ್ವಾಮ್ಯಪಡೆದ ದತ್ತಾಂಶ ಸಂಗ್ರಹ ಕಡತವೊಂದರ ಜೊತೆಗೆ ಸಂಗೀತದ ಕಡತಗಳನ್ನು ಶೇಖರಿಸಿಡಲಾಗುತ್ತದೆ. [[ಗುಪ್ತ ಕಡತಗಳನ್ನು]] ತೋರಿಸುವಂತೆ ಅನುವು ಮಾಡುವ ಮೂಲಕ, ಅತಿಥೇಯ ಕಾರ್ಯಾಚರಣಾ ವ್ಯವಸ್ಥೆಯ (ಹೋಸ್ಟ್ ಆಪರೇಟಿಂಗ್ ಸಿಸ್ಟಂ) ಮೇಲಿನ ಗುಪ್ತ ಹುರುಳನ್ನು ತಲುಪಬಹುದು. ಐಪಾಡ್ನಿಂದ ಆಚೆಗೆ ಕಡತಗಳು ಅಥವಾ ಫೋಲ್ಡರುಗಳನ್ನು ನಕಲು ಮಾಡುವ ಮೂಲಕ ಸಂಗೀತ ಕಡತಗಳನ್ನು ನಂತರ ನಾವೇ ಸ್ವತಃ ಪುನಃ ವಶಪಡಿಸಿಕೊಳ್ಳಬಹುದು. ಐಪಾಡ್ನಿಂದ ಆಚೆಗೆ ಸಂಗೀತ ಕಡತಗಳನ್ನು ಸುಲಭವಾಗಿ ನಕಲು ಮಾಡುವಲ್ಲಿ ಅನೇಕ ತೃತೀಯ ಅನ್ವಯಿಕ ತಂತ್ರಾಂಶಗಳೂ ಅನುವು ಮಾಡಿಕೊಡುತ್ತವೆ.
== ಯಂತ್ರಾಂಶ ==
{| class="wikitable sortable "
|+ಚಿಪ್ಸೆಟ್ಗಳು ಮತ್ತು ಇಲೆಕ್ಟ್ರಾನಿಕ್ ಶಾಸ್ತ್ರ
!ಚಿಪ್ಸೆಟ್ ಅಥವಾ ಇಲೆಕ್ಟ್ರಾನಿಕ್ ಶಾಸ್ತ್ರ
!ಉತ್ಪನ್ನ(ಗಳು)
!ಉಪಸಾಮಗ್ರಿ(ಗಳು)
|-
| rowspan="4"|ಸೂಕ್ಷ್ಮನಿಯಂತ್ರಕ
| ಐಪಾಡ್ ಕ್ಲಾಸಿಕ್ ಮೊದಲಿನಿಂದ ಮೂರನೆಯವರೆಗಿನ ಪೀಳಿಗೆಗಳು
| 90 MHzನಲ್ಲಿ ಓಡುತ್ತಿರುವ, [[ARM]] 7TDMI-ನಿಂದ ಜನ್ಯವಾದ ಎರಡು [[CPUಗಳು]]
|-
| ಐಪಾಡ್ ಕ್ಲಾಸಿಕ್ ನಾಲ್ಕನೇ ಮತ್ತು ಐದನೇ ಪೀಳಿಗೆಗಳು, ಐಪಾಡ್ ಮಿನಿ, ಐಪಾಡ್ ನ್ಯಾನೋ ಮೊದಲ ಪೀಳಿಗೆ
| ಬ್ಯಾಟರಿಯ ಜೀವಿತಾವಧಿಯನ್ನು ಉಳಿಸಲು 80 MHzನಷ್ಟು ಉತ್ತುಂಗದಲ್ಲಿ ಓಡುತ್ತಿರುವ, ಚಂಚಲ-ವೇಗದ [[ARM]] 7TDMI CPUಗಳು.
|-
| ಐಪಾಡ್ ನ್ಯಾನೋ ಎರಡನೇ ಪೀಳಿಗೆ
| [[ARM ಪ್ರೊಸೆಸರ್]] ಒಂದರ ಸುತ್ತ ಆಧರಿಸಲ್ಪಟ್ಟಿರುವ [[ಸ್ಯಾಮ್ಸಂಗ್]] [[ಸಿಸ್ಟಂ-ಆನ್-ಎ-ಚಿಪ್]].<ref>ಕ್ಯಾಸ್ಸೆಲ್, ಜೋನಾಥನ್. [http://www.isuppli.com/markech/default.asp?id=360 ಆಪಲ್ ಡೆಲಿವರ್ಸ್ ಮೋರ್ ಫಾರ್ ಲೆಸ್ ವಿತ್ ನ್ಯೂ ಐಪಾಡ್ ನ್ಯಾನೋ], ಐ ಸಪ್ಲೈ ಕಾರ್ಪೊರೇಷನ್, 2006-09-20. 2006-10-21ರಂದು ಮರುಸಂಪಾದಿಸಿದ್ದು.</ref><ref>{{cite web |title=mobile SoC |url=http://www.samsung.com/global/business/semiconductor/products/mobilesoc/Products_MobileSoC.html |publisher=Samsung Group |accessdate=04 Aug 2009}}</ref>
|-
| ಐಪಾಡ್ ಷಫಲ್ ಮೊದಲನೆ ಪೀಳಿಗೆ
| ಸಂಗೀತದ ವಿಸಂಕೇತಿಸುವಿಕೆ (ಡಿಕೋಡಿಂಗ್) ಮತ್ತು ಶ್ರವಣ ವಿದ್ಯುನ್ಮಂಡಲ ಜಾಲವೆರಡನ್ನೂ ನಿರ್ವಹಿಸುವ [[ಸಿಗ್ಮಾಟೆಲ್]] STMP3550 ಚಿಪ್.<ref>ವಿಲಿಯಮ್ಸ್, ಮಾರ್ಟಿನ್. [http://www.pcworld.com/article/119799-1/article.html ಹೌ ಮಚ್ ಷುಡ್ ಆನ್ ಐಪಾಡ್ ಷಫಲ್ ಕಾಸ್ಟ್?] {{Webarchive|url=https://web.archive.org/web/20090303153350/http://www.pcworld.com/article/119799-1/article.html |date=2009-03-03 }}, ''[[PC ವರ್ಲ್ಡ್]]'', 2005-02-24. 2006-08-14ರಂದು ಮರುಸಂಪಾದಿಸಿದ್ದು.</ref>
|-
| rowspan="2"|ಶ್ರವಣ ಚಿಪ್
| ಎಲ್ಲಾ ಐಪಾಡ್ಗಳು (ಐಪಾಡ್ ಷಫಲ್, 6G ಕ್ಲಾಸಿಕ್ ಮತ್ತು 2G ಟಚ್ ಮಾದರಿಗಳನ್ನು ಹೊರತುಪಡಿಸಿ) <ref>[[ಮ್ಯಾಕ್ವರ್ಲ್ಡ್]] [http://www.macworld.co.uk/ipod-itunes/news/index.cfm?RSS&NewsID=20818 ವೋಲ್ಫ್ಸನ್ ಲೂಸಸ್ ಆಪಲ್ ಐಪಾಡ್ ಬಿಸಿನೆಸ್] {{Webarchive|url=https://web.archive.org/web/20110610175720/http://www.macworld.co.uk/ipod-itunes/news/index.cfm?RSS&NewsID=20818 |date=2011-06-10 }}</ref>
| [[ವೋಲ್ಫ್ಸನ್ ಮೈಕ್ರೋಎಲೆಕ್ಟ್ರಾನಿಕ್ಸ್]]ನಿಂದ ಅಭಿವೃದ್ಧಿಗೊಳಿಸಲ್ಪಟ್ಟ [[ಶ್ರವಣ ಕೋಡೆಕ್ಗಳು]]
|-
| ಆರನೇ ಪೀಳಿಗೆಯ ಐಪಾಡ್ ಕ್ಲಾಸಿಕ್
| [[ಸಿರಸ್ ಲಾಜಿಕ್]] ಶ್ರವಣ ಕೋಡೆಕ್ ಚಿಪ್
|-
| rowspan="4"|ಶೇಖರಣಾ ಮಾಧ್ಯಮ
| ಐಪಾಡ್ ಕ್ಲಾಸಿಕ್
| 45.7 ಮಿಮೀ (1.8 ಇಂಚು) ಹಾರ್ಡ್ ಡ್ರೈವ್ಗಳು ([[ATA-6]], 4200 rpm ಸ್ವಾಮ್ಯದ ಸಂಬಂಧಕಗಳೊಂದಿಗಿರುವುದು) [[ತೋಷಿಬಾ]] ಕಂಪನಿಯ ತಯಾರಿಕೆ
|-
| ಐಪಾಡ್ ಮಿನಿ
| 25.4 ಮಿಮೀ (1 ಇಂಚು) [[ಮೈಕ್ರೋಡ್ರೈವ್]] [[ಹಿಟಾಚಿ]] ಅಂಡ್ [[ಸೀಗೇಟ್]] ಕಂಪನಿಯ ತಯಾರಿಕೆ
|-
| ಐಪಾಡ್ ನ್ಯಾನೋ
| [[ಸ್ಯಾಮ್ಸಂಗ್]], [[ತೋಷಿಬಾ]], ಮತ್ತು ಇತರರಿಂದ ತಯಾರಿಸಲ್ಪಟ್ಟಿರುವ [[ಫ್ಲಾಷ್ ಮೆಮರಿ]]
|-
| ಐಪಾಡ್ ಷಫಲ್ ಮತ್ತು ಟಚ್
| [[ಫ್ಲಾಷ್ ಮೆಮರಿ]]
|-
| rowspan="2"|ಬ್ಯಾಟರಿಗಳು
| ಐಪಾಡ್ ಕ್ಲಾಸಿಕ್ ಮೊದಲನೆಯ ಮತ್ತು ಎರಡನೆಯ ಪೀಳಿಗೆ, ಷಫಲ್
| ಆಂತರಿಕ [[ಲಿಥಿಯಂ ಪಾಲಿಮರ್ ಬ್ಯಾಟರಿಗಳು]]
|-
| ಐಪಾಡ್ ಕ್ಲಾಸಿಕ್ 3G ನಂತರದ್ದು, ಐಪಾಡ್ ಮಿನಿ, ಐಪಾಡ್ ನ್ಯಾನೋ, ಐಪಾಡ್ ಟಚ್,
| ಆಂತರಿಕ [[ಲಿಥಿಯಂ-ಅಯಾನು ಬ್ಯಾಟರಿಗಳು]]
|-
| rowspan="3"|ಪ್ರದರ್ಶನ
| ಐಪಾಡ್ ನ್ಯಾನೋ
| 2.2-ಇಂಚು (ಓರೆಯಾದ್ದು) [[ಬಣ್ಣದ LCD]] ನೀಲಿ-ಬಿಳಿ [[LED ಬ್ಯಾಕ್ಲೈಟ್]]ನೊಂದಿಗಿನದು, [[320x240 ರೆಸಲ್ಯೂಷನ್]], 204 [[ಪಿಕ್ಸೆಲ್ಗಳು ಪ್ರತಿ ಇಂಚಿಗೆ]]<ref>{{cite web |title=iPod nano Technical Specifications |url=http://www.apple.com/ipodnano/specs.html |publisher=Apple Inc. |accessdate=04 Aug 2009}}</ref>
|-
| ಐಪಾಡ್ ಕ್ಲಾಸಿಕ್
| 2.5-ಇಂಚು (ಓರೆಯಾದ್ದು) [[ಬಣ್ಣದ LCD]] [[LED ಬ್ಯಾಕ್ಲೈಟ್]]ನೊಂದಿಗಿನದು, [[320x240 ರೆಸಲ್ಯೂಷನ್]], 163 [[ಪಿಕ್ಸೆಲ್ಗಳು ಪ್ರತಿ ಇಂಚಿಗೆ]]<ref>{{cite web |title=iPod classic Technical Specifications |url=http://www.apple.com/ipodclassic/specs.html |publisher=Apple Inc. |accessdate=04 Aug 2009}}</ref>
|-
| ಐಪಾಡ್ ಟಚ್
| 3.5-ಇಂಚು (ಓರೆಯಾದ್ದು) [[ವಿಶಾಲತೆರೆ]] [[ಮಲ್ಟಿ-ಟಚ್]], [[480x320 ರೆಸಲ್ಯೂಷನ್]], 163 [[ಪಿಕ್ಸೆಲ್ಗಳು ಪ್ರತಿ ಇಂಚಿಗೆ]]<ref>{{cite web |title=iPod touch Technical Specifications |url=http://www.apple.com/ipodtouch/specs.html |publisher=Apple Inc. |accessdate=04 Aug 2009}}</ref>
|}
=== ಸಂಪರ್ಕಶೀಲತೆ ===
[[ಚಿತ್ರ:Apple iPod Chargers.jpg|thumb|right|ಉತ್ತರ ಅಮೆರಿಕಾಗಾಗಿ ನಿರ್ಮಿಸಲಾದ ನಾಲ್ಕು ಐಪಾಡ್ ವಾಲ್ ಛಾರ್ಜರ್ಗಳು, ಎಲ್ಲವೂ ಆಪಲ್ನಿಂದ ನಿರ್ಮಿತವಾದದ್ದು.ಫೈರ್ವೈರ್ (ಎಡಭಾಗ) ಮತ್ತು USB (ಬಲಭಾಗದ ಮೂರು) ಸಂಪರ್ಕ ಸಾಧನಗಳನ್ನು ಇವು ಹೊಂದಿದ್ದು, ಈ ಸಾಧನಗಳು ಕಂಪ್ಯೂಟರ್ ನೆರವಿಲ್ಲದೆಯೇ ಛಾರ್ಜ್ ಮಾಡಲು ಐಪಾಡ್ಗಳಿಗೆ ಅನುವುಮಾಡಿಕೊಡುತ್ತವೆ.ಘಟಕಗಳನ್ನು ಹೇಗೆ ಚಿಕಣಿ ಪ್ರತಿಕೃತಿಯ ರೂಪಕ್ಕೆ ಇಳಿಸಲಾಗಿದೆ ಎಂಬುದನ್ನು ಗಮನಿಸಿ. ಇತರ ದೇಶಗಳಿಗೆ ಮೀಸಲಾದವುಗಳು ಇನ್ನೂ ದೊಡ್ಡದಾಗಿವೆ.]]
ಹಾಡುಗಳನ್ನು ಪರಿಷ್ಕರಿಸುವ ಅಥವಾ [[ಬ್ಯಾಟರಿ]]ಯನ್ನು ಪುನರ್ಭರ್ತಿ (ರೀಚಾರ್ಜ್) ಮಾಡುವ ಸಂದರ್ಭದಲ್ಲಿ ಅತೀಥೇಯ ಕಂಪ್ಯೂಟರ್ಗೆ ಮೂಲತಃ ಒಂದು [[ಫೈರ್ವೈರ್]] ಸಂಪರ್ಕವನ್ನು ಮಾಡಲಾಗುತ್ತಿತ್ತು. ಮೊದಲ ನಾಲ್ಕು ಪೀಳಿಗೆಯ ಉತ್ಪನ್ನಗಳೊಂದಿಗೆ ನೀಡಲಾಗಿದ್ದ ಒಂದು ಪವರ್ ಅಡಾಪ್ಟರ್ನ್ನು ಬಳಸಿಕೊಂಡೂ ಸಹ ಬ್ಯಾಟರಿಯನ್ನು ಪುನರ್ಭರ್ತಿ ಮಾಡಬಹುದಾಗಿತ್ತು. ಫೈರ್ವೈರ್ ಅಥವಾ [[USB]] ಸಂಪರ್ಕಶೀಲತೆಗಾಗಿ ಅನುವುಮಾಡಿಕೊಡಲು ಒಂದು 30-ಪಿನ್ [[ಡಾಕ್ ಸಂಬಂಧಕ]]ವನ್ನು ಮೂರನೇ ಪೀಳಿಗೆಯ ಉತ್ಪನ್ನದೊಂದಿಗೆ ಸೇರಿಸಿ ನೀಡಲು ಪ್ರಾರಂಭಿಸಲಾಯಿತು. ಆಪಲ್ ಕಂಪನಿಯನ್ನು ಹೊರತುಪಡಿಸಿದ ಬಹುತೇಕ ಉತ್ಪನ್ನಗಳು ಅಥವಾ ಯಂತ್ರಗಳು ಆ ಸಮಯದಲ್ಲಿ ಫೈರ್ವೈರ್ ಸಂಪರ್ಕಕುಳಿಗಳನ್ನು (ಅಂದರೆ, ಪೋರ್ಟ್ಗಳನ್ನು) ಹೊಂದಿರಲಿಲ್ಲವಾದ್ದರಿಂದ, ಈ ಹೊಸ ವ್ಯವಸ್ಥೆಯಿಂದಾಗಿ ಅವುಗಳೊಂದಿಗೂ ಉತ್ತಮ ರೀತಿಯ ಹೊಂದಾಣಿಕೆಗೆ ಅನುವುಮಾಡಿಕೊಟ್ಟಿತು.
ಅಂತಿಮವಾಗಿ, ಫೈರ್ವೈ್ನ ಬದಲಿಗೆ USB ಕೇಬಲ್ಗಳನ್ನು ಒಡಗೂಡಿದ ಐಪಾಡ್ಗಳನ್ನು ಆಪಲ್ ಕಂಪನಿಯು ಮಾರುಕಟ್ಟೆಗೆ ಬಿಡುಗಡೆಮಾಡಲಾರಂಭಿಸಿತು. ಆದರೂ ಫೈರ್ವೈರ್ನೊಂದಿಗಿನ ಉತ್ಪನ್ನವು ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿ ಲಭ್ಯವಿತ್ತು. ಮೊದಲನೇ ಪೀಳಿಗೆಯ ಐಪಾಡ್ ನ್ಯಾನೋ ಮತ್ತು ಐದನೇ ಪೀಳಿಗೆಯ ಐಪಾಡ್ ಕ್ಲಾಸಿಕ್ ಉತ್ಪನ್ನಗಳು ಬಿಡುಗಡೆಯಾದಂದಿನಿಂದ, ದತ್ತಾಂಶದ ವರ್ಗಾವಣಾ ಕಾರ್ಯಗಳಿಗೆ ಫೈರ್ವೈರ್ನ್ನು ಬಳಸುವುದನ್ನು ಆಪಲ್ ಕಂಪನಿಯು ಸ್ಥಗಿತಗೊಳಿಸಿತು (ಆದರೆ, ಉಪಕರಣವನ್ನು ಮರುಭರ್ತಿ ಮಾಡಲು ಫೈರ್ವೈರ್ನ ಬಳಕೆಗೆ ಈಗಲೂ ಅವಕಾಶ ನೀಡಲಾಗಿದೆ). ವೆಚ್ಚ ತಗ್ಗಿಸಲು ಹಾಗೂ ಉತ್ಪನ್ನದ ಆಕಾರವನ್ನು ಗಮನದಲ್ಲಿಟ್ಟುಕೊಂಡು ಈ ಪ್ರಯತ್ನವನ್ನು ಮಾಡಲಾಗಿತ್ತು. ಎರಡನೇ-ಪೀಳಿಗೆಯ ಐಪಾಡ್ ಟಚ್ ಮತ್ತು ನಾಲ್ಕನೇ-ಪೀಳಿಗೆಯ ಐಪಾಡ್ ನ್ಯಾನೋ ಬಂದಂದಿನಿಂದ, ಫೈರ್ವೈರ್ ಮರುಭರ್ತೀಕರಣದ ಅರ್ಹತೆಯನ್ನು ತೆಗೆದುಹಾಕಲಾಗಿದೆ. ಎರಡನೇ ಮತ್ತು ಮೂರನೇ ಪೀಳಿಗೆಗೆ ಸೇರಿದ ಐಪಾಡ್ ಷಫಲ್ ಒಂದು ಏಕ [[3.5 ಮಿಮೀ ಜ್ಯಾಕ್]]ನ್ನು ಬಳಸುತ್ತದೆ. ಈ ಜ್ಯಾಕ್ ಒಂದು ಹೆಡ್ಫೋನ್ನಂತೆ ಮಾತ್ರವೇ ಅಲ್ಲದೇ, ಡಾಕ್ಗಾಗಿರುವ ಒಂದು ದತ್ತಾಂಶ ಸಂಪರ್ಕಕುಳಿಯಂತೆಯೂ ಕಾರ್ಯನಿರ್ವಹಿಸುತ್ತದೆ.
ಉಪಸಾಮಗ್ರಿಗಳೊಂದಿಗೆ ಐಪಾಡ್ ಸಂಪರ್ಕಹೊಂದಲೂ ಸಹ ಡಾಕ್ ಸಂಬಂಧಕವು ಅನುವುಮಾಡಿಕೊಟ್ಟಿದ್ದು, ಈ ಉಪಸಾಮಗ್ರಿಗಳು ಐಪಾಡ್ನ ಸಂಗೀತ, ದೃಶ್ಯ ಹಾಗೂ ಛಾಯಾಚಿತ್ರದ ಪುನರ್ಚಾಲನಾ (ಪ್ಲೇಬ್ಯಾಕ್) ಕಾರ್ಯಗಳಿಗೆ ಪೂರಕವಾಗಿ ನಿಲ್ಲುತ್ತವೆ. ಈಗ ಸ್ಥಗಿತಗೊಳಿಸಲಾಗಿರುವ [[ಐಪಾಡ್ ಹೈ-ಫೈ]]ನಂತಹ ಕೆಲವೊಂದು ಉಪಸಾಮಗ್ರಿಗಳನ್ನು ಆಪಲ್ ಕಂಪನಿಯು ಮಾರಾಟಮಾಡುತ್ತದೆಯಾದರೂ, ಅವುಗಳಲ್ಲಿ ಬಹುಪಾಲು [[ಬೆಲ್ಕಿನ್]] ಮತ್ತು [[ಗ್ರಿಫಿನ್]]ನಂತಹ ತೃತೀಯ ಕಂಪನಿಗಳ ಉತ್ಪನ್ನಗಳಾಗಿವೆ. ಕೆಲವೊಂದು ಬಾಹ್ಯೋಪಕರಣಗಳು (ಪೆರಿಫೆರಲ್ಸ್) ತಮ್ಮದೇ ಸ್ವಂತ ಇಂಟರ್ಫೇಸ್ನ್ನು ಬಳಸಿದರೆ, ಇತರವು ಐಪಾಡ್ನದೇ ಪರದೆಯನ್ನು ಬಳಸುತ್ತವೆ. ಏಕೆಂದರೆ ಡಾಕ್ ಸಂಬಂಧಕವು ಒಂದು ಸ್ವಾಮ್ಯದ ಇಂಟರ್ಫೇಸ್ ಆಗಿದ್ದು, ಇಂಟರ್ಫೇಸ್ನ್ನು ಅನುಷ್ಠಾನಗೊಳಿಸಬೇಕು ಅಥವಾ ಕಾರ್ಯಗತಗೊಳಿಸಬೇಕೆಂದರೆ, ಅದಕ್ಕಾಗಿ ಆಪಲ್ ಕಂಪನಿಗೆ ರಾಯಧನವನ್ನು ಪಾವತಿಸುವುದು ಅತ್ಯಗತ್ಯ.<ref>{{cite news |first= Joel |last= Johnson |authorlink= |coauthors= |title= How the "Apple Tax" Boosts Prices on iPod & iPhone Accessories |url= http://www.popularmechanics.com/technology/industry/4272628.html?page=1 |work= |publisher= [[Popular Mechanics]] |date= 2008-07-10 |accessdate= 2008-09-09 |archive-date= 2008-08-17 |archive-url= https://web.archive.org/web/20080817114656/http://www.popularmechanics.com/technology/industry/4272628.html?page=1 |url-status= dead }}</ref>
=== ಉಪಸಾಮಗ್ರಿಗಳು ===
ಐಪಾಡ್ ಉತ್ಪನ್ನ ಶ್ರೇಣಿಗಾಗಿ ಅನೇಕ ಉಪಸಾಮಗ್ರಿಗಳು ತಯಾರಿಸಲ್ಪಟ್ಟಿವೆ. ಇವುಗಳ ಬಹುಪಾಲನ್ನು ತೃತೀಯ ಕಂಪನಿಗಳು ತಯಾರಿಸುತ್ತವೆಯಾದರೂ, [[ಐಪಾಡ್ ಹೈ-ಫೈ]] ನಂತರ ಮಾರುಕಟ್ಟೆಯನ್ನು ಪ್ರವೇಶಿಸಿದ ಅನೇಕ ಉಪಸಾಮಗ್ರಿಗಳನ್ನು ಸ್ವತಃ ಆಪಲ್ ಕಂಪನಿಯೇ ತಯಾರಿಸುತ್ತದೆ. ಇತರ ಸಂಗೀತ ಸಾಧನಗಳು ಹೊಂದಿರುವ ಶಬ್ದದ ಧ್ವನಿಮುದ್ರಕಗಳು, FM ರೇಡಿಯೋ ಟ್ಯೂನರ್ಗಳು, ತಂತಿಸಹಿತ ದೂರ ನಿಯಂತ್ರಕಗಳು, ಮತ್ತು TV ಸಂಪರ್ಕಗಳಿಗಾಗಿರುವ ಶ್ರವಣ/ದೃಶ್ಯ ಕೇಬಲ್ಗಳಂಥ ಹೆಚ್ಚುವರಿ ಲಕ್ಷಣಗಳನ್ನು ಕೆಲವೊಂದು ಉಪಸಾಮಗ್ರಿಗಳು ಸೇರ್ಪಡೆಮಾಡುತ್ತವೆ. [[ನೈಕ್+ಐಪಾಡ್]] ಪಾದಮಾಪಕ (ಪಿಡಾಮಿಟರ್) ಮತ್ತು ಐಪಾಡ್ ಕ್ಯಾಮರಾ ಸಂಬಂಧಕದಂಥ ವಿಶಿಷ್ಟ ಲಕ್ಷಣಗಳನ್ನು ಇತರ ಉಪಸಾಮಗ್ರಿಗಳು ನೀಡುತ್ತವೆ. ಗಮನಾರ್ಹವಾದ ಇತರ ಉಪಸಾಮಗ್ರಿಗಳಲ್ಲಿ ಬಾಹ್ಯ ಸ್ಪೀಕರುಗಳು, ನಿಸ್ತಂತು ದೂರನಿಯಂತ್ರಕಗಳು, ರಕ್ಷಣಾತ್ಮಕ ಕವಚಗಳು/ತೆಳು ಹೊದಿಕೆಗಳು ಮತ್ತು ನಿಸ್ತಂತು ಕರ್ಣವಾಣಿಗಳು (ಇಯರ್ಫೋನುಗಳು) ಸೇರಿವೆ.<ref>[http://www.etymotic.com/ephp/er88.aspx ಇನ್-ದಿ-ಇಯರ್ ಬ್ಲೂಟೂತ್ ಇಯರ್ಫೋನ್ಸ್] {{Webarchive|url=https://web.archive.org/web/20090220103013/http://www.etymotic.com/ephp/er88.aspx |date=2009-02-20 }}. 2007-02-17ರಂದು ಮರುಸಂಪಾದಿಸಿದ್ದು.</ref> 0}ಗ್ರಿಫಿನ್ ಟೆಕ್ನಾಲಜಿ, [[ಬೆಲ್ಕಿನ್]], [[JBL]], [[ಬೋಸ್]], [[ಮಾನ್ಸ್ಟರ್ ಕೇಬಲ್]], ಮತ್ತು [[ಸೆಂಡ್ಸ್ಟೇಷನ್]] ಇವೇ ಮೊದಲಾದ ಕಂಪನಿಗಳು ಮೊಟ್ಟಮೊದಲ ಉಪಸಾಮಗ್ರಿ ತಯಾರಕರಲ್ಲಿ ಸೇರಿದ್ದವು.[[ಚಿತ್ರ:IPod Earbuds.JPG|thumb|ಐಪಾಡ್ ಕರ್ಣವಾಣಿಗಳ (ಇಯರ್ಫೋನುಗಳ) ಎರಡು ವಿನ್ಯಾಸಗಳು. ಸದ್ಯದ ಆವೃತ್ತಿಯನ್ನು ಬಲಭಾಗದಲ್ಲಿ ತೋರಿಸಲಾಗಿದೆ.]]
ಮೊಟ್ಟಮೊದಲ ಐಪಾಡ್ ಆಟೋಮೊಬೈಲ್ ಇಂಟರ್ಫೇಸ್ನ್ನು<ref>[http://www.ipodyourbmw.com/ ಐಪಾಡ್ ಯುವರ್ BMW] {{Webarchive|url=https://web.archive.org/web/20070423230915/http://www.ipodyourbmw.com/ |date=2007-04-23 }}. 2007-02-17ರಂದು ಮರುಸಂಪಾದಿಸಿದ್ದು.</ref> ಬಿಡುಗಡೆ ಮಾಡಿದ [[BMW]] ಕಂಪನಿ, ಹೊಚ್ಚ ಹೊಸ BMW ವಾಹನಗಳ ಚಾಲಕರು ಸ್ಟೀರಿಂಗ್-ಚಕ್ರದಲ್ಲಿ ಅಂತರ್ಗತವಾಗಿರುವ ನಿಯಂತ್ರಕಗಳನ್ನಾಗಲೀ ಅಥವಾ ರೇಡಿಯೋ ಹೆಡ್-ಯುನಿಟ್ ಗುಂಡಿಗಳನ್ನಾಗಲೀ ಬಳಸುವ ಮೂಲಕ ಐಪಾಡ್ವೊಂದನ್ನು ನಿಯಂತ್ರಿಸಲು ಅನುವುಮಾಡಿಕೊಟ್ಟವು. [[ಮರ್ಸಿಡಿಸ್-ಬೆಂಝ್]],<ref>[http://www.apple.com/pr/library/2005/jan/11mercedes.html ಆಪಲ್ & ಮರ್ಸಿಡಿಸ್-ಬೆಂಝ್ ಅನ್ವೇಲ್ ಐಪಾಡ್ ಇಂಟಿಗ್ರೇಷನ್ ಕಿಟ್], ''[[ಆಪಲ್ ಇಂಕ್.]]'', 2005-01-11. 2006-06-20ರಂದು ಮರುಸಂಪಾದಿಸಿದ್ದು.</ref> [[ವೋಲ್ವೋ]],<ref>[http://www.apple.com/pr/library/2005/jan/11volvo.html ಆಪಲ್ & ವೋಲ್ವೊ ಅನೌನ್ಸ್ ಐಪಾಡ್ ಕನೆಕ್ಟಿವಿಟಿ ಫಾರ್ ಎಂಟೈರ್ 2005 US ಮಾಡೆಲ್ ಲೈನ್], ''[[ಆಪಲ್ ಇಂಕ್.]]'', 2005-01-11. 2006-06-20ರಂದು ಮರುಸಂಪಾದಿಸಿದ್ದು.</ref> [[ನಿಸಾನ್]], [[ಟಯೋಟಾ]],<ref>http://www.gizmag.com/go/7945/</ref> [[ಆಲ್ಫಾ ರೋಮಿಯೋ]], [[ಫೆರಾರಿ]],<ref>[http://www.apple.com/pr/library/2005/jan/11cars.html ಆಪಲ್ & ಲೀಡಿಂಗ್ ಕಾರ್ ಕಂಪನೀಸ್ ಟೀಮ್ ಅಪ್ ಟು ಡೆಲಿವರ್ ಐಪಾಡ್ ಇಂಟಿಗ್ರೇಷನ್ ಇನ್ 2005], ''[[ಆಪಲ್ ಇಂಕ್.]]'', 2005-01-11. 2006-06-20ರಂದು ಮರುಸಂಪಾದಿಸಿದ್ದು.</ref> [[ಅಕ್ಯುರಾ]], [[ಆಡಿ]], [[ಹೋಂಡಾ]],<ref>[http://automobiles.honda.com/models/audio_accessories.asp?ModelName=Accord%20Coupe&PHOTO=0 ಹೋಂಡಾ ಮ್ಯೂಸಿಕ್ ಲಿಂಕ್ ಫಾರ್ ಐಪಾಡ್ಸ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}, ''[[ಹೋಂಡಾ]]''. 2007-02-17ರಂದು ಮರುಸಂಪಾದಿಸಿದ್ದು.</ref> [[ರೆನಾಲ್ಟ್]], [[ಇನ್ಫಿನಿಟಿ]]<ref>[http://www.apple.com/ipod/carintegration/#car_browser_infiniti ಆಪಲ್ ಕಾರ್ ಇಂಡಿಗ್ರೇಷನ್ ಪೇಜ್]</ref> ಮತ್ತು [[ವೋಲ್ಕ್ಸ್ವ್ಯಾಗನ್]]- ಇವೇ ಮೊದಲಾದ ವಾಹನಗಳನ್ನು ಒಳಗೊಂಡಂತೆ ಇತರ ವಾಹನ ಬ್ರಾಂಡ್ಗಳಲ್ಲೂ ಬಳಕೆಗೆ ಯೋಗ್ಯವಾದ ಇದೇ ಬಗೆಯ ವ್ಯವಸ್ಥೆಗಳು ಲಭ್ಯವಿವೆ ಎಂದು 2005ರಲ್ಲಿ ಆಪಲ್ ಕಂಪನಿಯು ಘೋಷಿಸಿತು.<ref>[http://www.apple.com/pr/library/2005/sep/07ipod_auto.html ಆಪಲ್ ಟೀಮ್ಸ್ ಅಪ್ ವಿತ್ ಅಕ್ಯುರ, ಆಡಿ, ಹೋಂಡ & ವೋಕ್ಸ್ವ್ಯಾಗನ್ ಟು ಡೆಲಿವರ್ ಸೀಮ್ಲೆಸ್ ಐಪಾಡ್ ಎಕ್ಸ್ಪೀರಿಯೆನ್ಸ್], ''[[ಆಪಲ್ ಇಂಕ್.]]'', 2005-09-07. 2006-06-20ರಂದು ಮರುಸಂಪಾದಿಸಿದ್ದು.</ref> [[ಸಯಾನ್]] ಕಂಪನಿಯು ತನ್ನೆಲ್ಲಾ ಕಾರುಗಳಿಗೆ ಉತ್ತಮ ಗುಣಮಟ್ಟದ ಐಪಾಡ್ ಸಂಪರ್ಕಶೀಲತೆಯನ್ನು ಒದಗಿಸುತ್ತದೆ.
[[JVC]], [[ಪಯನೀರ್]], [[ಕೆನ್ವುಡ್]], [[ಆಲ್ಪೈನ್]], [[ಸೋನಿ]], ಮತ್ತು [[ಹರ್ಮನ್ ಕಾರ್ಡಾನ್]] ಸೇರಿದಂತೆ ಕೆಲವೊಂದು ಸ್ವತಂತ್ರ ಸ್ಟೀರಿಯೋ ತಯಾರಕ ಕಂಪನಿಗಳೂ ಸಹ ಐಪಾಡ್-ಉದ್ದೇಶದ ಇಂಟಿಗ್ರೇಷನ್ ಸಲ್ಯೂಷನ್ಗಳನ್ನು ಹೊಂದಿವೆ. ಪರ್ಯಾಯ ಸಂಪರ್ಕ ವಿಧಾನಗಳಲ್ಲಿ ಸಂಯೋಜಕ ಕಿಟ್ಗಳು (ಇವು ಕ್ಯಾಸೆಟ್ ಡೆಕ್ ಅಥವಾ ಚೇಂಜರ್ ಸಂಪರ್ಕಕುಳಿಗಳನ್ನು ಅಂದರೆ ಪೋರ್ಟ್ಗಳನ್ನು ಬಳಸುತ್ತವೆ), ಶ್ರವಣ ಪ್ರದಾನ ಜ್ಯಾಕ್ಗಳು (ಆಡಿಯೋ ಇನ್ಪುಟ್ ಜ್ಯಾಕ್ಗಳು) ಸೇರಿವೆ. ಮತ್ತು ಕೆಲವೊಂದು ದೇಶಗಳಲ್ಲಿ ವೈಯಕ್ತಿಕ FM ಟ್ರಾನ್ಸ್ಮಿಟರ್ಗಳು ಕಾನೂನುಬಾಹಿರವಾಗಿದ್ದರೂ, [[ಐಟ್ರಿಪ್]]ನಂತಹ FM ಟ್ರಾನ್ಸ್ಮಿಟರ್ಗಳು ಸದರಿ ಪರ್ಯಾಯ ಸಂಪರ್ಕ ವಿಧಾನಗಳಲ್ಲಿ ಸೇರಿಕೊಂಡಿವೆ. ಅನೇಕ ಕಾರು ತಯಾರಕ ಕಂಪನಿಗಳು ಶ್ರವಣ ಪ್ರದಾನ ಜ್ಯಾಕ್ಗಳನ್ನು ಮಾನಕಗಳಾಗಿ ಸೇರ್ಪಡೆಮಾಡಿವೆ.<ref>[http://www.apple.com/ipod/carintegration.html ಕಾರ್ ಇಂಟಿಗ್ರೇಷನ್: ಐಪಾಡ್ ಯುವರ್ ಕಾರ್], ''[[ಆಪಲ್ ಇಂಕ್.]]''. 2007-02-17ರಂದು ಮರುಸಂಪಾದಿಸಿದ್ದು.</ref>
2007ರ ಮಧ್ಯಾವಧಿಯ ಆರಂಭದಲ್ಲಿ, [[ಯುನೈಟೆಡ್]], [[ಕಾಂಟಿನೆಂಟಲ್]], [[ಡೆಲ್ಟಾ]], ಮತ್ತು [[ಎಮಿರೇಟ್ಸ್]] ಇವೇ ಮೊದಲಾದ ನಾಲ್ಕು ಪ್ರಮುಖ ವಿಮಾನಯಾನ ಸಂಸ್ಥೆಗಳ ಒಪ್ಪಂದಗಳು, ಐಪಾಡ್ ಆಸನ ಸಂಪರ್ಕಗಳನ್ನು ಅಳವಡಿಸಲು ಒಪ್ಪಂದ ಮಾಡಿಕೊಂಡವು. ಐಪಾಡ್ವೊಂದಕ್ಕೆ ಶಕ್ತಿ ಒದಗಿಸಲು ಮತ್ತು ಭರ್ತಿ ಮಾಡಲು, ಹಾಗೂ ಪ್ರತ್ಯೇಕ ಆಸನದ ಹಿಂಭಾಗದಲ್ಲಿನ ಪ್ರದರ್ಶಿಕೆಯಲ್ಲಿ ದೃಶ್ಯ ಮತ್ತು ಸಂಗೀತ ಸಂಗ್ರಹಗಳನ್ನು ವೀಕ್ಷಿಸಲು ಇಲ್ಲಿನ ಉಚಿತ ಸೇವೆಗಳು ಪ್ರಯಾಣಿಕರಿಗೆ ಅನುವುಮಾಡಿಕೊಡುತ್ತವೆ.<ref>[http://www.apple.com/pr/library/2006/nov/14ipod.html ಆಪಲ್ ಟೀಮ್ಸ್ ಅಪ್ ವಿತ್ ಕಾಂಟಿನೆಂಟಲ್, ಡೆಲ್ಟಾ, ಎಮಿರೇಟ್ಸ್, & ಯುನೈಟೆಡ್ ಟು ಡೆಲಿವರ್ ಐಪಾಡ್ ಇಂಟಿಗ್ರೇಷನ್], ''[[ಆಪಲ್ ಇಂಕ್.]]'', 2006-11-14. 2006-12-07ರಂದು ಮರುಸಂಪಾದಿಸಿದ್ದು.</ref>
ಮೂಲತಃ [[KLM]] ಮತ್ತು [[ಏರ್ ಫ್ರಾನ್ಸ್]] ಸಂಸ್ಥೆಗಳು ಆಪಲ್ ಕಂಪನಿಯೊಂದಿಗಿನ ಒಪ್ಪಂದದ ಭಾಗವಾಗಿದ್ದವು ಎಂದು ವರದಿಯಾಗಿತ್ತು. ಆದರೆ, ಕೇವಲ ಇಂಥ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಮಾತ್ರವೇ ತಾವು ಆಲೋಚಿಸುತ್ತಿದ್ದುದಾಗಿ ವಿವರಿಸುವ ಪತ್ರಿಕಾ ಹೇಳಿಕೆಗಳನ್ನು ನಂತರ ಅವು ಬಿಡುಗಡೆ ಮಾಡಿದವು.<ref>ಮರ್ಸಾಲ್, ಕೇಟೀ. [http://www.appleinsider.com/article.php?id=2240 ಟು ಆಫ್ ಸಿಕ್ಸ್ ಏರ್ಲೈನ್ಸ್ ಸೇ ದೇರ್ ಈಸ್ ನೋ ಇಂಕ್ ಆನ್ ಐಪಾಡ್ ಡೀಲ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}, ''ಆಪಲ್ ಇನ್ಸೈಡರ್'', 2006-11-15. 2006-12-07ರಂದು ಮರುಸಂಪಾದಿಸಿದ್ದು.</ref>
=== ಶ್ರವಣ ನಿರ್ವಹಣೆ ===
ಶ್ರವಣ ಪರೀಕ್ಷೆಗಳಲ್ಲಿ ಕಂಡುಬಂದಂತೆ, ಮೂರನೇ ಪೀಳಿಗೆಯ ಐಪಾಡ್ಗಳ ಮಂದ್ರಸ್ಥಾಯಿ ಪ್ರತಿವರ್ತನೆಯು ದುರ್ಬಲವಾಗಿತ್ತು.<ref name="playertest">ಮ್ಯಾಕ್ರೋನ್, ಬಿಲ್. [http://home.comcast.net./~machrone/playertest/playertest.htm ಐಪಾಡ್ ಆಡಿಯೋ ಮೆಷರ್ಮೆಂಟ್ಸ್] {{Webarchive|url=https://archive.is/20121220045904/http://home.comcast.net/~machrone/playertest/playertest.htm |date=2012-12-20 }}, ''[[PC ಮ್ಯಾಗಝೀನ್]]'', 2005. 2007-02-17ರಂದು ಮರುಸಂಪಾದಿಸಿದ್ದು.</ref><ref>ಹೀಜ್ಲಿಗರ್ಸ್, ಮಾರ್ಕ್. [http://members.chello.nl/~m.heijligers/ipod/Performance/measurements.html ಐಪಾಡ್ ಆಡಿಯೋ ಮೆಷರ್ಮೆಂಟ್ಸ್] {{Webarchive|url=https://web.archive.org/web/20090225073415/http://members.chello.nl/~m.heijligers/ipod/Performance/measurements.html |date=2009-02-25 }}. 2007-02-17ರಂದು ಮರುಸಂಪಾದಿಸಿದ್ದು.</ref> ವಾಡಿಕೆಗಿಂತ ಕಡಿಮೆ ಗಾತ್ರದ DC-ಬ್ಲಾಕಿಂಗ್ [[ವಿದ್ಯುತ್ ಧಾರಕ]]ಗಳು (ಕಪ್ಯಾಸಿಟರ್ಗಳು) ಮತ್ತು ಬಹುಮಟ್ಟಿನ ಬಳಕೆದಾರ ಶಿರಶ್ರವಣಕಗಳ (ಹೆಡ್ಫೋನುಗಳ) ವಿಶಿಷ್ಟವಾದ ಕಡಿಮೆ-[[ಪ್ರತಿರೋಧತ್ವ]]ಗಳ ಸಂಯೋಜನೆಯು, ಒಂದು [[ಉನ್ನತ-ಹಾಯ್ಕೆಯ ಶೋಧಕ]]ವನ್ನು ರೂಪಿಸುತ್ತವೆ. ಇದರಿಂದಾಗಿ ಕಡಿಮೆ-ಆವರ್ತನದ ಮಂದ್ರಸ್ಥಾಯಿಯು ದುರ್ಬಲವಾಗುತ್ತದೆ.
ನಾಲ್ಕನೇ ಪೀಳಿಗೆಯ ಐಪಾಡ್ಗಳಲ್ಲಿ ಇದೇ ಬಗೆಯ ವಿದ್ಯುತ್ ಧಾರಕಗಳನ್ನು ಬಳಸಲಾಗಿತ್ತು.<ref>ಹೀಜ್ಲಿಗರ್ಸ್, ಮಾರ್ಕ್. [https://web.archive.org/web/20060505034356/http://homepage.mac.com/marc.heijligers/audio/ipod/engineering/engineering.html ಐಪಾಡ್ ಸರ್ಕ್ಯುಟ್ ಡಿಸೈನ್ ಎಂಜಿನಿಯರಿಂಗ್], 2006ರ ಮೇ. 2007-02-17ರಂದು ಮರುಸಂಪಾದಿಸಿದ್ದು.</ref> ಉನ್ನತ-ಪ್ರತಿರೋಧಕತ್ವದ ಶಿರಶ್ರವಣಕಗಳನ್ನು ಬಳಸಿದಾಗ ಈ ಸಮಸ್ಯೆಯು ಕಡಿಮೆಯಾಗುತ್ತದೆ ಮತ್ತು ಬಾಹ್ಯ [[ಶಿರಶ್ರವಣಕ ಧ್ವನಿವರ್ಧಕ]]ದಂಥ (ಹೆಡ್ಫೋನ್ ಆಂಪ್ಲಿಫಯರ್) ಉನ್ನತ ಪ್ರತಿರೋಧಕತ್ವದ (ಸಾಲಿನ ಮಟ್ಟದ) ಹೊರೆಗಳನ್ನು ಚಾಲಿಸುವಾಗ ಈ ಸಮಸ್ಯೆಯು ಸಂಪೂರ್ಣವಾಗಿ ಮುಚ್ಚಿಹೋಗುತ್ತದೆ. ಒಂದು ಏಕ ವಿದ್ಯುತ್ ಧಾರಕ-ಸಂಯೋಜಿತ ಉತ್ಪತ್ತಿಗೆ ಬದಲಿಗೆ, [[ಜೋಡಿ-ಟ್ರಾನ್ಸಿಸ್ಟರ್ ಉತ್ಪತ್ತಿಯ ವೇದಿಕೆ]]ಯನ್ನು <ref name="playertest"/> ಮೊದಲನೇ ಪೀಳಿಗೆಯ ಐಪಾಡ್ ಷಫಲ್ ಬಳಸುತ್ತದೆ, ಮತ್ತು ಎಷ್ಟೇ ಹೊರೆಯಿದ್ದರೂ ಇಳಿಕೆಯಾದ ಮಂದ್ರಸ್ಥಾಯಿ ಪ್ರತಿವರ್ತನೆಯನ್ನು ಅದು ಹೊರಹೊಮ್ಮಿಸುವುದಿಲ್ಲ.
5ನೇ ಪೀಳಿಗೆಯ ಐಪಾಡ್ ಬಂದಾದ ನಂತರ, ಶ್ರವಣನಷ್ಟದ ಕುರಿತಾದ ಕಾಳಜಿಗಳಿಗೆ ಸ್ಪಂದಿಸಿದ ಆಪಲ್ ಕಂಪನಿಯು, ಬಳಕೆದಾರನೇ-ರೂಪಿಸಬಹುದಾದ ಧ್ವನಿಪ್ರಮಾಣ ಮಿತಿಯ ವ್ಯವಸ್ಥೆಯೊಂದನ್ನು (ಯೂಸರ್-ಕಾನ್ಫಿಗರಬಲ್ ವಾಲ್ಯೂಮ್ ಲಿಮಿಟ್ ವ್ಯವಸ್ಥೆಯನ್ನು) ಪರಿಚಯಿಸಿತು.<ref name="volumelimit">ಕೊಹೆನ್, ಪೀಟರ್. [http://www.macworld.com/article/50101/2006/03/ipodupdate.html ಐಪಾಡ್ ಅಪ್ಡೇಟ್ ಲಿಮಿಟ್ಸ್ ಐಪಾಡ್ ವಾಲ್ಯೂಮ್ ಸೆಟ್ಟಿಂಗ್] {{Webarchive|url=https://web.archive.org/web/20100330191622/http://www.macworld.com/article/50101/2006/03/ipodupdate.html |date=2010-03-30 }}, ಮ್ಯಾಕ್ವರ್ಲ್ಡ್, 2006. 2008-11-07ರಂದು ಮರುಸಂಪಾದಿಸಿದ್ದು.</ref> 6ನೇ ಪೀಳಿಗೆಯ ಐಪಾಡ್ನಲ್ಲಿ, ಧ್ವನಿಪ್ರಮಾಣದ ಉತ್ಪತ್ತಿಯ ಗರಿಷ್ಟ ಪ್ರಮಾಣವನ್ನು EU ಮಾರುಕಟ್ಟೆಗಳಲ್ಲಿ 100 dB ಪ್ರಮಾಣಕ್ಕೆ ಸೀಮಿತಗೊಳಿಸಲಾಗಿದೆ ಎಂದು ಬಳಕೆದಾರರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುಂಚಿತವಾಗಿ [[ಫ್ರಾನ್ಸ್]]ನ ಮಾರುಕಟ್ಟೆ ಮಳಿಗೆಗಳಿಂದ ಐಪಾಡ್ಗಳನ್ನು ಆಪಲ್ ಕಂಪನಿಯು ಹಿಂತೆಗೆದುಕೊಳ್ಳಬೇಕಾಗಿ ಬಂದಿತ್ತು.<ref name="ipodsfrance">ಫ್ರೀಡ್, ಇಯಾನ್. [http://news.cnet.com/2100-1040-960211.html ಆಪಲ್ ಪುಲ್ಸ್ ಐಪಾಡ್ ಇನ್ ಫ್ರಾನ್ಸ್]. 2008-11-07ರಂದು ಮರುಸಂಪಾದಿಸಿದ್ದು.</ref>
== ಮಾದರಿಗಳು ==
{{Main|List of iPod models}}
{{List of iPod models}}
{{timeline of iPod models}}
== ಹಕ್ಕುಪತ್ರದ ವಿವಾದಗಳು ==
2005ರಲ್ಲಿ, ಐಪಾಡ್ ಶ್ರೇಣಿ ಮತ್ತು ಅದರ ಸಹವರ್ತಿ ತಂತ್ರಜ್ಞಾನಗಳಿಂದ<ref>[http://www.channelregister.co.uk/2005/03/10/apple_ipod_patent_lawsuits/ ಆಪಲ್ ಫೇಸಸ್ ಪೇಟೆಂಟ್ ಲಾಸ್ಯೂಟ್ಸ್ ಓವರ್ ಇಟ್ಸ್ ಐಪಾಡ್] {{Webarchive|url=https://web.archive.org/web/20070927195329/http://www.channelregister.co.uk/2005/03/10/apple_ipod_patent_lawsuits/ |date=2007-09-27 }}, ''ಚಾನೆಲ್ ರಿಜಿಸ್ಟರ್'', 2005-03-10. 2007-02-17ರಂದು ಮರುಸಂಪಾದಿಸಿದ್ದು.</ref> [[ಹಕ್ಕುಪತ್ರದ ಉಲ್ಲಂಘನೆ]]ಯಾಗಿದೆ ಎಂದು ಹೂಡಲಾದ ಎರಡು ಕಾನೂನು ದಾವೆಗಳನ್ನು ಆಪಲ್ ಕಂಪನಿಯು ಎದುರಿಸಿತು. "ಮ್ಯೂಸಿಕ್ ಜೂಕ್ಬಾಕ್ಸ್" ಒಂದಕ್ಕೆ ಸಂಬಂದಿಸಿದಂತೆ ಐಪಾಡ್ ಶ್ರೇಣಿಯು ತನ್ನ [[ಹಕ್ಕುಪತ್ರ]]ವನ್ನು ಉಲ್ಲಂಘಿಸಿದೆ<ref>[http://www.google.com/patents?vid=USPAT6587403&id=oawMAAAAEBAJ&dq=6,587,403 U.S. ಪೇಟೆಂಟ್ 6,587,403] {{Webarchive|url=https://web.archive.org/web/20111205181049/http://www.google.com/patents?vid=USPAT6587403&id=oawMAAAAEBAJ&dq=6,587,403 |date=2011-12-05 }} — ಅಡ್ವಾನ್ಸ್ಡ್ ಆಡಿಯೋ ಡಿವೈಸಸ್' "ಮ್ಯೂಸಿಕ್ ಜೂಕ್ಬಾಕ್ಸ್" ಪೇಟೆಂಟ್.</ref> ಎಂದು ಅಡ್ವಾನ್ಸ್ಡ್ ಆಡಿಯೋ ಡಿವೈಸಸ್ ಕಂಪನಿಯು ಹಕ್ಕುಸಾಧಿಸಿದ್ದುದು ಮೊದಲ ಪ್ರಕರಣವಾದರೆ, [[ಹಾಂಗ್ ಕಾಂಗ್]]-ಮೂಲದ ಪ್ಯಾಟ್-ರೈಟ್ಸ್ ಎಂಬ ಒಂದು [[IP]] ಪೋರ್ಟ್ಫೋಲಿಯೋ ಕಂಪನಿಯು ದಾವೆಯೊಂದನ್ನು ಹೂಡಿ, ಹೊ ಕ್ಯುಂಗ್ ತ್ಸೆ ಎಂಬ ಸಂಶೋಧಕನಿಗೆ ನೀಡಲಾಗಿದ್ದ ಹಕ್ಕುಪತ್ರವೊಂದನ್ನು ಆಪಲ್ ಕಂಪನಿ ಫೇರ್ಪ್ಲೇ ತಂತ್ರಜ್ಞಾನವು ಉಲ್ಲಂಘಿಸಿದೆ<ref>[http://www.google.com/patents?vid=USPAT6665797&id=QrR2AAAAEBAJ&dq=6,665,797 U.S. ಪೇಟೆಂಟ್ 6,665,797] {{Webarchive|url=https://web.archive.org/web/20111205185736/http://www.google.com/patents?vid=USPAT6665797&id=QrR2AAAAEBAJ&dq=6,665,797 |date=2011-12-05 }} — "ಪ್ರೊಟೆಕ್ಷನ್ ಆಫ್ ಸಾಫ್ಟ್ವೇರ್ ಎಗೇನ್ ಎಗೇನ್ಸ್ಟ್ ಅನ್ಆಥರೈಸ್ಡ್ ಯೂಸ್" (ಕರೆಕ್ಟೆಡ್ ಟು "ಕಂಪ್ಯೂಟರ್ ಆಪರೇಟಸ್/ಸಾಫ್ಟ್ವೇರ್ ಆಕ್ಸೆಸ್ ಕಂಟ್ರೋಲ್").</ref> ಎಂದು ವಾದ ಮಂಡಿಸಿದ್ದು ಎರಡನೇ ಪ್ರಕರಣವಾಗಿತ್ತು.
ಎರಡನೇ ಪ್ರಕರಣವು [[ಸೋನಿ]], ರಿಯಲ್ ನೆಟ್ವರ್ಕ್ಸ್, [[ನ್ಯಾಪ್ಸ್ಟರ್]], ಮತ್ತು ಮ್ಯೂಸಿಕ್ಮ್ಯಾಚ್ ಕಂಪನಿಗಳ ಆನ್ಲೈನ್ ಸಂಗೀತ ಮಳಿಗೆಗಳನ್ನೂ ಪ್ರತಿವಾದಿಗಳ ಸ್ಥಾನದಲ್ಲಿ ಸೇರಿಸಿತ್ತು.<ref>[http://www.appleinsider.com/article.php?id=1235 ಆಪಲ್, ಸೋನಿ ಅಮಾಂಗ್ ದೋಸ್ ನೇಮ್ಡ್ ಇನ್ ನ್ಯೂ DRM ಲಾಸ್ಯೂಟ್] {{Webarchive|url=https://web.archive.org/web/20070311185337/http://www.appleinsider.com/article.php?id=1235 |date=2007-03-11 }}, ''ಆಪಲ್ ಇನ್ಸೈಡರ್'', 2005-08-16. 2007-02-17ರಂದು ಮರುಸಂಪಾದಿಸಿದ್ದು.</ref>
ಐಪಾಡ್ ಇಂಟರ್ಫೇಸ್ನ ಮೇಲೆ ಬಳಕೆಯಾಗಿರುವಂತೆ, "ರೊಟೇಷನಲ್ ಯೂಸರ್ ಇನ್ಪುಟ್ಸ್"ನ<ref>[http://appft1.uspto.gov/netacgi/nph-Parser?p=1&u=/netahtml/PTO/search-bool.html&r=1&f=G&l=50&co1=AND&d=PG01&s1=%2260/346,237%22&OS=%2260/346,237%22&RS=%2260/346,237%22 U.S. ಪೇಟೆಂಟ್ ಅಪ್ಲಿಕೇಷನ್ 20030095096] {{Webarchive|url=https://web.archive.org/web/20130713033627/http://appft1.uspto.gov/netacgi/nph-Parser?p=1&u=%2Fnetahtml%2FPTO%2Fsearch-bool.html&r=1&f=G&l=50&co1=AND&d=PG01&s1=%2260%2F346%2C237%22&OS=%2260%2F346%2C237%22&RS=%2260%2F346%2C237%22 |date=2013-07-13 }} [[ಆಪಲ್ ಇಂಕ್.]]'ಸ್ ಅಪ್ಲಿಕೇಷನ್ ಆನ್ "ರೊಟೇಷನಲ್ ಯೂಸರ್ ಇನ್ಪುಟ್ಸ್".</ref> ಕುರಿತಾದ ಒಂದು ಹಕ್ಕುಪತ್ರಕ್ಕಾಗಿ ಆಪಲ್ ಕಂಪನಿಯು [[ಅಮೆರಿಕ ಸಂಯುಕ್ತ ಸಂಸ್ಥಾನಗಳು ಪೇಟೆಂಟ್ ಮತ್ತು ಸರಕುಮುದ್ರೆ ಕಚೇರಿ]]ಗೆ ಸಲ್ಲಿಸಿದ ಅರ್ಜಿಯು 2005ರ ಆಗಸ್ಟ್ನಲ್ಲಿ ಒಂದು ಮೂರನೇ "ಅಂತಿಮವಲ್ಲದ-ನಿರಾಕರಣ"ವನ್ನು (ನಾನ್-ಫೈನಲ್ ರಿಜೆಕ್ಷನ್-NFR) ಪಡೆಯಬೇಕಾಗಿಬಂತು. 2005ರ ಆಗಸ್ಟ್ನಲ್ಲಿ, MP3 ಸಂಗೀತ ಸಾಧನದ ಮಾರುಕಟ್ಟೆಯಲ್ಲಿ ಆಪಲ್ ಕಂಪನಿಯ ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ ಒಂದಾದ [[ಕ್ರಿಯೇಟಿವ್ ಟೆಕ್ನಾಲಜಿ]]ಯು, ಐಪಾಡ್ ಶ್ರೇಣಿಯು ಬಳಸುತ್ತಿರುವ ಸಂಗೀತದ ಆಯ್ಕೆಯ ಇಂಟರ್ಫೇಸ್ಗೆ ಸಂಬಂಧಿಸಿದ ಒಂದು ಹಕ್ಕುಪತ್ರವನ್ನು<ref>[http://www.google.com/patents?vid=USPAT6928433&id=sJoVAAAAEBAJ&dq=6,928,433 U.S. ಪೇಟೆಂಟ್ 6,928,433] {{Webarchive|url=https://web.archive.org/web/20111205183104/http://www.google.com/patents?vid=USPAT6928433&id=sJoVAAAAEBAJ&dq=6,928,433 |date=2011-12-05 }} [[ಕ್ರಿಯೇಟಿವ್ ಟೆಕ್ನಾಲಜಿ]]ಯ "ಝೆನ್" ಪೇಟೆಂಟ್.</ref> ತಾನು ಹೊಂದಿರುವುದಾಗಿ ಮತ್ತು 2005ರ ಆಗಸ್ಟ್ 9ರಂದು ತನಗೆ ಮಂಜೂರಾಗಿದ್ದ ಈ ಹಕ್ಕುಪತ್ರಕ್ಕೆ ತಾನು "ಝೆನ್ ಪೇಟೆಂಟ್" ಎಂಬ ಅಡ್ಡಹೆಸರನ್ನು ಇಟ್ಟಿದ್ದಾಗಿ ಘೋಷಿಸಿತ್ತು.<ref>[http://news.bbc.co.uk/2/hi/technology/4198360.stm ಕ್ರಿಯೇಟಿವ್ ವಿನ್ಸ್ MP3 ಪ್ಲೇಯರ್ ಪೇಟೆಂಟ್], ''[[BBC ನ್ಯೂಸ್]]'', 2005-08-30. 2007-02-17ರಂದು ಮರುಸಂಪಾದಿಸಿದ್ದು.</ref>
2006ರ ಮೇ 15ರಂದು, [[ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಗಳಿಗಾಗಿದ್ದ ಅಮೆರಿಕ ಸಂಯುಕ್ತ ಸಂಸ್ಥಾನಗಳ ಜಿಲ್ಲಾ ನ್ಯಾಯಾಲಯ]]ದಲ್ಲಿ ಆಪಲ್ ಕಂಪನಿಯ ವಿರುದ್ಧ ಕ್ರಿಯೇಟಿವ್ ಟೆಕ್ನಾಲಜಿ ಕಂಪನಿಯು ಮತ್ತೊಂದು ದಾವೆಯನ್ನು ಹೂಡಿತು. ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಐಪಾಡ್ಗಳನ್ನು ಆಮದು ಮಾಡಿಕೊಳ್ಳುವ ಮೂಲಕ, ಆಪಲ್ ಕಂಪನಿಯು U.S. ವ್ಯಾಪಾರಿ ಕಾನೂನುಗಳನ್ನು ಉಲ್ಲಂಘಿಸುತ್ತಿದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕೆಂದು [[ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಂತರರಾಷ್ಟ್ರೀಯ ವ್ಯಾಪಾರ ಆಯೋಗ]]ವನ್ನೂ ಕ್ರಿಯೇಟಿವ್ ಟೆಕ್ನಾಲಜಿ ಕೇಳಿಕೊಂಡಿತು.<ref>[http://www.macworld.co.uk/news/index.cfm?NewsID=14646 ಕ್ರಿಯೇಟಿವ್ ಸ್ಯೂಸ್ ಆಪಲ್ ಓವರ್ ಪೇಟೆಂಟ್] {{Webarchive|url=https://web.archive.org/web/20090916064513/http://www.macworld.co.uk/news/index.cfm?NewsID=14646 |date=2009-09-16 }}, ''[[ಮ್ಯಾಕ್ವರ್ಲ್ಡ್ UK]]'', 2006-05-16. 2007-03-20ರಂದು ಮರುಸಂಪಾದಿಸಿದ್ದು.</ref> 2006ರ ಆಗಸ್ಟ್ 24ರಂದು, ಆಪಲ್ ಮತ್ತು ಕ್ರಿಯೇಟಿವ್ ಕಂಪನಿಗಳು ತಮ್ಮ ಕಾನೂನು ಸಂಬಂಧಿ ವಿವಾದಗಳಿಗೆ ಅಂತ್ಯಹಾಡಲು ಒಂದು ಉದಾರವಾದ ವಿವಾದ-ಪರಿಹಾರ ಒಪ್ಪಂದವನ್ನು ಪ್ರಕಟಿಸಿದವು. ಕ್ರಿಯೇಟಿವ್ ಟೆಕ್ನಾಲಜಿ ಕಂಪನಿಗೆ ಪ್ರದಾನ ಮಾಡಲಾಗಿದ್ದ ಹಕ್ಕುಪತ್ರವನ್ನು ಆಪಲ್ ಕಂಪನಿಯ ಎಲ್ಲಾ ಉತ್ಪನ್ನಗಳಲ್ಲಿ ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ, ಸಂಪೂರ್ಣ ಪಾವತಿಸಲಾದ ಪರವಾನಗಿಗಾಗಿ ಆಪಲ್ ಕಂಪನಿಯು ಕ್ರಿಯೇಟಿವ್ ಟೆಕ್ನಾಲಜಿ ಕಂಪನಿಗೆ 100 ದಶಲಕ್ಷ US$ ಹಣವನ್ನು ಪಾವತಿಸಬೇಕು. ಒಂದು ವೇಳೆ ಹಕ್ಕುಪತ್ರದ ಪರವಾನಗೀಕರಣದಲ್ಲಿ ಕ್ರಿಯೇಟಿವ್ ಕಂಪನಿಯು ವಿಫಲವಾದಲ್ಲಿ, ಒಪ್ಪಂದದ ಭಾಗವಾಗಿ, ಆಪಲ್ ಕಂಪನಿಯು ತನ್ನ ಪಾವತಿಯಲ್ಲಿನ ಒಂದು ಭಾಗವನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂಬುದು ಒಪ್ಪಂದದ ಸಾರವಾಗಿತ್ತು. ''ಮೇಡ್ ಫಾರ್ ಐಪಾಡ್'' ಯೋಜನೆಯನ್ನು ಸೇರುವ ಮೂಲಕ, ಐಪಾಡ್ ಉಪಸಾಮಗ್ರಿಗಳನ್ನು ತಯಾರಿಸುವ ತನ್ನ ಉದ್ದೇಶವನ್ನು ಕ್ರಿಯೇಟಿವ್ ಟೆಕ್ನಾಲಜಿ ಆಗ ಪ್ರಕಟಿಸಿತು.<ref>[http://www.apple.com/pr/library/2006/aug/23settlement.html ಆಪಲ್ & ಕ್ರಿಯೇಟಿವ್ ಅನೌನ್ಸ್ ಬೋರ್ಡ್ ಸೆಟ್ಲ್ಮೆಂಟ್...],, ''[[ಆಪಲ್ ಇಂಕ್.]]''. 2007-02-17ರಂದು ಮರುಸಂಪಾದಿಸಿದ್ದು.</ref>
== ಮಾರಾಟಗಳು ==
[[ಚಿತ್ರ:Ipod sales per quarter.svg|thumb|right|400px|ಐಪಾಡ್ನ ತ್ರೈಮಾಸಿಕ ಮಾರಾಟಗಳು.ದತ್ತಾಂಶ ಮತ್ತು ಮೂಲಗಳಿಗಾಗಿ ಕೋಷ್ಟಕವನ್ನು ಕ್ಲಿಕ್ ಮಾಡಿ.ರಜಾ ಕಾಲವಾದ, ಹಿಂದಿನ ವರ್ಷದ ಡಿಸೆಂಬರ್ ಮೂಲಕವಿರುವ ಅಕ್ಟೋಬರ್ Q1 ಆಗಿದೆ ಎಂಬುದನ್ನು ಗಮನಿಸಿ.]]
{{See also|iPod advertising}}
2004ರ ಅಕ್ಟೋಬರ್ ತಿಂಗಳಿಂದ, ಐಪಾಡ್ ಶ್ರೇಣಿಯು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿನ ಡಿಜಿಟಲ್ ಸಂಗೀತ ಸಾಧನಗಳ ಮಾರಾಟಗಳಲ್ಲಿ ಮೇಲುಗೈ ಸಾಧಿಸಿದೆ. ಹಾರ್ಡ್ ಡ್ರೈವ್-ಆಧರಿತ ಸಾಧನಗಳಿಗಾಗಿರುವ ಮಾರುಕಟ್ಟೆಯ 90%ಗಿಂತಲೂ ಹೆಚ್ಚಿನ ಭಾಗವನ್ನು ಮತ್ತು ಎಲ್ಲಾ ಬಗೆಯ ಸಂಗೀತ ಸಾಧನಗಳಿಗಾಗಿರುವ ಮಾರುಕಟ್ಟೆಯ 70%ಗಿಂತಲೂ ಹೆಚ್ಚು ಭಾಗವನ್ನು ಐಪಾಡ್ ಶ್ರೇಣಿಯು ವ್ಯಾಪಿಸಿಕೊಂಡಿದೆ.<ref>ಮರ್ಸಾಲ್, ಕೇಟೀ. [http://www.appleinsider.com/article.php?id=1770 ಐಪಾಡ್: ಹೌ ಬಿಗ್ ಕೆನ್ ಇಟ್ ಗೆಟ್?] {{Webarchive|url=https://web.archive.org/web/20061207173327/http://www.appleinsider.com/article.php?id=1770 |date=2006-12-07 }}, ''[[ಆಪಲ್ ಇನ್ಸೈಡರ್]]'', 2006-05-24. 2007-02-17ರಂದು ಮರುಸಂಪಾದಿಸಿದ್ದು.</ref> 2004ರ ಜನವರಿಯಿಂದ 2005ರ ಜನವರಿವರೆಗಿನ ವರ್ಷದ ಅವಧಿಯಲ್ಲಿ ಕಂಡುಬಂದ ಉನ್ನತ ಮಟ್ಟದ ಮಾರಾಟದಿಂದಾಗಿ, U.S. ಮಾರುಕಟ್ಟೆಯಲ್ಲಿನ ಇದರ ಪಾಲು 31%ನಿಂದ 65%ವರೆಗೆ ಏರಿಕೆ ಕಂಡಿದೆ ಮತ್ತು 2005ರ ಜುಲೈನಲ್ಲಿ ಈ ಮಾರುಕಟ್ಟೆ ಪಾಲು 74%ನಷ್ಟಿತ್ತು ಎಂದು ಹೇಳಲಾಗಿದೆ. ಬ್ಲೂಂಬರ್ಗ್ ಆನ್ಲೈನ್ ತಿಳಿಸಿರುವ ಪ್ರಕಾರ, 2007ರ ಜನವರಿಯಲ್ಲಿ ಐಪಾಡ್ನ ಮಾರುಕಟ್ಟೆ ಪಾಲು 72.7%ನ್ನು ಮುಟ್ಟಿತ್ತು.
ಪ್ರತಿಸ್ಪರ್ಧೆ ಒಡ್ಡುತ್ತಿದ್ದ ಫ್ಲಾಷ್-ಆಧರಿತ ಸಂಗೀತ ಸಾಧನಗಳು ಒಂದೊಮ್ಮೆ ಮಾರುಕಟ್ಟೆಯಲ್ಲಿ ಪ್ರಬಲವಾಗಿದ್ದ ಒಂದು ಸಮಯದಲ್ಲಿಯೇ ಐಪಾಡ್ ಮಿನಿ ಉತ್ಪನ್ನದ ಬಿಡುಗಡೆಯಾಗಿದ್ದು ಈ ಯಶಸ್ಸನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ನೆರವಾಯಿತು.{{Citation needed|date=September 2009}}
[[ಹೆವ್ಲೆಟ್-ಪ್ಯಾಕರ್ಡ್]] (HP) ಕಂಪನಿಯು ಆಪಲ್ ಕಂಪನಿಯಿಂದ ಪಡೆದ ಒಂದು ಪರವಾನಗಿ ಒಪ್ಪಂದದ ಅಡಿಯಲ್ಲಿ ತಾನು HP-ಬ್ರಾಂಡೆಡ್ ಐಪಾಡ್ಗಳನ್ನು ಮಾರುವುದಾಗಿ 2004ರ ಜನವರಿ 8ರಂದು ಪ್ರಕಟಿಸಿತು. [[ವಾಲ್-ಮಾರ್ಟ್]] ಸೇರಿದಂತೆ ಹಲವಾರು ಹೊಸ ಚಿಲ್ಲರೆ ವ್ಯಾಪಾರದ ವಾಹಿನಿಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಯಿತು, ಮತ್ತು ಈ ಐಪಾಡ್ಗಳು ಅಂತಿಮವಾಗಿ ಎಲ್ಲಾ ಐಪಾಡ್ ಮಾರಾಟಗಳ ಪೈಕಿ 5%ನಷ್ಟು ಭಾಗವನ್ನು ಆವರಿಸಿಕೊಂಡವು. ಆಪಲ್ ಕಂಪನಿಯಿಂದ ಹೇರಲ್ಪಟ್ಟ ಪ್ರತಿಕೂಲವಾದ ನಿಯಮಗಳು ಮತ್ತು ಷರತ್ತುಗಳ ದೆಸೆಯಿಂದಾಗಿ, 2005ರ ಜುಲೈನಲ್ಲಿ HP ಕಂಪನಿಯು ಐಪಾಡ್ಗಳ ಮಾರಾಟವನ್ನು ನಿಲ್ಲಿಸಿತು.<ref>[http://www.appleinsider.com/articles/05/07/29/hp_to_stop_selling_apples_ipods.html HP ಟು ಸ್ಟಾಪ್ ಸೆಲಿಂಗ್ ಆಪಲ್'ಸ್ ಐಪಾಡ್ಸ್], ''[[ಆಪಲ್ ಇನ್ಸೈಡರ್]]'', 2005-07-29. 2007-08-06ರಂದು ಮರುಸಂಪಾದಿಸಿದ್ದು.</ref>
2007ರ ಜನವರಿಯಲ್ಲಿ, ಅಭೂತಪೂರ್ವ ಎನ್ನಬಹುದಾದ 7.1 ಶತಕೋಟಿ US$ನಷ್ಟು ತ್ರೈಮಾಸಿಕ ಆದಾಯವನ್ನು ಆಪಲ್ ಕಂಪನಿಯು ದಾಖಲಿಸಿತು. ಇದರ ಪೈಕಿ 48%ನಷ್ಟು ಭಾಗವು ಐಪಾಡ್ ಮಾರಾಟಗಳಿಂದಲೇ ಬಂದಿತ್ತು.<ref>[http://www.apple.com/pr/library/2007/01/17results.html ಆಪಲ್ ರಿಪೋರ್ಟ್ಸ್ ಫಸ್ಟ್ ಕ್ವಾರ್ಟರ್ ರಿಸಲ್ಟ್], ''[[ಆಪಲ್ ಇಂಕ್.]]'', 2007-01-17. 2007-02-17ರಂದು ಮರುಸಂಪಾದಿಸಿದ್ದು.</ref>
ಆಪಲ್ ಕಂಪನಿಯು ತನ್ನ ಒಂದು-ನೂರು ದಶಲಕ್ಷದನೇ ಐಪಾಡ್ನ್ನು ಮಾರಾಟ ಮಾಡುವ ಮೂಲಕ, ಅದನ್ನು ಅತಿದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಸಾರ್ವಕಾಲಿಕ ಡಿಜಿಟಲ್ ಸಂಗೀತ ಸಾಧನವನ್ನಾಗಿಸಿದೆ ಎಂದು 2007ರ ಏಪ್ರಿಲ್ 9ರಂದು ಪ್ರಕಟಿಸಲಾಯಿತು. 2007ರ ಏಪ್ರಿಲ್ನಲ್ಲಿ, 5.2 ಶತಕೋಟಿ US$ನಷ್ಟು ಎರಡನೇ ತ್ರೈಮಾಸಿಕದ ಆದಾಯವನ್ನು ಆಪಲ್ ಕಂಪನಿಯು ದಾಖಲಿಸಿತು. ಇದರ ಪೈಕಿ 32%ನಷ್ಟು ಭಾಗವು ಕೇವಲ ಐಪಾಡ್ ಮಾರಾಟಗಳಿಂದಲೇ ಬಂದಿತ್ತು.<ref>[http://www.apple.com/pr/library/2007/04/25results.html ಆಪಲ್ ರಿಪೋರ್ಟ್ಸ್ ಸೆಕೆಂಡ್ ಕ್ವಾರ್ಟರ್ ರಿಸಲ್ಟ್ಸ್], ''[[ಆಪಲ್ ಇಂಕ್.]]''. 2007-04-25ರಂದು ಮರುಸಂಪಾದಿಸಿದ್ದು.</ref> ಮ್ಯಾಕ್ ಕಂಪ್ಯೂಟರುಗಳಂಥ ಐಪಾಡ್ ಕಂಪನಿಯ ಇತರ ಉತ್ಪನ್ನಗಳನ್ನೂ ಐಪಾಡ್ ಬಳಕೆದಾರರು ಖರೀದಿಸುವ ಸಾಧ್ಯತೆಗಳಿವೆ ಎಂಬುದು ಆಪಲ್ ಕಂಪನಿಯ ಹಾಗೂ ಉದ್ಯಮದ ಹಲವಾರು ವಿಶ್ಲೇಷಕರ ಅಭಿಪ್ರಾಯವಾಗಿದೆ.<ref>ಒರ್ಲೋವ್ಸ್ಕಿ, ಆಂಡ್ರೂ. [http://www.theregister.co.uk/2005/10/11/apple_q4_2005/ ಫಾರ್ ಆಪಲ್, ಹ್ಯಾಲೊ ಎಫೆಕ್ಟ್ ಎಕ್ಲಿಪ್ಸಸ್ ಓಸ್ಬೋರ್ನ್ ಎಫೆಕ್ಟ್], ''[[ದಿ ರಿಜಿಸ್ಟರ್]]'', 2005-10-11. 2006-07-13ರಂದು ಮರುಸಂಪಾದಿಸಿದ್ದು.</ref>
ಐಪಾಡ್ ಶ್ರೇಣಿಯ ಮಾರಾಟದ ಮಟ್ಟವು 110 ದಶಲಕ್ಷ ಸಂಖ್ಯೆಯನ್ನು ದಾಟಿಹೋಗಿದೆ ಎಂದು 2007ರ ಸೆಪ್ಟೆಂಬರ್ 5ರಂದು "ದಿ ಬೀಟ್ ಗೋಸ್ ಆನ್" ಎಂಬ ತನ್ನ ಕಾರ್ಯಕ್ರಮದ ಅವಧಿಯಲ್ಲಿ ಆಪಲ್ ಕಂಪನಿಯು ಪ್ರಕಟಿಸಿತು. 2007ರ ಅಕ್ಟೋಬರ್ 22ರಂದು, 6.22 ಶತಕೋಟಿ US$ನಷ್ಟು ತ್ರೈಮಾಸಿಕ ಆದಾಯವನ್ನು ಆಪಲ್ ದಾಖಲಿಸಿತು. ಇದರ ಪೈಕಿ 30.69%ನಷ್ಟು ಭಾಗವು ಆಪಲ್ ನೋಟ್ಬುಕ್ ಮಾರಾಟಗಳಿಂದ ಬಂದಿದ್ದರೆ, 19.22%ನಷ್ಟು ಭಾಗವು ಡೆಸ್ಕ್ಟಾಪ್ ಮಾರಾಟಗಳಿಂದ ಮತ್ತು 26%ನಷ್ಟು ಭಾಗವು ಐಪಾಡ್ ಮಾರಾಟಗಳಿಂದ ಬಂದಿತ್ತು. ಆಪಲ್ ಕಂಪನಿಯ 2007ರ ವಾರ್ಷಿಕ ಆದಾಯವು 24.01 ಶತಕೋಟಿ US$ಗೆ ಏರಿದ್ದಲ್ಲದೆ, ಲಾಭವು 3.5 ಶತಕೋಟಿ US$ಗೆ ಮುಟ್ಟಿತು. 15.4 ಶತಕೋಟಿ US$ನಷ್ಟು ನಗದು ಹಣ ಮತ್ತು ಯಾವುದೇ ಸಾಲವಿಲ್ಲದ ಸ್ಥಿತಿಯೊಂದಿಗೆ 2007ರ ಹಣಕಾಸು ವರ್ಷಕ್ಕೆ ಆಪಲ್ ಕಂಪನಿಯು ಅಂತ್ಯಹಾಡಿತು.<ref>[http://www.apple.com/pr/library/2007/10/22results.html ಆಪಲ್ ರಿಪೋಟ್ಸ್ ಫೋರ್ತ್ ಕ್ವಾರ್ಟರ್ ರಿಸಲ್ಟ್ಸ್], ''[[ಆಪಲ್ ಇಂಕ್.]]'', 2007-10-22. 2007-10-22ರಂದು ಮರುಸಂಪಾದಿಸಿದ್ದು.</ref>
2008ರ ಜನವರಿ 22ರಂದು, ಇದುವರೆಗಿನ ತನ್ನ ಇತಿಹಾಸದಲ್ಲಿಯೇ ತ್ರೈಮಾಸಿಕದ ಅತ್ಯುತ್ತಮ ಆದಾಯ ಹಾಗೂ ಲಾಭಗಳಿಕೆಗಳನ್ನು ಆಪಲ್ ಕಂಪನಿಯು ದಾಖಲಿಸಿತು. ಆಪಲ್ ಕಂಪನಿಯ ದಾಖಲಾರ್ಹ ಆದಾಯ ಮತ್ತು ದಾಖಲಾರ್ಹ ನಿವ್ವಳ ತ್ರೈಮಾಸಿಕ ಲಾಭಗಳು ಕ್ರಮವಾಗಿ 9.6 ಶತಕೋಟಿ US$ನ್ನು ಹಾಗೂ 1.58 ಶತಕೋಟಿ US$ನ್ನು ಮುಟ್ಟಿದವು. 2008ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕಾಗಿರುವ ಆಪಲ್ನ ಆದಾಯದ 42%ನಷ್ಟು ಭಾಗವು ಐಪಾಡ್ ಮಾರಾಟಗಳಿಂದ ಬಂದಿತು. ಇದನ್ನನುಸರಿಸಿ, ನೋಟ್ಬುಕ್ ಮಾರಾಟಗಳಿಂದ 21%ನಷ್ಟು ಭಾಗ ಮತ್ತು ಡೆಸ್ಕ್ಟಾಪ್ ಮಾರಾಟಗಳಿಂದ 16%ನಷ್ಟು ಭಾಗ ಬಂದವು.<ref>ಆಪಲ್ ಇಂಕ್. (2008ರ ಜನವರಿ 22). [http://www.apple.com/pr/library/2008/01/22results.html ಆಪಲ್ ರಿಪೋರ್ಟ್ಸ್ ಫಸ್ಟ್ ಕ್ವಾರ್ಟರ್ ರಿಸಲ್ಟ್ಸ್]. ಪತ್ರಿಕಾ ಹೇಳಿಕೆ ಬಿಡುಗಡೆ. 2008-1-23ರಂದು ಮರುಸಂಪಾದಿಸಿದ್ದು.</ref>
2008ರ ಹಣಕಾಸು ವರ್ಷದ 4ನೇ ತ್ರೈಮಾಸಿಕಕ್ಕಾಗಿರುವ ಒಟ್ಟು ಆದಾಯದ ಪೈಕಿ ಕೇವಲ 14.21%ನಷ್ಟು ಭಾಗವು ಐಪಾಡ್ಗಳ ಕಡೆಯಿಂದ ಬಂದಿದೆ ಎಂದು ಆಪಲ್ ಕಂಪನಿಯು 2008ರ ಅಕ್ಟೋಬರ್ 21ರಂದು ವರದಿಮಾಡಿತು.<ref>ಆಪಲ್ ಇನ್ಸೈಡರ್ (2008ರ ಅಕ್ಟೋಬರ್ 27). [http://www.appleinsider.com/articles/08/10/27/ipods_accounted_for_just_14_2_of_apples_sales_in_q4_2008.html ] 2008-10-27ರಂದು ಮರುಸಂಪಾದಿಸಿದ್ದು</ref>. 2009ರ ಸೆಪ್ಟೆಂಬರ್ 9ರಂದು ಜರುಗಿದ ಆಪಲ್ನ ಒಂದು ಕಾರ್ಯಕ್ರಮದಲ್ಲಿ ವಿಷಯ-ಮಂಡನಾತ್ಮಕ ಭಾಷಣ ಮಾಡಿದ ಫಿಲ್ ಷಿಲ್ಲರ್, ಐಪಾಡ್ಗಳ ಒಟ್ಟಾರೆ ಸಂಚಿತ ಮಾರಾಟಗಳು 220 ದಶಲಕ್ಷ ಸಂಖ್ಯೆಯನ್ನು ಮೀರಿದೆ ಎಂದು ಪ್ರಕಟಿಸಿದ.<ref>ವರ್ಲ್ಡ್ ಆಫ್ ಆಪಲ್. (2009ರ ಸೆಪ್ಟೆಂಬರ್ 9). [http://news.worldofapple.com/category/world-of-apple-events/ ಲೈವ್ ಕವರೇಜ್ ಫ್ರಂ ಆಪಲ್’ಸ್ “ಇಟ್ಸ್ ಓನ್ಲಿ ರಾಕ್ ಅಂಡ್ ರೋಲ್” ಇವೆಂಟ್] {{Webarchive|url=https://web.archive.org/web/20071227124346/http://news.worldofapple.com/category/world-of-apple-events/ |date=2007-12-27 }}. ಪತ್ರಿಕಾ ಹೇಳಿಕೆ ಬಿಡುಗಡೆ. 2009-9-9ರಂದು ಮರುಸಂಪಾದಿಸಿದ್ದು</ref>
== ಕೈಗಾರಿಕೆಯ ಪ್ರಭಾವ ==
ಎಂಜಿನಿಯರಿಂಗ್ ಉತ್ಕೃಷ್ಟತೆಯಿಂದ<ref>[http://news.bbc.co.uk/1/hi/technology/4605881.stm ಐಪಾಡ್ ಅಂಡ್ ಬ್ಲೂಟೂತ್ ಲೀಡ್ ಟು ಪ್ರೈಜಸ್], ''[[BBC ನ್ಯೂಸ್]]'', 2005-06-03. 2007-03-20ರಂದು ಮರುಸಂಪಾದಿಸಿದ್ದು.</ref> ಮೊದಲ್ಗೊಂಡು ಅತಿ ನಾವೀನ್ಯತೆಯ ಶ್ರವಣ ಉತ್ಪನ್ನ<ref name="pcworld25">{{cite web| coauthors = PC World Editors| title = The 25 Most Innovative Products of the Year| publisher = [[PC World (magazine)|PC World]]| date = 2007-08-03| url = http://www.pcworld.com/article/id,123942-page,2/article.html| accessdate = 2007-02-17| archive-date = 2007-01-29| archive-url = https://web.archive.org/web/20070129142217/http://www.pcworld.com/article/id%2C123942-page%2C2/article.html| url-status = dead}}</ref> ಎಂಬುದರವರೆಗೆ, ಹಾಗೂ ಅಲ್ಲಿಂದ ಮೊದಲ್ಗೊಂಡು 2006ರ ನಾಲ್ಕನೇ ಅತ್ಯುತ್ತಮ ಕಂಪ್ಯೂಟರ್ ಉತ್ಪನ್ನ<ref>[http://www.macnn.com/articles/06/05/31/top.100.products.announced/ ಆಪಲ್ ವಿನ್ಸ್ 5 'ವರ್ಲ್ಡ್ ಕ್ಲಾಸ್' ಅವಾರ್ಡ್ಸ್], ''ಮ್ಯಾಕ್NN''. 2007-02-17ರಂದು ಮರುಸಂಪಾದಿಸಿದ್ದು.</ref> ಎಂಬುದರವರೆಗಿನ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಐಪಾಡ್ಗಳು ತಮ್ಮ ಮುಡಿಗೇರಿಸಿಕೊಂಡಿವೆ. ತಮ್ಮ ಬಾಹ್ಯನೋಟಗಳು, ಚೊಕ್ಕ ವಿನ್ಯಾಸ, ಮತ್ತು ಬಳಕೆಯಲ್ಲಿನ ಸರಾಗತೆ ಇವೇ ಮೊದಲಾದ ಅಂಶಗಳಿಗಾಗಿ ಹೆಚ್ಚೆಚ್ಚು ಹೊಗಳಿಕೆಗಳನ್ನು ಪಡೆಯುವುದರ ಮೂಲಕ ಐಪಾಡ್ಗಳು ಆಗಾಗ ಆಶಾದಾಯಕ ವಿಮರ್ಶೆಗಳನ್ನು ಸ್ವೀಕರಿಸುತ್ತವೆ.
ಐಪಾಡ್ ಶ್ರೇಣಿಯು "ಒಯ್ಯಬಹುದಾದ ಶ್ರವಣ ಸಂಗೀತ ಸಾಧನಗಳಿಗಾಗಿರುವ ಸಮಗ್ರ ಚಿತ್ರಣವನ್ನು ಮಾರ್ಪಡಿಸಿದೆ" ಎಂದು [[PC ವರ್ಲ್ಡ್]] ನಿಯತಕಾಲಿಕವು ಅಭಿಪ್ರಾಯಪಡುತ್ತದೆ.<ref name="pcworld25"/> ಐಪಾಡ್ ಶ್ರೇಣಿ ಹಾಗೂ AAC ಶ್ರವಣ ಸ್ವರೂಪಗಳೆರಡರೊಂದಿಗೂ ಉತ್ತಮವಾಗಿ ಕಾರ್ಯನಿರ್ವಹಿಸುವ ದೃಷ್ಟಿಯಿಂದ ಹಲವಾರು ಉದ್ಯಮಗಳು ತಮ್ಮ ಉತ್ಪನ್ನಗಳನ್ನು ಮಾರ್ಪಡಿಸುತ್ತಿವೆ. CD ನಕಲು-ಸಂರಕ್ಷಣಾ ಯೋಜನೆಗಳು,<ref>[http://www.macrumors.com/pages/2004/07/20040720124549.shtml ಆಪಲ್, ಐಪಾಡ್, ಅಂಡ್ CD ಕಾಪಿ ಪ್ರೊಟೆಕ್ಷನ್], ''ಮ್ಯಾಕ್ ರೂಮರ್ಸ್''. 2007-02-17ರಂದು ಮರುಸಂಪಾದಿಸಿದ್ದು.</ref> ಮತ್ತು [[ಸೋನಿ ಎರಿಕ್ಸನ್]] ಮತ್ತು [[ನೋಕಿಯಾ]]ದಂಥ ಕಂಪನಿಗಳಿಂದ ಬರುವ ಫೋನುಗಳಂಥ, WMAಗೆ ಬದಲಾಗಿ AAC ಕಡತಗಳನ್ನು ಚಾಲಿಸಿ ಕೇಳಿಸುವ ಮೊಬೈಲ್ ಫೋನುಗಳು ಇಂಥ ಉದಾಹರಣೆಗಳಲ್ಲಿ ಸೇರಿವೆ.
ಗೌರವಿಸಲ್ಪಟ್ಟ ಮನರಂಜನಾ ಸಾಧನಗಳೆಂಬ ಅವುಗಳ ಪ್ರತಿಷ್ಠೆಯ ಜೊತೆಗೆ, ಐಪಾಡ್ಗಳು ವ್ಯಾವಹಾರಿಕ ಸಾಧನ ಅಥವಾ ಉಪಕರಣಗಳಾಗಿಯೂ ಸ್ವೀಕರಿಸಲ್ಪಟ್ಟಿವೆ. ಸರ್ಕಾರಿ ಇಲಾಖೆಗಳು, ಪ್ರಮುಖ ಸಂಘ-ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಸಂಘಟನೆಗಳು, ವ್ಯವಹಾರ ಸಂಬಂಧಿ ಸಂವಹನೆ-ಸಂಪರ್ಕ ಮತ್ತು ತರಬೇತಿಗಾಗಿ ಐಪಾಡ್ ಶ್ರೇಣಿಯನ್ನು ಒಂದು ವಿತರಣಾ ವ್ಯವಸ್ಥೆಯಾಗಿ ಪರಿಗಣಿಸಿವೆ. ಇಂಥ ಉದಾಹರಣೆಗಳಲ್ಲಿ [[ಗ್ಲಾಸ್ಗೋ]], [[ಸ್ಕಾಟ್ಲೆಂಡ್]]ಗಳಲ್ಲಿನ [[ರಾಯಲ್]] ಮತ್ತು [[ವೆಸ್ಟರ್ನ್ ಇನ್ಫರ್ಮರೀಸ್]] ಕೂಡಾ ಸೇರಿದ್ದು, ಹೊಸ ಸಿಬ್ಬಂದಿಗಳಿಗೆ ತರಬೇತಿ ನೀಡಲು ಅಲ್ಲಿ ಐಪಾಡ್ಗಳನ್ನು ಬಳಸಲಾಗುತ್ತದೆ.<ref>[http://news.bbc.co.uk/1/hi/business/4859302.stm ಹಾಸ್ಪಿಟಲ್ಸ್ ಟ್ರೇನ್ ಸ್ಟಾಫ್ ವಿತ್ ಐಪಾಡ್ಸ್], ''[[BBC ನ್ಯೂಸ್]]'', 2006-03-29. 2007-06-16ರಂದು ಮರುಸಂಪಾದಿಸಿದ್ದು.</ref>
ಶಿಕ್ಷಣಕ್ಷೇತ್ರದಲ್ಲಿನ ಬಳಕೆಗೆ ಸಂಬಂಧಿಸಿಯೂ ಐಪಾಡ್ಗಳು ಜನಪ್ರಿಯತೆಯನ್ನು ಗಳಿಸಿವೆ. ಪಾಠದ ಯೋಜನೆಗಳ ಒಂದು ಸಂಗ್ರಹವನ್ನು ಒಳಗೊಂಡಂತೆ, ಐಪಾಡ್ಗಳು ಒಳಗೊಂಡಿರುವ ಶೈಕ್ಷಣಿಕ ಬಳಕೆಗಳ ಕುರಿತಾದ ಹೆಚ್ಚಿನ ಮಾಹಿತಿಯನ್ನು ಆಪಲ್ ಕಂಪನಿಯು ತನ್ನ ವೆಬ್ಸೈಟ್ನಲ್ಲಿ<ref>[http://www.apple.com/education/teachers-professors/mobile-learning.html ಮೊಬೈಲ್ ಲರ್ನಿಂಗ್]</ref> ಒದಗಿಸುತ್ತದೆ. ಶುಶ್ರೂಷಾ ವೃತ್ತಿ ಶಿಕ್ಷಣ<ref name="Maag2006">{{cite journal | author = Maag, M.E.D. | year = 2006 | title = Podcasting and MP3 Players: Emerging Education Technologies. | journal = CIN: Computers, Informatics, Nursing | volume = 24 | issue = 1 | pages = 9–13 | url = http://www.cinjournal.com/pt/re/cin/fulltext.00024665-200601000-00005.htm | accessdate = 2008-02-08 | doi = 10.1186/1742-5581-3-1 }}{{Dead link|date=ಫೆಬ್ರವರಿ 2026 |bot=InternetArchiveBot |fix-attempted=yes }}</ref> ಮತ್ತು ಹೆಚ್ಚು ಸಾರ್ವತ್ರಿಕವಾದ K-16 ಶಿಕ್ಷಣವನ್ನೊಳಗೊಂಡಂತೆ ಈ ಕ್ಷೇತ್ರದಲ್ಲಿ ಶೈಕ್ಷಣಿಕ ಸ್ವರೂಪದ ಸಂಶೋಧನೆಯನ್ನೂ ಕೈಗೊಳ್ಳಲಾಗಿದೆ.<ref name="Slykhuis2006">{{cite journal | author = Slykhuis, D. | year = 2006 | title = Have an iPod? Then you need to know this about how to use it in your classroom. | url = http://www.aace.org/newdl/index.cfm?fuseaction=Reader.ViewAbstract&paper_id=22435 | accessdate = 2008-02-08 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> 2004ರ ಅಂತ್ಯದ ವೇಳೆಗೆ ಡ್ಯೂಕ್ ವಿಶ್ವವಿದ್ಯಾಲಯವು, ಪ್ರವೇಶ ಗಳಿಸಿದ ತನ್ನೆಲ್ಲಾ ಹೊಸ ವಿದ್ಯಾರ್ಥಿಗಳಿಗೆ ಐಪಾಡ್ಗಳನ್ನು ನೀಡಿದೆ, ಮತ್ತು ಒಂದಷ್ಟು ಮಾರ್ಪಾಡುಗಳೊಂದಿಗೆ ಅಲ್ಲಿನ ಐಪಾಡ್ ಯೋಜನೆಯು ಇಂದಿಗೂ ಮುಂದುವರಿದುಕೊಂಡು ಬಂದಿದೆ.<ref>{{Cite web |url=http://www.insidehighered.com/news/2006/04/28/ipod |title=ಡ್ಯೂಕ್’ಸ್ ಎವರ್-ಇವಾಲ್ವಿಂಗ್ ಐಪಾಡ್ ಇನಿಷಿಯಿಟಿವ್ |access-date=2009-12-21 |archive-date=2009-02-15 |archive-url=https://web.archive.org/web/20090215125247/http://www.insidehighered.com/news/2006/04/28/ipod |url-status=dead }}</ref>
== ಟೀಕೆಗಳು ==
{{Criticism section|date=September 2009}}
=== ಬ್ಯಾಟರಿ ಸಮಸ್ಯೆಗಳು ===
ಬಹುತೇಕ ಮಾದರಿಗಳಿಗೆ ಸಂಬಂಧಿಸಿದಂತೆ ಪ್ರಚಾರ ಮಾಡಲಾಗಿರುವ ಬ್ಯಾಟರಿ ಅವಧಿಗೂ, ವಾಸ್ತವಿಕವಾಗಿ ಕಾರ್ಯಸಾಧ್ಯವಾದ ಅವಧಿಗೂ ವ್ಯತ್ಯಾಸ ಕಂಡುಬಂದಿದೆ. ಉದಾಹರಣೆಗೆ, ಐದನೇ ಪೀಳಿಗೆಯ 30 GB ಐಪಾಡ್, 14 ಗಂಟೆಗಳಷ್ಟು ಅವಧಿಯವರೆಗೆ ಸಂಗೀತವನ್ನು ಮರುಚಾಲಿಸಬಲ್ಲದು ಎಂದು ಪ್ರಚಾರ ಮಾಡಲಾಗಿದೆ. ಆದರೆ ವಾಸ್ತವಿಕ-ಬಳಕೆಯ ಸನ್ನಿವೇಶಗಳ ಅಡಿಯಲ್ಲಿ ಇದು ವಸ್ತುತಃ ಕಾರ್ಯಸಾಧ್ಯವಾಗದ ಅಂಶ ಎಂದು MP3.com ವರದಿ ಮಾಡಿದೆ. ಐಪಾಡ್ ಒಂದರಿಂದ ಸರಾಸರಿ 8 ಗಂಟೆಗಳಿಗಿಂತಲೂ ಕಡಿಮೆ ಅವಧಿಯ ಸೇವೆಯು MP3.comಗೆ ಬರೆಯುವ ಓರ್ವ ಬರಹಗಾರನಿಗೆ ಸಿಕ್ಕಿರುವುದು ಈ ವರದಿಗೆ ಕಾರಣವಾದ ಅಂಶ.<ref>[http://www.mp3.com/features/stories/3646.html MP3 ಇನ್ಸೈಡರ್: ದಿ ಟ್ರುತ್ ಎಬೌಟ್ ಯುವರ್ ಬ್ಯಾಟರಿ ಲೈಫ್] {{Webarchive|url=https://web.archive.org/web/20060604141041/http://www.mp3.com/features/stories/3646.html |date=2006-06-04 }}, ''mp3.com'', 2006-03-13. 2006-07-10ರಂದು ಮರುಸಂಪಾದಿಸಿದ್ದು.</ref> 2003ರಲ್ಲಿ, ಆಪಲ್ ಕಂಪನಿಯ ವಿರುದ್ಧ ಉನ್ನತ ಮಟ್ಟದ ಕಾನೂನು ದಾವೆಗಳನ್ನು ಹೂಡಲಾಯಿತು. ಕಂಪನಿಯು ಹೇಳಿಕೊಂಡಿದ್ದಕ್ಕಿಂತ ತುಂಬಾ ಕಡಿಮೆ ಸಮಯಕ್ಕೇ ಬ್ಯಾಟರಿಯ ಅವಧಿ ಮುಗಿಯುತ್ತದೆ ಮತ್ತು ಕಾಲಾನಂತರದಲ್ಲಿ ಬ್ಯಾಟರಿಯ ಗುಣಮಟ್ಟ ಕುಸಿಯುತ್ತದೆ ಎಂಬುದಾಗಿ ಆಪಲ್ ಕಂಪನಿಯ ವಿರುದ್ಧ ದೂರು ನೀಡಲಾಯಿತು.<ref>[http://news.bbc.co.uk/1/hi/technology/3477497.stm ಆಪಲ್ ಇನ್ವೆಸ್ಟಿಗೇಟ್ಸ್ ಐಪಾಡ್ ಬ್ಯಾಟರೀಸ್], ''[[BBC ನ್ಯೂಸ್]]'', 2004-02-10. 2007-03-20ರಂದು ಮರುಸಂಪಾದಿಸಿದ್ದು.</ref>
ಈ ರೀತಿ ತೊಂದರೆಗೊಳಗಾದ ವ್ಯಕ್ತಿಗಳಿಗೆ 50 US$ನಷ್ಟು ಮಳಿಗೆಯ ಪ್ರತಿಫಲ ಅಥವಾ ಉಚಿತವಾಗಿ ಬ್ಯಾಟರಿಯನ್ನು ಬದಲಾಯಿಸಿಕೊಡುವ ವಾಗ್ದಾನದೊಂದಿಗೆ ಈ ಕಾನೂನು ದಾವೆಗಳನ್ನು ಇತ್ಯರ್ಥಗೊಳಿಸಲಾಯಿತು.<ref>ಹೋರ್ವಿಟ್ಸ್, ಜೆರೆಮಿ. [http://www.ilounge.com/index.php/articles/comments/apples-ipod-battery-settlement-explained/ ಆಪಲ್’s ಐಪಾಡ್ ಬ್ಯಾಟರಿ ಸೆಟ್ಲ್ಮೆಂಟ್, ಎಕ್ಸ್ಪ್ಲೇನ್ಡ್] {{Webarchive|url=https://web.archive.org/web/20090113081439/http://www.ilounge.com/index.php/articles/comments/apples-ipod-battery-settlement-explained/ |date=2009-01-13 }}, ''ಐಲಾಂಜ್'', 2005-06-10. 2006-08-27ರಂದು ಮರುಸಂಪಾದಿಸಿದ್ದು.</ref> ಬಳಕೆದಾರರು ಬ್ಯಾಟರಿಗಳನ್ನು ತೆಗೆಯಲಾಗದಂತೆ ಅಥವಾ ಬದಲಿಸಲಾಗದಂತೆ ಐಪಾಡ್ನ ಬ್ಯಾಟರಿಗಳನ್ನು ವಿನ್ಯಾಸಮಾಡಲಾಗಿರುತ್ತದೆ. ಆದರೂ ಕೆಲವೊಂದು ಬಳಕೆದಾರರು ಐಪಾಡ್ನ ಹೊದಿಕೆಯನ್ನು ಸ್ವತಃ ತೆರೆಯಬಲ್ಲವರಾಗಿರುತ್ತಾರೆ. ಐಪಾಡ್ ಬ್ಯಾಟರಿಗಳನ್ನು ಬದಲಿಸುವ, ತೃತೀಯ ಕಂಪನಿಯ ಮಾರಾಟಗಾರರಿಂದ ಸೂಚನೆ ಪಡೆದು ಬಳಕೆದಾರರು ಸಾಮಾನ್ಯವಾಗಿ ಈ ಕೆಲಸದಲ್ಲಿ ತೊಡಗುತ್ತಾರೆ ಎನ್ನಬಹುದು. ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುವಂತೆ, ಬಳಸಿ ಜೀರ್ಣವಾಗಿರುವ ಬ್ಯಾಟರಿಗಳನ್ನು ಆರಂಭದಲ್ಲಿ ಬದಲಾಯಿಸಿ ಕೊಡುವುದಿಲ್ಲ. ಹೆಚ್ಚೂ ಕಡಿಮೆ ಹೊಚ್ಚ ಹೊಸತಾದ ಐಪಾಡ್ ಒಂದರ ಬೆಲೆಗೆ ಸಮನಾದ ಬೆಲೆಯಲ್ಲಿ, ನವೀಕೃತ ಬದಲಿ ಐಪಾಡ್ನ್ನು ಗ್ರಾಹಕನು ಕೊಳ್ಳಬೇಕು ಎಂಬುದು ಕಂಪನಿಯ ಅಧಿಕೃತ ಕಾರ್ಯನೀತಿಯಾಗಿತ್ತು. ಎಲ್ಲಾ ಲಿಥಿಯಂ-ಅಯಾನ್ ಬ್ಯಾಟರಿಗಳು ತಮ್ಮ ಜೀವಿತಾವಧಿಯಲ್ಲಿ ಅಂತಿಮವಾಗಿ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ<ref>[http://www.mp3newswire.net/stories/6002/li_ion.html ದಿ ಕರ್ಸ್ ಆಫ್ ಲಿಥಿಯಂ ಅಯಾನ್ ಬ್ಯಾಟರೀಸ್] {{Webarchive|url=https://web.archive.org/web/20090308055855/http://www.mp3newswire.net/stories/6002/li_ion.html |date=2009-03-08 }}, ''[[MP3 ನ್ಯೂಸ್ವೈರ್]]'', 2006-01-06. 2006-11-30ರಂದು ಮರುಸಂಪಾದಿಸಿದ್ದು.</ref> ([[ಜೀವಿತಾವಧಿಯನ್ನು ಸುದೀರ್ಘಗೊಳಿಸುವ]] ಪ್ರಕ್ರಿಯೆಗಾಗಿ ಮಾರ್ಗದರ್ಶಿ ಸೂತ್ರಗಳು ಲಭ್ಯವಿವೆ) ಮತ್ತು ಈ ಪರಿಸ್ಥಿತಿಯಿಂದಾಗಿ ತೃತೀಯ ಕಂಪನಿಗಳ ಬ್ಯಾಟರಿ ಬದಲಾವಣೆಯ ಕಿಟ್ಗಳಿಗಾಗಿ ಒಂದು ಮಾರುಕಟ್ಟೆಯೇ ಸೃಷ್ಟಿಯಾಗಿದೆ.
[[ನೀಸ್ಟಾಟ್ ಸೋದರರು]] ಮಾಡಿದ ಒಂದು ಅತಿದೊಡ್ಡ ಪ್ರಚಾರದ ಕಸರತ್ತು ಮತ್ತು ವೆಬ್ಸೈಟ್ಗೆ ಒಂದು ವಾರ ಮುಂಚಿತವಾಗಿ,<ref>[http://ipodbatteryfaq.com/#18 ಐಪಾಡ್ ಬ್ಯಾಟರಿ FAQ] {{Webarchive|url=https://web.archive.org/web/20090303110450/http://www.ipodbatteryfaq.com/#18 |date=2009-03-03 }}. 2006-11-26ರಂದು ಮರುಸಂಪಾದಿಸಿದ್ದು.</ref> ಅಂದರೆ, 2003ರ ನವೆಂಬರ್ 14ರಂದು ಬ್ಯಾಟರಿ ಬದಲಿಕೆಯ ಒಂದು ಕಾರ್ಯಕ್ರಮವನ್ನು ಆಪಲ್ ಕಂಪನಿಯು ಪ್ರಕಟಿಸಿತು.<ref>ನೀಸ್ಟಾಟ್, ಕೇಸಿ. [http://www.ipodsdirtysecret.com/message.html ಎ ಮೆಸೇಜ್ ಫ್ರಂ ದಿ ನೀಸ್ಟಾಟ್ ಬ್ರದರ್ಸ್] {{Webarchive|url=https://web.archive.org/web/20090303205243/http://www.ipodsdirtysecret.com/message.html |date=2009-03-03 }}, 2003-11-20. 2007-02-17ರಂದು ಮರುಸಂಪಾದಿಸಿದ್ದು.</ref> ಆರಂಭದಲ್ಲಿ ವೆಚ್ಚವು 99 US$ನಷ್ಟಿತ್ತು<ref>[http://www.macminute.com/2003/11/14/ipodbattery ಆಪಲ್ ಆಫರ್ಸ್ ಐಪಾಡ್ ಬ್ಯಾಟರಿ ರೀಪ್ಲೇಸ್ಮೆಂಟ್ ಸರ್ವೀಸ್] {{Webarchive|url=https://web.archive.org/web/20041022041812/http://www.macminute.com/2003/11/14/ipodbattery |date=2004-10-22 }}, ''[[ಮ್ಯಾಕ್ಮಿನಿಟ್]]'', 2003-11-14. 2006-11-26ರಂದು ಮರುಸಂಪಾದಿಸಿದ್ದು.</ref>. 2005ರಲ್ಲಿ ಇದನ್ನು 59 US$ಗೆ ಇಳಿಸಲಾಯಿತು. ಒಂದು ವಾರದ ನಂತರ, 59 US$ನಷ್ಟು ಬೆಲೆಗೆ ಆಪಲ್ ಕಂಪನಿಯು ಐಪಾಡ್ನ ಒಂದು ವಿಸ್ತರಿತ ಖಾತರಿ ಕರಾರನ್ನು (ವಾರಂಟಿಯನ್ನು) ನೀಡಿತು.<ref>[http://www.macminute.com/2003/11/21/ipodapplecare/ ಆಪಲ್ಕೇರ್ ಫಾರ್ ಐಪಾಡ್ ನೌ ಅವೈಲಬಲ್] {{Webarchive|url=https://web.archive.org/web/20041022032309/http://www.macminute.com/2003/11/21/ipodapplecare |date=2004-10-22 }}, ''[[ಮ್ಯಾಕ್ಮಿನಿಟ್]]'', 2003-11-21. 2006-11-26ರಂದು ಮರುಸಂಪಾದಿಸಿದ್ದು.</ref> ಐಪಾಡ್ ನ್ಯಾನೋ ಮಾದರಿಯಲ್ಲಿ ಬ್ಯಾಟರಿಯನ್ನು ಮುಖ್ಯ ಫಲಕದ ಮೇಲೆ ಬೆಸುಗೆ ಹಾಕಲಾಗಿರುತ್ತದೆಯಾದ್ದರಿಂದ, [[ಬೆಸುಗೆ ಹಾಕುವ]] ಸಾಧನಗಳ ಅಗತ್ಯವಿರುತ್ತದೆ. ಐದನೇ ಪೀಳಿಗೆಯ ಐಪಾಡ್ಗಳಲ್ಲಿ ಬ್ಯಾಟರಿಗಳನ್ನು ಅಂಟುಪದಾರ್ಥದ ನೆರವಿನೊಂದಿಗೆ ಹಿಂಭಾಗದ ಪಟ್ಟಿಗೆ ಜೋಡಿಸಲಾಗಿರುತ್ತದೆ.<ref>ಇಕರ್, ಕ್ಲಿಂಟ್. [https://arstechnica.com/reviews/hardware/video-ipod.ars/6 ವಿವಿಸೆಕ್ಷನ್ ಆಫ್ ದಿ ವಿಡಿಯೋ ಐಪಾಡ್], ''[[ಆರ್ಸ್ ಟೆಕ್ನಿಕಾ]]'', 2005-10-19. 2006-11-26ರಂದು ಮರುಸಂಪಾದಿಸಿದ್ದು.</ref><ref>[http://www.ipodmods.com/guides/Video/videodisassemblyguide.htm ಡಿಸ್ಅಸೆಂಬಲ್ ಗೈಡ್ ಫಾರ್ ವಿಡಿಯೋ ಐಪಾಡ್] {{Webarchive|url=https://web.archive.org/web/20071116134427/http://www.ipodmods.com/guides/Video/videodisassemblyguide.htm |date=2007-11-16 }}. 2006-11-26ರಂದು ಮರುಸಂಪಾದಿಸಿದ್ದು.</ref>
=== ವಿಶ್ವಾಸಾರ್ಹತೆ ಮತ್ತು ಬಾಳಿಕೆ ===
ತಮ್ಮ ಕಿರು ಜೀವಿತಾವಧಿ ಹಾಗೂ ನಾಜೂಕಾದ ಹಾರ್ಡ್ ಡ್ರೈವ್ಗಳ ಕಾರಣದಿಂದಾಗಿ ಐಪಾಡ್ಗಳು ಟೀಕೆಗೊಳಗಾಗುತ್ತಲೇ ಬಂದಿವೆ. ಮ್ಯಾಕ್ಲ್ನ್ ಟಚ್ ವೆಬ್ಸೈಟ್ ಮೂಲಕ 2005ರಲ್ಲಿ ಕೈಗೊಳ್ಳಲಾದ ಒಂದು ಸಮೀಕ್ಷೆಯು, ಐಪಾಡ್ ಶ್ರೇಣಿಯು 13.7%ನಷ್ಟು ಸರಾಸರಿ ವೈಫಲ್ಯದ ಪ್ರಮಾಣವನ್ನು ಹೊಂದಿರುವುದನ್ನು ಕಂಡುಕೊಂಡಿತು (ಆದರೂ, "ಐಪಾಡ್ನ ನಿಜವಾದ ವೈಫಲ್ಯತಾ ಪ್ರಮಾಣವು ಕಾಣುವುದಕ್ಕಿಂತ ಇನ್ನೂ ಕಡಿಮೆಯಿರಬಹುದು" ಎಂದು ಸಮೀಕ್ಷೆಗೆ ಸ್ಪಂದಿಸಿದವರು ಸೂಚ್ಯವಾಗಿ ಹೇಳಿದ್ದನ್ನು ಅದು ಗಮನಿಸಿತ್ತು). ಇತರ ಉತ್ಪನ್ನಗಳಿಗಿಂತ ಕೆಲವೊಂದು ಮಾದರಿಗಳು ಹೆಚ್ಚು ಬಾಳಿಕೆ ಬರುವಂಥವಾಗಿದ್ದವು ಎಂದು ಅದು ತೀರ್ಮಾನಕ್ಕೆ ಬಂತು.<ref>[http://www.macintouch.com/reliability/ipodfailures.html ಐಪಾಡ್ ರಿಲಯಬಿಲಿಟಿ ಸರ್ವೆ] {{Webarchive|url=https://web.archive.org/web/20090219003252/http://www.macintouch.com/reliability/ipodfailures.html |date=2009-02-19 }}, ''ಮ್ಯಾಕ್ಲ್ನ್ ಟಚ್'', 2005-11-28. 2006-10-29ರಂದು ಮರುಸಂಪಾದಿಸಿದ್ದು.</ref> ನಿರ್ದಿಷ್ಟವಾಗಿ ಹೇಳುವುದಾದರೆ, ಹಾರ್ಡ್ ಡ್ರೈವ್ಗಳನ್ನು ಒಳಗೊಂಡ ಐಪಾಡ್ಗಳ ವೈಫಲ್ಯತಾ ಪ್ರಮಾಣವು ಸಾಮಾನ್ಯವಾಗಿ 20%ಗಿಂತಲೂ ಮೇಲಿದ್ದರೆ, ಫ್ಲಾಷ್ ಮೆಮರಿಯೊಂದಿಗಿನ ಐಪಾಡ್ಗಳದ್ದು 10%ಗಿಂತ ಕಡಿಮೆಯಿದ್ದು, ಹಾರ್ಡ್ ಡ್ರೈವ್ ಬಾಳಿಕೆಯ ಸಾಮರ್ಥ್ಯವು ದುರ್ಬಲವಾಗಿರುವುದನ್ನು ಸೂಚಿಸಿತ್ತು.
ಮೊದಲನೇ ಪೀಳಿಗೆಯ ಐಪಾಡ್ ನ್ಯಾನೋ ಮಾದರಿಯ ಮೇಲ್ಮೈಯು ಗೀಚುವಿಕೆಗೆ ಸುಲಭವಾಗಿ ಈಡಾಗುವುದರಿಂದ, ಅದರ ಪರದೆಯು ಬಳಕೆಗೆ ಯೋಗ್ಯವಾಗಿ ಉಳಿಯುವುದಿಲ್ಲ ಎಂದು ಬಹಳಷ್ಟು ಬಳಕೆದಾರರು ಆಪಾದಿಸಿದರು<ref>[http://www.macworld.com/news/2005/09/27/nanoscreen/index.php ಆಪಲ್ ರೆಸ್ಪಾಂಡ್ಸ್ ಟು ಐಪಾಡ್ ನ್ಯಾನೋ ಸ್ಕ್ರೀನ್ ಕನ್ಸರ್ನ್ಸ್] {{Webarchive|url=https://web.archive.org/web/20080517174305/http://www.macworld.com/news/2005/09/27/nanoscreen/index.php |date=2008-05-17 }}, ''[[ಮ್ಯಾಕ್ವರ್ಲ್ಡ್]]'', 2005-09-27. 2007-02-17ರಂದು ಮರುಸಂಪಾದಿಸಿದ್ದು.</ref><ref>ಅರ್ಥರ್, ಚಾರ್ಲ್ಸ್. [http://www.theregister.co.uk/2005/09/23/ipod_nano_scratching/ ಐಪಾಡ್ ನ್ಯಾನೋ ಓನರ್ಸ್ ಇನ್ ಸ್ಕ್ರೀನ್ ಸ್ಕ್ರಾಚ್ ಟ್ರೌಮಾ], ''[[ದಿ ರಿಜಿಸ್ಟರ್]]'', 2005-09-25. 2007-02-17ರಂದು ಮರುಸಂಪಾದಿಸಿದ್ದು.</ref> ಉನ್ನತ ಕ್ರಮದ ಕಾನೂನು ದಾವೆಯೊಂದನ್ನೂ ಹೂಡಲಾಯಿತು.<ref>ಫ್ರೀಡ್, ಐನಾ. [https://web.archive.org/web/20070820191319/http://news.com.com/Suit+filed+over+Nano+scratches/2100-1047_3-5906399.html ಸ್ಯೂಟ್ ಫೈಲ್ಡ್ ಓವರ್ ನ್ಯಾನೋ ಸ್ಕ್ರಾಚಸ್], ''[[CNet ನ್ಯೂಸ್]]'', 2005-10-21. 2007-02-17ರಂದು ಮರುಸಂಪಾದಿಸಿದ್ದು.</ref> ಈ ಪ್ರಕರಣವನ್ನು ಆರಂಭದಲ್ಲಿ ಆಪಲ್ ಕಂಪನಿಯು ಒಂದು ಚಿಕ್ಕ ಸೋಲಿನಂತೆ ಪರಿಗಣಿಸಿದರೂ, ನಂತರದಲ್ಲಿ ರಕ್ಷಣಾತ್ಮಕ ಹೊದಿಕೆಗಳೊಂದಿಗೆ ಈ ಐಪಾಡ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.
=== ಕೆಲಸಗಾರರ ಶೋಷಣೆಯ ಆಪಾದನೆಗಳು ===
ಪ್ರತಿ ತಿಂಗಳಿಗೆ 50 US$ಗಿಂತ ಹೆಚ್ಚು ಹಣ ಸಂಪಾದಿಸದ ಮತ್ತು 15-ಗಂಟೆ ಪಾಳಿಗಳಲ್ಲಿ ದುಡಿಯುವ ಕೆಲಸಗಾರರಿಂದ ಮುಖ್ಯವಾಗಿ ಐಪಾಡ್ಗಳು ತಯಾರಿಸಲ್ಪಡುತ್ತಿವೆ ಎಂದು ''[[ದಿ ಮೇಲ್ ಆನ್ ಸಂಡೆ]]'' ಎಂಬ ಬ್ರಿಟಿಷ್ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು 2006ರ ಜೂನ್ 11ರಂದು ವರದಿಮಾಡಿತು.<ref>[http://www.macworld.co.uk/news/index.cfm?NewsID=14915 ಇನ್ಸೈಡ್ ಆಪಲ್'ಸ್ ಐಪಾಡ್ ಫ್ಯಾಕ್ಟರೀಸ್], ''[[ಮ್ಯಾಕ್ವರ್ಲ್ಡ್ UK]]'', 2006-06-12. 2007-03-20ರಂದು ಮರುಸಂಪಾದಿಸಿದ್ದು.</ref> ಸ್ವತಂತ್ರ ಲೆಕ್ಕಪರಿಶೋಧಕರಿಂದ ಈ ಪ್ರಕರಣದ ತನಿಖೆ ನಡೆಸಿದ ಆಪಲ್ ಕಂಪನಿ, ತಯಾರಿಕಾ ಘಟಕದ ಕೆಲವೊಂದು ಕಾರ್ಮಿಕ ಪರಿಪಾಠಗಳು ಆಪಲ್ನ ನೀತಿಸಂಹಿತೆಗೆ ಅನುಸಾರವಾಗಿದ್ದರೆ, ಉಳಿದವು ಇರಲಿಲ್ಲ ಎಂಬ ಅಂಶವನ್ನೂ; ನೌಕರರು ಸಮಯದ 35%ನಷ್ಟು ಭಾಗದಲ್ಲಿ ವಾರವೊಂದಕ್ಕೆ 60 ಗಂಟೆಗಳಿಗೂ ಮೀರಿ ಕೆಲಸ ಮಾಡಿದ್ದರು, ಮತ್ತು ಸಮಯದ 25%ನಷ್ಟು ಭಾಗದಲ್ಲಿ ಆರು ನಿರಂತರ ದಿನಗಳಿಗೂ ಹೆಚ್ಚಾಗಿ ಕೆಲಸಮಾಡಿದ್ದರು ಎಂಬುದನ್ನು ಕಂಡುಕೊಂಡಿತು.<ref>ಮಿಲ್ಲಾರ್ಡ್, ಎಲಿಝಬತ್. [http://www.newsfactor.com/story.xhtml?story_id=13100EV85O19&page=2 ಈಸ್ ಇಟ್ ಎಥಿಕಲ್ ಟು ವಿನ್ ಆನ್ ಐಪಾಡ್?] {{Webarchive|url=https://web.archive.org/web/20090916064933/http://www.newsfactor.com/story.xhtml?story_id=13100EV85O19&page=2 |date=2009-09-16 }}. 2007-03-20ರಂದು ಮರುಸಂಪಾದಿಸಿದ್ದು.</ref>
ಆಪಲ್ನ ತಯಾರಕ ಕಂಪನಿಯಾದ 0}ಫಾಕ್ಸ್ಕಾನ್, ಮೊದಮೊದಲು ಆರೋಪವನ್ನು ನಿರಾಕರಿಸಿತು.<ref>[http://www.macnn.com/articles/06/06/19/ipod.sweatshop.claims/ ಫಾಕ್ಸ್ಕಾನ್ ಡಿನೈಸ್ ಐಪಾಡ್ 'ಸ್ವೆಟ್ಷಾಪ್' ಕ್ಲೇಮ್ಸ್], ''ಮ್ಯಾಕ್NN'', 2006-06-19. 2007-02-17ರಂದು ಮರುಸಂಪಾದಿಸಿದ್ದು.</ref> ಆದರೆ, ಚೀನೀ ಕಾನೂನಿನ ಅಡಿಯಲ್ಲಿ ಅವಕಾಶ ಮಾಡಿಕೊಡಲಾಗಿರುವ ಕೆಲಸದ ಅವಧಿಗಳಿಗಿಂತ ಹೆಚ್ಚಿನ ಅವಧಿಯವರೆಗೆ ಕೆಲಸಗಾರರು ಕೆಲಸ ಮಾಡುತ್ತಲೇ ಇದ್ದುದು ಆಪಲ್ನಿಂದ ಬಂದಿದ್ದ ಲೆಕ್ಕಪರಿಶೋಧಕರ ತಂಡದ ಗಮನಕ್ಕೆ ಬಂದಾಗ, ಸಂಹಿತೆಯಲ್ಲಿ ಸೂಚಿಸಲಾಗಿರುವುದಕ್ಕಿಂತ ಹೆಚ್ಚಿನ ಅವಧಿಯವರೆಗೆ ನೌಕರರಿಂದ ಕೆಲಸ ಮಾಡಿಸುವುದಿಲ್ಲ ಎಂದು ಸದರಿ ತಯಾರಕ ಕಂಪನಿಯು ಭರವಸೆ ನೀಡಿತು.
ಕೆಲಸದ ಜಾಗದ ಪ್ರಮಾಣಿತ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವ ವೆರೈಟೆ ಎಂಬ ಕಂಪನಿಯನ್ನು ಆಪಲ್ ಕಂಪನಿಯು ನೇಮಿಸಿಕೊಂಡಿದ್ದರ ಜೊತೆಗೆ, ಕಾರ್ಯಚಟುವಟಿಕೆಗಳು ಮತ್ತು ಪರಿಪಾಠಗಳ ಅನುಷ್ಠಾನಗಳನ್ನು ಮೇಲ್ವಿಚಾರಣೆ ಮಾಡಲೆಂದೇ ಇಲೆಕ್ಟ್ರಾನಿಕ್ ಇಂಡಸ್ಟ್ರಿ ಕೋಡ್ ಆಫ್ ಕಂಡಕ್ಟ್ ಇಂಪ್ಲಿಮೆಂಟೇಷನ್ ಗ್ರೂಪ್ನೊಂದಿಗೆ ಕೈಜೋಡಿಸಿತು. 2006ರ ಡಿಸೆಂಬರ್ 31ರಂದು, ಲೊಂಘುವಾದಲ್ಲಿನ [[ಷೆನ್ಝೆನ್]] ಕಾರ್ಖಾನೆಯ (ಫಾಕ್ಸ್ಕಾನ್ ಕಂಪನಿಗೆ ಇದರ ಮಾಲೀಕತ್ವವಿತ್ತು) ಕೆಲಸಗಾರರು ಒಂದು ಕಾರ್ಮಿಕ ಸಂಘವನ್ನು ಕಟ್ಟಿದರು. ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಪ್ರಬಲವಾದ ವೃತ್ತಿಸಂಘಗಳ ಒಕ್ಕೂಟವಾದ [[ಆಲ್-ಚೀನಾ ಫೆಡರೇಷನ್ ಆಫ್ ಟ್ರೇಡ್ ಯೂನಿಯನ್ಸ್]]ನ ವ್ಯಾಪ್ತಿಗೆ ಈ ಕಾರ್ಮಿಕ ಸಂಘವು ಒಳಪಟ್ಟಿದೆ ಅಥವಾ ಮಾನ್ಯತೆ ಹೊಂದಿದೆ.<ref>ಬೊದೀನ್, ಕ್ರಿಸ್ಟಫರ್. [http://www.forbes.com/feeds/ap/2007/01/17/ap3334400.html ಅಫಿಷಿಯಲ್ ಯೂನಿಯನ್ ಫಾರ್ಮ್ಸ್ ಅಟ್ ತೈವಾನೀಸ್ ಪ್ಲಾಂಟ್]{{Dead link|date=ಆಗಸ್ಟ್ 2022 |bot=InternetArchiveBot |fix-attempted=yes }}, ''[[ಫೋರ್ಬ್ಸ್]]'', 2007-01-17. 2007-02-17ರಂದು ಮರುಸಂಪಾದಿಸಿದ್ದು.</ref>
== ಇದನ್ನೂ ನೋಡಿರಿ ==
* [[ಒಯ್ಯಬಹುದಾದ ಸಂಗೀತ ಸಾಧನಗಳ ಹೋಲಿಕೆ]]
* [[ಐಪಾಡ್ ವ್ಯವಸ್ಥಾಪಕರ ಹೋಲಿಕೆ]]
== ಉಲ್ಲೇಖಗಳು ==
{{reflist|2}}
== ಹೊರಗಿನ ಕೊಂಡಿಗಳು ==
{{commons|iPod}}
{{wikiquote|iPod}}
* [http://www.apple.com/itunes/ ಆಪಲ್ ಐಪಾಡ್]—ಅಧಿಕೃತ ವೆಬ್ಸೈಟ್
* [http://docs.info.apple.com/article.html?artnum=32222 ಐಪಾಡ್ ಟ್ರಬಲ್ಶೂಟಿಂಗ್ ಬೇಸಿಕ್ಸ್ ಅಂಡ್ ಸರ್ವೀಸ್ FAQ] {{Webarchive|url=https://web.archive.org/web/20080406030638/http://docs.info.apple.com/article.html?artnum=32222 |date=2008-04-06 }}—ಅಧಿಕೃತ ವೆಬ್ಸೈಟ್ನಿಂದ
* [http://money.cnn.com/magazines/fortune/fortune_archive/2001/11/12/313342/index.htm ''ಆಪಲ್'ಸ್ 21ಸ್ಟ್ ಸೆಂಚುರಿ ವಾಕ್ಮನ್'' ] {{Webarchive|url=https://web.archive.org/web/20020602035407/http://www.fortune.com/indext.jhtml?channel=print_article.jhtml&doc_id=204903 |date=2002-06-02 }}—ಬ್ರೆಂಟ್ ಷ್ಲೆಂಡರ್, ''[[ಫಾರ್ಚೂನ್]]'', 2001ರ ಅಕ್ಟೋಬರ್
* [http://www.newsweek.com/id/54529 ಐಪಾಡ್ ನೇಷನ್]—[[ಸ್ಟೀವನ್ ಲೆವಿ]], ''[[ನ್ಯೂಸ್ವೀಕ್]]'', 2004ರ ಜುಲೈ
* [https://www.wired.com/wired/archive/14.11/ipod.html ದಿ ಪರ್ಫೆಕ್ಟ್ ಥಿಂಗ್]—[[ಸ್ಟೀವನ್ ಲೆವಿ]], ''[[ವೈರ್ಡ್]]'', 2006ರ ನವೆಂಬರ್
{{iPod}}
{{iPhone}}
{{Apple hardware since 1998}}
{{Apple}}
{{DEFAULTSORT:Ipod}}
{{Interwikineeded}}
[[ವರ್ಗ:ತಂತ್ರಜ್ಞಾನ]]
[[ವರ್ಗ:2001ರ ಪೀಠಿಕೆಗಳು]]
[[ವರ್ಗ:ಒಯ್ಯಬಹುದಾದ ಸಂಗೀತ ಸಾಧನಗಳು]]
[[ವರ್ಗ:ಕೈಗಾರಿಕಾ ವಿನ್ಯಾಸದ ಉದಾಹರಣೆಗಳು]]
[[ವರ್ಗ:ಐಪಾಡ್]]
[[ವರ್ಗ:ಐಫೋನ್ OS ತಂತ್ರಾಂಶ]]
[[ವರ್ಗ:ಐಟ್ಯೂನ್ಸ್]]
ipbrevl04e30cpuxo15bx3xnve0vxhz
ಐಫೋನ್
0
22393
1379540
1378211
2026-08-08T19:46:27Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379540
wikitext
text/x-wiki
{{Infobox Information appliance
|name=iPhone
|image=[[ಚಿತ್ರ:Smartphone.png|300px|iPhone]]
|caption=The iPhone 15 is the most recent of [[List of iPhone and iPod Touch models|generations]] of the iPhone.
|manufacturer=[[Apple Inc.]]
|type=[[Bar (form)|Candybar]] [[smartphone]]
|releasedate='''Original:''' June 29, 2007<ref name=Original_release>{{cite news|url=http://www.mp3newswire.net/stories/7002/iphone-line.html|title=Steve iPhone: Hundreds Come, Lines Orderly|publisher=[[MP3 Newswire]]|date=June 29, 2007|accessdate=2008-06-06|archive-date=2016-04-08|archive-url=https://web.archive.org/web/20160408093309/http://www.mp3newswire.net/stories/7002/iPhone-line.html|url-status=dead}}</ref><br />'''3G:''' July 11, 2008<ref name="tuaw">{{cite web|url=http://www.tuaw.com/2008/06/09/iphone-3g-announced/|title=iPhone 3G announced — The Unofficial Apple Weblog (TUAW)|accessdate=2008-06-10|date=June 9, 2008|author=Robert PalmerFiled|archive-date=2015-01-31|archive-url=https://web.archive.org/web/20150131132526/http://www.tuaw.com/2008/06/09/iphone-3g-announced/|url-status=dead}}</ref><br />'''3GS:''' June 19, 2009<ref name=3G_S_PR/>
|unitssold=21.17 million {{as of|2009|04|22|alt=(as of [[Fiscal year#United States|Q2]] 2009)}}<ref name=2009_Q2_PR/>
|os=[[iPhone OS]]<br />[[iPhone OS version history|3.1.2 (build 7D11)]], released October 8, 2009
|power='''Original:''' 3.7 [[Volt|V]] 1400 m[[Ampere-hour|Ah]]<br />'''3G:''' 3.7 V 1150 mAh<br />'''3GS:''' 3.7 V 1219 mAh<ref name="3GS teardown">{{cite web|url=http://www.ifixit.com/Teardown/iPhone-3G-S/817/2|title=iPhone 3GS Teardown|date=2009-06-19|publisher=iFixit.com|pages=2|accessdate=2009-06-19}}</ref><br />Internal rechargeable non-removable [[lithium-ion polymer battery]]<ref name=battery_specs>{{cite web|url=http://www.ipodbatteryfaq.com/ipodbatteryandpower.html|title=iPod and iPhone Battery and Power Specifications|publisher=iPodBatteryFAQ.com|accessdate=2009-05-12|archive-date=2009-02-07|archive-url=https://web.archive.org/web/20090207054030/http://www.ipodbatteryfaq.com/ipodbatteryandpower.html|url-status=dead}}</ref>
|cpu='''Original & 3G:''' [[Samsung]] [[32-bit]] [[Reduced instruction set computer|RISC]] [[ARM architecture|ARM]] 1176JZ(F)-S v1.0<ref name="Processor">{{cite web|url=http://toucharcade.com/2008/07/07/under-the-hood-the-iphones-gaming-mettle/|title=Under the Hood: The iPhone’s Gaming Mettle|last=Patterson|first=Blake|date=2008-07-07|publisher=touchArcade|accessdate=2009-03-20}}</ref><br />620 M[[Hertz|Hz]] [[underclocking|underclocked]] to 412 MHz<ref>{{cite web|url=http://www.roughlydrafted.com/2008/03/20/iphone-20-sdk-video-games-to-rival-nintendo-ds-sony-psp/|title=iPhone 2.0 SDK: Video Games to Rival Nintendo DS, Sony PSP|last=Dilger|first=Daniel Eran|date=2008-03-20|publisher=RoughlyDrafted Magazine|accessdate=2009-05-12|archive-date=2012-06-06|archive-url=https://www.webcitation.org/68DybFwlU?url=http://www.roughlydrafted.com/2008/03/20/iphone-20-sdk-video-games-to-rival-nintendo-ds-sony-psp/|url-status=dead}}</ref><br />[[PowerVR]] [[PowerVR#MBX|MBX]] Lite 3D [[Graphics processing unit|GPU]]<ref name="GPU">{{cite web|url=http://www.eetimes.com/news/semi/showArticle.jhtml?articleID=200900740|title=Update: U.K. graphics specialist confirms iPhone design win|publisher=[[EE Times]]|access-date=2010-01-28|archive-date=2012-06-06|archive-url=https://www.webcitation.org/68DyboxOh?url=http://eetimes.com/electronics-news/4188648/IPhone-code-trail-points-to-MBX-graphics-core|url-status=dead}}</ref>
<br />'''3GS:''' Samsung S5PC100 ARM Cortex-A8<ref name="3G_S_Processor">{{cite web|url=http://www.anandtech.com/gadgets/showdoc.aspx?i=3579&p=2|title=The iPhone 3GS Hardware Exposed & Analyzed|last=Shimpi|first=Anand|date=2009-06-10|publisher=AnandTech|accessdate=2009-06-10|archive-date=2010-03-08|archive-url=https://web.archive.org/web/20100308085851/http://www.anandtech.com/gadgets/showdoc.aspx?i=3579&p=2|url-status=dead}}</ref><br />833 MHz underclocked to 600 MHz<br />PowerVR [[PowerVR#Series5 (SGX)|SGX]] GPU<ref name="3G_S_Processor2">{{cite web|url=https://www.wired.com/gadgetlab/2009/06/iphone-teardown-reveals-underclocked-833mhz-cpu/|title=IPhone Teardown Reveals Underclocked 833MHz CPU|last=Sorrel|first=Charlie|date=2009-06-19|publisher=[[Wired (magazine)|Wired]]|accessdate=2009-11-20}}</ref>
|storage=[[Flash memory]]<br />'''Original:''' 4, 8, & 16 [[gigabyte|GB]]<br />'''3G:''' 8 & 16 GB<br />'''3GS:''' 16 & 32 GB
|memory='''Original & 3G:''' 128 [[megabyte|MB]] [[eDRAM]]<ref name="DRAM">{{cite web|url=http://www.semiconductor.com/resources/reports_database/view_device.asp?sinumber=18016|title=Apple (Samsung S5L8900) applications processor with eDRAM|publisher=Semiconductor Insights|accessdate=2009-05-12|archive-date=2009-02-07|archive-url=https://web.archive.org/web/20090207204820/http://semiconductor.com/resources/reports_database/view_device.asp?sinumber=18016|url-status=dead}}</ref><br />'''3GS:''' 256 MB eDRAM<ref name="3G_S_Processor"/>
|display=320 × 480 [[pixel|px]], {{convert|3.5|in|mm|0|abbr=on}}, 2:3 [[aspect ratio (image)|aspect ratio]], 18-bit (262,144-color) [[liquid crystal display|LCD]] with 163 [[pixels per inch]] (ppi)
|audio=Two [[loudspeaker|speakers]], [[TRS connector#Aircraft headsets|TRRS headphone jack]], 20 Hz to 20 kHz [[frequency response]] (internal, headset), [[microphone]]
|input=[[Multi-touch]] [[touchscreen]] display, [[#Audio|headset controls]], proximity and [[low-key lighting|ambient light]] sensors, 3-axis [[accelerometer]]<ref name="High Technology">{{cite web|url=http://www.apple.com/iphone/iphone-3g-s/high-technology.html|title=Apple - iPhone - Learn about high-tech features like Multi-Touch.|publisher=Apple|accessdate=2009-06-10}}</ref><br />'''3GS also includes:''' digital [[compass]]<ref name=Compass/>
|camera='''Original & 3G:''' 2.0 [[pixel#Megapixel|megapixels]] with [[geotagging]]<br />'''3GS:''' 3.0 megapixels with [[camcorder|video]] ([[Video Graphics Array|VGA]] at 30 [[frame rate|fps]]), geotagging, and automatic [[focus (optics)|focus]], [[color balance|white balance]], & [[exposure (photography)|exposure]]
|connectivity=[[Wi-Fi]] ([[802.11b/g]]), [[Bluetooth#Bluetooth 2.0|Bluetooth 2.0+EDR]] ('''3GS:''' [[Bluetooth#Bluetooth 2.1|2.1]]), [[Universal Serial Bus|USB 2.0]]/[[Dock connector]]<br />[[Quad band]] [[GSM]] [[GSM frequency ranges|850 900 1800 1900]] MHz [[General Packet Radio Service|GPRS]]/[[Enhanced Data Rates for GSM Evolution|EDGE]]<ref name="Original_tech_specs">{{cite web|url=http://www.apple.com/iphone/specs.html|archiveurl=https://web.archive.org/web/20070714051039/http://www.apple.com/iphone/specs.html|archivedate=2007-07-14|title=Apple — iPhone — Tech Specs|date=July 14, 2007|publisher=Apple and the [[Internet Archive#Wayback Machine|Wayback machine]]|accessdate=2009-01-19}}</ref><br />'''3G also includes:''' [[Assisted GPS|A-GPS]]; [[Tri band]] [[Universal Mobile Telecommunications System|UMTS]]/[[High-Speed Downlink Packet Access|HSDPA]] [[UMTS frequency bands|850, 1900, 2100]] MHz<ref name=3G_tech_specs /><br />'''3GS also supports:''' 7.2 [[Megabit|Mbps]] [[High-Speed Downlink Packet Access|HSDPA]]
|service=[[iTunes Store]], [[App Store]], [[MobileMe]]
|dimensions='''Original:'''<br />{{convert|115|mm|in|abbr=on}} ''(h)''<br />{{convert|61|mm|in|abbr=on}} ''(w)''<br />{{convert|11.6|mm|in|abbr=on}} ''(d)''<br />'''3G & 3GS:'''<br />{{convert|115.5|mm|in|abbr=on}} ''(h)''<br />{{convert|62.1|mm|in|abbr=on}} ''(w)''<br />{{convert|12.3|mm|in|abbr=on}} ''(d)''
|weight='''Original & 3GS:''' {{convert|135|g|oz|abbr=on}}<br />'''3G:''' {{convert|133|g|oz|abbr=on}}
|related=[[iPod Touch]] ([[List of iPhone and iPod Touch models|Comparison]])
}}
'''ಐಫೋನ್''' ಎಂಬುದು [[ಇಂಟರ್ನೆಟ್]] ಮತ್ತು [[ಮಲ್ಟಿಮೀಡಿಯಾ]] ವ್ಯವಸ್ಥೆಯುಳ್ಳ [[ಸ್ಮಾರ್ಟ್ಫೋನ್]]ಗಳ ಶ್ರೇಣಿ. [[ಆಪೆಲ್ ಇಂಕ್.]] ಸಂಸ್ಥೆಯು ಈ ಐಫೋನ್ಗಳನ್ನು ವಿನ್ಯಾಸಗೊಳಿಸಿ ಮಾರಾಟ ಮಾಡುತ್ತದೆ. ಐಫೋನ್ [[ಪಠ್ಯ ಸಂದೇಶ]] ಮತ್ತು [[ವೀಕ್ಷಿಸಬಹುದಾದ ಧ್ವನಿ ಸಂದೇಶ]] ಸೌಲಭ್ಯ ಹೊಂದಿರುವ ಒಂದು [[ಕ್ಯಾಮೆರಾ ಫೋನ್]], [[ಒಯ್ಯಬಹುದಾದ ಮೀಡಿಯಾ ಪ್ಲೇಯರ್]] (ಇದು ವೀಡಿಯೊ [[ಐಪಾಡ್]]ಗೆ ಸಮವೆನಿಸಿದೆ) ಹೊಂದಿದೆ. [[ಇ-ಮೇಲ್]], [[ಇಂಟರ್ನೆಟ್ ವೀಕ್ಷಣ]] ಮತ್ತು [[ವೈ-ಫೈ]] ಸಂಪರ್ಕವುಳ್ಳ [[ಇಂಟರ್ನೆಟ್]] ಜಾಲದ ವ್ಯವಸ್ಥೆ ಸಹ ಐಫೋನ್ ಹೊಂದಿದೆ. ಜೊತೆಗೆ, ಈ ಫೋನ್ ಭೌತಿಕ ಕೀಲಿಮಣೆಯ ಬದಲಿಗೆ [[ಮಲ್ಟಿ-ಟಚ್]] ಪರದೆಯು ಕಾರ್ಯಶೀಲಿಕ [[ಕೀಲಿಮಣೆ]] ಸೌಲಭ್ಯ ನೀಡುತ್ತದೆ.
ಮೊದಲ ತಲೆಮಾರಿನ ಫೋನ್ [[EDGE]] ಹೊಂದಿರುವ ಕ್ವಾಡ್-ಬ್ಯಾಂಡ್ [[GSM]] ಆಗಿತ್ತು; ಎರಡನೆಯ ತಲೆಮಾರಿನ ಫೋನ್ 3.6 Mbps [[HSDPA]] ಹೊಂದಿರುವ [[UMTS]] ಹೊಂದಿತ್ತು; ಮೂರನೆಯ ತಲೆಮಾರಿನದು 7.2 Mbpsರಷ್ಟು HSDPA ಇಳಿಸಿ(ಪಡೆದು)ಕೊಳ್ಳಲು ನೆರವಾಗುತ್ತದೆ. ಆದರೆ ಆಪೆಲ್ [[HSPA]] ಪ್ರೊಟೊಕೊಲ್ ಅಳವಡಿಸಿರದ ಕಾರಣ ಅಪ್ಲೋಡ್ ಸಾಮರ್ಥ್ಯ 384 Kbpsಗೆ ಸೀಮಿತಗೊಳಿಸುತ್ತದೆ.<ref name="Macworld 3GS HSPA upload">{{cite web|url=http://www.macworld.co.uk/mac/news/index.cfm?newsid=26559|title=iPhone 3GS upload limited to 384 Kbps upstream|date=2009-06-09|publisher=Macworld.co.uk|accessdate=2009-07-31|archive-date=2009-07-13|archive-url=https://web.archive.org/web/20090713185423/http://www.macworld.co.uk/mac/news/index.cfm?newsid=26559|url-status=dead}}</ref>
ಹಲವು ತಿಂಗಳ ಕಾಲ [[ವದಂತಿ ಮತ್ತು ಊಹಾಪೋಹ]] ಗಳ ನಂತರ 2007ರ ಜನವರಿ 9ರಂದು <ref>{{cite news|url=http://www.macworld.com/article/54769/2007/01/iphone.html|title=Apple unveils iPhone|date=2007-01-09|accessdate=2008-04-06|author=Honan, Mathew|publisher=[[Macworld]]|archive-date=2008-04-15|archive-url=https://web.archive.org/web/20080415223141/http://www.macworld.com/article/54769/2007/01/iphone.html|url-status=dead}}</ref> ಆಪೆಲ್ ಐಫೋನ್ ಗಳ ಬಿಡುಗಡೆಯನ್ನು ಘೋಷಿಸಿತು.<ref>{{cite web|author=Dolan, Brian|title=Timeline of Apple "iPhone" Rumors (1999–Present)|url=http://www.fiercewireless.com/story/timeline-apple-iphone-rumors-1999-present|accessdate=2008-02-17}}</ref> ತಕ್ಕುದಾಗಿ ಪ್ರತಿಕಿಯಿಸುವ ಮಾರುಕಟ್ಟೆ ಹೆಸರುಳ್ಳ(ಮಾರ್ಕೆಟ್ ಬ್ರಾಂಡ್) ಮೊದಲ ಬಾರಿಗೆ ಐಫೋನ್ನ್ನು 2007ರ ಜೂನ್ 29ರಂದು [[ಅಮೆರಿಕಾ ಸಂಯುಕ್ತ ಸಂಸ್ಥಾನ]]ದಲ್ಲಿ ಪರಿಚಯಿಸಲಾಯಿತು. ಇದರ ನಂತರ [[ಯುರೋಪ್]]ನ ಮಾರುಕಟ್ಟೆಗೆ ಪರಿಚಯಿಸಲಾಯಿತು. ಇಸವಿ 2007ರಲ್ಲಿ ವರ್ಷದ ಆವಿಷ್ಕಾರ ಎಂದು ''[[ಟೈಮ್]]'' ಪತ್ರಿಕೆಯು ಐಫೋನ್ನ್ನು ಬಣ್ಣಿಸಿತು.<ref>{{cite news|author=Grossman, Lev|title=Invention Of the Year: The iPhone|url=http://www.time.com/time/business/article/0,8599,1678581,00.html|date=2007-10-31|accessdate=2008-06-06|archive-date=2008-06-15|archive-url=https://web.archive.org/web/20080615155450/http://www.time.com/time/business/article/0%2C8599%2C1678581%2C00.html|url-status=dead}}</ref> 2008ರ ಜುಲೈ 11ರಂದು ಬಿಡುಗಡೆಯಾದ '''ಐಫೋನ್ 3G''' ಹೆಚ್ಚಿನ [[3G]] ಮಾಹಿತಿ ಮತ್ತು ನೆರವಿನ [[GPS]] ಒಟ್ಟಾರ್ಥ ನೀಡುತ್ತದೆ.<ref name="3G_PR" /> 2009ರ ಮಾರ್ಚ್ 17ರಂದು, ಐಫೋನ್ (ಹಾಗೂ [[ಐಪಾಡ್ ಟಚ್]])ಗಾಗಿ, [[ಐಫೋನ್ OS]]ನ 3.0 ಆವೃತ್ತಿಯನ್ನು ಆಪೆಲ್ ಘೋಷಿಸಿತು. ಇದನ್ನು 2009ರ ಜೂನ್ 17ರಂದು ಬಿಡುಗಡೆಗೊಳಿಸಿತು.<ref>{{cite news|url=http://www.nbcsandiego.com/around_town/shopping/Apple-to-Announce-Version-3-of-iPhone-OS.html|publisher=[[NBC]] [[San Diego]]|work=Around Town|title=Apple Shows Off New iPhone 3.0|author=Weber, Scott|date=2009-03-17|accessdate=2009-03-20}}</ref> 2009ರ ಜೂನ್ 8ರಂದು '''ಐಫೋನ್ 3GS''' ಘೋಷಿತವಾಯಿತು. ಇದು ತನ್ನ [[ಕ್ರಿಯಾಶೀಲತೆ]]ಯಲ್ಲಿ ಸುಧಾರಣೆ ತೋರಿಸಿತು. ಹೆಚ್ಚಿನ [[ರಿಸೊಲ್ಯೂಷನ್]] ಹಾಗೂ ವೀಡಿಯೊ ಕ್ಷಮತೆ ಹಾಗೂ [[ಧ್ವನಿ ನಿಯಂತ್ರಣ]] ಗುಣಲಕ್ಷಣಗಳನ್ನು ಹೊಂದಿದೆ.<ref>{{cite web|url=http://www.apple.com/iphone/compare-iphones/|title=Compare iPhone 3GS and iPhone 3G|publisher=[[Apple Inc.]]|date=August 18, 2009}}</ref> 2009ರ ಜೂನ್ 19ರಂದು U.S., ಕೆನಡಾ ಹಾಗೂ ಯುರೋಪ್ನ ಆರು ದೇಶಗಳಲ್ಲಿ ಬಿಡುಗಡೆಯಾಯಿತು.<ref name="3G_S_PR">{{cite news|url=http://www.apple.com/pr/library/2009/06/08iphone.html|title=Apple Announces the New iPhone 3GS—The Fastest, Most Powerful iPhone Yet|date=2009-06-08|accessdate=2009-06-08}}</ref> ಆಸ್ಟ್ರೇಲಿಯಾ ಮತ್ತು ಜಪಾನ್ಗಳಲ್ಲಿ ಜೂನ್ 26ರಂದು ಬಿಡುಗಡೆಯಾಯಿತು.<ref name="3GS Aus">{{cite news|last=Dudley-Nicholson|first=Jennifer|url=http://www.news.com.au/technology/story/0,28348,25608752-5014239,00.html|title=Apple unveils iPhone 3GS, says 'S' stands for speed|date=2009-06-09|accessdate=2009-06-11|archiveurl=https://web.archive.org/web/20090611184239/http://www.news.com.au/technology/story/0,28348,25608752-5014239,00.html|archivedate=2009-06-11}}</ref> ಜುಲೈ ಮತ್ತು ಆಗಸ್ಟ್ 2009ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಪಡೆಯಿತು.
== ಇತಿಹಾಸ ಮತ್ತು ಲಭ್ಯತೆ ==
[[ಚಿತ್ರ:Iphone sales worldwide.svg|thumb|left|ವಿಶ್ವಾದ್ಯಂತ ತ್ರೈಮಾಸಿಕ ಐಫೋನ್ ಮಾರಾಟಗಳು.ಮಾರಾಟ ಪ್ರಮಾಣವು ದಶಲಕ್ಷಗಳಲ್ಲಿವೆ. Q1 ರಜಾ ಋತುವಾಗಿದೆ.]]
[[ಚಿತ್ರ:iPhone 3G Availability.svg|thumb|left|ವಿಶ್ವಾದ್ಯಂತ ಐಫೋನ್ ಲಭ್ಯತೆ:]]
ಆಪೆಲ್ ಇಂಜಿನಿಯರ್ಗಳು ಟಚ್ಸ್ಕ್ರೀನ್ಗಳನ್ನು ಪರಿಶೀಲಿಸಬೇಕೆಂದು ಸಂಸ್ಥೆಯ [[CEO]] [[ಸ್ಟೀವ್ ಜಾಬ್ಸ್]] ಅವರ ಸೂಚನೆಯ ಮೇರೆಗೆ ಐಪಾಡ್ನ ಅಭಿವೃದ್ಧಿ ಆರಂಭಗೊಂಡಿತು.<ref name="keynoteMacworld">{{cite news|last=Cohen|first=Peter|url=http://www.macworld.com/news/2007/01/09/liveupdate/index.php|title=Macworld Expo Keynote Live Update|publisher=[[Macworld]]|date=January 9, 2007|accessdate=2007-02-01|archive-date=2007-01-27|archive-url=https://web.archive.org/web/20070127110536/http://www.macworld.com/news/2007/01/09/liveupdate/index.php|url-status=dead}}</ref>
[[AT&T ಮೊಬಿಲಿಟಿ]](ಅಂದು ಸಿಂಗ್ಯುಲರ್ ವಯರ್ಲೆಸ್) ಸಂಸ್ಥೆಯೊಂದಿಗೆ ರಹಸ್ಯ ಹಾಗೂ ಅಭೂತಪೂರ್ವ ಸಹಯೋಗದೊಂದಿಗೆ ಆಪೆಲ್ ಈ ಉಪಕರಣ ಸಿದ್ದಗೊಳಿಸಿತು. ಇದು ಮೂವತ್ತು ತಿಂಗಳು ನಡೆದು US$150 ದಶಲಕ್ಷದಷ್ಟು ಅಭಿವೃದ್ಧಿ ವೆಚ್ಚವಾಗಿತ್ತು. [[ಮೊಟೊರೊಲಾ ROKR E1]] ಅಭಿವೃದ್ಧಿ ಪಡಿಸಿದ 'ಡಿಸೈನ್ ಬೈ ಕಮಿಟಿ' ಯತ್ನವನ್ನು ಆಪೆಲ್ ನಿರಾಕರಿಸಿತು. ಏಕೆಂದರೆ, [[ಮೊಟೊರೊಲಾ]]ದೊಂದಿಗಿನ ಈ ಸಹಯೋಗವು ವೈಫಲ್ಯ ಕಂಡಿತ್ತು. ಇದರ ಬದಲಿಗೆ, ಆಪೆಲ್ ತಮ್ಮ ಸಂಸ್ಥೆಯಲ್ಲಿಯೇ ಐಫೋನ್ನ ಯಂತ್ರಾಂಶ-ತಂತ್ರಾಂಶಗಳನ್ನು ಅಭಿವೃದ್ಧಿಗೊಳಿಸಲು ಸಿಂಗ್ಯುಲರ್ ಆಪೆಲ್ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿತ್ತು.<ref name="CNN secrets">{{cite web|url=http://money.cnn.com/2007/01/10/commentary/lewis_fortune_iphone.fortune/index.htm|title=How Apple kept its iPhone secrets|last=Lewis|first=Peter|date=January 12, 2007|publisher=[[CNN|CNN Money]]|accessdate=2009-01-11|archive-date=2008-12-10|archive-url=https://web.archive.org/web/20081210110636/http://money.cnn.com/2007/01/10/commentary/lewis_fortune_iphone.fortune/index.htm|url-status=dead}}</ref><ref>{{cite news|last=Vogelstein|first=Fred|title=The Untold Story: How the iPhone Blew Up the Wireless Industry|url=https://www.wired.com/gadgets/wireless/magazine/16-02/ff_iphone|work=[[Wired News]]|publisher=[[Condé Nast Publications]]|date=January 9, 2008|accessdate=2008-01-10}}</ref>
2007ರ ಜನವರಿ 9ರಂದು [[ಪ್ರಸ್ತಾವಿಕ ಭಾಷಣ]] ದೊಂದಿಗೆ ಸ್ಟೀವ್ ಜಾಬ್ಸ್ ಐಫೋನ್ನ್ನು ಅನಾವರಣಗೊಳಿಸಿದರು. ಆಪೆಲ್ ಕಾರ್ಯನಿರ್ವಹಣಾ ಅನುಮತಿಗಾಗಿ [[FCC]]ಯಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಈ ಆರ್ಜಿಗಳು ಸಾರ್ವಜನಿಕರಿಗೆ ಲಭ್ಯವಾಗಿದ್ದವು. ಇದರ ಕಾರಣ, ಐಫೋನ್ ಮಂಜೂರಾತಿ ಪಡೆಯುವ ಕೆಲ ತಿಂಗಳ ಮುಂಚೆಯೇ ಈ ಘೋಷಣೆಯಾಗಿತ್ತು. 2007 ಜೂನ್ 29ರಂದು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸ್ಥಳೀಯ ಸಮಯ ಸಂಜೆ 6 ಗಂಟೆಗೆ ಮಾರಾಟಕ್ಕೆ ಸಿದ್ದವಾಯಿತು. ಅದನ್ನು ಕೊಳ್ಳಲು ರಾಷ್ಟ್ರಾದ್ಯಂತ ನೂರಾರು ಜನ ಗ್ರಾಹಕರು ಐಫೋನ್ ಅಂಗಡಿಗಳ ಮುಂದೆ ಸರದಿಯಲ್ಲಿದ್ದರು.<ref name="Original_release" /><ref name="AppleQ32007">{{cite web|url=http://images.apple.com/pr/pdf/q307data_sum.pdf|title=Apple Inc. Q3 2007 Unaudited Summary Data|accessdate=2008-06-06|date=July 25, 2007|format=PDF|publisher=[[Apple Inc.]]|quote=Consists of iPhones and Apple-branded and third-party iPhone accessories.}}</ref> ಮೂಲತಃ ಐಫೋನ್ ಉಗಮವು [[UK]], [[ಫ್ರಾನ್ಸ್]] ಮತ್ತು [[ಜರ್ಮನಿ]] ದೇಶಗಳಲ್ಲಿ ನವೆಂಬರ್ 2007ರಲ್ಲಿ, ಹಾಗೂ [[ಐರ್ಲೆಂಡ್]] ಮತ್ತು [[ಆಸ್ಟ್ರೇಲಿಯಾ]]ಗಳಲ್ಲಿ 2008ರ ವಸಂತ ಋತುವಿನಲ್ಲಿ ಆರಂಭ ಕಂಡಿತು.
ಐಫೋನ್ 3Gಯನ್ನು ಆಪೆಲ್ 2008ರ ಜುಲೈ 11ರಂದು ಮೊದಲ ಬಾರಿಗೆ ಅನ್ನುವಂತೆ ಇವು ಆರು ದೇಶಗಳೂ ಸೇರಿ ಒಟ್ಟು ಇಪ್ಪತ್ತೆರಡು ದೇಶಗಳಲ್ಲಿ ಬಿಡುಗಡೆಗೊಳಿಸಿತು.<ref name="iPhone 3G launch countries">{{cite web|url=http://ipod.about.com/od/iphone3g/a/iphone_3g_rel.htm|title=Initial iPhone 3G Country Availability List|last=Costello|first=Sam|publisher=about.com|accessdate=2009-01-11|archive-date=2012-06-05|archive-url=https://web.archive.org/web/20120605024205/http://ipod.about.com/od/iphone3g/a/iphone_3g_rel.htm|url-status=dead}}</ref> ಆಗಿನಿಂದಲೂ, ಆಪೆಲ್ ಐಫೋನ್ 3Gಯನ್ನು ಸುಮಾರು ಎಂಭತ್ತು ದೇಶ-ಪ್ರಾಂತ್ಯಗಳಲ್ಲಿ ಬಿಡುಗಡೆಗೊಳಿಸಿದೆ.<ref name="3G_countries">{{cite web|url=http://www.apple.com/iphone/countries/|title=iPhone 3G Coming to countries everywhere|publisher=[[Apple Inc.]]|accessdate=2009-04-12}}</ref> 2009ರ ಜೂನ್ 8ರಂದು ಆಪೆಲ್ ಐಫೋನ್ 3GS ಮಾದರಿಗೆ ಚಾಲನೆ ನೀಡಿತು. ನಂತರ, ಇದನ್ನು ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಬಿಡುಗಡೆಗೊಳಿಸಲು ಯೋಜಿಸಿತ್ತು. ಮೊದಲಿಗೆ U.S., ಕೆನಡಾ ಮತ್ತು ಯುರೋಪ್ನ ಪ್ರಮುಖ ದೇಶಗಳಲ್ಲಿ ಜೂನ್ 19ರಂದು ಬಿಡುಗಡೆಗೊಳಿಸಲು ಆಲೋಚಿಸಲಾಗಿತ್ತು.<ref name="3G_S_PR" /> ಐಪೋನ್ನ ಬೆಲೆಯ ಬಗ್ಗೆ ಹಲವು ಸಂಭಾವ್ಯ ಬಳಕೆದಾರರು ಅತೃಪ್ತಿ ವ್ಯಕ್ತಪಡಿಸಿದ್ದಾರೆ; ಇವರಲ್ಲಿ 40%ರಷ್ಟು 100,000 [[USD]]ಗಿಂತಲೂ ಹೆಚ್ಚು ಆದಾಯಯುಳ್ಳವರಾಗಿದ್ದಾರೆ.<ref name="Nielsen demographics" /> ವಿಸ್ತೃತ ಮಾರುಕಟ್ಟೆ ಒದಗಿಸುವ ಯತ್ನದಲ್ಲಿ ಆಪೆಲ್ 8 GB ಐಫೋನ್ 3Gಯನ್ನು ಕಡಿಮೆ ಬೆಲೆಯಲ್ಲಿ ಉಳಿಸಿಕೊಂಡಿದೆ. ಕಳೆದ ಕೆಲ ವರ್ಷಗಳಿಂದ ಬೆಲೆ ಇಳಿಕೆಯ ಯತ್ನಗಳಲ್ಲಿ ಇದು ಇತ್ತೀಚಿನದ್ದಾಗಿದೆ. ಇದೀಗ, ಮೂಲತಃ 8 GB ಐಫೋನ್ ಆರಂಭಿಕ ಬೆಲೆಯ ಆರನೆಯ ಒಂದು ಭಾಗದ ದರಕ್ಕೆ ಮಾರಾಟವಾಗುತ್ತಿದೆ. U.S.ನಲ್ಲಿ ಅದರ ಬೆಲೆ $599ರಿಂದ ಇಳಿಯುತ್ತಾ ಬಂದು ಈಗ $99 ಆಗಿದೆ. ಇದಕ್ಕೆ ಎರಡು ವರ್ಷಗಳ ಕರಾರು ಒಪ್ಪಂದ ಮತ್ತು [[SIM ಲಾಕ್]]ವ್ಯವಸ್ಥೆ ಕೂಡ ಇದೆ.
ಐದು ತ್ರೈಮಾಸಿಕ ಅವಧಿಗಳಿಂದಲೂ ಆಪೆಲ್ 6.1 ದಶಲಕ್ಷ ಐಫೋನ್ಗಳನ್ನು ಮಾರಾಟ ಮಾಡಿದೆ.<ref name="2009_Q1_PR">{{cite web|url=http://www.apple.com/pr/library/2009/01/21results.html|title=Apple Reports First Quarter Results|publisher=Apple|date=2009-01-21}}</ref> ಮಾರ್ಚ್ 2009ಕ್ಕೆ ಅಂತ್ಯಗೊಂಡ 2009ರ [[ಅರ್ಥಿಕ ವರ್ಷ]]ದ ಎರಡನೆಯ ತ್ರೈಮಾಸಿಕ ವಹಿವಾಟಿನಲ್ಲಿ 3.8 ದಶಲಕ್ಷ ಐಫೋನ್ 3G ಯುನಿಟ್ಗಳನ್ನು ಮಾರಾಟ ಮಾಡಿತು. 3G ಮತ್ತು 3GS ಎರಡೂ ಸೇರಿ ಇದುವರೆಗೂ 12.6 ದಶಲಕ್ಷ ಐಫೋನ್ಗಳು ಮಾರಾಟವಾಗಿವೆ. ಒಟ್ಟು ಸೇರಿ 33.75 ದಶಲಕ್ಷ ಐಫೋನ್ಗಳು ಮಾರಾಟಕಂಡಿವೆ. (Q4 2009).<ref name="2009_Q2_PR">{{cite web|url=http://www.apple.com/pr/library/2009/04/22results.html|title=Apple Reports Second Quarter Results|publisher=Apple|date=2009-04-22}} ಹೆಚ್ಚಿನ ಮಾರಾಟ ವಿವರಗಳಿಗಾಗಿ [[:File:iPhone sales per quarter.svg#Data and references|ತ್ರೈಮಾಸಿಕ ಮಾರಾಟಗಳ ಪಟ್ಟಿ]]ಯನ್ನು ನೋಡಿ.</ref> 2008ರ ನಾಲ್ಕನೆಯ ತ್ರೈಮಾಸಿಕದ ವ್ಯವಹಾರ [[RIM]]ನ ಮಾರಾಟವನ್ನೂ ಮೀರಿಸಿತು. ಆದಾಯದ ಪ್ರಕಾರ, [[ನೊಕಿಯಾ]] ಮತ್ತು [[ಸ್ಯಾಮ್ಸಂಗ್]] ನಂತರ, ಮೂರನೆಯ ಅತಿ ಹೆಚ್ಚು ಮೊಬೈಲ್ ಉತ್ಪಾದಕನಾಗಿ ಆಪೆಲ್ ಕೆಲ ಕಾಲ ತನ್ನ ಸಾಮರ್ಥ್ಯ ತೋರಿತು.<ref>{{cite web|url=http://www.appleinsider.com/articles/08/10/21/apple_iphone_3g_sales_surpass_rims_blackberry.html|title=Apple iPhone 3G sales surpass RIM's Blackberry|publisher=[[AppleInsider]]|date=October 21, 2008}}</ref> U.S. ಒಂದರಲ್ಲೇ ಸುಮಾರು 6.4 ದಶಲಕ್ಷ ಐಫೋನ್ಗಳು ಸಕ್ರಿಯವಾಗಿವೆ.<ref name="Nielsen demographics" /> ಆಪೆಲ್ನ ಆದಾಯದಲ್ಲಿ ಐಫೋನ್ಗಳ ಮಾರಾಟದ್ದೇ ಗಮನಾರ್ಹ ಪಾಲು. ಈ ಆದಾಯದಲ್ಲಿ ಕೆಲವು [[ಮುಂದುವರೆದ]]ಭವಿಷತ್ತಿನಲ್ಲಿ ಎನ್ನಲಾದ ಆದಾಯವಾಗಿದೆ.<ref name="2009_Q2_PR" />
[[ಡೇವಿಡ್ ಪೋಗ್]] <ref name="NYT Pogue">{{cite news|url=https://www.nytimes.com/2007/06/27/technology/circuits/27pogue.html?|title=The iPhone Matches Most of Its Hype |last=Pogue|first=David|date=2007-06-27|publisher=New York Times|accessdate=2009-06-27}}</ref> ಮತ್ತು [[ವಾಲ್ಟರ್ ಮೊಸ್ಬರ್ಗ್]] ಸೇರಿದಂತೆ, ಐಫೋನ್ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿದೆ.<ref name="Mossberg 3G">{{cite web|url=http://ptech.allthingsd.com/20080708/newer-faster-cheaper-iphone-3g/?mod=ATD_search|title=Newer, Faster, Cheaper iPhone 3G|last=Mossberg|first=Walter|date=2008-07-08|publisher=All Things Digital|accessdate=2009-06-27}}</ref><ref name="Mossberg 3GS">{{cite web|url=http://ptech.allthingsd.com/20090617/new-iphone-is-better-model-or-just-get-os-30/?mod=ATD_search|title=New iPhone Is Better Model–Or Just Get OS 3.0|last=Mossberg|first=Walter|date=2009-06-17|publisher=All Things Digital|accessdate=2009-06-27}}</ref>
ಎಲ್ಲಾ ವಯಸ್ಸಿನವರೂ ಐಫೋನ್ನತ್ತ ಆಕರ್ಷಿತರಾಗಿದ್ದಾರೆ.<ref name="Nielsen demographics" />
== ಯಂತ್ರ ಸಾಧನ (ಯಾಂತ್ರಿಕ ಉಪಕರಣ) ==
[[ಚಿತ್ರ:iphonesensors.jpg|thumb|150px|left|ಮೊದಲ ತಲೆಮಾರಿನ ಐಫೋನ್ನಲ್ಲಿರುವ ಸಾಮೀಪ್ಯ ಹಾಗೂ ಪರಿವೇಷ್ಟಕ ಬೆಳಕಿನ ಸಂವೇಧಕಗಳ ನೋಟ.]][[ಚಿತ್ರ:iPhone & iPhone 3G.jpg|thumb|right|ಅಲ್ಯುಮಿನಿಯಮ್ ಹಾಗೂ ಪ್ಲ್ಯಾಸ್ಟಿಕ್ ಬಳಸಿ ತಯಾರಿಸಲಾದ ಮೂಲತಃ ಐಫೋನ್ನ ಹಿಂಬದಿಯ ನೋಟ (ಎಡ), ಹಾಗೂ ಇಡಿಯಾಗಿ ದೃಢ ಪ್ಲ್ಯಾಸ್ಟಿಕ್ ವಸ್ತು ಬಳಸಿ ತಯಾರಿಸಲಾದ ಐಫೋನ್ 3G.<ref name="iPhone back">[62]</ref>]][[ಚಿತ್ರ:iphone3gsensors.jpg|thumb|150px|left|ಐಫೋನ್ 3Gಯ (ತೋರಿಸಲಾದ) ಸಾಮೀಪ್ಯ ಹಾಗೂ ಪರಿವೇಷ್ಟಕ ಬೆಳಕಿನ ಸಂವೇದಕಗಳು ಐಫೋನ್ 3GSನಲ್ಲಿರುವಂತೆ ತದ್ರೂಪವಾಗಿದೆ.]][[ಚಿತ್ರ:IPhone 3G and 3G S backs.jpg|thumb|ಐಫೋನ್ 3Gಯ ಹಿಂಬದಿ (ಎಡ) 3GSನಂತೆ ತದ್ರೂಪದ್ದಾಗಿದೆ. 3GSನಲ್ಲಿರುವ ಹೊಳಪಿನ ಬೆಳ್ಳಿ ಅಕ್ಷರಗಳು ಮಾತ್ರ ವ್ಯತ್ಯಾಸದ ಅಂಶವಾಗಿದೆ. 3Gಯ ನರೆಬಣ್ಣದ ಅಕ್ಷರಗಳ ಸ್ಥಾನದಲ್ಲಿ ಇದು ಬೆಳ್ಳಿಯ ಆಪೆಲ್ ಲೊಗೊವನ್ನು ಹೊಂದುತ್ತದೆ.]]
=== ಭಿತ್ತಿ ಮತ್ತು ಆಂತರಿಕ ಅಂಶ (ಪರದೆ ಮತ್ತು ಇನ್ಪುಟ್ ) ===
ಐಫೋನ್ನ [[ಟಚ್ಸ್ಕ್ರೀನ್]] [[ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ]] ಆಗಿದೆ. ಇದು 6.3 px/mm ಲೆಕ್ಕದಲ್ಲಿ 320 #480 px ಆಗಿರುತ್ತದೆ. 160 160 [[ppi]], [[HVGA]] ಲಕ್ಷಣಗಳನ್ನು ಹೊಂದಿವೆ. ಗೀಚುಗಳನ್ನು ತಡೆಗಟ್ಟಬಹುದಾದ ಗಾಜನ್ನು ಹೊಂದಿದೆ. ಇದು 18-ಬಿಟ್ ರಂಗ ಸಂಯೋಜನೆಯನ್ನು ಬಳಸುತ್ತದೆ (ಇದು 262,144 ಬಣ್ಣಗಳನ್ನು ನೀಡಬಲ್ಲದು).
[[ಸಂಚಯನಕ್ಕೆ ಸಂಬಂಧಿಸಿದ ಟಚ್ಸ್ಕ್ರೀನ್]] ಬೆರಳುಗಳಿಗೆ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ, [[ಮಲ್ಟಿ ಟಚ್]] ಸಂವೇದನೆಗಾಗಿ ಹಲವು ಬೆರಳುಗಳನ್ನು ಬಳಸಬಹುದಾಗಿದೆ.
ಐಫೋನ್ನ ಸ್ಪರ್ಶ ಮತ್ತು ಸಂಜ್ಞೆಯ ಲಕ್ಷಣಗಳು ಮೂಲತಃ [[ಫಿಂಗರ್ವರ್ಕ್ಸ್]] ಸಂಸ್ಥೆಯು ವಿನ್ಯಾಸ ಮಾಡಿದ ತಂತ್ರಜ್ಞಾನ ಆಧರಿಸಿವೆ.<ref>{{Citation|title=iGesture Game Mode Guide|last=Fingerworks, Inc.|date=2003|publisher=www.fingerworks.com|url=http://rwservices.no-ip.info:81/pens/biblio05.html#Fingerworks03|access-date=2009-04-30|archive-date=2009-02-02|archive-url=https://web.archive.org/web/20090202101130/http://rwservices.no-ip.info:81/pens/biblio05.html#Fingerworks03|url-status=dead}}</ref> ಕೈಚೀಲಗಳು ಮತ್ತು ಮೊನಚಾದ ರೆಕಾರ್ಡರಗಳು ಬಹಳಷ್ಟು ಅಗತ್ಯ ವಿದ್ಯುತ್ ಸಂಚಲನವನ್ನು ನಿಯಂತ್ರಿಸುತ್ತವೆ.1/}<ref name="pogueFAQ">{{cite web|authorlink=David Pogue|last=Pogue|first=David|url=http://pogue.blogs.nytimes.com/2007/01/11/the-ultimate-iphone-frequently-asked-questions/|title=The Ultimate iPhone Frequently Asked Questions|publisher=New York Times|date=January 11, 2007|accessdate=2008-06-06}}</ref><ref name="pogueFAQ2">{{cite web|authorlink=David Pogue|last=Pogue|first=David|url=http://pogue.blogs.nytimes.com/2007/01/13/ultimate-iphone-faqs-list-part-2/|title=Ultimate iPhone FAQs list, Part 2|publisher=New York Times|date=January 13, 2007|accessdate=2008-06-06}}</ref><ref>{{cite web|url=http://electronics.howstuffworks.com/iphone2.htm|title=How the iPhone's touchscreen Works|publisher=[[How Stuff Works]]|accessdate=2008-06-06}}</ref> ಐಫೋನ್ 3GS ಬೆರಳುಗಳ ಸ್ಪರ್ಶದಿಂದಾಗುವ ಧೂಳು ಮತ್ತು ಎಣ್ಣೆಜಿಡ್ಡನ್ನು ತಡೆಗಟ್ಟಬಲ್ಲ ಒಂದು [[ಒಲಿಯೊಫೊಬಿಕ್]] ಲೇಪನ ಹೊಂದಿದೆ.<ref>{{cite web|first=Eric |last=Slivka |url=http://www.macrumors.com/2009/06/10/more-wwdc-tidbits-iphone-3g-s-oleophobic-screen-find-my-iphone-live/ |title=More WWDC Tidbits: iPhone 3G S Oleophobic Screen, "Find My iPhone" Live |publisher=Mac Rumors |date=2009-06-10 |accessdate=2009-07-03}}</ref>
ಮೂರು ಯುಕ್ತ ಆದೇಶಗಳಿಗೆ ಪರದೆಯು ಪ್ರತಿಕ್ರಿಯೆ ನೀಡುತ್ತದೆ.
ಕರೆಯ ಸಮಯದಲ್ಲಿ ಐಫೋನ್ನ್ನು ಮುಖದ ಬಳಿ ತಂದಾಗ [[ಸಾಮೀಪ್ಯ ಸಂವೇದಕ]]ವು ಪರದೆ ಮತ್ತು ಟಚ್ಸ್ಕ್ರೀನ್ನ್ನು ನಿಷ್ಕ್ರಿಯಗೊಳಿಸುತ್ತದೆ. ಬ್ಯಾಟರಿ ಶಕ್ತಿಯನ್ನು ಉಳಿಸಲು ಮತ್ತು ಬಳಕೆದಾರರ ಮುಖ ಅಥವಾ ಕಿವಿಗೆ ತಗುಲಿದಾಗ ಅಪ್ಪಿತಪ್ಪಿ ಟಚ್ಸ್ಕ್ರೀನ್ಗೆ ಮಾಹಿತಿ ಹೋಗುವುದನ್ನು ತಡೆಗಟ್ಟಲು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಪರದೆಯ ಸುತ್ತಲಿನ ಬೆಳಕಿನ ಸಂವೇದಕವು ಬೆಳಕಿನ ಪ್ರಖರವನ್ನು ಹೊಂದಿಸಿಕೊಳ್ಳುತ್ತದೆ. ಈ ರೀತಿಯಾಗಿ ವಿದ್ಯುತ್ಕೋಶದಲ್ಲಿನ(ಬ್ಯಾಟರಿ) ಶಕ್ತಿಯ ಉಳಿತಾಯವಾಗುತ್ತದೆ. 3-ಅಕ್ಷೀಯ [[ಅಕ್ಸೆಲೆರೊಮೀಟರ್]] ಫೋನ್ನ ಸ್ಥಿತಿ ಗುರುತಿಸಿ ಅದಕ್ಕನುಗುಣವಾಗಿ ಪರದೆಯನ್ನು ಹೊಂದಿಸುತ್ತದೆ. ಇದರಿಂದ ಬಳಕೆದಾರರು [[ಪೊರ್ಟ್ರೇಟ್ (ಪ್ರತಿಕ್ರತಿ ಮತ್ತು ಭೂಚಿತ್ರಣ)ಮತ್ತು ಲ್ಯಾಂಡ್ಸ್ಕೇಪ್]] ನಡುವೆ ಬದಲಿಸಿ ಸುಲಭದ ತಿಳಿವಳಿಕೆಗೆ ಅವಕಾಶ ಕಲ್ಪಿಸುತ್ತದೆ.<ref>{{cite news|last=Johnson|first=R. Collin|url=http://www.eetimes.com/showArticle.jhtml?articleID=200900669|title=There's more to MEMS than meets the iPhone|publisher=[[EE Times]]|date=July 9, 2007|accessdate=2008-06-06|archive-date=2007-09-29|archive-url=https://web.archive.org/web/20070929095647/http://www.eetimes.com/showArticle.jhtml?articleID=200900669|url-status=dead}}</ref> ಛಾಯಾಚಿತ್ರ ಮತ್ತು ಜಾಲತಾಣಗಳ ಹುಡುಕಾಟ, ವೀಕ್ಷಣ, ಸಂಗೀತ ನುಡಿಸುವುದು - ಇವು ನೇರ ಅಥವಾ ಎಡ-ಬಲ ಅಗಲ ಪರದೆಯ ಸ್ಥಿತಿ ಗಮನಿಸಿ ಹೊಂದಿಕೆಯಾಗಬಲ್ಲವು.<ref>{{cite web |url=http://www.apple.com/ipodtouch/guidedtour/tour/medium.html|title=iPod touch — A Guided Tour|publisher=[[Apple Inc.]]|accessdate=2008-09-23}}</ref> 3.0 ಅಪ್ಡೇಟ್ (ಪರಿಷ್ಕರಣೆ) ಇ-ಮೇಲ್ನಂತಹ ಇನ್ನಷ್ಟು ಅನುಕೂಲಗಳಿಗೆ ಲ್ಯಾಂಡ್ಸ್ಕೇಪ್ ತನ್ನ ನೆರವನ್ನು ಸೇರಿಸಿತು. ಜೊತೆಗೆ ಫೋನ್ನ್ನು ಕ್ಷಿಪ್ರ ಮತ್ತು ಸುಲಭ ಬದಲಾಯಿಸುವದನ್ನು ಸಹ ಒಂದು ರೀತಿಯ ಇನ್ಪುಟ್ ಎಂದಾಯಿತು.<ref name="3.0 official" /><ref name="3.0 Macworld" /> ಕ್ರೀಡಾ ಬಳಕೆಗೆ [[ತೃತೀಯ ಬಲದ ಅಳವಡಿಕೆ]] ಗಳನ್ನು ನಿಯಂತ್ರಿಸಲು ಅಕ್ಸೆಲೆರೊಮೀಟರ್ ಬಳಸಬಹುದು.
ಜನವರಿ 2008ರಲ್ಲಿ ಅಳವಡಿಕೆಯಾದ ತಂತ್ರಾಂಶ ಅಪ್ಡೇಟ್<ref name="Update 1.1.3" />
[[GPS]] ಯಂತ್ರಾಂಶವಿಲ್ಲದ ಮೊದಲ ತಲೆಮಾರಿನ ಐಫೋನ್ಗಳೂ ಸಹ ಮೊಬೈಲ್ ಗೋಪುರಗಳು ಮತ್ತು ವೈ-ಫೈ ಜಾಲ [[ಟ್ರೈಲ್ಯಾಟರೇಷನ್]]<ref>{{cite web|url=http://www.howardforums.com/printthread.php?t=1383413&|title=Memo: iPhone does not use triangulation|last=XFF [[List of Latin phrases: E|et al.]]|date=2008-06-13|publisher=HowardForums|accessdate=2009-06-01}}</ref> ಗಳ ಬಳಸುವಂತೆ ಅವಕಾಶ ಕಲ್ಪಿಸಿಕೊಟ್ಟಿತು. ಐಫೋನ್ 3G ಮತ್ತು ಐಫೋನ್ 3GS [[A-GPS]] ವ್ಯವಸ್ಥೆಯನ್ನು ಬಳಸುತ್ತದೆ. ಐಫೋನ್ 3GS [[ಡಿಜಿಟಲ್ ಕಾಂಪಾಸ್]] ಸಹ ಹೊಂದಿದೆ.<ref name="Compass" />
ಐಫೋನ್ನ ಬದಿಗಳಲ್ಲಿ ಮೂರು ಸ್ವಿಚ್ಗಳಿವೆ. ವೇಕ್/ಸ್ಲೀಪ್, ವಾಲ್ಯೂಮ್ ಹಿಗ್ಗಿಸು/ಕುಗ್ಗಿಸು, ರಿಂಗರ್ ಆನ್/ಆಫ್. ಮೂಲತಃ ಐಫೋನ್ನಲ್ಲಿ ಇವು ಪ್ಲ್ಯಾಸ್ಟಿಕ್ನಿಂದ ನಿರ್ಮಿತವಾಗಿರುತ್ತವೆ. ನಂತರದ ಮಾದರಿಗಳಲ್ಲಿ ಅವುಗಳಿಗೆ ಲೋಹ ಬಳಸಲಾಗಿದೆ. ಪರದೆಯ ಕೆಳಗಿರುವ ಏಕೈಕ 'ಹೋಮ್' ಯಂತ್ರಾಂಶದ ಕೀ ಒತ್ತಿದಾದ ಮುಖ್ಯ ವಿಷಯ ಪಟ್ಟಿಯನ್ನು ಪ್ರದರ್ಶಿಸುತ್ತದೆ. ಟಚ್ಸ್ಕ್ರೀನ್ [[ಬಳಕೆದಾರ ಇಂಟರ್ಫೇಸ್]]ನ ಉಳಿದ ಅಂಶಗಳನ್ನು ತೋರಿಸುತ್ತದೆ.
ಮೂಲತಃ ಐಫೋನ್ನ ಹಿಂಬದಿಯು ಕಪ್ಪು ಬಣ್ಣದ ಪ್ಲ್ಯಾಸ್ಟಿಕ್ ಮಿಶ್ರಿತ ಅಲ್ಯುಮಿನಿಯಮ್ ಬಳಸಿ ನಿರ್ಮಿತವಾಗಿತ್ತು. ಐಫೋನ್ನ 3G ಮತ್ತು 3GSನ ಹಿಂಬದಿಯು ಸಂಪೂರ್ಣ ಪ್ಲ್ಯಾಸ್ಟಿಕ್ನದ್ದಾಗಿದೆ. ಇದರಿಂದಾಗಿ GSM ಸಂಕೇತದ ಪ್ರಖರತೆಯನ್ನು ಹೆಚ್ಚಿಸಬಹುದು.<ref>{{cite web|url=http://news.cnet.com/8301-13579_3-10012420-37.html?tag=mncol;title|title=Apple, AT&T mum on iPhone 3G issues|publisher=[[CNET Networks]]|accessdate=2008-09-23}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಐಫೋನ್ 3G ಕಪ್ಪು ಬಣ್ಣದಲ್ಲಿ ಲಭ್ಯವಿದೆ. 8 GB ಮೆಮೊರಿ ಹೊಂದಿದೆ.ಸದ್ಯ ಚಾಲ್ತಿಯಲ್ಲಿಲ್ಲದ 16 GB ಮಾದರಿಯು ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಲಭ್ಯವಿತ್ತು. ಮಾಹಿತಿ ಶೇಖರಣಾ ಸಾಮರ್ಥ್ಯ ಏನೇ ಇರಲಿ, ಐಫೋನ್ 3GS ಎರಡೂ ಬಣ್ಣಗಳಲ್ಲಿ ಲಭ್ಯವಿದೆ.
=== (ಆಡಿಯೊ ಮತ್ತು ಔಟ್ಪುಟ್) ಶ್ರವಣಸಾಮರ್ಥ್ಯ ಹೊರಹೊಮ್ಮಿಸುವುದು ===
[[File:IPhone-bottom.jpg|thumb|ಐಫೋನ್ನ ಅಡಿಯಲ್ಲಿರುವ ಡಾಕ್ ಕನೆಕ್ಟರ್ನ್ನು ಎರಡು ಸ್ಪೀಕರ್ಗಳಲ್ಲಿ ಒಂದು (ಎಡ) ಮತ್ತು ಧ್ವನಿಗ್ರಾಹಕ (ಬಲ) ಸುತ್ತುವರೆದಿರುವುದು. ಹೆಡ್ಸೆಟ್ಒಂದನ್ನು ಐಫೋನ್ಗೆ ಸೇರಿಸಿದಾಗ, ಧ್ವನಿಯು ಹೆಡ್ಸೆಟ್ ಮೂಲಕ ಕೇಳಿಬರುತ್ತದೆ.]]
ಪರದೆಯ ಮೇಲೆ ಇಯರ್ಪೀಸ್ ರೂಪದಲ್ಲಿ ಒಂದು [[ಲೌಡ್ಸ್ಪೀಕರ್]] ಉಂಟು, ಇನ್ನೊಂದು ಸ್ಪೀಕರ್ ಫೋನ್ನ ತಳದಲ್ಲಿ ಎಡಪಕ್ಕದಲ್ಲಿದೆ. ಬಲಪಕ್ಕದಲ್ಲಿ [[ಮೈಕ್ರೊಫೋನ್]] ಇದೆ. ಧ್ವನಿ ನಿಯಂತ್ರಣವು ಫೋನ್ನ ಎಡಭಾಗ ಹಾಗೂ ಐಪಾಡ್ ಅಳವಡಿಕೆ ಸ್ಲೈಡರ್ ರೂಪದಲ್ಲಿದೆ. ಎರಡೂ ಸ್ಪೀಕರ್ಗಳನ್ನು [[ಹ್ಯಾಂಡ್ಸ್ಫ್ರೀ]] ಕಾರ್ಯಗಳಿಗೆ ಮತ್ತು ಮೀಡಿಯಾ ಪ್ಲೇಬ್ಯಾಕ್ ಉದ್ದೇಶಕ್ಕಾಗಿ ಬಳಸಲಾಗುತ್ತದೆ.
ಹೆಡ್ಫೋನ್ಗಳಿಗಾಗಿ ಇರುವ 3.5 mm [[TRRS ಕನೆಕ್ಟರ್]] ಫೋನ್ನ ಮೇಲಬದಿಯ ಎಡಮೂಲೆಯಲ್ಲಿದೆ.<ref name="TRRS">{{cite web|url=http://encyclopedia2.thefreedictionary.com/Tip+and+ring|title=tip and ring|work=Computer Desktop Encyclopedia|publisher=The Computer Language Company Inc.|accessdate=2009-03-15}}</ref> ಮೂಲತಃ ಐಫೋನ್ನಲ್ಲಿರುವ ಹೆಡ್ಫೋನ್ ಸಾಕೆಟ್ ಕವಚದ ಒಳಗಿದೆ. ಹಾಗಾಗಿ ಇದು ಅಡ್ಯಾಪ್ಟರ್ ಇಲ್ಲದ ಹಲವು ಹೆಡ್ಸೆಟ್ಗಳೊಂದಿಗೆ ಹೊಂದಿಕೊಳ್ಳಲಾರದು ಮತ್ತು ಕೆಲಸವನ್ನೂ ಮಾಡದು.<ref name="Original Cnet review" /><ref>{{cite web|url=http://blogs.zdnet.com/Apple/?p=828|title=That damned recessed iPhone headphone jack|publisher=[[ZDNet]]|accessdate=2008-06-06|archive-date=2009-06-29|archive-url=https://web.archive.org/web/20090629052413/http://blogs.zdnet.com/Apple/?p=828|url-status=dead}}</ref> ಫ್ಲಷ್-ಮೌಂಟೆಡ್ ಹೆಡ್ಫೋನ್ ಸಾಕೆಟ್ ಜೊಡಣೆ ಹೊಂದಿರುವ ಐಫೋನ್ 3G ಈ ಸಮಸ್ಯೆಯನ್ನು ಪರಿಹರಿಸುತ್ತದೆ.
ಸಾಮಾನ್ಯ ಹೆಡ್ಫೋನ್ ಗಳೊಂದಿಗೆ ಐಫೋನ್ ಹೊಂದಿಕೊಳ್ಳಬಹುದಾದರೆ, ಆಪೆಲ್ ಹೆಚ್ಚುವರೆ ಕಾರ್ಯಕ್ಷಮತೆ ಹೊಂದಿರುವ ಹೆಡ್ಸೆಟ್ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತದೆ. ಸಂಗೀತ ಆಲಿಸಲು ಅಥವಾ ನಿಲ್ಲಿಸಲು, ಹಾಡುಗಳ ಪಟ್ಟಿಯಲ್ಲಿರುವ ಹಾಡನ್ನು ಬೇಕಾದ ಹಾಗೆ ಬದಲಿಸಲು, ಹಾಗೂ ಐಫೋನ್ ಮುಟ್ಟದೆಯೇ ಕರೆಗಳನ್ನು ಸ್ವೀಕರಿಸಲು/ಅಂತ್ಯಗೊಳಿಸಲು ಮೈಕ್ರೊಫೋನ್ ಬಳಿಯಿರುವ ಬಹುಉದ್ದೇಶಿತ ಬಟನ್ ಬಳಸಬಹುದು. ಐಫೋನ್ಗಾಗಿ ವಿಶಿಷ್ಟವಾಗಿ ವಿನ್ಯಾಸಗೊಳಿಸಿದ ಕೆಲವೇ ಕೆಲವು ತೃತೀಯ ಶ್ರೇಣಿಯ ಹೆಡ್ಸೆಟ್ಗಳು ಮೈಕ್ರೊಫೋನ್ ಮತ್ತು ನಿಯಂತ್ರಣಾ ಕೀಲಿಮಣಿ ಹೊಂದಿರುತ್ತವೆ.<ref name="Review: iPhone headsets">{{cite web|url=http://www.macworld.com/article/133445/2008/05/iphoneheadsets.html|title=Review: iPhone headsets|last=Frakes|first=Dan|date=May 14, 2008|publisher=Macworld|accessdate=2009-01-10}}</ref> ಧ್ವನಿ ನಿಯಂತ್ರಣಗಳುಳ್ಳ ಹೆಡ್ಸೆಟ್ಗಳನ್ನು ಆಪೆಲ್ ಮಾರಾಟ ಮಾಡುತ್ತದೆ. ಆದರೆ ಅವು ಕೇವಲ ಐಫೋನ್ 3GSನೊಂದಿಗೆ ಮಾತ್ರ ಹೊಂದಿಕೊಳ್ಳುತ್ತದೆ.<ref name="Earbuds with volume">{{cite web|url=http://store.apple.com/us/product/MB770G/A?fnode=MTY1NDA0Ng&mco=MjE0NDgxMg|title=Apple Earphones with Remote and Mic|publisher=Apple Store|accessdate=2009-05-19}}</ref>
[[HSP]] [[ಪ್ರೊಫೈಲ್]] ಅಗತ್ಯವಿರುವ ನಿಸ್ತಂತು ಇಯರ್ಪೀಸ್ಗಳು ಮತ್ತು ಹೆಡ್ಫೋನ್ಗಳಿಗೆ ಅಂತರ್ನಿರ್ಮಿತ [[ಬ್ಲೂಟೂತ್ 2.x+EDR]] ಸಹಕಾರ ನೀಡುತ್ತದೆ. [[A2DP]]ಗೆ ನೆರವು ನೀಡುವ ಯಂತ್ರಾಂಶಗಳಿಗೆ 3.0 ಅಪ್ಡೇಟ್ನಲ್ಲಿ [[ಸ್ಟೀರಿಯೊ ಆಡಿಯೊ]] ವನ್ನು ಸೇರಿಸಲಾಯಿತು.<ref name="3.0 official"/> ಅನುಮೋದನೆಯಾಗದ ತೃತೀಯ ವರ್ಗದ ತಂತ್ರಾಂಶಗಳು ಲಭ್ಯವಿದ್ದರೂ, ಐಫೋನ್ ಅಧಿಕೃತವಾಗಿ [[OBEX]] [[ಫೈಲ್ ಟ್ರಾನ್ಸ್ಫರ್]] [[ಪ್ರೊಟೊಕಾಲ್]] ಬೆಂಬಲಿಸುವುದಿಲ್ಲ.<ref>{{cite web|url=https://arstechnica.com/apple/news/2009/01/ibluetooth-team-achieves-obex-file-transfer.ars|title=iBluetooth team achieves OBEX file transfer|last=Sadun|first=Erica|date=2009-01-26|publisher=Ars Technica|accessdate=2009-05-12}}</ref> ಇಂತಹ ಪ್ರೊಫೈಲ್ಗಳ ಕೊರತೆಯಿಂದಾಗಿ ಚಿತ್ರಗಳು, ಸಂಗೀತ, ವೀಡಿಯೊಗಳಂತಹ ಮಲ್ಟಿಮೀಡಿಯಾ ಕಡತಗಳನ್ನು ಐಫೋನ್ ಬಳಕೆದಾರರು ಇತರೆ ಬ್ಲೂಟೂತ್ ಯುಳ್ಳ ಸಕ್ರಿಯ ಮೊಬೈಲ್ ಫೋನ್ಗಳೊಂದಿಗೆ ವಿನಿಮಯ ಮಾಡಿಕೊಳ್ಳುವುದನ್ನು ತಡೆಗಟ್ಟುತ್ತದೆ.
[[576i]] ಮತ್ತು ಸ್ಟೀರಿಯೊ ಆಡಿಯೊ ವರೆಗಿನ ಕಾಂಪೊಸಿಟ್ ಅಥವಾ ಕಾಂಪೊನೆಂಟ್ ವೀಡಿಯೊಗಳನ್ನು ಡಾಕ್ ಕನೆಕ್ಟರ್ಗಳಿಂದ ಔಟ್ಪುಟ್ ಮಾಡಬಹುದಾಗಿದೆ. ಇದಕ್ಕೆ ಆಪೆಲ್ ಮಾರಾಟ ಮಾಡುವ ಡಾಕ್ ಕನೆಕ್ಟರ್ ಮೂಲಕ ಔಟ್ಪುಟ್ ಮಾಡಬಹುದು.<ref>{{cite web|url=http://store.apple.com/1-800-MY-APPLE/WebObjects/AppleStore?spart=MB128LL%2FA|title=Apple Component AV Cable|publisher=[[Apple Inc.]]|work=[[Apple Store (online)|Apple Online Store]]|access-date=2010-01-28|archive-date=2008-12-31|archive-url=https://web.archive.org/web/20081231025407/http://store.apple.com/1-800-MY-APPLE/WebObjects/AppleStore?spart=MB128LL%2FA|url-status=dead}}</ref> ಇದೇ ರೀತಿಯ ಫೋನ್ ಗಳಿಗಿಂತಲೂ ಭಿನ್ನವಾಗಿ, 3.0 ತಂತ್ರಾಂಶದ ಅಪ್ಡೇಟ್ ಲಭ್ಯವಾಗುವವರೆಗೂ, ಐಫೋನ್ [[ಧ್ವನಿ ಮುದ್ರಣ]]ಕ್ಕೆ ಅವಕಾಶ ನೀಡುತ್ತಿರಲಿಲ್ಲ.<ref name="3.0 official"/>
=== ವಿದ್ಯುತ್ಕೋಶ(ವಿದ್ತ್ಯುತ್ ಸಂಚಯನದ ವಸ್ತು) ===
[[File:IPhone 3G S sides.jpg|thumb|ಐಫೋನ್ 3GSನ ಮೇಲ್ಭಾಗ ಮತ್ತು ಪಕ್ಕಭಾಗಗಳು ಐಫೋನ್ 3Gಯಂತೆಯೇ ಇವೆ. ಮೂಲತಃ ಮಾದರಿಯಲ್ಲಿ ಸ್ವಿಚ್ಗಳು ಕಪ್ಪು ಬಣ್ಣದ ಪ್ಲ್ಯಾಸ್ಟಿಕ್ ವಸ್ತುವಿನದ್ದಾಗಿದ್ದವು.ಎಡದಿಂದ ಬಲಕ್ಕೆ, ಪಕ್ಕದಲ್ಲಿ: ಆನ್/ಆಫ್ ಸ್ವಿಚ್, SIM ಕಾರ್ಡ್ಗಾಗಿ ಜಾಗ, ಹೆಡ್ಫೋನ್ ಜ್ಯಾಕ್, ನಿಃಶಬ್ದ ಸ್ವಿಚ್, ಧ್ವನಿ ನಿಯಂತ್ರಣಗಳು. ಮೇಲ್ಭಾಗ: ಸ್ಪೀಕರ್, ಪರದೆ.]]
ಐಫೋನ್ನಲ್ಲಿ ಆಂತರಿಕ ಪುನರ್ ಭರ್ತಿ ಮಾಡುವ ವಿದ್ಯುತ್ಕೋಶವಿದೆ. ಇತರೆ ಮೊಬೈಲ್ ಫೋನ್ಗಳಿಗಿಂತಲೂ ಭಿನ್ನವಾಗಿ, ಐಪಾಡ್ನಂತೆ, ಈ ವಿದ್ಯುತ್ಕೋಶವನ್ನು ವಿಧವಿಧವಾಗಿ ಬದಲಾಯಿಸಲಾಗದು.<ref name="Original Cnet review">{{cite web|url=http://reviews.cnet.com/smartphones/apple-iphone-8gb-at/4505-6452_7-32309245.html|title=Apple iPhone - 8GB (AT&T)|last=German|first=Kent|coauthors=Donald Bell|date=June 29, 2007|publisher=Cnet review|pages=1 and 2|accessdate=2009-01-10|archive-date=2009-01-01|archive-url=https://web.archive.org/web/20090101013627/http://reviews.cnet.com/smartphones/apple-iphone-8gb-at/4505-6452_7-32309245.html|url-status=dead}}</ref><ref name="Mobile Burn review">{{cite web|url=http://www.mobileburn.com/review.jsp?Id=3526|title=Review: Apple iPhone, In-Depth|last=Oryl|first=Michael|date=July 3, 2007|publisher=Mobile Burn|accessdate=2009-01-10}}</ref> [[ಐಪಾಡ್ ಚಾರ್ಜ್ ಮಾಡುವ ರೀತಿ]]ಯಂತೆಯೇ, ಕಂಪ್ಯೂಟರ್ಗೆ USB ತಂತಿಯ ಮೂಲಕ ಸಂಪರ್ಕವೇರ್ಪಡಿಸಿ ಐಫೋನ್ ಚಾರ್ಜ್ ಮಾಡಬಹುದಾಗಿದೆ. ಪರ್ಯಾಯವಾಗಿ, 'USB ಟು AC ಅಡ್ಯಾಪ್ಟರ್' (ಅಥವಾ 'ವಾಲ್ ಚಾರ್ಜರ್,' ಸಹಿತ) ತಂತಿಗೆ ಸೇರಿಸಿ ಅಥವಾ ನೇರವಾಗಿ [[AC ಔಟ್ಲೆಟ್ (ವಿದ್ಯುನ್ನೆಲೆ)]]ಯಿಂದ ಸಂಪರ್ಕವೇರ್ಪಡಿಸಿ ಚಾರ್ಜ್ ಮಾಡಬಹುದಾಗಿದೆ. ಹಲವು ತೃತೀಯ ವರ್ಗದ ಉಪಕರಣೆಯ ಅಂಶಗಳಲ್ಲಿ(ಸ್ಟೀರಿಯೊಗಳು, ಕಾರ್ ಚಾರ್ಜರ್, ಸೌರ ಚಾರ್ಜರ್ಗಳು) ಸಹ ಲಭ್ಯ.<ref>{{Citation|title=Hit the Road, Mac: iPod Power Aid|newspaper=Mac<nowiki>|</nowiki>Life|pages=32–33|year=2009|date=June 2009|issue=29}}</ref>
ವಿದ್ಯುತ್ಕೋಶದ ಜೀವಿತಾವಧಿಯನ್ನು ನಿರ್ಣಯಿಸಲು ಆಪೆಲ್ ನಿರ್ಮಾಣ-ಪೂರ್ವ (ವಿದ್ಯುತ್ಕೋಶ) ಉತ್ಪನ್ನಗಳ ಮೇಲೆ ಪರೀಕ್ಷೆ-ಪ್ರಯೋಗಳನ್ನು ನಡೆಸುತ್ತದೆ. ವಿದ್ಯುತ್ಕೋಶದ ಅವಧಿಯನ್ನು 'ವಿದ್ಯುತ್ಕೋಶವು 400 ಬಾರಿ ಚಾರ್ಜ್ ಮತ್ತು ಡಿಸ್ಚಾರ್ಜ್ ಆದ ನಂತರ ತನ್ನ ಆವರ್ತನೀಯ ಸಾಮರ್ಥ್ಯದ 80%ರಷ್ಟನ್ನು ಉಳಿಸಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ'<ref>{{cite web|url=http://www.apple.com/batteries/iphone.html|title=Batteries—iPhone|publisher=[[Apple Inc.]]|accessdate=2008-06-06}}</ref> ಎಂದು ಆಪೆಲ್ನ ಜಾಲತಾಣದ ಮಾಹಿತಿಯಲ್ಲಿ ತಿಳಿಸಲಾಗಿದೆ. ಇದನ್ನು ಐಪಾಡ್ ವಿದ್ಯುತ್ಕೋಶದ ವಿನ್ಯಾಸಕ್ಕೆ ಹೋಲಿಸಬಹುದು. ಮೂಲತಃ ಐಪೋನ್ನ ವಿದ್ಯುತ್ಕೋಶವು ಏಳು ಗಂಟೆಗಳ ವೀಡಿಯೊ ವೀಕ್ಷಣೆ, ಆರು ಗಂಟೆಗಳ ಇಂಟರ್ನೆಟ್ ವೀಕ್ಷಣೆ, ಎಂಟು ಗಂಟೆಗಳ ಸಂವಾದ ಅವಧಿ (ಟಾಕ್ ಟೈಮ್), 24 ಗಂಟೆಗಳ ಸಂಗೀತ ಅಥವಾ 250 ಗಂಟೆಗಳ ವರೆಗಿನ 'ಸನ್ನದ್ಧ' ಸ್ಥಿತಿಯಲ್ಲಿರಲು ಸಮರ್ಥವಾಗಿದೆ.<ref name="jun18PressRelease" /> ಐಫೋನ್ 3Gಯ ವಿದ್ಯುತ್ಕೋಶವು ಏಳು ಗಂಟೆಗಳ ವೀಡಿಯೊ, ಆರು ಗಂಟೆಗಳ ಕಾಲ ವೈ-ಫೈ ಮೂಲಕ ಇಂಟರ್ನೆಟ್ ವೀಕ್ಷಣೆ (ಅಥವಾ 3Gಯಲ್ಲಿ ಐದು), ಹತ್ತು ಗಂಟೆಗಳ 2G ಸಂವಾದ ಅವಧಿ (ಅಥವಾ 3Gಯಲ್ಲಿ ಐದು), ಅಥವಾ 300 ಗಂಟೆಗಳ ಕಾಲ ಸನ್ನದ್ಧ ಸ್ಥಿತಿಯಲ್ಲಿರಲು ಸಮರ್ಥವಾಗಿದೆ.<ref name="3G_tech_specs">{{cite web|url=http://www.apple.com/iphone/specs-3g.html|title=Apple — iPhone — Technical Specifications|publisher=[[Apple Inc.]]|accessdate=2009-06-10}}</ref> 3GS ಹತ್ತು ಗಂಟೆಗಳ ವರೆಗೂ ವೀಡಿಯೊ, ವೈ-ಫೈ ಮೂಲಕ ಒಂಬತ್ತು ಗಂಟೆಗಳ ಇಂಟರ್ನೆಟ್ ವೀಕ್ಷಣೆ (ಅಥವಾ 3Gಯಲ್ಲಿ ಐದು ಗಂಟೆಗಳು), ಹನ್ನೆರಡು ಗಂಟೆಗಳ 2G ಸಂವಾದ (ಅಥವಾ 3Gಯಲ್ಲಿ ಐದು ಗಂಟೆಗಳು), 30 ಗಂಟೆಗಳ ಸಂಗೀತ, ಅಥವಾ 300 ಗಂಟೆಗಳ ಸನ್ನದ್ಧ ಸ್ಥಿತಿಯಲ್ಲಿರಲು ಸಮರ್ಥವಾಗಿದೆ ಎಂದು ಆಪೆಲ್ ಹೇಳಿಕೊಂಡಿದೆ.<ref name="3G_S_tech_specs">{{cite web|url=http://www.apple.com/iphone/specs.html|title=Apple — iPhone — Technical Specifications|publisher=[[Apple Inc.]]|accessdate=2009-06-10}}</ref>
ಹಲವು ತಂತ್ರಜ್ಞಾನ ಪರಿಣತ ಪತ್ರಕರ್ತರಿಂದ ಬ್ಯಾಟರಿಯ ಜೀವಾವಧಿಯ ಬಗ್ಗೆ ಟೀಕೆಗಳು ಬಂದಿದ್ದು ಕೂಡಾ ಪರಾಮರ್ಶೆಯ ವಿಚಾರವಾಗಿದೆ.<ref>{{cite web|url=https://arstechnica.com/apple/reviews/2008/07/iphone3g-review.ars/6|title=The Second Coming: Ars goes in-depth with the iPhone 3G|publisher=Ars Technica|author=Cheng, Jacqui|coauthors=Chartier, David; Ecker, Clint|date=2008-07-14|accessdate=2009-06-23}}</ref><ref>{{cite web|url=http://gizmodo.com/5024412/iphone-3g-review|title=iPhone 3G Review|author=Lam, Brian|publisher=Gizmodo|date=2008-07-11|2009-06-23}}</ref><ref>{{cite web|url=http://www.washingtonpost.com/wp-dyn/content/article/2008/07/09/AR2008070900177.html|title=First iPhone 3G Reviews: Mossberg: Battery 'Significant Problem'; Pogue: Limited 3G, Good Audio|author=Kramer, Staci D.|publisher=MocoNews|work=The Washington Post|date=2008-07-09|accessdate=2009-06-23}}</ref><ref>{{cite web|url=http://ptech.allthingsd.com/20080708/newer-faster-cheaper-iphone-3g|title=Newer, Faster, Cheaper iPhone 3G|author=Mossberg, Walter S.|publisher=The Wall Street Journal|date=2008-07-08|accessdate=2009-06-23}}</ref> ಈ ವಿಚಾರವನ್ನು [[ಜೆ. ಡಿ. ಪಾವರ್ ಅಂಡ್ ಅಸೊಷಿಯೆಟ್ಸ್]] ಗ್ರಾಹಕರ ಬೇಡಿಕೆಯ ಕುರಿತಾದ ಸಮೀಕ್ಷೆಯು ಹೊರಗೆಡಹಿದೆ. ಇದರಂತೆ ಐಫೋನ್ 3Gಯ ವಿದ್ಯುತ್ಕೋಶ ವಿಚಾರದಲ್ಲಿ ಅತ್ಯಂತ ಕಡಿಮೆ ಅಂಕಗಳನ್ನು ನೀಡಿತ್ತು: 5 ಅಂಕಗಳಲ್ಲಿ 2.<ref name="JD_Power">{{cite web|url=http://www.jdpower.com/corporate/news/releases/pressrelease.aspx?id=2008240|title=2008 Business Wireless Smartphone Customer Satisfaction Study|date=2008-11-06|publisher=[[J. D. Power and Associates]]|accessdate=2009-06-10|archive-date=2009-05-28|archive-url=https://web.archive.org/web/20090528180840/http://www.jdpower.com/corporate/news/releases/pressrelease.aspx?ID=2008240|url-status=dead}}</ref><ref>{{cite web|url=http://news.cnet.com/8301-13579_3-10084250-37.html|title=Apple's iPhone wins J.D. Power award|last=Krazit|first=Tom|date=2008-11-06|publisher=CNET|accessdate=2009-06-10|archive-date=2009-08-06|archive-url=https://web.archive.org/web/20090806210347/http://news.cnet.com/8301-13579_3-10084250-37.html|url-status=dead}}</ref>
[[ಖಾತರಿಯ (ವಾರಂಟಿ) ಅವಧಿ]]ಯಲ್ಲಿ ವಿದ್ಯುತ್ಕೋಶವು ಅಸಮರ್ಪಕವಾಗಿ ಕೆಲಸ ಮಾಡಿದರೆ ಅಥವಾ ಅವಧಿಗೂ ಮುಂಚೆ ನಿಷ್ಕ್ರಿಯವಾದರೆ, ಫೋನ್ನ್ನು ಆಪೆಲ್ ಸಂಸ್ಥೆಗೆ ಹಿಂದಿರುಗಿಸಿ ಉಚಿತವಾಗಿ ಬದಲಾಯಿಸಲು ಅವಕಾಶವಿದೆ.<ref>{{cite web|url=http://www.apple.com/support/iphone/service/faq/|title=iPhone Service Frequently Asked Questions|publisher=[[Apple Inc.]]|accessdate=2008-06-06}}</ref> ಖರೀದಿಯ ಅವಧಿಯಿಂದ ವಾರಂಟಿಯು ಒಂದು ವರ್ಷದ ಕಾಲ ಸಿಂಧುವಾಗಿರುತ್ತದೆ. [[ಆಪೆಲ್ಕೇರ್]]ನೊಂದಿಗಿನ ಸೇವಾಸೌಲಭ್ಯಕ್ಕಾಗಿ ಇದನ್ನು ಎರಡು ವರ್ಷಗಳ ವರೆಗೆ ಇದನ್ನು ವಿಸ್ತರಿಸಲಾಗಿದೆ. ದಿ ಫೌಂಡೇಷನ್ ಫಾರ್ ಟ್ಯಾಕ್ಸ್ಪೇಯರ್ ಅಂಡ್ ಕನ್ಸ್ಯುಮರ್ ರೈಟ್ಸ್ ಎಂಬ [[ಗ್ರಾಹಕರ ಕಾನೂನು ಹಕ್ಕುಗಳ ಒಕ್ಕೂಟ]]ವು, ವಿದ್ಯುತ್ಕೋಶ(ಬ್ಯಾಟರಿ) ಬದಲಾಯಿಸಲು ಗ್ರಾಹಕರು ತೆರಬೇಕಾದ ಶುಲ್ಕದ ಬಗ್ಗೆ ಆಪೆಲ್ ಮತ್ತು AT&T ಸಂಸ್ಥೆಗಳಿಗೆ ತಕರಾರೊಂದನ್ನು ರವಾನಿಸಿದೆ.<ref name="LeeEllen">{{cite news|last=Lee|first=Ellen|url=http://www.sfgate.com/cgi-bin/article.cgi?file=/c/a/2007/07/11/BUG34QU3921.DTL&type=tech|title=Will a Cheaper iPhone click before Christmas?|publisher=San Francisco Chronicle|date=July 11, 2007|accessdate=2008-06-06|archive-date=2008-06-12|archive-url=https://web.archive.org/web/20080612160048/http://www.sfgate.com/cgi-bin/article.cgi?file=/c/a/2007/07/11/BUG34QU3921.DTL&type=tech|url-status=dead}}</ref> ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವ ವರೆಗೂ ವಿದ್ಯುತ್ಕೋಶದ ಬದಲಾಯಿಸುವಿಕೆ ಮತ್ತು ಬೆಲೆಯ ಬಗ್ಗೆ ಕೊಳ್ಳುಗರಿಗೆ ತಿಳಿಯಪಡಿಸದಿದ್ದರೂ,<ref name="LeeEllen" /><ref>{{cite news|last=Wong|first=May|url=http://www.washingtonpost.com/wp-dyn/content/article/2007/07/08/AR2007070800562_pf.html|title=Apple Issues Battery Program for IPhone|publisher=Washington Post|date=2007-07-08|accessdate=2007-07-08}}</ref> ಆಪೆಲ್ ಮತ್ತು ತೃತೀಯ ವರ್ಗದವರು ಐಪ್ಯಾಡ್ ಗೆ ಬ್ಯಾಟರಿ ಬದಲಾಯಿಸುವ ಪ್ರಕ್ರಿಯೆಗೆ ಇದು ಸಮನಾಗಿದೆ ಎಂದು ಪರಿಗಣಿಸಲಾಗಿದೆ.
ಜುಲೈ 2007ರಿಂದಲೂ, ತೃತೀಯ ಪಕ್ಷದ ಅಥವಾ ಹೊರಗಿನವರಿಗೆ ಒದಗಿಸುವ ವಿದ್ಯುತ್ಕೋಶ ಬದಲಾವಣಾ ಕಿಟ್ಗಳು ಸುಲಭ ಬೆಲೆಗೆ ಲಭ್ಯ.<ref>{{cite web|url=http://www.engadget.com/2007/07/31/iphones-first-sketchy-battery-replacement-kit-appears/|title=iPhone's first sketchy battery replacement kit appears|publisher=[[Engadget]]|date=July 31, 2007}}</ref> ಇದು ಆಪೆಲ್ನ ವಿದ್ಯುತ್ಕೋಶ ಬದಲಾವಣಾ ಯೋಜನಾ ಕಿಟ್ಗಳಿಗಿಂತಲೂ ಅಗ್ಗ. ಸಾಮಾನ್ಯವಾಗಿ ಈ ಕಿಟ್ ಸಣ್ಣ ಸ್ಕ್ರೂಡ್ರೈವರ್ ಮತ್ತು ಒಂದು ಸೂಚನಾ ಕೈಪಿಡಿ ಒಳಗೊಂಡಿರುತ್ತವೆ. ಆದರೆ, ಹೊಸ ಐಪಾಡ್ ಮಾದರಿಗಳಂತೆಯೇ, ಮೂಲತಃ ಐಫೋನ್ನಲ್ಲಿ ವಿದ್ಯುತ್ಕೋಶ [[ಬೆಸೆ-ಜೋಡಿಸ]]ಯಲಾಗಿದೆ. ಹಾಗಾಗಿ, ಹೊಸದನ್ನು ಅಳವಡಿಸಲು ಕಬ್ಬಿಣ ಲೋಹದ [[ಬೆಸುಗೆ ಉಪಕರಣ]]ದ ಅಗತ್ಯವಿದೆ. ಐಫೋನ್ 3Gಗಾಗಿ ವಿಭಿನ್ನ ವಿದ್ಯುತ್ಕೋಶ ಬಳಸಲಾಗುತ್ತದೆ. ಸುಲಭವಾಗಿ ಬದಲಾಯಿಸಬಲ್ಲ ಒಂದು ಜೋಡಣಾ ವ್ಯವಸ್ಥೆ ಇದಕ್ಕಿದೆ. ಆದರೂ ಸಹ, ಆಪೆಲ್ ಹೊರತುಪಡಿಸಿ ಬೇರೊಂದಕ್ಕೆ ಬದಲಾಯಿಸಿದಲ್ಲಿ ವಾರಂಟಿ ಅಸಿಂಧುವಾಗುವುದು.<ref name="3G quasi-replaceable battery">{{cite web|url=http://gizmodo.com/5023983/the-iphone-3g-battery-is-quasi+replaceable|title=The iPhone 3G Battery Is Quasi-Replaceable|last=Wilson|first=Mark|date=July 10, 2008|publisher=Gizmodo|accessdate=2009-01-10|archive-date=2009-01-29|archive-url=https://web.archive.org/web/20090129230612/http://gizmodo.com/5023983/the-iphone-3g-battery-is-quasi+replaceable|url-status=dead}}</ref>
=== ಕ್ಯಾಮೆರಾ(ಛಾಯಾಚಿತ್ರಣ ಮಾಧ್ಯಮ) ===
ಐಫೋನ್ ಮತ್ತು ಐಫೋನ್ 3G ಮಾದರಿಗಳಲ್ಲಿ ಅಂತರ್ನಿರ್ಮಿತ ಫಿಕ್ಸೆಡ್-ಫೊಕಸ್ (ಸ್ಥಿರತೆಯ) 2.0 [[ಮೆಗಾಪಿಕ್ಸೆಲ್]] [[ಕ್ಯಾಮೆರಾ]] ಅಳವಡಿಸಲಾಗಿದೆ. [[ಸ್ಥಿರ ಡಿಜಿಟಲ್ ಛಾಯಾಚಿತ್ರ]]ಗಳನ್ನು ಹಿಡಿಯಲು ಇದು ಉಪಯುಕ್ತವಾಗಿದೆ. ಇದರಲ್ಲಿ ದೃಷ್ಟಿಯ ಅಥವಾ ದೃಶ್ಯ ಸಂಯೋಜನೆಯ ವ್ಯವಸ್ಥೆಯಾಗಲೀ, ಫ್ಲ್ಯಾಷ್ ಅಥವಾ ಆಟೊಫೊಕಸ್ ವ್ಯವಸ್ಥೆಯಿಲ್ಲ. ಇಲ್ಲಿ ವೀಡಿಯೋ ಮುದ್ರಣ ಇರುವದಿಲ್ಲ. ಆದರೂ, [[ಆಪಲ್ ನ ಆಡಳಿತದ ನಿಯಮಮೀರಿ(ಕಾನೂನು ಬಾಹಿರ) ಐಪ್ಯಾಡ್ ಬಳಕೆಯಲ್ಲಿ]] ಗ್ರಾಹಕರಿಗೆ ಈ ತರಹದ ಕೆಲವು ಅವಕಾಶಗಳಿವೆ. ಐಫೋನ್ OSನ(ಎಡಭಾಗದ ಕೀಲಿಮಣೆ)ಯುಳ್ಳ ವರ್ಷನ್ 2.0ರಲ್ಲಿ, ಛಾಯಾಚಿತ್ರಗಳಲ್ಲಿ [[ಸ್ಥಳ ಮಾಹಿತಿ ಸೇರಿಸಲು]] ಅವಕಾಶ ನೀಡಿತು. ಇದರಿಂದಾಗಿ [[ಜಿಯೊಕೊಡೆಡ್ ಛಾಯಾಚಿತ್ರ]]ಗಳನ್ನು ತೆದುಕೊಳ್ಳಬಹುದು.
ಐಫೋನ್ 3GSನಲ್ಲಿ [[ಆಮ್ನಿವಿಷನ್]] ತಯಾರಿಸಿದ 3.2 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಇದರಲ್ಲಿ ಆಟೊಪೊಕಸ್, ಆಟೊ ವೈಟ್ ಬ್ಯಾಲೆನ್ಸ್ ಮತ್ತು ಆಟೊ ಮ್ಯಾಕ್ರೊ (10 ಸೆ.ಮೀ. ವರೆಗೆ) ವ್ಯವಸ್ಥೆಗಳಿವೆ.<ref>{{cite web|url=https://arstechnica.com/apple/news/2009/12/apple-may-bump-camera-in-next-gen-iphone-to-5-megapixels.ars|title=Apple may bump camera in next-gen iPhone to 5 megapixels|date=2009-12-23|first=Chris|last=Foresman|publisher=[[Ars Technica]]|accessdate=2009-12-23}}</ref> ಇದು ಪ್ರತಿ ಸೆಕೆಂಡ್ಗೆ 30 ಫ್ರೇಮ್ಗಳ ವೇಗದಲ್ಲಿ [[VGA]] ವೀಡಿಯೊ<ref>{{cite web|url=http://www.apple.com/iphone/iphone-3g-s/video-recording.html|title=Apple - iPhone - Record, edit, and shoot video.|date=2009-06-08|publisher=Apple|accessdate=2009-06-08}}</ref><ref>{{cite web|url=http://www.apple.com/iphone/iphone-3g-s/photos.html|title=Apple - iPhone - Take photos with a 3-megapixel camera.|date=2009-06-08|publisher=Apple|accessdate=2009-06-08}}</ref> ಚಿತ್ರೀಕರಿಸುತ್ತದೆ. ಆದರೂ, ಆಧುನಿಕ [[CCD]] ಆಧಾರಿತ ವೀಡಿಯೊ ಕ್ಯಾಮೆರಾಗಳಿಗೆ ಹೋಲಿಸಿದಲ್ಲಿ ಅದು [[ರೊಲಿಂಗ್ ಷಟರ್ಸ್]] ತರಹದ ಪ್ರಭಾವ ತೋರಿಸುತ್ತದೆ.{{Citation needed|date=December 2009}} ನಂತರ ವೀಡಿಯೊವನ್ನು ಉಪಕರಣದಲ್ಲೇ [[ಕ್ರಾಪ್]] ಮಾಡಿ ನೇರವಾಗಿ [[ಯುಟ್ಯೂಬ್]], [[ಮೊಬೈಲ್ಮಿ]] ಅಥವಾ ಇತರೆ ಜಾಲತಾಣಗಳಿಗೆ ನೇರವಾಗಿ ಅಪ್ಲೋಡ್ ಮಾಡಬಹುದು.
=== ಶೇಖರಣೆ ಮತ್ತು SIM ===
ಆರಂಭದಲ್ಲಿ, 4 GB ಅಥವಾ 8 GB ಆಂತರಿಕ ಶೇಖರಣಾ ಸಾಮರ್ಥ್ಯದ ಆಯ್ಕೆಯೊಂದಿಗೆ ಐಫೋನ್ ಬಿಡುಗಡೆಯಾಗಿತ್ತು. 2007ರ ಸೆಪ್ಟೆಂಬರ್ 5ರಂದು ಆಪೆಲ್ 4 GB ಮಾದರಿಗಳ ಉತ್ಪಾದನೆ ನಿಲ್ಲಿಸಿತು.<ref>{{cite web|url=http://www.iphoneatlas.com/2007/09/05/apple-kills-4gb-iphone-cuts-8gb-price-to-399/|title=Apple kills 4 GB iPhone, cuts 8 GB price to $399 - iPhone Atlas|date=September 5, 2007|publisher=iPhone Atlas|access-date=ಜನವರಿ 28, 2010|archive-date=ಸೆಪ್ಟೆಂಬರ್ 5, 2012|archive-url=https://archive.is/20120905050935/http://www.iphoneatlas.com/2007/09/05/apple-kills-4gb-iphone-cuts-8gb-price-to-399/|url-status=dead}}</ref> 2008ರ ಫೆಬ್ರವರಿ 5ರಂದು ಆಪೆಲ್ 16 GB ಮಾದರಿಯನ್ನು ತನ್ನ ಇತರ ಉತ್ಪಾದನೆಯೊಂದಿಗೆ ಇದನ್ನು ಹೆಚ್ಚುವರಿಯಾಗಿ ಪರಿಚಯಿಸಿತು.<ref>{{cite news|http://www.macworld.com/article/131959/2008/02/iphoneipodtouch.html|publisher=[[Macworld]]|title=Apple offers 16GB iPhone, 32GB iPod touch|date=February 6, 2008}}</ref> ಐಫೋನ್ 3G ಮಾದರಿಯು 16 GBಯಲ್ಲಿ ಲಭ್ಯವಿತ್ತು. 8 GB ಮಾದರಿಯು ಇಂದಿಗೂ ಲಭ್ಯವಿದೆ. ಐಫೋನ್ 3GS ಮಾದರಿಯು 16 GB ಮತ್ತು 32 GB ವೈವಿಧ್ಯದಲ್ಲಿ ಲಭ್ಯವಿದೆ.
ಎಲ್ಲಾ ಮಾಹಿತಿ ಆಂತರಿಕ ಫ್ಲ್ಯಾಷ್ ಡ್ರೈವ್ನಲ್ಲಿ ಶೇಖರಣೆಯಾಗಿರುತ್ತದೆ. ಮೆಮೊರಿ ಕಾರ್ಡ್ ಸ್ಲಾಟ್,ಅಥವಾ SIM ಕಾರ್ಡ್ ಮೂಲಕ ವಿಸ್ತೃರಿತ ಶೇಖರಣೆಯನ್ನು ಐಫೋನ್ ಸಮರ್ಥಿಸುವುದಿಲ್ಲ.
[[ಚಿತ್ರ:IPhone 3G box contents.jpg|thumb|ಐಫೋನ್ 3Gಯೊಂದಿಗೆ ಸೇರಿಸಲಾದ ವಸ್ತುಗಳು. ಎಡದಿಂದ ಬಲಕ್ಕೆ: ಪೆಟ್ಟಿಗೆಯ ಮೇಲ್ಭಾಗ; ಐಫೋನ್ 3G, ಬಟ್ಟೆಯೊಂದಿಗಿನ ಪ್ಯಾಕೇಜ್, ತಾಂತ್ರಿಕ ಕೈಪಿಡಿ (ಕಿರುಹೊತ್ತಿಗೆ), SIM ಹೊರತೆಗೆಯುವ ಸಲಕರಣೆ; ಹೆಡ್ಫೋನ್ಗಳು,USB ತಂತಿ ಮತ್ತು ವಿದ್ಯುತ್ ಚಾರ್ಜರ್.]]
ಉಪಕರಣದ ಮೇಲ್ಭಾಗದಲ್ಲಿರುವ ಸ್ಲಾಟ್ನಲ್ಲಿ ಅಳವಡಿಸಲಾದ ಟ್ರೇನಲ್ಲಿ [[SIM ಕಾರ್ಡ್]]ನ್ನು ಕೂಡಿಸಲಾಗಿದೆ. [[ಕಾಗದದ ಕ್ಲಿಪ್]] ಅಥವಾ SIM ತೆಗೆಯುವ ಸಲಕರಣೆಯ (ಐಫೋನ್ 3G ಮತ್ತು 3GSನೊಂದಿಗಿರುವ ಒಂದು ಸರಳ ಲೋಹ ಸಲಕರಣೆ) ಮೂಲಕ SIM ಟ್ರೇಯನ್ನು ಹೊರತೆಗೆಯಬಹುದು.<ref>{{cite web|url=http://support.apple.com/kb/HT1438|title=Removing SIM card|publisher=Apple|date=2008-07-10|accessdate=2009-06-11}}</ref><ref>{{cite news|last=Diaz|first=Jesus|title=iPhone 3G's New SIM Ejector Tool Makes It Instant Must-Buy|language=[[ಆಂಗ್ಲ|English]]|publisher=[[Gawker Media]]|work=[[Gizmodo]]|date=June 9, 2008|url=http://gizmodo.com/5014767/iphone-3gs-new-sim-ejector-tool-makes-it-instant-must+buy|accessdate=2008-06-24|archive-date=2008-06-18|archive-url=https://web.archive.org/web/20080618031423/http://gizmodo.com/5014767/iphone-3gs-new-sim-ejector-tool-makes-it-instant-must+buy|url-status=dead}}</ref>
ಬಹಳಷ್ಟು ದೇಶಗಳಲ್ಲಿ, ಐಫೋನ್ನ್ನು [[SIM ಲಾಕ್]]ನೊಂದಿಗೆ ಮಾರಾಟ ಮಾಡಲಾಗುತ್ತವೆ. ಇತರೆ ಮೊಬೈಲ್ ಗಳಲ್ಲಿ ಇದರ ಬಳಕೆ ತಡೆಗಟ್ಟುವುದು ಇಲ್ಲಿರುವ ಉದ್ದೇಶ.<ref name="Carrier unlocking list" />
=== ತೇವ ಸಂವೇದಕಗಳು (ಆರ್ದ್ರತೆಗೆ ಸ್ಪಂದಿಸುವ ಸೂಕ್ಷ್ಮ ಸಂವೇದಕಗಳು) ===
ಹಲವು ಆಧುನಿಕ ವಿದ್ಯುನ್ಮಾನ ಉಪಕರಣಗಳಂತೆ, ಐಫೋನ್ನಲ್ಲಿಯೂ ಸಹ ತೇವ ಸಂವೇದಕಗಳಿವೆ. ಇದರ ಮೂಲಕ ಉಪಕರಣ [[ನೀರಿನಿಂದ ಹಾನಿ]]ಯಾಗಿದೆಯೇ ಅಥವಾ ಏರುಪೇರಾಗಿದೆಯೇ ಎಂಬುದನ್ನು ತಿಳಿಸುತ್ತದೆ. ಐಫೋನ್ನಲ್ಲಿರುವ ಸಂವೇದಕಗಳಲ್ಲಿ, ಹೆಡ್ಫೋನ್ [[ಜ್ಯಾಕ್]]ನಲ್ಲಿರುವ ಸಣ್ಣ ಬಿಲ್ಲೆ ಹಾಗೂ [[ಡಾಕ್ ಕನೆಕ್ಟರ್]] ಬಳಿಯಿರುವ ಒಂದು ಭಾಗವು ಸೇರಿದೆ.<ref>{{cite web|author=Charlie Sorrel|title=IPhone Water Sensor Revealed|publisher=[[Wired (magazine)|Wired]]|date=October 16, 2007|url=https://www.wired.com/gadgetlab/2007/10/iphone-water-se/|accessdate=November 5, 2009}}</ref> ಉಪಕರಣವು ವಾರಂಟಿಯಡಿ ದುರಸ್ತಿಗೆ ಅಥವಾ ಬದಲಾವಣೆಗೆ ಯೋಗ್ಯವೇ ಎಂಬುದನ್ನು ನಿರ್ಣಯಿಸಲು ಆಪೆಲ್ ಉದ್ಯೋಗಿಗಳು ಈ ಸಂವೇದಕಗಳನ್ನು ಬಳಸುತ್ತಾರೆ. ಉಪಕರಣವು ತೇವವನ್ನು ಹೀರಿಕೊಂಡಿದೆ ಎಂಬುದನ್ನು ಸಂವೇದಕಗಳು ತಿಳಿಸಿದಲ್ಲಿ, ಉಪಕರಣವು ವಾರಂಟಿ ವ್ಯಾಪ್ತಿಯೊಳಗೆ ಬರುವುದಿಲ್ಲ
ಎಂಬನಿರ್ಣಯಕ್ಕೆಬರಬಹುದು.
ಆದರೂ, ತೇವ ಸಂವೇದಕಗಳು ಸಾಮಾನ್ಯ ಬಳಕೆಯ ಮೂಲಕ'ಟ್ರಿಪ್' ಆಗಬಹುದು. ವ್ಯಾಯಾಮದ ಸಮಯದಲ್ಲಿ ಐಫೋನ್ ಬಳಸಲಾಗಿದ್ದಲ್ಲಿ, ಆ ಸಮಯದಲ್ಲುಂಟಾಗುವ [[ಬೆವರು]] ಸಂವೇದಕಗಳನ್ನು ತೇವಗೊಳಿಸಿ ಅದಕ್ಕೆ ಹಾನಿ ಸಂಭವಿಸಬಹುದು.<ref>{{cite web|author=David Martin|title=Sweaty workouts killing iPhones?|publisher=[[Cnet]]|date=April 8, 2009|url=http://reviews.cnet.com/8301-19512_7-10214153-233.html|accessdate=November 5, 2009|archive-date=ಅಕ್ಟೋಬರ್ 28, 2009|archive-url=https://web.archive.org/web/20091028002902/http://reviews.cnet.com/8301-19512_7-10214153-233.html|url-status=dead}}</ref> ವಿವಿಧ ಉತ್ಪಾದಕರ ಹಲವು ಇತರೆ [[ಮೊಬೈಲ್ ದೂರವಾಣಿ]]ಗಳಲ್ಲಿಯೂ ಸಹ, ತೇವ ಸಂವೇದಕಗಳು ಸುರಕ್ಷಿತ ಸ್ಥಳದಲ್ಲಿರುತ್ತವೆ, ಉದಾಹರಣೆಗೆ [[ವಿದ್ಯುತ್ಕೋಶ]]ದ ಕವಚದ ಹಿಂದೆ ಅಥವಾ ವಿದ್ಯುತ್ಕೋಶದಡಿಗಳಲ್ಲಿ ಸಂವೇದಕಗಳಿರುತ್ತವೆ. ಆದರೆ ಐಫೋನ್ನಲ್ಲಿರುವ ಸಂವೇದಕಗಳು ಪರಿಸರಕ್ಕೆ ನೇರಸಂಪರ್ಕ ಹೊಂದಿರುತ್ತವೆ. ಸ್ನಾನಗೃಹದಲ್ಲಿನ [[ಹಬೆ]] ಹಾಗೂ ಅತ್ಯಲ್ಪಮಟ್ಟದ [[ಪರಿಸರೀಯ ತೇವ]]ವೂ ಸಹ ಸಂವೇದಕಗಳ ಮೇಲೆ ಪ್ರಭಾವ ಬೀರಬಹುದು. ಈ ಕಾರಣಕ್ಕಾಗಿ ಸಂವೇದಕಗಳ ಅಳವಡಿಸಿದ ತಾಣಗಳ ಬಗ್ಗೆ ವ್ಯಾಪಕ ಟೀಕೆಯೆದ್ದಿದೆ.<ref>{{cite news|author=Lisa Respers|title=Moisture, cold irritate some smart phone users|publisher=[[CNN]]|date=April 14, 2009|url=http://edition.cnn.com/2009/TECH/04/14/smart.phones.buggy/index.html|accessdate=November 5, 2009}}</ref>
=== ಒಳಗೊಂಡಿರುವ ಅಂಶಗಳು ===
ಎಲ್ಲಾ ಐಫೋನ್ ಮಾದರಿಗಳಲ್ಲಿಯೂ ಲಿಖಿತ ದಾಖಲೆ ಸಂಗ್ರಹದ ಕೈಪಿಡಿ, [[ಡಾಕ್ ಕನೆಕ್ಟರ್]] ಹಾಗೂ [[USB]] ತಂತಿ ಸೇರಿ ಹಲವಾರು ಅಂಶಗಳಿರುತ್ತವೆ. ಮೊದಲ ಬಾರಿಗೆ ಉತ್ಪಾದನೆಯಾದ 3G ಐಫೋನ್ಗಳೊಂದಿಗೆ ಸ್ವಚ್ಛಗೊಳಿಸಲು ಬೇಕಾಗುವ ಬಟ್ಟೆಯನ್ನೂ ನೀಡಲಾಗುತ್ತಿತ್ತು. ಮೂಲತಃ ಐಫೋನ್ನಲ್ಲಿ ಸ್ಟೀರಿಯೊ ಹೆಡ್ಸೆಟ್ ([[ಇಯರ್ಬಡ್ಸ್]] ಮತ್ತು [[ಮೈಕ್ರೊಫೋನ್]] ಸಹಿತ), ಹಾಗೂ, ಚಾರ್ಜ್ ಮತ್ತು ಉಪಕರಣದ ಹೊಂದಾಣಿಕೆಯ ಸಮಯದಲ್ಲಿ ಐಫೋನ್ ನೇರವಾಗಿ ಹಿಡಿದಿಡಲು ಒಂದು ಪ್ಲ್ಯಾಸ್ಟಿಕ್ ಕವಚ ಇತ್ತು. ಐಫೋನ್ 3G ಮಾದರಿಯಲ್ಲಿ ಇದೇ ರೀತಿಯ ಹೆಡ್ಸೆಟ್, ಜೊತೆಗೆ ಒಂದು SIM ಹೊರತೆಗೆಯುವ ಸಲಕರಣೆಯೂ ಇದೆ (ಮೂಲ ಮಾದರಿಯಲ್ಲಿ [[ಕಾಗದದ ಕ್ಲಿಪ್]] ಅಗತ್ಯವಿದೆ). ಐಫೋನ್ 3GSನಲ್ಲಿ SIM ಹೊರತೆಗೆಯುವ ಸಲಕರಣೆ ಮತ್ತು ಪುನರ್ವಿನ್ಯಾಸದ ಹೆಡ್ಸೆಟ್ (ಧ್ವನಿ ನಿಯಂತ್ರಣಾ ಬಟನ್ಗಳ ಸಹಿತ) ಇವೆ.<ref name="Earbuds with volume" /> ಐಫೋನ್ 3G ಮತ್ತು 3GS ಮಾದರಿಗಳು ಒಂದೇ ಡಾಕ್(ಜೋಡಣೆ)ನೊಂದಿಗೆ ಹೊಂದಿಕೊಳ್ಳುವಂತಿವೆ. ಅವನ್ನು ಮೂಲ ಮಾದರಿಯ ಡಾಕ್ನ ಬದಲಿಗೆ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತವೆ.<ref>{{cite web|url=http://store.apple.com/us/product/MB484G/A?fnode=MTY1NDAzOQ&mco=MjE0NjMxOA|title=Apple iPhone 3G Dock|publisher=Apple Store|accessdate=2009-06-14}}</ref> ಎಲ್ಲಾ ಆವೃತ್ತಿಗಳಲ್ಲಿಯೂ USB ಪಾವರ್ ಅಡ್ಯಾಪ್ಟರ್ ಅಥವಾ 'ವಾಲ್ ಚಾರ್ಜರ್' ಉಂಟು. ಇದರಿಂದ ಐಫೋನ್ನ್ನು [[AC ಔಟ್ಲೆಟ್]]ನಿಂದ ಚಾರ್ಜ್ ಮಾಡಲು ಅವಕಾಶವಿದೆ. [[ಉತ್ತರ ಅಮೆರಿಕಾ]], [[ಜಪಾನ್]], [[ಕೊಲಂಬಿಯಾ]], [[ಇಕ್ವೆಡಾರ್]], ಅಥವಾ [[ಪೆರು]] ದೇಶಗಳಲ್ಲಿ ಮಾರಾಟವಾಗುವ ಐಫೋನ್ 3G ಮತ್ತು ಐಫೋನ್ 3GS ಮಾದರಿಗಳಲ್ಲಿ ಅಲ್ಟ್ರಾಕಾಂಪ್ಯಾಕ್ಟ್ USB ಪಾವರ್ ಅಡ್ಯಾಪ್ಟರ್ ಉಂಟು.
== ಕಂಪ್ಯೂಟರ್ ತಂತ್ರಾಂಶ ==
ಐಫೋನ್ (ಹಾಗೂ [[ಐಪಾಡ್ ಟಚ್]]) [[ಐಫೋನ್ OS]] ಎಂಬ [[ಕಾರ್ಯಾನುಕೂಲ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್)]]ವನ್ನು ಹೊಂದಿದೆ. [[ಮ್ಯಾಕ್ OS X]]ನಲ್ಲಿರುವ [[ಡಾರ್ವಿನ್/0} ಆಪರೇಟಿಂಗ್ ಸಿಸ್ಟಮ್ ನ ಅಗ್ರ ಪಂಕ್ತಿಯ ಒಂದು ವಿಭಿನ್ನತೆಯನ್ನು ಐಫೋನ್ OS ಆಧರಿಸಿದೆ. ಜೊತೆಗೆ, ಮ್ಯಾಕ್ OS X v10.5 ಲೆಪರ್ಡ್ನ ತಂತ್ರಾಂಶದ ಭಾಗ 'ಕೋರ್ ಆನಿಮೇಷನ್|ಡಾರ್ವಿನ್/0} ಆಪರೇಟಿಂಗ್ ಸಿಸ್ಟಮ್ ನ ಅಗ್ರ ಪಂಕ್ತಿಯ ಒಂದು ವಿಭಿನ್ನತೆಯನ್ನು ಐಫೋನ್ OS ಆಧರಿಸಿದೆ. ಜೊತೆಗೆ, [[ಮ್ಯಾಕ್ OS X v10.5]] ಲೆಪರ್ಡ್ನ ತಂತ್ರಾಂಶದ ಭಾಗ '[[ಕೋರ್ ಆನಿಮೇಷನ್]]]]'ನ್ನೂ ಸಹ ಹೊಂದಿದೆ. [[ಪಾವರ್VR]] ಯಂತ್ರಾಂಶದೊಂದಿಗೆ (ಹಾಗೂ ಐಫೋನ್ 3GSನಲ್ಲಿ [[ಒಪನ್GL ES]] 2.0),<ref name="3G_S_PR" />, ಇದು ಇಂಟರ್ಫೇಸ್ನ [[ಮೋಷನ್ ಗ್ರ್ಯಾಫಿಕ್ಸ್]]ಗೆ (ಚಲಿಸುವ ರೇಖಾಚಿತ್ರಗಳು) ಕಾರಣವಾಗಿದೆ. ಉಪಕರಣದ ಒಟ್ಟು ಶೇಖರಣಾ ಸಾಮರ್ಥ್ಯ (4 to 32 GB) ಮತ್ತು ಆಪರೇಟಿಂಗ್ ಸಿಸ್ಟಮ್ ನ ಅರ್ಧ [[GB]]ಗಿಂತಲೂ ಕಡಿಮೆ ಜಾಗವನ್ನು ಆಕ್ರಮಿಸಿಕೊಂಡಿದೆ.<ref name="VersatileFlash">{{cite web|last=Haslam|first=Karen|url=http://www.macworld.co.uk/ipod-itunes/news/index.cfm?newsid=16927|title=Macworld Expo: Optimised OS X sits on 'versatile' flash|publisher=[[Macworld]]|date=January 12, 2007|accessdate=2008-06-06}}</ref>
ಒಟ್ಟಿಗೆ ಜೋಡಿಸಲಾದ, ಆಪೆಲ್ ಹಾಗೂ ತೃತೀಯ ಶ್ರೇಣಿಯ ಅಭಿವೃದ್ಧಿಗಾರರು ಬಿಡುಗಡೆಮಾಡುವ ಭವಿಷ್ಯತ್ ಅಳವಡಿಕೆಗಳನ್ನು ಬೆಂಬಲಿಸಲು ಇದು ಸಮರ್ಥವಾಗಿದೆ. ತಂತ್ರಾಂಶ ಅಳವಡಿಕೆಗಳನ್ನು ಮ್ಯಾಕ್ OS Xನಿಂದ ನೇರವಾಗಿ ನಕಲು ಮಾಡಲಾಗದು. ಬದಲಿಗೆ ಅವನ್ನು ಬರೆದು ಐಫೋನ್ OSಗೆ ವಿಶೇಷವಾಗಿ ಸಂಯೋಜಿಸಬಹುದಾಗಿದೆ.
ಐಪಾಡ್ನಂತೆ, ಐಫೋನ್ನ್ನು [[ಐಟ್ಯೂನ್ಸ್]] ಮೂಲಕ ನಿಭಾಹಿಸಲಾಗುತ್ತದೆ. ಐಫೋನ್ OSನ ಮುಂಚಿನ ಆವೃತ್ತಿಗಳಿಗೆ [[ವರ್ಷನ್ 7.3 ಅಥವಾ ಆನಂತರದ ಆವಿಷ್ಕಾರಗಳಿಗೆ]] ಅಗತ್ಯವಿತ್ತು. ಇದು ಮ್ಯಾಕ್ OS X ಆವೃತ್ತಿ 10.4.10 ಟೈಗರ್ ಅಥವಾ ಕಾಲ ಕಳೆದಂತೆ, ಹಾಗೂ 32-ಬಿಟ್ ಅಥವಾ 64-ಬಿಟ್ [[ವಿಂಡೋಸ್ XP]] ಅಥವಾ [[ವಿಸ್ಟಾ]]ದೊಂದಿಗೆ ಹೊಂದಿಕೆಯಾಗಬಲ್ಲದು.<ref>{{cite web|url=http://docs.info.apple.com/article.html?artnum=305703|title=iPhone: Minimum system requirements|publisher=[[Apple Inc.]]|accessdate=2007-07-13|archive-date=2007-09-03|archive-url=https://web.archive.org/web/20070903231507/http://docs.info.apple.com/article.html?artnum=305703|url-status=dead}}</ref> ಐಟ್ಯೂನ್ಸ್ 7.6ನ ಬಿಡುಗಡೆಯೊಂದಿಗೆ XP ಮತ್ತು ವಿಸ್ಟಾದ 64-ಬಿಟ್ ಅವೃತ್ತಿಗಳನ್ನು ಸೇರಿಸಲು ವ್ಯಾಪ್ತಿ ವಿಸ್ತರಿಸಲಾಯಿತು.<ref>{{cite web|title="Apple's iTunes 7.6 plays nice with 64 bit Vista"|url=http://www.engadget.com/2008/01/15/apples-itunes-7-6-plays-nice-with-64-bit-vista/|publisher=[[Engadget]]|date=January 15, 2008|accessdate=2008-01-22}}</ref> 64-ಬಿಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ಗಳ ಮುಂಚಿನ ಆವೃತ್ತಿಗಳಿಗಾಗಿ 'ಪರ್ಯಾಯ ಮಾರ್ಗವೂ'ಸಹ ಲಭಿಸಿದೆ.<ref>{{cite web|url=http://www.planetamd64.com/index.php?showtopic=35132&st=0&p=327771&#entry327771|title=iTunes is now 64-bit|publisher=PlanetAMD64|access-date=2010-01-28|archive-date=2008-04-12|archive-url=https://web.archive.org/web/20080412033719/http://www.planetamd64.com/index.php?showtopic=35132&st=0&p=327771&#entry327771|url-status=dead}}</ref> ಐಟ್ಯೂನ್ಸ್ ಮೂಲಕ ಆಪೆಲ್ ಐಫೋನ್ OSಗೆ ಉಚಿತ ಅಪ್ಡೇಟ್ಗಳನ್ನು ನೀಡುತ್ತದೆ ಹೊಸ ಮಾದರಿಗಳಲ್ಲಿ ಪ್ರಮುಖ ಅಪ್ಡೇಟ್ಗಳುಂಟು.<ref>{{cite web|url=http://www.macworldcanada.ca/news/feature/to-upgrade-or-not-the-iphone-3g-s-dilemma/130d25f1c0a8000600b4bb6582434a58/pg001.htm|title=To Upgrade or Not: the iPhone 3G S Dilemma|publisher=Macworld Canada|date=June 24, 2009|accessdate=2009-06-27|archive-date=2009-06-26|archive-url=https://web.archive.org/web/20090626094545/http://www.macworldcanada.ca/news/feature/to-upgrade-or-not-the-iphone-3g-s-dilemma/130d25f1c0a8000600b4bb6582434a58/pg001.htm|url-status=dead}}</ref>
ಇಂತಹ ಅಪ್ಡೇಟ್ಗಳಿಗೆ ಐಟ್ಯೂನ್ಸ್ನ ಹೊಸ ಆವೃತ್ತಿಗಳ ಅಗತ್ಯವಿದೆ. ಉದಾಹರಣೆಗೆ, 3.0 ಅಪ್ಡೇಟ್ಗಳಿಗೆ ಐಟ್ಯೂನ್ಸ್ 8.2ರ ಅಗತ್ಯವಿದೆ.<ref name="3G_S_PR" /> ಆದರೆ ಐಟ್ಯೂನ್ಸ್ಗಾಗಿ ಯಂತ್ರಾಂಶ ಅಗತ್ಯಗಳು ಹಿಂದಿನಂತೆಯೇ ಉಳಿದಿವೆ. ಅಪ್ಡೇಟ್ಗಳಲ್ಲಿ ಸುರಕ್ಷಾ ತುಣುಕು ಮತ್ತು ಹೊಸ ಕಾರ್ಯಲಕ್ಷಣಗಳನ್ನು ಒಳಗೊಂಡಿವೆ.<ref>{{cite news|laste=Kharif|first=Olga|url=http://www.businessweek.com/the_thread/techbeat/archives/2007/07/coming_soon_iph.html|title=Coming Soon: iPhone Software Updates|publisher=[[BusinessWeek]]|date=July 10, 2007|accessdate=2008-06-06}}</ref>
ಉದಾಹರಣೆಗೆ, ಅಪ್ಡೇಟ್ ಲಭಿಸುವ ತನಕ, ಐಫೋನ್ 3G ಬಳಕೆದಾರರು ಮೊದಮೊದಲು ಕರೆಗಳಲ್ಲಿನ ಅಸ್ಪಷ್ಟತೆಯ ಸಮಸ್ಯೆ ಎದುರಿಸುತ್ತಿದ್ದರು.<ref name="2.1">{{cite web|url=http://www.macworld.com/article/135515/2008/09/iphone21.html|title=Apple releases iPhone 2.1 update|last=Cohen|first=Peter|date=2008-09-12|publisher=Macworld|accessdate=2009-06-10}}</ref><ref>{{cite web|url=http://www.macblogz.com/2008/08/12/iphone-3g-connection-issues-caused-by-immature-chipset/|title=iPhone 3G Connection Issues Caused by Immature Infineon Chipset?|last=Aviv|date=August 12, 2008|publisher=MacBlogz|accessdate=2008-12-17|archive-date=2008-09-08|archive-url=https://web.archive.org/web/20080908131836/http://www.macblogz.com/2008/08/12/iphone-3g-connection-issues-caused-by-immature-chipset/|url-status=dead}}</ref>
=== ಅಂತರಸಂಪರ್ಕದ ಮುಖಾಮುಖಿ ಸಾಧನ (ಇಂಟರ್ಫೇಸ್) ===
[[ಇಂಟರ್ಫೇಸ್]] ಮುಖಪುಟವನ್ನಾಧರಿಸಿದೆ. ಇದು ಲಭ್ಯ ಅಳವಡಿಕೆಗಳ ಚಿತ್ರ-ರೂಪದ ಪಟ್ಟಿಯೊಂದನ್ನು ಹೊಂದಿದೆ. ಐಫೋನ್ ಕಾರ್ಯಚಟುವಟಿಕೆಗಳು ಸಾಮಾನ್ಯವಾಗಿ ಒಂದು ಸಮಯಕ್ಕೆ ಒಂದೇ ಆಗಿರುತ್ತದೆ. ಆದರೂ, ಕರೆ ಮಾಡುತ್ತಿರುವಾಗ ಅಥವಾ ಸಂಗೀತವನ್ನಾಲಿಸುವಾಗ ಹಲವು ಸೌಲಭ್ಯಗಳನ್ನು ಪಡೆಯುವ ಸಾಧ್ಯತೆ ಇಲ್ಲಿದೆ. ಪರದೆಯ ಕೆಳಗಿರುವ ಯಂತ್ರಾಂಶದ ಕೀಲಿಮಣಿ ಒತ್ತಿ ಮುಖಪರದೆಯನ್ನು ಯಾವಾಗಾದರೂ ವೀಕ್ಷಿಸಬಹುದಾಗಿದೆ. ಈ ಸಂದರ್ಭದಲ್ಲಿ ಕಾರ್ಯೋಮುಖ ವಿನ್ಯಾಸಗಳನ್ನು ಆವರಣಗೊಳಿಸುತ್ತದೆ.<ref name="home screen">{{cite web|url=http://www.apple.com/iphone/features/homescreen.html|title=Apple — iPhone — Features — Home screen|year=2008|publisher=[[Apple Inc.]]|accessdate=2008-12-13}}</ref> ಯಥಾಸ್ಥಿತಿಯಲ್ಲಿ, ಮುಖಪರದೆಯು ಕೆಳಕಂಡ ಶೀರ್ಷಿಕೆಗಳನ್ನು ಹೊಂದಿವೆ: ಸಂದೇಶಗಳು ([[SMS]] ಮತ್ತು [[MMS]] ಸಂದೇಶ ರವಾನೆ), ಕ್ಯಾಲೆಂಡರ್, ಫೋಟೋಗಳು, ಕ್ಯಾಮೆರಾ, [[ಯುಟ್ಯೂಬ್]], ಸ್ಟಾಕ್ಗಳೂ, ನಕ್ಷೆಗಳು ([[ಗೂಗಲ್ ಮ್ಯಾಪ್ಸ್]]), ಹವಾಮಾನ, ಧ್ವನಿ ಮೆಮೊಗಳು, ಟಿಪ್ಪಣಿಗಳು, ಗಡಿಯಾರ, ಗಣಕ, ಸಂಯೋಜನೆಗಳು, [[ಐಟ್ಯೂನ್ಸ್ (ಮಳಿಗೆ)]], [[ಆಪ್ ಸ್ಟೋರ್]] ಹಾಗೂ (ಐಫೋನ್ 3GS ಮಾತ್ರ) [[ದಿಕ್ಸೂಚಿ]].
ಪರದೆಯ ಅಡಿಯಲ್ಲಿ [[ದೂರವಾಣಿ]], [[ವಿ-ಅಂಚೆ]], [[ಸಫಾರಿ]] (ಇಂಟರ್ನೆಟ್) ಮತ್ತು ಐಪಾಡ್ ([[ಮಲ್ಟಿಮೀಡಿಯಾ]]) ಐಫೋನ್ನ ಮುಖ್ಯ ಉದ್ದೇಶಗಳನ್ನು ಚಿತ್ರಿಸುತ್ತವೆ.<ref>{{cite web|url=http://docs.info.apple.com/article.html?artnum=306003|title=iPhone Applications|publisher=[[Apple Inc.]]|date=July 11, 2007|accessdate=2007-11-04|archive-date=2008-03-11|archive-url=https://web.archive.org/web/20080311142319/http://docs.info.apple.com/article.html?artnum=306003|url-status=dead}}</ref>
2008ರ ಜನವರಿ 15ರಂದು ಆಪೆಲ್ ತಂತ್ರಾಂಶ ಅಪ್ಡೇಟ್ 1.1.3 ಆವೃತ್ತಿ ಬಿಡುಗಡೆಗೊಳಿಸಿತು. ಇದರಂತೆ ಬಳಕೆದಾರರು 'ವೆಬ್ ಕ್ಲಿಪ್ಸ್' (ಸಫಾರಿಯಲ್ಲಿ ಬಳಕೆದಾರರು ನಿಗದಿಪಡಿಸಬಹುದಾದ ಪುಟವನ್ನು ತೆರೆಯುವ ಅನ್ವಯಿಕೆಗಳನ್ನು ಹೋಲುವ ಮುಖಪುಟ ಐಕನ್ಗಳು) ರಚಿಸಲು ಅವಕಾಶ ನೀಡಿತು. ಅಪ್ಡೇಟ್ ನಂತರ, ಐಫೋನ್ ಬಳಕೆದಾರರು ಒಂಬತ್ತು ಇತರೆ ಐಕನ್ಗಳನ್ನು ಕೂಡಿಸಿ ಪುನಃ ಜೋಡಿಸಬಹುದು. ಒಂದು ಬಾರಿ ಅಡ್ಡಲಾಗಿ ಉಜ್ಜಿದರೆ ಆ ಮುಖಭಾಗದ ಪರದೆಗಯನ್ನು ಸಂದರ್ಶಿಸಬಹುದಾಗಿದೆ.<ref name="Update 1.1.3">{{cite web|url=http://www.apple.com/pr/library/2008/01/15iphone.html|title=Apple Enhances Revolutionary iPhone with Software Update|date=January 15, 2008|publisher=Apple|accessdate=2008-12-13}}</ref>
ಪ್ರತಿಯೊಂದು ಮುಖಪುಟದಲ್ಲಿ ಅದೇ ರೀತಿಯ ಡಾಕ್(ಜೋಡನೆಯಿಂದ)ನಿಂದ ಐಕನ್ಗಳನ್ನು ಸೇರಿಸಬಹುದು ಅಥವಾ ತೆಗೆಯಬಹುದು. ಪ್ರತಿಯೊಂದು ಮುಖಪುಟವೂ ಗರಿಷ್ಠ ಹದಿನಾರು ಐಕನ್ಗಳನ್ನು ತೋರಿಸಬಹುದು. ಡಾಕ್ ಗರಿಷ್ಠ ನಾಲ್ಕು ಐಕನ್ಗಳಿಗೆ ಅವಕಾಶ ಕಲ್ಪಿಸಬಹುದು. ಬಳಕೆದಾರರು ಯಾವುದೇ ಸಮಯದಲ್ಲಿ ವೆಬ್ ಕ್ಲಿಪ್ಸ್ ಮತ್ತು ತೃತೀಯ ವರ್ಗದ ಅಳವಡಿಕೆಗಳನ್ನು ತೆಗೆಯಬಹುದು. ಐಟ್ಯೂನ್ಸ್ನಿಂದ ಕೇವಲ ನಿರ್ದಿಷ್ಟ ಅನ್ವಯಿಕೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು. ಆಪೆಲ್ನ ಯಥಾಸ್ಥಿತಿ ಅನ್ವಯಿಕೆಗಳನ್ನು ತೆಗೆಯುವಂತಿಲ್ಲ. 3.0 ಅಪ್ಡೇಟ್ ಮೂಲಕ ವಿಶಾಲಮಟ್ಟದ'ಹುಡುಕು' ವ್ಯವಸ್ಥೆಯನ್ನು ಮೊದಲ ಮುಖಪುಟದ ಎಡಭಾಗದಲ್ಲಿ ಸೇರಿಸಲಾಗಿದೆ. ಇದಕ್ಕೆ [[ಸ್ಪಾಟ್ಲೈಟ್]] ಎನ್ನಲಾಗಿದೆ.<ref name="3.0 official"/>
ಬಹುಶಃ ಎಲ್ಲಾ ಇನ್ಪುಟ್ನ್ನೂ ಟಚ್ಸ್ಕ್ರೀನ್ ಮೂಲಕ ನೀಡಲಾಗಿದೆ. [[ಮಲ್ಟಿ-ಟಚ್]] ಮೂಲಕ ನೀಡಲಾದ ಜಟಿಲ ಸೂಚನೆಗಳನ್ನು ಅರ್ಥೈಸಿಕೊಳ್ಳುತ್ತದೆ. ಬೆರಳ ಸ್ಪರ್ಶ ಮತ್ತು ಉಜ್ಜುವುದರ ಮೂಲಕ ಪರದೆಯ ಮೇಲಿರುವ ವಿಷಯವನ್ನು ಮೇಲೆ-ಕೆಳಗೆ ಬದಲಾಯಿಸಲು ಐಫೋನ್ನ [[ಪರಸ್ಪರ ಕ್ರಿಯಾ ತಂತ್ರ]]ವು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಉದಾಹರಣೆಗೆ, ಎರಡು ಬೆರಳುಗಳನ್ನು ಪರದೆಯ ಮೇಲಿಟ್ಟು ಅಗಲಿಸುವುದರ ಮೂಲಕ ಜಾಲ ಪುಟಗಳು ಮತ್ತು ಛಾಯಾಚಿತ್ರಗಳನ್ನು ಹಿಗ್ಗಿಸಿ, ಹತ್ತಿರ ತರುವುದರ ಮೂಲಕ ಕುಗ್ಗಿಸಬಹುದು. ಈ ಕ್ರಿಯೆಗೆ 'ಪಿಂಚಿಂಗ್' ಎನ್ನಲಾಗಿದೆ. ಬೆರಳನ್ನು ಪರದೆಯ ಮೇಲೆ ಕೆಳಗಿಂದ ಮೇಲಕ್ಕೆ ತರುವುದರಿಂದ ಉದ್ದನೆಯ ಪಟ್ಟಿ ಅಥವಾ ಮೆನುವಿನ ಸುರುಳಿ ಕಾಣಬಹುದು; ಹಿಂದಕ್ಕೆ ಹೋಗಲು ಬೆರಳನ್ನು ಮೇಲಿಂದ ಕೆಳಗೆ ಹಾಯಿಸಬಹುದಾಗಿದೆ. ಚಕ್ರದ ಮೇಲ್ಮೈಗೆ ಅಂಟಿಕೊಂಡಿರುವ ಚಿತ್ರಗಳಂತೆ ಪಟ್ಟಿಯು ಚಲಿಸುತ್ತದೆ. [[ಘರ್ಷಣೆ]]ಗೊಳಗಾದಂತೆ ನಿಧಾನಗತಿಯಲ್ಲಿ ಚಲಿಸುತ್ತದೆ. ಈ ರೀತಿಯಲ್ಲಿ, ಇಂಟರ್ಫೇಸ್ ನೈಜ ವಸ್ತುವೊಂದರ ಭೌತವಿಜ್ಞಾನವನ್ನು ಅನುಕರಿಸುತ್ತದೆ. ಇತರೆ [[ಬಳಕೆದಾರ-ಕೇಂದ್ರೀಕೃತ]] [[ಪರಸ್ಪರ ಕಾರ್ಯ ನಡೆಸುವ]] ಸಂದರ್ಭಗಳಲ್ಲಿ, ಅಡ್ಡಲಾಗಿ ಬರುವ ಉಪ-ಆಯ್ಕೆ (ಸಬ್-ಸೆಲೆಕ್ಷನ್), ಉದ್ದಕ್ಕೆ ಹಾಯುವ ಕೀಲಿಮಣೆ ಮತ್ತು ಗುರುತಿನ (ಬುಕ್ಮಾರ್ಕ್) ಮೆನು, ಹಾಗೂ, ಸಂಯೋಜನೆಗಳನ್ನು ಇನ್ನೊಂದೆಡೆ ಹೊಂದಿಸುವ ಅವಕಾಶ ನೀಡುವ ವಿಡ್ಗೆಟ್ಗಳು ಸೇರಿವೆ. ಅಗತ್ಯವಿದ್ದಾಗೆಲ್ಲ ಮೆನು ಪಂಕ್ತಿಗಳು ಪರದೆಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಕಾಣಸಿಗುತ್ತವೆ. ಅವುಗಳ ಆಯ್ಕೆಯು ಪ್ರೊಗ್ರಾಮ್ನ್ನು ಅವಲಂಬಿಸುತ್ತವೆ. ಆದರೆ ಅವು ಸ್ಥಿರ ಶೈಲಿಯನ್ನು ಅನುಸರಿಸುತ್ತವೆ. ಮೆನು ಶ್ರೇಣಿ ವ್ಯವಸ್ಥೆಗಳಲ್ಲಿ, ಪರದೆಯ ಮೇಲಿನ ಎಡ ಮೂಲೆಯಲ್ಲಿರುವ 'ಹಿಂದೆ (ಬ್ಯಾಕ್)' ಬಟನ್ ಫೊಲ್ಡರಿನ ಹೆಸರನ್ನು ತೋರಿಸುತ್ತದೆ.
=== ದೂರವಾಣಿ ===
[[ಚಿತ್ರ:iPhone Calling.png|thumb|ಕರೆ ಮಾಡುವ ಸಮಯದಲ್ಲಿ ಐಫೋನ್ ಹಲವು ಆಯ್ಕೆಗಳನ್ನು ಮುಂದಿಡುತ್ತದೆ.ಮುಖಕ್ಕೆ ಬಹಳ ಸನಿಹದಲ್ಲಿಟ್ಟುಕೊಂಡಾಗ ಪರದೆಯು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತದೆ.]]
ಆಡಿಯೊ [[ಕಾನ್ಫೆರೆನ್ಸಿಂಗ್]], ಕರೆಯನ್ನು ಕೆಲಕ್ಷಣ ಹಿಡಿದಿಟ್ಟುಕೊಳ್ಳುವುದು, ಕರೆ ಒಳಬರ ಮಾಡಿಕೊಳ್ಳುವಿಕೆ, [[ಕರೆಯುವವರ ID]] ಮತ್ತು ಇತರೆ ಸೆಲ್ಯುಲರ್ ಜಾಲ-ಸಂಬಂಧಿತ ಲಕ್ಷಣಗಳೊಂದಿಗೆ ಐಫೋನ್ ಕ್ರಿಯೆಗಳ ಸಮಗ್ರತೆಗೆ ಐಫೋನ್ ಅವಕಾಶ ನೀಡುತ್ತದೆ. ಉದಾಹರಣೆಗೆ, ಕರೆಯೊಂದು ಒಳಗೆ ಬಂದಾಗ ಹಾಡೊಂದು ಕೇಳಿಸಿಕೊಳ್ಳುತ್ತಿದ್ದರೆ, ಹಾಡಿನ ಧ್ವನಿ ನಿಧಾನವಾಗಿ ನಿಂತುಹೋಗುತ್ತದೆ, ಕರೆಯು ಅಂತ್ಯಗೊಂಡಾಗ ಹಾಡಿನ ಧ್ವನಿಯು ನಿಧಾನವಾಗಿ ಮೊದಲಿನ ಮಟ್ಟಕ್ಕೆ ಏರುತ್ತದೆ. ಐಫೋನ್ನ್ನು ಮುಖದ ಬಳಿ ತಂದಾಗ, ಸಾಮೀಪ್ಯ ಸಂವೇದಕವು ಪರದೆ ಹಾಗೂ ಸ್ಪರ್ಶ ಸಂವೇದನಾ ಸರ್ಕ್ಯುಟನ್ನು ಮುಚ್ಚಿಹಾಕುತ್ತದೆ. ವಿದ್ಯುತ್ಕೋಶದಲ್ಲಿನ ಶಕ್ತಿಯನ್ನು ಉಳಿಸಲು ಹಾಗೂ ಆಕಸ್ಮಿಕ ಸ್ಪರ್ಶ ತಡೆಗಟ್ಟಲು ಸಾಮೀಪ್ಯ ಸಂವೇದಕವು ಈ ರೀತಿ ವರ್ತಿಸುತ್ತದೆ. ಈ ಐಫೋನ್ [[ವೀಡಿಯೊ ಕರೆ]] ಅಥವಾ [[ವೀಡಿಯೊಕಾನ್ಫೆರೆನ್ಸಿಂಗ್]] ಗೆ ನೆರವಾಗುವದಿಲ್ಲ. ಏಕೆಂದರೆ ಪರದೆ ಮತ್ತು ಕ್ಯಾಮೆರಾ ಉಪಕರಣದ ಎದುರು-ಬದುರಿನ ಬದಿಗಳಲ್ಲಿವೆ.<ref>{{cite web|url=http://www.engadget.com/2007/08/13/mirror-based-video-conferencing-developed-for-iphone/|title=Mirror-based video conferencing developed for iPhone|first=Donald|last=Melanson|publisher=[[Engadget]]|date=2007-09-13|accessdate=2009-12-20}}</ref> ತೃತೀಯ ಪಕ್ಷ(ಬಾಹ್ಯ) ಅನ್ವಯಿಕೆಗಳ ಮೂಲಕ ಕೇವಲ [[ಧ್ವನಿ ಡಯಲಿಂಗ್]] ಕ್ರಿಯೆಯನ್ನು ಮಾತ್ರ ಮೊದಲ ಎರಡು ಮಾದರಿಗಳು ಸಮರ್ಥಿಸುತ್ತವೆ.<ref>{{cite web|url=http://www.macworld.com/article/137421/2008/12/voicedialers.html|title=Review: iPhone voice dialers|last=Tessler|first=Franklin|date=2008-12-12|publisher=Macworld|accessdate=2009-05-09}}</ref> ಕೇವಲ ಐಫೋನ್ 3GSನಲ್ಲಿ ಲಭ್ಯವಿರುವ ಧ್ವನಿ ನಿಯಂತ್ರಣವು, ಸಂಪರ್ಕಗಳ ಹೆಸರು ಅಥವಾ ಸಂಖ್ಯೆಯನ್ನು ತಿಳಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ತಿಳಿಸಲಾದ ಈ ಸಂಪರ್ಕದ ಸಂಖ್ಯೆಯನ್ನು ಐಫೋನ್ ಡಯಲ್ ಮಾಡುತ್ತದೆ.<ref name="Voice_Control">{{cite web|url=http://www.apple.com/iphone/iphone-3g-s/voice-control.html|title=iPhone: Make calls and play music using voice control|date=2009-06-10|publisher=Apple|accessdate=2009-06-10}}</ref>
ಕೆಲವು ದೇಶಗಳಲ್ಲಿ ಐಫೋನ್ [[ವಿಷುಯಲ್ ವಾಯ್ಸ್ ಮೇಲ್]] <ref name="VV_abroad">{{cite web|url=http://www.ilounge.com/index.php/news/comments/iphone-3g-carriers-apple-vary-on-visual-voicemail/|title=iPhone 3G carriers, Apple vary on Visual Voicemail|last=Starrett|first=Charles|date=2008-06-11|publisher=[[iLounge]]|accessdate=2009-05-24|archive-date=2009-06-13|archive-url=https://web.archive.org/web/20090613074505/http://www.ilounge.com/index.php/news/comments/iphone-3g-carriers-apple-vary-on-visual-voicemail|url-status=dead}}</ref> ಲಕ್ಷಣವನ್ನೊಳಗೊಂಡಿರುತ್ತದೆ. ಇದರಂತೆ, ಬಳಕೆದಾರರು ಸದ್ಯದ ವಾಯ್ಸ್ಮೇಲ್ ಸಂದೇಶಗಳ ಪಟ್ಟಿಯನ್ನು ನೋಡಬಹುದು. ಹಾಗಾಗಿ ಅವರು ಕರೆ ನೀಡಿದವರ ವಾಯ್ಸ್ಮೇಲ್ಗೆ ಹೋಗುವ ಅಗತ್ಯವಿರುವುದಿಲ್ಲ. ಇತರೆ ಬಹಳಷ್ಟು ವ್ಯವಸ್ಥೆಗಳಿಗಿಂತ ಭಿನ್ನವಾಗಿ, ಪರದೆಯಲ್ಲಿರುವ ಒಳಬಂದ ಸಂದೇಶ ಪಟ್ಟಿಗಳಲ್ಲಿ ಸಂದೇಶವೊಂದನ್ನು (ಕಾಲಾನುಕ್ರಮಕ್ಕೆ ಅಂಟಿಕೊಳ್ಳದೆ) ಆಯ್ಕೆ ಮಾಡಿ, ಆಲಿಸಿ, ಅಳಿಸಬಹುದಾಗಿದೆ.
2007ರ ಸೆಪ್ಟೆಂಬರ್ 5ರಂದು ಸಂಗೀತ [[ರಿಂಗ್ಟೋನ್]] ಕಾರ್ಯಕ್ಷಮತೆಯನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪರಿಚಯಿಸಲಾಯಿತು. ಅತ್ಯಲ್ಪ ಹೆಚ್ಚುವರಿ ಶುಲ್ಕ ಪಾವತಿಸಿ ಐಟ್ಯೂನ್ಸ್ ಸ್ಟೋರ್ನಿಂದ ಹಾಡುಗಳನ್ನು ಖರೀದಿಸಿ ಬಳಕೆದಾರರು ತಮ್ಮ ಇಚ್ಛೆಯಂತೆ ರಿಂಗ್ಟೋನ್ಗಳನ್ನು ರಚಿಸಿಕೊಳ್ಳಬಹುದು. ಹಾಡಿನ ಯಾವುದೇ ಭಾಗವನ್ನು ಆಧರಿಸಿ ರಿಂಗ್ಟೋನ್ಗಳು 3ರಿಂದ 30 ಸೆಕೆಂಡ್ಗಳ ಅವಧಿಯದ್ದಾಗಿರಬಹುದು. ಜೊತೆಗೆ, ಅದರ ಧ್ವನಿಯು ನಿಧಾನಕ್ಕೆ ಇಳಿಯಬಹುದು ಅಥವಾ ಏರಬಹುದು; ಪುನರಾವರ್ತಿಸಿದಾಗ ಅರ್ಧ ಸೆಕೆಂಡಿನಿಂದ ಐದು ಸೆಕೆಂಡುಗಳ ವರೆಗೆ ತಡೆಯಬಹುದು, ಅಥವಾ [[ಸತತವಾಗಿ ಪುನರಾವರ್ತಿಸ]]ಬಹುದು. ಎಲ್ಲಾ ರೀತಿಯ 'ಗಿರಾಕಿಯ ಇಚ್ಛೆಯಂತೆ ವಿನ್ಯಾಸ'ಗಳನ್ನು ಐಟ್ಯೂನ್ಸ್ನಲ್ಲಿ ಮಾಡಬಹುದಾಗಿದೆ. ಅಥವಾ, ಪರ್ಯಾಯವಾಗಿ, ಆಪೆಲ್ನ [[ಗ್ಯಾರಿಜ್ಬ್ಯಾಂಡ್]] ('ಗರಾಜ್ಬ್ಯಾಂಡ್?') ಆವೃತ್ತಿ 4.1.1 ಅಥವಾ ನಂತರದ ತಂತ್ರಾಂಶ ಬಳಸಿ ಮಾಡಬಹುದಾಗಿದೆ (ಈ ತಂತ್ರಾಂಶವು ಕೇವಲ [[ಮ್ಯಾಕ್ OS X]])<ref name="GarageBand1">{{cite web|url=http://docs.info.apple.com/article.html?artnum=307108|title=How to create custom ringtones in GarageBand 4.1.1|publisher=[[Apple Inc.]]|accessdate=2007-12-15|archive-date=2007-12-15|archive-url=https://web.archive.org/web/20071215060626/http://docs.info.apple.com/article.html?artnum=307108|url-status=dead}}</ref> ಅಥವಾ ತೃತೀಯ ಪಕ್ಷದ ಅನ್ವಯಿಕೆಗಳಲ್ಲಿ ಮಾತ್ರ ಲಭ್ಯ<ref name="third party ringtones">{{cite news|last=Gilbertson|first=Scott|title=How to Make Custom IPhone Ringtones Without Paying Apple $2|url=https://www.wired.com/software/coolapps/news/2007/09/ringtone_hacks|work=[[Wired magazine]]|publisher=[[Condé Nast Publications]]|date=September 12, 2007|accessdate=2008-03-08}}</ref>).
=== ಮಲ್ಟಿಮೀಡಿಯಾ ===
ಸಂಗೀತದ ಸಂಕಲನದ ವಿನ್ಯಾಸವು ಐಪಾಡ್ನ್ನು ಅಥವಾ ಸದ್ಯದ [[ಸಿಂಬಿಯನ್]] [[S60]] ಹೋಲುತ್ತದೆ. [[ಹಾಡು]]ಗಳು, [[ಗಾಯನ ಕಲಾವಿದ]]ರು, [[ಆಲ್ಬಮ್]]ಗಳು, [[ವೀಡಿಯೊ]]ಗಳು, [[ಪ್ಲೇಲಿಸ್ಟ್]]ಗಳು (ನುಡಿಸಬೇಕಾದ ಹಾಡುಗಳ ನಿರ್ದಿಷ್ಟ ಪಟ್ಟಿ), [[ಗಾಯನ ಶೈಲಿ]]ಗಳು, [[ಸಂಗೀತ ಸಂಯೋಜಕ]]ರು, [[ಪಾಡ್ಕ್ಯಾಸ್ಟ್]]ಗಳು, [[ಆಡಿಯೊಹೊತ್ತಿಗೆ]]ಗಳು ಮತ್ತು [[ಸಂಗ್ರಹಣ]]ಗಳ ಪ್ರಕಾರವಾಗಿ ತನ್ನ ಮೀಡಿಯಾ ಸಂಕಲನವನ್ನು ಐಫೋನ್ ವಿಂಗಡಿಸಬಹುದು.
ಪ್ಲೇಲಿಸ್ಟ್ಗಳನ್ನು ಹೊರತುಪಡಿಸಿ, ಆಯ್ಕೆಗಳನ್ನು ಯಾವಾಗಲೂ ವರ್ಣಮಾಲೆಯ ಅನುಕ್ರಮದಲ್ಲಿ ದಾಖಲಿಸಲಾಗುವುದು. ಏಕೆಂದರೆ ಪ್ಲೇಲಿಸ್ಟ್ಗಳು [[ಐಟ್ಯೂನ್ಸ್]]ನಿಂದ ತಮ್ಮ ಅನುಕ್ರಮಣಿಕೆ ಉಳಿಸಿಕೊಳ್ಳುತ್ತವೆ. ಬಳಕೆದಾರರು ತಮ್ಮ ಆಯ್ಕೆ ಸ್ಪರ್ಶಕ್ಕೆ ಸಾಕಷ್ಟು ಸ್ಥಳಾವಕಾಶಕ್ಕೆ ಐಫೋನ್ ದೊಡ್ಡ ಗಾತ್ರದ ಫಾಂಟ್ಗಳನ್ನು ಬಳಸುತ್ತದೆ. [[ಕವರ್ ಫ್ಲೊ]] ನೋಡಲು ಬಳಕೆದಾರರು ತಮ್ಮ ಐಫೋನ್ಗಳನ್ನು ಅಡ್ಡಲಾಗಿ ತಿರುಗಿಸಿ [[ಲ್ಯಾಂಡ್ಸ್ಕೇಪ್ ರೀತಿ]]ಗೆ ತರಬಹುದು. ಐಟ್ಯೂನ್ಸ್ನಂತೆಯೇ, ಈ ಲಕ್ಷಣವು ವಿವಿಧ ಆಲ್ಬಮ್ ಕವಚಗಳನ್ನು ಸುರುಳಿ ಛಾಯಾಚಿತ್ರ ಸಂಕಲನ ರೂಪದಲ್ಲಿ ತೋರಿಸುತ್ತದೆ. ಪರದೆಯ ಮೇಲೆ ಬೆರಳು ಹಾಯಿಸಿ ಸುರುಳಿ ದೃಶ್ಯ ಪಡೆಯಬಹುದಾಗಿದೆ. ಪರ್ಯಾಯವಾಗಿ, ಹಾಡುಗಳ ನಿಲ್ಲಿಸಲು, ನುಡಿಸಲು, ಮುಂದೂಡಲು ಅಥವಾ ಪುನಾವತಿಸಲು ಹೆಡ್ಸೆಟ್ ನಿಯಂತ್ರಣ ಬಳಸಬಹುದಾಗಿದೆ. ಐಫೋನ್ 3GSನಲ್ಲಿ, ಅದರೊಂದಿಗೆ ನೀಡಲಾದ ಆಪೆಲ್ ಇಯರ್ಫೋನ್ಗಳನ್ನು ಬಳಸಿ, ಧ್ವನಿ ನಿಯಂತ್ರಣವನ್ನು ಬದಲಾಯಿಸಬಹುದು. ಧ್ವನಿ ನಿಯಂತ್ರಣಾ ಲಕ್ಷಣವನ್ನು ಬಳಸಿ ಹಾಡನ್ನು ಗುರುತಿಸಿ, ಹಾಡುಗಳ ಪಟ್ಟಿಯಲ್ಲಿರುವ ಹಾಡುಗಳನ್ನು ನುಡಿಸಲು, ಅಥವಾ, ವಿಶಿಷ್ಟ ಗಾಯನ ಕಲಾವಿದರ ಪ್ರಕಾರ ವಿಂಗಡಿಸಿ ನುಡಿಸಲು, ಅಥವಾ [[ಜೀನಿಯಸ್ ಪ್ಲೇಲಿಸ್ಟ್]] ರಚಿಸಲು ಅವಕಾಶವಿದೆ.<ref name="Voice_Control" />
[[ಚಿತ್ರ:iPhone Image Viewer.jpg|thumb|ಛಾಯಾಚಿತ್ರಗಳನ್ನು ತೋರಿಸುವ ಅನ್ವಯಿಕೆಯು ಪೊರ್ಟ್ರೇಟ್ ಮತ್ತು ಲ್ಯಾಂಡ್ಸ್ಕೇಪ್ ರೀತಿಗಳೆರಡನ್ನೂ ಬೆಂಬಲಿಸುತ್ತದೆ.]]
[[ಮಧ್ಯದಲ್ಲಿ ಅಂತರವಿಲ್ಲದೆ ನಿರಂತರತೆಯ]] ನ್ನು ಐಫೋನ್ ಬೆಂಬಲಿಸುತ್ತದೆ.<ref>{{cite web|url=http://support.apple.com/kb/HT1797|title=What is Gapless Playback?|accessdate=2008-05-13|publisher=[[Apple Inc.]]}}</ref> 2005ರಲ್ಲಿ ಪರಿಚಯಿಸಲಾದ [[ಐದನೆಯ ತಲೆಮಾರಿನ ಐಪಾಡ್]]ಗಳಂತೆ, ಐಫೋನ್ಗಳು [[ಡಿಜಿಟಲ್ ವೀಡಿಯೊ]]ಗಳನ್ನು ಪ್ರದರ್ಶಿಸಬಹುದು. ಅಗಲ ಪರದೆಯಲ್ಲಿ [[TV ಕಾರ್ಯಕ್ರಮ]]ಗಳು ಮತ್ತು [[ಚಲನಚಿತ್ರ]]ಗಳನ್ನು ವೀಕ್ಷಿಸಲು ಅವಕಾಶ ನೀಡುತ್ತದೆ. ಅಗಲ ಪರದೆ ಹಾಗೂ [[ಪೂರ್ಣಪರದೆ]]ಗಳ ನಡುವೆ ವೀಡಿಯೊ ಪ್ರದರ್ಶನ ಬದಲಿಸಿಕೊಳ್ಳಲು ಡಬಲ್-ಟ್ಯಾಪಿಂಗ್ ಮಾಡಬಹುದು.
[[ಐಟ್ಯೂನ್ಸ್ ಸ್ಟೋರ್]]ನಿಂದ ಹಾಡುಗಳನ್ನು ಐಫೋನ್ಗೆ ನೇರವಾಗಿ ಡೌನ್ಲೋಡ್ ಮಾಡಲು ಐಫೋನ್ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಈ ಲಕ್ಷಣಕ್ಕೆ ಮೂಲತಃ ವೈ-ಫೈ ಜಾಲದ ಅಗತ್ಯವಿತ್ತು. ಆದರೆ ಇಂದು, ವೈ-ಫೈ ಅಲಭ್ಯವಾಗಿದ್ದಲ್ಲಿ, ಅದು ಸೆಲ್ಯುಲರ್ ಮಾಹಿತಿ ಜಾಲವನ್ನು ಬಳಸಬಹುದು.<ref>{{cite web|url=http://daringfireball.net/linked/2007/september#thu-27-wifi|title=The Reason It’s Called the Wi-Fi Music Store|date=September 30, 2007|accessdate=2008-01-06|first=John|last=Gruber|publisher=[[Daring Fireball]]|authorlink=John Gruber|work=Linked List}}</ref>
ಬಳಕೆದಾರರು [[ಕ್ಯಾಮೆರಾ]]ದೊಂದಿಗೆ ತೆರೆದ ಫೋಟೊಗಳನ್ನು ಅಪ್ಲೋಡ್ ಮಾಡಲು, ವೀಕ್ಷಿಸಲು ಹಾಗೂ ಇ-ಮೇಲ್ ಮಾಡುವ ತಂತ್ರಾಂಶವನ್ನು ಐಫೋನ್ ಒಳಗೊಂಡಿದೆ. ಸಫಾರಿಯಂತೆಯೇ, ಬಳಕೆದಾರರು ಬೆರಳುಗಳನ್ನು ಬಳಸುವ ಮೂಲಕ ಫೋಟೊಗಳನ್ನು ಹಿಗ್ಗಿಸಬಹುದು ಅಥವಾ ಕುಗ್ಗಿಸಬಹುದಾಗಿದೆ. ಐಫೋನ್ನ ಕ್ಯಾಮೆರಾದೊಂದಿಗೆ ತೆಗೆದುಕೊಂಡ ಛಾಯಾಚಿತ್ರಗಳನ್ನು ಕ್ಯಾಮೆರಾ ಸುರುಳಿಯ ರೂಪದಲ್ಲಿ ನೋಡಲು ಕ್ಯಾಮೆರಾ ಅನ್ವಯಿಕೆಯು ಅವಕಾಶ ನೀಡುತ್ತದೆ. ಈ ಛಾಯಾಚಿತ್ರಗಳು ಫೊಟೊಸ್ ಅನ್ವಯಿಕೆಯಲ್ಲಿಯೂ ಸಹ ಲಭ್ಯವಿವೆ. ಇದರೊಂದಿಗೆ ಐಫೋಟೊ ಅಥವಾ ಮ್ಯಾಕ್ನಲ್ಲಿರುವ [[ಐಫೋಟೊ]] ಅಥವಾ [[ಅಪೆರ್ಚೂರ್]] ಅಥವಾ ವಿಂಡೋಸ್ ಬೆಂಬಲಿಸುವ [[ಫೊಟೊಷಾಪ್]] ಮೂಲಕ ರವಾನಿಸಲಾಧ ಚಿತ್ರಗಳು ಸಹ ಲಭ್ಯವಿವೆ.
=== ಇಂಟರ್ನೆಟ್ ಜೋಡಣೆ ಅಥವಾ ಕೊಂಡಿ ===
[[ಚಿತ್ರ:Wikipedia Main Page on iPhone.png|thumb|240px|ಐಫೋನ್ ಸಫಾರಿಯಲ್ಲಿ ವಿಕಿಪೀಡಿಯಾದ ಮುಖಪುಟವು ಲ್ಯಾಂಡ್ಸ್ಕೇಪ್ ರೀತಿಯಲ್ಲಿ ತೋರಿಸುತ್ತಿರುವುದು.]]
ಐಫೋನ್ ಸ್ಥಳೀಯ ವಿಸ್ತೀರ್ಣದ [[ವೈ-ಫೈ]] ಅಥವಾ ವಿಶಾಲ ವಿಸ್ತೀರ್ಣದ [[GSM]] ಅಥವಾ [[EDGE]] ಜಾಲಕ್ಕೆ (ಇವೆರಡೂ ಎರಡನೆಯ ತಲೆಮಾರಿನ ([[2G]]) ನಿಸ್ತಂತು ಮಾಹಿತಿ ಪ್ರಮಾಣಗಳು) ಸಂಪರ್ಕವೇರ್ಪಡಿಸಿಕೊಂಡಾಗ [[ಇಂಟರ್ನೆಟ್]] ಲಭ್ಯವಾಗುತ್ತದೆ. ಐಫೋನ್ 3G ಮೂರನೆಯ ತಲೆಮಾರಿನ [[UMTS]] ಮತ್ತು [[HSDPA]] 3.6,<ref>{{cite web|url=http://www.gearlog.com/2008/07/apples_joswiak_iphone_3g_runs.php|title=Apple's Joswiak: iPhone 3G Runs Fast HSDPA 3.6, Not Slower 1.8|publisher=Gearlog|accessdate=2008-10-12|archive-date=2008-10-04|archive-url=https://web.archive.org/web/20081004215201/http://www.gearlog.com/2008/07/apples_joswiak_iphone_3g_runs.php|url-status=dead}}</ref> ಗೆ ಬೆಂಬಲ ನೀಡುತ್ತದೆ, ಆದರೆ [[HSUPA]] ಜಾಲಕ್ಕೆ ಅಲ್ಲ. ಕೇವಲ ಐಫೋನ್ 3GS HSDPA 7.2ಗೆ ಬೆಂಬಲ ನೀಡುತ್ತದೆ.<ref name="Macworld_3G_S">{{cite web|url=http://www.macworld.com/article/141031/2009/06/iphone3gs.html?lsrc=top_1|title=iPhone 3GS offers speed boost, video capture|last=Michaels|first=Philip|coauthors=Jason Snell|date=2009-06-08|publisher=Macworld|accessdate=2009-06-08}}</ref> AT&T ಜುಲೈ 2004ರಲ್ಲಿ [[3G]]ಯನ್ನು ಪರಿಚಯಿಸಿತು.<ref name="3G rollout">{{cite web|url=http://www.engadget.com/2004/07/20/at-t-wireless-introduces-3g-wireless/|title=AT&T Wireless introduces 3G wireless|last=Rojas|first=Peter|date=July 20, 2004|publisher=[[Engadget]]|accessdate=2008-12-17}}</ref> ಆದರೆ, USನಲ್ಲಿ ಸಾಕಷ್ಟು ವ್ಯಾಪಕ ಬಳಕೆಯಲ್ಲಿ ಬಂದಿಲ್ಲ; ಅಲ್ಲದೇ ಚಿಪ್ಸೆಟ್ಗಳು ಐಫೋನ್ನಲ್ಲಿ ಅಳವಡಿಸುವಷ್ಟು ದಕ್ಷ ರೀತಿಯಲ್ಲಿ ಶಕ್ತಿಯನ್ನು ಬಳಸುತ್ತಿಲ್ಲ ಎಂದು [[ಸ್ಟೀವ್ ಜಾಬ್ಸ್]]ರಿಗೆ 2007ರ ಅವಧಿಗೆ ಅಂದರೆ ತಡವಾಗಿ ಜ್ಞಾನೋದಯವಾಯಿತು.<ref name="pogueFAQ" /><ref>{{cite web|url=http://www.macnn.com/articles/07/09/18/jobs.uk.cell.carrier.qa/|title=Jobs: battery life issues delaying 3G iPhone|publisher=MacNN|accessdate=2008-06-06}}</ref> ವಿಶ್ವವಿದ್ಯಾನಿಲಯ ಮತ್ತು ಕಾರ್ಪೊರೇಟ್ ವೈ-ಫೈ ಜಾಲಗಳು ಸಾಮಾನ್ಯವಾಗಿ ಬಳಸುವ ದೃಢೀಕರಣ ವ್ಯವಸ್ಥೆ [[802.1X]]ಗಾಗಿ ಬೆಂಬಲವನ್ನು 2.0 ಆವೃತ್ತಿಯ ಅಪ್ಡೇಟ್ನಲ್ಲಿ ಸೇರಿಸಲಾಯಿತು.<ref name="802.1x">{{cite web|url=http://www.apple.com/au/iphone/enterprise/|title=Apple — iPhone — Enterprise|publisher=[[Apple Inc.]]|accessdate=2008-06-11}}</ref>
ಯಥಾಸ್ಥಿತಿಯಲ್ಲಿ, ಹೊಸದಾಗಿ ಗುರುತಿಸಲಾದ ವೈ-ಫೈ ಜಾಲಗಳನ್ನು ಸೇರಲು ಐಫೋನ್ ಕೋರುತ್ತದೆ. ಅಗತ್ಯವಾದಾಗ ಪಾಸ್ವರ್ಡ್ ನೀಡಲು ಸೂಚಿಸುತ್ತದೆ. ಪರ್ಯಾಯವಾಗಿ, ಸೀಮಿತ ವೈ-ಫೈ ಜಾಲಕ್ಕೆ ಅದು ಕೈಬೆರಳಿಂದ ಸೇರಿಸಬಹುದು.<ref>{{cite web|url=http://docs.info.apple.com/article.html?artnum=306249|title=iPhone: About Connections Settings|publisher=[[Apple Inc.]]|accessdate=2007-11-04|archive-date=2007-10-19|archive-url=https://web.archive.org/web/20071019015540/http://docs.info.apple.com/article.html?artnum=306249|url-status=dead}}</ref> ಐಫೋನ್ ಸ್ವಯಂಚಾಲಿತವಾಗಿ ನಿಶ್ಚಿತ ಜಾಲವನ್ನು ಆಯ್ಕೆ ಮಾಡುತ್ತದೆ. ಲಭ್ಯತೆ ಮೇರೆಗೆ EDGE ಬದಲಿಗೆ ವೈ-ಫೈ ಜಾಲಕ್ಕೆ ಸಂಪರ್ಕವೇರ್ಪಡಿಸುತ್ತದೆ.<ref>{{cite web|url=http://docs.info.apple.com/article.html?artnum=305711|title=iPhone: Connecting to the Internet with EDGE or Wi-Fi|publisher=[[Apple Inc.]]|accessdate=2007-11-04|archive-date=2007-10-11|archive-url=https://web.archive.org/web/20071011042909/http://docs.info.apple.com/article.html?artnum=305711|url-status=dead}}</ref> ಇದೇ ರೀತಿ, ಐಫೋನ್ 3G ಮತ್ತು 3GS ಮಾದರಿಗಳು 2Gಯ ಬದಲು 3G ಗೆ, ಅಥವಾ ಇವೆರಡರ ಬದಲಿಗೆ ವೈ-ಫೈ ಪರ್ಯಾಯ ಆಯ್ಕೆ ಮಾಡಿಕೊಳ್ಳುತ್ತದೆ.<ref name="3GSpeeds">{{cite web|url=http://www.apple.com/iphone/features/wireless.html|title=Apple -iPhone — Features - 3G |year=2008|publisher=[[Apple Inc.]]|accessdate=2008-12-14}}</ref> ಐಫೋನ್ 3G ಮತ್ತು 3GSನಲ್ಲಿರುವ ವೈ-ಫೈ, [[ಬ್ಲೂಟೂತ್]] ಮತ್ತು 3Gಯನ್ನು ಒಂದೊಂದಾಗಿ ನಿಷ್ಕ್ರಿಯಗೊಳಿಸಬಹುದಾಗಿದೆ. ಏರ್ಪ್ಲೇನ್ ರೀತಿಯು ಇತರೆ ಐಚ್ಛಿಕ ಸಂಯೋಜನೆಗಳನ್ನು ಮೀರಿಸಿ, ಒಂದೇ ಹೊತ್ತಿಗೆ ಎಲ್ಲಾ ನಿಸ್ತಂತು ಸಂಪರ್ಕಗಳನ್ನು ಕಡಿತಗೊಳಿಸುತ್ತದೆ.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಐಫೋನ್ನ 3G ಗರಿಷ್ಠ ಡೌನ್ಲೋಡ್ ದರ 1.4 [[Mbps]]ರಷ್ಟಿದೆ.<ref>{{cite web|url=http://www.att.com/gen/press-room?pid=4800&cdvn=news&newsarticleid=25791|title=AT&T to Offer Next-Generation iPhone on Its High-Performance 3G Network|date=2008-06-09|publisher=AT&T|accessdate=2009-06-09}}</ref> ಇನ್ನೂ ಹೆಚ್ಚಿಗೆ, ಸೆಲ್ಯುಲರ್ ಜಾಲಗಳಲ್ಲಿ ಡೌನ್ಲೋಡ್ ಆದ ಕಡತಗಳು 10 MBಗಿಂತಲೂ ಚಿಕ್ಕದಾಗಿರಬೇಕು. ಇ-ಮೇಲ್ ಲಗತ್ತುಗಳು ಅಥವಾ ಪಾಡ್ಕ್ಯಾಸ್ಟ್ಗಳನ್ನು ವೈ-ಫೈ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕು, ಏಕೆಂದರೆ ಈ ಜಾಲದಲ್ಲಿ ಕಡತದ ಗಾತ್ರ ಮಿತಿಯಿರುವುದಿಲ್ಲ. ವೈ-ಫೈ ಅಲಭ್ಯವಾಗಿರುವಾಗ, ಸಫಾರಿಯಲ್ಲಿ ನೇರವಾಗಿ ಕಡತಗಳನ್ನು ತೆರೆಯುವುದು ಒಂದು [[ಸಮಸ್ಯಾ ಪರಿಹಾರ]] ಯತ್ನವಾಗಿದೆ.<ref name="iPhone: Beat 10MB 3G download limit">{{cite web|url=http://reviews.cnet.co.uk/natelanxon/0,139102300,49300138,00.htm|title=iPhone: Beat 10MB 3G download limit|access-date=2010-01-28|archive-date=2010-02-16|archive-url=https://web.archive.org/web/20100216173216/http://reviews.cnet.co.uk/natelanxon/0,139102300,49300138,00.htm|url-status=dead}}</ref>
[[ಸಫಾರಿ]] ಐಫೋನ್ನ [[ಜಾಲ ವೀಕ್ಷಣಾ ಸಾಧನ]]ವಾಗಿದೆ. ಮ್ಯಾಕ್ ಮತ್ತು ವಿಂಡೋಸ್ನಂತೆಯೇ ಪುಟಗಳನ್ನು ತೆರೆದಿಡುತ್ತದೆ. ಜಾಲ ಪುಟಗಳನ್ನು ಪೊರ್ಟ್ರೇಟ್ ಅಥವಾ ಲ್ಯಾಂಡ್ಸ್ಕೇಪ್ ರೀತಿಯಲ್ಲಿ ವೀಕ್ಷಿಸಬಹುದಾಗಿದೆ. ಪರದೆಯ ಮೇಲೆ ಬೆರಳುಗಳನ್ನು ಹಾಯಿಸುವುದರಿಂದ ಪುಟಗಳನ್ನು ಹಿಗ್ಗಿಸಬಹುದು ಅಥವಾ ಕುಗ್ಗಿಸಬಹುದು; ಬೆರಳಿಂದ ಎರಡು ಬಾರಿ ಸ್ಪರ್ಶಿಸುವುದರ ಮೂಲಕ ಪಠ್ಯ-ಚಿತ್ರಗಳನ್ನು ಹಿಗ್ಗಿಸಬಹುದಾಗಿದೆ.<ref>{{cite web|url=http://docs.info.apple.com/article.html?artnum=305899|title=iPhone: Zooming In to See a Page More Easily|publisher=[[Apple Inc.]]|accessdate=2007-11-04|archive-date=2007-12-25|archive-url=https://web.archive.org/web/20071225113959/http://docs.info.apple.com/article.html?artnum=305899|url-status=dead}}</ref><ref>{{cite web|url=http://solution.allthingsd.com/20070626/the-iphone-is-breakthrough-handheld-computer/|title=The iPhone Is a Breakthrough Handheld Computer|author=Mossberg and Boehret|quote=The iPhone is the first smart phone we’ve tested with a real, computer-grade Web browser, a version of Apple’s Safari. It displays entire Web pages, in their real layouts, and allows you to zoom in quickly by either tapping or pinching with your finger.|date=June 26, 2007}}</ref> ಐಫೋನ್ [[ಫ್ಲ್ಯಾಷ್]] ಆಗಲೀ [[ಜಾವಾ]] ಆಗಲೀ ಬೆಂಬಲಿಸುವುದಿಲ್ಲ.<ref>{{cite web|url=http://www.ericklein.com/2008/03/btw-i-love-apple.html|title=BTW, I love Apple!|date=March 9, 2008|accessdate=2008-05-07}}</ref> ಇದರ ಫಲವಾಗಿ, [[UKಯ ಜಾಹೀರಾತು ಗುಣಮಟ್ಟಗಳ ಪ್ರಾಧಿಕಾರ (ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ) ತನ್ನ ನ್ಯಾಯನಿರ್ಣಯದಲ್ಲಿ, "ಐಫೋನ್ 'ಇಂಟರ್ನೆಟ್ನ ಎಲ್ಲಾ ಭಾಗಗಳ'ನ್ನು ವೀಕ್ಷಿಸಬಲ್ಲದು ಎಂದು ಹೇಳಿಕೊಳ್ಳುವುದು 'ಮಿಥ್ಯ ಜಾಹೀರಾತು' ಎಂದು ಪರಿಗಣಿಸಲಾಗಿದೆ. ಈ ಜಾಹೀರಾತನ್ನು ಕೂಡಲೇ ಹಿಂತೆಗೆದುಕೊಳ್ಳತಕ್ಕದ್ದು" ಎಂದು ತಿಳಿಸಿತು.|UKಯ ಜಾಹೀರಾತು ಗುಣಮಟ್ಟಗಳ ಪ್ರಾಧಿಕಾರ (ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ) ತನ್ನ ನ್ಯಾಯನಿರ್ಣಯದಲ್ಲಿ, "ಐಫೋನ್ 'ಇಂಟರ್ನೆಟ್ನ ಎಲ್ಲಾ ಭಾಗಗಳ'ನ್ನು ವೀಕ್ಷಿಸಬಲ್ಲದು ಎಂದು ಹೇಳಿಕೊಳ್ಳುವುದು '[[ಮಿಥ್ಯ ಜಾಹೀರಾತು]]' ಎಂದು ಪರಿಗಣಿಸಲಾಗಿದೆ. ಈ ಜಾಹೀರಾತನ್ನು ಕೂಡಲೇ ಹಿಂತೆಗೆದುಕೊಳ್ಳತಕ್ಕದ್ದು" ಎಂದು ತಿಳಿಸಿತು.<ref name="asaiphoneban">{{cite web|url=http://www.asa.org.uk/asa/adjudications/Public/TF_ADJ_44891.htm|title=ASA Adjudications: Apple (UK) Ltd|date=2008-08-27|accessdate=2009-03-10|archive-date=2009-04-20|archive-url=https://web.archive.org/web/20090420040228/http://www.asa.org.uk/asa/adjudications/Public/TF_ADJ_44891.htm|url-status=dead}}</ref>]] ಐಫೋನ್ [[SVG]], [[CSS]], [[HTML]] [[ಕ್ಯಾನ್ವಸ್]] ಮತ್ತು [[ಬ್ಯಾನ್ಜೊ]]ಗಳಿಗೆ ಬೆಂಬಲ ನೀಡುತ್ತದೆ.<ref name="iPhone Atlas OS 2.0">{{cite web|url=http://reviews.cnet.com/8301-19512_7-10115415-233.html?tag=mncol;title|title=iPhone OS 2.0 will include Bonjour, full-screen Safari mode, more|last=Wilson|first=Ben|date=March 8, 2008|publisher=iPhone Atlas|accessdate=2009-01-09}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref name="riactant">{{cite web|url=http://riactant.wordpress.com/2007/08/27/apple-iphone-tech-talk-debriefing-part-2-vector-graphics-and-animation/|title=Apple iPhone Tech Talk Debriefing — Part 2 (Vector graphics and animation)|last=riactant|date=August 27, 2007|publisher=The General Theory of RIAtivity|accessdate=2009-01-09|archiveurl=https://web.archive.org/web/20071108221705/http://riactant.wordpress.com/2007/08/27/apple-iphone-tech-talk-debriefing-part-2-vector-graphics-and-animation/|archivedate=2007-11-08|url-status=dead}}</ref>
ನಕ್ಷೆಗಳ ಅನ್ವಯಿಕೆಯು [[ಗೂಗಲ್ ಮ್ಯಾಪ್ಸ್]]ನ್ನು ನಕ್ಷೆ, ಉಪಗ್ರಹ ಅಥವಾ ಸಮ್ಮಿಶ್ರ ರೂಪದಲ್ಲಿ ವೀಕ್ಷಿಸಬಹುದು. ಎರಡು ಸ್ಥಳಗಳ ನಡುವೆ ಮಾರ್ಗಸೂಚಿಗಳನ್ನು ರಚಿಸುವುದಲ್ಲದೆ, ಐಚ್ಛಿಕತೆ ಮೇರೆಗೆ ನಿಗದಿತ [[ಸಂಚಾರ]] ಕುರಿತು ಮಾಹಿತಿ ನೀಡಬಲ್ಲದು. ಐಫೋನ್ ಬಿಡುಗಡೆಗೊಳಿಸುವ ಸಮಯದಲ್ಲಿ, ಸನಿಹದ [[ಸ್ಟಾರ್ಬಕ್ಸ್]] ಸ್ಥಳಗಳನ್ನು ಹುಡುಕಿ, ನಂತರ ಬೆರಳಿನಿಂದ ಒಂದು ಸಣ್ಣ ಸ್ಪರ್ಶದ ಮೂಲಕ ಯಾರಿಗೋ [[ಆಕಸ್ಮಿಕ ತಪ್ಪಿನಿಂದಾಗಿ ಕರೆ]] ನೀಡುವುದರ ಮೂಲಕ ಸ್ಟೀವ್ ಜಾಬ್ಸ್ ಈ ಗುಣಲಕ್ಷಣ ಪ್ರದರ್ಶಿಸಿದರು.<ref name="keynoteMacworld" /><ref name="keynoteEngadget">{{cite web|last=Block|first=Ryan|url=http://www.engadget.com/2007/01/09/live-from-macworld-2007-steve-jobs-keynote/|title=Live from Macworld 2007: Steve Jobs keynote|publisher=[[Engadget]]|date=January 9, 2007|accessdate=2008-06-06}}</ref>
ಪಾದಚಾರಿ ಮಾರ್ಗದರ್ಶನ, ಸಾರ್ವಜನಿಕ ಸಾರಿಗೆ ಮತ್ತು [[ಬೀದಿ ನೋಟ]] ಗುಣಲಕ್ಷಣಗಳನ್ನು ವರ್ಷನ್ 2.2 ತಂತ್ರಾಂಶ ಅಪ್ಡೇಟ್ನಲ್ಲಿ ನೀಡಲಾಯಿತು. ಆದರೆ ಇದರಲ್ಲಿ ಧ್ವನಿ-ಮಾರ್ಗದರ್ಶನದ ಸಂಚಾರ ನಿರ್ದೇಶನವಿರಲಿಲ್ಲ.<ref name="2.2" /> ಐಫೋನ್ 3GS ನಕ್ಷೆಯನ್ನು ತನ್ನ ಡಿಜಿಟಲ್ ದಿಕ್ಸೂಚಿಗೆ ಹೊಂದಿಕೊಳ್ಳುವಂತೆ ಪ್ರತಿಷ್ಟಾಪಿಸಬಹುದು.<ref name="Compass">{{cite web|url=http://www.apple.com/iphone/iphone-3g-s/maps-compass.html|title=Apple - iPhone - Get directions with GPS maps and a new compass.|date=2009-06-08|publisher=Apple|accessdate=2009-06-08}}</ref> ಐಫೋನ್ನಲ್ಲಿ [[ಯುಟ್ಯೂಬ್]] ವೀಡಿಯೊಗಳನ್ನು ವೀಕ್ಷಿಸಲು ಆಪೆಲ್ ಪ್ರತ್ಯೇಕ ಅನ್ವಯಿಕೆಯ ವಿನ್ಯಾಸ-ಅಭಿವೃದ್ಧಿ ಪಡಿಸಿತು. ಈ ಅನ್ವಯಿಕೆಯು [[H.264]] ಕೊಡೆಕ್ ಬಳಸಿ ಎನ್ಕೋಡ್ ಮಾಡಿ ವೀಡಿಯೋಗಳನ್ನು ಪ್ರದರ್ಶಿಸುತ್ತದೆ.
ಸಾದಾ[[ಹವಾಗುಣ]] ಮತ್ತು [[ಸ್ಟಾಕ್]] (ಷೇರು ಮಾಹಿತಿ)ತುಣುಕಗಳನ್ನು ತಿಳಿಸುವ ಅನ್ವಯಿಕೆಗಳೂ ಸಹ ಇಂಟರ್ನೆಟ್ನಿಂದ ಮಾಹಿತಿ ಪಡೆಯಬಹುದು.
ಐಫೋನ್ ಬಳಕೆದಾರರು ಇಂಟರ್ನೆಟ್ನ್ನು ಆಗಾಗ್ಗೆ ಮತ್ತು ವಿವಿಧೆಡೆ ವೀಕ್ಷಿಸುವರು. [[ಗೂಗಲ್]]ನ ಪ್ರಕಾರ, ಇತರೆ ಅನ್ಯ ಮೊಬೈಲ್ ದೂರವಾಣಿಗಳಿಗಿಂತಲೂ ಐಫೋನ್ 50 ಪಟ್ಟು ಹೆಚ್ಚು ಹುಡುಕು, ವಿಷಯ ಪಠ್ಯಕ್ರಮದ ಅವಕಾಶಗಳನ್ನು ಸೃಷ್ಟಿಸುತ್ತದೆ.<ref name="GoogleSearches">{{cite web|last=Lane|first=Slash|url=http://www.appleinsider.com/articles/08/02/14/google_iphone_usage_shocks_search_giant.html|title=Google iPhone usage shocks search giant|publisher=[[AppleInsider]]|date=February 14, 2008|accessdate=2008-02-18}}</ref> [[ಡಾಯಿಚ್ ಟೆಲೆಕಾಮ್]] [[CEO]] ರೆನೆ ಒಬರ್ಮನ್ ಹೇಳುವಂತೆ, 'ಐಫೋನ್ ಗ್ರಾಹಕರೊಬ್ಬರ ಸರಾಸರಿ ಇಂಟರ್ನೆಟ್ ಬಳಕೆಯು 100 [[ಮೆಗಾಬೈಟ್]]ಗಳಿಗಿಂತಲೂ ಹೆಚ್ಚಾಗಿವೆ.
ಇದು ಸಾಮಾನ್ಯ ಕರಾರು-ಆಧಾರಿತ ಗ್ರಾಹಕರ ಬಳಕೆಗಿಂತಲೂ 30 ಪಟ್ಟು ಹೆಚ್ಚು.'<ref name="iPhoneDataBoom">{{cite web|url=http://www.unstrung.com/document.asp?doc_id=144563&f_src=unstrung_gnews|title=iPhone Data Booms at T-Mobile|publisher=Unstrung|date=January 30, 2008|accessdate=2008-02-18|archive-date=2008-02-07|archive-url=https://web.archive.org/web/20080207070137/http://www.unstrung.com/document.asp?doc_id=144563&f_src=unstrung_gnews|url-status=dead}}</ref> ಐಫೋನ್ ಬಳಕೆದಾರರಲ್ಲಿ 98%ರಷ್ಟು ಮಾಹಿತಿ ಸೇವೆಗಳಿಗಾಗಿ ಮತ್ತು 88%ರಷ್ಟು ಇಂಟರ್ನೆಟ್ ಬಳಸುತ್ತಾರೆಂದು [[ನೀಲ್ಸೆನ್]] ಪತ್ತೆಹಚ್ಚಿದೆ.<ref name="Nielsen demographics">{{cite web|url=http://blog.nielsen.com/nielsenwire/online_mobile/iphone-users-watch-more-video-and-are-older-than-you-think/|title=iPhone Users Watch More Video… and are Older than You Think|date=2009-106-10|publisher=The [[Nielsen Company]]|accessdate=2009-06-27|archive-date=2009-06-14|archive-url=https://web.archive.org/web/20090614082958/http://blog.nielsen.com/nielsenwire/online_mobile/iphone-users-watch-more-video-and-are-older-than-you-think|url-status=dead}}</ref>
=== ಪಠ್ಯಾಂಶ (ಪಠ್ಯ ಇನ್ಪುಟ್) ===
[[ಚಿತ್ರ:iPhone keyboard unblured.jpg|thumb|ಮೂಲತಃ ಐಫೋನ್ನ ಟಚ್ಸ್ಕ್ರೀನ್ನಲ್ಲಿರುವ ವರ್ಚುಯಲ್ ಕೀಬೋರ್ಡ್.]]
ಪಠ್ಯ ನಮೂದಿಸಲು ಐಫೋನ್ ಒಂದು [[ಕಾರ್ಯಶೀಲ ಕೀಲಿಮಣೆ]]ಯನ್ನು ಟಚ್ಸ್ಕ್ರೀನ್ ಮೇಲೆ ಮೂಡಿಸುತ್ತದೆ. ಇದು ಸ್ವಯಂಚಾಲಿತ [[ಪದ ಪರಿಶೀಲನೆ]] ಹಾಗೂ ತಿದ್ದುವ ಸಾಧನ, [[ಮೂಡಬಹುದಾದ ಪದವನ್ನು ಮುಂಬರುವ]] ಕ್ಷಮತೆ ಮತ್ತು ಹೊಸ ಪದಗಳನ್ನು ಸೇರಿಸಿಕೊಳ್ಳುವ ಕ್ರಿಯಾಶೀಲ ನಿಘಂಟನ್ನು ಹೊಂದಿದೆ. ಬಳಕೆದಾರರು ಯಾವ ಪದವನ್ನು ಬೆರಳಚ್ಚು ಮಾಡುತ್ತಿದ್ದಾರೆಂದು ಮನಗಂಡು ಕೀಲಿಮಣೆಯು ಅದನ್ನು ಸಂಪೂರ್ಣಗೊಳಿಸುತ್ತದೆ. ಅಪ್ಪಿತಪ್ಪಿ ಅಥವಾ ಆಕಸ್ಮಿಕ ಪಕ್ಕದ ಕೀಲಿಯನ್ನೊತ್ತಿ ಮೂಡಬಹುದಾದ ಅಕ್ಷರ ದೋಷಗಳನ್ನೂ ಸಹ ಸರಿಪಡಿಸಬಲ್ಲದು.<ref name="hasAKeyboard">{{cite news|authorlink=John Markoff|last=Markoff|first=John|url=https://www.nytimes.com/2007/06/13/technology/13phone.ready.html|title=That iPhone Has a Keyboard, but It’s Not Mechanical|publisher=New York Times|date=June 13, 2007|accessdate=2008-06-06}}</ref>
[[ಲ್ಯಾಂಡ್ಸ್ಕೇಪ್ ರೀತಿ]]ಯಲ್ಲಿದ್ದಾಗ ಕೀಲಿಮಣೆಗಳು ತುಸು ದೊಡ್ಡದಾಗಿದ್ದು ಸ್ವಲ್ಪ ಅಂತರದಲ್ಲಿರುತ್ತವೆ. ಕೆಲವೇ ಅನ್ವಯಿಕೆಗಳು ಇದಕ್ಕೆ ಬೆಂಬಲ ನೀಡುತ್ತವೆ. ಪಠ್ಯದ ವಿಭಾಗವನ್ನು ಒಂದೆರಡು ಕ್ಷಣ ಒತ್ತಿಹಿಡಿದಲ್ಲಿ, [[ಸ್ಪಷ್ಟ ಮಸೂರ]] ಗೋಚರಿಸುವಂತೆ ಮಾಡುತ್ತದೆ. ಇದನ್ನು ಬಳಸಿ [[ಕರ್ಸರ್]]ನ್ನು ಸದ್ಯಕ್ಕಿರುವ ಪಠ್ಯದ ಮಧ್ಯದಲ್ಲಿಟ್ಟು ಬೇಕಾದೆಡೆಗೆ ಚಲಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. [[ಚೀನೀ]] ಭಾಷಾ ಅಕ್ಷರಗಳ ಗುರುತಿಸುವಿಕೆ ಸೇರಿದಂತೆ, ವರ್ಚುಯಲ್(ಕಾರ್ಯಶೀಲಿಕ) ಕೀಲಿಮಣೆಯು 21 ಭಾಷೆಗಳನ್ನು ಒಂದುಗೂಡಿಸುವ ಸಾಮರ್ಥ್ಯ ಹೊಂದಿದೆ.<ref name="Keyboard">{{cite web|url=http://www.apple.com/iphone/features/keyboard.html|title=Apple — iPhone — Features — Keyboard|publisher=[[Apple Inc.]]|accessdate=2008-12-15}}</ref>.
ಪಠ್ಯವನ್ನು [[ಬೇರ್ಪಡಿಸುವುದು, ನಕಲು ಮಾಡುವುದು ಅಥವಾ ಅಂಟಿಸುವ]] ಕಾರ್ಯಗಳಿಗೆ 3.0 ಅಪ್ಡೇಟ್ ಬೆಂಬಲ ತಂದಿತು.<ref name="3.0 official"/>
=== ಇ-ಮೇಲ್ ಮತ್ತು ಪಠ್ಯ ಸಂದೇಶಗಳು ===
ಐಫೋನ್ [[ಇ-ಮೇಲ್]] ವ್ಯವಸ್ಥೆ ಸಹ ಹೊಂದಿದೆ. ಇದು [[HTML ಇ-ಮೇಲ್]]ನ್ನು ಬೆಂಬಲಿಸುತ್ತದೆ. ಇದರಿಂದಾಗಿ ಬಳಕೆದಾರರು ಇ-ಮೇಲ್ ಸಂದೇಶದಲ್ಲಿ ಫೋಟೊಗಳನ್ನು ಲಗತ್ತಿಸಬಹುದು. ಐಫೋನ್ ಮೂಲಕ ಪಠ್ಯ ಸಂದೇಶಕ್ಕೆ ಲಗತ್ತಿಸಿದ [[PDF]], [[ವರ್ಡ್]], [[ಎಕ್ಸೆಲ್]], ಮತ್ತು [[ಪವರ್ಪಾಯಿಂಟ್]] ಕಡತಗಳನ್ನು ಸಹ ವೀಕ್ಷಿಸಬಹುದು.<ref name="3G_tech_specs" />
ಆಪೆಲ್ನ [[ಮೊಬೈಲ್ಮಿ]] ಪ್ಲ್ಯಾಟ್ಫಾರ್ಮ್ [[ಪುಷ್ ಇ-ಮೇಲ್]] ಸೌಲಭ್ಯ ನೀಡುತ್ತದೆ. ಜನಪ್ರಿಯ [[ಬ್ಲ್ಯಾಕ್ಬೆರಿ]] ಇ-ಮೇಲ್ ಸಾಧನದಂತೆಯೇ ಇದೂ ಸಹ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ವಾರ್ಷಿಕ ಚಂದಾ ಹಣ ನೀಡಿದಲ್ಲಿ ಈ ಸೌಲಭ್ಯ ದಕ್ಕುತ್ತದೆ. [[ಯಾಹೂ!]] ಐಫೋನ್ಗಾಗಿ ಉಚಿತ ಪುಷ್-ಮೇಲ್ ಸೇವೆ ಒದಗಿಸುತ್ತದೆ. [[ಮೈಕ್ರೊಸಾಫ್ಟ್ ಎಕ್ಸ್ಚೇಂಜ್]]<ref>{{cite web|url=http://www.apple.com/iphone/enterprise/|title=Apple - iPhone - Enterprise|publisher=Apple|accessdate=2009-05-16}}</ref> ಮತ್ತು [[ಕೀರಿಯೊ ಮೇಲ್ಸರ್ವರ್]] ಸೇರಿದಂತೆ [[IMAP]] ([[ಪುಷ್-IMAP]] ಅಲ್ಲ) ಹಾಗೂ [[POP3]] ಗುಣಮಟ್ಟಗಳನ್ನು ಸಹ ಬೆಂಬಲಿಸಲಾಗುತ್ತದೆ.<ref>{{cite web|first=Anthony|last=Frausto-Robledo|url=http://www.architosh.com/news/2007-07/2007a0724_an-kerioiphone.html|title=Analysis: Kerio MailServer delivers email to Apple iPhone|date=July 24, 2007|accessdate=2008-06-06}}</ref>
ಐಫೋನ್ ಪರ್ಮ್ವೇರ್ನ ಮೊದಲ ಆವೃತ್ತಿಗಳಲ್ಲಿ, ಎಕ್ಸ್ಚೇಂಜ್ ಸರ್ವರ್ನಲ್ಲಿ IMAP ತೆರೆಯುವುದರ ಮೂಲಕ ಈಡೇರಿಸಬಹುದು. ಆಪೆಲ್ [[ಮೈಕ್ರೊಸಾಫ್ಟ್ ಆಕ್ಟಿವ್ಸಿಂಕ್]]ಗೂ ಪರವಾನಿಗೆ ನೀಡಿದೆ. ಇದರ ಫಲವಾಗಿ, ಐಫೋನ್ 2.0 ಫರ್ಮ್ವೇರ್ ಬಿಡುಗಡೆಯೊಂದಿಗೆ ಈಗ ಪುಷ್ ಇ-ಮೇಲ್ ಸೇರಿ ಪ್ಲ್ಯಾಟ್ಫಾರ್ಮ್ನ್ನು ಬೆಂಬಲಿಸುತ್ತದೆ.<ref>{{cite news|url=http://blogs.barrons.com/techtraderdaily/2008/03/06/apple-iphone-sdk-event/|title=iPhone to support Exchange|date=March 6, 2008|publisher=[[Barron's Magazine|Barron's]]|work=TechTraderDaily}}</ref><ref name="releasedate" /> ಆಪೆಲ್ನ ತನ್ನದೇ ಆದ [[ಮೇಲ್]] ವ್ಯವಸ್ಥೆ, [[ಮೈಕ್ರೊಸಾಫ್ಟ್ ಔಟ್ಲುಕ್]], ಹಾಗೂ [[ಮೈಕ್ರೊಸಾಫ್ಟ್ ಎಂಟೂರೇಜ್]] ಇಂದ ಸಂಯೋಜನೆಗಳನ್ನು ಒಯ್ದು, ಐಫೋನ್ನಲ್ಲಿನ ಸಂಯೋಜನೆಗಳನ್ನು ಏಲಕಾಲಕ್ಕೆ ಹೊಂದಿಸುತ್ತದೆ. ಅಥವಾ ಪರ್ಯಾಯವಾಗಿ ಉಪಕರಣದಲ್ಲೇ ಕೈಯಿಂದಲೇ ಸಂಯೋಜಿಸಬಹುದಾಗಿದೆ.
ಸರಿಯಾದ ಸಂಯೋಜನೆಗಳೊಂದಿಗೆ, ಇ-ಮೇಲ್ ವ್ಯವಸ್ಥೆಯ ಯಾವುದೇ IMAP ಅಥವಾ POP3 ಖಾತೆಯನ್ನು ವೀಕ್ಷಿಸಬಹುದು.<ref>{{cite web|url=http://www.apple.com/iphone/features/mail.html|title=iPhone—Features—Mail|publisher=[[Apple Inc.]]|accessdate=2009-05-16}}</ref>
ಪಠ್ಯ ಸಂದೇಶಗಳನ್ನು ಕಾಲಾನುಕ್ರಮವಾಗಿ ಮೇಲ್ಬಾಕ್ಸ್ ವಿನ್ಯಾಸದಲ್ಲಿ ಪ್ರಸ್ತುತಗೊಳಿಸಲಾಗುವುದು. ಇದು ಚಿರಪರಿಚಿತ [[ಮೇಲ್]]ನಂತೆ, ಸ್ವೀಕೃತಿದಾರರಿಂದ ಉತ್ತರ ಸಹಿತ ಇ-ಮೇಲ್ಗಳನ್ನು ಒಟ್ಟಿಗೆ ಸೇರಿಸುತ್ತದೆ. ಪಠ್ಯ ಸಂದೇಶಗಳನ್ನು ಪ್ರತಿ ಸ್ವೀಕೃತಿದಾರರ ಹೆಸರಿನಡಿ 'ವಾಕ್ಗುಳ್ಳೆ'ಗಳಲ್ಲಿ ಪ್ರದರ್ಶಿಸಲಾಗುವುದು ([[ಐಚ್ಯಾಟ್]]ನಂತೆ). ಸದ್ಯಕ್ಕೆ ಐಫೋನ್ನಲ್ಲಿ ಇ-ಮೇಲ್ ಸಂದೇಶ ಫಾರ್ವರ್ಡ್, ಕರಡುಗಳು, ಆಂತರಿಕ ಕ್ಯಾಮೆರಾದಿಂದ-ಇ-ಮೇಲ್ ಚಿತ್ರ ರವಾನೆಗಾಗಿ ಅಂತರ್ನಿರ್ಮಿತ ವ್ಯವಸ್ಥೆ ಇದೆ. 1.1.3 ತಂತ್ರಾಂಶ ಅಪ್ಡೇಟ್ನಲ್ಲಿ ಬಹು-ಸ್ವೀಕೃತಿದಾರರಿಗಾಗಿ [[SMS]] ಸೌಲಭ್ಯವನ್ನು ಹೊಸದಾಗಿ ಸೇರಿಸಲಾಯಿತು.<ref name="1.1.3">{{cite web|url=http://www.macworld.com/article/131616/2008/01/iphone_update.html|title=First Look: iPhone 1.1.3|last=Moren|first=Dan|date=2008-01-16|publisher=Macworld|accessdate=2009-06-10}}</ref> 3.0 ಅಪ್ಡೇಟ್ನಲ್ಲಿ [[MMS]] ಸಾಮರ್ಥ್ಯವನ್ನೂ ಸೇರಿಸಲಾಗಿತ್ತು. ಆದರೆ, ಮೂಲತಃ ಐಫೋನ್ನಲ್ಲಿ<ref name="3.0 official">{{cite web|url=http://www.apple.com/iphone/preview-iphone-os/|title=The most advanced mobile OS. Now even more advanced.|date=2009-03-17|work=Scott Forstall's presentation ([[QuickTime]] video)|publisher=Apple|accessdate=2009-04-01}}</ref><ref name="3.0 Macworld">{{cite web|url=http://www.macworld.com/article/139438/2009/03/iphone30user.html|title=Cut and paste, MMS highlight iPhone 3.0 improvements|last=Cohen|first=Peter|date=2009-03-17|publisher=Macworld|accessdate=2009-04-01}}</ref> ಹಾಗೂ U.S.ನಲ್ಲಿ 2009ರ ಸೆಪ್ಟೆಂಬರ್ 25ರಿಂದ ಮಾತ್ರ ಈ ವ್ಯವಸ್ಥೆ ನಿಗದಿಗೊಳಿಸಲಾಯಿತು.<ref name="AT&T_MMS_tethering">{{cite web|url=http://www.macworld.com/article/141070/att_tethering_mms.html|title=AT&T tight-lipped on MMS, tethering|last=Mies|first=Ginny|date=2009-06-09|publisher=Macworld|accessdate=2009-06-10|archive-date=2009-06-12|archive-url=https://web.archive.org/web/20090612202643/http://www.macworld.com/article/141070/att_tethering_mms.html|url-status=dead}}</ref><ref name="ComputerATT">{{cite news|url=http://www.computerworld.com/s/article/9138475/AT_T_slates_iPhone_MMS_launch_for_Friday?taxonomyId=78|title=AT&T slates iPhone MMS launch for Friday|date=2009-09-24|publisher=ComputerWorld|accessdate=2009-09-25|archive-date=2014-08-11|archive-url=https://web.archive.org/web/20140811020225/http://www.computerworld.com/s/article/9138475/AT_T_slates_iPhone_MMS_launch_for_Friday?taxonomyId=78|url-status=dead}}</ref>
=== ತೃತೀಯ ಪಕ್ಷ ಅನ್ವಯಿಕೆಗಳು(ಬಾಹ್ಯ ಅಳವಡಿಕೆಗಳು) ===
:''ಇದನ್ನೂ ನೋಡಿ: [[ಐಫೋನ್ SDK]] ಮತ್ತು [[ಅಪ್. ಸ್ಟೋರ್]]''
2007ರ ಜೂನ್ 11ರಂದು [[WWDC 2007]]ರಲ್ಲಿ ಕಾರ್ಯಕ್ರಮವೊಂದು ನಡೆಯಿತು. ಇದರಲ್ಲಿ ಆಪೆಲ್ ಪ್ರಕಟಿಸಿದ್ದು ಹೀಗೆ: "ಐಫೋನ್ [[ತೃತೀಯ ಪಕ್ಷ]]ದ ಅನ್ವಯಿಕೆಗಳನ್ನು ಬೆಂಬಲಿಸುತ್ತದೆ. ಇವು [[ಅಜ್ಯಾಕ್ಸ್]]ನಲ್ಲಿ ಬರೆದು ನಿರ್ಮಿಸಿದ 'ಜಾಲ ಅನ್ವಯಿಕೆ'ಗಳಾಗಿದ್ದು, ಐಫೋನ್ ಇಂಟರ್ಫೇಸ್ನ್ನು ಹೋಲುತ್ತದೆ."<ref name="Web apps">{{cite web|url=http://www.apple.com/pr/library/2007/06/11iphone.html|title=iPhone to Support Third-Party Web 2.0 Applications|date=June 11, 2007|publisher=[[Apple Inc.]]|accessdate=2008-12-15}}</ref> 2007ರ ಅಕ್ಟೋಬರ್ 17ರಂದು ಸ್ಟೀವ್ ಜಾಬ್ಸ್ ಆಪೆಲ್ನ 'ಹಾಟ್ ನ್ಯೂಸ್' [[ವೆಬ್ಲಾಗ್]]ನಲ್ಲಿ ಒಂದು ಬಹಿರಂಗ ಪತ್ರ ಪ್ರಕಟಿಸಿದರು. '2008ರ ಫೆಬ್ರವರಿ ತಿಂಗಳಲ್ಲಿ [[ಸಾಫ್ಟ್ವೇರ್ ಡೆವೆಲಪ್ಮೆಂಟ್ ಕಿಟ್]] (SDK) ತೃತೀಯ ಪಕ್ಷದ ಸಾಫ್ಟ್ವೇರ್ ವಿನ್ಯಾಸಕಾರರಿಗೆ ಲಭ್ಯವಾಗುವುದು' ಎಂದು ಅವರು ಅದರಲ್ಲಿ ತಿಳಿಸಿದರು. 2008ರ ಮಾರ್ಚ್ 6ರಂದು, ಆಪೆಲ್ ಟೌನ್ ಹಾಲ್ನಲ್ಲಿ ಐಫೋನ್ SDKಯನ್ನು ಅಧಿಕೃತವಾಗಿ ಘೋಷಿಸಲಾಯಿತು.<ref>{{cite web|url=http://www.engadget.com/2008/03/06/live-from-apples-iphone-press-conference/|title=Live from Apple's iPhone SDK press conference|publisher=[[Engadget]]|date=March 6, 2008}}</ref> ಐಫೋನ್ ಮತ್ತು ಐಪಾಡ್ ಟಚ್ಗಾಗಿ ಸ್ಥಳೀಯ ವಿನಿಯೋಗಳನ್ನು ವಿನ್ಯಾಸ-ಅಭಿವೃದ್ಧಿ ಮಾಡಲು ತಂತ್ರಾಂಶ ರಚನಾಕಾರರಿಗೆ ಅವಕಾಶ ನೀಡುತ್ತದೆ. ಜೊತೆಗೆ 'ಐಫೋನ್ ಸಿಮ್ಯುಲೇಟರ್'ನಲ್ಲಿ ಈ ಸ್ಥಳೀಯ ಅನ್ವಯಿಕೆಗಳನ್ನು ಪರೀಕ್ಷಿಸಲು ಸಹ ಅವಕಾಶ ನೀಡುತ್ತದೆ. ಆದರೂ, [[ಆಪೆಲ್ ಡೆವೆಲಪರ್ ಕನೆಕ್ಷನ್]]ಗೆ ಸದಸ್ಯತ್ವ ಶುಲ್ಕ ಪಾವತಿಸಿದ ನಂತರವೇ ಉಪಕರಣಗಳಲ್ಲಿ ಈ ಅನ್ವಯಿಕೆಗಳನ್ನು ಪ್ರತಿಷ್ಟಾಪಿಸಲು ಸಾಧ್ಯ. [[ಆಪ್ ಸ್ಟೋರ್]] ಮೂಲಕ ವಿತರಿಸಲಾಗುವ ತಮ್ಮ ಅನ್ವಯಿಕೆಗಳಿಗೆ ಬೆಲೆ ನಿರ್ಧರಿಸಲು ತಂತ್ರಾಂಶಗಾರರಿಗೆ ಸ್ವಾತಂತ್ರ್ಯವಿದೆ. ಇದಕ್ಕಾಗಿ ಅವರಿಗೆ 70%ರಷ್ಟು ಪಾಲು ಲಭಿಸುತ್ತದೆ.<ref>{{cite news |first=Michelle |last=Quinn |title=Apple will open App Store in bid to boost iPhone sales |url=http://www.latimes.com/business/la-fi-iphone10-2008jul10,0,3798678.story |work=[[Los Angeles Times]] |date=July 10, 2008 |accessdate=2008-07-10}}</ref>
ಅನ್ವಯಿಕೆಯನ್ನು ಉಚಿತವಾಗಿ ಬಿಡುಗಡೆಗೊಳಿಸಲು ತೃತೀಯ ಪಕ್ಷದ ತಂತ್ರಾಂಶ ವಿನ್ಯಾಸಕರು ಇಚ್ಛಿಸಬಹುದು. ಅವರು ಬಿಡುಗಡೆ ಮತ್ತು ವಿತರಣೆಗಾಗಿ ಯಾವುದೇ ಶುಲ್ಕ ಪಾವತಿಸುವುದಿಲ್ಲ. ಕೇವಲ ಸದಸ್ಯತ್ವ ಶುಲ್ಕ ಮಾತ್ರ ಪಾವತಿಸುವರಷ್ಟೆ. SDKಯನ್ನು ಕೂಡಲೇ ಲಭ್ಯಗೊಳಿಸಲಾಯಯಿತು. ಆದರೆ ಫರ್ಮ್ವೇರ್ ಅಪ್ಡೇಟ್ ಲಭಿಸುವವರೆಗೂ ಅನ್ವಯಿಕೆಗಳ ಬಿಡುಗಡೆಯನ್ನು ಸ್ಥಗಿತಗೊಳಿಸಬೇಕಾಯಿತು. ಫರ್ಮ್ವೇರ್ ಅಪ್ಡೇಟ್ನ್ನು 2008ರ ಜುಲೈ 11ರಂದು ಬಿಡುಗಡೆಗೊಳಿಸಲಾಯಿತು.<ref name="releasedate">{{cite web|url=http://www.apple.com/pr/library/2008/06/09iphone.html|title=Apple Introduces the New iPhone 3G|quote=iPhone 2.0 software will be available on July 11 as a free software update via iTunes 7.7 or later for all iPhone customers|work=[[Apple Inc.]]|date=June 9, 2008}}</ref>
ಐಫೋನ್ ಬಳಕೆದಾರರಿಗೆ ಅಪ್ಡೇಟ್ ಉಚಿತವಾಗಿತ್ತು. ಆದರೆ ಐಫೋನ್ OSನ 1.x ಆವೃತ್ತಿ ಹೊಂದಿರುವ ಐಪಾಡ್ ಟಚ್ ಉಪಕರಣದ ಬಳಕೆದಾರರಿಗೆ ಉಚಿತವಾಗಿರಲಿಲ್ಲ. ಏಕೆಂದರೆ, $10 ಶುಲ್ಕ ಪಾವತಿಸಿದ ನಂತರವೇ ಐಫೋನ್ OSನ ಪ್ರಚಲಿತ ಆವೃತ್ತಿಗೆ ಅಪ್ಡೇಟ್ ಮಾಡಲು ಅವಕಾಶವಿರುತ್ತದೆ.<ref>{{cite web|url=http://www.macworld.com/article/134502/2008/07/ipodtouch.html|title=Is the iPod touch 2.0 update worth $10?|last=Breen|first=Christopher|date=2008-07-15|publisher=[[Macworld]]|accessdate=2009-05-16}}</ref>
ತಂತ್ರಾಂಶ ನಿರ್ಮಾಕರೊಬ್ಬರು ಅಳವಡಿಕೆಯನ್ನು ಆಪ್ ಸ್ಟೋರ್ಗೆ ಕಳುಹಿಸಿದ ನಂತರ ಅದರ ವಿತರಣೆ ಮೇಲೆ ಆಪೆಲ್ನ ಸಂಪೂರ್ಣ, ನಿಶ್ಚಿತ ನಿಯಂತ್ರಣವಿರುತ್ತದೆ. ಉದಾಹರಣೆಗೆ, ಆನುಚಿತ ಅಳವಡಿಕೆಯ ವಿತರಣೆಯನ್ನು ಆಪೆಲ್ ಸ್ಥಗಿತಗೊಳಿಸಬಹುದು. [[US$1000 ಮೌಲ್ಯದ ಮಾದರಿ]]ಯೊಂದು ಅದರ ಬಳಕೆದಾರರ ಸಿರಿವಂತಿಕೆ ಪ್ರದರ್ಶಿಸಲೆಂದೇ ನಿರ್ಮಾಣವಾಗಿತ್ತು. ಇದರ ವಿತರಣೆಯನ್ನು ಕೊನೆಗೆ ಆಪೆಲ್ ಸ್ಥಗಿತಗೊಳಿಸಿತು.<ref name="wsj_article">{{cite web|url=http://wsj.com/article/SB121842341491928977.html| title=IPhone Software Sales Take Off: Apple's Jobs |accessdate=2008-09-03 |archiveurl=http://justamp.blogspot.com/2008/08/iphone-software-sales-take-off-apples.html|archivedate=2008-08-11}}</ref> ಐಫೋನ್ ಕ್ರಿಯಾಸೌಲಭ್ಯ ಸಕ್ರಿಯಗೊಳಿಸಬಲ್ಲ ತೃತೀಯ ಪಕ್ಷದ ಅನ್ವಯಿಕೆಗಳನ್ನು ನಿಷೇಧಿಸಿದ್ದಕ್ಕೆ ಆಪೆಲ್ ತೀವ್ರ ಟೀಕೆ ಎದುರಿಸುತ್ತಿದೆ. ಏಕೆಂದರೆ ಐಫೋನ್ ಇಂತಹ ಕ್ರಿಯಾ-ಸೌಕರ್ಯ ಹೊಂದುವುದು ಆಪೆಲ್ ಸಂಸ್ಥೆಗೆ ಇಷ್ಟವಿರಲಿಲ್ಲ. 2008ರಲ್ಲಿ, ಆಪೆಲ್ [[ಪಾಡ್ಕ್ಯಾಸ್ಟರ್]]ನ್ನು ತಿರಸ್ಕರಿಸಿತು. ಏಕೆಂದರೆ, ಪಾಡ್ಕ್ಯಾಸ್ಟ್ಗಳನ್ನು ನೇರವಾಗಿ ಐಫೋನ್ಗೆ ಡೌನ್ಲೋಡ್ ಮಾಡಿಕೊಳ್ಳುವುದು, ಐಟ್ಯೂನ್ಸ್ನ ಕ್ರಿಯಾ-ಸೌಲಭ್ಯವನ್ನು ನಕಲು ಮಾಡಿದಂತೆ ಎಂಬುದು ಕಾರಣವಾಗಿತ್ತು.<ref>{{cite web|url=http://www.macworld.com/article/135527/2008/09/appstore.html|date=2008-09-12|title=Podcasting app rejected from App Store|publisher=Macworld|accessdate=2009-01-23}}</ref>
ಈ ರೀತಿಯ ಕ್ಷಮತೆ ಹೊಂದಿರುವ ಸಾಫ್ಟ್ವೇರ್ ಅಪ್ಟೇಟ್ನ್ನು ಆಪೆಲ್ ಬಿಡುಗಡೆಗೊಳಿಸಿತು.<ref name="2.2">{{cite web|url=http://www.macworld.com/article/137023/2008/11/iphone_22.html|title=Apple releases iPhone 2.2 update|last=Snell|first=Jason|date=2008-11-21|publisher=Macworld|accessdate=2009-06-10|archive-date=2009-06-22|archive-url=https://web.archive.org/web/20090622084518/http://www.macworld.com/article/137023/2008/11/iphone_22.html|url-status=dead}}</ref>
ನೆಟ್ಷೇರ್ ಇನ್ನೊಂದು ಬೇಡದ ಅಳವಡಿಕೆಯಾಗಿತ್ತು. ಇದರಂತೆ, ಕಂಪ್ಯೂಟರ್ಗೆ ಮಾಹಿತಿ ಸೇರಿಸಲು, ಸೆಲ್ಯುಲರ್ ಜಾಲ ಬಳಸಿ, ಗ್ರಾಹಕರು ತಮ್ಮ ಐಫೋನ್ಗಳನ್ನು ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ಗಳೊಂದಿಗೆ ಸಂಪರ್ಕವೇರ್ಪಡಿಸಬಹುದು.<ref name="Banned apps">{{cite web|url=http://blogs.pcworld.com/staffblog/archives/007748.html|title=Apple App Store Ban: Android, Here's Your Chance|last=Raphael|first=JR|date=September 15, 2008|publisher=[[PC World (magazine)|PC World]]|accessdate=2008-12-13|archive-date=2008-12-07|archive-url=https://web.archive.org/web/20081207035309/http://blogs.pcworld.com/staffblog/archives/007748.html|url-status=dead}}</ref>
SDK ಬಿಡುಗಡೆಯಾಗುವ ಮುಂಚೆ, 'ಸಫಾರಿ' ಮೂಲಕ ನಡೆಯುವ 'ವೆಬ್ ಆಪ್ಸ್'ನ್ನು ವಿನ್ಯಾಸ ಮಾಡಲು ತೃತೀಯ ಪಕ್ಷ(ಬಾಹ್ಯ)ದವರಿಗೆ ಅನುಮತಿ ನೀಡಲಾಗಿತ್ತು.<ref>{{cite web|url=http://www.apple.com/webapps/whatarewebapps.html|title=Apple - Web apps|publisher=Apple|accessdate=2009-05-16}}</ref> ರುಜುಮಾಡದ ಸ್ಥಳೀಯ ಅನ್ವಯಿಕೆಗಳೂ ಸಹ ಲಭ್ಯವಿವೆ.<ref>{{cite news|last=Healey|first=Jon|title=Hacking the iPhone|publisher=[[Los Angeles Times]]|date=August 6, 2007|url=http://www.latimes.com/news/opinion/la-oew-healey6aug06,0,3456267.story|accessdate=2008-06-06}}</ref> ಆಪ್ ಸ್ಟೋರ್ ಹೊರತುಪಡಿಸಿ ಇನ್ನೆಲ್ಲೋ ಖರೀದಿಸಿದ ಸ್ಥಳೀಯ ಅನ್ವಯಿಕೆಗಳನ್ನು ಸ್ಥಾಪಿಸುವ ಸಾಮರ್ಥ್ಯವನ್ನು ಆಪೆಲ್ ಬೆಂಬಲಿಸುವುದಿಲ್ಲ. ಇಂತಹ ಮೂಲ ಅಳವಡಿಕೆಗಳನ್ನು ಯಾವುದೇ ತಂತ್ರಾಂಶ ಅಪ್ಡೇಟ್ ಮೂಲಕ ಛಿದ್ರಗೊಳಿಸಬಹುದು. ಆದರೆ, SIM ಅನ್ಲಾಕಿಂಗ್ ಮಾಡಬಲ್ಲ ತಂತ್ರಾಂಶವನ್ನು ಹೊರತುಪಡಿಸಿ, ಇನ್ಯಾವುದೇ ಸ್ಥಳೀಯ ತಂತ್ರಾಂಶ ಹೊಡೆದು ಹಾಕುವ ತಂತ್ರಾಂಶ ಅಪ್ಡೇಟ್ನ್ನು ವಿನ್ಯಾಸ ಮಾಡುವುದಿಲ್ಲ ಎಂದು ಆಪೆಲ್ ಸ್ಪಷ್ಟಪಡಿಸಿದೆ.<ref>{{cite web|url=http://www.gearlog.com/2007/09/apples_joswiak_we_dont_hate_ip.php|title=Apple's Joswiak: We Don't Hate iPhone Coders|date=September 2007|publisher=gearlog.com|access-date=2010-01-28|archive-date=2007-09-14|archive-url=https://web.archive.org/web/20070914203243/http://www.gearlog.com/2007/09/apples_joswiak_we_dont_hate_ip.php|url-status=dead}}</ref>
=== ಸುಲಭ ಸಾಧ್ಯತೆ ಅಥವಾ ಕೈಗಟುಕುವಂತಹದು ===
ದೃಷ್ಟಿ ತೊಂದರೆಯಿರುವವರಿಗೆ ಐಫೋನ್ ಪಠ್ಯದೃಶ್ಯ ಹಿಗ್ಗಿಸಬಹುದು.<ref name="access vision">{{cite web|url=http://www.apple.com/accessibility/iphone/vision.html|title=Apple — Accessibility — iPhone — Vision|publisher=Apple|accessdate=2008-12-15}}</ref> ಜೊತೆಗೆ, ಶ್ರವ್ಯ ಮಾಂದ್ಯತೆಯುಳ್ಳವರಿಗೆ [[ಶ್ರವ್ಯದ ಕಾರಣಗಳಿಗಾಗಿ]] ಮತ್ತು ಬಾಹ್ಯ [[TTY]] ಉಪಕರಣಗಳನ್ನು ಸಹ ಸೇರಿಸಿಕೊಳ್ಳಬಹುದು.<ref name="access hearing">{{cite web|url=http://www.apple.com/accessibility/iphone/hearing.html|title=Apple — Accessibility — iPhone — Hearing|publisher=Apple|accessdate=2008-12-15}}</ref> ಐಫೋನ್ 3GS ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಬಿಳಿಯ ಅಕ್ಷರಗಳನ್ನು ವೀಕ್ಷಿಸುವ ವ್ಯವಸ್ಥೆ, [[ವಾಯ್ಸ್ಒವರ್]] ([[ಪರದೆಯ ವಿವರ]]), ದೃಷ್ಟಿದೋಸ ತೊಂದರೆಯುಳ್ಳವರಿಗೆ ಪರದೆ ಪ್ರದರ್ಶನವನ್ನು ಹಿಗ್ಗಿಸುವುದು, ಹಾಗೂ, [[ಸೀಮಿತ ಶ್ರವಣ]]ವುಳ್ಳವರಿಗಾಗಿ ಒಂದೇ ಕಿವಿಯ ಮೊನೊ ಆಡಿಯೊ ವ್ಯವಸ್ಥೆಯನ್ನು ಹೊಂದಿದೆ.<ref>{{cite web|url=http://www.apple.com/iphone/iphone-3g-s/accessibility.html|title=Apple - iPhone - Accessibility|date=2009-06-08|publisher=Apple|accessdate=2009-06-08}}</ref> US ನಿಯಮ '[[ಸೆಕ್ಷನ್ 508]]'ನೊಂದಿಗೆ ಹೊಂದಿಕೊಳ್ಳುವಂತೆ ಸೂಚನೆ ನೀಡುವ ಸ್ವಯಂಪ್ರೇರಿತ ಉತ್ಪನ್ನ ಪ್ರವೇಶದ ಟೆಂಪ್ಲೇಟ್ಗಳನ್ನು ಆಪೆಲ್ ನಿಯತ್ತಾಗಿ ಪ್ರಕಟಿಸುತ್ತದೆ.<ref>{{cite web|url=http://www.apple.com/accessibility/resources/|title=Apple - Voluntary Product Accessibility Templates|date=2009-07-18|publisher=Apple|accessdate=2009-07-18}}</ref>
== ಬೌದ್ಧಿಕ ಒಡೆತನ ==
ಐಫೋನ್ ರಚಿಸುವ ತಂತ್ರಜ್ಞಾನಕ್ಕೆ ಸಂಬಂಧಿಸಿ ಸುಮಾರು 200ಕ್ಕೂ ಹೆಚ್ಚು [[ಪೆಟೆಂಟ್ (ಹಕ್ಕು ಸ್ವಾಮ್ಯ)]]ಗಳನ್ನು ಆಪೆಲ್ ದಾಖಲಿಸಿದೆ.<ref>{{cite news|last=Ishimaru|first=Heather|url=http://abclocal.go.com/kgo/story?section=news/business&id=4920783|title=Apple Options Not An Issue At Macworld|publisher=[[KGO-TV|abc7news.com]]|date=January 9, 2007|accessdate=2007-01-11|archive-date=2009-02-06|archive-url=https://web.archive.org/web/20090206203752/http://abclocal.go.com/kgo/story?section=news%2Fbusiness&id=4920783|url-status=dead}}</ref><ref>{{cite web|url=http://www.apple.com/iphone/features/index.html#technology|publisher=[[Apple Inc.]]|title=iPhone — Features — High Technology|accessdate=2008-06-06}}</ref>
[[LG ಪ್ರಾಡಾ]]ದಿಂದ ಐಫೋನ್ನ ವಿನ್ಯಾಸವನ್ನು ನಕಲು ಮಾಡಲಾಗಿದೆಯೆಂದು [[LG ಇಲೆಕ್ಟ್ರಾನಿಕ್ಸ್]] ಹೇಳಿಕೊಂಡಿದೆ. 'ಪ್ರಸ್ತುತ ವಿನ್ಯಾಸವನ್ನು ತಮ್ಮದಾಗಿಸಿಕೊಂಡು, iF ಡಿಸೈನ್ ಅವಾರ್ಡ್ ಸ್ಪರ್ಧೆಯಲ್ಲಿ 2006ರ ಸೆಪ್ಟೆಂಬರ್ನಲ್ಲಿ ಪ್ರಶಸ್ತಿ ಗೆದ್ದಾಗ, ಪ್ರಾಡಾ ಫೋನನ್ನು ಆಪೆಲ್ ನಕಲು ಮಾಡಿದೆ ಎಂದು ನಾವು ಪರಿಗಣಿಸಿದ್ದೇವೆ' ಎಂದು LG ಮೊಬೈಲ್ ದೂರವಾಣಿಯ R&D ಕೇಂದ್ರದ ಮುಖ್ಯಸ್ಥ ವೂ-ಯಂಗ್ ಕ್ವಾಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<ref name="am">{{cite news|url=http://www.applematters.com/article/the-iphone-lawsuits/|title=The iPhone Lawsuits|publisher=Apple Matters|first=Aaron|last=Wright|date=February 20, 2007|accessdate=2007-06-25}}</ref>
1993ರ ಸೆಪ್ಟೆಂಬರ್ 3ರಂದು, [[ಇನ್ಫೊಗಿಯರ್]] ಸಂಸ್ಥೆಯು "I PHONE" ಕುರಿತು U.S. [[ಟ್ರೇಡ್ಮಾರ್ಕ್]] ಗೆ ಅರ್ಜಿ ಸಲ್ಲಿಸಿತು. 1996ರ ಮಾರ್ಚ್ 20ರಂದು 'ಐಫೋನ್' ಟ್ರೇಡ್ಮಾರ್ಕ್ಗಾಗಿ ಅರ್ಜಿ ಸಲ್ಲಿಸಿತು.<ref name="CiscoSuesAppleOver">{{cite news|last=Berlind|first=David|url=http://blogs.zdnet.com/Berlind/?p=284|title=On the eve of a new phone, Apple appears to want in on Cisco’s “iPhone” trademark|date=January 7, 2007|accessdate=2009-01-10|archive-date=2007-02-10|archive-url=https://web.archive.org/web/20070210041453/http://blogs.zdnet.com/Berlind/?p=284|url-status=dead}}</ref> 'I Phone'ನ್ನು 1998ರ ಮಾರ್ಚ್ ತಿಂಗಳಲ್ಲಿ ನೋಂದಾಯಿಸಲಾಯಿತು.<ref name="IPhoneReg96" /> 'ಐಫೋನ್'ನ್ನು 1999ರಲ್ಲಿ ದಾಖಲಿಸಲಾಯಿತು.<ref name="CiscoSuesAppleOver" />
ಅಂದಿನಿಂದಲೂ I PHONE ಟ್ರೇಡ್ಮಾರ್ಕನ್ನು ತ್ಯಜಿಸಲಾಗಿದೆ.<ref name="IPhoneReg96" />
'ಸಮಗ್ರ ದೂರವಾಣಿ, ಮಾಹಿತಿ ಸಂವಹನಗಳು ಮತ್ತು ವೈಯಕ್ತಿಕ ಕಂಪ್ಯೂಟರ್ ಕಾರ್ಯವನ್ನು ಒದಗಿಸುವ ಕಂಪ್ಯೂಟರ್ ಯಂತ್ರಾಂಶ ಮತ್ತು ತಂತ್ರಾಂಶ ಹೊಂದಿರುವ ಸಂವಹನಾ ಸಾಧನಗಳು' - ಇವು ಇನ್ಫೊಗಿಯರ್ ಸಂಸ್ಥೆಯ ಟ್ರೇಡ್ಮಾರ್ಕ್ಗಳ ವ್ಯಾಪ್ತಿಯಲ್ಲಿರುತ್ತವೆ (1993 ದಾಖಲಾತಿ).<ref name="IPhoneReg96" /> 'ಸಮಗ್ರ ದೂರವಾಣಿ, ಮಾಹಿತಿ ಸಂವಹನಗಳ ಜೊತೆಗೆ ಕಂಪ್ಯೂಟರ್-ಚಾಲಿತ ಜಾಗತಿಕ ಮಾಹಿತಿ ಜಾಲಕ್ಕಾಗಿ ಕಂಪ್ಯೂಟರ್ ಯಂತ್ರಾಂಶ ಮತ್ತು ತಂತ್ರಾಂಶ' (1996 ದಾಖಲಾತಿ)<ref>{{cite web|url=http://tarr.uspto.gov/servlet/tarr?regser=serial&entry=75076573|title=Trademark Applications and Registrations Retrieval, serial number 75076573 (IPHONE)|publisher=[[United States Patent and Trademark Office]]|date=July 31, 2006|accessdate=2008-06-06}}</ref> 1998ರಲ್ಲಿ ಐಫೋನ್ ಎಂಬ ಹೆಸರಿನಡಿ ಸಮಗ್ರ[[ವೆಬ್ ಬ್ರೌಸರ್]] ಹೊಂದಿರುವ ದೂರವಾಣಿಯನ್ನು ಇನ್ಫೊಗಿಯರ್ ಬಿಡುಗಡೆಗೊಳಿಸಿತು.<ref name="InfoGearUpgradesPhone">{{cite news|last=Needle|first=David|url=http://www.cnn.com/TECH/computing/9906/10/iphone.idg/index.html|title=InfoGear upgrades phone of the future|publisher=CNN|date=June 10, 1999|accessdate=2007-01-27}}</ref>
2000ರಲ್ಲಿ, ಇನ್ಫೊಗಿಯರ್ iphones.com ಜಾಲತಾಣ ಹೆಸರಿನ ಮಾಲಿಕರ ವಿರುದ್ಧ ಅತಿಕ್ರಮದ ದಾವೆ ಹೂಡಿ ಗೆದ್ದಿತು.<ref name="InfogearTechnologyV">{{cite web|url=http://www.arb-forum.com/domains/decisions/94369.htm|title=InfoGear Technology Corporation v iPhones|publisher=National Arbitration Forum|date=April 13, 2000|accessdate=2008-06-06}}</ref> ಜೂನ್ 2000ರಲ್ಲಿ, [[ಸಿಸ್ಕೊ ಸಿಸ್ಟಮ್ಸ್]] ಐಫೋನ್ ಟ್ರೇಡ್ಮಾರ್ಕ್ ಸಹಿತ ಇನ್ಫೊಗಿಯರ್ನ್ನು ತನ್ನದಾಗಿಸಿಕೊಂಡಿತು.<ref name="CiscoFacesiPhone">{{cite news|last=Kawamoto|first=Dawn|url=http://news.zdnet.com/2100-9595_22-6153865.html|title=Cisco faces iPhone trademark challenge in Canada|publisher=[[ZDNet]]|date=January 26, 2007|accessdate=2008-06-06|archive-date=2008-04-24|archive-url=https://web.archive.org/web/20080424032521/http://news.zdnet.com/2100-9595_22-6153865.html|url-status=dead}}</ref> 2006ರ ಡಿಸೆಂಬರ್ 18ರಂದು ಸಿಸ್ಕೊ ಐಫೋನ್ ಹೆಸರಿನಡಿ ಮರುಹೆಸರಿಸಲಾದ [[ವಾಯ್ಸ್ ಒವರ್ IP]] (VoIP) ದೂರವಾಣಿ ಉಪಕರಣಗಳ ಶ್ರೇಣಿಯನ್ನು ಬಿಡುಗಡೆಗೊಳಿಸಿತು.<ref>{{cite news|last=Smith|first=Tony|url=http://www.theregister.co.uk/2006/12/18/linksys_launches_iphone/|title=iPhone launched... but not by Apple|publisher=The Register|date=December 18, 2006|accessdate=2008-06-06}}</ref>
2002ರ ಅಕ್ಟೋಬರ್ ತಿಂಗಳಲ್ಲಿ, ಆಪೆಲ್ ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, [[ಸಿಂಗಪುರ]] ಮತ್ತು [[ಯುರೋಪ್ ಒಕ್ಕೂಟ]]ಗಳಲ್ಲಿ ಐಫೋನ್ ಟ್ರೇಡ್ಮಾರ್ಕ್ಗಾಗಿ ಅರ್ಜಿ ಸಲ್ಲಿಸಿತು. 2004ರ ಅಕ್ಟೋಬರ್ನಲ್ಲಿ ಕೆನಡಾ ಹಾಗೂ 2006ರ ಸೆಪ್ಟೆಂಬರ್ ತಿಂಗಳಲ್ಲಿ [[ನ್ಯೂಜೀಲೆಂಡ್]] ದೇಶಗಳಲ್ಲಿ ಅರ್ಜಿ ಸಲ್ಲಿಸಲಾಯಿತು. 2006ರ ಅಕ್ಟೋಬರ್ ತಿಂಗಳಲ್ಲಿ ಕೇವಲ ಸಿಂಗಪುರ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಸಲ್ಲಿಸಿದ ಅರ್ಜಿಗಳನ್ನು ಮಂಜೂರು ಮಾಡಲಾಗಿತ್ತು. 2006ರ ಸೆಪ್ಟೆಂಬರ್ ತಿಂಗಳಲ್ಲಿ [[ಟ್ರಿನಿಡ್ಯಾಡ್ ಮತ್ತು ಟೊಬೆಗೊ]] ನಂತರ 'ಒಷಿಯನ್ ಟೆಲಿಕಾಮ್ ಸರ್ವೀಸಸ್ ಸಂಸ್ಥೆಯು ಅಮೆರಿಕಾ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ಡಮ್ ಮತ್ತು [[ಹಾಂಗ್ ಕಾಂಗ್]]ನಲ್ಲಿ 'ಐಫೋನ್' ಟ್ರೇಡ್ಮಾರ್ಕ್ಗಾಗಿ ಅರ್ಜಿ ಸಲ್ಲಿಸಿತು.<ref>{{cite web|url=http://www.ipo.gov.uk/tm/t-find/t-find-number?detailsrequested=C&trademark=E5341301|title=Case details for Community Trade Mark E5341301|publisher=[[UK Intellectual Property Office]]|accessdate=2008-06-06}}</ref> ಒಷಿಯನ್ ಟೆಲಿಕಾಮ್ ಟ್ರೇಡ್ಮಾರ್ಕ್ ಅರ್ಜಿಗಳು ಆಪೆಲ್ ಸಂಸ್ಥೆಯ ನ್ಯೂಜೀಲೆಂಡ್ ಅರ್ಜಿಯಲ್ಲಿ ಬಳಸಿದ ಶಬ್ದ-ಸ್ವರೂಪ ಹೊಂದಿದ್ದ ಕಾರಣ, ಆಪೆಲ್ನ ಪರವಾಗಿ ಒಷಿಯನ್ ಟೆಲಿಕಾಮ್ ಟ್ರೇಡ್ಮಾರ್ಕ್ ಅರ್ಜಿಗಳನ್ನು ಸಲ್ಲಿಸುತ್ತಿದೆಯೆಂದು ಊಹಿಸಲಾಗಿದೆ.<ref>{{cite web|url=http://10layers.com/2006/10/apple-filing-for-iphone-trademarks-worldwide/|title=Apple filing for iPhone trademarks worldwide|publisher=10layers.com|date=October 17, 2006|accessdate=2007-01-28|archive-date=2007-01-13|archive-url=https://web.archive.org/web/20070113014820/http://10layers.com/2006/10/apple-filing-for-iphone-trademarks-worldwide/|url-status=dead}}</ref> ಆಗಸ್ಟ್ 2005ರಲ್ಲಿ [[ಕಾಮ್ವೇವ್]] ಕಂಪೆನಿಯು ಕೆನಡಾದಲ್ಲಿ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿತು. ಮೂರು ತಿಂಗಳ ನಂತರ, ಕಾಮ್ವೇವ್ ಸ್ವತಃ ಟ್ರೇಡ್ಮಾರ್ಕ್ಗಾಗಿ ಅರ್ಜಿಯಲ್ಲಿ ಕೋರಿತು. ಕಾಮ್ವೇವ್ ಎಂಬ ಕಂಪೆನಿಯು 2004ರಿಂದಲೂ ಐಫೋನ್ ಎಂಬ VoIP ಉಪಕರಣಗಳನ್ನು ಮಾರಾಟ ಮಾಡುತ್ತಿದೆ.<ref name="CiscoFacesiPhone" />
ಆಪೆಲ್ ಐಫೋನ್ ಎಂಬ ಉತ್ಪಾದನೆಯನ್ನು ಜೂನ್ 2007ರಲ್ಲಿ ಮಾರಾಟ ಮಾಡಲಿದೆ ಎಂದು ಸ್ಟೀವ್ ಜಾಬ್ಸ್ 2007ರ ಜನವರಿ 9ರಂದು ತಿಳಿಸಿದರು. ಶೀಘ್ರದಲ್ಲಿಯೇ, ವಹಿವಾಟಿನ ಟ್ರೇಡ್ಮಾರ್ಕ್ ಪರವಾನಗೆ ಕುರಿತು ಆಪೆಲ್ನೊಂದಿಗೆ ಚರ್ಚಿಸುತ್ತಿದ್ದೇವೆ ಎಂದು ಸಿಸ್ಕೊ ಹೇಳಿತು. ಹಿಂದಿನ ದಿನ ಸಲ್ಲಿಸಿದ ಅಂತಿಮ ದಾಖಲೆ ಪತ್ರಗಳಲ್ಲಿರುವಂತೆ ಆಪೆಲ್ ಸಮ್ಮತಿಸುವುದೆಂದು ಸಿಸ್ಕೊ ನಿರೀಕ್ಷೆಯಲ್ಲಿತ್ತು.<ref name="AppleHelloiPhone">{{cite news|authorlink=Owen Thomas (journalist)|last=Thomas|first=Owen|url=http://money.cnn.com/2007/01/09/technology/apple_jobs/index.htm|title=Apple: Hello, iPhone|publisher=[[CNN|CNN Money]]|date=January 9, 2007|accessdate=2007-01-27|archive-date=2007-01-27|archive-url=https://web.archive.org/web/20070127044959/http://money.cnn.com/2007/01/09/technology/apple_jobs/index.htm|url-status=dead}}</ref> ಐಫೋನ್ ಟ್ರೇಡ್ಮಾರ್ಕ್ ಅತಿಕ್ರಮದ ಕುರಿತು ಆಪೆಲ್ ವಿರುದ್ಧ ಕಾನೂನು ಸಮರ ಹೂಡಲಾಗಿದೆಯೆಂದು ಸಿಸ್ಕೊ 2007ರ ಜನವರಿ 10ರಂದು ಘೋಷಿಸಿತು. ಮೊಕದ್ದಮೆಯಲ್ಲಿ ಆಪೆಲ್ ಐಫೋನ್ ಹೆಸರನ್ನು ಬಳಸಿಕೊಳ್ಳಬಾರದೆಂಬ ನಿಷೇಧ ಹೇರಲಾಗಿತ್ತು.<ref name="CiscoTrademark">{{cite press release|url=http://newsroom.cisco.com/dlls/2007/corp_011007.html|title=Cisco Sues Apple for Trademark Infringement|publisher=[[Cisco Systems]]|date=January 10, 2007|accessdate=2008-06-06}}</ref> ಇನ್ನಷ್ಟೂ ಇತ್ತೀಚೆಗೆ, ಈ ಟ್ರೇಡ್ಮಾರ್ಕ್ ಮೊಕದ್ದಮೆಯು 'ಸಣ್ಣ ಘರ್ಷಣೆ'ಯಷ್ಟೆ, ಅದು ಹಣದ ಬದಲಾಗಿ ಅಂತರ-ನಿರ್ವಹಣೆಯ ಕುರಿತಾಗಿತ್ತು ಎಂದು ಸಿಸ್ಕೊ ಹೇಳಿಕೊಂಡಿತು.<ref>{{cite news|url=http://news.cnet.com/2100-1047_3-6153339.html|title=Report: Cisco CEO calls iPhone suit 'minor skirmish'|publisher=[[News.com]]|author=[[Reuters]]|date=January 25, 2007|accessdate=2008-06-06}}</ref>
ಉಭಯ ಸಂಸ್ಥೆಗಳು ಮಾತುಕತೆ ನಡೆಸುವ ಸಮಯದಲ್ಲಿ ಅವು ಮೊಕದ್ದಮೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸುವುದಾಗಿ ಆಪೆಲ್ ಮತ್ತು ಸಿಸ್ಕೊ 2007ರ ಫೆಬ್ರವರಿ 2ರಂದು ಹೇಳಿಕೆ ನೀಡಿದವು.<ref>{{cite news|url=http://seattletimes.nwsource.com/html/businesstechnology/2003552200_iphone02.html|title=Cisco, Apple decide to talk over iPhone|first=May|last=Wong|agency=Associated Press|publisher=Seattle Times|date=February 2, 2007|accessdate=2008-06-06}}</ref> ನಂತರ 2007ರ ಫೆಬ್ರವರಿ 20ರಂದು ಒಪ್ಪಂದ ಮಾಡಿಕೊಂಡಿದ್ದೇವೆಂದು ಎರಡೂ ಸಂಸ್ಥೆಗಳು ಪ್ರಕಟಿಸಿದವು. ತಮ್ಮ ಭದ್ರತೆ, ಗ್ರಾಹಕ ಮತ್ತು ವಹಿವಾಟಿನ ಸಂಪರ್ಕದ ಉತ್ಪನ್ನಗಳ ನಡುವೆ ಅಂತರ-ನಿರ್ವಹಣೆ ಪರಿಶೋಧನೆಯ ವಿನಿಮಯವಾಗಿ, 'ಐಫೋನ್' ಹೆಸರನ್ನು<ref>{{cite news|url=http://online.wsj.com/article/SB117211001262715655.html|title=Apple, Cisco Reach Accord Over iPhone|first=Nick|last=Wingfield|publisher=Wall Street Journal|format=fee required|date=February 22, 2007|accessdate=2008-06-06}}</ref> ಬಳಸಲು ಎರಡೂ ಸಂಸ್ಥೆಗಳಿಗೆ ಅವಕಾಶವಿದೆ.<ref>{{cite news|url=http://www.apple.com/pr/library/2007/02/21iphone.html|title=Cisco and Apple Reach Agreement on iPhone Trademark|publisher=[[Apple Inc.]]|date=February 21, 2007|accessdate=2008-04-01}}</ref>
ಹಲವು ಪ್ರಮುಖ ಅಧುನಿಕ ತದ್ರೂಪಿಗಳಿಗೆ ಐಫೋನ್ ಸ್ಫೂರ್ತಿಯಾಗಿದೆ.<ref>{{cite web|url=http://blogs.consumerreports.org/electronics/2008/04/send-in-the-icl.html|title=Send in the iClones|last=Gikas|first=Mike|date=2008-04-08|publisher=[[Consumer Reports]]|accessdate=2009-06-10|archive-date=2009-06-09|archive-url=https://web.archive.org/web/20090609115114/http://blogs.consumerreports.org/electronics/2008/04/send-in-the-icl.html|url-status=dead}}</ref> ಆಪೆಲ್ನ ಜನಪ್ರಿಯತೆ ಹೆಚ್ಚಿಸುವ ಜೊತೆಗೆ, ಗ್ರಾಹಕರು ತಮ್ಮ ಐಫೋನ್ಗಳನ್ನು ಶೀಘ್ರದಲ್ಲಿಯೇ ಉತ್ತಮಗೊಳಿಸಲು ಪ್ರೇರೇಪಿಸಿತು.<ref name="cad">{{cite news|url=http://www.prweb.com/pdfdownload/1349134/pr.pdf|title=Cashing In on the Outdated iPhone|publisher=[[Vocus]]|work=[[PRWeb]]|date=2008-09-01|last=Perepelkin|first=Plato|format=PDF|accessdate=2009-04-08}}{{Dead link|date=ಫೆಬ್ರವರಿ 2026 |bot=InternetArchiveBot |fix-attempted=yes }}</ref>
ಅಕ್ಟೋಬರ್ 22, 2009ರಲ್ಲಿ [[ನೊಕಿಯಾ]] ಆಪೆಲ್ ವಿರುದ್ಧ ಮೊಕದ್ದಮೆ ಹೂಡಿತು. ಕಾರಣ ಆಪೆಲ್ನಿಂದ ತನ್ನ GSM, UMTS ಮತ್ತು WLAN ಗಳಿಂದ ಪೆಟೆಂಟ್ (ಹಕ್ಕು ಸ್ವಾಮ್ಯ) (ಹಕ್ಕು ಸ್ವಾಮ್ಯ)ಗಳ ಉಲ್ಲಂಘನೆ. ಕೆಲವು ವರದಿಯ ಮೂಲಗಳ ಪ್ರಕಾರ, ಐಫೋನ್ನ ಆರಂಭಿಕ ಬಿಡುಗಡೆಯಿಂದ ಆಪೆಲ್ ನೊಕಿಯಾದ ಪೆಟೆಂಟ್ (ಹಕ್ಕು ಸ್ವಾಮ್ಯ) (ಹಕ್ಕು ಸ್ವಾಮ್ಯ)ಗಳಲ್ಲಿನ ಹತ್ತನ್ನು ಉಲ್ಲಂಘಿಸಲಾಗುತ್ತಿದೆ ಎನ್ನಲಾಗಿದೆ.<ref name="nokia-lawsuit">{{Cite web|url=http://www.nokia.com/press/press-releases/showpressrelease?newsid=1349562|title=Nokia sues Apple in Delaware District Court for infringement of Nokia GSM, UMTS and WLAN patents|publisher=Nokia|date=2009-10-22|accessdate=2009-10-24}}</ref>
== ಪರಿಮಿತಿಗಳು ==
[[ಚಿತ್ರ:iPhone unlock v3.png|thumb|ಅನ್ಲಾಕ್ ಆಗಿರುವ ಐಫೋನ್ ಫರ್ಮ್ವೇರ್ ಆವೃತ್ತಿ 3.0. ಕ್ರಮಸಂಖ್ಯೆಯು ಸ್ವ-ಸೆನ್ಸಾರ್ ಆಗಿದೆ.]]
ಐಫೋನ್ನ ಕೆಲವು ಪ್ರಮುಖ ಕಾರ್ಯಅಂಶಗಳನ್ನು ಆಪೆಲ್ ತನ್ನ ಬಿಗಿ ಹಿಡಿತದಲ್ಲಿರಿಸಿಕೊಂಡಿದೆ. [[ಹ್ಯಾಕರ್]] ಸಮುದಾಯವು ಹಲವು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದೆ. ಇದರಿಂದಾಗಿ ಉಪಕರಣದ ವಾರಂಟಿ ಶೂನ್ಯವಾಗುವ ಅಪಾಯವಿದೆ. ಹ್ಯಾಕರ್ಗಳ ಈ ಕೃತ್ಯಗಳನ್ನು ಅಪೆಲ್ ಕಟುವಾಗಿ ಖಂಡಿಸಿದೆ.<ref>{{cite web|url=http://www.iphonealley.com/news/do-iphone-hacks-void-your-warranty|title=Do iPhone Hacks Void Your Warranty?|last=Johnston|first=Michael|date=2007-10-20|publisher=iPhone Alley|accessdate=2009-05-14|archive-date=2010-06-07|archive-url=https://web.archive.org/web/20100607043644/http://www.iphonealley.com/news/do-iphone-hacks-void-your-warranty|url-status=dead}}</ref> ಬಹಳಷ್ಟು ಕಾರ್ಯಲಕ್ಷಣಗಳು ಲಭ್ಯವಾಗುವ ಮುನ್ನ ಎಲ್ಲಾ ಐಫೋನ್ಗಳು (ಮೊಬೈಲ್ ಸೇವಾ ಸಂಸ್ಥೆಯು ನೀಡಿರುವ [[ದೂರವಾಣಿ ಸಂಖ್ಯೆ]]ಹೊಂದುವ ಮೂಲಕ) ಸಕ್ರಿಯವಾಗಿರಬೇಕು. "ಕಾನೂನುಬಾಹಿರ"ಅಥವಾ ಸೀಮಾತೀತ ಬಳಕೆದಾರರು ಆಪ್ ಸ್ಟೋರ್ನಲ್ಲಿ ಅಲಭ್ಯ ಅಳವಡಿಕೆಗಳ ಸ್ಥಾಪಿಸಲು ಅಥವಾ ಮೂಲಭೂತ ಕ್ರಿಯೆ-ಸೌಲಭ್ಯ ಬದಲಿಸಲು ಅವಕಾಶ ನೀಡುತ್ತದೆ. SIM ಅನ್ಲಾಕ್ ಮಾಡುವುದರಿಂದ ಬಳಕೆದಾರರು ತಮ್ಮ ಐಫೋನ್ನ್ನು ಅನ್ಯ ಮೊಬೈಲ್ ಸೇವಾ ಜಾಲಕ್ಕೆ ಒಯ್ಯಲು ಅನುಮತಿ ನೀಡುತ್ತದೆ.<ref>{{cite web|url=http://www.macworld.com/article/132675/2008/03/iphone_sdk_jailbreak.html|title=iPhone hackers look to an uncertain future|last=Moren|first=Dan|date=2008-05-28|publisher=Macworld|accessdate=2009-05-25}}</ref>
=== ಸಕ್ರಿಯಗೊಳಿಸುವಿಕೆ(ಚುರುಕುಗೊಳಿಸುವುದು,ಉತ್ತೇಜಿಸುವುದು) ===
ಸಾಮಾನ್ಯವಾಗಿ, ಅಧಿಕೃತ ಮೊಬೈಲ್ ಸೇವಾ ಸಂಸ್ಥೆಯೊಂದಿಗೆ ದೂರವಾಣಿಯ ರೂಪದಲ್ಲಿ ಸಕ್ರಿಯವಾಗದಿದ್ದಲ್ಲಿ, ಐಫೋನ್ ತನ್ನ ಮೀಡಿಯಾ ಪ್ಲೇಯರ್ ಹಾಗೂ ಜಾಲ ಕಾರ್ಯರೂಪಗಳತ್ತ ಪ್ರವೇಶ ನೀಡುವುದಿಲ್ಲ. ತಾನು ಈ ಷರತ್ತನ್ನು ಮೀರಿ, ಗ್ರಾಹಕರ-ಇಚ್ಚೆ-ಮೇರೆಗೆ ಮಾಡಲಾದ ತಂತ್ರಾಂಶಗಳು ಮತ್ತು ಐಟ್ಯೂನ್ಸ್ ದ್ವಿಮಾನ (ಬೈನರಿ) ಬದಲಾವಣೆಯ ಜೋಡಣೆ ಮೂಲಕ, ಐಫೋನ್ನ ಇತರೆ ಕಾರ್ಯಲಕ್ಷಣಗಳನ್ನು ಅನ್ಲಾಕ್ ಮಾಡಿದ್ದೇನೆಂದು [[ಜಾನ್ ಲೆಕ್ ಜೊಹಾನ್ಸೆನ್]] 2007ರ ಜುಲೈ 3ರಂದು ತಮ್ಮ ಬ್ಲಾಗ್ನಲ್ಲಿ ಹೇಳಿಕೊಂಡಿದ್ದರು. ಇತರರು ಬಳಸಲೆಂದು ಅವರು ತಂತ್ರಾಂಶ ಹಾಗೂ ಆಫ್ಸೆಟ್ಗಳನ್ನು ಪ್ರಕಟಿಸಿದರು.<ref>{{cite news|url=http://nanocr.eu/2007/07/03/iphone-without-att/|title=iPhone Independence Day|publisher=nanocr.eu|first=Jon Lech|last=Johansen|authorlink=Jon Lech Johansen|date=July 3, 2007|accessdate=2008-06-06}}</ref>
ಮೂಲ ಮಾದರಿಗಿಂತಲೂ ಭಿನ್ನವಾಗಿ, ಹಲವು ದೇಶಗಳಲ್ಲಿ ಐಫೋನ್ 3Gಯನ್ನು ಸ್ಟೋರ್ ಮೂಲಕವೇ ಸಕ್ರಿಯಗೊಳಿಸಬೇಕಾಗುವುದು.<ref>{{cite news|url=http://www.maclife.com/article/iphone_3g_in_store_activation_only|title=iPhone 3G — In-Store Activation Only|publisher=[[MacLife]]|first=Roberto|last=Baldwin|date=June 9, 2008|accessdate=2008-06-13|archive-date=2022-03-19|archive-url=https://web.archive.org/web/20220319013736/http://mos.futureplc.com/Mac_life_landing_page.html|url-status=dead}}</ref> ಇದರಿಂದಾಗಿ ಐಫೋನ್ 3Gಯನ್ನು ಹ್ಯಾಕ್ ಮಾಡಲು ಇನ್ನಷ್ಟು ಕಷ್ಟವಾಗುವುದು, ಆದರೆ ಅಸಾಧ್ಯವಲ್ಲ. ಸಂಗ್ರಹಾರಅಥವಾ ತಯಾರಾದ ಉಗ್ರಾಣದಿಂದಲೇ ಸಕ್ರಿಯಗೊಳಿಸುವ ಅಗತ್ಯ, ಹಾಗೂ, ಮೊದಲ ತಲೆಮಾರಿನ ಐಫೋನ್ ಮತ್ತು [[ಐಪಾಡ್ ಟಚ್]] ಬಳಕೆದಾರರು ಅಗಾಧ ಸಂಖ್ಯೆಯಲ್ಲಿ ಐಫೋನ್ OS 2.0ಗೆ ಉತ್ತಮಗೊಳಿಸುವ ಯತ್ನದಿಂದಾಗಿ ವಿಶ್ವಾದ್ಯಂತ ಆಪೆಲ್ [[ಸರ್ವರ್]]ಗಳು 2008ರ ಜುಲೈ 11ರಂದು ಅಪಾರ ಕಾರ್ಯದ ಹೊರೆಗೆ ಒಳಗಾದವು. ಇದೇ ದಿನ, ಐಫೋನ್ 3G ಹಾಗೂ ಐಫೋನ್ OS 2.0 ಅಪ್ಡೇಟ್ಗಳು ಹಾಗೂ [[ಮೊಬೈಲ್ಮಿ]] ಬಿಡುಗಡೆಯಾಗಿದ್ದವು. ಅಪ್ಡೇಟ್ನ ನಂತರ,ಇವುಗಳನ್ನು ದೃಢೀಕರಿಸಲು ಆಪೆಲ್ನ ಸರ್ವರ್ಗಳೊಂದಿಗೆ ಉಪಕರಣಗಳ ಸಂಪರ್ಕವೇರ್ಪಡಿಸಬೇಕಾಯಿತು. ಹಾಗಾಗಿ ಹಲವು ಉಪಕರಣಗಳು ತಾತ್ಕಾಲಿಕ ನಿಷ್ಕ್ರಿಯವಾದವು.<ref>{{cite news|url=https://www.nytimes.com/2008/07/12/business/12iphone.html?_r=1&ref=technology&oref=slogin|title=iPhone Users Plagued by Software Problems.|publisher=New York Times|first=John|last=Markoff|date=July 12, 2008|accessdate=2008-07-13}}</ref> ಇದನ್ನು ತಪ್ಪಿಸಲು, ಐಫೋನ್ 3GS ಬಿಡುಗಡೆಗೆ ಮುಂಚೆ ಆಪೆಲ್ 3.0 ತಂತ್ರಾಂಶವನ್ನು ಹೊರತಂದಿತು.
ಯುನೈಟೆಡ್ ಕಿಂಗ್ಡಮ್ನಲ್ಲಿ [[O2]] ಜಾಲದಲ್ಲಿರುವ ಬಳಕೆದಾರರು ಮುಂಚಿನ ಮಾದರಿಯಂತೆ, ಆನ್ಲೈನ್ ಮೂಲಕ ದೂರವಾಣಿ ಖರೀದಿಸಿ [[ಐಟ್ಯೂನ್ಸ್]] ಮೂಲಕ ಸಕ್ರಿಯಗೊಳಿಸಬಹುದು. ಅಗತ್ಯವಿಲ್ಲದಿದ್ದಾಗಿಯೂ, ಮಾರಾಟಗಾರರು ಸಾಮಾನ್ಯವಾಗಿ ಕೊಳ್ಳುಗರ ಅನುಕೂಲದ ಮೇರೆಗೆ ಸಕ್ರಿಯಗೊಳಿಸುವಿಕೆಯನ್ನು ಮಾಡಿಕೊಡುತ್ತಾರೆ. USನಲ್ಲಿ ಆಪೆಲ್ ಕಡ್ಡಾಯವಾಗಿ ಸ್ಟೋರ್ನಲ್ಲಿಯೇ ಸಕ್ರಿಯಗೊಳಿಸುವ ಷರತ್ತನ್ನು ಹಿಂದೆಗೆದುಕೊಂಡು, ಐಫೋನ್ 3G ಹಾಗೂ (ಲಭ್ಯವಿದ್ದಲ್ಲಿ) iPhone 3GS ಎರಡಕ್ಕೂ ಉಚಿತ ಸಾಗಾಟ ವ್ಯವಸ್ಥೆ ಒದಗಿಸಲು ಮುಂದಾಗಿದೆ. [[ಬೆಸ್ಟ್ ಬಾಯ್]] ಮತ್ತು [[ವಾಲ್-ಮಾರ್ಟ್]] ಮಳಿಗೆಗಳು ಸಹ ಐಫೋನ್ನ್ನು ಮಾರಾಟ ಮಾಡುತ್ತವೆ.<ref name="Buy iPhone">{{cite web|url=http://www.apple.com/iphone/buy/|title=Apple - iPhone - Buy iPhone 3G|publisher=Apple|accessdate=2009-06-14}}</ref>
=== ತೃತೀಯ ಪಕ್ಷದ ಅನ್ವಯಿಕೆಗಳು ("ಹೊರಗಿನವರಿಂದ ನಿಯಮ ಬಾಹಿರ ಬಳಕೆ") ===
ಕೇವಲ ಆಪೆಲ್ನಿಂದ ಮಂಜೂರಾದ [[ಗೂಢಲಿಪಿಯ ರುಜುವಾತು]] ಹೊಂದಿರುವ ತಂತ್ರಾಂಶಗಳನ್ನು ಮಾತ್ರ ಬಳಸುವಂತೆ ಐಫೋನ್ನ ಕಾರ್ಯಾಚರಣಾ ವ್ಯವಸ್ಥೆಯನ್ನು ವಿನ್ಯಾಸ ಮಾಡಲಾಗಿದೆ. ಐಫೋನ್ನ್ನು "[[ನಿಯಮಬಾಹಿರ ಬಳಕೆ]]" ಮಾಡುವ ಮೂಲಕ ಈ ನಿರ್ಬಂಧದಿಂದ ಪಾರಾಗಬಹುದು.<ref>{{cite web|url=http://news.cnet.com/8301-13579_3-9806428-37.htm|title=iPhone jailbreak for the masses released|last=Krazit|first=Tom|date=2007-10-19|publisher=CNET news|accessdate=2009-05-14}}</ref> ಇದರ ಅರ್ಥ, ಐಫೋನ್ನ [[ಫರ್ಮ್ವೇರ್]]ನ್ನು ಅಲ್ಪಮಟ್ಟಿಗೆ ಪರಿವರ್ತಿತ ಆವೃತ್ತಿಯೊಂದಿಗೆ ಬದಲಾಯಿಸುವುದು. ಇದರಿಂದಾಗಿ ರುಜು ತಪಾಸಣೆ ಅಥವಾ ಪರೀಕ್ಷೆಯನ್ನು ತಪ್ಪಿಸಬಹುದು.
ಈ ರೀತಿ ಮಾಡುವುದು ಆಪೆಲ್ನ [[ತಾಂತ್ರಿಕ ರಕ್ಷಣಾ ಕ್ರಮಗಳ]] ಸೀಮಾ ವಲಯ ದಾಟಿ ಹೋಗುವುದೆಂದು ಪರಿಗಣಿಸಲಾಗುವುದು.<ref>{{cite web|url=https://www.wired.com/politics/onlinerights/commentary/circuitcourt/2007/08/circuitcourt_0829|title=Legal or Not, IPhone Hacks Might Spur Revolution|last=Granick|first=Jennifer|date=2007-08-28|publisher=Wired|accessdate=2009-05-14|archiveurl=https://archive.today/20120530045655/http://www.wired.com/politics/onlinerights/commentary/circuitcourt/2007/08/circuitcourt_0829|archivedate=2012-05-30|url-status=live}}</ref>
ಈ ರೀತಿಯ ಹ್ಯಾಕಿಂಗ್ಗೆ DMCA ವಿನಾಯಿತಿಗಾಗಿ [[ಅಮೆರಿಕಾ ಸಂಯುಕ್ತ ಸಂಸ್ಥಾನ ಕೃತಿಸ್ವಾಮ್ಯ ಆಯೋಗ]]ದಲ್ಲಿ ಒತ್ತಡ ಹೇರುತ್ತಿದ್ದ [[EFF]] ಗೆ ಪ್ರತಿಯಾಗಿ ಆಪೆಲ್ ಹೇಳಿಕೆ ಸಲ್ಲಿಸಿತು. ಅದರಂತೆ, ಐಫೋನ್ನ ನಿಯಮಬಾಹಿರ ಕೃತ್ಯದಲ್ಲಿ ಸಿಸ್ಟಮ್ ತಂತ್ರಾಂಶ ತಿದ್ದುವುದರಿಂದ ಇದು ಕೃತಿಸ್ವಾಮ್ಯದ ಉಲ್ಲಂಘನೆಯಾಗುವುದು ಎಂದು ತಿಳಿಸಿತು.
ನಿಯಮ ಬಾಹಿರ ಐಫೋನ್ಗಳು ಐಫೋನ್ [[ವರ್ಮ್]](ಸೋಂಕು)ಗಳಿಗೆ ಈಡಾಗುವ ಸಾಧ್ಯತೆಗಳಿವೆ. ಆಷ್ಲೇ ಟೌನ್ಸ್ ಎಂಬ [[ಆಸ್ಟ್ರೇಲಿಯಾ]]ದ [[ತಾಂತ್ರಿಕ ವಿದ್ಯಾಲಯ]]ದ 21 ವರ್ಷದ ವಿದ್ಯಾರ್ಥಿ ಇದನ್ನು ಸೃಷ್ಟಿಸಿದ್ದನು. ಭದ್ರತೆಯ ವಿಷಯದ ಜಾಗೃತಿಗೆ ತಾನು ಈ ವೈರಸ್ನ್ನು ಸೃಷ್ಟಿಸಿದೆನೆಂದು ಆಷ್ಲೇ ಆಸ್ಟ್ರೇಲಿಯನ್ ಮಾಧ್ಯಮಕ್ಕೆ ತಿಳಿಸಿದನು.<ref>[http://www.abc.net.au/news/stories/2009/11/09/2737673.htm ತಾನು ಮೊದಲ ಐಫೋನ್ ವೈರಸ್ ಸೃಷ್ಟಿಸಿದಳೆಂದು ಒಪ್ಪಿಕೊಂಡ ಆಸ್ಟ್ರೇಲಿಯನ್ ವ್ಯಕ್ತಿ], ಬ್ರಿಜಿಡ್ ಆಂಡರ್ಸೆನ್, [[ABC ಆನ್ಲೈನ್]], 2009-11-09, ಪ್ರವೇಶಿಸಿದ ದಿನಾಂಕ 2009-11-10</ref><ref>{{cite web | url=http://www.computerworld.com/s/article/9140560/Jailbreaking_puts_iPhone_owners_at_risk_says_researcher?taxonomyId=15 | title=Jailbreaking puts iPhone owners at risk, says researcher | access-date=2010-01-28 | archive-date=2011-05-16 | archive-url=https://web.archive.org/web/20110516101021/http://www.computerworld.com/s/article/9140560/Jailbreaking_puts_iPhone_owners_at_risk_says_researcher?taxonomyId=15 | url-status=dead }}</ref> ಕಂಪೆನಿಯ ನಿಯಮಗಳ ಉಲ್ಲಂಘಿಸಿ ಉಪಕರಣಗಳ [[SSH]]ನಲ್ಲಿರುವ ಯಥಾಸ್ಥಿತಿಯ ಪಾಸ್ವರ್ಡ್ನ್ನು ಈ ವೈರಸ್ ಶೋಷಣೆಗೆ ಅವಕಾಶ ನೀಡುತ್ತದೆ. ಬಳಕೆದಾರರ ಉಪಕರಣಗಳನ್ನು '[[ಸೋಂಕಿತ]]'ಗೊಳಿಸುತ್ತದೆ.
=== SIM ಅನ್ಲಾಕ್ ಮಾಡುವುದು ===
[[ಚಿತ್ರ:iPhone SIM Slot.jpg|thumb|right|SIM ಅಳವಡಿಕೆಯು ಸ್ವಲ್ಪ ಈಚೆ ಬಂದಂತೆ ತೋರಿಸಲಾದ ಸಾಚಾ ಐಫೋನ್.]]
ಮಾರಾಟವಾಗುವ ಐಫೋನ್ಗಳಲ್ಲಿ ಬಹಳಷ್ಟು [[SIM ಲಾಕ್]]{{Citation needed|date=August 2009}}ನ್ನು ಹೊಂದಿರುತ್ತವೆ. ಇದರಿಂದಾಗಿ, ಅನ್ಯ ಮೊಬೈಲ್ ಸೇವಾ ಸಂಸ್ಥೆಗಳತ್ತ ವಲಸೆ ಹೋಗದಂತೆ ನಿರ್ಬಂಧಗಳನ್ನು ಹೇರಲಾಗುತ್ತದೆ. ಕಡಿಮೆ ಬೆಲೆಗೆ ದೊರೆಯುವ GSM ಫೋನ್ಗಳೊಂದಿಗೂ ಸಹ ಇದೇ ಪದ್ಧತಿ ಅನುಸರಿಸಲಾಗುತ್ತದೆ. ಹಲವು GSM ಫೋನ್ಗಳಿಗಿಂತಲೂ ಭಿನ್ನವಾಗಿ, ಕೋಡ್ ನಮೂದಿಸುವುದರ ಮೂಲಕ ಐಫೋನ್ನ್ನು ಅಧಿಕೃತವಾಗಿ ಅನ್ಲಾಕ್ ಮಾಡಲು ಸಾಧ್ಯವಿಲ್ಲ. [[IMEI]] ಪ್ರಕಾರ ಐಫೋನ್ನ ಲಾಕ್/ಅನ್ಲಾಕ್ ಸ್ಥಿತಿಯನ್ನು ಆಪೆಲ್ನ ಸರ್ವರ್ಗಳಲ್ಲಿ ಕಾದಿರಿಸಲಾಗಿರುತ್ತದೆ. ಐಫೋನ್ ಸಕ್ರಿಯಗೊಳಿಸಿದಾಗ ಲಾಕ್/ಅನ್ಲಾಕ್ ಸ್ಥಿತಿ ಸೆಟ್ ಮಾಡಲಾಗುತ್ತದೆ.
ಆರಂಭದಲ್ಲಿ ಕೇವಲ SIM ಲಾಕ್ನೊಂದಿಗೆ ಐಫೋನ್ನ್ನು AT&T ಜಾಲದಲ್ಲಿ ಮಾರಾಟವಾದಾಗ, ಹಲವು ಹ್ಯಾಕರ್ಗಳು ವಿಶಿಷ್ಟ ಜಾಲದಿಂದ ಐಫೋನ್ನ್ನು '[[ಅನ್ಲಾಕ್]]' ಮಾಡಲು ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನಿಸಿವೆ.<ref>{{cite web|url=http://www.macworld.com/article/60045/iphone_sim_unlocking.html?loomia_ow=t0:s0:a38:g26:r1:c0.001557:b21009213|title=Unlocking an iPhone|last=Farivar|first=Cyrus|date=2007-11-14|publisher=Macworld|accessdate=2009-05-25|archive-date=2009-06-18|archive-url=https://web.archive.org/web/20090618041336/http://www.macworld.com/article/60045/iphone_sim_unlocking.html?loomia_ow=t0:s0:a38:g26:r1:c0.001557:b21009213|url-status=dead}}</ref> ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕೇವಲ AT&T ಅಧಿಕೃತ ಐಫೋನ್ ಜಾಲ ನಿರ್ವಾಹಕವಾಗಿದೆ. ಆದರೂ ಸಹ, ಅನ್ಲಾಕ್ ಮಾಡಿದ ನಂತರ ಐಫೋನ್ಗಳನ್ನು ಅನಧಿಕೃತ ಜಾಲವಾಹಕದೊಂದಿಗೆ ಬಳಸಬಹುದು.<ref name="bw">{{cite news|url=http://www.businessweek.com/technology/content/sep2008/tc2008091_106953.htm?chan=top+news_top+news+index_news+++analysis|title=What's Hot: Used Apple iPhones: After the iPhone 3G launch, consumers want the original, hackable iPhone, and vendors are springing up to sell them—for a premium|last=Kharif|first=Olga|publisher=[[BusinessWeek]]|date=2008-09-02|accessdate=2009-03-17}}</ref>
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮಾರಾಟವಾದ ಐಫೋನ್ಗಳ ಪೈಕಿ 25%ಕ್ಕಿಂತಲೂ ಹೆಚ್ಚಿನವು AT&Tಯೊಂದಿಗೆ ನೋಂದಾಯಿತವಾಗಿರಲಿಲ್ಲ. ಅವುಗಳನ್ನು ಬಹುಶಃ ದೇಶದಾಚೆ ಒಯ್ದು ಅನ್ಲಾಕ್ ಮಾಡಿಸಲಾಗಿದೆಯೆಂದು ಆಪೆಲ್ ಊಹಿಸಿದೆ. ಐಫೋನ್ 3G ವಿಶ್ವಾದ್ಯಂತ ಬಿಡುಗಡೆಯಾಗುವ ಮುಂಚೆ ಇದರದು ಬಹಳ ಲಾಭದಾಯಕ ಮಾರುಕಟ್ಟೆಯಾಗಿತ್ತು.<ref>{{cite news|url=http://news.bbc.co.uk/1/hi/business/7214873.stm|publisher=BBC News|date=January 28, 2008|title=Quarter of US iPhones 'unlocked'}}</ref> U.S.ನಲ್ಲಿ ಐಫೋನ್ಗಳನ್ನು ಅನ್ಲಾಕ್ ಮಾಡಲು, ಸಂಭಾವ್ಯ ಬಳಕೆದಾರರು ತಮ್ಮ ಮೊಬೈಲ್ ಸೇವಾ ಜಾಲ ವಾಹಕವನ್ನು ಬದಲಿಸಲು ಇಚ್ಛಿಸುವರು; ಅಥವಾ AT&T ವಿಧಿಸುವ ಮಾಸಿಕ ಶುಲ್ಕವು ಬಹಳ ದುಬಾರಿಯೆಂದು ಪರಿಗಣಿಸುವುದು ಈ ಬದಲಾವಣೆ ಮಾಡಿಕೊಳ್ಳಲು ಕಾರಣವಾಗಿವೆ.<ref name="NPD demographics">{{cite web|url=http://www.npd.com/press/releases/press_090622.html|title=iPhone 3G Price Decrease Addresses Key Reason Consumers Exhibit Purchase Resistance|date=2009-06-22|publisher=[[NPD Group]]|accessdate=2009-06-27|archive-date=2009-06-26|archive-url=https://web.archive.org/web/20090626074446/http://www.npd.com/press/releases/press_090622.html|url-status=dead}}</ref>
2007ರ ನವೆಂಬರ್ 21ರಂದು, ಜರ್ಮನಿಯ [[T-ಮೊಬೈಲ್]] ಸಂಸ್ಥೆಯು ಐಫೋನ್ನ್ನು T-ಮೊಬೈಲ್ ಕರಾರಿಲ್ಲದೇ ಮಾರುವುದೆಂದು ಹೇಳಿಕೆ ನೀಡಿತು. ತಮ್ಮ ಪ್ರತಿಸ್ಪರ್ಧಿ [[ವೊಡಾಫೋನ್]] T-ಮೊಬೈಲ್ ವಿರುದ್ಧ ನಿರ್ಭಂದ ಹಾಕಿಸಿದ್ದು T-ಮೊಬೈಲ್ನ ಈ ನಿರ್ಧಾರಕ್ಕೆ ಕಾರಣವಾಯಿತು.<ref>{{cite news|url=http://www.reuters.com/article/technologyNews/idUSWEB918820071121|title=T-mobile to sell Iphone without contract|publisher=Reuters|date=November 21, 2007|accessdate=2008-06-06}}</ref> 2007ರ ಡಿಸೆಂಬರ್ 4ರಂದು ಜರ್ಮನ್ ನ್ಯಾಯಾಲಯವು ಈ ನಿರ್ಭಂದ ತೆರವುಗೊಳಿಸಿ, ಐಫೋನ್ನ್ನು SIM ಲಾಕ್ ಸಹಿತ ಮಾರಾಟ ಮಾಡಲು T-ಮೊಬೈಲ್ಗೆ ಅದರದೇ ಆದ ಪ್ರತ್ಯೇಕ ಹಕ್ಕುಗಳನ್ನು ನೀಡಿತು.<ref>{{cite news|url=http://news.cnet.com/T-Mobile-Germany-stops-selling-unlocked-iPhones/2100-1039_3-6221306.html?tag=nefd.top|title=T-Mobile Germany stops selling unlocked iPhones|publisher=[[CNET]]|date=December 4, 2007|accessdate=2008-06-06}}</ref> ಇದಕ್ಕೂ ಹೆಚ್ಚಾಗಿ, ಕರಾರು ಅಂತ್ಯಗೊಂಡ ನಂತರ,ಕಂಪೆನಿ T-ಮೊಬೈಲ್ ಗ್ರಾಹಕರ ಐಫೋನ್ನ್ನು ಅನ್ಲಾಕ್ ಮಾಡಲು ಸಹಕರಿಸುವುದು.<ref>{{cite news|url=http://www.betanews.com/article/Hamburg_court_relocks_iPhone_in_Germany/1196796105|title=Hamburg court re-locks iPhone in Germany|date=December 4, 2007|accessdate=2008-06-06}}</ref>
[[ಕರಾರು]] ಗಳ ಗಡಿ ಆಚೆ ಇದ್ದರೂ ಸಹ, ಐಫೋನ್ನ್ನು ಅನ್ಲಾಕ್ ಮಾಡಲು ಸುತರಾಂ ಸಾಧ್ಯವಿಲ್ಲ ಎಂದು AT&T ಹೇಳಿದೆ.<ref name="bw" /><ref>{{cite web|url= http://www.wireless.att.com/answer-center/main.jsp?t=solutionTab&ft=searchTab&ps=solutionPanels&locale=en_US&_dyncharset=UTF-8&solutionId=61097&isSrch=Yes|title= Answer Center: What is the unlock code for my iPhone?|publisher= AT&T|accessdate= 2009-05-13|archive-date= 2009-06-15|archive-url= https://web.archive.org/web/20090615215349/http://www.wireless.att.com/answer-center/main.jsp?t=solutionTab&ft=searchTab&ps=solutionPanels&locale=en_US&_dyncharset=UTF-8&solutionId=61097&isSrch=Yes|url-status= dead}}</ref> 2009ರ ಮಾರ್ಚ್ 26ರಂದು, AT&T ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕರಾರು ಒಪ್ಪಂದಗಳಿಲ್ಲದೆ ಐಫೋನ್ನ್ನು ಮಾರಾಟ ಮಾಡಲಾರಂಭಿಸಿತು. ಆದರೂ SIM ಅವರ ಜಾಲಕ್ಕೇ ಮಾತ್ರ ಲಾಕ್ ಸ್ಥಿತಿಯಲ್ಲಿರುತ್ತದೆ.<ref>{{cite web|url=http://news.cnet.com/8301-13579_3-10200602-37.html|title=AT&T: No-contract iPhones coming next week|last=Krazit|first=Tom|date=2009-13-19|publisher=CNET News|accessdate=2009-05-14|archive-date=2009-07-29|archive-url=https://web.archive.org/web/20090729033537/http://news.cnet.com/8301-13579_3-10200602-37.html|url-status=dead}}</ref> ಇಂತಹ ಐಫೋನ್ ಉಪಕರಣಗಳು ಕರಾರುಬದ್ಧ ಐಫೋನ್ಗಳ ಎರಡರಷ್ಟು ದುಬಾರಿ ಬೆಲೆಯದ್ದಾಗಿರುತ್ತವೆ, ಏಕೆಂದರೆ ಆಪೆಲ್ ಮತ್ತು AT&T ಸಂಭವನೀಯ ಆದಾಯ ಕಳೆದುಕೊಳ್ಳುವವು.<ref>{{cite news|url=http://www.pcretailmag.com/news/29052/Orange-to-sell-iPhone-SIM-free-for-749|title=Orange to sell iPhone SIM-free for €749|date=November 29, 2007|accessdate=2008-01-06|publisher=PC Retail Magazine|archive-date=2008-01-17|archive-url=https://web.archive.org/web/20080117165605/http://www.pcretailmag.com/news/29052/Orange-to-sell-iPhone-SIM-free-for-749|url-status=dead}}</ref> 2009ರ ಜುಲೈ 17ರಂದು, ಕರಾರುಒಪ್ಪಂದಗಳಿಲ್ಲದೆ ಐಫೋನ್ಗಳನ್ನು ಮಾರುವುದಿಲ್ಲವೆಂದು AT&T ಹೇಳಿಕೆ ನೀಡಿತು.{{Citation needed|date=September 2009}} ಹಾಂಗ್ಕಾಂಗ್, ಇಟಲಿ, ನ್ಯೂಜೀಲೆಂಡ್ ಮತ್ತು ರಷ್ಯಾ ಸೇರಿದಂತೆ ಇತರೆ ದೇಶಗಳಲ್ಲಿ ಮಾರಾಟಗಾರರು ಐಫೋನ್ಗಳನ್ನು ಯಾವುದೇ ಮೊಬೈಲ್ ಸೇವಾ ಸಾಗಾಟದ ಬದ್ಧವಾಗಿರದೆಯೇ ಮಾರಾಟ ಮಾಡುತ್ತಾರೆ.<ref name="Carrier unlocking list">{{cite web|url=http://support.apple.com/kb/HT1937|title=About activating iPhone 3G with a wireless carrier|date=December 13, 2008|publisher=[[Apple Inc.]]|accessdate=2008-12-14}}</ref> ಆಸ್ಟ್ರೇಲಿಯಾದಲ್ಲಿ ಆಪೆಲ್ ನೇರವಾಗಿ ಅನ್ಲಾಕ್ ಆಗಿರುವ ಐಫೋನ್ಗಳನ್ನು ನೇರವಾಗಿ ಮಾರಾಟ ಮಾಡುತ್ತವೆ. ಜೊತೆಗೆ, ಆಸ್ಟ್ರೇಲಿಯಾದ ನಾಲ್ಕು ಪ್ರಮುಖ ಮೊಬೈಲ್ ಸೇವೆಗಳಾದ [[ತ್ರೀ]], [[ಆಪ್ಟಸ್]], [[ಟೆಲ್ಸ್ಟ್ರಾ]] ಮತ್ತು [[ವೊಡಾಫೋನ್]] ಲಾಕ್ ಆಗಿರುವ ಐಫೋನ್ಗಳನ್ನು ಮಾರಾಟ ಮಾಡುತ್ತವೆ. ಆದರೆ ಅವುಗಳನ್ನು ಕೋರಿಕೆಯ ಮೇರೆಗೆ ಅನ್ಲಾಕ್ ಮಾಡಿಕೊಡುತ್ತವೆ.<ref name="Carrier unlocking list" /><ref name="Apple Store Australia">http://store.apple.com/au/browse/home/shop_iphone/family/iphone?mco=MTE2OTU{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
2009ರ ನವೆಂಬರ್ 10ರಿಂದಲೂ, O2 UK ಗ್ರಾಹಕರಿಗಾಗಿ ಕಾನೂನುಬದ್ಧವಾಗಿ ಫೋನ್ ಅನ್ಲಾಕ್ ಮಾಡುವ ವ್ಯವಸ್ಥೆ ಮಾಡಿದೆ.<ref name="O2 iPhone unlocking form">http://shop.o2.co.uk/update/unlockmyiphone.html{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref>
== ಇದನ್ನೂ ಗಮನಿಸಿ ==
* [[ಐಫೋನ್ ಮಾದರಿಗಳು]]
* [[ಐಫೋನ್ OS]]
** [[ಐಫೋನ್ OS ಆವೃತ್ತಿ ಇತಿಹಾಸ]]
* [[ಐಫೋನ್ನ ಇತಿಹಾಸ]]
* [[ನ್ಯೂಟನ್]]
* [[ಐಪಾಡ್]]
** [[ಐಪಾಡ್ ಟಚ್]]
== ಆಕರಗಳು ==
{{reflist|colwidth=30em}}
== ಬಾಹ್ಯ ಕೊಂಡಿಗಳು ==
* [http://www.apple.com/iphone/ ಆಪೆಲ್ನ ಐಫೋನ್ ಜಾಲತಾಣ]
* [http://support.apple.com/specs/#iphone ತಾಂತ್ರಿಕ ವೈಶಿಷ್ಟ್ಯತೆಗಳು (ಎಲ್ಲಾ ಮಾದರಿಗಳು)]
* {{dmoz|Computers/Systems/Handhelds/Smartphones/iPhone|iPhone}}
* [http://www.thestandard.com/news/2009/01/01/steve-jobs-greatest-macworld-video-hits-1998-2008?page=0%2C10 ಮ್ಯಾಕ್ವರ್ಲ್ಡ್ 2007 ಸಮಾರಂಭದಲ್ಲಿ ಜಾಬ್ಸ್ ಐಫೋನ್ ಬಿಡುಗಡೆಗೊಳಿಸುತ್ತಿರುವ ವೀಡಿಯೊ.] {{Webarchive|url=https://web.archive.org/web/20090803064342/http://www.thestandard.com/news/2009/01/01/steve-jobs-greatest-macworld-video-hits-1998-2008?page=0%2C10 |date=2009-08-03 }}
{{Apple}}
{{DEFAULTSORT:Iphone}}
{{Interwikineeded}}
[[ವರ್ಗ:1991 ಪೀಠಿಕೆಗಳು]]
[[ವರ್ಗ:ಆಪೆಲ್ ಇಂಕ್. ಮೊಬೈಲ್ ದೂರವಾಣಿಗಳು]]
[[ವರ್ಗ:ಆಪೆಲ್ ಪರ್ಸನಲ್ ಡಿಜಿಟಲ್ ಅಸಿಸ್ಟಂಟ್ಸ್]]
[[ವರ್ಗ:ಕ್ಲೌಡ್ ಕ್ಲಯಂಟ್ಸ್]]
[[ವರ್ಗ:ಡಿಜಿಟಲ್ ಆಡಿಯೊ ಪ್ಲೇಯರ್]]
[[ವರ್ಗ:ಐಫೋನ್]]
[[ವರ್ಗ:ಐಫೋನ್ OS]]
[[ವರ್ಗ:ಐಪಾಡ್]]
[[ವರ್ಗ:ಐಟ್ಯೂನ್ಸ್]]
hey8h3qk1nzyg8gjim0cw6z76mivbjm
ಕು ಕ್ಲುಕ್ಸ್ ಕ್ಲಾನ್
0
22933
1379546
1379359
2026-08-08T23:56:35Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379546
wikitext
text/x-wiki
{{Infobox
|title = Ku Klux Klan
|image = [[ಚಿತ್ರ:Klan-in-gainesville.jpg|300px]]
|caption = Ku Klux Klan rally, 1923.
|headerstyle = background:#ccf;
|labelstyle = background:#ddf;
|header1 = In Existence
|label2 = 1st Klan
|data2 = 1865–1870s
|label3 = 2nd Klan
|data3 = 1915–1944
|label4 = 3rd Klan{{smallsup|1}}
|data4 = since 1946
|header5 = Members
|label6 = 1st Klan
|data6 = 550,000
|label7 = 2nd Klan
|data7 = between 3 and 6 million<ref>McVeigh, Rory. "Structural Incentives for Conservative Mobilization: Power Devaluation and the Rise of the Ku Klux Klan, 1915-1925". ''Social Forces'', Vol. 77, No. 4 (Jun., 1999), p. 1463</ref> (peaked in 1920-1925 period)
|header9 = Properties
|label10 = Origin
|data10 = United States of America
|label11 = Political ideology
|data11 = [[White supremacy]]<br />[[White nationalism]]
|label12 = Political position
|data12 = [[Far right]]
|label13 = Religion
|data13 = [[Protestant Christian]]
|belowstyle = background:#ddf;
|below = {{smallsup|1}}<small>The ೩rd Klan is decentralized, with approx. ೧೭೯ chapters.</small>
}}
'''ಕು ಕ್ಲುಕ್ಸ್ ಕ್ಲಾನ್''' ಯನ್ನು (ಮೊದಲನೆಯ ಮಹಾಯುದ್ಧದ ಬಳಿಕ ಹೊರರಾಷ್ಟ್ರಗಳ ಪ್ರಭಾವದ ವಿರುದ್ಧ ಹೋರಾಡುವ ಸಲುವಾಗಿ ಅಮೆರಿಕಾದಲ್ಲಿ ಕಟ್ಟಿದ ಈ ಹೆಸರಿನ ಗುಪ್ತ ಸಂಘ), ಹಲವು ಬಾರಿ '''KKK''' ಎಂದು ಸಂಕ್ಷೇಪಗೊಳಿಸಲಾಗುತ್ತದೆ ಮತ್ತು ಲೋಕಾಭಿರಾಮವಾಗಿ '''ಕ್ಲಾನ್''' ಎಂದು ಪರಿಚಿತ, ಇದು ಹಲವು ಗತ ಮತ್ತು ವರ್ತಮಾನ ಕಾಲದ ಅತಿ ನ್ಯಾಯವಾದ ದ್ವೇಷ ಗುಂಪುಗಳ ಹೆಸರು<ref>KKKಗೆ "ದ್ವೇಷದ ಗುಂಪುಗಳು" ಪದದ ಅನ್ವಯದ ಕೆಲವು ಉದಾಹರಣೆಗಳು:
* [http://www.adl.org/hate_symbols/groups_kkk.asp/ ಆಯ್೦ಟಿ-ಡಿಫಾರ್ಮೇಶನ್ ಲೀಗ್ ] {{Webarchive|url=https://web.archive.org/web/20100615052048/http://adl.org/hate_symbols/groups_kkk.asp |date=ಜೂನ್ 15, 2010 }} ಮತ್ತು [http://www.splcenter.org/get-informed/intelligence-files/ideology/ku-klux-klan/Southern ಪಾವರ್ಟಿ ಲಾ ಸೆಂಟರ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಎರಡೂ ಅದನ್ನು ಅವುಗಳ ದ್ವೇಷ ಪಟ್ಟಿಗಳಲ್ಲಿ ಸೇರಿಸಿವೆ.
* ಅಕ್ಸ್ಟ್ಮ್ಯಾನ್, ಕ್ರಿಸ್. "ಹೌ ದಿ ಸೌಥ್ ಔಟ್ಗ್ರೊ ದಿ ಕ್ಲಾನ್." ಕ್ರಿಶ್ಚಿಯನ್ ಸೈನ್ಸ್ ಮಾನಿಟರ್; ೫/೪/೨೦೦೧, Vol. ೯೩ ಸಂಚಿಕೆ ೧೧೨, p ೧.
* ಲೆವಿನ್, ಬ್ರೈನ್ (ಆಗಸ್ಟ್ ೨೧, ೨೦೦೩). "ಸೈಬರ್ಹೆಟ್: ಎ ಲೀಗಲ್ ಆಯ್೦ಡ್ ಹಿಸ್ಟಾರಿಕಲ್ ಅನಾಲೆಸಿಸ್ ಆಫ್ ಎಕ್ಸ್ಟ್ರೀಮಿಸ್ಟ್ಸ್ ಯುಸ್ ಆಫ್ ಕಂಪ್ಯೂಟರ್ ನೆಟ್ವರ್ಕ್ಸ್ ಇನ್ ಅಮೇರಿಕಾ" ಇನ್ ಪೆರ್ರಿ, ಬರ್ಬರ, ಎಡಿಟರ್. ''ಹೇಟ್ ಆಯ್೦ಡ್ ಬೈಯಾಸ್ ಕ್ರೈಮ್:ಎ ರೀಡರ್.'' [http://books.google.co.uk/books?id=kUa5r4aUCYIC&printsec=frontcover&dq=Hate+and+Bias+Crime:+A+Reader&client=firefox-a&sig=ACfU3U0BTv0Z6yF16DVSMxKh7GOzZQKc5Q#v=onepage&q=&f=false/ ಪಿ.] ೧೧೨ p.[http://books.google.co.uk/books?id=kUa5r4aUCYIC&printsec=frontcover&dq=Hate+and+Bias+Crime:+A+Reader&client=firefox-a&sig=ACfU3U0BTv0Z6yF16DVSMxKh7GOzZQKc5Q#v=onepage&q=&f=false/ ಗೂಗಲ್ ಪುಸ್ತಕಗಳು]
* ಬ್ಲಾಜಕ್,ರಾಂಡಿ. "ವೈಟ್ ಬಾಯ್ಸ್ ಟು ಟೆರರಿಸ್ಟ್ ಮ್ಯಾನ್: ಟಾರ್ಗೆಟ್ ರೆಕ್ಯೂಟ್ಮೆಂಟ್ ಆಫ್ ನಾಜಿ ಸ್ಕಿನ್ಹೆಡ್ಸ್" ಇನ್ ಪೆರ್ರಿ, ಬರ್ಬರ,ಎಡಿಟರ್. ''ಹೇಟ್ ಆಯ್೦ಡ್ ಬೈಯಾಸ್ ಕ್ರೈಮ್:ಎ ರೀಡರ್''. ಪಿ. ೩೨೦. [https://books.google.com/books?id=kzAnYBVwLYoC&pg=PA320&dq=Ku+klux+Klan++%22hate+group%22&lr=&as_drrb_is=q&as_minm_is=0&as_miny_is=&as_maxm_is=0&as_maxy_is=&as_brr=0&cd=7#v=onepage&q=Ku%20klux%20Klan%20%20%22hate%20group%22&f=false/ ಗೂಗಲ್ ಪುಸ್ತಕಗಳು]
* ಗ್ರೆಗೊರಿ ಎಮ್. ಹೆರೆಕ್, ಕೆವಿನ್ ಬೆರ್ರಿಲ್ಲ್, ಕೆವಿನ್ ಟಿ. ಬೆರ್ರಿಲ್ಲ್. "''ಹೇಟ್ ಗ್ರೂಪ್ ಆಕ್ಟಿವಿಟಿ" ಇನ್ ಹೇಟ್ ಕ್ರೈಮ್ಸ್:ಕನ್ಫ್ರಾಂಟಿಂಗ್ ವೈಲೆನ್ಸ್ ಅಗೇನಸ್ಟ್ ಲೆಬಿನಿಯನ್ಸ್ ಆಯ್೦ಡ್ ಗೇ ಮೆನ್''.ಪಿ.೩೧ [https://books.google.com/books?id=ZWT4I2cTCFIC&pg=PA31&dq=Ku+klux+Klan++%22hate+group%22&lr=&as_drrb_is=q&as_minm_is=0&as_miny_is=&as_maxm_is=0&as_maxy_is=&as_brr=0&cd=3#v=onepage&q=Ku%20klux%20Klan%20%20%22hate%20group%22&f=false/ ಗೂಗಲ್ ಪುಸ್ತಕಗಳು]
* ''ಬಾರ್ನೆಟ್ಟ್, ಬ್ರೆಟ್ಟ್ ಎ. ಅನ್ಟ್ಯಾಂಗಲಿಂಗ್ ದಿ ವೆಬ್ ಆಫ್ ಹೇಟ್: ಆರ್ ಆನ್ಲೈನ್ "ಹೇಟ್ ಸೈಟ್ಸ್" ಡಿಸರ್ವಿಂಗ್ ಆಫ್ ಫಸ್ಟ್ ಅಮೆಂಡ್ಮೆಂಟ್ ಪ್ರೊಟೆಕ್ಷನ್? '' ಪಿ.೨೫ [https://books.google.com/books?id=iuQSNj5NxioC&pg=PA137&dq=Ku+klux+Klan++%22hate+group%22&lr=&as_drrb_is=q&as_minm_is=0&as_miny_is=&as_maxm_is=0&as_maxy_is=&as_brr=0&cd=4#v=onepage&q=Ku%20klux%20Klan%20%20%22hate%20group%22&f=false/ ಗೂಗಲ್ ಪುಸ್ತಕಗಳು]
* ಕ್ಯಾನನ್, ಎಜಿ ಆಯ್೦ಡ್ ಕೊಹೆನ್, ವಾರ್ನ್. "ದಿ ಚರ್ಚ್ ಆಫ್ ದಿ ಆಲ್ಮೈಟಿ ವೈಟ್ ಮ್ಯಾನ್-ಎ ನ್ಯಾಸ್ಟಿ ನ್ಯೂ ಸ್ಟ್ರೇನ್ ಆಫ್ ಸಪ್ರಮಸಿ ಎಮರ್ಜ್ಸ್." ಯು.ಎಸ್. ನ್ಯೂಸ್ ಆಯ್೦ಡ್ ವರ್ಲ್ಡ್ ರಿಪೋರ್ಟ್ ಜುಲೈ ೧೯, ೧೯೯೯.
* "ಹೇಟ್ ಸ್ಪ್ರಿಂಗ್ಸ್ ಎಟರ್ನಲ್". ''ಹಾರ್ಪರ್ಸ್ ಮ್ಯಾಗಜೈನ್''. ಮಾರ್ಚ್ ೨೦೦೦, ಸಂಪುಟ. ೩೦೦ ಸಂಚಿಕೆ ೧೭೯೮, p. ೯೬.
* ಡಡ್ಲಿ, ಜೆ.ವೇಯ್ನ್. '' ೧೯೪೦ರ ದಶಕದ "ಹೇಟ್" ಸಂಘ ಸಂಸ್ಥೆಗಳು: ದಿ ಕೊಲಂಬಿಯನ್ಸ್, ಐಎನ್ಸಿ.'' ಫೈಲಾನ್ (೧೯೬೦-), ಸಂಪುಟ. ೪೨, ಸಂಖ್ಯೆ. ೩ (೩ನೇ ಕ್ಯೂಟಿಆರ್., ೧೯೮೧), ಪಿಪಿ. ೨೬೨-೨೭೪.
* ಗ್ರೀನ್, ಜಾಕ್ ಆರ್.,ಎಡಿಟರ್. ''ದಿ ಎನ್ಸೈಕ್ಲೋಪಿಡಿಯಾ ಆಫ್ ಪೊಲೀಸ್ ಸೈನ್ಸ್, ಸಂಪುಟ ೧''. ಪಿಪಿ. ೬೧೩-೬೧೪ [https://books.google.com/books?id=HIE_zF1Rv7MC&pg=PA614&dq=Ku+klux+Klan++%22hate+group%22&lr=&as_drrb_is=q&as_minm_is=0&as_miny_is=&as_maxm_is=0&as_maxy_is=&as_brr=0&cd=12#v=onepage&q=Ku%20klux%20Klan%20%20%22hate%20group%22&f=false/ ಗೂಗಲ್ ಬುಕ್ಸ್]
* ಗೋಲ್ಡ್ಬರ್ಗ್, ರಾಬರ್ಟ್ ಎ. ರಿವಿವ್ ಆಫ್ ''ಹೂಡೆಡ್ ಅಮೇರಿಕನಿಸಮ್: ದಿ ಹಿಸ್ಟರಿ ಆಫ್ ದಿ ಕು ಕ್ಲುಕ್ಸ್ ಕ್ಲಾನ್'' ಬೈ ಡೇವಿಡ್ ಎಮ್.ಚಾಲ್ಮೆರ್ಸ್. ''ದಿ ವಿಸ್ಕಾನ್ಸನ್ ಮ್ಯಾಗಜೈನ್ ಆಫ್ ಹಿಸ್ಟರಿ'', ಸಂಪುಟ. ೬೫, ಸಂಖ್ಯೆ ೩ (ಸ್ಪ್ರಿಂಗ್, ೧೯೮೨), ಪಿಪಿ. ೨೨೫-೨೨೬.</ref>
ಅಮೆರಿಕಾದ ಸಂಯುಕ್ತ ಸಂಸ್ಥಾನದಲ್ಲಿ ಅವರು ಸ್ಪಷ್ಟವಾಗಿ ಹೇಳಿದ ಉದ್ದೇಶವೇನೆಂದರೆ ಹಿಂಸೆ ಮತ್ತು ಭಯದಿಂದ [[ಶ್ವೇತ ಅಮೇರಿಕನ್ನರ]] ಇತರ ಹಿತಾಸಕ್ತಿಗಳನ್ನು ಮತ್ತು ಹಕ್ಕುಗಳನ್ನು ಕಾಪಾಡುವುದು. ಮೊದಲಿಗೆ ಅಂತಹ ಸಂಘ ಸಂಸ್ಥೆಗಳು [[ದಕ್ಷಿಣದ ರಾಜ್ಯಗಳ]]ಲ್ಲಿ ಆರಂಭಗೊಂಡವು ಕೊನೆಗೆ ಇವು ರಾಷ್ಟ್ರೀಯ ಧ್ಯೇಯವಾಗಿ ಬೆಳೆಯಿತು. ಅವರು ಶ್ವೇತ ಸಾಂಪ್ರದಾಯಿಕ ಮಾದರಿಗಳಿಂದ ಕೂಡಿದ ರಗ್ಗುಗಳು, ಮುಖವಾಡಗಳು ಮತ್ತು ಕೋನಾಕಾರದ ಟೋಪಿಗಂತಹ ವೇಷಭೂಷಣಗಳನ್ನು ವೃದ್ದಿಪಡಿಸಿದ್ದರು. ಕೆಕೆಕೆ [[ಟೆರೆರಿಸಮ್]] ಬಳಸುವ ದಾಖಲೆಯನ್ನು ಹೊಂದಿದೆ,<ref name="FBI 2005">{{cite web|url=http://www.fbi.gov/publications/terror/terrorism2002_2005.pdf|title=Terrorism 2002-2005|date=2005|publisher=Federal Bureau of Investigation|pages=16, 34, 40, 63|accessdate=18 February 2010|archiveurl=https://web.archive.org/web/20071211213439/http://www.fbi.gov/publications/terror/terrorism2002_2005.pdf|archivedate=ಡಿಸೆಂಬರ್ 11, 2007|url-status=live}}</ref><ref>ಕೆಕೆಕೆಯನ್ನು ಉಲ್ಲೇಖಿಸಿ ಟೆರರಿಸಮ್ ಬಳಕೆಯ ಕೆಲವು ಉದಾಹರಣೆಗಳು:
* [http://www.fbi.gov/pressrel/pressrel10/oped_011210.htm/Federal ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಪ್ರೆಸ್ ರಿಲೀಸ್-- ಜನವರಿ 12, 2010.]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಪತ್ರಿಕಾ ಪ್ರಕಟಣೆಯಲ್ಲಿ, "ಎಫ್ಬಿಐ ಐತಿಹಾಸಿಕ ವಿಚಾರಗಳನ್ನು ಸಂಗ್ರಹಿಸಿ ವಿಮರ್ಶೆ ಮಾಡಿದೆ, ಅಥವಾ ಕು ಕ್ಲುಕ್ಸ್ ಕ್ಲಾನ್ ಅಥವಾ ಸಂಘಟಿತ ಅಪರಾಧದಂತ ಸೋವಿಯತ್ ಕ್ಕೂಟದ ಪ್ರಾದೇಶಿಕ ಉಗ್ರಗಾಮಿಗಳಿಂದ ಅಪಾಯವಿದೆ." ಎನ್ನುವ ವಿಚಾರವನ್ನು ತಿಳಿಸಲಾಗಿತ್ತು.
* ಗೋಲ್ಡ್ಬರ್ಗ್, ರಾಬರ್ಟ್ ಎ.''"''
''ರಿವಿವ್ ಆಫ್ ಅಮೇರಿಕನಿಸಮ್ : ದಿ ಹಿಸ್ಟರಿ ಆಫ್ ದಿ ಕು ಕ್ಲುಕ್ಸ್ ಕ್ಲಾನ್"'' ಬೈ ಡೇವಿಡ್ ಎಮ್. ಚಾಲ್ಮೇರ್ಸ್ ದಿ ವಿಸ್ಕಾನ್ಸನ್ ಮ್ಯಾಗಜೈನ್ ಆಫ್ ಹಿಸ್ಟರಿ,ಸಂಪುಟ೬೫,ಸಂಖ್ಯೆ. ೩ (ಸ್ಪ್ರಿಂಗ್, ೧೯೮೨), ಪಿಪಿ. ೨೨೫-೨೨೬. ರಿವಿವ್ ಹೀಗೆ ಹೇಳಿದೆ, ಹೊರಗಿನ ಉಗ್ರಗಾಮಿ ಪಡೆಗಳ ಸಂಘಟನೆಗಳ ಪರಿಣಾಮಗಳನ್ನು ಕ್ಲಾನ್ ವಿರಳವಾಗಿ ನಿರಾಕರಿಸುತ್ತಿದ್ದನು. ಅದಕ್ಕಿಂತ ಹೆಚ್ಚಾಗಿ, ಆಂತರಿಕ ಭಿನ್ನಾಭಿಪ್ರಾಯಗಳು,ಕೀಳಾದ ನಾಯಕತ್ವ,ಕಾರ್ಯಕ್ರಮ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ ಅಥವಾ ಉಗ್ರಗಾಮಿ ಚಟುವಟಿಕೆಗಳ ಬಗ್ಗೆ ಅವರ ಒಡನಾಡಿಗಳ ಪ್ರತಿಕ್ರಿಗಳಿಂದ ಕ್ಲಾನ್ಸ್ಮ್ಯಾನ್ ತನ್ನ ಪ್ರಾದೇಶಿಕ ಕು ಕ್ಲುಕ್ಸ್ ಕ್ಲಾನ್ ಘಟಕವನ್ನು ತೊರೆದನು."
* ಬ್ರಯಂಟ್ ಜೊನಾಥನ್, ಎಮ್''"''
''ದಿ ಕು ಕ್ಲುಕ್ಸ್ ಕ್ಲಾನ್ ಇನ್ ದಿ ರೀಕನ್ಸ್ಟ್ರಕ್ಷನ್ ಎರಾ"[http://www.georgiaencyclopedia.org/nge/Article.jsp?id=h-694/ ಫ್ರಂ ದಿ ನ್ಯೂ ಜೋರ್ಜಾ ಎನ್ಸೈಕ್ಲೋಪಡಿಯಾ]{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}''. ಬ್ರಯಂಟ್, "೧೮೬೮ ರಿಂದ ೧೮೭೦ರ ದಶಕದ ಪ್ರಾರಂಭದವರೆಗೆ ಕು ಕ್ಲುಕ್ಸ್ ಕ್ಲಾನ್ (ಕೆಕೆಕೆ) ಸಡಿಲವಾಗಿ ಸಂಘಟಿವಾಗಿರುವ ರಾಜಕೀಯ ಮತ್ತು ಸಾಮಾಜಿಕ ಉಗ್ರಗಾಮಿಗಳ ಗುಂಪಾಗಿ ಕೆಲಸ ಮಾಡಿದ ಕುರಿತಾಗಿ ಬರೆದಿದ್ದಾರೆ." "</ref>
[[ಆಫ್ರಿಕನ್ ಅಮೇರಿಕನ್ನ]]ರನ್ನು [[ಹಿಂಸೆ]] ಮತ್ತು [[ಪೀಡಿಸುವ]] ಮೂಲಕ [[ಗಲ್ಲಿಗೇರಿಸಿ]] ಸಾಯಿಸುತ್ತಿದ್ದರು ಮತ್ತು [[ಯಹೂದಿ]]ಗಳು ಮತ್ತು ಇತರ [[ಅಲ್ಪಸಂಖ್ಯಾತರು]]
[[ರೋಮನ್ ಕ್ಯಾಥೋಲಿಕ್ಸ್]] ಮತ್ತು ಕಾರ್ಮಿಕ [[ಒಕ್ಕೂಟಗಳನ್ನು]] ವಿರೋಧಿಸಿ ಹೆದರಿಸುತ್ತಿದ್ದರು.
ಇಂದು, ಹೆಚ್ಚಿನ ಬಹುಸಂಖ್ಯಾತ ಮೂಲಗಳು ಕ್ಲಾನ್ನನ್ನು ಒಂದು "ವಿದ್ರೋಹಕಾರಕ ಅಥವಾ ಭಯೋತ್ವಾದಕ ಸಂಸ್ಥೆ" ಎಂದು ಪರಿಗಣಿಸುತ್ತದೆ.೦/}<ref name="Lee, Jennifer">{{cite web|url=https://www.nytimes.com/2006/11/06/us/06bowers.html|title=Samuel Bowers, 82, Klan Leader Convicted in Fatal Bombing, Dies |last=Lee|first=Jennifer|date=November 6, 2006|publisher=NY Times|accessdate=2 January 2010}}</ref><ref name="ADL">{{cite web|url=http://www.adl.org/learn/ext_us/kkk/default.asp?LEARN_Cat=Extremism&LEARN_SubCat=Extremism_in_America&xpicked=4&item=kkk|title=About the Ku Klux Klan|publisher=Anti-Defamation League|accessdate=2 January 2010|archive-date=ಡಿಸೆಂಬರ್ 26, 2009|archive-url=https://web.archive.org/web/20091226085812/http://www.adl.org/learn/ext_us/kkk/default.asp?LEARN_Cat=Extremism&LEARN_SubCat=Extremism_in_America&xpicked=4&item=kkk|url-status=dead}}</ref><ref name="Brush, Pete">{{cite web|url=http://www.cbsnews.com/stories/2002/05/28/supremecourt/main510317.shtml|title=Court Will Review Cross Burning Ban|last=Brush|first=Pete|date=May 28, 2002|publisher=CBS News|accessdate=2 January 2010|archive-date=ಅಕ್ಟೋಬರ್ 6, 2010|archive-url=https://web.archive.org/web/20101006224439/http://www.cbsnews.com/stories/2002/05/28/supremecourt/main510317.shtml|url-status=dead}}</ref> ೧೯೯೯ರಲ್ಲಿ, [[ಕ್ಯಾರ್ಲೆಸ್ಟೊನ್, ದಕ್ಷಿಣ ಕ್ಯಾರೊಲಿನಾ]]ದ ನಗರಪಾಲಿಕೆ ಸಭೆ ಕ್ಲಾನ್ ಒಂದು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸುವ ಒಂದು ನಿರ್ಣಯವನ್ನು ಜಾರಿಗೊಳಿಸಿತು.<ref name="Charleston">{{cite web|url=https://news.google.com/newspapers?id=c0wPAAAAIBAJ&sjid=J4YDAAAAIBAJ&pg=6460,2081194&dq=klan+terrorist-organization&hl=en|title=Klan named terrorist organization in Charleston|date=October 14, 1999|publisher=Reuters|accessdate=2 January 2010}}</ref> [[ಲ್ಯೂಯಿಸ್ವಿಲ್ಲ್ ವಿಶ್ವವಿದ್ಯಾನಿಲಯ]]ದಲ್ಲಿ ಒಬ್ಬ ಪ್ರಾಧ್ಯಾಪಕ ಕ್ಲಾನ್ ಒಂದು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸಲಾಗಿದೆ ಆದ್ದರಿಂದ ಅದನ್ನು ಕಾಲೇಜು ಆವರಣದಿಂದ ನಿಷೇಧಿಸಬೇಕು ಎಂದು ಪ್ರಚಾರ ಮಾಡಲು ಆರಂಭಿಸಿದ್ದಾಗ, ೨೦೦೪ರಲ್ಲಿ ಅದೇ ರಿಟಿಯ ಪ್ರಯತ್ನಗಳನ್ನು ಮಾಡಲಾಯಿತು.<ref name="MSNBC">{{cite web|url=http://www.msnbc.msn.com/id/5030023|title=Ban the Klan? Professor has court strategy|date=May 21, 2004|publisher=Associated Press|accessdate=2 January 2010|archive-date=ಅಕ್ಟೋಬರ್ 15, 2010|archive-url=https://web.archive.org/web/20101015004832/http://www.msnbc.msn.com/id/5030023|url-status=dead}}</ref> ಏಪ್ರಿಲ್ ೧೯೯೭ರಲ್ಲಿ, FBI ಗೂಡಾಚಾರಿಗಳು ಡಲ್ಲಾಸ್ನಲ್ಲಿ ಕು ಕ್ಲುಕ್ಸ್ ಕ್ಲಾನ್ನ ನಿಜವಾದ ವೀರ ಯೋಧರ (ಟ್ರು ನೈಟ್ಸ್) ನಾಲ್ಕು ಜನ ಸದಸ್ಯರನ್ನು ಡಕಾಯಿತಿ ಮಾಡುವ ಮತ್ತು ಸ್ವಾಭಾವಿಕ ಅನಿಲ ಸಂರಕ್ಷಣ ಸ್ಥಾವರವನ್ನು ಸ್ಫೋಟಿಸಿ ನಾಶಮಾಡುವ ಪಿತೂರಿಗಾಗಿ ಬಂಧಿಸಲಾಯಿತು.<ref>ಪ್ರಾದೇಶಿಕ ಭಯೋತ್ಪಾದನಿಂದ ಕ್ಲಾನ್ ಪ್ರಮುಖ ಕೀಲಿಕೈಯಾಗಿ ಉಳಿದುಕೊಂಡ [http://dallas.fbi.gov/history.htm ಡ್ಯಾಲಸ್.] {{Webarchive|url=https://web.archive.org/web/20100305075543/http://dallas.fbi.gov/history.htm |date=ಮಾರ್ಚ್ 5, 2010 }}[http://dallas.fbi.gov/history.htm ಎಫ್ಬಿಐ.ಗೊವ್] {{Webarchive|url=https://web.archive.org/web/20100305075543/http://dallas.fbi.gov/history.htm |date=ಮಾರ್ಚ್ 5, 2010 }}</ref>
ಮೊದಲ ಕ್ಲಾನ್ ೧೮೬೫ರಲ್ಲಿ ಕಂಡು ಹಿಡಿಯಲಾಯಿತು, ಅದನ್ನು [[ಒಕ್ಕೂಟದ-ಸದಸ್ಯ ಸೈನ್ಯ]]ದ ನಿಪುಣ [[ಟೆನ್ನೆಸ್ಸ್]] ಕಂಡು ಹಿಡಿದನು. ದಕ್ಷಿಣದ ಉದ್ದಗಲಕ್ಕೂ ಕ್ಲಾನ್ ಗುಂಪುಗಳು ಹರಡಿವೆ. [[ಅಮೇರಿಕದ ಅಸೈನಿಕ ಯುದ್ಧ]]ದ ಪರಿಣಾಮದಲ್ಲಿ ಬಿಳಿಯರ ಶ್ವೇತ ಪ್ರಾಧಾನ್ಯ ಹಿಂತಿರುಗಿಸುವುದು ಕ್ಲಾನ್ನ ಉದ್ದೇಶ. ಕ್ಲಾನ್ [[ಹಲ್ಲೆ]] ಮಾಡುವುದು, ಕೊಲೆ ಮಾಡುವುದು ಮತ್ತು [[ಮುಕ್ತ ಮನುಷ್ಯ]]ರಲ್ಲಿ ಭಯ ಹುಟ್ಟಿಸುವ ಮೂಲಕ [[ಪುನರ್ನಿರ್ಮಾಣ]]ವನ್ನು ಮತ್ತು ರಿಪಬ್ಲಿಕನ್ ಪಾರ್ಟಿಯ ಒಳಗೆ ಬಿಳಿಯರ [[ಪ್ರಗತಿಪರಗಳ]]ನ್ನು ವಿರೋಧಿಸಿತು. ೧೮೭೦ ಮತ್ತು ೧೮೭೧ರಲ್ಲಿ ಸಂಯುಕ್ತ ರಾಷ್ಟ್ರದ ಸರ್ಕಾರ [[ಫೊರ್ಸ್ ಆಕ್ಟ್]]ನ್ನು ಜಾರಿಗೊಳಿಸಿತು, ಅವುಗಳನ್ನು ಕ್ಲಾನ್ ಅಪರಾಧಗಳಿಗೆ ಕಾನೂನು ಕ್ರಮ ಜರುಗಿಸಲು ಬಳಸಲಾಯಿತು. ಕ್ಲಾನ್ ಅಪರಾಧಗಳ ವಿಚಾರಣೆ ಮತ್ತು ಫೊರ್ಸ್ ಕಾಯಿದೆಯ ಚಲಾವಣೆಯು ಕ್ಲಾನ್ ಚಟುವಟಿಕೆಗಳನ್ನು ತಡೆಹಿಡಿಯಿತು. ೧೮೭೪ರಲ್ಲಿ ಮತ್ತು ನಂತರದಲ್ಲಿ, ಆದ್ಯಾಗಿಯೂ, ಹೊಸದಾಗಿ ಸಂಘಟಿಸಿದ ಮತ್ತು ಮುಕ್ತವಾಗಿ ಕ್ರಿಯಶೀಲವಾದ ಅರೆಸೈನಿಕ ಸಂಸ್ಥೆಗಳಾದ [[ವೈಟ್ ಲೀಗ್]] ಮತ್ತು [[ರೆಡ್ ಶರ್ಟ್ಸ್]] ಪ್ರಜಾಪ್ರಭುತ್ವವಾದಿ ಮತದಾನ ವತ್ತು ಕಛೇರಿಯ ಹೊರಗೆ ರಿಪಬ್ಲಿಕನ್ಗಳನ್ನು ನೆಡೆಸುವರನ್ನು ಗುರಿಯಾಗಿಸಿ ಕೊಂಡು ಹಿಂಸೆಯ ಮತ್ತೊಂದು ಹಂತವನ್ನು ಆರಂಭಿಸಿತು. ಇವುಗಳು ೧೯ನೆ ಮತ್ತು ೨೦ನೆ ಶತಮಾನದ ಆರಂಭದಲ್ಲಿ ಶ್ವೇತ [[ಸಂಪ್ರದಾಯವಾದಿ ಪ್ರಜಾಪ್ರಭುತ್ವವಾದಿಗಳು]] ದಕ್ಷಿಣ ರಾಜ್ಯಗಳಲ್ಲಿ ರಾಜಿಕೀಯ ಅಧಿಕಾರವನ್ನು ಪುನಃಪಡೆಯಲು ಕೊಡುಗೆ ನೀಡಿದವು.
೧೯೧೫ರಲ್ಲಿ, ಎರಡನೆಯ ಕ್ಲಾನ್ನನ್ನು ಕಂಡು ಹಿಡಯಲಾಯಿತು. ಯುದ್ಧ ನಂತರದ ಸಾಮಾಜಿಕ ಆತಂಕಗಳ ಕಾಲದಲ್ಲಿ ಇವು ಶೀಘ್ರವಾಗಿ ಬೆಳೆದವು, ಆ ಸಮಯದಲ್ಲಿ ಉತ್ತರದಲ್ಲಿನ ಕೈಗಾರಿಕರಣ, ದಕ್ಷಿಣದ ಮತ್ತು ಪೂರ್ವ [[ಯುರೋಪ್]] ವಲಸೆಗಾರ ಅಸಂಖ್ಯಾತ ಅಲೆಗಳನ್ನು ಮತ್ತು ದಕ್ಷಿಣ ಕರಿಯರು ಮತ್ತು ಬಿಳಿಯರ [[ಮಹಾ ವಲಸೆ]]ಯನ್ನು ಆಕರ್ಷಿಸಿತು. ಎರಡನೆಯ KKK [[ವರ್ಣಭೇದ ನೀತಿ]], [[ಕ್ಯಾಥೋಲಿಕ್ ವಿರೋಧಿ ನೀತಿ]], [[ಸಮತಾವಾದ-ವಿರೋಧಿ ನೀತಿ]], [[ಸಹಜ ಜ್ಞಾನಸಿದ್ದಾಂತ]], ಮತ್ತು [[ಯಹೂದ್ಯಿ-ವಿರೋಧಿ ನೀತಿ]]ಗಳನ್ನು ಭೋಧಿಸಿತು. ಕೆವು ಸ್ಥಳೀಯ ಗುಂಪುಗಳು ನ್ಯಾಯ ವಿಚಾರಣೆಯಿಲ್ಲದೆ ಗಲ್ಲಿಗೇರಿಸುವಿಕೆಗಳು, ಖಾಸಗಿ ಮನೆಗಳ ಮೇಲೆ ದಾಳಿಗಳಲ್ಲಿ ಭಾಗವಹಿಸಿದವು ಮತ್ತು ಇತರೆ ಹಿಂಸಕಾರಕ ಚಟುವಟಿಕೆಗಳನ್ನು ನೆಡೆಸಿದವು. ಕ್ಲಾನ್ ಅದರ ಅತಿ ಹೆಚ್ಚು ಕೊಲೆಗಳು ಮತ್ತು ಹಿಂಸೆಯ ಕ್ರಿಯೆಗಳನ್ನು [[ನ್ಯಾಯ ನಿರ್ಲಕ್ಷ್ಯ]]ದ ಸಾಂಪ್ರದಾಯವನ್ನು ಹೊಂದಿದ್ದ ದಕ್ಷಿಣದಲ್ಲಿ ನೆಡೆಸಿತು.<ref>ಜಾಕ್ಸನ್ ೧೯೯೨ ಇಡಿ., ಪಿಪಿ. ೨೪೧-೨೪೨.</ref>
ಎರಡನೆಯ ಕ್ಲಾನ್ ರಾಷ್ಟ್ರೀಯ ಮತ್ತು ರಾಜ್ಯ ವಿನ್ಯಾಸವನ್ನು ಹೊಂದಿದ, ಒಂದು ಅಧಿಕೃತ [[ಸೋದರರ ಸಂಸ್ಥೆ]]. ೧೯೨೦ರ ಮಧ್ಯದಲ್ಲಿ ಅದರ ಉತ್ತುಂಗದಲ್ಲಿ, ಸಂಸ್ಥೆಯು ರಾಷ್ಟ್ರದ ಆರ್ಹ ಜನಸಂಖ್ಯೆಯ ಸುಮಾರು ಶೇ ೧೫ರಷ್ಟನ್ನು ಒಳಗೊಂಡಿತ್ತು, ಅಂದಾಜು ೪–೫ ಮಿಲಿಯನ್ ಪುರುಷರು.<ref>೧೯೨೦ರ ಜನಗಣತಿಯ ಪ್ರಕಾರ ೧೮ವರ್ಷ ಮತ್ತು ಅದ್ದಕ್ಕಿಂತ ಹಿರಿಯ ವಯಸ್ಸಿನ ಶ್ವೇತವರಣದ ಪುರುಷರ ಸಂಖ್ಯೆ ೩೧ಮಿಲಿಯನ್ ಆದರೆ ಇದರಲ್ಲಿ ಸದಸ್ಯತ್ವಕ್ಕೆ ಹಲವು ಪುರುಷರು ಅನರ್ಹರಾಗಿದ್ದರು ಏಕೆಂದರೆ ಅವರು ಆಗಂತುಕರು, ಯಹೋದಿಗಳು ಅಥವಾ ರೋಮನ್ ಕ್ಯಾಥೋಲಿಕ್ಸ್ ಆಗಿದ್ದರು. ಕ್ಲಾನ್ ಸದಸ್ಯತ್ವ ೧೯೨೦ದಶಕದ ಮಧ್ಯ ಭಾಗದಲ್ಲಿ ೪-೫ಮಿಲಿಯನ್ ಅಷ್ಟು ಮೇಲೇರಿತು. {{cite web |url=http://www.aaregistry.com/african_american_history/2207/The_Ku_Klux_Klan_a_brief__biography |title=The Ku Klux Klan, a brief biography |accessdate= |author= |date= |work= |publisher=[[The African American Registry]] |archive-date=ಏಪ್ರಿಲ್ 3, 2007 |archive-url=https://web.archive.org/web/20070403111321/http://www.aaregistry.com/african_american_history/2207/The_Ku_Klux_Klan_a_brief__biography |url-status=dead }}</ref> ಅಂತರಿಕ ವಿಭಜನೆಗಳು ಮತ್ತು ಬಾಹ್ಯ ವಿರೋಧ ಸದಸ್ಯತ್ವದಲ್ಲಿ ಒಂದು ತೀಕ್ಷಣವಾದ ಇಳಿಕೆಯನ್ನು ತಂದಿತು, ಅದು ೧೯೩೦ರಷ್ಟರಲ್ಲಿ ಸುಮಾರು
೩೦,೦೦೦ ಇಳಿದಿತ್ತು. ಕ್ಲಾನ್ನ ಜನಪ್ರಿಯತೆ [[ಮಹಾ ಆರ್ಥಿಕ ಮುಗ್ಗಟ್ಟು]] ಮತ್ತು [[ಮಹಾ ಯುದ್ಧ II]]ರ ಸಮಯದಲ್ಲಿ ಮತ್ತಷ್ಟು ಕುಸಿಯಿತು.<ref>{{cite web |url=http://www.georgiaencyclopedia.org/nge/Article.jsp?id=h-2730 |title=Ku Klux Klan in the Twentieth Century |accessdate= |author=Lay, Shawn |date= |work=[[The New Georgia Encyclopedia]] |publisher=[[Coker College]] |archive-date=ಅಕ್ಟೋಬರ್ 25, 2005 |archive-url=https://web.archive.org/web/20051025072407/http://www.georgiaencyclopedia.org/nge/Article.jsp?id=h-2730 |url-status=dead }}</ref>
[[ಪೌರ ಹಕ್ಕುಗಳ ಚಳುವಳಿ]] ಮತ್ತು [[ಏಕೀಕರಣ]]ವನ್ನು ವಿರೋಧಿಸುವ ಹಲವು ಸ್ವಾತಂತ್ರ ಗುಂಪುಗಳ ಮೂಲಕ ಕು ಕ್ಲುಕ್ಸ್ ಕ್ಲಾನ್ನ ಹೆಸರನ್ನು ಉಪಯೋಗಿಸಲಾಗುತ್ತಿತ್ತು, ವಿಶೇಷವಾಗಿ ೧೯೫೦ರ ಮತ್ತು ೧೯೬೦ರಲ್ಲಿ. ಆ ಸಮಯದಲ್ಲಿ, ಅವರು ಪದೇಪದೇ ದಕ್ಷಿಣದ ಪೋಲಿಸ್ ಇಲಾಖೆಯ ಜೊತೆ ಒಪ್ಪಂದಗಳ ನಕಲಿ ದಾಖಲೆ ಸೃಷ್ಟಿಸಿದರು, [[ಬಿರ್ಮಿಂಘಮ್, ಅಲಬಾಮ]]ದಲ್ಲಿ; ಅಥವಾ ಗವರ್ನರ್ರ ಕಛೇರಿಗಳ ಜೊತೆಯ ಹಾಗೆ, ಅಲಬಾಮದ [[ಜಾರ್ಜ್ ವಾಲ್ಲಸ್]] ಹಾಗೆ.<ref name="McWhorter">ಮ್ಯಾಕ್ವೋರ್ಟರ್ ೨೦೦೧.</ref> ಪೌರ ಹಕ್ಕುಗಳ ಕಾರ್ಯಕರ್ತರ ಮತ್ತು [[ಬಿರ್ಮಿಂಗ್ಹ್ಯಾಮ್ನಲ್ಲಿನ 16ನೆ ರಸ್ತೆಯ ಬಾಪ್ಟಿಸ್ಟ್ ಚರ್ಚಿನ ಬಾಂಬು ಎಸೆತ]]ದಲ್ಲಿ ಮಕ್ಕಳ ಸಾವು<ref name="Iyoho">{{cite web|url=http://www.marshallnewsmessenger.com/news/content/news/stories/stories/2009/012410_web_fisher.html|title=Marshallite recalls King's Birmingham movement|last=Iyoho|first=Charles|date=January 23, 2010|publisher=Marshall News Messenger|accessdate=19 February 2010}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>, [[NAACP]] ಸಂಘಟಕ [[ಮೆಡ್ಗರ್ ಎವೆರ್ಸ್]] ಹತ್ಯೆ<ref name="Long">{{cite web|url=http://www.theepochtimes.com/n2/content/view/28674/|title=Cold Civil Rights Cases to be Investigated|last=Long|first=Genevieve|date=January 26, 2010|publisher=The Epoch Times|accessdate=19 February 2010|archive-date=ಮೇ 20, 2011|archive-url=https://web.archive.org/web/20110520072755/http://www.theepochtimes.com/n2/content/view/28674/|url-status=dead}}</ref>, ಮತ್ತು ಮೂರು [[ಪೌರ ಹಕ್ಕುಗಳ ಕಾರ್ಯಕರ್ತರ]] ಕೊಲೆಗಳಲ್ಲಿ KKK ಗುಂಪಿನ ಹಲವು ಸದಸ್ಯರನ್ನು ಕೊಲೆಯ ಅಪರಾಧಿಯೆಂದು ತೀರ್ಮಾನಿಸಲಾಯಿತು.<ref name="Linder">{{cite web|url=http://www.law.umkc.edu/faculty/projects/ftrials/price%26bowers/Account.html|title=The Mississippi Burning Trial (U. S. vs. Price et al.)|last=Linder|first=Douglas|publisher=Univ. of Missouri-Kansas City Law School|accessdate=19 February 2010|archive-date=ಅಕ್ಟೋಬರ್ 14, 2008|archive-url=https://web.archive.org/web/20081014003534/http://www.law.umkc.edu/faculty/projects/ftrials/price%26bowers/Account.html|url-status=dead}}</ref> ಇಂದು, ಹೆಚ್ಚು ಕಡಿಮೆ ದೇಶಾದ್ಯಂತ ೫,೦೦೦<ref name="ADL"/>–೮,೦೦೦ ಸದಸ್ಯರನ್ನು ಹೊಂದಿದ ೧೫೦ ಕ್ಲಾನ್ ಸಂಘಗಳಿವೆ ಎಂದು ಸಂಶೋದಕರು ಅಂದಾಜು ಮಾಡುತ್ತಾರೆ.{{Citation needed|date=February 2010}}
== ಮೊದಲ ಕ್ಲಾನ್ ೧೮೬೫–೧೮೭೪ ==
=== ಸೃಷ್ಟಿ ===
[[ಚಿತ್ರ:Kkk-carpetbagger-cartoon.jpg|thumb|250px| ಎ ಕಾರ್ಟೂನ್ ಥ್ರೀಯೇಟಿಂಗ್ ದಟ್ ದಿ ಕೆಕೆಕೆ ವುಡ್ ಲಾನ್ಚ್ ಕಾರ್ಪೆಟ್ಬ್ಯಾಗರ್ಸ್. ಫ್ರಂ ದಿ ಇಂಡಿಪೆಂಡೆನ್ಟ್ ಮಾನಿಟರ್, ಟುಸ್ಕಲೋಸಾ,ಹ್ಯಾಲ್ಬಮಾ,1868.]]
[[ಅಮೆರಿಕದ ಸಿವಿಲ್ ಯುದ್ಧ]]ದ ತಕ್ಷಣದ ಪರಿಣಾಮದಲ್ಲಿ, [[ಪುಲಸ್ಕಿ, ಟೆನ್ನೆಸ್ಸ್]]ನ ಆರು [[ಮಧ್ಯಮ-ವರ್ಗ]] [[ಬೆಂಬಲಿಗ]] ನಿಪುಣರು, ಮೂಲ ಕು ಕ್ಲುಕ್ಸ್ ಕ್ಲಾನ್ನನ್ನು ಡಿಸೆಂಬರ್ ೨೪, ೧೮೬೫ರಂದು ಸೃಷ್ಟಿಸಿದರು.<ref>ಹಾರ್ನ್ ೧೯೩೯, p. ೯. ಸಂಸ್ಥಾಪಕರು [[ಜಾನ್ ಸಿ. ಲೆಸ್ಟೆರ್]], [[ಜಾನ್ ಬಿ.ಕೆನಡಿ]], [[ಜೇಮ್ಸ್ ಆರ್.ಕ್ರೊವ್]], [[ಫ್ರಾಂಕ್ ಒ. ಮ್ಯಾಕೋರ್ಡ್]], [[ರಿಚರ್ಡ್ ಆರ್.ರೀಡ್]] ಮತ್ತು [[ಜೆ.ಕ್ಯಾಲ್ವಿನ್ ಜಾನ್ಸ್]]</ref> ಅದರ ಮೊದಲ ವರ್ಷಗಳಲ್ಲಿ ಗುಂಪಿನ ಹೆಸರಿನ ಮೂಲವು ಮಾದ್ಯಮ ಮತ್ತು ವಿರೋಧಿಗಳಿಂದ ಅನುಮಾನಕ್ಕೆ ಗುರಿಯಾಯಿತು, ಮೆಕ್ಸಿಕೋದ ಪೌರಾಣಿಕ ಕಥೆಗಳಿಂದ ವ್ಯಾಪಿಸಿದ ಸಿದ್ಧಾಂತಗಳೊಂದಿಗೆ ಒಂದು ಜನಪ್ರಿಯವಾಗಿ ಎತ್ತಿ ಹಿಡಿದ ಕಲ್ಪನೆ ಎಂದರೆ "ಕು" ಮತ್ತು "ಕ್ಲುಕ್ಸ್" ಪದಗಳು ಒಂದು ಬೊಲ್ಟ್ ಆಕ್ಷನ್ ಕೋವಿಯ ತುಂಬುವ ಮತ್ತು ಮುಚ್ಚುವುದರ ಶಬ್ದಗಳ [[ಅನುಕರಣ ಶಬ್ದಗಳಿಗೆ ಸಂಬಂಧಿಸಿದ ಪದಗಳಾಗಿವೆ ಎಂಬುದು, ಇಂದಿಗೂ ಈ ಕಲ್ಪನೆ ಹರಡುತ್ತಿದೆ.|ಅನುಕರಣ ಶಬ್ದಗಳಿಗೆ ಸಂಬಂಧಿಸಿದ[[ ಪದಗಳಾಗಿವೆ ಎಂಬುದು, ಇಂದಿಗೂ ಈ ಕಲ್ಪನೆ ಹರಡುತ್ತಿದೆ.<ref>ಚೆಸ್ಟರ್ ಎಲ್. ಕ್ವಾರ್ಲೆಸ್, ದಿ ಕು ಕ್ಲುಕ್ಸ್ ಕ್ಲಾನ್ ಮತ್ತು ಅದಕ್ಕೆ ಸಂಬಂಧಿಸಿದಂತೆ ಜನಾಂಗೀಯವಾದಿ ಮತ್ತು ಯಹೂದ್ಯರ ವಿರೋಧಿ ಸಂಸ್ಥೆಗಳು: ಮ್ಯಾಕ್ ಫರ್ಲನ್ಯಾಂಡ್ ಅವಲೋಕನ 1999
</ref>]]]] ವಾಸ್ತವದಲ್ಲಿ, '' ವಾಸ್ತವದಲ್ಲಿ, ''[[ಕ್ಲಾನ್]]'' ಜೊತೆ [[ಗ್ರೀಕ್]]ನ್ನು (''κυκλος'', ''circle'' ) ಸಂಯೋಜಿಸಿ ಹೆಸರನ್ನು ರೂಪಿಸಲಾಗಿದೆ.<ref>ಹಾರ್ನ್ ೧೯೩೯, p. ೧೧, ರೀಡ್ ಪ್ರಸ್ಥಾಪಿಸಿದರು''{{lang|grc|κύκλος}}'' ''{{lang|grc-Latn|kyklos}}'' ಮತ್ತು ಕೆನಡಿ ''ಕುಲ'' ವನ್ನು ಸೇರಿಸಿದರು ಎಂದು ಹೇಳಿದರು. ವೇಡ್ ೧೯೮೭, p. ೩೩ ಕೆನಡಿ ಎರಡು ವಿಷಯಗಳೊಡನೆ ಬಂದರು, ಆದರೆ ಕ್ರೋವ್ ಬದಲಾಯಿಸಲು''{{lang|grc|κύκλος}}'' ಸಲಹೆ ನೀಡಿದರು''{{lang|grc-Latn|kuklux}}'' ಎಂದು ಹೇಳಿದರು.</ref> ನಿಜಕ್ಕೂ, ಗುಂಪು ಒಂದು ಅತಿ ಕಡಿಮೆ ಅವಧಿಗೆ "ಕುಕ್ಲುಕ್ಸ್ ಕ್ಲಾನ್" ಎಂದು ಪರಿಚಿತವಾಗಿತ್ತು. ಕು ಕ್ಲುಕ್ಸ್ ಕ್ಲಾನ್ ಹಲವು ಅಸಂಖ್ಯಾತ ರಹಸ್ಯ, ಪ್ರಮಾಣ-ಬದ್ಧ ಹಿಂಸೆಯನ್ನು ಬಳಸುವ ಸಂಸ್ಥೆಗಳಲ್ಲಿ ಒಂದು, [[ನ್ಯೂ ಒರ್ಲಿನ್ಸ್]]ನಲ್ಲಿನ ಸದರನ್ ಕ್ರಾಸ್ (೧೮೬೫), ಮತ್ತು ಲ್ಯೂಯಿಸಿಯಾನದಲ್ಲಿನ [[ನೈಟ್ಸ್ ಅಫ್ ದಿ ವೈಟ್ ಕ್ಯಾಮೆಲ್ಲಿಯ]] (೧೮೬೭) ಸೇರಿವೆ.<ref>ಡಬ್ಲ್ಯೂ.ಇ.ಬಿ ಡು ಬೊಯಿಸ್, ''ಬ್ಲಾಕ್ ರೀಕನ್ಸ್ಟ್ರಕ್ಷನ್ ಇನ್ ಅಮೇರಿಕ: ೧೮೬೦–೧೮೮೦'',ನ್ಯೂಯಾರ್ಕ್:ಆಕ್ಸ್ಪರ್ಡ್ ಯೂನಿವರ್ಸಿಟಿ ಪ್ರೆಸ್,೧೯೩೫; ರೀಪ್ರಿಂಟ್, ದಿ ಫ್ರೀ ಪ್ರೆಸ್,೧೯೯೮, pp.೬೭೯-೬೮೦</ref>
KKKಯನ್ನು ಯುದ್ಧ ನಂತರದ ಹಿಂಸೆಯ ಭಾಗವು ಕೇವಲ ಜನಸಂಖ್ಯೆಯಲ್ಲಿ ಹೆಚ್ಚು ಸಂಖ್ಯೆಯ ನಿಪುಣರಿಗೆ ಸಂಬಂಧಿಸದೆ, ಆದರೆ ಬಿಳಿಯರ ಏಕಸಾಮ್ಯತೆಯನ್ನು ಪುನಃಅ ಸ್ಥಾಪಿಸಲು ನ್ಯಾಯಾಲಯದ ಬಾಹ್ಯ ವಿಧಾನವನ್ನು ಬಳಸುವ ಮೂಲಕ ನಾಟಕೀಯವಾಗಿ ಬದಲಾದ ಸಾಮಾಜಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಅವರ ಪ್ರಯತ್ನಗಳಿಗೆ ಸಹ ಸಂಬಂಧಿಸಿದೆ ಎಂದು ಇತಿಹಾಸಕಾರರು ಸಾಮಾನ್ಯವಾಗಿ ಕಾಣುತ್ತಾರೆ. ೧೮೬೬ರಲ್ಲಿ, [[ಮಿಸ್ಸಿಸ್ಸಿಪ್ಪಿ]]ಯ ಗವರ್ನರ್ [[ವಿಲಿಯಮ್ ಎಲ್. ಷಾರ್ಕಿ]] ಹೀಗೆ ವರದಿ ಮಾಡುತ್ತಾರೆ ಅವ್ಯವಸ್ಥೆ, ನಿಯಂತ್ರಣದ ಕೊರೆತೆ ಮತ್ತು ಕಾನೂನು ನಿರ್ಲ್ಯಕ್ಷಗಳು ವ್ಯಾಪಕವಾಗಿ ಹರಡಿದವು; ಕೆಲವು ರಾಜ್ಯಗಳಲ್ಲಿ ಒಕ್ಕೂಟ ಸದಸ್ಯದ ಶಸ್ತ್ರಸಜ್ಜಿತ ತಂಡದ ಸೈನಿಕರು ಮನಸ್ಸಿಗೆ ಬಂದ ಹಾಗೆ ತಿರುಗುತ್ತಿದರು.
ಕ್ಲಾನ್ ಕರಿಯರ ವಿರುದ್ಧ ಸಾರ್ವಜನಿಕ ಹಿಂಸೆಯನ್ನು ಭಯ ಹುಟ್ಟಿಸುವ ಹಾಗೆ ಬಳಸಿದರು. ಅವರು ಮನೆಗಳನ್ನು ಸುಟ್ಟರು, ಮತ್ತು ಕರಿಯರ ಮೇಲೆ ದಾಳಿ ಮಾಡಿ ಮತ್ತು ಸಾಯಿಸಿದರು, ಅವರ ಶವಗಳನ್ನು ರಸ್ತೆಗಳ ಮೇಲೆ ಬಿಡುತ್ತಿದರು.<ref>ಡಬ್ಲ್ಯೂ.ಇ.ಬಿ ಡು ಬೊಯಿಸ್,'' ಬ್ಲಾಕ್ ರೀಕನ್ಸ್ಟ್ರಕ್ಷನ್ ಇನ್ ಅಮೇರಿಕ: ೧೮೬೦–೧೮೮೦'',ನ್ಯೂಯಾರ್ಕ್:ಆಕ್ಸ್ಪರ್ಡ್ ಯೂನಿವರ್ಸಿಟಿ ಪ್ರೆಸ್,೧೯೩೫; ರೀಪ್ರಿಂಟ್, ದಿ ಫ್ರೀ ಪ್ರೆಸ್,೧೯೯೮, p. ೬೭೧-೬೭೫.</ref>
[[ಚಿತ್ರ:Anti-kkk-cartoon.jpg|thumb|ಎ ಪೊಲಿಟಿಕಲ್ ಕಾರ್ಟೂನ್ ಡಿಪಿಕ್ಟಿಂಗ್ ದಿ ಕೆಕೆಕೆ ಆಯ್೦ಡ್ ದಿ ಡೇಮಾಕ್ರೆಟಿಕ್ ಪಾರ್ಟಿ ಆಯ್ಸ್ ಕನ್ಟಿನ್ಯೂಯೇಷನ್ಸ್ ಆಫ್ ದಿ ಕಾನ್ಫೆಡರ್ಸಿ]]
ಅಂತಿವಾಗಿ ಪ್ರಾದೇಶಿಕ ಪ್ರಕರಣಗಳನ್ನು ರಾಷ್ಟ್ರೀಯ ಕೇಂದ್ರ ಕಾರ್ಯಾಲಯಕ್ಕೆ ವರದಿ ಮಾಡುವುದರ ಜೊತೆಗೆ ೧೮೬೭ರಲ್ಲಿ [[ಟೆನೆಸ್ಸಿಯ ನ್ಯಾಶ್ವಿಲ್ಲೆಯಲ್ಲಿ]] ಸೇರಿದ್ದ ಸಭೆಯಲ್ಲಿ ಕ್ಲಾನ್ ಸದಸ್ಯರು ಒಟ್ಟಾಗಿ ಒಂದು ಶ್ರೇಣಿ ವ್ಯವಸ್ಥೆಯಯುಳ್ಳ ಸಂಸ್ಥೆಯನ್ನು ಸೃಷ್ಠಿಸಲು ಪ್ರಯತ್ನಿಸಿದರು. ಅವರು [[ಬ್ರೈಯನ್ ಎ.ಸ್ಕ್ಯಾಟೆಸ್]] ಅವರನ್ನು ಈ ಸಂಸ್ಥೆಯ ನಾಯಕ ಮತ್ತು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು. ಅನಂತರದಲ್ಲಿ ಹೆಚ್ಚಿನ ಕ್ಲಾನ್ ಸದಸ್ಯರು ಪರಿಣಿತರಾಗಿ, ಅವರು ಸಂಸ್ಥೆಗೆ ಶ್ರೇಣಿ ವ್ಯವಸ್ಥೆಯ ರಚನೆಯನ್ನು ಬಳಸಿದರು ಆದರೆ ವಾಸ್ತವಾಂಶವೆಂದರೆ ಈ ರಚನೆಯ ಅಡಿಯಲ್ಲಿ ಕ್ಲಾನ್ ಎಂದೂ ಕೆಲಸ ನಿರ್ವಹಿಸಲಿಲ್ಲ. ಮಾಜಿ ಬ್ರಿಗೇಡಿಯರ್ ಜನರಲ್ [[ಜಾರ್ಜ್ ಗೊರ್ಡಾನ್]] ''ಕಾನೂನುಕಟ್ಟಳೆ'' ಅಥವಾ ಕ್ಲಾನ್ ಡೊಗ್ಮಾವನ್ನು ವೃದ್ಧಿಪಡಿಸಿದ್ದನು. ಕಾನೂನುಕಟ್ಟಳೆ ಬಿಳಿಯರು ಸರ್ವಶ್ರೇಷ್ಠರೆಂಬ ಸಿದ್ಧಾಂತವನ್ನು ನಂಬುವಂತೆ ಸೂಚಿಸಿತ್ತು. ಉದಾಹರಣೆಗೆ, ಅರ್ಜಿದಾರ ತಾನು "ಶ್ವೇತಾ ಜನರ ಸರ್ಕಾರದ" ಪರ ಕೇಳಬೇಕಾಗಿತ್ತು, ದಕ್ಷಿಣದ ಬಿಳಿ ಜನರು ಪುನರ್ ವಿಮೋಚನೆ ಮತ್ತು ಬಂಧ ಮುಕ್ತಿ ಮತ್ತು ದಕ್ಷಿಣ ವಲಯದ ಜನರ ಎಲ್ಲಾ ಹಕ್ಕುಗಳನ್ನು ಪುನಃ ಸ್ವಾಧೀನ ಪಡಿಸಲಾಯಿತು."<ref>{{cite web |url=http://www.albany.edu/faculty/gz580/his101/kkk.html |title=Ku Klux Klan, Organization and Principles, 1868 |accessdate= |author= |date= |work= |publisher=[[State University of New York at Albany]] |archive-date=ಮಾರ್ಚ್ 3, 2016 |archive-url=https://web.archive.org/web/20160303192240/http://www.albany.edu/faculty/gz580/his101/kkk.html |url-status=dead }}</ref> [[ಐರನ್ಕ್ಲ್ಯಾಡ್ ಒಥ್]]ಗೆ ಪತ್ರ ಉಲ್ಲೇಖವಾಗಿತ್ತು, ಅದು ಅವರು ಸಂಘಕ್ಕೆ ವಿರುದ್ದವಾಗಿ ಧ್ವನಿ ಎತ್ತಲಿಲ್ಲವೆಂದು ಪ್ರಮಾಣ ಮಾಡಲು ನಿರಾಕರಿಸಿದ ಬಿಳಿ ಜನರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದರು,ಅದಾಗ್ಯೂ ರೂಢಿಯ ಆಚರಣೆಯಲ್ಲಿ ಸಣ್ನ ಪ್ರಮಾಣದ ಬಿಳಿಯರನ್ನು ವಿಮುಕ್ತ ಗೊಳಿಸಲಾಯಿತು.
[[ಟೆನೆಸ್ಸಿಯ ಮೆಮ್ಫಿಸ್ನಲ್ಲಿ]] ಅಕಸ್ಮಾತಾಗಿ ಕ್ಲಾನ್ ಕುರಿತು ಗೊರ್ಡಾನ್ ಮಾಜಿ [[ಸ್ಲೇವ್ ಟ್ರೆಡರ್]] ಮತ್ತು ಒಕ್ಕೂಟದ ಜನರಲ್ [[ನಾಥನ್ ಬೆಡ್ಫೊರ್ಡ್ ಫೊರೆಸ್ಟ್]] ಹೇಳಿದರು.
ಅದಕ್ಕೆ ಫೊರೆಸ್ಟ್ "ಅದು ಒಳ್ಳೆಯ ವಿಷಯ; ಅದು ಖಂಡಿಸುವಂತಹ ಒಳ್ಳೆಯ ವಿಷಯ ಎಂದು ಆಪಾದನೆಯ ನುಡಿಗಳಿಂದ ಅಸಮಾಧಾನವಾಗಿ ಪ್ರತಿಕ್ರಿಯಿಸಿದರು. ನಾವು ಅದನ್ನು ಬಳಸಿಕೊಂಡು ಅವರ ಸ್ಥಾನದಲ್ಲಿ [[ಕಪ್ಪುಜನರ]]ನ್ನು ಇಡೋಣ."<ref>ಹಾರ್ನ್ ೧೯೩೯. ಕಥೆಯಲ್ಲಿನ ಕೆಲ ಬೇರೆ ರೂಪಕಗಳ ಬಗ್ಗೆ ಹಾನ್ ಅವರಿಗೆ ಅನುಮಾನ ಮೂಡಿದತು.</ref> ಕೆಲವು ವಾರಗಳ ನಂತರ, ಫೊರೆಸ್ಟ್ರವರು ಕ್ಲಾನ್ನ ರಾಷ್ಟ್ರೀಯ ನಾಯಕ [[ಗ್ರ್ಯಾಂಡ್ ವಿಜರ್ಡ್]] ಆಗಿ ಆಯ್ಕೆಯಾದರು ಆದಾಗ್ಯೂ ಅವರು ತಮ್ಮ ನಾಯಕತ್ವವನ್ನು ನಿರಾಕರಿಸುತ್ತಿದ್ದರು.
[[ಚಿತ್ರ:NathanBedfordForrest.jpg|thumb|ನಾಥನ್ ಬೆಡ್ಪೋರ್ಡ್ ಫಾರ್ರೆಸ್ಟ್]]
೧೮೬೮ರಲ್ಲಿ ಒಂದು ಪತ್ರಿಕೆಯ ಸಂದರ್ಶನದಲ್ಲಿ ಫೊರೆಸ್ಟ್ರವರು [[ಲಾಯಲ್ ಲೀಗ್]], [[ಗಣತಂತ್ರವಾದಿ]] ರಾಜ್ಯ ಸರ್ಕಾರಗಳು, ಟೆನೆಸ್ಸಿ ಗೌರ್ನರ್ [[ಬ್ರೊವ್ನ್ಲೊ]] ಮತ್ತು ಇತರ [[ಕಾರ್ಪೆಟ್ ಬ್ಯಾಗರ್ಸ್]] ಮತ್ತು [[ಕೆಲಸಕ್ಕೆ ಬಾರದವರು]] ಇವರುಗಳು ಕ್ಲಾನ್ಸ್ ಪ್ರಾಥಮಿಕ ವಿರೋಧಿಳಾಗಿದ್ದರೆಂದು ಹೇಳಿದ್ದರು. ದಕ್ಷಿಣದ ಹಲವರು ಕಪ್ಪುಜನರು ರಿಪಬ್ಲಿಕನ್ ಪಾರ್ಟಿಗೆ ಮತನೀಡುತ್ತಾರೆಂದು ನಂಬಿದ್ದರು, ಏಕೆಂದರೆ [[ಲಾಯಲ್ ಲೀಗ್]]ನಿಂದ ಅ ಜನರು ವಂಚನೆಗೆ ಒಳಗಾಗಿದ್ದರು ಎಂದು ಅವರು ವಾದಿಸಿದರು. ವನ್ ಹ್ಯಾಲ್ಬಮ ಪತ್ರಿಕೆಯ ಸಂಪಾದಕ " ಲೀಗ್ ಕಪ್ಪುಚರ್ಮದವರ ಕು ಕ್ಲುಕ್ಸ್ ಕ್ಲಾನ್ಗಿಂತ ಹೆಚ್ಚೇನೂ ಇಲ್ಲವೆಂದು ಪ್ರಕಟಿಸಿದರು."<ref>ಹಾರ್ನ್ ೧೯೩೯, p. ೨೭.</ref>
ಗೊರ್ಡಾನ್ಸ್ ಮತ್ತು ಫೊರ್ರಸ್ಟ್ರವರುಗಳ ಕೆಲಸ ಹಾಗಿದ್ದರೂ,ಕಾನೂನುಕಟ್ಟಳೆಯನ್ನು ಪ್ರಾದೇಶಿಕ ಕ್ಲಾನ್ ಘಟಕಗಳು ಒಪ್ಪಲಿಲ್ಲ ಮತ್ತು ಮ್ಮ ಸ್ವಯಂ ಆಡಳಿತವನ್ನು ಮುಂದುವರೆಸಿದವು. ಅಲ್ಲಿ ಶ್ರೇಣಿಯ ವ್ಯವಸ್ಥೆ ಮಟ್ಟಗಳು ಅಥವಾ ರಾಜ್ಯ ಕೇಂದ್ರ ಕಾರ್ಯಾಲಯ ಎಂದಿಗೂ ಇರಲಿಲ್ಲ. ಕ್ಲಾನ್ ಸದಸ್ಯರು ತಮ್ಮ ಹಳೆ ದ್ವೇಷ ಮತ್ತು ಪ್ರಾದೇಶಿಕ ವಿರೋಧಿಗಳನ್ನು ಇತ್ಯರ್ಥಮಾಡುವುದಕ್ಕೆ ಹಿಂಸೆಯನ್ನು ಬಳಸಿದರು,ಭಂಗವನ್ನುಂಟು ಮಾಡಿದ ಯುದ್ದ ನಂತರದ ಸಮಾಜದಲ್ಲಿ ಬಿಳಿಯರ ಪ್ರಾಬಲ್ಯವನ್ನು ಪುನಃಸ್ಥಾಪನೆ ಮಾಡುವ ಸಲುವಾಗಿ ಅವರು ಕೆಲಸ ಮಾಡಿದರು. ಹಿಸ್ಟೋರಿಯನ್ [[ಎಲೈನ್ ಫ್ರಾಂಟ್ಜ್ ಪ್ಯಾರ್ಸನ್]] ಸದಸ್ಯತ್ವವನ್ನು ಮಾಡಿದ ಬಗ್ಗೆ ಹೇಳಿಕೆ ನೀಡಿದರು:
<blockquote> ವ್ಯವಸ್ಥೆಯಿಲ್ಲದ ಬಹುಸಂಖ್ಯಾ ಕರಿಯರ ವಿರೋಧಿ ಜನರ ಕ್ಲಾನ್ ಮುಖವಾಡವನ್ನು ಬಹಿರಂಗ ಪಡಿಸಿದರು.[[ಜಾಗೃತಸಮಿತಿ]] ಸದಸ್ಯರ ಗುಂಪುಗಳು, ನಿರಾಶೆಗೊಂಡ ಬಡ ಬಿಳಿ ರೈತರು, ಯುದ್ದ ಸಮಯದ [[ಗೆರಿಲ್ಲ]] ತಂಡಗಳು, ಪ್ರಜಾಪ್ರಭುತ್ವೀಯ ರಾಜಕಾರಣಿಗಳನ್ನು ಸ್ಥಳಾಂತರಿಸಿ, [[ಕಾನೂನು ಬಾಹೀರ ಮಧ್ಯ]] [[ತಯಾರಕರು]],[[ನೈತಿಕ]] ಸುಧಾರಣೆಗಾರರ ದಬ್ಬಾಳಿಕೆ,[[ಪೀಡನಾ ಸುಖಿಗಳು]],[[ಅತ್ಯಾಚಾರಿಗಳು]], ಕರಿಯರ ಪೈಪೋಟಿಯಲ್ಲಿ ಬಿಳಿ ಕೆಲಸಗಾರ ಭಯಗ್ರಸ್ಥನಾಗಿರ ಬೇಕಿತ್ತು. ಕೆಲಸಗಾರರು ಕೂಲಿಗಾರ ಶಿಸ್ತನ್ನು ಕಡ್ಡಾಯಗೊಳಿಸಲು ಪ್ರಯತ್ನಿಸುತ್ತಿದ್ದರು, ಸಾಮಾನ್ಯ ಕಳ್ಳರು,ಅಕ್ಕಪಕ್ಕದವರೊಂದಿಗೆ ದಶಕಗಳ ಕಾಲದ ಹಳೆ ದ್ವೇಷಗಳು ಹಾಗೂ ಕೆಲ [[ಸೇವಕರು]] ಮತ್ತು ಬಿಳಿ ಗಣತಂತ್ರವಾದಿಗಳು ಪ್ರಜಾಪ್ರಭುತ್ವೀಯ ಬಿಳಿಯರು ಅಥವಾ ಅವರ ಸ್ವಕ್ರಿಮಿನೆಲ್ ಕಾರ್ಯಕ್ರಮಗಳ ಜೊತೆಗೆ ಒಟ್ಟುಗೂಡಿದ್ದರು.
ಅಗಾಧವಾದ ಬಿಳಿಯರು ದಕ್ಷಿಣದವರು ಮತ್ತು ಪ್ರಜಾಪ್ರಭುತ್ವೀಯರು ಸಮೀಪದಲ್ಲೇ ಇದ್ದರು ಎಲ್ಲಾರು ದಿಟ್ಟತನದಿಂದ ಸಾಮಾನ್ಯಾವಾಗಿಯೇ ಇದ್ದರು, ಅದನ್ನು ಅವರೇ ಸ್ವಯಂ ಆಗಿ ಕ್ಲಾನ್ಸ್ಮೆನ್ ಎಂದು ಕರೆದುಕೊಂಡರು ಅಥವಾ ಕರೆದರು.<ref>ಪ್ಯಾರಸನ್ಸ್ ೨೦೦೫, p. ೮೧೬.</ref> </blockquote>
ಹಿಸ್ಟೊರಿಯನ್ [[ಎರಿಕ್ ಫೊನೆರ್]] ಈ ಕೆಳಗಿರುವಂತೆ ಗಮನಿಸಿದನು:
<blockquote>ಇದರ ಪರಿಣಾಮ ಕ್ಲಾನ್ [[ಡೆಮಾಕ್ರೆಟಿಕ್ ಪಾರ್ಟಿ]] ಮಿಲಿಟರಿ ಸೇನೆಯ ಸೇವೆಯ ಹೊಣೆಗಾರಿಕೆಯನ್ನು ನಿರ್ವಹಿಸುತಿದ್ದನು, ತೋಟದ ಮಾಲೀಕರ ವರ್ಗ ಮತ್ತು ಬಿಳಿಯರ ಹಿತವನ್ನು ಬಯಸುವವರು ಶ್ವೇತ ಪ್ರಾಬಲ್ಯದ ಪುನಃಪ್ಥಾಪನೆಗಾಗಿ ಮುಂದಾದರು. ಇದು ರಾಜಕೀಯವನ್ನು ಉದ್ದೇಶಿಸಿತ್ತು, ಆದರೆ ರಾಜಕೀಯ ಅತ್ಯಂತ ವಿಶಾಲವಾದ ಪ್ರಜ್ಞೆಯಾಗಿರುವುದರಿಂದ,ದಕ್ಷಿಣಭಾಗದ ಸಂಪೂರ್ಣ ಖಾಸಗಿ ಮತ್ತು ಸಾರ್ವಜನಿಕ ಎರಡೂ ಶಕ್ತಿ ಸಂಬಂಧಗಳಿಗೆ ತೊಂದರೆಕೊಡುವುದು ಉದ್ದೇಶವನ್ನು ಹೊಂದಿತ್ತು. ಇದು ಪುನರ್ನಿರ್ಮಾಣ ಸಂದರ್ಭದಲ್ಲಿ ಸಂಪೂರ್ಣ ದಕ್ಷಿಣದಲ್ಲಿ ಪರಸ್ಪರ ತೊಡರಿಕೆಯ ಕೂಡಿಕೆಯ ಬದಲಾವಣೆಗಳನ್ನು ಹಿಂದೆ ಸರಿಸುವ ಉದ್ದೇಶವನ್ನು ಹೊಂದಿತ್ತು: ರಿಪಬ್ಲಿಕನ್ ಪಾರ್ಟಿಯ ಅಡಿವ್ಯವಸ್ಥೆಯನ್ನು ನಾಶಪಡಿಸಿ, ಪುನರ್ನಿರ್ಮಾಣ ಸ್ಥಿತಿಯನ್ನು ಒಳಗೊಳಗೆ ಹಾಳುಮಾಡಿ ಕಪ್ಪು ಕೂಲಿ ಕೆಲಸಗಾರ ನಿಯಂತ್ರಣ ಮಂಡಳಿಯನ್ನು ಮತ್ತೆ ಸ್ಥಾಪಿಸಿ ಜನಾಂಗದ ಅಧೀನತೆಯನ್ನು ದಕ್ಷಿಣ ಭಾಗ ಜೀವನದ ಪ್ರತಿರೂಪವಾಗಿ ಪುನಃಸ್ಥಾಪನೆ ಮಾಡುವ ಯೋಚನೆಯಲ್ಲಿತ್ತು.<ref name="Foner425">ಫೊನೇರ್ ೧೯೮೯, p. ೪೨೫-೪೨೬.</ref>
</blockquote>
{{wikisource|Interview with Nathan Bedford Forrest}}
ಅದರೊಂದಿಗೆ ಕೊನೆಯಲ್ಲಿ ಅವರು ಶಿಕ್ಷಣ, ಆರ್ಥಿಕ ಪ್ರಗತಿ, ಮತದಾನದ ಹಕ್ಕುಗಳು ಮತ್ತು ಕಪ್ಪುಜನರು [[ಕರಡಿ ತೋಳುಗಳನ್ನು ಇಟ್ಟುಕೊಳ್ಳುವಂತಹ ಹಕ್ಕು]]ಗಳನ್ನು ನಿಗ್ರಹಿಸುವ ಕೆಲಸವನ್ನು ಮಾಡಿದರು.<ref name="Foner425"/> ಕು ಕ್ಲುಕ್ಸ್ ಕ್ಲಾನ್ ಶೀಘ್ರದಲ್ಲಿಯೇ ಕಪ್ಪು ಮತ್ತು ಬಿಳಿ ಇಬ್ಬರೂ [[ರಿಪಬ್ಲಿಕನ್]] ನಾಯಕರ ವಿರುದ್ದ "[[ರೀಜನ್ ಆಫ್ ಟೆರರ್]]" ಅನ್ನು ಪ್ರಾರಂಭಿಸಿ ದಕ್ಷಿಣದ ಸುಮಾರೂ ಎಲ್ಲಾ ರಾಜ್ಯಗಳಿಗೂ ಅದನ್ನು ವ್ಯಾಪಿಸಿತು. ಚಳುವಳಿಯ ಸಂದರ್ಭದಲ್ಲಿ [[ಆರ್ಕ್ಯಾನ್ಸಸ್]] ಕಾಂಗ್ರೆಸ್ಮ್ಯಾನ್ [[ಜೇಮ್ಸ್ ಎಮ್.ಹಿಂಡ್ಸ್]], [[ದಕ್ಷಿಣ ಕಾರೋಲಿನಾ]] ವಿಧಾನ ಮಂಡಲದ ಮೂರು ಸದಸ್ಯರು ಮತ್ತು ಹಲವು ಸಂವಿಧಾನ ಸಭೆಗಳಲ್ಲಿ ಸೇವೆ ಸಲ್ಲಿಸಿದ ಹಲವು ಜನರು ಒಳಗೊಂಡಂತೆ ಕೆಲವು ರಾಜಕೀಯ ನಾಯಕರು ಪ್ರಾಣತ್ಯಾಗ ಮಾಡಿದರು".<ref>ಫೊನೇರ್ ೧೯೮೯, p. ೩೪೨.</ref>
=== ಚಟುವಟಿಕೆಗಳು ===
[[ಚಿತ್ರ:Mississippi ku klux.jpg|thumb|ತ್ರೀ ಕು ಕ್ಲುಕ್ಸ್ ಕ್ಲಾನ್ ಮೆಂಬರ್ಸ್ ಅರೆಸ್ಟೆಡ್ ಇನ್ ಟಿಷೋಮಿಂಗೂ ಕಂಟ್ರಿ, ಮಿಸ್ಸಿಸ್ಸಿಪ್ಪಿ, ಸೆಪ್ಟೆಂಬರ್1871, ಫಾರ್ ದಿ ಅಟೆಮ್ಟೆಡ್ ಮರ್ಡರ್ ಆಫ್ ಆಯ್ನ್ ಎಂಟೈಯರ್ ಫ್ಯಾಮಿಲಿ.]]
{{wikisource|Why the Ku Klux}}
ಕ್ಲಾನ್ ಸದಸ್ಯರು ತಮ್ಮ ರಾತ್ರಿ ಪ್ರಯಾಣದ ಕಾರ್ಯವನ್ನು ಜೊತೆಗೆ ಆಕ್ರಮಣಕ್ಕೆ ಆರಿಸಿಕೊಂಡ ವೇಳೆಯಲ್ಲಿ ತಮ್ಮ ಗುರುತನ್ನು ಮರೆಮಾಚಲು, ಮುಸುಕನ್ನು ಮತ್ತು ನಿಲುವಂಗಿ ಬಳಸುವುದನ್ನು ಅಳವಡಿಸಿಕೊಂಡಿದ್ದರು. ಇಲ್ಲವಾದರೆ ಎಲ್ಲಿ ಜನರು ಅವರ ಮುಖ ಪರಿಚಯವನ್ನು ಹೊಂದಿರುತ್ತಾರೆ ಮತ್ತು ಕೆಲವೊಮ್ಮೆ ಆಕ್ರಮಣಕಾರರನ್ನು ಗುರುತಿಸುತ್ತಾರೆ ಎಂದು ಕೂಡ ಅವರಲ್ಲಿ ಹಲವರು ಸಣ್ಣ ಪಟ್ಟಣಗಳಲ್ಲಿ ಮತ್ತು ಹಳ್ಳಿ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. "ಈ ತರಹದ ಕೆಲಸವನ್ನು ಬಹಿರಂಗವಾಗಿ ಮಾಡಲು ಪುರುಷರು ಹೆದರುತ್ತಿದ್ದರು ಅಥವಾ ನಾಚಿಕೆಪಟ್ಟುಕೊಳ್ಳುತ್ತಿದ್ದರು, ಮತ್ತು ಹಗಲಿನಲ್ಲಿ, ಹಾಗೂ ರಾತ್ರಿಗಳಲ್ಲಿ ಮುಸುಕನ್ನು ಧರಿಸಿ ಗುಟ್ಟಾಗಿ ಕೆಲಸವನ್ನು ಪೂರೈಸುತ್ತಿದ್ದರು." ಈ ಕ್ರಮದಿಂದ ಮೇಲ್ವರ್ಗದವರು ಮತ್ತು ಕೆಳವರ್ಗದವರೆರಡೂ ಆಕ್ರಮಣಕ್ಕೊಳಪಟ್ಟರು.<ref>ಡಬ್ಲ್ಯೂ.ಇ.ಬಿ ಡು ಬೊಯಿಸ್, ''ಬ್ಲಾಕ್ ರೀಕನ್ಸ್ಟ್ರಕ್ಷನ್ ಇನ್ ಅಮೇರಿಕ: ೧೮೬೦–೧೮೮೦'',ನ್ಯೂಯಾರ್ಕ್:ಆಕ್ಸ್ಪರ್ಡ್ ಯೂನಿವರ್ಸಿಟಿ ಪ್ರೆಸ್,೧೯೩೫; ರೀಪ್ರಿಂಟ್, ದಿ ಫ್ರೀ ಪ್ರೆಸ್,೧೯೯೮, p. ೬೭೭-೬೭೮.</ref> ಕ್ಲು ಕ್ಲಕ್ಸ್ ಕ್ಲ್ಯಾನ್ ರಾತ್ರಿ ಪಯಣಿಗರು"ಕೆಲವೊಮ್ಮೆ ಅತೀಂದ್ರಿಯ ಕರಿಯರನ್ನು ಹೆದರಿಸುವ ಸೈನಿಕ ಸಹಾಯಕ ಭೂತಗಳೆಂದು ಕರೆಯಲ್ಪಟ್ಟರು. ಕೆಲವು ಗುಲಾಮಗಿರಿಯಿಂದ ಹೊರಬಂದಂಥವರು ಈ ಅಸಂಬದ್ಧತೆಯನ್ನು ಗಂಭೀರವಾಗಿ ಪರಿಗಣಿಸಿದರು."<ref>ಎರಿಕ್ ಫೊನೇರ್, ''ರೀಕನ್ಸ್ಟ್ರಕ್ಷನ್ ಅಮೇರಿಕನ್ಸ್ ಅನ್ಫಿನಿಶ್ಡ್ ರೆವಲ್ಯೂಷನ್,೧೮೬೩–೧೮೭೭'', ನ್ಯೂ ಯಾರ್ಕ್: ಪೆರಿನಿಯಲ್ ಕ್ಲಾಸಿಕ್ಸ್,೧೯೮೯;ರೀಪ್ರಿಂಟೆಡ್ ೨೦೦೨, p.೪೩೨</ref>
[[ಲಾಯಲ್ ಲೀಗ್ನ]] ಕರಿ ಸದಸ್ಯರ ಮೇಲೆ ಕ್ಲಾನ್ ಆಕ್ರಮಣ ನಡೆಸಿತು ಮತ್ತು ಸದರ್ನ್ ರಿಪಬ್ಲಿಕನ್ ಹಾಗೂ [[ಫ್ರೀಡ್ಮೆನ್ಸ್ ಬ್ಯೂರಿಯೊ]] ಕೆಲಸಗಾರರನ್ನು ಭಯಪಡಿಸಿತು. ಕಪ್ಪು ರಾಜಕೀಯ ಮುಖಂಡರನ್ನು ಯಾವಾಗ ಕೊಂದಿತೋ,ಅಂದು ಚರ್ಚಿನ ಮುಖಂಡರನ್ನು ಮತ್ತು ಸಾಮಾಜಿಕ ಗುಂಪನ್ನು,ಕುಟುಂಬದ ಮುಖ್ಯಸ್ಥರನ್ನು ಕೂಡ ಬಲಿತೆಗೆದುಕೊಂಡಿತು. ಫ್ರೀಡ್ಮನ್ಸ್ ಬ್ಯೂರಿಯೊ ಕಾರ್ಯಭಾರಿಗಳು ಕರಿಯರ ಮೇಲಿನ ವಾರದ ಆಕ್ರಮಣ ಮತ್ತು ಕೊಲೆಗಳ ಬಗ್ಗೆ ವರದಿ ಮಾಡುತ್ತಿದ್ದವು. "ಶಸ್ತ್ರಧಾರಿ ಗೆರಿಲ್ಲಾ ಸಂಗ್ರಾಮದಲ್ಲಿ ಸಾವಿರಗಟ್ಟಲೆ ನಿಗ್ರೊಗಳನ್ನು ಕೊಲ್ಲಲಾಯಿತು;ರಾಜಕೀಯ ಹಿಂಸಾಚಾರ ಮುಗಿಲುಲುಟ್ಟಿದೆ;ಅವರ ಉದ್ದೇಶ ಅಥವಾ ಸಂದರ್ಭ ಎಂದಿಗೂ ಅಸಾಧಾರಣವಾಗಿರುತ್ತದೆ,ಅವರ ಪರಿಣಾಮಗಳು ಎಂದಿಗೂ ನಿಶ್ಚಿತವಾಗಿರುತ್ತದೆ:ಬಿಳಿಯರಿಗಿಂತ ನಿಗ್ರೊಗಳು ಹತ್ತರಿಂದ ನೂರು ಪಟ್ಟು ಹೆಚ್ಚು ಕೊಲ್ಲಲ್ಪಟ್ಟಿದ್ದಾರೆ." ಮುಸುಕುಧಾರಿ ಪುರುಷರು ಕೆಲವೊಮ್ಮೆ ನಿವಾಸಿಗಳು ಒಳಗೆ ಇರುವಂತೆಯೇ ಮನೆಗಳಿಗೆ ಗುಂಡು ಹಾರಿಸುತ್ತಾರೆ ಮತ್ತು ಅವುಗಳನ್ನು ಸುಡುತ್ತಾರೆ. ಕಪ್ಪು ರೈತರನ್ನು ಅವರ ಜಾಗದಿಂದ ಯಶಸ್ವಿಯಾಗಿ ದಬ್ಬುತ್ತಾರೆ. ಸುಮಾರಾಗಿ,ಉತ್ತರ ಮತ್ತು ದಕ್ಷಿಣ ಕರೊಲಿನಾದಲ್ಲಿ,೧೮೬೭ ಜೂನ್ ಹೊತ್ತಿಗೆ ೧೮ ತಿಂಗಳಲ್ಲಿ ೧೯೭ ಕೊಲೆಗಳು ಮತ್ತು ೫೪೮ ತೀವೃಗತಿಯ ಆಕ್ರಮಣ ನಡೆಯಿತೆಂದು ವರದಿಯಾಯಿತು.<ref>ಡಬ್ಲ್ಯೂ.ಇ.ಬಿ ಡು ಬೊಯಿಸ್, ''ಬ್ಲಾಕ್ ರೀಕನ್ಸ್ಟ್ರಕ್ಷನ್ ಇನ್ ಅಮೇರಿಕ: ೧೮೬೦–೧೮೮೦'',ನ್ಯೂಯಾರ್ಕ್:ಆಕ್ಸ್ಪರ್ಡ್ ಯೂನಿವರ್ಸಿಟಿ ಪ್ರೆಸ್,೧೯೩೫; ರೀಪ್ರಿಂಟ್, ದಿ ಫ್ರೀ ಪ್ರೆಸ್,೧೯೯೮, p. ೬೭೧-೬೭೫.</ref>
ಕ್ಲಾನ್ ಹಿಂಸಾಚಾರದ ಕಾರ್ಯವು ಕರಿಯರ ಮತವನ್ನು ತಡೆಹಿಡಿಯುವುದಾಗಿತ್ತು. ಈ ಮೇಲಿನ ಉದಾಹರಣೆಗಳು ತೋರಿಸುವಂತೆ,೧೮೬೮ ನವೆಂಬರ್ನಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕೆಲವು ವಾರಗಳ ಮುಂಚೆ [[ಲುವಿಸಿಯಾನಾ]]ದಲ್ಲಿ ೨,೦೦೦ ಕ್ಕಿಂತ ಹೆಚ್ಚು ಜನರು ಕೊಲ್ಲಲ್ಪಟ್ಟರು,ಗಾಯಗೊಂಡರು ಮತ್ತು ಘಾಸಿಗೊಂಡರು. ಆದಗ್ಯೂ, [[ಸೇಂಟ್.ಲ್ಯಾಂಡ್ರಿ ಪೆರಿಶ್]] ರಿಪಬ್ಲಿಕನ್ ಪಕ್ಷಕ್ಕೆ ೧,೦೭೧ ಮತಗಳೊಂದಿಗೆ ದಾಖಲೆ ಜಯ ತಂದುಕೊಟ್ಟರು,ಕೊಲೆಗಳ ನಂತರದ ಚುನಾವಣೆಯಲ್ಲಿ ಯಾವ ರಿಪಬ್ಲಿಕನ್ ಕೂಡ ಮತ ಹಾಕಲಿಲ್ಲ. ಬಿಳಿ ಪ್ರಜಾಪ್ರಭುತ್ವ ಪಕ್ಷದವರು ಗ್ರ್ಯಾಂಟ್ಸ್ ವಿರೋಧವಾಗಿ ಪಾದ್ರಿಯಾಡಳಿತಕ್ಕೆ ಪೂರ್ತಿ ಮತವನ್ನು ನೀಡಿತು. ಕೆಕೆಕೆ ಯು ೨೦೦ಕ್ಕೂ ಹೆಚ್ಚು ಕಪ್ಪು ಪ್ರಜಾಪ್ರಭುತ್ವವಾದಿಗಳನ್ನು ಹುಡುಕಿ ಹಾಗೂ ಕಾಡಿನಲ್ಲೆಲ್ಲ ಅವರನ್ನು ಅಟ್ಟಿಸಿಕೊಂಡು ಹೋಗಿ ಕೊಂದಿತು ಮತ್ತು ಗಾಯಗೊಳಿಸಿತು. ಜೈಲಿನಿಂದ ಹದಿಮೂರು ಬಂಧಿತರನ್ನು ತೆಗೆದುಕೊಂಡು ಹೋಯಿತು ಮತ್ತು ಗುಂಡುಹೊಡೆಯಲಾಯಿತು;ಕಾಡಿನಲ್ಲಿ ೨೫ ಶವಗಳಲ್ಲಿ ಅರ್ಧ ಹೂತಿಟ್ಟ ರಾಶಿಯ ರೂಪದಲ್ಲಿ ದೊರಕಿತು. ಕೆಕೆಕೆಯು ಡೆಮೊಕ್ರೆಟಿಕ್ಗೆ ಜನರ ಮತ ಬೀಳುವಂತೆ ಮಾಡಿತು ಮತ್ತು ಅವರಿಗೆ ನಿಜ ಸ್ಥಿತಿಯ ಪ್ರಮಾಣ ಪತ್ರವನ್ನು ನೀಡಿತು.<ref>ಡಬ್ಲ್ಯೂ.ಇ.ಬಿ ಡು ಬೊಯಿಸ್, ''ಬ್ಲಾಕ್ ರೀಕನ್ಸ್ಟ್ರಕ್ಷನ್ ಇನ್ ಅಮೇರಿಕ: ೧೮೬೦–೧೮೮೦'',ನ್ಯೂಯಾರ್ಕ್:ಆಕ್ಸ್ಪರ್ಡ್ ಯೂನಿವರ್ಸಿಟಿ ಪ್ರೆಸ್,೧೯೩೫; ರೀಪ್ರಿಂಟ್, ದಿ ಫ್ರೀ ಪ್ರೆಸ್,೧೯೯೮, pp.೬೮೦-೬೮೧</ref>
೧೮೬೮ ಏಪ್ರಿಲ್ನಲ್ಲಿ [[ಜಾರ್ಜಿಯಾ]]ದ ಸರ್ಕಾರೀ ಚುನಾವಣೆಯಲ್ಲಿ [[ಕೋಲಂಬಿಯಾ ಕಂಟ್ರಿ]] ಕಾಸ್ಟ್ ೧, ರಿಪಬ್ಲಿಕ್ ಪಕ್ಷದ [[ರುಫಸ್ ಬುಲಕ್]] ಅವರು ೨೨೨ ಮತಗಳನ್ನು ಗಳಿಸಿದರು. [[ನವೆಂಬರ್ನ ಅಧ್ಯಕ್ಷೀಯ ಚುನಾವಣೆ]] ಹೊತ್ತಿಗೆ,ಹೇಗಿದ್ದರೂ ಕ್ಲಾನ್ ಭಯಹುಟ್ಟಿಸಿ ರಿಪಬ್ಲಿಕ್ ಪಕ್ಷಕ್ಕೆ ಮತಚಲಾಯಿಸುವುದನ್ನು ತಡೆಹಿಡಿದಿತ್ತು ಮತ್ತು ಕೇವಲ ಒಬ್ಬರೇ ಒಬ್ಬರು [[ಯುಲಿಸೆಸ್ ಎಸ್.ಗ್ರ್ಯಾಂಟ್]]ಗೆ ಮತಚಲಾಯಿಸಿದ್ದರು.<ref>{{cite web |url=http://www.georgiaencyclopedia.org/nge/Article.jsp?id=h-694 |title=Ku Klux Klan in the Reconstruction Era |accessdate= |author=Bryant, Jonathan M. |date= |work=[[The New Georgia Encyclopedia]] |publisher=[[Georgia Southern University]] |archive-date=ಸೆಪ್ಟೆಂಬರ್ 19, 2008 |archive-url=https://web.archive.org/web/20080919005917/http://www.georgiaencyclopedia.org/nge/Article.jsp?id=h-694 |url-status=dead }}</ref>
ಕ್ಲಾನ್ಸ್ ಜನರು ೧೫೦ಕ್ಕೂ ಹೆಚ್ಚು ಆಫ್ರಿಕಾದ ಅಮೇರಿಕನ್ರನ್ನು [[ಫ್ಲೊರಿಡಾ]]ದಲ್ಲಿ ಮತ್ತು ನೂರಕ್ಕೂ ಹೆಚ್ಚು ಜನರನ್ನು ಉಳಿದ ದೇಶಗಳಲ್ಲಿ ಕೊಂದರು. ಫ್ರೀಡ್ಮೆನ್ಸ್ ಕಛೇರಿಯ ದಾಖಲೆಗಳು ಕ್ಲಾನ್ಸ್ ಜನರಿಂದ ಹೊಡೆತಕ್ಕೊಳಗಾದ ಮತ್ತು ಕೊಲೆಗೀಡಾದ ಸ್ವತಂತ್ರಜನರ ಮತ್ತು ಅವರ ಬಿಳಿ ಸ್ನೇಹಿತರ ಮರುಎಣಿಕೆಯನ್ನು ವಿಸ್ತಾರವಾಗಿ ನೀಡಿತು.<ref>''ದಿ ಇನ್ವಿಸಿಬಲ್ ಎಂಪೈಯರ್: ದಿ ಕು ಕ್ಲುಕ್ಸ್ ಕ್ಲಾನ್ ಇನ್ ಪ್ಲೋರಿಡಾ'' ಬೈ ಮೈಕಲ್ ನ್ಯೂಟನ್, ಪಿಪಿ. pp. ೧-೩೦. ನ್ಯೂಟನ್ ಕೋಟ್ಸ್ ಫ್ರಂ ದಿ ಟೆಸ್ಟಿಮೋನಿ ಟೇಕನ್ ಬೈ ದಿ ಜಾಯಿಂಟ್ ಸೆಲೆಕ್ಟ್ ಕಮಿಟಿ ಟು ಎನ್ಕ್ವಯರ್ ಇನ್ಟೂ ದಿ ಕಂಡಿಶನ್ ಆಫ್ ಅಫೇರ್ಸ್ ಇನ್ ದಿ ಲೇಟ್ ಇನ್ಶುರ್ರೇಕ್ಟರಿ ಸ್ಟೇಟ್ಸ್. Vol. ೧೩. ವಾಷಿಂಗ್ಟನ್, ಡಿ.ಸಿ.:ಯು.ಎಸ್. ಗೌರ್ನಮೆಂಟ್ ಪ್ರಿಂಟಿಂಗ್ ಆಫಿಸ್,೧೮೭೨. ಅಮಾಂಗ್ ಹಿಸ್ಟರಿಯನ್ಸ್ ಆಫ್ ದಿ ಕ್ಲಾನ್,ದಿಸ್ ವಾಲ್ಯೂಮ್ ಇಸ್ ಆಲ್ಸೋ ನೌವನ್ ಆಯ್ಸ್ "ದಿ ಕೆಕೆಕೆ ಟೆಸ್ಟಿಮೋನಿ".</ref>
ಸ್ವಲ್ಪಮಟ್ಟಿಗೆ ಎನ್ಕೌಂಟರ್ ಕೂಡ ನಡೆಯಿತು. [[ಮಿಸ್ಸಿಸಿಪಿ]]ಯಲ್ಲಿ, ಕಾಂಗ್ರೆಸ್ಸಿನ ವಿಚಾರಣೆಯ ಪ್ರಕಾರ<ref>ರೋಡೇಸ್ ೧೯೨೦, pp. ೧೫೭–೧೫೮.</ref>
<blockquote>[[ಮನ್ರೊ ಕಂಟ್ರಿ]]ಯ ಕಾಟನ್ ಗಿನ್ ಪೋರ್ಟ್ನಲ್ಲಿರುವ ಶಾಲೆಗೆ,ಮಾರ್ಚ್ ೧೮೭೧ ರ,ಬೆಳಗಿನ ಒಂದರಿಂದ ಎರಡು ಘಂಟೆಯ ಮಧ್ಯದಲ್ಲಿ ಸುಮಾರು ಐವತ್ತು ಪುರುಷರು ಭೇಟಿಕೊಟ್ಟರು....,ಅಲ್ಲಿ ಶಿಕ್ಷಕರಲ್ಲಿ ಒಬ್ಬರಾದ ([[ಇಲನಾಯ್]]ನ ಮಿಸ್.ಅಲ್ಲೆನ್) ಅವರನ್ನು ಮರೆಮಾಚಿದರು ಮತ್ತು ಕಾರ್ಯಪ್ರವರ್ತರಾದರು. ಪ್ರತಿಯೊಬ್ಬರೂ ಉದ್ದನೆಯ ಬಿಳಿ ನಿಲುವಂಗಿಯನ್ನು ಧರಿಸಿದ್ದರು ಮತ್ತು ಅವರ ಮುಖಗಳು ಕಡುಗೆಂಪಿನ ಪಟ್ಟೆ ಪಟ್ಟೆಯಿಂದ ಕೂಡಿದ ಸಡಿಲವಾದ ಮುಸುಕಿನಿಂದ ಮುಚ್ಚಿತ್ತು. ಈ ಶಿಕ್ಷಕಿಗೆ ಮೇಲೇಳುವಂತೆ ಆದೇಶ ನೀಡಲಾಯಿತು ಮತ್ತು ಒಮ್ಮೆ ತಯಾರಾದ ನಂತರ ಇವರ ಕೋಣೆಯೊಳಗೆ ತಮ್ಮ ಎಂದಿನ ಮರೆಮಾಚಿದ ಧಿರಿಸಿನಲ್ಲಿ ಮತ್ತು ತಲೆಯ ಮೇಲೆ ಉದ್ದನೆಯ ಕೊಂಬನ್ನು ಹೊಂದಿದ ಹಾಗೂ ಮುಂದೆ ಒಂದು ತರಹದ ಉಪಕರಣವನ್ನು ಹಿಡಿದ ಮುಖ್ಯಸ್ಥರು ಮತ್ತು ಅವರ ಕೆಳಗಿನ ಅಧಿಕಾರಿಯು ಬಂದರು. ಮುಖ್ಯಸ್ಥರ ಕೆಳಗಿನ ಅಧಿಕಾರಿಯ ಕೈಯಲ್ಲಿ [[ಪಿಸ್ತೂಲು]] ಇತ್ತು,ಅವರು ಮತ್ತು ಮುಖ್ಯಸ್ಥರು ಕೆಳಗೆ ಕುಳಿತರೆ ಉಳಿದ ಎಂಟು ಅಥವಾ ಹತ್ತು ಜನರು ಬಾಗಿಲಿನ ಒಳಗೆ ನಿಂತಿದ್ದರು ಮತ್ತು ಒಳಾಂಗಣವು ಪೂರ್ತಿ ತುಂಬಿತ್ತು. ಅವರು ಇವರನ್ನು "ಸಭ್ಯವಾಗಿ ಮತ್ತು ಸೌಮ್ಯವಾಗಿ" ಉಪಚರಿಸಿದರು ಆದರೆ ಬಹುಮೊತ್ತದ ಶಾಲಾ-ತೆರಿಗೆಯನ್ನು ವಿರೋಧಿಸಿದರು,ಇವರಿಗೆ ಪಾಠ ಕಲಿಸುವುದನ್ನು ನಿಲ್ಲಿಸುವಂತೆ ಹೇಳಿದರು ಮತ್ತು ಇದನ್ನು ಎರಡನೆಯ ಬಾರಿಗೆ ಎಚ್ಚರಿಕೆ ನೀಡುವುದಿಲ್ಲವೆಂದೂ ಹೇಳಿದರು ಹಾಗೂ ಅಲ್ಲಿಂದ ತೆರಳಲು ಅನುಮತಿ ನೀಡಿದರು. ಇವರು ಮುನ್ನೆಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡರು ಮತ್ತು ದೇಶವನ್ನು ತೊರೆದರು.</blockquote>
೧೮೬೮ರ ಹೊತ್ತಿಗೆ,ಕ್ಲಾನ್ಸ್ ರಚನೆಯ ಎರಡು ವರ್ಷಗಳ ನಂತರ,ಅದರ ಕಾರ್ಯಚಟುವಟಿಕೆಗಳು ಕಡಿಮೆಯಾಗಲು ಪ್ರಾರಂಭಿಸಿದವು.<ref name="Horn-p375">ಹಾರ್ನ್ ೧೯೩೯, p. ೩೭೫.</ref> ಕ್ಲಾನ್ ಸದಸ್ಯರು ಅನಿರ್ಬಂಧಿತ-ಹಲ್ಲೆ ಹಿಂಸಾಚಾರದ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಮುಸುಕಿನೊಳಗೆ ಮತ್ತು ನಿಲುವಂಗಿಯೊಳಗೆ ತಲೆಮರೆಸಿಕೊಳ್ಳತೊಡಗಿದರು. ಕ್ಲಾನ್ ಶಾಸನೋಲ್ಲಂಘನೆಯು, ಸಂಯುಕ್ತ ರಾಷ್ಟ್ರ ಸರ್ಕಾರವು ದಕ್ಷಿಣದಲ್ಲಿ ತಮ್ಮ ಶಕ್ತಿಯನ್ನು ಕಾಯ್ದಿರಿಸಿಕೊಳ್ಳಲು ಸಮರ್ಥನೆಯನ್ನು ಒದಗಿಸುವುದು ಎಂದು ಹಲವು ಪ್ರಭಾವಶಾಲಿ ಸದರ್ನ್ ಡೆಮಕ್ರಟಿಕ್ಗಳು ಹೆದರಿದವು ಮತ್ತು ಅವರು ಅದಕ್ಕೆ ವಿರೋಧಿಗಳಾಗಿ ತಿರುಗಿದರು.<ref name="Wade-p102">ವೇಡ್ ೧೯೮೭, p. ೧೦೨.</ref> ಅಲ್ಲಿ ವಿಲಕ್ಷಣವಾದ ಹೇಳಿಕೆಗಳು ಕಂಡುಬಂದವು,ಅವುಗಳಲ್ಲಿ ಜಾರ್ಜಿಯಾದ [[ಬಿ.ಹೆಚ್.ಹಿಲ್]] ಹೇಳುವಂತೆ"ಕೆಲವರ ಈ ವಿರೋಧವು ನಿಜವಾಗಿ ರಾಜಕೀಯ ಸ್ನೇಹಿತರಿಂದ ಪಕ್ಷದ ವಧೆಯಂತಹ ಅಪರಾಧ ಕೃತ್ಯ ಜರುಗುತ್ತಿದೆ" ಎಂದು.<ref name="Horn-p375"/>
=== ಪ್ರತಿರೋಧ. ===
ಯೂನಿಯನ್ ಆರ್ಮಿ ಪರಿಣಿತರು [[ಬ್ಲಂಟ್ ಕಂಟ್ರಿ,ಅಲಬಾಮಾ]]ದ ಪರ್ವತಗಳಲ್ಲಿ'ದಿ ಎಂಟಿ-ಕು ಕ್ಲುಕ್ಸ್’ನ್ನು ಸಂಘಟಿಸಿದರು. ಇವರು, ಸಂಘಟನಾವಾದಿಗಳಿಗೆ ಚಾವಟಿ ನೀಡುವ ಮತ್ತು ಕರಿಯರ ಚರ್ಚ್ ಹಾಗೂ ಶಾಲೆಗಳನ್ನು ಸುಡುವುದನ್ನು ಕ್ಲಾನ್ಸ್ ಜನರು ನಿಲ್ಲಿಸುವವರೆಗೂ ಅದಕ್ಕೆ ಪ್ರತೀಕಾರವಾಗಿ ಅವರನ್ನು ಹೆದರಿಸುವ ಮೂಲಕ ಹಿಂಸಾಚಾರಕ್ಕೆ ಕೊನೆ ಕಾಣಿಸಿದರು. ಶಸ್ತ್ರ ಸಜ್ಜಿತ ಕರಿಯರು [[ಬೆನ್ನೆಟ್ಸ್ ವಿಲ್ಲೆ,ಸೌತ್ ಕರೊಲಿನಾ]]ದಲ್ಲಿ ತಮ್ಮ ಸ್ವ ರಕ್ಷಣೆಯನ್ನು ಸಂಘಟಿಸಿದರು ಮತ್ತು ತಮ್ಮ ಮನೆಗಳನ್ನು ರಕ್ಷಿಸಿಕೊಳ್ಳಲು ರಸ್ತೆಗಳಲ್ಲಿ ಗಸ್ತು ಕಾದರು.<ref>ಫೊನೇರ್ ೧೯೮೯, p. ೪೩೫.</ref>
ಕೆಲವು ರಾಷ್ಟ್ರ ಮಟ್ಟದ ಡೆಮಕ್ರಟಿಕ್ಗಳು ಕ್ಲಾನ್ ನಿಜವಾಗಿಯೂ ಅಸ್ತಿತ್ವದಲ್ಲಿ ಇರುವುದೇ ಅಥವಾ ಇದು ಕೇವಲ ಸದರ್ನ್ ರಿಪಬ್ಲಿಕ್ ಗವರ್ನರ್ಗಳನ್ನು ಭಯಪಡಿಸಲು ಇರುವ ಕಲ್ಪನೆಯೇ ಎಂದು ಪ್ರಶ್ನಿಸಿದರೂ ಕೂಡ ರಾಷ್ಟ್ರೀಯ ಮನೋಭಾವ, ಕ್ಲಾನ್ನ ಶಕ್ತಿಗುಂದಿಸಲು ಒಂದುಗೂಡಿತು.<ref>ವೇಡ್ ೧೯೮೭.</ref> ಕೆಲವು ಸದರ್ನ್ ರಾಜ್ಯಗಳು ಕ್ಲಾನ್-ಪ್ರತಿರೋಧ ಶಾಸನವನ್ನು ಸಾಗಿಸಲು ಪ್ರಾರಂಭಿಸಿತು.
{{Wikisource|Ku Klux Klan Act of 1871}}
೧೮೭೧ ಜನವರಿಯಲ್ಲಿ,[[ಪೆನ್ಸಿಲ್ವೇನಿಯಾ]] ರಿಪಬ್ಲಿಕ್ನ ಸೆನೆಟ್ ಸದಸ್ಯ [[ಜಾನ್ ಸ್ಕಾಟ್]], ಕಾಂಗ್ರೆಸ್ಸಿನ ಸದಸ್ಯರಿಗೆ ಕ್ಲಾನ್ನ ಅತಿಪಾಶವೀ ಕೃತ್ಯದ ೫೨ ಸಾಕ್ಷ್ಯಗಳನ್ನು ಪ್ರಮಾಣೀಕರಿಸಿ ತೋರಿಸಿದರು. ಅವರು ಭಯಂಕರವೆನಿಸುವ ೧೨ ಕಡತಗಳ ಸಾಕ್ಷ್ಯಗಳನ್ನು ಒಟ್ಟುಗೂಡಿಸಿದರು. ಫೆಬ್ರುವರಿಯಲ್ಲಿ,[[ಮ್ಯಾಸಚೂಸೆಟ್ಸ್]] ನ ಮಾಜಿ ಯೂನಿಯನ್ ಜನರಲ್ ಮತ್ತು ಕಾಂಗ್ರೆಸ್ಸಿಗ [[ಬೆಂಜಮಿನ್ ಫ್ರಾಂಕ್ಲಿನ್ ಬಟ್ಲರ್]], [[ಕು ಕ್ಲುಕ್ಸ್ ಕ್ಲಾನ್ ನಾಟಕವನ್ನು]] ಪರಿಚಯಿಸಿದರು.ಇದು ಇವರ ಕುರಿತು ಸದರ್ನ್ ವೈಟ್ ಡೆಮಕ್ರೆಟಿಕ್ ಬೇಸರಿಸುವಂತಾಯಿತು ಮತ್ತು ಹಗೆತನಕ್ಕೆ ಗುರಿಮಾಡಿತು.<ref>ಹಾರ್ನ್ ೧೯೩೯, p. ೩೭೩.</ref> ಭಿತ್ತಿಪತ್ರವು ಎಂದು ಗಮನಿಸಲ್ಪಟ್ಟಿತೋ,ದಕ್ಷಿಣದಲ್ಲಿ ಇದರ ಮಾರ್ಗಕ್ಕೆ ಮತ್ತೂ ಹೆಚ್ಚಿನ ಹಿಂಸಾಚಾರವು ಬೆಂಬಲ ಪಡೆಯಿತು. [[ದಕ್ಷಿಣ ಕರೊಲಿನಾದ ರಾಜ್ಯಪಾಲರು]],ಸಂಯುಕ್ತ ರಾಷ್ಟ್ರದ ಸೇನೆಯನ್ನು ರಾಜ್ಯದ ಮೇಲೆ ಹಿಡಿತ ಸಾಧಿಸುವ ಪ್ರಯತ್ನಕ್ಕೆ ಸಹಾಯ ಮಾಡಲು ಕೇಳಿಕೊಂಡರು. [[ಮಿಸ್ಸಿಸಿಪಿಯ ಮೆರಿಡಿಯನ್]]ನ ಕೋರ್ಟಿನಲ್ಲಿ ದೊಂಬಿ ಮತ್ತು ಸಾಮೂಹಿಕ ಹತ್ಯೆ ಇದರಲ್ಲಿ ರಾಜ್ಯದ ಪ್ರತಿನಿಧಿ ಒಬ್ಬ ಕರಿಯನನ್ನು ಕಾಡಿಗೆ ಒಯ್ದಾಗ ಅವರು ತಪ್ಪಿಸಿಕೊಂಡರು ಎಂದು ವರದಿಯಾಯಿತು.<ref>ವೇಡ್ ೧೯೮೭, p. ೮೮.</ref>
[[ಚಿತ್ರ:BenFrankButler.jpg|thumb|left|ಬೆಂಜಮಿನ್ ಫ್ರಾಂಕ್ಲೀನ್ ಬಟ್ಲರ್ ವ್ರೋಟ್ ದಿ 1871 ಕ್ಲಾನ್ ಆಯ್ಕ್ಟ್]]
೧೮೭೧ರಲ್ಲಿ,ಅಧ್ಯಕ್ಷ [[ಯುಲಿಸೆಸ್ ಎಸ್.ಗ್ರ್ಯಾಂಟ್]] ಬಟ್ಲರ್ರ ಕಾನೂನಿಗೆ ಸಹಿ ಮಾಡಿದರು. ಸಂಯುಕ್ತ ರಾಷ್ಟ್ರ ಸರ್ಕಾರವು ೧೮೭೦ರ ಫೋರ್ಸ್ ಆಕ್ಟ್ ಜೊತೆಗೂಡಿ ಸಂವಿಧಾನ ವ್ಯವಸ್ಥೆಯಲ್ಲಿ ಬಲವಂತವಾಗಿ ಪ್ರತಿಯೊಬ್ಬರಿಗೂ ಪೌರ ಹಕ್ಕು ಬೇಡಿಕೆ ನೀಡಲು ಕು ಕ್ಲುಕ್ಸ್ ಕ್ಲಾನ್ ನಾಟಕವನ್ನು ಬಳಸಿಕೊಂಡಿತು. ಕ್ಲಾನ್ ಆಕ್ಟ್ ಪ್ರಕಾರ,ಫೆಡರಲ್ ಸೇನೆಯು ಕಡ್ಡಾಯವಾಗಿ ಬಳಸಲ್ಪಡುವುದು, ಮತ್ತು ಕ್ಲಾನ್ಸ್ ಜನರಿಗೆ ಫೆಡರಲ್ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗುವುದು. ಸ್ಥಳೀಯ ಹಾಗೂ ರಾಜ್ಯದ ತೀರ್ಪುಗಾರರಿಗಿಂತ ಹೆಚ್ಚು, ಆಫ್ರಿಕಾದ ಅಮೇರಿಕನ್ನರು ಫೆಡರಲ್ ನ್ಯಾಯಾಲಯದಲ್ಲಿ ತೀರ್ಪುಗಾರರಾಗಿ ನೇಮಿಸಲ್ಪಟ್ಟರು,ಇದರಿಂದ ಅವರಿಗೆ ಈ ಕೆಲಸದಲ್ಲಿ ಭಾಗವಹಿಸಲು ಒಂದು ಅವಕಾಶ ದೊರಕಿದಂತಾಯಿತು.<ref name="jimcrow-stories"/> ಶಿಕ್ಷೆಯಲ್ಲಿ,ನೂರುಗಟ್ಟಲೆ ಕ್ಲಾನ್ ಸದಸ್ಯರಿಗೆ ದಂಡ ವಿಧಿಸಲಾಯಿತು ಅಥವಾ ಜೈಲು ಶಿಕ್ಷೆಯಾಯಿತು. ಸೌತ್ ಕರೊಲಿನಾದಲ್ಲಿ,''[[ಹೇಬಿಯಸ್ ಕಾರ್ಪಸ್]]'' (ಜಾಮೀನು ಪತ್ರ)ನ್ನು ಒಂಭತ್ತು ದೇಶಗಳಲ್ಲಿ ತಡೆಹಿಡಿಯಲಾಯಿತು.
=== ಕ್ಲಾನ್ನ ಅವನತಿ ಮತ್ತು ಬೇರೆ ಗುಂಪಿನಿಂದ ಬದಲಾವಣೆ ===
ಕ್ಲಾನ್ ದೇಶದಾದ್ಯಂತ ೫೫೦,೦೦೦ ಸದಸ್ಯರ ಸಂಘಟನೆಯನ್ನು ಹೊಂದಿದ್ದು ಎಚ್ಚರಿಕೆ ನೀಡಿದ ಐದು ದಿನಗಳೊಳಗೆ ಸದಸ್ಯತ್ವದ ವಿಧಿ,ಸಭೆ, ಸ್ಥಳೀಯ ಅಧಿಕಾರಿಗಳಿಲ್ಲದೆ ರಹಸ್ಯ ಅಥವಾ "[[ಅಗೋಚರ]]" ೪೦,೦೦೦ ಕ್ಲಾನ್ ಬೆಂಬಲಿಗರನ್ನು ಒಟ್ಟುಸೇರಿಸಬಲ್ಲೆ ಎಂದು ಫಾರೆಸ್ಟ್ ಬಡಾಯಿ ಕೊಚ್ಚಿಕೊಂಡರು
ಆದರೆ ನೋಡುಗರಿಗೆ ಇದರ ನಿಜವಾದ ಸದಸ್ಯತ್ವದ ಬಗ್ಗೆ ನಿರ್ಣಯ ಮಾಡುವುದು ಕಷ್ಟವಾಯಿತು. ಗುಪ್ತ ಆಕ್ರಮಣ ಮತ್ತು ಇದು ನಡೆಸಿದ ಹಲವು ಕೊಲೆಗಳ ನಾಟಕೀಯ ಗುಣಗಳಿಂದ ಇದು ಭಾವೋದ್ರೇಕವನ್ನುಂಟುಮಾಡಿತು.
ಒಬ್ಬ ಕ್ಲಾನ್ ಅಧಿಕೃತವಾಗಿ ಹೀಗೆ ದೂರು ನೀಡಿದರು," ಹಡಗಿನ ’ಮುಖ್ಯಸ್ಥ’ ಎಂದು ಅಪ್ಪಟ ನಾಮ ಮಾತ್ರ ಕರೆಯಲ್ಪಡುವ, ಎಲ್ಲ ಕ್ಲಾನ್ನ ಶಾಸನ ಮತ್ತು ಉದ್ದೇಶದಿಂದ ಹೊರ ಉಳಿದ ರಾತ್ರಿ-ಪ್ರಯಾಣ,ನುಗ್ಗುವಿಕೆ, ಮುಂತಾದವುಗಳಲ್ಲಿ.,ಹೆಚ್ಚು ಕ್ರಿಯಾಶೀಲರಾದಂತಹ ಅಜಾಗರೂಕತೆಯ ಯುವ ದೇಶೀ ಹುಡುಗರ ಮೇಲೆ ನಾನು ಕನಿಷ್ಠ ಪ್ರಮಾಣದ ಅಧಿಕಾರವನ್ನೂ ಹೊಂದಿರಲಿಲ್ಲ.." ಎಂದು.{{Citation needed|April 2009|date=May 2009}}
೧೮೭೦ರಲ್ಲಿ ಸಂಯುಕ್ತ ರಾಷ್ಟ್ರದ ಅತ್ಯುಚ್ಛ ತೀರ್ಪುಗಾರರ ಸಮಿತಿಯು ಕ್ಲಾನ್ ಒಂದು "[[ಉಗ್ರಗಾಮಿ]] ಸಂಘಟನೆ" ಎಂದು ತೀರ್ಮಾನಿಸಿತು.<ref>[http://isbn.nu/toc/9780807119532 ''''ವೈಟ್ ಟೆರರ್: ದಿ ಕು ಕ್ಲುಕ್ಸ್ ಕ್ಲಾನ್ ಕಾನ್ಸ್ಪೈರಸಿ ಆಯ್೦ಡ್ ಸದರನ್ ರೀಕನ್ಸ್ಟ್ರಕ್ಷನ್'' '' ಬೈ ಅಲ್ಲೆನ್ ಡಬ್ಲ್ಯೂ ಟ್ರೇಲೆಸ್ (ಲೂಸಿಯಾನ ಸ್ಟೇಟ್ ಯೂನಿವರ್ಸಿಟಿ ಪ್ರೆಸ್:1995)]</ref> ಇದು ಹಿಂಸೆ ಮತ್ತು ಉಗ್ರಾವಾದದ ಅಪರಾಧಗಳಿಗಾಗಿ ನೂರಾರು ದೋಷಾರೋಪಣೆಗಳನ್ನು ಪ್ರಕಟಿಸಿತು.
ಕ್ಲಾನ್ ಸದಸ್ಯರು ಕಾನೂನುಕ್ರಮ ಕೈಗೊಂಡಿದ್ದರಿಂದ, ಸಂಯುಕ್ತ ಸರ್ಕಾರದ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಂದ,ನಿರ್ದಿಷ್ಟವಾಗಿ ದಕ್ಷಿಣ ಕರೊಲಿನಾದಲ್ಲಿ ಅನೇಕರು ಊರು ಬಿಟ್ಟರು.<ref>ಟ್ರೇಲೆಸ್ ೧೯೯೫.</ref> ಕ್ಲಾನ್ ಹಿಂಸೆಯ ಕಾಯಿದೆಗಳನ್ನು ಹೊಂದಿದ್ದಾಗ ತಮ್ಮ ಗುರುತುಗಳನ್ನು ಮರೆ ಮಾಚುವ ಮೂಲಕ ಅಜ್ಞಾತ ನಾಮಕತ್ವಕ್ಕಾಗಿ ಕ್ಲಾನ್ಗೆ ಸೇರಿಕೊಳ್ಳದ ಇರುವ ಅನೇಕ ಜನರು ಸಹ ಕ್ಲಾನ್ನ ಉಡುಗೆಯನ್ನು ಬಳಸಿದರು.
೧೮೬೯ರಲ್ಲಿ ಕ್ಲಾನ್ ಅನ್ನು ಚದುರಿಸಲು ಫಾರೆಸ್ಟ್ ಆದೇಶಿಸಿದರು, ಇದು "ತನ್ನ ಮೂಲ ಪ್ರಾಮಾಣಿಕತೆ ಮತ್ತು ಸ್ವದೇಶಾಭಿಮಾನದ ಉದ್ದೇಶವನ್ನು ದುರುಪಯೋಗಪಡಿಸಿ ಕೊಂಡಿದೆ, ಸಾರ್ವಜನಿಕ ಶಾಂತಿಗೆ ಸಾಧಕವಾಗುವುದರ ಬದಲಾಗಿ ಅಪಚಾರವೆಸಗುತ್ತಿದೆ" ಎಂದು ಹೇಳಿದರು. ಇತಿಹಾಸ ತಜ್ಞ [[ಸ್ಟ್ಯಾನ್ಲೀ ಹೊರ್ನ್]] ಅವರು " ಕ್ಲಾನ್ನ ಅಂತ್ಯವು ಸಾಮಾನ್ಯ ಮತ್ತು ನಿರ್ಣಾಯಕ ವಿಸರ್ಜನೆಗಿಂತ ಕ್ರಮಕ್ರಮವಾಗಿ ಬಳಸುವ ವಿಯೋಜನೆ, ನಿಧಾನಗತಿ ಮತ್ತು ನಾನಾ ವಿಧದ ರೂಪದಲ್ಲಾಗಿತ್ತು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ" ಎಂದು ಬರೆದರು.<ref>ಹಾರ್ನ್ ೧೯೩೯, p. ೩೬೦.</ref> ೧೮೭೦ರಲ್ಲಿ ಜಾರ್ಜಿಯಾದಲ್ಲಿ ವರದಿಗಾರನೊಬ್ಬ, "ಕು ಕ್ಲುಕ್ಸ್ಗಳು ಪರವಾನಗಿ ಹೊಂದಿದ ಅಪರಾಧಿಗಳ ತಂಡವನ್ನು ಸಂಘಟಿಸಿವೆ, ಆದರೆ ಅಪರಾಧಗಳನ್ನು ಮಾಡಿದ್ದಂತಹ ಆ ಸದಸ್ಯರು ಸ್ವತಃ ತಮ್ಮನ್ನು ಕು ಕ್ಲುಕ್ಸ್ ಎಂದು ಕರೆದುಕೊಳ್ಳುತ್ತಿರುವ ಘಟನೆಗೆ ಸಂಬಂಧಿಸಿಂತೆ ಯಾವುದೇ ನೈಜ ಹೇಳಿಕೆಯಿಲ್ಲ" ಎಂದು ಬರೆದಿದ್ದಾನೆ.<ref>ಹಾರ್ನ್ ೧೯೩೯, p. ೩೬೨.</ref>
[[ಚಿತ್ರ:NCG-WilliamHolden.jpg|thumb|left|ಗೊವ್.ವಿಲಿಯಂ ಹೋಲ್ಡನ್ ಆಫ್ ನಾರ್ಥ್ ಕಾರೋಲಿನಾ.]]
ರಾಜಕೀಯೇತರ ಅಪರಾಧಗಳನ್ನು ಮಾಡಲು ಮುಖವಾಡ ಧರಿಸುವ ಹಾಗೆ ಜನರು ಕ್ಲಾನ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು ಅವರ ವಿರುದ್ಧ ಅಪರೂಪವಾಗಿ ಕಾನೂನು ಕ್ರಮ ಜರುಗಿಸಿದವು. ಆಫ್ರಿಕನ್ ಅಮೆರಿಕನ್ನರು ತೀರ್ಪುಗಾರರ ಸಮಿತಿಗಳನ್ನು ಅವಲಂಭಿಸಿದರು. ಆದರೆ ಗಲ್ಲಿಗೇರಿಸಿದಂತಹ ಘಟನೆಗಳಲ್ಲಿ, ಎಲ್ಲಾ-ಶ್ವೇತವರ್ಣದ ನ್ಯಾಯಾಧೀಶರು ಕು ಕ್ಲುಕ್ ಕ್ಲಾನ್ ಸದಸ್ಯರ ಮೇಲೆ ದೋಷಾರೋಪಣೆ ಮಾಡಲಿಲ್ಲ. ಅದೊಂದು ಅಪರೂಪದ ದೋಷಾರೋಪಣೆಯಾಗಿದ್ದಾಗ ನ್ಯಾಯಾಧೀಶರು ದೋಷ ನಿರ್ಣಯಕ್ಕಾಗಿ ಮತಚಲಾಯಿಸಲು ಒಪ್ಪಲಿಲ್ಲ. ಹೀಗೆ, ತೀರ್ಪುಗಾರರ ಸಮಿತಿಯ ಸದಸ್ಯರು ಸ್ಥಳೀಯ ಕ್ಲಾನ್ ಸದಸ್ಯರ ಪ್ರತೀಕಾರಕ್ಕೆ ಭಯಭೀತರಾದರು.
ಕಪ್ಪು ಜನರ ಮೇಲಿನ ಅಧಿಕಾರ ಚಲಾಯಿಸಿದ ರೀತಿಯಂತೆಯೇ ಗಲ್ಲಿಗೇರಿಸುವುದನ್ನು ಕೆಲವರು ಒಪ್ಪಿಕೊಂಡರು. ಇನ್ನು ಹಲವರ ಹೇಳಿಕೆಗಳಲ್ಲಿ, ಅಧಿಕಾರಿಗಳು ಜನಾಂಗೀಯ ಉದ್ವೇಗವನ್ನ ಹೊಂದಿರುವ ಕ್ಲಾನ್ ವಿರುದ್ಧ ಕಪ್ಪು ಜನರ ಸೇನೆಯನ್ನು ಬಳಸಿಕೊಳ್ಳಲು ಹೆಣಗಾಡುತ್ತಿದ್ದರು.<ref name="jimcrow-stories">{{cite web |url=http://www.pbs.org/wnet/jimcrow/stories_events_enforce.html |title=The Rise and Fall of Jim Crow—The Enforcement Acts (1870–1871) |accessdate= |author=Wormser, Richard |date= |work= |publisher=[[Public Broadcasting Service]] |archive-date=ಮೇ 1, 2009 |archive-url=https://web.archive.org/web/20090501083643/http://www.pbs.org/wnet/jimcrow/stories_events_enforce.html |url-status=dead }}</ref> ರಿಪಬ್ಲಿಕನ್ ಪಕ್ಷದ [[ಉತ್ತರ ಕರೊಲಿನದ ರಾಜ್ಯಪಾಲ]]ರಾದ [[ವಿಲಿಯಂ ವುಡ್ಸ್ ಹೋಲ್ಡನ್]] ಅವರು ೧೮೭೦ರಲ್ಲಿ ಕ್ಲಾನ್ ವಿರುದ್ಧ ಸೇನೆಯನ್ನು ಕರೆದರು, ಇದು ಅವರ ಅಪಖ್ಯಾತಿಗೆ ಕಾರಣವಾಯಿತು. ಮತಗಟ್ಟೆಗಳಲ್ಲಿ ಹಿಂಸೆ ಮತ್ತು ಮೋಸಗಾರಿಕೆ ತಾಂಡವಾಡುತ್ತಿದ್ದವು, ರಿಪಬ್ಲಿಕನ್ ಪಕ್ಷದವರು ರಾಜ್ಯದ ಮತಕ್ಷೇತ್ರದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡರು. ರಾಜಕೀಯ ಅವಿಶ್ವಾಸವಿರುವ ಹೋಲ್ಡೆನ್ರ ಕೆಲಸಗಳು ಹೋಲ್ಡನ್ರನ್ನು ಅನುಮಾನಿಸುವ ಮೂಲಕ ಬಿಳಿಯರ ಡೆಮಾಕ್ರಟಿಕ್ ಶಾಸಕರಿಗೆ ದಾರಿ ಮಾಡಿಕೊಟ್ಟವು ಮತ್ತು ಬಹಳಷ್ಟು ಕಾರಣಗಳನ್ನಿಟ್ಟುಕೊಂಡು ಅವರನ್ನು ಕಛೇರಿಯಿಂದ ತೆಗೆದುಹಾಕಲಾಯಿತು.<ref>ವೇಡ್ ೧೯೮೭, p. ೮೫.</ref>
ದಕ್ಷಿಣ ಕರೊಲಿನಾದಲ್ಲಿ ಕ್ಲಾನ್ ನಾಶಗೊಂಡಿತು <ref>ವೇಡ್, p೧೦೨</ref> ಮತ್ತು ದಕ್ಷಿಣದ ಉಳಿದ ಭಾಗಗಳಲ್ಲಿ ಬಹಳಷ್ಟು ಜನರನ್ನು ಬಲಿ ತೆಗೆದುಕೊಂಡಿತು, ಅಲ್ಲಿ ಇದು ಈಗಾಗಲೇ ಅವನತಿ ಹೊಂದಿದೆ. ಅಟಾರ್ನಿ ಜನರಲ್ [[ಅಮಾಸ್ ಟಪ್ಪನ್ ಅಕೆರ್ಮನ್]] ಅವರು ಕಾನೂನು ಕ್ರಮ ಜರುಗಿಸುವ ಜವಾಬ್ದಾರಿಯನ್ನು ಹೊಂದಿದ್ದರು.<ref>ವೇಡ್ ೧೯೮೭, p. ೧೦೯, ವ್ರೈಟ್ಸ್ ದಟ್ ಬೈ ಕ. ೧೮೭೧–೧೮೭೪,"ಫಾರ್ ಮೆನಿ ದಿ ಲ್ಯಾಪ್ಸ್ ಆಫ್ ದಿ ಎನ್ಫೋರ್ಸ್ಮೆಂಟ್ ಆಯ್ಕ್ಟಸ್ ವಾಸ್ ಜಸ್ಟಿಫೈಡ್ ಸಿನ್ಸ್ ದೇರ್ ರೀಸನ್ ಫಾರ್ ಬೀಯಿಂಗ್-ದಿ ಕು ಕ್ಲುಕ್ಸ್ ಕ್ಲಾನ್-ಹ್ಯಾಡ್ ಬೀನ್ ಎಫೆಕ್ಟೀವ್ಲೀ ಸ್ಮ್ಯಾಶ್ಡ್ ಆಯ್ಸ್ ಎ ರಿಸಲ್ಟ್ ಆಫ್ ದಿ ಡ್ರಮ್ಯಾಟಿಕ್ ಶೋಡೌನ್ ಇನ್ ಸೌಥ್ ಕರೊಲಿನಾ"</ref>
ಕೆಲವು ಪ್ರದೇಶಗಳಲ್ಲಿ, [[ವೈಟ್ ಲೀಗ್]], [[ರೆಡ್ ಶರ್ಟ್ಸ್]], ಸೇಬರ್ ಕ್ಲಬ್ಸ್ ಮತ್ತು ರಿಫ್ಲ್ ಕ್ಲಬ್ಸ್-ನಂತಹ ಇತರೆ ಸ್ಥಳೀಯ ಸೇನಾ ಸದೃಶ ಸಂಘಟನೆಗಳು ಕಪ್ಪು ಮತದಾರರನ್ನು ಎದುರಿಸಿ ಕೊಲೆ ಮಾಡುವುದನ್ನು ಮುಂದುವರಿಸಿದರು.<ref>ವೇಡ್ ೧೯೮೭, p. ೧೦೯–೧೧೦.</ref>
೧೮೭೪ರಲ್ಲಿ ಸಂಘಟಿತ ಬಿಳಿಯರ ಸೇನಾ ಸದೃಶ ಗುಂಪುಗಳು ಡೀಪ್ ಸೌತ್ನಲ್ಲಿ ಕಳೆದುಹೋಗುತ್ತಿರುವ ಕ್ಲಾನ್ ಅನ್ನು ಸ್ಥಳಾಂತರಿಸುವುದಕ್ಕಾಗಿ ರಚನೆಗೊಂಡವು: ಅವುಗಳೆಂದರೆ [[ಲುಯಿಸಿಯಾನ]]ದ [[ವೈಟ್ ಲೀಗ್]] ಮತ್ತು [[ಉತ್ತರ]] ಮತ್ತು [[ದಕ್ಷಿಣ ಕರೊಲಿನಾ]]ದ [[ಮಿಸಿಪ್ಪಿ]]ಯಾದ [[ರೆಡ್ ಶರ್ಟ್ಸ್]].
ಅವುಗಳು ರಿಪಬ್ಲಿಕನ್ ಪಕ್ಷದವರನ್ನು ಕಛೇರಿಯಿಂದ ಹೊರಹಾಕುವಂತೆ ಮುಕ್ತವಾಗಿ ಹೋರಾಟ ಮಾಡುತ್ತಾ, ಕಪ್ಪು ಮತದಾರರನ್ನು ಎದುರಿಸಿ ಕೊಲೆ ಮಾಡಿದವು. ಕರಿಯರ ಮತಗಳನ್ನು ತಡೆಯಲು ಮತ್ತು ಸಂಘಟನೆಯನ್ನು ಛಿದ್ರಗೊಳಿಸಲು ಪ್ರಯತ್ನಿಸಿದವು. ಅವುಗಳು ಚಳುವಳಿಗಳು ಮತ್ತು ೧೮೭೪ರ ಮತ್ತು ೧೮೭೬ರ ಚುನಾವಣೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಬಲವನ್ನು ಹೊಂದಿದ್ದು, ೧೮೭೬ರಲ್ಲಿ ಚುನಾವಣೆ ಅಧಿಕಾರದ ಬಲ ಪ್ರಯೋಗದ ಹಿನ್ನೆಲೆಯ ವಿರುದ್ಧ ಸಂಪ್ರದಾಯವಾದಿ ಡೆಮಾಕ್ರಟ್ ಪಕ್ಷದವರು ಅಧಿಕಾರವನ್ನು ಮರಳಿ ಪಡೆಯುವುದಕ್ಕೆ ನೆರವಾದವು.
ನಂತರದಲ್ಲೇ ''[[ಯುನೈಟೆಡ್ ಸ್ಟೇಟ್ಸ್ ವಿ.ಕ್ರುಯಿಕ್ಷಾಂಕ್]]'' (೧೮೭೫)ನಲ್ಲಿ, ಸರ್ವೋಚ್ಚ ನ್ಯಾಯಾಲಯವು ೧೮೭೦ರ ಸೇನಾಬಲ ಕಾಯಿದೆಯನ್ನು ಖಾಸಗಿ ಕೆಲಸಗಳನ್ನು ನಿಯಂತ್ರಿಸುವುದಕ್ಕಾಗಿ ಸಂಯುಕ್ತ ಸರ್ಕಾರದ ಆಡಳಿತಕ್ಕೆ ನೀಡಿಲ್ಲ, ಆದರೆ ಅದು ರಾಜ್ಯ ಸರ್ಕಾರಗಳಿಂದ ಬಂದವರಿಗೆ ಮಾತ್ರ ಎಂದು ಆದೇಶಿಸಿದೆ. ಈ ಪರಿಣಾಮವು ಒಂದು ಶತಮಾನ ಕಳೆದ ಹಾಗೆ, ಆಫ್ರಿಕನ್ ಅಮೆರಿಕನ್ನರು ಹಗೆಯ ರಾಜ್ಯ ಸರ್ಕಾರಗಳ ದಯೆಯಲ್ಲಿದ್ದು, ಖಾಸಗಿ ಹಿಂಸೆ ಮತ್ತು ಸೇನಾ ಸಾದೃಶ್ಯ ಗುಂಪುಗಳ ವಿರುದ್ಧ ಮಧ್ಯ ಪ್ರವೇಶಿಸುವುದನ್ನು ನಿರಾಕರಿಸಿದರು.
<blockquote>
ದಕ್ಷಿಣದಾದ್ಯಂತ ಅಸಂಖ್ಯಾತ ದೋಷಾರೋಪಣೆಗಳು ಹೆಚ್ಚಾದಾಗ, ಅನೇಕ ಕೇಸುಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಿ ಶಿಕ್ಷೆ ನೀಡಲಾಯಿತು. ಮಿತಿಮೀರಿ ಕೆಲಸ ಮಾಡಿದ ಸಂಯುಕ್ತ ಸರ್ಕಾರದ ಕೋರ್ಟುಗಳು ಸಹ ಅನೇಕ ಅಸಾಧಾರಣ ಘಟನೆಗಳನ್ನು ಪೂರೈಸಲು ಪ್ರಯತ್ನಿಸುವಲ್ಲಿ ಅಸಮರ್ಥವಾದವು, ಇಂತಹ ಪರಿಸ್ಥಿತಿಯು ಅಪರಾಧವನ್ನು ಕಡೆಗಣಿಸುವುದಕ್ಕೆ ಕಾರಣವಾಯಿತು.
೧೮೭೩ ಮತ್ತು ೧೮೭೪ರ ನಂತರ, ಹೊಸ ಘಟನೆಗಳಿಗೆ ಸಂಬಂಧಿಸಿದಂತೆ ಅನೇಕ ವರ್ಷಗಳವರೆಗೆ ವಿಧಿಸಿದ್ದ ಕಾನೂನುಕ್ರಮಗಳು ಮುಂದುವರಿಯುತ್ತಿದ್ದರೂ ಕ್ಲಾನ್ಸದಸ್ಯರ ವಿರುದ್ಧ ಅನೇಕ ಆರೋಪಗಳನ್ನು ತೆಗೆದುಹಾಕಲಾಯಿತು. ಶಿಕ್ಷೆಗೊಳಗಾಗಿದ್ದ ಅನೇಕರು ತಮ್ಮ ಅವಧಿಯಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದರು ಅಥವಾ ೧೮೭೫ರ ನಂತರ ಕ್ಷಮಾರ್ಪಣೆಗೆ ಒಳಗಾದರು.</blockquote>
[[ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ವೊಚ್ಛ ನ್ಯಾಯಾಲಯ]]ವು ೧೮೭೬ರಲ್ಲಿ ಆಡಳಿತ ಸರ್ಕಾರದಿಂದ ಕು ಕ್ಲುಕ್ಸ್ ಕ್ಲಾನ್ ಕಾಯಿದೆಯನ್ನು ತೆಗೆದುಹಾಕಿತು, ರಾಜ್ಯಗಳೂ ಒಕ್ಕೂಟದ ನಾಗರೀಕ ಹಕ್ಕುಗಳ ನಿಬಂಧನೆಗಳನ್ನು ಅನುಸರಿಸಲು ಒತ್ತಾಯಪಡಿಸಿದ್ದರೂ ಆ ಸಂಯುಕ್ತ ಸರ್ಕಾರವು ವ್ಯಕ್ತಿಗಳ ಮೇಲೆ ದೀರ್ಘವಾದ ಕಾನೂನು ಕ್ರಮಗಳನ್ನು ಜರುಗಿಸಿರಲಿಲ್ಲ. ರಿಪಬ್ಲಿಕನ್ ಪಕ್ಷದವರು ಸಾರ್ವಜನಿಕ ಸೌಲಭ್ಯಗಳು ಮತ್ತು ಜನಾಂಗಕ್ಕೆ ಲೆಕ್ಕಿಸದಷ್ಟು ವಸತಿ ಸೌಲಭ್ಯಗಳನ್ನು ಸಮಾನವಾಗಿ ದೊರಕಿಸಿಕೊಡಲು ಎರಡನೇ ನಾಗರೀಕ ಹಕ್ಕುಗಳ ಕಾಯಿದೆಯನ್ನು (ನಾಗರೀಕ ಹಕ್ಕುಗಳ ಕಾಯಿದೆ ೧೮೭೫) ಜಾರಿಗೆ ತಂದರು. ವಿಡಂಬನಾರ್ಹವಾಗಿ, ಈ ಅವಧಿಯಲ್ಲಿ ಉತ್ತರದ ಪುನರ್ರಚನಾ ಯತ್ನಗಳನ್ನು ಅಭಿವೃದ್ಧಿಪಡಿಸಲು ಕಪ್ಪು ಜನರ ರಕ್ಷಣೆಗಾಗಿ ನಾಗರೀಕ ಹಕ್ಕುಗಳನ್ನು ಜಾರಿಗೊಳಿಸಲು ಅಗತ್ಯವಾಗುವಂತೆ ರಾಜಕೀಯ ವಾತಾವರಣವನ್ನು ಒದಗಿಸಿದ ಕು ಕ್ಲುಕ್ಸ್ ಹಿಂಸೆಯಂತೆ ಕ್ಲಾನ್ ಕೆಲಸ ಮಾಡಿತು. ೧೮೭೧ರ ಕು ಕ್ಲುಕ್ಸ್ ಕ್ಲಾನ್ ಕಾಯಿದೆ ಮೊದಲ ಕ್ಲಾನ್ನನ್ನು ನೆಲಸಮ ಮಾಡಿದ್ದರೂ, ದಕ್ಷಿಣದ ಬಿಳಿಯರು ಮತ್ತೆ ಕೆಲವನ್ನು ರಚನೆ ಮಾಡಿದರು. ಆ ಸಾದೃಶ್ಯ ಗುಂಪುಗಳು ಬೆದರಿಕೆ ಮತ್ತು ದೈಹಿಕ ಹಿಂಸೆಯ ಮೂಲಕ ಮತಗಟ್ಟೆಗಳಿಂದ ಕರಿಯರನ್ನು ದೂರವಿಟ್ಟಿದ್ದವು. ಈ ಪುನರ್ ರಚನೆಯು ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ರುರ್ಫೊರ್ಡ್ ಬಿ.ಹಯೇಸ್ ಆಯ್ಕೆಯಾಗುವುದರೊಂದಿಗೆ ಮುಕ್ತಾಯಗೊಂಡಿತು, ಅವರು ದಕ್ಷಿಣದ ಒಕ್ಕೂಟ ಸೈನಿಕ ವೃತ್ತಿಯಿಂದ ಅಮಾನತ್ತುಗೊಂಡಿದ್ದರು; ಆದರೆ ಇಲ್ಲಿವರೆಗೂ ಕರಿಯರು ಮೂಲಭೂತ ನಾಗರೀಕ ಹಕ್ಕುಗಳಿಲ್ಲದೆಯೇ ಇದ್ದಾರೆ, ಕಾಂಗ್ರೆಸ್ಸಿನ ರಿಪಬ್ಲಿಕನ್ನರು ರಕ್ಷಣೆಯನ್ನು ಪಡೆದುಕೊಂಡಿದ್ದಾರೆ.<ref>"ಕು ಕ್ಲುಕ್ಸ್ ಕ್ಲಾನ್ ಆಯ್ಕ್ಟ್ ಆಫ್ ೧೮೭೧." ''ಸಿವಿಲ್ ರೈಟ್ಸ್ ಇನ್ ದಿ ಯುನೈಟೆಡ್ ಸ್ಟೇಟ್ಸ್ ''. ೨ vols. ಮ್ಯಾಕ್ಮಿಲ್ಲನ್ ರೆಫೆರೆನ್ಸ್ ಯುಎಸ್ಎ ೨೦೦೦.
ರೆಪ್ರೊಡ್ಯೂಡ್ ಇನ್ ಹಿಸ್ಟರಿ ರೆಸೋರ್ಸ್ ಸೆಂಟರ್. ಫರ್ಮಿಂಗ್ಟನ್ ಹಿಲ್ಸ್. ಎಮ್ಐ:ಗಲೆ. [http://galenet.galegroup.com/servlet/HistRC/ Galenet. ][http://galenet.galegroup.com/servlet/HistRC/ Galegroup.com]</ref>
೧೮೮೨ರಲ್ಲಿ ''[[ಅಮೆರಿಕಾದ ಸಂಯುಕ್ತ ಸಂಸ್ಥಾನಗಳ ವಿ.ಹ್ಯಾರಿಸ್]]'' ಸರ್ವೊಚ್ಛ ನ್ಯಾಯಾಲಯ ಕ್ಲಾನ್ ನಿಯಮ ಭಾಗಶಃ [[ಸಂವಿಧಾನ ಬಾಹಿರ]] ಎಂದು ಆದೇಶಿಸಿತು.
ಅದು ಕಾಂಗ್ರೆಸ್ನ ಅಧಿಕಾರದ [[ಹದಿನಾಲ್ಕನೇ ತಿದ್ದುಪಡಿಯ]] ಅಡಿಯಲ್ಲಿ ಖಾಸಗಿ ಜತೆಗೂಡುವಿಕೆಗಳನ್ನು ಮಿತಿಗೊಳಿಸುವುದರ ವಿರುದ್ದ ಹಕ್ಕನ್ನು ಮುಂದೂಡದಂತೆ ಆದೇಶ ಹೊರಡಿಸಿತ್ತು.<ref>{{cite web |url=http://www.yale.edu/lawweb/jbalkin/opeds/historylesson1.pdf |format=PDF |title=History Lesson |accessdate= |author=Balkin, Jack M. |year=2002 |work= |publisher=[[Yale University]] |archive-date=ಮಾರ್ಚ್ 4, 2016 |archive-url=https://web.archive.org/web/20160304054220/http://www.yale.edu/lawweb/jbalkin/opeds/historylesson1.pdf |url-status=dead }}</ref>
ಕ್ಲಾನ್ ವೇಷಭೂಷಣಗಳನ್ನು "[[ರಾಜನ ವಿಶೇಷ ಹಕ್ಕು ಅಥವಾ ರೆಗಾಲಿಯಾ]]", ಎಂದು ಸಹ ಕರೆಯುತ್ತಿದ್ದರು, ಅದು ೧೮೭೦ದಶಕದ ಆರಂಭದಲ್ಲಿ ಕಣ್ಮರೆಯಾಗಿತ್ತು. (ವೇಡ್ ೧೯೮೭,ಪಿ. ೧೦೯).
ವಾಸ್ತವವೆಂದರೆ, ಸಿಮ್ಮನ್ಸ್ರ ೧೯೧೫ರ ಕ್ಲಾನ್ ಮನರಂಜನೆಯು "ಮಾಜಿ ಕ್ಲಾನ್ ಸದಸ್ಯರ ಪುನಸ್ಥಾಪನೆ"ಯ ಇಬ್ಬರ ಬಲವರ್ಧನೆಯನ್ನು ಮಾತ್ರ ಆಕರ್ಷಿಸಿದಾಗ ಕ್ಲಾನ್ ದಶಕಗಳ ಕಾಲ ಅಸ್ಥಿತ್ವದಲ್ಲಿರುವುದಿಲ್ಲ ಎಂಬುದನ್ನು ತೋರಿಸಿತು. ಅದರ ಎಲ್ಲಾ ಸದಸ್ಯರು ಹೊಸಬರು.<ref>(ವೇಡ್ ೧೯೮೭, p. ೧೪೪).</ref> ೧೮೭೨ರ ನಂತರ ಕ್ಲಾನ್ ಒಂದು ಸಂಘಟನೆಯಂತೆ ಮುರಿದು ಬಿತ್ತು.<ref>[http://www.pbs.org/wnet/jimcrow/stories_events_enforce.html "ದಿ ರೈಸ್ ಆಯಂಡ್ ಫಾಲ್ ಆಫ್ ಜಿಮ್ ಕ್ರುವ್:ದಿ ಎನ್ಪೋರ್ಸ್ಮೆಂಟ್ ಆಯ್ಕ್ಟ್ಸ್,1870–1871", ಪಬ್ಲಿಕ್ ಬ್ರಾಡ್ಕಾಸ್ಟ್ ಸರ್ವೀಸ್] {{Webarchive|url=https://web.archive.org/web/20090501083643/http://www.pbs.org/wnet/jimcrow/stories_events_enforce.html |date=ಮೇ 1, 2009 }}. ರೇಟ್ರೈವ್ಡ್ ಏಪ್ರಿಲ್ ೫, ೨೦೦೮.</ref> ಅದೇನೆ ಇದ್ದರೂ, ಕ್ಲಾನ್ ಸ್ವತಃ ಸಾಧಿಸುವಲ್ಲಿ ವಿಫಲಗೊಂಡಿದ್ದಂತಹ ಗುರಿಗಳಾದ ದಕ್ಷಿಣದ ಕರಿಯರಿಗೆ [[ಮತಾಧಿಕಾರ]]ವನ್ನು ತಡೆಯುವುದು ಮತ್ತು ಬಡ ಬಿಳಿಯರು ಮತ್ತು ಕರಿಯರ ನಡುವೆ ಪ್ರತ್ಯೇಕತೆಯನ್ನುಂಟು ಮಾಡುವುದು ಮುಂತಾದವುಗಳು ೧೮೯೦ರ ನಂತರ ದಕ್ಷಿಣದ ರಾಜಕೀಯ ತೀವ್ರವಾದಿ ಬಿಳಿಯರಿಂದ ಅತ್ಯಧಿಕವಾಗಿ ನೆರವೇರಿದವು. ೧೮೯೨ರಲ್ಲಿ ೧೬೧ ಕೊಲೆಗಳೊಂದಿಗೆ ಪರಾಕಾಷ್ಟೆ ತಲುಪಿದ್ದರ ಪರ್ಯಾಯವಾಗಿ, ಕ್ಲಾನ್ನ ವಿಯೋಜನೆಯಿಂದ ಆಫ್ರಿಕನ್ ಅಮೆರಿಕನ್ನರನ್ನು ಗಲ್ಲುಗೇರಿಸುವುದು ಅಂತ್ಯಗೊಂಡಿತು.<ref>{{cite web |url=http://www.bgsu.edu/departments/acs/1890s/lynching/lynching.html |title=Lynching in the 1890s |publisher=Bgsu.edu |date= |accessdate=2009-12-24 |archive-date=ಮಾರ್ಚ್ 9, 2010 |archive-url=https://web.archive.org/web/20100309042910/http://www.bgsu.edu/departments/acs/1890s/lynching/lynching.html |url-status=dead }}</ref>
== ಎರಡನೇ ಕ್ಲಾನ್: ೧೯೧೫–೧೯೪೪ ==
=== ೧೯೧೫ ರಲ್ಲಿ ಪುನರ್ ನಿರ್ಮಾಣ ===
[[ಚಿತ್ರ:Birth of a Nation theatrical poster.jpg|thumb|ಮೋವಿ ಪೋಸ್ಟರ್ ಫಾರ್ ದಿ ಬರ್ಥ್ ಆಫ್ ಎ ನೇಷನ್.ಇಟ್ ಹ್ಯಾಸ್ ಬೀನ್ ವೈಡ್ಲೀ ನೋಟೆಡ್ ಫಾರ್ ರಿಸಿವಿಂಗ್ ದಿ ಕು ಕ್ಲುಕ್ಸ್ ಕ್ಲಾನ್.]]
[[ಚಿತ್ರ:The-clansman-cropped.jpg|thumb|left|upright|ಆಯ್ನ್ ಇಲ್ಯೂಸ್ಟ್ರೇಷನ್ ಫ್ರಂ ದಿ ಕ್ಲಾನ್ಸ್ಮ್ಯಾನ್:::"ಟೇಕ್ ಡಟ್ ಫಮ್ ಯೊ ಇಕ್ವಲ್-"]]
೧೯೧೫ ರಲ್ಲಿ ಘಟಿಸಿದ ಮೂರು ಸಂಬಂಧಿತ ಘಟನೆಗಳು:
*ಮೊದಲನೇ ಕ್ಲಾನ್ ನ್ನು ವಿವರಿಸಲು ಮತ್ತು ವೈಭವೀಕರಿಸಲು ''[[ದಿ ಬರ್ತ್ ಆಫ್ ನೇಷನ್]]'' ಚಿತ್ರ ಬಿಡುಗಡೆಗೊಂಡಿತು.
*[[ಮೇರಿ ಫಾಗನ್]] ಹೆಸರಿನ ಚಿಕ್ಕ ವಯಸ್ಸಿನ ಬಿಳಿ ಹುಡುಗಿಯ ಅತ್ಯಾಚಾರ ಮತ್ತು ಸಾವಿನ ಬಗ್ಗೆ [[ಲಿಯೋ ಫ್ರಾಂಕ್]] ಎಂಬ ಯೆಹೂದ್ಯನ ವಿವಾದಾತ್ಮಕ ಸಾವಿನ ಹೇಳಿಕೆ ಬದಲಾಯಿತು, ಇವನನ್ನು [[ಅಟ್ಲಾಂಟ]]ದ ಹತ್ತಿರ ಮಾಧ್ಯಮದ ಉನ್ಮಾದದ ಹಿನ್ನೆಲೆಯ ವಿರುದ್ಧ ಗಲ್ಲಿಗೇರಿಸಲಾಯಿತು.
*ಎರಡನೇ ಕು ಕ್ಲುಕ್ಸ್ ಕ್ಲಾನ್ ಜಾರ್ಜಿಯಾದ ಸ್ಟೋನ್ ಮೌಂಟೇನ್ ನ್ನಲ್ಲಿ ಹುಟ್ಟಿಕೊಂಡಿತು, ಇದರ ಮೂಲ ಕರಿಯರ ವಿರೋಧಿ ನೀತಿಯ ಜೊತೆ ಹೊಸ ವಲಸೆಗಾರರ ವಿರೋಧಿ ನೀತಿ, ಕ್ಯಾಥೊಲಿಕ್ ವಿರೋಧಿ ನೀತಿ, [[ವಿರೋಧಿಗಳು]], ಮತ್ತು ಯೆಹೂದ್ಯರ ವಿರೋಧಿ ನೀತಿಗಳನ್ನು ಸೇರಿಸಲಾಯಿತು.
ಲಿಯೋ ಫ್ರಾಂಕ್ ನ ವಿಚಾರಣೆಯ ಸಮಯದಲ್ಲಿ ಸಂಘಟಿತಗೊಂಡ ನೈಟ್ಸ್ ಆಫ್ ಮೇರಿ ಫಾಗನ್ ಎಂದು ತಾವೇ ಕರೆದುಕೊಳ್ಳುವ ಹೆಚ್ಚಿನ ಸ್ಥಾಪಕರು ಅಟ್ಲಾಂಟದ ಸಂಘಟನೆಯವರು.
''ದಿ ಬರ್ತ್ ಆಫ್ ಅ ನೇಷನ್'' ನ್ನಲ್ಲಿ ಅರ್ಪಿಸುವ ಕ್ಲಾನ್ ನ ಕಾಲ್ಪನಿಕ ಆವೃತ್ತಿಗೆ ಹೊಸ ಸಂಘಟನೆ ಪೈಪೋಟಿ ನೀಡಿತು.
==== ''ದಿ ಬರ್ತ್ ಆಫ್ ಎ ನೇಷನ್ '' ====
ನಿರ್ದೇಶಕ [[ಡಿ.ಡಬ್ಲು.ಗ್ರಿಫಿತ್]] ರ ''ದಿ ಬರ್ತ್ ಆಫ್ ಅ ನೇಷನ್'' ಮೂಲ ಕ್ಲಾನ್ ನ್ನು ವೈಭವೀಕರಿಸುತ್ತದೆ.
ಇವರ ಚಿತ್ರಗಳು [[ಥಾಮಸ್ ಡಿಕ್ಸನ್,ಜೆಆರ್]] ರವರು ಬರೆದ ಪುಸ್ತಕ ಮತ್ತು ನಾಟಕ ''[[ದಿ ಕ್ಲಾನ್ಸ್ ಮ್ಯಾನ್]]'' ಮತ್ತು ''[[ದಿ ಲಿಯೋಪರ್ಡ್ಸ ಸ್ಫೋಟ್ಸ್]]'' ಪುಸ್ತಕಗಳ ಮೇಲಿತ್ತು.
"ಉತ್ತರ ಭಾಗದವರ ಮನೋ ಭಾವವನ್ನು ಇತಿಹಾಸವನ್ನು ಪ್ರಸ್ತುತಪದಿಸುವುದರ ಮೂಲಕ ಮಾರ್ಪಾಡು ಮಾಡುವುದು ಇದು ಪ್ರತಿಯೊಬ್ಬ ಕೇಳುಗರನ್ನು ಉತ್ತಮ [[ಪ್ರಜೆ]]ಯನ್ನಾಗಿ ಮಾಡುತ್ತದೆ" ಇದು ತಮ್ಮ ಉದ್ದೇಶವಾಗಿತ್ತು ಎಂದು ಡಿಕ್ಸನ್ ಹೇಳಿದ್ದಾರೆ.
ಈ ಚಿತ್ರ ದೇಶದ ತುಂಬೆಲ್ಲ ಕ್ಲಾನ್ ಬಗ್ಗೆ ಆಸಕ್ತಿಯನ್ನು ಹುಟ್ಟಿಸಿತು.
ಅಟ್ಲಾಂಟದ ಸರ್ಕಾರಿ ಮುಖ್ಯಸ್ಥ, ಕ್ಲಾನ್ ನ ಸದಸ್ಯರು ಥಿಯಟರಿನ ಮುಂದಿನ ರಸ್ತೆಯಲ್ಲಿ ಮೆರವಣಿಗೆ ಮಾಡಿದರು.<ref>ಡ್ರೇಯ್ ೨೦೦೨.</ref>
ಉತ್ತಮ ಗುಣಮಟ್ಟದ ಬಿಳಿಯ ಉಡುಪು ಮತ್ತು ಪ್ರಕಾಶಿತ ಶಿಲುಬೆಗಳಿಂದ ಹಿಡಿದು, ಹೆಚ್ಚಿನ ಆಧುನಿಕ ಕ್ಲಾನ್ ನ ಮೂರ್ತಿ ನಿರ್ಮಾಣಗಳು ಚಲನಚಿತ್ರಗಳಿಂದ ಪಡೆದುಕೊಂಡಿದ್ದಾಗಿದೆ.
ಇದರ ಪ್ರತಿಮೆಗಳು ಸರ್ [[ವಾಲ್ಟರ್ ಸ್ಕಾಟ್]] ರವರ ಕವಿತೆ ಮತ್ತು ಕಾದಂಬರಿಗಳಲ್ಲಿನ ವರ್ಣಿಸಿದಂತೆ, ಡಿಕ್ಸನ್ ರ ಹಳೆಯ ಸ್ಕಾಟ್ಲೆಂಡ್ ನ ಪ್ರೇಮವನ್ನು ಸೂಚಿಸುವ ವಿಷಯದ ಆಧಾರದ ಮೇಲಿತ್ತು.
ಇತಿಹಾಸಕಾರ ಮತ್ತು ಯು.ಎಸ್. ನ ಅಧ್ಯಕ್ಷ [[ವುಡ್ರೋ ವಿಲ್ಸನ್]] ರ ವ್ಯಾಪಕವಾದ ವರದಿಯ ಒಪ್ಪಂದದ ಮೂಲಕ ಚಿತ್ರದ ಪ್ರಭಾವ ಮತ್ತು ಜನಪ್ರಿಯತೆ ಅಧಿಕವಾಯಿತು.
[[ಚಿತ್ರ:President Woodrow Wilson portrait December 2 1912.jpg|thumb|ಪ್ರಸಿಡೇಂಟ್ ವಿಲ್ಸನ್]]
ವುಡ್ರೋ ವಿಲ್ಸನ್ ರ ''ಹಿಸ್ಟರಿ ಆಫ್ ದಿ ಅಮೇರಿಕನ್ ಪೀಪಲ್'' ನಲ್ಲಿನ ವಿಸ್ತಾರವಾದ ಉಲ್ಲೇಖನಗಳು ''ದಿ ಬರ್ತ್ ಆಫ್ ಅ ನೇಷನ್'' ನ್ನಲ್ಲಿ ಇದಕ್ಕೆ ಬಲವಾದ ಅಡಿಪಾಯ ಕೊಡುವಂತೆ ಸೇರಿಕೊಂಡಿವೆ.
[[ವೈಟ್ ಹೌಸ್]] ನ ವಿಶೇಷವಾದ ಪರದೆಯ ಮೇಲೆ ಚಿತ್ರ ವೀಕ್ಷಿಸಿದ ನಂತರ ವಿಲ್ಸನ್ ಹೀಗೆ ಹೇಳಿದ್ದಾರೆ, "ಇದು ಬೆಳಕಿನ ಜೊತೆ ಇತಿಹಾಸವನ್ನು ಬರೆಯುವ ಹಾಗೆ ಇದೆ, ಮತ್ತು ಒಂದೇ ಒಂದು ವಿಷಾದವೆಂದರೆ ಇದೆಲ್ಲವೂ ಭಯಾನಕ ಸತ್ಯ".<ref>ಡ್ರೇಯ್ ೨೦೦೨, p. ೧೯೮. ಗ್ರೀಫಿಥ್ ಕ್ಯುವಿಕ್ ರೆಲೇಯ್ಡ್ ದಿ ಕಮೆಂಟ್ ಟು ದಿ ಪ್ರೆಸ್, ವೇರ್ ಇಟ್ ವೈಡ್ಲೀ ರಿಪೋರ್ಟೆಡ್. ಇನ್ ಸುಬ್ಸೀಕ್ವೆಂಟ್ ಕರಸ್ಪಾಂಡೆನ್ಸ್, ವಿಲ್ಸನ್ ಡಿಸ್ಕಸ್ಡ್ ಗ್ರೀಫಿಥ್ಸ್ ಫಿಲ್ಮ್ಮೇಕಿಂಗ್ ಇನ್ ಎ ಪಾಸಿಟಿವ್ ಟೋನ್ ವಿತ್ಔಟ್ ಚಾಲೆಂಜಿಂಗ್ ಯೂಸ್ ಆಫ್ ಇಸ್ ಸ್ಟೇಟ್ಮೆಂಟ್.</ref>
ಜಾತಿ ಮತ್ತು ಕ್ಲಾನ್ ಗಳ ಬಗ್ಗೆ ವಿಲ್ಸನ್ ರವರ ಅಭಿಪ್ರಾಯದ ಹೇಳಿಕೆಯನ್ನು ಚಿತ್ರವನ್ನು ಬೆಂಬಲಿಸುವಂತೆ ತೆಗೆದುಕೊಳ್ಳಲಾಗಿದೆ.
ನಂತರದ ಗ್ರಿಫಿತ್ ಜೊತೆಗಿನ ಮಾತುಕತೆಯಲ್ಲಿ ವಿಲ್ಸನ್ ರವರು ಅವರ ಉತ್ಸಾಹವನ್ನು ಸ್ಪಷ್ಟಪಡಿಸುತ್ತಾರೆ.
ವಿಲ್ಸನ್ ರವರ ಹೇಳಿಕೆಗಳು ತಕ್ಷಣ ವಿವಾದಾಸ್ಪದವಾದವು.
ವಿಲ್ಸನ್ ತಟಸ್ಥವಾಗಿರಲು ಪ್ರಯತ್ನಿಸಿದರು, ಆದರೆ ಕೊನೆಯಲ್ಲಿ ಎಪ್ರಿಲ್ ೩೦ರಂದು [[ನಾನ್-ಡೆನಿಯಲ್ ಡೆನಿಯಲ್]] (ಸಮ್ಮತಿಯ ನಿರಾಕರಣೆ)ಯನ್ನು ಜಾರಿಗೊಳಿಸಿದರು.<ref>ವೇಡ್ ೧೯೮೭, p. ೧೩೭.</ref>
ಇತಿಹಾಸಕಾರ [[ಅರ್ಥರ್ ಲಿಂಕ್]] ವಿಲ್ಸನ್ ರ ಸಹಾಯಕ [[ಜೋಸೆಫ್ ತುಮಲ್ಟಿ]] ಈ ಮಾತನ್ನು ಎತ್ತಿಹೇಳಿದ್ದಾರೆ : "ಇದನ್ನು ಪ್ರಸ್ತುತಪಡಿಸುವ ಮೊದಲು ಅಧ್ಯಕ್ಷರಿಗೆ ಸಂಪೂರ್ಣವಾದ ವಿಷಯ ಗೊತ್ತಿರಲಿಲ್ಲ ಮತ್ತು ಯಾವ ಸಮಯದಲ್ಲೂ ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಿಲ್ಲ."<ref>ಲೆಟರ್ ಫ್ರಂ ಜೆ.ಎಮ್.ಟುಮಲ್ಟಿ,ಸೆಕ್ರೇಟ್ರಿ ಟು ಪ್ರೆಸಿಡೆಂಟ್ ವಿಲ್ಸನ್,ಟುದಿ ಬೊಸ್ಟನ್ ಬ್ರಾನ್ಚ್ ಆಫ್ ದಿ NAACP,ಕೊಟೆಡ್ ಇನ್ ಲಿಂಕ್,ವಿಲ್ಸನ್.</ref>
==== ಲಿಯೋ ಫ್ರಾಂಕ್ ====
ಮತ್ತೊಂದು ಘಟನೆ ಕ್ಲಾನ್ ಪರೀಕ್ಷೆಯ ಸಂವೇದನೆಯ ವ್ಯಾಪ್ತಿಯಾಗಿತ್ತು ಎಂಬುದಕ್ಕೆ ಒಟ್ಟು ನೀಡುತ್ತದೆ, ಅಟ್ಲಾಂಟದ ಫ್ಯಾಕ್ಟರಿ ಮುಖ್ಯಸ್ಥ [[ಲಿಯೋ ಫ್ರಾಂಕ್]] ಹೆಸರಿನ ಯೆಹೂದ್ಯನನ್ನು ಶಿಕ್ಷಿಸಿ ಗಲ್ಲಿಗೇರಿಸಿದ ಘಟನೆ.
ಭಯಂಕರ ದಿನಪತ್ರಿಕೆಗಳ ದೃಷ್ಟಿಯಲ್ಲಿ, ಫ್ರಾಂಕ್ ಅವನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ [[ಮೇರಿ ಫಾಗನ್]] ಎಂಬ ಹುಡುಗಿಯ ಅತ್ಯಾಚಾರ ಮತ್ತು ಕೊಲೆಯ ಆರೋಪಿಯಾಗಿದ್ದ.
[[ಚಿತ್ರ:FrankLynchedLarge.jpg|thumb|ದಿ ಆಫ್ ಲಿಯೋ ಫ್ರಾಂಕ್]]
ನಂತರ ಜಾರ್ಜಿಯಾದ ವಿಚಾರಣೆಯಲ್ಲಿ, ಜನಸಮೂಹ ದಿನಾಲು ಕೋರ್ಟ್ ರೂಮನ್ನು ಸುತ್ತುವರೆದಿತ್ತು, ಫ್ರಾಂಕ್ ನನ್ನು ದೋಷಿ ಎಂದು ನಿರ್ಧರಿಸಲಾಯಿತು.
ಏಕೆಂದರೆ ಸಶಸ್ತ್ರ ಜನಸಮೂಹದ ಸಮ್ಮುಖದಲ್ಲಿ, ತೀರ್ಪನ್ನು ಘೋಷಿಸಿದ ಸಮಯದಲ್ಲಿ ನ್ಯಾಯಾಧೀಶರು ಫ್ರಾಂಕ್ ಮತ್ತು ಅವನ ವಕೀಲರನ್ನು ದೂರವಿರಲು ಹೇಳಿದ್ದರು.
ಫ್ರಾಂಕ್ ನ ಮೇಲ್ಮನವಿ ವಿಫಲವಾಯಿತು. ಸುಪ್ರೀಮ್ ಕೋರ್ಟ್ ನ್ಯಾಯವಾದಿ [[ಆಲಿವರ್ ವೆಂಡೆಲ್ ಹೋಮ್ಸ್]] ಉಳಿದ ನ್ಯಾಯವಿಚಾರಗಳ ಕುರಿತು ಅಸಮಾದಾನ ವ್ಯಕ್ತಪಡಿಸಿದರು ಅಲ್ಲದೆ ಗುಂಪಿನ ಬಗ್ಗೆ ನ್ಯಾಯಮೂರ್ತಿಗಳಿಗಿದ್ದ ಭಯದಿಂದಾಗಿ ನ್ಯಾಯಾಲಯವು ಇದರ [[ಪ್ರಕ್ರಿಯೆಯಲ್ಲಿ]] ಪ್ರತಿವಾದಿಗೆ ಸರಿಯಾದ ನ್ಯಾಯ ದೊರಕಲಿಲ್ಲ ಎಂಬುದು ಅವರ ವಾದವಾಗಿತ್ತು.
ನಂತರ ರಾಜ್ಯಪಾಲರು ಫ್ರಾಂಕ್ ನಿಗೆ ಜೀವಾವಧಿ ಶಿಕ್ಷೆ ವಿಧಿಸಿದರು, ಮೇರಿ ಫಾಗನ್ ನ ಅನುಯಾಯಿಗಳು ಎಂದು ತಮ್ಮಷ್ಟಕ್ಕೇ ಕರೆದುಕೊಂಡ ಜನಸಮೂಹ ಫ್ರಾಂಕ್ ನನ್ನು ಅಪಹರಿಸಿ ಗಲ್ಲಿಗೇರಿಸಿತು.
ಜಾರ್ಜಿಯಾದ ರಾಜಕಾರಣಿ ಮತ್ತು ಪ್ರಕಾಶಕ ಮತ್ತು ''ಜಫರ್ಸೊನಿಯನ್'' ಮ್ಯಾಗಜೀನ್ ನ ಸಂಪಾದಕ [[ಥಾಮಸ್ ಇ.ವ್ಯಾಟ್ಸನ್]] ರಿಂದ ಫ್ರಾಂಕ್ ವಿಚಾರಣೆಯನ್ನು ಕೌಶಲದಿಂದ ಆಯೋಜಿಸಲಾಗಿತ್ತು.
ಇವರು ಕ್ಲಾನ್ ಪುನರ್ನಿರ್ಮಾಣದ ಮುಖಂಡರಾಗಿದ್ದರು ಮತ್ತು ನಂತರ ಯು.ಎಸ. ಸಂಸತ್ತಿಗೆ ಆಯ್ಕೆಗೊಂಡರು.
೧೯೧೫ರಲ್ಲಿ [[ಸ್ಟೋನ್ ಮೌಂಟೇನ್]] ನ ತುದಿಯ ಮೇಲೆ [[ವಿಲಿಯಂ ಜೆ.ಸಿಮನ್ಸ್]] ರ ನೇತೃತ್ವದ ಸಭೆಯಲ್ಲಿ ಹೊಸ ಕ್ಲಾನ್ ಆರಂಭಗೊಂಡಿತು. ಮೂಲ ಕ್ಲಾನ್ ನಲ್ಲಿದ್ದ ಸದಸ್ಯರು ಮತ್ತು ತಾವೇ ಹೆಸರಿಸಿದ ನೈಟ್ಸ್ ಆಫ್ ಮೇರಿ ಫಾಗನ್ ನ ಸದಸ್ಯರು ಹಾಜರಿದ್ದರು.
೧೮೬೭ ರಲ್ಲಿ ಒಕ್ಕೂಟದ ಮುಖ್ಯಸ್ಥ ಜಾರ್ಜ್ ಜೋರ್ಡನ್ ಅವರು ರಾಷ್ಟ್ರೀಯ ಸಂಘಟನೆಯನ್ನು ಸೃಷ್ಟಿಸುವ ಪ್ರಯತ್ನಕ್ಕಾಗಿ ಬರೆದ ಮೂಲ ಕ್ಲಾನ್ ನ ಆದೇಶಗಳಿಂದ ತಾನು ಸ್ಫೂರ್ತಿಗೊಂಡಿರುವುದಾಗಿ ಸಿಮನ್ಸ್ ಹೇಳಿದ್ದಾರೆ.
ಇವುಗಳನ್ನು ಕ್ಲಾನ್ ಗಳಲ್ಲಿ ಯಾವಾಗಲೂ ಅಳವಡಿಸಿಕೊಳ್ಳಲಿಲ್ಲ.<ref>''ದಿ ದಿ ಕು ಕ್ಲುಕ್ಸ್ ಕ್ಲಾನ್ ಆಯ್೦ಡ್ ರೆಲೇಟೆಡ್ ಅಮೇರಿಕಾ ರೇಸಿಯಲಿಸ್ಟ್ ಆಯ್೦ಡ್ ಆಯ್೦ಟಿಸೆಮಿಟಿಕ್ ಆರ್ಗನೈಜೇಶನ್ಸ್: ಎ ಹಿಸ್ಟರಿ ಆಯ್೦ಡ್ ಅನಲೆಸಿಸ್'' ಬೈ ಚೆಸ್ಟರ್ ಎಲ್ ಕ್ಯಾರಲ್ಸ್, ಪೇಜ್ ೨೧೯. ದಿ ಸೆಕೆಂಡ್ ಕ್ಲಾನ್ಸ್ ಕಾನ್ಸ್ಟಿಟ್ಯೂಶನ್ ಆಯ್೦ಡ್ ಪ್ರಿಯಾಂಬಲ್,ರೀಪ್ರಿಂಟೆಡ್ ಇನ್ ಕ್ಯಾರೆಲ್ಸ್ ಬುಕ್, ಸ್ಟ್ಯಾಂಡೆಡ್ ದಟ್ ದಿ ಸೆಕೆಂಡ್ ಕ್ಲಾನ್ ವಾಸ್ ಇನ್ಡಿಬೇಟೆಡ್ ಟು ದಿ ಒರಿಜಿನಲ್ ಕ್ಲಾನ್ಸ್ ಪ್ರೀಸ್ಕ್ರಿಪ್ಟ್ಸ್.</ref>
ಕ್ಲಾನ್ ನ ಉದ್ದೇಶಗಳನ್ನು ಕಾನೂನು ಕಟ್ಟಳೆಗಳು ಮಾದರಿ ಶಬ್ದಗಳಲ್ಲಿ ಹೇಳಿವೆ, ಸತ್ಯವನ್ನು ಅಡಗಿಸಿ ಇದರ ಸದಸ್ಯರು ಹಿಂಸಾಚಾರ ನಡೆಸಿದರು ಮತ್ತು ಮುಸುಕನ್ನು ಧರಿಸಿ ಕೊಲೆಗಳನ್ನು ಮಾಡಿದರು.
=== ಸಾಮಾಜಿಕ ಸಂಗತಿಗಳು ===
ನಗರೀಕರಣ ಮತ್ತು ಕೈಗಾರಿಕೀಕರಣಕ್ಕೆ ಉತ್ತರವಾಗಿ, ಎರಡನೇ ಕ್ಲಾನ್ [[ಅಮೇರಿಕಾದ ಜಾತಿ ಸಂಬಂಧಗಳ ಅಧೋಗತಿ]]ಯ ಸಮಯದಲ್ಲಿ ಹುಟ್ಟಿಕೊಂಡಿತು.
ಪೂರ್ವ ಮತ್ತು ದಕ್ಷಿಣ ಭಾಗದ ಯೂರೋಪಿನ ಕ್ಯಾಥೊಲಿಕ್ ರ ದೇಶಗಳಿಂದ ಬಂದ ಅಧಿಕ ಪ್ರಮಾಣದ ವಲಸೆಗಾರರು ಅಮೆರಿಕಾದ ಬಹಳ ಹಿಂದೆ ಸ್ಥಾಪಿತವಾದ ಪ್ರೊಟೆಸ್ಟಂಟರ ಜೊತೆ ಸಂಘರ್ಷಕ್ಕೆ ಮುಂದಾದರು.
ಉತ್ತರ ಭಾಗಕ್ಕೆ ಆಫ್ರಿಕನ್ ಅಮೇರಿಕಾದವರ [[ಹೆಚ್ಚಿನ ವಲಸೆ]] ಉತ್ತರ ಭಾಗದ ಕೈಗಾರಿಕಾ ನಗರದಲ್ಲಿರುವ ಬಿಳಿಯರಲ್ಲಿ ಜನಾಂಗಭೇದ ನೀತಿಯ ಉರಿ ಹೆಚ್ಚಿಸಿತು; ಹೀಗೆ ಎರಡನೇ ಕ್ಲಾನ್ ಇದರ ಉನ್ನತ ರಾಜಕಾರಣದ ಬಲವನ್ನು [[ಇಂಡಿಯಾನಾ]]ದಲ್ಲಿ ಸಾಧಿಸಿತು, ಆದರೆ ದಕ್ಷಿಣದ ರಾಜ್ಯಗಳಲ್ಲಿ ಸಾಧ್ಯವಾಗಲಿಲ್ಲ.
ದಕ್ಷಿಣ ಭಾಗದ ನಗರಗಳಿಗೆ ಆಫ್ರಿಕಾದ ಅಮೆರಿಕನ್ನರು ಮತ್ತು ಗ್ರಾಮೀಣ ಪ್ರದೇಶಗಳ ಬಿಳಿಯರ ವಲಸೆ ಆತಂಕವನ್ನು ಇನ್ನೂ ಹೆಚ್ಚಿಸಿತು.
೧೯೧೦ ಮತ್ತು ೧೯೩೦ರ ಮಧ್ಯೆ [[ಡೆಟ್ರಿಯಾಟ್]], [[ಮೆಂಪಿಸ್]], [[ಡಯ್ಟನ್]], [[ಅಟ್ಲಾಂಟ]], [[ದಲ್ಲಾಸ್]], ಮತ್ತು [[ಹೌಸ್ಟನ್]] ನಂತಹ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಕ್ಲಾನ್ ತ್ವರಿತವಾಗಿ ಬೆಳೆಯಿತು.<ref>ಜ್ಯಾಕ್ಸನ್ ೧೯೬೭, p. ೨೪೧.</ref>
ದಕ್ಷಿಣ ಭಾಗದ ಮೊದಲನೇ ಕ್ಲಾನ್ ನ ಸಹಾನುಭೂತಿಯ ಇತಿಹಾಸಕಾರ [[ಸ್ಟೇನ್ಲಿ ಹಾರ್ನ್]] ಇದನ್ನು ನಂತರದ್ದಕ್ಕೆ ಹೋಲಿಸುವ ಮಾತಿನ ಸಂದರ್ಶನದಲ್ಲಿ ಎಚ್ಚರಿಕೆ ವಹಿಸಿದ್ದರು "ಕೃತಕ ಕು ಕ್ಲಕ್ಸ್ ಸಂಘಟನೆ ಕೆಟ್ಟದಾಗಿತ್ತು ಮತ್ತು ಎಂದಿಗೂ ಕ್ಲಾನ್ ನ ಪುನರ್ ನಿರ್ಮಾಣದ ದಿನಗಳ ಜೊತೆ ಯಾವುದೇ ಸಂಬಂಧ ಹೊಂದಿರಲಿಲ್ಲ".<ref>{{Cite web |url=http://www.foresthistory.org/research/Biltmore_Project/OHIs/HornOHI.pdf |title=ಆಯ್ನ್ ಇನ್ಟರ್ವಿವ್ ವಿತ್ ಸ್ಟೇನ್ಲಿ ಎಫ್.ಹಾರ್ನ್ -ಒರಲ್ ಹಿಸ್ಟರಿ ಇನ್ಟೆರ್ವಿವ್ಸ್ ಆಫ್ ದಿ ಫಾರೆಸ್ಟ್ ಹಿಸ್ಟರಿ ಸೊಸೈಟಿ |access-date=ಮಾರ್ಚ್ 29, 2010 |archive-date=ಮಾರ್ಚ್ 26, 2017 |archive-url=https://web.archive.org/web/20170326190608/http://www.foresthistory.org/research/biltmore_project/ohis/hornohi.pdf |url-status=dead }}</ref>
[[ಚಿತ್ರ:William-joseph-simmons2.jpg|thumb|ವಿಲಿಯಂ ಜೆ.ಸಿಮ್ಮೊನ್ಸ್ ಫೌಂಡೆಡ್ ದಿ ಸೆಕೆಂಡ್ ಕು ಕ್ಲುಕ್ಸ್ ಕ್ಲಾನ್ ಇನ್ 1915.]]
[[ಸಾಮಾಜಿಕ ಭದ್ರತೆ]] ಇಲ್ಲದ ಅಥವಾ [[ಜೀವ ವಿಮೆ]] ಹೆಚ್ಚ್ಹಾಗಿ ಸಿಗುವ ಕಾಲದಲ್ಲಿ, ಗಂಡಸರು ತೀರಿ ಕೊಂಡರೆ ಅಥವಾ ಕೆಲಸ ಮಾಡಲು ಅಶಕ್ತರಾದ ಸಂದರ್ಭಗಳಲ್ಲಿ ಅವರ ಕುಟುಂಬಕ್ಕೆ ಭದ್ರತೆ ಒದಗಿಸುವ ಸಲುವಾಗಿ [[ಎಲ್ಕ್ಸ್]]ಅಥವಾ [[ವುಡ್ ಮೆನ್ ಆಫ್ ದಿ ವರ್ಲ್ಡ್]] ನಂತಹ [[ಸ್ನೇಹ ಸೌಹಾರ್ದ ಸಂಘಟನೆ]]ಗಳಿಗೆ ಗಂಡಸರು ಸೇರುವುದು ಸಾಮಾನ್ಯವಾಗಿತ್ತು.
ಕ್ಲಾನ್ ನ ಪ್ರವರ್ತಕ [[ವಿಲಿಯಂ ಜೆ. ಸಿಮನ್ಸ್]] ಹನ್ನೆರಡು ವಿವಿಧ ರೀತಿಯ ಸ್ನೇಹ ಸೌಹಾರ್ದ ಸಂಘಟನೆಗಳ ಸದಸ್ಯರಾಗಿದ್ದರು.
ಸ್ನೇಹ ಸೌಹಾರ್ದದ ಬ್ಯಾಜ್ ಗಳಿಂದ ತುಂಬಿರುವವರನ್ನು ಅವರು [[ಕ್ಲಾನ್ ಗಳಿಗೆ ಆಯ್ಕೆ]] ಮಾಡಿದರು, ಆ ಸಂಘಟನೆಗಳ ನಂತರ ಉದ್ದೇಶಪೂರ್ವಕವಾಗಿ ಮಾದರಿ ವ್ಯಕ್ತಿಗಳನ್ನಾಗಿ ಮಾಡಲಾಯಿತು.<ref>{{cite web |author=By Friday, Apr. 09, 1965 |url=http://www.time.com/time/magazine/article/0,9171,898581,00.html |title=Nation: The Various Shady Lives Of The Ku Klux Klan |publisher=TIME |date=1965-04-09 |accessdate=2009-12-24 |archive-date=ಆಗಸ್ಟ್ 24, 2013 |archive-url=https://web.archive.org/web/20130824014609/http://www.time.com/time/magazine/article/0,9171,898581,00.html |url-status=dead }}</ref>
"[[ಕ್ಲೆಗ್ಲೆಸ್]]" ಎಂದು ಕರೆಯುವ ಕ್ಲಾನ್ ನ ಸಂಘಟಕರು ನೂರಾರು ಹೊಸ ಸದಸ್ಯರನ್ನು ಸೇರಿಸಿಕೊಂಡರು, ಅವರು ಆರಂಭದ ಶುಲ್ಕ ಕೊಟ್ಟರು ಮತ್ತು KKK ವೇಷ ಭೂಷಣಗಳನ್ನು ಪಡೆದರು.
ಸಂಘಟಕರು ಹಣದ ಅರ್ಧ ಮೊತ್ತವನ್ನು ತಾವೇ ಇಟ್ಟುಕೊಂಡರು ಮತ್ತು ಉಳಿದಿದ್ದನ್ನು ರಾಜ್ಯದ ಅಥವಾ ರಾಷ್ಟ್ರೀಯ ಅಧಿಕಾರಿಗಳಿಗೆ ಕಳುಹಿಸುತ್ತಿದ್ದರು.
ಸಂಘಟಕರು ಒಂದು ಪ್ರದೇಶದಲ್ಲಿ ಮಾಡಿದಾಗ, ಅವರು ಒಂದು ದೊಡ್ಡ ಮೇಳವನ್ನು ಸಂಘಟಿಸಿ, ಕೆಲವೊಮ್ಮೆ ಶಿಲುಬೆಯನ್ನು ಸುಟ್ಟು ಮತ್ತು ಪ್ರಾಯಶಃ ಪ್ರಾದೇಶಿಕ ಮಂತ್ರಿಯವರಿಗೆ ಬೈಬಲ್ ನ್ನು ನೀಡುತ್ತಿದ್ದರು.
ಅವರು ನಂತರ ಹಣದ ಜೊತೆ ಊರು ಬಿಟ್ಟರು. ಪ್ರಾದೇಶಿಕ ಘಟಕಗಳು ಬಹಳ ಸ್ನೇಹ ಸೌಹಾರ್ದ ಸಂಘಗಳಂತೆ ಕಾರ್ಯ ನಿರ್ವಹಿಸಿದವು ಮತ್ತು ಕೆಲವೊಮ್ಮೆ ಭಾಷಣಗಾರರನ್ನು ಕರೆಸುತ್ತಿದ್ದರು.
[[ಮೊದಲ ಮಹಾಯುದ್ಧ]] ಮತ್ತು ಮುಂದಿನ ಯುದ್ಧದ ಆತಂಕಗಳ ಬದಲಾವಣೆಗಳಿಂದ (ಮೊಬಿಲೈಜೆಶನ್) ಕ್ಲಾನ್ ಗಳ ಬೆಳವಣಿಗೆಗೆ ಅಡ್ಡ ಪರಿಣಾಮ ಬೀರಿತು, ವಿಶೇಷವಾಗಿ ನಗರಗಳಲ್ಲಿ ಪದೇ ಪದೇ ಹೊಸಬರು ತಮ್ಮತಮ್ಮಲ್ಲಿಯೇ ಹತ್ತಿಕ್ಕಿಕೊಳ್ಳುತ್ತಿದ್ದರು.
ದಕ್ಷಿಣ ಭಾಗದ ಬಿಳಿಯರು ಕಪ್ಪು ಯೋಧರ ಸೈನ್ಯದ ಮೇಲೆ ಸಿಟ್ಟಾದರು.
ಕಪ್ಪು ಕೆಲಸಗಾರರು ಎರಡನೇ ದರ್ಜೆಗೆ ಹೋಗಲು ಇಚ್ಛಿಸುತ್ತಿರಲಿಲ್ಲ, ಮತ್ತು ಇನ್ನೂ ಸಮವಸ್ತ್ರದಲ್ಲಿ ವಿದೇಶದಿಂದ ಹಿಂದಿರುಗಿದಾಗ ಕೆಲವರನ್ನು ಗಲ್ಲಿಗೇರಿಸಲಾಯಿತು.<ref>[http://mailer.fsu.edu/~mjones/rosewood/rosewood.html ಮ್ಯಾಕ್ಸಿನ್ ಡಿ.ರೋಗರ್ಸ್, ''ಎಟ್ ಅಲ್'', ''ಡಾಕ್ಯೂಮೆಂಟೆಡ್ ಹಿಸ್ಟರಿ ಆಫ್ ರೋಸ್ವುಡ್, ಫ್ಲೋರಿಡಾ ಇನ್ ಜನವರಿ 1923'', ''op.cit., pp.4-6'' ] {{Webarchive|url=https://web.archive.org/web/20080515152951/http://mailer.fsu.edu/~mjones/rosewood/rosewood.html |date=ಮೇ 15, 2008 }},ಆಯ್ಕಸ್ಸಡ್ ಮಾರ್ಚ್೨೮, ೨೦೦೮; ಕ್ಲರೆನ್ಸ್ ಲುಸೇನ್(೨೦೦೩), ಹಿಟ್ಲರ್ಸ್ ಬ್ಲಾಕ್ ವಿಕ್ಟಿಮ್ಸ್'', p. ೮೯''.</ref>
=== ಚಟುವಟಿಕೆಗಳು ===
ಸಾಮಾಜಿಕ ಬದಲಾವಣೆಗಳ ಪರಿಣಾಮವಾಗಿ, ಕ್ಲಾನ್ [[ಯಹೂದಿ-ವಿರೋಧಿ]], [[ಕ್ಯಾಥೋಲಿಕ್-ವಿರೋಧಿ]], [[ಕಮ್ಯೂನಿಸ್ಟ್-ವಿರೋಧಿ]] ಮತ್ತು [[ವಲಸೆಗಾರ-ವಿರೋಧಿ]] ಟೀಕಾಕಾರರನ್ನು ಸೇರಿಸಿಕೊಂಡಿತು.
ಕಪ್ಪು ಸೈನಿಕರು [[ಮೊದಲನೇ ಮಹಾಯದ್ಧ]]ದಿಂದ ಮರಳುತ್ತಿದ್ದಾಗ ಅವರು ಇನ್ನೂ ಸೈನಿಕ ಸಮವಸ್ತ್ರದಲ್ಲಿದ್ದುದ್ದರಿಂದ ಅವರನ್ನು ಕ್ಲಾನ್ ಗುಂಪುಗಳು ಲಿಂಚ್ ನ್ಯಾಯದಂತೆ ಗಲ್ಲಿಗೇರಿಸಿದವು ಮತ್ತು ಕೊಲೆ ಮಾಡಿದವು. "ತಮ್ಮ ದೇಶದಲ್ಲಿ ವಾಸಿಸಲು ಕಪ್ಪು ಜನರು ಅನುಮತಿ ಪಡೆದು" ಶ್ವೇತಜನಾಂಗೀಯ ಹಕ್ಕುಗಳನ್ನು ಗೌರವಿಸಬೇಕು ಎಂದು ಕ್ಲಾನ್ ಕಪ್ಪುಜನರಿಗೆ ಎಚ್ಚರಿಕೆ ನೀಡಿತು.<ref name="Franklin-R&H">ಫ್ರಾಂಕ್ಲಿನ್ ೧೯೯೨, p.೧೪೫</ref> ಅನೇಕ ಜನರನ್ನು ಅನುಕ್ರಮವಾಗಿ ಗಲ್ಲಿಗೇರಿಸಲಾಯಿತು ಮತ್ತು ೧೯೧೮ರಿಂದ ೧೯೨೭ರವರೆಗೆ, ದಕ್ಷಿಣ ಭಾಗದಲ್ಲೇ ಹೆಚ್ಚಾಗಿ ೪೧೬ ಆಫ್ರಿಕನ್ ಅಮೆರಿಕನ್ ಜನರು ಕೊಲ್ಲಲ್ಪಟ್ಟರು.<ref name="autogenerated1">[http://mailer.fsu.edu/~mjones/rosewood/rosewood.html ಮ್ಯಾಕ್ಸಿನ್ ಡಿ.ರೋಗರ್ಸ್, ''ಎಟ್ ಅಲ್'', ''ಡಾಕ್ಯೂಮೆಂಟೆಡ್ ಹಿಸ್ಟರಿ ಆಫ್ ರೋಸ್ವುಡ್, ಫ್ಲೋರಿಡಾ ಇನ್ ಜನವರಿ 1923'', ''op.cit., p.7'' ] {{Webarchive|url=https://web.archive.org/web/20080515152951/http://mailer.fsu.edu/~mjones/rosewood/rosewood.html |date=ಮೇ 15, 2008 }}. ೨೦೦೮ರ ಮಾರ್ಚ್ ೨೩ರಂದು ತೆಗೆದುಕೊಳ್ಳಲಾಗಿದೆ.</ref>
[[ಪ್ಲೋರಿಡಾದ ಒಕೊಯಿ]]ಯಲ್ಲಿ ೧೯೨೦ರ ನವೆಂಬರ್ನಲ್ಲಿ ಇಬ್ಬರು ಕಪ್ಪು ಜನರು ಮತ ಚಲಾಯಿಸಲು ಪ್ರಯತ್ನಿಸಿದಾಗ, ಕ್ಲಾನ್ ಕಪ್ಪು ಸಮುದಾಯದ ಮೇಲೆ ಧಾಳಿ ನಡೆಸಿತು. ಈ ಹಿಂಸೆಯಿಂದಾಗಿ ಆರುಜನ ಕಪ್ಪು ನಿವಾಸಿಗಳು ಮತ್ತು ಇಬ್ಬರು ಬಿಳಿಯರು ಕೊಲ್ಲಲ್ಪಟ್ಟರು ಮತ್ತು ಕಪ್ಪು ಜನರ ಇಪ್ಪತ್ತೈದು ಮನೆಗಳು, ಎರಡು ಚರ್ಚುಗಳು ಮತ್ತು ಒಂದು ಸಹೋದರರ ಲಾಡ್ಜ್ ನಾಶವಾದವು.<ref name="autogenerated1"/>
[[ಚಿತ್ರ:initiationkkk.jpg|left|thumb|ಬ್ರಾನ್ಫೊರ್ಡ್ ಕಾರ್ಕ್ ಇಲ್ಯೂಸ್ಟ್ರೇಷನ್ ಇನ್ ದಿ ಕು ಕ್ಲುಕ್ಸ್ ಕ್ಲಾನ್ ಇನ್ ಪ್ರೊಫೆಸಿ ಬೈ ಬಿಶಪ್ ಆಲಮ್ ವೈಟ್ ಪಬ್ಲಿಷ್ಡ್ ಬೈ ದಿ ಪಿಲ್ಲರ್ ಆಫ್ ಫಯರ್ ಚರ್ಚ್ ಇನ್1925 ಆಯ್ಟ್ ಜರೇಪಾಥ್, ಎನ್ಜೆ]]
ಆದರೆ ಕ್ಲಾನ್ ಸದಸ್ಯರು ಮಿಡ್ವೆಸ್ಟ್ ಮತ್ತು ವೆಸ್ಟ್ನ ದಕ್ಷಿಣ ಭಾಗದತ್ತ ಕೇಂದ್ರಿಕರಿಸಿದರು, ಅವರಲ್ಲಿನ ಕೆಲವು ಸದಸ್ಯರು [[ನ್ಯೂ ಇಂಗ್ಲೆಂಡ್]]ನತ್ತ ಸಹ ಹೋದರು. ಕ್ಲಾನ್ ಸದಸ್ಯರು [[ರೋಡೆ ಐಸ್ಲ್ಯಾಂಡಿನ ಸ್ಕಿಟುಯೆಟ್]]ನಲ್ಲಿ [[ಆಫ್ರಿಕನ್ ಅಮೆರಿಕನ್]] ಶಾಲೆಯನ್ನು ಬೆಂಕಿಹಚ್ಚಿ ಸುಟ್ಟರು.<ref>{{cite news |first=Robert L. |last=Smith |authorlink= |coauthors= |title=In the 1920s, the Klan ruled the countryside |url=http://www.projo.com/specials/century/month4/426nw1.htm |work=The Providence Journal |publisher= |date=April 26, 1999 |accessdate= }}</ref>
೧೯೨೦ರ ಮತ್ತು ೧೯೩೦ರ ದಶಕದಲ್ಲಿ ಹಿಂಸಾತ್ಮಕ ಮತ್ತು ಉತ್ಸಾಹಭರಿತ ಪಕ್ಷವಾದದ ಕ್ಲಾನ್ [[ಬ್ಲಾಕ್ ಲೆಗಿಯನ್]] ಸಂಘಟನೆಯನ್ನು [[ವರ್ಜಿಲ್ ಎಫ್ಫಿಂಗರ್]]ನ ಅಡಿಯಲ್ಲಿ ಕಾರ್ಯನಿರ್ವಹಿಸುವ [[ಮಿಡ್ವೆಸ್ಟರ್ನ್ ಯು.ಎಸ್.]]ನ ಸಕ್ರಿಯ ಕ್ರಿಯಾಶೀಲ ಎಂದು ಕರೆದಿದೆ.
==== ಆತ್ಮಸಂಯಮ ====
{{FixBunching|beg}}
[[File:Defender18thkkk.jpg|right|thumb|
ಫ್ರಂ [109] 1926 ಇಲ್ಲ್. ಬೈ ರಿವ್.ಬ್ರಾನ್ಫೊರ್ಡ್ ಕಾರ್ಕ್]]
{{FixBunching|mid}}
{{FixBunching|mid}}
[[ಚಿತ್ರ:klanphoto1923.jpg|right|thumb|ಫೋಟೋಗ್ರಾಫ್ ಆನ್ ಪೇಜ್ 4,ಫೆಬ್ರವರಿ 1923ಎಡಿಶನ್ ಆಫ್ ದಿ ಗುಡ್ ಸಿಟಿಜನ್]]
{{FixBunching|end}}
ಲೆಂಡರ್ ಎಟ್ ಅಲ್. ಹೇಳಿಕೆಯ ಪ್ರಕಾರ ೧೯೨೦ರಲ್ಲಿ ಕ್ಲಾನ್ನ ಮತ್ತೆ ತಲೆಯೆತ್ತುವಿಕೆ [[ಆತ್ಮಸಂಯಮದ ಚಳುವಳಿ]]ಯಿಂದ ನೆರವು ಪಡೆದಿತ್ತು. [[ಅರ್ಕಾನ್ಸಾಸ್]]ನಲ್ಲಿ ಹಾಗೂ ಇತರ ಪ್ರದೇಶಗಳಲ್ಲಿ ಕ್ಲಾನ್ ಅಕ್ರಮವಾಗಿ ಮದ್ಯ ತಯಾರಿಸುವವರ ವಿರೋಧ ಮಾಡಿತು ಮತ್ತು ೧೯೨೨ರಲ್ಲಿ ಇನ್ನೂರು ಕ್ಲಾನ್ ಸದಸ್ಯರು [[ಸಂಯುಕ್ತ ಕೌಂಟಿ]]ಯ ಮದ್ಯದಂಗಡಿಗಳಿಗೆ ಬೆಂಕಿ ಹಚ್ಚಿದರು. ರಾಷ್ಟ್ರೀಯ ಕ್ಲಾನ್ ಕಚೇರಿಯನ್ನು ಕೊನೆಯಲ್ಲಿ [[ಡಲ್ಲಾಸ]] ಹಾಗೂ [[ಟೆಕ್ಸಾಸ್]]ನಲ್ಲಿ ಸ್ಥಾಪಿಸಲಾಯಿತು ಆದರೆ [[ಲಿಟಲ್ ರಾಕ್]] ಅರ್ಕಾನ್ಸಾಸ್ [[ಕು ಕ್ಲಾಕ್ಸ್ ಕ್ಲಾನ್ ಮಹಿಳೆಯರ]] ಮನೆಯಾಗಿತ್ತು. ಈ [[ಆನುಷಂಗಿಕ]]ದ ಮೊದಲ ಮುಖ್ಯಸ್ಥರು ಅರ್ಕಾನ್ಸಾಸ್ WCTUನ ಮಾಜಿ ಪ್ರಾಧಾನಿ ಆಗಿದ್ದರು.<ref>ಲೆಂಲ್ಡರ್ ಎಟ್ ಅಲ್. ೧೯೮೨, p. ೩೩.</ref>{{Verify source|date=November 2008}} ಒಬ್ಬ ಇತಿಹಾಸಕಾರರು KKKಯ ವಿಚಾರದಲ್ಲಿ ಒತ್ತಿ ಹೇಳಿದ್ದು "ಇದರ [[ಪ್ರತಿಬಂಧತೆ]]ಗೆ ಬೆಂಬಲವು ಇಡಿ ರಾಷ್ಟ್ರದಾದ್ಯಂತವೂ ಕ್ಲಾನ್ಸ್ ಜನರ ಮಧ್ಯೆ ಒಂದು ಮುಖ್ಯ ಸಂಕೋಲೆಯನ್ನು ಸೂಚಿಸುತಿತ್ತು".<ref>ಪ್ರೆಂಡೆಗ್ರಸ್ಟ್ ೧೯೮೭, pp. ೨೫-೫೨, ೨೭.</ref>
ಕ್ಲಾನ್ ಹಾಗೂ ಇತರ ಪ್ರತಿಬಂಧಿತ ಗುಂಪುಗಳ ಸದಸ್ಯತ್ವ ಅತಿಕ್ರಮಣವಾಗಿ ಹಲವು ಬಾರಿ ಅವುಗಳು ಚಟುವಟಿಕೆಗಳನ್ನು ಸಂಘಟಿತವಾಗಿ ನೆರವೇರಿಸಿದವು. ಉದಾಹರಣೆಗೆ,[[ಎಡ್ವರ್ಡ್ ಯಂಗ್ ಕ್ಲಾರ್ಕ್]] ಕ್ಲಾನ್ನ ಒಬ್ಬ ಉಛ್ಛ ನಾಯಕ ಕ್ಲಾನ್ ಹಾಗೂ [[ಮದ್ಯದಂಗಡಿ-ವಿರೋಧಿ ಸಂಘ]] ಎರಡಕ್ಕೂ ಚಂದಾ ಕೂಡಿಸುತ್ತಿದ್ದರು.<ref>ಬರ್ರ್ ೧೯೯೯, p. ೩೭೦.</ref> [[ಮ್ಯಾನ ವಿಧಿ]] ಉಲ್ಲಂಘನೆಗಳಿಗೆ ೧೯೨೩ರಲ್ಲಿ ಕ್ಲಾರ್ಕ್ ಅವರ ಮೇಲೆ ದೋಷಾರೋಪಣೆ ಮಾಡಲಾಯಿತು.<ref>{{cite news |first= |last= |authorlink= |coauthors= |title=A Wizard's Indictment |url=http://www.time.com/time/magazine/article/0,9171,846485,00.html |work=[[TIME]] |publisher= |date=March 10, 1923 |accessdate= |archive-date=ಅಕ್ಟೋಬರ್ 6, 2010 |archive-url=https://web.archive.org/web/20101006193807/http://www.time.com/time/magazine/article/0,9171,846485,00.html |url-status=dead }}</ref>
==== ಬ್ಲೇನ್ ಸುಧಾರಣೆಗಳು ====
೧೯೨೧ರಲ್ಲಿ ಕ್ಲಾನ್ ಮಧ್ಯ [[ಕ್ಯಾಲಿಫೋರ್ನಿಯ]]ಯಿಂದ [[ಒರೆಗಾನ್]]ಗೆ ಆಗಮನಿಸಿ ಮೆಡ್ಫೋರ್ಡ್ನಲ್ಲಿ ರಾಜ್ಯದ ಮೊದಲ ಕ್ಲಾವರ್ನ್ (ಕು ಕ್ಲುಕ್ಸ್ ಕ್ಲಾನ್ನ ಒಂದು ಸ್ಥಳಿಯ ಘಟಕ) ಸ್ಥಾಪಿಸಿದರು. ರಾಷ್ಟ್ರದ ಅತಿ ಹೆಚ್ಚು ಶೇಖಡಾಂಶದ ಬಿಳಿ ಜನ ಇರುವ ರಾಜ್ಯ ಒಂದರಲ್ಲಿ ಕ್ಲಾನ್ ೧೪,೦೦೦ರಷ್ಟು ಸದಸ್ಯರನ್ನು ಆಕರ್ಷಿಸಿತು ಹಾಗೂ ೫೮ ಕ್ಲಾವರ್ನ್ಸ್ ಅನ್ನು ೧೯೨೨ರ ಕೊನೆಯದವರೆಗೆ ಸ್ಥಾಪಿಸಿತು. ಪೊರ್ಟ್ಲ್ಯಾಂಡ್ ಹೊರಗಡೆ ಕೇವಲ ಕೆಲವೇ ಕೆಲವು ಬಿಳಿಯೇತರ ಸಣ್ಣ ಪ್ರಮಾಣದ ಜನತೆಯನ್ನು ಸುಧಾರಣೆಯ ದಿಕ್ಕಿಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಈ ಪ್ರದೇಶದಲ್ಲಿ ಒರೆಗಾನ್ ಕ್ಲಾನ್ ೮% ಇದ್ದ ಕ್ಯಾಥೊಲಿಕ್ರ ಕಡೆಗೆ ಹೆಚ್ಚಿನ ಗಮನವನ್ನು ನೀಡಿದ. ೧೯೨೨ರಲ್ಲಿ, ಒರೆಗಾನ್ನ ಮೆಸಾನಿಕ್ ಗ್ರೇಂಡ್ ಲೊಡ್ಜ್ ಎಲ್ಲ ಶಾಲ-ವಯಸ್ಸಿನ ಮಕ್ಕಳು ಸಾರ್ವಜನಿಕ ಶಾಲೆಗಳಲ್ಲಿ ಹಾಜರಾಗಲು ಒಂದು ಬೆಲೆಪಟ್ಟಿಯನ್ನು ಪ್ರಯೋಜಕಗೊಳಿಸಿತು. ಕ್ಲಾನ್ ಹಾಗೂ ಜನತಂತ್ರ ರಾಜ್ಯಪಾಲ ವಾಲ್ಟರ್ ಎಮ್. ಪಿಯರ್ಸ್ರ ಬೆಂಬಲದಿಂದ ಮತ್ತು ಕ್ಲಾನ್ನ ದೃಡಿಕರಣೆಯಿಂದ ಕಡ್ಡಾಯವಾದ ಶಿಕ್ಷಣ ನಿಯಮವು ಬಹುಮತದಿಂದ ಮಂಜೂರಾತಿ ಪಡೆಯಿತು. ಇದರ ಪ್ರಾಥಮಿಕ ಉದ್ದೇಶ ಒರೆಗಾನ್ನ ಕ್ಯಾಥೊಲಿಕ್ ಶಾಲೆಗಳನ್ನು ಮುಚ್ಚಿಸುವುದಾಗಿತ್ತು ಆದರೆ ಇದು ಇತರ ಖಾಸಗಿ ಹಾಗೂ ಮಿಲಿಟರಿ ಶಾಲೆಗಳಿಗೂ ಪ್ರಭಾವ ಬೀರಿತು. ಹಲವು ರಾಷ್ಟ್ರಗಳು [[ಬ್ಲೇನ್ ಸುಧಾರಣೆಗಳ]]ನ್ನು ಮಂಜೂರು ಮಾಡಿದವು, ಇದರಿಂದ ಸರ್ಕಾರದ ನೇರ ನೆರವು ಧಾರ್ಮಿಕ ಶಾಲೆಗಳಿಗೆ ನಿಷೇಧಿಸಲಾಗಿತ್ತು.
==== ಕಾರ್ಮಿಕ ಹಾಗೂ ವೃತ್ತಿ ಸಂಘ ತತ್ವ ವಿರೋಧ ====
ಯುದ್ಧದ ನಂತರದ ಸಮಯದಲ್ಲಿ ಆಗುತ್ತಿದ್ದ ಸಮಾಜದಲ್ಲಿನ ಅಶಾಂತಿಯುತ ವಾತಾವರಣದಲ್ಲಿ ಕಡಿಮೆ ಸಂಬಳ ಹಾಗೂ ಕೆಳ ಮಟ್ಟದ ಕೆಲಸದ ಪರಿಸರಗಳ ವಿರುದ್ಧ ಕಾರ್ಮಿಕ ಮುಷ್ಕರಗಳು ಆಗುತ್ತಿದ್ದವು, ಇದು ಔದ್ಯೋಗಿಕ ನಗರಗಳಲ್ಲಿ ಬಹುಪಾಲು ವಲಸೆಗಾರರ ನಾಯಕತ್ವದಲ್ಲಿ ನಡೆಯುತಿತ್ತು, ಅವರು ಕಾರ್ಮಿಕ ಸಂಘಗಳನ್ನು ನಿಯೋಜಿಸುತ್ತಿದ್ದರು. ಕಾರ್ಮಿಕ ಸಂಯೋಜಕರ ಹಾಗೂ ಕೆಲವು ವೆಲಸೇಗಾರ ಸಮಾಜವಾದಿಗಳ ಪ್ರವೃತ್ತಿಗಳ ಬಗ್ಗೆ ಕ್ಲಾನ್ ಸದಸ್ಯರು ಚಿಂತಿಸಿದರು, ಇದು ಕೂಡ ಆತಂಕಗಳನ್ನು ಹೆಚ್ಚಿಸಿತು. ಅವರು ಮೇಲುವಲಯದ ಚರ ಜನಾಂಗೀಯ ಕ್ಯಾಥೋಲಿಕರ ಸಿಟ್ಟಿಗೂ ಕಾರಣರಾದರು.<ref>[http://mailer.fsu.edu/~mjones/rosewood/rosewood.html ಮ್ಯಾಕ್ಸಿನ್ ಡಿ.ರೋಗರ್ಸ್, ''ಎಟ್ ಅಲ್'', ''ಡಾಕ್ಯೂಮೆಂಟೆಡ್ ಹಿಸ್ಟರಿ ಆಫ್ ರೋಸ್ವುಡ್, ಫ್ಲೋರಿಡಾ ಇನ್ ಜನವರಿ 1923'', ''op.cit.,p.6'' ] {{Webarchive|url=https://web.archive.org/web/20080515152951/http://mailer.fsu.edu/~mjones/rosewood/rosewood.html |date=ಮೇ 15, 2008 }}. ೨೦೦೮ರ ಮಾರ್ಚ್ ೨೩ರಂದು ತೆಗೆದುಕೊಳ್ಳಲಾಗಿದೆ.</ref> ಅದೇ ಸಮಯದಲ್ಲಿ, ಕ್ಲಾನ್ ಸದಸ್ಯರೇ ನಗರಗಳಲ್ಲಿ ಔದ್ಯೋಗಿಕ ಪರಿಸರದಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ಅಲ್ಲಿನ ಪರೀಸ್ಥಿತಿಗಳಲ್ಲಿ ಒದ್ದಾಡುತ್ತಿದ್ದರು.
[[ಬರ್ಮಿಂಗಹಾಂ, ಅಲಬಾಮ]] ಅಂತಹ ದಕ್ಷಿಣ ನಗರಗಳಲ್ಲಿ ಇನ್ನು ಉನ್ನತ-ಸಂಬಳದ ಔದ್ಯೋಗಿಕ ಉದ್ಯೋಗಗಳ ಪ್ರವೇಶವನ್ನು ಕ್ಲಾನ್ ಸದಸ್ಯರು ನಿಯಂತ್ರಿಸುತ್ತಿದ್ದರು ಆದರೆ ಕಾರ್ಮಿಕ ಸಂಘಟನೆಗಳನ್ನು ವಿರೋಧಿಸುತ್ತಿದ್ದರು. ೧೯೩೦ ಹಾಗೂ ೧೯೪೦ರಲ್ಲಿ, ಕ್ಲಾನ್ ನಾಯಕರು ತಮ್ಮ ಸದಸ್ಯರಿಗೆ [[ಔದ್ಯೋಗಿಕ ಸಂಘಗಳ ಕಾಂಗ್ರೆಸ್]] (CIO) ಅನ್ನು ಭಂಗಮಾಡಲು ಒತ್ತಾಯಿಸಿದರು, ಇದು ಔದ್ಯೋಗಿಕ ಸಂಘಗಳ ಪಕ್ಷವಾದಿ ಆಗಿತ್ತು ಹಾಗೂ ಆಫ್ರಿಕಿ-ಅಮೆರಿಕನ್ ಸದಸ್ಯರಿಗೆ ತೆರೆದಿತ್ತು. ಡೈನಾಮೈಟ್ ಪ್ರವೇಶ ಮತ್ತು ಸ್ಟೀಲ್ ಹಾಗೂ ಗಣಿಗಾರಿಕೆಯಲ್ಲಿನ ಪರಿಣತಿಯೊಂದಿಗೆ ೧೯೪೦ರ ಕೊನೆಯಲ್ಲಿ ಬರ್ಮಿಂಗ್ಹ್ಯಾಂನ ಕೆಲವು ಕ್ಲಾನ್ ಸದಸ್ಯರು ತಮ್ಮ ಮಧ್ಯ-ವರ್ಗದ ನೆರೆಯಲ್ಲಿ ಜರುಗಿದ ಮೆಲ್ಮಟ್ಟದ ಚರ ಕಪ್ಪು ಜನರನ್ನು ಬೊಂಬ್ಗಳನ್ನು ಬಳಸಿ ಬೆದರಿಸಲಾರಂಭಿಸಿದರು. “೧೯೪೯ರ ಮಧ್ಯದಲ್ಲಿ ಈ ಪ್ರದೇಶದಲ್ಲಿನ [ಕಾಲೆಜ್ ಹಿಲ್ಸ್] ಎಷ್ಟು ಮನೆಗಳು ಸುಟ್ಟಿದ್ದವು ಎಂದರೆ ಅದನ್ನು ಅನೌಪಚಾರಿಕವಾಗಿ ಡೈನಾಮೈಟ್ ಗುಡ್ಡ ಎಂದು ಹೆಸರಿಸಲಾಯಿತು.” ಸ್ವತಂತ್ರ ಕ್ಲಾನ್ ಗುಂಪುಗಳು ಬರ್ಮಿಂಗ್ಹ್ಯಾಂನಲ್ಲಿ ಸಕ್ರಿಯವಾಗಿ ಉಳಿದವು ಹಾಗೂ ಸಿವಿಲ್ ಹಕ್ಕುಗಳ ಚಳುವಳಿಯ ಹಿಂಸಾತ್ಮಕ ವಿರೋದ್ಧದಲ್ಲಿ ಆಳವಾಗಿ ತೊಡಗಿದ್ದರು.<ref>ಡೈನ್ ಮ್ಯಾಕ್ವೋರ್ಟರ್, ''ಕ್ಯಾರಿ ಮಿ ಹೋಮ್:ಬರ್ಮಿಂಗ್ಹ್ಯಾಮ್, ಹ್ಯಾಲ್ಬಮಾ, ದಿ ಕ್ಲೈಮ್ಯಾಟಿಕ್ ಬ್ಯಾಟಲ್ ಆಫ್ ದಿ ಸಿವಿಲ್ ರೈಟ್ಸ್ ರೆವಲ್ಯೂಶನ್'', ನ್ಯೂಯಾರ್ಕ್:ಟಚಸ್ಟೂನ್ ಬುಕ್, ೨೦೦೨,ಪ.೭೫</ref>
=== ನಗರೀಕರಣ ===
[[ಚಿತ್ರ:Stonemtn2.jpg|thumb|ಸ್ಟೋನ್ ಮೌಂಟೆನ್, ಸ್ಟೇಟ್ ಆಫ್ ದಿ ಫೌಂಡಿಂಗ್ ಆಫ್ ದಿ ಸೆಕೆಂಡ್ ಕ್ಲಾನ್ ಇನ್ 1915]]
ಎರಡನೇಯ ಕ್ಲಾನ್ನ ಮುಖ್ಯ ಲಕ್ಷಣವೆಂದರೆ ಅದು ನಗರ ಪ್ರದೇಶದಲ್ಲಿ ನೆಲೆಯಾದ ಸಂಘವಾಗಿತ್ತು, ಇದು ಉತ್ತರ ಹಾಗೂ ದಕ್ಷಿಣ ಎರಡು ಕಡೆಗಿನ ನಗರಗಳಲ್ಲಿಯೂ ಗರಿಷ್ಟ ಜನಸಂಖ್ಯೆಯ ಪಲಾಯನವನ್ನು ಸೂಚಿಸುತ್ತದೆ. ಮಿಚಿಗನ್ನಲ್ಲಿ, ಉದಾಹರಣೆಗೆ, ೪೦,೦೦೦ ಸದಸ್ಯರು ಡೆಟ್ರಾಯಿಟ್ನಲ್ಲೇ ವಾಸಿಸುತ್ತಿದ್ದರು. ಅಲ್ಲಿ ಅವರು ಇಡೀ ರಾಜ್ಯದ ಸುಮಾರು ಅರ್ಧಕ್ಕಿಂತ ಹೆಚ್ಚಿನ ಜನರ ಸದಸ್ಯತ್ವವನ್ನು ಪಡೆದುಕೊಳ್ಳುತ್ತಾರೆ. ಹಲವು ಕ್ಲಾನ್ ಜನರು ಮಧ್ಯ-ವರ್ಗದಗಿಂತ ಕೆಳಮಟ್ಟದ ಬಿಳಿ ಜನರಾಗಿದ್ದರು, ಅವರು ತಮ್ಮ ಉದ್ಯೋಗ ಹಾಗೂ ಮನೆಗಳನ್ನು ಔದ್ಯೋಗಿಕ ನಗರಗಳಿಗೆ ಪ್ರವೇಶಿಸುತ್ತಿದ್ದ ಹೊಸಬರಿಂದ ರಕ್ಷಿಸುವ ಪ್ರಯತ್ನ ಮಾಡುತ್ತಿದ್ದರು: ವಿಶ್ವವ್ಯಾಪಿ ಹಾಗೂ ಯೆಹೂದ್ಯನರಾದ ದಕ್ಷಿಣ ಹಾಗೂ ಪೂರ್ವ ಯುರೋಪಿನ ವಲಸೇಗಾರರು ಹಿಂದೆ ಬಂದ ಗುಂಪುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರು ಮತ್ತು ದಕ್ಷಿಣದಿಂದ ಕಪ್ಪು ಹಾಗೂ ಬಿಳಿ ವಲಸೇಗರರು. ಹೊಸ ಜನಸಂಖ್ಯೆ ನಗರಗಳಲ್ಲಿ ಸುರಿಯುತ್ತಿದ್ದ ಹಾಗೆ ಶೀಘ್ರವಾಗಿ ಬದಲಾಗುತ್ತಿದ್ದ ನೆರೆಹೊರೆಗಳಿಂದ ಸಾಮಾಜಿಕ ಗೊಂದಲಗಳು ಸೃಷ್ಟಿ ಆಗುತ್ತಿತ್ತು. ಡೆಟ್ರೋಯಿಟ್ ಹಾಗೂ ಶಿಕಾಗೋ ಅಂತಹ ಔದ್ಯೋಗಿಕರಣವಾಗುತ್ತಿರುವ ನಗರಗಳಲ್ಲಿ ಕ್ಷಿಪ್ರ ಗತಿಯ ಜನಸಂಖ್ಯೆಯಲ್ಲಿನ ಏರಿಕೆಯ ಕಾರಣ ಕ್ಲಾನ್ [[ಮಧ್ಯ-ಪಶ್ಚಮ]] U.S.ನಲ್ಲಿ ಕ್ಷಿಪ್ರವಾಗಿ ಬೆಳೆಯಿತು. ಡಲ್ಲಾಸ್ ಹಾಗೂ ಹೌಸ್ಟನ್ ಅಂತಹ ಉತ್ಕರ್ಷವಾಗುತ್ತಿದ್ದ ದಕ್ಷಿಣ ನಗರಗಳಲ್ಲಿ ಕೂಡ ಕ್ಲಾನ್ ಬೆಳೆಯಿತು.<ref name="Jackson">ಜ್ಯಾಕ್ಸನ್, ೧೯೯೨.</ref>
ಕೆಲವು ರಾಜ್ಯಗಳಿಗೆ, ಕೆಲವು ಸ್ಥಳಿಯ ಅಂಗಗಳ ಸದಸ್ಯರ ಉದ್ಯೋಗದ ವಿಧಿಗಳನ್ನು ಇತಿಹಾಸಗಾರರು ಪಡೆದು, ಅದನ್ನು ನಗರದ ವಿವರ ಸೂಚಿಕೆಯ ಹೆಸರುಗಳ ಹಾಗೂ ಸ್ಥಳಯ ದಾಖಲೆಗಳೊಂದಿಗೆ ಹೋಲಿಸಿ ಸದಸ್ಯತ್ವದ ಸಂಖ್ಯಾಶಾಸ್ತ್ರೀಯ ಸಂಕ್ಷಿಪ್ತ ವ್ಯಕ್ತಿಚಿತ್ರವನ್ನು ಸೃಷ್ಟಿಸಿದರು. ದೊಡ್ಡ ನಗರ ವಾರ್ತಾಪತ್ರಿಕೆಗಳು ಹಲವು ಬಾರಿ ಪ್ರತಿಕೂಲವಾಗಿದ್ದು ಕ್ಲಾನ್ ಜನರನ್ನು ತಿಳಿವಿಲ್ಲದ ಬೇಸಾಯಗಾರರೆಂದು ಹಂಗಿಸುತ್ತಿದ್ದರು. [[ಇಂಡಿಯಾನ]]ದ ವಿಸ್ತಾರವಾದ ಅನ್ವೇಷಣೆ ತೋರಿಸಿದ್ದು ಆ ರಾಜ್ಯಕ್ಕೆ ಗ್ರಾಮೀಣ ಪಡಿಯಚ್ಚು ತಪ್ಪಾಗಿತ್ತೆಂದು:
<blockquote>ಇಂಡಿಯಾನದ ಕ್ಲಾನ್ ಜನರು ಸಮಾಜದ ಒಂದು ವಿಸ್ತಾರವಾದ ವಿರುದ್ಧವಾದ ಭಾಗವನ್ನು ಸೂಚಿಸುತ್ತಿದ್ದರು: ಅವರು ಅಸಮಾನ ಪ್ರಮಾಣಾನುಗತವಾಗಿ ಗ್ರಾಮೀಣ ಅಥವ ನಗರದವರಾಗಿರಲಿಲ್ಲ, ಮತ್ತು ಮುಖ್ಯವಾಗಿ ಉಳಿದ ಇತರ ಸಮಾಜದ ಸದಸ್ಯರ ಕಾರ್ಯನಿರ್ವಾಹಕ ದರ್ಜೆ, ಮಧ್ಯೆ ದರ್ಜೆ ಅಥವಾ ವೃತ್ತಿನಿರತ ದರ್ಜೆಯ ಹೆಚ್ಚು-ಕಮ್ಮಿ ಸಮಾನವಾಗಿಯೂ ಇರಲಿಲ್ಲ. ಕ್ಲಾನ್ ಜನರು [[ಪೋಪನ ಮತಕ್ಕೆ ವಿರೋಧಿಯಾದವ]]ರಾಗಿದ್ದರೂ ಸಹ ಅವರನ್ನು ಪ್ರತ್ಯೇಕವಾಗಿ ಅಥವಾ ಪ್ರಬಲವಾಗಿ [[ಮೂಲ ತತ್ವಗಳ ಜನರು]] ಎಂದು ಹೇಳಲಾಗದು. ವಾಸ್ತವಿಕವಾಗಿ, ಅವರ ಧಾರ್ಮಿಕ ಒಲವುಗಳು ಚರ್ಚಿಗೆ ಸೇರದ ಜನರನ್ನೂ ಸೇರಿಸಿ ಇಡಿ ಪೋಪನ ಮತಕ್ಕೆ ವಿರೋಧಿಯಾದ ಬಿಳಿ ಜನರ ಸಮಾಜವನ್ನು ದರ್ಶಿಸುತ್ತದೆ.<ref>ಮೋರೇ ೧೯೯೧.</ref></blockquote>
ಕ್ಲಾನ್ ಜನರನ್ನು ಆಕರ್ಷಿಸಿತು ಆದರೆ ಹಲವರು ಈ ಸಂಘದಲ್ಲಿ ಹೆಚ್ಚು ಸಮಯದವರೆಗೆ ಉಳಿಯಲಿಲ್ಲ. ಜನರು ತಮಗೆ ಬೇಕಾದ ಗುಂಪು ಇದಲ್ಲ ಎಂದು ಅರಿತಾಗ ಕ್ಲಾನ್ನಲ್ಲಿ ಸದಸ್ಯತ್ವ ಹಿಂತಿರುಗಲು ಶುರುವಾಯಿತು. ಮಿಲಿಯನ್ರಷ್ಟು ಜನರು ಸೇರಿದರು ಮತ್ತು ೧೯೨೦ರಲ್ಲಿ ಈ ಸಂಘದಲ್ಲಿ ರಾಷ್ಟ್ರದ ಶೇಖಡ ೧೫%ರಷ್ಟು ಅರ್ಹ ಜನಸಂಖ್ಯೆ ಸೇರಿ ಅದರ ಶಿಖರ ತಲುಪಿತು. ಸಾಮಾಜಿಕ ಆತಂಕಗಳ ಕಡಿಮೆಗೊಳ್ಳುವಿಕೆ ಕ್ಲಾನ್ನ ಅವನತಿಗೆ ನೆರವಾಯಿತು.
=== ಸುಡುತ್ತಿರುವ ಶಿಲುಬೆ ===
[[ಚಿತ್ರ:Ku Klux Klan members and a burning cross, Denver, Colorado, 1921.jpg|thumb|ಕ್ರಾಸ್ ಬರ್ನಿಂಗ್ ಇಸ್ ಸೆಡ್ ಟು ಹ್ಯಾವ್ ಬೀನ್ ಇಂಟ್ರಡ್ಯೂಸ್ಡ್ ಬೈ ವಿಲಿಯಂ ಜೆ.ಸಿಮ್ಮೊನ್ಸ್, ದಿ ಫೌಂಡರ್ ಆಫ್ ದಿ ಸೆಕೆಂಡ್ ಕ್ಲಾನ್ ಇನ್ 1915.]]
ಎರಡನೇಯ ಕ್ಲಾನ್ರು ಒಂದು [[ಕ್ರೈಸ್ತ ಶಿಲುಬೆ]]ಯನ್ನು ತಮ್ಮ ಚಿನ್ಹೆ ಎಂದು ಅಳವಡಿಸಿಕೊಂಡರು, ಇದನ್ನೇ ಅವರು ಕ್ಲಾನ್ನ ಮುದ್ರೆಯಾಗಿ ಕೂಡ ಬಳಸಿದರು. ಮೊದಲನೇಯ ಕ್ಲಾನ್ ಇಂತಹ ಯಾವುದೇ ಶಿಲುಬೆಯನ್ನು ಬಳಸಿರಲಿಲ್ಲ ಆದರೆ ಸುಡುತ್ತಿರುವ ಶಿಲುಬೆ ಎರಡನೇಯ ಕ್ಲಾನ್ ಅವರಿಂದ ಬೆದರಿಕೆಯ ಚಿನ್ಹೆಯ ಪ್ರತೀಕ ಆಗಿತ್ತು.<ref name="Greenhouse">{{cite web|url=https://www.nytimes.com/2002/05/29/us/supreme-court-roundup-free-speech-or-hate-speech-court-weighs-cross-burning.html?pagewanted=all|title=Supreme Court Roundup; Free Speech or Hate Speech? Court Weighs Cross Burning|last=Greenhouse|first=Linda|date=May 29, 2002|publisher=New York Times|accessdate=20 February 2010}}</ref>
ಶಿಲುಬೆಯನ್ನು ಸುಡುವ ಪದ್ಧತಿ ಪುರಾತನ ಸ್ಕಾಟ್ಲೆಂಡಿನ ಕ್ಲಾನ್ಗಳ [[ಸಂತ. ಅಂಡ್ರ್ಯು ಶಿಲುಬೆ]]ಯ (ಒಂದು X-ಆಕಾರಾದ) ಸುಡುವ ಪದ್ಧತಿಯ ಮೇಲೆ ಆಧಾರಿತವಾಗಿತ್ತು, ಇದು ಜನರ ಸಮೂಹವನ್ನು ಕೂಡಿಸಲು ಎಚ್ಚರಿಕೆಯ ಸಂಕೇತವಾಗಿ ಬಳಸುವ ದೀಪವಾಗಿತ್ತು. ''ಕ್ಲಾನ್ಸ್ಮನ್ನಲ್ಲಿ'' (ಮೇಲೆ ನೋಡಿ), ಮೊದಲ ಕ್ಲಾನ್ರವರು ಉರಿಯುತ್ತಿರುವ ಶಿಲುಬೆಗಳನ್ನು ತಮ್ಮ ಜನರು ಪುನರ್ನಿರ್ಮಾಣದ ವಿರುದ್ಧ ಹೋರಾಡುವಾಗ ಮೇಳಗಳಲ್ಲಿ ಬಳಸಿದರು ಎಂದು ಡಿಕ್ಸನ್ ತಪ್ಪಾಗಿ ಅಪವಾದ ಹೊರಿಸಿದ್ದರು. ಗ್ರೆಫಿತ್ ಈ ಆಕೃತಿನ್ನು ''ದ ಬರ್ಥ್ ಒಫ್ ಅ ನೇಷನ್'' ನ ಪರದೆಯ ಮೇಲೆ ತಂದಿದ್ದರು, ಹೈಲಾಂಡ್ ಕ್ಲಾನ್ಸ್ ವಾಸ್ತವಿಕವಾಗಿ ಬಳಸಿದ ಸಂತ. ಅಂಡ್ರ್ಯೂನ ಶಿಲುಬೆಯನ್ನು ಅವರು ತಪ್ಪಾಗಿ ಸುಡುತ್ತಿರುವ ಶಿಲುಬೆ ನೇರವಾದ ಲ್ಯಾಟಿನರ ಶಿಲುಬೆ ಎಂದು ವಿವರಿಸುತ್ತಾ ಹೆಚ್ಚು ಗೊಂದಲಕ್ಕೆ ದಾರಿ ಮಾಡಿದರು. ಸಿಮೋನ್ಸ್ ಸುಡುತ್ತಿರುವ ಲ್ಯೇಟಿನ್ ಶಿಲುಬೆಯನ್ನು ಸಗಟಾಗಿ ಚಲನಚಿತ್ರದಿಂದ ಅಳವಡಿಸಿಕೊಂಡು ಮುಖ್ಯವಾಗಿ ಅದನ್ನು ೧೯೧೫ರ ಸ್ಟೋನ್ ಮೌಂಟನ್ ಸಭೆಯಲ್ಲಿ ಪ್ರದರ್ಶಿಸಿದರು ಮತ್ತು ಅಂದಿನಿಂದ ಈ ಉದ್ರೇಕಗೊಳಿಸುವ ಚಿನ್ಹೆ ಅಳಿಸಲಾಗದ ರೀತಿಯಲ್ಲಿ ಕು ಕ್ಲುಕ್ಸ್ ಕ್ಲಾಣ್ ಜೊತೆ ಸಂಬಂಧಿತವಾಗಿದೆ.<ref>{{cite web|author=Cecil Adams |url=http://www.straightdope.com/columns/read/1038/why-does-the-ku-klux-klan-burn-crosses |title=Why does the Ku Klux Klan burn crosses? |publisher=The Straight Dope |date=1993-06-18 |accessdate=2009-12-24}}</ref>
=== ರಾಜಕೀಯ ಪ್ರಭಾವ ===
[[ಚಿತ್ರ:klan-sheet-music.jpg|thumb|ಶೀಟ್ ಮ್ಯೂಸಿಕ್ ಟು "ವಿ ಆರ್ ಆಲ್ ಲಾಯಲ್ ಕ್ಲಾನ್ಸ್ಮೆನ್",1923]]
[[ಚಿತ್ರ:goodcitizenjuly1926.jpg|left|thumb|ದಿ ಗೋಲ್ಡ್ ಸಿಟಿಜನ್ ಜುಲೈ ಪಬ್ಲಿಷ್ಡ್ ಬೈ ಪಿಲ್ಲರ್ ಆಫ್ ಫಯರ್ ಚರ್ಚ್]]
[[ಚಿತ್ರ:Ballot1.jpg|left|thumb|ಬ್ರಾನ್ಫೊರ್ಡ್ ಕಾರ್ಕ್ ಇಲ್ಯೂಸ್ಟ್ರೇಷನ್ ಇನ್ ಹೀರೋಸ್ ಆಫ್ ದಿ ಫಯರಿ ಕ್ರಾಸ್ 1928]]
ಹಲವು ರಾಜ್ಯಗಳಲ್ಲಿ ಕ್ಲಾನ್ನ ಪ್ರಧಾನ ರಾಜಕೀಯ ಪ್ರಭಾವವಿತ್ತು ಮತ್ತು ದೇಶದ ಮಧ್ಯ ಭಾಗದಲ್ಲಿ ಬಹುಪಾಲು ಪ್ರಭಾವಕಾರಿಯಿತ್ತು. ಕ್ಲಾನ್ ದಕ್ಷಿಣದಿಂದ ಮಧ್ಯಪಶ್ಚಿಮ ಹಾಗೂ ಉತ್ತರ ರಾಷ್ಟ್ರಗಳಲ್ಲಿ ಪಸರಿಸಿತು ಮತ್ತು ಕ್ಯಾನಡದಲ್ಲೂ ಹರಡಿತು, ಇಲ್ಲಿ ವಿಶ್ವವ್ಯಾಪಿ ವಲಸೆಗಾರರ ವಿರುದ್ಧ ದೊಡ್ಡ ಚಳುವಳಿ ನಡೆದ್ದಿತ್ತು.<ref>{{cite news |first=Kevin |last=Weedmark |authorlink= |coauthors= |title=When the KKK rode high across the Prairies |url=http://www.world-spectator.com/archives.25.html |work=Moosomin World-Spectator |publisher= |date= |accessdate= |archive-date=ಫೆಬ್ರವರಿ 7, 2009 |archive-url=https://web.archive.org/web/20090207212225/http://www.world-spectator.com/archives.25.html |url-status=dead }}</ref> ಕ್ಲಾನ್ ಸದಸ್ಯತ್ವ ನಾಲ್ಕು ಮಿಲಿಯನ್ಗಿಂತ ಹೆಚ್ಚಾಗಿ ಶಿಖರವನ್ನು ಮುಟ್ಟಿತು, ಇದರಲ್ಲಿ ಶೇಖಡ ೨೦% ಪ್ರಾಪ್ತ ವಯಸ್ಕ ಬಿಳಿ ಪುರುಷ ಜನಸಂಖ್ಯೆ ಹಲವು ವ್ಯಾಪಕ ಭೂಗೋಳಿಕ ಪ್ರದೇಶದಿಂದ ಸೇರಿದ್ದು ಇನ್ನು ಕೆಲವು ಭಾಗಗಳಿಂದ ಶೇಖಡ ೪೦% ಜನಸಂಖ್ಯೆ ಅಷ್ಟು ಜನರು ಸೇರಿದ್ದರು.{{Citation needed|date=July 2009}} ಕ್ಲಾನ್ನ ಬಹುಪಾಲು ಸದಸ್ಯತ್ವದ ಜನರು ಮಧ್ಯಪಶ್ಚಿಮ ರಾಜ್ಯಗಳಲ್ಲಿ ಸ್ಥಾಯಿ ಆಗಿದ್ದರು.
ಅದೇ ವರ್ಷದಲ್ಲಿನ ಇನ್ನೊಂದು ಪ್ರಸಿದ್ಧ ಉದಾಹರಣೆ ಎಂದರೆ [[ಕ್ಯಾಲಿಫೋರ್ನಿಯಾದ ಅನಹೆಮ್]] ಅನ್ನು ಮಾದರಿ ಕ್ಲಾನ್ ನಗರ ಎಂದು ಪರಿವರ್ತಿಸಲು ಕ್ಲಾನ್ ತೀರ್ಮಾನಿಸಿದ್ದು. ಇದು ಗುಟ್ಟಾಗಿ ನಗರ ಸಮಿತಿಯ ಮೇಲು ಜಯ ಪಡೆಯಿತು, ಆದರೆ ನಗರವು ಒಂದು ವಿಶೇಷ ಮರುಚುನಾವಣೆಯನ್ನು ನಡೆಸಿತ್ತು ಹಾಗೂ ಕ್ಲಾನ್ ಸದಸ್ಯರನ್ನು ವಿರುದ್ಧ ಮತಗಳ ಮೂಲಕ ಹೊರ ಹಾಕಲಾಯಿತು.<ref>[http://www.anaheimcolony.com/klan.htm ಇಟ್ ಹ್ಯಾಸ್ ಬೀನ್ ಸೆವೆಂಟೀನ್ ಇಯರ್ಸ್ ಸಿನ್ಸ್ ಅನಾಹ್ಯಾಮ್ ಬೂಟೆಡ್ ದಿ ಕ್ಲಾನ್] {{Webarchive|url=https://web.archive.org/web/20060823234643/http://www.anaheimcolony.com/klan.htm |date=ಆಗಸ್ಟ್ 23, 2006 }},ರೀಪ್ರಿಂಟೆಡ್ ಫ್ರಂ ದಿ ''[[ಲಾಸ್ ಏಂಜಲೀಸ್ ಟೈಮ್ಸ್]]''</ref>
ಕ್ಲಾನ್ ಪ್ರತಿನಿಧಿಗಳು ನ್ಯೂಯಾರ್ಕ್ ಸಿಟಿಯಲ್ಲಿ [[1924ರ ಡೆಮಾಕ್ರಟಿಕ್ ರಾಷ್ಟ್ರೀಯ ಅಧಿವೇಶನದ]] ರಚನೆಯಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ಅದನ್ನು ಅನೇಕ ಬಾರಿ "ಕ್ಲಾನ್ಬೇಕ್ ಅಧಿವೇಶನ" ಎಂದು ಕರೆಯಲಾಗುತ್ತಿತ್ತು.
ಈ ಅಧಿವೇಶನವು ಆರಂಭದಲ್ಲಿ ಸಣ್ಣ ಸಣ್ಣ ಛಿದ್ರವಾಗಿದ್ದ ಕ್ಲಾನ್-ಹಿಂದಿರುಗಿದ ಅಭ್ಯರ್ಥಿ [[ವಿಲ್ಲಿಯಂ ಗಿಬ್ಸ್ ಮ್ಯಾಕ್ಆಡೂ]] [[ಕ್ಯಾಥೋಲಿಕ್]] ನ್ಯೂಯಾರ್ಕ್ ರಾಜ್ಯಪಾಲ [[ಆಲ್ ಸ್ಮಿಥ್]] ವಿರುದ್ಧ ಸ್ಪರ್ಧಿಸಿದ್ದರು. ಈ ಬಿಕ್ಕಟ್ಟು ಮತ್ತು ಗಲಭೆಗಳುಂಟಾದ ಕೆಲವು ದಿನಗಳ ನಂತರ ಇಬ್ಬರೂ ಅಭ್ಯರ್ಥಿಗಳನ್ನು ರಾಜಿ ಒಪ್ಪಂದದ ಮೂಲಕ ಹಿಂದಕ್ಕೆ ಕರೆಸಲಾಯಿತು. ಕ್ಲಾನ್ ಪ್ರತಿನಿಧಿಗಳು ತಮ್ಮ ಸಂಘಟನೆಯನ್ನು ನಿಂದಿಸಿದ ಡೆಮಾಕ್ರಟಿಕ್ ಪಕ್ಷದ ವೇದಿಕೆ ಮಂಡಳಿಯನ್ನು ಸೋಲಿಸಿದರು.
ಆಲಬಾಮಾದಂತಹ ಕೆಲವು ರಾಜ್ಯಗಳಲ್ಲಿ KKKಯು ರಾಜಕೀಯ ಮತ್ತು ಸಾಮಾಜಿಕ ಸುಧಾರಣೆಗಾಗಿ ಕೆಲಸ ಮಾಡಿತು.<ref>ಫೆಲ್ಡ್ಮ್ಯಾನ್ ೧೯೯೯.</ref> ರಾಜ್ಯದ ಕ್ಲಾನ್ ಸದಸ್ಯರು ಉತ್ತಮ ಪಬ್ಲಿಕ್ ಶಾಲೆಗಳ ಅತ್ಯಂತ ಮುಂದಿರುವ ಪಕ್ಷವಾದಿಗಳನ್ನು, ಪರಿಣಾಮಕಾರಿ [[ನಿಷೇದಾಜ್ಞೆ]] ಬಲವನ್ನು ಒಟ್ಟುಗೂಡಿಸಿ, ರಸ್ತೆ ನಿರ್ಮಾಣ ಕಾರ್ಯ ಮತ್ತು ಇತರೆ "[[ಪ್ರಗತಿಪರ]]" ರಾಜಕೀಯ ಮಾಪನಗಳನ್ನು ವಿಸ್ತರಿಸಿದರು. ಅನೇಕ ವಿಧದಲ್ಲಿ ಈ ಸುಧಾರಣೆಗಳು ಕೆಳವರ್ಗದ ಶ್ವೇತವರ್ಣಿಯರಿಗೆ ಅನುಕೂಲಕರವಾಗಿದ್ದವು. ೧೯೨೫ರಿಂದ ಕ್ಲಾನ್ ಈ ರಾಜ್ಯದಲ್ಲಿ ರಾಜಕೀಯ ಬಲವನ್ನು ಹೊಂದಿತ್ತು,.[[ಜೆ. ಥಾಮಸ್ ಹೆಲ್ಫಿನ್]], [[ಡೇವಿಡ್ ಬಿಬ್ ಗ್ರೇವ್ಸ್]], ಮತ್ತು [[ಹುಗೊ ಬ್ಲಾಕ್]] ನಂತಹ ನಾಯರುಗಳಂತೆ ರಾಜ್ಯವನ್ನು ದೀರ್ಘಾವಧಿ ಆಳ್ವಿಕೆ ಮಾಡಿದ ಬ್ಲಾಕ್ ಬೆಲ್ಟ್ ತೋಟದ ಮಾಲೀಕರ ಅಧಿಕಾರದ ವಿರುದ್ಧ KKK ಸದಸ್ಯತ್ವವನ್ನು ಕುಶಲತೆಯಿಂದ ಬಳಸಿದರು.
೧೯೨೬ರಲ್ಲಿ ಬ್ಲಾಕ್ ಸೆನೆಟ್ ಸದಸ್ಯನಾಗಿ ಆಯ್ಕೆಗೊಂಡು ನಂತರದಲ್ಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದರು. ೧೯೨ರಲ್ಲಿ ಕ್ಲಾನ್ ಬೆಂಬಲದೊಂದಿಗೆ ಮಾಜಿ ಕ್ಲಾನ್ನ ಪ್ರಮುಖರಾಗಿದ್ದ [[ಬಿಬ್ ಗ್ರೇವ್ಸ್]] ಅಲಬಾಮಾದ ರಾಜ್ಯಪಾಲರ ಕಛೇರಿ ಸ್ಥಾನವನ್ನು ಗಳಿಸಿದರು. ಶಿಕ್ಷಣ ನಿಧಿಯ ಹೆಚ್ಚಳ, ಉತ್ತಮ ಸಾರ್ವಜನಿಕ ಆರೋಗ್ಯ, ಹೊಸ ಹೆದ್ದಾರಿ ನಿರ್ಮಾಣ ಮತ್ತು ಕಾರ್ಮಿಕ-ಪರ ಶಾಸನ ಸಭೆಗಳನ್ನು ಜಾರಿಗೊಳಿಸಲು ಅವರು ಮುಂದಾದರು. ಈ ಶಾಸನ ಸಭೆಯನ್ನು ಅಲಬಾಮಾ ರಾಜ್ಯದ ಕಾರಣದಿಂದಾಗಿ ೧೯೭೨ರವರೆಗೂ ರಿಡಿಸ್ಟ್ರಿಕ್ಟ್ ಮಾಡಲು ನಿರಾಕರಿಸಲಾಯಿತು, ಆದರೆ ಪ್ರತಿಯೊಂದು ಕ್ಲಾನ್ ಗ್ರಾಮೀಣ ಪ್ರದೇಶಗಳಲ್ಲಿ ಅಧಿಕಾರದಲ್ಲಿದ್ದ ತೋಟದ ಮಾಲೀಕರನ್ನು ಸೋಲಿಸಲು ಅಸಮರ್ಥವಾಗಿತ್ತು.
ಇದರ ಪೂರ್ವಾಧಿಕಾರಿಯಲ್ಲದವರು ಪ್ರತ್ಯೇಕವಾಗಿ ಡೆಮಾಕ್ರಟಿಕ್ ಸಂಘಟನೆಯ ಪಕ್ಷಪಾತಿಯಾಗಿದ್ದರು, ಎರಡನೆ ಕ್ಲಾನ್ನನ್ನು ಮಿಡ್ವೆಸ್ಟ್ನಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟ್ ಸದಸ್ಯರು ಓಲೈಸಿದರು. ಪ್ರತಿಯೊಂದೂ ಪಕ್ಷದಿಂದ ಒಪ್ಪಿಗೆ ಪಡೆದ ಅಭ್ಯರ್ಥಿಗಳು ಇದರ ಗುರಿಗಳನ್ನು ಬೆಂಬಲಿಸಿದರು; ನಿಷೇದಾಜ್ಞೆಯು ಉತ್ತರದಲ್ಲಿ ಸಾಮಾನ್ಯ ಗುರಿಯನ್ನು ನೇರವೇರಿಸಲು ಕ್ಲಾನ್ ಮತ್ತು ರಿಪಬ್ಲಿಕನ್ ಸದಸ್ಯರಿಗೆ ಪ್ರತ್ಯೇಕವಾಗಿ ಸಹಾಯವಾಗಿತ್ತು.
ಹೀಗಾಗಿ ದಕ್ಷಿಣದಲ್ಲಿ ರಿಪಬ್ಲಿಕನ್ ಪಕ್ಷ ಅಧಿಕಾರಹೀನಗೊಂಡಿತು; ಹೀಗೆ ದಕ್ಷಿಣದ ಕ್ಲಾನ್ ಡೆಮಾಕ್ರಟಿಕ್ ಪೊಲೀಸ್, ಷರೀಫರು ಮತ್ತು ಸ್ಥಳೀಯ ಸರ್ಕಾರದ ಇತರೆ ಅಧಿಕಾರಿಗಳೊಂದಿಗೆ ಆತ್ಮೀಯವಾಗಿ ಒಟ್ಟುಗೂಡುವ ಮೂಲಕ ಡೆಮಾಕ್ರಟಿಕ್ ಅನ್ನು ಉಳಿಸಿಕೊಂಡಿತ್ತು.
=== ಪ್ರತಿಭಟನೆ ಮತ್ತು ಅವನತಿ ===
[[ಚಿತ್ರ:Liberators-Kultur-Terror-Anti-Americanism-1944-Nazi-Propaganda-Poster.jpg|thumb|right| ನಾಜಿ ಪ್ರೊಪಗ್ಯಾಂಡ ಪೋಸ್ಟರ್ ಫ್ರಂ 1944, ಶೋಯಿಂಗ್ ಎ ಕು ಕ್ಲುಕ್ಸ್ ಕ್ಲಾನ್ ಹುಡ್ ಆಯ್೦ಡ್ ಎ ನೋಸ್]]
ಡೆಟ್ರಾಯಿಟ್ನಲ್ಲಿ [[ರೆಯಿನ್ಹೋಲ್ಡ್ ನೈಬರ್]]ರಂತಹ ಪ್ರಮುಖ ಪ್ರೊಟೆಸ್ಟೆಂಟ್ ಮಂತ್ರಿಗಳು ಸೇರಿದಂತೆ ಅನೇಕ ಗುಂಪುಗಳು ಮತ್ತು ನಾಯಕರು ಕ್ಲಾನ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದಕ್ಕೆ ಪ್ರತ್ಯುತ್ತರವಾಗಿ ಯಹೂದಿ ಅಮೆರಿಕರನ್ನರ ವಿರುದ್ಧ ಹರಿತವಿಲ್ಲದ ಧಾಳಿಯನ್ನು ನಡೆಸಿ, ಕ್ಲಾನ್ನ ಚಳುವಳಿಯು ಖಾಸಗಿ ಶಾಲೆಗಳನ್ನು ಗಡಿಪಾರು ಮಾಡಿತು. ಲಿಯೊ ಫ್ರಾಂಕ್ನನ್ನು ಕಾನೂನು ಬಾಹಿರವಾಗಿ ಗೆಲ್ಲಿಗೇರಿಸಿದ ನಂತರ ಯಹೂದಿ ಧರ್ಮೀಯರ [[ಮಾನನಷ್ಟ-ವಿರೋಧ ಸಂಘಟನೆ]] ರಚನೆಯಾಯಿತು. ಕ್ಲಾನ್ ಸದಸ್ಯತ್ವ ಪಟ್ಟಿಗಳನ್ನು ಪ್ರಕಟ ಮಾಡುವುದನ್ನು ನಾಗರೀಕ ಗುಂಪೊಂದು ಆರಂಭಿಸಿದಾಗ ಬಹುತೇಕ ಸದಸ್ಯರು ತಕ್ಷಣವೇ ಅದನ್ನು ನಿರಾಕರಿಸಿದರು.
[[ವರ್ಣಮಯ ಜನರ ಸಾಧನೆಗಾಗಿ ರಾಷ್ಟ್ರೀಯ ಸಂಘಟನೆಯು]] ಕ್ಲಾನ್ ಚಟುವಟಿಕೆಗಳನ್ನು ಕುರಿತಂತೆ ಜನರಿಗೆ ಕ್ರಮಬದ್ಧವಾಗಿ ತಿಳಿಸಲು ಶೈಕ್ಷಣಿಕ ಚಳುವಳಿಗಳನ್ನು ನಡೆಸಿತು ಮತ್ತು ಕ್ಲಾನ್ ವಿರುದ್ಧ ಕಾಂಗ್ರೆಸ್ನಲ್ಲಿ ನಿಂದಿಸುವವರ ಮೇಲೆ ಹೆಚ್ಚು ಪ್ರಭಾವ ಬೀರಿತು. ೧೯೨೫ರಲ್ಲಿ ಇದರ ಅತ್ಯುನ್ನತಿಯಾದ ನಂತರ, ಕ್ಲಾನ್ ಸದಸ್ಯತ್ವವು ಮಿಡ್ವೆಸ್ಟ್ನ ಅನೇಕ ಪ್ರದೇಶಗಳಲ್ಲಿ ಬಹುಬೇಗನೆ ಅವನತಿ ಹೊಂದಲು ಆರಂಭಿಸಿತು.<ref name="Jackson" />
[[ಅಲಬಾಮಾ]]ದಲ್ಲಿ KKK ರಕ್ಷಕರು ಸರ್ಕಾರದ ರಕ್ಷಣೆಯನ್ನು ಪಡೆಯಲು ಯೋಚಿಸಿದರು, ೧೯೨೭ರಲ್ಲಿ ದೈಹಿಕ ಭಯಂಕರ ತರಂಗವನ್ನು ಆರಂಭಿಸಿದರು, ನೈತಿಕತೆಗೆ ಸಂಬಂಧಿಸಿದ ಅಚಾತುರ್ಯಗಳನ್ನು ಮಾಡಿದ್ದಕ್ಕೆ ಜನಾಂಗೀಯ ಸಂಪ್ರದಾಯಗಳನ್ನು ಹಿಂಸಿಸಿದಂತಹ ಕರಿಯರು ಮತ್ತು ಶ್ವೇತ ವರ್ಣಿಯರಿಬ್ಬರನ್ನು ಗುರಿಯಾಗಿಸಿಕೊಂಡಿದ್ದರು.<ref>ರೋಗೆರ್ಸ್ ಎಟ್ ಅಲ್., pp. ೪೩೨-೪೩೩.</ref> ರಾಜ್ಯದ ಸಂಪ್ರದಾಯವಾದಿ ಗಣ್ಯರು ಆರೋಪಿಸಲ್ಪಟ್ಟರು. ''[[ಮಾಂಟೆಗೊಮಿ ಅಡ್ವರ್ಟೈಸರ್]]'' ನ ಸಂಪಾದಕ [[ಗ್ರೊವರ್ ಸಿ.ಹಾಲ್]], Sr. ಅವರು ಕ್ಲಾನ್ ತನ್ನ "ಜನಾಂಗೀಯ ಮತ್ತು ಧಾರ್ಮಿಕ ಅಸಹಿಷ್ಣುತೆ"ಗಾಗಿ ಧಾಳಿ ಮಾಡಿರುವ ಬಗ್ಗೆ ಸಂಪಾದಕೀಯ ಮತ್ತು ಲೇಖನಗಳ ಸರಣಿಗಳನ್ನು ಪ್ರಕಟಗೊಳಿಸಲು ಆರಂಭಿಸಿದರು. ಹಾಲ್ ತನ್ನ ಹೋರಾಟಕ್ಕಾಗಿ [[ಪುಲ್ಟಿಜರ್ ಪ್ರಶಸ್ತಿ]]ಯನ್ನು ಗಳಿಸಿದರು.<ref>ರೋಗೆರ್ಸ್ ಎಟ್ ಅಲ್., p. ೪೩೩.</ref>
ಬೇರೆ ದಿನಪತ್ರಿಕೆಗಳು ತಮ್ಮ ಸ್ಥಿರವಾಗಿದ್ದುಕೊಂಡು ಕ್ಲಾನ್ ಮೇಲೆ ಉಚ್ಚ ಸ್ವರದಲ್ಲೇ ಧಾಳಿ ಮಾಡಿದವು, ಅದು ಸಂಘಟನೆಯನ್ನು ಹಿಂಸಾಕಾರಿ ಮತ್ತು "ಅಮೆರಿಕದಲ್ಲ"ವೆಂಬುದನ್ನು ಸೂಚಿಸುತ್ತಿತ್ತು.
ಷರೀಪರು ಅಸಮರ್ಥರಾದರು. [[1928ರ ಅಧ್ಯಕ್ಷೀಯ ಚುನಾವಣೆ]]ಯಲ್ಲಿ, ಈ ರಾಜ್ಯವು ಡೆಮಾಕ್ರಟಿಕ್ ಅಭ್ಯರ್ಥಿ ಆಲ್ ಸ್ಮಿಥ್ ಕ್ಯಾಥೋಲಿಕ್ ಆಗಿದ್ದರೂ, ಅವರಿಗೆ ಮತನೀಡಿತು. ಅಲಬಾಮಾದಲ್ಲಿ ೧೯೩೦ರ ನಂತರ ಆರು ಸಾವಿರಗಿಂತಲೂ ಕಡಿಮೆಯಿಲ್ಲದಷ್ಟು ಕ್ಲಾನ್ ಸದಸ್ಯತ್ವ ಪತನಗೊಂಡಿತು. ಬರ್ಮಿಂಗ್ಹ್ಯಾಮ್ನಲ್ಲಿ ಸಣ್ಣ ಸ್ವತಂತ್ರ ಘಟಕಗಳು ಕ್ರಿಯಾತ್ಮಕವಾಗಿ ಮುಂದುವರಿಯುತ್ತಿದ್ದವು, ೧೯೪೦ರ ನಂತರದಲ್ಲಿ ಅಲ್ಲಿನ ಸದಸ್ಯರು ಅಫ್ರಿಕನ್ ಅಮೆರಿಕನ್ನರ ವಸತಿಗಳ ಮೇಲೆ ಬಾಂಬ್ ಎಸೆಯುವ ಮೂಲಕ ಭಯಂಕರ ಆಳ್ವಿಕೆಯನ್ನು ಆರಂಭಿಸಿದ್ದರು. ೧೯೫೦ ಮತ್ತು ೧೯೬೦ರ ದಶಕದಲ್ಲಿ ನಾಗರೀಕ ಹಕ್ಕುಗಳ ಚಳುವಳಿ ವಿರುದ್ಧದ ಪ್ರತಿಭಟನೆಯಂತೆ KKK ಕ್ರಾಂತಿಯೂ ಹೆಚ್ಚಾಗಿತ್ತು.
[[ಚಿತ್ರ:D. C. Stephenson Grand Dragon of the Klu Klux Klan in Indiana, c 1922.jpg|thumb|upright| ಡಿ.ಸಿ ಸ್ಟೀಫನ್ಸನ್,ಗ್ರ್ಯಾಂಡ್ ಡ್ರ್ಯಾಗನ್ ಆಫ್ ದಿ ಇಂಡಿಯನ್ ಕ್ಲಾನ್.ಹಿಸ್ ಕನ್ವಿಕ್ಷನ್ ಫಾರ್ ಮರ್ಡರಿಂಗ್ ಎ ಯಂಗ್ ವೈಟ್ ಸ್ಕೂಲ್ ಟೀಚರ್ ಇನ್ 1925 ಡಿವಾಸ್ಟೇಡ್ ದಿ ಇಂಡಿಯಾನ ಕ್ಲಾನ್.]]
[[ಡಿ.ಸಿ.ಸ್ಟೀಫೆನ್ಸನ್]], ಇಂಡಿಯಾನಾ ಮತ್ತು ದಕ್ಶಿಣದ ರಾಜ್ಯಗಳ [[ದೊಡ್ಡ ಡ್ರಾಗನ್(ಸುಲಿಗೆಕೋರ)]] ಆಗಿದ್ದನು, ಅವನು ೧೯೨೫ರಲ್ಲಿ
<ref name="indianahistory.org">[http://www.indianahistory.org/library/manuscripts/collection_guides/m0264.html ಡಿ.ಸಿ ಸ್ಟೀಫನ್ಸನ್ ಮನುಸ್ಕ್ರಿಪ್ಟ್ ಕಲೆಕ್ಷನ್]</ref><ref name="indianahistory.org"/> [[ಮಡ್ಗೆ ಓಬರ್ಹೊಲ್ಟ್ಜರ್]]ಳ ಮೇಲಿನ ಅತ್ಯಾಚಾರ ಮತ್ತು ಆಕೆಯ ಸಾವಿನಲ್ಲಿ ಅವನು ಭಾಗಿಯಾದುದ್ದರಿಂದ ಎರಡನೆ ದರ್ಜೆಯ ಕೊಲೆ ಆಪಾದನೆಗೆ ಶಿಕ್ಷೆಗೊಳಪಟ್ಟಿದ್ದನು. ಈ ತೀವ್ರಾಸಕ್ತಿ ವಿಚಾರಣೆಯಲ್ಲಿ ಸ್ಟೀಪೆನ್ಸನ್ಗೆ ಶಿಕ್ಷೆಯಾದ ನಂತರ, ಇಂಡಿಯಾನದಲ್ಲಿ ಕ್ಲಾನ್ ಅನಿರೀಕ್ಷಿತವಾಗಿ ಅವನತಿ ಹೊಂದಿತು. ಇತಿಹಾಸತಜ್ಞ [[ಲಿಯೊನಾರ್ಡ್ ಮೋರೆ]] ಕ್ಲಾನ್ನ ಅವನತಿಗೆ ಅದರ ನಾಯಕತ್ವದಲ್ಲಿದ್ದ ವಿಫಲತೆಯೇ ಕಾರಣ ಎಂದು ಹೇಳಿದ್ದಾರೆ:
<blockquote> ಇಂಡಿಯಾನಾದ ಅಗೋಚರ ಸಾಮ್ರಾಜ್ಯದ ನಿಯಂತ್ರಣಕ್ಕಾಗಿ ಕುಟೀಲ ತಂತ್ರ ಹೂಡಿದ್ದಂತಹ ಸ್ಟೀಪನ್ಸನ್ ಮತ್ತು ಇತರೆ ಮಾರಾಟಗಾರರು ಮತ್ತು ಕಛೇರಿ ಕೆಲಸಗಾರರು ಕ್ಲಾನ್ನ ಅಧಿಕಾರದ ಗುರಿಗಳನ್ನು ಹರಡುವುದಕ್ಕಾಗಿ ಸಾಮರ್ಥ್ಯ ಮತ್ತು ಬಯಕೆ ಎರಡನ್ನು ರಾಜಕೀಯ ವ್ಯವಸ್ಥೆಯಲ್ಲಿ ಬಳಕೆ ಮಾಡುವುದನ್ನು ಕಡಿಮೆ ಮಾಡಲಾಯಿತು. ಅವರು ಅದರಲ್ಲಿ ಅನಾಸಕ್ತಿ ತೋರಿದ್ದರು ಅಥವಾ ಪ್ರತಿಯೊಂದರಲ್ಲೂ ಅರಿವಿಲ್ಲದವರಾಗಿದ್ದರೂ ಚಳುವಳಿಯೊಳಗೆ ಗ್ರಾಸ್ ರೂಟ್ಸ್ ಆಸಕ್ತಿಗಳನ್ನು ಹೊಂದಿದ್ದರು. ಅವರಿಗೆ ಕ್ಲಾನ್ ಸಂಪತ್ತು ಮತ್ತು ಅಧಿಕಾರವನ್ನು ಸಂಪಾದನೆ ಮಾಡುವುದಕ್ಕಿಂತ ಬೇರೆನೂ ಹೆಚ್ಚಿಗೆ ಬೇಕಿರಲಿಲ್ಲ. ಇದು ರಾಜಕೀಯ ಬಲ ಹೊಂದುವವರೆಗೂ ಈ ಪ್ರಮುಖರಲ್ಲದ ಸದಸ್ಯರು ತಲೆಗವಸುಗಳಿಂದ ಮೇಲ್ಭಾಗವನ್ನು ಮುಚ್ಚಿಕೊಂಡು ಕಾಣಿಸಿಕೊಂಡರು. ಕ್ಲಾನ್ ಎಂದಿಗೂ ಅಗತ್ಯವಾದ ಪ್ರಭಾವಿಶಾಲಿಯನ್ನು, ಸಮರ್ಪಕ ನಾಯಕತ್ವವನ್ನು ಹೊಂದಿರಲಿಲ್ಲ. ಕ್ಲಾನ್ನನ್ನು ಸಮರ್ಥಿಸಿದಂತಹ ಅತ್ಯಂತ ಪ್ರತಿಷ್ಟಿತ ಮತ್ತು ಅನುಭವಿ ರಾಜಕಾರಣಿಗಳು ಅಥವಾ ತಮ್ಮ ಕ್ಲಾನ್ ಮತದಾರರ ಕೆಲವು ಹಿತಾಸಕ್ತಿಗಳಲ್ಲಿ ತೊಡಗಿರುವವರು ಸಹ ಚಿಕ್ಕದನ್ನು ಸಾಧಿಸಿದ್ದಾರೆ. ಒಂದು ಅಡಚಣೆಯಿಂದ ಪಕ್ಷೀಯವಾದ (ವೈಮನಸ್ಸು) ಸೃಷ್ಟಿಯಾಯಿತು, ಆದರೆ ಅನೇಕ ರಾಜಕಾರಣಿಗಳು ಕ್ಲಾನ್ನನ್ನು ಸಮಯೋಚಿತ ದೃಷ್ಟಿಯಿಂದ ಬೆಂಬಲಿಸಿದರು. ಅಪರಾಧ ಮತ್ತು ಭ್ರಷ್ಟಾಚಾರ ಆರೋಪಗಳು ಚಳುವಳಿಯನ್ನು ಕಳಂಕಗೊಳಿಸಲು ಆರಂಭಿಸಿದಾಗ, ಅದರ ರಾಜಕೀಯ ಲಕ್ಷಣಗಳಿಗೆ ಸಂಬಂಧಿಸಿದಂತೆ ಕ್ಲಾನ್ನ ಪರವಾಗಿ ಕೆಲಸ ಮಾಡುವ ಅಭಿಪ್ರಾಯವಿಲ್ಲವೆಂಬ ಆಸಕ್ತಿಯನ್ನು ಹಲವರು ತೋರಿದರು.:<ref>ಮೋರೇ ೧೯೯೧, p.೧೮೬.</ref> </blockquote>
[[ಪರಮಾಧಿಕಾರವುಳ್ಳ ಮಾಟಗಾರ]] [[ಹಿರಾಮ್ ವೆಸ್ಲೇ ಇವನ್ಸ್]] ೧೯೩೯ರಲ್ಲಿ ಇಂಡಿಯಾನದ [[ಪಶುವೈದ್ಯ]]ರಾದ [[ಜೇಮ್ಸ್ ಕೊಲ್ಸ್ಕಾಟ್]] ಮತ್ತು ಅಟ್ಲಾಂಟದ [[ಪ್ರಸೂತಿ ವಿಜ್ಞಾನಿ]]ಯಾದ [[ಸ್ಯಾಮ್ಯುಯೆಲ್ ಗ್ರೀನ್]] ಅವರಿಗೆ ಸಂಘಟನೆಯನ್ನು ಮಾರಿದನು. ಆದರೆ ಅವರಿಬ್ಬರೂ ಸದಸ್ಯರ ಸಾಮೂಹಿಕ ನಿರ್ಗಮನವನ್ನು ತಡೆಯುವಲ್ಲಿ ಅಸಮರ್ಥರಾದರು. ೧೯೪೪ರಲ್ಲಿ, ಕ್ಲಾನ್ ವಿರುದ್ದದ ಹಿಂದಿನ ತೆರಿಗೆಯಲ್ಲಿ $೬೮೫,೦೦೦ಗೆ ಒಡೆತನದ ಹಕ್ಕನ್ನು ಹೊಂದಲು [[IRS]] ವಿಫಲವಾಯಿತು ಮತ್ತು ಕೊಲ್ಸ್ಕಾಟ್ ೧೯೪೪ರಲ್ಲಿ ಸಂಘಟನೆಯನ್ನು ಪಾಲು ಮಾಡುವಂತೆ ಒತ್ತಾಯಪಡಿಸಿದರು. ಸ್ಥಳೀಯ ಕ್ಲಾನ್ ಗುಂಪುಗಳು ನಂತರದ ವರ್ಷಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾದವು.<ref>{{cite news |author= |coauthors= |title=Georgia Orders Action to Revoke Charter of Klan. Federal Lien Also Put on File to Collect Income Taxes Dating Back to 1921. Governor Warns of a Special Session if Needed to Enact 'De-Hooding' Measures Tells of Phone Threats Georgia Acts to Crush the Klan. Federal Tax Lien Also Is Filed |url=http://select.nytimes.com/gst/abstract.html?res=F60D13F83B5E1B7B93C3AA178ED85F428485F9 |quote=Governor Ellis Arnall today ordered the State's legal department to bring action to revoke the Georgia charter of the Ku Klux Klan.... 'It is my further information that on June 4, 1944, the Ku Klux Klan...|work=[[New York Times]] |date=May 31, 1946 |accessdate=2010-01-12 }}</ref>
[[ಚಿತ್ರ:Kkk1928.jpg|thumb|left|ಕು ಕ್ಲುಕ್ಸ್ ಕ್ಲಾನ್ ಮೆಂಬರ್ಸ್ ಮಾರ್ಚ್ ಡೌನ್ ಪೆನ್ನೆಸ್ಯಾವನಿಯಾ ಅವೆನ್ಯೂ ಇನ್ ವಾಷಿಂಗ್ಟನ್, ಡಿ.ಸಿ ಇನ್ 1928]]
ಐದು ಮಿಲಿಯನ್ ಕರಿಯರಿಗೆ ಗುರಿಯಿಟ್ಟಿದ್ದ ಕ್ಲಾನ್ ೧೯೪೦ರಿಂದ ೧೯೭೦ರವರೆಗೆ ಉತ್ತರದ ಮಧ್ಯಪಾಶ್ಚಿಮಾತ್ಯ ಮತ್ತು ಪಾಶ್ಚಿಮಾತ್ಯ ನಗರಗಳಿಗಾಗಿ ದಕ್ಷಿಣವನ್ನು ತೊರೆಯಿತು. ಆದಾಗ್ಯೂ ಅವರು ಇಂಡಿಯಾನದಲ್ಲಿ ಕೆಲವು ಅತ್ಯಂತ ರಾಜಕೀಯವಾಗಿ ಪ್ರಾಬಲ್ಯಯುತ ಕ್ಲಾನ್ ಸಂಘಗಳನ್ನು ಕಟ್ಟಿದರು. ಕು ಕ್ಲುಕ್ಸ್ ಕ್ಲಾನ್ ಇಂಡಿಯಾನದ ರಾಜಕೀಯ ಮತ್ತು ಸಮಾಜದಲ್ಲಿ ಪ್ರಥಮ ಮಹಾಯುದ್ದದ ನಂತರ ಪ್ರಾಮುಖ್ಯತೆಯನ್ನು ಗಳಿಸುವತ್ತ ಬೆಳೆಯಿತು. ಇದು ಸ್ಥಳೀಯ-ನಿವಾಸಿಗಳಾದ ಅನೇಕ ಶ್ವೇತವರ್ಣದ ಪ್ರೊಟೆಸ್ಟೆಂಟ್ರ ಆದಾಯ ಮತ್ತು ಸಾಮಾಜಿಕ ಮಟ್ಟಗಳನ್ನು ರೂಪಿಸಿತು. ರಾಷ್ಟ್ರೀಯವಾಗಿ ೧೯೨೦ರಲ್ಲಿ ಇಂಡಿಯಾನವು ಅತ್ಯಂತ ಪ್ರಾಬಲ್ಯಯುತ ಕು ಕ್ಲುಕ್ಸ್ ಕ್ಲಾನ್ನನ್ನು ಹೊಂದುವುದಾಗಿ ಹೇಳಿತು. ಹೀಗಾಗಿ ಅದು ರಾಜ್ಯದಾದ್ಯಂತ ಇರುವ ಸದಸ್ಯರ ಅಧಿಕ ಸಂಖ್ಯೆಯನ್ನು ಲೆಕ್ಕಹಾಕಿತು, ಅದರ ಪ್ರಾಮುಖ್ಯತೆಯು ರಾಜ್ಯಪಾಲ ಹುದ್ದೆಗಾಗಿ ೧೯೨೪ರಲ್ಲಿ ನಡೆದ ಚುನಾವಣೆಯಲ್ಲಿ [[ಎಡ್ವರ್ಡ್ ಜಾಕ್ಸನ್]]ರನ್ನು ಅಧಿಕಾರಕ್ಕೇರಿಸಿತು. ಅಲ್ಪಾವಧಿಯ ನಂತರ, ಇಂಡಿಯಾನದ ಕ್ಲಾನ್ ಅಧಿಕಾರಿ ಡಿ.ಸಿ.ಸ್ಟೀಫೆನ್ಸನ್ನ ಕೊಲೆ ವಿಚಾರಣೆಗೆ ಸಂಬಂಧಿಸಿದ ಹಗರಣವು ಕಾನೂನು ಕ್ರಮದ ಅನುಚರರಂತಿದ್ದ ಕು ಕ್ಲುಕ್ಸ್ ಕಾನ್ನ ಸ್ವರೂಪವನ್ನು ನಾಶ ಮಾಡಿತು. ೧೯೨೬ರ ನಂತರ ಕು ಕ್ಲುಕ್ಸ್ ಕ್ಲಾನ್ "ದುರ್ಬಲಗೊಂಡಿತು ಮತ್ತು ಅಪಖ್ಯಾತಿಯನ್ನು ಪಡೆಯಿತು" <ref>{{cite web
| url=http://www.in.gov/library/2848.htm
| title=Ku Klux Klan in Indiana
| publisher=Indiana State Library
| date=2000-11
| accessdate=2009-09-27
| archive-date=2009-09-18
| archive-url=https://web.archive.org/web/20090918163319/http://www.in.gov/library/2848.htm
| url-status=dead
}}</ref>
ಎರಡನೇ ಮಹಾಯುದ್ಧದ ನಂತರ, ಜನಪದ ಅಧ್ಯಾಯಿ ಮತ್ತು ಲೇಖ [[ಸ್ಟೆಟ್ಸನ್ ಕೆನಡಿ]] ಕ್ಲಾನ್ನೊಳಗೆ ಸೇರಿ, ಮಾಧ್ಯಮ ಮತ್ತು ಕಾನೂನು ಬಲವುಳ್ಳ ಸಂಸ್ಥೆಗಳಿಗೆ ಮಾಹಿತಿಯನ್ನು ಒದಗಿಸಿದರು. ಅವರು ''[[ಸೂಪರ್ಮ್ಯಾನ್]]'' ರೇಡಿಯೋ ಕಾರ್ಯಕ್ರಮದ ಬರಹಗಾರರಿಗೆ ರಹಸ್ಯ ಸಂಕೇತ ಪದಗಳನ್ನು ಸಹ ಒದಗಿಸಿದರು, ಇದರ ಪರಿಣಾಮವಾಗಿ [[ಸೂಪರ್ಮ್ಯಾನ್]]ನ ಕಂತುಗಳಲ್ಲಿ KKKಯನ್ನು ಬಳಸಿಕೊಳ್ಳಲಾಯಿತು. ಕೆನಡಿಯ ಉದ್ದೇಶವು ಕ್ಲಾನ್ನ ತಂತ್ರವನ್ನು ಬಹಿರಂಗಗೊಳಿಸುವುದು ಮತ್ತು ಕ್ಲಾನ್ನ ಸಂಪ್ರದಾಯಗಳನ್ನು ಕ್ಷುಲ್ಲಕಗೊಳಿಸುವುದಾಗಿತ್ತು. ಈ ಸಂಕೇತ ಪದಗಳು ಕ್ಲಾನ್ಗೆ ಹೊಸಸೇರ್ಪಡೆ ಮತ್ತು ಸದಸ್ಯತ್ವವನ್ನು ಕುಗ್ಗಿಸುವಲ್ಲಿ ನೆರವಾದವು.<ref>{{cite news |first=Richard |last=von Busack |authorlink= |coauthors= |title=Superman Versus the KKK |url=http://www.metroactive.com/papers/metro/07.02.98/comics-9826.html |work=MetroActive |publisher= |date= |accessdate= }}</ref> ೧೯೫೦ರ ದಶಕದಲ್ಲಿ ಕೆನೆಡಿ ತಮ್ಮ ಅನುಭವಗಳನ್ನು ಕುರಿತಂತೆ ಉತ್ತಮವಾಗಿ ಮಾರಾಟವಾದ ಪುಸ್ತಕವೊಂದನ್ನು ಬರೆದರು. ಅದು ಇನ್ನೂ ಮುಂದೆ ಕ್ಲಾನ್ ನಾಶಗೊಳಿಸಿತ್ತು.<ref>ಕೆನಡಿ ೧೯೯೦.</ref>
ಈ ಕೆಳಕಂಡ ಕೋಷ್ಟಕವು ಕ್ಲಾನ್ನ ಅವಧಿಯಲ್ಲಿ ಅಂದಾಜಿಸಲ್ಪಟ್ಟ ಸದಸ್ಯತ್ವದಲ್ಲಾದ ಬದಲಾವಣೆಯನ್ನು ತೋರಿಸುತ್ತದೆ.<ref>{{cite web |url=http://www.aaregistry.com/african_american_history/2207/The_Ku_Klux_Klan_a_brief__biography |title=The Ku Klux Klan, a brief biography |accessdate= |author= |date= |work= |publisher=[[The African American Registry]] |archive-date=ಏಪ್ರಿಲ್ 3, 2007 |archive-url=https://web.archive.org/web/20070403111321/http://www.aaregistry.com/african_american_history/2207/The_Ku_Klux_Klan_a_brief__biography |url-status=dead }} ಆಯ್೦ಡ್ {{cite web |url=http://www.georgiaencyclopedia.org/nge/Article.jsp?id=h-2730 |title=Ku Klux Klan in the Twentieth Century |accessdate= |author=Lay, Shawn |date= |work=[[The New Georgia Encyclopedia]] |publisher=[[Coker College]] |archive-date=ಅಕ್ಟೋಬರ್ 25, 2005 |archive-url=https://web.archive.org/web/20051025072407/http://www.georgiaencyclopedia.org/nge/Article.jsp?id=h-2730 |url-status=dead }}</ref> (ಕೋಷ್ಟಕದಲ್ಲಿ ನೀಡಿರುವ ವರ್ಷಗಳು ಅಂದಾಜು ಕಾಲಾವಧಿಯನ್ನು ಪ್ರತಿನಿಧಿಸುತ್ತವೆ.)
<div class="center">
{| class="wikitable sortable "
|-
!ವರ್ಷ
!ಸದಸ್ಯತ್ವ
|-
!1920
| style="text-align:right"|4,000,000<ref>{{cite web |author=By Friday, Apr. 09, 1965 |url=http://www.time.com/time/magazine/article/0,9171,898581-2,00.html |title=The Various Shady Lives Of The Ku Klux Klan - Time |publisher=Time<! |date=1965-04-09 |accessdate=2009-12-24 |archive-date=ಮೇ 21, 2013 |archive-url=https://web.archive.org/web/20130521074526/http://www.time.com/time/magazine/article/0,9171,898581-2,00.html |url-status=dead }}</ref>
|-
!೧೯೨೪
| style="text-align:right"|೬,೦೦೦,೦೦೦
|-
!೧೯೩೦
| style="text-align:right"|೩೦,೦೦೦
|-
!೧೯೮೦
| style="text-align:right"|೫,೦೦೦
|-
!೨೦೦೮
| align="right"|೬,೦೦೦
|}
</div>
== ಕ್ಲಾನ್ಸ್ ನಂತರ, ೧೯೫೦ ರಿಂದ ೧೯೬೦ರ ದಶಕ ==
"ಕು ಕ್ಲುಕ್ಸ್ ಕ್ಲಾನ್" ಹೆಸರನ್ನು ಹಲವು ಸ್ವಯಮಾಡಳಿತ ಗುಂಪುಗಳು ಬಳಸಲು ಪ್ರಾರಂಭಿಸಿದವು. ಸಂಧಿಕಾಲದ ನೆರೆಹೊರೆ ಮನೆಗಳ ಮೇಲೆ ಮತ್ತು ಕ್ರಾಂತಿಕಾರರ ಮನೆಗಳ ಮೇಲೆ ಬಾಂಬ್ ದಾಳಿ ನಡೆಸುವುದರ ಜತೆಗೆ ದೈಹಿಕ ಹಿಂಸೆ, ಬೆದರಿಕೆ ಮತ್ತು ಹತ್ಯೆಗಳು ಮಾಡುವ ಮೂಲಕ ೧೯೫೦ದಶಕದ ಆರಂಭದಲ್ಲಿ ಕ್ಲಾನ್ ಗುಂಪುಗಳು [[ಸಾರ್ವಜನಿಕ ಹಕ್ಕುಗಳ ಚಳುವಳಿ]]ಯನ್ನು ವಿರೋಧಿಸಿತು. ಹ್ಯಾಲ್ಬಮದ ಬ್ರಿಮಿಂಗ್ಯಾಮ್ನಲ್ಲಿ ಬುಲ್ ಕಾರ್ನರ್ ಅಧಿಕಾರವಧಿಯಲ್ಲಿ,ಕ್ಲಾನ್ ಗುಂಪುಗಳು ಪೊಲೀಸರೊಂದಿಗೆ ನಿಕಟ ಒಕ್ಕೂಟ ಮತ್ತು ನಿರ್ಭಯವಾಗಿ ಕಲಸಮಾಡಿಕೊಂಡಿದ್ದರು. ಕ್ಲಾನ್ ಗುಂಪುಗಳಿಂದ ಈ ನಗರ ಹಲವು ಮನೆಗಳ ಮೇಲೆ ಬಾಂಬ್ ದಾಳಿ ಮಾಡಿದ್ದರಿಂದ ಈ ನಗರಕ್ಕೆ "ಬಾಂಬಿಂಗ್ಯಾಮ್" ಎನ್ನುವ ಅಡ್ಡಹೆಸರು ಬಂತು. ಹ್ಯಾಲ್ಬಮ ಮತ್ತು [[ಮಿಸ್ಸಿಸ್ಸಿಪ್ಪಿ]] ಅಂತಹ ರಾಜ್ಯಗಳಲ್ಲಿ, ಗೌವರ್ನರ್ ಆಡಳಿತಗಳೊಂದಿಗೆ ಕ್ಲಾನ್ ಸದಸ್ಯರು ಕಳ್ಳ ಒಪ್ಪಂದಗಳಿಗೆ ಸಹಿ ಹಾಕುತ್ತಿದ್ದರು.<ref name="McWhorter"/>
ಎಷ್ಟೂ ಕೊಲೆಗಳು ವರಧಿ ಮಾಡದೆ ಮತ್ತು ಕಾನೂನುಕ್ರಮ ಕೈಗೊಳ್ಳದೆಯೆ ಮುಗಿದು ಹೋದವು. ಅವರೆಲ್ಲರೂ ಬಿಳಿ ಜನರಾಗಿದ್ದರಿಂದ ಹೆಚ್ಚಿನ ನ್ಯಾಯಾದರ್ಶಿಗಳು ಉದ್ದೇಶಪೂರ್ವಕವಾಗಿಯೇ ನಿರಂತರವಾಗಿ ಕಪ್ಪು ಮತದಾರರಿಗೆ ಮತದಾನದ ಹಕ್ಕನು ನೀಡದೆ ವಂಚಿಸುತ್ತಿದ್ದರು.
[[ದಕ್ಷಿಣದ ಪ್ರಾದೇಶಿಕ ಕೌನ್ಸಿಲ್]] ವರದಿಯ ಪ್ರಕಾರ,೧೯೫೧ ಮತ್ತು ೧೯೫೨ರಲ್ಲಿ [[ಆಟ್ಲಾಂಟ]]ದಲ್ಲಿ ದಕ್ಷಿಣದ ನಲವತ್ತು ಕಪ್ಪು ಕುಟುಂಬಗಳು ಬಾಂಬ್ ದಾಳಿಗೆ ಒಳಗಾಗಿದ್ದವು. ಬಾಂಬ್ ದಾಳಿಗೆ ಅಹುತಿಯಾದವರಲ್ಲಿ ಸಾಮಾಜಿಕ ಕಾರ್ಯಕರ್ತರಾಗಿದ್ದರು, ಅವರು ಮಾಡಿದಂಹ ಕೆಲಸವೇ ಅವರಿಗೆ ಅಪಾಯವನ್ನು ತಂದೊಡ್ಡಿತು, ಆದರೆ ಅದರಲ್ಲಿ ಹೆಚ್ಚಿನವರು ಜನಾಂಗೀಯವಾದಿಗಳಿಗೆ ಸಭೆಗಳನ್ನು ತೊರೆದರು ಅಥವಾ ಮೂಖ ಪ್ರೇಕ್ಷಕರು, ಗೊತ್ತುಗುರಿಯಿಲ್ಲದೆ ಮಾಡಿದ ಹಿಂಸೆಗೆ ನಿಸ್ಸಂದೇಹವಾಗಿ ಬಲಿಯಾದರು.<ref>ಇಗಾರ್ಟನ್ ೧೯೯೪, p. ೫೬೨-೫೬೩.</ref>
ಕ್ಲಾನ್ ಸದಸ್ಯರು ಎಸಗಿದ ಅತ್ಯಂತ ಪ್ರಖ್ಯಾತ ಕೊಲೆಗಳು:
* ಫ್ಲೊರಿಡಾದ ಮಿಮ್ಸ್ನಲ್ಲಿ ೧೯೫೧ರಲ್ಲಿ [[NAACP]] ಕಾರ್ಯತರಾದ [[ಹ್ಯಾರಿ ಮತ್ತು ಹ್ಯಾರ್ರೈಟ್ಟೆ ಮೂರೆ]] ಮನೆಗಳ ಮೇಲೆ ನಡೆದ ಕ್ರಿಸ್ಮಸ್ ಇವ್ ಬಾಂಬ್ ದಾಳಿ ನಡೆಯಿಒತು ಇದರಲ್ಲಿ ಇದರ ಫಲಿತಾಂಶ ಅವರು ಮರಣ ಹೊಂದಿದ್ದರು.<ref>[http://www.hartford-hwp.com/archives/45a/454.html "ಹೋ ವಾಸ್ ಹ್ಯಾರಿ ಟಿ. ಮೋರೇ?"]- ''ದಿ ಪ್ಲಾನ್
ಬೀಚ್ ಪೋಸ್ಟ್'' ಆಗಸ್ಟ್೧೬, ೧೯೯೯</ref>
* ೧೯೫೭ರ [[ವಿಲ್ಲೆ ಹೆಡ್ವರ್ಡ್ಸ್]],ಜೆಆರ್.ಕ್ಲಾನ್ಸ್ಮೆನ್ ಸೇತೆವೆಯ ಮೇಲಿಂದ [[ಹ್ಯಾಲ್ಬಮನದಿ]]ಗೆ ಜಿಯುವುವಂತೆ ಒತ್ತಾಯ ಮಾಡಿದ್ದರಿಂದ ಆತ ಮರಣ ಹೊಂದಿದ್ದರು.<ref>{{cite news |first=Major W. |last=Cox |authorlink= |coauthors= |title=Justice Still Absent in Bridge Death |url=http://www.majorcox.com/columns/edwards1.htm |work=[[Montgomery Advertiser]] |date=March 2, 1999 |accessdate= |archive-date=ಮೇ 29, 2006 |archive-url=https://web.archive.org/web/20060529131328/http://www.majorcox.com/columns/edwards1.htm |url-status=dead }}</ref>
* ೧೯೬೩ರಲ್ಲಿ ಮಿಸ್ಸಿಸ್ಸಿಪ್ಪಿಯಲ್ಲಿ[[NAACP]] ಸಂಘಟಕ [[ಮೆಡ್ಗರ್ ಎವರ್ಸ್]]ರವರ ಹತ್ಯೆ. ೧೯೯೪ರಲ್ಲಿ, ಮಾಜಿ ಕು ಕ್ಲುಕ್ಸ್ ಕ್ಲಾನ್ಸ್ಮ್ಯಾನ್ [[ಬೈರಾನ್ ಡೇ ಲಾ ಬೆಕ್ವಿಥ್]]ರವರನ್ನು ತಪ್ಪಿತಸ್ಥನೆಂದು ನಿರ್ಣಯಿಸಲಾಯಿತು.
* ೧೯೬೩ರಲ್ಲಿ [[ಹ್ಯಾಲ್ಬಮದ ಬ್ರಿಮಿಂಗ್ಯಾಮ್ನಲ್ಲಿರುವ 16ನೇ ಬೀದಿಯ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ನಡೆದ ಬಾಂಬ್ ದಾಳಿ ನಡೆಯಿತು]], ಇದರಲ್ಲಿ ನಾಲ್ಕು ಜನ [[ಆಫ್ರಿಕನ್-ಅಮೇರಿಕನ್]] ಹುಡುಗಿಯರು ಸಾವನ್ನಪ್ಪಿದರು. ಕ್ಲಾನ್ ಸದಸ್ಯರುಗಳಾದ [[ರಾಬರ್ಟ್ ಕ್ಯಾಂಬ್ಲಿಸ್ಸ್]] ಅನ್ನು ೧೯೭೭ರಲ್ಲಿ ತಪ್ಪಿತಸ್ಥ ಎಂದು ನಿರ್ಣಯಿಸಲಾಯಿತು, ಮತ್ತು ೨೦೦೧ ಮತ್ತು ೨೦೦೨ರಲ್ಲಿ ಥಾಮಸ್ ಬ್ಲನ್ಟನ್ ಹಾಗೂ [[ಬಾಬಿ ಫ್ರಾಂಕ್ ಚೆರಿ]] ಅವರುಗಳನ್ನು ಅಪರಾಧಿಗಳೆಂದು ತಿರ್ಮಾನಿಸಲಾಯಿತು. ನಾಲ್ಕನೆಯ ಶಂಕಿತ ಅಪರಾಧಿ [[ಹರ್ಮನ್ ಕ್ಯಾಶ್]] ಮೇಲೆ ದೋಷಾರೋಪಣೆ ಮಾಡುವ ಮೊದಲೆ ಆತ ತೀರಿಹೋದ.
* ೧೯೬೪ರಲ್ಲಿ ಮಿಸ್ಸಿಸ್ಸಿಪ್ಪಿಯಲ್ಲಿ ಸಾರ್ವಜನಿಕ ಹಕ್ಕುಗಳ ಕಾರ್ಯಕರ್ತರಾದ [[ಚೈನಿ,ಗುಡ್ಮ್ಯಾನ್ ಮತ್ತು ಚಿನೇರ್]] ಈ ಮೂರು ಜನರ ಕೊಲೆಗಳಾಯಿತು. ಜೂನ್೨೦೦೫ ರಲ್ಲಿ ಕ್ಲಾನ್ ಸದಸ್ಯ [[ಎಡ್ಗರ್ ರೇ ಕಿಲ್ಲನ್]] ಈ ಮೂರು ಜನರ ಕೊಲೆಗಾರ ಎಂದು ತಿರ್ಮಾನಿಸಲಾಯಿತು.<ref>{{cite news |first=Kris |last=Axtman |authorlink= |coauthors= |title=Mississippi verdict greeted by a generation gap |url=http://www.csmonitor.com/2005/0623/p01s03-ussc.html |work=[[The Christian Science Monitor]] |publisher= |date=June 23, 2005 |accessdate= }}</ref>
* ೧೯೬೪ ರಲ್ಲಿ ಮಿಸ್ಸಿಸ್ಸಿಪ್ಪಿನಲ್ಲಿ [[ಹೆನ್ರಿ ಹೆಜಕಾಯ ಡಿ]] ಮತ್ತು [[ಚಾರ್ಲ್ಸ್ ಎಡ್ಡೆ ಮೂರೇ]] ಎಂಬ ಇಬ್ಬರು ಕಪ್ಪು ತರುಣರನ್ನು ಹತ್ಯೆ ನಡೆದಿತ್ತು. ಆಗಸ್ಟ್ ೨೦೦೭ರಲ್ಲಿ ಕ್ಲಾಮ್ಸ್ಮ್ಯಾನ್ [[ಚಾರ್ಲ್ಸ್ ಮಾರ್ಕಸ್ ಎಡ್ವರ್ಡಸ್]], [[ಜೇಮ್ಸ್ ಪೋರ್ಡ್ ಸೇಲ್]] ರವರ ಅಂಗೀಕಾರದ ಆಧಾರದ ಮೇಲೆ ಕು ಕ್ಲುಕ್ಸ್ ಕ್ಲಾನ್ ಅಪರಾಧಿ ಎಂದು ತಿರ್ಮಾನಿಸಲಾಯಿತು. ಸೇಲ್ರವರು ಮೂರು ಜೀವಾವಧಿ ಶಿಕ್ಷೆಯನ್ನು ನೀಡಬೇಕೆಂದು ಹೇಳಿದ್ದರು. ಸೇಲ್ರವರು ಮಿಸ್ಸಿಸ್ಸಿಪ್ಪಿಯ ಮಾಜಿ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾ ಉಪಅಧಿಕಾರಿಯಾಗಿದ್ದರು.<ref>{{cite web |url=http://news.findlaw.com/usatoday/docs/crights/usseale12407ind.html |title=Reputed Klansman, Ex-Cop, and Sheriff's Deputy Indicted For The 1964 Murders of Two Young African-American Men in Mississippi; U.S. v. James Ford Seale |accessdate=March 23, 2008 |author= |date=January 24, 2007 |work= |publisher=}}</ref>
[[ಚಿತ್ರ:Kkk-march-violence.jpg|thumb|ವೈಲೆನ್ಸ್ ಆಯ್ಟ್ ಎ ಕ್ಲಾನ್ ಮಾರ್ಚ್ ಇನ್ ಮೊಬೈಲ್,ಹ್ಯಾಲ್ಬಮ,1977]]
* ೧೯೬೫ರಲ್ಲಿ ಹ್ಯಾಲ್ಬಮದಲ್ಲಿ [[ವಿಯೋಲಾ ಲಿಯುಜ್ಜೊ]] ಅವರ ಹತ್ಯೆ. ಇವರು [[ಡೆಟ್ರೈಟ್]]ನ ಅಭಿವೃದ್ಧಿಯಾಗಿದ್ದ ದಕ್ಷಿಣ ಭಾಗದವರು ಹಾಗೂ ಸಾರ್ವಜನಿಕ ಹಕ್ಕುಗಳ ಚಳುವಳಿಯಲ್ಲಿ ಭಾಗವಹಿಸುವ ಸಲುವಾಗಿ ರಾಜ್ಯಕ್ಕೆ ಬಂದಿದ್ದ ಐದು ಜನರ ತಾಯಿಯಾಗಿದ್ದರು. ಆಕೆಯ ಹತ್ಯೆಯ ಸಮಯದಲ್ಲಿ ಲಿಯಿಜ್ಜೊ ಸಾರ್ವಜನಿಕ ಹಕ್ಕುಗಳ ಚಳುವಳಿಗಾರರನ್ನು ಸಾಗಾಣೆಮಾಡುತ್ತಿದ್ದರು.
* ೧೯೬೬ರಲ್ಲಿ ಮಿಸ್ಸಿಸ್ಸಿಪಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ NAACP ನಾಯಕ ವರ್ನನ್ ಡಹ್ಮೆರ್ ಎಸ್ರ್.,೫೮, ಸಾವನ್ನಪ್ಪಿದರು. ೧೯೯೮ರಲ್ಲಿ NAACP ನಾಯಕ ವರ್ನನ್ ಡಹ್ಮೆರ್ ಅವರ ಹತ್ಯೆಗೆ ಮಾಜಿ ಕು ಕ್ಲುಕ್ಸ್ ಕ್ಲಾನ್ಸ್ನ ಮಾಟಗಾರ [[ಸ್ಯಾಮ್ ಬೊವೆರ್ಸ್]] ರುವಾರಿ ಎಂದು ತಿರ್ಮಾನಿಸಿ ಆತನಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಬೊವೆರ್ಸ್ನೊಂದಿಗೆ ಮತ್ತಿಬ್ಬರು ಕ್ಲಾನ್ ಸದಸ್ಯರನ್ನು ಶಂಕಿಸಲಾಗಿತ್ತು, ಆದರೆ ಅದರಲ್ಲಿ ಒಬ್ಬ ವಿಚಾರಣೆಗೆ ಮುನ್ನವೇ ತೀರಿಕೊಂಡ, ಮತ್ತು ಇನ್ನೊಬ್ಬನ ದೋಷಾರೋಪಣೆಯನ್ನು ತಳ್ಳಿಹಾಕಲಾಯಿತು.
ಕ್ಲಾನ್ ಹಿಂಸೆಗೆ ವಿರೋಧವು ಸಹ ಇತ್ತು. ಮೂಲ ಅಮೇರಿಕನ್ನರು ಬಿಳಿ ಜನರೊಂದಿಗೆ ಸೇರಿಕೊಂಡು [[ಲುಂಬೀ]] ಎನ್ನುವ ಸಂಘವನ್ನು ಕಟ್ಟಿಕೊಂಡಿದ್ದರು,೧೯೫೮ರ [[ನಾರ್ಥ್ ಕಾರೊಲಿನಾ]] ಘಟನೆಯಲ್ಲಿ ಕ್ಲಾನ್ ಎರಡು ಲುಂಬಿ ಮನೆಗಳನ್ನು ಸುಟ್ಟುಹಾಕುವ ಮಟ್ಟಕ್ಕೆ ಬೆಳೆದು ನಿಂತರು,ನಂತರ ಅವರನ್ನು ಬೆದರಿಸಲು ಲುಂಬೀಯವರು ಹೆಚ್ಚಿನ ಮಂದಿಯೊಂದಿಗೆ ಹಿಂತಿರುಗಿದರು. ಅವರು ರಾತ್ರಿ ಸಮಯದಲ್ಲಿ ಆಯೋಜಿಸಿದ್ದ ಚಳುವಳಿಗೆ ಸುಮಾರು ನೂರಾರು ಶಸ್ತ್ರಸಜ್ಜಿತವಾಗಿದ್ದ ಲುಂಬೀ ಜನರು ಸುತ್ತುವರೆದಿದ್ದದನ್ನು ನೋಡಿದರು.
ಗನ್ಪೈಯರ್ ಬದಲಾಯಿತು, ಮತ್ತು ಕ್ಲಾನ್ [[ಹಯೆಸ್ ಪಾಂಡ್ ಯುದ್ದ]]ದಿಂದ ಏನೂ ತಿಳಿಯುವ ಮಾರ್ಗವನ್ನ್ನು ಕಂಡುಕೊಂಡಿದ್ದ.<ref>ಇಂಗಾಲ್ಸ್ ೧೯೭೯; {{cite web |url=http://www.lib.unc.edu/ncc/ref/nchistory/jan2005/jan05.html |title=January 1958 -- The Lumbees face the Klan |accessdate= |author=Graham, Nicholas |month=January |year=2005 |work= |publisher=[[University of North Carolina at Chapel Hill]] |archive-date=ಅಕ್ಟೋಬರ್ 24, 2007 |archive-url=https://web.archive.org/web/20071024123305/http://www.lib.unc.edu/ncc/ref/nchistory/jan2005/jan05.html |url-status=dead }}</ref>
ಕ್ಲಾನ್ ಚಟುವಟಿಕೆಗಳನ್ನು ವರದಿ ಮಾಡಿದ್ದಕ್ಕೆ, ೧೯೫೩ರಲ್ಲಿ ಸುದ್ದಿ ಪತ್ರಿಕಾ ಸಂಪಾದಕ [[ಡಬ್ಲ್ಯೂ.ಹೊರೇಸ್ ಕಾರ್ಟೆರ್]]ರವರು [[ಪಲಿಟ್ಜರ್ ಪ್ರಶಸ್ತಿ]]ಯನ್ನು ಪಡೆದರು.
[[ಫ್ರೀಡಂ ರೈಡರ್ಸ್]] ಅಲಾಬಾಮಾದ ಬರ್ಮಿಂಗ್ಯಾಮ್ ಅನ್ನು ತಲುಪಿದಾಗ, ಪೊಲೀಸ್ ಕಮಿಷನರ್ ಬುಲ್ ಕನ್ನರ್ ಪೊಲೀಸರನ್ನು ಕಳುಹಿಸುವುದಕ್ಕೆ ಮುಂಚೆ ರೈಡರ್ಸ್ ಮೇಲೆ ದಾಳಿ ನಡೆಸಲು ಕ್ಲಾನ್ ಸದಸ್ಯರಿಗೆ ಹದಿನೈದು ನಿಮಿಷಗಳನ್ನು ನೀಡಿದ್ದನು.<ref name="McWhorter"/> ಸ್ಥಳೀಯ ಮತ್ತು ರಾಜ್ಯ ಆಡಳಿತಗಳು ಅವರನ್ನು ರಕ್ಷಿಸುವಲ್ಲಿ ವಿಫಲಗೊಂಡಾಗ, ಒಕ್ಕೂಟ ಸರ್ಕಾರ ಮಧ್ಯೆ ಪ್ರವೇಶವನ್ನು ಮಾಡಬೇಕಾಯಿತು.
ಎಫ್ಬಿಐ ಕ್ಲಾನ್ನ ಬಾತ್ಮೀದಾರರಿಗೆ ಸಂಬಳ ನೀಡುತ್ತಿದ್ದ ಸಂದರ್ಭದಲ್ಲಿ, ಉದಾಹರಣೆಗೆ ೧೯೬೦ರ ದಶಕದ ಆರಂಭದಲ್ಲಿ ಆಲಬಾಮಾದ ಬರ್ಮಿಂಗ್ಯಾಮ್ನಲ್ಲಿ ಸ್ಥಳೀಯ ಕಾನೂನು ಅಧಿಕಾರ ಚಲಾಯಿಸುವ ಸಂಸ್ಥೆಗಳೊಂದಿಗೆ ಇದರ ಸಂಬಂಧಗಳಿದ್ದವು, ಆಗ ಕ್ಲಾನ್ ಆಗಾಗ್ಗೆ ಸಂಧಿಗ್ದ ಸ್ಥಿತಿಯಲ್ಲಿರುತ್ತಿತ್ತು.
ಎಫ್ಬಿಐನ ಮುಖ್ಯಸ್ಥ [[ಜೆ.ಇಡ್ಗರ್ ಹೂವರ್]] ಅವರು, ಕ್ಲಾನ್ನ ದೌರ್ಜನ್ಯಗಳನ್ನು ನಿಯಂತ್ರಿಸುವುದರ ಜೊತೆಗೆ ನಾಗರೀಕ ಹಕ್ಕುಗಳ ಕ್ರಾಂತಿಿಗಳಲ್ಲಿರುವ ಸಮತಾವಾದಿ ಸಂಬಂಧಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ತೋರಿದರು. ೧೯೬೪ರಲ್ಲಿ, ಎಫ್ಬಿಐನ [[ಕಾಯಿನ್ಟೆಲ್ಪ್ರೊ]] ಕಾರ್ಯಕ್ರಮವು ನಾಗರಿಕ ಹಕ್ಕುಗಳ ಗುಂಪುಗಳಿಗೆ ಕದ್ದು ಸೇರುವುದನ್ನು ತಡೆಯುವಂತಹ ಪ್ರಯತ್ನಗಳನ್ನು ಆರಂಭಿಸಿತು.<ref name="McWhorter" />
೨೦ನೇ ಶತಮಾನದ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನಾಗರೀಕರ [[ನಾಗರೀಕ ಹಕ್ಕುಗಳ]] ಒಕ್ಕೂಟ ಅಧಿಕಾರವನ್ನು ವಿಸ್ತರಿಸಲಾಯಿತು, ಪುನರ್ರಚನೆಯ ದಿನಗಳಿಂದಲೂ ದೀಘಾವಧಿ ಕಾಲ ನಿರ್ಲಕ್ಷಿಸಲ್ಪಟ್ಟ ಅಧಿಕಾರ ಕಾಯಿದೆ ಮತ್ತು ಕ್ಲಾನ್ ಕಾಯಿದೆಗಳು ಪುನಃಶ್ಚೇತನಗೊಂಡವು. ಅವುಗಳನ್ನು ಒಕ್ಕೂಟ ಫಿರ್ಯಾದಿಗಳು ೧೯೬೪ರಲ್ಲಾದ [[ಚಾನೇ, ಗುಡ್ಮನ್ ಮತ್ತು ಶ್ವೆರ್ನರ್]]ರ ಕೊಲೆಗಳು <ref>{{cite web |url=http://faculty.smu.edu/dsimon/Change-CivRts2.html |title=The Civil Rights Movement, 1964–1968 |accessdate= |author=Simon, Dennis M. |date= |work= |publisher=[[Southern Methodist University]] |archive-date=ಆಗಸ್ಟ್ 27, 2005 |archive-url=https://web.archive.org/web/20050827194827/http://faculty.smu.edu/dsimon/Change-CivRts2.html |url-status=dead }}</ref> ಮತ್ತು ೧೯೬೫ರಲ್ಲಾದ [[ವಿಯಾಲಾ ಲಿಯುಜ್ಜೊ]]ರ ಕೊಲೆಯ ಮೇಲಿನ ದೋಷಾರೋಪಣೆಗಳು ಮತ್ತು ತನಿಖೆಗಳಿಗೆ ಆಧಾರವಾಗಿ ಬಳಕೆ ಮಾಡಿಕೊಂಡರು.<ref>{{cite web |url=http://www.spartacus.schoolnet.co.uk/USAliuzzo.htm |title=Viola Liuzzo |accessdate= |author= |date= |work= |publisher=[[Spartacus Educational]] |archive-date=ಜುಲೈ 9, 2006 |archive-url=https://web.archive.org/web/20060709211320/http://www.spartacus.schoolnet.co.uk/USAliuzzo.htm |url-status=dead }}</ref> ಅವುಗಳನ್ನು ೧೯೯೧ರಲ್ಲಿ ''[[ಬ್ರೇ ವಿ.ಅಲೆಕ್ಸಾಂಡ್ರಿಯಾ ಮಹಿಳೆಯರ ಆರೋಗ್ಯ ಚಿಕಿತ್ಸಾಲಯ]]'' ದಲ್ಲಿ ಕಾನೂನು ಕ್ರಮ ಜರಗಿಸುವುದಕ್ಕಾಗಿಯೂ ಸಹ ಆಧಾರವಾಗಿ ಬಳಕೆ ಮಾಡಲಾಯಿತು.
== ೧೯೭೦ರ ನಂತರ ==
ಒಮ್ಮೆ ಆಫ್ರಿಕಾದ ಅಮೆರಿಕನ್ನರು ನಾಗರೀಕ ಮತ್ತು ಮತ ಚಲಾಯಿಸುವ ಹಕ್ಕುಗಳನ್ನು ರಕ್ಷಿಸಲು ಒಕ್ಕೂಟ ಶಾಸನವನ್ನು ಭದ್ರಪಡಿಸಿದರು, ಕೋರ್ಟಿನ ಆದೇಶಗಳಾದ [[ಶಾಲೆಗಳಿಗೆ ವಾಹನ ಸೌಲಭ್ಯ ಒದಗಿಸುವುದು]], [[ಸಮರ್ಥನಾ ಚಟುಚಟಿಕೆ]] ಮತ್ತು [[ವಲಸೆ ಬರುವಿಕೆ]]ಯ ಹೆಚ್ಚಳವನ್ನು ವಿರೋಧಿಸುವತ್ತ ಕ್ಲಾನ್ ತನ್ನ ಗಮನವನ್ನು ಬದಲಾಯಿಸಿತು. ಇದಕ್ಕೆ ನಿದರ್ಶನವೆಂದರೆ, ೧೯೭೧ರಲ್ಲಿ ಕ್ಲಾನ್ಗಳ ಸದಸ್ಯರು [[ಮಿಚಿಗನ್ನ ಪೊನ್ಟಿಯಾಕ್]]ನಲ್ಲಿ ೧೦ ಶಾಲೆಗಳ ಬಸ್ಸುಗಳನ್ನು ನಾಶ ಮಾಡಲು ಬಾಂಬ್ಗಳನ್ನು ಬಳಕೆ ಮಾಡಿದ್ದರು. ಕ್ಲಾನ್ ಸದಸ್ಯವಾದ [[ಡೇವಿಡ್ ಡ್ಯುಕ್]] ೧೯೭೪ರ ಶಾಲಾ ವಾಹನ ಸಾರಿಗೆ ಉತ್ಕಟ ಪರಿಸ್ಥಿತಿಯಲ್ಲಿ [[ದಕ್ಷಿಣ ಬೊಸ್ಟನ್]]ನಲ್ಲಿ ಕ್ರಿಯಾಶೀಲನಾಗಿದ್ದ. ೧೯೭೪ರಿಂದ ೧೯೭೮ರಲ್ಲಿ ಕ್ಲಾನ್ಗೆ ರಾಜೀನಾಮೆ ನೀಡುವವರೆಗೂ ಡ್ಯುಕ್ ಕ್ಲಾನ್ ಕು ಕ್ಲುಕ್ಸ್ ಕಾನ್ನ ನೈಟ್ಸ್ನ ಮುಖಂಡನಾಗಿದ್ದ.
ನವೆಂಬರ್ ೩, ೧೯೭೯ರಲ್ಲಿ [[ಗ್ರೀನ್ಸ್ಬೊರೊ ಸಾಮೂಹಿಕ ಸಂಹಾರ]]ವು [[ನಾರ್ಥ್ ಕ್ಯಾರೊಲಿನಾದ ಗ್ರೀನ್ಸ್ಬೊರೊ]]ದಲ್ಲಿ ಜರುಗಿತು, ಅಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಮಯದಲ್ಲಿ ಐದು ಜನ ಗಡಿ ನಿವಾಸಿಗಳು ಕು ಕ್ಲುಕ್ಸ್ ಕ್ಲಾನ್ ಮತ್ತು [[ಅಮೆರಿಕನ್ ನಾಜಿ ಪಾರ್ಟಿ]]ಯ ಸದಸ್ಯರಿಂದ ಕೊಲ್ಲಲ್ಪಟ್ಟರು, ಆದರೆ ಕ್ಲಾನ್ ಅಥವಾ ನಿಯೋ-ನಾಜಿಗಳು ಗಾಯಗೊಂಡಿರಲಿಲ್ಲ ಅಥವಾ ಕೊಲೆಯಾಗಿರಲಿಲ್ಲ.<ref>{{cite news | url=http://www.democracynow.org/2004/11/18/remembering_the_1979_greensboro_massacre_25 | title=Remembering the 1979 Greensboro Massacre: 25 Years Later Survivors Form Country’s First Truth and Reconciliation Commission | publisher=[[Democracy Now]] | date= November 18, 2004 | first= | last= | accessdate =2009-08-15}}</ref> ಇದು ಆ ಪ್ರದೇಶದ ಪ್ರಬಲ ಬ್ಲಾಕ್ಗಳಲ್ಲಿನ ಕೈಗಾರಿಕಾ ಕೆಲಸಗಾರರನ್ನು ಸಂಘಟಿಸುವ [[ಕಮ್ಯೂನಿಸ್ಟ್ ವರ್ಕರ್ಸ್ ಪಾರ್ಟಿ]]ಯ ಪ್ರಯತ್ನಗಳ ಪರಾಕಾಷ್ಠೆಯಾಗಿತ್ತು.
೧೯೭೯ರಲ್ಲಿ ಕ್ಲಾನ್ನನ್ನು ಅಂತರ್ವ್ಯಾಪಿಸುವಂತೆ ಬರೆದ ದಿನಪತ್ರಿಕೆ ವರದಿಗಾರ ಜೆರಿ ಥಾಮ್ಪ್ಸನ್, ಎಫ್ಬಿಐನ [[ಕಾಯಿನ್ಟೆಲ್ಪ್ರೊ]] ಪ್ರಯತ್ನಗಳು ಅತ್ಯಂತ ಯಶಸ್ವಿಪೂರ್ಣವಾಗಿವೆ ಎಂದು ವರದಿ ಮಾಡಿದ್ದರು. ರಿವಲ್ ಕ್ಲಾನ್ ಒಳಪಂಗಡಗಳು [[ಎಫ್ಬಿಐ ಬಾತ್ಮೀದಾರ]]ರ ಉಳಿದ ನಾಯಕರನ್ನು ಆರೋಪಿಸಿದರು. ಇನ್ವಿಸಿಬಲ್ ಎಂಪೈರ್ನ [[ಬಿಲ್ ವಿಲ್ಕಿನ್ಸನ್]], ನೈಟ್ಸ್ ಕು ಕ್ಲುಕ್ಸ್ ಕ್ಲಾನ್ನ ನೈಟ್ಸ್ [[ಎಫ್ಬಿಐ]]ಗಾಗಿ ಕೆಲಸ ಮಾಡುತ್ತಿರುವುದಾಗಿ ಬಹಿರಂಗಪಡಿಸಿದ.<ref>ಟಾಮ್ಸನ್ ೧೯೮೨.</ref> ಥಾಮ್ಪ್ಸನ್ನ ಅಲ್ಪಾವಧಿಯ ಸದಸ್ಯತ್ವದ ಅವಧಿಯಲ್ಲಿ, ಅವನ ಟ್ರಕ್ ಗುಂಡು ಸಿಡಿಸುತ್ತಿದ್ದಾಗ, ಅವನು ಕಪ್ಪು ಮಕ್ಕಳಿಗೆ ಕೂಗಿ ಹೇಳಿದ್ದನು ಮತ್ತು ಕಪ್ಪು ಸೈನಿಕರು ಸಮೀಪದ ಸೈನಿಕರಲ್ಲಿ ಕ್ಲಾನ್ಸ್ ಮನುಷ್ಯರನ್ನು ಮೂದಲಿಸಿದಾಗ ಅವನು ಕ್ಲಾನ್ ಸಂಘಟನೆಯಲ್ಲಿ ಸೇರಿ ಹಿಂಸಾಚಾರಕ್ಕೆ ತಿರುಗಿದನು. ಪ್ರತಿಭಟಿಸುವ ಕ್ಲಾನ್ನ ಪ್ರಯತ್ನಗಳು ಪ್ರತಿಭಟನಾ ವಿರೋಧಿಗಳನ್ನು ಕೆಲವು ಸಂದರ್ಭದಲ್ಲಿ ಹಿಂಸಾಚಾರದೊಂದಿಗೆ ಆಗಾಗ್ಗೆ ಸಂಧಿಸುತ್ತಿದ್ದವು.
೧೯೮೦ರಲ್ಲಿ [[ಟೆನೆಸ್ಸೆ]]ಯ [[ಚಟ್ಟನೂಗಾ]]ದಲ್ಲಿ ಮೂವರು ಕು ಕ್ಲುಕ್ಸ್ ಕ್ಲಾನ್ ಸದಸ್ಯರು ನಾಲ್ವರು ವೃದ್ಧ ಕಪ್ಪು ಮಹಿಳೆಯರನ್ನು(ವಿಯಾಲಾ ಎಲ್ಲಿಸನ್, ಲೆಲಾ ಇವನ್ಸ್, ಒಪಾಲ್ ಜಾಕ್ಸನ್ ಮತ್ತು ಕೆಥರಿನ್ ಜಾನ್ಸನ್) ಶೂಟ್ ಮಾಡಿದರು, ೧೯೮೦ KKK ಆರಂಭದ ರಾಲಿ ಮುಂದುವರಿದಿತ್ತು. (ಐದನೇ ಮಹಿಳೆ ಫ್ಯಾನ್ನಿ ಕ್ರುಮ್ಸೆ, ಈ ಘಟನೆಯಲ್ಲಿ ಮುರಿದು ಹೋಗಿದ್ದ ಗಾಜಿನಿಂದಾಗಿ ಗಾಯಗೊಂಡಿದ್ದಳು.) ಈ ಐವರು ಬಲಿಪಶುಗಳಲ್ಲಿ ಯಾರೊಬ್ಬರೂ ಸಾಯಲಿಲ್ಲ. ಈ ಕೊಲೆ ಪ್ರಯತ್ನದ ಆರೋಪಗಳನ್ನು ಮೂವರು ಕ್ಲಾನ್ ಸದಸ್ಯರ ವಿರುದ್ಧ ದಾಖಲಿಸಲಾಗಿತ್ತು, ಅದರಲ್ಲಿ ಬಿಲ್ ಚರ್ಚ್ ಮತ್ತು ಲ್ಯಾರಿ ಪೇನೆ -ಈ ಇಬ್ಬರಿಗೆ ಎಲ್ಲಾ-ಬಿಳಿಯ ತೀರ್ಪುಗಾರರ ಸಮಿತಿಯಿಂದ ನಿರ್ದೋಷಿಗಳೆಂದು ತೀರ್ಮಾನಿಸಲಾಯಿತು ಮತ್ತು ಮತ್ತೊಬ್ಬನಾದ ಮಾರ್ಶೆಲ್ ಥ್ರಾಶ್ಗೆ ಅದೇ ತೀರ್ಪುಗಾರರ ಸಮಿತಿಯಿಂದ ಕೆಲವು ಆರೋಪಗಳ ಸಲುವಾಗಿ ಒಂಭತ್ತು ತಿಂಗಳ ಕಾಲ ಶಿಕ್ಷೆ ವಿಧಿಸಲಾಯಿತು. ಅವನು ಮೂರು ತಿಂಗಳ ನಂತರ ಬಿಡುಗಡೆಯಾದ.<ref>[https://books.google.com/books?id=r59bGyH4lOAC&pg=PA22&lpg=PA22&dq=1980+chattanooga+kkk+shootings&source=bl&ots=E5aHjgk8Fo&sig=CaGNndRhWtS4m64HGUye0HagnqE&hl=en&ei=LzkPSuunO5_utQPA6ZH_Ag&sa=X&oi=book_result&ct=result&resnum=2 ದಿ ವೈಟ್ ಸೆಪರೇಟಿಸ್ಟ್ ಮೋಮೆಂಟ್ ಇನ್ ಯುನೈಟೆಡ್ ಸ್ಟೇಟ್ಸ್:" ವೈಟ್ ಪವರ್, ವೈಟ್ ಫ್ರೈಡ್!", ಬೈ ಬೆಟ್ಟಿ ಎ. ಡೋಬ್ರಾಟ್ಜ್ ಆಯ್೦ಡ್ ಸ್ಟೀಫನೈ ಎಲ್.ಶನ್ಕ್ಸ್-ಮೈಲೆ]</ref><ref>[http://www.archives.gov/news/john-roberts/accession-60-89-0173/039-civil-rights-division-anti-klan/folder039.pdf ವುಮೆನ್ಸ್ ಅಪೀಯರೆಲ್ ಫಾರ್ ಜಸ್ಟೀಸ್ ಚಾನ್ಟಾನೋಗ-ಯುಎಸ್ ದೀಪಾರ್ಟ್ಮೆಂಟ್ ಆಫ್ ಜಸ್ಟೀಸ್ ]</ref><ref>[https://news.google.com/newspapers?nid=861&dat=19800422&id=5SMNAAAAIBAJ&sjid=QmsDAAAAIBAJ&pg=6077,4796456 ದಿ ವಿಕ್ಟೋರಿಯಾ ಆಡ್ವೊಕೇಟ್: ಬಾಂಡ್ಸ್ ಫಾರ್ ಕ್ಲಾನ್ ಅಪ್ಯೇಲ್ಡ್ ]</ref> ೧೯೮೨ರಲ್ಲಿ ತೀರ್ಪುಗಾರರ ಸಮಿತಿಯು ನಾಗರೀಕ ಹಕ್ಕುಗಳ ವಿಚಾರಣೆಯಲ್ಲಿ ಆ ಐದು ಮಹಿಳೆಯರಿಗೆ $೫೩೫,೦೦೦ ನೀಡಲು ತೀರ್ಮಾನಿಸಿತು.<ref>[https://www.nytimes.com/1982/02/28/us/around-the-nation-jury-award-to-5-blacks-hailed-as-blow-to-klan.html?n=Top%2FReference%2FTimes%20Topics%2FSubjects%2FB%2FBlack%20Culture%20and%20 ನ್ಯೂ ಯಾರ್ಕ್ ಟೈಮ್ಸ್: ಹಿಸ್ಟರಿ ಅರೌಂಡ್ ದಿ ನೇಷನ್; ಜೂರೀ ಅವಾರ್ಡ್ ಟು 5 ಬ್ಲಾಕ್ ಹೈಲೆಡ್ ಆಯ್ಸ್ ಬ್ಲೋ ಟು ಕ್ಲಾನ್]</ref>
೧೯೮೧ರಲ್ಲಿ [[ಆಲಬಾಮಾ]]ದಲ್ಲಿ [[ಮೈಕೆಲ್ ಡೊನಾಲ್ಡ್]]ನನ್ನು ಗಲ್ಲಿಗೇರಿಸಿದ ನಂತರ, ಅವನ ಸಾವಿಗೆ ಸಂಬಂಧಿಸಿದಂತೆ [[ಎಫ್ಬಿಐ]] ತನಿಖೆ ನಡೆಸಿತ್ತು.
ಇಬ್ಬರು ಸ್ಥಳೀಯ ಕ್ಲಾನ್ ಸದಸ್ಯರು ಗಲ್ಲು ಶಿಕ್ಷೆಗೊಳಪಟ್ಟಿದ್ದ [[ಹೆನ್ರಿ ಹೇಸ್]] ಸೇರಿದಂತೆ ಆ ಕೃತ್ಯದಲ್ಲಿ ತಪ್ಪಿತಸ್ಥರೆಂದು ನಿರ್ಣಯಿಸಲ್ಪಟ್ಟಿದ್ದರು. [[ಸೌಥರ್ನ್ ಪಾವರ್ಟಿ ಲಾ ಸೆಂಟರ್]](SPLC)ನಲ್ಲಿ ವಕೀಲರಾದ [[ಮಾರಿಸ್ ಡೀಸ್]] ಮತ್ತು ಜೊಸೆಫ್ ಜೆ.ಲೆವಿನ್ರ ಸಹಾಯದೊಂದಿಗೆ, ಡೊನಾಲ್ಡ್ನ ತಾಯಿ ಬ್ಯುಲಾಹ್ ಮೇ ಡೊನಾಲ್ಡ್ ಆಲಬಾಮಾದ ಸಿವಿಲ್ ಕೋರ್ಟಿನಲ್ಲಿ ಕು ಕ್ಲುಕ್ಸ್ ಕ್ಲಾನ್ ವಿರುದ್ಧ ಮೊಕದ್ದಮೆ ಹೂಡಿದಳು. ಆಕೆಯ ಮೊಕದ್ದಮೆಯು [[ಯುನೈಟೆಡ್ ಕ್ಲಾನ್ಸ್ ಆಫ್ ಅಮೆರಿಕ]]ದ ವಿರುದ್ಧವಾಗಿತ್ತು, ಅದನ್ನು ೧೯೮೭ರ ಫೆಬ್ರುವರಿಯಲ್ಲಿ ವಿಚಾರಣೆ ನಡೆಸಲಾಗಿತ್ತು.
ಎಲ್ಲಾ-ಬಿಳಿ ತೀರ್ಪುಗಾರರ ಸಮಿತಿಯು ಡೊನಾಲ್ಡ್ನನ್ನು ಗಲ್ಲಿಗೇರಿಸುತ್ತಿರುವುದಕ್ಕೆ ಕ್ಲಾನ್ ಜವಾಬ್ದಾರಿ ಎಂದು ಹೇಳಿತ್ತು ಮತ್ತು ಕ್ಲಾನ್ $೭ಮಿಲಿಯನ್ ಯುಎಸ್ಡಿಯನ್ನು ಪಾವತಿಸುವಂತೆ ಆದೇಶಿಸಿತ್ತು. ಕ್ಲಾನ್ [[ಟಸ್ಕಾಲೋಸಾ]]ದ ತನ್ನ ರಾಷ್ಟ್ರೀಯ ಪ್ರಧಾನ ಕಛೇರಿ ಕಟ್ಟಡವು ಸೇರಿದಂತೆ ಸಂಪೂರ್ಣವಾಗಿ ತನ್ನೆಲ್ಲಾ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಂಥ ತೀರ್ಪು ಹೊರಬಿತ್ತು.<ref>{{cite web |url=http://www.spartacus.schoolnet.co.uk/USAkkk.htm |title=Ku Klux Klan |accessdate= |author= |date= |work= |publisher=Spartacus Educational, accessed April 22, 2008 |archive-date=ಜುಲೈ 14, 2005 |archive-url=https://web.archive.org/web/20050714081946/http://www.spartacus.schoolnet.co.uk/USAkkk.htm |url-status=dead }}</ref>
ಅಪೀಲುಗಳ ದಾವೆಯ ವಿಚಾರಣೆ ಮುಗಿದ ನಂತರ, ಹೇಯ್ಸ್ ಜೂನ್ ೬, ೧೯೯೭ರಲ್ಲಿ ಅಲಬಾಮಾದಲ್ಲಿ ಡೊನಾಲ್ಡ್ನನ್ನು ಗಲ್ಲಿಗೇರಿಸಿದ್ದನು. ೧೯೧೩ ರಿಂದೀಚೆಗೆ ಆಫ್ರಿಕಾದ ಅಮೆರಿಕನ್ ಪ್ರಜೆಯ ವಿರುದ್ಧದ ಅಪರಾಧಕ್ಕಾಗಿ ಆಲಬಾಮಾದಲ್ಲಿ ಶ್ವೇತ ವರ್ಣೀಯನೊಬ್ಬನನ್ನು ಗಲ್ಲಿಗೇರಿಸಿದ್ದುದು ಇದೇ ಮೊದಲ ಬಾರಿಯಾಗಿತ್ತು.<ref>{{cite web |url=http://www.spartacus.schoolnet.co.uk/USAkkk.htm |title=Ku Klux Klan |accessdate= |author= |date= |work= |publisher=Spartacus Educational |archive-date=ಜುಲೈ 14, 2005 |archive-url=https://web.archive.org/web/20050714081946/http://www.spartacus.schoolnet.co.uk/USAkkk.htm |url-status=dead }}</ref> ಕ್ಲಾನ್ನನ್ನು ಅಂತರ್ವ್ಯಾಪಿಸುವಂತೆ ಬರೆದಿದ್ದ ಪತ್ರಕರ್ತ ಥಾಮ್ಪ್ಸನ್ ಅವರು, ಮಿಲಿಯನ್ಗಟ್ಟಲೆ ಡಾಲರುಗಳನ್ನು ನಾಶ ಮಾಡಿದ್ದಕ್ಕಾಗಿ [[ಸೌಥರ್ನ್ ಪಾವರ್ಟಿ ಲಾ ಸೆಂಟರ್]]ನಿಂದ ದಾಖಲಾಗಿದ್ದ ನಾಗರೀಕ ಮೊಕದ್ದಮೆಗಳ ಸರಣಿಯ ಬಗ್ಗೆ ಬಹಳ ಕಾಳಜಿ ವಹಿಸಿ, ಬಂಧನದ ಭೀತಿಯಿಂದಾಗಿ ಉದಾಸೀನ ಭಾವದೊಂದಿಗೆ ಕ್ಲಾನ್ ಮುಖಂಡರು ಕಾಣಿಸಿಕೊಂಡಿದ್ದು ಇದಕ್ಕೆ ಸಂಬಂಧಪಡುತ್ತದೆ ಎಂದು ಹೇಳಿದರು. ಆಫ್ರಿಕಾದ ಅಮೆರಿಕನ್ ಜನರ ಗುಂಪಿನಲ್ಲಿ ಕ್ಲಾನ್ಸ್ ಸದಸ್ಯರನ್ನು ಶೂಟ್ ಮಾಡಿದ ನಂತರ ಇದನ್ನು ದಾಖಲಿಸಲಾಗಿದೆ. ಮೊಕದ್ದಮೆಗಳ ವಿರುದ್ದ ರಕ್ಷಣೆಗಾಗಿ ಹಣವನ್ನು ಶೇಖರಿಸಿಡುವ ಚಟುವಟಿಕೆಗಳನ್ನು ಕ್ಲಾನ್ಸ್ ಸದಸ್ಯರು ಕಡಿಮೆ ಮಾಡಿದರು. ಕ್ಲಾನ್ ಸ್ವತಃ ಸಾಧನಗಳಂತೆಯೇ ಮೊಕದ್ದಮೆಗಳನ್ನು ಬಳಸಿಕೊಂಡಿತು. ಅವರು ಥಾಮ್ಪ್ಸನ್ನ ಪುಸ್ತಕದ ಪೇಪರ್ಬ್ಯಾಕ್ ಆವೃತ್ತಿಯ ಪ್ರಕಟಣೆಯನ್ನು ತಡೆಯುವ ಸಲುವಾಗಿ ಮಾನನಷ್ಟ ಮೊಕದ್ದಮೆಯೊಂದನ್ನು ದಾಖಲಿಸಿದರು.
ಪ್ರಸ್ತುತ ದಿನಗಳಲ್ಲಿ ಕು ಕ್ಲುಕ್ಸ್ ಕ್ಲಾನ್ನ ಯಾವುದೇ ಒಂದು ಸಂಘಟನೆಯೂ ಉಳಿದಿಲ್ಲ. ಇದು ಯುಎಸ್ನಾದ್ಯಂತ ಒಂದು ಸಣ್ಣ ಸ್ವತಂತ್ರ ಅಧ್ಯಾಯದಂತೆ ಮಾತ್ರ ಪರಿಚಿತವಿದೆ.<ref>[http://www.adl.org/learn/ext_us/kkk/default.asp ಅಬೌಟ್ ದಿ ಕು ಕ್ಲುಕ್ಸ್ ಕ್ಲಾನ್] {{Webarchive|url=https://web.archive.org/web/20100725122657/http://www.adl.org/learn/ext_us/kkk/default.asp |date=ಜುಲೈ 25, 2010 }}, [[ಆಯ್೦ಟಿ-ಡೀಫಾರ್ಮೇಷನ್ ಲೀಗ್]],೨೦೦೨. ಅಕಾರ್ಡಿಂಗ್ ಟು ದಿ ರಿಪೋರ್ಟ್,"ದಿ ಕೆಕೆಕೆಸ್ ಎಸ್ಟಿಮೇಟೆಡ್ ಸೈಜ್ ದೆನ್ ವಾಸ್"ನೋ ಮೋರ್ ಅಫ್ಯುವ್ ಥೌಸಂಡ್, ಆರ್ಗನೈಜ್ಡ್ ಇನ್ ಟು ಸ್ಲೈಟ್ಲೀ ಮೋರ್ ದೆನ್ ೧೦೦ ಮಿನಿಟ್ಸ್."</ref> ಸ್ವತಂತ್ರ ಸಣ್ಣ ಸಣ್ಣ ಅದ್ಯಾಯಗಳನ್ನು ಹುಟ್ಟುಹಾಕುವ ಮೂಲಕ ಕೆಕೆಕೆ ಗುಂಪು ಬೆಳೆದಿದ್ದರಿಂದ ಇದನ್ನು ಬೇಧಿಸುವುದು ಮತ್ತು ಸಂಶೋಧಕರಿಗೆ ಇದರ ಸಂಖ್ಯೆಯನ್ನು ನಿಖರವಾಗಿ ತಿಳಿದುಕೊಳ್ಳುವುದು ಕಷ್ಟಸಾಧ್ಯವಾಯಿತು. ಇತ್ತೀಚಿನ ವರ್ಷಗಳಲ್ಲಿ KKK ಸದಸ್ಯರು ಹೊಸ ಸೇರ್ಪಡೆಯತ್ತ ಹೆಜ್ಜೆ ಹಾಕಿದ್ದಾರೆ, ಆದರೆ ಸಂಘಟನೆ ಮಾತ್ರ ೧೭೯ ಪ್ರಕರಣಗಳಲ್ಲಿ ಸುಮಾರು ೫,೦೦೦–೮,೦೦೦ ಸದಸ್ಯತ್ವದೊಂದಿಗೆ ನಿಧಾನವಾಗಿ ಬೆಳೆಯಲು ಮತ್ತೆ ಪ್ರಾರಂಭಿಸಿದೆ. [[ಅಕ್ರಮ ವಲಸೆ]], ನಗರ ಅಪರಾಧ ಮತ್ತು [[ಸಲಿಂಗ ಮದುವೆ]] ಕುರಿತಂತೆ ಜನರ ಆತಂಕಗಳಂತಹ ವಿಷಯಗಳ ಮೇಲೆ ಇತ್ತೀಚಿನ ಪ್ರಯತ್ನಗಳನ್ನು ವಶ ಪಡಿಸಿಕೊಳ್ಳಲಾಗಿದೆ.<ref>{{cite web |url=http://www.csmonitor.com/2007/0209/p02s02-ussc.html|title=Anti-Immigrant Sentiments Fuel Ku Klux Klan Resurgence|accessdate= |author= Brad Knickerbocker|date=February 9, 2007 |work= |publisher=Christian Science Monitor}}</ref>
ಪ್ರಸ್ತುತದಲ್ಲಿ ಯುಎಸ್ನಲ್ಲಿ ಒಕ್ಕೂಟ ಕಛೇರಿಯನ್ನು ಅವಲಂಭಿಸಿರುವ ಕ್ಲಾನ್ನ ಮಾಜಿ ಸದಸ್ಯರಾದ [[ವೆಸ್ಟ್ ವರ್ಜಿನಿಯಾ]]ದ ಡೆಮಾಕ್ರಟಿಕ್ ಸೆನೆಟಾರ್ [[ರಾಬರ್ಟ್ ಬೈರ್ಡ್]] ಅವರು, ತಾನು ೨೪ ವರ್ಷದವನಾಗಿದ್ದಾಗ ಅರ್ಧ ಶತಮಾನಕ್ಕಿಂತ ಮುಂಚೆ ಕ್ಲಾನ್ಗೆ ಸೇರಿಕೊಂಡಿದ್ದಕ್ಕಾಗಿ "ಮನಸ್ಪೂರ್ತಿಯಾಗಿ ವಿಷಾದಿಸುತ್ತೇನೆ" ಎಂದು ಹೇಳಿದ್ದಾರೆ. ಬೈರ್ಡ್ ೧೯೪೦ರ ದಶಕದಲ್ಲಿ ಯುವಕನಂತೆ ಸೇರಿ, ೧೫೦ ಸ್ನೇಹಿತರು ಮತ್ತು ಅವರ ವೆಸ್ಟ್ ವರ್ಜಿನಿಯಾದ ಸಣ್ಣ ಪಟ್ಟಣದಿಂದ ಪರಿಚಯಸ್ಥರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಂಡರು. ಒಂದು ವರ್ಷದವರೆಗೆ ಕ್ಲಾನ್ನ ಸದಸ್ಯನಾಗಿದ್ದೆ, ಆದರೆ ಸಮಕಾಲೀನ ದಿನಪತ್ರಿಕೆಗಳು ೧೯೪೬ರಲ್ಲಿ ಕ್ಲಾನೇಗಲ್ ಆಗಿ ಸ್ನೇಹಿತನೊಬ್ಬನನ್ನು ತಾನು ಶಿಫಾರಸ್ಸು ಮಾಡುತ್ತಿರುವ ಪತ್ರದ ಬಗೆಗಿನ ಕಥೆಗಳನ್ನು ಒಳಗೊಂಡಿರುತ್ತಿದ್ದವು ಎಂದು ಅವರು ನಂತರದಲ್ಲಿ ಹೇಳಿದರು.<ref name="washingtonpost.com">[http://www.washingtonpost.com/wp-dyn/content/article/2005/06/18/AR2005061801105.html ಎರಿಕ್ ಪಯಾನಿನ್, "ಎ ಸೆನೇಟರ್ಸ್ ಶೇಮ್ ವಾಷಿಂಗ್ ಟನ್ ಪೋಸ್ಟ್, ಜೂನ್19, 2005.] ರೀಟ್ರಿವ್ಡ್ ಆಗಸ್ಟ್ ೪, ೨೦೦೮.</ref> ೨೦೦೫ರಲ್ಲಿ ಅವರು ಘಟನಾವಳಿಯೊಂದನ್ನು ಪ್ರಕಟ ಮಾಡಿದಾಗ, ಅವರ ಜೀವನಕ್ಕೆ ಸಂಬಂಧಿಸಿದಂತೆ ಮತ್ತೆ ಕೇಳಲಾಯಿತು, ಅದಕ್ಕೆ ಬೈರ್ಡ್, "ನಾನು ತುಂಬಾ ಕೆಟ್ಟವನಾಗಿದ್ದೆ ಎಂಬುದು ನನಗೆ ಗೊತ್ತು, ಅಸಹಿಷ್ಣುತೆಗೆ ಅಮೆರಿಕಾದಲ್ಲಿ ಸ್ಥಳವಿಲ್ಲ. ನಾನು ಸಾವಿರಾರು ಬಾರಿ ಕ್ಷಮೆ ಕೇಳಿದ್ದೇನೆ... ಮತ್ತು ಅದಕ್ಕೂ ಮಿತಿಮೀರಿ ಮತ್ತೆ ಮತ್ತೆ ಅತಿಯಾಗಿ ಕ್ಷಮೆ ಕೇಳುವುದು ನನಗಿಷ್ಟವಿಲ್ಲ. ಏನೇನು ನಡೆದಿದೆ ಎಂಬುದನ್ನು ಸಂಪೂರ್ಣವಾಗಿ ಅಳಿಸಿ ಹಾಕಲು ನನ್ನಿಂದ ಸಾಧ್ಯವಿಲ್ಲ."<ref name="washingtonpost.com"/>
ಕಾರ್ಯಾಚರಣೆಯಲ್ಲಿ ಕೆಲವು ದೊಡ್ಡ KKK ಸಂಘಟನೆಗಳು ಸೇರಿವೆ:
* ಕು ಕ್ಲುಕ್ಸ್ ಕ್ಲಾನ್ನ ಬೇಯು ನೈಟ್ಸ್, [[ಟೆಕ್ಸಾಸ್]], [[ಒಕಲಹೊಮಾ]], ಆರ್ಕಾನ್ಸಾಸ್, [[ಲೂಯಿಸಿಯಾನಾ]] ಮತ್ತು ಸೌಥ್ಈಸ್ಟರ್ನ್ ಯಎಸ್ನ ಇನ್ನಿತರ ಪ್ರದೇಶಗಳಲ್ಲಿ ಚಾಲ್ತಿಯಲ್ಲಿದೆ.
* ಕು ಕ್ಲುಕ್ಸ್ ಕ್ಲಾನ್ನ ಅಮೆರಿಕನ್ ನೈಟ್ಸ್ ಚರ್ಚು<ref name="adl-ak-kkk">{{cite web |url=http://www.adl.org/backgrounders/american_knights_kkk.asp |title=Church of the American Knights of the KKK |accessdate= |author= |date=October 22, 1999 |work= |publisher=[[Anti-Defamation League]] |archive-date=ಸೆಪ್ಟೆಂಬರ್ 1, 2010 |archive-url=https://web.archive.org/web/20100901094652/http://www.adl.org/backgrounders/american_knights_kkk.asp |url-status=dead }}</ref>
* [[ಅಮೆರಿಕಾದ ಇಂಪೆರಿಯಲ್ ಕ್ಲಾನ್ಸ್]]<ref>{{cite news | url=http://www.msnbc.msn.com/id/27665247/ | title=No. 2 Klan group on trial in Ky. teen's beating | agency=Associated Press | date=November 11, 2008 | first= | last= | accessdate=November 22, 2008 | archive-date=ಫೆಬ್ರವರಿ 12, 2009 | archive-url=https://web.archive.org/web/20090212191202/http://www.msnbc.msn.com/id/27665247/ | url-status=dead }}</ref>
* ವೈಟ್ ಕಮೆಲಿಯಾದ ನೈಟ್ಸ್
* ಕು ಕ್ಲುಕ್ಸ್ ಕ್ಲಾನ್ನ ನೈಟ್ಸ್, ರಾಷ್ಟ್ರೀಯ ನಿರ್ದೇಶಕ ಮತ್ತು ಸ್ವತಃ ಪಾದ್ರಿ ಎಂದು ಹೇಳಿಕೊಳ್ಳುವ [[ಥಾಮ್ ರಾಬ್]] ಇದರ ಮುಖಂಡರು ಮತ್ತು ಇದು [[ಆರ್ಕನ್ಸಾಸ್ನ ಜಿಂಕ್]]ನಲ್ಲಿದೆ.<ref>{{cite news | url=http://www.adl.org/main_Extremism/Klan-vs-Rhino-Times.htm | title=Arkansas Klan Group Loses Legal Battle with North Carolina Newspaper | publisher=[[Anti-Defamation League]] | date=July 9, 2009 | first= | last= | accessdate=2008-08-15 | archive-date=ಏಪ್ರಿಲ್ 12, 2010 | archive-url=https://web.archive.org/web/20100412051638/http://www.adl.org/main_Extremism/Klan-vs-Rhino-Times.htm | url-status=dead }}</ref> ಇದನ್ನು ಈಗೀಗ ಅಮೆರಿಕಾದ ಅತಿದೊಡ್ಡ ಕ್ಲಾನ್ ಸಂಘಟನೆ ಎಂದು ಹೇಳಲಾಗುತ್ತಿದೆ. ವಕ್ತಾರರು ಇದನ್ನು "ಆರನೇ ಯುಗದ ಕ್ಲಾನ್"ನಂತಿದೆ ಮತ್ತು ಇದು ಜನಾಂಗೀಯವಾದಿ ಗುಂಪಾಗಲು ಪ್ರಾರಂಭಿಸಿದೆ ಎಂದು ಉಲ್ಲೇಖಿಸಿದ್ದಾರೆ.
ಅಸಂಖ್ಯಾತ ಸಣ್ಣ ಗುಂಪುಗಳು ಕ್ಲಾನ್ನ ಹೆಸರನ್ನು ಬಳಸಿಕೊಂಡಿವೆ. ಅತ್ಯಂತ ಕೆಳಮಟ್ಟದ ಮಿಡ್ವೆಸ್ಟ್ನಲ್ಲಿ ಪ್ರಾಥಮಿಕವಾಗಿ ಮತ್ತೊಂದು ಮೂರನೆಯದು ನೆಲೆಗೊಳ್ಳುವುದರ ಜೊತೆಗೆ ಎರಡು-ಮೂರು KKK ಸದಸ್ಯರ ಕುರಿತಾದ ಅಭಿಪ್ರಾಯಗಳು [[ದಕ್ಷಿಣ]]ದಲ್ಲಿ ಒಟ್ಟುಗೂಡಿಸಲ್ಪಟ್ಟಿವೆ.<ref name="adl-ak-kkk"/><ref>{{cite web |url=http://www.splcenter.org/intel/map/hate.jsp |title=Active U.S. Hate Groups |accessdate= |author= |date= |work=Intelligence Report |publisher=[[Southern Poverty Law Center]] |archive-date=ಸೆಪ್ಟೆಂಬರ್ 14, 2007 |archive-url=https://web.archive.org/web/20070914024214/http://www.splcenter.org/intel/map/hate.jsp |url-status=dead }}</ref><ref name="adl-kkk">{{cite web |url=http://www.adl.org/learn/ext_us/kkk/default.asp |title=About the Ku Klux Klan |accessdate= |author= |date= |work= |publisher=[[Anti-Defamation League]] |archive-date=ಜುಲೈ 25, 2010 |archive-url=https://web.archive.org/web/20100725122657/http://www.adl.org/learn/ext_us/kkk/default.asp |url-status=dead }}</ref>
ನವೆಂಬರ್ ೧೪, ೨೦೦೮ರಲ್ಲಿ ಎಲ್ಲಾ-ಶ್ವೇತ ವರ್ಣದ ತೀರ್ಪುಗಾರರ ಸಮಿತಿಯ ಏಳು ಜನ ಪುರುಷರು ಮತ್ತು ಏಳು ಜನ ಮಹಿಳೆಯರು ಪರಿಹಾರಾತ್ಮಕ ದಂಡವಾಗಿ $೧.೫ಮಿಲಿಯನ್ ಮತ್ತು ದಂಡನಾತ್ಮಕ ನಷ್ಟಪರಿಹಾಗಿ $೧.೫ಮಿಲಿಯನ್ ಅನ್ನು ಆಪಾದಕ ಜೊರ್ಡಾನ್ ಗ್ರುವರ್ಗೆ ನೀಡಲು ತೀರ್ಮಾನಿಸಿದರು. ಅವರು ಅಮೆರಿಕಾದ ಇಂಪೆರಿಯಲ್ ಕ್ಲಾನ್ಸ್ ಅನ್ನು ವಿರೋಧಿಸುವ [[ಸೌಥರ್ನ್ ಪಾವರ್ಟಿ ಲಾ ಸೆಂಟರ್]]ನಿಂದ ಪ್ರತಿನಿಧಿಸಲ್ಪಟ್ಟಿದ್ದರು.<ref>{{cite news | url=http://www.cnn.com/2008/CRIME/11/14/klan.sued.verdict/index.html | title=Jury awards $2.5 million to teen beaten by Klan members | publisher=CNN |date=November 14, 2008 | first= | last= | accessdate = November 18, 2008}}</ref> ಜುಲೈ ೨೦೦೬ರಲ್ಲಿ ಕೆಂಟುಕಿ ಪ್ರಾಂತ್ಯದ ಜಾತ್ರೆಯಲ್ಲಿ ೧೬ ವರ್ಷದವರಾಗಿದ್ದ ಗ್ರುವರ್ರನ್ನು ಐದು ಜನ IKA ಸದಸ್ಯರು ಕ್ರೂರವಾಗಿ ಹೊಡೆದಿದ್ದರು ಎಂದು ಆಡಳಿತ ಪಕ್ಷ ಹೇಳಿತ್ತು.<ref name="SPLClawsuit">{{cite news | url=http://www.splcenter.org/legal/docket/files.jsp?cdrID=69&sortID=2 | title=Southern Poverty Law Center vs. Imperial Klans of America | publisher=[[Southern Poverty Law Center]] | date=July 25, 2007 | first= | last= | accessdate=September 18, 2007 | archive-date=ಸೆಪ್ಟೆಂಬರ್ 30, 2007 | archive-url=https://web.archive.org/web/20070930185509/http://www.splcenter.org/legal/docket/files.jsp?cdrID=69&sortID=2 | url-status=dead }}</ref>
ಅನೇಕ ಕ್ಲಾನ್ ಗುಂಪುಗಳು [[ನಿಯೊ-ನಾಜಿ]]ಗಳಂತೆಯೇ ಇತರೆ ಶ್ವೇತ ಪ್ರಾಧಾನ್ಯ ಗುಂಪುಗಳೊಂದಿಗೆ ಪ್ರಬಲ ಮೈತ್ರಿಕೂಟಗಳನ್ನು ರಚಿಸಿದ್ದವು. ಕೆಲವು ಕ್ಲಾನ್ ಗುಂಪುಗಳು ನಾಜಿ ತೊಗಲು ತಲೆಗಳ ಸಂಕೇತಗಳನ್ನು ಮತ್ತು ನೋಟಗಳನ್ನು ಅಳವಡಿಸಿಕೊಳ್ಳುವ ಮೂಲಕ ಅತ್ಯಧಿಕವಾಗಿ "ನಾಜೀಕರಣ"ಗೊಂಡವು.<ref>[http://www.adl.org/learn/ext_us/kkk/affiliations.asp?LEARN_Cat=Extremism&LEARN_SubCat=Extremism_in_America&xpicked=4&item=kkk ಕು ಕ್ಲುಕ್ಸ್ ಕ್ಲಾನ್ - ಅಫಿಲಿಯೇಷನ್ಸ್] {{Webarchive|url=https://web.archive.org/web/20100729144311/http://www.adl.org/learn/ext_us/kkk/affiliations.asp?LEARN_Cat=Extremism&LEARN_SubCat=Extremism_in_America&xpicked=4&item=kkk |date=ಜುಲೈ 29, 2010 }} [[ಆಯ್೦ಟಿ-ಡೀಫಾರ್ಮೇಷನ್ ಲೀಗ್]].</ref>
ಅವುಗಳಲ್ಲಿ ಅನೇಕವು KKK ಗುಂಪುಗಳಾಗಿದ್ದರೂ, ಮಾದ್ಯಮ ಮತ್ತು ಜನಪ್ರಿಯ ಮಾತುಕತೆಗಳು ಸಾಮಾನ್ಯವಾಗಿ ಸಮಯ ಸಾಧಕತನಕ್ಕಾಗಿ '' ದಿ '' ಕ್ಲಾನ್ ಎಂದು ಹೇಳಿವೆ. [[ACLU]] ತಮ್ಮ [[ಮೊದಲ ತಿದ್ದುಪಡಿ]] ಹಕ್ಕುಗಳ ರಕ್ಷಣೆಯಲ್ಲಿ ಸಾರ್ವಜನಿಕ ಸಮಾವೇಶಗಳು, ಮೆರವಣಿಗೆಗಳು, ಸೈನಿಕರ ಪ್ರಯಾಣಗಳು ಮತ್ತು ರಾಜಕೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿನ ತಮ್ಮ ಹಕ್ಕನ್ನು ಪಡೆಯಲು KKKಯ ವಿವಿಧ ಒಳ ಪಂಗಡಗಳಿಗೆ ಕಾನೂನು ರೀತ್ಯಾ ಬೆಂಬಲವನ್ನು ಒದಗಿಸುತ್ತದೆ.<ref>ಸೀ, e.g., [https://www.nytimes.com/1993/12/16/us/aclu-lawsuit-backs-klan-in-seeking-permit-for-cross.html NYtimes.com] (ಆಯ್ಕ್ಸಸ್ಡ್ ಆಗಸ್ಟ್ ೨೦೦೯); [http://www.channel3000.com/news/381962/detail.html Channel3000 com] {{Webarchive|url=https://web.archive.org/web/20110510002233/http://www.channel3000.com/news/381962/detail.html |date=ಮೇ 10, 2011 }} (ಆಯ್ಕ್ಸಸ್ಡ್ ಆಗಸ್ಟ್ ೨೦೦೯). ದಿ ಎಸಿಎಲ್ಯು ಕ್ಲೈಮ್ಸ್ ಸ್ಪೆಷಲ್ ಪರ್ಫಾರ್ಮೆನ್ಸ್ ಫಾರ್ ಡಿಪೆಂಡಿಂಗ್ ದಿ ಕು ಕ್ಲುಕ್ಸ್ ಕ್ಲಾನ್, ಬಟ್ ರ್ಯಾದರ್ ಪ್ರೊಫೆಸ್ಸೆಸ್ ಎ ಮಿಷನ್ ಟು ಡಿಫೈನ್ಡ್ ದಿ ಕಾನ್ಸ್ಟಿಟ್ಯೂಶ್ನಲ್ ರೈಟ್ಸ್ ಆಫ್ ಆಲ್ ಗ್ರೋಪ್ಸ್, ವೆದರ್ ಲೆಫ್ಟ್, ಸೆಂಟರ್, ಆರ್ ರೈಟ್.</ref>
== ಶಬ್ದಕೋಶ ==
ಕ್ಲಾನ್ ಸದಸ್ಯತ್ವವು ರಹಸ್ಯವಾದುದು. ಅನೇಕ ಸ್ನೇಹ ಸೌಹಾರ್ದದ ಸಂಘಟನೆಗಳಂತೆ, ಬೇರೆಯೊಬ್ಬರನ್ನು ಗುರುತಿಸಲು ಯಾವುದೇ ಸದಸ್ಯರನ್ನು ಬಳಸಿಕೊಳ್ಳುವಂತೆ ಕ್ಲಾನ್ ಸಹಿ ಮಾಡುತ್ತದೆ. ಸದಸ್ಯನು ''AYAK'' ಸಂಕ್ಷಿಪ್ತ ರೂಪವನ್ನು(ನೀನು ಕ್ಲಾನ್ ಸದಸ್ಯನಾ??) ಸಂಭಾಷಣೆಯಲ್ಲಿ ರಹಸ್ಯವಾಗಿ ಬೇರೆ ಸಂಭವನೀಯ ಸದಸ್ಯನಿಗೆ ತನ್ನನ್ನು ಸ್ವತಃ ಗುರುತಿಸಿಕೊಳ್ಳಲು ಬಳಸಬಹುದು. ಪ್ರತಿಕ್ರಿಯೆಯಾಗಿ ''AKIA'' (ನಾನೊಬ್ಬ ಕ್ಲಾನ್ಸ್ ಸದಸ್ಯ) ಎಂದು ಶುಭಾಷಯವನ್ನು ಪೂರ್ಣಗೊಳಿಸುತ್ತದೆ.<ref>{{cite web |url=http://www.adl.org/hate_symbols/acronyms_KIGY.asp |title=A Visual Database of Extremist Symbols, Logos and Tattoos |accessdate= |author= |date= |work= |publisher=[[Anti-Defamation League]] |archive-date=ಆಗಸ್ಟ್ 15, 2012 |archive-url=https://web.archive.org/web/20120815051939/http://www.adl.org/hate_symbols/acronyms_KIGY.asp |url-status=dead }}</ref>
ಇದರ ಸಂಪೂರ್ಣ ವೈವಿದ್ಯಮಯ ಇತಿಹಾಸದಾದ್ಯಂತ ಆರಂಭಲ್ಲಿ "KL" ಸೇರಿದಂತೆ ಕ್ಲಾನ್ ಅನೇಕ ಪದಗಳನ್ನು<ref>ಆಯ್ಕ್ಸೆಲ್ ರಾಡ್ ೧೯೯೭, p. ೧೬೦.</ref> ಸೃಷ್ಟಿಸಿದೆ :
* ಕ್ಲಾಬಿ: ಖಂಜಾಂಚಿಗಳು
* ಕ್ಲಾವೆರ್ನ್: ಸ್ಥಳೀಯ ಸಂಘಟನೆ
* [[ಕ್ಲಿಯಾಗಲ್]]: ಹೊಸದಾಗಿ ಸೇರಿಸಿಕೊಳ್ಳುವವನು
* ಕ್ಲೆಕ್ಟೊಕೆನ್: ಪ್ರವೇಶ ಶುಲ್ಕ
* ಕ್ಲಿಗ್ರಾಪ್: ಕಾರ್ಯದರ್ಶಿ
* ಕ್ಲೊವೊಕೇಷನ್: ಸಭೆ
* [[ಕ್ಲೊರಾನ್]]: ಧಾರ್ಮಿಕ ಪುಸ್ತಕ
* ಕ್ಲೊರೆರೊ: ಪ್ರತಿನಿಧಿ
* ಕ್ಲುಡ್: ಪಾದ್ರಿ
ವಿಲ್ಲಿಯಂ ಸಿಮನ್ಸ್ನಿಂದ ಸೃಷ್ಟಿಯಾದ ಈ ಎಲ್ಲಾ ಪರಿಭಾಷಾಶಾಸ್ತ್ರವು ಕ್ಲಾನ್ನ ೧೯೧೫ರ ಪುನರುಜ್ಜೀವನದ ಅವನ ಭಾಗವಾಗಿತ್ತು.{{Citation needed|date=May 2009}} ಪುನರ್ಸ್ಥಾಪನಾ-ಯುಗದ ಕ್ಲಾನ್ ವಿಭಿನ್ನ ಶೀರ್ಷಿಕೆಗಳನ್ನು ಬಳಸಿತ್ತು; ಕ್ಲಾನ್ನ ಎಲ್ಲಾ ನಾಯಕರುಗಳಿಗಾಗಿ "ವಿಜರ್ಡ್", ಭದ್ರತಾ ಶುಲ್ಕದಲ್ಲಿ ಉದ್ಯೋಗಕ್ಕಾಗಿ ಮತ್ತು ಸಂಘಟನೆಯ ಪ್ರಾದೇಶಿಕ ಕಛೇರಿ ಅಧಿಕಾರಿಗಳಿಗಾಗಿ "ನೈಟ್ ಹವಾಕ್" ಎಂಬ ಕೆಲವು ಶೀರ್ಷಿಕೆಗಳು ಬಳಸಲ್ಪಡುತ್ತಿದ್ದವು.{{Citation needed|date=May 2009}}
== ಇವನ್ನೂ ಗಮನಿಸಿ ==
{{portal|Gangs}}
* [[ನ್ಯೂ ಜರ್ಸಿಯಲ್ಲಿ ಕು ಕ್ಲುಕ್ಸ್ ಕ್ಲಾನ್ನ ಇತಿಹಾಸ]]
* [[ಯುನೈಟೆಡ್ ಸ್ಟೇಟ್ಸ್ನ ಇತಿಹಾಸ(1865–1918)#ಸಾಮಾಜಿಕ ಅಸಂತುಷ್ಟಿ]]
* [[ಜಿಮ್ ಕ್ರೂ ಶಾಸನಗಳು]]
* [[ಕ್ಯಾಲಿಪೋರ್ನಿಯಾದ, ಇಂಗಲ್ವುಡ್ನಲ್ಲಿ ಕು ಕ್ಲುಕ್ಸ್ ಕ್ಲಾನ್]]
* [[ಕು ಕ್ಲುಕ್ಸ್ ಕ್ಲಾನ್ ಹೊಸ ಸೇರ್ಪಡೆ]]
* [[ಕು ಕ್ಲುಕ್ಸ್ ಕ್ಲಾನ್ನ ನಾಯಕರು]]
* [[ರಾಷ್ಟ್ರೀಯ ರಾಜಕಾರಣದಲ್ಲಿ ಕು ಕ್ಲುಕ್ಸ್ ಕ್ಲಾನ್ ಸದಸ್ಯರ ಗುರುತರ ಪ್ರಭಾವಗಳು]]
* [[ಆದೇಶ]]
* [[ನೆಬ್ರಾಸ್ಕಾದ, ಒಮಹದಲ್ಲಿ ಜನಾಂಗದ ಒತ್ತಡ ಅವಧಿ]]
* [[ಟಲ್ಸ ರೇಸ್ ದಂಗೆ]]
* [[ಕು ಕ್ಲುಕ್ಸ್ ಕ್ಲಾನ್ನ ವೈಟ್ನೈಟ್ಸ್]]
== ಅಡಿಟಿಪ್ಪಣಿಗಳು ==
{{Reflist|2}}
== ಗ್ರಂಥಸೂಚಿ ==
{{refbegin}}
* {{cite book |title=The International Encyclopedia of Secret Societies & Fraternal Orders |last=Axelrod |first=Alan |authorlink= |coauthors= |year=1997 |publisher=Facts On File |location=New York |isbn= |pages= }}
* {{cite book |title=Drink: A Social History of America |last=Barr |first=Andrew |authorlink= |coauthors= |year=1999 |publisher=Carroll & Graf |location=New York |isbn= |pages= }}
* {{cite book |title=Hooded Americanism: The History of the Ku Klux Klan |last=Chalmers |first=David M. |authorlink= |coauthors= |year=1987 |publisher=[[Duke University Press]] |location=Durahm, N.C.|isbn=9780822307303 |page=512}}
* {{cite book |title=At the Hands of Persons Unknown: The Lynching of Black America |last=Dray |first=Philip |authorlink= |coauthors= |year=2002 |publisher=[[Random House]] |location=New York |isbn= |pages= }}
* {{cite book |title=Speak Now Against the Day: The Generation Before the Civil Rights Movement in the South |last=Egerton |first=John |authorlink= |coauthors= |year=1994 |publisher=Alfred and Knopf Inc. |location= |isbn= |pages= }}
* {{cite book |title=Politics, Society, and the Klan in Alabama, 1915-1949 |last=Feldman |first=Glenn |authorlink= |coauthors= |year=1999 |publisher=[[University of Alabama Press]] |location=Tuscaloosa, Alabama |isbn= |pages= }}
* {{cite book |title=Reconstruction: America's Unfinished Revolution, 1863-1877 |last=Foner |first=Eric |authorlink= |coauthors= |year=1989 |publisher=Perennial (HarperCollins) |location= |isbn= |pages= }}
* {{cite book |title=Race and History: Selected Essays 1938-1988 |last=Franklin |first=John Hope |authorlink= |coauthors= |year=1992 |publisher=[[Louisiana State University Press]] |location= |isbn= |pages= }}
* {{cite book |title=Invisible Empire: The Story of the Ku Klux Klan, 1866-1871 |last=Horn |first=Stanley F. |authorlink= |coauthors= |year=1939 |publisher=Patterson Smith Publishing Corporation |location=Montclair, New Jersey |isbn= |pages= }}
* {{cite book |title=Hoods: The Story of the Ku Klux Klan |last=Ingalls |first=Robert P. |authorlink= |coauthors= |year=1979 |publisher=G.P. Putnam's Sons |location=New York |isbn= |pages= }}
* {{cite book |title=The Ku Klux Klan in the City, 1915-1930 |last=Jackson |first=Kenneth T. |authorlink= |coauthors= |year=1967; 1992 edition|publisher=[[Oxford University Press]] |locationNew York= |isbn= |pages= }}
* {{cite book |title=The Klan Unmasked |last=Kennedy |first=Stetson |authorlink=Stetson Kennedy |coauthors= |year=1990 |publisher=[[University Press of Florida]] |location= |isbn= |pages= }}
* {{cite book |title=Drinking in America |last=Lender |first=Mark E. |authorlink= |coauthors=James K. Martin |year=1982 |publisher=Free Press |location=New York |isbn= |page= }}
* {{cite book |title=Freakonomics: A Rogue Economist Explores the Hidden Side of Everything |last=Levitt |first=Stephen D. |authorlink= |coauthors=Stephen J. Dubner |year=2005 |publisher=William Morrow |location=New York |isbn= |pages= }}
* {{cite book |title=Carry Me Home: Birmingham, Alabama, The Climactic Battle of the Civil Rights Revolution |last=McWhorter |first=Diane |authorlink= |coauthors= |year=2001 |publisher=[[Simon & Schuster]] |location=New York |isbn= |pages= }}
* {{cite book |title=Citizen Klansmen: The Ku Klux Klan in Indiana, 1921-1928 |last=Moore |first=Leonard J. |authorlink= |coauthors= |year=1991 |publisher=[[University of North Carolina Press]] |location=Chapel Hill |isbn= |pages= }}
* {{cite book|title=The Ku Klux Klan: An Encyclopedia |last=Newton |first=Michael |authorlink= |coauthors=Judy Ann Newton|year=1991|publisher=Garland Publishing |location=New York & London |isbn=}}
* {{cite journal |last=Parsons |first=Elaine Frantz |authorlink= |coauthors= |year=2005 |month= |title=Midnight Rangers: Costume and Performance in the Reconstruction-Era Ku Klux Klan |journal=[[The Journal of American History]] |volume=92 |issue=3 |pages=811–836 |id= |url=https://archive.org/details/sim_journal-of-american-history_2005-12_92_3/page/811|accessdate= |quote= }}
* {{Citation|last=Prendergast | first=Michael L. | authorlink= | year= | chapter=A History of Alcohol Problem Prevention Efforts in the United States | editor-last=Holder | editor-first=Harold D. | editorlink= | title=Control Issues in Alcohol Abuse Prevention: Strategies for States and Communities | edition= | place=Greenwich, Connecticut | publisher=JAI Press | year=1987 | volume= | id= }}
* {{cite book |title=History of the United States from the Compromise of 1850 to the McKinley-Bryan Campaign of 1896 |volume= 7 |last=Rhodes |first=James Ford |authorlink=James Ford Rhodes |coauthors= |year=1920 |publisher= |location= |isbn= |pages= }}೧೯೧೮ರ [[ಪೊಲಿಟ್ಜರ್ ಪ್ರಶಸ್ತಿ]] ಗೆದ್ದ [http://www.pulitzer.org/awards/1918 ಇತಿಹಾಸ] {{Webarchive|url=https://web.archive.org/web/20100701075420/http://www.pulitzer.org/awards/1918 |date=2010-07-01 }}.
* {{cite book |title=Alabama: The History of a Deep South State |last=Rogers |first=William |authorlink= |coauthors=Robert Ward, Leah Atkins and Wayne Flynt |year=1994 |publisher=[[University of Alabama Press]] |location=Tuscaloosa, Alabama |isbn= |pages= }}
* {{cite book |title=The man from Missouri; the life and times of Harry S. Truman |last=Steinberg |first=Alfred |authorlink= |year=1962 |publisher=Putnam |location=New York |oclc=466366 |pages= }}
* {{cite book |title=Louisiana Reconstructed, 1863-1877 |last=Taylor |first=Joe G. |authorlink= |coauthors= |year=1974 |publisher= |location=Baton Rouge |isbn= |pages= }}
* {{cite book |title=My Life in the Klan |last=Thompson |first=Jerry |authorlink= |coauthors= |year=1982 |publisher=Putnam |location=New York |isbn=0399126953 |pages= }}
* {{cite book |title=White Terror: The Ku Klux Klan Conspiracy and Southern Reconstruction |last=Trelease |first=Allen W. |authorlink= |coauthors= |year=1995 |publisher=[[Louisiana State University Press]] |location= |isbn= |pages= }}
:ಮೂಲಾಧಾರಗಳಲ್ಲಿನ ಸಂಶೋಧನೆಯ ಆಧಾರದ ಮೇಲೆ ೧೯೭೧ರಲ್ಲಿ ಮೊದಲು ಪ್ರಕಟ ಮಾಡಲಾಯಿತು, ಇದು ಕ್ಲಾನ್ನ ಅತ್ಯಂತ ವ್ಯಾಪಕ ವ್ಯವಹಾರ ಮತ್ತು ಇದು ಪೋಸ್ಟ್-ಸಿವಿಲ್ ಯುದ್ದದ ಪುನರ್ನಿರ್ಮಾಣದ ಸಂಬಂಧವನ್ನು ಹೊಂದಿತ್ತು.
ಬೇರೆಯ ನೈಟ್-ರೈಡಿಂಗ್ ಗುಂಪುಗಳ ಮೇಲಿನ ಕಥಾನಿರುಪಣೆಯ ಸಂಶೋಧನೆ ಒಳಗೊಂಡಿತ್ತು. ೧೯ನೇ ಶತಮಾನದ ಕೊನೆ ಮತ್ತು ೨೦ನೇಶತಮಾನದ ಆರಂಭದ ಡೆಮಾಕ್ರೇಟಿಕ್ ಪಕ್ಷ ಮತ್ತು ಕ್ಲಾನ್ ನಡುವಿನ ವಿವರಗಳು ಅತ್ಯಂತ ಸಮೀಪ ಸಂಬಂಧವನ್ನು ಕಲ್ಪಿಸಿದವು.
* {{cite book |title=The Fiery Cross: The Ku Klux Klan in America |last=Wade |first=Wyn Craig |authorlink= |coauthors= |year=1987 |publisher=[[Simon and Schuster]] |location=New York |isbn= |pages= }}
:ಇಬ್ಬರು ಕ್ಲಾನ್ಗಳಲ್ಲಿಯೂ ಅನುಕಂಪವಿಲ್ಲದೆ ಸಮರ್ಪಣೆಯ ಜೊತೆಗೆ ಕಂಟಾಕಿ ಗ್ರ್ಯಾಂಡ್ಮದರ್... ಆಕೆ ತೀರಿಕೊಳ್ಳುವವರೆಗೂ ಸುಮಾರು ಒಂದು ಶತಮಾನದ ನಂತರ ಪುನನಿರ್ಮಾಣವನ್ನು ತಗ್ಗಿಸುವುದರಿಂದ ಆವೇಷದ ಮತ್ತು ದೃಢ ಮೂಲಸ್ವರೂಪದ ಗಣತಂತ್ರವಾದಿಯಾಗಿದ್ದರು".
{{refend}}
=== ಹೆಚ್ಚಿನ ಮಾಹಿತಿಗಾಗಿ ===
* {{cite book |title=Women of the Klan |last=Blee |first=Kathleen M. |authorlink=Kathleen M. Blee|year=1992 |publisher=[[University of California Press]] |location= |isbn=0-520-07876-4 |pages= }}
* {{cite news |url=http://www.gainesville.com/apps/pbcs.dll/article?AID=%2F20070206%2FWIRE%2F702050325%2F-1%2Fnews |title=White supremacist groups flourishing |accessdate= |author= |date= |work= |agency=Associated Press |archive-date=ಜುಲೈ 30, 2018 |archive-url=https://web.archive.org/web/20180730202916/http://www.gainesville.com/apps/pbcs.dll/article?AID=%2F20070206%2FWIRE%2F702050325%2F-1%2Fnews |url-status=dead }}
* {{cite book |title=Terror in the Night: The Klan's Campaign Against the Jews |last=Nelson |first=Jack |authorlink=Jack Nelson_(journalist) |coauthors= |year=1993 |publisher=[[Simon & Schuster]] |location=New York |isbn=0-671-69223-2 |pages= }}
* {{cite book |title=[https://books.google.com/books?id=ziG-M2q3ckYC&source=gbs_navlinks_s Backfire: how the Ku Klux Klan helped the civil rights movement ] |last=Chalmers |first=David M. |authorlink= |coauthors= |year=2003 |publisher=Rowman & Littlefield|isbn=0742523101}}
== ಹೊರಗಿನ ಕೊಂಡಿಗಳು ==
{{Commons category}}
* [http://www.splcenter.org/get-informed/intelligence-files/ideology/ku-klux-klan ದಿ ಸದರನ್ ಪವರ್ಟಿ ಲಾ ಸೆಂಟರ್ ಇನ್ಫರ್ಮೇಶನ್ ಆನ್ ದಿ ಕ್ಲಾನ್]
* [http://www.adl.org/learn/ext_us/KKK.asp?xpicked=4&item=18 ದಿ ಎಡಿಎಲ್ ಆನ್ ದಿ ಕೆಕೆಕೆ] {{Webarchive|url=https://web.archive.org/web/20060829045351/http://www.adl.org/learn/ext_us/KKK.asp?xpicked=4&item=18 |date=ಆಗಸ್ಟ್ 29, 2006 }}
* [http://www.life.com/image/first/in-gallery/25151/life-goes-inside-todays-kkk ಇನ್ಸೈಡ್ ಟುಡೆಸ್ ಕೆಕೆಕೆ] {{Webarchive|url=https://web.archive.org/web/20090716065944/http://www.life.com/image/first/in-gallery/25151/life-goes-inside-todays-kkk |date=ಜುಲೈ 16, 2009 }}-ಸ್ಲೈಡ್ಶೋ ಬೈ ''ಲೈಫ್'' ಮ್ಯಾಗ್ಜೈನ್. ಏಪ್ರಿಲ್ ೧೩, ೨೦೦೯
* ಇನ್ವಿಸಿಬಲ್ ಎಂಪೈಯರ್ ಲೇಖಕ ಸ್ಟಾನ್ಲೆ ಎಫ್.ಹಾರ್ನ್, ಅವರೊಂದಿಗಿನ [http://www.foresthistory.org/research/Biltmore_Project/OHIs/HornOHI.pdf ಸುದೀರ್ಘ ಸಂದರ್ಶನ] {{Webarchive|url=https://web.archive.org/web/20170326190608/http://www.foresthistory.org/research/biltmore_project/ohis/hornohi.pdf |date=ಮಾರ್ಚ್ 26, 2017 }}:ಕು ಕ್ಲುಕ್ಸ್ ಕ್ಲಾನ್ ಕಥೆ ೧೮೬೬–೧೮೭೧
{{Racism topics|state=collapsed}}
{{discrimination}}
{{Interwikineeded}}
[[ವರ್ಗ:ಯುನೈಟೆಡ್ ಸ್ಟೇಟ್ಸ್ನಲ್ಲಿ ಕ್ಯಾಥೋಲಿಸಮ್ ವಿರೋಧಿ]]
[[ವರ್ಗ:ಕ್ರೈಸ್ತ ಭಯೋತ್ಪಾದನೆ]]
[[ವರ್ಗ:ಯುನೈಟೆಡ್ ಸ್ಟೇಟ್ಸ್ನಲ್ಲಿ ಫಾರ್ ರೈಟ್ ರಾಜಕೀಯಗಳು]]
[[ವರ್ಗ:ಶ್ವೇತ ರಾಷ್ಟ್ರೀಯತಾವಾದಿಗಳು]]
[[ವರ್ಗ:ಕು ಕ್ಲುಕ್ಸ್ ಕ್ಲಾನ್]]
[[ವರ್ಗ:ಕು ಕ್ಲುಕ್ಸ್ ಕ್ಲಾನ್ ಅಪರಾಧಗಳು]]
[[ವರ್ಗ:1865ರ ಸ್ಥಾಪನೆಗಳು]]
[[ವರ್ಗ:1915ರ ಸ್ಥಾಪನೆಗಳು]]
[[ವರ್ಗ:ಆಫ್ರಿಕಾ ಅಮೇರಿಕಾ ಇತಿಹಾಸ]]
[[ವರ್ಗ:ಯುನೈಟೆಡ್ ಸ್ಟೇಟ್ಸ್ನಲ್ಲಿ ಕಮ್ಯೂನಿಸಮ್ ವಿರೋಧಿ]]
[[ವರ್ಗ:ಸೆಮಿಟಿಸಮ್ ವಿರೋಧಿ]]
[[ವರ್ಗ:ದಬ್ಬಾಳಿಕೆ]]
[[ವರ್ಗ:ದ್ವೇಷದ ಅಪರಾಧಗಳು]]
[[ವರ್ಗ:ವಿರೋಧಿ ಗುಂಪುಗಳು]]
[[ವರ್ಗ:ಯುನೈಟೆಡ್ ಸ್ಟೇಟ್ಸ್ನಲ್ಲಿಯ ಜನಾಂಗಭೇದ ಇತಿಹಾಸ]]
[[ವರ್ಗ:ಯುನೈಟೆಡ್ ಸ್ಟೇಟ್ಸ್ನಲ್ಲಿಯ ವರ್ಣಭೇದ ಇತಿಹಾಸ]]
[[ವರ್ಗ:ಯುನೈಟೆಡ್ ಸ್ಟೇಟ್ಸ್ನಲ್ಲಿಯ ಮತದಾನ ಹಕ್ಕುಗಳ ಇತಿಹಾಸ]]
[[ವರ್ಗ:ಆಫ್ರಿಕನ್ ಅಮೇರಿಕನ್ನರ ವಿರುದ್ದ ಜನಾಂಗೀಯವಾಗಿ ಪ್ರೇರಣೆಗೊಂಡ ಹಿಂಸೆ]]
[[ವರ್ಗ:ವರ್ಣಭೇಧ ನೀತಿ]]
[[ವರ್ಗ:ಪುನರ್ನಿರ್ಮಾಣ]]
[[ವರ್ಗ:ಯುನೈಟೆಡ್ ಸ್ಟೇಸ್ನ ಸಾಮಾಜಿಕ ಇತಿಹಾಸ]]
[[ವರ್ಗ:ಯುನೈಟೆಡ್ ಸ್ಟೇಸ್ನಲ್ಲಿ ಭಯೋತ್ಪಾದಕ ಪ್ರಾಸಂಗಿಕ ಘಟನೆಗಳು]]
[[ವರ್ಗ:ಶ್ವೇತ ಪ್ರಾಧಾನ್ಯ]]
[[ವರ್ಗ:ಅಂತರರಾಷ್ಟ್ರೀಯ ಸಂಘಟನೆಗಳು]]
[[ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನ]]
dpsu4xogk3wgncvogcsamx30m2w2v1s
ಟ್ಯಾಬ್ಲೆಟ್ ಪಿಸಿ
0
23802
1379606
1378443
2026-08-09T11:50:40Z
InternetArchiveBot
69876
Rescuing 5 sources and tagging 0 as dead.) #IABot (v2.0.9.5
1379606
wikitext
text/x-wiki
{{For|tablet devices which bear similarities to tablet PCs but do not adhere to the definition of [[personal computer]]|Tablet computer}}
{{image}}
[[ಚಿತ್ರ:HP Tablet PC running Windows XP (Tablet PC edition) (2006).jpg|right|thumb|225px|ತಿರುಗುವ/ತೆಗೆಯಬಲ್ಲ ಕೀಬೋರ್ಡ್ನ ಜೊತೆಯಲ್ಲಿ HP ಕಾಂಪ್ಯಾಕ್ ಟ್ಯಾಬ್ಲೆಟ್ PC]]
'''ಟ್ಯಾಬ್ಲೆಟ್ PC''' ಒಂದು [[ಲ್ಯಾಪ್ ಟಾಪ್]] [[PC]] ಆಗಿದ್ದು, ಇದು [[ಸ್ಟೈಲಸ್]] ಮತ್ತು ಅಥವಾ ಒಂದು ಟಚ್ಸ್ಕ್ರೀನ್. ಈ ವಿನ್ಯಾಸಿತ [[ಅಂಶವು]] ಹೆಚ್ಚಿನ ಮೊಬೈಲ್ PCಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ; ಹಾಗೆಯೇ ಈ ಟ್ಯಾಬ್ಲೆಟ್ PCಗಳನ್ನು ನೋಟ್ ಬುಕ್ಗಳು ಕಾರ್ಯಸಾಧುವಾಗಿಲ್ಲದಿರುವಲ್ಲಿ ಅಥವಾ ಸ್ಥೂಲವಾದ ಅಥವಾ ಅವಶ್ಯಕ ಕ್ರಿಯಾತ್ಮಕ ಕಾರ್ಯವನ್ನು ಒದಗಿಸದಿದ್ದಾಗ ಬಳಸಲಾಗುತ್ತದೆ.{{Citation needed|date=April 2010}}
2001ರಲ್ಲಿ [[ಮೈಕ್ರೋಸಾಫ್ಟ್]] ಪ್ರಕಟಿಸಲ್ಪಟ್ಟ ಸಾಫ್ಟವೇರ್ ಉತ್ಪನ್ನಗಳಲ್ಲಿ ಈ '''ಟ್ಯಾಬ್ಲೆಟ್ PC''' ಯನ್ನು ಹೆಚ್ಚು ಜನಪ್ರಿಯಗೊಳಿಸಲಾಯಿತಲ್ಲದೇ, ಮೈಕ್ರೋಸಾಫ್ಟ್ ಮತ್ತು “ವಿಂಡೋಸ್ ಎಕ್ಸ್ ಪಿ ಟ್ಯಾಬ್ಲೆಟ್ PC ಎಡಿಷನ್” ಇದರ ಪರವಾನಗಿ ಪ್ರತಿಯಡಿ ಕಾರ್ಯ ನಿರ್ವಹಿಸಲು ಅಥವಾ ಅದರ ಮೂಲಕ ಅನ್ವೇಷಣಾಕಾರಿ ಕೆಲಸವನ್ನು ಮಾಡಲು ಇದೊಂದು ಹಾರ್ಡ್ವೇರ್ ವಿಶಿಷ್ಟತೆಯಿಂದ ರಚಿಸಲ್ಪಟ್ಟ [[ಪೆನ್ ಎನೇಬಲ್ಡ್ ಕಂಪ್ಯೂಟರ್]] ಎಂದು ವಿವರಿಸಲ್ಪಟ್ಟಿದೆ.<ref name="Microsoft 2005">{{Citation
| last=Microsoft
| title= Windows XP Tablet PC Edition 2005 Hardware Requirements
| date=2005
| publisher=www.microsoft.com
| url=http://users.erols.com/rwservices/pens/biblio10.html#Microsoft06i
| accessdate = 2009-03-14 }}</ref> ಟ್ಯಾಬ್ಲೆಟ್ PCಗಳು ವೈಯಕ್ತಿಕ ಕಂಪ್ಯೂಟರ್ಗಳಾಗಿದ್ದು, ಇದರ ಮಾಲೀಕನು ಯಾವುದೇ ಯೋಗ್ಯ(ಕಾಂಪ್ಯಾಟಿಬಲ್) ಅಪ್ಲಿಕೇಷನ್ಗಳು ಅಥವಾ ಆಪರೇಟಿಂಗ್ ವ್ಯವಸ್ಥೆಯನ್ನು ಅಳವಡಿಸಲು ಮುಕ್ತರಾಗಿದ್ದಾರೆ. ಇತರ ಟ್ಯಾಬ್ಲೆಟ್ ಕಂಪ್ಯೂಟರ್ ಸಾಧನಗಳಾದ [[ಈ ಬುಕ್ ರೀಡರ್ಸ್]] ಅಥವಾ [[PDA]]ಗಳು ಈ ಆಯ್ಕೆಯನ್ನು ಒದಗಿಸುವುದಿಲ್ಲ ಮತ್ತು ಅವುಗಳು ಸಾಮಾನ್ಯವಾಗಿ ಇನ್ನೊಂದು/ಬೇರೆ ವರ್ಗದವುಗಳೆಂದು ಪರಿಗಣಿಸಲ್ಪಡುತ್ತದೆ. ಸ್ಟೈಲಸ್ನ ಗ್ರಹಣಶಕ್ತಿಯ ತೀವ್ರತೆಯನ್ನು ತಿಳಿದುಕೊಳ್ಳಲು ಈ ಮೂಲ ಮೈಕ್ರೋಸಾಫ್ಟ್ ಲೈಸೆನ್ಸಿಂಗ್ ಸ್ಪೆಸಿಫಿಕೇಶನ್ನ ಅಗತ್ಯತೆಯಿರುವುದಲ್ಲದೇ, ಆ ಮೈಕ್ರೋಸಾಫ್ಟ್ನ್ನು “ಹೋವರ್” ಎಂದು ಕರೆಯಲಾಗುತ್ತದೆ. [[UMPC]] ಯನ್ನು ಕೊನೆಯಲ್ಲಿ ಪ್ರಕಟಿಸುವ ಮೂಲಕ ಈ ಮೂಲ ಅಗತ್ಯತೆಯನ್ನು ಕೈಬಿಡಲಾಯಿತು.
== ಪ್ರಕಾರಗಳು ==
{{Unreferenced section|date=July 2008}}
=== ಬುಕ್ಲೆಟ್ಗಳು ===
ಬುಕ್ಲೆಟ್ PCಗಳು ಜೊತೆಯಾದ ಸ್ಕ್ರೀನ್ ಟ್ಯಾಬ್ಲೆಟ್ ಕಂಪ್ಯೂಟರ್ಗಳಾಗಿದ್ದು ಅವುಗಳನ್ನು ಪುಸ್ತಕಗಳಂತೆ ಮಡಚಬಹುದಾಗಿದೆ. ಈ ವಿಶಿಷ್ಠ ಬುಕ್ಲೆಟ್ PCಗಳನ್ನು [[ಮಲ್ಟಿ ಟಚ್]] ಸ್ಕ್ರೀನ್ಗಳು ಮತ್ತು ಪೆನ್ ರೈಟಿಂಗ್ ಮಾನ್ಯತೆಯ ಸಾಮರ್ಥ್ಯಗಳೊಂದಿಗೆ ಇದನ್ನು ರಚಿಸಲಾಗಿದೆ. ಅವುಗಳನ್ನು ಡಿಜಿಟಲ್ ಡೇ ಪ್ಲ್ಯಾನರ್ಗಳಾಗಿ ಬಳಸಲು ಅನುಕೂಲವಾಗುವಂತೆ, ಹಾಗೂ ಇಂಟರ್ನೆಟ್ ಸರ್ಫಿಂಗ್ ಸಾಧನಗಳು, ಪ್ರಾಜೆಕ್ಟ್ ಪ್ಲ್ಯಾನರ್ಗಳು, ಮ್ಯೂಸಿಕ್ ಪ್ಲ್ಯಾನರ್ಗಳು ಮತ್ತು ವೀಡಿಯೋಗಳನ್ನು ಪ್ರದರ್ಶಿಸಲು, ನೇರ ಟಿವಿ ಪ್ರದರ್ಶನಗಳಿಗಾಗಿ ಮತ್ತು ಈ-ರೀಡಿಂಗ್ಗಾಗಿ ಅನುಕೂಲವಾಗುವಂತೆ ವಿನ್ಯಾಸಿಸಲಾಗಿದೆ.
=== ಸ್ಲೇಟ್ಗಳು ===
ಸ್ಲೇಟ್ ಕಂಪ್ಯೂಟರ್ಗಳು [[ರೈಟಿಂಗ್ ಸ್ಲೇಟ್ಗಳಂತೆ]] ಹೋಲುವ ಟ್ಯಾಬ್ಲೆಟ್ PCಗಳಾಗಿದ್ದು, ಅವುಗಳು ನಿರ್ದಿಷ್ಟ ಕೀಬೋರ್ಡ್ಗಳನ್ನು ಒಳಗೊಂಡಿರುವುದಿಲ್ಲ.
ಟ್ಯಾಬ್ಲೆಟ್ PCಗಳಲ್ಲಿ ವಿಶೇಷವಾಗಿ ಸಣ್ಣ ({{convert|8.4|-|14.1|in|cm|abbr=off|disp=s}}) [[LCD]] ಸ್ಕ್ರೀನ್ಗಳನ್ನು ಒಳಗೊಂಡಿದೆಯಲ್ಲದೇ, ಆರೋಗ್ಯಸೇವೆ, ಶಿಕ್ಷಣ, ಅತಿಥಿಸತ್ಕಾರ ಮತ್ತು ಫೀಲ್ಡ್ ವರ್ಕ್ಗಳಂತಹ [[ನೇರ ಮಾರುಕಟ್ಟೆಗಳಲ್ಲಿ]] ಇದು ಜನಪ್ರಿಯತೆಯನ್ನು ಗಳಿಸಿದೆ. ಫೀಲ್ಡ್ ವರ್ಕ್ಗಳಿಗಾಗಿನ ಅಪ್ಲಿಕೇಷನ್ಗಳಿಗೆ ಕೆಲವೊಮ್ಮೆ ಸ್ಥಿರ ವಿಶೇಷ ಗುಣಗಳಿರುವ ಟ್ಯಾಬ್ಲೆಟ್ PC ಗಳ ಅಗತ್ಯತೆಯಿರುತ್ತದೆಯಲ್ಲದೇ, ಅವುಗಳು ಉಷ್ಣ ನಿರೋಧಕತೆ, ಆರ್ದ್ರತೆ ಮತ್ತು ಡ್ರಾಪ್/ವೈಬ್ರೇಷನ್ ಹಾನಿಯಂತಹ ದೀರ್ಘಕಾಲಿಕತೆಯನ್ನು ಖಚಿತಪಡಿಸುತ್ತದೆ. ಈ ಮೊಬಿಲಿಟಿ ಮತ್ತು/ಅಥವಾ ಸ್ಥಿರತೆಯ ಬಗೆಗಿನ ಹೆಚ್ಚುವರಿ ಪ್ರಾಶಸ್ತ್ಯವು ಈ ಅರ್ಹತೆಗಳಿಗೆ ಅಡ್ಡಿಯುಂಟುಮಾಡುವಂತಹ ಭಾಗಗಳನ್ನು ಆಚೀಚೆ ಬದಲಾಯಿಸುವುದನ್ನು ತಪ್ಪಿಸಲು ಕಾರಣವಾಗುತ್ತದೆ.
=== ಪರಿವರ್ತಕಗಳು ===
ಪರಿವರ್ತಕ ನೋಟ್ಬುಕ್ಗಳು ಜೋಡಿತ ಕೀಬೋರ್ಡ್ನೊಂದಿಗಿರುವ ಬೇಸ್ ಬಾಡಿಯನ್ನು ಹೊಂದಿರುತ್ತವೆ. ಅವುಗಳು ಹೆಚ್ಚಾಗಿ ಆಧುನಿಕ ಲ್ಯಾಪ್ಟಾಪ್ಗಳನ್ನು ಹೋಲುತ್ತವೆ, ಮತ್ತು ಸ್ಲೇಟ್ಗಳಿಗಿಂತ ಸಾಮಾನ್ಯವಾಗಿ ಹೆಚ್ಚು ತೂಕ ಮತ್ತು ಗಾತ್ರದಲ್ಲಿ ಕೂಡ ದೊಡ್ಡದಾಗಿರುತ್ತದೆ.
ವಿಶಿಷ್ಟವಾಗಿ, ಕನ್ವರ್ಟಿಬಲ್(ಪರಿವರ್ತಕಗಳ) ಬೇಸ್ಗಳು ಸ್ವಿವೆಲ್ ಹಿಂಜ್ ಅಥವಾ ರೊಟೇಟಿಂಗ್ ಹಿಂಜ್ ಎಂದು ಕರೆಯಲ್ಪಡುವ ಸಿಂಗಲ್ ಜಾಯಿಂಟ್ನಲ್ಲಿ ಡಿಸ್ಪ್ಲೇಗೆ ಜೋಡಿಣೆಗೊಳ್ಳುತ್ತವೆ. ಈ ಜಾಯಿಂಟ್, ಸ್ಕ್ರೀನ್ 180° ಯ ಮೂಲಕ ತಿರುಗಲು ಸಹಕರಿಸುವುದಲ್ಲದೇ, ಫ್ಲ್ಯಾಟ್ ರೈಟಿಂಗ್ ಸರ್ಫೇಸ್ ನ್ನು ಒದಗಿಸಲು, ಕೀಬೋರ್ಡ್ನ ಮೇಲ್ಭಾಗವನ್ನು ಮಡಚಿ ಹಿಡಿಯತ್ತದೆ. ಆದ್ದಾಗ್ಯೂ ಸಾಮಾನ್ಯವಾಗಿ ಈ ವಿನ್ಯಾಸವು, ನೋಟ್ಬುಕ್ನಲ್ಲಿರುವ ದೌರ್ಬಲ್ಯದ ಭೌತಿಕ ದೃಷ್ಟಿಕೋನವನ್ನು ರಚಿಸುತ್ತದೆ.
ಕೆಲವೊಂದು ಉತ್ಪಾದಕರು ಈ ದೌರ್ಬಲ್ಯಗಳ ಅಂಶಗಳನ್ನು ಜಯಿಸಲು ಪ್ರಯತ್ನಿಸಿದ್ದಾರೆ. ಉದಾಹರಣೆಗೆ, [[ಪ್ಯಾನಾಸೋನಿಕ್ ಟಫ್ಬುಕ್]] 19 ಇದನ್ನು ಹೆಚ್ಚು ಬಾಳಿಕೆ ಬರುವ ನೋಟ್ ಬುಕ್ ಎಂದು ಪ್ರಚಾರ ಪಡಿಸಲಾಗುತ್ತದೆ. ಏಸರ್ ನ ಒಂದು ಮಾದರಿ (ಟ್ರಾವೆಲ್ ಮೇಟ್ C210)ಯು ಸ್ಲೈಡಿಂಗ್ ಡಿಸೈನ್ ಹೊಂದಿದ್ದು, ಇದು ಸ್ಲೇಟ್ ಲೈಕ್ ಪೊಸಿಷನ್ನಿಂದ ಸ್ಕ್ರೀನ್ ಸ್ಲೈಡ್ಸ್ ಅಪ್ ಆಗುವುದಲ್ಲದೇ, ಲ್ಯಾಪ್ ಟಾಪ್ ಮೋಡ್ನ್ನು ಒದಗಿಸಲು, ಸೂಕ್ತ ಸ್ಥಳದಲ್ಲಿ ಲಾಕ್ ಮಾಡುತ್ತದೆ.
ಪರಿವರ್ತಕಗಳು ಟ್ಯಾಬ್ಲೆಟ್ PCಗಳ ಹೆಚ್ಚು ಜನಪ್ರಿಯ ಫಾರ್ಮ್ ಫ್ಯಾಕ್ಟರ್ಗಳಾಗಿವೆ, ಯಾಕೆಂದರೆ, ಅವುಗಳು ಟಚ್ಸ್ಕ್ರೀನ್ನ್ನು ಇನ್ಪುಟ್ನ ಒಂದು ಮೂಲ ವಿಧಾನವಾಗಿ ಬಳಸದಿರುವಂತಹ ಈಗಲೂ ಕೀಬೋರ್ಡ್ ಮತ್ತು ಹಳೆಯ ನೋಟ್ಬುಕ್ಗಳ ಪಾಯಿಂಟಿಂಗ್ ಸಾಧನವನ್ನು ಒದಗಿಸುತ್ತದೆ.
=== ಹೈಬ್ರಿಡ್ಸ್ ===
[[HP/ಕಾಂಪ್ಯಾಕ್ TC 1000]] ಮತ್ತು [[TC1100]] ಶ್ರೇಣಿಗಳಿಂದ ಹೈಬ್ರಿಡ್ಸ್ ಎಂಬ ಪದವನ್ನು ರಚಿಸಲಾಗಿದ್ದು, ಇದು ಸ್ಲೇಟ್ ಮತ್ತು ಕನ್ವರ್ಟಿಬಲ್ಗಳ ಗುಣಲಕ್ಷಣಗಳನ್ನು ಹೊಂದಿದ್ದು, ಕನ್ವರ್ಟಿಬಲ್ಗಳನ್ನು ಜೋಡಿಸಿ ಡಿಟ್ಯಾಚೇಬಲ್ ಕೀಬೋರ್ಡ್ಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸುವಾಗ, ಕನ್ವರ್ಟಿಬಲ್ಗಳ ಲಕ್ಷಣಕ್ಕೆ ಸಮನಾಗಿ ಕೆಲಸ ಮಾಡುತ್ತದೆ. ಡಿಟ್ಯಾಚೇಬಲ್ ಕೀಬೋರ್ಡ್ಗಳೊಂದಿಗಿರುವ ಹೈಬ್ರಿಡ್ಸ್ಗಳು ಸ್ಲೇಟ್ ಮಾಡೆಲ್ಗಳಲ್ಲಿ ಯಾವುದೇ ಗೊಂದಲವನ್ನುಂಟುಮಾಡುವುದಿಲ್ಲ; ಪರಿಶುದ್ಧ ಸ್ಲೇಟ್ ಮಾಡೆಲ್ಗಳಿಗಾಗಿನ ಡಿಟ್ಯಾಚೇಬಲ್ ಕೀಬೋರ್ಡ್ಗಳು, ಪರಿವರ್ತಕಗಳಂತೆ, ಟ್ಯಾಬ್ಲೆಟ್ಗಳು ಅದರಲ್ಲಿ ಪ್ರವೇಶಿಸಿ ಉಳಿಯಲು ಆವರ್ತಗೊಳ್ಳುವುದಿಲ್ಲ.
== ಸಿಸ್ಟಂ ಸಾಫ್ಟವೇರ್ ==
=== ಆಪಲ್ ===
ಆಕ್ಸಿಯಾಟ್ರಾನ್ 2007 <ref name="modbookRelease">[http://www.tabletpcreview.com/default.asp?newsID=695 ]</ref> ರಲ್ಲಿ ಮ್ಯಾಕ್ವರ್ಲ್ಡ್ ನ್ನು ಪರಿಚಯಿಸಿದ್ದಲ್ಲದೇ ಮಾರುಕಟ್ಟೆಗೆ ಬಿಡುಗಡೆಗೊಂಡನಂತರ, [[ಮಾಡ್ಬುಕ್]] [[Mac OS X]]-ಆಧಾರಿತ ಟ್ಯಾಬ್ಲೆಟ್ ಕಂಪ್ಯೂಟರ್ ಎನ್ನುವ ಆಪಲ್ [[ಮ್ಯಾಕ್ ಬುಕ್]] ನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರ್ಪಡಿಸಿದನು. ಮಾಡ್ಬುಕ್ ಕೈಬರವಣಿಗೆ ಮತ್ತು ಭಂಗಿಗಳ ಗುರುತಿಸುವಿಕೆಗಾಗಿ ಆåಪಲ್ನ [[ಇಂಕ್ವೆಲ್ನ್ನು]] ಬಳಸುವುದಲ್ಲದೇ, [[ವ್ಯಾಕೋಮ್ನಿಂದ]] ಡಿಜಿಟೈಸೇಷನ್ ಹಾರ್ಡ್ವೇರ್ನ್ನು ಬಳಸುತ್ತದೆ. ಇಂಟಿಗ್ರೇಟೆಡ್ ಟ್ಯಾಬ್ಲೆಟ್ನಲ್ಲಿರುವ ಟಾಕ್ ಟು ಡಿಜಿಟೈಜರ್ ನಿಂದ ಮ್ಯಾಕ್ ಒಎಸ್ ಎಕ್ಸ್ ಪಡೆಯಲು, ಮಾಡ್ಬುಕ್ನಲ್ಲಿ ಟ್ಯಾಬ್ಲೆಟ್ ಮ್ಯಾಜಿಕ್ ಎಂದು ಕರೆಯಲ್ಪಡುವ ಥರ್ಡ್ ಪಾರ್ಟಿ ಡ್ರೈವರ್ನ್ನು ಒದಗಿಸಲಾಗಿದೆ; ವ್ಯಾಕೊಮ್ ಈ ಸಾಧನಕ್ಕೆ ಯಾವುದೇ ಡ್ರೈವರ್ ಸಪೋರ್ಟ್ ಒದಗಿಸುವುದಿಲ್ಲ.
=== ಲಿನಕ್ಸ್ ===
ಫ್ರಂಟ್ಪಾತ್ನಿಂದ ಅಳವಡಿಸಲ್ಪಟ್ಟ ಲಿನಕ್ಸ್ ಟ್ಯಾಬ್ಲೆಟ್ನ ಒಂದು ಪ್ರಾರಂಭಿಕ ಅಳವಡಿಕೆಯೇ [[ಪ್ರೋ ಗೇರ್]]. ಪ್ರೋಗೇರ್ನಲ್ಲಿ ಟ್ರಾನ್ಸ್ಮೆಟಾ ಚಿಪ್ ಮತ್ತು ಒಂದು ರೆಸಿಸ್ಟಿವ್ ಡಿಜಿಟೈಝರ್ನ್ನು ಬಳಸಲಾಗಿದೆ.
ಪ್ರಾರಂಭದಲ್ಲಿ ಈ ಪ್ರೋಗೇರ್ ಸ್ಲ್ಯಾಕ್ವೇರ್ ಲಿನಕ್ಸ್ನ ವರ್ಷನ್ನಲ್ಲಿ ಬಂದಿತು, ಆದರೆ ತದನಂತರ ಅದನ್ನು ವಿಂಡೋಸ್ 98 ನೊಂದಿಗೆ ಕೊಂಡುಕೊಳ್ಳಲಾಯಿತು. ಯಾಕೆಂದರೆ, ಈ ಕಂಪ್ಯೂಟರ್ಗಳು ಸಾಮಾನ್ಯ ಉದ್ದೇಶಿತ [[IBM PC ಕಾಂಪ್ಯಾಟಿಬಲ್]] ಯಂತ್ರಗಳಾಗಿವೆ, ಅವುಗಳು ಅನೇಕ ರೀತಿಯ ಆಪರೇಟಿಂಗ್ ಸಿಸ್ಟಂಗಳನ್ನು ಚಾಲನೆ ಮಾಡುತ್ತವೆ. ಆದ್ದಾಗ್ಯೂ, ಈ ಸಾಧನವನ್ನು ಹೆಚ್ಚು ಸಮಯದವರೆಗೆ ಮಾರಾಟ ಮಾಡುವಂತಿಲ್ಲ ಮತ್ತು ಫ್ರಂಟ್ ಪಾತ್ ಈ ಸಾಧನದ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತದೆ. ಅನೇಕ ಟಚ್ಸ್ಕ್ರೀನ್ ಸಬ್-ನೋಟ್ಬುಕ್ ಕಂಪ್ಯೂಟರ್ಗಳು ಸಣ್ಣ ಕಸ್ಟಮೈಸೇಷನ್ನೊಂದಿಗೆ ಲಿನಕ್ಸ್ನ ಅನೇಕ ಡಿಸ್ಟ್ರಿಬ್ಯೂಷನ್ಗಳಲ್ಲಿ ಯಾವುದನ್ನಾದರೂ ಚಾಲನೆ ಮಾಡಬಹುದೆಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು.
[[ಎಕ್ಸ್.ಆರ್ಗ್]] ಈಗ ವ್ಯಾಕೊಮ್ ಡ್ರೈವರ್ಗಳ ಮೂಲಕ ಸ್ಕ್ರೀನ್ ರೊಟೇಷನ್ ಮತ್ತು ಟ್ಯಾಬ್ಲೆಟ್ ಇನ್ಪುಟ್ಗಳಿಗೆ ಸಪೋರ್ಟ್ ಮಾಡುವುದಲ್ಲದೇ, [[Qt]] ಆಧಾರಿತ [[ಕ್ಯುಟೋಪಿಯಾ]] ಮತ್ತು [[GTK +]] ಆಧಾರಿತ [[ಇಂಟರ್ನೆಟ್ ಟ್ಯಾಬ್ಲೆಟ್ OS]] ಅವೆರಡರಿಂದಲೂ ಹ್ಯಾಂಡ್ರೈಟಿಂಗ್ ಮಾನ್ಯತೆಯ ಸಾಫ್ಟ್ವೇರ್ಗಳಿಗೂ ಸಪೋರ್ಟ್ ಮಾಡುತ್ತದೆ ಮತ್ತು ಭವಿಷ್ಯದ ಬೆಳವಣಿಗೆಗೆ ಮುಕ್ತವಾದ ಮೂಲ ವ್ಯವಸ್ಥೆಯನ್ನು ಒದಗಿಸುವ ಖಾತರಿಯನ್ನು ಒದಗಿಸುತ್ತದೆ.
ಲಿನಕ್ಸ್ನಲ್ಲಿರುವ ಓಪನ್ ಸೋರ್ಸ್ ನೋಟ್ ಟೇಕಿಂಗ್ ಸಾಫ್ಟವೇರ್ [[ಕ್ಸರ್ನಲ್]] (PDF ಫೈಲ್ ಆನಟೇಷನ್ಗೆ ಸಹಾಯಕವಾಗುವ), ಗೌರ್ನಲ್ (ಗ್ನೋಮ್ ಆಧಾರಿತವಾದ ಒಂದು ನೋಟ್ ಟೇಕಿಂಗ್ ಅಪ್ಲಿಕೇಶನ್) ಮತ್ತು ಜಾವಾ ಆಧಾರಿತ [[ಜರ್ನಾಲ್]] (ಬಿಲ್ಟ್ ಇನ್ ಫಂಕ್ಷನ್ ಹ್ಯಾಂಡ್ರೈಟಿಂಗ್ ಮಾನ್ಯತೆಗೆ ಸಹಕರಿಸುವ) ಗಳಂತಹ ಅಪ್ಲಿಕೇಷನ್ಗಳನ್ನು ಒಳಗೊಂಡಿದೆ. ಮೇಲೆ ತಿಳಿಸಿದ ಸಾಫ್ಟವೇರ್ನ ಅನ್ವೇಷಣೆಗಿಂತ ಮೊದಲು, ಅನೇಕ ಬಳಕೆದಾರರು ಆನ್ ಸ್ಕ್ರೀನ್ ಕೀಬೋರ್ಡ್ಗಳನ್ನೇ ಅವಲಂಬಿಸಬೇಕಾಗಿತ್ತು ಮತ್ತು [[ಡ್ಯಾಷರ್]] ನಂತಹ ಆಲ್ಟರ್ನೇಟಿವ್ ಟೆಕ್ಸ್ಟ್ ಇನ್ಪುಟ್ ವಿಧಾನಗಳನ್ನು ಅವಲಂಬಿಸಬೇಕಾಗಿತ್ತು. ಸೆಲ್ ರೈಟರ್, ಹ್ಯಾಂಡ್ರೈಟಿಂಗ್ ಮಾನ್ಯತೆಯ, ಏಕೈಕ ಪ್ರೋಗ್ರಾಂ ಲಭ್ಯವಿದ್ದು,ಇದರಲ್ಲಿ ಬಳಕೆದಾರರು ಗ್ರಿಡ್ನಲ್ಲಿ ಅಕ್ಷರಗಳನ್ನು ಪ್ರತ್ಯೇಕವಾಗಿ ಬರೆಯಬೇಕಾಗುತ್ತದೆ.
ಲಿನಕ್ಸ್ ಆಧಾರಿತ ಅನೇಕ ಒ ಎಸ್ ಪ್ರಾಜೆಕ್ಟ್ಗಳು ಟ್ಯಾಬ್ಲೆಟ್ PCಗಳಿಗಾಗಿ ಮೀಸಲಾಗಿವೆ. ಮಾಯೆಮೋ, ಡೇಬಿಯನ್ ಲಿನಕ್ಸ್ ಆಧಾರಿತ ಗ್ರಾಫಿಕಲ್ ಯೂಸರ್ ಎನ್ವಿರಾನ್ಮೆಂಟ್ ಇದನ್ನು ನೋಕಿಯಾ ಇಂಟರ್ನೆಟ್ ಟ್ಯಾಬ್ಲೆಟ್ ಸಾಧನಗಳಿಗಾಗಿ(N770, N800, N810 & N900) ಅಭಿವೃದ್ಧಿಪಡಿಸಲಾಗಿದೆ. ಅದು ಈಗ 5ನೇ ಪೀಳಿಗೆಯಲ್ಲಿದೆಯಲ್ಲದೇ, ವಿಸ್ತೃತ ವಿನ್ಯಾಸಗಳ ಅಪ್ಲಿಕೇಷನ್ಗಳಲ್ಲಿ ಅಧಿಕೃತ ಮತ್ತು ಯೂಸರ್ ಸಪೋರ್ಟೆಡ್ ಸಂಪುಟಗಳಲ್ಲಿ ಲಭ್ಯವಾಗಿದೆ. ಉಬುಂಟು ನೆಟ್ಬುಕ್ ರಿಮಿಕ್ಸ್ ಎಡಿಷನ್ನಂತೆ, ಇಂಟೆಲ್ ಸ್ಪಾನ್ಸರ್ಡ್ ಮೋಬ್ಲಿನ್ ಪ್ರಾಜೆಕ್ಟ್, ಇವೆರಡೂ ಕೂಡ ಟಚ್ಸ್ಕ್ರೀನ್ ಹೊಂದಿದ್ದು, ಅವುಗಳ ಯೂಸರ್ ಇಂಟರ್ಫೇಸ್ಗಳಿಗೆ ಇಂಟಿಗ್ರೇಟೆಡ್ ಸಪೋರ್ಟ್ ನೀಡುತ್ತವೆ.
ಇವೆಲ್ಲವುಗಳೂ ಕೂಡ ಓಪನ್ ಸೋರ್ಸ್ಗಳಾಗಿದ್ದರೂ ಕೂಡ, ಅವುಗಳು ಉಚಿತವಾಗಿ ಲಭ್ಯವಾಗುವುದಲ್ಲದೇ, ಟ್ಯಾಬ್ಲೆಟ್ PC ಡಿಸೈನ್ಗಳಿಗೆ ಅನುರೂಪವಾದ ಸಾಧನಗಳಿಗೆ ಅಳವಡಿಸಲು ಅಥವಾ ಅವುಗಳನ್ನು ನಿರ್ವಹಿಸಲು ಅನುಕೂಲವಾಗುತ್ತವೆ.
ಟ್ಯಾಬ್ಲೆಟ್ ಕಿಯೋಸ್ಕ್ ಪ್ರಸ್ತುತವಾಗಿ ಹೈಬ್ರಿಡ್ ಡಿಜಿಟೈಝರ್/ಟಚ್ ಡಿವೈಸ್ ರನ್ನಿಂಗ್ ಓಪನ್SUSE ಲಿನಕ್ಸ್. ಈ ಗುಣಲಕ್ಷಣಗಳೊಂದಿಗೆ ಲಿನಕ್ಸ್ ಗೆ ಸಹಾಯಮಾಡಲು ಇದು ಮೊದಲ ಸಾಧನವಾಗಿತ್ತು.
=== ಮೈಕ್ರೋಸಾಫ್ಟ್ ===
ವಿಂಡೋಸ್ 7 ಟಚ್ ಕೆಪಾಬಿಲಿಟಿಯು [[ಮೈಕ್ರೋಸಾಫ್ಟ್ ಸರ್ಫೇಸ್]] ತಂತ್ರಜಾÕನಗಳಿಂದ ರಚಿಸಲ್ಪಟ್ಟಿದೆ. ಇದೊಂದು ಸೂಚಕ ಮತ್ತು ಟಚ್ ಸೆಂಟ್ರಿಕ್ UI ಎನ್ಹ್ಯಾನ್ಸ್ಮೆಂಟ್ ಆಗಿದ್ದು ಈಗಿನ ಹೆಚ್ಚಿನ ಟಚ್ ಕಂಪ್ಯೂಟರ್ಗಳಲ್ಲಿ ಇದು ಕೆಲಸ ನಿರ್ವಹಿಸುತ್ತದೆ. [[ವಿಂಡೋಸ್ XP ಟ್ಯಾಬ್ಲೆಟ್ PC ಎಡಿಷನ್]].<ref>{{Citation
| last =
| first =
| coauthors =
| title =MSDN: Windows XP Tablet PC Edition: Tablet PC: An Overview
| work =
| pages =
| language =
| publisher =Microsoft
| date =2004-08-24
| url = http://users.erols.com/rwservices/pens/biblio05.html#Microsoft04a
| accessdate = 2008-09-04}}</ref><ref>{{Citation
| last =
| first =
| coauthors =
| title = Windows XP Tablet PC Edition: Tablet PC: An Overview
| work =
| pages =
| language =
| publisher = Microsoft
| date = 2002-06-01
| url = http://www.itxcgc.com/images/Brochures/Microsoft/TabletPCOverview.pdf
| accessdate = 2008-09-04
| archive-date = 2008-07-19
| archive-url = https://web.archive.org/web/20080719105920/http://www.itxcgc.com/images/Brochures/Microsoft/TabletPCOverview.pdf
| url-status = dead
}}</ref> ಒಳಗೊಂಡಂತೆ, ಟ್ಯಾಬ್ಲೆಟ್ ತಂತ್ರಜಾÕನದ ಚರಿತ್ರೆಯನ್ನು ಈ ವಿಂಡೋಸ್ ಹೊಂದಿದೆ. ಟ್ಯಾಬ್ಲೆಟ್ PC ಎಡಿಷನ್ ಇದು ವಿಂಡೋಸ್ ಎಕ್ಸ್ ಪಿ ಪ್ರೊಫೆಷನಲ್ನ ಸೂಪರ್ಸೆಟ್ ಆಗಿದ್ದು, ಆಲ್ಟರ್ನೇಟ್ ಟೆಕ್ಸ್ಟ್ ಇನ್ಪುಟ್ ([[ಟ್ಯಾಬ್ಲೆಟ್ PC ಇನ್ಪುಟ್ ಪ್ಯಾನೆಲ್]]) ಮತ್ತು ಟ್ಯಾಬ್ಲೆಟ್ PC ಸ್ಪೆಸಿಫಿಕ್ ಹಾರ್ಡ್ವೇರ್ಗಳಿಗೆ ಸಪೋರ್ಟ್ ಮಾಡಲು ಬೇಸಿಕ್ ಡ್ರೈವರ್ಗಳನ್ನು ಒಳಗೊಂಡು ಟ್ಯಾಬ್ಲೇಟ್ ಫಂಕ್ಷನಾಲಿಟಿಯ ಭಿನ್ನತೆಯನ್ನು ಹೊಂದಿದೆ. ಟ್ಯಾಬ್ಲೆಟ್ PC ಎಡಿಷನ್ನ್ನು ಅಳವಡಿಸಲು, ಟ್ಯಾಬ್ಲೆಟ್ ಡಿಜಿಟೈಝರ್ ಅಥವಾ ಟಚ್ ಸ್ಕ್ರೀನ್ ಡಿವೈಸ್, ಮತ್ತು ಹಾರ್ಡ್ವೇರ್ ಕಂಟ್ರೋಲ್ ಬಟನ್ಗಳನ್ನೊಳಗೊಂಡಂತೆ, [[ಕಂಟ್ರೋಲ್- ಆಲ್ಟ್- ಡಿಲೇಟ್]] ಶಾರ್ಟ್ ಕಟ್ ಬಟನ್, ಸ್ಕ್ರೋಲಿಂಗ್ ಬಟನ್ಗಳು, ಮತ್ತು ಕನಿಷ್ಠ ಪಕ್ಷ ಒಂದು ಯೂಸರ್ ಕನ್ಫಿಗರೇಬಲ್ ಅಪ್ಲಿಕೇಶನ್ ಬಟನ್ಗಳ ಅಗತ್ಯವಿರುತ್ತದೆ.
ಯುನೈಟೆಡ್ ಸ್ಟೇಟ್ಸ್ನ ಕೆಲವೇ ಕೆಲವು ಹೈಸ್ಕೂಲ್ಗಳು ಪ್ರತಿ ವಿದ್ಯಾರ್ಥಿಗಳಿಗಾಗಿ ಈ ಟ್ಯಾಬ್ಲೆಟ್ PC ಗಳನ್ನು ಬಳಸುತ್ತವೆ.
ವಿಂಡೋಸ್ XP ಗಾಗಿನ ಸರ್ವೀಸ್ ಪ್ಯಾಕ್ 2, ಇದು ಟ್ಯಾಬ್ಲೆಟ್ PC ಎಡಿಷನ್ 2005 ಮತ್ತು ಫ್ರೀ ಅಪ್ಗ್ರೇಡ್ನ್ನು ಒಳಗೊಂಡಿದೆ. ಈ ವರ್ಷನ್ ಸುಧಾರಿತ ಹ್ಯಾಂಡ್ರೈಟಿಂಗ್ ಮಾನ್ಯತೆಯನ್ನು ತಂದಿತಲ್ಲದೇ, ಮತ್ತು ಇನ್ಪುಟ್ ಪ್ಯಾನೆಲ್ನ್ನು ಸುಧಾರಿಸಿತು. ಇನ್ಪುಟ್ ಪ್ಯಾನೆಲ್ ಇದನ್ನು ಇತರ ಅಪ್ಲಿಕೇಶನ್ಗಳಿಗಾಗಿ ಸ್ಪೀಚ್ ರೆಕಗ್ನಿಷನ್ ಸೇವೆಗಳನ್ನು ವಿಸ್ತರಿಸಲು(ಇನ್ಪುಟ್ ಮತ್ತು ಕರೆಕ್ಷನ್) ಪರಿಷ್ಕರಿಸಲಾಯಿತು.
ವಿಂಡೋಸ್ ವಿಸ್ತಾದ ಯಶಸ್ಸಿನಿಂದಾಗಿ, ಟ್ಯಾಬ್ಲೆಟ್ PC ಫಂಕ್ಷನಾಲಿಟಿಯು ಹೆಚ್ಚು ಸಮಯದವರೆಗೆ ಈ ಪ್ರತ್ಯೇಕ ಎಡಿಷನ್ನ ಅವಶ್ಯಕತೆಯು ಬೇಕಾಗುವುದಿಲ್ಲ. ಹೋಮ್ ಬೇಸಿಕ್ ಮತ್ತು ಸ್ಟಾರ್ಟರ್ ಎಡಿಷನ್ಗಳನ್ನು ಹೊರತಾಗಿ, ಈ ಟ್ಯಾಬ್ಲೆಟ್ PC ಸಪೋರ್ಟ್ ವಿಂಡೋಸ್ ವಿಸ್ತಾದ ಎಲ್ಲಾ ಎಡಿಷನ್ಗಳಿಗಾಗಿ ರಚಿಸಲ್ಪಟ್ಟಿದೆ. ಒಂದು ವೇಳೆ, ಇನ್ಪುಟ್ ಡಿವೈಸ್ ಡಿಜಿಟರ್, ಟಚ್ ಸ್ಕ್ರೀನ್, ಅಥವಾ ರೆಗ್ಯೂಲರ್ ಮೌಸ್ ಇದ್ದರೂ ಕೂಡ, ಇದು ಯಾವುದೇ ಕಂಪ್ಯೂಟರ್ ರನ್ನಿಂಗ್ ವಿಸ್ತಾಗಳಿಗೆ ಹ್ಯಾಂಡ್ರೈಟಿಂಗ್ ಮಾನ್ಯತೆ, ಇಂಕ್ ಕಲೆಕ್ಷನ್,<ref>[http://msdn.microsoft.com/en-us/library/ms701180(VS.85).aspx MSDN] Ink collection</ref> ಮತ್ತು ಪೂರಕ ಇನ್ಪುಟ್ ವಿಧಾನಗಳನ್ನು ವಿಸ್ತರಿಸುತ್ತದೆ. ಹಾಗೆಯೇ ವಿಸ್ತಾವು, ಮಲ್ಟಿ ಟಚ್ ಫಂಕ್ಷನ್ಗಳು ಮತ್ತು ಸೂಚನೆಗಳು (ಮುಖ್ಯವಾಗಿ [[ಮೈಕ್ರೋಸಾಫ್ಟ್ ಸರ್ಫೆಸ್]] ವರ್ಶನ್ ಆಫ್ ವಿಸ್ತಾಗಾಗಿ ಅಭಿವೃದ್ಧಿಪಡಿಸಿದ) ಮತ್ತು ಮಲ್ಟಿ ಟಚ್ ಟ್ಯಾಬ್ಲೆಟ್ಗಳ ಬಿಡುಗಡೆಯೊಂದಿಗೆ ಈಗ ಸಾರ್ವಜನಿಕರಿಗೆ ಕೂಡ ಬಳಕೆಯಾಗುತ್ತಿದೆ. ಅಟೋಮ್ಯಾಟಿಕ್ ಹ್ಯಾಂಡ್ರೈಟಿಂಗ್ ಕಲಿಕಾ ಸಾಧನದಂತೆ, ಹ್ಯಾಂಡ್ರೈಟಿಂಗ್ ರೆಕಗ್ನಿಷನ್ ಪರ್ಸನಲೈಸೇಷನ್ ಸಾಧನದ ಪರಿಚಯದೊಂದಿಗೆ, ವಿಂಡೋಸ್ ವಿಸ್ತಾವು, ಸುಧಾರಿತ ಹ್ಯಾಂಡ್ರೈಟಿಂಗ್ ಮಾನ್ಯತೆಯ ಫಂಕ್ಷನಾಲಿಟಿಯನ್ನು ಮುಖ್ಯವಾಗಿ ಇನ್ನಷ್ಟು ಸುಧಾರಿಸಿತು.
ಸ್ಟಾರ್ಟರ್ ಎಡಿಷನ್ನ್ನು ಹೊರತುಪಡಿಸಿ, ಟ್ಯಾಬ್ಲೆಟ್ ಫಂಕ್ಷನಾಲಿಟಿಯು ವಿಂಡೋಸ್ 7 ಎಲ್ಲಾ ಎಡಿಷನ್ಗಳಲ್ಲಿ ಲಭ್ಯವಿರುತ್ತದೆ. ಅದು ಹ್ಯಾಂಡ್ರಿಟನ್ ಮ್ಯಾಥ್ ಎಕ್ಸ್ಪ್ರೆಷನ್ಸ್ ಫಾರ್ಮುಲಾಗಳನ್ನು ಮಾನ್ಯಮಾಡುವಂತಹ ಹೊಸ ಮ್ಯಾಥ್ ಇನ್ಪುಟ್ ಪ್ಯಾನಲ್ನ್ನು ಪರಿಚಯಿಸಿತಲ್ಲದೇ, ಇತರ ಕಾರ್ಯಕ್ರಮಗಳೊಂದಿಗೆ ಕೂಡ ಸಂಯೋಜನೆಗೊಳ್ಳುತ್ತದೆ. ಹಾಗೆಯೇ ವಿಂಡೋಸ್ 7, ಅತೀ ಬೇಗನೆ, ಹೆಚ್ಚು ಸ್ಪಷ್ಟ, ಮತ್ತು ಪೂರ್ವ ಏಷ್ಯಾದ ಬರವಣಿಗೆ ವ್ಯವಸ್ಥೆಯನ್ನು ಒಳಗೊಂಡಂತೆ, ಹೆಚ್ಚಿನ ಭಾಷೆಗಳಿಗೆ ಹೊಂದಿಕೆಯಾಗುವಂತೆ, ಈ ಪೆನ್ ಇನ್ಪುಟ್ ಮತ್ತು ಹ್ಯಾಂಡ್ರೈಟಿಂಗ್ ರೆಕಗ್ನಿಷನ್ನ್ನು ಪ್ರಮುಖವಾಗಿ ಸುಧಾರಿಸಿತು. ವಿಶಿಷ್ಟ ಶಬ್ದಭಂಡಾರದೊಂದಿಗೆ (ಮೆಡಿಕಲ್ ಮತ್ತು ತಾಂತ್ರಿಕ ಶಬ್ದಗಳು) ಪರ್ಸನಲೈಸ್ಡ್ ಕಸ್ಟಮ್ ಡಿಕ್ಷನರಿಗಳು ಸಹಕರಿಸುವುದಲ್ಲದೇ, ನೋಟ್ ಟೇಕಿಂಗ್ ಪ್ರಕ್ರಿಯೆಯನ್ನು ಹೆಚ್ಚು ತ್ವರಿತಗೊಳಿಸಲು, ಟೆಕ್ಸ್ಟ್ ಪ್ರಿಡಿಕ್ಷನ್ ಇನ್ಪುಟ್ ಪ್ರಕ್ರಿಯೆಗಳನ್ನು ಹೆಚ್ಚು ವೇಗವಾಗಿ ನಡೆಯುವಂತೆ ಕೂಡ ಸಹಕರಿಸುತ್ತದೆ. ಮೌಸ್ನಂತೆಯೇ, ನಿಮ್ಮ ಬೆರಳುಗಳನ್ನು ಬಳಸಿ ಟಚ್ ಗೆಸ್ಚರ್ಗಳಿಂದ ಹೆಚ್ಚು ಸುಧಾರಿತ ರೀತಿಯ ಪ್ರತಿಕ್ರಿಯೆಯನ್ನು ಸಬಲಗೊಳಿಸಲು, ಮಲ್ಟಿ ಟಚ್ ತಂತ್ರಜಾÕನ ಕೆಲವೊಂದು ಟ್ಯಾಬ್ಲೆಟ್ PC ಗಳಲ್ಲಿ ಕೂಡ ಲಭ್ಯವಾಗಿದೆ.<ref>http://www.microsoft.com/windows/windows-7/features/tablet-pc.aspx</ref> ಇಂತಹ ಕೆಲವೊಂದು ಪ್ರಗತಿಗಳ ಹೊರತಾಗಿಯೂ, ಒಎಸ್ನ ಟ್ಯಾಬ್ಲೆಟ್ ಫಂಕ್ಷನ್ಗಳಲ್ಲಿ ಕೆಲವೊಂದು ಸಮಸ್ಯೆಗಳು ಉದ್ಭವಾಗುತ್ತವೆ, ಉದಾಹರಣೆಗೆ, ಟಚ್ ಸ್ಕ್ರೀನ್ ಡ್ರೈವರ್ಸ್ಗಳು ಟಚ್ ಇನ್ಪುಟ್ ಡಿವೈಸ್ಗಳ ಬದಲಾಗಿ, ಪಿಎಸ್/2 ಮೌಸ್ ಇನ್ಪುಟ್ ಎಂದು ಗುರುತಿಸಲ್ಪಡುತ್ತವೆ. ಅಂತಹ ಸಂದರ್ಭಗಳಲ್ಲಿ ಟ್ಯಾಬ್ಲೆಟ್ ಫಂಕ್ಷನ್ಗಳು ಫಂಕ್ಷನಾಲಿಟಿಯಲ್ಲಿ ಲಭ್ಯವಾಗದಿರಬಹುದು ಅಥವಾ ಸಂಪೂರ್ಣವಾಗಿ ನಿರ್ಬಂಧಿಸಲ್ಪಡಬಹುದು.
== ವಿಂಡೋಸ್ ಅಪ್ಲಿಕೇಷನ್ಸ್ ==
ಫ್ಲ್ಯಾಟ್ಫಾರ್ಮನಲ್ಲಿ ಲಭ್ಯವಾಗಿರುವ ಫಾರ್ಮ್ ಫ್ಯಾಕ್ಟರ್ ಮತ್ತು ಫಂಕ್ಷನ್ಗಳಿಗಾಗಿನ ಟ್ಯಾಬ್ಲೆಟ್ PC ಕ್ಯಾಟರ್ಗಳಿಗಾಗಿ ಅಪ್ಲಿಕೇಷನ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಡಾಕ್ಯುಮೆಂಟ್ ಅಥವಾ ಇಂಟರ್ಫೇಸ್ನಲ್ಲಿ,ಪೆನ್- ಫ್ರೆಂಡ್ಲಿ ಯೂಸರ್ ಇಂಟರ್ಫೇಸ್ ಮತ್ತು /ಅಥವಾ ನೇರವಾಗಿ ಹ್ಯಾಂಡ್ ರೈಟ್ ಮಾಡಲು ಸಮರ್ಥವಾಗುವಂತೆ, ಅಪ್ಲಿಕೇಷನ್ಗಳ ಅನೇಕ ನಮೂನೆಗಳು ಸಂಯೋಜನೆಗೊಳ್ಳುತ್ತವೆ.
ಅಪ್ಲಿಕೇಷನ್ಗಳ ಸಂಕ್ಷಿಪ್ತ ವಿವರಣೆಯು ಈ ಕೆಳಗಿನವುಗಳನ್ನು ಒಳಗೊಂಡಿದೆ.
;ಎಕ್ಸ್ಪೀರಿಯನ್ಸ್ ಪ್ಯಾಕ್
* ಇಂಕ್ ಡೆಸ್ಕ್ಟಾಪ್: ಆಕ್ಟಿವ್ ಡೆಸ್ಕ್ಟಾಪ್ ಕಂಟ್ರೋಲ್ ಇದು ಬಳಕೆದಾರನು ಬ್ಯಾಕ್ಗ್ರೌಂಡ್ನಲ್ಲಿ ಕೆಲಸ ನಿರ್ವಹಿಸಲು ಮತ್ತು ಡೆಸ್ಕ್ಟಾಪ್ನಲ್ಲಿ ನೇರವಾಗಿ ಬರೆಯಲು ಅನುಕೂಲವಾಗುವಂತೆ ವಿನ್ಯಾಸಿಸಲ್ಪಟ್ಟಿದೆ.
* ಸ್ನಿಪ್ಪಿಂಗ್ ಟೂಲ್: ಸ್ಕ್ರೀನ್ ಕ್ಯಾಪ್ಚರ್ ಅಪ್ಲಿಕೇಷನ್ ಇದು ಸ್ಕ್ರೀನ್ನ ಭಾಗ ಆಯ್ಕೆಮಾಡಲು ಟ್ಯಾಬ್ಲೆಟ್ ಪೆನ್ಗೆ ಅವಕಾಶ ನೀಡುತ್ತದೆ, ನಂತರ ಅದನ್ನು ಟಿಪ್ಪಣಿ ಮಾಡುವುದಲ್ಲದೇ, ಫೈಲ್ನಂತೆ ಸೇವ್ ಮಾಡುವುದು ಅಥವಾ ಈಮೇಲ್ನಲ್ಲಿ ಕಳುಹಿಸಲು ಅವಕಾಶ ನೀಡುತ್ತದೆ.
* ಇಂಕ್ ಆರ್ಟ್: ಪೈಂಟಿಂಗ್ ಅಪ್ಲಿಕೇಷನ್ನನ್ನು ಮೂಲತಃ ಆಂಬಿಯೆಂಟ್ ಡಿಸೈನ್ನಿಂದ ಆರ್ಟ್ರೇಜ್ ಎಂದು ವಿನ್ಯಾಸಿಸಲಾಯಿತಲ್ಲದೇ, ಅದು ಟ್ಯಾಬ್ಲೆಟ್ PC ಬಳಕೆದಾರರಿಗೆ ಬಿಡುಗಡೆಮಾಡುವುದಕ್ಕಾಗಿ ಮೈಕ್ರೋಸಾಫ್ಟ್ಗೆ ಮಾತ್ರ ಸೀಮಿತವಾಗಿತ್ತು.
* ಇಂಕ್ ಕ್ರಾಸ್ವರ್ಡ್: ಪೇಪರ್ ಕ್ರಾಸ್ವರ್ಲ್ಡ್ ಪಝಲ್ನ ಅನುಭವವನ್ನು ಟ್ಯಾಬ್ಲೆಟ್ PCನಲ್ಲಿ ಪ್ರತಿಬಿಂಬಿಸಲು ಕ್ರಾಸ್ವರ್ಡ್ ಅಪ್ಲಿಕೇಷನ್ನನ್ನು ಅಭಿವೃದ್ಧಿಪಡಿಸಲಾಯಿತು.
* ಮೀಡಿಯಾ ಟ್ರಾನ್ಸ್ಫರ್: ಒಂದೇ ನೆಟ್ವರ್ಕ್ನ ಕಂಪ್ಯೂಟರ್ಗಳಿಂದ ಮ್ಯೂಸಿಕ್, ಚಿತ್ರಗಳು, ಮತ್ತು ವೀಡಿಯೋಗಳನ್ನು ಡೌನ್ಲೋಡ್ ಮಾಡಿಕೊಳ್ಳಲು, ಸಿಂಕ್ರೋನೈಸೇಷನ್ ಯುಟಿಲಿಟಿಯನ್ನು ವಿನ್ಯಾಸಿಸಲಾಗಿದೆ.
;ಎಜುಕೇಷನ್ ಪ್ಯಾಕ್
* [http://www.microsoft.com/windowsxp/downloads/tabletpc/educationpack/overview3.mspx ಇಂಕ್ ಫ್ಲ್ಯಾಶ್ ಕಾರ್ಡ್ಸ್]: [[ಫ್ಲ್ಯಾಶ್ ಕಾರ್ಡ್]] ಅಪ್ರೋಚ್ನ್ನು ಬಳಸಿಕೊಂಡು ಮೆಮೊರೈಸೇಷನ್ಗೆ ಸಹಕರಿಸಲು, ಬಳಕೆದಾರರಿಗೆ ಅವರದೇ ಆದ ಫ್ಲ್ಯಾಶ್ಕಾರ್ಡ್ಗಳಲ್ಲಿ ಹ್ಯಾಂಡ್ ರೈಟ್ ಮಾಡಲು ಮತ್ತು ಅವುಗಳನ್ನು ಪುನಃ ಸ್ಲೈಡ್ ಶೋನಲ್ಲಿ ಪ್ರದರ್ಶಿಸಲು ಅನುಕೂಲವಾಗುವಂತೆ, ಈ ಅಪ್ಲಿಕೇಷನ್ನ್ನು ವಿನ್ಯಾಸಿಸಲಾಗಿದೆ.
* [http://www.microsoft.com/windowsxp/downloads/tabletpc/educationpack/overview4.mspx ಇಕ್ವೇಷನ್ ರೈಟರ್]: ಇದೊಂದು ಹ್ಯಾಂಡ್ರಿಟನ್ ಗಣಿತ ಸಮೀಕರಣಗಳನ್ನು ಇತರ ದಾಖಲೆಗಳಿಗೆ ಪೇಸ್ಟಿಂಗ್ ಮಾಡಲು, ಕಂಪ್ಯೂಟರ್ ಆಧಾರಿತ ಇಮೇಜ್ಗಳನ್ನಾಗಿ ಪರಿವರ್ತಿಸುವ ವಿಶೇಷ ಮಾನ್ಯತಾ ಸಾಧನವಾಗಿದೆ.
* [http://www.microsoft.com/windowsxp/downloads/tabletpc/educationpack/overview2.mspx ಗೋ ಬೈಂಡರ್ ಲೈಟ್]: ಆåಜಿಲೆಕ್ಸ್ ಲ್ಯಾಬ್ನಿಂದ ಅಭಿವೃದ್ಧಿಪಡಿಸಲಾದ ಸಾಂಸ್ಥಿಕ ಮತ್ತು ನೋಟ್ ಟೇಕಿಂಗ್ ಅಪ್ಲಿಕೇಷನ್ ಆಗಿದೆ.
* [http://www.microsoft.com/windowsxp/downloads/tabletpc/educationpack/overview6.mspx ಹೆಕ್ಸಿಕ್ ಡಿಲಕ್ಸ್]: ವಿಶೇಷ ಸೂಚಕವಿರುವ ಟ್ಯಾಬ್ಲೆಟ್ PCಯೊಂದಿಗಿನ ಒಂದು ಆಟವಾಗಿದ್ದು, ಟ್ಯಾಬ್ಲೆಟ್ನ್ನು ಸುಲಭವಾಗಿ ಮತ್ತು ಉತ್ತಮವಾಗಿ ಬಳಸಲು ಸಮರ್ಥವಾಗುವಂತೆ ಸಹಕರಿಸುತ್ತದೆ.
== ಟ್ಯಾಬ್ಲೆಟ್ಸ್ಗೆ ಪ್ರತಿಯಾಗಿ ಸಾಂಪ್ರದಾಯಿಕ ನೋಟ್ಬುಕ್ಗಳು ==
ಟ್ಯಾಬ್ಲೆಟ್ PCಗಳ ಪ್ರಯೋಜನಗಳು ಮತ್ತು ದುಷ್ಪರಿಣಾಮಗಳು ಹೆಚ್ಚಿನ ವಸ್ತುನಿಷ್ಠ ಗುಣಲಕ್ಷಣಗಳನ್ನು ಹೊಂದಿವೆ. ಒಬ್ಬ ಬಳಕೆದಾರನ ಅರಿಕೆಯು ನಿರ್ದಿಷ್ಟವಾಗಿ ಇನ್ನೊಬ್ಬ ಬಳಕೆದಾರನಿಗೆ ಅಸಮಾಧಾನವನ್ನುಂಟುಮಾಡಬಹುದು. ಟ್ಯಾಬ್ಲೆಟ್ PC ಫ್ಲ್ಯಾಟ್ಫಾರ್ಮ್ ಬಳಕೆದಾರರ ಸಾಮಾನ್ಯ ಅಭಿಪ್ರಾಯಗಳು ಈ ಕೆಳಗಿನಂತಿವೆ:
==== ಪ್ರಯೋಜನಗಳು ====
* ಹಾಸಿಗೆಯಲ್ಲಿ ಮಲಗಿಕೊಂಡು, ನಿಂತುಕೊಂಡು ಅಥವಾ ಒಂದೇ ಕೈಯಲ್ಲಿ ನಿರ್ವಹಣೆ ಮಾಡುವಂತಹ ಸಂದರ್ಭದಲ್ಲಿ, ಮೌಸ್ ಮತ್ತು ಕೀಬೋರ್ಡ್ಗಳನ್ನು ಬಳಕೆಮಾಡಲು ಹೆಚ್ಚು ಸಹಕಾರಿಯಾಗಿರುವುದಿಲ್ಲ.
* ಕಡಿಮೆ ತೂಕ, ಲೋವರ್ ಪವರ್ ಮಾಡೆಲ್ಗಳು [[ಅಮೆಝಾನ್ ಕಿಂಡಲ್]]ನಂತೆ ಸಾರ್ವತ್ರಿಕ ರೀಡಿಂಗ್ ಡಿವೈಸ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
* ಇಮೇಜ್ ಮ್ಯಾನಿಪ್ಯುಲೇಷನ್, ಅಥವಾ ಮೌಸ್ ಆಧಾರಿತ ಆಟಗಳಂತಹ ನಿರ್ದಿಷ್ಟ ಸಂದರ್ಭಗಳಲ್ಲಿ, ಸಾಂಪ್ರದಾಯಿಕ ರೀತಿಯ ಕೀಬೋರ್ಡ್ ಮತ್ತು ಮೌಸ್ ಅಥವಾ ಟಚ್ ಪ್ಯಾಡ್ ಬಳಕೆಗಿಂತ, ಟಚ್ ಸ್ಕ್ರೀನ್ ವ್ಯವಸ್ಥೆಯು ನ್ಯಾವಿಗೇಷನ್ ಸುಲಭವಾಗುವಂತೆ ಮಾಡುತ್ತದೆ.
* ಡಯಾಗ್ರಾಮ್ಗಳನ್ನು, ಗಣಿತ ಸಂಕೇತಗಳು, ಮತ್ತು ಚಿಹ್ನೆಗಳನ್ನು ಸುಲಭ ಅಥವಾ ಅತೀ ಬೇಗನೆ ದಾಖಲಿಸುವ ಸಾಮರ್ಥ್ಯವನ್ನು ಹೊಂದಿರುವುದು.
* ರಿಯಾಯಿತಿ, ಸೂಕ್ತ ಸಾಫ್ಟ್ವೇರ್ಗಳು, ಯೂನಿವರ್ಸಲ್ ಇನ್ಪುಟ್, ವಿಭಿನ್ನ ಕೀಬೋರ್ಡ್ ಲೋಕಲೈಸೇಷನ್ಗಳಿಗಿಂತ ಮುಕ್ತವಾಗಿದೆ.
* ಕೆಲವೊಂದು ಬಳಕೆದಾರರು, ಸ್ಕ್ರೀನ್ನಲ್ಲಿನ ಪಾಯಿಂಟರ್ಗೆ ನೇರವಾಗಿ ಜೋಡಣೆಗೊಳ್ಳದಿರುವ ಮೌಸ್ ಅಥವಾ ಟಚ್ಪ್ಯಾಡ್ ನ್ನು ಕ್ಲಿಕ್ ಮಾಡುವ ಬದಲು, ನಿರ್ದಿಷ್ಟ ವಿಭಾಗವನ್ನು ಕ್ಲಿಕ್ ಮಾಡಲು ಹೆಚ್ಚು ಸ್ವಾಭಾವಿಕ ಮತ್ತು ಸಂತೋಷಕ್ಕಾಗಿ ಸ್ಟೈಲಸ್ನ್ನು ಬಳಸುತ್ತಾರೆ.
==== ಅನಾನುಕೂಲಗಳು ====
* ದುಬಾರಿ ವೆಚ್ಚ- ಕನ್ವರ್ಟಿಬಲ್ ಟ್ಯಾಬ್ಲೆಟ್ PCಗಳು ಮುಖ್ಯವಾಗಿ ನಾನ್ ಟ್ಯಾಬ್ಲೆಟ್ PCಗಳಿಗಿಂತ ತುಂಬಾ ದುಬಾರಿಯಾಗಿರುವುದಲ್ಲದೇ, ಈ ಪ್ರೀಮಿಯಂ ಇಳಿಮುಖವಾಗುತ್ತಿದೆ ಎಂದು ಭಾವಿಸಲಾಗಿದೆ.<ref>{{Cite web |url=http://news.com.com/Convertibles+The+new+laptop+bling/2100-1044_3-5900655.html |title=Convertibles: The new laptop bling? - CNET News.com |access-date=2012-07-15 |archive-date=2012-07-15 |archive-url=https://archive.is/20120715080342/http://news.com.com/Convertibles+The+new+laptop+bling/2100-1044_3-5900655.html |url-status=live }}</ref>
* ಇನ್ಪುಟ್ ಸ್ಪೀಡ್- ಪ್ರಮುಖವಾಗಿ, ಹ್ಯಾಂಡ್ ರೈಟಿಂಗ್ ಟೈಪಿಂಗ್ಗಿಂತ ನಿಧಾನವಾಗಿದೆ, ಟೈಪಿಂಗ್ [[WPM]]ಗೆ 50-150 ರಷ್ಟು ಹೆಚ್ಚಾದರೆ; [[Slideit]], [[Swype]] ಮತ್ತು ಇತರ ತಂತ್ರಾಂಶಗಳು ಇನ್ಪುಟ್ ನ ಪೂರಕ, ಸ್ಪೀಡರ್ ವಿಧಾನಗಳನ್ನು ಒದಗಿಸಲು ಸಮರ್ಥವಾಗಿವೆ.
* ಸ್ಕ್ರೀನ್ ಮತ್ತು ಹಿಂಜ್ ಡ್ಯಾಮೇಜ್ ರಿಸ್ಕ್- ಒಂದೇ ಫ್ರೇಮ್ನಲ್ಲಿ ರಚಿಸಲ್ಪಟ್ಟರೂ ಕೂಡ, ಟ್ಯಾಬ್ಲೆಟ್ PCಗಳು ಸಾಂಪ್ರದಾಯಿಕ ಲ್ಯಾಪ್ಟ್ಯಾಪ್ಗಳಿಂದ ಹೆಚ್ಚು ನಿರ್ವಹಿಸಲ್ಪಡುತ್ತವೆ; ಇದಕ್ಕೆ ಪೂರಕವಾಗಿ, ಅವುಗಳ ಸ್ಕ್ರೀನ್ಗಳು ಕೂಡ ಇನ್ಪುಟ್ ಡಿವೈಸ್ಗಳಾಗಿ ಬಳಸಲ್ಪಡುತ್ತವೆಯಲ್ಲದೇ, ಇಂಪ್ಯಾಕ್ಟ್ ಮತ್ತು ಮಿಸ್ಯೂಸ್ ಕಾರಣದಿಂದಾಗಿ, ಅವುಗಳಲ್ಲಿ ಸ್ಕ್ರೀನ್ ಡ್ಯಾಮೇಜ್ನ ಅಪಾಯಗಳ ಸಾಧ್ಯತೆ ಹೆಚ್ಚು. ಕನ್ವರ್ಟಿಬಲ್ ಟ್ಯಾಬ್ಲೆಟ್ PCಗಳ ಸ್ಕ್ರೀನ್ ಹಿಂಜ್ ನಾರ್ಮಲ್ ಲ್ಯಾಪ್ ಟಾಪ್ ಸ್ಕ್ರೀನ್ಗಳಂತಲ್ಲದೇ, ಇದು ಎರಡು ಆåಕ್ಸಿಸ್ಗಳಲ್ಲಿ ತಿರುಗಬೇಕಾಗುತ್ತದೆ, ನಂತರದಲ್ಲಿ ಅದು ಅನೇಕ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ (ಡಿಜಿಟೈಝರ್ ಮತ್ತು ವೀಡಿಯೋ ಕೇಬಲ್ಸ್, ಎಂಬೆಡೆಡ್ ವಿಫಿ ಆåಂಟೆನ್ನಾಗಳು ಇತ್ಯಾದಿ) ವೈಫಲ್ಯತೆಗಳು ಹೆಚ್ಚಾಗಲು ಕಾರಣವಾಗುತ್ತದೆ.{{Citation needed|date=April 2010}}
* ಎರ್ಗಾನಾಮಿಕ್ಸ್ – ಸ್ಕ್ರೀನ್ ಸ್ಲೇಟ್ ಮೋಡಾಗಿ ಮಡಚಲ್ಪಟ್ಟಾಗ, ಟ್ಯಾಬ್ಲೆಟ್ PCಯು ರಿಸ್ಟ್ ರೆಸ್ಟ್ಗೆ(ಮಣಿಕಟ್ಟಿನ ವಿಶ್ರಾಂತಿಗೆ) ಅವಕಾಶ ನೀಡುವುದಿಲ್ಲ. ಇದಕ್ಕೆ ಪೂರಕವಾಗಿ, ಬಳಕೆದಾರನು ಬರೆಯುವಾಗ ಅವರ ತೋಳನ್ನು ನಿರಂತರವಾಗಿ ಆಚೀಚೆ ಚಲಿಸಬೇಕಾಗುತ್ತದೆ.{{Citation needed|date=December 2009}}
* ನಿಧಾನ ಪ್ರಕ್ರಿಯೆ- ಟ್ಯಾಬ್ಲೆಟ್ PCಗಳು ಅವುಗಳ ದರ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಲ್ಯಾಪ್ಟಾಪ್ಗಳಿಗಿಂತ ನಿಧಾನ ಗತಿಯ ಗಣಕೀಕರಣ ಮತ್ತು ಗ್ರಾಫಿಕಲ್ ಪ್ರಕ್ರಿಯೆಯ ಪ್ರವೃತ್ತಿಯನ್ನು ತೋರಿಸುತ್ತವೆ. ಹೆಚ್ಚಿನ ಟ್ಯಾಬ್ಲೆಟ್ PCಗಳು ಪ್ರತ್ಯೇಕ ಗ್ರಾಫಿಕ್ ಕಾರ್ಡ್ಗಳ ಬದಲಾಗಿ ನಿರ್ದಿಷ್ಟವಾಗಿ ನಿರೂಪಿತ ಗ್ರಾಫಿಕ್ ಪ್ರಾಸೆಸ್ಸರ್ಗಳಿಂದ ಸಿದ್ಧಗೊಳಿಸಿ ರಚಿಸಲ್ಪಟ್ಟಿವೆ. ಜನವರಿ 2010, ರಲ್ಲಿ ಅಂತಹ ಪ್ರತ್ಯೇಕ ಗ್ರಾಫಿಕ್ಸ್ ಕಾರ್ಡ್ಗಳನ್ನು ಹೊಂದಿದ್ದ ಒಂದೇ ಒಂದು ಟ್ಯಾಬ್ಲೆಟ್ PC ಅಂದರೆ ಅದು [[ಎಚ್ ಪಿ ಟಚ್ಸ್ಮಾರ್ಟ್]] tm2, ಅದು [[ATI]] ಮೊಬಿಲಿಟಿ ರೇಡಿಯಾನ್ HD4550 ವನ್ನು ಹೆಚ್ಚುವರಿ ಆಯ್ಕೆಯಾಗಿ ಹೊಂದಿತ್ತು. ಆಕಸ್ಮಿಕವಾಗಿ, ಅದರ ಕೋರ್ 2 ಡ್ಯೂ ಪ್ರಾಸೆಸ್ಸರ್ 1.8 GHz. ರಷ್ಟು ಗರಿಷ್ಠ ಕ್ಲಾಕ್ ಸ್ಪೀಡ್ನ್ನು ಹೊಂದಿದೆ. [http://store.shopfujitsu.com/fpc/Ecommerce/PrdBridge.jsp?pclass=T5 Fujitsu LifeBook T5010]{{Dead link|date=ಜೂನ್ 2023 |bot=InternetArchiveBot |fix-attempted=yes }} ಎಂಬ ಈ ಆಪ್ಷನ್ಗಳು CPUಗಳಿಗೆ 2.8 GHz, ರವರಷ್ಟು ಸ್ಪೀಡ್ ಸಾಮರ್ಥ್ಯವನ್ನು ನೀಡುತ್ತದೆ.ಆದರೆ ಎಲ್ಲವೂ ಕೂಡ ಕೇವಲ ಇಂಟಿಗ್ರೇಟೆಡ್ ಗ್ರಾಫಿಕ್ಸಗಳಿಗೆ{{Citation needed|date=April 2010}} ಸಪೋರ್ಟ್ ಆಗುತ್ತವೆ.
== ವೈಶಿಷ್ಟ್ಯಗಳು ==
ರೆಗ್ಯುಲರ್ ಲ್ಯಾಪ್ಟಾಪ್ನಲ್ಲಿ ಕಂಡುಬರುವ ಗುಣಲಕ್ಷಣಗಳಿಗೆ ಪೂರಕವಾಗಿ, ಟ್ಯಾಬ್ಲೆಟ್ PC ಗಳು ಕೂಡ ಈ ಗುಣಲಕ್ಷಣಗಳನ್ನು ಒದಗಿಸುತ್ತವೆ:
* ಕೆಪಾಸಿಟಿವ್ ಕಾಂಟ್ಯಾಕ್ಟ್ ತಂತ್ರಜ್ಞಾನವು ಇನ್ಪುಟ್ನ್ನು. ಗುರುತಿಸುವುದಕ್ಕಾಗಿ, ಸಿಸ್ಟಂಗೆ ಯಾವುದೇ ಪ್ರಮುಖ ಒತ್ತಡವಿಲ್ಲದೇ, ಸ್ಕ್ರೀನ್ನಲ್ಲಿನ ಬೆರಳುಗಳನ್ನು ಗ್ರಹಿಸಬಲ್ಲುದು.<ref name="autogenerated1">{{Cite web |url=http://news.thomasnet.com/fullstory/811421 |title=Tablet PC offers capacitive touch sensing capability., Dell, Inc |access-date=2010-06-28 |archive-date=2010-02-11 |archive-url=https://web.archive.org/web/20100211151556/http://news.thomasnet.com/fullstory/811421 |url-status=dead }}</ref>
* ಪಾಮ್ ರೆಕಗ್ನಿಷನ್, ಇದು ಅನುದ್ದೇಶಕರ ಪಾಮ್ಸ್ಗಳು ಅಥವಾ ಪೆನ್ಸ್ ಇನ್ಪುಟ್ಗಳಿಗೆಅಡ್ಡಿಪಡಿಸುವ ಇತರ ಸಂಪರ್ಕಗಳನ್ನು ತಡೆಯುತ್ತದೆ.<ref name="autogenerated1"/>
* [[ಮಲ್ಟಿ ಟಚ್]] ಕೆಪಾಬಿಲಿಟಿಗಳು, ಮಲ್ಟಿಪಲ್ ಏಕಕಾಲಿಕ ಫಿಂಗರ್ಟಚ್ಗಳನ್ನು ಗುರುತಿಸುವುದಲ್ಲದೇ, ಆನ್ ಸ್ಕ್ರೀನ್ ಅಂಶಗಳ<ref>{{Cite web |url=http://jkontherun.blogs.com/jkontherun/2007/12/so-what-is-mult.html |title=jkOnTheRun:So what is multi-touch? |access-date=2010-06-28 |archive-date=2011-03-21 |archive-url=https://web.archive.org/web/20110321093941/http://jkontherun.blogs.com/jkontherun/2007/12/so-what-is-mult.html |url-status=dead }}</ref> ವಿಸ್ತರಿತ ಕೈಚಳಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತದೆ.
== ಜನಪ್ರಿಯ ಮಾಡೆಲ್ಗಳು ==
{{Refimprove|section|date=December 2006}}
{{See|Comparison of tablet PCs}}
ಪ್ರಮುಖ ಟ್ಯಾಬ್ಲೆಟ್ PC ತಯಾರಕರೆಂದರೆ [[ಏಸರ್]], [[AIS]], [[ಆಪಲ್ Inc.]], [[Asus]], [[ಬೊಸಾನ್ವಾ]], [[ಎಲೆಕ್ಟ್ರೋವಯ]], [[ಫುಜಿಸ್ತು]], [[ಗೇಟ್ವೇ, Inc.]],[http://www.gnetcanada.com G-NET]{{Dead link|date=ಫೆಬ್ರವರಿ 2026 |bot=InternetArchiveBot |fix-attempted=yes }}, [[ಹೆವ್ಲೆಟ್-ಪ್ಯಾಕರ್ಡ್]], [[IBM]], [[ಲೆನೊವೊ ಗ್ರೂಪ್]], [[LG ಎಲೆಕ್ಟ್ರಾನಿಕ್ಸ್]], [http://www.ruggedtabletpc.com ಮೊಬೈಲ್ಡಿಮ್ಯಾಂಡ್], [[ಮೋಶನ್ ಕಂಪ್ಯೂಟಿಂಗ್]], [[NEC]], [[ಪ್ಯಾನಾಸಾನಿಕ್]], [http://www.quaduro.com ಕ್ವಾಡುರೊ-ಸಿಸ್ಟಮ್ಸ್], [[ಟ್ಯಾಬ್ಲೆಟ್ಕಿಯೋಸ್ಕ್]] ಮತ್ತು [[ತೊಷಿಬಾ]].
ಜನಪ್ರಿಯ ಮಾದರಿಗಳಲ್ಲಿ ಒಳಗಿನವು ಸೇರಿವೆ:
==== ಹಲಗೆ ====
* [http://www.aispro.com/TabletPC/ruggedTabletPC.asp AIS Rugged Tablet PC] {{Webarchive|url=https://web.archive.org/web/20100802034421/http://www.aispro.com/TabletPC/ruggedTabletPC.asp |date=2010-08-02 }}
* ಆರ್ಕೋಸ್ 9
* [[ಆಪಲ್ iPad]]
* [[Axiotron Modbook]]
* COWON Q5W
* [http://www.scribblertabletpc.com Electrovaya Scribbler SC4100] {{Webarchive|url=https://web.archive.org/web/20161007085612/http://scribblertabletpc.com/ |date=2016-10-07 }}
* ಫುಜಿತ್ಸು ಸ್ಟೈಲಿಸ್ಟಿಕ್ ST5010
* ಫುಜಿತ್ಸು ಸ್ಟೈಲಿಸ್ಟಿಕ್ ST5111
* ಫುಜಿತ್ಸು ಸ್ಟೈಲಿಸ್ಟಿಕ್ ST5112
* ಫುಜಿತ್ಸು ಸ್ಟೈಲಿಸ್ಟಿಕ್ ST6012
* ಫುಜಿತ್ಸು ಸ್ಟೈಲಿಸ್ಟಿಕ್ ST1010
* [http://www.gnetcanada.com/rugged-industrial-computers-gnet_rugtab104.asp G-NET Rugged Tablet PC] {{Webarchive|url=https://web.archive.org/web/20081225060038/http://www.gnetcanada.com/rugged-industrial-computers-gnet_rugtab104.asp |date=2008-12-25 }}
* JLT8404 Field Tablet PC
* [http://www.ruggedtabletpc.com/rugged-tablet-pc/xtablet-t7000-rugged-tablet-pc.php MobileDemand xTablet T7000 Rugged Tablet PC]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.ruggedtabletpc.com/rugged-tablet-pc/xtablet-t8700-rugged-tablet-pc.php MobileDemand xTablet T8700 Rugged Tablet PC] {{Webarchive|url=https://web.archive.org/web/20100117062206/http://www.ruggedtabletpc.com/rugged-tablet-pc/xtablet-t8700-rugged-tablet-pc.php |date=2010-01-17 }}
* Motion M1200, M1300, M1400, LE-Series, LS800, LE 1700
* [http://www.motioncomputing.com/products/tablet_pc_J34.asp Motion J3400 Semi-Rugged Tablet PC] {{Webarchive|url=https://web.archive.org/web/20100819162025/http://www.motioncomputing.com/products/tablet_pc_J34.asp |date=2010-08-19 }}
* [http://www.motioncomputing.com/products/tablet_pc_c5.asp Motion C5 Mobile Clinical Assistant Tablet PC] {{Webarchive|url=https://web.archive.org/web/20100526104532/http://www.motioncomputing.com/products/tablet_pc_c5.asp |date=2010-05-26 }}
* [http://www.motioncomputing.com/products/tablet_pc_f5.asp Motion F5 Rugged Tablet PC] {{Webarchive|url=https://web.archive.org/web/20100527193939/http://www.motioncomputing.com/products/tablet_pc_f5.asp |date=2010-05-27 }}
* [http://www.paceblade.com/site/DesktopDefault.aspx?tabindex=2&tabid=3&cat=20&grp=2010 PaceBlade SlimBook 200 Series Tablet PCs] {{Webarchive|url=https://web.archive.org/web/20091030201515/http://www.paceblade.com/site/DesktopDefault.aspx?tabindex=2&tabid=3&cat=20&grp=2010 |date=2009-10-30 }}
* ಪ್ಯಾನಾಸಾನಿಕ್ ಟಫ್ಬುಕ್ 08
* [http://www.quaduro.com Quadpad Slate Style Tablet PC]
* [http://www.quaduro.com Quadpad 3G HSDPA Tablet PC]
* [[ಸ್ಯಾಮ್ಸಂಗ್ Q1]] (Q1 Ultra)
* [http://www.tabletkiosk.com/products/sahara/i400s_pp.asp TabletKiosk Sahara Slate PC i400 series Tablet PCs] {{Webarchive|url=https://web.archive.org/web/20100526224930/http://www.tabletkiosk.com/products/sahara/i400s_pp.asp |date=2010-05-26 }}
* [http://www.tabletkiosk.com/products/sahara/a230t_overview.asp TabletKiosk Sahara NetSlate a230T Tablet PC] {{Webarchive|url=https://web.archive.org/web/20101130144329/http://tabletkiosk.com/products/sahara/a230t_overview.asp |date=2010-11-30 }}
* [http://www.tabletkiosk.com/products/eo/a7330_overview.asp TabletKiosk eo a7330 Ultra-Mobile Tablet PCs] {{Webarchive|url=https://web.archive.org/web/20101130144532/http://tabletkiosk.com/products/eo/a7330_overview.asp |date=2010-11-30 }}
* [http://www.tabletkiosk.com/products/eo/a7230X_overview.asp TabletKiosk eo TufTab Rugged Ultra-Mobile Tablet PCs] {{Webarchive|url=https://web.archive.org/web/20101130142116/http://tabletkiosk.com/products/eo/a7230X_overview.asp |date=2010-11-30 }}
* ಎಕ್ಸ್ಪ್ಲೋರ್ ಟೆಕ್ನಾಲಜೀಸ್
* Viliv S5
* Viliv X70
==== ಕನ್ವರ್ಟಿಬಲ್ ====
* Acer TravelMate C100/C200/C210/C300/C310
* Asus R1F
* Asus R1E
* ASUS Eee PC T91 (8.9" Netbook)
* ಅವೆರಾಟೆಕ್ C3500 ಶ್ರೇಣಿ
* ಡೈಲಾಗ್ [[ಫ್ಲೈಬುಕ್]] V5
* [[ಡೆಲ್ ಲ್ಯಾಟಿಟ್ಯೂಡ್]] XT/XT2
* ಫುಜಿತ್ಸು ಲೈಫ್ಬುಕ್ P1610, P1620, P1630 (8.9" ಅಲ್ಟ್ರಾಪೋರ್ಟಬಲ್)
* ಫುಜಿತ್ಸು ಲೈಫ್ಬುಕ್ T4020, T4210, T4220 (12.1" ತೆಳ್ಳನೆಯ ಮತ್ತು ಹಗುವವಾದ, ವ್ಯವಹಾರಿಕ)
* ಫುಜಿತ್ಸು ಲೈಫ್ಬುಕ್ T1010 (13.3" ತೆಳ್ಳನೆಯ ಮತ್ತು ಹಗುವವಾದ, ಬಳಕೆದಾರ)
* ಫುಜಿತ್ಸು ಲೈಫ್ಬುಕ್ T2010, T2020 (12.1" ಅಲ್ಟ್ರಾಪೋರ್ಟಬಲ್, ವ್ಯವಹಾರ)
* ಫುಜಿತ್ಸು ಲೈಫ್ಬುಕ್ T4310 (12.1" ತೆಳ್ಳನೆಯ ಮತ್ತು ಹಗುವವಾದ, ಬಳಕೆದಾರ)
* ಫುಜಿತ್ಸು ಲೈಫ್ಬುಕ್ T4410 (12.1" ತೆಳ್ಳನೆಯ ಮತ್ತು ಹಗುವವಾದ, ವ್ಯವಹಾರ)
* ಫುಜಿತ್ಸು ಲೈಫ್ಬುಕ್ T5010 (13.3"ತೆಳ್ಳನೆಯ ಮತ್ತು ಹಗುವವಾದ, ವ್ಯವಹಾರಿಕ)
* ಫುಜಿತ್ಸು ಲೈಫ್ಬುಕ್ T900 (13.3" ತೆಳ್ಳನೆಯ ಮತ್ತು ಹಗುವವಾದ, ವ್ಯವಹಾರಿಕ)
* ಫುಜಿತ್ಸು ಲೈಫ್ಬುಕ್ U810, U820, U2010 (5.6" ಅಲ್ಟ್ರಾಪೋರ್ಟಬಲ್)
* ಗೇಟ್ವೇ C-140X (aka S-7235/E-295C)
* ಗೇಟ್ವೇ C-120X (aka S-7125C/E-155C)
* HP TC4200/TC4400
* HP ಕಾಂಪ್ಯಾಕ್ 2710p
* [[HP ಎಲೈಟ್ಬುಕ್]] 2700 ಶ್ರೇಣಿ
* HP ಪೆವಿಲಿಯನ್ tx1000 ಶ್ರೇಣಿ
* HP ಪೆವಿಲಿಯನ್ tx2000 ಶ್ರೇಣಿ
* HP ಪೆವಿಲಿಯ tx2500 ಶ್ರೇಣಿ
* HP ಟಚ್ಸ್ಮಾರ್ಟ್ tx2 ಶ್ರೇಣಿ
* HP ಟಚ್ಸ್ಮಾರ್ಟ್ tm2 ಶ್ರೇಣಿ
* ಕೊಹ್ಜಿನ್ಶಾ SX3 (8.9" ನೆಟ್ಬುಕ್)
* [[ಲೆನೊವೊ]] [[ಥಿಂಕ್ಪ್ಯಾಡ್]] X41 ಟ್ಯಾಬ್ಲೆಟ್
* ಲೆನೊವೊ ಥಿಂಕ್ಪ್ಯಾಡ್ X60 Tablet ("X60t"ರಂತೆ ಗೊತ್ತಿರುವ ಜನಪ್ರಿಯತೆ)
* ಲೆನೊವೊ ಥಿಂಕ್ಪ್ಯಾಡ್ X61 ಟ್ಯಾಬ್ಲೆಟ್ (12.1" ಮಲ್ಟಿವ್ಯೂ/ಮಲ್ಟಿಟಚ್ XGA (1024x768) TFT)
* ಲೆನೊವೊ ಥಿಂಕ್ಪ್ಯಾಡ್ X200 ಟ್ಯಾಬ್ಲೆಟ್ (12.1" [[WXGA]] (1280 x 800)) ಸೆಪ್ಟೆಂಬರ್ 2008ರಂದು ಬಿಡುಗಡೆಯಾದದ್ದು)
* LG XNote C1
* LG XNote P100(C1 Upgrade Model)
* LG LT-20-47CE
* MDG ಫ್ಲಿಪ್ ಟಚ್ಸ್ಕ್ರೀನ್ ನೆಟ್ಬುಕ್ (8.9" ಟ್ಯಾಬ್ಲೆಟ್ ನೆಟ್ಬುಕ್)[http://www.mdg.ca/flip MDG ಫ್ಲಿಪ್]{{Dead link|date=ಮಾರ್ಚ್ 2026 |bot=InternetArchiveBot |fix-attempted=yes }}
* ಪ್ಯಾನಾಸಾನಿಕ್ ಟಫ್ಬುಕ್ 19
* [[ತೊಷಿಬಾ ಪೋರ್ಟೇಜ್]] 3500/3505
* ತೊಷಿಬಾ ಪೋರ್ಟೇಜ್ M200
* ತೊಷಿಬಾ ಪೋರ್ಟೇಜ್ M400/405/700/750
* ತೊಷಿಬಾ ಪೋರ್ಟೇಜ್ R400/405
* [[ತೊಷಿಬಾ ಸ್ಯಾಟಲೈಟ್]] R10/R15/R20/R25
* [[ತೊಷಿಬಾ ಟೆಕ್ರಾ]] M4/M7
* Viliv S7
* Viliv S10
==== ಹೈಬ್ರಿಡ್ ====
* [[ಕಾಂಪ್ಯಾಕ್ TC1000]]
* [[HP ಕಾಂಪ್ಯಾಕ್ TC1100]]
* ಲೆನೊವೊ ಐಡಿಯಾಪ್ಯಾಡ್ U1 (ಬರುವ ಬೇಸಿಗೆ 2010ರಲ್ಲಿ)
* ಟ್ಯಾಟಂಗ್ ಟ್ಯಾಂಗಿ
* ಕಾಂಪ್ಯಾಕ್ ಕಾನ್ಸರ್ಟೊ
== ಅಪ್ಲಿಕೇಷನ್ ಸಾಫ್ಟ್ವೇರ್ ==
* [http://www.comfort-software.com/on-screen-keyboard.html Comfort On-Screen Keyboard] - ಟ್ಯಾಬ್ಲೆಟ್ PCಗಾಗಿ ಆಧುನಿಕ ಆನ್-ಸ್ಕ್ರೀನ್ ಕೀಬೋರ್ಡ್
* [[ಮೈಕ್ರೊಸಾಫ್ಟ್ ವಿಂಡೋಸ್ ಜರ್ನಲ್]]
* [[ಮೈಕ್ರೊಸಾಫ್ಟ್ ಆಫೀಸ್ ಒನ್ನೋಟ್]]
* [[ಐನ್ಸ್ಟೀನ್ ಟೆಕ್ನಾಲಜೀಸ್ ಟ್ಯಾಬ್ಲೆಟ್ ಎನಾನ್ಸ್ಮೆಂಟ್ಸ್ ಫಾರ್ ಔಟ್ಲುಕ್]]
* [[ಫ್ಯೂಚರ್ವೇರ್ ಸಾಫ್ಟ್ವೇರ್]]ನಿಂದ ಪ್ರಕಟವಾದ ಫ್ಯೂಚರ್ವೇರ್ ಸ್ಮಾರ್ಟ್ಸ್ಕೆಚ್ ಡ್ರಾಯಿಂಗ್ ಪ್ರೋಗ್ರಾಂ
* [[GO ಕಾರ್ಪೊರೇಶನ್]]
* [[ಅಜಿಲಿಕ್ಸ್ ಗೊಬೈಂಡರ್]]
* [[ಮೊಬಿಲಿಸ್ - ಪ್ರೊಟೆಕ್ಟಿಸ್ ರೇಂಜ್]]
* [[ಎವರ್ನೋಟ್]]
* [http://research.microsoft.com/en-us/um/redmond/projects/inkseine/ InkSeine] {{Webarchive|url=https://web.archive.org/web/20100723164105/http://research.microsoft.com/en-us/um/redmond/projects/inkseine/ |date=2010-07-23 }}: ಪ್ರೋಟೋಟೈಪ್ ಟ್ಯಾಬ್ಲೆಟ್ GUI/ಇಂಟರ್ಫೇಸ್ - ಮೈಕ್ರೊಸಾಫ್ಟ್ ರೀಸರ್ಚ್
* [http://cmap.ihmc.us/conceptmap.html IHMC CmapTools] - ಒಂದು ಫ್ರೀ [[ಕಾನ್ಸೆಪ್ಟ್ ಮ್ಯಾಪಿಂಗ್]] ಅಪ್ಲಿಕೇಶನ್
* [[Xournal]] - ಒಂದು ಲೈನಕ್ಸ್ ನೋಟ್ಟೇಕಿಂಗ್ ಅಪ್ಲಿಕೇಶನ್
* ಟ್ಯಾಬ್ಲೆಟ್ PCಗಾಗಿ ಆನ್ಸೈಟ್ ಕಂಪ್ಯಾನಿಯನ್ ಕನ್ಸ್ಟ್ರಕ್ಷನ್ ಸಾಫ್ಟ್ವೇರ್
* [http://users.erols.com/rwservices/pens/biblio10.html#FreehandSystems06 MusicPad Pro]: ಮ್ಯೂಸಿಕ್ರೀಡರ್ - ಎಲೆಕ್ಟ್ರಾನಿಕ್ ಮ್ಯೂಸಿಕ್ ಸ್ಟ್ಯಾಂಡ್ - ಟ್ಯಾಬ್ಲೆಟ್ PCಯ ಮೇಲೆ ಶೀಟ್ ಮ್ಯೂಸಿಕ್ ಡಿಸ್ಪ್ಲೇ
* [http://www.eonsystems.net/documentor.htm Documentor] {{Webarchive|url=https://web.archive.org/web/20100318053058/http://eonsystems.net/documentor.htm |date=2010-03-18 }}: ಹೆಲ್ತ್ಕೇರ್ ವೃತ್ತಿನಿರತರಿಗಾಗಿ ಡಾಕ್ಯುಮೆಂಟೇಷನ್ ಇಂಜಿನ್
* [[ಸ್ಟಾರ್ಡ್ರಾ]] ಕಂಟ್ರೋಲ್ - [[ರೂಮ್ ಆಟೊಮೇಷನ್]] / [[ಹೋಮ್ ಸಿನೆಮಾ]] ಕಂಟ್ರೋಲ್ ಸಿಸ್ಟಂ
== ಸ್ಕ್ರೀನ್ ಸೈಜ್ ಟ್ರೆಂಡ್ಸ್ ==
ಹಲವು ಟ್ಯಾಬ್ಲೆಟ್ PC ತಯಾರಕರು 12" ವೈಡ್ಸ್ಕ್ರೀನ್ ಫಾರ್ಮ್ಯಾಟ್ನೊಂದಿಗೆ 1280x800 ಪಿಕ್ಸೆಲ್ಗಳ ರೆಸೊಲ್ಯೂಶನ್ ಅನ್ನು ಸಾಮಾನ್ಯ ಅಳತೆಯನ್ನಾಗಿ ಮಾಡಿಕೊಂಡಿದ್ದಾರೆ. ಫುಜಿತ್ಸು T5010 ಅತಿದೊಡ್ಡ 13.3" ಡಿಸ್ಪ್ಲೇ ಹೊಂದಿದೆ, ಆದರೆ ಅದು 1280x800 ಪಿಕ್ಸೆಲ್ ರೆಸೊಲ್ಯೂಶನ್ನಲ್ಲಿ ಕಾರ್ಯನಿರ್ವಹಿಸುತ್ತದೆ<ref>{{Cite web |url=http://www.fujitsu.com/au/services/technology/pc/notebooks/tseries/t5010/specs.html |title=ಆರ್ಕೈವ್ ನಕಲು |access-date=2010-06-28 |archive-date=2010-02-18 |archive-url=https://web.archive.org/web/20100218214425/http://www.fujitsu.com/au/services/technology/pc/notebooks/tseries/t5010/specs.html |url-status=dead }}</ref>. ಏಸರ್ ಟ್ರ್ಯಾವೆಲ್ಮೇಟ್ C300 1024x768ನಲ್ಲಿ 14.1" ಸ್ಕ್ರೀನ್ ಹೊಂದಿದೆ.
ಹಗುರವಾಗಿರುವುದಕ್ಕೆ ಬೇಕಾದಂತಹ ಪವರ್, ಗಾತ್ರ ಮತ್ತು ತೂಕಕ್ಕೆ 12" ಫಾರ್ಮ್ ಫ್ಯಾಕ್ಟರ್ ಉತ್ತಮವಾದದ್ದು. ಆದಾಗ್ಯೂ ಗ್ರಾಹಕರಿಂದ ದೊಡ್ಡ ಗಾತ್ರದ ಟ್ಯಾಬ್ಲೆಟ್ PC ಗಳಿಗೆ ಕೆಲವು ಬೇಡಿಕೆಗಳಿವೆ, ದೊಡ್ಡ ಸ್ಕ್ರೀನ್ಗಳು ತೂಕವನ್ನು ಹೆಚ್ಚಿಸುತ್ತವೆ ಮತ್ತು ಟ್ಯಾಬ್ಲೆಟ್ PCಗಳಿಗೆ ಗಾತ್ರ ಹೆಚ್ಚಿಸುತ್ತದೆ. ಮತ್ತು ಆದ್ದರಿಂದ ಹೆಚ್ಚು ಪವರ್, ಹೆಚ್ಚು ತೂಕದ ಬ್ಯಾಟರಿಗಳು ಅಥವಾ ಕಡಿಮೆ ಸಮಯ ಇರುವಂತಹ ಬ್ಯಾಟರಿಗಳು ಬೇಕಾಗುತ್ತವೆ.
== ಇತಿಹಾಸ ==
{{Prose|date=July 2009}}
ಟ್ಯಾಬ್ಲೆಟ್ PC ಮತ್ತು ಸಂಬಂಧಿತ ವಿಶೇಷ ಆಪರೇಟಿಂಗ್ ಸಾಫ್ಟ್ವೇರ್ [[ಪೆನ್ಕಂಪ್ಯೂಟಿಂಗ್]] ಟೆಕ್ನಾಲಜಿಗೆ ಉದಾಹರಣೆ, ಮತ್ತು ಹಾಗೇ ಟ್ಯಾಬ್ಲೆಟ್ -ಆಧಾರಿತ PCಗಳ ಅಭಿವೃದ್ಧಿಯು ಐತಿಹಾಸಿಕ ಮೂಲವನ್ನು ಹೊಂದಿದೆ.
ಈಗಿನ ವಾಣಿಜ್ಯ ಉತ್ಪನ್ನಗಳೊಂದಿಗೆ ಮಾತ್ರ ಪರಿಚಿತರಾಗಿರುವ ಜನರಿಗೆ ಈ ಮೂಲದ ಆಳ ಸ್ವಲ್ಪ ಅಚ್ಚರಿ ಉಂಟುಮಾಡುತ್ತದೆ. ಉದಾಹರಣೆಗೆ, ಕೈಬರಹಕ್ಕಾಗಿ ಬಳಸಿದ ಎಲೆಕ್ಟ್ರಾನಿಕ್ ಟ್ಯಾಬ್ಲೆಟ್ಗಾಗಿ ಮೊದಲ ಪೇಟೆಂಟ್ಗೆ ಅನುಮತಿ ದೊರೆತದ್ದು 1988ರಲ್ಲಿ.<ref name="Gray">{{Citation
| last =Gray
| first =Elisha
| coauthors =
| title =Telautograph
| work =
| pages =
| language =
| publisher =United States Patent 386,815 (full image)
| date =1888-07-31
| url = http://www.freepatentsonline.com/386815.pdf
| accessdate = }}</ref>
ಕೈಬರಹದ ಅಕ್ಷರಗಳನ್ನು ಗುರುತಿಸುವ ಕೈಬರಹದ ಚಲನೆಗಳಿಂದ ವಿಶ್ಲೇಷಿಸುವ ಸಿಸ್ಟಂನ ಮೊದಲ ಪೇಟೆಂಟ್
1915ರಲ್ಲಿ ದೊರೆಯಿತು.<ref name="Goldberg">{{Citation
| last=Goldberg
| first=H.E.
| title = Controller
| publisher=United States Patent 1,117,184 (full image)
| url=http://www.freepatentsonline.com/1117184.pdf
| accessdate =
| date=1915-12-28 }}</ref>
ಕೀಬೋರ್ಡ್ನ ಬದಲಾಗಿ ಕೈಬರಹದ ಅಕ್ಷರಗಳನ್ನು ಗುರುತಿಸುವ ಆಧುನಿಕ ಡಿಜಿಟಲ್ ಕಂಪ್ಯೂಟರ್ ಮೊದಲ ಬಾರಿ ಬಹಿರಂಗವಾಗಿ-ನಿರೂಪಿಸಿದ್ದು 1956ರಲ್ಲಿ.<ref name="Dimond 232–237">{{Citation
| last=Dimond
| first=Tom
| title=Devices for reading handwritten characters
| publisher=Proceedings of Eastern Joint Computer Conference
| pages=232–237
| date=1957-12-01
| url=http://rwservices.no-ip.info:81/pens/biblio70.html#Dimond57
| accessdate=2008-08-23
| archive-date=2012-01-10
| archive-url=https://web.archive.org/web/20120110140037/http://rwservices.no-ip.info:81/pens/biblio70.html#Dimond57
| url-status=dead
}}</ref>
ಹಲವಾರು ಶೈಕ್ಷಣಿಕ ಮತ್ತು ಸಂಶೋಧನೆಯ ಸಿಸ್ಟಂಗಳ ಜೊತೆಗೆ, 1980ರ ಸಮಯದಲ್ಲಿ ವಾಣಿಜ್ಯ ಉತ್ಪನ್ನಗಳ ಹಲವಾರು ಕಂಪನಿಗಳು ಇದ್ದವು: [[ಪೆನ್ಸೆಪ್ಟ್]], [[ಕಮ್ಯುನಿಕೇಷನ್ಸ್ ಇಂಟಲಿಜೆನ್ಸ್ ಕಾರ್ಪೊರೇಷನ್]], ಮತ್ತು ಲೈನಸ್
ಇವುಗಳು ಗುಂಪಿನಲ್ಲಿ ಹೆಚ್ಚು ಪರಿಚಿತವಾದವು. ನಂತರದಲ್ಲಿ, [[GO Corp.]] ಟ್ಯಾಬ್ಲೆಟ್ PCಗಾಗಿ [[ಪೆನ್ಪಾಯಿಂಟ್ OS]] ಆಪರೇಟಿಂಗ್ ಸಿಸ್ಟಂ ಅನ್ನು ಹೊರತಂದಿತು: ಟ್ಯಾಬ್ಲೆಟ್ PC ಆಪರೇಟಿಂಗ್ ಸಿಸ್ಟಂಗೆ ಸಂಬಂಧಿಸಿದಂತೆ ಇತ್ತೀಚಿನ ಕಾನೂನು ಉಲ್ಲಂಘನೆಯ ಮೊಕದ್ದಮೆಯನ್ನು GO ಕಾರ್ಪೊರೇಶನ್ನ ಒಂದು ಪೇಟೆಂಟ್ ಎದುರಿಸುತ್ತಿದೆ.<ref name="Mintz">{{Citation
| last =Mintz
| first =Jessica
| coauthors =
| title =Microsoft to Appeal $367M Patent Ruling
| work =
| pages =
| language =
| publisher =The Associated Press
| date =2008-04-04
| url = http://www.usatoday.com/tech/products/2008-04-04-2507619152_x.htm
| accessdate = 2008-09-04 }}</ref>
ಕೆಳಕಂಡ ಸಮಯದ ಪಟ್ಟಿಯು ಇತಿಹಾಸದ ಕೆಲ ಪ್ರಮುಖ ಘಟನೆಗಳನ್ನು ನೀಡುತ್ತದೆ:
* 1950ಕ್ಕಿಂತ ಮೊದಲೆ
** 1888: ಕೈಬರಹವನ್ನು ತೆಗೆಯಲು ಒಂದು ಎಲೆಕ್ಟ್ರಿಕಲ್ ಸ್ಟೈಲಸ್ ಡಿವೈಸ್ಗಾಗಿ [[ಎಲಿಷಾ ಗ್ರೇ]]ಗೆ [[U.S. ಪೇಟೆಂಟ್]] ದೊರೆಯಿತು.<ref name="Gray"/><ref>{{Citation
| last =Gray
| coauthors =
| title =Telautograph
| work =
| pages =
| language =
| publisher =United States Patent 386,815
| date =1888-07-31
| url =http://rwservices.no-ip.info:81/pens/biblio70.html#Gray1888b
| accessdate =
| archive-date =2012-01-10
| archive-url =https://web.archive.org/web/20120110140037/http://rwservices.no-ip.info:81/pens/biblio70.html#Gray1888b
| url-status =dead
}}</ref>
** 1915: ಸ್ಟೈಲಸ್ನೊಂದಿಗೆ ಕೈಬರಹ ಗುರುತಿಸುವ ಬಳಕೆದಾರನ ಸಂಪರ್ಕಕ್ಕೆ U.S. ಪೇಟೆಂಟ್.<ref name="Goldberg"/><ref>{{Citation
| last=Goldberg
| first=H.E.
| title = Controller
| publisher=United States Patent 1,117,184
| url=http://users.erols.com/rwservices/pens/biblio70.html#GoldbergHE15
| accessdate =
| date=1915-12-28 }}</ref>
** 1942: ಕೈಬರಹ ಸೇರಿಸುವ ಟಚ್ಸ್ಕ್ರೀನ್ಗಾಗಿ U.S. ಪೇಟೆಂಟ್.<ref>{{Citation
| last=Moodey
| first=H.C.
| title = Telautograph System
| date =1942-12-27
| publisher=United States Patent 2,269,599
| url=http://users.erols.com/rwservices/pens/biblio70.html#Moodey40
| accessdate = }}</ref><ref>{{Citation
| last=Moodey
| first=H.C.
| title = Telautograph System
| date =1942-12-27
| publisher=United States Patent 2,269,599 (full image)
| url=http://www.freepatentsonline.com/2269599.pdf
| accessdate = }}</ref>
** 1945: [[ವನ್ನೆವರ್ ಬುಶ್]] ಒಂದು ಪ್ರಬಂಧ [[ಅಸ್ ವಿ ಮೇ ಥಿಂಕ್]]ನಲ್ಲಿ [[ಮೆಮೆಕ್ಸ್]] ಅನ್ನು ಪ್ರಸ್ತಾಪಿಸಿದ, ಕೈಬರಹವನ್ನು ಸೇರಿಸುವುದನ್ನು ಒಳಗೊಂಡ ಒಂದು ಡಾಟಾ ದಾಖಲಿಸುವ ಸಾಧನ.<ref>{{Citation
| last=Bush
| first=Vannevar
| title=As We May Think
| date=1945-07-15
| publisher=The Atlantic Monthly
| url=http://rwservices.no-ip.info:81/pens/biblio70.html#BushV45
| accessdate=
| archive-date=2012-01-10
| archive-url=https://web.archive.org/web/20120110140037/http://rwservices.no-ip.info:81/pens/biblio70.html#BushV45
| url-status=dead
}}</ref>
* 1950ರ ದಶಕಗಳಲ್ಲಿ
** ರಿಯಲ್-ಟೈಮ್ನಲ್ಲಿ ಟಾಮ್ ಡೈಮಂಡ್ ಕೈಬರಹ ಪಠ್ಯವನ್ನು ಗುರುತಿಸುವಂತಹ ಸಾಫ್ಟ್ವೇರ್ ಮತ್ತು ಕಂಪ್ಯೂಟರ್ ಇನ್ಪುಟ್ ಜೊತೆಗೆ ಸ್ಟೈಲೇಟರ್ ಎಲೆಕ್ಟ್ರಾನಿಕ್ ಟ್ಯಾಬ್ಲೆಟ್ ಅನ್ನು ಪ್ರದರ್ಶಿಸಿದನು.<ref name="Dimond 232–237"/>
* 1960ರ ದಶಕದ ಪ್ರಾರಂಭದಲ್ಲಿ
** RAND ಟ್ಯಾಬ್ಲೆಟ್ ಕಂಡುಹಿಡಿದದ್ದು.<ref>{{Citation
| last=
| first=
| title = RAND Tablet
| publisher=
| pages=
| date=1961-09-01
| url=http://users.erols.com/rwservices/pens/biblio70.html#RAND61
| accessdate = }}</ref><ref>{{Citation
| last=
| first=
| title=50 Years of Looking Forward
| publisher=RAND Corporation
| pages=
| date=1998-09-01
| url=http://www.rand.org/publications/randreview/issues/rr.fall.98/50.html
| accessdate=
| archive-date=2009-05-07
| archive-url=https://web.archive.org/web/20090507193627/http://www.rand.org/publications/randreview/issues/rr.fall.98/50.html
| url-status=dead
}}</ref> RAND ಟ್ಯಾಬ್ಲೆಟ್ ಒಂದು ಸ್ಟಯಲೇಟರ್ಗಿಂತ ಉತ್ತಮ ಪರಿಚಿತ, ಆದರೆ ಇದನ್ನು ನಂತರ ಕಂಡುಹಿಡಿಯಲಾಯಿತು.
* 1960ರ ದಶಕದ ಕೊನೆಯಲ್ಲಿ
** [[ಝೆರಾಕ್ಸ್]] PARCನ [[ಅಲನ್ ಕೇ]] ಕೆಲವೊಮ್ಮೆ ಪೆನ್ ಇನ್ಪುಟ್ ಬಳಸುವ, [[ಡೈನಬುಕ್]] ಎಂದು ಕರೆಯಲಾಗುವ ನೋಟ್ಬುಕ್ ಕಂಪ್ಯೂಟರ್ ಅನ್ನು ಪ್ರಸ್ತಾಪಿಸಿದ: ಆದಾಗ್ಯೂ ಈ ಸಾಧನವು ಎಂದಿಗೂ ನಿರ್ಮಾಣವಾಗಲಿಲ್ಲ ಅಥವಾ ಪೆನ್ ಇನ್ಪುಟ್ ಅನ್ನು ಕೈಗೂಡಿಸಲಾಗಲಿಲ್ಲ.
* 1966
** [[ಸೈನ್ಸ್ ಫಿಕ್ಷನ್]] [[ದೂರದರ್ಶನ ದಾರಾವಾಹಿ]] [[Star Trek: The Original Series|ಸ್ಟಾರ್ ಟ್ರೆಕ್]]ನಲ್ಲಿ, ಕ್ರಿವ್ ಸದಸ್ಯರು ದೊಡ್ಡ, ವೆಡ್ಜ್ ಆಕಾರದ ಎಲೆಕ್ಟ್ರಾನಿಕ್ [[ಕ್ಲಿಪ್ಬೋರ್ಡ್]]ಗಳನ್ನು ತೆಗೆದುಕೊಳ್ಳುತ್ತಾರೆ, ಅವನ್ನು ಸ್ಟೈಲಸ್ ಬಳಸಿ ಉಪಯೋಗಿಸುತ್ತಾರೆ.
* 1968
[[ಚಿತ್ರ:2001interview.jpg|thumb|right|2001ರ ಚಿತ್ರದಲ್ಲಿ ವೈರ್ಲೆಸ್ ಟ್ಯಾಬ್ಲೆಟ್ ಸಾಧನ]]
*
** ಚಿತ್ರ ನಿರ್ಮಾಪಕ [[ಸ್ಟ್ಯಾನ್ಲೇ ಕುಬ್ರಿಕ್]] ಅವರು ಚಿತ್ರದಲ್ಲಿ ಒಂದು ಪ್ಲ್ಯಾಟ್ಸ್ಕ್ರೀನ್ ಟ್ಯಾಬ್ಲೆಟ್ ಸಾಧನವು ವೈರ್ಗಳಿಲ್ಲದೆ ವೀಡಿಯೋ ಸ್ಟ್ರೀಮ್ ಅನ್ನು ತೋರಿಸುವ ಹಾಗೆ ರೂಪಿಸಿದ್ದಾರೆ. [[2001: A Space Odyssey]].<ref>http://en.wikipedia.org/wiki/2001_%28film%29</ref>
{{image}}
* 1982
** [[ಮಸ್ಸಾಚುಸೆಟ್ಸ್, ವಾಲ್ತಮ್]]ನ [[ಪೆನ್ಸೆಪ್ಟ್]], ಕೀಬೋರ್ಡ್ ಮತ್ತು ಮೌಸ್ನ ಬದಲಾಗಿ ಕೈಬರಹವನ್ನು ಗುರುತಿಸಲು ಟ್ಯಾಬ್ಲೆಟ್ ಬಳಸುವ ಸಾಮಾನ್ಯ-ಬಳಕೆಯ ಕಂಪ್ಯೂಟರ್ ಟರ್ಮಿನಲ್ ಅನ್ನು ಮಾರುಕಟ್ಟೆಗೆ ತಂದರು.<ref>{{Citation
| last=
| first=
| title=Pencept Penpad (TM) 200 Product Literature
| publisher=Pencept, Inc.
| pages=
| date=1982-08-15
| url=http://rwservices.no-ip.info:81/pens/biblio83.html#Pencept83
| accessdate=
| archive-date=2012-01-11
| archive-url=https://web.archive.org/web/20120111152232/http://rwservices.no-ip.info:81/pens/biblio83.html#Pencept83
| url-status=dead
}}</ref>
** ಕೈಬರಹ ಗುರುತಿಸುವುದನ್ನು ಬಳಸುವಂತಹ ಇನ್ಫೊರೈಟ್ ಪಾಯಿಂಟ್-ಆಫ್-ಸೇಲ್ ಟರ್ಮಿನಲ್ ಮತ್ತು ಚಿಕ್ಕ ಎಲೆಕ್ಟ್ರಾನಿಕ್ ಟ್ಯಾಬ್ಲೆಟ್ ಮತ್ತು ಪೆನ್ ಅನ್ನು ಕ್ಯಾಡ್ರೆ ಸಿಸ್ಟಂ ಮಾರಾಟ ಮಾಡಿತು.<ref>{{Citation
| last=
| first=
| title=Inforite Hand Character Recognition Terminal
| publisher=Cadre Systems Limited, England
| pages=
| date=1982-08-15
| url=http://rwservices.no-ip.info:81/pens/biblio83.html#Inforite82
| accessdate=
| archive-date=2012-01-11
| archive-url=https://web.archive.org/web/20120111152232/http://rwservices.no-ip.info:81/pens/biblio83.html#Inforite82
| url-status=dead
}}</ref>
* 1985
** [[ಪೆನ್ಸೆಪ್ಟ್]]<ref>{{Citation
| last=
| first=
| title = Users Manual for Penpad 320
| publisher= Pencept, Inc.
| pages=
| date=1984-06-15
| url=http://users.erols.com/rwservices/pens/biblio85.html#Pencept84d
| accessdate = }}</ref> ಮತ್ತು CIC<ref>{{Citation
| last=
| first=
| title=Handwriter (R) GrafText (TM) System Model GT-5000
| publisher=Communication Intelligence Corporation
| pages=
| date=1985-01-15
| url=http://rwservices.no-ip.info:81/pens/biblio85.html#CIC85
| accessdate=
| archive-date=2009-11-27
| archive-url=https://web.archive.org/web/20091127064643/http://rwservices.no-ip.info:81/pens/biblio85.html#CIC85
| url-status=dead
}}</ref> ಎರಡೂ PC ಕಂಪ್ಯೂಟರ್ಗಳನ್ನು ಟ್ಯಾಬ್ಲೆಟ್ ಬಳಸುವ ಗ್ರಾಹಕರ ಮಾರುಕಟ್ಟೆಗೆ ನೀಡಿದವು ಮತ್ತು ಕೀಬೋರ್ಡ್ ಮತ್ತು ಮೌಸ್ ಬದಲಿಗೆ ಕೈಬರಹವನ್ನು ಗುರುತಿಸುವಂತದ್ದಾಗಿದೆ. ಆಪರೇಟಿಂಗ್ ಸಿಸ್ಟಂ [[MS-DOS]] ಆಗಿದೆ.
* 1989
** ಟ್ಯಾಬ್ಲೆಟ್-ಟೈಪ್ ಪೋರ್ಟಬಲ್ ಕಂಪ್ಯೂಟರ್ ವಾಣಿಜ್ಯರೂಪದಲ್ಲಿ ಮೊದಲು ಲಭ್ಯವಾದದ್ದು [[ಗ್ರಿಡ್ ಸಿಸ್ಟಮ್ಸ್]]ನ GRiDPad<ref>{{Citation
| last=
| first=
| title=The BYTE Awards: GRiD System's GRiDPad
| publisher=BYTE Magazine, Vol 15. No 1
| pages=285
| date=1990-01-12
| url=http://rwservices.no-ip.info:81/pens/biblio90.html#GridPad90a
| accessdate=
| archive-date=2010-01-25
| archive-url=https://web.archive.org/web/20100125181350/http://rwservices.no-ip.info:81/pens/biblio90.html#GridPad90a
| url-status=dead
}}</ref>, ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಯಿತು. ಇದರ ಆಪರೇಟಿಂಗ್ ಸಿಸ್ಟಂ [[MS-ಡಾಸ್]] ಆಧಾರಿತವಾದದ್ದು.
** ವ್ಯಾಂಗ್ ಲ್ಯಾಬೊರೇಟರೀಸ್ ಫ್ರೀಸ್ಟೈಲ್ ಅನ್ನು ಪರಿಚಯಿಸಿತು. ಫ್ರೀಸ್ಟೈಲ್ ಎನ್ನುವುದು ಒಂದು ಅಪ್ಲಿಕೇಶನ್ ಇದರಿಂದ MS-DOS ಅಪ್ಲಿಕೇಶನ್ನಿಂದ ಸ್ಕ್ರೀನ್ ಕ್ಯಾಪ್ಚರ್ ಮಾಡಬಹುದು, ಮತ್ತು ಬಳಕೆದಾರನು ಧ್ವನಿ ಮತ್ತು ಕೈಬರಹ ಟಿಪ್ಪಣಿಗಳನ್ನು ಸೇರಿಸಬಹುದು. ಟ್ಯಾಬ್ಲೆಟ್ PCಯಂತಹ ಸಿಸ್ಟಂಗಳಿಗೆ ಟಿಪ್ಪಣಿ-ತೆಗೆದುಕೊಳ್ಳುವಂತಹ ಅಪ್ಲಿಕೇಷನ್ಗಳಿಗೆ ಇದು ಮೂಲವಾಗಿತ್ತು.<ref>{{Citation
| last=
| first=
| title= WANG Freestyle demo
| publisher= Wang Laboratories
| pages=
| date= 1989
| url= http://rwservices.no-ip.info:81/pens/images.html#WangFreestyle
| accessdate= 2008-09-22
| archive-date= 2009-02-27
| archive-url= https://web.archive.org/web/20090227044455/http://rwservices.no-ip.info:81/pens/images.html#WangFreestyle
| url-status= dead
}}</ref> ಆಪರೇಟಿಂಗ್ ಸಿಸ್ಟಂ [[MS-DOS]] ಆಗಿತ್ತು
** [http://solutions.us.fujitsu.com/www/content/products/Tablet-PCS/index.php Fujitsu] {{Webarchive|url=https://web.archive.org/web/20101002093249/http://solutions.us.fujitsu.com/www/content/products/Tablet-PCS/index.php |date=2010-10-02 }} ನೊಂದಿಗೆ ಪಾಲುದಾರಿಕೆಯಲ್ಲಿ, ಪೊಕೆಟ್ ಕಂಪ್ಯೂಟರ್ ಕಾರ್ಪೊರೇಶನ್ ಹೊಸ ಪೊಕೆಟ್ PC ಬಿಡುಗಡೆಯನ್ನು ಪ್ರಕಟಿಸಿತು.
* 1991
** ಮೊಮೆಂಟಾ ಪೆನ್ಟಾಪ್ ಬಿಡುಗಡೆಯಾಯಿತು.<ref>{{Citation
| last =Lempesis
| first =Bill
| coauthors =
| title =What's New in Laptops and Pen Computing
| work =
| pages =
| language =
| publisher =Flat Panel Display News
| date =1990-05
| url =http://rwservices.no-ip.info:81/pens/biblio90.html#Momenta90
| accessdate =
| archive-date =2010-01-25
| archive-url =https://web.archive.org/web/20100125181350/http://rwservices.no-ip.info:81/pens/biblio90.html#Momenta90
| url-status =dead
}}</ref>
** [[GO ಕಾರ್ಪೊರೇಶನ್]] [[ಪೆನ್ಪಾಯಿಂಟ್ OS]] ಎಂಬ ಆಪರೇಟಿಂಗ್ ಸಿಸ್ಟಂ ಅನ್ನು ಪ್ರಕಟಿಸಿತು,ಕೈಬರಹ ಗೆಸ್ಚರ್ ಶೇಪ್ಗಳ ಮೂಲಕ ಫೀಚರಿಂಗ್ ನಿಯಂತ್ರಣ ಹೊಂದಿದೆ.<ref>{{Citation
| last=Agulnick
| first=Todd
| title = Control of a computer through a position-sensed stylus
| date =1994-09-13
| publisher=United States Patent 5,347,295
| url=http://users.erols.com/rwservices/pens/biblio95.html#Agulnick94
| accessdate = }}</ref><ref>{{Citation
| last=Agulnick
| first=Todd
| title = Control of a computer through a position-sensed stylus
| date =1994-09-13
| publisher=United States Patent 5,347,295 (full image)
| url=http://www.freepatentsonline.com/5347295.pdf
| accessdate = }}</ref>
** NCR ಮಾಡೆಲ್ 3125 MS-DOS ಆಪರೇಟಿಂಗ್ ಸಿಸ್ಟಂ ಹೊಂದಿರುವ ಪೆನ್ ಕಂಪ್ಯೂಟರ್ ಬಿಡುಗಡೆ ಮಾಡಿತು, [[ಪೆನ್ಪಾಯಿಂಟ್ OS]] ಅಥವಾ [[ಪೆನ್ ವಿಂಡೋಸ್]].<ref>{{Citation
| title = NCR announces pen-based computer press release
| url = http://findarticles.com/p/articles/mi_m0NEW/is_1991_June_24/ai_10957018
| accessdate = 2007-04-20
| format = {{Dead link|date=April 2009}} – <sup>[http://scholar.google.co.uk/scholar?hl=en&lr=&q=intitle%3ANCR+announces+pen-based+computer+press+release&as_publication=&as_ylo=&as_yhi=&btnG=Search Scholar search]</sup>
| publisher = [[FindArticles]]
| archiveurl = https://web.archive.org/web/20080502135338/http://findarticles.com/p/articles/mi_m0NEW/is_1991_June_24/ai_10957018
| archivedate = 2008-05-02
| url-status = bot: unknown
}}</ref>
** [[ಆಪಲ್ ನ್ಯೂಟೌನ್]] ಡೆವೆಲಪ್ಮೆಂಟ್ಗೆ ಕಾಲಿಟ್ಟಿತು; ಇದು ಕೊನೆಯಲ್ಲಿ [[PDA]] ಆಯಿತು, ಇದರ ಮೂಲ ಯೋಜನೆ (ದೊಡ್ಡ ಸ್ಕ್ರೀನ್ ಮತ್ತು ಹೆಚ್ಚಿನ ಸ್ಕೆಚಿಂಗ್ ಸಾಮರ್ಥ್ಯವುಳ್ಳದೆಂದು ಕರೆಯಲಾಗುತ್ತದೆ) ಟ್ಯಾಬ್ಲೆಟ್ PCಯ ಹಾರ್ಡ್ವೇರ್ ಅನ್ನು ಹೋಲುತ್ತದೆ.
* 1992
** [[GO ಕಾರ್ಪೊರೇಶನ್]] [[ಪೆನ್ಪಾಯಿಂಟ್ OS]] ಅನ್ನು ಸಾಮಾನ್ಯ ಲಭ್ಯತೆಗಾಗಿ ಬಿಡುಗಡೆ ಮಾಡಿತು ಮತ್ತು IBM ಏಪ್ರಿಲ್ನಲ್ಲಿ IBM 2125 ಪೆನ್ ಕಂಪ್ಯೂಟರ್ ಅನ್ನು ಪ್ರಕಟಿಸಿತು (ಮೊದಲ IBM ಮಾಡೆಲ್ ಹೆಸರು "ಥಿಂಕ್ಪ್ಯಾಡ್").<ref>{{Citation
| title = Penpoint OS shipping press release
| url = http://findarticles.com/p/articles/mi_m0NEW/is_1992_April_17/ai_12165379
| accessdate = 2007-04-20
| format = {{Dead link|date=April 2009}} – <sup>[http://scholar.google.co.uk/scholar?hl=en&lr=&q=intitle%3APenpoint+OS+shipping+press+release&as_publication=&as_ylo=&as_yhi=&btnG=Search Scholar search]</sup>
| publisher = [[FindArticles]]
| archiveurl = https://web.archive.org/web/20070830050237/http://findarticles.com/p/articles/mi_m0NEW/is_1992_April_17/ai_12165379
| archivedate = 2007-08-30
| url-status = bot: unknown
}}</ref>
** [[ಮೈಕ್ರೋಸಾಫ್ಟ್]] [[ವಿಂಡೋಸ್ ಫಾರ್ ಪೆನ್ ಕಂಪ್ಯೂಟಿಂಗ್]] ಅನ್ನು [[GO ಕಾರ್ಪೊರೇಶನ್]]ನ [[ಪೆನ್ಪಾಯಿಂಟ್ OS]]ಗೆ ಪ್ರತಿಯಾಗಿ ಬಿಡುಗಡೆ ಮಾಡಿತು.
* 1993
** [[ಫುಜಿತ್ಸು]] ಇಂಟೆಗ್ರೇಟೆಡ್ ವೈರ್ಲೆಸ್ LAN ಬಳಸುವಂತಹ ಮೊದಲ ಪೆನ್ ಟ್ಯಾಬ್ಲೆಟ್ ಪೊಕೆಟ್ PC ಬಿಡುಗಡೆಮಾಡಿತು.<ref>{{Cite web |url=http://solutions.us.fujitsu.com/www/content/products/Tablet-PCS/index.php |title=ಆರ್ಕೈವ್ ನಕಲು |access-date=2010-06-28 |archive-date=2010-10-02 |archive-url=https://web.archive.org/web/20101002093249/http://solutions.us.fujitsu.com/www/content/products/Tablet-PCS/index.php |url-status=dead }}</ref>
** ಆಪಲ್ ಕಂಪ್ಯೂಟರ್ ನ್ಯೂಟೌನ್ PDA ಅನ್ನು ಪ್ರಕಟಿಸಿತು, ಇದು ಆಪಲ್ ಮೆಸೇಜ್ ಪ್ಯಾಡ್ ಎಂದೂ ಕೂಡಾ ಪರಿಚಿತ, ಇದರಲ್ಲಿ ಸ್ಟ್ಯಲಸ್ನೊಂದಿಗೆ ಕೈಬರಹ ಗುರುತಿಸುವುದು ಕೂಡಾ ಸೇರಿದೆ.
** [[IBM]] [[ಥಿಂಕ್ಪ್ಯಾಡ್]] ಬಿಡುಗಡೆ ಮಾಡಿತು, IBMನ ಮೊದಲ ವಾಣಿಜ್ಯೂಕರಿಸಿದ ಪೋರ್ಟಬಲ್ ಕಂಪ್ಯೂಟರ್ ಉತ್ಪನ್ನ ಬಳಕೆದಾರರ ಮಾರುಕಟ್ಟೆಯಲ್ಲಿ ಲಭ್ಯವಾಯಿತು, IBM [[ಥಿಂಕ್ಪ್ಯಾಡ್]] 750P ಮತ್ತು 360P ರೂಪದಲ್ಲಿ <ref>[http://www.pc.ibm.com/us/thinkpad/anniversary/history.html Lenovo - The history of ThinkPad]</ref>
** [[AT&T]] ಪೆನ್ಪಾಯಿಂಟ್ ಜೊತೆಗೆ ವೈರ್ಲೆಸ್ ಸಂಪರ್ಕ ಸೇರಿಸಿದಂತಹ [[EO ಪರ್ಸನಲ್ ಕಮ್ಯುನಿಕೇಟರ್]] ಅನ್ನು ಪರಿಚಯಿಸಿತು.
* 1999
** ಅಕ್ಸೆಸ್ ಟೆಕ್ನಾಲಜೀಸ್ ಸೃಷ್ಟಿಸಿದ "QBE" ಪೆನ್ ಕಂಪ್ಯೂಟರ್ [[ಕಾಮ್ಡೆಕ್ಸ್]] ಬೆಸ್ಟ್ ಆಫ್ ಶೋ ಗಳಿಸಿತು.<ref>{{Citation
| title = Trends at COMDEX Event 1999
| url=http://www.guiart.fi/gobr01en.htm
| accessdate = 2008-08-11}}</ref>
* 2000
** ಮೈಕ್ರೋಸಾಫ್ಟ್ನ ಟ್ಯಾಬ್ಲೆಟ್ PC ಗುಣಮಟ್ಟವನ್ನು ಹೊಂದಿರುವ ಮೊದಲ ಸಾಧನವನ್ನು [http://www.paceblade.com ಪೇಸ್ಬ್ಲೇಡ್] ಅಭಿವೃದ್ಧಿ ಪಡಿಸಿತು<ref>[http://www.allbusiness.com/electronics/computer-equipment-personal-computers/6004956-1.html PaceBlade launches Tablet PC]</ref> ಹಾಗೂ VAR ವಿಶನ್ 2000ರಲ್ಲಿ "ಉತ್ತಮ ಹಾರ್ಡ್ವೇರ್" ಪ್ರಶಸ್ತಿ ಗಳಿಸಿತು.
** ಅಕ್ಸೆಸ್ ಟೆಕ್ನಾಲಜೀಸ್ ಸೃಷ್ಟಿಸಿದ "QBE ವಿವೊ" ಪೆನ್ ಕಂಪ್ಯೂಟರ್ [[ಕಾಮ್ಡೆಕ್ಸ್]] ಬೆಸ್ಟ್ ಆಫ್ ಶೋದಲ್ಲಿ ಟೈ ಆಯಿತು.
* 2001
** ಮೈಕ್ರೋಸಾಫ್ಟ್ನ [[ಬಿಲ್ ಗೇಟ್ಸ್]] [[ಕಾಮ್ಡೆಕ್ಸ್]]ನಲ್ಲಿ ಟ್ಯಾಬ್ಲೆಟ್ PCಯ ಮೊದಲ ಸಾರ್ವಜನಿಕ ಪ್ರೋಟೊಟೈಪ್ ಅನ್ನು ಪ್ರದರ್ಶಿಸಿದನು (ಪರವಾನಗಿ ಹೊಂದಿದ "ಟ್ಯಾಬ್ಲೆಟ್ PC ಆವೃತ್ತಿಯ ವಿಂಡೋಸ್ XP" ಆಪರೇಟಿಂಗ್ ಸಿಸ್ಟಂ ಹೊಂದಿರುವ ಪೆನ್-ಎನೇಬಲ್ಡ್ ಕಂಪ್ಯೂಟರ್ ಅನ್ನು ಮೈಕ್ರೋಸಾಫ್ಟ್ ವಿವರಿಸಿತು)<ref name="Microsoft 2005"/>.
* 2003
** [http://www.PaceBlade.com ಪೇಸ್ಬ್ಲೇಡ್] "ಇನ್ನೋವೇಶನ್ ಡೆಸ್ ಜಹ್ರೆಸ್ 2002/2003" ಪ್ರಶಸ್ತಿಯನ್ನು[http://www.paceblade.com/site/DesktopDefault.aspx?tabindex=1&tabid=220&Cat=30&grp=3010&ar=3&Prod_ID=25&Prod=PB_D110 ಪೇಸ್ಬುಕ್] {{Webarchive|url=https://web.archive.org/web/20070930225301/http://www.paceblade.com/site/DesktopDefault.aspx?tabindex=1&tabid=220&Cat=30&grp=3010&ar=3&Prod_ID=25&Prod=PB_D110 |date=2007-09-30 }} ಟ್ಯಾಬ್ಲೆಟ್ PC ಗಾಗಿ [[ಸೆಬಿಟ್]]ಗಾಗಿ PC ಪ್ರೊಫೆಷನಲ್ ಮ್ಯಾಗಜೀನ್ನಿಂದ ಸ್ವೀಕರಿಸಿತು.
** ಫಿಂಗರ್ವರ್ಕ್ಸ್<ref>{{Citation
|title=iGesture Game Mode Guide
|last=Fingerworks, Inc.
|date=2003
|publisher=www.fingerworks.com
|url=http://rwservices.no-ip.info:81/pens/biblio05.html#Fingerworks03
|accessdate=2009-04-30
|archive-date=2009-02-02
|archive-url=https://web.archive.org/web/20090202101130/http://rwservices.no-ip.info:81/pens/biblio05.html#Fingerworks03
|url-status=dead
}}</ref> ಟಚ್ ಟೆಕ್ನಾಲಜಿಯನ್ನು ಹಾಗೂ ಟಚ್ ಗೆಸ್ಚರ್ಗಳನ್ನು ಅಭಿವೃದ್ಧಿ ಪಡಿಸುತ್ತದೆ ನಂತರದಲ್ಲಿ ಇವನ್ನು ಆಪಲ್ [[ಐಫೋನ್]]ನಲ್ಲಿ ಬಳಸಲಾಯಿತು.
* 2006
** ಸಾಮಾನ್ಯರಿಗೆ ಲಭ್ಯವಾಗುವಂಟೆ [[ವಿಂಡೋಸ್ ವಿಸ್ತಾ]] ಬಿಡುಗಡೆಯಾಯಿತು. ವಿಸ್ತಾದಲ್ಲಿ ವಿಶೇಷ ಟ್ಯಾಬ್ಲೆಟ್ PC [[ವಿಂಡೋಸ್ XP]] ಆವೃತ್ತಿ ಕಾರ್ಯಚಟುವಟಿಕೆಯನ್ನು ಒಳಗೊಂಡಿದೆ.
** ಡಿಸ್ನೀ ಚಾನಲ್ನಲ್ಲಿ ಮೂಲ ಚಿತ್ರ, ''ರೀಡ್ ಇಟ್ ಅಂಡ್ ವೀಪ್'' ನಲ್ಲಿ ಜಾಮೀ ಆಕೆಯ ಜರ್ನಲ್ಗಾಗಿ ಟ್ಯಾಬ್ಲೆಟ್ PCಯನ್ನು ಬಳಸುತ್ತಾಳೆ.
* 2007
** ಆಕ್ಸಿಯೋಟ್ರಾನ್ ಮಾಡ್ಬುಕ್ ಅನ್ನು ಪರಿಚಯಿಸಿತು, ಮ್ಯಾಕ್ವರ್ಲ್ಡ್ನಲ್ಲಿ ಮ್ಯಾಕ್ ಹಾರ್ಡ್ವೇರ್ ಮತ್ತು ಮ್ಯಾಕ್ OS X ಆಧಾರಿತ ಮೊದಲನೆಯ (ಮತ್ತು ಏಕೈಕ) ಟ್ಯಾಬ್ಲೆಟ್ ಕಂಪ್ಯೂಟರ್<ref name="modbookRelease"/>.
* 2008
** ಏಪ್ರಿಲ್ 2008ರಲ್ಲಿ, ದೊಡ್ಡ ಫೆಡರಲ್ ಕೋರ್ಟ್ ಕೇಸ್ನ ಒಂದು ಭಾಗವಾಗಿ, ವಿಂಡೋಸ್/ಟ್ಯಾಬ್ಲೆಟ್ PC ಆಪರೇಟಿಂಗ್ ಸಿಸ್ಟಂನ ಗೆಸ್ಚರ್ ಪೀಚರ್ಗಳು ಮತ್ತು [[GO Corp.]]ನ ಪೇಟೆಂಟ್ ಇನ್ಫ್ರಿಂಜ್ ಹಾರ್ಡ್ವೇರ್ ಇದರಲ್ಲಿದೆ, ಪೆನ್ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂಗಳ ಬಳಕೆದಾರನ ಇಂಟರ್ಫೇಸ್ಗಳಿಗೆ ಸಂಬಂಧಿಸಿದೆ.<ref name="Mintz"/> ಮೈಕ್ರೋಸಾಫ್ಟ್ನ ಟೆಕ್ನಾಲಜಿಯ ಖರೀದಿಯು ಒಂದು ಬೇರೆ ಮೊಕದ್ದಮೆಗೆ ಒಳಗಾಯಿತು.<ref>{{Cite web |url=http://news.com.com/Go+files+antitrust+suit+against+Microsoft/2100-7343_3-5772534.html |title=ಆರ್ಕೈವ್ ನಕಲು |access-date=2005-07-06 |archive-date=2005-07-06 |archive-url=https://web.archive.org/web/20050706024122/http://news.com.com/Go+files+antitrust+suit+against+Microsoft/2100-7343_3-5772534.html |url-status=live }}</ref><ref>{{Cite web |url=http://www.groklaw.net/article.php?story=20050704045343631 |title=ಆರ್ಕೈವ್ ನಕಲು |access-date=2010-06-28 |archive-date=2018-10-29 |archive-url=https://web.archive.org/web/20181029093517/http://www.groklaw.net/article.php?story=20050704045343631 |url-status=dead }}</ref>
** [[HP]]ಯು ಎರಡನೆಯ ಮಲ್ಟಿ-ಟಚ್ ಸಮರ್ಥ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿತು: [[HP ಟಚ್ಸ್ಮಾರ್ಟ್]] tx2 ಶ್ರೇಣಿ.<ref>{{Citation
| last =
| first =
| coauthors =
| title =HP TouchSmart tx2z
| work =
| pages =
| language =
| publisher =HP
| date =
| url = http://www.shopping.hp.com/webapp/shopping/computer_can_series.do?storeName=computer_store&category=notebooks&a1=Category&v1=Mobility&series_name=tx2z_series
| accessdate = 2008-11-28 }}</ref>
* 2009
** ಏಸಸ್ ಟ್ಯಾಬ್ಲೆಟ್ ನೆಟ್ಬುಕ್ ಅನ್ನು ಘೋಷಿಸಿತು, [[EEE PC]] T91 ಮತ್ತು T91MT, ಅದು [[ಮಲ್ಟಿ-ಟಚ್]] ಸ್ಕ್ರೀನ್ ಹೊಂದಿದೆ.
** ಯಾವಾಗಲೂ ಹೊಸತನ ಘೋಷಿಸುವ ಇದು ಒಂದು ಹೊಸ ಟ್ಯಾಬ್ಲೆಟ್ ನೆಟ್ಬುಕ್ ARM CPU ಬಿಡುಗಡೆ ಮಾಡಿತು.
** [[ಮೋಶನ್ ಕಂಪ್ಯೂಟಿಂಗ್]] J3400 ಬಿಡುಗಡೆ ಮಾಡಿತು
* 2010
** ನಿಯೋಫೊನೀ [[WePad]] ಅನ್ನು ಪ್ರಕಟಿಸಿದೆ, ಲೈನಕ್ಸ್ ಆಧಾರಿತ ಸ್ಲೇಟ್ ಟ್ಯಾಬ್ಲೆಟ್ PC, 11.6 ಇಂಚಿನ ಮಲ್ಟಿ-ಟಚ್ ಸ್ಕ್ರೀನ್ 1366x768 ಪಿಕ್ಸೆಲ್ಗಳ ರೆಸೊಲ್ಯೂಷನ್ನೊಂದಿಗೆ.<ref>{{Citation
| last = BAETZ
| first = JUERGEN
| coauthors =
| title = German tablet PC sets out to rival Apple's iPad
| work =
| pages =
| language =
| publisher = Associated Press
| date = April 12 2010
| url = http://hosted.ap.org/dynamic/stories/E/EU_TEC_GERMANY_IPAD_RIVAL
| accessdate = 2010-04-15
}}{{Dead link|date=ಜುಲೈ 2025 |bot=InternetArchiveBot |fix-attempted=yes }}</ref><ref>{{Citation
| last =
| first =
| coauthors =
| title = WePad specifications
| work =
| pages =
| language =
| publisher = Neofonie
| date = April 12 2010
| url = http://www.neofonie.de/files/product_specifications_WePad_1004014.pdf
| accessdate = 2010-04-15
| archive-date = 2010-12-29
| archive-url = https://web.archive.org/web/20101229190813/http://www.neofonie.de/files/product_specifications_WePad_1004014.pdf
| url-status = dead
}}</ref>
== ಈ ಕೆಳಗಿನವುಗಳನ್ನೂ ನೋಡಬಹುದು ==
{{commons}}
* [[ಬ್ಲೂಟೂಥ್]]
* [[ಕ್ರಂಚ್ಪ್ಯಾಡ್]]
* [[ಇ-ಬುಕ್]]
* [[ಗ್ರಾಫಿಕ್ಸ್ ಟ್ಯಾಬ್ಲೆಟ್]]
* [[HSPA]]
* [[MIL-STD-810F]] ಸ್ಟ್ಯಾಂಡರ್ಡ್.
* ಮೊಬೈಲ್ ಅಂತರಜಾಲ ಉಪಕರಣ (MID)
* [[ನೆಟ್ಟಾಪ್]]
* [[ನೋಟ್ಟೇಕಿಂಗ್]]
* [[ನ್ಯೂಮರಿಕ್ ಕೀಪ್ಯಾಡ್]]
* [[ಪೆನ್ ಕಂಪ್ಯೂಟಿಂಗ್]]
* [[ಸಾಲಿಡ್-ಸ್ಟೇಟ್ ಡ್ರೈವ್]] (SSD)
* [[ಸ್ಮಾರ್ಟ್ಬುಕ್]]
* [[ಯುಎಸ್ಬಿ]]
* [[WiFi]]
* [[V12 ವಿನ್ಯಾಸ]]
== ಆಕರಗಳು ==
{{Reflist|2}}
* ಸ್ಟಾರ್ಗೇಟ್ ಅಟ್ಲಾಂಟಿಸ್ನವರುಟ್ಯಾಬ್ಲೆಟ್ PC JLSX2010 ಬಳಸಿದ್ದು ನೋಡಿ
== ಬಾಹ್ಯ ಕೊಂಡಿಗಳು ==
* {{dmoz|Computers/Systems/Tablet_PCs|Tablet PCs}}
* {{HSW|1787-jeff-han-talks-about-touch-driven-computer-screens-video|Jeff Han Talks About Touch-Driven Computer Screens}}
* [http://rwservices.no-ip.info:81/biblio.html Annotated bibliography of references to handwriting recognition and pen computing] {{Webarchive|url=https://web.archive.org/web/20120111151619/http://rwservices.no-ip.info:81/biblio.html |date=2012-01-11 }}
* [http://thetabletpc.net/comparison-convertibles.htm Comparison table of convertible tablets] {{Webarchive|url=https://web.archive.org/web/20100725002142/http://thetabletpc.net/comparison-convertibles.htm |date=2010-07-25 }}
* [http://www.hp.com/sbso/solutions/healthcare/hp_tablet_whitepaper.pdf The Case for the Tablet PC in Health Care] ([[HP]], [[ಮೈಕ್ರೋಸಾಫ್ಟ್]] [[ವ್ಹೈಟ್ ಪೇಪರ್]]) ಆಧಾರಿತ.
* [http://www.motioncomputing.com/resources/WhitePaper_HealthCare.pdf Tablet PCs in Health Care] {{Webarchive|url=https://web.archive.org/web/20120227110125/http://www.motioncomputing.com/resources/WhitePaper_HealthCare.pdf |date=2012-02-27 }}.
* [http://www.vtnews.vt.edu/story.php?relyear=2006&itemno=300 College of Engineering announces alliance with Fujitsu and Microsoft] — [[ವರ್ಜೀನಿಯಾ ಟೆಕ್]]ನಿಂದ ಹೊಸ ಲೇಖನಗಳು
* [http://pen.cs.brown.edu/ Microsoft Center for Research on Pen-Centric Computing]
{{DEFAULTSORT:Tablet Pc}}
{{Interwikineeded}}
[[ವರ್ಗ:ಪರ್ಸನಲ್ ಕಂಪ್ಯೂಟರ್ಗಳು]]
[[ವರ್ಗ:ಟ್ಯಾಬ್ಲೆಟ್ ಪಿಸಿ]]
[[en:Early tablet computers]]
[[ru:Планшетный персональный компьютер]]
geoq2qm8bt82b3vbdigyu7axixa3fmf
ಗಣಿಗಾರಿಕೆ
0
24135
1379556
1344548
2026-08-09T03:51:28Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379556
wikitext
text/x-wiki
{{cleanup|date=May 2010}}
{{Wiktionary|mining}}
{{About| the extraction of geological materials from the Earth|the municipality in [[Austria]]|Mining, Austria|the siege tactic|Mining (military)|name of the [[China|Chinese]] emperor|Daoguang Emperor}}
[[File:Chuquicamata-002.jpg|thumb|right|ಚುಕ್ವಿಕಮಾಟಾ, ಚಿಲಿ, ಜಗತ್ತಿನ ದೊಡ್ಡದಾದ ಪರಿಧಿಯ ಸ್ಥಳ ಮತ್ತು ಎರಡನೇಯ ಆಳವಾಗಿ ತೆರೆದ ತಾಮ್ರ ಗಣಿಗಾರಿಕೆಯ ಕುಳಿ.]]
[[File:GarbuttMine.gif|thumb|right|ಬ್ರೇಕ್ ಟೈಮ್ ಅಂಡರ್ಗ್ರೌಂಡ್ ಕೊಲರಾಡೊ, ಕ್ಯಾಲಿಫೊರ್ನಿಯಾ. 1900]]
'''ಗಣಿಗಾರಿಕೆ''' ಅಂದರೆ [[ಉಪಯುಕ್ತ]] [[ಖನಿಜ]]ಗಳು ಅಥವಾ ಇತರ [[ಭೂವೈಜ್ಞಾನಿಕ]] ವಸ್ತುಗಳನ್ನು ಅಂದರೆ ಸಾಮಾನ್ಯವಾಗಿ [[ಅದಿರು]]ಗಳು, [[ಲೋಹ]]ಗಳು ಅಥವಾ [[ಕಲ್ಲಿದ್ದಲ]] ಪದರ ಭೂಮಿಯಿಂದ ಹೊರತೆಗೆಯುವುದಾಗಿದೆ,.
ಗಣಿಗಾರಿಕೆಯಿಂದ ಸಿಗುವ ವಸ್ತುಗಳೆಂದರೆ [[ಕಚ್ಚಾ ಲೋಹಗಳು]], [[ಅಮೂಲ್ಯವಾದ ಲೋಹಗಳು]], [[ಕಬ್ಬಿಣ]], [[ಯುರೇನಿಯಂ]], [[ಕಲ್ಲಿದ್ದಲು]], [[ವಜ್ರ]]ಗಳು, [[ಸುಣ್ಣಕಲ್ಲು]], [[ತೈಲಶಿಲೆ]], [[ಕಲ್ಲುಪ್ಪು]] ಮತ್ತು [[ಪೊಟ್ಯಾಶ್]].
ಈ ವಸ್ತುಗಳನ್ನು [[ಕೃಷಿ]] ಮಾಡುವುದರ ಮೂಲಕ ಬೆಳೆಯಲು, ಅಥವಾ [[ಪ್ರಯೋಗಾಲಯ]] ಅಥವಾ [[ಕಾರ್ಖಾನೆ]]ಗಳಲ್ಲಿ [[ಕೃತಕ]]ವಾಗಿ ತಯಾರಿಸಲು ಸಾಧ್ಯವಿಲ್ಲ, ಸಾಮಾನ್ಯವಾಗಿ ಭೂಮಿಯಿಂದ ತೆಗೆಯುತ್ತಾರೆ.
ಗಣಿಗಾರಿಕೆಯ ವಿಶಾಲ ಅರ್ಥವೆಂದರೆ, ಯಾವುದೇ [[ನವೀಕರಣಗೊಳಿಸಲಾಗದ ಸಂಪನ್ಮೂಲ]]ವನ್ನು ಹೊರತೆಗೆಯುವುದು (ಉದಾಹರಣೆಗೆ, [[ಪೆಟ್ರೋಲಿಯಂ]], [[ನೈಸರ್ಗಿಕ ಅನಿಲ]], ಅಥವಾ [[ನೀರು]]).
ಕಲ್ಲು ಮತ್ತು ಲೋಹಗಳ ಗಣಿಗಾರಿಕೆಗಳನ್ನು [[ಇತಿಹಾಸ-ಪೂರ್ವ]] ಕಾಲದಿಂದ ಮಾಡಲಾಗುತ್ತಿತ್ತು.
ಅದಿರು ಘಟಕಗಳನ್ನು [[ಅನ್ವೇಷಿಸುವುದು]], ಸೂಚಿಸಿದ ಗಣಿಯ ಲಾಭದ ಸಂಭವನೀಯತೆಯನ್ನು ವಿಶ್ಲೇಷಿಸುವುದು, ಅಪೇಕ್ಷಿತ ವಸ್ತುಗಳನ್ನು ಹೊರತೆಗೆಯುವುದು ಮತ್ತು ಕೊನೆಯದಾಗಿ ಗಣಿಗಾರಿಕೆ ಕೆಲಸ ಮುಗಿದ ನಂತರ ಭೂಮಿಯನ್ನು ಬೇರೆ ಉಪಯೋಗಕ್ಕೆ ಬರುವಂತೆ ಉತ್ತಮ ಸ್ಥಿತಿಗೆ ತರುವುದು, ಆಧುನಿಕ ಗಣಿಗಾರಿಕಾ ಕಾರ್ಯವಿಧಾನ ಈ ಎಲ್ಲ ಕಾರ್ಯಗಳನ್ನು ಒಳಗೊಂಡಿದೆ.
ಗಣಿಗಾರಿಕೆ ಕಾರ್ಯಾಚರಣೆ, ಗಣಿಗಾರಿಕಾ ಕೆಲಸ ನಡೆಯುತ್ತಿರುವಾಗ ಮತ್ತು ಇದು ಮುಗಿದ ವರ್ಷಗಳ ನಂತರ ಸಹ ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
ಇದರ ಪರಿಣಾಮವಾಗಿ ವಿಶ್ವದ ಸುಮಾರು ದೇಶಗಳು ಗಣಿ ಕಾರ್ಯಾಚರಣೆಯ ಋಣಾತ್ಮಕ ಪರಿಣಾಮಗಳನ್ನು ಸುಧಾರಿಸಲು ನಿಭಂದನೆಗಳನ್ನು ಅಳವಡಿಸಿಕೊಂಡಿವೆ.
ಸುರಕ್ಷತೆಯು ಬಹುಕಾಲದಿಂದಲೂ ಕೂಡ ಒಂದು ಆಸಕ್ತಿಯಾಗಿತ್ತು, ಆಧುನಿಕ ಆಚರಣೆಗಳು ಗಣಿಗಾರಿಕೆಗಳಲ್ಲಿ ಭದ್ರತೆಯನ್ನು ಗಮನಾರ್ಹವಾಗಿ ಸುಧಾರಿಸಿವೆ.
==ಇತಿಹಾಸ==
===ಇತಿಹಾಸಪೂರ್ವ ಗಣಿಗಾರಿಕೆ ===
[[File:TimnaChalcolithicMine.JPG|thumb|ಟಿಮ್ನಾ ಕಣಿವೆಯಲ್ಲಿ ಕಂಚಿನಯುಗದ ತಾಮ್ರದ ಗಣಿ, ನೆಗೆವ್ ಮರುಭೂಮಿ,ಇಸ್ರೇಲ್]]
ನಾಗರೀಕತೆಯ ಪ್ರಾರಂಭದಿಂದ ಜನರು, [[ಕಲ್ಲು]], [[ಸಿರಾಮಿಕ್]] ಗಳನ್ನೂ ಉಪಯೋಗಿಸುತ್ತಿದ್ದರು, ಮತ್ತು ನಂತರ, [[ಭೂಮಿ]]ಯ ಮೇಲ್ಪದರದಲ್ಲಿ [[ಲೋಹ]]ಗಳು ಕಂಡವು.
ಇವುಗಳನ್ನು ಪ್ರಾಚೀನ ಸಲಕರಣೆಗಳು ಮತ್ತು ಆಯುಧಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದರು, ಉದಾಹರಣೆಗೆ [[ಫ್ರಾನ್ಸ್]]ನ ಉತ್ತರ ಭಾಗದಲ್ಲಿ ಕಂಡುಬಂದ [[ಚಕಮಕಿ ಕಲ್ಲು]], [[ಇಂಗ್ಲೆಂಡ್]]ನ ದಕ್ಷಿಣ ಭಾಗದಲ್ಲಿ ಕಲ್ಲಿನ ಸಲಕರಣೆಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದರು.<ref>ಹಾರ್ಟ್ಮನ್, ಹೋವಾರ್ಡ್ ಎಲ್. ''ಎಸ್ಎಂಇ ಮೈನಿಂಗ್ ಇಂಜಿನಿಯರಿಂಗ್ ಹ್ಯಾಂಡ್ಬುಕ್'', ಸಮಾಜಕ್ಕಾಗಿ ಗಣಿಗಾರಿಕೆ,ಲೋಹಶಾಸ್ತ್ರ,ಮತ್ತು ಪರಿಶೋಧನೆ ಇನ್ಕಾರ್ಪೊರೇಶನ್, 1992, ಪು3.</ref> ಚಕಮಕಿ ಕಲ್ಲಿನ ಗಣಿಗಳು [[ಸೀಮೆಸುಣ್ಣ ಪದರ]]ಗಳಲ್ಲಿ ಕಂಡುಬಂದವು, ಅಲ್ಲಿ ಕಲ್ಲಿನ ಸ್ತರಗಳು ಬಾಣಗಳು ಮತ್ತು ಗ್ಯಾಲರಿಗಳಿಂದ ಭೂಮಿಯೊಳಗಡೆ ಅನುಸರಿಸಲ್ಪಡುತ್ತವೆ.
[[ಗ್ರಿಮ್ಸ್ ಗ್ರೆವ್ಸ್]] ನಲ್ಲಿರುವ ಗಣಿಗಳು ವಿಶೇಷವಾಗಿ ಜನಪ್ರಿಯವಾಗಿವೆ, ಮತ್ತು ಇತರ ಹೆಚ್ಚಿನ ಕಲ್ಲಿನ ಗಣಿಗಳಂತೆ ಇವು ಮೂಲತಃ [[ನವಶಿಲಾಯುಗ]]ದ್ದಾಗಿವೆ (ಕ್ರಿಸ್ತ ಪೂರ್ವ ca 4000-ಕ್ರಿಸ್ತ ಪೂರ್ವ ca 3000)
[[ಇಂಗ್ಲೀಷ್ ಲೇಕ್ ಡಿಸ್ಟ್ರಿಕ್ಟ್]] ನಲ್ಲಿ ಆಧಾರವಾಗಿರುವ [[ಲಾಂಗ್ದಲೆ ಅಕ್ಸ್ ಇಂಡಸ್ಟ್ರಿ]]ಯ [[ಹಸಿರುಕಲ್ಲು]]ನ್ನು ಕೊಡಲಿಗಳನ್ನು ಮಾಡಲು ಹೊರತೆಗೆದ ಅಥವಾ ಸಂಗ್ರಹಿಸಿದ ಇತರ ಬಿರುಸಾದ ಕಲ್ಲುಗಳು ಒಳಗೊಂಡಿವೆ.
ಪುರಾತತ್ವ ಶಾಸ್ತ್ರೀಯ ದಾಖಲೆಗಳ ಪ್ರಕಾರ [[ಸ್ವಾಜಿಲ್ಯಾಂಡಿ]]ನ "ಲಯನ್ ಕೇವ್" ಅತ್ಯಂತ ಹಳೆಯ ಗಣಿಗಾರಿಕೆಯಾಗಿದೆ.
ಈ ಸ್ಥಳ ಸುಮಾರು 43,000 ವರ್ಷ ಹಳೆಯದು ಎಂದು [[ರೇಡಿಯೋ ಕಾರ್ಬನ್ ಕಾಲ ನಿರ್ಣಯ]] ಸಾಬೀತು ಪಡಿಸುತ್ತದೆ, [[ಪೂರ್ವ ಶಿಲಾಯುಗ]]ಕ್ಕೆ ಸಂಬಂಧಿಸಿದ ಜನರು ಗಣಿಯಿಂದ [[ಹೆಮಟೈಟ್]] ಖನಿಜವನ್ನು ಹೊರತೆಗೆದರು, ಇದು [[ಕಬ್ಬಿಣ]] ಮತ್ತು ಕೆಂಪು ವರ್ಣದ [[ಕಾವಿಮಣ್ಣ]]ನ್ನು ತಯಾರಿಸಲು ಬೇಕಾಗುವ ಕಚ್ಚಾವಸ್ತುಗಳನ್ನು ಒಳಗೊಂಡಿತ್ತು.<ref>ಸ್ವಾಜಿಲ್ಯಾಂಡ್ ನ್ಯಾಚುರಲ್ ಟ್ರಸ್ಟ್ ಕಮೀಶನ್, "ಕಲ್ಚರಲ್ ಸೋರ್ಸಸ್ - ಮಲಲೊಟ್ಜಾ ಆರ್ಕಿಯಾಲಜಿ, ಲಯನ್ ಕವರ್ನ್," ಅಗಸ್ಟ್ 27, 2007ರಂದು ಪರಿಷ್ಕರಿಸಲಾಗಿದೆ, [http://www.sntc.org.sz/cultural/malarch.asp] {{Webarchive|url=https://web.archive.org/web/20160303221001/http://www.sntc.org.sz/cultural/malarch.asp|date=2016-03-03}}.</ref><ref>ಪೀಸ್ ಪಾರ್ಕ್ ಫೌಂಡೇಶನ್, "ಮೇಜರ್ ಫೀಚರ್ಸ್: ಕಲ್ಚರಲ್ ಇಂಪಾಟೆನ್ಸ್." ದಕ್ಷಿಣ ಆಫ್ರಿಕಾ ಗಣರಾಜ್ಯ: ಲೇಖಕ. ಅಗಸ್ಟ್ 27, 2007ರಂದು ಪರಿಷ್ಕರಿಸಲಾಗಿದೆ, [http://www.peaceparks.org/story.php?mid=168&pid=148] {{Webarchive|url=https://web.archive.org/web/20081207102130/http://www.peaceparks.org/story.php?mid=168&pid=148|date=2008-12-07}}.</ref>
ಇದೇ ಸಮಯದಲ್ಲಿ [[ಹಂಗೇರಿ]]ಯ [[ನೀಂದರ್ಥಲ್]] ನ್ನಲ್ಲಿ ಆಯುಧಗಳು ಮತ್ತು ಸಲಕರಣಗಳಿಗಾಗಿ [[ಕಲ್ಲನ್ನು]] ಹೊರತೆಗೆದಿರಬಹುದು ಎಂದು ನಂಬಲಾಗಿದೆ. {{Citation needed|date=March 2010}}
===ಪ್ರಾಚೀನ ಈಜಿಪ್ಟ್===
[[ಪ್ರಾಚೀನ ಈಜಿಪ್ಟಿ]]ಯನ್ನರು [[ಮಾದಿ]]ಯಲ್ಲಿ [[ಮೆಲಾಕೈಟ]]ನ್ನು ಹೊರತೆಗೆದರು.<ref>ಶಾ, ಐ. (2000). ''ದ ಆಕ್ಸ್ಫರ್ಡ್ ಹಿಸ್ಟರಿ ಆಫ್ ಎನ್ಶಿಯಂಟ್ ಈಜಿಪ್ತ್''. ನ್ಯೂಯಾರ್ಕ್: ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, ಪುಪು. 57-59.</ref>
ಮೊದಲ ಬಾರಿಗೆ [[ಈಜಿಪ್ಟಿಯನ್ನರು]] ಪ್ರಕಾಶಮಾನವಾದ ಹಸಿರು ಮೆಲಾಕೈಟ್ನ ಕಲ್ಲನ್ನು ಅಲಂಕಾರಿಕ ಸಾಮಗ್ರಿಗಳು ಮತ್ತು ಮಡಿಕೆಗಳನ್ನು ತಯಾರಿಸಲು ಉಪಯೋಗಿಸಿದರು.
ನಂತರ, ಕ್ರಿಸ್ತ ಪೂರ್ವ 2,613 ಮತ್ತು 2,494ರ ನಡುವೆ, ವಾಡಿ ಮಘರದ ಪ್ರದೇಶಗಳಲ್ಲಿ "ಈಜಿಪ್ಟಿನಲ್ಲಿ ಸಿಗದ ಖನಿಜಗಳು ಮತ್ತು ಇತರ ಸಂಪನ್ಮೂಲಗಳನ್ನು ರಕ್ಷಿಸಲು" ದೊಡ್ಡದಾಗಿ ನಿರ್ಮಾಣವಾಗುತ್ತಿರುವ ಪ್ರಾಜೆಕ್ಟುಗಳಿಗೆ ಎಲ್ಲ ಕಡೆಗೂ ವಿಶೇಷ ಕಾರ್ಯಯಾತ್ರೆಯ ಅವಶ್ಯಕತೆ ಇತ್ತು.<ref name="Shaw">ಶಾ,ಐ. (2000). ''ದ ಆಕ್ಸ್ಫರ್ಡ್ ಹಿಸ್ಟರಿ ಆಫ್ ಎನ್ಶಿಯಂಟ್ ಈಜಿಪ್ತ್''. ನ್ಯೂಯಾರ್ಕ್: ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ., ಪು. 35.</ref>
ಕ್ವೆರಿಗಳಿಗೆ [[ಪಚ್ಚೆಕಲ್ಲು]] ಮತ್ತು [[ತಾಮ್ರ]]ಗಳು ಸಹ "ವಾಡಿ ಹಮಮತ್, ತುರ, ಅಸ್ವಾನ್ ಮತ್ತು ವಿವಿಧ ನುಬಿಯನ್ ಪ್ರದೇಶಗಳಲ್ಲಿ"<ref name="Shaw" /> [[ಸಿನೈ ಪೆನೆನ್ಸುಲ]] ಮತ್ತು [[ಟಿಮ್ನ]]ಗಳಲ್ಲಿ ಕಂಡುಬಂದವು.
ಪ್ರಾಚೀನ ಮನೆತನಗಳಿಂದ [[ಈಜಿಪ್ಟಿನಲ್ಲಿ ಗಣಿಗಾರಿಕೆ]] ಪ್ರಾರಂಭವಾಯಿತು, [[ಪ್ರಾಚೀನ ಈಜಿಪ್ಟಿ]]ನಲ್ಲಿ [[ನುಬಿಯಾ]]ದ [[ಚಿನ್ನದ ಗಣಿ]]ಗಳು ಇವುಗಳಲ್ಲಿ ದೊಡ್ಡ ಪ್ರಮಾಣದ ಮತ್ತು ವ್ಯಾಪಕವಾದ ಗಣಿಯಾಗಿತ್ತು, ಮತ್ತು ಗ್ರೀಕಿನ ಲೇಖಕ [[ದೈಯೋದೊರಸ್ ಸಿಕ್ಯುಲಸ್]] ಇವುಗಳನ್ನು ವಿವರಿಸಿದ್ದಾರೆ.
ಚಿನ್ನವನ್ನು ಹೊಂದಿರುವ ಕಠಿಣ ಬಂಡೆಗಳನ್ನು ಒಡೆಯಲು [[ಬೆಂಕಿ ಹಾಕುವ]] ಒಂದು ವಿಧಾನವನ್ನು ಉಪಯೋಗಿಸುತ್ತಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರಾಚೀನ ನಕ್ಷೆಗಳಲ್ಲಿ ಒಂದರಲ್ಲಿ ಸಂಕೀರ್ಣಗಳಲ್ಲಿ ಒಂದನ್ನು ತೋರಿಸಲಾಗಿದೆ.
[[ಚಿನ್ನದ ಹುಡಿ]]ಗೆ ಪುಡಿಯನ್ನು ತೊಳೆಯುವ ಮೊದಲು ಅವರು ಅದಿರುಗಳನ್ನು ಚಚ್ಚಿ ನುಣುಪಾದ ಪುಡಿ ಮಾಡುತ್ತಿದ್ದರು.
===ಪ್ರಾಚೀನ ಗ್ರೀಸ್ ಮತ್ತು ರೋಮ್===
[[File:Georgius Agricola.jpg|thumb|150px|left|ಅಗ್ರಿಕೋಲಾ,ಡೇ ರೆ ಮೆಟಾಲಿಕ ಲೇಖಕ]]
[[File:Archscrew2.jpg|right|thumb|200px|ರಿಯೊ ಟಿಂಟೋ ಗಣಿಯಿಂದ ಕಾಲುವೆ ಚಕ್ರ]]
ಯೂರೋಪಿನ ಗಣಿಗಾರಿಕೆ ಬಹಳ ಕಾಲದ ಇತಿಹಾಸವನ್ನು ಹೊಂದಿದೆ, ಇದಕ್ಕೆ ಉದಾಹರಣೆ ಎಂದರೆ [[ಲೌರಿಯಂ]]ನ ಬೆಳ್ಳಿಯ ಗಣಿ, ಇದು [[ಅಥೆನ್ಸಿ]]ನ ಗ್ರೀಕರ [[ರಾಜ್ಯದ ನಗರ]]ವನ್ನು ಅನುಮೋದಿಸುತ್ತದೆ.
ಆದಾಗ್ಯೂ, [[ರೋಮನ್ನರು]] ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆಯ ವಿಧಾನಗಳನ್ನು ಅಭಿವೃದ್ಧಿಗೊಳಿಸಿದರು, ವಿಶೇಷವಾಗಿ ಬಹಳ [[ಕಾಲುವೆ]]ಗಳ ಮೂಲಕ ದೊಡ್ಡ ಪ್ರಮಾಣದ ನೀರನ್ನು ಮೈನ್ಹೆಡ್ಗೆ ತರಲು ಉಪಯೋಗಿಸುವುದು.
ನೀರನ್ನು ವಿವಿಧ ಉದ್ದೇಶಗಳಿಗೆ ಉಪಯೋಗಿಸಲಾಗುತ್ತಿತ್ತು, [[ಹೈಡ್ರೋಲಿಕ್ ಮೈನಿಂಗ್]] ಎಂದು ಕರೆಯುವ, ಅತಿಯಾದ ಹೊರೆ ಮತ್ತು ಕಲ್ಲಿನ ಭಗ್ನಾವಶೇಷಗಳನ್ನು ತೆಗೆದುಹಾಕಲು ಉಪಯೋಗಿಸುವುದನ್ನು ಒಳಗೊಂಡಂತೆ, [[ಪುಡಿಮಾಡಿದ]] ಅಥವಾ ಜಜ್ಜಿದ ಅದಿರುಗಳನ್ನು ತೊಳೆಯಲು ಮತ್ತು ಸರಳ ಯಂತ್ರಗಳನ್ನು ಚಲಾಯಿಸಲು ಸಹ ಉಪಯೋಗಿಸುತ್ತಿದ್ದರು.
ಅದಿರಿನ ಸ್ತರಗಳನ್ನು ಅನ್ವೇಷಿಸಲು ಹೈಡ್ರೋಲಿಕ್ ಗಣಿಗಾರಿಕಾ ವಿಧಾನಗಳನ್ನು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಿದರು, ವಿಶೇಷವಾಗಿ [[ಹಶಿಂಗ್]] ಎನ್ನುವ ಈಗ ಬಳಕೆಯಲ್ಲಿಲ್ಲದ ಗಣಿಗಾರಿಕಾ ವಿಧಾನ.
ಮೈನ್ಹೆಡ್ಗೆ ನೀರನ್ನು ಒದಗಿಸಲು ಬಹಳ [[ಕಾಲುವೆಗಳನ್ನು]] ನಿರ್ಮಿಸಿ, ಅಲ್ಲಿ ನೀರನ್ನು [[ಜಲಾಶಯಗಳು]] ಮತ್ತು ದೊಡ್ಡ ತೊಟ್ಟಿಗಳಲ್ಲಿ ಶೇಖರಿಸಿಡಲಾಗುತ್ತಿತ್ತು.
ತುಂಬಿದ ತೊಟ್ಟಿಯನ್ನು ತೆರೆದಾಗ, ನೀರಿನ ಅಲೆಯು ಅಡಿಯಲ್ಲಿರುವ ಮತ್ತು ಯಾವುದೇ ಹೊನ್ನಿನ ಬಣ್ಣದ ಸ್ತರಗಳ ಆಧಾರ ಶಿಲೆಯನ್ನು ಹೊರತೆಗೆಯುವುದಕ್ಕೆ ಹೆಚ್ಚಿನ ಹೊರೆಗೆ ಭರ್ತಿ ನೀರು ಬಿಡುತ್ತದೆ.
ಕಲ್ಲನ್ನು ಬಿಸಿ ಮಾಡಲು ಕಲ್ಲಿಗೆ [[ಬೆಂಕಿ ಹಾಕ]]ಲಾಗುತ್ತಿತ್ತು, ಇದನ್ನು ನೀರನ್ನು ಪ್ರವಹಿಸಿ ನಂದಿಸಲಾಗುತ್ತಿತ್ತು.
[[ಶಾಖದ ಆಘಾತ]]ದಿಂದ ಕಲ್ಲು ಒಡೆಯುತ್ತಿತ್ತು, ಇದನ್ನು ತೆಗೆದುಹಾಕಲು ಎತ್ತರದ ತೊಟ್ಟಿಗಳಿಂದ ನೀರನ್ನು ಪ್ರವಹಿಸುತ್ತಿದ್ದರು.
[[ಪೆನಿನಸ್]] ನಲ್ಲಿನ [[ಸೀಸದ]] ಅದಿರು ಮತ್ತು [[ಕಾರ್ನ್ವಾಲ್]] ನಲ್ಲಿರುವ [[ಕಸಿಟರೈಟ್ನ್ನು]] ಹೊರತೆಗೆಯಲು ಸಹ ಅವರು ಇದೇ ರೀತಿಯ ವಿಧಾನವನ್ನು ಉಪಯೋಗಿಸುತ್ತಿದ್ದರು.
ಕ್ರಿಸ್ತಶಕ 25ರಲ್ಲಿ [[ಸ್ಪೈನಿ]]ನಲ್ಲಿ ರೋಮನ್ನರು ವ್ಯಾಪಕವಾದ [[ಅಲ್ಯುವಿಯಲ್]] ಚಿನ್ನದ ಗಣಿಯನ್ನು ಲಾಭಕರವಾಗಿ ಬಳಸಿಕೊಳ್ಳಲು ಗಣಿಗಾರಿಕಾ ವಿಧಾನಗಳನ್ನು ಅಭಿವೃದ್ಧಿಗೊಳಿಸಿದರು, ಚಿನ್ನದ ಗಣಿಯ ವಿಶಾಲವಾದ ಪ್ರದೇಶ [[ಲಾಸ್ ಮೆದುಲಾಸ್]] ನಲ್ಲಿತ್ತು, ಅಲ್ಲಿನ ಪ್ರಾಂತೀಯ ನದಿಗಳನ್ನು ಉಪಯೋಗಿಸಿಕೊಳ್ಳಲು ಮತ್ತು ಶೇಖರಿಸಿದ ನೀರನ್ನು ಹರಿಸಲು ಉದ್ದವಾದ ಏಳು ಕಾಲುವೆಗಳನ್ನು ನಿರ್ಮಿಸಿದರು.
ಹೆಚ್ಚು ಪ್ರಮುಖವಾದ ಗಣಿಗಾರಿಕಾ ಪ್ರದೇಶಗಳಲ್ಲಿ [[ಸ್ಪೇನ್]] ಒಂದಾಗಿತ್ತು, ಆದರೆ [[ರೋಮನ್ ಸಾಮ್ರಾಜ್ಯ]]ದ ಎಲ್ಲ ಪ್ರದೇಶಗಳನ್ನು ಬಳಸಿಕೊಳ್ಳಲಾಗಿತ್ತು.
[[ರಿಯೋ ಟಿಂಟೊ]]ನಲ್ಲಿರುವಂತಹ ಅವರ ಆಳವಾದ ಗಣಿಗಳಿಂದ ನೀರನ್ನು ಹೊರ ತೆಗೆಯಲು [[ಹಿಂಚಾಲನ ನೀರಿನ ಧಾರಾ ಚಕ್ರ]]ಗಳನ್ನು ಅವರು ಉಪಯೋಗಿಸುತ್ತಿದ್ದರು.
ಗ್ರೇಟ್ ಬ್ರಿಟನ್ನಿನ ಸ್ಥಳೀಯರು ಮಿಲೆನಿಯಕ್ಕೆ ಖನಿಜಗಳನ್ನು [[ಹೊರತೆಗೆ]]ಯುತ್ತಿದ್ದರು,<ref>{{Cite web |url=http://news.independent.co.uk/uk/this_britain/article2169254.ece |title=ದ ಇಂಡಪೆಂಡೆಂಟ್, 20 ಜನವರಿ. 2007: ''ದ ಎಂಡ್ ಅಫ್ ದ ಸೆಲ್ಟಿಕ್ ಟ್ರೆಡಿಶನ್: ದ ಲಾಸ್ಟ್ ಗೋಲ್ಡ್ ಮೈನರ್ ಇನ್ ವೇಲ್ಸ್'' |access-date=2010-07-31 |archive-date=2008-07-06 |archive-url=https://web.archive.org/web/20080706035317/http://news.independent.co.uk/uk/this_britain/article2169254.ece |url-status=dead }}</ref> ಆದರೆ [[ರೋಮನ್ನರು]] ಬಂದಾಗ, ಕಾರ್ಯಾಚರಣೆಯ ಪ್ರಮಾಣ ನಾಟಕೀಯವಾಗಿ ಬದಲಾಯಿತು.
ವಿಶೇಷವಾಗಿ ಬ್ರಿಟೆನ್ ಹೊಂದಿರುವ [[ಚಿನ್ನ]], [[ಬೆಳ್ಳಿ]], [[ತವರ]] ಮತ್ತು [[ಸೀಸ]] ರೋಮನ್ನರಿಗೆ ಬೇಕಾಗಿತ್ತು.
ರೋಮನ್ನರ ಕಾರ್ಯವಿಧಾನ ಭೂಮಿಯ ಮೇಲ್ಮೈನ ಗಣಿಗಾರಿಕೆಗೆ ಮಾತ್ರ ಸೀಮಿತವಾಗಿರಲಿಲ್ಲ.
ಒಂದುಬಾರಿ ಅವರು ನೆಲದಡಿಯಲ್ಲಿರುವ ಅದಿರಿನ ಸ್ತರಗಳ ಗಣಿಗಾರಿಕೆಯನ್ನು ಅನುಸರಿಸಿದ ನಂತರ ಹೊರಮೈ ಗಣಿಗಾರಿಕೆ ಹೆಚ್ಚುಕಾಲ ಸಾಧ್ಯವಾಗಲಿಲ್ಲ. [[ಡೊಲೊಕೌಥಿ]]ಯಲ್ಲಿ ಅವರು ಹರಿಸುವಿಕೆಯನ್ನು ನಿಲ್ಲಿಸಿದರು ಮತ್ತು ಬಂಜರು ಬಂಡೆಗಳ ಮೂಲಕ ಪ್ರವೇಶಗಳನ್ನು ಬರಿದುಮಾಡಲು [[ಗಣಿಯೊಳಗಿನ ಮಾರ್ಗ]]ವನ್ನು ಅನುಸರಿಸಿದರು.
ಇದೇ ರೀತಿಯ ಮಾರ್ಗಗಳನ್ನು ಕೆಲಸಗಳಿಗೆ ಗಾಳಿ ಬೆಳಕು ಬರಲು ಉಪಯೋಗಿಸುತ್ತಿದ್ದರು, ವಿಶೇಷವಾಗಿ [[ಬೆಂಕಿ ಹಾಕಿದಾಗ]] ಮುಖ್ಯವಾಗಿ ಉಪಯೋಗಿಸುತ್ತಿದ್ದರು.
ಪ್ರದೇಶದ ಇತರ ಭಾಗಗಳಲ್ಲಿ, ಅವು [[ನೀರಿನ ಟೇಬಲ]]ನ್ನು ನುಗ್ಗಿಹೊಗುತ್ತವೆ ಮತ್ತು [[ಹಿಂಚಾಲನ ನೀರಿನ ಧಾರಾ ಚಕ್ರ]]ಗಳಂತಹ ಕೆಲವು ಯಂತ್ರಗಳನ್ನು ಉಪಯೋಗಿಸಿ ನೀರನ್ನು ಹೊರತೆಗೆಯುತ್ತಾರೆ.
ಸ್ಪೈನಿನ [[ರಿಯೋ ಟಿಂಟೊ]]ದ [[ತಾಮ್ರ]]ದ ಗಣಿಗಳಲ್ಲಿ ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸುತ್ತಿದ್ದರು, ಅಲ್ಲಿ ನೀರನ್ನು ಎತ್ತುವ ಸಲುವಾಗಿ ಒಂದು ಸರಣಿ, ಜೋಡಿಗಳಲ್ಲಿ ಹೊಂದಿಸಲಾದ 16 ಅಂತಹ ಚಕ್ರಗಳನ್ನು ಹೊಂದಿದೆ.{{convert|80|ft|m}}
ಎತ್ತರದ ಹಲಗೆಗಳ ಮೇಲೆ ನಿಂತು ಅವು ಗಣಿಗಾರರ ಜೊತೆ ಟ್ರೆಡ್ಮಿಲ್ಗಳಂತೆ ಕೆಲಸ ಮಾಡುತ್ತಿದ್ದವು.
ಈ ರೀತಿಯ ಸಾಧನಗಳಿಗೆ ಬಹಳ ಉದಾಹರಣೆಗಳು ಹಳೆಯ ರೋಮನ್ ಗಣಿಗಳಲ್ಲಿ ದೊರೆತಿವೆ ಮತ್ತು ಕೆಲವು ಸಾಧನಗಳನ್ನು ಈಗ [[ಬ್ರಿಟಿಷ್ ಮ್ಯೂಸಿಯಂ]] ಮತ್ತು [[ನ್ಯಾಷನಲ್ ಮ್ಯೂಸಿಯಂ ಆಫ್ ವೇಲ್ಸ್]] ಗಳಲ್ಲಿ ಸಂರಕ್ಷಿಸಿಡಲಾಗಿದೆ.<ref>{{Cite web |url=http://www.romans-in-britain.org.uk/raw_mining.htm |title=''ದ ರೋಮನ್ಸ್ ಇನ್ ಬ್ರಿಟನ್,ಮೈನಿಂಗ್'' |access-date=2010-07-31 |archive-date=2010-07-20 |archive-url=https://web.archive.org/web/20100720073131/http://www.romans-in-britain.org.uk/raw_mining.htm |url-status=dead }}</ref>
===ಮಧ್ಯಕಾಲೀನ ಯುರೋಪ್===
[[ಮಧ್ಯಕಾಲೀನ ಯುರೋಪಿ]]ನಲ್ಲಿ ಗಣಿಗಾರಿಕೆ ಒಂದು ಕೈಗಾರಿಕೆಯಾಗಿ ನಾಟಕೀಯ ಬದಲಾವಣೆಗಳನ್ನು ಕಂಡಿತು.
ಗಣಿಗಾರಿಕಾ ಉದ್ಯಮ ಮಧ್ಯಕಾಲೀನ ಯುಗದ ಪ್ರಾರಂಭದಲ್ಲಿ ಮುಖ್ಯವಾಗಿ ತಾಮ್ರ ಮತ್ತು ಕಬ್ಬಿಣವನ್ನು ಹೊರತೆಗೆಯುವುದರ ಮೇಲೆ ಲಕ್ಷವಹಿಸಿತ್ತು.
ಇತರ ಬೆಲೆಬಾಳುವ ಲೋಹಗಳನ್ನೂ ಸಹ ಗಿಲೀಟು ಮಾಡಲು ಅಥವಾ ನಾಣ್ಯಗಳನ್ನು ತಯಾರಿಸಲು ಉಪಯೋಗಿಸಲಾಗುತ್ತಿತ್ತು.
ಪ್ರಾರಂಭದಲ್ಲಿ, ಬಹಳ ಲೋಹಗಳನ್ನು [[ಓಪನ್-ಪಿಟ್ ಗಣಿಗಾರಿಕೆ]] ಮೂಲಕ ಪಡೆಯಲಾಗುತ್ತಿತ್ತು, ಆಳವಾದ ಗಣಿ ಮಾರ್ಗಗಳನ್ನು ಅಗೆಯುವುದರ ಬದಲು, ಮೊದಲಿಗೆ ಅದಿರನ್ನು ಕಿರಿದಾದ ಆಳಗಳ ಮೂಲಕ ಹೊರ ತೆಗೆಯಲಾಗುತ್ತಿತ್ತು.
ಸುಮಾರು 14ನೆ ಶತಮಾನದ ಅವಧಿಯಲ್ಲಿ, ಆಯುಧಗಳು, ಕವಚ, ಕುದುರೆಲಾಳಗಳು ಮತ್ತು ಕುದುರೆ ಸವಾರಿ ಮಾಡುವಾಗ ಪಾದಗಳಿಗೆ ಆಧಾರವಾಗಿ ಧರಿಸುವ ಕಬ್ಬಿಣದ ಬಳೆಗಳ ಬೇಡಿಕೆಗಳು ಕಬ್ಬಿಣಕ್ಕೆ ಬೇಡಿಕೆಯನ್ನು ಬಹಳ ಹೆಚ್ಚಿಸಿದವು.
ಉದಾಹರಣೆಗೆ ಮಧ್ಯ ಕಾಲೀನ ಸೈನಿಕರು ಕೆಲವೊಮ್ಮೆ ಖಡ್ಗಗಳು, ಈಟಿಗಳು ಮತ್ತು ಇತರ ಆಯುಧಗಳ ಜೊತೆ ಚೈನುಗಳನ್ನು ಹೊಂದಿರುವ ಕವಚಗಳು ಅಥವಾ ಫಲಕಗಳ 100 ಪೌಂಡುಗಳ ಭಾರವನ್ನು ಹೊತ್ತಿರುತ್ತಿದ್ದರು.<ref>ಪ್ರಗತಿಯ ಸಂಸ್ಕೃತಿ. ರಾಬರ್ಟ್ ಫ್ರೈಡಲ್. ಎಂಐಟಿ ಮುದ್ರಣಾಲಯ 2007. ಪುಟ 13.</ref>
ಮಿಲಿಟರಿ ಉದ್ದೇಶಗಳಿಗೆ ಕಬ್ಬಿಣದ ಮೇಲೆ ಅಗಾಧ ಅವಲಂಬನೆ ಕಬ್ಬಿಣದ ಉತ್ಪಾದನೆ ಮತ್ತು ಹೊರತೆಗೆಯುವ ಕಾರ್ಯಾಚರಣೆಗಳು ಹೆಚ್ಚಾಗಲು ಸಹಾಯ ಮಾಡಿತು.
11ರಿಂದ 14ನೇ ಶತಮಾನಗಳಲ್ಲಿ, ಈ ಹೊಸ ಮಿಲಿಟರಿ ಅನ್ವಯಿಸುವಿಕೆಗಳು ಯೂರೋಪಿನ ತುಂಬ ಜನಸಂಖ್ಯಾ ಸ್ಫೋಟದ ಜೊತೆ ತಾಳೆಹೊಂದಿದವು, ಇದು ನಾಣ್ಯಗಳ ಅಭಾವವನ್ನು ತುಂಬಲು ಅಮೂಲ್ಯ ಲೋಹಗಳಿಗೆ ಬೇಡಿಕೆಯನ್ನು ಪುಷ್ಟೀಕರಿಸಿತು.<ref>{0/ಮಿಡಿವಿಯಲ್ ಸೈನ್ಸ್ ಆಯ್೦ಡ್ ಟೆಕ್ನಾಲಜಿ:ಒರಿಜನಲ್ ಹಿಸ್ಟರಿ.ಮಿಡಿವಿಯಲ್ ಐರೆನ್ ಆಯ್೦ಡ್ ಸ್ಟೀಲ್ – ಸಿಂಪ್ಲಿಫೈಡ್
Hall, Bert http://www.the-orb.net/encyclop/culture/scitech/iron_steel.html</ref>
ಲಭ್ಯವಿರುವ ತಾಂತ್ರಿಕತೆಯಲ್ಲಿ ಗಣಿಯನ್ನು ಪ್ರವೇಶಿಸುವ ಮಾರ್ಗಗಳು ಪಂಪ್ ಮಾಡಲು ಸಾಧ್ಯವಾಗದೆ ಎಲ್ಲಾ ಗಣಿಗಳು ತಳವನ್ನು ಮುಟ್ಟಿದಾಗ 1465ರ ಬೆಳ್ಳಿಯ ಬಿಕ್ಕಟ್ಟು ಉಂಟಾಯಿತು.<ref>{{Cite web |url=http://mygeologypage.ucdavis.edu/cowen/~GEL115/115CH7.html |title=ಆರ್ಕೈವ್ ನಕಲು |access-date=2010-07-31 |archive-date=2013-07-14 |archive-url=https://web.archive.org/web/20130714062613/http://mygeologypage.ucdavis.edu/cowen/~GEL115/115ch7.html |url-status=dead }}</ref>
ಆದಾಗ್ಯೂ ಈ ಅವಧಿಯಲ್ಲಿ [[ಬ್ಯಾಂಕ್ ನೋಟುಗಳ]] ಬಳಕೆ ಮತ್ತು ಕ್ರೆಡಿಟ್ನ ಬಳಕೆ ಅಮೂಲ್ಯ ಲೋಹಗಳ ಮೌಲ್ಯ ಮತ್ತು ಅವಲಂಬನೆಗಳನ್ನು ಕಡಿಮೆ ಮಾಡಿವೆ, ಮಧ್ಯಕಾಲೀನ ಗಣಿಗಾರಿಕೆಯಿಂದ ಈ ರೀತಿಯ ನಾಣ್ಯ ಪದ್ಧತಿ ಇನ್ನೂ ಚಲಾವಣೆಯಲ್ಲಿದೆ.
[[ಬೀಸು ಯಂತ್ರ]]ಗಳ ಪ್ರಕಾರದಲ್ಲಿ ನೀರಿನ ಶಕ್ತಿಯನ್ನು ಉಪಯೋಗಿಸುವುದು ವ್ಯಾಪಕವಾಗಿತ್ತು; ಅವುಗಳು ಅದಿರನ್ನು ಪುಡಿ ಮಾಡುವುದು, ಗಣಿಗಳಿಂದ ಅದಿರನ್ನು ಮೇಲೆತ್ತುವುದು ಮತ್ತು ಹೆಚ್ಚಿನ ಶಕ್ತಿಯ [[ಗಾಳಿ ಒದಗಿಸುವ ಸಾಧನ]]ದ ಮೂಲಕ ಗಾಳಿ ಬೆಳಕು ಒದಗಿಸುವುದನ್ನು ಮಾಡುತ್ತಿದ್ದವು.
1627ರಲ್ಲಿ [[ಕಪ್ಪು ಪೌಡರ]]ನ್ನು ಮೊದಲು ಈಗ [[ಸ್ಲೊವೇಕಿಯಾ]]ದ [[ಬನ್ಸ್ಕ ಸ್ಟೀವ್ನಿಕ]] ಆಗಿರುವ [[ಹಂಗೇರಿಯ ರಾಜ್ಯ]]ವಾಗಿದ್ದ [[ಸೆಲ್ಮೆಕ್ಬನ್ಯ]]ದಲ್ಲಿ ಉಪಯೋಗಿಸಿದ್ದರು.<ref>{0/ಹೈಸ್,ಎ ಜಿ&. Heiss, A.G. & Oeggl, K(2008). ಕಂಚಿನ ಯುಗದ ನಂತರ ಮತ್ತು ಕಬ್ಬಿಣ ಯುಗದ ಮೊದಲಿಗೆ Schwaz ಬ್ರಿಕ್ಸ್ಲೆಗ್ ಪ್ರದೇಶಗಳಲ್ಲಿ ತಾಮ್ರದ ಗಣಿಗಾರಿಕೆಯ ಸ್ಥಳಗಳಲ್ಲಿ ಮರದ ಇಂಧನ ಉಪಯೋಗಿಸಿದ್ದರ ವಿಶ್ಲೇಷಣೆ (ಟೈರೋಲ್,ಆಸ್ಟ್ರೇಲಿಯಾ) ''ವೆಜಿಟೇರಿಯನ್ ಹಿಸ್ಟರಿ ಆಯ್೦ಡ್ ಆಕಿಯೊಬಾಟನಿ'' 17(2):211-221, ಸ್ಪ್ರಿಂಗರ್ ಬರ್ಲಿನ್ / ಹೈಡೆಲ್ಬರ್ಗ್, [http://dx.doi.org/10.1007/s00334-007-0096-8].</ref>
ಕಲ್ಲನ್ನು ಸಿಡಿಸಲು ಮತ್ತು ಭೂಮಿಯನ್ನು ಸಡಿಲಗೊಳಿಸಲು ಮತ್ತು ಅದಿರಿನ ಶಿರೆಗಳನ್ನು ಹೊರತೆಗೆಯಲು ಕಪ್ಪು ಪೌಡರ್ ಅವಕಾಶ ಮಾಡಿಕೊಡುತ್ತದೆ, ಇದು [[ಬೆಂಕಿ ಹಾಕುವುದ]]ಕ್ಕಿಂತ ಹೆಚ್ಚು ವೇಗವಾಗಿ ಮಾಡುತ್ತದೆ, ಇದರಲ್ಲಿ ಕಲ್ಲು ಶಾಖಕ್ಕೆ ತೆರೆದುಕೊಳ್ಳುತ್ತಿತ್ತು ಮತ್ತು ನಂತರ ತಣ್ಣೀರಿನಲ್ಲಿ ತೋಯಿಸಲಾಗುತ್ತಿತ್ತು.
ಮೊದಲು ತೂರಲಾಗದ ಲೋಹಗಳು ಮತ್ತು ಅದಿರುಗಳ ಗಣಿಗಾರಿಕೆಗೆ ಕಪ್ಪು ಪೌಡರ್ ಅವಕಾಶ ಕಲ್ಪಿಸುತ್ತದೆ.<ref>ದಕ್ಷಿಣ ಭಾರತದ ಗ್ರಾನೈಟ್ ಕ್ವಾರಿಗಳಲ್ಲಿ ಫೈಯರ್ಸೆಟ್ಟಿಂಗ್ ಉಪಯೋಗ ಪೊಲ್ ಟಿ. ಕ್ರ್ಯಾಡಾಕ್ ದ ಬುಲೆಟಿನ್ ಆಫ್ ದ ಪೀಕ್ ಡಿಸ್ಟ್ರಿಕ್ಟ್ ಮೈನ್ಸ್ ಹಿಸ್ಟೋರಿಕಲ್ ಸೊಸೈಟಿ, ಸಂಪುಟ. 13 ನವೆಂಬರ್ 1. 1996</ref>
1762ರಲ್ಲಿ ವಿಶ್ವದ ಮೊದಲ ಗಣಿಗಾರಿಕಾ ಅಕಾಡೆಮಿ ಅದೇ ನಗರದಲ್ಲಿ ಪ್ರಾರಂಭವಾಯಿತು.
ಕಬ್ಬಿಣದ [[ನೇಗಿಲಿನ ಮೊಳೆ]]ಯಂತಹ ಕೃಷಿಯ ಆವಿಷ್ಕಾರಗಳ ಹೆಚ್ಚಿನ ಅಳವಡಿಕೆ, ಕಟ್ಟಡದ ಕೆಲಸಗಳಿಗೆ ಲೋಹದ ವಸ್ತುಗಳ ಬಳಕೆ, ಇವುಗಳು ಈ ಅವಧಿಯಲ್ಲಿ ಕಬ್ಬಿಣದ ಕೈಗಾರಿಕೆಗಳಲ್ಲಿ ಮಹತ್ತರ ಬೆಳವಣಿಗೆಗಳಿಗೆ ಒತ್ತು ನೀಡಿದವು. ಅರೆಸ್ಟ್ರಾ ದಂತಹ ಆವಿಷ್ಕಾರಗಳನ್ನು ಸ್ಪ್ಯಾನಿಷರು ಅದಿರನ್ನು ಹೊರತೆಗಗೆದ ನಂತರ ಪುಡಿ ಮಾಡಲು ಉಪಯೋಗಿಸುತ್ತಿದ್ದರು.
ಈ ಉಪಕರಣ ಪ್ರಾಣಿಗಳ ಬಲದಿಂದ ಮತ್ತು ಪ್ರಾಚೀನ ಮಧ್ಯ ಪೂರ್ವದ ಧಾನ್ಯ [[ಒಕ್ಕುವ]] ತಾಂತ್ರಿಕತೆಯನ್ನು ಹೋಲುವ ಯಾಂತ್ರಿಕ ತತ್ವಗಳನ್ನು ಉಪಯೋಗಿಸಿಕೊಂಡು ನಡೆಯುತ್ತಿತ್ತು.<ref>"ಬಂಗಾರ ಮತ್ತು ಬೆಳ್ಳಿ ಗಣಿಗಾರಿಕೆಯಲ್ಲಿ ಸ್ಪೇನ್ ಸಂಪ್ರದಾಯ." ಒಟೀಸ್ ಇ.ಯಂಗ್ ''[[ಅರಿಜೋನಾ ಆಯ್೦ಡ್ ದ ವೆಸ್ಟ್]]'', ಸಂಪುಟ. 7, ಸಂಖ್ಯೆ. 4 (ವಿಂಟರ್, 1965), ಪುಪು. 299-314 (''ಜರ್ನಲ್ ಆಫ್ ದ ಸೌತ್ವೆಸ್ಟ್'' ) ಸ್ಟೇಬಲ್ ಯುಆರ್ಎಲ್: http://www.jstor.org/stable/40167137.</ref>
ಮಧ್ಯ ಕಾಲೀನ ಯುಗದ ಗಣಿಗಾರಿಕಾ ವಿಧಾನಗಳ ಹೆಚ್ಚಿನ ವಿವರಗಳು [[ಬಿರಿಂಗುಶಿಯೋ]]ರ [[ಪಿರೊತೆಕ್ನಿಯ]] ಪುಸ್ತಕ ಮತ್ತು ಮುಖ್ಯವಾಗಿ [[ಜಾರ್ಜ್ ಎಗ್ರಿಕೊಲ]]ರ [[ದೆ ರೆ ಮೆಟಲಿಕ]] (1556) ಪುಸ್ತಕಗಳಿಂದ ಸಿಕ್ಕಿದವು.
ಜರ್ಮನಿ ಮತ್ತು ಸಕ್ಸನ್ ಗಣಿಗಳಲ್ಲಿ ಉಪಯೋಗಿಸಿದ ಬಹಳ ವಿವಿಧ ಗಣಿಗಾರಿಕಾ ವಿಧಾನಗಳನ್ನು ಈ ಪುಸ್ತಕಗಳು ವಿವರಿಸುತ್ತವೆ.
ಗಣಿಯನ್ನು ಪ್ರವೇಶಿಸುವ ಮಾರ್ಗಗಳಿಂದ ನೀರನ್ನು ಹೊರ ತೆಗೆಯುವುದು (ಇದರ ಬಗ್ಗೆ ಎಗ್ರಿಕೊಲ ವಿಶದವಾಗಿ ಹೇಳಿದೆ) ಮಧ್ಯಕಾಲೀನ ಗಣಿಗಾರರ ಎದುರು ನಿಂತ ಪ್ರಮುಖ ವಿಷಯಗಳಲ್ಲಿ ಒಂದಾಗಿತ್ತು.
ಹೊಸ ಸ್ತರಗಳನ್ನು ಪಡೆಯಲು ಗಣಿಗಾರರು ಆಳಕ್ಕೆ ಅಗೆದಂತೆ, ಪ್ರವಾಹ ಬರುವುದು ಸಹಜವಾದ ಅಡಚಣೆಯಾಯಿತು.
ಇದರ ಪರಿಣಾಮವಾಗಿ ಗಣಿಗಾರಿಕಾ ಕೈಗಾರಿಕೆಯಲ್ಲಿ ಅನಿರೀಕ್ಷಿತವಾಗಿ ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ಬೆಳೆಯಿತು, ವಿವಿಧ ಯಂತ್ರಗಳ ಬಳಕೆ ಮತ್ತು ಪ್ರಾಣಿಗಳು ಎಳೆಯುವ ಪಂಪುಗಳನ್ನು ಅಳವಡಿಸಲಾಯಿತು.
===ಉತ್ತರ ಮತ್ತು ದಕ್ಷಿಣ ಅಮೆರಿಕ ===
[[File:TamarackMiners CopperCountryMI sepia.jpg|thumb|245px|1905ರಲ್ಲಿ. ತಾಮ್ರ ದೇಶದಲ್ಲಿ ತಮರ್ಯಾಕ್ ಗಣಿಯಲ್ಲಿ ಗಣಿ ಕೆಲಸಗಾರ,ಮಿಚಿಗನ್, ಯು.ಎಸ್]]
[[ಉತ್ತರ ಅಮೇರಿಕಾ]]ದಲ್ಲಿ ಪ್ರಾಚೀನ, ಇತಿಹಾಸಪೂರ್ವ [[ತಾಮ್ರ]]ದ ಗಣಿಗಳು [[ಲೇಕ್ ಸುಪಿರಿಯರ್ನ]] ಉದ್ದಕ್ಕೂ ಇವೆ.<ref name="Lankton91">ಲ್ಯಾಂಕ್ಟನ್,ಎಲ್. (1991). ''ಕ್ರೆಡಲ್ ಟು ಗ್ರೇವ್: ಲೈಫ್,ವರ್ಕ್, ಆಯ್೦ಡ್ ಡೆತ್ ಎಟ್ ದ ಲೇಕ್ ಸುಪೀರಿಯರ್ ಕಾಪರ್ ಮೈನ್ಸ್ ''. ನ್ಯೂಯಾರ್ಕ್: ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, ಪು. 5-6.</ref><ref name="west70">ವೆಸ್ಟ್,ಜಿ.ಎ (1970). ''ಕಾಪರ್ : ಇಟ್ಸ್ ಮೈನಿಂಗ್ ಆಯ್೦ಡ್ ಯೂಸ್ ಬೈ ದ ಅಬಾರಿಜಿನ್ಸ್ ಆಫ್ ದ ಲೇಕ್ ಸುಪೀರಿಯರ್ ರೀಜನ್''. ವೆಸ್ಟ್ಪೋರ್ಟ್, Conn.: ಗ್ರೀನ್ವುಡ್ ಮುದ್ರಣಾಲಯ.</ref>
"ಭಾರತೀಯರು 5000 ವರ್ಷಗಳ ಹಿಂದಿನಿಂದ ಪ್ರಾರಂಭವಾದ ಈ ತಾಮ್ರದ ಪ್ರಯೋಜನ ಪಡೆದರು,"<ref name="Lankton91" /> ಮತ್ತು ತಾಮ್ರದ ಸಲಕರಣೆಗಳು, ಬಾಣದ ತುದಿಗಳು, ಮತ್ತು ಇತರ [[ಕಲಾಕೃತಿಗಳು]] ಪ್ರಾಂತೀಯ ವ್ಯಾಪಾರದ ವ್ಯವಸ್ಥೆಯ ಭಾಗವಾಗಿತ್ತು.
ಇದರ ಜೊತೆಗೆ, [[ಕಾರ್ಗಲ್ಲು]], [[ಚಕಮಕಿ ಕಲ್ಲು]], ಮತ್ತು ಇತರ ಖನಿಜಗಳನ್ನು ಹೊರತೆಗೆದು, ಹದಮಾಡಿ ಮಾರಲಾಯಿತು.<ref name="west70" />
ಕೆಲವು ಪ್ರದೇಶಗಳಲ್ಲಿ ಸಾಗಿಸುವ ತೊಂದರೆಯಿಂದ ಲೋಹಗಳು ಉಪಯೋಗಕ್ಕೆ ಬರದಿರುವುದನ್ನು ಮುಂಚಿನ ಫ್ರೆಂಚ್ ಪರಿಶೋಧಕರು ಎದುರಿಸಿದರು,<ref name="west70" /> ತಾಮ್ರವು ಕೊನೆಯದಾಗಿ ಇಡೀ ಖಂಡದ ತುಂಬ ಮುಖ್ಯ ನದಿಯ ಮಾರ್ಗಗಳಲ್ಲಿ ಮಾರಾಟವಾಯಿತು.
[[ಮನಿತೊಬ]], ಕೆನಡಗಳಲ್ಲಿ ಸಹ ವಾಡಿ ಲೇಕ್ನ ಹತ್ತಿರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಪ್ರಾಚೀನ [[ಸ್ಫಟಿಕಶಿಲೆ]]ಯ ಗಣಿಗಳಿದ್ದವು.<ref>ಬ್ರುನೊ, ಎಲ್. & ಹಿಯಾಮನ್, ಎಲ್.ಎಂ. (2004) ಲಾ ರೌಜ್ ಡೋಮಿನ್ನಲ್ಲಿ ಹೈಪೊಜೋನಲ್ ಒರಗಾನಿಕ್ ಬಂಗಾರ ಖನಿಜೀಕರಣ ರಚನಾ ನಿಯಂತ್ರಣ, ಟ್ರಾನ್ಸ್-ಹಡ್ಸನ್ ಒರೊಜೆನ್, ಸ್ಕಾಟ್ಚೆವನ್. ''ದ ಕೆನೆಡಿಯನ್ ಜರ್ನಲ್ ಆಫ್ ಅರ್ಥ್ ಸೈನ್ಸಸ್'', ಸಂಪುಟ. 41, ಸಂಚಿಕೆ 12, ಪುಪು. 1453-1471.</ref>
ಅಮೇರಿಕಾದ ಮುಂಚಿನ ವಸಾಹತಿನ ಇತಿಹಾಸದಲ್ಲಿ, "ಪ್ರಾಂತೀಯ ಚಿನ್ನ ಮತ್ತು ಬೆಳ್ಳಿಗಳನ್ನು ಅಪಹರಿಸಿ ಚಿನ್ನದ ಹಡಗುಗಳಲ್ಲಿ ಮತ್ತು ಭಾರವಾದ ಬೆಳ್ಳಿಯ ಗ್ಯಾಲನ್ಗಳಲ್ಲಿ ಸ್ಪೈನ್ಗೆ ಕಳುಹಿಸಲಾಯಿತು"<ref>ವಡೆನ್,ಎಚ್.ಇ. & ಪ್ರಿವೊಸ್ಟ್. ಜಿ. (2002). ''ಪಒಲಿಟಿಕ್ಸ್ ಆಫ್ ಲ್ಯಾಟಿನ್ ಅಮೆರಿಕಾ: ದ ಪವರ್ ಗೇಮ್''. ನ್ಯೂಯಾರ್ಕ್: ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ., ಪು. 35.</ref> ಮುಖ್ಯವಾಗಿ ಕೇಂದ್ರ ಮತ್ತು ದಕ್ಷಿಣ ಅಮೇರಿಕಾದ ಗಣಿಗಳಿಂದ.
ಅಮೇರಿಕಾದ [[ಪೂರ್ವ ಕೊಲಂಬಿಯ]]ದಲ್ಲಿ ಕ್ರಿಸ್ತಶಕ 700ರಲ್ಲಿ [[ಪಚ್ಚೆಕಲ್ಲಿನ]] ಗಣಿಗಾರಿಕೆ ಮಾಡಲಾಯಿತು; [[ಹೊಸ ಮೆಕ್ಸಿಕೋ]]ದ ಸೆರಿಲೋಸ್ ಗಣಿಗಾರಿಕೆ ಜಿಲ್ಲೆಯಲ್ಲಿ 1700ಕ್ಕಿಂತ ಮೊದಲು [[ಕಲ್ಲಿನ ಸಲಕರಣೆ]]ಗಳನ್ನು ಉಪಯೋಗಿಸಿ ಸುಮಾರು 15000 ಟನ್ ಕಲ್ಲನ್ನು ಚಲ್ಚಿಹ್ಯುತ್ಲ್ ಪರ್ವತದಿಂದ ಹೊರತೆಗೆಯಲಾಗಿತ್ತು ಎಂದು ಅಂದಾಜಿಸಲಾಗಿದೆ.<ref>ಮೆನಾರ್ಡ್, ಎಸ್.ಆರ್., ಲೈಸೆನ್ಬೇ, ಎ.ಎಲ್. & ರೋಜರ್ಸ್, ಜೆ. (2002). ಪಿಚ್ಚರ್ ರಾಕ್ 7.5 ಪ್ರಾಥಮಿಕ ಭೂವಿಜ್ಞಾನ ನಕ್ಷೆ- ಮಿನಿಟ್ ಕ್ವಾಡ್ರಾಂಗಲ್ ಸೇಂತ್ ಫೆ ಕಂಟ್ರಿ,ಸೆಂಟ್ರಲ್ ನ್ಯೂ ಮೆಕ್ಸಿಕೊ ನ್ಯೂ ಮೆಕ್ಸಿಕೊ ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲಗಳು, ಒಪನ್ -ಫೈಲ್ ರಿಪೋರ್ಟ್ ಡಿಎಂ-49.</ref><ref>ಸೆರಲ್ಲೊಸ್ ಹಿಲ್ಸ್ ಪಾರ್ಕ್ ಕೊಲಿಷನ್, (2000). ಸೆರಲ್ಲೊಸ್ ಹಿಲ್ಸ್ ಹಿಸ್ಟೋರಿಕ್ ಪಾರ್ಕ್ ವರ್ಷನ್ ಸ್ಟೇಟ್ಮೆಂಟ್. ಸಾರ್ವಜನಿಕ ಕಾಗದ ಪತ್ರಗಳು : ಲೇಖಕ. ಅಗಸ್ಟ್ 27, 2007ರಂದು ಪರಿಷ್ಕರಿಸಲಾಗಿದೆ, [http://www.cerrilloshills.org/Coalition/document.html] {{Webarchive|url=https://web.archive.org/web/20120801011021/http://www.cerrilloshills.org/Coalition/document.html|date=2012-08-01}}.</ref>
19ನೇ ಶತಮಾನದಲ್ಲಿ [[ಸಂಯುಕ್ತ ಸಂಸ್ಥಾನಗಳ]]ಲ್ಲಿ ಗಣಿಗಾರಿಕೆ ಸಾಮಾನ್ಯವಾಯಿತು, ಸಂಯುಕ್ತ ರಾಷ್ಟ್ರದ ಭೂಮಿಗಳಲ್ಲಿ ಗಣಿಗಾರಿಕೆಯನ್ನು ಉತ್ತೇಜಿಸಲು [[1872ರ ಜನರಲ್ ಮೈನಿಂಗ್ ಏಕ್ಟ್]] ನ್ನು ಅಂಗೀಕರಿಸಲಾಯಿತು.<ref>ಮ್ಯಾಕ್ಕ್ಲ್ಯುರ್ ಆರ್,ಸ್ನೀಡರ್ ಎ. [http://www.seattlepi.com/specials/mining/26875_mine11.shtml ದ ಜನರಲ್ ಮೈನಿಂಗ್ ಆಯ್ಕ್ಟ್ ಆಫ್ 1872 ಹ್ಯಾಸ್ ಲೆಫ್ಟ್ ಎ ಲೀಗಸಿ ಆಫ್ ರಿಚಸ್ ಆಯ್೦ಡ್ ರುಯಿನ್]. ''ಸೀಟಲ್ ಪಿಐ''.</ref> 1800 ರ ದಶಕದ ಮಧ್ಯದಲ್ಲಿ [[ಕ್ಯಾಲಿಫೋರ್ನಿಯಾ ಗೋಲ್ಡ್ ರಷ್]]ನ ಜೊತೆ ಖನಿಜಗಳಿಗಾಗಿ ಮತ್ತು ಅಮೂಲ್ಯವಾದ ಲೋಹಗಳಿಗಾಗಿ [[ಯಾವುದೇ ಕೃಷಿ ಕ್ಷೇತ್ರ]]ದ ಜೊತೆಗೆ ಗಣಿಗಾರಿಕೆಗಳು [[ಪಶ್ಚಿಮ ಕಡೆಗಿನ ವಿಸ್ತರಣೆ]]ಯಲ್ಲಿ ಪೆಸಿಫಿಕ್ ಕರಾವಳಿ ತೀರದ ಕಡೆಗೆ ನಡೆಸುವ ಒಂದು ಸಂಗತಿಯಾಗಿತ್ತು. ಪಶ್ಚಿಮದ ಪರಿಶೋಧನೆಯ ಜೊತೆ, ಗಣಿಗಾರಿಕಾ ಶಿಬಿರಗಳು ಸ್ಥಾಪಿಸಲ್ಪಟ್ಟವು ಮತ್ತು "ಒಂದು ವಿಭಿನ್ನವಾದ ಚೇತನವನ್ನು, ಹೊಸ ದೇಶಕ್ಕೆ ಒಂದು ಅನುಭವದ ಸ್ವತ್ತನ್ನು ಯಥಾವತ್ತಾಗಿ ವಿವರಿಸುತ್ತದೆ;" ಗೋಲ್ಡ್ ರಷ್ಗಳು ಅವರನ್ನು ಹಿಂದೆ ಹಾಕುವ ಅಶಾಶ್ವತ ಪಶ್ಚಿಮದ ಲ್ಯಾಂಡ್ ರಷರ್ಸ್ಗಳ ಇದೇ ರೀತಿಯಾದ ಸಮಸ್ಯೆಗಳನ್ನು ಅನುಭವಿಸುತ್ತವೆ.<ref>ಬೂರ್ಸ್ಟಿನ್, ಡಿ.ಜೆ. (1965). ''ದ ಅಮೆರಿಕನ್ಸ್:ದ ನ್ಯಾಷನಲ್ ಎಕ್ಸ್ಪೀರಿಯನ್ಸ್''. ನ್ಯೂಯಾರ್ಕ್: ವಿಂಟೇಜ್ ಬುಕ್ಸ್,ಪುಪು. 78-81.</ref> ರೈಲ್ವೇ ರಸ್ತೆಗಳಿಂದ ಸಂಯೋಜಿಸಲ್ಪಟ್ಟ ಕಾರಣದಿಂದ ಹಲವಾರು ಜನರು ಗಣಿಗಾರಿಕೆಯಲ್ಲಿನ ಕೆಲಸದ ಅವಕಾಶಗಳಿಗಾಗಿ ಪಶ್ಚಿಮದ ಕಡೆಗೆ ಪ್ರಯಾಣ ಮಾಡಿದರು.
[[ಡೆನ್ವರ್]] ಮತ್ತು [[ಸೆಕ್ರಮೆಂತೊ]]ನಂತಹ ಪಶ್ಚಿಮ ಭಾಗದ ನಗರಗಳು ಗಣಿಗಾರಿಕಾ ಪಟ್ಟಣಗಳಾಗಿ ಜನ್ಮತಾಳಿದವು.
==ಗಣಿಗಾರಿಕಾ ವಿಧಾನಗಳು ಮತ್ತು ಕಾರ್ಯವೈಖರಿ ==
===ಗಣಿ ಅಭಿವೃದ್ಧಿಯ ಹಂತಗಳು ===
[[File:Simplified_world_mining_map_1.png|thumb|right|ಜಗತ್ತಿನ ಸರಳೀಕೃತ ಗಣಿ ನಕ್ಷೆ (ದೊಡ್ಡದಕ್ಕಾಗಿ ಕ್ಲಿಕ್ ಮಾಡಿ)]]
[[File:Simplified_world_mining_map_2.png|thumb|right|ಇನ್ನೊಂದು ಜಗತ್ತಿನ ಸರಳೀಕೃತ ಗಣಿ ನಕ್ಷೆ (ದೊಡ್ಡದಕ್ಕಾಗಿ ಕ್ಲಿಕ್ ಮಾಡಿ(ದೊಡ್ಡದನ್ನಾಗಿ ಮಾಡಲು ಕ್ಲಿಕ್ ಮಾಡಿ)]]
ಅದಿರಿನ ಗಣಿಯನ್ನು ಅನ್ವೇಷಿಸಿ ಖನಿಜಗಳ ಹೊರತೆಗೆಯುವಿಕೆಯಿಂದ ಹಿಡಿದು ಕೊನೆಯದಾಗಿ ಭೂಮಿಯನ್ನು ಮೊದಲಿನ ಸ್ಥಿತಿಗೆ ತರುವವರೆಗೆ ಗಣಿಗಾರಿಕಾ ಕಾರ್ಯಾಚರಣೆ ಹಲವಾರು ಹಂತಗಳನ್ನು ಒಳಗೊಂಡಿದೆ.
ಮೊದಲು ಅದಿರಿನ ಗಣಿಯನ್ನು ಅನ್ವೇಷಿಸುವುದು, ಇದು ಅನ್ವೇಷಿಸಲು [[ಹುಡುಕುವುದು]] ಅಥವಾ [[ಪರಿಶೋಧನೆ]]ಯ ಮೂಲಕ ನಡೆಯುವುದು, ನಂತರ ವಿಸ್ತಾರ, ಪ್ರದೇಶ ಮತ್ತು ಅದಿರಿನ ಗಣಿಯ ಮೌಲ್ಯಗಳನ್ನು ನಿರ್ಧರಿಸುವುದು.
ಇದರಿಂದ ನಿಕ್ಷೇಪದ [[ಮಟ್ಟ]] ಮತ್ತು ಪ್ರಮಾಣವನ್ನು ಅಂದಾಜಿಸಲು ಗಣಿತೀಯ [[ಮೂಲಸಂಪತ್ತಿನ ಅಂದಾಜು]] ಸಾಧ್ಯವಾಗುತ್ತದೆ.
ಅದಿರಿನ ನಿಕ್ಷೇಪದ ಸೈದ್ಧಾಂತಿಕ ಆರ್ಥಿಕತೆಯನ್ನು ನಿರ್ಧರಿಸಲು ಪೂರ್ವ-ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಈ ಅಂದಾಜು ಉಪಯೋಗವಾಗುತ್ತದೆ.
ಪ್ರಾರಂಭದ ಹಂತದಲ್ಲಿ, ಅಂದಾಜಿಸಿದ್ದರಲ್ಲಿ ಬಂಡವಾಳ ಹೂಡಿಕೆ ಮತ್ತು ಇಂಜನೀಯರಿಂಗ್ ಅಧ್ಯಯನ ಸಮರ್ಥವಾಗಿದೆಯೇ ಎಂದು ಇದು ಗುರುತಿಸುತ್ತದೆ ಮತ್ತು ಮುಂದಿನ ಕೆಲಸಗಳಿಗೆ ಜಾಗಗಳನ್ನು ಮತ್ತು ಹಾನಿ ಸಂಬವನೀಯತೆಗಳನ್ನು ಗುರುತಿಸುತ್ತದೆ.
ಆರ್ಥಿಕ ಸ್ಥಿತಿ, ತಾಂತ್ರಿಕ ಮತ್ತು ಆರ್ಥಿಕ ತೊಂದರೆಗಳು ಮತ್ತು ಪ್ರಾಜೆಕ್ಟಿನ ಪ್ರಾಬಲ್ಯಗಳನ್ನು ಪರೀಕ್ಷಿಸಲು [[ಕಾರ್ಯಸಾಧ್ಯತಾ ಅಧ್ಯಯನ]]ವನ್ನು ನಡೆಸುವುದು ಮುಂದಿನ ಹಂತವಾಗಿದೆ.
ಆಗ ಗಣಿಗಾರಿಕಾ ಕಂಪೆನಿ ಗಣಿಗಾರಿಕೆಯನ್ನು ಪ್ರಾರಂಭಿಸಬೇಕೋ ಅಥವಾ ಪ್ರಾಜೆಕ್ಟಿನಿಂದ ದೂರ ಸರಿಯಬೇಕೋ ಎಂಬುದನ್ನು ನಿರ್ಧರಿಸುತ್ತದೆ.
ಇದು ಆರ್ಥಿಕವಾಗಿ ಮರಳಿಪಡೆಯಬಹುದಾದ ನಿಕ್ಷೇಪದ ಭಾಗವನ್ನು ಪರೀಕ್ಷಿಸಲು ಯೋಜಿಸುವುದು, [[ಲೋಹ ರಚನೆಯ ಅಧ್ಯಯನ]] ಮತ್ತು ಅದಿರನ್ನು ಪುನಃ ಪಡೆಯಲು ಸಾಧ್ಯವಿರುವಿಕೆ, ಮಾರುಕಟ್ಟೆಯ ಸಾಧ್ಯತೆಗಳು ಮತ್ತು ಅದಿರು ಸಾಂದ್ರಣದ ವೇತನದ ಸಾಧ್ಯತೆ, ಇಂಜನೀಯರಿಂಗ್ ಸಂಬಂಧಪಟ್ಟ ವಿಷಯಗಳು, ಹಿಟ್ಟುಮಾಡುವ ಮತ್ತು ಅಧಾರ ರಚನೆಯ ವೆಚ್ಚಗಳು, ಹಣಕಾಸು ಮತ್ತು ಷೇರುಗಳ ಅವಶ್ಯಕತೆಗಳು ಮತ್ತು ತೋಡುಗೆಲಸದ ಪ್ರಾರಂಭದಿಂದ ಉದ್ಧರಣದವರೆಗೆ ಸೂಚಿಸಿದ ಗಣಿಯ ವಿಶ್ಲೇಷಣೆಗಳನ್ನು ಒಳಗೊಂಡಿದೆ.
ಅದಿರಿನ ನಿಕ್ಷೇಪ ಹೊರತೆಗೆಯಲು ಯೋಗ್ಯವಾಗಿದೆ ಎಂದು ವಿಶ್ಲೇಷಣೆ ನಿರ್ಧರಿಸಿದ ನಂತರ, ಅದಿರಿನ ನಿಕ್ಷೇಪವನ್ನು ಪಡೆಯುವ ಅಭಿವೃದ್ಧಿ ಕಾರ್ಯ ಪ್ರಾರಂಭವಾಗುತ್ತದೆ.
ಗಣಿ ಕಟ್ಟಡಗಳು ಮತ್ತು ಕಾರ್ಯಾಚರಣೆಯ ಯಂತ್ರಗಳನ್ನು ನಿರ್ಮಿಸಲಾಗುವುದು ಮತ್ತು ಇತರ ಅವಶ್ಯಕ ಸಲಕರಣೆಗಳನ್ನು ಪಡೆಯಲಾಗುತ್ತದೆ.
ಅದಿರನ್ನು ಪಡೆಯಲು ಗಣಿಗಾರಿಕಾ ಕಾರ್ಯಾಚರಣೆ ಪ್ರಾರಂಭವಾಗುತ್ತದೆ ಮತ್ತು ಎಲ್ಲಿಯವರೆಗೆ ಕಂಪನಿ ಗಣಿಯ ಕಾರ್ಯಾಚರಣೆಯನ್ನು ಆರ್ಥಿಕವಾಗಿ ಮಾಡಬಹುದು ಎಂದು ಯೋಚಿಸುತ್ತದೆಯೋ ಅಲ್ಲಿಯವರೆಗೆ ಮುಂದುವರೆಯುತ್ತದೆ
ಒಂದುಸಲ ಗಣಿಯಿಂದ ಉತ್ಪಾದನೆಯಾದ ಎಲ್ಲ ಅದಿರನ್ನು ಲಾಭಕರವಾಗಿ ಪಡೆದ ಮೇಲೆ, ಮುಂದಿನ ಬಳಕೆಗೆ ಅನುವಾಗುವಂತೆ ಗಣಿಗಾರಿಕೆಗೆ ಉಪಯೋಗಿಸಿದ ಭೂಮಿಯ [[ಉದ್ಧರಣ]] ಕಾರ್ಯ ಪ್ರಾರಂಭವಾಗುತ್ತದೆ.
=== ಗಣಿಗಾರಿಕೆ ಕಾರ್ಯವಿಧಾನಗಳು ===
[[File:Minecart toilet.jpg|thumb|upright|ಮೈನ್ಕಾರ್ಟ್ ಶೌಚಾಲಯ, ಬಿಸ್ಬಿಯಲ್ಲಿ ಉಪಯೋಗಿಸುತ್ತಾರೆ,ಅರಿಜೋನಾ]]
ಗಣಿಗಾರಿಕೆಯ ಕಾರ್ಯವಿಧಾನಗಳನ್ನು ಎರಡು [[ಉತ್ಖನನ]] ಗುಂಪುಗಳಾಗಿ ವಿಭಾಗಿಸಲಾಗಿದೆ: ಮೇಲ್ಮೈ ಗಣಿಗಾರಿಕೆ ಮತ್ತು ಉಪಮೆಲ್ಮೈ (ನೆಲದಡಿಯ) ಗಣಿಗಾರಿಕೆ.
ಮೇಲ್ಮೈ ಗಣಿಗಾರಿಕೆ ಹೆಚ್ಚು ಸಾಮಾನ್ಯವಾಗಿದೆ, ಉದಾಹರಣೆಗೆ ಸಂಯುಕ್ತ ಸಂಸ್ಥಾನಗಳಲ್ಲಿ 98% ಲೋಹಿಯ ಅದಿರುಗಳನ್ನು ಒಳಗೊಂಡಂತೆ ಖನಿಜಗಳ 85% ನ್ನು (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲವನ್ನು ಬಿಟ್ಟು) ಉತ್ಪಾದಿಸುತ್ತದೆ.
ಪ್ರಮಾಣವನ್ನು ಮೂಲ ವಸ್ತುಗಳ ಎರಡು ಸಾಮಾನ್ಯ ಗುಂಪುಗಳಾಗಿ ವಿಭಾಗಿಸಲಾಗಿದೆ: ಪ್ಲೇಸರ್ ನಿಕ್ಷೇಪಗಳು ಇದು ನದಿಯ ಜಲ್ಲಿ ಕಲ್ಲುಗಳಲ್ಲಿ, ಸಮುದ್ರ ತೀರದ ಮರಳುಗಳಲ್ಲಿ ಅಡಕವಾಗಿರುವ ಅಮೂಲ್ಯವಾದ ಖನಿಜಗಳು, ಮತ್ತು ಇತರ ಅಸಂಯೋಜಿತ ವಸ್ತುಗಳನ್ನು ಒಳಗೊಂಡಿದೆ; ಮತ್ತು ''ಭಾರದ ನಿಕ್ಷೇಪಗಳು'', ಅಲ್ಲಿ ಪದರುಗಳಲ್ಲಿ ಅತ್ಯಮೂಲ್ಯವಾದ ಖನಿಜಗಳು ಕಂಡುಬಂದವು, ಪದರಗಳಲ್ಲಿ, ಅಥವಾ ಖನಿಜಗಳ ದೊರಕುವಿಕೆಯು ಸಾಮಾನ್ಯವಾಗಿ ಸ್ವಾಭಾವಿಕ ಕಲ್ಲುಗಳ ಸಮೂಹಗಳ ಮೂಲಕ ಪೂರ್ತಿ ಜಾಗದಲ್ಲಿ ವಿಂಗಡಿಸಲ್ಪಟ್ಟಿರುತ್ತವೆ.
ಪ್ಲೇಸರ್ ಅಥವಾ ಲೋಹ ರೇಖೆ, ಎರಡೂ ರೀತಿಯ ಅದಿರಿನ ನಿಕ್ಷೇಪಗಳನ್ನು ಮೇಲ್ಮೈ ಮತ್ತು ನೆಲದಡಿಯ ಗಣಿಗಾರಿಕೆ ಎರಡೂ ವಿಧಾನಗಳಿಂದ ಹೊರ ತೆಗೆಯುತ್ತಾರೆ.
ಪ್ಲೇಸರ್ ಅದಿರಿನ ವಸ್ತುಗಳ ಕಾರ್ಯಾಚರಣೆ [[ಸ್ಲುಯಿಸ್]] ಬಾಕ್ಸಸ್ನಂತಹ ಗುರುತ್ವ ಆಧಾರದ ಬೇರ್ಪಡಿಸುವ ವಿಧಾನಗಳನ್ನು ಒಳಗೊಂಡಿದೆ.
ಕಾರ್ಯಾಚರಣೆಯ ಮೊದಲು ಮರಳು ಅಥವಾ ಜಲ್ಲಿ ಕಲ್ಲುಗಳನ್ನು ಬೇರ್ಪಡಿಸಲು ಜರಡಿ ಹಿಡಿಯುವ ಅಥವಾ ತೊಳೆಯುವ ಅವಶ್ಯಕತೆ ಬರಬಹುದು.
ಮೇಲ್ಮೈ ಅಥವಾ ಉಪಮೇಲ್ಮೈ ಗಣಿಗಾರಿಕೆ ಯಾವುದಿದ್ದರೂ, ಲೋಹ ರೇಖೆ ಗಣಿಯ ಅದಿರಿನ ಕಾರ್ಯಾಚರಣೆಗೆ, ಬೆಲೆಬಾಳುವ ಖನಿಜಗಳನ್ನು ಹೊರತೆಗೆಯಲು ಪ್ರಾರಂಭಿಸುವ ಮೊದಲು ಕಲ್ಲು ಅದಿರನ್ನು ಒಡೆಯುವುದು ಮತ್ತು ಪುಡಿ ಮಾಡುವ ಅವಶ್ಯಕತೆ ಇದೆ.
ಲೋಹ ರೇಖೆ ಅದಿರನ್ನು ಒಡೆದ ನಂತರ, ಬೆಲೆಬಾಳುವ ಖನಿಜಗಳನ್ನು ಒಂದು ಅಥವಾ ಕೆಲವು ಯಾಂತ್ರಿಕ ಮತ್ತು ರಾಸಾಯನಿಕ ವಿಧಾನಗಳ ಸಂಯೋಗದಲ್ಲಿ ಪಡೆಯಲಾಗುತ್ತದೆ.
[[File:UMine.JPG|thumb|left|ಮೊಯಾಬ್ ಸಮೀಪ ಯುರೆನಿಯಂ ಗಣಿ,ಉತಾಹ್]]
ಕೆಲವು ಗಣಿಗಾರಿಕೆ, [[ಯುರೇನಿಯಂ ಗಣಿಗಾರಿಕೆ]] ಮತ್ತು ಇತ್ತೀಚಿನ ದಿನಗಳಲ್ಲಿ ಮಾಡುತ್ತಿರುವ ಭೂಮಿಯ ಅಪರೂಪದ ವಸ್ತುಗಳ ಗಣಿಗಾರಿಕೆಗಳಂತಹ ಕೆಲವು ಗಣಿಗಾರಿಕೆಗಳನ್ನು [[ಇನ್-ಸಿತು ಲೀಚ್]] ನಂತಹ ವಿಶೇಷ ವಿಧಾನಗಳ ಮೂಲಕ ಮಾಡಲಾಗುತ್ತದೆ: ಈ ವಿಧಾನದಲ್ಲಿ ಮೇಲ್ಮೈ ಮತ್ತು ನೆಲದಡಿಯಲ್ಲಿ ಎಲ್ಲೂ ಅಗೆಯುವುದಿಲ್ಲ.
ಈ ವಿಧಾನದಲ್ಲಿ ಸಿಗುವ ಖನಿಜಗಳನ್ನು ಹೊರತೆಗೆಯಲು ಲೀನವಾಗಬಲ್ಲ [[ಪೊಟ್ಯಾಶ್]], [[ಪೊಟ್ಯಾಶಿಯಮ್ ಕ್ಲೋರೈಡ್]], [[ಸೋಡಿಯಮ್ ಕ್ಲೋರೈಡ್]], [[ಸೋಡಿಯಮ್ ಸಲ್ಫೇಟ್]] ಮತ್ತು [[ಯುರೇನಿಯಮ್ ಆಕ್ಸೈಡ್ಗ]]ಳ ಅವಶ್ಯಕತೆ ಇದೆ, ಇವು ನೀರಿನಲ್ಲಿ ಕರಗುತ್ತವೆ.<ref>{{Cite web |url=http://world-nuclear.org/info/inf27.html |title=ಆರ್ಕೈವ್ ನಕಲು |access-date=2010-07-31 |archive-date=2010-08-17 |archive-url=https://web.archive.org/web/20100817042715/http://www.world-nuclear.org/info/inf27.html |url-status=dead }}</ref><ref>{{Cite web |url=http://www.kazatomprom.kz/cgi-bin/index.cgi?p27&version=en |title=ಆರ್ಕೈವ್ ನಕಲು |access-date=2026-08-09 |archive-date=2013-05-10 |archive-url=https://web.archive.org/web/20130510144331/http://www.kazatomprom.kz/cgi-bin/index.cgi?p27&version=en |url-status=dead }}</ref>
ಹುದುಗಿದ್ದ ಅದಿರಿನ ನಿಕ್ಷೇಪವನ್ನು ತಲುಪಲು ಮೇಲ್ಮೈನ ಗಿಡ ಮರ ಸಸ್ಯಗಳು, ಕೊಳೆಯನ್ನು, ಅವಶ್ಯಕತೆಯಿದ್ದರೆ ತಳಪಾಯದ ಸ್ತರಗಳನ್ನು ತೆಗೆದು (ಹೊದಿಕೆಯನ್ನು ತೆಗೆದು) [[ಮೇಲ್ಮೈ ಗಣಿಗಾರಿಕೆ]]ಯನ್ನು ಮಾಡುತ್ತಾರೆ.
ಮೇಲ್ಮೈ ಗಣಿಗಾರಿಕೆಯ ಕಾರ್ಯಾಚರಣೆ ಇವುಗಳನ್ನು ಒಳಗೊಂಡಿದೆ; [[ಓಪನ್ ಪಿಟ್ ಗಣಿಗಾರಿಕೆ]], ಇದರಲ್ಲಿ ನೆಲದಲ್ಲಿನ ತೆರೆದ ಹೊಂಡದ ಮೂಲಕ ವಸ್ತುಗಳನ್ನು ಪಡೆಯುವುದು, ನಿರ್ಮಾಣದ ಸಾಮಗ್ರಿಗಳನ್ನು ಓಪನ್ ಪಿಟ್ ಗಣಿಯಿಂದ ಒಟ್ಟುಗೂಡಿಸುವುದು ಅಥವಾ [[ಕಲ್ಲು]]ತೆಗೆಯುವಿಕೆ, [[ಸ್ಟ್ರಿಪ್ ಗಣಿಗಾರಿಕೆ]], ಇದರಲ್ಲಿ ಅಡಿಯಲ್ಲಿರುವ ಅದಿರನ್ನು ತೆಗೆಯಲು ಮೇಲ್ಮೈ ಪದರುಗಳನ್ನು ತೆಗೆಯಲಾಗುವುದು, ಮತ್ತು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ [[ಮೌಂಟೇನ್ಟಾಪ್ ರಿಮೂವಲ್]], ಇದರಲ್ಲಿ ಆಳದಲ್ಲಿರುವ ಅದಿರಿನ ನಿಕ್ಷೇಪವನ್ನು ತಲುಪಲು ಪರ್ವತದ ತುದಿಯನ್ನು ತೆಗೆದುಕೊಂಡು ಪ್ರಾರಂಭಿಸುವುದು.
ಆಳದಲ್ಲಿ ಹುದುಗಿರದ ಕಾರಣದಿಂದ, ಹೆಚ್ಚಿನ (ಆದರೆ ಎಲ್ಲವೂ ಅಲ್ಲ) ಪ್ಲೇಸರ್ ನಿಕ್ಷೇಪಗಳನ್ನು ಮೇಲ್ಮೈ ವಿಧಾನಗಳ ಮೂಲಕ ಗಣಿಗಾರಿಕೆ ಮಾಡಲಾಗುವುದು.
ಕೊನೆಯದಾಗಿ [[ಲ್ಯಾಂಡ್ಫಿಲ್ ಗಣಿಗಾರಿಕೆ]], ಇದರಲ್ಲಿ ಗಣಿಗಾರಿಕೆ ಮಾಡುವ ಸ್ಥಳದಲ್ಲಿ [[ಲ್ಯಾಂಡ್ಫಿಲ್ಗ]]ಳನ್ನು ತೆಗೆದುಹಾಕಿ ಕಾರ್ಯಾಚರಣೆ ಮಾಡಲಾಗುವುದು.<ref>[http://www.enviroalternatives.com/landfill.html ಲ್ಯಾಂಡ್ಫಿಲ್ ಮೈನಿಂಗ್] {{Webarchive|url=https://web.archive.org/web/20170523045629/http://www.enviroalternatives.com/landfill.html |date=2017-05-23 }} ಲ್ಯಾಂಡ್ಫಿಲ್ ಮೈನಿಂಗ್, ಇಂಟಿಗ್ರೇಟೇಡ್ ಸಸ್ಟೇನೆಬಲ್ ಮ್ಯಾನೇಜ್ಮೆಂಟ್ ಆಫ್ ವೇಸ್ಟ್ ಮೂಲಕ ಸಂರಕ್ಷಿಸಲ್ಪಟ್ಟ ಸಂಪನ್ಮೂಲಗಳು, ವರ್ಲ್ಡ್ ರಿಸೋರ್ಸ್ ಫೌಂಡೇಶನ್ನಿಂದ ಟೆಕ್ನಿಕಲ್ ಬ್ರೀಫ್.</ref>
{{wide image|Tagebau_Garzweiler_Panorama_2005.jpg|1200px|Open-pit mine near [[Garzweiler]], [[ಜರ್ಮನಿ]]}}
[[ಉಪ-ಮೇಲ್ಮೈ ಗಣಿಗಾರಿಕೆ]]ಯಲ್ಲಿ, ಹುದುಗಿರುವ ಅದಿರಿನ ನಿಕ್ಷೇಪಗಳನ್ನು ತೆಗೆಯಲು ಸುರಂಗಗಳನ್ನು ಅಥವಾ ತೋಡುದಾರಿಗಳನ್ನು ಭೂಮಿಯಲ್ಲಿ ಮಾಡಲಾಗುವುದು.
ಸುರಂಗಗಳು ಮತ್ತು ತೋಡುದಾರಿಗಳ ಮೂಲಕ ಅದಿರನ್ನು ಕಾರ್ಯಾಚರಣೆಗೆ, ನಿರುಪಯುಕ್ತ ಕಲ್ಲನ್ನು ಎಸೆಯಲು ಮೇಲೆ ತರಲಾಗುವುದು.
ಖನಿಜದ ಗಣಿಯನ್ನು ತಲುಪಲು ಉಪಯೋಗಿಸಲಾದ ವಿಧಾನ ಅಥವಾ ಹೊರತೆಗೆದ ವಿಧಾನ, ಯಾವ ರೀತಿಯ ತೋಡುದಾರಿಗಳನ್ನು ಉಪಯೋಗಿಸಲಾಗಿದೆ ಎನ್ನುವುದರ ಆಧಾರದ ಮೇಲೆ ಉಪ-ಮೇಲ್ಮೈ ಗಣಿಗಾರಿಕೆಯನ್ನು ವಿಭಾಗಿಸಲಾಗಿದೆ.
[[ಡ್ರಿಫ್ಟ್ ಗಣಿಗಾರಿಕೆ]] ಸಮತಲವಾದ ಪ್ರವೇಶದ ಸುರಂಗಗಳನ್ನು ಉಪಯೋಗಿಸುತ್ತವೆ, [[ಸ್ಲೋಪ್ ಗಣಿಗಾರಿಕೆ]] ಕರ್ಣೀಯವಾದ (ಓರೆಯಾದ) ಇಳಿಜಾರು ಪ್ರವೇಶ ಮಾರ್ಗಗಳನ್ನು ಉಪಯೋಗಿಸುತ್ತವೆ, ಮತ್ತು [[ಶಾಫ್ಟ್ ಗಣಿಗಾರಿಕೆ]] ಲಂಬವಾದ ಪ್ರವೇಶ ಮಾರ್ಗಗಳನ್ನು ಹೊಂದಿರುತ್ತದೆ.
ಇತರ ವಿಧಾನಗಳು [[ಶ್ರಿಂಕೆಜ್ ಸ್ಟೋಪ್ ಗಣಿಗಾರಿಕೆ]]ಯಲ್ಲಿ ಇಳಿಜಾರಾದ ನೆಲಮಾಳಿಗೆಯನ್ನು ನಿರ್ಮಿಸಿ ಮೇಲೆ ಗಣಿಗಾರಿಕೆಯನ್ನು ಮಾಡಲಾಗುವುದು, [[ಲಾಂಗ್ ವಾಲ್ ಗಣಿಗಾರಿಕೆ]]ಯಲ್ಲಿ ನೆಲದಡಿಯ ಮೇಲ್ಮೈನ ವಿಸ್ತಾರವಾದ ಅದಿರನ್ನು ಪುಡಿ ಮಾಡಲಾಗುವುದು ಮತ್ತು [[ರೂಂ ಮತ್ತು ಪಿಲ್ಲರ್]] ಇದರಲ್ಲಿ ರೂಮಿನ ಛಾವಣಿಗೆ ಆಸರೆ ನೀಡುವ ಜಾಗದಲ್ಲಿ ಕಂಬಗಳನ್ನು ಬಿಡುವಾಗ ರೂಮ್ಗಳಿಂದ ಅದಿರನ್ನು ಹೊರತೆಗೆಯಲಾಗುವುದು.
ರೂಂ ಮತ್ತು ಪಿಲ್ಲರ್ ಗಣಿಗಾರಿಕೆ ಕೆಲವೊಮ್ಮೆ [[ರಿಟ್ರೀಟ್ ಗಣಿಗಾರಿಕೆ]]ಗೆ ಆಸ್ಪದ ನೀಡುತ್ತದೆ, ಇದು ರೂಮುಗಳಿಗೆ ಆಧಾರವಾಗಿರುವ ಕಂಬಗಳನ್ನು ತೆಗೆದುಹಾಕಿ ಹೆಚ್ಚು ಅದಿರನ್ನು ಸಡಿಲಗೊಳಿಸಿ ಗುಹೆಯೊಳಗಿನ ರೂಮ್ಗಳನ್ನು ಅನುಮತಿಸುತ್ತ, ಹೆಚ್ಚು ಅದಿರುಗಳನ್ನು ಬಿಡುಗಡೆ ಮಾಡುತ್ತವೆ.
ಉಪ-ಮೇಲ್ಮೈ ಗಣಿಗಾರಿಕೆಯ ಇತರ ವಿಧಾನಗಳೆಂದರೆ, [[ಹಾರ್ಡ್ ರಾಕ್ ಗಣಿಗಾರಿಕೆ]] ಇದು ಗಟ್ಟಿಯಾಗಿರುವ ವಸ್ತುಗಳ ಗಣಿಗಾರಿಕೆ ಮಾಡುತ್ತದೆ, [[ಬೋರ್ ಹೋಲ್ ಗಣಿಗಾರಿಕೆ]], [[ಡ್ರಿಫ್ಟ್ ಎಂಡ್ ಫಿಲ್ ಗಣಿಗಾರಿಕೆ]], [[ಲಾಂಗ್ ಹೋಲ್ ಸ್ಲೋಪ್ ಗಣಿಗಾರಿಕೆ]], [[ಸಬ್ ಲೆವೆಲ್ ಕೇವಿಂಗ್]] ಮತ್ತು [[ಬ್ಲಾಕ್ ಕೇವಿಂಗ್]].
===ಯಂತ್ರೋಪಕರಣಗಳು ===
[[File:Alaskan Trommel.jpg|thumb|right|ಬಂಗಾರ-ಧರಿಸಿದ ಜಲ್ಲಿಕಲ್ಲುಗಳು ಒಂದು ಟ್ರೊಮ್ಮೆಲ್ಗಳೊಳಗೆ ಬ್ಲ್ಯೂ ರಿಬ್ಬನ್ ಪ್ಲೇಸರ್ ಗಣಿಗಾರಿಕೆಯಲ್ಲಿ ಸೇರಿಸಲ್ಪಟ್ಟಿರುತ್ತವೆ, ಅಲಾಸ್ಕ.]]
ಪರಿಶೋಧನೆ ಮತ್ತು ಅಭಿವೃದ್ಧಿ, ನಿರುಪಯುಕ್ತವನ್ನು ತೆಗೆದುಹಾಕಲು, ವಿವಿಧ ಕಠಿಣ ಮತ್ತು ಬಲವಾದ ಬಂಡೆಗಳನ್ನು ಒಡೆಯಲು ಮತ್ತು ತೆಗೆದುಹಾಕಲು, ಅದಿರಿನ ಕಾರ್ಯಾಚರಣೆ ಮತ್ತು ಗಣಿಗಾರಿಕೆ ಮುಗಿದ ನಂತರ ಭೂಮಿಯನ್ನು ಮೊದಲಿನ ಸ್ಥಿತಿಗೆ ತರಲು ಗಣಿಗಾರಿಕೆಯಲ್ಲಿ ಭಾರಿ ಯಂತ್ರೋಪಕರಣಗಳು ಬೇಕಾಗುತ್ತವೆ.
ಭೂಮಿಯನ್ನು ಅಗೆಯಲು ಬುಲ್ಡೊಜರ್ಗಳು, ಡ್ರಿಲ್ಗಳು, ಸ್ಫೋಟಕಗಳು ಮತ್ತು ಟ್ರಕ್ಗಳ ಅವಶ್ಯಕತೆ ಇದೆ. [[ಪ್ಲೇಸರ್ ಗಣಿಗಾರಿಕೆ]]ಯ ದೃಷ್ಟಾಂತದಲ್ಲಿ, ಅಸಂಯೋಜಿತ ಜಲ್ಲಿ ಗರಸು ಅಥವಾ [[ನೆರೆಮಣ್ಣು]], ಇವುಗಳು ಒಂದು ಹಾಪರ್ ಮತ್ತು ಒಂದು ಅಲುಗಾಡುವ ಪರದೆ ಅಥವಾ [[ಟ್ರೊಮ್ಮೆಲ್]] ಅನ್ನು ಒಳಗೊಂಡಿರುವ ಯಂತ್ರೋಪಕರಣಗಳಿಗೆ ಒದಗಿಸುತ್ತವೆ, ಅವು ಅನುಪಯುಕ್ತ ಜಲ್ಲಿ ಗರಸುಗಳಿಂದ ಬೇಕಾದ ಖನಿಜಗಳನ್ನು ಬಿಡುಗಡೆ ಮಾಡುತ್ತದೆ.
ನೀರಿನ ಕಾಲುವೆಗಳು ಅಥವಾ ಜಿಗ್ಗಳನ್ನು ಉಪಯೋಗಿಸಿ ಖನಿಜಗಳನ್ನು ಕೇಂದ್ರೀಕರಿಸಲಾಗುವುದು.
ವಿಶ್ಲೇಷಣೆಗೆ ಮಾದರಿಯನ್ನು ಪಡೆಯಲು, ಸ್ಟೋಪ್ಗಳನ್ನು ತೆಗೆಯಲು, ಕೊಳವೆಗಳನ್ನು ಇಳಿಸಲು ದೊಡ್ಡ [[ಡ್ರಿಲ್ಗಳನ್ನು]] ಉಪಯೋಗಿಸುತ್ತಾರೆ.
ಗಣಿಗಾರರ, ಖನಿಜಗಳ ಮತ್ತು ನಿರುಪಯುಕ್ತಗಳ ಸಾರಿಗೆಗೆ [[ಟ್ರಾಮು]]ಗಳನ್ನು ಉಪಯೋಗಿಸುತ್ತಾರೆ.
ಗಣಿಗಾರರು ಗಣಿಯ ಒಳಗೆ ಹೋಗಲು ಮತ್ತು ಹೊರ ಬರಲು, ಬಂಡೆಗಳನ್ನು ಸಾಗಿಸಲು ಮತ್ತು ಅದಿರನ್ನು ಹೊರತೆಗೆಯಲು, ಯಂತ್ರಗಳನ್ನು ನೆಲದಡಿಯ ಗಣಿಗಳಿಗೆ ಸಾಗಿಸಲು ಮತ್ತು ಹೊರತರುವ ಕೆಲಸವನ್ನು ಲಿಫ್ಟ್ ಗಳು ಮಾಡುತ್ತವೆ.
ಮೇಲ್ಮೈ ಗಣಿಗಾರಿಕೆಯಲ್ಲಿ ದೊಡ್ಡ ಟ್ರಕ್ಗಳು, ಶೊವೆಲ್ಗಳು ಮತ್ತು ಕ್ರೇನ್ಗಳು ದೊಡ್ಡ ಪ್ರಮಾಣದ ನಿರುಪಯುಕ್ತಗಳು ಮತ್ತು ಅದಿರನ್ನು ಚಲಿಸುವ ಕೆಲಸ ಮಾಡುತ್ತವೆ.
ಕಾರ್ಯಾಚರನೆಯಾಗುತ್ತಿರುವ ಪ್ರದೇಶಗಳು ಖನಿಜಗಳು ಹೆಚ್ಚಾಗಿ ಹೊಂದಿರುವ ವಸ್ತುವನ್ನು ಒಂದುಗೂಡಿಸಲು ಮತ್ತು ಅದಿರಿನಿಂದ ಬೇಕಾದ ಸಂಯೋಗಗಳು ಮತ್ತು ಲೋಹಗಳನ್ನು ಪಡೆಯಲು ದೊಡ್ಡ ಕ್ರಶರ್ಗಳು, ಮಿಲ್ಗಳು, ರಿಯೆಕ್ಟರ್ಗಳು, ರೋಸ್ಟರ್ಗಳು ಮತ್ತು ಇತರ ಉಪಕರಣಗಳನ್ನು ಬಳಸುತ್ತವೆ
=== ಸಾರದಂಥ ಲೋಹಶಾಸ್ತ್ರ ===
{{Main|extractive metallurgy}}
extractive ಲೋಹಶಾಸ್ತ್ರದ ವಿಜ್ಞಾನ ಲೋಹಶಾಸ್ತ್ರದ ವಿಜ್ಞಾನದಲ್ಲಿ ಒಂದು ಮುಖ್ಯವಾದ ವಿಷಯ, ಇದು ವಿಶೇಷವಾಗಿ ರಾಸಾಯನಿಕ ಮತ್ತು ಯಾಂತ್ರಿಕ ರೂಪದಲ್ಲಿ ಅದಿರುಗಳಿಂದ ಬೆಲೆಬಾಳುವ ಲೋಹಗಳನ್ನು ಪಡೆಯುವುದನ್ನು ಅಭ್ಯಸಿಸುತ್ತದೆ.
[[ಖನಿಜ ಕಾರ್ಯಾಚರಣೆ]] (ಅಥವಾ ಮಿನರಲ್ ಡ್ರೆಸ್ಸಿಂಗ್) ಇದು ಲೋಹಶಾಸ್ತ್ರದ ವಿಜ್ಞಾನದಲ್ಲಿ ಒಂದು ವಿಶೇಷವಾದ ವಿಷಯ, ಇದು ಬೆಲೆಬಾಳುವ ಲೋಹಗಳು ಅಥವಾ ಖನಿಜಗಳನ್ನು ಅವುಗಳ [[ಅದುರು ಕಸ]] (ನಿರುಪಯುಕ್ತ ವಸ್ತು) ನಿಂದ ಬೇರ್ಪಡಿಸಲು (ಉದ್ಧರಣ ಲೋಹಶಾಸ್ತ್ರ) ಸಾಧ್ಯ ಮಾಡುವ ಯಾಂತ್ರಿಕ ರೂಪದ ಒಡೆಯುವುದು, ಪುಡಿ ಮಾಡುವುದು, ಮತ್ತು ತೊಳೆಯುವುದರ ಅಧ್ಯಯನ ನಡೆಸುತ್ತದೆ.
ಹೆಚ್ಚು ಲೋಹಗಳು ಅದಿರಿನಲ್ಲಿ ಆಕ್ಸೈಡ್ಗಳು ಅಥವಾ ಸಲ್ಫೈಡ್ಗಳ ರೂಪದಲ್ಲಿರುತ್ತವೆ, ಲೋಹದ ಲೋಹೀಯ ಗುಣವನ್ನು [[ಕಡಿಮೆ]] ಮಾಡುವ ಅವಶ್ಯಕತೆ ಇದೆ.
[[ಅದಿರನ್ನು ಕರಗಿಸು]]ವಂತಹ ರಾಸಾಯನಿಕ ರೂಪದಲ್ಲಿ ಅಥವಾ [[ಅಲ್ಯೂಮಿನಿಯಂ]]ನ್ನು ಬೇರ್ಪಡಿಸುವ ಸಂದರ್ಭದಲ್ಲಿ ವಿದ್ಯುದ್ವಿಚ್ಛೇದನದ ಸಂಕೊಚನದ ಮೂಲಕ ಇದನ್ನು ಮಾಡಲಾಗುತ್ತದೆ.
[[ಭೂಲೋಹಶಾಸ್ತ್ರ]], ಭೂಗರ್ಭಿಕ ವಿಜ್ಞಾನದ ಜೊತೆ... ಲೋಹಶಾಸ್ತ್ರ ಮತ್ತು ಗಣಿಗಾರಿಕೆಯನ್ನು ಸಂಯೋಜಿಸುತ್ತದೆ.
==ಪಾರಿಸಾರಿಕ ಪರಿಣಾಮಗಳು==
[[File:Iron hydroxide precipitate in stream.jpg|thumb|upright|right|ಕಬ್ಬಿಣ ಹೈಡ್ರೋಕ್ಸೈಡ್ಗಳ ಅತಿರಭಸದ ಗುರುತುಗಳು ಮೇಲ್ಮೈ ಕಲ್ಲಿದ್ದಲು ಗಣಿಗಾರಿಕೆಯಿಂದ ಆಸಿಡ್ ನಾಲೆ-ವ್ಯವಸ್ಥೆಗಳನ್ನು ಪಡೆದುಕೊಳ್ಳುತ್ತದೆ.]]
{{Main|Environmental issues with mining}}
ಗಣಿಗಾರಿಕಾ ಕಾರ್ಯಾಚರಣೆಗಳ ರಾಸಾಯನಿಕಗಳಿಂದ [[ಭೂಸವೆತ]], [[ಸಿಂಖೋಲ್]]ಗಳ ನಿರ್ಮಾಣ, [[ಜೈವಿಕವೈವಿಧ್ಯದ]] ನಾಶ, ಮತ್ತು ಮಣ್ಣು, [[ಭೂಜಲ]] ಮತ್ತು [[ಮೇಲ್ಮೈ ನೀರಿನ]] ಕಶ್ಮಲೀಕರಣ ಇವುಗಳನ್ನು ಪರಿಸರೀಯ ವಿಷಯಗಳು ಒಳಗೊಂಡಿವೆ. ಕೆಲವು ಸಂದರ್ಭಗಳಲ್ಲಿ, ಗಣಿಗಾರಿಕೆಯ ಸಮೀಪದ ಪ್ರದೇಶಗಳಲ್ಲಿ ಶಿಲಾಖಂಡರಾಶಿ ಮತ್ತು ಮಣ್ಣಿನಲ್ಲಿ ನಿರ್ಮಿತ ಸಂಗ್ರಹಗಳಿಗಾಗಿ ದೊರಕುವ ಜಾಗವನ್ನು ಹೆಚ್ಚಿಸುವ ಸಲುವಾಗಿ ಕಾಡಿನ ಮರಗಳನ್ನು ಕತ್ತರಿಸುವುದನ್ನು ಮಾಡಲಾಯಿತು.<ref>{{Cite web |url=http://ngm.nationalgeographic.com/2009/01/gold/larmer-text/6 |title=ಲಾಗಿಂಗ್ ಅಫ್ ಫಾರೆಸ್ಟ್ಸ್ ಆಯ್೦ಡ್ ಡೆಬ್ರಿಸ್ ಡಂಪಿಂಗ್ |access-date=2010-07-31 |archive-date=2017-07-01 |archive-url=https://web.archive.org/web/20170701153625/http://ngm.nationalgeographic.com/2009/01/gold/larmer-text/6 |url-status=dead }}</ref>
ರಾಸಾಯನಿಕಗಳ ಸೋರಿಕೆಯಿಂದ ಆದ ಕಶ್ಮಲೀಕರಣವನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಇದು ಸ್ಥಳೀಯ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು.<ref>{{cite web |url=http://ngm.nationalgeographic.com/2009/01/gold/larmer-text/12 |title=The Real Price of Gold |publisher=National Geographic |date=2009-01 |first=Brook |last=Larmer |access-date=2010-07-31 |archive-date=2017-07-26 |archive-url=https://web.archive.org/web/20170726111900/http://ngm.nationalgeographic.com/2009/01/gold/larmer-text/12 |url-status=dead }}</ref>
<ref name="RocksHardPlaces">ಮೂಡಿ ಆರ್. (2007). ''ರಾಕ್ಸ್ ಆಯ್೦ಡ್ ಹಾರ್ಡ್ ಪ್ಲೇಸಸ್''. ಝೆಡ್ ಬುಕ್ಸ್.</ref> 1992 ರಲ್ಲಿ ರಾಷ್ಟ್ರದ ಗಡಿಯಾಚೆಗಿನ ಕಂಪನಿಗಳಿಗಾಗಿ ಬರೆಯಲ್ಪಟ್ಟ ಒಂದು ನೀತಿ ಸಂಹಿತೆಯನ್ನು [[ರಿಯೋ ಅರ್ಥ್ ಸಮಿತ್]]ನಲ್ಲಿ ಯುಎನ್ ಕೇಂದ್ರದಿಂದ ರಾಷ್ಟ್ರದ ಗಡಿಯಾಚೆಗಿನ ಕಂಪನಿಗಳಿಗಾಗಿ (UNCTC) ಸೂಚಿಸಲ್ಪಟ್ಟಿತು, ಆದರೆ ಸಮರ್ಥನೀಯ ಅಭಿವೃದ್ದಿಗಾಗಿ ವ್ಯವಹಾರ ಮಂಡಳಿಯು (BCSD) ಅಂತರಾಷ್ಟ್ರೀಯ ವಾಣಿಜ್ಯ ಮಂಡಳಿಯ (ICC) ಜೊತೆ ಅದಕ್ಕೆ ಬದಲಾಗಿ ಸ್ವಯಂ-ನಿರ್ವಹಣೆಯ ಪರವಾಗಿ ಯಶಸ್ವಿಯಾಗಿ ವಾದಿಸಿತು.<ref>ಅಬ್ರಹಾಮ್ಸ್ ಡಿ. (2005). [http://www.business-humanrights.org/Links/Repository/276544/link_page_view ರೆಗ್ಯೂಲೇಶನ್ ಫಾರ್ ಕಾರ್ಪೊರೇಶನ್ಸ್:ಎ ಹಿಸ್ಟೋರಿಕಲ್ ಅಕೌಂಟ್ ಆಫ್ ಟಿಎನ್ಸಿ ರೆಗ್ಯೂಲೇಶನ್] {{Webarchive|url=https://web.archive.org/web/20111001000506/http://www.business-humanrights.org/Links/Repository/276544/link_page_view |date=2011-10-01 }}, ಪು. 6. ಯುಎನ್ಆರ್ಐಎಸ್ಡಿ.</ref>
ಪರಿಸರೀಯ ಪರಿಣಾಮಗಳು ಮತ್ತು ಮಾನವ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಹೆಚ್ಚು ದೇಶಗಳಲ್ಲಿ ಗಣಿಗಾರಿಕಾ ಕಂಪನಿಗಳು ಬಿಗಿಯಾದ ಪರಿಸರೀಯ ಮತ್ತು ಪುನರ್ವಸತಿಗೊಳಿಸುವ ನಿಯಮಗಳನ್ನು ಪಾಲಿಸುವ ಅವಶ್ಯಕತೆ ಇದೆ
ಈ ಎಲ್ಲ ಸಂಹಿತೆಗಳು ಮತ್ತು ನಿಯಮಾವಳಿಗಳಿಗೆ ಸಾಮಾನ್ಯ ಕ್ರಮಗಳ ಅವಶ್ಯಕತೆಯಿದೆ, ಅವು [[ಪರಿಸರೀಯ ಪರಿಣಾಮ ನಿರ್ಧರಿಸುವಿಕೆ]], [[ಪರಿಸರ ವ್ಯವಸ್ಥೆ]]ಯ ಯೋಜನೆಗಳ ಅಭಿವೃದ್ಧಿ, [[ಗಣಿಯ ಮುಚ್ಚುವಿಕೆಯ ಯೋಜನೆ]]ಗಳು (ಇದನ್ನು ಗಣಿಗಾರಿಕೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು ಮಾಡಲೇಬೇಕು), ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಮತ್ತು ಮುಕ್ತಾಯದ ನಂತರ [[ಪರಿಸರೀಯ ಪರಿವೀಕ್ಷಣೆ]].
ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ, ಸರ್ಕಾರ ನಿಯಮಾವಳಿಗಳನ್ನು ಸರಿಯಾಗಿ ಜಾರಿಗೊಳಿಸಿಲ್ಲ.
ಪ್ರಮುಖ ಗಣಿಗಾರಿಕೆ ಕಂಪನಿಗಳಿಗೆ, ಅಂತರಾಷ್ಟ್ರೀಯ ಹಣಕಾಸನ್ನು ಪಡೆಯುತ್ತಿರುವ ಯಾವುದೇ ಕಂಪನಿಗಳಿಗೆ ಒಳ್ಳೆಯ ಪರಿಸರೀಯ ಮೌಲ್ಯಗಳನ್ನು ಜಾರಿಮಾಡಲು ಹಲವಾರು ಇತರ ಯಾಂತ್ರಿಕವ್ಯವಸ್ಥೆಗಳಿರುತ್ತವೆ.
[[ಇಕ್ವೇಟರ್ ಸಿದ್ಧಾಂತಗಳು]], [[ಐಎಫ್ಸಿ]] ಪರಿಸರೀಯ ಮೌಲ್ಯಗಳು, [[ಸಾಮಾಜಿಕ ಜವಬ್ದಾರಿಯ ವಿನಿಯೋಗ]]ಕ್ಕೆ ಮಾನದಂಡದಂತಹ ಹಣಕಾಸು ಮೌಲ್ಯಗಳಿಗೆ ಇವುಗಳು ಸಂಬಂಧಿಸಿವೆ. ಗಣಿಗಾರಿಕಾ ಕಂಪನಿಗಳು ಈ ಹಣಕಾಸಿನ ಉದ್ದಿಮೆಗಳ ಮೇಲ್ವಿಚಾರಣೆಯನ್ನು ಒಂದು ಹಂತದ [[ಸ್ವಯಂ-ನಿರ್ದೇಶನ]]ವನ್ನು ಮಾಡಿಕೊಳ್ಳಲು ವಾದಿಸುವುದಕ್ಕಾಗಿ ಬಳಸಿಕೊಂಡವು.
ಇದು ವಿಶ್ವ ವ್ಯಾಪಕ ಗಣಿಗಾರಿಕಾ ತೊಡಗುವಿಕೆಯನ್ನು ಅನುಸರಿಸಿತ್ತು, ಒಂಭತ್ತು ಅತ್ಯಂತ ವ್ಯಾಪಕವಾದ ಲೋಹಗಳು ಮತ್ತು ಗಣಿಗಾರಿಕಾ ಕಂಪನಿಗಳ ಮೂಲಕ ಇದು ಪ್ರಾರಂಭವಾಗಿತ್ತು, ಮತ್ತು ಅಂತರರಾಷ್ಟ್ರೀಯವಾಗಿ ಗಣಿಗಾರಿಕೆ ಮತ್ತು ಲೋಹಗಳ ಕೈಗಾರಿಕೆಯಲ್ಲಿ ಸಾಮಾಜಿಕ ಮತ್ತು ಪರಿಸರೀಯ ಕಾರ್ಯ ನಿರ್ವಹಣಾ ಸುಧಾರಣೆಗೆ "ಕ್ರಿಯಾವರ್ಧಕದಂತೆ ಕೆಲಸ ಮಾಡಲು" [[ಗಣಿಗಾರಿಕೆ ಮತ್ತು ಲೋಹಗಳ ಮೇಲೆ ಅಂತರರಾಷ್ಟ್ರೀಯ ಕೌನ್ಸಿಲ]]ನ್ನು ರಚಿಸಲು ಮುಂದಾಗಿತ್ತು.<ref name="RocksHardPlaces" />
ಗಣಿಗಾರಿಕಾ ಕೈಗಾರಿಕೆ ವಿವಿಧ ಸಂರಕ್ಷಣಾ ಗುಂಪುಗಳಿಗೆ ಹಣ ಒದಗಿಸಿದೆ, ಇದರಲ್ಲಿ ಕೆಲವು ಸಂರಕ್ಷಣಾ ಕಾರ್ಯಕ್ರಮಗಳ ಜೊತೆ ಕೆಲಸ ಮಾಡುತ್ತಿವೆ ಅವು ಸ್ಥಳೀಯ ವ್ಯಕ್ತಿ ಹಕ್ಕನ್ನು ಹೊಂದಿರುವ ಗೋಚರ ಸಮ್ಮತಿಯ ಜೊತೆ ವಿಚಿತ್ರ ರೀತಿಯಲ್ಲಿರಲ್ಪಡುತ್ತವೆ - ಮುಖ್ಯವಾಗಿ ಭೂ ಉಪಯೋಗ ನಿರ್ಧಾರಗಳನ್ನು ಮಾಡುವ ಹಕ್ಕುಗಳು.<ref>{{cite journal |title=A Challenge to Conservationists: Can we protect natural habitats without abusing the people who live in them? |url=http://www.worldwatch.org/node/565 |first=Mac |last=Chapin |date=2004-10-15 |accessdate=2010-02-18 |journal=World Watch Magazine |series=6 |volume=17 |archive-date=2010-08-02 |archive-url=https://web.archive.org/web/20100802101924/http://www.worldwatch.org/node/565 |url-status=dead }}</ref>
ಅದಿರಿನ ಮಿಲ್ಲುಗಳು ಹೆಚ್ಚಿನ ಪ್ರಮಾಣದ ನಿರುಪಯುಕ್ತಗಳನ್ನು ಉತ್ಪಾದಿಸುತ್ತವೆ, ಇವನ್ನು [[ಉಳಿಕೆಗಳು]] ಎನ್ನುವರು.
ಉದಾಹರಣೆಗೆ, ಪ್ರತಿ ಒಂದು ಟನ್ ತಾಮ್ರಕ್ಕೆ 99 ಟನ್ ನಿರುಪಯುಕ್ತ ಉತ್ಪಾದನೆಯಾಗುತ್ತದೆ, ಚಿನ್ನದ ಗಣಿಗಾರಿಕೆಯಲ್ಲಿ (ಉದ್ಧರಣ ಬೇಕಾಗುತ್ತದೆ) ಈ ಪ್ರಮಾಣ ಇನ್ನೂ ಹೆಚ್ಚು. ಈ ಉಳಿಕೆಗಳು ವಿಷಕಾರಿಯಾಗಿರಬಹುದು.
ಸಾಮಾನ್ಯವಾಗಿ [[ಸ್ಲರಿ]]ಯ ರೂಪದಲ್ಲಿ ಉತ್ಪಾದನೆಯಾಗುವ ಉಳಿಕೆಗಳನ್ನು ಹೆಚ್ಚಾಗಿ ನೈಸರ್ಗಿಕವಾಗಿರುವ ಕಣಿವೆಗಳಲ್ಲಿ ಮಾಡಿದ ಹೊಂಡಗಳಲ್ಲಿ ಬಿಸಾಡಲಾಗುತಿತ್ತು.<ref name="EPADesignDams">[12] ^ ಯು.ಎಸ್. ಇಪಿಎ. "1994). [http://www.epa.gov/osw/nonhaz/industrial/special/mining/.../tailings.pdf ಟೆಕ್ನಿಕಲ್ ರಿಪೋರ್ಟ್: ಡಿಸೈನ್ ಆಯ್೦ಡ್ ಇವ್ಯಾಲ್ಯುಯೇಶನ್ ಆಫ್ ಟೇಲಿಂಗ್ ಡಮ್ಸ್].</ref>
ಈ ಹೊಂಡಗಳನ್ನು ಸ್ವತ್ತು ನಿಷೇಧಗಳ ([[ಅಣೆಕಟ್ಟು]]ಗಳು ಅಥವಾ [[ಒಡ್ಡು ಹಾಕಿದ ಅಣೆಕಟ್ಟು]]ಗಳು) ಮೂಲಕ ಸುರಕ್ಷಿತ ಮಾಡಿರುತ್ತಾರೆ.<ref name="EPADesignDams" />
2000ದಲ್ಲಿ, ಅಂದಾಜಿನ ಪ್ರಕಾರ ಉಳಿಕೆಗಳ ಸ್ವತ್ತು ನಿಷೇಧಗಳು 3,500 ಇತ್ತು, ಮತ್ತು ಪ್ರತಿ ವರ್ಷ 2 ರಿಂದ 5 ಪ್ರಮುಖ ವೈಫಲ್ಯಗಳು ಮತ್ತು 35 ಸಣ್ಣ ವೈಫಲ್ಯಗಳು (ಉದ್ಧರಣ ಬೇಕಾಯಿತು) ಸಂಭವಿಸಿದವು; ಉದಾಹರಣೆಗೆ, [[ಮರ್ಕೊಪ್ಪರ್ ಗಣಿಗಾರಿಕಾ ದುರಂತ]]ದಲ್ಲಿ ಕಡಿಮೆ ಅಂದರೂ 2 ಮಿಲಿಯನ್ ಟನ್ಗಳಷ್ಟು ಉಳಿಕೆಗಳು ಅಲ್ಲಿನ ನದಿಗೆ ಬಿಡಲಾಗಿತ್ತು.<ref name="StewardDams">ಟಿಇ ಮಾರ್ಟೀನ್,ಎಂಪಿ ಡೆವೀಸ್. (2000). [http://www.infomine.com/publications/docs/Martin2000.pdf ಟ್ರೇಂಡ್ಸ್ ಇನ್ ದ ಸ್ಟೀವಾರ್ಡ್ಶಿಪ್ ಆಓ ಟೇಲಿಂಗ್ ಡಮ್ಸ್].</ref>
ನೀರಿನಡಿಯಲ್ಲಿ ಉಳಿಕೆಗಳ ವಿಲೇವಾರಿ ಮತ್ತೊಂದು ಆಯ್ಕೆಯಾಗಿದೆ.<ref name="EPADesignDams" />
ಉಳಿಕೆಗಳನ್ನು ಸಮುದ್ರದಲ್ಲಿ ವಿಲೇವಾರಿ ಮಾಡುವ ಸಬ್ಮರೈನ್ ಟೇಲಿಂಗ್ಸ್ ಡಿಸ್ಪೊಸಲ್ (ಎಸ್ಟಿಡಿ)
ಪರಿಪೂರ್ಣವಾಗಿದೆ ಎಂದು ಗಣಿಗಾರಿಕಾ ಕೈಗಾರಿಕೆ ಪ್ರತಿಪಾದಿಸಿತು ಏಕೆಂದರೆ ಇದು ಉಳಿಕೆಗಳ ಹೊಂಡಗಳ ತೊಂದರೆಗಳನ್ನು ದೂರವಾಗಿಸುತ್ತದೆ; ಆದರೂ ಸಂಯುಕ್ತ ಸಂಸ್ಥಾನ ಮತ್ತು ಕೆನಡಗಳಲ್ಲಿ ಇದು ನ್ಯಾಯಸಮ್ಮತವಲ್ಲ, ಇದನ್ನು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶದಲ್ಲಿ ಉಪಯೋಗಿಸುತ್ತಾರೆ.<ref>ಕ್ಯೂಮನ್ಸ್ ಸಿ. (2002). [https://web.archive.org/web/20100401040144/http://www.wman-info.org/resources/technicalreports/Submarine%20Tailings%20Disposal%20Toolkit.pdf ಮೈನಿಂಗ್ಸ್ ಪ್ರಾಬ್ಲೆಮ್ಸ್ ವಿತ್ ವೇಸ್ಟ್]. ಮೈನಿಂಗ್ ವಾಚ್ ಕೆನಡಾ.</ref>
[[ಇಂಟರ್ನ್ಯಾಷನಲ್ ಆರ್ಗನೈಜೇಶನ್ ಫಾರ್ ಸ್ಟ್ಯಾಂಡರ್ಡೈಜೇಶನ್]] (ಆಯ್ಎಸ್ಒ)ದ ಮೂಲಕ ಆಯ್ಎಸ್ಒ 9000 ಮತ್ತು ಆಯ್ಎಸ್ಒ 14001ನಂತೆ ಒಳ್ಳೆಯ ಬಳಕೆಗಳ ಜೊತೆ ಗಣಿಗಳ ಧೃಡೀಕರಣ ಆಗುತ್ತದೆ, ಇದು 'ಧೃಢೀಕರಿಸಬಹುದಾದ ವಾತಾವರಣ ನಿರ್ವಹಣಾ ವ್ಯವಸ್ಥೆ' ಎಂದು ಧೃಡೀಕರಿಸುತ್ತದೆ; ಈ ದೃಡೀಕರಣ ಚಿಕ್ಕ ತನಿಖೆಗಳನ್ನು ಒಳಗೊಂಡಿರುತ್ತದೆ, ಆದಾಗ್ಯೂ ಇದು ಬಿಗಿತದ ಕೊರತೆಯ ಆರೋಪವನ್ನು ಹೊಂದಿದೆ.<ref name="RocksHardPlaces" />{{rp|183-4}}
ಧೃಡೀಕರಣ [[ಸೆರೆಸ್]]' [[ಗ್ಲೋಬಲ್ ರಿಪೋರ್ಟಿಂಗ್ ಇನಿಶಿಯೇಟಿವ್]] ಮೂಲಕ ಸಹ ದೊರೆಯುತ್ತದೆ, ಆದರೆ ಈ ವರದಿಗಳು ಸ್ವಇಚ್ಛಿತ ಮತ್ತು ಪರಿಶೀಲಿಸದವುಗಲಾಗಿರುತ್ತವೆ.
ಹಲವು ರೀತಿಯ ಇತರ ಧೃಡೀಕರಣ ಕಾರ್ಯಕ್ರಮಗಳು ವಿಶಿಷ್ಟವಾಗಿ ಲಾಭಾಪೇಕ್ಷೆಯಿಲ್ಲದ ಗುಂಪುಗಳ ಮೂಲಕ ವಿವಿಧ ಪ್ರಾಜೆಕ್ಟುಗಳಿಗೆ ಅಸ್ತಿತ್ವದಲ್ಲಿವೆ.<ref name="RocksHardPlaces" />{{rp|185-6}}
== ನಿಯಂತ್ರಣಗಳು ಮತ್ತು ವಿಶ್ವ ಬ್ಯಾಂಕ್ ಸಂಬಂಧ ==
1955ರಿಂದ ಗಣಿಗಾರಿಕಾ ಪ್ರಕ್ರಿಯೆಯಲ್ಲಿ [[ವಿಶ್ವ ಬ್ಯಾಂಕ್]] ತೊಡಗಿಸಿಕೊಂಡಿದೆ, ಮುಖ್ಯವಾಗಿ ಇದರ [[ಪುನರ್ನಿರ್ಮಾಣ ಮತ್ತು ಅಭಿವೃದ್ಧಿಗೆ ಅಂತರರಾಷ್ಟ್ರೀಯ ಬ್ಯಾಂಕಿ]]ನಿಂದ ಹಣ ನೀಡುವ ಮೂಲಕ, ಜೊತೆಗೆ ಬ್ಯಾಂಕಿನ [[ಮಲ್ಟಿಲ್ಯಾಟರಲ್ ಇನ್ವೆಸ್ಟ್ಮೆಂಟ್ ಗ್ಯಾರಂಟಿ ಎಜೆನ್ಸಿ]] [[ಪಾಲಿಟಿಕಲ್ ರಿಸ್ಕ್]] ಇನ್ಸುರೆನ್ಸ್ ನ್ನು ಒದಗಿಸುತ್ತದೆ.<ref>ಬ್ಯಾಂಕ್ ಮತ್ತು ಗಣಿಗಾರಿಕೆ ಮೇಲೆ ಸ್ಥೂಲಾವಲೋಕನ, ನೋಡಿ [http://www.pdac.ca/pdac/publications/papers/2001/pdf/Weber-Fahr(T-8).pdf ಗಣಿಗಾರಿಕೆ ಮುಂದುವರೆಯುವಿಕೆ ಮತ್ತು ಅಪಾಯ:ವಿಶ್ವ ಬ್ಯಾಂಕ್ ಗುಂಪಿನ ಅನುಭವ] {{Webarchive|url=https://web.archive.org/web/20110929090158/http://www.pdac.ca/pdac/publications/papers/2001/pdf/Weber-Fahr(T-8).pdf |date=2011-09-29 }}.</ref>
1955 ಮತ್ತು 1990ರ ನಡುವೆ ಇದು ಸುಮಾರು 2 ಬಿಲಿಯನ್ ಡಾಲರ್ಗಳನ್ನು ಐವತ್ತು ಗಣಿಗಾರಿಕಾ ಪ್ರಾಜೆಕ್ಟುಗಳಿಗೆ ಒದಗಿಸಿದೆ, ಸುಧಾರಣೆ ಮತ್ತು ಪುನರ್ವಸತಿ, ಹಸಿರುಭೂಮಿಯ ಗಣಿ ನಿರ್ಮಾಣ, ಖನಿಜದ ಕಾರ್ಯಾಚರಣೆ, ತಾಂತ್ರಿಕ ನೆರವು, ಮತ್ತು ಇಂಜನಿಯರಿಂಗ್ ಎಂದು ಮುಖ್ಯವಾಗಿ ವರ್ಗೀಕರಿಸಿದೆ.
ಈ ಪ್ರಾಜೆಕ್ಟುಗಳನ್ನು ವಿಮರ್ಶಿಸಲಾಗಿದೆ, ಮುಖ್ಯವಾಗಿ 1981ರಲ್ಲಿ ಆರಂಭಗೊಂಡ ಬ್ರೆಜಿಲ್ಲಿನ ಫೆರೋ ಸರಜಸ್ ಪ್ರಾಜೆಕ್ಟ್.<ref>1995 ''ವರ್ಲ್ಡ್ ಡೆವಲಪ್ಮೆಂಟ್'' ನೋಡಿ '''23''' (3) ಪುಪು. 385-400.</ref>
ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಬ್ಯಾಂಕು ಗಣಿಗಾರಿಕಾ ಕೋಡುಗಳನ್ನು ಪ್ರಾರಂಭಿಸಿತು, 1988ರಲ್ಲಿ ಅದರ ತೊಡಗಿಸಿಕೊಳ್ಳುವಿಕೆಯನ್ನು ಹೇಗೆ ಹೆಚ್ಚಿಸಬೇಕು ಎನ್ನುವುದರ ಮೇಲೆ 45 ಗಣಿಗಾರಿಕಾ ಕಂಪನಿಗಳಿಂದ ಕೋರಿಕೆಯ ಪ್ರತಿಕ್ರಿಯೆ ದೊರೆಯಿತು.<ref name="RocksHardPlaces" />{{rp|20}}
1992ರಲ್ಲಿ ಬ್ಯಾಂಕು ಹೊಸ ಸಂಹಿತೆಗಳ ಜೊತೆ [[ಸರ್ಕಾರ ನಡೆಸುತ್ತಿರುವ ಗಣಿಗಾರಿಕಾ ಕಂಪನಿ]]ಗಳ ಖಾಸಗೀಕರಣವನ್ನು ಉತ್ತೇಜಿಸುವುದನ್ನು ಪ್ರಾರಂಭಿಸಿತು, ಇದರ ವರದಿಯನ್ನು ''ಆಫ್ರಿಕಾದ ಗಣಿಗಾರಿಕೆಗೆ ತಂತ್ರ'' ಗಳ ಜೊತೆ ಪ್ರಾರಂಭವಾಯಿತು.
1997ರಲ್ಲಿ, ಲ್ಯಾಟಿನ್ ಅಮೇರಿಕಾದ ದೊಡ್ಡ ಗಣಿಗಾರ [[ಕಂಪಾನಿಯೋ ವಲ್ ದೊ ರಿಯೊ ಡೋಸ್]] (ಸಿವಿಆರ್ಡಿ) ಖಾಸಗಿಗೊಳಿಸಿದ.
ಇವು ಮತ್ತು ಫಿಲಿಫೈನ್ಸ್ 1995 ಮೈನಿಂಗ್ ಏಕ್ಟ್ ನಂತಹ ಇತರ ಬದಲಾವಣೆಗಳು ವಿಶ್ವ ಬ್ಯಾಂಕ್ ಮೂರನೇ ವರದಿ (''ಸದಸ್ಯ ದೇಶಗಳಲ್ಲಿ ಖನಿಜಗಳ ಕ್ಷೇತ್ರದ ಅಭಿವೃದ್ಧಿ ಮತ್ತು ಸುಧಾರಣೆಗೆ ಸಹಾಯ'' ) ಪ್ರಕಟಿಸುವಂತೆ ಮಾಡಿದವು, ಇದು ಸ್ಥಳೀಯ ಜನರಿಗೆ ನಿರ್ಭಂದಕ ಪರಿಸರದ ಪರಿಣಾಮದ ನೆರವು ಮತ್ತು ಗಮನವನ್ನು ನಮೂದಿಸಿದೆ.
ಈ ವರದಿಯ ಆಧಾರದ ಮೇಲಿರುವ ಸಂಹಿತೆಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಶಾಸನದಲ್ಲಿ ಪ್ರಭಾವ ಬೀರಿದವು.
ಹೊಸ ಸಂಹಿತೆಗಳು ಟ್ಯಾಕ್ಸ್ ಹಾಲಿಡೆಯ್ಸ್, ಝೀರೊ ಕಸ್ಟಮ್ ಡ್ಯೂಟಿ, ಕಡಿಮೆ ಆದಾಯ ತೆರಿಗೆಗಳು, ಮತ್ತು ಸಂಬಂಧಿತ ಕ್ರಮಗಳ ಮೂಲಕ ಹೆಚ್ಚು ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಿದ್ದವು.<ref name="RocksHardPlaces" />{{rp|22}}
ಈ ಸಂಹಿತೆಗಳ ಫಲಿತಾಂಶಗಳನ್ನು ಕ್ಯುಬೆಕ್ನ ವಿಶ್ವವಿದ್ಯಾಲಯದ ಗುಂಪಿನ ಮೂಲಕ ವಿಶ್ಲೇಷಿಸಲಾಯಿತು, ಸಂಹಿತೆಗಳು ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಿದವು ಆದರೆ "ಸಮ್ಮತಿ ನೀಡುವ ಮುಂದುವರೆಯಬಲ್ಲ ಬೆಳವಣಿಗೆಯ ಹೆಚ್ಚಿನ ಕೊರತೆ".<ref>ಗ್ರಾಮಾ. (2003. [http://migs.concordia.ca/documents/MIGS_Campbell_Feb07.pdf ದ ಚಾಲೆಂಜಸ್ ಆಫ್ ಡೆವಲಪ್ಮೆಂಟ್, ಮೈನಿಂಗ್ ಕೋಡ್ಸ್ ಇನ್ ಆಫ್ರಿಕಾ ಆಯ್೦ಡ್ ಕಾರ್ಪೊರೇಟ್ ರಿಸ್ಪಾನ್ಸಿಬಿಲಿಟಿ] {{Webarchive|url=https://web.archive.org/web/20160101075848/http://migs.concordia.ca/documents/MIGS_Campbell_Feb07.pdf |date=2016-01-01 }}. ಇನ್: ''ಇಂಟರ್ನ್ಯಾಷನಲ್ ಆಯ್೦ಡ್ ಕಂಪಾರೆಟಿವ್ ಮಿನರಲ್ ಲಾ ಆಯ್೦ಡ್ ಪಾಲಿಸಿ:''
ಧೋರಣೆಗಳು ಮತ್ತು ಶೋಧನೆಗಳು''. '' ''ಸಮರೈಸ್ಡ್ ಇನ್ ದ [https://web.archive.org/web/20040705112844/http://www.unites.uqam.ca/grama/pdf/AfricaCodes-Mining_Journal.pdf ಆಫ್ರಿಕನ್ ಮೈನಿಂಗ್ ಕೋಡ್ಸ್ ಕ್ವೆಶ್ಚನ್ಡ್].''</ref>
ನೈಸರ್ಗಿಕ ಸಂಪನ್ಮೂಲಗಳು ಮತ್ತು ಆರ್ಥಿಕ ಅಭಿವೃದ್ಧಿಯ ನಡುವಿನ ಗಮನಿಸಿದ ಋಣಾತ್ಮಕ ಸಂಬಂಧವನ್ನು [[ಸಂಪನ್ಮೂಲ ಶಾಪ]] ಎನ್ನುವರು.
==ಗಣಿಗಾರಿಕಾ ಕೈಗಾರಿಕೆ ==
{{Expand section|date=October 2008}}
ಗಣಿಗಾರಿಕೆ ಬಹಳ ದೇಶಗಳಲ್ಲಿ ಅಸ್ತಿತ್ವದಲ್ಲಿದೆ ಆದರೆ ಆಸ್ಟ್ರೇಲಿಯ ಮತ್ತು ಕೆನಡಗಳು ದೇಶೀಯ ಗಣಿಗಾರಿಕಾ ಪರಿಣಿತಿಗೆ ಪ್ರಸಿದ್ಧಿಯನ್ನು ಹೊಂದಿವೆ, ಮತ್ತು ಲಂಡನ್ [[ರಿಯೊ ಟಿಂಟೊ]], [[ಬಿಎಚ್ಪಿ ಬಿಲಿಟನ್]], ಮತ್ತು [[ಆಂಗ್ಲೊ ಅಮೆರಿಕನ್ ಪಿಎಲ್ಸಿ]]ಗಳಂತಹ ವಿಶ್ವವ್ಯಾಪಿ "ಗಣಿಗಾರಿಕಾ ನೆಲೆಗಳ" ರಾಜಧಾನಿ ಎಂದು ಕರೆಯಲ್ಪಡುತ್ತದೆ.<ref name="NAIndustryProfile">ಮ್ಯಾಕ್ಡೋನಾಲ್ಡ್ ಎ. (2002). [http://www.iisd.org/publications/pub.aspx?id=448 ಇಂಡಸ್ಟ್ರಿ ಇನ್ ಟ್ರಾನ್ಸಿಶನ್: ಎ ಪ್ರೊಫೈಲ್ ಆಫ್ ದ ನಾರ್ತ್ ಅಮೆರಿಕನ್ ಮೈನಿಂಗ್ ಸೆಕ್ಟರ್] {{Webarchive|url=https://web.archive.org/web/20110728143932/http://www.iisd.org/publications/pub.aspx?id=448 |date=2011-07-28 }}. ಷ್ರೀ ಫುಲ್ -ಟೆಕ್ಸ್ಟ್.</ref>
ಸಂಯುಕ್ತ ಸಂಸ್ಥಾನದ ಗಣಿ ಕೈಗಾರಿಕೆ ಸಹ ದೊಡ್ಡದಾಗಿದೆ ಆದರೆ ಇದು ಕಲ್ಲಿದ್ದಲು ಮತ್ತು ಅಲೋಹ ಖನಿಜಗಳು ಪ್ರಧಾನವಾಗಿವೆ, ಮತ್ತು ಸಂಯುಕ್ತ ಸಂಸ್ಥಾನದಲ್ಲಿ ಗಣಿಗಾರಿಕೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಹಲವಾರು ನಿಯಮಾವಳಿಗಳನ್ನು ಮಾಡಲಾಗಿದೆ.<ref name="NAIndustryProfile" />
2007ರಲ್ಲಿ ಗಣಿ ಕಂಪನಿಗಳ ಒಟ್ಟೂ [[ಮಾರುಕಟ್ಟೆಯ ಬಂಡವಾಳ]] 962 ಬಿಲಿಯನ್ ಯುಎಸ್ ಡಾಲರ್ ಆಗಿತ್ತು, 2007ರಲ್ಲಿ ವಿಶ್ವವ್ಯಾಪಿ ಪಬ್ಲಿಕ್ ಟ್ರೇಡೆಡ್ ಕಂಪನಿಗಳ ಮಾರುಕಟ್ಟೆಯ ಬಂಡವಾಳ 50 ಟ್ರಿಲಿಯನ್ ಯುಎಸ್ ಡಾಲರ್ ಆಗಿತ್ತು.<ref>ರೈಟರ್ಸ್. [http://www.reuters.com/article/idUSL2144839620070321 ಗ್ಲೋಬಲ್ ಸ್ಟಾಕ್ ವ್ಯಾಲ್ಯೂಸ್ ಟಾಪ್ $50 ಟ್ರಿಲಿಯನ್: ಇಂಡಸ್ಟ್ರಿ ಡಾಟಾ].</ref>
ಖಾಸಗಿ ಉದ್ಯಮಿಗಳು ಅಥವಾ ಸಣ್ಣ ಉದ್ಯಮಗಳು ಕೆಲವೊಮ್ಮೆ ಪರಿಶೋಧನೆ ಮತ್ತು ಗಣಿಗಾರಿಕೆಯನ್ನು ನಡೆಸಬಹುದಿತ್ತು, ಆಧುನಿಕ ದಿನಗಳಲ್ಲಿ ಗಣಿಯನ್ನು ಪ್ರಾರಂಭಿಸಲು ದೊಡ್ಡ ಉದ್ಯಮಗಳಿಗೆ ಹೆಚ್ಚಿನ ಬಂಡವಾಳ ಬೇಕಾಗುತ್ತದೆ.
ಪರಿಣಾಮವಾಗಿ, ಕೈಗಾರಿಕೆಯ ಗಣಿಗಾರಿಕಾ ವಲಯವನ್ನು ಬೃಹತ್ ಕಂಪನಿಗಳು, ಕೆಲವೊಮ್ಮೆ ಸಾರ್ವಜನಿಕವಾಗಿ ದಾಖಲಾದ ಹೆಚ್ಚಿನ ಅಂತರರಾಷ್ಟ್ರೀಯ ಕಂಪನಿಗಳು ನಿಯಂತ್ರಿಸುತ್ತವೆ. ಒಂದು ಯಾದಿಗಾಗಿ [[:ವರ್ಗ:Mining companies|ಗಣಿಗಾರಿಕಾ ಕಂಪನಿಗಳನ್ನು]] ನೋಡಿ.
ಗಣಿಗಾರಿಕಾ ಕೈಗಾರಿಕೆ ಎಂದರೆ ಏನು ಎಂದು ಚರ್ಚಿಸಲಾಗಿದೆ, ಇದರಲ್ಲಿ ನಿಜವಾಗಿ ಎರಡು ವಿಭಾಗಗಳಿವೆ, ಒಂದು ಹೊಸ ಸಂಪನ್ಮೂಲಗಳಿಗೆ ಪರಿಶೋಧನೆ, ಇನ್ನೊಂದು ಆ ಸಂಪನ್ಮೂಲಗಳ ಗಣಿಗಾರಿಕೆ.
ಪರಿಶೋಧನಾ ವಲಯ ವಿಶಿಷ್ಟವಾಗಿ ಏಕವ್ಯಕ್ತಿಗಳು ಮತ್ತು ಸಾಹಸೋದ್ಯಮ ಬಂಡವಾಳದ ಮೇಲೆ ಅವಲಂಬಿತವಾಗಿರುವ ಚಿಕ್ಕ ಖನಿಜ ಸಂಪನ್ಮೂಲ ಕಂಪನಿಗಳಿಂದ ("ಕೆಳ ದರ್ಜೆಯ") ಕೂಡಿದೆ.
ಗಣಿಗಾರಿಕಾ ವಲಯ ವಿಶಿಷ್ಟವಾಗಿ ಗಣಿಗಾರಿಕಾ ಕಾರ್ಯಾಚರಣೆಯಿಂದ ಖನಿಜಗಳನ್ನು ಉತ್ಪತ್ತಿ ಮಾಡುವ ಮೂಲಕ ನಡೆಯುವ ಬೃಹತ್ ಮತ್ತು ಅಂತರರಾಷ್ಟ್ರೀಯ ಕಂಪನಿಗಳಿಂದ ಕೂಡಿದೆ.
ಈ ಎರಡು ವಲಯಗಳ ಜೊತೆ ಪ್ರಪಂಚದ ತುಂಬಾ ಉಪಕರಣ ತಯಾರಿಕೆ, ಪರಿಸರೀಯ ಸಮೀಕ್ಷೆಗಳು ಮತ್ತು ಲೋಹ ಶಾಸ್ತ್ರದ ವಿಶ್ಲೇಷಣೆಗಳಂತಹ ವಿವಿಧ ಇತರ ಕೈಗಾರಿಕೆಗಳು ಸಹ ಗಣಿಗಾರಿಕಾ ಕೈಗಾರಿಕೆಯನ್ನು ಅನುಮೊದಿಸುತ್ತವೆ ಮತ್ತು ಅವಲಂಬಿತವಾಗಿವೆ.
ಕೆನಡದ ಶೇರು ಪೇಟೆಗಳು ಗಣಿಗಾರಿಕಾ ಕಂಪನಿಗಳ ಮೇಲೆ ವಿಶೇಷ ಗಮನ ಹರಿಸಿವೆ, ಅದರಲ್ಲೂ [[ಟಿಎಸ್ಎಕ್ಸ್ ವೆಂಚರ್ ಎಕ್ಸ್ಚೇಂಜ್]] ಮೂಲಕ ಕೆಳದರ್ಜೆಯ ಪರಿಶೋಧನಾ ಕಂಪನಿಗಳ ಮೇಲೆ; ಕೆನಡದ ಕಂಪನಿಗಳು ಈ ಎಕ್ಸ್ಚೇಂಜ್ಗಳ ಮೇಲೆ ಬಂಡವಾಳವನ್ನು ಹೆಚ್ಚಿಸುತ್ತಾರೆ ಮತ್ತು ವಿಶ್ವವ್ಯಾಪಿಯಾಗಿ ಪರಿಶೋಧನೆಯಲ್ಲಿ ಹಣವನ್ನು ತೊಡಗಿಸುತ್ತಾರೆ.<ref name="NAIndustryProfile" /> ಜ್ಯೂನಿಯರ್ಗಳ ಕೆಳಗೆ ಅಲ್ಲಿ ವಸ್ತುಗಳ ಬೆಲೆಗಳನ್ನು ಬದಲಾಯಿಸುವುದರ ಮೇಲೆ ಪ್ರಮುಖವಾಗಿ ಕೇಂದ್ರೀಕೃತಗೊಂಡ ಕಾನೂನು ಸಮ್ಮತವಲ್ಲದ ಒಂದು ಸಂಭವನೀಯ ವಿಭಾಗವು ಅಸ್ತಿತ್ವದಲ್ಲಿವೆ ಎಂದು ಕೆಲವರು ವಾದಿಸಿದರು.<ref name="NAIndustryProfile" />
ಗಣಿಗಾರಿಕಾ ಕಾರ್ಯಾಚರಣೆಯನ್ನು ಅವುಗಳ ಮೂಲಸಂಪತ್ತಿಗನುಗುಣವಾಗಿ ಐದು ಮುಖ್ಯ ಗುಂಪುಗಳಾಗಿ ವಿಂಗಡಿಸಬಹುದು.
ಅವು ಎಣ್ಣೆ ಮತ್ತು ನೈಸರ್ಗಿಕ ಅನಿಲಗಳ ಉದ್ಧರಣ, ಕಲ್ಲಿದ್ದಲು ಗಣಿಗಾರಿಕೆ, ಲೋಹದ ಅದಿರಿನ ಗಣಿಗಾರಿಕೆ, ಅಲೋಹ ಖನಿಜ ಗಣಿಗಾರಿಕೆ ಮತ್ತು ಕಲ್ಲುತೆಗೆಯುವುದು, ಮತ್ತು ಗಣಿಗಾರಿಕೆಗೆ ಸಹಕರಿಸುವ ಇತರ ಕಾರ್ಯಗಳು.<ref>ಯುನೈಟೆಡ್ ಸ್ಟೇಟ್ ಕಾರ್ಮಿಕ ಇಲಾಖೆ
http://www.bls.gov/oco/cg/cgs004.htm#nature</ref>
ಈ ಎಲ್ಲ ಗುಂಪುಗಳಲ್ಲಿ ಎಣ್ಣೆ ಮತ್ತು ನೈಸರ್ಗಿಕ ಅನಿಲಗಳ ಉದ್ಧರಣ ಇದರ ವಿಶ್ವವ್ಯಾಪಿ ಆರ್ಥಿಕ ಪ್ರಾಮುಖ್ಯತೆಯಿಂದಾಗಿ ಒಂದು ಬೃಹತ್ ಗುಂಪಾಗಿ ಉಳಿದಿದೆ.
ಸಂಭವನೀಯ ಗಣಿಗಾರಿಕೆ ಪ್ರದೇಶಗಳನ್ನು ಪರಿವೀಕ್ಷಿಸಲು, ಈಗ ಗಣಿಗಾರಿಕಾ ಕೈಗಾರಿಕೆಗಳು ಭೂಕಂಪನದ ಪರಿವೀಕ್ಷಣೆ ಮತ್ತು ದೂರದ ಸಂಜ್ಞೆಯನ್ನು ನೀಡುವ ಸೆಟಲೈಟ್ಗಳಂತಹ ಕೃತಕವಾದ ಹೊಸ ತಂತ್ರಜ್ಞಾನಗಳನ್ನು ಉಪಯೋಗಿಸುತ್ತಿದೆ.
===ಕಾರ್ಪೊರೇಟ್ ವರ್ಗೀಕರಣ ===
ಗಣಿಗಾರಿಕಾ ಕಂಪನಿಗಳನ್ನು ಅವುಗಳ ಗಾತ್ರ ಮತ್ತು ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ವರ್ಗೀಕರಿಸಬಹುದು:
*
'''ಬೃಹತ್''' ಕಂಪನಿಗಳು ಎಂದು ಪರಿಗಣಿಸುವ ಕಂಪನಿಗಳು ಕಂದಾಯಕ್ಕನುಗುಣವಾಗಿ 500 ಮಿಲಿಯನ್ ಯುಎಸ್ ಡಾಲರ್ಗಿಂತ ಹೆಚ್ಚು ವಾರ್ಷಿಕ ಗಣಿಗಾರಿಕೆಯನ್ನು ಹೊಂದಿರುತ್ತವೆ ಮತ್ತು ಸ್ವಂತವಾಗಿ ಒಂದು ಪ್ರಮುಖ ಗಣಿಯನ್ನು ಅಭಿವೃದ್ಧಿಗೊಳಿಸುವ ಆರ್ಥಿಕ ಸಾಮರ್ಥ್ಯವನ್ನು ಹೊಂದಿರುತ್ತವೆ.
*
'''ಮಧ್ಯಮ''' ಕಂಪನಿಗಳು 50 ಮಿಲಿಯನ್ ಯುಎಸ್ ಡಾಲರ್ಗಿಂತ ಹೆಚ್ಚು ಆದರೆ 500 ಮಿಲಿಯನ್ ಯುಎಸ್ ಡಾಲರ್ಗಿಂತ ಕಡಿಮೆ ವಾರ್ಷಿಕ ಕಂದಾಯವನ್ನು ಹೊಂದಿರುತ್ತವೆ.
*
'''ಸಣ್ಣ''' ಕಂಪನಿಗಳು ಅವುಗಳ ಉದ್ಧರಣದ ನಿಧಿಯ ಅಸಲಿನ ಹಣಕ್ಕೆ [[ಇಕ್ವಿಟಿ]] ಷೇರುಗಳ ಮೇಲೆ ಅವಲಂಬಿತವಾಗಿರುತ್ತವೆ.
ಸಣ್ಣ ಕಂಪನಿಗಳು ಮುಖ್ಯವಾಗಿ ಅಪ್ಪಟ ಉದ್ಧರಣ ಕಂಪನಿಗಳು, ಆದರೆ ಸಣ್ಣ ಪ್ರಮಾಣದಲ್ಲಿ ಉತ್ಪಾದಿಸುತ್ತವೆ, ಮತ್ತು 50 ಮಿಲಿಯನ್ ಯುಎಸ್ ಡಾಲರ್ ಕಂದಾಯವನ್ನು ಹೊಂದಿರುವುದಿಲ್ಲ.<ref name="MEG-CorpClass">{{cite web|url=http://www.metalseconomics.com/pdf/PDAC%202009%20World%20Exploration%20Trends.pdf|title=Metals Economics Group World Exploration Trends Report|accessdate=2009-05-05|publisher=Metals Economics Group Inc.|archive-date=2012-08-03|archive-url=https://web.archive.org/web/20120803095004/http://www.metalseconomics.com/pdf/PDAC|url-status=dead}}</ref>
==ಸುರಕ್ಷತೆ==
[[File:Minedanger.jpg|thumb|right|ಅರೊಜೋನಾದ ಹಳೆಯ ಗಾಣಿಗಾರಿಕೆಯಲ್ಲಿ ಅಪಾಯಕಾರಿ ಗುರುತು.]]
[[File:Inclined Mine Shaft Entrace at Yarnbury.jpg|thumb|right|ಯಾರ್ಕ್ಶೈರ್ ಪ್ರವೇಶದಲ್ಲಿ ಕೈಬಿಟ್ಟ ಗಾಣಿಗಾರಿಕೆ, ಇಂಗ್ಲೇಂಡ್,ಯುನೈಟೆಡ್ ಕಿಂಗ್ಡಮ್]]
ಗಣಿಗಾರಿಕೆ ವ್ಯವಹಾರದಲ್ಲಿ ಅದರಲ್ಲೂ ಮುಖ್ಯವಾಗಿ ಉಪ-ಮೇಲ್ಮೈ ಗಣಿಗಾರಿಕೆಯಲ್ಲಿ ಸುರಕ್ಷತೆ ಬಹಳ ಕಾಲದಿಂದಲೂ ವಿವಾದಾತ್ಮಕ ವಿಷಯವಾಗಿದೆ.
ಹಿಂದಿನ ದಶಕಗಲ್ಲಿ ಇದ್ದಿದ್ದಕ್ಕಿಂತ ಇಂದಿನ ಕಾಲದ ಗಣಿಗಾರಿಕೆ ಗಣನೀಯವಾಗಿ ಸುರಕ್ಷಿತವಾಗಿದೆ, [[ಗಣಿಗಾರಿಕಾ ಅಪಘಾತ]] ಬಹಳ ಹೆಚ್ಚಾಗಿದೆ, 2002ರಲ್ಲಿ [[ಕ್ವೆಕ್ರೀಕ್ ಗಣಿ ರಕ್ಷಣೆ]] ಗಣಿಯಲ್ಲಿ ಸಿಕ್ಕಿಕೊಂಡ 9 ಪೆನ್ಸಿಲ್ವೇನಿಯದ ಕಲ್ಲಿದ್ದಲು ಗಣಿಗಾರರನ್ನು ಕಾಪಾಡಿತು.
ಗಣಿಗಾರಿಕೆಯಲ್ಲಿ ಗಾಳಿ ಬೆಳಕನ್ನು ಸರಿಯಾಗಿ ಹಾಯಿಸುವುದು ಬಹಳ ಗಣಿಗಾರರಿಗೆ ಒಂದು ಮಹತ್ವದ ಸುರಕ್ಷತಾ ವಿಧಾನ.
ಗಣಿಗಳಲ್ಲಿ ಗಾಳಿ ಬೆಳಕಿನ ಕೊರತೆಯಿಂದ ಹಾನಿಕಾರಕ ಅನಿಲಗಳು, ಶಾಖ ಮತ್ತು ಧೂಳು ಉಪ-ಮೇಲ್ಮೈ ಗಣಿಗಳ ಒಳಗಿಂದ ಹೊರಬೀಳುತ್ತವೆ.
ಇವು ಸಾವಿನಿಂದ ಹಿಡಿದು ಇತರ ಹಾನಿಕಾರಕ ದೈಹಿಕ ತೊಂದರೆಗಳಿಗೆ ಕಾರಣವಾಗಬಹುದು. ಭೂಮಿಯಡಿಯಲ್ಲಿರುವ ಮೀಥೇನ್ ಮತ್ತು ಇತರ ವಾಯುನಿರ್ಮಿತ ಕಲುಷಿತಗಳ ಸಾಂದ್ರಣವು ಸಾಮಾನ್ಯವಾಗಿ ಸಾರಗುಂದಿಸುವಿಕೆ(ಗಾಳಿ ಬೆಳಕನ್ನು ಹಾಯಿಸುವುದು), ಸಮೂಹ ವಾಯು ಮಾರ್ಗವನ್ನು ಪ್ರವೇಶಿಸಿವುದಕ್ಕೆ ಮುಂಚೆ ಹಿಡಿಯುವುದು (ಮೀಥೇನ್ ನಾಲೆ-ವ್ಯವಸ್ಥೆ), ಅಥವಾ ವಿಭಜನೆ (ಮುಚ್ಚುವಿಕೆ ಮತ್ತು ನಿಲ್ಲಿಸುವಿಕೆ) ಗಳ ಮೂಲಕ ನಿಯಂತ್ರಿಸಲ್ಪಡುತ್ತದೆ.<ref name="NIOSH_Vent">{{cite web|url= http://www.cdc.gov/niosh/mining/topics/topicpage30.htm |title=NIOSH Mining Safety and Health Ventilation |accessdate=2007-10-29|publisher=United States National Institute for Occupational Safety and Health}}</ref>
ಕಾಯಿಸಿದ [[ಮಿಥೇನ್ ಅನಿಲ]] ಕಲ್ಲಿದ್ದಲು ಗಣಿಗಳಲ್ಲಿ ಸಿಡಿತದ ಸಾಮಾನ್ಯ ಮೂಲವಾಗಿದೆ, ಅಥವಾ ಹೆಚ್ಚು ತೀವ್ರವಾದ [[ಕಲ್ಲಿದ್ದಲ ಧೂಳಿ]]ನ ಸಿಡಿತಗಳು.
ಗಣಿಗಳಲ್ಲಿ ಅನಿಲಗಳು ಸಹ ಕೆಲಸಗಾರರಿಗೆ ವಿಷವಾಗಬಹುದು ಅಥವಾ ಗಣಿಯಲ್ಲಿ ಆಮ್ಲಜನಕವನ್ನು ಸ್ಥಳಾಂತರಿಸಬಹುದು, ಪರಿಣಾಮವಾಗಿ ಆಸ್ಫಿಕ್ಸಿಯೇಷನ್ ಉಂಟಾಗುತ್ತದೆ.<ref name="NIOSH_Vent" />
ಈ ಕಾರಣಕ್ಕಾಗಿ, ಗಣಿಗಾರರ ಗುಂಪುಗಳಲ್ಲಿ ಕೆಲಸಗಾರರು ಅನಿಲವನ್ನು ಪತ್ತೆಮಾಮಾಡುವ ಉಪಕರಣವನ್ನು ಹೊಂದಿರಲು ಎಮ್ಎಚ್ಎಸ್ಎ ಅಗತ್ಯವಾಗಿರುತ್ತದೆ.
CO, O2, H2S ನಂತಹ ಸಾಮಾನ್ಯ ಅನಿಲಗಳನ್ನು ಮತ್ತು % ಲೋವರ್ ಎಕ್ಸ್ಪ್ಲೋಸಿವ್ ಲಿಮಿಟ್ ಗಳನ್ನು ಇದು ಪತ್ತೆಮಾಡುತ್ತದೆ.
ಜೊತೆಗೆ, ಹೆಚ್ಚು ಅನಿಲವನ್ನು ಪತ್ತೆಹಚ್ಚಲು ನ್ಯಾನೊಟೆಕ್ನಾಲಜಿಯನ್ನು ಪರಿಚಯಿಸಿದಂತೆ ಹೊಸ ತಾಂತ್ರಿಕತೆಗೆ ಹೆಚ್ಚಿನ ನಿಯಂತ್ರಣಗಳನ್ನು ಕೋರಲಾಗಿದೆ.
ಅಧಿಕ ಉಷ್ಣತೆ ಮತ್ತು ಆರ್ದ್ರತೆಗಳು [[ಉಷ್ಣಾಘಾತ]]ವನ್ನು ಒಳಗೊಂಡಂತೆ ಶಾಖಕ್ಕೆ ಸಂಬಂಧಿಸಿದ ವ್ಯಾಧಿಗಳಿಗೆ ಕಾರಣವಾಗಬಹುದು, ಇದು ಪ್ರಾಣಾಂತಿಕವಾಗಬಹುದು.
ಧೂಳುಗಳು [[ಸಿಲಿಕೊಸಿಸ್]], [[ಅಸ್ಬಸ್ಟೊಸಿಸ್]] ಮತ್ತು [[ನ್ಯುಮೊಕೊನಿಯೋಸಿಸ್]] (ಗಣಿಗಾರ ಶ್ವಾಸಕೋಶ ಅಥವಾ [[ಕಪ್ಪು ಶ್ವಾಸಕೋಶ]] ರೋಗ ಎಂದೂ ಸಹ ಕರೆಯುತ್ತಾರೆ) ನಂತಹ ಶ್ವಾಸಕೋಶಗಳ ತೊಂದರೆಗೆ ಕಾರಣವಾಗಬಹುದು.
ಗಣಿ ಕೆಲಸ ಮಾಡುವ ಕ್ಷೇತ್ರದ ಮೂಲಕ ಗಾಳಿಯನ್ನು ಹಾಯಿಸಲು ಗಾಳಿ ಬೆಳಕಿನ ವ್ಯವಸ್ಥೆ ಮಾಡಲಾಗಿರುತ್ತದೆ.
ಗಾಳಿಯ ಪ್ರಸರಣ ಗಣಿಯ ಪರಿಣಾಮಕಾರಿ ಗಾಳಿ ಬೆಳಕಿನ ವ್ಯವಸ್ಥೆಗೆ ಅಗತ್ಯವಾಗಿದೆ, ಇದನ್ನು ಸಾಮಾನ್ಯವಾಗಿ ಭೂಮಿಯ ಮೇಲೆ ಸ್ಥಾಪಿಸಿದ ಒಂದು ಅಥವಾ ಹೆಚ್ಚು ದೊಡ್ಡ ಗಣಿ ಫ್ಯಾನುಗಳು ಒದಗಿಸುತ್ತವೆ.
ಪ್ರತಿಯೊಂದು ಮುಖ್ಯ ಕೆಲಸದ ಜಾಗವು ಸ್ಥಿರವಾಗಿ ತಾಜಾ ಗಾಳಿಯನ್ನು ಪಡೆಯಲು ಗಣಿಯ ಸುತ್ತಲೂ ಸುತ್ತುಹಾಕಲು ಗಾಳಿಯನ್ನು ಒಮ್ಮುಖವಾಗಿ ಮಾತ್ರ ಹಾಯಿಸಲಾಗುವುದು.
ಗಣಿಗಾರಿಕೆಯ ಸಮಯದಲ್ಲಿ ಕೊಳಕನ್ನು ತೆಗೆದುಹಾಕಲು ಮತ್ತು ಬಂಡೆಯನ್ನು ಅದರ ನೈಜ ಸ್ಥಾನದಿಂದ ಹೊರತೆಗೆಯಲು ದೊಡ್ಡ ಖಾಲಿ ಹೊಂಡಗಳು, ರೂಮ್ಸ್ ಮತ್ತು ಸುರಂಗಗಳು, ಗಣಿಯ-ಒಳಗಿನವುಗಳನ್ನು ಗಳನ್ನು ಗಣಿಯೊಳಗೆ ಮಾಡುವುದು ಅಗತ್ಯವಾಗಿದೆ.
ಆಧುನಿಕ ವಿಧಾನಗಳು ಉಪ-ಮೇಲ್ಮೈ ಗಣಿಗಳಲ್ಲಿ ನಾಟ ಮಾಡುವುದು and ಬ್ರೇಸಿಂಗ್ ಗೋಡೆಗಳು ಮತ್ತು ಛಾವಣಿಗಳಿಗೆ ಗುಹೆಯ-ಒಳಗಿನವುಗಳಿಂದಾಗುವ ಘಾತಕ ಪರಿಣಾಮಗಳನ್ನು ಕಡಿಮೆ ಮಾಡಿದೆ, ಆದರೆ ಅಪಘಾತಗಳು ಇನ್ನೂ ಸಂಭವಿಸುತ್ತವೆ.{{Citation needed|date=October 2008}}
ಕೆಲವು ಪ್ರದೇಶಗಳಲ್ಲಿ ಭಾರಿ ಉಪಕರಣದಿಂದ ಸಹ ಗಣಿಗಾರರಿಗೆ ತೊಂದರೆಯಾಗುವ ಸಂಭವವಿದೆ, ಮತ್ತು ಸುರಕ್ಷತಾ ಕ್ರಮಗಳಿಗೆ ಆಧುನಿಕ ಸುಧಾರಣೆಗಳ ಹೊರತಾಗಿಯೂ ಪ್ರಪಂಚದ ತುಂಬ ಗಣಿಗಾರಿಕೆ ಅಪಾಯಕಾರಿಯಾಗಿದೆ.
===ಪರಿತ್ಯಕ್ತ ಗಣಿಗಳು ===
[[File:Abandoned mine Yerington.JPG|thumb|right|ನವೆಡಾದಲ್ಲಿ ಕೈಬಿಟ್ಟ ಗಣಿಗಾರಿಕೆ.]]
[[File:Abandoned mines sign.jpg|thumb|ಅರಿಜೋನಾದ ಜೆರೊಮ್ ಸಮೀಪ ಎಚ್ಚರಿಕೆಯ ಗುರುತು]]
ಸಂಯುಕ್ತ ಸಂಸ್ಥಾನ ಒಂದರಲ್ಲೇ ಸಾರ್ವಜನಿಕ ಮತ್ತು ಖಾಸಗಿ ಭೂಮಿಗಳಲ್ಲಿ 560,000 ಹೆಚ್ಚಾಗಿ ಪರಿತ್ಯಕ್ತ ಗಣಿಗಳಿವೆ.<ref>ಕರ್ಟೀಸ್,ಎನ್., (March, 1996). ಯುಎಸ್ ಕೈಬಿಟ್ಟ ಗಣಿ ಲೆಕ್ಕ ಈಗಲೂ ರಹಸ್ಯವಾಗಿದೆ - ಜನರಲ್ ಅಕೌಂಟಿಂಗ್ ಕಛೇರಿಯ ವರದಿ. ''ಅಮೆರಿಕನ್ ಮೆಟಲ್ ಮಾರ್ಕೆಟ್'', ಅಗಸ್ಟ್ 27, 2007ರಂದು ಪರಿಷ್ಕರಿಸಲಾಗಿದೆ, [http://findarticles.com/p/articles/mi_m3MKT/is_n60_v104/ai_18131890]</ref><ref>ಜನರು,ಭೂಮಿ,ಮತ್ತು ನೀರು (ಮಾರ್ಚ್, 2007). ಕೀಪ್ ಔಟ್! ಹಳೆಯ ಗಣಿಗಳು ಅಪಾಯಕರ. ''ಆಫೀಸ್ ಆಫ್ ಸರ್ಫೆಸ್ ಮೈನಿಂಗ್'' : ಯು.ಎಸ್. ಒಳಾಡಳಿತ ಇಲಾಖೆ. ಅಗಸ್ಟ್ 27, 2007ರಂದು ಪರಿಷ್ಕರಿಸಲಾಗಿದೆ, [http://www.peoplelandandwater.gov/osm/osm_03-20-07_keep-out-old.cfm] {{Webarchive|url=https://web.archive.org/web/20091205052455/http://www.peoplelandandwater.gov/osm/osm_03-20-07_keep-out-old.cfm|date=2009-12-05}}</ref>
ಸರಿಯಾದ ತಿಳುವಳಿಕೆ ಮತ್ತು ಸುರಕ್ಷತೆಯ ತರಬೇತಿ ಇಲ್ಲದೆ ಪರಿತ್ಯಕ್ತ ಗಣಿಗಳನ್ನು ಶೋಧಿಸುವ ಪ್ರಯತ್ನ ಮಾಡುವವರಿಗೆ ಅವು ಅಪಾಯಕಾರಿಯಾಗಿವೆ.
ಹಳೆಯ ಗಣಿಗಳು ಕೆಲವೊಮ್ಮೆ ಅಪಾಯಕಾರಿಯಾಗಿರುತ್ತವೆ ಮತ್ತು ನಿರ್ಜೀವ ಅನಿಲಗಳನ್ನು ಹೊಂದಿರುತ್ತವೆ.
ಸೋರುವಿಕೆ ಅಥವಾ ಅಂತರಾಕ್ರಮಣದಿಂದ ಗಣಿಗಳಲ್ಲಿ ನಿಂತ ನೀರು ಆಳವಾದ ಹೊಂಡಗಳನ್ನು ಕಾಣದಂತೆ ಮಾಡುತ್ತದೆ ಮತ್ತು ನೀರಿನ ಕೆಳಗಿನ ಅಪಾಯ ಅನಿಲಗಳಂತಹ ಮುಖ್ಯ ತೊಂದರೆಯನ್ನುಂಟುಮಾಡುತ್ತದೆ.
ಜೊತೆಗೆ, ಹವಾಮಾನವು ಮೇಲ್ಮೈಯನ್ನು [[ಸವೆಸು]]ವ ಕಾರಣದಿಂದ ಅದರ ಸುತ್ತಲಿರುವ ಬಂಡೆ ಮತ್ತು ಭೂಮಿಯನ್ನು, ಹಳೆಯ ಗಣಿಯನ್ನು ಪ್ರವೇಶಿಸುವುದು ಬಹಳ ಅಪಾಯಕಾರಿಯಾಗಬಹುದು.
ಹಳೆಯ ಗಣಿ ಕಾರ್ಯಗಳು, ಗವಿಗಳು ಮುಂತಾದವುಗಳು ಗಾಳಿಯಲ್ಲಿ ಆಮ್ಲಜನಕದ ಕೊರತೆಯ ಕಾರಣದಿಂದ ಸಾಮಾನ್ಯವಾಗಿ ಅಪಾಯಕರವಾಗಿರುತ್ತವೆ, ಗಣಿಗಳಲ್ಲಿನ ಈ ಸ್ಥಿತಿಯನ್ನು [[ಬ್ಲ್ಯಾಕ್ಡಂಪ್]] ಎನ್ನುವರು.
===ಶಬ್ಧ ಗೃಹಣದ ನಾಶ===
ಭೂಮಿಯ [[ತೊಗಟೆ]]ಯ ಅತ್ಯಂತ ಗಟ್ಟಿಯಾದ ಸ್ತರಗಳನ್ನು ಸೀಳಲು [[ಗಣಿಗಾರರು]] ಸಾಕಷ್ಟು ಬಲವಾದ ಸಲಕರಣೆಗಳನ್ನು ಉಪಯೋಗಿಸುತ್ತಾರೆ.
ಈ ಸಲಕರಣೆಯನ್ನು [[ನೆಲದಡಿಯಲ್ಲಿ ಗಣಿಗಾರರು]] ಕೆಲಸ ಮಾಡುವ ಸ್ಥಳದಲ್ಲಿ ಉಪಯೋಗಿಸಲಾಗುವುದು, ಇದರಿಂದ [[ಶಬ್ದ ಗ್ರಹಣದ ನಾಶ]]ವಾಗಬಹುದು.<ref name="sound">{{cite journal|last=Peterson|first=J.S.|coauthors=P.G. Kovalchik, R.J. Matetic|title=Sound power level study of a roof bolter|journal=Trans Soc Min Metal Explor|issue=320|pages=171–7|date=2006|url=http://www.cdc.gov/niosh/mining/pubs/pdfs/splso.pdf|format=[[Portable Document Format|PDF]]|accessdate=2009-06-16|archiveurl=https://web.archive.org/web/20090115205343/http://www.cdc.gov/niosh/mining/pubs/pdfs/splso.pdf|archivedate=2009-01-15}}</ref>
ಉದಾಹರಣೆಗೆ, ರೂಫ್ ಬೊಲ್ಟರ್ (ಸಾಮಾನ್ಯವಾಗಿ ಗಣಿಯ ರೂಫ್ ಬೋಲ್ಟರ್ ಕೆಲಸ ಮಾಡುವವರು ಉಪಯೋಗಿಸುತ್ತಾರೆ) 115 ಡಿಬಿ ವರೆಗಿನ ಶಬ್ದ ಶಕ್ತಿಯ ಹಂತದವರೆಗೆ ತಲುಪಬಹುದು.<ref name="sound" />
[[ಪ್ರತಿಧ್ವನಿಸುವ]] ಪರಿಣಾಮಗಳ ಜೊತೆ ಸೇರಿಕೊಂಡಿರುವ ನೆಲದಡಿಯ ಗಣಿಗಳ ಕೆಲಸಗಾರ ಸರಿಯಾದ [[ಗೃಹಣ ಸುರಕ್ಷತೆ]]ಯನ್ನು ತೆಗೆಕೊಂಡಿರದಿದ್ದರೆ [[ಶಬ್ದ ಗೃಹಣ ನಾಶ]]ದ ತೊಂದರೆ ಮಾತ್ರ ಅಲ್ಲ,<ref name="sound" /> [[ಒಎಸ್ಎಚ್ಎ]] ಸ್ಟ್ಯಾಂಡರ್ಡ್ಸ್ ನ ವಿರುದ್ಧ ಸಹ ಹೋಗುತ್ತದೆ.<ref>{{Cite book | contribution = Appendix A: OSHA Noise Standard Compliance Checklist | contribution-url = http://origin.cdc.gov/niosh/docs/96-110/pdfs/96-110.pdf | title = Preventing Occupational Hearing Loss: A Practical Guide | editor-last = Franks | editor-first = John R. | pages = 60 | year = 1996 | publisher = U.S. Department of Health and Human Services | access-date = 2010-07-31 | archive-date = 2010-03-09 | archive-url = https://web.archive.org/web/20100309131313/http://origin.cdc.gov/niosh/docs/96-110/pdfs/96-110.pdf | url-status = dead }}</ref>
== ದಾಖಲೆಗಳು ==
2008ರಿಂದ ಪ್ರಪಂಚದ ಅತ್ಯಂತ ಆಳವಾದ ಗಣಿ 3,774 ಮೀಟರ್ ಆಳವಿರುವ [[ದಕ್ಷಿಣ ಆಫ್ರಿಕಾ]]ದ [[ಉತ್ತರ ಪಶ್ಚಿಮ ಪ್ರಾವೆನ್ಸಿ]]ನ [[ಸವುಕ ಗಣಿ]]ಯ <ref name="TauTonaExtended">{{cite news |title=TauTona, Anglo Gold - Mining Technology |url=http://www.mining-technology.com/projects/tautona_goldmine/ |publisher=SPG Media Group PLC |date=2009-01-01 |accessdate=2009-03-02 }}</ref> ಬದಲಾಗಿ 3.9 ಕಿಲೋಮೀಟರ್ಗಳಿರುವ [[ದಕ್ಷಿಣ ಆಫ್ರಿಕಾ]]ದ [[ಕಾರ್ಲೆತೊನ್ವಿಲೆ]]ಯಲ್ಲಿನ [[ತೌತೊನ]] ಆಗಿದೆ.<ref name="TauTonaPlans">{{cite news |first=Brindaveni |last=Naidoo |title=TauTona to take ‘deepest mine’ accolade |url=http://www.miningweekly.co.za/article.php?a_id=98516 |publisher=Creamer Media's Mining Weekly Online |date=2006-12-15 |accessdate=2007-07-19 |archive-date=2008-03-08 |archive-url=https://web.archive.org/web/20080308201748/http://www.miningweekly.co.za/article.php?a_id=98516 |url-status=dead }}</ref>
[[ದಕ್ಷಿಣ ಆಫ್ರಿಕಾ]]ದ [[ಬಾಕ್ಸಬರ್ಗ್]] ನಲ್ಲಿರುವ [[ಈಸ್ಟ್ ರ್ಯಾಂಡ್ ಗಣಿ]] ಸಂಕ್ಷಿಪ್ತವಾಗಿ 3,585 ಮೀಟರ್ ಹೊಂದಿರುವ ದಾಖಲೆ ಹೊಂದಿತ್ತು, ಮತ್ತು ತೌತೊನ್ 3,581 ಮೀಟರ್ ಆಳವಿದ್ದಾಗಲೂ ಸಹ ಇದನ್ನು ಪ್ರಪಂಚದಲ್ಲಿ ಅತ್ಯಂತ ಆಳವಾದ ಮೊದಲ ಗಣಿ ಎಂದು ಪ್ರಕಟಿಸಲಾಗಿತ್ತು.
1,444 ಮೀಟರ್ ಇರುವ [[ಫಿನ್ಲ್ಯಾಂಡಿ]]ನ [[ಪ್ಯ್ಹಜರ್ವಿ]]ಯಲ್ಲಿನ [[ಪ್ಯ್ಹಸಲ್ಮಿ ಗಣಿ]] ಯುರೋಪಿನಲ್ಲಿ ಅತ್ಯಂತ ಆಳವಾದ ಗಣಿಯಾಗಿದೆ.
1,400 ಮೀಟರ್ (ಸುರಂಗ ಮಾರ್ಗದ ಆಳ 1,100 ಮೀಟರುಗಳು) ಇರುವ [[ಇಂಗ್ಲೆಂಡಿ]]ನ [[ಬೌಲ್ಬಿ ಗಣಿ]] ಯುರೋಪಿನಲ್ಲಿ ಎರಡನೇ ಹೆಚ್ಚು ಆಳವಾದ ಗಣಿಯಾಗಿದೆ.
1,200 ಮೀಟರ್ ಇರುವ [[ಸಂಯುಕ್ತ ಸಂಸ್ಥಾನಗಳ]] [[ಉತಃ]]ದ [[ಬಿಂಗಮ್ ಕೆನ್ಯೊನ್ನ]]ಲ್ಲಿನ [[ಬಿಂಗಮ್ ಕೆನ್ಯೊನ್ ಗಣಿ]] ಪ್ರಪಂಚದ ಅತ್ಯಂತ ಆಳದ ಓಪನ್ ಪಿಟ್ ಗಣಿಯಾಗಿದೆ.
900 ಮೀಟರ್ ಇರುವ [[ಚಿಲಿ]]ಯ [[ಚುಕ್ವಿಕಮತ್ನ]] [[ಚುಕ್ವಿಕಮತ್]] ಪ್ರಪಂಚದ ದೊಡ್ಡ ಮತ್ತು ಎರಡನೇ ಆಳವಾದ ಓಪನ್ ಪಿಟ್ ತಾಮ್ರದ ಗಣಿಯಾಗಿದೆ, ಇದು ವಾರ್ಷಿಕವಾಗಿ 940,600 ಟನ್ ತಾಮ್ರ ಮತ್ತು 17,700 ಟನ್ ಮೊಲಿಬ್ಡನಮ್ನ್ನು ಉತ್ಪಾದಿಸುತ್ತದೆ. {{Citation needed|date=October 2008}}
ಸಮುದ್ರ ಮಟ್ಟಕ್ಕನುಗುಣವಾಗಿ ಆಳವಾದ ಓಪನ್ ಪಿಟ್ ಗಣಿ ಜರ್ಮನಿಯ [[ತಗೆಬು ಹಂಬಚ್]] ಆಗಿದೆ, ಹೊಂಡದ ಆಳ ಸಮುದ್ರ ಮಟ್ಟಕ್ಕಿಂತ 293 ಮೀಟರ್ ಇದೆ.
ದೊಡ್ಡ ನೆಲದಡಿಯ ಗಣಿ: [[ಚಿಲಿ]]ಯ ರ್ಯಾನ್ಕಗ್ವದಲ್ಲಿನ [[ಎಲ್ ತೆನಿಯೆಂತ್]], 2,400 ಕಿಲೋಮೀಟರ್ ನೆಲದಡಿಯ ಹರಿವುಗಳು, ವಾರ್ಷಿಕವಾಗಿ 418,000 ಟನ್ ತಾಮ್ರವನ್ನು ಉತ್ಪಾದಿಸುತ್ತದೆ.
12,262 ಮೀಟರ್ ಇರುವ [[ಕೊಲ ಸುಪರ್ಡೀಪ್ ಬೋರ್ಹೋಲ್]] ಪ್ರಪಂಚದ ಆಳವಾದ ಬೋರ್ಹೋಲ್ ಆಗಿದೆ.
ಇದು ಗಣಿಗಾರಿಕೆ ವಿಷಯಕ್ಕೆ ಸಂಬಂಧಿಸಿಲ್ಲ ಆದರೂ [[ವೈಜ್ಞಾನಿಕ ಡ್ರಿಲ್ಲಿಂಗ್ಗೆ]] ಸಂಬಂಧಿಸಿದೆ.
== ಇವನ್ನೂ ನೋಡಿ ==
*[[ರಾಷ್ಟ್ರ ಆರ್ಥಿಕತೆಯಲ್ಲಿ ಗಣಿಗಾರಿಕೆಯ ಪಾತ್ರ]]
*[http://www.prajavani.net/news/article/2016/12/31/462668.htmlಜಾರ್ಖಂಡ್: ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಶಂಕೆ;ಗಣಿ ಕುಸಿತ: 10 ಕಾರ್ಮಿಕರು ಸಾವು;31 Dec, 2016]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
*[http://www.prajavani.net/news/article/2017/01/03/463321.html ಕಲ್ಲಿದ್ದಲು ಗಣಿಗಳಲ್ಲಿ ದುರಂತ.] {{Webarchive|url=https://web.archive.org/web/20170103125500/http://www.prajavani.net/news/article/2017/01/03/463321.html |date=2017-01-03 }}
==ಆಕರಗಳು==
{{reflist|2}}
==ಹೆಚ್ಚಿನ ಓದಿಗಾಗಿ==
* ಅಲೀ, ಸಲೀಮ್ ಎಚ್. (2003) ''ಮೈನಿಂಗ್, ದ ಎನ್ವಿರಾನ್ಮೆಂಟ್ ಆಯ್೦ಡ್ ಇಂಡಿಜೀನಿಯಸ್ ಡೆವಲಪ್ಮೆಂಟ್ ಕನ್ಫ್ಲಿಕ್ಟ್ ''. ಟಕ್ಸನ್ ಎಝಡ್: ಅರಿಜೋನಾ ವಿಶ್ವವಿದ್ಯಾಲಯ ಮುದ್ರಣಾಲಯ ಪ್ರೆಸ್.
* ಅಲೀ, ಸಲೀಮ್ ಎಚ್. (2009) ''ಟ್ರೆಶರ್ಸ್ ಆಫ್ ದ ಅರ್ಥ್: ನೀಡ್, ಗ್ರೀಡ್ ಅಯ್೦ಡ್ ಎ ಸಸ್ಟೇನೇಬಲ್ ಫ್ಯೂಚರ್''. ನ್ಯೂ ಹ್ಯಾವನ್ ಮತ್ತು ಲಂಡನ್: ಯೇಲ್ ವಿಶ್ವವಿದ್ಯಾಲಯ ಮುದ್ರಣಾಲಯ.
* {{cite book |title=From Mine to Mistress: Corporate Strategies and Government Policies in the International Diamond Industry |last=Even-Zohar |first=Chaim |year=2002 |publisher=Mining Journal Books |isbn=0953733610 |pages=555}}
* ಗಿಯೋಬ್ಯಾಕ್ಟರ್ ಪ್ರೊಜೆಕ್ಟ್: [http://www.geobacter.org/press/2001-07-21-economist.pdf ಗೋಲ್ಡ್ ಮೈನ್ಸ್ ಮೇ ಓವ್ ದೇರ್ ಒರಿಜಿನ್ಸ್ ಟು ಬ್ಯಾಕ್ಟೇರಿಯಾ] {{Webarchive|url=https://web.archive.org/web/20170308175324/http://www.geobacter.org/press/2001-07-21-economist.pdf |date=2017-03-08 }} ([[ಪಿಡಿಎಫ್]] ವಿಧಾನದಲ್ಲಿ)
* ಗ್ಯಾರೆಟ್,ಡೆನ್ನಿಸ್ ''ಅಲಾಸ್ಕಾ ಪ್ಲೇಸರ್ ಮೈನಿಂಗ್''
* {{cite book |title=Principles of Mine Planning|edition=2nd |last=Jayanta |first=Bhattacharya |year=2007 |publisher=Wide Publishing |location= |isbn=81-7764-480-7 |pages=505}}
* ಮಾರಿಸನ್,ಟಾಮ್(1992) ''ಹಾರ್ಡ್ಡ್ರಾಕ್ ಗೋಲ್ಡ್: ಎ ಮೈನರ್ಸ್ ಟೇಲ್''. ISBN 0-521-22515-9.
==ಬಾಹ್ಯ ಕೊಂಡಿಗಳು==
{{Commons category|Mining}}
* [http://kids.mongabay.com/lesson_plans/lisa_algee/mining.html ಗಣಿಗಾರಿಕೆ ಎಂದರೆ ಏನು?]
* [http://www.smenet.org ಸಮಾಜಕ್ಕಾಗಿ ಗಣಿಗಾರಿಕೆ,ಲೋಹಶಾಸ್ತ್ರ,ಮತ್ತು ಪರಿಶೋಧನೆ]
{{Mining techniques}}
{{Technology}}
{{Caves}}
{{Interwikineeded}}
[[ವರ್ಗ:ಗಾಣಿಗಾರಿಕೆ]]
[[ವರ್ಗ:ಗಣಿಗಾರಿಕೆಯ ಇತಿಹಾಸ]]
[[ವರ್ಗ:ಉದ್ಯೋಗದ ಸುರಕ್ಷತೆ ಮತ್ತು ಆರೋಗ್ಯ]]
[[ವರ್ಗ:ಖನಿಜಗಳು]]
[[ವರ್ಗ:ಗಣಿಗಾರಿಕೆ]]
gt9jxrs3jh48rp046ebcq6fp2dvvz30
ಟಾರ್ಗೆಟ್ ಕಾರ್ಪೊರೇಶನ್
0
24353
1379605
1373590
2026-08-09T11:00:08Z
InternetArchiveBot
69876
Rescuing 5 sources and tagging 0 as dead.) #IABot (v2.0.9.5
1379605
wikitext
text/x-wiki
{{About|the United States retail company and its stores|the Australian retail stores|Target Australia}}
{{Infobox company
| company_name = Target Corporation
| company_logo = [[Image:Target logo.svg|125px]]
| company_type = [[Public company|Public]] ({{nyse|TGT}})
| company_slogan = ''Expect More. Pay Less.''
| foundation = 1902<br /><small>1902 as Dayton Dry Goods<ref>{{cite book|url=https://books.google.com/books?id=l-7XAAAAMAAJ&q=1903+%22dayton+dry+goods%22&dq=1903+%22dayton+dry+goods%22 |title=International directory of company... - Google Books |publisher=Books.google.com |date=2009-06-26 |accessdate=2010-02-21}}</ref></small><br/><small>1969 as Dayton-Hudson<ref>{{cite book|url=https://books.google.com/books?id=g9W6AAAAIAAJ&q=1969+%22dayton-hudson%22&dq=1969+%22dayton-hudson%22 |title=International directory of company... - Google Books |publisher=Books.google.com |date=2008-09-22 |accessdate=2010-02-21}}</ref></small><br/><small>2000 as Target<ref>{{cite news|url=https://www.nytimes.com/2000/01/14/business/company-news-dayton-hudson-says-it-will-change-its-name-to-target.html |title=Company News - Company News - Dayton Hudson Says It Will Change Its Name To Target |publisher=NYTimes.com |date=2000-01-14 |accessdate=2010-02-21}}</ref></small>
| founder = [[George Dayton]]
| location = Target Plaza North & [[Target Plaza South]]<br>[[Minneapolis, Minnesota|Minneapolis]], [[Minnesota]]
| area_served = United States<br /><small>excepting Vermont</small>
| key_people = [[Gregg Steinhafel]],<br /><small>[[chairman]], [[president]],</small><br /><small>and [[chief executive officer]]<small>
| industry = [[Retail]]
| products = [[clothing]], [[housewares]], [[food]]
| homepage = [http://www.target.com/ target.com]
| revenue = {{profit}} US$64.948 billion
| operating_income = {{profit}} US$ 3.536 billion
| net_income = {{profit}} US$ 2.214 billion
| assets = {{profit}} US$ 44.106 billion
| equity = {{decrease}} US$ 13.712 billion<br />(financials for fiscal 2008)<ref name="2008 financials">[http://sites.target.com/images/company/annual_report_2008/documents/2008_target_annualreport.pdf Target Corporation Fourth Quarter Earnings Per Share $1.23]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}, Target Corporation, February 26, 2008.</ref>
| num_employees = 351,000 (''2009'')
}}
'''ಟಾರ್ಗೆಟ್ ಕಾರ್ಪೋರೇಷನ್''', ಇದು ಸಾಮಾನ್ಯವಾಗಿ '''ಟಾರ್ಗೆಟ್''' ಎಂದು ಗುರುತಿಸಲ್ಪಟ್ಟ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕದ]] ರೀಟೇಲ್ ವ್ಯಾಪಾರೀ ಕಂಪನಿಯಾಗಿದೆ, ಇದು 1902ರಲ್ಲಿ ಮಿನ್ನೇಸೋಟಾದ ಡೇಟನ್ ಡ್ರೈ ಗೂಡ್ಸ್ ಕಂಪನಿಯಾಗಿ ಮಿನಿಯಾಪೊಲಿಸ್ನಲ್ಲಿ ಆರಂಭಗೊಂಡಿತು.
ಟಾರ್ಗೆಟ್ ತನ್ನ ಮೊದಲ ಟಾರ್ಗೆಟ್ ಸ್ಟೋರನ್ನು ರೋಸ್ವಿಲ್ಲೆಯ ಸಮೀಪ 1962ರಲ್ಲಿ ಪ್ರಾರಂಭಿಸಿತು. ಟಾರ್ಗೆಟ್ ಸ್ಟೋರ್ನ ಕಲ್ಪನೆಯು ಬೆಳೆದು, ಕೊನೆಗೆ ಇದು ಡೇಟನ್ ಹಡ್ಸನ್ ಕಾರ್ಪೋರೇಷನ್ನ ಅತೀ ದೊಡ್ಡ ವಿಭಾಗವಾಗಿ ಹೊರಹೊಮ್ಮಿತು, ಇದರಿಂದಾಗಿ 2000ದಲ್ಲಿ ಅದು ತನ್ನ ಹೆಸರನ್ನು ಟಾರ್ಗೆಟ್ ಕಾರ್ಪೋರೇಷನ್ ಎಂದು ಬದಲಾಯಿಸಿಕೊಂಡಿತು.{{As of|2010|5|lc=on}} ಈ ಕಂಪೆನಿಯು, ವರ್ಮಾಂಟ್ ರಾಜ್ಯವೊಂದನ್ನು ಹೊರತುಪಡಿಸಿ ಇತರ ಎಲ್ಲಾ ರಾಜ್ಯಗಳಲ್ಲಿ ಟಾರ್ಗೆಟ್, ಸೂಪರ್ ಟಾರ್ಗೆಟ್ ಮತ್ತು ಟಾರ್ಗೆಟ್ ಗ್ರೇಟ್ಲ್ಯಾಂಡ್ಗಳ ಮೂಲಕ ಕಾರ್ಯನಿರ್ವಹಿಸಬಹುದಾದ ಅಂಗಡಿಗಳನ್ನು ತೆರೆಯಿತು.
ಟಾರ್ಗೆಟ್ ಇದು [[ಅಮೇರಿಕ ಸಂಯುಕ್ತ ಸಂಸ್ಥಾನ|ಸಂಯುಕ್ತ ಸಂಸ್ಥಾನ]]ದಲ್ಲಿನ ವಾಲ್ಮಾರ್ಟ್ನ ನಂತರದ ಅತೀ ಹೆಚ್ಚು ರಿಯಾಯಿತಿ ನೀಡುವ ವ್ಯಾಪಾರೀ ಕಂಪೆನಿಯಾಗಿದೆ.<ref>{{cite web |last=Barwise |first=Patrick |url=http://hbswk.hbs.edu/archive/4319.html |title=Bullseye: Target's Cheap Chic Strategy - HBS Working Knowledge |publisher=Hbswk.hbs.edu |date=2004-08-16 |accessdate=2010-02-21 |archive-date=2016-03-03 |archive-url=https://web.archive.org/web/20160303185737/http://hbswk.hbs.edu/archive/4319.html |url-status=dead }}</ref><ref>{{cite web|url=https://www.bloomberg.com/apps/news?sid=aX.YYXT2sDwI&pid=20601087 |title=Wal-Mart Set to Repeat Share Gains, Grab Target Sales (Update3) |publisher=Bloomberg.com |date=2009-01-02 |accessdate=2010-02-21}}</ref> ಈ ಕಂಪೆನಿಯು ಫಾರ್ಚೂನ್ 500{{As of|2009|lc=on}} ನ ಒಟ್ಟೂ ಶ್ರೀಮಂತ ಕಂಪನಿಗಳಲ್ಲಿ 28ನೇ ಸ್ಥಾನದಲ್ಲಿದೆ ಮತ್ತು ಇದು ಸ್ಟ್ಯಾಂಡರ್ಡ್ & ಪೂಅರ್ಸ್ 500 ಇಂಡೆಕ್ಸ್ನಲ್ಲಿಯೂ ಪ್ರತಿಸ್ಪರ್ಧಿಯಾಗಿದೆ. ಪ್ರತ್ಯೇಕ ಟಾರ್ಗೆಟ್ ಆಸ್ಟ್ರೇಲಿಯಾದ ಸರಣಿಯ ಮಾಲೀಕರಾಗಿರುವ ವೆಶ್ಫಾರ್ಮರ್ಸ್ಗೆ ಕಂಪೆನಿಯು ತನ್ನ ಗೂಳಿಯ ಕಣ್ಣಿನ ವ್ಯಾಪಾರೀ ಮುದ್ರೆಯನ್ನು ಪರವಾನಿಗೆ ನೀಡಿದೆ.
==ಇತಿಹಾಸ==
===1902–1962: ಡೇಟನ್ಸ್===
1901ರಲ್ಲಿ ಜಾರ್ಜ್ ಡೇಟನ್ ಮಿನಿಯಾಪೊಲಿಸ್ ನಗರದಲ್ಲಿ ಆರು ಮಹಡಿಗಳ ಕಟ್ಟಡವನ್ನು ಕಟ್ಟಿಸಿದ ಮತ್ತು ಆ.ಎಸ್. ಗುಡ್ಫೆಲ್ಲೊ ಕಂಪನಿಯು ತನ್ನ ಗುಡ್ಫೆಲ್ಲೊಸ್ ಡಿಪಾರ್ಟ್ಮೆಂಟ್ ಸ್ಟೋರನ್ನು ಆ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಮನವೊಲಿಸಿದನು. ಆ ಕಂಪೆನಿಯ ಮಾಲೀಕನಾಗಿದ್ದ ರುಬೆನ್ ಸಿಮನ್ ಗುಡ್ಫೆಲ್ಲೊ ಅವರು ನಿವೃತ್ತಿಯಾದರು ಹಾಗೂ ಸ್ಟೋರನ್ನು ಜಾರ್ಜ್ ಡೇಟಾನ್ಗೆ ಮಾರಿದರು.<ref name="rowley">
ರೌಲೀ,ಲೌರ(2003)'' ಆನ್ ಟಾರ್ಗೆಟ್: ಹೌ ದ ವರ್ಲ್ಡ್ಸ್ ಹಾಟೆಸ್ಟ್ ರಿಟೈಲರ್ ಹಿಟ್ ಅ ಬುಲ್ಸ್-ಐ'' ಜಾನ್ ವಿಲೇ & ಸನ್ಸ್; ಹೊಬೊಕೆನ್,ನ್ಯೂಜರ್ಸಿ. ಐಎಸ್ಬಿಎನ್ 0-595-20284-5.</ref> 1903ರಲ್ಲಿ ಈ ಸ್ಟೋರ್ನ ಹೆಸರನ್ನು ಡೇಟಾನ್ ಡ್ರೈ ಗೂಡ್ಸ್ ಕಂಪೆನಿಯೆಂದು ಬದಲಾಯಿಸಲಾಯಿತು ಮತ್ತು 1911ರಲ್ಲಿ ಪುನಃ ಇದು ತನ್ನ ಹೆಸರನ್ನು ಡೇಟನ್ ಕಂಪನಿಯೆಂದು ಬದಲಾಯಿಸಿಕೊಂಡಿತು. 1950ರಲ್ಲಿ ಇದು ಪೋರ್ಟ್ಲ್ಯಾಂಡ್, ಓರಿಗಾನ್-ಮೂಲದ ಲಿಪ್ಮೆನ್ಜ್ ಡಿಪಾರ್ಟ್ಮೆಂಟ್ ಸ್ಟೋರ್ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಅದನ್ನು ಪ್ರತ್ಯೇಕ ವಿಭಾಗವಾಗಿ ಕಾರ್ಯನಿರ್ವಹಿಸುವಂತೆ ಮಾಡಿತು.<ref name="lipmans">[http://www.pdxhistory.com/html/lipman_wolfe.html ಲಿಪ್ಮನ್ ವೂಲ್ಫ್ ಆಯ್೦ಡ್ ಕೊ.], ಜೂನ್ 24, 2006.</ref> 1956ರಲ್ಲಿ ಡೇಟಾನ್ ಕಂಪೆನಿಯು ವಿಶ್ವದಲ್ಲಿಯೇ ಮೊದಲನೆಯದಾದ, ಸಂಪೂರ್ಣವಾಗಿ ಸುತ್ತುವರಿದಿರುವ ಸೌತ್ಡೇಲ್ ಎಂಬ ಎರಡು ಮಹಡಿಗಳ ವ್ಯಾಪಾರಕೇಂದ್ರವನ್ನ ಮಿನಿಯಾಪೊಲಿಸ್ ನಗರದ ಹೊರಭಾಗದಲ್ಲಿರುವ ಮಿನಿಸೌಟಾದ ಎಡಿನಾದಲ್ಲಿ ತೆರೆಯಿತು.<ref>[http://www.southdale.com/stellent01/groups/public/@mallsouthdale/documents/webassets/029241.pdf ಡಾಯ್ಟನ್ಸ್ ಆಯ್೦ಡ್ ಸೌತ್ಡಲೆ ಸ್ಟೋರ್ಸ್] {{Webarchive|url=https://web.archive.org/web/20070710142426/http://www.southdale.com/stellent01/groups/public/@mallsouthdale/documents/webassets/029241.pdf |date=2007-07-10 }}, ರುಡ್ಡರ್ & ಫಿನ್, ಅಕ್ಟೋಬರ್ 7, 1956.</ref>{{Verify source|date=July 2010}} ಡೇಟನ್ ಕಂಪನಿಯು ತನ್ನ ಎರಡನೇ ಸ್ಟೋರನ್ನು ಸೌತ್ಡೇಲ್ನಲ್ಲಿ ತೆರೆಯುವ ಮೂಲಕ ರಿಟೇಲ್ ಕ್ಷೇತ್ರದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ಈ ಸರಣಿಯು ನ್ಯೂ ಇಂಗ್ಲೆಂಡ್ವರೆಗೂ ವಿಸ್ತಾರಗೊಂಡಿತು. ಸಶುವಾದ ಫೆಜಂಟ್ ಲೇನ್ ಮಾಲ್ನ ನ್ಯೂಹ್ಯಾಂಪ್ಶೈರ್ನಲ್ಲಿ ತನ್ನ ಪ್ರಥಮ ಸ್ಟೋರ್ ತೆರೆಯುವ ಮೂಲಕ ನ್ಯೂಹ್ಯಾಂಪ್ಷೈರ್ನಲ್ಲಿ ನಿಷ್ಕ್ರಿಯ ಸ್ಥಿತಿಯಲ್ಲಿದ್ದ ಲೆಚ್ಮೀರ್ ಕಾಪರೇಷನ್ ಕಂಪೆನಿಯನ್ನು ಸ್ಥಾನಪಲ್ಲಟಗೊಳಿಸಿತು.
===1962–1971: ಟಾರ್ಗೆಟ್ನ ಸ್ಥಾಪನೆ===
[[File:Target logo (1968).png|thumb|right|175px| 1962ರಿಂದ 1968ರ ವರೆಗಿನ ಟಾರ್ಗೆಟ್ನ ನೈಜ ಬುಲ್ಸ್ಐ ಚಿನ್ಹೆ.]]
1962ರಲ್ಲಿ, ಜಾನ್ ಎಫ್. ಜೀಸ್ ಅಭಿವೃದ್ಧಿಪಡಿಸಿದ್ದ ಒಂದು ಕಲ್ಪನೆಯ ಮೂಲಕ ಡೇಟಾನ್ ಕಂಪೆನಿಯು ತನ್ನ ಮೊದಲ ಟಾರ್ಗೆಟ್ ಡಿಸ್ಕೌಂಟ್ ಸ್ಟೋರನ್ನು ಉತ್ತರ ಸೇಂಟ್ ಪೌಲ್ ನಗರದ ಹೊರಭಾಗದಲ್ಲಿರುವ ರೋಸ್ವಿಲ್ಲೆಯ ಮಿನಿಸೌಟಾದಲ್ಲಿ ತೆರೆಯುವುದರೊಂದಿಗೆ ರಿಯಾಯಿತಿ ವ್ಯಾಪಾರಕ್ಕೆ ಪ್ರವೇಶಿಸಿತು. "ಟಾರ್ಗೆಟ್" ಎಂಬ ಹೆಸರನ್ನು ಡೇಟನ್ನ ಪ್ರಚಾರ(ಪಬ್ಲಿಸಿಟಿ) ನಿರ್ದೇಶಕರಾಗಿದ್ದ ಸ್ಟುವರ್ಟ್ ಕೆ. ವಿಡೆಸ್ ನೀಡಿದ. ಈತ ಗ್ರಾಹಕರು ಹೊಸ ರಿಯಾಯಿತಿ ಸ್ಟೋರ್ ಮತ್ತು ಡಿಪಾರ್ಟ್ಮೆಂಟ್ ಸ್ಟೋರ್ ನಡುವೆ ಸಂಬಂಧಕಲ್ಪಸುವುದನ್ನು ತಡೆಯಬೇಕೆಂಬ ಅಭಿಲಾಷೆ ಹೊಂದಿದ್ದ. ಟಾರ್ಗೆಟ್ನ ಈ ಅಂಗಸಂಸ್ಥೆಗಳು ನಾಲ್ಕು ಘಟಕಗಳೊಂದಿಗೆ ತಮ್ಮ ಮೊದಲ ವರ್ಷವನ್ನು ಪೂರೈಸಿದವು. ಈ ನಾಲ್ಕೂ ಘಟಕಗಳು ಮಿನಿಸೌಟವೊಂದರಲ್ಲೇ ಇದ್ದವು. ಆರಂಭದ ವರ್ಷಗಳಲ್ಲಿ ಟಾರ್ಗೆಟ್ ಸ್ಟೋರ್ಗಳು ಹಣ ಕಳೆದುಕೊಂಡು ನಷ್ಟ ಅನುಭವಿಸಿದವು ಆದರೆ 1965ರಲ್ಲಿ ವ್ಯಾಪಾರವು 39 ಮಿಲಿಯನ್ ಯುಎಸ್ ಡಾಲರ್ಗಳನ್ನು ಮುಟ್ಟುವುದರೊಂದಿಗೆ ಪ್ರಥಮ ಬಾರಿಗೆ ಲಾಭಗಳಿಸಿತು ಎಂದು ವರದಿ ಮಾಡಲಾಯಿತು, ಇದು ಮಿನಿಯಾಪೊಲಿಸ್ನಲ್ಲಿ ಐದನೇ ಮಳಿಗೆ ತೆರೆಯಲು ಅನುವು ಮಾಡಿಕೊಟ್ಟಿತು. 1966ರಲ್ಲಿ ಬ್ರೂಸ್ ಡೇಟನ್ ಬಿ.ಡಾಲ್ಟನ್ ಬುಕ್ಸೆಲ್ಲರ್ ಎಂಬ ವಿಶೇಷ ವಿಭಾಗವನ್ನು ತೆರೆದ, ಇದು ಸಂಯುಕ್ತ ಸಂಸ್ಥಾನದಲ್ಲೇ ಅತೀ ಹೆಚ್ಚು ಹಾರ್ಡ್ಕವರ್ ಪುಸ್ತಕ ಮಾರಾಟಮಾಡುವ ಸಂಸ್ಥೆಯಾಯಿತು.<ref name="rowley" /> ಈ ಪುಸ್ತಕವನ್ನು ಮಾರಾಟ ಮಾಡುವ ವಿಭಾಗಕ್ಕೆ ಅದರ ಸ್ಥಾಪಕನ ಹೆಸರನ್ನು ಇಡಲಾಯಿತು, ಆದರೆ ಡೇಟನ್ ಹೆಸರಿನಲ್ಲಿರುವ ''ವೈ'' ಬದಲಿಗೆ ''ಐ'' ಯನ್ನು ಉಪಯೋಗಿಸಲಾಯಿತು. ಟಾರ್ಗೆಟ್ ಸ್ಟೋರ್ಗಳನ್ನು ಡೆನ್ವರ್, ಕೊಲರಾಡೊದಲ್ಲಿ ತೆರೆಯುವ ಮೂಲಕ ಮಿನಿಯಾಪೊಲಿಸ್ನ ಹೊರಗಡೆಯೂ ವಿಸ್ತರಿಸಲಾಯಿತು ಹಾಗೂ ವ್ಯಾಪಾರವು 60 ಮಿಲಿಯನ್ ಯುಎಸ್ ಡಾಲರ್ಗಳನ್ನು ಮೀರಿತು. 1967ರಲ್ಲಿ ಡೇಟನ್ ಕಾರ್ಪೋರೇಷನನ್ನು ಸ್ಥಾಪನೆ ಮಾಡಲಾಯಿತು ಮತ್ತು ಅದು ಸಾರ್ವಜನಿಕರಿಗೆ ಕಂಪನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅಹ್ವಾನ ನೀಡಿತು, ಇದು ಮತ್ತೆ ಎರಡು ಟಾರ್ಗೆಟ್ ಸ್ಟೋರ್ಗಳನ್ನು ಮಿನಿಸೌಟಾದಲ್ಲಿ ತೆರೆಯುವುದರೊಂದಿಗೆ ಒಟ್ಟು ಒಂಭತ್ತು ಘಟಕಗಳಾದವು.<ref name="growth">[http://www.findarticles.com/p/articles/mi_m3092/is_n18_v29/ai_8970766 ಫ್ರಂ ರೋಸ್ವಿಲ್ಲೆ ಟು ಗ್ರೇಟ್ಲ್ಯಾಂಡ್, ಟಾರ್ಗೆಟ್ ಸ್ಟಿಲ್ ಹಿಟ್ಸ್ ದ ಮಾರ್ಕ್ ] {{Webarchive|url=https://web.archive.org/web/20050528105558/http://www.findarticles.com/p/articles/mi_m3092/is_n18_v29/ai_8970766 |date=2005-05-28 }}, ''ಡಿಸ್ಕೌಂಟ್ ಸ್ಟೋರ್ ನ್ಯೂಸ್'', ಸೆಪ್ಟೆಂಬರ್ 17, 1990.</ref>
[[File:2009-0610-009-Roseville-TargetNo1.jpg|thumb|left|1962ರಲ್ಲಿ ಸ್ಥಾಪನೆಯಾದ ಮೊದಲ ಟಾರ್ಗೆಟ್ ಮಳಿಗೆಯನ್ನು ನೆಲಸಮ ಮಾಡಿ ಆ ಜಾಗದಲ್ಲಿ 2005ರಲ್ಲಿ ದೊಡ್ಡದಾಗಿ ನಿರ್ಮಿಸಲಾದ ಈ ಸೂಪರ್ ಟಾರ್ಗೆಟ್ನೆಲೆಸಿದೆ.]]
1968ರಲ್ಲಿ ಟಾರ್ಗೆಟ್ ತನ್ನ ಗೂಳಿಯ ಕಣ್ಣಿನ ಮುದ್ರೆಯನ್ನು ಆಧುನಿಕ ರೀತಿಯಲ್ಲಿ ಕಾಣುವಂತೆ ಬದಲಾಯಿಸಿಕೊಂಡಿತು ಮತ್ತು ತನ್ನ ಮಳಿಗೆಗಳನ್ನು ಸೇಂಟ್ ಲೂಯಿಸ್, ಮಿಸ್ಸೌರಿಯಲ್ಲಿ ತೆರೆಯಿತು. ಆ ವರ್ಷ ಟಾರ್ಗೆಟ್ ಸ್ಟೋರ್ಗೆ ಬದಲಾವಣೆಯ ವರ್ಷವಾಗಿತ್ತು: ಟಾರ್ಗೆಟ್ನ ಅಧ್ಯಕ್ಷ ಮತ್ತು ಸಹಾಯಕ ಸ್ಥಾಪಕನಾಗಿದ್ದ ಡಗ್ಲಸ್ ಜೆ. ಡೇಟನ್ ಹಿಂದಿನ ಡೇಟನ್ ಕಾರ್ಪೋರೇಷನ್ಗೆ ಹೋದನು, ಆತನ ನಂತರ ಬಂದ ವಿಲಿಯಮ್ ಎ. ಹಾಡರ್ ಮತ್ತು ಹಿರಿಯ ಉಪಾಧ್ಯಕ್ಷ ಹಾಗೂ ಸಹಾಯಕ ಸ್ಥಾಪಕ ಜಾನ್ ಜೀಸ್ ಕಂಪೆನಿಯನ್ನು ತೊರೆದರು. ನಂತರ ಆತನನ್ನು ಸೇಂಟ್ ಲೂಯಿಸ್ ಮೂಲದ ಮೇ ಡಿಪಾರ್ಟ್ಮೆಂಟ್ ಸ್ಟೋರ್ಸ್ ನೇಮಿಸಿಕೊಂಡಿತು, ಅಲ್ಲಿ ಆತ ವೆಂಚರ್ ಸ್ಟೋರ್ ಚೈನನ್ನು ಸ್ಥಾಪಿಸಿದ. ಟಾರ್ಗೆಟ್ ಸ್ಟೋರ್ ಆ ವರ್ಷದಲ್ಲಿ 11 ಘಟಕಗಳೊಂದಿಗೆ 130ಮಿಲಿಯನ್ ಡಾಲರ್ಗಳಷ್ಟು ಮಾರಾಟ ಮಾಡಿತು. ಇದು 1969ರಲ್ಲಿ ನ್ಯೂ ಇಂಗ್ಲೆಂಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೆಚ್ಮೀರ್ ಎಂಬ ವಿದ್ಯುನ್ಮಾನ ಮತ್ತು ಉಪಕರಣವನ್ನು ಖರೀದಿಸಿತು, ಟಾರ್ಗೆಟ್ ಸ್ಟೋರ್ ತನ್ನ ವ್ಯಾಪ್ತಿಯನ್ನು ಆರು ಘಟಕಗಳೊಂದಿಗೆ ಟೆಕ್ಸಾಸ್ ಮತ್ತು [[ಒಕ್ಲಹೋಮ|ಓಕ್ಲಹೋಮಾ]]ಕ್ಕೆ ವಿಸ್ತರಿಸಿತು ಹಾಗೂ ತನ್ನ ಮೊದಲ ವಿತರಣಾ ಕೇಂದ್ರವನ್ನು ಮಿನಿಸೌಟಾದ ಫ್ರೀಡ್ಲಿಯಲ್ಲಿ ತೆರೆಯಿತು.<ref name="lechmere">[http://www.fundinguniverse.com/company-histories/Lechmere-Inc-Company-History.html ಲೆಕ್ಮೆರೆ, Inc. ಕಂಪನಿ ಹಿಸ್ಟರಿ], FundingUniverse.com.</ref> ಡೇಟನ್ ಕಂಪನಿಯು ಅದೇ ವರ್ಷ ಡಿಟ್ರೋಯಿಟ್ ಮೂಲದ ಜೆ.ಎಲ್. ಹಡ್ಸನ್ ಕಂಪನಿಯೊಂದಿಗೆ ವಿಲೀನವಾಯಿತು, ಆ ಮೂಲಕ ಡೇಟನ್-ಹಡ್ಸನ್ ಕಾರ್ಪೋರೇಷನ್, ಟಾರ್ಗೆಟ್ ಮತ್ತು ಐದು ಪ್ರಮುಖ ವಿಭಾಗಳನ್ನು ಹೊಂದಿತ್ತು, ಅವುಗಳೆಂದರೆ ಡೇಟಾನ್ಸ್, ಡೈಮಂಡ್ಸ್ ಆಫ್ ಫೀನಿಕ್ಸ್, ಎರಿಜೊನ, ಹಡ್ಸನ್ಸ್, ಜಾನ್ ಎ. ಬ್ರೌನ್ ಆಫ್ ಓಕ್ಲಹೋಮಾ ಸಿಟಿ, ಓಕ್ಲಹೋಮಾ ಮತ್ತು ಲಿಪ್ಮನ್ಸ್. 1970ರಲ್ಲಿ, [[ವಿಸ್ಕೊನ್ಸಿನ್|ವಿಸ್ಕಾನ್ಸಿನ್]]ನಲ್ಲಿ ಎರಡು ಘಟಕಗಳು ಸೇರಿದಂತೆ ಒಟ್ಟು ಏಳು ಹೊಸ ಘಟಕಗಳನ್ನು ತೆರೆಯಿತು. 24 ಘಟಕಗಳ ವ್ಯಾಪಾರವು 200ಮಿಲಿಯನ್ ಯುಎಸ್ ಡಾಲರ್ಗಳನ್ನು ಮುಟ್ಟಿತು.<ref name="growth" />
ಅದೇ ವರ್ಷ ಸ್ಟೀಫನ್ ಎಲ್. ಪಿಸ್ಟ್ನರ್ರವರು ಮುಖ್ಯಸ್ಥರಾಗಿದ್ದ ಟೀಮ್ ಎಲೆಕ್ಟ್ರಾನಿಕ್ಸ್ ವಿಶೇಷ ವಿಭಾಗವನ್ನು ಡೇಟನ್ ಹಡ್ಸ್ನ್ ಕಂಪನಿಯು ಸ್ಪಾಧೀನಪಡಿಸಿಕೊಂಡಿತು.<ref name="team_electronics">[http://findarticles.com/p/articles/mi_m3092/is_n9_v33/ai_15194807 ಅಲ್ರಿಚ್ ಮೂವಿಂಗ್ ಅಪ್ ಡಿಹೆಚ್: ಸ್ಪೆಕ್ಯುಲೇಶನ್ ಮೌಂಟ್ಸ್ ಅಬೌಟ್ ನೇಮಿಂಗ್ ಅ ಸೆಕ್ಸೆಸ್ಸಾರ್- ರಾಬರ್ಟ್ ಅಲ್ರಿಚ್ ಬಿಕಮ್ಸ್ ಚೇರ್ಮನ್ ಆಫ್ ಡಾಯ್ಟನ್ ಹಡ್ಸನ್ ಕಾರ್ಪೋರೇಶನ್ ], ''ಡಿಸ್ಕೌಂಟ್ ಸ್ಟೋರ್ ನ್ಯೂಸ್'', ರಿಚ್ಮಂಡ್ ಹಲ್ವರ್ಸನ್, ಮೇ 2, 1994.</ref>
===1971–1982: ಬೃಹತ್ ಬದಲಾವಣೆ===
[[File:Target old logo.svg|right|thumb|1980ರಿಂದ 2004ವರೆಗೆ ಟಾರ್ಗೆಟ್ ಲಿಪಿಯನ್ನು ಬಳಸಲಾಯಿತು. ತನ್ನ ಮೂಲ ಚಿಹ್ನೆಯನ್ನು ಹೊಸ ಒಂದು ಕೆಂಪು ಬಿಂದುವನ್ನು ಮಧ್ಯದಲ್ಲಿ ಹೊಂದಿದ ಕೆಂಪು ವೃತ್ತವನ್ನು ವ್ಯವಹಾರದ ಗುರುತನ್ನಾಗಿ ಹೊಂದಿತು, ಮತ್ತು ಅದರ ಅಕ್ಷರಗಳು ಹೆಲ್ವೆಟಿಕ ಮದರಿಯನ್ನು ಬಳಸಿದವು.<ref name="helvetica">ದ ಹಲ್ವೆಟಿಕ ಹಿಗೆಮೊನಿ, ಸ್ಲೇಟ್, ಮಿಯ ಫೈನ್ಮನ್, ಮೇ 25, 2007.</ref>]]
1971ರಲ್ಲಿ ಡೇಟನ್-ಹಡ್ಸನ್ ಕಂಪನಿಯು ಕೊಲರಾಡೊ, ಆಯೋವಾ ಮತ್ತು [[ಒಕ್ಲಹೋಮ|ಓಕ್ಲಹೋಮಾ]]ದಲ್ಲಿನ ಅರ್ಲನ್ನ ಹದಿನಾರು ಸ್ಟೋರ್ಗಳನ್ನು ಸ್ವಾಧೀನಕ್ಕೆ ಪಡೆಯಿತು. ಅದೇ ವರ್ಷದಲ್ಲಿ, ಟಾರ್ಗೆಟ್ ಸ್ಟೋರ್ಗಳಾಗಿ ಎರಡು ಘಟಕಗಳು ಪುನಃ ತೆರೆಯಲ್ಪಟ್ಟವು, 1972ರಲ್ಲಿ ಉಳಿದ ಟಾರ್ಗೆಟ್ ಸ್ಟೋರ್ಗಳಾಗಿ ಪರಿವರ್ತಿತಗೊಂಡ ಒಟ್ಟು ಟಾರ್ಗೆಟ್ ಸ್ಟೋರ್ಗಳ ಸಂಖ್ಯೆ 46 ಆಯಿತು. ಇದು ಮತ್ತೊಂದು ಮಹತ್ತರವಾದ ಬದಲಾವಣೆಗೆ ಕಾರಣವಾಯಿತು, ಕಂಪನಿಯ ಶೀಘ್ರ ವಿಸ್ತರಣೆ ಹಾಗೂ ಉನ್ನತ ಅಧಿಕಾರಿಗಳಲ್ಲಿ ರಿಯಾಯಿತಿ ವ್ಯಾಪಾರದಲ್ಲಿನ ಅನುಭವದ ಕೊರತೆಯಿಂದಾಗಿ ಆರಂಭದ ವರ್ಷಗಳನ್ನು ಹೊರತುಪಡಿಸಿದರೆ ಪ್ರಥಮ ಬಾರಿಗೆ ಲಾಭದಲ್ಲಿ ಇಳಿಕೆಯಾಯಿತು. ಅಗತ್ಯಕ್ಕಿಂತ ಹೆಚ್ಚು ಶೇಕರಣೆ ಹಾಗೂ ಸರಕುಗಳ ಸಂಗ್ರಹಣಾ ವೆಚ್ಚ, ನಿರ್ವಹಣಾ ವೆಚ್ಚವನ್ನು ಗಮನಿಸದೆ ಹಲವಾರು ವರ್ಷಗಳ ಕಾಲ ಶೇಕರಿಸಿ ಇಟ್ಟಿದ್ದರಿಂದ ಅದರ ಆದಾಯದಲ್ಲಿ ನಷ್ಟವಾಯಿತು. ಆ ಹೊತ್ತಿಗೆ ಡೇಟನ್-ಹಡ್ಸನ್, ಟಾರ್ಗೆಟ್ ಸ್ಟೋರ್ನ ಅಂಗಸಂಸ್ಥೆಗಳನ್ನು ಮಾರಲು ನಿರ್ಧರಿಸಿದರು. 1973ರಲ್ಲಿ, ಟೀಮ್ ಎಲೆಕ್ಟ್ರಾನಿಕ್ಸ್ ನಂತರ, ಮಾಂಟ್ಗೊಮೆರಿ ವಾರ್ಡ್ ಮತ್ತು ಏಮ್ಸ್ ಮುಂತಾದ ಕಂಪೆನಿಗಳಲ್ಲಿ ಸೇವೆಸಲ್ಲಿಸಿದ್ದ ಸ್ಟೀಫನ್ ಪಿಸ್ಟ್ನರ್ನನ್ನು ಟಾರ್ಗೆಟ್ ಸ್ಟೋರ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನೇಮಕ ಮಾಡಲಾಯಿತು ಹಾಗೂ ಕೆನ್ನೆತ್ ಮ್ಯಾಕ್ನನ್ನು ಟಾರ್ಗೆಟ್ ಸ್ಟೋರ್ನ ಹಿರಿಯ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು. ಹೊಸದಾಗಿ ಬಂದ ಆಡಳಿತವು ಅಗತ್ಯಕ್ಕಿಂತ ಹೆಚ್ಚಿದ್ದ ಸರಕುಗಳ ಸಂಗ್ರಹಣೆಯನ್ನು ಕಡಿಮೆಮಾಡುವುದರ ಮೂಲಕ ಹಾಗೂ ಕೇವಲ ಒಂದು ಹೊಸ ಘಟಕವನ್ನು ತೆರೆಯುವ ಮೂಲಕ ಕಂಪೆನಿಯನ್ನು ನಷ್ಟದಿಂದ ಬಚಾವು ಮಾಡಿದರು.
1975ರಲ್ಲಿ ಇದು ಎರಡು ಸ್ಟೋರ್ಗಳನ್ನು ತೆರೆಯುವುದರೊಂದಿಗೆ ಒಂಭತ್ತು ರಾಜ್ಯಗಳಲ್ಲಿನ ಸ್ಟೋರ್ಗಳ ಸಂಖ್ಯೆ 49ನ್ನು ಮುಟ್ಟಿತು ಹಾಗೂ ವ್ಯಾಪಾರವು 511 ಮಿಲಿಯನ್ ಡಾಲರ್ಗಳಷ್ಟಾಯಿತು. ಆ ವರ್ಷ ಟಾರ್ಗೆಟ್ನ ಆದಾಯದಲ್ಲಿ ಹೆಚ್ಚಿನ ಭಾಗವು ಡಿಸ್ಕೌಂಟ್ ವಿಭಾಗದಿಂದ ಬಂದಿತು.<ref name="growth" />
1976ರಲ್ಲಿ ಟಾರ್ಗೆಟ್ನಾಲ್ಕು ಹೊಸ ಘಟಕಗಳನ್ನು ತೆರೆಯುವ ಮೂಲಕ ವ್ಯಾಪಾರವು 600ಮಿಲಿಯನ್ ಮುಟ್ಟಿತು. ಅದೇ ವರ್ಷ ಮ್ಯಾಕ್ನನ್ನು ಟಾರ್ಗೆಟ್ ಸ್ಟೋರ್ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಬಡ್ತಿ ನೀಡಲಾಯಿತು. 1977ರಲ್ಲಿ ಟಾರ್ಗೆಟ್ ಸ್ಟೋರ್ ಏಳು ಹೊಸ ಘಟಕಗಳನ್ನು ತೆರೆಯಿತು, ಸ್ಟೀಫನ್ ಪಿಸ್ಟ್ನರ್ ಡೇಟನ್, ಹಡ್ಸನ್ ಕಂಪನಿಯ ಅಧ್ಯಕ್ಷರಾದರು ಹಾಗೂ ಮ್ಯಾಕ್ ನಂತರದಲ್ಲಿ ಟಾರ್ಗೆಟ್ ಸ್ಟೋರ್ನ ಚೇರ್ಮನ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದರು. ಡೇಟನ್ ಹಡ್ಸನ್ನ ಉಪಾಧ್ಯಕ್ಷರಾಗಿದ್ದ ಬ್ರೂಸ್ ಜಿ.ಆಲ್ಬ್ರೈಟ್ ಟಾರ್ಗೆಟ್ ಸ್ಟೋರ್ಗೆ ವರ್ಗಾವಣೆಗೊಂಡು ಕೆನ್ನೆತ್ ಮ್ಯಾಕ್ನ ನಂತರ ಟಾರ್ಗೆಟ್ ಸ್ಟೋರ್ನ ಅಧ್ಯಕ್ಷರಾದರು. 1978ರಲ್ಲಿ ಕಂಪನಿಯು ಮರ್ವಿನ್ಸ್ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದರೊಂದಿಗೆ ಸಂಯುಕ್ತ ಸಂಸ್ಥಾನದ ಏಳನೇ ಅತೀ ದೊಡ್ಡ ವ್ಯಾಪಾರೀ ಕಂಪನಿಯಾಯಿತು. ಟಾರ್ಗೆಟ್ ಸ್ಟೋರ್, ಉತ್ತರ ಡಕೌಟದ ಗ್ರ್ಯಾಂಡ್ ಫೋರ್ಕ್ಸ್ನಲ್ಲಿ ತನ್ನ ಮೊದಲ ಶಾಪಿಂಗ್ ಮಾಲ್ ಉಪ ಸ್ಟೋರನ್ನು ತೆರೆಯುವುದರ ಜೊತೆಗೆ ಆ ವರ್ಷದಲ್ಲಿ ಒಟ್ಟು ಎಂಟು ಮಳಿಗೆಗಳನ್ನು ತೆರೆಯಿತು. 1979ರಲ್ಲಿ 13ಹೊಸ ಘಟಕಗಳನ್ನು ತೆರೆಯಿತು, ಅದರೊಂದಿಗೆ ಸಂಯುಕ್ತ ಸಂಸ್ಥಾನದಲ್ಲಿ ಒಟ್ಟು ಟಾರ್ಗೆಟ್ ಸ್ಟೋರ್ಗಳ ಸಂಖ್ಯೆ 80ನ್ನು ಮುಟ್ಟಿತು ಹಾಗೂ 1.12 ಬಿಲಿಯನ್ ಯುಎಸ್ ಡಾಲರ್ಗಳಷ್ಟು ವ್ಯಾಪಾರವಾಯಿತು.<ref name="growth" /><ref name="community">{{cite web |url=http://www.und.nodak.edu/dept/grad/html/gfinfo.html |title=Community of Grand Forks |accessdate=2007-06-11 |publisher=University of North Dakota }}</ref> 1980ರಲ್ಲಿ, ಕಂಪನಿಯು ಲಿಪ್ಮನ್ಸ್ ಡಿಪಾರ್ಟ್ಮೆಂಟ್ ಸ್ಟೋರ್ನ ಆರು ಘಟಕಗಳನ್ನು ಮಾರ್ಷಲ್ ಫೀಲ್ಡ್ಸ್ಗೆ ಮಾರಿತು, ಆ ಕಂಪನಿಯು ಬ್ರಾಂಡಿನ ಹೆಸರನ್ನು ಫೆಡ್ರಿಕ್ ಅಂಡ್ ನೆಲ್ಸನ್ ಎಂದು ಬದಲಾಯಿಸಿತು.<ref name="lipmans" /> ಅದೇ ವರ್ಷ, ಟಾರ್ಗೆಟ್ ಸ್ಟೋರ್, ಟೆನ್ನಿಸೀ ಮತ್ತು ಕ್ಯಾಂಜಸ್ ರಾಜ್ಯಗಳಲ್ಲಿ ತನ್ನ ಮಳಿಗೆಗಳನ್ನು ಸ್ಥಾಪಿಸುವುದರ ಜೊತೆಗೆ ಒಟ್ಟು ಏಳು ಹೊಸ ಮಳಿಗೆಗಳನ್ನು ಸ್ಥಾಪಿಸಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ಇದು ಏರ್-ವೇ ಎಂಬ 40 ಸ್ಟೋರ್ಗಳಿರುವ ರಿಯಾಯಿತಿ ವಿಭಾಗವನ್ನು ಹಾಗೂ ಇಂಡಿಯನಾಪೊಲಿಸ್-ಮೂಲದ ಎಲ್.ಎಸ್. ಏರ್ಸ್ ಅಂಡ್ ಕಂಪನಿಯ ಒಂದು ವಿತರಣಾ ವಿಭಾಗವನ್ನು ಖರೀದಿಸಿತು, ಆ ವಿತರಣಾ ವಿಭಾಗವನ್ನು 1981ರಲ್ಲಿ ವಿತಾರಣಾ ವಿಭಾಗವಾಗಿ ತೆರೆಯಲಾಯಿತು. ಆ ವರ್ಷ ಸ್ಟೀಫನ್ ಪಿಸ್ಟ್ನರ್ ಪೋಷಕ ಕಂಪನಿಯನ್ನು ತೊರೆದು ಮಾಂಟ್ಗೊಮ್ರಿ ವಾರ್ಡ್ ಕಂಪನಿಯನ್ನು ಸೇರಿಕೊಂಡ ಮತ್ತು ಕೆನ್ನೆತ್ ಮ್ಯಾಕ್ ಆತನ ನಂತರ ಡೇಟನ್ ಹಡ್ಸನ್ನ ಅಧ್ಯಕ್ಷನಾದ.<ref>[http://www.time.com/time/magazine/article/0,9171,956312,00.html?iid=chix-sphere ಕಾಲಿಂಗ್ ಇಟ್ ಕ್ವಿಟ್ಸ್ ] {{Webarchive|url=https://web.archive.org/web/20121024010807/http://www.time.com/time/magazine/article/0,9171,956312,00.html?iid=chix-sphere |date=2012-10-24 }}, ''ಟೈಮ್'', ಜಾನ್ ಎಸ್. ಡಿಮೊಟ್, ಮೇ 20, 1985.</ref> ಕೆನ್ನೆತ್ ಮ್ಯಾಕ್ನ ನಂತರದಲ್ಲಿ ಫ್ಲಾಯ್ದ್ ಹಾಲ್ ಟಾರ್ಗೆಟ್ ಸ್ಟೋರ್ನ ಚೇರ್ಮನ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಯಶಸ್ವಿಯಾದನು. ಬ್ರೂಸ್ ಆಲ್ಬ್ರೈಟ್ ವೂಲ್ವರ್ತ್ನಲ್ಲಿ ಕೆಲಸ ಮಾಡುವ ಉದ್ದೇಶದಿಂದ ಕಂಪನಿಯನ್ನು ತೊರೆದ, ಆತನನ್ನು ವೂಲ್ಕೊದ ಚೇರ್ಮನ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನೇಮಿಸಲಾಯಿತು. ಬಾಬ್ ಅಲ್ರಿಚ್ ಸಹ 1981ರಲ್ಲಿ ಡೈಮಂಡ್ಸ್ ಡಿಪಾರ್ಟ್ಮೆಂಟ್ ಸ್ಟೋರ್ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ.<ref name="ulrich_dsn">[http://www.findarticles.com/p/articles/mi_m0FNP/is_7_45/ai_n16124757 ಲೀಡರ್ಶಿಪ್ ಪೇವ್ಸ್ ದ ವೇ ಟು ಕಂಪನಿ ಸ್ಟ್ರೆಂತ್ ] {{Webarchive|url=https://web.archive.org/web/20070714001100/http://findarticles.com/p/articles/mi_m0FNP/is_7_45/ai_n16124757 |date=2007-07-14 }}, ''ಡಿಎಸ್ಎನ್ ರಿಟೇಲಿಂಗ್ ಟುಡೇ'', ಏಪ್ರಿಲ್ 10, 2006.</ref> ಏರ್-ವೇ ಕಂಪೆನಿಯ ಸ್ವಾಧೀನದ ಜೊತೆಗೆ, ಟಾರ್ಗೆಟ್ ಸ್ಟೋರ್ ಹೊಸದಾಗಿ ಹದಿನಾಲ್ಕು ಸ್ಟೋರ್ಗಳನ್ನು ಹಾಗೂ ಮೂರನೇ ವಿತರಣಾ ಕೇದ್ರವನ್ನು ಆರ್ಕ್ನ್ಸೊದ ಲಿಟಲ್ ರಾಕ್ನಲ್ಲಿ ತೆರೆಯಿತು. ಇದರೊಂದಿಗೆ ಒಟ್ಟು ಘಟಕಗಳ ಸಂಖ್ಯೆ 151ನ್ನು ಮುಟ್ಟಿತು ಹಾಗೂ ವ್ಯಾಪಾರವು 2.05 ಬಿಲಿಯನ್ ಯುಎಸ್ ಡಾಲರ್ಗಳಷ್ಟಾಯಿತು.<ref name="growth" />
===1982–2000: ಪಶ್ಚಿಮ ಮತ್ತು ಉತ್ತರ ಕರಾವಳಿಯಲ್ಲಿ ವಿಸ್ತರಣೆ===
ಈ ಪ್ರದೇಶದಲ್ಲಿ ಟಾರ್ಗೆಟ್ ಸ್ಟೋರ್ಗಳನ್ನು ತೆರೆಯುವುದಕ್ಕೂ ಮೊದಲು ಕಂಪನಿಯು ಸಂಯುಕ್ತ ಸಂಸ್ಥಾನದ ಕೇಂದ್ರ ಭಾಗದಲ್ಲಿ ವಿಸ್ತರಣೆಯತ್ತ ಗಮನಹರಿಸಿತ್ತು. 1982ರಲ್ಲಿ 33 ಫೆಡ್ಮಾರ್ಟ್ ಸ್ಟೋರ್ಗಳನ್ನು [[ಆರಿಜೋನ|ಆರಿಜೋನಾ]], [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯಾ]] ಮತ್ತು ಟೆಕ್ಸಾಸ್ನಲ್ಲಿ ಸ್ವಾಧೀನಕ್ಕೆ ತೆಗೆದುಕೊಳ್ಳುವ ಮೂಲಕ ಹಾಗೂ ಲಾಸ್ ಏಂಜಲೀಸ್ನಲ್ಲಿ ನಾಲ್ಕನೇ ವಿತರಣಾ ಕೇಂದ್ರವನ್ನು ತೆರೆಯುವ ಮೂಲಕ ಸಂಯುಕ್ತ ಸಂಸ್ಥಾನದ ಪಶ್ಚಿಮ ಕರಾವಳಿಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು.<ref name="30_years">[http://www.findarticles.com/p/articles/mi_m3092/is_n8_v31/ai_12098940 1962-1992 ಡಾಯ್ಟನ್ಸ್ ಡ್ರೀಮ್ ಇಸ್ ಆನ್ ಟಾರ್ಗೆಟ್] {{Webarchive|url=https://web.archive.org/web/20050826190637/http://www.findarticles.com/p/articles/mi_m3092/is_n8_v31/ai_12098940 |date=2005-08-26 }}, ''ಡಿಸ್ಕೌಂಟ್ ಸ್ಟೋರ್ ನ್ಯೂಸ್'', ಏಪ್ರಿಲ್ 20, 1992.</ref> ಆ ವರ್ಷ, ಬ್ರೂಸ್ ಆಲ್ಬ್ರೈಟ್ ಉಪ ಚೇರ್ಮನ್ ಹಾಗೂ ಮುಖ್ಯ ಆಡಳಿತಾಧಿಕಾರಿಯಾಗಿ ಟಾರ್ಗೆಟ್ ಸ್ಟೋರ್ಗೆ ಮರಳಿದ ಹಾಗೂ ಅದರ ಘಟಕಗಳು 167ನ್ನು ಮುಟ್ಟಿ, ವ್ಯಾಪಾರವು 2.41 ಬಿಲಿಯನ್ ಡಾಲರ್ಗಳಷ್ಟಾಯಿತು. ಫೆಡ್ಮಾರ್ಟ್ನಿಂದ ಸ್ವಾಧೀನಕ್ಕೆ ತೆಗೆದುಕೊಂಡಿದ್ದ 33 ಸ್ಟೋರ್ಗಳನ್ನು 1983ರಲ್ಲಿ ಟಾರ್ಗೆಟ್ ಸ್ಟೋರಾಗಿ ತೆರೆಯಲಾಯಿತು. ಇದು 1983ರಲ್ಲಿ ಪ್ಲಮ್ಸ್ ಆಫ್-ಪ್ರೈಸ್ ಅಪಾರೆಲ್ ಸ್ಪೆಷಾಲಿಟಿ ಸ್ಟೋರ್ನ ನಾಲ್ಕು ಘಟಕಗಳನ್ನು ಲಾಸ್ಏಂಜಲೀಸ್ ಪ್ರದೇಶದಲ್ಲಿ ತೆರೆಯಿತು, ಇದರ ಉದ್ದೇಶ ಆ ಪ್ರದೇಶದಲ್ಲಿ ಮಧ್ಯಮದಿಂದ ಹೆಚ್ಚು ಆದಾಯವಿರುವ ಮಹಿಳೆಯರು ಇರುವುದಾಗಿತ್ತು.
1984ರಲ್ಲಿ, ಇದು ತನ್ನ ಪ್ಲಮ್ಸ್ ವಿಭಾಗವನ್ನು ಅದು 11 ತಿಂಗಳುಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ ರೋಸ್ ಸ್ಟೋರ್ಗೆ ಹಾಗೂ ಡೈಮಂಡ್ಸ್ ಮತ್ತು ಜಾನ್ ಎ. ಬ್ರೌನ್ ವಿಭಾಗವನ್ನು ಡಿಲರ್ಡ್ಸ್ಗೆ ಮಾರಲಾಯಿತು.<ref>[http://www.findarticles.com/p/articles/mi_hb4298/is_198402/ai_n14972822 ಪ್ಲಮ್ಸ್ ಫಾಲ್ ಡಸಂಟ್ ಕಾಸ್ ಟೂ ಮೆನಿ ಶಾಕ್ ವೇವ್ಸ್ ], ''ಡಿಸ್ಕೌಂಟ್ ಸ್ಟೋರ್ ನ್ಯೂಸ್'', ಸಿಡ್ನಿ ರುಟ್ಬರ್ಗ್, ಫೆಬ್ರವರಿ, 1984.</ref><ref>[https://web.archive.org/web/20050129150420/http://www.findarticles.com/p/articles/mi_m3092/is_v23/ai_3183523/print ಡಾಯ್ಟನ್ ಹಡ್ಸನ್, ಸೌರ್ ಆನ್ ಪ್ಲಮ್ಸ್, ಸೆಲ್ಲ್ಸ್ ಇಟ್ಸ್ 11-ಮಂತ್-ಒಲ್ಡ್ ಆಫ್-ಪ್ರೈಸರ್], ''ಡಿಸ್ಕೌಂಟ್ ಸ್ಟೋರ್ ನ್ಯೂಸ್'', 19, 1984.</ref><ref name="dillards">[http://query.nytimes.com/gst/fullpage.html?res=9903E2DB1438F933A2575BC0A962948260 ಡಾಯ್ಟನ್-ಹಡ್ಸನ್ ಇನ್ ಡಿಲ್ಲರ್ಡ್ ಡೀಲ್], ''ದ ನ್ಯೂಯಾರ್ಕ್ ಟೈಮ್ಸ್'', ಆಗಸ್ಟ್ 10, 1984.</ref> ಅದೇ ಸಮಯದಲ್ಲಿ, ಈಗಾಗಲೇ ಇದ್ದ 215 ಸ್ಟೋರ್ಗಳಿಗೆ ಒಂಭತ್ತು ಹೊಸ ಟಾರ್ಗೆಟ್ ಸ್ಟೋರ್ಗಳನ್ನು ಸೇರಿಸಿಕೊಳ್ಳುವುದರೊಂದಿಗೆ ವ್ಯಾಪಾರದಲ್ಲಿ 3.55 ಬಿಲಿಯನ್ ಡಾಲರ್ಗಳಷ್ಟು ಗಳಿಕೆಯನ್ನು ಪಡೆಯಿತು. ಫ್ಲಾಯ್ಡ್ ಟಾರ್ಗೆಟ್ ಸ್ಟೋರನ್ನು ತೊರೆದ ಬಳಿಕ ಬ್ರೂಸ್ ಆಲ್ಬ್ರೈಟ್ ಚೇರ್ಮನ್ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದನು. 1984ರ ಮೇನಲ್ಲಿ ಬಾಬ್ ಅಲ್ರಿಚ್ ಡೇಟನ್ ಹಡ್ಸನ್ ಡಿಪಾರ್ಟ್ಮೆಂಟ್ ಸ್ಟೋರ್ ವಿಭಾಗದ ಅಧ್ಯಕ್ಷರಾದರು, 1984ರ ಡಿಸೆಂಬರ್ನಲ್ಲಿ ಈತ ಟಾರ್ಗೆಟ್ ಸ್ಟೋರ್ನ ಅಧ್ಯಕ್ಷನಾದ.<ref name="ulrich_dsn" />
1986ರಲ್ಲಿ, ಕಂಪನಿಯು [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯಾ]]ದ ಲಕ್ಕೀ ಸ್ಟೋರ್ಸ್ನ 50 ಜೆಮ್ಕೊ ಸ್ಟೋರ್ಗಳನ್ನು ಖರೀದಿಸಿತು, ಇದರಿಂದಾಗಿ ಟಾರ್ಗೆಟ್ ಸ್ಟೋರ್ ಒಟ್ಟು 246 ಘಟಕಗಳನ್ನು ಹೊಂದುವುದರೊಂದಿಗೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ವ್ಯಾಪಾರೀ ಕಂಪನಿಯಾಯಿತು. ಅಲ್ಲದೆ, ಇದು ತನ್ನ ಐದನೇ ವಿತರಣಾ ಘಟಕವನ್ನು ಕೊಲರಾಡೊದ ಪ್ಯೂಬ್ಲೊದಲ್ಲಿ ತೆರೆಯಿತು. ಡೇಟನ್-ಹಡ್ಸನ್ ತನ್ನ ಬಿ. ಡಾಲ್ಟನ್ ಬುಕ್ಸೆಲ್ಲರ್ ವಿಭಾಗದ ಸಾವಿರಾರು ಘಟಕಗಳನ್ನು ಬಾರ್ನ್ಸ್ ಅಂಡ್ ನೋಬಲ್ ಕಂಪನಿಗೆ ಮಾರಿತು.<ref name="rowley" /> 1987ರಲ್ಲಿ, ತಾನು ಖರೀದಿಸಿದ್ದ ಜೆಂಕೊದ ಘಟಕಗಳನ್ನು ಟಾರ್ಗೆಟ್ ಸ್ಟೋರ್ಗಳಾಗಿ ಮಾರ್ಪಡಿಸಿ ತೆರೆಯಲಾಯಿತು, ಡೆಟ್ರಾಯಿಟ್, ಮಿಚಿಗನ್ ಸೇರಿದಂತೆ ಹಲವು ಕಡೆ ಆರು ಹೊಸ ಘಟಕಗಳನ್ನು ತೆರೆದು ಮಿಚಿಗನ್ ಮತ್ತು ನುವಾಡದಲ್ಲಿ ಟಾರ್ಗೆಟ್ ಸ್ಟೋರ್ ವಿಸ್ತರಿಸಲ್ಪಟ್ಟಿತು. ಇದು ಮಿಚಿಗನ್ನ ಡೆಟ್ರಾಯಿಟ್ ಮೂಲದ ಕೆಮಾರ್ಟ್ ಕಂಪನಿಯೊಂದಿಗೆ ನೇರವಾಗಿ ಸ್ಪರ್ಧೆಗಿಳಿಯುವಂತೆ ಮಾಡಿತು. ಕಂಪನಿಯು 24 ರಾಜ್ಯಗಳಲ್ಲಿ ಒಟ್ಟು 317 ಘಟಕಗಳನ್ನು ಹೊಂದಿ, 5.3 ಬಿಲಿಯನ್ ಯುಎಸ್ ಡಾಲರ್ಗಳಷ್ಟು ವ್ಯಾಪಾರವಾಯಿತು. ಬ್ರೂಸ್ ಆಲ್ಬ್ರೈಟ್, ಡೇಟನ್ ಹಡ್ಸನ್ ಕಂಪನಿಯ ಅಧ್ಯಕ್ಷರಾದರು ಮತ್ತು ನಂತರದಲ್ಲಿ ಬಾಬ್ ಅಲ್ರಿಚ್ ಟಾರ್ಗೆಟ್ ಸ್ಟೋರ್ನ ಚೇರ್ಮನ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ.<ref name="ulrich_dsn" /> 1988ರಲ್ಲಿ ಟಾರ್ಗೆಟ್ ಸ್ಟೋರ್ ಎಂಟು ಘಟಕಗಳನ್ನು ವಾಷಿಂಗ್ಟನ್ ಮತ್ತು [[ಆರೆಗನ್|ಓರೆಗನ್]]ನಲ್ಲಿ ಮೂರು ಘಟಕಗಳನ್ನು ತೆರೆಯುವ ಮೂಲಕ ಸಂಯುಕ್ತ ಸಂಸ್ಥಾನದ ವಾಯುವ್ಯ ಭಾಗದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ಇದರೊಂದಿಗೆ 27 ರಾಜ್ಯಗಳಲ್ಲಿ ಒಟ್ಟು ಸ್ಟೋರ್ಗಳ ಸಂಖ್ಯೆ 341ನ್ನು ಮುಟ್ಟಿತು. ಕ್ಯಾಲಿಫೋರ್ನಿಯಾದ ಸ್ಯಾಕ್ರೊಮೆಂಟೊದಲ್ಲಿ ವಿತರಣಾ ಕೇಂದ್ರವನ್ನು ತೆರೆಯಿತು. ಏರ್-ವೇ ಕಂಪನಿಯನ್ನು ಖರೀದಿಸುವ ಮೂಲಕ ಇಂಡಿಯಾನಾದ ಇಂಡಿಯನಾಪೊಲಿಸ್ನಲ್ಲಿದ್ದ ಹಳೆಯ ವಿತರಣಾ ಕೇಂದ್ರದ ಬದಲಿಗೆ ಹೊಸದಾದ ವಿತರಣಾ ಕೇಂದ್ರವನ್ನು ತೆರೆಯಲಾಯಿತು.<ref name="growth" />
1989ರಲ್ಲಿ 60 ಹೊಸ ಘಟಕಗಳನ್ನು ಪ್ರಮುಖವಾಗಿ ಆಗ್ನೇಯ ಸಂಯುಕ್ತ ಸಂಸ್ಥಾನದ ಪ್ರದೇಶಗಳಾದ ಫೋರಿಡಾ, [[ಜಾರ್ಜಿಯ (ಅಮೇರಿಕ ದೇಶದ ರಾಜ್ಯ)|ಜಾರ್ಜಿಯಾ]], ಉತ್ತರ ಕರೋಲಿನಾ ಮತ್ತು ದಕ್ಷಿಣ ಕರೋಲಿನಾಗಳಲ್ಲಿ ಸ್ಥಾಪಿಸುವುದರೊಂದಿಗೆ 30 ರಾಜ್ಯಗಳಲ್ಲಿ ಒಟ್ಟು ಘಟಕಗಳ ಸಂಖ್ಯೆ 399 ಮುಟ್ಟಿತು ಹಾಗೂ ವ್ಯಾಪಾರವು 7.51 ಬಿಲಿಯನ್ ಯುಎಸ್ ಡಾಲರ್ಗಳನ್ನು ಮುಟ್ಟಿತು.<ref name="growth" /> ಇದು ಟಾರ್ಗೆಟ್ ಸ್ಟೋರಾಗಿ ತೆರೆಯಲ್ಪಟ್ಟ, ಫೆಡೆರೇಟೆಡ್ ಡಿಪಾರ್ಟ್ಮೆಂಟ್ ಸ್ಟೋರ್ಸ್ನ ಫೋರಿಡಾ, ಜೋರ್ಜಾ ಮತ್ತು ಉತ್ತರ ಕರೋಲಿನಾದಲ್ಲಿ ಸ್ವಾಧೀನಕ್ಕೆ ತೆಗೆದುಕೊಂಡ ಗೋಲ್ಡ್ ಸರ್ಕಲ್ ಮತ್ತು ರಿಚ್ವೇ ವಿಭಾಗಗಳನ್ನು ಒಳಗೊಂಡಿದೆ.<ref name="30_years" /> ಇದು ಲೆಚ್ಮೀರ್ ವಿಭಾಗವನ್ನು ಸಹ ಅದೇ ವರ್ಷ ಬಂಡವಾಳ ಹೂಡಿಕೆದಾರರ ಸಮೂಹಕ್ಕೆ ಮಾರಿತು. ಆ ಸಮೂಹದಲ್ಲಿ ಬರ್ಶೈರ್ ಪಾಲುದಾರರು, ಮಸಾಚುಸೆಟ್ಸ್ (ಬೋಸ್ಟನ್) ಮೂಲದ ಹೂಡಿಕೆದಾರರ ಸಮೂಹ, ಎಂಟು ಲೆಚ್ಮೀರ್ ಕಾರ್ಯನಿರ್ವಾಹಕರು ಹಾಗೂ ಎರಡು ಸ್ಥಳೀಯ ವ್ಯಾಪಾರೀ ಮಳಿಗೆಗಳ ನಿರ್ವಾಹಕರನ್ನು ಒಳಗೊಂಡಿತ್ತು.<ref name="lechmere" />
1990ರಲ್ಲಿ, ಬಾಟಸ್(BATUS) ಇಂಕ್ ಕಂಪನಿಯಿಂದ ಮಾರ್ಷಲ್ ಫೀಲ್ಡ್ಸ್ ಕಂಪನಿಯನ್ನು ಪಡೆಯಿತು, ಮಿನ್ನೆಸೋಟಾದ ಅಯ್ಪಲ್ ವ್ಯಾಲಿಯಲ್ಲಿ ಟಾರ್ಗೆಟ್ ಸ್ಟೋರ್ ತನ್ನ ಮೊದಲ ಟಾರ್ಗೆಟ್ ಗ್ರೇಟ್ಲ್ಯಾಂಡ್ ಜನರಲ್ ಮರ್ಚಂಡೈಸ್ ಸೂಪರ್ ಸ್ಟೋರನ್ನು ತೆರೆಯಿತು. 1991ರಲ್ಲಿ, 43 ಟಾರ್ಗೆಟ್ ಗ್ರೇಟ್ಲ್ಯಾಂಡ್ ಘಟಕಗಳನ್ನು ತೆರೆಯುವುದರೊಂದಿಗೆ ವ್ಯಾಪಾರವು 9.01ಬಿಲಿಯನ್ ಯುಎಸ್ ಡಾಲರ್ಗಳನ್ನು ಮುಟ್ಟಿತು. 1992ರಲ್ಲಿ ಮಿನಿಯಾಪೊಲಿಸ್ನಲ್ಲಿ ಎವ್ವೆರಿಡೇ ಹೀರೋ ಎಂದು ಕರೆಯಲ್ಪಡುವ ವೇಷ ಭೂಷಣಗಳ ಸ್ಪೆಷಾಲಿಟಿ ಸ್ಟೋರನ್ನು ಸ್ಥಾಪಿಸಿತು.<ref name="30_years" /> ಮೆರೊನಾ ಬ್ರಾಂಡ್ನಂತಹ ಖಾಸಗೀ ಲೇಬಲ್ಲಿನ ವಸ್ತ್ರಗಳನ್ನು ಹೊರತರುವ ಮೂಲಕ GAP ನಂತಹ ವಸ್ತ್ರಗಳ ವಿಶೇಷ ಸ್ಟೋರುಗಳೊಂದಿಗೆ ಸ್ಪರ್ಧಿಸಲು ಪ್ರಯತ್ನಿಸಿತು. 1993ರಲ್ಲಿ, ರಾಷ್ಟ್ರೀಯ ಬಾಂಡ್ಗಳಿಗಾಗಿ ಇರುವ ಕ್ಲೋಸ್ಔಟ್ ಸ್ಟೋರ್ಗಳನ್ನು ಹೊರತುಪಡಿಸಿ ಖಾಸಗೀ ಬ್ರಾಂಡ್ಗಳ ವಸ್ತ್ರಗಳ ಹಳೆಯ ಸಂಗ್ರಹಣೆಯನ್ನು ಖಾಲಿ ಮಾಡುವ ಉದ್ದೇಶದಿಂದ ಸ್ಮಾರ್ಟ್ಸ್ ಎಂಬ ಕ್ಲೋಸ್ಔಟ್ಗಳನ್ನು ತೆರೆಯಲಾಯಿತು.<ref name="smarts">[http://findarticles.com/p/articles/mi_m3092/is_n9_v32/ai_13837855 ಟಾರ್ಗೆಟ್ ಸೆಟ್ಸ್ ಟೆಸ್ಟ್ ಆಫ್ ನ್ಯೂ ಸ್ಮಾರ್ಟ್ಸ್ ಕ್ಲೋಸ್ಔಟ್ ಸ್ಟೋರ್ ] {{Webarchive|url=https://web.archive.org/web/20090707094509/http://findarticles.com/p/articles/mi_m3092/is_n9_v32/ai_13837855/ |date=2009-07-07 }}, ''ಡಿಸ್ಕೌಂಟ್ ಸ್ಟೋರ್ ನ್ಯೂಸ್'', ರಿಚರ್ಡ್ ಹಲ್ವೆರ್ಸನ್, ಮೇ 3, 1993</ref> ಹಳೆಯ ಟಾರ್ಗೆಟ್ ಸ್ಟೋರ್ಗಳಿದ್ದ ರಾಂಚೊ ಕ್ಯೂಕಮಾಂಗ, ಕ್ಯಾಲಿಫೋರ್ನಿಯಾ, ಡೆಮೊಯಿನ್, ಆಯೋವಾ, ಎಲ್ಪ್ಯಾಸೊ, ಟೆಕ್ಸಾಸ್ ಮತ್ತು ಇಂಡಿಯಾನಾದ ಇಂಡಿಯನಾಪೊಲಿಸ್ ನಲ್ಲಿ ವಿತರಣಾ ಕೇಂದ್ರಗಳ ಸಮೀಪದಲ್ಲಿ ನಾಲ್ಕು ಸ್ಮಾರ್ಟ್ಸ್ ಘಟಕಗಳನ್ನು ತೆರೆಯಲಾಯಿತು.
1994ರಲ್ಲಿ ಕೆನ್ನೆತ್ ಮ್ಯಾಕ್ ಕಂಪನಿಯನ್ನು ತೊರೆದ. ಆತನ ನಂತರ ಬಾಬ್ ಅಲ್ರಿಚ್ ಡೇಟನ್-ಹಡ್ಸನ್ ಕಂಪನಿಯ ಹೊಸ ಚೇರ್ಮನ್ ಆದ.
1995ರಲ್ಲಿ, ಟಾರ್ಗೆಟ್ ಸ್ಟೋರ್ ನೆಬ್ರಾಸ್ಕಾದ ಒಮಾಹಾದಲ್ಲಿ ತನ್ನ ಮೊದಲ ಸೂಪರ್ ಟಾರ್ಗೆಟ್ ಹೈಪರ್ಮಾರ್ಕೆಟನ್ನು ತೆರೆಯಿತು. ಕೇವಲ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ನಾಲ್ಕು ಸ್ಮಾರ್ಟ್ ಘಟಕಗಳನ್ನು ಸಹ ಮುಚ್ಚಿತು. ಇದರ ಸ್ಟೋರ್ಗಳ ಸಂಖ್ಯೆ 670ಕ್ಕೆ ಏರಿತು ಹಾಗೂ 15.7 ಬಿಲಿಯನ್ ಯುಎಸ್ ಡಾಲರ್ಗಳಷ್ಟು ವ್ಯಾಪಾರವಾಯಿತು. 1996ರಲ್ಲಿ ಇದು 736 ಘಟಕಗಳೊಂದಿಗೆ 17.8 ಬಿಲಿಯನ್ ಯುಎಸ್ ಡಾಲರ್ಗಳನ್ನು ಮುಟ್ಟಿತು. 1997ರಲ್ಲಿ ಎರಡೂ ಎವ್ವೆರಿಡೇ ಹೀರೋ ಸ್ಟೋರ್ಗಳನ್ನು ಮುಚ್ಚಲಾಯಿತು. ಟಾರ್ಗೆಟ್ ಸ್ಟೋರ್ಗಳ ಸಂಖ್ಯೆ 796ಕ್ಕೆ ಏರಲ್ಪಟ್ಟು, ವ್ಯಾಪಾರವು 20.2 ಬಿಲಿಯನ್ ಯುಎಸ್ ಡಾಲರ್ಗಳಷ್ಟಾಯಿತು. 1998ರಲ್ಲಿ ಮಿನಿಸೌಟಾ ಕಮ್ಯೂನಿಕೇಷನ್ಸ್ ಗ್ರೂಪ್ನಿಂದ ಗ್ರೀನ್ಸ್ಪ್ರಿಂಗ್ ಕಂಪೆನಿಯ ಮುಲ್ಟಿ-ಕೆಟಲಾಗ್ ಡೈರೆಕ್ಟ್ ಮಾರ್ಕೆಟಿಂಗ್ ಯುನಿಟ್, ರಿವರ್ಟೌನ್ ಟ್ರೇಡಿಂಗ್ ಕಂಪನಿಯನ್ನು ಹಾಗೂ ಉಡುಪುಗಳ ಒದಗಿಸುವ ಅಸೋಸಿಯೇಟೆಡ್ ಮರ್ಚಂಡೈಸ್ ಕಾರ್ಪೋರೇಷನ್ ಕಂಪನಿಯನ್ನು ಅಧೀನಕ್ಕೆ ಪಡೆದರು. ಟಾರ್ಗೆಟ್ ಸ್ಟೋರ್ಗಳ ಸಂಖ್ಯೆ 851ಕ್ಕೆ ಹೆಚ್ಚಾಗಿ ವ್ಯಾಪಾರವು 23.0 ಬಿಲಿಯನ್ ಯುಎಸ್ ಡಾಲರ್ಗಳಷ್ಟಾಯಿತು. 1999ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸೂಪರ್ ಟಾರ್ಗೆಟ್ಗಳ ಕಾರ್ಯಾಚರಣೆಯನ್ನು ವಿಸ್ತರಿಸುವ ಉದ್ದೇಶದಿಂದ ಫೆಡ್ಕೊ ಕಂಪನಿಯ ಹತ್ತು ಸ್ಟೋರ್ಗಳನ್ನು ಪಡೆಯಿತು. ಅದರಲ್ಲಿ ಆರು ಸ್ಟೋರ್ಗಳನ್ನು ಟಾರ್ಗೆಟ್ನ ಬ್ರಾಂಡ್ನ ಅಡಿಯಲ್ಲಿ ತೆರೆಯಿತು. ಉಳಿದ ನಾಲ್ಕನ್ನು ವಲ್-ಮಾರ್ಟ್, ಹೋಮ್ ಡಿಪೋಟ್ ಮತ್ತು ಆನ್ಟೆರಿಯೋ ಪೋಲೀಸ್ ಡಿಪಾರ್ಟ್ಮೆಂಟಿಗೆ ಮಾರಿತು. ಇದರೊಂದಿಗೆ, 44 ರಾಜ್ಯಗಳಲ್ಲಿ ಒಟ್ಟು 912 ಸ್ಟೋರ್ಗಳಾದವು ಮತ್ತು ವ್ಯಾಪಾರವು 26.0 ಬಿಲಿಯನ್ ಯುಎಸ್ ಡಾಲರ್ಗಳನ್ನು ಮುಟ್ಟಿತು. 1999ರ ಸೆಪ್ಟೆಂಬರ್ 7ರಂದು ಟಾರ್ಗೆಟ್.ಕಾಮನ್ನು ಇ-ಕಾಮರ್ಸ್ ತಾಣವಾಗಿ ಹಾಗೂ ರಿಯಾಯಿತಿ ವಿಭಾಗದ ಭಾಗವಾಗಿ ಪುನಃ ತೆರೆಯಲಾಯಿತು. ಈ ತಾಣವು ಪ್ರಾರಂಭದಲ್ಲಿ ಮೈಕಲ್ ಗ್ರೇವ್ಸ್ ಬ್ರಾಂಡ್ನಂತಹ ಸ್ಪರ್ಧಾತ್ಮಕ ಬ್ರಾಂಡ್ಗಳನ್ನು ಬೇರ್ಪಡಿಸಿ ಉತ್ಪನ್ನಗಳನ್ನು ಒದಗಿಸಿತು.
===2000ರಿಂದ ಇಲ್ಲಿಯವರೆಗೆ: ಟಾರ್ಗೆಟ್ ಕಾರ್ಪೋರೇಷನ್===
[[File:Cash Registers.JPG|thumb|left| ಟಾರ್ಗೆಟ್ ಮಳಿಗೆಯ ಮಾರಾಟದ ವಿಷಯ]]
[[File:Bullseye Bodega 6 Av jeh.JPG|thumb|ಮಿಡ್ಟೌನ್ ಮನ್ಹಟನ್ನ ಬುಲ್ಸ್ಐ ಬೊಡೆಗ ಸಬ್ಸಿಡರಿ]]
ಜನವರಿ, 2000ದಲ್ಲಿ ಡೇಟನ್ ಹಡ್ಸನ್ ಕಾರ್ಪೋರೇಷನ್ ತನ್ನ ಹೆಸರನ್ನು ಟಾರ್ಗೆಟ್ ಕಾರ್ಪೋರೇಷನ್ ಎಂದು ಬದಲಿಸಿಕೊಂಡಿತು ಹಾಗೂ ತನ್ನ ಗುರುತಿನ ಚಿಹ್ನೆಯನ್ನು ಟಿಜಿಟಿಯಾಗಿ (TGT) ಬದಲಾಯಿಸಿಕೊಂಡಿತು. ಅದಾದ ನಂತರ ಕಾರ್ಪೋರೇಷನ ಒಟ್ಟು ಮಾರಾಟ ಮತ್ತು ಗಳಿಕೆಯ ಶೇ.75ರಿಂದ 80ಭಾಗ ಟಾರ್ಗೆಟ್ ಸ್ಟೋರ್ಗಳಿಂದ ಬಂದಿತು.ಇತರೆ ಭಾಗಗಳಾದ( ಕೊಂಡಿ, ಚೈನ್) ಡೇಟ್ಸನ್, ಹಡ್ಸನ್, ಮಾರ್ಷಲ್ ಫೀಲ್ಡ್ಸ್ ಮತ್ತು ಮರ್ವೇನ್ಸ್ಗಳನ್ನು ರಿಯಾಯಿತಿ ವ್ಯಾಪಾರವನ್ನು ಉತ್ತೇಜಿಸಲು ಬಳಸಲಾಯಿತು. ಇದು 46ರಾಜ್ಯಗಳಲ್ಲಿ 977 ಮಳಿಗೆಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿತ್ತಲ್ಲದೆ, ವರ್ಷದ ಅಂತ್ಯಕ್ಕೆ ವ್ಯಾಪಾರವು 29.7ಬಿಲಿಯನ್ ಯುಎಸ್ ಡಾಲರ್ಗಳನ್ನು ಮುಟ್ಟಿತು.<ref name="community" /> ಇದು ಇ-ಕಾಮರ್ಸ್ ವ್ಯವಹಾರಗಳನ್ನು ತನ್ನ ಚಿಲ್ಲರೆ ವ್ಯಾಪಾರ ವಿಭಾಗದಿಂದ ಬೇರ್ಪಡಿಸಿ, ರಿವರ್ಟೌನ್ ವ್ಯಾಪಾರ ಘಟಕಕ್ಕೆ ಸೇರಿಸಿತು, ಇದನ್ನು ಟಾರ್ಗೆಟ್.ಡೈರೆಕ್ಟ್ ಎಂದು ಕರೆದರು.<ref name="namechange">[http://www.findarticles.com/p/articles/mi_m3092/is_4_39/ai_59649452 ಟಾರ್ಗೆಟ್ ಇಸ್ ದ ನೇಮ್], ''ಡಿಸ್ಕೌಂಟ್ ಸ್ಟೋರ್ ನ್ಯೂಸ್'', ಫೆಬ್ರವರಿ 21, 2000.</ref> 2001ರಲ್ಲಿ ತನ್ನ ಡೇಟನ್ಸ್ ಮತ್ತು ಹಡ್ಸನ್ಸ್ ಮಳಿಗೆಗಳು ವಿಭಾಗೀಯ ವ್ಯಾಪಾರ ಮಳಿಗೆಗಳಲ್ಲಿ ಹೆಚ್ಚು ಗುರುತಿಸಲ್ಪಟ್ಟಿದ್ದ ಮಾರ್ಷಲ್ ಫೀಲ್ಡ್ನ ಬ್ರಾಂಡ್ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಘೋಷಿಸಿತು.
ಟಾರ್ಗೆಟ್ ಸ್ಟೋರ್, ಮೇಯಿನ್ನ ವರೆಗೂ ವಿಸ್ತರಿಸಲ್ಪಟ್ಟಿತು, 47 ರಾಜ್ಯಗಳಲ್ಲಿ 1053 ಘಟಕಗಳ ಸಂಖ್ಯೆಯನ್ನು ಮುಟ್ಟಿತು ಹಾಗೂ ವ್ಯಾಪಾರವು 33.0 ಬಿಲಿಯನ್ ಡಾಲರ್ಗಳನ್ನು ಮುಟ್ಟಿತು. <ಉಲ್ಲೇಖದ ಹೆಸರು=
"2000 ವಾರ್ಷಿಕ ವರದಿ"> [http://media.corporate-ir.net/media_files/irol/65/65828/reports/2000_TGT_annual.pdf ''ಟಾರ್ಗೆಟ್ ಕಾರ್ಪೋರೇಷನ್'' ವಾರ್ಷಿಕ ವರದಿ]</ಉಲ್ಲೇಖ><ref>[http://media.corporate-ir.net/media_files/irol/65/65828/reports/2001_TGT_annual_HTML/business/2_expansion.htm ಟಾರ್ಗೆಟ್ ಕಾರ್ಪೊರೇಶನ್ 2001 ವಾರ್ಷಿಕ ವರದಿ], ''ಟಾರ್ಗೆಟ್ ಕಾರ್ಪೊರೇಶನ್''.</ref>. ಅದೇ ಸಮಯದಲ್ಲಿ ಈ ಜಾಲವು ಯಶಸ್ವಿಯಾಗಿ ಪಿಟ್ಸ್ಬರ್ಗ್ ಮಾರ್ಕೆಟ್ಗೆ ವಿಸ್ತೃತವಾಯಿತು, ಮತ್ತು ಇದೇ ಸಮಯದಲ್ಲಿ ಏಮ್ಸ್ ಡಿಪಾರ್ಟ್ಮೆಂಟ್ ಸ್ಟೋರ್ ಪತನಗೊಂಡು, ಅದರ ಲಾಭವನ್ನು ಈ ಸಂಸ್ಥೆಯು ಪಡೆಯಿತು. 2002ರ ಸುಮಾರಿಗೆ ಸ್ಯಾನ್ ಲಿಯನಾರ್ಡೊ(ಬೇ ಫೇರ್ ಮಾಲ್), ಫ್ರೆಮಾಂಟ್, ಹೆವಾರ್ಡ್ ಮತ್ತು ಕ್ಯಾಲಿಫೋರ್ನಿಯಾ ಸೇರಿದಂತೆ ಇನ್ನೂ ಅನೇಕ ಕಡೆ 1147 ಘಟಕಗಳನ್ನು ಹೊಂದಿತು, ವ್ಯಾಪಾರವು 37.4 ಬಿಲಿಯನ್ ಯುಎಸ್ ಡಾಲರ್ಗಳನ್ನು ಮುಟ್ಟಿತು, ಮತ್ತು 2003ರಲ್ಲಿ ಇದು 1225 ಘಟಕಗಳನ್ನು ಹೊಂದಿ ವ್ಯಾಪಾರವು 42.0 ಬಿಲಿಯನ್ ಯುಎಸ್ ಡಾಲರ್ಗಳನ್ನು ದಾಟಿತು.<ref name="community" />
2004ರ ಜೂನ್ 9ರಂದು ಟಾರ್ಗೆಟ್ ಕಾರ್ಪೋರೇಷನ್ ಮಾರ್ಷಲ್ ಫೀಲ್ಡ್ಸ್ ಚೈನ್ನನ್ನು ಮಿಸ್ಸೌರಿ ಮೂಲದ ಮೇ ಡಿಪಾರ್ಟ್ಮೆಂಟ್ ಸ್ಟೋರ್ಸ್ನ ಸೇಂಟ್ ಲೂಯಿಸ್ಗೆ ಮಾರುವುದಾಗಿ ಘೋಷಿಸಿತು, ಇದು ಜುಲೈ 31, 2004ರಿಂದ ಜಾರಿಗೆ ಬಂದಿತು. ಹಾಗೆಯೇ ಜುಲೈ 21, 2004ರಲ್ಲಿ ಮರ್ವಿನ್ಸ್ನ್ನು, ಸನ್ ಕ್ಯಾಪಿಟಲ್ ಪಾಟ್ನರ್ಸ್, ಇಂಕ್., ಸರ್ಬರಸ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್, ಎಲ್. ಪಿ., ಲುಬರ್ಟ್-ಓಲ್ಡರ್/ಕ್ಲಾಫ್ ಆಂಡ್ ಪಾಟ್ನರ್ಸ್, ಎಲ್.ಪಿ. ಮುಂತಾದ ಕಂಪೆನಿಗಳಿರುವ ಕಾಂಸ್ಟೋರಿಯಂಗೆ ಮಾರಾಟ ಮಾಡುವುದಾಗಿ ಘೋಷಿಸಿ, ಸೆಪ್ಟೆಂಬರ್ 2ರಂದು ಇತ್ಯರ್ಥಮಾಡಲಾಯಿತು. ಟಾರ್ಗೆಟ್ ಸ್ಟೋರ್ಗಳು ಸಂಖ್ಯೆ 1308ಕ್ಕೆ ವಿಸ್ತರಿಸಲ್ಪಟ್ಟು, ವ್ಯಾಪಾರವು 46.8 ಬಿಲಿಯನ್ ಯುಎಸ್ ಡಾಲರ್ಗಳನ್ನು ಮುಟ್ಟಿತು. 2005ರಲ್ಲಿ ಇದು 1397 ಘಟಕಗಳು, 52.6ಬಿಲಿಯನ್ ಯುಎಸ್ ಡಾಲರ್ ವ್ಯಾಪಾರ ಹಾಗೂ 2006ರಲ್ಲಿ 1488 ಘಟಕಗಳಾಗಿ ವ್ಯಾಪಾರವು 59.4 ಬಿಲಿಯನ್ ಯುಎಸ್ ಡಾಲರ್ನಷ್ಟಾಯಿತು.<ref name="community" /><ref name="2006 financials">[http://investors.target.com/phoenix.zhtml?c=65828&p=irol-newsArticle&ID=967693 ಟಾರ್ಗೆಟ್ ಕಾರ್ಪೊರೇಶನ್ ಫೊರ್ಥ್ ಕ್ವಾರ್ಟರ್ ಅರ್ನಿಂಗ್ ಪರ್ ಶೇರ್ $1.29], ಟಾರ್ಗೆಟ್ ಕಾರ್ಪೊರೇಶನ್, ಫೆಬ್ರವರಿ 27, 2007.</ref>
ಮೇ, 2005ರಲ್ಲಿ ಟಾರ್ಗೆಟ್ [[ಭಾರತ]]ದ [[ಬೆಂಗಳೂರು|ಬೆಂಗಳೂರಿ]]ನಲ್ಲಿ ಕಾರ್ಯಾರಂಭ ಮಾಡಿತು, ಇದು ಇಂದು ಎಲ್ಲಾ ಟಾರ್ಗೆಟ್ ಬ್ಯುಸಿನೆಸ್ ಘಟಕಗಳಿಗೆ ಬೆಂಬಲವಾಗಿ ಕಾರ್ಯನಿರ್ವಹಿಸುತ್ತಿದೆ.<ref>{{Cite web |url=http://sites.target.com/site/en/corporate/page.jsp?contentId=PRD03-001085 |title=ಟಾರ್ಗೆಟ್ ಅಂತರಜಾಲ |access-date=2010-08-19 |archive-date=2008-10-23 |archive-url=https://web.archive.org/web/20081023100103/http://sites.target.com/site/en/corporate/page.jsp?contentId=PRD03-001085 |url-status=dead }}</ref> 2006ರಲ್ಲಿ ಬೆಂಗಳೂರಿನ ಎಂಬ್ಯಾಸಿ ಗಾಲ್ಫ್ ಲಿಂಕ್ಸ್ನಲ್ಲಿ ರಾಬರ್ಟ್ ಜೆ. ಅಲ್ರಿಚ್ ಸೆಂಟರ್ನ ನಿರ್ಮಾಣಕಾರ್ಯವನ್ನು ಪೂರ್ಣಗೊಳಿಸಲಾಯಿತು, ಇದಲ್ಲದೆ ಟಾರ್ಗೆಟ್ ಮೈಸೂರಿನಲ್ಲಿ ಯಶಸ್ವಿಯಾಗಿ ತನ್ನ ಶಾಖೆಯನ್ನು ಆರಂಭಿಸಿದ್ದು ಮೈಸೂರಿನ ಕಾರ್ಪೋರೇಟ್ ಕ್ಯಾಂಪಸ್ನಲ್ಲಿ ಹೆಚ್ಚುವರಿ ಕಛೇರಿಯ ನಿರ್ಮಾಣದೊಂದಿಗೆ ಭಾರತದಲ್ಲಿ ತನ್ನ ಶಾಖೆಗಳನ್ನು ತೆರೆಯುವ ಯೋಜನೆ ಹೊಂದಿದೆ.<ref>{{Cite web |url=http://sites.target.com/site/en/corporate/page.jsp?contentId=PRD03-004529 |title=ಟಾರ್ಗೆಟ್ ಅಂತರಜಾಲ |access-date=2010-08-19 |archive-date=2011-07-10 |archive-url=https://web.archive.org/web/20110710074911/http://sites.target.com/site/en/corporate/page.jsp?contentId=PRD03-004529 |url-status=dead }}</ref>
ಜನವರಿ 9, 2008ರಲ್ಲಿ ಬಾಬ್ ಅಲ್ರಿಚ್ ಸಿಇಒ ಹುದ್ದೆಯಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದರು ಮತ್ತು ಗ್ರೆಗ್ ಸ್ಟೈನ್ಹಾಫೆಲ್ರನ್ನು ಉತ್ತರಾಧಿಕಾರಿ ಹುದ್ದೆಗೆ ಹೆಸರಿಸಿದರು. ಟಾರ್ಗೆಟ್ ಕಾರ್ಫೋಷನ್ನಲ್ಲಿ ಉನ್ನತ ದರ್ಜೆಯಲ್ಲಿರುವ ಅಧಿಕಾರಿಗಳು 65 ವರ್ಷಕ್ಕೆ ನಿವೃತ್ತಿಯಾಗಬೇಕೆಂಬ ನಿಯಮವಿದ್ದ ಕಾರಣ ಬಾಬ್ ಅಲ್ರಿಚ್ ಹೀಗೆ ಮಾಡಬೇಕಾಯಿತು. ಬಾಬ್ ಅಲ್ರಿಚ್ ತಮ್ಮ ಸಿಇಒ ಹುದ್ದೆಯಿಂದ ನಿವೃತ್ತಿಯಾಗಿದ್ದು ಮೇ 2ರಿಂದ ಅನ್ವಯವಾದರೂ 2008ರ ಆರ್ಥಿಕ ವರ್ಷದ ಅಂತ್ಯದ ವರೆಗೂ ಛೇರ್ಮನ್ ಆಗಿ ಮುಂದುವರೆದರು.
ಮಾರ್ಚ್ 4, 2009ರಲ್ಲಿ ಟಾರ್ಗೆಟ್ ಪ್ರಥಮ ಬಾರಿಗೆ ಸಂಯುಕ್ತ ಸಂಸ್ಥಾನ ಖಂಡದ ಹೊರಗಡೆ ಮಳಿಗೆಗಳನ್ನು ಸ್ಥಾಪಿಸಿತು. ಏಕಕಾಲದಲ್ಲಿ ಎರಡು ಮಳಿಗೆಗಳನ್ನು ಹವಾಯೀ ದ್ವೀಪದ ಒವಾಹು ಮತ್ತು ಎರಡು ಮಳಿಗೆಗಳನ್ನು ಅಲಾಸ್ಕಾದಲ್ಲಿ ತೆರೆಯಲಾಯಿತು. ಆರ್ಥಿಕ ಇಳಿಮುಖದ ಹೊರತಾಗಿಯೂ, ಹೆಚ್ಚು ಜನರನ್ನು ಆಕರ್ಷಿಸಿ ಬೃಹತ್ ವ್ಯಾಪಾರವಾಯಿತೆಂದು ಮಾದ್ಯಮಗಳಿಂದ ತಿಳಿದುಬರುತ್ತದೆ. ಹವಾಯೀಯಲ್ಲಿ ತನ್ನ ಮಳಿಗೆಯ ಪ್ರಾರಂಭದ ನಂತರ ವೆರ್ಮಾಂಟ್, ಟಾರ್ಗೆಟ್ ಕಂಪೆನಿ ಇರದ ಏಕೈಕ ರಾಜ್ಯವಾಗಿ ಉಳಿಯಿತು.
==ಕಾರ್ಪೋರೇಟ್ ವ್ಯವಹಾರಗಳು==
===ಕಾರ್ಫೊರೇಟ್ ಮುಖ್ಯ ಕಛೇರಿ===
[[File:Target Plaza South.jpg|right|thumb| ಟಾರ್ಗೆಟ್ ಪ್ಲಾಜ ಸೌಥ್, ಟಾರ್ಗೆಟ್ ಕಾರ್ಪೊರೇಶನ್ನ ಮುಖ್ಯ ಕಛೇರಿ ಸಂಕೀರ್ಣದ ಒಂದು ಭಾಗ; 3Mನಿಂದ ತಯಾರಿಸಲಾದ ಟಾರ್ಗೆಟ್ ಲೈಟ್ ಸಿಸ್ಟಮ್ನ್ನು ಹೊಂದಿದ ಕಟ್ಟಡ.<ref>Target Lights create evolving ಮಿನ್ನೆಅಪೊಲಿಸ್ landmark, ಮಿನ್ನೆಅಪೊಲಿಸ್/ಸೈಂಟ್. ಪೌಲ್ ಬಿಸಿನೆಸ್ ಜರ್ನಲ್, ಏಪ್ರಿಲ್ 11, 2003.</ref>]]
ಪ್ರಸ್ತುತ ಟಾರ್ಗೆಟ್ ಕಾರ್ಪೋರೇಷನ್ನ ಪ್ರಧಾನ ಕಛೇರಿ ಮೂಲ ಗುಡ್ಫೆಲ್ಲೋಸ್ ಸ್ಟೋರ್ ಇರುವ ಮಿನ್ಯಾಪೊಲಿಸ್ನ<ref>"[http://sites.target.com/site/en/company/page.jsp?contentId=WCMP04-031463 ಕಾರ್ಫೊರೇಟ್ ಮುಖ್ಯ ಕಛೇರಿ] {{Webarchive|url=https://web.archive.org/web/20101118054646/http://sites.target.com/site/en/company/page.jsp?contentId=WCMP04-031463 |date=2010-11-18 }}." ಟಾರ್ಗೆಟ್ ಕಾರ್ಪೊರೇಶನ್. ಜುಲೈ 8, 2008 ರಂದು ಹಿಂಪಡೆದದ್ದು. "ಟಾರ್ಗೆಟ್ ಕಾರ್ಫೊರೇಟ್ ಮುಖ್ಯ ಕಛೇರಿ 1000 ನಿಕೊಲೆಟ್ ಮಾಲ್ ಮಿನ್ನೆಅಪೊಲಿಸ್, ಎಮ್ಎನ್ 55440"</ref> ನಿಕೊಲೆಟ್ ಮಾಲ್ನಲ್ಲಿದೆ.{{Citation needed|date=July 2010}} ಈ ಸಂಕೀರ್ಣದಲ್ಲಿ ಟಾರ್ಗೆಟ್ ಪ್ಲಾಜಾ ನಾರ್ತ್ ಮತ್ತು ಟಾರ್ಗೆಟ್ ಪ್ಲಾಜಾ ಸೌತ್ ಇವೆ. ಈ ಸಂಕೀರ್ಣವನ್ನು ರೆಯಾನ ಕಂಪೆನಿಯವರು ನಿರ್ಮಿಸಿದರು ಹಾಗೂ ಅದರ ವಾಸ್ತುಶಿಲ್ಪಿ ಎಲರ್ಬ್ ಬೆಕೆಟ್. ಟಾರ್ಗೆಟ್ 6000 ಉದ್ಯೋಗಿಗಳಿಗೆ ಸ್ಥಳಾವಕಾಶವಿರುವ ಸಂಕೀರ್ಣವನ್ನು ಹೊಂದಿದ್ದು, ಅದರ ಅಂದಾಜು ವೆಚ್ಚ 26 ಮಿಲಿಯನ್ ಯುಎಸ್ ಡಾಲರ್ಗಳಾಗಿವೆ. ಈ ಸಂಕೀರ್ಣದಲ್ಲಿರುವ 14 ಮಹಡಿಗಳ ಟಾರ್ಗೆಟ್ ಪ್ಲಾಜಾ ನಾರ್ತ್ ಕಛೇರಿ ಹಾಗೂ ಮಾರಾಟ ಕೇಂದ್ರ{{convert|600000|sqft|sqm}} ಸ್ಥಳವನ್ನು ಹೊಂದಿದೆ, ಹಾಗೆಯೇ 32 ಮಹಡಿಗಳ ಟಾರ್ಗೆಟ್ ಸೌತ್ ಪ್ಲಾಜಾ ಮಾರಾಟ ಕೇಂದ್ರವಾಗಿದ್ದು {{convert|1250000|sqft|sqm}} ಸ್ಥಳವನ್ನು ಹೊಂದಿದೆ.<ref>"[http://www.ci.minneapolis.mn.us/cped/target_towers.asp ಟಾರ್ಗೆಟ್ ಆಫಿಸ್ ಟವರ್ಸ್] {{Webarchive|url=https://web.archive.org/web/20120117163710/http://www.ci.minneapolis.mn.us/cped/target_towers.asp |date=2012-01-17 }}." ಸಿಟಿ ಆಫ್ ಮಿನ್ನೆಅಪೊಲಿಸ್. ಜುಲೈ 8, 2008 ರಂದು ಹಿಂಪಡೆದದ್ದು.</ref>
===ಅಂಗಸಂಸ್ಥೆಗಳು===
ಟಾರ್ಗೆಟ್ ಕಂಪೆನಿಯು ಅನೇಕ ಇತರೆ ಅಂಗಸಂಸ್ಥೆಗಳನ್ನು ಹೊಂದಿದೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
*'''ಟಾರ್ಗೆಟ್ ಫಿನ್ಯಾಶಿಯಲ್ ಸರ್ವಿಸಸ್(ಟಿಎಫ್ಎಸ್)''' : ಇದು ಟಾರ್ಗೆಟ್ ರೆಡ್ಕಾರ್ಡ್ ಎಂದು ಕರೆಯಲ್ಪಡುವ ಟಾರ್ಗೆಟ್ನ ಕ್ರೆಡಿಟ್ ಕಾರ್ಡ್ ಗಳನ್ನು (ಹಿಂದೆ ಟಾರ್ಗೆಟ್ ಗೆಸ್ಟ್ ಕಾರ್ಡ್ ಎಂದು ಕರೆಯಲ್ಪಡುತ್ತಿತ್ತು) ವ್ಯವಹಾರದ ಉದ್ದೇಶದಿಂದ ಗ್ರಾಹಕರಿಗೆ ಟಾರ್ಗೆಟ್ ನ್ಯಾಷನಲ್ ಬ್ಯಾಂಕ್(ಇದು ಮೊದಲು ರಿಟೇಲರ್ಸ್ ನ್ಯಾಷನಲ್ ಬ್ಯಾಂಕಾಗಿತ್ತು) ಮೂಲಕ ನೀಡುತ್ತದೆ. ಇದು ಗಿಪ್ಟ್ಕಾರ್ಡ್ ಆಯವ್ಯಯಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ಟಾರ್ಗೆಟ್ 2007, ಅಕ್ಟೋಬರ್ನಲ್ಲಿ ಪಿನ್(PIN) ಇರುವ ಟಾರ್ಗೆಟ್ ಚೆಕ್ ಕಾರ್ಡ್ ಎಂಬ ಡೆಬಿಟ್ಕಾರ್ಡನ್ನು ಹೊರತಂದಿತು. ಇದು ಪ್ರಸ್ತುತ ಗ್ರಾಹಕರ ಖಾತೆಯಲ್ಲಿರುವ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಿತು, 40 ಯುಎಸ್ ಡಾಲರ್ನ ವರೆಗೆ "ನಗದು ಹಿಂಪಡೆಯಲು" ಅವಕಾಶವಿತ್ತು. ಇದು ಗ್ರಾಹಕರು ಟಾರ್ಗೆಟ್ ನೀಡುವ ಬಹುಮಾನ, ಶೈಕ್ಷಣಿಕ ಸವಲತ್ತು ಮತ್ತು ವೈದ್ಯಕೀಯ ಸವಲತ್ತು ಪಡೆಯಲು ನೀಡುವ ಅಂಕಗಳನ್ನು ಪಡೆಯಲು ಅವಕಾಶ ಕಲ್ಪಿಸಿತು. ಟಾರ್ಗೆಟ್ ಕಾರ್ಡ್ ಮತ್ತು ಟಾರ್ಗೆಟ್ ವೀಸಾದಲ್ಲಿರುವಂತೆ, ಖಾತೆ ತೆರೆಯಲು ಇದ್ದ ಶೇ.10 ರಿಯಾಯಿತಿ ಇದಕ್ಕೆ ದೊರೆಯಲಿಲ್ಲ.
* '''ಟಾರ್ಗೆಟ್ ಸೋರ್ಸಿಂಗ್ ಸರ್ವೀಸಸ್/ ದಿ ಅಸೋಸಿಯೇಟೆಡ್ ಮರ್ಚುನ್ಡೈಸಿಂಗ್ ಕಾರ್ಪೋರೇಷನ್( ಟಿಎಸ್ಎಸ್/ಎಎಮ್ಸಿ)''' : ಈ ಜಾಗತಿಕ ಸಂಸ್ಥೆಯು ವ್ಯಾಪಾರೋತ್ಪನ್ನಗಳನ್ನು ಪತ್ತೆಮಾಡಿ, ಅವುಗಳನ್ನು ಸಂಯುಕ್ತ ಸಂಸ್ಥಾನಕ್ಕೆ ಆಮದು ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆ ಉತ್ಪನ್ನಗಳು ವಸ್ತ್ರಗಳು, ಪೀಠೋಪಕರಣಗಳು, ಹಾಸಿಗೆ, ಟವೆಲ್ ಮುಂತಾದವುಗಳನ್ನು ಒಳಗೊಂಡಿದೆ. ಟಿಎಸ್ಎಸ್/ಎಎಮ್ಸಿ ವಿಶ್ವದಾದ್ಯಂತ 27 ಪೂರ್ಣ ಸೇವೆ ನೀಡುವ ಕಚೇರಿಗಳನ್ನು, 48 ಗುಣಮಟ್ಟ ನಿರ್ವಹಣೆಯ ಕಚೇರಿಗಳನ್ನು ಹಾಗೂ ಏಳು ನಿಯೋಗಗಳನ್ನು ಹೊಂದಿದೆ. ಟಿಎಸ್ಎಸ್/ಎಎಮ್ಸಿ ಯಲ್ಲಿ 1200 ಜನ ಉದ್ಯೋಗಿಗಳಿದ್ದರು. ಅದರಲ್ಲಿರುವ ಇಂಜಿನಿಯರ್ಸ್ಗಳು ಟಾರ್ಗೆಟ್ ಕಂಪೆಯಿಯೊಂದಿಗೆ ಇತರ ಕಂಪೆನಿಗಳು ಮಾಡುವ ವ್ಯವಹಾರದ ಗುಣಮಟ್ಟದ ಸಮೀಕ್ಷೆ, ಕಾರ್ಮಿಕರ ಹಕ್ಕುಗಳು, ಇತರೆ ವರ್ಗಾವಣೆ ಸಂಬಂಧೀ ವಿಷಯಗಳ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿರುತ್ತಾರೆ.<ref>[http://sites.target.com/site/en/corporate/page.jsp?contentId=PRD03-001092 ವೆಂಡರ್ ಕಾಂಪ್ಲಿಯನ್ಸ್] {{Webarchive|url=https://web.archive.org/web/20110710074907/http://sites.target.com/site/en/corporate/page.jsp?contentId=PRD03-001092 |date=2011-07-10 }}, ಟಾರ್ಗೆಟ್ ಕಾರ್ಪೊರೇಶನ್.</ref> ಇದನ್ನು 1998ರಲ್ಲಿ ಟಾರ್ಗೆಟ್ ಕಾರ್ಪೋರೇಷನ್ ಸ್ವಾಧೀನಪಡಿಸಿಕೊಂಡಿತು, ಮತ್ತು 1916ರಲ್ಲಿ ಸ್ಥಾಪನೆಯಾಗಿದ್ದ ಈ ಕಂಪೆನಿಯು ಮೊದಲು ತಾನು ಸೇವೆ ನೀಡಿದ್ದ ಗ್ರಾಹಕರಿಂದಲೇ ನಡೆಸಲ್ಪಡುತ್ತಿತ್ತು.<ref>[http://www.theamc.com/history.html ಟಾರ್ಗೆಟ್ ಸೊರ್ಸಿಂಗ್ ಸರ್ವಿಸಸ್/ಎಎಮ್ಸಿ ಹಿಸ್ಟರಿ] {{Webarchive|url=https://web.archive.org/web/20100111064501/http://www.theamc.com/history.html |date=2010-01-11 }}, ''ಟಾರ್ಗೆಟ್ ಕಾರ್ಪೊರೇಶನ್''.</ref> ಇದು ಸ್ಯಾಕ್ಸ್ ಇನ್ಕಾರ್ಪೋರೇಟೆಡ್, ಬ್ಲೋಮಿಂಗ್ಡೇಲ್ಸ್, ಸ್ಟೇಜ್ ಸ್ಟೋರ್ಸ್ ಇಂಕ್., ಟಿಜೆ ಮ್ಯಾಕ್ಸ್ ಮತ್ತು ಮಾರ್ಷಲ್ಸ್ ಮುಂತಾದ ಕಂಪೆನಿಗಳಿಗೆ ಉತ್ಪನ್ನಗಳನ್ನು ಕೊಂಡುಕೊಳ್ಳುವ ಸ್ಥಳವಾಗಿತ್ತು.<ref name="amc" /> ಟಾರ್ಗೆಟ್ ಸೋರ್ಸಿಂಗ್ ಸರ್ವೀಸಸ್ ವಿಭಾಗವು ಟಾರ್ಗೆಟ್ ಸ್ಟೋರ್ಸ್ ಮತ್ತು ಟಾರ್ಗೆಟ್.ಕಾಮ್ಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳನ್ನು ಒದಗಿಸುತ್ತದೆ.
*'''ಟಾರ್ಗೆಟ್ ಕಮರ್ಷಿಯಲ್ ಇಂಟೀರಿಯರ್ಸ್:''' ಇದು ವಿನ್ಯಾಸದ ಸೇವೆಗಳು ಮತ್ತು ಕಚೇರಿಗಳಿಗೆ ಬೇಕಾಗುವ ಪೀಠೋಪಕರಣಗಳನ್ನು ಒದಗಿಸುತ್ತದೆ ಹಾಗೂ ಇದು ಡೆಟಾನ್ನ ಹೋಮ್ ಪೀಠೋಪಕರಣಗಳ ವಿಭಾಗದಿಂದ ರಚಿತವಾಗಿದೆ.<ref name="DTJ121407">ಮಿಚೆಲ್ಲೆ ಬ್ರುಚ್, [http://www.downtownjournal.com/index.php?&story=10629&page=65&category=54 ಟಾರ್ಗೆಟ್ ಟೇಕಿಂಗ್ ಓವರ್ ಕ್ರೆಟ್ & ಬರೆಲ್ ಸ್ಪೇಸ್ ಆನ್ ನಿಕೊಲೆಟ್ ಮಾಲ್ ] {{Webarchive|url=https://web.archive.org/web/20121027160426/http://www.downtownjournal.com/index.php?&story=10629&page=65&category=54 |date=2012-10-27 }}, ''ಡೌನ್ಟೌನ್ ಜರ್ನಲ್'', ಡಿಸೆಂಬರ್ 14, 2007.</ref> ಪ್ರಸ್ತುತ ಇದು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದ್ದು 500/1000 ಗ್ರಾಹಕರನ್ನು ಹೊಂದಿದೆ, ಅಲ್ಲದೆ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರವನ್ನು ಪ್ರಧಾನ ಕಚೇರಿ ಸೇರಿದಂತೆ ಉಳಿದೆಡೆಯಲ್ಲಿಯೂ ಆಕರ್ಷಿಸಿ, ವಿಸ್ತರಿಸುವತ್ತ ಗಮನಹರಿಸಿದೆ. ಈ ಅಂಗಸಂಸ್ಥೆಯು ಆರು ಶೋ ರೂಮ್ಗಳನ್ನು ಇಲಿನಾಯಿಸ್, ಮಿನಿಸೌಟಾ ಮತ್ತು [[ವಿಸ್ಕೊನ್ಸಿನ್|ವಿಸ್ಕಾಸಿನ್]] ಮುಂತಾದೆಡೆ ಹೊಂದಿದೆ ಮತ್ತು ಇದು ಜೂನ್ 23, 2005ರಲ್ಲಿ ಮಿನ್ನೆಸೋಟಾದ ಬ್ಲೂಮಿಂಗ್ಟನ್ನಲ್ಲಿ ತೆರೆಯಲ್ಪಟ್ಟ ಫಸ್ಟ್-ಆಫ್-ಇಟ್ಸ್-ಕೈಂಡ್ ರಿಟೇಲ್ ಕಾಂನ್ಸೆಪ್ಟ್ ಸ್ಟೋರ್ ಹಾಗೂ ಶೋ ರೂಮನ್ನು ಒಳಗೊಂಡಿದೆ.
*'''ಟಾರ್ಗೆಟ್ ಬ್ರಾಂಡ್ಸ್''' : ಇದು ಕಂಪೆನಿಯ ಖಾಸಗೀ ಲೇಬಲ್ ಇರುವ ಉತ್ಪನ್ನಗಳ ಮಾಲೀಕತ್ವ ಹೊಂದಿದೆ ಹಾಗೂ ಮೇಲ್ವಿಚಾರಣೆ ನಡೆಸುತ್ತದೆ, ಕಿರಾಣಿ ಸಾಮಾನಿನ ಬ್ರಾಂಡ್ಗಳನ್ನು ಹೊಂದಿದ ಆರ್ಚರ್ ಫಾರ್ಮ್ಸ್ ಮತ್ತು ಮಾರ್ಕೇಟ್ ಪ್ಯಾಂಟ್ರೀ, ಸೂಟನ್ & ಡಾಡ್ಜ್,ಅವರ ಉತ್ಕೃಷ್ಟವಾದ ಮೀಟ್ ಲೈನ್, ಮತ್ತು ಎಲೆಕ್ರಾನಿಕ್ಸ್ ಬ್ರಾಂಡ್ನ ಟ್ರುಟೆಕ್ಗಳೂ ಸೇರುತ್ತವೆ. ಇದರ ಜೊತೆಗೆ, ಗೂಳಿಯಕಣ್ಣುಗಳ ಡಾಗ್, ವ್ಯಾಪಾರಿ ಸರಕಿನ ಗುರುತಾಗಿದ್ದು ಗೂಳಿಯಕಣ್ಣು ಡಿಸೈನ್ ಮತ್ತು 'ಟಾರ್ಗೆಟ್' ಟಾರ್ಗೆಟ್ ಬ್ರಾಂಡಿನ ನೊಂದಾಯಿತ ಟ್ರೇಡ್ಮಾರ್ಕ್ಗಳಾಗಿವೆ.
*'''ಟಾರ್ಗೆಟ್.ಕಾಮ್''' : ಇದು ಕಂಪೆನಿಯ [[ಇ-ಕಾಮರ್ಸ್]] ವ್ಯವಹಾರಗಳನ್ನು ಮಾಲೀಕತ್ವ ಹೊಂದಿದ್ದು, ಅದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ಇದನ್ನು 2000ನೇ ಇಸವಿಯ ಆದಿ ಭಾಗದಲ್ಲಿ ರಿಟೇಲಿಂಗ್ ವಿಭಾಗದಿಂದ ಇದರ ಇ-ಕಾಮರ್ಸ್ ವ್ಯವಹಾರಗಳನ್ನು ಬೇರ್ಪಡಿಸಿ, ರಿವರ್ ಟೌನ್ ಟ್ರೇಡಿಂಗ್ ಡೈರೆಕ್ಟ್ ಮಾರ್ಕೆಟಿಂಗ್ ಘಟಕದೊಂದಿಗೆ ವಿಲೀನಗೊಳಿಸಿ ಸ್ವತಂತ್ರ-ಸ್ಥಿರವಾದ ಅಂಗಸಂಸ್ಥೆಯಾಗಿ ಮಾಡಿ ಟಾರ್ಗೆಟ್. ಡೈರೆಕ್ಟ್ ಎಂದು ಹೆಸರು ನೀಡಲಾಯಿತು.<ref name="namechange" /> 2002ರಲ್ಲಿ ಟಾರ್ಗೆಟ್.ಕಾಮ್ ಮತ್ತು ಅಮೇಜಾನ್.ಕಾಮ್ ಅಂಗಸಂಸ್ಥೆಯಾದ ಅಮೇಜಾನ್ ಎಂಟರ್ಪ್ರೈಸ್ ಸಲ್ಯುಷನ್ ಒಂದು ಒಪ್ಪಂದ ಮಾಡಿಕೊಂಡವು, ಅದರಂತೆ ಅಮೇಜಾನ್.ಕಾಮ್ ಸ್ಥಿರ ಮತ್ತು ಚರ ದರದಲ್ಲಿ ಬೇಡಿಕೆಗಳ ಈಡೇರಿಕೆ ಮತ್ತು ಅತಿಥಿ ಸೇವೆಗಳನ್ನು ನೀಡಲು ಒಪ್ಪಿಕೊಂಡಿತು. ಟಾರ್ಗೆಟ್.ಡೈರೆಕ್ಟ್ ಮತ್ತು ಅಮೇಜಾನ್.ಕಾಮ್ಗಳ ನಡುವಿನ ಈ ಇಲೆಕ್ಟ್ರಾನಿಕ್ ಕಾಮರ್ಸ್ ಸಂಬಂಧವು ಆಗಸ್ಟ್ 2010ರ ವರೆಗೆ ಮುಂದುವರೆಯಲಿದೆ.<ref>[http://www.writenews.com/2002/082102_amazon_target.htm ಟಾರ್ಗೆಟ್ ಆಯ್೦ಡ್ ಅಮೆಜಾನ್.ಕಾಮ್ ಎಕ್ಸ್ಪ್ಯಾಂಡ್ ಆನ್ಲೈನ್ ಟಾರ್ಗೆಟ್ ಸ್ಟೋರ್ ], ದ ರೈಟ್ ನ್ಯೂಸ್, ಆಗಸ್ಟ್ 21, 2002.</ref><ref>[http://news.target.com/phoenix.zhtml?c=196187&p=irol-newsArticle&ID=883195&highlight= ಟಾರ್ಗೆಟ್ ಕಾರ್ಪೊರೇಶನ್ ಆಯ್೦ಡ್ ಅಮೆಜಾನ್ ಎಂಟರ್ಪ್ರೈಸ್ ಸಲೂಶನ್ಸ್ ಎಕ್ಸ್ಟೆಂಡ್ ಇ-ಕಾಮರ್ಸ್ ಅಗ್ರೀಮೆಂಟ್ ಟು 2010] {{Webarchive|url=https://web.archive.org/web/20061124011344/http://news.target.com/phoenix.zhtml?c=196187&p=irol-newsArticle&ID=883195&highlight= |date=2006-11-24 }}, ಟಾರ್ಗೆಟ್ ಕಾರ್ಪೊರೇಶನ್, ಜುಲೈ 18, 2006.</ref> ಕಂಪೆನಿಯು ಮಾರ್ಷಲ್ ಫೀಲ್ಡ್ಸ್ ಮತ್ತು ಮರ್ವೇನ್ಸನ್ನು 2004ರಲ್ಲಿ ಮಾರಿದ ಬಳಿಕ, ಟಾರ್ಗೆಟ್.ಡೈರೆಕ್ಟ್ ಇದು ಟಾರ್ಗೆಟ್.ಕಾಮ್ ಆಗಿ ಪರಿವರ್ತಿತವಾಯಿತು. ಕಂಪ್ಲೀಟ್.ಕಾಮ್ನ ಒಂದು ಸರ್ವೇಕ್ಷಣೆಯ ಪ್ರಕಾರ, ''ಟಾರ್ಗೆಟ್.ಕಾಮ್'' ಅಂತರಜಾಲ ತಾಣಕ್ಕೆ 2008ರಲ್ಲಿ 288ಮಿಲಿಯನ್ ಜನ ಭೇಟಿ ನೀಡಿದ್ದರು.<ref>{{cite web |url=http://siteanalytics.compete.com/target.com?metric=uv |title=Site Profile for target.com (rank #28) | Compete |publisher=Siteanalytics.compete.com |date= |accessdate=2010-02-21 |archive-date=2011-05-22 |archive-url=https://web.archive.org/web/20110522145316/http://siteanalytics.compete.com/target.com/?metric=uv |url-status=dead }}</ref>
==ಟಾರ್ಗೆಟ್ ಸ್ಟೋರ್ಸ್ಗಳು==
[[File:Target Store Plaza North Haven.jpg|thumb|ಕನೆಕ್ಟಿಕಟ್ನ ನರ್ತ್ ಹೆವನ್ನಲ್ಲಿರುವ ವಿಶಿಷ್ಟವಾದ ಟಾರ್ಗೆಟ್ ಮಳಿಗೆಯ ನೋಟ.]]
'''ಟಾರ್ಗೆಟ್''', ರಿಯಾಯಿತಿ ವಿಭಾಗದ(ಡಿಸ್ಕೌಂಟ್ ಡಿಪಾರ್ಟ್ಮೆಂಟ್ ಸ್ಟೋರ್ಸ್ಗಳ) ಕೊಂಡಿಯಾಗಿದ್ದು, ಅಂದಾಜು 95,000ದಿಂದ 135,000 ಚದರ ಅಡಿಗಳಷ್ಟು (12,000 m²) ವಿಸ್ತೀರ್ಣವನ್ನು ಹೊಂದಿದೆ, ಇದು ಹಾರ್ಡ್ಲೈನ್ಸ್ ("ದಿನನಿತ್ಯದ" ಉತ್ಪನ್ನಗಳು ಮತ್ತು ಸರಕುಗಳು), ಸಾಫ್ಟ್ ಲೈನ್ಸ್ (ವಸ್ತ್ರಗಳು) ಹಾಗೂ ನಿಗದಿತ ಪ್ರಮಾಣದಲ್ಲಿ ಬೇಗ ಕೆಡದ ಆಹಾರ ಉತ್ಪನ್ನಗಳನ್ನು ಹೊಂದಿದೆ. ಪ್ರಮುಖವಾಗಿ ಟಾರ್ಗೆಟ್ ಸ್ಟೋರ್ಸ್ ವಸ್ತ್ರಗಳು, ಶೂ, ಆಭರಣ, ಆರೋಗ್ಯ ಮತ್ತು ಸೌಂದರ್ಯವರ್ಧಕಗಳು, ವಿದ್ಯುನ್ಮಾನ ವಸ್ತುಗಳು, ಕಾಂಪ್ಯಾಕ್ಟ್ ಡಿಸ್ಕ್, ಡಿವಿಡಿ, ಹಾಸಿಗೆ, ಅಡುಗೆಗೆ ಸಂಬಂಧಪಟ್ಟ ವಸ್ತುಗಳು, ಆಟದ ಸಾಮಾಗ್ರಿಗಳು, ಸಾಕುಪ್ರಾಣಿಗಳ ಪೂರೈಕೆಗಳು, ಆಟೋಮೋಟಿವ್ ಮತ್ತು ಹಾರ್ಡ್ವೇರ್ ವಸ್ತುಗಳನ್ನು ಒಳಗೊಂಡಿದೆ. ಇದಲ್ಲದೆ ಕಾಲೋಚಿತ ವ್ಯಾಪಾರಿ ಉತ್ಪನ್ನಗಳಾದ, ಬೇಸಿಗೆಯಲ್ಲಿ ಪ್ಯಾಟಿಯೊ ಪೀಠೋಪಕರಣ, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ [[ಕ್ರಿಸ್ಮಸ್|ಕ್ರಿಸ್ಮಸ್]] ಅಲಂಕಾರವನ್ನು ಒದಗಿಸುತ್ತದೆ. ಪ್ರದೇಶಕ್ಕೆ ಅನುಗುಣವಾಗಿ ಟಾರ್ಗೆಟ್ ಆಪ್ಟಿಕಲ್, ಟಾರ್ಗೆಟ್ ಕ್ಲಿನಿಕ್, ಪೋಟ್ರಿಯಾಟ್ ಸ್ಟುಡಿಯೊ ಮತ್ತು ಗಾರ್ಡನ್ ಸೆಂಟರ್ ಇದೆ ಮತ್ತು ಹೊಸ ಮಳಿಗೆಗಳಲ್ಲಿ ಹೆಚ್ಚು ಭಾಗ 2004ರ ನಂತರ ನಿರ್ಮಿತವಾದವುಗಳಾಗಿವೆ, ಅವುಗಳೆಂದರೆ ಟಾರ್ಗೆಟ್ ಫೋಟೊ, ಟಾರ್ಗೆಟ್ ಫಾರ್ಮಸಿ, ಸ್ಟಾರ್ಬಕ್ಸ್ ಕಾಫೀ, ಜಂಬಾ ಜ್ಯೂಸ್ ಮತ್ತು "ಆಹಾರದ ಕೇಂದ್ರ"ವಾದ ಪೀಜಾ ಹಟ್ ಎಕ್ಸ್ಪ್ರೆಸ್. ಕೋಲ್ಡ್ ಸ್ಟೋನ್ ಕ್ರೀಮರಿ ಮತ್ತು ಟಾರ್ಗೆಟ್ ಮೂರು ಮಳಿಗೆಗಳಲ್ಲಿನ ಐಸ್ಕ್ರೀಮ್ ಅಂಗಡಿಗಳನ್ನು ಪರೀಕ್ಷಿಸುವ ಒಪ್ಪಂದಕ್ಕೆ ಸಹಿ ಹಾಕಿದವು ಎಂದು ವರದಿ ಮಾಡಲಾಯಿತು.<ref>[http://www.retailnet.com/story.cfm?ID=28398 ಕೊಲ್ಡ್ ಸ್ಟೋನ್ ಕ್ರೀಮೆರಿ ಟು ಓಪನ್ ಟೆಸ್ಟ್ ಸ್ಟೋರಿಸ್ ಇನ್ ಟಾರ್ಗೆಟ್], ಚೈನ್ ಸ್ಟೋರ್ ಏಜ್, ಮೇ 5, 2006.</ref> 2008ರಲ್ಲಿ ಟಾರ್ಗೆಟ್ ಮಳಿಗೆಯ ಕೂಪನ್ಗಳಲ್ಲಿದ್ದ "ಫುಡ್ ಅವೆನ್ಯೂ" ಎಂಬ ಹೆಸರಿನ ಬದಲಿಗೆ "ಟಾರ್ಗೆಟ್ ಕೆಫೆ" ಎಂಬ ಹೆಸರನ್ನು ಉಪಯೋಗಿಸಲು ಪ್ರಾರಂಭಿಸಿತು.
ಮೊದಲ ಟಾರ್ಗೆಟ್ ಸ್ಟೋರ್ ಸಾಮಾನ್ಯ ಉತ್ಪನ್ನಗಳ ಜೊತೆಗೆ ಗುತ್ತಿಗೆಯ ಸೂಪರ್ ಮಾರ್ಕೆಟನ್ನು ಒಳಗೊಂಡಿತ್ತು, ಆ ಸಮಯದಲ್ಲಿ ಗ್ರಾಹಕರಿಗೆ ಒಂದೇ ಸ್ಥಳದಲ್ಲಿ ಎಲ್ಲವನ್ನೂ ಕೊಳ್ಳುವ ಸೌಲಭ್ಯ ನೀಡುವ ಪದ್ಧತಿ ಇದ್ದಿತು. 1967ರಲ್ಲಿ ಡೌಗ್ಲಸ್ ಡೇಟನ್, " ಗ್ರಾಹಕರಿಗೆ ರಿಯಾಯಿತಿಯ ಮಾರಾಟದ ಮಳಿಗೆಗಳು ಅಗತ್ಯ ಎಂದು ನಾವು ನಂಬಿದ್ದೇವೆ, ಆದರೆ ಆಹಾರ ಉತ್ಪನ್ನಗಳ ಶೇ.40ರಷ್ಟು ಭಾಗದ ಮಾರಾಟ ಡಿಪಾರ್ಟ್ಮೆಂಟ್ ಮಾದರಿಯ ಆಹಾರ ಮಳಿಗೆಗಳಲ್ಲಿ ಆಗುತ್ತದೆ. ಹಾಗಾಗಿ ರಿಯಾಯಿತಿ ಮಳಿಗೆಗಳ ಬಗ್ಗೆ ಜನರು ಯೋಚಿಸುವಾಗ ಈ ಎರಡು ಮಾದರಿಯ ಜೊತೆ ಜೊತೆಯಾಗಿ ಮುಂದುವರಿಯಬೇಕಾಗುತ್ತದೆ ಎನ್ನಬೇಕಾಗುತ್ತದೆ" ಎಂದು ಹೇಳಿದರು. ಹಾಗಿದ್ದರೂ, ಆ ದಶಕದ ಅಂತ್ಯದಲ್ಲಿ ಟಾರ್ಗೆಟ್, ಜೆನರಲ್ ಮರ್ಚಂಡೈಸ್ ಮತ್ತು ಗುತ್ತಿಗೆಯ ಸೂಪರ್ ಮಾರ್ಕೆಟ್ ಪದ್ಧತಿಯಿಂದ ಆಚೆ ಸರಿಯಿತು. 1969ರಲ್ಲಿ ಟಾರ್ಗೆಟ್, ಜೆನರಲ್ ಮರ್ಚಂಡೈಸ್ ಇರುವ ತನ್ನ ಪ್ರಥಮ ಸ್ಟೋರನ್ನು ತೆರೆಯಿತು.<ref name="30_years" /> ಸ್ಪರ್ಧಾತ್ಮಕ ಯು.ಎಸ್ ಆಹಾರ ಮಾರುಕಟ್ಟೆಯಲ್ಲಿ, ವಿಭಿನ್ನವಾಗಿರುವ ಮತ್ತು ಪೈಪೋಟಿ ನೀಡುವ ಪ್ರಯತ್ನದ ಫಲವಾಗಿ ಮಾಂಸ ಮತ್ತು ಅದನ್ನು ಉತ್ಪಾದಿಸುವ ಕ್ರಮವನ್ನು ಸರಕುಗಳೊಂದಿಗೆ 2009ರ ಪ್ರಾರಂಭದಲ್ಲಿ ಎರಡು ಬಿಕರಿ ಮಾಲುಗಳ ಟಾರ್ಗೆಟ್ ಮಳಿಗೆಗಳಲ್ಲಿ ಪ್ರದರ್ಶನಕ್ಕಿಡಲಾಯಿತು ಹಾಗೂ ಅನೇಕ ಮಳಿಗೆಗಳು ಇತರೆ ಹೊಸ ಮತ್ತು ನವೀಕರಿಸಲ್ಪಟ್ಟ ಪ್ರದೇಶಗಳಿಗೆ ವಿಸ್ತರಿಸಲ್ಪಟ್ಟಿವೆ.
[[File:Target in Miami.jpg|thumb|ಸ್ಥಳೀಯ ವಾಸ್ತುಶಿಲ್ಪವನ್ನುಪಯೋಗಿಸಿ ತಯಾರಿಸಿದ ಫ್ಲೋರಿಡಾದ ಮೈಯಾಮಿನಲ್ಲಿರುವ ಹೊಸ ಟಾರ್ಗೆಟ್ ಮಳಿಗೆಯ ಹೊರಾಂಗಣ ನೋಟ.]]
[[File:TargetHollywoodCA.JPG|thumb|left|ಸಿಎನಲ್ಲಿರುವ ಜನನಿಬಿಡ ವೆಸ್ಟ್ ಹಾಲಿವುಡ್ನ ಟಾರ್ಗೆಟ್ನ ಹೊರನೋಟ್.]]
ಈ ಹಿಂದೆ ಒಂದು-ಗಂಟೆ ಫೋಟೋ ಸಂಸ್ಕರಣಾ ಲ್ಯಾಬ್ನ ಮಾಲೀಕತ್ವವನ್ನು ಟಾರ್ಗೆಟ್ ಹೊಂದಿರದೆ, ಈಸ್ಟ್ಮನ್ ಕೊಡ್ಯಾಕ್ ಸಂಸ್ಥೆಯ ಅಂಗಸಂಸ್ಥೆಯಾದ ಕ್ವಾಲೆಕ್ಸ್ ಹೊಂದಿತ್ತು, ಇದರ ಮೇಲ್ವಿಚಾರಣೆಯನ್ನು ಕ್ವಾಲೆಕ್ಸ್ನ ನೌಕರರು ನಡೆಸುತ್ತಿದ್ದರು. ಹಾಗಿದ್ದರೂ, 2005ರ ಜೂನ್ನಲ್ಲಿ ಟಾರ್ಗೆಟ್ನ ವಕ್ತಾರೆ ಬ್ರೀ ಹೀತ್, ಕೊಡ್ಯಾಕ್ನ ಉಪಕರಣದೊಂದಿಗೆ ಕ್ವಾಲೆಕ್ಸ್ ಫೋಟೊ ಲ್ಯಾಬ್ ಬದಲಿಗೆ ಟಾರ್ಗೆಟ್ ಕಾರ್ಪೋರೇಷನ್ ತನ್ನ ಲ್ಯಾಬನ್ನು ತೆರೆಯಲಿದೆ ಮತ್ತು ಅದನ್ನು ಟಾರ್ಗೆಟ್ನ ನೌಕರರು ನಡೆಸುತ್ತಾರೆ ಎಂದು ಘೋಷಿಸಿದಳು. ನೆಕ್ಸ್ಟ್ ಡೇ, ಡಿಜಿಟಲ್ ಮತ್ತು ಕೊಡ್ಯಾಕ್ ಪರ್ಫೆಕ್ಟ್ ಟಚ್ ಪ್ರೊಸೆಸಿಂಗ್ನಂತಹ ಎಲ್ಲಾ ರೀತಿಯ ಫೋಟೊ ಪ್ರಕ್ರಿಯೆಯು "ಇನ್ ಹೌಸ್" ಒಳಗೆ ನಡೆಯಿತು, ಆದಾಗ್ಯೂ ಕೆಲವು ಲ್ಯಾಬ್ಗಳು ಸ್ವಯಂ ಸೇವೆ ಕೊಡಾಕ್ ಪಿಕ್ಚರ್ ಮೇಕರ್ ಕಿಯಾಸ್ಕ್ ಮೂಲಕ "ಸೆಂಡ್-ಔಟ್" ಸೇವೆಯನ್ನು ಆಕ್ರಮಿಸಿಕೊಂಡವು. ಕೆಲವು ಕೊಡ್ಯಾಕ್ ಬದಲಿಗೆ ಫೂಜಿಫಿಲ್ಮ್ ಉಪಕರಣದ ಮೂಲಕ "ಟೆಸ್ಟ್" ಸ್ಟೋರ್ಗಳನ್ನು ನಡೆಸುತ್ತಿವೆ.<ref>[http://www.allbusiness.com/professional-scientific/professional-services-photographic/465782-1.html ಬಿಜೇಸ್ ಕ್ಲೋಸಸ್ ಫೊತೊಫಿನಿಶಿಂಗ್ ಕೊಯೋಸ್ಕ್ಸ್] {{Webarchive|url=https://web.archive.org/web/20110710002210/http://www.allbusiness.com/professional-scientific/professional-services-photographic/465782-1.html |date=2011-07-10 }}, ಫೊಟೊ ಮಾರ್ಕೆಟಿಂಗ್ ನ್ಯೂಲೈನ್, ಜೂನ್ 22, 2005.</ref> ಟಾರ್ಗೆಟ್, ಯಾಹೂ ಫೋಟೋನೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದು, ಫೋಟೋ ಆನ್ಲೈನ್ ಸೇವೆಯನ್ನು ನೀಡುತ್ತಿದೆ ಜೊತೆಗೆ ಇದು ಒಂದು ತಾಸಿನ ಸ್ಟೋರ್ ಪಿಕ್ಅಪ್ಗಾಗಿ ಆನ್ಲೈನ್ ಪ್ರಿಂಟ್ಸ್ಗಳನ್ನು ವ್ಯವಸ್ತೆಗೊಳಿಸುತ್ತಿದೆ. ಇದು ಸೆಪ್ಟೆಂಬರ್, 2007ರಲ್ಲಿ ಕೊನೆಗೊಂಡಿತು. ಈಗ ಟಾರ್ಗೆಟ್ ಫೋಟೋ, ಕೊಡ್ಯಾಕ್ ಗ್ಯಾಲರಿ, ಶಟರ್ಫ್ಲೈ ಮತ್ತು ಫೋಟೋ ಬಕೆಟ್ನೊಂದಿಗೆ ಪಾಲುದಾರಿಕೆ ಹೊಂದಿದೆ.
===ಟಾರ್ಗೆಟ್ ಗ್ರೇಟ್ಲ್ಯಾಂಡ್===
[[File:Target greatland 1917.jpg|thumb|left|
ನ್ಯೂಜೆರ್ಸಿಯಲ್ಲಿರುವ ಮೌಂಟ್ ಲೌರೆಲ್ನ ವಿಶಿಷ್ಟವಾದ ಟಾರ್ಗೆಟ್ ಗ್ರೇಟ್ಲ್ಯಾಂಡ್ ಮಳಿಗೆಯ ಹೊರಾಂಗಣ ನೋಟ. ಟಾರ್ಗೆಟ್ ಮಳಿಗೆಗಳಂತಲ್ಲದೆ, ಟಾರ್ಗೆಟ್ ಗ್ರೇಟ್ಲ್ಯಾಂಡ್ ಎರಡು ಪ್ರವೇಶದ್ವಾರಗಳನ್ನು ಹೊಂದಿದೆ.]]
'''ಟಾರ್ಗೆಟ್ ಗ್ರೇಟ್ಲ್ಯಾಂಡ್''' ಇದು ಜೆನರಲ್ ಮರ್ಚಂಡೈಸ್ ಸೂಪರ್ಸ್ಟೋರ್ನ ಒಂದು ಭಾಗವಾಗಿದ್ದು 150,000 ಚದರ ಅಡಿಗಳಷ್ಟು(14,000 m²) ವಿಸ್ತೀರ್ಣವನ್ನು ಹೊಂದಿದೆ. ಸೂಪರ್ ಟಾರ್ಗೆಟ್ನಂತೆಯೇ ಇವು ಕೂಡ 2004ಕ್ಕಿಂತ ಮೊದಲು ಇದ್ದ ಬೇಸಿಕ್ ಟಾರ್ಗೆಟ್ ಸ್ಟೋರ್ಗಳಿಗಿಂತ ಹೆಚ್ಚು ವಿವಿಧತೆಯ ಉತ್ಪನ್ನಗಳನ್ನು ಮಾರಾಟಮಾಡುತ್ತವೆ, ಆದರೂ ಇವು ಆಹಾರ ಉತ್ಪನ್ನಗಳಾದ ಮಾಂಸ, ಬೇಕರಿ, ಡೆಲಿ, ಉತ್ಪನ್ನಗಳು ಹಾಗೂ ಹಾಲಿನ ಉತ್ಪನ್ನಗಳನ್ನು ಹೊಂದಿಲ್ಲ. 1990ರಲ್ಲಿ ಮೊದಲ ಟಾರ್ಗೆಟ್ ಗ್ರೇಟ್ಲ್ಯಾಂಡ್ನ್ನು ಮಿನ್ನೆಸೋಟಾದ ಆಯ್ಪಲ್ ವ್ಯಾಲಿಯಲ್ಲಿ ತೆರೆಯಲಾಯಿತು, ನಂತರ ಅದನ್ನು ನವೀಕರಿಸಿ, ವಿಸ್ತರಿಸಿ ಸೂಪರ್ ಟಾರ್ಗೆಟ್ ಮಾಡಲಾಯಿತು. 2005ರಿಂದ 2008ರ ವರೆಗೆ ಮಾರಾಟಮಾಡುವ ಸ್ಥಳವನ್ನು ಗುರುತಿಸಿ ಆಹಾರ ಉತ್ಪನ್ನಗಳನ್ನು ಮಾರುವ ಸ್ಥಳವನ್ನು ದುಪ್ಪಟ್ಟು ಮಾಡಲಾಯಿತು ಹಾಗೂ ಇತರೆ ವಿಭಾಗಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಟಾರ್ಗೆಟ್ನ ವ್ಯಾಪಾರಿ ಮಳಿಗೆಗೆ ಸರಿಯಾದ ರೂಪುರೇಷೆ ನೀಡಲಾಯಿತು. ಒಂದೇ ಮಳಿಗೆಗೆ ಎರಡು ಪ್ರವೇಶ ದ್ವಾರಗಳು ಹಾಗೂ ವಿಸ್ತರಿಸಲ್ಪಟ್ಟ ಫುಡ್ ಅವೆನ್ಯೂ ಇದರ ಪ್ರಮುಖ ಲಕ್ಷಣಗಳಾಗಿವೆ. ಟಾರ್ಗೆಟ್ ಕೆಫೆಯು ಪೀಜಾ ಹಟ್ ಎಕ್ಸ್ಪ್ರೆಸ್, ಟಾಕೊ ಬೆಲ್ ಎಕ್ಸ್ಪ್ರೆಸ್ ಮತ್ತು ಸ್ಟಾರ್ಬಕ್ಸನ್ನು ಒಳಗೊಂಡಿದೆ. ಹೊಸದಾಗಿ ನಿರ್ಮಿಸಿದ ಟಾರ್ಗೆಟ್ ಗ್ರೇಟ್ಲ್ಯಾಂಡ್ ಸ್ಟೋರ್ಗಳು ಬೇಗ ಕೆಡುವ ಆಹಾರ ವಸ್ತುಗಳನ್ನು ಇಡುವ ಜನರಲ್ ಮರ್ಚಂಡೈಸ್ ಸ್ಟೋರ್ಗಳಾಗಿ ಮಾರ್ಪಡಿಸಿ ಕಟ್ಟಲಾಗಿದೆ.
===ಸೂಪರ್ ಟಾರ್ಗೆಟ್ ===
[[File:SuperTarget2006PNG.PNG|100px|left|thumb|2006ನಿಂದೀಚೆಯ ಸೂಪರ್ಟಾರ್ಗೆಟ್ ಚಿಹ್ನೆ.]]
[[File:SuperTarget.jpg|thumb|ಯುಟಾನ ಸಾಲ್ಟ್ಲೇಕ್ ನಗರದ ವಿಶಿಷ್ಟವಾದ ಸೂಪರ್ಟಾರ್ಗೆಟ್ನ ಹೊರಾಂಗಣ ನೋಟ.
ಕಟ್ಟಡದ ಮುಂಭಾಗದ ಎರಡು ಪ್ರವೇಶದ್ವಾರಗಳ ನಡುವಿನಲ್ಲಿ ಮಾರಾಟದ ಸರಕನ್ನು ದಾರಿಯಲ್ಲಿ ತುಂಬುತ್ತಿರುವುದನ್ನು ಕಾಣಬಹುದು. ]]
ಸೂಪರ್ ಟಾರ್ಗೆಟ್ ಇದು ಹೈಪರ್ ಮಾರ್ಕೆಟ್ನ ಭಾಗವಾಗಿದೆ. ಟಾರ್ಗೆಟ್ ಗ್ರೇಟ್ಲ್ಯಾಂಡ್ನಂತೆಯೇ ಇದರಲ್ಲಿ ಒಂದೇ ಮಹಡಿ ಕಟ್ಟಡಕ್ಕೆ ಎರಡು ಪ್ರವೇಶದ್ವಾರಗಳಿವೆ. ಸ್ಟೋರ್ನ "ಸೂಪರ್" ಎಂಬುದು 2006ರ ವರೆಗೆ ಹಸಿರು ಬಣ್ಣದಲ್ಲಿತ್ತು. ನಂತರದಲ್ಲಿ ತೆರೆಯಲ್ಪಟ್ಟ ಮಳಿಗೆಗಳಲ್ಲಿ ಎರಡೂ ಪದಗಳೂ ಕೆಂಪು ಬಣ್ಣದಲ್ಲಿತ್ತು, "ಸೂಪರ್" ಪದವನ್ನು "ಟಾರ್ಗೆಟ್" ಪದಕ್ಕೆ ಬಳಸಿದ ಹೆಲ್ವೆಟಿಕ ಶೈಲಿಯಲ್ಲಿ ಮತ್ತು "ಟಾರ್ಗೆಟ್"ನ್ನು ದಪ್ಪಾಕ್ಷರಗಳಲ್ಲಿ ಸರಳೀಕರಿಸಿ "ಟಾರ್ಗೆಟ್ ಬ್ರ್ಯಾಂಡ್"ನಲ್ಲಿ ಕಾಣುವಂತೆ ಬರೆಯಲಾಯಿತು.<ref name="helvetica" /> ಸೂಪರ್ ಟಾರ್ಗೆಟ್ ಸ್ಟೋರ್, ಜನರಲ್ ಮರ್ಚಂಡೈಸ್ನಲ್ಲಿ ಸಿಗುವ ಎಲ್ಲಾ ಉತ್ಪನ್ನಗಳ ಜೊತೆಗೆ ಆಹಾರ ಉತ್ಪನ್ನಗಳು, ತಾಜಾ ಉತ್ಪನ್ನಗಳು, ಬೇಕರಿ ಉತ್ಪನ್ನಗಳನ್ನು ಹೊಂದಿದೆ. ಎಲ್ಲಾ ತುಂಬಾ ಹಳೆಯ ಮತ್ತು ಹೊಸ ಸೂಪರ್ ಟಾರ್ಗೆಟ್ ಸ್ಟೋರ್ಗಳು ಟಾರ್ಗೆಟ್ ಆಪ್ಟಿಕಲನ್ನು ಹೊಂದಿವೆ. ಅನೇಕ ಸೂಪರ್ ಸ್ಟೋರ್ಗಳು ಸ್ಟಾರ್ಬಕ್ಸ್, ಕಾಫೀ, ಪೀಜಾ ಹಟ್ ಎಕ್ಸ್ಪ್ರೆಸ್, ಟಾಕೊ ಬೆಲ್ ಎಕ್ಸ್ಪ್ರೆಸ್, ಟಾರ್ಗೆಟ್ ಫಾರ್ಮಸಿ, ದಿ ಸ್ಟೋಡಿಯೋ(@)ಟಾರ್ಗೆಟ್ (ಒಂದು ವರ್ಣಚಿತ್ರ ಸ್ಟೂಡಿಯೊ), ಟಾರ್ಗೆಟ್ ಫೋಟೋ ಮತ್ತು ವೆಲ್ಸ್ ಫಾರ್ಗೋ ಬ್ಯಾಂಕ್ ಅಥವಾ ಯುಎಸ್ ಬ್ಯಾಂಕನ್ನು ಒಳಗೊಂಡಿವೆ. ಮೇರಿಲ್ಯಾಂಡ್ ಮತ್ತು ಟ್ವಿನ್ ಸಿಟೀಸ್ನ ಕೆಲವು ಸ್ಟೋರ್ಗಳು ಟಾರ್ಗೆಟ್ ಕ್ಲಿನಿಕ್ ಎಂಬ ಹೊಸ ಪದ್ಧತಿ ಇದೆ. ಇದು ಔಷಧಿ ಅಂಗಡಿಯಲ್ಲಿ ವಾಲ್ಗ್ರೀನ್ಸ್ ಅಥವಾ ಸಿವಿಎಸ್/ಫಾರ್ಮಸಿ ಎಂಬ ಮಿನಿಟ್ ಕ್ಲಿನಿಕ್ ಇರುವಂತೆ. [[ಅಮೇರಿಕ ಸಂಯುಕ್ತ ಸಂಸ್ಥಾನ|ಯೂನೈಟೆಡ್ ಸ್ಟೇಟ್ಸ್]]ನಲ್ಲಿ ಇತರ ಹೈಪರ್ ಮಾರ್ಕೆಟ್ಗಳು(ವಾಲ್-ಮಾರ್ಟ್ ಸೂಪರ್ಸೆಂಟರ್ಸ್ ಮತ್ತು ಮೀಜರ್) 24 ಗಂಟೆಗಳ ಕಾಲ ತೆರೆದಿರುವಂತೆ ಸೂಪರ್ ಟಾರ್ಗೆಟ್ಗಳು ತೆರೆದಿರುವುದಿಲ್ಲ.
ಹಿಂದೆ ಸೂಪರ್ ಟಾರ್ಗೆಟ್ ಬ್ಯಾಂಕಾಗಿರದೆ ಇ*ಟ್ರೇಡ್ ವ್ಯಾಪಾರ ಕೇಂದ್ರವಾಗಿತ್ತು. ಜೂನ್, 2003ರಲ್ಲಿ ಇ*ಟ್ರೇಡ್, ಸೂಪರ್ ಟಾರ್ಗೆಟ್ನಲ್ಲಿನ್ ತನ್ನೆಲ್ಲಾ ಶಾಖೆಗಳನ್ನು ಮುನ್ಸೂಚನೆ ನೀಡದೆ ಮುಚ್ಚಲು ನಿರ್ಧರಿಸಿತು.<ref>[http://www.bizjournals.com/sanfrancisco/stories/2003/06/02/daily69.html ಇ-ಟ್ರೇಡ್ ಕ್ಲೋಸಸ್ ಟ್ರೇಡಿಂಗ್ ಸ್ಟೇಶನ್ಸ್], ''ಸ್ಯಾನ್ ಫ್ರಾನ್ಸಿಸ್ಕೊ ಬಿಸಿನೆಸ್ ಟೈಮ್ಸ್'', ಜೂನ್ 6, 2003.</ref> ಈ ಶೀಘ್ರ ಬೆಳೆವಣಿಗೆಯು ಟಾರ್ಗೆಟ್ ಕಾರ್ಪೋರೇಷನ್ನಿಂದ ಪ್ರಾರಂಭವಾಗಿರಲಿಲ್ಲ. ಆ ಸಮಯದಲ್ಲಿ ಇ*ಟ್ರೇಡ್ ನ ಸಿಇಒ ಆಗಿದ್ದ ಮಿಚೆಲ್ ಕೆಪ್ಲಾನ್ ಹೀಗೆ ಹೇಳಿದ, "ನಾವು ಲಾಭದಾಯಕ ವಿತರಣೆಯನ್ನು ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ನಾವು ತ್ಯಜಿಸುವುದೇ ಒಳಿತು." ಇ*ಟ್ರೇಡ್ ತನ್ನ ಗ್ರಾಹಕರಿಗೆ ಈ ಬದಲಾವಣೆಯ ಬಗ್ಗೆ ಕಾರ್ಡ್ ದ ಮೂಲಕ ಗಮನಕ್ಕೆ ತಂದಿತು.
1995ರಲ್ಲಿ ಮೊದಲ ಸೂಪರ್ ಟಾರ್ಗೆಟನ್ನು ನೆಬ್ರಾಸ್ಕಾದ ಒಮಾಹಾದಲ್ಲಿ ತೆರೆಯಲಾಯಿತು, ನಂತರ ಅದೇ ವರ್ಷದಲ್ಲಿ ಎರಡನೇ ಸೂಪರ್ ಟಾರ್ಗೆಟನ್ನು ಕ್ಯಾನ್ಜ್ಸ್ನ ಲಾರೆನ್ಸ್ನಲ್ಲಿ ತೆರೆಯಲಾಯಿತು.<ref name="timeline">ಟಾರ್ಗೆಟ್ ಹಿಸ್ತರಿ ಟೈಮ್ಲೈನ್(ಪಿಡಿಎಫ್)[http://sites.target.com/images/corporate/about/pdfs/target_history_timeline.pdf ] {{Webarchive|url=https://web.archive.org/web/20110716192749/http://sites.target.com/images/corporate/about/pdfs/target_history_timeline.pdf |date=2011-07-16 }}, ಟಾರ್ಗೆಟ್ ಕಾರ್ಪೊರೇಶನ್.</ref> {{As of|2008|10}} ಟಾರ್ಗೆಟ್, 218 ಸೂಪರ್ ಟಾರ್ಗೆಟ್ ಸ್ಟೋರ್ಗಳನ್ನು 22 [[ಅಮೇರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳು|ಯುಎಸ್ ರಾಜ್ಯ]]ಗಳಲ್ಲಿ ನಡೆಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅವು ಟೆಕ್ಸಾಸ್, ಫ್ಲೋರಿಡಾ, ಮಿನಿಸೌಟಾ ಮತ್ತು ಕೊಲರಾಡೋನಲ್ಲಿವೆ.<ref name="community" /><ref name="factcard">ಕಾರ್ಪೊರೇಟ್ ಫ್ಯಾಕ್ಟ್ ಕಾರ್ಡ್(ಪಿಡಿಎಫ್)[http://sites.target.com/images/corporate/about/pdfs/corp_factcard_101107.pdf ] {{Webarchive|url=https://web.archive.org/web/20071128161431/http://sites.target.com/images/corporate/about/pdfs/corp_factcard_101107.pdf |date=2007-11-28 }}, ಟಾರ್ಗೆಟ್ ಕಾರ್ಪೊರೇಶನ್, ಅಕ್ಟೋಬರ್ 10, 2007.</ref>
===ಪಿಫ್ರೆಶ್ ಸ್ಟೋರ್ಸ್===
2009ರಲ್ಲಿ, ಜನರಲ್ ಮರ್ಚಂಡೈಸ್ ಸ್ಟೋರ್ಗಳಿಗಾಗಿ ಹೊಸ ಮಾದರಿಯನ್ನು ಸಿದ್ಧಪಡಿಸಲಾಯಿತು. ಈ ಸ್ಟೋರ್ಗಳನ್ನು ಪಿಫ್ರೆಶ್ ಎಂದು ಕರೆಯಲಾಯಿತು, ಇವು ಬೇಗ ಕೆಡುವ ಆಹಾರ ಪದಾರ್ಥಗಳು ಮತ್ತು ಶೀತಲ ಆಹಾರಗಳು, ಮಾಂಸ ಮತ್ತು ಡೈರಿ ಉತ್ಪನ್ನಗಳನ್ನು ಇಡುವ ವ್ಯವಸ್ಥೆಯನ್ನು ಹೊಂದಿದ್ದವು. ಬಾರ್ ಕೋಡ್ ಮಾಡಿದ್ದ ಹಣ್ಣುಗಳು ಮತ್ತು ತರಕಾರಿಗಳು, ಮೊದಲೇ ಚೀಲದಲ್ಲಿ ತುಂಬಿದ್ದ ಬಾಳೆಹಣ್ಣುಗಳು ತೂಕದ ಅಧಾರದ ಬೆಲೆ ನಿಗದಿ ಮತ್ತು ಮಾಪಕದ ಅವಶ್ಯಕತೆಯನ್ನು ನಿವಾರಿಸಿದವು, ಈ ಉತ್ಪನ್ನಗಳಲ್ಲಿ ಕೆಲವು ರಾಷ್ಟ್ರೀಯ ಬ್ರಾಂಡ್ಗಳಿದ್ದವು. ಆದರೆ ಅವು ಇನ್ ಹೌಸ್ ಬೇಕರಿ ಅಥವಾ ಡೆಲಿಯನ್ನು ಒಳಗೊಂಡಿರಲಿಲ್ಲ ಬದಲಿಗೆ ಚಿಕ್ಕ ಸಂಖ್ಯೆಯ ಬೇಯಿಸಿದ ಸರಕುಗಳು ಮತ್ತು ಮುಂಚಿತವಾಗಿಯೇ ಜೋಡಿಸಲ್ಪಟ್ಟ ಡೆಲಿ ವಸ್ತುಗಳನ್ನು ಹೊಂದಿದ್ದವು. ಉತ್ಪನ್ನಗಳು ಕೆಲವೇ ಕೆಲವು ರಾಷ್ಟ್ರೀಯ ಬ್ರಾಂಡ್ಗಳನ್ನು ಹೊಂದಿದ್ದವು, ಆದರೆ ಇವು ಮುಖ್ಯವಾಗಿ ಟಾರ್ಗೆಟ್, ಆರ್ಚರ್ ಮತ್ತು ಮಾರ್ಕೆಟ್ ಪ್ಯಾನ್ಟ್ರಿಯಂತಹ ತಾನು ಮಾಲೀಕತ್ವ ವಹಿಸಿರುವ ಬ್ರಾಂಡ್ ಉತ್ಪನ್ನಗಳತ್ತ ಗಮನ ನೀಡಿದ್ದವು. ಮೊದಲಿಗೆ ಪಿಫ್ರೆಶ್ನ 100 ಸ್ಟೋರ್ಗಳು ತೆರೆಯಲ್ಪಟ್ಟವು. ಇವುಗಳಲ್ಲಿ ಹೆಚ್ಚಿನವು ಮೊದಲಿದ್ದ ಅಂಗಡಿಗಳನ್ನು ನವೀಕರಿಸಿ ಮತ್ತು ಆಹಾರ ಉತ್ಪನ್ನಗಳನ್ನು ಇಡಲು ವಿಸ್ತರಿಸಿ ಮಾಡಿದಂತಹ ಸ್ಟೋರ್ಗಳಾಗಿದ್ದವು, ಆದರೆ 2009ರಲ್ಲಿ ಹೊಸದಾಗಿ ತೆರೆಯಲ್ಪಟ್ಟ ಕೆಲವು ಸ್ಟೋರ್ಗಳು ಹೊಸ ಮಾದರಿಯಲ್ಲಿದ್ದವು. 2010ರ ಹೊತ್ತಿಗೆ ನವೀಕರಣ ಅಥವಾ ಹೊಸದಾಗಿ ಸ್ಟೋರ್ಗಳನ್ನು ತೆರೆಯಲಾಗಿ 350 ಸ್ಟೋರ್ಗಳಲ್ಲಿ ಪಿಫ್ರೆಶ್ ಕಲ್ಪನೆಯನ್ನು ತರಲಾಯಿತು. ಸಾಮಾನ್ಯವಾಗಿ ಪಿಫ್ರೆಶ್ ಸ್ಟೋರ್, ಜನರಲ್ ಮರ್ಚಂಡೈಸ್ ಟಾರ್ಗೆಟ್ ಸ್ಟೋರ್ಗಿಂತ 1,500 ಚದರ ಅಡಿಗಳಷ್ಟು ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ, ಆದರೂ ಇವುಗಳ ದಿನಬಳಕೆಯ ವಸ್ತುಗಳ ಬೆಲೆಗಳು ಹೈಪರ್ ಮಾರ್ಕೆಟ್ಗಿಂತ ಕಡಿಮೆಯಿರುವುದರಿಂದ ಇವನ್ನು ಸೂಪರ್ ಮಾರ್ಕೆಟ್ ಎಂದು ಕರೆಯುವುದಿಲ್ಲ.<ref>{{cite web|url=http://twincities.bizjournals.com/twincities/stories/2009/11/16/daily32.html |title=Target to add ‘PFresh’ grocery concept at 350 stores - Minneapolis / St. Paul Business Journal: |publisher=Twincities.bizjournals.com |date=2009-11-18 |accessdate=2010-02-21}}</ref>
===ನಗರದ ಸ್ಟೋರ್ಗಳು ===
[[File:The downtown Minneapolis Target Corporation store with its corporate headquarters tower in the background, Minneapolis, Minnesota, USA, 05-12-07.jpg|right|thumb|ನಿಕೊಲಟ್ ಮಾಲ್ ಡೌನ್ಟೌನ್ನಲ್ಲಿರುವ ಮಿನ್ನೆಅಪೊಲಿಸ್ ಟಾರ್ಗೆಟ್, ಎರಡು ಹಂತದ ಕಟ್ಟಡದಲ್ಲಿ ಒಂದೇ ರೀತಿಯಲ್ಲಿರುವಂತೆ ನೋಡಿಕೊಳ್ಳಲಾಗಿತ್ತು. ಟವರ್ನ ಹಿನ್ನೋಟದಲ್ಲಿರುವುದು ಟಾರ್ಗೆಟ್ ಕಾರ್ಪೊರೇಶನ್ನಿನ ಮುಖ್ಯಕಛೇರಿ.]]
ಹಲವು ಟಾರ್ಗೆಟ್ ಸ್ಟೋರ್ಗಳು ಒಂದೇ ರೀತಿಯ ಬಿಗ್-ಬಾಕ್ಸ್ ಸ್ಟೋರ್ಸ್ ವಿನ್ಯಾಸವನ್ನು ಹೊಂದಿದ್ದರೆ, ಕೆಲವು ಬೇರೆ ಬೇರೆ ರೀತಿಯ ವಿನ್ಯಾಸವನ್ನು ಹೊಂದಿವೆ, ಕಂಪನಿಯು ಈ ವಿನ್ಯಾಸಗಳಿಂದಾಗಿ ಹೆಚ್ಚು ವಿಸ್ತಾರವನ್ನು ಹೊಂದಿದೆ. ದೇಶದಾದ್ಯಂತ ನಗರ ಪ್ರದೇಶಗಳಲ್ಲಿ ಅಥವಾ ಮಾಲ್ಗಳೊಳಗೆ ಅನನ್ಯವಾದ ಸಂಗ್ರಹವಿರುವಂತೆ ಟಾರ್ಗೆಟ್ನ್ನು ನಿರ್ವಹಿಸಲಾಗುತ್ತಿದೆ, ಹೀಗಾಗಿ ಒಂದು ಮಹಡಿಯ ಕಟ್ಟಡದಲ್ಲಿ ಇದನ್ನೆಲ್ಲಾ ನಿರ್ವಹಿಸಲಾಗುವುದಿಲ್ಲ. ಈ ಸ್ಟೋರ್ಗಳು ಬಹು ಮಹಡಿ ಕಟ್ಟಡಗಳಾಗಿದ್ದು ಅದು ಮಾರಾಟ ಮಳಿಗೆ, ಶೇಕರಣಾ ಮಳಿಗೆ ಮತ್ತು ಕಚೇರಿಗಳನ್ನು ಒಳಗೊಂಡಿದೆ. ಮಹಡಿಗಳಿಗೆ ತಲುಪಲು ಎಸ್ಕಲೇಟರ್, ಎಲಿವೇಟರ್ ಅಥವಾ ವರ್ಮಪೋರ್ಟ್ ಎಂಬ ವಿಶೇಷ ರೀತಿಯ ಎಲಿವೇಟರ್ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ.
ಟಾರ್ಗೆಟ್ ಅರ್ಬನ್ ಸ್ಟೋರ್ ಕಲ್ಪನೆಯನ್ನು ಉಪಯೋಗಿಸಿಕೊಂಡು ಬಹು ಮಹಡಿ ಕಟ್ಟಡಗಳನ್ನು ನಗರಗಳಾದ ಅನ್ನಾಪುಲಿಸ್, ದಿ ಬ್ರಾಂಕ್ಸ್, ಬ್ರೂಕ್ಲಿನ್, ಕ್ವೀನ್ಸ್, ಗ್ಲೆಂಡೇಲ್, ಲಾಸ್ ಏಂಜಲೀಸ್, ಚಿಕಾಗೊ, ಪಾಸಡೀನ, ಕ್ಯಾಲಿಫೋರ್ನಿಯ, ಸ್ಯಾನ್ ಡಿಯೆಗೊ, ಸಿಯಾಟೆಲ್, [[ವಾಷಿಂಗ್ಟನ್, ಡಿ.ಸಿ.|ವಾಷಿಂಗ್ಟನ್ ಡಿ.ಸಿ.]], ಅಟ್ಲಾಂಟಾ, ಮಯಾಮೀ, ನ್ಯೂ ಅರ್ಲೀನ್ಸ್ ಮತ್ತು ಕಾರ್ಪೋರೇಷನ್ನ ಪ್ರಧಾನ ಕಚೇರಿಯಿರುವ ಮಿನಿಯಾಪುಲಿಸ್ನಲ್ಲಿ ಕಟ್ಟಲಾಯಿತು. ಜುಲೈ, 2010ರಲ್ಲಿ ನ್ಯೂಯಾರ್ಕ್ನ ಪೂರ್ವ ಹರ್ಲಮ್ನಲ್ಲಿ ಟಾರ್ಗೆಟ್ ಸ್ಟೋರನ್ನು ತೆರೆಯಲಾಯಿತು.<ref name="Fernandez">{{cite news|url=https://www.nytimes.com/2010/07/26/nyregion/26pleasant.html?src=mv|title=On Pleasant Avenue, a Grisly Past Fades, and a Target Moves In|last=Fernandez|first=Manny|date=July 25, 2010|work=The New York Times|accessdate=30 July 2010}}</ref> 2011ರ ವೇಳೆಗೆ ಕಂಪೆನಿಯು ನಗರದ ಪೂರ್ವ ಲಿಬರ್ಟಿ ಸೆಕ್ಸ್ನ್ನ ಪಿಟ್ಸ್ಬರ್ಗ್ನಲ್ಲಿ ಅರ್ಬನ್ ಸ್ಟೋರ್ ತೆರೆಯುವ ಯೋಜನೆಯಲ್ಲಿದೆ.<ref>{{Cite web |url=http://www.bizjournals.com/mobile/news/pittsburgh/2009/11/09/daily34 |title=ಆರ್ಕೈವ್ ನಕಲು |access-date=2010-08-19 |archive-date=2020-10-27 |archive-url=https://web.archive.org/web/20201027173918/https://www.bizjournals.com/mobile/news/pittsburgh/2009/11/09/daily34 |url-status=dead }}</ref>
ಮಿನಿಯಾಪುಲಿಸ್ನಲ್ಲಿರುವ ನಿಕೊಲೆಟ್ ಮಾಲ್ ಎಂಬ ಟಾರ್ಗೆಟ್ ಸ್ಟೋರ್, ಮೂರು ಮಹಡಿಯದಾಗಿದ್ದು ಗಾಜಿನ ಪ್ರವೇಶದ್ವಾರವಿದೆ, ಇದರ ವಿನ್ಯಾಸವು ಇತರೆ ಟಾರ್ಗೆಟ್ ಸ್ಟೋರ್ಗಳಿಗಿಂತ ಭಿನ್ನವಾಗಿದೆ. ಈ ಅರ್ಬನ್ ಸ್ಟೋರನ್ನು ಯುಎಸ್ ಮಿಲಿಯನ್ [[ಸಂಯುಕ್ತ ಸಂಸ್ಥಾನದ ಡಾಲರ್|$]]16.3 ವೆಚ್ಚದಿಂದ ಟಾರ್ಗೆಟ್ ಕಾರ್ಪೋರೇಷನ್ ನಿರ್ಮಿಸಿದೆ.<ref>ಟಾರ್ಗೆಟ್ ಸ್ಟೋರ್ ಒಪನ್ಸ್, ಬಟ್ ಕಾಂಟ್ರಾವರ್ಸಿಸ್ ಡಸಂಟ್ ಎಂಡ್ [http://news.minnesota.publicradio.org/features/200110/09_hughesa_newtarget/ ], ಮಿನ್ನೆಸೊಟ ಪಬ್ಲಿಕ್ ರೇಡಿಯೊ, ಅಕ್ಟೋಬರ್ 9, 2001.</ref> ಇದೇ ಮಾದರಿಯನ್ನು ಉಪಯೋಗಿಸಿಕೊಂಡು ಹಿಂದಿನ ಬುಲಕ್ಸ್, ಮಾಂಟ್ಗೊಮೆರಿ ವಾರ್ಡ್, ಜೆ.ಡಬ್ಲೂ. ರಾಬಿನ್ಸನ್ಸ್, ರಾಬಿನ್ಸನ್ಸ್-ಮೇ ಮತ್ತು ಯಾಂಕರ್ಸ್ ಸ್ಟೋರ್ಗಳನ್ನು ಮಾರ್ಪಡಿಸಲಾಯಿತು.<ref>ಆನ್ ದ ಬುಲ್ಸ್ ಐ [http://www.buildings.com/Articles/detail.asp?ArticleID=1392 ] {{Webarchive|url=https://web.archive.org/web/20070313013941/http://www.buildings.com/Articles/detail.asp?ArticleID=1392 |date=2007-03-13 }}, ''ಬಿಲ್ಡಿಂಗ್ಸ್ ಮ್ಯಾಗ್ಜೀನ್'', ಜೂನ್ 2003.</ref>
===ವಿತರಣಾ ಕೇಂದ್ರಗಳು===
====ಪ್ರಾದೇಶಿಕ ವಿತರಣಾ ಕೇಂದ್ರಗಳು====
{{As of|2010|1}}ಟಾರ್ಗೆಟ್ ಕಾರ್ಪೋರೇಷನ್ ಸಂಸ್ಥೆಯು [[ಅಮೇರಿಕ ಸಂಯುಕ್ತ ಸಂಸ್ಥಾನ|ಸಂಯುಕ್ತ ರಾಷ್ಟ್ರ]]ಗಳ ವ್ಯಾಪ್ತಿಯಲ್ಲಿ 38 ವಿತರಣಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.<ref name="10k">[http://www.sec.gov/Archives/edgar/data/27419/000104746910002408/a2197369z10-ka.htmT{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} /></ref>{{As of|2010|1}} ಟಾರ್ಗೆಟ್ ಇದು 2006ರಲ್ಲಿ ಎರಡು ಹೊಸ ವಿತರಣಾ ಸಂಸ್ಥೆಯನ್ನು ಪ್ರಾರಂಭಿಸಿತು (ರಿಯಾಲ್ಟೋ, ಕ್ಯಾಲಿಫೋರ್ನಿಯಾ ಮತ್ತು ಡೆಕಾಬ್, ಇಲ್ಲಿನೊಯ್ ), ಮತ್ತು 2009ರಲ್ಲಿ ಮತ್ತೊಂದು ಸಂಸ್ಥೆಯನ್ನು ಪ್ರಾರಂಭಿಸಲಾಯಿತು (ನ್ಯೂಟೌನ್, ಉತ್ತರ ಕೆರೋಲಿನಾ), ಇದನ್ನು ತನ್ನ ದಾಸ್ತಾನು ಅಭಿವೃದ್ಧಿಗೆ ಸಹಾಯವಾಗಲು ಸ್ಥಾಪಿಸಿತು. ಗ್ರೀಟಿಂಗ್ ಕಾರ್ಡ್ಗಳು ಮತ್ತು ಸೋಡಾಗಳು ಮೊದಲಾದ ಮಾರಾಟಗಾರ ವಿತರಿಸಿದ ವಸ್ತುಗಳನ್ನು ಹೊರತುಪಡಿಸಿ, ಈ ವಿತರಣಾ ಸಂಸ್ಥೆಗಳಿಂದ ಬಂದ ಹಡಗು ವಸ್ತುಗಳು ನೇರವಾಗಿ ಟಾರ್ಗೆಟ್ ಕಾರ್ಪೋರೇಷನ್ಗೆ ಹೋಗುತ್ತದೆ. ವಾಲ್-ಮಾರ್ಟ್ ಕೇಂದ್ರವನ್ನು ಹೊರತುಪಡಿಸಿ, ಟಾರ್ಗೆಟ್ ಆಯ್ಕೆ ಮಾಡಿದ ಇತರ ಕಿರಾಣಿ ವಸ್ತುಗಳು ಅವುಗಳ ಸ್ವಂತ ವಿತರಣಾ ಕೇಂದ್ರದಿಂದ ಬಂದಿರುವುದಿಲ್ಲ, ಆದರೆ ಅವು ಟಾರ್ಗೆಟ್ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿದ ಸಂಸ್ಥೆಗಳಿಂದ ಬಂದಿರುತ್ತದೆ.<ref name="rowley" />
ಬಿಡಿ ವಸ್ತುಗಳ ಮಾರಾಟ ಶ್ರೇಣಿಯ ಮೊದಲ ವಿತರಣಾ ಸಂಸ್ಥೆಯು ಮಿನ್ನೆಸೊಟಾದ ಫ್ರೈಡ್ಲಿಯಲ್ಲಿ 1969ರಲ್ಲಿ ಪ್ರಾರಂಭಗೊಂಡಿತು. ಇದು ಗಣಕೀಕೃತ ವಿತರಣಾ ಪದ್ಧತಿಯನ್ನು ಅಳವಡಿಸಿಕೊಂಡಿದೆ ಮತ್ತು ಉತ್ತರೀಯ ವಿತರಣಾ ಸಂಸ್ಥೆಯೆಂದು ಇದನ್ನು ತಿಳಿಯಲಾಗಿತ್ತು. [[ಒಕ್ಲಹೋಮ|ಒಕ್ಲಾಹೋಮ್]] ಮತ್ತು ಟೆಕ್ಸಾಸ್ದಲ್ಲಿ ಗೋದಾಮನ್ನು ವಿಸ್ತರಿಸಿದ ಸಂದರ್ಭದಲ್ಲಿ ಶ್ರೇಣಿ ಪದ್ಧತಿಯು ಹದಿನೇಳು ಗೋದಾಮನ್ನು ಒಳಗೊಂಡಿತ್ತು.<ref name="growth" />
2004 ಆಗಸ್ಟ್ 9 ರಂದು ಟಾರ್ಗೆಟ್ ಸಂಸ್ಥೆಯು ರೇಡಿಯೋ ತರಂಗಾಂತರದ ಸಾಮರ್ಥ್ಯವನ್ನು ಮತ್ತು ಅದರ ಪರಿಣಾಮಗಳನ್ನು ಗುರುತಿಸುವುದಕ್ಕಾಗಿ ಒಂದು ಪ್ರಯೋಗವನ್ನು ಡಲ್ಲಾಸ್/ಫೋರ್ಟ್ ವರ್ತ್ ಮೆಟ್ರೊಫ್ಲೆಕ್ಸ್ನಲ್ಲಿ ಆಯೋಜಿಸುವುದಾಗಿ ಘೋಷಿಸಿತು. ಈ ಪ್ರಯೋಗವು ಒಂದು ವಿತರಣಾ ಕೇಂದ್ರ ಮತ್ತು ಸಮೀಪವಿರುವ ಹತ್ತು ಟಾರ್ಗೆಟ್ ಗೋದಾಮು ಒಳಗೊಂಡಿದೆ. ಇಲ್ಲಿ ಆರ್ಎಫ್ಐಡಿಯು ಲೋಹಪಟ್ಟಿಯ ಗುಪ್ತಸಂಕೆತವನ್ನೊಳಗೊಂಡಿದ್ದು, ತಟ್ಟುಹಲಗೆ ಮತ್ತು ರಟ್ಟುಗಳನ್ನು ವಿತರಣಾ ಕೇಂದ್ರದಿಂದ ಸಾಮಗ್ರಿಗಳ ಪೂರೈಕೆಗೆ ಬಳಸಿದ ಹೆಜ್ಜೆಗುರುತನ್ನು ಪತ್ತೆ ಹಚ್ಚಲು ಮತ್ತು ವಿತರಣಾ ಕೇಂದ್ರದಿಂದ ಗೋದಾಮಿಗೆ ಕಳುಹಿಸಲು ಅನುಕೂಲವಾಗುತ್ತದೆ.<ref>[http://informationweek.com/story/showArticle.jhtml?articleID=26806887 ಟಾರ್ಗೆಟ್ ಮೀಟ್ಸ್ ವಿತ್ ಸಪ್ಲೈಯರ್ಸ್ ಎಬೌಟ್ ಅರ್ಎಫ್ಐಡಿ ಪ್ಲಾನ್ಸ್ ] {{Webarchive|url=https://web.archive.org/web/20051214190444/http://www.informationweek.com/story/showArticle.jhtml?articleID=26806887 |date=2005-12-14 }}, ಇನ್ಫಾರ್ಮೇಶನ್ ವೀಕ್, ಆಗಸ್ಟ್ 10, 2004.</ref> 2009ರಲ್ಲಿ ಆರ್ಎಫ್ಐಡಿಗಳನ್ನು ಡಲ್ಲಾಸ್/ಫೋರ್ಟ್ ವರ್ತ್ ಮೆಟ್ರೊಪ್ಲೆಕ್ಸ್ ಮಳಿಗೆಗಳಿಂದ ಮುಕ್ತಗೊಳಿಸಲಾಯಿತು.
2009ರ ಜನವರಿ 27ರಂದು, ಎರಡನೇ ಅತಿ ಹಳೆಯ ಸಂಸ್ಥೆಗಳಾದ ಮೌಮೆಲ್ಲಿ ಮತ್ತು ಅರ್ಕ್ನ್ಸಾಸ್ನ ವಿತರಣಾ ಸಂಸ್ಥೆಯನ್ನು ಮುಚ್ಚಿರುವುದಾಗಿ ಟಾರ್ಗೆಟ್ ಪ್ರಕಟಿಸಿತು. ಮುಂದಿನ ವಹಿವಾಟನ್ನು ಗಮನದಲ್ಲಿಟ್ಟುಕೊಂಡು ಗುರಿಯನ್ನು ಉಳಿಸಿಕೊಂಡು ಮಾರುಕಟ್ಟೆ ಬೆಲೆ ಕಾಪಾಡಿಕೊಳ್ಳಲು ಈ ಕ್ರಮ ಕೈಗೊಂಡಿರುವುದಾಗಿ ಅದು ಕಾರಣವನ್ನು ನೀಡಿದೆ.<ref>{{Cite web |url=http://investors.target.com/phoenix.zhtml?c=65828&p=irol-newsArticle&ID=1248941&highlight= |title=ಟಾರ್ಗೆಟ್ ಅನೌನ್ಸಸ್ ವರ್ಕ್ಫೊರ್ಸ್ ರಿಡಕ್ಷನ್ |access-date=2021-08-10 |archive-date=2019-03-23 |archive-url=https://web.archive.org/web/20190323090610/http://investors.target.com/phoenix.zhtml?c=65828&p=irol-newsArticle&ID=1248941&highlight= |url-status=dead }}</ref>
====ಆಹಾರ ವಿತರಣಾ ಕೇಂದ್ರಗಳು====
ಸುಪರ್ ಟಾರ್ಗೆಟ್ ಮತ್ತು ಪಿಫ್ರೆಷ್ ಸ್ಟೋರ್ಸ್ಗಳು ಅಗತ್ಯವುಳ್ಳ ರೆಫ್ರಿಜಿರೇಟರ್ ಮತ್ತು ಘನೀಕೃತ ತಾಜಾ ವಸ್ತುಗಳನ್ನು ಉತ್ಪಾದಿಸುತ್ತದೆ. ಆಹಾರ ವಿತರಣಾ ಕೇಂದ್ರದ ಮಾಲೀಕತ್ವವನ್ನು ಸೂಪರ್ವಾಲು ಹೊಂದಿದೆ, ಹಲವಾರು ವರ್ಷಗಳಿಂದ ಇದರ ಸದ್ಬಳಕೆಯನ್ನು ಟಾರ್ಗೆಟ್ ಮಾಡಿಕೊಳುತ್ತಾ ಬಂದಿದೆ. 2003 ಅಕ್ಟೋಬರ್ನಲ್ಲಿ ಅರಿಜೋನಾದ ಫಿನಿಕ್ಸ್ನಲ್ಲಿ ಸುಪರ್ವಾಲುವಿನ ಸೌಕರ್ಯವನ್ನು ಟಾರ್ಗೆಟ್ನ ಸೇವೆಗೆ ಬಳಸಲಾಯಿತು.<ref name="RT">[http://refrigeratedtrans.com/news/Target-planning-FL-food-distribution-center/ ] {{Webarchive|url=https://web.archive.org/web/20090413191255/http://refrigeratedtrans.com/news/Target-planning-FL-food-distribution-center/ |date=2009-04-13 }} ರೆಫ್ರಿಜರೇಟೆಡ್ ಟ್ರಾನ್ಸ್ಫರ್, ಫೆಬ್ರವರಿ 1, 2007, “ಟಾರ್ಗೆಟ್ ಏಮ್ಸ್ ಫಾರ್ ಎಫ್ಎಲ್ ಫುಡ್ ಡಿಸ್ಟ್ರಿಬ್ಯೂಶನ್ ಸೆಂಟರ್”</ref> ಇದೇ ಬದಲಾವಣೆಯನ್ನು ಫೋರ್ಟ್ ವರ್ಥ್, ಟೆಕ್ಸಾಸ್ನ ಸುಪರ್ವಾಲು ಕೇಂದ್ರದಲ್ಲಿ ಅನುಷ್ಠಾನಕ್ಕೆ ತರಲಾಯಿತು.<ref name="TARGET">[http://pressroom.target.com/pr/news/target-stores/target-distribution-centers.aspx ] {{Webarchive|url=https://web.archive.org/web/20090904083346/http://pressroom.target.com/pr/news/target-stores/target-distribution-centers.aspx |date=2009-09-04 }} ಟಾರ್ಗೆಟ್ ಸ್ಟೋರ್ಸ್, ಟಾರ್ಗೆಟ್ ಡಿಸ್ಟ್ರಿಬ್ಯೂಶನ್ ಸೆಂಟರ್</ref> ಟಾರ್ಗೆಟ್, ಫ್ಲೋರಿಡಾದ ಲೇಕ್ ನಗರದಲ್ಲಿ ಒಂದು ಹೊಸ ವಿತರಣಾ ಕೇಂದ್ರವನ್ನು ನಿರ್ಮಾಣ ಮಾಡಿತು, ಫ್ಲೋರಿಡಾದಿಂ ಉತ್ತರ ಮತ್ತು ಪೂರ್ವ ಭಾಗಗಳಿಗೆ ಇದರಿಂದ ವಿತರಣೆ ಮಾಡಲಾಗುತ್ತಿತ್ತು, ಆದರೆ ಇದನ್ನು ಸುಪರ್ವಾಲು ಕಾರ್ಯರೂಪಕ್ಕೆ ತರುತ್ತಿತ್ತು.<ref name="RT" /> ಐಯೊವಾ ಫಾಲ್ಸ್ನ ಸೆಡಾರ್ನಲ್ಲಿ 4ನೇ ಕೇಂದ್ರವನ್ನು ಆಗಸ್ಟ್ 2009ರಲ್ಲಿ ಪ್ರಾರಂಭಿಸುವುದಾಗಿ ಬಿಂಬಿಸಿತು.<ref name="TARGET" /> ಬೇರೆ ರೀಟೈಲ್ ವ್ಯಾಪಾರ ಮಳಿಗೆಯ ಮಾಲೀಕತ್ವವನ್ನು ಸುಪರ್ವಾಲು ಹೊಂದಿದ್ದು ಈಗಲೂ ಬೇರೆ ಪ್ರದೇಶಗಳಲ್ಲಿ ಇದನ್ನು ಬಳಸಲಾಗುತ್ತಿದೆ, ಆದರೆ ಗುರಿ ಯೋಜನೆಯು ಮುಂದಿನ ಕೆಲ ವರ್ಷಗಳಲ್ಲಿ ಬದಲಾಗುತ್ತದೆ.<ref name="RT" /> ಕೊಲೋರಾಡೊದಲ್ಲಿ ಮಳಿಗೆಗಳು ''ಫ್ರೆಶ್ ಪ್ಯಾಕ್ ಪ್ರೊಡ್ಯೂಸ್ ಇಂಕ್.'' ಡೆನ್ ವರ್ ಕೊಲೋರಾಡೊ ಮೂಲಕ ಸೇವೆ ಸಲ್ಲಿಸುತ್ತವೆ.<ref name="rowley" />
==== ಆಮದು ಉಗ್ರಾಣ ಮಳಿಗೆಗಳು====
ಕಂಪನಿಯು ಸಮುದ್ರಯಾನದ ಉತ್ಪಾದಕರು ಮತ್ತು ವಿತರಕರಿಂದ ಹಡಗು ಸರಕುಗಳನ್ನು ಪಡೆಯುವಾಗ ನಾಲ್ಕು ಸೌಲಭ್ಯಗಳ ಕಾರ್ಯ ನಿರ್ವಹಿಸುತ್ತದೆ. ಅವುಗಳು ರಿಯಾಲ್ಟೊ, ಕ್ಯಾಲಿಫೋರ್ನಿಯಾ; ಸವನ್ನಾ, ಜಾರ್ಜಿಯಾ; ಲೇಸಿ, ವಾಷಿಂಗ್ಟನ್; ಮತ್ತು ಸಫೋಕ್, ವರ್ಜೀನಿಯಾ ಸಮೀಪದ ಬಂದರುಗಳಲ್ಲಿ ಸ್ತಾಪಿತಗೊಂಡಿವೆ.
ಮರ್ಚಂಡೈಸ್ ಇದು ಪ್ರಾದೇಶಿಕ ವಿತರಣಾ ಕೇಂದ್ರದಿಂದ ನೇರವಾಗಿ ಪಡೆಯುತ್ತದೆ.<ref name="TARGET" />
====ಪೂರೈಕಾ ಕೇಂದ್ರ====
ಅಂತರಜಾಲ ಮಾರಾಟವು ಟಾರ್ಗೆಟ್ ಡೈರೆಕ್ಟ್ ಡಿವಿಷನ್ದಿಂದ ಆಗುತ್ತದೆ, ಇದನ್ನು ಟಾರ್ಗೆಟ್.ಕಾಮ್ ವೈಬ್ಸೈಟ್ನಿಂದ ಕಾರ್ಯನಿರ್ವಹಿಸಲಾಗುತ್ತದೆ, ಇವುಗಳ ಕಾರ್ಯ ಚಟುವಟಿಕೆಯ ಸೌಕರ್ಯವು ಮಿನ್ನೆಸೊಟಾದ ವುಡ್ಬರ್ರಿಗಳಲ್ಲಿ ಗಾರ್ಜಿಯಾದ ಸವನ್ನಾ ಮತ್ತು ಇತರ ಮಾರಾಟಗಾರರ ಕೆಲವು ಬೆಂಬಲದಿಂದ ಸಾಧ್ಯವಾಗುತ್ತದೆ. 2009 ರಲ್ಲಿ ಹೊಸ ಕೇಂದ್ರಗಳ ಪಟ್ಟಿಯನ್ನು ಕ್ಯಾಲಿಫೋರ್ನಿಯಾದ ಒಂಟಾರಿಯೋ ಮತ್ತು ಅರಿಜೋನಾದ ಟಕ್ಸಾನ್ಗಳಲ್ಲಿ ಬಿಡುಗಡೆ ಮಾಡಲಾಯಿತು.<ref name="TARGET" />
==ವ್ಯತ್ಯಾಸಗಳು==
[[File:targetinterior.JPG|thumb|ವಿಶಿಷ್ಟವಾದ ಟಾರ್ಗೆಟ್ ಸ್ಟೋರ್ನ ಒಳಾಂಗಂಣ]]
ಟಾರ್ಗೆಟ್ ಕಾರ್ಪೋರೇಷನ್ ನೇರವಾಗಿ ರಿಯಾಯಿತಿ ಚಿಲ್ಲರೆ ವ್ಯಾಪಾರಿಗಳ ವಿರುದ್ಧ ಮುಖ್ಯವಾಗಿ ವಾಲ್-ಮಾರ್ಟ್ ಮತ್ತು ಕೆಮಾರ್ಟ್ ವಿರುದ್ಧ ಪೈಪೋಟಿ ನಡೆಸುತ್ತದೆ. ಇದು 1962ರಿಂದ ಪ್ರಾರಂಭಗೊಳ್ಳುತ್ತಾ ಬಂದಿದ್ದು, ಇದು ಗೋದಾಮಿನಲ್ಲಿ ಉದ್ದೇಶಪೂರ್ವಕವಾಗಿ ವ್ಯತ್ಯಾಸವನ್ನು ಮಾಡಿ ತನ್ನ ಪ್ರತಿಸ್ಪರ್ಧಿಗಳು ನಂಬಿದ್ದ ಹೆಚ್ಚಿನ ದರ ಕಲ್ಪನೆಯನ್ನು ಬದಲಾಯಿಸುವ ಸಲುವಾಗಿ ವಾಣಿಜ್ಯ ಸರಕನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿತು, ಇದು ಕಡಿಮೆ ಬೆಲೆ ಸರಕುಗಳಿಂದ ಸಾಂಪ್ರದಾಯಿಕ ಪದ್ಥತಿಯನ್ನು ವಿರೋಧಿಸಿತು. ಡೇಟನ್ ಸಹೋದರರಲ್ಲಿ ಒಬ್ಬರಾದ ಡೌಗ್ಲಾಸ್ ಜೆ. ಡೇಟನ್ ಎಂಬುವರು ಜಾನ್ ಜೈಸಿಸ್ ನ ವಿಚಾರವನ್ನು ವಿವರಿಸುತ್ತಾನೆ.
{{cquote|"We will offer high-quality merchandise at low margins, because we are cutting expenses. We would much rather do this than trumpet dramatic price cuts on cheap merchandise."<ref name=growth/>}}
ಇದರ ಪರಿಣಾಮ ಟಾರ್ಗೆಟ್ ಗೋದಾಮು ಯುವಕರು ಮತ್ತು ಶಿಕ್ಷಣವಂತರು ಹಾಗೂ ಶ್ರೀಮಂತ ಗ್ರಾಹಕರನ್ನು ಪ್ರತಿಸ್ಪರ್ಧಿಗಳಿಂದ ತನ್ನತ್ತ ಸೆಳೆಯುವಂತೆ ನೋಡಿಕೊಳ್ಳುತ್ತದೆ. ಪ್ರಸ್ತುತ ಮಧ್ಯವರ್ತಿ ಟಾರ್ಗೆಟ್ ಅಂಗಡಿಕಾರರು 41 ವರ್ಷಗಳಿಂದ ಇದ್ದು, ಇದು ಎಲ್ಲ ದೊಡ್ಡ ದೊಡ್ಡ ಚಿಲ್ಲರೆ ವ್ಯಾಪಾರಿಗಳಿಗಿಂತ ಚಿಕ್ಕದಾಗಿದ್ದು ಟಾರ್ಗೆಟ್ ಕಂಪನಿಯು ನೇರವಾಗಿ ಅವುಗಳ ವಿರುದ್ಧ ಪೈಪೋಟಿ ನಡೆಸುತ್ತಿದೆ. ಟಾರ್ಗೆಟ್ ಗ್ರಾಹಕರ ಮನೆಯ ಸರಾಸರಿ ಆದಾಯವು ಸುಮಾರು 63000 [[ಸಂಯುಕ್ತ ಸಂಸ್ಥಾನದ ಡಾಲರ್|USD]] ಆಗಿರುತ್ತದೆ, ಟಾರ್ಗೆಟ್ನ ಗ್ರಾಹಕರಲ್ಲಿ ಸುಮಾರು ಶೇಕಡಾ 76 ರಷ್ಟು ಸ್ತ್ರೀಯರು ಇದ್ದು, ಅವರಲ್ಲಿ 45 ಪ್ರತಿಶತಕ್ಕಿಂತ ಹೆಚ್ಚು ಸ್ತ್ರೀಯರು ಮಕ್ಕಳನ್ನು ಹೊಂದಿರುತ್ತಾರೆ. ಸುಮಾರು 80 ಪ್ರತಿಶತದಷ್ಟು ಜನರು ಕಾಲೇಜಿಗೆ ಹೋಗಿರುವವರಾಗಿದ್ದು, ಅವರಲ್ಲಿ ಶೇಕಡಾ 48ರಷ್ಟು ಮಂದಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದವರಾಗಿದ್ದಾರೆ.<ref name="community" /><ref name="factcard" /> ಟಾರ್ಗೆಟ್ನ "ಬುಲ್ಸ್ಐ" ಲೊಗೊ ವನ್ನು ಶೇಕಡಾ 97 ರಷ್ಟು ಅಮೆರಿಕಾ ಗ್ರಾಹಕರು ಗುರುತಿಸುತ್ತಾರೆ.
2008ರ ಅಕ್ಟೋಬರ್ ನಲ್ಲಿ ಟಾರ್ಗೆಟ್ ತನ್ನ ಉತ್ಪನ್ನವನ್ನು, ಯಾರು ವಾಲ್ ಮಾರ್ಟ್ ನಂತಹ ರಿಯಾಯಿತಿ ಚಿಲ್ಲರೆ ವ್ಯಾಪರಿಗಳಿಗಿಂತಲೂ ವೆಚ್ಚದಾಯಕ ಎಂದು ತಿಳಿದಿದ್ದರೋ ಅಂಥವರನ್ನು ತನ್ನತ್ತ ಸೆಳೆಯಲು ಯೋಜನೆಯೊಂದನ್ನು ಪ್ರಕಟಿಸಿತು. ಕಂಪನಿಯು ಬೇಗೆ ಹಾಳಾಗುವ ವಸ್ತುಗಳನ್ನು ದಾಸ್ತಾನುಗೊಳಿಸಲು ಯೋಜಿಸಿ, ವಿವೇಚನೆಗೆ ಸಂಬಂಧಿಸಿದ ವಸ್ತುಗಳ ದಾಸ್ತಾನನ್ನು ಕಡಿಮೆಗೊಳಿಸಿ ಮತ್ತು ಅದರ ಮೂರು ತ್ರೈಮಾಸಿಕದ ಮಾರುಕಟ್ಟೆ ಆಯವ್ಯಯದಲ್ಲಿನ ಖರ್ಚನ್ನು ಜಾಹೀರಾತಿನಲ್ಲಿ ಮಾರುಕಟ್ಟೆಯ ಮೌಲ್ಯಕ್ಕೆ ಪ್ರಾಮುಖ್ಯತೆ ಕೊಟ್ಟು ಮತ್ತು ಉತ್ಪನ್ನಗಳ ನಿಗದಿತ ಬೆಲೆಯನ್ನು ಜಾಹಿರಾತಿನಲ್ಲಿ ತೋರಿಸಿತು. ಟಾರ್ಗೆಟ್ ಕಂಪನಿಯು ತನ್ನ ಗೋದಾಮಿನ ಜಾಲವನ್ನು ಮಂದಗತಿಯಲ್ಲಿ ವಿಸ್ತರಿಸಲು ನಿರ್ಧರಿಸಿ ವರ್ಷಕ್ಕೆ 100 ಸ್ಟೋರ್ಗಳಿಗೆ ಬದಲು 70 ಸ್ಟೋರ್ಗಳಿಗೆ ಸೀಮಿತಗೊಳಿಸಲು ಯೋಜಿಸಿತು.<ref>[http://blog.marketingdoctor.tv/2008/10/24/value-for-money-is-back--target-does-marketing-right.aspx (2008-10-23)." ] {{Webarchive|url=https://web.archive.org/web/20090112221355/http://blog.marketingdoctor.tv/2008/10/24/value-for-money-is-back--target-does-marketing-right.aspx |date=2009-01-12 }}[http://blog.marketingdoctor.tv/2008/10/24/value-for-money-is-back--target-does-marketing-right.aspx ವ್ಯಾಲ್ಯೂ ಫಾರ್ ಮನಿ ಇಸ್ ಬ್ಯಾಕ್– ಟಾರ್ಗೆಟ್ ಡಸ್ ಮಾರ್ಕೇಟಿಂಗ್ ರೈಟ್," ಮಾರ್ಕೆ.] {{Webarchive|url=https://web.archive.org/web/20090112221355/http://blog.marketingdoctor.tv/2008/10/24/value-for-money-is-back--target-does-marketing-right.aspx |date=2009-01-12 }}</ref><ref>[http://www.marketwatch.com/news/story/ಟಾರ್ಗೆಟ್ -intensify-value-message-vend/story.aspx?guid={3530B21A-2435-466C-A282-42594139AE9F} (2008-10-23). "ಟಾರ್ಗೆಟ್ to emphasize value, add perishables," Market Watch.]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>[http://www.istockanalyst.com/article/viewarticle+articleid_2802564.html (2008-11-15). ] {{Webarchive|url=https://archive.is/20130104032318/http://www.istockanalyst.com/article/viewarticle+articleid_2802564.html |date=2013-01-04 }}[http://www.istockanalyst.com/article/viewarticle+articleid_2802564.html "ಅರ್ನಿಂಗ್ಸ್ ಪ್ರಿವ್ಯೂ – ಟಾರ್ಗೆಟ್ ಕಾರ್ಪೊರೇಶನ್(NYSE:TGT)," ಐಸ್ಟಾಕ್ಅನಾಲಿಸ್ಟ್.] {{Webarchive|url=https://archive.is/20130104032318/http://www.istockanalyst.com/article/viewarticle+articleid_2802564.html |date=2013-01-04 }}</ref>
ಟಾರ್ಗೆಟ್ ತನ್ನ ಸ್ಟೋರ್ಗಳಲ್ಲಿ ಸಂಗೀತವನ್ನು ಕೇಳಲು ಅವಕಾಶ ನೀಡುವುದಿಲ್ಲ. ಇದು ತನ್ನ ಪಬ್ಲಿಕ್ ಅಡ್ರೆಸ್ ಸಿಸ್ಟಮ್ನ ಮೂಲಕ ತನ್ನ ವಸ್ತುಗಳನ್ನು ಮತ್ತು ಸೇವೆಯನ್ನು ಪ್ರಚಾರ ಮಾಡುವುದಿಲ್ಲ ಟಾರ್ಗೆಟ್, ವಾಲ್ ಮಾರ್ಟ್ ಗಿಂತ ಆಕರ್ಷಕವಾಗಿ ತನ್ನ ಅಂಗಡಿಯನ್ನು ಅಲಂಕರಿಸುತ್ತದೆ ಮತ್ತು ಇತರ ದೊಡ್ಡ ಬಾಕ್ಸ್-ಡಿಪಾರ್ಟ್ಮೆಂಟ್ ಮಳಿಗೆಗಳು ಅಗಲವಾದ ನಡುವಿನ ದಾರಿಯನ್ನು, ಡ್ರಾಪ್ ಸೀಲಿಂಗ್, ಹೆಚ್ಚು ಆಕರ್ಷಕ ಮರ್ಚಂಡೈಸ್ನ ಪ್ರಸಂಟೇಶನ್ಗಳನ್ನು ಮತ್ತು ಕ್ಲೀನರ್ ಫಿಕ್ಚರ್ಗಳನ್ನು ಹೊಂದಿವೆ. ಅದರೊಂದಿಗೆ ಅಂಗಡಿ ವಾತಾವರಣವನ್ನು ರೂಪಿಸಲು ವಿಶೇಷ ಕಾಳಜಿ ವಹಿಸುತ್ತದೆ, ಇದಕ್ಕಾಗಿ ಟಾರ್ಗೆಟ್ ಕಂಪನಿಯು ಜಾಹೀರಾತನ್ನು ಬಲಪಡಿಸಲು ವಿಗ್ರಹ ಮತ್ತು ಗೋಡೆ ಅಥವಾ ಪಟ್ಟಿಗಳನ್ನು ಸಮಕಾಲೀನ ಚಿಹ್ನೆ, ಹಿನ್ನೆಲೆ ಮತ್ತು ವರ್ಣನೆ ಮೂಲಕ ತಯಾರಿಸುತ್ತದೆ, ಇವುಗಳ್ನು ವೆಚ್ಚದಾಯಕ ವಸ್ತುಗಳಿಂದ ಮುದ್ರಿಸಲಾಗುತ್ತದೆ, ಅವುಗಳೆಂದರೆ ಪೇಪರ್, ಸುಕ್ಕಾದ ಮತ್ತು ಸ್ಪಂಜಿನಂತಿರುವ ರಟ್ಟಾಗಿದೆ. ಕೆಲವು ಅಂಗಡಿಗಳು ಮುಖ್ಯವಾಗಿ ದೊಡ್ಡ ವಿಮಾನ ನಿಲ್ದಾಣಗಳ ಸಮೀಪದಲ್ಲಿರುವ ಬುಲ್ಸ್ಐಯನ್ನು ಮೇಲ್ಚಾವಣಿಯಲ್ಲಿ ಎತ್ತರದಲ್ಲಿ ಕಾಣುವ ಹಾಗೆ ಚಿತ್ರಿಸಲಾಗಿದೆ, ಈ ಅಂಗಡಿಗಳು ಇಲ್ಲಿನೋಯಿಸ್ನ ರೋಸ್ ಮಾಂಟ್ನಲ್ಲಿ ಓ ಹರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದ ಮತ್ತು ಮಿನ್ನೆಸೋಟಾದ ರಿಚ್ ಫೀಲ್ಡ್ನ ಪಕ್ಕದ ಮಿನ್ನೆಅಪೊಲಿಸ್-ಸೈಂಟ್.ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಾಣಬಹುದಾಗಿದೆ.<ref>[http://maps.google.com/maps?f=q&hl=en&q=Target+loc:+Rosemont,+Illinois&ie=UTF8&z=18&ll=42.006903,-87.887095&spn=0.00287,0.006748&t=k&om=1 ಗೂಗಲ್ ನಕ್ಷೆಯಿಂದ ಟಾರ್ಗೆಟ್ನ ಮೇಲ್ಚಾವಣಿಯ ನೋಟ.]. ಜನವರಿ 2007ರಂದು ಹಿಂಪಡೆದದ್ದು.</ref>
[[File:ManahawkinTarget.jpg|thumb|right|ನ್ಯೂಜರ್ಸಿಯ ಮಾನಹಾವ್ಕಿನ್ನಲ್ಲಿ 2008ರಲ್ಲಿ ಪ್ರಾರಂಭವಾದ ಹೊಚ್ಚಹೊಸ ಟಾರ್ಗೆಟ್ ಸ್ಟೋನ ವಿನ್ಯಾಸ.]]
ಉತ್ತಮ ಮಟ್ಟದ ನಾಜೂಕಿನ ವಸ್ತು ಮತ್ತು ಬಟ್ಟೆಗಳನ್ನು ಮಾರುವ ಚಿಕ್ಕ ಅಂಗಡಿ ಎನ್ನುವ ರೀತಿಯಲ್ಲಿ ಕೆಲ ಜನರು ತಮಾಷೆಗೆ ಟಾರ್ಗೆಟ್ ಅನ್ನು [[ಫ್ರೆಂಚ್ ಭಾಷೆ|ಫ್ರೆಂಚ್]] ಉಚ್ಚಾರವಾಗಿ {{IPA-en|tɑrˈʒeɪ|}}''ಟಾರ್-'' {{sc|zhay}}ಎಂದು ಹೇಳುವರೆಂದು ಸುಳ್ಳು ಹೆಸರನ್ನು ಸೂಚಿಸಿದ್ದರು. ಈ ಶೈಲಿಯನ್ನು ಓಪ್ರಾ ವಿನ್ಫ್ರೇ ಎಂಬಾಕೆ ಪ್ರಾರಂಭಿಸಿದಳು ಎಂದು ತಪ್ಪಾಗಿ ನಂಬಲಾಗಿದೆ, ಯಾವಾಗ ಆಕೆ ಫ್ರೆಂಚ್ ಉಚ್ಚಾರವನ್ನು ಬಳಸಿದಳೋ ಆಗ ಆ ಅಂಗಡಿಯನ್ನು ಆಕೆಯ ಟಿವಿ ಕಾಯಕ್ರಮದಲ್ಲಿ ಗುರುತಿಸಲಾಯಿತು; ನಿಜವಾಗಿ ಹೇಳಬೇಕೆಂದರೆ ಟಾರ್ಗೆಟ್ ಅಂಗಡಿಯು ಪ್ರಾರಂಭವಾದ ವರ್ಷವಾದ 1962ರ ಮೊದಲೇ ಇದನ್ನು ಪತ್ತೆ ಹಚ್ಚಲಾಗಿತ್ತು, 1980ರಲ್ಲಿ ಟಿವಿಯಲ್ಲಿ ಬಿತ್ತರವಾದ ಸ್ಟಾರಿಂಗ್ ಡಿಡಿ ಕೋನ್ ಎಂಬ ಜಾಹೀರಾತು ಇದನ್ನು ಬಲಪಡಿಸಿತು, ಈ ಉಚ್ಚಾರದಿಂದಾಗಿ ಕೆಲ ಜನರು ಈ ಸಂಸ್ಥೆಯು ಫ್ರೆಂಚ್ ಮಾಲೀಕತ್ವದ್ದು ಎಂದು ಈಗಲೂ ತಪ್ಪಾಗಿ ನಂಬಿದ್ದಾರೆ.<ref name="rowley" />
ಟಾರ್ಗೆಟ್ ಕಂಪನಿಯು ತನ್ನ ಗ್ರಾಹಕರನ್ನು "ಅತಿಥಿಗಳು" ಎಂದು ಕರೆಯುತ್ತದೆ, ಹಾಗೂ ತನ್ನ ನೌಕರರನ್ನು "ತಂಡದ ಸದಸ್ಯರು" ಎಂದೂ, ಮೇಲ್ವಿಚಾರಕರನ್ನು "ತಂಡದ ನಾಯಕರು" ಎಂದೂ ಕರೆಯುತ್ತದೆ. ಜೊತೆಗೆ ವ್ಯವಸ್ಥಾಪಕರನ್ನು ಕಾರ್ಯ ನಿರ್ವಾಹಕ ತಂಡದ ನಾಯಕರು (ETLs), ಅಂಗಡಿ ವ್ಯವಸ್ಥಾಪಕರನ್ನು ಅಂಗಡಿ ತಂಡದ ನಾಯಕರು (STL)} ಎಂದು ಕರೆಯಲಾಗುತ್ತದೆ. ಅದರ ಮೇಲಿನ ಮಟ್ಟದವರನ್ನು "ಚೈನ್ ಆಫ್ ಕಮಾಂಡ್" ಎಂದೂ, ಜಿಲ್ಲಾ ತಂಡದ ನಾಯಕರು (DTL), ಗ್ರೂಪ್ ಟೀಮ್ ಲೀಡರ್ಸ್ (GTL), ಪ್ರಾದೇಶಿಕ ತಂಡದ ನಾಯಕರು (RTL), ಕೆಲಮೊಮ್ಮೆ ಪ್ರಾದೇಶಿಕ ಉಪ ಅಧ್ಯಕ್ಷ ಎಂದೂ ನೇಮಿಸಲಾಗುತ್ತದೆ, ಸಂಸ್ಥೆಗಳ ಮಟ್ಟದ ಕಾರ್ಯನಿರ್ವಾಹಕರು ಎಂದು ಕರೆಯುತ್ತದೆ. 1989ರಲ್ಲಿ ದಿ ವಾಲ್ಟ್ ಡಿಸ್ನಿ ಕಂಪನಿಯಿಂದ ಈ ಪದ್ಧತಿ ಪ್ರಾರಂಭವಾಯಿತು.<ref name="rowley" />
ಟಾರ್ಗೆಟ್ ಅಂಗಡಿಗಳು ಬಂದೂಕನ್ನು ಮಾರಾಟ ಮಾಡುವುದಿಲ್ಲ. 1990ಕ್ಕಿಂತ ಮೊದಲು ಅವರು ನೈಜವಾಗಿ ಕಾಣುವ ಮತ್ತು ಕಡಿಮೆ ಪ್ರಮಾಣದ ಆಟಿಕೆ ಬಂದೂಕನ್ನು ಮಾರುವುದನ್ನು ನಿಲ್ಲಿಸಿತು, ಈ ಆಟಿಕೆ ಬಂದೂಕು ಪ್ರಕಾಶಮಾನವಾದ ಬಣ್ಣವನ್ನು ಹೊಂದಿದ್ದು ಹಾಗೂ ವಿಚಿತ್ರವಾದ ಸ್ವರೂಪವನ್ನು ಪಡೆದಿತ್ತು. ಟಾರ್ಗೆಟ್ ಕಂಪನಿಯು ತಂಬಾಕು ಉತ್ಪನ್ನಗಳನ್ನು ಹಾಗೂ ಸಿಗರೇಟ್ ಗಳನ್ನು 1996ರಿಂದ ಮಾರಾಟ ಮಾಡುವುದಿಲ್ಲ.<ref name="responsibility report">[http://sites.target.com/images/corporate/about/pdfs/corp_responsibility_report_0406.pdf ಕಾರ್ಪೊರೇಟ್ ರೆಸ್ಪಾನ್ಸಿಬಿಲಿಟಿ ರಿಪೋರ್ಟ್ (ಪಿಡಿಎಫ್)] {{Webarchive|url=https://web.archive.org/web/20060716093402/http://sites.target.com/images/corporate/about/pdfs/corp_responsibility_report_0406.pdf |date=2006-07-16 }}, ಟಾರ್ಗೆಟ್ ಕಾರ್ಪೊರೇಶನ್, ಜನವರಿ 31, 2006.</ref>
ಟಾರ್ಗೆಟ್, ಇದು ಹಲವು ವಿಶೇಷ ವ್ಯವಹಾರವನ್ನು ಹಲವಾರು ವಿನ್ಯಾಸಕರರ ಮತ್ತು ಹೆಸರಾಂತ ವ್ಯಕ್ತಿಗಳ ಜೊತೆ ನಡೆಸಿದ್ದು ಮಿಚೆಲ್ ಗ್ರೇವ್ಸ್, ಮೊಸ್ಸಿಮೊ ಗೈನ್ನುಲ್ಲಿ, ಫಿಯೊರುಸ್ಸಿ, ಲಿಜ್ ಲೇಂಜ್ ಮತ್ತು ಕನ್ವರ್ಸ್ ಮುಂತಾದವರೊಂದಿಗೆ ಮಾತುಕತೆ ನಡೆಸಿದೆ. ಅದು ತನ್ನ ಫ್ಯಾಷನ್ ಸಾಧನೆ ಪಟ್ಟಿಯ ಮುಂದಿನ ಬೆಳವಣಿಗೆಗೆ ಸ್ವಂತ ಫ್ಯಾಷನ್ ಫಾರ್ವರ್ಡ್ ಆದ ಗೊ ಇಂಟರ್ನ್ಯಾಶನಲ್ ಲೈನ್ಅನ್ನು ಸೃಷ್ಟಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿತು, ಟಾರ್ಗೆಟ್ ಕಂಪನಿಯು ಪ್ರಖ್ಯಾತ ವಿನ್ಯಾಸಗಾರರು ರಚಿಸಿದ ವಿನ್ಯಾಸವನ್ನು ಕೆಲ ತಿಂಗಳ ಮಟ್ಟಿಗೆ ಎರವಲು ಪಡೆದುಕೊಳ್ಳುತ್ತದೆ. ಟಾರ್ಗೆಟ್, ಮಿಚೆಲ್ ಗ್ರೇವ್ಸ್ ಎಂಬ ವಾಸ್ತುಶಿಲ್ಪಿಯಿಂದ ಎರವಲಾಗಿ ಪಡೆದ ಕಟ್ಟಡ ಕಟ್ಟಲು ಸಹಾಯಕವಾಗುವ ಚೌಕಟ್ಟಿನ ವಿನ್ಯಾಸವನ್ನು ವಾಷಿಂಗ್ಟನ್ ಮೊನ್ಯುಮೆಂಟ್ ಅನ್ನು ಪುನರ್ ನಿರ್ಮಾಣ ಮಾಡಲು ಬಳಸಿತು ಮತ್ತು 6 ಮಿಲಿಯನ್ USD ಮೌಲ್ಯದ ನವೀಕರಣ ಯೋಜನೆ ಸಿದ್ಧಪಡಿಸಿ 1999ರಲ್ಲಿ ಇದರ ಮೊದಲ ವಿನ್ಯಾಸ ರೇಖೆಯ ಉತ್ಪನ್ನವನ್ನು ಪ್ರಚುರಪಡಿಸಿತು, ಮಿಚೆಲ್ ಗ್ರೇವ್ಸ್ ಸಂಗ್ರಹವಾದ ಮನೆಬಳಕೆ ಮತ್ತು ಮನೆ ಅಲಂಕಾರಿಕ ಉತ್ಪನ್ನಗಳನ್ನು ಪ್ರದರ್ಶಿಸಿತು.<ref name="michael_graves">[http://www.findarticles.com/p/articles/mi_m3092/is_1999_Feb_8/ai_53904958 ಇಸ್ ಟಾರ್ಗೆಟ್ ಮೇಕಿಂಗ್ ಎ ಗ್ರೇವ್ಸ್ ಮಿಸ್ಟೇಕ್?] {{Webarchive|url=https://web.archive.org/web/20070312085505/http://www.findarticles.com/p/articles/mi_m3092/is_1999_Feb_8/ai_53904958 |date=2007-03-12 }}, ''ಡಿಸ್ಕೌಂಟ್ ಸ್ಟೋರ್ ನ್ಯೂಸ್'', ಫೆಬ್ರವರಿ 8, 1999.</ref> ವಾಲ್-ಮಾರ್ಟ್ ಮತ್ತು ಕೆಮಾರ್ಟ್ಗಳು ಟಾರ್ಗೆಟ್ ಸಂಸ್ಥೆಯ ಬೆಳವಣಿಗೆಯನ್ನು ಅನುಸರಿಸಿ ಕೆಲ ವಿಶೇಷ ವಿನ್ಯಾಸಗಾರರನ್ನು ತನ್ನ ಅಂಗಡಿಗಳಿಗೆ ಬಳಸಿಕೊಂಡವು. ಟಾರ್ಗೆಟ್ ಸಂಸ್ಥೆಯು ಉತ್ತಮ ಸಂಸ್ಥಾಪಿತ ರಾಷ್ಟ್ರೀಯ ಬ್ರಾಂಡ್ಸ್ ಜೊತೆ ಸಹಭಾಗಿತ್ವ ಹೊಂದಿ ಹೊಸ ಬೇರೆ ಎಲ್ಲೂ ಸಿಗದ ಸಂಗ್ರಹವನ್ನು ನಿರ್ಮಾಣ ಮಾಡುತ್ತಿದೆ. ಇತ್ತೀಚೆಗೆ ಸೋನಿ ಕಂಪನಿಯು ಎಲೆಕ್ಟ್ರಾನಿಕ್ ವಸ್ತುವನ್ನು ಸೋನಿ ಎಲ್ಐವಿ ಎಂಬ ಹೆಸರಿನಲ್ಲಿ ಮಹಿಳೆಯರಿಗಾಗಿ ತಯಾರಿಸಿತು. ಇದರ ಉತ್ಪನ್ನಗಳು ಸಿಡಿ ಪ್ಲೇಯರ್ ಗಳನ್ನು ಹೊಂದಿದ್ದು, ಅದು ಪರ್ಸ್ (ಹಣದ ಚೀಲ)ವನ್ನು ಹೋಲುವ ಹಾಗೆ ತಯಾರಿಸಲಾಗಿತ್ತು. ಮತ್ತು ಈ ಸಿಡಿ ಪ್ಲೇಯರ್ ಅಡುಗೆ ಮನೆಯಲ್ಲಿಯೂ ಕೂಡ ಇಡಬಹುದಾದಂತೆ ನಿರ್ಮಿಸಲಾಗಿತ್ತು. ಮತ್ತೊಂದು ಉದಾಹರಣೆ ಎಂದರೆ ಟಾರ್ಗೆಟ್ ಸಂಸ್ಥೆಯು ಆಹಾರ ಜಾಲದೊಂದಿಗೆ ಡಿವಿಡಿ ಮತ್ತು ಟಿವಿ ಯನ್ನು ಮಾರಲು ವಿಶೇಷ ವ್ಯವಹಾರವನ್ನು ನಡೆಸಿತು. ಇದು ಪ್ರಖ್ಯಾತ ಅಡುಗೆ ಭಟ್ಟರಾದ ರೆಚೆಲ್ ರೇ, ಆಲ್ಟನ್ ಬ್ರೌನ್ ಮತ್ತು ಪೌಲ್ ಡೀನ್ನನ್ನು ಬಿಂಬಿಸಲು ಬಳಸಿಕೊಂಡಿತು. ಜುಲೈ 2006ರಲ್ಲಿ, ಟಾರ್ಗೆಟ್ ಸಂಸ್ಥೆಯು ಆಪಲ್ ಐಪೋಡ್ನ ಎರಡು ಧ್ವನಿಯ ಪಿಂಕ್ ಆವೃತ್ತಿಯನ್ನು ಕಲರ್ ವೇರ್ ಸಂಸ್ಥೆಯೊಂದಿಗೆ ಮಾರಲು ಸಹಭಾಗಿತ್ವವನ್ನು ಪಡೆಯಿತು. ಕೆಲವೊಮ್ಮೆ ಕೆಂಪು ಬಣ್ಣದ ಐಟೆಂಗಳನ್ನು ತಯಾರಿಸುತ್ತದೆ. ಇದು ಟಾರ್ಗೆಟ್ಗಾಗಿಯೇ ಮಾಡಲ್ಪಟ್ಟಿದ್ದಾಗಿರುತ್ತದೆ. 2002ರಲ್ಲಿ ನಿಂಟೆಡೋವು ಕೆಂಪು ಹೊಸ ಆವೃತ್ತಿಯಾದ ಗೇಮ್ ಬಾಯ್ ಅಡ್ವಾನ್ಸ್ (Game Boy Advance) ಉತ್ಪಾದಿಸಿತು. ಇದು ಟಾರ್ಗೆಟ್ನ ಲೋಗೋ ಆಗಿ ಪರದೆಯಲ್ಲಿ ತೋರಿಸಲ್ಪಟ್ಟಿತು.<ref name="gameboyadvance">[http://www.nintendoworldreport.com/newsArt.cfm?artid=8056 ಟಾರ್ಗೆಟ್ ಗೆಟ್ಸ್ ಎಕ್ಲೂಸಿವ್ ನ್ಯೂ ಜಿಬಿಎ ಕಾಲರ್!], ''ನಿಟೆಂಡೊ ವರ್ಲ್ಡ್ ರಿಪೋರ್ಟ್ '',ಬಿಲ್ಲೀ Berghammer, ನವೆಂಬರ್ 25, 2002.</ref>
2005ರಲ್ಲಿ ಐಎಫ್ಸಿಯ ಸಹಭಾಗಿತ್ವದೊಂದಿಗೆ ಟಾರ್ಗೆಟ್ ಸಂಸ್ಥೆಯು ಕೆಲವು ಆಯ್ಕೆ ಮಾಡಲಾದ ಚಲನಚಿತ್ರಗಳನ್ನು ಪ್ರಚಾರ ಮಾಡಲು ಒಪ್ಪಿಕೊಂಡಿತು, ಟಾರ್ಗೆಟ್ ಮಳಿಗೆಗಳು ಮತ್ತು ಐಎಫ್ಸಿಗಳೆರಡರಲ್ಲೂ ಮಂಡೇ ನೈಟ್ಸ್ ಈಸ್ಟರ್ನ್ನಲ್ಲಿ ರಾತ್ರಿ 9:00ಕ್ಕೆ ಪ್ರಚಾರ ನಡೆಯುತ್ತಿತ್ತು.
''ಐಎಫ್ಸಿ ಸಿನಿಮಾ ರೆಡ್'' ಎಂಬುದು ಮೂಲ ಶೀರ್ಷಿಕೆಯಾಗಿದ್ದು, 2007ರಲ್ಲಿ ''ದಿ ಸ್ಪಾಟ್ ಲೈಟ್'' ಎಂಬ ಹೊಸ ಹೆಸರಿನಲ್ಲಿ ಪ್ರಸಾರ ಮಾಡಲಾಯಿತು. ಗೋದಾಮು ಮುಖ್ಯಸ್ಥರು ಇದಕ್ಕೆ ''ಐಎಫ್ಸಿ ಇಂಡೀಸ್'' ಎಂಬ ಶೀರ್ಷಿಕೆಯನ್ನು ಆಯ್ಕೆಮಾಡಿದರು. ಅಂದರೆ ಇಂಡಿಪೆಂಡೆಂಟ್ ಫಿಲ್ಮ್ಸ್ ಚೂಸನ್ ಫಾರ್ ಟಾರ್ಗೆಟ್ ಬೈ ದಿ ಇಂಡಿಪೆಂಡೆಂಟ್ ಫಿಲ್ಮ್ ಚಾನೆಲ್ ಎಂದಾಗುತ್ತದೆ.<ref>[http://findarticles.com/p/articles/mi_hb5057/is_200607/ai_n18406438 ಟಾರ್ಗೆಟ್ ವೆಲ್ಕಮ್ಸ್ ಇಂಡೀಸ್], ಬಿಎನ್ಐಟಿ, ಜುಲೈ 2006.</ref>
=== ಉಡುಗೊರೆ ಕಾರ್ಡ್ಗಳು===
ಟಾರ್ಗೆಟ್ ಉಡುಗೊರೆ ಗಿಫ್ಟ್ಕಾರ್ಡ್ ಚಿಲ್ಲರೆ ವ್ಯಾಪಾರದ ವಿಭಾಗಗಳು ವ್ಯಾಲ್ಯೂ ಕಾರ್ಡ್ ಅಥವಾ ಉಡುಗೊರೆ ಕಾರ್ಡ್ ಅನ್ನು ದಾಸ್ತಾನು ಮಾಡಿರುತ್ತವೆ. ಸಂಯುಕ್ತ ರಾಷ್ಟ್ರಗಳಲ್ಲಿ ಇತರೆ ಚಿಲ್ಲರೆ ವ್ಯಾಪಾರಿಗಳಿಗಿಂತ ಟಾರ್ಗೆಟ್ ಹೆಚ್ಚು ಉಡುಗೊರೆ ಕಾರ್ಡ್ ಗಳನ್ನು ಮಾರಾಟ ಮಾಡುತ್ತದೆ. ಮತ್ತು ವಿಶ್ವದಲ್ಲೇ ಡಾಲರ್ಗಳಲ್ಲಿ ಹಾಗೂ ಯುನಿಟ್ಗಳಲ್ಲಿ ಅತಿ ಹೆಚ್ಚು ಮಾರಾಟ ಮಾಡುವ ಸಂಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದಿದೆ.<ref>[http://www.secinfo.com/d11MXs.112p2.d.htm ಟಾರ್ಗೆಟ್ ಕಾರ್ಪೊರೇಶನ್ಸ್ ಥರ್ಡ್ ಕ್ವಾರ್ಟರ್ ಅರ್ನಿಂಗ್ಸ್ ರಿಲೀಸ್ ಕಾನ್ಫರೆನ್ಸ್ ಕಾಲ್ ] {{Webarchive|url=https://web.archive.org/web/20100312225146/http://www.secinfo.com/d11MXs.112p2.d.htm |date=2010-03-12 }}, ''ಸೆಕ್ಯೂರಿಟಿ ಇನ್ಫಾರ್ಮೇಶನ್ ಫ್ರಂ ದ ಎಸ್ಇಸಿ ಐಡಿಜಿಎಆರ್ ಡಾಟಾಬೇಸ್ '', ನವೆಂಬರ್ 11, 2004.</ref> ಇದಕ್ಕೆ ಸರಿಸಾಟಿ ಇಲ್ಲದ ಹಾಗೆ ವಿನ್ಯಾಸವನ್ನು ಮಾಡಿ ಟಾರ್ಗೆಟ್ನ ಈ ಕಾರ್ಡ್ ಗಳು ಹೆಚ್ಚಿಗೆ ಮಾರಾಟವಾಗಲು ತನ್ನ ಕೊಡುಗೆ ನೀಡಿದೆ. ಜೊತೆಗೆ ಟಾರ್ಗೆಟ್ ತಂತ್ರಕ್ಕೆ ಕೊನೆಯಿಲ್ಲದ ದಿನಾಂಕ ಅಥವಾ ಸೇವಾ ಶುಲ್ಕ ಎಂಬುದು ಇಲ್ಲ.<ref>{{cite web |url=http://www.target.com/b/ref=sc_iw_l_0/?node=1232828011 |title=About GiftCards : GiftCards |publisher=Target |date= |accessdate=2010-02-21 |archive-date=2010-02-19 |archive-url=https://web.archive.org/web/20100219040433/http://www.target.com/b/ref=sc_iw_l_0/?node=1232828011 |url-status=dead }}</ref> ಹಿಂದಿನ ಮತ್ತು ಪ್ರಸ್ತುತದ ವಿನ್ಯಾಸಗಳನ್ನು ಕಾರ್ಡ್ನ ಎರಡೂ ಕಡೆಗಳಲ್ಲಿ ಉಪಯೋಗಿಸಬಹುದಾದ ವಿನ್ಯಾಸವು "ಸ್ಕ್ರಾಚ್ ಮತ್ತು ಸ್ನಿಫ್" ([[ಕ್ರಿಸ್ಮಸ್|ಕ್ರಿಸ್ಮಸ್]] ಕಾಲದಲ್ಲಿ ತಯಾರಿಸುವ ಚಾಕಲೇಟ್), ಕತ್ತಲಲ್ಲಿ ಪ್ರಕಾಶಿಸುವ, ಎಲ್ಇಡಿ ಲೈಟ್-ಅಪ್, ಉಡುಗೊರೆ ಕಾರ್ಡ್ನ ತುದಿಯಲ್ಲಿ ಗಾಳಿ ಗುಳ್ಳೆ ಇರುತ್ತದೆ, ಈ ಉಡುಗೊರೆ ಕಾರ್ಡ್ ಸಿಡಿ-ರಾಮ್ನ ಕಾರ್ಯವನ್ನು ನಿರ್ವಹಿಸುತ್ತದೆ ಮತ್ತು ಈ ಉಡುಗೊರೆ ಕಾರ್ಡ್ ವನ್ನು ಕಳಿಸುವವರು ಇದರಲ್ಲಿ ತಮ್ಮ ಧ್ವನಿಯನ್ನು ಮುದ್ರಿಸಿ (ರೆಕಾರ್ಡ್ ಮಾಡಿ) ಸಂದೇಶ ಕಳುಹಿಸುವ ಅವಕಾಶವನ್ನೂ ಒಳಗೊಂಡಿದೆ. ಈ ರೀತಿಯಾಗಿ ಇದನ್ನು ವಿನ್ಯಾಸ ಮಾಡಲಾಗುತ್ತದೆ. ಇತ್ತೀಚೆಗೆ ಪರಿಸರಸ್ನೇಹಿ ಜೋಳದಿಂದ ತಯಾರಿಸಿದ ಜೈವಿಕಪ್ಲಾಸ್ಟಿಕ್ನಿಂದ ಉಡುಗೊರೆ ಕಾರ್ಡ್ ಗಳನ್ನು ತಯಾರಿಸಿತು.<ref>[http://www.treehugger.com/files/2006/01/targets_bioplas.php ಟಾರ್ಗೆಟ್ಸ್ ಬಯೋಪ್ಲಾಸ್ಟಿಕ್ ಉಡುಗೊರೆ ಕಾರ್ಡ್ ], ಟ್ರೀಹಗ್ಗರ್, ಜನವರಿ 31, 2006.</ref> ಟಾರ್ಗೆಟ್ ಹೊಸ ಎಮ್ಪಿ3 ಪ್ಲೇಯರ್ ಗಿಫ್ಟ್ಕಾರ್ಡ ಅನ್ನು 2006ರ ರಜಾ ಸಮಯದಲ್ಲಿ ಬಿಡುಗಡೆ ಮಾಡಿತು. ಇದು 12 ಹಾಡುಗಳನ್ನು ಹೊಂದಿರುವ ಇದು ಕನಿಷ್ಠ $50 ಪ್ರಾರಂಭಿಕ ಬೆಲೆಯನ್ನು ಹೊಂದಿತ್ತು.
2010 ಜನವರಿ ಪ್ರಾರಂಭದಲ್ಲಿ ಟಾರ್ಗೆಟ್ ಅಂಗಡಿಗಳು ಮೊಬೈಲ್ ಉಡುಗೊರೆ ಕಾರ್ಡ್ಗಳನ್ನು ಹೊರ ತಂದಿತು. ಈ ಉಡುಗೊರೆ ಕಾರ್ಡ್ ಅನ್ನು ವೆಬ್ ಹೊಂದಿರುವ ಮೊಬೈಲ್ ಫೋನ್ ಮೂಲಕ ಯಾರು ಬೇಕಾದರೂ ಉಡುಗೊರೆ ಕಾರ್ಡ್ನ (ಬಾರ್ ಕೋಡ್) ಗುಪ್ತಸಂಖ್ಯೆಯನ್ನು ಅಂತರಜಾಲದಲ್ಲಿ ನಮೂದಿಸಿ ಕಾರ್ಡ್ ಅನ್ನು ಪಡೆಯಬಹುದಾಗಿದೆ. ಕಂಪ್ಯೂಟರ್ನ ಡಾಟಾ ವ್ಯೂಹದ ಗುಪ್ತ ಸಂಖ್ಯೆಯನ್ನು ಟಾರ್ಗೆಟ್ ಪಿಓಎಸ್ನ ಯಾವುದೇ ಫಿಸಿಕಲ್ ಕಾರ್ಡ್ ಬಾರ್ ಕೋಡ್ ಮೂಲಕ ಸ್ಕ್ಯಾನ್ ಮಾಡಬಹುದಾಗಿದೆ. ಮತ್ತು ಮೊಬೈಲ್ ಫೋನ್ ಮೂಲಕ ಗಿಫ್ಟ್ ಕೊಡುವ ಅನುಕೂಲ ಇದರಲ್ಲಿ ಲಭ್ಯವಿದೆ.
ಇಂಥ ಕೆಲವೊಂದು ಅಸಾಧಾರಣ ವಿನ್ಯಾಸಗಳ ಏಕಸ್ವಾಮ್ಯವನ್ನು ಹೊಂದಿದ್ದರು. ಮತ್ತು ಈ ಏಕಸ್ವಾಮ್ಯಗಳ ಕುರಿತು ಟಾರ್ಗೆಟ್ ಬ್ರ್ಯಾಂಡ್ಗಳ ಉಪವಿಭಾಗ ಕಾರ್ಯನಿರ್ವಹಿಸುತ್ತಿತ್ತು. ಉದಾಹರಣೆಗೆ, ಕೆಲವು ಅಂಥವ ಟಾರ್ಗೆಟ್ ಬ್ರಾಂಡ್ ನ ಉಡುಗೊರೆ ಕಾರ್ಡ್ಗಳ ಮೇಲ್ಪದರವು ಮರದಿಂದ (ವುಡನ್) ಮಾಡಲ್ಪಟ್ಟಿದೆ. 2005 ರ ಮೇ 24ರಂದು ಸಂಯುಕ್ತ ರಾಷ್ಟ್ರಗಳ ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ ಕಚೇರಿಯು ಯುಎಸ್ ಪೇಟೆಂಟ್ ಡಿ505,450 ಅನ್ನು, ಕ್ರೆಡಿಟ್ ಅಥವಾ ಸ್ಟೋರಡ್ ವ್ಯಾಲ್ಯೂ ಕಾರ್ಡ್ಗಳ ಮೇಲೆ ಮರದ ಪದರ ವಿನ್ಯಾಸ’ ಏಕಸ್ವಾಮ್ಯವನ್ನು ಸಂಶೋಧಿಸಿದ ಎಮಿ ಎಲ್. ಲ್ಯೂವರ್ ಮತ್ತು ಜಾನ್ ಡಿ. ಮೆಹಿವ್ ಅವರಿಗೆ ನೀಡಿತು.<ref>{{US patent|D505,450|US design patent D505,450}}: ಕ್ರೆಡಿಟ್ ಆರ್ ಸ್ಟೋರ್ಡ್ ವ್ಯಾಲ್ಯೂ ಕಾರ್ಡ್ ವಿತ್ ವುಡ್ ಲೇಯರ್, ಯು.ಎಸ್. ಪೇಟೆಂಟ್ & ಟ್ರೇಡ್ಮಾರ್ಕ್ ಆಫೀಸ್.</ref> ಯು.ಎಸ್. ಪೇಟೆಂಟ್ ಸಂಖ್ಯೆ 7004398 ಅನ್ನು, ಮಿಚಲ್ ಆರ್. ಫ್ರಾನ್ಸಿನ್ಸ್ ಮತ್ತು ಬೆರ್ರಿ ಸಿ. ಬ್ರೂಕ್ಸ್ ಅವರಿಗೆ "ಸ್ಟೋರ್ಡ್ ಮೌಲ್ಯ ಕಾರ್ಡ್ ಸಂಯೋಜನೆಯೊಂದಿಗೆ ಸ್ಟೋರ್ಡ್ ಮೌಲ್ಯ ಕಾರ್ಡ್ ವು ಖಾದ್ಯ ಉತ್ಪನ್ನಗಳು ಮತ್ತು ಕವರ್" 2006 ಫೆಬ್ರವರಿ 28ರಂದು ನೀಡಿತು.<ref>{{US patent|7004398}}: ಸ್ಟೋರ್ಡ್-ವ್ಯಾಲ್ಯೂ ಕಾರ್ಡ್ ವಿತ್ ಎಡಿಬಲ್ ಪ್ರಾಡಕ್ಟ್, ಯು.ಎಸ್. ಪೇಟೆಂಟ್ & ಟ್ರೇಡ್ಮಾರ್ಕ್ ಆಫೀಸ್.</ref> ಈ ಎರಡೂ ಏಕಸ್ವಾಮ್ಯಗಳು ಟಾರ್ಗೆಟ್ ಬ್ರ್ಯಾಂಡ್ನ ಉಪವಿಭಾಗಕ್ಕೆ ನಿರ್ವಹಿಸಲು ನೀಡಲಾಗಿತ್ತು.
ಟಾರ್ಗೆಟ್ ಗಿಫ್ಟ್ಕಾರ್ಡ್ಗಳು ಸಂಗ್ರಯಯೋಗ್ಯ ವಸ್ತುಗಳಾಗಿವೆ.
ಮೊದಲು ಬಿಡುಗಡೆ ಮಾಡಿದ ಗಿಫ್ಟ್ಕಾರ್ಡ್ಗಳು $300 ಬೆಲೆಯವಾಗಿದ್ದವು( ಆದರೂ ಅವು ಅಷ್ಟು ಹಣವನ್ನು ಯಾವುದೇ ಹಣವನ್ನು ಪಡೆಯಲಿಲ್ಲ). ಪ್ರತಿ ವರ್ಷವೂ ಟಾರ್ಗೆಟ್ ರಜಾಕಾಲದ ಗಿಫ್ಟ್ಕಾರ್ಡ್ಗಳನ್ನು ಬಿಡುಗಡೆ ಮಾಡುತ್ತದೆ. 2007ರಲ್ಲಿ, ಟಾರ್ಗೆಟ್ನ ರಜಾಕಾಲದ ಗಿಫ್ಟ್ಕಾರ್ಡ್ಗಳು ಫ್ಲಾಷ್ಲೈಟ್, ಮ್ಯೂಸಿಕಲ್ ಗಿಫ್ಟ್ಕಾರ್ಡ್, ಪ್ರಕಾಶಿಸಬಹುದಾದ ಗಿಫ್ಟ್ಕಾರ್ಡ್ ಮತ್ತು ಪರಿಮಳವಿರುವ ಗಿಫ್ಟ್ಕಾರ್ಡ್ಗಳಿಂದ ಮುಕ್ತಾಯಗೊಂಡಿತ್ತು.
===ಕ್ಲಿಯರ್ ಆರ್ಎಕ್ಸ್===
[[File:Target ClearRx.jpg|thumb|ಟಾರ್ಗೆಟ್ ಕ್ಲಿಯರ್Rx ಔಷದದ ಬಾಟಲಿಗಳು.]]
2005ರಲ್ಲಿ ಟಾರ್ಗೆಟ್ ಕಂಪನಿಯು ಪುನರ್ ಬಳಕೆ ಮಾಡಬಹುದಾದ ಮಾಹಿತಿ ಬಾಟಲ್ ಅನ್ನು ಮುಖ್ಯವಾಗಿ ಹೊರತಂದದು ಇದನ್ನು ಕ್ಲಿಯರ್ಆರ್ಎಕ್ಸ್ ಪದ್ಧತಿ ಎಂದು ಕರೆಯಿತು. ಪುನರ್ ನಿರ್ಮಿಸಿದ ಬಾಟಲ್ಗಳು ಬಣ್ಣಗಳಿಂದ ಗುರುತಿಸಲ್ಪಟ್ಟಿದ್ದು, ತೆಳ್ಳಗೆ ಮತ್ತು ಮೇಲ್ಭಾಗದಲ್ಲಿ ತಿರುಚಲ್ಪಟ್ಟು, ಲೇಬಲ್ ಗೆ ಹೆಚ್ಚಿನ ಸ್ಥಳಾವಕಾಶ ನೀಡಲಾಗಿದೆ. ಈ ಪದ್ಧತಿಯ ಏಕಸ್ವಾಮ್ಯವನ್ನು<ref>[http://appft1.uspto.gov/netacgi/nph-Parser?Sect1=PTO1&Sect2=HITOFF&d=PG01&p=1&u=%2Fnetahtml%2FPTO%2Fsrchnum.html&r=1&f=G&l=50&s1=%2220030214129%22.PGNR.&OS=DN/20030214129&RS=DN/20030214129 ಯುಎಸ್ ಪೇಟೆಂಟ್ ಅಪ್ಲಿಕೇಶನ್ 20030214129: ಮೆಡಿಕೇಶನ್ ಪ್ಯಾಕಿಂಗ್ ಆಯ್೦ಡ್ ಲೇಬಲಿಂಗ್ ಸಿಸ್ಟಮ್ ] {{Webarchive|url=https://web.archive.org/web/20160228163408/http://appft1.uspto.gov/netacgi/nph-Parser?Sect1=PTO1&Sect2=HITOFF&d=PG01&p=1&u=%2Fnetahtml%2FPTO%2Fsrchnum.html&r=1&f=G&l=50&s1=%2220030214129%22.PGNR.&OS=DN%2F20030214129&RS=DN%2F20030214129 |date=2016-02-28 }}, ಯು.ಎಸ್. ಪೇಟೆಂಟ್ & ಟ್ರೇಡ್ಮಾರ್ಕ್ ಆಫೀಸ್.</ref> ಡೆಬೊರಾ ಆಡ್ಲರ್ ಎಮ್ಬ ವಿದ್ಯಾರ್ಥಿ ಪಡೆದಿದ್ದು, ಟೈಮ್ಸ್ನ ಒಂದು '''"2005ರ ಅತಿ ವಿಸ್ಮಯಕರ ಸಂಶೋಧನೆ" ''' ಎಂದು ಹೆಸರಿಸಲಾಯಿತು.<ref>[http://www.time.com/time/business/article/0,8599,1129522,00.html ಬೆಸ್ಟ್ ಇನ್ವೆನ್ಷನ್ಸ್ 2005: ಹೆಲ್ತೀ ಆಪ್ಷನ್ಸ್] {{Webarchive|url=https://web.archive.org/web/20070108140316/http://www.time.com/time/business/article/0,8599,1129522,00.html |date=2007-01-08 }}, '''ಟೈಮ್'', ನವೆಂಬರ್ 21, 2005.'' '''</ref>
==ಲೋಕೋಪಕಾರ==
ಟಾರ್ಗೆಟ್ ಕಾರ್ಪೊರೇಶನ್ ಇದು ಸಂಯುಕ್ತ ಸಂಸ್ಥಾನದ ಲೋಕೋಪಕಾರಿ ಕಂಪನಿಗಳಲ್ಲಿ ಒಂದು ಎಂಬ ಸ್ಥಿರವಾದ ಸ್ಥಾನ ಪಡೆದಿದೆ. ಇದು ಫಾರ್ಚೂನ್ ಮೆಗ್ಜೀನ್ನ 2007ರ "ಟಾಪ್ 20 ಮೋಸ್ಟ್ ಅಡ್ಮಯರ್ಡ್ ಕಂಪನೀಸ್" ಗಳಲ್ಲಿ 11ನೇ ರ್ಯಾಂಕ್ ಪಡೆದಿದೆ, ಇದು ಹೆಚ್ಚಾಗಿ ಕಂಪನಿಯ ಡೊನೇಷನ್ ಪ್ರಯತ್ನಗಳಿಗಾಗಿದೆ.<ref>{{cite news | url=http://money.cnn.com/galleries/2008/fortune/0802/gallery.mostadmired_top20.fortune/11.html | work=CNN | title=Target | accessdate=May 24, 2010 | archive-date=ಮಾರ್ಚ್ 10, 2010 | archive-url=https://web.archive.org/web/20100310174031/http://money.cnn.com/galleries/2008/fortune/0802/gallery.mostadmired_top20.fortune/11.html | url-status=dead }}</ref> ''ಫೊರ್ಬ್ಸ್'' ನ ಲೇಖನದ ಪ್ರಕಾರ, ಆದಾಯ ಕೊಡುವ ಸರಾಸರಿಯಲ್ಲಿ ಇದು ಅಮೆರಿಕದ ಅಧಿಕ ಹಣ ಕೊಡುವ ಕಂಪನಿಯಾಗಿದೆ (2.1%).<ref>[https://web.archive.org/web/20060515230306/http://www.forbes.com/business/2005/11/11/charities-corporations-giving-cx_lm_1114charity.html ದ ಮೊಸ್ಟ್ ಚಾರಿಟೆಬಲ್ ಕಂಪನೀಸ್], ''ಫೊರ್ಬ್ಸ್'', ನವೆಂಬರ್ 14, 2005.</ref>
ಟಾರ್ಗೆಟ್ ಇದರ ಟ್ಯಾಕ್ಸ್ ಬೀಳುವುದಕ್ಕಿಂತ ಮೊದಲಿನ ಲಾಭದ ಸುಮಾರು 5 ಪ್ರತಿಶತವನ್ನು ದಾನ ಮಾಡುತ್ತದೆ; ಇದು ನಡೆಸುವ ಸಮುದಾಯಗಳಿಗೆ ಇದು ಒಂದು ವಾರದಲ್ಲಿ $3 ಮಿಲಿಯನ್ ಕೊಡುತ್ತದೆ (ಹಿಂದಿನ ವರ್ಷಗಳಲ್ಲಿ $2 ಮಿಲಿಯನ್ ಇತ್ತು). ಕಾರ್ಡ್ ಹೊಂದಿದವರು ನಿಯೋಜಿಸುವ ಶಾಲೆಗಳಿಗೆ ಸಹ ಇದು ಟಾರ್ಗೆಟ್ ವಿಸಾದಿಂದ ಪ್ರತಿಶತ ಪ್ರಮಾಣವನ್ನು ಕೊಡುತ್ತದೆ. ಇಲ್ಲಿಯವರೆಗೆ ಈ ಯೋಜನೆಯ ಮೂಲಕ [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್]]ನ ಶಾಲೆಗಳಿಗೆ ಸುಮಾರು $150 ಮಿಲಿಯನ್ಗಿಂತ ಹೆಚ್ಚಾಗಿ ಕೊಟ್ಟಿದೆ.
ಟಾರ್ಗೆಟ್ನ ಲೋಕೋಪಕಾರಕ್ಕೆ ಮತ್ತೊಂದು ಸಾಕ್ಷಿಯನ್ನು ಟೆನೆಸ್ಸಿಯ ಮೆಂಪಿಸ್ನಲ್ಲಿನ ಟಾರ್ಗೆಟ್ ಹೌಸ್ ಕಾಂಪ್ಲೆಕ್ಸ್ನ್ನಲ್ಲಿ ಕಾಣಬಹುದು, ನಗರದ ಸೇಂಟ್ ಜುದೆ ಮಕ್ಕಳ ರಿಸರ್ಚ್ ಆಸ್ಕಾರ್ಡ್ಯ ರೋಗಿಗಳ ಪರಿವಾರಗಳಿಗೆ ಒಂದು ದೀರ್ಘ ಕಾಲದ ವಸತಿ ಸೌಲಭ್ಯವನ್ನು ಒದಗಿಸಿದೆ. ಕಾರ್ಪೋರೇಶನ್ $27 ಮಿಲಿಯನ್ಗಿಂತ ಹೆಚ್ಚು ದೇಣಿಗೆಗಳ ನೇತೃತ್ವವಹಿಸಿದೆ, ಸೇಂಟ್ ಜುದೆಯಲ್ಲಿ 90 ದಿನಗಳಿಗಿಂತ ಹೆಚ್ಚು ಉಳಿಯುವ ಅವಶ್ಯಕತೆಯಿರುವ ಪರಿವಾರಗಳಿಗೆ 96 ಸುಸಜ್ಜಿತ ಮನೆಗಳು ದೊರಕುವಂತೆ ಮಾಡಿದೆ.
ಟಾರ್ಗೆಟ್ ತನ್ನ ಆಸ್ತಿಗಳಲ್ಲಿ ಉತ್ತಮವಾದ ಒತ್ತಾಯಪೂರ್ವಕವಲ್ಲದ ನಿಯಮ ಹೊಂದಿದೆ, ಇದು "ಇದರ ಅತಿಥಿಗಳಿಗೆ ವ್ಯಾಕುಲತೆ-ರಹಿತ ಖರೀದಿ ಅನುಭವವನ್ನು" ಒದಗಿಸಲು ಯತ್ನಿಸುತ್ತದೆ.
ಮೊದಲು ಕ್ರಿಸ್ಮಸ್ ರಜಾದಿನಗಳ ಸಮಯದಲ್ಲಿ ಟಾರ್ಗೆಟ್ ಸ್ಟೋರ್ಗಳ ಹೊರಗೆ ಸಾಲ್ವೇಶನ್ ಆರ್ಮಿ ಕೆಂಪು ಕೆಟಲ್ಗಳು ಮತ್ತು ಬೆಲ್-ರಿಂಗರ್ಗಳಿಗೆ ಮಾಡಿದ ನಿಯಮಗಳು ಈ ನಿಯಮಕ್ಕೆ ಅಪವಾದಗಳಾಗಿತ್ತು. ಆದಾಗ್ಯೂ, 2004ರಲ್ಲಿ, ಟಾರ್ಗೆಟ್ನ ಜೊತೆ ಪಾಲುದಾರ ಆಗಲು ಪರ್ಯಾಯ ವಿಧಾನಗಳನ್ನು ಹುಡುಕಲು ಟಾರ್ಗೆಟ್ ಸಂಘಟನೆಗೆ ಹೇಳಿತು. ಟಾರ್ಗೆಟ್ ಇದರ ಗ್ರ್ಯಾಂಟ್ ಪ್ರೊಗ್ರಾಮ್ ಮತ್ತು ಯುನೈಟೆಡ್ ವೇ ಆಫ್ ಅಮೆರಿಕದ (ಸಾಲ್ವೇಶನ್ ಆರ್ಮಿ ಯುನೈಟೆಡ್ ವೇ ಏಕೀಭವನದ ಸದಸ್ಯತ್ವವನ್ನು ಹೊಂದಿದೆ) ಮೂಲಕ ಸ್ಥಳೀಯ ಸಾಲ್ವೇಶನ್ ಆರ್ಮಿಗೆ ದೇಣಿಗೆ ನೀಡುತ್ತದೆ.
2005ರಲ್ಲಿ ಟಾರ್ಗೆಟ್ ಮತ್ತು ದ ಸಾಲ್ವೇಶನ್ ಆರ್ಮಿಗಳು<ref>[http://www.salvationarmyusa.org/usn%5Cwww_usn.nsf/vw-news/A2C8D799DEE5BE74802570B90052D6C7?opendocument ಟಾರ್ಗೆಟ್ ಆಯ್೦ಡ್ ದ ಸಾಲ್ವೇಶನ್ ಆರ್ಮಿ ಅನೌನ್ಸ್ ಪಾರ್ಟನರ್ಶಿಪ್] {{Webarchive|url=https://web.archive.org/web/20060222085916/http://www.salvationarmyusa.org/usn/www_usn.nsf/vw-news/A2C8D799DEE5BE74802570B90052D6C7?opendocument |date=2006-02-22 }}, ದ ಸಾಲ್ವೇಶನ್ ಆರ್ಮಿ, ನವೆಂಬರ್ 14, 2005.</ref> "ದ ಟಾರ್ಗೆಟ್/ಸಾಲ್ವೇಶನ್ ಆರ್ಮಿ ವಿಶ್ ಲಿಸ್ಟ್" ಎನ್ನುವ ಒಂದು ಸಹಯೋಗ ಉದ್ಯಮವನ್ನು ರೂಪಿಸಿದೆ, ಇಲ್ಲಿ ಆನ್ಲೈನ್ ಖರೀದಿದಾರರು ಹರಿಕೇನ್ಗೆ ತತ್ತಾದವರ ಸಂಘಟನೆಗಳಿಗೆ ನವೆಂಬರ್ 25, 2005 ಮತ್ತು ಜನವರಿ 25, 2006ರ ನಡುವೆ ನೇರವಾಗಿ ಟಾರ್ಗೆಟ್.ಕಾಂನಿಂದ ಕೊಳ್ಳುವ ಮೂಲಕ ವಸ್ತುಗಳನ್ನು ದಾನ ಮಾಡಬಹುದು. 2006ರಲ್ಲಿ ಅವು "ದ ಟಾರ್ಗೆಟ್/ಸಾಲ್ವೇಶನ್ ಆರ್ಮಿ ಏಂಜೆಲ್ ಗಿವಿಂಗ್ ಟ್ರೀ" ಎನ್ನುವ ಮತ್ತೊಂದು ಸಹಯೋಗ ಉದ್ಯಮವನ್ನು ರೂಪಿಸಿದರು,<ref>[http://www.salvationarmyusa.org/usn%5Cwww_usn.nsf/vw-news/C243B3583468A6E7852572260057D753?opendocument ಟಾರ್ಗೆಟ್ ಲಾಂಚಸ್ ಮಲ್ಟಿ-ಫಸೆಟೆಡ್ ಕ್ರಿಸ್ಮಸ್ ಪಾರ್ಟ್ನರ್ಶಿಪ್ ವಿತ್ ದ ಸಾಲ್ವೇಶನ್ ಆರ್ಮಿ] {{Webarchive|url=https://web.archive.org/web/20061122191207/http://www.salvationarmyusa.org/usn/www_usn.nsf/vw-news/C243B3583468A6E7852572260057D753?opendocument |date=2006-11-22 }}, ದ ಸಾಲ್ವೇಶನ್ ಆರ್ಮಿ, ನವೆಂಬರ್ 14, 2006.</ref> ಇದು ದ ಸಾಲ್ವೇಶನ್ ಆರ್ಮಿಯ ಏಂಜೆಲ್ ಟ್ರೀ ಕಾರ್ಯಕ್ರಮದ ಆನ್ಲೈನ್ ರೂಪಾಂತರವಾಗಿದೆ;<ref>[http://target.com/salvationarmy ಸಾಲ್ವೇಶನ್ ಆರ್ಮಿ ಗಿವಿಂಗ್ ಟ್ರೀ] {{Webarchive|url=https://web.archive.org/web/20051128031923/http://target.com/salvationarmy |date=2005-11-28 }}, Target.com.</ref> ಇದರ ಜೊತೆಗೆ ಟಾರ್ಗೆಟ್ ಸ್ಟೋರ್ಗಳ ಒಳಗೆ ಹಾರ್ವೆ ಲೆವೀಸ್ ಏಂಜೆಲ್ ಆಭರಣಗಳ ನಿಯಮಿತ ಆವೃತ್ತಿಗಳ ಮಾರಾಟದಿಂದ ದಾನಮಾಡುವ ಪ್ರಕ್ರಿಯೆಯನ್ನು ಮಾಡುವುದು. 2006ರ ಥ್ಯಾಂಕ್ಸ್ಗಿವಿಂಗ್ ಹಾಲಿಡೆ ಸಮಯದಲ್ಲಿ, ಬಹಳ ಕುಟುಂಬಗಳನ್ನು ಬ್ಲ್ಯಾಕ್ ಫ್ರೈಡೆಯ ಬೆಳಗ್ಗಿನ ಖರೀದಿ ವಿನೋದಕ್ಕೆ ಕಳುಹಿಸಲು ಟಾರ್ಗೆಟ್ ಮತ್ತು ಸಾಲ್ವೇಶನ್ ಆರ್ಮಿ ಜಾದುಗಾರ ಡೆವಿಡ್ ಬ್ಲೇನ್ ಜೊತೆಗೂಡಿತು. ಬ್ಲೇನ್ ಅವರ ಕೆಲಸದಲ್ಲಿ ಬ್ಲ್ಯಾಕ್ ಫ್ರೈಡೆಯ ಬೆಳಗ್ಗಿನವರೆಗೆ ನೂಲುವ ಗೈರೊಸ್ಕೋಪ್ನಿಂದ ಹೊರತಾಗಿ ಯಶಸ್ವಿಯಾದರೆ ಬಹಳ ಕುಟುಂಬಗಳು $500 ಖರೀದಿ ಪ್ರಮಾಣಕಾರ್ಡ್ಗಳನ್ನು ಪಡೆಯುತ್ತವೆ. ಈ ಸವಾಲನ್ನು ಬ್ಲೇನ್ ಯಶಸ್ವಿಯಾಗಿ ಪೂರ್ಣಗೊಳಿಸಿದರು.<ref>[http://www.foxnews.com/story/0,2933,231713,00.html ಮಜಿಶಿಯನ್ ಡೇವಿಡ್ ಬ್ಲೈನೆ ಎಂಡ್ಸ್ ಲೇಟೆಸ್ಟ್ ಸ್ಟಂಟ್ ಬೈ ಎಸ್ಕೇಪಿಂಗ್ ಫ್ರಂ ಗೈರೊಸ್ಕೋಪ್ ಇನ್ ಎನ್ವೈಸಿ], FOXNews.com, ನವೆಂಬರ್ 24, 2006.</ref>
ವಿಪತ್ತಿನ ಸಮಯದಲ್ಲಿ ಪರಿಹಾರ ಕಾರ್ಯಗಳಿಗೆ ಟಾರ್ಗೆಟ್ ಒಂದು ಮುಖ್ಯ ದಾನಿಯಾಗಿದೆ. ಟಾರ್ಗೆಟ್ ಸಪ್ಟೆಂಬರ್ 11ರ ಧಾಳಿಯ ಸಮಯದಲ್ಲಿ ಧನ ಮತ್ತು ವಸ್ತುಗಳ ದೇಣಿಗೆಗಳನ್ನು ನೀಡಿತ್ತು; ಇದು ದಕ್ಷಿಣ ಏಷ್ಯಾದ [[೨೦೦೪ ಹಿಂದೂ ಮಹಾಸಾಗರದ ಭೂಕಂಪ|2004ರ ಸುನಾಮಿ]]ಯ ಪರಿಹಾರ ಪ್ರಯತ್ನಗಳಿಗೆ ಹಣದ ಸಹಾಯ ಮಾಡಿತು ಮತ್ತು 2005ರ [[ಕತ್ರಿನಾ ಚಂಡಮಾರುತ|ಹರಿಕೇನ್ ಕತ್ರಿನ]]ದ ಪರಿಣಾಮದಲ್ಲಿ ಅಮೇರಿಕಾದ ರೆಡ್ಕ್ರಾಸ್ಗೆ $1.5 ಮಿಲಿಯನ್ (ಯು.ಎಸ್.) ನ್ನು ದೇಣಿಗೆ ನೀಡಿತು. ಪ್ರಭಾವಕ್ಕೊಳಗಾದ ಪ್ರದೇಶಗಳಲ್ಲಿ ಸಂಘಟನೆಗಳ ಪರಿಹಾರಕ್ಕೆ ಇದರ ಸ್ಟೋರ್ ಆಸ್ತಿಗಳನ್ನು ಕಮಾಂಡ್ ಸೆಂಟರ್ಗಳಂತೆ ಉಪಯೋಗಿಸಲು ಸಹ ಅವಕಾಶ ಮಾಡಿಕೊಟ್ಟಿದೆ. ಇದು ನೀರು ಮತ್ತು ಬಗ್ ಸ್ಪ್ರೇಗಳನ್ನೂ ಸಹ ಒದಗಿಸಿತು.
==ಪರಿಸರೀಯ ದಾಖಲೆ/ಮಾಹಿತಿಗಳು==
ಟಾರ್ಗೆಟ್ ಕಾರ್ಪೊರೇಶನ್ ತನ್ನ ಎಲ್ಲಾ ಮಾರಾಟ ವಸ್ತುಗಳು ಹೊಂದಿರುವ ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಕಡಿಮೆ ಮಾಡಲು ಒಪ್ಪಿಕೊಂಡಿದೆ.<ref name="newswire1">http://www.ens-newswire.com/ens/nov2007/2007-11-12-092.asp {{Webarchive|url=https://web.archive.org/web/20100228132232/http://www.ens-newswire.com/ens/nov2007/2007-11-12-092.asp |date=2010-02-28 }} ಎನ್ವಿರಾನ್ಮೆಂಟ್ ನ್ಯೂಸ್ ಸರ್ವಿಸ್ ನವೆಂಬರ್ 12, 2007. ಮೇ 30, 2007ರಂದು ಪುನರ್ಸಂಪಾದಿಸಲಾಗಿದೆ.</ref> ಪರೀಕ್ಷಕರು ಗೊಂಬೆ,ಊಟದ ಡಬ್ಬಿಗಳು,ಮಕ್ಕಳ ಕೊರಳಪಟ್ಟಿಗಳು,ಆಭರಣಗಳು,ಉದ್ಯಾನದ ಕೊಳವೆ,ಮಿನಿ ಬ್ಲೈಂಡ್ಸ್,ಕ್ರಿಸ್ಮಸ್ ಮರಗಳು,ಮತ್ತು ವಿದ್ಯುಜನಕಗಳಲ್ಲಿ ಸೀಸದ ವಿಷ,ಮತ್ತು ಪ್ತಾಲೆಟ್ಸ್, ಮತ್ತು ದೊಡ್ಡ ಪ್ರಮಾಣದಲ್ಲಿ ಪಿವಿಸಿ ಇರುವುದನ್ನು ಕಂಡುಹಿಡಿದಿದ್ದಾರೆ.<ref name="newswire1" /> ವಿನೈಲ್ ಕ್ಲೊರೈಡ್ ಮಕ್ಕಳು ಮತ್ತು ವಯಸ್ಕರಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ.<ref name="newswire1" /> ಚಿಕಾಗೋ ರಾಜ್ಯದಲ್ಲಿನ ಇಲ್ಲಿನಾಯ್ಸ್ ಮೆಡಿಕಲ್ ಸೆಂಟರ್ ವಿಶ್ವವಿದ್ಯಾಲಯವು ಪಿವಿಸಿ ಹೊಂದಿರುವ ಉತ್ಪನ್ನಗಳನ್ನು ಉಪಯೋಗಿಸಿದ ಜನರು ಅಪಾಯಕಾರಿಯಾದ ವಿಷಯುಕ್ತ ಪ್ತಾಲೆಟ್ಸ್ ಮತ್ತು ಸೀಸಕ್ಕೆ ತೆರೆದುಕೊಳ್ಳುತ್ತಾರೆ,ಕೊನೆಯಲ್ಲಿ ಡಯಾಕ್ಸಿನ್ಗಳ ದೊಡ್ಡ ದಾನಿಗಳಾಗುತ್ತಾರೆ.<ref name="newswire1" /> ಲೋಯಿಸ್ ಗಿಬ್ಸ್, ಆರೋಗ್ಯ ಕೇಂದ್ರದ ಕಾರ್ಯಕಾರಿ ನಿರ್ದೇಶಕ, ಪರಿಸರ ಮತ್ತು ನ್ಯಾಯವಾದಿ ಹೇಳುತ್ತಾರೆ, "ಟಾರ್ಗೆಟ್ ಪಿವಿಸಿ ಮತ್ತು ಸುರಕ್ಷಾ ಬದಲಾವಣೆಗಳನ್ನು ಮಾರ್ಪಾಡುಮಾಡಿ ಅದರಿಂದ ದೂರವಿರುವಿಕೆಯಿಂದ ಒಳ್ಳೆಯ ಕೆಲಸ ಮಾಡಿದ್ದಾರೆ."<ref name="newswire1" /> ಇತರೆ ಕಂಪನಿಗಳಾದ ವಾಲ್-ಮಾತ್,ಮೈಕ್ರೋಸಾಫ್ಟ್, ಜಾನ್ಸನ್ & ಜಾನ್ಸನ್, ನೈಕ್, ಮತ್ತು ಆಯ್ಪಲ್ ಪಿವಿಸಿ ಕಡಿಮೆ ಮಾಡುವುದನ್ನು ಮುಂದೂಡಿದ್ದಾರೆ.<ref name="newswire1" /> ಟಾರ್ಗೆಟ್ ಸ್ಟೋರ್ ತನ್ನ ಸ್ಟೋರ್ ಒಳಗಡೆ ವಸ್ತುಗಳನ್ನು ಮರುಬಳಕೆ ಮಾಡುವಿಕೆಯಿಂದ ಪರಿಸರೀಯ ಅಳತೆ ತೆಗೆದುಕೊಂಡಿದೆ ಮತ್ತು ಮುರಿದ ಹ್ಯಾಂಗರ್ಗಳು,ಕಾರ್ಡ್ ಬೋರ್ಡ್,ಮರುಬಳಕೆ ಮಾಡಬಹುದಾದ ಬ್ಯಾಟರಿಗಳಂತಹ,ಇತರೆ ಮರುಬಳಕೆ ಉತ್ಪನ್ನ ಒಳಗೊಂಡಿದೆ.<ref>[http://sites.target.com/site/en/corporate/page.jsp?contentId=PRD03-001095 ಟಾರ್ಗೆಟ್ ಕಾರ್ಪೊರೇಶನ್ 2006ರ ಪಶಸ್ತಿಗಳು. ] {{Webarchive|url=https://web.archive.org/web/20080418051214/http://sites.target.com/site/en/corporate/page.jsp?contentId=PRD03-001095 |date=2008-04-18 }}[http://sites.target.com/site/en/corporate/page.jsp?contentId=PRD03-001095 ಮೇ 30, 2007ರಂದು ಪುನರ್ಸಂಪಾದಿಸಲಾಗಿದೆ.] {{Webarchive|url=https://web.archive.org/web/20080418051214/http://sites.target.com/site/en/corporate/page.jsp?contentId=PRD03-001095 |date=2008-04-18 }}</ref> ಟಾರ್ಗೆಟ್ ಶಕ್ತಿ-ದಕ್ಷ ಸ್ಟೋರ್ಫ್ರಂಟ್ಗಳ ಶಕ್ತಿ ಬಳಕೆ ಕಡಿಮೆ ಮಾಡಲು ಪ್ರಾರಂಭಿಸಿದೆ,ಮತ್ತು ಮರು ಬಳಕೆ ಯೋಜನೆ ಮೂಲಕ ನಿರುಪಯುಕ್ತತೆ ಕಡಿಮೆ ಮಾಡಿದೆ..<ref>[http://www.practicalecommerce.com/articles/623/Green-Commerce-Is-Good-Commerce/ ಪ್ರಾಕ್ಟಿಕಲ್ ಐಕಾಮರ್ಸ್ 2007. ][http://www.practicalecommerce.com/articles/623/Green-Commerce-Is-Good-Commerce/ ಮೇ 30, 2007ರಂದು ಪುನರ್ಸಂಪಾದಿಸಲಾಗಿದೆ.]</ref> ಹಾಗೆಯೇ, ಯು.ಎಸ್ನಲ್ಲಿರುವ ಎಲ್ಲ ಟಾರ್ಗೆಟ್ ಸ್ಟೋರ್ಗಳು ಮೆಟಲ್ ಫ್ರೇಮ್ಸ್ ಜೊತೆಗೆ ಪ್ಲಾಸ್ಟಿಕ್ ಕಾರ್ಟ್ ಉಪಯೋಗಿಸುತ್ತಿವೆ. 2006-ಮಧ್ಯದಲ್ಲಿ, ಟಾರ್ಗೆಟ್ ಮುಂದುವದು ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಸಿ ಮಾಡಿದ ಹೊಸತಾದ ಕಾರ್ಟ್ ವಿನ್ಯಾಸ ಮಾಡಿ ಪರಿಚಯಿಸಲು ಪ್ರಾರಂಭಿಸಿದೆ. ಇದು ಕೂಡ ಇದರ ಕೈ-ಬಳಕೆ ಬಾಸ್ಕೆಟ್ಳಲ್ಲಿ ಇದೇ ವಿನ್ಯಾಸ ರೂಪಿಸಿದೆ.<ref>{{cite web |title=How To Paint Furniture |url=http://www.plasticsdesign.org/Winners/WinnerDetail.cfm?itemnumber=2783 |website=Home Painted Furniture and Décor {{!}} Plastics Design |date=9 July 2021 |access-date=19 ಆಗಸ್ಟ್ 2010 |archive-date=7 ಸೆಪ್ಟೆಂಬರ್ 2012 |archive-url=https://archive.is/20120907192045/http://www.plasticsdesign.org/Winners/WinnerDetail.cfm?itemnumber=2783 |url-status=dead }}</ref>
2007ರಲ್ಲಿ ಟಾರ್ಗೆಟ್ ತಾನು ಲೀಡ್ ಪ್ರಕಾರ ಹೆಚ್ಚು ಇಳೆ-ಸ್ನೇಹಿ ಆಗುವ ತನ್ನ ಪ್ರಸ್ತುತ ಮತ್ತು ಮುಂಬರುವ ದಿನಗಳ ಯೋಜನೆಗಳ ಬಗ್ಗೆ 13-ಪುಟಗಳ ವರದಿ ಬಿಡುಗಡೆ ಮಾಡಿದೆ. ಇಂತಹ ಪ್ರಯತ್ನ ಸೋರ್ನ ನಿರುಪಯುಕ್ತ ನೀರಿಗಾಗಿ ಮರಳು ಶೋಧಕ ಅಳವಡಿಕೆ ಪದ್ಧತಿಯನ್ನು ಒಳಗೊಂಡಿದೆ. ಮರುಬಳಕೆ ಯೋಜನೆಯು ಉಡುಪಿನ ಹ್ಯಾಂಗರ್ಗಳು,ಮಡಿಕೆ ಬಿದ್ದ ಕಾರ್ಡ್ ಬೋರ್ಡ್,ವಿದ್ಯುಜ್ಜನಕಗಳು,ಶಾಪಿಂಗ್ ಕಾರ್ಟ್ಗಳು,ಶ್ರಿಂಕ್ ವ್ರ್ಯಾಕ್,ನಿರ್ಮಾಣ ನಿರುಪಯುಕ್ತಗಳು,ರತ್ನಗಂಬಳಿಗಳು ಮತ್ತು ಛಾವಣಿ ಟೈಲ್ಸ್ಗಳು,ಮತ್ತು ಮೇಲ್ಛಾವಣಿ ವಸ್ತುಗಳನ್ನು ಗುರಿಯಾಗಿರಿಸಿಕೊಂಡಿದೆ. [[ಒಕ್ಲಹೋಮ|ಒಕ್ಲಹಾಮಾ]]ದಲ್ಲಿನ ಎಲ್ಲಾ ಮಳಿಗೆಗಳು ಒಕ್ಲಹಾಮಾ ಗ್ಯಾಸ್ & ಎಲೆಕ್ಟ್ರಾನಿಕ್ ಜೊತೆ ಭಾಗಿಯಾಗಿ ಸಂಪೂರ್ಣವಾಗಿ ಪವನ ಶಕ್ತಿ ಬಳಸಲು ಟಾರ್ಗೆಟ್ ಮಳಿಗೆಗಳು ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಲು ಆದೇಶಿಸಲಾಗಿದೆ. ದೇಶಾದ್ಯಂತ ಮಳಿಗೆಗಳು ಕೇವಲ ಲೆಡ್ ಮತ್ತು ಫ್ಲೊರೊಸೆಂಟ್ ಲೈಟ್ಗಳು ಮತ್ತು ಕಡಿಮೆ-ಪ್ರವಹಿಸುವ ಶೌಚಾಲಯ ಉಪಯೋಗಿಸಿ 30% ನೀರಿನ ಹಾಳುಮಾಡುವಿಕೆಯನ್ನು ಕಡಿಮೆಮಾಡಲಾಗುತ್ತಿದೆ. ಕೆಲವು ಟಾರ್ಗೆಟ್ ಮಳಿಗೆಗಳು ಛಾವಣಿ ಉದ್ಯಾನ ಅಥವಾ ಹಸಿರು ಛಾವಣಿಗಳನ್ನು ಅಳವಡಿಸಿಕೊಂಡಿವೆ, ಇವು ಅಬ್ಬರದ ನೀರನ್ನು ಮತ್ತು ಮೇಲ್ಮೈಯಲ್ಲಿ ತುಂಬಿಹರಿಯುವಿಕೆಕಡಿಮೆ ಮಾಡಿ ಹೀರಿಕೊಂಡು ತಾಪಮಾನ ಏರಿಳಿತ ಮಿತಗೊಳಿಸುತ್ತದೆ ಮತ್ತು ಹಕ್ಕಿಗಳಿಗೆ ವಾಸಸ್ಥಾನ ಒದಗಿಸುತ್ತದೆ. ಪ್ರಸ್ತುತ ನಾಲ್ಕು ಹಸಿರು-ಛಾವಣಿ ಟಾರ್ಗೆಟ್ ಮಳಿಗೆಗಳು ಚಿಕಾಗೋದಲ್ಲಿವೆ.
ಟಾರ್ಗೆಟ್ ಆರ್ಚರ್ ಫಾರ್ಮ್, ಬರ್ಟ್ಸ್ ಬೀಸ್, ಮತ್ತು ಮೆಥಡ್ ಪ್ರೊಡಕ್ಟ್ಸ್ ಬ್ರ್ಯಾಂಡ್ನಂತಹ 700 ಕ್ಕಿಂತ ಹೆಚ್ಚಿನ ಸಾವಯವ ಮತ್ತು ಪರ್ಯಾಯ ಉತ್ಪನ್ನ ರವಾನಿಸುತ್ತದೆ. ಸಾವಯವ ಹತ್ತಿಯಿಂದ ಮಾಡಿದ ಬಟ್ಟೆಗಳು, ಟಾಕ್ಸಿಕ್-ರಹಿತ ಮಾರ್ಜಕ,ಕಡಿಮೆ-ಶಕ್ತಿಯ ಬೆಳಕುಗಳು ಮತ್ತು ವಿದ್ಯುಜ್ಜನಕಗಳು,ಟಾಕ್ಸಿಕ್-ರಹಿತ ಮತ್ತು ಪ್ರಾಣಿಯೇತರ ಪರ್ರೀಕ್ಷಿಸಿದ ಪ್ರಸಾಧನಗಳು, ಮತ್ತು ಮರು ಬಳಕೆ ವಸ್ತುಗಳಿಂದ ಪೀಠೋಪಕರಣಗಳ ತಯಾರಿಕೆ ಮಾಡಲಾದ ವಸ್ತುಗಳನ್ನು ಕೂಡ ಮಾರಾಟ ಮಾಡುತ್ತಾರೆ. {{As of|2007|6}}, ಟಾರ್ಗೆಟ್ ಎಸೆಯುವ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಮರು ಬಳಕೆ ಮಾಡಬಹುದಾದ ಶಾಪಿಂಗ್ ಚೀಲಗಳನ್ನು ಮಾರಾಟಮಾಡುತ್ತದೆ. ಟಾರ್ಗೆಟ್ ಜೋಳ-ಆಧಾರಿತ ರಾಳ ಉಪಯೋಗಿಸಿ ಉಡುಗೊರೆ ಕಾರ್ಡ್ಗಳನ್ನು ಮಾಡುತ್ತದೆ. ಎಲ್ಲಾ ಮಳಿಗೆಗಳಲ್ಲಿ ಈ ವಸ್ತುಗಳ ಪ್ಯಾಕ್ ಮಾಡುವಿಕೆಯನ್ನು ರೂಪಾಂತರಿಸಿದ ಪೇಪರ್ ಬೋರ್ಡ್/ಕ್ಲಾಮ್ಶೆಲ್ಗಳನ್ನು ಬಳಸಲಾಗುತ್ತಿತ್ತು. ಇದರಿಂದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.<ref>ಟಾರ್ಗೆಟ್ ಕಾರ್ಪೊರೇಶನ್. "ಎನ್ವಿರಾನ್ಮೆಂಟಲ್ ರೆಸ್ಪಾನ್ಸಿಬಿಲಿಟಿ." ಟಾರ್ಗೆಟ್ ಕಾರ್ಪೊರೇಶನ್ ರೆಸ್ಪಾನ್ಸಿಬಿಲಿಟಿ ರಿಪೊರ್ಟ್. ಜೂನ್, 1992. 16 ಏಪ್ರಿಲ್ 2008:ರಂದು ನೋಡಲಾಗಿದೆ:
http://sites.ಟಾರ್ಗೆಟ್{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}.com/images/corporate/about/responsibility_report/responsibility_report_environmental.pdf</ref>
ಎಂಬಿಎಚ್ ಆರ್ಕಿಟೆಕ್ಟ್ಸ್ ಜೊತೆಯ ಸಹಭಾಗಿತ್ವದಲ್ಲಿ, ಟಾರ್ಗೆಟ್ 'ನ ಮೊದಲ "ಹಸಿರು" ಕಟ್ಟಡ 100,000+ ಚದರಡಿ ಟಾರ್ಗೆಟ್ ಮಳಿಗೆ 1995ರಲ್ಲಿ ಪುಲ್ಲರ್ಟನ್, ಕ್ಯಾಲಿಫೋರ್ನಿಯಾದಲ್ಲಿ ಕಟ್ಟಲ್ಪಟ್ಟಿತು. ಇದು ಇಪಿಎ ಎನರ್ಜಿ ಸ್ಟಾರ್ ಶೋಕೇಸ್ನ ಸ್ಕೈಲೈಟ್ನ ಭಾಗವಾಗಿ ಬಳಸಲ್ಪಟ್ಟಿತ್ತು. ಇದು ನೇರವಾದ ಶಕ್ತಿ ಬಳಕೆಯನ್ನು ಶೇಕಡಾ 24% ಕಡಿಮೆ ಮಾಡುತ್ತಿತ್ತು. ಅಲ್ಲದೆ ಐದು ವರ್ಷಗಳ ಖರ್ಚನ್ನು ಹಿಂದೆ ನೀಡುವ ಗುರಿ ಹೊಂದಿತ್ತು.<ref>Dobrovolny, ಪೀಟರ್. ಸಸ್ಟೈನೆಬಿಲಿಟಿ: ಹೈ ಪರ್ಫಾರ್ಮೆನ್ಸ್ ಬಿಲ್ಡಿಂಗ್ ಡೆಲಿವರ್ ಇನ್ಕ್ರೀಸ್ಡ್ ರಿಟೈಲ್ ಸೇಲ್ಸ್.” Seattle.gov.: 17 ಮಾರ್ಚ್ 2008ರಂದು ನೋಡಲಾಗಿದೆ. http://www.ci.seattle.wa.us/light/conserve/sustainability/studies/cv5_ss.htm {{Webarchive|url=https://web.archive.org/web/20050405030406/http://www.ci.seattle.wa.us/light/conserve/sustainability/studies/cv5_ss.htm |date=2005-04-05 }}</ref> ಟಾರ್ಗೆಟ್ ಮತ್ತು ಎಂಬಿಎಚ್ ಆರ್ಕಿಟೆಕ್ಟ್ಸ್ "ಗ್ರೀನ್ಲೈಟ್ ಪಾರ್ಟ್ನರ್/ಆಯ್ಲಿ ಆಫ್ ದ ಇಯರ್ ಅವಾರ್ಡ್" ಪ್ರಶಸ್ತಿ ಗಳಿಸಿದರು.<ref>Brookter, ಕೆರೊಲಿನ್. "ಟಾರ್ಗೆಟ್ ರಿಸೀವ್ಸ್ ನ್ಯಾಶನಲ್ ಎನರ್ಜಿ-ಎಫಿಶಿಯನ್ಸಿ ಅವಾರ್ಡ್; ಐಪಿಎ ಪಾರ್ಟನರ್ಶಿಪ್ಸ್ ಸಿಗ್ನಿಫೈ ಕಮಿಟ್ಮೆಂಟ್ ಟು ಎನ್ಚಿರಾನ್ಮೆಂಟ್ ಆಯ್೦ಡ್ ಕಮ್ಯುನಿಟೀಸ್." ಬಿಸಿನೆಸ್ ವೈರ್. 4 ಜೂನ್ 2008 ರಂದು ನೋಡಲಾಗಿದೆ: 16 ಏಪ್ರಿಲ್ 2008. https://web.archive.org/web/20080508021153/http://findarticles.com/p/articles/mi_m0EIN/is_1996_June_4/ai_18355343</ref>
ಟಾರ್ಗೆಟ್ ಮಾತ್ರ ರಾಷ್ಟ್ರೀಯ ಸಿದ್ಧ ಉಡುಪು ಹ್ಯಾಂಗರ್ನ ಮರುಬಳಕೆ ಯೋಜನೆಯ ಚಿಲ್ಲೆರೆ ವ್ಯಾಪಾರ ಬಳಸಿಕೊಂಡಿದೆ,ನೆಲಭರ್ತಿ ಹೊರಗೆ ಮಿಲಿಯನ್ ಪೌಂಡ್ಗಟ್ಟಲೆ ಲೋಹ ಮತ್ತು ಪ್ಲಾಸ್ಟಿಕ್ ಕಾದಿರಿಸಿದೆ. 2007ರಲ್ಲಿ, ಈ ಯೋಜನೆಯು ನೆಲಭರ್ತಿಗಳಿಂಗೆ ಪ್ರವೇಶವಾಗುವಿಕೆಯಿಂದ 434 ಮಿಲಿಯನ್ ಹ್ಯಾಂಗರ್ ಸಂರಕ್ಷಿಸಲ್ಪಟ್ಟಿದೆ.
ಜೂನ್ 15, 2009ರಂದು,ಕ್ಯಾಲಿಫೋರ್ನಿಯಾ ಆಟಾರ್ನಿ ಜನರಲ್ ಮತ್ತು 20 ಕ್ಯಾಲಿಫೋರ್ನಿಯಾ ಡಿಸ್ಟ್ರಿಕ್ಟ್ ಅಟಾರ್ನಿಗಳು ಅಲಮೆದಾ ಕೌಂಡಿಯಲ್ಲಿ ರಾಜ್ಯಾದ್ಯಂತ ಟಾರ್ಗೆಟ್ ಮಳಿಗೆಗಳು ನೆಲಕ್ಕೆ ಅಕ್ರಮವಾಗಿ ಅಪಾಯಕಾರಿ ನಿರುಪಯುಕ್ತ ವಸ್ತುಗಳನ್ನು ಬಿಸಾಡುತ್ತದೆ ಎಂದು ಆರೋಪಿಸಿ ದಾವೆ ಹಾಕಿದ್ದಾರೆ.<ref>{{cite web |url=http://pressbanner.com/pages/full_story?page_label=opinion_letters&id=2806048-Attorney+general+targets+Target&article-Attorney%20general%20targets%20Target%20=&widget=push&instance=opinion_letters&open |title=Attorney general targets Target |publisher=Press-Banner |date=2009-06-26 |accessdate=2010-02-21 |archive-date=2011-07-15 |archive-url=https://web.archive.org/web/20110715112419/http://pressbanner.com/pages/full_story?page_label=opinion_letters&id=2806048-Attorney+general+targets+Target&article-Attorney%20general%20targets%20Target%20=&widget=push&instance=opinion_letters&open |url-status=dead }}</ref>
ಅಕ್ಟೋಬರ್ 1, 2009ರಂದು ಟಾರ್ಗೆಟ್ ಕಾರ್ಪೊರೇಶನ್ ಸೀಸದ ಬಣ್ಣದ ಮಟ್ಟವು ಕಾಯಿದೆ ಅಂಗೀಕರಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿದ್ದ ವಿವಿಧ ಗೊಂಬೆಗಳ ಆಮದು ಮತ್ತು ಮಾರಾಟ ಮಾಡಿದ್ದಕ್ಕಾಗಿ $600,000 ಸಿವಿಲ್ ದಂಡ ಕೊಡಲು ಒಪ್ಪಿಕೊಂಡಿತು. ಗ್ರಾಹಕ ಉತ್ಪನ್ನ ಸುರಕ್ಷತಾ ನಿಯೋಗವು “ಮೇ 2006 ಮತ್ತು ಆಗಸ್ಟ್ 2007 ರ ಮಧ್ಯೆ ಟಾರ್ಗೆಟ್ ಗೊತ್ತಿದ್ದು ಆಮದು ಮಾಡಿಕೊಂಡಿದೆ ಮತ್ತು ಚೈನಾ-ಮಾಡಿದ ಅಕ್ರಮ ಗೊಂಬೆಗಳನ್ನು ಮಾರಾಟ ಮಾಡಿದೆ ಎಂದು ಹೇಳಿದೆ. ” <ref>[https://news.yahoo.com/s/ap/20091001/ap_on_bi_ge/us_target_lead_toy_penalty_3 ]{{Dead link|date=February 2010}}</ref> ಕೆಲವು ತಿಂಗಳ ನಂತರ 2010 ಫೆಬ್ರವರಿಯಲ್ಲಿ ಇದೇ ತರನಾದ ಸಮಸ್ಯೆ ತಲೆದೋರಿತು, ಟಾರ್ಗೆಟ್ [[ಪ್ರೇಮಿಗಳ ದಿನಾಚರಣೆ|ಪ್ರೇಮಿಗಳ ದಿನ]]ದಂದು ಮನರಂಜನೆಗಾಗಿ ನಿಲ್ಲಿಸಿದ್ದ "ಸಂದೇಶ ಕರಡಿಗಳ"ನ್ನು ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಕಛೇರಿಯ ಮಿನಂತಿಯಿಂದ ತ್ಯಜಿಸಿತು.
12 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಚೈನಾದಲ್ಲಿ ತಯಾರಾಗಿದ್ದ ಕರಡಿಗಳು,ಸಂಯುಕ್ತ ಕಾನೂನಿನ ಅಡಿಯಲ್ಲಿ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಸೀಸ ಒಳಗೊಂಡಿತ್ತು..<ref>{{cite web
|url=http://www.nationalledger.com/ledgerdc/article_272630344.shtml
|title=Target Bears Recall (Photo) "Message Bears" for Valentine's Day Pulled
|work=National Ledger
|date=February 10, 2010
|accessdate=Feb 10, 2010
|archive-date=ಮಾರ್ಚ್ 2, 2010
|archive-url=https://web.archive.org/web/20100302163506/http://www.nationalledger.com/ledgerdc/article_272630344.shtml
|url-status=dead
}}</ref>
== ಟಾರ್ಗೆಟ್ ನ್ಯಾಯಸ್ಥಾನಕ ಸೇವೆಗಳು==
2006ರಲ್ಲಿ ''ದ ವಾಷಿಂಗ್ಟನ್ ಪೋಸ್ಟ್'' ಪ್ರಕಟಪಡಿಸಿದ ಮಾಹಿತಿಯಂತೆ ಟಾರ್ಗೆಟ್ ಸುವ್ಯವಸ್ಥಿತ ಅಪರಾಧದ ನ್ಯಾಯಸ್ಥಾನಕ ಪ್ರಯೋಗಾಲಯಗಳನ್ನು ನಡೆಸುತ್ತಿದೆ, ಇದರಲ್ಲಿ ಒಂದು ಮುಖ್ಯ ಕಛೇರಿಯಲ್ಲಿದೆ ಮತ್ತು ಇನ್ನೊಂದು ಲಾಸ್ ವೆಗಾಸ್ನಲ್ಲಿದೆ.<ref>[http://www.azag.gov/StopMeth/RetailBusinessPerspectiveOnLawEnforcementPartnerships.pdf ಟಾರ್ಗೆಟ್ ಕಾರ್ಪೊರೇಶನ್ ಅಸೆಟ್ಸ್ ಪ್ರೊಟೆಕ್ಷನ್ (ಪಿಡಿಎಫ್)] {{Webarchive|url=https://web.archive.org/web/20070620130430/http://www.azag.gov/StopMeth/RetailBusinessPerspectiveOnLawEnforcementPartnerships.pdf |date=2007-06-20 }}, ಅರಿಜೋನ ಅಟರ್ನಿ ಜನರಲ್ ಅವರ ಕಛೇರಿ</ref> ಇದನ್ನು ಕಂಪನಿಯು ಮೊದಲಿಗೆ ತನ್ನ ಆಂತರಿಕ ಬಳಕೆಗೆ ಸ್ಥಾಪಿಸಿತು, ಅವುಗಳನ್ನು ತನ್ನ ಆವರಣದಲ್ಲಾಗುವ ಕಳ್ಳತನ ಮತ್ತು ಮೋಸ ಮತ್ತಿತರ ಅಪರಾಧ ಕೃತ್ಯಗಳನ್ನು ಕಂಡುಹಿಡಿಯಲು ನಿರ್ಮಿಸಲಾಗಿತ್ತು. ನಂತರ ಕಂಪನಿಯು ಇದನ್ನು ದೇಶದಾದ್ಯಂತ ಕಾನೂನಿನ ಎನ್ಪೋರ್ಸ್ಮೆಂಟ್ ಎಜನ್ಸಿಯ ಸಾರ್ವಜನಿಕ ಸೇವೆಗಳಿಗೆ ಮುಕ್ತಗೊಳಿಸಿತು. ಟಾರ್ಗೆಟ್ನ ನ್ಯಾಯಸ್ಥಾನಕ ಸೇವೆಗಳನ್ನು ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸಸ್, ಬ್ಯೂರೊ ಆಫ್ ಅಲ್ಕೊಹಾಲ್, ಟೊಬ್ಯಕೊ ಆಯ್೦ಡ್ ಫೈರ್ಆರ್ಮ್ಸ್ ಮತ್ತ್ತು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ನಂತಹ ಸಂಯುಕ್ತ ಎಜೆನ್ಸಿಗಳೂ ಸೇರಿದಂತೆ ಸರ್ಕಾರದ ಏಜೆನ್ಸಿಗಳಿಗೆ ಎಲ್ಲಾ ಹಂತಗಳಲ್ಲೂ ಸಹಕಾರ ನೀಡಿತು. ಈ ಪ್ರಯೋಗಾಲಯಗಳು ಲಾ ಎನ್ಫೋರ್ಸ್ಮೆಂಟಿನ ಸಂಪನ್ಮೂಲಗಳಾಗಿ ಬಳಕೆಯಾಗತೊಡಗಿದವು, ಟಾರ್ಗೆಟ್ ಇದರ ಸಹಕಾರವನ್ನು ಘಾತುಕ ಕೃತ್ಯಗಳಿಗೆ ಮಾತ್ರ ಸೀಮಿತಗೊಳಿಸಿತು.<ref name="police_work">[http://www.washingtonpost.com/wp-dyn/content/article/2006/01/28/AR2006012801268.html ರಿಟೈಲರ್ ಟಾರ್ಗೆಟ್ ಬ್ರಾಂಚಸ್ ಔಟ್ ಇನ್ಟು ಪೊಲೀಸ್ ವರ್ಕ್], ''ದ ವಾಶಿಂಗ್ಟನ್ ಪೋಸ್ಟ್'', ಜನವರಿ 29, 2006.</ref><ref>[http://www.cnn.com/CNN/Programs/anderson.cooper.360/blog/2006/02/target-sets-sights-on-hard-to-crack.html ಟಾರ್ಗೆಟ್ ಸೆಟ್ಸ್ ಸೈಟ್ಸ್ ಆನ್ ಹಾರ್ದ್-ಟು-ಕ್ರಾಕ್ ಕೇಸಸ್ ], ಸಿಎನ್ಎನ್, ಫೆಬ್ರವರಿ 9, 2006.</ref>
==ಟೀಕೆ==
ದಿನಗೂಲಿ ಪ್ರಮಾಣೀಕರಣದ ಕೊರತೆ, ಕೂಲಿಕಾರರ ಸಂಘದ ಕೊರತೆ, ಮತ್ತು ಟಾರ್ಗೆಟ್ನ ಕಾರಣದಿಂದಾಗಿ ನಗರಗಳ ಅನಿಯಂತ್ರಿತ ಹರಡಿಕೆ ಆತಂಕಕ್ಕೆ ಕಾರಂಣಗಳಾದ ಪದ್ದತಿಗಳಾಗಿದೆ.<ref>[http://money.cnn.com/2005/04/20/news/fortune500/target_walmart/ ಜಸ್ಟ್ ಕಾಲ್ ಇಟ್ 'ಟೆಫ್ಲಾನ್' ಟಾರ್ಗೆಟ್ ] {{Webarchive|url=https://web.archive.org/web/20110605234647/http://money.cnn.com/2005/04/20/news/fortune500/target_walmart/ |date=2011-06-05 }}, ಸಿಎನ್ಎನ್/ಮನಿ, ಏಪ್ರಿಲ್ 20, 2005.</ref>
ದಿ ನೇಶನ್ ನಿಯತಕಾಲಿಕೆಯಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ''ಸೆಲ್ಲಿಂಗ್ ವಿಮೆನ್ ಶಾರ್ಟ್: ದ ಲ್ಯಾಂಡ್ ಮಾರ್ಕ್ ಬ್ಯಾಟಲ್ ಫಾರ್ ವರ್ಕರ್ಸ್ ರೈಟ್ ಎಟ್ ವಾಲ್-ಮಾರ್ಟ್'' ಪುಸ್ತಕದ ಲೇಖಕರೂ ಆದ ಲಿಜಾ ಫೆದರ್ಸ್ಟೋನ್ ಈ ಕೆಳಗಿನ ಸಂದರ್ಶನವನ್ನು ದಾಖಲಿಸುತ್ತಾರೆ.
{{cquote|"Aesthetically, we all like Target better, but their wages are in many places low or just as low, and they all represent the [[Walmarting|Wal-Martization]] of our economy, which is the exchange of low prices for poor work conditions."<ref>[http://www.stayfreemagazine.org/archives/23/wal-mart-liza-featherstone.html The Trouble with Wal-Mart] {{Webarchive|url=https://web.archive.org/web/20100613001950/http://stayfreemagazine.org/archives/23/wal-mart-liza-featherstone.html |date=2010-06-13 }}, ''Stay Free!'', Fall 2004.</ref>|4=[[Liza Featherstone]]|5=''The Trouble with Wal-Mart: An interview with Liza Featherstone''}}
2004ರಲ್ಲಿ, ಮಳಿಗೆಗಳಲ್ಲಿ ದಣಿಗೆಗಾಗಿ ಕೋರುವುದರಿಂದ ದ ಸಾಲ್ವೇಶನ್ ಆರ್ಮಿಯನ್ನು ನಿಷೇಧಿಸಲು ಕಂಪನಿಯ ನಿರ್ಧರಿಸಿತು, ಇದು ಸಾರ್ವಜನಿಕರಿಂದ ಟೀಕೆಗೊಳಗಾಯಿತು( ಮೇಲಿನ ''ಫಿಲಾಂಥ್ರೋಪಿ '' ವಿಭಾಗವನ್ನು ನೋಡಿ). ಇದಲ್ಲದೆ, ಟಾರ್ಗೆಟ್ ತನ್ನ ಮಳಿಗೆಗಳಿಂದ ಟಾಯ್ಸ್ ಫಾರ್ ಟಾಟ್ಸ್ ಆಟದ ಸಾಮಾನುಗಳನ್ನು ಸಂಗ್ರಹಿಸುವುದನ್ನು ವಿರೋಧಿಸಿತು. ಟಾರ್ಗೆಟ್, ಇನ್ನಿತರರು ದೇಣಿಗೆಯನ್ನು ಕೋರುವುದನ್ನು ಹೆಚ್ಚಿಸುವುದರಿಂದ ದ ಸಾಲ್ವೇಶನ್ ಆರ್ಮಿಯ ನಿಷೇದವನ್ನು ಹೆಚ್ಚುಕಾಲ ಸವರ್ಥಿಸಿಕೊಳ್ಳಲಾಗುವುದಿಲ್ಲವೆಂದು ಹೇಳಿತು.<ref name="USAToday">[http://www.usatoday.com/money/industries/retail/2004-12-06-target-salvation-army_x.htm ಟಾರ್ಗೆಟ್ ಸ್ಟಿಕ್ಸ್ ಟು ಇಟ್ಸ್ ಡಿಸಿಶನ್ ಟು ಬಾರ್ ಸಲ್ವೇಶನ್ ಆರ್ಮಿ ಕೆಟಲ್ಸ್ ]</ref>
2005ರಲ್ಲಿ, ಪ್ಲಾನ್ಡ್ ಪೇರೆಂಟ್ಹುಡ್ ಟಾರ್ಗೆಟ್ನ ಕಾನ್ಸೈನ್ಸ ಕ್ಲಾಸಸ್ಪಾಲಿಸಿಯನ್ನು ವಿರೋಧಿಸಿತು,ಇದು ಸರಿಯಾದ ಸಮಯಕ್ಕೆ ವೈದ್ಯನ-ಲಿಖಿತ ಸಲಹೆಯು ಇನ್ನೊಬ್ಬ ಔಷಧಿ ಮರಾಟಗಾರನಿಂದ ಪೂರೈಸಲ್ಪಟ್ಟಿದೆಯೆಂದು ಖಚಿತಪಡಿಸುವವರೆಗೂ ನೌಕರನು, ಪ್ಲ್ಯಾನ್ ಬಿ ಲೀವನೊಜೆಸ್ಟ್ರೊ,ಔಷಧಿ ಮರಾಟಗಾರರು ತುರ್ತು ಗರ್ಭನಿರೋಧ ವಿನಾಯಿತಿ ಕೊಡುವುದನ್ನು ವಿರೋಧಿಸುವುದಕ್ಕೆ ಅವಕಾಶ ಮಾಡಿಕೊಡುವುದನ್ನು ಒಗೊಳ್ಳುತ್ತದೆ.
ಡಿಫೆಂಡರ್ಸ್ ಆಫ್ ಟಾರ್ಗೆಟ್ ತನ್ನ ನೌಕರರ ಫ್ರೀಡಮ್ ಆಫ್ ಕಾನ್ಸೈನ್ಸ್ಗಾಗಿ ಸಮ್ಮತಿಯನ್ನು ಸೂಚಿಸಿತು, ಆದರೆ ಟೀಕಾಕಾರರು ಈ ನಿಯಮಗಳು ಔಷದ ಮಾರಾಟಗಾರರ ಡ್ಯೂಟಿ ಆಫ್ ಕೇರ್ನ್ನು ಎತ್ತಿಹಿಡಿಯುವಲ್ಲಿ ಸೋತಿದೆ ಎಂದು ಭಾವಿಸಿದರು.<ref>ಟಾರ್ಗೆಟ್ಬಲ್ಲಿನ ಜನನ ನಿಯಂತ್ರಣ ಸಮರ; ಯೋಜಿಸಿದ ಪಿತೃತ್ವ ಮತ್ತು ಟಾರ್ಗೆಟ್ ಕಾರ್ಪೊರೇಶನ್.ನ ಯಾರ ಹಕ್ಕು ಹೆಚ್ಚು ಮುಖ್ಯವಾದುದು ಎನ್ನುವ ವಿವಾದ: ಸಂತಾನ ನಿಯಂತ್ರಣವನ್ನು ತುರ್ತಾಗಿ ಬಯಸುವ ಗ್ರಾಹಕರು ಅಥವಾ ಅದನ್ನೊದಗಿಸುವುದು ಅನೈತಿಕ ಎನ್ನುವ ಔಷಧಿಗಳ ತಯಾರಕ. ''ಸ್ಟಾರ್ ಟ್ರೈಬ್ಯೂನ್''. ನವೆಂಬರ್ 12, 2005</ref>
ಜುಲೈ 2007ರಲ್ಲಿ, ಟಾರ್ಗೆಟ್ ಕಾರ್ಪೊರೇಶನ್ ನಿಷೇಧಕ್ಕೊಳಗಾದ ಎರೊಸಾಲ್ ಕಾನ್ಫೆಟ್ಟಿ ಸ್ಟ್ರಿಂಗನ್ನು ಮಾರಿದುದಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಎಜೆನ್ಸಿಯಿಂದ $120,000 ದಂಡ ವಿಧಿಸಲ್ಪಟ್ಟಿತು.
ಇಪಿಎ ಹಾರಿಬಲ್ ಸ್ಪೂಕಿ ಸ್ಟ್ರಿಂಗ್ನ್ನು ಮಿನ್ನೆಅಪೊಲಿಸ್ ಮೂಲದ ಟಾರ್ಗೆಟ್ ಮರಾಟಕ್ಕೆ ದಂಡವು ವಿಧಿಸಲಾಗಿದೆ ಎಂದು ಹೇಳಿತು, ಮಕ್ಕಳ ಹಾರಿಸಬಹುದಾದ ಕಾನ್ಫೆಟ್ಟಿ ಉತ್ಪನ್ನವು ಕ್ಲೀನ್ ಏರ್ ಆಯ್ಕ್ಟ್ನ್ನು ಉಲ್ಲಂಘಿಸುತ್ತದೆ, ಏಕೆಂದರೆ ಇದರಲ್ಲಿ ಹೈಡ್ರೊಕ್ಲೋರೊಫ್ಲೋರೊಕಾರ್ಬನ್(ಹೆಚ್ಸಿಎಫ್ಎ)ಗಳಿರುತ್ತದೆ.
ಆ ರೀತಿಯ ರಾಸಾಯನಿಕವು ಓಜೋನ್ ಪದರವನ್ನು ಕರಗಿಸುತ್ತದೆ, ವತ್ತು ಅದರ ಮಾರಾಟ ಅಥವಾ "ಅನಗತ್ಯ" ವಸ್ತುಗಳಲ್ಲಿ ಹಂಚಿಕೆಯು ಯುನೈಟೆಡ್ ಸ್ಟೇಟ್ಸ್ನಿಂದ ನಿಷೇಧಿಸಲ್ಪಟ್ಟಿದೆ.<ref name="biz">[http://www.bizjournals.com/twincities/stories/2007/07/09/daily20.html 'ಸ್ಪೂಕಿ ಸ್ಟ್ರಿಂಗ್'ಗಾಗಿ ಟಾರ್ಗೆಟ್ $120,000 ದಂಡ ]</ref>
ಜುಲೈ 2010ರಲ್ಲಿ, ಟಾರ್ಗೆಟ್ ಕಾರ್ಪೊರೇಶನ್ ಮಿನ್ನೆಸೋಟ ಕಾರ್ಪೋರೇಶನ್ನಿನಿಂದ ಪ್ರಾಯೋಜಿಸಲ್ಪಟ್ಟ ವಿಸ್ತೃತ ಸಂಸ್ಥೆಯಾದ ಮಿನ್ನೆಸೊಟ ಫಾರ್ವರ್ಡ್ಗೆ $150,000 ಹಣವನ್ನು ದೇಣಿಗೆ ನೀಡಿರುವುದಾಗಿ ಹೇಳಿತು.
ಮಿನ್ನೆಸೊಟ ಫಾರ್ವರ್ಡ್ 2010ರ ರಿಪಬ್ಲಿಕನ್ ಸರ್ಕಾರದ ಅಭ್ಯರ್ಥಿಯಾದ ಟಾಮ್ ಎಮ್ಮರ್ನ ಪರವಾಗಿ ದೂರದರ್ಶನದ ಜಾಹಿರಾತುಗಳನ್ನು ಪ್ರದರ್ಶಿಸಲು ಆರಂಭಿಸಿತು.
ಮಿನ್ನೆಸೊಟ ಸ್ಟೇಟ್ ರೆಪ್ರಸಂಟೇಟಿವ್ ರೇಯಾನ್ ವಿಂಕ್ಲರ್ನು, ಇದು ಟಾರ್ಗೆಟ್ ಕಾರ್ಪೊರೇಶನ್ನ ಮೂರ್ಖತನ, ಏಕೆಂದರೆ ವಲಸೆ, ಎಲ್ಜಿಬಿಟಿ ಹಕ್ಕುಗಳು, ಟಾರ್ಗೆಟ್ ಮಳಿಗೆಗಳಲ್ಲಿರುವ ರೆಸ್ಟೊರೆಂಟ್ಗಳ ಕೆಲಸಗಾರರಿಗೆ ಕನಿಷ್ಠ ವೇತನವನ್ನು ಕಡಿಮೆಗೊಳಿಸುವ ಬಗೆಗಿನ ಎಮ್ಮರ್ನ ದೃಷ್ಥಿಕೋನವು ವಿವಾದಾಸ್ಪದವಾಗಿದೆ ಮತ್ತು ಟಾರ್ಗೆಟ್ ಗ್ರಾಹಕರ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದನು.<ref>"ನ್ಯೂ ಎಮ್ಮರ್ ಆಯ್ಡ್ ಫಂಡೆಡ್ ಬೈ ನ್ಯೂ ಬಿಸಿನೆಸ್ ಮನಿ ", ಮಿನ್ನೆಸೊಟ ಪಬ್ಲಿಕ್ ರೇಡಿಯೊ, ಜುಲೈ 20, 2010. [http://minnesota.publicradio.org/display/web/2010/07/19/emmer-ad/ ]</ref>
ಎಮ್ಮರ್ನ ಬೆಂಬಲಕ್ಕೆ ಎಲ್ಜಿಬಿಟಿ ಮತ್ತು ಪ್ರಗತಿಪರ ತಂಡಗಳು ಅಮಾಧಾನವನ್ನು ವ್ಯಕ್ತಪಡಿಸಿದವು ಮತ್ತು ಟಾರ್ಗೆಟ್ ಮಳಿಗೆಗಳಿಗೆ ಬೈಕಾಟ್ ಮಾಡಿದವು.<ref>"ಟಾರ್ಗೆಟ್ ಟಾರ್ಗೆಟ್ ed ಓವರ್ ಪ್ರೊ-ಎಮ್ಮರ್ ಆಯ್ಡ್", ಮಿನ್ನಿಸೊಟ ಇಂಡಿಪೆಂಡೆಂಟ್, ಜುಲೈ 23, 2010 [http://minnesotaindependent.com/61801/target-targeted-over-pro-emmer-ad ]</ref>
==ವೈವಿಧ್ಯತೆ==
ಟಾರ್ಗೆಟ್ ವೈವಿಧ್ಯತೆಯನ್ನು ವೈಯಕ್ತಿಕತೆ ಎಂದು ವ್ಯಾಖ್ಯಾನಿಸುತ್ತದೆ.
ಕಂಪನಿಯ ಹೇಳಿಕಯಂತೆ ವೈಯಕ್ತಿಕತೆಯು ಗುಣಗಳು ವಿಶಾಲವ್ಯಾಪ್ತಿಯವಾಗಿರಬಹುದು, ಅವೆಂದರೆ ವಯಕ್ತಿಕ ಶೈಲಿ, ವಯಸ್ಸು, ಜಾತಿ, ಲಿಂಗ, ಜನಾಂಗೀಯತೆ, ಲೈಂಗಿಕ ದೃಷ್ಟಿಕೋನ, ಭಾಷೆ, ದೈಹಿಕ ಸಾಮರ್ಥ್ಯ, ಧರ್ಮ, ಕುಟುಂಬ, ನಾಗರೀಕತ್ವದ ಸ್ಥಾನ, ಸಮಾಜಿಕ-ಆರ್ಥಿಕ ಪರಿಸ್ಥಿತಿಳು, ವಿದ್ಯಾರ್ಹತೆ ಮತ್ತು ಜೀವನದ ಅನುಭವಗಳಾಗಿರುತ್ತವೆ.<ref>[http://sites.target.com/site/en/corporate/page.jsp?contentId=PRD03-002097 ಡೈವರ್ಸಿಟಿ ಸ್ಟೇಟ್ಮೆಂಟ್] {{Webarchive|url=https://web.archive.org/web/20060629131339/http://sites.target.com/site/en/corporate/page.jsp?contentId=PRD03-002097 |date=2006-06-29 }}, ಟಾರ್ಗೆಟ್ ಕಾರ್ಪೊರೇಶನ್.</ref>
ಟಾರ್ಗೆಟ್ನೌಕರರ ವಿವಿಧ್ಯತೆಯ ಕಾರ್ಯಕ್ರಮವನ್ನು "ದ ಸ್ಟ್ರೆಂತ್ ಆಫ್ ಮೆನಿ.
ದ ಪವರ್ ಆಫ್ ಒನ್" ಎಂದು ಕರೆಯಲಾಗುತ್ತದೆ.<ref>[http://sites.target.com/site/en/corporate/page.jsp?ref=nav%5Ffooter%5Fdiversity&contentId=PRD03-002096 ಟಾರ್ಗೆಟ್ ಡೈವರ್ಸಿಟಿ ವೆಬ್ಸೈಟ್] {{Webarchive|url=https://web.archive.org/web/20070529192310/http://sites.target.com/site/en/corporate/page.jsp?contentId=PRD03-002096&ref=nav_footer_diversity |date=2007-05-29 }}, ಟಾರ್ಗೆಟ್ ಕಾರ್ಪೊರೇಶನ್.</ref> ಇದು ನಿರ್ಧಿಷ್ಟವಾಗಿ ಅಲ್ಪಸಂಖ್ಯಾತರು ಅಥವಾ ಮಹಿಳೆಯರ ಪ್ರಭುತ್ವವಿರುವ ಮಾರಾಟಗಾರ ಮತ್ತು ಗುತ್ತಿಗೆದಾರರೊಂದಿಗೆ ಕೆಲಸ ಮಾಡಲು ಬಯಸುತ್ತದೆ.<ref>[http://www.partnersonline.com/web-app/pol/diversity/diversityTemplate.jsp?pTitle=Supplier%2BDiversity&linkName=diversitySplash ಸಪ್ಲೈಯರ್ ಡೈವರ್ಸಿಟಿ: ಮೈನಾರಿಟಿ ಆಯ್೦ಡ್ ವೊಮೆನ್ ಬಿಸಿನೆಸ್ ಡೆವಲಪ್ಮೆಂಟ್ ಪ್ರೊಗ್ರಾಮ್ ], ಟಾರ್ಗೆಟ್ ಕಾರ್ಪೊರೇಶನ್.</ref>
ನೇರ, ಸಲಿಂಗಕಾಮಿ ನೌಕರರಿಗೆ ಮೊದಲೇ ಜೊತೆಯಾಗಿರುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇದು ಹ್ಯೂಮನ್ ರೈಟ್ಸ್ ಕ್ಯಾಂಪೈನ್ ಕಾರ್ಪೋರೇಟ್ ಇಕ್ವಾಲಿಟಿ ಇಂಡೆಕ್ಸ್ ಸ್ಕೋರ್ನಲ್ಲಿ 100 ಅಂಕಗಳನ್ನು ಗಳಿಸಿತು.<ref>{{Cite web |url=http://www.hrc.org/issues/workplace/organization_profile.asp?organization_id=1153&search_id=1&search_type=Quick. |title=ಆರ್ಕೈವ್ ನಕಲು |access-date=2021-08-28 |archive-date=2012-06-06 |archive-url=https://web.archive.org/web/20120606191919/http://www.hrc.org/issues/workplace/organization_profile.asp?organization_id=1153&search_id=1&search_type=Quick. |url-status=dead }}</ref>
ಇದಲ್ಲದೆ ಟಾರ್ಗೆಟ್ ಕಾರ್ಪೊರೇಶನ್ "100 ಉತ್ತಮ ತಾಯಂದಿರು ಕೆಲಸ ಮಾಡುವ ಕಂಪನಿ" ಎಂದು 2004ರಲ್ಲಿ ''[http://www.workingmother.com/ ವರ್ಕಿಂಗ್ ಮದರ್]'' ನಿಂದ ಹೆಸರಿಸಲ್ಪಟ್ಟಿತು.
ನ್ಯಾಶನಲ್ ಅಸ್ಸೊಸಿಯೇಶನ್ ಫಾರ್ ದ ಅಡ್ವಾನ್ಸ್ಮೆಂಟ್ ಆಫ್ ಕಲರ್ಡ್ ಪೀಪಲ್ ಅನೇಕ ಬಾರಿ ವಾರ್ಷಿಕ ಎಕನಾಮಿಕ್ ರೆಸಿಪ್ರೊಸಿಟಿ ಇನಿಶಿಯೇಟಿವ್ ವರದಿ ಕಾರ್ಡ್ ದಲ್ಲಿ ಟಾರ್ಗೆಟ್ಗೆ ಅನರ್ಹತಾ ದರ್ಜೆಯನ್ನು ನೀಡಿತು, ಇದು ಕಂಪನಿಯ "ಆಫ್ರಿಕನ್-ಅಮೇರಿಕನ್ ನಾಗರೀಕತ್ವದ ಬದ್ದತೆ"ಯ ಮಾನದಂಡವಾಗಿದೆ. 2003 ಮತ್ತು 2005ರಲ್ಲಿ, ಎನ್ಎಎಸಿಪಿ ಟಾರ್ಗೆಟ್ಗೆ ತನ್ನ ವರದಿಯಲ್ಲಿ "ಎಫ್" ಶ್ರೇಣಿಯನ್ನು ನೀಡಿತು; 2004ರಲ್ಲಿ, ಟಾರ್ಗೆಟ್ ಇದು "ಡಿ-" ಆಯಿತು.<ref>[http://www.naacp.org/inc/docs/economy/economic_gen_merc_report_card-04.pdf 2004 ಎನ್ಎಎಸಿಪಿ ಜನರಲ್ ಮರ್ಚಂಡೈಸಿಂಗ್ ಇಂಡಸ್ಟ್ರಿ ಕಾರ್ಡ್ (ಪಿಡಿಎಫ್)] {{Webarchive|url=https://web.archive.org/web/20060213201521/http://www.naacp.org/inc/docs/economy/economic_gen_merc_report_card-04.pdf |date=2006-02-13 }}, ನ್ಯಾಶನಲ್ ಅಸ್ಸೋಸಿಯೇಶನ್ ಫಾರ್ ದ ಅಡ್ವಾನ್ಸ್ಮೆಂಟ್ ಆಫ್ ಕಲರ್ಡ್ ಪೀಪಲ್.</ref><ref>[http://www.naacp.org/news/press/2005-07-12/index.html ಎನ್ಎಎಸಿಪಿ 2005 ಇಂಡಸ್ಟ್ರಿ ಸರ್ವೇಸ್ ಗೀವ್ ಫೈವ್ ಮೇಜರ್ ಇಂಡಸ್ಟ್ರೀಸ್ "ಸಿ" ಆಯ್೦ಡ್ "ಡಿ" ಗ್ರೇಡ್ಸ್] {{Webarchive|url=https://web.archive.org/web/20110524103354/http://www.naacp.org/news/press/2005-07-12/index.html |date=2011-05-24 }},ನ್ಯಾಶನಲ್ ಆಸ್ಸೋಸಿಯೇಶನ್ ಫಾರ್ ದ ಅಡ್ವಾನ್ಸ್ಮೆಂಟ್ ಆಫ್ ಕಲರ್ಡ್ ಪೀಪಲ್.</ref><ref>[http://www.naacp.org/inc/docs/economy/economic_gen_merc_report_card-05.pdf 2005 ಎನ್ಎಎಸಿಪಿ ಜನರಲ್ ಮರ್ಚಂಡೈಸಿಂಗ್ ಇಂಡಸ್ಟ್ರಿ ರಿಪೋರ್ಟ್ ಕಾರ್ಡ್ (ಪಿಡಿಎಫ್)] {{Webarchive|url=https://web.archive.org/web/20060213202047/http://www.naacp.org/inc/docs/economy/economic_gen_merc_report_card-05.pdf |date=2006-02-13 }}, ನ್ಯಾಶನಲ್ ಆಸ್ಸೋಸಿಯೇಶನ್ ಫಾರ್ ದ ಅಡ್ವಾನ್ಸ್ಮೆಂಟ್ ಆಫ್ ಕಲರ್ಡ್ ಪೀಪಲ್.</ref> 2006ರಲ್ಲಿ, ಟಾರ್ಗೆಟ್ನ್ನು ಇದು ಯಾಕೆ ಸರ್ವೇಕ್ಷಣೆಯಲ್ಲಿ ಮತ್ತೆ ಭಾಗವಹಿಸಲಿಲ್ಲ ಎಂದು ಕೇಳಿದಾಗ,<ref>[http://www.naacp.org/advocacy/economic/reportcard/2006/generalmerchandising/ 2006 ಜನರಲ್ ಮರ್ಚಂಡೈಸಿಂಗ್ ಇಂಡಸ್ಟ್ರಿ ರಿಪೋರ್ಟ್ ಕಾರ್ಡ್ (ಪಿಡಿಎಫ್)] {{Webarchive|url=https://web.archive.org/web/20061130051219/http://www.naacp.org/advocacy/economic/reportcard/2006/generalmerchandising/ |date=2006-11-30 }}, ನ್ಯಾಶನಲ್ ಆಸ್ಸೋಸಿಯೇಶನ್ ಫಾರ್ ದ ಅಡ್ವಾನ್ಸ್ಮೆಂಟ್ ಆಫ್ ಕಲರ್ಡ್ ಪೀಪಲ್.</ref> ಅದರ ಪ್ರತಿನಿಧಿ ವಿವರಿಸಿದನು, "ಟಾರ್ಗೆಟ್ನ ದೃಷ್ಠಿಕೋನದ ಪ್ರಕಾರ ವೈವಿಧ್ಯತೆಯು ಒಂದು ಗುಂಪಾಗಿಲ್ಲ, ಇದು ವಿವಿಧ ಹಿನ್ನಲೆಯನ್ನೊಳಗೊಂಡ ಅನೇಕ ಜನರದ್ದಾಗಿದೆ."<ref>[http://www.washingtonpost.com/wp-dyn/content/article/2006/07/18/AR2006071800729.html ಎನ್ಎಎಸಿಪಿ ಇಶ್ಯೂಸ್ ಕಾರ್ಪೊರೇಟ್ ರಿಪೋರ್ಟ್ ಕಾರ್ಡ್ಸ್, ], ''ದ ಅಸ್ಸೋಸಿಯೇಟೆಡ್ ಪ್ರೆಸ್'', ಜುಲೈ 18, 2006.</ref>
ಫೆಬ್ರವರಿ 2006ರಲ್ಲಿ ನ್ಯಾಶನಲ್ ಫೆಡರೇಶನ್ ಆಫ್ ಬ್ಲೈಂಡ್ (ಎನ್ಎಫ್ಬಿ) ನಾರ್ತನ್ ಕ್ಯಾಲಿಫೋರ್ನಿಯಾದ ಅಲಮೆಡ ಕೌಂಟೀ ಸುಪೀರಿಯರ್ ಕೋರ್ಟ್ನಲ್ಲಿ ಪಕ್ಷಪಾತಕ್ಕಾಗಿ ಮೊಕದ್ದಮೆ ದಾಖಲು ಮಾಡಿತು. ಇದರ ಆರೋಪ ಟಾರ್ಗೆಟ್ನ ವ್ಯಾಪಾರದ ವೆಬ್ಸೈಟಿನಲ್ಲಿ, "ಸಾವಿರಾರು ಅಡೆತಡೆಗಳಿರುವುದರಿಂದಾಗಿ ಅದನ್ನು ಕುರುಡು ಗ್ರಾಹಕರಿಗೆ ಬಳಸುವುದು ಕಷ್ಟಸಾಧ್ಯವಾಗಿದೆ" ಎಂಬುದಾಗಿತ್ತು.
<ref>{{cite web|last=Meyers |first=Michelle |url=http://news.cnet.com/Blind-patrons-sue-Target-for-site-inaccessibility/2100-1030_3-6038123.html |title=Blind patrons sue Target for site inaccessibility - CNET News |publisher=News.cnet.com |date= |accessdate=2010-02-21}}</ref> ಟಾರ್ಗೆಟ್ ಕಾರ್ಪೊರೇಶನ್, ಅಕ್ಟೋಬರ್ 2008ರಲ್ಲಿ $6 ಮಿಲಿಯನ್ ಹಣವನ್ನು ನೀಡುವ ಮತ್ತು ಟಾರ್ಗೆಟ್.ಕಾಮ್ ಅಂತರಜಾಲವನ್ನು ಎನ್ಎಫ್ಬಿಯೊಂದಿಗೆ ಸೇರಿ ಮೂರು ವರ್ಷಗಳಲ್ಲಿ ಸರಳಗೊಳಿಸಲು ಒಪ್ಪುವ ಮೂಲಕ ಮೊಕದ್ದಮೆಯನ್ನು ಬಗೆಹರಿಸಿಕೊಂಡಿತು.<ref>{{cite web |author=By STEVE ALEXANDER, Star Tribune |url=http://www.startribune.com/business/27570799.html?page=1&c=y |title=Target settles suit over Web access |publisher=StarTribune.com |date=2008-08-27 |accessdate=2010-02-21 |archive-date=2012-10-15 |archive-url=https://web.archive.org/web/20121015185337/http://www.startribune.com/business/27570799.html?page=1&c=y |url-status=dead }}</ref>
ಆಗಸ್ಟ್ 24, 2009ರಲ್ಲಿ ಯುನೈಟೆಡ್ ಸ್ಟೇಟ್ಸ್ ಈಕ್ವಲ್ ಎಂಪ್ಲಾಯ್ಮೆಂಟ್ ಆಪರ್ಚುನಿಟಿ ಕಮಿಶನ್ (ಇಇಒಸಿ)ಯು ರಾಷ್ಟ್ರೀಯ ಚಿಲ್ಲರೆ ವ್ಯಾಪಾರಿ ಟಾರ್ಗೆಟ್ ಕಾರ್ಪೊರೇಶನ್ನ ಮೇಲೆ ದಾವೆ ಹೂಡಿತು,ಅದು ಕನೂನಿಗೆ ವಿರುದ್ಧವಾಗಿ ತನ್ನ ಅನೇಕ ವಿಕಲತೆಗಳನ್ನು ಹೊಂದಿದ ನೌಕರನಿಗೆ ಕೊಡಬೇಕಾದ ವಸತಿ ಸೌಕರ್ಯವನ್ನು ಒದಗಿಸಲು ನಿರಾಕರಿಸಿದಕ್ಕಾಗಿ ಮತ್ತು ಆತನ ಆರೋಗ್ಯದ ಪರಿಸ್ಥಿತಿಗಾಗಿ ಕೆಲಸದ ವೇಳೆಯನ್ನು ಕಡಿಮೆಗೊಳಿಸದಿರುವ ಕಾರಣಕ್ಕಾಗಿ ಮೊಕದ್ದಮೆ ದಾಖಲಿಸಿತು.<ref>{{cite web |url=http://cbs2.com/local/disability.Target.suit.2.1142677.html |title=EEOC Sues Target For Disability Discrimination |publisher=cbs2.com |date=2009-08-24 |accessdate=2010-02-21 |archive-date=2010-05-27 |archive-url=https://web.archive.org/web/20100527040048/http://cbs2.com/local/disability.Target.suit.2.1142677.html |url-status=dead }}</ref>
ಯು.ಎಸ್.ಇಇಒಸಿಯ ಹಕ್ಕು ಕೇಳಿಕೆಯ ಪ್ರಕಟಣೆಯ ಪ್ರಕಾರ, ಟಾರ್ಗೆಟ್ ಅಮೇರಿಕನ್ಸ್ ವಿತ್ ಡಿಸ್ಎಬಿಲಿಟೀಸ್ ಆಯ್ಕ್ಟ್(ಎಡಿಎ)ನ ಟೈಟಲ್ I ಮತ್ತು 1991ರ ಸಿವಿಲ್ ಟೈಟ್ಸ್ ಆಯ್ಕ್ಟ್ ಟೈಟಲ್ Iನ್ನು ಉಲ್ಲಂಘಿಸಿದೆ.<ref>{{cite web |url=http://www.eeoc.gov/press/8-24-09.html |title=Target Stores Sued For Disability Discrimination |publisher=Eeoc.gov |date= |accessdate=2010-02-21 |archive-date=2009-09-10 |archive-url=https://web.archive.org/web/20090910235019/http://www.eeoc.gov/press/8-24-09.html |url-status=dead }}</ref>
==ಪ್ರಮುಖ ಪ್ರಾಯೋಜಕತ್ವಗಳು==
[[File:Target indycar.jpg|thumb|ಪರ್ಡ್ಯು ವಿಶ್ವವಿದ್ಯಾಲಯಕ್ಕೆ ಬೇಟಿ ಕೊಡುತ್ತಿರುವ ಟಾರ್ಗೆಟ್ ಚಿಪ್ ಗನಸ್ಸಿ ರೇಸಿಂಗ್ನ ಇಂಡಿಕಾರ್]]
ಟಾರ್ಗೆಟ್ ಮಿನ್ನೆಅಪೊಲಿಸ್ನಲ್ಲಿನ ಟಾರ್ಗೆಟ್ ಸೆಂಟರ್ ಮತ್ತು ಟಾರ್ಗೆಟ್ ಫೀಲ್ಸ್ ಹೆಸರಿಡುವ ಹಕ್ಕನ್ನು ಹೊಂದಿದೆ. ಇದು ಎನ್ಎಎಸ್ಸಿಎಆರ್ ಮತ್ತು ದೀರ್ಘಕಾಲದ ಇಂಡಿಕಾರ್ ರೇಸಿಂಗ್ನ ಚಿಪ್ ಗನಾಸ್ಸಿ ರೇಸಿಂಗ್ ತಂಡದ ಪ್ರಾಯೋಜಕತ್ವವನ್ನು ವಹಿಸಿದೆ. 2002 ಮತ್ತು 2003ರಲ್ಲಿ ಎನ್ಎಎಸ್ಸುಎಆರ್ ಋತುವಿನಲ್ಲಿ, #41 ಚಿಪ್ ಗನಾಸ್ಸಿ ಟಾರ್ಗೆಟ್ ಕಾರನ್ನು ಜಿಮ್ಮಿ ಸ್ಪೆನ್ಸರ್ ಚಲಾಯಿಸಿದನು; 2004ರ ಮತ್ತು 2005 ಋತುವಿನಲ್ಲಿ, ಕೇಸಿ ಮೇರ್ಸ್ ಚಲಾಯಿಸಿದನು.
2006ರಲ್ಲಿ, ಮೆರ್ಸ್ ಅದೇ ತಂಡದ ಬೇರೆ ಸಿಪ್ ಗನಸ್ಸಿ ಕಾರನ್ನು ಚಲಾಯಿಸಿದಾಗ ರೀಡ್ ಸೋರೆನ್ಸನ್ #41ನ್ನು ಚಲಾಯಿಸಿದನು. ಸೋರೆನ್ಸನ್ 2008 ಋತುವಿನಲ್ಲಿ ಕಾರನ್ನು ಚಲಾಯಿಸಿದನು ಮತ್ತು ಟಾರ್ಗೆಟ್ ಸಹ ಕೆಲವು ಪ್ರಮುಖ ಪ್ರಾಯೋಜಕತ್ವವನ್ನು ಡಾರಿಯೋ ಫ್ರಾಂಚಿಟ್ಟಿನೊಂದಿಗಿನ ಗನಾಸ್ಸಿ ರೇಸಿಂಗ್ #40 ಕಾರಿಗೆ ವಹಿಸಿತು ಮತ್ತು ಜೆರೆಮಿ ಮೇಫೀಲ್ಡ್ ಹಾನಿಗೊಳಗಾದ ಫ್ರಾಂಚಿಟ್ಟಿಯ ಬದಲಿಗೆ ಕಾರನ್ನು ಚಲಾಯಿಸಿದನು.
40 ತಂಡವನ್ನು ಆನಂತರ ಮುಚ್ಚಲಾಯಿತು. 2009ರಲ್ಲಿ, ಟಾರ್ಗೆಟ್ ಹೊಸದಾಗಿ ಸ್ಥಾಪಿಸಿದ ಎರ್ನ್ಹರ್ಡ್ಟ್ ಗನಾಸ್ಸಿ ರೇಸಿಂಗ್ನ ಹ್ವಾನ್ ಪಾಬ್ಲೊ ಮಾನ್ಟೋಯ ಚಲಾಯಿಸಿದ #42ಕ್ಕೆ ಪ್ರಾಯೋಜಕತ್ವ ವಹಿಸಿತು.
ಟಾರ್ಗೆಟ್ ಎರ್ನ್ಹರ್ಡ್ಟ್ ಗನಾಸ್ಸಿ ರೇಸಿಂಗ್ನ ಆರ್ಕ್ ಅಲ್ಮಿರೊಲ ಚಲಾಯಿಸಿದ #8 ಕಾರಿಗೆ ಪ್ರಾಯೋಜಕತ್ವವನ್ನು ವಹಿಸಿತು, ಇದು ಕೆಲವು ರೇಸ್ಗಳಿಗೆ ಇತರ ಪ್ರಾಯೋಜಕರೊಂದಿಗೆ ಸಹ ಪ್ರಾಯೋಜಕತ್ವದಲ್ಲಿ ಭಾಗವಹಿಸಿತು, ಅವೆಂದರೆ ಮೇ 2009ರಲ್ಲಿ ತಂಡ ಒಡೆಯುವವರೆಗೂ ಗಿಟಾರ್ ಹೀರೊ ಮತ್ತು ಟಾಮ್ಟಾಮ್ಕ್ಕೆ ಪ್ರಾಯೋಜಕತ್ವ ವಹಿಸಿತು. 2009 ಋತುವನ್ನು 20ನೇ ಟಾರ್ಗೆಟ್ನ ವಾರ್ಷಿಕೋತ್ಸವದ ರೇಸ್ ಕಾರ್ಯಕ್ರಮವನ್ನಾಗಿ ಗುರುತಿಸಲಾಗುತ್ತಿದೆ(1990–ಇಲ್ಲಿಯವರೆಗೂ). ಡೇರಿಯೊ ಫ್ರಾಂಚಿಟ್ಟಿ ಎರಡನೇ ಇಂಡಿಕಾರ್ ಚಾಂಪಿಯನ್ಶಿಪ್ನ್ನು ಗೆದ್ದನು, ಮತ್ತು ಸ್ಕಾಟ್ ಡಿಕ್ಸನ್ ಎರಡನೇಯವನಾದನು, ಟಾರ್ಗೆಟ್ ಇಂಡಿಕಾರ್ ಸರಣಿಯಲ್ಲಿ ಮೊದಲನೇ ಮತ್ತು ಎರಡನೆಯವರಾಗಿ ಬಂದರು. ಡಿಕ್ಸನ್ ಮತ್ತು ಫ್ರಾಂಚಿಟ್ಟಿ 17ರಲ್ಲಿ 10 ರೇಸ್ಗಳನ್ನು ಗೆದ್ದನು(ಡಿಕ್ಸನ್-5, ಫ್ರಾಂಚಿಟ್ಟಿ -5) ಮತ್ತು 1998ರ ಅಲೆಕ್ಸ್ ಜನಾರ್ಡಿ ಮ್,ಅತ್ತು ಜಿಮ್ಮಿ ವಾಸ್ಸೆರ್ ಜೊತೆಯಾಗಿ 19-ರೇಸ್ಗಳಲ್ಲಿ 10ನ್ನು 1998ರ ಸಿಎಆರ್ಟಿ ಋತುವಿನಲ್ಲಿ ಗೆದ್ದ ದಾಖಲೆಯನ್ನು ಸರಿಗಟ್ಟಿದರು.
ಟಾರ್ಗೆಟ್ ಚಿಪ್ ಗನಾಸ್ಸಿ<ref>{{Cite web |url=http://www.chipganassiracing.com/sponsors/index.cfm?cid=1370 |title=ಟಾರ್ಗೆಟ್ ಗನಸ್ಸಿ ರೇಸಿಂಗ್ ಸ್ಪಾನ್ಸರ್ಸ್ |access-date=2010-08-19 |archive-date=2009-04-14 |archive-url=https://web.archive.org/web/20090414110827/http://www.chipganassiracing.com/sponsors/index.cfm?cid=1370 |url-status=dead }}</ref> ಯ ಡೇರಿಯೊ ಫ್ರಾಂಚಿಟ್ಟಿಚಲಾಯಿಸಿದ ಕಾರು of the ಭಾನುವಾರ ಮೇ 30, 2010ರಲ್ಲಿ ಇಂಡಿಯನ್ಪೋಲೀಸ್ 500ರ 94ನೇ ಓಟವನ್ನು<ref>{{Cite web |url=https://sports.yahoo.com/irl/news?slug=ap-indy500 |title=ಆರ್ಕೈವ್ ನಕಲು |access-date=2021-07-20 |archive-date=2010-05-30 |archive-url=https://web.archive.org/web/20100530225622/http://sports.yahoo.com/irl/news?slug=ap-indy500 |url-status=dead }}</ref> ಗೆದ್ದಿತು.<ref name="INDY1">{{cite web
|publisher=Indianapolis Motor Speedway
|url=http://www.indianapolismotorspeedway.com/indy500/
|title=Indy 500
}}</ref>
ಟಾರ್ಗೆಟ್ ಕಾರ್ಪೊರೇಶನ್ ಮಿನ್ನೆಅಪೊಲಿಸ್ ಅಕ್ವಟೆನಿಯಲ್ನ ಪ್ರಮುಖ ಪ್ರಾಯೋಜಕರು, ಇದು ಟಾರ್ಗೆಟ್ ಫೈರ್ವರ್ಕ್ ಶೋವನ್ನು ನಡೆಸಿ ಕೊಟ್ಟರು. ಇದು ಮಿಸಿಸ್ಸಿಪಿ ನದಿಯ ಪಶ್ಚಿಮದ ದೊಡ್ಡ ವಾರ್ಷಿಕ ಫೈರವರ್ಕ್ ಶೋ, [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್]]ನ ನಾಲ್ಕನೇ ಅತಿದೊಡ್ಡ ಶೋ.<ref>[http://www.aquatennial.com/events.php?mode=detailEvent&EventID=273 ಟಾರ್ಗೆಟ್ ಫೈರ್ವರ್ಕ್ ಶೊ] {{Webarchive|url=https://web.archive.org/web/20070929012856/http://www.aquatennial.com/events.php?mode=detailEvent&EventID=273 |date=2007-09-29 }}, ''2007 ಮಿನ್ನೆಅಪೊಲಿಸ್ ಅಕ್ವಟೆನಿಯಲ್''.</ref>
ಟಾರ್ಗೆಟ್ನ್ಯೂಯಾರ್ಕಿನ ಮನ್ಹಾಟನ್ನ ಮ್ಯೂಸಿಯಮ್ ಆಫ್ ಆರ್ಟ್ಸ್ನ ಪ್ರಾಯೋಜಕರು. ಶುಕ್ರವಾರ ಸಂಜೆ 4ಗಂಟೆಯ ನಂತರ ವಸ್ತು ಸಂಗ್ರಹಾಲಯಕ್ಕೆ ಬರುವ ಎಲ್ಲಾ ವೀಕ್ಷಕರಿಗೆ ಶುಲ್ಕರಹಿತ ಪ್ರವೇಶದೊಂದಿಗೆ ಇದು ಟಾರ್ಗೆಟ್ ಫ್ರೀ ಫ್ರೈಡೇ ನೈಟ್ಸ್ನ್ನು ನಡೆಸಿಕೊಡುತ್ತದೆ, ಕಂಪನಿಯು ಟಾರ್ಗೆಟ್ ಬ್ರೂಕ್ಲಿನ್ ಮ್ಯೂಸಿಯಮ್ನಲ್ಲಿ ಫಸ್ಟ್ ಸಾಟರ್ಡೇಗಳನ್ನೂ ನಡೆಸಿಕೊಡುತ್ತದೆ. ಅದೇ ರೀತಿಯ ಲಾಸ್ ಎಂಜಲ್ಸ್ ಕೌಂಟೀ ಮ್ಯೂಸಿಯಮ್ ಆಫ್ ಆರ್ಟ್ಸ್ ನಲ್ಲಿನ "ಫ್ರೀ ಆಫ್ಟರ್ ಫೈವ್" ಎಂಬ ಟಾರ್ಗೆಟ್ ಪ್ರಾಯೋಜಕತ್ವದ ಕಾರ್ಯಕ್ರಮವು ವಾರದಾದ್ಯಂತ ಸಂಜೆ ಶುಲ್ಕರಹಿತ ಪ್ರವೇಶವನ್ನೊದಗಿಸುತ್ತದೆ.
ಪ್ರತಿ ಮಂಗಳವಾರ ಟಾರ್ಗೆಟ್ ಇಲ್ಲಿನೋಸ್ನಲ್ಲಿನ ಚಿಕಾಗೊದ ಮ್ಯೂಸಿಯಮ್ ಆಫ್ ಕಾಂಟೆಂಪರರಿ ಆರ್ಟ್ಕ್ಕೆ ಉಚಿತ ಪ್ರವೇಶವನ್ನೊದಗಿಸುತ್ತದೆ. ತನ್ನ ತವರಾದ ಮಿನ್ನೆಅಪೊಲಿಸ್, ಟಾರ್ಗೆಟ್ ವಾಕರ್ ಆರ್ಟ್ ಸೆಂಟರ್ನ ಟಾರ್ಗೆಟ್ ಫ್ರೀ ಥರ್ಸ್ಡೇ ನೈಟ್ಸ್ಗೆ ಪ್ರಾಯೋಜಕತ್ವವನ್ನೊದಗಿಸುತ್ತದೆ, ಇಲ್ಲಿ ಸಂಜೆ 4ರ ನಂತರ ಉಚಿತ ಪ್ರವೇಶವನ್ನೊದಗಿಸುತ್ತದೆ ಅದಲ್ಲದೆ ಇದರ ಸೋದರ ನಗರವಾದ ಸೈಂಟ್ ಪೌಲ್ನಲ್ಲಿ ಮಿನ್ನೆಸೋಟ ಚಿಲ್ಡ್ರನ್ಸ್ ಮ್ಯೂಸಿಯಮ್ನ "ಟಾರ್ಗೆಟ್ ಥರ್ಡ್ ಫ್ರೀ ಸಂಡೇಸ್"ನಲ್ಲಿ ಉಚಿತ ಪ್ರವೇಶವನ್ನೊದಗಿಸುತ್ತದೆ. ಮಸ್ಸಚುಸೆಟ್ಸ್ನ ಬಾಸ್ಟನ್ನಗರದ ಬಾಸ್ಟನ್ಸ್ ಚಿಲ್ಡ್ರನ್ಸ್ ಮ್ಯೂಸಿಯಮ್ನಲ್ಲಿ ಟಾರ್ಗೆಟ್ $1 ಫ್ರೈಡೇ ನೈಟ್ಸ್ ಕಾರ್ಯಕ್ರಮವನ್ನು ಸಂಜೆ 5:00ರಿಂದ 9:00ರ ವರೆಗೆ ನಡೆಸಿಕೊಡುತ್ತದೆ.
ಟಾರ್ಗೆಟ್ ವೀಕೆಂಡ್ ಅಮೇರಿಕಾ ರೇಡಿಯೋ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸುತ್ತದೆ. ಟಾರ್ಗೆಟ್ ಕೆಲವೊಮ್ಮೆ ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೆ ಸಹಾಯ ಮಾಡುತ್ತದೆ, ಅವುಗಳೆಂದರೆ ಆಸ್ಕರ್ಗಳು, ಎಮ್ಮೀಗಳು, ಗ್ರಾಮ್ಮಿಗಳು, ಮತ್ತು ಗೋಲ್ಡನ್ ಗ್ಲೋಬ್ಗಳು. ಹಿಂದೆ ಇದು ಟೂರ್ನಮೆಂಟ್ ಆಫ್ ರೋಸಸ್ ಪೆರೆಡ್ನಲ್ಲಿ ತನ್ನ ಕಾರ್ಪೋರೇಟ್ ತಂಡದೊಂದಿಗೆ ಭಾಗವಹಿಸುತ್ತಿತ್ತು.
==ರಜೆಯ ಜಾಹಿರಾತು==
ಕ್ರಿಸ್ಮಸ್ನ ಮರಾಟಗಳ ಪ್ರಚಾರವು ಟಾರ್ಗೆಟ್ನ ಜಾಹಿರಾತಿನ ಚಿಹ್ನೆಯಾಗಿದೆ. ಟಾರ್ಗೆಟ್ ತನ್ನ ರಜಾಕಾಲದ ಮಾರಾಟವನ್ನು ಪ್ರಚಾರ ಮಾಡಲು ಅನೇಕ ಪ್ರಖ್ಯಾತ ಹಾಡುಗಾರರನ್ನು ಇದು ಸೇರಿಸಿತು. ಏಮಿ ಗ್ರೆಯಾಂಟ್ ಮತ್ತು ಶಾರ್ಲೆಟ್ ಚರ್ಚ್ ವರ್ಷದಾದ್ಯಂತ ಕಾಣಿಸಿಕೊಂಡ ಪ್ರತಿಸಿಧಿಗಳಾಗಿದ್ದರು. ಒಂದು ಕ್ರಿಸ್ಮಸ್ ಕಾರ್ಯಾಚರಣೆಯಲ್ಲಿ ಲೀಯಾನ್ ರೈಮ್ಸ್ ಮತ್ತು ಲೂನಿ ಟ್ಯೂನ್ಸ್ಪಾತ್ರಗಳು ಭಾಗವಹಿಸಿದ್ದವು (ಬಗ್ಸ್ ಬನ್ನಿ, ಮುಂತಾದವು.).
==ಇವನ್ನೂ ಗಮನಿಸಿ==
* ನ್ಯಾಶನಲ್ ಫೆಡರೇಶನ್ ಆಫ್ ದ ಬ್ಲೈಂಡ್ v.ಟಾರ್ಗೆಟ್ ಕಾರ್ಪೋರೇಶನ್
* ಟಾರ್ಗೆಟ್ ( ಆಸ್ಟ್ರೇಲಿಯಾ)
* ಟಾರ್ಗೆಟ್ ಸೆಂಟರ್
* ಟಾರ್ಗೆಟ್ ಫೀಲ್ಡ್
* ಡಿಸೈನ್ ಫಾರ್ ಆಲ್ (ಟಾರ್ಗೆಟ್ ಕಾರ್ಪೊರೇಶನ್)
{{-}}
==ಟಿಪ್ಪಣಿಗಳು ಮತ್ತು ಆಕರಗಳು==
{{Reflist|2}}
==ಬಾಹ್ಯ ಕೊಂಡಿಗಳು==
{{Commons category|Target Corporation}}
* [http://www.target.com/ Target.com] ಚಿಲ್ಲರೆ ವ್ಯಪಾರದ ಅಂತರಜಾಲ
**[http://www.targetcorp.com/ ಟಾರ್ಗೆಟ್ ಕಾರ್ಪೋರೇಶನ್] ಕಾರ್ಪೊರೇಟ್ ಅಂತರಜಾಲ
**[http://www.theamc.com ದ ಅಸೋಸಿಯೇಟೆಡ್ ಮರ್ಚಂಡೈಸಿಂಗ್ ಕಾರ್ಪೋರೇಶನ್] {{Webarchive|url=https://web.archive.org/web/20150206030937/http://www.theamc.com/ |date=2015-02-06 }}
* [http://projects.flowingdata.com/target/ ಗ್ರೋಥ್ ಆಫ್ ಟಾರ್ಗೆಟ್, 1962-2008]
{{Interwikineeded}}
[[ವರ್ಗ:1927ರಲ್ಲಿ ಕಂಪನಿ ಸ್ಥಾಪನೆಯಾಯಿತು]]
[[ವರ್ಗ:ಮಿನ್ನೆಸೊಟಾದ ಮಿನ್ನೆಅಪೊಲಿಸ್ನಲ್ಲಿ ನೆಲೆಗೊಂಡ ಕಂಪನಿಗಳು]]
[[ವರ್ಗ:ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿಮಾಡಿದ ಕಂಪನಿಗಳು]]
[[ವರ್ಗ:ಯುನೈಟೆಡ್ ಸ್ಟೇಟ್ಸ್ನ ರಿಟೈಲ್ ಕಂಪನಿಗಳು]]
[[ವರ್ಗ:ಯುನೈಟೆಡ್ ಸ್ಟೇಟ್ಸ್ನ್ ಡಿಸ್ಕೌಂಟ್ ಮಳಿಗೆಗಳು]]
[[ವರ್ಗ:ಮುಕ್ತ ವ್ಯಪಾರ ಕಂಪನಿಗಳು]]
[[ವರ್ಗ:ಯುನೈಟೆಡ್ ಸ್ಟೇಟ್ಸ್ನ ಕಡಿಮೆ(ಕಡಿತಗೊಳಿಸಿದ)ಬೆಲೆಯ ಸರ್ವವಸ್ತು ಭಂಡಾರ]]
[[ವರ್ಗ:ಉದ್ಯಮ]]
p3g1e15x1cztwagajgrnb5meqyy4y9p
ಆಲಪುಳ
0
24526
1379454
1378404
2026-08-08T14:56:55Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1379454
wikitext
text/x-wiki
{{databox}}
{{Infobox settlement
| name = ಆಲಪುಳ
| native_name = <!--Please do not add Malayalam or Hindi here, as per WP:NOINDICSCRIPT-->
| native_name_lang = ml
| other_name = ಅಲ್ಲೆಪ್ಪೇಯ್
| settlement_type = [[ಉಪನಗರ]] ಮತ್ತು [[ಕೇರಳದ ನಗರಸಭೆಗಳು|ನಗರಸಭೆ]]<ref name="auto">{{Cite web|url=https://lsgkerala.gov.in/system/files/2017-10/localbodies.pdf|title=Grama Panchayaths|website=lsgkerala.gov.in}}</ref>
| image_skyline = {{multiple image
| border = infobox
| total_width = 300
| image_style =
| perrow = 1/2/2/2
| image1 = Alappuzha Boat Beauty W.jpg{{!}}ಕೆಟ್ಟುವಳ್ಳಂ
| image2 = AC Road SH-11.JPG{{!}}AC ರಸ್ತೆ SH-11
| image3 = Alleppey beach.jpg{{!}}ಆಲಪುಳ ಬೀಚ್
| image4 = Mullakkal Devi.jpg{{!}}ಮುಲ್ಲಕ್ಕಲ್ ದೇವಿ
| image5 = Alappuzha loves Wikimedia IMG 7655.JPG{{!}}ದೋಣಿ ಕೇಂದ್ರ
| image6 = Jain-temple-alleppey.jpg{{!}}ಆಲಪುಳದಲ್ಲಿನ ಜೈನ ದೇವಾಲಯ
| image7 = Our Lady of Mount Carmel Cathedral.jpg{{!}}ಅವರ್ ಲೇಡಿ ಆಫ್ ಮೌಂಟ್ ಕಾರ್ಮೆಲ್ ಕಥೆಡ್ರಲ್
}}
| image_alt =
| image_caption = '''ಮೇಲಿನ ಎಡದಿಂದ ಪ್ರದಕ್ಷಿಣಾಕಾರವಾಗಿ''': [[ಕೆಟ್ಟುವಳ್ಳಂ|ಆಲಪುಳ ಹೌಸ್ಬೋಟ್]], [[ಆಲಪುಳ ಬೀಚ್]], [[ವೆಂಬನಾಡ್ ಸರೋವರ]], [[ರೋಮನ್ ಕ್ಯಾಥೋಲಿಕ್ ಡಯಾಸಿಸ್ ಆಫ್ ಅಲ್ಲೆಪ್ಪೇಯ್|ಮೌಂಟ್ ಕಾರ್ಮೆಲ್ ಕಥೆಡ್ರಲ್]], [[ಜೈನ ದೇವಾಲಯ, ಆಲಪುಳ|ಜೈನ ದೇವಾಲಯ]], [[ಮುಲ್ಲಕ್ಕಲ್ ದೇವಾಲಯ]], [[ರಾಜ್ಯ ಹೆದ್ದಾರಿ 11 (ಕೇರಳ)]]
| mapframe = yes
| mapframe-zoom = 12
| map_alt =
| map_caption =
| pushpin_map = India Kerala#India
| pushpin_label_position =
| pushpin_map_alt =
| pushpin_map_caption =
| coordinates = {{coord|9.49|N|76.33|E|display=inline,title}}
| subdivision_type = ದೇಶ
| subdivision_name = {{flag|India}}
| subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| subdivision_name1 = {{flagicon image|..Kerala Flag(INDIA).png}} [[ಕೇರಳ]]
| subdivision_type2 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| subdivision_name2 = [[ಆಲಪುಳ ಜಿಲ್ಲೆ]]
| established_title = <!-- Established -->
| established_date = {{start date and age|17|08|1957}}
| founder =
| named_for =
| governing_body = ಆಲಪುಳ ಪಟ್ಟಣ
| leader_title = ನಗರಸಭಾ ಅಧ್ಯಕ್ಷರು
| leader_name = ಮೊಲ್ಲಿ ಜಾಕೋಬ್ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]
| unit_pref = ಮೆಟ್ರಿಕ್
| area_footnotes =
| area_rank =
| area_total_km2 = 65.57
| elevation_footnotes =
| elevation_m =
| population_total = 240,991
| population_as_of = 2011
| population_rank = 6ನೇ
| population_density_km2 = auto
| population_demonym =
| population_footnotes = <ref>{{cite web|url=http://www.censusindia.net/results/town.php?stad=A&state5=999 |title=Table - 3 : Population, population in the age group 0-6 and literates by sex - Cities/Towns (in alphabetic order): 2001 |url-status=dead |archive-url=https://web.archive.org/web/20040225054758/http://www.censusindia.net/results/town.php?stad=A&state5=999 |archive-date=2004-02-25 |access-date=7 April 2024}}</ref><ref>{{cite web|url=https://www.citypopulation.de/en/india/kerala/3211__alappuzha/ |title=Cities and Towns in Alappuzha (Kerala, India) - Population Statistics, Charts |website=www.citypopulation.de |access-date=7 April 2024}}</ref>
| demographics_type1 = ಭಾಷೆಗಳು
| demographics1_title1 = ಅಧಿಕೃತ
| demographics1_info1 = [[ಮಲಯಾಳಂ ಭಾಷೆ|ಮಲಯಾಳಂ]], ಇಂಗ್ಲಿಷ್<ref>{{Cite web|url=http://www.lawsofindia.org/pdf/kerala/1969/1969KERALA7.pdf|title=The Kerala Official Language (Legislation) Act, 1969|access-date=3 July 2022|archive-date=20 April 2016|archive-url=https://web.archive.org/web/20160420030352/http://www.lawsofindia.org/pdf/kerala/1969/1969KERALA7.pdf|url-status=usurped}}</ref>
| timezone1 = [[ಭಾರತೀಯ ಪ್ರಮಾಣಿತ ಸಮಯ|IST]]
| utc_offset1 = +5:30
| postal_code_type = [[ಪಿನ್ ಕೋಡ್|PIN]]
| postal_code = 688001
| area_code_type = ದೂರವಾಣಿ ಕೋಡ್
| area_code = 0477
| registration_plate = *[[ಭಾರತದಲ್ಲಿ RTO ಜಿಲ್ಲೆಗಳ ಪಟ್ಟಿ#KL-ಕೇರಳ|KL]]-04 ಆಲಪುಳ,
*KL-29 ಕಾಯಂಕುಲಂ
*KL-30 ಚೆಂಗನ್ನೂರು
*KL-31 ಮಾವೇಲಿಕ್ಕರ
*KL-32 ಚೇರ್ತಲ
*KL-66 ಕುಟ್ಟನಾಡ್
| blank1_name_sec1 = [[ಲಿಂಗಾನುಪಾತ]]
| blank1_info_sec1 = 1079 [[ಪುರುಷ|♂]]/[[ಮಹಿಳೆ|♀]]
| website = {{URL|alappuzha.gov.in}}
| footnotes =
| official_name =
| nickname = '''"ಪೂರ್ವದ [[ವೆನಿಸ್]]"'''
}}
[[File:Sun rise view Alleppey backwaters , Kerala 06.jpg|thumb|ಸೂರ್ಯೋದಯ ನೋಟ ಅಲ್ಲೆಪ್ಪೇಯ್ ಬ್ಯಾಕ್ವಾಟರ್ಸ್, ಕೇರಳ]]
'''ಆಲಪುಳ''' ({{IPA|ml|aːlɐpːuɻɐ|lang|Alappuzha.ogg}}) ಅಥವಾ '''ಅಲ್ಲೆಪ್ಪೇಯ್''' ದಕ್ಷಿಣ [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತೀಯ ರಾಜ್ಯ]]ವಾದ [[ಕೇರಳ]]ದಲ್ಲಿನ [[ಲಕ್ಷದ್ವೀಪ ಸಮುದ್ರ]]ದ ತೀರದಲ್ಲಿರುವ ಒಂದು ನಗರಸಭೆ ಮತ್ತು ಪಟ್ಟಣವಾಗಿದೆ.<ref>{{Cite web |url=https://www.keralatourism.org/destination/alappuzha-beach/60/ |title=Alappuzha - a popular backwater destination in Kerala |website=www.keralatourism.org |language=en |access-date=2026-08-05}}</ref><ref>{{Cite web |url=https://www.dtpcalappuzha.com/ |title=DTPC Alappuzha {{!}} Alappuzha Tourist Places |website=DTPC alappuzha |language=en |access-date=2026-08-05}}</ref> ಇದು [[ಆಲಪುಳ ಜಿಲ್ಲೆ|ಆಲಪುಳ ಜಿಲ್ಲೆಯ]] ಜಿಲ್ಲಾ ಕೇಂದ್ರವಾಗಿದೆ, ಮತ್ತು ರಾಜ್ಯದ ರಾಜಧಾನಿ [[ತಿರುವನಂತಪುರಂ]] ನಿಂದ ಸುಮಾರು {{convert|130|km|1|abbr=on}} ಉತ್ತರದಲ್ಲಿದೆ. [[2011 ಭಾರತದ ಜನಗಣತಿ]]ಯ ಪ್ರಕಾರ, ಆಲಪುಳವು 240,991 ಜನಸಂಖ್ಯೆಯನ್ನು ಹೊಂದಿದೆ, ಮತ್ತು {{convert|3675|/sqkm|abbr=on}} ಜನಸಾಂದ್ರತೆಯನ್ನು ಹೊಂದಿದೆ.
ಆಲಪುಳವು [[ಸಂಗಮ್ ಸಾಹಿತ್ಯ|ಸಂಗಮ್ ಯುಗ]]ದ ಹಿಂದಿನದು, ಮತ್ತು ಇದನ್ನು [[ಪ್ಲಿನಿ ದಿ ಎಲ್ಡರ್]] 1ನೇ ಶತಮಾನ AD ಯಷ್ಟು ಹಿಂದೆಯೇ ''ಬರಾಸೆಸ್'' ಎಂದು ಉಲ್ಲೇಖಿಸಿದ್ದಾರೆ.<ref>{{Cite web |title=History {{!}} District Alappuzha, Government of Kerala {{!}} India |url=https://alappuzha.nic.in/en/history/#:~:text=History%20says%20Alappuzha%20had%20trade,per%20GO(P)%20No |access-date=2024-08-16 |language=en-US}}</ref> ನಂತರ 16ನೇ ಮತ್ತು 17ನೇ ಶತಮಾನಗಳಲ್ಲಿ, ಪಟ್ಟಣವು [[ಡಚ್ ಮಲಬಾರ್|ಡಚ್]] ಮತ್ತು [[ಪೋರ್ಚುಗೀಸ್ ಭಾರತ|ಪೋರ್ಚುಗೀಸ್]] ಸೇರಿದಂತೆ ವಿವಿಧ ಯುರೋಪಿಯನ್ ಶಕ್ತಿಗಳೊಂದಿಗೆ ಮಸಾಲೆ ವ್ಯಾಪಾರಕ್ಕೆ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿ ಹೊಂದಿತು. [[ರಾಜ ಕೇಶವದಾಸ್]]ರ ಆಳ್ವಿಕೆಯಲ್ಲಿ, ಬಂದರು ನಿರ್ಮಿಸಲಾಯಿತು ಮತ್ತು ಸಾರಿಗೆಗಾಗಿ ಕಾಲುವೆಗಳನ್ನು ನಗರದಾದ್ಯಂತ ಹಾಕಲಾಯಿತು, ಮತ್ತು ಪಟ್ಟಣವು ವೇಗದ ಅಭಿವೃದ್ಧಿಯನ್ನು ಕಂಡಿತು. ಆದಾಗ್ಯೂ, 18ನೇ ಶತಮಾನದ ಅಂತ್ಯದ ವೇಳೆಗೆ, ಈ ಪ್ರದೇಶವು [[ಬ್ರಿಟಿಷ್ ರಾಜ್|ಬ್ರಿಟಿಷ್ ಆಳ್ವಿಕೆಗೆ]] ಒಳಪಟ್ಟಿತು ಮತ್ತು ವಾಣಿಜ್ಯ ಮತ್ತು ಸಂಸ್ಕೃತಿಯ ಕೇಂದ್ರವಾಗಿ ತನ್ನ ಸ್ಥಾನಮಾನದಲ್ಲಿ ಕುಸಿತವನ್ನು ಅನುಭವಿಸಿತು.<ref>{{Cite web |title=History of Alappuzha |url=https://www.alappuzhaonline.in/city-guide/history-of-alappuzha |website=www.alappuzhaonline.in}}</ref>
ಇಂದು, ಆಲಪುಳವು ಕೇರಳದ ಪ್ರಮುಖ ಪ್ರವಾಸಿ ತಾಣವಾಗಿದೆ. ಪಟ್ಟಣವು ಅದರ [[ಕೇರಳ ಬ್ಯಾಕ್ವಾಟರ್ಸ್|ಜಲಮಾರ್ಗಗಳು ಮತ್ತು ಬ್ಯಾಕ್ವಾಟರ್ಸ್]]ಗಳಿಗೆ ಪ್ರಸಿದ್ಧವಾಗಿದೆ. ಇದು ಕೇರಳದ ತಾರ್ಷಿಶ್ ನಾಡು ಎಂದು ಕರೆಯಲ್ಪಡುತ್ತದೆ<ref>{{cite web|title=History {{!}} District Alappuzha, Government of Kerala {{!}} India|url=https://alappuzha.nic.in/history/|access-date=2020-09-08|language=en-US}}</ref> ಇದು [[ಓಣಂ]] ಹಬ್ಬದ ಸಮಯದಲ್ಲಿ ವಾರ್ಷಿಕ [[ನೆಹರು ಟ್ರೋಫಿ ದೋಣಿ ಪಂದ್ಯ]]ಕ್ಕೆ ಪ್ರಾಥಮಿಕ ಪ್ರವೇಶ ಬಿಂದುಗಳಲ್ಲಿ ಒಂದಾಗಿ ಪಾತ್ರ ವಹಿಸುತ್ತದೆ.<ref>"Nehru Trophy Boat Race.{{cite web|url=http://nehrutrophy.nic.in/new/home.html |title=The History of NTBR |access-date=2011-06-05 |url-status=dead |archive-url=https://web.archive.org/web/20110718024917/http://nehrutrophy.nic.in/new/home.html |archive-date=18 July 2011 |df=dmy }}"</ref><ref>{{cite web|url=https://www.mapsofindia.com/maps/india/tourist-centers.htm|title=Tourist Places in India, Best Places to Visit in India|website=Maps of India}}</ref> ಆಲಪುಳವು [[ತೆಂಗಿನ ನಾರು]] ತಯಾರಿಕೆಗೆ ಕೇಂದ್ರವಾಗಿದೆ, ಮತ್ತು ಅಭಿವೃದ್ಧಿ ಹೊಂದಿದ ತೆಂಗಿನ ನಾರು ಉದ್ಯಮವನ್ನು ಹೊಂದಿದೆ.<ref>"coir industry {{cite web|url=http://coirboard.gov.in/aboutcoir.htm |title= About Coir |access-date=2011-06-05 |url-status=dead |archive-url=https://web.archive.org/web/20110813201137/http://coirboard.gov.in/aboutcoir.htm |archive-date=13 August 2011 |df=dmy }}"</ref>
== ಜಿಲ್ಲೆಯ ಸ್ಥಿತಿಗತಿಗಳು ==
ಹಿಂದಿನ [[ಕೊಟ್ಟಾಯಂ]] ಮತ್ತು [[ಕ್ವಿಲೋನ್|ಕೊಲ್ಲಂ]] ಜಿಲ್ಲೆಗಳಿಂದ ಕಡಿದು, ಆಲಪುಳ ಜಿಲ್ಲೆಯು 17 ಆಗಸ್ಟ್ 1957 ರಂದು ರಚನೆಯಾಯಿತು ಮತ್ತು ಆರಂಭದಲ್ಲಿ ಏಳು [[ತಾಲೂಕು]]ಗಳನ್ನು ಒಳಗೊಂಡಿತ್ತು, ಅವುಗಳೆಂದರೆ [[ಚೇರ್ತಲ]], [[ಅಂಬಲಪ್ಪುಳ]], [[ಕುಟ್ಟನಾಡ್]], [[ತಿರುವಲ್ಲ]], [[ಚೆಂಗನ್ನೂರು]], [[ಕಾರ್ತಿಕಪ್ಪಳ್ಳಿ]] ಮತ್ತು [[ಮಾವೇಲಿಕ್ಕರ]].<ref>{{cite web|url=http://www.alleppeyonline.com/|title=taluks in Alappuzha 1957|publisher=Alleppeyonline.com|access-date=2021-02-14|archive-date=18 November 2011|archive-url=https://web.archive.org/web/20111118145124/http://www.alleppeyonline.com/|url-status=dead}}</ref>
ಜಿಲ್ಲೆಯು ಉತ್ತರದಲ್ಲಿ [[ಎರ್ನಾಕುಲಂ]] ಜಿಲ್ಲೆಯ [[ಕೊಚ್ಚಿ]] ಮತ್ತು ಕನಯನ್ನೂರು ತಾಲೂಕುಗಳು, ಪೂರ್ವದಲ್ಲಿ ಕೊಟ್ಟಾಯಂ ಜಿಲ್ಲೆಯ ವೈಕೋಮ್, ಕೊಟ್ಟಾಯಂ ಮತ್ತು [[ಚಂಗನಶ್ಶೇರಿ]] ತಾಲೂಕುಗಳು ಮತ್ತು [[ಪತ್ತನಂತಿಟ್ಟ]] ಜಿಲ್ಲೆಯ ತಿರುವಲ್ಲ, [[ಕೋಝೆಂಚೇರಿ]] ಮತ್ತು [[ಅಡೂರು]] ತಾಲೂಕುಗಳು, ದಕ್ಷಿಣದಲ್ಲಿ [[ಕೊಲ್ಲಂ ಜಿಲ್ಲೆ]]ಯ [[ಕುನ್ನತ್ತೂರು (ಕೇರಳ)|ಕುನ್ನತ್ತೂರು]] ಮತ್ತು [[ಕರುನಾಗಪ್ಪಳ್ಳಿ]] ತಾಲೂಕುಗಳು ಮತ್ತು ಪಶ್ಚಿಮದಲ್ಲಿ ಲಕ್ಷದ್ವೀಪ ಸಮುದ್ರದಿಂದ ಸುತ್ತುವರೆದಿದೆ.<ref>{{cite web|url=http://www.alleppeyonline.com/|title=boundaries|publisher=Alleppeyonline.com|access-date=2021-02-14|archive-date=18 November 2011|archive-url=https://web.archive.org/web/20111118145124/http://www.alleppeyonline.com/|url-status=dead}}</ref>
ಆಲಪುಳ ಜಿಲ್ಲೆಯು ಆರು ತಾಲೂಕುಗಳನ್ನು ಒಳಗೊಂಡಿದೆ, ಅವುಗಳೆಂದರೆ ಚೇರ್ತಲ, ಅಂಬಲಪ್ಪುಳ, ಕುಟ್ಟನಾಡ್, ಕಾರ್ತಿಕಪ್ಪಳ್ಳಿ, ಚೆಂಗನ್ನೂರು ಮತ್ತು ಮಾವೇಲಿಕ್ಕರ.<ref>{{cite web|url=http://www.alleppeyonline.com/|title=taluks in Alappuzha|publisher=Alleppeyonline.com|access-date=2021-02-14|archive-date=18 November 2011|archive-url=https://web.archive.org/web/20111118145124/http://www.alleppeyonline.com/|url-status=dead}}</ref> ಜಿಲ್ಲೆಯ ವಿಸ್ತೀರ್ಣ {{cvt|1414|km2}}.<ref>{{Cite web |title=Alappuzha district profile |url=https://alappuzha.nic.in/en/district-profile/}}</ref>
== ಇತಿಹಾಸ ==
{{More citations needed section|date=February 2023}}
[[File:Stone bridge, Alleppey 1900.jpg|thumb|left|1900 ರಲ್ಲಿ ಕಲ್ಲಿನ ಸೇತುವೆ.]]
[[File:Alleppey canal.jpg|200px|thumb|ವಾಣಿಜ್ಯ ಕಾಲುವೆಯಲ್ಲಿ ಕಾಲುದಾರಿ]]
ಕೇರಳದ [[ಬ್ರೆಡ್ಬಾಸ್ಕೆಟ್|ಅಕ್ಕಿಯ ತಟ್ಟೆ]]ಯಾದ [[ಕುಟ್ಟನಾಡ್]], ಅದರ [[ಭತ್ತದ]] ಗದ್ದೆಗಳು, ಸಣ್ಣ ತೊರೆಗಳು ಮತ್ತು ಹಸಿರು ತೆಂಗಿನ ಮರಗಳ ಕಾಲುವೆಗಳೊಂದಿಗೆ, [[ಸಂಗಮ್ ಯುಗ]]ದ ಆರಂಭಿಕ ಕಾಲದಿಂದಲೂ ಚೆನ್ನಾಗಿ ತಿಳಿದಿತ್ತು.<ref name="alappuzha">{{cite web|url=https://www.alappuzha.com/pages/kuttanad|title=Kuttanad|website=www.alappuzha.com}}</ref>
''[[ಉನ್ನೂನೀಲಿ ಸಂದೇಶಂ]]'' ನಂತಹ ಸಾಹಿತ್ಯ ಕೃತಿಗಳು ಈ ಜಿಲ್ಲೆಯ ಪ್ರಾಚೀನ ಕಾಲದ ಬಗ್ಗೆ ಕೆಲವು ಒಳನೋಟವನ್ನು ನೀಡುತ್ತವೆ. ಕಲ್ಲಿನ ಶಾಸನಗಳು, ದೇವಾಲಯಗಳು, ಚರ್ಚುಗಳು ಮತ್ತು ಬಂಡೆಯ ಕತ್ತರಿಸಿದ ಗುಹೆಗಳಲ್ಲಿ ಕಂಡುಬರುವ ಐತಿಹಾಸಿಕ ಸ್ಮಾರಕಗಳಂತಹ ಪುರಾತತ್ತ್ವ ಶಾಸ್ತ್ರದ ಪ್ರಾಚೀನ ವಸ್ತುಗಳು [[ಆಲಪುಳ ಜಿಲ್ಲೆ|ಆಲಪುಳ ಜಿಲ್ಲೆಯ]] ಐತಿಹಾಸಿಕ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ.
ಕ್ರೈಸ್ತ ಧರ್ಮವು 1ನೇ ಶತಮಾನ AD ಯಿಂದಲೂ ಈ ಜಿಲ್ಲೆಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿತ್ತು. [[ಕೊಕ್ಕಮಂಗಲಂ]] ನಲ್ಲಿರುವ ಚರ್ಚು [[ತೋಮಾ|ಸೇಂಟ್ ಥಾಮಸ್]] ಸ್ಥಾಪಿಸಿದ ಏಳು ಚರ್ಚುಗಳಲ್ಲಿ ಒಂದಾಗಿತ್ತು,<ref name="Goswami">{{Cite news |last=Goswami |first=Arunansh B. |title=Saint Thomas the Apostle to Us Indians |url=https://timesofindia.indiatimes.com/blogs/weltanschauung/saint-thomas-the-apostle-to-us-indians/ |access-date=2025-02-27 |work=The Times of India |issn=0971-8257}}</ref>{{citation needed|date=July 2012}} ಅವರು [[ಯೇಸು ಕ್ರಿಸ್ತ]]ನ ಹನ್ನೆರಡು ಶಿಷ್ಯರಲ್ಲಿ ಒಬ್ಬರು. ಅವರು 52 AD ಯಲ್ಲಿ [[ಮಾಲಿಯಂಕರ]]ದಲ್ಲಿ [[ಮುಝಿರಿಸ್]] ಬಂದರಿನಲ್ಲಿ ಇಳಿದರು ಎಂದು ಸಾಮಾನ್ಯವಾಗಿ ನಂಬಲಾಗಿದೆ, ಇದನ್ನು ಪ್ರಸ್ತುತ [[ಕ್ರಂಗನೋರ್]] ಅಥವಾ [[ಕೊಡುಂಗಲ್ಲೂರು]] ಎಂದು ಕರೆಯಲಾಗುತ್ತದೆ, ಮತ್ತು [[ದಕ್ಷಿಣ ಭಾರತ]]ದಲ್ಲಿ ಕ್ರೈಸ್ತ ಧರ್ಮವನ್ನು ಬೋಧಿಸಿದರು.<ref name="Goswami"/>
ಜಿಲ್ಲೆಯು 9ನೇ ಶತಮಾನದಿಂದ 12ನೇ ಶತಮಾನ AD ವರೆಗೆ ಎರಡನೇ ಚೇರ ಸಾಮ್ರಾಜ್ಯದ ಅಡಿಯಲ್ಲಿ ಧರ್ಮ ಮತ್ತು ಸಂಸ್ಕೃತಿಯಲ್ಲಿ ಅಭಿವೃದ್ಧಿ ಹೊಂದಿತು. [[ಚೆಂಗನ್ನೂರು|ಚೆಂಗನ್ನೂರಿನ]] ವಿದ್ವಾಂಸ [[ಶಕ್ತಿಭದ್ರನ್]] ಬರೆದ ಸಂಸ್ಕೃತ ನಾಟಕವಾದ `ಅಶ್ಚರ್ಯ ಚೂಡಾಮಣಿ` ಎಂಬ ಸಾಹಿತ್ಯ ಕೃತಿಯು ಅನೇಕ ಪ್ರಸ್ತುತ ಸಂಗತಿಗಳನ್ನು ತಿಳಿಯಲು ನಮಗೆ ಸಹಾಯ ಮಾಡುತ್ತದೆ. ಇದಲ್ಲದೆ, ಆಲಪುಳ ಜಿಲ್ಲೆಯ ಮುಹಮ್ಮ ಬಳಿಯ ಮುಕ್ಕಲ್ ವಟ್ಟಂನಲ್ಲಿರುವ [[ಅಯ್ಯಪ್ಪ]] ಸ್ವಾಮಿಯ ದೇವಾಲಯವನ್ನು [[ಚೀರಪ್ಪಾಂಚಿರ]] ಎಂದು ಕರೆಯಲಾಗುತ್ತದೆ, ಇದು ಅಯ್ಯಪ್ಪ ಸ್ವಾಮಿ ತಮ್ಮ ಸಮರ ಕಲೆಗಳನ್ನು ಕಲಿತ ಕಳರಿಗಾಗಿ. ಅಯ್ಯಪ್ಪ ಸ್ವಾಮಿಯವರ ಇತ್ತೀಚಿನ ಆಲ್ಬಮ್ 'ಸಬರಿಮಲೈ ವಾ ಚರಣಂ ಸೊಲ್ಲಿ ವಾ' ಈ ದೇವಾಲಯದ ಇತಿಹಾಸ ಮತ್ತು ಅಯ್ಯಪ್ಪ ಸ್ವಾಮಿ ಮಹಿಷಿ ರಾಕ್ಷಸನನ್ನು ವಶಪಡಿಸಿಕೊಳ್ಳಲು ಹೋಗುವ ಮೊದಲು ಇಲ್ಲಿ ಉಳಿದುಕೊಂಡಿದ್ದನ್ನು ವಿವರಿಸುವ ಹಾಡುಗಳನ್ನು ಹೊಂದಿದೆ.<ref>{{cite news|url=https://www.thehindu.com/features/friday-review/music/%E2%80%98Swamiyae%E2%80%A6-Saranam-Aiyappa%E2%80%99/article15616424.ece|title='Swamiyae… Saranam Aiyappa'|first=S.|last=Shivpprasadh|newspaper=The Hindu |date=29 November 2012|via=thehindu.com}}</ref>
1498 ರಲ್ಲಿ [[ಕೋಝಿಕ್ಕೋಡ್]]ನಲ್ಲಿ ಇಳಿದ ನಂತರ, [[ಪೋರ್ಚುಗಲ್|ಪೋರ್ಚುಗೀಸರು]] ಆಲಪುಳದಲ್ಲಿ ಪ್ರಭಾವಶಾಲಿ ಪಾತ್ರವನ್ನು ವಹಿಸಲು ಪ್ರಾರಂಭಿಸಿದರು. ಅವರು ಕ್ಯಾಥೋಲಿಕ್ ಧರ್ಮವನ್ನು ಹರಡುವ ಮೂಲಕ ಮತ್ತು ಈಗಾಗಲೇ ಅಸ್ತಿತ್ವದಲ್ಲಿದ್ದ [[ಸೇಂಟ್ ಥಾಮಸ್ ಕ್ರೈಸ್ತರು|ಕ್ರೈಸ್ತರನ್ನು]] ಕ್ಯಾಥೋಲಿಕರನ್ನಾಗಿ ಪರಿವರ್ತಿಸುವ ಮೂಲಕ ಪ್ರಾರಂಭಿಸಿದರು. [[ಅರ್ಥುಂಕಲ್#ಸೇಂಟ್ ಆಂಡ್ರ್ಯೂಸ್ ಬೆಸಿಲಿಕಾ, ಅರ್ಥುಂಕಲ್|ಸೇಂಟ್ ಆಂಡ್ರ್ಯೂಸ್ ಬೆಸಿಲಿಕಾ]]ವನ್ನು ಈ ಅವಧಿಯಲ್ಲಿ ನಿರ್ಮಿಸಲಾಯಿತು.<ref>{{cite web | url=http://arthunkal.bizhat.com/arthunkal_church_history.html | publisher=Arthunkal Church | title=Arthunkal Church history}}</ref>
17ನೇ ಶತಮಾನದಲ್ಲಿ, [[ಪೋರ್ಚುಗೀಸ್ ಜನರು|ಪೋರ್ಚುಗೀಸ್]] ಶಕ್ತಿಯು ಕುಸಿದಂತೆ, [[ಡಚ್ ಜನರು|ಡಚ್]]ರು ಈ ಜಿಲ್ಲೆಯ ರಾಜ್ಯಗಳಲ್ಲಿ ಪ್ರಬಲ ಸ್ಥಾನವನ್ನು ಪಡೆದರು. ಅವರು [[ಪುರಕ್ಕಡ್]], [[ಕಾಯಂಕುಲಂ]] ಮತ್ತು ಕರಪ್ಪುರಂಗಳ [[ರಾಜ]]ರ ನಡುವೆ ಸಹಿ ಮಾಡಿದ ಹಲವಾರು ಒಪ್ಪಂದಗಳನ್ನು ಅವಲಂಬಿಸಿ [[ಕರಿಮೆಣಸು|ಮೆಣಸು]] ಮತ್ತು [[ಶುಂಠಿ]]ಯನ್ನು ಸಂಗ್ರಹಿಸಲು ಅನೇಕ ಕಾರ್ಖಾನೆಗಳು ಮತ್ತು ಗೋದಾಮುಗಳನ್ನು ನಿರ್ಮಿಸಿದರು. ಕಾಲಾನಂತರದಲ್ಲಿ ಅವರು ಜಿಲ್ಲೆಯ ರಾಜಕೀಯ ಮತ್ತು ಸಾಂಸ್ಕೃತಿಕ ವ್ಯವಹಾರಗಳಲ್ಲಿಯೂ ತೊಡಗಿಸಿಕೊಂಡರು. ಆ ಸಮಯದಲ್ಲಿ 'ಆಧುನಿಕ [[ತಿರುವಾಂಕೂರು|ತಿರುವಾಂಕೂರಿನ]] ನಿರ್ಮಾತೃ' ಆಗಿದ್ದ ಮಹಾರಾಜ [[ಮಾರ್ಥಾಂಡ ವರ್ಮ]] (1706–1758) ಆ ರಾಜ್ಯಗಳ ರಾಜಕೀಯ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಿದರು.
ತಿರುವಾಂಕೂರಿನ [[ದಿವಾನ್]] [[ರಾಮಯ್ಯನ್ ದಳವಾಯ್]] (ಮೃತ 1756) [[ಮಾವೇಲಿಕ್ಕರ]]ದಲ್ಲಿ ನೆಲೆಸಿದ್ದರು, ಅಲ್ಲಿ ಅವರು ಮಾರ್ಥಾಂಡ ವರ್ಮ ನಿರ್ಮಿಸಿದ ಅರಮನೆಯನ್ನು ಹೊಂದಿದ್ದರು. ತನ್ನ ಪತ್ನಿಯ ಮರಣದ ನಂತರ, ರಾಮಯ್ಯನ್ ಮಾವೇಲಿಕ್ಕರದ ಎಡಸ್ಸೇರಿ ಕುಟುಂಬದ (ಪಿಜಿಎನ್ ಉನ್ನಿಥನ್, ಈ ಕುಟುಂಬದ ಸದಸ್ಯ, ನಂತರ 1947 ರಲ್ಲಿ ತಿರುವಾಂಕೂರಿನ ಕೊನೆಯ ದಿವಾನ್ ಆದರು) ಒಬ್ಬ ನಾಯರ್ ಮಹಿಳೆಯೊಂದಿಗೆ ಸಂಬಂಧವನ್ನು ಬೆಳೆಸಿದರು. ಅವನ ಮರಣದ ನಂತರ ರಾಮಯ್ಯನ್ ವಂಶಸ್ಥರು ತಿರುವಾಂಕೂರನ್ನು ತೊರೆದು ತಮಿಳುನಾಡಿನ [[ಪುದುಕೋಟೈ]]ಯಲ್ಲಿ ನೆಲೆಸಿದರು. ತಮಿಳುನಾಡಿನಲ್ಲಿ ನೆಲೆಸಿದ ಅವರ ನಾಯರ್ ಪತ್ನಿಗೆ ರಾಜ್ಯಕ್ಕೆ ಸಲ್ಲಿಸಿದ ಸೇವೆಗಳ ಮನ್ನಣೆಯಾಗಿ ತಿರುವಾಂಕೂರ್ ಸರ್ಕಾರದಿಂದ ಉಡುಗೊರೆಗಳು ಮತ್ತು ವಿಶೇಷ ಭತ್ಯೆಗಳನ್ನು ನೀಡಲಾಯಿತು ಆದರೆ ಅವರ ಸ್ವಂತ ವಂಶಸ್ಥರಿಗೆ ದಳವಾಯ್ ಎಂಬ ಗೌರವಸೂಚಕ ಬಿರುದನ್ನು ನೀಡಲಾಯಿತು.
19ನೇ ಶತಮಾನದಲ್ಲಿ ಜಿಲ್ಲೆಯು ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಕಂಡಿತು. ಕರ್ನಲ್ [[ಜಾರ್ಜ್ ಮನ್ರೋ (ಬ್ರಿಟಿಷ್ ಸೇನಾ ಅಧಿಕಾರಿ)|ಜಾರ್ಜ್ ಮನ್ರೋ]] ನ್ಯಾಯಾಂಗ ವ್ಯವಸ್ಥೆಯ ಪುನರ್ವ್ಯವಸ್ಥೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ತೆರೆಯಲ್ಪಟ್ಟ ಐದು ಅಧೀನ ನ್ಯಾಯಾಲಯಗಳಲ್ಲಿ ಒಂದು [[ಮಾವೇಲಿಕ್ಕರ]]ದಲ್ಲಿತ್ತು. ಹಿಂದಿನ ತಿರುವಾಂಕೂರು ರಾಜ್ಯದಲ್ಲಿ ಮೊದಲ ಅಂಚೆ ಕಚೇರಿ ಮತ್ತು ಮೊದಲ ಟೆಲಿಗ್ರಾಫ್ ಕಚೇರಿಯನ್ನು ಈ ಜಿಲ್ಲೆಯಲ್ಲಿ ಸ್ಥಾಪಿಸಲಾಯಿತು. [[ತೆಂಗಿನ ನಾರು]] ಚಾಪೆಗಳಿಗೆ ಮೊದಲ ಉತ್ಪಾದನಾ ಕಾರ್ಖಾನೆಯನ್ನು 1859 ರಲ್ಲಿ ಸ್ಥಾಪಿಸಲಾಯಿತು. 1894 ರಲ್ಲಿ ನಗರ ಸುಧಾರಣಾ ಸಮಿತಿಯನ್ನು ಸ್ಥಾಪಿಸಲಾಯಿತು.
ಜಿಲ್ಲೆಯು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರ ವಹಿಸಿತು. 1946 ರಲ್ಲಿ [[ಪುನ್ನಪ್ರ-ವಾಯಲರ್ ದಂಗೆ|ಪುನ್ನಪ್ರ ಮತ್ತು ವಾಯಲರ್]] ಹೋರಾಟಗಳು ತಿರುವಾಂಕೂರಿನ ದಿವಾನ್ ಆಗಿದ್ದ ಸರ್ [[ಸಿ. ಪಿ. ರಾಮಸ್ವಾಮಿ ಅಯ್ಯರ್]] ವಿರುದ್ಧ ಜನರನ್ನು ಒಟ್ಟುಗೂಡಿಸಿತು. ಇದು ರಾಮಸ್ವಾಮಿ ಅಯ್ಯರ್ ಅವರನ್ನು ತಿರುವಾಂಕೂರಿನ ರಾಜಕೀಯ ಕ್ಷೇತ್ರದಿಂದ ಹೊರಹಾಕಲು ಕಾರಣವಾಯಿತು. ಭಾರತದ ಸ್ವಾತಂತ್ರ್ಯದ ನಂತರ 24 ಮಾರ್ಚ್ 1948 ರಂದು ತಿರುವಾಂಕೂರಿನಲ್ಲಿ ಜನಪ್ರಿಯ ಮಂತ್ರಿಮಂಡಲವು ರಚನೆಯಾಯಿತು. ತಿರುವಾಂಕೂರು ಮತ್ತು [[ಕೊಚ್ಚಿ]] ರಾಜ್ಯಗಳು 1 ಜುಲೈ 1949 ರಂದು ವಿಲೀನಗೊಂಡವು.<ref>{{Cite news |date=2016-06-30 |title=Princely states of Travancore and Cochin join the union post independence |url=https://www.thehindu.com/features/kids/Joining-hands/article14410304.ece |access-date=2025-02-27 |work=The Hindu |language=en-IN |issn=0971-751X}}</ref> ಈ ವ್ಯವಸ್ಥೆಯು 1 ನವೆಂಬರ್ 1956 ರಂದು ಕೇರಳ ರಾಜ್ಯದ ರಚನೆಯವರೆಗೆ ಮುಂದುವರೆಯಿತು, [[ರಾಜ್ಯಗಳ ಪುನರ್ವಿಂಗಡಣೆ ಕಾಯಿದೆ, 1956|ರಾಜ್ಯಗಳ ಪುನರ್ವಿಂಗಡಣೆ ಕಾಯಿದೆ 1956]] ಅಡಿಯಲ್ಲಿ. ಜಿಲ್ಲೆಯು 1 ಆಗಸ್ಟ್ 1957 ರಂದು ಪ್ರತ್ಯೇಕ ಆಡಳಿತ ಘಟಕವಾಗಿ ಅಸ್ತಿತ್ವಕ್ಕೆ ಬಂದಿತು.<ref>{{Cite web |title=Alappuzha District formation |url=https://alappuzha.nic.in/en/history/}}</ref>
=== ರಾಜ ಕೇಶವದಾಸ್ ಮತ್ತು ಆಲಪುಳ ===
[[ರಾಜ ಕೇಶವದಾಸ್]], 18ನೇ ಶತಮಾನದಲ್ಲಿ [[ಧರ್ಮ ರಾಜ|ಧರ್ಮ ರಾಜ ಕಾರ್ತಿಕ ತಿರುನಾಳ್ ರಾಮ ವರ್ಮ]] ಆಳ್ವಿಕೆಯಲ್ಲಿ [[ತಿರುವಾಂಕೂರು|ತಿರುವಾಂಕೂರಿನ]] [[ದಿವಾನ್]] ಆಗಿದ್ದವರು ತಮ್ಮ ಯೋಜನಾ ಕೌಶಲ್ಯ ಮತ್ತು ಆಡಳಿತಾತ್ಮಕ ದಕ್ಷತೆಗೆ ಹೆಸರುವಾಸಿಯಾಗಿದ್ದರು. ಆಲಪುಳ ಪಟ್ಟಣವನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಮುಖ್ಯ ಪ್ರತಿಭೆಯಾಗಿದ್ದರು.<ref>{{Cite web|title=Alappuzha: A detailed Study for PSC {{!}} PSC Arivukal|url=https://www.pscarivukal.com/2020/02/alappuzha.html|access-date=2021-07-20|website=www.pscarivukal.com}}</ref>
ಅವರು ಆಲಪುಳವನ್ನು ಸೂಕ್ತ ಸ್ಥಳವೆಂದು ಕಂಡುಕೊಂಡರು ಮತ್ತು [[ತಿರುವಾಂಕೂರು|ತಿರುವಾಂಕೂರಿನಲ್ಲಿ]] ಉತ್ತಮ ಯೋಜಿತ ಬಂದರು ನಗರವನ್ನು ನಿರ್ಮಿಸಲು ಪ್ರಾರಂಭಿಸಿದರು. ಭೌಗೋಳಿಕ ಮತ್ತು ಸಾಗರ ಕಾರಣಗಳಿಂದಾಗಿ ಆಲಪುಳವು ಅತ್ಯಂತ ಸೂಕ್ತವಾಗಿತ್ತು. ಅವರು ಸರಕುಗಳನ್ನು ಬಂದರಿಗೆ ತರಲು ಬ್ಯಾಕ್ವಾಟರ್ಸ್ನಿಂದ ಎರಡು ಸಮಾನಾಂತರ ಕಾಲುವೆಗಳನ್ನು ನಿರ್ಮಿಸಿದರು ಮತ್ತು ಸೂರತ್, ಮುಂಬೈ ಮತ್ತು ಕಚ್ಛ್ನ ವ್ಯಾಪಾರಿಗಳಿಗೆ ಕೈಗಾರಿಕಾ ಉದ್ಯಮಗಳು, ವ್ಯಾಪಾರ ಮತ್ತು ಸರಕು ಕೇಂದ್ರಗಳನ್ನು ಪ್ರಾರಂಭಿಸಲು ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಿದರು. ಆಲಪುಳವು ಪ್ರಗತಿಯನ್ನು ಸಾಧಿಸಿತು ಮತ್ತು ಅವರ ಕಾಲದಲ್ಲಿ ತಿರುವಾಂಕೂರಿನ ಹಣಕಾಸಿನ ನರ ಕೇಂದ್ರವಾಯಿತು.<ref>{{cite book |last1=Kusuman |first1=Kakkaraveettil K. |title=A history of trade & commerce in Travancore: 1600 - 1805 |date=1987 |publisher=Mittal |location=Delhi |isbn=8170990262}}</ref> ಬಂದರು 1762 ರಲ್ಲಿ ತೆರೆಯಲ್ಪಟ್ಟಿತು, ಮುಖ್ಯವಾಗಿ ತೆಂಗಿನ ನಾರಿನ ಚಾಪೆ ಮತ್ತು ತೆಂಗಿನ ನಾರಿನ ನೂಲಿನ ರಫ್ತಿಗಾಗಿ. ಕೇಶವದಾಸ್ ಕಲ್ಕತ್ತಾ ಮತ್ತು ಬಾಂಬೆಗೆ ವ್ಯಾಪಾರಕ್ಕಾಗಿ ಮೂರು ಹಡಗುಗಳನ್ನು ನಿರ್ಮಿಸಿದರು, ಮತ್ತು ಅಲ್ಲೆಪ್ಪೇಯ್ ಪೂರ್ವದಲ್ಲಿ ಉತ್ಪತ್ತಿಯಾಗುವ ಸರಕುಗಳ ಸಂಗ್ರಹಣೆ ಮತ್ತು ವಿಲೇವಾರಿಗೆ ಅನುಕೂಲಕರ ಡಿಪೋವನ್ನು ಒದಗಿಸಿತು.<ref>{{cite web|url=http://prd.kerala.gov.in/d_alappuzha.htm|title=Alappuzha - A brief history|access-date=23 April 2020|archive-date=30 September 2017|archive-url=https://web.archive.org/web/20170930221743/http://prd.kerala.gov.in/d_alappuzha.htm|url-status=dead}}</ref>
== ಭೌಗೋಳಿಕತೆ ==
{{wide image|File:VembanadAlleppey.jpg|800px|[[ವೆಂಬನಾಡ್ ಸರೋವರ]]}}
ಆಲಪುಳವು {{Coord|9.54|N|76.40|E|}} ನಲ್ಲಿದೆ.<ref>{{cite web|url=http://www.fallingrain.com/world/IN/13/Alappuzha.html |title=Maps, Weather, Videos, and Airports for Alappuzha, India |publisher=Fallingrain.com |access-date=2013-09-25}}</ref> ಸರಾಸರಿ ಎತ್ತರ {{convert|1|m|ft}}.<ref>[http://population.mongabay.com/population/india/1278985/alleppey elevation] {{webarchive|url=https://web.archive.org/web/20111116031902/http://population.mongabay.com/population/india/1278985/alleppey |date=16 November 2011 }}</ref> ಆಲಪುಳವು {{convert|1414|km2}} ವಿಸ್ತೀರ್ಣವನ್ನು ಆವರಿಸಿದೆ ಮತ್ತು {{convert|2195|km2}} [[ವೆಂಬನಾಡ್ ಸರೋವರ]]ದಿಂದ ಆವೃತವಾಗಿದೆ, ಅಲ್ಲಿ ಆರು ಪ್ರಮುಖ ನದಿಗಳು ಜಿಲ್ಲೆಯ 80 ಕಿ.ಮೀ ಕರಾವಳಿ ರೇಖೆಯನ್ನು ಸೇರುವ ಮೊದಲು ಹರಡುತ್ತವೆ. ಆಲಪುಳ ನಗರವು [[ರಾಷ್ಟ್ರೀಯ ಜಲಮಾರ್ಗ 3 (ಭಾರತ)|ರಾಷ್ಟ್ರೀಯ ಜಲಮಾರ್ಗ 3]] ರ ಭಾಗವಾಗಿರುವ [[ಕಾಲುವೆ]]ಗಳ ವ್ಯವಸ್ಥೆಯಿಂದ ಅಡ್ಡಹಾಯಲ್ಪಟ್ಟಿದೆ.<ref>{{cite web|url=https://www.thehouseboatkerala.com/the-best-time-to-visit-alleppey.html|title=Alleppey|website=thehouseboatkerala.com}}</ref>
ಜಿಲ್ಲೆಯು ಸರೋವರಗಳು, ನದಿಗಳು ಮತ್ತು ಕಾಲುವೆಗಳಿಂದ ಆವೃತವಾದ ಮರಳಿನ ಪಟ್ಟಿಯಾಗಿದೆ. ಜಿಲ್ಲೆಯ ಪೂರ್ವ ಭಾಗದಲ್ಲಿ [[ಭರಣಿಕ್ಕಾವು]] ಮತ್ತು [[ಚೆಂಗನ್ನೂರು]] ಬ್ಲಾಕ್ಗಳ ನಡುವೆ ಕೆಲವು ಚದುರಿದ ಗುಡ್ಡಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಪರ್ವತಗಳು ಅಥವಾ ಬೆಟ್ಟಗಳಿಲ್ಲ. ಈ ಜಿಲ್ಲೆಯಲ್ಲಿ ಯಾವುದೇ ಅರಣ್ಯ ಪ್ರದೇಶವಿಲ್ಲ.
ಆಲಪುಳವು ಅದರ ಪಶ್ಚಿಮದಲ್ಲಿ ಲಕ್ಷದ್ವೀಪ ಸಮುದ್ರದಿಂದ ಸುತ್ತುವರೆದಿದೆ. ಪಟ್ಟಣವು ಸರೋವರಗಳು, ಸರೋವರಗಳು ಮತ್ತು [[ಶುದ್ಧ ನೀರು|ಶುದ್ಧ ನೀರಿನ]] ನದಿಗಳ ಜಾಲವನ್ನು ಹೊಂದಿದೆ. ಕರಾವಳಿ ಆಲಪುಳ ನೀರಿನ ಶ್ರೀಮಂತಿಕೆಯು 'ಚಕರ' ಎಂದು ಕರೆಯಲ್ಪಡುವ ಆಲಪುಳ ಕರಾವಳಿಯಲ್ಲಿ ದೊಡ್ಡ ಪ್ರಮಾಣದ ಮೀನು ಮತ್ತು [[ಸೀಗಡಿ]]ಗಳ ಅರಳುವಿಕೆ ಮತ್ತು ನಂತರದ ಶೇಖರಣೆಯಲ್ಲಿ ವಾರ್ಷಿಕವಾಗಿ ವ್ಯಕ್ತವಾಗುತ್ತದೆ. ಮಳೆಗಾಲದ ನಂತರದ ಅವಧಿಯಲ್ಲಿ ಕಾಣಿಸಿಕೊಳ್ಳುವ ಈ ವಾರ್ಷಿಕ ಮರಳು ದಿಬ್ಬದ ಬದಲಾವಣೆಯು ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುತ್ತದೆ ಮತ್ತು ಕೇರಳ ಜನರಿಗೆ ಹಬ್ಬದ ಸಮಯವಾಗಿದೆ. ವಾರ್ಷಿಕ ಪ್ರವಾಹಗಳು ಮಣ್ಣು ಮತ್ತು ನೀರನ್ನು ಪುನರುಜ್ಜೀವನಗೊಳಿಸುತ್ತವೆ ಮತ್ತು ಶುದ್ಧೀಕರಿಸುತ್ತವೆ, ಇದರಿಂದಾಗಿ ಸಮುದ್ರದಲ್ಲಿ ಸೀಗಡಿ, [[ನಳ್ಳಿ]], ಮೀನುಗಳು, ಆಮೆಗಳು ಮತ್ತು ಇತರ [[ಸಸ್ಯವರ್ಗ|ಸಸ್ಯವರ್ಗ]]ದಂತಹ ಸಮುದ್ರ ಜೀವನವು ಸಮೃದ್ಧವಾಗಿದೆ.
[[ಕೇರಳ ಬ್ಯಾಕ್ವಾಟರ್ಸ್|ಬ್ಯಾಕ್ವಾಟರ್ಸ್]] ಮತ್ತು [[ಜೌಗು ಪ್ರದೇಶಗಳು]] ಪ್ರತಿ ವರ್ಷವೂ ದೂರದಿಂದ ಇಲ್ಲಿಗೆ ಬರುವ ಸಾವಿರಾರು ವಲಸೆ [[ಸಾಮಾನ್ಯ ಟೀಲ್]], [[ಬಾತುಕೋಳಿ]]ಗಳು ಮತ್ತು [[ನೀರುಕಾಗೆ]]ಗಳಿಗೆ ಆತಿಥ್ಯ ವಹಿಸುತ್ತವೆ. ಈ ಪ್ರದೇಶದ ಪ್ರಮುಖ ಲಕ್ಷಣವೆಂದರೆ ಕುಟ್ಟನಾಡ್ ಎಂಬ ಪ್ರದೇಶ, ಕೇರಳದ 'ಧಾನ್ಯದ ತೊಟ್ಟಿ'. [[ಕುಟ್ಟನಾಡ್]] ಕೇರಳದ ಅಕ್ಕಿಯ ತಟ್ಟೆ ಎಂದೂ ಕರೆಯಲ್ಪಡುತ್ತದೆ ಮತ್ತು ಸಮುದ್ರ ಮಟ್ಟಕ್ಕಿಂತ ಕೆಳಗೆ ಕೃಷಿ ಮಾಡುವ ಕೆಲವೇ ಸ್ಥಳಗಳಲ್ಲಿ ಒಂದಾಗಿದೆ.<ref name="keralatourism.org">{{Cite web |title=Kuttanad - the Rice Bowl of Kerala in Alappuzha |url=https://www.keralatourism.org/destination/kuttanad-alappuzha/59/ |access-date=2025-03-11 |website=www.keralatourism.org |language=en}}</ref> ಭತ್ತದ ಗದ್ದೆಗಳು ಸರಾಸರಿ ಸಮುದ್ರ ಮಟ್ಟಕ್ಕಿಂತ 0.6 ರಿಂದ 2 ಮೀ ಕೆಳಗಿವೆ.<ref name="alappuzha"/>
=== ಹವಾಮಾನ ===
ಸಮುದ್ರದ ಸಾಮೀಪ್ಯದಿಂದಾಗಿ, ಆಲಪುಳದ ಹವಾಮಾನವು [[ಬೇಸಿಗೆ]]ಯಲ್ಲಿ ಆರ್ದ್ರ ಮತ್ತು ಬಿಸಿಯಾಗಿರುತ್ತದೆ, ಆದಾಗ್ಯೂ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಸಾಕಷ್ಟು ತಂಪು ಮತ್ತು ಆಹ್ಲಾದಕರವಾಗಿರುತ್ತದೆ. ಸರಾಸರಿ ಮಾಸಿಕ ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ಆಗಿದೆ. ರಾಜ್ಯದ ಇತರ ಭಾಗಗಳಂತೆ, ಜಿಲ್ಲೆಯು ಎರಡು ಕಾಲಿಕ [[ಮಾನ್ಸೂನ್]]ಗಳ ಪ್ರಯೋಜನವನ್ನು ಪಡೆಯುತ್ತದೆ. ಆಲಪುಳ ಪಟ್ಟಣವು ದೀರ್ಘ ಮಾನ್ಸೂನ್ ಋತುವನ್ನು ಅನುಭವಿಸುತ್ತದೆ, ಏಕೆಂದರೆ [[ನೈಋತ್ಯ ಮಾನ್ಸೂನ್|ನೈಋತ್ಯ]] ಮತ್ತು [[ಈಶಾನ್ಯ ಮಾನ್ಸೂನ್]] ಎರಡೂ ಆಲಪುಳದ ಹವಾಮಾನದ ಮೇಲೆ ಪ್ರಭಾವ ಬೀರುತ್ತವೆ. ನೈಋತ್ಯ ಮಾನ್ಸೂನ್ ಜೂನ್ನಿಂದ ಸೆಪ್ಟೆಂಬರ್ ವರೆಗಿನ ತಿಂಗಳುಗಳಲ್ಲಿ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಈಶಾನ್ಯ ಮಾನ್ಸೂನ್ ಅಕ್ಟೋಬರ್ನಿಂದ ನವೆಂಬರ್ ವರೆಗೆ ಮಳೆಯನ್ನು ತರುತ್ತದೆ. ಈ ಪ್ರದೇಶವು ಪಡೆಯುವ ಸರಾಸರಿ ಮಳೆಯು 2763 ಮಿ.ಮೀ.<ref>{{cite web|url=https://www.mapsofindia.com/maps/india/annualrainfall.htm|title=Annual Rainfall Map of India, Rainfall in India|website=Maps of India}}</ref>
{{Weather box
| location = ಆಲಪುಳ (1991–2020, ತೀವ್ರತೆಗಳು 1944–2012)
| metric first = Y
| single line = Y
| Jan record high C = 36.7
| Feb record high C = 37.4
| Mar record high C = 37.9
| Apr record high C = 38.2
| May record high C = 36.7
| Jun record high C = 37.2
| Jul record high C = 34.0
| Aug record high C = 34.2
| Sep record high C = 34.8
| Oct record high C = 35.6
| Nov record high C = 35.4
| Dec record high C = 36.6
| year record high C = 38.2
| Jan record low C = 17.3
| Feb record low C = 18.7
| Mar record low C = 18.8
| Apr record low C = 19.2
| May record low C = 20.0
| Jun record low C = 19.5
| Jul record low C = 19.9
| Aug record low C = 19.4
| Sep record low C = 20.4
| Oct record low C = 19.3
| Nov record low C = 20.0
| Dec record low C = 17.8
| year record low C = 17.3
|Jan high C = 32.7
|Feb high C = 33.0
|Mar high C = 33.6
|Apr high C = 33.7
|May high C = 32.8
|Jun high C = 30.4
|Jul high C = 29.4
|Aug high C = 29.6
|Sep high C = 30.5
|Oct high C = 31.3
|Nov high C = 32.0
|Dec high C = 32.5
| year high C = 31.8
|Jan low C = 22.5
|Feb low C = 23.6
|Mar low C = 25.0
|Apr low C = 25.4
|May low C = 25.3
|Jun low C = 23.9
|Jul low C = 23.2
|Aug low C = 23.5
|Sep low C = 23.8
|Oct low C = 23.8
|Nov low C = 23.8
|Dec low C = 22.9
| year low C = 23.9
| rain colour = green
| Jan rain mm = 16.3
| Feb rain mm = 42.1
| Mar rain mm = 62.7
| Apr rain mm = 131.7
| May rain mm = 274.1
| Jun rain mm = 592.0
| Jul rain mm = 485.9
| Aug rain mm = 349.8
| Sep rain mm = 296.5
| Oct rain mm = 357.4
| Nov rain mm = 175.8
| Dec rain mm = 48.2
| year rain mm = 2832.4
| Jan rain days = 1.0
| Feb rain days = 1.9
| Mar rain days = 3.3
| Apr rain days = 6.7
| May rain days = 11.6
| Jun rain days = 21.3
| Jul rain days = 21.4
| Aug rain days = 16.6
| Sep rain days = 13.8
| Oct rain days = 15.0
| Nov rain days = 8.5
| Dec rain days = 2.9
| year rain days = 123.9
|time day = 17:30 [[ಭಾರತೀಯ ಪ್ರಮಾಣಿತ ಸಮಯ|IST]]
| Jan humidity = 68
| Feb humidity = 70
| Mar humidity = 73
| Apr humidity = 74
| May humidity = 78
| Jun humidity = 86
| Jul humidity = 88
| Aug humidity = 87
| Sep humidity = 84
| Oct humidity = 81
| Nov humidity = 78
| Dec humidity = 71
|year humidity = 86
|source 1 = [[ಭಾರತ ಹವಾಮಾನ ಇಲಾಖೆ]]<ref name=IMDnormals>
{{cite web
| archive-url = https://web.archive.org/web/20240408025145/https://www.imdpune.gov.in/library/public/Climatological%20Tables%201991-2020.pdf
| archive-date = 8 April 2024
| url = https://www.imdpune.gov.in/library/public/Climatological%20Tables%201991-2020.pdf
| title = Station: Alappuzha Climatological Table 1991–2020
| work = Climatological Normals 1991–2020
| publisher = India Meteorological Department
| access-date = 7 July 2024}}</ref><ref>
{{cite web
| archive-url = https://web.archive.org/web/20200205042509/http://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| archive-date = 5 February 2020
| url = https://imdpune.gov.in/library/public/EXTREMES%20OF%20TEMPERATURE%20and%20RAINFALL%20upto%202012.pdf
| title = Extremes of Temperature & Rainfall for Indian Stations (Up to 2012)
| publisher = India Meteorological Department
| date = December 2016
| page = M105
| access-date = 19 February 2020}}</ref>
}}
== ಜನಸಂಖ್ಯಾಶಾಸ್ತ್ರ ==
{{bar box
|width=250px
|barwidth=100px
| title = ಆಲಪುಳ ನಗರದಲ್ಲಿ ಧರ್ಮ (2011)
| left1 =
| right1 = ಶೇಕಡಾವಾರು
| float = right
| bars =
{{bar percent|[[ಹಿಂದೂ ಧರ್ಮ]]|darkorange|49.85}}
{{bar percent|[[ಕ್ರೈಸ್ತ ಧರ್ಮ]]|blue|26.23}}
{{bar percent|[[ಇಸ್ಲಾಂ ಧರ್ಮ]]|green|23.62}}
{{bar percent|ಇತರೆ|black|0.30}}
}}
[[File:JainTempleAlappuzhaFrontPrd.jpg|thumb|250px|ಜೈನ ದೇವಾಲಯ, ಆಲಪುಳ]]
{{Historical populations
|state=collapsed
|align=right
|1991 | 174,666
|2001 | 239,384
|2011 | 240,991
|footnote = ಮೂಲಗಳು:
* 1991-2011<ref>{{Cite web|url=https://www.citypopulation.de/en/india/kerala/3211__alappuzha/|title=Cities and towns in Alappuzha district|website=citypopulation.de}}</ref>
}}
2011 ರ ಜನಗಣತಿಯ ಪ್ರಕಾರ, ಆಲಪುಳ ನಗರಸಭೆ+ಬಾಹ್ಯ ಬೆಳವಣಿಗೆಗಳು 116,439 ಪುರುಷರು ಮತ್ತು 124,552 ಮಹಿಳೆಯರೊಂದಿಗೆ 240,991 ಜನಸಂಖ್ಯೆಯನ್ನು ಹೊಂದಿದ್ದವು. ನಗರವು ಆಲಪುಳ ನಗರಸಭೆ ಮತ್ತು [[ಪುನ್ನಪ್ರ]] ಮತ್ತು [[ಕಲಾರ್ಕೋಡ್]] ಗ್ರಾಮಗಳ ಬಾಹ್ಯ ಬೆಳವಣಿಗೆಗಳ ಮೇಲೆ {{cvt|65.57|km2}} ವಿಸ್ತೀರ್ಣದಲ್ಲಿ ಹರಡಿದೆ ಮತ್ತು ಪ್ರತಿ ಚದರ ಕಿಲೋಮೀಟರ್ಗೆ 3,675 ಜನರ ಜನಸಾಂದ್ರತೆಯನ್ನು ಹೊಂದಿದೆ. ಆರು ವರ್ಷದೊಳಗಿನ 22,361 ಜನರಿದ್ದರು. ಆಲಪುಳ ನಗರದ [[ಸಾಕ್ಷರತಾ ಪ್ರಮಾಣ]]ವು 95.81% ರಷ್ಟಿದ್ದು, 209,201 ಸಾಕ್ಷರರಿದ್ದಾರೆ, ಅಲ್ಲಿ 101,927 ಪುರುಷರು (97.3%) ಮತ್ತು 107,274 ಮಹಿಳೆಯರು (94.43%). ಆಲಪುಳವು 1070 ರ ಲಿಂಗಾನುಪಾತವನ್ನು ಹೊಂದಿತ್ತು.<ref>[https://censusindia.gov.in/nada/index.php/catalog/11379/download/14492/DDW32C-01%20MDDS.XLS Census India 2011]</ref>
ಜನಸಂಖ್ಯೆಯು ಪ್ರಧಾನವಾಗಿ [[ಹಿಂದೂಗಳು]], ಮತ್ತು ಗಣನೀಯ ಸಂಖ್ಯೆಯ [[ಕ್ರೈಸ್ತರು]] ಮತ್ತು [[ಮುಸ್ಲಿಮರು]] ಇದ್ದಾರೆ. ಅತ್ಯಂತ ವ್ಯಾಪಕವಾಗಿ ಮಾತನಾಡುವ ಭಾಷೆ [[ಮಲಯಾಳಂ]], ಆದರೂ ಅನೇಕ ಜನರು [[ಕೊಂಕಣಿ ಭಾಷೆ|ಕೊಂಕಣಿ]] ಮಾತನಾಡುತ್ತಾರೆ.
ಆಲಪುಳ ಪಟ್ಟಣದಲ್ಲಿನ ಮಲಂಕರ ಆರ್ಥೊಡಾಕ್ಸ್ ಕ್ರೈಸ್ತರು ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ನ [[ಮಲಂಕರ ಆರ್ಥೊಡಾಕ್ಸ್ ಡಯಾಸಿಸ್ ಆಫ್ ನಿರಣಂ|ನಿರಣಂ ಡಯಾಸಿಸ್]] ವ್ಯಾಪ್ತಿಗೆ ಒಳಪಡುತ್ತಾರೆ. ಪ್ರಸ್ತುತ ಪಟ್ಟಣದಲ್ಲಿನ ಅತಿದೊಡ್ಡ ಆರ್ಥೊಡಾಕ್ಸ್ ಚರ್ಚು ಸೇಂಟ್ ಥಾಮಸ್ ಆರ್ಥೊಡಾಕ್ಸ್ ಚರ್ಚ್, ಆಲಪುಳವಾಗಿದ್ದು, ಇದು ಆಲಪುಳದಲ್ಲಿ ಮಾರ್ ಗ್ರೆಗೋರಿಯೋಸ್ ಕರುಣ್ಯ ಥೀರಂ ಮಾರ್ಗದರ್ಶನ ಕೇಂದ್ರವನ್ನು ಸಹ ನಡೆಸುತ್ತದೆ.<ref>{{cite web |title=St. Thomas Church, Parish |url=https://alappuzhaorthodoxchurch.org/parish.html |website=Alappuzha Orthodox Church |access-date=31 January 2025}}</ref>
ಮಾತನಾಡುವ ಮಲಯಾಳಂನ ಪ್ರಮಾಣಿತ ಉಪಭಾಷೆಯು ಕೇಂದ್ರ ತಿರುವಾಂಕೂರು ಉಪಭಾಷೆಯಾಗಿದೆ.<ref>{{cite web|url=http://www.jaimalayalam.com/maladialect.htm |title=dialect |publisher=Jaimalayalam.com |date= |access-date=2021-02-14}}</ref> ಕೊಂಕಣಿ ಎಂಬುದು [[ಕೊಂಕಣ]] ಪ್ರದೇಶದಲ್ಲಿ ಮಾತನಾಡುವ ಭಾಷೆಯಾಗಿದೆ. 16ನೇ ಮತ್ತು 18ನೇ ಶತಮಾನಗಳ ಪೋರ್ಚುಗೀಸ್ ಮತ್ತು ಡಚ್ ಆಕ್ರಮಣಗಳ ಸಮಯದಲ್ಲಿ, ಅನೇಕ [[ಕೊಂಕಣಿ]]ಗಳು [[ತಿರುವಾಂಕೂರು]] ರಾಜ್ಯದ [[ತುರವೂರು, ಚೇರ್ತಲ|ತುರವೂರು]], [[ಚೇರ್ತಲ]] ಮತ್ತು ಆಲಪುಳಕ್ಕೆ ಮತ್ತು ಕೇರಳದ ಇತರ ಸ್ಥಳಗಳಾದ [[ಕೊಚ್ಚಿ]], [[ಕೊಡುಂಗಲ್ಲೂರು]], ಮತ್ತು [[ಕೊಲ್ಲಂ]]ಗಳಿಗೆ ದಕ್ಷಿಣಕ್ಕೆ ವಲಸೆ ಬಂದರು. ಈ ಜನರ ಬಹುಪಾಲು ಜನರು ಆಲಪುಳದಲ್ಲಿ ನೆಲೆಸಿದರು.<ref>{{cite web|url=http://www.gosripuram.org.in/Community4.htm |title=migration of konkanis |publisher=Gosripuram.org.in |access-date=2013-09-25 |url-status=usurped |archive-url=https://web.archive.org/web/20130927053619/http://www.gosripuram.org.in/Community4.htm |archive-date=27 September 2013 }}</ref><ref>{{cite web |url=http://gsbkonkani.net/OurHistory.htm |title=migration of konkanis |publisher=Gsbkonkani.net |access-date=2013-09-25 |archive-date=19 September 2011 |archive-url=https://web.archive.org/web/20110919072443/http://www.gsbkonkani.net/OurHistory.htm |url-status=dead }}</ref><ref>[[ಗೌಡ ಸಾರಸ್ವತ್ ಬ್ರಾಹ್ಮಣ|"migration of konkanis]]</ref>
== ಆರ್ಥಿಕತೆ ==
[[File:Alleppey Boat houses.jpg|thumb|[[ಹೌಸ್ಬೋಟ್]]ಗಳು ಅಲ್ಲೆಪ್ಪೇಯ್ನಲ್ಲಿ]]
ಜಿಲ್ಲೆಯ ಆರ್ಥಿಕತೆಯು ಕೃಷಿ ಮತ್ತು ಸಮುದ್ರ ಉತ್ಪನ್ನಗಳನ್ನು ಆಧರಿಸಿದೆ. ಕೃಷಿ ಚಟುವಟಿಕೆಗಳು ಪ್ರಧಾನವಾಗಿ ಕೇರಳದ ಅಕ್ಕಿಯ ತಟ್ಟೆಯಾದ [[ಕುಟ್ಟನಾಡ್]] ಪ್ರದೇಶದ ಸುತ್ತ ಕೇಂದ್ರೀಕೃತವಾಗಿವೆ. ಜಿಲ್ಲೆಯು ಕೈಗಾರಿಕಾತ್ಮಕವಾಗಿ ಹಿಂದುಳಿದಿದ್ದರೂ, [[ತೆಂಗಿನ ನಾರು]] ಮತ್ತು ತೆಂಗಿನ ನಾರಿನ ಉತ್ಪನ್ನಗಳು, ಸಮುದ್ರ ಉತ್ಪನ್ನಗಳು, ಕೈಮಗ್ಗಗಳು, ವಿವಿಧ ರೀತಿಯ [[ಕರಕುಶಲ]] ವಸ್ತುಗಳು, [[ಕಳ್ಳು ಹಿಂಡುವುದು]] ಆಧಾರಿತ ಕೆಲವು ಸಾಂಪ್ರದಾಯಿಕ ಕೈಗಾರಿಕೆಗಳು ಬಹಳ ಹಿಂದಿನಿಂದಲೂ ಸಕ್ರಿಯವಾಗಿವೆ. ಜಿಲ್ಲೆಯು ಕೇರಳದಲ್ಲಿ ತೆಂಗಿನ ನಾರು ಉದ್ಯಮದ ಸಾಂಪ್ರದಾಯಿಕ ನೆಲೆ ಎಂದು ಕರೆಯಲ್ಪಡುತ್ತದೆ.<ref>{{cite web|url=https://www.scribd.com/document/56052689/Final-Body|title=Final Body|website=Scribd}}</ref>
[[File:Coco Boat Allapphy Kerala.JPG|thumb|ಆಲಪುಳವು ಸಾರಿಗೆ ಮತ್ತು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ವ್ಯಾಪಕವಾದ ಬ್ಯಾಕ್ವಾಟರ್ಸ್ ಅನ್ನು ಹೊಂದಿದೆ.]]
ಕಚ್ಚಾ ವಸ್ತುಗಳ ಲಭ್ಯತೆ ಮತ್ತು ಹಸಿರು ಸಿಪ್ಪೆಯನ್ನು ಪಡೆಯಲು ಸೂಕ್ತವಾದ ಬ್ಯಾಕ್ವಾಟರ್ಸ್ ಮತ್ತು ಕಾಲುವೆಗಳ ಅಸ್ತಿತ್ವ ಮತ್ತು ಸಾರಿಗೆಯ ಪ್ರವೇಶಸಾಧ್ಯತೆಯು ಈ ಉದ್ಯಮದ ಅಭಿವೃದ್ಧಿಯ ಮುಖ್ಯ ಅಂಶಗಳಾಗಿವೆ. [[ಅರಬ್ಬರು]] ಬಹಳ ಪ್ರಾಚೀನ ಕಾಲದಿಂದಲೂ ತೆಂಗಿನ ನಾರಿನ ಉತ್ಪನ್ನಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಚಾಪೆ ಮತ್ತು ಮೆತ್ತೆಗಳ ತಯಾರಿಕೆಯನ್ನು 1859 ರಲ್ಲಿ ಜೇಮ್ಸ್ ದುರ್ರಾಗ್ ಅವರು ಮೊದಲು ಪರಿಚಯಿಸಿದರು.<ref>"mats {{cite web|url=http://www.deputycollector.in/uploads/sub_sub_cont/1103151300189140KERALA%20ECONOMY.pdf |title=Archived copy |access-date=2011-06-06 |url-status=dead |archive-url=https://web.archive.org/web/20110409171842/http://www.deputycollector.in/uploads/sub_sub_cont/1103151300189140KERALA%20ECONOMY.pdf |archive-date=9 April 2011 |df=dmy }}"</ref>
ತೆಂಗಿನ ನಾರು ಮಂಡಳಿಯನ್ನು ಕೇಂದ್ರ ಸರ್ಕಾರವು 1955 ರಲ್ಲಿ ತೆಂಗಿನ ನಾರು ಉದ್ಯಮ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಸ್ಥಾಪಿಸಿತು.<ref>{{cite web|url=https://www.scribd.com/doc/40081419/Coir-Board-today|title=coir board|access-date=8 September 2017|archive-date=19 November 2010|archive-url=https://web.archive.org/web/20101119115131/http://www.scribd.com/doc/40081419/Coir-Board-today|url-status=dead}}</ref> [[ಕಲಾವೂರು]]ನಲ್ಲಿ ತೆಂಗಿನ ನಾರು ಸಂಶೋಧನಾ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.<ref>"coir research {{cite web|url=http://www.ccriindia.org/Portal/web%20home%20page/CCRI%20frond%20icon%20file.htm |title=Central Coir Research Institute |access-date=2011-06-05 |url-status=dead |archive-url=https://web.archive.org/web/20110912002921/http://www.ccriindia.org/Portal/web%20home%20page/CCRI%20frond%20icon%20file.htm |archive-date=12 September 2011 |df=dmy }}"</ref> ರಾಷ್ಟ್ರೀಯ ತೆಂಗಿನ ನಾರು ತರಬೇತಿ ಮತ್ತು ವಿನ್ಯಾಸ ಕೇಂದ್ರವನ್ನು 1965 ರಲ್ಲಿ ಆಲಪುಳದಲ್ಲಿ ಸ್ಥಾಪಿಸಲಾಯಿತು.
[[ತೆಂಗಿನ ನಾರು]] ಆಲಪುಳ, [[ಕಾಯಂಕುಲಂ]], [[ಕೊಕ್ಕೋತಮಂಗಲಂ]], [[ಕೋಮಲಪುರಂ]], [[ಮನ್ನಂಚೇರಿ]], [[ಮುಹಮ್ಮ]] ಮತ್ತು [[ವಾಯಲರ್]]ಗಳಲ್ಲಿ ತಯಾರಿಸಲಾಗುವ ಪ್ರಮುಖ ಸರಕು.<ref>{{cite web|url=https://www.scribd.com/doc/56052689/8/INDUSTRY-PROFILE |title=coir |publisher=Scribd.com |access-date=2013-09-25}}</ref> ತೆಂಗಿನ ನಾರಿನ ಉತ್ಪನ್ನಗಳು [[ಚೇರ್ತಲ]] ಮತ್ತು [[ಮನ್ನಂಚೇರಿ]]ಯಲ್ಲಿ, ಸುಣ್ಣದ ಚಿಪ್ಪು [[ಆರೂಕುಟ್ಟಿ]] ಮತ್ತು [[ಕೋಡಮ್ತುರುತ್]]ನಲ್ಲಿ, [[ಪ್ಲೈವುಡ್]] [[ಚೆಂಗನ್ನೂರು]]ನಲ್ಲಿ, ಕೆಲ್ಟ್ರಾನ್ ನಿಯಂತ್ರಣಗಳು [[ಆರೂರು]]ನಲ್ಲಿ,<ref>"Keltron Controls {{cite web|url=http://www.veethi.com/Alappuzha-Computers-and-Electronics--yellowpages_list_details-list_id-156071.htm |title=Archived copy |access-date=7 June 2011 |url-status=dead |archive-url=https://web.archive.org/web/20110727000954/http://www.veethi.com/Alappuzha-Computers-and-Electronics--yellowpages_list_details-list_id-156071.htm |archive-date=27 July 2011 |df=dmy }}"</ref> [[ಪೊಟ್ಯಾಸಿಯಮ್ ಕ್ಲೋರೈಡ್]] [[ಮಾವೇಲಿಕ್ಕರ]]ದಲ್ಲಿ, ಮತ್ತು ತೆಂಗಿನಕಾಯಿ ಮತ್ತು ತೆಂಗಿನ ಎಣ್ಣೆ [[ತನ್ನೀರ್ಮುಕ್ಕಂ]]ನಲ್ಲಿ ಲಭ್ಯವಿದೆ. ಈ ಪಟ್ಟಣಗಳಲ್ಲಿ ತಯಾರಿಸಲಾಗುವ ಇತರ ಪ್ರಮುಖ ಸರಕುಗಳೆಂದರೆ [[ಕೊಪ್ರಾ]], ಗಾಜು, ಚಾಪೆ ಮತ್ತು [[ಬೆಂಕಿಕಡ್ಡಿ]]ಗಳು.<ref>"coir mat {{cite web|url=http://coirboard.gov.in/dir_manufacturers_mats.htm |title=Resources|access-date=7 June 2011 |url-status=dead |archive-url=https://web.archive.org/web/20110813201755/http://coirboard.gov.in/dir_manufacturers_mats.htm |archive-date=13 August 2011 |df=dmy }}"</ref>
ಇತ್ತೀಚಿನ ಕಾಲದಲ್ಲಿ, ಪ್ರವಾಸೋದ್ಯಮವು ಆದಾಯದ ಪ್ರಮುಖ ಮೂಲವಾಗಿದೆ. ಇದು ಮುಖ್ಯವಾಗಿ ಪಟ್ಟಣದ ಸುಂದರ ಬ್ಯಾಕ್ವಾಟರ್ಸ್ಗಳ ನೋಟವನ್ನು ಪ್ರವಾಸಿಗರಿಗೆ ಒದಗಿಸುವ [[ಹೌಸ್ಬೋಟ್]]ಗಳ ಉಪಸ್ಥಿತಿಯಿಂದಾಗಿ. ಮತ್ತೊಂದು ಕಾರಣವೆಂದರೆ [[ಮುನ್ನಾರ್]], [[ವರ್ಕಲ]] ಮತ್ತು [[ವಯನಾಡ್]] ನಂತಹ ಇತರ ಪ್ರವಾಸಿ ತಾಣಗಳ ಸಾಮೀಪ್ಯ. ಇದಲ್ಲದೆ, ಕೇರಳ ಪ್ರವಾಸೋದ್ಯಮದ ಪ್ರವಾಸಿ ಅಂಕಿಅಂಶಗಳ ಪ್ರಕಾರ, 2021 ಮತ್ತು 2020 ರ ನಡುವೆ ಅಲ್ಲೆಪ್ಪೇಯ್ಗೆ ಆಗಮಿಸುವ ಪ್ರವಾಸಿಗರಲ್ಲಿ 74.55% ರಷ್ಟು ಹೆಚ್ಚಳವಾಗಿದೆ, ಆದರೆ ಇಡೀ ರಾಜ್ಯದ ಸರಾಸರಿಯು 51.09% ರಷ್ಟಿದೆ.<ref>{{Cite web |last=Tourism |first=Kerala |title=Kerala Statistics – 2021 - Highlights |url=https://www.keralatourism.org/tourismstatistics/tourist_statistics_202120220530122636.pdf |access-date=12 January 2023 |website=Kerala Tourism: Official Website |language=English}}</ref>
== ಬ್ಯಾಕ್ವಾಟರ್ ಭತ್ತದ ಕೃಷಿ ==
{{More citations needed section|date=February 2023}}
[[Image:Kerala Kuttanad2.jpg|thumb|ಕುಟ್ಟನಾಡಿನಲ್ಲಿ ಭತ್ತದ ಗದ್ದೆಗಳು]]
ಆಲಪುಳದಲ್ಲಿನ ಪ್ರಮುಖ ಉದ್ಯೋಗವೆಂದರೆ ಕೃಷಿ. ಕೇರಳದ ಅಕ್ಕಿಯ ತಟ್ಟೆ, ಕುಟ್ಟನಾಡು ಆಲಪುಳದಲ್ಲಿದೆ.<ref name="keralatourism.org"/>
ವೆಂಬನಾಡ್ ಸರೋವರದಿಂದ ಭೂಮಿಯನ್ನು ಮರುಪಡೆಯುವಲ್ಲಿ ಮೂರು ಹಂತಗಳಿದ್ದವು. ಮೊದಲ ಹಂತದಲ್ಲಿ ಇದನ್ನು ಸರ್ಕಾರದ ಯಾವುದೇ ಹಣಕಾಸಿನ ಬೆಂಬಲವಿಲ್ಲದೆ ಖಾಸಗಿ ಉದ್ಯಮಿಗಳು ನಡೆಸಿದರು. 1865 ರಲ್ಲಿ ತಿರುವಾಂಕೂರು ರಾಜ್ಯವು ಮಾಡಿದ ''ಪಟ್ಟೋಮ್ ಪ್ರಕಟಣೆ''ಯು 1865 ಮತ್ತು 1890 ರ ನಡುವಿನ ಮರುಪಡೆಯುವ ಚಟುವಟಿಕೆಗಳಿಗೆ ಉತ್ತಮ ಉತ್ತೇಜನವನ್ನು ನೀಡಿತು. ಈ ಅವಧಿಯಲ್ಲಿ ಪೋಲ್ಡರ್ಗಳ ನೀರು-ವಿಸರ್ಜನೆಯನ್ನು ನೀರಿನ ಚಕ್ರಗಳನ್ನು ಬಳಸಿ ಹಸ್ತಚಾಲಿತವಾಗಿ ಮಾಡಲಾಗುತ್ತಿತ್ತು, ಇದು ದೊಡ್ಡ ಪ್ರಮಾಣದ ಮರುಪಡೆಯುವಿಕೆಗಳನ್ನು ನಿರ್ಬಂಧಿಸಿತು. ಈ ಅವಧಿಯಲ್ಲಿ ಸುಮಾರು 250 ಹೆಕ್ಟೇರ್ ಭೂಮಿಯನ್ನು ಮರುಪಡೆಯಲಾಯಿತು. ಈ ಅವಧಿಯಲ್ಲಿ ಮರುಪಡೆಯಲಾದ ವೆನಾಡು ಸರೋವರ ಮತ್ತು ಮಡತಿಲ್ ಸರೋವರವನ್ನು ವೆಂಬನಾಡ್ ಸರೋವರದಿಂದ ಮರುಪಡೆಯಲಾದ ಮೊದಲ ''ಕಾಯಲ್ ನಿಲಂ'' (ಸರೋವರ-ಮರುಪಡೆಯಲಾದ ಭೂಮಿ) ಎಂದು ಪರಿಗಣಿಸಲಾಗುತ್ತದೆ.<ref>{{cite news
|author=M.S. Swaminathan, FRS
|title=The Kuttanadu Below Sea Level Farming System, India
|newspaper=FAO Website
|date=May 2013
|page=8
|url=http://www.fao.org/fileadmin/templates/giahs_assets/Information_Resources_Annexes/Japan_Forum/Kuttanad_Below_Sea_Level_Farming_System.pdf
|access-date=8 October 2013
|url-status=dead
|archive-url=https://web.archive.org/web/20150611175117/http://www.fao.org/fileadmin/templates/giahs_assets/Information_Resources_Annexes/Japan_Forum/Kuttanad_Below_Sea_Level_Farming_System.pdf
|archive-date=11 June 2015 }}</ref> ಸರೋವರ-ಮರುಪಡೆಯುವಿಕೆ ಮತ್ತು ಕೃಷಿಯ ಪ್ರವರ್ತಕ ಮರುಪಡೆಯುವಿಕೆ ಚಟುವಟಿಕೆಯನ್ನು [[ಪಲ್ಲಿತಾನಂ ಲುಕಾ ಮತ್ತಾಯಿ]] ಮಾಡಿದರು.<ref>{{cite news
|author=G S Unnikrishanan Nair
|title=Kuttanad; Our Heritage Our wealth
|newspaper=KERALA CALLING
|date=September 2013
|pages=16–20
|url=http://www.kerala.gov.in/docs/publication/2013/kc/september_13/16.pdf
|access-date=26 Sep 2013
|url-status=dead
|archive-url=https://web.archive.org/web/20130927092458/http://www.kerala.gov.in/docs/publication/2013/kc/september_13/16.pdf
|archive-date=27 September 2013 }}</ref>
ಎರಡನೇ ಹಂತವು (1890 ರಿಂದ 1903) ಆಗಿತ್ತು.{{citation needed|date=August 2025}}
1920 ರಿಂದ 1940 ರ ಅವಧಿಯಲ್ಲಿ ಅಕ್ಕಿಯ ಬೆಲೆಯಲ್ಲಿ ತೀವ್ರ ಕುಸಿತದ ಕಾರಣ, ಮರುಪಡೆಯುವಿಕೆ ಚಟುವಟಿಕೆಗಳು ನಿಧಾನವಾದವು, ನಂತರ 1940 ರ ದಶಕದ ಆರಂಭದಲ್ಲಿ ಮತ್ತೆ ವೇಗವನ್ನು ಪಡೆದುಕೊಂಡವು. ಈ ಅವಧಿಯಲ್ಲಿ, ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ, ಸರ್ಕಾರವು ''ಹೆಚ್ಚು ಆಹಾರ ಬೆಳೆಸಿ'' ಅಭಿಯಾನವನ್ನು ಪ್ರಾರಂಭಿಸಿತು ಮತ್ತು ಹೊಸ ಮರುಪಡೆಯುವಿಕೆಗಳನ್ನು ಪ್ರೋತ್ಸಾಹಿಸಲು ಪ್ರೋತ್ಸಾಹವನ್ನು ಒದಗಿಸಿತು. ವಿದ್ಯುತ್ ಮೋಟಾರ್ಗಳ ಆಗಮನವು ಹಿಂದಿನ ಅವಧಿಗಳಿಗೆ ಹೋಲಿಸಿದರೆ ಮರುಪಡೆಯುವಿಕೆಯನ್ನು ಸುಲಭ, ಅಗ್ಗ ಮತ್ತು ಕಡಿಮೆ ಅಪಾಯಕಾರಿಯನ್ನಾಗಿ ಮಾಡಿತು. ಮರುಪಡೆಯುವಿಕೆಯ ಕೊನೆಯ ಭಾಗವಾದ Q, S ಮತ್ತು T ಬ್ಲಾಕ್ಗಳನ್ನು ಈ ಅವಧಿಯಲ್ಲಿ ಮಾಡಲಾಯಿತು.<ref>{{cite web|last=Studies Society|first=Thiruvananthapuram Economic|date=August 2017|title=Agricultural Development of Kerala From 1800 AD to 1980 AD: A Survey of Studies|url=http://keralaeconomy.com/admin/pdfs/A%20Survey%20of%20Studies.pdf|website=keralaeconomy.com}}</ref>
=== ಮುಪ್ಪಾಳಂ ಸೇತುವೆಯ ಪುನರ್ನಿರ್ಮಾಣ ===
ಐಕಾನಿಕ್ ಮುಪ್ಪಾಳಂ,<ref>{{Cite news |last=Viswam |first=Vishak |date=March 13, 2025 |title=Can Nalpalam fill the big shoes of Alappuzha's iconic Muppalam? |url=https://www.newindianexpress.com/states/kerala/2025/Mar/13/can-nalpalam-fill-the-big-shoes-of-alappuzhas-iconic-muppalam |work=The New Indian Express |pages=1}}</ref> ಅಥವಾ ಟ್ರಿಪಲ್ ಸೇತುವೆ, ಆಲಪುಳ ಪಟ್ಟಣದ ಹೃದಯಭಾಗದಲ್ಲಿದ್ದು, ಇದು ಒಮ್ಮೆ ಪ್ರವಾಸಿಗರು ಮತ್ತು ಚಲನಚಿತ್ರ ನಿರ್ಮಾಪಕರಿಗೆ ಪ್ರಮುಖ ಆಕರ್ಷಣೆಯಾಗಿತ್ತು.
ಹೊಸ ನಾಲ್ಕು-ಪಂಕ್ತಿ ಸೇತುವೆಯನ್ನು ನಿರ್ಮಿಸಲು ಪುನರ್ನಿರ್ಮಾಣ ಪ್ರಾರಂಭವಾಯಿತು, ಇದನ್ನು ಸ್ಥಳೀಯವಾಗಿ ನಾಲ್ಪಾಳಂ ಎಂದು ಕರೆಯಲಾಗುತ್ತದೆ. ಸೇತುವೆಯು ಎರಡು ಪ್ರಮುಖ ಕಾಲುವೆಗಳಾದ ವಡಾ ಕಾಲುವೆ ಮತ್ತು ಕಾಮರ್ಷಿಯಲ್ ಕಾಲುವೆಯನ್ನು ಸಂಪರ್ಕಿಸುತ್ತದೆ ಮತ್ತು ಇದು ಆಲಪುಳದ ರಸ್ತೆ ಜಾಲ ಮತ್ತು ಗುರುತಿನ ಅವಿಭಾಜ್ಯ ಅಂಗವಾಗಿದೆ.
ಸೇತುವೆಯು ವಿವಿಧ ಭಾರತೀಯ ಭಾಷೆಗಳಾದ ಮಲಯಾಳಂ, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದೆ, ಇದು ಅದರ ಸಿನಿಮೀಯ ಆಕರ್ಷಣೆಯನ್ನು ಎತ್ತಿ ತೋರಿಸುತ್ತದೆ.
ಮುಪ್ಪಾಳಂ ಅನ್ನು ಹೆಚ್ಚು ಆಧುನಿಕ, ನಾಲ್ಕು-ಪಂಕ್ತಿಯ ಬದಲಿಗೆ ಸ್ಥಳೀಯವಾಗಿ ನಾಲ್ಪಾಳಂ ಎಂದು ಕರೆಯಲ್ಪಡುವ ಸ್ಥಳಾಂತರಿಸಲು ಕಿತ್ತುಹಾಕಲಾಯಿತು. ಈ ಯೋಜನೆಯು ಕೇರಳ ಸಾರ್ವಜನಿಕ ಕಾರ್ಯಗಳ ಇಲಾಖೆಯ (PWD) ನೇತೃತ್ವದಲ್ಲಿದೆ, ಇದು ಸ್ಥಳದ ಸಾಂಸ್ಕೃತಿಕ ಮತ್ತು ದೃಶ್ಯ ಪ್ರಾಮುಖ್ಯತೆಯನ್ನು ಸಂರಕ್ಷಿಸುತ್ತದೆ.
== ಸಾರಿಗೆ ==
{{wide image|Pallathuruthi bridge pano small.jpg|1200px|align-cap=center| [[ಪಲ್ಲತ್ತುರುತಿ]] ಸೇತುವೆ}}
=== ರಸ್ತೆ ===
==== ರಾಷ್ಟ್ರೀಯ ಹೆದ್ದಾರಿಗಳು ====
[[ರಾಷ್ಟ್ರೀಯ ಹೆದ್ದಾರಿ 66 (ಭಾರತ)|ರಾಷ್ಟ್ರೀಯ ಹೆದ್ದಾರಿ 66]], [[ಪನ್ವೆಲ್]] ಅನ್ನು [[ಕನ್ಯಾಕುಮಾರಿ]]ಗೆ ಸಂಪರ್ಕಿಸುತ್ತದೆ, ಇದು ಆಲಪುಳ [[ನಗರ ಕೇಂದ್ರ]]ದ ಮೂಲಕ ಹಾದುಹೋಗುತ್ತದೆ. ಕೊಮ್ಮಾಡಿ ಮತ್ತು [[ಕಲಾರ್ಕೋಡ್]] ನಡುವಿನ ನಗರ ಕೇಂದ್ರಗಳ ಸುತ್ತಲೂ ರಾಷ್ಟ್ರೀಯ ಹೆದ್ದಾರಿಯನ್ನು ಮಾರ್ಗದರ್ಶನ ಮಾಡಲು [[ಆಲಪುಳ ಬೈಪಾಸ್]] ಅನ್ನು ನಿರ್ಮಿಸಲಾಯಿತು. ರಾಷ್ಟ್ರೀಯ ಹೆದ್ದಾರಿ 66 ಆಲಪುಳ ನಗರವನ್ನು ಮುಂಬೈ, [[ಉಡುಪಿ]], [[ಮಂಗಳೂರು]], [[ಕಣ್ಣೂರು]], [[ಕೋಝಿಕ್ಕೋಡ್]], ಎರ್ನಾಕುಲಂ, ಕೊಲ್ಲಂ ಮತ್ತು ತಿರುವನಂತಪುರಂ ನಂತಹ ಇತರ ಪ್ರಮುಖ ನಗರಗಳಿಗೆ ಸಂಪರ್ಕಿಸುತ್ತದೆ. ಕರಾವಳಿ-ಬೆಟ್ಟ ಪ್ರವಾಸೋದ್ಯಮ ಯೋಜನೆಯನ್ನು ಉತ್ತೇಜಿಸುವ ಭಾಗವಾಗಿ ಆಲಪುಳವನ್ನು [[ಕೊಡೈಕನಾಲ್]] ಗೆ ಸಂಪರ್ಕಿಸಲು ಸಹಾಯ ಮಾಡಲು [[ರಾಜ್ಯ ಹೆದ್ದಾರಿ 11 (ಕೇರಳ)|ರಾಜ್ಯ ಹೆದ್ದಾರಿ 11]] ಅನ್ನು ರಾಷ್ಟ್ರೀಯ ಹೆದ್ದಾರಿಗೆ ಉನ್ನತೀಕರಿಸುವ ಯೋಜನೆ ಇದೆ.<ref>{{cite web|url=https://www.deccanchronicle.com/150809/nation-current-affairs/article/jawahar-thayankari-lifts-nehru-trophy|title=Jawahar Thayankari lifts Nehru trophy|newspaper=[[Deccan Chronicle]]|date=9 August 2015}}</ref>
==== ರಾಜ್ಯ ಹೆದ್ದಾರಿಗಳು ====
[[File:KSRTC Bus stand Alappuzha.jpg|thumb|250px|ಆಲಪುಳ KSRTC ಬಸ್ ನಿಲ್ದಾಣ]]
[[File:AC Road SH-11.JPG|250px|thumb|ರಾಜ್ಯ ಹೆದ್ದಾರಿ 11]]
ಆಲಪುಳ ಜಿಲ್ಲೆಯಲ್ಲಿ ಎಂಟು ರಾಜ್ಯ ಹೆದ್ದಾರಿಗಳಿವೆ, ಅವುಗಳಲ್ಲಿ ಮೂರು ಆಲಪುಳ ಪಟ್ಟಣದಿಂದ ಹುಟ್ಟುತ್ತವೆ. ರಾಜ್ಯ ಹೆದ್ದಾರಿ 11 [[ಕಲಾರ್ಕೋಡ್]] ನಲ್ಲಿ ಪ್ರಾರಂಭವಾಗಿ [[ಪೆರುನ್ನ]]ದಲ್ಲಿ ಕೊನೆಗೊಳ್ಳುತ್ತದೆ. ಈ ಹೆದ್ದಾರಿಯನ್ನು ಸ್ಥಳೀಯವಾಗಿ AC ರಸ್ತೆ (ಆಲಪುಳ-[[ಚಂಗನಶ್ಶೇರಿ]] ರಸ್ತೆ) ಎಂದು ಕರೆಯಲಾಗುತ್ತದೆ ಮತ್ತು ಇದು 24.2 ಕಿ.ಮೀ ದೂರವನ್ನು ಆವರಿಸುತ್ತದೆ. ಇದು ಆಲಪುಳ ಪಟ್ಟಣವನ್ನು [[ಕೊಟ್ಟಾಯಂ ಜಿಲ್ಲೆ]]ಯೊಂದಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. [[ರಾಜ್ಯ ಹೆದ್ದಾರಿ 40 (ಕೇರಳ)|ರಾಜ್ಯ ಹೆದ್ದಾರಿ 40]] ಆಲಪುಳ ಜಿಲ್ಲೆಯ ಅಂತರರಾಜ್ಯ ಹೆದ್ದಾರಿಯಾಗಿದ್ದು, ಇದು ಆಲಪುಳ ಪಟ್ಟಣವನ್ನು [[ತಮಿಳುನಾಡು]]ನ [[ಮಧುರೈ]]ಗೆ ಸಂಪರ್ಕಿಸುತ್ತದೆ. ಇದು ಆಲಪುಳ ಜಿಲ್ಲೆಯ ಏಕೈಕ ಅಂತರರಾಜ್ಯ ಹೆದ್ದಾರಿಯಾಗಿದೆ. [[ರಾಜ್ಯ ಹೆದ್ದಾರಿ 66 (ಕೇರಳ)|ರಾಜ್ಯ ಹೆದ್ದಾರಿ 66]] ಆಲಪುಳ ಪಟ್ಟಣದಿಂದ ಹುಟ್ಟುತ್ತದೆ ಮತ್ತು [[ಥೊಪ್ಪುಂಪಾಡಿ]]ಯಲ್ಲಿ ಕೊನೆಗೊಳ್ಳುತ್ತದೆ.<ref>{{cite web|url=http://www.keralapwd.gov.in/getPage.php?page=maps&pageId=248|title=PWD Public Site|access-date=7 June 2016|archive-url=https://web.archive.org/web/20101201055331/http://www.keralapwd.gov.in/getPage.php?page=maps&pageId=248|archive-date=1 December 2010|url-status=dead|df=dmy-all}}</ref>
ಆಲಪುಳವು ಎರಡು ಮುಖ್ಯ ಬಸ್ ಟರ್ಮಿನಲ್ಗಳನ್ನು ಹೊಂದಿದೆ. [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ]]ದ ಬಸ್ ನಿಲ್ದಾಣವು (ರಾಜ್ಯ ಜಲ ಸಾರಿಗೆ ನಿಗಮದ ಪ್ರಧಾನ ಕಚೇರಿಯ ಬಳಿ, ಬೋಟ್ ಜೆಟ್ಟಿ ರಸ್ತೆ) ಸರ್ಕಾರಿ ನಡೆಸುವ ಬಸ್ಗಳಿಗೆ ಸೇವೆ ಸಲ್ಲಿಸುತ್ತದೆ ಮತ್ತು V K ಸೋಮನ್ ಸ್ಮಾರಕ ನಗರಸಭಾ ಬಸ್ ನಿಲ್ದಾಣವು (ವಾಝಿಚೇರಿ ಬಳಿ) ಖಾಸಗಿ ಬಸ್ಗಳು ಮತ್ತು ಇತರ ರಾಜ್ಯಗಳಿಗೆ ಸೇವೆ ಸಲ್ಲಿಸುವ ಒಪ್ಪಂದದ ಗಾಡಿ ಸೇವೆಗಳಿಂದ ಬಳಸಲ್ಪಡುತ್ತದೆ.
KSRTC ಬಸ್ಗಳು ಆಲಪುಳವನ್ನು [[ಬೆಂಗಳೂರು|ಬೆಂಗಳೂರು]], [[ಮೈಸೂರು]], [[ಕೊಲ್ಲೂರು, ಉಡುಪಿ ಜಿಲ್ಲೆ|ಕೊಲ್ಲೂರು]], [[ಮಂಗಳೂರು]], [[ಚೆನ್ನೈ]], [[ಕೊಯಂಬತ್ತೂರು]], [[ತಿರುವನಂತಪುರಂ]], ಮತ್ತು [[ತಿರುವಲ್ಲ]] ಸೇರಿದಂತೆ ಇತರ ಸ್ಥಳಗಳಿಗೆ ಸಂಪರ್ಕಿಸುತ್ತವೆ. ಹೆಚ್ಚುವರಿಯಾಗಿ [[ಸ್ಟೇಟ್ ಎಕ್ಸ್ಪ್ರೆಸ್ ಟ್ರಾನ್ಸ್ಪೋರ್ಟ್ ನಿಗಮ|SETC]] ಮತ್ತು [[ತಮಿಳುನಾಡು ರಾಜ್ಯ ಸಾರಿಗೆ ನಿಗಮ|TNSTC]] ಪಟ್ಟಣಕ್ಕೆ ಮತ್ತು ಪಟ್ಟಣದಿಂದ ಹಲವಾರು ದೈನಂದಿನ ಸೇವೆಗಳನ್ನು ನಡೆಸುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ]]ವು ಆಲಪುಳದಿಂದ ಹುಟ್ಟುವ ಎರಡು ದೈನಂದಿನ ಸೇವೆಗಳನ್ನು ನಡೆಸುತ್ತದೆ ಎಂದು ವರದಿಯಾಗಿದೆ.{{citation needed|date=February 2023}}
ರಾಷ್ಟ್ರೀಯ ಹೆದ್ದಾರಿ 66 ರ ಉದ್ದಕ್ಕೂ ವಲವನಾಡಿನಲ್ಲಿ ಹೊಸ [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|KSRTC]] ಡಿಪೋ ಮತ್ತು ಬಸ್ ನಿಲ್ದಾಣವು ನಿರ್ಮಾಣ ಹಂತದಲ್ಲಿದೆ. ಈ ಅಭಿವೃದ್ಧಿಯು ಸಂಪರ್ಕವನ್ನು ಹೆಚ್ಚಿಸಲು ಮತ್ತು ಪ್ರದೇಶದಲ್ಲಿ ಸಾರಿಗೆ ಮೂಲಸೌಕರ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
=== ಜಲ ===
ಹಲವಾರು ಬ್ಯಾಕ್ವಾಟರ್ಸ್ ಮತ್ತು ಕಾಲುವೆಗಳ ಉಪಸ್ಥಿತಿಯು ಜಲ ಸಾರಿಗೆಯನ್ನು ಜನಪ್ರಿಯ ಸಾರಿಗೆ ಸಾಧನವನ್ನಾಗಿ ಮಾಡುತ್ತದೆ. [[ಭಾರತದ ಒಳನಾಡು ಜಲಮಾರ್ಗಗಳು|ರಾಷ್ಟ್ರೀಯ ಜಲಮಾರ್ಗ-3]] ಆಲಪುಳದ ಮೂಲಕ ಹಾದುಹೋಗುತ್ತದೆ. [[ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ|SWTD]] ದೋಣಿ ಜೆಟ್ಟಿಯು [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|KSRTC]] ಬಸ್ ನಿಲ್ದಾಣದ ಎದುರು ನಗರದಲ್ಲಿದೆ. ಇದು ಕೊಟ್ಟಾಯಂ ನಗರಕ್ಕೆ ಮತ್ತು ಇತರ ಸಣ್ಣ ಪಟ್ಟಣಗಳು ಮತ್ತು ಜೆಟ್ಟಿಗಳಿಗೆ ದೋಣಿ ಸೇವೆಗಳಿಂದ ಸೇವೆ ಸಲ್ಲಿಸುತ್ತದೆ. [[ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ|SWTD]] ದೋಣಿಯನ್ನು ಬಳಸುವುದು ಪ್ರವಾಸಿಗರಿಗೆ ಹೌಸ್ಬೋಟ್ಗಳಿಗೆ ಅಗ್ಗದ ಪರ್ಯಾಯವಾಗಿದೆ.
[[File:The Public Transport Through Waters in Kerala.jpg|thumb|ಕೇರಳದ ಬ್ಯಾಕ್ವಾಟರ್ಸ್ನೊಳಗೆ ದೂರ-ದೂರ ಸಾರಿಗೆಗಾಗಿ ಕೇರಳ ರಾಜ್ಯ ಸಾರಿಗೆ ಏಜೆನ್ಸಿ ಆಯೋಜಿಸಿದ ಸಾರ್ವಜನಿಕ ಜಲ ಸಾರಿಗೆ]]
=== ರೈಲ್ವೇ ===
[[ಆಲಪುಳ ರೈಲು ನಿಲ್ದಾಣ|ಆಲಪುಳ]]ವು [[ಎರ್ನಾಕುಲಂ-ಕಾಯಂಕುಲಂ ಕರಾವಳಿ ರೈಲು ಮಾರ್ಗ]]ದಿಂದ ಸಂಪರ್ಕ ಹೊಂದಿದೆ ಮತ್ತು ತಿರುವನಂತಪುರಂ, ಕೊಲ್ಲಂ, ಕೊಚ್ಚಿ, [[ಕೊಯಂಬತ್ತೂರು]], [[ಚೆನ್ನೈ]], [[ದೆಹಲಿ]], [[ಬೊಕಾರೊ ಸ್ಟೀಲ್ ಸಿಟಿ|ಬೊಕಾರೊ]] ಮತ್ತು [[ಮುಂಬೈ]] ನಂತಹ ನಗರಗಳಿಗೆ ಸಂಪರ್ಕಿಸುತ್ತದೆ. [[ಆಲಪುಳ ರೈಲು ನಿಲ್ದಾಣ|ರೈಲು ನಿಲ್ದಾಣ]]ವು ನಗರದ ಹೃದಯಭಾಗದಿಂದ ಸುಮಾರು {{convert|4|km|mi}} ದೂರದಲ್ಲಿದೆ.<ref>Trains from Alappuzha {{cite web|url=http://www.indiantrains.org/station-details/?code%3DALLP%26name%3DALLEPPEY |title=Indian Trains: Alleppey (ALLP) Railway Station Details |access-date=2011-06-07 |url-status=dead |archive-url=https://web.archive.org/web/20110906084048/http://www.indiantrains.org/station-details/?code=ALLP&name=ALLEPPEY |archive-date=6 September 2011 |df=dmy }}</ref> [[ಕಣ್ಣೂರು]], [[ಚೆನ್ನೈ]], [[ಧನ್ಬಾದ್]] ಮತ್ತು [[ಟಾಟಾನಗರ]] ನಂತಹ ನಗರಗಳಿಗೆ ಒಟ್ಟು ನಾಲ್ಕು ರೈಲುಗಳು ಆಲಪುಳದಿಂದ ಹುಟ್ಟುತ್ತವೆ. ದಿನವಿಡೀ ಸ್ಥಳೀಯ ರೈಲುಗಳು ಸಹ ಓಡುತ್ತವೆ, ಇದು ಆಲಪುಳವನ್ನು ಸಮೀಪದ ಇತರ ಪಟ್ಟಣಗಳಿಗೆ ಸಂಪರ್ಕಿಸುತ್ತದೆ. ಆಲಪುಳವು ಪ್ರಮುಖ ತಾಣವಾಗಿರುವುದರಿಂದ, [[ದೆಹಲಿ]], [[ಚಂಡೀಗಢ]], [[ಬೆಂಗಳೂರು]], [[ಮಂಗಳೂರು]], [[ಕೋಝಿಕ್ಕೋಡ್]] ಮತ್ತು [[ಅಮೃತಸರ]] ನಂತಹ ಪ್ರಮುಖ ನಗರಗಳಿಂದ ರೈಲುಗಳು ಈ ನಿಲ್ದಾಣದ ಮೂಲಕ ಹಾದುಹೋಗುತ್ತವೆ.<ref>[https://www.atdcalleppey.com/ ATDC – Alleppey Tourism Development Co-operative Society Ltd.], is the premier body in the district of Alleppey, Kerala for the promotion of tourism.</ref>
===ವಿಮಾನ ನಿಲ್ದಾಣ===
[[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]], ಇದು ಉತ್ತರಕ್ಕೆ {{convert|78|km|mi}} ದೂರದಲ್ಲಿದೆ, ಇದು ಸಮೀಪದ ವಿಮಾನ ನಿಲ್ದಾಣವಾಗಿದೆ. [[ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]], ದಕ್ಷಿಣಕ್ಕೆ {{convert|159|km|mi}} ದೂರದಲ್ಲಿದೆ, ಇದು ಜಿಲ್ಲೆಯನ್ನು ಇತರ ದೇಶಗಳೊಂದಿಗೆ ಸಂಪರ್ಕಿಸುವ ಇತರ ವಿಮಾನ ನಿಲ್ದಾಣವಾಗಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು ಈ ವಿಮಾನ ನಿಲ್ದಾಣಗಳನ್ನು ಆಲಪುಳವನ್ನು ತಲುಪಲು ಬಳಸುತ್ತಾರೆ. ಇತರ ಸಮೀಪದ ವಿಮಾನ ನಿಲ್ದಾಣಗಳೆಂದರೆ [[ಕಾಲಿಕಟ್]] ({{convert|236|km|mi}}) ಮತ್ತು [[ಕೊಯಂಬತ್ತೂರು]] ({{convert|254|km|mi}}) ವಿಮಾನ ನಿಲ್ದಾಣಗಳು. ಪಟ್ಟಣದಲ್ಲಿನ ಹೆಲಿಪ್ಯಾಡ್ ಅನ್ನು ಸರ್ಕಾರಿ ಬಳಕೆಗಾಗಿ ಮೀಸಲಿಡಲಾಗಿದೆ.
== ಆಡಳಿತ ಮತ್ತು ರಾಜಕೀಯ ==
{| class="wikitable" style="float:right; margin: 0 1em 0 0;"
|-
!colspan="2"| ಆಲಪುಳ ನಗರದ ಅಧಿಕಾರಿಗಳು
|-
| [[ಜಿಲ್ಲಾ ಕಲೆಕ್ಟರ್]]
| ಅಲೆಕ್ಸ್ ವರ್ಗೀಸ್ IAS
|-
| ನಗರಸಭಾ ಅಧ್ಯಕ್ಷರು
| ಮೊಲ್ಲಿ ಜಾಕೋಬ್
|-
| [[ಪೊಲೀಸ್ ಅಧೀಕ್ಷಕ (ಭಾರತ)|SP & ಜಿಲ್ಲಾ ಪೊಲೀಸ್ ಮುಖ್ಯಸ್ಥ]]
|ಎಂ.ಪಿ. ಮೋಹನಚಂದ್ರನ್ IPS<ref>{{cite web|url=http://alappuzha.nic.in/ele2009_phone.htm |title=Election 2009 - Alappuzha District, Kerala State, India - Observers |access-date=2012-04-22 |url-status=dead |archive-url=https://web.archive.org/web/20110807061530/http://alappuzha.nic.in/ele2009_phone.htm |archive-date=7 August 2011}}</ref>
|}
[[File:Alappuzha loves Wikimedia IMG 7599.JPG|thumb|250px|ಅಲ್ಲೆಪ್ಪೇಯ್ ಬಾರ್ ಅಸೋಸಿಯೇಷನ್]]
ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಎರಡು ಆಡಳಿತ ವ್ಯವಸ್ಥೆಗಳೆಂದರೆ [[ರಾಜಸ್ವ]] ಮತ್ತು [[ಭಾರತದಲ್ಲಿ ಸ್ಥಳೀಯ ಸ್ವಯಂ-ಸರ್ಕಾರ|ಸ್ಥಳೀಯ ಸ್ವಯಂ-ಸರ್ಕಾರ]]. ರಾಜಸ್ವ ವ್ಯವಸ್ಥೆಯ ಅಡಿಯಲ್ಲಿ, ಜಿಲ್ಲೆಯನ್ನು ಎರಡು ರಾಜಸ್ವ ವಿಭಾಗಗಳು, ಆರು [[ತಾಲೂಕು]]ಗಳು ಮತ್ತು 91 ಗ್ರಾಮಗಳಾಗಿ ವಿಂಗಡಿಸಲಾಗಿದೆ. ಎರಡು ರಾಜಸ್ವ ವಿಭಾಗಗಳು [[ಚೇರ್ತಲ]], [[ಅಂಬಲಪ್ಪುಳ]] ಮತ್ತು [[ಕುಟ್ಟನಾಡ್]] ತಾಲೂಕುಗಳನ್ನು 47 ಗ್ರಾಮಗಳನ್ನು ಒಳಗೊಂಡಿರುವ ಆಲಪುಳ ವಿಭಾಗ ಮತ್ತು [[ಕಾರ್ತಿಕಪ್ಪಳ್ಳಿ]], [[ಚೆಂಗನ್ನೂರು]] ಮತ್ತು [[ಮಾವೇಲಿಕ್ಕರ]] ತಾಲೂಕುಗಳನ್ನು 44 ಗ್ರಾಮಗಳನ್ನು ಒಳಗೊಂಡಿರುವ [[ಚೆಂಗನ್ನೂರು]] ವಿಭಾಗ. ಜನಗಣತಿಯ ಉದ್ದೇಶಗಳಿಗಾಗಿ, [[ಆರೂರು]], [[ಆರೂಕುಟ್ಟಿ]], [[ಕೋಡಮ್ತುರುತ್]], [[ತನ್ನೀರ್ಮುಕ್ಕಂ]] ವಡಕ್ಕು, ತಾನೀರ್ಮುಕ್ಕಂ ಥೇಕ್ಕು, [[ವಾಯಲರ್]] ಪೂರ್ವ ಮತ್ತು [[ಕೊಕ್ಕೋತಮಂಗಲಂ]] ಗ್ರಾಮಗಳು, ಚೇರ್ತಲ [[ನಗರಸಭೆ]]ಯಲ್ಲಿ ಸೇರಿಸಲಾದ ಭಾಗಗಳನ್ನು ಹೊರತುಪಡಿಸಿ, 1981 ರ ಜನಗಣತಿಯಲ್ಲಿ ಒಂದು ಸ್ಥಳವನ್ನು ಜನಗಣತಿ ಪಟ್ಟಣವೆಂದು ಪರಿಗಣಿಸಲು ಅಳವಡಿಸಿಕೊಂಡ ಮೂರು ಅಂಶಗಳ ಮಾನದಂಡಗಳ ಆಧಾರದ ಮೇಲೆ ಜನಗಣತಿ ಪಟ್ಟಣಗಳೆಂದು ಪರಿಗಣಿಸಲಾಗಿದೆ.{{citation needed|date=February 2023}}
ಸ್ಥಳೀಯ ಸ್ವಯಂ-ಸರ್ಕಾರ ವ್ಯವಸ್ಥೆಯ ಅಡಿಯಲ್ಲಿ, ಜಿಲ್ಲೆಯನ್ನು ಐದು ವಿಧಾನಬದ್ಧ ಪಟ್ಟಣಗಳು ಮತ್ತು 71 [[ಪಂಚಾಯತ್]]ಗಳನ್ನು ಒಳಗೊಂಡಿರುವ ಅಭಿವೃದ್ಧಿ ಬ್ಲಾಕ್ಗಳಾಗಿ ವಿಂಗಡಿಸಲಾಗಿದೆ. ಅಭಿವೃದ್ಧಿ ಬ್ಲಾಕ್ನ ಅಧಿಕಾರ ವ್ಯಾಪ್ತಿಯು ಜನಗಣತಿ ಪಟ್ಟಣಗಳಲ್ಲಿ ಬರುವ ಪ್ರದೇಶಗಳನ್ನು ಸಹ ಒಳಗೊಂಡಿದೆ.<ref>{{cite web|url=http://www.alappuzha.nic.in/admin.htm |title=Official Web Site of Alappuzha, Kerala, India |access-date=2011-06-09 |url-status=dead |archive-url=https://web.archive.org/web/20110721162712/http://www.alappuzha.nic.in/admin.htm |archive-date=21 July 2011 |df=dmy }}</ref>
[[2011 ಕೇರಳ ರಾಜ್ಯ ವಿಧಾನಸಭಾ ಚುನಾವಣೆ|2011 ವಿಧಾನಸಭಾ ಚುನಾವಣೆ]]ಗಾಗಿ ಆಲಪುಳ ಜಿಲ್ಲೆಯಲ್ಲಿ ಒಂಬತ್ತು [[ಕೇರಳ ವಿಧಾನಸಭೆ|ವಿಧಾನಸಭಾ]] ಕ್ಷೇತ್ರಗಳಿದ್ದವು. ಅವು [[ಆರೂರು]], [[ಚೇರ್ತಲ]], ಆಲಪುಳ, [[ಕುಟ್ಟನಾಡ್]], [[ಹರಿಪಾಡ್]], [[ಕಾಯಂಕುಲಂ]], [[ಮಾವೇಲಿಕ್ಕರ]] ಮತ್ತು [[ಚೆಂಗನ್ನೂರು]].<ref>{{cite web|author=Kerala Legislature |url=http://www.niyamasabha.org/codes/members.htm |title=Niyamsabha official site |publisher=Niyamasabha.org |date= |access-date=14 February 2021}}</ref>
ಆಲಪುಳ ವಿಧಾನಸಭಾ ಕ್ಷೇತ್ರವು ಆಲಪುಳ (ಲೋಕಸಭಾ ಕ್ಷೇತ್ರ)ದ ಭಾಗವಾಗಿದೆ. ಜಿಲ್ಲೆಯ ಇತರ [[ಲೋಕಸಭಾ]] ಕ್ಷೇತ್ರವೆಂದರೆ [[ಮಾವೇಲಿಕ್ಕರ]].<ref>{{Cite web |url=http://eci.nic.in/archive/se2001/background/S11/KL_Dist_PC_AC.pdf |title=constituency |access-date=9 June 2011 |archive-date=18 July 2011 |archive-url=https://web.archive.org/web/20110718054105/http://eci.nic.in/archive/se2001/background/S11/KL_Dist_PC_AC.pdf |url-status=dead }}</ref>
{| border="2"
|-
! colspan="2" | '''ಸಂಸತ್ ಪ್ರತಿನಿಧಿಗಳು'''
|-
! ಹೆಸರು
! ಲೋಕ-ಸಭಾ ಕ್ಷೇತ್ರ
! ವರ್ಷ
! ರಾಜಕೀಯ ಪಕ್ಷ
|-
| ಪಿ. ಕೆ. ವಾಸುದೇವನ್ ನಾಯರ್
| ಆಲಪುಳ
| 1962–1977
| ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಅಂಬಲಪ್ಪುಳ ಸ್ಥಾನವಾಗಿ)
|-
| ಆರ್. ಅಚುತನ್
| ಮಾವೇಲಿಕರ
| 1962–1967
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| ಜಿ.ಪಿ. ಮಂಗಳತ್ತುಮಡೋಮ್
| ಮಾವೇಲಿಕರ
| 1967–1971
| ಸಮ್ಯುಕ್ತ ಸೋಷಲಿಸ್ಟ್ ಪಾರ್ಟಿ
|-
| [[ಆರ್. ಬಾಲಕೃಷ್ಣ ಪಿಳ್ಳೈ]]
| ಮಾವೇಲಿಕರ
| 1971–1977
| ಕೇರಳ ಕಾಂಗ್ರೆಸ್
|-
| ಬಿ.ಕೆ. ನಾಯರ್
| ಮಾವೇಲಿಕರ
| 1977–1980
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| ಸುಸೀಲಾ ಗೋಪಾಲನ್
| ಆಲಪುಳ
| 1980–1984
| ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)
|-
| [[ಪಿ. ಜೆ. ಕುರಿಯನ್|ಪ್ರೊ. ಪಿ.ಜೆ. ಕುರಿಯನ್]]
| ಮಾವೇಲಿಕರ
| 1980–1984,1989-1998
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| ವಕ್ಕೊಮ್ ಪುರುಷೋತ್ತಮ್
| ಆಲಪುಳ
| 1984–1991
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| [[ಥಂಪನ್ ಥಾಮಸ್]]
| ಮಾವೇಲಿಕರ
| 1984–1989
| ಜನತಾ ಪಾರ್ಟಿ
|-
| ಟಿ. ಜೆ. ಅಂಜಲೋಸ್
| ಆಲಪುಳ
| 1991–1996
| ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)
|-
| [[ರಮೇಶ್ ಚೆನ್ನಿತಲ]]
| ಮಾವೇಲಿಕರ
| 1999–2004
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| [[ಸಿ. ಎಸ್. ಸುಜಾತಾ|ಸಿ.ಎಸ್. ಸುಜಾತಾ]]
| ಮಾವೇಲಿಕರ
| 2004–2009
| ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)
|-
| [[ವಿ. ಎಂ. ಸುಧೀರನ್|ವಿ.ಎಂ ಸುಧೀರನ್]]
| ಆಲಪುಳ
| 1977–1980, 1996–2004
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| [[ಕೆ. ಎಸ್. ಮನೋಜ್|ಡಾ. ಕೆ.ಎಸ್ ಮನೋಜ್]]
| ಆಲಪುಳ
| 2004–2009
| ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)
|-
| [[ಕೆ. ಸಿ. ವೇಣುಗೋಪಾಲ್|ಕೆ.ಸಿ ವೇಣುಗೋಪಾಲ್ ಸಂಸದ]]
| ಆಲಪುಳ
| 2009- 2014
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| [[ಕೊಡಿಕುನ್ನುನಿಲ್ ಸುರೇಶ್]] ಸಂಸದ
| ಮಾವೇಲಿಕರ
| 2009–2014
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| [[ಕೆ. ಸಿ. ವೇಣುಗೋಪಾಲ್|ಕೆ.ಸಿ ವೇಣುಗೋಪಾಲ್ ಸಂಸದ]]
| ಆಲಪುಳ
| 2009- 2014
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| [[ಕೊಡಿಕುನ್ನುನಿಲ್ ಸುರೇಶ್]] ಸಂಸದ
| ಮಾವೇಲಿಕರ
| 2009–2014
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| [[ಕೆ. ಸಿ. ವೇಣುಗೋಪಾಲ್|ಕೆ.ಸಿ ವೇಣುಗೋಪಾಲ್ ಸಂಸದ]]
| ಆಲಪುಳ
| 2014- 2019
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| [[ಕೊಡಿಕುನ್ನುನಿಲ್ ಸುರೇಶ್]] ಸಂಸದ
| ಮಾವೇಲಿಕರ
| 2014–2019
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| [[ಎ. ಎಂ. ಅರೀಫ್]]
| ಆಲಪುಳ
| 2019–2024
| ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)
|-
| [[ಕೊಡಿಕುನ್ನುನಿಲ್ ಸುರೇಶ್]] ಸಂಸದ
| ಮಾವೇಲಿಕರ
| 2019–2024
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| [[ಕೆ. ಸಿ. ವೇಣುಗೋಪಾಲ್|ಕೆ.ಸಿ ವೇಣುಗೋಪಾಲ್ ಸಂಸದ]]
| ಆಲಪುಳ
| 2024-
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|-
| [[ಕೊಡಿಕುನ್ನುನಿಲ್ ಸುರೇಶ್]] ಸಂಸದ
| ಮಾವೇಲಿಕರ
| 2024-
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
|}
== ಶಿಕ್ಷಣ ==
[[File:St. Joseph's College for Women Alappuzha.jpg|thumb|[[ಸೇಂಟ್ ಜೋಸೆಫ್ಸ್ ಕಾಲೇಜ್ ಫಾರ್ ವುಮೆನ್, ಆಲಪುಳ]]]]
[[File:Alappuzha Medical College.jpg|thumb|[[ಗವರ್ನಮೆಂಟ್ ಟಿ. ಡಿ. ಮೆಡಿಕಲ್ ಕಾಲೇಜ್, ಆಲಪುಳ]]]]
[[File:Leo XIII HSS, Alappuzha.jpg|thumb|ಲಿಯೋ XIII HSS, ಆಲಪುಳ]]
ಜಿಲ್ಲೆಯಾದ್ಯಂತ ಶಾಲೆಗಳು, ಕಂಪ್ಯೂಟರ್ ಸಂಸ್ಥೆಗಳು ಮತ್ತು ಕಾಲೇಜುಗಳಿವೆ, ಒಂಬತ್ತು ತರಬೇತಿ ಶಾಲೆಗಳು, 405 ಕೆಳಗಿನ ಪ್ರಾಥಮಿಕ ಶಾಲೆಗಳು, 105 ಪ್ರೌಢಶಾಲೆಗಳು ಮತ್ತು 87 ಉನ್ನತ ಮಾಧ್ಯಮಿಕ ಶಾಲೆಗಳು.<ref>"education in Alappuzha {{cite web |title=Official WEBSITE of Alappuzha, Kerala, India - Education Department |url=http://alappuzha.nic.in/dept.htm |url-status=dead |archive-url=https://web.archive.org/web/20110807061328/http://alappuzha.nic.in/dept.htm |archive-date=7 August 2011 |access-date=2011-06-10 |df=dmy}}"</ref>
ಆಲಪುಳದ ಮೊದಲ ಶಾಲೆ, [[ಚರ್ಚ್ ಮಿಷನರಿ ಸೊಸೈಟಿ]] (CMS) ಶಾಲೆಯನ್ನು 1816 ರಲ್ಲಿ ಸ್ಥಾಪಿಸಲಾಯಿತು. ಶಾಲೆಯನ್ನು ಭಾರತಕ್ಕೆ ಮೊದಲ CMS ಮಿಷನರಿಯಾದ ರೆವ್. ಥಾಮಸ್ ನಾರ್ಟನ್ ಸ್ಥಾಪಿಸಿದರು. ಶಾಲೆಯನ್ನು [[ಚರ್ಚ್ ಆಫ್ ಸೌತ್ ಇಂಡಿಯಾ|CSI]] ಕ್ರೈಸ್ಟ್ ಚರ್ಚ್, ಆಲಪುಳ ನಡೆಸುತ್ತದೆ. ಆಲಪುಳದಲ್ಲಿ ಮೊದಲ ಉನ್ನತ ಮಾಧ್ಯಮಿಕ ಶಾಲೆಯು ಲಿಯೋ XIII ನೇ ಉನ್ನತ ಮಾಧ್ಯಮಿಕ ಶಾಲೆಯಾಗಿದ್ದು, ಇದನ್ನು 1 ಜೂನ್ 1889 ರಂದು [[ಕೊಚ್ಚಿ]]ನ ಪೋರ್ಚುಗೀಸ್ ಬಿಷಪ್ [[ಜಾನ್ ಗೋಮೆಸ್ ಪೆರೇರಾ]] ಅವರು ತೆರೆದರು. ಆಲಪುಳದ ಮೊದಲ ಪಾಲಿಟೆಕ್ನಿಕ್ ಕಾಲೇಜು ಕಾರ್ಮೆಲ್ ಪಾಲಿಟೆಕ್ನಿಕ್ ಕಾಲೇಜು ಆಗಿದ್ದು, ಇದನ್ನು ಫಾ. ಗಿಲ್ಬರ್ಟ್ ಪಳಕ್ಕುನೇಲ್ ಸ್ಥಾಪಿಸಿದರು, ಮತ್ತು ಇದನ್ನು CMI ಸಭೆಯು ನಿರ್ವಹಿಸುತ್ತದೆ. ಕಾರ್ಮೆಲ್ ಇನ್ನೂ ರಾಜ್ಯದಲ್ಲಿ ಶೈಕ್ಷಣಿಕವಾಗಿ ಅಗ್ರಸ್ಥಾನದ ಪಾಲಿಟೆಕ್ನಿಕ್ ಆಗಿದೆ.<ref>"Leo 13 school {{cite web|url=http://alleppeydiocesanschools.org/php/schoolsDetails.php?sId%3D1%26linkid%3D21%26type%3DH |title=Higher Secondary Schools |access-date=2011-06-10 |url-status=dead |archive-url=https://web.archive.org/web/20120426064244/http://alleppeydiocesanschools.org/php/schoolsDetails.php?sId=1&linkid=21&type=H |archive-date=26 April 2012 |df=dmy }}"</ref>
[[File:Cemp2.jpg|thumb|[[ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಪುನ್ನಪ್ರ]]]]
ಆಲಪುಳದ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ [[ಸ್ನಾತಕೋತ್ತರ|ಸ್ನಾತಕ]] ಮತ್ತು [[ಸ್ನಾತಕೋತ್ತರ]] ಕೋರ್ಸ್ಗಳನ್ನು ನೀಡುತ್ತವೆ.<ref>"colleges in Alappuzha {{cite web |title=Official WEBSITE of Alappuzha, Kerala, India - Colleges of Alappuzha |url=http://alappuzha.nic.in/college.htm |url-status=dead |archive-url=https://web.archive.org/web/20110807061232/http://alappuzha.nic.in/college.htm |archive-date=7 August 2011 |access-date=2011-06-10 |df=dmy}}"</ref>
=== ಪ್ರಮುಖ ಕಾಲೇಜು ಸಂಸ್ಥೆಗಳು ===
* ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (UIT), ಆಲಪುಳ<ref>{{cite web|url=https://www.uitalleppey.org/ |title=University Institute of Technology (UIT), Alappuzha}}</ref>
* [[ಕಾಲೇಜ್ ಆಫ್ ಇಂಜಿನಿಯರಿಂಗ್, ಚೇರ್ತಲ]]<ref>{{cite web|url=http://www.cectl.ac.in/ |title=College of Engineering, Cherthala |publisher=Cectl.ac.in |access-date=25 September 2013}}</ref>
* [[ಸನಾತನ ಧರ್ಮ ಕಾಲೇಜು]]<ref>{{cite web|url=http://www.sdcollege.in|title=Welcome - Sanatana Dharma College|accessdate=26 February 2023}}</ref>
* [[ಎಸ್. ಡಿ. ವಿ. ಕಾಲೇಜ್ ಆಫ್ ಆರ್ಟ್ಸ್ ಅಂಡ್ ಅಪ್ಲೈಡ್ ಸೈನ್ಸ್]]<ref>{{cite web|url=http://www.sdvcollege.in|title=Welcome: S. D. V. College of Arts and Applied Science|accessdate=26 February 2023}}</ref>
* [[ಶ್ರೀ ನಾರಾಯಣ ಕಾಲೇಜು, ಚೇರ್ತಲ|ಶ್ರೀ ನಾರಾಯಣ ಕಾಲೇಜು ಚೇರ್ತಲ-SN ಕಾಲೇಜು ಕಂಜಿಕ್ಕುಳಿ]]<ref>{{cite web|url=http://www.sncollegecherthala.in/|title=SN COLLEGE CHERTHALA|accessdate=26 February 2023|archive-date=22 February 2016|archive-url=https://web.archive.org/web/20160222082800/http://www.sncollegecherthala.in/|url-status=dead}}</ref>
* [[ಎನ್.ಎಸ್.ಎಸ್. ಕಾಲೇಜು, ಚೇರ್ತಲ]]<ref>{{cite web|url=http://www.grotal.com/e/NSS-College-Alappuzha-C4791 |title=NSS Alappuzha |publisher=Grotal.com |access-date=25 September 2013}}</ref>
* ಗವರ್ನಮೆಂಟ್ ಕಾಲೇಜು, ಅಂಬಲಪ್ಪುಳ<ref>{{cite web|url=http://www.ambalapuzhagc.org|title=Government College, Ambalapuzha|accessdate=26 February 2023}}</ref>
* [[ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಪುನ್ನಪ್ರ]]<ref>{{cite web|url=http://www.cempunnapra.org|title=CEM Punnapra|accessdate=26 February 2023}}</ref>
* [[ಮಾರ್ ಗ್ರೆಗೋರಿಯೋಸ್ ಕಾಲೇಜು ಪುನ್ನಪ್ರ]]<ref>{{cite web|url=http://margregoriospunnapra.org|title=Mar Gregorios College|access-date=7 October 2018|archive-url=https://web.archive.org/web/20151019133501/http://margregoriospunnapra.org/|archive-date=19 October 2015|url-status=dead|df=dmy-all}}</ref>
* [[ಕಾಲೇಜ್ ಆಫ್ ಇಂಜಿನಿಯರಿಂಗ್ ಚೆಂಗನ್ನೂರು]]<ref>{{cite web|url=http://www.ceconline.edu |title=College of Engineering (Chengannur) |publisher=Ceconline.edu |access-date=25 September 2013}}</ref>
* ಕಾಲೇಜ್ ಆಫ್ ಅಪ್ಲೈಡ್ ಸೈನ್ಸಸ್, ಮಾವೇಲಿಕ್ಕರ<ref>{{cite web|url=http://casmvk.kerala.gov.in|title=Profile of the College - College of Applied Sciences, Mavelikkara|accessdate=26 February 2023}}</ref>
* ಕಾರ್ಮೆಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಆಲಪುಳ <ref>{{Cite web|url=https://www.carmelcet.in/|title=Carmel College of Engineering and Technology|website=www.carmelcet.in}}</ref>
* [[ಗವರ್ನಮೆಂಟ್ ಟಿ ಡಿ ಮೆಡಿಕಲ್ ಕಾಲೇಜು, ಆಲಪುಳ]]<ref>{{Cite web|url=https://tdmcalappuzha.org/|title=TD Medical College – Alappuzha}}</ref>
* [[ಸೇಂಟ್ ಜೋಸೆಫ್ಸ್ ಕಾಲೇಜ್ ಫಾರ್ ವುಮೆನ್, ಆಲಪುಳ|ಸೇಂಟ್ ಜೋಸೆಫ್ಸ್ ಕಾಲೇಜ್ ಫಾರ್ ವುಮೆನ್, ಆಲಪುಳ]]<ref>{{Cite web |url=http://www.stjosephcollegeforwomen.com/ |title=SJCW |access-date=10 June 2011 |archive-date=9 January 2016 |archive-url=https://web.archive.org/web/20160109222048/http://stjosephcollegeforwomen.com/ |url-status=dead }}</ref>
* [[ಸೇಂಟ್ ಮೈಕೆಲ್ಸ್ ಕಾಲೇಜು, ಚೇರ್ತಲ|ಸೇಂಟ್ ಮೈಕೆಲ್ಸ್ ಕಾಲೇಜು, ಚೇರ್ತಲ]]<ref>SMC {{cite web|url=http://www.keralauniversity.edu/stmicheals.htm |title=St. Michael's College, Cherthala |access-date=18 February 2016 |url-status=dead |archive-url=https://web.archive.org/web/20100527094214/http://www.keralauniversity.edu/stmicheals.htm |archive-date=27 May 2010 }}</ref>
* [[ಟಿ. ಕೆ. ಮಾಧವ ಸ್ಮಾರಕ ಕಾಲೇಜು]]<ref>{{cite web|url=http://www.keralauniversity.edu/tkmadava.htm |title=T.K. Madhava Memorial College, Nangiarkulangara |access-date=18 February 2016 |url-status=dead |archive-url=https://web.archive.org/web/20110926212337/http://www.keralauniversity.edu/tkmadava.htm |archive-date=26 September 2011 |df=dmy }}</ref>
* ಸೇಂಟ್ ಅಲೋಶಿಯಸ್ ಕಾಲೇಜು ಎಡತ್ತುವ<ref>{{cite web |url=http://www.aloysiuscollege.org/ |title=St Aloysius |publisher=Aloysiuscollege.org |access-date=25 September 2013 |archive-date=29 August 2013 |archive-url=https://web.archive.org/web/20130829023214/http://www.aloysiuscollege.org/ |url-status=dead }}</ref>
* [[ಬಿಷಪ್ ಮೂರ್ ಕಾಲೇಜು]] ಮಾವೇಲಿಕ್ಕರ
* ಮಿಲಾದ್-ಇ-ಶೆರೀಫ್ ಸ್ಮಾರಕ ಕಾಲೇಜು, ಕಾಯಂಕುಲಂ (MSM)
* [[ಕ್ರಿಶ್ಚಿಯನ್ ಕಾಲೇಜು, ಚೆಂಗನ್ನೂರು]]
== ಧಾರ್ಮಿಕ ಕಟ್ಟಡಗಳು ಮತ್ತು ದೇಗುಲಗಳು ==
[[File:Ambalappuzha Temple.JPG|thumb|ಅಂಬಲಪ್ಪುಳ ಶ್ರೀ ಕೃಷ್ಣ ಸ್ವಾಮಿ ದೇವಾಲಯ]]
[[File:Our Lady of Mount Carmel Cathedral.jpg|thumb|ಅವರ್ ಲೇಡಿ ಆಫ್ ಮೌಂಟ್ ಕಾರ್ಮೆಲ್ ಕಥೆಡ್ರಲ್, ಆಲಪುಳ]]
[[File:St. Andrew's Forane Church of Arthunkal.jpg|thumb|ಸೇಂಟ್ ಆಂಡ್ರ್ಯೂಸ್ ಬೆಸಿಲಿಕಾ, ಅರ್ಥುಂಕಲ್]]
===ಆಲಪುಳದಲ್ಲಿನ ಹಿಂದೂ ದೇವಾಲಯಗಳು===
* [[ಅಂಬಲಪ್ಪುಳ ಶ್ರೀ ಕೃಷ್ಣ ಸ್ವಾಮಿ ದೇವಾಲಯ]]
* [[ಆನಂದೇಶ್ವರಂ ಮಹಾದೇವ ದೇವಾಲಯ]]
* [[ಚಕ್ಕುಳತ್ತುಕಾವು ದೇವಾಲಯ]] (ಭಗವತಿ ದೇವಾಲಯ)
* [[ಚೆಟ್ಟಿಕುಳಂಗರ ದೇವಿ ದೇವಾಲಯ]]
* [[ಚೆಂಗನ್ನೂರು ಮಹಾದೇವ ದೇವಾಲಯ]]
* [[ಹರಿಪಾಡ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ]]
* [[ಕಾರ್ತ್ಯಾಯಿನಿ ದೇವಿ ದೇವಾಲಯ, ಚೇರ್ತಲ|ಕಾನಿಚುಕುಳಂಗರ ದೇವಿ ದೇವಾಲಯ]]
* [[ಕಂಡಿಯೂರು ಶ್ರೀ ಮಹಾದೇವ ದೇವಾಲಯ]], ಮಾವೇಲಿಕ್ಕರ
* [[ಮನ್ನಾರಸಾಲ ದೇವಾಲಯ]]
* [[ಮುಲ್ಲಕ್ಕಲ್ ದೇವಾಲಯ|ಮುಲ್ಲಕ್ಕಲ್ ರಾಜರಾಜೇಶ್ವರಿ ದೇವಾಲಯ]]
* [[ಪಡನಿಲಂ ಪರಬ್ರಹ್ಮ ದೇವಾಲಯ]], ನೂರನಾಡ್
* [[ಪುಲಿಯೂರು ಮಹಾವಿಷ್ಣು ದೇವಾಲಯ|ತ್ರಿಪುಲಿಯೂರು ಮಹಾವಿಷ್ಣು ದೇವಾಲಯ]]
* [[ತೃಚಿತ್ತಟ್ಟ ಮಹಾ ವಿಷ್ಣು ದೇವಾಲಯ]]
* [[ವಲಿಯಕುಳಂಗರ ದೇವಿ ದೇವಾಲಯ]], ಕಾರ್ತಿಕಪ್ಪಳ್ಳಿ
===ಆಲಪುಳದಲ್ಲಿನ ಕ್ರೈಸ್ತ ಚರ್ಚುಗಳು===
* [[ಆಲಪುಳ ಡಯಾಸಿಸ್|ಅವರ್ ಲೇಡಿ ಆಫ್ ಮೌಂಟ್ ಕಾರ್ಮೆಲ್ ಕಥೆಡ್ರಲ್, ಆಲಪುಳ]]
* [[ಸೇಂಟ್ ಆಂಡ್ರ್ಯೂಸ್ ಬೆಸಿಲಿಕಾ, ಅರ್ಥುಂಕಲ್|ಸೇಂಟ್ ಆಂಡ್ರ್ಯೂಸ್ ಬೆಸಿಲಿಕಾ, ಅರ್ಥುಂಕಲ್]]
* [[ಸೇಂಟ್ ಜಾರ್ಜ್ ಫೊರೇನ್ ಚರ್ಚ್, ಎಡತ್ತುವ|ಸೇಂಟ್ ಜಾರ್ಜ್/ಪಾಲ್ ಫೊರೇನ್ ಚರ್ಚ್]]
* [[ಬೆಸಿಲಿಕಾ ಆಫ್ ಸೇಂಟ್ ಮೇರಿ, ಚಂಪಾಕುಳಂ|ಬೆಸಿಲಿಕಾ ಆಫ್ ಸೇಂಟ್ ಮೇರಿ, ಚಂಪಾಕುಳಂ]] (ಚಂಬಾಕುಳಂ ಕಲ್ಲೂರ್ಕಾಡು ಬೆಸಿಲಿಕಾ)
* [[ಸೇಂಟ್ ಥಾಮಸ್ ಚರ್ಚ್, ಥುಂಪೋಲಿ|ಸೇಂಟ್ ಥಾಮಸ್ ಚರ್ಚ್, ಥುಂಪೋಲಿ]] (ಥುಂಪೋಲಿ ಪಳ್ಳಿ)
* [[ಸೇಂಟ್ ಮೇರಿಸ್ ಫೊರೇನ್ ಚರ್ಚ್, ಪುಳಿಂಕುನ್ನು]]
===ಆಲಪುಳದಲ್ಲಿನ ಮುಸ್ಲಿಂ ಮಸೀದಿಗಳು===
*[[ಮಕಾಂ ಮಸೀದಿ]], ಸಿವಿಲ್ ಸ್ಟೇಷನ್ ವಾರ್ಡ್, ಆಲಪುಳ.<ref name="sunni">{{Cite web |last=SUNNIVOICE |date=2021-12-31 |title=ആലപ്പുഴ: കനാൽ കരകളിലെ പൈതൃകക്കാഴ്ചകൾ |url=https://sunnivoice.net/%e0%b4%86%e0%b4%b2%e0%b4%aa%e0%b5%8d%e0%b4%aa%e0%b5%81%e0%b4%b4-%e0%b4%95%e0%b4%a8%e0%b4%be%e0%b5%bd-%e0%b4%95%e0%b4%b0%e0%b4%95%e0%b4%b3%e0%b4bf%e0%b4%b2%e0%b5%86-%e0%b4%aa%e0%b5%88%e0%b4%a4/ |access-date=2024-06-27 |language=ml}}</ref>
* [[ಸೌಕರ್ ಮಸೀದಿ]], 1850 ರಲ್ಲಿ ನಿರ್ಮಿಸಲಾದ ಮಸೀದಿ.<ref name="News18">{{cite news |title=ആലപ്പുഴ പൈതൃകപദ്ധതിയിൽ മുഖംമിനുക്കി ' സൗക്കാർ മസ്ജിദ് ' |url=https://malayalam.news18.com/news/alappuzha/sawker-masjid-timeless-beacon-of-spiritual-heritage-in-alappuzha-local18-649587.html |work=News18 മലയാളം |date=14 January 2024 |language=ml }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
== ಕ್ರೀಡೆ ==
[[File:Nehru Trophy Boat Race 2012 7791.JPG|250px|thumb|[[ನೆಹರು ಟ್ರೋಫಿ ದೋಣಿ ಪಂದ್ಯ]]ವು ಆಲಪುಳದ ಬಳಿಯ ಪುನ್ನಮಾಡ ಸರೋವರದಲ್ಲಿ ನಡೆಸಲಾಗುವ ಜನಪ್ರಿಯ ಕ್ರೀಡೆಯಾಗಿದೆ]]
ಆಲಪುಳವು ಆಲಪುಳದ ಬಳಿಯ [[ಪುನ್ನಮಾಡ ಸರೋವರ]]ದಲ್ಲಿ ನಡೆಯುವ ನೆಹರು ಟ್ರೋಫಿ ದೋಣಿ ಪಂದ್ಯವನ್ನು ಆಯೋಜಿಸುತ್ತದೆ.<ref>{{Cite web |title=The Nehru Trophy Boat Race |url=https://utsav.gov.in/view-event/nehru-trophy-boat-race#:~:text=The%20Nehru%20Trophy%20Boat%20Race%20is%20one,there%20is%20an%20interesting%20story%20behind%20it.}}</ref> 1952 ರಲ್ಲಿ, ಭಾರತದ ಮೊದಲ ಪ್ರಧಾನ ಮಂತ್ರಿಯಾದ [[ಜವಾಹರಲಾಲ್ ನೆಹರು]] ಕೇರಳಕ್ಕೆ ಭೇಟಿ ನೀಡಿದಾಗ, ಅಲ್ಲೆಪ್ಪೇಯ್ ಜನರು ತಮ್ಮ ಪ್ರತಿಷ್ಠಿತ ಅತಿಥಿಗೆ ವಿಶೇಷ ಮನರಂಜನೆಯನ್ನು ನೀಡಲು ನಿರ್ಧರಿಸಿದರು ಮತ್ತು ಹಾವಿನ ದೋಣಿ ಪಂದ್ಯವನ್ನು ನಡೆಸಿದರು. ನೆಹರು ಈ ಘಟನೆಯಿಂದ ಬಹಳ ಪ್ರಚೋದಿತರಾದರು ಮತ್ತು ಅವರು ಭದ್ರತಾ ಅಧಿಕಾರಿಗಳನ್ನು ನಿರ್ಲಕ್ಷಿಸಿ 'ನಾಡುಭಾಗಂ ಚುಂದನ್' (ಹಾವಿನ ದೋಣಿ) ಗೆ ಜಿಗಿದರು. ಹಾವಿನ ದೋಣಿಯಲ್ಲಿ ಸಂಚರಿಸುವ ಈ ಪ್ರಚೋದನೆಯಿಂದ ಅವರು ಪಂದ್ಯದ ವಿಜೇತರಿಗೆ ನೀಡಲು ತಿರುಗುವ ಪ್ರಶಸ್ತಿಯನ್ನು ದಾನ ಮಾಡಿದರು. ಈ ಹಾವಿನ ದೋಣಿ ಪಂದ್ಯದ ಹೊರತಾಗಿ [[ಕ್ರಿಕೆಟ್]], [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]], [[ಬ್ಯಾಸ್ಕೆಟ್ಬಾಲ್]] ಮತ್ತು [[ರೋಯಿಂಗ್]] ಪಟ್ಟಣದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಗಳಾಗಿವೆ. 2015 ರಲ್ಲಿ, [[ಕೇರಳ ಕ್ರಿಕೆಟ್ ಅಸೋಸಿಯೇಷನ್]] ಆಲಪುಳದಲ್ಲಿ [[ಕೆಸಿಎ ಕ್ರಿಕೆಟ್ ಸ್ಟೇಡಿಯಂ ಆಲಪುಳ]]ವನ್ನು ಉದ್ಘಾಟಿಸಿತು, ಇದು ಎ-ವರ್ಗದ ಕ್ರಿಕೆಟ್ ಸ್ಟೇಡಿಯಂ ಆಗಿದೆ.<ref>{{cite web|url=http://www.keralacricketassociation.com/Alappuzha-cg|title=SD College- KCA Cricket Ground- Alapuzha}}</ref>
== ಗಮನಾರ್ಹ ವ್ಯಕ್ತಿಗಳು ==
* [[ಥಕಳಿ ಶಿವಶಂಕರ ಪಿಳ್ಳೈ]] - ಕಾದಂಬರಿಕಾರ ಮತ್ತು ಸಣ್ಣ ಕಥೆ ಬರಹಗಾರ, ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ.
* [[ವಾಯಲರ್ ರಾಮವರ್ಮ]] - ಮಲಯಾಳಂ ಕವಿ ಮತ್ತು ಚಲನಚಿತ್ರ ಗೀತರಚನೆಕಾರ
* [[ಅರತ್ತುಪುಳ ವೇಲಾಯುಧ ಪಣಿಕ್ಕರ್]] - [[ಕೇರಳ]]ದ ಸಾಮಾಜಿಕ ಸುಧಾರಕ
* [[ಎಂ. ಕೆ. ಸಾನು]] – ಬರಹಗಾರ, ವಿಮರ್ಶಕ ಮತ್ತು ಸಾಮಾಜಿಕ ಕಾರ್ಯಕರ್ತ, ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಸಂಸ್ಥೆಯ ಶಾಶ್ವತ ಸದಸ್ಯ
* [[ಇರಯಿಮ್ಮನ್ ತಂಪಿ]] - ಕೇರಳದ ಕರ್ನಾಟಕ ಸಂಗೀತಗಾರ ಮತ್ತು ಸಂಗೀತ ಸಂಯೋಜಕ
* [[ಕವಾಲಂ ನಾರಾಯಣ ಪಣಿಕ್ಕರ್]] - ನಿರ್ದೇಶಕ, ಕವಿ
* [[ಎಸ್. ಡಿ. ಶಿಬುಲಾಲ್]] - [[ಇನ್ಫೋಸಿಸ್]]ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ
* [[ಕರುಣಾಕರ ಗುರು|ನವಜ್ಯೋತಿ ಶ್ರೀ ಕರುಣಾಕರ ಗುರು]] - [[ಸಂತಿಗಿರಿ ಆಶ್ರಮ]]ದ ಸ್ಥಾಪಕ
* [[ಗಣೇಶ್ ಪುತೂರು]] - ಬರಹಗಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ
* [[ಪಿ. ಎಸ್. ಕಾರ್ತಿಕೇಯನ್]] - ಹಿಂದಿನ ಸಚಿವ, ಎಸ್. ಎನ್. ಟ್ರಸ್ಟ್, [[SNDP]] ಯೋಗದ ಮಾಜಿ ನಿರ್ದೇಶಕ, ಮಾಜಿ ವಿಧಾನಸಭಾ ಸದಸ್ಯ (ಆರೂರು), ದಿನಮಣಿ ದೈನಿಕದ ಮುಖ್ಯ ಸಂಪಾದಕ
* [[ಪಿ. ನಾರಾಯಣ ಕುರುಪ್]] - ಮಲಯಾಳಂ ಕವಿ
* [[ಜಾಯ್ ಜೆ. ಕೈಮಪರಂಬನ್]] - ಇಂಗ್ಲಿಷ್ ಮತ್ತು ಮಲಯಾಳಂ ಲೇಖಕ
* [[ಇಟ್ಟಿ ಅಚುತನ್]] - [[ಹಾರ್ಟಸ್ ಮಲಬಾರಿಕಸ್]]ನ ಸಂಕಲನಕ್ಕೆ ಜನಾಂಗೀಯ-ವೈದ್ಯಕೀಯ ಮಾಹಿತಿಯ ಪ್ರಮುಖ ಕೊಡುಗೆದಾರ
* [[ಎಲಿಯಾನರ್ ಸಿಂಕ್ಲೇರ್ ರೋಡ್]] - ಬ್ರಿಟಿಷ್ ತೋಟಗಾರ ಮತ್ತು ತೋಟಗಾರಿಕೆಯ ಬರಹಗಾರ
* [[ವಿ. ಪಿ. ಶಿವಕುಮಾರ್]] - ಸಣ್ಣ ಕಥೆ ಬರಹಗಾರ
* [[ಸಿ. ಟಿ. ರವಿಕುಮಾರ್|ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್]] - ಸುಪ್ರೀಂ ಕೋರ್ಟ್ ನ್ಯಾಯಾಧೀಶರು.
* [[ಎಂ. ಜಿ. ಶ್ರೀಕುಮಾರ್]] - ಸಂಗೀತಗಾರ, ಗಾಯಕ ಮತ್ತು ಸಂಗೀತ ನಿರ್ದೇಶಕ
* [[ವಾಯಲರ್ ಸಾರತ್ ಚಂದ್ರ ವರ್ಮ]] - ಕವಿ ಮತ್ತು ಗೀತರಚನೆಕಾರ
* [[ಕವಾಲಂ ಶ್ರೀಕುಮಾರ್]] - ಶಾಸ್ತ್ರೀಯ ಸಂಗೀತಗಾರ, ಪ್ಲೇಬ್ಯಾಕ್ ಗಾಯಕ, ಸಂಯೋಜಕ
* [[ರಾಜೀವ್ ಅಲುಂಕಲ್]] - ಗೀತರಚನೆಕಾರ, ಕವಿ ಮತ್ತು ವಾಗ್ಮಿ
=== ಧರ್ಮ ===
* [[ಕರುಣಾಕರ ಗುರು]] - ಸಂತಿಗಿರಿ ಆಶ್ರಮದ ಸ್ಥಾಪಕ
* [[ಪಾಲಕ್ಕಲ್ ಥೋಮಾ ಮಲ್ಪಾನ್]] - [[ಕಾರ್ಮೆಲೈಟ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್]] ಸ್ಥಾಪಕ
* [[ಮಿಗ್ರ್. ಜೋಸೆಫ್ ಸಿ. ಪಂಜಿಕರನ್]] - ಸಿಸ್ಟರ್ಸ್ ಆಫ್ ಸೇಂಟ್ ಜೋಸೆಫ್ ಸ್ಥಾಪಕ
* [[ಆಂಟನಿ ಥಿಯೋಡೋರ್]] - ಕ್ರೈಸ್ತ ಶಿಕ್ಷಣತಜ್ಞ, ಕವಿ, ಸಮಾಜ ಕಾರ್ಯಕರ್ತ
* ಸಂತ [[ಕುರಿಯಾಕೋಸ್ ಎಲಿಯಾಸ್ ಚಾವರ]] - ಕ್ರೈಸ್ತ ಸಂತ
=== ರಾಜಕೀಯ ===
* [[ಎ. ಕೆ. ಆಂಟನಿ]] - [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಯುಡಿಎಫ್]] ಮಂತ್ರಿಮಂಡಲದಲ್ಲಿ ಕೇರಳದ ಮೂರು ಬಾರಿಯ ಮುಖ್ಯಮಂತ್ರಿ, ಮಾಜಿ ಭಾರತೀಯ ರಕ್ಷಣಾ ಸಚಿವ
* [[ವಿ. ಎಸ್. ಅಚ್ಯುತಾನಂದನ್]] - ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಭಾರತದ ಅತ್ಯಂತ ಹಿರಿಯ ಕಮ್ಯುನಿಸ್ಟ್ ರಾಜಕಾರಣಿಗಳಲ್ಲಿ ಒಬ್ಬರು
* [[ರಮೇಶ್ ಚೆನ್ನಿತಲ]] - ಮಾಜಿ ಗೃಹ ಸಚಿವ ಮತ್ತು ಕೇರಳದ ಮಾಜಿ ಪ್ರತಿಪಕ್ಷ ನಾಯಕ, ಹರಿಪಾಡ್ ಕ್ಷೇತ್ರದ ಪ್ರಸ್ತುತ ವಿಧಾನಸಭಾ ಸದಸ್ಯ.
* [[ಸುಶೀಲಾ ಗೋಪಾಲನ್|ಸುಸೀಲಾ ಗೋಪಾಲನ್]]- ಮಾಜಿ ಕೇರಳ ಕೈಗಾರಿಕಾ ಸಚಿವ ಮತ್ತು ಕಮ್ಯುನಿಸ್ಟ್ ನಾಯಕ
* [[ಕೆ. ಆರ್. ಗೌರಿ]] - ಮೊದಲ ಕೇರಳ [[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಎಲ್ಡಿಎಫ್]] ಮಂತ್ರಿಮಂಡಲದಲ್ಲಿ ರಾಜಸ್ವ ಸಚಿವ, ಕೇರಳದಲ್ಲಿ [[ಭೂ ಸುಧಾರಣೆಗಳನ್ನು]] ಪ್ರಾರಂಭಿಸಿದರು, ಕೇರಳ ಯುಡಿಎಫ್ ಮಂತ್ರಿಮಂಡಲದಲ್ಲಿ ಕೃಷಿ ಸಚಿವ
* [[ವಾಯಲರ್ ರವಿ]] - ಯುಡಿಎಫ್ ಮಂತ್ರಿಮಂಡಲದಲ್ಲಿ ಕೇರಳದ ಮಾಜಿ ಗೃಹ ಸಚಿವ, ವಿದೇಶ ಭಾರತೀಯ ವ್ಯವಹಾರಗಳ ಮಾಜಿ ಕೇಂದ್ರ ಸಚಿವ ಮತ್ತು ಸಂಸದೀಯ ವ್ಯವಹಾರಗಳ ಸಚಿವ
* [[ಸಿ. ಕೆ. ಚಂದ್ರಪ್ಪನ್]] - ಕಮ್ಯುನಿಸ್ಟ್ ನಾಯಕ ಮತ್ತು ಮಾಜಿ ಸಂಸದ
* [[ಎಸ್. ರಾಮಚಂದ್ರನ್ ಪಿಳ್ಳೈ]] - ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಪೊಲಿಟ್ಬ್ಯೂರೋ ಸದಸ್ಯ ಮತ್ತು ಆಲ್ ಇಂಡಿಯಾ ಕಿಸಾನ್ ಸಭಾ (ರೈತರ ಒಕ್ಕೂಟ) ಪ್ರಧಾನ ಕಾರ್ಯದರ್ಶಿ
* [[ಜಿ. ಸುಧಾಕರನ್]] - [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)]] ಸದಸ್ಯ ಮತ್ತು ಕೇರಳದ ಮಾಜಿ ಸಾರ್ವಜನಿಕ ಕಾರ್ಯಗಳ ಸಚಿವ
* [[ಪಿ. ಪರಮೇಶ್ವರನ್]] - ಭಾರತೀಯ ವಿಚಾರ ಕೇಂದ್ರದ ನಿರ್ದೇಶಕ; ತತ್ವಜ್ಞಾನಿ
=== ಸಿನೆಮಾ ===
* [[ಶ್ರೀಕುಮಾರನ್ ತಂಪಿ]] - ಮಲಯಾಳಂ ಸಿನೆಮಾದ ಗೀತರಚನೆಕಾರ, ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ
* [[ಜೋಮನ್ ಟಿ. ಜಾನ್]] - ಭಾರತೀಯ ಛಾಯಾಗ್ರಾಹಕ
* [[ರತೀಶ್]] - ಮಲಯಾಳಂ ಚಲನಚಿತ್ರ ನಟ
* [[ಕುಂಚಾಕೋ]] - ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ
* [[ನೆಡುಮುಡಿ ವೇಣು]] - ಮಲಯಾಳಂ ಚಲನಚಿತ್ರ ನಟ.
* [[ಫಾಜಿಲ್ (ನಿರ್ದೇಶಕ)|ಫಾಜಿಲ್]] - ಮಲಯಾಳಂ ಚಲನಚಿತ್ರ ನಿರ್ದೇಶಕ
* [[ಕುಂಚಾಕೋ ಬೋಬನ್]] - ಮಲಯಾಳಂ ಚಲನಚಿತ್ರ ನಟ
* [[ರಿಯಾಜ್ ಎಂ ಟಿ]] - ಮಲಯಾಳಂ ಚಲನಚಿತ್ರ ನಟ
* [[ಫಹಾದ್ ಫಾಸಿಲ್]] - ಮಲಯಾಳಂ ಚಲನಚಿತ್ರ ನಟ
* [[ಜಗನ್ನಾಥ ವರ್ಮ]] - ಕಥಕ್ಕಳಿ ಕಲಾವಿದ, ಮಲಯಾಳಂ ಚಲನಚಿತ್ರ ಮತ್ತು ಧಾರಾವಾಹಿಯಲ್ಲಿ ನಟ
* [[ಅಶೋಕನ್ (ನಟ)|ಅಶೋಕನ್]] - ಮಲಯಾಳಂ ಚಲನಚಿತ್ರ ನಟ
* [[ರಾಜನ್ ಪಿ. ದೇವ್]] – ಮಲಯಾಳಂ ಚಲನಚಿತ್ರ ನಟ ಮತ್ತು ನಾಟಕ/ರಂಗಭೂಮಿ ವ್ಯಕ್ತಿ
* [[ಎಸ್. ಎಲ್. ಪುರಂ ಸದಾನಂದನ್]] - ಮಲಯಾಳಂ ನಾಟಕಕಾರ ಮತ್ತು ಚಲನಚಿತ್ರ ಚಿತ್ರಕಥೆಗಾರ
* [[ಚೆಲಂಗಟ್ ಗೋಪಾಲಕೃಷ್ಣನ್]] - ಬರಹಗಾರ ಮತ್ತು ಚಲನಚಿತ್ರ ವಿಮರ್ಶಕ
* [[ರಾಧಿಕಾ (ಮಲಯಾಳಂ ನಟಿ)]] - ಮಲಯಾಳಂ ಚಲನಚಿತ್ರ ನಟಿ
* [[ನವೋದಯ ಅಪ್ಪಚನ್]] - ಮಲಯಾಳಂ ಚಲನಚಿತ್ರ ನಿರ್ಮಾಪಕ ಮತ್ತು ವ್ಯಾಪಾರಿ
* [[ಜಿಜೋ ಪುನ್ನೂಸ್]] - ಚಲನಚಿತ್ರ ನಿರ್ದೇಶಕ
* [[ಪದ್ಮರಾಜನ್]] - ಚಲನಚಿತ್ರ ನಿರ್ದೇಶಕ
* [[ನರೇಂದ್ರ ಪ್ರಸಾದ್]] - ಚಲನಚಿತ್ರ ನಟ, ಬರಹಗಾರ ಮತ್ತು ವಿಮರ್ಶಕ
* [[KPAC ಲಲಿತಾ]] - ಮಲಯಾಳಂ ಚಲನಚಿತ್ರ ನಟಿ
* [[ಬೀಯಾರ್ ಪ್ರಸಾದ್]] - ಭಾರತೀಯ ಮಲಯಾಳಂ ಗೀತರಚನೆಕಾರ ಮತ್ತು ಕವಿ
* [[ಮಧು ಮುಟ್ಟೋಂ]] - [[ಮಣಿಚಿತ್ರತಾಝು]], [[ಕಕ್ಕೋತಿಕ್ಕಾವಿಲೆ ಅಪ್ಪೂಪ್ಪನ್ ಥಾಡಿಕಲ್]] ಚಲನಚಿತ್ರಗಳ ಚಿತ್ರಕಥೆಗಾರ
* [[ಸಮಂತಾ ರುತ್ ಪ್ರಭು]]- ನಟಿ
* [[ನವ್ಯಾ ನಾಯರ್]] - ನಟಿ
* [[ಎಂ. ಜಿ. ಶ್ರೀಕುಮಾರ್|ಎಂಜಿ ಶ್ರೀಕುಮಾರ್]] - ಪ್ಲೇಬ್ಯಾಕ್ ಗಾಯಕ
* [[ಶಾಹಿ ಕಬೀರ್]] - ಮಲಯಾಳಂ ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ
=== ಕ್ರೀಡೆ ===
* [[ಪ್ರಶಾಂತ್ ಪರಮೇಶ್ವರನ್]] - ಕೇರಳ ಪ್ರಥಮ ದರ್ಜೆ ಕ್ರಿಕೆಟಿಗ ([[ಇಂಡಿಯನ್ ಪ್ರೀಮಿಯರ್ ಲೀಗ್]] ಮತ್ತು [[ರಾಯಲ್ ಚಾಲೆಂಜರ್ಸ್ ಬೆಂಗಳೂರು]] ಆಟಗಾರ)
* [[ಸಾಜಿ ಥಾಮಸ್]] - ಕ್ರೀಡಾಪಟು ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ
* [[ಕೆ. ಉದಯಕುಮಾರ್]] - [[ಭಾರತ ಪುರುಷರ ರಾಷ್ಟ್ರೀಯ ವಾಲಿಬಾಲ್ ತಂಡ|ಭಾರತ ಪುರುಷರ ರಾಷ್ಟ್ರೀಯ ವಾಲಿಬಾಲ್]] ಆಟಗಾರ, [[ಅರ್ಜುನ ಪ್ರಶಸ್ತಿ]] ಪುರಸ್ಕೃತ
== ಇವನ್ನೂ ನೋಡಿ ==
* [[ಆಲಪುಳ ಪೂರ್ವ]]
* [[ಆಲಪುಳ ಪಶ್ಚಿಮ]]
* [[ಆಲಪುಳ ಲೈಟ್ಹೌಸ್]]
* [[ಆಲಪುಳ ಬೀಚ್]]
* [[ಎರ್ನಾಕುಲಂ-ಕಾಯಂಕುಲಂ ಕರಾವಳಿ ರೈಲು ಮಾರ್ಗ]]
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
{{Commons category|Alappuzha}}
* {{Wikivoyage inline|Alappuzha}}
* [https://web.archive.org/web/20100217035703/http://www.swtd.gov.in/ ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್]
* [http://alappuzha.nic.in/ ಆಲಪುಳ ಜಿಲ್ಲೆಯ ಅಧಿಕೃತ ವೆಬ್ಸೈಟ್]
* [https://alteredgoal.com/https-alteredgoal-com-backwaters-of-alappuzha/ ಆಲಪುಳದ ಬ್ಯಾಕ್ವಾಟರ್ಸ್] {{Webarchive|url=https://web.archive.org/web/20191219075158/https://alteredgoal.com/https-alteredgoal-com-backwaters-of-alappuzha/ |date=19 December 2019 }}
* [https://www.keralatourism.org/article-venice-of-the-east.html ಪೂರ್ವದ ವೆನಿಸ್, ಅಲ್ಲೆಪ್ಪೇಯ್] {{Webarchive|url=https://web.archive.org/web/20211025135417/https://www.keralatourism.org/article-venice-of-the-east.html |date=25 October 2021 }}
{{Alappuzha district}}
{{Central Travancore}}
{{Kerala|h}}
{{Kerala topics}}
{{Municipalities of Kerala}}
{{Authority control}}
[[ವರ್ಗ:ಆಲಪ್ಪುಳ| ]]
[[ವರ್ಗ:ಆಲಪ್ಪುಳ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು]]
[[ವರ್ಗ:ಭಾರತದಲ್ಲಿ ಜನನಿಬಿಡ ಕರಾವಳಿ ಸ್ಥಳಗಳು]]
[[ವರ್ಗ:ಭಾರತದಲ್ಲಿ ಬಂದರು ನಗರಗಳು ಮತ್ತು ಪಟ್ಟಣಗಳು]]
iacyd2fgct1x85dqhd93qobr0oqyyw2
ಟ್ಯಾಸ್ಮೆನಿಯಾ
0
25805
1379607
1348894
2026-08-09T11:51:15Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379607
wikitext
text/x-wiki
{{Other uses|Tasmania (disambiguation)}}
[[File:Tasmania Coat of Arms.svg|right|150px]]
[[File:Flag of Tasmania.svg|right|200px]]
{{Australia state or territory
| Name = Tasmania
| Fullname = State of Tasmania
| Flag = Flag of Tasmania.svg
| CoatOfArms = Coat of arms of Tasmania.png
| Map = Tigris-Australia location Tasmania.svg
| Motto = "Ubertas et Fidelitas" (Fertility and Faithfulness)
| Nickname = Island of Inspiration; The Apple Isle; Holiday Isle; Tassie
| Emblem_title1 = Floral
| Emblem1 = [[Tasmanian Blue Gum]]<ref>[http://www.parliament.tas.gov.au/tpl/InfoSheets/FloraProclamation.htm Proclamation of Tasmanian floral emblem] {{Webarchive|url=https://web.archive.org/web/20181225064026/http://www.parliament.tas.gov.au/tpl/InfoSheets/FloraProclamation.htm |date=25 ಡಿಸೆಂಬರ್ 2018 }}, ''Tasmanian Government Gazette'', 27 November 1962.</ref><br />''(Eucalyptus globulus)''
| Emblem_title2 = Animal
| Emblem2 = [[Tasmanian Devil]] (unofficial)<ref>[http://www.parliament.tas.gov.au/tpl/InfoSheets/StateEmblems.htm Tasmanian State Emblems] {{Webarchive|url=https://web.archive.org/web/20181225064058/http://www.parliament.tas.gov.au/tpl/InfoSheets/StateEmblems.htm |date=25 ಡಿಸೆಂಬರ್ 2018 }}, Government of Tasmania, 29 January 2003.</ref><br />''(Sarcophilus harrisii)''
| Emblem_title3 = [[Australian state colours|Colours]]
| Emblem3 = Dark green, red & gold
| Emblem_title4 = Mineral
| Emblem4 = [[Crocoite]]<ref>[http://www.parliament.tas.gov.au/tpl/InfoSheets/MineralProclamation.htm Proclamation of Tasmanian mineral emblem] {{Webarchive|url=https://web.archive.org/web/20181225064059/http://www.parliament.tas.gov.au/tpl/InfoSheets/MineralProclamation.htm |date=25 ಡಿಸೆಂಬರ್ 2018 }}, ''Tasmanian Government Gazette'', 4 December 2000.</ref><br />''(PbCrO<sub>4</sub>)''
| Capital = [[Hobart]]
| Demonym = Tasmanian
| ChiefType = Premier
| Chief = [[David Bartlett]]
| ChiefParty = [[Australian Labor Party|ALP]]
| Viceroy = [[Peter Underwood]]
| ViceroyType = Governor
| PostalAbbreviation = TAS
| AreaRank = 7th
| TotalArea = 90758
| LandArea = 68401
| WaterArea = 22357
| EntityAdjective = State
| GSP = $22,564<ref>[http://www.abs.gov.au/AUSSTATS/abs@.nsf/Lookup/5220.0Main+Features12008-09%20%28Reissue%29?OpenDocument 5220.0 - Australian National Accounts: State Accounts, 2008-09 (Reissue)], [[Australian Bureau of Statistics]], 22 December 2009.</ref>
| GSPYear = 2008–09
| GSPRank = 7th
| GSPPerCapita = $44,895
| GSPPerCapitaRank = 8th
| PercentWater = 24.63
| PopulationRank = 6th
| Population = 502,600<ref>[http://www.abs.gov.au/AUSSTATS/abs@.nsf/Lookup/3101.0Main+Features1Jun%202009?OpenDocument 3101.0 - Australian Demographic Statistics, Jun 2009], [[Australian Bureau of Statistics]], 3 December 2009.</ref>
| PopulationYear = June 2009
| DensityRank = 4th
| Density = 7.35
| HighestPoint = [[Mount Ossa (Tasmania)|Mount Ossa]]
| HighestElev = +1,614 m [[Australian Height Datum|AHD]]<ref name="height">
{{cite web
| title = LISTmap (Mount Ossa)
| publisher=Tasmanian Government Department of Primary Industries and Water
| url = http://www.thelist.tas.gov.au/listmap/listmap.jsp?llx=419200&lly=5363700&urx=420100&ury=5364300&layers=17
| accessdate = 2007-10-06
}}</ref>
| HighestElev_ft = 5,295
| LowestPoint =
| LowestElev =
| LowestElev_ft =
|TimeZone = [[UTC+10]] ([[Australian Eastern Standard Time|AEST]])<br />[[UTC+11]] ([[Australian Eastern Daylight Time|AEDT]])
| HouseSeats = 5
| SenateSeats = 12
| ISOCode = AU-TAS
| Website = www.tas.gov.au
}}
[[ಚಿತ್ರ:Tasmania-satellite.jpg|thumb|right|275px|ಬಾಹ್ಯಾಕಾಶದಿಂದ ಟ್ಯಾಸ್ಮೆನಿಯಾದ ಚಿತ್ರಣ]]
'''ಟ್ಯಾಸ್ಮೆನಿಯಾ''' ಆಸ್ಟ್ರೇಲಿಯಾ ದೇಶದ ಒಂದು ದ್ವೀಪ ಹಾಗೂ ರಾಜ್ಯವಾಗಿದೆ. ಇದು ಆಸ್ಟ್ರೇಲಿಯಾ ಮುಖ್ಯಭೂಮಿಯಿಂದ {{convert|240|km|mi}} ದಕ್ಷಿಣದಲ್ಲಿದೆ. ಬಾಸ್ ಸ್ಟ್ರೇಟ್ ಆಸ್ಟ್ರೇಲಿಯಾ ಮತ್ತು ಟ್ಯಾಸ್ಮೆನಿಯಾವನ್ನು ಪ್ರತ್ಯೇಕಿಸುವ ಜಲಭಾಗ. ವಿಶ್ವದಲ್ಲಿ 26ನೆಯ ಅತಿದೊಡ್ಡ ದ್ವೀಪ ಎನ್ನಲಾದ ಟ್ಯಾಸ್ಮೆನಿಯಾದ ದ್ವೀಪ ಹಾಗೂ ಸುತ್ತಮುತ್ತಲಿನ ದ್ವೀಪಗಳನ್ನು ಈ ರಾಜ್ಯವು ಒಳಗೊಳ್ಳುತ್ತದೆ.
ರಾಜ್ಯದ ಜನಸಂಖ್ಯೆ 500,000ದಷ್ಟಿದೆ {{as of|2008|12|lc=on}}. ಇದರಲ್ಲಿ ಅರ್ಧದಷ್ಟು ಬೃಹತ್ ಹೋಬಾರ್ಟ್ ನೆರೆಹೊರೆಯಲ್ಲಿ ವಾಸಿಸುವರು. ಟ್ಯಾಸ್ಮೆನಿಯಾದ ವಿಸ್ತೀರ್ಣ {{convert|68401|km2|sqmi}} ಇದರಲ್ಲಿ ಮುಖ್ಯ ದ್ವೀಪವು {{convert|62409|km2|sqmi}} ಆವರಿಸುತ್ತದೆ.<ref>[http://www.brandtasmania.com/show.php?ACT=Public&menu_code=100.1100 'ಫ್ಯಾಕ್ಟ್ಸ್ ಎಬೌಟ್ ಟ್ಯಾಸ್ಮೆನಿಯಾ'] {{Webarchive|url=https://web.archive.org/web/20110911041146/http://www.brandtasmania.com/show.php?ACT=Public&menu_code=100.1100 |date=11 ಸೆಪ್ಟೆಂಬರ್ 2011 }} ''ಬ್ರ್ಯಾಂಡ್ Tasmania.com''. 2009 ಜೂನ್ 15ರಂದು ಮರು ಸಂಪಾದಿಸಲಾಯಿತು.</ref>
ಟ್ಯಾಸ್ಮೆನಿಯಾವನ್ನು ''ನೈಸರ್ಗಿಕ ರಾಜ್ಯ'', 'ಸ್ಫೂರ್ತಿ ನೀಡುವ ದ್ವೀಪ',<ref>{{cite web |url=http://www.tourismtasmania.com.au/vismktg/2007/island_of_inspiration/phase12/index.html|title=Tasmania - Island of Inspiration|accessdate=2007-12-31 |archiveurl = https://web.archive.org/web/20080125040942/http://www.tourismtasmania.com.au/vismktg/2007/island_of_inspiration/phase12/index.html <!-- Bot retrieved archive --> |archivedate = 25 January 2008}}</ref> ಹಾಗೂ, ವಿಶಾಲ, ಹಚ್ಚಹಸಿರಾಗಿರುವ ನೈಸರ್ಗಿಕ ಪರಿಸರ ಹೊಂದಿರುವ ಈ ದ್ವೀಪಕ್ಕೆ ''ವಿಶ್ವದಿಂದಲೇ ಭಿನ್ನವಾದರೂ ವಿಶ್ವದಿಂದ ದೂರವಲ್ಲ'' ಎನ್ನಲಾಗಿದೆ. ಟ್ಯಾಸ್ಮೆನಿಯಾದ 37%ರಷ್ಟು ಭಾಗದಲ್ಲಿ ರಕ್ಷಿತಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಹಾಗೂ ವಿಶ್ವ ಪರಂಪರೆ ತಾಣಗಳಿವೆ.<ref>{{cite web|url=http://www.parks.tas.gov.au/manage/parksres/reserves.html|title=Complete National Parks and Reserves Listings|publisher=[[Parks and Wildlife Service]]|date=2006-11-10|accessdate=2006-11-30|archive-date=10 ಡಿಸೆಂಬರ್ 2006|archive-url=https://web.archive.org/web/20061210215825/http://www.parks.tas.gov.au/manage/parksres/reserves.html|url-status=dead}}</ref> ದ್ವೀಪವು ಅತಿ ಉತ್ತರ ತುದಿಯಿಂದ ಅತಿ ದಕ್ಷಿಣ ತುದಿಯ ತನಕ {{convert|364|km|mi}} ಉದ್ದವಿದೆ, ಹಾಗೂ ಪಶ್ಚಿಮ ತುದಿಯಿಂದ ಪೂರ್ವ ತುದಿಯ ತನಕ {{convert|306|km|mi}} ಉದ್ದದಲ್ಲಿ ಹರಡಿದೆ.
ಹೋಬಾರ್ಟ್ ರಾಜ್ಯದ ರಾಜಧಾನಿ ಹಾಗೂ ಅತಿದೊಡ್ಡ ನಗರವಾಗಿದೆ. ಇದು ಹೋಬಾರ್ಟ್ ನಗರ, ಗ್ಲೆನೊರ್ಕಿ ನಗರ ಮತ್ತು ಕ್ಲಾರೆನ್ಸ್ ನಗರಗಳ ಸ್ಥಳೀಯ ಸರ್ಕಾರದ ಆಡಳಿತ ಪ್ರದೇಶಗಳನ್ನು ಆವರಿಸಿದೆ. ಕಿಂಗ್ಬೊರೊ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿರುವ ಕಿಂಗ್ಸ್ಟನ್ ಉಪನಗರವನ್ನು ಸಾಮಾನ್ಯವಾಗಿ ಗ್ರೇಟರ್ (ಬೃಹತ್) ಹೋಬಾರ್ಟ್ ಪ್ರದೇಶದಲ್ಲಿ ಸೇರಿಸಲಾಗಿದೆ. ಇತರೆ ಪ್ರಮುಖ ಜನಸಾಂದ್ರತೆಯುಳ್ಳ ಪ್ರದೇಶಗಳಲ್ಲಿ ಉತ್ತರದಲ್ಲಿರುವ ಲಾನ್ಸೆಸ್ಟನ್ ಹಾಗೂ ವಾಯವ್ಯದಲ್ಲಿರುವ ಡೆವನ್ಪೋರ್ಟ್ ಮತ್ತು ಬರ್ನಿ ನಗರಗಳು ಸೇರಿವೆ.
ಉಪ-ಅಂಟಾರ್ಕ್ಟಿಕ್ ಮೆಕ್ವಾರಿ ದ್ವೀಪವೂ ಸಹ, ಹುವಾನ್ ಕಣಿವೆ ಪರಿಷತ್ ಸ್ಥಳೀಯ ಸರ್ಕಾರ ಕ್ಷೇತ್ರದ ಅಂಗವಾಗಿ, ರಾಜ್ಯದ ಆಡಳಿತ ವ್ಯಾಪ್ತಿಯಲ್ಲಿದೆ.
== ವ್ಯುತ್ಪತ್ತಿ ==
ಡಚ್ ಮೂಲದ ಪರಿಶೋಧಕ ಎಬೆಲ್ ಟ್ಯಾಸ್ಮನ್ ಮೊದಲ ಬಾರಿಗೆ ಈ ದ್ವೀಪವನ್ನು 1642ರ ನವೆಂಬರ್ 24ರಂದು ಪರಿಶೋಧಿಸಿ, ಮೊದಲ ಯುರೋಪಿಯನ್ ಎನಿಸಿಕೊಂಡ. ಆದ್ದರಿಂದ ಈ ದ್ವೀಪಕ್ಕೆ ಈತನ ಹೆಸರು ನಾಮಕರಣ ಮಾಡಲಾಗಿದೆ. ಎಬೆಲ್ ಟ್ಯಾಸ್ಮನ್ ಈ ದ್ವೀಪಕ್ಕೆ ಆತನ ಪ್ರಾಯೋಜಕ, ಡಚ್ ಈಸ್ಟ್ ಇಂಡೀಸ್ ರಾಜ್ಯಪಾಲ ಆಂಟನಿ ವಾನ್ ಡೀಮನ್ನ ಹೆಸರನ್ನಿಟ್ಟ. ಇದರಿಂದಾಗಿ ಈ ದ್ವೀಪವು ಆಂಟನಿ ವಾನ್ ಡೀಮನ್ಸ್ ಲ್ಯಾಂಡ್ ಎನ್ನಲಾಯಿತು. ಆನಂತರ ಬ್ರಿಟಿಷ್ ಆಡಳಿತವು ಈ ದ್ವೀಪದ ಹೆಸರನ್ನು ವಾನ್ ಡೀಮನ್ಸ್ ಲ್ಯಾಂಡ್ ಎಂದು ಸಂಕ್ಷಿಪ್ತಗೊಳಿಸಿತು. 1856ರ ಜನವರಿ 1ರಂದು ಈ ದ್ವೀಪದ ಹೆಸರನ್ನು ಅಧಿಕೃತವಾಗಿ ಇದರ ಪರಿಶೋಧಕರ ಹೆಸರಿಗೆ ಬದಲಾಯಿಸಲಾಯಿತು.<ref>'ಸೆಲೆಕ್ಟ್ ಕ್ರಾನಾಲಜಿ ಆಫ್ ರಿನೇಮಿಂಗ್' ''ಪಾರ್ಲಿಯಮೆಂಟ್ ಆಫ್ ಟ್ಯಾಸ್ಮೆನಿಯಾ'' http://www.parliament.tas.gov.au/php/BecomingTasmania/BTAppend2.htm {{Webarchive|url=https://web.archive.org/web/20110422111627/http://www.parliament.tas.gov.au/php/BecomingTasmania/BTAppend2.htm |date=22 ಏಪ್ರಿಲ್ 2011 }} 2009ರ ಜೂನ್ 15ರಂದು ಮರುಸಂಪಾದಿಸಲಾಯಿತು.</ref> ಈ ರಾಜ್ಯಕ್ಕೆ ಆಡುಭಾಷೆಯಲ್ಲಿ ಟ್ಯಾಸೀ ಎನ್ನಲಾಗಿದೆ. ಉದಾಹರಣೆಗೆ, ಬಾಸ್ ಸ್ಟ್ರೇಟ್ ಹಡಗು ಹಾಗೂ ಸ್ಪಿರಿಟ್ ಆಫ್ ಟ್ಯಾಸ್ಮೆನಿಯಾಗಾಗಿ ಜಾಹೀರಾತುಗಳಲ್ಲಿ ಟ್ಯಾಸ್ಮೆನಿಯಾ ರಾಜ್ಯವನ್ನು ಟ್ಯಾಸೀ ಎಂದು ಉಲ್ಲೇಖಿಸಲಾಗಿದೆ.<ref>[http://www.spiritoftasmania.com.au/tassiejourneys/index.htm 'ಟ್ಯಾಸೀ ಜರ್ನೀಸ್' ''ಸ್ಪಿರಿಟ್ ಆಫ್ ಟ್ಯಾಸ್ಮೆನಿಯಾ'' ] {{Webarchive|url=https://web.archive.org/web/20090913135311/http://www.spiritoftasmania.com.au/tassiejourneys/index.htm |date=13 ಸೆಪ್ಟೆಂಬರ್ 2009 }} 2009ರ ಜೂನ್ 24ರಂದು ಮರುಸಂಪಾದಿಸಲಾಯಿತು.</ref>
== ಇತಿಹಾಸ ==
{{Main|History of Tasmania}}
=== ಭೌತಿಕ ಇತಿಹಾಸ ===
{{Main|Geology of Tasmania}}
[[ಚಿತ್ರ:Tessellated Pavement Sunrise Landscape.jpg|thumb|left|ಟ್ಯಾಸ್ಮನ್ ಪರ್ಯಾಯದ್ವೀಪದಲ್ಲಿ ಶಬಲದಂತಹ ಬಂಡೆಯ ಅಪರೂಪ ಸ್ವರೂಪ.]]
ಕಡೆಯ ಹಿಮಶಿಲೆಯ ಯುಗದ ವರೆಗೆ, ಅಂದರೆ 10,000 ವರ್ಷಗಳ ಹಿಂದಿನ ತನಕ, ಈ ದ್ವೀಪವು ಆಸ್ಟ್ರೇಲಿಯಾದ ಮುಖ್ಯ ಭೂಮಿಗೆ ಸೇರಿಕೊಂಡಿತ್ತು ಎಂದು ನಂಬಲಾಗಿದೆ.
ದ್ವೀಪದ ಬಹಳಷ್ಟು ಭಾಗದಲ್ಲಿ ಇತರೆ ಬಂಡೆಗಳ ರೀತಿಯಲ್ಲಿ, ಜುರಾಸಿಕ್ ಡೊಲೆರೈಟ್ ಅಗ್ನಿಶಿಲೆಯ ಮಿಶ್ರಣ (ಉಕ್ಕಿಬರುವ ಶಿಲಾಪಾಕ) ಹೊಂದಿದೆ. ಕೆಲವೊಮ್ಮೆ ಇವುಗಳ ದೊಡ್ಡ ಸ್ತಂಭಾಕಾರದ ಜೋಡನೆಯ ರಚನೆಗಳೂ ಆಗುತ್ತವೆ. ಟ್ಯಾಸ್ಮೆನಿಯಾ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಡೊಲೆರೈಟ್ ಅಂಶ ಹೊಂದಿದೆ. ಈ ರೀತಿಯ ಬಂಡೆಯದು ಬಹಳಷ್ಟು ವಿಭಿನ್ನವಾದ ಪರ್ವತಗಳು ಮತ್ತು ಕಡಿಕಲ್ಲು ಬಂಡೆಗಳಿವೆ. ಟ್ಯಾಸ್ಮೆನಿಯಾ ದ್ವೀಪದ ಮಧ್ಯದ ಪ್ರಸ್ಥಭೂಮಿ ಮತ್ತು ಅಗ್ನೇಯ ಭಾಗಗಳಲ್ಲಿ ಬಹಳಷ್ಟು ಡೊಲೆರೈಟ್ ಅಂಶಗಳಿವೆ. ಹೋಬಾರ್ಟ್ನ ಸಿಂಹಾವಲೋಕನ ಮಾಡುವಂತಿರುವ ಮೌಂಟ್ ವೆಲ್ಲಿಂಗ್ಟನ್ ಇದರಲ್ಲಿ ಅತ್ಯುತ್ತಮ ಉದಾಹರಣೆ. ಇದರಲ್ಲಿ ಆರ್ಗನ್ ಪೈಪ್ಗಳೆನ್ನಲಾದ ಎದ್ದುಕಾಣುವಂತ ಸ್ತಂಭಗಳಿವೆ. ನೈಋತ್ಯ ಭಾಗದಲ್ಲಿ, ಬಹಳ ಪ್ರಾಚೀನ ಕಾಲದ ಸಮುದ್ರ ಸಂಚಯಗಳಿಂದ ಪ್ರಿಕೇಂಬ್ರಿಯನ್ ಯುಗದ ಕ್ವಾರ್ಟ್ಜೈಟ್ ಶಿಲೆಗಳು ರಚನೆಯಾಗುತ್ತವೆ. ಇವುಗಳಿಂದಾಗಿ ಫೆಡರೇಷನ್ ಪೀಕ್ ಅಥವಾ ಫ್ರೆಂಚ್ಮನ್ಸ್ ಕ್ಯಾಪ್ನಂತಹ ಬಹಳ ಮೊನಚಾದ ಏಣುಗಳು ಮತ್ತು ಶ್ರೇಣಿಗಳ ರಚನೆಯಾಗುತ್ತವೆ. ಫ್ರೆಯ್ಸಿನೆಟ್ ಹಾಗೂ ಈಶಾನ್ಯ ಮತ್ತು ಪೂರ್ವ ಪ್ರದೇಶಗಳಲ್ಲಿ ಖಂಡೀಯ ಬೆಣಚುಕಲ್ಲು(ಗ್ರ್ಯಾನೈಟ್)ಗಳನ್ನೂ ನೋಡಬಹುದು. ಇವು ಆಸ್ಟ್ರೇಲಿಯಾ ಮುಖ್ಯ ಭೂಮಿಯ ಕಡಲತೀರದಲ್ಲಿ ಕಂಡುಬರುವ ಬೆಣಚುಕಲ್ಲುಗಳಂತಿವೆ. ವಾಯವ್ಯ ಮತ್ತು ಪಶ್ಚಿಮ ಪ್ರದೇಶಗಳಲ್ಲಿ, ರೋಸ್ಬೆರಿಯ ಸನಿಹ ಮೌಂಟ್ ರೋಡ್ನಲ್ಲಿ ಅಥವಾ ಕ್ವೀನ್ಸ್ಟೌನ್ ಸನಿಹ ಮೌಂಟ್ ಲಯಲ್ನಲ್ಲಿ ಖನಿಜ-ಭರಿತ ಜ್ವಾಲಾಮುಖಿ ಶಿಲೆಗಳಿವೆ. ದಕ್ಷಿಣ ಮತ್ತು ವಾಯವ್ಯದಲ್ಲಿ ಅದ್ಭುತವಾದ ಸುಣ್ಣಗಲ್ಲು ಇರುವ ಗುಹೆಗಳನ್ನು ಕಾಣಬಹುದು.
ಎತ್ತರದ ಪರ್ವತಗಳಲ್ಲಿ ಕ್ವಾರ್ಟ್ಜೈಟ್ ಮತ್ತು ಡೊಲೆರೈಟ್ ಪ್ರದೇಶಗಳು ಹಿಮಶಿಲಾರಚನೆಗೆ ಸಾಕ್ಷ್ಯವಾಗಿವೆ. ಆಸ್ಟ್ರೇಲಿಯಾದ ಹಿಮಶಿಲೆಯುಳ್ಳ ಭೂಚಿತ್ರಣವು ಮಧ್ಯ ಪ್ರಸ್ಥಭೂಮಿ ಮತ್ತು ನೈಋತ್ಯದಲ್ಲಿವೆ. ಉದಾಹರಣೆಗೆ, ಕ್ರೇಡ್ಲ್ ಮೌಂಟನ್ ಎಂಬ ಇನ್ನೊಂದು ಡೊಲೆರೈಟ್ ಶಿಖರವು ಒಂದು ನುನಟಾಕ್ ಆಗಿತ್ತು. ಇವೆರಡೂ ವಿವಿಧ ಶಿಲಾ ವಿಧಾನಗಳ ಒಟ್ಟುಗೂಡುವಿಕೆಯಿಂದಾಗಿ ಅದ್ಭುತ ರಮಣೀಯ ದೃಶ್ಯವೊದಗಿಸುತ್ತವೆ. ವಿಶ್ವದ ಇತರೆಡೆ ವಲಯಗಳಿಗಿಂತಲೂ ಇದು ಬಹಳಷ್ಟು ಭಿನ್ನವಾಗಿದೆ.
=== ಸ್ಥಳೀಯ ಜನರು (ಮೂಲನಿವಾಸಿಗಳು) ===
[[ಚಿತ್ರ:Truganini and last 4 tasmanian aborigines.jpg|thumb|right|175px|ಸುಮಾರು 1860ರ ದಶಕದ ಕಾಲಾವಧಿಯಲ್ಲಿ ಬದುಕುಳಿದಿದ್ದ ಕೊನೆಯ ನಾಲ್ಕು ಪರಿಪೂರ್ಣ ಟ್ಯಾಸ್ಮೆನಿಯನ್ ಬುಡಕಟ್ಟು ಜನಾಂಗದ ಕೊನೆಯ ನಾಲ್ಕು ಸದಸ್ಯರ ಚಿತ್ರ.ಕೊನೆಯಲ್ಲಿ ಬದುಕುಳಿದಿದ್ದ ಟ್ರುಗನಿನಿ, ಅತ್ಯಂತ ಬಲಗಡೆಗೆ ಕುಳಿತಿದ್ದಾರೆ.]]
{{Main|Tasmanian Aborigines}}
ಟ್ಯಾಸ್ಮೆನಿಯನ್ ಸ್ಥಳೀಯ ಬುಡಕಟ್ಟು ಜನಾಂಗದವರು ಟ್ಯಾಸ್ಮೆನಿಯಾದ ಮೊದಲ ನಿವಾಸಿಗಳಾಗಿದ್ದರು.
ಅನಂತರ ದ್ವೀಪವಾದ ಈ ವಲಯದಲ್ಲಿ, ಕನಿಷ್ಠ ಪಕ್ಷ 35,000 ವರ್ಷಗಳ ಹಿಂದಿನಿಂದಲೂ ಈ ಜನಾಂಗದವರು ಇಲ್ಲಿ ವಾಸಿಸುತ್ತಿದ್ದುದಕ್ಕೆ ಸಾಕ್ಷ್ಯಗಳಿವೆ.<ref>{{cite web|url=http://www.aboriginalartonline.com/regions/tasmania.php|title=Tasmanian Aboriginal People and History|publisher=Aboriginal Art Online|accessdate=29 March 2010|archive-date=9 ಏಪ್ರಿಲ್ 2011|archive-url=https://web.archive.org/web/20110409171454/http://www.aboriginalartonline.com/regions/tasmania.php|url-status=dead}}</ref> ಸುಮಾರು 10,000 ವರ್ಷಗಳ ಹಿಂದೆ ಏರುತ್ತಿದ್ದ ಸಮುದ್ರ ಮಟ್ಟಗಳು ಟ್ಯಾಸ್ಮೆನಿಯಾವನ್ನು ಆಸ್ಟ್ರೇಲಿಯಾ ಮುಖ್ಯ ಭೂಮಿಯಿಂದ ಬೇರ್ಪಡಿಸಿತು.
ಯುರೋಪಿಯನ್ ಪರಿಶೋಧಕರು ಇಲ್ಲಿ ಬಂದಾಗ, ಟ್ಯಾಸ್ಮೆನಿಯಾದ ಬುಡಕಟ್ಟು ಜನರಲ್ಲಿ ಒಂಬತ್ತು ಪ್ರಮುಖ ಜನಾಂಗೀಯ ಗುಂಪುಗಳಿದ್ದವು. 1803ರಲ್ಲಿ ಬ್ರಿಟಿಷರು ವಸಾಹತು ಸ್ಥಾಪಿಸಿದಾಗ, ಬುಡಕಟ್ಟು ಜನರ ಸಂಖ್ಯೆ 5,000ದಿಂದ 10,000ದ ನಡುವೆ ಎಂದು ಅಂದಾಜಿಸಲಾಗಿತ್ತು. ಯಾವುದೇ ಪ್ರತಿರೋಧ ಶಕ್ತಿಯಿಲ್ಲದ ಸಾಂಕ್ರಾಮಿಕ ರೋಗಗಳು, ಯುದ್ಧಗಳು ಮತ್ತು ಕಿರುಕುಳಗಳ ಕಾರಣದಿಂದಾಗಿ, 1833ರಲ್ಲಿ ಬುಡಕಟ್ಟು ಜನರ ಸಂಖ್ಯೆ ಕೇವಲ 300ರಷ್ಟಕ್ಕೆ ಇಳಿದಿತ್ತು.
ಜಾರ್ಜ್ ಆಗಸ್ಟಸ್ ರಾಬಿನ್ಸನ್ ಬಹುಶಃ ಎಲ್ಲಾ ಬುಡಕಟ್ಟು ಜನರನ್ನು ಫ್ಲಿಂಡರ್ಸ್ ಐಲೆಂಡ್ಗೆ ಸ್ಥಳಾಂತರಿಸಿದರು.
ಟ್ರುಗನಿನಿ ಎಂಬ ಮಹಿಳೆ (1812-76) ಟ್ಯಾಸ್ಮೆನಿಯಾದ ಪರಿಪೂರ್ಣ ಬುಡಕಟ್ಟು ಜನಾಂಗದ ವ್ಯಕ್ತಿಯೆಂದು ವ್ಯಾಪಕವಾಗಿ ನಂಬಲಾಗಿದೆ. ವೈಬಲೆನಾದಲ್ಲಿ ಜನಿಸಿ, 1905ರಲ್ಲಿ ನಿಧನಳಾದ ಇನ್ನೊರ್ವ ಮಹಿಳೆ ಫ್ಯಾನಿ ಕಾಕ್ರೇನ್ ಸ್ಮಿತ್ ಬುಡಕಟ್ಟು ಜನಾಂಗದ ಕೊನೆಯ ಸದಸ್ಯೆ ಎಂಬುದಕ್ಕೆ ಬಲವಾದ ಸಾಕ್ಷ್ಯವಿದೆ.<ref>[http://www.adb.online.anu.edu.au/biogs/A110661b.htm ಸ್ಮಿತ್, ಫ್ಯಾನಿ ಕಾಚ್ರೇನ್ (1834 - 1905)] {{Webarchive|url=https://web.archive.org/web/20121008073110/http://adb.anu.edu.au/biography/smith-fanny-cochrane-8466 |date=8 ಅಕ್ಟೋಬರ್ 2012 }} ಆಸ್ಟ್ರೇಲಿಯನ್ ಡಿಕ್ಷನರಿ ಆಫ್ ಬಯೊಗ್ರಫಿ ಆನ್ಲೈನ್</ref>
=== ಯುರೋಪಿಯನ್ನರ ಆಗಮನ ===
[[ಚಿತ್ರ:Late 19th Century Tasmania.jpg|left|200px|thumb|19ನೆಯ ಶತಮಾನದ ಅಪರಾರ್ಧದಲ್ಲಿ ಟ್ಯಾಸ್ಮೆನಿಯಾ]]
1642ರ ನವೆಂಬರ್ 24ರಂದು ಡಚ್ ಪರಿಶೋಧಕ ಎಬೆಲ್ ಟ್ಯಾಸ್ಮನ್ ಈ ದ್ವೀಪವನ್ನು ಪರಿಶೋಧಿಸಿ, ಮೊದಲ ಯುರೋಪಿಯನ್ ಎನಿಸಿಕೊಂಡ. ಎಬೆಲ್ ಟ್ಯಾಸ್ಮನ್ ಇಂದಿನ ಬ್ಲ್ಯಾಕ್ಮನ್ಸ್ ಬೇ ಎಂಬ ಸ್ಥಳದಲ್ಲಿ ಈ ದ್ವೀಪ ತಲುಪಿದ. 1773ರಲ್ಲಿ, ಟ್ಯಾಸ್ಮೆನಿಯಾದ ಇಂದಿನ ಅಡ್ವೆಂಚರ್ ಬೇ ಎಂಬ ಸ್ಥಳಕ್ಕೆ ತಲುಪಿದ ಟೊಬಿಯಸ್ ಫರ್ನೊಕ್ಸ್ ಮೊದಲ ಇಂಗ್ಲಿಷ್ ವ್ಯಕ್ತಿಯೆನಿಸಿದ. ಮಾರ್ಕ್-ಜೊಸೆಫ್ ಮ್ಯಾರಿಯಾನ್ ಡು ಫ್ರೆಸ್ ನಾಯಕತ್ವದ ಫ್ರೆಂಚ್ ಪರಿಶೋಧಕ ಪಂಗಡವು 1772ರಲ್ಲಿ ಬ್ಲ್ಯಾಕ್ಮನ್ಸ್ ಬೇಯಲ್ಲಿ ನೆಲ ತಲುಪಿತು. ಕ್ಯಾಪ್ಟನ್ ಜೇಮ್ಸ್ ಕುಕ್ 1777ರಲ್ಲಿ ಅಡ್ವೆಂಚರ್ ಬೇಯ ಪ್ರದೇಶ ತಲುಪಿದ. ಈತನೊಂದಿಗೆ ಯುವ ಪರಿಶೋಧಕ ವಿಲಿಯಮ್ ಬ್ಲೈ ಕೂಡ ಇದ್ದ. ವಿಲಿಯಮ್ ಬ್ಲೈ 1788ರಲ್ಲಿ ಎಚ್ಎಂಎಸ್ ಬೌಂಟಿ ಹಡಗಿನಲ್ಲಿ ಹಾಗೂ 1792ರಲ್ಲಿ ಎಚ್ಎಂಎಸ್ ಪ್ರಾವಿಡೆನ್ಸ್ನಲ್ಲಿ ಪುನಃ ಬಂದು, ಆತನೊಂದಿಗೆ ಯುವ ಪರಿಶೋಧಕ ಮ್ಯಾಥ್ಯೂ ಫ್ಲಿಂಡರ್ಸ್ನನ್ನು ಕರೆತಂದ. ಹಲವು ಇತರೆ ಯುರೋಪಿಯನ್ನರು ಭೂಚಿತ್ರಣದಲ್ಲಿ ಬದಲಾವಣೆ ಮಾಡಿದ ಪರಿಣಾಮವಾಗಿ, ಟ್ಯಾಸ್ಮೆನಿಯಾದ ಸ್ಥಳಾಕೃತಿಯಲ್ಲಿ ವಿವಿಧ ಹೆಸರುಗಳುಳ್ಳ ಸುಂದರ ವೈವಿಧ್ಯತೆಗಳು ಕಾಣಸಿಕ್ಕವು.
ಟ್ಯಾಸ್ಮೆನಿಯಾ ದ್ವೀಪ ಎಂಬುದನ್ನು ಮೊದಲ ಬಾರಿಗೆ ಮ್ಯಾಧ್ಯೂ ಫ್ಲಿಂಡರ್ಸ್ ಮತ್ತು ಜಾರ್ಜ್ ಬಾಸ್ 1798-99ರಲ್ಲಿ ಮೊದಲ ಬಾರಿಗೆ ಸಾಬೀತುಪಡಿಸಿದರು.<ref>ದಿ ಅರ್ಲಿ ಹಿಸ್ಟರಿ ಆಫ್ ಟ್ಯಾಸ್ಮೆನಿಯಾ, ಆರ್.ಡಬ್ಲ್ಯೂ.ಜಿಬ್ಲಿನ್ 1928</ref>
1803ರಲ್ಲಿ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷ]]ರು ಟ್ಯಾಸ್ಮೆನಿಯಾದಲ್ಲಿ ಮೊಟ್ಟಮೊದಲ ವಸಾಹತು ಸ್ಥಾಪಿಸಿದರು. ಫ್ರೆಂಚ್ ಪಡೆಯು ಈ ದ್ವೀಪವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವುದನ್ನು ತಡೆಗಟ್ಟಲೆಂದು, ಲೆಫ್ಟಿನೆಂಟ್ ಜಾನ್ ಬೊವೆನ್ ಮುಂದಾಳುತ್ವದ ಸಣ್ಣ ಪಡೆಯು ಡೆರ್ವೆಂಟ್ ನದಿಮುಖದ ಪೂರ್ವ ದಡದಲ್ಲಿ ರಿಸ್ಡನ್ ಕೋವ್ ಎಂಬ ಸ್ಥಳದಲ್ಲಿ ನೆಲೆಸಿತು. ದ್ವೀಪದ ದಕ್ಷಿಣದಲ್ಲಿರುವ ಡೆರ್ವೆಂಟ್ನ ಪಶ್ಚಿಮ ಭಾಗದಲ್ಲಿ ಸಲ್ಲಿವನ್ಸ್ ಕೋವ್ನಲ್ಲಿ ಪರಿಶುದ್ದ ನೀರು ಹರಿಯುತ್ತಿದ್ದು, 1804ರಲ್ಲಿ ಕ್ಯಾಪ್ಟನ್ ಡೇವಿಡ್ ಕೊಲಿನ್ಸ್ {{convert|5|km|mi}} ಪರ್ಯಾಯ ವಸಾಹತು ಸ್ಥಾಪಿಸಿದರು. ಆ ಕಾಲದ ಬ್ರಿಟಿಷ್ ವಸಾಹತಿನ ಕಾರ್ಯದರ್ಶಿ ಲಾರ್ಡ್ ಹೋಬಾರ್ಟ್ರ ಹೆಸರಿನಲ್ಲಿ, ಈ ವಸಾಹತಿಗೆ ಹೋಬಾರ್ಟ್ ಟೌನ್ ಅಥವಾ ಹೋಬಾರ್ಟನ್ ಎನ್ನಲಾಯಿತು. ಆನಂತರ ಇದನ್ನು ಹೋಬಾರ್ಟ್ ಎಂದು ಹ್ರಸ್ವಗೊಳಿಸಲಾಯಿತು. ರಿಸ್ಡನ್ ವಸಾಹತನ್ನು ಆನಂತರ ತ್ಯಜಿಸಲಾಯಿತು.
ವಸಾಹತುದಾರರಲ್ಲಿ ಬಹಳಷ್ಟು ಜನರು ಕೈದಿಗಳು ಹಾಗೂ ಅವರ ಸೇನಾ ಕಾವಲುಗಾರರಾಗಿದ್ದರು. ಕೃಷಿ ಮತ್ತು ಇತರೆ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸುವುದು ಇವರ ಹೊಣೆಗಾರಿಕೆಯಾಗಿತ್ತು. ವಾನ್ ಡೀಮನ್ಸ್ ದ್ವೀಪದಲ್ಲಿ ಹಲವು ಇತರೆ ಕೈದಿಗಳ ವಸಾಹತುಗಳನ್ನು ಸ್ಥಾಪಿಸಲಾಯಿತು. ಇವುಗಳಲ್ಲಿ, ಅಗ್ನೇಯದಲ್ಲಿ ಪೋರ್ಟ್ ಆರ್ಥರ್ನಲ್ಲಿ ಹಾಗೂ ಪಶ್ಚಿಮ ಕಡಲತೀರದಲ್ಲಿ ಮೆಕ್ವಾರೀ ಹಾರ್ಬರ್ನಲ್ಲಿ ಬಹಳಷ್ಟು ಕಠಿಣ ಶಿಕ್ಷೆಯ ಕಾರಾವಾಸಗಳು ಸೇರಿದಂತೆ ಆನುಷಂಗಿಕ ಕಾರಾವಾಸಗಳು ಸ್ಥಾಪಿತವಾದವು. 1803ರಿಂದ 1853ರವರೆಗೆ, ಐವತ್ತು ವರ್ಷಗಳ ಕಾಲಾವಧಿಯಲ್ಲಿ ಸುಮಾರು 75,000 ಕೈದಿಗಳನ್ನು ಟ್ಯಾಸ್ಮೆನಿಯಾಗೆ ರವಾನೆ ಮಾಡಲಾಯಿತು.<ref>"[http://www.cultureandrecreation.gov.au/articles/convicts/ ಕನ್ವಿಕ್ಟ್ಸ್ ಅಂಡ್ ದಿ ಬ್ರಿಟಿಷ್ ಕಾಲೊನಿಸ್ ಇನ್ ಆಸ್ಟ್ರೇಲಿಯಾ] {{Webarchive|url=https://web.archive.org/web/20071012213641/http://www.cultureandrecreation.gov.au/articles/convicts/ |date=12 ಅಕ್ಟೋಬರ್ 2007 }}". Culture.gov.au.</ref>
ವಾನ್ ಡೀಮೆನ್ಸ್ ಲ್ಯಾಂಡ್ನ್ನು ನ್ಯೂ ಸೌತ್ ವೇಲ್ಸ್ನಿಂದ ಪ್ರತ್ಯೇಕ ವಸಾಹತು ಎಂದು ಘೋಷಿಸಲಾಯಿತು. 1825ರ ಡಿಸೆಂಬರ್ 3ರಂದು ತನ್ನದೇ ಆದ ನ್ಯಾಯಾಂಗ ಮತ್ತು ಶಾಸನಾಂಗ ವಿಧಾನ ಪರಿಷತ್ ರಚನೆಯಾದವು.
=== ಟ್ಯಾಸ್ಮೆನಿಯಾದ ವಸಾಹತು ===
{{Main|Colony of Tasmania}}
ಟ್ಯಾಸ್ಮೆನಿಯಾದ ವಸಾಹತು (ಕಾಲೊನಿ ಆಫ್ ಟ್ಯಾಸ್ಮೆನಿಯಾ), ಅಥವಾ ಇನ್ನೂ ಸರಳವಾಗಿ, 'ಟ್ಯಾಸ್ಮೆನಿಯಾ' ಎಂಬುದು 1856ರಿಂದ 1901ರ ತನಕ ಟ್ಯಾಸ್ಮೆನಿಯಾ ದ್ವೀಪದಲ್ಲಿದ್ದ ಬ್ರಿಟಿಷ್ ವಸಾಹತು ಆಗಿತ್ತು. 1901ರಲ್ಲಿ ಐದು ಇತರೆ ಆಸ್ಟ್ರೇಲಿಯನ್ ವಸಾಹತುಗಳೊಂದಿಗೆ ಒಕ್ಕೂಟ ರಚಿಸಿ, ಆಸ್ಟ್ರೇಲಿಯಾದ ಕಾಮನ್ವೆಲ್ತ್ (ಕಾಮನ್ವೆಲ್ತ್ ಆಫ್ ಆಸ್ಟ್ರೇಲಿಯಾ) ಆಯಿತು. 1850ರಲ್ಲಿ ವೆಸ್ಟ್ಮಿಂಸ್ಟರ್ ಸಂಸತ್ನಲ್ಲಿ ಆಸ್ಟ್ರೇಲಿಯನ್ ವಸಾಹತುಗಳ ಸರ್ಕಾರ ಕಾಯಿದೆಯನ್ನು ಅನುಮೋದಿಸಿ, ಆರೂ ಆಸ್ಟ್ರೇಲಿಯನ್ ವಸಾಹತುಗಳಿಗೆ ಶಾಸನ ಅಧಿಕಾರ ನೀಡುವುದರೊಂದಿಗೆ ವಸಾಹತು ಸ್ಥಾಪನೆಯಾದವು. ವಾನ್ ಡೀಮನ್ಸ್ ಲ್ಯಾಂಡ್ನ ಶಾಸನ ಪರಿಷತ್ನಲ್ಲಿ ಹೊಸ ಸಂವಿಧಾನದ ಕರಡು ಸಿದ್ಧಪಡಿಸಲಾಯಿತು. ಇದನ್ನು 1854ರಲ್ಲಿ ಅನುಮೋದಿಸಲಾಗಿ, 1855ರಲ್ಲಿ ಮಹಾರಾಣಿ ವಿಕ್ಟೊರಿಯಾರಿಂದ ರಾಜಮನೆತನದ ಸಮ್ಮತಿ ದೊರೆಯಿತು. ಆದೇ ವರ್ಷದ ಅಪರಾರ್ಧದಲ್ಲಿ, ವಸಾಹತಿನ ಹೆಸರನ್ನು 'ವಾನ್ ಡೀಮೆನ್ಸ್ ಲ್ಯಾಂಡ್' ಇಂದ 'ಟ್ಯಾಸ್ಮೆನಿಯಾ' ಎಂದು ಬದಲಿಸುವ ಪ್ರಸ್ತಾಪವನ್ನು ರಾಜಮನೆತನದ ಆಪ್ತ ಸಮಾಲೋಚಕರ ಸಭೆ (ಪ್ರಿವಿ ಕೌನ್ಸಿಲ್) ಅನುಮೋದಿಸಿತು. 1856ರಲ್ಲಿ, ಹೊಸದಾಗಿ ಚುನಾಯಿತವಾದ ದ್ವಿಸಭೆಯ ಸಂಸತ್ ಮೊದಲ ಬಾರಿಗೆ ಸದನ ಸೇರಿ, ಟ್ಯಾಸ್ಮೆನಿಯಾವನ್ನು ಬ್ರಿಟಿಷ್ ಸಾಮ್ರಾಜ್ಯದ ಸ್ವಯಮಾಧಿಕಾರದ ವಸಾಹತು ಎಂದು ಸ್ಥಾಪಿಸಿತು.
ಮೊದಲಿಗೆ ಈ ವಸಾಹತಿನ ಆರ್ಥಿಕ ಸ್ಥಿತಿ ಏರುಪೇರಾದ ಕಾರಣ, ಜನಜೀವನ ಅಸ್ತವ್ಯಸ್ತಗೊಳ್ಳುತ್ತಿತ್ತು. ಆನಂತರ ಆರ್ಥಿಕತೆಯು ಸ್ಥಿರಗೊಂಡು, ನಿರಂತರ ಸುಧಾರಣೆ ಕಂಡಿತು. ಈ ದೇಶದ ಗಡಿಯಾಚೆಯಿಂದ ಯಾವುದೇ ಅಕ್ರಮಣದ ಭೀತಿಯಿಲ್ಲದ ಹಾಗೂ ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಸದೃಢ ವಹಿವಾಟು ಸಂಪರ್ಕ ಹೊಂದಿದ್ದ ಕಾರಣ, ಹತ್ತೊಂಬತ್ತನೆಯ ಶತಮಾನದ ಅಪರಾರ್ಧದಲ್ಲಿ ಟ್ಯಾಸ್ಮೆನಿಯಾ ಉತ್ತಮ ಆರ್ಥಿಕ ಯುಗವನ್ನು ಕಂಡಿತು. ಹಡಗು ನಿರ್ಮಾಣದ ಕೈಗಾರಿಕಾ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ಕೇಂದ್ರವಾಯಿತು. ಟ್ಯಾಸ್ಮೆನಿಯಾ ತನ್ನದೇ ಆದ ಸ್ಥಳೀಯ ರಕ್ಷಣಾ ಪಡೆಯನ್ನು ಸ್ಥಾಪಿಸಿತು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೆಯ ಬೂಯರ್ ಯುದ್ಧದಲ್ಲಿ ಈ ಪಡೆಯು ಗಮನಾರ್ಹ ಪಾತ್ರ ವಹಿಸಿತು. ಮೊದಲ ಎರಡು ವಿಕ್ಟೊರಿಯಾ ಕ್ರಾಸ್ ಗೌರವ ಪಡೆದ ಆಸ್ಟ್ರೇಲಿಯನ್ನರಲ್ಲಿ ಟ್ಯಾಸ್ಮೆನಿಯಾದವರೇ ಆಗಿದ್ದರು. ಎಲ್ಲಾ ಆಸ್ಟ್ರೇಲಿಯನ್ ವಸಾಹತುಗಳ ಪೈಕಿ ಬಹಳಷ್ಟು ವಸಾಹತುಗಳೊಂದಿಗೆ ಸಂಯುಕ್ತತೆಯ ಪರವಾಗಿ ಟ್ಯಾಸ್ಮೆನಿಯಾದವರು ಮತ ಚಲಾಯಿಸಿದರು. 1901ರ ಜನವರಿ 1ರಂದು, ಟ್ಯಾಸ್ಮೆನಿಯಾದ ವಸಾಹತು (ಕಾಲೊನಿ ಆಫ್ ಟ್ಯಾಸ್ಮೆನಿಯಾ) ಎಂಬುದು ಆಸ್ಟ್ರೇಲಿಯಾದ ರಾಜ್ಯ ಟ್ಯಾಸ್ಮೆನಿಯಾ ಎಂದಾಯಿತು. (ಆಸ್ಟ್ರೇಲಿಯನ್ ಸ್ಟೇಟ್ ಆಫ್ ಟ್ಯಾಸ್ಮೆನಿಯಾ).
=== ಇತ್ತೀಚಿನ ಇತಿಹಾಸ ===
1967ರಲ್ಲಿ ಸಂಭವಿಸಿದ ಟ್ಯಾಸ್ಮೆನಿಯನ್ ಅಗ್ನಿದುರಂತದಿಂದ ರಾಜ್ಯಕ್ಕೆ ಬಹಳಷ್ಟು ಹಾನಿಯಾಗಿತ್ತು. ಇದರಲ್ಲಿ ಬಹಳಷ್ಟು ಜೀವ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾಗಿತ್ತು. 1970ರ ದಶಕದ ಕಾಲಾವಧಿಯಲ್ಲಿ, ಪರಿಸರ ಮಹತ್ವ ಹೊಂದಿದ್ದ ಪೆಡ್ಡರ್ ಕೆರೆಗೆ ಅಣೆಕಟ್ಟು ಕಟ್ಟಲು ರಾಜ್ಯ ಸರ್ಕಾರವು ಯೋಜನೆ ಘೋಷಿಸಿತು. ಅಣೆಕಟ್ಟಿನಿಂದಾಗಿ ಪ್ರವಾಹವುಂಟಾಯಿತು. 1975ರಲ್ಲಿ, ಭಾರಿ ಅದಿರು ಹೊತ್ತ ಹಡಗು ''ಎಂವಿ ಲೇಕ್ ಇಲಾವರಾ'' ಢಿಕ್ಕಿ ಹೊಡೆದ ಕಾರಣ, ಟ್ಯಾಸ್ಮನ್ ಸೇತುವೆಯು ಕುಸಿದುಬಿದ್ದಿತು. ಇದರಿಂದಾಗಿ ಹೋಬಾರ್ಟ್ನಲ್ಲಿರುವ ಡರ್ವೆಂಟ್ ನದಿಯನ್ನು ದಾಟುವುದು ಅಸಾಧ್ಯವಾಯಿತು.
1980ರ ದಶಕದ ಕಾಲಾವಧಿಯಲ್ಲಿ, ಫ್ರ್ಯಾಂಕ್ಲಿನ್ ಅಣೆಕಟ್ಟು ನಿರ್ಮಾಣದ ವಿರುದ್ಧದ ಭಾರಿ ಆಂದೋಲನವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗಮನ ಸೆಳೆಯಿತು. ಇದು ಹಸಿರು ಚಳವಳಿಯ ಆರಂಭಕ್ಕೆ ಕಾರಣವಾಯಿತು.
1996ರ ಏಪ್ರಿಲ್ 28ರಂದು, ಇಂದು ಪೋರ್ಟ್ ಆರ್ಥರ್ ಹತ್ಯಾಕಾಂಡ ಎಂದು ಅಪಖ್ಯಾತವಾದ ಘಟನೆಯಲ್ಲಿ ಮಾರ್ಟಿನ್ ಬ್ರಯಂಟ್ ಎಂಬೊಬ್ಬ ಬಂದೂಕುಧಾರಿಯು, ಪ್ರವಾಸಿಗರು ಮತ್ತು ನಿವಾಸಿಗಳು ಸೇರಿದಂತೆ 25 ಜನರನ್ನು ಗುಂಡು ಹಾರಿಸಿ ಕೊಂದು, ಇತರೆ 21 ಜನರನ್ನು ಗಾಯಗೊಳಿಸಿದನು. ಇದರಿಂದಾಗಿ, ಬಂದೂಕು ಮುಂತಾದ ಶಸ್ತ್ರಗಳ ಬಳಕೆಯ ನಿಯಮಾವಳಿಗಳನ್ನು ಕೂಡಲೇ ಪುನಃ ಪರಿಶೀಲಿಸಲಾಯಿತು. ರಾಷ್ಟ್ರಾದ್ಯಂತ ಬಂದೂಕು ಮಾಲಿಕತ್ವ ನಿಯಮಾವಳಿ-ಕಾನೂನುಗಳನ್ನು ರಚಿಸಲಾಯಿತು. ಟ್ಯಾಸ್ಮೆನಿಯಾದ ನಿಯಮಾವಳಿಗಳು ಆಸ್ಟ್ರೇಲಿಯಾದಲ್ಲೇ ಅತಿ ಕಟು ನಿಯಮಗಳಾಗಿವೆ. 2006ರ ಏಪ್ರಿಲ್ ತಿಂಗಳಲ್ಲಿ, ಸಣ್ಣ ಪ್ರಮಾಣದ ಭೂಕಂಪದಿಂದಾಗಿ ಬೀಕನ್ಸ್ಫೀಲ್ಡ್ ಗಣಿ ಕುಸಿದುಬಿದ್ದಿತು. ಒಬ್ಬ ವ್ಯಕ್ತಿ ಮೃತರಾಗಿ ಇನ್ನೂ ಇಬ್ಬರು ನೆಲದಡಿಯಲ್ಲಿ ಹದಿನಾಲ್ಕು ದಿನಗಳ ಕಾಲ ಸ್ಥಳದಲ್ಲೇ ಸಿಲುಕಿಕೊಂಡಿದ್ದರು. ಟ್ಯಾಮರ್ ಕಣಿವೆಯಲ್ಲಿ ಬೆಲ್ ಬೇ ಪಲ್ಮ್ ಮಿಲ್ ನಿರ್ಮಾಣ ಪ್ರಸ್ತಾಪದ ಬಗ್ಗೆ, ಟ್ಯಾಸ್ಮೆನಿಯನ್ ಸಮುದಾಯಲ್ಲಿ ಕೆಲಕಾಲ ಭಿನ್ನಾಭಿಪ್ರಾಯವಿತ್ತು. ಉದ್ಯೋಗಗಳು ಸೃಷ್ಟಿಯಾಗುವುದು ಎಂದು ಇದರ ಸಮರ್ಥಕರು ವಾದಿಸಿದರೆ, ಮಾಲಿನ್ಯದಿಂದಾಗಿ ಬಾಸ್ ಸ್ಟ್ರೇಟ್ ಮೀನುಗಾರಿಕೆ ಉದ್ದಿಮೆ ಮತ್ತು ಸ್ಥಳೀಯ ಪ್ರವಾಸೋದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರುವುದೆಂದು ಇದರ ವಿರೋಧಿಗಳು ವಾದಿಸಿದರು.
{{Panorama simple
|image = File:Port Arthur Panorama.jpg
|fullwidth = 10971
|fullheight = 1782
|caption = Port Arthur.
|height = 130
}}
== ಟ್ಯಾಸ್ಮೆನಿಯಾದ ಭೂಗೋಳ ==
[[ಚಿತ್ರ:Cradle Mountain Behind Dove Lake.jpg|left|thumb|ಟಾಸ್ಮೆನಿಯಾದ ಕೇಂದ್ರೀಯ ಎತ್ತರದ ಭೂಮಿ ಪ್ರದೇಶದಲ್ಲಿರುವ ಡವ್ ಕೆರೆ ಮತ್ತು ಕ್ರೇಡ್ಲ್ ಪರ್ವತ.]]
{{Main|Geography of Tasmania}}
ಟ್ಯಾಸ್ಮೆನಿಯಾದ {{convert|68401|km2|sqmi|adj=off}} ಭೂಪ್ರದೇಶವು {{Coord|42|S|147|E|region:AU_type:isle|display=inline,title}} ಲ್ಲಿ ಸ್ಥಿತವಾಗಿದೆ. ಈ ಭೂಮಿಯನ್ನು ಸುತ್ತುವ, ಅಪಖ್ಯಾತ ಎನ್ನಲಾದ 'ರೋರಿಂಗ್ ಫಾರ್ಟೀಸ್' ಬಿರುಗಾಳಿಯ ಪಥದಲ್ಲಿಯೇ ಇದೆ. ಹಿಂದೂ ಸಾಗರ ಮತ್ತು ಶಾಂತ ಸಾಗರಗಳು ಈ ದ್ವೀಪವನ್ನು ಸುತ್ತುವರೆದಿವೆ. ಈ ದ್ವೀಪವನ್ನು ಬಾಸ್ ಸ್ಟ್ರೇಟ್ ಆಸ್ಟ್ರೇಲಿಯಾ ಮುಖ್ಯಭೂಮಿಯಿಂದ ಬೇರ್ಪಡಿಸುತ್ತದೆ.
ಇತ್ತೀಚಿನ ಭೂವೈಜ್ಞಾನಿಕ ಕಾಲಾವಧಿಗಳಲ್ಲಿ ಈ ದ್ವೀಪದ ಜ್ವಾಲಾಮುಖಿಗಳು ನಿಷ್ಕ್ರಿಯವಾಗಿರುವುದರಿಂದ, ಟ್ಯಾಸ್ಮೆನಿಯಾದಲ್ಲಿ ಹಲವು ದುಂಡಗಿನ, ನುಣುಪಾದ ಪರ್ವತ ಶ್ರೇಣಿಗಳಿವೆ. ಇದರಿಂದಾಗಿ ಇದು ಆಸ್ಟ್ರೇಲಿಯಾದಲ್ಲೇ ಹೆಚ್ಚು ಪರ್ವತಗಳುಳ್ಳ ಪ್ರದೇಶದ ರಾಜ್ಯವಾಗಿದೆ. ಮಧ್ಯದ ಎತ್ತರದಭೂಮಿ (ಸೆಂಟ್ರಲ್ ಹೈಲೆಂಡ್ಸ್) ಪ್ರದೇಶವು ಅತಿ ಪರ್ವತಮಯ ಪ್ರದೇಶವಾಗಿದೆ. ಇದು ರಾಜ್ಯದ ಮಧ್ಯವಲಯದ ಪಶ್ಚಿಮ ಭಾಗದ ಬಹಳಷ್ಟು ಭಾಗದಲ್ಲಿ ವ್ಯಾಪಿಸಿದೆ. ಕೇಂದ್ರವಲಯದ ಪೂರ್ವಭಾಗದಲ್ಲಿರುವ ನಡುನಾಡು (ಮಿಡ್ಲೆಂಡ್ಸ್) ಬಹಳಷ್ಟು ಮಧ್ಯಭಾಗದ ಭೂಪ್ರದೇಶ ಸಮತಟ್ಟಾಗಿದೆ. ಇದನ್ನು ಕೃಷಿಗಾಗಿ ಬಹಳಷ್ಟು ಬಳಸಲಾಗುತ್ತಿದೆ. ಆದರೂ, ಕೃಷಿ ಚಟುವಟಿಕೆಗಳು ರಾಜ್ಯಾದ್ಯಂತ ಹರಡಿವೆ. 1,617 ಮೀಟರ್ ಎತ್ತರದ ಮೌಂಟ್ ಒಸಾ ಟ್ಯಾಸ್ಮೆನಿಯಾದ ಅತ್ಯೆತ್ತರದ ಪರ್ವತ. ವಿಶ್ವವಿಖ್ಯಾತ ಕ್ರೇಡ್ಲ್ ಪರ್ವತ ಹಾಗೂ ಲೇಕ್ ಸೇಂಟ್ ಕ್ಲೇರ್ ರಾಷ್ಟ್ರೀಯ ಉದ್ಯಾನದ ಮಧ್ಯಭಾಗದಲ್ಲಿ ಈ ಪರ್ವತವಿದೆ.<ref name="height"/><ref>'ಮೌಂಟ್ ಆಸ್ಸಾ, ಟ್ಯಾಸ್ಮೆನಿಯಾ' ''ದಿ ಇಂಟರಾಕ್ಟಿವ್ ಟೂರ್ ಆಫ್ ಟ್ಯಾಸ್ಮೆನಿಯಾ'' http://tourtasmania.com/content.php?id=ossa 2009ರ ಜೂನ್ 15ರಂದು ಮರುಸಂಪಾದಿಸಲಾಯಿತು.</ref>
ಇಂದಿಗೂ ಸಹ, ಟ್ಯಾಸ್ಮೆನಿಯಾದ ಬಹಳಷ್ಟು ಭಾಗಗಳಲ್ಲಿ ದಟ್ಟ ಅರಣ್ಯವಿದೆ. ದಕ್ಷಿಣ ಗೋಲಾರ್ಧದಲ್ಲಿಯೇ ಕೊನೆಯದು ಎನ್ನಲಾದ ಸಮಶೀತೋಷ್ಣ ಮಳೆಕಾಡುಗಳಲ್ಲಿ ಕೆಲವು ನೈಋತ್ಯ ರಾಷ್ಟ್ರೀಯ ಉದ್ಯಾನ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿವೆ.
[[ಚಿತ್ರ:Wineglass Bay from Lookout crop.jpg|350px|thumb|right|ಪೂರ್ವ ಕಡಲತೀರದಲ್ಲಿ ವೈನ್ಗ್ಲ್ಯಾಸ್ ಬೇ.]]
ದ್ವೀಪದ ಅತಿ ವಾಯವ್ಯದಲ್ಲಿರುವ ಟಾರ್ಕೀನ್ ಆಸ್ಟ್ರೇಲಿಯಾದಲ್ಲೇ ಅತಿವಿಶಾಲ ಸಮಶೀತೋಷ್ಣ ಮಳೆಕಾಡು ಪ್ರದೇಶವಾಗಿದೆ. ಇದು ಸುಮಾರು {{convert|3800|km2|sqmi|adj=off}} ಅಷ್ಟು ವ್ಯಾಪಿಸಿದೆ.<ref>[http://www.tarkine.com.au/ 'ಎಬೌಟ್ ದಿ ಟಾರ್ಕಿನ್' ''ಟಾರ್ಕಿನ್: ಆಸ್ಟ್ರೇಲಿಯಾಸ್ ಲಾರ್ಜೆಸ್ಟ್ ಟೆಂಪೆರೇಟ್ ರೇನ್ ಫಾರೆಸ್ಟ್'' ] {{Webarchive|url=https://web.archive.org/web/20120426080629/http://www.tarkine.com.au/ |date=26 ಏಪ್ರಿಲ್ 2012 }} 2009ರ ಜೂನ್ 15ರಂದು ಮರುಸಂಪಾದಿಸಲಾಯಿತು.</ref>
ಬಹಳ ಕಡಿದಾದ ಭೂನಕ್ಷೆ ಹೊಂದಿರುವ ಟ್ಯಾಸ್ಮೆನಿಯಾದಲ್ಲಿ ಹಲವು ನದಿಗಳು ಹರಿಯುತ್ತವೆ. ಇಡೀ ರಾಜ್ಯದ ಜಲವಿದ್ಯುತ್ ಯೋಜನೆಗಳ ಮೂಲಕ ವಿದ್ಯುತ್ ಒದಗಿಸಲೆಂದು, ರಾಜ್ಯದ ಬಹುತೇಕ ಎಲ್ಲಾ ನದಿಗಳಿಗೂ ಒಂದಲ್ಲ ಒಂದೆಡೆ ಅಣೆಕಟ್ಟು ಇದ್ದೇ ಇದೆ. ಬಹಳಷ್ಟು ನದಿಗಳು ಮಧ್ಯದ ಎತ್ತರದ ಭೂಮಿಗಳಿಂದ ಉಗಮವಾಗಿ, ಕಡಲತೀರದತ್ತ ಹರಿಯುತ್ತವೆ. ಟ್ಯಾಸ್ಮೆನಿಯಾದ ನದೀಮುಖಗಳು (ಆದರೂ ಹಲವು ನಿದರ್ಶನಗಳಲ್ಲಿ ಇವುಗಳನ್ನು ನದಿಗಳೆಂದೇ ಉಲ್ಲೇಖಿಸಲಾಗಿದೆ) ಪ್ರಮುಖ ಜನನಿಬಿಡ ಕೇಂದ್ರಗಳಲ್ಲಿವೆ.
ಡರ್ವೆಂಟ್ ನದಿಯು ದಕ್ಷಿಣಕ್ಕೆ ಹರಿದು, ಹೋಬಾರ್ಟ್ನಲ್ಲಿ ಕಡಲತೀರ ಸೇರುತ್ತದೆ. ಟ್ಯಾಮರ್ ನದಿಯು ಲಾನ್ಸೆಸ್ಟನ್ನಿಂದ ಉತ್ತರಕ್ಕೆ ಹರಿಯುತ್ತದೆ. ಮರ್ಸೀ ನದಿಯೂ ಸಹ ಉತ್ತರಕ್ಕೆ ಹರಿದು, ವಾಯವ್ಯ ದಿಕ್ಕಿನಲ್ಲಿರುವ ಡೆವೊನ್ಪೋರ್ಟ್ನಲ್ಲಿ ಕಡಲ ತೀರ ಸೇರುತ್ತದೆ. ಫ್ರ್ಯಾಂಕ್ಲಿನ್ ಮತ್ತು ಗೊರ್ಡಾನ್ ನದಿಗಳು ಪಶ್ಚಿಮಕ್ಕೆ ಹರಿದು, ಸ್ಟ್ರಾಹಾನ್ನಲ್ಲಿ ಪಶ್ಚಿಮ ಕಡಲತೀರ ಸೇರುತ್ತವೆ. ದಕ್ಷಿಣ ಎಸ್ಕ್ ನದಿಯು ಟ್ಯಾಸ್ಮೆನಿಯಾದಲ್ಲೆ ಅತಿ ಉದ್ದವಾದ ನದಿ. ಇದು ಫಿಂಗಲ್ನಲ್ಲಿರುವ ಪರ್ವತಗಳಲ್ಲಿ ಉಗಮಿಸಿ, ಅವೊಕಾ, ಇವಾನ್ಡೇಲ್, ಲಾಂಗ್ಫರ್ಡ್, ಹ್ಯಾಡ್ಸ್ಪೆನ್ ಹಾಗೂ ಅಂತಿಮವಾಗಿ ಲಾನ್ಸೆಸ್ಟನ್ ಮೂಲಕ ಹರಿಯುತ್ತದೆ. ಲಾನ್ಸೆಸ್ಟನ್ನ ಟ್ರೆವಾಲಿನ್ ಅಣೆಕಟ್ಟೆನಲ್ಲಿ ನದಿಗೆ ಪೂರಕವಾಗಿ ಇನ್ನೊಂದು ಅಣೆಕಟ್ಟು ನಿರ್ಮಿಸಲಾಗಿದೆ. ನಗರದ [[ಜಲವಿದ್ಯುತ್|ಜಲವಿದ್ಯುತ್ ಯೋಜನೆ]]ಗಾಗಿ ಈ ವ್ಯವಸ್ಥೆಯನ್ನು ಬಳಸಲಾಗಿದೆ. ಟ್ರೆವಲಿನ್ ಕೆರೆಯಲ್ಲಿ ನೀರಿನ ಬಹಳಷ್ಟು ಪಾಲು ಅಣೆಕಟ್ಟು ಹಾಕಿದೆಯಾದರೂ, ಸ್ವಲ್ಪ ನೀರು ಕ್ಯಾಟರಾಕ್ಟ್ ಕಮರಿಯಲ್ಲಿ ಹರಿದು, ಟ್ಯಾಮರ್ ನದಿಗೆ ಉಪನದಿಯಾಗುತ್ತದೆ. ವಿದ್ಯುತ್ ಕೇಂದ್ರದಿಂದ ಹೊರಹರಿವು ಸಹ ಲಾನ್ಸೆಸ್ಟನ್ನಿಂದ ಪ್ರವಾಹದ ದಿಕ್ಕಿನಲ್ಲಿ ಟ್ಯಾಮರ್ ನದಿಯೊಂದಿಗೆ ಸೇರುತ್ತದೆ.<ref>[http://www.abs.gov.au/ausstats/abs@.nsf/bb8db737e2af84b8ca2571780015701e/BE97516E2870B5AFCA25710E00756153?opendocument 'ಸ್ಟ್ಯಾಟಿಸ್ಟಿಕ್ಸ್ - ಟ್ಯಾಸ್ಮೆನಿಯಾ, 2006'], ''ಆಸ್ಟ್ರೇಲಿಯನ್ ಬ್ಯೂರೊ ಆಫ್ ಸ್ಟ್ಯಾಟಿಸ್ಟಿಕ್ಸ್''. 2009ರ ಜೂನ್ 25ರಂದು ಮರುಸಂಪಾದಿಸಲಾಯಿತು.</ref>
=== ಹವಾಗುಣ ===
{{See also|commons:Category:Climate diagrams of Tasmania|l1=Climate diagrams of Tasmania|Climate of Tasmania}}
ಟ್ಯಾಸ್ಮೆನಿಯಾದಲ್ಲಿ ತಂಪಾದ ಸಮಶೀತೋಷ್ಣ ಹವಾಗುಣ ಹೊಂದಿದ್ದು, ನಾಲ್ಕು ವಿವಿಧ ಋತುಗಳಿವೆ. ಬೇಸಿಗೆಯ ಋತುವು ಡಿಸೆಂಬರ್ನಿಂದ ಫೆಬ್ರುವರಿ ತನಕ ಇರುತ್ತದೆ. ಈ ಋತುವಿನಲ್ಲಿ ಗರಿಷ್ಠ ಸರಾಸರಿಯು {{convert|21|°C|°F}} ಅಷ್ಟಿದ್ದು, ಲಾನ್ಸೆಸ್ಟನ್ ಸುತ್ತಮುತ್ತಲ ಅಂತರ್ದೇಶೀಯ ವಲಯಗಳಲ್ಲಿ ಉಷ್ಣಾಂಶವು {{convert|24|°C|°F}} ತಲುಪುತ್ತದೆ. ಒಳನಾಡಿನ ಇತರೆ ಭಾಗಗಳಲ್ಲಿ ಇನ್ನಷ್ಟು ತಂಪಾದ ಹವಾಗುಣವಿದೆ. ಮಧ್ಯ ಪ್ರಸ್ಥಭೂಮಿಯಲ್ಲಿರುವ ಲಿಯಾವೆನಿ ಆಸ್ಟ್ರೇಲಿಯಾದ ಅತಿ ಹೆಚ್ಚು ಶೀತ ಪ್ರದೇಶವಾಗಿದೆ. ಫೆಬ್ರವರಿ ತಿಂಗಳಲ್ಲಿ ಇಲ್ಲಿಯ ಉಷ್ಣಾಂಶವು {{convert|4|°C|°F}} ಇಂದ {{convert|17|°C|°F}} ಮಟ್ಟದಲ್ಲಿರುತ್ತದೆ. ಶರತ್ಕಾಲವು ಮಾರ್ಚ್ ತಿಂಗಳಿಂದ ಮೇ ತಿಂಗಳ ವರೆಗಿದ್ದು, ಹವಾಮಾನದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಬೇಸಿಗೆಯ ಹವಾಮಾನ ಗುಣಗಳು ಚಳಿಗಾಲದ ಹವಾಗುಣವನ್ನು ಅನುಸರಿಸುತ್ತದೆ.<ref>{{cite news
| title = Climate of Launceston
| work = Australian BOM
| date =
| url = http://www.bom.gov.au/weather/tas/launceston/climate.shtml
| accessdate = 2009-01-01
| archive-date = 22 ಫೆಬ್ರವರಿ 2009
| archive-url = https://web.archive.org/web/20090222154659/http://www.bom.gov.au/weather/tas/launceston/climate.shtml
| url-status = dead
}}</ref>
[[ಚಿತ್ರ:Russell Falls 2.jpg|thumb|left|250px|ರಸೆಲ್ ಜಲಪಾತ]]
ಚಳಿಗಾಲವು ಜೂನ್ ತಿಂಗಳಿಂದ ಆಗಸ್ಟ್ ತಿಂಗಳವರೆಗಿರುತ್ತದೆ. ರಾಜ್ಯದ ಪಾಲಿಗೆ ಈ ಮೂರು ತಿಂಗಳುಗಳು ಬಹಳಷ್ಟು ಆರ್ದ್ರಮಯ ಹಾಗೂ ಅತಿ ತಂಪಿನ ತಿಂಗಳುಗಳಾಗಿರುತ್ತವೆ. ಎತ್ತರದ ಪ್ರದೇಶಗಳಲ್ಲಿ ಬಹಳಷ್ಟು ಹಿಮಪಾತವಾಗುತ್ತದೆ. [[ದಕ್ಷಿಣ ಮಹಾಸಾಗರ|ದಕ್ಷಿಣ ಸಾಗರ]]ದಿಂದ ಒಳಬರುವ ಶೀತಗಾಳಿಯಿಂದಾಗಿ, ಚಳಿಗಾಲದಲ್ಲಿ ಕಡಲ ತೀರದ ಪ್ರದೇಶಗಳಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶವು {{convert|12|°C|°F}} ಹಾಗೂ ಮಧ್ಯದ ಪ್ರಸ್ಥಭೂಮಿಯಲ್ಲಿ {{convert|3|°C|°F}} ಇರುತ್ತದೆ.<ref>{{cite news
| title = Tasmania Climate
| work = World 66
| date =
| url = http://www.world66.com/australiaandpacific/australia/tasmania/geography
| accessdate = 2009-01-01
| archive-date = 30 ಏಪ್ರಿಲ್ 2009
| archive-url = https://web.archive.org/web/20090430125251/http://www.world66.com/australiaandpacific/australia/tasmania/geography
| url-status = dead
}}</ref>
ವಸಂತ ಋತುವು ಸಂಕ್ರಮಣದ ಋತುವಾಗಿರುತ್ತದೆ. ಈ ಸಮಯದಲ್ಲಿ ಚಳಿಗಾಲದ ಹವಾಮಾನವು ಬೇಸಿಗೆಯ ಹವಾಮಾನದ ಗುಣಗಳನ್ನು ಅನುಸರಿಸಲಾರಂಭಿಸುತ್ತದೆ. ಆದರೂ, ಅಕ್ಟೋಬರ್ ತಿಂಗಳ ತನಕ ಮಂಜು ಬೀಳುವುದು ಸಾಮಾನ್ಯ. ವಸಂತ ಋತುವು ವರ್ಷದಲೇ ಜೋರು ಗಾಳಿ ಬೀಸುವ ಋತುವಾಗಿರುತ್ತದೆ. ಅಪರಾಹ್ನದ ಸಮುದ್ರ ಗಾಳಿಯು ಕಡಲತೀರದ ಮೇಲೆ ಪ್ರಭಾವ ಬೀರಲಾರಂಭಿಸುತ್ತದೆ.
ಉತ್ತರ ಗೋಲಾರ್ಧದಲ್ಲಿ ಅದೇ ಅಕ್ಷಾಂಶದಲ್ಲಿರುವ ದೊಡ್ಡ ಖಂಡಗಳಲ್ಲಿನ ಮಳೆಗಾಲಕ್ಕೆ ಸಾಮ್ಯತೆಯಿರುವಂತೆ, ಟ್ಯಾಸ್ಮೆನಿಯಾದಲ್ಲಿ ಮಳೆಗಾಲವು ಸಂಕೀರ್ಣ ಪ್ರವೃತ್ತಿ ಅನುಸರಿಸುತ್ತದೆ. ಪಶ್ಚಿಮ ಪ್ರದೇಶದಲ್ಲಿ ಮಳೆಯು ಕಡಲ ತೀರದಲ್ಲಿನ ಸ್ಟ್ರಹನ್ನಲ್ಲಿ {{convert|1458|mm|in}}ಇಂದ ಹಿಡಿದು, ಪ್ರಸ್ಥಭೂಮಿಯಲ್ಲಿರುವ ಕ್ರೇಡ್ಲ್ ಕಣಿವೆಯಲ್ಲಿ {{convert|2690|mm|in}} ವರೆಗೆ ಹೆಚ್ಚುತ್ತದೆ.<ref>{{cite news
| title = Cradle Valley Climate
| work=Australian Government Bureau of Meteorology
| date =
| url = http://www.bom.gov.au/climate/averages/tables/cw_096005.shtml
| accessdate = 2009-01-01}}</ref>
ಚಳಿಗಾಲದಲ್ಲಿ ಗರಿಷ್ಠ ಮಳೆಯಾಗುವುದು: ಜುಲೈ ಮತ್ತು ಅಗಸ್ಟ್ ತಿಂಗಳಲ್ಲಿ ಸಂಭವಿಸುವ ಸರಾಸರಿ ಮಳೆಯ 30-40%ರಷ್ಟು ಮಳೆಯು ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಸಂಭವಿಸುವುದು. ಆದರೂ, ಅತಿ ಶುಷ್ಕ ತಿಂಗಳುಗಳಲ್ಲಿಯೂ ಸಹ ಪ್ರತಿ ಎರಡನೆಯ ದಿನದಂದು ಮಳೆಯಾಗುವುದು. ಪ್ರತಿವರ್ಷದಲ್ಲಿ ಮಳೆಯಾಗುವ ದಿನಗಳು ಆಸ್ಟ್ರೇಲಿಯಾದ ಮುಖ್ಯಭೂಮಿಯಲ್ಲಿ ಯಾವುದೇ ಭಾಗದಕ್ಕಿಂತಲೂ ಹೆಚ್ಚು. ಇನ್ನಷ್ಟು ಪೂರ್ವದಲ್ಲಿರುವ ಲೇಕ್ ಕಂಟ್ರಿಯಲ್ಲಿ, ವಾರ್ಷಿಕ ಮಳೆಯು {{convert|900|mm|in}} ಕ್ಕೆ ಕಡಿಮೆಯಾಗುತ್ತದೆ. ಮಧ್ಯದ ಪ್ರಸ್ಥಭೂಮಿಯಲ್ಲಿ ರಾಸ್ನಲ್ಲಿ ವಾರ್ಷಿಕ ಮಳೆಯು {{convert|450|mm|in}}ರಷ್ಟು ಕಡಿಮೆಯಾಗಿ, ಸಾಮಾನ್ಯವಾಗಿ {{convert|600|mm|in}}ಗಿಂತಲೂ ಕಡಿಮೆಯಿರುತ್ತದೆ. ಟ್ಯಾಸ್ಮೆನಿಯಾದ ಪೂರ್ವ ಭಾಗದಲ್ಲಿ ಪಶ್ಚಿಮ ಭಾಗಕ್ಕಿಂತಲೂ ಇನ್ನಷ್ಟು ಸಮವಾಗಿ ಚದುರಿದಂತೆ ಮಳೆಯಾಗುತ್ತದೆ. ಹಲವು ತಿಂಗಳುಗಳಲ್ಲಿ ಒಂದೇ ತೆರನಾದ ಸರಾಸರಿ ಮಳೆಯಾಗುತ್ತದೆ.
ಹೆಚ್ಚು ಜನನಿಬಿಡ ಉತ್ತರ ಭಾಗವು ಪಶ್ಚಿಮ ಭಾಗಕ್ಕಿಂತಲೂ ಶುಷ್ಕವಾಗಿದೆ. ವಾರ್ಷಿಕ ಮಳೆಯ ಲಾನ್ಸೆಸ್ಟನ್ನಲ್ಲಿ {{convert|666|mm|in}} ಇಂದ ಹಿಡಿದು, ವಾಯವ್ಯದಲ್ಲಿರುವ ಬರ್ನೀಯಲ್ಲಿ {{convert|955|mm|in}} ಹಾಗೂ ಇನ್ನಷ್ಟು ಪೂರ್ವದಲ್ಲಿರುವ ಸ್ಕಾಟ್ಸ್ಡೇಲ್ನಲ್ಲಿನ {{convert|993|mm|in}} ವರೆಗಿನ ಶ್ರೇಣಿಯಲ್ಲಿದೆ.<ref>{{cite news
| title = Burnie Climate
| work=Australian Government Bureau of Meteorology
| date =
| url = http://www.bom.gov.au/climate/averages/tables/cw_091009.shtml
| accessdate = 2009-01-01}}</ref><ref>{{cite news
| title = Scottsdale Climate
| work=Australian Government Bureau of Meteorology
| date =
| url = http://www.bom.gov.au/climate/averages/tables/cw_091219.shtml
| accessdate = 2009-01-01}}</ref>
ಚಳಿಗಾಲದಲ್ಲೇ ಬಹಳಷ್ಟು ಮಳೆಯಾಗುತ್ತದೆ. ಲಾನ್ಸೆಸ್ಟನ್ನಲ್ಲಿ ಬೇಸಿಗೆಯಲ್ಲಿ ತಿಂಗಳ ಮಳೆಯ ಸರಾಸರಿಯು {{convert|31|mm|in}} ಅಷ್ಟು ಕಡಿಮೆಯಾಗಬಲ್ಲದು. ಮಧ್ಯದ ಪ್ರಸ್ಥಭೂಮಿಗಿಂತಲೂ ಪೂರ್ವ ಕಡಲತೀರವು ಹೆಚ್ಚು ಆರ್ದ್ರತೆ ಹೊಂದಿದೆ. ವಾರ್ಷಿಕ ಸರಾಸರಿ ಮಳೆಯು ಸೇಂಟ್ ಹೆಲೆನ್ಸ್ನಲ್ಲಿನ {{convert|775|mm|in}} ಇಂದ ಹಿಡಿದು, ಸ್ವಾನ್ಸೀಯಲ್ಲಿ {{convert|640|mm|in}}ರ ವರೆಗಿನ ಮಟ್ಟದಲ್ಲಿದೆ.<ref>{{cite news
| title = St Helens Climate
| work=Australian Government Bureau of Meteorology
| date =
| url = http://www.bom.gov.au/climate/averages/tables/cw_092033.shtml
| accessdate = 2009-01-01}}</ref><ref>{{cite news
| title = Swansea Climate
| work=Australian Government Bureau of Meteorology
| date =
| url = http://www.bom.gov.au/climate/averages/tables/cw_092038.shtml
| accessdate = 2009-01-01}}</ref>
ಇಲ್ಲಿ ಇಡೀ ವರ್ಷ ಮಳೆಯು ಸಮನಾಗಿ ಹಂಚಿಕೆಯಾಗಿದೆ, ಆದರೆ ಕೆಲವೊಮ್ಮೆ ಏರುಪೇರಾಗುವ ಸಾಧ್ಯತೆಯುಂಟು, ಏಕೆಂದರೆ ಬೆಚ್ಚನೆಯ ಟ್ಯಾಸ್ಮನ್ ಸಮುದ್ರದಿಂದ ಆಗಾಗ ಭಾರಿ ಮಳೆ ಸಂಭವಿಸುವುದು. ಸತತ ಮೂರು ದಿನಗಳ {{convert|125|mm|in}} ಮಳೆಯು ಉತ್ತರ ಕಡಲತೀರದಲ್ಲಿ ಐವತ್ತು ವರ್ಷಗಳಲ್ಲೊಮ್ಮೆ ಮಾತ್ರ ಸಂಭವಿಸುವುದು. ಸ್ವಾನ್ಸೀ ಮತ್ತು ಬಿಚೆನೊ ನಗರಗಳಲ್ಲಿ ಪ್ರತಿ ನಾಲ್ಕು ಅಥವಾ ಐದು ವರ್ಷಗಳಲ್ಲಿ ಸರಾಸರಿ ಒಮ್ಮೆ ಮಳೆಯಾಗುವುದು. 1954ರ ಜೂನ್ 7-8ರಂದು, ಆ ಪ್ರದೇಶದಲ್ಲಿ {{convert|230|mm|in}}ರಷ್ಟು ಭಾರಿಯಾಗಿ ಹಲವು ಬಾರಿ ಮಳೆಯಾಗಿತ್ತು. ಬಹಳಷ್ಟು ಬಿಸಿಲಿರುವ ಹವಾಗುಣವುಳ್ಳ ಪೂರ್ವ ಕಡಲತೀರವನ್ನು ಕೆಲವೊಮ್ಮೆ ಸೂರ್ಯತೀರ ಎನ್ನಲಾಗಿದೆ.<ref>{{cite news
| title = Climate of Tasmania
| work = T Change
| date =
| url = http://www.tchange.com.au/climate/climate.html
| accessdate = 2009-01-01
| archive-date = 21 ಸೆಪ್ಟೆಂಬರ್ 2010
| archive-url = https://web.archive.org/web/20100921235813/http://www.tchange.com.au/climate/climate.html
| url-status = dead
}}</ref>
2007ರಲ್ಲಿ ರಾಜ್ಯ ಸರ್ಕಾರವು, ಫ್ಲಿಂಡರ್ಸ್ ಐಲೆಂಡ್ ಒಂದಿಗೆ ಟ್ಯಾಸ್ಮೆನಿಯಾ ಒಳನಾಡಿನ ಹಲವು ವಿಭಾಗಗಳನ್ನು ಬರಪೀಡಿತ ಎಂದು ಘೋಷಿಸಿತು.<ref>{{cite news
| title = Midlands Drought area
| work = Tasmanian Government
| date =
| url = http://www.farmpoint.tas.gov.au/farmpoint.nsf/v-attachments/B314475C0B2942F0CA2572F7007EA8CD/$file/Midlands-drought-area-24July07.pdf
| format = PDF
| accessdate = 2009-01-01
| archive-date = 1 ಜನವರಿ 2016
| archive-url = https://web.archive.org/web/20160101181101/http://www.farmpoint.tas.gov.au/farmpoint.nsf/v-attachments/B314475C0B2942F0CA2572F7007EA8CD/$file/Midlands-drought-area-24July07.pdf
| url-status = dead
}}</ref>
2009ರಲ್ಲಿ ಸಂಭವಿಸಿದ ಅಗ್ನೇಯ ಆಸ್ಟ್ರೇಲಿಯಾ ಶಾಖದ ಅಲೆಯಲ್ಲಿ, ಟ್ಯಾಸ್ಮೆನಿಯಾದ ಸ್ಕೆಮಾಂಡರ್ನಲ್ಲಿ 2009ರ ಜನವರಿ 30ರಂದು ಅತ್ಯುನ್ನತ ಗರಿಷ್ಠ ಉಷ್ಣಾಂಶ {{convert|42.2|°C|°F|abbr=on}} ದಾಖಲಾಯಿತು. 1983ರ ಜೂನ್ 30ರಂದು, ಬಟ್ಲರ್ಸ್ ಗಾರ್ಜ್, ಷ್ಯಾನೊನ್ ಮತ್ತು ಟರಾಲೀ ನಗರಗಳಲ್ಲಿ ಟ್ಯಾಸ್ಮೆನಿಯಾದ ಅತಿ ಕನಿಷ್ಠ ಉಷ್ಣಾಂಶ {{convert|-13.0|°C|°F|1|abbr=on}} ದಾಖಲಾಯಿತು.<ref>{{cite web |url=http://www.bom.gov.au/climate/extreme/records/national.pdf|title=Rainfall and Temperature Records: National|publisher=[[Bureau of Meteorology (Australia)|Bureau of Meteorology]] |accessdate=14 November 2009|format=PDF}}</ref>
{| class="wikitable"
|-
!ನಗರ
!ಕಲ್ಪಿತ ಕನಿಷ್ಠ ಉಷ್ಣಾಂಶ <sup>o</sup>C
!ಕಲ್ಪಿತ ಗರಿಷ್ಠ ಉಷ್ಣಾಂಶ <sup>o</sup>C
!ತಿಳಿ ವಾತಾವರಣದ ದಿನಗಳು
!ಮಳೆ (ಮಿಮೀ)
|-
| ಹೋಬಾರ್ಟ್
| align="center"| 8.3
| align="center"| 16.9
| align="center"| 41
| align="center"| 616<ref name="hobartclimate">{{cite web
| title = Hobart Climate Statistics
| publisher=Australian Government Bureau of Meteorology
| url = http://www.bom.gov.au/climate/averages/tables/cw_094030.shtml
| accessdate = 2009-01-01}}</ref>
|-
| ಲಾನ್ಸೆಸ್ಟನ್
| align="center"| 7.2
| align="center"| 18.4
| align="center"| 50
| align="center"| 666<ref name="launcestonclimate">{{cite web
| title = Launceston Climate Statistics
| publisher=Australian Government Bureau of Meteorology
| url = http://www.bom.gov.au/climate/averages/tables/cw_091237.shtml
| accessdate = 2009-01-01}}</ref>
|-
| ಡೆವೊನ್ಪೋರ್ಟ್
| align="center"| 8.1
| align="center"| 16.8
| align="center"| 61
| align="center"| 778<ref name="devonportclimate">{{cite web
| title = Devonport Climate Statistics
| publisher=Australian Government Bureau of Meteorology
| url = http://www.bom.gov.au/climate/averages/tables/cw_091126.shtml
| accessdate = 2009-01-01}}</ref>
|-
| ಸ್ಟ್ರಹನ್
| align="center"| 7.9
| align="center"| 16.5
| align="center"| 41
| align="center"| 1,458<ref name="strahanclimate">{{cite web
| title = Strahan Climate Statistics
| publisher=Australian Government Bureau of Meteorology
| url = http://www.bom.gov.au/climate/averages/tables/cw_097072.shtml
| accessdate = 2009-01-01}}</ref>
|}
=== ವಿವಿಧ ಮಣ್ಣು ===
[[ಚಿತ್ರ:Blick ueber Great Oyster Bay zur Freycinet Peninsula.jpg|thumb|left|275px|ಫ್ರೇಯ್ಸಿನೆಟ್ ಪರ್ಯಾಯ ದ್ವೀಪದಲ್ಲಿ ಗ್ರೇಟ್ ಆಯ್ಸ್ಟರ್ ಬೇ]]
[[ಚಿತ್ರ:Hellyer Gorge, Tasmania.jpg|thumb|ಟ್ಯಾಸ್ಮೆನಿಯಾದ ಹೆಲ್ಯರ್ ಕಮರಿ]]
ಕ್ವಾಟರ್ನರಿ ಹಿಮೀಕರಣವಿದ್ದರೂ ಸಹ, ಟ್ಯಾಸ್ಮೆನಿಯಾದ ಮಣ್ಣು ಆಸ್ಟ್ರೇಲಿಯಾ ಮುಖ್ಯಭೂಮಿಯ ಮಣ್ಣಿನಷ್ಟು ಫಲವತ್ತಾಗಿಲ್ಲ, ಏಕೆಂದರೆ, ಮಣ್ಣಿನ ಬಹಳಷ್ಟು ಪಾಲು ಹರಿದುಹೋಗುತ್ತದೆ. ಅತಿ ಶುಷ್ಕ ಹವಾಗುಣ ಹೊಂದಿರುವ ಪ್ರದೇಶಗಳಲ್ಲಿ ಅತಿ ಕಡಿಮೆ ಹರಿದುಹೋಗುತ್ತಿದ್ದರಿಂದ ಹಿಮೀಕರಣ ಅಥವಾ ಅದರಿಂದ ಉಂಟಾಗುವ ಮೆಕ್ಕಲಿನಿಂದ ಪ್ರಭಾವಿತವಾಗಿರಲಿಲ್ಲ. ಬಾಸ್ ಸ್ಟ್ರೇಟ್ ದ್ವೀಪಗಳು, ಪೂರ್ವ ಕಡಲ ತೀರ ಮತ್ತು ಪಶ್ಚಿಮ ಟ್ಯಾಸ್ಮೆನಿಯಾ ಪ್ರದೇಶಗಳಲ್ಲಿ ಮಣ್ಣು ಬಹಳಷ್ಟು ಫಲವತ್ತಾಗಿಲ್ಲದ ಸ್ಪೊಡೊಸಾಲ್ಸ್ ಅಥವಾ ಸಾಮೆಂಟ್ಸ್ (ಕಬ್ಬಿಣಾಅಂಶ ರಹಿತ-ಸಹಿತ ಮಣ್ಣು ಮಾದರಿ)ಆಗಿರುತ್ತವೆ. ಇನ್ನು ಪಶ್ಚಿಮ ಟ್ಯಾಸ್ಮೆನಿಯಾದಲ್ಲಿ ಇನ್ನಷ್ಟು ಕಡಿಮೆ ಫಲವತ್ತಾದ 'ಲ್ಯಾಟೆರಿಟಿಕ್ ಪೊಡ್ಝೊಲಿಕ್ ಮಣ್ಣು' ಉಂಟು. ಈ ಪ್ರದೇಶಗಳಲ್ಲಿ ಬಹಳಷ್ಟು ಕೃಷಿಗಾಗಿ ಬಳಸಲಾಗದು. ಆದರೆ ಬಹಳಷ್ಟು ಉಪಯುಕ್ತವಾದ ವನ್ಯಪ್ರದೇಶಗಳಿವೆ. ಇದು ರಾಜ್ಯದ ಪ್ರಮುಖ ಉದ್ದಿಮೆಗಳಲ್ಲೊಂದು.
ಉತ್ತರ ಕಡಲತೀರದಲ್ಲಿ, ಫಲ ತೋಟಗಾರಿಕೆಗಾಗಿ ಫಲವತ್ತಾದ ಮೆಕ್ಕಲು ಮಣ್ಣಿನ ಜೊತೆಗೆ, ಕಡು ಕೆಂಪು ಬಣ್ಣದ, ಸುಲಭವಾಗಿ ಬಳಸಬಹುದಾದ 'ಕ್ರಾಸ್ನೊಝೆಮ್ಸ್' ಎಂಬ ಕೆಮ್ಮಣ್ಣು ಉಂಟು. ಈ ಮಣ್ಣು ಬಹಳಷ್ಟು ಆಮ್ಲಾಂಶ ಹೊಂದಿದ್ದು, ಫಾಸ್ಫೇಟ್ನ್ನು ಪ್ರಭಾವಶಾಲಿಯಾಗಿ ಹಿಡಿದಿಟ್ಟಿರುತ್ತದೆ. ಆದರೆ ಅದು ಬಹಳಷ್ಟು ಉಪಯುಕ್ತ ಭೌತಿಕ ಗುಣಗಳನ್ನು ಹೊಂದಿರುವ ಕಾರಣ, ಹೈನುಗಾರಿಕೆ, ಗೋಮಾಂಸಕ್ಕಾಗಿ ಪಶು ಸಾಕಣೆ ಹಾಗೂ ಮೇವಿಗಾಗಿ ಈ ಪ್ರದೇಶವನ್ನು ಬಳಸಲಾಗುತ್ತದೆ.
ಮಧ್ಯದ ಪ್ರಸ್ಥಭೂಮಿ ಹಾಗೂ ಡರ್ವೆಂಟ್ನ ತಗ್ಗು ಪ್ರದೇಶದ ಮಣ್ಣು ರಾಜ್ಯದ ಇತರೆ ಭಾಗಕ್ಕಿಂತಲೂ ಭಿನ್ನವಾಗಿವೆ. ಶುಷ್ಕ ಹವಾಗುಣ ಮತ್ತು ಕ್ಷಾರೀಯ (ಡೊಲೆರೈಟ್) ಮೂಲ ವಸ್ತು ಹೊಂದಿರುವ ಕಾರಣ, ಈ ಮಣ್ಣು ಹರಿದು ಹೋಗುವುದಿಲ್ಲ. ಇವು ಇನ್ನಷ್ಟು ಆಳವಾದ ಕೆಳಭಾಗದಮಣ್ಣಿನಲ್ಲಿ ಸುಣ್ಣದ ಅಂಶವುಂಟು. ಅದು ಪ್ರೈರೀ (ಹುಲ್ಲುಗಾವಲು) ಮಣ್ಣು, ಅಥವಾ ಕಂದು ಭೂಮಿ ಎಂದು ವಿಂಗಡಿಸಲಾಗಿದೆ. ಇವು ರಷ್ಯಾ ಮತ್ತು ಉತ್ತರ ಅಮೆರಿಕಾದ ಚರ್ನೊಝೆಮ್ ಮಣ್ಣನ್ನು ಹೋಲುತ್ತವೆ. ಆದರೂ ಅವು ಕೆಳಮಟ್ಟದಲ್ಲಿ [[ರಂಜಕ]] ಪ್ರಮಾಣ ಕಡಿಮೆಯಿದ್ದು, ಮೇಲ್ಮಟ್ಟದಲ್ಲಿ ಆಮ್ಲ ಪ್ರಮಾಣ ಹೆಚ್ಚಾಗಿರುತ್ತದೆ. ಆದರೆ ಇವುಗಳ ಹೆಚ್ಚಿನ ಪೌಷ್ಟಿಕಾಂಶದಿಂದಾಗಿ, ಉಪಯುಕ್ತಕರ ಹಸಿಹುಲ್ಲಿಗೆ ಸೂಕ್ತವಾಗಿದ್ದು, ಈ ವಲಯಗಳಲ್ಲಿ ಕುರಿಗಳು ಹೇರಳವಾಗಿ ಮೇಯಲು ಅವಕಾಶವುಂಟು. ಅತಿ ಶುಷ್ಕ ಪ್ರದೇಶಗಳಲ್ಲಿ ಧವಸಧಾನ್ಯಗಳನ್ನು ಸಹ ಬೆಳೆಸಲಾಗುವುದು. ಅಗ್ನೇಯ ಟ್ಯಾಸ್ಮೆನಿಯಾದ ಮೆಕ್ಕಲು ಮಣ್ಣು ಪ್ರದೇಶಗಳಲ್ಲಿ ಫಲವತ್ತಾದ ಮೆಕ್ಕಲು ಮಣ್ಣಿನಲ್ಲಿ ಸೇಬು ಹಣ್ಣು ಬೆಳೆಯಲು ಅನುಕೂಲಕರವಾಗಿದೆ.
== ಪರಿಸರ ವಿಜ್ಞಾನ ==
=== ಸಸ್ಯಸಂಪತ್ತು ===
[[File:Mt Anne from High Shelf Camp.jpg|thumb|ಮೌಂಟ್ ಆನ್ ಹತ್ತಿರ ಹೈ ಷೆಲ್ಫ್ ಕ್ಯಾಂಪ್ನಲ್ಲಿರುವ ಆಲ್ಪೀನ್ ಹೀತ್ಲೆಂಡ್. ಟ್ಯಾಸ್ಮೆನಿಯನ್ ಆಲ್ಪೀನ್ ಸಸ್ಯವರ್ಗದಲ್ಲಿ 60%ರಷ್ಟು ಈ ರಾಜ್ಯಜ್ಜೆ ವಿಶಿಷ್ಟವಾಗಿದೆ.<ref>[84]</ref>
]]
ಟ್ಯಾಸ್ಮೆನಿಯಾದ ಸಸ್ಯವರ್ಗದಲ್ಲಿ [[ಜೀವವೈವಿಧ್ಯ|ಬಹಳಷ್ಟು ವೈವಿಧ್ಯ]]ವಿದೆ. ಶುಷ್ಕ ಮಧ್ಯಪ್ರಸ್ಥಭೂಮಿಯಲ್ಲಿರುವ ಬಹಳಷ್ಟು ಮೇವು ಬೆಳೆಯುವ ಹುಲ್ಲುಗಾವಲು ಪ್ರದೇಶದಿಂದ ಹಿಡಿದು, ರಾಜ್ಯದ ಇತರೆ ಭಾಗಗಳಲ್ಲಿ ಎತ್ತರಕ್ಕೆ ಬೆಳೆಯುವ, ನಿತ್ಯಹರಿದ್ವರ್ಣ ನೀಲಗಿರಿ (ಯುಕಲಿಪ್ಟಸ್) ಕಾಡು, ಉನ್ನತ ಪರ್ವತ ಪ್ರದೇಶದ ಕುರುಚಲು ಭೂಮಿ ಹಾಗೂ ತಂಪಾದ ಸಮಶೀತೋಷ್ಣ ಮಳೆಕಾಡುಗಳು ಮತ್ತು ಕೆಲ ಪ್ರಮಾಣದ ಬಂಜರು ಪ್ರದೇಶಗಳಿವೆ. ಟ್ಯಾಸ್ಮೆನಿಯಾದಲ್ಲಿ ಬಹಳ ಅಪೂರ್ವವಾದ ಸಸ್ಯವರ್ಗಗಳಿವೆ. ಕೆಲವು ಸಸ್ಯಗಳು ಪೂರ್ವವರ್ತಿಗಳ ಮೂಲಕ ದಕ್ಷಿಣ ಅಮೆರಿಕಾ ಹಾಗೂ ನ್ಯೂಜೀಲೆಂಡ್ ದೇಶದ ಸಸ್ಯಜಾತಿಗಳಿಗೆ ಸಂಬಂಧಿತವಾಗಿವೆ. ಸುಮಾರು 50 ದಶಲಕ್ಷ ವರ್ಷಗಳ ಹಿಂದೆ, ಈ ಪೂರ್ವವರ್ತಿ ಸಸ್ಯಗಳು ಗೊಂಡ್ವಾನಾ ಎಂಬ ಬೃಹತ್ ಖಂಡದಲ್ಲಿ ಬೆಳೆಯುತ್ತಿದ್ದವು.
ಟ್ಯಾಸ್ಮೆನಿಯಾದಲ್ಲಿ ವಿಶ್ವದಲ್ಲೇ ಅತ್ಯೆತ್ತರದ ಮತ್ತು ಅತಿ ಹಳೆಯ ಮರಗಳಿವೆ. ಕೆಲವು ಹುವೊನ್ ಪೀತದಾರು ಮರಗಳು ಸುಮಾರು 2,000 ವರ್ಷ ಹಳೆಯದಾಗಿವೆ ಎಂಬುದು ಅದ್ಭುತ ಸಂಗತಿ. ಮೌಂಟ್ ರೀಡ್ನಲ್ಲಿರುವ ಗಂಡು ಹುವೊನ್ ಪೀತದಾರು ಮರಗಳು ಸಸ್ಯಕಾಶಿಯ ಮರುಹುಟ್ಟು ವಿನ ಮೂಲಕ ಬೆಳೆದಿದ್ದು, ಸುಮಾರು 10,000 ವರ್ಷ ಹಳೆಯವು ಎಂದು ಅಂದಾಜು ಮಾಡಲಾಗಿದೆ.<ref name="DPIW">{{cite web
| url = http://www.dpiw.tas.gov.au/inter.nsf/WebPages/BHAN-5494LA?open
| title = Native Conifers of Western Tasmania
| publisher=Department of Primary Industries and Water
| date = 2007-09-20 | accessdate = 2008-01-11
}}</ref>
ಸ್ಟಿಕ್ಸ್ ಕಣಿವೆಯಲ್ಲಿ ಬೆಳೆಯುವ ಯುಕಲಿಪ್ಟಸ್ ರೆಗ್ನನ್ಸ್ ಮರಗಳು {{convert|90|m|ft}}ಕ್ಕಿಂತಲೂ ಎತ್ತರವಿದ್ದು, ಆಸ್ಟ್ರೇಲಿಯಾದಲ್ಲಿನ ಅತ್ಯೆತ್ತರದ ಮರಗಳು ಎಂದು ಪರಿಗಣಿಸಲಾಗಿವೆ. ಈ ಮರಗಳು ಇನ್ನೂ ಬೆಳೆಯುತ್ತಿರುವ ಕಾರಣ, ದೇಶದಲ್ಲಿ ಇದೀಗ ಅತ್ಯೆತ್ತರ ಮರದ ದಾಖಲೆಯನ್ನು ಮೀರಿ ಬೆಳೆಯಬಹುದೆಂಬ ಆಶಯವಿದೆ. ಆಸ್ಟ್ರೇಲಿಯಾ ದೇಶದ ವಿಕ್ಟೊರಿಯಾ ರಾಜ್ಯದ ಥೊರ್ಪ್ಡೇಲ್ನಲ್ಲಿ ಬೆಳೆಯುತ್ತಿದ್ದ ಮೌಂಟನ್ ಆಷ್ ಮರವು {{convert|112|m|ft}}ಕ್ಕಿಂತಲೂ ಎತ್ತರವಿತ್ತು. ಈ ಮರವನ್ನು 1884ರಲ್ಲಿ ಕಡಿದು ಬೀಳಿಸಲಾಯಿತು.<ref name="ISAAC">{{cite web
| url = http://isaac.org.au/info/bigtrees.htm
| title = Australia's Biggest, Tallest and Oldest Trees
| publisher = International Society of Arboriculture Australia Chapter
| year = 2004
| accessdate = 2008-01-11
| archive-date = 11 ಡಿಸೆಂಬರ್ 2007
| archive-url = https://web.archive.org/web/20071211232426/http://isaac.org.au/info/bigtrees.htm
| url-status = dead
}}</ref> ಇದೇ ವಲಯಕ್ಕೆ ಸೀಮಿತವಾಗಿರುವ ಹಾಗೂ ಸೀಮಿತ ವಲಯದಲ್ಲಿ ಹಂಚಿಹೋದ ಸಸ್ಯ ಪ್ರಭೇದಗಳು ಟ್ಯಾಸ್ಮೆನಿಯಾದಲ್ಲಿವೆ. ''ಆರ್ಚರಿಯಾ'' ಪ್ರಭೇದವು ಇದಕ್ಕೆ ಉದಾಹರಣೆ.
=== ಪ್ರಾಣಿ ಸಂಕುಲ ===
==== ಥೈಲಸೀನ್/ಟ್ಯಾಸ್ಮೆನಿಯನ್ ಹುಲಿ (ಟ್ಯಾಸ್ಮೆನಿಯನ್ ಟೈಗರ್) ====
[[ಚಿತ್ರ:Thylacinus.jpg|thumb|left|ಪ್ರಾಣಿಸಂಗ್ರಹಾಲಯದಲ್ಲಿ ಇಂದು ಅಳಿಸಿಹೋಗಿರುವ, ಬಂಧಿತ ಟ್ಯಾಸ್ಮೆನಿಯನ್ ಟೈಗರ್ಗಳು.]]
ಟ್ಯಾಸ್ಮೆನಿಯಾದಲ್ಲಿ ಥೈಲಸೀನ್ ಎಂಬ ಹೊಟ್ಟೆಚೀಲದ ಪ್ರಾಣಿಯಿತ್ತು. ಇದು ಕಾಡು ನಾಯಿಯನ್ನು ಹೋಲುತ್ತಿತ್ತು. ಅದರ ಬೆನ್ನಿನ ಮೇಲೆ ವಿಶೇಷ ಲಕ್ಷಣದ ಪಟ್ಟೆಗಳಿದ್ದ ಕಾರಣ, ಇದನ್ನು ಟ್ಯಾಸ್ಮೆನಿಯನ್ ಹುಲಿ (ಟ್ಯಾಸ್ಮೆನಿಯನ್ ಟೈಗರ್) ಎಂದು ಆಡುಮಾತಿನಲ್ಲಿ ಉಲ್ಲೇಖಿಸಲಾಗುತ್ತಿತ್ತು. ಪ್ರಾಗೈತಿಹಾಸಿಕ ಕಾಲದಲ್ಲಿ ಡಿಂಗೊ ಎಂಬ ಪ್ರಾಣಿಯೊಂದಿಗೆ ಪೈಪೋಟಿಯಾಗಿ, ಅಂತಿಮವಾಗಿ ಈ ಪ್ರಾಣಿ ಬಹಳಷ್ಟು ಮುಂಚೆಯೇ ಆಸ್ಟ್ರೇಲಿಯಾದ ಮುಖ್ಯ ಭೂಮಿಯಿಂದ ನಶಿಸಿಹೋಯಿತು. ರೈತರಿಂದ ನಿರಂತರ ಬೇಟೆಯಿಂದಾಗಿ, ಸರ್ಕಾರದ ಪ್ರೋತ್ಸಾಹಧನ ಪಡೆದ ಬೇಟೆಗಾರರು, ಹಾಗೂ ಅಂತಿಮವಾಗಿ, ವಿದೇಶದ ವಸ್ತುಪ್ರದರ್ಶನಾಲಯಕ್ಕಾಗಿ ಸಂಗ್ರಹಕಾರರ ಕಾಟಗಳಿಂದಾಗಿ ಟ್ಯಾಸ್ಮೆನಿಯಾ ಹುಲಿಯು ಬಹುಶಃ ಈ ದ್ವೀಪದಿಂದಲೂ ಅಳಿದುಹೋದಂತಿದೆ.
ಆಧುನಿಕ ಕಾಲದಲ್ಲಿ ಥೈಲಸೀನ್ ಅತಿದೊಡ್ಡ ಮಾಂಸಾಹಾರಿ ಹೊಟ್ಟೆಚೀಲದ ಪ್ರಾಣಿಯಾಗಿತ್ತು. ಹೊಟ್ಟೆಚೀಲ ಪ್ರಾಣಿಗಳ ಜಾತಿಯಲ್ಲಿ ಗಂಡು ಮತ್ತು ಹೆಣ್ಣುಗಳೆರಡೂ ಹೊಟ್ಟೆಚೀಲ ಹೊಂದಿರುವುದು ಥೈಲಸೀನ್ ಏಕೈಕ ಪ್ರಾಣಿ; ಇದಲ್ಲದೆ ನೀರಿನ ಅಪಾಸಮ್ ಸಹ ಹೊಟ್ಟೆಯ ಚೀಲ ಹೊಂದಿರುತ್ತದೆ. ಗಂಡು ಥೈಲಸೀನ್ ಹೊಟ್ಟೆಚೀಲ ಹೊಂದಿದ್ದು, ಈ ಪ್ರಾಣಿಯು ಕುರುಚಲು, ಒರಟು ಪೊದೆಗಳ ಮಧ್ಯೆ ನುಗ್ಗಿ ಓಡುವಾಗ ಚೀಲವು ರಕ್ಷಾಕವಚದಂತಾಗಿ, ಅದರ ಬಾಹ್ಯ ಜನನಾಂಗಗಳನ್ನು ರಕ್ಷಿಸುತ್ತದೆ. ಸೆರೆಯಲ್ಲಿದ್ದ ಕೊನೆಯ ಪ್ರಾಣಿಯು, ಪ್ರಾಣಿಸಂಗ್ರಹಾಲಯದಲ್ಲಿ 1936ರಲ್ಲಿ ಸತ್ತುಹೋಯಿತು. ನಂತರ, ಹಲವು ಬಾರಿ ಈ ಪ್ರಾಣಿ ಅಲ್ಲಲ್ಲಿ ಕಂಡದ್ದನ್ನು ಹಲವು ಭಾರಿ ದಾಖಲಿಸಲಾಗಿದೆ, ಆದರೆ ಯಾವುದನ್ನೂ ಖಚಿತಪಡಿಸಲಾಗಿಲ್ಲ. ಪೂರ್ತಿ ವಿಕಾಸ ಹೊಂದಿದ ಥೈಲಸೀನ್ ಸುಮಾರು {{convert|100|to|130|cm|in|abbr=on}} ಉದ್ದವಿದ್ದು, {{convert|50|to|65|cm|in|abbr=on}} ಉದ್ದದ ಬಾಲವಿತ್ತು.<ref name="PI">{{cite book|title=Tasmania's Threatened Fauna Handbook|author=Sally Bryant and Jean Jackson Threatened Species Unit, Parks and Wildlife Service, Tasmania|publisher=Bryant and Jackson|year=1999|pages=190–193|isbn= 0-7246-6223-5|url=http://www.dpiw.tas.gov.au/inter.nsf/Attachments/RLIG-5425ZR/$FILE/threatfauna.pdf|format=PDF}}</ref> ಅತಿ ದೊಡ್ಡ ಟ್ಯಾಸ್ಮೆನಿಯನ್ ಹುಲಿಯು ಮೂಗಿನ ತುದಿಯಿಂದ ಬಾಲದ ವರೆಗೂ {{convert|290|cm|ft|abbr=on}} ಉದ್ದವಿತ್ತು. ಬೆಳೆದ ಪ್ರಾಣಿಗಳು ಭುಜ ಮಟ್ಟದಲ್ಲಿ {{convert|60|cm|in|abbr=on}} ಎತ್ತರವಿದ್ದು {{convert|20|to|30|kg|lb|-1|abbr=on}} ತೂಕವಿದ್ದವು.<ref name="PI"/> ಥೈಲಸೀನ್ನಲ್ಲಿ ಸ್ವಲ್ಪ ಮಟ್ಟಗಿನ ಲೈಂಗಿಕ ದ್ವಿರೂಪತೆಯಿತ್ತು. ಗಂಡು ಥೈಲಸೀನ್ನ ಸರಾಸರಿ ಗಾತ್ರವು ಹೆಣ್ಣಿನದಕ್ಕಿಂತಲೂ ದೊಡ್ಡದಾಗಿತ್ತು.<ref name="FA">{{cite journal|journal=Ecology|date=1997-12|author=Menna Jones|title=Character displacement in Australian dasyurid carnivores: size relationships and prey size patterns|publisher=Ecological Society of America|url=http://www.findarticles.com/p/articles/mi_m2120/is_n8_v78/ai_20608534/pg_1|accessdate=27 November 2006|archive-date=21 ಮೇ 2005|archive-url=https://web.archive.org/web/20050521072228/http://www.findarticles.com/p/articles/mi_m2120/is_n8_v78/ai_20608534|url-status=dead}}</ref>
==== ಟ್ಯಾಸ್ಮೆನಿಯನ್ ಡೆವಿಲ್ ====
[[ಚಿತ್ರ:Tasdevil large.jpg|thumb|ಟ್ಯಾಸ್ಮೆನಿಯನ್ ಡೆವಿಲ್]]
ಟ್ಯಾಸ್ಮೆನಿಯನ್ ಡೆವಿಲ್ ವಿಶಿಷ್ಟವಾಗಿ ಟ್ಯಾಸ್ಮೆನಿಯಾ ದ್ವೀಪದಲ್ಲಿ ಕಾಣಸಿಗುವ, ಹೊಟ್ಟೆಚೀಲವುಳ್ಳ ಮಾಂಸಾಹಾರಿ ಪ್ರಾಣಿ. ಇದು ಸಣ್ಣ ಗಾತ್ರದ ನಾಯಿಯಷ್ಟಿದ್ದರೂ ದೃಢ ಹಾಗೂ ಸ್ನಾಯುಗಳುಳ್ಳ ಮೈಕಟ್ಟು ಹೊಂದಿದೆ. ಇದರ ಕರಿಯ ತುಪ್ಪುಳಿನಲ್ಲಿ ಬಿಳಿಯ ಮಚ್ಚೆಗಳಿವೆ. ಇದು ಕೀರಲು ಧ್ವನಿಯಲ್ಲಿ ಗುರುಗುಟ್ಟುವ, ಕೋಪಿಷ್ಠ ಸ್ವಭಾವದ ಹಾಗೂ ಕೊಳೆತ ಮಾಂಸ ತಿನ್ನುವ ಪ್ರಾಣಿ. ಯುರೋಪಿಯನ್ನರು ಇಲ್ಲಿ ವಸಾಹತು ಸ್ಥಾಪಿಸಿಕೊಂಡ ಕಾಲವನ್ನೂ ಈ ಟ್ಯಾಸ್ಮೆನಿಯನ್ ಡೆವಿಲ್ ಇತ್ತೀಚಿನ ವರೆಗೂ ಇಡೀ ದ್ವೀಪದಾದ್ಯಂತ ಸರ್ವೇಸಾಮಾನ್ಯವೆನಿಸಿತ್ತು.
ಇತರೆ ವನ್ಯಜೀವಿಗಳಂತೆಯೇ, ವೇಗವಾಗಿ ಚಲಿಸುವ ವಾಹನಗಳಿಂದ ಟ್ಯಾಸ್ಮೆನಿಯನ್ ಡೆವಿಲ್ಗಳಿಗೆ ಅಪಾಯ ಸಂಭವಿಸಿದ್ದುಂಟು. ರಸ್ತೆ ಅಪಘಾತದಲ್ಲಿ ಸತ್ತ [[ವಾಲಬಿ]]ಗಳಂತಹ ಪ್ರಾಣಿಗಳನ್ನು ತಿನ್ನುತ್ತಿದ್ದಾಗ ವಾಹನ ಢಿಕ್ಕಿ ಹೊಡೆದು ಸತ್ತುಹೋಗುವುದುಂಟು. ಟ್ಯಾಸ್ಮೆನಿಯನ್ ಡೆವಿಲ್ಗಳು ಮೂಳೆಗಳೂ ಸೇರಿಸಿ ಎಲ್ಲವನ್ನೂ ತಿನ್ನುತ್ತವೆ.
2005ರಲ್ಲಿ. ಟ್ಯಾಸ್ಮೆನಿಯಾದ ಕೆಲವು ಭಾಗಗಳಲ್ಲಿ ಟ್ಯಾಸ್ಮೆನಿಯಾ ಡೆವಿಲ್ ಸಂಖ್ಯೆಯು ಸುಮಾರು 80%ರಷ್ಟು ಕಡಿಮೆಯಾಗಿತ್ತು. ಡೆವಿಲ್ ಮುಖದ ದುರ್ಮಾಂಸ ರೋಗ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಈ ದ್ವೀಪದುದ್ದಕ್ಕೂ ಹಂತ-ಹಂತವಾಗಿ ಹರಡುತ್ತಿದೆ. ಈ ದುರ್ಮಾಂಸ ರೋಗವು ಅವುಗಳ ಬಾಯಿಯತ್ತ ಹರಡಿದಾಗ ಬಹಳಷ್ಟು ಡೆವಿಲ್ ಪ್ರಾಣಿಗಳು ಆಹಾರವಿಲ್ಲದೇ ಹೋದವು. ಸತ್ತ ಪ್ರಾಣಿಗಳ ಮಾಂಸಕ್ಕಾಗಿ ಡೆವಿಲ್ಗಳು ಕಾದಾಡುವ ಮೂಲಕ ದುರ್ಮಾಂಸ ರೋಗವು ಹರಡುವುದುಂಟು ಎಂದು ನಂಬಲಾಗಿದೆ. ಕಾದಾಡುವ ಡೆವಿಲ್ಗಳು ಪರಸ್ಪರ ಮುಖಗಳನ್ನು ಕಚ್ಚುತ್ತವೆ.
ಈ ದುರ್ಮಾಂಸ ರೋಗಕ್ಕೆ ಯಾವುದೇ ಮದ್ದು ಕಂಡುಹಿಡಿದಿಲ್ಲ. ಈ ರೋಗಕ್ಕೆ ಕಾರಣವೇನೆಂಬುದನ್ನು ನಿರ್ಣಯಿಸಲು ತೀವ್ರ ಸಂಶೋಧನೆ ನಡೆಯುತ್ತಿದೆ. ರೋಗ-ಮುಕ್ತ, ತಳೀಯ ವೈವಿಧ್ಯದ ಟ್ಯಾಸ್ಮೆನಿಯನ್ ಡೆವಿಲ್ ಆವರಣವನ್ನು ಟ್ಯಾಸ್ಮೆನಿಯಾದ ಆಚೆ ಸ್ಥಾಪಿಸಿ, ಟ್ಯಾಸ್ಮೆನಿಯನ್ ಸರ್ಕಾರವು ಈ ತಳಿಯ ಪ್ರಾಣಿಗಳನ್ನು ಬೆಳೆಸುವ ಯೋಜನೆ ಹಮ್ಮಿಕೊಂಡಿದೆ. ಇದು ಇದುವರೆಗೂ ಯಶಸ್ವಿಯಾಗಿದೆ.
==== ಪಕ್ಷಿಗಳು ====
[[ಚಿತ್ರ:Gallinula mortierii 1.jpg|thumb|left|ಟ್ಯಾಸ್ಮೆನಿಯನ್ ಸ್ಥಳೀಯ ಕೋಳಿ]]
{{Main|List of birds of Tasmania}}
ಆಸ್ಟ್ರೇಲಿಯಾದ ಮುಖ್ಯ ಭೂಮಿ ಮತ್ತು ಸುತ್ತಮುತ್ತಲ ಸಾಗರಗಳಲ್ಲಿರುವ ಹಲವು ಹಕ್ಕಿಗಳು ಟ್ಯಾಸ್ಮೆನಿಯಾದಲ್ಲೂ ಕಾಣಸಿಗುತ್ತವೆ. ಟ್ಯಾಸ್ಮೆನಿಯಾದಲ್ಲಿ 12 ಸ್ಥಳೀಯ ಹಕ್ಕಿ [[ಜಾತಿ]]ಗಳಿವೆ:
* 4 ಜೇನುಭಕ್ಷಕಗಳು (ಮೆಲಿಫ್ಯಾಜಿಡೆ (Meliphagidae)) - ಹಳದಿಯ ತಡಿಕೆಹಕ್ಕಿ (ವಿಶ್ವದಲ್ಲೇ ಅತಿ ದೊಡ್ಡ ಜೇನುಭಕ್ಷಕ ಹಕ್ಕಿ) ಹಾಗೂ ಹಳದಿ ಕುತ್ತಿಗೆಯ, ಕಪ್ಪುತಲೆಯ ಹಾಗೂ ದೃಢ ಕೊಕ್ಕಿನ ಜೇನುಭಕ್ಷಕಗಳು
* 3 ಆಸ್ಟ್ರೆಲೊ-ಪಪುವನ್ ವಾರ್ಬ್ಲರ್ಗಳು (ಅಕ್ಯಾಂತಿಜಿಡೆ (Acanthizidae) ಕುಟುಂಬ) - ಟ್ಯಾಸ್ಮೆನಿಯನ್ ಥಾರ್ನ್ಬಿಲ್, ಸ್ಕ್ರಬ್ಟಿಟ್ ಹಾಗೂ ಟ್ಯಾಸ್ಮೆನಿಯನ್ ಸ್ಕ್ರಬ್ರೆನ್
* 1 ಪರ್ಡಲೊಟ್ (ಪರ್ಡಲೊಟಿಡೆ (Pardalotidae) ಕುಟುಂಬ) - ಅಳಿವಿನ ಅಪಾಯದಲ್ಲಿರುವ ನಲವತ್ತು-ಚುಕ್ಕೆಗಳುಳ್ಳ ಪರ್ಡಲೊಟ್
* 1 ಓಲ್ಡ್-ವರ್ಲ್ಡ್ ಫ್ಲೈಕ್ಯಾಚರ್ (ನೊಣ ಭಕ್ಷಕ ಹಕ್ಕಿ) (ಮಸ್ಕಿಕ್ಯಾಪಿಡೆ (Muscicapidae) ಕುಟುಂಬ) - ಮಬ್ಬು ಬಣ್ಣದ ಕೆಂಪೆದೆಯ ಹಕ್ಕಿ
* 1 ಕೊರ್ವಿಡ್ (ಅರ್ಟಮಿಡೇ (Artamidae) ಕುಟುಂಬ) - ಬ್ಲ್ಯಾಕ್ ಕರವಾಂಗ್
* 1 ಗಿಣಿ (ಸಿಟೆಸಿಡೆ (Psittacidae) ಕುಟುಂಬ) - ಗ್ರೀನ್ ರೊಸೆಲಾ
* 1 ರೇಲ್ (ರೆಲಿಡೇ (Rallidae) ಕುಟುಂಬ) - ಟ್ಯಾಸ್ಮೆನಿಯನ್ ಸ್ಥಳೀಯ ಕೋಳಿ, ಆಸ್ಟ್ರೇಲಿಯಾದ ಏಕೈಕ ರೆಕ್ಕೆಯಿಲ್ಲದ ನೆಲ ಹಕ್ಕಿ (ಹಾರಲಾಗದ ಪಕ್ಷಿಗಳಾದ ([[ಎಮು]] ಮತ್ತು ದಕ್ಷಿಣ ಕ್ಯಾಸೊವರಿ ಹೊರತುಪಡಿಸಿ).
ಸ್ಥಳೀಯ ಟ್ಯಾಸ್ಮೆನಿಯನ್ ಎಮು 19ನೆಯ ಶತಮಾನದ ಮಧ್ಯದಲ್ಲಿ ಅಳಿದುಹೋಯಿತು. ಟ್ಯಾಸ್ಮೆನಿಯನ್ ಬೆಣೆ-ಬಾಲದ ಹದ್ದು ಸಹ ಅಳಿವಿನ ಅಪಾಯ ಎದುರಿಸುತ್ತಿರುವ ಉಪಜಾತಿ.
==== ಕಪ್ಪೆಗಳು ====
{{Main|List of amphibians of Tasmania}}
[[ಚಿತ್ರ:Brown Tree Frog 2.jpg|thumb|ಟ್ಯಾಸ್ಮೆನಿಯಾದಲ್ಲಿ ಕಂದುಬಣ್ಣದ ಮರಗಪ್ಪೆ.]]
ಕಪ್ಪೆಯ ಹನ್ನೊಂದು ಜಾತಿಗಳು ಟ್ಯಾಸ್ಮೆನಿಯಾದಲ್ಲಿವೆ. ಇವುಗಳಲ್ಲಿ ಮೂರು ಕೇವಲ ಟ್ಯಾಸ್ಮೆನಿಯಾದಲ್ಲಿ ಮಾತ್ರ ಕಾಣಸಿಗುತ್ತವೆ - ಟ್ಯಾಸ್ಮೆನಿಯನ್ ಮರಗಪ್ಪೆ (''ಲಿಟೊರಿಯಾ ಬರೊಸೆ (Litoria burrowsae)'', ಟ್ಯಾಸ್ಮೆನಿಯನ್ ಸಣ್ಣ ಕಪ್ಪೆ (''ಕ್ರಿನಿಯಾ ಟ್ಯಾಸ್ಮೆನಿಯೆನ್ಸಿಸ್ (Crinia tasmaniensis)'' ) ಹಾಗೂ ಇತ್ತೀಚೆಗೆ ಪತ್ತೆಯಾದ ಮಾಸ್ ಸಣ್ಣ ಕಪ್ಪೆ (''ಬ್ರಯೊಬ್ಯಾಟ್ರೆಕಸ್ ನಿಂಬಸ್ (Bryobatrachus nimbus)'' ). ಟ್ಯಾಸ್ಮೆನಿಯಾದಲ್ಲಿರುವ 11 ಜಾತಿಗಳಲ್ಲಿ ಎಲ್ಲವೂ ಸಹ ಆಸ್ಟ್ರೇಲಿಯಾ ಮೂಲದ್ದಾಗಿವೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರಸವಿಸುವ, ಅಳಿವಿನ ಅಪಾಯಕ್ಕೆ ಸಿಲುಕಬಹುದಾದ, ಗುರುಗುಟ್ಟುವ ಹುಲ್ಲು ಕಪ್ಪೆ (''ಲಿಟೊರಿಯಾ ರಾನಿಫಾರ್ಮಿಸ್ (Litoria raniformis)'' ) ಟ್ಯಾಸ್ಮೇನಿಯಾ ಮೂಲದ್ದಾಗಿದೆ. ಇದರ ವಾಸಶ್ರೇಣಿಯು ಕಡಿಮೆಯಾಗುತ್ತಲಿದೆ.
==== ಯುರೋಪಿಯನ್ ಕೆಂಪುನರಿ ====
ಯುರೋಪಿಯನ್ ಕೆಂಪು ನರಿಯನ್ನು ಅಳಿಸಿಹಾಕಲೆಂದು, ಟ್ಯಾಸ್ಮೆನಿಯಾ ಸರ್ಕಾರವು 2001ರ ಜೂನ್ 20ರಂದು ನರಿ ನಿರ್ಮೂಲನಾ ವಿಭಾಗ ಎಂಬ ಕಾರ್ಯಪಡೆಯನ್ನು ಸಂಘಟಿಸಿತು. ಈ ನರಿಯನ್ನು ಅಳಿಸಿಹಾಕುವ ಅಭಿಯಾನಕ್ಕಾಗಿ ಅಧಿಕಾರಿಗಳು ಸುಮಾರು 50 ದಶಲಕ್ಷ ಆಸ್ಟ್ರೇಲಿಯನ್ ಡಾಲರ್ ವೆಚ್ಚ ಮಾಡುವ ಯೋಜನೆ ಹೊತ್ತಿದ್ದರು. ಆವತ್ತಿನಿಂದ ಕೆಲ ಪ್ರಮಾಣದಲ್ಲಿ ಇದನ್ನು ಕಡಿಮೆ ಮಾಡಲಾಗಿದೆ. ಟ್ಯಾಸ್ಮೆನಿಯಾದಲ್ಲಿ ಯಾವುದೇ ನರಿಯನ್ನು ಹಿಡಿದಿಲ್ಲ, ವಿಷ ನೀಡಿಲ್ಲ ಅಥವಾ ಖಚಿತ ಪಡಿಸಲು ಛಾಯಾಚಿತ್ರಣ ಮಾಡಿಲ್ಲ. ಆದರೂ ನಾಲ್ಕು ನರಿಗಳ ಮೃತ ದೇಹಗಳ ಪತ್ತೆಯಾಗಿವೆ. ಇವುಗಳಲ್ಲಿ, ಒಂದನ್ನು ಗುಂಡಿಕ್ಕಿ ಕೊಲ್ಲಲಾಯಿತು, ಇನ್ನು ಮೂರು ರಸ್ತೆ ಅಪಘಾತದಲ್ಲಿ ಸತ್ತವು ಎನ್ನಲಾಗಿದೆ. ನರಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿರುವುದು, ಕಡಿಮೆ ಸಾಂದ್ರತೆ ಮತ್ತು ವಿಷಪ್ರಾಶನದ ಮೂಲಕ ನರಿಗಳನ್ನು ಕೊಲ್ಲುವ ಅಭಿಯಾನದಿಂದಾಗಿ ನರಿಗಳಿವೆ ಎಂಬ ಮಾತನ್ನು ಸುಳ್ಳು ಎನ್ನುವವರು ಬಹಳಷ್ಟಿದ್ದಾರೆ. ಟ್ಯಾಸ್ಮೆನಿಯಾದಲ್ಲಿ ನರಿಗಳ ಸಂಖ್ಯೆ ಹೇರಳವಾಗಿದ್ದಲ್ಲಿ, ಸ್ಥಳೀಯ ಪ್ರಾಣಿಗಳು, ಪಶುಸಂಪತ್ತು, ನೆಲದ ಮೇಲೆ ಗೂಡು ಕಟ್ಟುವ ಹಕ್ಕಿಗಳು ಮತ್ತು ಸ್ಥಳೀಯ ದಂಶಕ ಪ್ರಾಣಿಗಳನ್ನು ಕೊಂದು ತಿನ್ನಬಹುದು. ಆಸ್ಟ್ರೇಲಿಯಾದ ಮುಖ್ಯ ಭೂಮಿಯಲ್ಲಿ ನರಿಗಳ ಸಂಖ್ಯೆಯು 30 ದಶಲಕ್ಷಕ್ಕಿಂತಲೂ ಕಡಿಮೆಯಿದೆ. ಹಿಂದೆ ಈ ನರಿಗಳನ್ನು ಯುರೋಪಿಯನ್ ವಸಾಹತುದಾರರು ಪರಿಚಯಿಸಿದ್ದರು.<ref>ಮರ್ಸರ್, ಫಿಲ್ (24 ಸೆಪ್ಟೆಂಬರ್ 2007) [http://news.bbc.co.uk/2/hi/asia-pacific/7009798.stm 'ಫಾಕ್ಸ್ ಇನ್ವೇಷನ್ ಫಿಯರ್ ಗ್ರಿಪ್ಸ್ ಟ್ಯಾಸ್ಮೆನಿಯಾ'], ಬಿಬಿಸಿ ನ್ಯೂಸ್</ref>
ಬಿಳಿಯರು ವಸಾಹತು ಸ್ಥಾಪಿಸಿದಾಗಿಂದಲೂ ಸುಮಾರು 28 ಸ್ಥಳೀಯ ಸಸ್ತನಿ ಜಾತಿಗಳು ಅಥವಾ ಉಪಜಾತಿಗಳು ಆಸ್ಟ್ರೇಲಿಯನ್ ಮುಖ್ಯ ಭೂಮಿಯಿಂದ ಅಳಿದುಹೋಗಿವೆ. ಇಡೀ ವಿಶ್ವದಲ್ಲೇ ಖಂಡೀಯ ಅಳಿಯುವಿಕೆಯ ಅಪಾರ ಪ್ರಮಾಣ ಎನ್ನಲಾಗಿದೆ. ಇದಕ್ಕೆ ಕೆಂಪು ನರಿಗಳೇ ಕಾರಣ ಎನ್ನಲಾಗಿದೆ. ಆಸ್ಟ್ರೇಲಿಯಾದ ಮುಖ್ಯ ಭೂಮಿಯಲ್ಲಿ ಬಹುಶಃ ಅಳಿದುಹೋಗಿರುವ, ಆದರೆ ಟ್ಯಾಸ್ಮೆನಿಯಾದಲ್ಲಿ ಇನ್ನೂ ಸಾಮಾನ್ಯವಾಗಿರುವ ಪ್ರಾಣಿಗಳಲ್ಲಿ ಪಟ್ಟೆಯುಳ್ಳ ಪೂರ್ವ ಮೂಷಕ, ಪೂರ್ವ ಕ್ವೊಲ್ ಹಾಗೂ ಟ್ಯಾಸ್ಮೆನಿಯನ್ ಪಡಮೆಲನ್ (ಥೈಲೊಗೆಲ್ ಬಿಲರ್ಡಿಯರಿ (Thylogale billardierii)) ಸೇರಿವೆ. ಮೇಲ್ಮನೆಯ ಸದಸ್ಯ ಹಾಗೂ ವಿಂಡರ್ಮರ್ ವಿಧಾನ ಪರಿಷತ್ ಸದಸ್ಯ ಐವಾನ್ ಡೀನ್ ಎಂಎಲ್ಸಿ ಈ ನರಿ ಯೋಜನೆಯನ್ನು ಕಟುವಾಗಿ ಟೀಕಿಸಿದ್ದಾರೆ. ಟ್ಯಾಸ್ಮೆನಿಯನ್ ಡಿ.ಪಿ.ಐ.ಪಿ.ಡಬ್ಲ್ಯೂ.ಇ.ಯ ನರಿ ನಿರ್ಮೂಲನಾ ವಿಭಾಗಕ್ಕಾಗಿ ಕಂದಾಯದಾರರ ಹಣ ಬೆಂಬಲ ದೊರಕಲೆಂದು ಕೊಂದ ನರಿಗಳ ಸಾಕ್ಷ್ಯ ಬಳಸುವ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದರು. ಟ್ಯಾಸ್ಮೆನಿಯಾದೊಳಗೆ ನರಿಗಳ ಆಮದು ಮತ್ತು ಸ್ಥಳೀಯ ಕಾಡುಗಳಲ್ಲಿ ನರಿಗಳ ಪರಿಚಯದ ವಿಚಾರದಲ್ಲಿ ಟ್ಯಾಸ್ಮೆನಿಯನ್ ಪೊಲೀಸ್ ಮುಖ್ಯಸ್ಥ ಡೀನ್ ನೇತೃತ್ವದಲ್ಲಿ ಪೊಲೀಸ್ ತನಿಖೆ ನಡೆಸಲಾಯಿತು. ಈ ತನಿಖೆಯಲ್ಲಿ ಯಾವುದೇ ಕಾನೂನು-ಬಾಹಿರ ಆಮುದು ಪತ್ತೆಯಾಗಲಿಲ್ಲ. ಆನಂತರ, 2007ರ ಏಪ್ರಿಲ್ 17ರಂದು ಟ್ಯಾಸ್ಮೆನಿಯನ್ ಸಂಸತ್ನಲ್ಲಿ ಅವರು ಟ್ಯಾಸ್ಮೆನಿಯನ್ ನರಿಗಳ ವಿಚಾರವನ್ನು ಪ್ರಸ್ತಾಪಿಸಿದರು.<ref>ಟ್ಯಾಸ್ಮೆನಿಯನ್ ಪಾರ್ಲಿಯಮೆಂಟ್ ಲೆಜಿಸ್ಲೆಟಿವ್ ಕೌನ್ಸಿಲ್ ಪಾರ್ಟ್ 1 - ಪುಟಗಳು 1-61 [http://www.parliament.tas.gov.au/HansardCouncil/isysquery/6e425fd6-097e-41a1-8b0a-704e58a0e88d/16/doc/ ಹ್ಯಾನ್ಸಾರ್ಟ್ 17 ಏಪ್ರಿಲ್ 2007]{{Dead link|date=August 2010}}
</ref> ನಾಲ್ಕು ನರಿಗಲ ಮೃತದೇಹಗಳ ಜೊತೆಗೆ, ಸ್ವತಂತ್ರವಾಗಿ ಪರೀಕ್ಷಿಸಲಾದ 40ಕ್ಕೂ ಹೆಚ್ಚು ನರಿ-ಡಿಎನ್ಎ ಸ್ಕ್ಯಾಟ್ಗಳು ಟ್ಯಾಸ್ಮೆನಿಯಾದಾದ್ಯಂತ ಪತ್ತೆಯಾದವು. ಸರ್ಕಾರದ ಪರಿಶೀಲನೆಯ ನಂತರ, ಟ್ಯಾಸ್ಮೆನಿಯಾದಲ್ಲಿ ನರಿಗಳಿರುವುದು ಖಚಿತವಾಗಿದೆ.<ref>{{cite news|url=http://www.abc.net.au/news/stories/2009/12/24/2780292.htm |title=Foxes officially confirmed in Tasmania |publisher=Australian Broadcasting Corporation |date=2009-12-24 |accessdate=2010-04-02}}</ref> ಕಾಮನ್ವೆಲ್ತ್ನಿಂದ ಧನಸಹಾಯ ಪಡೆಯಲು ಇವೆಲ್ಲ ಸೃಷ್ಟಿಸಲಾದ ಸಾಕ್ಷ್ಯ ಎಂಬ ಆರೋಪಗಳ ತನಿಖೆ ನಡೆಯಬೇಕು ಎಂದು ಡಾ. ಡೇವಿಡ್ ಒಬೆಂಡಾರ್ಫ್ ಸೇರಿದಂತೆ ಪ್ರಮುಖ ಟ್ಯಾಸ್ಮೆನಿಯನ್ನರು {{Who|date=January 2010}} ಆಗ್ರಹಪಡಿಸಿದ್ದಾರೆ.<ref>{{cite news|url=http://tasmaniantimes.com/index.php/article/the-federal-police-should-be-asked-to-investigate |title=The Federal Police should be asked to investigate |publisher=Tasmanian Times |date= |accessdate=2010-04-02}}</ref>
== ಸರ್ಕಾರ ==
{{Main|Government of Tasmania}}
{{See also|Local Government Areas of Tasmania}}
ಟ್ಯಾಸ್ಮೆನಿಯಾ ಸರ್ಕಾರದ ರಚನೆಯನ್ನು ಅದರ ಸಂವಿಧಾನದಲ್ಲಿ ನಿರ್ಣಯಿಸಲಾಗಿದೆ. ಇದನ್ನು ಮೊದಲ ಬಾರಿಗೆ 1856ರಲ್ಲಿ ರಚಿಸಲಾಗಿದ್ದರೂ, ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ. 1901ರಿಂದ, ಟ್ಯಾಸ್ಮೆನಿಯಾ ಆಸ್ಟ್ರೇಲಿಯಾ ಕಾಮನ್ವೆಲ್ತ್ನ ರಾಜ್ಯವಾಗಿದೆ. ಆಸ್ಟ್ರೇಲಿಯನ್ ಸಂವಿಧಾನವು ಕಾಮನ್ವೆಲ್ತ್ನೊಂದಿಗೆ ಇದರ ಸಂಬಂಧವನ್ನು ನಿರ್ವಹಿಸಿ, ನಿಯಂತ್ರಿಸಿ, ಸರ್ಕಾರದ ಯಾವ ಮಟ್ಟವು ಯಾವ ಮಟ್ಟದ ಅಧಿಕಾರವನ್ನು ಪಡೆಯಬಲ್ಲವು ಎಂಬುದನ್ನು ನಿರ್ಣಯಿಸುತ್ತದೆ.
== ರಾಜಕೀಯ ==
{{Main|List of Governors of Tasmania|l1=Governors of Tasmania|Parliament of Tasmania}}
ಟ್ಯಾಸ್ಮೆನಿಯಾ ಆಸ್ಟ್ರೇಲಿಯನ್ ಸಂಯುಕ್ತತೆಯಲ್ಲಿ ಒಂದು ರಾಜ್ಯ. ಆಸ್ಟ್ರೇಲಿಯಾ ಸಂವಿಧಾನವು ಆಸ್ಟ್ರೇಲಿಯಾ ಒಕ್ಕೂಟ ಸರ್ಕಾರ ಮತ್ತು ಸಂಸತ್ನೊಂದಿಗಿನ ಸಂಬಂಧದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇತರೆ ರಾಜ್ಯಗಳಂತೆ, ಸೆನೇಟ್ನಲ್ಲಿ ಟ್ಯಾಸ್ಮೆನಿಯಾದಿಂದಲೂ ಸಹ 12 ಮಂದಿ ಸೆನೇಟ್ ಸದಸ್ಯರು ಪ್ರತಿನಿಧಿಸುವರು. ಇದು ಇತರೆ ರಾಜ್ಯಗಳೊಂದಿಗೆ ಸಮಾನ ಪ್ರತಿನಿಧಿತ್ವ ದೊರಕಿಸುತ್ತದೆ. ಸಂವಿಧಾನದಲ್ಲಿ ಸೂಚಿಸಿದಂತೆ, ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ನಲ್ಲಿ, ಟ್ಯಾಸ್ಮೆನಿಯಾಗೆ ಕನಿಷ್ಠ ಪಕ್ಷ ಐದು ಜನ ಪ್ರತಿನಿಧಿಗಳು ಆರಿಸಿ ಬರಬಹುದು. ಪ್ರತಿ ರಾಜ್ಯಕ್ಕೂ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ ಸ್ಥಾನಗಳನ್ನು ಜನಸಂಖ್ಯೆಯನ್ನಾಧರಿಸಿ ನಿರ್ಣಯಿಸಲಾಗುತ್ತದೆ. ಈ ಆಧಾರವನ್ನು ಮಾತ್ರ ಪರಿಗಣಿಸಿದಲ್ಲಿ ಟ್ಯಾಸ್ಮೆನಿಯಾ ಐದು ಸ್ಥಾನಗಳಿಗೆ ಅರ್ಹತೆ ಪಡಯುತ್ತಿರಲಿಲ್ಲ.
ಟ್ಯಾಸ್ಮೆನಿಯಾದ ಹೌಸ್ ಆಫ್ ಅಸೆಂಬ್ಲಿ ಮತ್ತು ಸ್ಥಳೀಯ ಸರ್ಕಾರ ಚುನಾವಣೆಗಳಲ್ಲಿ ಹೇರ್-ಕ್ಲಾರ್ಕ್ ಎಂಬ ಒಂದಕ್ಕಿಂತಲೂ ಹೆಚ್ಚು ಸ್ಥಾನಗಳ ಸಮಾನಾಂತರದ ಪ್ರತಿನಿಧಿತ್ವ ವ್ಯವಸ್ಥೆ ಹೊಂದಿದೆ.
{| class="toccolours" cellpadding="0" cellspacing="0" style="float:right;margin-right:.5em;margin-top:.4em;margin-left:0.5em;font-size:90%"
|-
! colspan="3" style="background:#cef;text-align:center"| ಟ್ಯಾಸ್ಮೆನಿಯಾ ಸಂಸತ್ತಿನ ರಚನೆ
|- style="background:#ccc;vertical-align:top"
!ರಾಜಕೀಯ<br />ಪಕ್ಷ
!ಹೌಸ್ ಆಫ್<br />ಅಸೆಂಬ್ಲಿ (ಸಭೆ)
!ಶಾಸನಾಧಿಕಾರದ<br />ಪರಿಷತ್
|-
| style="text-align:center;background:#f66"|ಎಎಲ್ಪಿ
| style="text-align:center"|10
| style="text-align:center"|3
|-
| style="text-align:center;background:#00bfff"|ಲಿಬರಲ್
| style="text-align:center"|10
| style="text-align:center"|1
|-
| style="text-align:center;background:#90ee90"|ಗ್ರೀನ್ಸ್
| style="text-align:center"|5
| style="text-align:center"|0
|-
| style="text-align:center;background:#ccf"|ಇಂಡಿಪೆಂಡೆಂಟ್
| style="text-align:center"|0
| style="text-align:center"|11
|-
| colspan="3" style="font-size:80%;background:#cef;text-align:center"| ಮೂಲ: ಟ್ಯಾಸ್ಮೆನಿಯನ್ ಮತದಾನ ಆಯೋಗ
|}
2002ರ ಇಸವಿಯ ರಾಜ್ಯ ಚುನಾವಣೆಯಲ್ಲಿ, ಲೇಬರ್ ಪಾರ್ಟಿ 25 ಸ್ಥಾನಗಳ ಪೈಕಿ 14ರಲ್ಲಿ ಜಯಗಳಿಸಿತು. ಲಿಬರಲ್ ಪಾರ್ಟಿಯ ಮತ ಶೇಕಡಾವಾರು ಬಹಳಷ್ಟು ಕಡಿಮೆಯಾಯಿತು, ಸಂಸತ್ನಲ್ಲಿ ಈ ಪಕ್ಷದ ಪ್ರಾತಿನಿಧಿತ್ವ ಕೇವಲ ಏಳು ಸ್ಥಾನಗಳಿಗೆ ಇಳಿದಿತ್ತು. ಗ್ರೀನ್ಸ್ ಪಕ್ಷವು ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿತು, ಮತಗಳಲ್ಲಿ ಸುಮಾರು 18%ಕ್ಕಿಂತಲೂ ಹೆಚ್ಚು ಪಾಲು ಈ ಪಕ್ಷಕ್ಕೆ ಲಭಿಸಿತು. ವಿಶ್ವದಾದ್ಯಂತ, ಸಂಸತ್ನಲ್ಲಿ ಹಸಿರು-ಸಮರ್ಥಕ ಪಕ್ಷಗಳಲ್ಲಿ ಈ ಪಕ್ಷದ್ದೇ ಅತಿ ಹೆಚ್ಚು ಶೇಕಡಾವಾರು.
[[ಚಿತ್ರ:CG-ParliamentHouseHobart.jpg|thumb|right|300px|ಹೋಬಾರ್ಟ್ನಲ್ಲಿರುವ ಸಂಸತ್ ಭವನ.]]
2004ರ ಫೆಬ್ರವರಿ 23ರಂದು, ಶ್ವಾಸ ಕೋಶದ ಅರ್ಬುದ ರೋಗ ಪೀಡಿತ ಟ್ಯಾಸ್ಮೆನಿಯಾ ಪ್ರಧಾನಿ ಜಿಮ್ ಬ್ಯಾಕನ್ ತಮ್ಮ ನಿವೃತ್ತಿ ಘೋಷಿಸಿದರು. ತಮ್ಮ ಕೊನೆಯ ದಿನಗಳಲ್ಲಿ ಅವರು ಧೂಮಪಾನ ವಿರೋಧಿ ಆಂದೋಲನಗಳನ್ನು ಆರಂಭಿಸಿದರು. ಇದರಂತೆ, ಪಬ್ಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರ ಮೇಲೆ ನಿಷೇಧ ಹೇರಲಾಯಿತು. ನಾಲ್ಕು ತಿಂಗಳ ನಂತರ ಅವರು ನಿಧನರಾದರು.
ಪಾಲ್ ಲೆನನ್ ಬ್ಯಾಕನ್ರ ಉತ್ತರಾಧಿಕಾರಿಯಾದರು. ಎರಡು ವರ್ಷಗಳ ಕಾಲ ರಾಜ್ಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಂತರ, 2006ರ ರಾಜ್ಯ ಚುನಾವಣೆಗಳಲ್ಲಿ ತಮ್ಮ ಸಾಮರ್ಥ್ಯದ ಮೇಲೆಯೇ ಜಯಗಳಿಸಿದರು. 2008ರಲ್ಲಿ ಲೆನನ್ ರಾಜೀನಾಮೆ ನೀಡಿದ ನಂತರ ಡೇವಿಡ್ ಬಾರ್ಟ್ಲೆಟ್ ಉತ್ತರಾಧಿಕಾರಿಯಾದರು.
ಟ್ಯಾಸ್ಮೆನಿಯಾದಲ್ಲಿ ಯಾವುದೇ ಹಾನಿಯಾಗಿರದ, ಪರಿಸರ ಮೌಲ್ಯವಿರುವ ಪ್ರದೇಶಗಳಿವೆ. ಆದ್ದರಿಂದ, ಸ್ಥಳೀಯ ಅರ್ಥಿಕ ಅಭಿವೃದ್ಧಿ ಪ್ರಸ್ತಾಪಗಳಿಗೆ ಕಟ್ಟುನಿಟ್ಟಾದ ಪರಿಸರ ಷರತ್ತುಗಳನ್ನು ವಿಧಿಸಲಾಗಿದೆ ಅಥವಾ ಈ ಅಭಿವೃದ್ಧಿ ಪ್ರಸ್ತಾಪಗಳು ಪ್ರಬಲ ವಿರೋಧ ಎದುರಿಸುತ್ತಿವೆ. ಇನ್ನೂ ವಿಶಿಷ್ಟವಾಗಿ, 20ನೆಯ ಶತಮಾನದ ಅಪರಾರ್ಧದಲ್ಲಿ ಜಲವಿದ್ಯುತ್ ಉತ್ಪಾದನೆಯ ಪ್ರಸ್ತಾಪಗಳು ವಿವಾದಗ್ರಸ್ತವಾದವು. 1970ರ ದಶಕದ ಕಾಲಾವಧಿಯಲ್ಲಿ, ಪೆಡ್ಡರ್ ಕೆರೆಯ ಅಣೆಕಟ್ಟು ನಿರ್ಮಾಣಕ್ಕೆ ವಿರೋಧದಿಂದಾಗಿ, ಯುನೈಟೆಡ್ ಟ್ಯಾಸ್ಮೆನಿಯಾ ಗ್ರೂಪ್ ಎಂಬ ವಿಶ್ವದಲ್ಲೇ ಮೊಟ್ಟಮೊದಲ ಹಸಿರು-ಸಮರ್ಥಕ ಪಕ್ಷದ ಸಂಘಟನೆಯಾಯಿತು.<ref>{{cite web
|url=http://www.utas.edu.au/library/companion_to_tasmanian_history/L/Lake%20Pedder.htm
|title=Lake Pedder
|accessdate=2010-03-06
|last=Davies
|first=Lynn
|year=2006 |work=
|publisher=Centre for Tasmanian Historical Studies
}}</ref>
ಫ್ರ್ಯಾಂಕ್ಲಿನ್ ನದಿ ಅಣೆಕಟ್ಟು ವಿಚಾರವಾಗಿ, 1980ರ ದಶಕದ ಪೂರ್ವಾರ್ಧದಲ್ಲಿ ರಾಜ್ಯಾದ್ಯಂತ ಗಹನ ಚರ್ಚೆ ನಡೆಯಿತು. ಟ್ಯಾಸ್ಮೆನಿಯಾದ ಆಚೆ ಹಲವು ಆಸ್ಟ್ರೇಲಿಯನ್ನರು ಅಣೆಕಟ್ಟು ವಿರೋಧಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದರ ಫಲವಾಗಿ, 1983ರಲ್ಲಿ ಬಾಬ್ ಹಾಕ್ ಮುಂದಾಳುತ್ವದ ಲೇಬರ್ ಸರ್ಕಾರ ಅಧಿಕಾರಕ್ಕೆ ಬಂದು, ಅಣೆಕಟ್ಟಿನ ನಿರ್ಮಾಣವನ್ನು ರದ್ದುಗೊಳಿಸಿತು. 1980ರ ದಶಕದಿಂದಲೂ, ಹಳೆಯ ಬೆಳವಣಿಗೆಗಳ ದಾಖಲೆಯತ್ತ ಪರಿಸರದ ಗಮನವು ಕೇಂದ್ರೀಕೃತವಾಗಿತ್ತು. ಇದು ಬಹಳಷ್ಟು ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಹಳೆಯ ಕಾಡುಗಳಲ್ಲಿ ಮರಗಳನ್ನು ಕಡಿಯದೆ, ಅವುಗಳನ್ನು ಕಟ್ಟುನಿಟ್ಟಾಗಿ ಸಂರಕ್ಷಿಸಬೇಕೆಂದು
ಟ್ಯಾಸ್ಮೆನಿಯಾ ಟುಗೆದರ್ ಸಂಘಟನೆಯು 2003ರ ಜನವರಿಯಲ್ಲಿ ಶಿಫಾರಸು ಮಾಡಿತು.
== ಜನಸಂಖ್ಯಾ ವಿವರಣೆ ==
ಟ್ಯಾಸ್ಮೆನಿಯಾದ ನಿವಾಸಿಗಳಲ್ಲಿ ಬಹಳಷ್ಟು ಜನರು ಬ್ರಿಟಿಷ್ ಮೂಲದವರಾಗಿದ್ದಾರೆ.<ref>"[http://www.britannica.com/EBchecked/topic/583912/Tasmania ಟ್ಯಾಸ್ಮೆನಿಯಾ (ಐಲೆಂಡ್ ಅಂಡ್ ಸ್ಟೇಟ್, ಆಸ್ಟ್ರೇಲಿಯಾ)]". ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಆನ್ಲೈನ್. ''''</ref> 2008ರಲ್ಲಿ, ಆಸ್ಟ್ರೇಲಿಯಾದಲ್ಲಿನ ಮಹಿಳೆಯರಲ್ಲಿ ಸಂಪೂರ್ಣ ಗರ್ಭಧಾರಣೆ ಕ್ಷಮತೆ ಹೊಂದಿದ ಏಕೈಕ ರಾಜ್ಯ ಟ್ಯಾಸ್ಮೆನಿಯಾ. ಟ್ಯಾಸ್ಮೆನಿಯನ್ ಮಹಿಳೆಯರಲ್ಲಿ ಪ್ರತಿಯೊಬ್ಬರಿಗೂ ಸರಾಸರಿ 2.24ರಷ್ಟು ಮಕ್ಕಳಿದ್ದರು.<ref>{{cite news|url=http://news.theage.com.au/national/australia-had-baby-boom-in-2007-abs-20081028-5ag2.html |title=Australia had baby boom in 2007: ABS |work=The Age |location=Australia |date= |accessdate=2010-04-02}}</ref>
1975ರ ನಂತರ ಇದು ದಾಖಲಾದ ಅತಿ ಹೆಚ್ಚು ಸಂಪೂರ್ಣ ಗರ್ಭಧಾರಣೆಯ ಕ್ಷಮತೆ ಪ್ರಮಾಣ (ಟಿಎಫ್ಆರ್) ಆಗಿದೆ.<ref>{{cite web|url=http://www.abs.gov.au/ausstats/abs@.nsf/mf/3301.0?OpenDocument |title=3301.0 - Births, Australia, 2008 |publisher=ABS |date=2010-01-19 |accessdate=2010-04-02}}</ref><ref>{{cite news|last=Vaughan |first=Joanna |url=http://www.theaustralian.com.au/news/breaking-news/highest-birth-rate-in-38-years/story-fn3dxiwe-1225796497889 |title=Highest birth rate in 38 years |work=The Australian |date=2009-11-11 |accessdate=2010-04-02}}</ref>
== ಆರ್ಥಿಕ ಸ್ಥಿತಿ ==
[[ಚಿತ್ರ:WesternTasmania1865.jpg|thumb|250px|ನೈಸರ್ಗಿಕ ಸಂಪನ್ಮೂಲಗಳನ್ನು ತೋರಿಸುತ್ತಿರುವ ಪಶ್ಚಿಮ ಟ್ಯಾಸ್ಮೆನಿಯಾದ 1865ರ ಇಸವಿಯ ನಕ್ಷೆ]]
{{Unreferenced section|date=June 2008}}
ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ವಸಾಹತುದಾರರಿಗೆ ಟ್ಯಾಸ್ಮೆನಿಯಾದ ಏರುಪೇರಾದ ಆರ್ಥಿಕ ಸ್ಥಿತಿಯ ಮೊದಲ ಅನುಭವವಾಯಿತು.{{Citation needed|date=May 2008}} ಹಲವು ವರ್ಷಗಳ ಕಾಲ ಇದಕ್ಕೆ ವಿವಿಧ ಕಾರಣಗಳನ್ನು ವಿವರಿಸಲಾಗಿದೆ. ಇನ್ನೂ ಇತ್ತೀಚೆಗೆ, ಒಕ್ಕೂಟದ ಮೂಲಭೂತ ಸೌಕರ್ಯ ಹೆದ್ದಾರಿಯ ಕೊರತೆ, ಚಿನ್ನಕ್ಕಾಗಿ ಕುಸಿದ ಬೇಡಿಕೆ, ಮುಕ್ತ ವಲಸೆಯ ಯತ್ನಗಳ ಕೊರತೆ, ಜನಸಂಖ್ಯೆಯ ಕೊರತೆ, ಉಣ್ಣೆ ಮತ್ತು ಖನಿಜ-ಆಧಾರಿತ ಆರ್ಥಿಕತೆಗಳಲ್ಲಿ ಕುಸಿತ, ಆರಂಭಿಕ ವಸಾಹತು ಯತ್ನಗಳಲ್ಲಿ ವೈಫಲ್ಯ, ಅಥವಾ ವಿದೇಶಿ ಬಂಡವಾಳದ ಕೊರತೆ ಈ ಆರ್ಥಿಕ ಸಮಸ್ಯೆಗೆ ಕಾರಣ ಎಂದು ವಿವರಿಸಲಾಗಿದೆ. ಟ್ಯಾಸ್ಮೆನಿಯಾದ ಇತಿಹಾಸದುದ್ದಕ್ಕೂ, ಟ್ಯಾಸ್ಮೆನಿಯಾದ ಯುವಕರು ತಮ್ಮ ಉದ್ಯೋಗ ಹಾಗೂ ಜೀವನದ ಹಾದಿ ಕಂಡುಕೊಳ್ಳಲೆಂದು ಆಸ್ಟ್ರೇಲಿಯಾದ ಮುಖ್ಯ ಭೂಮಿಗೆ ವಲಸೆ ಹೋಗುತ್ತಿರುವುದುಂಟು.
ಸಾಂಪ್ರದಾಯಿಕವಾಗಿ, ತಾಮ್ರ, ಸತು, ತವರ ಮತ್ತು ಕಬ್ಬಿಣ ಸೇರಿದಂತೆ ಇತರೆ ಲೋಹಗಳ ಗಣಿಗಾರಿಕೆ; ಕೃಷಿ, ಅರಣ್ಯ ಬೆಳೆಸುವಿಕೆ ಮತ್ತು ಪ್ರವಾಸೋದ್ಯಮವು ಟ್ಯಾಸ್ಮೆನಿಯಾದ ಪ್ರಮುಖ ಉದ್ದಿಮೆಗಳಾಗಿವೆ. ಗಮನಾರ್ಹವಾಗಿ, 1940ರ ಹಾಗೂ 1950ರ ದಶಕದ ಕಾಲಾವಧಿಗಳಲ್ಲಿ, ಹೈಡ್ರೊ ಟ್ಯಾಸ್ಮೆನಿಯಾ ಜಲವಿದ್ಯುತ್ ಕ್ಷೇತ್ರದ ವಿಕಸನ ಯೋಜನೆ ಕೈಗೊಂಡಿದ್ದುಂಟು. ಕಳೆದ ಶತಮಾನದುದ್ದಕ್ಕೂ ಇವೆಲ್ಲವೂ ವಿವಿಧ ಮಟ್ಟಗಳಲ್ಲಿ ಯಶಸ್ವಿಯಾದವು. ಆ ಕಾಲದಲ್ಲಿ ಅತಿ ಹೆಚ್ಚು ಪ್ರಚಲಿತ ಉದ್ದಿಮೆಗೆ ಅನುಗುಣವಾಗಿ, ಜನರ ಒಳ-ವಲಸೆ ಅಥವಾ ಹೊರ-ವಲಸೆಯಾಗುತ್ತಿತ್ತು.
1990ರ ದಶಕದ ಕಾಲಾವಧಿಯಲ್ಲಿ ಉತ್ಪಾದನೆ-ತಯಾರಿಕೆಯಲ್ಲಿ ಇಳಿಕೆ ಸಂಭವಿಸಿತು. ಇದರ ಪರಿಣಾಮವಾಗಿ ಟ್ಯಾಸ್ಮೆನಿಯಾ ಮೂಲದ ಅನುಭವಿ ಉದ್ಯೋಗಿಗಳು ಆಸ್ಟ್ರೇಲಿಯಾ ಮುಖ್ಯ ಪ್ರದೇಶದೆಡೆಗೆ ವಲಸೆ ಹೋದರು. ಇಂದಿಗೂ ಸಹ, ಬಹಳಷ್ಟು ಜನರು ಪ್ರಮುಖ ನಗರಕೇಂದ್ರಗಳಾದ ಮೆಲ್ಬೊರ್ನ್ ಮತ್ತು ಸಿಡ್ನಿ ಮಹಾನಗರಗಳಿಗೆ ವಲಸೆ ಹೋಗುವರು.
ಆಹಾರ ರಫ್ತು ಕ್ಷೇತ್ರಗಳು ರಾಜ್ಯದಲ್ಲಿ ಹೇರಳವಾಗಿವೆ. ಇವುಗಳಲ್ಲಿ ಕಡಲ ಆಹಾರವೂ (ಉದಾಹರಣೆಗೆ, ಅಟ್ಲಾಂಟಿಕ್ ಸ್ಯಾಲ್ಮನ್, ಕಡಲ್ಗಿವಿ ಹಾಗೂ ಚಿಕ್ಕ ಮುಳ್ಳುನಳ್ಳಿ) ಸೇರಿದೆ ಆದರೆ ಇಷ್ಟಕ್ಕೇ ಸೀಮಿತವಾಗಿಲ್ಲ.
2001ರಿಂದಲೂ, ಟ್ಯಾಸ್ಮೆನಿಯಾದಲ್ಲಿ ಉಜ್ವಲ ಬೆಳವಣಿಗೆಯ ಅವಕಾಶಗಳಿವೆ. ಇಡೀ ಆಸ್ಟ್ರೇಲಿಯಾದಲ್ಲಿ ಅನುಕೂಲಕರ ಸ್ಥಿತಿ, ಕಡಿಮೆಯಾದ ವಿಮಾನಯಾನ ದರಗಳು ಹಾಗೂ ಹೊಸದಾದ ಎರಡು ''ಸ್ಪಿರಿಟ್ ಆಫ್ ಟ್ಯಾಸ್ಮೆನಿಯಾ'' ಹಡಗುಗಳು - ಇವೆಲ್ಲವೂ ಸಹ ಪ್ರವಾಸೋದ್ಯಮ ಕ್ಷೇತ್ರದ ಏಳ್ಗೆಗಾಗಿ ಭಾರೀ ಕಾರಣಗಳಾದವು.
ಇಂದು, ಟ್ಯಾಸ್ಮೆನಿಯನ್ ಉದ್ಯೋಗಿಗಳು ಗಮನಾರ್ಹ ಸಂಖ್ಯೆಯಲ್ಲಿ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತರೆ ಉದ್ದಿಮೆದಾರರ ಪೈಕಿ, ಹಲವು ಹೋಟೆಲ್ಗಳು ಹಾಗೂ ಟ್ಯಾಸ್ಮೆನಿಯಾದ ಎರಡು ಕ್ಯಾಸಿನೊಗಳ ಸ್ವಾಮ್ಯ ಗಳಿಸಿರುವ ಫೆಡರಲ್ ಗ್ರೂಪ್ ಹಾಗೂ ರಾಜ್ಯದ ಅತಿದೊಡ್ಡ ಅರಣ್ಯ ವಿಕಸನ ಪ್ರಾಧಿಕಾರ ಗನ್ಸ್ ಲಿಮಿಟೆಡ್ ಸೇರಿವೆ. 1990ರ ದಶಕದ ಕಾಲಾವಧಿಯಲ್ಲಿ, ಬ್ರಾಡ್ಬ್ಯಾಂಡ್ ಫೈಬರ್-ಆಪ್ಟಿಕ್ ಸಂಪರ್ಕಗಳನ್ನು ಅಗ್ಗ ದರಗಳಲ್ಲಿ ಪಡೆದ ಹಲವು ರಾಷ್ಟ್ರೀಯ ಉದ್ದಿಮೆಗಳು, ತಮ್ಮ ಸೇವಾ ಕೇಂದ್ರಗಳನ್ನು ಟ್ಯಾಸ್ಮೆನಿಯಾದಲ್ಲಿ ಸ್ಥಾಪಿಸಿದವು. {{Citation needed|date=April 2007}}
2000ದ ಇಸವಿಯ ಪೂರ್ವಾರ್ಧದಲ್ಲಿ ರಾಜ್ಯದ ಗೃಹನಿರ್ಮಾಣ ಮಾರುಕಟ್ಟೆಯನ್ನು ಅಗತ್ಯಕ್ಕಿಂತಲೂ ಕಡಿಮೆ ದರದಲ್ಲಿ ನಿಗದಿಪಡಿಸಲಾಗಿತ್ತು ಎಂದು ಭಾಸವಾಗಿದೆ. ನಂತರ, ರಾಷ್ಟ್ರೀಯ ಗೃಹನಿರ್ಮಾಣ ಮಾರುಕಟ್ಟೆಯಲ್ಲಿ ಉಂಟಾದ ಭಾರೀ ಏರಿಕೆಯಿಂದಾಗಿ ಟ್ಯಾಸ್ಮೆನಿಯಾ ಗೃಹನಿರ್ಮಾಣ ದರಗಳನ್ನು ಬಹಳಷ್ಟು ಏರಿಸಿತು. ಅಂತರರಾಜ್ಯ <ref>ಎಬಿಸಿ ಟೆಲೆವಿಷನ್ ನ್ಯೂಸ್ (ಟ್ಯಾಸ್ಮೆನಿಯಾ), ಸಂಜೆ 7 ಗಂಟೆಗೆ. ಶುಕ್ರವಾರ, 27/1/06</ref> ಹಾಗೂ ವಿದೇಶಿ ವಲಸೆಯ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಇದಕ್ಕೆ ಭಾಗಶಃ ಕಾರಣ ಎನ್ನಲಾಗಿದೆ. ಬಾಡಿಗೆ ಮನೆಗಳ ಕೊರತೆಯಿಂದಾಗಿ ಟ್ಯಾಸ್ಮೆನಿಯಾದ ಕಡಿಮೆ-ವೇತನದ ಉದ್ಯೋಗಿಗಳಿಗೆ ಸಮಸ್ಯೆಯುಂಟಾಗಿದೆ.
ಸಮುದಾಯ ಜೀವನದಲ್ಲಿ ಸಣ್ಣ ಪ್ರಮಾಣದ ಉದ್ದಿಮೆಗಳದು ದೊಡ್ಡ ಪಾಲಿದೆ. ಟ್ಯಾಸ್ಮೆನಿಯಾದಲ್ಲಿ ಉದ್ದಿಮೆ ಪರಿಸರದಲ್ಲಿ ಸ್ಪರ್ಧಿಸಿ ಉಳಿದುಕೊಳ್ಳುವುದು ಬಹಳ ಕಷ್ಟ ಎಂದು ಹಲವರು ನಂಬಿದ್ದಾರೆ. ಆದರೂ, ಇಂಟರ್ನ್ಯಾಷನಲ್ ಕ್ಯಾಟಮರನ್ಸ್, ಮುರಿಲಾ ಎಸ್ಟೇಟ್ ಮತ್ತು ಟ್ಯಾಸಲ್ನಂತಹ ಉದ್ದಿಮೆಗಳು ಈ ದ್ವೀಪದ ಉದ್ದಿಮೆ ಪರಿಸರದಲ್ಲಿ ಯಶಸ್ವಿಯಾಗಿವೆ.
== ಸಾರಿಗೆ ==
[[ಚಿತ್ರ:HobartAirportTerminal.jpg|thumb|ಹೋಬಾರ್ಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ನೋಟ.]]
ಕ್ವಾಂಟಾಸ್ ಮತ್ತು ಅದರ ಅಂಗ ಸಂಸ್ಥೆ ಜೆಟ್ಸ್ಟಾರ್, ಹಾಗೂ ವರ್ಜಿನ್ ಬ್ಲೂ ಟ್ಯಾಸ್ಮೆನಿಯಾದ ಪ್ರಮುಖ ವಿಮಾನಯಾನ ಸೇವಾ ಉದ್ದಿಮೆಗಳಾಗಿವೆ. ಇವು ದ್ವೀಪದಿಂದ ಮೆಲ್ಬೊರ್ನ್, ಸಿಡ್ನಿ, ಬ್ರಿಸ್ಬೇನ್ ಮತ್ತು ಆಡಿಲೇಡ್ ಮಹಾನಗರಗಳಿಗೆ ನೇರ ವಿಮಾನಯಾನ ಸೇವೆ ಒದಗಿಸುತ್ತಿವೆ. ಕಡಿಮೆ-ದರಗಳಲ್ಲಿ ವಿಮಾನಯಾನ ಸೇವೆ ಒದಗಿಸುವ ಟೈಗರ್ ಏರ್ವೇಸ್ 2007ರ ನವೆಂಬರ್ ತಿಂಗಳಿನಿಂದ ಲಾನ್ಸೆಸ್ಟನ್ ಮತ್ತು ಮೆಲ್ಬೊರ್ನ್ ನಗರಗಳ ನಡುವೆ ವಿಮಾನಯಾನ ಸೇವೆ ಪ್ರಾರಂಭಿಸಿ, 2008ರ ಜನವರಿ ತಿಂಗಳಲ್ಲಿ ಹೋಬಾರ್ಟ್ ಹಾಗೂ ಮೆಲ್ಬೊರ್ನ್ ನಡುವೆ ವಿಮಾನಯಾನ ಸೇವೆ ಒದಗಿಸಲಾರಂಭಿಸಿತು. ಪ್ರಮುಖ ವಿಮಾನ ನಿಲ್ದಾಣಗಳ ಪೈಕಿ ಹೋಬಾರ್ಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಲಾನ್ಸೆಸ್ಟನ್ ವಿಮಾನ ನಿಲ್ದಾಣಗಳು ಸೇರಿವೆ. 1990ರ ದಶಕದಿಂದಲೂ, ಹೋಬಾರ್ಟ್ನಲ್ಲಿ ನಿಯತ್ತಾದ ಅಂತರರಾಷ್ಟ್ರೀಯ ವಿಮಾನಯಾನ ಸೇವೆಯಿರಲಿಲ್ಲ. ಆಸ್ಟ್ರೇಲಿಯಾ ಮುಖ್ಯ ಭೂಮಿಯಲ್ಲಿರುವ ಮೆಲ್ಬೊರ್ನ್ ನಗರದೊಂದಿಗೆ, ರೀಜನಲ್ ಎಕ್ಸ್ಪ್ರೆಸ್ ವಿಮಾನಯಾನದ ಮೂಲಕ ಬರ್ನೀ (ವೈನ್ಯಾರ್ಡ್) ಹಾಗೂ ಕ್ವಾಂಟಾಸ್ಲಿಂಕ್ ವಿಮಾನಯಾನದ ಮೂಲಕ ಡೆವೊನ್ಪೋರ್ಟ್ ನಗರಗಳು ಸಂಪರ್ಕಗೊಂಡಿವೆ.
ಟ್ಯಾಸ್ಮೆನಿಯನ್ ಸರ್ಕಾರ ಸ್ವಾಮ್ಯದ ಟಿಟಿ-ಲೈನ್ (ಟ್ಯಾಸ್ಮೆನಿಯಾ) ಬಾಸ್ ಸ್ಟ್ರೇಟ್ ಮೂಲಕ ಪ್ರಯಾಣಿಕ ಹಡಗುಗಳನ್ನು ನಡೆಸಿ, ದೇಶೀಯ ಸಮುದ್ರಯಾನ ಸೇವೆ ಒದಗಿಸುತ್ತದೆ.
1986ರಿಂದ, ''ಎಬೆಲ್ ಟ್ಯಾಸ್ಮೆನ್'' ಹಡಗು ಡೆವೊನ್ಪೊರ್ಟ್ ಮತ್ತು ಮೆಲ್ಬೊರ್ನ್ ನಗರಗಳ ನಡುವೆ ವಾರಕ್ಕೆ ಆರು ಬಾರಿ ರಾತ್ರಿಯ ವೇಳೆ ಸಂಚರಿಸಿದ್ದುಂಟು. 1993ರಲ್ಲಿ, ಎಬೆಲ್ ಟ್ಯಾಸ್ಮೆನ್ ಸ್ಥಾನದಲ್ಲಿ ಬಂದ ''ಸ್ಪಿರಿಟ್ ಆಫ್ ಟ್ಯಾಸ್ಮೆನಿಯಾ'' ಹಡಗು ಇದೇ ಮಾರ್ಗ ಹಾಗೂ ವೇಳಾಪಟ್ಟಿಯನ್ನು ಅನುಸರಿಸಿತು. ಇತ್ತೀಚಿನ ಬದಲಾವಣೆಯೆಂದರೆ, 2002ರಲ್ಲಿ ಈ ಹಡಗಿನ ಸ್ಥಾನದಲ್ಲಿ, ''ಸ್ಪಿರಿಟ್ ಆಫ್ ಟ್ಯಾಸ್ಮೆನಿಯಾ I'' ಮತ್ತು ''ಸ್ಪಿರಿಟ್ ಆಫ್ ಟ್ಯಾಸ್ಮೆನಿಯಾ II'' ಎಂಬ ಎರಡು ಅತಿವೇಗದ ಹಡಗುಗಳನ್ನು ನಡೆಸಲಾಯಿತು. ಇದರಿಂದಾಗಿ ಪ್ರತಿವಾರಕ್ಕೆ ಹದಿನಾಲ್ಕು ಬಾರಿ ರಾತ್ರಿ ಸಂಚಾರ, ಜೊತೆಗೆ ಹೆಚ್ಚಿನ ಬೇಡಿಕೆಯಿದ್ದಾಗ ಹಗಲಿನ ಹೊತ್ತೂ ಸಹ ಹೆಚ್ಚುವರಿ ಸಂಚಾರ ವ್ಯವಸ್ಥೆ ಕಲ್ಪಿಸಲಾಯಿತು. 2004ರ ಜನವರಿ ತಿಂಗಳಲ್ಲಿ, ಇವೆರಡು ಹಡಗುಗಳಿಗಿಂತಲೂ ಸ್ವಲ್ಪ ಚಿಕ್ಕದಾಗಿರುವ ''ಸ್ಪಿರಿಟ್ ಆಫ್ ಟ್ಯಾಸ್ಮೆನಿಯಾ III'' ಎಂಬ ಮೂರನೆಯ ಹಡಗನ್ನು ಪರಿಚಯಿಸಿ, ಡೆವೊನ್ಪೊರ್ಟ್ ಮತ್ತು ಸಿಡ್ನಿ ನಗರಗಳ ನಡುವೆ ಸಾರಿಗೆ ಸೇವೆ ಒದಗಿಸಲಾರಂಭಿಸಿತು. ಇದರಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಬಹಳ ಕಡಿಮೆ, ಇದರಿಂದಾಗಿ ಆದಾಯ ಸಾಲದು ಎಂದು ಟ್ಯಾಸ್ಮೆನಿಯನ್ ಸರ್ಕಾರ 2006ರಲ್ಲಿ ಈ ಸೇವೆಯನ್ನು ರದ್ದುಗೊಳಿಸಿತು. ಟ್ಯಾಸ್ಮೆನಿಯಾದ ಬ್ರಿಡ್ಪೊರ್ಟ್ನಿಂದ ಬಾಸ್ ಸ್ಟ್ರೇಟ್ನಲ್ಲಿರುವ ಫ್ಲಿಂಡರ್ಸ್ ಐಲೆಂಡ್ ದ್ವೀಪ ಹಾಗೂ ಆಸ್ಟ್ರೇಲಿಯಾ ಮುಖ್ಯ ಭೂಮಿಯ ವಿಕ್ಟೊರಿಯಾ ರಾಜ್ಯದ ಪೋರ್ಟ್ ವೆಲ್ಷ್ಪೂಲ್ ನಡುವೆ ಹಡಗು ಸಾರಿಗೆ ಸೇವೆಯಿದೆ.<ref>[http://www.southernshipping.com.au/ 'ಮೆಯಿನ್'] {{Webarchive|url=https://web.archive.org/web/20110108082339/http://www.southernshipping.com.au/ |date=8 ಜನವರಿ 2011 }}, ಸದರ್ನ್ ಷಿಪಿಂಗ್ ಕಂಪೆನಿ, 2009ರ ಜೂನ್ 15ರಂದು ಮರುಸಂಪಾದಿಸಲಾಯಿತು.</ref> ಟೊಲ್ ಷಿಪಿಂಗ್ ಸ್ವಾಮ್ಯದಲ್ಲಿರುವ ಎರಡು ಭಾರೀ ಸರಕಿನ ಹಡಗುಗಳು ಪ್ರತಿದಿನ ಬರ್ನೀ ಮತ್ತು ಮೆಲ್ಬೊರ್ನ್ ನಗರಗಳ ನಡುವೆ ಸಮುದ್ರಯಾನ ನಡೆಸುತ್ತವೆ. ಹಲವು ವಿಹಾರಯಾನ ಹಡಗುಗಳು ಹೋಬಾರ್ಟ್ ಬಂದರಿಗೆ ಆಗಮಿಸಿ ನಿಲ್ಲುತ್ತವೆ.
[[ಚಿತ್ರ:Spirit of Tasmania Port Melbourne.jpg|thumb|left|ದಿ ಸ್ಪಿರಿಟ್ ಆಫ್ ಟ್ಯಾಸ್ಮೆನಿಯಾ ಎಂಬುದು ಈ ದ್ವೀಪವನ್ನು ಆಸ್ಟ್ರೇಲಿಯಾದ ಮುಖ್ಯ ನೆಲೆಯೊಂದಿಗೆ ಸಂಪರ್ಕಿಸುತ್ತದೆ.]]
''ಸೀಕ್ಯಾಟ್'' ಎಂದು ಜ್ಞಾತವಾದ ಅತಿವೇಗದ ಅಲ್ಯುಮಿನಿಯಮ್ ಹಡಗುಗಳ ತಯಾರಕ ಉದ್ದಿಮೆ ಇಂಟರ್ನ್ಯಾಷನಲ್ ಕ್ಯಾಟಮರನ್ಸ್ ಸಹ ಟ್ಯಾಸ್ಮೆನಿಯಾದಲ್ಲಿದೆ. ಈ ಸೀಕ್ಯಾಟ್ ಹಡಗುಗಳನ್ನು ಮೊದಲ ಬಾರಿಗೆ ಪರಿಚಯಿಸಿದಾಗ ವೇಗದ ದಾಖಲೆಗಳನ್ನು ಆಗಿಂದಾಗ್ಗೆ ಮೀರಿಸಿದ್ದುಂಟು. ರಾಜ್ಯ ಸರ್ಕಾರವು ಬಾಸ್ ಸ್ಟ್ರೇಟ್ನಲ್ಲಿ ಈ ಹಡಗುಗಳನ್ನು ಚಲಾಯಿಸಲು ಯತ್ನಿಸಿತು. ಆದರೆ ಅಂತಿಮವಾಗಿ, ಬಾಸ್ ಸ್ಟ್ರೇಟ್ನಲ್ಲಿ ಕೆಲವೊಮ್ಮೆ ಉಂಟಾಗುವ ಬಹಳ ಪ್ರತಿಕೂಲಕರ ಹವಾಮಾನ ಸ್ಥಿತಿಗಳಲ್ಲಿ ಈ ಹಡಗುಗಳು ಅಪಾಯಕ್ಕೀಡಾಗಬಹುದಾದ ಕಾರಣ, ಈ ಯೋಜನೆಯನ್ನು ಕೈಬಿಡಬೇಕಾಯಿತು.
ಟ್ಯಾಸ್ಮೆನಿಯಾ, ಅದರಲ್ಲೂ ವಿಶಿಷ್ಟವಾಗಿ ಹೋಬಾರ್ಟ್, ಆಸ್ಟ್ರೇಲಿಯಾ ಮತ್ತು ಅಂಟಾರ್ಕ್ಟಿಕಾ ನಡುವಿನ ಸಮುದ್ರ ಸಂಪರ್ಕ ಕೇಂದ್ರವಾಗಿದೆ. ಆಸ್ಟ್ರೇಲಿಯನ್ ಅಂಟಾರ್ಕ್ಟಿಕ್ ವಿಭಾಗವು, ಹೋಬಾರ್ಟ್ನ ಹೊರವಲಯ ಬಡಾವಣೆಯಾದ ಕಿಂಗ್ಸ್ಟನ್ನಲ್ಲಿದೆ.
ಹೋಬಾರ್ಟ್ ''l'Astrolabe'' ಫ್ರೆಂಚ್ ಹಡಗಿಗೂ ಸಹ ಮೂಲ ಬಂದರು ಆಗಿದೆ. ಅಂಟಾರ್ಕ್ಟಿಕಾದಲ್ಲಿ ಹಾಗೂ ಅದರ ಬಳಿಯಿರುವ ಫ್ರೆಂಚ್ ಸ್ವಾಮ್ಯದ ದಕ್ಷಿಣ ಪ್ರಾಂತ್ಯಗಳಿಗೆ ನಿಯತ್ತಾಗಿ ಸರಕು ಸಾಗಿಸುತ್ತದೆ.
ಬ್ರೆಜಿಲ್ ದೇಶದ [[ರಿಯೋ ಡಿ ಜನೈರೊ|ರಿಯೊ ಡಿಜನೆರೊ]] ನಂತರ, ಹೋಬಾರ್ಟ್ ವಿಶ್ವದ ಎರಡನೆಯ ಅತಿ ಆಳವಾದ ನೈಸರ್ಗಿಕ ಬಂದರು ಆಗಿದೆ.
ರಾಜ್ಯದೊಳಗೆ, ರಸ್ತೆ ಮಾರ್ಗವೇ ಪ್ರಾಥಮಿಕ ಸಾರಿಗೆಯಾಗಿದೆ. 1980ರ ದಶಕದ ಕಾಲಾವಧಿಯಲ್ಲಿ, ರಾಜ್ಯದ ಹೆದ್ದಾರಿಗಳ ಪೈಕಿ ಬಹಳಷ್ಟನ್ನು ದುರಸ್ತಿ ಹಾಗೂ ಆಧುನೀಕರಣ ಮಾಡಲಾಗಿದೆ. ಇವುಗಳಲ್ಲಿ ಹೋಬಾರ್ಟ್ ಸದರ್ನ್ ಔಟ್ಲೆಟ್, ಲಾನ್ಸೆಸ್ಟನ್ ಸದರ್ನ್ ಔಟ್ಲೆಟ್, ಬಾಸ್ ಹೈವೇ ಪುನರ್ನಿರ್ಮಾಣ ಹಾಗೂ ಹುವಾನ್ ಹೈವೇ ಸೇರಿವೆ. ಮೆಟ್ರೊ ಟ್ಯಾಸ್ಮೆನಿಯಾ ಬಸ್ ಸೇವೆಯು ಸಾರ್ವಜನಿಕ ಸಾರಿಗೆ ಒದಗಿಸುತ್ತದೆ.
ಟ್ಯಾಸ್ಮೆನಿಯಾದ ರೈಲು ಸಾರಿಗೆಯಲ್ಲಿ, ಎಲ್ಲಾ ನಾಲ್ಕೂ ಜನನಿಬಿಡ ನಗರಗಳಿಗೆ ಹಾಗೂ ಗಣಿಗಾರಿಕೆ ಹಾಗೂ ಪಶ್ಚಿಮ ಕಡಲತೀರ ಮತ್ತು ವಾಯವ್ಯದಲ್ಲಿರುವ ಅರಣ್ಯ ವಿಕಸನಾ ಕೇಂದ್ರಗಳ ನಡುವೆ, 52 ಅಂಗುಲಗಳಿಗಿಂತ ಅಗಲ ಕಿರಿದಾದ ರೈಲು ದಾರಿ (ನ್ಯಾರೊ ಗೇಜ್) ರೈಲು ಸಾರಿಗೆ ಸೇವೆ ಒದಗಿಸುತ್ತದೆ. ಪೆಸಿಫಿಕ್ ನ್ಯಾಷನಲ್ ಸಂಸ್ಥೆಯ ಅಂಗಸಂಸ್ಥೆಯಾದ ಟ್ಯಾಸ್ರೇಲ್ ಈ ಸೇವೆಗಳನ್ನು ಒದಗಿಸುತ್ತದೆ. 1977ರಲ್ಲಿ ರಾಜ್ಯದಲ್ಲಿ ನಿಯಮಿತ ಪ್ರಯಾಣಿಕ ರೈಲು ಸೇವೆಗಳು ರದ್ದಾದವು. ಇಂದು ಕೇವಲ ಸರಕು ಸಾಗಾಣಿಕೆಯ ರೈಲುಗಳು ಮಾತ್ರ ಸಂಚರಿಸುತ್ತಿವೆ. ಕೆಲವು ವಿಶಿಷ್ಟ ಪ್ರದೇಶಗಳಲ್ಲಿ ಪ್ರವಾಸೀ ರೈಲುಗಳಿವೆ. ಉದಾಹರಣೆಗೆ, ವೆಸ್ಟ್ ಕೋಸ್ಟ್ ವೈಲ್ಡರ್ನೆಸ್ ರೇಲ್ವೆ. 2005ರಲ್ಲಿ, ರೈಲು ಸೇವೆಗಳಲ್ಲಿ ಬಹಳಷ್ಟು ಸಮಸ್ಯೆಯಿದ್ದು, ಗಾರೆ ಸಾಗಾಣಿಕೆ ಹೊರತುಪಡಿಸಿ ಬೇರೆ ಯಾವುದೇ ಸೇವೆಗೆ ಲಭ್ಯವಾಗದು ಎಂಬ ತಳಮಳಗಳು ವ್ಯಕ್ತವಾದವು.
== ಸಂಸ್ಕೃತಿ ==
=== ಪಾಕಪದ್ಧತಿ ===
{{See also|Tasmanian wine}}
ವಸಾಹತು ಕಾಲದಲ್ಲಿ, ಟ್ಯಾಸ್ಮೆನಿಯಾದ ಹಲವೆಡೆ ಸಾಮಾನ್ಯ ಇಂಗ್ಲಿಷ್ ಪಾಕಪದ್ಧತಿ ತಯಾರಿಸಲಾಗುತ್ತಿತ್ತು. ವಲಸಿಗರ ಆಗಮನ ಮತ್ತು ಸಂಸ್ಕೃತಿಯ ನಮೂನೆಗಳಲ್ಲಿ ಬದಲಾವಣೆಗಳಿಂದಾಗಿ, ಟ್ಯಾಸ್ಮೆನಿಯಾದಲ್ಲಿ ಇಂದು ವಿವಿಧ ಪಾಕಪದ್ಧತಿಗಳನ್ನು ಅನುಸರಿಸುವ ಭೋಜನಾಕೇಂದ್ರಗಳಿವೆ. ಟ್ಯಾಸ್ಮೆನಿಯಾದಾದ್ಯಂತ ದ್ರಾಕ್ಷಿತೋಟಗಳಿವೆ. ಬೋಗ್ಸ್ ಮತ್ತು ಕ್ಯಾಸ್ಕೇಡ್ನಂತಹ ಟ್ಯಾಸ್ಮೆನಿಯಾ ಮೂಲದ ಬಿಯರ್ ಬ್ರ್ಯಾಂಡ್ಗಳು ಆಸ್ಟ್ರೇಲಿಯಾ ಮುಖ್ಯ ಭೂಮಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿವೆ. ಟ್ಯಾಸ್ಮೆನಿಯಾದ ವಾಯವ್ಯ ಕಡಲತೀರದಾಚೆಗಿರುವ ಕಿಂಗ್ ಐಲೆಂಡ್, ಬೂಟಿಕ್ ಗಿಣ್ಣು ಮತ್ತು ಹಾಲಿನ ಉತ್ಪನ್ನಗಳಿಗೆ ಖ್ಯಾತವಾಗಿದೆ. ಟ್ಯಾಸ್ಮೆನಿಯನ್ನರು ಸಾಕಣೆಯಾದ ಹಾಗೂ ವನ್ಯ ಸ್ಯಾಲ್ಮೊನ್, ಆರೆಂಜ್ ರೊಫಿ ಹಾಗೂ ಚಿಕ್ಕಮುಳ್ಳುನಳ್ಳಿಯಂತಹ ಕಡಲ ಆಹಾರ ಸೇವಿಸುವರು.
=== ಕಾರ್ಯಕ್ರಮಗಳು ===
{{Main|List of Events in Tasmania}}
ಪ್ರವಾಸೋದ್ಯಮ ಕ್ಷೇತ್ರವನ್ನು ಬೆಳೆಸಲು, ರಾಜ್ಯ ಸರ್ಕಾರವು ದ್ವೀಪದುದ್ದಗಲಕ್ಕೂ ಹಲವು ವಿವಿಧ ವಾರ್ಷಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತದೆ ಅಥವಾ ಬೆಂಬಲಿಸುತ್ತದೆ. ಇವುಗಳಲ್ಲಿ ಪ್ರಸಿದ್ಧವಾದದ್ದು ಸಿಡ್ನಿಯಿಂದ ಹೋಬಾರ್ಟ್ ವರೆಗಿನ ಓಡುದೋಣಿ ಸ್ಪರ್ಧೆ. ಇದು ಉಡುಗೊರೆ ಕಳಿಸುವ ದಿನಾಚರಣೆ (ಬಾಕ್ಸಿಂಗ್ ಡೇ)ಯಂದು ಸಿಡ್ನಿಯಲ್ಲಿ ಅರಂಭವಾಗಿ, ಸುಮಾರು ಮೂರು-ನಾಲ್ಕು ದಿನಗಳ ನಂತರ ಹೋಬಾರ್ಟ್ನ ಕಾಂಸ್ಟಿಟ್ಯೂಷನ್ ಡಾಕ್ ತಲುಪುತ್ತದೆ. ಆ ಸಮಯ 'ಟೇಸ್ಟ್ ಆಫ್ ಟ್ಯಾಸ್ಮೆನಿಯಾ' ಎಂಬ ಟ್ಯಾಸ್ಮೆನಿಯಾದ ವಾರ್ಷಿಕ ಆಹಾರ ಮತ್ತು ವೈನ್ ಉತ್ಸವ ನಡೆಯುತ್ತಿರುತ್ತದೆ.
ಇತರೆ ಕಾರ್ಯಕ್ರಮಗಳಲ್ಲಿ ಟಾರ್ಗಾ ಟ್ಯಾಸ್ಮೆನಿಯಾ ಎಂಬ ರಸ್ತೆ ಓಟ ಸಹ ಒಂದು. ವಿಶ್ವವಿಖ್ಯಾತ ರ್ಯಾಲಿ ಚಾಲಕರು ಇಲ್ಲಿ ಬಂದು ಸ್ಪರ್ಧಿಸುವರು. ಈ ಸ್ಪರ್ಧೆಯು ರಾಜ್ಯಾದ್ಯಂತ ಐದು ದಿನಗಳ ಕಾಲ ನಡೆಯುವುದು. ಗ್ರಾಮಾಂತರ ಅಥವಾ ಪ್ರಾದೇಶಿಕ ಕಾರ್ಯಕ್ರಮಗಳಲ್ಲಿ, ಪ್ರತಿ ವರ್ಷ ಮೇ ತಿಂಗಳ ಆರಂಭದಲ್ಲಿ, ಲಾನ್ಸೆಸ್ಟನ್ ನಗರದ ಪಶ್ಚಿಮದಲ್ಲಿರುವ ಕ್ಯಾರಿಕ್ನಲ್ಲಿ ನಡೆಯುವ ಅಗ್ಫೆಸ್ಟ್ ಎಂಬ ಮೂರು-ದಿನಗಳ ಕೃಷಿ ಉತ್ಸವ; ಹಾಗೂ, ಪ್ರತಿ ವರ್ಷ ಅಕ್ಟೊಬರ್ ತಿಂಗಳಲ್ಲಿ ರಾಯಲ್ ಹೋಬಾರ್ಟ್ ಷೋ ಮತ್ತು ರಾಯಲ್ ಲಾನ್ಸೆಸ್ಟನ್ ಷೋ ನಡೆಯುತ್ತವೆ. ಸಂಗೀತ ಉತ್ಸವಗಳು ಸಹ ಅದ್ದೂರಿಯಾಗಿ ನಡೆಯುತ್ತವೆ. ಕ್ರೈಸ್ತವರ್ಷಾರಂಭದ ಹಿಂದಿನ ಸಂಜೆ, ಮ್ಯಾರಿಯಾನ್ ಬೇಯಲ್ಲಿ ಫಾಲ್ಸ್ ಫೆಸ್ಟಿವಲ್ ಮುಂಚೆ ವಿಕ್ಟೊರಿಯಾದಲ್ಲಿ ಮಾತ್ರ ನಡೆಯುತ್ತಿತ್ತು, ಈಗ ಇದು ಟ್ಯಾಸ್ಮೆನಿಯಾದಲ್ಲೂ ಆಯೋಜಿತವಾಗುತ್ತದೆ. ಬಹುಮಟ್ಟದ ಪೆಡಸುಗಟ್ಟುವಿಕೆ ರೋಗ ಪೀಡಿತರಿಗೆ ಧನಸಹಾಯಾರ್ಥವಾಗಿ, ಪ್ರತಿ ವರ್ಷ ಈಸ್ಟರ್ ದಿನದಂದು ಲಾನ್ಸೆಸ್ಟನ್ನಲ್ಲಿ ಎಂಎಸ್ ಫೆಸ್ಟ್ ಹಾಗೂ ಹೋಬಾರ್ಟ್ನಲ್ಲಿ ಸದರ್ನ್ ರೂಟ್ಸ್ ಫೆಸ್ಟಿವಲ್ ನಡೆಯುತ್ತವೆ. ಟೆನ್ ಡೇಸ್ ಆನ್ ದಿ ಐಲೆಂಡ್ ಎಂಬ ಕಲಾ ಉತ್ಸವವು ಈ ರಾಜ್ಯದಲ್ಲಿ ಹೊಸದಾಗಿ ಆರಂಭವಾದ ಉತ್ಸವವಾಗಿದೆ.
=== ಸಾಹಿತ್ಯ ===
{{Main|Tasmanian literature}}
ಟ್ಯಾಸ್ಮೆನಿಯಾದಲ್ಲಿ ತುಲನಾತ್ಮಕವಾಗಿ ಸಣ್ಣ ಪ್ರಮಾಣದ, ಆದರೆ ವಿಕಸನಗೊಳ್ಳುತ್ತಿರುವ ಸಾಹಿತ್ಯ ಸಂಸ್ಕೃತಿಯಿದೆ. ಮಾರ್ಕಸ್ ಕ್ಲಾರ್ಕ್ರ ''ಫಾರ್ ದಿ ಟರ್ಮ್ ಆಫ್ ಹಿಸ ನ್ಯಾಚುರಲ್ ಲೈಫ್'', ''ದಿ ಸೌಂಡ್ ಆಫ್ ಒನ್ ಹ್ಯಾಂಡ್ ಕ್ಲ್ಯಾಪಿಂಗ್'', ರಿಚರ್ಡ್ ಫ್ಲ್ಯಾನಗನ್ರ ''ಗೌಲ್ಡ್ಸ್ ಬುಕ್ ಆಫ್ ಫಿಷ್'' ಕ್ರಿಸ್ಟೊಫರ್ ಕೊಚ್ರ ''ದಿ ಇಯರ್ ಆಫ್ ಲಿವಿಂಗ್ ಡೇಂಜರಸ್ಲಿ'' ಪ್ರಸಿದ್ಧ ಶೀರ್ಷಿಕೆಗಳಲ್ಲಿ ಕೆಲವು.
'ಟ್ಯಾಸ್ಮೆನಿಯನ್ ಶೈಲಿ'ಯ {{Clarify|date=February 2009}} ಕಲ್ಪನಾಕಥೆಗಳ ಪೈಕಿ, ಮ್ಯಾರಿಯಾನ್ ಮತ್ತು ಸ್ಟೀವ್ ಇಷ್ಯಾಮ್ ರಚಿಸಿದ ''ಟೈಗರ್ ಟೇಲ್'' ನಂತಹ ಮಕ್ಕಳ ಗ್ರಂಥಗಳು ಸೇರಿವೆ.
=== ಸಂಗೀತ ಮತ್ತು ಪ್ರದರ್ಶನಾ ಕಲೆಗಳು ===
ಟ್ಯಾಸ್ಮೆನಿಯಾದ ಸಂಗೀತ ಕ್ಷೇತ್ರವು ವೈವಿಧ್ಯಮಯವಾಗಿದೆ. ಫೆಡರೇಷನ್ ವಾದ್ಯಗೋಷ್ಠಿ ಭವನದಲ್ಲಿ ನಡೆಯುವ ಟ್ಯಾಸ್ಮೆನಿಯನ್ ಸಿಂಫನಿ ಆರ್ಕೆಸ್ಟ್ರಾದಿಂದ ಹಿಡಿದು, ಗಮನಾರ್ಹ ಸಂಖ್ಯೆಯಲ್ಲಿರುವ ಸಣ್ಣ ಪ್ರಮಾಣದ ವಾದ್ಯತಂಡಗಳು, ವಾದ್ಯಗೋಷ್ಠಿಗಳು, ಪಂಚಮೇಳಗಳು, ಸ್ಯಾಕ್ಸೊಫೋನ್ ಮಹಾಮೇಳಗಳು ಹಾಗೂ, ರಾಜ್ಯಾದ್ಯಂತ ವಿವಿಧ ಸ್ಥಳಗಳಲ್ಲಿ ಸಂಗೀತ ಪ್ರದರ್ಶನ ನೀಡುವ ಏಕ-ಕಲಾವಿದರ ವರೆಗೂ ಸಂಗೀತ ಕ್ಷೇತ್ರದ ಶ್ರೇಣಿಯಿದೆ. ಕಾಂಸ್ಟ್ಯಾಂಟಿನ್ ಕೊಕಿಯಸ್, ಮಾರಿಯಾ ಗ್ರೆನ್ಫೆಲ್ ಹಾಗೂ, ಟ್ಯಾಸ್ಮೆನಿಯಾ ಸಂಗೀತ ಸಂಯೋಜಕರ ಪ್ರತಿನಿಧಿ ಕೂಟ ಟ್ಯಾಸ್ಮೆನಿಯನ್ ಕಂಪೊಸರ್ಸ್ ಕಲೆಕ್ಟಿವ್<ref>[http://www.tasmanianmusic.com/composer.php?composerid=donkay 'ಡಾನ್ ಕೇ'] {{Webarchive|url=https://web.archive.org/web/20090101065049/http://www.tasmanianmusic.com/composer.php?composerid=donkay |date=1 ಜನವರಿ 2009 }}, ಟ್ಯಾಸ್ಮೆನಿಯನ್ ಕಾಂಪೊಸರ್ಸ್ ಕಲೆಕ್ಟಿವ್, 2009ರ ಜೂನ್ 15ರಂದು ಮರುಸಂಪಾದಿಸಲಾಯಿತು.</ref>ನ ಪ್ರಧಾನ ಸಂಚಾಲಕ ಡಾನ್ ಕೇ ಸೇರಿದಂತೆ, ವಿವಿಧ ಶೈಲಿಗಳ ಸಂಗೀತ ಸಂಯೋಜಕರರು ಟ್ಯಾಸ್ಮೆನಿಯಾದಲ್ಲಿದ್ದಾರೆ. ಟ್ಯಾಸ್ಮೆನಿಯಾ is also home to one of ಆಸ್ಟ್ರೇಲಿಯಾ's leading new music institutions, IHOS Music Theatre and Opera and gospel choirs, the Southern Gospel Choir.
ಆಸ್ಟ್ರೇಲಿಯಾದ ಹೊಸ ಪ್ರಸಿದ್ಧ ಸಂಗೀತ ಸಂಸ್ಥೆಗಳಾದ ಐಹೆಚ್ಒಎಸ್ ಮ್ಯೂಸಿಕ್ ಥಿಯೆಟರ್ ಅಂಡ್ ಅಪೆರಾ ಹಾಗೂ ಸದರ್ನ್ ಗೊಸ್ಪೆಲ್ ಕ್ವೈರ್ ಎಂಬ ಶುಭನುಡಿ ಗಾಯಕಗೋಷ್ಠಿಗಳಿಗೆ ಟ್ಯಾಸ್ಮೆನಿಯಾ ಸ್ವಸ್ಥಳವಾಗಿದೆ. ಡೆತ್ ಮೆಟಲ್ ಸಂಗೀತ ಶೈಲಿಯ ವಾದ್ಯತಂಡ ಸೈಕ್ರಾಪ್ಟಿಕ್ ಟ್ಯಾಸ್ಮೆನಿಯಾ ಮೂಲದ್ದಾಗಿದ್ದು, ಆಸ್ಟ್ರೇಲಿಯಾದ ಪ್ರಮುಖ ಮೆಟಲ್ ಸಂಗೀತ ಶೈಲಿಯ ವಾದ್ಯತಂಡಗಳಲ್ಲಿ ಒಂದು.<ref>{{cite web
|url=http://www.themetalforge.com/modules.php?name=News&file=article&sid=329
|title=PSYCROPTIC: Rise Above
|accessdate=2010-03-06
|publisher=www.themetalforge.com
|archive-date=17 ಮಾರ್ಚ್ 2011
|archive-url=https://web.archive.org/web/20110317135605/http://themetalforge.com/modules.php?name=News&file=article&sid=329
|url-status=dead
}}</ref> ಪ್ರತಿಷ್ಠಿತ ನ್ವಾರ್-ರಾಕ್-ಸಂಗೀತ ವಾದ್ಯತಂಡ ದಿ ಪ್ಯಾರಡೈಸ್ ಮೊಟೆಲ್<ref>'ದಿ ಪ್ಯಾರಡೈಸ್ ಮೊಟೆಲ್' ''last.fm'' http://www.last.fm/music/The+Paradise+Motel 2009ರ ಜೂನ್ 15ರಂದು ಮರುಸಂಪಾದಿಸಲಾಯಿತು.
</ref> ಹಾಗೂ 1980ರ ದಶಕದ ಪವರ್-ಪಾಪ್ ಮಿಶ್ರಣದ ದಿ ಇನೊಸೆಂಟ್ಸ್<ref>{{cite web |url=http://www.theinnocents.com.au/ |title=Beathoven and The Innocents - Official Web site |publisher=The Innocents |date= |accessdate=2010-04-02 |archive-date=20 ಮೇ 2014 |archive-url=https://web.archive.org/web/20140520201204/http://www.theinnocents.com.au/ |url-status=dead }}</ref> ಸಹ ಟ್ಯಾಸ್ಮೆನಿಯಾ ಮೂಲದ್ದಾಗಿವೆ. ಶಾಸ್ತ್ರೀಯ ಸಂಗೀತ ಋತು, ಹಾಗೂ, ರಾಜ್ಯಾದ್ಯಂತ ಸಂಗೀತ ಪ್ರದರ್ಶನ ಪ್ರವಾಸ ನೀಡುವ ಸ್ಥಳೀಯ ಹಾಗೂ ಅಂತರರಾಜ್ಯ ತಂಡಗಳಿವೆ. ಇದಲ್ಲದೆ, ಬೇಸಿಗೆಯ ಋತುವಿನಲ್ಲಿ ನಡೆಯುವ ಫಾಲ್ಸ್ ಫೆಸ್ಟಿವಲ್ ಹಾಗೂ ಕ್ರಿಸ್ಮಸ್ ಹಬ್ಬಕ್ಕೆ ಕೆಲವು ವಾರಗಲ ಮುಂಚೆ ನಡೆಯುವ ಕೆರೊಲ್ಸ್ ಬೈ ಕ್ಯಾಂಡ್ಲ್ಲೈಟ್- ಇವೆರಡೂ ಸಹ, ವರ್ಷವಾರು ಸಂಗೀತ ಚಟುವಟಿಕೆಗಳಲ್ಲಿ ಪ್ರಮುಖ ಪ್ರದರ್ಶನಗಳಾಗಿವೆ.
''ದಿ ಮೋಲ್'' ನ ಮೊದಲ ಋತುವಿನ ಚಿತ್ರೀಕರಣವನ್ನು ಮುಖ್ಯವಾಗಿ ಟ್ಯಾಸ್ಮೆನಿಯಾದಲ್ಲಿ ನಡೆಸಲಾಯಿತು. ಖ್ಯಾತ ಪೋರ್ಟ್ ಆರ್ಥರ್ ಕಾರಾವಾಸದಲ್ಲಿ ಅಂತಿಮ ಸುತ್ತು ನಡೆಯಿತು.
=== ಟ್ಯಾಸ್ಮೆನಿಯನ್ ಚಲನಚಿತ್ರರಂಗ ===
''ದಿ ಟೇಲ್ ಆಫ್ ರೂಬಿ ರೋಸ್'', ''ದಿ ಲಾಸ್ಟ್ ಕನ್ಫೆಷನ್ ಆಫ್ ಅಲೆಕ್ಸಾಂಡರ್ ಪಿಯರ್ಸ್'' ಹಾಗೂ ಇತ್ತೀಚೆಗಿನ ಚಲನಚಿತ್ರ ''ವಾನ್ ಡೀಮೆನ್ಸ್ ಲ್ಯಾಂಡ್'' ಸೇರಿದಂತೆ ಬಹಳಷ್ಟು ಚಲನಚಿತ್ರಗಳ ಚಿತ್ರೀಕರಣ ಹಾಗೂ ಕಥಾಹಂದರವನ್ನು ಟ್ಯಾಸ್ಮೆನಿಯಾದಲ್ಲಿ ಹೆಣೆಯಲಾಯಿತು. ಈ ಮೂರಲ್ಲಿಯೂ, ಟ್ಯಾಸ್ಮೆನಿಯನ್ ಭೂಚಿತ್ರಣವು ಪ್ರಮುಖ ಸ್ಥಾನದಲ್ಲಿದೆ. ಟ್ಯಾಸ್ಮೆನಿಯಾದ ಕೈದಿ ಇತಿಹಾಸದ ಬಗೆಗಿನ ಒಂದು ಕಂತಿನಲ್ಲಿ ''ದಿ ಲಾಸ್ಟ್ ಕನ್ಫೆಷನ್ ಆಫ್ ಅಲೆಕ್ಸಾಂಡರ್ ಪಿಯರ್ಸ್'' ಮತ್ತು ''ವಾನ್ ಡೀಮೆನ್ಸ್ ಲ್ಯಾಂಡ್'' ಕಥೆಗಳನ್ನು ಹೆಣೆಯಯಾಗಿದೆ.
=== ದೃಶ್ಯ ಕಲೆಗಳು ===
ದ್ವಿವರ್ಷೀಯ ಉತ್ಸವವಾದ ''ಟ್ಯಾಸ್ಮೆನಿಯನ್ ಲಿವಿಂಗ್ ಆರ್ಟಿಸ್ಟ್ಸ್ ವೀಕ್'', ಟ್ಯಾಸ್ಮೆನಿಯಾದ ದೃಶ್ಯಕಲಾವಿದರಿಗಾಗಿ ನಡೆಯುವ ಹತ್ತು-ದಿನಗಳ ಕಾಲದ ರಾಜ್ಯಾದ್ಯಂತ ಉತ್ಸವ. 2007ರಲ್ಲಿ ನಡೆದ ನಾಲ್ಕನೆಯ ಉತ್ಸವದಲ್ಲಿ 1000ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡರು. ಇಬ್ಬರು ಟ್ಯಾಸ್ಮೆನಿಯನ್ನರು ಪ್ರತಿಷ್ಠಿತ ಆರ್ಚಿಬಾಲ್ಡ್ ಪ್ರಶಸ್ತಿ ವಿಜೇತರಾಗಿದ್ದಾರೆ. ಪ್ರೊಫೆಸರ್ ಜೇಮ್ಸ್ ಮೆಕಾಲೆಯಂಡ್ ಪಾತ್ರ ನಿರ್ವಹಿಸಿದ ಜ್ಯಾಕ್ ಕ್ಯಾರಿಂಗ್ಟನ್ ಸ್ಮಿತ್ರಿಗೆ 1963ರಲ್ಲಿ ಹಾಗೂ ರಿಚರ್ಡ್ ಫ್ಲ್ಯಾನಗನ್ ಪಾತ್ರ ನಿರ್ವಹಿಸಿದ ಜಿಯೊಫ್ರಿ ಡಯರ್ಗೆ 2003ರಲ್ಲಿ ಈ ಪ್ರಶಸ್ತಿ ಲಭಿಸಿತು. ಛಾಯಾಚಿತ್ರಣ ಕಲಾವಿದರಾದ ಒಲೆಗಾಸ್ ಟ್ರುಕನಾಸ್ ಮತ್ತು ಪೀಟರ್ ಡೊಂಬ್ರೊವ್ಸ್ಕಿಸ್ರ ಕೃತಿಗಳು ಬಹಳಷ್ಟು ಪ್ರಸಿದ್ಧಿ ಪಡೆದು ಪೆಡ್ಡರ್ ಕೆರೆ ಮತ್ತು ಫ್ರ್ಯಾಂಕ್ಲಿನ್ ಅಣೆಕಟ್ಟಿನ ಸಂರಕ್ಷಣಾ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವು.
ಇಂಗ್ಲಿಷ್-ಸಂಜಾತ ಜಾನ್ ಗ್ಲೊವರ್ (1767-1849) ಟ್ಯಾಸ್ಮೆನಿಯನ್ ಭೂಚಿತ್ರಣಗಳ ಚಿತ್ರಕಲೆಗಳಿಗೆ ಪ್ರಸಿದ್ಧರಾಗಿದ್ದರು.
== ಮಾಧ್ಯಮಗಳು ==
=== ಕಿರುತೆರೆ ===
ಟ್ಯಾಸ್ಮೆನಿಯಾದಲ್ಲಿ ಐದು ದೂರದರ್ಶನ ಪ್ರಸಾರ ಕೇಂದ್ರಗಳಿವೆ:
* ಎಬಿಸಿ ಟ್ಯಾಸ್ಮೆನಿಯಾ. ಪ್ರತಿ ಸಂಜೆ 7 ಗಂಟೆಗೆ ಪ್ರಸಾರವಾಗುವ ಸ್ಥಳೀಯ ವಾರ್ತೆಗಳ ನಿರ್ಮಾಣ (ಡಿಜಿಟಲ್ ಮತ್ತು ಅನಾಲಾಗ್) (ಕರೆಸಂಕೇತ: ABT)
* ಎಸ್ಬಿಎಸ್ ಒನ್ (ಡಿಜಿಟಲ್ ಮತ್ತು ಅನಾಲಾಗ್) (ಕರೆಸಂಕೇತ: SBS)
* ಸದರ್ನ್ ಕ್ರಾಸ್ ಟೆಲಿವಿಷನ್ ಟ್ಯಾಸ್ಮೆನಿಯಾ (ಡಿಜಿಟಲ್ ಮತ್ತು ಅನಾಲಾಗ್). ಸೆವೆನ್ ನೆಟ್ವರ್ಕ್ ಅಂಗಸಂಸ್ಥೆ. (ಕರೆಸಂಕೇತ: TNT).
* ವಿನ್ ಟೆಲಿವಿಷನ್ ಟ್ಯಾಸ್ಮೆನಿಯಾ. (ಡಿಜಿಟಲ್ ಮತ್ತು ಅನಾಲಾಗ್). ನೈನ್ ನೆಟ್ವರ್ಕ್ನ ಅಂಗಸಂಸ್ಥೆ (ಕರೆಸಂಕೇತ: TVT)
* ಟ್ಯಾಸ್ಮೆನಿಯಾ ಡಿಜಿಟಲ್ ಟೆಲಿವಿಷನ್. ಮೆಲ್ಬೊರ್ನ್ನಲ್ಲಿರುವ ಎಟಿವಿ-10 ವಾಹಿನಿಯಿಂದ 'ಟೆನ್ ನ್ಯೂಸ್ ಅಟ್ ಫೈವ್' ಕಾರ್ಯಕ್ರಮವನ್ನು ಸ್ವೀಕರಿಸುತ್ತದೆ (ಡಿಜಿಟಲ್ ಪ್ರಸಾರ ಮಾತ್ರ).
ಟೆನ್ ನೆಟ್ವರ್ಕ್ನ ಅಂಗಸಂಸ್ಥೆ (ಕರೆಸಂಕೇತ: ಟಿಡಿಟಿ)
ಇದಲ್ಲದೆ ಪ್ರಸಾರಕೇಂದ್ರಗಳು ಹಲವು ಡಿಜಿಟಲ್ ವಾಹಿನಿಗಳನ್ನು ಪ್ರಸರಿಸುತ್ತವೆ:
* ಎಬಿಸಿ2 (ಎಬಿಟಿ ವಾಹಿನಿಯು ಮರುಪ್ರಸಾರ ಮಾಡುವುದು)
* ಎಬಿಸಿ3 (ಎಬಿಟಿ ವಾಹಿನಿಯು ಮರುಪ್ರಸಾರ ಮಾಡುವುದು)
* ಎಬಿಸಿ ನ್ಯೂಸ್ 24 (ಎಬಿಟಿ ವಾಹಿನಿಯು ಮರುಪ್ರಸಾರ ಮಾಡುವುದು)
* ಎಸ್ಬಿಎಸ್ ಟೂ (ಎಸ್ಬಿಎಸ್ ವಾಹಿನಿಯು ಮರುಪ್ರಸಾರ ಮಾಡುವುದು)
* ಎಸ್ಬಿಎಸ್ ಹೆಚ್ಡಿ (ಎಸ್ಬಿಎಸ್ ವಾಹಿನಿಯು ಮರುಪ್ರಸಾರ ಮಾಡುವುದು)
* ಒನ್ ಹೆಚ್ಡಿ (ಟಿಡಿಟಿ ವಾಹಿನಿಯು ಮರುಪ್ರಸಾರ ಮಾಡುವುದು)
* ಗೋ! (ಟಿವಿಟಿ ವಾಹಿನಿಯು ಮರುಪ್ರಸಾರ ಮಾಡುವುದು)
* ವಿನ್ ಹೆಚ್ಡಿ (ಟಿವಿಟಿ ವಾಹಿನಿಯು ಮರುಪ್ರಸಾರ ಮಾಡುವುದು)
* ಸದರ್ನ್ ಕ್ರಾಸ್ ಹೆಚ್ಡಿ (ಟಿಎನ್ಟಿ ವಾಹಿನಿಯು ಮರುಪ್ರಸಾರ ಮಾಡುವುದು)
* 7ಟೂ (ಟಿಎನ್ಟಿ ವಾಹಿನಿಯು ಮರುಪ್ರಸಾರ ಮಾಡುವುದು)
== ಕ್ರೀಡೆ ==
{{Main|Sport in Tasmania}}
[[ಚಿತ್ರ:Bellerive Oval Hill.JPG|thumb|240px|left|ಬೆಲ್ಲೆರೀವ್ ಒವಲ್ ಕ್ರಿಕೆಟ್ ಮೈದಾನದಲ್ಲಿ ಜನಸಂದಣಿ]]
ಟ್ಯಾಸ್ಮೆನಿಯಾದಲ್ಲಿ ಕ್ರೀಡೆಯು ಕೇವಲ ಪ್ರಮುಖ ಹವ್ಯಾಸವಷ್ಟೇ ಅಲ್ಲ. ಟ್ಯಾಸ್ಮೆನಿಯಾ ಮೂಲದ ಹಲವು ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದಾರೆ. ಈ ರಾಜ್ಯದಲ್ಲಿ ಹಲವು ಪ್ರಮುಖ ಕ್ರೀಡಾಕೂಟಗಳು ಆಯೋಜಿತವಾಗಿವೆ. ಟ್ಯಾಸ್ಮೆನಿಯನ್ ಟೈಗರ್ಸ್ ಕ್ರಿಕೆಟ್ ತಂಡವು ಟ್ಯಾಸ್ಮೆನಿಯಾ ರಾಜ್ಯವನ್ನು ಪ್ರತಿನಿಧಿಸುವಲ್ಲಿ ಸಫಲವಾಗಿದೆ (ಉದಾಹರಣೆಗೆ 2007ರ ಷೆಫೀಲ್ಡ್ ಷೀಲ್ಡ್ ಪಂದ್ಯಾವಳಿ). ಹೋಬಾರ್ಟ್ನಲ್ಲಿರುವ ಬೆಲೆರೀವ್ ಒವಲ್ ಕ್ರಿಕೆಟ್ ಕ್ರೀಡಾಂಗಣವು ಈ ತಂಡದ ಸ್ವಸ್ಥಳ. ಈ ಮೈದಾನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳೂ ನಡೆಯುತ್ತವೆ. ಟ್ಯಾಸ್ಮೆನಿಯನ್ ಕ್ರಿಕೆಟ್ ಆಟಗಾರರ ಪೈಕಿ ಡೇವಿಡ್ ಬೂನ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್ ಹಾಗೂ ಇತ್ತೀಚೆಗೆ ಕ್ರಿಕೆಟ್ ಟೆಸ್ಟ್ ತಂಡದ ಕಾಯಂ ಸದಸ್ಯ ವೇಗದ ಬೌಲರ್ ಬೆನ್ ಹಿಲ್ಫೆನ್ಹಾಸ್ ಪ್ರಸಿದ್ಧರು. ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್ ಸಹ ಇಲ್ಲಿ ಜನಪ್ರಿಯ ಆಟ. ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ (ಎಎಫ್ಎಲ್)ನಲ್ಲಿ ಟ್ಯಾಸ್ಮೆನಿಯನ್ ತಂಡ ಭಾಗವಹಿಸುವ ಪ್ರಸ್ತಾಪ ಆಗಾಗ್ಗೆ ಕೇಳಿಬರುವುದುಂಟು. ಲಾನ್ಸೆಸ್ಟನ್ನ ಯಾರ್ಕ್ ಪಾರ್ಕ್ನಲ್ಲಿರುವ ಅರೊರಾ ಕ್ರೀಡಾಂಗಣದಲ್ಲಿ, ಹಾಥಾರ್ನ್ ಫುಟ್ಬಾಲ್ ಕ್ಲಬ್ ಸೇರಿದಂತೆ, ಹಲವು ಎಎಫ್ಎಲ್ ಪಂದ್ಯಗಳು ನಡೆದಿವೆ. ಅಪಖ್ಯಾತಿ ಪಡೆದ, ಸೇಂಟ್ ಕಿಲ್ಡಾ ಮತ್ತು ಫ್ರೀಮ್ಯಾಂಟ್ಲ್ ತಂಡಗಳ ನಡುವಿನ ಪಂದ್ಯವನ್ನು ವಿವಾದಾಸ್ಪದವಾಗಿ ಡ್ರಾ ಎಂದು ಘೋಷಿಸಲಾಯಿತು. ಅಂಪೈರ್ಗಳು ಪಂದ್ಯದ ಅಂತ್ಯ ಎಂದು ಘೋಷಿಸುವ ಶಿಳ್ಳೆಯನ್ನು ಗಮನಿಸಲು ವಿಫಲವಾದದ್ದೆ ಇದಕ್ಕೆ ಕಾರಣ.
ರಾಜ್ಯಾದ್ಯಂತ ಅಸೊಷಿಯೇಷನ್ ಫುಟ್ಬಾಲ್ (ಸಾಕರ್) ಆಡಲಾಗುತ್ತದೆ. ಪ್ರಸ್ತುತ ಸದರ್ನ್ ಪ್ರೀಮಿಯರ್ ಲೀಗ್ ಮತ್ತು ನಾರ್ದರ್ನ್ ಪ್ರೀಮಿಯರ್ ಲೀಗ್ನ ಮಾದರಿಯಂತೆ ಟ್ಯಾಸ್ಮೆನಿಯನ್ ಹ್ಯುಂಡೈ ಎ-ಲೀಗ್ ಕ್ಲಬ್ ಲೀಗ್ ಪಂದ್ಯಾವಳಿಯನ್ನು ಆಯೋಜಿಸುವ ಪ್ರಸ್ತಾಪವು ಚರ್ಚೆಯಲ್ಲಿದೆ. ಆಸ್ಟ್ರೇಲಿಯನ್ ಒಪನ್ ಟೆನಿಸ್ ಪಂದ್ಯಾವಳಿಯ ಪೂರ್ವಸಿದ್ಧತೆ ಎಂಬಂತೆ, ಮೂರಿಲ್ಲಾ ಇಂಟರ್ನ್ಯಾಷನಲ್ ಟೆನಿಸ್ ಪಂದ್ಯಾವಳಿಯು ಟ್ಯಾಸ್ಮೆನಿಯಾದ ರಾಜಧಾನಿ ಹೋಬಾರ್ಟ್ನ ಹೋಬಾರ್ಟ್ ಇಂಟರ್ನ್ಯಾಷನಲ್ ಟೆನಿಸ್ ಸೆಂಟರ್ನಲ್ಲಿ ನಡೆಯುತ್ತದೆ. ಸಿಡ್ನಿ-ಹೋಬಾರ್ಟ್ ಓಡುದೋಣಿ ಓಟ ಸ್ಪರ್ಧೆಯು 1945ರಿಂದಲೂ ಪ್ರತಿ ವರ್ಷ ಬಾಕ್ಸಿಂಗ್ ಡೇ ಮತ್ತು ಹೊಸವರ್ಷದ ದಿನದ ತನಕ ಆಯೋಜಿತವಾಗಿದ್ದು, ಹೋಬಾರ್ಟ್ನಲ್ಲಿ ಅಂತ್ಯಗೊಳ್ಳುತ್ತದೆ.
ಆಡಲಾದ ಹಾಗೂ ಪ್ರೋತ್ಸಾಹಿಸಲಾದ ಕೆಲವು ಇತರೆ ಕ್ರೀಡಗಳು ಜನಪ್ರಯತೆ ಗಳಿಸುತ್ತಿದ್ದರೆ, ಇನ್ನು ಕೆಲವು ಅವಸಾನ ಕಾಣುತ್ತಿವೆ. ಉದಾಹರಣೆಗೆ, 1996ರಲ್ಲಿ ಹೋಬಾರ್ಟ್ ಡೆವಿಲ್ಸ್ ಕ್ರೀಡಾಸಂಘವು ಮುಚ್ಚಿಹೋದಾಗಿನಿಂದಲೂ, ಬ್ಯಾಸ್ಕೆಟ್ಬಾಲ್ ಕ್ರೀಡೆಯ ನ್ಯಾಷನಲ್ ಬ್ಯಾಸ್ಕೆಟ್ಬಾಲ್ ಲೀಗ್ ಪಂದ್ಯಾವಳಿಯಲ್ಲಿ ಟ್ಯಾಸ್ಮೆನಿಯಾದ ತಂಡವೇ ಇಲ್ಲ.
== ಟ್ಯಾಸ್ಮೆನಿಯಾದಲ್ಲಿನ ಸ್ಥಳಗಳು ==
{{See also|Geography of Tasmania}}
:''ಇವನ್ನೂ ನೋಡಿ: ಆಸ್ಟ್ರೇಲಿಯಾದ ದ್ವೀಪಗಳು, ಕೆರೆಗಳು, ಸೇತುವೆಗಳು, ಹೆದ್ದಾರಿಗಳು, ನದಿಗಳು, ಪರ್ವತಗಳು ಹಾಗೂ ವಲಯಗಳು.''
[[ಚಿತ್ರ:Bruny-Island-068.jpg|thumb|ಟ್ಯಾಸ್ಮೆನಿಯಾದ ಅಗ್ನೇಯ ಕಡಲ ತೀರದಾಚೆಯಿರುವ ಬ್ರುನಿ ದ್ವೀಪದ ಬಳಿ ಸಣ್ಣ ದ್ವೀಪ]]
[[ಚಿತ್ರ:Gorge fix.jpg|thumb|left|ಲಾಂಸೆಸ್ಟನ್ನಲ್ಲಿರುವ ಕ್ಯಾಟರಾಕ್ಟ್ ಗಾರ್ಜ್]]
[[ಚಿತ್ರ:Misty cradle mountain and lake - tasmania.jpg|thumb|left|ಹಿನ್ನೆಲೆಯಲ್ಲಿ ಕ್ರೇಡ್ಲ್ ಮೌಂಟನ್ ಹೊಂದಿರುವ ಡವ್ ಲೇಕ್ನ ಒಂದು ದೃಶ್ಯ]]
[[ಚಿತ್ರ:Frenchmans Cap.JPG|thumb|right|ಫ್ರೆಂಚ್ಮನ್ಸ್ ಕ್ಯಾಪ್ ಪರ್ವತದ ದೃಶ್ಯ]]
{| valign="top"
|-
| style="vertical-align:top; width:200px; font-size:90%;"
| '''ದ್ವೀಪಗಳು:''' '''ಕೆರೆಗಳು:'''
* ಬೌಂಡರಿ ಐಲೆಟ್
* ಬ್ರೂನಿ ಐಲೆಂಡ್
* ಕೇಪ್ ಬ್ಯಾರೆನ್ ಐಲೆಂಡ್
* ಫ್ಲಿಂಡರ್ಸ್ ಐಲೆಂಡ್
* ಹೊಗನ್ ಐಲೆಂಡ್
* ಕೆಂಟ್ ಗ್ರೂಪ್
* ಕಿಂಗ್ ಐಲೆಂಡ್
* ಮಾಟ್ಸುಯ್ಕರ್ ಐಲೆಂಡ್ಸ್
* ಮೆಕ್ವಾರಿ ಐಲೆಂಡ್
* ಮ್ಯಾರಿಯಾ ಐಲೆಂಡ್
* ರೌಂಡ್ ಐಲೆಂಡ್
* ಷೌಟೆನ್ ಐಲೆಂಡ್
* ಸ್ಮೂತ್ ಐಲೆಂಡ್ (ಟ್ಯಾಸ್ಮೆನಿಯಾ)
| style="vertical-align:top; width:200px; font-size:90%;"
| '''ಗಮನಾರ್ಹ ಸೇತುವೆಗಳು:''' '''ಕಡಲತೀರಗಳು:'''
* ಬೊವೆನ್ ಬ್ರಿಡ್ಜ್
* ಬ್ಯಾಟ್ಮನ್ ಬ್ರಿಡ್ಜ್
* ಬ್ರಿಡ್ಜ್ವಾಟರ್ ಬ್ರಿಡ್ಜ್
* ರಾಸ್ ಬ್ರಿಡ್ಜ್
* ರಿಚ್ಮಂಡ್ ಬ್ರಿಡ್ಜ್
* ಸೊರೆಲ್ ಕಾಸ್ವೇ
* ಟ್ಯಾಸ್ಮೆನ್ ಬ್ರಿಡ್ಜ್
| style="vertical-align:top; width:200px; font-size:90%;"
| ''' ಪ್ರಮುಖ ಹೆದ್ದಾರಿಗಳು:'''
* ಆರ್ಥರ್ ಹೈವೇ
* ಬಾಸ್ ಹೈವೇ
* ಬ್ರೂಕರ್ ಹೈವೇ
* ಈಸ್ಟ್ ಟಮರ್ ಹೈವೇ
* ಎಸ್ಕ್ ಹೈವೇ
* ಹುವೊನ್ ಹೈವೇ
* ಲೇಕ್ ಹೈವೇ
* ಲಯೆಲ್ ಹೈವೇ
* ಮಿಡ್ಲೆಂಡ್ ಹೈವೇ
* ಮರ್ಚಿಸನ್ ಹೈವೇ
* ಟ್ಯಾಸ್ಮೆನ್ ಹೈವೇ
* ವೆಸ್ಟ್ ಟಮರ್ ಹೈವೇ
* ಝೀಹನ್ ಹೈವೇ
| style="vertical-align:top; width:200px; font-size:90%;"
| '''ನದಿಗಳು'''
* ಆರ್ಥರ್ ನದಿ
* ಡರ್ವೆಂಟ್ ನದಿ
* ಫ್ರ್ಯಾಂಕ್ಲಿನ್ ನದಿ
* ಗೊರ್ಡಾನ್ ನದಿ
* ಹೆಂಟಿ ನದಿ
* ಹುವೊನ್ ನದಿ
* ಕಿಂಗ್ ನದಿ
* ಲೆವೆನ್ ನದಿ
* ಮೀಂಡರ್ ನದಿ
* ಮರ್ಸೀ ನದಿ
* ನಾರ್ತ್ ಎಸ್ಕ್ ನದಿ
* ಪೈಮನ್ ನದಿ
* ಪಿಕ್ಟನ್ ನದಿ
* ಕ್ವೀನ್ ನದಿ
* ಸ್ಯಾವೇಜ್ ನದಿ
* ಸೌತ್ ಎಸ್ಕ್ ನದಿ
* ಸ್ಟಿಕ್ಸ್ ನದಿ
* ಟಮರ್ ನದಿ
| style="vertical-align:top; width:200px; font-size:90%;"
| '''ಪರ್ವತಗಳು:''' '''ವಲಯಗಳು:'''
* ಬೆನ್ ಲೊಮಂಡ್
* ಕ್ರೇಡ್ಲ್ ಪರ್ವತ
* ಫೆಡರೇಷನ್ ಪೀಕ್
* ಮೌಂಟ್ ಫೀಲ್ಡ್
* ಫ್ರೆಂಚ್ಮನ್ಸ್ ಕ್ಯಾಪ್
* ಗ್ರೇಟ್ ವೆಸ್ಟರ್ನ್ ಟಯರ್ಸ್
* ಮೌಂಟ್ ಒಸಾ
* ಮೌಂಟ್ ವೆಲಿಂಗ್ಟನ್
* ವೆಸ್ಟ್ ಕೋಸ್ಟ್ ರೇಂಜ್
|}
== ಪ್ರಸಿದ್ಧ ಟ್ಯಾಸ್ಮೆನಿಯನ್ನರು ==
{{Main|List of Tasmanians}}
ಟ್ಯಾಸ್ಮೆನಿಯಾದ ಗಣ್ಯರಲ್ಲಿ ಇವರೆಲ್ಲರೂ ಸೇರಿದ್ದಾರೆ:
{{Div col|cols=2}}
* ಡೆನ್ಮಾರ್ಕ್ನ ಕ್ರೌನ್ ಪ್ರಿನ್ಸೆಸ್ ಮೇರಿ (ಮೇರಿ ಡೊನಾಲ್ಡ್ಸನ್)
* ಜೊಸೆಫ್ ಲಯನ್ಸ್, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ
* ಜೊಸೆಫ್ ಲಯನ್ಸ್ರ ಪತ್ನಿ ಎನಿಡ್ ಲಯನ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಪ್ರಥಮ ಸದಸ್ಯೆ
* ಎಲಿಜಬೆತ್ ಬ್ಲ್ಯಾಕ್ಬರ್ನ್, [[ನೊಬೆಲ್ ಪ್ರಶಸ್ತಿ|ನೊಬೆಲ್ ಪ್ರಶಸ್ತಿ]] ಗಳಿಸಿದ ಮೊದಲ ಆಸ್ಟ್ರೇಲಿಯನ್ ಮಹಿಳೆ
* ಗ್ರಂಥಕರ್ತ ರಿಚರ್ಡ್ ಫ್ಲ್ಯಾನಗನ್
* ಗ್ರಂಥಕರ್ತ ಕ್ರಿಸ್ಟೊಫರ್ ಕೊಚ್
* ನಟ ಎರೊಲ್ ಫ್ಲಿನ್
* ನಟ ಸೈಮನ್ ಬೇಕರ್, ''ದಿ ಮೆಂಟಲಿಸ್ಟ್'' ಚಲನಚಿತ್ರದಲ್ಲಿ ನಟಿಸಿದಾತ
* ನಟಿ ರಾಚೆಲ್ ಟೇಯ್ಲರ್
* ನೃತ್ಯ ಕಲಾವಿದ ಮತ್ತು ನೃತ್ಯ ಸಂಯೋಜಕ ಗ್ರ್ಯೇಮ್ ಮರ್ಫಿ
* ಸಂಯೋಜಕ ಪೀಟರ್ ಸ್ಕಲ್ಥಾರ್ಪ್
* ಬ್ರಿಸ್ಬೆನ್ನ ಆಂಗ್ಲಿಕನ್ ಪ್ರಧಾನ ಬಿಷಪ್ ಹಾಗೂ ಆಸ್ಟ್ರೇಲಿಯಾದ ಪ್ರಧಾನ (ಪ್ರೈಮೇಟ್) ಬಿಷಪ್ ಫಿಲಿಪ್ ಅಸ್ಪಿನಾಲ್
* ಮರಕಡಿಯುವವ ವಿಶ್ವ ಚಾಂಪಿಯನ್ ಡೇವಿಡ್ ಫೊಸ್ಟರ್
* [[ಕ್ರಿಕೆಟ್|ಕ್ರಿಕೆಟ್]] ಆಟಗಾರ ರಿಕಿ ಪಾಂಟಿಂಗ್
* ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರ ಡೇವಿಡ್ ಬೂನ್
* ಟ್ರುಗನಿನಿ, ಜೀವಂತ ಕಟ್ಟಕಡೆಯ ಬುಡಕಟ್ಟು ಟ್ಯಾಸ್ಮೆನಿಯನ್ ಮೂಲನಿವಾಸಿ
* ವಿ8 ಸೂಪರ್ಕಾರ್ ಚಾಲಕ ಜಾನ್ ಬೋವ್ (1995ರಲ್ಲಿ ಚಾಂಪಿಯನ್)
* ವಿ8 ಸೂಪರ್ಕಾರ್ ಚಾಲಕ ಮಾರ್ಕೊಸ್ ಆಂಬ್ರೊಸ್ (2003-2004 ಚಾಂಪಿಯನ್)
* ಎಫ್. ಮಥಾಯಸ್ ಅಲೆಕ್ಸಾಂಡರ್ (1869–1955) - ಅಲೆಕ್ಸಾಂಡರ್ ಟೆಕ್ನಿಕ್ನ ಜನಕ
* ಮಿಷೆಲ್ ಜಿ. ಕ್ರಾಸ್ಕ್, ಪಿ.ಹೆಚ್.ಡಿ - ವೈದ್ಯಕೀಯ ಸಂಶೋಧಕ, ಗ್ರಂಥಕರ್ತ, ಚಿಕಿತ್ಸಕ ಹಾಗೂ ಪ್ರಾಧ್ಯಾಪಕ
* ಲೆಗ್ಯಾಸಿಯ ಸಂಸ್ಥಾಪಕ ಜಾನ್ ಗೆಲಿಬ್ರ್ಯಾಂಡ್
* ಸೈಕ್ಲಿಂಗ್ ಪಟು ಲೂಕ್ ಆಕರ್ಬಿ
* ಸೈಕ್ಲಿಂಗ್ ಪಟು ರಿಚಿ ಪೊರ್ಟ್
* ಡ್ರಮ್ ವಾದಕ ಡೇವ್ ಹೇಲಿ ಟೆಕ್ನಿಕಲ್ ಡೆತ್ ಮೆಟಲ್ ಸಂಗೀತ ಶೈಲಿಯ ವಾದ್ಯ ತಂಡ ಸೈಕ್ರಾಪ್ಟಿಕ್ ಹಾಗೂ ಬ್ಲ್ಯಾಕ್ ಮೆಟಲ್ ಸಂಗೀತ ಶೈಲಿಯ ವಾದ್ಯ ತಂಡ ರುಯಿನ್ಸ್ (ಮೆಟಲ್ ಬ್ಯಾಂಡ್) ಸದಸ್ಯ
* ಬಾಬ್ ಕ್ಲಿಫರ್ಡ್ - ಇಂಕ್ಯಾಟ್ ಸಂಸ್ಥಾಪಕ ಮತ್ತು ಮಾಲೀಕ
* ರುಯಿನ್ಸ್ (ಮೆಟಲ್ ಬ್ಯಾಂಡ್) ಸದಸ್ಯ ಹಾಗೂ ಸೀ ಸ್ಕೌಟ್ಸ್ (ವಾದ್ಯತಂಡ) ಮಾಜಿ ಸದಸ್ಯ ಅಲೆಕ್ಸ್ ಪೋಲ್
{{Div col end}}
== ಇವನ್ನೂ ಗಮನಿಸಿ ==
* ಟ್ಯಾಸ್ಮೆನಿಯಾದಲ್ಲಿ ದೇಶೀಯ ಪಾಲುದಾರಿಕೆ
* ಅವ್ರಾಮ್ನ ಗ್ರ್ಯಾಂಡ್ ಡಚಿ
* ಟ್ಯಾಸ್ಮೆನಿಯಾದಲ್ಲಿನ ಶಾಲೆಗಳ ಪಟ್ಟಿ
* ಟ್ಯಾಸ್ಮೆನಿಯಾದ ರಕ್ಷಿತ ಪ್ರದೇಶಗಳು
* ಟ್ಯಾಸ್ಮೆನಿಯಾ ವಿಶ್ವವಿದ್ಯಾನಿಲಯ
== ಉಲ್ಲೇಖಗಳು ==
{{Reflist|colwidth=30em}}
== ಮುಂದಿನ ಓದಿಗಾಗಿ ==
* ಅಲೆಕ್ಸಾಂಡರ್, ಅಲಿಸನ್ (ಸಂಪಾದಕರು) (2005) ''ದಿ ಕಂಪ್ಯಾನಿಯನ್ ಟು ಟ್ಯಾಸ್ಮೆನಿಯನ್ ಹಿಸ್ಟರಿ'' ಸೆಂಟರ್ ಫಾರ್ ಟ್ಯಾಸ್ಮೆನಿಯನ್ ಹಿಸ್ಟರಿಕಲ್ ಸ್ಟಡೀಸ್, ಟ್ಯಾಸ್ಮೆನಿಯಾ, ಹೋಬಾರ್ಟ್. ISBN 1-932714-12-X
* ರಾಬ್ಸನ್, ಎಲ್.ಎಲ್. (1983) ''ಎ ಹಿಸ್ಟರಿ ಆಫ್ ಟ್ಯಾಸ್ಮೆನಿಯಾ. '' ''ವಾಲ್ಯೂಮ್ I. ವಾನ್ ಡೀಮೆನ್ಸ್ ಲ್ಯಾಂಡ್ ಫ್ರಮ್ ದಿ ಅರ್ಲಿಯೆಸ್ಟ್ ಟೈಮ್ಸ್ ಟು 1855'' ಮೆಲ್ಬೊರ್ನ್, ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್.
ISBN 0-9771991-1-8.
* ರಾಬ್ಸನ್, ಎಲ್.ಎಲ್. (1991) ''ಎ ಹಿಸ್ಟರಿ ಆಫ್ ಟ್ಯಾಸ್ಮೆನಿಯಾ. '' ''ವಾಲ್ಯೂಮ್ II. ಕಾಲೊನಿ ಅಂಡ್ ಸ್ಟೇಟ್ ಫ್ರಮ್ 1856 ಟು ದಿ 1980ಸ್'' Melbourne, Oxford University Press.
ISBN 0-9771991-1-8.
== ಬಾಹ್ಯ ಕೊಂಡಿಗಳು ==
{{commons}}
* [http://tas.gov.au/ ಟ್ಯಾಸ್ಮೆನಿಯಾ ಆನ್ಲೈನ್ - ರಾಜ್ಯ ಸರ್ಕಾರದ ಪ್ರಮುಖ ಅಂತರಜಾಲತಾಣ ] {{Webarchive|url=https://web.archive.org/web/20230710093253/https://www.tas.gov.au/ |date=10 ಜುಲೈ 2023 }}
* [http://www.discovertasmania.com/ ಡಿಸ್ಕವರ್ ಟ್ಯಾಸ್ಮೆನಿಯಾ] - ಅಧಿಕೃತ ಪ್ರವಾಸೋದ್ಯಮ ಅಂತರಜಾಲತಾಣ
{{States and territories of Australia}}
{{Australia topics}}
{{Use dmy dates|date=August 2010}}
{{EngvarB|date=August 2010}}
{{Interwikineeded}}
[[ವರ್ಗ:ಆಸ್ಟ್ರೇಲಿಯಾದ ದ್ವೀಪಗಳು]]
[[ವರ್ಗ:ಟ್ಯಾಸ್ಮೆನಿಯಾ]]
[[ವರ್ಗ:ಹಿಂದಿನ ಬ್ರಿಟಿಷ್ ವಸಾಹತುಗಳು]]
[[ವರ್ಗ:ಆಸ್ಟ್ರೇಲಿಯಾದ ರಾಜ್ಯಗಳು ಮತ್ತು ಪ್ರದೇಶಗಳು]]
[[ವರ್ಗ:1825ರಲ್ಲಿ ಸ್ಥಾಪಿತವಾದ ರಾಜ್ಯಗಳು ಮತ್ತು ಪ್ರದೇಶಗಳು]]
au2tkn4av2bbb1vwfthj5llpy2pfdc2
ಇಂಡಿಯನ್ ಆಯಿಲ್ ಕಾರ್ಪೊರೇಷನ್
0
25887
1379457
1373476
2026-08-08T15:43:11Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379457
wikitext
text/x-wiki
{{Orphan|date=ಮಾರ್ಚ್ ೨೦೧೯}}
{{for|the American-based oil company|Indian Refining Company}}
{{Infobox company
| company_name = Indian Oil Corporation Limited
| company_logo = [[Image:Indian Oil Logo.svg|150px]]
| company_type = [[Government-owned corporation|State-owned enterprise]]<br />[[public company|Public]] ({{NSE|IOC}})
| foundation = 1964
| company_slogan = Bringing Energy to Life
| location = [[ನವ ದೆಹಲಿ]], India
| key_people = Brij Mohan Bansal, [[Chairman]]
| num_employees = 36,307 (2009)
| revenue = {{loss}} {{INRConvert|253964.10|c}} (2009-10)<ref name="bseindia1">{{cite web |url=http://www.bseindia.com/qresann/detailedresult_cons.asp?scrip_cd=530965&qtr=65.5&compname=INDIAN%20OIL%20CORPORATION%20LTD.&quarter=MC2009-2010&checkcons=55c |title=BSE 2010 Data |publisher=http://www.bseindia.com |date= |accessdate=2010-08-26 }}{{Dead link|date=ಜೂನ್ 2025 |bot=InternetArchiveBot |fix-attempted=yes }}</ref>
| net_income = {{increase}} {{INRConvert|10998.68|c}} (2009-10) <ref name="bseindia1"/>
| assets = {{increase}} $29.672 billion (2009-10)<ref name=sbi>{{cite web |url=http://money.cnn.com/magazines/fortune/global500/2010/snapshots/6361.html |title=Fortune Global 500 2010 Rankings - Indian Oil Corporation |publisher=Money.cnn.com |date= |accessdate=2010-08-26 |archive-date=2010-07-26 |archive-url=https://web.archive.org/web/20100726091655/http://money.cnn.com/magazines/fortune/global500/2010/snapshots/6361.html |url-status=dead }}</ref>
| equity = {{increase}} $11.686 billion (2009-10) <ref name=sbi/>
| industry = [[List of petroleum companies|Oil and Gas]]
| products = [[Oil]]<br />[[Petroleum]]<br />[[Natural gas]]<br />[[Petrochemical]]<br />[[Fuel]]<br />[[Lubricant]]
| homepage = [http://www.iocl.com/ Iocl.com]
}}
[[File:IndianOil tanker in front of terminal 1C at Mumbai airport.JPG|right|thumb|ಮುಂಬಯಿಯ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಇಂಡಿಯನ್ ಆಯಿಲ್ ಟ್ಯಾಂಕರ್]]
'''ಇಂಡಿಯನ್ ಆಯಿಲ್ ಕಾರ್ಪೊರೇಷನ್''', ಅಥವಾ '''ಇಂಡಿಯನ್ ಆಯಿಲ್''', ({{NSE|IOC}}) ಎನ್ನುವುದು [[ಭಾರತ]]ದ ಸರ್ಕಾರಿ-ಮಾಲೀಕತ್ವದ ತೈಲ ಮತ್ತು ಅನಿಲ ಕಂಪನಿಯಾಗಿದೆ. ಇದು [[ಭಾರತ]]ದ ಅತೀ ದೊಡ್ಡ ವಾಣಿಜ್ಯಿಕ ಸಂಸ್ಥೆಯಾಗಿದ್ದು, 2009 ರ ಫಾರ್ಚ್ಯೂನ್ ಗ್ಲೋಬಲ್ 500 ಪಟ್ಟಿಯಲ್ಲಿ 105 ನೇ ಶ್ರೇಣಿಯನ್ನು ಪಡೆದುಕೊಂಡಿದೆ. ಇಂಡಿಯನ್ ಆಯಿಲ್ ಮತ್ತು ಅದರ ಅಂಗಸಂಸ್ಥೆಗಳು ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ 47% ರಷ್ಟು, ಸಂಸ್ಕರಣೆ ಸಾಮರ್ಥ್ಯದಲ್ಲಿ 40% ರಷ್ಟು ಮತ್ತು ಭಾರತದಲ್ಲಿನ ಪೈಪ್ಲೈನ್ಗಳ ಪ್ರಮುಖ ವಿಭಾಗದಲ್ಲಿ 67% ಪಾಲನ್ನು ಹೊಂದಿವೆ. ಇಂಡಿಯಲ್ ಆಯಿಲ್ ಕಂಪನಿಗಳ ಸಮೂಹವು ಭಾರತದಲ್ಲಿ 19 ತೈಲ ಸಂಸ್ಥರಣಾಗಾರಗಳಲ್ಲಿ 10 ರ ಮಾಲೀಕತ್ವ ಮತ್ತು ಕಾರ್ಯನಿರ್ವಹಣೆಯನ್ನು ಹೊಂದಿದ್ದು, ಪ್ರತಿ ವರ್ಷ 60.2 ಮಿಲಿಯನ್ ಮೆಟ್ರಿಕ್ ಟನ್ನಷ್ಟು ಸಂಯೋಜಿತ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ.
ರಾಷ್ಟ್ರದಲ್ಲಿ ಇಂಡಿಯನ್ ಆಯಿಲ್ 17606 ರಷ್ಟು ಸಂಖ್ಯೆಯಲ್ಲಿ ಅತಿದೊಡ್ಡ ಮತ್ತು ವ್ಯಾಪಕವಾದ ಇಂಧನ ಕೇಂದ್ರಗಳ ಸರಣಿಯನ್ನು ಹೊಂದಿದೆ (15557 ಸಾಮಾನ್ಯ ಆರ್ಓಗಳು ಮತ್ತು 2049 ಕಿಸಾನ್ ಸೇವಾ ಕೇಂದ್ರಗಳು). ಇದು ಆಟೋ ಎಲ್ಪಿಜಿ ವಿತರಣಾ ಕೇಂದ್ರಗಳನ್ನು (ಎಎಲ್ಡಿಎಸ್) ಸಹ ಪ್ರಾರಂಭಿಸಿದೆ. ಇದು ತನ್ನ 4,900 ಭಾರತೀಯ ಹಂಚಿಕೆದಾರರ ನೆಟ್ವರ್ಕ್ ಮುಖಾಂತರ 47.5 ಮಿಲಿಯನ್ಗೂ ಹೆಚ್ಚು ಮನೆಗಳಿಗೆ ಇಂಡೇನ್ ಅಡುಗೆ ಅನಿಲವನ್ನು ಪೂರೈಸುತ್ತದೆ. ಇದಕ್ಕೆ ಹೆಚ್ಚಿನದಾಗಿ, ಫರಿದಾಬಾದ್ ನಲ್ಲಿರುವ ಭಾರತೀಯ ಆಯಿಲ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಆರ್ & ಡಿ) ವು ಕಾರ್ಪೊರೇಶನ್ನ ಕಾರ್ಯನಿರ್ವಹಣೆ ವಿಭಾಗಗಳಿಗೆ ಮತ್ತು ದೇಶದ ಮತ್ತು ವಿದೇಶದ ತನ್ನ ಗ್ರಾಹಕರಿಗೆ ಅಗತ್ಯವಾದ ತಂತ್ರಜ್ಞಾನ ಪರಿಹಾರಗಳನ್ನು ಬೆಂಬಲಿಸುತ್ತದೆ, ಅಭಿವೃದ್ಧಿಪಡಿಸುತ್ತದೆ ಮತ್ತು ಒದಗಿಸುತ್ತದೆ. ತರುವಾಯು, ಇಂಡಿಯನ್ ಆಯಿಲ್ ಟೆಕ್ನಾಲಜೀಸ್ ಲಿಮಿಟೆಡ್ - ಪೂರ್ಣ ಸ್ವಾಮ್ಯದ ಅಂಗಸಂಸ್ಥೆಯನ್ನು 2003 ರಲ್ಲಿ ಇಂಡಿಯನ್ ಆಯಿಲ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಮಾರುಕಟ್ಟೆ ಮಾಡುವ ಗುರಿಯೊಂದಿಗೆ ಸ್ಥಾಪಿಸಲಾಯಿತು. ಇದನ್ನು ರಾಯಲ್ ಡಚ್ ಶೆಲ್ ಮತ್ತು ಬ್ರಿಟಿಷ್ ಪೆಟ್ರೋಲಿಯಂನ ಆರ್ & ಡಿ ವಿಭಾಗಗಳಿಂದ ಆದರ್ಶಪ್ರಾಯವಾಗಿ ಪಡೆಯಲಾಗಿದೆ.
== ಇತಿಹಾಸ ==
ಇಂಡಿಯಲ್ ಆಯಿಲ್ ಕಂಪನಿ ಲಿಮಿಟೆಡ್ ಆಗಿ 1959 ರಲ್ಲಿ ಇಂಡಿಯಲ್ ಆಯಿಲ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇಂಡಿಯ್ ರಿಫೈನರೀಸ್ ಲಿಮಿಟೆಡ್ನೊಡನೆ ವಿಲೀನದೊಂದಿಗೆ 1964 ರಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ರೂಪಿತವಾಯಿತು.
== ಉತ್ಪನ್ನಗಳು ==
ಇಂಡಿಯಲ್ ಆಯಿಲ್ನ ಉತ್ಪನ್ನ ಶ್ರೇಣಿಗಳು ಪೆಟ್ರೋಲ್, ಡೀಸೆಲ್, ಎಲ್ಪಿಜಿ, ಆಟೋ ಎಲ್ಪಿಜಿ, ವಿಮಾನದ ಟರ್ಬೈನ್ ಇಂಧನ, ಲೂಬ್ರಿಕೆಂಟ್ಗಳು, ನಾಫ್ತಾ, ಬಿಟುಮೆನ್, ಪ್ಯಾರಾಫಿನ್, ಕೆರೋಸಿನ್ ಮುಂತಾದವು. ಎಕ್ಸ್ಟ್ರಾ ಪ್ರೀಮಿಯಂ ಪೆಟ್ರೋಲ್, ಎಕ್ಸ್ಟ್ರಾ ಮೈಲ್ ಡೀಸೆಲ್, ಸರ್ವೋ ಲೂಬ್ರಿಕೆಂಟ್ಗಳು, ಇಂಡೇನ್ ಎಲ್ಪಿಜಿ, ಆಟೋಗ್ಯಾಸ್ ಎಲ್ಪಿಜಿ, ಇಂಡಿಯನ್ ಆಯಿಲ್ ಏವಿಯೇಶನ್ಗಳು ಪ್ರಮುಖ ಬ್ರಾಂಡ್ಗಳಲ್ಲಿ ಕೆಲವು ಆಗಿವೆ.<br>ಇತ್ತೀಚೆಗೆ ಇಂಡಿಯನ್ ಆಯಿಲ್ ಕ್ರಯೋಜೆನಿಕ್ ಸಾಗಾಣಿಕೆಯ ಮೂಲಕ ಎಲ್ಎನ್ಜಿ (ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್) ಪೂರೈಸುವ ಹೊಸ ವ್ಯಾಪಾರ ಸ್ವರೂಪವನ್ನು ಪರಿಚಿಯಿಸಿದೆ. ಇದನ್ನು "ಮನೆಬಾಗಿಲಲ್ಲಿ ಎಲ್ಎನ್ಜಿ" ಎಂದು ಕರೆಯಲಾಗುತ್ತದೆ. ಎಲ್ಎನ್ಜಿಯ ಪ್ರಧಾನ ಕಚೇರಿಯು [[ದೆಹಲಿ]]ಯ ಲೋಧಿ ರಸ್ತೆಯಲ್ಲಿರುವ ಸ್ಕೋಪ್ ಕಾಂಪ್ಲೆಕ್ಸ್ನಲ್ಲಿದೆ.ಇಂಡಿಯನ್ ಆಯಿಲ್ನ ಉತ್ಪನವಾದ LPGಯನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರ ಗ್ರಾಮಿಣ ಪ್ರದೇಶದ ಕುಟುಂಬದ ಸದಸ್ಯರಿಗೆ ಉಚಿತವಾಗಿ ೨೦೧೭ರಲ್ಲಿ ಕೂಡಲು ಆರಂಭಿಸಿದಾರೆ ಇದರಿಂದ [[ಅರಣ್ಯನಾಶ]] ಮತ್ತು ವಾಯುಮಾಲಿನ್ಯ ತಡೆಗಟ್ಟಲಾಗಿದೆ
== ಸಂಸ್ಕರಣಾಗಾರಗಳು ==
* ಮೇಲಿನ ಅಸ್ಸಾಮ್ನಲ್ಲಿರುವ ದಿಗ್ಬೋಯಿ ಸಂಸ್ಕರಣಾಗಾರವು ಭಾರತದ ಅತ್ಯಂತ ಹಳೆಯ ಸಂಸ್ಕರಣಾಗಾರವಾಗಿದ್ದು, ಇದು 1901 ರಲ್ಲಿ ಕಾರ್ಯಾರಂಭ ಮಾಡಿತು. ಮೂಲಭೂತವಾಗಿ ಅಸ್ಸಾಮ್ ಆಯಿಲ್ ಕಂಪನಿಯ ಭಾಗವಾಗಿದ್ದು, 1981 ರಲ್ಲಿ ಇದು ಇಂಡಿಯಲ್ ಆಯಿಲ್ನ ಭಾಗವಾಯಿತು. 1901 ರಿಂದ ಇದರ ನೈಜವಾದ ಸಂಸ್ಕರಣಾ ಸಾಮರ್ಥ್ಯವು 0.5 ಎಮ್ಎಮ್ಟಿಪಿಎ ಆಗಿತ್ತು. ಈ ಸಂಸ್ಕರಣಾಗಾರದ ಆಧುನೀಕರಿಸುವಿಕೆಯ ಯೋಜನೆಯು ಪೂರ್ಣಗೊಳಿಸಲಾಗಿದೆ ಮತ್ತು ಇದೀಗ ಸಂಸ್ಕರಣಾಗಾರವು 0.65 ಎಮ್ಎಮ್ಟಿಪಿಎ ನಷ್ಟು ಹೆಚ್ಚಿಸಿದ ಸಾಮರ್ಥ್ಯವನ್ನು ಹೊಂದಿದೆ.
* ಗುವಹಾಟಿ ಸಂಸ್ಕರಣಾಗಾರವು, ರಾಷ್ಟ್ರದ ಮೊದಲ ಸಾರ್ವಜನಿಕ ಕ್ಷೇತ್ರದ ಸಂಸ್ಕರಣಾಗಾರವಾಗಿದ್ದು, ಇದನ್ನು ರೊಮಾನಿಯನ್ ಸಹಯೋಗದೊಂದಿಗೆ ನಿರ್ಮಿಸಲಾಗಿದೆ ಮತ್ತು ಇದನ್ನು ಭಾರತದ ಮೊದಲ ಪ್ರಧಾನಮಂತ್ರಿಯವರಾದ. ದಿವಂಗತ ಪಂಡಿತ್ [[ಜವಾಹರಲಾಲ್ ನೆಹರು|ಜವಹರಲಾಲ್ ನೆಹರು]] ಅವರು 1962 ರ ಜನವರಿ 1 ರಂದು ಉದ್ಭಾಟಿಸಿದರು.
* ಬಿಹಾರದಲ್ಲಿರುವ ಬರೌನಿ ಸಂಸ್ಕರಣಾಗಾರವನ್ನು ರಷ್ಯಾ ಮತ್ತು ರೊಮಾನಿಯಾದ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಇದು 1964 ರಲ್ಲಿ 1 ಎಮ್ಎಮ್ಟಿಪಿಎ ಸಾಮರ್ಥ್ಯದೊಂದಿಗೆ ಪ್ರಾರಂಭಗೊಂಡಿತು. ಇಂದು ಇದರ ಸಾಮರ್ಥ್ಯವು 6 ಎಮ್ಎಮ್ಟಿಪಿಎ ಆಗಿದೆ.
* ಪಶ್ಚಿಮ ಭಾರತದ ಗುಜರಾತಿನ ಕೊಯಾಲಿಯಲ್ಲಿರುವ ಗುಜರಾತ್ ಸಂಸ್ಕರಣಾಗಾರವು ಇಂಡಿಯನ್ ಆಯಿಲ್ನ ಅತಿದೊಡ್ಡ ಸಂಸ್ಕರಣಾಗಾರವಾಗಿದೆ. ಈ ರಿಫೈನರಿಯನ್ನು 1965 ರಲ್ಲಿ ಕಾರ್ಯಾರಂಭ ಮಾಡಲಾಯಿತು. ಇದರಲ್ಲಿ ರಾಷ್ಟ್ರದ ಮೊದಲ ಹೈಡ್ರೋಕ್ರಾಕಿಂಗ್ ಘಟಕವೂ ಸಹ ಇದೆ. ಇದರ ಪ್ರಸ್ತುತ ಸಾಮರ್ಥ್ಯವು 13.70 ಎಮ್ಎಮ್ಟಿಪಿಎ ಆಗಿದೆ.
* ಕೊಲ್ಕತ್ತಾದಿಂದ 136 ಕಿಮೀ ಕೆಳಪ್ರದೇಶದಲ್ಲಿ ಪೂರ್ಬಾ ಮೇದಿನಿಪುರ (ಪೂರ್ವ ಮಿಡ್ನಾಪುರ) ಜಿಲ್ಲೆಯಲ್ಲಿರುವ ಹಲ್ದಿಯಾ ಸಂಸ್ಕರಣಾಗಾರವು ಕಾರ್ಪೊರೇಷನ್ನ ಏಕೈಕ ಸಮುದ್ರ ತೀರದ ಸಂಸ್ಕರಣಾಗಾರವಾಗಿದೆ. ಇದನ್ನು 1975 ರಲ್ಲಿ 2.5 ಎಮ್ಎಮ್ಟಿಪಿಎ ಸಾಮರ್ಥ್ಯದೊಂದಿಗೆ ಕಾರ್ಯಾರಂಭ ಮಾಡಲಾಯಿತು, ಅಂದಿನಿದ ಇದನ್ನು 5.8 ಎಮ್ಎಮ್ಟಿಪಿಎ ಗೆ ಹೆಚ್ಚಿಸಲಾಗಿದೆ
* ಇಂಡಿಯನ್ ಆಯಿಲ್ನ ಅಧೀನದಲ್ಲಿರುವ ಆರನೇ ರಿಫೈನರಿಯಾಗಿ 6.0 ಎಮ್ಎಮ್ಟಿಪಿಎ ಮೂಲ ಸಾಮರ್ಥ್ಯದೊಡನೆ 1982 ರಲ್ಲಿ ಮಥುರಾ ಸಂಸ್ಕರಣಾಗಾರವನ್ನು ಕಾರ್ಯಾರಂಭ ಮಾಡಲಾಯಿತು. ಆಗ್ರಾ ಮತ್ತು ದೆಹಲಿಯ ಐತಿಹಾಸಿಕ ನಗರಗಳ ಮಧ್ಯದಲ್ಲಿರುವ ಮಥುರಾ ಸಂಸ್ಕರಣಾಗಾರದ ಸಾಮರ್ಥ್ಯವನ್ನು 7.5 ಎಮ್ಎಮ್ಟಿಪಿಎ ಗೆ ಹೆಚ್ಚಿಸಲಾಗಿದೆ.
* ಪಾಣಿಪತ್ ಸಂಸ್ಕರಣಾಗಾರ ವು ಇಂಡಿಯಲ್ ಆಯಿಲ್ನ ಏಳನೇ ಸಂಸ್ಕರಣಾಗಾರವಾಗಿದೆ. 6 ಎಮ್ಎಮ್ಟಿಪಿಎಯೊಂದಿಗಿನ ಮೂಲ ಸಂಸ್ಕರಣಾಗಾರವನ್ನು 1998 ರಲ್ಲಿ ನಿರ್ಮಿಸಲಾಯಿತು ಮತ್ತು ಕಾರ್ಯನಿರ್ವಹಣೆಯನ್ನು ಪ್ರಾರಂಭಿಸಲಾಯಿತು. ಪಾಣಿಪತ್ ಸಂಸ್ಕರಣಾಗಾರದ ವಿಸ್ತರಣಾ ಯೋಜನೆಯ ಪ್ರಾರಂಭದೊಂದಿಗೆ ಅದರ ಸಂಸ್ಕರಣಾ ಸಾಮರ್ಥ್ಯವನ್ನು ಪ್ರತಿ ವರ್ಷಕ್ಕೆ 6 ಎಮ್ಎಮ್ಟಿಪಿಎ ಇಂದ 12 ಎಮ್ಎಮ್ಟಿಪಿಎ ಗೆ ದ್ವಿಗುಣಗೊಳಿಸಲಾಗಿದೆ.
ಪೂರಕ ಸಂಸ್ಕರಣಾಗಾರಗಳು - ಬೊಂಬೈಗಾವ್ ಸಂಸ್ಕರಣಾಗಾರ (2.95 ಎಮ್ಎಮ್ಟಿಪಿಎ), ಚೆನ್ನೈ ಪೆಟ್ರೋಲಿಯಂ (9.5 ಎಮ್ಎಮ್ಟಿಪಿಎ)
== ಸಮೂಹ ಕಂಪನಿಗಳು ಮತ್ತು ಜಂಟಿ ಸಹಯೋಗಗಳು ==
* ಇಂಡಿಯಲ್ ಆಯಿಲ್ ಟೆಕ್ನಾಲಜೀಸ್ ಲಿಮಿಟೆಡ್: ಇಂಡಿಯಲ್ ಆಯಿಲ್ ಟೆಕ್ನಾಲಜಿ ಎನ್ನುವುದು ಐಓಸಿಎಲ್ನ ಮಾರುಕಟ್ಟೆ ವಿಭಾಗವಾಗಿದ್ದು, ಇದು ಫರೀದಾಬಾದ್ನ ಇಂಡಿಯಲ್ ಆಯಿಲ್ ಆರ್&ಡಿ ಕೇಂದ್ರದವರು ಅಭಿವೃದ್ಧಿಪಡಿಸಿದ ಸಂಪೂರ್ಣ ಶ್ರೇಣಿಯ ತಂತ್ರಜ್ಞಾನಗಳನ್ನು ಮಾರುಕಟ್ಟೆ ಮಾಡುತ್ತದೆ. ಇಂಡಿಯಲ್ ಆಯಿಲ್ ಟೆಕ್ನಾಲಜೀಸ್ ಲಿಮಿಟೆಡ್ನ ಕೇಂದ್ರ ಕಚೇರಿಯು ಇಂಡಿಯನ್ ಆಯಿಲ್ನ ಆರ್&ಡಿ ಕೇಂದ್ರದಲ್ಲಿ ನೆಲೆಸಿದೆ.
* ಇಂಡಿಯಲ್ ಆಯಿಲ್ (ಮಾರಿಷಸ್) ಲಿಮಿಟೆಡ್.
* ಲಂಕಾ ಐಓಸಿ ಪಿಎಲ್ಸಿ - [[ಶ್ರೀಲಂಕಾ]] ದಲ್ಲಿ ರಿಟೇಲ್ ಮತ್ತು ಸಂಗ್ರಹಣೆ ಕಾರ್ಯಾಚರಣೆಗಳಿಗಾಗಿ ಸಮೂಹ ಕಂಪನಿ. ಇದು ಕೊಲಂಬೋ ಶೇರು ವಿನಿಮಯ ಕೇಂದ್ರ ದಲ್ಲಿ ಪಟ್ಟಿ ಮಾಡಲ್ಪಟ್ಟಿದೆ. ಇದು ಶ್ರೀಲಂಕಾ ಸರ್ಕಾರದೊಡನೆ ಸಬ್ಸಿಡಿ ಪಾವತಿಗೆ ಸಂಬಂಧಿಸಿದಂತೆ ಕಹಿಯಾದ ವಿವಾದವೊಂದರಲ್ಲಿ ಸಿಲುಕಿತ್ತು, ನಂತರ ಅದನ್ನು ಪರಿಹರಿಸಿಕೊಳ್ಳಲಾಯಿತು.{{Citation needed|date=January 2010}}
* ಐಓಸಿ [[ಮಧ್ಯ ಪ್ರಾಚ್ಯ]] ಎಫ್ಜೆಡ್ಇ
* ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್
* ಬೊಂಗೈಗಾಂವ್ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್.
* ಗ್ರೀನ್ ಗ್ಯಾಸ್ ಲಿಮಿಟೆಡ್ - ನಗರ-ವ್ಯಾಪ್ತಿಯ ಅನಿಲ ವಿತರಣೆ ವ್ಯವಸ್ಥೆಗಳಿಗೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್.ನೊಂದಿಗಿನ ಜಂಟಿ ಸಹಯೋಗ.
* ಭಾರತದಲ್ಲಿ ವಾರ್ಷಿಕ ಎಫ್ಸಿಸಿ (ದ್ರಾವಣೀಕರಿಸಿದ ಕ್ಯಾಟಲಿಟಿಕ್ ಕ್ರ್ಯಾಕಿಂಗ್) ವೇಗವರ್ಧಕ ಮತ್ತು ಸಂಯೋಜನೀಯಗಳ 15,000 ಟನ್ಗಳ ತಯಾರಿಕೆಗಾಗಿ ಯುಎಸ್ಎ ಯ ಇಂಟರ್ಕ್ಯಾಟ್ ಸಂಸ್ಥಯೊಂದಿಗಿನ ಸಹಯೋಗದಲ್ಲಿ ಇಂಡೋ ಕ್ಯಾಟ್ ಪ್ರೈವೇಟ್ ಲಿಮಿಟೆಡ್.
* ಆಯಿಲ್ ಇಂಡಿಯಾ ಲಿಮಿಟೆಡ್., ಆಯಿಲ್ ಎಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ದೊಂದಿಗೆ ಹಲವಾರು ಪರಿಶೋಧನೆ ಮತ್ತು ಉತ್ಪಾದನೆ ಸಹಯೋಗಗಳು
== ಅಂತರರಾಷ್ಟ್ರೀಯ ಶ್ರೇಯಾಂಕಗಳು ==
2007 ರ ಹಣಕಾಸು ವರ್ಷದ ಸಾಧನೆಯ ಆಧಾರದಲ್ಲಿ ಫಾರ್ಚ್ಯೂನ್ ಗ್ಲೋಬಲ್ 500 ಪಟ್ಟಿಯಲ್ಲಿ ಇಂಡಿಯನ್ ಆಯಿಲ್ 116<sup>ನೇ</sup> ಸ್ಥಾನ (2008 ರಲ್ಲಿ) ವನ್ನು ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಉನ್ನತ ಶ್ರೇಯಾಂಕ ಪಡೆದ ಭಾರತೀಯ ಕಂಪನಿಯಾಗಿದೆ. ಇದು ವಿಶ್ವದಲ್ಲೇ 18 ನೇ ಅತೀದೊಡ್ಡ ಪೆಟ್ರೋಲಿಯಂ ಕಂಪನಿಯಾಗಿದೆ ಮತ್ತು ಏಷ್ಯಾ-ಫೆಸಿಫಿಕ್ ಪ್ರಾಂತ್ಯದಲ್ಲಿನ ರಾಷ್ಟ್ರೀಯ ತೈಲ ಕಂಪನಿಗಳಲ್ಲಿ ಅಗ್ರಗಣ್ಯ ಪೆಟ್ರೋಲಿಯಂ ಟ್ರೇಡಿಂಗ್ ಕಂಪನಿಯಾಗಿದೆ. 2008 ರ ಫೋರ್ಬ್ಸ್ ಗ್ಲೋಬಲ್ 2000 ಪಟ್ಟಿಯಲ್ಲಿನ 303 ನೇ ಸ್ಥಾನದಲ್ಲಿ ಐಓಸಿಎಲ್ ಕಾಣಿಸಿಕೊಂಡಿದೆ.
== ನಿಷ್ಠಾವಂತಿಕೆ ಕಾರ್ಯಕ್ರಮಗಳು ==
ಎಕ್ಸ್ಟ್ರಾಪವರ್ ಫ್ಲೀಟ್ ಕಾರ್ಡ್ ಕಾರ್ಯಕ್ರಮವನ್ನು ದೊಡ್ಡ ಮೋಟಾರು ಕಾರುಗಳ ನಿರ್ವಾಹಕರುಗಳನ್ನು ಉದ್ದೇಶಿಸಿ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಇದು 1 ಮಿಲಿಯನ್ ಗ್ರಾಹಕರ ಮೂಲವನ್ನು ಹೊಂದಿದೆ. ಎಕ್ಸ್ಟ್ರಾ ರಿವಾರ್ಡ್ಸ್ ಎನ್ನುವುದು ರಿಟೇಲ್ ಗ್ರಾಹಕರಿಗಾಗಿ ಇತ್ತೀಚೆಗೆ ಪ್ರಾರಂಭಿಸಲಾದ ನಿಷ್ಠಾವಂತಿಕೆ ಕಾರ್ಯಕ್ರಮವಾಗಿದ್ದು, ಇಲ್ಲಿ ಗ್ರಾಹಕರು ಸಂಸ್ಥೆಯಲ್ಲಿನ ಖರೀದಿಗೆ ರಿವಾರ್ಡ್ ಅಂಕಗಳನ್ನು ಸಂಪಾದಿಸಬಹುದು
== ಪ್ರತಿಸ್ಪರ್ಧಿಗಳು ==
ಇಂಡಿಯಲ್ ಆಯಿಲ್ ಕಾರ್ಪೊರೇಶನ್ ಎರಡು ಪ್ರಮುಖ ದೇಶೀಯ ಪ್ರತಿಸ್ಪರ್ಧಿಗಳನ್ನು ಹೊಂದಿದ್ದು, ಅವುಗಳೆಂದರೆ, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ. ಎರಡೂ ಸಹ ಇಂಡಿಯನ್ ಆಯಿಲ್ ಕಾರ್ಪೊರೇಶನ್ನಂತೆಯೇ ಸರ್ಕಾರಿ-ಸ್ವಾಮ್ಯದ ಸಂಸ್ಥೆಗಳಾಗಿವೆ. ಎರಡು ಖಾಸಗಿ ಪ್ರತಿಸ್ಪರ್ಧಿಗಳಿದ್ದು, ಅವು ಯಾವುವೆಂದರೆ ರಿಲಯನ್ಸ್ ಪೆಟ್ರೋಲಿಯಂ ಮತ್ತು ಎಸ್ಸಾರ್ ಆಯಿಲ್.
== ಆತಂಕಗಳು ==
ಮಾರ್ಕೆಟಿಂಗ್ ವ್ಯವಸ್ಥಾಪಕರಾಗಿದ್ದು ಮತ್ತು ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಲಖ್ನೋದಿಂದ ಎಂಬಿಎ ಪಡೆದ ಮಂಜುನಾಥ್ ಷಣ್ಮುಗಂ ಅವರನ್ನು [[ಉತ್ತರ ಪ್ರದೇಶ]] ರಾಜ್ಯದಲ್ಲಿ ಭ್ರಷ್ಟ ಪೆಟ್ರೋಲ್ ಸ್ಟೇಶನ್ ಅನ್ನು ಮುಚ್ಚಲು ಪ್ರಯತ್ನಿಸಿದಾಗ 2005 ರಲ್ಲಿ ಕೊಲೆ ಮಾಡಲಾಯಿತು ಮತ್ತು ಆಗ ತನ್ನ ಮಾರುಕಟ್ಟೆ ವ್ಯವಹಾರಗಳಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಕಳವಳವನ್ನು ಹೊಂದಿತು.<ref>{{cite web |url=http://syg.com/web/mstrust/manju/scmadmin/Home.php |title=Manjunath Shanmugam Trust |publisher=Syg.com |date=2006-11-19 |accessdate=2010-08-26 |archive-date=2011-08-09 |archive-url=https://web.archive.org/web/20110809162641/http://syg.com/web/mstrust/manju/scmadmin/Home.php |url-status=dead }}</ref>
ಕಾರ್ಪೊರೇಶನ್ನ ಮಥುರಾದ ಸಂಸ್ಕರಣಾ ಘಟಕದ ಕಾರಣದಿಂದ ಉಂಟಾಗುವ [http://www.indiatogether.org/2009/apr/env-hpgencag.htm ವಾಯು ಮಾಲಿನ್ಯ] ದ ಅಪಾಯದ ಕಾರಣದಿಂದ ಅದು [http://www.mcmef.org/landmark.htm ಸತತವಾಗಿ ಸುದ್ದಿ] {{Webarchive|url=https://web.archive.org/web/20081227053748/http://www.mcmef.org/landmark.htm |date=2008-12-27 }} ಯಲ್ಲಿದ್ದಿತು.
== ತೈಲ ಉದ್ಯಮ ಅಭಿವೃದ್ಧಿ ಮಂಡಳಿ ==
ಭಾರತವು ಸುಮಾರು ಎರಡು ವಾರಗಳ ಬಳಕೆಗೆ ಸಾಕಾಗುವ 37.4 ಬಿಲಿಯನ್ ಬ್ಯಾರಲ್ಗಳ ಗಾತ್ರದ ಧ್ಯೇಯೋದ್ದೇಶದ ಕಚ್ಚಾ ತೈಲ ಸಂಗ್ರಹಣೆಯ ಅಭಿವೃದ್ದಿಯನ್ನು ಪ್ರಾರಂಭಿಸಿದೆ.<ref>{{cite web |url=http://www.gasandoil.com/goc/news/nts43834.htm |title=Alexander's Gas & Oil Connections - India to build up storage of crude oil |publisher=Gasandoil.com |date=2004-09-21 |accessdate=2010-08-26 |archive-date=2009-04-18 |archive-url=https://web.archive.org/web/20090418001150/http://www.gasandoil.com/goc/news/nts43834.htm |url-status=dead }}</ref> ಪೆಟ್ರೋಲಿಯಂ ಸಂಗ್ರಹಣೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಇಂಡಿಯನ್ ಆಯಿಲ್) ನಿಂದ ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್ (ಓಐಡಿಬಿ) ಗೆ ವರ್ಗಾಯಿಸಲಾಗಿದೆ.<ref>{{cite web|url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |publisher=The Hindu Business Line |date=2006-04-02 |accessdate=2010-08-26}}</ref> ಯೋಜನಾ ವ್ಯವಸ್ಥೆಯ ಸಂಗ್ರಹಣೆಗಾಗಿ ನಿಯಂತ್ರಿತ ಸರ್ಕಾರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಓಐಡಿಬಿ ಯು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ಐಎಸ್ಪಿಆರ್ಎಲ್) ಅನ್ನು ಸ್ಥಾಪಿಸಿದೆ.<ref>{{cite web|author=20 Jun, 2007, 09.18PM IST,PTI |url=http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title='India to form crude oil reserve of 5 mmt'- Oil & Gas-Energy-News By Industry-News-The Economic Times |publisher=Economictimes.indiatimes.com |date=2007-06-20 |accessdate=2010-08-26}}</ref>
== ಇವನ್ನೂ ನೋಡಿ ==
* ಜಾಗತಿಕ ತಂತ್ರಕುಶಲತೆಯ ಪೆಟ್ರೋಲಿಯಂ ಸಂಗ್ರಹಣೆಗಳು
* ಇಂಡಿಯಲ್ ಆಯಿಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಮ್ಯಾನೇಜ್ಮೆಂಟ್
== ಬಾಹ್ಯ ಕೊಂಡಿಗಳು ==
* [http://eledger.indianoil.co.in - ಇಂಡಿಯನ್ ಆಯಿಲ್ ಗ್ರಾಹಕರ ಪೋರ್ಟಲ್ /ಎಲೆಡ್ಜರ್ -ಮಾಹಿತಿ ವ್ಯವಸ್ಥೆ ವಿಭಾಗ -ಕೇಂ.ಕ-ಮುಂಬಯಿ] {{Webarchive|url=https://web.archive.org/web/20100824203701/http://eledger.indianoil.co.in/ |date=2010-08-24 }}
* [http://eledger.indianoil.co.in/ioconline - ಇಂಡಿಯನ್ ಆಯಿಲ್ ಉದ್ಯೋಗಿಗಳ ಪೋರ್ಟಲ್ /ಎಲೆಡ್ಜರ್ -ಮಾಹಿತಿ ವ್ಯವಸ್ಥೆ ವಿಭಾಗ -ಕೇಂ.ಕ-ಮುಂಬಯಿ] {{Webarchive|url=https://web.archive.org/web/20100723112755/http://eledger.indianoil.co.in/ioconline/ |date=2010-07-23 }}
* [http://www.indianoil.co.in - ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್.ಮಾರುಕಟ್ಟೆ ವಿಭಾಗ -ಮಾಹಿತಿ ವ್ಯವಸ್ಥೆ ವಿಭಾಗ -ಕೇಂ.ಕ-ಮುಂಬಯಿ] {{Webarchive|url=https://web.archive.org/web/20150409063315/http://www.indianoil.co.in/ |date=2015-04-09 }}
* [http://www.iocl.com www.][http://www.iocl.com IOCL.com]
* [http://www.lankaioc.net/ ಲಂಕಾ ಐಓಸಿ ಪಿಎಲ್ಸಿ] {{Webarchive|url=https://web.archive.org/web/20101229150419/http://lankaioc.net/ |date=2010-12-29 }}
* [http://money.cnn.com/magazines/fortune/global500/2006/snapshots/663.html ಫಾರ್ಚೂನ್ ಗ್ಲೋಬಲ್ ೫೦೦ ನಲ್ಲಿ ಐಓಸಿಎಲ್] {{Webarchive|url=https://web.archive.org/web/20100108012129/http://money.cnn.com/magazines/fortune/global500/2006/snapshots/663.html |date=2010-01-08 }}
* [http://businesstoday.digitaltoday.in/i-want-ioc-in-top-100-of-fortune-500-narasimhan.html ಐಓಸಿ ನಿರ್ದೇಶಕರ ಸಂದರ್ಶನ] {{Webarchive|url=https://web.archive.org/web/20090111233345/http://businesstoday.digitaltoday.in/i-want-ioc-in-top-100-of-fortune-500-narasimhan.html |date=2009-01-11 }}
* [http://www.forbes.com/lists/2006/18/06f2000_The-Forbes-2000_Counrty_5.html ಫೋರ್ಬ್ಸ್ ೨೦೦೦ ಪಟ್ಟಿಯಲ್ಲಿ ಐಓಸಿಎಲ್]
* [http://www.iocxtrapower.com ಎಕ್ಸ್ಟ್ರಾ ಪವರ್ ಫ್ಲೀಟ್ ಕಾರ್ಡ್] {{Webarchive|url=https://web.archive.org/web/20101031212311/http://iocxtrapower.com/ |date=2010-10-31 }}
* [http://www.iocltech.com ಇಂಡಿಯನ್ ಆಯಿಲ್ ಟೆಕ್ನಾಲಜೀಸ್ ಲಿಮಿಟೆಡ್.] {{Webarchive|url=https://web.archive.org/web/20150801154620/http://iocltech.com/ |date=2015-08-01 }}
* [http://www.indianoilexpress.com ಉದ್ಯೋಗಿಗಳ ಪೋರ್ಟಲ್] {{Webarchive|url=https://web.archive.org/web/20080130031035/http://www.indianoilexpress.com/ |date=2008-01-30 }}
== ಉಲ್ಲೇಖಗಳು ==
{{reflist}}
{{Interwikineeded}}
[[ವರ್ಗ:ನವದೆಹಲಿಯಲ್ಲಿರುವ ಕಂಪನಿಗಳು]]
[[ವರ್ಗ:ಭಾರತದ ಅನಿಲ ಮತ್ತು ತೈಲ ಕಂಪನಿಗಳು]]
[[ವರ್ಗ:ಭಾರತದ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲ್ಪಟ್ಟಿರುವ ಕಂಪನಿಗಳು]]
[[ವರ್ಗ:ಸರ್ಕಾರಿ ಒಡೆತನದ ಭಾರತದಲ್ಲಿರುವ ಕಂಪನಿಗಳು]]
[[ವರ್ಗ:ಇಂಡಿಯನ್ ಆಯಿಲ್ ಕಾರ್ಪೊರೇಶನ್]]
p9vtlfc4d10bmdxvznntd8d06fte8c2
ಮೋಹನ್ ಲಾಲ್
0
27063
1379566
1360405
2026-08-09T05:10:12Z
A826
72368
1379566
wikitext
text/x-wiki
{{databox}}
{{Infobox person
| years_active = 1978–ಪ್ರಸ್ತುತ
| name = ಮೋಹನ್ಲಾಲ್
| native_name =
| image = Mohanlal (cropped).jpg
| image_size =
| caption = 2022 ರಲ್ಲಿ ಮೋಹನ್ಲಾಲ್
| birth_name = ಮೋಹನ್ಲಾಲ್ ವಿಶ್ವನಾಥನ್
| other_names = ಲಾಲ್, ಲಾಲು, ಲಾಲೆಟ್ಟನ್
| birth_date = {{Birth date and age|df=yes|1960|05|21}}
| birth_place = ಎಲಂತೂರ್, ಕೊಲ್ಲಂ ಜಿಲ್ಲೆ, ಕೇರಳ (ಪ್ರಸ್ತುತ ಪಥನಮ್ಥಿಟ್ಟ ಜಿಲ್ಲೆ, ಕೇರಳ, ಭಾರತ)
| education = ಮಹಾತ್ಮಾ ಗಾಂಧಿ ಕಾಲೇಜು (ಬಿಕಾಂ)
| occupation = {{hlist|ನಟ|ನಿರ್ದೇಶಕ|ನಿರ್ಮಾಪಕ|ವಿತರಕ|ಹಿನ್ನೆಲೆ ಗಾಯಕ}}
| works = ಮೋಹನ್ಲಾಲ್ ಚಲನಚಿತ್ರಗಳ ಪಟ್ಟಿ
| spouse = {{marriage|ಸುಚಿತ್ರ|1988}}
| children = ಪ್ರಣವ್ ಮೋಹನ್ಲಾಲ್, ವಿಸ್ಮಯಾ ಮೋಹನ್ಲಾಲ್
| relatives = ಕೆ. ಬಾಲಾಜಿ {{small|(ಮಾವ)}}<br />ಸುರೇಶ್ ಬಾಲಾಜೆ {{small|(ಭಾವ)}}<br />ಬಿ. ಉನ್ನಿಕೃಷ್ಣನ್ {{small|(ಸಂಬಂಧಿ)}}<ref name="YouTube Channel Name">{{cite video |people=24 News |date=2025-03-23 |title=പ്രകൃതിയോട് ചേർന്ന് പഴമ കൈവിടാതെ മോഹൻലാലിൻറെ തറവാട് വീട് |url=https://www.youtube.com/watch?si=1zTaC-AaaBdWUAAy&v=H8iRlz__KC4&feature=youtu.be |access-date=2025-03-23 |time=6:13 |publisher=YouTube Channel Name}}</ref>
| website = {{URL|thecompleteactor.com}}
| awards = ಮೋಹನ್ಲಾಲ್ ಸ್ವೀಕರಿಸಿದ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳ ಪಟ್ಟಿ
| honours = {{plainlist|
*ಪದ್ಮಶ್ರೀ (2001)
*ಪದ್ಮಭೂಷಣ (2019)
*ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2023)
}}
| module = {{Infobox officeholder
| embed = yes
| allegiance = {{flag|India}}
| branch = {{army|India}}
| service_years = 2009–ಪ್ರಸ್ತುತ
| rank = [[File:Lieutenant Colonel of the Indian Army.svg|10px]] [[ಲೆಫ್ಟಿನೆಂಟ್ ಕರ್ನಲ್]] (ಗೌರವ)
| unit = {{flagicon image|Territorial Army (Flag).svg}} [[ಟೆರಿಟೋರಿಯಲ್ ಆರ್ಮಿ (ಭಾರತ)|ಟೆರಿಟೋರಿಯಲ್ ಆರ್ಮಿ]]
}}
}}
'''ಮೋಹನ್ಲಾಲ್ ವಿಶ್ವನಾಥನ್''' ({{IPA|ml|moːhɐnlaːl ʋiʃʋʷɐn̪aːt̪ʰɐn|IPA}}; ಜನನ ೨೧ ಮೇ ೧೯೬೦), ಇವರು ಏಕನಾಮಧೇಯವಾಗಿ '''ಮೋಹನ್ಲಾಲ್''' ಎಂದು ಪ್ರಸಿದ್ಧರಾಗಿರುವ ಭಾರತೀಯ ನಟ ಮತ್ತು ಚಲನಚಿತ್ರ ನಿರ್ಮಾಪಕ. ಇವರು ಪ್ರಧಾನವಾಗಿ ಮಲಯಾಳಂ ಚಲನಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಮತ್ತು ಸಾಂದರ್ಭಿಕವಾಗಿ ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.<ref name="thehindu.com">{{Cite news|last=Kumar|first=P. k Ajith|date=21 May 2020|title=On Mohanlal's 60th birthday, remembering 10 of his finest performances|language=en-IN|work=The Hindu|url=https://www.thehindu.com/entertainment/movies/on-mohanlals-60th-birthday-remembering-10-of-his-finest-performances/article31638507.ece|access-date=28 August 2020|issn=0971-751X|archive-date=12 June 2020|archive-url=https://web.archive.org/web/20200612102647/https://www.thehindu.com/entertainment/movies/on-mohanlals-60th-birthday-remembering-10-of-his-finest-performances/article31638507.ece|url-status=live}}</ref><ref name="Kumar">{{Cite news|last=Kumar|first=P. k Ajith|date=20 May 2020|title=Mohanlal at 60: An actor par excellence|language=en-IN|work=The Hindu|url=https://www.thehindu.com/entertainment/movies/mohanlal-at-60-an-actor-par-excellence/article31633617.ece|access-date=28 August 2020|issn=0971-751X|archive-date=19 June 2020|archive-url=https://web.archive.org/web/20200619123905/https://www.thehindu.com/entertainment/movies/mohanlal-at-60-an-actor-par-excellence/article31633617.ece|url-status=live}}</ref><ref name="india.com">{{Cite web|date=21 May 2020|title=Happy Birthday, Mohanlal: 11 Lesser-Known And Interesting Facts About The Top Malayalam Star|url=https://www.india.com/entertainment/malayalam-news-happy-birthday-mohanlal-11-lesser-known-and-interesting-facts-about-the-top-malayalam-star-4035296/|access-date=28 August 2020|website=India News, Breaking News, Entertainment News {{!}} India.com|language=en|archive-date=9 June 2020|archive-url=https://web.archive.org/web/20200609145515/https://www.india.com/entertainment/malayalam-news-happy-birthday-mohanlal-11-lesser-known-and-interesting-facts-about-the-top-malayalam-star-4035296/|url-status=live}}</ref> ಮೋಹನ್ಲಾಲ್ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನವನ್ನು ಹೊಂದಿದ್ದು, ಈ ಅವಧಿಯಲ್ಲಿ ಅವರು ೪೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.<ref name="Kumar"/><ref>{{Cite news |date=21 May 2022 |title='The complete actor' is not just a sobriquet, but Mohanlal's legacy |url=https://indianexpress.com/article/entertainment/malayalam/the-complete-actor-is-not-just-a-sobriquet-but-mohanlal-legacy-7926705/ |access-date=21 May 2022 |work=The Indian Express |language=en |archive-date=21 May 2022 |archive-url=https://web.archive.org/web/20220521064533/https://indianexpress.com/article/entertainment/malayalam/the-complete-actor-is-not-just-a-sobriquet-but-mohanlal-legacy-7926705/ |url-status=live }}</ref> ಭಾರತ ಸರ್ಕಾರವು ಅವರಿಗೆ ೨೦೦೧ ರಲ್ಲಿ ಪದ್ಮಶ್ರೀ<ref name="Padma Awards2">{{cite web|date=2015|title=Padma Awards|url=http://mha.nic.in/sites/upload_files/mha/files/LST-PDAWD-2013.pdf|url-status=dead|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015|publisher=Ministry of Home Affairs, Government of India}}</ref> ಮತ್ತು ೨೦೧೯ ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿತು. ಇವು ಭಾರತದ ನಾಲ್ಕನೇ ಮತ್ತು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ.<ref name="Padmabhushan2">{{Cite web|date=25 January 2019|title=Mohanlal conferred with Padma Bhushan|url=https://indianexpress.com/article/entertainment/entertainment-others/mohanlal-padma-bhushan-kader-khan-manoj-bajpayee-prabhudheva-shankar-mahadevan-5555516/|url-status=live|archive-url=https://web.archive.org/web/20190126001318/https://indianexpress.com/article/entertainment/entertainment-others/mohanlal-padma-bhushan-kader-khan-manoj-bajpayee-prabhudheva-shankar-mahadevan-5555516/|archive-date=26 January 2019|access-date=25 January 2019|website=[[The New Indian Express]]}}</ref> ೨೦೦೯ ರಲ್ಲಿ, ಭಾರತೀಯ ಚಲನಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪಡೆದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು.<ref>{{Cite web|date=9 July 2009|title=Malayalam superstar Mohanlal joins Territorial Army|url=https://www.hindustantimes.com/india/malayalam-superstar-mohanlal-joins-territorial-army/story-O6L4Kpu19jVG6wi0uejIAK.html|access-date=25 July 2021|website=Hindustan Times|language=en|archive-date=25 July 2021|archive-url=https://web.archive.org/web/20210725181929/https://www.hindustantimes.com/india/malayalam-superstar-mohanlal-joins-territorial-army/story-O6L4Kpu19jVG6wi0uejIAK.html|url-status=live}}</ref><ref>{{Cite web|title=Mohanlal enters Territorial Army training unit|url=https://www.newindianexpress.com/states/kerala/2010/mar/26/mohanlal-enters-territorial-army-training-unit-142466.html|access-date=25 July 2021|website=The New Indian Express|archive-date=25 July 2021|archive-url=https://web.archive.org/web/20210725181928/https://www.newindianexpress.com/states/kerala/2010/mar/26/mohanlal-enters-territorial-army-training-unit-142466.html|url-status=dead}}</ref> "ಭಾರತೀಯ ಸಿನೆಮಾದ ಮುಖವನ್ನು ಬದಲಾಯಿಸಿದ ಪುರುಷರು" ಎಂದು ಸಿಎನ್ಎನ್ ಮೋಹನ್ಲಾಲ್ ಅವರನ್ನು ಹೆಸರಿಸಿದೆ.<ref>{{Cite web |title=100 Years of Cinema: The men who changed the face of Indian films |url=https://www.news18.com/photogallery/movies/100-years-of-cinema-the-men-who-changed-the-face-of-indian-films-894555.html |access-date=8 January 2023 |website=News18 |language=en |archive-date=8 January 2023 |archive-url=https://web.archive.org/web/20230108064500/https://www.news18.com/photogallery/movies/100-years-of-cinema-the-men-who-changed-the-face-of-indian-films-894555.html |url-status=live }}</ref> ೨೦೨೫ ರಲ್ಲಿ, ಭಾರತ ಸರ್ಕಾರವು ಅವರಿಗೆ ಭಾರತೀಯ ಸಿನೆಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು.<ref name="Malayalam actor Mohanlal to be conferred Dadasaheb Phalke Award for 2023">{{cite news |title=Malayalam actor Mohanlal to be conferred Dadasaheb Phalke Award for 2023 |url=https://www.thehindu.com/entertainment/movies/actor-mohanlal-to-be-conferred-dadasaheb-phalke-award-for-2023/article70073864.ece |access-date=20 September 2025 |work=The Hindu |date=20 September 2025 |archive-url=https://web.archive.org/web/20250920160340/https://www.thehindu.com/entertainment/movies/actor-mohanlal-to-be-conferred-dadasaheb-phalke-award-for-2023/article70073864.ece |archive-date=20 September 2025 |language=en-IN}}</ref><ref name="Mohanlal honoured with Dadasaheb Phalke award at 71st National Film Awards ceremony">{{cite news |title=Mohanlal honoured with Dadasaheb Phalke award at 71st National Film Awards ceremony |url=https://www.newindianexpress.com/nation/2025/Sep/23/mohanlal-honoured-with-dadasaheb-phalke-award-at-71st-national-film-awards-ceremony |access-date=24 September 2025 |publisher=The New Indian Express |date=23 September 2025 |archive-url=https://web.archive.org/web/20250924041846/https://www.newindianexpress.com/nation/2025/Sep/23/mohanlal-honoured-with-dadasaheb-phalke-award-at-71st-national-film-awards-ceremony |archive-date=24 September 2025 |language=en}}</ref>
ಮೋಹನ್ಲಾಲ್ ಅವರು ೧೯೭೮ ರಲ್ಲಿ ಮಲಯಾಳಂ ಚಿತ್ರ 'ತಿರನೋಟ್ಟಂ' ಮೂಲಕ ೧೮ ನೇ ವಯಸ್ಸಿನಲ್ಲಿ ಅಭಿನಯಕ್ಕೆ ಪಾದಾರ್ಪಣೆ ಮಾಡಿದರು, ಆದರೆ ಸೆನ್ಸಾರ್ ಸಮಸ್ಯೆಗಳಿಂದಾಗಿ ಈ ಚಿತ್ರವು ೨೫ ವರ್ಷಗಳ ಕಾಲ ಬಿಡುಗಡೆಯಾಗದೆ ಉಳಿಯಿತು. ೧೯೮೦ ರಲ್ಲಿ ಬಂದ ಪ್ರಣಯ ಚಿತ್ರ 'ಮಂಜಿಲ್ ವಿರಿಂಜ ಪೂಕ್ಕಲ್' ನಲ್ಲಿ ಅವರ ಪರದೆಯ ಮೇಲಿನ ಮೊದಲ ಚಿತ್ರವಾಗಿತ್ತು, ಇದರಲ್ಲಿ ಅವರು ಪ್ರತಿನಾಯಕನ ಪಾತ್ರವನ್ನು ನಿರ್ವಹಿಸಿದ್ದರು.<ref name="rediff"/><ref name="thiranottam">{{cite news|title=I have nothing to prove in Bollywood: Mohanlal|url=http://www.deccanherald.com/content/242650/i-have-nothing-prove-bollywood.html|access-date=11 January 2017|work=[[Deccan Herald]]|agency=[[Press Trust of India]]|date=17 April 2012|archive-url=https://web.archive.org/web/20170113014138/http://www.deccanherald.com/content/242650/i-have-nothing-prove-bollywood.html|archive-date=13 January 2017|url-status=live}}</ref> ಅವರು ಖಳನಾಯಕನ ಪಾತ್ರಗಳನ್ನು ಮುಂದುವರೆಸಿದರು ಮತ್ತು ನಂತರದ ವರ್ಷಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಿಗೆ ಏರಿದರು. ೧೯೮೦ ರ ದಶಕದ ಮಧ್ಯಭಾಗದ ವೇಳೆಗೆ, ಅವರು ವಿಶ್ವಾಸಾರ್ಹ ಪ್ರಮುಖ ನಟನಾಗಿ ಸ್ಥಾಪಿತರಾದರು ಮತ್ತು ೧೯೮೬ ರಲ್ಲಿ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ ನಂತರ ಸ್ಟಾರ್ಡಮ್ ಅನ್ನು ಗಳಿಸಿದರು; ಆ ವರ್ಷ ಬಿಡುಗಡೆಯಾದ ಅಪರಾಧ ನಾಟಕ 'ರಾಜವಿಂಟೆ ಮಕನ್' ಅವರ ಸ್ಟಾರ್ಡಮ್ ಅನ್ನು ಹೆಚ್ಚಿಸಿತು.<ref name="rediff">{{cite web|last=Warrier|first=Shobha|title=25 years, 25 landmarks|url=https://www.rediff.com/movies/report/mohan1/20030903.htm|work=[[Rediff.com]]|access-date=21 July 2020|archive-date=21 July 2020|archive-url=https://web.archive.org/web/20200721123434/https://www.rediff.com/movies/report/mohan1/20030903.htm|url-status=live}}</ref> ಮೋಹನ್ಲಾಲ್ ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಲು ಆದ್ಯತೆ ನೀಡುತ್ತಾರೆ, ಆದರೆ ಅವರು ಇತರ ಭಾಷೆಯ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅವರ ಕೆಲವು ಪ್ರಸಿದ್ಧ ಅನ್ಯಭಾಷಾ ಚಿತ್ರಗಳೆಂದರೆ ತಮಿಳು ರಾಜಕೀಯ ನಾಟಕ 'ಇರುವರ್' (೧೯೯೭), ಹಿಂದಿ ಅಪರಾಧ ನಾಟಕ 'ಕಂಪನಿ' (೨೦೦೨) ಮತ್ತು ತೆಲುಗು ಚಿತ್ರ 'ಜನತಾ ಗ್ಯಾರೇಜ್' (೨೦೧೬).<ref>{{cite news|last=Khan|first=Ujala Ali|title=Reigning southern stars|url=https://www.thenationalnews.com/arts-culture/film/reigning-southern-stars-1.260566/|access-date=11 January 2017|work=[[The National (Abu Dhabi)|The National]]|date=14 September 2013|archive-url=https://web.archive.org/web/20170113092556/http://www.thenational.ae/arts-culture/bollywood/reigning-southern-stars|archive-date=13 January 2017|url-status=live}}</ref><ref>{{cite news|last=Rajpal|first=Roktim|title=Mohanlal turns 55: 8 performances that prove he is the most bankable, successful star of Indian cinema|url=http://www.news18.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html|access-date=11 January 2017|work=[[News18]]|date=21 May 2015|archive-url=https://web.archive.org/web/20170113195555/http://www.news18.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html|archive-date=13 January 2017|url-status=live}}</ref>
ಮೋಹನ್ಲಾಲ್ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ — ಎರಡು ಅತ್ಯುತ್ತಮ ನಟ ಪ್ರಶಸ್ತಿಗಳು, ಒಂದು ವಿಶೇಷ ಉಲ್ಲೇಖ ಮತ್ತು ಅಭಿನಯಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ, ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿ (ನಿರ್ಮಾಪಕರಾಗಿ) ಪ್ರಶಸ್ತಿ, ಜೊತೆಗೆ ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ಹಲವಾರು ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ೨೦೧೦ ರಲ್ಲಿ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದಿಂದ<ref name="auto">{{cite news|url=http://www.hindu.com/2010/03/17/stories/2010031760500700.htm|title=Mohanlal, Pookutty get D.Litt.|date=17 March 2010|access-date=18 May 2010|work=[[The Hindu]]|location=Chennai, India|archive-url=https://web.archive.org/web/20100611191903/http://www.hindu.com/2010/03/17/stories/2010031760500700.htm|archive-date=11 June 2010|url-status=dead}}</ref> ಮತ್ತು ೨೦೧೮ ರಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರು.<ref>{{cite news|url=http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html|title=Calicut University confers D.Litt on Mohanlal, P.T.Usha|newspaper=Business Standard India|date=29 January 2018|access-date=29 January 2018|archive-url=https://web.archive.org/web/20180129195119/http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html|archive-date=29 January 2018|url-status=live}}</ref>
ಮೋಹನ್ಲಾಲ್ ಅವರು ತಮ್ಮ ಪರೋಪಕಾರಿ ಪ್ರಯತ್ನಗಳಿಗೂ ಹೆಸರುವಾಸಿಯಾಗಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಹೆಚ್ಚಿನ ಪರಿಣಾಮ ಮತ್ತು ಕೇಂದ್ರೀಕೃತ ಕಾರ್ಯಕ್ರಮಗಳನ್ನು ರಚಿಸಲು ಮತ್ತು ತಲುಪಿಸಲು ಅವರು ವಿಶ್ವಶಾಂತಿ ಫೌಂಡೇಶನ್ ಅನ್ನು ಸ್ಥಾಪಿಸಿದರು.<ref>{{cite news|author=Express News Service|title=Mohanlal donates robot for fighting Covid-19|url=https://www.newindianexpress.com/cities/kochi/2020/apr/26/mohanlal-donates-robot-for-fighting-covid-19-2135358.html|access-date=21 July 2020|work=[[The New Indian Express]]|date=26 April 2020|archive-date=21 July 2020|archive-url=https://web.archive.org/web/20200721123426/https://www.newindianexpress.com/cities/kochi/2020/apr/26/mohanlal-donates-robot-for-fighting-covid-19-2135358.html|url-status=live}}</ref><ref>{{Cite web|title=ViswaSanthi Foundation|url=https://www.viswasanthifoundation.com/about/founder-message|access-date=16 July 2021|website=www.viswasanthifoundation.com|archive-date=16 July 2021|archive-url=https://web.archive.org/web/20210716073121/https://www.viswasanthifoundation.com/about/founder-message|url-status=live}}</ref><ref>{{cite news|title=Mohanlal launches project to raise aid for children's heart surgeries|url=https://english.mathrubhumi.com/movies-music/movie-news/mohanlal-launches-project-to-raise-aid-for-children-s-heart-surgeries-kerala-1.4019081|access-date=21 July 2020|work=[[Mathrubhumi]]|date=6 August 2019|archive-date=21 July 2020|archive-url=https://web.archive.org/web/20200721123429/https://english.mathrubhumi.com/movies-music/movie-news/mohanlal-launches-project-to-raise-aid-for-children-s-heart-surgeries-kerala-1.4019081|url-status=live}}</ref>
==ಆರಂಭಿಕ ಜೀವನ==
ಮೋಹನ್ಲಾಲ್ ವಿಶ್ವನಾಥನ್<ref>{{cite web|author=President of India|title=President Kovind presents Padma Bhushan to Mohanlal|url=https://www.youtube.com/watch?v=m9LwAdl84ys|website=[[YouTube]]|publisher=[[President of India]]|access-date=29 September 2022|date=22 March 2019|archive-date=29 September 2022|archive-url=https://web.archive.org/web/20220929110315/https://www.youtube.com/watch?v=m9LwAdl84ys&gl=US&hl=en|url-status=live}}</ref><ref>{{cite news |date=25 August 2020 |title=തനിക്ക് ജാതിവാൽ ഇല്ലാത്തതിന് കാരണം പറഞ്ഞ് മോഹൻലാൽ |trans-title=Mohanlal explains the reason for not having a caste surname |url=https://www.madhyamam.com/entertainment/movie-news/actor-mohanlal-reveals-the-secret-of-his-name-558738 |url-status=live |archive-url=https://web.archive.org/web/20220929113918/https://www.madhyamam.com/entertainment/movie-news/actor-mohanlal-reveals-the-secret-of-his-name-558738 |archive-date=29 September 2022 |access-date=29 September 2022 |work=[[Madhyamam]] |language=ml}}</ref> ಅವರು ೧೯೬೦ ರ ಮೇ ೨೧ ರಂದು ಕೇರಳದ ಕೊಲ್ಲಂ ಜಿಲ್ಲೆಯ (ಪ್ರಸ್ತುತ ಪಥನಮ್ಥಿಟ್ಟ ಜಿಲ್ಲೆ) ಎಲಂತೂರ್ ಗ್ರಾಮದಲ್ಲಿ ಜನಿಸಿದರು. ಅವರು ಮಾಜಿ ನೌಕರಶಾಹಿ ಮತ್ತು ಕೇರಳ ಸರ್ಕಾರದ ಕಾನೂನು ಕಾರ್ಯದರ್ಶಿಯಾಗಿದ್ದ ವಿಶ್ವನಾಥನ್ ನಾಯರ್ ಮತ್ತು ಸಂತಕುಮಾರಿ ದಂಪತಿಗಳ ಕಿರಿಯ ಮಗ.<ref>[http://www.manoramaonline.com/homestyle/spot-light/2017/04/22/mohanlal-visited-ancestral-home-punnackal-tharavadu.html Mohanlal Birth Place] {{Webarchive|url=https://web.archive.org/web/20170425025030/http://www.manoramaonline.com/homestyle/spot-light/2017/04/22/mohanlal-visited-ancestral-home-punnackal-tharavadu.html |date=25 April 2017 }}. Manoramaonline.com (22 April 2017). Retrieved on 24 July 2017.</ref><ref>{{cite news|title=Happy Birthday Mohanlal: The South Indian Superstar's Health Mantra|url=https://food.ndtv.com/health/mohanlal-diet-and-fitness-1694810|access-date=23 December 2017|work=[[NDTV]]|date=21 May 2017|archive-url=https://web.archive.org/web/20171223142407/https://food.ndtv.com/health/mohanlal-diet-and-fitness-1694810|archive-date=23 December 2017|url-status=live}}</ref> ಅವರಿಗೆ ಪ್ಯಾರಿಲಾಲ್ ಎಂಬ ಹಿರಿಯ ಸಹೋದರನಿದ್ದನು, ಅವರು ೨೦೦೦ ರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದ ನಿಧನರಾದರು.<ref name="ReferenceA">{{cite web | url=https://malayalam.oneindia.com/news/2000/08/23/ker-pyarilal.html | title=മോഹന്ലാലിന്റെ സഹോദരന് അന്തരിച്ചു | date=23 August 2000 }}</ref> ನಿರ್ದೇಶಕ ಬಿ. ಉನ್ನಿಕೃಷ್ಣನ್ ಅವರು ಮೋಹನ್ಲಾಲ್ ಅವರ ನಿಕಟ ಮಾತೃ ಬಂಧು.<ref name="YouTube Channel Name">{{cite video |people=24 News |date=2025-03-23 |title=പ്രകൃതിയോട് ചേർന്ന് പഴമ കൈവിടാതെ മോഹൻലാലിൻറെ തറവാട് വീട് |url=https://www.youtube.com/watch?si=1zTaC-AaaBdWUAAy&v=H8iRlz__KC4&feature=youtu.be |access-date=2025-03-23 |time=6:13 |publisher=YouTube Channel Name}}</ref>
ಮೋಹನ್ಲಾಲ್ ಅವರು ತಿರುವನಂತಪುರದಲ್ಲಿರುವ ತಮ್ಮ ಪಿತೃತ್ವದ ಮನೆಯಲ್ಲಿ ಮುದವನ್ಮುಗಲ್ನಲ್ಲಿ ಬೆಳೆದರು. ಅವರು ತಿರುವನಂತಪುರದ ಸರ್ಕಾರಿ ಮಾದರಿ ಬಾಲಕರ ಪ್ರೌಢಶಾಲೆಯಲ್ಲಿ ಓದಿದರು ಮತ್ತು ತಿರುವನಂತಪುರದ ಮಹಾತ್ಮಾ ಗಾಂಧಿ ಕಾಲೇಜಿನಿಂದ ವಾಣಿಜ್ಯದಲ್ಲಿ ಪದವಿ ಪಡೆದರು.<ref>{{cite web|last1=Entertainment|first1=Art &|title=Mohanlal Biography|url=http://lifestyle.iloveindia.com/lounge/mohanlal-biography-4023.html|website=LIFESTYLE LOUNGE|publisher=iloveindia.com.|access-date=5 January 2015|archive-url=https://web.archive.org/web/20141021010753/http://lifestyle.iloveindia.com/lounge/mohanlal-biography-4023.html|archive-date=21 October 2014|url-status=dead}}</ref><ref>{{cite web|last1=.com|first1=Mohanlalonline|title=LAL'S BIOGRAPHY|url=http://www.mohanlalonline.com/Content/Biography/|website=Mohanlalonline.com|access-date=5 January 2015|archive-url=https://web.archive.org/web/20150105104009/http://www.mohanlalonline.com/Content/Biography/|archive-date=5 January 2015|url-status=dead}}</ref> ಮೋಹನ್ಲಾಲ್ ಅವರ ಮೊದಲ ಪಾತ್ರವು ಆರನೇ ತರಗತಿಯಲ್ಲಿದ್ದಾಗ 'ಕಂಪ್ಯೂಟರ್ ಬಾಯ್' ಎಂಬ ರಂಗಭೂಮಿ ನಾಟಕದಲ್ಲಿತ್ತು, ಅದರಲ್ಲಿ ಅವರು ತೊಂಬತ್ತು ವರ್ಷದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದರು.<ref>{{cite news |url=http://www.hindu.com/2009/05/25/stories/2009052558020300.htm |title=Kerala / Thiruvananthapuram News : Centenary celebrations of Model School inaugurated |date=25 May 2009 |access-date=12 September 2013 |location=Chennai, India |archive-url=https://web.archive.org/web/20090530061910/http://www.hindu.com/2009/05/25/stories/2009052558020300.htm |archive-date=30 May 2009 |work=[[The Hindu]] |url-status=dead }}</ref>
೧೯೭೭ ಮತ್ತು ೧೯೭೮ ರ ಸಮಯದಲ್ಲಿ ಅವರು ಕೇರಳ ರಾಜ್ಯ ಕುಸ್ತಿ ಚಾಂಪಿಯನ್ ಆಗಿದ್ದರು.<ref name = blackbelt>{{Cite news|url = http://timesofindia.indiatimes.com/entertainment/malayalam/movies/news/After-SRK-Mohanlal-to-get-a-Taekwondo-blackbelt/articleshow/16940066.cms|title = After SRK, Mohanlal to get a Taekwondo blackbelt|author = Prakash, Asha|date = 25 October 2012|access-date = 6 October 2014|work = [[The Times of India]]|archive-url = https://web.archive.org/web/20160204084353/http://timesofindia.indiatimes.com/entertainment/malayalam/movies/news/After-SRK-Mohanlal-to-get-a-Taekwondo-blackbelt/articleshow/16940066.cms|archive-date = 4 February 2016|url-status = live}}</ref>
ಮೋಹನ್ಲಾಲ್ ಅವರಿಗೆ ಅವರ ಮಾತೃ ಚಿಕ್ಕಪ್ಪ ಗೋಪಿನಾಥನ್ ನಾಯರ್ ಅವರು ಹೆಸರಿಟ್ಟರು. ಅವರು ಆರಂಭದಲ್ಲಿ ರೋಷನ್ಲಾಲ್ ಎಂದು ಹೆಸರಿಡಲು ನಿರ್ಧರಿಸಿದ್ದರು, ನಂತರ "ಮೋಹನ್ಲಾಲ್" ಅನ್ನು ಆಯ್ಕೆ ಮಾಡಿದರು.<ref>{{cite web|author=The Cue|title='ആദ്യം നല്കാന് ഉദ്ദേശിച്ച പേര് റോഷന് ലാല്, പേരിനൊപ്പം ജാതി വേണ്ടെന്നത് അച്ഛന്റെ തീരുമാനം'; മോഹന്ലാല്|date=25 August 2020|url=https://www.thecue.in/entertainment/film-news/actor-mohanlal-about-his-name|publisher=The Cue|access-date=29 September 2022|language=ml|archive-date=29 September 2022|archive-url=https://web.archive.org/web/20220929110316/https://www.thecue.in/entertainment/film-news/actor-mohanlal-about-his-name|url-status=live}}</ref>
==ಚಲನಚಿತ್ರ ವೃತ್ತಿಜೀವನ==
===ಆರಂಭಿಕ ವರ್ಷಗಳು (1978–1985)===
ಮೋಹನ್ಲಾಲ್ ಅವರು ೧೯೭೮ ರಲ್ಲಿ 'ತಿರನೋಟ್ಟಂ' ಚಿತ್ರದ ಮೂಲಕ ತಮ್ಮ ಅಭಿನಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರವನ್ನು ಮೋಹನ್ಲಾಲ್ ಮತ್ತು ಅವರ ಸ್ನೇಹಿತರು — ಮಣಿಯನ್ ಪಿಳ್ಳ ರಾಜು, ಸುರೇಶ್ ಕುಮಾರ್, ಉನ್ನಿ, ಪ್ರಿಯದರ್ಶನ್, ರವಿಕುಮಾರ್ ಮತ್ತು ಇತರ ಕೆಲವರು ನಿರ್ಮಿಸಿ ನಿರ್ದೇಶಿಸಿದ್ದರು. ಮೋಹನ್ಲಾಲ್ ಮಾನಸಿಕವಾಗಿ ವಿಕಲಚೇತನ ಸೇವಕ ಕುಟ್ಟಪ್ಪನ್ ಪಾತ್ರವನ್ನು ನಿರ್ವಹಿಸಿದ್ದರು. ಸೆನ್ಸಾರ್ ಸಮಸ್ಯೆಗಳಿಂದಾಗಿ, ಚಿತ್ರವು ಸಮಯಕ್ಕೆ ಬಿಡುಗಡೆಯಾಗಲಿಲ್ಲ. ಚಿತ್ರ ಬಿಡುಗಡೆಯಾಗಲು ೨೫ ವರ್ಷಗಳೇ ಬೇಕಾಯಿತು.<ref name="thiranottam"/>
೧೯೮೦ ರಲ್ಲಿ, ಮೋಹನ್ಲಾಲ್ ಅವರು ಫಾಜಿಲ್ ಅವರ ನಿರ್ದೇಶನದ ಚೊಚ್ಚಲ ಚಿತ್ರ 'ಮಂಜಿಲ್ ವಿರಿಂಜ ಪೂಕ್ಕಲ್' ನಲ್ಲಿ ಪ್ರಮುಖ ಪ್ರತಿನಾಯಕನ ಪಾತ್ರಕ್ಕಾಗಿ ಆಯ್ಕೆಯಾದರು. ಈ ಚಿತ್ರವು ದೊಡ್ಡ ಯಶಸ್ಸನ್ನು ಗಳಿಸಿತು.<ref name="toi1">{{cite news|title=Destiny made me an actor: Mohanlal|url=http://timesofindia.indiatimes.com/entertainment/hindi/bollywood/news/Destiny-made-me-an-actor-Mohanlal/articleshow/199817.cms|work=[[The Times of India]]|last=Maya|first=M.|date=24 September 2003|access-date=30 September 2003|archive-url=https://web.archive.org/web/20161130123747/http://timesofindia.indiatimes.com/entertainment/hindi/bollywood/news/Destiny-made-me-an-actor-Mohanlal/articleshow/199817.cms|archive-date=30 November 2016|url-status=live}}</ref> ಮೋಹನ್ಲಾಲ್ ಅವರ ಸ್ನೇಹಿತರು ನವೋದಯ ಸ್ಟುಡಿಯೋ ಬಿಡುಗಡೆ ಮಾಡಿದ ಜಾಹೀರಾತಿಗೆ ಪ್ರತಿಕ್ರಿಯೆಯಾಗಿ ಅವರ ಅರ್ಜಿಯನ್ನು ಕಳುಹಿಸಿದ್ದರು.<ref name="mathrubhumi">{{cite news|author=Mathrubhumi|title=മഞ്ഞിൽ വിരിയുന്ന ഓർമ്മകൾ...|trans-title=Remembrance Bloomed in the Mist|url=http://www.mathrubhumi.com/travel/columns/mohanlal/mohanlal-malayalam-news-1.36450|work=[[Mathrubhumi]]|language=ml|date=23 February 2011|access-date=6 May 2012|archive-url=https://web.archive.org/web/20161115230814/http://www.mathrubhumi.com/travel/columns/mohanlal/mohanlal-malayalam-news-1.36450|archive-date=15 November 2016|url-status=live}}</ref> ಅವರು ವೃತ್ತಿಪರ ನಿರ್ದೇಶಕರನ್ನು ಒಳಗೊಂಡ ಸಮಿತಿಯ ಮುಂದೆ ಆಡಿಷನ್ ನೀಡಿದರು. ಅವರ ನೋಟದಿಂದ ಅಸಮಾಧಾನಗೊಂಡ ಇಬ್ಬರು ಅವರಿಗೆ ಕಡಿಮೆ ಅಂಕಗಳನ್ನು ನೀಡಿದರು, ಆದರೆ ಫಾಜಿಲ್ ಮತ್ತು ಜಿಜೊ ಅಪ್ಪಚನ್ ಅವರು ೧೦೦ ರಲ್ಲಿ ೯೦ ಮತ್ತು ೯೫ ಅಂಕಗಳನ್ನು ನೀಡಿದರು.<ref>{{cite news|url=http://www.thehindu.com/thehindu/fr/2005/12/23/stories/2005122301990100.htm|title=His experiments with cinema|last=Manmadhan|first=Prema|work=[[The Hindu]]|date=23 December 2005|access-date=3 March 2011|archive-url=https://web.archive.org/web/20161130130934/http://www.thehindu.com/thehindu/fr/2005/12/23/stories/2005122301990100.htm|archive-date=30 November 2016|url-status=dead}}</ref> ೨೦೦೪ ರಲ್ಲಿ ರೀಡರ್ಸ್ ಡೈಜೆಸ್ಟ್ಗೆ ನೀಡಿದ ಸಂದರ್ಶನದಲ್ಲಿ, ಮೋಹನ್ಲಾಲ್ ಅವರು ಯುವಕನಾಗಿದ್ದಾಗ ತಮ್ಮ ನೋಟವು ಖಳನಾಯಕನ ಚಿತ್ರಣಕ್ಕೆ ಸರಿಹೊಂದುತ್ತದೆ ಎಂದು ಹೇಳಿದರು.<ref name="rd">{{cite web|title=You Cool Cat|url=http://www.rd-india.com/newsite/other/facetoface_july04.asp|publisher=[[Reader's Digest]]|last=Sivanand|first=Mohan|author-link=Mohan Sivanand|access-date=19 April 2010|date=July 2004|archive-url=https://web.archive.org/web/20060523070740/http://www.rd-india.com/newsite/other/facetoface_july04.asp|archive-date=23 May 2006}}</ref> ಅವರ ಪ್ರಶಂಸನೀಯ ಋಣಾತ್ಮಕ ಪಾತ್ರಗಳಲ್ಲಿ 'ಸಂಧ್ಯಾಕ್ಕು ವಿರಿಂಜ ಪೂವು' ಮತ್ತು 'ಕುಯಿಲಿನೆ ತೇದಿ' ಸೇರಿವೆ.<ref>{{Cite news |date=11 August 2011 |title=Back in action |language=en-IN |work=The Hindu |url=https://www.thehindu.com/features/cinema/back-in-action/article2346718.ece |access-date=21 March 2023 |issn=0971-751X |archive-date=2 February 2021 |archive-url=https://web.archive.org/web/20210202062049/https://www.thehindu.com/features/cinema/back-in-action/article2346718.ece |url-status=live }}</ref>
೧೯೮೩ ರ ವೇಳೆಗೆ, ಮೋಹನ್ಲಾಲ್ ೨೫ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು, ಹೆಚ್ಚಿನವುಗಳಲ್ಲಿ ಅವರು ಋಣಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದರು.<ref name="rd"/> 'ಎಂಟೆ ಮೊಹಂಗಲ್ ಪೂವನಿಂಜು', 'ಇನಿಯೆಂಗಿಲುಮ್', 'ವೀಸಾ', 'ಅಟ್ಟಕಳಶಂ', 'ಕಳಿಯಿಲ್ ಅಲ್ಪಂ ಕಾರ್ಯಂ', 'ಎಂಟೆ ಮಾಮಟ್ಟುಕ್ಕುಟ್ಟಿಯಮ್ಮಕ್ಕು', 'ಎಂಗನೆ ನೀ ಮರಕ್ಕುಮ್', 'ಉನಾರೂ' ಮತ್ತು 'ಶ್ರೀಕೃಷ್ಣ ಪರುಂತು' ಮುಂತಾದ ಚಿತ್ರಗಳು ಅವರ ಚಿತ್ರಣವನ್ನು ಬದಲಾಯಿಸಿದವು. ಶಶಿಕುಮಾರ್ ಅವರ 'ಇವಿಡೆ ತುಡಂಗುನ್ನು' ಮೂಲಕ, ಅವರು "ಒಳ್ಳೆಯ ಹೃದಯ" ಹೊಂದಿರುವ ಯಶಸ್ವಿ ನಾಯಕರಾದರು. ಮೋಹನ್ಲಾಲ್ ೧೯೮೪ ರ ಹಾಸ್ಯ ಚಿತ್ರ 'ಪೂಚಕ್ಕೊರು ಮೂಕ್ಕುತಿ' ಯಲ್ಲಿ ಪ್ರಿಯದರ್ಶನ್ ನಿರ್ದೇಶನದಲ್ಲಿ ತಮ್ಮ ಮೊದಲ ಹಾಸ್ಯ ಪ್ರಮುಖ ಪಾತ್ರವನ್ನು ತಂಡದಲ್ಲಿ ನಿರ್ವಹಿಸಿದರು. ಇದರಲ್ಲಿ ಅವರು ಶ್ರೀಮಂತಳೆಂದು ತಪ್ಪಾಗಿ ಭಾವಿಸಿದ ಹುಡುಗಿಯೊಬ್ಬಳನ್ನು ಪ್ರೀತಿಸುವ ಯುವಕನ ಪಾತ್ರವನ್ನು ನಿರ್ವಹಿಸಿದರು.<ref name="25yrs">{{cite web|url=http://www.rediff.com/movies/2003/sep/03mohan1.htm|title=25 years, 25 landmarks|work=[[Rediff.com]]|last=Warrior|first=Shobha|date=3 September 2003|access-date=3 March 2011|archive-url=https://web.archive.org/web/20161130134455/http://www.rediff.com/movies/2003/sep/03mohan1.htm|archive-date=30 November 2016|url-status=live}}</ref> ಇದು ಮೋಹನ್ಲಾಲ್-ಪ್ರಿಯದರ್ಶನ್ ಜೋಡಿಯ ಪ್ರಾರಂಭವನ್ನು ಗುರುತಿಸಿತು, ಇವರು ೨೦೧೬ ರ ಹೊತ್ತಿಗೆ ೪೪ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.<ref>{{cite news|title=Priyan-Mohanlal back after eight years for a comedy|url=http://www.deccanherald.com/content/141489/priyan-mohanlal-back-eight-years.html|work=[[Deccan Herald]]|agency=[[Indo-Asian News Service]]|access-date=6 May 2012|date=27 February 2011|archive-url=https://web.archive.org/web/20161130135839/http://www.deccanherald.com/content/141489/priyan-mohanlal-back-eight-years.html|archive-date=30 November 2016|url-status=live}}</ref>
೧೯೮೫ ರಲ್ಲಿ, ಅವರು 'ಒನ್ನಾನಂ ಕುನ್ನಿಲ್ ಒರಡಿ ಕುನ್ನಿಲ್' ಚಿತ್ರಕ್ಕಾಗಿ ಹಾಡನ್ನು ರೆಕಾರ್ಡ್ ಮಾಡಿದರು.<ref name="25yrs"/> 'ಉಯರಂಗಲಿಲ್', 'ನೊಕ್ಕೆತ ಡೂರತು ಕಣ್ಣುಂ ನಟ್ಟು', 'ಬೋಯಿಂಗ್ ಬೋಯಿಂಗ್' ಮತ್ತು 'ಅರಂ + ಅರಂ = ಕಿನ್ನರಂ' ಈ ಅವಧಿಯ ಅವರ ಕೆಲವು ಚಿತ್ರಗಳಾಗಿವೆ.
===ಸ್ಥಾಪಿತ ನಟ (1986–1999)===
[[File:Mohanlal and mammootty.JPG|thumb|ಮೋಹನ್ಲಾಲ್ ಮತ್ತು ಮಮ್ಮೂಟ್ಟಿ ಜೊತೆಗೆ, ಮಲಯಾಳಂ ಸಿನೆಮಾದ ಇಬ್ಬರು ಪ್ರಭಾವಶಾಲಿ ನಟರು]]
ಈ ಅವಧಿಯಲ್ಲಿ, ಮೋಹನ್ಲಾಲ್ ಅವರು "ಮಹಾನ್ ಗುರುಗಳು" ಎಂದು ಕರೆಯಲ್ಪಡುವ ಜಿ. ಅರವಿಂದನ್, ಹರಿಹರನ್, ಎಂ.ಟಿ. ವಾಸುದೇವನ್ ನಾಯರ್, ಪದ್ಮರಾಜನ್, ಭರತನ್ ಮತ್ತು ಲೋಹಿತದಾಸ್ ಅವರ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದರು.<ref name="hinduinterview"/> ಮೋಹನ್ಲಾಲ್, ನಟ ಮತ್ತು ಚಿತ್ರಕಥೆಗಾರ ಶ್ರೀನಿವಾಸನ್ ಅವರೊಂದಿಗೆ, ಹಲವಾರು ವಾಸ್ತವಿಕ ಸಾಮಾಜಿಕ ವಿಡಂಬನೆಗಳಲ್ಲಿ ಪ್ರತಿಕೂಲ ವಾತಾವರಣಕ್ಕೆ ಹೊಂದಿಕೊಳ್ಳಲು ಒತ್ತಾಯಿಸಲ್ಪಟ್ಟ ನಿರುದ್ಯೋಗಿ, ವಿದ್ಯಾವಂತ ಮಲಯಾಳಿ ಯುವಕರ ಆಕ್ರೋಶವನ್ನು ಪ್ರದರ್ಶಿಸಿದರು.<ref name="toi2">{{cite news|url=http://timesofindia.indiatimes.com/home/sunday-toi/Too-bad-if-you-dont-know-this-man/articleshow/1173425.cms|work=[[The Times of India]]|title=Too bad if you don't know this man|last=B.|first=Viju|date=14 January 2007|access-date=20 January 2008|archive-url=https://web.archive.org/web/20110120042753/http://timesofindia.indiatimes.com/home/sunday-toi/Too-bad-if-you-dont-know-this-man/articleshow/1173425.cms|archive-date=20 January 2011|url-status=live}}</ref> ಇವುಗಳಲ್ಲಿ ಕೆಲವನ್ನು ಶ್ರೀನಿವಾಸನ್ ಸ್ವತಃ ಬರೆದಿದ್ದರು.<ref name="udayan">{{cite news|url=http://hindu.com/thehindu/fr/2005/05/20/stories/2005052003000100.htm|work=[[The Hindu]]|last=Pillai|first=Sreedhar|title=The Mohanlal effect|date=20 May 2005|access-date=22 May 2009|archive-url=https://web.archive.org/web/20161204154816/http://www.thehindu.com/thehindu/fr/2005/05/20/stories/2005052003000100.htm|archive-date=4 December 2016|url-status=dead}}</ref>
೧೯೮೬ ರಲ್ಲಿ, ಅವರು ಸತ್ಯನ್ ಅಂತಿಕ್ಕಾಡ್ ನಿರ್ದೇಶನದ 'ಟಿ.ಪಿ. ಬಾಲಗೋಪಾಲನ್ ಎಂ.ಎ.' ಚಿತ್ರದಲ್ಲಿ ನಟಿಸಿದರು, ಇದಕ್ಕಾಗಿ ಅವರು ತಮ್ಮ ಮೊದಲ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ಪಡೆದರು.<ref name="award1">{{cite web|title=State Film Awards (1986)|url=http://www.prd.kerala.gov.in/stateawards2.htm|publisher=Department of Information and Public Relations|access-date=6 May 2012|url-status=dead|archive-url=https://web.archive.org/web/20091119014326/http://www.prd.kerala.gov.in/stateawards2.htm|archive-date=19 November 2009}}</ref> ಅವರು ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊತ್ತ ನಿರುದ್ಯೋಗಿ ಯುವಕನ ಪಾತ್ರವನ್ನು ನಿರ್ವಹಿಸಿದರು. ಅದೇ ವರ್ಷ, 'ಸನ್ಮಾನಸ್ಸುಳ್ಳವರ್ಕ್ಕು ಸಮಾಧಾನಂ' ನಲ್ಲಿ ಪೀಡಿತ ಮನೆಯ ಮಾಲೀಕನ ಪಾತ್ರಕ್ಕಾಗಿ ಅವರು ಫಿಲ್ಮ್ಫೇರ್ ಅತ್ಯುತ್ತಮ ನಟ (ಮಲಯಾಳಂ) ಪ್ರಶಸ್ತಿಯನ್ನು ಗೆದ್ದರು. ೧೯೮೬ ರಲ್ಲಿ 'ರಾಜವಿಂಟೆ ಮಕನ್' ನ ಬಾಕ್ಸ್ ಆಫೀಸ್ ಯಶಸ್ಸಿನ ನಂತರ ಮೋಹನ್ಲಾಲ್ ಅವರಿಗೆ ಜನತೆಯಿಂದ ಹೊಸ ಮಲಯಾಳಂ ಸೂಪರ್ಸ್ಟಾರ್ ಸ್ಥಾನವು ದೊರೆಯಿತು. ಅದರಲ್ಲಿ ಅವರು ಅಂಡರ್ ವರ್ಲ್ಡ್ ಡಾನ್ ವಿನ್ಸೆಂಟ್ ಗೊಮೆಜ್ ಆಗಿ ನಟಿಸಿದ್ದರು. ಅವರು ದುರಂತ ಚಿತ್ರ 'ತಾಲವಟ್ಟಂ' ನಲ್ಲೂ ನಟಿಸಿದರು. ಇದರಲ್ಲಿ ಅವರು ತಮ್ಮ ಪ್ರೇಯಸಿಯ ಸಾಕ್ಷಿಯಾದಾಗ ಮಾನಸಿಕವಾಗಿ ಅಸ್ವಸ್ಥನಾಗುವ ಯುವಕ ವಿನೋದ್ ಪಾತ್ರವನ್ನು ನಿರ್ವಹಿಸಿದರು. ಪದ್ಮರಾಜನ್ ಅವರ 'ನಮುಕ್ಕು ಪಾರ್ಕ್ಕನ್ ಮುಂತಿರಿತೊಪ್ಪುಕಳ್' ನಲ್ಲಿ ಅವರು ಸಾಲೋಮನ್ ಪಾತ್ರವನ್ನು ನಿರ್ವಹಿಸಿದರು. ಪದ್ಮರಾಜನ್ ಜೊತೆಗಿನ ಮೋಹನ್ಲಾಲ್ ಅವರ ಸಹಭಾಗಿತ್ವವು ಬಹಳ ಗಮನಾರ್ಹವಾಗಿತ್ತು ಏಕೆಂದರೆ ಅವರ ಚಿತ್ರಗಳು ಆ ಸಮಯದಲ್ಲಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿದ್ದ ಅನೇಕ ಸಾಂಪ್ರದಾಯಿಕ ಸ್ಟೀರಿಯೊಟೈಪ್ಗಳನ್ನು ಮುರಿದ ಕಥೆಗಳನ್ನು ಹೇಳುತ್ತಿದ್ದವು. ೧೯೮೬ ರಲ್ಲಿ ಮಾತ್ರ, ಮೋಹನ್ಲಾಲ್ ೩೬ ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡರು.<ref name="hinduinterview"/>
ಮರು ವರ್ಷ, ಮೋಹನ್ಲಾಲ್ ಸತ್ಯನ್ ಅಂತಿಕ್ಕಾಡ್ ಅವರ ಹಾಸ್ಯ ಚಿತ್ರ 'ನಾಡೋಡಿಕ್ಕಟ್ಟು' ನಲ್ಲಿ ಶ್ರೀನಿವಾಸನ್ ಮತ್ತು ಶೋಭನಾ ಅವರೊಂದಿಗೆ ನಟಿಸಿದರು. ಇದು ಬಾಕ್ಸ್ ಆಫೀಸ್ ಯಶಸ್ಸು ಗಳಿಸಿತು. ಮೋಹನ್ಲಾಲ್ ಮತ್ತು ಶ್ರೀನಿವಾಸನ್ ಅವರು ತಮ್ಮ ಅನುಕ್ರಮ ಚಿತ್ರಗಳಾದ 'ಪಟ್ಟನಪ್ರವೇಶಂ' (೧೯೮೮) ಮತ್ತು 'ಅಕ್ಕರೆ ಅಕ್ಕರೆ ಅಕ್ಕರೆ' (೧೯೯೦) ನಲ್ಲಿ ಕ್ರಮವಾಗಿ ಪತ್ತೇದಾರಿ ದಾಸನ್ ಮತ್ತು ವಿಜಯನ್ ಪಾತ್ರಗಳನ್ನು ಪುನರಾವರ್ತಿಸಿದರು. ಪದ್ಮರಾಜನ್ ನಿರ್ದೇಶನದ 'ತೂವನತ್ತುಂಬಿಕಲ್' ನಲ್ಲಿ ಅವರು ತಮ್ಮ ಎರಡು ಪ್ರೇಮಾಸಕ್ತಿಗಳ ನಡುವೆ ಸಿಲುಕಿಕೊಂಡ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ಭಾರತೀಯ ಚಿತ್ರಗಳಲ್ಲಿನ ಅನೇಕ ಸ್ಟೀರಿಯೊಟೈಪ್ಗಳನ್ನು ಮುರಿಯಿತು.<ref name="toi2"/><ref>{{cite news|title=Mohanlal, still raring to go at 53|url=http://movies.ndtv.com/photos/mohanlal-still-raring-to-go-at-53-10492|access-date=21 May 2013|work=[[NDTV]]|date=21 May 2013|archive-url=https://web.archive.org/web/20161204155948/http://movies.ndtv.com/photos/mohanlal-still-raring-to-go-at-53-10492|archive-date=4 December 2016|url-status=live}}</ref> ೧೯೮೮ ರಲ್ಲಿ ಬಿಡುಗಡೆಯಾದ ಪ್ರಣಯ ಹಾಸ್ಯ 'ಚಿತ್ರಂ', ೩೬೬ ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡು, ಅತಿ ಹೆಚ್ಚು ದಿನಗಳ ಕಾಲ ಪ್ರದರ್ಶನಗೊಂಡ ಮಲಯಾಳಂ ಚಿತ್ರವಾಯಿತು.<ref name="25yrs"/> ೧೯೮೮ ರಲ್ಲಿ 'ಪದಮುದ್ರ', 'ಆರ್ಯನ್', 'ವೆಲ್ಲನಕಳುಡೆ ನಾಡು', 'ಉಲ್ಸವಪಿಟ್ಟೆನ್ನು' ಮತ್ತು 'ಚಿತ್ರಂ' ಚಿತ್ರಗಳಲ್ಲಿನ ಅಭಿನಯಕ್ಕಾಗಿ ಮೋಹನ್ಲಾಲ್ ಕೇರಳ ರಾಜ್ಯ ವಿಶೇಷ ತೀರ್ಪುಗಾರ ಪ್ರಶಸ್ತಿಯನ್ನು ಗೆದ್ದರು.<ref name="award1"/>
೧೯೮೯ ರಲ್ಲಿ, ಬರಹಗಾರ ಲೋಹಿತದಾಸ್ ಮತ್ತು ನಿರ್ದೇಶಕ ಸಿಬಿ ಮಲಯಿಲ್ ಅವರ ಸಂಯೋಜನೆಯು ದುರಂತ ಚಿತ್ರ 'ಕಿರೀಡಂ' ನಲ್ಲಿ ಪೊಲೀಸ್ ಅಧಿಕಾರಿಯಾಗುವ ಕನಸು ಕಾಣುವ, ಆದರೆ ಅಪರಾಧಿಯಾಗಿ ಕೊನೆಗೊಳ್ಳುವ ಸೇತುಮಾಧವನ್ ಪಾತ್ರವನ್ನು ಸೃಷ್ಟಿಸಿತು. ಈ ಪಾತ್ರವು ಮೋಹನ್ಲಾಲ್ ಅವರಿಗೆ ರಾಷ್ಟ್ರೀಯ ಚಲನಚಿತ್ರ ವಿಶೇಷ ತೀರ್ಪುಗಾರರ ಉಲ್ಲೇಖವನ್ನು ಗಳಿಸಿಕೊಟ್ಟಿತು.<ref name="25yrs"/> ಮೋಹನ್ಲಾಲ್ ನಂತರ ನೆನಪಿಸಿಕೊಂಡರು, ಸೇತುಮಾಧವನ್ ಅವರ ಮಾನಸಿಕ ಸಂಕಟದ ಚಿತ್ರಣವು ಸ್ವಾಭಾವಿಕವಾಗಿದೆ ಮತ್ತು "ನನ್ನ ಪಾತ್ರವಾದ ಸೇತುಮಾಧವನ್ ಅಂತಹ ಸಂದರ್ಭದಲ್ಲಿ ಏನು ಮಾಡುತ್ತಿದ್ದನೋ ಅದನ್ನೇ ನಾನು ಮಾಡಿದೆ" ಎಂದು ಹೇಳಿದರು. ಅಭಿನಯವು "ಇನ್ನೊಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸುವುದಕ್ಕೆ ಹೋಲುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.<ref name="hinduinterview"/> ಅದೇ ವರ್ಷ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ 'ವರವೇಲ್ಪು' ಚಿತ್ರದಲ್ಲಿ ನಟಿಸಿದರು. ಇದು ಪರ್ಷಿಯನ್ ಗಲ್ಫ್ನಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿ ತನ್ನ ಕುಟುಂಬದೊಂದಿಗೆ ಜೀವನವನ್ನು ಆನಂದಿಸಲು ಮನೆಗೆ ಬಂದ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಅವರು ಬಸ್ ಖರೀದಿಸಿದರು, ಅದು ಅಂತಿಮವಾಗಿ ಅವರನ್ನು ತೊಂದರೆಗೆ ಸಿಲುಕಿಸಿತು. ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ೨೦೦೩ ರ ಜನವರಿ ೧೮ ರಂದು ಕೊಚ್ಚಿಯಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟರ್ ಮೀಟ್ನ ಉದ್ಘಾಟನಾ ಸಮಾರಂಭದಲ್ಲಿ ಜಾಗತಿಕ ಆರ್ಥಿಕ ಬದಲಾವಣೆಗಳ ಬಗ್ಗೆ ಮಲಯಾಳಿಗಳ ಅಜ್ಞಾನಕ್ಕೆ ಉದಾಹರಣೆಯಾಗಿ ಈ ಚಿತ್ರವನ್ನು ಉಲ್ಲೇಖಿಸಿದರು.<ref>{{cite web|url=http://www.rediff.com/money/2003/jan/18gim.htm|title=Kerala ignores global economic changes: PM|work=[[Rediff.com]]|date=18 January 2003|access-date=20 January 2008|author=Press Trust of India|author-link=Press Trust of India|archive-url=https://web.archive.org/web/20161204162257/http://www.rediff.com/money/2003/jan/18gim.htm|archive-date=4 December 2016|url-status=live}}</ref><ref>{{cite press release|author=<!--Staff writer(s); no by-line.-->|title=PIB Press Releases: Prime Minister Inaugurates Global Investors Meet|url=http://pib.nic.in/archive/releases98/lyr2003/rjan2003/18012003/r180120031.html|location=[[Kochi]]|publisher=[[Press Information Bureau]]|date=18 January 2003|access-date=18 January 2003|archive-url=https://web.archive.org/web/20161204172357/http://pib.nic.in/archive/releases98/lyr2003/rjan2003/18012003/r180120031.html|archive-date=4 December 2016|url-status=live}}</ref> ೧೯೮೯ ರಲ್ಲಿ, ಅವರು ಪದ್ಮರಾಜನ್ ಅವರ ಮತ್ತೊಂದು ಚಿತ್ರ 'ಸೀಸನ್' ನಲ್ಲಿ ನಟಿಸಿದರು.
೧೯೯೦ ರ ದಶಕದ ಆರಂಭದಲ್ಲಿ, ಮೋಹನ್ಲಾಲ್ ಹಲವಾರು ವಾಣಿಜ್ಯ ಚಿತ್ರಗಳಲ್ಲಿ ನಟಿಸಿದರು, ಅವುಗಳಲ್ಲಿ 'ಹಿಸ್ ಹೈನೆಸ್ ಅಬ್ದುಲ್ಲಾ', 'ಮಿಧುನಂ' ಮತ್ತು 'ನಂ.20 ಮದ್ರಾಸ್ ಮೇಲ್' ಸೇರಿವೆ. 'ಹಿಸ್ ಹೈನೆಸ್ ಅಬ್ದುಲ್ಲಾ' ಮೋಹನ್ಲಾಲ್ ಅವರ ಕಂಪನಿ ಪ್ರಣವಂ ಆರ್ಟ್ಸ್ ಇಂಟರ್ನ್ಯಾಷನಲ್ ಅಡಿಯಲ್ಲಿ ಅವರ ಮೊದಲ ಸ್ವತಂತ್ರ ನಿರ್ಮಾಣವಾಗಿದೆ. ಮೋಹನ್ಲಾಲ್ ೧೯೯೦ ರಲ್ಲಿ ಭರತನ್ ಅವರ 'ತಾಳ್ವರಂ' ನಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ತಮ್ಮ ಅತ್ಯಂತ ವಿಶ್ವಾಸಾರ್ಹ ಸ್ನೇಹಿತನಿಂದ ತಮ್ಮ ಪತ್ನಿಯ ಕೊಲೆಗೆ ಪ್ರತೀಕಾರವನ್ನು ಬಯಸುವ ವಿಧುರನ ಪಾತ್ರವನ್ನು ನಿರ್ವಹಿಸಿದರು. ೧೯೯೧ ರಲ್ಲಿ ಅವರ ಪ್ರಣಯ ಹಾಸ್ಯ 'ಕಿಲುಕ್ಕಂ' ಅವರಿಗೆ ಅತ್ಯುತ್ತಮ ನಟನಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಚಿತ್ರವು ಮಲಯಾಳಂನ ಎಲ್ಲಾ ಕಾಲದ ಶ್ರೇಷ್ಠ ಹಾಸ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವೂ ಆಯಿತು. ೧೯೯೧ ರಲ್ಲಿ, ಮೋಹನ್ಲಾಲ್ 'ಭರತಂ' ಅನ್ನು ನಿರ್ಮಿಸಿ ನಟಿಸಿದರು. ಇದನ್ನು ರಾಮಾಯಣದ ಆಧುನಿಕ ರೂಪಾಂತರವೆಂದು ಭರತನ ದೃಷ್ಟಿಕೋನದಿಂದ ವ್ಯಾಖ್ಯಾನಿಸಲಾಗಿದೆ. ಈ ಚಿತ್ರವು ವಿಮರ್ಶಾತ್ಮಕ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಅಸೂಯೆ ಪಟ್ಟ ಸಹೋದರನಿಂದ ಹೊರೆಯಾದ ಕರ್ನಾಟಕ ಗಾಯಕನ ಪಾತ್ರಕ್ಕಾಗಿ ಅವರು ಆ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ಪಡೆದರು.<ref name="ndtvgoodtimes">{{cite news|url=http://goodtimes.ndtv.com/PhotoDetail.aspx?Page=2&ID=10492&AlbumType=PG#talk|title=Malayalam cinema's invincible star turns 51|work=[[NDTV Good Times]]|date=21 May 2011|access-date=6 May 2012|archive-url=https://web.archive.org/web/20120401141453/http://goodtimes.ndtv.com/PhotoDetail.aspx?Page=2&ID=10492&AlbumType=PG#talk|archive-date=1 April 2012|url-status=live}}</ref><ref>{{cite web|last=Warrier|first=Shobha|title=An interview with Lohitadas, director of the Malayalam film, Bhoothakkannadi|url=http://www.rediff.com/entertai/aug/11lo1.htm|work=[[Rediff.com]]|access-date=24 January 2016|date=22 August 1997|archive-url=https://web.archive.org/web/20160220111815/http://www.rediff.com/entertai/aug/11lo1.htm|archive-date=20 February 2016|url-status=live}}</ref> ೧೯೯೨ ರಲ್ಲಿ ಅವರು 'ಕಮಲದಳಂ' ನಲ್ಲಿ ಭರತನಾಟ್ಯ ನರ್ತಕನ ಪಾತ್ರವನ್ನು ನಿರ್ವಹಿಸಿದರು. ನೃತ್ಯ ದೃಶ್ಯಗಳನ್ನು ನಿರ್ವಹಿಸಲು ಅವರು ತಮ್ಮ ನೃತ್ಯ ಸಂಯೋಜಕ ಮತ್ತು ಸಹ-ನಟರು ಮತ್ತು ವೃತ್ತಿಪರ ನರ್ತಕರಾದ ವಿನೀತ್ ಮತ್ತು ಮೋನಿಶಾ ಅವರ ಸಹಾಯವನ್ನು ಪಡೆದರು.<ref name = "hinduinterview">{{cite news|url=http://www.thehindu.com/todays-paper/tp-features/tp-fridayreview/acting-is-a-bit-like-meditation/article2273126.ece|title=Acting is a bit like meditation|work=[[The Hindu]]|last=Kumar|first=P. K. Ajith|date=27 July 2007|access-date=27 July 2007|archive-url=https://web.archive.org/web/20161204170644/http://www.thehindu.com/todays-paper/tp-features/tp-fridayreview/acting-is-a-bit-like-meditation/article2273126.ece|archive-date=4 December 2016|url-status=live}}</ref> 'ರಾಜಶಿಲ್ಪಿ', 'ಸದಯಂ', 'ಯೋಧ' ಮತ್ತು 'ವಿಯೆಟ್ನಾಂ ಕಾಲೋನಿ' ೧೯೯೨ ರಲ್ಲಿ ಬಿಡುಗಡೆಯಾದ ಅವರ ಇತರ ಚಿತ್ರಗಳಾಗಿವೆ. ರಂಜಿತ್ ಬರೆದು ಐ.ವಿ. ಶಶಿ ನಿರ್ದೇಶನದ 'ದೇವಾಸುರಂ' (೧೯೯೩) ಮೋಹನ್ಲಾಲ್ ಅವರ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ ಮತ್ತು ಇದನ್ನು ಕ್ಲಾಸಿಕ್ ಎಂದು ಪರಿಗಣಿಸಲಾಗಿದೆ.<ref name="ndtvgoodtimes"/>
೧೯೯೪ ರಲ್ಲಿ, ಮೋಹನ್ಲಾಲ್ ಫಾಜಿಲ್ ನಿರ್ದೇಶನದ ಶ್ರೇಷ್ಠ 'ಮಣಿಚಿತ್ರತಾಳು' ನಲ್ಲಿ ಪ್ರಮುಖ ಪಾತ್ರವಾದ ಮನೋವೈದ್ಯ ಡಾ. ಸನ್ನಿ ಜೋಸೆಫ್ ಆಗಿ ನಟಿಸಿದರು. ಇದು ಅತ್ಯಂತ ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದ್ದು, ಕೆಲವು ಚಿತ್ರಮಂದಿರಗಳಲ್ಲಿ ೩೬೫ ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.<ref>{{Cite news |date=31 May 2016 |title=10 Mollywood films that ran for the longest time |work=[[The Times of India]] |agency=Times News Network |url=http://timesofindia.indiatimes.com/entertainment/malayalam/movies/10-Mollywood-films-that-ran-for-the-longest-time/10-Mollywood-films-that-ran-for-the-longest-time/photostory/52523456.cms |url-status=live |access-date=28 July 2016 |archive-url=https://web.archive.org/web/20160728160923/http://timesofindia.indiatimes.com/entertainment/malayalam/movies/10-Mollywood-films-that-ran-for-the-longest-time/10-Mollywood-films-that-ran-for-the-longest-time/photostory/52523456.cms |archive-date=28 July 2016}}</ref> ಈ ಚಿತ್ರವು ನಂತರ ಕ್ಲಾಸಿಕ್ ಸ್ಥಾನಮಾನವನ್ನು ಗಳಿಸಿತು ಮತ್ತು ಇದು ಭಾರತೀಯ ಸಿನೆಮಾದ ಅತ್ಯುತ್ತಮ ಮಾನಸಿಕ ಥ್ರಿಲ್ಲರ್ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.<ref>{{Cite web |title=India's 'best' psychological thriller turns 25 |url=https://www.theweek.in/news/entertainment/2018/03/12/25-years-manichitrathazhu-still-best-psychological-thriller-india-has-produced.html |access-date=2024-02-19 |website=The Week |language=en}}</ref><ref>{{Cite news |title=25 years of Manichitrathazhu: Why this Malayalam classic remains unsurpassed |work=The News Minute |url=https://www.thenewsminute.com/article/25-years-manichitrathazhu-why-malayalam-classic-remains-unsurpassed-93441 |access-date=15 April 2022 |archive-date=25 March 2022 |archive-url=https://web.archive.org/web/20220325162342/https://www.thenewsminute.com/article/25-years-manichitrathazhu-why-malayalam-classic-remains-unsurpassed-93441 |url-status=live }}</ref> 'ಸ್ಪಡಿಕಂ' ೧೯೯೫ ರ ಕೃತಿಯಾಗಿದ್ದು, ಇದಕ್ಕಾಗಿ ಅವರು ತಮ್ಮ ಮೂರನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ಮತ್ತು ಐದನೇ ಫಿಲ್ಮ್ಫೇರ್ ಪ್ರಶಸ್ತಿಯನ್ನು ಅತ್ಯುತ್ತಮ ನಟ (ಮಲಯಾಳಂ) ಆಗಿ ಗೆದ್ದರು. ಅವರು ಥಾಮಸ್ "ಆಡು ಥೋಮ" ಚಾಕೋ ಪಾತ್ರಕ್ಕಾಗಿ, ತಂದೆಯ ಹೆಚ್ಚಿನ ನಿರೀಕ್ಷೆಗಳನ್ನು ಪೂರೈಸಲು ವಿಫಲವಾದಾಗ, ತಂದೆಯಿಂದ ದೂರವಾದ ಗುಂಡುಗಾರನಾಗುವ ಯುವಕನ ಪಾತ್ರವನ್ನು ನಿರ್ವಹಿಸಿದರು.<ref>{{Cite web |date=2018-03-30 |title='Spadikam': 23 years on, this Mohanlal film remains a favourite Malayalam action flick |url=https://www.thenewsminute.com/article/spadikam-23-years-mohanlal-film-remains-favourite-malayalam-action-flick-78731 |access-date=2023-02-09 |website=The News Minute |language=en |archive-date=9 February 2023 |archive-url=https://web.archive.org/web/20230209200924/https://www.thenewsminute.com/article/spadikam-23-years-mohanlal-film-remains-favourite-malayalam-action-flick-78731 |url-status=live }}</ref> ೧೯೯೬ ರಲ್ಲಿ, ಮೋಹನ್ಲಾಲ್ ಪ್ರಿಯದರ್ಶನ್ ಅವರ 'ಕಾಲಪಾನಿ' ಯಲ್ಲಿ ನಟಿಸಿದರು. ಇದು ಪೋರ್ಟ್ ಬ್ಲೇರ್ನ ಸೆಲ್ಯುಲಾರ್ ಜೈಲಿನ ಕೈದಿಗಳ ಬಗ್ಗೆ ಮಹಾಕಾವ್ಯದ ಚಿತ್ರವಾಗಿದೆ ಮತ್ತು ೧೯೯೮ ರಲ್ಲಿ ಲೋಹಿತದಾಸ್ ಅವರ 'ಕನ್ಮದಂ' ನಲ್ಲಿ ನಟಿಸಿದರು. ೧೯೯೭ ರಲ್ಲಿ ರಾಜೀವ್ ಅಂಚಲ್ ನಿರ್ದೇಶನದ 'ಗುರು' ಚಿತ್ರದಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ೧೯೯೭ ರ ಅತ್ಯುತ್ತಮ ವಿದೇಶಿ ಭಾಷಾ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯ ನಾಮನಿರ್ದೇಶನಕ್ಕೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಯಿತು.<ref>{{cite web|last1=Jose|first1=D|title=Blind man's buff|url=http://www.rediff.com/entertai/1998/mar/16guru.htm|work=[[Rediff.com]]|access-date=4 August 2016|date=16 March 1998}}</ref>
ಮೋಹನ್ಲಾಲ್ ೧೯೯೭ ರಲ್ಲಿ ಮಣಿರತ್ನಂ ನಿರ್ದೇಶನದ ತಮಿಳು ಜೀವನಚರಿತ್ರೆಯ ಚಿತ್ರ 'ಇರುವರ್' ನಲ್ಲಿ ತಮ್ಮ ಮೊದಲ ಅನ್ಯಭಾಷಾ ಚಿತ್ರದಲ್ಲಿ ನಟಿಸಿದರು.<ref>{{cite web|url=http://www.rediff.com/movies/2002/dec/07ash.htm|title=Ash's Hollywood debut in mid-2003|work=[[Rediff.com]]|last=Chand|first=Fakir|date=7 December 2002|access-date=6 May 2012|archive-url=https://web.archive.org/web/20161204172636/http://www.rediff.com/movies/2002/dec/07ash.htm|archive-date=4 December 2016|url-status=live}}</ref> ಮೋಹನ್ಲಾಲ್ ರಾಜಕೀಯಕ್ಕೆ ತಿರುಗುವ ನಟನನ್ನು ಚಿತ್ರಿಸಿದ ಈ ಚಿತ್ರವು (ಎಂ.ಜಿ. ರಾಮಚಂದ್ರನ್ ಅವರ ಜೀವನವನ್ನು ಆಧರಿಸಿ) ವಿಮರ್ಶಾತ್ಮಕ ಯಶಸ್ಸನ್ನು ಗಳಿಸಿತು ಮತ್ತು ಬೆಲ್ಗ್ರೇಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಮತ್ತು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.<ref>{{cite news|url=http://www.cscsarchive.org:8081/MediaArchive/art.nsf/%28docid%29/F4AF25E8DDFA9E8F6525694100207BAB|title=Censors refer Iruvar to home dept|work=[[The Times of India]]|date=28 February 1997|access-date=6 May 2012|url-status=dead|archive-url=https://web.archive.org/web/20120405022505/http://www.cscsarchive.org:8081/MediaArchive/art.nsf/%28docid%29/F4AF25E8DDFA9E8F6525694100207BAB|archive-date=5 April 2012}}</ref><ref>{{cite web|url=http://movies.rediff.com/slide-show/2010/jun/09/slide-show-1-looking-at-mani-ratnams-landmark-movies.htm|title=Looking at Mani Ratnam's landmark movies|work=[[Rediff.com]]|date=9 June 2010|access-date=6 May 2012|first=Pavithra|last=Srinivasan|archive-url=https://web.archive.org/web/20161204173521/http://movies.rediff.com/slide-show/2010/jun/09/slide-show-1-looking-at-mani-ratnams-landmark-movies.htm|archive-date=4 December 2016|url-status=live}}</ref> ೧೯೯೮ ರಲ್ಲಿ, ಅವರು 'ಹರಿಕೃಷ್ಣನ್ಸ್' ಅನ್ನು ನಿರ್ಮಿಸಿ ನಟಿಸಿದರು, ಇದರಲ್ಲಿ ಮಮ್ಮೂಟ್ಟಿ ಮತ್ತು ಜೂಹಿ ಚಾವ್ಲಾ ಸಹ ನಟಿಸಿದ್ದರು. ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ವಿಮರ್ಶಕರಿಂದ ಉತ್ತಮ ಸ್ವೀಕಾರ ಪಡೆಯಲಿಲ್ಲ.<ref>{{cite web|url=http://www.rediff.com/movies/1999/mar/11moh1.htm|title=Nothing, neither criticism nor compliment, affects me|work=[[Rediff.com]]|last=Warrier|first=Shobha|date=11 March 1999|access-date=6 May 2012|archive-url=https://web.archive.org/web/20161204174203/http://www.rediff.com/movies/1999/mar/11moh1.htm|archive-date=4 December 2016|url-status=live}}</ref> ಈ ಚಿತ್ರವು ಎರಡು ಕ್ಲೈಮ್ಯಾಕ್ಸ್ಗಳನ್ನು ಹೊಂದಿತ್ತು, ಅವುಗಳನ್ನು ಪ್ರತಿಯೊಂದು ಪ್ರದೇಶದಲ್ಲಿ ಎರಡು ಪ್ರಮುಖ ನಟರ ಜನಪ್ರಿಯತೆಯ ಆಧಾರದ ಮೇಲೆ ವಿವಿಧ ಪ್ರದೇಶಗಳಲ್ಲಿ ಪ್ರದರ್ಶಿಸಲಾಯಿತು.<ref>{{cite web|url=http://www.rediff.com/movies/1998/sep/14hari.htm|title=The win-win situation|work=[[Rediff.com]]|last=Jose|first=D.|date=14 September 1998|access-date=6 May 2012|archive-url=https://web.archive.org/web/20161204174523/http://www.rediff.com/movies/1998/sep/14hari.htm|archive-date=4 December 2016|url-status=live}}</ref> ಆದಾಗ್ಯೂ, ಇದು ವಿವಾದಾತ್ಮಕವಾಯಿತು ಮತ್ತು ಹಿಂದೂ ಪ್ರಧಾನ ಪ್ರದೇಶಗಳಲ್ಲಿ ಪ್ರದರ್ಶಿಸಲಾದ ಪ್ರತಿಗಳು ಮೋಹನ್ಲಾಲ್ ನಾಯಕಿಯನ್ನು ಮದುವೆಯಾಗುವುದನ್ನು ತೋರಿಸಿದೆ ಎಂದು ಹೇಳಿ ಮೊಕದ್ದಮೆಗಳನ್ನು ಹೂಡಲಾಯಿತು, ಆದರೆ ಮುಸ್ಲಿಂ ಪ್ರಧಾನ ಪ್ರದೇಶಗಳಲ್ಲಿ ಮಮ್ಮೂಟ್ಟಿ ಅವಳನ್ನು ಮದುವೆಯಾಗುವುದನ್ನು ತೋರಿಸಲಾಯಿತು. ಪ್ರಮುಖ ಸಮಸ್ಯೆಯೆಂದರೆ, ಸೆನ್ಸಾರ್ ಮಂಡಳಿಗೆ ಸಲ್ಲಿಸಿದ ಚಿತ್ರದ ಆವೃತ್ತಿಯು ಮೋಹನ್ಲಾಲ್ ಪ್ರಮುಖ ನಟಿಯನ್ನು ಗೆಲ್ಲುವ ಆವೃತ್ತಿಯಾಗಿತ್ತು. ಆದ್ದರಿಂದ ಅವರು ಮಮ್ಮೂಟ್ಟಿ ಆವೃತ್ತಿಯನ್ನು ಚಿತ್ರಮಂದಿರಗಳಿಂದ ತೆಗೆದುಹಾಕಲು ಒತ್ತಾಯಿಸಲಾಯಿತು, ಅದನ್ನು ಮೂಲ ಆವೃತ್ತಿಯಿಂದ ಬದಲಾಯಿಸಲಾಯಿತು. ಆದಾಗ್ಯೂ, ದೂರದರ್ಶನ ಪ್ರಥಮ ಪ್ರದರ್ಶನಗಳಲ್ಲಿ, ಎರಡೂ ಚಿತ್ರ ಆವೃತ್ತಿಗಳನ್ನು ತೋರಿಸಲಾಗಿದೆ.<ref>{{cite web|url=http://www.rediff.com/movies/1998/oct/06hari.htm|title=Double trouble|work=[[Rediff.com]]|last=Jose|first=D.|date=6 October 1998|access-date=6 May 2012|archive-url=https://web.archive.org/web/20161204174801/http://www.rediff.com/movies/1998/oct/06hari.htm|archive-date=4 December 2016|url-status=live}}</ref>
ಮೋಹನ್ಲಾಲ್ ೧೯೯೯ ರ ಇಂಡೋ-ಫ್ರೆಂಚ್ ಐತಿಹಾಸಿಕ ನಾಟಕ 'ವನಪ್ರಸ್ಥಂ' ನಲ್ಲಿ ಕಥಕಳಿ ಕಲಾವಿದನ ಪಾತ್ರವನ್ನು ನಿರ್ವಹಿಸಿದರು. ಇದನ್ನು ಅವರು ನಿರ್ಮಿಸಿದರು ಮತ್ತು ಶಾಜಿ ಎನ್. ಕರುಣ್ ನಿರ್ದೇಶಿಸಿದರು. ಇದು ಅವರಿಗೆ ಎರಡನೇ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು ಮತ್ತು ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಅವರಿಗೆ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟ ಮೊದಲ ಚಿತ್ರವಾಗಿದೆ. ಈ ಚಿತ್ರವು ಕಾನ್ಸ್ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಯಿತು ಮತ್ತು ಅವರ ಅಭಿನಯವನ್ನು ವಿಮರ್ಶಕರು ಪ್ರಶಂಸಿಸಿದರು. ಇದು ಅವರಿಗೆ ನಾಲ್ಕನೇ ಕೇರಳ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ, ಎರಡನೇ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಆರನೇ ಫಿಲ್ಮ್ಫೇರ್ ಅತ್ಯುತ್ತಮ ನಟ (ಮಲಯಾಳಂ) ಪ್ರಶಸ್ತಿಯನ್ನು ತಂದುಕೊಟ್ಟಿತು.<ref name="rd"/><ref>{{cite news|url=http://www.thehindu.com/2000/07/28/stories/09280226.htm|title=Accolades are a norm|work=[[The Hindu]]|last=Narasimham|first=M. L.|date=28 July 2000|access-date=6 May 2012|archive-url=https://web.archive.org/web/20161204175519/http://www.thehindu.com/2000/07/28/stories/09280226.htm|archive-date=4 December 2016|url-status=dead}}</ref><ref>{{cite news|url=http://www.thehindu.com/2000/07/14/stories/09140221.htm|title=On a winning spree|work=[[The Hindu]]|last=Santhosh|first=K.|date=14 July 2000|access-date=6 May 2012|archive-url=https://web.archive.org/web/20161204175307/http://www.thehindu.com/2000/07/14/stories/09140221.htm|archive-date=4 December 2016|url-status=dead}}</ref> 'ವನಪ್ರಸ್ಥಂ' ಅನ್ನು ಅಮೆರಿಕನ್ ಫಿಲ್ಮ್ ಇನ್ಸ್ಟಿಟ್ಯೂಟ್ ಫೆಸ್ಟ್ನಲ್ಲಿ ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಯಿತು.<ref>{{cite news|last=Philip|first=Benson|title=Must Watch International Award Winning Malayalam Films|url=http://timesofindia.indiatimes.com/entertainment/malayalam/movies/must-watch-international-award-winning-malayalam-films/photostory/52255815.cms|access-date=11 January 2017|work=[[The Times of India]]|date=13 May 2016|archive-url=https://web.archive.org/web/20170113194956/http://timesofindia.indiatimes.com/entertainment/malayalam/movies/must-watch-international-award-winning-malayalam-films/photostory/52255815.cms|archive-date=13 January 2017|url-status=live}}</ref> ೨೦೧೪ ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಭಾರತೀಯ ಸಿನೆಮಾದಲ್ಲಿ ನೃತ್ಯವನ್ನು ಆಚರಿಸುವುದು' ವಿಭಾಗದಲ್ಲಿ 'ವನಪ್ರಸ್ಥಂ' ಅನ್ನು ಹಿಂದಿನ ಪ್ರದರ್ಶನದಲ್ಲಿ ತೋರಿಸಲಾಯಿತು.<ref>{{cite web|title=Indian Cinema Catalogue 2014|url=http://www.iffi.nic.in/Indian%20Cinema%20Catalogue%202014.pdf|publisher=[[International Film Festival of India]]|date=20 November 2014|access-date=16 September 2016|archive-url=https://web.archive.org/web/20160316163822/http://www.iffi.nic.in/Indian%20Cinema%20Catalogue%202014.pdf|archive-date=16 March 2016|url-status=dead}}</ref>
===ವೃತ್ತಿ ವಿಸ್ತರಣೆ ಮತ್ತು ಸ್ಟಾರ್ಡಮ್ (2000–2009)===
[[File:Mohanlal and Madhu.jpg|thumb|alt=Mohanlal talking to actor Madhu
|ಮೋಹನ್ಲಾಲ್ ಮತ್ತು ಮಧು ಅವರು 2008 ರಲ್ಲಿ ಅಮ್ಮ ಸಾಮಾನ್ಯ ಸಭೆಯಲ್ಲಿ]]
೨೦೦೦ ರಲ್ಲಿ, ಮೋಹನ್ಲಾಲ್ 'ನರಸಿಂಹಂ' ನಲ್ಲಿ ನಟಿಸಿದರು. ಇದರಲ್ಲಿ ಅವರು ಒಳ್ಳೆಯ ಹೃದಯದ ದುಷ್ಟನ ಪಾತ್ರವನ್ನು ನಿರ್ವಹಿಸಿದರು.<ref>{{cite web|url=http://www.frontline.in/static/html/fl1715/17151210.htm|publisher=[[Frontline (magazine)|Frontline]]|title=Greasepaint, and beyond|last=Krishnankumar|first=R.|date=22 July 2000|access-date=20 March 2008|archive-url=https://web.archive.org/web/20161204190956/http://www.frontline.in/static/html/fl1715/17151210.htm|archive-date=4 December 2016 |url-status=live}}</ref> ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.<ref name="narasimham">{{cite web|url=http://www.rediff.com/entertai/2001/jan/24mallu.htm|title=Sleaze time, folks!|work=[[Rediff.com]]|last=Ayyappan|first=R.|date=24 January 2001|access-date=3 March 2011|archive-url=https://web.archive.org/web/20161204191304/http://www.rediff.com/entertai/2001/jan/24mallu.htm|archive-date=4 December 2016 |url-status=live}}</ref> ಮುಂದಿನ ಎರಡು ವರ್ಷಗಳಲ್ಲಿ, ಮೋಹನ್ಲಾಲ್ ಅವರು 'ರಾವಣಪ್ರಭು' (೨೦೦೧), 'ಪ್ರಜಾ' (೨೦೦೧), 'ಒನ್ನಾಮನ್' (೨೦೦೨), 'ತಂಡವಂ' (೨೦೦೨) ಮತ್ತು 'ಚತುರಂಗಂ' (೨೦೦೨) ನಂತಹ ಚಿತ್ರಗಳಲ್ಲಿ ಇದೇ ರೀತಿಯ ಜೀವನಕ್ಕಿಂತ ದೊಡ್ಡದಾದ ಆಕ್ಷನ್ ಹೀರೋ ಪಾತ್ರಗಳಲ್ಲಿ ಟೈಪ್ ಕಾಸ್ಟ್ ಆಗಿದ್ದರು. 'ರಾವಣಪ್ರಭು' ಹೊರತುಪಡಿಸಿ, ಈ ಚಿತ್ರಗಳು ಅವುಗಳ ಪುನರಾವರ್ತಿತ ಕಥಾವಸ್ತು, ಅಶ್ಲೀಲ ಸಂಭಾಷಣೆಗಳು, ಪಂಚ್ ಲೈನ್ಗಳು ಮತ್ತು ಪುರುಷ ಪ್ರಧಾನ ದೃಷ್ಟಿಕೋನಕ್ಕಾಗಿ ವ್ಯಾಪಕವಾಗಿ ಟೀಕಿಸಲ್ಪಟ್ಟವು.<ref name="narasimham"/><ref>{{cite web|url=http://www.sify.com/movies/thandavam-review-malayalam-pclutucejjhjc.html|title=Thandavam|website=[[Sify]]|date=16 August 2002|access-date=6 May 2012|author=Moviebuzz|archive-url=https://web.archive.org/web/20161204191733/http://www.sify.com/movies/thandavam-review-malayalam-pclutucejjhjc.html|archive-date=4 December 2016 |url-status=dead}}</ref><ref>{{cite web|url=http://www.sify.com/movies/praja-review-malayalam-pclunFceecebe.html|title=Praja|website=[[Sify]]|author=Moviebuzz|date=24 December 2001|access-date=6 May 2012|archive-url=https://web.archive.org/web/20161204191837/http://www.sify.com/movies/praja-review-malayalam-pclunFceecebe.html|archive-date=4 December 2016 |url-status=dead}}</ref> 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ನ ವಿಮರ್ಶಕರೊಬ್ಬರು "ನರಸಿಂಹಂನ ಅತಿಯಾದ ಪ್ರಭಾವವು ಅತಿಯಾಗಿ ಬಲವಾಗಿದೆ ಮತ್ತು ಅದು ಸದ್ಯಕ್ಕೆ ಉತ್ತಮ ಚಿತ್ರಗಳ ಸಾಧ್ಯತೆಗಳನ್ನು ಕೊಂದಿದೆ. 'ಮಳ', 'ಮಧುರನೊಂಬರಕಟ್ಟು' ಮುಂತಾದ ಉತ್ತಮವಾಗಿ ನಿರ್ಮಿಸಲಾದ ಮಹಿಳಾ ಪ್ರಧಾನ ಚಿತ್ರಗಳ ವೈಫಲ್ಯಕ್ಕೆ ಬೇರೆ ಕಾರಣವನ್ನು ನಾನು ಕಾಣುತ್ತಿಲ್ಲ" ಎಂದು ಬರೆದರು.<ref name="narasimham"/>
೨೦೦೨ ರಲ್ಲಿ, ಮೋಹನ್ಲಾಲ್ ಅವರ ಮೊದಲ ಬಾಲಿವುಡ್ ಚಿತ್ರ 'ಕಂಪನಿ'ಯಲ್ಲಿ ಐಪಿಎಸ್ ಶ್ರೀನಿವಾಸನ್, ಮುಂಬೈ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದರು.<ref name="rd"/> ಇದು ಅವರನ್ನು ಭಾರತದ ಹಿಂದಿ ಮಾತನಾಡುವ ಪ್ರೇಕ್ಷಕರಿಗೆ ಪರಿಚಯಿಸಿತು ಮತ್ತು ಇದಕ್ಕಾಗಿ ಅವರು ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು ಮತ್ತು ಸ್ಟಾರ್ ಸ್ಕ್ರೀನ್ ಪ್ರಶಸ್ತಿಯನ್ನು ಅತ್ಯುತ್ತಮ ಪೋಷಕ ನಟನಾಗಿ ಗೆದ್ದರು.<ref>{{cite news|url=http://www.thehindu.com/todays-paper/tp-features/tp-fridayreview/bold-themes-different-roles/article3218428.ece|title=Bold themes, different roles|work=[[The Hindu]]|date=9 June 2006|access-date=3 March 2011|last=Nagarajan|first=Saraswathy|archive-url=https://web.archive.org/web/20161204192315/http://www.thehindu.com/todays-paper/tp-features/tp-fridayreview/bold-themes-different-roles/article3218428.ece|archive-date=4 December 2016|url-status=live}}</ref><ref>{{cite news|url=http://www.bbc.co.uk/shropshire/content/image_galleries/iifa_red_carpet_gallery.shtml?4|title=Stars arrive at IIFA awards|work=[[BBC]]|access-date=3 March 2011|archive-date=22 July 2012|archive-url=https://archive.today/20120722194226/http://www.bbc.co.uk/shropshire/content/image_galleries/iifa_red_carpet_gallery.shtml?4|url-status=dead}}</ref> ಈ ಚಿತ್ರವು ಮುಂಬೈನಲ್ಲಿ ಆಳ್ವಿಕೆ ನಡೆಸಿದ ಇಬ್ಬರು ಅಂಡರ್ ವರ್ಲ್ಡ್ ಡಾನ್ಗಳ (ಅಜಯ್ ದೇವ್ಗನ್ ಮತ್ತು ವಿವೇಕ್ ಒಬೆರಾಯ್ ನಟಿಸಿದ್ದಾರೆ) ನೈಜ ಜೀವನದ ಕಥೆಯನ್ನು ಆಧರಿಸಿದೆ. ಮೋಹನ್ಲಾಲ್ ಅವರ ಅಭಿನಯವನ್ನು ಚೆನ್ನಾಗಿ ಸ್ವೀಕರಿಸಲಾಯಿತು. 'ದಿ ಹಿಂದೂ' ಅವರು "ತಮ್ಮ ನೈಸರ್ಗಿಕ ಶ್ರೇಷ್ಠತೆಯಲ್ಲಿದ್ದಾರೆ" ಮತ್ತು "ಮೊದಲ ಬಾರಿಗೆ ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡಾಗ ಇತರ ದಕ್ಷಿಣ ಭಾರತೀಯ ನಟರು ಮಾಡುವಂತೆ ಸ್ತಬ್ಧ ಅಥವಾ ಆತಂಕಿತರಾಗಿ ಕಾಣುತ್ತಿಲ್ಲ" ಎಂದು ಗಮನಿಸಿದರು.<ref>{{cite news| url=http://www.thehindu.com/thehindu/mp/2002/04/22/stories/2002042200750300.htm|work=[[The Hindu]]|last=Palicha|first=Paresh C.|title=Mohanlal at ease in Company|date=22 April 2002|access-date=20 April 2009|archive-url=https://web.archive.org/web/20161204193002/http://www.thehindu.com/thehindu/mp/2002/04/22/stories/2002042200750300.htm|archive-date=4 December 2016 |url-status=dead}}</ref> ೨೦೧೦ ರಲ್ಲಿ ಹಿಂದಿಫಿಲ್ಮ್ನ್ಯೂಸ್.ಕಾಮ್ನ ಆನ್ಲೈನ್ ಸಮೀಕ್ಷೆಯಲ್ಲಿ, 'ಕಂಪನಿ' ಯಲ್ಲಿನ ಮೋಹನ್ಲಾಲ್ ಅವರ ಅಭಿನಯವನ್ನು "ಕಳೆದ ದಶಕದಲ್ಲಿ (೨೦೦೧-೨೦೧೦) ಬಾಲಿವುಡ್ ನಟನ ಅತ್ಯುತ್ತಮ ಅಭಿನಯ" ಎಂದು ಆಯ್ಕೆ ಮಾಡಲಾಯಿತು. ಅವರು ಪ್ರೇಕ್ಷಕರ ಪಟ್ಟಿಯಲ್ಲಿ ನಂ.೧ ಮತ್ತು ವಿಮರ್ಶಕರ ಪಟ್ಟಿಯಲ್ಲಿ ನಂ.೬ ಸ್ಥಾನದಲ್ಲಿದ್ದರು.<ref>{{cite web|url=http://www.hindifilmnews.com/polls-2/poll-5-the-finest-performance-of-a-bollywood-actor-in-the-last-decade-2001-2010/#.UNNmrXdTGSo|title=Poll-5: The Finest Performance of a Bollywood Actor in the Last Decade (2001–2010)|publisher=Hindifilmnews.com|access-date=21 December 2012|url-status=dead|archive-url=https://web.archive.org/web/20130627120413/http://www.hindifilmnews.com/polls-2/poll-5-the-finest-performance-of-a-bollywood-actor-in-the-last-decade-2001-2010/#.UNNmrXdTGSo|archive-date=27 June 2013}}</ref>
ಮರು ವರ್ಷ, ಮೋಹನ್ಲಾಲ್ ತಮ್ಮ ಆಕ್ಷನ್ ಹೀರೋ ಚಿತ್ರಣವನ್ನು ಬದಲಾಯಿಸಲು ಪ್ರಯತ್ನಿಸುತ್ತಾ,<ref>{{cite news|url=http://www.thehindu.com/thehindu/mp/2002/11/28/stories/2002112800890403.htm|work=[[The Hindu]]|title=Superstars running scared?|date=28 November 2002|access-date=22 May 2009|archive-url=https://web.archive.org/web/20161204200806/http://www.thehindu.com/thehindu/mp/2002/11/28/stories/2002112800890403.htm|archive-date=4 December 2016 |url-status=dead}}</ref> 'ಕಿಲಿಚುಂದನ್ ಮಂಪಳಂ', 'ಬಾಲೆಟ್ಟನ್', 'ಹರಿಹರನ್ ಪಿಲ್ಲೈ ಹ್ಯಾಪಿ ಆಣು' ಮತ್ತು 'ಮಿಸ್ಟರ್ ಬ್ರಹ್ಮಚಾರಿ' ಯಂತಹ ಹಾಸ್ಯ ಪಾತ್ರಗಳಿಗೆ ಮರಳಿದರು. ನಟನಿಗೆ ಮರಳುವ ವಾಹನವೆಂದು ಪ್ರಚಾರ ಮಾಡಲ್ಪಟ್ಟ 'ಕಿಲಿಚುಂದನ್ ಮಂಪಳಂ' ಉತ್ತಮ ವಿಮರ್ಶೆಗಳನ್ನು ಮತ್ತು ಯೋಗ್ಯ ಬಾಕ್ಸ್ ಆಫೀಸ್ ಸಂಗ್ರಹವನ್ನು ಪಡೆಯಿತು.<ref>{{cite news|url=http://www.thehindu.com/thehindu/mp/2003/04/24/stories/2003042400120203.htm|work=[[The Hindu]]|last=Pillai|first=Sreedhar|title=Box-office update|date=28 April 2003|access-date=24 April 2010|archive-url=https://web.archive.org/web/20161204201012/http://www.thehindu.com/thehindu/mp/2003/04/24/stories/2003042400120203.htm|archive-date=4 December 2016 |url-status=dead}}</ref><ref>{{cite web|url=http://www.sify.com/movies/kilichundan-mambazham-review-malayalam-pclu1idhbfgij.html|title=Kilichundan Mambazham|website=[[Sify]]|access-date=6 May 2012|archive-url=https://web.archive.org/web/20161204202732/http://www.sify.com/movies/kilichundan-mambazham-review-malayalam-pclu1idhbfgij.html|archive-date=4 December 2016 |url-status=dead}}</ref> ವಿ.ಎಂ. ವಿನು ನಿರ್ದೇಶನದ 'ಬಾಲೆಟ್ಟನ್' ಕೂಡ ವಾಣಿಜ್ಯಿಕ ಯಶಸ್ಸು ಗಳಿಸಿತು.<ref>{{cite news|url=http://www.thehindubusinessline.com/2004/01/01/stories/2004010101290200.htm|title=Tinsel world sees a bright picture|work=[[The Hindu Business Line]]|last1=Venkatraman|first1=Latha|last2=Radhakrishnan|first2=Sankar|date=1 January 2004|access-date=6 May 2012|archive-url=https://web.archive.org/web/20100307015933/http://www.thehindubusinessline.com/2004/01/01/stories/2004010101290200.htm|archive-date=7 March 2010|url-status=live}}</ref> ಮೋಹನ್ಲಾಲ್ ಅತನಿಪ್ಪರಂಬಿಲ್ ಬಾಲಚಂದ್ರನ್ ಪಾತ್ರವನ್ನು ನಿರ್ವಹಿಸಿದರು. ಇವರು ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುವ ಬ್ಯಾಂಕ್ ಉದ್ಯೋಗಿ, ಅವರ ತಂದೆಯ ಮರಣದ ನಂತರ ಅನೇಕ ರಹಸ್ಯಗಳನ್ನು ಮರೆಮಾಡಲು ಒತ್ತಾಯಿಸಲ್ಪಡುತ್ತಾರೆ, ಇದು ಅವರ ಕುಟುಂಬದ ಅಪನಂಬಿಕೆಗೆ ಕಾರಣವಾಗುತ್ತದೆ.<ref name="balettan">{{cite news|url=http://www.hindu.com/mp/2003/09/04/stories/2003090401100200.htm|work=[[The Hindu]]|title=Mohanlal back to 'chammal' role|last1=Abhijath|last2=Ram|date=4 September 2003|access-date=6 May 2012|archive-url=https://web.archive.org/web/20060628023259/http://www.hindu.com/mp/2003/09/04/stories/2003090401100200.htm|archive-date=28 June 2006|url-status=dead}}</ref> ೨೦೦೪ ರಲ್ಲಿ, 'ನಟ್ಟುರಾಜವು' ಮತ್ತು 'ಮಂಬಳಕ್ಕಾಲಂ' ಮಾತ್ರ ಅವರ ಯಶಸ್ಸುಗಳಾಗಿವೆ.<ref>{{cite web|url=http://www.sify.com/movies/malayalam-cinema-analysis-2004-news-malayalam-kkfvAKceaeasi.html|title=Malayalam cinema- Analysis 2004!|website=[[Sify]]|author=Moviebuzz|date=1 January 2005|access-date=6 May 2012|archive-url=https://web.archive.org/web/20161204202246/http://www.sify.com/movies/malayalam-cinema-analysis-2004-news-malayalam-kkfvAKceaeasi.html|archive-date=4 December 2016 |url-status=dead}}</ref>
ಮೋಹನ್ಲಾಲ್ ೨೦೦೫ ರಲ್ಲಿ 'ಉದಯನಾಣು ತಾರಂ' ಎಂಬ ಕಪ್ಪು ಹಾಸ್ಯದಲ್ಲಿ ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ದೇಶಕನಾಗಿ ಕಾಣಿಸಿಕೊಂಡರು. ಇದು ವಿಮರ್ಶಕರಿಂದ ಉತ್ತಮ ಸ್ವೀಕಾರ ಪಡೆಯಿತು ಮತ್ತು ವಡೋದರಾ, ರಾಜ್ಕೋಟ್, ಪುಣೆ ಮತ್ತು ಅಹಮದಾಬಾದ್ನಂತಹ ಮಲಯಾಳಂ ಚಿತ್ರಗಳು ನಿಯಮಿತವಾಗಿ ಪ್ರದರ್ಶನಗೊಳ್ಳದ ಸ್ಥಳಗಳಲ್ಲೂ ಉತ್ತಮ ಪ್ರದರ್ಶನ ನೀಡಿತು.<ref name="udayan"/> ಅದೇ ವರ್ಷ, ಅವರು ನಿರ್ದೇಶಕ ಬ್ಲೆಸ್ಸಿ ಅವರ ಎರಡನೇ ಚಿತ್ರ 'ತನ್ಮಾತ್ರ' ದಲ್ಲಿ ಕಾಣಿಸಿಕೊಂಡರು. ಇದು ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಮೋಹನ್ಲಾಲ್ ಅವರ ಅಭಿನಯವನ್ನು ವಿಮರ್ಶಕರು ಹೆಚ್ಚು ಪ್ರಶಂಸಿಸಿದರು.<ref name="thanmatra">{{cite web|url=http://specials.rediff.com/movies/2006/feb/15sd1.htm|title=Exclusive! Mohanlal on Thanmatra|work=[[Rediff.com]]|last=Warrier|first=Shobha|access-date=6 May 2012|archive-url=https://web.archive.org/web/20161204195922/http://specials.rediff.com/movies/2006/feb/15sd1.htm|archive-date=4 December 2016 |url-status=live}}</ref> ಈ ಅಭಿನಯಕ್ಕಾಗಿ ಮೋಹನ್ಲಾಲ್ ತಮ್ಮ ಐದನೇ ಕೇರಳ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಏಳನೇ ಫಿಲ್ಮ್ಫೇರ್ ಅತ್ಯುತ್ತಮ ನಟ (ಮಲಯಾಳಂ) ಪ್ರಶಸ್ತಿಯನ್ನು ಗೆದ್ದರು. ಚಿತ್ರದಲ್ಲಿ, ಅವರ ಪಾತ್ರವು ಎರಡನೇ ಭಾಗದಲ್ಲಿ ಮಾತನಾಡುವುದಿಲ್ಲ.<ref name="thanmatra"/><ref name="hindu2"/><ref>{{cite web|url=http://www.rediff.com/movies/report/blessy/20060308.htm|title=Blessy: Thrilled about winning|work=[[Rediff.com]]|first=Paresh C.|last=Palicha|date=8 March 2006|access-date=6 May 2012|archive-url=https://web.archive.org/web/20161204195711/http://www.rediff.com/movies/report/blessy/20060308.htm|archive-date=4 December 2016 |url-status=live}}</ref>
೨೦೦೬ ರಲ್ಲಿ, ಅವರು ನಿರ್ದೇಶಕ ಸತ್ಯನ್ ಅಂತಿಕ್ಕಾಡ್ ಅವರೊಂದಿಗೆ ಕೌಟುಂಬಿಕ ನಾಟಕ 'ರಸತಂತ್ರಂ' ನಲ್ಲಿ ಕೆಲಸ ಮಾಡಿದರು. ಮೋಹನ್ಲಾಲ್ ಮೇಜರ್ ರವಿ ನಿರ್ದೇಶನದ 'ಕೀರ್ತಿ ಚಕ್ರ' ದಲ್ಲೂ ನಟಿಸಿದರು. ಇದರಲ್ಲಿ ಅವರು ಭಾರತೀಯ ಸೇನಾ ಅಧಿಕಾರಿ ಮೇಜರ್ ಮಹಾದೇವನ್ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಯಿತು ಮತ್ತು ಇದು ಗಮನಾರ್ಹ ವಾಣಿಜ್ಯ ಯಶಸ್ಸು ಗಳಿಸಿತು.<ref>{{cite news|url=http://www.thehindu.com/todays-paper/tp-features/tp-fridayreview/superstars-continue-their-reign/article3231843.ece|work=[[The Hindu]]|title=Superstars continue their reign|date=29 December 2006|access-date=30 May 2009|archive-url=https://web.archive.org/web/20161204195419/http://www.thehindu.com/todays-paper/tp-features/tp-fridayreview/superstars-continue-their-reign/article3231843.ece|archive-date=4 December 2016 |url-status=live}}</ref> ಈ ಚಿತ್ರದ ಡಬ್ ಮಾಡಲಾದ ತಮಿಳು ಆವೃತ್ತಿಯು ತಮಿಳುನಾಡಿನಲ್ಲಿ 'ಅರನ್' ಎಂದು ಬಿಡುಗಡೆಯಾಯಿತು, ಆದರೆ ಅವರ ಧ್ವನಿಯನ್ನು ಬಳಸದ ಕಾರಣ ಮೋಹನ್ಲಾಲ್ ಅವರು ಈ ಚಿತ್ರದಿಂದ ದೂರವಿದ್ದರು, "ಚಿತ್ರದಲ್ಲಿ ನನ್ನ ಪಾತ್ರಕ್ಕಾಗಿ ನಾನು ಮಾತನಾಡಲು ಬಯಸುತ್ತೇನೆ" ಎಂದು ಹೇಳಿದರು.<ref>{{cite news|url=http://www.thehindu.com/todays-paper/tp-national/tp-tamilnadu/mohanlal-dissociates-himself-from-aran/article3087136.ece|work=[[The Hindu]]|title=Mohanlal dissociates himself from 'Aran'|last=Kumar|first=S. R. Ashok|date=8 August 2006|access-date=8 May 2008|archive-url=https://web.archive.org/web/20161204195238/http://www.thehindu.com/todays-paper/tp-national/tp-tamilnadu/mohanlal-dissociates-himself-from-aran/article3087136.ece|archive-date=4 December 2016 |url-status=live}}</ref> ಮೋಹನ್ಲಾಲ್ ಮೇಜರ್ ಮಹಾದೇವನ್ ಸರಣಿಯಲ್ಲಿ 'ಕುರುಕ್ಷೇತ್ರ' (೨೦೦೮) ಮತ್ತು 'ಕಾಂದಹಾರ್' (೨೦೧೦) ಅನುಕ್ರಮ ಚಿತ್ರಗಳಲ್ಲೂ ನಟಿಸಿದರು. ೨೦೦೯ ರಲ್ಲಿ, ಭಾರತ ಸರ್ಕಾರವು ಅವರಿಗೆ ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿತು.<ref>{{cite news|url=https://www.newindianexpress.com/entertainment/malayalam/2013/sep/04/mohanlals-fb-page-crosses-one-million-fans-513324.html|title=Mohanlal's FB page crosses one million fans|work=[[The New Indian Express]]|date=4 September 2013|access-date=20 December 2015|archive-url=https://web.archive.org/web/20161204195045/http://www.newindianexpress.com/entertainment/malayalam/2013/sep/04/Mohanlals-FB-page-crosses-one-million-fans-513324.html|archive-date=4 December 2016 |url-status=live}}</ref>
೨೦೦೭ ರಲ್ಲಿ, ಮೋಹನ್ಲಾಲ್ ಪಿ.ಟಿ. ಕುಂಜು ಮುಹಮ್ಮದ್ ನಿರ್ದೇಶನದ 'ಪರದೇಸಿ' ಯಲ್ಲಿನ ಅಭಿನಯಕ್ಕಾಗಿ ಕೇರಳ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರು. 'ಸಿಫಿ.ಕಾಮ್' "ಮೋಹನ್ಲಾಲ್ ಮಂತ್ರಮುಗ್ಧಗೊಳಿಸುವವರಾಗಿದ್ದಾರೆ ಮತ್ತು ಭಾವನೆಯೊಂದಿಗೆ ಮತ್ತೊಮ್ಮೆ ಅಭಿನಯದ ಭಾಷೆಯನ್ನು ಮರುಶೋಧಿಸುತ್ತಾರೆ" ಎಂದು ಹೇಳಿತು. ಅವರ ಜುಲೈ ಬಿಡುಗಡೆಯಾದ 'ಹಾಲೋ' ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>[https://web.archive.org/web/20100305075728/http://www.bharatwaves.com/news/Mohanlal%E2%80%99s-Hello:-biggest-Mollywood-hit-of-2007-7964.html "Malayalam Cinema News : Mohanlal's 'Hello': biggest Mollywood hit of 2007".] Bharatwaves.com. Retrieved 15 January 2011.</ref><ref>[http://www.sify.com/movies/pardesi-review-malayalam-14542769.html Movie Review:Pardesi] {{Webarchive|url=https://web.archive.org/web/20131222221213/http://www.sify.com/movies/pardesi-review-malayalam-14542769.html |date=22 December 2013 }}. Sify.com. Retrieved on 6 May 2012.</ref> ಆಗಸ್ಟ್ನಲ್ಲಿ, ಅವರು ತಮ್ಮ ಎರಡನೇ ಬಾಲಿವುಡ್ ಚಿತ್ರ 'ಆಗ್' (ಇದನ್ನು 'ರಾಮ್ ಗೋಪಾಲ್ ವರ್ಮಾ ಕಿ ಆಗ್' ಎಂದೂ ಕರೆಯುತ್ತಾರೆ) ನಲ್ಲಿ ಕಾಣಿಸಿಕೊಂಡರು. ಇದು ಬಾಲಿವುಡ್ ಕ್ಲಾಸಿಕ್ 'ಶೋಲೆ' (೧೯೭೫) ನ ಪುನರ್ನಿರ್ಮಾಣವಾಗಿದೆ. ಮೋಹನ್ಲಾಲ್ ಮೂಲ ಚಿತ್ರದಲ್ಲಿ ಸಂಜೀವ್ ಕುಮಾರ್ ನಿರ್ವಹಿಸಿದ ಪಾತ್ರವನ್ನು ಪುನರಾವರ್ತಿಸಿದರು.<ref>{{cite web |url=http://www.boxofficeindia.com/showProd.php?itemCat=214 |title=Boxofficeindia.com |publisher=[[Box Office India]] |access-date=12 September 2013 |archive-url=https://web.archive.org/web/20131109040918/http://www.boxofficeindia.com/showProd.php?itemCat=214 |archive-date=9 November 2013 |url-status=live }}</ref> ೨೦೦೮ ರಲ್ಲಿ, ಮೋಹನ್ಲಾಲ್ ಬಹುನಕ್ಷತ್ರ ಬ್ಲಾಕ್ಬಸ್ಟರ್ 'ಟ್ವೆಂಟಿ:೨೦' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು ಮತ್ತು ೨೦೦೯ ರಲ್ಲಿ, ಅವರು ತಮಿಳು ಚಿತ್ರ 'ಉನ್ನೈಪೋಲ್ ಒರುವನ್' ನಲ್ಲಿ ಕಮಲ್ ಹಾಸನ್ ಜೊತೆ ಸಹ ನಟಿಸಿದರು. ಆ ವರ್ಷದ ಅವರ ಕೊನೆಯ ಚಿತ್ರ 'ಎವಿಡಂ ಸ್ವರ್ಗಮಾಣು' ನಿರ್ದೇಶಕ ರೋಷನ್ ಆಂಡ್ರ್ಯೂಸ್ ಅವರದ್ದಾಗಿತ್ತು.
### ಮುಂದುವರಿದ ವಾಣಿಜ್ಯ ಯಶಸ್ಸು (2010–2015)
[[File:Bachan mohanlal.jpg|thumb|ಮೋಹನ್ಲಾಲ್ ಮತ್ತು ಅಮಿತಾಬ್ ಬಚ್ಚನ್ ಜೊತೆಗೆ|alt=Mohanlal with the Bollywood actor Amitabh Bachchan]]
೨೦೧೦ ರಲ್ಲಿ, ಅವರು ಐದು ಚಿತ್ರಗಳಲ್ಲಿ ನಟಿಸಿದರು. ಮೊದಲನೆಯದು 'ಜನಕನ್', ಇದು ಅಪರಾಧ ಥ್ರಿಲ್ಲರ್ ಆಗಿದ್ದು, ಅದರಲ್ಲಿ ಅವರು ಸುರೇಶ್ ಗೋಪಿ ಜೊತೆ ಸಹ ನಟಿಸಿದರು. ಇದನ್ನು ಎಸ್.ಎನ್. ಸ್ವಾಮಿ ಬರೆದಿದ್ದಾರೆ. ಈ ಚಿತ್ರದಲ್ಲಿ, ಅವರು ವಕೀಲ ಸೂರ್ಯ ನಾರಾಯಣನ್ ಪಾತ್ರವನ್ನು ನಿರ್ವಹಿಸಿದರು. ಅವರು ನ್ಯಾಯಕ್ಕಾಗಿ ತಮ್ಮನ್ನು ಸಮೀಪಿಸುವ ಕೆಲವು ಪರಾರಿಯಾದ ಶಂಕಿತರನ್ನು ಎದುರಿಸುತ್ತಾರೆ. ಮುರಳಿ ನಾಗವಲ್ಲಿ ನಿರ್ದೇಶನದ 'ಅಲೆಕ್ಸಾಂಡರ್ ದಿ ಗ್ರೇಟ್' ಮೇ ತಿಂಗಳಲ್ಲಿ ಬಿಡುಗಡೆಯಾದ ಹಾಸ್ಯಮಯ ಚಟುವಟಿಕೆಯ ಮನರಂಜನಾ ಚಿತ್ರವಾಗಿದೆ. ಟಿ.ಕೆ. ರಾಜೀವ್ ಕುಮಾರ್ ನಿರ್ದೇಶನದ, ಶ್ರೀನಿವಾಸನ್ ಚಿತ್ರಕಥೆ ಬರೆದ ಮತ್ತು ಮಣಿಯನ್ ಪಿಳ್ಳ ರಾಜು ನಿರ್ಮಿಸಿದ 'ಒರು ನಾಳ್ ವರುಮ್', ಭಾರತದಲ್ಲಿ ಭ್ರಷ್ಟಾಚಾರದ ಬಗ್ಗೆ ಸಾಮಾಜಿಕ ವಿಡಂಬನೆಯಾಗಿದೆ. ಇದು ಪರದೆಯ ಮೇಲೆ ಮೋಹನ್ಲಾಲ್-ಶ್ರೀನಿವಾಸನ್ ಅವರ ಪ್ರೀತಿಯ ಶ್ರೇಷ್ಠ ಸಂಯೋಜನೆಯನ್ನು ಪುನರೇಕಿಸಿತು. ಅವರ ಮುಂದಿನ ಚಿತ್ರ 'ಶಿಕ್ಕರ್', ಎಂ. ಪದ್ಮಕುಮಾರ್ ನಿರ್ದೇಶನದ ಕತ್ತಲೆಯ ಪ್ರತೀಕಾರದ ಥ್ರಿಲ್ಲರ್ ಆಗಿದ್ದು, ಇದರಲ್ಲಿ ಅವರು ತಮ್ಮ ಭೂತಕಾಲದಿಂದ ಪೀಡಿತರಾಗಿರುವ ಲಾರಿ ಚಾಲಕನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ರಂಜಾನ್ ಬಾಕ್ಸ್ ಆಫೀಸ್ನಲ್ಲಿ ಅಗ್ರಸ್ಥಾನದಲ್ಲಿತ್ತು.<ref>{{cite web|url = http://www.sify.com/movies/boxoffice.php?id=14957248&cid=14625530|title = Kerala Box-Office (September 1 to 16)|date = 18 September 2010|access-date = 11 October 2014|website = [[Sify]]|archive-url = https://web.archive.org/web/20141028080936/http://www.sify.com/movies/boxoffice.php?id=14957248&cid=14625530|archive-date = 28 October 2014|url-status = dead}}</ref> ನಂತರ ಮೇಜರ್ ರವಿ ನಿರ್ದೇಶನದ ಯುದ್ಧ ಚಿತ್ರ 'ಕಾಂದಹಾರ್' ಬಂದಿತು. ಇದು ೧೯೯೯ ರಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ೮೧೪ ರ ಅಪಹರಣವನ್ನು ಆಧರಿಸಿದೆ. ಮೋಹನ್ಲಾಲ್ ಈ ಚಿತ್ರದಲ್ಲಿ ಮೇಜರ್ ಮಹಾದೇವನ್ ಪಾತ್ರವನ್ನು ಪುನರಾವರ್ತಿಸಿದರು. ಇದು ಮೇಜರ್ ಮಹಾದೇವನ್ ಚಿತ್ರ ಸರಣಿಯ ಮೂರನೇ ಕಂತು ಮತ್ತು ಅಮಿತಾಬ್ ಬಚ್ಚನ್ ಅವರ ಮೊದಲ ಮಲಯಾಳಂ ಚಿತ್ರವಾಗಿದೆ.
ಮೋಹನ್ಲಾಲ್ ಅವರ ೨೦೧೧ ರ ಮೊದಲ ಬಿಡುಗಡೆಯು ಬಹುನಕ್ಷತ್ರ 'ಕ್ರಿಶ್ಚಿಯನ್ ಬ್ರದರ್ಸ್' ಆಗಿದ್ದು, ಇದು ಜೋಷಿ ನಿರ್ದೇಶನದ ಮತ್ತು ಉದಯಕೃಷ್ಣ-ಶಿಬಿ ಕೆ. ಥಾಮಸ್ ಚಿತ್ರಕಥೆ ಬರೆದ ಆಕ್ಷನ್ ನಾಟಕವಾಗಿದೆ. ಇದರಲ್ಲಿ ಅವರು ಸುರೇಶ್ ಗೋಪಿ, ದಿಲೀಪ್ ಮತ್ತು ಸರತ್ ಕುಮಾರ್ ಅವರೊಂದಿಗೆ ಸಹ ನಟಿಸಿದ್ದರು. ಮಾರ್ಚ್ನಲ್ಲಿ ೩೦೦ ಪರದೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರವು ಆ ಸಮಯದಲ್ಲಿ ಮಲಯಾಳಂ ಚಿತ್ರಕ್ಕೆ ಅತಿದೊಡ್ಡ ಬಿಡುಗಡೆಯಾಗಿತ್ತು.<ref>{{Cite news|url = http://timesofindia.indiatimes.com/entertainment/tamil/movies/news/Can-Mohanlal-pull-it-off/articleshow/7734697.cms|title = Can Mohanlal pull it off?|date = 18 March 2011|work = [[The Times of India]]|access-date = 12 October 2014|archive-url = https://web.archive.org/web/20161205101608/http://timesofindia.indiatimes.com/entertainment/tamil/movies/news/Can-Mohanlal-pull-it-off/articleshow/7734697.cms|archive-date = 5 December 2016|url-status = live}}</ref> ಈ ವೇಗದ ಚಿತ್ರವು ವಾಣಿಜ್ಯಿಕ ಯಶಸ್ಸು ಮತ್ತು ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ.<ref>{{cite web|url = http://www.rediff.com/movies/review/south-review-christian-brothers/20110318.htm|title = Review: Christian Brothers is entertaining|date = 18 March 2011|work = rediff.com|access-date = 12 October 2014|archive-url = https://web.archive.org/web/20141019005606/http://www.rediff.com/movies/review/south-review-christian-brothers/20110318.htm|archive-date = 19 October 2014|url-status = live}}</ref> ಅವರ ವಿಷು (ಏಪ್ರಿಲ್) ಬಿಡುಗಡೆಯು ರಫಿ ಮೆಕಾರ್ಟಿನ್ ನಿರ್ದೇಶನದ ಹಾಸ್ಯ ಚಿತ್ರ 'ಚೈನಾ ಟೌನ್' ಆಗಿದ್ದು, ಇದರಲ್ಲಿ ಅವರು ಜಯರಾಂ ಮತ್ತು ದಿಲೀಪ್ ಅವರೊಂದಿಗೆ ಸಹ ನಟಿಸಿದರು. ವಿಮರ್ಶೆಗಳು ಮಿಶ್ರವಾಗಿದ್ದರೂ, ಈ ಚಿತ್ರವು ೧೦೦ ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನಗೊಂಡು ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>{{Cite news|url = http://ibnlive.in.com/news/2011-was-troublesome-for-malayalam-films/217739-8-70.html|title = 2011 was troublesome for Malayalam films|publisher = ibnlive.in.com|access-date = 12 October 2014|archive-url = https://web.archive.org/web/20141023221826/http://ibnlive.in.com/news/2011-was-troublesome-for-malayalam-films/217739-8-70.html|archive-date = 23 October 2014|url-status = dead}}</ref> ಅವರು ಆಗಸ್ಟ್ನಲ್ಲಿ ಬಿಡುಗಡೆಯಾದ 'ಪ್ರಣಯಂ' ನಲ್ಲಿ ನಟಿಸಿದರು. ಇದು ಬ್ಲೆಸ್ಸಿ ನಿರ್ದೇಶನದ ವಿಲಕ್ಷಣ ಪ್ರಣಯ ನಾಟಕವಾಗಿದೆ. ಇದು ಮೋಹನ್ಲಾಲ್, ಅನುಪಮ್ ಖೇರ್ ಮತ್ತು ಜಯಪ್ರದಾ ನಟಿಸಿದ ಮೂರು ವಯಸ್ಸಾದ ಪಾತ್ರಗಳ ನಡುವಿನ ಪ್ರೇಮಕಥೆಯಾಗಿದೆ. ಈ ಚಿತ್ರವು ವಿಮರ್ಶಕರಿಂದ ಹೆಚ್ಚು ಮೆಚ್ಚುಗೆ ಪಡೆಯಿತು ಮತ್ತು ಮೋಹನ್ಲಾಲ್ ಅವರ ಮ್ಯಾಥ್ಯೂಸ್ ಪಾತ್ರವನ್ನು ಚೆನ್ನಾಗಿ ಪ್ರಶಂಸಿಸಲಾಯಿತು.<ref>{{Cite news|url=http://www.mathrubhumi.com/english/movies/malayalam/123816/ |title=Mohanlal, Blessy bag Critics award |date=18 May 2012 |publisher=mathrubhumi.com |url-status=dead |archive-url=https://web.archive.org/web/20120529040906/http://www.mathrubhumi.com/english/movies/malayalam/123816/ |archive-date=29 May 2012}}</ref> ಅವರ ಮುಂದಿನ ಚಿತ್ರ 'ಸ್ನೇಹವೀಡು', ಸತ್ಯನ್ ಅಂತಿಕ್ಕಾಡು ನಿರ್ದೇಶನದ ಕೌಟುಂಬಿಕ ಚಿತ್ರವಾಗಿದ್ದು, ಪಾಲಕ್ಕಾಡ್ನ ಹಳ್ಳಿಯ ಹಿನ್ನೆಲೆಯಲ್ಲಿದೆ.<ref>[http://www.sify.com/movies/snehaveedu-review-malayalam-14980318.html Movie Review: Snehaveedu] {{Webarchive|url=https://web.archive.org/web/20131011085931/http://www.sify.com/movies/snehaveedu-review-malayalam-14980318.html |date=11 October 2013 }}. Sify.com. Retrieved on 6 May 2012.</ref> ಮೊದಲ ಬಾರಿಗೆ, ನಟಿ ಶೀಲಾ ಮೋಹನ್ಲಾಲ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡರು. ಅವರು ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದರು. 'ಸ್ನೇಹವೀಡು' ಅವರ ೩೦೦ ನೇ ಚಿತ್ರವೆಂದು ಹೇಳಲಾಗುತ್ತದೆ.<ref>{{cite web|url = http://www.sify.com/movies/sneha-veedu-mohanlal-s-300th-film-imagegallery-malayalam-ljtmomdedidsi.html|title = Sneha Veedu Mohanlal's 300th film|access-date = 12 October 2014|website = [[Sify]]|archive-url = https://web.archive.org/web/20141028081228/http://www.sify.com/movies/sneha-veedu-mohanlal-s-300th-film-imagegallery-malayalam-ljtmomdedidsi.html|archive-date = 28 October 2014|url-status = dead}}</ref> ಈ ಚಿತ್ರವು ಹಿಟ್ ಆಯಿತು.<ref>{{cite web|url = http://www.sify.com/movies/boxoffice.php?id=14981090&cid=14625530|title = Kerala Box-Office- September 12 to October 8|date = 12 October 2011|website = [[Sify]]|access-date = 12 October 2014|archive-url = https://web.archive.org/web/20141028081231/http://www.sify.com/movies/boxoffice.php?id=14981090&cid=14625530|archive-date = 28 October 2014|url-status = dead}}</ref> ಆ ವರ್ಷದ ಅವರ ಕೊನೆಯ ಚಿತ್ರ 'ಒರು ಮರುಭೂಮಿಕ್ಕಾಧ'. ಇದು ಪ್ರಿಯದರ್ಶನ್ ನಿರ್ದೇಶನದ ಸಂಪೂರ್ಣ ಮಧ್ಯಪ್ರಾಚ್ಯದಲ್ಲಿ ಸೆಟ್ ಮಾಡಲಾದ ಆಕ್ಷನ್ ಹಾಸ್ಯ ಥ್ರಿಲ್ಲರ್ ಆಗಿದೆ. ಇದು ೧೯೮೦ ರ ದಶಕದ ಉತ್ತರಾರ್ಧ ಮತ್ತು ೯೦ ರ ದಶಕದ ಪ್ರಿಯದರ್ಶನ್-ಮೋಹನ್ಲಾಲ್-ಮುಕೇಶ್ ಸಂಯೋಜನೆಯ ಮರಳುವಿಕೆಯನ್ನು ಗುರುತಿಸಿತು. ಈ ಚಿತ್ರವು ಕ್ರಿಸ್ಮಸ್-ಹೊಸ ವರ್ಷದ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡಿತು.<ref>{{cite web|url = http://www.sify.com/movies/boxoffice.php?id=14989183&cid=14625530|title = Kerala Box-Office – Dec 16 to Jan 11|date = 19 January 2012|access-date = 12 October 2014|website = [[Sify]]|archive-url = https://web.archive.org/web/20141028081233/http://www.sify.com/movies/boxoffice.php?id=14989183&cid=14625530|archive-date = 28 October 2014|url-status = dead}}</ref>
೨೦೧೨ ರಲ್ಲಿ, ಅವರು ಆರು ಚಿತ್ರಗಳಲ್ಲಿ ನಟಿಸಿದರು. ಅವರ ಮೊದಲ ಬಿಡುಗಡೆಯು ಬಹು ನಿರೀಕ್ಷಿತ ದೊಡ್ಡ ಬಜೆಟ್ ಪ್ರಣಯ ಥ್ರಿಲ್ಲರ್ 'ಕಸನೋವ್ವಾ' ಆಗಿದ್ದು, ಇದನ್ನು ರೋಷನ್ ಆಂಡ್ರ್ಯೂಸ್ ನಿರ್ದೇಶಿಸಿದ್ದಾರೆ ಮತ್ತು ಬಾಬಿ-ಸಂಜಯ್ ಬರೆದಿದ್ದಾರೆ. ಅವರು ಕಸನೋವಾ ಪಾತ್ರವನ್ನು ನಿರ್ವಹಿಸಿದರು. ಇವರು ಸರಣಿ ಮಹಿಳಾ ಪ್ರಿಯ ಮತ್ತು ಕಸನೋವಾಸ್ ಇಟರ್ನಲ್ ಸ್ಪ್ರಿಂಗ್ - ಹೂವಿನ ಬುಟೀಕುಗಳ ಅಂತರರಾಷ್ಟ್ರೀಯ ಸರಪಳಿಯ ಮಾಲೀಕರಾಗಿದ್ದಾರೆ. ನಂತರ, ಅವರು ಏಪ್ರಿಲ್ನಲ್ಲಿ ಬಿಡುಗಡೆಯಾದ ಮತ್ತು ಪ್ರಿಯದರ್ಶನ್ ನಿರ್ದೇಶನದ ಬಾಲಿವುಡ್ ಚಿತ್ರ 'ಟೆಜ್' ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅವರ ಮುಂದಿನ ಚಿತ್ರ ಬಿ. ಉನ್ನಿಕೃಷ್ಣನ್ ನಿರ್ದೇಶನದ 'ಗ್ರಾಂಡ್ಮಾಸ್ಟರ್' ಆಗಿದ್ದು, ಇದು ಸರಣಿ ಕೊಲೆಗಳನ್ನು ತನಿಖೆ ಮಾಡಲು ಒತ್ತಾಯಿಸಲ್ಪಟ್ಟ ಪೊಲೀಸ್ ಅಧಿಕಾರಿಯ ಬಗ್ಗೆ ನವ-ನೊಯಿರ್ ಅಪರಾಧ ಥ್ರಿಲ್ಲರ್ ಆಗಿದೆ. ಮೋಹನ್ಲಾಲ್ ಅವರ ಸಮಚಿತ್ತ, ಶಾಂತ ಮತ್ತು ಸಂಯಮದ ಅಭಿನಯವನ್ನು ವಿಮರ್ಶಕರು ಪ್ರಶಂಸಿಸಿದರು.<ref>{{cite web|url = http://www.rediff.com/movies/review/south-review-mohanlal-excels-in-grandmaster/20120504.htm|title = Review: Mohanlal excels in Grandmaster|date = 4 May 2012|access-date = 12 October 2014|work = rediff.com|archive-url = https://web.archive.org/web/20141018235924/http://www.rediff.com/movies/review/south-review-mohanlal-excels-in-grandmaster/20120504.htm|archive-date = 18 October 2014|url-status = live}}</ref> ಯುಟಿವಿ ಮೋಷನ್ ಪಿಕ್ಚರ್ಸ್ ನಿರ್ಮಿಸಿದ ಇದು ನೆಟ್ಫ್ಲಿಕ್ಸ್ ಮೂಲಕ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವಾಗಿದ್ದು, ಇದನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಲಭ್ಯವಾಗುವಂತೆ ಮಾಡಲಾಯಿತು.<ref>{{cite news|last=Prakash|first=Asha|title=How about paying for viewing films online?|url=http://timesofindia.indiatimes.com/entertainment/malayalam/movies/news/How-about-paying-for-viewing-films-online/articleshow/16322780.cms|access-date=24 November 2016|work=[[The Times of India]]|date=10 September 2012|archive-url=https://web.archive.org/web/20171031085616/https://timesofindia.indiatimes.com/entertainment/malayalam/movies/news/How-about-paying-for-viewing-films-online/articleshow/16322780.cms|archive-date=31 October 2017|url-status=live}}</ref> ರಂಜಿತ್ ನಿರ್ದೇಶನದ 'ಸ್ಪಿರಿಟ್' ಕೇರಳದಲ್ಲಿ ಹೆಚ್ಚುತ್ತಿರುವ ಮದ್ಯಪಾನದ ಅಭ್ಯಾಸದ ಬಗ್ಗೆ ಮಾತನಾಡಿದೆ. ಸಮಾಜದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದ್ದಕ್ಕಾಗಿ ರಾಜ್ಯ ಸರ್ಕಾರವು ಈ ಚಿತ್ರವನ್ನು ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಿತು.<ref>{{Cite news|url = http://ibnlive.in.com/news/malayalam-film-spirit-exempted-from-tax/267983-71-210.html|title = Malayalam film 'Spirit' exempted from tax|date = 26 June 2012|publisher = ibnlive.in.com|access-date = 12 October 2014|archive-url = https://web.archive.org/web/20141023161143/http://ibnlive.in.com/news/malayalam-film-spirit-exempted-from-tax/267983-71-210.html|archive-date = 23 October 2014|url-status = dead}}</ref> ಈ ಚಿತ್ರವು ಕೇರಳದಲ್ಲಿ ೧೨೫-ದಿನಗಳ ಚಿತ್ರಮಂದಿರ ಪ್ರದರ್ಶನವನ್ನು ಪೂರ್ಣಗೊಳಿಸಿತು ಮತ್ತು ವಾಣಿಜ್ಯಿಕ ಯಶಸ್ಸು ಗಳಿಸಿತು.<ref>{{Cite news|url = http://ibnlive.in.com/news/spirit-completes-100-day-run-on-box-office/293536-71-210.html|title = Spirit: Completes 100 day run on Box office|date = 20 September 2012|publisher = ibnlive.in.com|access-date = 12 October 2014|archive-url = https://web.archive.org/web/20141023115500/http://ibnlive.in.com/news/spirit-completes-100-day-run-on-box-office/293536-71-210.html|archive-date = 23 October 2014|url-status = dead}}</ref> ಓಣಂ ಹಬ್ಬದ ಸಮಯದಲ್ಲಿ ಬಿಡುಗಡೆಯಾದ 'ರನ್ ಬೇಬಿ ರನ್' ಜೋಷಿ ನಿರ್ದೇಶನದ ಹಾಸ್ಯ ಥ್ರಿಲ್ಲರ್ ಆಗಿತ್ತು. ಇದು ಸುದ್ದಿ ಮಾಧ್ಯಮವನ್ನು ಹಿನ್ನೆಲೆಯಾಗಿ ಹೊಂದಿತ್ತು. ಈ ಚಿತ್ರವು ವಿಮರ್ಶಕರಿಂದ ಚೆನ್ನಾಗಿ ಮೆಚ್ಚುಗೆ ಪಡೆಯಿತು, ಇದು ಉತ್ತಮವಾಗಿ ರಚಿಸಲ್ಪಟ್ಟ ಥ್ರಿಲ್ಲರ್ಗೆ ಉದಾಹರಣೆಯಾಗಿದೆ ಎಂದು ಹೇಳಲಾಯಿತು.<ref>{{Cite news|url = http://ibnlive.in.com/news/malayalam-review-run-baby-run-is-gripping-thriller/287092-71-212.html|title = Malayalam Review: 'Run Baby Run' is a gripping thriller|date = 31 August 2012|access-date = 12 October 2014|publisher = ibnlive.in.com|archive-url = https://web.archive.org/web/20141023161149/http://ibnlive.in.com/news/malayalam-review-run-baby-run-is-gripping-thriller/287092-71-212.html|archive-date = 23 October 2014|url-status = dead}}</ref> ಇದು ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>{{Cite news|url = http://ibnlive.in.com/news/run-baby-run-to-trivandrum-lodge-mohanlal-is-giving-back-to-back-hits/299788-71-210.html|title = 'Run Baby Run' to 'Trivandrum lodge', Mohanlal is giving back to back hits|date = 10 October 2012|publisher = ibnlive.in.com|access-date = 12 October 2014|archive-url = https://web.archive.org/web/20141023161157/http://ibnlive.in.com/news/run-baby-run-to-trivandrum-lodge-mohanlal-is-giving-back-to-back-hits/299788-71-210.html|archive-date = 23 October 2014|url-status = dead}}</ref> ವರ್ಷವು ಕ್ರಿಸ್ಮಸ್ ಬಿಡುಗಡೆಯಾದ 'ಕರ್ಮಯೋಧ' ದೊಂದಿಗೆ ಕೊನೆಗೊಂಡಿತು. ಇದನ್ನು ಮೇಜರ್ ರವಿ ನಿರ್ದೇಶಿಸಿದ್ದಾರೆ. ಇದು ಆಕ್ಷನ್ ಥ್ರಿಲ್ಲರ್ ಆಗಿದ್ದು, ಅದರಲ್ಲಿ ಅವರು ಮ್ಯಾಡ್ ಮ್ಯಾಡಿ ಎಂಬ ಎನ್ಕೌಂಟರ್ ತಜ್ಞರಾಗಿ ನಟಿಸಿದ್ದಾರೆ. ಮುಂಬೈನಲ್ಲಿ ಹದಿಹರೆಯದ ಶಾಲಾ ಬಾಲಕಿಯೊಬ್ಬಳು ಕಣ್ಮರೆಯಾಗುವುದನ್ನು ತನಿಖೆ ಮಾಡಲು ಅವರಿಗೆ ನಿಯೋಜಿಸಲಾಗಿದೆ. ಈ ಚಿತ್ರವು ಮಹಿಳೆಯರ ವಿರುದ್ಧದ ತಾರತಮ್ಯವನ್ನು ಕುರಿತದ್ದಾಗಿದೆ.
[[File:Mohanlal.jpg|thumb|upright|left|alt=Photograph taken from an angle highlighting his face|2012 ರಲ್ಲಿ 17 ನೇ ಅಂತರರಾಷ್ಟ್ರೀಯ ಕೇರಳ ಚಲನಚಿತ್ರೋತ್ಸವದಲ್ಲಿ ಮೋಹನ್ಲಾಲ್]]
೨೦೧೩ ಮೋಹನ್ಲಾಲ್ ಅವರಿಗೆ ಗಮನಾರ್ಹ ವರ್ಷವಾಗಿತ್ತು. ಈ ವರ್ಷವೇ ಮಲಯಾಳಂ ಚಿತ್ರದ ಆಲ್ ಟೈಮ್ ಬ್ಲಾಕ್ಬಸ್ಟರ್ 'ದೃಶ್ಯಂ' ಬಿಡುಗಡೆಯಾಯಿತು. ಆ ವರ್ಷದ ಅವರ ಮೊದಲ ಚಿತ್ರ 'ಲೋಕ್ಪಾಲ್', ಇದು ವಿಜಿಲೆಂಟ್ ಥ್ರಿಲ್ಲರ್ ಆಗಿದ್ದು, ಅದರಲ್ಲಿ ಅವರು "ಲೋಕ್ಪಾಲ್" ಎಂದು ಅಡ್ಡಹೆಸರುಳ್ಳ ವಿಜಿಲೆಂಟ್ ಪಾತ್ರವನ್ನು ನಿರ್ವಹಿಸಿದರು. ಇದನ್ನು ಜೋಷಿ ನಿರ್ದೇಶಿಸಿದ್ದರು ಮತ್ತು ಎಸ್.ಎನ್. ಸ್ವಾಮಿ ಬರೆದಿದ್ದರು. ಸಲಾಂ ಬಪ್ಪು ನಿರ್ದೇಶನದ 'ರೆಡ್ ವೈನ್' ರಾಜಕೀಯ ಕೊಲೆಯ ಆಧಾರಿತ ರೇಖಾತ್ಮಕವಲ್ಲದ ತನಿಖಾ ಥ್ರಿಲ್ಲರ್ ಆಗಿತ್ತು. ಸಿದ್ದಿಕ್ ನಿರ್ದೇಶನದ 'ಲೇಡೀಸ್ ಅಂಡ್ ಜೆಂಟಲ್ಮನ್' ಐಟಿ ಕಂಪನಿಗಳ ಹಿನ್ನೆಲೆಯಲ್ಲಿ ಸೆಟ್ ಮಾಡಲಾದ ಪ್ರಣಯ ಹಾಸ್ಯ ಚಿತ್ರವಾಗಿದೆ. ಪ್ರಿಯದರ್ಶನ್ ನಿರ್ದೇಶನದ 'ಗೀತಾಂಜಲಿ' ಮಲಯಾಳಂ ಕ್ಲಾಸಿಕ್ 'ಮಣಿಚಿತ್ರತಾಳು' ನ ಸ್ಪಿನ್-ಆಫ್ ಆಗಿರುವ ಹಾರರ್ ಥ್ರಿಲ್ಲರ್ ಆಗಿದ್ದು, ಅದರಲ್ಲಿ ಅವರು ಮೂಲ ಚಿತ್ರದ ಡಾ. ಸನ್ನಿ ಪಾತ್ರವನ್ನು ಪುನರಾವರ್ತಿಸಿದರು. ಅವರ ಕೊನೆಯ ಬಿಡುಗಡೆಯು ಜೀತು ಜೋಸೆಫ್ ನಿರ್ದೇಶನದ 'ದೃಶ್ಯಂ' ಆಗಿತ್ತು. ಇದು ವಿಶ್ವದಾದ್ಯಂತ ೬೨ ಕೋಟಿ ರೂಪಾಯಿ ಗಳಿಸಿತು ಮತ್ತು ೨೦೧೬ ರವರೆಗೆ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.<ref>{{cite news|author=DC|title=Mohanlal's Pulimurugan becomes first Malayalam film to gross over 100 crore rupees|url=https://www.deccanchronicle.com/entertainment/mollywood/071116/mohanlals-pulimurugan-becomes-first-malayalam-film-to-gross-over-100-crore-rupees.html|access-date=12 January 2017|work=[[Deccan Chronicle]]|date=7 November 2016|archive-url=https://web.archive.org/web/20161122062944/http://www.deccanchronicle.com/entertainment/mollywood/071116/mohanlals-pulimurugan-becomes-first-malayalam-film-to-gross-over-100-crore-rupees.html|archive-date=22 November 2016|url-status=live}}</ref>
೨೦೧೪ ರಲ್ಲಿ, ಅವರು ಸಿ. ಜೋಸೆಫ್ ವಿಜಯ್ ಅವರೊಂದಿಗೆ ತಮಿಳು ಆಕ್ಷನ್-ನಾಟಕ 'ಜಿಲ್ಲಾ' ದಲ್ಲಿ ನಟಿಸಿದರು. ಇದನ್ನು ಆರ್.ಟಿ. ನೀಸನ್ ನಿರ್ದೇಶಿಸಿದ್ದರು ಮತ್ತು ಆರ್.ಬಿ. ಚೌಧರಿ ನಿರ್ಮಿಸಿದ್ದರು.<ref>{{cite news|title=First Day Box Office Collections of 'Jilla' and 'Veeram'|url=http://www.deccanchronicle.com/140111/entertainment-kollywood/article/first-day-box-office-collections-jilla-and-veeram|publisher=[[Deccan Chronicle]]|date=15 January 2014|access-date=17 October 2014|archive-url=https://web.archive.org/web/20141006104616/http://www.deccanchronicle.com/140111/entertainment-kollywood/article/first-day-box-office-collections-jilla-and-veeram|archive-date=6 October 2014|url-status=dead}}</ref><ref>{{cite news|title=Pongal releases 'Jilla', 'Veeram' gold spinners|url=http://timesofindia.indiatimes.com/entertainment/tamil/movies/news/Pongal-releases-Jilla-Veeram-gold-spinners/articleshow/28882331.cms|publisher=[[The Times of India]]|author=IANS|date=16 January 2014|access-date=17 October 2014|archive-url=https://web.archive.org/web/20170801011522/http://timesofindia.indiatimes.com/entertainment/tamil/movies/news/Pongal-releases-Jilla-Veeram-gold-spinners/articleshow/28882331.cms|archive-date=1 August 2017|url-status=live}}</ref> ಈ ಚಿತ್ರವು ವಿಶ್ವದಾದ್ಯಂತ ೮೫ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿ ವಾಣಿಜ್ಯಿಕ ಯಶಸ್ಸು ಗಳಿಸಿತು<ref>{{cite news|last=Mehta|first=Ankita|title='Jilla' Box Office Collection: Vijay-Mohanlal Starrer Wins BO Battle|url=http://www.ibtimes.co.in/jilla-box-office-collection-vijay-mohanlal-starrer-wins-bo-battle-537429|access-date=12 January 2017|work=[[International Business Times]]|date=5 February 2014|archive-url=https://web.archive.org/web/20170215001253/http://www.ibtimes.co.in/jilla-box-office-collection-vijay-mohanlal-starrer-wins-bo-battle-537429|archive-date=15 February 2017|url-status=live}}</ref> ಮತ್ತು ತಮಿಳುನಾಡಿನ ಚೆನ್ನೈನಲ್ಲಿ ೧೦೦ ದಿನಗಳ ಚಿತ್ರಮಂದಿರ ಪ್ರದರ್ಶನವನ್ನು ಪೂರ್ಣಗೊಳಿಸಿತು.<ref>{{cite news|title='Ilayathalapathy' Vijay-Mohanlal's 'Jilla' Set to Complete 100-Day Theatrical Run|url=http://www.ibtimes.co.in/039ilayathalapathy039-vijay-mohanlal039s-039jilla039-set-to-complete-100-day-theatrical-run-548546|work=[[International Business Times]]|author=Sangeetha Seshagiri|date=17 April 2014|access-date=17 October 2014|archive-url=https://web.archive.org/web/20141011225222/http://www.ibtimes.co.in/039ilayathalapathy039-vijay-mohanlal039s-039jilla039-set-to-complete-100-day-theatrical-run-548546|archive-date=11 October 2014|url-status=live}}</ref> ೨೦೧೪ ರಲ್ಲಿ ಮೋಹನ್ಲಾಲ್ ಅವರ ಮೊದಲ ಮಲಯಾಳಂ ಬಿಡುಗಡೆಯು ಬಿ. ಉನ್ನಿಕೃಷ್ಣನ್ ನಿರ್ದೇಶನದ ಹೀಸ್ಟ್ ಚಿತ್ರ 'ಮಿಸ್ಟರ್ ಫ್ರಾಡ್' ಆಗಿತ್ತು. ಅವರು ತಮ್ಮ ಮುಂದಿನ ಚಿತ್ರ 'ಕೂತಾರ' ದಲ್ಲಿ ವಿಸ್ತೃತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಶ್ರೀನಾಥ್ ರಾಜೇಂದ್ರನ್ ನಿರ್ದೇಶನದ, ಹೇಳಲಾಗದ ಕಾಲಘಟ್ಟದಲ್ಲಿ ಸೆಟ್ ಮಾಡಲಾದ ಪ್ರೌಢಾವಸ್ಥೆಯ ಮಿಸ್ಟರಿ ಚಿತ್ರವಾಗಿದೆ. ಪ್ರಾಯೋಗಿಕ ಚಿತ್ರದಲ್ಲಿ ಅವರು ನಿಗೂಢ ಪಾತ್ರವನ್ನು ನಿರ್ವಹಿಸಿದರು, ಚಿತ್ರದ ಕೊನೆಯಲ್ಲಿ ಅವರು ಮರ್ಮನ್ ಆಗಿ ಬಹಿರಂಗಗೊಳ್ಳುತ್ತಾರೆ. ಅವರ ಮುಂದಿನದು ಅರುಣ್ ವೈದ್ಯನಾಥನ್ ಬರೆದು ನಿರ್ದೇಶನದ ಹಾಸ್ಯಮಯ ರಾಜಕೀಯ ವಿಡಂಬನೆ ಚಿತ್ರ 'ಪೆರುಚಾಳಿ'. ಅವರು ಯುವ ರಾಜಕೀಯ ಕಿಂಗ್ ಮೇಕರ್ ಪಾತ್ರವನ್ನು ನಿರ್ವಹಿಸಿದರು. ಕ್ಯಾಲಿಫೋರ್ನಿಯಾ ರಾಜ್ಯ ಗವರ್ನರ್ ಚುನಾವಣೆಯಲ್ಲಿ ಗೆಲ್ಲಲು ಗವರ್ನರ್ ಅಭ್ಯರ್ಥಿಗೆ ಅವರಿಗೆ ನಿಯೋಜಿಸಲಾಗುತ್ತದೆ. ಅಲ್ಲಿ ಅವರು ಯುಎಸ್ಎ ಚುನಾವಣೆಯನ್ನು ಗೆಲ್ಲಲು ಪ್ರಮಾಣಿತ ಭಾರತೀಯ ರಾಜಕೀಯ ತಂತ್ರಗಳನ್ನು ಬಳಸುತ್ತಾರೆ.
೨೦೧೫ ರಲ್ಲಿ, ಅವರ ಮೊದಲ ಬಿಡುಗಡೆಯು ಕನ್ನಡ ಚಿತ್ರ 'ಮೈಥ್ರಿ' ಆಗಿತ್ತು. ಪ್ರತೀಕಾರ ಬಯಸುವ ಆರ್ಡಿಆರ್ಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ವಿಜ್ಞಾನಿ ಮಹಾದೇವ್ ಪಾತ್ರದಲ್ಲಿ ಅವರ ಅಭಿನಯವನ್ನು ವಿಮರ್ಶಕರು ಚೆನ್ನಾಗಿ ಪ್ರಶಂಸಿಸಿದರು. ಅವರ ಮೊದಲ ಮಲಯಾಳಂ ಬಿಡುಗಡೆಯು 'ರಸಂ' ನಲ್ಲಿ ಅತಿಥಿ ಪಾತ್ರವಾಗಿತ್ತು. ಸತ್ಯನ್ ಅಂತಿಕ್ಕಾಡ್ ನಿರ್ದೇಶನದ 'ಎನ್ನುಮ್ ಎಪ್ಪೋಳುಂ' ಆ ವರ್ಷದ ಅವರ ಮೊದಲ ಪ್ರಮುಖ ಪಾತ್ರವಾಗಿದ್ದು, ಅದರಲ್ಲಿ ಮಂಜು ವಾರಿಯರ್ ಸಹ ನಟಿಸಿದ್ದರು. ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಯಿತು. ನಂತರ ಜೋಷಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಲೈಲಾ ಓ ಲೈಲಾ' ಬಂದಿತು. ಇವೆರಡೂ ಬಾಕ್ಸ್ ಆಫೀಸ್ನಲ್ಲಿ ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾದವು. ಅವರ ಮುಂದಿನದು ರಂಜಿತ್ ನಿರ್ದೇಶನದ ಥ್ರಿಲ್ಲರ್ 'ಲೋಹಂ'. ಇದು ಮಿಶ್ರ ವಿಮರ್ಶಾತ್ಮಕ ಪ್ರತಿಕ್ರಿಯೆಗಳನ್ನು ಎದುರಿಸಿದರೂ, ಚಿತ್ರವು ವಾಣಿಜ್ಯಿಕ ಯಶಸ್ಸು ಗಳಿಸಿತು.<ref>{{cite news|author=IBTimes|title=Charlie, I, Puli, Loham, Amar Akbar Anthony among top 5 movies with good opening day collection at Kerala box office|url=http://www.ibtimes.co.in/charlie-i-puli-loham-amar-akbar-anthony-among-top-5-movies-good-opening-day-collection-kerala-661271|access-date=12 January 2017|work=[[International Business Times]]|date=29 December 2015|archive-url=https://web.archive.org/web/20170106102142/http://www.ibtimes.co.in/charlie-i-puli-loham-amar-akbar-anthony-among-top-5-movies-good-opening-day-collection-kerala-661271|archive-date=6 January 2017|url-status=live}}</ref> ಪ್ರತೀಕಾರದ ಥ್ರಿಲ್ಲರ್ 'ಕನಾಲ್' ಆ ವರ್ಷದ ಅವರ ಕೊನೆಯ ಚಿತ್ರವಾಗಿತ್ತು. ಇದು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು.
[[File:Mohanlal 1.jpg|thumb|48 ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ]]
===ವೃತ್ತಿ ಪ್ರಗತಿ ಮತ್ತು ವಾಣಿಜ್ಯ ಏರಿಳಿತಗಳು (2016–2024)===
೨೦೧೬ ರಲ್ಲಿ, ಮೋಹನ್ಲಾಲ್ ನಾಲ್ಕು ಬಿಡುಗಡೆಗಳನ್ನು ಹೊಂದಿದ್ದರು, ಇವುಗಳ ಒಟ್ಟು ಸಂಗ್ರಹವು ವಿಶ್ವದಾದ್ಯಂತ ೩೭೮ ಕೋಟಿ ರೂಪಾಯಿಗಳಾಗಿದ್ದು, ಈ ವರ್ಷದಲ್ಲಿ ಆಮಿರ್ ಖಾನ್, ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರ ನಂತರ ಅತಿ ಹೆಚ್ಚು ಬಾಕ್ಸ್ ಆಫೀಸ್ ಗಳಿಕೆಯ ಭಾರತೀಯ ನಟರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು.<ref name="top5">{{cite news|last=Nair|first=Sree Prasad|title=2016 Box Office Kings : Mohanlal is the only Malayalam actor among top 5, Aamir Khan tops the list, followed by Akshay Kumar and Salman Khan|url=http://www.catchnews.com/regional-cinema/2016-box-office-kings-mohanlal-is-the-only-malayalam-actor-among-top-5-aamir-khan-tops-the-list-followed-by-akshay-kumar-and-salman-khan-1483966620.html|access-date=12 January 2017|work=Catch News|date=9 January 2017|archive-url=https://web.archive.org/web/20170112061634/http://www.catchnews.com/regional-cinema/2016-box-office-kings-mohanlal-is-the-only-malayalam-actor-among-top-5-aamir-khan-tops-the-list-followed-by-akshay-kumar-and-salman-khan-1483966620.html|archive-date=12 January 2017|url-status=live}}</ref> ಆ ವರ್ಷದ ಅವರ ಮೊದಲ ಬಿಡುಗಡೆಯು ಚಂದ್ರಶೇಖರ್ ಯೆಲೇಟಿ ನಿರ್ದೇಶನದ ತೆಲುಗು ಕೌಟುಂಬಿಕ ನಾಟಕ 'ಮನಮಂತ' ಆಗಿತ್ತು. ಈ ಚಿತ್ರಕ್ಕಾಗಿ ಅವರು ತೆಲುಗಿನಲ್ಲಿ ಡಬ್ ಮಾಡಿದರು.<ref>{{cite news|last=Jayaram|first=Deepika|title=It's a pleasure to learn and dub in Telugu: Mohanlal|url=http://timesofindia.indiatimes.com/entertainment/malayalam/movies/news/Its-a-pleasure-to-learn-and-dub-in-Telugu-Mohanlal/articleshow/52851841.cms|access-date=22 June 2016|work=[[The Times of India]]|date=21 June 2016|archive-date=30 September 2022|archive-url=https://web.archive.org/web/20220930005823/https://timesofindia.indiatimes.com/entertainment/malayalam/movies/news/Its-a-pleasure-to-learn-and-dub-in-Telugu-Mohanlal/articleshow/52851841.cms|url-status=live}}</ref><ref>{{cite web|title=Mohanlal dubbing for 'Manamantha'|url=http://www.sify.com/movies/mohanlal-dubbing-for-manamantha-news-telugu-qgvjDfdchajhg.html|archive-url=https://web.archive.org/web/20160621103338/http://www.sify.com/movies/mohanlal-dubbing-for-manamantha-news-telugu-qgvjDfdchajhg.html|url-status=dead|archive-date=21 June 2016|website=[[Sify]]|access-date=22 June 2016|date=21 June 2016}}</ref> ಅವರ ನಂತರದ ಬಿಡುಗಡೆಯು ಕೊರಟಾಲ ಶಿವ ನಿರ್ದೇಶನದ ಮತ್ತೊಂದು ತೆಲುಗು ಚಿತ್ರ 'ಜನತಾ ಗ್ಯಾರೇಜ್' ಆಗಿದ್ದು, ಇದು ಆಕ್ಷನ್ ನಾಟಕವಾಗಿದೆ.<ref>{{cite web|url=https://www.firstpost.com/entertainment/janatha-garage-review-this-mohanlal-jr-ntr-film-is-an-entertaining-ride-for-the-most-part-2986476.html|title=Janatha Garage review: This Mohanlal, Jr NTR film is an entertaining ride for the most part|website=Firstpost|date=September 2016 }}</ref> ಇದು ೨೦೧೬ ರ ಅತಿ ಹೆಚ್ಚು ಗಳಿಕೆಯ ತೆಲುಗು ಚಿತ್ರವಾಯಿತು ಮತ್ತು ಅತಿ ಹೆಚ್ಚು ಗಳಿಕೆಯ ತೆಲುಗು ಚಿತ್ರಗಳಲ್ಲಿ ಒಂದಾಗಿದೆ,<ref>{{cite news|last=Hooli|first=Shekhar H|title=Janatha Garage 3rd week box office collection: Jr NTR film emerges as the highest grosser of 2016|url=http://www.ibtimes.co.in/janatha-garage-3rd-week-box-office-collection-jr-ntr-film-emerges-highest-grosser-2016-694855|access-date=26 September 2016|work=[[International Business Times]]|date=23 September 2016|archive-url=https://web.archive.org/web/20160926023119/http://www.ibtimes.co.in/janatha-garage-3rd-week-box-office-collection-jr-ntr-film-emerges-highest-grosser-2016-694855|archive-date=26 September 2016|url-status=live}}</ref> ವಿಶ್ವದಾದ್ಯಂತ ೧೩೫ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಕೆ ಮಾಡಿದೆ.<ref name="JG">{{cite news|author=DC|title=6 South Indian films that turned out to be game-changers in 2016|url=https://www.deccanchronicle.com/entertainment/bollywood/301216/6-south-indian-films-that-turned-out-to-be-game-changers-in-2016.html|access-date=12 January 2017|work=[[Deccan Chronicle]]|date=30 December 2016|archive-url=https://web.archive.org/web/20170113012015/http://www.deccanchronicle.com/entertainment/bollywood/301216/6-south-indian-films-that-turned-out-to-be-game-changers-in-2016.html|archive-date=13 January 2017|url-status=live}}</ref> ಆ ವರ್ಷದ ಅವರ ಮೊದಲ ಮಲಯಾಳಂ ಬಿಡುಗಡೆಯು ಪ್ರಿಯದರ್ಶನ್ ನಿರ್ದೇಶನದ ಅಪರಾಧ-ಥ್ರಿಲ್ಲರ್ 'ಒಪ್ಪಂ' ಆಗಿದ್ದು, ಅದರಲ್ಲಿ ಅವರು ಕುರುಡನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ೨೦೧೬ ರ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>{{cite news|last=Nair|first=Sree Prasad|title=Kerala Box Office: Mohanlal's Oppam is now highest grosser of 2016, beats Jacobinte Swargarajyam|url=http://www.catchnews.com/regional-cinema/kerala-box-office-mohanlal-s-oppam-is-now-highest-grosser-of-2016-beats-jacobinte-swargarajyam-1474716416.html|access-date=26 September 2016|work=Catch News|date=24 September 2016|archive-url=https://web.archive.org/web/20160927001833/http://www.catchnews.com/regional-cinema/kerala-box-office-mohanlal-s-oppam-is-now-highest-grosser-of-2016-beats-jacobinte-swargarajyam-1474716416.html|archive-date=27 September 2016|url-status=live}}</ref> ಇದು ಒಂದೂವರೆ ತಿಂಗಳೊಳಗೆ ಬಾಕ್ಸ್ ಆಫೀಸ್ನಲ್ಲಿ ೫೦ ಕೋಟಿ ರೂಪಾಯಿ ಗಡಿಯನ್ನು ದಾಟಿತು,<ref>{{cite web|author=Moviebuzz|title=Mohanlal has two 50 crore blockbusters in his kitty!|url=http://www.sify.com/movies/mohanlal-has-two-50-crore-blockbusters-in-his-kitty-news-malayalam-qkssadjifbbdc.html|website=[[Sify]]|access-date=11 November 2016|date=18 October 2016|archive-url=https://web.archive.org/web/20161025204019/http://www.sify.com/movies/mohanlal-has-two-50-crore-blockbusters-in-his-kitty-news-malayalam-qkssadjifbbdc.html|archive-date=25 October 2016|url-status=dead}}</ref> ಮತ್ತು ವಿಶ್ವದಾದ್ಯಂತ ೬೫ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿತು.<ref>{{cite news|last=Nair|first=Sree Prasad|title=After Drishyam, Ajay Devgn to reprise Mohanlal's role in Oppam|url=http://www.catchnews.com/regional-cinema/after-drishyam-ajay-devgn-to-reprise-mohanlal-s-role-in-oppam-1482872134.html|access-date=12 January 2017|work=Catch News|date=28 December 2016|archive-url=https://web.archive.org/web/20170114184512/http://www.catchnews.com/regional-cinema/after-drishyam-ajay-devgn-to-reprise-mohanlal-s-role-in-oppam-1482872134.html|archive-date=14 January 2017|url-status=live}}</ref> ಅವರು ಆ ವರ್ಷದ ಕೊನೆಯ ಬಿಡುಗಡೆಯಾದ ಆಕ್ಷನ್ ಚಿತ್ರ 'ಪುಲಿಮುರುಗನ್' ನಲ್ಲಿ ಬೇಟೆಗಾರನ ಪಾತ್ರವನ್ನು ನಿರ್ವಹಿಸಿದರು. ಇದು ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು ಮತ್ತು ಬಾಕ್ಸ್ ಆಫೀಸ್ನಲ್ಲಿ ೧೦೦ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿದ ಮೊದಲ ಮಲಯಾಳಂ ಚಿತ್ರವಾಗಿದೆ.<ref>{{cite news|last=Viswanath|first=Chandrakanth|title=Mohanlal's Pulimurugan breaches the Rs 100 crore mark|url=http://www.newindianexpress.com/entertainment/malayalam/2016/nov/07/mohanlals-pulimurugan-breaches-the-rs-100-crore-mark-1536006--2.html|access-date=11 November 2016|work=[[The New Indian Express]]|date=7 November 2016|archive-url=https://web.archive.org/web/20161111194211/http://www.newindianexpress.com/entertainment/malayalam/2016/nov/07/mohanlals-pulimurugan-breaches-the-rs-100-crore-mark-1536006--2.html|archive-date=11 November 2016|url-status=dead}}</ref> ಈ ಚಿತ್ರವು ಇದುವರೆಗೆ ವಿಶ್ವದಾದ್ಯಂತ ೧೫೨ ಕೋಟಿ ರೂಪಾಯಿ ಸಂಗ್ರಹಿಸಿದೆ.<ref>{{cite news|last=R.|first=Manoj Kumar|title=Pulimurugan box office: Mohanlal-starrer breaking records, making history|url=http://indianexpress.com/article/regional/pulimurugan-box-office-mohanlal-starrer-breaking-records-making-history-3075509/|access-date=10 October 2016|work=[[The Indian Express]]|date=10 October 2016|url-status=live|archive-url=https://web.archive.org/web/20161010203623/http://indianexpress.com/article/regional/pulimurugan-box-office-mohanlal-starrer-breaking-records-making-history-3075509/|archive-date=10 October 2016|df=dmy-all}}</ref> ಈ ಚಿತ್ರವು ಅವರ ಅಭಿನಯಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು ಮತ್ತು ಪರೇಶ್ ಸಿ. ಪಾಲಿಚಾ ಅವರು "ಈ ಥ್ರಿಲ್ಲರ್ ಅನ್ನು ನಿಜವಾಗಿಯೂ ರೋಮಾಂಚಕಾರಿ ಅನುಭವವನ್ನಾಗಿ ಮಾಡುವುದು ಮೋಹನ್ಲಾಲ್ ಅವರ ಪ್ರತಿಭೆ" ಎಂದು ಹೇಳಿದರು.<ref>{{cite web|last=Palicha|first=Paresh C.|title=Review: Pulimurugan is a thrilling experience|url=http://www.rediff.com/movies/report/review-pulimurugan-is-a-thrilling-experience/20161012.htm|work=[[Rediff.com]]|access-date=18 November 2016|date=12 October 2016|archive-url=https://web.archive.org/web/20161118155436/http://www.rediff.com/movies/report/review-pulimurugan-is-a-thrilling-experience/20161012.htm|archive-date=18 November 2016|url-status=live}}</ref> ಮುಂದಿನ ವರ್ಷ ೨೦೧೭ ರಲ್ಲಿ, ಅವರು 'ಮುಂತಿರಿವಳ್ಳಿಕಲ್ ತಾಲಿರ್ಕ್ಕುಂಬೋಲ್' (೨೦೧೬) ನಲ್ಲಿ ನಟಿಸಿದರು. ಇದು ಬಾಕ್ಸ್ ಆಫೀಸ್ನಲ್ಲಿ ೫೦ ಕೋಟಿ ಗಳಿಸಿತು.<ref name="top5"/> ನಂತರ ಅವರು ಮೇಜರ್ ರವಿ ನಿರ್ದೇಶನದ '೧೯೭೧: ಬಿಯಾಂಡ್ ಬಾರ್ಡರ್ಸ್' ನಲ್ಲಿ ಕಾಣಿಸಿಕೊಂಡರು. ಇದು ೧೯೭೧ ರ ಭಾರತ-ಪಾಕಿಸ್ತಾನ ಯುದ್ಧವನ್ನು ಆಧರಿಸಿದೆ.<ref>{{cite news|last=Sidhardhan|first=Sanjith|title=Mohanlal is a busy bee|url=http://timesofindia.indiatimes.com/entertainment/malayalam/movies/news/Nikki-to-play-a-Tamil-belle-in-Major-Ravis-war-drama/articleshow/55923840.cms|access-date=18 January 2017|work=[[The Times of India]]|date=12 December 2016}}</ref> ಅವರು ಕರ್ನಲ್ ಮಹಾದೇವನ್ ಮತ್ತು ಮೇಜರ್ ಸಹದೇವನ್ ಅವರ ದ್ವಿಪಾತ್ರಗಳನ್ನು ನಿರ್ವಹಿಸಿದರು.<ref>{{cite news|last=Upadhyaya|first=Prakash|title=Rockline Venkatesh ventures into Malayalam; to produce Mohanlal's next film|url=http://www.ibtimes.co.in/rockline-venkatesh-ventures-into-malayalam-produce-mohanlals-next-film-713760|access-date=5 February 2017|work=[[International Business Times]]|date=27 January 2017}}</ref> ಅವರು ನಟಿಸಿದ ಮುಂದಿನ ಚಿತ್ರವು ಲಾಲ್ ಜೋಸ್ ನಿರ್ದೇಶನದ 'ವೇಲಿಪದಿಂಟೆ ಪುಸ್ತಕಂ' ಆಗಿದ್ದು, ಇದು ಅವರ ಮೊದಲ ಸಹಯೋಗವಾಗಿದೆ.<ref>{{cite news|last=Mishra|first=Nivedita|title=From Baahubali's Prabhas to Mersal's Vijay, these south stars were the newsmakers in 2017|url=https://www.hindustantimes.com/regional-movies/from-baahubali-s-prabhas-to-mersal-s-vijay-these-south-stars-were-the-newsmakers-in-2017/story-0YgCfdolIM7LoTzfvlXSJL.html|access-date=28 August 2019|work=[[Hindustan Times]]|date=28 December 2017|archive-date=28 August 2019|archive-url=https://web.archive.org/web/20190828073547/https://www.hindustantimes.com/regional-movies/from-baahubali-s-prabhas-to-mersal-s-vijay-these-south-stars-were-the-newsmakers-in-2017/story-0YgCfdolIM7LoTzfvlXSJL.html|url-status=live}}</ref> ನಂತರ ಬಿ. ಉನ್ನಿಕೃಷ್ಣನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ವಿಲನ್' ಬಂದಿತು.<ref>{{cite news|last=Soman|first=Deepa|title=Mohanlal to be the lead in B Unnikrishnan's next film too!|url=https://timesofindia.indiatimes.com/entertainment/malayalam/movies/news/Mohanlal-to-be-the-lead-in-B-Unnikrishnans-next-film-too/articleshow/35440215.cms|access-date=28 April 2018|work=[[The Times of India]]|date=22 May 2014}}</ref> ಇದು ಆ ವರ್ಷದ ಅವರ ಕೊನೆಯ ಬಿಡುಗಡೆಯಾಗಿದ್ದು, ಅವರ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಒಂದಾಯಿತು.<ref>{{cite news|author=Speed News Desk|title=Kerala Box Office: Mohanlal's Villain had a humongous opening weekend, emerges 3rd all-time opener after Baahubali 2 and Pulimurugan|url=http://www.catchnews.com/regional-cinema/kerala-box-office-mohanlal-s-villain-had-a-humongous-opening-weekend-emerges-3rd-all-time-opener-after-baahubali-2-and-pulimurugan-87449.html|access-date=4 November 2017|work=Catch News|date=30 October 2017|url-status=live|archive-url=https://web.archive.org/web/20171107011529/http://www.catchnews.com/regional-cinema/kerala-box-office-mohanlal-s-villain-had-a-humongous-opening-weekend-emerges-3rd-all-time-opener-after-baahubali-2-and-pulimurugan-87449.html|archive-date=7 November 2017|df=dmy-all}}</ref><ref>{{cite web|author=Forbes India|title=Mohanlal: Strong and steady|url=http://www.forbesindia.com/article/2017-celebrity-100/mohanlal-strong-and-steady/49033/1|work=[[Forbes India]]|date=1 January 2018}}</ref>
೨೦೧೮ ರಲ್ಲಿ, ಮೋಹನ್ಲಾಲ್ 'ಆದಿ' ಮತ್ತು 'ಕಾಯಂಕುಲಂ ಕೊಚುನ್ನಿ' ಯಲ್ಲಿ ಅತಿಥಿ ಪಾತ್ರಗಳನ್ನು ಮಾಡಿದರು. ಅಲ್ಲಿ ಅವರು ಕೊಚುನ್ನಿಯ ಸಮಕಾಲೀನ ಕಳ್ಳ ಇತ್ತಿಕ್ಕರ ಪಕ್ಕಿ ಪಾತ್ರವನ್ನು ನಿರ್ವಹಿಸಿದರು.<ref>{{cite news|author=Express Web Desk|title=Mohanlal on Aadhi: Pranav has done a good job|url=http://indianexpress.com/article/entertainment/malayalam/mohanlal-on-aadhi-pranav-has-done-a-good-job-5043453/|access-date=30 January 2018|work=[[The Indian Express]]|date=29 January 2018|archive-url=https://web.archive.org/web/20180129115528/http://indianexpress.com/article/entertainment/malayalam/mohanlal-on-aadhi-pranav-has-done-a-good-job-5043453/|archive-date=29 January 2018|url-status=live}}</ref><ref>{{cite news|author=Onmanorama staff|title=Mohanlal joins Nivin Pauly's 'Kayamkulam Kochunni,' Rosshan reveals role|url=http://english.manoramaonline.com/entertainment/entertainment-news/2018/01/09/mohanlal-joins-nivin-paulys-kayamkulam-kochunni-rosshan-reveals-.html|access-date=9 January 2018|work=[[Malayala Manorama]]|date=9 January 2018}}</ref><ref>{{cite news|last=Soman|first=Deepa|title=Mohanlal joins the sets of Kayamkulam Kochunni|url=https://timesofindia.indiatimes.com/entertainment/malayalam/movies/news/mohanlal-joins-the-sets-of-kayamkulam-kochunni/articleshow/62916059.cms|access-date=15 February 2018|work=[[The Times of India]]|date=14 February 2018}}</ref> ಅವರ ಮುಂದಿನ ಎರಡು ಬಿಡುಗಡೆಗಳಾದ 'ನೀರಳಿ' ಮತ್ತು 'ಡ್ರಾಮಾ' ಬಾಕ್ಸ್ ಆಫೀಸ್ನಲ್ಲಿ ವಿಫಲವಾದವು.<ref>{{cite news |last=Sidhardhan |first=Sanjith |title=Mohanlal teams up with Bollywood filmmaker for a thriller |url=https://timesofindia.indiatimes.com/entertainment/malayalam/movies/news/mohanlal-teams-up-with-bollywood-filmmaker-for-a-thriller/articleshow/60938490.cms |access-date=28 January 2018 |work=[[The Times of India]] |date=4 October 2017}}</ref><ref>{{cite news |last=Kumar R. |first=Manoj |title=Mohanlal promises a lot of action in his next film, see photo |url=http://indianexpress.com/article/entertainment/malayalam/mohanlal-ajoy-varma-5035695/ |access-date=28 January 2018 |work=[[The Indian Express]] |date=23 January 2018}}</ref><ref>{{cite news|title=Ranjith's 'Drama' starring Mohanlal to release on November 1|url=https://www.newindianexpress.com/entertainment/malayalam/2018/sep/11/ranjiths-drama-starring-mohanlal-to-release-on-november-1-1870225.html|access-date=24 September 2018|work=[[The New Indian Express]]|agency=Express News Service|date=11 September 2018}}</ref> ನಂತರ ಮೋಹನ್ಲಾಲ್ ವಿ.ಎ. ಶ್ರೀಕುಮಾರ್ ಮೇನನ್ ನಿರ್ದೇಶನದ ಕಾಲ್ಪನಿಕ ನಾಟಕ ಚಿತ್ರ 'ಒಡಿಯಾನ್' ನಲ್ಲಿ ನಟಿಸಿದರು. ಇದು ಒಡಿಯಾನ್ ಕುಲದ ದಂತಕಥೆಯನ್ನು ಆಧರಿಸಿದೆ. ಈ ಚಿತ್ರವು ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು ಮತ್ತು ೨೦೧೮ ರಲ್ಲಿ ಅವರ ಏಕೈಕ ಬಾಕ್ಸ್ ಆಫೀಸ್ ಯಶಸ್ಸು.<ref>{{cite news|author=<!--staff writer-->|title=Odiyan: Mohanlal shoots in Varanasi, tells us more about his character Manikyan. Watch video|url=https://www.hindustantimes.com/regional-movies/odiyan-mohanlal-shoots-in-varanasi-tells-us-more-about-his-character-manikyan-watch-video/story-KRL8vkUip0HFwYTcpXovyH.html|access-date=15 November 2018|work=[[Hindustan Times]]|date=7 September 2017}}</ref><ref>{{cite news|last=M. K.|first=Surendhar|title=Odiyan sets industry record with Rs 21.5 cr domestic opening weekend total; 2.0 stacks up more records |url=https://www.firstpost.com/entertainment/odiyan-sets-industry-record-with-rs-21-5-cr-domestic-opening-weekend-total-2-0-stacks-up-more-records-5751571.html|access-date=19 December 2018|work=Firstpost|date=19 December 2018}}</ref> ಮೋಹನ್ಲಾಲ್ ೨೦೧೯ ರ ತಮ್ಮ ಮೊದಲ ಚಿತ್ರ 'ಲೂಸಿಫರ್' ನಲ್ಲಿ ಅಪರಾಧ ಸಿಂಡಿಕೇಟ್ ನಾಯಕನ ಪಾತ್ರವನ್ನು ನಿರ್ವಹಿಸಿದರು. ಇದನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದಾರೆ.<ref>{{cite news|author=Express Web Desk|title=Mohanlal-Prithviraj film Lucifer goes on floor|url=https://indianexpress.com/article/entertainment/malayalam/mohanlal-prithviraj-film-lucifer-goes-on-floor-5262195/|access-date=25 September 2018|work=The Indian Express|date=16 July 2018}}</ref> ಲಕ್ಷಣಾ ಎನ್. ಪಾಲಾತ್ ಅವರು 'ಇಂಡಿಯಾ ಟುಡೇ' ನಲ್ಲಿ " 'ಲೂಸಿಫರ್' ಮೋಹನ್ಲಾಲ್ ಫ್ಯಾನ್ಫಿಕ್ಷನ್ ಪರದೆಯ ಮೇಲೆ ಜೀವಂತಗೊಳಿಸಿದಂತಿದೆ. ನೀವು ಮೋಹನ್ಲಾಲ್ ಅವರನ್ನು ನಂಬಿದರೆ, ಅದಕ್ಕೆ ಹೋಗಿ." ಎಂದು ಹೇಳಿದರು.<ref>{{Cite magazine|author=Lakshana N. Palat |date=March 29, 2019 |title=Lucifer Movie Review: New Prithviraj film is for diehard Mohanlal fans|url=https://www.indiatoday.in/movies/reviews/story/lucifer-movie-review-new-prithviraj-film-is-for-diehard-mohanlal-fans-1489097-2019-03-29|access-date=2021-11-24|magazine=India Today|language=en}}</ref> ಆಲ್ ಟೈಮ್ನ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾದ ಇದು ೨೦೦ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿತು, ಇದರಲ್ಲಿ ಬಾಕ್ಸ್ ಆಫೀಸ್ ಸಂಗ್ರಹಗಳು ಮತ್ತು ಅದರ ಉಪಗ್ರಹ ಹಕ್ಕುಗಳು, ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳು ಮತ್ತು ಇತರ ಭಾಷೆಗಳಲ್ಲಿ ಟಿವಿ ಹಕ್ಕುಗಳ ಮಾರಾಟದಿಂದ ಬಂದ ಗಳಿಕೆಗಳು ಸೇರಿವೆ.<ref>{{Cite web|url=https://indianexpress.com/article/entertainment/malayalam/lucifer-box-office-mohanlal-film-collects-rs-100-crore-worldwide-5665523/|title=Lucifer box office: Mohanlal film collects Rs 100 crore worldwide|date=8 April 2019|access-date=30 April 2019|archive-url=https://web.archive.org/web/20190409131841/https://indianexpress.com/article/entertainment/malayalam/lucifer-box-office-mohanlal-film-collects-rs-100-crore-worldwide-5665523/|archive-date=9 April 2019|url-status=live}}</ref><ref>{{Cite web|date=4 June 2019|title=Mohanlal's Lucifer storms into Rs 200 crore club, first for Malayalam cinema|url=https://www.hindustantimes.com/regional-movies/mohanlal-s-lucifer-storms-into-rs-200-crore-club-first-for-malayalam-cinema/story-vTm7JXaAdz0FWFTllE4n2I.html|access-date=16 July 2021|website=Hindustan Times|language=en|archive-date=11 June 2019|archive-url=https://web.archive.org/web/20190611022057/https://www.hindustantimes.com/regional-movies/mohanlal-s-lucifer-storms-into-rs-200-crore-club-first-for-malayalam-cinema/story-vTm7JXaAdz0FWFTllE4n2I.html|url-status=live}}</ref> ನಂತರ ಅವರು 'ಇಟ್ಟಿಮಾನಿ: ಮೇಡ್ ಇನ್ ಚೈನಾ' ನಲ್ಲಿ ಕಾಣಿಸಿಕೊಂಡರು, ಇದು ಮಧ್ಯಮ ಯಶಸ್ಸು ಗಳಿಸಿತು.<ref>{{cite news|last=Pillai|first=Sreedhar|title=Ittymaani: Made In China, Love Action Drama, Brothers Day, Finals: Why Onam 2019 releases failed at the box-office|url=https://www.firstpost.com/entertainment/ittymaani-made-in-china-love-action-drama-brothers-day-finals-why-onam-2019-releases-failed-at-the-box-office-7341581.html|access-date=29 September 2019|work=[[Firstpost]]|date=15 September 2019}}</ref> ನಂತರ ಅವರು ತಮಿಳು ಚಿತ್ರ 'ಕಾಪ್ಪಾನ್' ನಲ್ಲಿ ಪ್ರಧಾನ ಮಂತ್ರಿಯ ಪಾತ್ರವನ್ನು ನಿರ್ವಹಿಸಿದರು, ಇದು ವಾಣಿಜ್ಯ ಯಶಸ್ಸು ಗಳಿಸಿತು.<ref>{{Cite web|url=https://www.firstpost.com/entertainment/kaappaan-tops-tn-kerala-box-office-in-opening-weekend-gaddalakonda-ganesh-earns-rs-25-cr-globally-7398541.html|title=Mohanlal starrer Kaappaan tops TN, Kerala box office in opening weekend; Gaddalakonda Ganesh earns Rs 55 cr globally|date=2019-09-25|website=Firstpost|language=en|access-date=2020-04-19|archive-date=19 August 2020|archive-url=https://web.archive.org/web/20200819131706/https://www.firstpost.com/entertainment/kaappaan-tops-tn-kerala-box-office-in-opening-weekend-gaddalakonda-ganesh-earns-rs-25-cr-globally-7398541.html|url-status=live}}</ref><ref>{{Cite web|url=https://www.news18.com/news/movies/kaappaan-movie-review-despite-stellar-star-cast-suriya-mohanlal-starrer-loses-focus-2316599.html|title=Kaappaan Movie Review: Despite Stellar Star Cast, Mohanlal-Suriya Starrer Loses Focus|website=News18|date=2019-09-20|access-date=2019-10-26|archive-date=26 October 2019|archive-url=https://web.archive.org/web/20191026175438/https://www.news18.com/news/movies/kaappaan-movie-review-despite-stellar-star-cast-suriya-mohanlal-starrer-loses-focus-2316599.html|url-status=live}}</ref> ೨೦೨೦ ರಲ್ಲಿ ಅವರ ಏಕೈಕ ಚಿತ್ರ 'ಬಿಗ್ ಬ್ರದರ್' ಆಗಿದ್ದು, ಅದರಲ್ಲಿ ಅವರು ಜೈಲಿನಿಂದ ಬಿಡುಗಡೆಯಾದ ನಂತರ ತಮ್ಮ ಕುಟುಂಬಕ್ಕೆ ಮರಳುವ ಮಾಜಿ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು.<ref>{{cite news|title=Mohanlal and Siddique to team up for project titled 'Big Brother'|url=https://www.thenewsminute.com/article/mohanlal-and-siddique-team-project-titled-big-brother-82520|access-date=26 May 2019|work=[[The News Minute]]|date=5 June 2018|archive-url=https://web.archive.org/web/20190526181945/https://www.thenewsminute.com/article/mohanlal-and-siddique-team-project-titled-big-brother-82520|archive-date=26 May 2019|url-status=live}}</ref><ref>{{cite news|last=Sidhardhan|first=Sanjith|title=Mohanlal, Siddique to team up for an action-comedy|url=https://timesofindia.indiatimes.com/entertainment/malayalam/movies/news/mohanlal-siddique-to-team-up-for-an-action-comedy/articleshow/64435104.cms|access-date=26 May 2019|work=[[The Times of India]]|date=3 June 2018|archive-date=11 October 2023|archive-url=https://web.archive.org/web/20231011091015/https://timesofindia.indiatimes.com/entertainment/malayalam/movies/news/mohanlal-siddique-to-team-up-for-an-action-comedy/articleshow/64435104.cms|url-status=live}}</ref>
ಮೋಹನ್ಲಾಲ್ ೨೦೨೧ ರಲ್ಲಿ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಜೀತು ಜೋಸೆಫ್ ನಿರ್ದೇಶನದ ಅನುಕ್ರಮ ಚಿತ್ರ 'ದೃಶ್ಯಂ ೨' ನಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರು.<ref>{{Cite web|date=6 February 2021|title=Drishyam 2 trailer: Ghost from the past comes to haunt Mohanlal|url=https://indianexpress.com/article/entertainment/malayalam/drishyam-2-trailer-the-ghost-from-the-past-comes-to-haunt-mohanlal-7177482/|access-date=8 February 2021|website=The Indian Express|language=en|archive-date=27 February 2021|archive-url=https://web.archive.org/web/20210227153724/https://indianexpress.com/article/entertainment/malayalam/drishyam-2-trailer-the-ghost-from-the-past-comes-to-haunt-mohanlal-7177482/|url-status=live}}</ref> ಹರಿಚರನ್ ಪುದಿಪ್ಪೇಡಿ ಅವರು "ಮೋಹನ್ಲಾಲ್ ಜಾರ್ಜ್ಕುಟ್ಟಿಯ ಪಾತ್ರಕ್ಕೆ ಸಂಯಮದ ಅಭಿನಯವನ್ನು ತರುತ್ತಾರೆ. ಈ ಬಾರಿ ಅವರು ಹೆಚ್ಚು ಶಾಂತ ವ್ಯಕ್ತಿಯಂತೆ ಕಾಣುತ್ತಾರೆ ಆದರೆ ಅವರ ಮನಸ್ಸಿನಲ್ಲಿ ಏನು ಕುದಿಯುತ್ತಿದೆ ಎಂಬುದರ ಬಗ್ಗೆ ಯಾರಿಗೂ ಕಲ್ಪನೆಯಿಲ್ಲ." ಎಂದು ಗಮನಿಸಿದರು.<ref>{{Cite news |last=Pudippedi |first=Haricharan |date=19 February 2021 |title=Drishyam 2 review: Mohanlal, Jeethu Joseph reunite for one of the best sequels ever |work=[[Hindustan Times]] |url=https://www.hindustantimes.com/entertainment/others/drishyam-2-review-mohanlal-jeethu-joseph-reunite-for-one-of-the-best-sequels-ever-101613707672069.html |access-date=19 February 2021 |archive-date=19 February 2021 |archive-url=https://web.archive.org/web/20210219042754/https://www.hindustantimes.com/entertainment/others/drishyam-2-review-mohanlal-jeethu-joseph-reunite-for-one-of-the-best-sequels-ever-101613707672069.html |url-status=live }}</ref> ನಂತರ ಅವರು 'ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ' ನಲ್ಲಿ ಮುಸ್ಲಿಂ ಯೋಧ ಕುಂಜಾಲಿ ಮರಕ್ಕರ್ IV ಪಾತ್ರವನ್ನು ನಿರ್ವಹಿಸಿದರು. ಇದು ಬಾಕ್ಸ್ ಆಫೀಸ್ನಲ್ಲಿ ಕಡಿಮೆ ಪ್ರದರ್ಶನ ನೀಡಿತು. ಆದಾಗ್ಯೂ, ಇದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.<ref>{{cite web |title=Box Office: Analyzing theatrical performance of Mohanlal's post-pandemic movies, Marakkar to L2 Empuraan |url=https://www.pinkvilla.com/entertainment/box-office/box-office-analysing-theatrical-performance-of-mohanlals-post-pandemic-movies-from-marakkar-to-l2-empuraan-1384093 |website=PINKVILLA |access-date=26 April 2025 |language=en |date=23 April 2025}}</ref><ref>{{cite news|last=Punnoose|first=Aby|date=11 November 2021|title=67th National Film Awards: Marakkar: Lion of the Arabian Sea wins Best Feature Film at National Film Awards|url=https://timesofindia.indiatimes.com/entertainment/malayalam/movies/news/67th-national-film-awards-marakkar-arabikkadalinte-simham-wins-the-best-feature-film-award/articleshow/81633289.cms|access-date=11 November 2021|website=Times of India|language=en|archive-date=11 November 2021|archive-url=https://web.archive.org/web/20211111163303/https://timesofindia.indiatimes.com/entertainment/malayalam/movies/news/67th-national-film-awards-marakkar-arabikkadalinte-simham-wins-the-best-feature-film-award/articleshow/81633289.cms|url-status=live}}</ref> ೨೦೨೨ ರಲ್ಲಿ ಅವರ ಮೊದಲ ಚಿತ್ರ 'ಬ್ರೋ ಡ್ಯಾಡಿ' ಆಗಿದ್ದು, ಅದರಲ್ಲಿ ಅವರು ಪೃಥ್ವಿರಾಜ್ ಸುಕುಮಾರನ್ ಅವರಿಗೆ ಸಂತೋಷದ ತಂದೆಯ ಪಾತ್ರವನ್ನು ನಿರ್ವಹಿಸಿದರು.<ref>{{cite news |last=Palisetty |first=Ramya |title=Prithviraj Sukumaran announces his second directorial Bro Daddy with Mohanlal |url=https://www.indiatoday.in/movies/regional-cinema/story/prithviraj-sukumaran-announces-his-second-directorial-bro-daddy-with-mohanlal-1816663-2021-06-18 |access-date=15 July 2021 |work=[[India Today]] |date=18 June 2021 |archive-date=19 June 2021 |archive-url=https://web.archive.org/web/20210619201702/https://www.indiatoday.in/movies/regional-cinema/story/prithviraj-sukumaran-announces-his-second-directorial-bro-daddy-with-mohanlal-1816663-2021-06-18 |url-status=live }}</ref> ಜನನಿ ಕೆ. "ಮೋಹನ್ಲಾಲ್ ಈ ಚಿತ್ರದಲ್ಲಿ ತುಂಬಾ ಮಜಾ ಮಾಡಿದ್ದಾರೆ. ಅವರ ಸೂಕ್ಷ್ಮ ಅಭಿವ್ಯಕ್ತಿಗಳು ಮತ್ತು ಅವರ ಹಾಸ್ಯ ಸಮಯವು ದೋಷರಹಿತವಾಗಿದೆ." ಎಂದು ಹೇಳಿದರು.<ref>{{cite news |last=K. |first=Janani |title=Bro Daddy Movie Review: Mohanlal, Prithviraj's fun family drama is not Badhaai Ho, but better |url=https://www.indiatoday.in/movies/regional-cinema/story/bro-daddy-movie-review-mohanlal-prithviraj-fun-family-drama-is-full-of-life-1904564-2022-01-26 |access-date=26 January 2022 |work=[[India Today]] |date=26 January 2022 |archive-date=26 January 2022 |archive-url=https://web.archive.org/web/20220126070054/https://www.indiatoday.in/movies/regional-cinema/story/bro-daddy-movie-review-mohanlal-prithviraj-fun-family-drama-is-full-of-life-1904564-2022-01-26 |url-status=live }}</ref> ಅವರ ಮುಂದಿನ ಎರಡು ಬಿಡುಗಡೆಗಳಾದ 'ಆರಾಟ್ಟು' ಮತ್ತು 'ಮಾನ್ಸ್ಟರ್' ಬಾಕ್ಸ್ ಆಫೀಸ್ ವಿಫಲಗಳಾಗಿದ್ದವು.<ref>{{Cite web |title='Thank You', 'Radhe Shyam', 'Aaraattu': A Look At The Biggest Flops Of South Cinema - Films That Fizzled Out |url=https://economictimes.indiatimes.com/magazines/panache/thank-you-radhe-shyam-liger-a-look-at-the-biggest-flops-of-south-cinema/aaraattu/slideshow/95660122.cms?from=mdr |access-date=2025-01-20 |website=The Economic Times}}</ref><ref>{{cite web |title=Monster box office collection Day 3: Mohanlal's film underperforms on Sunday|url=https://www.indiatoday.in/movies/regional-cinema/story/monster-box-office-collection-day-3-mohanlals-film-underperforms-on-sunday-2288889-2022-10-24|website=[[India Today]]|date=24 October 2022 |access-date=24 October 2022|quote=the film has been having a lukewarm response from the critics and the audiences.}}</ref> ನಂತರ ಅವರು '೧೨ನೇ ಮನುಷ್ಯ' ನಲ್ಲಿ ಕಾಣಿಸಿಕೊಂಡರು, ಇದು ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಡಿಜಿಟಲ್ ಆಗಿ ಬಿಡುಗಡೆಯಾಯಿತು.<ref>{{cite news | url=https://timesofindia.indiatimes.com/web-series/reviews/malayalam/12th-man/ottmoviereview/91669767.cms | title=12th Man Review: A entertaining, delicious whodunnit | website=[[The Times of India]] | last1=Mathews | first1=Anna }}</ref> ೨೦೨೩ ರಲ್ಲಿ, ಮೋಹನ್ಲಾಲ್ ಅವರ ಮೊದಲ ಚಿತ್ರ 'ಅಲೋನ್' ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು.<ref>{{Cite news |date=2023-01-31 |title='Alone' box office collection day 4: Mohanlal starrer stays low, mints only Rs 65 lakhs|work=The Times of India |url=https://timesofindia.indiatimes.com/entertainment/malayalam/movies/news/alone-box-office-collection-day-4-mohanlal-starrer-stays-low-mints-only-rs-68-lakhs/articleshow/97484057.cms}}</ref> ನಂತರ ಅವರು ತಮಿಳು ಚಿತ್ರ 'ಜೈಲರ್' ನಲ್ಲಿ ಅತಿಥಿ ಪಾತ್ರವನ್ನು ಮಾಡಿದರು.<ref>{{Cite web |date=6 January 2023 |title=Mohanlal to have a cameo in Rajinikanth's Jailer, fans call it 'iconic moment' |url=https://www.hindustantimes.com/entertainment/tamil-cinema/mohanlal-to-have-a-cameo-in-rajinikanth-s-jailer-fans-call-it-iconic-moment-101672988696266.html |url-status=live |archive-url=https://web.archive.org/web/20230106094648/https://www.hindustantimes.com/entertainment/tamil-cinema/mohanlal-to-have-a-cameo-in-rajinikanth-s-jailer-fans-call-it-iconic-moment-101672988696266.html |archive-date=6 January 2023 |access-date=6 January 2023 |website=[[Hindustan Times]]}}</ref> ಮೋಹನ್ಲಾಲ್ ನಂತರ 'ನೇರು' ನಲ್ಲಿ ವಕೀಲನ ಪಾತ್ರವನ್ನು ನಿರ್ವಹಿಸಿದರು, ಇದು ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು.<ref>{{cite news|last=Chakraborty|first=Saikat|title=Mohanlal teams up with Drishyam director Jeethu Joseph for legal drama Neru|url=https://www.telegraphindia.com/entertainment/mohanlal-teams-up-with-drishyam-director-jeethu-joseph-for-legal-drama-neru/cid/1958941|access-date=26 November 2023|work=[[Telegraph India]]|date=14 August 2023|archive-date=26 November 2023|archive-url=https://web.archive.org/web/20231126092959/https://www.telegraphindia.com/entertainment/mohanlal-teams-up-with-drishyam-director-jeethu-joseph-for-legal-drama-neru/cid/1958941|url-status=live}}</ref><ref>{{Cite news |date=2024-01-18 |title='Neru' box office collections day 27: Mohanlal's film dominates overseas; mints more than Rs 32 crores |url=https://timesofindia.indiatimes.com/entertainment/malayalam/movies/news/neru-box-office-collections-mohanlals-film-dominates-overseas/articleshow/106949938.cms?from=mdr |access-date=2024-01-21 |work=The Times of India |issn=0971-8257}}</ref> ಎಸ್.ಆರ್. ಪ್ರವೀಣ್ ಅವರು ಮೋಹನ್ಲಾಲ್ "ಸಂಯಮದ ಅಭಿನಯ" ದೊಂದಿಗೆ ಫಾರ್ಮ್ಗೆ ಮರಳಿದ್ದಾರೆ ಎಂದು ಹೇಳಿದರು.<ref>{{cite news|last=Praveen|first=S. R.|title='Neru' movie review: Jeethu Joseph and Mohanlal's courtroom drama almost delivers a cathartic high|url=https://www.thehindu.com/entertainment/movies/neru-movie-review-jeethu-joseph-and-mohanlals-courtroom-drama-almost-delivers-a-cathartic-high/article67661846.ece|access-date=22 December 2023|work=[[The Hindu]]|date=21 December 2023|archive-date=21 December 2023|archive-url=https://web.archive.org/web/20231221135645/https://www.thehindu.com/entertainment/movies/neru-movie-review-jeethu-joseph-and-mohanlals-courtroom-drama-almost-delivers-a-cathartic-high/article67661846.ece|url-status=live}}</ref> ೨೦೨೪ ರಲ್ಲಿ ಅವರ ಎರಡೂ ಚಿತ್ರಗಳು: 'ಮಲೈಕೋಟ್ಟೈ ವಾಲಿಬನ್' ಮತ್ತು 'ಬರೋಜ್ 3D' ಬಾಕ್ಸ್ ಆಫೀಸ್ನಲ್ಲಿ ವಿಫಲವಾದವು, ಇದು ಮೋಹನ್ಲಾಲ್ ಅವರಿಗೆ ವಾಣಿಜ್ಯ ವೈಫಲ್ಯಗಳ ಸರಣಿಗೆ ಕಾರಣವಾಯಿತು.<ref>{{cite web | url=https://indianexpress.com/article/entertainment/malayalam/malaikottai-vaaliban-box-office-collection-day-5-mohanlal-lijo-jose-pellissery-film-hits-a-new-low-9133901/#:~:text=So%20far%2C%20the%20film%20has%20grossed%20Rs%2021.75%20crore%20worldwide.&text=On%20Monday%2C%20Malaikottai%20Vaaliban%20experienced,dipped%20to%2010.35%20per%20cent | title=Malaikottai Vaaliban box office collection Day 5: Mohanlal and Lijo Jose Pellissery's film hits a new low on first Monday; earns 90% less than opening day | date=30 January 2024 }}</ref><ref>{{cite web |access-date=31 December 2024 |title=Mohanlal reacts to Barroz's box office failure after film collects Rs 9 cr in 6 days: 'Not made for the numbers'|url=https://indianexpress.com/article/entertainment/malayalam/mohanlal-reacts-to-barroz-box-office-failure-after-film-collects-rs-9-cr-in-6-days-not-made-for-the-numbers-9752550/ |work=Indian Express|date=30 December 2024|archive-url=https://web.archive.org/web/20250103190259/https://indianexpress.com/article/entertainment/malayalam/mohanlal-reacts-to-barroz-box-office-failure-after-film-collects-rs-9-cr-in-6-days-not-made-for-the-numbers-9752550/|archive-date=3 January 2025|url-status=live}}</ref>
###ಮತ್ತಷ್ಟು ಯಶಸ್ಸು ಮತ್ತು ಪುನರುತ್ಥಾನ (2025–ಪ್ರಸ್ತುತ)
ಮೋಹನ್ಲಾಲ್ ಅವರ ವೃತ್ತಿಜೀವನವು ೨೦೨೫ ರಲ್ಲಿ ಮತ್ತೆ ಚೇತರಿಸಿಕೊಂಡಿತು. ಅವರು ಮೊದಲು 'ಎಲ್೨: ಎಂಪುರಾನ್' ಅನುಕ್ರಮ ಚಿತ್ರದಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರು.<ref>{{Cite news |date=6 October 2023 |title=Mohanlal-Prithviraj film Empuraan starts rolling |url=https://www.newindianexpress.com/entertainment/malayalam/2023/oct/06/mohanlal-prithviraj-film-empuraan-starts-rolling-2621183.html |url-status=live |archive-url=https://web.archive.org/web/20231103160033/https://www.newindianexpress.com/entertainment/malayalam/2023/oct/06/mohanlal-prithviraj-film-empuraan-starts-rolling-2621183.html |archive-date=3 November 2023 |access-date=13 November 2023 |work=[[The New Indian Express]]}}</ref> ಫಸ್ಟ್ಪೋಸ್ಟ್ನ ಗಣೇಶ್ ಆಗ್ಲವ್ ಅವರು "ಮೋಹನ್ಲಾಲ್ ಅದ್ಭುತರಾಗಿರಬೇಕೆಂದು ನಿರೀಕ್ಷಿಸಲಾಗಿದೆ, ಮತ್ತು ಅವರು ಯಾವುದೇ ಸಂದೇಹವಿಲ್ಲದೆ ಅದ್ಭುತರಾಗಿದ್ದಾರೆ. ಅವರು ಸ್ವಾಗ್ ಅನ್ನು ಸುರಿಸುತ್ತಾರೆ ಮತ್ತು ಪ್ರತಿಯೊಂದು ಭಾವನೆಯನ್ನು ಸೂಕ್ಷ್ಮ ಆದರೆ ಪ್ರಭಾವಶಾಲಿ ಮನಸ್ಥಿತಿಯೊಂದಿಗೆ ಸುಂದರವಾಗಿ ವ್ಯಕ್ತಪಡಿಸುತ್ತಾರೆ." ಎಂದು ಗಮನಿಸಿದರು.<ref>{{Cite web |date=27 March 2025 |title=L2: Empuraan movie review: Mohanlal & Prithviraj Sukumaran starrer action-thriller is high on swag, charisma & technical brilliance |url=https://www.firstpost.com/entertainment/l2-empuraan-movie-review-mohanlal-prithviraj-sukumaran-starrer-action-thriller-is-high-on-swag-charisma-technical-brilliance-13874843.html |url-status=live |archive-url=https://web.archive.org/web/20250327085309/https://www.firstpost.com/entertainment/l2-empuraan-movie-review-mohanlal-prithviraj-sukumaran-starrer-action-thriller-is-high-on-swag-charisma-technical-brilliance-13874843.html |archive-date=27 March 2025 |access-date=27 March 2025 |website=Firstpost |language=en-us}}</ref> ಇದು ವಾಣಿಜ್ಯ ಯಶಸ್ಸನ್ನು ಗಳಿಸಿ, ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು.<ref>{{Cite news |date=29 March 2025 |title=L2 Empuraan worldwide box office collection day 2: Mohanlal film is the fastest Malayalam film to cross ₹100 crore |url=https://www.hindustantimes.com/entertainment/others/l2-empuraan-worldwide-box-office-collection-day-2-mohanlal-film-is-the-fastest-malayalam-film-to-cross-100-crore-101743229690067.html |url-status=live |archive-url=https://web.archive.org/web/20250329081943/https://www.hindustantimes.com/entertainment/others/l2-empuraan-worldwide-box-office-collection-day-2-mohanlal-film-is-the-fastest-malayalam-film-to-cross-100-crore-101743229690067.html |archive-date=29 March 2025 |access-date=2 April 2025 |work=Hindustan Times |language=en-us}}</ref> ನಂತರ ಅವರು 'ತುದಾರುಂ' ನಲ್ಲಿ ಟ್ಯಾಕ್ಸಿ ಚಾಲಕನ ಪಾತ್ರವನ್ನು ನಿರ್ವಹಿಸಿದರು.<ref>{{Cite news |last=India Today Entertainment Desk |date=22 April 2024 |title=Pics: Mohanlal, Shobana reunite for his 360th film with director Tharun Moorthy |url=https://www.indiatoday.in/movies/regional-cinema/story/pics-mohanlal-shobana-reunite-for-his-360th-film-with-director-tharun-moorthy-produced-by-m-renjith-under-rejaputhra-visual-media-2530133-2024-04-22 |url-status=live |archive-url=https://web.archive.org/web/20241203133250/https://www.indiatoday.in/movies/regional-cinema/story/pics-mohanlal-shobana-reunite-for-his-360th-film-with-director-tharun-moorthy-produced-by-m-renjith-under-rejaputhra-visual-media-2530133-2024-04-22 |archive-date=3 December 2024 |access-date=30 November 2024 |work=[[India Today]]}}</ref> ಹಿಂದೂಸ್ತಾನ್ ಟೈಮ್ಸ್ನ ಲತಾ ಶ್ರೀನಿವಾಸನ್ ಅವರು "ಮೋಹನ್ಲಾಲ್ ಅತ್ಯುತ್ತಮ ಸ್ಥಿತಿಯಲ್ಲಿದ್ದಾರೆ ಮತ್ತು ಅವರು ಇರುವ ಪ್ರತಿಯೊಂದು ದೃಶ್ಯವೂ ಅವರು ಎಂಥಾ ಶ್ರೇಷ್ಠ ನಟ ಎಂಬುದನ್ನು ತೋರಿಸುತ್ತದೆ." ಎಂದು ಗಮನಿಸಿದರು.<ref>{{Cite web |last=Srinivasan |first=Latha |date=25 April 2025 |title=Thudarum movie review: A top-form Mohanlal shines in fan boy Tharun Moorthy's gripping directorial |url=https://www.hindustantimes.com/entertainment/others/thudarum-movie-review-a-top-form-mohanlal-shines-in-fan-boy-tharun-moorthys-gripping-directorial-101745582170234.html |access-date=27 April 2025 |website=[[Hindustan Times]]}}</ref> ತುದಾರುಂ ನಂತರ, ಮೋಹನ್ಲಾಲ್ ಸಂದೀಪ್ ಪಾತ್ರವನ್ನು ನಿರ್ವಹಿಸಿದರು. ಅವರು ಹೃದಯ ಕಸಿಗೆ ಒಳಗಾದವರಾಗಿದ್ದು, ತಮ್ಮ ಹೃದಯವನ್ನು ಪಡೆದ ಕರ್ನಲ್ನ ಮಗಳ ನಿಶ್ಚಿತಾರ್ಥಕ್ಕೆ ಹಾಜರಾಗಲು ಒತ್ತಾಯಿಸಲ್ಪಡುತ್ತಾರೆ. ಈ ಚಿತ್ರವು 'ಹೃದಯಪೂರ್ವಂ' ಬಾಕ್ಸ್ ಆಫೀಸ್ ಯಶಸ್ಸು ಗಳಿಸಿತು ಮತ್ತು 'ಎಲ್೨: ಎಂಪುರಾನ್' ಮತ್ತು 'ತುದಾರುಂ' ಜೊತೆಗೆ, 'ಹೃದಯಪೂರ್ವಂ' ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>{{Cite web |title=Hridayapoorvam Box Office Collection Day 12: Mohanlal Starrer Is A Success, Set To Beat Officer On Duty! |url=https://www.imdb.com/news/ni65467996/ |access-date=2025-09-21 |website=IMDb |language=en-US}}</ref> ನಂತರ ಅವರು 'ಭಾ ಭಾ ಬಾ' ನಲ್ಲಿ ವಿಸ್ತೃತ ಅತಿಥಿ ಪಾತ್ರವನ್ನು ಮಾಡಿದರು.{{Citation needed|date=March 2026}}
==ಇತರೆ ಯೋಜನೆಗಳು==
=== ರಂಗಭೂಮಿ ಪ್ರದರ್ಶನಗಳು ===
[[File:Acclaimed Malayalam film actor Mohan Lal joined the Territorial Army on July 09, 2009 in the rank of an Honorary Lt. Colonel. The Defence Minister, Shri A. K. Antony is seen greeting Shri Mohan Lal soon after his induction.jpg|thumb|upright|left|alt=Mohanlal in Indian Army Uniform|ಮೋಹನ್ಲಾಲ್ ಅವರು ಭಾರತೀಯ ಟೆರಿಟೋರಿಯಲ್ ಆರ್ಮಿಗೆ ಸೇರ್ಪಡೆಯಾದ ನಂತರ ಭಾರತದ ರಕ್ಷಣಾ ಸಚಿವ ಎ.ಕೆ. ಆ್ಯಂಟೋನಿ ಅವರನ್ನು ಭೇಟಿಯಾಗುತ್ತಿರುವುದು]]
ಮೋಹನ್ಲಾಲ್ ಚಿತ್ರಗಳಿಗೆ ಪ್ರವೇಶಿಸುವ ಮೊದಲು ಹಲವಾರು ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸಿದ್ದರು. ೨೦೦೧ ರಲ್ಲಿ, ಅವರು ಭಾರತೀಯ ಮಹಾಕಾವ್ಯ ಮಹಾಭಾರತದ ಪಾತ್ರವಾದ ಕರ್ಣನ ಪಾತ್ರವನ್ನು ನಿರ್ವಹಿಸಿ ಕವಲಾಂ ನಾರಾಯಣ ಪಣಿಕ್ಕರ್ ನಿರ್ದೇಶನದ ಸಂಸ್ಕೃತ ಭಾಷೆಯ ನಾಟಕ 'ಕರ್ಣಭಾರಂ' ನಲ್ಲಿ ವೃತ್ತಿಪರ ನಾಟಕಕ್ಕೆ ಪಾದಾರ್ಪಣೆ ಮಾಡಿದರು. ಇದು ೨೦೦೧ ರ ಮಾರ್ಚ್ ೨೯ ರಂದು ನ್ಯೂ ಡೆಲ್ಲಿ ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ರಾಷ್ಟ್ರೀಯ ನಾಟಕೋತ್ಸವದ ಭಾಗವಾಗಿ ಪ್ರಥಮ ಪ್ರದರ್ಶನಗೊಂಡಿತು. ಈ ನಾಟಕವು ಕುರುಕ್ಷೇತ್ರ ಯುದ್ಧಕ್ಕೆ ಒಂದು ದಿನ ಮೊದಲು ಕರ್ಣನ ಮಾನಸಿಕ ಸಂಕಟವನ್ನು ಚಿತ್ರಿಸುತ್ತದೆ, ಅವನು ತನ್ನ ಹಿಂದಿನ ಮತ್ತು ತನ್ನ ನಂಬಿಕೆಯ ಬಗ್ಗೆ ಯೋಚಿಸುತ್ತಾನೆ. ಮೋಹನ್ಲಾಲ್ ಹೀಗೆ ಹೇಳಿದರು: "ಕವಲಾಮ್ನ ನಾಟಕವನ್ನು ನಾನು ಮಾಡಿದ ಹವ್ಯಾಸಿ ನಾಟಕಗಳೊಂದಿಗೆ ಹೋಲಿಸಲಾಗುವುದಿಲ್ಲ. ನಾಟಕದಲ್ಲಿ ಇತರ ಪಾತ್ರಗಳಿದ್ದರೂ, ಕಥಾವಸ್ತುವು ಕರ್ಣನ ಸುತ್ತ ಸುತ್ತುತ್ತದೆ. ಇದು ಬಹುತೇಕ ಏಕವ್ಯಕ್ತಿ ಪ್ರದರ್ಶನದಂತಿದೆ. ಕೆಲವು ದೃಶ್ಯಗಳು ನಿಜಕ್ಕೂ ಸ್ಪರ್ಶಿಸುವ ಮತ್ತು ಸವಾಲಿನವು" ಎಂದರು.<ref>{{cite web|url=http://www.rediff.com/entertai/2001/mar/13mohan.htm|title=Mohanlal's new obsession|work=[[Rediff.com]]|last=Jose|first=D.|date=13 March 2001|access-date=12 September 2013|archive-url=https://web.archive.org/web/20170215005226/http://www.rediff.com/entertai/2001/mar/13mohan.htm|archive-date=15 February 2017|url-status=live}}</ref> ಅವರು ಯಾವುದೇ ಸಂಭಾವನೆಯಿಲ್ಲದೆ ಅಭಿನಯಿಸಿದರು: "ನಾನು ಅದರ ಸಂತೋಷಕ್ಕಾಗಿ ಪ್ರದರ್ಶನ ನೀಡಿದೆ... ನಮ್ಮ ಇತಿಹಾಸದ ಮೇಲಿನ ಪ್ರೀತಿಗಾಗಿ".<ref name="rd"/>
'ಕಥಾಯಟ್ಟಂ' ಮೋಹನ್ಲಾಲ್ ಅವರಿಂದ ಪ್ರದರ್ಶಿಸಲ್ಪಟ್ಟ ಪ್ರಸ್ತುತಿಯಾಗಿದ್ದು, ೧೦೦ ವರ್ಷಗಳ ಅವಧಿಯಲ್ಲಿ ಒಯ್ಯಾರತ್ತು ಚಂದು ಮೇನನ್, ಸಿ.ವಿ. ರಾಮನ್ ಪಿಳ್ಳೈ, ಎಸ್.ಕೆ. ಪೊಟ್ಟೆಕ್ಕಟ್ಟ್, ತಕ್ಕಳಿ ಶಿವಶಂಕರ ಪಿಳ್ಳೈ, ಪಿ. ಕೇಸವದೇವ್, ವೈಕಂ ಮುಹಮ್ಮದ್ ಬಷೀರ್, ಉರೂಬ್, ಒ.ವಿ. ವಿಜಯನ್, ಎಂ. ಮುಕುಂದನ್ ಮತ್ತು ಎಂ.ಟಿ. ವಾಸುದೇವನ್ ನಾಯರ್ ಬರೆದ ಹತ್ತು ಮಲಯಾಳಂ ಕಾದಂಬರಿಗಳಿಂದ ಆಯ್ಕೆ ಮಾಡಲಾದ ಹತ್ತು ಶ್ರೇಷ್ಠ ಪಾತ್ರಗಳು ಮತ್ತು ಸಂದರ್ಭಗಳನ್ನು ಪ್ರದರ್ಶಿಸಲಾಗಿದೆ. ಟಿ.ಕೆ. ರಾಜೀವ್ ಕುಮಾರ್ ನಿರ್ದೇಶನದ ಈ ನಾಟಕವು ೨೦೦೩ ರ ನವೆಂಬರ್ ೧ ರಂದು ಕೇರಳ ವಿಶ್ವವಿದ್ಯಾಲಯದ ಸೆನೆಟ್ ಹಾಲ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು ನಂತರ ಕೋಜಿಕ್ಕೋಡ್, ಬೆಂಗಳೂರು, ಚೆನ್ನೈ ಮತ್ತು ದೆಹಲಿಗಳಲ್ಲಿ ಪ್ರದರ್ಶನಗೊಂಡಿತು.<ref>{{cite news|url=http://www.thehindu.com/2003/10/28/stories/2003102807480400.htm|title=Document for rejuvenating Malayalam to be released|work=[[The Hindu]]|date=28 October 2003|archive-url=https://web.archive.org/web/20161205135557/http://www.thehindu.com/2003/10/28/stories/2003102807480400.htm|archive-date=5 December 2016|url-status=dead}}</ref><ref>{{cite news|title=Mohanlal to enact characters from Malayalam literature|url=http://www.thehindubusinessline.com/2004/12/04/stories/2004120402091700.htm|archive-url=https://web.archive.org/web/20090607065324/http://www.thehindubusinessline.com/2004/12/04/stories/2004120402091700.htm|archive-date=7 June 2009|work=[[The Hindu Business Line]]|date=4 December 2004|access-date=9 December 2016|url-status=live}}</ref> ೨೦೦೮ ರಲ್ಲಿ, ಮೋಹನ್ಲಾಲ್ ಮುಕೇಶ್ ಜೊತೆಗೆ 'ಚಾಯಮುಖಿ' ನಲ್ಲಿ ಪ್ರದರ್ಶನ ನೀಡಿದರು. ಇದನ್ನು ಪ್ರಶಾಂತ್ ನಾರಾಯಣನ್ ಬರೆದು ನಿರ್ದೇಶಿಸಿದರು. ಮೋಹನ್ಲಾಲ್ ಮತ್ತು ಮುಕೇಶ್ ಕ್ರಮವಾಗಿ ಮಹಾಭಾರತದ ಪಾತ್ರಗಳಾದ ಭೀಮ ಮತ್ತು ಕೀಚಕ ಪಾತ್ರಗಳನ್ನು ನಿರ್ವಹಿಸಿದರು. ಇದು ನಾಟಕದೊಳಗಿನ ನಾಟಕದ ನಿರೂಪಣಾ ಶೈಲಿಯನ್ನು ಹೊಂದಿತ್ತು. ೨೦೦೮ ರ ಮಾರ್ಚ್ ೧೨ ರಂದು ತ್ರಿಶೂರ್ನ ಲುಲು ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಪ್ರಥಮ ಪ್ರದರ್ಶನಗೊಂಡಿತು,<ref>{{cite news|url=http://www.thehindu.com/todays-paper/tp-national/tp-kerala/mirroring-the-pangs-of-love/article1218835.ece|archive-url=https://web.archive.org/web/20160219140152/http://www.thehindu.com/todays-paper/tp-national/tp-kerala/mirroring-the-pangs-of-love/article1218835.ece|archive-date=19 February 2016|title=Mirroring the pangs of love|work=[[The Hindu]]|date=13 March 2008|access-date=10 December 2016|last=Santhosh|first=K.|url-status=live}}</ref> ಮತ್ತು ನಂತರ ತಿರುವನಂತಪುರ, ಬೆಂಗಳೂರು, ಕೊಲ್ಲಂ, ಕೊಚ್ಚಿ ಮತ್ತು ಕೋಜಿಕ್ಕೋಡ್ಗಳಲ್ಲಿ ಪ್ರದರ್ಶನಗೊಂಡಿತು. 'ದಿ ಹಿಂದೂ' ನ ವಿಮರ್ಶಕರು "'ಚಾಯಮುಖಿ' ಇತ್ತೀಚಿನ ಕಾಲದ ಮಲಯಾಳಂ ರಂಗಭೂಮಿಯ ಅತ್ಯುತ್ತಮ ಕೃತಿ" ಎಂದು ಬರೆದರು.<ref>{{cite news|url=http://www.thehindu.com/todays-paper/tp-national/tp-kerala/chayamukhi-to-be-staged-today/article119204.ece|title='Chayamukhi' to be staged today|work=[[The Hindu]]|last=Kumar|first=P. K. Ajith|date=20 December 2009|access-date=3 February 2015|archive-url=https://web.archive.org/web/20161205135749/http://www.thehindu.com/todays-paper/tp-national/tp-kerala/chayamukhi-to-be-staged-today/article119204.ece|archive-date=5 December 2016|url-status=live}}</ref> ಅದೇ ವರ್ಷ, ಮೋಹನ್ಲಾಲ್ ಶೋಭನಾ ನಿರ್ದೇಶನದ ಇಂಗ್ಲಿಷ್ ಬ್ಯಾಲೆ 'ಮಾಯಾ ರಾವಣ' ನಲ್ಲಿ ಹನುಮಂತನಿಗೆ ಧ್ವನಿ ನೀಡಿದರು.<ref>{{cite news|url=https://www.newindianexpress.com/cities/kochi/2009/may/12/mayaravan-unveiled-48387.html|title=Mayaravan unveiled|work=[[The New Indian Express]]|date=12 May 2009|access-date=10 December 2016|last=Varma|first=Sivadas|archive-url=https://web.archive.org/web/20151224105226/http://www.newindianexpress.com/cities/kochi/article117561.ece|archive-date=24 December 2015|url-status=live}}</ref>
೨೦೧೪ ರಲ್ಲಿ, ಮೋಹನ್ಲಾಲ್ ಮತ್ತು ಸಂಗೀತಗಾರ ರತೀಶ್ ವೇಗ ಅವರು ಲಾಲಿಸಮ್ - ದಿ ಲಾಲ್ ಎಫೆಕ್ಟ್ ಎಂಬ ಸಂಗೀತ ತಂಡವನ್ನು ರಚಿಸಿದರು.<ref>{{cite news|url=https://www.newindianexpress.com/states/kerala/2014/nov/05/cult-lalisom-set-to-rock-lalettan-fans-679003.html|title=Cult Lalisom Set to Rock Lalettan Fans|work=[[The New Indian Express]]|agency=Express News Service|archive-url=https://web.archive.org/web/20161205142519/http://www.newindianexpress.com/states/kerala/2014/nov/05/Cult-Lalisom-Set-to-Rock-Lalettan-Fans-679003.html|archive-date=5 December 2016|url-status=live}}</ref> ಇದರ ಮೊದಲ ಪ್ರದರ್ಶನವು ೨೦೧೫ ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿತ್ತು. ಆರಂಭದಲ್ಲಿ ೧.೬೩ ಕೋಟಿ ರೂಪಾಯಿ ಶುಲ್ಕ ವಿಧಿಸಿದ್ದಕ್ಕಾಗಿ ಮತ್ತು ನಂತರ ಲಿಪ್-ಸಿಂಕ್ ಮಾಡಿದ್ದಕ್ಕಾಗಿ ಈ ತಂಡವು ಸಾಮಾಜಿಕ ಮಾಧ್ಯಮದಿಂದ ಟೀಕೆಗೆ ಗುರಿಯಾಯಿತು.<ref>{{cite news|url=http://www.ndtv.com/kerala-news/under-social-media-pressure-actor-mohanlal-offers-to-give-back-national-games-performance-money-736535|title=Under Social Media Pressure, Actor Mohanlal Offers to Return National Games Performance Fee|work=[[NDTV]]|last=Koshy|first=Sneha Mary|date=3 February 2015|access-date=15 February 2015|archive-url=https://web.archive.org/web/20161205143154/http://www.ndtv.com/kerala-news/under-social-media-pressure-actor-mohanlal-offers-to-give-back-national-games-performance-money-736535|archive-date=5 December 2016|url-status=live}}</ref> ಟೀಕೆಯ ನಂತರ, ಮೋಹನ್ಲಾಲ್ ಆ ಮೊತ್ತವನ್ನು ಸರ್ಕಾರಕ್ಕೆ ಹಿಂದಿರುಗಿಸಿದರು, ಆದರೆ ಸರ್ಕಾರವು ನಿರಾಕರಿಸಿತು, ಏಕೆಂದರೆ ಸರ್ಕಾರದ ನೈತಿಕತೆಯು ಅವರಿಂದ ಹಣವನ್ನು ಮರಳಿ ಪಡೆಯಲು ಅನುಮತಿಸುವುದಿಲ್ಲ ಮತ್ತು ಮೋಹನ್ಲಾಲ್ ಅವರು ಸ್ವೀಕರಿಸಿದ ಮೊತ್ತದಿಂದ ವೈಯಕ್ತಿಕವಾಗಿ ಲಾಭ ಪಡೆಯಲಿಲ್ಲ, ಏಕೆಂದರೆ ಅದು ವೇದಿಕೆಯ ವೆಚ್ಚಗಳು ಮತ್ತು ಕಲಾವಿದರಿಗೆ ಸಂಭಾವನೆಯನ್ನು ಪೂರೈಸಲು ಉದ್ದೇಶಿಸಲಾಗಿತ್ತು.<ref>{{cite news|url=http://www.thehindu.com/sport/govt-rejects-mohanlals-offer-to-return-money/article6856750.ece|title=Govt rejects Mohanlal's offer to return money|agency=[[Press Trust of India]]|date=4 February 2015|work=[[The Hindu]]|access-date=6 February 2015|archive-url=https://web.archive.org/web/20161205144127/http://www.thehindu.com/sport/govt-rejects-mohanlals-offer-to-return-money/article6856750.ece|archive-date=5 December 2016|url-status=live}}</ref> ಅದರ ಹೊರತಾಗಿಯೂ, ಮೋಹನ್ಲಾಲ್ ಅವರು ಕಳುಹಿಸಿದ ಹಣವನ್ನು ಹಿಂತೆಗೆದುಕೊಳ್ಳಲಿಲ್ಲ.<ref>{{cite news|title=Lalisom fiasco: Mohanlal refuses to take back remuneration of Rs 1.63 crore|url=http://www.dnaindia.com/entertainment/report-lalisom-fiasco-mohanlal-refuses-to-take-back-remuneration-of-rs-163-crore-2058887|access-date=23 July 2017|work=[[Daily News and Analysis]]|agency=[[Press Trust of India]]|date=7 February 2015|archive-url=https://web.archive.org/web/20171204122424/http://www.dnaindia.com/entertainment/report-lalisom-fiasco-mohanlal-refuses-to-take-back-remuneration-of-rs-163-crore-2058887|archive-date=4 December 2017|url-status=live}}</ref>
೨೦೧೫ ರಲ್ಲಿ, ಅವರು ಮುಕೇಶ್ ಜೊತೆ ಮತ್ತೊಮ್ಮೆ 'ನಾಗ' ಗಾಗಿ ಸಹಕರಿಸಿದರು, ಆದರೆ ಈ ಬಾರಿ ನಿರೂಪಕರಾಗಿ. ಗಿರೀಶ್ ಕಾರ್ನಾಡ್ ಅವರ ಕನ್ನಡ ನಾಟಕ 'ನಾಗಮಂಡಲ'ವನ್ನು ಆಧರಿಸಿದ ಈ ನಾಟಕವನ್ನು ಸುವೀರನ್ ನಿರ್ದೇಶಿಸಿದ್ದಾರೆ. 'ನಾಗ' ಪುರಾಣ, ಮೂಢನಂಬಿಕೆ, ವಾಸ್ತವ ಮತ್ತು ಫ್ಯಾಂಟಸಿಯ ಸಂಯೋಜನೆಯಾಗಿದೆ. ೨೦೧೫ ರ ಆಗಸ್ಟ್ ೯ ರಂದು ಸೇಂಟ್ ಜಾರ್ಜ್ ಚರ್ಚ್, ಕಳಡಿಯ ಪ್ಯಾರಿಷ್ ಹಾಲ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು.<ref>{{cite news|url=http://www.newindianexpress.com/cities/kochi/Mohanlal-Mukesh-to-Set-Stage-Afire-with-Naga/2015/08/08/article2963127.ece | title=Mohanlal, Mukesh to Set Stage Afire with 'Naga'|work=[[The New Indian Express]]|date=8 August 2015|access-date=10 December 2016|last=Kallungal|first=Dhinesh|archive-url=https://web.archive.org/web/20151222083204/http://www.newindianexpress.com/cities/kochi/Mohanlal-Mukesh-to-Set-Stage-Afire-with-Naga/2015/08/08/article2963127.ece|archive-date=22 December 2015|url-status=dead}}</ref>
### ಸದ್ಭಾವನಾ ದೂತ ಮತ್ತು ಬ್ರಾಂಡ್ ರಾಯಭಾರಿ
ಮೋಹನ್ಲಾಲ್ ಸರ್ಕಾರ ಮತ್ತು ಇತರ ಲಾಭರಹಿತ ಸಂಸ್ಥೆಗಳ ಸದ್ಭಾವನಾ ದೂತರಾಗಿದ್ದಾರೆ, ಮುಖ್ಯವಾಗಿ ಸಾರ್ವಜನಿಕ ಸೇವಾ ಜಾಹೀರಾತುಗಳು ಮತ್ತು ಮಾನವೀಯ ಕಾರ್ಯಗಳಿಗಾಗಿ. ೨೦೦೭ ರ ಮಾರ್ಚ್ನಲ್ಲಿ, ಕೇರಳ ಏಡ್ಸ್ ನಿಯಂತ್ರಣ ಸೊಸೈಟಿಯು ಎಚ್ಐವಿ/ಏಡ್ಸ್ ಜಾಗೃತಿ ಅಭಿಯಾನದ ಸದ್ಭಾವನಾ ದೂತರನ್ನಾಗಿ ನೇಮಿಸಿತು, ಇದಕ್ಕಾಗಿ ಅವರು ಸಣ್ಣ ಜಾಗೃತಿ ವೀಡಿಯೊಗಳಲ್ಲಿ ನಟಿಸಿದರು.<ref>{{cite news|url=http://www.thehindu.com/todays-paper/tp-national/tp-kerala/Mohanlal-joins-AIDS-awareness-drive/article14733228.ece|work=[[The Hindu]]|title=Mohanlal joins AIDS awareness drive|author=<!--Staff writer(s); no by-line.-->|date=13 March 2007|access-date=30 October 2010|archive-url=https://web.archive.org/web/20161205140525/http://www.thehindu.com/todays-paper/tp-national/tp-kerala/Mohanlal-joins-AIDS-awareness-drive/article14733228.ece|archive-date=5 December 2016|url-status=live}}</ref> ೨೦೦೯ ರ ಅಕ್ಟೋಬರ್ನಲ್ಲಿ, ಕೇರಳ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಮೋಹನ್ಲಾಲ್ ಅವರನ್ನು ಕೇರಳ ರಾಜ್ಯ ಅಥ್ಲೆಟಿಕ್ಸ್ನ ಸದ್ಭಾವನಾ ದೂತರನ್ನಾಗಿ ನೇಮಿಸಿತು.<ref name="IPL">{{cite news|url=http://timesofindia.indiatimes.com/news/Mohanlal-may-bid-for-IPL-team/articleshow/5184365.cms|work=[[The Times of India]]|title=Mohanlal may bid for IPL team|agency=[[Press Trust of India]]|date=31 October 2009|access-date=31 October 2009|archive-url=https://web.archive.org/web/20161205140208/http://timesofindia.indiatimes.com/news/Mohanlal-may-bid-for-IPL-team/articleshow/5184365.cms|archive-date=5 December 2016|url-status=live}}</ref> ೨೦೧೦ ರ ಮಾರ್ಚ್ನಲ್ಲಿ, ಮೋಹನ್ಲಾಲ್ ಕೇರಳ ಸರ್ಕಾರದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಮನವಿಯನ್ನು ಒಪ್ಪಿಕೊಂಡು ಕೇರಳದ ಕೈಮಗ್ಗ ಉದ್ಯಮದ ಸದ್ಭಾವನಾ ದೂತರಾಗಿ ನೇಮಕಗೊಂಡರು.<ref>{{cite news|title=Mohanlal to be khadi goodwill ambassador|url=http://www.thehindu.com/todays-paper/tp-national/tp-kerala/Mohanlal-to-be-khadi-goodwill-ambassador/article15995736.ecee|access-date=5 December 2016|work=[[The Hindu]]|date=3 March 2010|archive-url=https://web.archive.org/web/20161210122445/http://www.thehindu.com/todays-paper/tp-national/tp-kerala/Mohanlal-to-be-khadi-goodwill-ambassador/article15995736.ece|archive-date=10 December 2016|url-status=dead}}</ref> ೨೦೧೫ ರ ಜುಲೈನಲ್ಲಿ, ಕೇರಳ ಸರ್ಕಾರವು ಅವರನ್ನು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಅಭಿವೃದ್ಧಿಪಡಿಸಿದ "ಸುಭಯಾತ್ರಾ ೨೦೧೫" ಯೋಜನೆಯ ಸದ್ಭಾವನಾ ದೂತರನ್ನಾಗಿ ಮಾಡಿತು.<ref>{{cite news|title=Actor Mohanlal goodwill ambassador of 'Subhayatra' drive|url=http://www.business-standard.com/article/pti-stories/actor-mohanlal-goodwill-ambassador-of-subhayatra-drive-115070601022_1.html|access-date=10 December 2016|work=[[Business Standard]]|agency=[[Press Trust of India]]|date=6 July 2015|archive-url=https://web.archive.org/web/20160507203320/http://www.business-standard.com/article/pti-stories/actor-mohanlal-goodwill-ambassador-of-subhayatra-drive-115070601022_1.html|archive-date=7 May 2016|url-status=live}}</ref> ೨೦೧೬ ರ ಸೆಪ್ಟೆಂಬರ್ನಲ್ಲಿ, ಕೇರಳ ಸರ್ಕಾರದ ಮತ್ತೊಂದು ಯೋಜನೆಯಾದ "ಮೃತಸಂಜೀವನಿ" ಯ ಸದ್ಭಾವನಾ ದೂತರನ್ನಾಗಿ ನೇಮಿಸಲಾಯಿತು. ಇದು ರಾಜ್ಯದಲ್ಲಿ ಅಂಗ ದಾನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.<ref>{{cite news|last=James|first=Anu|title=Pinarayi Vijayan introduces Mohanlal as goodwill ambassador of Mrithasanjeevani programme in Kerala|url=http://www.ibtimes.co.in/pinarayi-vijayan-introduces-mohanlal-goodwill-ambassador-mrithasanjeevani-programme-kerala-695626|access-date=10 December 2016|work=[[International Business Times]]|date=28 September 2016|archive-url=https://web.archive.org/web/20161210133620/http://www.ibtimes.co.in/pinarayi-vijayan-introduces-mohanlal-goodwill-ambassador-mrithasanjeevani-programme-kerala-695626|archive-date=10 December 2016|url-status=live}}</ref> ೨೦೨೧ ರ ಜನವರಿಯಲ್ಲಿ, ಕೇರಳ ಸರ್ಕಾರದ ಆರೋಗ್ಯ ಇಲಾಖೆಯು ಕ್ಷಯರೋಗ ನಿರ್ಮೂಲನ ಅಭಿಯಾನದ ಸದ್ಭಾವನಾ ದೂತರನ್ನಾಗಿ ನೇಮಿಸಿತು.<ref>{{Cite web |date=22 January 2021 |title=Mohanlal to be ambassador of TB eradication drive |url=https://www.newindianexpress.com/states/kerala/2021/jan/22/mohanlal-to-be-ambassador-of-tb-eradication-drive-2253344.html |url-status=live |archive-url=https://web.archive.org/web/20210122032018/https://www.newindianexpress.com/states/kerala/2021/jan/22/mohanlal-to-be-ambassador-of-tb-eradication-drive-2253344.html |archive-date=22 January 2021 |access-date=27 January 2021 |website=[[The Indian Express]]}}</ref>
ಅವರು ಹಲವಾರು ದೂರದರ್ಶನ ಜಾಹೀರಾತುಗಳು ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಓಷಿಯಾನಸ್ ಇತ್ಯಾದಿಗಳ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.<ref name="indiatoday">{{cite news|url=https://www.indiatoday.in/magazine/states/kerala/story/20100315-sniping-superstars-742241-2010-03-03|title=Sniping superstars|work=[[India Today]]|last=Radhakrishnan|first=M. G.|date=4 March 2010|access-date=6 May 2012|archive-url=https://web.archive.org/web/20161205141342/http://indiatoday.intoday.in/story/Sniping+superstars/1/86696.html|archive-date=5 December 2016|url-status=live}}</ref> ೨೦೦೧ ರಲ್ಲಿ ಅವರು ಎಮ್ಸಿಆರ್ನ ಬ್ರಾಂಡ್ ರಾಯಭಾರಿಯಾದ ನಂತರ ಭಾರತದಲ್ಲಿ ಧೋತಿಯನ್ನು ಎಂಡೋರ್ಸ್ ಮಾಡಿದ ಮೊದಲ ಚಲನಚಿತ್ರ ತಾರೆ ಮೋಹನ್ಲಾಲ್. ಎಮ್ಸಿಆರ್ ೩೦,೦೦೦ ಬಣ್ಣದ ಧೋತಿಗಳನ್ನು ತಯಾರಿಸಿತು, ಅವುಗಳು 'ನರಸಿಂಹಂ' (೨೦೦೦) ಚಿತ್ರದಲ್ಲಿ ಕಾಣಿಸಿಕೊಂಡಿದ್ದವು, ಇದು ಮಾರುಕಟ್ಟೆಯಲ್ಲಿ ಯಶಸ್ಸನ್ನು ಗಳಿಸಿತು. ಅವರು ಎಮ್ಸಿಆರ್ನ ಮುಖ್ಯ ಬ್ರಾಂಡ್ ರಾಯಭಾರಿಯಾಗಿ ಮುಂದುವರೆದಿದ್ದಾರೆ.<ref>{{cite news|last=Shoba|first=V.|title=Tamil Wrap Star|url=http://indianexpress.com/article/entertainment/regional/tamil-wrap-star/|access-date=13 December 2016|work=[[The Indian Express]]|date=3 August 2014|archive-url=https://web.archive.org/web/20161220221518/http://indianexpress.com/article/entertainment/regional/tamil-wrap-star/|archive-date=20 December 2016|url-status=live}}</ref> ಮೋಹನ್ಲಾಲ್ ೨೦೦೨ ರಲ್ಲಿ ಟಾಟಾ ಗ್ಲೋಬಲ್ ಬೆವರೇಜಸ್ ಒಡೆತನದ ಚಹಾ ಬ್ರಾಂಡ್ ಕಾನನ್ ದೇವನ್ ಅವರ ಬ್ರಾಂಡ್ ರಾಯಭಾರಿಯಾಗಿ ಸಹಿ ಹಾಕಿದರು. ೨೦೧೪ ರಲ್ಲಿ ಅದರ ಮರು-ಬ್ರಾಂಡಿಂಗ್ ನಂತರ ಅವರ ಒಪ್ಪಂದವನ್ನು ನವೀಕರಿಸಲಾಯಿತು.<ref>{{cite news|title=Tata tea relaunches Kannan Devan in Kerala|url=http://www.thehindubusinessline.com/economy/agri-business/tata-tea-relaunches-kannan-devan-in-kerala/article6419941.ece|access-date=12 December 2016|work=[[The Hindu Business Line]]|date=17 September 2014}}</ref> ೨೦೧೦ ರ ಜುಲೈನಲ್ಲಿ, ಎಲ್ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಕೇರಳ ಗ್ರಾಹಕರಿಗೆ ಸೆಪ್ಟೆಂಬರ್ ೨೦೧೦ ರವರೆಗೆ ಬ್ರಾಂಡ್ನ ಓಣಂ ಹಬ್ಬದ ಕೊಡುಗೆಗಳನ್ನು ಎಂಡೋರ್ಸ್ ಮಾಡಲು ಮೋಹನ್ಲಾಲ್ ಅವರನ್ನು ನೇಮಿಸಿತು.<ref>{{cite news|url=https://www.indiatoday.in/business/world/story/lg-eyes-19kcr-sales-turnover-78237-2010-07-06|title=LG eyes 19K-cr sales turnover|work=[[India Today]]|agency=[[Press Trust of India]]|date=7 July 2010|access-date=12 September 2013|archive-url=https://web.archive.org/web/20161205141745/http://indiatoday.intoday.in/story/lg-eyes-19kcr-sales-turnover/1/104560.html|archive-date=5 December 2016|url-status=live}}</ref> ಅದೇ ವರ್ಷ, ಅವರು ಬ್ಯಾಂಕೇತರ ಹಣಕಾಸು ಕಂಪನಿಯಾದ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ನ ರಾಜ್ಯದ ಬ್ರಾಂಡ್ ರಾಯಭಾರಿಯಾಗಿ ಸಹಿ ಹಾಕಿದರು.<ref>{{cite news|title=Manappuram to take QIP route to raise Rs 1,000 crore|url=http://economictimes.indiatimes.com/markets/stocks/news/manappuram-to-take-qip-route-to-raise-rs-1000-crore/articleshow/6333929.cms|access-date=13 December 2016|work=[[The Economic Times]]|agency=ET Bureau|date=19 August 2010|archive-date=11 October 2020|archive-url=https://web.archive.org/web/20201011170913/https://economictimes.indiatimes.com/markets/stocks/news/manappuram-to-take-qip-route-to-raise-rs-1000-crore/articleshow/6333929.cms|url-status=live}}</ref> ೨೦೧೩ ರಲ್ಲಿ ಮೋಹನ್ಲಾಲ್ ಕೆಎಲ್ಎಫ್ ಕೊಕೊನಾಡ್ ತೆಂಗಿನ ಎಣ್ಣೆ ಬ್ರಾಂಡ್ ಅನ್ನು ಎಂಡೋರ್ಸ್ ಮಾಡಿದರು.<ref>{{cite news|last=Sathish|first=V. M.|title=Doctors slam Mohanlal's 'cholesterol-free' oil|url=http://www.emirates247.com/news/emirates/doctors-slam-mohanlal-s-cholesterol-free-oil-2013-05-01-1.504620|access-date=13 December 2016|work=[[Emirates 24/7]]|date=1 May 2013|archive-url=https://web.archive.org/web/20161220130513/http://www.emirates247.com/news/emirates/doctors-slam-mohanlal-s-cholesterol-free-oil-2013-05-01-1.504620|archive-date=20 December 2016|url-status=live}}</ref>
೨೦೧೩ ರ ಸೆಪ್ಟೆಂಬರ್ನಲ್ಲಿ, ನೇರ-ಪ್ರಸಾರ ಉಪಗ್ರಹ ದೂರದರ್ಶನ ಸೇವಾ ಪೂರೈಕೆದಾರ ಟಾಟಾ ಸ್ಕೈ ಮೋಹನ್ಲಾಲ್ ಅವರನ್ನು ತಮ್ಮ ಕೇರಳ ಮಾರುಕಟ್ಟೆಗೆ ಬ್ರಾಂಡ್ ಎಂಡೋರ್ಸರ್ ಆಗಿ ಘೋಷಿಸಿತು.<ref>{{cite news|title=Mohanlal roped in as Tata Sky brand ambassador|url=http://www.business-standard.com/article/news-ians/mohanlal-roped-in-as-tata-sky-brand-ambassador-113090900650_1.html|access-date=5 December 2016|work=[[Business Standard]]|agency=[[Press Trust of India]]|date=9 September 2013|archive-url=https://web.archive.org/web/20161205141922/http://www.business-standard.com/article/news-ians/mohanlal-roped-in-as-tata-sky-brand-ambassador-113090900650_1.html|archive-date=5 December 2016|url-status=live}}</ref> ಮೋಹನ್ಲಾಲ್, ಮಿಲ್ಕಾ ಸಿಂಗ್ ಮತ್ತು ಪಿ.ಟಿ. ಉಷಾ ಅವರೊಂದಿಗೆ ೨೦೧೩ ರಲ್ಲಿ ಕೊಚ್ಚಿ ಇಂಟರ್ನ್ಯಾಷನಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮದ ಬ್ರಾಂಡ್ ರಾಯಭಾರಿಗಳಾಗಿದ್ದರು. ಇದು ಕೊಚ್ಚಿ ಮ್ಯುನಿಸಿಪಲ್ ಕಾರ್ಪೊರೇಷನ್ ಮತ್ತು ಪುಷ್ ಇಂಟಿಗ್ರೇಟೆಡ್ ಕಮ್ಯುನಿಕೇಷನ್ ಪ್ರೈ. ಲಿಮಿಟೆಡ್ ಆಯೋಜಿಸಿದ್ದ ಅರ್ಧ ಮ್ಯಾರಥಾನ್ ಆಗಿತ್ತು.<ref>{{cite news|author=<!--Staff writer(s); no by-line.-->|title=Kochi to turn marathon city|url=http://www.thehindu.com/todays-paper/tp-national/tp-kerala/kochi-to-turn-marathon-city/article5362889.ece|access-date=13 December 2016|work=[[The Hindu]]|date=18 November 2013|archive-url=https://web.archive.org/web/20140830164521/http://www.thehindu.com/todays-paper/tp-national/tp-kerala/kochi-to-turn-marathon-city/article5362889.ece|archive-date=30 August 2014|url-status=live}}</ref> ೨೦೧೪ ರಲ್ಲಿ ಅದರ ಎರಡನೇ ಆವೃತ್ತಿಯಲ್ಲಿಯೂ ಅವರು ಮುಂದುವರೆದರು, ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರೊಂದಿಗೆ.<ref>{{cite news|title=Harbhajan, Mohanlal to be brand ambassadors for Kochi Marathon|url=http://www.business-standard.com/article/pti-stories/harbhajan-mohanlal-to-be-brand-ambassadors-for-kochi-marathon-114092300940_1.html|access-date=13 December 2016|work=[[Business Standard]]|agency=[[Press Trust of India]]|date=23 September 2014|archive-url=https://web.archive.org/web/20161220110910/http://www.business-standard.com/article/pti-stories/harbhajan-mohanlal-to-be-brand-ambassadors-for-kochi-marathon-114092300940_1.html|archive-date=20 December 2016|url-status=live}}</ref> ೨೦೧೬ ರ ಮೇ ತಿಂಗಳಲ್ಲಿ, ಮನರಂಜನಾ ಕಂಪನಿ ಹಾಟ್ಸ್ಟಾರ್ ತನ್ನ ಮಾರುಕಟ್ಟೆಯನ್ನು ದಕ್ಷಿಣ ಭಾರತದ ಪ್ರೇಕ್ಷಕರಿಗೆ ವಿಸ್ತರಿಸುವ ಭಾಗವಾಗಿ, ತನ್ನ ಮಲಯಾಳಂ ವಿಷಯಕ್ಕೆ ಮೋಹನ್ಲಾಲ್ ಅವರನ್ನು ಬ್ರಾಂಡ್ ರಾಯಭಾರಿಯನ್ನಾಗಿ ಘೋಷಿಸಿತು. ದೂರದರ್ಶನ, ಮುದ್ರಣ, ಹೊರಾಂಗಣ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಅವರ ಆರು ವಾರಗಳ ಬಹು-ಮಾಧ್ಯಮ ಜಾಹೀರಾತು ಅಭಿಯಾನವನ್ನು ಅವರು ಎಂಡೋರ್ಸ್ ಮಾಡಿದರು.<ref>{{cite news|title=Hotstar campaign to reach out to market in South|url=http://www.thehindubusinessline.com/news/hotstar-campaign-to-reach-out-to-market-in-south/article8594052.ece|access-date=11 December 2016|work=[[The Hindu Business Line]]|date=13 May 2016|archive-date=16 September 2021|archive-url=https://web.archive.org/web/20210916163234/https://www.thehindubusinessline.com/news/hotstar-campaign-to-reach-out-to-market-in-south/article8594052.ece|url-status=live}}</ref><ref>{{Cite news|url=https://timesofindia.indiatimes.com/entertainment/malayalam/movies/news/mohanlal-takes-on-volleyball-for-army/articleshow/62725974.cms|title=Mohanlal takes on volleyball for army|work=The Times of India|access-date=2 February 2018|archive-url=https://web.archive.org/web/20180602050839/https://timesofindia.indiatimes.com/entertainment/malayalam/movies/news/mohanlal-takes-on-volleyball-for-army/articleshow/62725974.cms|archive-date=2 June 2018|url-status=live}}</ref>
೨೦೨೬ ರಲ್ಲಿ, ಅವರು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಸದ್ಭಾವನಾ ದೂತರಾದರು ಮತ್ತು ಪ್ರಿಯದರ್ಶನ್ ನಿರ್ದೇಶನದ ಜಾಹೀರಾತು ಚಿತ್ರದಲ್ಲಿ ಯಾವುದೇ ಸಂಭಾವನೆಯಿಲ್ಲದೆ ನಟಿಸಿದರು.<ref>{{Cite news|url=https://keralakaumudi.com/news/mobile/news.php?id=1710724&u=minister-kb-ganesh-kumar-interview|title=കെഎസ്ആർടിസി പരസ്യത്തിൽ അഭിനയിക്കാൻ മോഹൻലാൽ എത്ര രൂപ വാങ്ങി? തുറന്നുപറഞ്ഞ് ഗണേശ് കുമാർ|work=Kerala Kaumudi|access-date=7 March 2026|date=6 March 2026}}</ref>
### ವ್ಯಾಪಾರ ಮತ್ತು ಇತರ ಉದ್ಯಮಗಳು
[[File:Mohanlal CCL 3 Opening.jpg|thumb|upright|CCL 3 ಉದ್ಘಾಟನೆಯಲ್ಲಿ ಮೋಹನ್ಲಾಲ್|alt=Mohanlal singing at the CCL opening ceremony]]
ಮೋಹನ್ಲಾಲ್ ಚಲನಚಿತ್ರ ನಿರ್ಮಾಣ ಮತ್ತು ವಿತರಣೆ, ರೆಸ್ಟೋರೆಂಟ್ಗಳು ಮತ್ತು ಪ್ಯಾಕೇಜ್ ಮಸಾಲೆಗಳು ಸೇರಿದಂತೆ ಹಲವಾರು ವ್ಯಾಪಾರ ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಸಂಯೋಜಿಸಿದ್ದಾರೆ. ೧೯೮೦ ರ ದಶಕದಲ್ಲಿ ಅವರು ಮಮ್ಮೂಟ್ಟಿ, ಐ.ವಿ. ಶಶಿ, ಸೀಮಾ ಮತ್ತು ಸೆಂಚುರಿ ಕೊಚುಮನ್ ಜೊತೆಗೆ ಕ್ಯಾಸಿನೋ ಎಂಬ ನಿರ್ಮಾಣ ಕಂಪನಿಯನ್ನು ಸಹ-ಮಾಲೀಕತ್ವ ಹೊಂದಿದ್ದರು. ಈ ನಿರ್ಮಾಣ ಸಂಸ್ಥೆಯು 'ಆದಿಯೋಳುಕ್ಕುಕಳ್' (೧೯೮೪), 'ಕರಿಂಪಿನ್ ಪೂವಿನಕ್ಕರೆ' (೧೯೮೫), 'ಗಾಂಧಿನಗರ್ ೨ನೇ ಸ್ಟ್ರೀಟ್' (೧೯೮೬) ಮತ್ತು 'ನಾಡೋಡಿಕ್ಕಟ್ಟು' (೧೯೮೭) ನಂತಹ ವಾಣಿಜ್ಯಿಕವಾಗಿ ಯಶಸ್ವಿ ಚಿತ್ರಗಳನ್ನು ನಿರ್ಮಿಸಿತು.<ref>{{Cite web|date=2 August 2016|title=When Mammootty And Mohanlal Produced Films For Each Other!|url=https://www.filmibeat.com/malayalam/news/2016/when-mammootty-and-mohanlal-produced-films-for-each-other-236031.html|access-date=20 July 2021|work=filmibeat.com|language=en|archive-date=16 July 2021|archive-url=https://web.archive.org/web/20210716105401/https://www.filmibeat.com/malayalam/news/2016/when-mammootty-and-mohanlal-produced-films-for-each-other-236031.html|url-status=live}}</ref><ref>{{cite news |title=Mammootty owned a production house with Mohanlal! |url=https://timesofindia.indiatimes.com/entertainment/malayalam/movies/did-you-know/mammootty-owned-a-production-house-with-mohanlal/articleshow/45345886.cms |website=The Times of India |archive-url=https://web.archive.org/web/20220706175210/https://timesofindia.indiatimes.com/entertainment/malayalam/movies/did-you-know/mammootty-owned-a-production-house-with-mohanlal/articleshow/45345886.cms |archive-date=6 July 2022}}</ref> ಅವರು ಮ್ಯಾಕ್ಸ್ಲ್ಯಾಬ್ ಸಿನೆಮಾಸ್ ಮತ್ತು ಎಂಟರ್ಟೈನ್ಮೆಂಟ್ಸ್ ಅನ್ನು ಹೊಂದಿದ್ದಾರೆ, ಇದು ಚಲನಚಿತ್ರ ವಿತರಣಾ ಕಂಪನಿಯಾಗಿದೆ.<ref>{{cite web |last=Moviebuzz |title=No MG for Mohanlal! |url=http://www.sify.com/movies/no-mg-for-mohanlal-news-malayalam-kkfspcefdfdsi.html |archive-url=https://web.archive.org/web/20151224085327/http://www.sify.com/movies/no-mg-for-mohanlal-news-malayalam-kkfspcefdfdsi.html |archive-date=24 December 2015 |website=[[Sify]] |access-date=6 December 2015 |date=13 March 2009 |url-status=dead}}</ref> ಅವರು ವಿಸ್ಮಯಾಸ್ ಮ್ಯಾಕ್ಸ್ ಅನ್ನು ಪ್ರಾರಂಭಿಸಿದರು. ಇದು ತಿರುವನಂತಪುರದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಚಿತ್ರದ ಪೂರ್ವ ಮತ್ತು ನಂತರದ ನಿರ್ಮಾಣ ಸ್ಟುಡಿಯೋ ಮತ್ತು ತಿರುವನಂತಪುರದ ಕಿನ್ಫ್ರಾ ಚಲನಚಿತ್ರ ಮತ್ತು ವಿಡಿಯೋ ಪಾರ್ಕ್ನಲ್ಲಿ ಡಬ್ಬಿಂಗ್ ಕಲಾವಿದರಿಗಾಗಿ ಕಾಲೇಜಾಗಿದೆ. ಕಂಪನಿಯ ನಿರ್ವಹಣೆಯನ್ನು ನಂತರ ಏರೀಸ್ ಗುಂಪಿನ ಸೋಹನ್ ರಾಯ್ ವಹಿಸಿಕೊಂಡರು, ಇದನ್ನು ಈಗ ಏರೀಸ್ ವಿಸ್ಮಯಾಸ್ ಮ್ಯಾಕ್ಸ್ ಎಂದು ಮರುನಾಮಕರಣ ಮಾಡಲಾಗಿದೆ. ಮೋಹನ್ಲಾಲ್ ಅದರ ಬ್ರಾಂಡ್ ರಾಯಭಾರಿಯಾಗಿ ಮುಂದುವರೆದಿದ್ದಾರೆ. ಅವರು ಪ್ರಣವಂ ಆರ್ಟ್ಸ್ ಇಂಟರ್ನ್ಯಾಷನಲ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಚಿತ್ರಗಳನ್ನು ನಿರ್ಮಿಸಿದ್ದಾರೆ.<ref>{{cite news|url=http://indianexpress.com/article/entertainment/regional/mohanlals-vismayas-max-studio-taken-over-by-aries-group/|title=Mohanlal's Vismayas Max Studio taken over by Aries group|work=[[The Indian Express]]|agency=[[Indo-Asian News Service]]|date=11 July 2014|access-date=12 July 2014|archive-url=https://web.archive.org/web/20161205145400/http://indianexpress.com/article/entertainment/regional/mohanlals-vismayas-max-studio-taken-over-by-aries-group/|archive-date=5 December 2016|url-status=live}}</ref>
ಅವರು ಭಾರತ ಮತ್ತು ವಿದೇಶಗಳಲ್ಲಿ ರೆಸ್ಟೋರೆಂಟ್ಗಳನ್ನು ಹೊಂದಿದ್ದಾರೆ. ೨೦೦೨ ರಲ್ಲಿ ಸ್ಥಾಪಿಸಲಾದ ದುಬೈನಲ್ಲಿ ಮೋಹನ್ಲಾಲ್ಸ್ ಟೇಸ್ಟ್ಬಡ್ಸ್ ಎಂಬ ಸರಪಳಿ ಮತ್ತು ೨೦೦೪ ರ ಫೆಬ್ರವರಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಅದೇ ಹೆಸರಿನ ಮಸಾಲೆಗಳು, ಉಪ್ಪಿನಕಾಯಿಗಳು, ಮಸಾಲೆಗಳು ಮತ್ತು ಕರಿಮಸಾಲೆ ಪುಡಿ ಬ್ರಾಂಡ್ ಅನ್ನು ಪ್ರಾರಂಭಿಸಿದರು. ೨೦೦೭ ರಿಂದ, ಈಸ್ಟರ್ನ್ ಗ್ರೂಪ್ ಬ್ರಾಂಡ್ನಲ್ಲಿ ಬಹುಪಾಲು ಪಾಲನ್ನು ಹೊಂದಿದೆ.<ref>{{cite news|url=http://timesofindia.indiatimes.com/business/india-business/Mohanlal-sells-Taste-Buds-to-Eastern-group/articleshow/2605816.cms|title=Mohanlal sells Taste Buds to Eastern group|work=[[The Times of India]]|last=Tejaswi|first=Mini Joseph|date=8 December 2007|access-date=8 May 2009|archive-url=https://web.archive.org/web/20161205145850/http://timesofindia.indiatimes.com/business/india-business/Mohanlal-sells-Taste-Buds-to-Eastern-group/articleshow/2605816.cms|archive-date=5 December 2016|url-status=live}}</ref> ೨೦೦೬ ರಲ್ಲಿ, ಅವರು ಬೆಂಗಳೂರಿನಲ್ಲಿ 'ದಿ ಹಾರ್ಬರ್ ಮಾರ್ಕೆಟ್' ಎಂಬ ಸಮುದ್ರಾಹಾರ ರೆಸ್ಟೋರೆಂಟ್ ಅನ್ನು ತೆರೆದರು<ref>{{cite news|last=Chibber|first=Mini Anthikad|title=Stirring it up with Mohanlal|url=http://www.thehindu.com/todays-paper/tp-features/tp-metroplus/stirring-it-up-with-mohanlal/article3190569.ece|access-date=13 January 2017|work=[[The Hindu]]|date=8 April 2006|archive-url=https://web.archive.org/web/20170113183016/http://www.thehindu.com/todays-paper/tp-features/tp-metroplus/stirring-it-up-with-mohanlal/article3190569.ece|archive-date=13 January 2017|url-status=live}}</ref> ಮತ್ತು ಕೊಚ್ಚಿಯಲ್ಲಿ ಟ್ರಾವೆನ್ಕೋರ್ ಕೋರ್ಟ್ ಎಂಬ ಹೋಟೆಲ್ ಅನ್ನು ತೆರೆದರು.<ref>{{cite news|last=Nair|first=R. Madhavan|title=Colourful feast for the eyes|url=http://www.thehindu.com/todays-paper/tp-features/tp-fridayreview/colourful-feast-for-the-eyes/article3231281.ece|access-date=13 January 2017|work=[[The Hindu]]|date=10 November 2006|archive-date=6 January 2024|archive-url=https://web.archive.org/web/20240106052349/https://www.thehindu.com/todays-paper/tp-features/tp-fridayreview/colourful-feast-for-the-eyes/article3231281.ece|url-status=live}}</ref> ಅವರ ಇತರ ವ್ಯಾಪಾರ ಉದ್ಯಮಗಳಲ್ಲಿ ಯುನಿರಾಯಲ್ ಮರೀನ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ ಸೇರಿವೆ — ಇದು ಕೋಝಿಕ್ಕೋಡ್ ಮೂಲದ ಸಮುದ್ರಾಹಾರ ರಫ್ತು ಕಂಪನಿಯಾಗಿದ್ದು, ೧೯೯೨ ರಿಂದ ಅವರು ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದಾರೆ.<ref>{{cite web|author=Bloomberg|title=V. Mohanlal: Executive Profile & Biography|url=https://www.bloomberg.com/research/stocks/people/person.asp?personId=24929476&capId=20387802|publisher=[[Bloomberg L.P.]]|access-date=13 January 2017|date=21 August 1992|archive-url=https://web.archive.org/web/20170116162824/http://www.bloomberg.com/research/stocks/people/person.asp?personId=24929476&capId=20387802|archive-date=16 January 2017|url-status=live}}</ref> ಅವರು ೨೦೦೯ ರಲ್ಲಿ ಸ್ಥಾಪಿಸಲಾದ ಕೊಚ್ಚಿಯ ತ್ರಿಪ್ಪುನಿತುರಾದಲ್ಲಿನ ಜೋಸ್ ಥಾಮಸ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ನ ಸಹ-ಸ್ಥಾಪಕ, ಪಾಲುದಾರ ಮತ್ತು ಅಧ್ಯಕ್ಷರಾಗಿದ್ದಾರೆ.<ref>{{cite news|url=https://www.indiatoday.in/magazine/leisure/story/20090413-creativity-at-a-new-address-739410-2009-04-02|title=Creativity at a new address|work=[[India Today]]|last=Ravindran|first=Nirmala|date=3 April 2009|access-date=6 May 2012|archive-url=https://web.archive.org/web/20161205153355/http://indiatoday.intoday.in/story/Creativity+at+a+new+address/1/35066.html|archive-date=5 December 2016|url-status=live}}</ref> ಅವರು ಕ್ಲೀನರ್ಜೆನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದು ಜೈವಿಕ ಅನಿಲೀಕರಣಕ್ಕಾಗಿ ಜೈವಿಕ ವಸ್ತುಗಳ ಉತ್ಪಾದನೆ ಮತ್ತು ಪೂರೈಕೆಗಾಗಿ ಕಂಪನಿಯಾಗಿದೆ.<ref>{{cite press release|last=Hatfield|first=Jessica|title=Clenergen India Private Limited Appoints Mohanlal As Its Non-Executive Director|url=http://www.free-press-release.com/news-clenergen-india-private-limited-appoints-mohanlal-as-its-non-executive-director-1272920150.html|location=United States|publisher=Clenergen India|agency=Free Press Release|date=6 April 2014|access-date=6 May 2014|archive-date=11 October 2020|archive-url=https://web.archive.org/web/20201011170919/https://www.tptptp.com/|url-status=live}}</ref>
೨೦೦೯ ರಲ್ಲಿ, ಮೋಹನ್ಲಾಲ್ ಪ್ರಿಯದರ್ಶನ್ ಜೊತೆಗೆ ಕೊಚ್ಚಿ ಮೂಲದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡಕ್ಕೆ ಬಿಡ್ ಮಾಡಲು ಪ್ರಯತ್ನಿಸಿದರು; ನಿಯಮಗಳಲ್ಲಿನ ಬದಲಾವಣೆಯ ನಂತರ ಸಾಕಷ್ಟು ಹಣವನ್ನು ಸಂಗ್ರಹಿಸಲು ವಿಫಲವಾದ ಕಾರಣ ಅವರು ಬಿಡ್ ಅನ್ನು ಹಿಂತೆಗೆದುಕೊಂಡರು.<ref name="IPL"/><ref>{{cite news|url=http://timesofindia.indiatimes.com/news/Keralas-dream-to-have-IPL-team-suffers-reversal/articleshow/5648755.cms|work=[[The Times of India]]|title=Kerala's dream to have IPL team suffers reversal|agency=[[Press Trust of India]]|date=5 March 2010|access-date=10 March 2010|archive-url=https://web.archive.org/web/20161205153942/http://timesofindia.indiatimes.com/news/Keralas-dream-to-have-IPL-team-suffers-reversal/articleshow/5648755.cms|archive-date=5 December 2016|url-status=live}}</ref> ೨೦೧೨ ಮತ್ತು ೨೦೧೩ ರಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಮೋಹನ್ಲಾಲ್ ಕೇರಳ ಸ್ಟ್ರೈಕರ್ಸ್ ತಂಡದ ನಾಯಕರಾಗಿದ್ದರು.<ref>[http://keralastrikers.in/ Official site — Kerala Strikers]{{Dead link|date=July 2026 |bot=InternetArchiveBot }}</ref>
===ಪಲಾಯನ ಕಲೆ===
೨೦೦೮ ರಲ್ಲಿ, ಮೋಹನ್ಲಾಲ್ ತಿರುವನಂತಪುರದಲ್ಲಿ "ಬರ್ನಿಂಗ್ ಇಲ್ಯೂಷನ್" ಎಂಬ ಸ್ಟಂಟ್ ಅನ್ನು ನಿರ್ವಹಿಸಲು ಮಾಂತ್ರಿಕ ಗೋಪಿನಾಥ್ ಮುತುಕಾಡ್ ಅವರ ಅಡಿಯಲ್ಲಿ ೧೮ ತಿಂಗಳುಗಳ ಕಾಲ ಗುಪ್ತ ಪಲಾಯನ ಕಲಾವಿದ ತರಬೇತಿಗೆ ಒಳಗಾದರು.<ref>{{cite news|url=https://nmp1toi.indiatimes.com/entertainment/malayalam/movies/did-you-know/Mohanlal-as-escape-artist/articleshow/45650012.cms|archive-url=https://web.archive.org/web/20230901133010/https://nmp1toi.indiatimes.com/entertainment/malayalam/movies/did-you-know/Mohanlal-as-escape-artist/articleshow/45650012.cms|url-status=dead|archive-date=1 September 2023|title=Mohanlal as escape artist!|work=[[India Times]]|access-date=21 November 2019}}</ref> ಆದಾಗ್ಯೂ, ಅಭಿಮಾನಿಗಳು ಮತ್ತು ಸಮಕಾಲೀನರ ಒತ್ತಡದಿಂದಾಗಿ, ಈ ಕೃತ್ಯವನ್ನು ರದ್ದುಗೊಳಿಸಲಾಯಿತು. ಈ ಕಾರ್ಯಕ್ರಮವನ್ನು ಕೇರಳ ಪೊಲೀಸ್, ಪ್ರವಾಸೋದ್ಯಮ ಇಲಾಖೆ ಮತ್ತು ಕೇರಳ ರಾಜ್ಯ ಯುವ ಕಲ್ಯಾಣ ಮಂಡಳಿಯು 'ವಿಸ್ಮಯಂ ೨೦೦೮' ರ ಭಾಗವಾಗಿ ಸಂಯೋಜಿಸಿತ್ತು, ಇದು ಮಾಂತ್ರಿಕರ ಅಂತರರಾಷ್ಟ್ರೀಯ ಸಮ್ಮೇಳನವಾಗಿತ್ತು. ಈ ಸ್ಟಂಟ್ ಮೋಹನ್ಲಾಲ್ ಅವರನ್ನು ಕೈಕೋಳಗಳಿಗೆ ಸಿಲುಕಿಸಿ ಸರಪಳಿಗಳಲ್ಲಿ ಸುತ್ತಿ, ಪೆಟ್ಟಿಗೆಯೊಳಗೆ ಇರಿಸಿ, ಬೆಂಕಿಯ ಚೆಂಡಿನಲ್ಲಿ ಎಸೆಯುವುದನ್ನು ಒಳಗೊಂಡಿತ್ತು. ಅದರಿಂದ ಅವರು ಪಾರಾಗಬೇಕಾಗಿತ್ತು.<ref>{{cite news|url=http://www.dnaindia.com/india/report-mohanlal-gives-up-his-shot-at-magic-1161104|title=Mohanlal gives up his shot at magic|work=[[Daily News and Analysis]]|date=23 April 2008|access-date=8 November 2014|agency=[[Press Trust of India]]|archive-url=https://web.archive.org/web/20161205155253/http://www.dnaindia.com/india/report-mohanlal-gives-up-his-shot-at-magic-1161104|archive-date=5 December 2016|url-status=live}}</ref>
ಮಾಂತ್ರಿಕ ಸಾಮ್ರಾಜ್ ಮೋಹನ್ಲಾಲ್ ಅವರಿಗೆ ಸ್ಟಂಟ್ ವಿರುದ್ಧ ಸಲಹೆ ನೀಡಿದರು ಮತ್ತು ಅದನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡರು.<ref>{{cite news|url=http://www.news18.com/news/india/mohanlal-plans-daredevil-stunt-magicians-frown-287683.html|title=Mohanlal plans daredevil stunt, magicians frown|work=[[CNN-News18]]|date=21 April 2008|access-date=6 May 2012|archive-url=https://web.archive.org/web/20161205155533/http://www.news18.com/news/india/mohanlal-plans-daredevil-stunt-magicians-frown-287683.html|archive-date=5 December 2016|url-status=live}}</ref> ಅಮ್ಮ ಅಧ್ಯಕ್ಷ ಇನ್ನೋಸೆಂಟ್ ಕೂಡ ಮೋಹನ್ಲಾಲ್ ಅವರನ್ನು ಅಪಾಯಕಾರಿ ಪ್ರದರ್ಶನದಿಂದ ದೂರವಿರಲು ಒತ್ತಾಯಿಸಿದರು.<ref>{{cite news|url=http://www.hindustantimes.com/regional-movies/mohanlal-wilts-under-pressure-withdraws-from-stunt-act/story-UtjgWjYVRcwwbMThmGTkiI.html|title=Mohanlal wilts under pressure, withdraws from stunt act|agency=[[Indo-Asian News Service]]|date=24 April 2008|access-date=12 May 2009|work=[[Hindustan Times]]|archive-url=https://web.archive.org/web/20161205160018/http://www.hindustantimes.com/regional-movies/mohanlal-wilts-under-pressure-withdraws-from-stunt-act/story-UtjgWjYVRcwwbMThmGTkiI.html|archive-date=5 December 2016|url-status=live}}</ref> ಈ ಸ್ಟಂಟ್ನ ಉದ್ದೇಶವು ಯುವಕರಿಗೆ ಜೀವನದ ಸವಾಲುಗಳನ್ನು ಎದುರಿಸಲು ಪ್ರೇರೇಪಿಸುವುದಾಗಿತ್ತು. ಮೋಹನ್ಲಾಲ್ ೫೦-೫೦ ಅಪಾಯವನ್ನು ಒಪ್ಪಿಕೊಂಡರು ಆದರೆ ಯಶಸ್ಸಿನ ಭರವಸೆ ವ್ಯಕ್ತಪಡಿಸಿದರು.<ref>{{cite news|url=http://www.thehindu.com/todays-paper/tp-national/tp-kerala/lsquoEscape-act-a-big-challengersquo/article15205851.ece|title='Escape act a big challenge'|author=<!--Not stated--> reporter|date=18 April 2008|work=[[The Hindu]]|access-date=8 November 2014|archive-url=https://web.archive.org/web/20161205160229/http://www.thehindu.com/todays-paper/tp-national/tp-kerala/lsquoEscape-act-a-big-challengersquo/article15205851.ece|archive-date=5 December 2016|url-status=live}}</ref> ಮುತುಕಾಡ್ ಒತ್ತಿಹೇಳಿದರು, ಬೆಂಕಿ ಪಲಾಯನವು ಅತ್ಯಂತ ಅಪಾಯಕಾರಿ ಕೃತ್ಯಗಳಲ್ಲಿ ಒಂದಾಗಿದ್ದರೂ, ಮೋಹನ್ಲಾಲ್ ಅದನ್ನು ಪರಿಪೂರ್ಣಗೊಳಿಸಲು ಅಭ್ಯಾಸ ಮಾಡುತ್ತಿದ್ದಾರೆ.<ref>{{cite news|url=http://www.hindustantimes.com/entertainment/regional/actor-mohanlal-s-stint-with-magic/article1-303913.aspx|title=Actor Mohanlal's stint with magic|agency=[[Indo-Asian News Service]]|date=11 April 2008|work=[[Hindustan Times]]|access-date=8 November 2014|archive-url=https://web.archive.org/web/20141108192317/http://www.hindustantimes.com/entertainment/regional/actor-mohanlal-s-stint-with-magic/article1-303913.aspx|archive-date=8 November 2014}}</ref>
೨೦೧೪ ರಲ್ಲಿ, ಮೋಹನ್ಲಾಲ್ ಮುತುಕಾಡ್ ಸ್ಥಾಪಿಸಿದ ತಿರುವನಂತಪುರದಲ್ಲಿ ಮ್ಯಾಜಿಕ್ ಥೀಮ್ ಸಂಕೀರ್ಣವಾದ ಮ್ಯಾಜಿಕ್ ಪ್ಲಾನೆಟ್ನ ಉದ್ಘಾಟನಾ ಸಮಾರಂಭದಲ್ಲಿ ಅಪಾಯ-ಮುಕ್ತ ಮ್ಯಾಜಿಕ್ ಅನ್ನು ಪ್ರದರ್ಶಿಸಿದರು. ಕೇರಳದ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮತ್ತು ಮೋಹನ್ಲಾಲ್ ಅವರ ಕೃತ್ಯವು ಹುಡುಗಿಯೊಬ್ಬಳನ್ನು ಲೆವಿಟೇಟ್ ಮಾಡುವುದನ್ನು ಒಳಗೊಂಡಿತ್ತು.<ref>{{cite news|url=https://www.newindianexpress.com/cities/thiruvananthapuram/2014/nov/01/actor-turns-magician-at-magic-planets-inaugural-677674.html|title=Actor Turns Magician at Magic Planet's Inaugural|agency=Express News Service|date=1 November 2014|work=[[The New Indian Express]]|access-date=8 November 2014|archive-url=https://web.archive.org/web/20161205161221/http://www.newindianexpress.com/cities/thiruvananthapuram/2014/nov/01/Actor-Turns-Magician-at-Magic-Planets-Inaugural-677674.html|archive-date=5 December 2016|url-status=live}}</ref>
==ಮಾಧ್ಯಮ ಚಿತ್ರಣ ಮತ್ತು ಕಲಾತ್ಮಕತೆ==
[[File:Mohanlal with the team.jpg|upright|thumb|alt=Mohanlal sitting in a chair|2006 ರಲ್ಲಿ ಪುಸ್ತಕ ಅನಾವರಣ ಸಮಾರಂಭದಲ್ಲಿ ಮೋಹನ್ಲಾಲ್]]
ಮೋಹನ್ಲಾಲ್ ಅವರನ್ನು ಭಾರತೀಯ ಮಾಧ್ಯಮದಲ್ಲಿ ಅತ್ಯಂತ ಬಹುಮುಖ ನಟರಲ್ಲಿ ಒಬ್ಬರೆಂದು ವಿವರಿಸಲಾಗಿದೆ ಮತ್ತು ಅವರ ನೈಸರ್ಗಿಕ ಅಭಿನಯ ಶೈಲಿಗಾಗಿ ಪ್ರಶಂಸಿಸಲಾಗಿದೆ.<ref name="ndtvgoodtimes"/><ref name="hindu2">{{cite news | url=http://www.hindu.com/thehindu/mag/2006/02/19/stories/2006021900500500.htm | location=Chennai | title=In for the long haul | date=19 February 2006 | access-date=28 May 2011 | archive-url=https://web.archive.org/web/20111208094212/http://www.hindu.com/thehindu/mag/2006/02/19/stories/2006021900500500.htm | archive-date=8 December 2011 | work=[[The Hindu]]|url-access=subscription | url-status=dead }}</ref><ref name="aag">[https://timesofindia.indiatimes.com/entertainment/hindi/movie-details/ram-gopal-varma-ki-aag/movieshow/61258127.cms Ram Gopal Varma ki.. Aag!] {{Webarchive|url=https://web.archive.org/web/20180812191738/https://timesofindia.indiatimes.com/entertainment/hindi/movie-details/ram-gopal-varma-ki-aag/movieshow/61258127.cms |date=12 August 2018 }}. Indiatimes.com. August 2007. Retrieved on 6 May 2012.</ref><ref>{{cite news | url=http://www.hindu.com/thehindu/gallery/1222/ | location=Chennai | work=The Hindu|url-access=subscription | title=Rare Honour: Mohanlal joins Territorial Army | access-date=29 May 2011 | archive-url=https://web.archive.org/web/20110809095012/http://www.hindu.com/thehindu/gallery/1222/ | archive-date=9 August 2011 | url-status=live }}</ref><ref>[http://www.hindu.com/thehindu/mp/2003/06/23/stories/2003062300110202.htm The Hindu : New action hero?] {{Webarchive|url=https://web.archive.org/web/20101129091013/http://hindu.com/thehindu/mp/2003/06/23/stories/2003062300110202.htm|date=29 November 2010}} (23 June 2003)</ref> ಮೋಹನ್ಲಾಲ್ ಅವರ "ಲಾಲೆಟ್ಟನ್" ಎಂಬ ಅಡ್ಡಹೆಸರಿನಿಂದಲೂ ಕರೆಯಲ್ಪಡುತ್ತಾರೆ.<ref>{{cite web|url=https://www.deccanchronicle.com/entertainment/mollywood/030717/lalettan-to-grace-small-screen.html|title=Lalettan to grace small screen|date=3 July 2017|website=Deccan Chronicle|access-date=23 January 2019|archive-url=https://web.archive.org/web/20180722214154/https://www.deccanchronicle.com/entertainment/mollywood/030717/lalettan-to-grace-small-screen.html|archive-date=22 July 2018|url-status=live}}</ref> ರೀಡರ್ಸ್ ಡೈಜೆಸ್ಟ್ ಇಂಡಿಯಾ ಅವರನ್ನು ೨೦೦೪ ರಲ್ಲಿ "ಸಿನೆಮಾದ ಎಲ್ಲಾ ವ್ಯಾಪಾರಗಳ ಜಾಕ್ ಮತ್ತು ಅನೇಕ ಮಾಸ್ಟರ್ಸ್" ಎಂದು ವಿವರಿಸಿತು.<ref name="rd"/> ೨೦೧೦ ರಲ್ಲಿ ರೀಡರ್ಸ್ ಡೈಜೆಸ್ಟ್ ನಡೆಸಿದ ಸಮೀಕ್ಷೆಯಲ್ಲಿ ಅವರು ಭಾರತದ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳ ಪಟ್ಟಿಯಲ್ಲಿ ೮೦ ನೇ ಸ್ಥಾನದಲ್ಲಿದ್ದರು.<ref>[http://www.sify.com/news/list-of-reader-s-digest-s-india-s-most-trusted-to-go-with-abdul-kalam-ratan-tata-are-india-s-most-trusted-survey-news-national-kdcsacchfhf.html List of Reader's Digest's India's Most Trusted (To go with Abdul Kalam, Ratan Tata are India's most trusted: Survey)] {{Webarchive|url=https://web.archive.org/web/20120816040706/http://www.sify.com/news/list-of-reader-s-digest-s-india-s-most-trusted-to-go-with-abdul-kalam-ratan-tata-are-india-s-most-trusted-survey-news-national-kdcsacchfhf.html |date=16 August 2012 }}. Sify.com (2 March 2010). Retrieved on 6 May 2012.</ref> ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೋಹನ್ಲಾಲ್ ಅವರನ್ನು "ಯಾವುದೇ ಪಾತ್ರಕ್ಕೆ ಸುಲಭವಾಗಿ ಹೊಂದಿಕೊಳ್ಳಬಲ್ಲ ದೇಶದ ಅತ್ಯುತ್ತಮ ನಟರಲ್ಲಿ ಒಬ್ಬರು" ಎಂದು ವಿವರಿಸಿದ್ದಾರೆ.<ref>{{cite news | url=http://www.hindu.com/mp/2003/09/18/stories/2003091800800200.htm | location=[[Chennai]] | work=[[The Hindu]]|url-access=subscription | title=Lal salaam! | date=18 September 2003 | access-date=25 May 2011 | archive-url=https://web.archive.org/web/20080401073340/http://www.hindu.com/mp/2003/09/18/stories/2003091800800200.htm | archive-date=1 April 2008 | url-status=dead }}</ref> ಭಾರತೀಯ ಚಲನಚಿತ್ರೋದ್ಯಮದಲ್ಲಿ ಅವರ ಸಮಕಾಲೀನರು ಮಲಯಾಳಂ ಚಲನಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಅವರನ್ನು ಹೆಚ್ಚಾಗಿ ಪ್ರಶಂಸಿಸಿದ್ದಾರೆ.<ref>{{Cite web|title=Mohanlal is India's pride, Kerala's treasure: Vijay to Dhanush, best quotes by Tamil actors on the Malayalam superstar. Rajinikanth, Suriya and more...|url=https://www.newindianexpress.com/galleries/entertainment/2020/may/20/mohanlal-is-indias-pride-keralas-treasure-vijay-to-dhanush-best-quotes-by-tamil-actors-on-the-m-102872.html|access-date=7 September 2021|website=The New Indian Express|date=20 May 2020 |archive-date=3 June 2020|archive-url=https://web.archive.org/web/20200603124847/https://www.newindianexpress.com/galleries/entertainment/2020/may/20/mohanlal-is-indias-pride-keralas-treasure-vijay-to-dhanush-best-quotes-by-tamil-actors-on-the-m-102872.html|url-status=live}}</ref><ref>{{Cite web|title=Mohanlal is the greatest actor we have in our country: Suriya on his 'Kaappaan' co-star|url=https://www.newindianexpress.com/entertainment/tamil/2019/sep/14/mohanlal-is-the-greatest-actor-we-have-in-our-country-suriya-on-his-kaappaan-co-star-2033651.html|access-date=2 July 2021|website=The New Indian Express|date=20 September 2019 |archive-date=9 July 2021|archive-url=https://web.archive.org/web/20210709182722/https://www.newindianexpress.com/entertainment/tamil/2019/sep/14/mohanlal-is-the-greatest-actor-we-have-in-our-country-suriya-on-his-kaappaan-co-star-2033651.html|url-status=live}}</ref><ref>{{Cite news|title=My admiration increases: Amitabh Bachchan after watching the trailer of Mohanlal's Marakkar|url=https://timesofindia.indiatimes.com/entertainment/malayalam/movies/news/my-admiration-increases-amitabh-bachchan-after-watching-the-trailer-of-mohanlals-marakkar/articleshow/74546739.cms|access-date=2 July 2021|website=The Times of India|language=en|archive-date=9 July 2021|archive-url=https://web.archive.org/web/20210709214758/https://timesofindia.indiatimes.com/entertainment/malayalam/movies/news/my-admiration-increases-amitabh-bachchan-after-watching-the-trailer-of-mohanlals-marakkar/articleshow/74546739.cms|url-status=live}}</ref>
೨೦೦೩ ರಲ್ಲಿ, ಮೋಹನ್ಲಾಲ್ ಅವರ ಚಲನಚಿತ್ರ ವೃತ್ತಿಯ ೨೫ ನೇ ವಾರ್ಷಿಕೋತ್ಸವದಂದು, ತಿರುವನಂತಪುರದಲ್ಲಿ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಒಂದು ವಾರದ ಆಚರಣೆ ಮತ್ತು ವೇದಿಕೆ ಪ್ರದರ್ಶನವನ್ನು ನಡೆಸಿದರು. ವೇದಿಕೆ ಪ್ರದರ್ಶನದಿಂದ ಬಂದ ಹಣವನ್ನು ದಾನಕ್ಕೆ ನೀಡಲಾಯಿತು.<ref>{{cite news | url=http://www.hindu.com/thehindu/mp/2003/08/21/stories/2003082100220202.htm | location=[[Chennai]] | work=[[The Hindu]]|url-access=subscription | title=Down memory lane | date=21 August 2003 | access-date=31 May 2011 | archive-url=https://web.archive.org/web/20101129052038/http://hindu.com/thehindu/mp/2003/08/21/stories/2003082100220202.htm | archive-date=29 November 2010 | url-status=dead }}</ref> ಮಲಯಾಳಂ ದೂರದರ್ಶನ ವಾಹಿನಿಗಳಾದ ಏಷ್ಯಾನೆಟ್ ಮತ್ತು ಸೂರ್ಯ ಟಿವಿ ಸಹ ವಾರ್ಷಿಕೋತ್ಸವವನ್ನು ಆಚರಿಸಲು ಪ್ರತ್ಯೇಕ ವೇದಿಕೆ ಪ್ರದರ್ಶನಗಳನ್ನು ನಡೆಸಿದವು.<ref>{{cite news | url=http://www.hindu.com/mp/2003/12/22/stories/2003122200220200.htm | location=[[Chennai]] | work=[[The Hindu]]|url-access=subscription | title=Showtime | date=22 December 2003 | access-date=31 May 2011 | archive-url=https://web.archive.org/web/20090925032600/http://www.hindu.com/mp/2003/12/22/stories/2003122200220200.htm | archive-date=25 September 2009 | url-status=dead }}</ref>
೧೯೮೦ ರ ದಶಕದಲ್ಲಿ, ಮೋಹನ್ಲಾಲ್ ಮತ್ತು ಮಮ್ಮೂಟ್ಟಿ ಮಲಯಾಳಂ ಚಲನಚಿತ್ರರಂಗದಲ್ಲಿ "ಸೂಪರ್ಸ್ಟಾರ್"ಗಳಾಗಿ ಹೊರಹೊಮ್ಮಿದರು, ಇದು ಉದ್ಯಮದಲ್ಲಿ ಅಭೂತಪೂರ್ವ ವಿದ್ಯಮಾನವನ್ನು ಗುರುತಿಸಿತು. ಇದು ಮಲಯಾಳಂ ಚಲನಚಿತ್ರರಂಗದ ಬದಲಾವಣೆಗೆ ಕಾರಣವಾಯಿತು, ಬಾಲಿವುಡ್ ಮತ್ತು ತಮಿಳು ಚಲನಚಿತ್ರ ಸಂಸ್ಕೃತಿಗಳನ್ನು ನೆನಪಿಸುವ ನಟ-ಪ್ರಧಾನ ಚಿತ್ರಗಳು ರೂಢಿಯಾದವು. ೧೯೮೮ ರಲ್ಲಿ 'ಇಂಡಿಯಾ ಟುಡೇ' ಗಮನಿಸಿದಂತೆ, ಚಲನಚಿತ್ರ ನಿರ್ಮಾಪಕರು ಈ ಸೂಪರ್ಸ್ಟಾರ್ಗಳಿಗೆ ಸರಿಹೊಂದುವಂತೆ ಪಾತ್ರಗಳನ್ನು ರೂಪಿಸಿದರು. ನಿರ್ದೇಶಕ ಐ.ವಿ. ಶಶಿ ಅವರು ಪ್ರೇಮ್ ನಜೀರ್ ಕೂಡ ಮೋಹನ್ಲಾಲ್ ಮತ್ತು ಮಮ್ಮೂಟ್ಟಿಯ ಜನಪ್ರಿಯತೆಯನ್ನು ಹೊಂದಿರಲಿಲ್ಲ ಎಂದು ಹೇಳಿದರು. ಅವರು "ವಿರಳ ಮತ್ತು ಸರಿಯಾದ ಮಿಶ್ರಣವಾದ ಮೋಡಿ ಮತ್ತು ಅಭಿನಯ ಸಾಮರ್ಥ್ಯ" ವನ್ನು ಹೊಂದಿದ್ದಾರೆ. ೧೯೮೮ ರಲ್ಲಿ, ಚಲನಚಿತ್ರ ನಿರ್ದೇಶಕ ಫಾಜಿಲ್ "ಮೋಹನ್ಲಾಲ್ ಇಂದು ದೇಶದ ಅತ್ಯಂತ ಹೊಂದಿಕೊಳ್ಳುವ ಮತ್ತು ಸೂಕ್ಷ್ಮ ನಟ. ಡಸ್ಟಿನ್ ಹಾಫ್ಮನ್ 'ಟೂಟ್ಸೀ' ನಲ್ಲಿ ಅಥವಾ ಸಿಲ್ವೆಸ್ಟರ್ ಸ್ಟಾಲೋನ್ 'ರಾಂಬೊ' ನಲ್ಲಿ ಮಾಡಿದ್ದನ್ನು ಅವರು ಸುಲಭವಾಗಿ ಮಾಡಬಲ್ಲರು" ಎಂದು ಹೇಳಿದರು.<ref>{{Cite web|url=https://www.indiatoday.in/magazine/society-the-arts/films/story/19881231-mammootty-and-mohan-lal-emerge-as-unprecedented-superstars-of-malayalam-films-798061-1988-12-31|archive-url = https://web.archive.org/web/20190918142917/https://www.indiatoday.in/magazine/society-the-arts/films/story/19881231-mammootty-and-mohan-lal-emerge-as-unprecedented-superstars-of-malayalam-films-798061-1988-12-31|archive-date = 18 September 2019|title = Mammootty and Mohan Lal emerge as unprecedented superstars of Malayalam films| date=31 December 1988 }}</ref>
೨೦೦೫ ರಲ್ಲಿ, ಮೋಹನ್ಲಾಲ್, ಮಮ್ಮೂಟ್ಟಿ ಮತ್ತು ದಿಲೀಪ್ ಅವರ ಚಿತ್ರಗಳು ಮಲಯಾಳಂ ಚಲನಚಿತ್ರರಂಗದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ೯೫ ಪ್ರತಿಶತವನ್ನು ಹೊಂದಿದ್ದವು. 'ದಿ ಹಿಂದೂ' "ಮಲಯಾಳಂ ಚಲನಚಿತ್ರವು ಅವರ ಸುತ್ತ ಸುತ್ತುತ್ತದೆ ಮತ್ತು ಅವರ ವಯಸ್ಸು ಮತ್ತು ಚಿತ್ರಣವನ್ನು ಮನಸ್ಸಿನಲ್ಲಿಟ್ಟುಕೊಂಡು ಚಿತ್ರಕಥೆಗಳನ್ನು ಬರೆಯಲಾಗುತ್ತದೆ" ಎಂದು ಬರೆಯಿತು. ಅವರು ವಿಶಿಷ್ಟ ಶೈಲಿಯ ಉಡುಪು, ಸಂಭಾಷಣೆ, ನೃತ್ಯ ಮತ್ತು ಹೋರಾಟದ ಅನುಕ್ರಮಗಳೊಂದಿಗೆ ಜೀವನಕ್ಕಿಂತ ದೊಡ್ಡದಾದ ಪಾತ್ರಗಳನ್ನು ನಿರ್ವಹಿಸಿದರು.<ref>[http://www.hindu.com/fr/2005/12/09/stories/2005120901230100.htm The Hindu : Entertainment Thiruvananthapuram / Cinema : Whither the heroine?] {{Webarchive|url=https://web.archive.org/web/20130928042749/http://www.hindu.com/fr/2005/12/09/stories/2005120901230100.htm|date=28 September 2013}} (9 December 2005)</ref><ref>T. N. Gopakumar [http://www.cscsarchive.org:8081/MediaArchive/art.nsf/94ff8a4a35a9b8876525698d002642a9/46344d1a8344a1f9652572df003429af/$FILE/A0190307.pdf Malayalam Cinema Faces a Threat] {{webarchive|url=https://web.archive.org/web/20110725213203/http://www.cscsarchive.org:8081/MediaArchive/art.nsf/94ff8a4a35a9b8876525698d002642a9/46344d1a8344a1f9652572df003429af/$FILE/A0190307.pdf |date=25 July 2011 }}</ref> ಕೇರಳದಾದ್ಯಂತ ಇರುವ ಮೋಹನ್ಲಾಲ್ ಅವರ ಅನೇಕ ಅಭಿಮಾನಿ ಸಂಘಗಳು ಹೊಸ ಬಿಡುಗಡೆಗಳ ಸುತ್ತ ಸದ್ದು ಮಾಡಲು ಮತ್ತು ಚಲನಚಿತ್ರ ಪರದೆಗಳಲ್ಲಿ ಉತ್ತಮ ಆರಂಭವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ. ಇದು ಕೇರಳದಲ್ಲಿ ಚಿತ್ರಗಳ ಯಶಸ್ಸಿಗೆ ನಿರ್ಣಾಯಕ ಅಂಶವಾಗಿದೆ.<ref>[http://www.hindu.com/fr/2005/12/30/stories/2005123001380100.htm The Hindu : Entertainment Thiruvananthapuram : Boom year for Mollywood] {{Webarchive|url=https://web.archive.org/web/20070921125535/http://www.hindu.com/fr/2005/12/30/stories/2005123001380100.htm|date=21 September 2007}} (30 December 2005)</ref> ೨೦೦೭ ರಲ್ಲಿ, ಕೆಲವು ಸಾಮಾಜಿಕ ಕಾರ್ಯಕರ್ತರು ವಿಸ್ಕಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮೋಹನ್ಲಾಲ್ ವಿರುದ್ಧ ಪ್ರತಿಭಟಿಸಿದರು, ಅದಕ್ಕೆ ಅವರು ಅನೇಕ ಇತರ ಭಾರತೀಯ ನಟರು ಅದೇ ರೀತಿ ಮಾಡುವಾಗ ತಮ್ಮನ್ನು ಮಾತ್ರ ಗುರಿಯಾಗಿಸುವುದು ಅನ್ಯಾಯ ಎಂದು ಪ್ರತಿಕ್ರಿಯಿಸಿದರು.<ref>{{cite news | url=https://news.bbc.co.uk/2/hi/south_asia/6364165.stm | work=[[BBC News]] | first=John | last=Mary | title=Trouble brews over alcohol ads | date=15 February 2007 | access-date=26 May 2011 | archive-url=https://web.archive.org/web/20110525140434/http://news.bbc.co.uk/2/hi/south_asia/6364165.stm | archive-date=25 May 2011 | url-status=live }}</ref>
೨೦೧೨ ರಲ್ಲಿ, ಅರಣ್ಯ ಇಲಾಖೆಯು ಮೋಹನ್ಲಾಲ್ ಅವರ ಮನೆಯಲ್ಲಿ ಆದಾಯ ತೆರಿಗೆ ದಾಳಿಯ ವೇಳೆ ಪತ್ತೆಯಾದ ಆನೆಯ ದಂತಗಳನ್ನು ಹೊಂದಿದ್ದಕ್ಕಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ, ೧೯೭೨ ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿತು.<ref>{{cite news| url=http://timesofindia.indiatimes.com/entertainment/regional/malayalam/news-and-interviews/Superstar-Mohanlal-booked-for-possessing-elephant-tusk/articleshow/14144301.cms | title= Superstar Mohanlal booked for possessing elephant tusk| date=15 June 2012 | work=[[The Times of India]]}}</ref> ನಂತರ, ದಂತಗಳನ್ನು ಮೋಹನ್ಲಾಲ್ ಅವರಿಗೆ ಹಿಂದಿರುಗಿಸಲಾಯಿತು.<ref>{{cite news|last=K. P.|first=Bhavadas|title=Court wonders whether the elephant tusk case is for publicity.|url=http://www.metromatinee.com/news-articles/court-wonders-whether-the-elephant-tusk-case-is-for-publicity-7651|access-date=5 January 2015|agency=Metromatinee|publisher=Metromatinee|date=22 January 2014|archive-url=https://web.archive.org/web/20150105113435/http://www.metromatinee.com/news-articles/court-wonders-whether-the-elephant-tusk-case-is-for-publicity-7651|archive-date=5 January 2015|url-status=dead}}</ref> ಕೆಳ ಅದಾಲತುಗಳು ಮತ್ತು ಕೇರಳ ಉಚ್ಚ ನ್ಯಾಯಾಲಯದಲ್ಲಿ, ರಾಜ್ಯ ಸರ್ಕಾರ ಮತ್ತು ಇಲಾಖೆ ಅಧಿಕಾರಿಗಳು ಮೋಹನ್ಲಾಲ್ ಪಕ್ಷಪಾತವನ್ನು ಆರೋಪಿಸಿ ಮತ್ತು ಈ ವಿಷಯದ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಹಲವಾರು ಅರ್ಜಿಗಳನ್ನು ವಜಾ ಮಾಡಲಾಯಿತು.<ref name="Bennett, Coleman & Co. Ltd"/><ref name="2013HC"/> ೨೦೧೩ ರಲ್ಲಿ, ಅರ್ಜಿಯನ್ನು ವಜಾಗೊಳಿಸುತ್ತಾ, "ರಾಜ್ಯ ಸರ್ಕಾರ ಅಥವಾ ಅದರ ಅಧಿಕಾರಿಗಳು ನಟನ ಪರವಾಗಿ ವರ್ತಿಸಿದ್ದಾರೆ ಎಂದು ತೋರಿಸಲು ಏನೂ ಇಲ್ಲ. ಅಲ್ಲದೆ, ಅರ್ಜಿದಾರರು ತನಿಖೆಯಲ್ಲಿ ಯಾವುದೇ ಅಕ್ರಮ ಅಥವಾ ಕ್ರಮಬಾಹಿರತೆಯನ್ನು ಸೂಚಿಸಲು ಸಾಧ್ಯವಾಗಿಲ್ಲ" ಎಂದು ಉಚ್ಚ ನ್ಯಾಯಾಲಯವು ತೀರ್ಮಾನಿಸಿತು.<ref name="2013HC">{{cite news |title=Tusk seizure case: court rules out graft |url=https://www.thehindu.com/news/national/kerala/tusk-seizure-case-court-rules-out-graft/article4827284.ece |access-date=20 May 2023 |work=[[The Hindu]] |date=19 June 2013 |archive-url=https://web.archive.org/web/20180702060445/https://www.thehindu.com/news/national/kerala/tusk-seizure-case-court-rules-out-graft/article4827284.ece|archive-date=2 July 2018|url-status=live}}</ref> ಅದೇ ರೀತಿ, ೨೦೧೪ ರಲ್ಲಿ, ಉಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಜಾಗೊಳಿಸಿತು ಮತ್ತು ಅರ್ಜಿದಾರರನ್ನು ಟೀಕಿಸಿತು, "ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ, ಆದರೆ ಅದು ಪ್ರಚಾರಕ್ಕಾಗಿ ಮಾತ್ರ" ಎಂದು ಹೇಳಿತು.<ref name="Bennett, Coleman & Co. Ltd">{{cite news|title=Are petitions against Mohanlal aimed at publicity, asks HC|url=http://timesofindia.indiatimes.com/city/kochi/Are-petitions-against-Mohanlal-aimed-at-publicity-asks-HC/articleshow/29125683.cms|access-date=5 January 2015|work=[[The Times of India]]|date=21 January 2014|archive-url=https://web.archive.org/web/20140131022328/http://timesofindia.indiatimes.com/city/kochi/Are-petitions-against-Mohanlal-aimed-at-publicity-asks-HC/articleshow/29125683.cms|archive-date=31 January 2014|url-status=live}}</ref>
'ಭರತಂ' ನಲ್ಲಿನ ಮೋಹನ್ಲಾಲ್ ಅವರ ಅಭಿನಯವನ್ನು ೧೦೦ ವರ್ಷಗಳ ಭಾರತೀಯ ಸಿನೆಮಾವನ್ನು ಆಚರಿಸುವ ಸಂದರ್ಭದಲ್ಲಿ 'ಫೋರ್ಬ್ಸ್ ಇಂಡಿಯಾ' "ಭಾರತೀಯ ಸಿನೆಮಾದ ೨೫ ಶ್ರೇಷ್ಠ ಅಭಿನಯ ಪ್ರದರ್ಶನಗಳು" ಪಟ್ಟಿಯಲ್ಲಿ ಸೇರಿಸಲಾಗಿದೆ.<ref>{{cite web|last1=Prasad|first1=Shishir|last2=Ramanath|first2=N. S.|last3=Mitter|first3=Sohini|title=25 Greatest Acting Performances of Indian Cinema|url=http://www.forbesindia.com/article/100-years-of-indian-cinema/25-greatest-acting-performances-of-indian-cinema/35125/0|work=[[Forbes India]]|access-date=11 January 2017|date=27 April 2013|archive-url=https://archive.today/20141028052937/http://forbesindia.com/article/100-years-of-indian-cinema/25-greatest-acting-performances-of-indian-cinema/35125/0|archive-date=28 October 2014|url-status=live}}</ref> 'ದೃಶ್ಯಂ' ನಲ್ಲಿನ ಅವರ ಅಭಿನಯವನ್ನು 'ಫಿಲ್ಮ್ ಕಂಪ್ಯಾನಿಯನ್' "ದಶಕದ ೧೦೦ ಶ್ರೇಷ್ಠ ಅಭಿನಯಗಳು" ಎಂದು ಪರಿಗಣಿಸಿದೆ.<ref>{{Cite web |title=100 Greatest Performances of the Decade |url=https://filmcompanion.in/best-of-the-decade/100-best-performances-indian-cinema.html |archive-url=https://web.archive.org/web/20191219043509/https://www.filmcompanion.in/best-of-the-decade/100-best-performances-indian-cinema.html |url-status=dead |archive-date=19 December 2019 |access-date=14 November 2020 |website=[[Film Companion]] |language=en}}</ref> ೨೦೨೪ ರಲ್ಲಿ, ಅವರು ಐಎಂಡಿಬಿಯ ೧೦೦ ಅತ್ಯಂತ ವೀಕ್ಷಿತ ಭಾರತೀಯ ತಾರೆಯರ ಪಟ್ಟಿಯಲ್ಲಿ ೪೮ ನೇ ಸ್ಥಾನದಲ್ಲಿದ್ದರು.<ref>{{Cite web |access-date=29 August 2024 |title=Deepika Padukone, Shah Rukh Khan Top IMDb's List of Most Viewed Indian Stars |url=https://variety.com/2024/film/news/deepika-padukone-shah-rukh-khan-imdb-indian-stars-list-1236018332/ |url-status=live |archive-url=https://web.archive.org/web/20241122092159/https://variety.com/2024/film/news/deepika-padukone-shah-rukh-khan-imdb-indian-stars-list-1236018332/ |archive-date=22 November 2024 |website=Variety |date=29 May 2024 }}</ref>
==ವೈಯಕ್ತಿಕ ಜೀವನ==
ಮೋಹನ್ಲಾಲ್ ಅವರು ೨೮ ಏಪ್ರಿಲ್ ೧೯೮೮ ರಂದು ತಮಿಳು ಚಲನಚಿತ್ರ ನಿರ್ಮಾಪಕ ಕೆ. ಬಾಲಾಜಿ ಅವರ ಪುತ್ರಿ ಸುಚಿತ್ರಾ ಅವರನ್ನು ವಿವಾಹವಾದರು.<ref>[http://www.sify.com/movies/actor-producer-k-balaji-passes-away-news-tamil-kkfsbLfgjbg.html Actor-producer K Balaji passes away] {{Webarchive|url=https://web.archive.org/web/20140109185630/http://www.sify.com/movies/actor-producer-k-balaji-passes-away-news-tamil-kkfsbLfgjbg.html |date=9 January 2014 }}. Sify.com (3 May 2009). Retrieved on 6 May 2012.</ref> ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ – ಪ್ರಣವ್ ಮೋಹನ್ಲಾಲ್ ಮತ್ತು ವಿಸ್ಮಯಾ ಮೋಹನ್ಲಾಲ್. ಪ್ರಣವ್ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ, ಮೋಹನ್ಲಾಲ್ ಅವರ 'ಒನ್ನಾಮನ್' (೨೦೦೧) ನಲ್ಲಿ ಪಾದಾರ್ಪಣೆ ಮಾಡಿದರು.<ref name="rediff.com">[http://www.rediff.com/movies/2002/apr/13pran.htm Movies: Introducing Mohanlal's son-Pranav] {{Webarchive|url=https://web.archive.org/web/20101017172106/http://www.rediff.com/movies/2002/apr/13pran.htm |date=17 October 2010 }}. [[Rediff.com]] (13 April 2002). Retrieved on 6 May 2012.</ref> ಮೋಹನ್ಲಾಲ್ ಅವರು ತಮ್ಮ ಮಗ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸಿದಾಗ ಅದನ್ನು ವಿರೋಧಿಸಲಿಲ್ಲ, ಏಕೆಂದರೆ "ಮಕ್ಕಳಿಗೆ ಅಂತಹ ಅನೇಕ ಆಸೆಗಳಿರಬಹುದು. ಅವರಿಗೆ ಏನನ್ನಾದರೂ ಸಾಧಿಸಲು ನಾವು ಸಹಾಯ ಮಾಡಬಹುದಾದರೆ, ಸಮಸ್ಯೆ ಏನು?"<ref name="rediff.com"/> ಅವರು ಕೊಚ್ಚಿಯಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಅವರು ತೇವರಾ,<ref>{{cite news | url=https://www.onmanorama.com/lifestyle/decor/2018/06/27/mohanlal-kochi-home-thevara.html | work=[[Malayala Manorama]] | title=Welcome to actor Mohanlal's home! | date=28 June 2018 | access-date=26 December 2020 | archive-date=27 January 2021 | archive-url=https://web.archive.org/web/20210127213814/https://www.onmanorama.com/lifestyle/decor/2018/06/27/mohanlal-kochi-home-thevara.html | url-status=live }}</ref> ಎಳಮಕ್ಕರ<ref>{{cite news | url=https://timesofindia.indiatimes.com/entertainment/malayalam/movies/news/beans-tomato-lettuce-fill-mohanlals-organic-farm-at-his-elamakkara-house/articleshow/78389488.cms | work=[[The Times of India]] | title=Beans, tomato, lettuce fill Mohanlal's organic farm at his Elamakkara house | date=29 September 2020 | access-date=26 December 2020 | archive-date=5 January 2021 | archive-url=https://web.archive.org/web/20210105080959/https://timesofindia.indiatimes.com/entertainment/malayalam/movies/news/beans-tomato-lettuce-fill-mohanlals-organic-farm-at-his-elamakkara-house/articleshow/78389488.cms | url-status=live }}</ref> ಮತ್ತು ಕುಂದನ್ನೂರ್<ref>{{cite news | url=https://www.onmanorama.com/lifestyle/decor/2022/07/08/mohalal-new-luxury-duplex-flat-kochi.html | work=[[Malayala Manorama]] |title=Actor Mohanlal's new luxury duplex flat in Kochi is magnificent | date=8 July 2022 | access-date=9 March 2025 }}</ref>ಗಳಲ್ಲಿ ಮನೆಗಳನ್ನು ಹೊಂದಿದ್ದಾರೆ. ಅವರು ಚೆನ್ನೈ, ತಮ್ಮ ಸ್ವಂತ ಊರು ತಿರುವನಂತಪುರ, ಊಟಿ,<ref>{{Cite web|title=Income Tax officials search Mohanlal's residence|url=https://www.rediff.com/movies/report/income-tax-officials-search-mohanlals-house/20110726.htm|access-date=2 August 2021|website=Rediff|language=en|archive-date=2 August 2021|archive-url=https://web.archive.org/web/20210802021153/https://www.rediff.com/movies/report/income-tax-officials-search-mohanlals-house/20110726.htm|url-status=live}}</ref> ಮಹಾಬಲಿಪುರಂ, ಅರೇಬಿಯನ್ ರಾಂಚಸ್ನಲ್ಲಿ ವಿಲ್ಲಾ ಮತ್ತು ದುಬೈನಲ್ಲಿ ಬುರ್ಜ್ ಖಲೀಫಾದಲ್ಲಿ ಅಪಾರ್ಟ್ಮೆಂಟ್ ಅನ್ನು ಸಹ ಹೊಂದಿದ್ದಾರೆ.<ref>{{Cite news|url=https://economictimes.indiatimes.com/malayalam-matinee-idol-mohanlal-buying-apartment-in-worlds-tallest-towerburj-khalifa/articleshow/8602725.cms|title=Malayalam matinee idol Mohanlal buying apartment in world's tallest tower, Burj Khalifa|date=27 May 2011|newspaper=The Economic Times|access-date=22 July 2018|archive-url=https://web.archive.org/web/20180722184730/https://economictimes.indiatimes.com/malayalam-matinee-idol-mohanlal-buying-apartment-in-worlds-tallest-towerburj-khalifa/articleshow/8602725.cms|archive-date=22 July 2018|url-status=live}}</ref>
ಮೋಹನ್ಲಾಲ್ ತಮ್ಮನ್ನು ತಾವು ಆಹಾರ ಪ್ರಿಯರು ಎಂದು ವಿವರಿಸಿಕೊಳ್ಳುತ್ತಾರೆ.<ref>{{cite news | url=http://www.hindu.com/mp/2006/04/08/stories/2006040803360300.htm | location=Chennai, India | work=[[The Hindu]] |url-access=subscription| title=Stirring it up with Mohanlal | date=8 April 2006 | access-date=25 May 2011 | archive-url=https://web.archive.org/web/20071127035120/http://www.hindu.com/mp/2006/04/08/stories/2006040803360300.htm | archive-date=27 November 2007 | url-status=dead }}</ref> ಅವರು ಮಧುರ ಸಂಗೀತವನ್ನು ಸಹ ಆನಂದಿಸುತ್ತಾರೆ. ಮೋಹನ್ಲಾಲ್ ಅದೃಷ್ಟ ಮತ್ತು ಆಧ್ಯಾತ್ಮಿಕತೆಯಲ್ಲಿ ಬಲವಾದ ನಂಬಿಕೆಯುಳ್ಳವರು. ಅವರು ಧಾರ್ಮಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿ ಎಂದು ತಮ್ಮನ್ನು ವಿವರಿಸುತ್ತಾರೆ,<ref>{{cite web|title=Mohanlal about Pranav Mohanlal's perspectives about spirituality|url=http://onlookersmedia.in/latestnews/mohanlal-pranav-mohanlals-perspectives-spirituality/|website=onlookersmedia.in|access-date=9 April 2017|archive-url=https://web.archive.org/web/20170404130810/http://onlookersmedia.in/latestnews/mohanlal-pranav-mohanlals-perspectives-spirituality/|archive-date=4 April 2017|url-status=dead}}</ref> ಮತ್ತು ಓಶೋ, ಜೆ. ಕೃಷ್ಣಮೂರ್ತಿ, ಅರವಿಂದ ಮತ್ತು ರಮಣ ಮಹರ್ಷಿಗಳನ್ನು ಓದಲು ಇಷ್ಟಪಡುತ್ತಾರೆ.{{citation needed|date=January 2026}} ಅವರು ತಮ್ಮ ಜೀವನದಲ್ಲಿ ನಡೆದ ಘಟನೆಗಳು, ಅವರ ಚಲನಚಿತ್ರ ವೃತ್ತಿಯನ್ನು ಒಳಗೊಂಡಂತೆ, ಆಕಸ್ಮಿಕ ಎಂದು ಆಗಾಗ್ಗೆ ಹೇಳಿದ್ದಾರೆ.{{citation needed|date=January 2026}}
==ಚಲನಚಿತ್ರ ಪಟ್ಟಿ ಮತ್ತು ಧ್ವನಿಮುದ್ರಿಕೆ==
ಮೋಹನ್ಲಾಲ್ ಅವರ ವೃತ್ತಿಜೀವನವು ನಾಲ್ಕು ದಶಕಗಳವರೆಗೆ ವ್ಯಾಪಿಸಿದ್ದು, ಈ ಅವಧಿಯಲ್ಲಿ ಅವರು ೩೨೫ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಕ್ಯಾಸಿನೊ ಫಿಲ್ಮ್ಸ್, ಚೀರ್ಸ್ ಫಿಲ್ಮ್ಸ್ ಮತ್ತು ಪ್ರಣವಂ ಆರ್ಟ್ಸ್ ಇಂಟರ್ನ್ಯಾಷನಲ್ ಎಂಬ ಮೂರು ನಿರ್ಮಾಣ ಸಂಸ್ಥೆಗಳ ಅಡಿಯಲ್ಲಿ ಚಿತ್ರಗಳನ್ನು ನಿರ್ಮಿಸಿದ್ದಾರೆ ಮತ್ತು ಸಹ-ನಿರ್ಮಿಸಿದ್ದಾರೆ. ಅವರು ಪ್ರಧಾನವಾಗಿ ಮಲಯಾಳಂ ಚಲನಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ, ಆದರೆ ಅವರ ಅಭಿನಯ ಕ್ರೆಡಿಟ್ಗಳು ಕೆಲವು ಬಾಲಿವುಡ್, ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳನ್ನು ಸಹ ಒಳಗೊಂಡಿವೆ.<ref>{{cite web |last=Warrier |first=Shobha |title=I celebrate whether a film is a hit or a flop |url=http://www.rediff.com/entertai/apr/04mohn.htm |work=[[Rediff.com]] |access-date=27 March 2016 |archive-url=https://web.archive.org/web/20141107034816/http://www.rediff.com/entertai/apr/04mohn.htm |archive-date=7 November 2014 |date=4 April 1997 |url-status=live}}</ref> ಮೋಹನ್ಲಾಲ್ ಸಾಂದರ್ಭಿಕವಾಗಿ ಕೆಲವು ವೃತ್ತಿಪರ ನಾಟಕಗಳಲ್ಲಿ ನಟಿಸಿದ್ದಾರೆ ಮತ್ತು ಕೆಲವು ಸಣ್ಣ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅವರು ೩೧ ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಅವರು ನಟಿಸಿದ ಚಿತ್ರಗಳಿಗಾಗಿ. ದೂರದರ್ಶನದಲ್ಲಿ, ಮೋಹನ್ಲಾಲ್ ಮೊದಲ ಸೀಸನ್ನ ಪ್ರಾರಂಭದಿಂದಲೂ ಏಷ್ಯಾನೆಟ್ನಲ್ಲಿ ರಿಯಾಲಿಟಿ ಶೋ 'ಬಿಗ್ ಬಾಸ್' ನ ಆತಿಥ್ಯವನ್ನು ವಹಿಸಿದ್ದಾರೆ.<ref>{{cite news|title=Bigg Boss Malayalam: Mohanlal is super excited to host the show | newspaper=The Times of India|date=16 May 2018|url=https://timesofindia.indiatimes.com/tv/news/malayalam/bigg-boss-malayalam-mohanlal-is-super-excited-to-host-the-show/articleshow/64188898.cms|access-date=14 June 2011}}</ref>
{{Infobox filmography list
| name = ಮೋಹನ್ಲಾಲ್
| image = Super Star Mohanlal BNC.jpg
| image_upright = 1
| alt =
| caption = 2015 ರಲ್ಲಿ ಮೋಹನ್ಲಾಲ್
| film = 366
| television_series = 1
| web_series =
| television_show = 5
| radio_show = 2
| documentary =
| hosting = 5
| music_videos = 2
| narrating = 18
| theatre = 7
| advertising =
| others = 10
}}
ಮೋಹನ್ಲಾಲ್ ಭಾರತೀಯ ನಟ, ನಿರ್ಮಾಪಕ, ವಿತರಕ, ಆತಿಥೇಯ ಮತ್ತು ಹಿನ್ನೆಲೆ ಗಾಯಕರಾಗಿದ್ದು, ಅವರು ಮುಖ್ಯವಾಹಿನಿಯ ಬ್ಲಾಕ್ಬಸ್ಟರ್ ಮತ್ತು ಕಲಾತ್ಮಕ ಚಿತ್ರಗಳಲ್ಲಿ ನಟಿಸಿದ್ದಾರೆ.<ref>{{cite web |last=Warrier |first=Shobha |date=4 April 1997 |title=I celebrate whether a film is a hit or a flop |url=http://www.rediff.com/entertai/apr/04mohn.htm |url-status=live |archive-url=https://web.archive.org/web/20141107034816/http://www.rediff.com/entertai/apr/04mohn.htm |archive-date=7 November 2014 |access-date=27 March 2016 |work=[[Rediff.com]]}}</ref> ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ ೩೬೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಮುಖ್ಯವಾಗಿ ಮಲಯಾಳಂ ಚಲನಚಿತ್ರರಂಗದಲ್ಲಿ ಮತ್ತು ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿಯೂ ಸಹ.<ref name="34films">{{cite news |last=James |first=Anu |date=21 May 2015 |title=Mohanlal Turns 55; Notable Facts about 'the Complete Actor' [PHOTOS] |url=http://www.ibtimes.co.in/mohanlal-turns-55-notable-facts-about-complete-actor-photos-633117 |url-status=live |archive-url=https://web.archive.org/web/20151223202135/http://www.ibtimes.co.in/mohanlal-turns-55-notable-facts-about-complete-actor-photos-633117 |archive-date=23 December 2015 |access-date=1 January 2016 |work=[[International Business Times]]}}</ref>
ಮೋಹನ್ಲಾಲ್ ೧೮ ನೇ ವಯಸ್ಸಿನಲ್ಲಿ 'ತಿರನೋಟ್ಟಂ' (೧೯೭೮) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಲು ಪ್ರಾರಂಭಿಸಿದರು, ಇದು ಒಂದು ಶತಮಾನದ ನಂತರ ಬಿಡುಗಡೆಯಾಯಿತು. ೧೯೮೦ ರಲ್ಲಿ ಪ್ರಣಯ ಥ್ರಿಲ್ಲರ್ 'ಮಂಜಿಲ್ ವಿರಿಂಜ ಪೂಕ್ಕಲ್' ನಲ್ಲಿ ಪ್ರತಿನಾಯಕನಾಗಿ ಅವರು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು.<ref name="ActingAlone">{{cite web |last=Warrier |first=Shobha |date=3 September 2003 |title=Life is not about acting alone |url=http://www.rediff.com/movies/2003/sep/03mohanlal.htm |url-status=live |archive-url=https://web.archive.org/web/20151216230036/http://www.rediff.com/movies/2003/sep/03mohanlal.htm |archive-date=16 December 2015 |access-date=1 January 2016 |work=[[Rediff.com]]}}</ref> ನರೇಂದ್ರನ್ ಎಂಬ ಸ್ಯಾಡಿಸ್ಟಿಕ್ ಪತಿಯ ಪಾತ್ರವು ಅವರಿಗೆ ಮನ್ನಣೆಯನ್ನು ತಂದುಕೊಟ್ಟಿತು ಮತ್ತು ಈ ಚಿತ್ರವು ಕ್ಲಾಸಿಕ್ ಸ್ಥಾನಮಾನವನ್ನು ಗಳಿಸಿತು.<ref name="team48">{{cite web |last=Ranjitha |date=1 September 1998 |title=Team of 48 |url=http://www.rediff.com/movies/1998/sep/01hari1.htm |url-status=live |archive-url=https://web.archive.org/web/20040318112351/http://www.rediff.com/movies/1998/sep/01hari1.htm |archive-date=18 March 2004 |access-date=1 January 2016 |work=[[Rediff.com]]}}</ref><ref>{{cite web |last=Moviebuzz (Sify) |date=14 May 2013 |title=Mohanlal & Poornima are together again! |url=http://www.sify.com/movies/mohanlal-poornima-are-together-again-news-malayalam-nfoqliiejfbsi.html |url-status=dead |archive-url=https://web.archive.org/web/20160219153421/http://www.sify.com/movies/mohanlal-poornima-are-together-again-news-malayalam-nfoqliiejfbsi.html |archive-date=19 February 2016 |access-date=1 January 2016 |website=[[Sify]]}}</ref> ನಂತರ ಅವರು ಹಲವಾರು ಚಿತ್ರಗಳಲ್ಲಿ ಖಳನಾಯಕ ಪಾತ್ರಗಳಲ್ಲಿ ನಟಿಸಿದರು. 'ಪಾದಯೋಟ್ಟಂ' (೧೯೮೨) ಅವರು ಚಿತ್ರದ ಪ್ರಮುಖ ಪ್ರತಿನಾಯಕರಲ್ಲಿ ಒಬ್ಬರ ಮಗನಾಗಿ ಪ್ರಮುಖ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ಮೊದಲ ೭೦ ಎಂಎಂ ಚಿತ್ರವಾಗಿದೆ.<ref name="team48" /> ಕೌಟುಂಬಿಕ ನಾಟಕ 'ಆಟ್ಟಕಳಶಂ' ಅವರನ್ನು ಮಲಯಾಳಂ ಚಲನಚಿತ್ರರಂಗದ ಪ್ರಮುಖ ನಟನಾಗಿ ಸ್ಥಾಪಿಸಿತು.<ref>{{cite news |last=Menon |first=Neelima |date=23 July 2019 |title=Can Mohanlal And Mammootty Keep Up With New-Gen Malayalam Films? |url=https://www.huffingtonpost.in/entry/can-mohanlal-mammootty-keep-up-with-new-gen-malayalam-films_in_5d32e125e4b004b6adb05aa6 |access-date=23 July 2019 |work=[[HuffPost]]}}</ref> ೧೯೮೪ ರಲ್ಲಿ ಅವರು 'ಪೂಚಕ್ಕೊರು ಮೂಕ್ಕುತಿ' ಎಂಬ ಹಾಸ್ಯ ಚಿತ್ರದಲ್ಲಿ ನಟಿಸಿದರು, ಅದರ ಯಶಸ್ಸು ಒಂದು ಪ್ರವೃತ್ತಿಯನ್ನು ಸೃಷ್ಟಿಸಿತು ಮತ್ತು ೧೯೮೦ ರ ದಶಕದಲ್ಲಿ ಪ್ರಕಾರವನ್ನು ಜನಪ್ರಿಯಗೊಳಿಸಿತು.<ref name="25years">{{cite web |last=Warrier |first=Shobha |date=3 September 2003 |title=25 years, 25 landmarks |url=http://www.rediff.com/movies/2003/sep/03mohan1.htm |url-status=live |archive-url=https://web.archive.org/web/20160121020441/http://www.rediff.com/movies/2003/sep/03mohan1.htm |archive-date=21 January 2016 |access-date=1 January 2016 |work=[[Rediff.com]]}}</ref><ref>{{cite news |last=Times News Network |date=12 May 2007 |title=Priyan's remake Darshan |url=http://articles.economictimes.indiatimes.com/2007-05-12/news/28443490_1_priyadarshan-remakes-hindi-film |url-status=dead |archive-url=https://web.archive.org/web/20151222161539/http://articles.economictimes.indiatimes.com/2007-05-12/news/28443490_1_priyadarshan-remakes-hindi-film |archive-date=22 December 2015 |access-date=1 January 2016 |work=[[The Economic Times]]}}</ref> ೧೯೮೪ ರಲ್ಲಿ ಐ.ವಿ. ಶಶಿ ನಿರ್ದೇಶನದ 'ಉಯರಂಗಲಿಲ್' ನಲ್ಲಿ ಅವರು ಪ್ರತಿನಾಯಕನ ಪಾತ್ರವನ್ನು ನಿರ್ವಹಿಸಿದರು, ಇದಕ್ಕಾಗಿ ಅವರು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು.<ref name="MT84">{{cite news |last=Kumar |first=P. K. Ajith |date=19 July 2013 |title=MT film being retold |url=http://www.thehindu.com/todays-paper/tp-national/tp-kerala/mt-film-being-retold/article4930509.ece |url-status=live |archive-url=https://web.archive.org/web/20140831035142/http://www.thehindu.com/todays-paper/tp-national/tp-kerala/mt-film-being-retold/article4930509.ece |archive-date=31 August 2014 |access-date=16 December 2015 |work=[[The Hindu]]}}</ref> ಅದೇ ವರ್ಷ, ಅವರು ಕ್ಯಾಸಿನೊ ಫಿಲ್ಮ್ಸ್ ಅನ್ನು ಸಹ-ಸ್ಥಾಪಿಸಿದರು, ಇದು ನಂತರ ಅವರ ಹಾಸ್ಯ ಚಿತ್ರಗಳಾದ 'ಗಾಂಧಿನಗರ್ 2ನೇ ಸ್ಟ್ರೀಟ್' (೧೯೮೬) ಮತ್ತು 'ನಾಡೋಡಿಕ್ಕಟ್ಟು' (೧೯೮೭) ಅನ್ನು ನಿರ್ಮಿಸಿತು.<ref name="casino">{{cite news |last=N |first=Sethumadhavan |date=26 July 2015 |title=In Search of Greener Pastures |url=https://bangaloremirror.indiatimes.com/entertainment/south-masala/In-search-of-greener-pastures/articleshow/48228444.cms |url-status=live |archive-url=https://web.archive.org/web/20151222095311/http://www.bangaloremirror.com/entertainment/south-masala/In-search-of-greener-pastures/articleshow/48228444.cms |archive-date=22 December 2015 |access-date=31 December 2015 |work=[[Bangalore Mirror]]}}</ref>
'ಒನ್ನಾನಂ ಕುನ್ನಿಲ್ ಒರಡಿ ಕುನ್ನಿಲ್' (೧೯೮೫) ಚಿತ್ರಕ್ಕಾಗಿ "ಸಿಂಧೂರ ಮೇಘಂ" ಹಾಡಿನ ಮೂಲಕ ಅವರು ಹಿನ್ನೆಲೆ ಗಾಯಕರಾಗಿ ತಮ್ಮ ಮೊದಲ ಹಾಡನ್ನು ರೆಕಾರ್ಡ್ ಮಾಡಿದರು.<ref name="25years" /> ೧೯೮೬ ರಲ್ಲಿ ಅವರು ೩೪ ಚಿತ್ರಗಳಲ್ಲಿ ನಟಿಸಿದರು.<ref name="34films" /> ಕಾಮಿಡಿ-ನಾಟಕ 'ಟಿ.ಪಿ. ಬಾಲಗೋಪಾಲನ್ ಎಂ.ಎ.' (೧೯೮೬) ನಲ್ಲಿ ಕೆಳಮಟ್ಟದ ಉದ್ಯೋಗಿಯ ಟಿ.ಪಿ. ಬಾಲಗೋಪಾಲನ್ ಅವರ ಚಿತ್ರಣವು ಅವರಿಗೆ ೨೬ ನೇ ವಯಸ್ಸಿನಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ತಂದುಕೊಟ್ಟಿತು. ಇದು ಕಿರಿಯ ವಿಜೇತರಾಗುವ ದಾಖಲೆಯಾಗಿದ್ದು, ೨೦೦೬ ರವರೆಗೆ ಅವರು ಈ ದಾಖಲೆಯನ್ನು ಹೊಂದಿದ್ದರು.<ref>{{cite news |last=Vasudevan |first=Aishwarya |date=10 January 2012 |title=Prithviraj: Lesser known facts |url=http://timesofindia.indiatimes.com/entertainment/malayalam/movies/Prithviraj-Lesser-known-facts/photostory/48958589.cms |url-status=live |archive-url=https://web.archive.org/web/20160219154704/http://timesofindia.indiatimes.com/entertainment/malayalam/movies/Prithviraj-Lesser-known-facts/photostory/48958589.cms |archive-date=19 February 2016 |access-date=4 January 2016 |work=[[The Times of India]]}}</ref> ಅದೇ ವರ್ಷ ಅವರು ತಮ್ಮ ಎರಡನೇ ನಿರ್ಮಾಣ ಕಂಪನಿಯಾದ ಚೀರ್ಸ್ ಫಿಲ್ಮ್ಸ್ ಅನ್ನು ಸಹ-ಸ್ಥಾಪಿಸಿದರು. ಅಪರಾಧ ನಾಟಕ 'ರಾಜವಿಂಟೆ ಮಕನ್' (೧೯೮೬) ಯಶಸ್ಸಿನೊಂದಿಗೆ ಮೋಹನ್ಲಾಲ್ ಅವರ ಸ್ಟಾರ್ಡಮ್ ಹೆಚ್ಚಾಯಿತು.<ref>{{cite news |last=PTI |date=19 April 2012 |title=Will do a Hindi film only if it's irresistible: Mohanlal |url=http://www.firstpost.com/bollywood/will-do-a-hindi-film-only-if-its-irresistible-mohanlal-280540.html |url-status=live |archive-url=https://web.archive.org/web/20160304151910/http://www.firstpost.com/bollywood/will-do-a-hindi-film-only-if-its-irresistible-mohanlal-280540.html |archive-date=4 March 2016 |access-date=4 March 2016 |work=[[Firstpost]]}}</ref> 'ಇರುಪತಂ ನೂಟ್ಟಾಂಡು' (೧೯೮೭) ನಲ್ಲಿ ಅವರು ಮಾಫಿಯಾ ಮುಖ್ಯಸ್ಥ ಸಾಗರ್ ಅಲಿಯಾಸ್ ಜಾಕಿ ಪಾತ್ರವನ್ನು ನಿರ್ವಹಿಸಿದರು ಮತ್ತು ಅದರ ಬಿಡುಗಡೆಯ ನಂತರ ಅವರು ಕ್ಲಾಸಿಕ್ ವ್ಯಕ್ತಿಯಾಗಿ ಮಾರ್ಪಟ್ಟರು.<ref>{{cite news |last=Onmanorama Desk |date=18 June 2015 |title=Sagar Alias Jacky: Mohanlal joins Dubsmash craze |url=http://english.manoramaonline.com/entertainment/entertainment-news/mohanlal-joins-dubsmash-craze.html |url-status=live |archive-url=https://web.archive.org/web/20151213014353/http://english.manoramaonline.com/entertainment/entertainment-news/mohanlal-joins-dubsmash-craze.html |archive-date=13 December 2015 |access-date=25 March 2016 |work=[[Malayala Manorama]]}}</ref> ೧೯೮೮ ರಲ್ಲಿ ಅವರ ದುರಂತ ಹಾಸ್ಯ 'ಚಿತ್ರಂ' ೫೮ ವಾರಗಳ ನಿರಂತರ ಪ್ರದರ್ಶನದ ದಾಖಲೆಯನ್ನು ಹೊಂದಿತ್ತು.<ref name="milestone">{{cite web |date=21 May 2005 |title=Milestones in Mohanlal's career |url=http://www.sify.com/movies/milestones-in-mohanlal-s-career-news-malayalam-kkfv4xbabjgsi.html |url-status=dead |archive-url=https://web.archive.org/web/20160204162519/http://www.sify.com/movies/milestones-in-mohanlal-s-career-news-malayalam-kkfv4xbabjgsi.html |archive-date=4 February 2016 |access-date=5 January 2016 |website=[[Sify]]}}</ref> ೧೯೮೯ ರಲ್ಲಿ, 'ಕಿರೀಡಂ' ನಲ್ಲಿನ ಅವರ ಅಭಿನಯವು ೩೭ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಉಲ್ಲೇಖವನ್ನು ಗಳಿಸಿಕೊಟ್ಟಿತು.<ref>{{cite web |last=Warrier |first=Shobha |date=20 April 2012 |title=Special: The A-Z of Malayalam cinema |url=http://www.rediff.com/movies/slide-show/slide-show-1-south-a-z-of-malayalam-cinema/20120420.htm#11 |url-status=live |archive-url=https://web.archive.org/web/20131019192242/http://www.rediff.com/movies/slide-show/slide-show-1-south-a-z-of-malayalam-cinema/20120420.htm#11 |archive-date=19 October 2013 |access-date=5 January 2016 |work=[[Rediff.com]]}}</ref>
೧೯೯೦ ರಲ್ಲಿ, ಮೋಹನ್ಲಾಲ್ ತಮ್ಮ ಸ್ವಂತ ಚಲನಚಿತ್ರ ನಿರ್ಮಾಣ ಕಂಪನಿ ಪ್ರಣವಂ ಆರ್ಟ್ಸ್ ಅನ್ನು ಸ್ಥಾಪಿಸಿದರು.<ref name="25years" /> ಇದು ಸಂಗೀತ ಥ್ರಿಲ್ಲರ್ 'ಹಿಸ್ ಹೈನೆಸ್ ಅಬ್ದುಲ್ಲಾ' ಮೂಲಕ ಪಾದಾರ್ಪಣೆ ಮಾಡಿತು, ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು ಮತ್ತು ಆ ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು.<ref>{{cite news |last=Vasudevan |first=Aishwarya |date=24 July 2015 |title=Musical hits of Malayalam film industry |url=http://timesofindia.indiatimes.com/entertainment/malayalam/movies/Musical-hits-of-Malayalam-film-industry/photostory/48522892.cms |url-status=live |archive-url=https://web.archive.org/web/20160219154005/http://timesofindia.indiatimes.com/entertainment/malayalam/movies/Musical-hits-of-Malayalam-film-industry/photostory/48522892.cms |archive-date=19 February 2016 |access-date=24 January 2016 |work=[[The Times of India]]}}</ref> ಪ್ರಣವಂ ಆರ್ಟ್ಸ್ ಅಡಿಯಲ್ಲಿ ಎರಡನೇ ಚಿತ್ರ 'ಭರತಂ' (೧೯೯೧), ಇದು ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ತಂದುಕೊಟ್ಟಿತು ಮತ್ತು 'ಫೋರ್ಬ್ಸ್ ಇಂಡಿಯಾ' ಅದನ್ನು "ಭಾರತೀಯ ಸಿನೆಮಾದ ೨೫ ಶ್ರೇಷ್ಠ ಅಭಿನಯ ಪ್ರದರ್ಶನಗಳು" ಪಟ್ಟಿಯಲ್ಲಿ ಸೇರಿಸಿತು.<ref>{{cite web |last1=Prasad |first1=Shishir |last2=Ramnath |first2=N.S. |last3=Mitter |first3=Sohini |date=27 April 2013 |title=Forbes India Magazine – 25 Greatest Acting Performances of Indian Cinema |url=http://forbesindia.com/article/100-years-of-indian-cinema/25-greatest-acting-performances-of-indian-cinema/35125/0 |url-status=dead |archive-url=https://web.archive.org/web/20160112014841/http://forbesindia.com/article/100-years-of-indian-cinema/25-greatest-acting-performances-of-indian-cinema/35125/0 |archive-date=12 January 2016 |access-date=24 January 2016 |work=[[Forbes India]]}}</ref> ಅವರ ಚಿತ್ರ, ಆಧ್ಯಾತ್ಮಿಕ ಕಾಲ್ಪನಿಕ 'ಗುರು' (೧೯೯೭), ಅತ್ಯುತ್ತಮ ವಿದೇಶಿ ಭಾಷಾ ಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗೆ ಸಲ್ಲಿಸಲಾದ ಮೊದಲ ಮಲಯಾಳಂ ಚಿತ್ರವಾಗಿದೆ.<ref>{{cite news |last=IBN LIVE |date=23 September 2012 |title=From 'Saaransh' to 'Barfi': India's past Oscar entries in Foreign Language Film category |url=http://www.ibnlive.com/photogallery/movies/from-saaransh-to-barfi-indias-past-oscar-entries-in-foreign-language-film-category-854695.html |url-status=live |archive-url=https://web.archive.org/web/20160323110433/http://www.ibnlive.com/photogallery/movies/from-saaransh-to-barfi-indias-past-oscar-entries-in-foreign-language-film-category-854695.html |archive-date=23 March 2016 |access-date=6 February 2016 |work=[[IBN Live]]}}</ref> ೧೯೯೭ ರಲ್ಲಿ, ಅವರು ಮಣಿರತ್ನಂ ನಿರ್ದೇಶನದ ತಮಿಳು ಚಿತ್ರ 'ಇರುವರ್' ನಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು.<ref>{{cite web |last=Srinivasan |first=Pavithra |date=14 June 2010 |title=Mohanlal in Iruvar |url=http://www.rediff.com/movies/slide-show/slide-show-1-south-best-performances-in-mani-ratnam-films/20100614.htm#1 |url-status=live |archive-url=https://web.archive.org/web/20151106081325/http://www.rediff.com/movies/slide-show/slide-show-1-south-best-performances-in-mani-ratnam-films/20100614.htm#1 |archive-date=6 November 2015 |access-date=7 February 2016 |work=[[Rediff.com]]}}</ref> ೧೯೯೯ ರ ಕಾನ್ಸ್ ಚಲನಚಿತ್ರೋತ್ಸವದ ಅನ್ ಸರ್ಟನ್ ರೆಗಾರ್ಡ್ ವಿಭಾಗದಲ್ಲಿ ಪ್ರದರ್ಶನಗೊಂಡ 'ವನಪ್ರಸ್ಥಂ' ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಚಿತ್ರ (ನಿರ್ಮಾಪಕ) ಆಗಿ ತಂದುಕೊಟ್ಟಿತು.<ref name="milestone" /><ref>{{cite news |last=Dhingra |first=Manisha |date=14 May 2014 |title=The History of India at Cannes |url=http://movies.ndtv.com/bollywood/the-history-of-india-at-cannes-639287 |url-status=live |archive-url=https://web.archive.org/web/20150912153645/http://movies.ndtv.com/bollywood/the-history-of-india-at-cannes-639287 |archive-date=12 September 2015 |access-date=7 February 2016 |work=[[NDTV]]}}</ref>
೨೦೦೦ ರಲ್ಲಿ, ಅವರು ಆಕ್ಷನ್ ನಾಟಕ 'ನರಸಿಂಹಂ' ನಲ್ಲಿ ನಟಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು. ಅವರ ಪಾತ್ರವಾದ ಇಂದುಚೂಡನ್ ನಂತರ ಒಂದು ಕ್ಲಾಸಿಕ್ ಅನುಯಾಯಿಗಳನ್ನು ಆಕರ್ಷಿಸಿದೆ.<ref>{{cite web |last=Vikram |first=Raj |date=21 October 2014 |title='Narasimham' to return after 15 years. |url=http://www.metromatinee.com/news-articles/narasimham-to-return-after-15-years-9681 |url-status=dead |archive-url=https://web.archive.org/web/20150107140546/http://www.metromatinee.com/news-articles/narasimham-to-return-after-15-years-9681 |archive-date=7 January 2015 |access-date=8 February 2016}}</ref> ೨೦೦೧ ರಲ್ಲಿ, ಅವರು ಕವಲಾಂ ನಾರಾಯಣ ಪಣಿಕ್ಕರ್ ನಿರ್ದೇಶನದ ಸಂಸ್ಕೃತ ನಾಟಕ 'ಕರ್ಣಭಾರಂ' ನಲ್ಲಿ ಕರ್ಣನ ಪಾತ್ರವನ್ನು ನಿರ್ವಹಿಸಿದರು.<ref>{{cite news |last=Viswanath |first=Chandrakanth |date=20 January 2016 |title=Battle for the Lone |url=http://www.newindianexpress.com/entertainment/malayalam/Battle-for-the-Lone/2016/01/20/article3234763.ece |url-status=dead |archive-url=https://web.archive.org/web/20160215192951/http://www.newindianexpress.com/entertainment/malayalam/Battle-for-the-Lone/2016/01/20/article3234763.ece |archive-date=15 February 2016 |access-date=8 February 2016 |work=[[The New Indian Express]]}}</ref> ೨೦೦೩ ರಲ್ಲಿ, ಅವರು 'ಕಂಪನಿ' (೨೦೦೨) ಹಿಂದಿ ಚಿತ್ರದಲ್ಲಿನ ಪಾತ್ರಕ್ಕಾಗಿ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಯನ್ನು ಅತ್ಯುತ್ತಮ ಪೋಷಕ ನಟನಾಗಿ ಗೆದ್ದರು.<ref>{{cite news |last=Press Trust Of India |date=17 April 2012 |title=I have nothing to prove in Bollywood: Mohanlal |url=http://movies.ndtv.com/regional/i-have-nothing-to-prove-in-bollywood-mohanlal-624585 |url-status=live |archive-url=https://web.archive.org/web/20160215235858/http://movies.ndtv.com/regional/i-have-nothing-to-prove-in-bollywood-mohanlal-624585 |archive-date=15 February 2016 |access-date=8 February 2016 |work=[[NDTV]]}}</ref> ೨೦೦೫ ರಲ್ಲಿ, ಅವರು ಬಿಜೋಯ್ ನಂಬಿಯಾರ್ ನಿರ್ದೇಶನದ ಮೌನ ಸಣ್ಣ ಚಿತ್ರ 'ರಿಫ್ಲೆಕ್ಷನ್ಸ್' ನಲ್ಲಿ ನಟಿಸಿದರು.<ref>{{cite news |last=Rajpal |first=Ryoktim |date=21 May 2015 |title=Happy birthday Mohanlal: 7 relatively unknown facts about the megastar's life |url=http://www.ibnlive.com/news/movies/happy-birthday-mohanlal-7-relatively-unknown-facts-about-the-megastars-life-994765.html |url-status=live |archive-url=https://web.archive.org/web/20160128124241/http://www.ibnlive.com/news/movies/happy-birthday-mohanlal-7-relatively-unknown-facts-about-the-megastars-life-994765.html |archive-date=28 January 2016 |access-date=8 February 2016 |work=[[IBN Live]]}}</ref> 'ತನ್ಮಾತ್ರ' (೨೦೦೫) ನಲ್ಲಿ ಅಲ್ಝೈಮರ್ ಕಾಯಿಲೆಯ ರೋಗಿಯ ಚಿತ್ರಣವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು ಮತ್ತು ಭಾರತೀಯ ವೈದ್ಯಕೀಯ ಸಂಘದಿಂದ ಗೌರವ ಪ್ರಶಸ್ತಿಯನ್ನು ಗಳಿಸಿತು.<ref name="MohanlalTelegraph">{{cite news |last=Jayan |first=T.V. |date=9 March 2014 |title=Actors live between the two worlds of 'action' and 'cut' |url=http://www.telegraphindia.com/1140309/jsp/7days/18061240.jsp |url-status=dead |archive-url=https://web.archive.org/web/20150708110422/http://www.telegraphindia.com/1140309/jsp/7days/18061240.jsp |archive-date=8 July 2015 |access-date=15 January 2016 |work=[[The Telegraph (Calcutta)|The Telegraph]] |location=India}}</ref> 'ಕೀರ್ತಿ ಚಕ್ರ' (೨೦೦೬) ಮತ್ತು ಅದರ ಅನುಕ್ರಮ 'ಕುರುಕ್ಷೇತ್ರ' (೨೦೦೮) ಯುದ್ಧ ಚಿತ್ರಗಳಲ್ಲಿ ಮೇಜರ್ ಮಹಾದೇವನ್ ಪಾತ್ರಕ್ಕಾಗಿ ಭಾರತೀಯ ಟೆರಿಟೋರಿಯಲ್ ಆರ್ಮಿ ಅವರಿಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿತು.<ref>{{cite news |last=Sai Kiran |first=K. P. |date=20 October 2009 |title=Lt Col Mohanlal makes his mark in Territorial Army |url=http://www.newindianexpress.com/nation/article141454.ece |url-status=dead |archive-url=https://web.archive.org/web/20160215191528/http://www.newindianexpress.com/nation/article141454.ece |archive-date=15 February 2016 |access-date=8 February 2016 |work=[[The New Indian Express]] |location=[[New Delhi]]}}</ref> ೨೦೦೮ ರಲ್ಲಿ, ಅವರು 'ಟ್ವೆಂಟಿ:೨೦' ನಲ್ಲಿ ನಟಿಸಿದರು. ಇದು ಮಲಯಾಳಂ ಚಲನಚಿತ್ರ ನಟರ ಸಂಘವಾದ ಅಮ್ಮದ ಬಹುತೇಕ ಎಲ್ಲಾ ನಟರನ್ನು ಒಳಗೊಂಡ ಮೈಲಿಗಲ್ಲಿನ ಚಿತ್ರವಾಗಿದೆ.<ref>{{cite news |last=V. P |first=Nicy |date=7 October 2014 |title=Shaji Kailas Confirms Next Film with Mohanlal and Mammootty |url=http://www.ibtimes.co.in/shaji-kailas-confirms-next-film-mohanlal-mammootty-610700 |url-status=live |archive-url=https://web.archive.org/web/20160216110732/http://www.ibtimes.co.in/shaji-kailas-confirms-next-film-mohanlal-mammootty-610700 |archive-date=16 February 2016 |access-date=8 February 2016 |work=[[International Business Times]]}}</ref>
'ದೃಶ್ಯಂ' (೨೦೧೩), ಅದರಲ್ಲಿ ಅವರು ಸಾಧಾರಣ ವ್ಯಕ್ತಿಯಾದ ಜಾರ್ಜ್ಕುಟ್ಟಿಯ ಪಾತ್ರವನ್ನು ನಿರ್ವಹಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.<ref>{{cite news |last=James |first=Anu |date=9 September 2015 |title='Drishyam' Director Jeethu Joseph Says He Was Unhappy with Mohanlal Starrer's Hindi Remake Cast |url=http://www.ibtimes.co.in/drishyam-director-jeethu-joseph-says-he-was-unhappy-mohanlal-starrers-hindi-remake-cast-646005 |url-status=live |archive-url=https://web.archive.org/web/20160216111310/http://www.ibtimes.co.in/drishyam-director-jeethu-joseph-says-he-was-unhappy-mohanlal-starrers-hindi-remake-cast-646005 |archive-date=16 February 2016 |access-date=8 February 2016 |work=[[International Business Times]]}}</ref><ref>{{cite news |last=Pillai |first=Radhika C |date=21 December 2013 |title=Mollywood praises Mohanlal for Drishyam's success |url=http://timesofindia.indiatimes.com/entertainment/malayalam/movies/news/Mollywood-praises-Mohanlal-for-Drishyams-success/articleshow/27721249.cms |url-status=live |archive-url=https://web.archive.org/web/20160304151131/http://timesofindia.indiatimes.com/entertainment/malayalam/movies/news/Mollywood-praises-Mohanlal-for-Drishyams-success/articleshow/27721249.cms |archive-date=4 March 2016 |access-date=4 March 2016 |work=[[The Times of India]]}}</ref> ೨೦೧೬ ರಲ್ಲಿ, ಅವರು 'ಪುಲಿಮುರುಗನ್' ಆಕ್ಷನ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಇದು ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು ಮತ್ತು ಬಾಕ್ಸ್ ಆಫೀಸ್ನಲ್ಲಿ ೧೦೦ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿದ ಮೊದಲ ಮಲಯಾಳಂ ಚಿತ್ರವಾಗಿದೆ.<ref>{{cite news |last=Viswanath |first=Chandrakanth |date=7 November 2016 |title=Mohanlal's Pulimurugan breaches the Rs 100 crore mark |url=http://www.newindianexpress.com/entertainment/malayalam/2016/nov/07/mohanlals-pulimurugan-breaches-the-rs-100-crore-mark-1536006--2.html |url-status=dead |archive-url=https://web.archive.org/web/20161111194211/http://www.newindianexpress.com/entertainment/malayalam/2016/nov/07/mohanlals-pulimurugan-breaches-the-rs-100-crore-mark-1536006--2.html |archive-date=11 November 2016 |access-date=11 November 2016 |work=[[The New Indian Express]]}}</ref> ೨೦೧೯ ರಲ್ಲಿ, ಅವರು ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ 'ಲೂಸಿಫರ್' ನಲ್ಲಿ ನಟಿಸಿದರು, ಮತ್ತು ಈ ಚಿತ್ರವು ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. ೨೦೨೩ ರಲ್ಲಿ, ಅವರು 'ನೇರು' ನಲ್ಲಿ ನಟಿಸಿದರು, ಇದು ವಾಣಿಜ್ಯ ಯಶಸ್ಸು ಗಳಿಸಿತು. ೨೦೨೫ ರಲ್ಲಿ, ಅವರು 'ಎಲ್೨: ಎಂಪುರಾನ್' ನಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರು ಮತ್ತು ನಂತರದ ಚಿತ್ರವು 'ತುದಾರುಂ' ಆಗಿತ್ತು; ಎರಡೂ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ.<ref>{{Cite web |date=26 April 2025 |title=Kerala Box Office: Mohanlal's L2 Empuraan plummets with OTT premiere; likely to end theatrical run behind Tovino Thomas starrer 2018 |url=https://www.pinkvilla.com/entertainment/box-office/kerala-box-office-mohanlals-l2-empuraan-plummets-with-ott-premiere-likely-to-end-theatrical-run-behind-tovino-thomas-starrer-2018-1384193 |access-date=28 April 2025 |website=[[Pinkvilla]] |language=en}}</ref><ref>{{Cite web |last=Sawlani |first=Kush |date=14 May 2025 |title=Top 5 Indian Films Of 2025 At The Worldwide Box Office So Far: Chhaava reigns supreme; L2 Empuraan and others follow suit |url=https://www.pinkvilla.com/entertainment/box-office/top-5-indian-films-of-2025-at-the-worldwide-box-office-so-far-chhaava-reigns-supreme-l2-empuraan-and-others-follow-suit-1387656 |access-date=14 May 2025 |website=[[Pinkvilla]]}}</ref>
== ಚಿತ್ರಗಳು ==
{{pending films key}}
{| class="wikitable plainrowheaders sortable"
|+ ಮೋಹನ್ಲಾಲ್ ಚಲನಚಿತ್ರ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! class="unsortable" scope="col" | ಟಿಪ್ಪಣಿಗಳು
! class="unsortable" scope="col" | {{ref heading}}
|-
| 1980
! scope="row" | ''[[ಮಂಜಿಲ್ ವಿರಿಂಜ ಪೂಕ್ಕಲ್]]''
| ನರೇಂದ್ರನ್
|
|<ref>{{cite news |last=Express News Service |date=24 April 2012 |title=The Camera that Captured a Star |url=http://www.newindianexpress.com/entertainment/malayalam/article387139.ece |url-status=dead |archive-url=https://web.archive.org/web/20151224195251/http://www.newindianexpress.com/entertainment/malayalam/article387139.ece |archive-date=24 December 2015 |access-date=15 December 2015 |work=[[The New Indian Express]]}}</ref>
|-
| rowspan="8" | 1981
! scope="row" | ''[[ಸಂಚಾರಿ]]''
| ಡಾ. ಶೇಖರ್
|
|<ref>{{cite news |last=ഭാനുപ്രകാശ് |date=16 November 2017 |title=സംഘട്ടനരംഗങ്ങള്ക്ക് ഇറങ്ങുമ്പോള് ജയൻ കൊടുത്ത ആ ഉപദേശമാണ് ഇപ്പോഴും മോഹന്ലാലിന്റെ മനസ്സില് |url=http://www.mathrubhumi.com/movies-music/flashback/jayan-mohanlal-malayalam-movie-stunt-action-hero-action-scenes-1.2391456 |url-status=live |archive-url=https://archive.today/20171130154334/http://www.mathrubhumi.com/movies-music/flashback/jayan-mohanlal-malayalam-movie-stunt-action-hero-action-scenes-1.2391456 |archive-date=30 November 2017 |access-date=15 December 2015 |work=[[Mathrubhumi]] |language=ml}}</ref>
|-
! scope="row" | ''[[ತಕಿಲು ಕೊಟ್ಟಂಪುರಂ]]''
| ವಕೀಲ ಪಾಲ್
|
|<ref>{{cite news |last=Hindu |date=21 July 2011 |title=They set the trend... |url=http://www.thehindu.com/todays-paper/tp-features/tp-metroplus/they-set-the-trend/article2278114.ece |url-status=live |archive-url=https://web.archive.org/web/20160219154201/http://www.thehindu.com/todays-paper/tp-features/tp-metroplus/they-set-the-trend/article2278114.ece |archive-date=19 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ಧನ್ಯಾ]]''
| ಮೋಹನ್ಲಾಲ್
|
|<ref>{{cite news |last=Sidhardhan |first=Sanjith |date=13 June 2012 |title=Mohanlal, Kunchacko to team up |url=http://timesofindia.indiatimes.com/entertainment/malayalam/movies/news/Mohanlal-Kunchacko-to-team-up/articleshow/14058883.cms |url-status=live |archive-url=https://archive.today/20171130151756/https://timesofindia.indiatimes.com/entertainment/malayalam/movies/news/Mohanlal-Kunchacko-to-team-up/articleshow/14058883.cms |archive-date=30 November 2017 |access-date=19 December 2015 |work=[[The Times of India]]}}</ref>
|-
! scope="row" | ''[[ಧ್ರುವಸಂಗಮಂ]]''
| ಶಂಕರನ್ಕುಟ್ಟಿ
|
|<ref name="sasikumar">{{cite news |last=മാത്യു ആർത്താറ്റ് |first=മനോജ് |date=19 July 2014 |title=മായാത്ത ശശികല |url=http://www.mathrubhumi.com/movies-music/features/%E0%B4%AE%E0%B4%BE%E0%B4%AF%E0%B4%BE%E0%B4%A4%E0%B5%8D%E0%B4%A4-%E0%B4%B6%E0%B4%B6%E0%B4%BF%E0%B4%95%E0%B4%B2-1.184372 |url-status=live |archive-url=https://web.archive.org/web/20151222150952/http://www.mathrubhumi.com/movies-music/features/%E0%B4%AE%E0%B4%BE%E0%B4%AF%E0%B4%BE%E0%B4%A4%E0%B5%8D%E0%B4%A4-%E0%B4%B6%E0%B4%B6%E0%B4%BF%E0%B4%95%E0%B4%B2-1.184372 |archive-date=22 December 2015 |access-date=21 December 2015 |work=[[Mathrubhumi]]}}</ref>
|-
! scope="row" | ''[[ಅತ್ತಿಮಾರಿ]]''
| ಶಾನ್
|
|<ref>{{cite news |last=Kumar |first=P. K. AJITH |date=8 January 2015 |title=A fan's tribute to a legend |url=http://www.thehindu.com/news/cities/kozhikode/a-fans-tribute-to-a-legend/article6766196.ece |url-status=live |archive-url=https://web.archive.org/web/20160327175432/http://www.thehindu.com/news/cities/kozhikode/a-fans-tribute-to-a-legend/article6766196.ece |archive-date=27 March 2016 |access-date=15 December 2015 |work=[[The Hindu]]}}</ref>
|-
! scope="row" | ''[[ತೇನುಂ ವಯಂಬುಂ]]''
| ವರ್ಮಾ
|
|<ref>{{cite news |last=Roshith |first=Sivalakshmi |date=14 March 2014 |title='Maash was a God-gifted Musician' |url=http://www.newindianexpress.com/entertainment/malayalam/Maash-was-a-God-gifted-Musician/2014/03/14/article2107583.ece |url-status=dead |archive-url=https://web.archive.org/web/20151222124726/http://www.newindianexpress.com/entertainment/malayalam/Maash-was-a-God-gifted-Musician/2014/03/14/article2107583.ece |archive-date=22 December 2015 |access-date=15 December 2015 |work=[[The New Indian Express]]}}</ref>
|-
! scope="row" | ''[[ಊತಿಕಾಚಿಯ ಪೊನ್ನು]]''
| ನಂದನ್
|
|<ref>{{cite web |last=ഹരികൃഷ്ണൻ [Harikrishnan] |first=ജി. [G.] |date=3 December 2015 |script-title=ml:തകരാറുള്ള ഹൃദയം, തളരാത്ത കഥകൾ |trans-title=A Broken heart, tireless stories |url=http://mangalam.pc.cdn.bitgravity.com/print-edition/keralam/383501 |url-status=dead |archive-url=https://web.archive.org/web/20151222130244/http://mangalam.pc.cdn.bitgravity.com/print-edition/keralam/383501 |archive-date=22 December 2015 |access-date=20 December 2015 |publisher=[[Mangalam Publications]] |language=ml}}</ref>
|-
! scope="row" | ''[[ಅಹಿಂಸಾ]]''
| ಮೋಹನನ್
|
|
|-
| rowspan="14" | 1982
! scope="row" | ''[[ಕೆಳಕ್ಕಾತ ಸಬ್ದಂ]]''
| ಬಾಬು
|
|<ref>{{cite news |last=Santhosh |first=K. |date=19 August 2011 |title=Music director Johnson passes away |url=http://www.thehindu.com/todays-paper/tp-national/tp-kerala/music-director-johnson-passes-away/article2371682.ece |url-status=live |archive-url=https://web.archive.org/web/20160220081700/http://www.thehindu.com/todays-paper/tp-national/tp-kerala/music-director-johnson-passes-away/article2371682.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಫುಟ್ಬಾಲ್]]''
| ಬಾಲಕೃಷ್ಣನ್
|
|<ref>{{cite news |last=Pradeep |first=K. |date=2 March 2007 |title=Artistic director |url=http://www.thehindu.com/todays-paper/tp-features/tp-fridayreview/artistic-director/article2271656.ece |url-status=live |archive-url=https://web.archive.org/web/20160220081700/http://www.thehindu.com/todays-paper/tp-features/tp-fridayreview/artistic-director/article2271656.ece |archive-date=20 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ಪಾದಯೋಟ್ಟಂ]]''
| ಕಣ್ಣನ್
|
|<ref>{{cite news |last=Pillai |first=Sreedhar |date=16 October 2013 |title=Padayottam set to be the biggest thing in films in south India |url=https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |url-status=live |archive-url=https://web.archive.org/web/20151222142054/http://indiatoday.intoday.in/story/padayottam-set-to-be-the-biggest-thing-in-films-in-south-india/1/391560.html |archive-date=22 December 2015 |access-date=15 December 2015 |work=[[India Today]]}}</ref>
|-
! scope="row" | ''[[ಎಂತಿನೋ ಪೂಕ್ಕುನ್ನ ಪೂಕ್ಕಳ್]]''
| ಸುರೇಂದ್ರನ್
|
|<ref>{{cite news |last=Mathrubhumi |date=2 December 2015 |title=തിരക്കഥാകൃത്ത് ആലപ്പി ഷെരീഫ് അന്തരിച്ചു |url=http://www.mathrubhumi.com/movies-music/news/alleppey-sheriff-passes-away-malayalam-news-1.709572 |url-status=live |archive-url=https://web.archive.org/web/20151222165019/http://www.mathrubhumi.com/movies-music/news/alleppey-sheriff-passes-away-malayalam-news-1.709572 |archive-date=22 December 2015 |access-date=20 December 2015 |work=[[Mathrubhumi]]}}</ref>
|-
! scope="row" | ''[[ಕಳಿಯಾಮರ್ದನಂ]]''
| ಜಾನಿ
|
|<ref name="backto">{{cite news |last=K |first=Aswathy |date=1 January 2015 |title=Back to Where He Belongs |url=http://www.newindianexpress.com/entertainment/malayalam/Back-to-Where-He-Belongs/2015/01/01/article2597596.ece |url-status=dead |archive-url=https://web.archive.org/web/20151222125300/http://www.newindianexpress.com/entertainment/malayalam/Back-to-Where-He-Belongs/2015/01/01/article2597596.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಮದ್ರಾಸಿಲೆ ಮೋನ್]]''
| ಮೋಹನ್ಲಾಲ್
|
|<ref>{{cite news |author=TNM staff |date=19 June 2017 |title=Not just Sukumara Kurup: 6 spine-chilling real-life murders have inspired Malayalam films |url=http://www.thenewsminute.com/article/not-just-sukumara-kurup-6-spine-chilling-real-life-murders-have-inspired-malayalam-films |url-status=live |archive-url=https://archive.today/20171130152301/http://www.thenewsminute.com/article/not-just-sukumara-kurup-6-spine-chilling-real-life-murders-have-inspired-malayalam-films |archive-date=30 November 2017 |access-date=15 December 2015 |work=[[The News Minute]]}}</ref>
|-
! scope="row" | ''[[ಆಕ್ರೋಶಂ]]''
| ಮೋಹನಚಂದ್ರನ್
|
|<ref>{{cite news |last=Hindu |date=23 November 2015 |title=TV programme listings (23/11/2015) |url=http://www.thehindu.com/features/metroplus/radio-and-tv/article7905504.ece |url-status=live |archive-url=https://web.archive.org/web/20160220070220/http://www.thehindu.com/features/metroplus/radio-and-tv/article7905504.ece |archive-date=20 February 2016 |access-date=22 December 2015 |work=[[The Hindu]]}}</ref>
|-
! scope="row" | ''[[ಎನಿಕ್ಕುಂ ಒರು ದಿವಸಂ]]''
| ಬಾಬು
|
|<ref name="enikkum">{{cite news |last=Hindu |date=1 October 2004 |title=Actor Shivaji dead |url=http://www.thehindu.com/2004/10/01/stories/2004100113800300.htm |url-status=dead |archive-url=https://web.archive.org/web/20160219154609/http://www.thehindu.com/2004/10/01/stories/2004100113800300.htm |archive-date=19 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ಶ್ರೀ ಅಯ್ಯಪ್ಪನುಂ ವಾವರುಂ]]''
| ಕದುತ
|ಅತಿಥಿ ಪಾತ್ರ
|<ref>{{cite news |last=Vijayakumar |first=B. |date=21 November 2015 |title=Sree Ayyappanum Vavarum: 1982 |url=http://www.thehindu.com/features/metroplus/society/sree-ayyappanum-vavarum-film-on-sabarimala/article7903888.ece |url-status=live |archive-url=https://web.archive.org/web/20160220070620/http://www.thehindu.com/features/metroplus/society/sree-ayyappanum-vavarum-film-on-sabarimala/article7903888.ece |archive-date=20 February 2016 |access-date=30 December 2015 |work=[[The Hindu]]}}</ref>
|-
! scope="row" | ''[[ಕುರುಕ್ಕಂಟೆ ಕಲ್ಯಾಣಂ]]''
| ಸೈನಾಬಾ ಅವರ ಪತಿ
|
|<ref>{{cite news |last=Soman |first=Deepa |date=26 March 2015 |title=I like to believe I am young: Sathyan Anthikad |url=http://timesofindia.indiatimes.com/entertainment/malayalam/movies/news/I-like-to-believe-I-am-young-Sathyan-Anthikad/articleshow/46701986.cms? |url-status=live |archive-url=https://web.archive.org/web/20160220070328/http://timesofindia.indiatimes.com/entertainment/malayalam/movies/news/I-like-to-believe-I-am-young-Sathyan-Anthikad/articleshow/46701986.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''ಞಾನ್ ಒನ್ನು ಪರಯಟ್ಟೆ''
| ಶೇಖರನ್ಕುಟ್ಟಿ
|
|<ref name="lalvasantham">{{cite news |last=Manoramaonline |date=21 May 2011 |title=Manorama Online. Metro Manorama. Lal Vasantham |url=http://specials.manoramaonline.com/Movie/2014/lal-vasantham/filimography.htm |url-status=live |archive-url=https://web.archive.org/web/20151223063201/http://specials.manoramaonline.com/Movie/2014/lal-vasantham/filimography.htm |archive-date=23 December 2015 |access-date=22 December 2015 |work=[[Malayala Manorama]]}}</ref>
|-
! scope="row" | ''[[ಎಂಟೆ ಮೊಹಂಗಲ್ ಪೂವನಿಂಜು]]''
| ಜಯನ್
|
|<ref>{{cite news |last=Kumar |first=P. K. Ajith |date=26 June 2010 |title=The circle of life |url=http://www.thehindu.com/features/cinema/the-circle-of-life/article487320.ece |url-status=live |archive-url=https://web.archive.org/web/20160220081700/http://www.thehindu.com/features/cinema/the-circle-of-life/article487320.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಆ ದಿವಸಂ]]''
| ಬಾಸ್
|
|<ref name="may2011">{{cite news |last=Manoramaonline |date=21 May 2011 |title=Mohanlal Birthday:Filmography |url=http://mymanorama.manoramaonline.com/advt/movie/Mohanlal_Birthday_2011/filmography.htm |url-status=dead |archive-url=https://web.archive.org/web/20110806151012/http://mymanorama.manoramaonline.com/advt/movie/Mohanlal_Birthday_2011/filmography.htm |archive-date=6 August 2011 |access-date=23 February 2016 |work=[[Malayala Manorama]]}}</ref>
|-
! scope="row" | ''[[ಸಿಂದೂರ ಸಂಧ್ಯಾಕ್ಕು ಮೌನಂ]]''
| ಕಿಶೋರ್
|
|<ref name="DG">{{cite news |date=11 October 2016 |title=The Priyan you never knew |url=http://www.deepikaglobal.com/News.aspx?ID=89412 |url-status=live |archive-url=https://archive.today/20171130145706/http://www.deepikaglobal.com/News.aspx?ID=89412 |archive-date=30 November 2017 |access-date=30 November 2017 |work=[[Deepika (newspaper)|Deepika]]}}</ref>
|-
| rowspan="26" | 1983
! scope="row" | ''[[ಭೂಕಂಬಂ]]''
| ರಘು
|
|<ref>{{cite news |last=Nair |first=Unni R |date=25 March 2011 |title=Malayalam Cinema's THREE Team UP |url=http://archive.indianexpress.com/news/malayalam-cinemas-three-team-up/766894/ |url-status=live |archive-url=https://www.webcitation.org/6feYsCkH8?url=http://archive.indianexpress.com/news/malayalam-cinemas-three-team-up/766894/ |archive-date=29 February 2016 |access-date=29 February 2016 |work=[[The Indian Express]]}}</ref>
|-
! scope="row" | ''[[ಹೆಲೋ ಮದ್ರಾಸ್ ಗರ್ಲ್]]''
| ಲಾಲ್
|
|<ref name="DG" />
|-
! scope="row" | ''[[ಸಂಧ್ಯಾಕ್ಕು ವಿರಿಂಜ ಪೂವು]]''
| ರಾಮು
|
|<ref>{{cite news |last=Kumar |first=S. R. Ashok |date=27 November 2010 |title=Grill Mill: Seema |url=http://www.thehindu.com/features/cinema/grill-mill-seema/article917579.ece |url-status=live |archive-url=https://web.archive.org/web/20160220071107/http://www.thehindu.com/features/cinema/grill-mill-seema/article917579.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಕುಯಿಲಿನೆ ತೇದಿ]]''
| ತಂಪುರನ್ ಕುಟ್ಟಿ
|
|<ref>{{cite news |last=Kumar |first=P. K. Ajith |date=11 August 2011 |title=Back in action |url=http://www.thehindu.com/features/cinema/back-in-action/article2346718.ece |url-status=live |archive-url=https://web.archive.org/web/20160220070806/http://www.thehindu.com/features/cinema/back-in-action/article2346718.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ನಸೀಮಾ]]''
| ಸೈತಾಲಿ
|
|<ref>{{cite news |last=Viswanath |first=Chandrakanth |date=3 December 2015 |title='Avalude Ravukal' was a Turning Point in Sheriff's Career |url=http://www.newindianexpress.com/states/kerala/Avalude-Ravukal-was-a-Turning-Point-in-Sheriff%E2%80%99s-Career/2015/12/03/article3158247.ece |url-status=dead |archive-url=https://web.archive.org/web/20151222112605/http://www.newindianexpress.com/states/kerala/Avalude-Ravukal-was-a-Turning-Point-in-Sheriff%E2%80%99s-Career/2015/12/03/article3158247.ece |archive-date=22 December 2015 |access-date=17 December 2015 |work=[[The New Indian Express]]}}</ref>
|-
! scope="row" | ''[[ಹಿಮವಾಹಿನಿ]]''
| ಪಾಪಿ
|
|<ref name="may2011" />
|-
! scope="row" | ''[[ಗುರು ದಕ್ಷಿಣಾ]]''
| ಸಚಿವ ಪ್ರಭಾಕರನ್
|
|<ref name="may2011" />
|-
! scope="row" | ''[[ಚಕ್ರವಾಳಂ ಚುವನ್ನಪ್ಪೋಲ್]]''
| ಸುರೇಶ್
|
|<ref>{{cite news |last=Hindu |date=14 September 2015 |title=TV programme listings (14/09/2015) |url=http://www.thehindu.com/features/metroplus/radio-and-tv/article7648382.ece |url-status=live |archive-url=https://web.archive.org/web/20160220070947/http://www.thehindu.com/features/metroplus/radio-and-tv/article7648382.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ತಾವಾಳಂ]]''
| ರಾಜಪ್ಪನ್
|
|<ref name="may2011" />
|-
! scope="row" | ''[[ವೀಸಾ]]''
| ಸನ್ನಿ
|
|<ref name="may2011" />
|-
! scope="row" | ''ಆಧಿಪತ್ಯಂ''
| ಮೋಹನ್
|
|<ref>{{cite news |last=Naha |first=Abdul Latheef |date=30 November 2003 |title=Multifaceted film-maker |url=http://www.thehindu.com/lf/2003/11/30/stories/2003113000140200.htm |url-status=dead |archive-url=https://web.archive.org/web/20160220070740/http://www.thehindu.com/lf/2003/11/30/stories/2003113000140200.htm |archive-date=20 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ಎಂಟೆ ಕಥಾ]]''
| ರಮೇಶ್
|
|<ref name="lalvasantham" />
|-
! scope="row" | ''[[ಒರು ಮುಖಂ ಪಾಲ ಮುಖಂ]]''
| ಸುಕುಮಾರನ್ ತಂಪಿ
|
|<ref name="unitedfilms" />
|-
! scope="row" | ''[[ಪಿನ್ನಿಲಾವು]]''
| ರಘು
|
|<ref>{{cite news |last=Venkiteswaran |first=C. S |date=13 September 2012 |title=Madhavan Nair: An actor for all seasons |url=http://www.thehindu.com/features/cinema/madhavan-nair-an-actor-for-all-seasons/article3893139.ece |url-status=live |archive-url=https://web.archive.org/web/20160113191742/http://www.thehindu.com/features/cinema/madhavan-nair-an-actor-for-all-seasons/article3893139.ece |archive-date=13 January 2016 |access-date=16 December 2015 |work=[[The Hindu]]}}</ref>
|-
! scope="row" | ''[[ಅರಬ್ಬೀಕಡಲ್]]''
| ರವಿ
|
|<ref name="sasikumar" />
|-
! scope="row" | ''ಶೇಷಂ ಕಳ್ಚಯಿಲ್''
| ಪೊಲೀಸ್ ಇನ್ಸ್ಪೆಕ್ಟರ್
|
|<ref>{{cite news |last=Nagarajan |first=Saraswathy |date=6 August 2015 |title=Frankly speaking… |url=http://www.thehindu.com/features/friday-review/balachandra-menons-new-film-njan-samvidhanam-cheyyum/article7507550.ece |url-status=live |archive-url=https://web.archive.org/web/20160220070850/http://www.thehindu.com/features/friday-review/balachandra-menons-new-film-njan-samvidhanam-cheyyum/article7507550.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಇನಿಯೆಂಗಿಲುಮ್]]''
| ರವಿ
|
|<ref>{{cite news |last=Pillai |first=Sreedhar |date=17 July 2013 |title=Poor patchwork |url=https://www.indiatoday.in/magazine/society-and-the-arts/films/story/19830915-iniyenkilum-starring-mammootty-mohan-lal-seema-is-a-badly-made-film-771014-2013-07-17 |url-status=live |archive-url=https://web.archive.org/web/20160306142039/http://indiatoday.intoday.in/story/iniyenkilum-starring-mammootty-mohan-lal-seema-is-a-badly-made-film/1/371951.html |archive-date=6 March 2016 |access-date=29 February 2016 |work=[[India Today]]}}</ref>
|-
! scope="row" | ''[[ಮರಕ್ಕಿಲ್ಲೊರಿಕ್ಕಲುಂ]]''
| ಮುರಳಿ
|
|<ref name="lalvasantham" />
|-
! scope="row" | ''[[ಎಂಟೆ ಮಾಮಟ್ಟುಕ್ಕುಟ್ಟಿಯಮ್ಮಕ್ಕು]]''
| ಅಲೆಕ್ಸ್
|
|<ref>{{cite news |last=Manmadhan |first=Prema |date=5 December 2010 |title=He loves courting risks |url=http://www.thehindu.com/life-and-style/money-and-careers/he-loves-courting-risks/article931599.ece |url-status=live |archive-url=https://web.archive.org/web/20160219155140/http://www.thehindu.com/life-and-style/money-and-careers/he-loves-courting-risks/article931599.ece |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ಎಂಗನೆ ನೀ ಮರಕ್ಕುಮ್]]''
| ಶಂಬು
|
|<ref name="lalvasantham" />
|-
! scope="row" | ''[[ನನಯಂ]]''
| ಬಾಬು
|
|<ref name="unitedfilms" />
|-
! scope="row" | ''[[ಅಸ್ತ್ರಂ]]''
| ದಾಸ್
|
|<ref>{{cite news |last=Staff Reporter |date=10 September 2008 |title=Film-maker P.N. Menon dead |url=http://www.thehindu.com/todays-paper/tp-national/tp-kerala/filmmaker-pn-menon-dead/article1335136.ece |url-status=live |archive-url=https://web.archive.org/web/20160229105428/http://www.thehindu.com/todays-paper/tp-national/tp-kerala/filmmaker-pn-menon-dead/article1335136.ece |archive-date=29 February 2016 |access-date=29 February 2016 |work=[[The Hindu]]}}</ref>
|-
! scope="row" | ''[[ಅಟ್ಟಕಳಶಂ]]''
| ಸಂತೋಷ್ ಬಾಬು
|
|<ref>{{cite news |last=Indo-Asian News Service |date=17 July 2014 |title=Ace film director Sasikumar dead |url=https://www.indiatoday.in/movies/regional-cinema/story/ace-film-director-sasikumar-dead-200766-2014-07-17 |url-status=live |archive-url=https://web.archive.org/web/20151222135438/http://indiatoday.intoday.in/story/ace-film-director-sasikumar-dead/1/372899.html |archive-date=22 December 2015 |access-date=19 December 2015 |work=[[India Today]]}}</ref>
|-
! scope="row" | ''[[ಕೊಲಕ್ಕೊಂಬನ್]]''
| ಗೋಪಿ
|
|<ref name="sasikumar" />
|-
! scope="row" | ''[[ಕಟ್ಟತೆ ಕಿಲಿಕ್ಕೂಡು]]''
| ಉನ್ನಿ ಕೃಷ್ಣನ್
|
|<ref>{{cite news |last=Nagarajan |first=Saraswathy |date=31 March 2012 |title=Master of political thrillers |url=http://www.thehindu.com/features/cinema/master-of-political-thrillers/article3258326.ece |url-status=live |archive-url=https://web.archive.org/web/20160219154936/http://www.thehindu.com/features/cinema/master-of-political-thrillers/article3258326.ece |archive-date=19 February 2016 |access-date=16 December 2015 |work=[[The Hindu]]}}</ref>
|-
! scope="row" | ''[[ಚಂಗಾತಂ]]''
| ಎಸ್.ಟಿ. ಡೇನಿಯಲ್
|
|<ref name="unitedfilms">{{cite web |last=Vikram |first=Raj |date=19 April 2015 |title=When Mammootty and Mohanlal unite! |url=http://www.metromatinee.com/news-articles/-when-mammootty-and-mohanlal-unite-11094 |url-status=dead |archive-url=https://web.archive.org/web/20151222124407/http://www.metromatinee.com/news-articles/-when-mammootty-and-mohanlal-unite-11094 |archive-date=22 December 2015 |access-date=21 December 2015 |publisher=Metromatinee.com}}</ref>
|-
| rowspan="25" | 1984
! scope="row" | ''[[ಅಕ್ಕರೆ]]''
| ಸುಧಾಕರನ್
|
|<ref>{{cite news |last=Nambidi |first=Parvathy |date=2 October 2014 |title=A Tale of Innocence |url=http://www.newindianexpress.com/entertainment/malayalam/A-Tale-of-Innocence/2014/10/02/article2458562.ece |url-status=dead |archive-url=https://web.archive.org/web/20151222111710/http://www.newindianexpress.com/entertainment/malayalam/A-Tale-of-Innocence/2014/10/02/article2458562.ece |archive-date=22 December 2015 |access-date=20 December 2015 |work=[[The New Indian Express]]}}</ref>
|-
! scope="row" | ''[[ಒರು ಕೊಚು ಸ್ವಪ್ನಂ]]''
| ಗಿಲ್ಬರ್ಟ್
|
|<ref>{{cite news |last=Kumar |first=P. K. Ajith |date=12 March 2014 |title=Of MBS, melodies, memories… |url=http://www.thehindu.com/todays-paper/tp-national/tp-kerala/of-mbs-melodies-memories/article5775696.ece |url-status=live |archive-url=https://web.archive.org/web/20160220072352/http://www.thehindu.com/todays-paper/tp-national/tp-kerala/of-mbs-melodies-memories/article5775696.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಮನಸರಿಯತೆ]]''
| ಮಮ್ಮೂಟ್ಟಿ
|
|<ref>{{cite news |date=7 July 2016 |title=മമ്മൂട്ടി -ആരുമറിയാത്ത 45 കാര്യങ്ങള് |url=http://www.mathrubhumi.com/movies-music/features/45-unknown-factors-about-mammootty-malayalam-news-1.1184876 |url-status=live |archive-url=https://archive.today/20171129112805/http://www.mathrubhumi.com/movies-music/features/45-unknown-factors-about-mammootty-malayalam-news-1.1184876 |archive-date=29 November 2017 |access-date=30 November 2017 |work=[[Mathrubhumi]] |language=ml}}</ref>
|-
! scope="row" | ''[[ಸ್ವಂಥಮೇವಿಡೆ ಬಂಧಮೇವಿಡೆ]]''
| ರಾಜೇಂದ್ರನ್
|
|<ref>{{cite news |last=Pradeep |first=K. |date=16 July 2009 |title=Tall and handsome 'bad man' |url=http://www.thehindu.com/todays-paper/tp-features/tp-metroplus/tall-and-handsome-bad-man/article638536.ece |url-status=live |archive-url=https://web.archive.org/web/20160220071226/http://www.thehindu.com/todays-paper/tp-features/tp-metroplus/tall-and-handsome-bad-man/article638536.ece |archive-date=20 February 2016 |access-date=16 December 2015 |work=[[The Hindu]]}}</ref>
|-
! scope="row" | ''[[ಆಲ್ಕ್ಕೂಟ್ಟತಿಲ್ ತನಿಯೆ]]''
| ಅನಿಲ್ ಕುಮಾರ್
|
|<ref>{{cite news |last=Kumar |first=P. K. Ajith |date=26 September 2014 |title=Screenplays for ever |url=http://www.thehindu.com/entertainment/screenplays-for-ever/article6449094.ece |url-status=live |archive-url=https://web.archive.org/web/20160220071645/http://www.thehindu.com/entertainment/screenplays-for-ever/article6449094.ece |archive-date=20 February 2016 |access-date=16 December 2015 |work=[[The Hindu]]}}</ref>
|-
! scope="row" | ''[[ಪೂಚಕ್ಕೊರು ಮೂಕ್ಕುತಿ]]''
| ಗೋಪಾಲಕೃಷ್ಣನ್
|
|<ref>{{cite news |last=Times News Network |date=12 May 2007 |title=Priyan's remake Darshan |url=http://articles.economictimes.indiatimes.com/2007-05-12/news/28443490_1_priyadarshan-remakes-hindi-film |url-status=dead |archive-url=https://web.archive.org/web/20151222161539/http://articles.economictimes.indiatimes.com/2007-05-12/news/28443490_1_priyadarshan-remakes-hindi-film |archive-date=22 December 2015 |access-date=16 December 2015 |work=[[The Economic Times|Economic Times]]}}</ref>
|-
! scope="row" | ''[[ಅಪ್ಪುನ್ನಿ]]''
| ಮೇನನ್ ಮಾಷ್
|
|<ref>{{cite news |last=Menon |first=Neelima |date=31 May 2009 |title=One's own copycat |url=http://www.newindianexpress.com/entertainment/tamil/article124536.ece |url-status=dead |archive-url=https://web.archive.org/web/20160229110324/http://www.newindianexpress.com/entertainment/tamil/article124536.ece |archive-date=29 February 2016 |access-date=29 February 2016 |work=[[The New Indian Express]]}}</ref>
|-
! scope="row" | ''[[ಅತಿರಾತ್ರಂ]]''
| ಪ್ರಸಾದ್
|
|<ref>{{cite news |last=Sidhardhan |first=Sanjith |date=8 September 2011 |title=Mashups in Mollywood! |url=http://timesofindia.indiatimes.com/others/news-interviews/Mashups-in-Mollywood/articleshow/9911371.cms |url-status=live |archive-url=https://web.archive.org/web/20160220082827/http://timesofindia.indiatimes.com/others/news-interviews/Mashups-in-Mollywood/articleshow/9911371.cms |archive-date=20 February 2016 |access-date=16 December 2015 |work=[[The Times of India]]}}</ref>
|-
! scope="row" | ''[[ಉನಾರೂ]]''
| ರಾಮು
|
|<ref>{{cite news |last=Ramachandran |first=Mythily |date=15 April 2015 |title=Mani Ratnam's 'O Kadhal Kanmani' out on Friday |url=http://gulfnews.com/life-style/celebrity/desi-news/south-india/mani-ratnam-s-o-kadhal-kanmani-out-on-friday-1.1492175 |url-status=live |archive-url=https://web.archive.org/web/20151123023156/http://gulfnews.com/life-style/celebrity/desi-news/south-india/mani-ratnam-s-o-kadhal-kanmani-out-on-friday-1.1492175 |archive-date=23 November 2015 |access-date=16 December 2015 |work=[[Gulf News]]}}</ref>
|-
! scope="row" | ''[[ಕಳಿಯಿಲ್ ಅಲ್ಪಂ ಕಾರ್ಯಂ]]''
| ವಿನಯನ್
|
|<ref name="may2011" />
|-
! scope="row" | ''[[ಕಿಳಿಕ್ಕೊಂಚಲ್]]''
| ರತೀಶ್
|
|<ref name="may2011" />
|-
! scope="row" | ''[[ಪಾವಂ ಪೂರ್ಣಿಮಾ]]''
| ಅಣ್ಣನ್ ತಂಪುರನ್
|
|<ref name="reghukumar">{{cite web |last=DC |date=20 February 2014 |title=സംഗീത സംവിധയകാൻ രഘുകുമാർ അന്ധരിച്ചു |url=http://www.dcbooks.com/music-director-raghu-kumar-passed-away.html |url-status=dead |archive-url=https://web.archive.org/web/20151222121950/http://www.dcbooks.com/music-director-raghu-kumar-passed-away.html |archive-date=22 December 2015 |access-date=21 December 2015 |publisher=[[DC Books]]}}</ref>
|-
! scope="row" | ''[[ಲಕ್ಷ್ಮಣ ರೇಖಾ]]''
| ಸುಧಾಕರನ್ ನಾಯರ್
|
|<ref name="may2011" />
|-
! scope="row" | ''[[ವನಿತಾ ಪೊಲೀಸ್]]''
| ಅಚುತನ್
|
|<ref>{{cite news |last=Hindu |date=11 June 2014 |title=TV programme listings (11/06/2014) |url=http://www.thehindu.com/features/metroplus/radio-and-tv/article6101171.ece |url-status=live |archive-url=https://web.archive.org/web/20160220071335/http://www.thehindu.com/features/metroplus/radio-and-tv/article6101171.ece |archive-date=20 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ವೆಟ್ಟಾ]]''
| ಬಾಲನ್
|
|<ref>{{cite news |last=James |first=Anu |date=1 March 2016 |title=After Rajesh Pillai, director Mohanroop of 1984 'Vetta' fame passes away |url=http://www.ibtimes.co.in/after-rajesh-pillai-director-Mohanroop-1984-vetta-fame-passes-away-668894 |url-status=dead |archive-url=https://web.archive.org/web/20160301174119/http://www.ibtimes.co.in/after-rajesh-pillai-director-Mohanroop-1984-vetta-fame-passes-away-668894 |archive-date=1 March 2016 |access-date=1 March 2016 |work=[[International Business Times]]}}</ref>
|-
! scope="row" | ''[[ಇವಿಡೆ ತುಡಂಗುನ್ನು]]''
| ಕೃಷ್ಣಕುಮಾರ್
|
|<ref name="sasikumar" />
|-
! scope="row" | ''[[ಶ್ರೀಕೃಷ್ಣ ಪರುಂತು]]''
| ಕುಮಾರನ್
|
|
|-
! scope="row" | ''[[ಕುರುಶಿಯುದ್ಧಂ]]''
| ಜಾನಿ
|
|<ref>{{cite news |last=Kumar |first=P. K. Ajith |date=25 April 2013 |title=Architect of blockbusters |url=http://www.thehindu.com/features/cinema/architect-of-blockbusters/article4653559.ece |url-status=live |archive-url=https://web.archive.org/web/20160220083225/http://www.thehindu.com/features/cinema/architect-of-blockbusters/article4653559.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಇಥಾ ಇನ್ನು ಮುತಲ್]]''
| ಸ್ವತಃ
|ಅತಿಥಿ ಪಾತ್ರ
|<ref>{{cite news |last=Staff Reporter |date=24 April 2010 |title=Actor Sreenath found dead in hotel |url=http://www.thehindu.com/todays-paper/tp-national/tp-kerala/actor-sreenath-found-dead-in-hotel/article755384.ece |url-status=live |archive-url=https://web.archive.org/web/20160220072235/http://www.thehindu.com/todays-paper/tp-national/tp-kerala/actor-sreenath-found-dead-in-hotel/article755384.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಅರಿಯಾತ ವೀತಿಕಳ್]]''
| ಬಾಲನ್
|
|<ref name="may2011" />
|-
! scope="row" | ''[[ಅದುತದುತು]]''
| ವಿಷ್ಣು ಮೋಹನ್
|
|<ref>{{cite web |last=MetroMatinee |date=25 September 1984 |title=Aduthaduthu |url=http://www.metromatinee.com/movie/aduthaduthu-3101 |url-status=dead |archive-url=https://web.archive.org/web/20160223162223/http://www.metromatinee.com/movie/aduthaduthu-3101 |archive-date=23 February 2016 |access-date=22 December 2015 |publisher=Metromatinee.com}}</ref>
|-
! scope="row" | ''[[ತಿರಕಳ್]]''
| ಜೇಮ್ಸ್ ಜಾರ್ಜ್
|
|<ref name="lalvasantham" />
|-
! scope="row" | ''[[ಉಯರಂಗಲಿಲ್]]''
| ಪಿ.ಕೆ. ಜಯರಾಜನ್
|
|<ref name="MT84" />
|-
! scope="row" | ''[[ಆದಿಯೋಳುಕ್ಕುಕಳ್]]''
| ಗೋಪಿ
|
|<ref name="unitedfilms" />
|-
! scope="row" | ''[[ಒನ್ನಾನು ನಮ್ಮಳ್]]''
| ನಂದಗೋಪಾಲ್
|
|<ref>{{cite news |last=പ്രകാശ് |first=ഭാനു |date=7 June 2013 |script-title=ml:'ഗുഡ് ഈവെനിംഗ്, മിസ്സിസ് പ്രഭാ നരേന്ദ്രൻ...' |trans-title='Good evening, Mrs. Prabha Narendran...' |url=http://mathrubhumi.com/movies/welcome/366675/ |url-status=dead |archive-url=https://web.archive.org/web/20160310032529/http://mathrubhumi.com/movies/welcome/366675/ |archive-date=10 March 2016 |access-date=29 February 2016 |work=[[Mathrubhumi]] |language=ml}}</ref>
|-
| rowspan="25" | 1985
! scope="row" | ''[[ಅವಿದತೆಪೋಲೆ ಇವಿದೆಯುಂ]]''
| ಸುಕುಮಾರನ್
|
|<ref>{{cite news |last=Sebastian |first=Shevlin |date=28 November 2009 |title=It's all about being Innocent |url=http://www.newindianexpress.com/entertainment/malayalam/article161560.ece |url-status=dead |archive-url=https://web.archive.org/web/20151222131937/http://www.newindianexpress.com/entertainment/malayalam/article161560.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ನೊಕ್ಕೆತ ಡೂರತು ಕಣ್ಣುಂ ನಟ್ಟು]]''
| ಶ್ರೀಕುಮಾರ್
|
|<ref>{{cite news |last=Wire |first=Sampurn |date=8 May 2010 |title=Nadiya switches attention to TV now |url=http://www.newindianexpress.com/entertainment/tamil/article268513.ece?pageToolsFontSize=70%25 |url-status=dead |archive-url=https://web.archive.org/web/20160220071909/http://www.newindianexpress.com/entertainment/tamil/article268513.ece |archive-date=20 February 2016 |access-date=19 December 2015 |work=[[The New Indian Express]]}}</ref>
|-
! scope="row" | ''[[ಒಮಾನಿಕ್ಕನ್ ಒರ್ಮವೈಕ್ಕನ್]]''
| ದೇವ ಕುಮಾರ್
|
|<ref name="lalvasantham" />
|-
! scope="row" | ''[[ನಾಯಕನ್]]''
| ಕೃಷ್ಣದಾಸ್
|
|<ref name="lalvasantham" />
|-
! scope="row" | ''[[ಅನುಬಂಧಂ]]''
| ಭಾಸ್ಕರನ್
|
|<ref>{{cite news |last=K S |first=Aravind |date=23 June 2015 |title=Slices Panning of Life |url=http://www.newindianexpress.com/entertainment/malayalam/Slices-Panning-of-Life/2015/06/23/article2881125.ece |url-status=dead |archive-url=https://web.archive.org/web/20151222080909/http://www.newindianexpress.com/entertainment/malayalam/Slices-Panning-of-Life/2015/06/23/article2881125.ece |archive-date=22 December 2015 |access-date=16 December 2015 |work=[[The New Indian Express]]}}</ref>
|-
! scope="row" | ''[[ಒನ್ನಾನಂ ಕುನ್ನಿಲ್ ಒರಡಿ ಕುನ್ನಿಲ್]]''
| ನಿತಿನ್
|
|<ref>{{cite news |last=Pradeep |first=K. |date=28 November 2008 |title=Notes of nostalgia |url=http://www.thehindu.com/todays-paper/tp-features/tp-fridayreview/notes-of-nostalgia/article1436492.ece |url-status=live |archive-url=https://web.archive.org/web/20160220072434/http://www.thehindu.com/todays-paper/tp-features/tp-fridayreview/notes-of-nostalgia/article1436492.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ಜೀವಂತೆ ಜೀವನ್]]''
| ಜಯನ್
|
|<ref name="lalvasantham" />
|-
! scope="row" | ''[[ಅಂಗಡಿಕ್ಕಪ್ಪುರತು]]''
| ಬಾಬು
|
|<ref name="may2011" />
|-
! scope="row" | ''[[ರಂಗಂ]]''
| ಅಪ್ಪುನ್ನಿ
|
|<ref>{{cite news |last=Mahesh |first=Chitra |date=1 May 2014 |title=Life on her own terms |url=http://www.thehindu.com/features/friday-review/dance/life-on-her-own-terms/article5966113.ece |url-status=live |archive-url=https://web.archive.org/web/20160220083641/http://www.thehindu.com/features/friday-review/dance/life-on-her-own-terms/article5966113.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಕೂಡುಂ ತೇದಿ]]''
| ಪೀಟರ್
|
|<ref>{{cite news |last=Jayakumar |first=G. |date=30 January 2009 |title=Master of suspense |url=http://www.thehindu.com/todays-paper/tp-features/tp-fridayreview/master-of-suspense/article657180.ece |url-status=live |archive-url=https://web.archive.org/web/20160220072557/http://www.thehindu.com/todays-paper/tp-features/tp-fridayreview/master-of-suspense/article657180.ece |archive-date=20 February 2016 |access-date=22 December 2015 |work=[[The Hindu]]}}</ref>
|-
! scope="row" | ''[[ಎಳು ಮುತಲ್ ಒನ್ಪತು ವರೆ]]''
| ಆನಂದ್
|
|<ref name="sasikumar" />
|-
! scope="row" | ''[[ಅರಂ + ಅರಂ = ಕಿನ್ನರಂ]]''
| ನಾರಾಯಣನ್ ಕುಟ್ಟಿ
|
|<ref>{{cite news |last=Sathyendran |first=Nita |date=10 July 2014 |title=Talking the talk... on the small screen |url=http://www.thehindu.com/features/metroplus/radio-and-tv/talking-the-talk-on-the-small-screen/article6197228.ece |url-status=live |archive-url=https://web.archive.org/web/20160220083335/http://www.thehindu.com/features/metroplus/radio-and-tv/talking-the-talk-on-the-small-screen/article6197228.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಮುಲಮೂಟ್ಟಿಲ್ ಆದಿಮ]]''
| ಆದಿಮಕನ್ನೆ
|
|<ref name="may2011" />
|-
! scope="row" | ''[[ಇದನಿಲಂಗಳ್]]''
| ಬಾಲನ್
|
|<ref>{{cite news |last=Kumar |first=Aswin J |date=24 December 2014 |title=A director who could foresee the future |url=http://timesofindia.indiatimes.com/entertainment/tamil/movies/news/A-director-who-could-foresee-the-future/articleshow/45629663.cms |url-status=live |archive-url=https://web.archive.org/web/20160220072631/http://timesofindia.indiatimes.com/entertainment/tamil/movies/news/A-director-who-could-foresee-the-future/articleshow/45629663.cms |archive-date=20 February 2016 |access-date=21 December 2015 |work=[[The Times of India]]}}</ref>
|-
! scope="row" | ''[[ಬೋಯಿಂಗ್ ಬೋಯಿಂಗ್]]''
| ಶ್ಯಾಮ್
|
|<ref>{{cite news |last=Sidhardhan |first=Sanjith |date=22 November 2011 |title='No other language can match Malayalam comedy' |url=http://timesofindia.indiatimes.com/others/news-interviews/No-other-language-can-match-Malayalam-comedy/articleshow/10842071.cms |url-status=live |archive-url=https://web.archive.org/web/20141001204830/http://timesofindia.indiatimes.com/others/news-interviews/No-other-language-can-match-Malayalam-comedy/articleshow/10842071.cms |archive-date=1 October 2014 |access-date=17 December 2015 |work=[[The Times of India]]}}</ref>
|-
! scope="row" | ''[[ಞಾನ್ ಪಿರನ್ನ ನಾಟ್ಟಿಲ್]]''
| ಇನ್ಸ್ಪೆಕ್ಟರ್ ರಾಜಶೇಖರನ್
|
|<ref name="lalvasantham" />
|-
! scope="row" | ''[[ಅಧ್ಯಾಯಂ ಒನ್ನು ಮುತಲ್]]''
| ವಿಷ್ಣು
|
|<ref>{{cite web |last=MetroMatinee |date=22 December 1985 |title=Adhyayam Onnu Muthal Malayalam Movie |url=http://www.metromatinee.com/movie/adhyayam-onnu-muthal-221 |url-status=dead |archive-url=https://web.archive.org/web/20151223034720/http://www.metromatinee.com/movie/adhyayam-onnu-muthal-221 |archive-date=23 December 2015 |access-date=22 December 2015 |publisher=www.metromatinee.com}}</ref>
|-
! scope="row" | ''[[ಪಥಮುದಯಂ]]''
| ಜಯಮೋಹನ್ ಮತ್ತು ವಿಕ್ರಮನ್
|
|<ref>{{cite web |last=DC |date=9 September 2013 |title=എസ് രമേശൻ നായർക്ക് ചങ്ങമ്പുഴ പുരസ്കാരം |url=http://www.dcbooks.com/changampuzha-award-for-s-ramesan-nair.html |url-status=dead |archive-url=https://web.archive.org/web/20151222112635/http://www.dcbooks.com/changampuzha-award-for-s-ramesan-nair.html |archive-date=22 December 2015 |access-date=20 December 2015 |publisher=[[DC Books]]}}</ref>
|-
! scope="row" | ''[[ಗುರುಜಿ ಒರು ವಾಕ್ಕು]]''
| ಸುಧಾಕರನ್ ನಾಯರ್
|
|<ref>{{cite news |last=Kumar |first=P. K. Ajith |date=15 April 2014 |title=Seasons could not wither his snow-fresh songs |url=http://www.thehindu.com/news/cities/Thiruvananthapuram/seasons-could-not-wither-his-snowfresh-songs/article5914258.ece |url-status=live |archive-url=https://web.archive.org/web/20160220072520/http://www.thehindu.com/news/cities/Thiruvananthapuram/seasons-could-not-wither-his-snowfresh-songs/article5914258.ece |archive-date=20 February 2016 |access-date=22 December 2015 |work=[[The Hindu]]}}</ref>
|-
! scope="row" | ''[[ವಸಂತ ಸೇನಾ]]''
| ದೇವನ್
|
|<ref name="may2011" />
|-
! scope="row" | ''[[ಕರಿಂಪಿನ್ ಪೂವಿನಕ್ಕರೆ]]''
| ಭದ್ರನ್
|
|<ref>{{cite news |last=Hindu |date=3 August 2014 |title=TV programme listings (03/08/2014) |url=http://www.thehindu.com/features/metroplus/radio-and-tv/article6275306.ece |url-status=live |archive-url=https://web.archive.org/web/20160220083423/http://www.thehindu.com/features/metroplus/radio-and-tv/article6275306.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''ಅಳಿಯಾತ ಬಂಧಂಗಳ್''
| ಬಾಲಕೃಷ್ಣನ್
|
|
|-
! scope="row" | ''[[ಉಯರುಂ ಞಾನ್ ನಡಕೆ]]''
| ದಾರಪ್ಪನ್
|
|<ref>{{cite news |last=Kumar |first=P. K. AJITH |date=18 January 2008 |title=Charmed by Mohanam |url=http://www.thehindu.com/todays-paper/tp-features/tp-fridayreview/charmed-by-mohanam/article1432882.ece |url-status=live |archive-url=https://web.archive.org/web/20160220083555/http://www.thehindu.com/todays-paper/tp-features/tp-fridayreview/charmed-by-mohanam/article1432882.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಪರಾಯನುಂವಯ್ಯ ಪರಯತಿರಿಕ್ಕನುಂವಯ್ಯ]]''
| ಕರೆಂಟ್ ಹಂಸ
|
|<ref>{{cite news |last=Soman |first=Deepa |date=13 August 2014 |title=No film with Mohanlal and Mammootty immediately: Priyadarshan |url=http://timesofindia.indiatimes.com/Entertainment/Malayalam/Movies/News/No-film-with-Mohanlal-and-Mammootty-immediately-Priyadarshan/articleshow/40193331.cms |url-status=live |archive-url=https://web.archive.org/web/20140817081806/http://timesofindia.indiatimes.com/Entertainment/Malayalam/Movies/News/No-film-with-Mohanlal-and-Mammootty-immediately-Priyadarshan/articleshow/40193331.cms |archive-date=17 August 2014 |access-date=20 December 2015 |work=[[The Times of India]]}}</ref>
|-
! scope="row" | ''[[ಕಂಡು ಕಂಡರಿಂಜು]]''
| ಉನ್ನಿ ಕೃಷ್ಣನ್ ಉನ್ನಿ
|
|<ref>{{cite news |last=Soman |first=Deepa |date=21 August 2015 |title=M- Town's own booze playlist |url=http://timesofindia.indiatimes.com/entertainment/malayalam/movies/news/M-Towns-own-booze-playlist/articleshow/48556134.cms? |url-status=live |archive-url=https://web.archive.org/web/20160219135324/http://timesofindia.indiatimes.com/entertainment/malayalam/movies/news/M-Towns-own-booze-playlist/articleshow/48556134.cms |archive-date=19 February 2016 |access-date=12 December 2015 |work=[[The Times of India]]}}</ref>
|-
| rowspan="34" | 1986
! scope="row" | ''[[ಪಪ್ಪನ್ ಪ್ರಿಯಪ್ಪೆಟ್ಟ ಪಪ್ಪನ್]]''
| ಇನ್ಸ್ಪೆಕ್ಟರ್ ದೇವದಾಸ್
|
|<ref>{{cite news |last=Manmadhan |first=Prema |date=18 September 2011 |title=Backed by 'Bodyguard' |url=http://www.thehindu.com/features/cinema/backed-by-bodyguard/article2462130.ece |url-status=live |archive-url=https://web.archive.org/web/20160220083830/http://www.thehindu.com/features/cinema/backed-by-bodyguard/article2462130.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಡೂರೆ ಡೂರೆ ಒರು ಕೂಡು ಕೂಟ್ಟಂ]]''
| ದಿವಾಕರನ್
|
|<ref>{{cite news |last=Jayaram |first=Deepika |date=20 December 2015 |title=Salt Mango Tree might release on November 6 |url=http://timesofindia.indiatimes.com/entertainment/malayalam/movies/news/Salt-Mango-Tree-might-release-on-November-6/articleshow/49538875.cms? |url-status=live |archive-url=https://web.archive.org/web/20160220084206/http://timesofindia.indiatimes.com/entertainment/malayalam/movies/news/Salt-Mango-Tree-might-release-on-November-6/articleshow/49538875.cms |archive-date=20 February 2016 |access-date=26 October 2015 |work=[[The Times of India]]}}</ref>
|-
! scope="row" | ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]''
| ಶಂಬು
| 100 ನೇ ಚಿತ್ರ
|<ref>{{cite news |last=George |first=P. G. |date=21 August 2008 |title=Jest like that |url=http://www.thehindu.com/todays-paper/tp-features/tp-metroplus/jest-like-that/article1423161.ece |url-status=live |archive-url=https://web.archive.org/web/20160220083908/http://www.thehindu.com/todays-paper/tp-features/tp-metroplus/jest-like-that/article1423161.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಪಂಚಾಗ್ನಿ]]''
| ರಶೀದ್
|
|<ref>{{cite web |last=Warrier |first=Shobha |date=29 August 2000 |title=Hariharan speaks about Mohanlal |url=http://www.rediff.com/entertai/2000/aug/29hari.htm |url-status=live |archive-url=https://web.archive.org/web/20151006003044/http://www.rediff.com/entertai/2000/aug/29hari.htm |archive-date=6 October 2015 |access-date=16 December 2015 |work=[[Rediff.com]]}}</ref>
|-
! scope="row" | ''[[ಅಭಯಂ ತೇದಿ]]''
| ಅಪ್ಪು
|
|<ref name="lalvasantham" />
|-
! scope="row" | ''[[ಟಿ.ಪಿ. ಬಾಲಗೋಪಾಲನ್ ಎಂ.ಎ.]]''
| ಬಾಲಗೋಪಾಲನ್
|ಕೇರಳ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ
|<ref>{{cite news |last=Kumar |first=P. K. Ajith |date=15 October 2007 |title=Time for celebrations |url=http://www.thehindu.com/todays-paper/tp-national/tp-kerala/time-for-celebrations/article1929968.ece |url-status=live |archive-url=https://web.archive.org/web/20160220084631/http://www.thehindu.com/todays-paper/tp-national/tp-kerala/time-for-celebrations/article1929968.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ದೇಶಾದನಕ್ಕಿಳಿ ಕರಯಾರಿಲ್ಲ]]''
| ಹರಿಶಂಕರ್
|
|<ref>{{cite news |last=Ramnath |first=Nandini |date=8 February 2014 |title=The Love Issue. To be or not to be? |url=http://www.livemint.com/Leisure/5Le56nRXCDyIN0ZqtVHmsM/The-Love-Issue--To-be-or-not-to-be.html |url-status=live |archive-url=https://web.archive.org/web/20151222095312/http://www.livemint.com/Leisure/5Le56nRXCDyIN0ZqtVHmsM/The-Love-Issue--To-be-or-not-to-be.html |archive-date=22 December 2015 |access-date=20 December 2015 |work=[[Mint (newspaper)|Mint]]}}</ref>
|-
! scope="row" | ''[[ವಾರ್ಥಾ]]''
| ಪರೋಲ್ ವಾಸು
|
|<ref>{{cite news |last=Pillai |first=Sreedhar |date=28 February 1987 |title=Malayalam film makers in Kerala transposes real life into reel life |url=https://www.indiatoday.in/magazine/society-and-the-arts/films/story/19870228-malayalam-film-makers-in-kerala-transposes-real-life-into-reel-life-798594-1987-02-27 |url-status=live |archive-url=https://web.archive.org/web/20151222091736/http://indiatoday.intoday.in/story/malayalam-film-makers-in-kerala-transposes-real-life-into-reel-life/1/336768.html |archive-date=22 December 2015 |access-date=16 December 2015 |work=[[India Today]]}}</ref>
|-
! scope="row" | ''[[ಇನಿಯುಂ ಕುರುಕ್ಷೇತ್ರಂ]]''
| ಸುರೇಶ್ ಬಾಬು
|
|<ref name="sasikumar" />
|-
! scope="row" | ''[[ರೇವತಿಕ್ಕೊರು ಪಾವಕ್ಕುಟ್ಟಿ]]''
| ಡಾ. ಮಾಧವನ್ಕುಟ್ಟಿ
|
|<ref>{{cite news |last=Anthikad |first=Sathyan |date=29 January 2013 |title=അവസാനത്തെ 'ഭരത്' അഥവാ ഭരത് ഗോപി |url=http://www.mathrubhumi.com/books/memories/%E0%B4%85%E0%B4%B5%E0%B4%B8%E0%B4%BE%E0%B4%A8%E0%B4%A4%E0%B5%8D%E0%B4%A4%E0%B5%86-%E0%B4%AD%E0%B4%B0%E0%B4%A4%E0%B5%8D-%E0%B4%85%E0%B4%A5%E0%B4%B5%E0%B4%BE-%E0%B4%AD%E0%B4%B0%E0%B4%A4%E0%B5%8D-%E0%B4%97%E0%B5%8B%E0%B4%AA%E0%B4%BF-1.178792 |url-status=live |archive-url=https://web.archive.org/web/20151222153730/http://www.mathrubhumi.com/books/memories/%E0%B4%85%E0%B4%B5%E0%B4%B8%E0%B4%BE%E0%B4%A8%E0%B4%A4%E0%B5%8D%E0%B4%A4%E0%B5%86-%E0%B4%AD%E0%B4%B0%E0%B4%A4%E0%B5%8D-%E0%B4%85%E0%B4%A5%E0%B4%B5%E0%B4%BE-%E0%B4%AD%E0%B4%B0%E0%B4%A4%E0%B5%8D-%E0%B4%97%E0%B5%8B%E0%B4%AA%E0%B4%BF-1.178792 |archive-date=22 December 2015 |access-date=21 December 2015 |work=[[Mathrubhumi]]}}</ref>
|-
! scope="row" | ''[[ಕರಿಯಿಲಕ್ಕಟ್ಟುಪೋಲೆ]]''
| ಇನ್ಸ್ಪೆಕ್ಟರ್ ಅಚುತನ್ಕುಟ್ಟಿ
|
|<ref>{{cite web |last=Ravindranath |first=Sarita |date=5 August 2014 |title=Murder and the Malayalee |url=http://www.sify.com/movies/murder-and-the-malayalee-news-malayalam-oifmk1jaejjfg.html |url-status=dead |archive-url=https://web.archive.org/web/20151224010605/http://www.sify.com/movies/murder-and-the-malayalee-news-malayalam-oifmk1jaejjfg.html |archive-date=24 December 2015 |access-date=20 December 2015 |website=[[Sify]]}}</ref>
|-
! scope="row" | ''[[ಕುಂಜಟ್ಟಕ್ಕಿಳಿಕಳ್]]''
| ಬಾಲಕೃಷ್ಣನ್
|
|<ref name="sasikumar" />
|-
! scope="row" | ''[[ಹೆಲ್ಲೋ ಮೈ ಡಿಯರ್ ರಾಂಗ್ ನಂಬರ್]]''
| ವೇಣುಗೋಪಾಲ್
|
|<ref>{{cite news |last1=Mehrotra |first1=Rohit |last2=Nair |first2=Vipin |date=3 November 2014 |title=Ringing Endorsement |url=http://www.outlookindia.com/article/ringing-endorsement/292342 |url-status=live |archive-url=https://web.archive.org/web/20151222075026/http://www.outlookindia.com/article/ringing-endorsement/292342 |archive-date=22 December 2015 |access-date=20 December 2015 |work=[[Outlook (Indian magazine)|Outlook]]}}</ref>
|-
! scope="row" | ''[[ಎಂಟೆ ಎಂತೆತು ಮಾತ್ರಂ]]''
| ಮಿಸ್ಟರ್ ಮೇನನ್
|
|<ref name="sasikumar" />
|-
! scope="row" | ''[[ನೇರಂ ಪುಳರುಂಬೋಲ್]]''
| ಗಾಡ್ ಫ್ರೀ
|
|<ref>{{cite news |last=Kumar |first=P. K. Ajith |date=30 June 2008 |title=When masters of melody reunite |url=http://www.thehindu.com/todays-paper/tp-national/tp-kerala/when-masters-of-melody-reunite/article1286946.ece |url-status=live |archive-url=https://web.archive.org/web/20160220083948/http://www.thehindu.com/todays-paper/tp-national/tp-kerala/when-masters-of-melody-reunite/article1286946.ece |archive-date=20 February 2016 |access-date=22 December 2015 |work=[[The Hindu]]}}</ref>
|-
! scope="row" | ''[[ಪೂಮುಖಪ್ಪದಿಯಿಲ್ ನಿನ್ನೆಯುಂ ಕಥು]]''
| ಪೌಲಿ
| ಅತಿಥಿ ಪಾತ್ರ
|<ref name="unitedfilms" />
|-
! scope="row" | ''[[ಕಾವೇರಿ]]''
| ಬಾಲಚಂದ್ರನ್ ನಾಯರ್
|
|<ref>{{cite news |last=Nagarajan |first=Saraswathy |date=22 January 2015 |title=Platter of flavours |url=http://www.thehindu.com/features/friday-review/platter-of-flavours/article6811350.ece |url-status=live |archive-url=https://web.archive.org/web/20160229105735/http://www.thehindu.com/features/friday-review/platter-of-flavours/article6811350.ece |archive-date=29 February 2016 |access-date=29 February 2016 |work=[[The Hindu]]}}</ref>
|-
! scope="row" | ''[[ಮಿಳಿನೀರ್ಪ್ಪೂವುಕಳ್]]''
| ರಿಚರ್ಡ್
|
|<ref>{{cite news |last=Shivaprasad |first=S |date=10 May 2012 |title=He cast a 3-D spell |url=http://www.thehindu.com/features/cinema/he-cast-a-3d-spell/article3404301.ece |url-status=live |archive-url=https://web.archive.org/web/20160220084036/http://www.thehindu.com/features/cinema/he-cast-a-3d-spell/article3404301.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಗಾಂಧಿನಗರ್ 2ನೇ ಸ್ಟ್ರೀಟ್]]''
| ಸೇತು / ರಾಮ್ ಸಿಂಗ್
|
|<ref>{{cite news |last=Menon |first=Neelima |date=6 November 2011 |title=The director with the golden touch |url=http://www.newindianexpress.com/entertainment/malayalam/article240024.ece |url-status=dead |archive-url=https://web.archive.org/web/20160229065642/http://www.newindianexpress.com/entertainment/malayalam/article240024.ece |archive-date=29 February 2016 |access-date=29 February 2016 |work=[[The New Indian Express]]}}</ref>
|-
! scope="row" | ''[[ರಾಜವಿಂಟೆ ಮಕನ್]]''
| ವಿನ್ಸೆಂಟ್ ಗೊಮೆಜ್
|
|<ref>{{cite news |last=B S |first=Shibu |date=7 February 2010 |title=The prince returns |url=http://www.newindianexpress.com/cities/thiruvananthapuram/article178273.ece |url-status=dead |archive-url=https://web.archive.org/web/20151222092859/http://www.newindianexpress.com/cities/thiruvananthapuram/article178273.ece |archive-date=22 December 2015 |access-date=20 December 2015 |work=[[The New Indian Express]]}}</ref>
|-
! scope="row" | ''[[ಯುವಜನೋತ್ಸವಂ]]''
| ಜಯನ್
|
|<ref>{{cite news |last=<!--staff byline--> |date=17 December 2015 |title=Singer in uniform delights patients |url=http://www.thehindu.com/news/national/kerala/singer-in-uniform-delights-patients/article7998820.ece |url-status=live |archive-url=https://web.archive.org/web/20160220084304/http://www.thehindu.com/news/national/kerala/singer-in-uniform-delights-patients/article7998820.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಸುಖಮೋ ದೇವಿ]]''
| ಸನ್ನಿ
|
|<ref>{{cite news |last=Menon |first=Harish C |date=10 September 2010 |title=Obituary: Venu Nagavally |url=http://www.newindianexpress.com/entertainment/interviews/article299990.ece |url-status=dead |archive-url=https://web.archive.org/web/20151224112419/http://www.newindianexpress.com/entertainment/interviews/article299990.ece |archive-date=24 December 2015 |access-date=16 December 2015 |work=[[The New Indian Express]]}}</ref>
|-
! scope="row" | ''[[ನಮುಕ್ಕು ಪಾರ್ಕ್ಕನ್ ಮುಂತಿರಿತೊಪ್ಪುಕಳ್]]''
| ಸಾಲೋಮನ್
|
|<ref>{{cite web |last=Nair |first=Patcy |date=1 December 2006 |title=Five great Malayalam movies Bollywood should make |url=http://www.rediff.com/movies/2006/dec/26slide4.htm |url-status=live |archive-url=https://web.archive.org/web/20160105122044/http://www.rediff.com/movies/2006/dec/26slide4.htm |archive-date=5 January 2016 |access-date=20 December 2015 |work=[[Rediff.com]]}}</ref>
|-
! scope="row" | ''[[ನಿಮಿಷಂಗಳ್]]''
| ಮುರಳಿ
|
|<ref name="lalvasantham" />
|-
! scope="row" | ''[[ಮನಸಿಲ್ಲೊರು ಮಣಿಮುತು]]''
| ಮೋಹನ್
|
|<ref>{{cite news |last=Hindu |date=20 December 2012 |title=TV programme listings (20/12/2012) |url=http://www.thehindu.com/features/metroplus/radio-and-tv/article4217457.ece |url-status=live |archive-url=https://web.archive.org/web/20160220084457/http://www.thehindu.com/features/metroplus/radio-and-tv/article4217457.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಒಪ್ಪಂ ಒಪ್ಪಾತಿನೊಪ್ಪಂ]]''
| ಕೃಷ್ಣನ್ ಕುಟ್ಟಿ
|
|<ref name="lalvasantham" />
|-
! scope="row" | ''[[ನಿನ್ನಿಷ್ಟಂ ಎನ್ನಿಷ್ಟಂ]]''
| ಶ್ರೀಕುಮಾರ್
|
|
|-
! scope="row" | ''[[ತಾಲವಟ್ಟಂ]]''
| ವಿನೋದ್
|
|<ref>{{cite news |last=Sharma |first=Nandini |date=1 October 2015 |title=Did you know that these popular Hindi movies that were actually copied from South Indian films? |url=http://www.businessinsider.in/Did-you-know-that-these-popular-Hindi-movies-that-were-actually-copied-from-South-Indian-films/articleshow/49183038.cms |url-status=live |archive-url=https://web.archive.org/web/20151225165922/http://www.businessinsider.in/Did-you-know-that-these-popular-Hindi-movies-that-were-actually-copied-from-South-Indian-films/articleshow/49183038.cms |archive-date=25 December 2015 |access-date=16 December 2015 |work=[[Business Insider]]}}</ref>
|-
! scope="row" | ''[[ಗೀತಂ]]''
| ಜಗದೀಶ್ ನಾಯರ್
|
|<ref name="unitedfilms" />
|-
! scope="row" | ''[[ಒನ್ನು ಮುತಲ್ ಪೂಜ್ಯಂ ವರೆ]]''
| ಟೆಲಿಫೋನ್ ಅಂಕಲ್
|
|<ref>{{cite news |last=Sidhardhan |first=Sanjith |date=14 November 2015 |title=Story behind M Town's most iconic child roles |url=http://timesofindia.indiatimes.com/entertainment/malayalam/movies/news/Story-behind-M-Towns-most-iconic-child-roles/articleshow/49770221.cms? |url-status=live |archive-url=https://web.archive.org/web/20160220084409/http://timesofindia.indiatimes.com/entertainment/malayalam/movies/news/Story-behind-M-Towns-most-iconic-child-roles/articleshow/49770221.cms |archive-date=20 February 2016 |access-date=15 December 2015 |work=[[The Times of India]]}}</ref>
|-
! scope="row" | ''[[ಸನ್ಮಾನಸ್ಸುಳ್ಳವರ್ಕ್ಕು ಸಮಾಧಾನಂ]]''
| ಗೋಪಾಲಕೃಷ್ಣ ಪಣಿಕ್ಕರ್
|
|<ref>{{cite news |last=Anand |first=Shilpa Nair |date=28 November 2014 |title=Living spaces: a house to many top films |url=http://www.thehindu.com/features/metroplus/society/living-spaces-a-house-to-many-top-films/article6643602.ece |url-status=live |archive-url=https://web.archive.org/web/20160220084547/http://www.thehindu.com/features/metroplus/society/living-spaces-a-house-to-many-top-films/article6643602.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಪದಯಾನಿ]]''
| ರಮೇಶ್
|
|<ref>{{cite news |date=30 November 2015 |title=Childhood of Mohanlal by Indrajith? |url=http://www.cinemascoop.net/news/movienews/4185-childhood-of-mohanlal-by-indrajith-in-padayani |url-status=live |archive-url=https://web.archive.org/web/20151222103710/http://www.cinemascoop.net/news/movienews/4185-childhood-of-mohanlal-by-indrajith-in-padayani |archive-date=22 December 2015 |access-date=19 December 2015 |work=Cinemascoop.com}}</ref>
|-
! scope="row" | ''[[ಆದಿವೇರುಕಳ್]]''
| ಬಾಲಕೃಷ್ಣನ್
|
|<ref>{{cite news |last=Pillai |first=Radhika C |date=20 December 2013 |title=Mohanlal to play a retired Army officer |url=http://timesofindia.indiatimes.com/entertainment/malayalam/movies/news/Mohanlal-to-play-a-retired-Army-officer/articleshow/27673505.cms? |url-status=live |archive-url=https://web.archive.org/web/20160229065946/http://timesofindia.indiatimes.com/entertainment/malayalam/movies/news/Mohanlal-to-play-a-retired-Army-officer/articleshow/27673505.cms |archive-date=29 February 2016 |access-date=29 February 2016 |work=[[The Times of India]]}}</ref>
|-
! scope="row" | ''[[ಶೋಭ್ರಾಜ್]]''
| ಶೋಭರಾಜ್ ಮತ್ತು ಧರ್ಮರಾಜ್
|
|<ref>{{cite news |last=Express Web Desk |date=30 October 2015 |title=Four films that perfectly capture the 'devil genius' Charles Sobhraj |url=http://indianexpress.com/article/trending/trending-in-india/four-films-that-perfectly-capture-the-devil-genius-charles-sobhraj/ |url-status=dead |archive-url=https://web.archive.org/web/20151222084036/http://indianexpress.com/article/trending/trending-in-india/four-films-that-perfectly-capture-the-devil-genius-charles-sobhraj/ |archive-date=22 December 2015 |access-date=15 December 2015 |work=[[The Indian Express]]}}</ref>
|-
| rowspan="13" | 1987
! scope="row" | ''ಕೈಯೆತುಂ ದೂರತು''
| ವಿನೋದ್
|
|<ref>{{cite web |last=DC |date=18 May 2013 |title=ആദ്യ ഡയലോഗുമായി വീണ്ടും മോഹൻലാൽ |url=http://www.dcbooks.com/mohanlal-again-with-his-first-dialogue.html |url-status=dead |archive-url=https://web.archive.org/web/20151222130334/http://www.dcbooks.com/mohanlal-again-with-his-first-dialogue.html |archive-date=22 December 2015 |access-date=21 December 2015 |publisher=[[DC Books]]}}</ref>
|-
! scope="row" | ''[[ಜನವರಿ ಒರು ಒರ್ಮ]]''
| ರಾಜು
|
|<ref>{{cite news |last=T |first=Nandakumar |date=22 October 2004 |title=Life Thiruvananthapuram : Pooja 'specials' on a platter |url=http://www.thehindu.com/lf/2004/10/22/stories/2004102200860200.htm |url-status=dead |archive-url=https://web.archive.org/web/20160220084715/http://www.thehindu.com/lf/2004/10/22/stories/2004102200860200.htm |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''ಇವಿಡೆ ಎಲ್ಲಾವರ್ಕ್ಕುಂ ಸುಘಂ''
| ಅಪ್ಪು
|
|<ref name="lalvasantham" />
|-
! scope="row" | ''[[ಅಮೃತಂ ಗಮಯ]]''
| ಡಾ. ಪಿ.ಕೆ. ಹರಿದಾಸ್
|
|<ref>{{cite news |last=Prakash |first=Asha |date=13 February 2015 |title=Drugs, not new in Malayalam Cinema |url=http://timesofindia.indiatimes.com/entertainment/malayalam/movies/news/Drugs-not-new-in-Malayalam-Cinema/articleshow/46213904.cms |url-status=live |archive-url=https://web.archive.org/web/20150219205235/http://timesofindia.indiatimes.com/entertainment/malayalam/movies/news/Drugs-not-new-in-Malayalam-Cinema/articleshow/46213904.cms |archive-date=19 February 2015 |access-date=16 December 2015 |work=[[The Times of India]]}}</ref>
|-
! scope="row" | ''[[ಆದಿಮಕಳ್ ಉದಮಕಳ್]]''
| ಮೋಹನ್ ಚೆರಿಯನ್
|
|<ref>{{cite news |last=Kumar |first=P. K. Ajith |date=28 March 2012 |title=Malayalam scriptwriter Damodaran dead |url=http://www.thehindu.com/news/national/kerala/malayalam-scriptwriter-damodaran-dead/article3253792.ece |url-status=live |archive-url=https://web.archive.org/web/20160220084800/http://www.thehindu.com/news/national/kerala/malayalam-scriptwriter-damodaran-dead/article3253792.ece |archive-date=20 February 2016 |access-date=16 December 2015 |work=[[The Hindu]]}}</ref>
|-
! scope="row" | ''[[ಸರ್ವಕಳಾಶಾಲ]]''
| ಲಾಲ್
|
|<ref>{{cite news |last=Jayaram |first=Deepika |date=11 August 2015 |title=A slice of life from college corridors |url=http://timesofindia.indiatimes.com/entertainment/malayalam/movies/news/A-slice-of-life-from-college-corridors/articleshow/48439607.cms |url-status=live |archive-url=https://web.archive.org/web/20160220084843/http://timesofindia.indiatimes.com/entertainment/malayalam/movies/news/A-slice-of-life-from-college-corridors/articleshow/48439607.cms |archive-date=20 February 2016 |access-date=16 December 2015 |work=[[The Times of India]]}}</ref>
|-
! scope="row" | ''[[ಇರುಪತಂ ನೂಟ್ಟಾಂಡು]]''
| ಸಾಗರ್ ಅಲಿಯಾಸ್ ಜಾಕಿ
|
|<ref>{{cite news |last=Deccan Chronicle |date=19 June 2015 |title=Mohanlal's dubsmash video goes viral |url=https://www.deccanchronicle.com/150619/entertainment-mollywood/article/mohanlal%E2%80%99s-dubsmash-video-goes-viral |url-status=live |archive-url=https://web.archive.org/web/20150622203840/http://deccanchronicle.com/150619/entertainment-mollywood/article/mohanlal%E2%80%99s-dubsmash-video-goes-viral |archive-date=22 June 2015 |access-date=25 March 2016 |work=[[Deccan Chronicle]]}}</ref>
|-
! scope="row" | ''[[ಚೆಪ್ಪು]]''
| ರಾಮಚಂದ್ರನ್
|
|<ref>{{cite news |last=Indo-Asian News Service |date=8 August 2011 |title=Mohanlal set for his 300th film |url=http://www.newindianexpress.com/entertainment/malayalam/article481448.ece |url-status=dead |archive-url=https://web.archive.org/web/20151222111713/http://www.newindianexpress.com/entertainment/malayalam/article481448.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಭೂಮಿಯಿಲೆ ರಾಜಕ್ಕನ್ಮರ್]]''
| ರಾಜಾ ಮಹೇಂದ್ರ ವರ್ಮಾ
|
|<ref name="lalvasantham" />
|-
! scope="row" | ''[[ಉನ್ನಿಕಳೆ ಒರು ಕಧಾ ಪರಯಂ]]''
| ಅಬಿ
|
|<ref>{{cite news |last=Express News Service |date=19 May 2013 |title=They cast a spell on Kochiites |url=http://www.newindianexpress.com/cities/kochi/They-cast-a-spell-on-Kochiites/2013/05/19/article1596548.ece |url-status=dead |archive-url=https://web.archive.org/web/20151222091711/http://www.newindianexpress.com/cities/kochi/They-cast-a-spell-on-Kochiites/2013/05/19/article1596548.ece |archive-date=22 December 2015 |access-date=18 December 2015 |work=[[The New Indian Express]]}}</ref>
|-
! scope="row" | ''[[ತೂವನತ್ತುಂಬಿಕಲ್]]''
| ಮನ್ನಾರತೋಡಿ ಜಯಕೃಷ್ಣನ್
|
|<ref>{{cite news |last=P |first=Divya |date=26 May 2015 |title=Happy birthday Mohanlal: A look at the actor's iconic roles |url=http://english.manoramaonline.com/entertainment/entertainment-news/malayalam-film-actor-mohanlal-birthday-kerala.html |url-status=live |archive-url=https://web.archive.org/web/20160229111156/http://english.manoramaonline.com/entertainment/entertainment-news/malayalam-film-actor-mohanlal-birthday-kerala.html |archive-date=29 February 2016 |access-date=29 February 2016 |work=[[Malayala Manorama]]}}</ref>
|-
! scope="row" | ''[[ವಾಳಿಯೊರಕ್ಕಾಳ್ಚಕಳ್]]''
| ರಾಘವನ್ / ಆಂಟೋನಿ ಐಸಾಕ್
|
|<ref name="may2011" />
|-
! scope="row" | ''[[ನಾಡೋಡಿಕ್ಕಟ್ಟು]]''
| ದಾಸನ್
|
|<ref>{{cite news |last=Kumar |first=M K Sunil |date=2 February 2012 |title=Blast from the past: The duo who stole our hearts |url=http://timesofindia.indiatimes.com/city/kochi/Blast-from-the-past-The-duo-who-stole-our-hearts/articleshow/11722642.cms |url-status=live |archive-url=https://web.archive.org/web/20150711100814/http://timesofindia.indiatimes.com/city/kochi/Blast-from-the-past-The-duo-who-stole-our-hearts/articleshow/11722642.cms |archive-date=11 July 2015 |access-date=17 December 2015 |work=[[The Times of India]]}}</ref>
|-
| rowspan="12" | 1988
! scope="row" | ''[[ಮುಕುಂತೆಟ್ಟ ಸುಮಿತ್ರಾ ವಿಳಿಕ್ಕುನ್ನು]]''
| ಮುಕುಂದನ್ ಕೆ. ಕಾರ್ತಾ
|
|<ref>{{cite news |last=Sudhish |first=Navamy |date=24 September 2013 |title=People still call me Kalyani: Ranjini |url=http://www.newindianexpress.com/entertainment/malayalam/People-still-call-me-Kalyani-Ranjini/2013/09/24/article1799897.ece |url-status=dead |archive-url=https://web.archive.org/web/20160215203012/http://www.newindianexpress.com/entertainment/malayalam/People-still-call-me-Kalyani-Ranjini/2013/09/24/article1799897.ece |archive-date=15 February 2016 |access-date=17 December 2015 |work=[[The New Indian Express]]}}</ref>
|-
! scope="row" | ''[[ಅಯಿತಂ]]''
| ಶಂಕರನ್
|
|<ref>{{cite news |last=Pradeep |first=K. |date=2 September 2009 |title=End of a journey |url=http://www.thehindu.com/features/friday-review/dance/end-of-a-journey/article13646.ece |url-status=dead |archive-url=https://web.archive.org/web/20160220084925/http://www.thehindu.com/features/friday-review/dance/end-of-a-journey/article13646.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ಮನು ಅಂಕಲ್]]''
| ಸ್ವತಃ
| ಅತಿಥಿ ಪಾತ್ರ
|<ref>{{cite news |last=Nagarajan |first=Saraswathy |date=9 December 2015 |title=I am…Gopakumar C. |url=http://www.thehindu.com/features/metroplus/society/meet-gopakumar-c-first-assistant-in-films/article7966315.ece |url-status=live |archive-url=https://web.archive.org/web/20160220085031/http://www.thehindu.com/features/metroplus/society/meet-gopakumar-c-first-assistant-in-films/article7966315.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ಒರ್ಕ್ಕಪ್ಪುರತು]]''
| ಫ್ರೆಡ್ಡಿ ನಿಕೋಲಸ್
|
|<ref>{{cite news |last=Devasia |first=T. K. |date=27 December 2014 |title=Malayalam film actor Balakrishnan passes away – Khaleej Times |url=http://www.khaleejtimes.com/article/20141227/ARTICLE/312279945/1028 |url-status=live |archive-url=https://web.archive.org/web/20151222082411/http://www.khaleejtimes.com/article/20141227/ARTICLE/312279945/1028 |archive-date=22 December 2015 |access-date=17 December 2015 |work=[[Khaleej Times]]}}</ref>
|-
! scope="row" | ''[[ಪಟ್ಟನಪ್ರವೇಶಂ]]''
| ಸಿಐಡಿ ರಾಮದಾಸ್ / ದಾಸನ್
|
|<ref>{{cite news |last=Sidhardhan |first=Sanjith |date=20 September 2011 |title=Scoring with sequels |url=http://timesofindia.indiatimes.com/others/news-interviews/Scoring-with-sequels/articleshow/10053641.cms |url-status=live |archive-url=https://web.archive.org/web/20160226165234/http://timesofindia.indiatimes.com/others/news-interviews/Scoring-with-sequels/articleshow/10053641.cms |archive-date=26 February 2016 |access-date=26 February 2016 |work=[[The Times of India]]}}</ref>
|-
! scope="row" | ''[[ಪಾದ ಮುದ್ರ]]''
| ಮತು ಪಾಂಡರಂ ಮತ್ತು ಸೋಪ್ ಕುಟ್ಟಪ್ಪನ್
|
|<ref name="sketch">{{cite news |last=Kumar |first=P. K. AJITH |date=12 October 2007 |title=Sketch of the Guru |url=http://www.thehindu.com/todays-paper/tp-features/tp-fridayreview/sketch-of-the-guru/article2273938.ece |url-status=live |archive-url=https://web.archive.org/web/20160220085129/http://www.thehindu.com/todays-paper/tp-features/tp-fridayreview/sketch-of-the-guru/article2273938.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ಆರ್ಯನ್]]''
| ದೇವನಾರಾಯಣನ್
| style="text-align:center;" |
|<ref>{{cite news |last=Viswanath |first=Chandrkanth |date=27 May 2012 |title=Adieu to the exotic villain |url=http://www.newindianexpress.com/entertainment/malayalam/article528449.ece |url-status=dead |archive-url=https://web.archive.org/web/20151224225314/http://www.newindianexpress.com/entertainment/malayalam/article528449.ece |archive-date=24 December 2015 |access-date=17 December 2015 |work=[[The New Indian Express]]}}</ref>
|-
! scope="row" | ''[[ಅನುರಾಗಿ]]''
| ಸಾಮು
|
|<ref>{{cite news |last=Kaumudi |date=2 December 2015 |title=Script writer Alleppey Sherif no more |url=http://www.kaumudi.com/innerpage1.php?newsid=72022 |url-status=live |archive-url=https://web.archive.org/web/20151222164246/http://www.kaumudi.com/innerpage1.php?newsid=72022 |archive-date=22 December 2015 |access-date=17 December 2015 |work=[[Kerala Kaumudi]]}}</ref>
|-
! scope="row" | ''[[ಮೂನ್ನಾಂ ಮುರ]]''
| ಅಲಿ ಇಮ್ರಾನ್
|
|<ref>{{cite news |last=Menon |first=Anasuya |date=4 December 2011 |title=A dekko into past glory |url=http://www.thehindu.com/features/friday-review/history-and-culture/a-dekko-into-past-glory/article2686817.ece |url-status=live |archive-url=https://web.archive.org/web/20160220085210/http://www.thehindu.com/features/friday-review/history-and-culture/a-dekko-into-past-glory/article2686817.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ವೆಲ್ಲನಕಳುಡೆ ನಾಡು]]''
| ಸಿ. ಪವಿತ್ರನ್ "ಸಿ.ಪಿ." ನಾಯರ್
|
|<ref>{{cite news |last=Indo-Asian News Service |date=1 July 2010 |title=No dancing around trees in 'Khatta Meetha': Trisha |url=http://zeenews.india.com/entertainment/bollywood/no-dancing-around-trees-in-khatta-meetha-trisha_64872.html |url-status=live |archive-url=https://web.archive.org/web/20151222110801/http://zeenews.india.com/entertainment/bollywood/no-dancing-around-trees-in-khatta-meetha-trisha_64872.html |archive-date=22 December 2015 |access-date=17 December 2015 |work=[[Zee News]]}}</ref>
|-
! scope="row" | ''[[ಉಲ್ಸವಪಿಟ್ಟೆನ್ನು]]''
| ಅನಿಯನ್ಕುಟ್ಟನ್
|
|<ref>{{cite web |last=Warrier |first=Shobha |date=29 January 2008 |title=Goodbye, Mr Bharat Gopi |url=http://www.rediff.com/movies/2008/jan/29gopi.htm |url-status=live |archive-url=https://web.archive.org/web/20150721234517/http://www.rediff.com/movies/2008/jan/29gopi.htm |archive-date=21 July 2015 |access-date=17 December 2015 |work=[[Rediff.com]]}}</ref>
|-
! scope="row" | ''[[ಚಿತ್ರಂ]]''
| ವಿಷ್ಣು
|
|<ref>{{cite news |last=Ramachandran |first=Mythily |date=16 April 2014 |title=Catching up with actress Ranjini |url=http://gulfnews.com/life-style/celebrity/catching-up-with-actress-ranjini-1.1320172 |url-status=live |archive-url=https://web.archive.org/web/20151222091411/http://gulfnews.com/life-style/celebrity/catching-up-with-actress-ranjini-1.1320172 |archive-date=22 December 2015 |access-date=17 December 2015 |work=[[Gulf News]]}}</ref>
|-
| rowspan="10" | 1989
! scope="row" | ''[[ದೌತ್ಯಂ]]''
| ಕ್ಯಾಪ್ಟನ್ ರಾಯ್ ಜಾಕೋಬ್ ಥಾಮಸ್
|
|<ref>{{cite news |last=Sidhardhan |first=Sanjith |date=6 May 2013 |title=Mohanlal to play a military officer once more |url=http://timesofindia.indiatimes.com/entertainment/malayalam/movies/news/Mohanlal-to-play-a-military-officer-once-more/articleshow/19895566.cms? |url-status=live |archive-url=https://web.archive.org/web/20160220085344/http://timesofindia.indiatimes.com/entertainment/malayalam/movies/news/Mohanlal-to-play-a-military-officer-once-more/articleshow/19895566.cms |archive-date=20 February 2016 |access-date=16 December 2015 |work=[[The Times of India]]}}</ref>
|-
! scope="row" | ''[[ಸೀಸನ್]]''
| ಜೀವನ್
|
|<ref>{{cite web |last=Vikram |first=Raj |date=26 October 2010 |title=Prithviraj to do "Season" remake.. |url=http://www.metromatinee.com/news-articles/prithviraj-to-do-season-remake-2698 |url-status=dead |archive-url=https://web.archive.org/web/20160226174149/http://www.metromatinee.com/news-articles/prithviraj-to-do-season-remake-2698 |archive-date=26 February 2016 |access-date=26 February 2016 |publisher=Metromatinee.com}}</ref>
|-
! scope="row" | ''[[ವರವೇಲ್ಪು]]''
| ಮುರಳಿಧರನ್
|
|<ref>{{cite news |last=Sanandakumar |first=S |date=14 July 2013 |title=Kerala's non-resident tycoons investing in massive projects back home |url=http://articles.economictimes.indiatimes.com/2013-07-14/news/40554381_1_nrks-yusuffali-ma-gulf-countries |url-status=dead |archive-url=https://web.archive.org/web/20150627200024/http://articles.economictimes.indiatimes.com/2013-07-14/news/40554381_1_nrks-yusuffali-ma-gulf-countries |archive-date=27 June 2015 |access-date=16 December 2015 |work=[[The Economic Times|Economic Times]]}}</ref>
|-
! scope="row" | ''[[ನಾಡುವಾಳಿಕಳ್]]''
| ಅರ್ಜುನ್
|
|<ref>{{cite news |last=Sidhardhan |first=Sanjith |date=18 June 2012 |title=One more film inspired by The Godfather |url=http://timesofindia.indiatimes.com/entertainment/malayalam/movies/news/One-more-film-inspired-by-The-Godfather/articleshow/14207849.cms |url-status=live |archive-url=https://web.archive.org/web/20150404004133/http://timesofindia.indiatimes.com/entertainment/malayalam/movies/news/One-more-film-inspired-by-The-Godfather/articleshow/14207849.cms |archive-date=4 April 2015 |access-date=16 December 2015 |work=[[The Times of India]]}}</ref>
|-
! scope="row" | ''[[ವಂದನಂ]]''
| ಉನ್ನಿಕೃಷ್ಣನ್
|
|<ref>{{cite news |last=Krishnakumar |first=R |date=27 July 2014 |title=Bangalore woos filmmakers |url=http://www.deccanherald.com/content/422054/bangalore-woos-filmmakers.html |url-status=live |archive-url=https://web.archive.org/web/20151222122931/http://www.deccanherald.com/content/422054/bangalore-woos-filmmakers.html |archive-date=22 December 2015 |access-date=17 December 2015 |work=[[Deccan Herald]]}}</ref>
|-
! scope="row" | ''[[ಪೆರುವಣ್ಣಪುರತೆ ವಿಶೇಷಂಗಳ್]]''
| ಅಚುತ ಕುರುಪ್
| ಅತಿಥಿ ಪಾತ್ರ
|<ref>{{cite news |last=Soman |first=Deepa |date=9 November 2013 |title=In Mollywood, cameo roles are on the rise |url=http://timesofindia.indiatimes.com/entertainment/malayalam/movies/news/In-Mollywood-cameo-roles-are-on-the-rise/articleshow/25445574.cms? |url-status=live |archive-url=https://web.archive.org/web/20160220085428/http://timesofindia.indiatimes.com/entertainment/malayalam/movies/news/In-Mollywood-cameo-roles-are-on-the-rise/articleshow/25445574.cms |archive-date=20 February 2016 |access-date=17 December 2015 |work=[[The Times of India]]}}</ref>
|-
! scope="row" | ''[[ಕಿರೀಡಂ]]''
| ಸೇತುಮಾಧವನ್
|ರಾಷ್ಟ್ರೀಯ ಚಲನಚಿತ್ರ ವಿಶೇಷ ಉಲ್ಲೇಖ
|<ref>{{cite news |last=Krishnakumar |first=R |date=20 July 2014 |title=Birth of a tragic hero |url=http://www.deccanherald.com/content/420608/birth-tragic-hero.html |url-status=live |archive-url=https://web.archive.org/web/20160113163614/http://www.deccanherald.com/content/420608/birth-tragic-hero.html |archive-date=13 January 2016 |access-date=17 December 2015 |work=[[Deccan Herald]]}}</ref>
|-
! scope="row" | ''[[ಲಾಲ್ ಅಮೆರಿಕಯಿಲ್]]''
| ವಿನೋದ್
| ವಿಳಂಬ ಬಿಡುಗಡೆ; 1986 ರಲ್ಲಿ ಚಿತ್ರೀಕರಿಸಲಾಗಿದೆ
|<ref>{{cite news |last=Sidhardhan |first=Sanjith |date=14 April 2012 |title=Mollywood goes to America |url=http://timesofindia.indiatimes.com/others/news-interviews/Mollywood-goes-to-America/articleshow/12651112.cms? |url-status=live |archive-url=https://web.archive.org/web/20160220085256/http://timesofindia.indiatimes.com/others/news-interviews/Mollywood-goes-to-America/articleshow/12651112.cms |archive-date=20 February 2016 |access-date=16 December 2015 |work=[[The Times of India]]}}</ref>
|-
! scope="row" | ''[[ಆಧಿಪನ್]]''
| ವಕೀಲ ಶ್ಯಾಮ್ ಪ್ರಕಾಶ್
|
|<ref>{{cite news |last=Sidhardhan |first=Sanjith |date=16 September 2015 |title='Mohanlal's mischief attracted me' |url=http://timesofindia.indiatimes.com/entertainment/malayalam/movies/news/Mohanlals-mischief-attracted-me/articleshow/48982100.cms? |url-status=live |archive-url=https://web.archive.org/web/20160220085515/http://timesofindia.indiatimes.com/entertainment/malayalam/movies/news/Mohanlals-mischief-attracted-me/articleshow/48982100.cms |archive-date=20 February 2016 |access-date=17 December 2015 |work=[[The Times of India]]}}</ref>
|-
! scope="row" | ''[[ದಶರಥಂ]]''
| ರಾಜೀವ್ ಮೇನನ್
|
|<ref>{{cite news |last=Diwakar |first=Gitanjali |date=29 July 2015 |title=Surrogacy: Narrated through motion pictures |url=http://english.manoramaonline.com/lifestyle/health/surrogacy-narrated-through-motion-pictures.html |url-status=dead |archive-url=https://web.archive.org/web/20151222144515/http://english.manoramaonline.com/lifestyle/health/surrogacy-narrated-through-motion-pictures.html |archive-date=22 December 2015 |access-date=16 December 2015 |work=[[Malayala Manorama]]}}</ref>
|-
| rowspan="11" | 1990
! scope="row" | ''[[ಅಕ್ಕರೆ ಅಕ್ಕರೆ ಅಕ್ಕರೆ]]''
| ಸಿಐಡಿ ರಾಮದಾಸ್/ದಾಸನ್
|
|<ref>{{cite news |last=Soman |first=Deepa |date=31 October 2013 |title=Sequel fever in Malayalam cinema |url=http://timesofindia.indiatimes.com/entertainment/malayalam/movies/news/Sequel-fever-in-Malayalam-cinema/articleshow/25044473.cms? |url-status=live |archive-url=https://web.archive.org/web/20160220085618/http://timesofindia.indiatimes.com/entertainment/malayalam/movies/news/Sequel-fever-in-Malayalam-cinema/articleshow/25044473.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಆಯೆ ಆಟೋ]]''
| ಸುಧಿ
|
|<ref>{{cite news |last=Sharadhaa |first=A |date=8 May 2013 |title=When the autowale grab all the limelight |url=http://www.newindianexpress.com/entertainment/kannada/When-the-autowale-grab-all-the-limelight/2013/05/08/article1580345.ece |url-status=dead |archive-url=https://web.archive.org/web/20151225025020/http://www.newindianexpress.com/entertainment/kannada/When-the-autowale-grab-all-the-limelight/2013/05/08/article1580345.ece |archive-date=25 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ನಂ.20 ಮದ್ರಾಸ್ ಮೇಲ್]]''
| ಟೋನಿ ಕುರಿಶಿಂಗಲ್
|
|<ref>{{cite news |last=Pilla |first=Radhika C |date=16 June 2015 |title=Mohanlal's kissing pic goes viral! |url=http://timesofindia.indiatimes.com/entertainment/malayalam/movies/news/Mohanlals-kissing-pic-goes-viral/articleshow/47685999.cms? |url-status=live |archive-url=https://web.archive.org/web/20150624005733/http://timesofindia.indiatimes.com/entertainment/malayalam/movies/news/Mohanlals-kissing-pic-goes-viral/articleshow/47685999.cms |archive-date=24 June 2015 |access-date=19 December 2015 |work=[[The Times of India]]}}</ref>
|-
! scope="row" | ''[[ಮುಖಂ]]''
| ಹರಿಪ್ರಸಾದ್
|
|<ref>{{cite news |last=Kurian |first=Shiba |date=15 September 2013 |title=Ranjini and Mohanlal to share screen space after two decades |url=http://timesofindia.indiatimes.com/entertainment/malayalam/movies/news/Ranjini-and-Mohanlal-to-share-screen-space-after-two-decades/articleshow/22590895.cms |url-status=live |archive-url=https://web.archive.org/web/20160220085836/http://timesofindia.indiatimes.com/entertainment/malayalam/movies/news/Ranjini-and-Mohanlal-to-share-screen-space-after-two-decades/articleshow/22590895.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಹಿಸ್ ಹೈನೆಸ್ ಅಬ್ದುಲ್ಲಾ]]''
| ಅಬ್ದುಲ್ಲಾ / ಆನಂದನ್ ನಂಪೂತಿರಿ
|
|<ref>{{cite news |last=Kumar |first=P. K. Ajith |date=31 March 2015 |title=Silver milestone for a golden song |url=http://www.thehindu.com/news/national/kerala/silver-milestone-for-a-golden-song/article7051341.ece |url-status=live |archive-url=https://web.archive.org/web/20160220085706/http://www.thehindu.com/news/national/kerala/silver-milestone-for-a-golden-song/article7051341.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಕದತನಾಡನ್ ಅಂಬಾಡಿ]]''
| ಕದತನಾಡನ್ ಅಂಬಾಡಿ
| ವಿಳಂಬ ಬಿಡುಗಡೆ; 1987 ರಲ್ಲಿ ಚಿತ್ರೀಕರಿಸಲಾಗಿದೆ
|<ref>{{cite news |last=Mathew |first=Dennis Marcus |date=2 February 2011 |title=Malayalam cinema's Sarangapani is no more |url=http://www.thehindu.com/news/national/kerala/malayalam-cinemas-sarangapani-is-no-more/article1149198.ece |url-status=live |archive-url=https://web.archive.org/web/20160220085928/http://www.thehindu.com/news/national/kerala/malayalam-cinemas-sarangapani-is-no-more/article1149198.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ತಾಲ್ವರಂ]]''
| ಬಾಲನ್
|
|<ref>{{cite news |last=Kumar |first=P. K. Ajith |date=26 September 2014 |title=Screenplays for ever |url=http://www.thehindu.com/entertainment/screenplays-for-ever/article6449094.ece |url-status=live |archive-url=https://web.archive.org/web/20160220071645/http://www.thehindu.com/entertainment/screenplays-for-ever/article6449094.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಅರ್ಹತ]]''
| ದೇವರಾಜ್
|
|<ref>{{cite news |last=B S |first=Shibu |date=9 September 2011 |title=Big Ms take an Onam break |url=http://www.newindianexpress.com/cities/kochi/article360273.ece |url-status=dead |archive-url=https://web.archive.org/web/20151222110712/http://www.newindianexpress.com/cities/kochi/article360273.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಇಂದ್ರಜಾಲಂ]]''
| ಕಣ್ಣನ್ ನಾಯರ್
|
|<ref>{{cite news |last=Jhunjhunwala |first=Udita |date=9 September 2015 |title='When I saw Masaan, I realised Vicky Kaushal really is an actor' |url=http://www.hindustantimes.com/brunch/when-i-saw-masaan-i-realised-vicky-kaushal-really-is-an-actor/story-sb85fgziQzB6AplP1aiaDL.html |url-status=live |archive-url=https://web.archive.org/web/20151222111046/http://www.hindustantimes.com/brunch/when-i-saw-masaan-i-realised-vicky-kaushal-really-is-an-actor/story-sb85fgziQzB6AplP1aiaDL.html |archive-date=22 December 2015 |access-date=19 December 2015 |work=[[Hindustan Times]]}}</ref>
|-
! scope="row" | ''[[ಅಪ್ಪು]]''
| ಅಪ್ಪು
|
|<ref>{{cite news |last=Ayyappan |first=R |date=7 August 2009 |title=Irreverence personified |url=http://www.newindianexpress.com/states/kerala/article66699.ece |url-status=dead |archive-url=https://web.archive.org/web/20151222114921/http://www.newindianexpress.com/states/kerala/article66699.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಲಾಲ್ ಸಲಾಂ]]''
| ನೆಟ್ಟೂರ್ ಸ್ಟೀಫನ್
|
|<ref>{{cite news |last=Venkiteswaram |first=C. S. |date=17 September 2010 |title=The unconventional hero |url=http://www.thehindu.com/todays-paper/tp-features/tp-fridayreview/the-unconventional-hero/article673252.ece |url-status=live |archive-url=https://web.archive.org/web/20160220090206/http://www.thehindu.com/todays-paper/tp-features/tp-fridayreview/the-unconventional-hero/article673252.ece |archive-date=20 February 2016 |access-date=19 December 2015 |work=[[The Hindu]]}}</ref>
|-
| rowspan="10" | 1991
! scope="row" | ''[[ಧನಂ]]''
| ಶಿವಶಂಕರನ್
|
|<ref>{{cite web |last=George |first=Meghna |date=29 June 2009 |title=A K Lohithadas (1955–2009): Tribute to a legend |url=http://movies.rediff.com/report/2009/jun/29/a-k-lohithadas-tribute-to-a-legend.htm |url-status=live |archive-url=https://web.archive.org/web/20151222173555/http://movies.rediff.com/report/2009/jun/29/a-k-lohithadas-tribute-to-a-legend.htm |archive-date=22 December 2015 |access-date=19 December 2015 |work=[[Rediff.com]]}}</ref>
|-
! scope="row" | ''[[ಗೋಪುರ ವಾಸಲಿಲೆ]]''
| ಅಕಾರ್ಡಿಯನ್ ವಾದಕ
| ತಮಿಳು ಚಿತ್ರ; "ಕೆಲಾದಿ ಎನ್ ಪಾವಾಯೇ" ಹಾಡಿನಲ್ಲಿ ವಿಶೇಷ ಪಾತ್ರ
|<ref>{{cite news |last=Kurian |first=Shiba |date=20 May 2012 |title=Lady luck has not been kind to all Mollywood actors |url=http://timesofindia.indiatimes.com/entertainment/malayalam/movies/news/Lady-luck-has-not-been-kind-to-all-Mollywood-actors/articleshow/13298071.cms |url-status=live |archive-url=https://archive.today/20170610081159/http://timesofindia.indiatimes.com/entertainment/malayalam/movies/news/Lady-luck-has-not-been-kind-to-all-Mollywood-actors/articleshow/13298071.cms |archive-date=10 June 2017 |access-date=11 December 2015 |work=[[The Times of India]]}}</ref>
|-
! scope="row" | ''[[ಭರತಂ]]''
| ಕಲ್ಲೂರ್ "ಗೋಪಿ" ಗೋಪಿನಾಥನ್
|ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ
|<ref>{{cite news |last=Pillai |first=Radhika C |date=15 December 2013 |title=Mammooty and Mohanlal in Forbe's list |url=http://timesofindia.indiatimes.com/entertainment/malayalam/movies/news/Mammooty-and-Mohanlal-in-Forbes-list/articleshow/27407829.cms? |url-status=live |archive-url=https://web.archive.org/web/20160220090330/http://timesofindia.indiatimes.com/entertainment/malayalam/movies/news/Mammooty-and-Mohanlal-in-Forbes-list/articleshow/27407829.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ವಿಷ್ಣುಲೋಕಂ]]''
| ಶಂಕು
|
|<ref>{{cite news |last=Gauri |first=Deepa |date=10 April 2014 |title=Expat focus: T.A. Razak is scouting for talent in Dubai |url=http://www.khaleejtimes.com/article/20140410/ARTICLE/304109963/1057 |url-status=live |archive-url=https://web.archive.org/web/20151222113301/http://www.khaleejtimes.com/article/20140410/ARTICLE/304109963/1057 |archive-date=22 December 2015 |access-date=19 December 2015 |work=[[Khaleej Times]]}}</ref>
|-
! scope="row" | ''[[ವಸ್ತುಹಾರ]]''
| ವೇಣುಗೋಪಾಲ್
|
|<ref>{{cite news |last=<!--staff byline--> |date=16 March 2012 |title=Aravindan's Vasthuhara to be screened |url=http://www.thehindu.com/todays-paper/tp-national/tp-kerala/aravindans-vasthuhara-to-be-screened/article3001153.ece |url-status=live |archive-url=https://web.archive.org/web/20160220090251/http://www.thehindu.com/todays-paper/tp-national/tp-kerala/aravindans-vasthuhara-to-be-screened/article3001153.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಉಲ್ಲಾಡಕ್ಕಂ]]''
| ಡಾ. ಸನ್ನಿ
|
|<ref>{{cite news |last=Ranjithaa |date=14 June 2000 |title=Kamal joins the rat race |url=http://www.rediff.com/movies/2000/jun/14spice.htm |url-status=live |archive-url=https://web.archive.org/web/20160129003006/http://www.rediff.com/movies/2000/jun/14spice.htm |archive-date=29 January 2016 |access-date=19 December 2015 |work=[[Rediff.com]]}}</ref>
|-
! scope="row" | ''[[ಅಂಕಲ್ ಬನ್]]''
| ಚಾರ್ಲಿ ಚಾಕೋ
|
|<ref>{{cite news |last=Pillai |first=Radhika C |date=5 January 2015 |title=Actress Monica is getting married |url=http://timesofindia.indiatimes.com/entertainment/malayalam/movies/news/Actress-Monica-is-getting-married/articleshow/45759943.cms |url-status=live |archive-url=https://web.archive.org/web/20150108130217/http://timesofindia.indiatimes.com/entertainment/malayalam/movies/news/Actress-Monica-is-getting-married/articleshow/45759943.cms |archive-date=8 January 2015 |access-date=19 December 2015 |work=[[The Times of India]]}}</ref>
|-
! scope="row" | ''[[ಕಿಲುಕ್ಕಂ]]''
| ಜೋಜಿ
|
|<ref>{{cite news |last=Gauri |first=Deepa |date=7 November 2015 |title=Romance returns to Malayalam cinema |url=http://khaleejtimes.com/citytimes/south-stars/romance-returns-to-malayalam-cinema |url-status=live |archive-url=https://web.archive.org/web/20160115165342/http://khaleejtimes.com/citytimes/south-stars/romance-returns-to-malayalam-cinema |archive-date=15 January 2016 |access-date=19 December 2015 |work=[[Khaleej Times]]}}</ref>
|-
! scope="row" | ''[[ಕಿಳಕ್ಕುನರುಂ ಪಕ್ಷಿ]]''
| ಆನಂದ್ ಮೂರ್ತಿ
|
|<ref name="backto" />
|-
! scope="row" | ''[[ಅಭಿಮನ್ಯು]]''
| ಹರಿಕೃಷ್ಣನ್
|
|<ref>{{cite web |last=Moviebuzz (Sify) |date=19 May 2006 |title=Thalainagaram |url=http://www.sify.com/movies/thalainagaram-review-tamil-pclvUXecbjefa.html |url-status=dead |archive-url=https://web.archive.org/web/20160226173547/http://www.sify.com/movies/thalainagaram-review-tamil-pclvUXecbjefa.html |archive-date=26 February 2016 |access-date=26 February 2016 |website=[[Sify]]}}</ref>
|-
| rowspan="9" | 1992
! scope="row" | ''[[ಸದಯಂ]]''
| ಸತ್ಯನಾಧನ್
|
|<ref>{{cite news |last=Karthikeyan |first=Shruti |date=4 July 2014 |title=Filmmakers go 'behind bars' |url=http://timesofindia.indiatimes.com/entertainment/malayalam/movies/news/Filmmakers-go-behind-bars/articleshow/37904077.cms |url-status=live |archive-url=https://web.archive.org/web/20140728174744/http://timesofindia.indiatimes.com/entertainment/malayalam/movies/news/Filmmakers-go-behind-bars/articleshow/37904077.cms |archive-date=28 July 2014 |access-date=19 December 2015 |work=[[The Times of India]]}}</ref>
|-
! scope="row" | ''[[ಸೂರ್ಯ ಗಾಯತ್ರಿ]]''
| ಡಾ. ಬಾಲಸುಬ್ರಮಣಿಯನ್
|
|<ref>{{cite news |last=Kurian |first=Shiba |date=16 July 2012 |title=No more ragging woes for freshers at college |url=http://timesofindia.indiatimes.com/life-style/people/No-more-ragging-woes-for-freshers-at-college/articleshow/14951936.cms? |url-status=live |archive-url=https://web.archive.org/web/20120716215132/http://timesofindia.indiatimes.com/life-style/people/No-more-ragging-woes-for-freshers-at-college/articleshow/14951936.cms |archive-date=16 July 2012 |access-date=19 December 2015 |work=[[The Times of India]]}}</ref>
|-
! scope="row" | ''[[ಕಮಲದಳಂ]]''
| ನಂದಗೋಪನ್
|
|<ref>{{cite news |last=Gauri |first=Deepa |date=21 April 2015 |title=Dedication is key to success for Asha – Khaleej Times |url=http://www.khaleejtimes.com/article/20150421/ARTICLE/304219994/1057 |url-status=live |archive-url=https://web.archive.org/web/20151222110848/http://www.khaleejtimes.com/article/20150421/ARTICLE/304219994/1057 |archive-date=22 December 2015 |access-date=19 December 2015 |work=[[Khaleej Times]]}}</ref>
|-
! scope="row" | ''[[ಅಹಂ]]''
| ಸಿದ್ಧಾರ್ಥನ್
|
|<ref>{{cite news |last=K S |first=Aravind |date=22 January 2015 |title=In Retrospect |url=http://www.newindianexpress.com/entertainment/malayalam/In-Retrospect/2015/01/22/article2630485.ece |url-status=dead |archive-url=https://web.archive.org/web/20151222120239/http://www.newindianexpress.com/entertainment/malayalam/In-Retrospect/2015/01/22/article2630485.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ರಾಜಶಿಲ್ಪಿ]]''
| ಶಂಭು
|
|<ref name="sketch" />
|-
! scope="row" | ''[[ಯೋಧ]]''
| ತೈಪರಂಬಿಲ್ ಅಶೋಕನ್
|
|<ref>{{cite news |last=George |first=Anjana |date=16 November 2015 |title=I want to act with Mohanlal : Siddhartha Lama |url=http://timesofindia.indiatimes.com/entertainment/malayalam/movies/news/I-want-to-act-with-Mohanlal-Siddhartha-Lama/articleshow/49790893.cms? |url-status=live |archive-url=https://web.archive.org/web/20160220090505/http://timesofindia.indiatimes.com/entertainment/malayalam/movies/news/I-want-to-act-with-Mohanlal-Siddhartha-Lama/articleshow/49790893.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಅದ್ವೈತಂ]]''
| ಶಿವಪ್ರಸಾದ್
|
|<ref>{{cite news |last=Express News Service |date=2 September 2009 |title=No Onam gala; cinemas go dry |url=http://www.newindianexpress.com/entertainment/malayalam/article147328.ece? |url-status=dead |archive-url=https://web.archive.org/web/20160220090543/http://www.newindianexpress.com/entertainment/malayalam/article147328.ece |archive-date=20 February 2016 |access-date=19 December 2015 |work=[[The New Indian Express]]}}</ref>
|-
! scope="row" | ''[[ನಾಡೋಡಿ]]''
| ಸಚಿದಾನಂದನ್ ಮತ್ತು ಬಾಲಕೃಷ್ಣನ್ ಭಾಗವತರ್
|
|<ref>{{cite web |last=Amazon India |date=26 February 2016 |title=Nadodi |url=https://www.amazon.in/Nadodi-Mohanlal/dp/B00SH54C8Q |url-status=live |archive-url=https://web.archive.org/web/20160226163812/http://www.amazon.in/Nadodi-Mohanlal/dp/B00SH54C8Q |archive-date=26 February 2016 |access-date=26 February 2016}}</ref>
|-
! scope="row" | ''[[ವಿಯೆಟ್ನಾಂ ಕಾಲೋನಿ]]''
| ಜಿ. ಕೃಷ್ಣಮೂರ್ತಿ
|
|<ref>{{cite news |last=Krishna |first=Gayathri |date=30 June 2013 |title=Two decades later, Vietnam Colony set to be remade |url=http://archives.deccanchronicle.com/130630/entertainment-mollywood/article/two-decades-later-vietnam-colony-set-be-remade |url-status=dead |archive-url=https://web.archive.org/web/20151223122325/http://archives.deccanchronicle.com/130630/entertainment-mollywood/article/two-decades-later-vietnam-colony-set-be-remade |archive-date=23 December 2015 |access-date=19 December 2015 |work=[[Deccan Chronicle]]}}</ref>
|-
| rowspan="8" | 1993
! scope="row" | ''[[ಮಿಧುನಂ]]''
| ಸೇಧುಮಾಧವನ್
|
|<ref>{{cite news |last=Anand |first=Shilpa Nair |date=10 April 2014 |title=The way the cookie crumbles |url=http://www.thehindu.com/features/friday-review/the-way-the-cookie-crumbles/article5895841.ece |url-status=live |archive-url=https://web.archive.org/web/20160220093025/http://www.thehindu.com/features/friday-review/the-way-the-cookie-crumbles/article5895841.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ದೇವಾಸುರಂ]]''
| ಮಂಗಳಸ್ಸೇರಿ ನೀಲಕಂಠನ್
|
|<ref>{{cite news |last=Kurian |first=Shiba |date=2 April 2014 |title=Mohanlal shoots at Varikaserry Mana |url=http://timesofindia.indiatimes.com/entertainment/malayalam/movies/news/Mohanlal-shoots-at-Varikaserry-Mana/articleshow/33127108.cms? |url-status=live |archive-url=https://web.archive.org/web/20160220092652/http://timesofindia.indiatimes.com/entertainment/malayalam/movies/news/Mohanlal-shoots-at-Varikaserry-Mana/articleshow/33127108.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಬಟರ್ಫ್ಲೈಸ್]]''
| ಪ್ರಿನ್ಸ್
|
|<ref>{{cite news |last=Nair |first=Shoba |date=6 May 2005 |title=The Hollywood link |url=http://www.thehindu.com/thehindu/fr/2005/05/06/stories/2005050602600100.htm |url-status=dead |archive-url=https://web.archive.org/web/20160220092731/http://www.thehindu.com/thehindu/fr/2005/05/06/stories/2005050602600100.htm |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಮಾಯ ಮಯೂರಂ]]''
| ಕೃಷ್ಣನ್ ಉನ್ನಿ ಮತ್ತು ನರೇಂದ್ರನ್
|
|<ref>{{cite news |last=Pradeep |first=K. |date=27 February 2014 |title=Standing the test of time |url=http://www.thehindu.com/features/cinema/standing-the-test-of-time/article5732192.ece |url-status=live |archive-url=https://web.archive.org/web/20160220093242/http://www.thehindu.com/features/cinema/standing-the-test-of-time/article5732192.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಗಂಧರ್ವಂ]]''
| ಸ್ಯಾಮ್ಯುಯೆಲ್ ಅಲೆಕ್ಸಾಂಡರ್
|
|<ref>{{cite news |last=Kumar |first=P. K. Ajith |date=13 June 2013 |title=Rolling out comedy |url=http://www.thehindu.com/features/cinema/cinema-reviews/rolling-out-comedy/article4810058.ece |url-status=live |archive-url=https://web.archive.org/web/20160220092938/http://www.thehindu.com/features/cinema/cinema-reviews/rolling-out-comedy/article4810058.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಚೆಂಕೋಲ್]]''
| ಸೇತುಮಾಧವನ್
|
|<ref>{{cite news |last=Express News Service |date=22 September 2011 |title=A musical tribute to Johnson Master |url=http://www.newindianexpress.com/cities/kochi/article365809.ece |url-status=dead |archive-url=https://web.archive.org/web/20151222101115/http://www.newindianexpress.com/cities/kochi/article365809.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಕಳಿಪ್ಪಟ್ಟಂ]]''
| ವೇಣು
|
|<ref>{{cite news |last=സ്വന്തം ലേഖകൻ |date=12 November 2015 |title=കളിപ്പാട്ടമായ് കൺമണി നിന്റെ മുന്നിൽ... |url=http://www.manoramaonline.com/music/songs-of-the-day/kalippattamy-kanmani-song-in-the-movie-kalippattam.html |url-status=live |archive-url=https://web.archive.org/web/20160216153038/http://www.manoramaonline.com/music/songs-of-the-day/kalippattamy-kanmani-song-in-the-movie-kalippattam.html |archive-date=16 February 2016 |access-date=19 December 2015 |work=[[Malayala Manorama]]}}</ref>
|-
! scope="row" | ''[[ಮಣಿಚಿತ್ರತಾಳು]]''
| ಡಾ. ಸನ್ನಿ ಜೋಸೆಫ್
| 200 ನೇ ಚಿತ್ರ
|<ref>{{cite news |last1=Broadbent |first1=Giles |last2=Scott |first2=Patrick |date=30 October 2015 |title=How many of these 100 best horror films have you seen? |url=http://www.wharf.co.uk/whats-on/film-news/how-many-100-best-horror-10357350 |url-status=live |archive-url=https://web.archive.org/web/20151222110732/http://www.wharf.co.uk/whats-on/film-news/how-many-100-best-horror-10357350 |archive-date=22 December 2015 |access-date=19 December 2015 |work=[[The Wharf (newspaper)|The Wharf]]}}</ref>
|-
| rowspan="6" | 1994
! scope="row" | ''[[ಪವಿತ್ರಂ]]''
| ಉನ್ನಿಕೃಷ್ಣನ್
|
|<ref>{{cite news |last=Pradeep |first=K. |date=16 October 2015 |title=Retrace a worthy path |url=http://www.thehindu.com/features/metroplus/society/documentary-filmmaker-binuraj-kalapeetom/article7770306.ece |url-status=live |archive-url=https://web.archive.org/web/20160220093325/http://www.thehindu.com/features/metroplus/society/documentary-filmmaker-binuraj-kalapeetom/article7770306.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ತೇನ್ಮಾವಿನ್ ಕೊಂಬತ್]]''
| ಮಣಿಕ್ಯನ್
|
|<ref>{{cite news |last=Kumar |first=P. K. Ajith |date=1 July 2007 |title=Changing dynamics of screenplay |url=http://www.thehindu.com/todays-paper/tp-national/tp-kerala/changing-dynamics-of-screenplay/article1864285.ece |url-status=live |archive-url=https://web.archive.org/web/20160220092806/http://www.thehindu.com/todays-paper/tp-national/tp-kerala/changing-dynamics-of-screenplay/article1864285.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಪಿಂಗಾಮಿ]]''
| ಕ್ಯಾಪ್ಟನ್ ವಿಜಯ್ ಮೇನನ್
|
|<ref>{{cite news |last=Nambidi |first=Parvathy |date=19 September 2013 |title=A love story with a difference |url=http://www.newindianexpress.com/entertainment/malayalam/A-love-story-with-a-difference/2013/09/19/article1791830.ece |url-status=dead |archive-url=https://web.archive.org/web/20151222091713/http://www.newindianexpress.com/entertainment/malayalam/A-love-story-with-a-difference/2013/09/19/article1791830.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಪಕ್ಷೆ]]''
| ಬಾಲಚಂದ್ರನ್
|
|<ref>{{cite news |last=Krishnaraj |first=Prasanna |date=7 February 2013 |title=My five… |url=http://www.thehindu.com/features/metroplus/my-five/article4389319.ece |url-status=live |archive-url=https://web.archive.org/web/20160220093547/http://www.thehindu.com/features/metroplus/my-five/article4389319.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಗಂಧೀವಂ]]''
| ಕ್ಯಾಪ್ಟನ್
| ತೆಲುಗು ಚಿತ್ರ; "ಗೋರುವಂಕ ವಲಗನೆ" ಹಾಡಿನಲ್ಲಿ ವಿಶೇಷ ಪಾತ್ರ
|<ref>{{cite news |last=Indo-Asian News Service |date=26 August 2015 |title=Mohanlal to re-enter Telugu films with 'Nuvve Na Pranamani' |url=http://www.ibnlive.com/news/movies/mohanlal-to-re-enter-telugu-films-with-nuvve-na-pranamani-1051635.html |url-status=live |archive-url=https://web.archive.org/web/20160128055505/http://www.ibnlive.com/news/movies/mohanlal-to-re-enter-telugu-films-with-nuvve-na-pranamani-1051635.html |archive-date=28 January 2016 |access-date=11 December 2015 |work=[[IBN Live]]}}</ref>
|-
! scope="row" | ''[[ಮಿನ್ನಾರಂ]]''
| ಬಾಬಿ
|
|<ref>{{cite news |last=Vasudevan |first=Aishwarya |date=13 March 2012 |title=Priyadarshan – Mohanlal: Best films of the duo |url=http://timesofindia.indiatimes.com/entertainment/malayalam/movies/Priyadarshan-Mohanlal-Best-films-of-the-duo/photostory/48783890.cms |url-status=live |archive-url=https://web.archive.org/web/20160304152231/http://timesofindia.indiatimes.com/entertainment/malayalam/movies/Priyadarshan-Mohanlal-Best-films-of-the-duo/photostory/48783890.cms |archive-date=4 March 2016 |access-date=4 March 2016 |work=[[The Times of India]]}}</ref>
|-
| rowspan="5" | 1995
! scope="row" | ''[[ನಿರ್ಣಯಂ]]''
| ಡಾ. ರಾಯ್ ಅಲೆಕ್ಸ್
|
|<ref>{{cite news |last=Indo-Asian News Service |date=10 May 2013 |title=Sangeeth Sivan: Would love to work with Mohanlal |url=http://movies.ndtv.com/bollywood/sangeeth-sivan-would-love-to-work-with-mohanlal-633124 |url-status=live |archive-url=https://web.archive.org/web/20151222104905/http://movies.ndtv.com/bollywood/sangeeth-sivan-would-love-to-work-with-mohanlal-633124 |archive-date=22 December 2015 |access-date=19 December 2015 |work=[[NDTV]]}}</ref>
|-
! scope="row" | ''[[ಸ್ಪಡಿಕಂ]]''
| ಥಾಮಸ್ "ಆಡು ಥೋಮ" ಚಾಕೋ
|
|<ref>{{cite news |last=Times News Network |date=20 February 2015 |title=Spadikam to re- release in digital format ? |url=http://timesofindia.indiatimes.com/entertainment/malayalam/movies/news/Spadikam-to-re-release-in-digital-format-/articleshow/46311319.cms? |url-status=live |archive-url=https://web.archive.org/web/20160220093417/http://timesofindia.indiatimes.com/entertainment/malayalam/movies/news/Spadikam-to-re-release-in-digital-format-/articleshow/46311319.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ತಾಚೋಳಿ ವರ್ಘೀಸ್ ಚೇಕವರ್]]''
| ತಾಚೋಳಿ ವರ್ಘೀಸ್ ಚೇಕವರ್
|
|<ref>{{cite news |last=Prakash |first=Asha |date=27 August 2013 |title=Mollywood packs a punch with martial arts |url=http://timesofindia.indiatimes.com/entertainment/malayalam/movies/news/Mollywood-packs-a-punch-with-martial-arts/articleshow/22067426.cms |url-status=live |archive-url=https://web.archive.org/web/20160220093457/http://timesofindia.indiatimes.com/entertainment/malayalam/movies/news/Mollywood-packs-a-punch-with-martial-arts/articleshow/22067426.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಮಂತ್ರಿಕಂ]]''
| ಸ್ಟೀಫನ್ ರೊನಾಲ್ಡ್ / ಆಲ್ಬಿ ರೋಮಿಯೋ ಹಿಗುಟ್ಟಾ
|
|<ref>{{cite news |last=Anand |first=Shilpa Nair |date=5 June 2013 |title=On the super hero trail |url=http://www.thehindu.com/features/cinema/on-the-super-hero-trail/article4784550.ece |url-status=live |archive-url=https://web.archive.org/web/20160220093636/http://www.thehindu.com/features/cinema/on-the-super-hero-trail/article4784550.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಅಗ್ನಿದೇವನ್]]''
| ಅನಿಯನ್ಕುಟ್ಟನ್ / ರವಿ ವರ್ಮಾ
|
|<ref>{{cite news |last=Express News Service |date=11 February 2010 |title=An acknowledged prince among lyricists |url=http://www.newindianexpress.com/states/kerala/article180069.ece |url-status=dead |archive-url=https://web.archive.org/web/20151222120507/http://www.newindianexpress.com/states/kerala/article180069.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
| rowspan="2" | 1996
! scope="row" | ''[[ಕಾಲಪಾನಿ]]''
| ಡಾ. ಗೋವರ್ಧನ್ ಮೇನನ್
|
|<ref>{{cite news |last=Rajpal |first=Roktim |date=21 May 2015 |title=Mohanlal turns 55: 8 performances that prove he is the most bankable, successful star of Indian cinema |url=http://www.ibnlive.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html |url-status=live |archive-url=https://web.archive.org/web/20160310045435/http://www.ibnlive.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html |archive-date=10 March 2016 |access-date=29 February 2016 |work=[[IBN Live]]}}</ref>
|-
! scope="row" | ''[[ದಿ ಪ್ರಿನ್ಸ್]]''
| ಜೀವಾ
|
|<ref>{{cite news |last=B S |first=Shibu |date=9 September 2011 |title=No M&M this Onam |url=http://www.newindianexpress.com/entertainment/malayalam/article359915.ece |url-status=dead |archive-url=https://web.archive.org/web/20151224231632/http://www.newindianexpress.com/entertainment/malayalam/article359915.ece |archive-date=24 December 2015 |access-date=19 December 2015 |work=[[The New Indian Express]]}}</ref>
|-
| rowspan="6" | 1997
! scope="row" | ''[[ಇರುವರ್]]''
| ಆನಂದನ್
| ತಮಿಳು ಚಿತ್ರ
|<ref>{{cite news |last=James |first=Anu |date=28 February 2015 |title=Mani Ratnam-AR Rahman: 'Roja', 'Bombay', 'Iruvar' and Other Tamil Films of the Duo with Hit Songs |url=http://www.ibtimes.co.in/mani-ratnam-ar-rahman-roja-bombay-iruvar-other-tamil-films-duo-hit-songs-624822 |url-status=live |archive-url=https://web.archive.org/web/20151222084447/http://www.ibtimes.co.in/mani-ratnam-ar-rahman-roja-bombay-iruvar-other-tamil-films-duo-hit-songs-624822 |archive-date=22 December 2015 |access-date=11 December 2015 |work=[[International Business Times]]}}</ref>
|-
!scope="row" | ''[[ವರ್ಣಪಕಿಟ್ಟು]]''
| ಸನ್ನಿ ಪಾಲಮಟ್ಟಂ
|
|<ref>{{cite news |last=Hindu |date=18 March 2011 |title=Regional channels |url=http://www.thehindu.com/todays-paper/tp-features/tp-fridayreview/regional-channels/article1548401.ece |url-status=live |archive-url=https://web.archive.org/web/20160220093722/http://www.thehindu.com/todays-paper/tp-features/tp-fridayreview/regional-channels/article1548401.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಚಂದ್ರಲೇಖಾ]]''
| ಅಪ್ಪುಕುಟ್ಟನ್ / ಆಲ್ಫಿ
|
|<ref>{{cite news |last=Narayan |first=Shoba |date=18 January 2011 |title=Why do Arabic rhythms sound so sweet to Indian ears? |url=http://www.thenational.ae/thenationalconversation/comment/why-do-arabic-rhythms-sound-so-sweet-to-indian-ears |url-status=dead |archive-url=https://web.archive.org/web/20151222095758/http://www.thenational.ae/thenationalconversation/comment/why-do-arabic-rhythms-sound-so-sweet-to-indian-ears |archive-date=22 December 2015 |access-date=19 December 2015 |work=[[The National (Abu Dhabi)|The National]]}}</ref>
|-
! scope="row" | ''[[ಗುರು]]''
| ರಘುರಾಮನ್
|
|<ref>{{cite news |last=Times News Network |date=16 July 2015 |title=Guru was nominated for the Oscars |url=http://timesofindia.indiatimes.com/entertainment/malayalam/movies/did-you-know-/Guru-was-nominated-for-the-Oscars/articleshow/48095864.cms |url-status=live |archive-url=https://web.archive.org/web/20160219150322/http://timesofindia.indiatimes.com/entertainment/malayalam/movies/did-you-know-/Guru-was-nominated-for-the-Oscars/articleshow/48095864.cms |archive-date=19 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಒರು ಯಾತ್ರಮೊಳಿ]]''
| ಗೋವಿಂದನ್ಕುಟ್ಟಿ
|
|<ref name="yathramozhi">{{cite news |last=Sidhardhan |first=Sanjith |date=19 November 2012 |title=When Mollywood meets Kollywood |url=http://timesofindia.indiatimes.com/entertainment/malayalam/movies/news/When-Mollywood-meets-Kollywood/articleshow/17266196.cms? |url-status=live |archive-url=https://web.archive.org/web/20160220093805/http://timesofindia.indiatimes.com/entertainment/malayalam/movies/news/When-Mollywood-meets-Kollywood/articleshow/17266196.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಆರಾಂ ತಂಪುರನ್]]''
| ಜಗನ್ನಾಧನ್
|
|<ref>{{cite news |last=M |first=Athira |date=26 September 2013 |title=Going great guns |url=http://www.thehindu.com/features/cinema/going-great-guns/article5171425.ece |url-status=live |archive-url=https://web.archive.org/web/20160219150642/http://www.thehindu.com/features/cinema/going-great-guns/article5171425.ece |archive-date=19 February 2016 |access-date=19 December 2015 |work=[[The Hindu]]}}</ref>
|-
| rowspan="5" | 1998
! scope="row" | ''[[ಕನ್ಮದಂ]]''
| ವಿಶ್ವನಾಥನ್
|
|<ref>{{cite news |last=Menon |first=Neelima |date=5 July 2009 |title=That thin line between sanity and lunacy |url=http://www.newindianexpress.com/magazine/article91020.ece |url-status=dead |archive-url=https://web.archive.org/web/20151224231206/http://www.newindianexpress.com/magazine/article91020.ece |archive-date=24 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಹರಿಕೃಷ್ಣನ್ಸ್]]''
| ವಕೀಲ ಕೃಷ್ಣನ್
|
|<ref>{{cite news |last=Times News Network |date=8 March 2015 |title=Harikrishnan's multiple climaxes |url=http://timesofindia.indiatimes.com/entertainment/malayalam/movies/did-you-know-/Harikrishnans-multiple-climaxes/articleshow/46493185.cms |url-status=live |archive-url=https://web.archive.org/web/20150602204857/http://timesofindia.indiatimes.com/entertainment/malayalam/movies/did-you-know-/Harikrishnans-multiple-climaxes/articleshow/46493185.cms |archive-date=2 June 2015 |access-date=19 December 2015 |work=[[The Times of India]]}}</ref>
|-
! scope="row" | ''[[ಸಮ್ಮರ್ ಇನ್ ಬೆತ್ಲೆಹೆಮ್]]''
| ನಿರಂಜನ್
|ಅತಿಥಿ ಪಾತ್ರ
|<ref>{{cite news |last=V. P |first=Nicy |date=4 November 2014 |title=Manju Warrier's New Look from Mohanlal-Sathyan Anthikkad Film is Out [PHOTOS] |url=http://www.ibtimes.co.in/manju-warriers-new-look-mohanlal-sathyan-anthikkad-film-out-photos-613056 |url-status=live |archive-url=https://web.archive.org/web/20151121162934/http://www.ibtimes.co.in/manju-warriers-new-look-mohanlal-sathyan-anthikkad-film-out-photos-613056 |archive-date=21 November 2015 |access-date=19 December 2015 |work=[[International Business Times]]}}</ref>
|-
! scope="row" | ''[[ರಕ್ತಸಾಕ್ಷಿಕಳ್ ಸಿಂದಾಬಾದ್]]''
| ಶಿವ ಸುಬ್ರಹ್ಮಣ್ಯ ಅಯ್ಯರ್
|
|<ref>{{cite news |last=Express News Service |date=3 March 2009 |title='Making political films no longer possible' |url=http://www.newindianexpress.com/entertainment/tamil/article42460.ece |url-status=dead |archive-url=https://web.archive.org/web/20151222081800/http://www.newindianexpress.com/entertainment/tamil/article42460.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಅಯಾಲ್ ಕಧಾ ಎಳುತುಕಯಾನು]]''
| ಸಾಗರ್ ಕೊಟ್ಟಪ್ಪುರಂ / ವಿದ್ಯಾಸಾಗರ್
|
|<ref>{{cite news |last=Nayar |first=Parvathy S |date=21 July 2012 |title=Bhavana to do an Urmila in her next? |url=http://timesofindia.indiatimes.com/entertainment/kannada/movies/news/Bhavana-to-do-an-Urmila-in-her-next/articleshow/15055365.cms |url-status=live |archive-url=https://web.archive.org/web/20160219151701/http://timesofindia.indiatimes.com/entertainment/kannada/movies/news/Bhavana-to-do-an-Urmila-in-her-next/articleshow/15055365.cms |archive-date=19 February 2016 |access-date=19 December 2015 |work=[[The Times of India]]}}</ref>
|-
| rowspan="3" | 1999
! scope="row" | ''[[ಉಸ್ತಾದ್]]''
| ಪರಮೇಶ್ವರನ್ / ಉಸ್ತಾದ್
|
|<ref>{{cite news |last=Kumar |first=P. K. Ajith |date=3 September 2013 |title=How the comeback was scripted |url=http://www.thehindu.com/todays-paper/tp-national/tp-kerala/how-the-comeback-was-scripted/article5087829.ece |url-status=live |archive-url=https://web.archive.org/web/20160226174708/http://www.thehindu.com/todays-paper/tp-national/tp-kerala/how-the-comeback-was-scripted/article5087829.ece |archive-date=26 February 2016 |access-date=26 February 2016 |work=[[The Hindu]]}}</ref>
|-
! scope="row" | ''[[ಒಲಿಂಪಿಯನ್ ಆಂಥೋನಿ ಆಡಮ್]]''
| ಎಸ್ಪಿ ಆಂಥೋನಿ ಚಕ್ಕುಮ್ಮೂಟ್ಟಿಲ್ ವರ್ಗೀಸ್ ಐಪಿಎಸ್
|
|<ref>{{cite news |last=Kurian |first=Shiba |date=19 June 2014 |title=Mohanlal gets a surprise visitor in the US |url=http://timesofindia.indiatimes.com/entertainment/malayalam/movies/news/Mohanlal-gets-a-surprise-visitor-in-the-US/articleshow/36815656.cms |url-status=live |archive-url=https://web.archive.org/web/20160219150841/http://timesofindia.indiatimes.com/entertainment/malayalam/movies/news/Mohanlal-gets-a-surprise-visitor-in-the-US/articleshow/36815656.cms |archive-date=19 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ವನಪ್ರಸ್ಥಂ]]''
| ಕುಂಜಿಕುಟ್ಟನ್
|ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ
|<ref>{{cite news |last=Ramachandran |first=Mythily |date=7 December 2013 |title=Diff: a Malayalam film that dances with drama |url=http://gulfnews.com/life-style/celebrity/diff-a-malayalam-film-that-dances-with-drama-1.1264154 |url-status=live |archive-url=https://web.archive.org/web/20151222112842/http://gulfnews.com/life-style/celebrity/diff-a-malayalam-film-that-dances-with-drama-1.1264154 |archive-date=22 December 2015 |access-date=19 December 2015 |work=[[Gulf News]]}}</ref>
|-
| rowspan="4" | 2000
! scope="row" | ''[[ನರಸಿಂಹಂ]]''
| ಪೂವಳ್ಳಿ ಇಂದ್ರಚೂಡನ್
|
|<ref>{{cite news |last=James |first=Anu |date=23 January 2016 |title=Narasimham returns: Mohanlal starrer to be re-released in 7 theatres on Republic Day |url=http://www.ibtimes.co.in/narasimham-returns-mohanlal-starrer-be-re-released-7-theatres-republic-day-664264 |url-status=live |archive-url=https://web.archive.org/web/20160130092954/http://www.ibtimes.co.in/narasimham-returns-mohanlal-starrer-be-re-released-7-theatres-republic-day-664264 |archive-date=30 January 2016 |access-date=26 February 2016 |work=[[International Business Times]]}}</ref>
|-
! scope="row" | ''[[ಲೈಫ್ ಈಸ್ ಬ್ಯೂಟಿಫುಲ್]]''
| ವಿನಯ ಚಂದ್ರನ್
|
|<ref>{{cite web |last1=Warrier |first1=Shobha |date=12 July 2000 |title='Life itself is a daily celebration' |url=http://www.rediff.com/entertai/2000/jul/12lal.htm |url-status=live |archive-url=https://web.archive.org/web/20150521061130/http://www.rediff.com/entertai/2000/jul/12lal.htm |archive-date=21 May 2015 |access-date=26 February 2016 |work=[[Rediff.com]]}}</ref>
|-
! scope="row" | ''[[ಶ್ರಾದ್ಧ]]''
| ಗಂಗಾಪ್ರಸಾದ್ ಐಪಿಎಸ್
|
|<ref name="year2000">{{cite web |last=Ayyappan |first=R |date=24 January 2001 |title=Sleaze time, folks! |url=http://www.rediff.com/movies/2001/jan/24mallu.htm |url-status=live |archive-url=https://web.archive.org/web/20100411035302/http://www.rediff.com/movies/2001/jan/24mallu.htm |archive-date=11 April 2010 |access-date=26 February 2016 |work=[[Rediff.com]]}}</ref>
|-
! scope="row" | ''[[ದೇವದೂತನ್]]''
| ವಿಶಾಲ್ ಕೃಷ್ಣಮೂರ್ತಿ
|
|<ref name="year2000" />
|-
| rowspan="5" | 2001
! scope="row" | ''[[ಕಕ್ಕಕುಯಿಲ್]]''
| ಶಿವರಾಮನ್
|
|<ref>{{cite news |last=Karthikeyan |first=Shruti |date=29 April 2015 |title=Amala was happy shooting for Lailaa O Lailaa |url=http://timesofindia.indiatimes.com/entertainment/malayalam/movies/news/Amala-was-happy-shooting-for-Lailaa-O-Lailaa/articleshow/47085153.cms |url-status=live |archive-url=https://web.archive.org/web/20160219151228/http://timesofindia.indiatimes.com/entertainment/malayalam/movies/news/Amala-was-happy-shooting-for-Lailaa-O-Lailaa/articleshow/47085153.cms |archive-date=19 February 2016 |access-date=15 December 2015 |work=[[The Times of India]]}}</ref>
|-
! scope="row" | ''[[ರಾವಣಪ್ರಭು]]''
| ಮಂಗಳಸ್ಸೇರಿ ನೀಲಕಂಠನ್ ಮತ್ತು ಕಾರ್ತಿಕೇಯನ್
|
|<ref>{{cite news |last=Zachariah |first=Ammu |date=29 July 2013 |title=Like father, like son |url=http://timesofindia.indiatimes.com/entertainment/malayalam/movies/news/Like-father-like-son/articleshow/21423588.cms |url-status=live |archive-url=https://web.archive.org/web/20160219151442/http://timesofindia.indiatimes.com/entertainment/malayalam/movies/news/Like-father-like-son/articleshow/21423588.cms |archive-date=19 February 2016 |access-date=15 December 2015 |work=[[The Times of India]]}}</ref>
|-
! scope="row" | ''[[ಪ್ರಜಾ]]''
| ಜಾಕಿರ್ ಅಲಿ ಹುಸೇನ್
|
|<ref>{{cite news |last=Karthikeyan |first=Shruti |date=23 August 2014 |title=Mammootty and Mohanlal to share screen space? |url=http://timesofindia.indiatimes.com/Entertainment/Malayalam/Movies/News/Mammootty-and-Mohanlal-to-share-screen-space/articleshow/40694989.cms |url-status=live |archive-url=https://web.archive.org/web/20140828192648/http://timesofindia.indiatimes.com/Entertainment/Malayalam/Movies/News/Mammootty-and-Mohanlal-to-share-screen-space/articleshow/40694989.cms |archive-date=28 August 2014 |access-date=15 December 2015 |work=[[The Times of India]]}}</ref>
|-
! scope="row" | ''[[ಅಚ್ಚನೆಯನೆನಿಕ್ಕಿಷ್ಟಂ]]''
| ಮಹಾದೇವನ್
| rowspan="2" |ಅತಿಥಿ ಪಾತ್ರ
|<ref>{{cite news |last=PM |date=16 September 2002 |title=Ready with Vasanthamalika |url=http://www.thehindu.com/thehindu/mp/2002/09/16/stories/2002091600250400.htm |url-status=dead |archive-url=https://web.archive.org/web/20160219153056/http://www.thehindu.com/thehindu/mp/2002/09/16/stories/2002091600250400.htm |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ಉನ್ನತಂಗಳಿಲ್]]''
| ವಿವೇಕ್
|<ref>{{cite news |last=C. |first=B. |date=18 March 2002 |title=From the ramp to the screen |url=http://www.thehindu.com/thehindu/mp/2002/03/18/stories/2002031800940200.htm |url-status=dead |archive-url=https://web.archive.org/web/20160219153150/http://www.thehindu.com/thehindu/mp/2002/03/18/stories/2002031800940200.htm |archive-date=19 February 2016 |access-date=15 December 2015 |work=[[The Hindu]]}}</ref>
|-
| rowspan="4" | 2002
! scope="row" | ''[[ಕಂಪನಿ]]''
| ಐಜಿ ವೀರಪ್ಪಳ್ಳಿ ಶ್ರೀನಿವಾಸನ್ ಐಪಿಎಸ್
| ಹಿಂದಿ ಚಿತ್ರ
|<ref>{{cite news |last=Ayaz |first=Shaikh |date=29 April 2012 |title=Mohanlal, the 'Company' actor |url=http://www.newindianexpress.com/entertainment/malayalam/article390773.ece |url-status=dead |archive-url=https://web.archive.org/web/20151222085635/http://www.newindianexpress.com/entertainment/malayalam/article390773.ece |archive-date=22 December 2015 |access-date=11 December 2015 |work=[[The New Indian Express]]}}</ref>
|-
! scope="row" | ''[[ಒನ್ನಾಮನ್]]''
| ರವಿಶಂಕರ್
|
|<ref>{{cite web |last=Iype |first=George |date=23 April 2002 |title=Mohanlal's Company's hero in Kerala |url=http://www.rediff.com/entertai/2002/apr/23mohan.htm |url-status=live |archive-url=https://web.archive.org/web/20160105191537/http://www.rediff.com/entertai/2002/apr/23mohan.htm |archive-date=5 January 2016 |access-date=15 December 2015 |work=[[Rediff.com]]}}</ref>
|-
! scope="row" | ''[[ತಂಡವಂ]]''
| ಕಾಶಿನಾಥನ್
|
|<ref>{{cite news |last=Joseph |first=Mini K. |date=3 September 2002 |title=Engine oil powers Mohanlal movie, and vice versa |url=http://timesofindia.indiatimes.com/city/thiruvananthapuram/Engine-oil-powers-Mohanlal-movie-and-vice-versa/articleshow/21090328.cms |url-status=live |archive-url=https://web.archive.org/web/20160219152803/http://timesofindia.indiatimes.com/city/thiruvananthapuram/Engine-oil-powers-Mohanlal-movie-and-vice-versa/articleshow/21090328.cms |archive-date=19 February 2016 |access-date=15 December 2015 |work=[[The Times of India]]}}</ref>
|-
! scope="row" | ''[[ಚತುರಂಗಂ]]''
| ಆಟಿಪ್ರಾಕಲ್ ಜಿಮ್ಮಿ ಜಾಕೋಬ್
|
|<ref>{{cite web |last=Moviebuzz (Sify) |date=25 December 2002 |title=Review: Chathurangam |url=http://www.sify.com/movies/chathurangam-review-malayalam-pclurfibgahdh.html |url-status=dead |archive-url=https://web.archive.org/web/20151224070756/http://www.sify.com/movies/chathurangam-review-malayalam-pclurfibgahdh.html |archive-date=24 December 2015 |access-date=15 December 2015 |website=[[Sify]]}}</ref>
|-
| rowspan="5" | 2003
! scope="row" | ''[[ಪಾಪ್ ಕಾರ್ನ್]]''
| ವಿಕ್ರಮಾದಿತ್ಯ
| ತಮಿಳು ಚಿತ್ರ
|<ref>{{cite news |last=Kamath |first=Sudhish |date=23 January 2002 |title=Pop goes Nasser's carnival |url=http://www.thehindu.com/lf/2002/01/23/stories/2002012300400200.htm |url-status=dead |archive-url=https://web.archive.org/web/20160219142013/http://www.thehindu.com/lf/2002/01/23/stories/2002012300400200.htm |archive-date=19 February 2016 |access-date=11 December 2015 |work=[[The Hindu]]}}</ref>
|-
! scope="row" | ''[[ಮಿಸ್ಟರ್ ಬ್ರಹ್ಮಚಾರಿ]]''
| ಆನಂದನ್ ತಂಪಿ
|
|<ref>{{cite web |last=Warrier |first=Shobha |date=26 April 2003 |title='I may be the first actor brand of pickles!' |url=http://www.rediff.com/movies/2003/apr/26mohan.htm |url-status=live |archive-url=https://web.archive.org/web/20160105191108/http://www.rediff.com/movies/2003/apr/26mohan.htm |archive-date=5 January 2016 |access-date=15 December 2015 |work=[[Rediff.com]]}}</ref>
|-
! scope="row" | ''[[ಕಿಲಿಚುಂದನ್ ಮಂಪಳಂ]]''
| ಅಬ್ದುಲ್ ಖಾದರ್
|
|<ref>{{cite web |last1=Warrier |first1=Shobha |last2=Riti |first2=M D |date=19 April 2004 |title='Filmstars should not join politics' |url=http://www.rediff.com/movies/2004/apr/18soundarya.htm |url-status=live |archive-url=https://web.archive.org/web/20160105121944/http://www.rediff.com/movies/2004/apr/18soundarya.htm |archive-date=5 January 2016 |access-date=15 December 2015 |work=[[Rediff.com]]}}</ref>
|-
! scope="row" | ''[[ಬಾಲೆಟ್ಟನ್]]''
| ಅತನಿಪ್ಪರಂಬಿಲ್ ಬಾಲಚಂದ್ರನ್
|
|<ref>{{cite news |last=Kumar |first=P. K. Ajith |date=29 September 2012 |title=Shahid told simple tales |url=http://www.thehindu.com/news/national/kerala/shahid-told-simple-tales/article3946183.ece |url-status=live |archive-url=https://web.archive.org/web/20160219152535/http://www.thehindu.com/news/national/kerala/shahid-told-simple-tales/article3946183.ece |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ಹರಿಹರನ್ ಪಿಲ್ಲೈ ಹ್ಯಾಪಿ ಆಣು]]''
| ಹರಿಹರನ್ ಪಿಲ್ಲೈ
|
|<ref>{{cite news |last=Abhijath |first=Ram |date=27 November 2003 |title=Short-lived happiness |url=https://www.thehindu.com/todays-paper/tp-features/tp-metroplus/short-lived-happiness/article28457664.ece |access-date=15 December 2015 |work=[[The Hindu]]}}</ref>
|-
| rowspan="6" | 2004
! scope="row" | ''[[ವಾಮನಪುರಂ ಬಸ್ ರೂಟ್]]''
| ಲೆವರ್ ಜಾನಿ
|
|<ref>{{cite news |last=Pillai |first=Sreedhar |date=19 January 2004 |title=Mohanlal turns NRI |url=http://www.thehindu.com/thehindu/mp/2004/01/19/stories/2004011900260200.htm |url-status=dead |archive-url=https://web.archive.org/web/20160219152441/http://www.thehindu.com/thehindu/mp/2004/01/19/stories/2004011900260200.htm |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ವಿಸ್ಮಯತ್ತುಂಬತು]]''
| ಶ್ರೀಕುಮಾರ್
|
|<ref>{{cite web |last=Moviebuzz (Sify) |date=10 April 2004 |title=Vismayathumbathu |url=http://www.sify.com/movies/vismayathumbathu-review-malayalam-pclv2digcbjhj.html |url-status=dead |archive-url=https://web.archive.org/web/20151121134325/http://www.sify.com/movies/vismayathumbathu-review-malayalam-pclv2digcbjhj.html |archive-date=21 November 2015 |access-date=26 February 2016 |website=[[Sify]]}}</ref>
|-
! scope="row" | ''[[ಪ್ರೀತಿ]]''
| ಮೋಹನ್ ನಾಯರ್
| ಕನ್ನಡ ಚಿತ್ರ; ಅತಿಥಿ ಪಾತ್ರ
|<ref>{{cite web |last=Vijayasarathy |first=R.G. |date=2 July 2004 |title=No homework for me: Mohanlal |url=http://www.sify.com/movies/malayalam/interview.php?id=13512329&cid=2406 |url-status=dead |archive-url=https://web.archive.org/web/20040816002022/http://sify.com/movies/malayalam/interview.php?id=13512329&cid=2406 |archive-date=16 August 2004 |access-date=25 February 2016 |website=[[Sify]]}}</ref>
|-
! scope="row" | ''[[ವಾಂಟೆಡ್]]''
| ನಾರಾಯಣ ಸ್ವಾಮಿ ಐಪಿಎಸ್
|
|<ref>{{Cite web |date=17 July 2004 |title=Review: (2004) |url=https://www.sify.com/movies/wanted-review-malayalam-pclv46cfbhfhd.html |url-status=dead |archive-url=https://web.archive.org/web/20210818210537/https://www.sify.com/movies/wanted-review-malayalam-pclv46cfbhfhd.html |archive-date=18 August 2021 |work=Sify}}</ref>
|-
! scope="row" | ''[[ನಟ್ಟುರಾಜವು]]''
| ಪುಳಿಕ್ಕಟ್ಟಿಲ್ ಚಾರ್ಲಿ
|
|<ref>{{cite news |last=Krishnakumar |first=G. |date=11 August 2004 |title=Hoping for a box office revival |url=http://www.thehindu.com/lf/2004/08/11/stories/2004081100930200.htm |url-status=dead |archive-url=https://web.archive.org/web/20160219152323/http://www.thehindu.com/lf/2004/08/11/stories/2004081100930200.htm |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ಮಂಬಳಕ್ಕಾಲಂ]]''
| ಪುರಮನಾಯಿಲ್ ಚಂದ್ರನ್
|
|<ref>{{cite web |last=Moviebuzz (Sify) |date=3 November 2004 |title='Aroma' Mani's big gamble |url=http://www.sify.com/movies/aroma-mani-s-big-gamble-news-malayalam-kkfvFmeageasi.html |url-status=dead |archive-url=https://web.archive.org/web/20150811084645/http://www.sify.com/movies/aroma-mani-s-big-gamble-news-malayalam-kkfvFmeageasi.html |archive-date=11 August 2015 |access-date=15 December 2015 |website=[[Sify]]}}</ref>
|-
| rowspan="6" | 2005
! scope="row" | ''[[ಉದಯನಾಣು ತಾರಂ]]''
| ಉದಯಭಾನು
|
|<ref>{{cite web |last=Moviebuzz (Sify) |date=12 February 2005 |title='Udayan' bigger than 'Narasimham'! |url=http://www.sify.com/movies/udayan-bigger-than-narasimham-news-malayalam-kkfv86jfhecsi.html |url-status=dead |archive-url=https://web.archive.org/web/20151223184905/http://www.sify.com/movies/udayan-bigger-than-narasimham-news-malayalam-kkfv86jfhecsi.html |archive-date=23 December 2015 |access-date=14 December 2015 |website=[[Sify]]}}</ref>
|-
! scope="row" | ''[[ಚಂದ್ರೋಲ್ಸವಂ]]''
| ಚಿರಕ್ಕಲ್ ಶ್ರೀಹರಿ
|
|<ref>{{cite web |last=Moviebuzz (Sify) |date=20 April 2005 |title='Chandramukhi' trounces 'Chandrolsavam'! |url=http://www.sify.com/movies/chandramukhi-trounces-chandrolsavam-news-malayalam-kkfv51dceigsi.html |url-status=dead |archive-url=https://web.archive.org/web/20151224212711/http://www.sify.com/movies/chandramukhi-trounces-chandrolsavam-news-malayalam-kkfv51dceigsi.html |archive-date=24 December 2015 |access-date=15 December 2015 |website=[[Sify]]}}</ref>
|-
! scope="row" | ''[[ತಿರನೋಟ್ಟಂ]]''
| ಕುಟ್ಟಪ್ಪನ್
| ವಿಳಂಬ ಬಿಡುಗಡೆ; 1978 ರಲ್ಲಿ ಚಿತ್ರೀಕರಿಸಲಾಗಿದೆ
|<ref name="ActingAlone" /><ref name="MohanlalTelegraph" />
|-
! scope="row" | ''[[ಉದಯೋನ್]]''
| ಶೂರನಾಡ್ ಪಪ್ಪೋಯಿ ಮತ್ತು ಶೂರನಾಡ್ ಕುಂಜು
|
|<ref>{{cite news |last=Pillai |first=Sreedhar |date=20 May 2005 |title=The Mohanlal effect |url=http://www.thehindu.com/thehindu/fr/2005/05/20/stories/2005052003000100.htm |url-status=dead |archive-url=https://web.archive.org/web/20160219152141/http://www.thehindu.com/thehindu/fr/2005/05/20/stories/2005052003000100.htm |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ನಾರನ್]]''
| ಮುಲ್ಲಂಕೊಳ್ಳಿ ವೇಲಾಯುಧನ್
|
|<ref>{{cite web |last=Moviebuzz (Sify) |date=3 September 2005 |title=Naran |url=http://www.sify.com/movies/naran-review-malayalam-pclvMljccbicj.html |url-status=dead |archive-url=https://web.archive.org/web/20160226124459/http://www.sify.com/movies/naran-review-malayalam-pclvMljccbicj.html |archive-date=26 February 2016 |access-date=26 February 2016 |website=[[Sify]]}}</ref>
|-
! scope="row" | ''[[ತನ್ಮಾತ್ರ]]''
| ರಮೇಶನ್ ನಾಯರ್
|
|<ref>{{cite news |last=Prakash |first=Asha |date=12 June 2015 |title=Mohanlal in Class X Biology textbook |url=http://timesofindia.indiatimes.com/entertainment/malayalam/movies/news/Mohanlal-in-Class-X-Biology-textbook/articleshow/47638850.cms |url-status=live |archive-url=https://web.archive.org/web/20150616115021/http://timesofindia.indiatimes.com/entertainment/malayalam/movies/news/Mohanlal-in-Class-X-Biology-textbook/articleshow/47638850.cms |archive-date=16 June 2015 |access-date=15 December 2015 |work=[[The Times of India]]}}</ref>
|-
| rowspan="7" | 2006
! scope="row" | ''[[ಕಿಲುಕ್ಕಂ ಕಿಲುಕಿಲುಕ್ಕಂ]]''
| ಜೋಜಿ
|ಅತಿಥಿ ಪಾತ್ರ
|
|-
! scope="row" | ''[[ರಸತಂತ್ರಂ]]''
| ಪ್ರೇಮಚಂದ್ರನ್
|
|<ref>{{cite news |last=Gopalakrishnan |first=K. K. |date=17 March 2006 |title=Getting the right equation |url=http://www.thehindu.com/todays-paper/tp-features/tp-fridayreview/getting-the-right-equation/article3217527.ece |url-status=live |archive-url=https://web.archive.org/web/20160219145549/http://www.thehindu.com/todays-paper/tp-features/tp-fridayreview/getting-the-right-equation/article3217527.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ವಡಕ್ಕುಮ್ನಾಥನ್]]''
| ಇರಿಂಗನ್ನೂರ್ ಭರತ ಪಿಶಾರಡಿ
|
|<ref>{{cite web |last=Palicha |first=Paresh C |date=23 May 2006 |title=Watch Vadakkumnathan only for Mohanlal |url=http://www.rediff.com/movies/review/vada/20060523.htm |url-status=live |archive-url=https://web.archive.org/web/20160226130310/http://www.rediff.com/movies/review/vada/20060523.htm |archive-date=26 February 2016 |access-date=26 February 2016 |work=[[Rediff.com]]}}</ref>
|-
! scope="row" | ''[[ಕೀರ್ತಿ ಚಕ್ರ]]''
| ಮೇಜರ್ ಮಹಾದೇವನ್
|
|<ref>{{cite web |last=Palicha |first=Paresh C |date=5 August 2006 |title=Keerthichakra: commendable |url=http://www.rediff.com/movies/2006/aug/05mal.htm |url-status=live |archive-url=https://web.archive.org/web/20160226130526/http://www.rediff.com/movies/2006/aug/05mal.htm |archive-date=26 February 2016 |access-date=26 February 2016 |work=[[Rediff.com]]}}</ref>
|-
! scope="row" | ''[[ಮಹಾಸಮುದ್ರಂ]]''
| ಇಸಹಾಕ್ ವೆಲಂಕನ್ನಿ
|
|<ref>{{cite news |last=Soman |first=Deepa |date=9 June 2014 |title=Mohanlal off to Brazil to catch World Cup climax |url=http://timesofindia.indiatimes.com/entertainment/malayalam/movies/news/Mohanlal-off-to-Brazil-to-catch-World-Cup-climax/articleshow/38057093.cms |url-status=live |archive-url=https://web.archive.org/web/20160226125141/http://timesofindia.indiatimes.com/entertainment/malayalam/movies/news/Mohanlal-off-to-Brazil-to-catch-World-Cup-climax/articleshow/38057093.cms |archive-date=26 February 2016 |access-date=26 February 2016 |work=[[The Times of India]]}}</ref>
|-
! scope="row" | ''[[ಫೋಟೋಗ್ರಾಫರ್]]''
| ದಿಜೊ ಜಾನ್ ಮತ್ತು ಜಾಯ್ ಜಾನ್
|
|<ref>{{cite news |last=Pillai |first=Sreedhar |date=20 October 2006 |title=Clash of the titans |url=http://www.thehindu.com/todays-paper/tp-features/tp-fridayreview/clash-of-the-titans/article3231056.ece |url-status=live |archive-url=https://web.archive.org/web/20160219145306/http://www.thehindu.com/todays-paper/tp-features/tp-fridayreview/clash-of-the-titans/article3231056.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಬಾಬಾ ಕಲ್ಯಾಣಿ]]''
| ಬಾಬಾ ಕಲ್ಯಾಣಿ ಐಪಿಎಸ್
|
|<ref>{{cite news |last=George |first=Vijay |date=27 October 2006 |title=The plot of a thriller |url=http://www.thehindu.com/todays-paper/tp-features/tp-fridayreview/the-plot-of-a-thriller/article3231125.ece |url-status=live |archive-url=https://web.archive.org/web/20160226125429/http://www.thehindu.com/todays-paper/tp-features/tp-fridayreview/the-plot-of-a-thriller/article3231125.ece |archive-date=26 February 2016 |access-date=26 February 2016 |work=[[The Hindu]]}}</ref>
|-
| rowspan="7" | 2007
! scope="row" | ''[[ಚೋಟ್ಟಾ ಮುಂಬೈ]]''
| ವಾಸ್ಕೊ ಡಾ "ತಾಲಾ" ಗಾಮಾ
|
|<ref>{{cite web |last=Moviebuzz (Sify) |date=2 April 2007 |title=Vishu-Change of dates |url=http://www.sify.com/movies/vishu-change-of-dates-news-malayalam-kkfvbgigfhasi.html |url-status=dead |archive-url=https://web.archive.org/web/20151223222020/http://www.sify.com/movies/vishu-change-of-dates-news-malayalam-kkfvbgigfhasi.html |archive-date=23 December 2015 |access-date=14 December 2015 |website=[[Sify]]}}</ref>
|-
! scope="row" | ''[[ಹಾಲೋ]]''
| ಶಿವರಾಮನ್
|
|<ref>{{cite web |last=Palicha |first=Paresh C |date=6 July 2007 |title=Mohanlal rocks in Hallo |url=http://www.rediff.com/movies/2007/jul/06sshallo.htm |url-status=live |archive-url=https://web.archive.org/web/20160105191031/http://www.rediff.com/movies/2007/jul/06sshallo.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ಅಲಿಬಾಯ್]]''
| ಅನ್ವರ್ "ಅಲಿ ಭಾಯ್" ಅಲಿ
|
|<ref>{{cite news |last=Kumar |first=P. K. Ajith |date=6 July 2007 |title=For fans of Mohanlal |url=http://www.thehindu.com/todays-paper/tp-features/tp-fridayreview/for-fans-of-mohanlal/article2272957.ece |url-status=live |archive-url=https://web.archive.org/web/20160219143835/http://www.thehindu.com/todays-paper/tp-features/tp-fridayreview/for-fans-of-mohanlal/article2272957.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ರಾಮ್ ಗೋಪಾಲ್ ವರ್ಮಾ ಕಿ ಆಗ್]]''
| ಇನ್ಸ್ಪೆಕ್ಟರ್ ನರಸಿಂಹ
| ಹಿಂದಿ ಚಿತ್ರ
|<ref>{{cite news |last=Nair |first=Manoj |date=1 September 2007 |title=Mohanlal the saving grace in Ram Gopal Varma's Aag |url=http://economictimes.indiatimes.com/magazines/business-of-bollywood/mohanlal-the-saving-grace-in-ram-gopal-varmas-aag/articleshow/2328428.cms |url-status=live |archive-url=https://web.archive.org/web/20160219140307/http://economictimes.indiatimes.com/magazines/business-of-bollywood/mohanlal-the-saving-grace-in-ram-gopal-varmas-aag/articleshow/2328428.cms |archive-date=19 February 2016 |access-date=11 December 2015 |work=[[The Economic Times]]}}</ref>
|-
! scope="row" | ''[[ಪರದೇಸಿ]]''
| ವಾಲಿಯಕತು ಮೂಸಾ
|
|<ref>{{cite web |last=Palicha |first=Paresh C |date=15 October 2007 |title=Paradeshi review |url=http://www.rediff.com/movies/2007/oct/15pardeshi.htm |url-status=live |archive-url=https://web.archive.org/web/20160105122112/http://www.rediff.com/movies/2007/oct/15pardeshi.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ರಾಕ್ ಎನ್' ರೋಲ್]]''
| ಚಂದ್ರಮೌಲಿ
|
|<ref>{{cite web |last=Palicha |first=Paresh C |date=19 November 2007 |title=Nothing musical about Rock n' Roll |url=http://www.rediff.com/movies/2007/nov/19rock.htm |url-status=live |archive-url=https://web.archive.org/web/20090413173924/http://rediff.com/movies/2007/nov/19rock.htm |archive-date=13 April 2009 |access-date=26 February 2016 |work=[[Rediff.com]]}}</ref>
|-
! scope="row" | ''[[ಫ್ಲಾಷ್]]''
| ಡಾ. ಮಿಧುನ್ ಮಾಧವ್
|
|<ref>{{cite news |last=Kumar |first=P. K. Ajith |date=2 November 2007 |title=Flash of suspense |url=http://www.thehindu.com/todays-paper/tp-features/tp-fridayreview/flash-of-suspense/article2274176.ece |url-status=live |archive-url=https://web.archive.org/web/20160219145021/http://www.thehindu.com/todays-paper/tp-features/tp-fridayreview/flash-of-suspense/article2274176.ece |archive-date=19 February 2016 |access-date=14 December 2015 |work=[[The Hindu]]}}</ref>
|-
| rowspan="9" | 2008
! scope="row" | ''[[ಹಲ್ಲಾ ಬೋಲ್]]''
| ಸ್ವತಃ
| ಹಿಂದಿ ಚಿತ್ರ; ಅತಿಥಿ ಪಾತ್ರ
|<ref>{{cite news |title=Halla Bol Movie Review {3/5}: Critic Review of Halla Bol by Times of India |url=https://timesofindia.indiatimes.com/entertainment/hindi/movie-reviews/halla-bol/movie-review/2693447.cms |website=[[The Times of India]]}}</ref>
|-
! scope="row" | ''[[ಕಾಲೇಜ್ ಕುಮಾರನ್]]''
| ಕ್ಯಾಪ್ಟನ್ ಶ್ರೀಕುಮಾರ್ / ಕ್ಯಾಂಟೀನ್ ಕುಮಾರನ್ / ಕಾಲೇಜ್ ಕುಮಾರನ್
|
|<ref>{{cite news |last=George |first=Vijay |date=25 January 2008 |title=Clash of titans |url=http://www.thehindu.com/todays-paper/tp-features/tp-fridayreview/clash-of-titans/article1432903.ece |access-date=26 February 2016 |work=[[The Hindu]]}}</ref>
|-
! scope="row" | ''[[ಇನ್ನಾತೆ ಚಿಂತ ವಿಶಯಂ]]''
| ಗೋಪಾಕುಮಾರ್ "ಜಿ.ಕೆ."
|
|<ref>{{cite news |last=George |first=Vijay |date=11 April 2008 |title=Battling for the box office |url=http://www.thehindu.com/todays-paper/tp-features/tp-fridayreview/battling-for-the-box-office/article1433815.ece |url-status=live |archive-url=https://web.archive.org/web/20160219144604/http://www.thehindu.com/todays-paper/tp-features/tp-fridayreview/battling-for-the-box-office/article1433815.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಮಿಳಿಕಳ್ ಸಾಕ್ಷಿ]]''
| ಪ್ರೊಫೆಸರ್ ಸಯೀದ್ ಅಹ್ಮದ್
|
|<ref>{{cite web |last=Palicha |first=Paresh C |date=23 June 2008 |title=Mizhikal Sakshi is melodramatic |url=http://www.rediff.com/movies/review/ssms/20080623.htm |url-status=live |archive-url=https://web.archive.org/web/20160105190949/http://www.rediff.com/movies/review/ssms/20080623.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ಮದಾಂಪಿ]]''
| ಪುತ್ತನ್ ಪುರಕ್ಕಲ್ ಗೋಪಾಲಕೃಷ್ಣ ಪಿಳ್ಳೈ
|
|<ref>{{cite news |last=Nagarajan |first=Saraswathy |date=4 July 2008 |title=Of banks and bankers |url=http://www.thehindu.com/todays-paper/tp-features/tp-fridayreview/of-banks-and-bankers/article1434742.ece |url-status=live |archive-url=https://web.archive.org/web/20160219144313/http://www.thehindu.com/todays-paper/tp-features/tp-fridayreview/of-banks-and-bankers/article1434742.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಆಕಾಶ ಗೋಪುರಂ]]''
| ಆಲ್ಬರ್ಟ್ ಸ್ಯಾಮ್ಸನ್
|
|<ref>{{cite news |last=Zaman |first=Rana Siddiqui |date=22 August 2008 |title=A castle of his own |url=http://www.thehindu.com/todays-paper/tp-features/tp-fridayreview/a-castle-of-his-own/article1435337.ece |url-status=live |archive-url=https://web.archive.org/web/20160219143539/http://www.thehindu.com/todays-paper/tp-features/tp-fridayreview/a-castle-of-his-own/article1435337.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಕುರುಕ್ಷೇತ್ರ]]''
| ಕರ್ನಲ್ ಮಹಾದೇವನ್
|
|<ref>{{cite news |last=Pillai |first=Sreedhar |date=4 October 2008 |title=Marking a new trend |url=http://timesofindia.indiatimes.com/entertainment/hindi/bollywood/news/Marking-a-new-trend/articleshow/3556813.cms |url-status=live |archive-url=https://web.archive.org/web/20160219144731/http://timesofindia.indiatimes.com/entertainment/hindi/bollywood/news/Marking-a-new-trend/articleshow/3556813.cms |archive-date=19 February 2016 |access-date=14 December 2015 |work=[[The Times of India]]}}</ref>
|-
! scope="row" | ''[[ಟ್ವೆಂಟಿ:೨೦]]''
| ದೇವರಾಜ ಪ್ರತಾಪ ವರ್ಮಾ
|
|<ref>{{cite web |last=Palicha |first=Paresh C |date=6 November 2008 |title=Twenty: 20 is surprisingly good |url=http://www.rediff.com/movies/2008/nov/06sst.htm |url-status=live |archive-url=https://web.archive.org/web/20160207165042/http://www.rediff.com/movies/2008/nov/06sst.htm |archive-date=7 February 2016 |access-date=26 February 2016 |work=[[Rediff.com]]}}</ref>
|-
! scope="row" | ''[[ಪಾಕಲ್ ನಕ್ಷತ್ರಂಗಳ್]]''
| ಸಿದ್ಧಾರ್ಥನ್
|
|<ref>{{cite web |last=Palicha |first=Paresh C |date=1 December 2008 |title=Review: Pakal Nakshatrangal |url=http://www.rediff.com/movies/2008/dec/01review-pakal-nakshatrangal.htm |url-status=live |archive-url=https://web.archive.org/web/20160105122050/http://www.rediff.com/movies/2008/dec/01review-pakal-nakshatrangal.htm |archive-date=5 January 2016 |access-date=14 December 2015 |work=[[Rediff.com]]}}</ref>
|-
| rowspan="7" | 2009
! scope="row" | ''[[ರೆಡ್ ಚಿಲ್ಲೀಸ್]]''
| ಒಯ್ಯಾರತು ಮದತಿಲ್ "ಒ.ಎಂ.ಆರ್" ರಾಮನಾಥನ್
|
|<ref>{{cite web |last=Moviebuzz (Sify) |date=12 February 2009 |title=Valentine weekend- Kunchacko v/s Red Chillies |url=http://www.sify.com/movies/valentine-weekend-kunchacko-v-s-red-chillies-news-malayalam-kkfsvhhchggsi.html |url-status=dead |archive-url=https://web.archive.org/web/20151224093841/http://www.sify.com/movies/valentine-weekend-kunchacko-v-s-red-chillies-news-malayalam-kkfsvhhchggsi.html |archive-date=24 December 2015 |access-date=14 December 2015 |website=[[Sify]]}}</ref>
|-
! scope="row" | ''[[ಸಾಗರ್ ಅಲಿಯಾಸ್ ಜಾಕಿ ರೀಲೋಡೆಡ್]]''
| ಸಾಗರ್ ಅಲಿಯಾಸ್ ಜಾಕಿ
|
|<ref>{{cite news |last=George |first=Vijay |date=27 March 2009 |title=Amal Neerad alias Action |url=http://www.thehindu.com/todays-paper/tp-features/tp-fridayreview/amal-neerad-alias-action/article657897.ece |url-status=live |archive-url=https://web.archive.org/web/20160219143143/http://www.thehindu.com/todays-paper/tp-features/tp-fridayreview/amal-neerad-alias-action/article657897.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಭಗವಾನ್]]''
| ಡಾ. ಬಾಲಗೋಪಾಲನ್
|
|<ref>{{cite news |last=Bureau |first=Spicezee |date=10 December 2008 |title=South superstar Mohanlal's 'Bhagavan' shot in 12 hours flat! |url=http://zeenews.india.com/home/south-superstar-mohanlals-bhagavan-shot-in-12-hours-flat_489751.html |url-status=live |archive-url=https://web.archive.org/web/20151222164359/http://zeenews.india.com/home/south-superstar-mohanlals-bhagavan-shot-in-12-hours-flat_489751.html |archive-date=22 December 2015 |access-date=14 December 2015 |work=[[Zee News]]}}</ref>
|-
! scope="row" | ''[[ಭ್ರಮರಂ]]''
| ಶಿವನ್ಕುಟ್ಟಿ
|
|<ref>{{cite web |last=Palicha |first=Paresh C |date=26 June 2009 |title=Watch Bhramaram for Mohanlal |url=http://www.rediff.com/movies/review/watch-bhramaram-for-mohanlal/20090626.htm |url-status=live |archive-url=https://web.archive.org/web/20160105191415/http://www.rediff.com/movies/review/watch-bhramaram-for-mohanlal/20090626.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ಉನ್ನೈಪೋಲ್ ಒರುವನ್]]''
| ಡಿಜಿಪಿ ಗೋವಿಂದ ರಾಘವನ್ ಮಾರಾರ್ ಐಪಿಎಸ್
|ತಮಿಳು ಚಿತ್ರ
|<ref>{{cite web |last=Rediff |date=6 August 2009 |title=Kamal, Mohanlal in Tamil's A Wednesday |url=http://movies.rediff.com/report/2009/aug/06/kamal-mohanlal-intamils-a-wednesday.htm |url-status=live |archive-url=https://web.archive.org/web/20151222111711/http://movies.rediff.com/report/2009/aug/06/kamal-mohanlal-intamils-a-wednesday.htm |archive-date=22 December 2015 |access-date=11 December 2015 |work=[[Rediff.com]]}}</ref>
|-
! scope="row" | ''[[ಏಂಜೆಲ್ ಜಾನ್]]''
| ಏಂಜೆಲ್ ಜಾನ್
|
|<ref>{{cite web |last=Palicha |first=Paresh C |date=23 October 2009 |title=Review: Angel John is no Bruce Almighty |url=http://movies.rediff.com/report/2009/oct/23/south-malayalam-movie-review-angel-john.htm |url-status=live |archive-url=https://web.archive.org/web/20151222134350/http://movies.rediff.com/report/2009/oct/23/south-malayalam-movie-review-angel-john.htm |archive-date=22 December 2015 |access-date=14 December 2015 |work=[[Rediff.com]]}}</ref>
|-
! scope="row" | ''[[ಎವಿಡಂ ಸ್ವರ್ಗಮಾಣು]]''
| ಮ್ಯಾಥ್ಯೂಸ್ ಜೆರೆಮಿಯಾಸ್
|
|<ref>{{cite web |last=Palicha |first=Paresh C |date=28 December 2009 |title=Review: Ividam Swargamanu is worth watching |url=http://www.rediff.com/movies/review/south-review-ividam-swargamanu/20091228.htm |url-status=live |archive-url=https://web.archive.org/web/20160105121838/http://www.rediff.com/movies/review/south-review-ividam-swargamanu/20091228.htm |archive-date=5 January 2016 |access-date=14 December 2015 |work=[[Rediff.com]]}}</ref>
|-
| rowspan="5" | 2010
! scope="row" | ''[[ಜನಕನ್]]''
| ವಕೀಲ ಸೂರ್ಯ ನಾರಾಯಣನ್
|
|<ref>{{cite web |last=Palicha |first=Paresh C |date=9 April 2010 |title=Review: Janakan is promising |url=http://movies.rediff.com/review/2010/apr/09/south-malayalam-movie-review-janakan.htm |url-status=live |archive-url=https://web.archive.org/web/20151222080401/http://movies.rediff.com/review/2010/apr/09/south-malayalam-movie-review-janakan.htm |archive-date=22 December 2015 |access-date=14 December 2015 |work=[[Rediff.com]]}}</ref>
|-
! scope="row" | ''[[ಅಲೆಕ್ಸಾಂಡರ್ ದಿ ಗ್ರೇಟ್]]''
| ಅಲೆಕ್ಸಾಂಡರ್ ವರ್ಮಾ
|
|<ref>{{cite news |last=IBN Live |date=6 May 2010 |title=Malayalam industry lifts ban on new releases |url=http://www.ibnlive.com/news/india/malayalam-industry-lifts-ban-338025.html |url-status=live |archive-url=https://web.archive.org/web/20160128055501/http://www.ibnlive.com/news/india/malayalam-industry-lifts-ban-338025.html |archive-date=28 January 2016 |access-date=14 December 2015 |work=[[IBN Live]]}}</ref>
|-
! scope="row" | ''[[ಒರು ನಾಳ್ ವರುಮ್]]''
| ಕುಳಪ್ಪುಳ್ಳಿ ಸುಕುಮಾರನ್ / ಡಿವೈಎಸ್ಪಿ ನಂದಕುಮಾರ್
|
|<ref>{{cite news |last=Media |first=Sampurn |date=27 April 2010 |title=Oru Naal Varum to release on May 7 |url=http://www.newindianexpress.com/entertainment/malayalam/article198029.ece |url-status=dead |archive-url=https://web.archive.org/web/20160219142600/http://www.newindianexpress.com/entertainment/malayalam/article198029.ece |archive-date=19 February 2016 |access-date=14 December 2015 |work=[[The New Indian Express]]}}</ref>
|-
! scope="row" | ''[[ಶಿಕ್ಕರ್]]''
| ಬಾಲರಾಮನ್
|
|<ref>{{cite news |last=Wire |first=Sampurn |date=2 October 2010 |title='Shikkar' wins the Ramzan race |url=http://www.newindianexpress.com/entertainment/malayalam/article286778.ece |url-status=dead |archive-url=https://web.archive.org/web/20150722051403/http://www.newindianexpress.com/entertainment/malayalam/article286778.ece |archive-date=22 July 2015 |access-date=14 December 2015 |work=[[The New Indian Express]]}}</ref>
|-
! scope="row" | ''[[ಕಾಂದಹಾರ್]]''
| ಮೇಜರ್ ಮಹಾದೇವನ್
|
|<ref>{{cite web |last=George |first=Meghna |date=17 December 2010 |title=Review: Big B, Mohanlal shine in Kandahar |url=http://www.rediff.com/movies/review/south-review-kandahar/20101217.htm |url-status=live |archive-url=https://web.archive.org/web/20151117102735/http://www.rediff.com/movies/review/south-review-kandahar/20101217.htm |archive-date=17 November 2015 |access-date=14 December 2015 |work=[[Rediff.com]]}}</ref>
|-
| rowspan="5" | 2011
! scope="row" | ''[[ಕ್ರಿಶ್ಚಿಯನ್ ಬ್ರದರ್ಸ್]]''
| ಕ್ರಿಸ್ಟಿ ವರ್ಗೀಸ್ ಮಪ್ಪಿಳ್ಳ ಅಲಿಯಾಸ್ ಶೆರ್ಸನ್
|
|<ref>{{cite news |last=B S |first=Shibu |date=26 February 2011 |title='Christian Brothers' to spread the good word |url=http://www.newindianexpress.com/entertainment/malayalam/article400741.ece |url-status=dead |archive-url=https://web.archive.org/web/20151224232022/http://www.newindianexpress.com/entertainment/malayalam/article400741.ece |archive-date=24 December 2015 |access-date=14 December 2015 |work=[[The New Indian Express]]}}</ref>
|-
! scope="row" | ''[[ಚೈನಾ ಟೌನ್]]''
| ಮಥುಕುಟ್ಟಿ ಮತ್ತು ಕ್ಸೇವಿಯರ್
|
|<ref>{{cite web |last=Moviebuzz (Sify) |date=17 February 2010 |title=China Town is Mohanlal's Onam release! |url=http://www.sify.com/movies/china-town-is-mohanlals-onam-release-news-malayalam-kkfqRAheehisi.html |url-status=dead |archive-url=https://web.archive.org/web/20151222091652/http://www.sify.com/movies/china-town-is-mohanlals-onam-release-news-malayalam-kkfqRAheehisi.html |archive-date=22 December 2015 |access-date=14 December 2015 |website=[[Sify]]}}</ref>
|-
! scope="row" | ''[[ಪ್ರಣಯಂ]]''
| ಮ್ಯಾಥ್ಯೂಸ್
|
|<ref>{{cite news |last=Velayanikal |first=Malavika |date=11 September 2011 |title='Pranayam', a film you can take home with you |url=http://www.dnaindia.com/entertainment/report-pranayam-a-film-you-can-take-home-with-you-1585909 |url-status=live |archive-url=https://web.archive.org/web/20160226123629/http://www.dnaindia.com/entertainment/report-pranayam-a-film-you-can-take-home-with-you-1585909 |archive-date=26 February 2016 |access-date=26 February 2016 |work=[[Daily News and Analysis]]}}</ref>
|-
! scope="row" | ''[[ಸ್ನೇಹವೀಡು]]''
| ಅಜಯನ್ ಮೇನನ್
|
|<ref>{{cite web |last=George |first=Meghna |date=26 September 2011 |title=Mohanlal hits 300 with Snehaveedu |url=http://www.rediff.com/movies/slide-show/slide-show-1-mohanlal-gears-up-with-landmark-film/20110926.htm |url-status=live |archive-url=https://web.archive.org/web/20111230223238/http://www.rediff.com/movies/slide-show/slide-show-1-mohanlal-gears-up-with-landmark-film/20110926.htm |archive-date=30 December 2011 |access-date=14 December 2015 |work=[[Rediff.com]]}}</ref>
|-
! scope="row" | ''[[ಒರು ಮರುಭೂಮಿಕ್ಕಾಧ]]''
| ಪಿ. ಮಾಧವನ್ ನಾಯರ್
|
|<ref>{{cite news |last=Nagarajan |first=Saraswathy |date=20 October 2011 |title=An Arabian comedy |url=http://www.thehindu.com/features/cinema/an-arabian-comedy/article2555143.ece |url-status=live |archive-url=https://web.archive.org/web/20160219142431/http://www.thehindu.com/features/cinema/an-arabian-comedy/article2555143.ece |archive-date=19 February 2016 |access-date=14 December 2015 |work=[[The Hindu]]}}</ref>
|-
| rowspan="6" | 2012
! scope="row" | ''[[ಕಸನೋವ್ವಾ]]''
| ಕಸನೋವ್ವಾ
|
|<ref>{{cite news |last=Mid-Day |date=6 February 2012 |title=Ajay vs Aamir – Who will play Casanova in south remake? – NDTV Movies |url=http://movies.ndtv.com/bollywood/ajay-vs-aamir-who-will-play-casanova-in-south-remake-603474 |url-status=live |archive-url=https://web.archive.org/web/20151222111951/http://movies.ndtv.com/bollywood/ajay-vs-aamir-who-will-play-casanova-in-south-remake-603474 |archive-date=22 December 2015 |access-date=14 December 2015 |work=[[NDTV]]}}</ref>
|-
! scope="row" | ''[[ಟೆಜ್]]''
| ಶಿವನ್ ಮೇನನ್
| ಹಿಂದಿ ಚಿತ್ರ; ಅತಿಥಿ ಪಾತ್ರ
|<ref>{{cite news |last1=Srivastava |first1=Priyanka |last2=Varma |first2=Lipika |date=25 January 2012 |title=Mohanlal's fans want more |url=https://www.indiatoday.in/movies/bollywood/story/mohanlal-tezz-priyadarshans-action-film-90855-2012-01-24 |url-status=live |archive-url=https://web.archive.org/web/20140129181953/http://indiatoday.intoday.in/story/mohanlal-tezz-priyadarshans-action-film/1/170483.html |archive-date=29 January 2014 |access-date=11 December 2015 |work=[[India Today]]}}</ref>
|-
! scope="row" | ''[[ಗ್ರಾಂಡ್ಮಾಸ್ಟರ್]]''
| ಐಜಿ ಚಂದ್ರಶೇಖರ್ ಐಪಿಎಸ್
|
|<ref>{{cite web |last=Palicha |first=Paresh C |date=4 May 2012 |title=Review: Mohanlal excels in Grandmaster |url=http://www.rediff.com/movies/report/south-review-mohanlal-excels-in-grandmaster/20120504.htm |url-status=live |archive-url=https://web.archive.org/web/20160105121854/http://www.rediff.com/movies/report/south-review-mohanlal-excels-in-grandmaster/20120504.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ಸ್ಪಿರಿಟ್]]''
| ರಘು ನಂದನ್
|
|<ref>{{cite news |last=IBN Live |date=20 September 2012 |title=Spirit: Completes 100 day run on Box office |url=http://www.ibnlive.com/news/india/spirit-completes-100-day-run-on-box-office-509793.html |url-status=live |archive-url=https://web.archive.org/web/20160128055507/http://www.ibnlive.com/news/india/spirit-completes-100-day-run-on-box-office-509793.html |archive-date=28 January 2016 |access-date=14 December 2015 |work=[[IBN Live]]}}</ref>
|-
! scope="row" | ''[[ರನ್ ಬೇಬಿ ರನ್]]''
| ವೇಣು
|
|<ref>{{cite news |last=IBN Live |date=31 August 2012 |title=Malayalam Review: 'Run Baby Run' is a gripping thriller |url=http://www.ibnlive.com/news/india/malayalam-review-run-baby-run-is-a-gripping-thriller-503350.html |url-status=live |archive-url=https://web.archive.org/web/20160128124258/http://www.ibnlive.com/news/india/malayalam-review-run-baby-run-is-a-gripping-thriller-503350.html |archive-date=28 January 2016 |access-date=14 December 2015 |work=[[IBN Live]]}}</ref>
|-
! scope="row" | ''[[ಕರ್ಮಯೋಧ]]''
| ಡಿಸಿಪಿ ಮಾಧವ "ಮ್ಯಾಡ್ ಮ್ಯಾಡಿ" ಮೇನನ್ ಐಪಿಎಸ್
|
|<ref>{{cite news |last=Kurian |first=Shiba |date=19 December 2012 |title=Mohanlal's 'Karmayodha' courts trouble |url=http://timesofindia.indiatimes.com/entertainment/malayalam/movies/news/Mohanlals-Karmayodha-courts-trouble/articleshow/17675330.cms? |url-status=live |archive-url=https://web.archive.org/web/20160219142226/http://timesofindia.indiatimes.com/entertainment/malayalam/movies/news/Mohanlals-Karmayodha-courts-trouble/articleshow/17675330.cms |archive-date=19 February 2016 |access-date=14 December 2015 |work=[[The Times of India]]}}</ref>
|-
| rowspan="6" | 2013
! scope="row" | ''[[ಲೋಕ್ಪಾಲ್]]''
| ನಂದಗೋಪಾಲ್ / ಲೋಕ್ಪಾಲ್
|
|<ref>{{cite news |last=IBN Live |date=9 February 2013 |title='Lokpal' Review: The Malayalam film is a one time watch |url=http://www.ibnlive.com/news/india/lokpal-review-the-malayalam-film-is-a-one-time-watch-589835.html |url-status=live |archive-url=https://web.archive.org/web/20160126052846/http://www.ibnlive.com/news/india/lokpal-review-the-malayalam-film-is-a-one-time-watch-589835.html |archive-date=26 January 2016 |access-date=14 December 2015 |work=[[IBN Live]]}}</ref>
|-
! scope="row" | ''[[ರೆಡ್ ವೈನ್]]''
| ಎಸಿಪಿ ರತೀಶ್ ವಾಸುದೇವನ್ ಐಪಿಎಸ್
|
|<ref>{{cite news |last=Kurian |first=Shiba |date=26 March 2013 |title=Red Wine's climax changed after its release? |url=http://timesofindia.indiatimes.com/entertainment/malayalam/movies/news/Red-Wines-climax-changed-after-its-release/articleshow/19214416.cms |url-status=live |archive-url=https://web.archive.org/web/20160219142104/http://timesofindia.indiatimes.com/entertainment/malayalam/movies/news/Red-Wines-climax-changed-after-its-release/articleshow/19214416.cms |archive-date=19 February 2016 |access-date=14 December 2015 |work=[[The Times of India]]}}</ref>
|-
! scope="row" | ''[[ಲೇಡೀಸ್ ಅಂಡ್ ಜೆಂಟಲ್ಮನ್]]''
| ಚಂದ್ರಬೋಸ್
|
|<ref>{{cite news |last=Saseendran |first=Sajila |date=23 March 2013 |title=Dubai is my second home: Mohanlal – Khaleej Times |url=http://www.khaleejtimes.com/article/20130323/ARTICLE/303239974/1057 |url-status=live |archive-url=https://web.archive.org/web/20151118041835/http://www.khaleejtimes.com/article/20130323/ARTICLE/303239974/1057 |archive-date=18 November 2015 |access-date=14 December 2015 |work=[[Khaleej Times]]}}</ref>
|-
! scope="row" | ''[[ಕಡಲ್ ಕಡನ್ನು ಒರು ಮಾತುಕುಟ್ಟಿ]]''
| ಸ್ವತಃ
|ಅತಿಥಿ ಪಾತ್ರ
|<ref>{{cite news |last=Karthikeyan |first=Shruti |date=23 August 2014 |title=Mammootty and Mohanlal to share screen space? |url=http://timesofindia.indiatimes.com/Entertainment/Malayalam/Movies/News/Mammootty-and-Mohanlal-to-share-screen-space/articleshow/40694989.cms |url-status=live |archive-url=https://web.archive.org/web/20140828192648/http://timesofindia.indiatimes.com/Entertainment/Malayalam/Movies/News/Mammootty-and-Mohanlal-to-share-screen-space/articleshow/40694989.cms |archive-date=28 August 2014 |access-date=20 December 2015 |work=[[The Times of India]]}}</ref>
|-
! scope="row" | ''[[ಗೀತಾಂಜಲಿ]]''
| ಡಾ. ಸನ್ನಿ ಜೋಸೆಫ್
|
|<ref>{{cite news |last=Nagarajan |first=Saraswathy |date=14 November 2013 |title=Ghostbuster returns |url=http://www.thehindu.com/features/cinema/ghostbuster-returns/article5350923.ece |url-status=live |archive-url=https://web.archive.org/web/20131114180638/http://www.thehindu.com/features/cinema/ghostbuster-returns/article5350923.ece |archive-date=14 November 2013 |access-date=26 February 2016 |work=[[The Hindu]]}}</ref>
|-
! scope="row" | ''[[ದೃಶ್ಯಂ]]''
| ಜಾರ್ಜ್ಕುಟ್ಟಿ
|
|<ref>{{cite news |last=Seshagiri |first=Sangeetha |date=12 February 2014 |title='Drishyam' Box Office Collection: Mohanlal Starrer is Mega Blockbuster in India, Performs Well in UK |url=http://www.ibtimes.co.in/039drishyam039-box-office-collection-mohanlal-starrer-is-mega-blockbuster-in-india-performs-well-in-uk-538490 |url-status=live |archive-url=https://web.archive.org/web/20150803002040/http://www.ibtimes.co.in/039drishyam039-box-office-collection-mohanlal-starrer-is-mega-blockbuster-in-india-performs-well-in-uk-538490 |archive-date=3 August 2015 |access-date=14 December 2015 |work=[[International Business Times]]}}</ref>
|-
| rowspan="4" | 2014
! scope="row" | ''[[ಜಿಲ್ಲಾ]]''
| ಶಿವನ್
| ತಮಿಳು ಚಿತ್ರ
|<ref>{{cite news |last=Bhaskaran |first=Gautaman |date=11 January 2014 |title=Movie review: Watch Jilla for Mohanlal's performance, Vijay's charisma |url=http://www.hindustantimes.com/regional-movies/movie-review-watch-jilla-for-mohanlal-s-performance-vijay-s-charisma/story-YdCiVl9QPOInca7Odd13BI.html |url-status=live |archive-url=https://web.archive.org/web/20160127123601/http://www.hindustantimes.com/regional-movies/movie-review-watch-jilla-for-mohanlal-s-performance-vijay-s-charisma/story-YdCiVl9QPOInca7Odd13BI.html |archive-date=27 January 2016 |access-date=11 December 2015 |work=[[Hindustan Times]]}}</ref>
|-
! scope="row" | ''[[ಮಿಸ್ಟರ್ ಫ್ರಾಡ್]]''
| ಭಾಯಿ ಜಿ / ಜಾನ್ ಕ್ಲಿಫ್ / ಶಿವರಾಮ್
|
|<ref>{{cite news |last=Press Trust of India |date=28 April 2014 |title=Malayalam films won't release till ban on Mohanlal's 'Mr Fraud' is lifted: FEFKA |url=http://indianexpress.com/article/entertainment/entertainment-others/malayalam-films-wont-release-till-ban-on-mohanlals-mr-fraud-is-lifted-fefka/ |url-status=live |archive-url=https://web.archive.org/web/20151222170549/http://indianexpress.com/article/entertainment/entertainment-others/malayalam-films-wont-release-till-ban-on-mohanlals-mr-fraud-is-lifted-fefka/ |archive-date=22 December 2015 |access-date=14 December 2015 |work=[[The Indian Express]]}}</ref>
|-
! scope="row" | ''[[ಕೂತಾರ]]''
| ಉಸ್ತಾದ್ ಸಾಲಿ
| ವಿಸ್ತೃತ ಅತಿಥಿ ಪಾತ್ರ
|<ref>{{cite news |last=V. P |first=Nicy |date=12 June 2014 |title=New Malayalam Movie Releases: 'Koothara', 'Angry Babies in Love' Set to Roll by Weekend |url=http://www.ibtimes.co.in/new-malayalam-movie-releases-koothara-angry-babies-love-set-roll-by-weekend-602128 |url-status=live |archive-url=https://web.archive.org/web/20151222120709/http://www.ibtimes.co.in/new-malayalam-movie-releases-koothara-angry-babies-love-set-roll-by-weekend-602128 |archive-date=22 December 2015 |access-date=14 December 2015 |work=[[International Business Times]]}}</ref>
|-
! scope="row" | ''[[ಪೆರುಚಾಳಿ]]''
| ಜಗನ್ನಾಥನ್
|
|<ref>{{cite news |last=Sathish |first=V M |date=2 September 2014 |title=Malayalam superstar Mohanlal's 'Peruchazhi' to premiere in Dubai |url=http://www.emirates247.com/entertainment/malayalam-superstar-mohanlal-s-peruchazhi-to-premiere-in-dubai-2014-09-02-1.561510 |url-status=live |archive-url=https://web.archive.org/web/20150702005605/http://www.emirates247.com/entertainment/malayalam-superstar-mohanlal-s-peruchazhi-to-premiere-in-dubai-2014-09-02-1.561510 |archive-date=2 July 2015 |access-date=14 December 2015 |work=[[Emirates 24/7]]}}</ref>
|-
| rowspan="6" | 2015
! scope="row" | ''[[ರಸಂ]]''
| ಸ್ವತಃ
|ಅತಿಥಿ ಪಾತ್ರ
|<ref>{{cite news |last=Indo-Asian News Service |date=5 January 2015 |title=Malayalam film 'Rasam', shot in Qatar to release soon |url=http://indianexpress.com/article/entertainment/regional/malayalam-film-rasam-shot-in-qatar-to-release-soon/ |url-status=live |archive-url=https://web.archive.org/web/20160210011326/http://indianexpress.com/article/entertainment/regional/malayalam-film-rasam-shot-in-qatar-to-release-soon/ |archive-date=10 February 2016 |access-date=14 December 2015 |work=[[The Indian Express]]}}</ref>
|-
! scope="row" | ''[[ಮೈಥ್ರಿ]]''
| ಮಹಾದೇವ್ ಗೋಡ್ಕೆ
| ಕನ್ನಡ ಚಿತ್ರ; ಅತಿಥಿ ಪಾತ್ರ; ಮಲಯಾಳಂನಲ್ಲಿ 'ಮೈ ಹೀರೋ ಮೈಥ್ರಿ' ಎಂದು ಭಾಗಶಃ ಮರುನಿರ್ಮಾಣ
|<ref>{{cite news |last=Sharadhaa |first=A |date=17 February 2015 |title=Mythri Creates Ripples |url=http://www.newindianexpress.com/entertainment/kannada/Mythri-Creates-Ripples/2015/02/17/article2671918.ece |url-status=dead |archive-url=https://web.archive.org/web/20151222074633/http://www.newindianexpress.com/entertainment/kannada/Mythri-Creates-Ripples/2015/02/17/article2671918.ece |archive-date=22 December 2015 |access-date=11 December 2015 |work=[[The New Indian Express]]}}</ref>
|-
! scope="row" | ''[[ಎನ್ನುಮ್ ಎಪ್ಪೋಳುಂ]]''
| ವಿನೀತ್ ಎನ್. ಪಿಳ್ಳೈ
|
|<ref>{{cite news |last=Online Desk |date=28 March 2015 |title=5 reasons to watch 'Ennum Eppozhum' |url=http://english.manoramaonline.com/entertainment/entertainment-news/ennum-eppozhum-mohanlal-manju-warrier-sathyan-anthikad-box-office-reasons-to-watch.html |url-status=live |archive-url=https://web.archive.org/web/20151209174649/http://english.manoramaonline.com/entertainment/entertainment-news/ennum-eppozhum-mohanlal-manju-warrier-sathyan-anthikad-box-office-reasons-to-watch.html |archive-date=9 December 2015 |access-date=14 December 2015 |work=[[Malayala Manorama]]}}</ref>
|-
! scope="row" | ''[[ಲೈಲಾ ಓ ಲೈಲಾ]]''
| ಏಜೆಂಟ್ ಜೈ ಮೋಹನ್
|
|<ref>{{cite news |last=Khan |first=Ujala Ali |date=19 May 2015 |title=Dubai film Lailaa O Lailaa, with Malayalam superstar Mohanlal, aims for local premiere |url=https://www.thenationalnews.com/arts-culture/dubai-film-lailaa-o-lailaa-with-malayalam-superstar-mohanlal-aims-for-local-premiere-1.126415/ |url-status=live |archive-url=https://web.archive.org/web/20151227223332/http://www.thenational.ae/arts-lifestyle/film/dubai-film-lailaa-o-lailaa-with-malayalam-superstar-mohanlal-aims-for-local-premiere |archive-date=27 December 2015 |access-date=14 December 2015 |work=[[The National (Abu Dhabi)|The National]]}}</ref>
|-
! scope="row" | ''[[ಲೋಹಂ]]''
| ರಾಜೀವ್ "ರಾಜು" ಸತ್ಯಮೂರ್ತಿ
|
|<ref>{{cite news |last=James |first=Anu |date=21 August 2015 |title=Mohanlal's 'Loham' Review: Live Audience Response |url=http://www.ibtimes.co.in/mohanlal-starrer-loham-review-live-audience-response-643552 |url-status=live |archive-url=https://web.archive.org/web/20151223142243/http://www.ibtimes.co.in/mohanlal-starrer-loham-review-live-audience-response-643552 |archive-date=23 December 2015 |access-date=14 December 2015 |work=[[International Business Times]]}}</ref>
|-
! scope="row" | ''[[ಕನಾಲ್]]''
| ಜಾನ್ ಡೇವಿಡ್
|
|<ref>{{cite news |last=James |first=Anu |date=22 October 2015 |title=Mohanlal's 'Kanal' review: Live audience response |url=http://www.ibtimes.co.in/mohanlals-kanal-review-live-audience-response-651514 |url-status=live |archive-url=https://web.archive.org/web/20151122065356/http://www.ibtimes.co.in/mohanlals-kanal-review-live-audience-response-651514 |archive-date=22 November 2015 |access-date=14 December 2015 |work=[[International Business Times]]}}</ref>
|-
| rowspan="4" | 2016
! scope="row" | ''[[ಮನಮಂತ]]''
| ಸಾಯಿ ರಾಮ್
| ತೆಲುಗು ಚಿತ್ರ; ಮಲಯಾಳಂನಲ್ಲಿ 'ವಿಸ್ಮಯಂ' ಎಂದು ಭಾಗಶಃ ಮರುನಿರ್ಮಾಣ
|<ref>{{cite news |last=Sidhardhan |first=Sanjith |date=14 January 2016 |title=Mohanlal wraps up filming his Telugu movie |url=http://timesofindia.indiatimes.com/entertainment/malayalam/movies/news/Mohanlal-wraps-up-filming-his-Telugu-movie/articleshow/50574492.cms |url-status=live |archive-url=https://web.archive.org/web/20160225180814/http://timesofindia.indiatimes.com/entertainment/malayalam/movies/news/Mohanlal-wraps-up-filming-his-Telugu-movie/articleshow/50574492.cms |archive-date=25 February 2016 |access-date=25 February 2016}}</ref>
|-
! scope="row" | ''[[ಜನತಾ ಗ್ಯಾರೇಜ್]]''
| ಸತ್ಯಮ್
| ತೆಲುಗು ಚಿತ್ರ
|<ref>{{cite news |last=Jonnalagedda |first=Pranita |date=26 November 2016 |title=Mohanlal is NTR's peddananna |url=http://timesofindia.indiatimes.com/entertainment/telugu/movies/news/Mohanlal-is-NTRs-peddananna/articleshow/49934152.cms? |url-status=live |archive-url=https://web.archive.org/web/20160219141527/http://timesofindia.indiatimes.com/entertainment/telugu/movies/news/Mohanlal-is-NTRs-peddananna/articleshow/49934152.cms |archive-date=19 February 2016 |access-date=1 December 2015 |work=[[The Times of India]]}}</ref>
|-
! scope="row" | ''[[ಒಪ್ಪಂ]]''
| ಜಯರಾಮನ್
|
|<ref>{{cite news |last=Sidhardhan |first=Sanjith |date=6 March 2016 |title=Mohanlal's Oppam starts filming in Kochi |url=http://timesofindia.indiatimes.com/entertainment/malayalam/Mohanlals-Oppam-starts-filming-in-Kochi/articleshow/51275090.cms |url-status=live |archive-url=https://web.archive.org/web/20160308192944/http://timesofindia.indiatimes.com/entertainment/malayalam/Mohanlals-Oppam-starts-filming-in-Kochi/articleshow/51275090.cms |archive-date=8 March 2016 |access-date=8 March 2016 |work=[[The Times of India]]}}</ref>
|-
! scope="row" | ''[[ಪುಲಿಮುರುಗನ್]]''
| ಮುರುಗನ್
|
|<ref>{{cite news |last=James |first=Anu |date=26 February 2016 |title=Mohanlal's 'Pulimurugan' to be released in 3,000 screens? |url=http://www.ibtimes.co.in/mohanlals-pulimurugan-be-released-3000-screens-668379 |url-status=live |archive-url=https://web.archive.org/web/20160227105254/http://www.ibtimes.co.in/mohanlals-pulimurugan-be-released-3000-screens-668379 |archive-date=27 February 2016 |access-date=29 February 2016 |work=[[International Business Times]]}}</ref>
|-
| rowspan="4" | 2017
! scope="row" | ''[[ಮುಂತಿರಿವಳ್ಳಿಕಲ್ ತಾಲಿರ್ಕ್ಕುಂಬೋಲ್]]''
| ಉಳಹನ್ನನ್ "ಉನ್ನಚನ್"
|
|<ref>{{cite news |last1=James |first1=Anu |date=15 July 2016 |title=Mohanlal, Meena start shooting for untitled Jibu Jacob movie [PHOTOS] |url=http://www.ibtimes.co.in/mohanlal-meena-start-shooting-untitled-jibu-jacob-movie-photos-686732 |access-date=17 July 2016 |work=[[International Business Times]]}}</ref>
|-
! scope="row" | ''[[1971: ಬಿಯಾಂಡ್ ಬಾರ್ಡರ್ಸ್]]''
| ಕರ್ನಲ್ ಮಹಾದೇವನ್ ಮತ್ತು ಮೇಜರ್ ಸಹದೇವನ್
|
|<ref>{{cite news |title=Mohanlal starts shooting for Major Ravi's next |url=http://timesofindia.indiatimes.com/entertainment/malayalam/movies/news/Mohanlal-starts-shooting-for-Major-Ravis-next/articleshow/55204172.cms |access-date=7 November 2016 |work=The Times of India}}</ref>
|-
! scope="row" | ''[[ವೇಲಿಪದಿಂಟೆ ಪುಸ್ತಕಂ]]''
| ಮೈಕೆಲ್ ಇಡಿಕುಲ
|
|<ref>{{Cite news |date=26 May 2017 |title=Mohanlal reveals his look from Lal Jose's Velipadinte Pustakam. See photo |url=http://indianexpress.com/article/entertainment/malayalam/mohanlal-reveals-his-look-from-lal-jose-velipadinte-pustakam-see-photo-4675302/ |url-status=live |archive-url=https://archive.today/20170606140309/http://indianexpress.com/article/entertainment/malayalam/mohanlal-reveals-his-look-from-lal-jose-velipadinte-pustakam-see-photo-4675302/ |archive-date=6 June 2017 |access-date=6 June 2017 |work=The Indian Express}}</ref>
|-
! scope="row" | ''[[ವಿಲನ್]]''
| ಎಡಿಜಿಪಿ ಮ್ಯಾಥ್ಯೂ ಮಂಜೂರನ್ ಐಪಿಎಸ್
|
|<ref>{{cite news |title=Mohanlal in as villain in B Unnikrishan's next: Here's the first poster and it's badass |url=http://timesofindia.indiatimes.com/entertainment/malayalam/movies/news/mohanlal-in-as-villain-in-b-unnikrishans-next-heres-the-first-poster-and-its-badass/articleshow/57518330.cms |access-date=7 March 2017 |work=[[The Times of India]]}}</ref>
|-
| rowspan="5" | 2018
! scope="row" | ''[[ಆದಿ]]''
| ಸ್ವತಃ
|ಅತಿಥಿ ಪಾತ್ರ
|<ref>{{cite news |date=28 January 2018 |title=Aadhi movie review: Pranav parkours to stardom |url=https://www.deccanchronicle.com/entertainment/movie-reviews/280118/aadhi-movie-review-pranav-parkours-to-stardom.html |url-status=live |archive-url=https://web.archive.org/web/20180128071836/http://www.deccanchronicle.com/entertainment/movie-reviews/280118/aadhi-movie-review-pranav-parkours-to-stardom.html |archive-date=28 January 2018 |access-date=28 January 2018 |work=[[Deccan Chronicle]]}}</ref>
|-
! scope="row" | ''[[ನೀರಳಿ]]''
| ಸನ್ನಿ ಜಾರ್ಜ್
|
|<ref>{{cite news |author=സ്വന്തം ലേഖകൻ |date=10 January 2018 |title=ഈ മോഹൻലാൽ ചിത്രത്തിന് പ്രത്യേകതകൾ നിരവധി |url=https://www.manoramaonline.com/movies/movie-news/2018/01/10/mohanlal-ajoy-varma-movie-cast-list.html |access-date=26 May 2018 |work=[[Malayala Manorama]] |language=ml}}</ref>
|-
! scope="row" | ''[[ಕಾಯಂಕುಲಂ ಕೊಚುನ್ನಿ]]''
| ಇತ್ತಿಕ್ಕರ ಪಕ್ಕಿ
|
|<ref>{{cite news |last=Sidhardhan |first=Sanjith |date=9 January 2018 |title=Mohanlal's Ithikkara Pakki will be a revelation: Rosshan Andrrews |url=https://timesofindia.indiatimes.com/entertainment/malayalam/movies/news/mohanlals-ithikkara-pakki-will-be-a-revelation-rosshan-andrrews/articleshow/62427874.cms |access-date=9 January 2018 |work=[[The Times of India]]}}</ref>
|-
! scope="row" | ''[[ಡ್ರಾಮಾ]]''
| ರಾಜಗೋಪಾಲ್
|
|<ref>{{cite web |last=Smith |first=Alan |date=29 May 2018 |title=Mohanlal meets Margaret Preedy |url=http://www.kentonline.co.uk/maidstone/news/mohanlal-meets-margaret-preedy-183744/ |access-date=29 May 2018 |publisher=Kent Online}}</ref>
|-
! scope="row" | ''[[ಒಡಿಯಾನ್]]''
| ಒಡಿಯಾನ್ ಮಣಿಕ್ಯನ್
|
|<ref>{{cite news |last=James |first=Anu |date=4 October 2017 |title=Mohanlal on a roll: After Odiyan, superstar announces his next biggie |url=http://www.ibtimes.co.in/mohanlal-roll-after-odiyan-superstar-announces-his-next-biggie-744269 |access-date=28 January 2018 |work=[[International Business Times]]}}</ref>
|-
| rowspan="3" | 2019
! scope="row" | ''[[ಲೂಸಿಫರ್]]''
| ಸ್ಟೀಫನ್ ನೆಡುಂಪಲ್ಲಿ / ಖುರೇಶಿ ಅಬ್'ರಾಮ್
|
|<ref>{{cite web |date=4 June 2019 |title=Mohanlal's Lucifer storms into Rs 200 crore club, first for Malayalam cinema |url=https://www.hindustantimes.com/regional-movies/mohanlal-s-lucifer-storms-into-rs-200-crore-club-first-for-malayalam-cinema/story-vTm7JXaAdz0FWFTllE4n2I.html |access-date=16 February 2020 |website=Hindustan Times}}</ref>
|-
! scope="row" | ''[[ಇಟ್ಟಿಮಾನಿ: ಮೇಡ್ ಇನ್ ಚೈನಾ]]''
| ಇಟ್ಟಿಮಾನಿ ಮತ್ತು ಇಟ್ಟಿಮಾಥನ್
|
|<ref>{{cite news |date=24 April 2019 |title='Ittimani Made in China' puja in Kochi |url=https://timesofindia.indiatimes.com/entertainment/events/kochi/ittimani-made-in-china-puja-in-kochi/articleshow/69021700.cms?from=mdr |access-date=21 May 2019 |work=[[The Times of India]]}}</ref>
|-
! scope="row" | ''[[ಕಾಪ್ಪಾನ್]]''
| ಪಿಎಂ ಚಂದ್ರಕಾಂತ್ ವರ್ಮಾ
| ತಮಿಳು ಚಿತ್ರ
|<ref>{{Cite web |date=20 September 2019 |title=Mohanlal is the greatest actor we have in our country: Suriya on his 'Kaappaan' co-star |url=https://www.newindianexpress.com/entertainment/tamil/2019/sep/14/mohanlal-is-the-greatest-actor-we-have-in-our-country-suriya-on-his-kaappaan-co-star-2033651.html |website=The New Indian Express}}</ref>
|-
| 2020
! scope="row" | ''[[ಬಿಗ್ ಬ್ರದರ್]]''
| ಸಚಿದಾನಂದನ್
|
|<ref>{{cite web |date=11 October 2018 |title=Mohanlal's film with Siddique titled 'Big Brother' |url=https://www.thenewsminute.com/article/mohanlal-s-film-siddique-titled-big-brother-89829 |url-status=live |archive-url=https://web.archive.org/web/20190525133404/https://www.thenewsminute.com/article/mohanlal-s-film-siddique-titled-big-brother-89829 |archive-date=25 May 2019 |accessdate=25 May 2019 |website=The News Minute}}</ref>
|-
| rowspan="2" | 2021
! scope="row" | ''[[ದೃಶ್ಯಂ ೨]]''
| ಜಾರ್ಜ್ಕುಟ್ಟಿ
|
|<ref>{{Cite web |date=21 September 2020 |title=In Pics: Mohanlal's Drishyam 2 Goes on the Floors |url=https://www.news18.com/news/movies/in-pics-mohanlals-drishyam-2-goes-on-the-floors-2894603.html |website=News18}}</ref>
|-
! scope="row" | ''[[ಮರಕ್ಕರ್: ಅರಬಿಕ್ಕಡಲಿಂಟೆ ಸಿಂಹಂ]]''
| ಕುಂಜಾಲಿ ಮರಕ್ಕರ್
|
|<ref>{{cite news |date=2 September 2019 |title=Mohanlal: We are dedicating Marakkar to the Indian Navy |url=https://timesofindia.indiatimes.com/entertainment/malayalam/movies/news/mohanlal-we-are-dedicating-marakkar-to-the-indian-navy/articleshow/70945908.cms |url-status=live |archive-url=https://web.archive.org/web/20210410140701/https://timesofindia.indiatimes.com/entertainment/malayalam/movies/news/mohanlal-we-are-dedicating-marakkar-to-the-indian-navy/articleshow/70945908.cms |archive-date=10 April 2021 |access-date=30 March 2021 |work=[[Times of India]]}}</ref>
|-
| rowspan="4" | 2022
! scope="row"|''[[ಬ್ರೋ ಡ್ಯಾಡಿ]]''
| ಜಾನ್ ಚಾಕೋ ಕಟ್ಟಾಡಿ
|
|<ref>{{cite news |title=Mohanlal to lead in Prthviraj Sukumaran's Bro Daddy |url=https://www.indiatoday.in/movies/regional-cinema/story/prithviraj-sukumaran-announces-his-second-directorial-bro-daddy-with-mohanlal-1816663-2021-06-18}}</ref>
|-
! scope="row" |''[[ಆರಾಟ್ಟು]]''
| ಗಣಭೂಷಣಂ ನೆಯ್ಯಟ್ಟಿಂಕರ ಗೋಪನ್ / ಕರ್ನಲ್ ಸೂರ್ಯಚಂದ್ರ ಲಾಲ್ / ಏಜೆಂಟ್ X
|
|<ref>{{cite news |last=George |first=Anjana |date=12 October 2021 |title=Mohanlal, Unnikrishnan team up for a rustic entertainer |url=https://timesofindia.indiatimes.com/entertainment/malayalam/movies/news/mohanlal-unnikrishnan-team-up-for-a-rustic-entertainer/articleshow/78618723.cms |access-date=13 April 2021 |work=[[The Times of India]]}}</ref>
|-
! scope="row" |''[[12ನೇ ಮನುಷ್ಯ]]''
|ಡಿವೈಎಸ್ಪಿ ಚಂದ್ರಶೇಖರ್
|
|<ref>{{cite news |author=Express News Service |date=16 September 2021 |title=Mohanlal joins sets of Jeethu Joseph's 'The 12th Man' |url=https://www.newindianexpress.com/entertainment/malayalam/2021/sep/16/mohanlal-joins-sets-of-jeethu-josephs-the-12th-man-2359258.html |access-date=31 October 2021 |work=[[The New Indian Express]]}}</ref>
|-
! scope="row" |''[[ಮಾನ್ಸ್ಟರ್]]''
|ಲಕಿ ಸಿಂಗ್ / ಶಿವದೇವ್ ಸುಬ್ರಮಣಿಯಂ ಐಪಿಎಸ್
|
|<ref>{{cite news |date=10 November 2021 |title=Mohanlal announces new film 'Monster' |url=https://www.thehindu.com/entertainment/movies/mohanlal-announces-new-film-monster/article37417344.ece |work=The Hindu}}</ref>
|-
| rowspan="3" |2023
! scope="row" |''[[ಅಲೋನ್]]''
| ಕಾಳಿದಾಸ್
|
|<ref>{{Cite news |title=Mohanlal starrer 'Alone' finishes its shoot in just 18 days! – Times of India |url=https://timesofindia.indiatimes.com/entertainment/malayalam/movies/news/mohanlal-starrer-alone-finishes-its-shoot-in-just-18-days/articleshow/87223483.cms |access-date=1 December 2021 |website=The Times of India |language=en}}</ref>
|-
! scope="row" |''[[ಜೈಲರ್]]''
| ಮ್ಯಾಥ್ಯೂ
| ತಮಿಳು ಚಿತ್ರ; ಅತಿಥಿ ಪಾತ್ರ
|<ref>{{Cite web |date=6 January 2023 |title=Mohanlal to have a cameo in Rajinikanth's Jailer, fans call it 'iconic moment' |url=https://www.hindustantimes.com/entertainment/tamil-cinema/mohanlal-to-have-a-cameo-in-rajinikanth-s-jailer-fans-call-it-iconic-moment-101672988696266.html |url-status=live |archive-url=https://web.archive.org/web/20230106094648/https://www.hindustantimes.com/entertainment/tamil-cinema/mohanlal-to-have-a-cameo-in-rajinikanth-s-jailer-fans-call-it-iconic-moment-101672988696266.html |archive-date=6 January 2023 |access-date=6 January 2023 |website=[[Hindustan Times]]}}</ref>
|-
! scope="row" | ''[[ನೇರು]]''
|ವಕೀಲ ವಿಜಯಮೋಹನ್
|
|<ref>{{Cite web |date=5 October 2023 |title=Filming of Mohanlal's Neru wraps up |url=https://www.cinemaexpress.com/malayalam/news/2023/oct/05/filming-of-mohanlals-neru-wraps-up-48335.html |access-date=26 November 2023 |website=[[Cinema Express]] |language=en}}</ref>
|-
| rowspan="2" |2024
! scope="row" | ''[[ಮಲೈಕೋಟ್ಟೈ ವಾಲಿಬನ್]]''
| ಮಲೈಕೋಟ್ಟೈ ವಾಲಿಬನ್ / ಮಲೈಕೋಟ್ಟೈ ಮಲಯನ್
|
|<ref>{{cite news |date=18 January 2023 |title=Mohanlal-Lijo Jose Pellissery's 'Malaikottai Valiban' goes on floors in Rajasthan |url=https://timesofindia.indiatimes.com/entertainment/malayalam/movies/news/mohanlal-lijo-jose-pellisserys-malaikottai-valiban-goes-on-floors-in-rajasthan/articleshow/97086061.cms |access-date=19 January 2023 |newspaper=[[The Times of India]]}}</ref>
|-
! scope="row" | ''[[ಬರೋಜ್ 3D]]''
| ಬರೋಜ್
| ಸಹ ನಿರ್ದೇಶಕ
|<ref>{{Cite web |date=23 February 2021 |title=Mohanlal commences work on 'Barroz' |url=https://www.newindianexpress.com/entertainment/malayalam/2021/feb/23/mohanlal-commences-work-on-barroz-2267471.html |access-date=1 March 2021 |website=[[The New Indian Express]]}}</ref>
|-
| rowspan="6" |2025
! scope="row" | ''[[ಎಲ್೨: ಎಂಪುರಾನ್]]''
| ಖುರೇಶಿ ಅಬ್'ರಾಮ್ / ಸ್ಟೀಫನ್ ನೆಡುಂಪಲ್ಲಿ
|
|<ref>{{Cite web |date=1 December 2024 |title=Empuraan release date: Prithviraj wraps up shoot of Mohanlal's L2: Empuraan: 'What an incredible 14-month journey across 8 states and 4 countries' |url=https://indianexpress.com/article/entertainment/malayalam/prithviraj-sukumaran-wraps-up-shoot-of-mohanlals-l2-empuraan-9699956/ |access-date=25 December 2024 |website=[[The Indian Express]]}}</ref>
|-
! scope="row" | ''[[ತುದಾರುಂ]]''
| ಶಣ್ಮುಘಂ "ಬೆಂಜ್"
|
|<ref>{{Cite web |date=8 November 2024 |title=Mohanlal's 'L360' gets official title 'Thudarum', featuring a long-awaited reunion with Shobana |url=https://english.mathrubhumi.com/movies-music/news/mohanlal-l360-movie-title-shobana-tharun-moorthy-m-renjith-1.10059842 |access-date=23 November 2024 |website=[[Mathrubhumi]]}}</ref>
|-
! scope="row" | ''[[ಕಣ್ಣಪ್ಪ]]''
|ಕಿರಾತ || ತೆಲುಗು ಚಿತ್ರ; ಅತಿಥಿ ಪಾತ್ರ
|<ref>{{Cite news |date=19 August 2023 |title=Vishnu Manchu Begins His Dream Project Kannappa |url=https://www.deccanchronicle.com/entertainment/tollywood/180823/vishnu-manchu-begins-his-dream-project-kannappa.html |access-date=19 August 2023 |work=[[Deccan Chronicle]]}}</ref>
|-
! scope="row" | ''[[ಹೃದಯಪೂರ್ವಂ]]''
| ಸಂದೀಪ್ ಬಾಲಕೃಷ್ಣನ್ ||
|<ref>{{cite news |date=10 February 2025 |title=Hridayapoorvam: Mohanlal and Sathyan Anthikad's film goes on floors |url=https://www.thehindu.com/entertainment/movies/hridayapoorvam-mohanlal-and-sathyan-anthikads-film-goes-on-floors/article69202663.ece}}</ref>
|-
! scope="row" | ''[[ಭಾ ಭಾ ಬಾ]]''
| ಘಿಲ್ಲಿ ಬಾಲಾ
| ಅತಿಥಿ ಪಾತ್ರ
|<ref>{{cite news |date=20 July 2025 |title=Mohanlal's grand dance track in 'Bha Bha Ba' could be Malayalam cinema's costliest song yet - DEETS inside |url=https://timesofindia.indiatimes.com/entertainment/malayalam/movies/news/mohanlals-grand-dance-track-in-bha-bha-ba-could-be-malayalam-cinemas-costliest-song-yet-deets-inside/articleshow/122798898.cms |newspaper=The Times of India}}</ref>
|-
! scope="row" | ''[[ವೃಷಭ]]''
| ರಾಜಾ ವಿಜಯೇಂದ್ರ ವೃಷಭ / ಆದಿ ದೇವ ವರ್ಮಾ
| ದ್ವಿಭಾಷಾ ಚಿತ್ರ
|<ref>{{cite news |date=23 July 2023 |title=Vrushabha: Mohanlal's pan-India bilingual film goes on floors |url=https://timesofindia.indiatimes.com/entertainment/telugu/movies/news/vrushabha-mohanlals-pan-india-bilingual-film-goes-on-floors/articleshow/102058032.cms |newspaper=The Times of India}}</ref>
|-
| rowspan="8" |2026
! scope="row" | ''[[ಪ್ಯಾಟ್ರಿಯಾಟ್]]''
| ಕರ್ನಲ್ ರಹೀಂ ನಾಯಕ್
|ವಿಸ್ತೃತ ಅತಿಥಿ ಪಾತ್ರ
|<ref>{{Cite news |date=20 November 2024 |title=Mohanlal, Mammootty, Fahadh Faasil and Kunchacko Boban; Mahesh Narayanan's multi-starrer starts rolling |url=https://timesofindia.indiatimes.com/entertainment/malayalam/movies/news/mohanlal-mammootty-nayantharafahadh-faasil-and-more-mahesh-narayanans-multi-starrer-starts-rolling/articleshow/115474717.cms |access-date=21 November 2024 |work=The Times of India}}</ref>
|-
!scope="row" |''[[ದೃಶ್ಯಂ ೩]]''
|ಜಾರ್ಜ್ಕುಟ್ಟಿ
|
|<ref>{{Cite web |date=25 September 2025 |title=Mohanlal begins Drishyam 3 shoot a day after receiving Dadasaheb Phalke Award |url=https://www.cinemaexpress.com/malayalam/news/2025/Sep/25/mohanlal-begins-drishyam-3-shoot-a-day-after-receiving-dadasaheb-phalke-award |access-date=28 September 2025 |website=[[Cinema Express]] |language=en}}</ref>
|-
!scope="row"|''[[ತುಡಕ್ಕಂ]]''
| ಮಾಸ್ಟರ್
| rowspan="5" |ಅತಿಥಿ ಪಾತ್ರ
|<ref>{{Cite web |author=<!--Unlisted--> |date=2026-05-10 |title=Thudakkam, starring Vismaya Mohanlal, gets release date |url=https://www.cinemaexpress.com/malayalam/news/2026/May/10/thudakkam-starring-vismaya-mohanlal-gets-release-date |access-date=2026-05-10 |website=Cinema Express |language=en}}</ref>
|-
|{{Pending film|ಖಲೀಫಾ: ಭಾಗ I - ದಿ ಇಂಟ್ರೋ}}
|ಮಂಬರಾಯಕ್ಕಲ್ ಅಹಮದ್ ಅಲಿ
|<ref>{{Cite web |last=The Hollywood Reporter India |date=8 December 2025 |title=Mohanlal to star as Mambaraykkal Ahmad Ali in Prithviraj's ''Khalifa'' |url=https://www.hollywoodreporterindia.com/features/insight/mohanlal-to-act-in-prithviraj-sukumarans-khalifa/amp}}</ref>
|-
| {{Pending film|ಹೈವಾನ್}}
| {{TableTBA}}
|<ref>{{cite news |last1= |first1= |title='Haiwaan': Akshay Kumar and Saif Ali Khan reunite after 17 years for a Priyadarshan film |url=https://www.thehindu.com/entertainment/movies/haiwaan-akshay-kumar-saif-ali-khan-priyadarshan-17-years-oppam-remake/article69818435}}</ref>
|-
|{{Pending film|[[ಜೈಲರ್ 2]]}}
|ಮ್ಯಾಥ್ಯೂ
|<ref>{{Cite web |last=Entertainment Desk |first=TOI |date=5 December 2025 |title=''Jailer 2'' gets bigger - Malayalam superstar Mohanlal and Vinayakan are set to reprise their roles from the first film! |url=https://timesofindia.indiatimes.com/entertainment/malayalam/movies/news/jailer-2-gets-bigger-vinayakan-confirms-comeback-mohanlal-jets-off-to-join-rajinikanths-sequel-shoot/articleshow/125730992.cms |website=Times of India: Entertainment Desk}}</ref>
|-
|{{Pending film|[[ಕಥನಾರ್ - ದಿ ವೈಲ್ಡ್ ಸಾರ್ಸೆರರ್]]}}
|ಮಾರ್ ಅಬೋ
|<ref>{{Cite web |last=A Manu |first=Hridayambika |date=January 6, 2026 |title=ഇനി ഇത് നീലിയും വിറക്കും. ജയസൂര്യയുടെ കത്തനാറിൽ മാർ അബോ ആയി മോഹൻലാൽ |url=https://malayalam.indianexpress.com/social/kathanar-mohanlal-cameo-fan-made-poster-jayasurya-10975167}}</ref>
|-
| {{Pending film|italic=no|''ಅತಿಮನೋಹರಂ''}}
|ಎಸ್ಐ ಟಿ.ಎಸ್. ಲವೆಲಜನ್
| ಚಿತ್ರೀಕರಣ
|<ref>{{Cite news |date=23 January 2026 |title=Mohanlal returns to his classic moustache look for 'L366'|url=https://www.onmanorama.com/entertainment/entertainment-news/2026/01/23/mohanlal-joins-new-movie-sets-tharun-moorthy.html|access-date=24 January 2026 |work=Onmanorama}}</ref>
|-
| rowspan="2" |2027
|scope="row"{{Pending film|italic=no|''L367''}}
|<small>TBA</small>
|ಪೂರ್ವ-ನಿರ್ಮಾಣ
|<ref>{{Cite news |date=26 January 2026 |title=Mohanlal announces 'L367' with National Award winner Vishnu Mohan; FIRST LOOK poster out: 'Looking forward to this new chapter'|url=https://timesofindia.indiatimes.com/entertainment/malayalam/movies/news/mohanlal-announces-l367-with-national-award-winner-vishnu-mohan-first-look-poster-out-looking-forward-to-this-new-chapter/articleshow/127547504.cms|work=Times Entertainment}}</ref>
|-
|{{Pending film|ನೆಡುಂಕಂಡಂ ಮಿರಾಕಲ್}}
| {{TableTBA}}
| ಪೂರ್ವ-ನಿರ್ಮಾಣ
|<ref>{{Cite web |last=News |first=Reporter |title=ലാലേട്ടനൊപ്പം ഇനി പോത്തേട്ടൻസ് ബ്രില്യൻസ്; വരുന്നു 'നെടുങ്കണ്ടം മിറാക്കിൾ', അണിയറയിലും വമ്പന്മാർ |url=https://www.reporterlive.com/entertainment/entertainment-news/2026/07/03/dileesh-pothans-new-movie-with-mohanlal-nedukandam-miracle-announced |access-date=2026-07-03 |website=ReporterNews |language=ml}}</ref>
|-
|{{TBA}}
|{{Pending film|ಖಲೀಫಾ: ಭಾಗ II - ಹಿಸ್ ರೇನ್}}
|ಮಂಬರಾಯಕ್ಕಲ್ ಅಹಮದ್ ಅಲಿ
|''ಖಲೀಫಾ: ಭಾಗ I - ದಿ ಇಂಟ್ರೋ'' ನ ಪ್ರೀಕ್ವೆಲ್
|
|-
| {{TBA}}
! scope="row" {{pending film|italic=no| ''[[ರಾಮ್]]''}}
| ರಾಮ್ ಮೋಹನ್
| ವಿಳಂಬ
|<ref name="timesofindia.indiatimes.com">{{Cite news |title=Mohanlal looks super cool and stylish as he shoots for 'RAM' – Times of India |url=https://timesofindia.indiatimes.com/entertainment/malayalam/movies/news/mohanlal-looks-super-cool-and-stylish-as-he-shoots-for-ram/articleshow/73274437.cms |access-date=17 January 2020 |website=The Times of India |language=en}}</ref>
|}
== ನಿರ್ಮಾಪಕ ==
{| class="wikitable plainrowheaders sortable" style="margin-right: 0;"
|+ ಮೋಹನ್ಲಾಲ್ ನಿರ್ಮಾಪಕರಾಗಿ ಚಲನಚಿತ್ರ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ನಿರ್ಮಾಣ
! scope="col" | {{ref heading}}
|-
| 1984
! scope="row" | ''[[ಆದಿಯೋಳುಕ್ಕುಕಳ್]]''
| rowspan="3" |ಕ್ಯಾಸಿನೊ ಫಿಲ್ಮ್ಸ್
| rowspan="19"|<ref>{{Cite web |last=Suresh |first=Anandu |date=21 May 2025 |title=Forget the actor, it's Mohanlal the producer who should make a comeback; the one behind both his National Awards for Best Actor |url=https://indianexpress.com/article/entertainment/malayalam/forget-the-actor-its-mohanlal-the-producer-who-should-make-a-comeback-10017351/ |access-date=22 May 2025 |website=[[The Indian Express]]}}</ref>
|-
| 1985
! scope="row" | ''[[ಕರಿಂಬಿನ್ ಪೂವಿನಕ್ಕರೆ]]''
|-
| rowspan="2"| 1986
! scope="row" | ''[[ಗಾಂಧಿನಗರ್ 2ನೇ ಸ್ಟ್ರೀಟ್]]''
|-
! scope="row" | ''[[ಆದಿವೇರುಕಳ್]]''
| ಚೀರ್ಸ್ ಫಿಲ್ಮ್ಸ್
|-
| rowspan="2"| 1987
! scope="row" | ''[[ನಾಡೋಡಿಕ್ಕಟ್ಟು]]''
| ಕ್ಯಾಸಿನೊ ಫಿಲ್ಮ್ಸ್
|-
! scope="row" | ''[[ಉನ್ನಿಕಳೆ ಒರು ಕಧಾ ಪರಯಂ]]''
| rowspan="3" | ಚೀರ್ಸ್ ಫಿಲ್ಮ್ಸ್
|-
| rowspan="2"| 1988
! scope="row" | ''[[ಒರ್ಕ್ಕಪ್ಪುರತು]]''
|-
! scope="row" | ''[[ಆರ್ಯನ್]]''
|-
| 1990
! scope="row" | ''[[ಹಿಸ್ ಹೈನೆಸ್ ಅಬ್ದುಲ್ಲಾ]]''
| rowspan="11" | ಪ್ರಣವಂ ಆರ್ಟ್ಸ್ ಇಂಟರ್ನ್ಯಾಷನಲ್
|-
| 1991
! scope="row" | ''[[ಭರತಂ]]''
|-
| 1992
! scope="row" | ''[[ಕಮಲದಳಂ]]''
|-
| 1993
! scope="row" | ''[[ಮಿಧುನಂ]]''
|-
| 1994
! scope="row" | ''[[ಪಿಂಗಾಮಿ]]''
|-
| 1996
! scope="row" | ''[[ಕಾಲಪಾನಿ]]''
|-
| rowspan="2"| 1998
! scope="row" | ''[[ಕನ್ಮದಂ]]''
|-
! scope="row" | ''[[ಹರಿಕೃಷ್ಣನ್ಸ್]]''
|-
| rowspan="2"| 1999
! scope="row" | ''[[ಒಲಿಂಪಿಯನ್ ಆಂಥೋನಿ ಆಡಮ್]]''
|-
! scope="row" | ''[[ವನಪ್ರಸ್ಥಂ]]''
|-
| 2010
! scope="row" | ''[[ಕಾಂದಹಾರ್]]''
|}
== ನಿರೂಪಕ / ಧ್ವನಿ ==
{| class="wikitable plainrowheaders sortable" style="margin-right: 0;"
|+ ಮೋಹನ್ಲಾಲ್ ನಿರೂಪಕ ಅಥವಾ ಧ್ವನಿಯಾಗಿ ಚಲನಚಿತ್ರ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" class="unsortable" | ಟಿಪ್ಪಣಿಗಳು
! scope="col" class="unsortable" | {{ref heading}}
|-
| 1989
! scope="row"|''[[ಸೀಸನ್]]''
| rowspan="2" |ಪ್ರಮುಖ ನಟನಾಗಿಯೂ
|
|-
| 1990
! scope="row"|''[[ಇಂದ್ರಜಾಲಂ]]''
|
|-
| 1998
! scope="row" | ''[[ಕಲ್ಲು ಕೊಂಡೊರು ಪೆನ್ನು]]''
| ಚಿತ್ರಮಂದಿರ ಆವೃತ್ತಿ ಮಾತ್ರ
| style="text-align:center;"|<ref>{{cite news |author=Deepa Soman |date=15 October 2014 |title=Voice overs are in vogue in Mollywood |url=http://timesofindia.indiatimes.com/entertainment/malayalam/movies/news/Voice-overs-are-in-vogue-in-Mollywood/articleshow/44821451.cms |url-status=live |archive-url=https://web.archive.org/web/20141018235107/http://timesofindia.indiatimes.com/entertainment/malayalam/movies/news/Voice-overs-are-in-vogue-in-Mollywood/articleshow/44821451.cms |archive-date=18 October 2014 |access-date=11 December 2015 |work=[[The Times of India]]}}</ref>
|-
|2002
! scope="row" | ''[[ಒನ್ನಾಮನ್]]''
| rowspan="2" |ಪ್ರಮುಖ ನಟನಾಗಿಯೂ
|
|-
| 2007
! scope="row" | ''[[ಚೋಟ್ಟಾ ಮುಂಬೈ]]''
|
|-
| 2008
! scope="row" | ''[[ಸ್ವರ್ಣಂ]]''
|
| style="text-align:center;"|<ref>{{cite news |last=V. P. |first=Nicy |date=15 November 2014 |title=Mohanlal Turns Narrator for Priyadarshan's 'Aamayum Muyalum' |url=http://www.ibtimes.co.in/mohanlal-turns-narrator-priyadarshans-aamayum-muyalum-614103 |url-status=live |archive-url=https://web.archive.org/web/20151222094116/http://www.ibtimes.co.in/mohanlal-turns-narrator-priyadarshans-aamayum-muyalum-614103 |archive-date=22 December 2015 |access-date=25 February 2016 |work=[[International Business Times]]}}</ref>
|-
| 2009
! scope="row" | ''[[ಕೇರಳ ವರ್ಮಾ ಪಳಸ್ಸಿ ರಾಜಾ]]''
|
| style="text-align:center;"|<ref>{{cite news |last=Media |first=Sampurn |date=16 September 2009 |title=Mohanlal to do Pazhassi Raja's narration |url=http://www.newindianexpress.com/entertainment/malayalam/article153158.ece |url-status=dead |archive-url=https://web.archive.org/web/20151222133222/http://www.newindianexpress.com/entertainment/malayalam/article153158.ece |archive-date=22 December 2015 |access-date=19 February 2016 |work=[[The New Indian Express]]}}</ref>
|-
| 2010
!scope="row" | ''[[ಜನಕನ್]]''
|ಪ್ರಮುಖ ನಟನಾಗಿಯೂ
|
|-
| rowspan="2" | 2012
! scope="row" | ''[[ದಿ ಹಿಟ್ ಲಿಸ್ಟ್]]''
|
| style="text-align:center;"|<ref>{{cite news |last=V. P |first=Nicy |date=2 December 2014 |title=Priyadarshan-Jayasurya Film 'Aamayum Muyalum' Set to Release on 19 December |url=http://www.ibtimes.co.in/priyadarshan-jayasurya-film-aamayum-muyalum-set-release-19-december-615869 |url-status=live |archive-url=https://web.archive.org/web/20151222112240/http://www.ibtimes.co.in/priyadarshan-jayasurya-film-aamayum-muyalum-set-release-19-december-615869 |archive-date=22 December 2015 |access-date=11 December 2015 |work=[[International Business Times]]}}</ref>
|-
! scope="row" | ''[[ನಮುಕ್ಕು ಪಾರ್ಕ್ಕನ್]]''
|
| style="text-align:center;"|<ref>{{cite news |last=V. P |first=Nicy |date=15 November 2014 |title=Mohanlal Turns Narrator for Priyadarshan's 'Aamayum Muyalum' |url=http://www.ibtimes.co.in/mohanlal-turns-narrator-priyadarshans-aamayum-muyalum-614103 |url-status=live |archive-url=https://web.archive.org/web/20151222094116/http://www.ibtimes.co.in/mohanlal-turns-narrator-priyadarshans-aamayum-muyalum-614103 |archive-date=22 December 2015 |work=[[International Business Times]]}}</ref>
|-
| 2014
! scope="row" | ''[[ಆಮಯುಂ ಮುಯಲುಂ]]''
|
| style="text-align:center;"|<ref>{{cite news |last=Soman |first=Deepa |date=15 November 2015 |title=Mohanlal to introduce Aamayum Muyalum characters |url=http://timesofindia.indiatimes.com/entertainment/malayalam/movies/news/Mohanlal-to-introduce-Aamayum-Muyalum-characters/articleshow/45147882.cms |url-status=live |archive-url=https://web.archive.org/web/20141118095316/http://timesofindia.indiatimes.com/entertainment/malayalam/movies/news/Mohanlal-to-introduce-Aamayum-Muyalum-characters/articleshow/45147882.cms |archive-date=18 November 2014 |access-date=25 February 2016 |work=[[The Times of India]]}}</ref>
|-
| rowspan="2" | 2015
! scope="row" | ''[[ಎನ್ನುಮ್ ಎಪ್ಪೋಳುಂ]]''
| ಪ್ರಮುಖ ನಟನಾಗಿಯೂ
|
|-
! scope="row" | ''[[ಪಿಕೆಟ್ 43]]''
|
| style="text-align:center;"|<ref>{{cite web |last=Vikram |first=Raj |date=23 January 2015 |title=Picket 43 Movie Review |url=http://www.metromatinee.com/movie-review/picket-43-movie-review-556 |url-status=dead |archive-url=https://web.archive.org/web/20150506040812/http://www.metromatinee.com/movie-review/picket-43-movie-review-556 |archive-date=6 May 2015 |access-date=25 February 2016 |publisher=Metromatinee.com}}</ref>
|-
| rowspan="3" | 2017
! scope="row" | ''[[ಸಿ/ಓ ಸೈರಾ ಬಾನು]]''
| ಧ್ವನಿ ಪಾತ್ರ: ಪೀಟರ್ ಜಾರ್ಜ್
|
|-
! scope="row" | ''[[ತಿಯಾನ್]]''
| "ಸಮಯ" ದ ಧ್ವನಿ
| style="text-align:center;"|<ref>{{cite news |last=Thomas |first=Elizabeth |date=9 July 2017 |title=Tiyaan movie review: In the name of faith |url=https://www.deccanchronicle.com/entertainment/movie-reviews/090717/tiyaan-movie-review-in-the-name-of-faith.html |access-date=7 April 2020 |work=[[Deccan Chronicle]]}}</ref>
|-
! scope="row" | ''[[ಆಕಾಶಮಿತ್ತಾಯಿ]]''
|
| style="text-align:center;"|<ref>{{cite news |last1=Sreenivasan |first1=Deepthi |date=31 August 2017 |title=Appa comes to Mollywood |url=https://www.deccanchronicle.com/entertainment/mollywood/310817/appa-comes-to-mollywood.html |access-date=7 April 2020 |work=[[Deccan Chronicle]]}}</ref>
|-
|2018
! scope="row" | ''[[ಕಾಯಂಕುಲಂ ಕೊಚುನ್ನಿ]]''
| ಸಹ ನಟ
|
|-
| rowspan="3" | 2019
! scope="row" | ''[[ನೆಯುಂ ಞಾನುಂ]]''
|
|
|-
! scope="row" | ''100 ಇಯರ್ಸ್ ಆಫ್ ಕ್ರಿಸೊಸ್ಟಮ್''
| ಸಾಕ್ಷ್ಯಚಿತ್ರ; ಗಿನ್ನೆಸ್ ವಿಶ್ವ ದಾಖಲೆಗೆ ಪ್ರವೇಶ
| style="text-align:center;"|<ref>{{cite news |author=<!--staff byline--> |date=20 August 2019 |title=Guinness entry of docu on Chrysostom celebrated |url=https://www.thehindu.com/news/national/kerala/guinness-entry-of-docu-on-chrysostom-celebrated/article29184940.ece |access-date=7 April 2020 |work=[[The Hindu]]}}</ref>
|-
! scope="row" | ''[[ಸ್ಯೇ ರಾ ನರಸಿಂಹ ರೆಡ್ಡಿ]]''
|ಮಲಯಾಳಂ ಡಬ್ ಆವೃತ್ತಿ
| style="text-align:center;"|<ref>{{cite news |author=India Today Web Desk |date=20 August 2019 |title=Sye Raa Narasimha Reddy: Rajinikanth and Mohanlal to lend their voices for Chiranjeevi's film? |url=https://www.indiatoday.in/movies/regional-cinema/story/sye-raa-narasimha-reddy-rajinikanth-and-mohanlal-to-lend-their-voices-for-chiranjeevi-s-film-1582598-2019-08-20 |access-date=7 April 2020 |work=[[India Today]]}}</ref>
|-
|2022
! scope="row" | ''[[ಪಥೋನ್ಪಥಂ ನೂಟ್ಟಾಂಡು]]''
|
|
|-
|2023
! scope="row" | ''[[ಕಿಂಗ್ ಆಫ್ ಕೊಥಾ]]''
|
|
|-
| rowspan="2" |2024
! scope="row" | ''[[ಗು]]''
|
|<ref>{{cite news |author=India Today Web Desk |date=7 May 2024 |title=Trailer Of Saiju Kurup's Gu Promises Spine-chilling Horror |url=https://www.news18.com/movies/trailer-of-saiju-kurups-gu-promises-spine-chilling-horror-8881446.html |work=[[News 18]]}}</ref>
|-
! scope="row" | ''[[ಎಆರ್ಎಂ]]''
| ವಿಶ್ವ ಸೃಷ್ಟಿಕರ್ತನ ಧ್ವನಿ
|<ref>{{cite news |date=12 September 2024 |title=Mohanlal joins Tovino Thomas in 'Ajayante Randam Moshanam', surprise revealed |url=https://english.mathrubhumi.com/movies-music/news/mohanlal-joins-tovino-thomas-ajayante-randam-moshanam-voiceover-1.9895462 |work=[[Mathrubhumi News]]}}</ref>
|-
| 2026
! scope="row" | ''[[ಕೆಡಿ: ದಿ ಡೆವಿಲ್]]''
|ಮಲಯಾಳಂ ಡಬ್ ಆವೃತ್ತಿ
|
|}
== ರಂಗಭೂಮಿ ==
{| class="wikitable plainrowheaders sortable" style="margin-right: 0;"
|+ ಮೋಹನ್ಲಾಲ್ ರಂಗಭೂಮಿ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ನಾಟಕ
! scope="col" | ಪಾತ್ರ
! scope="col" | ಭಾಷೆ
! scope="col" | ಪ್ರಥಮ ಪ್ರದರ್ಶನ
! scope="col" class="unsortable" | {{ref heading}}
|-
| 2001
! scope="row" | ''[[ಕರ್ಣಭಾರಂ]]''
| [[ಕರ್ಣ]]
| [[ಸಂಸ್ಕೃತ]]
| ಸಿರಿ ಫೋರ್ಟ್ ಆಡಿಟೋರಿಯಂ, ನ್ಯೂ ಡೆಲ್ಲಿ
| style="text-align:center;"|<ref>{{cite web |last=Jose |first=D |date=13 March 2001 |title=Mohanlal's new obsession |url=http://www.rediff.com/movies/2001/mar/13mohan.htm |url-status=live |archive-url=https://web.archive.org/web/20160105190842/http://www.rediff.com/movies/2001/mar/13mohan.htm |archive-date=5 January 2016 |access-date=13 March 2010 |work=[[Rediff.com]]}}</ref>
|-
| 2003
! scope="row" | ''ಕಥಾಯಟ್ಟಂ''{{efn|''ಕಥಾಯಟ್ಟಂ'' ನಲ್ಲಿ, ಮೋಹನ್ಲಾಲ್ ಮಲಯಾಳಂ ಸಾಹಿತ್ಯದಿಂದ ಆಯ್ಕೆ ಮಾಡಲಾದ ಹತ್ತು ಕಾದಂಬರಿಗಳಿಂದ ಹತ್ತು ಶ್ರೇಷ್ಠ ಪಾತ್ರಗಳು ಮತ್ತು ಸಂದರ್ಭಗಳನ್ನು ನಿರ್ವಹಿಸಿದರು. ಅವುಗಳನ್ನು ಒಯ್ಯಾರತ್ತು ಚಂದು ಮೇನನ್ (''ಇಂದುಲೇಖ''), ಸಿ.ವಿ. ರಾಮನ್ ಪಿಳ್ಳೈ (''ಧರ್ಮರಾಜ''), ಎಸ್.ಕೆ. ಪೊಟ್ಟೆಕ್ಕಟ್ಟ್ (''ನಾಡನ್ ಪ್ರೇಮಂ''), ತಕ್ಕಳಿ ಶಿವಶಂಕರ ಪಿಳ್ಳೈ (''ಚೆಮ್ಮೀನ್''), ಪಿ. ಕೇಸವದೇವ್ (''ಒಡಯಿಲ್ ನಿನ್ನು''), ವೈಕಂ ಮುಹಮ್ಮದ್ ಬಷೀರ್, ಉರೂಬ್ (''ಉಮ್ಮಚು''), ಒ.ವಿ. ವಿಜಯನ್ (''ಖಾಸಕ್ಕಿಂಟೆ ಇತಿಹಾಸಂ''), ಎಂ. ಮುಕುಂದನ್ (''ಮಯ್ಯಳಿಪ್ಪುಳಯುಡೆ ತೀರಂಗಳಿಲ್''), ಮತ್ತು ಎಂ.ಟಿ. ವಾಸುದೇವನ್ ನಾಯರ್ (''ರಂಡಾಮೂಳಂ'') ಬರೆದಿದ್ದಾರೆ.<ref>{{cite news |date=4 December 2004 |title=Mohanlal to enact characters from Malayalam literature |url=http://www.thehindubusinessline.com/2004/12/04/stories/2004120402091700.htm |url-status=live |archive-url=https://web.archive.org/web/20090607065324/http://www.thehindubusinessline.com/2004/12/04/stories/2004120402091700.htm |archive-date=7 June 2009 |access-date=16 February 2016 |work=[[The Hindu]]}}</ref><ref name="kadhayattam" />}}
|
*ಸೂರಿ ನಂಬೂತಿರಿಪಾಡು
*ಚಂದ್ರಕರನ್
*ಪಪ್ಪು
*ಇಕ್ಕೊರನ್
*ಚೆಂಬನ್ ಕುಂಜು
*ಮಾಯನ್
*ಅಲ್ಲಪಿಚಾ ಮೊಲ್ಲಾಕಾ
*ದಾಸನ್
*ಭೀಮ
*ವೈಕಂ ಮುಹಮ್ಮದ್ ಬಷೀರ್
| [[ಮಲಯಾಳಂ]]
| ಸೆನೆಟ್ ಹಾಲ್, ಕೇರಳ ವಿಶ್ವವಿದ್ಯಾಲಯ
| style="text-align:center;"|<ref name="kadhayattam">{{cite news |date=28 October 2003 |title=Document for rejuvenating Malayalam to be released |url=http://www.thehindu.com/2003/10/28/stories/2003102807480400.htm |url-status=dead |archive-url=https://web.archive.org/web/20160219141233/http://www.thehindu.com/2003/10/28/stories/2003102807480400.htm |archive-date=19 February 2016 |access-date=28 October 2011 |work=[[The Hindu]]}}</ref>
|-
| rowspan="2" | 2008
! scope="row" | ''ಚಾಯಮುಖಿ''
| [[ಭೀಮ]]
| ಮಲಯಾಳಂ
| ಲುಲು ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರ, ತ್ರಿಶೂರ್
| style="text-align:center;"|<ref>{{cite news |last=Santhosh |first=K. |date=13 March 2008 |title=Mirroring the pangs of love |url=http://www.thehindu.com/todays-paper/tp-national/tp-kerala/mirroring-the-pangs-of-love/article1218835.ece |url-status=live |archive-url=https://web.archive.org/web/20160219140152/http://www.thehindu.com/todays-paper/tp-national/tp-kerala/mirroring-the-pangs-of-love/article1218835.ece |archive-date=19 February 2016 |access-date=10 December 2015 |work=[[The Hindu]]}}</ref>
|-
! scope="row" | ''ಮಾಯಾ ರಾವಣ'' (ಬ್ಯಾಲೆ)
| [[ಹನುಮಂತ]] (ಧ್ವನಿ)
| ಇಂಗ್ಲಿಷ್
| ನೆಹರು ಕೇಂದ್ರ, ಮುಂಬೈ
| style="text-align:center;"|<ref>{{cite news |last=Varma |first=Sivadas |date=12 May 2009 |title=Mayaravan unveiled |url=http://www.newindianexpress.com/cities/kochi/article117561.ece |url-status=dead |archive-url=https://web.archive.org/web/20151224105226/http://www.newindianexpress.com/cities/kochi/article117561.ece |archive-date=24 December 2015 |access-date=12 December 2015 |work=[[The New Indian Express]]}}{{indent|3}}{{cite news |last=Trivedi |first=Mihir |title=Celebs give full marks to Shobhana's Maya Ravan |url=http://www.ibnlive.com/videos/india/shobhanas-ravan-296253.html |archive-url=https://www.webcitation.org/6fQmer4DD?url=http://www.ibnlive.com/videos/india/shobhanas-ravan-296253.html |archive-date=20 February 2016 |access-date=12 December 2015 |agency=[[IBN Live]] |date=1 September 2008 |url-status=dead}}{{indent|3}}{{cite news |last=Arunachalam |first=Jayashree |title=Tale of epic grandeur |url=http://www.thehindu.com/features/friday-review/dance/tale-of-epic-grandeur/article26008.ece |archive-url=https://web.archive.org/web/20160219135057/http://www.thehindu.com/features/friday-review/dance/tale-of-epic-grandeur/article26008.ece |archive-date=19 February 2016 |access-date=12 December 2015 |agency=[[The Hindu]] |date=28 September 2009 |url-status=live}}</ref>
|-
| 2009
! scope="row" | ''[[ದಿ ಟೆಂಪೆಸ್ಟ್]]''
| [[ಪ್ರಾಸ್ಪೆರೊ]]
| ಮಲಯಾಳಂ
| ಜೋಸ್ ಥಾಮಸ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್
| style="text-align:center;"|<ref>{{cite news |last=Manmadhan |first=Prema |date=29 January 2009 |title=Mohanlal to play Prospero |url=http://www.thehindu.com/todays-paper/tp-features/tp-metroplus/mohanlal-to-play-prospero/article656373.ece |url-status=live |archive-url=https://web.archive.org/web/20160219140551/http://www.thehindu.com/todays-paper/tp-features/tp-metroplus/mohanlal-to-play-prospero/article656373.ece |archive-date=19 February 2016 |access-date=10 December 2015 |work=[[The Hindu]]}}</ref>
|-
| 2010
! scope="row" | ''[[ವಿಕ್ರಮೋರ್ವಶೀಯಂ]]''
| [[ಪುರುರವಸ]]
| ಸಂಸ್ಕೃತ
| ಉಜ್ಜಯಿನಿ, ಮಧ್ಯ ಪ್ರದೇಶ
| style="text-align:center;"|<ref>{{cite news |last=PTI |date=19 March 2010 |title=Mohanlal to return to stage with Kalidasa's play |url=http://www.thehindu.com/features/friday-review/theatre/mohanlal-to-return-to-stage-with-kalidasas-play/article258115.ece |url-status=live |archive-url=https://web.archive.org/web/20160219140004/http://www.thehindu.com/features/friday-review/theatre/mohanlal-to-return-to-stage-with-kalidasas-play/article258115.ece |archive-date=19 February 2016 |work=[[The Hindu]]}}</ref>
|-
| 2015
! scope="row" | ''ನಾಗ''
| scope="row" | ನಿರೂಪಕ
| ಮಲಯಾಳಂ
| ಪ್ಯಾರಿಷ್ ಹಾಲ್, ಸೇಂಟ್ ಜಾರ್ಜ್ ಚರ್ಚ್, ಕಳಡಿ
| style="text-align:center;"|<ref>{{cite news |last=Kallungal |first=Dhinesh |date=8 August 2015 |title=Mohanlal, Mukesh to Set Stage Afire with 'Naga' |url=http://www.newindianexpress.com/cities/kochi/Mohanlal-Mukesh-to-Set-Stage-Afire-with-Naga/2015/08/08/article2963127.ece |url-status=dead |archive-url=https://web.archive.org/web/20151222083204/http://www.newindianexpress.com/cities/kochi/Mohanlal-Mukesh-to-Set-Stage-Afire-with-Naga/2015/08/08/article2963127.ece |archive-date=22 December 2015 |access-date=10 December 2015 |work=[[The New Indian Express]]}}</ref>
|}
== ಸಣ್ಣ ಚಿತ್ರಗಳು ==
{| class="wikitable plainrowheaders sortable" style="margin-right: 0;"
|+ ಮೋಹನ್ಲಾಲ್ ಸಣ್ಣ ಚಿತ್ರ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! scope="col" class="unsortable" | ಟಿಪ್ಪಣಿಗಳು
! scope="col" class="unsortable" | {{ref heading}}
|-
| 2005
! scope="row" | ''[[ರಿಫ್ಲೆಕ್ಷನ್ಸ್]]''
| ಏಕಾಂಗಿ
|
| style="text-align:center;"|<ref>{{cite web |last=N |first=Patcy |date=20 May 2008 |title=From Mohanlal to Hollywood |url=http://www.rediff.com/movies/2008/may/20bejoy.htm |url-status=live |archive-url=https://web.archive.org/web/20160105121645/http://www.rediff.com/movies/2008/may/20bejoy.htm |archive-date=5 January 2016 |access-date=20 May 2008 |work=[[Rediff.com]]}}</ref>
|-
| 2010
! scope="row" | ''ವಿಲ್ಸನ್ ಪೆರೆಯಿರಾ''
| {{Hlist | ವಿಲ್ಸನ್ ಪೆರೆಯಿರಾ | ಅಳಿಲು | ಮೀನು | ಕಾಗೆ}}
| ಅನಿಮೇಷನ್ ಚಿತ್ರ; ನಿರೂಪಕ (ಕಾಗೆ) ಆಗಿಯೂ
| style="text-align:center;"|<ref>{{cite news |author=Staff Reporter |date=10 October 2010 |title=Kochiite makes it big in animation |url=http://www.thehindu.com/todays-paper/tp-national/tp-kerala/kochiite-makes-it-big-in-animation/article823145.ece |url-status=live |archive-url=https://web.archive.org/web/20160219141412/http://www.thehindu.com/todays-paper/tp-national/tp-kerala/kochiite-makes-it-big-in-animation/article823145.ece |archive-date=19 February 2016 |access-date=10 October 2011 |work=[[The Hindu]]}}</ref>
|-
| 2015
! scope="row" | ''[[ಪುಂಚಿರಿಕ್ಕು ಪರಸ್ಪರಂ]]''
| rowspan="5" | ಸ್ವತಃ
| rowspan="4" | ಅತಿಥಿ ಪಾತ್ರ
| style="text-align:center;"|<ref>{{cite news |last=Staff |first=Onmanorama |date=1 November 2015 |title=Mohanlal acts in short film to light up world with smile |url=http://english.manoramaonline.com/entertainment/entertainment-news/mohanlal-acts-in-short-film-punchirikkoo-parasparam-to-light-up-world-with-smile.html |url-status=live |archive-url=https://web.archive.org/web/20151222130521/http://english.manoramaonline.com/entertainment/entertainment-news/mohanlal-acts-in-short-film-punchirikkoo-parasparam-to-light-up-world-with-smile.html |archive-date=22 December 2015 |access-date=11 December 2015 |work=[[Malayala Manorama]]}}</ref>
|-
| 2016
! scope="row" | ''ಲೋಡಲ್ ಲೋಡಾ ಲೋಡಾಲು''
| style="text-align:center;"|<ref>{{cite news |last=Sidhardhan |first=Sanjith |date=14 June 2016 |title=Mohanlal makes time to dub for a children's short film – Times of India |url=http://timesofindia.indiatimes.com/entertainment/malayalam/Mohanlal-makes-time-to-dub-for-a-childrens-short-film/articleshow/52744558.cms |url-status=live |archive-url=https://web.archive.org/web/20160616190659/http://timesofindia.indiatimes.com/entertainment/malayalam/Mohanlal-makes-time-to-dub-for-a-childrens-short-film/articleshow/52744558.cms |archive-date=16 June 2016 |access-date=16 June 2016 |work=[[The Times of India]]}}</ref>
|-
| rowspan="2" | 2017
! scope="row" | ''ಅಮರ್ ಜವಾನ್ ಅಮರ್ ಭರತ್''
|
|-
! scope="row" | ''ಹ್ಯಾಪಿ ನ್ಯೂ ಇಯರ್''
| style="text-align:center;"|<ref>{{cite news |author=TNM Staff |date=27 December 2016 |title=A world without child abuse: Mohanlal dares to dream in Malayalam short film |url=http://www.thenewsminute.com/article/world-without-child-abuse-mohanlal-dares-dream-malayalam-short-film-54874 |access-date=1 January 2017 |work=[[The News Minute]]}}</ref>
|-
| 2020
! scope="row" | ''ಫ್ಯಾಮಿಲಿ''
| ಸೋನಿಗಾಗಿ ಸಣ್ಣ ಚಿತ್ರ
| style="text-align:center;"|<ref>{{cite news |last=Raghuvanshi |first=Aakanksha |date=7 April 2020 |title=Short Film Family, Featuring Rajinikanth, Amitabh Bachchan, Priyanka Chopra, Mohanlal, Chiranjeevi And Others, Gets A Big Shout-Out From Karan Johar |url=https://www.ndtv.com/entertainment/short-film-family-featuring-rajinikanth-amitabh-bachchan-priyanka-chopra-mohanlal-chiranjeevi-and-ot-2207269 |access-date=7 April 2020 |work=[[NDTV]]}}</ref>
|}
== ದೂರದರ್ಶನ ==
{{pending series key}}
{| class="wikitable plainrowheaders sortable"
|+ ಮೋಹನ್ಲಾಲ್ ದೂರದರ್ಶನ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! scope="col" | ವಾಹಿನಿ
! scope="col" | ಭಾಷೆ
! scope="col" class="unsortable" | {{ref heading}}
|-
| 2013
! scope="row" | ''[[ಬಡೈ ಬಂಗಲೋ]]''
| ಅತಿಥಿ
| [[ಏಷ್ಯಾನೆಟ್]]
| [[ಸಂಭಾಷಣಾ ಕಾರ್ಯಕ್ರಮ]]
|<ref>{{Cite news |title=Badai Bungalow: When Mohanlal spoke about the first time he was called 'Lalettan' |url=https://timesofindia.indiatimes.com/tv/news/malayalam/badai-bungalow-when-mohanlal-spoke-about-the-first-time-he-was-called-lalettan/articleshow/96360973.cms |work=The Times of India}}</ref>
|-
|2015
! scope="row" | ''ಸಂಸ್ಕೃತ ನ್ಯೂಸ್''
|ವರದಿಗಾರ
|[[ಜನಂ ಟಿವಿ]]
|ಉದ್ಘಾಟನಾ ಸಂಚಿಕೆ
|
|-
| 2017–2018
! scope="row" | ''[[ಲಾಲ್ ಸಲಾಂ]]''
| ಆತಿಥೇಯ
| [[ಅಮೃತ ಟಿವಿ]]
| ಸಂಭಾಷಣಾ ಕಾರ್ಯಕ್ರಮ; ಮೀರಾ ನಂದನ್ ಜೊತೆ ಸಹ-ಆತಿಥ್ಯ
|<ref>{{Cite news |title=Lalsalam: All you need to know about Mohanlal's new television show |url=http://www.ibtimes.co.in/lalsalam-all-you-need-know-about-mohanlals-new-television-show-videos-737929 |work=International Business Times}}</ref>
|-
|2018{{endash}} present
! scope="row" | ''[[ಬಿಗ್ ಬಾಸ್ ಮಲಯಾಳಂ|ಬಿಗ್ ಬಾಸ್]]''
|ಆತಿಥೇಯ
|[[ಏಷ್ಯಾನೆಟ್]]
|ರಿಯಾಲಿಟಿ ಶೋ
|<ref>{{cite news |date=2 June 2018 |title=Bigg Boss Malayalam: Mohanlal's show to begin from June 24. |url=https://indianexpress.com/article/entertainment/television/bigg-boss-malayalam-mohanlal-show-to-begin-from-june-24-5201679/ |work=The Indian Express}}</ref>
|-
|2019
! scope="row" | ''[[ಟಾಪ್ ಸಿಂಗರ್ ಸೀಸನ್ 1]]''
|ಅತಿಥಿ
|[[ಫ್ಲವರ್ಸ್ ಟಿವಿ]]
|ರಿಯಾಲಿಟಿ ಶೋ
|<ref>{{Cite news |date=6 September 2019 |title=Mohanlal will be the Onam guest of Top Singer kids |url=https://timesofindia.indiatimes.com/tv/news/malayalam/mohanlal-mesmerises-the-kids-on-top-singer/articleshow/70979373.cms |access-date=19 September 2019 |newspaper=[[Times of India]]}}</ref>
|-
|rowspan=3|2020
! scope="row" | ''ಫಸ್ಟ್ ಬೆಲ್''
|ಆತಿಥೇಯ (ಸಂಚಿಕೆ – [[ಪ್ರಾಜೆಕ್ಟ್ ಟೈಗರ್]])
|[[ವಿಕ್ಟರ್ಸ್ ಟಿವಿ]]
|ಶೈಕ್ಷಣಿಕ ಕಾರ್ಯಕ್ರಮ||
|-
! scope="row" | ''ಲಲೋನಮ್ ನಲ್ಲೋನಮ್''
|ಆತಿಥೇಯ / ವಿವಿಧ ಪಾತ್ರಗಳು
|[[ಏಷ್ಯಾನೆಟ್]]
|ಓಣಂ ವಿಶೇಷ ಕಾರ್ಯಕ್ರಮ
|
|-
! scope="row" | ''ಉತ್ಸವಂ ವಿತ್ ಲಾಲೆಟ್ಟನ್''
|ವಿವಿಧ ಪಾತ್ರಗಳು
|[[ಫ್ಲವರ್ಸ್ ಟಿವಿ]]
|ಕ್ರಿಸ್ಮಸ್ ವಿಶೇಷ ಕಾರ್ಯಕ್ರಮ
|
|-
|Rowspan=2|2021
! scope="row" | ''ಒನಾವಿಲ್ಲು''
|ಆತಿಥೇಯ
|[[ಏಷ್ಯಾನೆಟ್]]
|ಓಣಂ ವಿಶೇಷ ಕಾರ್ಯಕ್ರಮ
|
|-
! scope="row" | ''[[ಟಾಪ್ ಸಿಂಗರ್ ಸೀಸನ್ 2]]''
|ಅತಿಥಿ
|[[ಫ್ಲವರ್ಸ್ ಟಿವಿ]]
|ರಿಯಾಲಿಟಿ ಶೋ
|
|-
|2023
! scope="row" | ಮಳವಿಲ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ 2023
|ಅತಿಥಿ||[[ಮಳವಿಲ್ ಮನೋರಮ]]||||
|-
|Rowspan=4|2024
!scope="row" | ''[[ಟಾಪ್ ಸಿಂಗರ್ ಸೀಸನ್ 4]]''
|ಅತಿಥಿ
|[[ಫ್ಲವರ್ಸ್ ಟಿವಿ]]
|ರಿಯಾಲಿಟಿ ಶೋ
|<ref>{{cite web |date=17 September 2024 |title=Top Singer 4 winner: Droupadi Santhosh wins the title; takes home gold worth 15 lakhs |url=https://timesofindia.indiatimes.com/tv/news/malayalam/top-singer-4-winner-droupadi-santhosh-wins-the-title-takes-home-gold-worth-15-lakhs/articleshow/113422375.cms |work=[[The Times of India]]}}</ref>
|-
! scope="row" | ''[[ಮನೋರಥಂಗಳ್]]''
|| ಬಾಪುಟ್ಟಿ ||[[ಜೀ5]] || ಸಮಾಹಾರ ಸರಣಿ <br /> ವಿಭಾಗ: "[[ಒಲವುಂ ತೀರವುಂ]]" ||<ref>{{cite web |title=Priyadarshan's 'Olavum Theeravum' shot in black and white |url=https://www.onmanorama.com/entertainment/entertainment-news/2022/07/19/priyadarshan-olavum-theeravum-movie.html}}</ref><ref>{{cite web |date=14 July 2024 |title=MT Vasudevan Nair's Anthology Series Gets A Title, Trailer Release On This Date! |url=https://www.timesnownews.com/entertainment-news/malayalam/mt-vasudevan-nairs-anthology-series-gets-a-title-trailer-release-on-this-date-article-111726840 |work=[[Times Now]]}}</ref>
|-
! scope="row" | ಮಳವಿಲ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ 2024
|ಅತಿಥಿ||[[ಮಳವಿಲ್ ಮನೋರಮ]]||||
|-
! scope="row" | [[ವನಿತಾ ಫಿಲ್ಮ್ ಅವಾರ್ಡ್ಸ್]] 2024
|ಅತಿಥಿ||[[ಮಳವಿಲ್ ಮನೋರಮ]]||||
|-
|2025
!scope="row" | ''[[ಸ್ಟಾರ್ ಸಿಂಗರ್ ಸೀಸನ್ 10]]''
|ಅತಿಥಿ
|[[ಏಷ್ಯಾನೆಟ್]]
|ರಿಯಾಲಿಟಿ ಶೋ
|<ref>{{cite web |date=20 July 2025 |title=Mohanlal to make a smashing entry on 'Star Singer'; Fans anticipate Bigg Boss Malayalam 7 announcement |url=https://timesofindia.indiatimes.com/tv/news/malayalam/mohanlal-to-make-a-smashing-entry-on-star-singer-fans-anticipate-bigg-boss-malayalam-7-announcement/articleshow/122768759.cms |work=[[The Times of India]]}}</ref>
|-
|}
== ರೇಡಿಯೋ ನಾಟಕ ==
{| class="wikitable plainrowheaders" style="margin-right: 0;"
|+ ಮೋಹನ್ಲಾಲ್ ರೇಡಿಯೋ ನಾಟಕ ಕ್ರೆಡಿಟ್ಗಳ ಪಟ್ಟಿ
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! scope="col" | ಪ್ರಸಾರಕ
! scope="col" class="unsortable" | ಟಿಪ್ಪಣಿಗಳು
! scope="col" class="unsortable" | {{ref heading}}
|-
| 1987
! scope="row" | ''ಜೀವನುಲ್ಲ ಪ್ರತಿಮಕಳ್''
| {{Unknown}}
| [[ಆಲ್ ಇಂಡಿಯಾ ರೇಡಿಯೋ]]
| 27 ಸೆಪ್ಟೆಂಬರ್ 2010 ರಂದು ಮರುಪ್ರಸಾರ
| style="text-align:center;"|<ref>{{cite web |last=Varma |first=Sivadas |date=21 September 2010 |title=Go back in time with radio plays |url=http://www.newindianexpress.com/states/kerala/article489054.ece |url-status=dead |archive-url=https://web.archive.org/web/20151225042658/http://www.newindianexpress.com/states/kerala/article489054.ece |archive-date=25 December 2015 |access-date=21 September 2010 |publisher=[[The New Indian Express]]}}</ref>
|-
| 2024
! scope="row" | ''AiDEN - ದಿ ಎಐ ಸ್ಪಿರಿಟ್''
| ರಘು ಉತಾಮನ್
| [[94.3 ಕ್ಲಬ್ ಎಫ್ಎಂ]]
|
| style="text-align:center;"|<ref>{{cite web |last=Varma |first=Sivadas |date=19 July 2024 |title=Mohanlal's magical sound to premiere through Club FM's 'Aiden-The AI Spirit' |url=https://english.mathrubhumi.com/movies-music/news/mohanlal-makes-radio-debut-in-club-fm-aiden-the-ai-spirit-1.9738935 |access-date=20 July 2024 |publisher=Mathrubhumi News}}</ref>
|}
==ಪ್ರಶಸ್ತಿಗಳು==
[[File:Padmabhushan Mohanlal.jpg|upright|thumb|alt=Mohanlal at Rashtrapati Bhavan|ಮೋಹನ್ಲಾಲ್ ಅವರು [[ರಾಮ್ ನಾಥ್ ಕೋವಿಂದ್]], ಅಂದಿನ [[ಭಾರತದ ರಾಷ್ಟ್ರಪತಿ]] ಅವರಿಂದ [[ಪದ್ಮಭೂಷಣ]] ಸ್ವೀಕರಿಸುತ್ತಿರುವುದು]]
{{Main|List of awards and nominations received by Mohanlal}}
ಸುಮಾರು ನಲವತ್ತು ವರ್ಷಗಳ ವೃತ್ತಿಜೀವನದಲ್ಲಿ, ಮೋಹನ್ಲಾಲ್ ಅವರು ಸ್ಪರ್ಧಾತ್ಮಕ ಮತ್ತು ಗೌರವಾನ್ವಿತ ಎರಡೂ ರೀತಿಯ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ, ಅವುಗಳಲ್ಲಿ ಐದು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], ಒಂಬತ್ತು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] ಮತ್ತು [[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]] ಸೇರಿವೆ. ಕಲೆಗೆ ನೀಡಿದ ಕೊಡುಗೆಗಳಿಗಾಗಿ [[ಭಾರತ ಸರ್ಕಾರ]]ವು 2001 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ [[ಪದ್ಮಶ್ರೀ]] ಮತ್ತು 2019 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ [[ಪದ್ಮಭೂಷಣ]] ಪ್ರಶಸ್ತಿಯನ್ನು ನೀಡಿ ಗೌರವಿಸಿತು.<ref name="Padmabhushan2"/> 2025 ರಲ್ಲಿ, [[ಭಾರತ ಸರ್ಕಾರ]]ವು [[71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ]] ಭಾರತೀಯ ಸಿನೆಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ [[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]ಯನ್ನು ಅವರಿಗೆ ನೀಡಿ ಗೌರವಿಸಿತು.<ref name="Malayalam actor Mohanlal to be conferred Dadasaheb Phalke Award for 2023"/> 2010 ರಲ್ಲಿ [[ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ]]ದಿಂದ<ref name="auto"/><ref>[http://www.indianoftheyear.com/2007/judging_council.html CNN-IBN – INDIAN OF THE YEAR 2007] {{webarchive|url=https://web.archive.org/web/20111013161549/http://www.indianoftheyear.com/2007/judging_council.html |date=13 October 2011 }}. Indianoftheyear.com. Retrieved on 6 May 2012.</ref> ಮತ್ತು 2018 ರಲ್ಲಿ [[ಕ್ಯಾಲಿಕಟ್ ವಿಶ್ವವಿದ್ಯಾಲಯ]]ದಿಂದ<ref>{{cite news|title=Calicut University confers D.Litt on Mohanlal, P.T.Usha|url=http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html|access-date=29 January 2018|work=[[Business Standard]]|date=29 January 2018|archive-url=https://web.archive.org/web/20180129195119/http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html|archive-date=29 January 2018|url-status=live}}</ref> ಗೌರವಾನ್ವಿತ [[ಡಾಕ್ಟರ್ ಆಫ್ ಲೆಟರ್ಸ್]] ಪ್ರಶಸ್ತಿಯನ್ನು ಪಡೆದರು.
2008 ರಲ್ಲಿ, ಅವರು [[ಭಾರತೀಯ ಸೇನೆ|ಭಾರತೀಯ ಸೇನೆಯ]] ಅಧಿಕಾರಿಯಾಗಿ ಅಭಿನಯಿಸಿದ ''[[ಕುರುಕ್ಷೇತ್ರ (2008 ಚಲನಚಿತ್ರ)|ಕುರುಕ್ಷೇತ್ರ]]'' ಚಿತ್ರೀಕರಣದ ಸಮಯದಲ್ಲಿ, ಮೋಹನ್ಲಾಲ್ [[ಭಾರತದ ಪ್ರಾದೇಶಿಕ ಸೇನೆ]]ಗೆ ಸೇರುವ ಆಸಕ್ತಿಯನ್ನು ವ್ಯಕ್ತಪಡಿಸಿದರು. ಆದರೆ 42 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಸ್ವಯಂಸೇವಕ ಪಡೆಗೆ ಸೇರಲು ಅರ್ಹರಲ್ಲದ ಕಾರಣ ಅವರಿಗೆ ಸಾಧ್ಯವಾಗಲಿಲ್ಲ.<ref>[http://ibnlive.in.com/news/mohanlal-wants-to-join-territorial-army/77204-8.html Mohanlal wants to join Territorial Army – Movies News News – IBNLive] {{Webarchive|url=https://web.archive.org/web/20110728130958/http://ibnlive.in.com/news/mohanlal-wants-to-join-territorial-army/77204-8.html |date=28 July 2011 }}. Ibnlive.in.com. 1 November 2008. Retrieved on 6 May 2012.</ref> 9 ಜುಲೈ 2008 ರಂದು, ಅಂದಿನ ಸೇನಾ ಮುಖ್ಯಸ್ಥ [[ದೀಪಕ್ ಕಪೂರ್]] ಅವರಿಂದ ಗೌರವಾನ್ವಿತ [[ಲೆಫ್ಟಿನೆಂಟ್ ಕರ್ನಲ್]] ಹುದ್ದೆಯಲ್ಲಿ ಅವರನ್ನು ಪ್ರಾದೇಶಿಕ ಸೇನೆಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಲಾಯಿತು. ಈ ಗೌರವವನ್ನು ಪಡೆದ ಮೊದಲ ನಟಿ ಇವರು.<ref>Thiruvananthapuram [http://www.hindustantimes.com/Mohanlal-to-join-Territorial-Army/Article1-429999.aspx Mohanlal to join Territorial Army] {{webarchive|url=https://web.archive.org/web/20101201053052/http://www.hindustantimes.com/Mohanlal-to-join-Territorial-Army/Article1-429999.aspx |date=1 December 2010 }}. Hindustan Times. 8 July 2009</ref><ref>{{cite news | url=http://www.hindu.com/2009/07/10/stories/2009071056411800.htm | location=[[Chennai]] | work=[[The Hindu]] | title=Mohanlal joins Territorial Army | date=10 July 2009 | access-date=29 May 2011 | archive-url=https://web.archive.org/web/20090913052237/http://www.hindu.com/2009/07/10/stories/2009071056411800.htm | archive-date=13 September 2009 | url-status=dead }}</ref> 2012 ರಲ್ಲಿ, ದಕ್ಷಿಣ ಕೊರಿಯಾದ [[ಕುಕ್ಕಿವಾನ್]] ನಿಂದ [[ಟೇಕ್ವಾಂಡೋ]] ನಲ್ಲಿ ಗೌರವಾನ್ವಿತ [[ಕಪ್ಪು ಪಟ್ಟಿ (ಸಮರ ಕಲೆಗಳು)|ಕಪ್ಪು ಪಟ್ಟಿ]] ಬಿರುದನ್ನು ನೀಡಲಾಯಿತು. ಈ ಬಿರುದನ್ನು ಪಡೆದ ಮೊದಲ [[ದಕ್ಷಿಣ ಭಾರತ]]ದ ನಟಿ ಇವರು.<ref name = blackbelt/><ref>{{Cite news|url = https://www.indiatoday.in/movies/celebrities/story/mohanlal-blackbelt-119610-2012-10-24|title = Blackbelt for Mohanlal!|date = 25 October 2012|work = [[India Today]]|access-date = 6 October 2014|archive-url = https://web.archive.org/web/20141015210145/http://indiatoday.intoday.in/story/mohanlal-blackbelt/1/226217.html|archive-date = 15 October 2014|url-status = live}}</ref>
{| class="infobox" style="width:14em; text-align:left; font-size:90%; vertical-align:middle; background:#eef;"
|+ <span style="font-size: 10pt">'''[[ಮೋಹನ್ಲಾಲ್]] ಪಡೆದ ಪ್ರಶಸ್ತಿಗಳ ಪಟ್ಟಿ'''</span>
|- style="background:white;"
| colspan="3" style="text-align:center;" | [[File:Actor Mohanlal.jpg|thumb|2018 ರಲ್ಲಿ ಮೋಹನ್ಲಾಲ್]]
|-
| colspan="3" |
{| class="collapsible collapsed" style="width:100%;"
! colspan="3" style="background:#d9e8ff; text-align:center;"| ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
|- style="background:#d9e8ff; text-align:center;"
!style="vertical-align: middle;"| ಪ್ರಶಸ್ತಿ
| style="background:#cec; font-size:9pt; width:40px;"| ಗೆಲುವು
| style="background:#ecc; font-size:9pt; width:40px;"| ನಾಮನಿರ್ದೇಶನಗಳು
|-
| style="text-align:left;"|
;ಬಿರುದುಗಳು ಮತ್ತು ಗೌರವಗಳು
|{{won|7}}
|{{nom|7}}
|-
| style="text-align:left;"|
;[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]
|{{won|6}}
|{{nom|37}}
|-
| style="text-align:left;"|
;[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]
|{{won|9}}
|{{nom|30}}
|-
| style="text-align:left;"|
;[[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]]
|{{won|9}}
|{{nom|12}}
|-
| style="text-align:left;"|
;[[ನಂದಿ ಪ್ರಶಸ್ತಿಗಳು]]
|{{won|1}}
|{{nom|1}}
|-
| style="text-align:left;"|
;[[ಫಿಲ್ಮ್ಫೇರ್ ಪ್ರಶಸ್ತಿಗಳು]]
|{{won|0}}
|{{nom|11}}
|-
| style="text-align:left;"|
;[[ಸ್ಕ್ರೀನ್ ಪ್ರಶಸ್ತಿಗಳು]]
|{{won|1}}
|{{nom|1}}
|-
| style="text-align:left;"|
;ಸ್ಕ್ರೀನ್ ಪ್ರಶಸ್ತಿಗಳು ದಕ್ಷಿಣ
|{{won|1}}
|{{nom|1}}
|-
| style="text-align:left;"|
;[[ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು]]
|{{won|1}}
|{{nom|1}}
|-
| style="text-align:left;"|
;[[IIFA ಉತ್ಸವಂ]]
|{{won|0}}
|{{nom|2}}
|-
| style="text-align:left;"|
;[[ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]
|{{won|5}}
|{{nom|9}}
|-
| style="text-align:left;"|
;[[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]]
|{{won|12}}
|{{nom|19}}
|-
| style="text-align:left;"|
;[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]]
|{{won|15}}
|{{nom|15}}
|-
| style="text-align:left;"|
;[[ವನಿತಾ ಚಲನಚಿತ್ರ ಪ್ರಶಸ್ತಿಗಳು]]
|{{won|9}}
|{{nom|9}}
|-
| style="text-align:left;"|
;[[ಏಷ್ಯಾವಿಷನ್ ಪ್ರಶಸ್ತಿಗಳು]]
|{{won|6}}
|{{nom|6}}
|-
| style="text-align:left;"|
;ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು
|{{won|6}}
|{{nom|6}}
|-
| style="text-align:left;"|
;ಅಮೃತ ಚಲನಚಿತ್ರ ಪ್ರಶಸ್ತಿಗಳು
|{{won|5}}
|{{nom|5}}
|-
| style="text-align:left;"|
;ಇತರ ಪ್ರಶಸ್ತಿಗಳು, ಗೌರವಗಳು ಮತ್ತು ಮನ್ನಣೆಗಳು
|{{won|57}}
|{{nom|0}}
|}
|- style="background-color:#d9e8ff;"
| colspan="3" style="text-align:center;" | '''ಒಟ್ಟು'''
|-
| {{won|ಗೆಲುವುಗಳು}}
| colspan="2" width=50 {{won|150}}
|-
|- style="background:#d9e8ff;"
| colspan="3" style="font-size: smaller; text-align:center;" | [[#References|ಉಲ್ಲೇಖಗಳು]]
|}
[[ಮೋಹನ್ಲಾಲ್]] ಅವರು ಭಾರತೀಯ ನಟ, [[ಪ್ಲೇಬ್ಯಾಕ್ ಗಾಯಕ]] ಮತ್ತು [[ಚಲನಚಿತ್ರ ನಿರ್ಮಾಪಕ|ನಿರ್ಮಾಪಕ]] ಅವರು ಪ್ರಧಾನವಾಗಿ [[ಮಲಯಾಳಂ ಚಲನಚಿತ್ರ]]ಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು [[ಮೋಹನ್ಲಾಲ್ ಚಲನಚಿತ್ರಗಳ ಪಟ್ಟಿ|350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ]] ಅಭಿನಯಿಸಿದ್ದಾರೆ. ಅವರು [[ಭಾರತೀಯ ಸಿನೆಮಾ|ಭಾರತೀಯ ಸಿನೆಮಾ]]ದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಶ್ರೇಷ್ಠ ನಟರಲ್ಲಿ ಒಬ್ಬರಾಗಿ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಅವರು ಎರಡು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]], ಒಂದು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ (ವೈಶಿಷ್ಟ್ಯ ಚಲನಚಿತ್ರ)]], ಒಂದು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯ ಚಲನಚಿತ್ರ)]] ಮತ್ತು ನಿರ್ಮಾಪಕರಾಗಿ [[ಅತ್ಯುತ್ತಮ ವೈಶಿಷ್ಟ್ಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]], ಒಂಬತ್ತು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] (ಆರರಲ್ಲಿ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]] ಸೇರಿದೆ), ಒಂದು [[ನಂದಿ ಪ್ರಶಸ್ತಿಗಳು|ನಂದಿ ಪ್ರಶಸ್ತಿ]], ಒಂಬತ್ತು [[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]], ಎರಡು [[ಸ್ಕ್ರೀನ್ ಪ್ರಶಸ್ತಿಗಳು]], ಒಂದು [[ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು|ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ]], ನಾಲ್ಕು [[ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], ಮತ್ತು ಹನ್ನೊಂದು [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]] ಮತ್ತು ಹಲವಾರು ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮೋಹನ್ಲಾಲ್ ಅವರು 1978 ರಲ್ಲಿ ಪ್ರಣಯ ಚಲನಚಿತ್ರ ''[[ಮಂಜಿಲ್ ವಿರಿಂಜ ಪೂಕ್ಕಲ್]]'' ನಲ್ಲಿ ವಿರೋಧಿ ಪಾತ್ರದಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಅಂತಹ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಂಡ ನಂತರ, ಅವರು 1980 ರ ದಶಕದ ಮಧ್ಯಭಾಗದಲ್ಲಿ ಪ್ರಮುಖ ನಟನಾಗಿ ಸ್ಥಾಪಿತರಾದರು. 1986 ರಲ್ಲಿ, ಅವರು ಹಾಸ್ಯ ನಾಟಕ ''[[ಟಿ. ಪಿ. ಬಾಲಗೋಪಾಲನ್ ಎಂ. ಎ.]]'' ನಲ್ಲಿ ನಟಿಸಿದರು, ಇದಕ್ಕಾಗಿ ಅವರು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]] ಗೆದ್ದರು. ಅದೇ ವರ್ಷ ಹಾಸ್ಯ ನಾಟಕ ''[[ಸನ್ಮನಸ್ಸುಳ್ಳವರ್ಕ್ಕು ಸಮಾಧಾನಂ]]'' ನಲ್ಲಿನ ಅಭಿನಯಕ್ಕಾಗಿ [[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಮಲಯಾಳಂ]] ಅನ್ನು ಸಹ ಪಡೆದರು. ನಾಟಕ ಚಲನಚಿತ್ರ ''[[ಕಿರೀಡಂ (1989 ಚಲನಚಿತ್ರ)|ಕಿರೀಡಂ]]'' (1989) ನಲ್ಲಿನ ಅವರ ಪಾತ್ರವು ಅವರಿಗೆ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ (ವೈಶಿಷ್ಟ್ಯ ಚಲನಚಿತ್ರ)|ವಿಶೇಷ ಉಲ್ಲೇಖ]] ಪ್ರಶಸ್ತಿಯನ್ನು ತಂದುಕೊಟ್ಟಿತು.
1991 ರಲ್ಲಿ, ಅವರು ಸಂಗೀತ ಚಲನಚಿತ್ರ ''[[ಭಾರತಂ]]'' ಅನ್ನು ನಿರ್ಮಿಸಿದರು ಮತ್ತು ನಟಿಸಿದರು, ಇದು ಅವರಿಗೆ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]] ಪ್ರಶಸ್ತಿಯನ್ನು ತಂದುಕೊಟ್ಟಿತು. 2013 ರಲ್ಲಿ ಭಾರತೀಯ ಚಲನಚಿತ್ರ ಉದ್ಯಮದ ಶತಮಾನೋತ್ಸವದ ಸಂದರ್ಭದಲ್ಲಿ ಸಂಕಲಿಸಲಾದ "ಭಾರತೀಯ ಸಿನೆಮಾದ 25 ಶ್ರೇಷ್ಠ ಅಭಿನಯ ಪ್ರದರ್ಶನಗಳು" ಪಟ್ಟಿಯಲ್ಲಿ ''[[ಫೋರ್ಬ್ಸ್ ಇಂಡಿಯಾ]]'' ಅವರ ಪಾತ್ರವನ್ನು ಸೇರಿಸಿತು. 1997 ರಲ್ಲಿ ಬಿಡುಗಡೆಯಾದ ಅವರ ನಾಲ್ಕು ಚಲನಚಿತ್ರಗಳು{{mdash}}''[[ಚಂದ್ರಲೇಖಾ (1997 ಚಲನಚಿತ್ರ)|ಚಂದ್ರಲೇಖಾ]]'', ''[[ಗುರು (1997 ಚಲನಚಿತ್ರ)|ಗುರು]]'', ''[[ಒರು ಯಾತ್ರಮೊಳಿ]]'', ಮತ್ತು ''[[ಆರಾಂ ತಂಪುರನ್]]'' ಅವರಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಸ್ಕ್ರೀನ್ ಪ್ರಶಸ್ತಿಗಳು ದಕ್ಷಿಣವನ್ನು ತಂದುಕೊಟ್ಟವು. ಅವರು ನಾಟಕ ಚಲನಚಿತ್ರ ''[[ವನಪ್ರಸ್ಥಂ]]'' (1999) ಅನ್ನು ಸಹ-ನಿರ್ಮಿಸಿದರು ಮತ್ತು ನಟಿಸಿದರು, [[ಕಥಕ್ಕಳಿ]] ಕಲಾವಿದನಾಗಿ ಅವರ ಪಾತ್ರವು ಅವರಿಗೆ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]], [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]], [[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]], ಮತ್ತು [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿ]] ಗಳನ್ನು ತಂದುಕೊಟ್ಟಿತು. [[File:Padmabhushan Mohanlal.jpg|upright|thumb|ಮೋಹನ್ಲಾಲ್ ಅವರು [[ರಾಮ್ ನಾಥ್ ಕೋವಿಂದ್]], [[ಭಾರತದ ರಾಷ್ಟ್ರಪತಿ]] ಅವರಿಂದ [[ಪದ್ಮಭೂಷಣ]] ಸ್ವೀಕರಿಸುತ್ತಿರುವುದು]]
ಅವರ [[ಬಾಲಿವುಡ್|ಹಿಂದಿ]] ಚೊಚ್ಚಲ ಚಿತ್ರ ''[[ಕಂಪನಿ (2002 ಚಲನಚಿತ್ರ)|ಕಂಪನಿ]]'' (2002) ಗಾಗಿ [[ಫಿಲ್ಮ್ಫೇರ್ ಪ್ರಶಸ್ತಿ]]ಗೆ ನಾಮನಿರ್ದೇಶನಗೊಂಡರು ಮತ್ತು ಅಪರಾಧ ನಾಟಕದಲ್ಲಿನ ಅಭಿನಯವು ಅವರಿಗೆ [[ಸ್ಕ್ರೀನ್ ಪ್ರಶಸ್ತಿ]] ಮತ್ತು [[ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು|ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ]] ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರು 2005 ರ ನಾಟಕ ಚಲನಚಿತ್ರ ''[[ಥನ್ಮತ್ರ]]'' ದಲ್ಲಿ [[ಅಲ್ಝೈಮರ್ ಕಾಯಿಲೆ]]ಯಿಂದ ಬಳಲುತ್ತಿರುವ ರೋಗಿಯ ಪಾತ್ರವನ್ನು ನಿರ್ವಹಿಸಿದರು, ಇದಕ್ಕಾಗಿ ಅವರು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]] ಮತ್ತು [[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಮಲಯಾಳಂ]] ಪ್ರಶಸ್ತಿಗಳನ್ನು ಪಡೆದರು.
ಅವರು 2011 ರ ಪ್ರಣಯ ನಾಟಕ ''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]'' ನಲ್ಲಿ ವಯಸ್ಸಾದ ಹಾಸಿಗೆ ಹಿಡಿದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಅವರ ಪಾತ್ರವು ಅವರಿಗೆ [[ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]] ಅತ್ಯುತ್ತಮ ನಟ ಪ್ರಶಸ್ತಿ ಮತ್ತು [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]], [[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]], [[ವನಿತಾ ಚಲನಚಿತ್ರ ಪ್ರಶಸ್ತಿಗಳು]], ಮತ್ತು [[ಮಾತೃಭೂಮಿ]] ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಇತರ ಪ್ರಶಸ್ತಿಗಳನ್ನು ತಂದುಕೊಟ್ಟಿತು. 2013 ರಲ್ಲಿ, ಅವರು ಥ್ರಿಲ್ಲರ್ ಚಲನಚಿತ್ರ ''[[ದೃಶ್ಯಂ]]'' ನಲ್ಲಿ ನಟಿಸಿದರು, ಇದಕ್ಕಾಗಿ ಅವರು [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]] ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. 2013 ರಲ್ಲಿ [[CNN-IBN]] ನಡೆಸಿದ "ಭಾರತೀಯ ಸಿನೆಮಾದ 100 ವರ್ಷಗಳು" ಸಮೀಕ್ಷೆಯಲ್ಲಿ, "ಭಾರತದ ಶ್ರೇಷ್ಠ ನಟರು" ಪಟ್ಟಿಯಲ್ಲಿ ನಟರಲ್ಲಿ ಅವರು ಮೂರನೇ ಸ್ಥಾನ ಪಡೆದರು. 2017 ರಲ್ಲಿ, ''[[ಜನತಾ ಗ್ಯಾರೇಜ್]]'', ''[[ಮುಂತಿರಿವಳ್ಳಿಕಲ್ ಥಾಲಿರ್ಕ್ಕುಂಬೋಲ್]]'', ಮತ್ತು ''[[ಪುಲಿಮುರುಗನ್]]'' ಚಲನಚಿತ್ರಗಳಲ್ಲಿನ ಅಭಿನಯಕ್ಕಾಗಿ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯ ಚಲನಚಿತ್ರ)|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ]] ಗೆದ್ದರು.
ಅಭಿನಯದ ಪ್ರಶಸ್ತಿಗಳ ಜೊತೆಗೆ, [[ಭಾರತ ಸರ್ಕಾರ]]ವು ಕಲೆಗೆ ನೀಡಿದ ಕೊಡುಗೆಗಳಿಗಾಗಿ 2001 ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ [[ಭಾರತೀಯ ಗೌರವ ಪದ್ಧತಿ|ನಾಗರಿಕ ಪ್ರಶಸ್ತಿ]]ಯಾದ [[ಪದ್ಮಶ್ರೀ]] ಮತ್ತು 2019 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ [[ಪದ್ಮಭೂಷಣ]] ಪ್ರಶಸ್ತಿಯನ್ನು ನೀಡಿ ಗೌರವಿಸಿತು. 2009 ರಲ್ಲಿ [[ಭಾರತೀಯ ಪ್ರಾದೇಶಿಕ ಸೇನೆ]]ಯಿಂದ ಗೌರವಾನ್ವಿತ [[ಲೆಫ್ಟಿನೆಂಟ್ ಕರ್ನಲ್]] ಹುದ್ದೆಯನ್ನು ನೀಡಲಾಯಿತು. ಮೋಹನ್ಲಾಲ್ ಅವರಿಗೆ [[ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ]] (2010) ಮತ್ತು [[ಕ್ಯಾಲಿಕಟ್ ವಿಶ್ವವಿದ್ಯಾಲಯ]] (2018) ರಿಂದ ಗೌರವಾನ್ವಿತ [[ಡಾಕ್ಟರ್ ಆಫ್ ಲೆಟರ್ಸ್]] ಪ್ರಶಸ್ತಿ, ಹಾಗೆಯೇ ಹಲವಾರು ಇತರ ಮನ್ನಣೆಗಳನ್ನು ನೀಡಲಾಯಿತು.
== ಗೌರವಗಳು ==
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:10%;"| ಗೌರವ
! scope="col" style="width:10%;"| ಗೌರವ ನೀಡುವ ಸಂಸ್ಥೆ
! scope="col" style="width:15%;"| ಪ್ರದಾನ ಮಾಡಿದವರು
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2001
|[[ಪದ್ಮಶ್ರೀ]]
|[[ಭಾರತ ಸರ್ಕಾರ]]
|[[ಕೆ. ಆರ್. ನಾರಾಯಣನ್]], [[ಭಾರತದ ರಾಷ್ಟ್ರಪತಿ]]
|style="text-align:center;"|<ref>{{Cite web |title=Mohanlal nominated for Padma Bhushan |url=http://asianetindia.com/mohanlal-nominated-for-padma-bhushan/ |url-status=dead |archive-url=https://web.archive.org/web/20150419132031/http://asianetindia.com/mohanlal-nominated-for-padma-bhushan/ |archive-date=19 April 2015 |website=[[Asianet Satellite Communications|Asianet]] |access-date=14 November 2014 }}</ref>
|-
! scope="row"| 2009
|ಗೌರವಾನ್ವಿತ [[ಲೆಫ್ಟಿನೆಂಟ್ ಕರ್ನಲ್]]
|[[ಭಾರತದ ಪ್ರಾದೇಶಿಕ ಸೇನೆ|ಭಾರತೀಯ ಪ್ರಾದೇಶಿಕ ಸೇನೆ]]
|[[ದೀಪಕ್ ಕಪೂರ್]], [[ಭಾರತದ ಸೇನಾ ಮುಖ್ಯಸ್ಥ]]
|style="text-align:center;"|<ref>{{Cite web |last=Thapar |first=Vishal |date=10 July 2009 |title=Meet Lt Colonel Mohanlal, actor in the Army |url=http://ibnlive.in.com/news/meet-lt-colonel-mohanlal-actor-in-the-army/96788-8.html |url-status=dead |archive-url=https://web.archive.org/web/20090714180011/http://ibnlive.in.com/news/meet-lt-colonel-mohanlal-actor-in-the-army/96788-8.html |archive-date=14 July 2009 |website=[[IBNLive]]}}</ref>
|-
! scope="row"| 2010
|ಗೌರವಾನ್ವಿತ [[ಡಾಕ್ಟರೇಟ್]] ([[ಡಾಕ್ಟರ್ ಆಫ್ ಲೆಟರ್ಸ್|D.Litt]])
|[[ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ]]
|[[ಆರ್. ಎಸ್. ಗವಾಯಿ]], [[ಕೇರಳದ ರಾಜ್ಯಪಾಲರ ಪಟ್ಟಿ|ಕೇರಳದ ರಾಜ್ಯಪಾಲರು]]
|style="text-align:center;"|<ref>{{cite web |url=http://movies.ndtv.com/movie_Story.aspx?id=ENTEN20100135288&keyword=&subcatg=&cp |archive-url=https://archive.today/20120714031203/http://movies.ndtv.com/movie_Story.aspx?id=ENTEN20100135288&keyword=&subcatg=&cp |url-status=dead |archive-date=14 July 2012 |title=Mohanlal, Resul receive D.Litt |website=NDTVmovies.com |date=18 March 2010}}</ref>
|-
! scope="row"| 2013
|[[ಟೇಕ್ವಾಂಡೋ]] ನಲ್ಲಿ ಗೌರವಾನ್ವಿತ [[ಕಪ್ಪು ಪಟ್ಟಿ (ಸಮರ ಕಲೆಗಳು)|ಕಪ್ಪು ಪಟ್ಟಿ]]
|[[ಕುಕ್ಕಿವಾನ್|ವರ್ಲ್ಡ್ ಟೇಕ್ವಾಂಡೋ ಪ್ರಧಾನ ಕಚೇರಿ]], [[ದಕ್ಷಿಣ ಕೊರಿಯಾ]]
|[[ಗ್ರ್ಯಾಂಡ್ಮಾಸ್ಟರ್ (ಸಮರ ಕಲೆಗಳು)|ಗ್ರ್ಯಾಂಡ್ಮಾಸ್ಟರ್]] ಲೀ ಜಿಯೋಂಗ್ಹೀ, ಸ್ಪೋರ್ಟ್ಸ್ [[ಜನರಲ್ ಮ್ಯಾನೇಜರ್|GM]], ಭಾರತೀಯ [[ದಕ್ಷಿಣ ಕೊರಿಯಾ|ROK]] ರಾಯಭಾರ ಕಚೇರಿ
|style="text-align:center;"|<ref>{{Cite web|url=https://www.newindianexpress.com/entertainment/malayalam/2012/oct/24/black-belt-for-mohanlal-418347.html|title=Black belt for Mohanlal|website=The New Indian Express|date=24 October 2012 |access-date=2020-09-20|archive-date=2019-03-28|archive-url=https://web.archive.org/web/20190328192154/http://www.newindianexpress.com/entertainment/malayalam/2012/oct/24/black-belt-for-mohanlal-418347.html|url-status=live}}</ref>
|-
! scope="row"| 2018
|ಗೌರವಾನ್ವಿತ ಡಾಕ್ಟರೇಟ್ (D.Litt)
|[[ಕ್ಯಾಲಿಕಟ್ ವಿಶ್ವವಿದ್ಯಾಲಯ]]
|[[ಪಿ. ಸತಶಿವಮ್]], ಕೇರಳದ ರಾಜ್ಯಪಾಲರು
|style="text-align:center;"|<ref>{{cite web |url=http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html |title=Calicut University confers D.Litt on Mohanlal, P.T.Usha |website=business-standard.com |date=29 January 2018 |access-date=2018-01-29 |archive-date=2018-01-29 |archive-url=https://web.archive.org/web/20180129195119/http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html |url-status=live }}</ref>
|-
! scope="row"| 2019
|[[ಪದ್ಮಭೂಷಣ]]
|ಭಾರತ ಸರ್ಕಾರ
|[[ರಾಮ್ ನಾಥ್ ಕೋವಿಂದ್]], ಭಾರತದ ರಾಷ್ಟ್ರಪತಿ
|style="text-align:center;"|<ref>{{cite web |url=https://padmaawards.gov.in/PDFS/2019AwardeesList.pdf |title=2019 Padma Awards |date=2019-01-25 |website=Padmaawards.gov.in |access-date=2019-01-25 |archive-date=2019-01-26 |archive-url=https://web.archive.org/web/20190126060850/https://padmaawards.gov.in/PDFS/2019AwardeesList.pdf |url-status=live }}</ref>
|-
! scope="row"| 2025
|[[COAS ಕೊಂಡಾಟ್ ಕಾರ್ಡ್]]
|[[ಭಾರತೀಯ ಸೇನೆ]]
|[[ಉಪೇಂದ್ರ ದ್ವಿವೇದಿ]], ಸೇನಾ ಮುಖ್ಯಸ್ಥ
| style="text-align: center;" |<ref>{{Cite web |date=2025-10-07 |title=Mohanlal receives commendation from Army Chief: ‘A moment of immense pride and gratitude’ |url=https://indianexpress.com/article/entertainment/malayalam/mohanlal-receives-commendation-from-army-chief-a-moment-of-immense-pride-and-gratitude-10293241/ |access-date=2025-10-07 |website=The Indian Express |language=en}}</ref>
|}
== ವಿಶ್ವ ದಾಖಲೆಗಳು ==
* ಜಗತ್ತಿನ ಅತಿದೊಡ್ಡ ದಾನ ಪೆಟ್ಟಿಗೆಯನ್ನು ಮಾಡುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದ ವಿಶ್ವದ ಮೊದಲ ಅಭಿಮಾನಿಗಳ ಸಂಘ<ref>{{Cite web|url=https://www.guinnessworldrecords.com/world-records/largest-wooden-chest|title=Largest wooden chest|access-date=2020-05-29|archive-date=2021-01-27|archive-url=https://web.archive.org/web/20210127211750/https://www.guinnessworldrecords.com/world-records/largest-wooden-chest|url-status=live}}</ref><ref>{{Cite web|url=http://lalcaresqatar.com/home/|title=Home – Lal Cares Qatar|access-date=2020-05-29|archive-date=2021-01-27|archive-url=https://web.archive.org/web/20210127211750/http://lalcaresqatar.com/home/|url-status=live}}</ref>
* 3D ಚಲನಚಿತ್ರ ಪ್ರದರ್ಶನದಲ್ಲಿ ಅತಿ ಹೆಚ್ಚು ಹಾಜರಾತಿ<ref>{{Cite web|url=https://www.guinnessworldrecords.com/world-records/largest-attendance-at-a-3d-film-screening|title=Largest attendance at a 3D film screening|website=Guinness World Records|access-date=2020-05-28|archive-date=2017-12-27|archive-url=https://web.archive.org/web/20171227113036/http://www.guinnessworldrecords.com/world-records/largest-attendance-at-a-3d-film-screening|url-status=live}}</ref>
* ಇಲ್ಲಿಯವರೆಗೆ ಜಗತ್ತಿನಲ್ಲಿ ನಿರ್ಮಿಸಲಾದ ಅತಿ ಉದ್ದದ ಸಾಕ್ಷ್ಯಚಿತ್ರಕ್ಕೆ ತಮ್ಮ ಧ್ವನಿಯನ್ನು ನೀಡಿದ್ದಾರೆ.<ref name="newscoopz.com">{{Cite web|url=https://www.newscoopz.com/third-time-guinness-world-record-for-mohanlal/|title=Mohanlal becomes a part of Guinness world record for the 3rd time in his career|date=21 August 2019|access-date=28 May 2020|archive-date=20 September 2020|archive-url=https://web.archive.org/web/20200920071410/https://www.newscoopz.com/third-time-guinness-world-record-for-mohanlal/|url-status=live}}</ref><ref name="Kuttoor">{{Cite news|url=https://www.thehindu.com/news/national/kerala/its-official-the-longest-docu-is-on-mar-chrysostum/article27097855.ece|title=It's official, the longest docu is on Mar Chrysostum|first=Radhakrishnan|last=Kuttoor|newspaper=The Hindu |date=10 May 2019|via=www.thehindu.com|access-date=18 June 2020|archive-date=27 January 2021|archive-url=https://web.archive.org/web/20210127211748/https://www.thehindu.com/news/national/kerala/its-official-the-longest-docu-is-on-mar-chrysostum/article27097855.ece|url-status=live}}</ref>
== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ==
1954 ರಲ್ಲಿ ಸ್ಥಾಪಿಸಲಾದ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], [[ಭಾರತ ಸರ್ಕಾರ]]ದ [[ಚಲನಚಿತ್ರೋತ್ಸವಗಳ ನಿರ್ದೇಶನಾಲಯ]]ದಿಂದ ನಿರ್ವಹಿಸಲ್ಪಡುತ್ತದೆ. ಮೋಹನ್ಲಾಲ್ ಆರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:20%;"| ವರ್ಗ
! scope="col" style="width:30%;"| ಭಾಷೆ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row" | 1989
| ''[[ಕಿರೀಡಂ (1989 ಚಲನಚಿತ್ರ)|ಕಿರೀಡಂ]]''
| [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ (ವೈಶಿಷ್ಟ್ಯ ಚಲನಚಿತ್ರ)|ವಿಶೇಷ ಉಲ್ಲೇಖ]]
| rowspan="4" scope="row" | ಮಲಯಾಳಂ
|style="text-align:center;"|<ref name="37thawardPDF">{{cite web|url=http://dff.nic.in/images/Documents/80_37thNfacatalogue.pdf|title=37th National Film Awards|publisher=[[Directorate of Film Festivals]]|accessdate=12 July 2020|archive-date=9 July 2020|archive-url=https://web.archive.org/web/20200709165915/http://dff.nic.in/images/Documents/80_37thNfacatalogue.pdf|url-status=live}}</ref>
|-
! scope="row" | 1991
| ''[[ಭಾರತಂ]]''
| [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|style="text-align:center;"|<ref>{{cite web|url=http://iffi.nic.in/Dff2011/Frm39thNFAAward.aspx?PdfName=39NFA.pdf|title=39th National Film Award (1991)|publisher=diff.nic.in|access-date=2014-11-14|archive-date=2011-07-21|archive-url=https://web.archive.org/web/20110721170014/http://iffi.nic.in/Dff2011/Frm39thNFAAward.aspx?PdfName=39NFA.pdf|url-status=dead}}</ref>
|-
! scope="row" rowspan="2"| 1999
| rowspan="2" | ''[[ವನಪ್ರಸ್ಥಂ]]''
|[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ವೈಶಿಷ್ಟ್ಯ ಚಲನಚಿತ್ರ|ಅತ್ಯುತ್ತಮ ವೈಶಿಷ್ಟ್ಯ ಚಲನಚಿತ್ರ]] (ನಿರ್ಮಾಪಕ)
|style="text-align:center;" rowspan="2"|<ref name="47th National Film Award 1999">{{cite web|url = http://iffi.nic.in/Dff2011/Frm47NFAAward.aspx?PdfName=47NFA.pdf|title = 47th National Film Award (1999)|publisher = diff.nic.in|access-date = 2014-11-14|archive-date = 2011-09-28|archive-url = https://web.archive.org/web/20110928072346/http://iffi.nic.in/Dff2011/Frm47NFAAward.aspx?PdfName=47NFA.pdf|url-status = dead}}</ref>
|-
|[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ|ಅತ್ಯುತ್ತಮ ನಟ]]
|-
! rowspan="3" scope="row" | 2016
|''[[ಜನತಾ ಗ್ಯಾರೇಜ್]]''
| rowspan="3" scope="row" | [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯ ಚಲನಚಿತ್ರ)|ವಿಶೇಷ ತೀರ್ಪುಗಾರರ ಪ್ರಶಸ್ತಿ]]
| ತೆಲುಗು
| rowspan="3" style="text-align:center;" |<ref name=":3">{{cite news|title=64th National Film Awards: Here's the complete list of winners|url=https://www.hindustantimes.com/bollywood/64th-national-film-awards-here-s-the-complete-list-of-winners/story-2o8HmEbUZ8kmvhfx2XE64I.html|accessdate=10 August 2020|work=[[Hindustan Times]]|date=7 April 2017|archive-date=17 September 2020|archive-url=https://web.archive.org/web/20200917031535/https://www.hindustantimes.com/bollywood/64th-national-film-awards-here-s-the-complete-list-of-winners/story-2o8HmEbUZ8kmvhfx2XE64I.html|url-status=live}}</ref>
|-
|''[[ಮುಂತಿರಿವಳ್ಳಿಕಲ್ ಥಾಲಿರ್ಕ್ಕುಂಬೋಲ್]]''
| rowspan="2" |ಮಲಯಾಳಂ
|-
|''[[ಪುಲಿಮುರುಗನ್]]''
|-
! scope="row" | 2023
|''ಜೀವಮಾನ ಸಾಧನೆ''
|[[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]
|—
|style="text-align:center;"|<ref name="Malayalam actor Mohanlal to be conferred Dadasaheb Phalke Award for 2023">{{cite news |last1= |first1= |title=Malayalam actor Mohanlal to be conferred Dadasaheb Phalke Award for 2023 |url=https://www.thehindu.com/entertainment/movies/actor-mohanlal-to-be-conferred-dadasaheb-phalke-award-for-2023/article70073864.ece |access-date=20 September 2025 |publisher=The Hindu |date=20 September 2025 |archive-url=https://web.archive.org/web/20250920160340/https://www.thehindu.com/entertainment/movies/actor-mohanlal-to-be-conferred-dadasaheb-phalke-award-for-2023/article70073864.ece |archive-date=20 September 2025 |language=en-IN}}</ref>
|}
== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ==
[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] ಮಲಯಾಳಂ ಚಲನಚಿತ್ರದಲ್ಲಿನ ಉತ್ಕೃಷ್ಟತೆಗಾಗಿ [[ಕೇರಳ ಸರ್ಕಾರ]]ದ [[ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ]]ಯಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1986
|''[[ಟಿ. ಪಿ. ಬಾಲಗೋಪಾಲನ್ M.A.]]''
|[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|{{won}}
|style="text-align:center;"|<ref name="State Film Awards">{{cite web |url=http://www.prd.kerala.gov.in/stateawards2.htm |title=State Film Awards |publisher=prd.kerala.gov.in |url-status=dead |archive-url=https://web.archive.org/web/20160303234213/http://www.prd.kerala.gov.in/stateawards2.htm |archive-date=3 March 2016 |df=dmy-all}}</ref>
|-
! scope="row"| 1988
|''[[ಪದಮುದ್ರಾ (ಚಲನಚಿತ್ರ)|ಪದಮುದ್ರಾ]], [[ಚಿತ್ರಂ]], [[ಉಲ್ಸವಪಿಟ್ಟೇನ್ನು]], [[ಆರ್ಯನ್ (1988 ಚಲನಚಿತ್ರ)|ಆರ್ಯನ್]], [[ವೆಲ್ಲನಾಕಳುಡೆ ನಾಡು]]''
|[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ (ವಿಶೇಷ ತೀರ್ಪುಗಾರರ ಪ್ರಶಸ್ತಿ)|ವಿಶೇಷ ತೀರ್ಪುಗಾರರ ಪ್ರಶಸ್ತಿ]]
|{{won}}
|style="text-align:center;"|<ref name="State Film Awards" />
|-
! scope="row" rowspan="2"| 1991
|''[[ಭಾರತಂ]]''
|[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಎರಡನೇ ಅತ್ಯುತ್ತಮ ಚಲನಚಿತ್ರ|ಎರಡನೇ ಅತ್ಯುತ್ತಮ ಚಲನಚಿತ್ರ]] {{small|(ನಿರ್ಮಾಪಕ)}}
|{{won}}
|style="text-align:center;"|<ref name="prd.kerala.gov.in">{{cite web |url=http://www.prd.kerala.gov.in/stateawards3.htm |title=State Film Awards |publisher=prd.kerala.gov.in |url-status=dead |archive-url=https://web.archive.org/web/20160303234157/http://www.prd.kerala.gov.in/stateawards3.htm |archive-date=3 March 2016 |df=dmy-all}}</ref>
|-
|''[[ಅಭಿಮನ್ಯು (1991 ಚಲನಚಿತ್ರ)|ಅಭಿಮನ್ಯು]], [[ಕಿಳುಕ್ಕಂ]], [[ಉಳ್ಳಡಕ್ಕಂ]]''
| rowspan="2" |[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|{{won}}
|style="text-align:center;"|<ref name="prd.kerala.gov.in" />
|-
! scope="row" rowspan="2"| 1995
|''[[ಸ್ಪಡಿಕಂ]], [[ಕಾಲಪಾನಿ]]''
|{{won}}
|style="text-align:center;"|<ref name="prd.kerala.gov.in" />
|-
|''[[ಕಾಲಪಾನಿ]]''
|[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಎರಡನೇ ಅತ್ಯುತ್ತಮ ಚಲನಚಿತ್ರ|ಎರಡನೇ ಅತ್ಯುತ್ತಮ ಚಲನಚಿತ್ರ]] {{small|(ನಿರ್ಮಾಪಕ)}}
|{{won}}
|style="text-align:center;"|<ref name="prd.kerala.gov.in" />
|-
! scope="row"| 1999
|''[[ವನಪ್ರಸ್ಥಂ]]''
| rowspan="3" |[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|{{won}}
|style="text-align:center;"|<ref name="prd.kerala.gov.in" />
|-
! scope="row"| 2005
|''[[ಥನ್ಮತ್ರ]]''
|{{won}}
|style="text-align:center;"|<ref name="ReferenceA">{{cite web |url=http://www.prd.kerala.gov.in/stateawards4.htm |title=State Film Awards |publisher=prd.kerala.gov.in |url-status=dead |archive-url=https://web.archive.org/web/20150707210332/http://www.prd.kerala.gov.in/stateawards4.htm |archive-date=7 July 2015 |df=dmy-all}}</ref>
|-
! scope="row"| 2007
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]''
|{{won}}
|style="text-align:center;"|<ref name="ReferenceA" />
|}
== ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ==
[[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]] ಮಲಯಾಳಂ ಚಲನಚಿತ್ರದಲ್ಲಿನ ಉತ್ಕೃಷ್ಟತೆಗಾಗಿ [[ಕೇರಳ ಚಲನಚಿತ್ರ ವಿಮರ್ಶಕರ ಸಂಘ]]ದಿಂದ ಪ್ರತಿ ವರ್ಷವೂ (1977 ರಿಂದ) ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1988
|''[[ಪದಮುದ್ರಾ (ಚಲನಚಿತ್ರ)|ಪದಮುದ್ರಾ]]'', ''[[ಚಿತ್ರಂ]]''
| rowspan="3" |[[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|{{won}}
|style="text-align:center;"|<ref name=criticsaward>{{cite news |author1=G. Hari Sundar |title=Mohanlal weaves a filmic web |url=http://www.thehindu.com/thehindu/lf/2002/05/19/stories/2002051901540200.htm |accessdate=12 January 2016 |work=[[The Hindu]] |date=19 May 2002 |archive-date=27 January 2021 |archive-url=https://web.archive.org/web/20210127211748/https://www.thehindu.com/archive/print/2002/05/19/ |url-status=live }}</ref>
|-
! scope="row"| 1991
|''[[ಭಾರತಂ]]'', ''[[ಉಳ್ಳಡಕ್ಕಂ]]''
|{{won}}
|style="text-align:center;"|<ref name=criticsaward />
|-
! scope="row"| 1999
|''[[ವನಪ್ರಸ್ಥಂ]]''
|{{won}}
|style="text-align:center;"|<ref name=criticsaward />
|-
! scope="row"| 2001
|''ಮಲಯಾಳಂ ಸಿನೆಮಾಗೆ ಕೊಡುಗೆ''
|ನಟನ ರತ್ನ ಪ್ರಶಸ್ತಿ
|
|style="text-align:center;"|<ref>{{Cite web |title=Mohanlal - Awards and Recognition |url=https://www.thecompleteactor.com/mohanlal-awards-recognition |access-date=2024-07-18 |website=TheCompleteActor.com}}</ref>
|-
! scope="row"| 2003
|''ಜೀವಮಾನ ಸಾಧನೆ ಪ್ರಶಸ್ತಿ''
|[[ಚಲಚಿತ್ರ ರತ್ನ ಪ್ರಶಸ್ತಿ]]
|
|style="text-align:center;"|<ref>{{Cite web |title=1993-2018 Chalachitra Ratnam Awards |url=https://www.keralafilmcritics.com/2020/10/1993.html |url-status=live |archive-url=https://web.archive.org/web/20231130133343/https://www.keralafilmcritics.com/2020/10/1993.html |archive-date=2023-11-30 |access-date=2024-07-18 |website=[[Kerala Film Critics Association]]}}</ref>
|-
! scope="row"| 2005
|''[[ನರನ್ (ಚಲನಚಿತ್ರ)|ನರನ್]], [[ಥನ್ಮತ್ರ]]''
|ಅತ್ಯಂತ ಜನಪ್ರಿಯ ನಟ
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-kerala/film-critics-awards-announced/article3173236.ece |title=Film Critics awards announced |date=3 February 2006 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127045903/http://www.thehindu.com/todays-paper/tp-national/tp-kerala/film-critics-awards-announced/article3173236.ece |url-status=live }}</ref>
|-
! scope="row"| 2007
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]''
| rowspan="6" |ಅತ್ಯುತ್ತಮ ನಟ
|{{won}}
|style="text-align:center;"|<ref>{{Cite news |url=http://articles.economictimes.indiatimes.com/2008-01-31/news/28412366_1_playback-singer-special-award-critics-awards |title='Ore Kadal', 'Thaniye' share critics award for best film |last=PTI |date=31 January 2008 |publisher=economictimes.indiatimes.com |access-date=2014-11-14 |archive-date=2014-12-16 |archive-url=https://web.archive.org/web/20141216094445/http://articles.economictimes.indiatimes.com/2008-01-31/news/28412366_1_playback-singer-special-award-critics-awards |url-status=dead }}</ref>
|-
! scope="row"| 2008
|''[[ಕುರುಕ್ಷೇತ್ರ (2008 ಚಲನಚಿತ್ರ)|ಕುರುಕ್ಷೇತ್ರ]], [[ಪಕಲ್ ನಕ್ಷತ್ರಂಗಳ್]], [[ಆಕಾಶ ಗೋಪುರಂ|ಆಕಾಶಗೋಪುರಂ]]''
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-kerala/mohanlal-sukumari-adjudged-best-actors/article386178.ece |title=Mohanlal, Sukumari adjudged best actors |date=31 January 2009 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127050528/http://www.thehindu.com/todays-paper/tp-national/tp-kerala/mohanlal-sukumari-adjudged-best-actors/article386178.ece |url-status=live }}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|{{won}}
|style="text-align:center;"|<ref>{{Cite web|url=http://www.mathrubhumi.com/english/movies/malayalam/123816/|archive-url=https://web.archive.org/web/20120529040906/http://www.mathrubhumi.com/english/movies/malayalam/123816/|url-status=dead|title=Mohanlal, Blessy bag Critics award|archive-date=29 May 2012}}</ref>
|-
! scope="row"| 2013
|''[[ದೃಶ್ಯಂ]]''
|{{won}}
|style="text-align:center;"|<ref>{{Cite news |url=http://www.newindianexpress.com/entertainment/malayalam/Drishyam-Bags-Kerala-Film-Critics-Association-Awards/2014/01/30/article2027269.ece |title='Drishyam' Bags Kerala Film Critics Association Awards |date=30 January 2014 |accessdate=13 Nov 2014 |publisher=[[The New Indian Express]] |archive-date=22 December 2014 |archive-url=https://web.archive.org/web/20141222164923/http://www.newindianexpress.com/entertainment/malayalam/Drishyam-Bags-Kerala-Film-Critics-Association-Awards/2014/01/30/article2027269.ece |url-status=dead }}</ref>
|-
! scope="row"| 2016
|''[[ಒಪ್ಪಂ]]''
|{{won}}
|style="text-align:center;"|<ref>{{cite news |title=Film critics awards announced |url=http://www.thehindu.com/news/cities/Thiruvananthapuram/film-critics-awards-announced/article17419650.ece |accessdate=7 March 2017 |work=[[The Hindu]] |date=7 March 2017 |archive-date=21 December 2019 |archive-url=https://web.archive.org/web/20191221165143/https://www.thehindu.com/news/cities/Thiruvananthapuram/film-critics-awards-announced/article17419650.ece |url-status=live }}</ref>
|-
! scope="row"| 2025
|''[[ತುದರುಂ]]''
|{{won}}
|style="text-align:center;"|<ref>{{cite news|title=Kerala Film Critics Awards announced|url=https://www.newindianexpress.com/entertainment/malayalam/2019/apr/09/kerala-film-critics-awards-announced-1962020.html|access-date=18 July 2019|work=[[The New Indian Express]]|date=9 April 2019|archive-date=22 July 2019|archive-url=https://web.archive.org/web/20190722031652/http://www.newindianexpress.com/entertainment/malayalam/2019/apr/09/kerala-film-critics-awards-announced-1962020.html|url-status=live}}</ref>
|}
== ನಂದಿ ಪ್ರಶಸ್ತಿಗಳು ==
[[ನಂದಿ ಪ್ರಶಸ್ತಿಗಳು]] [[ಆಂಧ್ರಪ್ರದೇಶ ಸರ್ಕಾರ]]ವು [[ತೆಲುಗು ಸಿನೆಮಾ]]ದಲ್ಲಿ ಕಲಾತ್ಮಕ ಕೌಶಲ್ಯಗಳನ್ನು ಗೌರವಿಸಲು ಪ್ರದಾನ ಮಾಡುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:27%;"| ನಾಮನಿರ್ದೇಶಿತ ಕೃತಿ
! scope="col" style="width:20%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2016
|''[[ಜನತಾ ಗ್ಯಾರೇಜ್]]''
|[[ನಂದಿ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ|ಅತ್ಯುತ್ತಮ ಪೋಷಕ ನಟ]]
|{{won}}
|style="text-align:center;"|<ref>{{cite news |last=Hooli |first=Shekhar H. |title=Nandi Awards 2014, 15 and 16 winners list: Mahesh Babu, Jr NTR, Balakrishna bag best actor awards |url=http://www.ibtimes.co.in/nandi-awards-2014-15-16-winners-list-revealed-mahesh-babu-jr-ntr-balakrishna-bag-best-actors-749398 |accessdate=14 November 2017 |work=[[International Business Times]] |date=14 November 2017 |archive-date=15 November 2017 |archive-url=https://web.archive.org/web/20171115014950/http://www.ibtimes.co.in/nandi-awards-2014-15-16-winners-list-revealed-mahesh-babu-jr-ntr-balakrishna-bag-best-actors-749398 |url-status=live }}</ref>
|}
== ಫಿಲ್ಮ್ಫೇರ್ ಪ್ರಶಸ್ತಿಗಳು ==
[[ಫಿಲ್ಮ್ಫೇರ್ ಪ್ರಶಸ್ತಿಗಳು]] [[ಹಿಂದಿ ಸಿನೆಮಾ]]ದಲ್ಲಿ ಸಿನೆಮಾಟಿಕ್ ಸಾಧನೆಗಳ ಉತ್ಕೃಷ್ಟತೆಗಾಗಿ [[ದಿ ಟೈಮ್ಸ್ ಗ್ರೂಪ್]] ನಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2002
|''[[ಕಂಪನಿ (2002 ಚಲನಚಿತ್ರ)|ಕಂಪನಿ]]''
|[[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ|ಅತ್ಯುತ್ತಮ ಪೋಷಕ ನಟ]]
|{{Nominated}}
|style="text-align:center;"|<ref>{{cite news |last=Rajpal |first=Roktim |title=Mohanlal turns 55: 8 performances that prove he is the most bankable, successful star of Indian cinema |url=http://www.ibnlive.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html |accessdate=26 March 2016 |work=[[IBN Live]] |date=21 May 2015 |location=New Delhi |archive-date=10 March 2016 |archive-url=https://web.archive.org/web/20160310045435/http://www.ibnlive.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html |url-status=live }}</ref>
|}
== ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ==
[[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]]ವು [[ಫಿಲ್ಮ್ಫೇರ್ ಪ್ರಶಸ್ತಿಗಳ]] ಒಂದು ಭಾಗವಾಗಿದ್ದು, ಇದನ್ನು ದಕ್ಷಿಣ ಭಾರತೀಯ ಚಲನಚಿತ್ರೋದ್ಯಮಕ್ಕೆ ನೀಡಲಾಗುತ್ತದೆ, ಇದು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮಗಳನ್ನು ಒಳಗೊಂಡಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಭಾಷೆ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1986
|''[[ಸನ್ಮನಸ್ಸುಳ್ಳವರ್ಕ್ಕು ಸಮಾಧಾನಂ]]''
| rowspan="8" |[[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಮಲಯಾಳಂ|ಅತ್ಯುತ್ತಮ ನಟ]]
| rowspan="11" |[[ಮಲಯಾಳಂ]]
|{{won}}
|style="text-align:center;"|<ref name="Filmfare">{{cite news |url=http://specials.manoramaonline.com/Movie/2014/mohanlal-2013/quick-info.html |title=Vismayangalude Lal |agency=[[Manoramaonline.com]] |accessdate=23 May 2015 |archive-date=16 October 2015 |archive-url=https://web.archive.org/web/20151016174547/http://specials.manoramaonline.com/Movie/2014/mohanlal-2013/quick-info.html |url-status=live }}</ref>
|-
! scope="row"| 1988
|''[[ಪದಮುದ್ರಾ (ಚಲನಚಿತ್ರ)|ಪದಮುದ್ರಾ]]''
|{{won}}
|style="text-align:center;"|<ref name=Filmfare />
|-
! scope="row"| 1993
|''[[ದೇವಾಸುರಂ]]''
|{{won}}
|style="text-align:center;"|<ref name=Filmfare />
|-
! scope="row"| 1994
|''[[ಪವಿತ್ರಂ (1994 ಚಲನಚಿತ್ರ)|ಪವಿತ್ರಂ]]''
|{{won}}
|style="text-align:center;"|<ref name=Filmfare />
|-
! scope="row"| 1995
|''[[ಸ್ಪಡಿಕಂ]]''
|{{won}}
|style="text-align:center;"|<ref name=Filmfare />
|-
! scope="row"| 1999
|''[[ವನಪ್ರಸ್ಥಂ]]''
|{{won}}
|style="text-align:center;"|<ref>{{Cite news |url=http://www.thehindu.com/thehindu/2000/04/15/stories/09150651.htm |title=Star-spangled show on cards |date=15 April 2000 |work=[[The Hindu]] |access-date=14 November 2014 |archive-date=17 July 2014 |archive-url=https://archive.today/20140717201000/http://www.thehindu.com/thehindu/2000/04/15/stories/09150651.htm |url-status=dead }}</ref>
|-
! scope="row"| 2005
|''[[ಥನ್ಮತ್ರ]]''
|{{won}}
|style="text-align:center;"|<ref>{{cite web |url=http://www.indiaglitz.com/channels/malayalam/gallery/Events/10441.html |archive-url=https://web.archive.org/web/20061118182553/http://www.indiaglitz.com/channels/malayalam/gallery/Events/10441.html |url-status=dead |archive-date=18 November 2006 |title=The 53rd Film Fare Awards |date=11 September 2006 |work=indiaglitz.com |access-date=14 November 2014 }}</ref>
|-
! scope="row"| 2007
|[[ಪರದೇಸಿ (2007 ಚಲನಚಿತ್ರ)|''ಪರದೇಸಿ'']]
|{{won}}
|style="text-align:center;"|<ref>{{Cite news |url=http://timesofindia.indiatimes.com/city/chennai/55th-annual-Tiger-Balm-South-Filmfare-Awards/articleshow/3228046.cms |title=55th annual Tiger Balm South Filmfare Awards |last=Chuman Das |date=13 July 2008 |agency=[[The Times of India]] |access-date=23 May 2015 |archive-date=8 July 2016 |archive-url=https://web.archive.org/web/20160708120930/http://timesofindia.indiatimes.com/city/chennai/55th-annual-Tiger-Balm-South-Filmfare-Awards/articleshow/3228046.cms |url-status=live }}</ref>
|-
! scope="row"| 2009
|''[[ಭ್ರಮರಂ]]''
|[[ಫಿಲ್ಮ್ಫೇರ್ ವಿಶೇಷ ಪ್ರಶಸ್ತಿ - ದಕ್ಷಿಣ|ವಿಶೇಷ ತೀರ್ಪುಗಾರರ ಪ್ರಶಸ್ತಿ]]
|{{won}}
|style="text-align:center;"|<ref>{{cite web|last=Ravi|first=Bhama Devi|title=South's best in spotlight|url=http://epaper.timesofindia.com/Default/Scripting/ArticleWin.asp?From=Archive&Source=Page&Skin=TOINEW&BaseHref=TOICH/2010/08/08&PageLabel=4&EntityId=Ar00400&ViewMode=GIF&GZ=T|archive-url=https://web.archive.org/web/20120612110912/http://epaper.timesofindia.com/Default/Scripting/ArticleWin.asp?From=Archive&Source=Page&Skin=TOINEW&BaseHref=TOICH/2010/08/08&PageLabel=4&EntityId=Ar00400&ViewMode=GIF&GZ=T|url-status=dead|archive-date=12 June 2012|work=[[The Times of India]]|access-date=20 July 2012}}</ref>
|-
! scope="row"| 2013
|''[[ದೃಶ್ಯಂ]]''
| rowspan="2" |[[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಮಲಯಾಳಂ|ಅತ್ಯುತ್ತಮ ನಟ]]
|{{nom}}
|style="text-align:center;"|<ref name="Filmfare_2014-07-08">{{cite web |last=Editorial |first=Filmfare |title=61st Idea Filmfare Awards (South) Nomination list |url=http://www.filmfare.com/features/60th-idea-filmfare-awards-south-nomination-list-6638.html |publisher=Filmfare.com |accessdate=26 March 2016 |date=8 July 2014 |archive-date=6 April 2016 |archive-url=https://web.archive.org/web/20160406210925/http://www.filmfare.com/features/60th-idea-filmfare-awards-south-nomination-list-6638.html |url-status=live }}</ref>
|-
! scope="row" rowspan="2"| 2016
|''[[ಒಪ್ಪಂ]]''
|{{nom}}
|style="text-align:center;"|<ref name="Filmfare_2014-07-08" />
|-
|''[[ಜನತಾ ಗ್ಯಾರೇಜ್]]''
|[[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ - ತೆಲುಗು|ಅತ್ಯುತ್ತಮ ಪೋಷಕ ನಟ]]
|[[ತೆಲುಗು ಭಾಷೆ|ತೆಲುಗು]]
|{{nom}}
|style="text-align:center;"|<ref name="Filmfare_2014-07-08" />
|}
== ಸ್ಕ್ರೀನ್ ಪ್ರಶಸ್ತಿಗಳು ==
[[ಸ್ಕ್ರೀನ್ ಪ್ರಶಸ್ತಿಗಳು]] ಹಿಂದಿ ಮತ್ತು ಮರಾಠಿ ಸಿನೆಮಾದಲ್ಲಿ ಸಿನೆಮಾಟಿಕ್ ಸಾಧನೆಗಳ ಉತ್ಕೃಷ್ಟತೆಯನ್ನು ಗೌರವಿಸಲು [[ಇಂಡಿಯನ್ ಎಕ್ಸ್ಪ್ರೆಸ್ ಲಿಮಿಟೆಡ್]] ನಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:28%;"| ನಾಮನಿರ್ದೇಶಿತ ಕೃತಿ
! scope="col" style="width:14%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಕಂಪನಿ (2002 ಚಲನಚಿತ್ರ)|ಕಂಪನಿ]]''
|[[ಸ್ಕ್ರೀನ್ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ|ಅತ್ಯುತ್ತಮ ಪೋಷಕ ನಟ]]
|{{won}}
|style="text-align:center;"|<ref>{{cite news |author=Press Trust Of India |title=I have nothing to prove in Bollywood: Mohanlal |url=http://movies.ndtv.com/regional/i-have-nothing-to-prove-in-bollywood-mohanlal-624585 |accessdate=16 August 2015 |agency=[[Ndtv.com]] |date=17 April 2012 |location=[[Mumbai]] |archive-date=15 February 2016 |archive-url=https://web.archive.org/web/20160215235858/http://movies.ndtv.com/regional/i-have-nothing-to-prove-in-bollywood-mohanlal-624585 |url-status=live }}</ref>
|}
== ಸ್ಕ್ರೀನ್ ಪ್ರಶಸ್ತಿಗಳು ದಕ್ಷಿಣ ==
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಭಾಷೆ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1997
|''[[ಆರಾಂ ತಂಪುರನ್]], [[ಒರು ಯಾತ್ರಮೊಳಿ]], [[ಗುರು (1997 ಚಲನಚಿತ್ರ)|ಗುರು]], [[ಚಂದ್ರಲೇಖಾ (1997 ಚಲನಚಿತ್ರ)|ಚಂದ್ರಲೇಖಾ]]''
|ಅತ್ಯುತ್ತಮ ನಟ
|ಮಲಯಾಳಂ
|{{won}}
|style="text-align:center;"|<ref>{{Cite web|url=http://www.screenindia.com/old/apr17/cover2.htm|title=Screen south awards|access-date=2011-04-10|archive-date=2021-01-27|archive-url=https://web.archive.org/web/20210127211750/https://indianexpress.com/section/entertainment/|url-status=dead}}</ref>
|}
== ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು ==
[[ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು]] (IIFA) [[ಬಾಲಿವುಡ್|ಹಿಂದಿ ಸಿನೆಮಾ]]ದಲ್ಲಿನ ಉತ್ಕೃಷ್ಟತೆಯನ್ನು ಗೌರವಿಸಲು ವಿಜ್ಕ್ರಾಫ್ಟ್ ಇಂಟರ್ನ್ಯಾಷನಲ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಆಯೋಜಿಸುವ ವಾರ್ಷಿಕ ಕಾರ್ಯಕ್ರಮವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:27%;"| ನಾಮನಿರ್ದೇಶಿತ ಕೃತಿ
! scope="col" style="width:20%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಕಂಪನಿ (2002 ಚಲನಚಿತ್ರ)|ಕಂಪನಿ]]''
|[[IIFA ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ|ಅತ್ಯುತ್ತಮ ಪೋಷಕ ನಟ]]
|{{won}}
|style="text-align:center;"|<ref>{{cite web |url=http://iifa.com/iifa-years/iifa-years-2003/ |title=IIFA Through the Years – IIFA 2003 : South Africa |website=IIFA.com |access-date=2015-05-24 |archive-url=https://web.archive.org/web/20150208124732/http://iifa.com/iifa-years/iifa-years-2003/ |archive-date=2015-02-08 |url-status=dead }}</ref>
|}
== IIFA ಉತ್ಸವಂ ==
[[IIFA ಉತ್ಸವಂ]] ಎಂಬುದು [[ತೆಲುಗು ಸಿನೆಮಾ|ತೆಲುಗು]], [[ತಮಿಳು ಸಿನೆಮಾ|ತಮಿಳು]], [[ಮಲಯಾಳಂ ಸಿನೆಮಾ|ಮಲಯಾಳಂ]], ಮತ್ತು [[ಕನ್ನಡ ಸಿನೆಮಾ|ಕನ್ನಡ]] ಸಿನೆಮಾವನ್ನು ಒಳಗೊಂಡ ದಕ್ಷಿಣ ಭಾರತೀಯ ಸಿನೆಮಾದಲ್ಲಿನ ಕಲಾತ್ಮಕ ಮತ್ತು ತಾಂತ್ರಿಕ ಸಾಧನೆಗಳನ್ನು ಪ್ರತಿಫಲಿಸಲು ವಿಜ್ಕ್ರಾಫ್ಟ್ ಇಂಟರ್ನ್ಯಾಷನಲ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಆಯೋಜಿಸುವ ಕಾರ್ಯಕ್ರಮವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:25%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:20%;"| ಭಾಷೆ
! scope="col" style="width:3%;"| ಫಲಿತಾಂಶ
|-
| scope="row" rowspan="2"|2017
| ''[[ಜನತಾ ಗ್ಯಾರೇಜ್]]''
| ಪೋಷಕ ಪಾತ್ರದಲ್ಲಿ ಅತ್ಯುತ್ತಮ ಪ್ರದರ್ಶನ - ಪುರುಷ
| [[ತೆಲುಗು ಭಾಷೆ|ತೆಲುಗು]]
| {{nom}}
|-
| ''[[ಒಪ್ಪಂ]]'', ''[[ಪುಲಿಮುರುಗನ್]]''
| ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಪ್ರದರ್ಶನ - ಪುರುಷ
| [[ಮಲಯಾಳಂ]]
| {{nom}}
|}
== ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ==
[[ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]] (SIIMA) [[ತೆಲುಗು ಸಿನೆಮಾ|ತೆಲುಗು]], [[ತಮಿಳು ಸಿನೆಮಾ|ತಮಿಳು]], [[ಮಲಯಾಳಂ ಸಿನೆಮಾ|ಮಲಯಾಳಂ]], ಮತ್ತು [[ಕನ್ನಡ ಸಿನೆಮಾ|ಕನ್ನಡ]] ಚಲನಚಿತ್ರೋದ್ಯಮಗಳಲ್ಲಿನ ಅತ್ಯುತ್ತಮ ಕೆಲಸವನ್ನು ಗುರುತಿಸಲು ವಿಬ್ರಿ ಮೀಡಿಯಾ ಪ್ರತಿ ವರ್ಷವೂ ಪ್ರದಾನ ಮಾಡುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:10%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:12%;"| ಭಾಷೆ
! scope="col" style="width:2%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|[[SIIMA ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
| rowspan="5" |[[ಮಲಯಾಳಂ]]
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-features/tp-cinemaplus/the-south-shines/article3589844.ece |title=The South Shines |last=K. R. Manigandan |date=1 July 2012 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127032831/http://www.thehindu.com/todays-paper/tp-features/tp-cinemaplus/the-south-shines/article3589844.ece |url-status=live }}</ref>
|-
! scope="row" rowspan="2"| 2012
|''[[ರನ್ ಬೇಬಿ ರನ್|ರನ್ ಬೇಬಿ ರನ್]]''
|ಅತ್ಯುತ್ತಮ ಪುರುಷ ಪ್ಲೇಬ್ಯಾಕ್ ಗಾಯಕ
|{{nom}}
|
|-
|''[[ಸ್ಪಿರಿಟ್ (2012 ಚಲನಚಿತ್ರ)|ಸ್ಪಿರಿಟ್]]''
| rowspan="3" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.siima.in/winners-2012.php |title=Siima awards: 2012 winners |publisher=siima.in |url-status=dead |archive-url=https://web.archive.org/web/20141019172549/http://www.siima.in/winners-2012.php |archive-date=19 October 2014}}</ref>
|-
! scope="row"| 2013
|''[[ದೃಶ್ಯಂ]]''
|{{nom}}
|style="text-align:center;"|<ref name="ibtimes1">{{cite news |last=V. P. |first=Nicy |title=SIIMA 2014 Malayalam Nominations: Mohanlal, Mammootty, Fahadh, Prithviraj, Dileep Get the Nod |url=http://www.ibtimes.co.in/siima-2014-malayalam-nominations-mohanlal-mammootty-fahadh-prithviraj-dileep-get-nod-604897 |accessdate=26 March 2016 |work=[[International Business Times]] |date=20 July 2014 |archive-date=22 March 2016 |archive-url=https://web.archive.org/web/20160322181232/http://www.ibtimes.co.in/siima-2014-malayalam-nominations-mohanlal-mammootty-fahadh-prithviraj-dileep-get-nod-604897 |url-status=live }}</ref>
|-
! scope="row" rowspan=2| 2016
|''[[ಪುಲಿಮುರುಗನ್]]''
|{{won}}
|style="text-align:center;"|<ref name="ibtimes1" />
|-
|''[[ಜನತಾ ಗ್ಯಾರೇಜ್]]''
|ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ
|[[ತೆಲುಗು ಭಾಷೆ|ತೆಲುಗು]]
|{{nom}}
|style="text-align:center;"|<ref name="ibtimes1" />
|-
! scope="row" rowspan="2"| 2018
| -
|[[ಮಧ್ಯಪ್ರಾಚ್ಯ]]ದಲ್ಲಿ ಅತ್ಯಂತ ಜನಪ್ರಿಯ ತಾರೆ
| -
|{{won}}
|style="text-align:center;"|<ref name="auto">{{cite news|last=Saleem|first=Fazeena|title=Malayalam, Tamil film industry legends wow audience at South Indian movie awards show|url=https://www.thepeninsulaqatar.com/article/17/08/2019/Malayalam,-Tamil-film-industry-legends-wow-audience-at-South-Indian-movie-awards-show|accessdate=17 August 2019|work=[[The Peninsula Qatar]]|date=17 August 2019|archive-date=17 August 2019|archive-url=https://web.archive.org/web/20190817073126/https://www.thepeninsulaqatar.com/article/17/08/2019/Malayalam,-Tamil-film-industry-legends-wow-audience-at-South-Indian-movie-awards-show|url-status=live}}</ref>
|-
|''[[ಒಡಿಯನ್]]''
| rowspan="2" |ಅತ್ಯುತ್ತಮ ನಟ
| rowspan="2" |ಮಲಯಾಳಂ
|{{nom}}
|style="text-align:center;"|<ref name="auto" />
|-
!scope="row"| 2019
|[[ಲೂಸಿಫರ್ (2019 ಭಾರತೀಯ ಚಲನಚಿತ್ರ)|''ಲೂಸಿಫರ್'']]
|{{won}}
|<ref>{{Cite web|date=2021-09-19|title=Mohanlal, Dhanush, Manju Warrier, Samantha Akkineni among big winners at SIIMA 2021|url=https://indianexpress.com/article/entertainment/regional/mohanlal-dhanush-manju-warrier-samantha-akkineni-among-big-winners-at-siima-2021-7519773/|access-date=2021-09-20|website=The Indian Express|language=en}}</ref>
|}
== ಆನಂದ ವಿಕಟನ್ ಸಿನೆಮಾ ಪ್ರಶಸ್ತಿಗಳು ==
ಆನಂದ ವಿಕಟನ್ ಸಿನೆಮಾ ಪ್ರಶಸ್ತಿಗಳು ತಮಿಳು ಚಲನಚಿತ್ರೋದ್ಯಮದ ಜನರಿಗಾಗಿ ನಡೆಸುವ ವಾರ್ಷಿಕ ಪ್ರಶಸ್ತಿ ಸಮಾರಂಭವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2009
|''[[ಉನ್ನೈಪೋಲ್ ಒರುವನ್ (2009 ಚಲನಚಿತ್ರ)|ಉನ್ನೈಪೋಲ್ ಒರುವನ್]]''
|ಅತ್ಯುತ್ತಮ ನಟ
|{{won}}
|style="text-align:center;"|
|}
== ಆಲ್ ಇಂಡಿಯಾ ರೇಡಿಯೋ ಪ್ರಶಸ್ತಿಗಳು ==
[[ಆಲ್ ಇಂಡಿಯಾ ರೇಡಿಯೋ]] (ಅಥವಾ ಆಕಾಶವಾಣಿ) ಭಾರತದ ರಾಷ್ಟ್ರೀಯ [[ಸಾರ್ವಜನಿಕ ಪ್ರಸಾರ|ಸಾರ್ವಜನಿಕ ರೇಡಿಯೋ ಪ್ರಸಾರಕ]] ಮತ್ತು [[ಪ್ರಸಾರ್ ಭಾರತಿ]]ಯ ಒಂದು ವಿಭಾಗವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2007
|''[[ರಸಾಂತತ್ರಂ]]'', ''[[ವಡಕ್ಕುಮ್ನಾಧನ್]]'', ''[[ಕೀರ್ತಿ ಚಕ್ರ (ಚಲನಚಿತ್ರ)|ಕೀರ್ತಿ ಚಕ್ರ]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{cite news |title=AIR awards for Mohanlal, Padma Priya |url=http://www.thehindu.com/todays-paper/tp-national/tp-kerala/air-awards-for-mohanlal-padma-priya/article1932128.ece |accessdate=16 August 2015 |agency=[[The Hindu]] |date=18 October 2007 |location=[[Thiruvananthapuram]] |archive-date=27 January 2021 |archive-url=https://web.archive.org/web/20210127211750/https://www.thehindu.com/todays-paper/tp-national/tp-kerala/AIR-awards-for-Mohanlal-Padma-Priya/article14859143.ece |url-status=live }}</ref>
|}
== ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು ==
[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]] [[ದಿ ವಾಲ್ಟ್ ಡಿಸ್ನಿ ಕಂಪನಿ]]ಯ ಸಹಾಯಕ ಸಂಸ್ಥೆಯಾದ [[ಸ್ಟಾರ್ ಇಂಡಿಯಾ]] ಒಡೆತನದ [[ಏಷ್ಯಾನೆಟ್ (ಟಿವಿ ಚಾನೆಲ್)|ಏಷ್ಯಾನೆಟ್]] ದೂರದರ್ಶನ ಜಾಲದಿಂದ ಪ್ರತಿ ವರ್ಷವೂ (1998 ರಿಂದ) ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಬಾಲೆಟ್ಟನ್]]''
| rowspan="3" |ಅತ್ಯುತ್ತಮ ನಟ
|{{won}}
|style="text-align:center;"|<ref>{{Cite news |url=http://www.thehindu.com/2004/03/08/stories/2004030808370400.htm |title=Star-studded show marks award nite |date=8 March 2004 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127032201/http://www.thehindu.com/2004/03/08/stories/2004030808370400.htm |url-status=dead }}</ref>
|-
! scope="row"| 2005
|''[[ಥನ್ಮತ್ರ]]'', ''[[ಉದಯನಾನು ಥಾರಂ]]''
|{{won}}
|style="text-align:center;"|<ref>{{Cite news |url=http://www.hindustantimes.com/nm7/mohanlal-bags-ujala-asianet-film-award/article1-74116.aspx |archive-url=https://web.archive.org/web/20150527001920/http://www.hindustantimes.com/nm7/mohanlal-bags-ujala-asianet-film-award/article1-74116.aspx |archive-date=2015-05-27 |title=Mohanlal bags Ujala-Asianet film award |date=11 March 2006 |url-status=dead |agency=[[Hindustan Times]]}}</ref>
|-
! scope="row"| 2006
|''[[ಕೀರ್ತಿಚಕ್ರ]]''
|{{won}}
|style="text-align:center;"|<ref>{{cite news |title=Ujala-Asianet awards announced |url=http://www.thehindu.com/todays-paper/tp-national/tp-kerala/ujalaasianet-awards-announced/article1785448.ece |accessdate=16 August 2015 |agency=[[The Hindu]] |date=21 January 2007 |location=[[Thiruvananthapuram]] |archive-date=27 January 2021 |archive-url=https://web.archive.org/web/20210127211749/https://www.thehindu.com/todays-paper/tp-national/tp-kerala/Ujala-Asianet-awards-announced/article14708969.ece |url-status=live }}</ref>
|-
! scope="row"| 2007
|[[ಹಲೋ (2007 ಚಲನಚಿತ್ರ)|''ಹಲೋ'']], ''[[ಚೋಟ್ಟ ಮುಂಬೈ]]''
|ಅತ್ಯಂತ ಜನಪ್ರಿಯ ನಟ
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-features/tp-fridayreview/in-the-starlight/article1432897.ece |title=In the starlight |date=25 January 2008 |agency=[[The Hindu]] |access-date=26 May 2015 |archive-date=27 January 2021 |archive-url=https://web.archive.org/web/20210127211824/https://www.thehindu.com/todays-paper/tp-features/tp-fridayreview/In-the-starlight/article15397312.ece |url-status=live }}</ref>
|-
! scope="row"| 2008
|''[[ಮಡಂಪಿ]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.thehindu.com/todays-paper/tp-national/tp-kerala/Asianet-film-awards-2009-announced/article16349659.ece |title=Asianet film awards 2009 announced |date=4 December 2017 |work=The Hindu |access-date=4 December 2017 |archive-date=21 December 2019 |archive-url=https://web.archive.org/web/20191221153315/https://www.thehindu.com/todays-paper/tp-national/tp-kerala/Asianet-film-awards-2009-announced/article16349659.ece |url-status=live }}</ref>
|-
! scope="row"| 2009
|''[[ಭ್ರಮರಂ]], [[ಎವಿಡಂ ಸ್ವರ್ಗಮಾನು]]''
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-kerala/article676380.ece |title='Pazhassi Raja' selected as best film |date=4 January 2010 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127050252/http://www.thehindu.com/todays-paper/tp-national/tp-kerala/article676380.ece |url-status=live }}</ref>
|-
! scope="row"| 2010
|{{mdash}}
|ಗೋಲ್ಡನ್ ಸ್ಟಾರ್ ಪ್ರಶಸ್ತಿ
|{{won}}
|style="text-align:center;"|<ref>{{cite web |url=http://www.keralatv.in/2011/01/ujala-asianet-film-awards-2010/ |title=Ujala Asianet Film Awards 2011 |date=11 January 2011 |publisher=keralatv.in |access-date=14 November 2014 |archive-date=29 November 2014 |archive-url=https://web.archive.org/web/20141129020812/http://www.keralatv.in/2011/01/ujala-asianet-film-awards-2010/ |url-status=live }}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]], [[ಸ್ನೇಹವೀಡು]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://kerala9.com/news/ujala-asianet-film-awards-2012-winners-list/ |title=Ujala Asianet Film Awards 2012 Winners List |date=7 January 2012 |publisher=kerala9.com |access-date=14 November 2014 |archive-url=https://web.archive.org/web/20120110025652/http://kerala9.com/news/ujala-asianet-film-awards-2012-winners-list/ |archive-date=10 January 2012 |url-status=dead }}</ref>
|-
! scope="row"| 2012
|''[[ಸ್ಪಿರಿಟ್ (2012 ಚಲನಚಿತ್ರ)|ಸ್ಪಿರಿಟ್]], [[ಗ್ರ್ಯಾಂಡ್ಮಾಸ್ಟರ್ (2012 ಚಲನಚಿತ್ರ)|ಗ್ರ್ಯಾಂಡ್ಮಾಸ್ಟರ್]], [[ರನ್ ಬೇಬಿ ರನ್]]''
|{{won}}
|style="text-align:center;"|<ref>{{cite web |url=http://www.filmibeat.com/malayalam/news/2013/asianet-film-awards-2013-winners-list-102810.html |title=Asianet Film Awards 2013 – Winners List |date=21 January 2013 |publisher=filmibeat.com |author=Smitha |access-date=14 November 2014 |archive-date=7 November 2014 |archive-url=https://web.archive.org/web/20141107151040/http://www.filmibeat.com/malayalam/news/2013/asianet-film-awards-2013-winners-list-102810.html |url-status=live }}</ref><ref>{{cite web |title=Asianet Film Awards 2013 Winners |url=http://www.keralatv.in/2013/01/asianet-film-awards-2013-winners/ |date=21 January 2013 |publisher=keralatv.in |access-date=14 November 2014 |archive-url=https://web.archive.org/web/20141129020808/http://www.keralatv.in/2013/01/asianet-film-awards-2013-winners/ |archive-date=29 November 2014 |url-status=dead }}</ref>
|-
! scope="row"| 2013
| {{mdash}}
|ಸಹಸ್ರಮಾನದ ನಟ ಪ್ರಶಸ್ತಿ
|{{won}}
|style="text-align:center;"|<ref>[https://web.archive.org/web/20160401204601/http://www.metromatinee.com/MetromatineMoviewNews/newsoverview.php?NEWSId=16th-ujala-asianet-film-awards-2014-winners-list-7548%2F16th-ujala-asianet-film-awards-2014-winners-list-7548 16th Ujala Asianet Film Awards 2014 – Winners List]. Web.archive.org. Retrieved on 2017-05-31.</ref>
|-
! scope="row"| 2014
| {{mdash}}
| 'ಮಲಯಾಳಂ ಚಲನಚಿತ್ರೋದ್ಯಮದಲ್ಲಿ 35 ವರ್ಷಗಳು' ವಿಶೇಷ ಸ್ಮಾರಕ
|{{won}}
|style="text-align:center;"|<ref>{{cite web |author1=Akhila Menon |title=PHOTOS: Stars At 17th Ujala Asianet Film Awards |url=http://www.filmibeat.com/malayalam/news/2015/photos-stars-at-17-ujala-asianet-film-awards-170333.html |website=[[Filmibeat]].com |accessdate=9 February 2016 |date=13 January 2015 |archive-date=4 March 2016 |archive-url=https://web.archive.org/web/20160304002523/http://www.filmibeat.com/malayalam/news/2015/photos-stars-at-17-ujala-asianet-film-awards-170333.html |url-status=live }}</ref>
|-
! scope="row"| 2015
| {{mdash}}
|"ಸಹಸ್ರಮಾನದ ಸೂಪರ್ಸ್ಟಾರ್" ಎಂದು ಕಿರೀಟಧಾರಣೆ
|{{won}}
|style="text-align:center;"|<ref>{{cite news |author=Anu James |title=18th Asianet Film Awards: Vikram, Trisha, Prithviraj, Mohanlal, Nivin Pauly bag awards [Full winners' list+photos] |url=http://www.ibtimes.co.in/18th-asianet-film-awards-vikram-trisha-prithviraj-mohanlal-nivin-pauly-bag-awards-full-666090 |accessdate=9 February 2016 |agency=[[International Business Times]] |date=8 February 2016 |archive-date=21 December 2019 |archive-url=https://web.archive.org/web/20191221170748/https://www.ibtimes.co.in/18th-asianet-film-awards-vikram-trisha-prithviraj-mohanlal-nivin-pauly-bag-awards-full-666090 |url-status=live }}</ref>
|-
! scope="row"| 2016
|''[[ಒಪ್ಪಂ]]'', ''[[ಪುಲಿಮುರುಗನ್]]''
| rowspan="3" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite news |title=Asiavision Movie Awards 2016 announced: and the winners are... |url=http://english.manoramaonline.com/entertainment/entertainment-news/asiavision-movie-awards-2016-nivin-pauly-manju-warrier-mohanlal.html |archive-url=https://web.archive.org/web/20161116145545/http://english.manoramaonline.com/entertainment/entertainment-news/asiavision-movie-awards-2016-nivin-pauly-manju-warrier-mohanlal.html |archive-date=16 November 2016 |accessdate=25 November 2016 |work=[[Malayala Manorama]] |date=16 November 2016 |url-status=live}}</ref>
|-
! scope="row"| 2018
|''[[ಒಡಿಯನ್]]'', ''[[ಕಾಯಂಕುಳಂ ಕೊಚುನ್ನುನಿ (2018 ಚಲನಚಿತ್ರ)|ಕಾಯಂಕುಳಂ ಕೊಚುನ್ನುನಿ]]''
|{{won}}
|style="text-align:center;"|
|-
! scope="row"| 2019
|''[[ಲೂಸಿಫರ್ (2019 ಭಾರತೀಯ ಚಲನಚಿತ್ರ)|ಲೂಸಿಫರ್]]''
|{{won}}
|style="text-align:center;"|<ref>{{cite news|title=മോഹന്ലാല് മികച്ച നടന്, പാര്വതി നടി, മഞ്ജു തമിഴ് നടി, പൃഥ്വിരാജ് സംവിധായകന്; ഏഷ്യാനെറ്റ് ഫിലിം അവാര്ഡ്|url=https://www.asianetnews.com/entertainment-news/asianet-film-awards-2020-full-list-q5dwhx|accessdate=10 February 2020|work=[[Asianet News]]|date=8 February 2020|language=ml|archive-date=10 February 2020|archive-url=https://web.archive.org/web/20200210160821/https://www.asianetnews.com/entertainment-news/asianet-film-awards-2020-full-list-q5dwhx|url-status=live}}</ref>
|}
== ಸಿನೆಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು ==
[[ಸಿನೆಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು]] [[ಸಿನೆಮಾ ಎಕ್ಸ್ಪ್ರೆಸ್]] ಚಲನಚಿತ್ರ ನಿಯತಕಾಲಿಕೆಯ ಪರವಾಗಿ [[ಇಂಡಿಯನ್ ಎಕ್ಸ್ಪ್ರೆಸ್ ಲಿಮಿಟೆಡ್|ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪ್]] ನಿಂದ ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದಲ್ಲಿನ ವೃತ್ತಿಪರರ ಕಲಾತ್ಮಕ ಉತ್ಕೃಷ್ಟತೆಯನ್ನು ಗೌರವಿಸಲು ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
|[[7ನೇ ಸಿನೆಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು|1986]]
|''[[ಪಂಚಾಗ್ನಿ]]''
|ಅತ್ಯುತ್ತಮ ನಟ
|{{won}}
|<ref>{{Cite news |date=13 April 1987 |title=Cine artistes asked to broaden talents |pages=3 |work=[[The Indian Express]] |url=https://news.google.com/newspapers?id=y4plAAAAIBAJ&sjid=f54NAAAAIBAJ&pg=787%2C2870744 |access-date=28 May 2025}}{{cbignore}}</ref>
|}
== ವನಿತಾ ಚಲನಚಿತ್ರ ಪ್ರಶಸ್ತಿಗಳು ==
[[ವನಿತಾ ಚಲನಚಿತ್ರ ಪ್ರಶಸ್ತಿಗಳು]] [[ಮಲಯಾಳ ಮನೋರಮ]] ಸಮೂಹದ ಭಾಗವಾದ ಮಹಿಳಾ ನಿಯತಕಾಲಿಕೆ ''[[ವನಿತಾ]]'' 1998 ರಿಂದ ಪ್ರತಿ ವರ್ಷವೂ ಆಯೋಜಿಸುವ ವಾರ್ಷಿಕ ಪ್ರಶಸ್ತಿ ಸಮಾರಂಭವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಬಾಲೆಟ್ಟನ್]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref name="Balettan">{{cite web |url=http://www.filmibeat.com/malayalam/movies/balettan/awards.html |title=Balettan |publisher=filmibeat.com |access-date=2014-11-14 |archive-date=2014-11-26 |archive-url=https://web.archive.org/web/20141126115336/http://www.filmibeat.com/malayalam/movies/balettan/awards.html |url-status=live }}</ref>
|-
! scope="row"| 2005
|''[[ಥನ್ಮತ್ರ]]''
|{{won}}
|
|-
! scope="row"| 2007
|''[[ಹಲೋ (ಮಲಯಾಳಂ ಚಲನಚಿತ್ರ)|ಹಲೋ]], [[ಚೋಟ್ಟ ಮುಂಬೈ]]''
|ಅತ್ಯಂತ ಜನಪ್ರಿಯ ನಟ
|{{won}}
|style="text-align:center;"|<ref>{{cite web |url=https://www.indiaglitz.com/vanitha-awards-for-mammootty-meera-jasmine-malayalam-news-36410 |title=Vanitha awards for Mammootty, Meera Jasmine |date=7 February 2008 |work=indiaglitz.com |access-date=14 November 2014 |archive-date=24 September 2015 |archive-url=https://web.archive.org/web/20150924190651/http://www.indiaglitz.com/vanitha-awards-for-mammootty-meera-jasmine-malayalam-news-36410 |url-status=live }}</ref>
|-
! scope="row"| 2008
| ''[[ಟ್ವೆಂಟಿ:20 (ಚಲನಚಿತ್ರ)|ಟ್ವೆಂಟಿ:20]], [[ಮಡಂಪಿ]], [[ಆಕಾಶ ಗೋಪುರಂ]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |title=Nippon has announced the vanitha film awards |url=http://www.metromatinee.com/news-articles/nippon-has-announced-the-vanitha-film-awards-592 |publisher=metromatinee.com |date=19 February 2009 |accessdate=3 Nov 2014 |url-status=dead |archive-url=https://web.archive.org/web/20141103133303/http://www.metromatinee.com/news-articles/nippon-has-announced-the-vanitha-film-awards-592 |archive-date=3 November 2014}}</ref>
|-
! scope="row"| 2009
|''[[ಭ್ರಮರಂ]], [[ಎವಿಡಂ ಸ್ವರ್ಗಮಾನು]]''
|ಅತ್ಯಂತ ಜನಪ್ರಿಯ ನಟ
|{{won}}
|style="text-align:center;"|<ref>{{cite web |url=http://www.keralatv.in/2010/03/vanitha-film-awards-2010-on-surya-tv/ |title=Vanitha Film Awards 2010 on Surya TV |date=27 March 2010 |accessdate=13 Nov 2014 |publisher=keralatv.in |archive-date=29 November 2014 |archive-url=https://web.archive.org/web/20141129020935/http://www.keralatv.in/2010/03/vanitha-film-awards-2010-on-surya-tv/ |url-status=live }}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
| rowspan="4" |ಅತ್ಯುತ್ತಮ ನಟ
|{{won}}
|style="text-align:center;"|<ref name="kerals1">{{cite web |url=http://www.kerals.com/kerala/vanitha-film-awards-2012-announced/ |title=Vanitha Film Awards 2012 announced! |date=14 February 2012 |publisher=kerals.com |access-date=14 November 2014 |archive-date=25 December 2014 |archive-url=https://web.archive.org/web/20141225144558/http://www.kerals.com/kerala/vanitha-film-awards-2012-announced/ |url-status=live }}</ref>
|-
! scope="row"| 2016
|''[[ಒಪ್ಪಂ]], [[ಪುಲಿಮುರುಗನ್]]''
|{{won}}
|style="text-align:center;"|<ref name="kerals1" />
|-
! scope="row"| 2018
|''[[ಒಡಿಯನ್]]''
|{{won}}
|style="text-align:center;"|<ref>{{cite news|title=Vanitha Film Awards: Mohanlal wins Best Actor, Manju Warrier is Best Actress|url=https://english.manoramaonline.com/entertainment/entertainment-news/2019/03/02/vanitha-film-awards-winners-list-live-show-kochi.html|work=[[Malayala Manorama]]|date=3 March 2019|access-date=12 April 2019|archive-date=12 April 2019|archive-url=https://web.archive.org/web/20190412155933/https://english.manoramaonline.com/entertainment/entertainment-news/2019/03/02/vanitha-film-awards-winners-list-live-show-kochi.html|url-status=live}}</ref>
|-
! scope="row"| 2019
|''[[ಲೂಸಿಫರ್ (2019 ಭಾರತೀಯ ಚಲನಚಿತ್ರ)|ಲೂಸಿಫರ್]]''
|{{won}}
|style="text-align:center;"|<ref>{{cite news|author=സ്വന്തം ലേഖകൻ|title=മോഹൻലാൽ മികച്ച നടൻ, മഞ്ജു വാരിയർ മികച്ച നടി; ജനപ്രിയ താരങ്ങളായി ആസിഫ് അലിയും പാർവതിയും!|url=https://www.vanitha.in/specials/vanitha-film-awards-2020/magic-moments/vfa-awards-announced-kochi-bristo-ground-february.html|accessdate=10 February 2020|work=[[Vanitha]]|date=10 February 2020|language=ml|archive-date=10 February 2020|archive-url=https://web.archive.org/web/20200210160516/https://www.vanitha.in/specials/vanitha-film-awards-2020/magic-moments/vfa-awards-announced-kochi-bristo-ground-february.html|url-status=live}}</ref>
|}
== ಏಷ್ಯಾವಿಷನ್ ಪ್ರಶಸ್ತಿಗಳು ==
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:28%;"| ನಾಮನಿರ್ದೇಶಿತ ಕೃತಿ
! scope="col" style="width:14%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2008
|''[[ಇನ್ನತೆ ಚಿಂತ ವಿಷಯಂ]], [[ಮಡಂಪಿ]], [[ಕುರುಕ್ಷೇತ್ರ (2008 ಚಲನಚಿತ್ರ)|ಕುರುಕ್ಷೇತ್ರ]], [[ಪಕಲ್ ನಕ್ಷತ್ರಂಗಳ್]]''
| rowspan="3" |ಅತ್ಯುತ್ತಮ ನಟ
|{{won}}
|
|-
! scope="row"| 2009
|''[[ಭ್ರಮರಂ]]''
|{{won}}
|
|-
! scope="row" rowspan="3"| 2012
|''[[ಸ್ಪಿರಿಟ್ (2012 ಚಲನಚಿತ್ರ)|ಸ್ಪಿರಿಟ್]]'', ''[[ರನ್ ಬೇಬಿ ರನ್ (2012 ಚಲನಚಿತ್ರ)|ರನ್ ಬೇಬಿ ರನ್]]''
|{{won}}
|
|-
|''-''
|ಅತ್ಯಂತ ಪ್ರಭಾವಶಾಲಿ ಮಲಯಾಳಿ<ref>{{Cite web |url=https://www.youtube.com/watch?v=YHNTYKG-5rs |title=Mohanlal receiving "Most Influential Malayali" Award in Asiavision TV Awards – YouTube |website=[[YouTube]] |date=23 June 2012 |access-date=2020-05-26 |archive-date=2016-04-16 |archive-url=https://web.archive.org/web/20160416083407/https://www.youtube.com/watch?v=YHNTYKG-5rs |url-status=live }}</ref>
|{{won}}
|
|-
|''[[ರನ್ ಬೇಬಿ ರನ್ (2012 ಚಲನಚಿತ್ರ)|ರನ್ ಬೇಬಿ ರನ್]]''
|ಗಾಯನದಲ್ಲಿ ಹೊಸ ಸಂವೇದನೆ – ಪುರುಷ
|{{won}}
|
|-
! scope="row"| 2016
|''[[ಒಪ್ಪಂ]]'', ''[[ಪುಲಿಮುರುಗನ್]]''
|ಜನಪ್ರಿಯ ನಟ
|{{won}}
|
|}
== ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು ==
ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು ದೈನಂದಿನ ವಾರ್ತಾಪತ್ರಿಕೆ [[ಮಾತೃಭೂಮಿ]]ಯಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1999
|''[[ವನಪ್ರಸ್ಥಂ]]''
| rowspan="3" |ಅತ್ಯುತ್ತಮ ನಟ
|{{won}}
|
|-
! scope="row"| 2003
|''[[ಬಾಲೆಟ್ಟನ್]]''
|{{won}}
|style="text-align:center;"|<ref>{{cite news |title=Padam Onnu Oru Vilapam bags four awards |url=http://timesofindia.indiatimes.com/city/Padam-Onnu-Oru-Vilapam-bags-four-awards/articleshow/570241.cms |accessdate=16 August 2015 |work=[[India Times]] |agency=[[The Times of India]] |date=19 March 2004 |location=[[Chennai]] |archive-date=26 December 2016 |archive-url=https://web.archive.org/web/20161226173400/http://timesofindia.indiatimes.com/city/Padam-Onnu-Oru-Vilapam-bags-four-awards/articleshow/570241.cms |url-status=live }}</ref>
|-
! scope="row"| 2005
|''[[ಥನ್ಮತ್ರ]]''
|{{won}}
|
|-
! scope="row"| 2006
|''[[ವಡಕ್ಕುಮ್ನಾಧನ್|ವಡಕ್ಕುಮ್ನಾಥನ್]]''
|ಅಭಿನಯದಲ್ಲಿ ಉತ್ಕೃಷ್ಟತೆ
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-tamilnadu/mathrubhumi-film-awards-announced/article1911794.ece |title=Mathrubhumi film awards announced |date=15 September 2007 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127045757/http://www.thehindu.com/todays-paper/tp-national/tp-tamilnadu/mathrubhumi-film-awards-announced/article1911794.ece |url-status=live }}</ref>
|-
! scope="row"| 2008
|''[[ಆಕಾಶ ಗೋಪುರಂ]], [[ಕುರುಕ್ಷೇತ್ರ (2008 ಚಲನಚಿತ್ರ)|ಕುರುಕ್ಷೇತ್ರ]], [[ಪಕಲ್ ನಕ್ಷತ್ರಂಗಳ್]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.afaqs.com/perl/media/media_newslets/index.html?id=40008 |title=Amrita TV to telecast Idea Mathrubhumi Amrita Film Awards |publisher=afaqs.com |url-status=dead |archive-url=https://web.archive.org/web/20141125032131/http://www.afaqs.com/perl/media/media_newslets/index.html?id=40008 |archive-date=25 November 2014}}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|{{won}}
|style="text-align:center;"|<ref>{{cite web |url=http://www.keralatv.in/2012/02/mathrubhumi-kalyan-silks-film-awards-2012-winners/ |title=Mathrubhumi Kalyan Silks Film Awards 2012 Winners |date=16 February 2012 |publisher=keralatv.in |access-date=14 November 2014 |archive-date=29 November 2014 |archive-url=https://web.archive.org/web/20141129020805/http://www.keralatv.in/2012/02/mathrubhumi-kalyan-silks-film-awards-2012-winners/ |url-status=live }}</ref>
|}
== ಅಮೃತ ಚಲನಚಿತ್ರ ಪ್ರಶಸ್ತಿಗಳು ==
ಅಮೃತ ಚಲನಚಿತ್ರ ಪ್ರಶಸ್ತಿಗಳು [[ಅಮೃತ ಟಿವಿ]] ದೂರದರ್ಶನ ಚಾನೆಲ್ನಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2006
|''[[ಕೀರ್ತಿ ಚಕ್ರ (ಚಲನಚಿತ್ರ)|ಕೀರ್ತಿ ಚಕ್ರ]]'', ''[[ವಡಕ್ಕುಮ್ನಾಧನ್|ವಡಕ್ಕುಮ್ನಾಥನ್]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-kerala/amrita-film-awards-announced/article1838347.ece |title=Amrita film awards announced |date=5 May 2007 |agency=[[The Hindu]] |access-date=26 May 2015 |archive-date=27 January 2021 |archive-url=https://web.archive.org/web/20210127211902/https://www.thehindu.com/todays-paper/tp-national/tp-kerala/Amrita-film-awards-announced/article14759558.ece |url-status=live }}</ref>
|-
! scope="row"| 2010
|{{mdash}}
|ಅಭಿನಯ ಕೀರ್ತಿ ಪ್ರಶಸ್ತಿ
|{{won}}
|style="text-align:center;"|<ref>{{cite news |url=http://www.bestmediainfo.com/2011/06/amrita-fefka-film-awards-announced/ |title=Amrita FEFKA Film Awards Announced |date=2 June 2011 |publisher=Best Media Info |accessdate=2 June 2011 |archive-date=3 June 2011 |archive-url=https://web.archive.org/web/20110603135529/http://www.bestmediainfo.com/2011/06/amrita-fefka-film-awards-announced/ |url-status=live }}</ref><ref>{{cite web |url=http://www.indiaglitz.com/channels/malayalam/article/67286.html |title=Amritha awards for Mammootty, Kavya and T D Dasan |date=2 June 2011 |work=Indiaglitz |accessdate=2 June 2011 |archive-date=27 January 2021 |archive-url=https://web.archive.org/web/20210127205023/https://www.indiaglitz.com/malayalam |url-status=dead }}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
| rowspan="3" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.keralatv.in/2012/04/winners-of-amrita-film-awards-2012/ |title=Winners Of Amrita Film Awards 2012 Announced |date=30 April 2012 |publisher=keralatv.in |access-date=14 November 2014 |archive-date=29 November 2014 |archive-url=https://web.archive.org/web/20141129020803/http://www.keralatv.in/2012/04/winners-of-amrita-film-awards-2012/ |url-status=live }}</ref>
|-
! scope="row"| 2012
|''[[ಸ್ಪಿರಿಟ್ (2012 ಚಲನಚಿತ್ರ)|ಸ್ಪಿರಿಟ್]]''
|{{won}}
|style="text-align:center;"|<ref>{{cite web |url=http://www.keralatv.in/2013/05/amrita-film-awards-2013-telecast-details/ |title=Amrita Film Awards To be Telecast on May 31st, June 1st & 2nd |date=30 May 2013 |publisher=keralatv.in |access-date=14 November 2014 |archive-date=29 November 2014 |archive-url=https://web.archive.org/web/20141129020811/http://www.keralatv.in/2013/05/amrita-film-awards-2013-telecast-details/ |url-status=live }}</ref>
|-
! scope="row"| 2013
|''[[ದೃಶ್ಯಂ]]''
|{{won}}
|style="text-align:center;"|<ref>{{cite web |url=http://www.amritatv.com/afa2014/awardcatogories.html |archive-url=https://web.archive.org/web/20160321013952/http://www.amritatv.com/afa2014/awardcatogories.html |archive-date=2016-03-21 |title=Amrita film awards |publisher=amritatv.com}}</ref>
|}
== ಜೈಹಿಂದ್ ಚಲನಚಿತ್ರ ಪ್ರಶಸ್ತಿಗಳು ==
ಜೈಹಿಂದ್ ಚಲನಚಿತ್ರ ಪ್ರಶಸ್ತಿಗಳು [[ಜೈಹಿಂದ್ ಟಿವಿ]] ದೂರದರ್ಶನ ಚಾನೆಲ್ನಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2007
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.kerala.com/news_kerala_Chandy_game_for_8_1969.html |title=Jaihind film awards announced |publisher=kerala.com |access-date=2014-11-14 |archive-date=2014-11-29 |archive-url=https://web.archive.org/web/20141129014612/http://www.kerala.com/news_kerala_Chandy_game_for_8_1969.html |url-status=live }}</ref>
|-
! scope="row"| 2010
|{{mdash}}
|ಚಲಚಿತ್ರ ರತ್ನ ಪ್ರಶಸ್ತಿ
|{{won}}
|style="text-align:center;"|<ref>{{cite web |url=https://www.indiaglitz.com/jai-hind-film-awards-announced-tamilfont-news-58720 |title=Jai Hind Film Awards announced |date=20 July 2010 |accessdate=14 Nov 2014 |work=indiaglitz.com |archive-date=24 September 2015 |archive-url=https://web.archive.org/web/20150924172810/http://www.indiaglitz.com/jai-hind-film-awards-announced-tamilfont-news-58720 |url-status=live }}</ref><ref>{{cite web |url=http://www.metromatinee.com/news-articles/jai-hind-film-awards-2010-announced-2451 |archive-url=https://web.archive.org/web/20160406081142/http://www.metromatinee.com/news-articles/jai-hind-film-awards-2010-announced-2451 |archive-date=2016-04-06 |title=Jai Hind Film Awards 2010 announced !! |date=25 July 2010 |publisher=metromatinee.com}}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
| rowspan="2" |ಅತ್ಯುತ್ತಮ ನಟ
|{{won}}
|
|-
! scope="row"| 2013
|''[[ದೃಶ್ಯಂ]]''
|{{won}}
|
|}
== ಜನ್ಮಭೂಮಿ ಸಿನೆಮಾ ಪ್ರಶಸ್ತಿಗಳು ==
ಜನ್ಮಭೂಮಿ ಸಿನೆಮಾ ಪ್ರಶಸ್ತಿಗಳು ದೈನಂದಿನ ವಾರ್ತಾಪತ್ರಿಕೆ [[ಜನ್ಮಭೂಮಿ]]ಯಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2016
|''[[ಒಪ್ಪಂ]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref>{{Cite web|url=https://keralaonlinenews.com/|title=||website=keralaonlinenews.com|access-date=2020-09-20|archive-date=2020-09-01|archive-url=https://web.archive.org/web/20200901234355/https://keralaonlinenews.com/|url-status=live}}</ref>
|-
! scope="row"| 2018
|''[[ಒಡಿಯನ್]]''
|{{won}}
|style="text-align:center;"|<ref>{{cite news|title=Janmabhumi Cinema Awards 2018: Mohanlal Actor and Nimisha Sajayan Actress|url=https://global.janmabhumidaily.com/news861146|accessdate=18 July 2019|work=[[Janmabhumi]]|date=12 July 2019|archive-date=18 July 2019|archive-url=https://web.archive.org/web/20190718092211/https://global.janmabhumidaily.com/news861146|url-status=live}}</ref>
|}
== ದಿ ಕೊಚ್ಚಿ ಟೈಮ್ಸ್ ಚಲನಚಿತ್ರ ಪ್ರಶಸ್ತಿಗಳು ==
ದಿ ಕೊಚ್ಚಿ ಟೈಮ್ಸ್ ಚಲನಚಿತ್ರ ಪ್ರಶಸ್ತಿಗಳು [[ದಿ ಟೈಮ್ಸ್ ಆಫ್ ಇಂಡಿಯಾ]]ನ ಕೊಚ್ಚಿ ಟೈಮ್ಸ್ ಸುದ್ದಿ ವಿಭಾಗದಿಂದ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|ಅತ್ಯುತ್ತಮ ನಟ – ಪುರುಷ
|{{won}}
|style="text-align:center;"|<ref>{{cite news |url=https://timesofindia.indiatimes.com/entertainment/regional/malayalam/news-and-interviews/The-Kochi-Times-Film-Awards-2011/articleshow/14341029.cms |title=The Kochi Times Film Awards 2011 |date=23 June 2012 |access-date=2013-07-04 |archive-date=2013-10-04 |archive-url=https://web.archive.org/web/20131004233019/http://articles.timesofindia.indiatimes.com/2012-06-23/news-and-interviews/32369964_1_video-mohanlal-kavya-madhavan |work=[[The Times of India]] |url-status=live }}</ref>
|}
== ಕೇರಳ ಚಲನಚಿತ್ರ ಪ್ರೇಕ್ಷಕ ಮಂಡಳಿ ಪ್ರಶಸ್ತಿಗಳು ==
ಕೇರಳ ಚಲನಚಿತ್ರ ಪ್ರೇಕ್ಷಕ ಮಂಡಳಿ ಪ್ರಶಸ್ತಿಗಳು ಕೇರಳ ಚಲನಚಿತ್ರ ಪ್ರೇಕ್ಷಕ ಮಂಡಳಿಯಿಂದ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಬಾಲೆಟ್ಟನ್]]''
| rowspan="4" |ಅತ್ಯುತ್ತಮ ನಟ
|{{won}}
|style="text-align:center;"|<ref name="Balettan" />
|-
! scope="row"| 2004
|''[[ವಿಸ್ಮಯಥುಂಬಾತು]]'', ''[[ಮಂಪಳಕ್ಕಾಲಂ]]''
|{{won}}
|
|-
! scope="row"| 2005
|''[[ಥನ್ಮತ್ರ]]''
|{{won}}
|
|-
! scope="row"| 2007
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]''
|{{won}}
|style="text-align:center;"|<ref>{{cite web |url=https://www.indiaglitz.com/audience-council-award-for-mohanlal-kavya-madhavan-malayalam-news-36730 |title=Audience council award for Mohanlal, Kavya Madhavan |date=21 February 2008 |work=indiaglitz.com |access-date=14 November 2014 |archive-date=24 September 2015 |archive-url=https://web.archive.org/web/20150924061450/http://www.indiaglitz.com/audience-council-award-for-mohanlal-kavya-madhavan-malayalam-news-36730 |url-status=live }}</ref>
|}
== ವಿ. ಶಾಂತಾರಾಮ್ ಪ್ರಶಸ್ತಿಗಳು ==
1993 ರಲ್ಲಿ ಸ್ಥಾಪಿಸಲಾದ ವಿ. ಶಾಂತಾರಾಮ್ ಪ್ರಶಸ್ತಿಗಳು, [[ಭಾರತ ಸರ್ಕಾರ]], [[ಮಹಾರಾಷ್ಟ್ರ ಸರ್ಕಾರ]], ಮತ್ತು ವಿ. ಶಾಂತಾರಾಮ್ ಮೋಷನ್ ಪಿಕ್ಚರ್ ಸೈಂಟಿಫಿಕ್ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಶನ್ ಸ್ಥಾಪಿಸಿದವು.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2008
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]'', ''[[ಆಕಾಶ ಗೋಪುರಂ]]''
| rowspan="2" |ಅತ್ಯುತ್ತಮ ನಟ
|{{nom}}
|style="text-align:center;"|<ref>{{cite web |url=http://businessofcinema.com/bollywood-news/nominations-announced-for-v-shantaram-awards-2008/25824 |title=Nominations announced for V Shantaram Awards 2008 |publisher=Business of Cinema |date=19 November 2008 |accessdate=5 April 2016 |last=BOC Editorial |archive-date=22 April 2016 |archive-url=https://web.archive.org/web/20160422002454/http://businessofcinema.com/bollywood-news/nominations-announced-for-v-shantaram-awards-2008/25824 |url-status=live }}</ref>
|-
! scope="row"| 2009
|''[[ಭ್ರಮರಂ]]''
|{{nom}}
|style="text-align:center;"|<ref>{{cite news |url=http://www.dnaindia.com/entertainment/report-actress-sandhya-to-be-honoured-at-v-shantaram-awards-1325669 |title=Actress Sandhya to be Honoured at V Shantaram Awards |work=[[Daily News and Analysis]] |date=20 December 2009 |accessdate=5 April 2016 |last=Press Trust of India |location=Mumbai |archive-date=8 August 2016 |archive-url=https://web.archive.org/web/20160808032030/http://www.dnaindia.com/entertainment/report-actress-sandhya-to-be-honoured-at-v-shantaram-awards-1325669 |url-status=live }}</ref>
|}
== [[ರಾಮು ಕಾರಿಯಾತ್]] ಪ್ರಶಸ್ತಿಗಳು ==
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"|2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{cite web|url=http://cinemadoctor.blogspot.com/2012/01/ramu-karyat-award-for-mohan-lal-kavya.html|title=Ramu Kariat Awards|access-date=27 January 2012|archive-date=30 January 2012|archive-url=https://web.archive.org/web/20120130131254/http://cinemadoctor.blogspot.com/2012/01/ramu-karyat-award-for-mohan-lal-kavya.html|url-status=live}}</ref>
|}
== ಇತರ ಪ್ರಶಸ್ತಿಗಳು ಮತ್ತು ಮನ್ನಣೆಗಳು ==
*1977-78 ಕೇರಳ ರಾಜ್ಯ ಕುಸ್ತಿ ಚಾಂಪಿಯನ್<ref name="blackbelt">[http://newindianexpress.com/entertainment/malayalam/article1310726.ece "Blackbelt for Mohanlal"] {{Webarchive|url=https://web.archive.org/web/20130413204428/http://newindianexpress.com/entertainment/malayalam/article1310726.ece |date=2013-04-13 }}. ''[[The New Indian Express]]''. 23 October 2012. Retrieved 24 October 2012.</ref>
*2003 [[ಭಾರತೀಯ ವೈದ್ಯಕೀಯ ಸಂಘ]]ದಿಂದ ''ವರ್ಷದ ಕೊಡುಗೆದಾರ'' ಗೌರವ<ref>{{Cite web |date=2003-05-13 |title=IMA Award for Mohanlal |url=https://mohanlalonline.com/Content/ima_award_for_mohanlal./ |url-status=live |archive-url=https://web.archive.org/web/20231003180421/https://mohanlalonline.com/Content/ima_award_for_mohanlal./ |archive-date=2023-10-03 |access-date=2024-07-26 |website=MohanlalOnline}}</ref>
*2005 [[ಜೆ.ಸಿ. ಡೇನಿಯಲ್#ಜೆ.ಸಿ. ಫೌಂಡೇಶನ್ ಪ್ರಶಸ್ತಿ|ಜೆ.ಸಿ. ಫೌಂಡೇಶನ್ ಪ್ರಶಸ್ತಿಗಳು]] ಅತ್ಯುತ್ತಮ ನಟ – [[ಥನ್ಮತ್ರ]]<ref name=":0">{{Citation|title=Thanmathra|date=2021-05-10|url=https://en.wikipedia.org/w/index.php?title=Thanmathra&oldid=1022432269|work=Wikipedia|language=en|access-date=2021-07-09}}</ref>
*2005 ಕಲಾ ಕೇರಳಂ ಪ್ರಶಸ್ತಿ ಅತ್ಯುತ್ತಮ ನಟ – [[ಥನ್ಮತ್ರ]]<ref name=":0" />
*2005 ರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಅತ್ಯುತ್ತಮ ನಟ – [[ಥನ್ಮತ್ರ]]<ref name=":0" />
*2006 [[CNN-IBN]] ಸಮೀಕ್ಷೆ – ಅತ್ಯಂತ ಜನಪ್ರಿಯ ಕೇರಳಿ ಪ್ರಶಸ್ತಿ<ref>{{Cite news |url=http://ibnlive.in.com/news/mohanlal-tops-popular-keralite-poll/25523-3.html |title=Mohanlal tops popular Keralite poll |publisher=CNN-IBN |date=6 November 2006 |work=ibnlive.in.com |url-status=dead |archive-url=https://web.archive.org/web/20141010015646/http://ibnlive.in.com/news/mohanlal-tops-popular-keralite-poll/25523-3.html |archive-date=10 October 2014}}</ref>
*2007 ಕೇರಳ [[HIV/AIDS|ಏಡ್ಸ್]] ನಿಯಂತ್ರಣ ಸೊಸೈಟಿ – ಸದ್ಭಾವನಾ ರಾಯಭಾರಿ<ref>{{Cite news |url=http://zeenews.india.com/home/mohanlal-goodwill-ambassador-for-aids-awareness-prog_359645.html |title=Mohanlal goodwill ambassador for AIDS awareness prog |date=12 March 2007 |agency=[[Zee News]] |access-date=24 May 2015 |archive-date=24 May 2015 |archive-url=https://web.archive.org/web/20150524213445/http://zeenews.india.com/home/mohanlal-goodwill-ambassador-for-aids-awareness-prog_359645.html |url-status=live }}</ref>
*2009 ಕೇರಳ ರಾಜ್ಯ ಅಥ್ಲೆಟಿಕ್ಸ್ – ಸದ್ಭಾವನಾ ರಾಯಭಾರಿ<ref>{{Cite news |url=http://www.thehindu.com/todays-paper/tp-sports/actor-mohanlal-runs-for-kerala-athletes/article129968.ece |title=Actor Mohanlal runs for Kerala athletes |date=1 November 2009 |access-date=24 May 2015 |archive-date=27 January 2021 |archive-url=https://web.archive.org/web/20210127211831/https://www.thehindu.com/todays-paper/tp-sports/Actor-Mohanlal-runs-for-Kerala-athletes/article16470312.ece |url-status=live }}</ref>
*2009 [[ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್]] "ವರ್ಷದ ವ್ಯಕ್ತಿಗಳು" ಪ್ರಶಸ್ತಿ<ref name="onlookers">{{Cite web |title=Interesting Facts about Mohanlal |date=27 January 2015 |url=http://onlookersmedia.in/onlookerslive/10-interesting-facts-about-mohanlal/ |url-status=live |archive-url=https://web.archive.org/web/20190908133435/http://onlookersmedia.in/onlookerslive/10-interesting-facts-about-mohanlal |archive-date=2019-09-08 |access-date=2020-05-07}}</ref>
*2009 [[ಚಿತ್ರ ತಿರುನಾಳ್ ಬಲರಾಮ ವರ್ಮ#ಶ್ರೀ ಚಿತ್ರ ತಿರುನಾಳ್ ರಾಷ್ಟ್ರೀಯ ಪ್ರಶಸ್ತಿ|ಶ್ರೀ ಚಿತ್ರ ತಿರುನಾಳ್ ರಾಷ್ಟ್ರೀಯ ಪ್ರಶಸ್ತಿ]]<ref>{{Cite web |date=19 September 2009 |title=Chithira Tirunal award for Mohanlal |url=https://www.thehindu.com/news/cities/Thiruvananthapuram/Chithira-Tirunal-award-for-Mohanlal/article16882326.ece |url-status=live |archive-url=https://web.archive.org/web/20210127211310/https://www.thehindu.com/news/cities/Thiruvananthapuram/Chithira-Tirunal-award-for-Mohanlal/article16882326.ece |archive-date=27 January 2021 |website=[[The Hindu]]}}</ref>
*2009 ವಾರ್ಷಿಕ ಮಲಯಾಳಂ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ನಟ – [[ಭ್ರಮರಂ]]<ref name=":1">{{Citation|title=Bhramaram|date=2021-06-20|url=https://en.wikipedia.org/w/index.php?title=Bhramaram&oldid=1029569132|work=Wikipedia|language=en|access-date=2021-07-09}}</ref>
*2009 [[ಕೈರಳಿ ಟಿವಿ]] ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ನಟ – [[ಭ್ರಮರಂ]]<ref name=":1" />
*2009 ಜೇಸೀ ಪ್ರಶಸ್ತಿ ಅತ್ಯುತ್ತಮ ನಟ – [[ಭ್ರಮರಂ]]<ref name=":1" />
*2010 [[ರೀಡರ್ಸ್ ಡೈಜೆಸ್ಟ್]] ಅವರನ್ನು "100 ಅತ್ಯಂತ ವಿಶ್ವಾಸಾರ್ಹ ಭಾರತೀಯರು" ಪಟ್ಟಿಯಲ್ಲಿ ಸೇರಿಸಿತು.<ref>{{Cite news |url=http://www.hindustantimes.com/newdelhi/kalam-ratan-tata-india-s-most-trusted-mayawati-least/article1-514441.aspx |title=Kalam, Ratan Tata India's most trusted, Mayawati least |last=IANS |date=2 March 2010 |agency=[[Hindustan Times]] |url-status=dead |archive-url=https://web.archive.org/web/20150524194509/http://www.hindustantimes.com/newdelhi/kalam-ratan-tata-india-s-most-trusted-mayawati-least/article1-514441.aspx |archive-date=24 May 2015}}</ref>
*2010 [[ಥಿಕ್ಕುರಿಸ್ಸಿ ಸುಕುಮಾರನ್ ನಾಯರ್]] ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಅವರ ಭಾರತೀಯ ಸಿನೆಮಾಗೆ ನೀಡಿದ ಕೊಡುಗೆಗಳಿಗಾಗಿ.<ref>{{cite news |url=http://www.newindianexpress.com/entertainment/malayalam/article479225.ece |title=Thikkurissy award for Mohanlal |publisher=[[The New Indian Express]] |date=29 September 2010 |access-date=5 April 2016 |archive-date=18 April 2016 |archive-url=https://web.archive.org/web/20160418060119/http://www.newindianexpress.com/entertainment/malayalam/article479225.ece |url-status=dead }}</ref>
*2010 ಕೇರಳ [[ಕೈಮಗ್ಗ]] ಉದ್ಯಮ – ಸದ್ಭಾವನಾ ರಾಯಭಾರಿ<ref>{{cite web |url=http://movies.ndtv.com/movie_Story.aspx?id=ENTEN20100142599 |archive-url=https://archive.today/20120729054009/http://movies.ndtv.com/movie_Story.aspx?id=ENTEN20100142599 |url-status=dead |archive-date=29 July 2012 |title=Mohanlal made goodwill ambassador of handloom textiles |website=NDTVmovies.com |date=31 May 2010}}</ref>
*2011 [[ಡೆಕ್ಕನ್ ಕ್ರಾನಿಕಲ್]] ಸಮೀಕ್ಷೆ – ಅತ್ಯಂತ ಜನಪ್ರಿಯ ಕೇರಳಿ<ref>{{Cite web|url=http://malayalamfilimnews.blogspot.com/2011/03/mohanlal-most-popular-keralite-2011.html|title=Malayalam Film News: Mohanlal – Most Popular Keralite 2011 Survey By Deccan Chronicle.|date=28 March 2011|access-date=13 May 2020|archive-date=27 January 2021|archive-url=https://web.archive.org/web/20210127211825/http://malayalamfilimnews.blogspot.com/2011/03/mohanlal-most-popular-keralite-2011.html|url-status=live}}</ref>
*2011 ಕೇರಳ ಚಲನಚಿತ್ರ ನಿರ್ಮಾಪಕರ ಸಂಘ ಅತ್ಯುತ್ತಮ ನಟ – [[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]<ref name=":2">{{Citation|title=Pranayam|date=2021-05-11|url=https://en.wikipedia.org/w/index.php?title=Pranayam&oldid=1022658419|work=Wikipedia|language=en|access-date=2021-07-09}}</ref>
*2011 ವೀವರ್ಸ್ ಚಾಯ್ಸ್ ಪ್ರಶಸ್ತಿಗಳು ಅತ್ಯುತ್ತಮ ನಟ – [[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]<ref name=":2" />
*2011 ನಾನಾ ಚಲನಚಿತ್ರ ಪ್ರಶಸ್ತಿಗಳು ವಿಶೇಷ ತೀರ್ಪುಗಾರರ ಉಲ್ಲೇಖ – [[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]<ref name=":2" />
*2011 ರಿಪೋರ್ಟರ್ ಟಿವಿ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ನಟ – [[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]<ref name=":2" />
*2012 ಅವರ ಚಲನಚಿತ್ರ [[ಇರುವರ್]] ಅನ್ನು [[ಬ್ರಿಟಿಷ್ ಫಿಲ್ಮ್ ಇನ್ಸ್ಟಿಟ್ಯೂಟ್]] [[ಸೈಟ್ ಅಂಡ್ ಸೌಂಡ್]] "ಎಲ್ಲಾ ಕಾಲದ 1000 ಶ್ರೇಷ್ಠ ಚಲನಚಿತ್ರಗಳು" ಪಟ್ಟಿಯಲ್ಲಿ ಸೇರಿಸಲಾಯಿತು.
*2013 ''[[ಔಟ್ಲುಕ್ (ಭಾರತೀಯ ನಿಯತಕಾಲಿಕೆ)|ಔಟ್ಲುಕ್ ಇಂಡಿಯಾ]]'' – "ಕೇರಳದಿಂದ ಅತ್ಯಂತ ಪ್ರಭಾವಶಾಲಿ ಭಾರತೀಯ".<ref>{{cite web |url=http://www.outlookindia.com/content11168.asp#I-Day%20Special:%20India%27s%20Most%20Influential |title=India's most influential |publisher=OutlookIndia.com |accessdate=15 August 2013 |url-status=dead |archive-url=https://web.archive.org/web/20130814000623/http://www.outlookindia.com/content11168.asp |archive-date=14 August 2013}}</ref><ref>{{cite web |url=http://www.outlookindia.com/article.aspx?287338 |title=Mohanlal – The Most Inflential Indian from Kerala |publisher=OutlookIndia.com |accessdate=15 August 2013 |author=Minu Ittyipe |archive-date=14 August 2013 |archive-url=https://web.archive.org/web/20130814172031/http://www.outlookindia.com/article.aspx?287338 |url-status=live }}</ref>
*2013 ''[[ಫೋರ್ಬ್ಸ್ (ಭಾರತ)|ಫೋರ್ಬ್ಸ್ ಇಂಡಿಯಾ]]'' 1991 ರಲ್ಲಿ ''ಭಾರತಂ'' ನಲ್ಲಿ ಅವರ ಪಾತ್ರವನ್ನು "ಭಾರತೀಯ ಸಿನೆಮಾದ 25 ಶ್ರೇಷ್ಠ ಅಭಿನಯ ಪ್ರದರ್ಶನಗಳು" ಪಟ್ಟಿಯಲ್ಲಿ ಸೇರಿಸಿತು.<ref>Prasad, Shishir. (2013-04-27) [http://forbesindia.com/article/100-years-of-indian-cinema/25-greatest-acting-performances-of-indian-cinema/35125/0 Forbes India Magazine – 25 Greatest Acting Performances of Indian Cinema] {{Webarchive|url=https://web.archive.org/web/20150519053125/http://forbesindia.com/article/100-years-of-indian-cinema/25-greatest-acting-performances-of-indian-cinema/35125/0 |date=2015-05-19 }}. Forbesindia.com. Retrieved on 2017-05-31.</ref>
*2013 [[CNN-IBN]] "ಭಾರತೀಯ ಸಿನೆಮಾದ 100 ವರ್ಷಗಳು" ಸಮೀಕ್ಷೆಯಲ್ಲಿ – ಭಾರತದ ಶ್ರೇಷ್ಠ ನಟರಲ್ಲಿ 3ನೇ ಸ್ಥಾನ.<ref>[http://news.entecity.com/mohanlal-comes-3rd-among-indias-great-actorscnn-ibn/ Mohanlal comes 3rd among India's great actors;CNN-IBN Survey] {{Webarchive|url=https://web.archive.org/web/20130314022727/http://news.entecity.com/mohanlal-comes-3rd-among-indias-great-actorscnn-ibn/ |date=2013-03-14 }}. News.entecity.com (2013-03-10). Retrieved on 2017-05-31.</ref>
*2015 ಆಲ್-ಕೇರಳ ಅಡ್ವರ್ಟೈಸರ್ಸ್ ಏಜೆನ್ಸೀಸ್ ಅಸೋಸಿಯೇಷನ್ ಅವರ ಜಾಹೀರಾತು ಪ್ರಪಂಚಕ್ಕೆ ನೀಡಿದ ಕೊಡುಗೆಗಳಿಗಾಗಿ "ಕೇರಳದ ಬ್ರ್ಯಾಂಡ್ ಐಕಾನ್" ಎಂಬ ಬಿರುದನ್ನು ನೀಡಿ ಗೌರವಿಸಿತು.<ref>{{cite news |title=Business Honchos to Put Heads Together |url=http://www.newindianexpress.com/cities/kochi/Business-Honchos-to-Put-Heads-Together/2015/11/26/article3146884.ece |work=[[The New Indian Express]] |date=26 November 2015 |accessdate=28 March 2016 |archive-date=9 April 2016 |archive-url=https://web.archive.org/web/20160409014621/http://www.newindianexpress.com/cities/kochi/Business-Honchos-to-Put-Heads-Together/2015/11/26/article3146884.ece |url-status=dead }}</ref>
*2016 ಕೇರಳ ಅಂಗಾಂಗ ದಾನ ಕಾರ್ಯಕ್ರಮ – ಸದ್ಭಾವನಾ ರಾಯಭಾರಿ.<ref>{{Cite web|date=|title=Kerala CM site|url=https://www.keralacm.gov.in/mrithasanjeevani/|url-status=live|archive-url=https://web.archive.org/web/20200718002415/http://www.keralacm.gov.in/mrithasanjeevani/|archive-date=2020-07-18|access-date=|website=}}</ref>
*2016 "[[ಮನೋರಮ ನ್ಯೂಸ್]]ಮೇಕರ್ ಆಫ್ ದಿ ಇಯರ್" ಪ್ರಶಸ್ತಿ, ಹೆಚ್ಚಿನ ಶೀರ್ಷಿಕೆಗಳನ್ನು ಗಳಿಸಿದ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದ [[ಕೇರಳಿ]] ವ್ಯಕ್ತಿಗೆ ನೀಡಲಾಗುವ ಬಿರುದು.<ref>{{cite news |title='Complete Actor' Mohanlal wins Manorama News Newsmaker 2016 award |url=http://english.manoramaonline.com/news/kerala/manorama-news-newsmaker-2016-mohanlal.html |accessdate=15 January 2017 |work=[[Malayala Manorama]] |date=15 January 2017 |archive-date=16 January 2017 |archive-url=https://web.archive.org/web/20170116170404/http://english.manoramaonline.com/news/kerala/manorama-news-newsmaker-2016-mohanlal.html |url-status=live }}</ref>
*2017 "ಇಂಡಿಯನ್ ಐಕಾನ್ 2017" ಪ್ರಶಸ್ತಿ ಬಹ್ರೈನ್ ಸ್ನೇಹಿತರಿಂದ.<ref>{{cite news |title='ഫ്രണ്ട്സ് ഓഫ് ബഹ്റൈന് ഇന്ത്യന് ഐക്കണ് പുരസ്കാരം മോഹന്ലാലിന്' ഫ്രണ്ട്സ് ഓഫ് ബഹ്റൈന് ഇന്ത്യന് ഐക്കണ് പുരസ്കാരം മോഹന്ലാലിന് |url=https://www.mathrubhumi.com/gulf/bahrain/mohanlal-friends-of-bahrain-indian-icon-award-1.1947551 |accessdate=19 May 2017 |archive-date=19 May 2017 |archive-url=https://web.archive.org/web/20170519103915/http://www.mathrubhumi.com/gulf/bahrain/mohanlal-friends-of-bahrain-indian-icon-award-1.1947551 |url-status=live }}</ref>
*2018 [[ಪಿ. ಕೇಶವದೇವ್#ಕೇಶವದೇವ್ ಪ್ರಶಸ್ತಿಗಳು|ಪಿ. ಕೇಶವದೇವ್ ಡಯಾಬ್ಸ್ಕ್ರೀನ್ ಕೇರಳ ಪ್ರಶಸ್ತಿ]]<ref>{{cite web|title=Mohanlal receives P Keshav Dev Award 2018|url=https://timesofindia.indiatimes.com/entertainment/events/kochi/mohanlal-receives-p-keshav-dev-award-2018/articleshow/64961942.cms|work=[[The Times of India]]|date=14 July 2018|accessdate=13 May 2020|archive-date=4 February 2020|archive-url=https://web.archive.org/web/20200204195919/https://timesofindia.indiatimes.com/entertainment/events/kochi/mohanlal-receives-p-keshav-dev-award-2018/articleshow/64961942.cms|url-status=live}}</ref><ref>{{cite web |title=11 July 2018: 14th P.Kesavadev Awards|url=http://diabscreenkerala.net/prgms/2018/july_11_2018.html |date=11 July 2018|accessdate=13 May 2020}}</ref>
*2019 ''ಪ್ರಣವಪಥ್ಮಂ ಪುರಸ್ಕಾರಂ'' [[ಸಂತಿಗಿರಿ|ಸಂತಿಗಿರಿ ಆಶ್ರಮ]]ದಿಂದ<ref>{{cite news |url=https://www.manoramaonline.com/news/latest-news/2019/03/25/mohanlal-receives-pranava-pathmam-award-by-santhigiri.html |title=3 സ്ഥാനാർഥികളും സാക്ഷി; ശാന്തിഗിരി പ്രണവപത്മം ഏറ്റുവാങ്ങി മോഹൻലാൽ }}</ref>
*2019 [[ಮಳವಿಲ್ ಮನೋರಮ|ಮಳವಿಲ್]] ಮನರಂಜನಾ ಪ್ರಶಸ್ತಿಗಳು – ಅಲ್ಟಿಮೇಟ್ ಎಂಟರ್ಟೈನರ್ ನಟ<ref>{{cite web|title=Mazhavil Entertainment Awards 2019: here's the list of winners|url=https://www.onmanorama.com/entertainment/entertainment-news/2019/05/07/mazhavil-entertainment-awards-2019-list-of-winners.html|date=7 May 2019|work=[[Manorama Online]]|access-date=5 August 2020|archive-date=30 October 2020|archive-url=https://web.archive.org/web/20201030145444/https://www.onmanorama.com/entertainment/entertainment-news/2019/05/07/mazhavil-entertainment-awards-2019-list-of-winners.html|url-status=live}}</ref>
*2020 ಪಿ. ವಿ. ಸಾಮಿ ಸ್ಮಾರಕ ಕೈಗಾರಿಕಾ ಮತ್ತು ಸಾಮಾಜಿಕ-ಸಾಂಸ್ಕೃತಿಕ ಪ್ರಶಸ್ತಿ, ಕಳೆದ ನಾಲ್ಕು ದಶಕಗಳಲ್ಲಿ [[ಮಲಯಾಳಂ ಸಿನೆಮಾ]]ಗೆ ನೀಡಿದ ಕೊಡುಗೆಗಳು ಮತ್ತು [[ವಿಶ್ವಶಾಂತಿ ಫೌಂಡೇಶನ್]] ಮೂಲಕ ದಾನಕ್ಕೆ ನೀಡಿದ ಕೊಡುಗೆಗಳಿಗಾಗಿ<ref>{{Cite news|last=Award|first=PV Sami|title=Mathrubhumi News|url=https://english.mathrubhumi.com/movies-music/movie-news/pv-sami-memorial-award-for-mohanlal-1.5013632}}</ref>
*2021 [[ಕೇರಳ ಸರ್ಕಾರ]]ದ ಆರೋಗ್ಯ ಇಲಾಖೆಯಿಂದ [[ಕ್ಷಯರೋಗ]] ನಿರ್ಮೂಲನೆ ಅಭಿಯಾನದ ಸದ್ಭಾವನಾ ರಾಯಭಾರಿ<ref>{{Cite news|date=|title=The news minute|work=|url=https://www.thenewsminute.com/article/mohanlal-be-goodwill-ambassador-keralas-tuberculosis-eradication-programme-141935|url-status=live|access-date=|archive-date=2021-01-22|archive-url=https://web.archive.org/web/20210122064725/https://www.thenewsminute.com/article/mohanlal-be-goodwill-ambassador-keralas-tuberculosis-eradication-programme-141935}}</ref>
*2022 [[ಮಳವಿಲ್ ಮನೋರಮ|ಮಳವಿಲ್]] ಮನರಂಜನಾ ಪ್ರಶಸ್ತಿಗಳು – ಮಾಸ್ಟರ್ ಎಂಟರ್ಟೈನರ್ ಅಭಿನಯ<ref>{{cite web | url=https://www.keralatv.in/mazhavil-entertainment-awards-winners/ | title=Mazhavil Entertainment Awards 2022 Winners Are Mohanlal, Manju Warrier | date=29 August 2022 }}</ref>
*2024 [[ಶ್ರೀಕುಮಾರನ್ ತಂಪಿ]] ಫೌಂಡೇಶನ್ ಪ್ರಶಸ್ತಿ ಅಭಿನಯದಲ್ಲಿನ ಉತ್ಕೃಷ್ಟತೆಗಾಗಿ<ref>{{Cite web |last=SV |first=Swathi |date=2024-07-03 |title=Sreekumaran Thambi Foundation award to Actor Mohanlal |url=https://en.thekarmanews.com/sreekumaran-thambi-foundation-award-to-actor-mohanlal/ |url-status=live |archive-url=https://web.archive.org/web/20240706100529/https://en.thekarmanews.com/sreekumaran-thambi-foundation-award-to-actor-mohanlal/ |archive-date=2024-07-06 |access-date=2024-07-06 |website=Karma News}}</ref>
*2024 [[ಕಲಾಭವನ್ ಮಣಿ]] ಸ್ಮಾರಕ ಪ್ರಶಸ್ತಿಗಳು - [[ಬರ್ರೋಜ್ 3D]] ಗಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ.<ref>{{Cite web|url=https://www.southlive.in/movie/film-news/mohanlal-wins-kalabhavan-mani-memorial-award-for-best-debut-director#amp_tf=From%20%251%24s&aoh=17474666917826&referrer=https%3A%2F%2Fwww.google.com&share=https%3A%2F%2Fwww.southlive.in%2Fmovie%2Ffilm-news%2Fmohanlal-wins-kalabhavan-mani-memorial-award-for-best-debut-director|title=മികച്ച നവാഗത സംവിധായകന് മോഹന്ലാല്; കലാഭവന് മണി മെമ്മോറിയല് പുരസ്കാരം|website=SouthLive}}</ref>
*2025 ''[[ತುದರುಂ]]'' ಗಾಗಿ ಮಲಯಾಳ ಪುರಸ್ಕಾರ ಸಮಿತಿಯ ಮಲಯಾಳ ಪುರಸ್ಕಾರಂ 1201 ರ ಅತ್ಯುತ್ತಮ ನಟ<ref>{{Cite web |date=2025-08-17 |title=ഒമ്പതാമത് മലയാള പുരസ്കാരങ്ങൾ: മോഹൻലാലിനും സിബി മലയിലിനും അഭിലാഷ് മോഹനനും അവാര്ഡ് |url=https://www.mathrubhumi.com/movies-music/news/malayalam-puraskaram-2025-winners-1.10839857 |access-date=2025-08-17 |website=[[Mathrubhumi]]}}</ref>
*2025 [[ಮಳವಿಲ್ ಮನೋರಮ|ಮಳವಿಲ್]] ಮನರಂಜನಾ ಪ್ರಶಸ್ತಿಗಳು – ವರ್ಷದ ಮನರಂಜಕ<ref>{{Cite web |title=Mazhavil Entertainment Awards: Mohanlal wins Entertainer of the Year for ‘Thudarum’ |url=https://www.onmanorama.com/entertainment/entertainment-news/2025/08/18/mazhavil-entertainment-awards-malayalam-cinema-star-studded-event.html |access-date=2025-09-22 |website=Mazhavil Entertainment Awards: Mohanlal wins Entertainer of the Year for ‘Thudarum’ |language=en}}</ref>
==ಉಲ್ಲೇಖಗಳು==
{{notelist}}
{{Reflist}}
==ಬಾಹ್ಯ ಕೊಂಡಿಗಳು==
{{Commons category}}
* [http://www.thecompleteactor.com ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20190829082013/https://www.thecompleteactor.com/ |date=29 August 2019 }}
* {{IMDb name|0482320|name=Mohanlal}}
* {{Rotten-tomatoes-person|mohanlal|Mohanlal}}
{{Authority control}}
{{DEFAULTSORT:ಮೋಹನ್ಲಾಲ್}}
[[ವರ್ಗ:ಮೋಹನ್ಲಾಲ್| ]]
[[ವರ್ಗ:1960 ರ ಜನನಗಳು]]
[[ವರ್ಗ:ಜೀವಂತ ಜನರು]]
[[ವರ್ಗ:ಕೇರಳದ ಚಲನಚಿತ್ರ ಜನರು]]
[[ವರ್ಗ:ಭಾರತೀಯ ಪುರುಷ ಚಲನಚಿತ್ರ ನಟರು]]
[[ವರ್ಗ:ಭಾರತೀಯ ಪುರುಷ ರಂಗಭೂಮಿ ನಟರು]]
[[ವರ್ಗ:ಕೇರಳದ ಪುರುಷ ನಟರು]]
[[ವರ್ಗ:ತಿರುವನಂತಪುರದ ಪುರುಷ ನಟರು]]
[[ವರ್ಗ:ಪತನಂತಿಟ್ಟದ ಪುರುಷ ನಟರು]]
[[ವರ್ಗ:ಮಲಯಾಳಂ ಚಿತ್ರರಂಗದ ಪುರುಷ ನಟರು]]
[[ವರ್ಗ:ತಮಿಳು ಚಿತ್ರರಂಗದ ಪುರುಷ ನಟರು]]
[[ವರ್ಗ:ಹಿಂದಿ ಸಿನೆಮಾದಲ್ಲಿ ಪುರುಷ ನಟರು]]
[[ವರ್ಗ:ತೆಲುಗು ಸಿನೆಮಾದಲ್ಲಿ ಪುರುಷ ನಟರು]]
[[ವರ್ಗ:ಕನ್ನಡ ಸಿನೆಮಾದಲ್ಲಿ ಪುರುಷ ನಟರು]]
[[ವರ್ಗ:ತಿರುವನಂತಪುರದ ಚಲನಚಿತ್ರ ನಿರ್ಮಾಪಕರು]]
[[ವರ್ಗ:ಮಲಯಾಳಂ ಚಲನಚಿತ್ರ ನಿರ್ಮಾಪಕರು]]
[[ವರ್ಗ:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಕಲೆಗಳು]]
[[ವರ್ಗ:ಕಲೆಗಳಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ವಿಜೇತರು]]
[[ವರ್ಗ:ದಕ್ಷಿಣ ಭಾರತೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯ ಚಲನಚಿತ್ರ) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ವಿಶೇಷ ಉಲ್ಲೇಖ (ವೈಶಿಷ್ಟ್ಯ ಚಲನಚಿತ್ರ) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಸ್ಕ್ರೀನ್ ಪ್ರಶಸ್ತಿ ವಿಜೇತರು]]
[[ವರ್ಗ:ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ ವಿಜೇತರು]]
[[ವರ್ಗ:20 ನೇ ಶತಮಾನದ ಭಾರತೀಯ ಪುರುಷ ನಟರು]]
[[ವರ್ಗ:21 ನೇ ಶತಮಾನದ ಭಾರತೀಯ ಪುರುಷ ನಟರು]]
[[ವರ್ಗ:20 ನೇ ಶತಮಾನದ ಭಾರತೀಯ ಉದ್ಯಮಿಗಳು]]
[[ವರ್ಗ:21 ನೇ ಶತಮಾನದ ಭಾರತೀಯ ಉದ್ಯಮಿಗಳು]]
[[ವರ್ಗ:21 ನೇ ಶತಮಾನದ ಭಾರತೀಯ ಉದ್ಯಮಿಗಳು]]
[[ವರ್ಗ:ಗೌರವ ಭಾರತೀಯ ಸೇನಾ ಅಧಿಕಾರಿಗಳು]]
niut8p5rn3k8v8wyb3bz3s8pm3rgxk2
1379567
1379566
2026-08-09T05:11:44Z
A826
72368
1379567
wikitext
text/x-wiki
{{databox}}
{{Infobox person
| years_active = 1978–ಪ್ರಸ್ತುತ
| name = ಮೋಹನ್ಲಾಲ್
| native_name =
| image = Mohanlal (cropped).jpg
| image_size =
| caption = 2022 ರಲ್ಲಿ ಮೋಹನ್ಲಾಲ್
| birth_name = ಮೋಹನ್ಲಾಲ್ ವಿಶ್ವನಾಥನ್
| other_names = ಲಾಲ್, ಲಾಲು, ಲಾಲೆಟ್ಟನ್
| birth_date = {{Birth date and age|df=yes|1960|05|21}}
| birth_place = ಎಲಂತೂರ್, ಕೊಲ್ಲಂ ಜಿಲ್ಲೆ, ಕೇರಳ (ಪ್ರಸ್ತುತ ಪಥನಮ್ಥಿಟ್ಟ ಜಿಲ್ಲೆ, ಕೇರಳ, ಭಾರತ)
| education = ಮಹಾತ್ಮಾ ಗಾಂಧಿ ಕಾಲೇಜು (ಬಿಕಾಂ)
| occupation = {{hlist|ನಟ|ನಿರ್ದೇಶಕ|ನಿರ್ಮಾಪಕ|ವಿತರಕ|ಹಿನ್ನೆಲೆ ಗಾಯಕ}}
| works = ಮೋಹನ್ಲಾಲ್ ಚಲನಚಿತ್ರಗಳ ಪಟ್ಟಿ
| spouse = {{marriage|ಸುಚಿತ್ರ|1988}}
| children = ಪ್ರಣವ್ ಮೋಹನ್ಲಾಲ್, ವಿಸ್ಮಯಾ ಮೋಹನ್ಲಾಲ್
| relatives = ಕೆ. ಬಾಲಾಜಿ {{small|(ಮಾವ)}}<br />ಸುರೇಶ್ ಬಾಲಾಜೆ {{small|(ಭಾವ)}}<br />ಬಿ. ಉನ್ನಿಕೃಷ್ಣನ್ {{small|(ಸಂಬಂಧಿ)}}<ref name="YouTube Channel Name">{{cite video |people=24 News |date=2025-03-23 |title=പ്രകൃതിയോട് ചേർന്ന് പഴമ കൈവിടാതെ മോഹൻലാലിൻറെ തറവാട് വീട് |url=https://www.youtube.com/watch?si=1zTaC-AaaBdWUAAy&v=H8iRlz__KC4&feature=youtu.be |access-date=2025-03-23 |time=6:13 |publisher=YouTube Channel Name}}</ref>
| website = {{URL|thecompleteactor.com}}
| awards = ಮೋಹನ್ಲಾಲ್ ಸ್ವೀಕರಿಸಿದ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳ ಪಟ್ಟಿ
| honours = {{plainlist|
* ಪದ್ಮಶ್ರೀ (2001)
* ಪದ್ಮಭೂಷಣ (2019)
* ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2023)
}}
| module = {{Infobox officeholder
| embed = yes
| allegiance = {{flag|India}}
| branch = {{army|India}}
| service_years = 2009–ಪ್ರಸ್ತುತ
| rank = [[File:Lieutenant Colonel of the Indian Army.svg|10px]] [[ಲೆಫ್ಟಿನೆಂಟ್ ಕರ್ನಲ್]] (ಗೌರವ)
| unit = {{flagicon image|Territorial Army (Flag).svg}} [[ಟೆರಿಟೋರಿಯಲ್ ಆರ್ಮಿ (ಭಾರತ)|ಟೆರಿಟೋರಿಯಲ್ ಆರ್ಮಿ]]
}}
}}
'''ಮೋಹನ್ಲಾಲ್ ವಿಶ್ವನಾಥನ್''' ({{IPA|ml|moːhɐnlaːl ʋiʃʋʷɐn̪aːt̪ʰɐn|IPA}}; ಜನನ ೨೧ ಮೇ ೧೯೬೦), ಇವರು ಏಕನಾಮಧೇಯವಾಗಿ ಮೋಹನ್ಲಾಲ್ ಎಂದು ಪ್ರಸಿದ್ಧರಾಗಿರುವ ಭಾರತೀಯ ನಟ ಮತ್ತು ಚಲನಚಿತ್ರ ನಿರ್ಮಾಪಕ. ಇವರು ಪ್ರಧಾನವಾಗಿ ಮಲಯಾಳಂ ಚಲನಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಮತ್ತು ಸಾಂದರ್ಭಿಕವಾಗಿ ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.<ref name="thehindu.com">{{Cite news|last=Kumar|first=P. k Ajith|date=21 May 2020|title=On Mohanlal's 60th birthday, remembering 10 of his finest performances|language=en-IN|work=The Hindu|url=https://www.thehindu.com/entertainment/movies/on-mohanlals-60th-birthday-remembering-10-of-his-finest-performances/article31638507.ece|access-date=28 August 2020|issn=0971-751X|archive-date=12 June 2020|archive-url=https://web.archive.org/web/20200612102647/https://www.thehindu.com/entertainment/movies/on-mohanlals-60th-birthday-remembering-10-of-his-finest-performances/article31638507.ece|url-status=live}}</ref><ref name="Kumar">{{Cite news|last=Kumar|first=P. k Ajith|date=20 May 2020|title=Mohanlal at 60: An actor par excellence|language=en-IN|work=The Hindu|url=https://www.thehindu.com/entertainment/movies/mohanlal-at-60-an-actor-par-excellence/article31633617.ece|access-date=28 August 2020|issn=0971-751X|archive-date=19 June 2020|archive-url=https://web.archive.org/web/20200619123905/https://www.thehindu.com/entertainment/movies/mohanlal-at-60-an-actor-par-excellence/article31633617.ece|url-status=live}}</ref><ref name="india.com">{{Cite web|date=21 May 2020|title=Happy Birthday, Mohanlal: 11 Lesser-Known And Interesting Facts About The Top Malayalam Star|url=https://www.india.com/entertainment/malayalam-news-happy-birthday-mohanlal-11-lesser-known-and-interesting-facts-about-the-top-malayalam-star-4035296/|access-date=28 August 2020|website=India News, Breaking News, Entertainment News {{!}} India.com|language=en|archive-date=9 June 2020|archive-url=https://web.archive.org/web/20200609145515/https://www.india.com/entertainment/malayalam-news-happy-birthday-mohanlal-11-lesser-known-and-interesting-facts-about-the-top-malayalam-star-4035296/|url-status=live}}</ref> ಮೋಹನ್ಲಾಲ್ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನವನ್ನು ಹೊಂದಿದ್ದು, ಈ ಅವಧಿಯಲ್ಲಿ ಅವರು ೪೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.<ref name="Kumar"/><ref>{{Cite news |date=21 May 2022 |title='The complete actor' is not just a sobriquet, but Mohanlal's legacy |url=https://indianexpress.com/article/entertainment/malayalam/the-complete-actor-is-not-just-a-sobriquet-but-mohanlal-legacy-7926705/ |access-date=21 May 2022 |work=The Indian Express |language=en |archive-date=21 May 2022 |archive-url=https://web.archive.org/web/20220521064533/https://indianexpress.com/article/entertainment/malayalam/the-complete-actor-is-not-just-a-sobriquet-but-mohanlal-legacy-7926705/ |url-status=live }}</ref> ಭಾರತ ಸರ್ಕಾರವು ಅವರಿಗೆ ೨೦೦೧ ರಲ್ಲಿ ಪದ್ಮಶ್ರೀ<ref name="Padma Awards2">{{cite web|date=2015|title=Padma Awards|url=http://mha.nic.in/sites/upload_files/mha/files/LST-PDAWD-2013.pdf|url-status=dead|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015|publisher=Ministry of Home Affairs, Government of India}}</ref> ಮತ್ತು ೨೦೧೯ ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿತು. ಇವು ಭಾರತದ ನಾಲ್ಕನೇ ಮತ್ತು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ.<ref name="Padmabhushan2">{{Cite web|date=25 January 2019|title=Mohanlal conferred with Padma Bhushan|url=https://indianexpress.com/article/entertainment/entertainment-others/mohanlal-padma-bhushan-kader-khan-manoj-bajpayee-prabhudheva-shankar-mahadevan-5555516/|url-status=live|archive-url=https://web.archive.org/web/20190126001318/https://indianexpress.com/article/entertainment/entertainment-others/mohanlal-padma-bhushan-kader-khan-manoj-bajpayee-prabhudheva-shankar-mahadevan-5555516/|archive-date=26 January 2019|access-date=25 January 2019|website=[[The New Indian Express]]}}</ref> ೨೦೦೯ ರಲ್ಲಿ, ಭಾರತೀಯ ಚಲನಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪಡೆದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು.<ref>{{Cite web|date=9 July 2009|title=Malayalam superstar Mohanlal joins Territorial Army|url=https://www.hindustantimes.com/india/malayalam-superstar-mohanlal-joins-territorial-army/story-O6L4Kpu19jVG6wi0uejIAK.html|access-date=25 July 2021|website=Hindustan Times|language=en|archive-date=25 July 2021|archive-url=https://web.archive.org/web/20210725181929/https://www.hindustantimes.com/india/malayalam-superstar-mohanlal-joins-territorial-army/story-O6L4Kpu19jVG6wi0uejIAK.html|url-status=live}}</ref><ref>{{Cite web|title=Mohanlal enters Territorial Army training unit|url=https://www.newindianexpress.com/states/kerala/2010/mar/26/mohanlal-enters-territorial-army-training-unit-142466.html|access-date=25 July 2021|website=The New Indian Express|archive-date=25 July 2021|archive-url=https://web.archive.org/web/20210725181928/https://www.newindianexpress.com/states/kerala/2010/mar/26/mohanlal-enters-territorial-army-training-unit-142466.html|url-status=dead}}</ref> "ಭಾರತೀಯ ಸಿನೆಮಾದ ಮುಖವನ್ನು ಬದಲಾಯಿಸಿದ ಪುರುಷರು" ಎಂದು ಸಿಎನ್ಎನ್ ಮೋಹನ್ಲಾಲ್ ಅವರನ್ನು ಹೆಸರಿಸಿದೆ.<ref>{{Cite web |title=100 Years of Cinema: The men who changed the face of Indian films |url=https://www.news18.com/photogallery/movies/100-years-of-cinema-the-men-who-changed-the-face-of-indian-films-894555.html |access-date=8 January 2023 |website=News18 |language=en |archive-date=8 January 2023 |archive-url=https://web.archive.org/web/20230108064500/https://www.news18.com/photogallery/movies/100-years-of-cinema-the-men-who-changed-the-face-of-indian-films-894555.html |url-status=live }}</ref> ೨೦೨೫ ರಲ್ಲಿ, ಭಾರತ ಸರ್ಕಾರವು ಅವರಿಗೆ ಭಾರತೀಯ ಸಿನೆಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು.<ref name="Malayalam actor Mohanlal to be conferred Dadasaheb Phalke Award for 2023">{{cite news |title=Malayalam actor Mohanlal to be conferred Dadasaheb Phalke Award for 2023 |url=https://www.thehindu.com/entertainment/movies/actor-mohanlal-to-be-conferred-dadasaheb-phalke-award-for-2023/article70073864.ece |access-date=20 September 2025 |work=The Hindu |date=20 September 2025 |archive-url=https://web.archive.org/web/20250920160340/https://www.thehindu.com/entertainment/movies/actor-mohanlal-to-be-conferred-dadasaheb-phalke-award-for-2023/article70073864.ece |archive-date=20 September 2025 |language=en-IN}}</ref><ref name="Mohanlal honoured with Dadasaheb Phalke award at 71st National Film Awards ceremony">{{cite news |title=Mohanlal honoured with Dadasaheb Phalke award at 71st National Film Awards ceremony |url=https://www.newindianexpress.com/nation/2025/Sep/23/mohanlal-honoured-with-dadasaheb-phalke-award-at-71st-national-film-awards-ceremony |access-date=24 September 2025 |publisher=The New Indian Express |date=23 September 2025 |archive-url=https://web.archive.org/web/20250924041846/https://www.newindianexpress.com/nation/2025/Sep/23/mohanlal-honoured-with-dadasaheb-phalke-award-at-71st-national-film-awards-ceremony |archive-date=24 September 2025 |language=en}}</ref>
ಮೋಹನ್ಲಾಲ್ ಅವರು ೧೯೭೮ ರಲ್ಲಿ ಮಲಯಾಳಂ ಚಿತ್ರ 'ತಿರನೋಟ್ಟಂ' ಮೂಲಕ ೧೮ ನೇ ವಯಸ್ಸಿನಲ್ಲಿ ಅಭಿನಯಕ್ಕೆ ಪಾದಾರ್ಪಣೆ ಮಾಡಿದರು, ಆದರೆ ಸೆನ್ಸಾರ್ ಸಮಸ್ಯೆಗಳಿಂದಾಗಿ ಈ ಚಿತ್ರವು ೨೫ ವರ್ಷಗಳ ಕಾಲ ಬಿಡುಗಡೆಯಾಗದೆ ಉಳಿಯಿತು. ೧೯೮೦ ರಲ್ಲಿ ಬಂದ ಪ್ರಣಯ ಚಿತ್ರ 'ಮಂಜಿಲ್ ವಿರಿಂಜ ಪೂಕ್ಕಲ್' ನಲ್ಲಿ ಅವರ ಪರದೆಯ ಮೇಲಿನ ಮೊದಲ ಚಿತ್ರವಾಗಿತ್ತು, ಇದರಲ್ಲಿ ಅವರು ಪ್ರತಿನಾಯಕನ ಪಾತ್ರವನ್ನು ನಿರ್ವಹಿಸಿದ್ದರು.<ref name="rediff"/><ref name="thiranottam">{{cite news|title=I have nothing to prove in Bollywood: Mohanlal|url=http://www.deccanherald.com/content/242650/i-have-nothing-prove-bollywood.html|access-date=11 January 2017|work=[[Deccan Herald]]|agency=[[Press Trust of India]]|date=17 April 2012|archive-url=https://web.archive.org/web/20170113014138/http://www.deccanherald.com/content/242650/i-have-nothing-prove-bollywood.html|archive-date=13 January 2017|url-status=live}}</ref> ಅವರು ಖಳನಾಯಕನ ಪಾತ್ರಗಳನ್ನು ಮುಂದುವರೆಸಿದರು ಮತ್ತು ನಂತರದ ವರ್ಷಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಿಗೆ ಏರಿದರು. ೧೯೮೦ ರ ದಶಕದ ಮಧ್ಯಭಾಗದ ವೇಳೆಗೆ, ಅವರು ವಿಶ್ವಾಸಾರ್ಹ ಪ್ರಮುಖ ನಟನಾಗಿ ಸ್ಥಾಪಿತರಾದರು ಮತ್ತು ೧೯೮೬ ರಲ್ಲಿ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ ನಂತರ ಸ್ಟಾರ್ಡಮ್ ಅನ್ನು ಗಳಿಸಿದರು; ಆ ವರ್ಷ ಬಿಡುಗಡೆಯಾದ ಅಪರಾಧ ನಾಟಕ 'ರಾಜವಿಂಟೆ ಮಕನ್' ಅವರ ಸ್ಟಾರ್ಡಮ್ ಅನ್ನು ಹೆಚ್ಚಿಸಿತು.<ref name="rediff">{{cite web|last=Warrier|first=Shobha|title=25 years, 25 landmarks|url=https://www.rediff.com/movies/report/mohan1/20030903.htm|work=[[Rediff.com]]|access-date=21 July 2020|archive-date=21 July 2020|archive-url=https://web.archive.org/web/20200721123434/https://www.rediff.com/movies/report/mohan1/20030903.htm|url-status=live}}</ref> ಮೋಹನ್ಲಾಲ್ ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಲು ಆದ್ಯತೆ ನೀಡುತ್ತಾರೆ, ಆದರೆ ಅವರು ಇತರ ಭಾಷೆಯ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅವರ ಕೆಲವು ಪ್ರಸಿದ್ಧ ಅನ್ಯಭಾಷಾ ಚಿತ್ರಗಳೆಂದರೆ ತಮಿಳು ರಾಜಕೀಯ ನಾಟಕ 'ಇರುವರ್' (೧೯೯೭), ಹಿಂದಿ ಅಪರಾಧ ನಾಟಕ 'ಕಂಪನಿ' (೨೦೦೨) ಮತ್ತು ತೆಲುಗು ಚಿತ್ರ 'ಜನತಾ ಗ್ಯಾರೇಜ್' (೨೦೧೬).<ref>{{cite news|last=Khan|first=Ujala Ali|title=Reigning southern stars|url=https://www.thenationalnews.com/arts-culture/film/reigning-southern-stars-1.260566/|access-date=11 January 2017|work=[[The National (Abu Dhabi)|The National]]|date=14 September 2013|archive-url=https://web.archive.org/web/20170113092556/http://www.thenational.ae/arts-culture/bollywood/reigning-southern-stars|archive-date=13 January 2017|url-status=live}}</ref><ref>{{cite news|last=Rajpal|first=Roktim|title=Mohanlal turns 55: 8 performances that prove he is the most bankable, successful star of Indian cinema|url=http://www.news18.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html|access-date=11 January 2017|work=[[News18]]|date=21 May 2015|archive-url=https://web.archive.org/web/20170113195555/http://www.news18.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html|archive-date=13 January 2017|url-status=live}}</ref>
ಮೋಹನ್ಲಾಲ್ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ — ಎರಡು ಅತ್ಯುತ್ತಮ ನಟ ಪ್ರಶಸ್ತಿಗಳು, ಒಂದು ವಿಶೇಷ ಉಲ್ಲೇಖ ಮತ್ತು ಅಭಿನಯಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ, ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿ (ನಿರ್ಮಾಪಕರಾಗಿ) ಪ್ರಶಸ್ತಿ, ಜೊತೆಗೆ ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ಹಲವಾರು ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ೨೦೧೦ ರಲ್ಲಿ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದಿಂದ<ref name="auto">{{cite news|url=http://www.hindu.com/2010/03/17/stories/2010031760500700.htm|title=Mohanlal, Pookutty get D.Litt.|date=17 March 2010|access-date=18 May 2010|work=[[The Hindu]]|location=Chennai, India|archive-url=https://web.archive.org/web/20100611191903/http://www.hindu.com/2010/03/17/stories/2010031760500700.htm|archive-date=11 June 2010|url-status=dead}}</ref> ಮತ್ತು ೨೦೧೮ ರಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರು.<ref>{{cite news|url=http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html|title=Calicut University confers D.Litt on Mohanlal, P.T.Usha|newspaper=Business Standard India|date=29 January 2018|access-date=29 January 2018|archive-url=https://web.archive.org/web/20180129195119/http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html|archive-date=29 January 2018|url-status=live}}</ref>
ಮೋಹನ್ಲಾಲ್ ಅವರು ತಮ್ಮ ಪರೋಪಕಾರಿ ಪ್ರಯತ್ನಗಳಿಗೂ ಹೆಸರುವಾಸಿಯಾಗಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಹೆಚ್ಚಿನ ಪರಿಣಾಮ ಮತ್ತು ಕೇಂದ್ರೀಕೃತ ಕಾರ್ಯಕ್ರಮಗಳನ್ನು ರಚಿಸಲು ಮತ್ತು ತಲುಪಿಸಲು ಅವರು ವಿಶ್ವಶಾಂತಿ ಫೌಂಡೇಶನ್ ಅನ್ನು ಸ್ಥಾಪಿಸಿದರು.<ref>{{cite news|author=Express News Service|title=Mohanlal donates robot for fighting Covid-19|url=https://www.newindianexpress.com/cities/kochi/2020/apr/26/mohanlal-donates-robot-for-fighting-covid-19-2135358.html|access-date=21 July 2020|work=[[The New Indian Express]]|date=26 April 2020|archive-date=21 July 2020|archive-url=https://web.archive.org/web/20200721123426/https://www.newindianexpress.com/cities/kochi/2020/apr/26/mohanlal-donates-robot-for-fighting-covid-19-2135358.html|url-status=live}}</ref><ref>{{Cite web|title=ViswaSanthi Foundation|url=https://www.viswasanthifoundation.com/about/founder-message|access-date=16 July 2021|website=www.viswasanthifoundation.com|archive-date=16 July 2021|archive-url=https://web.archive.org/web/20210716073121/https://www.viswasanthifoundation.com/about/founder-message|url-status=live}}</ref><ref>{{cite news|title=Mohanlal launches project to raise aid for children's heart surgeries|url=https://english.mathrubhumi.com/movies-music/movie-news/mohanlal-launches-project-to-raise-aid-for-children-s-heart-surgeries-kerala-1.4019081|access-date=21 July 2020|work=[[Mathrubhumi]]|date=6 August 2019|archive-date=21 July 2020|archive-url=https://web.archive.org/web/20200721123429/https://english.mathrubhumi.com/movies-music/movie-news/mohanlal-launches-project-to-raise-aid-for-children-s-heart-surgeries-kerala-1.4019081|url-status=live}}</ref>
==ಆರಂಭಿಕ ಜೀವನ==
ಮೋಹನ್ಲಾಲ್ ವಿಶ್ವನಾಥನ್<ref>{{cite web|author=President of India|title=President Kovind presents Padma Bhushan to Mohanlal|url=https://www.youtube.com/watch?v=m9LwAdl84ys|website=[[YouTube]]|publisher=[[President of India]]|access-date=29 September 2022|date=22 March 2019|archive-date=29 September 2022|archive-url=https://web.archive.org/web/20220929110315/https://www.youtube.com/watch?v=m9LwAdl84ys&gl=US&hl=en|url-status=live}}</ref><ref>{{cite news |date=25 August 2020 |title=തനിക്ക് ജാതിവാൽ ഇല്ലാത്തതിന് കാരണം പറഞ്ഞ് മോഹൻലാൽ |trans-title=Mohanlal explains the reason for not having a caste surname |url=https://www.madhyamam.com/entertainment/movie-news/actor-mohanlal-reveals-the-secret-of-his-name-558738 |url-status=live |archive-url=https://web.archive.org/web/20220929113918/https://www.madhyamam.com/entertainment/movie-news/actor-mohanlal-reveals-the-secret-of-his-name-558738 |archive-date=29 September 2022 |access-date=29 September 2022 |work=[[Madhyamam]] |language=ml}}</ref> ಅವರು ೧೯೬೦ ರ ಮೇ ೨೧ ರಂದು ಕೇರಳದ ಕೊಲ್ಲಂ ಜಿಲ್ಲೆಯ (ಪ್ರಸ್ತುತ ಪಥನಮ್ಥಿಟ್ಟ ಜಿಲ್ಲೆ) ಎಲಂತೂರ್ ಗ್ರಾಮದಲ್ಲಿ ಜನಿಸಿದರು. ಅವರು ಮಾಜಿ ನೌಕರಶಾಹಿ ಮತ್ತು ಕೇರಳ ಸರ್ಕಾರದ ಕಾನೂನು ಕಾರ್ಯದರ್ಶಿಯಾಗಿದ್ದ ವಿಶ್ವನಾಥನ್ ನಾಯರ್ ಮತ್ತು ಸಂತಕುಮಾರಿ ದಂಪತಿಗಳ ಕಿರಿಯ ಮಗ.<ref>[http://www.manoramaonline.com/homestyle/spot-light/2017/04/22/mohanlal-visited-ancestral-home-punnackal-tharavadu.html Mohanlal Birth Place] {{Webarchive|url=https://web.archive.org/web/20170425025030/http://www.manoramaonline.com/homestyle/spot-light/2017/04/22/mohanlal-visited-ancestral-home-punnackal-tharavadu.html |date=25 April 2017 }}. Manoramaonline.com (22 April 2017). Retrieved on 24 July 2017.</ref><ref>{{cite news|title=Happy Birthday Mohanlal: The South Indian Superstar's Health Mantra|url=https://food.ndtv.com/health/mohanlal-diet-and-fitness-1694810|access-date=23 December 2017|work=[[NDTV]]|date=21 May 2017|archive-url=https://web.archive.org/web/20171223142407/https://food.ndtv.com/health/mohanlal-diet-and-fitness-1694810|archive-date=23 December 2017|url-status=live}}</ref> ಅವರಿಗೆ ಪ್ಯಾರಿಲಾಲ್ ಎಂಬ ಹಿರಿಯ ಸಹೋದರನಿದ್ದನು, ಅವರು ೨೦೦೦ ರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದ ನಿಧನರಾದರು.<ref name="ReferenceA">{{cite web | url=https://malayalam.oneindia.com/news/2000/08/23/ker-pyarilal.html | title=മോഹന്ലാലിന്റെ സഹോദരന് അന്തരിച്ചു | date=23 August 2000 }}</ref> ನಿರ್ದೇಶಕ ಬಿ. ಉನ್ನಿಕೃಷ್ಣನ್ ಅವರು ಮೋಹನ್ಲಾಲ್ ಅವರ ನಿಕಟ ಮಾತೃ ಬಂಧು.<ref name="YouTube Channel Name">{{cite video |people=24 News |date=2025-03-23 |title=പ്രകൃതിയോട് ചേർന്ന് പഴമ കൈവിടാതെ മോഹൻലാലിൻറെ തറവാട് വീട് |url=https://www.youtube.com/watch?si=1zTaC-AaaBdWUAAy&v=H8iRlz__KC4&feature=youtu.be |access-date=2025-03-23 |time=6:13 |publisher=YouTube Channel Name}}</ref>
ಮೋಹನ್ಲಾಲ್ ಅವರು ತಿರುವನಂತಪುರದಲ್ಲಿರುವ ತಮ್ಮ ಪಿತೃತ್ವದ ಮನೆಯಲ್ಲಿ ಮುದವನ್ಮುಗಲ್ನಲ್ಲಿ ಬೆಳೆದರು. ಅವರು ತಿರುವನಂತಪುರದ ಸರ್ಕಾರಿ ಮಾದರಿ ಬಾಲಕರ ಪ್ರೌಢಶಾಲೆಯಲ್ಲಿ ಓದಿದರು ಮತ್ತು ತಿರುವನಂತಪುರದ ಮಹಾತ್ಮಾ ಗಾಂಧಿ ಕಾಲೇಜಿನಿಂದ ವಾಣಿಜ್ಯದಲ್ಲಿ ಪದವಿ ಪಡೆದರು.<ref>{{cite web|last1=Entertainment|first1=Art &|title=Mohanlal Biography|url=http://lifestyle.iloveindia.com/lounge/mohanlal-biography-4023.html|website=LIFESTYLE LOUNGE|publisher=iloveindia.com.|access-date=5 January 2015|archive-url=https://web.archive.org/web/20141021010753/http://lifestyle.iloveindia.com/lounge/mohanlal-biography-4023.html|archive-date=21 October 2014|url-status=dead}}</ref><ref>{{cite web|last1=.com|first1=Mohanlalonline|title=LAL'S BIOGRAPHY|url=http://www.mohanlalonline.com/Content/Biography/|website=Mohanlalonline.com|access-date=5 January 2015|archive-url=https://web.archive.org/web/20150105104009/http://www.mohanlalonline.com/Content/Biography/|archive-date=5 January 2015|url-status=dead}}</ref> ಮೋಹನ್ಲಾಲ್ ಅವರ ಮೊದಲ ಪಾತ್ರವು ಆರನೇ ತರಗತಿಯಲ್ಲಿದ್ದಾಗ 'ಕಂಪ್ಯೂಟರ್ ಬಾಯ್' ಎಂಬ ರಂಗಭೂಮಿ ನಾಟಕದಲ್ಲಿತ್ತು, ಅದರಲ್ಲಿ ಅವರು ತೊಂಬತ್ತು ವರ್ಷದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದರು.<ref>{{cite news |url=http://www.hindu.com/2009/05/25/stories/2009052558020300.htm |title=Kerala / Thiruvananthapuram News : Centenary celebrations of Model School inaugurated |date=25 May 2009 |access-date=12 September 2013 |location=Chennai, India |archive-url=https://web.archive.org/web/20090530061910/http://www.hindu.com/2009/05/25/stories/2009052558020300.htm |archive-date=30 May 2009 |work=[[The Hindu]] |url-status=dead }}</ref>
೧೯೭೭ ಮತ್ತು ೧೯೭೮ ರ ಸಮಯದಲ್ಲಿ ಅವರು ಕೇರಳ ರಾಜ್ಯ ಕುಸ್ತಿ ಚಾಂಪಿಯನ್ ಆಗಿದ್ದರು.<ref name = blackbelt>{{Cite news|url = http://timesofindia.indiatimes.com/entertainment/malayalam/movies/news/After-SRK-Mohanlal-to-get-a-Taekwondo-blackbelt/articleshow/16940066.cms|title = After SRK, Mohanlal to get a Taekwondo blackbelt|author = Prakash, Asha|date = 25 October 2012|access-date = 6 October 2014|work = [[The Times of India]]|archive-url = https://web.archive.org/web/20160204084353/http://timesofindia.indiatimes.com/entertainment/malayalam/movies/news/After-SRK-Mohanlal-to-get-a-Taekwondo-blackbelt/articleshow/16940066.cms|archive-date = 4 February 2016|url-status = live}}</ref>
ಮೋಹನ್ಲಾಲ್ ಅವರಿಗೆ ಅವರ ಮಾತೃ ಚಿಕ್ಕಪ್ಪ ಗೋಪಿನಾಥನ್ ನಾಯರ್ ಅವರು ಹೆಸರಿಟ್ಟರು. ಅವರು ಆರಂಭದಲ್ಲಿ ರೋಷನ್ಲಾಲ್ ಎಂದು ಹೆಸರಿಡಲು ನಿರ್ಧರಿಸಿದ್ದರು, ನಂತರ "ಮೋಹನ್ಲಾಲ್" ಅನ್ನು ಆಯ್ಕೆ ಮಾಡಿದರು.<ref>{{cite web|author=The Cue|title='ആദ്യം നല്കാന് ഉദ്ദേശിച്ച പേര് റോഷന് ലാല്, പേരിനൊപ്പം ജാതി വേണ്ടെന്നത് അച്ഛന്റെ തീരുമാനം'; മോഹന്ലാല്|date=25 August 2020|url=https://www.thecue.in/entertainment/film-news/actor-mohanlal-about-his-name|publisher=The Cue|access-date=29 September 2022|language=ml|archive-date=29 September 2022|archive-url=https://web.archive.org/web/20220929110316/https://www.thecue.in/entertainment/film-news/actor-mohanlal-about-his-name|url-status=live}}</ref>
==ಚಲನಚಿತ್ರ ವೃತ್ತಿಜೀವನ==
===ಆರಂಭಿಕ ವರ್ಷಗಳು (1978–1985)===
ಮೋಹನ್ಲಾಲ್ ಅವರು ೧೯೭೮ ರಲ್ಲಿ 'ತಿರನೋಟ್ಟಂ' ಚಿತ್ರದ ಮೂಲಕ ತಮ್ಮ ಅಭಿನಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರವನ್ನು ಮೋಹನ್ಲಾಲ್ ಮತ್ತು ಅವರ ಸ್ನೇಹಿತರು — ಮಣಿಯನ್ ಪಿಳ್ಳ ರಾಜು, ಸುರೇಶ್ ಕುಮಾರ್, ಉನ್ನಿ, ಪ್ರಿಯದರ್ಶನ್, ರವಿಕುಮಾರ್ ಮತ್ತು ಇತರ ಕೆಲವರು ನಿರ್ಮಿಸಿ ನಿರ್ದೇಶಿಸಿದ್ದರು. ಮೋಹನ್ಲಾಲ್ ಮಾನಸಿಕವಾಗಿ ವಿಕಲಚೇತನ ಸೇವಕ ಕುಟ್ಟಪ್ಪನ್ ಪಾತ್ರವನ್ನು ನಿರ್ವಹಿಸಿದ್ದರು. ಸೆನ್ಸಾರ್ ಸಮಸ್ಯೆಗಳಿಂದಾಗಿ, ಚಿತ್ರವು ಸಮಯಕ್ಕೆ ಬಿಡುಗಡೆಯಾಗಲಿಲ್ಲ. ಚಿತ್ರ ಬಿಡುಗಡೆಯಾಗಲು ೨೫ ವರ್ಷಗಳೇ ಬೇಕಾಯಿತು.<ref name="thiranottam"/>
೧೯೮೦ ರಲ್ಲಿ, ಮೋಹನ್ಲಾಲ್ ಅವರು ಫಾಜಿಲ್ ಅವರ ನಿರ್ದೇಶನದ ಚೊಚ್ಚಲ ಚಿತ್ರ 'ಮಂಜಿಲ್ ವಿರಿಂಜ ಪೂಕ್ಕಲ್' ನಲ್ಲಿ ಪ್ರಮುಖ ಪ್ರತಿನಾಯಕನ ಪಾತ್ರಕ್ಕಾಗಿ ಆಯ್ಕೆಯಾದರು. ಈ ಚಿತ್ರವು ದೊಡ್ಡ ಯಶಸ್ಸನ್ನು ಗಳಿಸಿತು.<ref name="toi1">{{cite news|title=Destiny made me an actor: Mohanlal|url=http://timesofindia.indiatimes.com/entertainment/hindi/bollywood/news/Destiny-made-me-an-actor-Mohanlal/articleshow/199817.cms|work=[[The Times of India]]|last=Maya|first=M.|date=24 September 2003|access-date=30 September 2003|archive-url=https://web.archive.org/web/20161130123747/http://timesofindia.indiatimes.com/entertainment/hindi/bollywood/news/Destiny-made-me-an-actor-Mohanlal/articleshow/199817.cms|archive-date=30 November 2016|url-status=live}}</ref> ಮೋಹನ್ಲಾಲ್ ಅವರ ಸ್ನೇಹಿತರು ನವೋದಯ ಸ್ಟುಡಿಯೋ ಬಿಡುಗಡೆ ಮಾಡಿದ ಜಾಹೀರಾತಿಗೆ ಪ್ರತಿಕ್ರಿಯೆಯಾಗಿ ಅವರ ಅರ್ಜಿಯನ್ನು ಕಳುಹಿಸಿದ್ದರು.<ref name="mathrubhumi">{{cite news|author=Mathrubhumi|title=മഞ്ഞിൽ വിരിയുന്ന ഓർമ്മകൾ...|trans-title=Remembrance Bloomed in the Mist|url=http://www.mathrubhumi.com/travel/columns/mohanlal/mohanlal-malayalam-news-1.36450|work=[[Mathrubhumi]]|language=ml|date=23 February 2011|access-date=6 May 2012|archive-url=https://web.archive.org/web/20161115230814/http://www.mathrubhumi.com/travel/columns/mohanlal/mohanlal-malayalam-news-1.36450|archive-date=15 November 2016|url-status=live}}</ref> ಅವರು ವೃತ್ತಿಪರ ನಿರ್ದೇಶಕರನ್ನು ಒಳಗೊಂಡ ಸಮಿತಿಯ ಮುಂದೆ ಆಡಿಷನ್ ನೀಡಿದರು. ಅವರ ನೋಟದಿಂದ ಅಸಮಾಧಾನಗೊಂಡ ಇಬ್ಬರು ಅವರಿಗೆ ಕಡಿಮೆ ಅಂಕಗಳನ್ನು ನೀಡಿದರು, ಆದರೆ ಫಾಜಿಲ್ ಮತ್ತು ಜಿಜೊ ಅಪ್ಪಚನ್ ಅವರು ೧೦೦ ರಲ್ಲಿ ೯೦ ಮತ್ತು ೯೫ ಅಂಕಗಳನ್ನು ನೀಡಿದರು.<ref>{{cite news|url=http://www.thehindu.com/thehindu/fr/2005/12/23/stories/2005122301990100.htm|title=His experiments with cinema|last=Manmadhan|first=Prema|work=[[The Hindu]]|date=23 December 2005|access-date=3 March 2011|archive-url=https://web.archive.org/web/20161130130934/http://www.thehindu.com/thehindu/fr/2005/12/23/stories/2005122301990100.htm|archive-date=30 November 2016|url-status=dead}}</ref> ೨೦೦೪ ರಲ್ಲಿ ರೀಡರ್ಸ್ ಡೈಜೆಸ್ಟ್ಗೆ ನೀಡಿದ ಸಂದರ್ಶನದಲ್ಲಿ, ಮೋಹನ್ಲಾಲ್ ಅವರು ಯುವಕನಾಗಿದ್ದಾಗ ತಮ್ಮ ನೋಟವು ಖಳನಾಯಕನ ಚಿತ್ರಣಕ್ಕೆ ಸರಿಹೊಂದುತ್ತದೆ ಎಂದು ಹೇಳಿದರು.<ref name="rd">{{cite web|title=You Cool Cat|url=http://www.rd-india.com/newsite/other/facetoface_july04.asp|publisher=[[Reader's Digest]]|last=Sivanand|first=Mohan|author-link=Mohan Sivanand|access-date=19 April 2010|date=July 2004|archive-url=https://web.archive.org/web/20060523070740/http://www.rd-india.com/newsite/other/facetoface_july04.asp|archive-date=23 May 2006}}</ref> ಅವರ ಪ್ರಶಂಸನೀಯ ಋಣಾತ್ಮಕ ಪಾತ್ರಗಳಲ್ಲಿ 'ಸಂಧ್ಯಾಕ್ಕು ವಿರಿಂಜ ಪೂವು' ಮತ್ತು 'ಕುಯಿಲಿನೆ ತೇದಿ' ಸೇರಿವೆ.<ref>{{Cite news |date=11 August 2011 |title=Back in action |language=en-IN |work=The Hindu |url=https://www.thehindu.com/features/cinema/back-in-action/article2346718.ece |access-date=21 March 2023 |issn=0971-751X |archive-date=2 February 2021 |archive-url=https://web.archive.org/web/20210202062049/https://www.thehindu.com/features/cinema/back-in-action/article2346718.ece |url-status=live }}</ref>
೧೯೮೩ ರ ವೇಳೆಗೆ, ಮೋಹನ್ಲಾಲ್ ೨೫ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು, ಹೆಚ್ಚಿನವುಗಳಲ್ಲಿ ಅವರು ಋಣಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದರು.<ref name="rd"/> 'ಎಂಟೆ ಮೊಹಂಗಲ್ ಪೂವನಿಂಜು', 'ಇನಿಯೆಂಗಿಲುಮ್', 'ವೀಸಾ', 'ಅಟ್ಟಕಳಶಂ', 'ಕಳಿಯಿಲ್ ಅಲ್ಪಂ ಕಾರ್ಯಂ', 'ಎಂಟೆ ಮಾಮಟ್ಟುಕ್ಕುಟ್ಟಿಯಮ್ಮಕ್ಕು', 'ಎಂಗನೆ ನೀ ಮರಕ್ಕುಮ್', 'ಉನಾರೂ' ಮತ್ತು 'ಶ್ರೀಕೃಷ್ಣ ಪರುಂತು' ಮುಂತಾದ ಚಿತ್ರಗಳು ಅವರ ಚಿತ್ರಣವನ್ನು ಬದಲಾಯಿಸಿದವು. ಶಶಿಕುಮಾರ್ ಅವರ 'ಇವಿಡೆ ತುಡಂಗುನ್ನು' ಮೂಲಕ, ಅವರು "ಒಳ್ಳೆಯ ಹೃದಯ" ಹೊಂದಿರುವ ಯಶಸ್ವಿ ನಾಯಕರಾದರು. ಮೋಹನ್ಲಾಲ್ ೧೯೮೪ ರ ಹಾಸ್ಯ ಚಿತ್ರ 'ಪೂಚಕ್ಕೊರು ಮೂಕ್ಕುತಿ' ಯಲ್ಲಿ ಪ್ರಿಯದರ್ಶನ್ ನಿರ್ದೇಶನದಲ್ಲಿ ತಮ್ಮ ಮೊದಲ ಹಾಸ್ಯ ಪ್ರಮುಖ ಪಾತ್ರವನ್ನು ತಂಡದಲ್ಲಿ ನಿರ್ವಹಿಸಿದರು. ಇದರಲ್ಲಿ ಅವರು ಶ್ರೀಮಂತಳೆಂದು ತಪ್ಪಾಗಿ ಭಾವಿಸಿದ ಹುಡುಗಿಯೊಬ್ಬಳನ್ನು ಪ್ರೀತಿಸುವ ಯುವಕನ ಪಾತ್ರವನ್ನು ನಿರ್ವಹಿಸಿದರು.<ref name="25yrs">{{cite web|url=http://www.rediff.com/movies/2003/sep/03mohan1.htm|title=25 years, 25 landmarks|work=[[Rediff.com]]|last=Warrior|first=Shobha|date=3 September 2003|access-date=3 March 2011|archive-url=https://web.archive.org/web/20161130134455/http://www.rediff.com/movies/2003/sep/03mohan1.htm|archive-date=30 November 2016|url-status=live}}</ref> ಇದು ಮೋಹನ್ಲಾಲ್-ಪ್ರಿಯದರ್ಶನ್ ಜೋಡಿಯ ಪ್ರಾರಂಭವನ್ನು ಗುರುತಿಸಿತು, ಇವರು ೨೦೧೬ ರ ಹೊತ್ತಿಗೆ ೪೪ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.<ref>{{cite news|title=Priyan-Mohanlal back after eight years for a comedy|url=http://www.deccanherald.com/content/141489/priyan-mohanlal-back-eight-years.html|work=[[Deccan Herald]]|agency=[[Indo-Asian News Service]]|access-date=6 May 2012|date=27 February 2011|archive-url=https://web.archive.org/web/20161130135839/http://www.deccanherald.com/content/141489/priyan-mohanlal-back-eight-years.html|archive-date=30 November 2016|url-status=live}}</ref>
೧೯೮೫ ರಲ್ಲಿ, ಅವರು 'ಒನ್ನಾನಂ ಕುನ್ನಿಲ್ ಒರಡಿ ಕುನ್ನಿಲ್' ಚಿತ್ರಕ್ಕಾಗಿ ಹಾಡನ್ನು ರೆಕಾರ್ಡ್ ಮಾಡಿದರು.<ref name="25yrs"/> 'ಉಯರಂಗಲಿಲ್', 'ನೊಕ್ಕೆತ ಡೂರತು ಕಣ್ಣುಂ ನಟ್ಟು', 'ಬೋಯಿಂಗ್ ಬೋಯಿಂಗ್' ಮತ್ತು 'ಅರಂ + ಅರಂ = ಕಿನ್ನರಂ' ಈ ಅವಧಿಯ ಅವರ ಕೆಲವು ಚಿತ್ರಗಳಾಗಿವೆ.
===ಸ್ಥಾಪಿತ ನಟ (1986–1999)===
[[File:Mohanlal and mammootty.JPG|thumb|ಮೋಹನ್ಲಾಲ್ ಮತ್ತು ಮಮ್ಮೂಟ್ಟಿ ಜೊತೆಗೆ, ಮಲಯಾಳಂ ಸಿನೆಮಾದ ಇಬ್ಬರು ಪ್ರಭಾವಶಾಲಿ ನಟರು]]
ಈ ಅವಧಿಯಲ್ಲಿ, ಮೋಹನ್ಲಾಲ್ ಅವರು "ಮಹಾನ್ ಗುರುಗಳು" ಎಂದು ಕರೆಯಲ್ಪಡುವ ಜಿ. ಅರವಿಂದನ್, ಹರಿಹರನ್, ಎಂ.ಟಿ. ವಾಸುದೇವನ್ ನಾಯರ್, ಪದ್ಮರಾಜನ್, ಭರತನ್ ಮತ್ತು ಲೋಹಿತದಾಸ್ ಅವರ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದರು.<ref name="hinduinterview"/> ಮೋಹನ್ಲಾಲ್, ನಟ ಮತ್ತು ಚಿತ್ರಕಥೆಗಾರ ಶ್ರೀನಿವಾಸನ್ ಅವರೊಂದಿಗೆ, ಹಲವಾರು ವಾಸ್ತವಿಕ ಸಾಮಾಜಿಕ ವಿಡಂಬನೆಗಳಲ್ಲಿ ಪ್ರತಿಕೂಲ ವಾತಾವರಣಕ್ಕೆ ಹೊಂದಿಕೊಳ್ಳಲು ಒತ್ತಾಯಿಸಲ್ಪಟ್ಟ ನಿರುದ್ಯೋಗಿ, ವಿದ್ಯಾವಂತ ಮಲಯಾಳಿ ಯುವಕರ ಆಕ್ರೋಶವನ್ನು ಪ್ರದರ್ಶಿಸಿದರು.<ref name="toi2">{{cite news|url=http://timesofindia.indiatimes.com/home/sunday-toi/Too-bad-if-you-dont-know-this-man/articleshow/1173425.cms|work=[[The Times of India]]|title=Too bad if you don't know this man|last=B.|first=Viju|date=14 January 2007|access-date=20 January 2008|archive-url=https://web.archive.org/web/20110120042753/http://timesofindia.indiatimes.com/home/sunday-toi/Too-bad-if-you-dont-know-this-man/articleshow/1173425.cms|archive-date=20 January 2011|url-status=live}}</ref> ಇವುಗಳಲ್ಲಿ ಕೆಲವನ್ನು ಶ್ರೀನಿವಾಸನ್ ಸ್ವತಃ ಬರೆದಿದ್ದರು.<ref name="udayan">{{cite news|url=http://hindu.com/thehindu/fr/2005/05/20/stories/2005052003000100.htm|work=[[The Hindu]]|last=Pillai|first=Sreedhar|title=The Mohanlal effect|date=20 May 2005|access-date=22 May 2009|archive-url=https://web.archive.org/web/20161204154816/http://www.thehindu.com/thehindu/fr/2005/05/20/stories/2005052003000100.htm|archive-date=4 December 2016|url-status=dead}}</ref>
೧೯೮೬ ರಲ್ಲಿ, ಅವರು ಸತ್ಯನ್ ಅಂತಿಕ್ಕಾಡ್ ನಿರ್ದೇಶನದ 'ಟಿ.ಪಿ. ಬಾಲಗೋಪಾಲನ್ ಎಂ.ಎ.' ಚಿತ್ರದಲ್ಲಿ ನಟಿಸಿದರು, ಇದಕ್ಕಾಗಿ ಅವರು ತಮ್ಮ ಮೊದಲ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ಪಡೆದರು.<ref name="award1">{{cite web|title=State Film Awards (1986)|url=http://www.prd.kerala.gov.in/stateawards2.htm|publisher=Department of Information and Public Relations|access-date=6 May 2012|url-status=dead|archive-url=https://web.archive.org/web/20091119014326/http://www.prd.kerala.gov.in/stateawards2.htm|archive-date=19 November 2009}}</ref> ಅವರು ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊತ್ತ ನಿರುದ್ಯೋಗಿ ಯುವಕನ ಪಾತ್ರವನ್ನು ನಿರ್ವಹಿಸಿದರು. ಅದೇ ವರ್ಷ, 'ಸನ್ಮಾನಸ್ಸುಳ್ಳವರ್ಕ್ಕು ಸಮಾಧಾನಂ' ನಲ್ಲಿ ಪೀಡಿತ ಮನೆಯ ಮಾಲೀಕನ ಪಾತ್ರಕ್ಕಾಗಿ ಅವರು ಫಿಲ್ಮ್ಫೇರ್ ಅತ್ಯುತ್ತಮ ನಟ (ಮಲಯಾಳಂ) ಪ್ರಶಸ್ತಿಯನ್ನು ಗೆದ್ದರು. ೧೯೮೬ ರಲ್ಲಿ 'ರಾಜವಿಂಟೆ ಮಕನ್' ನ ಬಾಕ್ಸ್ ಆಫೀಸ್ ಯಶಸ್ಸಿನ ನಂತರ ಮೋಹನ್ಲಾಲ್ ಅವರಿಗೆ ಜನತೆಯಿಂದ ಹೊಸ ಮಲಯಾಳಂ ಸೂಪರ್ಸ್ಟಾರ್ ಸ್ಥಾನವು ದೊರೆಯಿತು. ಅದರಲ್ಲಿ ಅವರು ಅಂಡರ್ ವರ್ಲ್ಡ್ ಡಾನ್ ವಿನ್ಸೆಂಟ್ ಗೊಮೆಜ್ ಆಗಿ ನಟಿಸಿದ್ದರು. ಅವರು ದುರಂತ ಚಿತ್ರ 'ತಾಲವಟ್ಟಂ' ನಲ್ಲೂ ನಟಿಸಿದರು. ಇದರಲ್ಲಿ ಅವರು ತಮ್ಮ ಪ್ರೇಯಸಿಯ ಸಾಕ್ಷಿಯಾದಾಗ ಮಾನಸಿಕವಾಗಿ ಅಸ್ವಸ್ಥನಾಗುವ ಯುವಕ ವಿನೋದ್ ಪಾತ್ರವನ್ನು ನಿರ್ವಹಿಸಿದರು. ಪದ್ಮರಾಜನ್ ಅವರ 'ನಮುಕ್ಕು ಪಾರ್ಕ್ಕನ್ ಮುಂತಿರಿತೊಪ್ಪುಕಳ್' ನಲ್ಲಿ ಅವರು ಸಾಲೋಮನ್ ಪಾತ್ರವನ್ನು ನಿರ್ವಹಿಸಿದರು. ಪದ್ಮರಾಜನ್ ಜೊತೆಗಿನ ಮೋಹನ್ಲಾಲ್ ಅವರ ಸಹಭಾಗಿತ್ವವು ಬಹಳ ಗಮನಾರ್ಹವಾಗಿತ್ತು ಏಕೆಂದರೆ ಅವರ ಚಿತ್ರಗಳು ಆ ಸಮಯದಲ್ಲಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿದ್ದ ಅನೇಕ ಸಾಂಪ್ರದಾಯಿಕ ಸ್ಟೀರಿಯೊಟೈಪ್ಗಳನ್ನು ಮುರಿದ ಕಥೆಗಳನ್ನು ಹೇಳುತ್ತಿದ್ದವು. ೧೯೮೬ ರಲ್ಲಿ ಮಾತ್ರ, ಮೋಹನ್ಲಾಲ್ ೩೬ ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡರು.<ref name="hinduinterview"/>
ಮರು ವರ್ಷ, ಮೋಹನ್ಲಾಲ್ ಸತ್ಯನ್ ಅಂತಿಕ್ಕಾಡ್ ಅವರ ಹಾಸ್ಯ ಚಿತ್ರ 'ನಾಡೋಡಿಕ್ಕಟ್ಟು' ನಲ್ಲಿ ಶ್ರೀನಿವಾಸನ್ ಮತ್ತು ಶೋಭನಾ ಅವರೊಂದಿಗೆ ನಟಿಸಿದರು. ಇದು ಬಾಕ್ಸ್ ಆಫೀಸ್ ಯಶಸ್ಸು ಗಳಿಸಿತು. ಮೋಹನ್ಲಾಲ್ ಮತ್ತು ಶ್ರೀನಿವಾಸನ್ ಅವರು ತಮ್ಮ ಅನುಕ್ರಮ ಚಿತ್ರಗಳಾದ 'ಪಟ್ಟನಪ್ರವೇಶಂ' (೧೯೮೮) ಮತ್ತು 'ಅಕ್ಕರೆ ಅಕ್ಕರೆ ಅಕ್ಕರೆ' (೧೯೯೦) ನಲ್ಲಿ ಕ್ರಮವಾಗಿ ಪತ್ತೇದಾರಿ ದಾಸನ್ ಮತ್ತು ವಿಜಯನ್ ಪಾತ್ರಗಳನ್ನು ಪುನರಾವರ್ತಿಸಿದರು. ಪದ್ಮರಾಜನ್ ನಿರ್ದೇಶನದ 'ತೂವನತ್ತುಂಬಿಕಲ್' ನಲ್ಲಿ ಅವರು ತಮ್ಮ ಎರಡು ಪ್ರೇಮಾಸಕ್ತಿಗಳ ನಡುವೆ ಸಿಲುಕಿಕೊಂಡ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ಭಾರತೀಯ ಚಿತ್ರಗಳಲ್ಲಿನ ಅನೇಕ ಸ್ಟೀರಿಯೊಟೈಪ್ಗಳನ್ನು ಮುರಿಯಿತು.<ref name="toi2"/><ref>{{cite news|title=Mohanlal, still raring to go at 53|url=http://movies.ndtv.com/photos/mohanlal-still-raring-to-go-at-53-10492|access-date=21 May 2013|work=[[NDTV]]|date=21 May 2013|archive-url=https://web.archive.org/web/20161204155948/http://movies.ndtv.com/photos/mohanlal-still-raring-to-go-at-53-10492|archive-date=4 December 2016|url-status=live}}</ref> ೧೯೮೮ ರಲ್ಲಿ ಬಿಡುಗಡೆಯಾದ ಪ್ರಣಯ ಹಾಸ್ಯ 'ಚಿತ್ರಂ', ೩೬೬ ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡು, ಅತಿ ಹೆಚ್ಚು ದಿನಗಳ ಕಾಲ ಪ್ರದರ್ಶನಗೊಂಡ ಮಲಯಾಳಂ ಚಿತ್ರವಾಯಿತು.<ref name="25yrs"/> ೧೯೮೮ ರಲ್ಲಿ 'ಪದಮುದ್ರ', 'ಆರ್ಯನ್', 'ವೆಲ್ಲನಕಳುಡೆ ನಾಡು', 'ಉಲ್ಸವಪಿಟ್ಟೆನ್ನು' ಮತ್ತು 'ಚಿತ್ರಂ' ಚಿತ್ರಗಳಲ್ಲಿನ ಅಭಿನಯಕ್ಕಾಗಿ ಮೋಹನ್ಲಾಲ್ ಕೇರಳ ರಾಜ್ಯ ವಿಶೇಷ ತೀರ್ಪುಗಾರ ಪ್ರಶಸ್ತಿಯನ್ನು ಗೆದ್ದರು.<ref name="award1"/>
೧೯೮೯ ರಲ್ಲಿ, ಬರಹಗಾರ ಲೋಹಿತದಾಸ್ ಮತ್ತು ನಿರ್ದೇಶಕ ಸಿಬಿ ಮಲಯಿಲ್ ಅವರ ಸಂಯೋಜನೆಯು ದುರಂತ ಚಿತ್ರ 'ಕಿರೀಡಂ' ನಲ್ಲಿ ಪೊಲೀಸ್ ಅಧಿಕಾರಿಯಾಗುವ ಕನಸು ಕಾಣುವ, ಆದರೆ ಅಪರಾಧಿಯಾಗಿ ಕೊನೆಗೊಳ್ಳುವ ಸೇತುಮಾಧವನ್ ಪಾತ್ರವನ್ನು ಸೃಷ್ಟಿಸಿತು. ಈ ಪಾತ್ರವು ಮೋಹನ್ಲಾಲ್ ಅವರಿಗೆ ರಾಷ್ಟ್ರೀಯ ಚಲನಚಿತ್ರ ವಿಶೇಷ ತೀರ್ಪುಗಾರರ ಉಲ್ಲೇಖವನ್ನು ಗಳಿಸಿಕೊಟ್ಟಿತು.<ref name="25yrs"/> ಮೋಹನ್ಲಾಲ್ ನಂತರ ನೆನಪಿಸಿಕೊಂಡರು, ಸೇತುಮಾಧವನ್ ಅವರ ಮಾನಸಿಕ ಸಂಕಟದ ಚಿತ್ರಣವು ಸ್ವಾಭಾವಿಕವಾಗಿದೆ ಮತ್ತು "ನನ್ನ ಪಾತ್ರವಾದ ಸೇತುಮಾಧವನ್ ಅಂತಹ ಸಂದರ್ಭದಲ್ಲಿ ಏನು ಮಾಡುತ್ತಿದ್ದನೋ ಅದನ್ನೇ ನಾನು ಮಾಡಿದೆ" ಎಂದು ಹೇಳಿದರು. ಅಭಿನಯವು "ಇನ್ನೊಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸುವುದಕ್ಕೆ ಹೋಲುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.<ref name="hinduinterview"/> ಅದೇ ವರ್ಷ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ 'ವರವೇಲ್ಪು' ಚಿತ್ರದಲ್ಲಿ ನಟಿಸಿದರು. ಇದು ಪರ್ಷಿಯನ್ ಗಲ್ಫ್ನಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿ ತನ್ನ ಕುಟುಂಬದೊಂದಿಗೆ ಜೀವನವನ್ನು ಆನಂದಿಸಲು ಮನೆಗೆ ಬಂದ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಅವರು ಬಸ್ ಖರೀದಿಸಿದರು, ಅದು ಅಂತಿಮವಾಗಿ ಅವರನ್ನು ತೊಂದರೆಗೆ ಸಿಲುಕಿಸಿತು. ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ೨೦೦೩ ರ ಜನವರಿ ೧೮ ರಂದು ಕೊಚ್ಚಿಯಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟರ್ ಮೀಟ್ನ ಉದ್ಘಾಟನಾ ಸಮಾರಂಭದಲ್ಲಿ ಜಾಗತಿಕ ಆರ್ಥಿಕ ಬದಲಾವಣೆಗಳ ಬಗ್ಗೆ ಮಲಯಾಳಿಗಳ ಅಜ್ಞಾನಕ್ಕೆ ಉದಾಹರಣೆಯಾಗಿ ಈ ಚಿತ್ರವನ್ನು ಉಲ್ಲೇಖಿಸಿದರು.<ref>{{cite web|url=http://www.rediff.com/money/2003/jan/18gim.htm|title=Kerala ignores global economic changes: PM|work=[[Rediff.com]]|date=18 January 2003|access-date=20 January 2008|author=Press Trust of India|author-link=Press Trust of India|archive-url=https://web.archive.org/web/20161204162257/http://www.rediff.com/money/2003/jan/18gim.htm|archive-date=4 December 2016|url-status=live}}</ref><ref>{{cite press release|author=<!--Staff writer(s); no by-line.-->|title=PIB Press Releases: Prime Minister Inaugurates Global Investors Meet|url=http://pib.nic.in/archive/releases98/lyr2003/rjan2003/18012003/r180120031.html|location=[[Kochi]]|publisher=[[Press Information Bureau]]|date=18 January 2003|access-date=18 January 2003|archive-url=https://web.archive.org/web/20161204172357/http://pib.nic.in/archive/releases98/lyr2003/rjan2003/18012003/r180120031.html|archive-date=4 December 2016|url-status=live}}</ref> ೧೯೮೯ ರಲ್ಲಿ, ಅವರು ಪದ್ಮರಾಜನ್ ಅವರ ಮತ್ತೊಂದು ಚಿತ್ರ 'ಸೀಸನ್' ನಲ್ಲಿ ನಟಿಸಿದರು.
೧೯೯೦ ರ ದಶಕದ ಆರಂಭದಲ್ಲಿ, ಮೋಹನ್ಲಾಲ್ ಹಲವಾರು ವಾಣಿಜ್ಯ ಚಿತ್ರಗಳಲ್ಲಿ ನಟಿಸಿದರು, ಅವುಗಳಲ್ಲಿ 'ಹಿಸ್ ಹೈನೆಸ್ ಅಬ್ದುಲ್ಲಾ', 'ಮಿಧುನಂ' ಮತ್ತು 'ನಂ.20 ಮದ್ರಾಸ್ ಮೇಲ್' ಸೇರಿವೆ. 'ಹಿಸ್ ಹೈನೆಸ್ ಅಬ್ದುಲ್ಲಾ' ಮೋಹನ್ಲಾಲ್ ಅವರ ಕಂಪನಿ ಪ್ರಣವಂ ಆರ್ಟ್ಸ್ ಇಂಟರ್ನ್ಯಾಷನಲ್ ಅಡಿಯಲ್ಲಿ ಅವರ ಮೊದಲ ಸ್ವತಂತ್ರ ನಿರ್ಮಾಣವಾಗಿದೆ. ಮೋಹನ್ಲಾಲ್ ೧೯೯೦ ರಲ್ಲಿ ಭರತನ್ ಅವರ 'ತಾಳ್ವರಂ' ನಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ತಮ್ಮ ಅತ್ಯಂತ ವಿಶ್ವಾಸಾರ್ಹ ಸ್ನೇಹಿತನಿಂದ ತಮ್ಮ ಪತ್ನಿಯ ಕೊಲೆಗೆ ಪ್ರತೀಕಾರವನ್ನು ಬಯಸುವ ವಿಧುರನ ಪಾತ್ರವನ್ನು ನಿರ್ವಹಿಸಿದರು. ೧೯೯೧ ರಲ್ಲಿ ಅವರ ಪ್ರಣಯ ಹಾಸ್ಯ 'ಕಿಲುಕ್ಕಂ' ಅವರಿಗೆ ಅತ್ಯುತ್ತಮ ನಟನಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಚಿತ್ರವು ಮಲಯಾಳಂನ ಎಲ್ಲಾ ಕಾಲದ ಶ್ರೇಷ್ಠ ಹಾಸ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವೂ ಆಯಿತು. ೧೯೯೧ ರಲ್ಲಿ, ಮೋಹನ್ಲಾಲ್ 'ಭರತಂ' ಅನ್ನು ನಿರ್ಮಿಸಿ ನಟಿಸಿದರು. ಇದನ್ನು ರಾಮಾಯಣದ ಆಧುನಿಕ ರೂಪಾಂತರವೆಂದು ಭರತನ ದೃಷ್ಟಿಕೋನದಿಂದ ವ್ಯಾಖ್ಯಾನಿಸಲಾಗಿದೆ. ಈ ಚಿತ್ರವು ವಿಮರ್ಶಾತ್ಮಕ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಅಸೂಯೆ ಪಟ್ಟ ಸಹೋದರನಿಂದ ಹೊರೆಯಾದ ಕರ್ನಾಟಕ ಗಾಯಕನ ಪಾತ್ರಕ್ಕಾಗಿ ಅವರು ಆ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ಪಡೆದರು.<ref name="ndtvgoodtimes">{{cite news|url=http://goodtimes.ndtv.com/PhotoDetail.aspx?Page=2&ID=10492&AlbumType=PG#talk|title=Malayalam cinema's invincible star turns 51|work=[[NDTV Good Times]]|date=21 May 2011|access-date=6 May 2012|archive-url=https://web.archive.org/web/20120401141453/http://goodtimes.ndtv.com/PhotoDetail.aspx?Page=2&ID=10492&AlbumType=PG#talk|archive-date=1 April 2012|url-status=live}}</ref><ref>{{cite web|last=Warrier|first=Shobha|title=An interview with Lohitadas, director of the Malayalam film, Bhoothakkannadi|url=http://www.rediff.com/entertai/aug/11lo1.htm|work=[[Rediff.com]]|access-date=24 January 2016|date=22 August 1997|archive-url=https://web.archive.org/web/20160220111815/http://www.rediff.com/entertai/aug/11lo1.htm|archive-date=20 February 2016|url-status=live}}</ref> ೧೯೯೨ ರಲ್ಲಿ ಅವರು 'ಕಮಲದಳಂ' ನಲ್ಲಿ ಭರತನಾಟ್ಯ ನರ್ತಕನ ಪಾತ್ರವನ್ನು ನಿರ್ವಹಿಸಿದರು. ನೃತ್ಯ ದೃಶ್ಯಗಳನ್ನು ನಿರ್ವಹಿಸಲು ಅವರು ತಮ್ಮ ನೃತ್ಯ ಸಂಯೋಜಕ ಮತ್ತು ಸಹ-ನಟರು ಮತ್ತು ವೃತ್ತಿಪರ ನರ್ತಕರಾದ ವಿನೀತ್ ಮತ್ತು ಮೋನಿಶಾ ಅವರ ಸಹಾಯವನ್ನು ಪಡೆದರು.<ref name = "hinduinterview">{{cite news|url=http://www.thehindu.com/todays-paper/tp-features/tp-fridayreview/acting-is-a-bit-like-meditation/article2273126.ece|title=Acting is a bit like meditation|work=[[The Hindu]]|last=Kumar|first=P. K. Ajith|date=27 July 2007|access-date=27 July 2007|archive-url=https://web.archive.org/web/20161204170644/http://www.thehindu.com/todays-paper/tp-features/tp-fridayreview/acting-is-a-bit-like-meditation/article2273126.ece|archive-date=4 December 2016|url-status=live}}</ref> 'ರಾಜಶಿಲ್ಪಿ', 'ಸದಯಂ', 'ಯೋಧ' ಮತ್ತು 'ವಿಯೆಟ್ನಾಂ ಕಾಲೋನಿ' ೧೯೯೨ ರಲ್ಲಿ ಬಿಡುಗಡೆಯಾದ ಅವರ ಇತರ ಚಿತ್ರಗಳಾಗಿವೆ. ರಂಜಿತ್ ಬರೆದು ಐ.ವಿ. ಶಶಿ ನಿರ್ದೇಶನದ 'ದೇವಾಸುರಂ' (೧೯೯೩) ಮೋಹನ್ಲಾಲ್ ಅವರ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ ಮತ್ತು ಇದನ್ನು ಕ್ಲಾಸಿಕ್ ಎಂದು ಪರಿಗಣಿಸಲಾಗಿದೆ.<ref name="ndtvgoodtimes"/>
೧೯೯೪ ರಲ್ಲಿ, ಮೋಹನ್ಲಾಲ್ ಫಾಜಿಲ್ ನಿರ್ದೇಶನದ ಶ್ರೇಷ್ಠ 'ಮಣಿಚಿತ್ರತಾಳು' ನಲ್ಲಿ ಪ್ರಮುಖ ಪಾತ್ರವಾದ ಮನೋವೈದ್ಯ ಡಾ. ಸನ್ನಿ ಜೋಸೆಫ್ ಆಗಿ ನಟಿಸಿದರು. ಇದು ಅತ್ಯಂತ ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದ್ದು, ಕೆಲವು ಚಿತ್ರಮಂದಿರಗಳಲ್ಲಿ ೩೬೫ ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.<ref>{{Cite news |date=31 May 2016 |title=10 Mollywood films that ran for the longest time |work=[[The Times of India]] |agency=Times News Network |url=http://timesofindia.indiatimes.com/entertainment/malayalam/movies/10-Mollywood-films-that-ran-for-the-longest-time/10-Mollywood-films-that-ran-for-the-longest-time/photostory/52523456.cms |url-status=live |access-date=28 July 2016 |archive-url=https://web.archive.org/web/20160728160923/http://timesofindia.indiatimes.com/entertainment/malayalam/movies/10-Mollywood-films-that-ran-for-the-longest-time/10-Mollywood-films-that-ran-for-the-longest-time/photostory/52523456.cms |archive-date=28 July 2016}}</ref> ಈ ಚಿತ್ರವು ನಂತರ ಕ್ಲಾಸಿಕ್ ಸ್ಥಾನಮಾನವನ್ನು ಗಳಿಸಿತು ಮತ್ತು ಇದು ಭಾರತೀಯ ಸಿನೆಮಾದ ಅತ್ಯುತ್ತಮ ಮಾನಸಿಕ ಥ್ರಿಲ್ಲರ್ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.<ref>{{Cite web |title=India's 'best' psychological thriller turns 25 |url=https://www.theweek.in/news/entertainment/2018/03/12/25-years-manichitrathazhu-still-best-psychological-thriller-india-has-produced.html |access-date=2024-02-19 |website=The Week |language=en}}</ref><ref>{{Cite news |title=25 years of Manichitrathazhu: Why this Malayalam classic remains unsurpassed |work=The News Minute |url=https://www.thenewsminute.com/article/25-years-manichitrathazhu-why-malayalam-classic-remains-unsurpassed-93441 |access-date=15 April 2022 |archive-date=25 March 2022 |archive-url=https://web.archive.org/web/20220325162342/https://www.thenewsminute.com/article/25-years-manichitrathazhu-why-malayalam-classic-remains-unsurpassed-93441 |url-status=live }}</ref> 'ಸ್ಪಡಿಕಂ' ೧೯೯೫ ರ ಕೃತಿಯಾಗಿದ್ದು, ಇದಕ್ಕಾಗಿ ಅವರು ತಮ್ಮ ಮೂರನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ಮತ್ತು ಐದನೇ ಫಿಲ್ಮ್ಫೇರ್ ಪ್ರಶಸ್ತಿಯನ್ನು ಅತ್ಯುತ್ತಮ ನಟ (ಮಲಯಾಳಂ) ಆಗಿ ಗೆದ್ದರು. ಅವರು ಥಾಮಸ್ "ಆಡು ಥೋಮ" ಚಾಕೋ ಪಾತ್ರಕ್ಕಾಗಿ, ತಂದೆಯ ಹೆಚ್ಚಿನ ನಿರೀಕ್ಷೆಗಳನ್ನು ಪೂರೈಸಲು ವಿಫಲವಾದಾಗ, ತಂದೆಯಿಂದ ದೂರವಾದ ಗುಂಡುಗಾರನಾಗುವ ಯುವಕನ ಪಾತ್ರವನ್ನು ನಿರ್ವಹಿಸಿದರು.<ref>{{Cite web |date=2018-03-30 |title='Spadikam': 23 years on, this Mohanlal film remains a favourite Malayalam action flick |url=https://www.thenewsminute.com/article/spadikam-23-years-mohanlal-film-remains-favourite-malayalam-action-flick-78731 |access-date=2023-02-09 |website=The News Minute |language=en |archive-date=9 February 2023 |archive-url=https://web.archive.org/web/20230209200924/https://www.thenewsminute.com/article/spadikam-23-years-mohanlal-film-remains-favourite-malayalam-action-flick-78731 |url-status=live }}</ref> ೧೯೯೬ ರಲ್ಲಿ, ಮೋಹನ್ಲಾಲ್ ಪ್ರಿಯದರ್ಶನ್ ಅವರ 'ಕಾಲಪಾನಿ' ಯಲ್ಲಿ ನಟಿಸಿದರು. ಇದು ಪೋರ್ಟ್ ಬ್ಲೇರ್ನ ಸೆಲ್ಯುಲಾರ್ ಜೈಲಿನ ಕೈದಿಗಳ ಬಗ್ಗೆ ಮಹಾಕಾವ್ಯದ ಚಿತ್ರವಾಗಿದೆ ಮತ್ತು ೧೯೯೮ ರಲ್ಲಿ ಲೋಹಿತದಾಸ್ ಅವರ 'ಕನ್ಮದಂ' ನಲ್ಲಿ ನಟಿಸಿದರು. ೧೯೯೭ ರಲ್ಲಿ ರಾಜೀವ್ ಅಂಚಲ್ ನಿರ್ದೇಶನದ 'ಗುರು' ಚಿತ್ರದಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ೧೯೯೭ ರ ಅತ್ಯುತ್ತಮ ವಿದೇಶಿ ಭಾಷಾ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯ ನಾಮನಿರ್ದೇಶನಕ್ಕೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಯಿತು.<ref>{{cite web|last1=Jose|first1=D|title=Blind man's buff|url=http://www.rediff.com/entertai/1998/mar/16guru.htm|work=[[Rediff.com]]|access-date=4 August 2016|date=16 March 1998}}</ref>
ಮೋಹನ್ಲಾಲ್ ೧೯೯೭ ರಲ್ಲಿ ಮಣಿರತ್ನಂ ನಿರ್ದೇಶನದ ತಮಿಳು ಜೀವನಚರಿತ್ರೆಯ ಚಿತ್ರ 'ಇರುವರ್' ನಲ್ಲಿ ತಮ್ಮ ಮೊದಲ ಅನ್ಯಭಾಷಾ ಚಿತ್ರದಲ್ಲಿ ನಟಿಸಿದರು.<ref>{{cite web|url=http://www.rediff.com/movies/2002/dec/07ash.htm|title=Ash's Hollywood debut in mid-2003|work=[[Rediff.com]]|last=Chand|first=Fakir|date=7 December 2002|access-date=6 May 2012|archive-url=https://web.archive.org/web/20161204172636/http://www.rediff.com/movies/2002/dec/07ash.htm|archive-date=4 December 2016|url-status=live}}</ref> ಮೋಹನ್ಲಾಲ್ ರಾಜಕೀಯಕ್ಕೆ ತಿರುಗುವ ನಟನನ್ನು ಚಿತ್ರಿಸಿದ ಈ ಚಿತ್ರವು (ಎಂ.ಜಿ. ರಾಮಚಂದ್ರನ್ ಅವರ ಜೀವನವನ್ನು ಆಧರಿಸಿ) ವಿಮರ್ಶಾತ್ಮಕ ಯಶಸ್ಸನ್ನು ಗಳಿಸಿತು ಮತ್ತು ಬೆಲ್ಗ್ರೇಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಮತ್ತು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.<ref>{{cite news|url=http://www.cscsarchive.org:8081/MediaArchive/art.nsf/%28docid%29/F4AF25E8DDFA9E8F6525694100207BAB|title=Censors refer Iruvar to home dept|work=[[The Times of India]]|date=28 February 1997|access-date=6 May 2012|url-status=dead|archive-url=https://web.archive.org/web/20120405022505/http://www.cscsarchive.org:8081/MediaArchive/art.nsf/%28docid%29/F4AF25E8DDFA9E8F6525694100207BAB|archive-date=5 April 2012}}</ref><ref>{{cite web|url=http://movies.rediff.com/slide-show/2010/jun/09/slide-show-1-looking-at-mani-ratnams-landmark-movies.htm|title=Looking at Mani Ratnam's landmark movies|work=[[Rediff.com]]|date=9 June 2010|access-date=6 May 2012|first=Pavithra|last=Srinivasan|archive-url=https://web.archive.org/web/20161204173521/http://movies.rediff.com/slide-show/2010/jun/09/slide-show-1-looking-at-mani-ratnams-landmark-movies.htm|archive-date=4 December 2016|url-status=live}}</ref> ೧೯೯೮ ರಲ್ಲಿ, ಅವರು 'ಹರಿಕೃಷ್ಣನ್ಸ್' ಅನ್ನು ನಿರ್ಮಿಸಿ ನಟಿಸಿದರು, ಇದರಲ್ಲಿ ಮಮ್ಮೂಟ್ಟಿ ಮತ್ತು ಜೂಹಿ ಚಾವ್ಲಾ ಸಹ ನಟಿಸಿದ್ದರು. ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ವಿಮರ್ಶಕರಿಂದ ಉತ್ತಮ ಸ್ವೀಕಾರ ಪಡೆಯಲಿಲ್ಲ.<ref>{{cite web|url=http://www.rediff.com/movies/1999/mar/11moh1.htm|title=Nothing, neither criticism nor compliment, affects me|work=[[Rediff.com]]|last=Warrier|first=Shobha|date=11 March 1999|access-date=6 May 2012|archive-url=https://web.archive.org/web/20161204174203/http://www.rediff.com/movies/1999/mar/11moh1.htm|archive-date=4 December 2016|url-status=live}}</ref> ಈ ಚಿತ್ರವು ಎರಡು ಕ್ಲೈಮ್ಯಾಕ್ಸ್ಗಳನ್ನು ಹೊಂದಿತ್ತು, ಅವುಗಳನ್ನು ಪ್ರತಿಯೊಂದು ಪ್ರದೇಶದಲ್ಲಿ ಎರಡು ಪ್ರಮುಖ ನಟರ ಜನಪ್ರಿಯತೆಯ ಆಧಾರದ ಮೇಲೆ ವಿವಿಧ ಪ್ರದೇಶಗಳಲ್ಲಿ ಪ್ರದರ್ಶಿಸಲಾಯಿತು.<ref>{{cite web|url=http://www.rediff.com/movies/1998/sep/14hari.htm|title=The win-win situation|work=[[Rediff.com]]|last=Jose|first=D.|date=14 September 1998|access-date=6 May 2012|archive-url=https://web.archive.org/web/20161204174523/http://www.rediff.com/movies/1998/sep/14hari.htm|archive-date=4 December 2016|url-status=live}}</ref> ಆದಾಗ್ಯೂ, ಇದು ವಿವಾದಾತ್ಮಕವಾಯಿತು ಮತ್ತು ಹಿಂದೂ ಪ್ರಧಾನ ಪ್ರದೇಶಗಳಲ್ಲಿ ಪ್ರದರ್ಶಿಸಲಾದ ಪ್ರತಿಗಳು ಮೋಹನ್ಲಾಲ್ ನಾಯಕಿಯನ್ನು ಮದುವೆಯಾಗುವುದನ್ನು ತೋರಿಸಿದೆ ಎಂದು ಹೇಳಿ ಮೊಕದ್ದಮೆಗಳನ್ನು ಹೂಡಲಾಯಿತು, ಆದರೆ ಮುಸ್ಲಿಂ ಪ್ರಧಾನ ಪ್ರದೇಶಗಳಲ್ಲಿ ಮಮ್ಮೂಟ್ಟಿ ಅವಳನ್ನು ಮದುವೆಯಾಗುವುದನ್ನು ತೋರಿಸಲಾಯಿತು. ಪ್ರಮುಖ ಸಮಸ್ಯೆಯೆಂದರೆ, ಸೆನ್ಸಾರ್ ಮಂಡಳಿಗೆ ಸಲ್ಲಿಸಿದ ಚಿತ್ರದ ಆವೃತ್ತಿಯು ಮೋಹನ್ಲಾಲ್ ಪ್ರಮುಖ ನಟಿಯನ್ನು ಗೆಲ್ಲುವ ಆವೃತ್ತಿಯಾಗಿತ್ತು. ಆದ್ದರಿಂದ ಅವರು ಮಮ್ಮೂಟ್ಟಿ ಆವೃತ್ತಿಯನ್ನು ಚಿತ್ರಮಂದಿರಗಳಿಂದ ತೆಗೆದುಹಾಕಲು ಒತ್ತಾಯಿಸಲಾಯಿತು, ಅದನ್ನು ಮೂಲ ಆವೃತ್ತಿಯಿಂದ ಬದಲಾಯಿಸಲಾಯಿತು. ಆದಾಗ್ಯೂ, ದೂರದರ್ಶನ ಪ್ರಥಮ ಪ್ರದರ್ಶನಗಳಲ್ಲಿ, ಎರಡೂ ಚಿತ್ರ ಆವೃತ್ತಿಗಳನ್ನು ತೋರಿಸಲಾಗಿದೆ.<ref>{{cite web|url=http://www.rediff.com/movies/1998/oct/06hari.htm|title=Double trouble|work=[[Rediff.com]]|last=Jose|first=D.|date=6 October 1998|access-date=6 May 2012|archive-url=https://web.archive.org/web/20161204174801/http://www.rediff.com/movies/1998/oct/06hari.htm|archive-date=4 December 2016|url-status=live}}</ref>
ಮೋಹನ್ಲಾಲ್ ೧೯೯೯ ರ ಇಂಡೋ-ಫ್ರೆಂಚ್ ಐತಿಹಾಸಿಕ ನಾಟಕ 'ವನಪ್ರಸ್ಥಂ' ನಲ್ಲಿ ಕಥಕಳಿ ಕಲಾವಿದನ ಪಾತ್ರವನ್ನು ನಿರ್ವಹಿಸಿದರು. ಇದನ್ನು ಅವರು ನಿರ್ಮಿಸಿದರು ಮತ್ತು ಶಾಜಿ ಎನ್. ಕರುಣ್ ನಿರ್ದೇಶಿಸಿದರು. ಇದು ಅವರಿಗೆ ಎರಡನೇ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು ಮತ್ತು ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಅವರಿಗೆ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟ ಮೊದಲ ಚಿತ್ರವಾಗಿದೆ. ಈ ಚಿತ್ರವು ಕಾನ್ಸ್ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಯಿತು ಮತ್ತು ಅವರ ಅಭಿನಯವನ್ನು ವಿಮರ್ಶಕರು ಪ್ರಶಂಸಿಸಿದರು. ಇದು ಅವರಿಗೆ ನಾಲ್ಕನೇ ಕೇರಳ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ, ಎರಡನೇ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಆರನೇ ಫಿಲ್ಮ್ಫೇರ್ ಅತ್ಯುತ್ತಮ ನಟ (ಮಲಯಾಳಂ) ಪ್ರಶಸ್ತಿಯನ್ನು ತಂದುಕೊಟ್ಟಿತು.<ref name="rd"/><ref>{{cite news|url=http://www.thehindu.com/2000/07/28/stories/09280226.htm|title=Accolades are a norm|work=[[The Hindu]]|last=Narasimham|first=M. L.|date=28 July 2000|access-date=6 May 2012|archive-url=https://web.archive.org/web/20161204175519/http://www.thehindu.com/2000/07/28/stories/09280226.htm|archive-date=4 December 2016|url-status=dead}}</ref><ref>{{cite news|url=http://www.thehindu.com/2000/07/14/stories/09140221.htm|title=On a winning spree|work=[[The Hindu]]|last=Santhosh|first=K.|date=14 July 2000|access-date=6 May 2012|archive-url=https://web.archive.org/web/20161204175307/http://www.thehindu.com/2000/07/14/stories/09140221.htm|archive-date=4 December 2016|url-status=dead}}</ref> 'ವನಪ್ರಸ್ಥಂ' ಅನ್ನು ಅಮೆರಿಕನ್ ಫಿಲ್ಮ್ ಇನ್ಸ್ಟಿಟ್ಯೂಟ್ ಫೆಸ್ಟ್ನಲ್ಲಿ ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಯಿತು.<ref>{{cite news|last=Philip|first=Benson|title=Must Watch International Award Winning Malayalam Films|url=http://timesofindia.indiatimes.com/entertainment/malayalam/movies/must-watch-international-award-winning-malayalam-films/photostory/52255815.cms|access-date=11 January 2017|work=[[The Times of India]]|date=13 May 2016|archive-url=https://web.archive.org/web/20170113194956/http://timesofindia.indiatimes.com/entertainment/malayalam/movies/must-watch-international-award-winning-malayalam-films/photostory/52255815.cms|archive-date=13 January 2017|url-status=live}}</ref> ೨೦೧೪ ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಭಾರತೀಯ ಸಿನೆಮಾದಲ್ಲಿ ನೃತ್ಯವನ್ನು ಆಚರಿಸುವುದು' ವಿಭಾಗದಲ್ಲಿ 'ವನಪ್ರಸ್ಥಂ' ಅನ್ನು ಹಿಂದಿನ ಪ್ರದರ್ಶನದಲ್ಲಿ ತೋರಿಸಲಾಯಿತು.<ref>{{cite web|title=Indian Cinema Catalogue 2014|url=http://www.iffi.nic.in/Indian%20Cinema%20Catalogue%202014.pdf|publisher=[[International Film Festival of India]]|date=20 November 2014|access-date=16 September 2016|archive-url=https://web.archive.org/web/20160316163822/http://www.iffi.nic.in/Indian%20Cinema%20Catalogue%202014.pdf|archive-date=16 March 2016|url-status=dead}}</ref>
===ವೃತ್ತಿ ವಿಸ್ತರಣೆ ಮತ್ತು ಸ್ಟಾರ್ಡಮ್ (2000–2009)===
[[File:Mohanlal and Madhu.jpg|thumb|alt=Mohanlal talking to actor Madhu
|ಮೋಹನ್ಲಾಲ್ ಮತ್ತು ಮಧು ಅವರು 2008 ರಲ್ಲಿ ಅಮ್ಮ ಸಾಮಾನ್ಯ ಸಭೆಯಲ್ಲಿ]]
೨೦೦೦ ರಲ್ಲಿ, ಮೋಹನ್ಲಾಲ್ 'ನರಸಿಂಹಂ' ನಲ್ಲಿ ನಟಿಸಿದರು. ಇದರಲ್ಲಿ ಅವರು ಒಳ್ಳೆಯ ಹೃದಯದ ದುಷ್ಟನ ಪಾತ್ರವನ್ನು ನಿರ್ವಹಿಸಿದರು.<ref>{{cite web|url=http://www.frontline.in/static/html/fl1715/17151210.htm|publisher=[[Frontline (magazine)|Frontline]]|title=Greasepaint, and beyond|last=Krishnankumar|first=R.|date=22 July 2000|access-date=20 March 2008|archive-url=https://web.archive.org/web/20161204190956/http://www.frontline.in/static/html/fl1715/17151210.htm|archive-date=4 December 2016 |url-status=live}}</ref> ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.<ref name="narasimham">{{cite web|url=http://www.rediff.com/entertai/2001/jan/24mallu.htm|title=Sleaze time, folks!|work=[[Rediff.com]]|last=Ayyappan|first=R.|date=24 January 2001|access-date=3 March 2011|archive-url=https://web.archive.org/web/20161204191304/http://www.rediff.com/entertai/2001/jan/24mallu.htm|archive-date=4 December 2016 |url-status=live}}</ref> ಮುಂದಿನ ಎರಡು ವರ್ಷಗಳಲ್ಲಿ, ಮೋಹನ್ಲಾಲ್ ಅವರು 'ರಾವಣಪ್ರಭು' (೨೦೦೧), 'ಪ್ರಜಾ' (೨೦೦೧), 'ಒನ್ನಾಮನ್' (೨೦೦೨), 'ತಂಡವಂ' (೨೦೦೨) ಮತ್ತು 'ಚತುರಂಗಂ' (೨೦೦೨) ನಂತಹ ಚಿತ್ರಗಳಲ್ಲಿ ಇದೇ ರೀತಿಯ ಜೀವನಕ್ಕಿಂತ ದೊಡ್ಡದಾದ ಆಕ್ಷನ್ ಹೀರೋ ಪಾತ್ರಗಳಲ್ಲಿ ಟೈಪ್ ಕಾಸ್ಟ್ ಆಗಿದ್ದರು. 'ರಾವಣಪ್ರಭು' ಹೊರತುಪಡಿಸಿ, ಈ ಚಿತ್ರಗಳು ಅವುಗಳ ಪುನರಾವರ್ತಿತ ಕಥಾವಸ್ತು, ಅಶ್ಲೀಲ ಸಂಭಾಷಣೆಗಳು, ಪಂಚ್ ಲೈನ್ಗಳು ಮತ್ತು ಪುರುಷ ಪ್ರಧಾನ ದೃಷ್ಟಿಕೋನಕ್ಕಾಗಿ ವ್ಯಾಪಕವಾಗಿ ಟೀಕಿಸಲ್ಪಟ್ಟವು.<ref name="narasimham"/><ref>{{cite web|url=http://www.sify.com/movies/thandavam-review-malayalam-pclutucejjhjc.html|title=Thandavam|website=[[Sify]]|date=16 August 2002|access-date=6 May 2012|author=Moviebuzz|archive-url=https://web.archive.org/web/20161204191733/http://www.sify.com/movies/thandavam-review-malayalam-pclutucejjhjc.html|archive-date=4 December 2016 |url-status=dead}}</ref><ref>{{cite web|url=http://www.sify.com/movies/praja-review-malayalam-pclunFceecebe.html|title=Praja|website=[[Sify]]|author=Moviebuzz|date=24 December 2001|access-date=6 May 2012|archive-url=https://web.archive.org/web/20161204191837/http://www.sify.com/movies/praja-review-malayalam-pclunFceecebe.html|archive-date=4 December 2016 |url-status=dead}}</ref> 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ನ ವಿಮರ್ಶಕರೊಬ್ಬರು "ನರಸಿಂಹಂನ ಅತಿಯಾದ ಪ್ರಭಾವವು ಅತಿಯಾಗಿ ಬಲವಾಗಿದೆ ಮತ್ತು ಅದು ಸದ್ಯಕ್ಕೆ ಉತ್ತಮ ಚಿತ್ರಗಳ ಸಾಧ್ಯತೆಗಳನ್ನು ಕೊಂದಿದೆ. 'ಮಳ', 'ಮಧುರನೊಂಬರಕಟ್ಟು' ಮುಂತಾದ ಉತ್ತಮವಾಗಿ ನಿರ್ಮಿಸಲಾದ ಮಹಿಳಾ ಪ್ರಧಾನ ಚಿತ್ರಗಳ ವೈಫಲ್ಯಕ್ಕೆ ಬೇರೆ ಕಾರಣವನ್ನು ನಾನು ಕಾಣುತ್ತಿಲ್ಲ" ಎಂದು ಬರೆದರು.<ref name="narasimham"/>
೨೦೦೨ ರಲ್ಲಿ, ಮೋಹನ್ಲಾಲ್ ಅವರ ಮೊದಲ ಬಾಲಿವುಡ್ ಚಿತ್ರ 'ಕಂಪನಿ'ಯಲ್ಲಿ ಐಪಿಎಸ್ ಶ್ರೀನಿವಾಸನ್, ಮುಂಬೈ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದರು.<ref name="rd"/> ಇದು ಅವರನ್ನು ಭಾರತದ ಹಿಂದಿ ಮಾತನಾಡುವ ಪ್ರೇಕ್ಷಕರಿಗೆ ಪರಿಚಯಿಸಿತು ಮತ್ತು ಇದಕ್ಕಾಗಿ ಅವರು ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು ಮತ್ತು ಸ್ಟಾರ್ ಸ್ಕ್ರೀನ್ ಪ್ರಶಸ್ತಿಯನ್ನು ಅತ್ಯುತ್ತಮ ಪೋಷಕ ನಟನಾಗಿ ಗೆದ್ದರು.<ref>{{cite news|url=http://www.thehindu.com/todays-paper/tp-features/tp-fridayreview/bold-themes-different-roles/article3218428.ece|title=Bold themes, different roles|work=[[The Hindu]]|date=9 June 2006|access-date=3 March 2011|last=Nagarajan|first=Saraswathy|archive-url=https://web.archive.org/web/20161204192315/http://www.thehindu.com/todays-paper/tp-features/tp-fridayreview/bold-themes-different-roles/article3218428.ece|archive-date=4 December 2016|url-status=live}}</ref><ref>{{cite news|url=http://www.bbc.co.uk/shropshire/content/image_galleries/iifa_red_carpet_gallery.shtml?4|title=Stars arrive at IIFA awards|work=[[BBC]]|access-date=3 March 2011|archive-date=22 July 2012|archive-url=https://archive.today/20120722194226/http://www.bbc.co.uk/shropshire/content/image_galleries/iifa_red_carpet_gallery.shtml?4|url-status=dead}}</ref> ಈ ಚಿತ್ರವು ಮುಂಬೈನಲ್ಲಿ ಆಳ್ವಿಕೆ ನಡೆಸಿದ ಇಬ್ಬರು ಅಂಡರ್ ವರ್ಲ್ಡ್ ಡಾನ್ಗಳ (ಅಜಯ್ ದೇವ್ಗನ್ ಮತ್ತು ವಿವೇಕ್ ಒಬೆರಾಯ್ ನಟಿಸಿದ್ದಾರೆ) ನೈಜ ಜೀವನದ ಕಥೆಯನ್ನು ಆಧರಿಸಿದೆ. ಮೋಹನ್ಲಾಲ್ ಅವರ ಅಭಿನಯವನ್ನು ಚೆನ್ನಾಗಿ ಸ್ವೀಕರಿಸಲಾಯಿತು. 'ದಿ ಹಿಂದೂ' ಅವರು "ತಮ್ಮ ನೈಸರ್ಗಿಕ ಶ್ರೇಷ್ಠತೆಯಲ್ಲಿದ್ದಾರೆ" ಮತ್ತು "ಮೊದಲ ಬಾರಿಗೆ ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡಾಗ ಇತರ ದಕ್ಷಿಣ ಭಾರತೀಯ ನಟರು ಮಾಡುವಂತೆ ಸ್ತಬ್ಧ ಅಥವಾ ಆತಂಕಿತರಾಗಿ ಕಾಣುತ್ತಿಲ್ಲ" ಎಂದು ಗಮನಿಸಿದರು.<ref>{{cite news| url=http://www.thehindu.com/thehindu/mp/2002/04/22/stories/2002042200750300.htm|work=[[The Hindu]]|last=Palicha|first=Paresh C.|title=Mohanlal at ease in Company|date=22 April 2002|access-date=20 April 2009|archive-url=https://web.archive.org/web/20161204193002/http://www.thehindu.com/thehindu/mp/2002/04/22/stories/2002042200750300.htm|archive-date=4 December 2016 |url-status=dead}}</ref> ೨೦೧೦ ರಲ್ಲಿ ಹಿಂದಿಫಿಲ್ಮ್ನ್ಯೂಸ್.ಕಾಮ್ನ ಆನ್ಲೈನ್ ಸಮೀಕ್ಷೆಯಲ್ಲಿ, 'ಕಂಪನಿ' ಯಲ್ಲಿನ ಮೋಹನ್ಲಾಲ್ ಅವರ ಅಭಿನಯವನ್ನು "ಕಳೆದ ದಶಕದಲ್ಲಿ (೨೦೦೧-೨೦೧೦) ಬಾಲಿವುಡ್ ನಟನ ಅತ್ಯುತ್ತಮ ಅಭಿನಯ" ಎಂದು ಆಯ್ಕೆ ಮಾಡಲಾಯಿತು. ಅವರು ಪ್ರೇಕ್ಷಕರ ಪಟ್ಟಿಯಲ್ಲಿ ನಂ.೧ ಮತ್ತು ವಿಮರ್ಶಕರ ಪಟ್ಟಿಯಲ್ಲಿ ನಂ.೬ ಸ್ಥಾನದಲ್ಲಿದ್ದರು.<ref>{{cite web|url=http://www.hindifilmnews.com/polls-2/poll-5-the-finest-performance-of-a-bollywood-actor-in-the-last-decade-2001-2010/#.UNNmrXdTGSo|title=Poll-5: The Finest Performance of a Bollywood Actor in the Last Decade (2001–2010)|publisher=Hindifilmnews.com|access-date=21 December 2012|url-status=dead|archive-url=https://web.archive.org/web/20130627120413/http://www.hindifilmnews.com/polls-2/poll-5-the-finest-performance-of-a-bollywood-actor-in-the-last-decade-2001-2010/#.UNNmrXdTGSo|archive-date=27 June 2013}}</ref>
ಮರು ವರ್ಷ, ಮೋಹನ್ಲಾಲ್ ತಮ್ಮ ಆಕ್ಷನ್ ಹೀರೋ ಚಿತ್ರಣವನ್ನು ಬದಲಾಯಿಸಲು ಪ್ರಯತ್ನಿಸುತ್ತಾ,<ref>{{cite news|url=http://www.thehindu.com/thehindu/mp/2002/11/28/stories/2002112800890403.htm|work=[[The Hindu]]|title=Superstars running scared?|date=28 November 2002|access-date=22 May 2009|archive-url=https://web.archive.org/web/20161204200806/http://www.thehindu.com/thehindu/mp/2002/11/28/stories/2002112800890403.htm|archive-date=4 December 2016 |url-status=dead}}</ref> 'ಕಿಲಿಚುಂದನ್ ಮಂಪಳಂ', 'ಬಾಲೆಟ್ಟನ್', 'ಹರಿಹರನ್ ಪಿಲ್ಲೈ ಹ್ಯಾಪಿ ಆಣು' ಮತ್ತು 'ಮಿಸ್ಟರ್ ಬ್ರಹ್ಮಚಾರಿ' ಯಂತಹ ಹಾಸ್ಯ ಪಾತ್ರಗಳಿಗೆ ಮರಳಿದರು. ನಟನಿಗೆ ಮರಳುವ ವಾಹನವೆಂದು ಪ್ರಚಾರ ಮಾಡಲ್ಪಟ್ಟ 'ಕಿಲಿಚುಂದನ್ ಮಂಪಳಂ' ಉತ್ತಮ ವಿಮರ್ಶೆಗಳನ್ನು ಮತ್ತು ಯೋಗ್ಯ ಬಾಕ್ಸ್ ಆಫೀಸ್ ಸಂಗ್ರಹವನ್ನು ಪಡೆಯಿತು.<ref>{{cite news|url=http://www.thehindu.com/thehindu/mp/2003/04/24/stories/2003042400120203.htm|work=[[The Hindu]]|last=Pillai|first=Sreedhar|title=Box-office update|date=28 April 2003|access-date=24 April 2010|archive-url=https://web.archive.org/web/20161204201012/http://www.thehindu.com/thehindu/mp/2003/04/24/stories/2003042400120203.htm|archive-date=4 December 2016 |url-status=dead}}</ref><ref>{{cite web|url=http://www.sify.com/movies/kilichundan-mambazham-review-malayalam-pclu1idhbfgij.html|title=Kilichundan Mambazham|website=[[Sify]]|access-date=6 May 2012|archive-url=https://web.archive.org/web/20161204202732/http://www.sify.com/movies/kilichundan-mambazham-review-malayalam-pclu1idhbfgij.html|archive-date=4 December 2016 |url-status=dead}}</ref> ವಿ.ಎಂ. ವಿನು ನಿರ್ದೇಶನದ 'ಬಾಲೆಟ್ಟನ್' ಕೂಡ ವಾಣಿಜ್ಯಿಕ ಯಶಸ್ಸು ಗಳಿಸಿತು.<ref>{{cite news|url=http://www.thehindubusinessline.com/2004/01/01/stories/2004010101290200.htm|title=Tinsel world sees a bright picture|work=[[The Hindu Business Line]]|last1=Venkatraman|first1=Latha|last2=Radhakrishnan|first2=Sankar|date=1 January 2004|access-date=6 May 2012|archive-url=https://web.archive.org/web/20100307015933/http://www.thehindubusinessline.com/2004/01/01/stories/2004010101290200.htm|archive-date=7 March 2010|url-status=live}}</ref> ಮೋಹನ್ಲಾಲ್ ಅತನಿಪ್ಪರಂಬಿಲ್ ಬಾಲಚಂದ್ರನ್ ಪಾತ್ರವನ್ನು ನಿರ್ವಹಿಸಿದರು. ಇವರು ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುವ ಬ್ಯಾಂಕ್ ಉದ್ಯೋಗಿ, ಅವರ ತಂದೆಯ ಮರಣದ ನಂತರ ಅನೇಕ ರಹಸ್ಯಗಳನ್ನು ಮರೆಮಾಡಲು ಒತ್ತಾಯಿಸಲ್ಪಡುತ್ತಾರೆ, ಇದು ಅವರ ಕುಟುಂಬದ ಅಪನಂಬಿಕೆಗೆ ಕಾರಣವಾಗುತ್ತದೆ.<ref name="balettan">{{cite news|url=http://www.hindu.com/mp/2003/09/04/stories/2003090401100200.htm|work=[[The Hindu]]|title=Mohanlal back to 'chammal' role|last1=Abhijath|last2=Ram|date=4 September 2003|access-date=6 May 2012|archive-url=https://web.archive.org/web/20060628023259/http://www.hindu.com/mp/2003/09/04/stories/2003090401100200.htm|archive-date=28 June 2006|url-status=dead}}</ref> ೨೦೦೪ ರಲ್ಲಿ, 'ನಟ್ಟುರಾಜವು' ಮತ್ತು 'ಮಂಬಳಕ್ಕಾಲಂ' ಮಾತ್ರ ಅವರ ಯಶಸ್ಸುಗಳಾಗಿವೆ.<ref>{{cite web|url=http://www.sify.com/movies/malayalam-cinema-analysis-2004-news-malayalam-kkfvAKceaeasi.html|title=Malayalam cinema- Analysis 2004!|website=[[Sify]]|author=Moviebuzz|date=1 January 2005|access-date=6 May 2012|archive-url=https://web.archive.org/web/20161204202246/http://www.sify.com/movies/malayalam-cinema-analysis-2004-news-malayalam-kkfvAKceaeasi.html|archive-date=4 December 2016 |url-status=dead}}</ref>
ಮೋಹನ್ಲಾಲ್ ೨೦೦೫ ರಲ್ಲಿ 'ಉದಯನಾಣು ತಾರಂ' ಎಂಬ ಕಪ್ಪು ಹಾಸ್ಯದಲ್ಲಿ ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ದೇಶಕನಾಗಿ ಕಾಣಿಸಿಕೊಂಡರು. ಇದು ವಿಮರ್ಶಕರಿಂದ ಉತ್ತಮ ಸ್ವೀಕಾರ ಪಡೆಯಿತು ಮತ್ತು ವಡೋದರಾ, ರಾಜ್ಕೋಟ್, ಪುಣೆ ಮತ್ತು ಅಹಮದಾಬಾದ್ನಂತಹ ಮಲಯಾಳಂ ಚಿತ್ರಗಳು ನಿಯಮಿತವಾಗಿ ಪ್ರದರ್ಶನಗೊಳ್ಳದ ಸ್ಥಳಗಳಲ್ಲೂ ಉತ್ತಮ ಪ್ರದರ್ಶನ ನೀಡಿತು.<ref name="udayan"/> ಅದೇ ವರ್ಷ, ಅವರು ನಿರ್ದೇಶಕ ಬ್ಲೆಸ್ಸಿ ಅವರ ಎರಡನೇ ಚಿತ್ರ 'ತನ್ಮಾತ್ರ' ದಲ್ಲಿ ಕಾಣಿಸಿಕೊಂಡರು. ಇದು ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಮೋಹನ್ಲಾಲ್ ಅವರ ಅಭಿನಯವನ್ನು ವಿಮರ್ಶಕರು ಹೆಚ್ಚು ಪ್ರಶಂಸಿಸಿದರು.<ref name="thanmatra">{{cite web|url=http://specials.rediff.com/movies/2006/feb/15sd1.htm|title=Exclusive! Mohanlal on Thanmatra|work=[[Rediff.com]]|last=Warrier|first=Shobha|access-date=6 May 2012|archive-url=https://web.archive.org/web/20161204195922/http://specials.rediff.com/movies/2006/feb/15sd1.htm|archive-date=4 December 2016 |url-status=live}}</ref> ಈ ಅಭಿನಯಕ್ಕಾಗಿ ಮೋಹನ್ಲಾಲ್ ತಮ್ಮ ಐದನೇ ಕೇರಳ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಏಳನೇ ಫಿಲ್ಮ್ಫೇರ್ ಅತ್ಯುತ್ತಮ ನಟ (ಮಲಯಾಳಂ) ಪ್ರಶಸ್ತಿಯನ್ನು ಗೆದ್ದರು. ಚಿತ್ರದಲ್ಲಿ, ಅವರ ಪಾತ್ರವು ಎರಡನೇ ಭಾಗದಲ್ಲಿ ಮಾತನಾಡುವುದಿಲ್ಲ.<ref name="thanmatra"/><ref name="hindu2"/><ref>{{cite web|url=http://www.rediff.com/movies/report/blessy/20060308.htm|title=Blessy: Thrilled about winning|work=[[Rediff.com]]|first=Paresh C.|last=Palicha|date=8 March 2006|access-date=6 May 2012|archive-url=https://web.archive.org/web/20161204195711/http://www.rediff.com/movies/report/blessy/20060308.htm|archive-date=4 December 2016 |url-status=live}}</ref>
೨೦೦೬ ರಲ್ಲಿ, ಅವರು ನಿರ್ದೇಶಕ ಸತ್ಯನ್ ಅಂತಿಕ್ಕಾಡ್ ಅವರೊಂದಿಗೆ ಕೌಟುಂಬಿಕ ನಾಟಕ 'ರಸತಂತ್ರಂ' ನಲ್ಲಿ ಕೆಲಸ ಮಾಡಿದರು. ಮೋಹನ್ಲಾಲ್ ಮೇಜರ್ ರವಿ ನಿರ್ದೇಶನದ 'ಕೀರ್ತಿ ಚಕ್ರ' ದಲ್ಲೂ ನಟಿಸಿದರು. ಇದರಲ್ಲಿ ಅವರು ಭಾರತೀಯ ಸೇನಾ ಅಧಿಕಾರಿ ಮೇಜರ್ ಮಹಾದೇವನ್ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಯಿತು ಮತ್ತು ಇದು ಗಮನಾರ್ಹ ವಾಣಿಜ್ಯ ಯಶಸ್ಸು ಗಳಿಸಿತು.<ref>{{cite news|url=http://www.thehindu.com/todays-paper/tp-features/tp-fridayreview/superstars-continue-their-reign/article3231843.ece|work=[[The Hindu]]|title=Superstars continue their reign|date=29 December 2006|access-date=30 May 2009|archive-url=https://web.archive.org/web/20161204195419/http://www.thehindu.com/todays-paper/tp-features/tp-fridayreview/superstars-continue-their-reign/article3231843.ece|archive-date=4 December 2016 |url-status=live}}</ref> ಈ ಚಿತ್ರದ ಡಬ್ ಮಾಡಲಾದ ತಮಿಳು ಆವೃತ್ತಿಯು ತಮಿಳುನಾಡಿನಲ್ಲಿ 'ಅರನ್' ಎಂದು ಬಿಡುಗಡೆಯಾಯಿತು, ಆದರೆ ಅವರ ಧ್ವನಿಯನ್ನು ಬಳಸದ ಕಾರಣ ಮೋಹನ್ಲಾಲ್ ಅವರು ಈ ಚಿತ್ರದಿಂದ ದೂರವಿದ್ದರು, "ಚಿತ್ರದಲ್ಲಿ ನನ್ನ ಪಾತ್ರಕ್ಕಾಗಿ ನಾನು ಮಾತನಾಡಲು ಬಯಸುತ್ತೇನೆ" ಎಂದು ಹೇಳಿದರು.<ref>{{cite news|url=http://www.thehindu.com/todays-paper/tp-national/tp-tamilnadu/mohanlal-dissociates-himself-from-aran/article3087136.ece|work=[[The Hindu]]|title=Mohanlal dissociates himself from 'Aran'|last=Kumar|first=S. R. Ashok|date=8 August 2006|access-date=8 May 2008|archive-url=https://web.archive.org/web/20161204195238/http://www.thehindu.com/todays-paper/tp-national/tp-tamilnadu/mohanlal-dissociates-himself-from-aran/article3087136.ece|archive-date=4 December 2016 |url-status=live}}</ref> ಮೋಹನ್ಲಾಲ್ ಮೇಜರ್ ಮಹಾದೇವನ್ ಸರಣಿಯಲ್ಲಿ 'ಕುರುಕ್ಷೇತ್ರ' (೨೦೦೮) ಮತ್ತು 'ಕಾಂದಹಾರ್' (೨೦೧೦) ಅನುಕ್ರಮ ಚಿತ್ರಗಳಲ್ಲೂ ನಟಿಸಿದರು. ೨೦೦೯ ರಲ್ಲಿ, ಭಾರತ ಸರ್ಕಾರವು ಅವರಿಗೆ ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿತು.<ref>{{cite news|url=https://www.newindianexpress.com/entertainment/malayalam/2013/sep/04/mohanlals-fb-page-crosses-one-million-fans-513324.html|title=Mohanlal's FB page crosses one million fans|work=[[The New Indian Express]]|date=4 September 2013|access-date=20 December 2015|archive-url=https://web.archive.org/web/20161204195045/http://www.newindianexpress.com/entertainment/malayalam/2013/sep/04/Mohanlals-FB-page-crosses-one-million-fans-513324.html|archive-date=4 December 2016 |url-status=live}}</ref>
೨೦೦೭ ರಲ್ಲಿ, ಮೋಹನ್ಲಾಲ್ ಪಿ.ಟಿ. ಕುಂಜು ಮುಹಮ್ಮದ್ ನಿರ್ದೇಶನದ 'ಪರದೇಸಿ' ಯಲ್ಲಿನ ಅಭಿನಯಕ್ಕಾಗಿ ಕೇರಳ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರು. 'ಸಿಫಿ.ಕಾಮ್' "ಮೋಹನ್ಲಾಲ್ ಮಂತ್ರಮುಗ್ಧಗೊಳಿಸುವವರಾಗಿದ್ದಾರೆ ಮತ್ತು ಭಾವನೆಯೊಂದಿಗೆ ಮತ್ತೊಮ್ಮೆ ಅಭಿನಯದ ಭಾಷೆಯನ್ನು ಮರುಶೋಧಿಸುತ್ತಾರೆ" ಎಂದು ಹೇಳಿತು. ಅವರ ಜುಲೈ ಬಿಡುಗಡೆಯಾದ 'ಹಾಲೋ' ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>[https://web.archive.org/web/20100305075728/http://www.bharatwaves.com/news/Mohanlal%E2%80%99s-Hello:-biggest-Mollywood-hit-of-2007-7964.html "Malayalam Cinema News : Mohanlal's 'Hello': biggest Mollywood hit of 2007".] Bharatwaves.com. Retrieved 15 January 2011.</ref><ref>[http://www.sify.com/movies/pardesi-review-malayalam-14542769.html Movie Review:Pardesi] {{Webarchive|url=https://web.archive.org/web/20131222221213/http://www.sify.com/movies/pardesi-review-malayalam-14542769.html |date=22 December 2013 }}. Sify.com. Retrieved on 6 May 2012.</ref> ಆಗಸ್ಟ್ನಲ್ಲಿ, ಅವರು ತಮ್ಮ ಎರಡನೇ ಬಾಲಿವುಡ್ ಚಿತ್ರ 'ಆಗ್' (ಇದನ್ನು 'ರಾಮ್ ಗೋಪಾಲ್ ವರ್ಮಾ ಕಿ ಆಗ್' ಎಂದೂ ಕರೆಯುತ್ತಾರೆ) ನಲ್ಲಿ ಕಾಣಿಸಿಕೊಂಡರು. ಇದು ಬಾಲಿವುಡ್ ಕ್ಲಾಸಿಕ್ 'ಶೋಲೆ' (೧೯೭೫) ನ ಪುನರ್ನಿರ್ಮಾಣವಾಗಿದೆ. ಮೋಹನ್ಲಾಲ್ ಮೂಲ ಚಿತ್ರದಲ್ಲಿ ಸಂಜೀವ್ ಕುಮಾರ್ ನಿರ್ವಹಿಸಿದ ಪಾತ್ರವನ್ನು ಪುನರಾವರ್ತಿಸಿದರು.<ref>{{cite web |url=http://www.boxofficeindia.com/showProd.php?itemCat=214 |title=Boxofficeindia.com |publisher=[[Box Office India]] |access-date=12 September 2013 |archive-url=https://web.archive.org/web/20131109040918/http://www.boxofficeindia.com/showProd.php?itemCat=214 |archive-date=9 November 2013 |url-status=live }}</ref> ೨೦೦೮ ರಲ್ಲಿ, ಮೋಹನ್ಲಾಲ್ ಬಹುನಕ್ಷತ್ರ ಬ್ಲಾಕ್ಬಸ್ಟರ್ 'ಟ್ವೆಂಟಿ:೨೦' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು ಮತ್ತು ೨೦೦೯ ರಲ್ಲಿ, ಅವರು ತಮಿಳು ಚಿತ್ರ 'ಉನ್ನೈಪೋಲ್ ಒರುವನ್' ನಲ್ಲಿ ಕಮಲ್ ಹಾಸನ್ ಜೊತೆ ಸಹ ನಟಿಸಿದರು. ಆ ವರ್ಷದ ಅವರ ಕೊನೆಯ ಚಿತ್ರ 'ಎವಿಡಂ ಸ್ವರ್ಗಮಾಣು' ನಿರ್ದೇಶಕ ರೋಷನ್ ಆಂಡ್ರ್ಯೂಸ್ ಅವರದ್ದಾಗಿತ್ತು.
### ಮುಂದುವರಿದ ವಾಣಿಜ್ಯ ಯಶಸ್ಸು (2010–2015)
[[File:Bachan mohanlal.jpg|thumb|ಮೋಹನ್ಲಾಲ್ ಮತ್ತು ಅಮಿತಾಬ್ ಬಚ್ಚನ್ ಜೊತೆಗೆ|alt=Mohanlal with the Bollywood actor Amitabh Bachchan]]
೨೦೧೦ ರಲ್ಲಿ, ಅವರು ಐದು ಚಿತ್ರಗಳಲ್ಲಿ ನಟಿಸಿದರು. ಮೊದಲನೆಯದು 'ಜನಕನ್', ಇದು ಅಪರಾಧ ಥ್ರಿಲ್ಲರ್ ಆಗಿದ್ದು, ಅದರಲ್ಲಿ ಅವರು ಸುರೇಶ್ ಗೋಪಿ ಜೊತೆ ಸಹ ನಟಿಸಿದರು. ಇದನ್ನು ಎಸ್.ಎನ್. ಸ್ವಾಮಿ ಬರೆದಿದ್ದಾರೆ. ಈ ಚಿತ್ರದಲ್ಲಿ, ಅವರು ವಕೀಲ ಸೂರ್ಯ ನಾರಾಯಣನ್ ಪಾತ್ರವನ್ನು ನಿರ್ವಹಿಸಿದರು. ಅವರು ನ್ಯಾಯಕ್ಕಾಗಿ ತಮ್ಮನ್ನು ಸಮೀಪಿಸುವ ಕೆಲವು ಪರಾರಿಯಾದ ಶಂಕಿತರನ್ನು ಎದುರಿಸುತ್ತಾರೆ. ಮುರಳಿ ನಾಗವಲ್ಲಿ ನಿರ್ದೇಶನದ 'ಅಲೆಕ್ಸಾಂಡರ್ ದಿ ಗ್ರೇಟ್' ಮೇ ತಿಂಗಳಲ್ಲಿ ಬಿಡುಗಡೆಯಾದ ಹಾಸ್ಯಮಯ ಚಟುವಟಿಕೆಯ ಮನರಂಜನಾ ಚಿತ್ರವಾಗಿದೆ. ಟಿ.ಕೆ. ರಾಜೀವ್ ಕುಮಾರ್ ನಿರ್ದೇಶನದ, ಶ್ರೀನಿವಾಸನ್ ಚಿತ್ರಕಥೆ ಬರೆದ ಮತ್ತು ಮಣಿಯನ್ ಪಿಳ್ಳ ರಾಜು ನಿರ್ಮಿಸಿದ 'ಒರು ನಾಳ್ ವರುಮ್', ಭಾರತದಲ್ಲಿ ಭ್ರಷ್ಟಾಚಾರದ ಬಗ್ಗೆ ಸಾಮಾಜಿಕ ವಿಡಂಬನೆಯಾಗಿದೆ. ಇದು ಪರದೆಯ ಮೇಲೆ ಮೋಹನ್ಲಾಲ್-ಶ್ರೀನಿವಾಸನ್ ಅವರ ಪ್ರೀತಿಯ ಶ್ರೇಷ್ಠ ಸಂಯೋಜನೆಯನ್ನು ಪುನರೇಕಿಸಿತು. ಅವರ ಮುಂದಿನ ಚಿತ್ರ 'ಶಿಕ್ಕರ್', ಎಂ. ಪದ್ಮಕುಮಾರ್ ನಿರ್ದೇಶನದ ಕತ್ತಲೆಯ ಪ್ರತೀಕಾರದ ಥ್ರಿಲ್ಲರ್ ಆಗಿದ್ದು, ಇದರಲ್ಲಿ ಅವರು ತಮ್ಮ ಭೂತಕಾಲದಿಂದ ಪೀಡಿತರಾಗಿರುವ ಲಾರಿ ಚಾಲಕನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ರಂಜಾನ್ ಬಾಕ್ಸ್ ಆಫೀಸ್ನಲ್ಲಿ ಅಗ್ರಸ್ಥಾನದಲ್ಲಿತ್ತು.<ref>{{cite web|url = http://www.sify.com/movies/boxoffice.php?id=14957248&cid=14625530|title = Kerala Box-Office (September 1 to 16)|date = 18 September 2010|access-date = 11 October 2014|website = [[Sify]]|archive-url = https://web.archive.org/web/20141028080936/http://www.sify.com/movies/boxoffice.php?id=14957248&cid=14625530|archive-date = 28 October 2014|url-status = dead}}</ref> ನಂತರ ಮೇಜರ್ ರವಿ ನಿರ್ದೇಶನದ ಯುದ್ಧ ಚಿತ್ರ 'ಕಾಂದಹಾರ್' ಬಂದಿತು. ಇದು ೧೯೯೯ ರಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ೮೧೪ ರ ಅಪಹರಣವನ್ನು ಆಧರಿಸಿದೆ. ಮೋಹನ್ಲಾಲ್ ಈ ಚಿತ್ರದಲ್ಲಿ ಮೇಜರ್ ಮಹಾದೇವನ್ ಪಾತ್ರವನ್ನು ಪುನರಾವರ್ತಿಸಿದರು. ಇದು ಮೇಜರ್ ಮಹಾದೇವನ್ ಚಿತ್ರ ಸರಣಿಯ ಮೂರನೇ ಕಂತು ಮತ್ತು ಅಮಿತಾಬ್ ಬಚ್ಚನ್ ಅವರ ಮೊದಲ ಮಲಯಾಳಂ ಚಿತ್ರವಾಗಿದೆ.
ಮೋಹನ್ಲಾಲ್ ಅವರ ೨೦೧೧ ರ ಮೊದಲ ಬಿಡುಗಡೆಯು ಬಹುನಕ್ಷತ್ರ 'ಕ್ರಿಶ್ಚಿಯನ್ ಬ್ರದರ್ಸ್' ಆಗಿದ್ದು, ಇದು ಜೋಷಿ ನಿರ್ದೇಶನದ ಮತ್ತು ಉದಯಕೃಷ್ಣ-ಶಿಬಿ ಕೆ. ಥಾಮಸ್ ಚಿತ್ರಕಥೆ ಬರೆದ ಆಕ್ಷನ್ ನಾಟಕವಾಗಿದೆ. ಇದರಲ್ಲಿ ಅವರು ಸುರೇಶ್ ಗೋಪಿ, ದಿಲೀಪ್ ಮತ್ತು ಸರತ್ ಕುಮಾರ್ ಅವರೊಂದಿಗೆ ಸಹ ನಟಿಸಿದ್ದರು. ಮಾರ್ಚ್ನಲ್ಲಿ ೩೦೦ ಪರದೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರವು ಆ ಸಮಯದಲ್ಲಿ ಮಲಯಾಳಂ ಚಿತ್ರಕ್ಕೆ ಅತಿದೊಡ್ಡ ಬಿಡುಗಡೆಯಾಗಿತ್ತು.<ref>{{Cite news|url = http://timesofindia.indiatimes.com/entertainment/tamil/movies/news/Can-Mohanlal-pull-it-off/articleshow/7734697.cms|title = Can Mohanlal pull it off?|date = 18 March 2011|work = [[The Times of India]]|access-date = 12 October 2014|archive-url = https://web.archive.org/web/20161205101608/http://timesofindia.indiatimes.com/entertainment/tamil/movies/news/Can-Mohanlal-pull-it-off/articleshow/7734697.cms|archive-date = 5 December 2016|url-status = live}}</ref> ಈ ವೇಗದ ಚಿತ್ರವು ವಾಣಿಜ್ಯಿಕ ಯಶಸ್ಸು ಮತ್ತು ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ.<ref>{{cite web|url = http://www.rediff.com/movies/review/south-review-christian-brothers/20110318.htm|title = Review: Christian Brothers is entertaining|date = 18 March 2011|work = rediff.com|access-date = 12 October 2014|archive-url = https://web.archive.org/web/20141019005606/http://www.rediff.com/movies/review/south-review-christian-brothers/20110318.htm|archive-date = 19 October 2014|url-status = live}}</ref> ಅವರ ವಿಷು (ಏಪ್ರಿಲ್) ಬಿಡುಗಡೆಯು ರಫಿ ಮೆಕಾರ್ಟಿನ್ ನಿರ್ದೇಶನದ ಹಾಸ್ಯ ಚಿತ್ರ 'ಚೈನಾ ಟೌನ್' ಆಗಿದ್ದು, ಇದರಲ್ಲಿ ಅವರು ಜಯರಾಂ ಮತ್ತು ದಿಲೀಪ್ ಅವರೊಂದಿಗೆ ಸಹ ನಟಿಸಿದರು. ವಿಮರ್ಶೆಗಳು ಮಿಶ್ರವಾಗಿದ್ದರೂ, ಈ ಚಿತ್ರವು ೧೦೦ ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನಗೊಂಡು ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>{{Cite news|url = http://ibnlive.in.com/news/2011-was-troublesome-for-malayalam-films/217739-8-70.html|title = 2011 was troublesome for Malayalam films|publisher = ibnlive.in.com|access-date = 12 October 2014|archive-url = https://web.archive.org/web/20141023221826/http://ibnlive.in.com/news/2011-was-troublesome-for-malayalam-films/217739-8-70.html|archive-date = 23 October 2014|url-status = dead}}</ref> ಅವರು ಆಗಸ್ಟ್ನಲ್ಲಿ ಬಿಡುಗಡೆಯಾದ 'ಪ್ರಣಯಂ' ನಲ್ಲಿ ನಟಿಸಿದರು. ಇದು ಬ್ಲೆಸ್ಸಿ ನಿರ್ದೇಶನದ ವಿಲಕ್ಷಣ ಪ್ರಣಯ ನಾಟಕವಾಗಿದೆ. ಇದು ಮೋಹನ್ಲಾಲ್, ಅನುಪಮ್ ಖೇರ್ ಮತ್ತು ಜಯಪ್ರದಾ ನಟಿಸಿದ ಮೂರು ವಯಸ್ಸಾದ ಪಾತ್ರಗಳ ನಡುವಿನ ಪ್ರೇಮಕಥೆಯಾಗಿದೆ. ಈ ಚಿತ್ರವು ವಿಮರ್ಶಕರಿಂದ ಹೆಚ್ಚು ಮೆಚ್ಚುಗೆ ಪಡೆಯಿತು ಮತ್ತು ಮೋಹನ್ಲಾಲ್ ಅವರ ಮ್ಯಾಥ್ಯೂಸ್ ಪಾತ್ರವನ್ನು ಚೆನ್ನಾಗಿ ಪ್ರಶಂಸಿಸಲಾಯಿತು.<ref>{{Cite news|url=http://www.mathrubhumi.com/english/movies/malayalam/123816/ |title=Mohanlal, Blessy bag Critics award |date=18 May 2012 |publisher=mathrubhumi.com |url-status=dead |archive-url=https://web.archive.org/web/20120529040906/http://www.mathrubhumi.com/english/movies/malayalam/123816/ |archive-date=29 May 2012}}</ref> ಅವರ ಮುಂದಿನ ಚಿತ್ರ 'ಸ್ನೇಹವೀಡು', ಸತ್ಯನ್ ಅಂತಿಕ್ಕಾಡು ನಿರ್ದೇಶನದ ಕೌಟುಂಬಿಕ ಚಿತ್ರವಾಗಿದ್ದು, ಪಾಲಕ್ಕಾಡ್ನ ಹಳ್ಳಿಯ ಹಿನ್ನೆಲೆಯಲ್ಲಿದೆ.<ref>[http://www.sify.com/movies/snehaveedu-review-malayalam-14980318.html Movie Review: Snehaveedu] {{Webarchive|url=https://web.archive.org/web/20131011085931/http://www.sify.com/movies/snehaveedu-review-malayalam-14980318.html |date=11 October 2013 }}. Sify.com. Retrieved on 6 May 2012.</ref> ಮೊದಲ ಬಾರಿಗೆ, ನಟಿ ಶೀಲಾ ಮೋಹನ್ಲಾಲ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡರು. ಅವರು ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದರು. 'ಸ್ನೇಹವೀಡು' ಅವರ ೩೦೦ ನೇ ಚಿತ್ರವೆಂದು ಹೇಳಲಾಗುತ್ತದೆ.<ref>{{cite web|url = http://www.sify.com/movies/sneha-veedu-mohanlal-s-300th-film-imagegallery-malayalam-ljtmomdedidsi.html|title = Sneha Veedu Mohanlal's 300th film|access-date = 12 October 2014|website = [[Sify]]|archive-url = https://web.archive.org/web/20141028081228/http://www.sify.com/movies/sneha-veedu-mohanlal-s-300th-film-imagegallery-malayalam-ljtmomdedidsi.html|archive-date = 28 October 2014|url-status = dead}}</ref> ಈ ಚಿತ್ರವು ಹಿಟ್ ಆಯಿತು.<ref>{{cite web|url = http://www.sify.com/movies/boxoffice.php?id=14981090&cid=14625530|title = Kerala Box-Office- September 12 to October 8|date = 12 October 2011|website = [[Sify]]|access-date = 12 October 2014|archive-url = https://web.archive.org/web/20141028081231/http://www.sify.com/movies/boxoffice.php?id=14981090&cid=14625530|archive-date = 28 October 2014|url-status = dead}}</ref> ಆ ವರ್ಷದ ಅವರ ಕೊನೆಯ ಚಿತ್ರ 'ಒರು ಮರುಭೂಮಿಕ್ಕಾಧ'. ಇದು ಪ್ರಿಯದರ್ಶನ್ ನಿರ್ದೇಶನದ ಸಂಪೂರ್ಣ ಮಧ್ಯಪ್ರಾಚ್ಯದಲ್ಲಿ ಸೆಟ್ ಮಾಡಲಾದ ಆಕ್ಷನ್ ಹಾಸ್ಯ ಥ್ರಿಲ್ಲರ್ ಆಗಿದೆ. ಇದು ೧೯೮೦ ರ ದಶಕದ ಉತ್ತರಾರ್ಧ ಮತ್ತು ೯೦ ರ ದಶಕದ ಪ್ರಿಯದರ್ಶನ್-ಮೋಹನ್ಲಾಲ್-ಮುಕೇಶ್ ಸಂಯೋಜನೆಯ ಮರಳುವಿಕೆಯನ್ನು ಗುರುತಿಸಿತು. ಈ ಚಿತ್ರವು ಕ್ರಿಸ್ಮಸ್-ಹೊಸ ವರ್ಷದ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡಿತು.<ref>{{cite web|url = http://www.sify.com/movies/boxoffice.php?id=14989183&cid=14625530|title = Kerala Box-Office – Dec 16 to Jan 11|date = 19 January 2012|access-date = 12 October 2014|website = [[Sify]]|archive-url = https://web.archive.org/web/20141028081233/http://www.sify.com/movies/boxoffice.php?id=14989183&cid=14625530|archive-date = 28 October 2014|url-status = dead}}</ref>
೨೦೧೨ ರಲ್ಲಿ, ಅವರು ಆರು ಚಿತ್ರಗಳಲ್ಲಿ ನಟಿಸಿದರು. ಅವರ ಮೊದಲ ಬಿಡುಗಡೆಯು ಬಹು ನಿರೀಕ್ಷಿತ ದೊಡ್ಡ ಬಜೆಟ್ ಪ್ರಣಯ ಥ್ರಿಲ್ಲರ್ 'ಕಸನೋವ್ವಾ' ಆಗಿದ್ದು, ಇದನ್ನು ರೋಷನ್ ಆಂಡ್ರ್ಯೂಸ್ ನಿರ್ದೇಶಿಸಿದ್ದಾರೆ ಮತ್ತು ಬಾಬಿ-ಸಂಜಯ್ ಬರೆದಿದ್ದಾರೆ. ಅವರು ಕಸನೋವಾ ಪಾತ್ರವನ್ನು ನಿರ್ವಹಿಸಿದರು. ಇವರು ಸರಣಿ ಮಹಿಳಾ ಪ್ರಿಯ ಮತ್ತು ಕಸನೋವಾಸ್ ಇಟರ್ನಲ್ ಸ್ಪ್ರಿಂಗ್ - ಹೂವಿನ ಬುಟೀಕುಗಳ ಅಂತರರಾಷ್ಟ್ರೀಯ ಸರಪಳಿಯ ಮಾಲೀಕರಾಗಿದ್ದಾರೆ. ನಂತರ, ಅವರು ಏಪ್ರಿಲ್ನಲ್ಲಿ ಬಿಡುಗಡೆಯಾದ ಮತ್ತು ಪ್ರಿಯದರ್ಶನ್ ನಿರ್ದೇಶನದ ಬಾಲಿವುಡ್ ಚಿತ್ರ 'ಟೆಜ್' ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅವರ ಮುಂದಿನ ಚಿತ್ರ ಬಿ. ಉನ್ನಿಕೃಷ್ಣನ್ ನಿರ್ದೇಶನದ 'ಗ್ರಾಂಡ್ಮಾಸ್ಟರ್' ಆಗಿದ್ದು, ಇದು ಸರಣಿ ಕೊಲೆಗಳನ್ನು ತನಿಖೆ ಮಾಡಲು ಒತ್ತಾಯಿಸಲ್ಪಟ್ಟ ಪೊಲೀಸ್ ಅಧಿಕಾರಿಯ ಬಗ್ಗೆ ನವ-ನೊಯಿರ್ ಅಪರಾಧ ಥ್ರಿಲ್ಲರ್ ಆಗಿದೆ. ಮೋಹನ್ಲಾಲ್ ಅವರ ಸಮಚಿತ್ತ, ಶಾಂತ ಮತ್ತು ಸಂಯಮದ ಅಭಿನಯವನ್ನು ವಿಮರ್ಶಕರು ಪ್ರಶಂಸಿಸಿದರು.<ref>{{cite web|url = http://www.rediff.com/movies/review/south-review-mohanlal-excels-in-grandmaster/20120504.htm|title = Review: Mohanlal excels in Grandmaster|date = 4 May 2012|access-date = 12 October 2014|work = rediff.com|archive-url = https://web.archive.org/web/20141018235924/http://www.rediff.com/movies/review/south-review-mohanlal-excels-in-grandmaster/20120504.htm|archive-date = 18 October 2014|url-status = live}}</ref> ಯುಟಿವಿ ಮೋಷನ್ ಪಿಕ್ಚರ್ಸ್ ನಿರ್ಮಿಸಿದ ಇದು ನೆಟ್ಫ್ಲಿಕ್ಸ್ ಮೂಲಕ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವಾಗಿದ್ದು, ಇದನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಲಭ್ಯವಾಗುವಂತೆ ಮಾಡಲಾಯಿತು.<ref>{{cite news|last=Prakash|first=Asha|title=How about paying for viewing films online?|url=http://timesofindia.indiatimes.com/entertainment/malayalam/movies/news/How-about-paying-for-viewing-films-online/articleshow/16322780.cms|access-date=24 November 2016|work=[[The Times of India]]|date=10 September 2012|archive-url=https://web.archive.org/web/20171031085616/https://timesofindia.indiatimes.com/entertainment/malayalam/movies/news/How-about-paying-for-viewing-films-online/articleshow/16322780.cms|archive-date=31 October 2017|url-status=live}}</ref> ರಂಜಿತ್ ನಿರ್ದೇಶನದ 'ಸ್ಪಿರಿಟ್' ಕೇರಳದಲ್ಲಿ ಹೆಚ್ಚುತ್ತಿರುವ ಮದ್ಯಪಾನದ ಅಭ್ಯಾಸದ ಬಗ್ಗೆ ಮಾತನಾಡಿದೆ. ಸಮಾಜದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದ್ದಕ್ಕಾಗಿ ರಾಜ್ಯ ಸರ್ಕಾರವು ಈ ಚಿತ್ರವನ್ನು ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಿತು.<ref>{{Cite news|url = http://ibnlive.in.com/news/malayalam-film-spirit-exempted-from-tax/267983-71-210.html|title = Malayalam film 'Spirit' exempted from tax|date = 26 June 2012|publisher = ibnlive.in.com|access-date = 12 October 2014|archive-url = https://web.archive.org/web/20141023161143/http://ibnlive.in.com/news/malayalam-film-spirit-exempted-from-tax/267983-71-210.html|archive-date = 23 October 2014|url-status = dead}}</ref> ಈ ಚಿತ್ರವು ಕೇರಳದಲ್ಲಿ ೧೨೫-ದಿನಗಳ ಚಿತ್ರಮಂದಿರ ಪ್ರದರ್ಶನವನ್ನು ಪೂರ್ಣಗೊಳಿಸಿತು ಮತ್ತು ವಾಣಿಜ್ಯಿಕ ಯಶಸ್ಸು ಗಳಿಸಿತು.<ref>{{Cite news|url = http://ibnlive.in.com/news/spirit-completes-100-day-run-on-box-office/293536-71-210.html|title = Spirit: Completes 100 day run on Box office|date = 20 September 2012|publisher = ibnlive.in.com|access-date = 12 October 2014|archive-url = https://web.archive.org/web/20141023115500/http://ibnlive.in.com/news/spirit-completes-100-day-run-on-box-office/293536-71-210.html|archive-date = 23 October 2014|url-status = dead}}</ref> ಓಣಂ ಹಬ್ಬದ ಸಮಯದಲ್ಲಿ ಬಿಡುಗಡೆಯಾದ 'ರನ್ ಬೇಬಿ ರನ್' ಜೋಷಿ ನಿರ್ದೇಶನದ ಹಾಸ್ಯ ಥ್ರಿಲ್ಲರ್ ಆಗಿತ್ತು. ಇದು ಸುದ್ದಿ ಮಾಧ್ಯಮವನ್ನು ಹಿನ್ನೆಲೆಯಾಗಿ ಹೊಂದಿತ್ತು. ಈ ಚಿತ್ರವು ವಿಮರ್ಶಕರಿಂದ ಚೆನ್ನಾಗಿ ಮೆಚ್ಚುಗೆ ಪಡೆಯಿತು, ಇದು ಉತ್ತಮವಾಗಿ ರಚಿಸಲ್ಪಟ್ಟ ಥ್ರಿಲ್ಲರ್ಗೆ ಉದಾಹರಣೆಯಾಗಿದೆ ಎಂದು ಹೇಳಲಾಯಿತು.<ref>{{Cite news|url = http://ibnlive.in.com/news/malayalam-review-run-baby-run-is-gripping-thriller/287092-71-212.html|title = Malayalam Review: 'Run Baby Run' is a gripping thriller|date = 31 August 2012|access-date = 12 October 2014|publisher = ibnlive.in.com|archive-url = https://web.archive.org/web/20141023161149/http://ibnlive.in.com/news/malayalam-review-run-baby-run-is-gripping-thriller/287092-71-212.html|archive-date = 23 October 2014|url-status = dead}}</ref> ಇದು ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>{{Cite news|url = http://ibnlive.in.com/news/run-baby-run-to-trivandrum-lodge-mohanlal-is-giving-back-to-back-hits/299788-71-210.html|title = 'Run Baby Run' to 'Trivandrum lodge', Mohanlal is giving back to back hits|date = 10 October 2012|publisher = ibnlive.in.com|access-date = 12 October 2014|archive-url = https://web.archive.org/web/20141023161157/http://ibnlive.in.com/news/run-baby-run-to-trivandrum-lodge-mohanlal-is-giving-back-to-back-hits/299788-71-210.html|archive-date = 23 October 2014|url-status = dead}}</ref> ವರ್ಷವು ಕ್ರಿಸ್ಮಸ್ ಬಿಡುಗಡೆಯಾದ 'ಕರ್ಮಯೋಧ' ದೊಂದಿಗೆ ಕೊನೆಗೊಂಡಿತು. ಇದನ್ನು ಮೇಜರ್ ರವಿ ನಿರ್ದೇಶಿಸಿದ್ದಾರೆ. ಇದು ಆಕ್ಷನ್ ಥ್ರಿಲ್ಲರ್ ಆಗಿದ್ದು, ಅದರಲ್ಲಿ ಅವರು ಮ್ಯಾಡ್ ಮ್ಯಾಡಿ ಎಂಬ ಎನ್ಕೌಂಟರ್ ತಜ್ಞರಾಗಿ ನಟಿಸಿದ್ದಾರೆ. ಮುಂಬೈನಲ್ಲಿ ಹದಿಹರೆಯದ ಶಾಲಾ ಬಾಲಕಿಯೊಬ್ಬಳು ಕಣ್ಮರೆಯಾಗುವುದನ್ನು ತನಿಖೆ ಮಾಡಲು ಅವರಿಗೆ ನಿಯೋಜಿಸಲಾಗಿದೆ. ಈ ಚಿತ್ರವು ಮಹಿಳೆಯರ ವಿರುದ್ಧದ ತಾರತಮ್ಯವನ್ನು ಕುರಿತದ್ದಾಗಿದೆ.
[[File:Mohanlal.jpg|thumb|upright|left|alt=Photograph taken from an angle highlighting his face|2012 ರಲ್ಲಿ 17 ನೇ ಅಂತರರಾಷ್ಟ್ರೀಯ ಕೇರಳ ಚಲನಚಿತ್ರೋತ್ಸವದಲ್ಲಿ ಮೋಹನ್ಲಾಲ್]]
೨೦೧೩ ಮೋಹನ್ಲಾಲ್ ಅವರಿಗೆ ಗಮನಾರ್ಹ ವರ್ಷವಾಗಿತ್ತು. ಈ ವರ್ಷವೇ ಮಲಯಾಳಂ ಚಿತ್ರದ ಆಲ್ ಟೈಮ್ ಬ್ಲಾಕ್ಬಸ್ಟರ್ 'ದೃಶ್ಯಂ' ಬಿಡುಗಡೆಯಾಯಿತು. ಆ ವರ್ಷದ ಅವರ ಮೊದಲ ಚಿತ್ರ 'ಲೋಕ್ಪಾಲ್', ಇದು ವಿಜಿಲೆಂಟ್ ಥ್ರಿಲ್ಲರ್ ಆಗಿದ್ದು, ಅದರಲ್ಲಿ ಅವರು "ಲೋಕ್ಪಾಲ್" ಎಂದು ಅಡ್ಡಹೆಸರುಳ್ಳ ವಿಜಿಲೆಂಟ್ ಪಾತ್ರವನ್ನು ನಿರ್ವಹಿಸಿದರು. ಇದನ್ನು ಜೋಷಿ ನಿರ್ದೇಶಿಸಿದ್ದರು ಮತ್ತು ಎಸ್.ಎನ್. ಸ್ವಾಮಿ ಬರೆದಿದ್ದರು. ಸಲಾಂ ಬಪ್ಪು ನಿರ್ದೇಶನದ 'ರೆಡ್ ವೈನ್' ರಾಜಕೀಯ ಕೊಲೆಯ ಆಧಾರಿತ ರೇಖಾತ್ಮಕವಲ್ಲದ ತನಿಖಾ ಥ್ರಿಲ್ಲರ್ ಆಗಿತ್ತು. ಸಿದ್ದಿಕ್ ನಿರ್ದೇಶನದ 'ಲೇಡೀಸ್ ಅಂಡ್ ಜೆಂಟಲ್ಮನ್' ಐಟಿ ಕಂಪನಿಗಳ ಹಿನ್ನೆಲೆಯಲ್ಲಿ ಸೆಟ್ ಮಾಡಲಾದ ಪ್ರಣಯ ಹಾಸ್ಯ ಚಿತ್ರವಾಗಿದೆ. ಪ್ರಿಯದರ್ಶನ್ ನಿರ್ದೇಶನದ 'ಗೀತಾಂಜಲಿ' ಮಲಯಾಳಂ ಕ್ಲಾಸಿಕ್ 'ಮಣಿಚಿತ್ರತಾಳು' ನ ಸ್ಪಿನ್-ಆಫ್ ಆಗಿರುವ ಹಾರರ್ ಥ್ರಿಲ್ಲರ್ ಆಗಿದ್ದು, ಅದರಲ್ಲಿ ಅವರು ಮೂಲ ಚಿತ್ರದ ಡಾ. ಸನ್ನಿ ಪಾತ್ರವನ್ನು ಪುನರಾವರ್ತಿಸಿದರು. ಅವರ ಕೊನೆಯ ಬಿಡುಗಡೆಯು ಜೀತು ಜೋಸೆಫ್ ನಿರ್ದೇಶನದ 'ದೃಶ್ಯಂ' ಆಗಿತ್ತು. ಇದು ವಿಶ್ವದಾದ್ಯಂತ ೬೨ ಕೋಟಿ ರೂಪಾಯಿ ಗಳಿಸಿತು ಮತ್ತು ೨೦೧೬ ರವರೆಗೆ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.<ref>{{cite news|author=DC|title=Mohanlal's Pulimurugan becomes first Malayalam film to gross over 100 crore rupees|url=https://www.deccanchronicle.com/entertainment/mollywood/071116/mohanlals-pulimurugan-becomes-first-malayalam-film-to-gross-over-100-crore-rupees.html|access-date=12 January 2017|work=[[Deccan Chronicle]]|date=7 November 2016|archive-url=https://web.archive.org/web/20161122062944/http://www.deccanchronicle.com/entertainment/mollywood/071116/mohanlals-pulimurugan-becomes-first-malayalam-film-to-gross-over-100-crore-rupees.html|archive-date=22 November 2016|url-status=live}}</ref>
೨೦೧೪ ರಲ್ಲಿ, ಅವರು ಸಿ. ಜೋಸೆಫ್ ವಿಜಯ್ ಅವರೊಂದಿಗೆ ತಮಿಳು ಆಕ್ಷನ್-ನಾಟಕ 'ಜಿಲ್ಲಾ' ದಲ್ಲಿ ನಟಿಸಿದರು. ಇದನ್ನು ಆರ್.ಟಿ. ನೀಸನ್ ನಿರ್ದೇಶಿಸಿದ್ದರು ಮತ್ತು ಆರ್.ಬಿ. ಚೌಧರಿ ನಿರ್ಮಿಸಿದ್ದರು.<ref>{{cite news|title=First Day Box Office Collections of 'Jilla' and 'Veeram'|url=http://www.deccanchronicle.com/140111/entertainment-kollywood/article/first-day-box-office-collections-jilla-and-veeram|publisher=[[Deccan Chronicle]]|date=15 January 2014|access-date=17 October 2014|archive-url=https://web.archive.org/web/20141006104616/http://www.deccanchronicle.com/140111/entertainment-kollywood/article/first-day-box-office-collections-jilla-and-veeram|archive-date=6 October 2014|url-status=dead}}</ref><ref>{{cite news|title=Pongal releases 'Jilla', 'Veeram' gold spinners|url=http://timesofindia.indiatimes.com/entertainment/tamil/movies/news/Pongal-releases-Jilla-Veeram-gold-spinners/articleshow/28882331.cms|publisher=[[The Times of India]]|author=IANS|date=16 January 2014|access-date=17 October 2014|archive-url=https://web.archive.org/web/20170801011522/http://timesofindia.indiatimes.com/entertainment/tamil/movies/news/Pongal-releases-Jilla-Veeram-gold-spinners/articleshow/28882331.cms|archive-date=1 August 2017|url-status=live}}</ref> ಈ ಚಿತ್ರವು ವಿಶ್ವದಾದ್ಯಂತ ೮೫ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿ ವಾಣಿಜ್ಯಿಕ ಯಶಸ್ಸು ಗಳಿಸಿತು<ref>{{cite news|last=Mehta|first=Ankita|title='Jilla' Box Office Collection: Vijay-Mohanlal Starrer Wins BO Battle|url=http://www.ibtimes.co.in/jilla-box-office-collection-vijay-mohanlal-starrer-wins-bo-battle-537429|access-date=12 January 2017|work=[[International Business Times]]|date=5 February 2014|archive-url=https://web.archive.org/web/20170215001253/http://www.ibtimes.co.in/jilla-box-office-collection-vijay-mohanlal-starrer-wins-bo-battle-537429|archive-date=15 February 2017|url-status=live}}</ref> ಮತ್ತು ತಮಿಳುನಾಡಿನ ಚೆನ್ನೈನಲ್ಲಿ ೧೦೦ ದಿನಗಳ ಚಿತ್ರಮಂದಿರ ಪ್ರದರ್ಶನವನ್ನು ಪೂರ್ಣಗೊಳಿಸಿತು.<ref>{{cite news|title='Ilayathalapathy' Vijay-Mohanlal's 'Jilla' Set to Complete 100-Day Theatrical Run|url=http://www.ibtimes.co.in/039ilayathalapathy039-vijay-mohanlal039s-039jilla039-set-to-complete-100-day-theatrical-run-548546|work=[[International Business Times]]|author=Sangeetha Seshagiri|date=17 April 2014|access-date=17 October 2014|archive-url=https://web.archive.org/web/20141011225222/http://www.ibtimes.co.in/039ilayathalapathy039-vijay-mohanlal039s-039jilla039-set-to-complete-100-day-theatrical-run-548546|archive-date=11 October 2014|url-status=live}}</ref> ೨೦೧೪ ರಲ್ಲಿ ಮೋಹನ್ಲಾಲ್ ಅವರ ಮೊದಲ ಮಲಯಾಳಂ ಬಿಡುಗಡೆಯು ಬಿ. ಉನ್ನಿಕೃಷ್ಣನ್ ನಿರ್ದೇಶನದ ಹೀಸ್ಟ್ ಚಿತ್ರ 'ಮಿಸ್ಟರ್ ಫ್ರಾಡ್' ಆಗಿತ್ತು. ಅವರು ತಮ್ಮ ಮುಂದಿನ ಚಿತ್ರ 'ಕೂತಾರ' ದಲ್ಲಿ ವಿಸ್ತೃತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಶ್ರೀನಾಥ್ ರಾಜೇಂದ್ರನ್ ನಿರ್ದೇಶನದ, ಹೇಳಲಾಗದ ಕಾಲಘಟ್ಟದಲ್ಲಿ ಸೆಟ್ ಮಾಡಲಾದ ಪ್ರೌಢಾವಸ್ಥೆಯ ಮಿಸ್ಟರಿ ಚಿತ್ರವಾಗಿದೆ. ಪ್ರಾಯೋಗಿಕ ಚಿತ್ರದಲ್ಲಿ ಅವರು ನಿಗೂಢ ಪಾತ್ರವನ್ನು ನಿರ್ವಹಿಸಿದರು, ಚಿತ್ರದ ಕೊನೆಯಲ್ಲಿ ಅವರು ಮರ್ಮನ್ ಆಗಿ ಬಹಿರಂಗಗೊಳ್ಳುತ್ತಾರೆ. ಅವರ ಮುಂದಿನದು ಅರುಣ್ ವೈದ್ಯನಾಥನ್ ಬರೆದು ನಿರ್ದೇಶನದ ಹಾಸ್ಯಮಯ ರಾಜಕೀಯ ವಿಡಂಬನೆ ಚಿತ್ರ 'ಪೆರುಚಾಳಿ'. ಅವರು ಯುವ ರಾಜಕೀಯ ಕಿಂಗ್ ಮೇಕರ್ ಪಾತ್ರವನ್ನು ನಿರ್ವಹಿಸಿದರು. ಕ್ಯಾಲಿಫೋರ್ನಿಯಾ ರಾಜ್ಯ ಗವರ್ನರ್ ಚುನಾವಣೆಯಲ್ಲಿ ಗೆಲ್ಲಲು ಗವರ್ನರ್ ಅಭ್ಯರ್ಥಿಗೆ ಅವರಿಗೆ ನಿಯೋಜಿಸಲಾಗುತ್ತದೆ. ಅಲ್ಲಿ ಅವರು ಯುಎಸ್ಎ ಚುನಾವಣೆಯನ್ನು ಗೆಲ್ಲಲು ಪ್ರಮಾಣಿತ ಭಾರತೀಯ ರಾಜಕೀಯ ತಂತ್ರಗಳನ್ನು ಬಳಸುತ್ತಾರೆ.
೨೦೧೫ ರಲ್ಲಿ, ಅವರ ಮೊದಲ ಬಿಡುಗಡೆಯು ಕನ್ನಡ ಚಿತ್ರ 'ಮೈಥ್ರಿ' ಆಗಿತ್ತು. ಪ್ರತೀಕಾರ ಬಯಸುವ ಆರ್ಡಿಆರ್ಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ವಿಜ್ಞಾನಿ ಮಹಾದೇವ್ ಪಾತ್ರದಲ್ಲಿ ಅವರ ಅಭಿನಯವನ್ನು ವಿಮರ್ಶಕರು ಚೆನ್ನಾಗಿ ಪ್ರಶಂಸಿಸಿದರು. ಅವರ ಮೊದಲ ಮಲಯಾಳಂ ಬಿಡುಗಡೆಯು 'ರಸಂ' ನಲ್ಲಿ ಅತಿಥಿ ಪಾತ್ರವಾಗಿತ್ತು. ಸತ್ಯನ್ ಅಂತಿಕ್ಕಾಡ್ ನಿರ್ದೇಶನದ 'ಎನ್ನುಮ್ ಎಪ್ಪೋಳುಂ' ಆ ವರ್ಷದ ಅವರ ಮೊದಲ ಪ್ರಮುಖ ಪಾತ್ರವಾಗಿದ್ದು, ಅದರಲ್ಲಿ ಮಂಜು ವಾರಿಯರ್ ಸಹ ನಟಿಸಿದ್ದರು. ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಯಿತು. ನಂತರ ಜೋಷಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಲೈಲಾ ಓ ಲೈಲಾ' ಬಂದಿತು. ಇವೆರಡೂ ಬಾಕ್ಸ್ ಆಫೀಸ್ನಲ್ಲಿ ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾದವು. ಅವರ ಮುಂದಿನದು ರಂಜಿತ್ ನಿರ್ದೇಶನದ ಥ್ರಿಲ್ಲರ್ 'ಲೋಹಂ'. ಇದು ಮಿಶ್ರ ವಿಮರ್ಶಾತ್ಮಕ ಪ್ರತಿಕ್ರಿಯೆಗಳನ್ನು ಎದುರಿಸಿದರೂ, ಚಿತ್ರವು ವಾಣಿಜ್ಯಿಕ ಯಶಸ್ಸು ಗಳಿಸಿತು.<ref>{{cite news|author=IBTimes|title=Charlie, I, Puli, Loham, Amar Akbar Anthony among top 5 movies with good opening day collection at Kerala box office|url=http://www.ibtimes.co.in/charlie-i-puli-loham-amar-akbar-anthony-among-top-5-movies-good-opening-day-collection-kerala-661271|access-date=12 January 2017|work=[[International Business Times]]|date=29 December 2015|archive-url=https://web.archive.org/web/20170106102142/http://www.ibtimes.co.in/charlie-i-puli-loham-amar-akbar-anthony-among-top-5-movies-good-opening-day-collection-kerala-661271|archive-date=6 January 2017|url-status=live}}</ref> ಪ್ರತೀಕಾರದ ಥ್ರಿಲ್ಲರ್ 'ಕನಾಲ್' ಆ ವರ್ಷದ ಅವರ ಕೊನೆಯ ಚಿತ್ರವಾಗಿತ್ತು. ಇದು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು.
[[File:Mohanlal 1.jpg|thumb|48 ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ]]
===ವೃತ್ತಿ ಪ್ರಗತಿ ಮತ್ತು ವಾಣಿಜ್ಯ ಏರಿಳಿತಗಳು (2016–2024)===
೨೦೧೬ ರಲ್ಲಿ, ಮೋಹನ್ಲಾಲ್ ನಾಲ್ಕು ಬಿಡುಗಡೆಗಳನ್ನು ಹೊಂದಿದ್ದರು, ಇವುಗಳ ಒಟ್ಟು ಸಂಗ್ರಹವು ವಿಶ್ವದಾದ್ಯಂತ ೩೭೮ ಕೋಟಿ ರೂಪಾಯಿಗಳಾಗಿದ್ದು, ಈ ವರ್ಷದಲ್ಲಿ ಆಮಿರ್ ಖಾನ್, ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರ ನಂತರ ಅತಿ ಹೆಚ್ಚು ಬಾಕ್ಸ್ ಆಫೀಸ್ ಗಳಿಕೆಯ ಭಾರತೀಯ ನಟರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು.<ref name="top5">{{cite news|last=Nair|first=Sree Prasad|title=2016 Box Office Kings : Mohanlal is the only Malayalam actor among top 5, Aamir Khan tops the list, followed by Akshay Kumar and Salman Khan|url=http://www.catchnews.com/regional-cinema/2016-box-office-kings-mohanlal-is-the-only-malayalam-actor-among-top-5-aamir-khan-tops-the-list-followed-by-akshay-kumar-and-salman-khan-1483966620.html|access-date=12 January 2017|work=Catch News|date=9 January 2017|archive-url=https://web.archive.org/web/20170112061634/http://www.catchnews.com/regional-cinema/2016-box-office-kings-mohanlal-is-the-only-malayalam-actor-among-top-5-aamir-khan-tops-the-list-followed-by-akshay-kumar-and-salman-khan-1483966620.html|archive-date=12 January 2017|url-status=live}}</ref> ಆ ವರ್ಷದ ಅವರ ಮೊದಲ ಬಿಡುಗಡೆಯು ಚಂದ್ರಶೇಖರ್ ಯೆಲೇಟಿ ನಿರ್ದೇಶನದ ತೆಲುಗು ಕೌಟುಂಬಿಕ ನಾಟಕ 'ಮನಮಂತ' ಆಗಿತ್ತು. ಈ ಚಿತ್ರಕ್ಕಾಗಿ ಅವರು ತೆಲುಗಿನಲ್ಲಿ ಡಬ್ ಮಾಡಿದರು.<ref>{{cite news|last=Jayaram|first=Deepika|title=It's a pleasure to learn and dub in Telugu: Mohanlal|url=http://timesofindia.indiatimes.com/entertainment/malayalam/movies/news/Its-a-pleasure-to-learn-and-dub-in-Telugu-Mohanlal/articleshow/52851841.cms|access-date=22 June 2016|work=[[The Times of India]]|date=21 June 2016|archive-date=30 September 2022|archive-url=https://web.archive.org/web/20220930005823/https://timesofindia.indiatimes.com/entertainment/malayalam/movies/news/Its-a-pleasure-to-learn-and-dub-in-Telugu-Mohanlal/articleshow/52851841.cms|url-status=live}}</ref><ref>{{cite web|title=Mohanlal dubbing for 'Manamantha'|url=http://www.sify.com/movies/mohanlal-dubbing-for-manamantha-news-telugu-qgvjDfdchajhg.html|archive-url=https://web.archive.org/web/20160621103338/http://www.sify.com/movies/mohanlal-dubbing-for-manamantha-news-telugu-qgvjDfdchajhg.html|url-status=dead|archive-date=21 June 2016|website=[[Sify]]|access-date=22 June 2016|date=21 June 2016}}</ref> ಅವರ ನಂತರದ ಬಿಡುಗಡೆಯು ಕೊರಟಾಲ ಶಿವ ನಿರ್ದೇಶನದ ಮತ್ತೊಂದು ತೆಲುಗು ಚಿತ್ರ 'ಜನತಾ ಗ್ಯಾರೇಜ್' ಆಗಿದ್ದು, ಇದು ಆಕ್ಷನ್ ನಾಟಕವಾಗಿದೆ.<ref>{{cite web|url=https://www.firstpost.com/entertainment/janatha-garage-review-this-mohanlal-jr-ntr-film-is-an-entertaining-ride-for-the-most-part-2986476.html|title=Janatha Garage review: This Mohanlal, Jr NTR film is an entertaining ride for the most part|website=Firstpost|date=September 2016 }}</ref> ಇದು ೨೦೧೬ ರ ಅತಿ ಹೆಚ್ಚು ಗಳಿಕೆಯ ತೆಲುಗು ಚಿತ್ರವಾಯಿತು ಮತ್ತು ಅತಿ ಹೆಚ್ಚು ಗಳಿಕೆಯ ತೆಲುಗು ಚಿತ್ರಗಳಲ್ಲಿ ಒಂದಾಗಿದೆ,<ref>{{cite news|last=Hooli|first=Shekhar H|title=Janatha Garage 3rd week box office collection: Jr NTR film emerges as the highest grosser of 2016|url=http://www.ibtimes.co.in/janatha-garage-3rd-week-box-office-collection-jr-ntr-film-emerges-highest-grosser-2016-694855|access-date=26 September 2016|work=[[International Business Times]]|date=23 September 2016|archive-url=https://web.archive.org/web/20160926023119/http://www.ibtimes.co.in/janatha-garage-3rd-week-box-office-collection-jr-ntr-film-emerges-highest-grosser-2016-694855|archive-date=26 September 2016|url-status=live}}</ref> ವಿಶ್ವದಾದ್ಯಂತ ೧೩೫ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಕೆ ಮಾಡಿದೆ.<ref name="JG">{{cite news|author=DC|title=6 South Indian films that turned out to be game-changers in 2016|url=https://www.deccanchronicle.com/entertainment/bollywood/301216/6-south-indian-films-that-turned-out-to-be-game-changers-in-2016.html|access-date=12 January 2017|work=[[Deccan Chronicle]]|date=30 December 2016|archive-url=https://web.archive.org/web/20170113012015/http://www.deccanchronicle.com/entertainment/bollywood/301216/6-south-indian-films-that-turned-out-to-be-game-changers-in-2016.html|archive-date=13 January 2017|url-status=live}}</ref> ಆ ವರ್ಷದ ಅವರ ಮೊದಲ ಮಲಯಾಳಂ ಬಿಡುಗಡೆಯು ಪ್ರಿಯದರ್ಶನ್ ನಿರ್ದೇಶನದ ಅಪರಾಧ-ಥ್ರಿಲ್ಲರ್ 'ಒಪ್ಪಂ' ಆಗಿದ್ದು, ಅದರಲ್ಲಿ ಅವರು ಕುರುಡನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ೨೦೧೬ ರ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>{{cite news|last=Nair|first=Sree Prasad|title=Kerala Box Office: Mohanlal's Oppam is now highest grosser of 2016, beats Jacobinte Swargarajyam|url=http://www.catchnews.com/regional-cinema/kerala-box-office-mohanlal-s-oppam-is-now-highest-grosser-of-2016-beats-jacobinte-swargarajyam-1474716416.html|access-date=26 September 2016|work=Catch News|date=24 September 2016|archive-url=https://web.archive.org/web/20160927001833/http://www.catchnews.com/regional-cinema/kerala-box-office-mohanlal-s-oppam-is-now-highest-grosser-of-2016-beats-jacobinte-swargarajyam-1474716416.html|archive-date=27 September 2016|url-status=live}}</ref> ಇದು ಒಂದೂವರೆ ತಿಂಗಳೊಳಗೆ ಬಾಕ್ಸ್ ಆಫೀಸ್ನಲ್ಲಿ ೫೦ ಕೋಟಿ ರೂಪಾಯಿ ಗಡಿಯನ್ನು ದಾಟಿತು,<ref>{{cite web|author=Moviebuzz|title=Mohanlal has two 50 crore blockbusters in his kitty!|url=http://www.sify.com/movies/mohanlal-has-two-50-crore-blockbusters-in-his-kitty-news-malayalam-qkssadjifbbdc.html|website=[[Sify]]|access-date=11 November 2016|date=18 October 2016|archive-url=https://web.archive.org/web/20161025204019/http://www.sify.com/movies/mohanlal-has-two-50-crore-blockbusters-in-his-kitty-news-malayalam-qkssadjifbbdc.html|archive-date=25 October 2016|url-status=dead}}</ref> ಮತ್ತು ವಿಶ್ವದಾದ್ಯಂತ ೬೫ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿತು.<ref>{{cite news|last=Nair|first=Sree Prasad|title=After Drishyam, Ajay Devgn to reprise Mohanlal's role in Oppam|url=http://www.catchnews.com/regional-cinema/after-drishyam-ajay-devgn-to-reprise-mohanlal-s-role-in-oppam-1482872134.html|access-date=12 January 2017|work=Catch News|date=28 December 2016|archive-url=https://web.archive.org/web/20170114184512/http://www.catchnews.com/regional-cinema/after-drishyam-ajay-devgn-to-reprise-mohanlal-s-role-in-oppam-1482872134.html|archive-date=14 January 2017|url-status=live}}</ref> ಅವರು ಆ ವರ್ಷದ ಕೊನೆಯ ಬಿಡುಗಡೆಯಾದ ಆಕ್ಷನ್ ಚಿತ್ರ 'ಪುಲಿಮುರುಗನ್' ನಲ್ಲಿ ಬೇಟೆಗಾರನ ಪಾತ್ರವನ್ನು ನಿರ್ವಹಿಸಿದರು. ಇದು ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು ಮತ್ತು ಬಾಕ್ಸ್ ಆಫೀಸ್ನಲ್ಲಿ ೧೦೦ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿದ ಮೊದಲ ಮಲಯಾಳಂ ಚಿತ್ರವಾಗಿದೆ.<ref>{{cite news|last=Viswanath|first=Chandrakanth|title=Mohanlal's Pulimurugan breaches the Rs 100 crore mark|url=http://www.newindianexpress.com/entertainment/malayalam/2016/nov/07/mohanlals-pulimurugan-breaches-the-rs-100-crore-mark-1536006--2.html|access-date=11 November 2016|work=[[The New Indian Express]]|date=7 November 2016|archive-url=https://web.archive.org/web/20161111194211/http://www.newindianexpress.com/entertainment/malayalam/2016/nov/07/mohanlals-pulimurugan-breaches-the-rs-100-crore-mark-1536006--2.html|archive-date=11 November 2016|url-status=dead}}</ref> ಈ ಚಿತ್ರವು ಇದುವರೆಗೆ ವಿಶ್ವದಾದ್ಯಂತ ೧೫೨ ಕೋಟಿ ರೂಪಾಯಿ ಸಂಗ್ರಹಿಸಿದೆ.<ref>{{cite news|last=R.|first=Manoj Kumar|title=Pulimurugan box office: Mohanlal-starrer breaking records, making history|url=http://indianexpress.com/article/regional/pulimurugan-box-office-mohanlal-starrer-breaking-records-making-history-3075509/|access-date=10 October 2016|work=[[The Indian Express]]|date=10 October 2016|url-status=live|archive-url=https://web.archive.org/web/20161010203623/http://indianexpress.com/article/regional/pulimurugan-box-office-mohanlal-starrer-breaking-records-making-history-3075509/|archive-date=10 October 2016|df=dmy-all}}</ref> ಈ ಚಿತ್ರವು ಅವರ ಅಭಿನಯಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು ಮತ್ತು ಪರೇಶ್ ಸಿ. ಪಾಲಿಚಾ ಅವರು "ಈ ಥ್ರಿಲ್ಲರ್ ಅನ್ನು ನಿಜವಾಗಿಯೂ ರೋಮಾಂಚಕಾರಿ ಅನುಭವವನ್ನಾಗಿ ಮಾಡುವುದು ಮೋಹನ್ಲಾಲ್ ಅವರ ಪ್ರತಿಭೆ" ಎಂದು ಹೇಳಿದರು.<ref>{{cite web|last=Palicha|first=Paresh C.|title=Review: Pulimurugan is a thrilling experience|url=http://www.rediff.com/movies/report/review-pulimurugan-is-a-thrilling-experience/20161012.htm|work=[[Rediff.com]]|access-date=18 November 2016|date=12 October 2016|archive-url=https://web.archive.org/web/20161118155436/http://www.rediff.com/movies/report/review-pulimurugan-is-a-thrilling-experience/20161012.htm|archive-date=18 November 2016|url-status=live}}</ref> ಮುಂದಿನ ವರ್ಷ ೨೦೧೭ ರಲ್ಲಿ, ಅವರು 'ಮುಂತಿರಿವಳ್ಳಿಕಲ್ ತಾಲಿರ್ಕ್ಕುಂಬೋಲ್' (೨೦೧೬) ನಲ್ಲಿ ನಟಿಸಿದರು. ಇದು ಬಾಕ್ಸ್ ಆಫೀಸ್ನಲ್ಲಿ ೫೦ ಕೋಟಿ ಗಳಿಸಿತು.<ref name="top5"/> ನಂತರ ಅವರು ಮೇಜರ್ ರವಿ ನಿರ್ದೇಶನದ '೧೯೭೧: ಬಿಯಾಂಡ್ ಬಾರ್ಡರ್ಸ್' ನಲ್ಲಿ ಕಾಣಿಸಿಕೊಂಡರು. ಇದು ೧೯೭೧ ರ ಭಾರತ-ಪಾಕಿಸ್ತಾನ ಯುದ್ಧವನ್ನು ಆಧರಿಸಿದೆ.<ref>{{cite news|last=Sidhardhan|first=Sanjith|title=Mohanlal is a busy bee|url=http://timesofindia.indiatimes.com/entertainment/malayalam/movies/news/Nikki-to-play-a-Tamil-belle-in-Major-Ravis-war-drama/articleshow/55923840.cms|access-date=18 January 2017|work=[[The Times of India]]|date=12 December 2016}}</ref> ಅವರು ಕರ್ನಲ್ ಮಹಾದೇವನ್ ಮತ್ತು ಮೇಜರ್ ಸಹದೇವನ್ ಅವರ ದ್ವಿಪಾತ್ರಗಳನ್ನು ನಿರ್ವಹಿಸಿದರು.<ref>{{cite news|last=Upadhyaya|first=Prakash|title=Rockline Venkatesh ventures into Malayalam; to produce Mohanlal's next film|url=http://www.ibtimes.co.in/rockline-venkatesh-ventures-into-malayalam-produce-mohanlals-next-film-713760|access-date=5 February 2017|work=[[International Business Times]]|date=27 January 2017}}</ref> ಅವರು ನಟಿಸಿದ ಮುಂದಿನ ಚಿತ್ರವು ಲಾಲ್ ಜೋಸ್ ನಿರ್ದೇಶನದ 'ವೇಲಿಪದಿಂಟೆ ಪುಸ್ತಕಂ' ಆಗಿದ್ದು, ಇದು ಅವರ ಮೊದಲ ಸಹಯೋಗವಾಗಿದೆ.<ref>{{cite news|last=Mishra|first=Nivedita|title=From Baahubali's Prabhas to Mersal's Vijay, these south stars were the newsmakers in 2017|url=https://www.hindustantimes.com/regional-movies/from-baahubali-s-prabhas-to-mersal-s-vijay-these-south-stars-were-the-newsmakers-in-2017/story-0YgCfdolIM7LoTzfvlXSJL.html|access-date=28 August 2019|work=[[Hindustan Times]]|date=28 December 2017|archive-date=28 August 2019|archive-url=https://web.archive.org/web/20190828073547/https://www.hindustantimes.com/regional-movies/from-baahubali-s-prabhas-to-mersal-s-vijay-these-south-stars-were-the-newsmakers-in-2017/story-0YgCfdolIM7LoTzfvlXSJL.html|url-status=live}}</ref> ನಂತರ ಬಿ. ಉನ್ನಿಕೃಷ್ಣನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ವಿಲನ್' ಬಂದಿತು.<ref>{{cite news|last=Soman|first=Deepa|title=Mohanlal to be the lead in B Unnikrishnan's next film too!|url=https://timesofindia.indiatimes.com/entertainment/malayalam/movies/news/Mohanlal-to-be-the-lead-in-B-Unnikrishnans-next-film-too/articleshow/35440215.cms|access-date=28 April 2018|work=[[The Times of India]]|date=22 May 2014}}</ref> ಇದು ಆ ವರ್ಷದ ಅವರ ಕೊನೆಯ ಬಿಡುಗಡೆಯಾಗಿದ್ದು, ಅವರ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಒಂದಾಯಿತು.<ref>{{cite news|author=Speed News Desk|title=Kerala Box Office: Mohanlal's Villain had a humongous opening weekend, emerges 3rd all-time opener after Baahubali 2 and Pulimurugan|url=http://www.catchnews.com/regional-cinema/kerala-box-office-mohanlal-s-villain-had-a-humongous-opening-weekend-emerges-3rd-all-time-opener-after-baahubali-2-and-pulimurugan-87449.html|access-date=4 November 2017|work=Catch News|date=30 October 2017|url-status=live|archive-url=https://web.archive.org/web/20171107011529/http://www.catchnews.com/regional-cinema/kerala-box-office-mohanlal-s-villain-had-a-humongous-opening-weekend-emerges-3rd-all-time-opener-after-baahubali-2-and-pulimurugan-87449.html|archive-date=7 November 2017|df=dmy-all}}</ref><ref>{{cite web|author=Forbes India|title=Mohanlal: Strong and steady|url=http://www.forbesindia.com/article/2017-celebrity-100/mohanlal-strong-and-steady/49033/1|work=[[Forbes India]]|date=1 January 2018}}</ref>
೨೦೧೮ ರಲ್ಲಿ, ಮೋಹನ್ಲಾಲ್ 'ಆದಿ' ಮತ್ತು 'ಕಾಯಂಕುಲಂ ಕೊಚುನ್ನಿ' ಯಲ್ಲಿ ಅತಿಥಿ ಪಾತ್ರಗಳನ್ನು ಮಾಡಿದರು. ಅಲ್ಲಿ ಅವರು ಕೊಚುನ್ನಿಯ ಸಮಕಾಲೀನ ಕಳ್ಳ ಇತ್ತಿಕ್ಕರ ಪಕ್ಕಿ ಪಾತ್ರವನ್ನು ನಿರ್ವಹಿಸಿದರು.<ref>{{cite news|author=Express Web Desk|title=Mohanlal on Aadhi: Pranav has done a good job|url=http://indianexpress.com/article/entertainment/malayalam/mohanlal-on-aadhi-pranav-has-done-a-good-job-5043453/|access-date=30 January 2018|work=[[The Indian Express]]|date=29 January 2018|archive-url=https://web.archive.org/web/20180129115528/http://indianexpress.com/article/entertainment/malayalam/mohanlal-on-aadhi-pranav-has-done-a-good-job-5043453/|archive-date=29 January 2018|url-status=live}}</ref><ref>{{cite news|author=Onmanorama staff|title=Mohanlal joins Nivin Pauly's 'Kayamkulam Kochunni,' Rosshan reveals role|url=http://english.manoramaonline.com/entertainment/entertainment-news/2018/01/09/mohanlal-joins-nivin-paulys-kayamkulam-kochunni-rosshan-reveals-.html|access-date=9 January 2018|work=[[Malayala Manorama]]|date=9 January 2018}}</ref><ref>{{cite news|last=Soman|first=Deepa|title=Mohanlal joins the sets of Kayamkulam Kochunni|url=https://timesofindia.indiatimes.com/entertainment/malayalam/movies/news/mohanlal-joins-the-sets-of-kayamkulam-kochunni/articleshow/62916059.cms|access-date=15 February 2018|work=[[The Times of India]]|date=14 February 2018}}</ref> ಅವರ ಮುಂದಿನ ಎರಡು ಬಿಡುಗಡೆಗಳಾದ 'ನೀರಳಿ' ಮತ್ತು 'ಡ್ರಾಮಾ' ಬಾಕ್ಸ್ ಆಫೀಸ್ನಲ್ಲಿ ವಿಫಲವಾದವು.<ref>{{cite news |last=Sidhardhan |first=Sanjith |title=Mohanlal teams up with Bollywood filmmaker for a thriller |url=https://timesofindia.indiatimes.com/entertainment/malayalam/movies/news/mohanlal-teams-up-with-bollywood-filmmaker-for-a-thriller/articleshow/60938490.cms |access-date=28 January 2018 |work=[[The Times of India]] |date=4 October 2017}}</ref><ref>{{cite news |last=Kumar R. |first=Manoj |title=Mohanlal promises a lot of action in his next film, see photo |url=http://indianexpress.com/article/entertainment/malayalam/mohanlal-ajoy-varma-5035695/ |access-date=28 January 2018 |work=[[The Indian Express]] |date=23 January 2018}}</ref><ref>{{cite news|title=Ranjith's 'Drama' starring Mohanlal to release on November 1|url=https://www.newindianexpress.com/entertainment/malayalam/2018/sep/11/ranjiths-drama-starring-mohanlal-to-release-on-november-1-1870225.html|access-date=24 September 2018|work=[[The New Indian Express]]|agency=Express News Service|date=11 September 2018}}</ref> ನಂತರ ಮೋಹನ್ಲಾಲ್ ವಿ.ಎ. ಶ್ರೀಕುಮಾರ್ ಮೇನನ್ ನಿರ್ದೇಶನದ ಕಾಲ್ಪನಿಕ ನಾಟಕ ಚಿತ್ರ 'ಒಡಿಯಾನ್' ನಲ್ಲಿ ನಟಿಸಿದರು. ಇದು ಒಡಿಯಾನ್ ಕುಲದ ದಂತಕಥೆಯನ್ನು ಆಧರಿಸಿದೆ. ಈ ಚಿತ್ರವು ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು ಮತ್ತು ೨೦೧೮ ರಲ್ಲಿ ಅವರ ಏಕೈಕ ಬಾಕ್ಸ್ ಆಫೀಸ್ ಯಶಸ್ಸು.<ref>{{cite news|author=<!--staff writer-->|title=Odiyan: Mohanlal shoots in Varanasi, tells us more about his character Manikyan. Watch video|url=https://www.hindustantimes.com/regional-movies/odiyan-mohanlal-shoots-in-varanasi-tells-us-more-about-his-character-manikyan-watch-video/story-KRL8vkUip0HFwYTcpXovyH.html|access-date=15 November 2018|work=[[Hindustan Times]]|date=7 September 2017}}</ref><ref>{{cite news|last=M. K.|first=Surendhar|title=Odiyan sets industry record with Rs 21.5 cr domestic opening weekend total; 2.0 stacks up more records |url=https://www.firstpost.com/entertainment/odiyan-sets-industry-record-with-rs-21-5-cr-domestic-opening-weekend-total-2-0-stacks-up-more-records-5751571.html|access-date=19 December 2018|work=Firstpost|date=19 December 2018}}</ref> ಮೋಹನ್ಲಾಲ್ ೨೦೧೯ ರ ತಮ್ಮ ಮೊದಲ ಚಿತ್ರ 'ಲೂಸಿಫರ್' ನಲ್ಲಿ ಅಪರಾಧ ಸಿಂಡಿಕೇಟ್ ನಾಯಕನ ಪಾತ್ರವನ್ನು ನಿರ್ವಹಿಸಿದರು. ಇದನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದಾರೆ.<ref>{{cite news|author=Express Web Desk|title=Mohanlal-Prithviraj film Lucifer goes on floor|url=https://indianexpress.com/article/entertainment/malayalam/mohanlal-prithviraj-film-lucifer-goes-on-floor-5262195/|access-date=25 September 2018|work=The Indian Express|date=16 July 2018}}</ref> ಲಕ್ಷಣಾ ಎನ್. ಪಾಲಾತ್ ಅವರು 'ಇಂಡಿಯಾ ಟುಡೇ' ನಲ್ಲಿ " 'ಲೂಸಿಫರ್' ಮೋಹನ್ಲಾಲ್ ಫ್ಯಾನ್ಫಿಕ್ಷನ್ ಪರದೆಯ ಮೇಲೆ ಜೀವಂತಗೊಳಿಸಿದಂತಿದೆ. ನೀವು ಮೋಹನ್ಲಾಲ್ ಅವರನ್ನು ನಂಬಿದರೆ, ಅದಕ್ಕೆ ಹೋಗಿ." ಎಂದು ಹೇಳಿದರು.<ref>{{Cite magazine|author=Lakshana N. Palat |date=March 29, 2019 |title=Lucifer Movie Review: New Prithviraj film is for diehard Mohanlal fans|url=https://www.indiatoday.in/movies/reviews/story/lucifer-movie-review-new-prithviraj-film-is-for-diehard-mohanlal-fans-1489097-2019-03-29|access-date=2021-11-24|magazine=India Today|language=en}}</ref> ಆಲ್ ಟೈಮ್ನ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾದ ಇದು ೨೦೦ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿತು, ಇದರಲ್ಲಿ ಬಾಕ್ಸ್ ಆಫೀಸ್ ಸಂಗ್ರಹಗಳು ಮತ್ತು ಅದರ ಉಪಗ್ರಹ ಹಕ್ಕುಗಳು, ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳು ಮತ್ತು ಇತರ ಭಾಷೆಗಳಲ್ಲಿ ಟಿವಿ ಹಕ್ಕುಗಳ ಮಾರಾಟದಿಂದ ಬಂದ ಗಳಿಕೆಗಳು ಸೇರಿವೆ.<ref>{{Cite web|url=https://indianexpress.com/article/entertainment/malayalam/lucifer-box-office-mohanlal-film-collects-rs-100-crore-worldwide-5665523/|title=Lucifer box office: Mohanlal film collects Rs 100 crore worldwide|date=8 April 2019|access-date=30 April 2019|archive-url=https://web.archive.org/web/20190409131841/https://indianexpress.com/article/entertainment/malayalam/lucifer-box-office-mohanlal-film-collects-rs-100-crore-worldwide-5665523/|archive-date=9 April 2019|url-status=live}}</ref><ref>{{Cite web|date=4 June 2019|title=Mohanlal's Lucifer storms into Rs 200 crore club, first for Malayalam cinema|url=https://www.hindustantimes.com/regional-movies/mohanlal-s-lucifer-storms-into-rs-200-crore-club-first-for-malayalam-cinema/story-vTm7JXaAdz0FWFTllE4n2I.html|access-date=16 July 2021|website=Hindustan Times|language=en|archive-date=11 June 2019|archive-url=https://web.archive.org/web/20190611022057/https://www.hindustantimes.com/regional-movies/mohanlal-s-lucifer-storms-into-rs-200-crore-club-first-for-malayalam-cinema/story-vTm7JXaAdz0FWFTllE4n2I.html|url-status=live}}</ref> ನಂತರ ಅವರು 'ಇಟ್ಟಿಮಾನಿ: ಮೇಡ್ ಇನ್ ಚೈನಾ' ನಲ್ಲಿ ಕಾಣಿಸಿಕೊಂಡರು, ಇದು ಮಧ್ಯಮ ಯಶಸ್ಸು ಗಳಿಸಿತು.<ref>{{cite news|last=Pillai|first=Sreedhar|title=Ittymaani: Made In China, Love Action Drama, Brothers Day, Finals: Why Onam 2019 releases failed at the box-office|url=https://www.firstpost.com/entertainment/ittymaani-made-in-china-love-action-drama-brothers-day-finals-why-onam-2019-releases-failed-at-the-box-office-7341581.html|access-date=29 September 2019|work=[[Firstpost]]|date=15 September 2019}}</ref> ನಂತರ ಅವರು ತಮಿಳು ಚಿತ್ರ 'ಕಾಪ್ಪಾನ್' ನಲ್ಲಿ ಪ್ರಧಾನ ಮಂತ್ರಿಯ ಪಾತ್ರವನ್ನು ನಿರ್ವಹಿಸಿದರು, ಇದು ವಾಣಿಜ್ಯ ಯಶಸ್ಸು ಗಳಿಸಿತು.<ref>{{Cite web|url=https://www.firstpost.com/entertainment/kaappaan-tops-tn-kerala-box-office-in-opening-weekend-gaddalakonda-ganesh-earns-rs-25-cr-globally-7398541.html|title=Mohanlal starrer Kaappaan tops TN, Kerala box office in opening weekend; Gaddalakonda Ganesh earns Rs 55 cr globally|date=2019-09-25|website=Firstpost|language=en|access-date=2020-04-19|archive-date=19 August 2020|archive-url=https://web.archive.org/web/20200819131706/https://www.firstpost.com/entertainment/kaappaan-tops-tn-kerala-box-office-in-opening-weekend-gaddalakonda-ganesh-earns-rs-25-cr-globally-7398541.html|url-status=live}}</ref><ref>{{Cite web|url=https://www.news18.com/news/movies/kaappaan-movie-review-despite-stellar-star-cast-suriya-mohanlal-starrer-loses-focus-2316599.html|title=Kaappaan Movie Review: Despite Stellar Star Cast, Mohanlal-Suriya Starrer Loses Focus|website=News18|date=2019-09-20|access-date=2019-10-26|archive-date=26 October 2019|archive-url=https://web.archive.org/web/20191026175438/https://www.news18.com/news/movies/kaappaan-movie-review-despite-stellar-star-cast-suriya-mohanlal-starrer-loses-focus-2316599.html|url-status=live}}</ref> ೨೦೨೦ ರಲ್ಲಿ ಅವರ ಏಕೈಕ ಚಿತ್ರ 'ಬಿಗ್ ಬ್ರದರ್' ಆಗಿದ್ದು, ಅದರಲ್ಲಿ ಅವರು ಜೈಲಿನಿಂದ ಬಿಡುಗಡೆಯಾದ ನಂತರ ತಮ್ಮ ಕುಟುಂಬಕ್ಕೆ ಮರಳುವ ಮಾಜಿ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು.<ref>{{cite news|title=Mohanlal and Siddique to team up for project titled 'Big Brother'|url=https://www.thenewsminute.com/article/mohanlal-and-siddique-team-project-titled-big-brother-82520|access-date=26 May 2019|work=[[The News Minute]]|date=5 June 2018|archive-url=https://web.archive.org/web/20190526181945/https://www.thenewsminute.com/article/mohanlal-and-siddique-team-project-titled-big-brother-82520|archive-date=26 May 2019|url-status=live}}</ref><ref>{{cite news|last=Sidhardhan|first=Sanjith|title=Mohanlal, Siddique to team up for an action-comedy|url=https://timesofindia.indiatimes.com/entertainment/malayalam/movies/news/mohanlal-siddique-to-team-up-for-an-action-comedy/articleshow/64435104.cms|access-date=26 May 2019|work=[[The Times of India]]|date=3 June 2018|archive-date=11 October 2023|archive-url=https://web.archive.org/web/20231011091015/https://timesofindia.indiatimes.com/entertainment/malayalam/movies/news/mohanlal-siddique-to-team-up-for-an-action-comedy/articleshow/64435104.cms|url-status=live}}</ref>
ಮೋಹನ್ಲಾಲ್ ೨೦೨೧ ರಲ್ಲಿ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಜೀತು ಜೋಸೆಫ್ ನಿರ್ದೇಶನದ ಅನುಕ್ರಮ ಚಿತ್ರ 'ದೃಶ್ಯಂ ೨' ನಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರು.<ref>{{Cite web|date=6 February 2021|title=Drishyam 2 trailer: Ghost from the past comes to haunt Mohanlal|url=https://indianexpress.com/article/entertainment/malayalam/drishyam-2-trailer-the-ghost-from-the-past-comes-to-haunt-mohanlal-7177482/|access-date=8 February 2021|website=The Indian Express|language=en|archive-date=27 February 2021|archive-url=https://web.archive.org/web/20210227153724/https://indianexpress.com/article/entertainment/malayalam/drishyam-2-trailer-the-ghost-from-the-past-comes-to-haunt-mohanlal-7177482/|url-status=live}}</ref> ಹರಿಚರನ್ ಪುದಿಪ್ಪೇಡಿ ಅವರು "ಮೋಹನ್ಲಾಲ್ ಜಾರ್ಜ್ಕುಟ್ಟಿಯ ಪಾತ್ರಕ್ಕೆ ಸಂಯಮದ ಅಭಿನಯವನ್ನು ತರುತ್ತಾರೆ. ಈ ಬಾರಿ ಅವರು ಹೆಚ್ಚು ಶಾಂತ ವ್ಯಕ್ತಿಯಂತೆ ಕಾಣುತ್ತಾರೆ ಆದರೆ ಅವರ ಮನಸ್ಸಿನಲ್ಲಿ ಏನು ಕುದಿಯುತ್ತಿದೆ ಎಂಬುದರ ಬಗ್ಗೆ ಯಾರಿಗೂ ಕಲ್ಪನೆಯಿಲ್ಲ." ಎಂದು ಗಮನಿಸಿದರು.<ref>{{Cite news |last=Pudippedi |first=Haricharan |date=19 February 2021 |title=Drishyam 2 review: Mohanlal, Jeethu Joseph reunite for one of the best sequels ever |work=[[Hindustan Times]] |url=https://www.hindustantimes.com/entertainment/others/drishyam-2-review-mohanlal-jeethu-joseph-reunite-for-one-of-the-best-sequels-ever-101613707672069.html |access-date=19 February 2021 |archive-date=19 February 2021 |archive-url=https://web.archive.org/web/20210219042754/https://www.hindustantimes.com/entertainment/others/drishyam-2-review-mohanlal-jeethu-joseph-reunite-for-one-of-the-best-sequels-ever-101613707672069.html |url-status=live }}</ref> ನಂತರ ಅವರು 'ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ' ನಲ್ಲಿ ಮುಸ್ಲಿಂ ಯೋಧ ಕುಂಜಾಲಿ ಮರಕ್ಕರ್ IV ಪಾತ್ರವನ್ನು ನಿರ್ವಹಿಸಿದರು. ಇದು ಬಾಕ್ಸ್ ಆಫೀಸ್ನಲ್ಲಿ ಕಡಿಮೆ ಪ್ರದರ್ಶನ ನೀಡಿತು. ಆದಾಗ್ಯೂ, ಇದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.<ref>{{cite web |title=Box Office: Analyzing theatrical performance of Mohanlal's post-pandemic movies, Marakkar to L2 Empuraan |url=https://www.pinkvilla.com/entertainment/box-office/box-office-analysing-theatrical-performance-of-mohanlals-post-pandemic-movies-from-marakkar-to-l2-empuraan-1384093 |website=PINKVILLA |access-date=26 April 2025 |language=en |date=23 April 2025}}</ref><ref>{{cite news|last=Punnoose|first=Aby|date=11 November 2021|title=67th National Film Awards: Marakkar: Lion of the Arabian Sea wins Best Feature Film at National Film Awards|url=https://timesofindia.indiatimes.com/entertainment/malayalam/movies/news/67th-national-film-awards-marakkar-arabikkadalinte-simham-wins-the-best-feature-film-award/articleshow/81633289.cms|access-date=11 November 2021|website=Times of India|language=en|archive-date=11 November 2021|archive-url=https://web.archive.org/web/20211111163303/https://timesofindia.indiatimes.com/entertainment/malayalam/movies/news/67th-national-film-awards-marakkar-arabikkadalinte-simham-wins-the-best-feature-film-award/articleshow/81633289.cms|url-status=live}}</ref> ೨೦೨೨ ರಲ್ಲಿ ಅವರ ಮೊದಲ ಚಿತ್ರ 'ಬ್ರೋ ಡ್ಯಾಡಿ' ಆಗಿದ್ದು, ಅದರಲ್ಲಿ ಅವರು ಪೃಥ್ವಿರಾಜ್ ಸುಕುಮಾರನ್ ಅವರಿಗೆ ಸಂತೋಷದ ತಂದೆಯ ಪಾತ್ರವನ್ನು ನಿರ್ವಹಿಸಿದರು.<ref>{{cite news |last=Palisetty |first=Ramya |title=Prithviraj Sukumaran announces his second directorial Bro Daddy with Mohanlal |url=https://www.indiatoday.in/movies/regional-cinema/story/prithviraj-sukumaran-announces-his-second-directorial-bro-daddy-with-mohanlal-1816663-2021-06-18 |access-date=15 July 2021 |work=[[India Today]] |date=18 June 2021 |archive-date=19 June 2021 |archive-url=https://web.archive.org/web/20210619201702/https://www.indiatoday.in/movies/regional-cinema/story/prithviraj-sukumaran-announces-his-second-directorial-bro-daddy-with-mohanlal-1816663-2021-06-18 |url-status=live }}</ref> ಜನನಿ ಕೆ. "ಮೋಹನ್ಲಾಲ್ ಈ ಚಿತ್ರದಲ್ಲಿ ತುಂಬಾ ಮಜಾ ಮಾಡಿದ್ದಾರೆ. ಅವರ ಸೂಕ್ಷ್ಮ ಅಭಿವ್ಯಕ್ತಿಗಳು ಮತ್ತು ಅವರ ಹಾಸ್ಯ ಸಮಯವು ದೋಷರಹಿತವಾಗಿದೆ." ಎಂದು ಹೇಳಿದರು.<ref>{{cite news |last=K. |first=Janani |title=Bro Daddy Movie Review: Mohanlal, Prithviraj's fun family drama is not Badhaai Ho, but better |url=https://www.indiatoday.in/movies/regional-cinema/story/bro-daddy-movie-review-mohanlal-prithviraj-fun-family-drama-is-full-of-life-1904564-2022-01-26 |access-date=26 January 2022 |work=[[India Today]] |date=26 January 2022 |archive-date=26 January 2022 |archive-url=https://web.archive.org/web/20220126070054/https://www.indiatoday.in/movies/regional-cinema/story/bro-daddy-movie-review-mohanlal-prithviraj-fun-family-drama-is-full-of-life-1904564-2022-01-26 |url-status=live }}</ref> ಅವರ ಮುಂದಿನ ಎರಡು ಬಿಡುಗಡೆಗಳಾದ 'ಆರಾಟ್ಟು' ಮತ್ತು 'ಮಾನ್ಸ್ಟರ್' ಬಾಕ್ಸ್ ಆಫೀಸ್ ವಿಫಲಗಳಾಗಿದ್ದವು.<ref>{{Cite web |title='Thank You', 'Radhe Shyam', 'Aaraattu': A Look At The Biggest Flops Of South Cinema - Films That Fizzled Out |url=https://economictimes.indiatimes.com/magazines/panache/thank-you-radhe-shyam-liger-a-look-at-the-biggest-flops-of-south-cinema/aaraattu/slideshow/95660122.cms?from=mdr |access-date=2025-01-20 |website=The Economic Times}}</ref><ref>{{cite web |title=Monster box office collection Day 3: Mohanlal's film underperforms on Sunday|url=https://www.indiatoday.in/movies/regional-cinema/story/monster-box-office-collection-day-3-mohanlals-film-underperforms-on-sunday-2288889-2022-10-24|website=[[India Today]]|date=24 October 2022 |access-date=24 October 2022|quote=the film has been having a lukewarm response from the critics and the audiences.}}</ref> ನಂತರ ಅವರು '೧೨ನೇ ಮನುಷ್ಯ' ನಲ್ಲಿ ಕಾಣಿಸಿಕೊಂಡರು, ಇದು ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಡಿಜಿಟಲ್ ಆಗಿ ಬಿಡುಗಡೆಯಾಯಿತು.<ref>{{cite news | url=https://timesofindia.indiatimes.com/web-series/reviews/malayalam/12th-man/ottmoviereview/91669767.cms | title=12th Man Review: A entertaining, delicious whodunnit | website=[[The Times of India]] | last1=Mathews | first1=Anna }}</ref> ೨೦೨೩ ರಲ್ಲಿ, ಮೋಹನ್ಲಾಲ್ ಅವರ ಮೊದಲ ಚಿತ್ರ 'ಅಲೋನ್' ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು.<ref>{{Cite news |date=2023-01-31 |title='Alone' box office collection day 4: Mohanlal starrer stays low, mints only Rs 65 lakhs|work=The Times of India |url=https://timesofindia.indiatimes.com/entertainment/malayalam/movies/news/alone-box-office-collection-day-4-mohanlal-starrer-stays-low-mints-only-rs-68-lakhs/articleshow/97484057.cms}}</ref> ನಂತರ ಅವರು ತಮಿಳು ಚಿತ್ರ 'ಜೈಲರ್' ನಲ್ಲಿ ಅತಿಥಿ ಪಾತ್ರವನ್ನು ಮಾಡಿದರು.<ref>{{Cite web |date=6 January 2023 |title=Mohanlal to have a cameo in Rajinikanth's Jailer, fans call it 'iconic moment' |url=https://www.hindustantimes.com/entertainment/tamil-cinema/mohanlal-to-have-a-cameo-in-rajinikanth-s-jailer-fans-call-it-iconic-moment-101672988696266.html |url-status=live |archive-url=https://web.archive.org/web/20230106094648/https://www.hindustantimes.com/entertainment/tamil-cinema/mohanlal-to-have-a-cameo-in-rajinikanth-s-jailer-fans-call-it-iconic-moment-101672988696266.html |archive-date=6 January 2023 |access-date=6 January 2023 |website=[[Hindustan Times]]}}</ref> ಮೋಹನ್ಲಾಲ್ ನಂತರ 'ನೇರು' ನಲ್ಲಿ ವಕೀಲನ ಪಾತ್ರವನ್ನು ನಿರ್ವಹಿಸಿದರು, ಇದು ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು.<ref>{{cite news|last=Chakraborty|first=Saikat|title=Mohanlal teams up with Drishyam director Jeethu Joseph for legal drama Neru|url=https://www.telegraphindia.com/entertainment/mohanlal-teams-up-with-drishyam-director-jeethu-joseph-for-legal-drama-neru/cid/1958941|access-date=26 November 2023|work=[[Telegraph India]]|date=14 August 2023|archive-date=26 November 2023|archive-url=https://web.archive.org/web/20231126092959/https://www.telegraphindia.com/entertainment/mohanlal-teams-up-with-drishyam-director-jeethu-joseph-for-legal-drama-neru/cid/1958941|url-status=live}}</ref><ref>{{Cite news |date=2024-01-18 |title='Neru' box office collections day 27: Mohanlal's film dominates overseas; mints more than Rs 32 crores |url=https://timesofindia.indiatimes.com/entertainment/malayalam/movies/news/neru-box-office-collections-mohanlals-film-dominates-overseas/articleshow/106949938.cms?from=mdr |access-date=2024-01-21 |work=The Times of India |issn=0971-8257}}</ref> ಎಸ್.ಆರ್. ಪ್ರವೀಣ್ ಅವರು ಮೋಹನ್ಲಾಲ್ "ಸಂಯಮದ ಅಭಿನಯ" ದೊಂದಿಗೆ ಫಾರ್ಮ್ಗೆ ಮರಳಿದ್ದಾರೆ ಎಂದು ಹೇಳಿದರು.<ref>{{cite news|last=Praveen|first=S. R.|title='Neru' movie review: Jeethu Joseph and Mohanlal's courtroom drama almost delivers a cathartic high|url=https://www.thehindu.com/entertainment/movies/neru-movie-review-jeethu-joseph-and-mohanlals-courtroom-drama-almost-delivers-a-cathartic-high/article67661846.ece|access-date=22 December 2023|work=[[The Hindu]]|date=21 December 2023|archive-date=21 December 2023|archive-url=https://web.archive.org/web/20231221135645/https://www.thehindu.com/entertainment/movies/neru-movie-review-jeethu-joseph-and-mohanlals-courtroom-drama-almost-delivers-a-cathartic-high/article67661846.ece|url-status=live}}</ref> ೨೦೨೪ ರಲ್ಲಿ ಅವರ ಎರಡೂ ಚಿತ್ರಗಳು: 'ಮಲೈಕೋಟ್ಟೈ ವಾಲಿಬನ್' ಮತ್ತು 'ಬರೋಜ್ 3D' ಬಾಕ್ಸ್ ಆಫೀಸ್ನಲ್ಲಿ ವಿಫಲವಾದವು, ಇದು ಮೋಹನ್ಲಾಲ್ ಅವರಿಗೆ ವಾಣಿಜ್ಯ ವೈಫಲ್ಯಗಳ ಸರಣಿಗೆ ಕಾರಣವಾಯಿತು.<ref>{{cite web | url=https://indianexpress.com/article/entertainment/malayalam/malaikottai-vaaliban-box-office-collection-day-5-mohanlal-lijo-jose-pellissery-film-hits-a-new-low-9133901/#:~:text=So%20far%2C%20the%20film%20has%20grossed%20Rs%2021.75%20crore%20worldwide.&text=On%20Monday%2C%20Malaikottai%20Vaaliban%20experienced,dipped%20to%2010.35%20per%20cent | title=Malaikottai Vaaliban box office collection Day 5: Mohanlal and Lijo Jose Pellissery's film hits a new low on first Monday; earns 90% less than opening day | date=30 January 2024 }}</ref><ref>{{cite web |access-date=31 December 2024 |title=Mohanlal reacts to Barroz's box office failure after film collects Rs 9 cr in 6 days: 'Not made for the numbers'|url=https://indianexpress.com/article/entertainment/malayalam/mohanlal-reacts-to-barroz-box-office-failure-after-film-collects-rs-9-cr-in-6-days-not-made-for-the-numbers-9752550/ |work=Indian Express|date=30 December 2024|archive-url=https://web.archive.org/web/20250103190259/https://indianexpress.com/article/entertainment/malayalam/mohanlal-reacts-to-barroz-box-office-failure-after-film-collects-rs-9-cr-in-6-days-not-made-for-the-numbers-9752550/|archive-date=3 January 2025|url-status=live}}</ref>
### ಮತ್ತಷ್ಟು ಯಶಸ್ಸು ಮತ್ತು ಪುನರುತ್ಥಾನ (2025–ಪ್ರಸ್ತುತ)
ಮೋಹನ್ಲಾಲ್ ಅವರ ವೃತ್ತಿಜೀವನವು ೨೦೨೫ ರಲ್ಲಿ ಮತ್ತೆ ಚೇತರಿಸಿಕೊಂಡಿತು. ಅವರು ಮೊದಲು 'ಎಲ್೨: ಎಂಪುರಾನ್' ಅನುಕ್ರಮ ಚಿತ್ರದಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರು.<ref>{{Cite news |date=6 October 2023 |title=Mohanlal-Prithviraj film Empuraan starts rolling |url=https://www.newindianexpress.com/entertainment/malayalam/2023/oct/06/mohanlal-prithviraj-film-empuraan-starts-rolling-2621183.html |url-status=live |archive-url=https://web.archive.org/web/20231103160033/https://www.newindianexpress.com/entertainment/malayalam/2023/oct/06/mohanlal-prithviraj-film-empuraan-starts-rolling-2621183.html |archive-date=3 November 2023 |access-date=13 November 2023 |work=[[The New Indian Express]]}}</ref> ಫಸ್ಟ್ಪೋಸ್ಟ್ನ ಗಣೇಶ್ ಆಗ್ಲವ್ ಅವರು "ಮೋಹನ್ಲಾಲ್ ಅದ್ಭುತರಾಗಿರಬೇಕೆಂದು ನಿರೀಕ್ಷಿಸಲಾಗಿದೆ, ಮತ್ತು ಅವರು ಯಾವುದೇ ಸಂದೇಹವಿಲ್ಲದೆ ಅದ್ಭುತರಾಗಿದ್ದಾರೆ. ಅವರು ಸ್ವಾಗ್ ಅನ್ನು ಸುರಿಸುತ್ತಾರೆ ಮತ್ತು ಪ್ರತಿಯೊಂದು ಭಾವನೆಯನ್ನು ಸೂಕ್ಷ್ಮ ಆದರೆ ಪ್ರಭಾವಶಾಲಿ ಮನಸ್ಥಿತಿಯೊಂದಿಗೆ ಸುಂದರವಾಗಿ ವ್ಯಕ್ತಪಡಿಸುತ್ತಾರೆ." ಎಂದು ಗಮನಿಸಿದರು.<ref>{{Cite web |date=27 March 2025 |title=L2: Empuraan movie review: Mohanlal & Prithviraj Sukumaran starrer action-thriller is high on swag, charisma & technical brilliance |url=https://www.firstpost.com/entertainment/l2-empuraan-movie-review-mohanlal-prithviraj-sukumaran-starrer-action-thriller-is-high-on-swag-charisma-technical-brilliance-13874843.html |url-status=live |archive-url=https://web.archive.org/web/20250327085309/https://www.firstpost.com/entertainment/l2-empuraan-movie-review-mohanlal-prithviraj-sukumaran-starrer-action-thriller-is-high-on-swag-charisma-technical-brilliance-13874843.html |archive-date=27 March 2025 |access-date=27 March 2025 |website=Firstpost |language=en-us}}</ref> ಇದು ವಾಣಿಜ್ಯ ಯಶಸ್ಸನ್ನು ಗಳಿಸಿ, ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು.<ref>{{Cite news |date=29 March 2025 |title=L2 Empuraan worldwide box office collection day 2: Mohanlal film is the fastest Malayalam film to cross ₹100 crore |url=https://www.hindustantimes.com/entertainment/others/l2-empuraan-worldwide-box-office-collection-day-2-mohanlal-film-is-the-fastest-malayalam-film-to-cross-100-crore-101743229690067.html |url-status=live |archive-url=https://web.archive.org/web/20250329081943/https://www.hindustantimes.com/entertainment/others/l2-empuraan-worldwide-box-office-collection-day-2-mohanlal-film-is-the-fastest-malayalam-film-to-cross-100-crore-101743229690067.html |archive-date=29 March 2025 |access-date=2 April 2025 |work=Hindustan Times |language=en-us}}</ref> ನಂತರ ಅವರು 'ತುದಾರುಂ' ನಲ್ಲಿ ಟ್ಯಾಕ್ಸಿ ಚಾಲಕನ ಪಾತ್ರವನ್ನು ನಿರ್ವಹಿಸಿದರು.<ref>{{Cite news |last=India Today Entertainment Desk |date=22 April 2024 |title=Pics: Mohanlal, Shobana reunite for his 360th film with director Tharun Moorthy |url=https://www.indiatoday.in/movies/regional-cinema/story/pics-mohanlal-shobana-reunite-for-his-360th-film-with-director-tharun-moorthy-produced-by-m-renjith-under-rejaputhra-visual-media-2530133-2024-04-22 |url-status=live |archive-url=https://web.archive.org/web/20241203133250/https://www.indiatoday.in/movies/regional-cinema/story/pics-mohanlal-shobana-reunite-for-his-360th-film-with-director-tharun-moorthy-produced-by-m-renjith-under-rejaputhra-visual-media-2530133-2024-04-22 |archive-date=3 December 2024 |access-date=30 November 2024 |work=[[India Today]]}}</ref> ಹಿಂದೂಸ್ತಾನ್ ಟೈಮ್ಸ್ನ ಲತಾ ಶ್ರೀನಿವಾಸನ್ ಅವರು "ಮೋಹನ್ಲಾಲ್ ಅತ್ಯುತ್ತಮ ಸ್ಥಿತಿಯಲ್ಲಿದ್ದಾರೆ ಮತ್ತು ಅವರು ಇರುವ ಪ್ರತಿಯೊಂದು ದೃಶ್ಯವೂ ಅವರು ಎಂಥಾ ಶ್ರೇಷ್ಠ ನಟ ಎಂಬುದನ್ನು ತೋರಿಸುತ್ತದೆ." ಎಂದು ಗಮನಿಸಿದರು.<ref>{{Cite web |last=Srinivasan |first=Latha |date=25 April 2025 |title=Thudarum movie review: A top-form Mohanlal shines in fan boy Tharun Moorthy's gripping directorial |url=https://www.hindustantimes.com/entertainment/others/thudarum-movie-review-a-top-form-mohanlal-shines-in-fan-boy-tharun-moorthys-gripping-directorial-101745582170234.html |access-date=27 April 2025 |website=[[Hindustan Times]]}}</ref> ತುದಾರುಂ ನಂತರ, ಮೋಹನ್ಲಾಲ್ ಸಂದೀಪ್ ಪಾತ್ರವನ್ನು ನಿರ್ವಹಿಸಿದರು. ಅವರು ಹೃದಯ ಕಸಿಗೆ ಒಳಗಾದವರಾಗಿದ್ದು, ತಮ್ಮ ಹೃದಯವನ್ನು ಪಡೆದ ಕರ್ನಲ್ನ ಮಗಳ ನಿಶ್ಚಿತಾರ್ಥಕ್ಕೆ ಹಾಜರಾಗಲು ಒತ್ತಾಯಿಸಲ್ಪಡುತ್ತಾರೆ. ಈ ಚಿತ್ರವು 'ಹೃದಯಪೂರ್ವಂ' ಬಾಕ್ಸ್ ಆಫೀಸ್ ಯಶಸ್ಸು ಗಳಿಸಿತು ಮತ್ತು 'ಎಲ್೨: ಎಂಪುರಾನ್' ಮತ್ತು 'ತುದಾರುಂ' ಜೊತೆಗೆ, 'ಹೃದಯಪೂರ್ವಂ' ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>{{Cite web |title=Hridayapoorvam Box Office Collection Day 12: Mohanlal Starrer Is A Success, Set To Beat Officer On Duty! |url=https://www.imdb.com/news/ni65467996/ |access-date=2025-09-21 |website=IMDb |language=en-US}}</ref> ನಂತರ ಅವರು 'ಭಾ ಭಾ ಬಾ' ನಲ್ಲಿ ವಿಸ್ತೃತ ಅತಿಥಿ ಪಾತ್ರವನ್ನು ಮಾಡಿದರು.{{Citation needed|date=March 2026}}
==ಇತರೆ ಯೋಜನೆಗಳು==
=== ರಂಗಭೂಮಿ ಪ್ರದರ್ಶನಗಳು ===
[[File:Acclaimed Malayalam film actor Mohan Lal joined the Territorial Army on July 09, 2009 in the rank of an Honorary Lt. Colonel. The Defence Minister, Shri A. K. Antony is seen greeting Shri Mohan Lal soon after his induction.jpg|thumb|upright|left|alt=Mohanlal in Indian Army Uniform|ಮೋಹನ್ಲಾಲ್ ಅವರು ಭಾರತೀಯ ಟೆರಿಟೋರಿಯಲ್ ಆರ್ಮಿಗೆ ಸೇರ್ಪಡೆಯಾದ ನಂತರ ಭಾರತದ ರಕ್ಷಣಾ ಸಚಿವ ಎ.ಕೆ. ಆ್ಯಂಟೋನಿ ಅವರನ್ನು ಭೇಟಿಯಾಗುತ್ತಿರುವುದು]]
ಮೋಹನ್ಲಾಲ್ ಚಿತ್ರಗಳಿಗೆ ಪ್ರವೇಶಿಸುವ ಮೊದಲು ಹಲವಾರು ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸಿದ್ದರು. ೨೦೦೧ ರಲ್ಲಿ, ಅವರು ಭಾರತೀಯ ಮಹಾಕಾವ್ಯ ಮಹಾಭಾರತದ ಪಾತ್ರವಾದ ಕರ್ಣನ ಪಾತ್ರವನ್ನು ನಿರ್ವಹಿಸಿ ಕವಲಾಂ ನಾರಾಯಣ ಪಣಿಕ್ಕರ್ ನಿರ್ದೇಶನದ ಸಂಸ್ಕೃತ ಭಾಷೆಯ ನಾಟಕ 'ಕರ್ಣಭಾರಂ' ನಲ್ಲಿ ವೃತ್ತಿಪರ ನಾಟಕಕ್ಕೆ ಪಾದಾರ್ಪಣೆ ಮಾಡಿದರು. ಇದು ೨೦೦೧ ರ ಮಾರ್ಚ್ ೨೯ ರಂದು ನ್ಯೂ ಡೆಲ್ಲಿ ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ರಾಷ್ಟ್ರೀಯ ನಾಟಕೋತ್ಸವದ ಭಾಗವಾಗಿ ಪ್ರಥಮ ಪ್ರದರ್ಶನಗೊಂಡಿತು. ಈ ನಾಟಕವು ಕುರುಕ್ಷೇತ್ರ ಯುದ್ಧಕ್ಕೆ ಒಂದು ದಿನ ಮೊದಲು ಕರ್ಣನ ಮಾನಸಿಕ ಸಂಕಟವನ್ನು ಚಿತ್ರಿಸುತ್ತದೆ, ಅವನು ತನ್ನ ಹಿಂದಿನ ಮತ್ತು ತನ್ನ ನಂಬಿಕೆಯ ಬಗ್ಗೆ ಯೋಚಿಸುತ್ತಾನೆ. ಮೋಹನ್ಲಾಲ್ ಹೀಗೆ ಹೇಳಿದರು: "ಕವಲಾಮ್ನ ನಾಟಕವನ್ನು ನಾನು ಮಾಡಿದ ಹವ್ಯಾಸಿ ನಾಟಕಗಳೊಂದಿಗೆ ಹೋಲಿಸಲಾಗುವುದಿಲ್ಲ. ನಾಟಕದಲ್ಲಿ ಇತರ ಪಾತ್ರಗಳಿದ್ದರೂ, ಕಥಾವಸ್ತುವು ಕರ್ಣನ ಸುತ್ತ ಸುತ್ತುತ್ತದೆ. ಇದು ಬಹುತೇಕ ಏಕವ್ಯಕ್ತಿ ಪ್ರದರ್ಶನದಂತಿದೆ. ಕೆಲವು ದೃಶ್ಯಗಳು ನಿಜಕ್ಕೂ ಸ್ಪರ್ಶಿಸುವ ಮತ್ತು ಸವಾಲಿನವು" ಎಂದರು.<ref>{{cite web|url=http://www.rediff.com/entertai/2001/mar/13mohan.htm|title=Mohanlal's new obsession|work=[[Rediff.com]]|last=Jose|first=D.|date=13 March 2001|access-date=12 September 2013|archive-url=https://web.archive.org/web/20170215005226/http://www.rediff.com/entertai/2001/mar/13mohan.htm|archive-date=15 February 2017|url-status=live}}</ref> ಅವರು ಯಾವುದೇ ಸಂಭಾವನೆಯಿಲ್ಲದೆ ಅಭಿನಯಿಸಿದರು: "ನಾನು ಅದರ ಸಂತೋಷಕ್ಕಾಗಿ ಪ್ರದರ್ಶನ ನೀಡಿದೆ... ನಮ್ಮ ಇತಿಹಾಸದ ಮೇಲಿನ ಪ್ರೀತಿಗಾಗಿ".<ref name="rd"/>
'ಕಥಾಯಟ್ಟಂ' ಮೋಹನ್ಲಾಲ್ ಅವರಿಂದ ಪ್ರದರ್ಶಿಸಲ್ಪಟ್ಟ ಪ್ರಸ್ತುತಿಯಾಗಿದ್ದು, ೧೦೦ ವರ್ಷಗಳ ಅವಧಿಯಲ್ಲಿ ಒಯ್ಯಾರತ್ತು ಚಂದು ಮೇನನ್, ಸಿ.ವಿ. ರಾಮನ್ ಪಿಳ್ಳೈ, ಎಸ್.ಕೆ. ಪೊಟ್ಟೆಕ್ಕಟ್ಟ್, ತಕ್ಕಳಿ ಶಿವಶಂಕರ ಪಿಳ್ಳೈ, ಪಿ. ಕೇಸವದೇವ್, ವೈಕಂ ಮುಹಮ್ಮದ್ ಬಷೀರ್, ಉರೂಬ್, ಒ.ವಿ. ವಿಜಯನ್, ಎಂ. ಮುಕುಂದನ್ ಮತ್ತು ಎಂ.ಟಿ. ವಾಸುದೇವನ್ ನಾಯರ್ ಬರೆದ ಹತ್ತು ಮಲಯಾಳಂ ಕಾದಂಬರಿಗಳಿಂದ ಆಯ್ಕೆ ಮಾಡಲಾದ ಹತ್ತು ಶ್ರೇಷ್ಠ ಪಾತ್ರಗಳು ಮತ್ತು ಸಂದರ್ಭಗಳನ್ನು ಪ್ರದರ್ಶಿಸಲಾಗಿದೆ. ಟಿ.ಕೆ. ರಾಜೀವ್ ಕುಮಾರ್ ನಿರ್ದೇಶನದ ಈ ನಾಟಕವು ೨೦೦೩ ರ ನವೆಂಬರ್ ೧ ರಂದು ಕೇರಳ ವಿಶ್ವವಿದ್ಯಾಲಯದ ಸೆನೆಟ್ ಹಾಲ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು ನಂತರ ಕೋಜಿಕ್ಕೋಡ್, ಬೆಂಗಳೂರು, ಚೆನ್ನೈ ಮತ್ತು ದೆಹಲಿಗಳಲ್ಲಿ ಪ್ರದರ್ಶನಗೊಂಡಿತು.<ref>{{cite news|url=http://www.thehindu.com/2003/10/28/stories/2003102807480400.htm|title=Document for rejuvenating Malayalam to be released|work=[[The Hindu]]|date=28 October 2003|archive-url=https://web.archive.org/web/20161205135557/http://www.thehindu.com/2003/10/28/stories/2003102807480400.htm|archive-date=5 December 2016|url-status=dead}}</ref><ref>{{cite news|title=Mohanlal to enact characters from Malayalam literature|url=http://www.thehindubusinessline.com/2004/12/04/stories/2004120402091700.htm|archive-url=https://web.archive.org/web/20090607065324/http://www.thehindubusinessline.com/2004/12/04/stories/2004120402091700.htm|archive-date=7 June 2009|work=[[The Hindu Business Line]]|date=4 December 2004|access-date=9 December 2016|url-status=live}}</ref> ೨೦೦೮ ರಲ್ಲಿ, ಮೋಹನ್ಲಾಲ್ ಮುಕೇಶ್ ಜೊತೆಗೆ 'ಚಾಯಮುಖಿ' ನಲ್ಲಿ ಪ್ರದರ್ಶನ ನೀಡಿದರು. ಇದನ್ನು ಪ್ರಶಾಂತ್ ನಾರಾಯಣನ್ ಬರೆದು ನಿರ್ದೇಶಿಸಿದರು. ಮೋಹನ್ಲಾಲ್ ಮತ್ತು ಮುಕೇಶ್ ಕ್ರಮವಾಗಿ ಮಹಾಭಾರತದ ಪಾತ್ರಗಳಾದ ಭೀಮ ಮತ್ತು ಕೀಚಕ ಪಾತ್ರಗಳನ್ನು ನಿರ್ವಹಿಸಿದರು. ಇದು ನಾಟಕದೊಳಗಿನ ನಾಟಕದ ನಿರೂಪಣಾ ಶೈಲಿಯನ್ನು ಹೊಂದಿತ್ತು. ೨೦೦೮ ರ ಮಾರ್ಚ್ ೧೨ ರಂದು ತ್ರಿಶೂರ್ನ ಲುಲು ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಪ್ರಥಮ ಪ್ರದರ್ಶನಗೊಂಡಿತು,<ref>{{cite news|url=http://www.thehindu.com/todays-paper/tp-national/tp-kerala/mirroring-the-pangs-of-love/article1218835.ece|archive-url=https://web.archive.org/web/20160219140152/http://www.thehindu.com/todays-paper/tp-national/tp-kerala/mirroring-the-pangs-of-love/article1218835.ece|archive-date=19 February 2016|title=Mirroring the pangs of love|work=[[The Hindu]]|date=13 March 2008|access-date=10 December 2016|last=Santhosh|first=K.|url-status=live}}</ref> ಮತ್ತು ನಂತರ ತಿರುವನಂತಪುರ, ಬೆಂಗಳೂರು, ಕೊಲ್ಲಂ, ಕೊಚ್ಚಿ ಮತ್ತು ಕೋಜಿಕ್ಕೋಡ್ಗಳಲ್ಲಿ ಪ್ರದರ್ಶನಗೊಂಡಿತು. 'ದಿ ಹಿಂದೂ' ನ ವಿಮರ್ಶಕರು "'ಚಾಯಮುಖಿ' ಇತ್ತೀಚಿನ ಕಾಲದ ಮಲಯಾಳಂ ರಂಗಭೂಮಿಯ ಅತ್ಯುತ್ತಮ ಕೃತಿ" ಎಂದು ಬರೆದರು.<ref>{{cite news|url=http://www.thehindu.com/todays-paper/tp-national/tp-kerala/chayamukhi-to-be-staged-today/article119204.ece|title='Chayamukhi' to be staged today|work=[[The Hindu]]|last=Kumar|first=P. K. Ajith|date=20 December 2009|access-date=3 February 2015|archive-url=https://web.archive.org/web/20161205135749/http://www.thehindu.com/todays-paper/tp-national/tp-kerala/chayamukhi-to-be-staged-today/article119204.ece|archive-date=5 December 2016|url-status=live}}</ref> ಅದೇ ವರ್ಷ, ಮೋಹನ್ಲಾಲ್ ಶೋಭನಾ ನಿರ್ದೇಶನದ ಇಂಗ್ಲಿಷ್ ಬ್ಯಾಲೆ 'ಮಾಯಾ ರಾವಣ' ನಲ್ಲಿ ಹನುಮಂತನಿಗೆ ಧ್ವನಿ ನೀಡಿದರು.<ref>{{cite news|url=https://www.newindianexpress.com/cities/kochi/2009/may/12/mayaravan-unveiled-48387.html|title=Mayaravan unveiled|work=[[The New Indian Express]]|date=12 May 2009|access-date=10 December 2016|last=Varma|first=Sivadas|archive-url=https://web.archive.org/web/20151224105226/http://www.newindianexpress.com/cities/kochi/article117561.ece|archive-date=24 December 2015|url-status=live}}</ref>
೨೦೧೪ ರಲ್ಲಿ, ಮೋಹನ್ಲಾಲ್ ಮತ್ತು ಸಂಗೀತಗಾರ ರತೀಶ್ ವೇಗ ಅವರು ಲಾಲಿಸಮ್ - ದಿ ಲಾಲ್ ಎಫೆಕ್ಟ್ ಎಂಬ ಸಂಗೀತ ತಂಡವನ್ನು ರಚಿಸಿದರು.<ref>{{cite news|url=https://www.newindianexpress.com/states/kerala/2014/nov/05/cult-lalisom-set-to-rock-lalettan-fans-679003.html|title=Cult Lalisom Set to Rock Lalettan Fans|work=[[The New Indian Express]]|agency=Express News Service|archive-url=https://web.archive.org/web/20161205142519/http://www.newindianexpress.com/states/kerala/2014/nov/05/Cult-Lalisom-Set-to-Rock-Lalettan-Fans-679003.html|archive-date=5 December 2016|url-status=live}}</ref> ಇದರ ಮೊದಲ ಪ್ರದರ್ಶನವು ೨೦೧೫ ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿತ್ತು. ಆರಂಭದಲ್ಲಿ ೧.೬೩ ಕೋಟಿ ರೂಪಾಯಿ ಶುಲ್ಕ ವಿಧಿಸಿದ್ದಕ್ಕಾಗಿ ಮತ್ತು ನಂತರ ಲಿಪ್-ಸಿಂಕ್ ಮಾಡಿದ್ದಕ್ಕಾಗಿ ಈ ತಂಡವು ಸಾಮಾಜಿಕ ಮಾಧ್ಯಮದಿಂದ ಟೀಕೆಗೆ ಗುರಿಯಾಯಿತು.<ref>{{cite news|url=http://www.ndtv.com/kerala-news/under-social-media-pressure-actor-mohanlal-offers-to-give-back-national-games-performance-money-736535|title=Under Social Media Pressure, Actor Mohanlal Offers to Return National Games Performance Fee|work=[[NDTV]]|last=Koshy|first=Sneha Mary|date=3 February 2015|access-date=15 February 2015|archive-url=https://web.archive.org/web/20161205143154/http://www.ndtv.com/kerala-news/under-social-media-pressure-actor-mohanlal-offers-to-give-back-national-games-performance-money-736535|archive-date=5 December 2016|url-status=live}}</ref> ಟೀಕೆಯ ನಂತರ, ಮೋಹನ್ಲಾಲ್ ಆ ಮೊತ್ತವನ್ನು ಸರ್ಕಾರಕ್ಕೆ ಹಿಂದಿರುಗಿಸಿದರು, ಆದರೆ ಸರ್ಕಾರವು ನಿರಾಕರಿಸಿತು, ಏಕೆಂದರೆ ಸರ್ಕಾರದ ನೈತಿಕತೆಯು ಅವರಿಂದ ಹಣವನ್ನು ಮರಳಿ ಪಡೆಯಲು ಅನುಮತಿಸುವುದಿಲ್ಲ ಮತ್ತು ಮೋಹನ್ಲಾಲ್ ಅವರು ಸ್ವೀಕರಿಸಿದ ಮೊತ್ತದಿಂದ ವೈಯಕ್ತಿಕವಾಗಿ ಲಾಭ ಪಡೆಯಲಿಲ್ಲ, ಏಕೆಂದರೆ ಅದು ವೇದಿಕೆಯ ವೆಚ್ಚಗಳು ಮತ್ತು ಕಲಾವಿದರಿಗೆ ಸಂಭಾವನೆಯನ್ನು ಪೂರೈಸಲು ಉದ್ದೇಶಿಸಲಾಗಿತ್ತು.<ref>{{cite news|url=http://www.thehindu.com/sport/govt-rejects-mohanlals-offer-to-return-money/article6856750.ece|title=Govt rejects Mohanlal's offer to return money|agency=[[Press Trust of India]]|date=4 February 2015|work=[[The Hindu]]|access-date=6 February 2015|archive-url=https://web.archive.org/web/20161205144127/http://www.thehindu.com/sport/govt-rejects-mohanlals-offer-to-return-money/article6856750.ece|archive-date=5 December 2016|url-status=live}}</ref> ಅದರ ಹೊರತಾಗಿಯೂ, ಮೋಹನ್ಲಾಲ್ ಅವರು ಕಳುಹಿಸಿದ ಹಣವನ್ನು ಹಿಂತೆಗೆದುಕೊಳ್ಳಲಿಲ್ಲ.<ref>{{cite news|title=Lalisom fiasco: Mohanlal refuses to take back remuneration of Rs 1.63 crore|url=http://www.dnaindia.com/entertainment/report-lalisom-fiasco-mohanlal-refuses-to-take-back-remuneration-of-rs-163-crore-2058887|access-date=23 July 2017|work=[[Daily News and Analysis]]|agency=[[Press Trust of India]]|date=7 February 2015|archive-url=https://web.archive.org/web/20171204122424/http://www.dnaindia.com/entertainment/report-lalisom-fiasco-mohanlal-refuses-to-take-back-remuneration-of-rs-163-crore-2058887|archive-date=4 December 2017|url-status=live}}</ref>
೨೦೧೫ ರಲ್ಲಿ, ಅವರು ಮುಕೇಶ್ ಜೊತೆ ಮತ್ತೊಮ್ಮೆ 'ನಾಗ' ಗಾಗಿ ಸಹಕರಿಸಿದರು, ಆದರೆ ಈ ಬಾರಿ ನಿರೂಪಕರಾಗಿ. ಗಿರೀಶ್ ಕಾರ್ನಾಡ್ ಅವರ ಕನ್ನಡ ನಾಟಕ 'ನಾಗಮಂಡಲ'ವನ್ನು ಆಧರಿಸಿದ ಈ ನಾಟಕವನ್ನು ಸುವೀರನ್ ನಿರ್ದೇಶಿಸಿದ್ದಾರೆ. 'ನಾಗ' ಪುರಾಣ, ಮೂಢನಂಬಿಕೆ, ವಾಸ್ತವ ಮತ್ತು ಫ್ಯಾಂಟಸಿಯ ಸಂಯೋಜನೆಯಾಗಿದೆ. ೨೦೧೫ ರ ಆಗಸ್ಟ್ ೯ ರಂದು ಸೇಂಟ್ ಜಾರ್ಜ್ ಚರ್ಚ್, ಕಳಡಿಯ ಪ್ಯಾರಿಷ್ ಹಾಲ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು.<ref>{{cite news|url=http://www.newindianexpress.com/cities/kochi/Mohanlal-Mukesh-to-Set-Stage-Afire-with-Naga/2015/08/08/article2963127.ece | title=Mohanlal, Mukesh to Set Stage Afire with 'Naga'|work=[[The New Indian Express]]|date=8 August 2015|access-date=10 December 2016|last=Kallungal|first=Dhinesh|archive-url=https://web.archive.org/web/20151222083204/http://www.newindianexpress.com/cities/kochi/Mohanlal-Mukesh-to-Set-Stage-Afire-with-Naga/2015/08/08/article2963127.ece|archive-date=22 December 2015|url-status=dead}}</ref>
### ಸದ್ಭಾವನಾ ದೂತ ಮತ್ತು ಬ್ರಾಂಡ್ ರಾಯಭಾರಿ
ಮೋಹನ್ಲಾಲ್ ಸರ್ಕಾರ ಮತ್ತು ಇತರ ಲಾಭರಹಿತ ಸಂಸ್ಥೆಗಳ ಸದ್ಭಾವನಾ ದೂತರಾಗಿದ್ದಾರೆ, ಮುಖ್ಯವಾಗಿ ಸಾರ್ವಜನಿಕ ಸೇವಾ ಜಾಹೀರಾತುಗಳು ಮತ್ತು ಮಾನವೀಯ ಕಾರ್ಯಗಳಿಗಾಗಿ. ೨೦೦೭ ರ ಮಾರ್ಚ್ನಲ್ಲಿ, ಕೇರಳ ಏಡ್ಸ್ ನಿಯಂತ್ರಣ ಸೊಸೈಟಿಯು ಎಚ್ಐವಿ/ಏಡ್ಸ್ ಜಾಗೃತಿ ಅಭಿಯಾನದ ಸದ್ಭಾವನಾ ದೂತರನ್ನಾಗಿ ನೇಮಿಸಿತು, ಇದಕ್ಕಾಗಿ ಅವರು ಸಣ್ಣ ಜಾಗೃತಿ ವೀಡಿಯೊಗಳಲ್ಲಿ ನಟಿಸಿದರು.<ref>{{cite news|url=http://www.thehindu.com/todays-paper/tp-national/tp-kerala/Mohanlal-joins-AIDS-awareness-drive/article14733228.ece|work=[[The Hindu]]|title=Mohanlal joins AIDS awareness drive|author=<!--Staff writer(s); no by-line.-->|date=13 March 2007|access-date=30 October 2010|archive-url=https://web.archive.org/web/20161205140525/http://www.thehindu.com/todays-paper/tp-national/tp-kerala/Mohanlal-joins-AIDS-awareness-drive/article14733228.ece|archive-date=5 December 2016|url-status=live}}</ref> ೨೦೦೯ ರ ಅಕ್ಟೋಬರ್ನಲ್ಲಿ, ಕೇರಳ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಮೋಹನ್ಲಾಲ್ ಅವರನ್ನು ಕೇರಳ ರಾಜ್ಯ ಅಥ್ಲೆಟಿಕ್ಸ್ನ ಸದ್ಭಾವನಾ ದೂತರನ್ನಾಗಿ ನೇಮಿಸಿತು.<ref name="IPL">{{cite news|url=http://timesofindia.indiatimes.com/news/Mohanlal-may-bid-for-IPL-team/articleshow/5184365.cms|work=[[The Times of India]]|title=Mohanlal may bid for IPL team|agency=[[Press Trust of India]]|date=31 October 2009|access-date=31 October 2009|archive-url=https://web.archive.org/web/20161205140208/http://timesofindia.indiatimes.com/news/Mohanlal-may-bid-for-IPL-team/articleshow/5184365.cms|archive-date=5 December 2016|url-status=live}}</ref> ೨೦೧೦ ರ ಮಾರ್ಚ್ನಲ್ಲಿ, ಮೋಹನ್ಲಾಲ್ ಕೇರಳ ಸರ್ಕಾರದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಮನವಿಯನ್ನು ಒಪ್ಪಿಕೊಂಡು ಕೇರಳದ ಕೈಮಗ್ಗ ಉದ್ಯಮದ ಸದ್ಭಾವನಾ ದೂತರಾಗಿ ನೇಮಕಗೊಂಡರು.<ref>{{cite news|title=Mohanlal to be khadi goodwill ambassador|url=http://www.thehindu.com/todays-paper/tp-national/tp-kerala/Mohanlal-to-be-khadi-goodwill-ambassador/article15995736.ecee|access-date=5 December 2016|work=[[The Hindu]]|date=3 March 2010|archive-url=https://web.archive.org/web/20161210122445/http://www.thehindu.com/todays-paper/tp-national/tp-kerala/Mohanlal-to-be-khadi-goodwill-ambassador/article15995736.ece|archive-date=10 December 2016|url-status=dead}}</ref> ೨೦೧೫ ರ ಜುಲೈನಲ್ಲಿ, ಕೇರಳ ಸರ್ಕಾರವು ಅವರನ್ನು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಅಭಿವೃದ್ಧಿಪಡಿಸಿದ "ಸುಭಯಾತ್ರಾ ೨೦೧೫" ಯೋಜನೆಯ ಸದ್ಭಾವನಾ ದೂತರನ್ನಾಗಿ ಮಾಡಿತು.<ref>{{cite news|title=Actor Mohanlal goodwill ambassador of 'Subhayatra' drive|url=http://www.business-standard.com/article/pti-stories/actor-mohanlal-goodwill-ambassador-of-subhayatra-drive-115070601022_1.html|access-date=10 December 2016|work=[[Business Standard]]|agency=[[Press Trust of India]]|date=6 July 2015|archive-url=https://web.archive.org/web/20160507203320/http://www.business-standard.com/article/pti-stories/actor-mohanlal-goodwill-ambassador-of-subhayatra-drive-115070601022_1.html|archive-date=7 May 2016|url-status=live}}</ref> ೨೦೧೬ ರ ಸೆಪ್ಟೆಂಬರ್ನಲ್ಲಿ, ಕೇರಳ ಸರ್ಕಾರದ ಮತ್ತೊಂದು ಯೋಜನೆಯಾದ "ಮೃತಸಂಜೀವನಿ" ಯ ಸದ್ಭಾವನಾ ದೂತರನ್ನಾಗಿ ನೇಮಿಸಲಾಯಿತು. ಇದು ರಾಜ್ಯದಲ್ಲಿ ಅಂಗ ದಾನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.<ref>{{cite news|last=James|first=Anu|title=Pinarayi Vijayan introduces Mohanlal as goodwill ambassador of Mrithasanjeevani programme in Kerala|url=http://www.ibtimes.co.in/pinarayi-vijayan-introduces-mohanlal-goodwill-ambassador-mrithasanjeevani-programme-kerala-695626|access-date=10 December 2016|work=[[International Business Times]]|date=28 September 2016|archive-url=https://web.archive.org/web/20161210133620/http://www.ibtimes.co.in/pinarayi-vijayan-introduces-mohanlal-goodwill-ambassador-mrithasanjeevani-programme-kerala-695626|archive-date=10 December 2016|url-status=live}}</ref> ೨೦೨೧ ರ ಜನವರಿಯಲ್ಲಿ, ಕೇರಳ ಸರ್ಕಾರದ ಆರೋಗ್ಯ ಇಲಾಖೆಯು ಕ್ಷಯರೋಗ ನಿರ್ಮೂಲನ ಅಭಿಯಾನದ ಸದ್ಭಾವನಾ ದೂತರನ್ನಾಗಿ ನೇಮಿಸಿತು.<ref>{{Cite web |date=22 January 2021 |title=Mohanlal to be ambassador of TB eradication drive |url=https://www.newindianexpress.com/states/kerala/2021/jan/22/mohanlal-to-be-ambassador-of-tb-eradication-drive-2253344.html |url-status=live |archive-url=https://web.archive.org/web/20210122032018/https://www.newindianexpress.com/states/kerala/2021/jan/22/mohanlal-to-be-ambassador-of-tb-eradication-drive-2253344.html |archive-date=22 January 2021 |access-date=27 January 2021 |website=[[The Indian Express]]}}</ref>
ಅವರು ಹಲವಾರು ದೂರದರ್ಶನ ಜಾಹೀರಾತುಗಳು ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಓಷಿಯಾನಸ್ ಇತ್ಯಾದಿಗಳ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.<ref name="indiatoday">{{cite news|url=https://www.indiatoday.in/magazine/states/kerala/story/20100315-sniping-superstars-742241-2010-03-03|title=Sniping superstars|work=[[India Today]]|last=Radhakrishnan|first=M. G.|date=4 March 2010|access-date=6 May 2012|archive-url=https://web.archive.org/web/20161205141342/http://indiatoday.intoday.in/story/Sniping+superstars/1/86696.html|archive-date=5 December 2016|url-status=live}}</ref> ೨೦೦೧ ರಲ್ಲಿ ಅವರು ಎಮ್ಸಿಆರ್ನ ಬ್ರಾಂಡ್ ರಾಯಭಾರಿಯಾದ ನಂತರ ಭಾರತದಲ್ಲಿ ಧೋತಿಯನ್ನು ಎಂಡೋರ್ಸ್ ಮಾಡಿದ ಮೊದಲ ಚಲನಚಿತ್ರ ತಾರೆ ಮೋಹನ್ಲಾಲ್. ಎಮ್ಸಿಆರ್ ೩೦,೦೦೦ ಬಣ್ಣದ ಧೋತಿಗಳನ್ನು ತಯಾರಿಸಿತು, ಅವುಗಳು 'ನರಸಿಂಹಂ' (೨೦೦೦) ಚಿತ್ರದಲ್ಲಿ ಕಾಣಿಸಿಕೊಂಡಿದ್ದವು, ಇದು ಮಾರುಕಟ್ಟೆಯಲ್ಲಿ ಯಶಸ್ಸನ್ನು ಗಳಿಸಿತು. ಅವರು ಎಮ್ಸಿಆರ್ನ ಮುಖ್ಯ ಬ್ರಾಂಡ್ ರಾಯಭಾರಿಯಾಗಿ ಮುಂದುವರೆದಿದ್ದಾರೆ.<ref>{{cite news|last=Shoba|first=V.|title=Tamil Wrap Star|url=http://indianexpress.com/article/entertainment/regional/tamil-wrap-star/|access-date=13 December 2016|work=[[The Indian Express]]|date=3 August 2014|archive-url=https://web.archive.org/web/20161220221518/http://indianexpress.com/article/entertainment/regional/tamil-wrap-star/|archive-date=20 December 2016|url-status=live}}</ref> ಮೋಹನ್ಲಾಲ್ ೨೦೦೨ ರಲ್ಲಿ ಟಾಟಾ ಗ್ಲೋಬಲ್ ಬೆವರೇಜಸ್ ಒಡೆತನದ ಚಹಾ ಬ್ರಾಂಡ್ ಕಾನನ್ ದೇವನ್ ಅವರ ಬ್ರಾಂಡ್ ರಾಯಭಾರಿಯಾಗಿ ಸಹಿ ಹಾಕಿದರು. ೨೦೧೪ ರಲ್ಲಿ ಅದರ ಮರು-ಬ್ರಾಂಡಿಂಗ್ ನಂತರ ಅವರ ಒಪ್ಪಂದವನ್ನು ನವೀಕರಿಸಲಾಯಿತು.<ref>{{cite news|title=Tata tea relaunches Kannan Devan in Kerala|url=http://www.thehindubusinessline.com/economy/agri-business/tata-tea-relaunches-kannan-devan-in-kerala/article6419941.ece|access-date=12 December 2016|work=[[The Hindu Business Line]]|date=17 September 2014}}</ref> ೨೦೧೦ ರ ಜುಲೈನಲ್ಲಿ, ಎಲ್ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಕೇರಳ ಗ್ರಾಹಕರಿಗೆ ಸೆಪ್ಟೆಂಬರ್ ೨೦೧೦ ರವರೆಗೆ ಬ್ರಾಂಡ್ನ ಓಣಂ ಹಬ್ಬದ ಕೊಡುಗೆಗಳನ್ನು ಎಂಡೋರ್ಸ್ ಮಾಡಲು ಮೋಹನ್ಲಾಲ್ ಅವರನ್ನು ನೇಮಿಸಿತು.<ref>{{cite news|url=https://www.indiatoday.in/business/world/story/lg-eyes-19kcr-sales-turnover-78237-2010-07-06|title=LG eyes 19K-cr sales turnover|work=[[India Today]]|agency=[[Press Trust of India]]|date=7 July 2010|access-date=12 September 2013|archive-url=https://web.archive.org/web/20161205141745/http://indiatoday.intoday.in/story/lg-eyes-19kcr-sales-turnover/1/104560.html|archive-date=5 December 2016|url-status=live}}</ref> ಅದೇ ವರ್ಷ, ಅವರು ಬ್ಯಾಂಕೇತರ ಹಣಕಾಸು ಕಂಪನಿಯಾದ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ನ ರಾಜ್ಯದ ಬ್ರಾಂಡ್ ರಾಯಭಾರಿಯಾಗಿ ಸಹಿ ಹಾಕಿದರು.<ref>{{cite news|title=Manappuram to take QIP route to raise Rs 1,000 crore|url=http://economictimes.indiatimes.com/markets/stocks/news/manappuram-to-take-qip-route-to-raise-rs-1000-crore/articleshow/6333929.cms|access-date=13 December 2016|work=[[The Economic Times]]|agency=ET Bureau|date=19 August 2010|archive-date=11 October 2020|archive-url=https://web.archive.org/web/20201011170913/https://economictimes.indiatimes.com/markets/stocks/news/manappuram-to-take-qip-route-to-raise-rs-1000-crore/articleshow/6333929.cms|url-status=live}}</ref> ೨೦೧೩ ರಲ್ಲಿ ಮೋಹನ್ಲಾಲ್ ಕೆಎಲ್ಎಫ್ ಕೊಕೊನಾಡ್ ತೆಂಗಿನ ಎಣ್ಣೆ ಬ್ರಾಂಡ್ ಅನ್ನು ಎಂಡೋರ್ಸ್ ಮಾಡಿದರು.<ref>{{cite news|last=Sathish|first=V. M.|title=Doctors slam Mohanlal's 'cholesterol-free' oil|url=http://www.emirates247.com/news/emirates/doctors-slam-mohanlal-s-cholesterol-free-oil-2013-05-01-1.504620|access-date=13 December 2016|work=[[Emirates 24/7]]|date=1 May 2013|archive-url=https://web.archive.org/web/20161220130513/http://www.emirates247.com/news/emirates/doctors-slam-mohanlal-s-cholesterol-free-oil-2013-05-01-1.504620|archive-date=20 December 2016|url-status=live}}</ref>
೨೦೧೩ ರ ಸೆಪ್ಟೆಂಬರ್ನಲ್ಲಿ, ನೇರ-ಪ್ರಸಾರ ಉಪಗ್ರಹ ದೂರದರ್ಶನ ಸೇವಾ ಪೂರೈಕೆದಾರ ಟಾಟಾ ಸ್ಕೈ ಮೋಹನ್ಲಾಲ್ ಅವರನ್ನು ತಮ್ಮ ಕೇರಳ ಮಾರುಕಟ್ಟೆಗೆ ಬ್ರಾಂಡ್ ಎಂಡೋರ್ಸರ್ ಆಗಿ ಘೋಷಿಸಿತು.<ref>{{cite news|title=Mohanlal roped in as Tata Sky brand ambassador|url=http://www.business-standard.com/article/news-ians/mohanlal-roped-in-as-tata-sky-brand-ambassador-113090900650_1.html|access-date=5 December 2016|work=[[Business Standard]]|agency=[[Press Trust of India]]|date=9 September 2013|archive-url=https://web.archive.org/web/20161205141922/http://www.business-standard.com/article/news-ians/mohanlal-roped-in-as-tata-sky-brand-ambassador-113090900650_1.html|archive-date=5 December 2016|url-status=live}}</ref> ಮೋಹನ್ಲಾಲ್, ಮಿಲ್ಕಾ ಸಿಂಗ್ ಮತ್ತು ಪಿ.ಟಿ. ಉಷಾ ಅವರೊಂದಿಗೆ ೨೦೧೩ ರಲ್ಲಿ ಕೊಚ್ಚಿ ಇಂಟರ್ನ್ಯಾಷನಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮದ ಬ್ರಾಂಡ್ ರಾಯಭಾರಿಗಳಾಗಿದ್ದರು. ಇದು ಕೊಚ್ಚಿ ಮ್ಯುನಿಸಿಪಲ್ ಕಾರ್ಪೊರೇಷನ್ ಮತ್ತು ಪುಷ್ ಇಂಟಿಗ್ರೇಟೆಡ್ ಕಮ್ಯುನಿಕೇಷನ್ ಪ್ರೈ. ಲಿಮಿಟೆಡ್ ಆಯೋಜಿಸಿದ್ದ ಅರ್ಧ ಮ್ಯಾರಥಾನ್ ಆಗಿತ್ತು.<ref>{{cite news|author=<!--Staff writer(s); no by-line.-->|title=Kochi to turn marathon city|url=http://www.thehindu.com/todays-paper/tp-national/tp-kerala/kochi-to-turn-marathon-city/article5362889.ece|access-date=13 December 2016|work=[[The Hindu]]|date=18 November 2013|archive-url=https://web.archive.org/web/20140830164521/http://www.thehindu.com/todays-paper/tp-national/tp-kerala/kochi-to-turn-marathon-city/article5362889.ece|archive-date=30 August 2014|url-status=live}}</ref> ೨೦೧೪ ರಲ್ಲಿ ಅದರ ಎರಡನೇ ಆವೃತ್ತಿಯಲ್ಲಿಯೂ ಅವರು ಮುಂದುವರೆದರು, ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರೊಂದಿಗೆ.<ref>{{cite news|title=Harbhajan, Mohanlal to be brand ambassadors for Kochi Marathon|url=http://www.business-standard.com/article/pti-stories/harbhajan-mohanlal-to-be-brand-ambassadors-for-kochi-marathon-114092300940_1.html|access-date=13 December 2016|work=[[Business Standard]]|agency=[[Press Trust of India]]|date=23 September 2014|archive-url=https://web.archive.org/web/20161220110910/http://www.business-standard.com/article/pti-stories/harbhajan-mohanlal-to-be-brand-ambassadors-for-kochi-marathon-114092300940_1.html|archive-date=20 December 2016|url-status=live}}</ref> ೨೦೧೬ ರ ಮೇ ತಿಂಗಳಲ್ಲಿ, ಮನರಂಜನಾ ಕಂಪನಿ ಹಾಟ್ಸ್ಟಾರ್ ತನ್ನ ಮಾರುಕಟ್ಟೆಯನ್ನು ದಕ್ಷಿಣ ಭಾರತದ ಪ್ರೇಕ್ಷಕರಿಗೆ ವಿಸ್ತರಿಸುವ ಭಾಗವಾಗಿ, ತನ್ನ ಮಲಯಾಳಂ ವಿಷಯಕ್ಕೆ ಮೋಹನ್ಲಾಲ್ ಅವರನ್ನು ಬ್ರಾಂಡ್ ರಾಯಭಾರಿಯನ್ನಾಗಿ ಘೋಷಿಸಿತು. ದೂರದರ್ಶನ, ಮುದ್ರಣ, ಹೊರಾಂಗಣ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಅವರ ಆರು ವಾರಗಳ ಬಹು-ಮಾಧ್ಯಮ ಜಾಹೀರಾತು ಅಭಿಯಾನವನ್ನು ಅವರು ಎಂಡೋರ್ಸ್ ಮಾಡಿದರು.<ref>{{cite news|title=Hotstar campaign to reach out to market in South|url=http://www.thehindubusinessline.com/news/hotstar-campaign-to-reach-out-to-market-in-south/article8594052.ece|access-date=11 December 2016|work=[[The Hindu Business Line]]|date=13 May 2016|archive-date=16 September 2021|archive-url=https://web.archive.org/web/20210916163234/https://www.thehindubusinessline.com/news/hotstar-campaign-to-reach-out-to-market-in-south/article8594052.ece|url-status=live}}</ref><ref>{{Cite news|url=https://timesofindia.indiatimes.com/entertainment/malayalam/movies/news/mohanlal-takes-on-volleyball-for-army/articleshow/62725974.cms|title=Mohanlal takes on volleyball for army|work=The Times of India|access-date=2 February 2018|archive-url=https://web.archive.org/web/20180602050839/https://timesofindia.indiatimes.com/entertainment/malayalam/movies/news/mohanlal-takes-on-volleyball-for-army/articleshow/62725974.cms|archive-date=2 June 2018|url-status=live}}</ref>
೨೦೨೬ ರಲ್ಲಿ, ಅವರು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಸದ್ಭಾವನಾ ದೂತರಾದರು ಮತ್ತು ಪ್ರಿಯದರ್ಶನ್ ನಿರ್ದೇಶನದ ಜಾಹೀರಾತು ಚಿತ್ರದಲ್ಲಿ ಯಾವುದೇ ಸಂಭಾವನೆಯಿಲ್ಲದೆ ನಟಿಸಿದರು.<ref>{{Cite news|url=https://keralakaumudi.com/news/mobile/news.php?id=1710724&u=minister-kb-ganesh-kumar-interview|title=കെഎസ്ആർടിസി പരസ്യത്തിൽ അഭിനയിക്കാൻ മോഹൻലാൽ എത്ര രൂപ വാങ്ങി? തുറന്നുപറഞ്ഞ് ഗണേശ് കുമാർ|work=Kerala Kaumudi|access-date=7 March 2026|date=6 March 2026}}</ref>
### ವ್ಯಾಪಾರ ಮತ್ತು ಇತರ ಉದ್ಯಮಗಳು
[[File:Mohanlal CCL 3 Opening.jpg|thumb|upright|CCL 3 ಉದ್ಘಾಟನೆಯಲ್ಲಿ ಮೋಹನ್ಲಾಲ್|alt=Mohanlal singing at the CCL opening ceremony]]
ಮೋಹನ್ಲಾಲ್ ಚಲನಚಿತ್ರ ನಿರ್ಮಾಣ ಮತ್ತು ವಿತರಣೆ, ರೆಸ್ಟೋರೆಂಟ್ಗಳು ಮತ್ತು ಪ್ಯಾಕೇಜ್ ಮಸಾಲೆಗಳು ಸೇರಿದಂತೆ ಹಲವಾರು ವ್ಯಾಪಾರ ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಸಂಯೋಜಿಸಿದ್ದಾರೆ. ೧೯೮೦ ರ ದಶಕದಲ್ಲಿ ಅವರು ಮಮ್ಮೂಟ್ಟಿ, ಐ.ವಿ. ಶಶಿ, ಸೀಮಾ ಮತ್ತು ಸೆಂಚುರಿ ಕೊಚುಮನ್ ಜೊತೆಗೆ ಕ್ಯಾಸಿನೋ ಎಂಬ ನಿರ್ಮಾಣ ಕಂಪನಿಯನ್ನು ಸಹ-ಮಾಲೀಕತ್ವ ಹೊಂದಿದ್ದರು. ಈ ನಿರ್ಮಾಣ ಸಂಸ್ಥೆಯು 'ಆದಿಯೋಳುಕ್ಕುಕಳ್' (೧೯೮೪), 'ಕರಿಂಪಿನ್ ಪೂವಿನಕ್ಕರೆ' (೧೯೮೫), 'ಗಾಂಧಿನಗರ್ ೨ನೇ ಸ್ಟ್ರೀಟ್' (೧೯೮೬) ಮತ್ತು 'ನಾಡೋಡಿಕ್ಕಟ್ಟು' (೧೯೮೭) ನಂತಹ ವಾಣಿಜ್ಯಿಕವಾಗಿ ಯಶಸ್ವಿ ಚಿತ್ರಗಳನ್ನು ನಿರ್ಮಿಸಿತು.<ref>{{Cite web|date=2 August 2016|title=When Mammootty And Mohanlal Produced Films For Each Other!|url=https://www.filmibeat.com/malayalam/news/2016/when-mammootty-and-mohanlal-produced-films-for-each-other-236031.html|access-date=20 July 2021|work=filmibeat.com|language=en|archive-date=16 July 2021|archive-url=https://web.archive.org/web/20210716105401/https://www.filmibeat.com/malayalam/news/2016/when-mammootty-and-mohanlal-produced-films-for-each-other-236031.html|url-status=live}}</ref><ref>{{cite news |title=Mammootty owned a production house with Mohanlal! |url=https://timesofindia.indiatimes.com/entertainment/malayalam/movies/did-you-know/mammootty-owned-a-production-house-with-mohanlal/articleshow/45345886.cms |website=The Times of India |archive-url=https://web.archive.org/web/20220706175210/https://timesofindia.indiatimes.com/entertainment/malayalam/movies/did-you-know/mammootty-owned-a-production-house-with-mohanlal/articleshow/45345886.cms |archive-date=6 July 2022}}</ref> ಅವರು ಮ್ಯಾಕ್ಸ್ಲ್ಯಾಬ್ ಸಿನೆಮಾಸ್ ಮತ್ತು ಎಂಟರ್ಟೈನ್ಮೆಂಟ್ಸ್ ಅನ್ನು ಹೊಂದಿದ್ದಾರೆ, ಇದು ಚಲನಚಿತ್ರ ವಿತರಣಾ ಕಂಪನಿಯಾಗಿದೆ.<ref>{{cite web |last=Moviebuzz |title=No MG for Mohanlal! |url=http://www.sify.com/movies/no-mg-for-mohanlal-news-malayalam-kkfspcefdfdsi.html |archive-url=https://web.archive.org/web/20151224085327/http://www.sify.com/movies/no-mg-for-mohanlal-news-malayalam-kkfspcefdfdsi.html |archive-date=24 December 2015 |website=[[Sify]] |access-date=6 December 2015 |date=13 March 2009 |url-status=dead}}</ref> ಅವರು ವಿಸ್ಮಯಾಸ್ ಮ್ಯಾಕ್ಸ್ ಅನ್ನು ಪ್ರಾರಂಭಿಸಿದರು. ಇದು ತಿರುವನಂತಪುರದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಚಿತ್ರದ ಪೂರ್ವ ಮತ್ತು ನಂತರದ ನಿರ್ಮಾಣ ಸ್ಟುಡಿಯೋ ಮತ್ತು ತಿರುವನಂತಪುರದ ಕಿನ್ಫ್ರಾ ಚಲನಚಿತ್ರ ಮತ್ತು ವಿಡಿಯೋ ಪಾರ್ಕ್ನಲ್ಲಿ ಡಬ್ಬಿಂಗ್ ಕಲಾವಿದರಿಗಾಗಿ ಕಾಲೇಜಾಗಿದೆ. ಕಂಪನಿಯ ನಿರ್ವಹಣೆಯನ್ನು ನಂತರ ಏರೀಸ್ ಗುಂಪಿನ ಸೋಹನ್ ರಾಯ್ ವಹಿಸಿಕೊಂಡರು, ಇದನ್ನು ಈಗ ಏರೀಸ್ ವಿಸ್ಮಯಾಸ್ ಮ್ಯಾಕ್ಸ್ ಎಂದು ಮರುನಾಮಕರಣ ಮಾಡಲಾಗಿದೆ. ಮೋಹನ್ಲಾಲ್ ಅದರ ಬ್ರಾಂಡ್ ರಾಯಭಾರಿಯಾಗಿ ಮುಂದುವರೆದಿದ್ದಾರೆ. ಅವರು ಪ್ರಣವಂ ಆರ್ಟ್ಸ್ ಇಂಟರ್ನ್ಯಾಷನಲ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಚಿತ್ರಗಳನ್ನು ನಿರ್ಮಿಸಿದ್ದಾರೆ.<ref>{{cite news|url=http://indianexpress.com/article/entertainment/regional/mohanlals-vismayas-max-studio-taken-over-by-aries-group/|title=Mohanlal's Vismayas Max Studio taken over by Aries group|work=[[The Indian Express]]|agency=[[Indo-Asian News Service]]|date=11 July 2014|access-date=12 July 2014|archive-url=https://web.archive.org/web/20161205145400/http://indianexpress.com/article/entertainment/regional/mohanlals-vismayas-max-studio-taken-over-by-aries-group/|archive-date=5 December 2016|url-status=live}}</ref>
ಅವರು ಭಾರತ ಮತ್ತು ವಿದೇಶಗಳಲ್ಲಿ ರೆಸ್ಟೋರೆಂಟ್ಗಳನ್ನು ಹೊಂದಿದ್ದಾರೆ. ೨೦೦೨ ರಲ್ಲಿ ಸ್ಥಾಪಿಸಲಾದ ದುಬೈನಲ್ಲಿ ಮೋಹನ್ಲಾಲ್ಸ್ ಟೇಸ್ಟ್ಬಡ್ಸ್ ಎಂಬ ಸರಪಳಿ ಮತ್ತು ೨೦೦೪ ರ ಫೆಬ್ರವರಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಅದೇ ಹೆಸರಿನ ಮಸಾಲೆಗಳು, ಉಪ್ಪಿನಕಾಯಿಗಳು, ಮಸಾಲೆಗಳು ಮತ್ತು ಕರಿಮಸಾಲೆ ಪುಡಿ ಬ್ರಾಂಡ್ ಅನ್ನು ಪ್ರಾರಂಭಿಸಿದರು. ೨೦೦೭ ರಿಂದ, ಈಸ್ಟರ್ನ್ ಗ್ರೂಪ್ ಬ್ರಾಂಡ್ನಲ್ಲಿ ಬಹುಪಾಲು ಪಾಲನ್ನು ಹೊಂದಿದೆ.<ref>{{cite news|url=http://timesofindia.indiatimes.com/business/india-business/Mohanlal-sells-Taste-Buds-to-Eastern-group/articleshow/2605816.cms|title=Mohanlal sells Taste Buds to Eastern group|work=[[The Times of India]]|last=Tejaswi|first=Mini Joseph|date=8 December 2007|access-date=8 May 2009|archive-url=https://web.archive.org/web/20161205145850/http://timesofindia.indiatimes.com/business/india-business/Mohanlal-sells-Taste-Buds-to-Eastern-group/articleshow/2605816.cms|archive-date=5 December 2016|url-status=live}}</ref> ೨೦೦೬ ರಲ್ಲಿ, ಅವರು ಬೆಂಗಳೂರಿನಲ್ಲಿ 'ದಿ ಹಾರ್ಬರ್ ಮಾರ್ಕೆಟ್' ಎಂಬ ಸಮುದ್ರಾಹಾರ ರೆಸ್ಟೋರೆಂಟ್ ಅನ್ನು ತೆರೆದರು<ref>{{cite news|last=Chibber|first=Mini Anthikad|title=Stirring it up with Mohanlal|url=http://www.thehindu.com/todays-paper/tp-features/tp-metroplus/stirring-it-up-with-mohanlal/article3190569.ece|access-date=13 January 2017|work=[[The Hindu]]|date=8 April 2006|archive-url=https://web.archive.org/web/20170113183016/http://www.thehindu.com/todays-paper/tp-features/tp-metroplus/stirring-it-up-with-mohanlal/article3190569.ece|archive-date=13 January 2017|url-status=live}}</ref> ಮತ್ತು ಕೊಚ್ಚಿಯಲ್ಲಿ ಟ್ರಾವೆನ್ಕೋರ್ ಕೋರ್ಟ್ ಎಂಬ ಹೋಟೆಲ್ ಅನ್ನು ತೆರೆದರು.<ref>{{cite news|last=Nair|first=R. Madhavan|title=Colourful feast for the eyes|url=http://www.thehindu.com/todays-paper/tp-features/tp-fridayreview/colourful-feast-for-the-eyes/article3231281.ece|access-date=13 January 2017|work=[[The Hindu]]|date=10 November 2006|archive-date=6 January 2024|archive-url=https://web.archive.org/web/20240106052349/https://www.thehindu.com/todays-paper/tp-features/tp-fridayreview/colourful-feast-for-the-eyes/article3231281.ece|url-status=live}}</ref> ಅವರ ಇತರ ವ್ಯಾಪಾರ ಉದ್ಯಮಗಳಲ್ಲಿ ಯುನಿರಾಯಲ್ ಮರೀನ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ ಸೇರಿವೆ — ಇದು ಕೋಝಿಕ್ಕೋಡ್ ಮೂಲದ ಸಮುದ್ರಾಹಾರ ರಫ್ತು ಕಂಪನಿಯಾಗಿದ್ದು, ೧೯೯೨ ರಿಂದ ಅವರು ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದಾರೆ.<ref>{{cite web|author=Bloomberg|title=V. Mohanlal: Executive Profile & Biography|url=https://www.bloomberg.com/research/stocks/people/person.asp?personId=24929476&capId=20387802|publisher=[[Bloomberg L.P.]]|access-date=13 January 2017|date=21 August 1992|archive-url=https://web.archive.org/web/20170116162824/http://www.bloomberg.com/research/stocks/people/person.asp?personId=24929476&capId=20387802|archive-date=16 January 2017|url-status=live}}</ref> ಅವರು ೨೦೦೯ ರಲ್ಲಿ ಸ್ಥಾಪಿಸಲಾದ ಕೊಚ್ಚಿಯ ತ್ರಿಪ್ಪುನಿತುರಾದಲ್ಲಿನ ಜೋಸ್ ಥಾಮಸ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ನ ಸಹ-ಸ್ಥಾಪಕ, ಪಾಲುದಾರ ಮತ್ತು ಅಧ್ಯಕ್ಷರಾಗಿದ್ದಾರೆ.<ref>{{cite news|url=https://www.indiatoday.in/magazine/leisure/story/20090413-creativity-at-a-new-address-739410-2009-04-02|title=Creativity at a new address|work=[[India Today]]|last=Ravindran|first=Nirmala|date=3 April 2009|access-date=6 May 2012|archive-url=https://web.archive.org/web/20161205153355/http://indiatoday.intoday.in/story/Creativity+at+a+new+address/1/35066.html|archive-date=5 December 2016|url-status=live}}</ref> ಅವರು ಕ್ಲೀನರ್ಜೆನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದು ಜೈವಿಕ ಅನಿಲೀಕರಣಕ್ಕಾಗಿ ಜೈವಿಕ ವಸ್ತುಗಳ ಉತ್ಪಾದನೆ ಮತ್ತು ಪೂರೈಕೆಗಾಗಿ ಕಂಪನಿಯಾಗಿದೆ.<ref>{{cite press release|last=Hatfield|first=Jessica|title=Clenergen India Private Limited Appoints Mohanlal As Its Non-Executive Director|url=http://www.free-press-release.com/news-clenergen-india-private-limited-appoints-mohanlal-as-its-non-executive-director-1272920150.html|location=United States|publisher=Clenergen India|agency=Free Press Release|date=6 April 2014|access-date=6 May 2014|archive-date=11 October 2020|archive-url=https://web.archive.org/web/20201011170919/https://www.tptptp.com/|url-status=live}}</ref>
೨೦೦೯ ರಲ್ಲಿ, ಮೋಹನ್ಲಾಲ್ ಪ್ರಿಯದರ್ಶನ್ ಜೊತೆಗೆ ಕೊಚ್ಚಿ ಮೂಲದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡಕ್ಕೆ ಬಿಡ್ ಮಾಡಲು ಪ್ರಯತ್ನಿಸಿದರು; ನಿಯಮಗಳಲ್ಲಿನ ಬದಲಾವಣೆಯ ನಂತರ ಸಾಕಷ್ಟು ಹಣವನ್ನು ಸಂಗ್ರಹಿಸಲು ವಿಫಲವಾದ ಕಾರಣ ಅವರು ಬಿಡ್ ಅನ್ನು ಹಿಂತೆಗೆದುಕೊಂಡರು.<ref name="IPL"/><ref>{{cite news|url=http://timesofindia.indiatimes.com/news/Keralas-dream-to-have-IPL-team-suffers-reversal/articleshow/5648755.cms|work=[[The Times of India]]|title=Kerala's dream to have IPL team suffers reversal|agency=[[Press Trust of India]]|date=5 March 2010|access-date=10 March 2010|archive-url=https://web.archive.org/web/20161205153942/http://timesofindia.indiatimes.com/news/Keralas-dream-to-have-IPL-team-suffers-reversal/articleshow/5648755.cms|archive-date=5 December 2016|url-status=live}}</ref> ೨೦೧೨ ಮತ್ತು ೨೦೧೩ ರಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಮೋಹನ್ಲಾಲ್ ಕೇರಳ ಸ್ಟ್ರೈಕರ್ಸ್ ತಂಡದ ನಾಯಕರಾಗಿದ್ದರು.<ref>[http://keralastrikers.in/ Official site — Kerala Strikers]{{Dead link|date=July 2026 |bot=InternetArchiveBot }}</ref>
===ಪಲಾಯನ ಕಲೆ===
೨೦೦೮ ರಲ್ಲಿ, ಮೋಹನ್ಲಾಲ್ ತಿರುವನಂತಪುರದಲ್ಲಿ "ಬರ್ನಿಂಗ್ ಇಲ್ಯೂಷನ್" ಎಂಬ ಸ್ಟಂಟ್ ಅನ್ನು ನಿರ್ವಹಿಸಲು ಮಾಂತ್ರಿಕ ಗೋಪಿನಾಥ್ ಮುತುಕಾಡ್ ಅವರ ಅಡಿಯಲ್ಲಿ ೧೮ ತಿಂಗಳುಗಳ ಕಾಲ ಗುಪ್ತ ಪಲಾಯನ ಕಲಾವಿದ ತರಬೇತಿಗೆ ಒಳಗಾದರು.<ref>{{cite news|url=https://nmp1toi.indiatimes.com/entertainment/malayalam/movies/did-you-know/Mohanlal-as-escape-artist/articleshow/45650012.cms|archive-url=https://web.archive.org/web/20230901133010/https://nmp1toi.indiatimes.com/entertainment/malayalam/movies/did-you-know/Mohanlal-as-escape-artist/articleshow/45650012.cms|url-status=dead|archive-date=1 September 2023|title=Mohanlal as escape artist!|work=[[India Times]]|access-date=21 November 2019}}</ref> ಆದಾಗ್ಯೂ, ಅಭಿಮಾನಿಗಳು ಮತ್ತು ಸಮಕಾಲೀನರ ಒತ್ತಡದಿಂದಾಗಿ, ಈ ಕೃತ್ಯವನ್ನು ರದ್ದುಗೊಳಿಸಲಾಯಿತು. ಈ ಕಾರ್ಯಕ್ರಮವನ್ನು ಕೇರಳ ಪೊಲೀಸ್, ಪ್ರವಾಸೋದ್ಯಮ ಇಲಾಖೆ ಮತ್ತು ಕೇರಳ ರಾಜ್ಯ ಯುವ ಕಲ್ಯಾಣ ಮಂಡಳಿಯು 'ವಿಸ್ಮಯಂ ೨೦೦೮' ರ ಭಾಗವಾಗಿ ಸಂಯೋಜಿಸಿತ್ತು, ಇದು ಮಾಂತ್ರಿಕರ ಅಂತರರಾಷ್ಟ್ರೀಯ ಸಮ್ಮೇಳನವಾಗಿತ್ತು. ಈ ಸ್ಟಂಟ್ ಮೋಹನ್ಲಾಲ್ ಅವರನ್ನು ಕೈಕೋಳಗಳಿಗೆ ಸಿಲುಕಿಸಿ ಸರಪಳಿಗಳಲ್ಲಿ ಸುತ್ತಿ, ಪೆಟ್ಟಿಗೆಯೊಳಗೆ ಇರಿಸಿ, ಬೆಂಕಿಯ ಚೆಂಡಿನಲ್ಲಿ ಎಸೆಯುವುದನ್ನು ಒಳಗೊಂಡಿತ್ತು. ಅದರಿಂದ ಅವರು ಪಾರಾಗಬೇಕಾಗಿತ್ತು.<ref>{{cite news|url=http://www.dnaindia.com/india/report-mohanlal-gives-up-his-shot-at-magic-1161104|title=Mohanlal gives up his shot at magic|work=[[Daily News and Analysis]]|date=23 April 2008|access-date=8 November 2014|agency=[[Press Trust of India]]|archive-url=https://web.archive.org/web/20161205155253/http://www.dnaindia.com/india/report-mohanlal-gives-up-his-shot-at-magic-1161104|archive-date=5 December 2016|url-status=live}}</ref>
ಮಾಂತ್ರಿಕ ಸಾಮ್ರಾಜ್ ಮೋಹನ್ಲಾಲ್ ಅವರಿಗೆ ಸ್ಟಂಟ್ ವಿರುದ್ಧ ಸಲಹೆ ನೀಡಿದರು ಮತ್ತು ಅದನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡರು.<ref>{{cite news|url=http://www.news18.com/news/india/mohanlal-plans-daredevil-stunt-magicians-frown-287683.html|title=Mohanlal plans daredevil stunt, magicians frown|work=[[CNN-News18]]|date=21 April 2008|access-date=6 May 2012|archive-url=https://web.archive.org/web/20161205155533/http://www.news18.com/news/india/mohanlal-plans-daredevil-stunt-magicians-frown-287683.html|archive-date=5 December 2016|url-status=live}}</ref> ಅಮ್ಮ ಅಧ್ಯಕ್ಷ ಇನ್ನೋಸೆಂಟ್ ಕೂಡ ಮೋಹನ್ಲಾಲ್ ಅವರನ್ನು ಅಪಾಯಕಾರಿ ಪ್ರದರ್ಶನದಿಂದ ದೂರವಿರಲು ಒತ್ತಾಯಿಸಿದರು.<ref>{{cite news|url=http://www.hindustantimes.com/regional-movies/mohanlal-wilts-under-pressure-withdraws-from-stunt-act/story-UtjgWjYVRcwwbMThmGTkiI.html|title=Mohanlal wilts under pressure, withdraws from stunt act|agency=[[Indo-Asian News Service]]|date=24 April 2008|access-date=12 May 2009|work=[[Hindustan Times]]|archive-url=https://web.archive.org/web/20161205160018/http://www.hindustantimes.com/regional-movies/mohanlal-wilts-under-pressure-withdraws-from-stunt-act/story-UtjgWjYVRcwwbMThmGTkiI.html|archive-date=5 December 2016|url-status=live}}</ref> ಈ ಸ್ಟಂಟ್ನ ಉದ್ದೇಶವು ಯುವಕರಿಗೆ ಜೀವನದ ಸವಾಲುಗಳನ್ನು ಎದುರಿಸಲು ಪ್ರೇರೇಪಿಸುವುದಾಗಿತ್ತು. ಮೋಹನ್ಲಾಲ್ ೫೦-೫೦ ಅಪಾಯವನ್ನು ಒಪ್ಪಿಕೊಂಡರು ಆದರೆ ಯಶಸ್ಸಿನ ಭರವಸೆ ವ್ಯಕ್ತಪಡಿಸಿದರು.<ref>{{cite news|url=http://www.thehindu.com/todays-paper/tp-national/tp-kerala/lsquoEscape-act-a-big-challengersquo/article15205851.ece|title='Escape act a big challenge'|author=<!--Not stated--> reporter|date=18 April 2008|work=[[The Hindu]]|access-date=8 November 2014|archive-url=https://web.archive.org/web/20161205160229/http://www.thehindu.com/todays-paper/tp-national/tp-kerala/lsquoEscape-act-a-big-challengersquo/article15205851.ece|archive-date=5 December 2016|url-status=live}}</ref> ಮುತುಕಾಡ್ ಒತ್ತಿಹೇಳಿದರು, ಬೆಂಕಿ ಪಲಾಯನವು ಅತ್ಯಂತ ಅಪಾಯಕಾರಿ ಕೃತ್ಯಗಳಲ್ಲಿ ಒಂದಾಗಿದ್ದರೂ, ಮೋಹನ್ಲಾಲ್ ಅದನ್ನು ಪರಿಪೂರ್ಣಗೊಳಿಸಲು ಅಭ್ಯಾಸ ಮಾಡುತ್ತಿದ್ದಾರೆ.<ref>{{cite news|url=http://www.hindustantimes.com/entertainment/regional/actor-mohanlal-s-stint-with-magic/article1-303913.aspx|title=Actor Mohanlal's stint with magic|agency=[[Indo-Asian News Service]]|date=11 April 2008|work=[[Hindustan Times]]|access-date=8 November 2014|archive-url=https://web.archive.org/web/20141108192317/http://www.hindustantimes.com/entertainment/regional/actor-mohanlal-s-stint-with-magic/article1-303913.aspx|archive-date=8 November 2014}}</ref>
೨೦೧೪ ರಲ್ಲಿ, ಮೋಹನ್ಲಾಲ್ ಮುತುಕಾಡ್ ಸ್ಥಾಪಿಸಿದ ತಿರುವನಂತಪುರದಲ್ಲಿ ಮ್ಯಾಜಿಕ್ ಥೀಮ್ ಸಂಕೀರ್ಣವಾದ ಮ್ಯಾಜಿಕ್ ಪ್ಲಾನೆಟ್ನ ಉದ್ಘಾಟನಾ ಸಮಾರಂಭದಲ್ಲಿ ಅಪಾಯ-ಮುಕ್ತ ಮ್ಯಾಜಿಕ್ ಅನ್ನು ಪ್ರದರ್ಶಿಸಿದರು. ಕೇರಳದ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮತ್ತು ಮೋಹನ್ಲಾಲ್ ಅವರ ಕೃತ್ಯವು ಹುಡುಗಿಯೊಬ್ಬಳನ್ನು ಲೆವಿಟೇಟ್ ಮಾಡುವುದನ್ನು ಒಳಗೊಂಡಿತ್ತು.<ref>{{cite news|url=https://www.newindianexpress.com/cities/thiruvananthapuram/2014/nov/01/actor-turns-magician-at-magic-planets-inaugural-677674.html|title=Actor Turns Magician at Magic Planet's Inaugural|agency=Express News Service|date=1 November 2014|work=[[The New Indian Express]]|access-date=8 November 2014|archive-url=https://web.archive.org/web/20161205161221/http://www.newindianexpress.com/cities/thiruvananthapuram/2014/nov/01/Actor-Turns-Magician-at-Magic-Planets-Inaugural-677674.html|archive-date=5 December 2016|url-status=live}}</ref>
==ಮಾಧ್ಯಮ ಚಿತ್ರಣ ಮತ್ತು ಕಲಾತ್ಮಕತೆ==
[[File:Mohanlal with the team.jpg|upright|thumb|alt=Mohanlal sitting in a chair|2006 ರಲ್ಲಿ ಪುಸ್ತಕ ಅನಾವರಣ ಸಮಾರಂಭದಲ್ಲಿ ಮೋಹನ್ಲಾಲ್]]
ಮೋಹನ್ಲಾಲ್ ಅವರನ್ನು ಭಾರತೀಯ ಮಾಧ್ಯಮದಲ್ಲಿ ಅತ್ಯಂತ ಬಹುಮುಖ ನಟರಲ್ಲಿ ಒಬ್ಬರೆಂದು ವಿವರಿಸಲಾಗಿದೆ ಮತ್ತು ಅವರ ನೈಸರ್ಗಿಕ ಅಭಿನಯ ಶೈಲಿಗಾಗಿ ಪ್ರಶಂಸಿಸಲಾಗಿದೆ.<ref name="ndtvgoodtimes"/><ref name="hindu2">{{cite news | url=http://www.hindu.com/thehindu/mag/2006/02/19/stories/2006021900500500.htm | location=Chennai | title=In for the long haul | date=19 February 2006 | access-date=28 May 2011 | archive-url=https://web.archive.org/web/20111208094212/http://www.hindu.com/thehindu/mag/2006/02/19/stories/2006021900500500.htm | archive-date=8 December 2011 | work=[[The Hindu]]|url-access=subscription | url-status=dead }}</ref><ref name="aag">[https://timesofindia.indiatimes.com/entertainment/hindi/movie-details/ram-gopal-varma-ki-aag/movieshow/61258127.cms Ram Gopal Varma ki.. Aag!] {{Webarchive|url=https://web.archive.org/web/20180812191738/https://timesofindia.indiatimes.com/entertainment/hindi/movie-details/ram-gopal-varma-ki-aag/movieshow/61258127.cms |date=12 August 2018 }}. Indiatimes.com. August 2007. Retrieved on 6 May 2012.</ref><ref>{{cite news | url=http://www.hindu.com/thehindu/gallery/1222/ | location=Chennai | work=The Hindu|url-access=subscription | title=Rare Honour: Mohanlal joins Territorial Army | access-date=29 May 2011 | archive-url=https://web.archive.org/web/20110809095012/http://www.hindu.com/thehindu/gallery/1222/ | archive-date=9 August 2011 | url-status=live }}</ref><ref>[http://www.hindu.com/thehindu/mp/2003/06/23/stories/2003062300110202.htm The Hindu : New action hero?] {{Webarchive|url=https://web.archive.org/web/20101129091013/http://hindu.com/thehindu/mp/2003/06/23/stories/2003062300110202.htm|date=29 November 2010}} (23 June 2003)</ref> ಮೋಹನ್ಲಾಲ್ ಅವರ "ಲಾಲೆಟ್ಟನ್" ಎಂಬ ಅಡ್ಡಹೆಸರಿನಿಂದಲೂ ಕರೆಯಲ್ಪಡುತ್ತಾರೆ.<ref>{{cite web|url=https://www.deccanchronicle.com/entertainment/mollywood/030717/lalettan-to-grace-small-screen.html|title=Lalettan to grace small screen|date=3 July 2017|website=Deccan Chronicle|access-date=23 January 2019|archive-url=https://web.archive.org/web/20180722214154/https://www.deccanchronicle.com/entertainment/mollywood/030717/lalettan-to-grace-small-screen.html|archive-date=22 July 2018|url-status=live}}</ref> ರೀಡರ್ಸ್ ಡೈಜೆಸ್ಟ್ ಇಂಡಿಯಾ ಅವರನ್ನು ೨೦೦೪ ರಲ್ಲಿ "ಸಿನೆಮಾದ ಎಲ್ಲಾ ವ್ಯಾಪಾರಗಳ ಜಾಕ್ ಮತ್ತು ಅನೇಕ ಮಾಸ್ಟರ್ಸ್" ಎಂದು ವಿವರಿಸಿತು.<ref name="rd"/> ೨೦೧೦ ರಲ್ಲಿ ರೀಡರ್ಸ್ ಡೈಜೆಸ್ಟ್ ನಡೆಸಿದ ಸಮೀಕ್ಷೆಯಲ್ಲಿ ಅವರು ಭಾರತದ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳ ಪಟ್ಟಿಯಲ್ಲಿ ೮೦ ನೇ ಸ್ಥಾನದಲ್ಲಿದ್ದರು.<ref>[http://www.sify.com/news/list-of-reader-s-digest-s-india-s-most-trusted-to-go-with-abdul-kalam-ratan-tata-are-india-s-most-trusted-survey-news-national-kdcsacchfhf.html List of Reader's Digest's India's Most Trusted (To go with Abdul Kalam, Ratan Tata are India's most trusted: Survey)] {{Webarchive|url=https://web.archive.org/web/20120816040706/http://www.sify.com/news/list-of-reader-s-digest-s-india-s-most-trusted-to-go-with-abdul-kalam-ratan-tata-are-india-s-most-trusted-survey-news-national-kdcsacchfhf.html |date=16 August 2012 }}. Sify.com (2 March 2010). Retrieved on 6 May 2012.</ref> ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೋಹನ್ಲಾಲ್ ಅವರನ್ನು "ಯಾವುದೇ ಪಾತ್ರಕ್ಕೆ ಸುಲಭವಾಗಿ ಹೊಂದಿಕೊಳ್ಳಬಲ್ಲ ದೇಶದ ಅತ್ಯುತ್ತಮ ನಟರಲ್ಲಿ ಒಬ್ಬರು" ಎಂದು ವಿವರಿಸಿದ್ದಾರೆ.<ref>{{cite news | url=http://www.hindu.com/mp/2003/09/18/stories/2003091800800200.htm | location=[[Chennai]] | work=[[The Hindu]]|url-access=subscription | title=Lal salaam! | date=18 September 2003 | access-date=25 May 2011 | archive-url=https://web.archive.org/web/20080401073340/http://www.hindu.com/mp/2003/09/18/stories/2003091800800200.htm | archive-date=1 April 2008 | url-status=dead }}</ref> ಭಾರತೀಯ ಚಲನಚಿತ್ರೋದ್ಯಮದಲ್ಲಿ ಅವರ ಸಮಕಾಲೀನರು ಮಲಯಾಳಂ ಚಲನಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಅವರನ್ನು ಹೆಚ್ಚಾಗಿ ಪ್ರಶಂಸಿಸಿದ್ದಾರೆ.<ref>{{Cite web|title=Mohanlal is India's pride, Kerala's treasure: Vijay to Dhanush, best quotes by Tamil actors on the Malayalam superstar. Rajinikanth, Suriya and more...|url=https://www.newindianexpress.com/galleries/entertainment/2020/may/20/mohanlal-is-indias-pride-keralas-treasure-vijay-to-dhanush-best-quotes-by-tamil-actors-on-the-m-102872.html|access-date=7 September 2021|website=The New Indian Express|date=20 May 2020 |archive-date=3 June 2020|archive-url=https://web.archive.org/web/20200603124847/https://www.newindianexpress.com/galleries/entertainment/2020/may/20/mohanlal-is-indias-pride-keralas-treasure-vijay-to-dhanush-best-quotes-by-tamil-actors-on-the-m-102872.html|url-status=live}}</ref><ref>{{Cite web|title=Mohanlal is the greatest actor we have in our country: Suriya on his 'Kaappaan' co-star|url=https://www.newindianexpress.com/entertainment/tamil/2019/sep/14/mohanlal-is-the-greatest-actor-we-have-in-our-country-suriya-on-his-kaappaan-co-star-2033651.html|access-date=2 July 2021|website=The New Indian Express|date=20 September 2019 |archive-date=9 July 2021|archive-url=https://web.archive.org/web/20210709182722/https://www.newindianexpress.com/entertainment/tamil/2019/sep/14/mohanlal-is-the-greatest-actor-we-have-in-our-country-suriya-on-his-kaappaan-co-star-2033651.html|url-status=live}}</ref><ref>{{Cite news|title=My admiration increases: Amitabh Bachchan after watching the trailer of Mohanlal's Marakkar|url=https://timesofindia.indiatimes.com/entertainment/malayalam/movies/news/my-admiration-increases-amitabh-bachchan-after-watching-the-trailer-of-mohanlals-marakkar/articleshow/74546739.cms|access-date=2 July 2021|website=The Times of India|language=en|archive-date=9 July 2021|archive-url=https://web.archive.org/web/20210709214758/https://timesofindia.indiatimes.com/entertainment/malayalam/movies/news/my-admiration-increases-amitabh-bachchan-after-watching-the-trailer-of-mohanlals-marakkar/articleshow/74546739.cms|url-status=live}}</ref>
೨೦೦೩ ರಲ್ಲಿ, ಮೋಹನ್ಲಾಲ್ ಅವರ ಚಲನಚಿತ್ರ ವೃತ್ತಿಯ ೨೫ ನೇ ವಾರ್ಷಿಕೋತ್ಸವದಂದು, ತಿರುವನಂತಪುರದಲ್ಲಿ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಒಂದು ವಾರದ ಆಚರಣೆ ಮತ್ತು ವೇದಿಕೆ ಪ್ರದರ್ಶನವನ್ನು ನಡೆಸಿದರು. ವೇದಿಕೆ ಪ್ರದರ್ಶನದಿಂದ ಬಂದ ಹಣವನ್ನು ದಾನಕ್ಕೆ ನೀಡಲಾಯಿತು.<ref>{{cite news | url=http://www.hindu.com/thehindu/mp/2003/08/21/stories/2003082100220202.htm | location=[[Chennai]] | work=[[The Hindu]]|url-access=subscription | title=Down memory lane | date=21 August 2003 | access-date=31 May 2011 | archive-url=https://web.archive.org/web/20101129052038/http://hindu.com/thehindu/mp/2003/08/21/stories/2003082100220202.htm | archive-date=29 November 2010 | url-status=dead }}</ref> ಮಲಯಾಳಂ ದೂರದರ್ಶನ ವಾಹಿನಿಗಳಾದ ಏಷ್ಯಾನೆಟ್ ಮತ್ತು ಸೂರ್ಯ ಟಿವಿ ಸಹ ವಾರ್ಷಿಕೋತ್ಸವವನ್ನು ಆಚರಿಸಲು ಪ್ರತ್ಯೇಕ ವೇದಿಕೆ ಪ್ರದರ್ಶನಗಳನ್ನು ನಡೆಸಿದವು.<ref>{{cite news | url=http://www.hindu.com/mp/2003/12/22/stories/2003122200220200.htm | location=[[Chennai]] | work=[[The Hindu]]|url-access=subscription | title=Showtime | date=22 December 2003 | access-date=31 May 2011 | archive-url=https://web.archive.org/web/20090925032600/http://www.hindu.com/mp/2003/12/22/stories/2003122200220200.htm | archive-date=25 September 2009 | url-status=dead }}</ref>
೧೯೮೦ ರ ದಶಕದಲ್ಲಿ, ಮೋಹನ್ಲಾಲ್ ಮತ್ತು ಮಮ್ಮೂಟ್ಟಿ ಮಲಯಾಳಂ ಚಲನಚಿತ್ರರಂಗದಲ್ಲಿ "ಸೂಪರ್ಸ್ಟಾರ್"ಗಳಾಗಿ ಹೊರಹೊಮ್ಮಿದರು, ಇದು ಉದ್ಯಮದಲ್ಲಿ ಅಭೂತಪೂರ್ವ ವಿದ್ಯಮಾನವನ್ನು ಗುರುತಿಸಿತು. ಇದು ಮಲಯಾಳಂ ಚಲನಚಿತ್ರರಂಗದ ಬದಲಾವಣೆಗೆ ಕಾರಣವಾಯಿತು, ಬಾಲಿವುಡ್ ಮತ್ತು ತಮಿಳು ಚಲನಚಿತ್ರ ಸಂಸ್ಕೃತಿಗಳನ್ನು ನೆನಪಿಸುವ ನಟ-ಪ್ರಧಾನ ಚಿತ್ರಗಳು ರೂಢಿಯಾದವು. ೧೯೮೮ ರಲ್ಲಿ 'ಇಂಡಿಯಾ ಟುಡೇ' ಗಮನಿಸಿದಂತೆ, ಚಲನಚಿತ್ರ ನಿರ್ಮಾಪಕರು ಈ ಸೂಪರ್ಸ್ಟಾರ್ಗಳಿಗೆ ಸರಿಹೊಂದುವಂತೆ ಪಾತ್ರಗಳನ್ನು ರೂಪಿಸಿದರು. ನಿರ್ದೇಶಕ ಐ.ವಿ. ಶಶಿ ಅವರು ಪ್ರೇಮ್ ನಜೀರ್ ಕೂಡ ಮೋಹನ್ಲಾಲ್ ಮತ್ತು ಮಮ್ಮೂಟ್ಟಿಯ ಜನಪ್ರಿಯತೆಯನ್ನು ಹೊಂದಿರಲಿಲ್ಲ ಎಂದು ಹೇಳಿದರು. ಅವರು "ವಿರಳ ಮತ್ತು ಸರಿಯಾದ ಮಿಶ್ರಣವಾದ ಮೋಡಿ ಮತ್ತು ಅಭಿನಯ ಸಾಮರ್ಥ್ಯ" ವನ್ನು ಹೊಂದಿದ್ದಾರೆ. ೧೯೮೮ ರಲ್ಲಿ, ಚಲನಚಿತ್ರ ನಿರ್ದೇಶಕ ಫಾಜಿಲ್ "ಮೋಹನ್ಲಾಲ್ ಇಂದು ದೇಶದ ಅತ್ಯಂತ ಹೊಂದಿಕೊಳ್ಳುವ ಮತ್ತು ಸೂಕ್ಷ್ಮ ನಟ. ಡಸ್ಟಿನ್ ಹಾಫ್ಮನ್ 'ಟೂಟ್ಸೀ' ನಲ್ಲಿ ಅಥವಾ ಸಿಲ್ವೆಸ್ಟರ್ ಸ್ಟಾಲೋನ್ 'ರಾಂಬೊ' ನಲ್ಲಿ ಮಾಡಿದ್ದನ್ನು ಅವರು ಸುಲಭವಾಗಿ ಮಾಡಬಲ್ಲರು" ಎಂದು ಹೇಳಿದರು.<ref>{{Cite web|url=https://www.indiatoday.in/magazine/society-the-arts/films/story/19881231-mammootty-and-mohan-lal-emerge-as-unprecedented-superstars-of-malayalam-films-798061-1988-12-31|archive-url = https://web.archive.org/web/20190918142917/https://www.indiatoday.in/magazine/society-the-arts/films/story/19881231-mammootty-and-mohan-lal-emerge-as-unprecedented-superstars-of-malayalam-films-798061-1988-12-31|archive-date = 18 September 2019|title = Mammootty and Mohan Lal emerge as unprecedented superstars of Malayalam films| date=31 December 1988 }}</ref>
೨೦೦೫ ರಲ್ಲಿ, ಮೋಹನ್ಲಾಲ್, ಮಮ್ಮೂಟ್ಟಿ ಮತ್ತು ದಿಲೀಪ್ ಅವರ ಚಿತ್ರಗಳು ಮಲಯಾಳಂ ಚಲನಚಿತ್ರರಂಗದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ೯೫ ಪ್ರತಿಶತವನ್ನು ಹೊಂದಿದ್ದವು. 'ದಿ ಹಿಂದೂ' "ಮಲಯಾಳಂ ಚಲನಚಿತ್ರವು ಅವರ ಸುತ್ತ ಸುತ್ತುತ್ತದೆ ಮತ್ತು ಅವರ ವಯಸ್ಸು ಮತ್ತು ಚಿತ್ರಣವನ್ನು ಮನಸ್ಸಿನಲ್ಲಿಟ್ಟುಕೊಂಡು ಚಿತ್ರಕಥೆಗಳನ್ನು ಬರೆಯಲಾಗುತ್ತದೆ" ಎಂದು ಬರೆಯಿತು. ಅವರು ವಿಶಿಷ್ಟ ಶೈಲಿಯ ಉಡುಪು, ಸಂಭಾಷಣೆ, ನೃತ್ಯ ಮತ್ತು ಹೋರಾಟದ ಅನುಕ್ರಮಗಳೊಂದಿಗೆ ಜೀವನಕ್ಕಿಂತ ದೊಡ್ಡದಾದ ಪಾತ್ರಗಳನ್ನು ನಿರ್ವಹಿಸಿದರು.<ref>[http://www.hindu.com/fr/2005/12/09/stories/2005120901230100.htm The Hindu : Entertainment Thiruvananthapuram / Cinema : Whither the heroine?] {{Webarchive|url=https://web.archive.org/web/20130928042749/http://www.hindu.com/fr/2005/12/09/stories/2005120901230100.htm|date=28 September 2013}} (9 December 2005)</ref><ref>T. N. Gopakumar [http://www.cscsarchive.org:8081/MediaArchive/art.nsf/94ff8a4a35a9b8876525698d002642a9/46344d1a8344a1f9652572df003429af/$FILE/A0190307.pdf Malayalam Cinema Faces a Threat] {{webarchive|url=https://web.archive.org/web/20110725213203/http://www.cscsarchive.org:8081/MediaArchive/art.nsf/94ff8a4a35a9b8876525698d002642a9/46344d1a8344a1f9652572df003429af/$FILE/A0190307.pdf |date=25 July 2011 }}</ref> ಕೇರಳದಾದ್ಯಂತ ಇರುವ ಮೋಹನ್ಲಾಲ್ ಅವರ ಅನೇಕ ಅಭಿಮಾನಿ ಸಂಘಗಳು ಹೊಸ ಬಿಡುಗಡೆಗಳ ಸುತ್ತ ಸದ್ದು ಮಾಡಲು ಮತ್ತು ಚಲನಚಿತ್ರ ಪರದೆಗಳಲ್ಲಿ ಉತ್ತಮ ಆರಂಭವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ. ಇದು ಕೇರಳದಲ್ಲಿ ಚಿತ್ರಗಳ ಯಶಸ್ಸಿಗೆ ನಿರ್ಣಾಯಕ ಅಂಶವಾಗಿದೆ.<ref>[http://www.hindu.com/fr/2005/12/30/stories/2005123001380100.htm The Hindu : Entertainment Thiruvananthapuram : Boom year for Mollywood] {{Webarchive|url=https://web.archive.org/web/20070921125535/http://www.hindu.com/fr/2005/12/30/stories/2005123001380100.htm|date=21 September 2007}} (30 December 2005)</ref> ೨೦೦೭ ರಲ್ಲಿ, ಕೆಲವು ಸಾಮಾಜಿಕ ಕಾರ್ಯಕರ್ತರು ವಿಸ್ಕಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮೋಹನ್ಲಾಲ್ ವಿರುದ್ಧ ಪ್ರತಿಭಟಿಸಿದರು, ಅದಕ್ಕೆ ಅವರು ಅನೇಕ ಇತರ ಭಾರತೀಯ ನಟರು ಅದೇ ರೀತಿ ಮಾಡುವಾಗ ತಮ್ಮನ್ನು ಮಾತ್ರ ಗುರಿಯಾಗಿಸುವುದು ಅನ್ಯಾಯ ಎಂದು ಪ್ರತಿಕ್ರಿಯಿಸಿದರು.<ref>{{cite news | url=https://news.bbc.co.uk/2/hi/south_asia/6364165.stm | work=[[BBC News]] | first=John | last=Mary | title=Trouble brews over alcohol ads | date=15 February 2007 | access-date=26 May 2011 | archive-url=https://web.archive.org/web/20110525140434/http://news.bbc.co.uk/2/hi/south_asia/6364165.stm | archive-date=25 May 2011 | url-status=live }}</ref>
೨೦೧೨ ರಲ್ಲಿ, ಅರಣ್ಯ ಇಲಾಖೆಯು ಮೋಹನ್ಲಾಲ್ ಅವರ ಮನೆಯಲ್ಲಿ ಆದಾಯ ತೆರಿಗೆ ದಾಳಿಯ ವೇಳೆ ಪತ್ತೆಯಾದ ಆನೆಯ ದಂತಗಳನ್ನು ಹೊಂದಿದ್ದಕ್ಕಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ, ೧೯೭೨ ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿತು.<ref>{{cite news| url=http://timesofindia.indiatimes.com/entertainment/regional/malayalam/news-and-interviews/Superstar-Mohanlal-booked-for-possessing-elephant-tusk/articleshow/14144301.cms | title= Superstar Mohanlal booked for possessing elephant tusk| date=15 June 2012 | work=[[The Times of India]]}}</ref> ನಂತರ, ದಂತಗಳನ್ನು ಮೋಹನ್ಲಾಲ್ ಅವರಿಗೆ ಹಿಂದಿರುಗಿಸಲಾಯಿತು.<ref>{{cite news|last=K. P.|first=Bhavadas|title=Court wonders whether the elephant tusk case is for publicity.|url=http://www.metromatinee.com/news-articles/court-wonders-whether-the-elephant-tusk-case-is-for-publicity-7651|access-date=5 January 2015|agency=Metromatinee|publisher=Metromatinee|date=22 January 2014|archive-url=https://web.archive.org/web/20150105113435/http://www.metromatinee.com/news-articles/court-wonders-whether-the-elephant-tusk-case-is-for-publicity-7651|archive-date=5 January 2015|url-status=dead}}</ref> ಕೆಳ ಅದಾಲತುಗಳು ಮತ್ತು ಕೇರಳ ಉಚ್ಚ ನ್ಯಾಯಾಲಯದಲ್ಲಿ, ರಾಜ್ಯ ಸರ್ಕಾರ ಮತ್ತು ಇಲಾಖೆ ಅಧಿಕಾರಿಗಳು ಮೋಹನ್ಲಾಲ್ ಪಕ್ಷಪಾತವನ್ನು ಆರೋಪಿಸಿ ಮತ್ತು ಈ ವಿಷಯದ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಹಲವಾರು ಅರ್ಜಿಗಳನ್ನು ವಜಾ ಮಾಡಲಾಯಿತು.<ref name="Bennett, Coleman & Co. Ltd"/><ref name="2013HC"/> ೨೦೧೩ ರಲ್ಲಿ, ಅರ್ಜಿಯನ್ನು ವಜಾಗೊಳಿಸುತ್ತಾ, "ರಾಜ್ಯ ಸರ್ಕಾರ ಅಥವಾ ಅದರ ಅಧಿಕಾರಿಗಳು ನಟನ ಪರವಾಗಿ ವರ್ತಿಸಿದ್ದಾರೆ ಎಂದು ತೋರಿಸಲು ಏನೂ ಇಲ್ಲ. ಅಲ್ಲದೆ, ಅರ್ಜಿದಾರರು ತನಿಖೆಯಲ್ಲಿ ಯಾವುದೇ ಅಕ್ರಮ ಅಥವಾ ಕ್ರಮಬಾಹಿರತೆಯನ್ನು ಸೂಚಿಸಲು ಸಾಧ್ಯವಾಗಿಲ್ಲ" ಎಂದು ಉಚ್ಚ ನ್ಯಾಯಾಲಯವು ತೀರ್ಮಾನಿಸಿತು.<ref name="2013HC">{{cite news |title=Tusk seizure case: court rules out graft |url=https://www.thehindu.com/news/national/kerala/tusk-seizure-case-court-rules-out-graft/article4827284.ece |access-date=20 May 2023 |work=[[The Hindu]] |date=19 June 2013 |archive-url=https://web.archive.org/web/20180702060445/https://www.thehindu.com/news/national/kerala/tusk-seizure-case-court-rules-out-graft/article4827284.ece|archive-date=2 July 2018|url-status=live}}</ref> ಅದೇ ರೀತಿ, ೨೦೧೪ ರಲ್ಲಿ, ಉಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಜಾಗೊಳಿಸಿತು ಮತ್ತು ಅರ್ಜಿದಾರರನ್ನು ಟೀಕಿಸಿತು, "ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ, ಆದರೆ ಅದು ಪ್ರಚಾರಕ್ಕಾಗಿ ಮಾತ್ರ" ಎಂದು ಹೇಳಿತು.<ref name="Bennett, Coleman & Co. Ltd">{{cite news|title=Are petitions against Mohanlal aimed at publicity, asks HC|url=http://timesofindia.indiatimes.com/city/kochi/Are-petitions-against-Mohanlal-aimed-at-publicity-asks-HC/articleshow/29125683.cms|access-date=5 January 2015|work=[[The Times of India]]|date=21 January 2014|archive-url=https://web.archive.org/web/20140131022328/http://timesofindia.indiatimes.com/city/kochi/Are-petitions-against-Mohanlal-aimed-at-publicity-asks-HC/articleshow/29125683.cms|archive-date=31 January 2014|url-status=live}}</ref>
'ಭರತಂ' ನಲ್ಲಿನ ಮೋಹನ್ಲಾಲ್ ಅವರ ಅಭಿನಯವನ್ನು ೧೦೦ ವರ್ಷಗಳ ಭಾರತೀಯ ಸಿನೆಮಾವನ್ನು ಆಚರಿಸುವ ಸಂದರ್ಭದಲ್ಲಿ 'ಫೋರ್ಬ್ಸ್ ಇಂಡಿಯಾ' "ಭಾರತೀಯ ಸಿನೆಮಾದ ೨೫ ಶ್ರೇಷ್ಠ ಅಭಿನಯ ಪ್ರದರ್ಶನಗಳು" ಪಟ್ಟಿಯಲ್ಲಿ ಸೇರಿಸಲಾಗಿದೆ.<ref>{{cite web|last1=Prasad|first1=Shishir|last2=Ramanath|first2=N. S.|last3=Mitter|first3=Sohini|title=25 Greatest Acting Performances of Indian Cinema|url=http://www.forbesindia.com/article/100-years-of-indian-cinema/25-greatest-acting-performances-of-indian-cinema/35125/0|work=[[Forbes India]]|access-date=11 January 2017|date=27 April 2013|archive-url=https://archive.today/20141028052937/http://forbesindia.com/article/100-years-of-indian-cinema/25-greatest-acting-performances-of-indian-cinema/35125/0|archive-date=28 October 2014|url-status=live}}</ref> 'ದೃಶ್ಯಂ' ನಲ್ಲಿನ ಅವರ ಅಭಿನಯವನ್ನು 'ಫಿಲ್ಮ್ ಕಂಪ್ಯಾನಿಯನ್' "ದಶಕದ ೧೦೦ ಶ್ರೇಷ್ಠ ಅಭಿನಯಗಳು" ಎಂದು ಪರಿಗಣಿಸಿದೆ.<ref>{{Cite web |title=100 Greatest Performances of the Decade |url=https://filmcompanion.in/best-of-the-decade/100-best-performances-indian-cinema.html |archive-url=https://web.archive.org/web/20191219043509/https://www.filmcompanion.in/best-of-the-decade/100-best-performances-indian-cinema.html |url-status=dead |archive-date=19 December 2019 |access-date=14 November 2020 |website=[[Film Companion]] |language=en}}</ref> ೨೦೨೪ ರಲ್ಲಿ, ಅವರು ಐಎಂಡಿಬಿಯ ೧೦೦ ಅತ್ಯಂತ ವೀಕ್ಷಿತ ಭಾರತೀಯ ತಾರೆಯರ ಪಟ್ಟಿಯಲ್ಲಿ ೪೮ ನೇ ಸ್ಥಾನದಲ್ಲಿದ್ದರು.<ref>{{Cite web |access-date=29 August 2024 |title=Deepika Padukone, Shah Rukh Khan Top IMDb's List of Most Viewed Indian Stars |url=https://variety.com/2024/film/news/deepika-padukone-shah-rukh-khan-imdb-indian-stars-list-1236018332/ |url-status=live |archive-url=https://web.archive.org/web/20241122092159/https://variety.com/2024/film/news/deepika-padukone-shah-rukh-khan-imdb-indian-stars-list-1236018332/ |archive-date=22 November 2024 |website=Variety |date=29 May 2024 }}</ref>
==ವೈಯಕ್ತಿಕ ಜೀವನ==
ಮೋಹನ್ಲಾಲ್ ಅವರು ೨೮ ಏಪ್ರಿಲ್ ೧೯೮೮ ರಂದು ತಮಿಳು ಚಲನಚಿತ್ರ ನಿರ್ಮಾಪಕ ಕೆ. ಬಾಲಾಜಿ ಅವರ ಪುತ್ರಿ ಸುಚಿತ್ರಾ ಅವರನ್ನು ವಿವಾಹವಾದರು.<ref>[http://www.sify.com/movies/actor-producer-k-balaji-passes-away-news-tamil-kkfsbLfgjbg.html Actor-producer K Balaji passes away] {{Webarchive|url=https://web.archive.org/web/20140109185630/http://www.sify.com/movies/actor-producer-k-balaji-passes-away-news-tamil-kkfsbLfgjbg.html |date=9 January 2014 }}. Sify.com (3 May 2009). Retrieved on 6 May 2012.</ref> ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ – ಪ್ರಣವ್ ಮೋಹನ್ಲಾಲ್ ಮತ್ತು ವಿಸ್ಮಯಾ ಮೋಹನ್ಲಾಲ್. ಪ್ರಣವ್ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ, ಮೋಹನ್ಲಾಲ್ ಅವರ 'ಒನ್ನಾಮನ್' (೨೦೦೧) ನಲ್ಲಿ ಪಾದಾರ್ಪಣೆ ಮಾಡಿದರು.<ref name="rediff.com">[http://www.rediff.com/movies/2002/apr/13pran.htm Movies: Introducing Mohanlal's son-Pranav] {{Webarchive|url=https://web.archive.org/web/20101017172106/http://www.rediff.com/movies/2002/apr/13pran.htm |date=17 October 2010 }}. [[Rediff.com]] (13 April 2002). Retrieved on 6 May 2012.</ref> ಮೋಹನ್ಲಾಲ್ ಅವರು ತಮ್ಮ ಮಗ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸಿದಾಗ ಅದನ್ನು ವಿರೋಧಿಸಲಿಲ್ಲ, ಏಕೆಂದರೆ "ಮಕ್ಕಳಿಗೆ ಅಂತಹ ಅನೇಕ ಆಸೆಗಳಿರಬಹುದು. ಅವರಿಗೆ ಏನನ್ನಾದರೂ ಸಾಧಿಸಲು ನಾವು ಸಹಾಯ ಮಾಡಬಹುದಾದರೆ, ಸಮಸ್ಯೆ ಏನು?"<ref name="rediff.com"/> ಅವರು ಕೊಚ್ಚಿಯಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಅವರು ತೇವರಾ,<ref>{{cite news | url=https://www.onmanorama.com/lifestyle/decor/2018/06/27/mohanlal-kochi-home-thevara.html | work=[[Malayala Manorama]] | title=Welcome to actor Mohanlal's home! | date=28 June 2018 | access-date=26 December 2020 | archive-date=27 January 2021 | archive-url=https://web.archive.org/web/20210127213814/https://www.onmanorama.com/lifestyle/decor/2018/06/27/mohanlal-kochi-home-thevara.html | url-status=live }}</ref> ಎಳಮಕ್ಕರ<ref>{{cite news | url=https://timesofindia.indiatimes.com/entertainment/malayalam/movies/news/beans-tomato-lettuce-fill-mohanlals-organic-farm-at-his-elamakkara-house/articleshow/78389488.cms | work=[[The Times of India]] | title=Beans, tomato, lettuce fill Mohanlal's organic farm at his Elamakkara house | date=29 September 2020 | access-date=26 December 2020 | archive-date=5 January 2021 | archive-url=https://web.archive.org/web/20210105080959/https://timesofindia.indiatimes.com/entertainment/malayalam/movies/news/beans-tomato-lettuce-fill-mohanlals-organic-farm-at-his-elamakkara-house/articleshow/78389488.cms | url-status=live }}</ref> ಮತ್ತು ಕುಂದನ್ನೂರ್<ref>{{cite news | url=https://www.onmanorama.com/lifestyle/decor/2022/07/08/mohalal-new-luxury-duplex-flat-kochi.html | work=[[Malayala Manorama]] |title=Actor Mohanlal's new luxury duplex flat in Kochi is magnificent | date=8 July 2022 | access-date=9 March 2025 }}</ref>ಗಳಲ್ಲಿ ಮನೆಗಳನ್ನು ಹೊಂದಿದ್ದಾರೆ. ಅವರು ಚೆನ್ನೈ, ತಮ್ಮ ಸ್ವಂತ ಊರು ತಿರುವನಂತಪುರ, ಊಟಿ,<ref>{{Cite web|title=Income Tax officials search Mohanlal's residence|url=https://www.rediff.com/movies/report/income-tax-officials-search-mohanlals-house/20110726.htm|access-date=2 August 2021|website=Rediff|language=en|archive-date=2 August 2021|archive-url=https://web.archive.org/web/20210802021153/https://www.rediff.com/movies/report/income-tax-officials-search-mohanlals-house/20110726.htm|url-status=live}}</ref> ಮಹಾಬಲಿಪುರಂ, ಅರೇಬಿಯನ್ ರಾಂಚಸ್ನಲ್ಲಿ ವಿಲ್ಲಾ ಮತ್ತು ದುಬೈನಲ್ಲಿ ಬುರ್ಜ್ ಖಲೀಫಾದಲ್ಲಿ ಅಪಾರ್ಟ್ಮೆಂಟ್ ಅನ್ನು ಸಹ ಹೊಂದಿದ್ದಾರೆ.<ref>{{Cite news|url=https://economictimes.indiatimes.com/malayalam-matinee-idol-mohanlal-buying-apartment-in-worlds-tallest-towerburj-khalifa/articleshow/8602725.cms|title=Malayalam matinee idol Mohanlal buying apartment in world's tallest tower, Burj Khalifa|date=27 May 2011|newspaper=The Economic Times|access-date=22 July 2018|archive-url=https://web.archive.org/web/20180722184730/https://economictimes.indiatimes.com/malayalam-matinee-idol-mohanlal-buying-apartment-in-worlds-tallest-towerburj-khalifa/articleshow/8602725.cms|archive-date=22 July 2018|url-status=live}}</ref>
ಮೋಹನ್ಲಾಲ್ ತಮ್ಮನ್ನು ತಾವು ಆಹಾರ ಪ್ರಿಯರು ಎಂದು ವಿವರಿಸಿಕೊಳ್ಳುತ್ತಾರೆ.<ref>{{cite news | url=http://www.hindu.com/mp/2006/04/08/stories/2006040803360300.htm | location=Chennai, India | work=[[The Hindu]] |url-access=subscription| title=Stirring it up with Mohanlal | date=8 April 2006 | access-date=25 May 2011 | archive-url=https://web.archive.org/web/20071127035120/http://www.hindu.com/mp/2006/04/08/stories/2006040803360300.htm | archive-date=27 November 2007 | url-status=dead }}</ref> ಅವರು ಮಧುರ ಸಂಗೀತವನ್ನು ಸಹ ಆನಂದಿಸುತ್ತಾರೆ. ಮೋಹನ್ಲಾಲ್ ಅದೃಷ್ಟ ಮತ್ತು ಆಧ್ಯಾತ್ಮಿಕತೆಯಲ್ಲಿ ಬಲವಾದ ನಂಬಿಕೆಯುಳ್ಳವರು. ಅವರು ಧಾರ್ಮಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿ ಎಂದು ತಮ್ಮನ್ನು ವಿವರಿಸುತ್ತಾರೆ,<ref>{{cite web|title=Mohanlal about Pranav Mohanlal's perspectives about spirituality|url=http://onlookersmedia.in/latestnews/mohanlal-pranav-mohanlals-perspectives-spirituality/|website=onlookersmedia.in|access-date=9 April 2017|archive-url=https://web.archive.org/web/20170404130810/http://onlookersmedia.in/latestnews/mohanlal-pranav-mohanlals-perspectives-spirituality/|archive-date=4 April 2017|url-status=dead}}</ref> ಮತ್ತು ಓಶೋ, ಜೆ. ಕೃಷ್ಣಮೂರ್ತಿ, ಅರವಿಂದ ಮತ್ತು ರಮಣ ಮಹರ್ಷಿಗಳನ್ನು ಓದಲು ಇಷ್ಟಪಡುತ್ತಾರೆ.{{citation needed|date=January 2026}} ಅವರು ತಮ್ಮ ಜೀವನದಲ್ಲಿ ನಡೆದ ಘಟನೆಗಳು, ಅವರ ಚಲನಚಿತ್ರ ವೃತ್ತಿಯನ್ನು ಒಳಗೊಂಡಂತೆ, ಆಕಸ್ಮಿಕ ಎಂದು ಆಗಾಗ್ಗೆ ಹೇಳಿದ್ದಾರೆ.{{citation needed|date=January 2026}}
==ಚಲನಚಿತ್ರ ಪಟ್ಟಿ ಮತ್ತು ಧ್ವನಿಮುದ್ರಿಕೆ==
ಮೋಹನ್ಲಾಲ್ ಅವರ ವೃತ್ತಿಜೀವನವು ನಾಲ್ಕು ದಶಕಗಳವರೆಗೆ ವ್ಯಾಪಿಸಿದ್ದು, ಈ ಅವಧಿಯಲ್ಲಿ ಅವರು ೩೨೫ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಕ್ಯಾಸಿನೊ ಫಿಲ್ಮ್ಸ್, ಚೀರ್ಸ್ ಫಿಲ್ಮ್ಸ್ ಮತ್ತು ಪ್ರಣವಂ ಆರ್ಟ್ಸ್ ಇಂಟರ್ನ್ಯಾಷನಲ್ ಎಂಬ ಮೂರು ನಿರ್ಮಾಣ ಸಂಸ್ಥೆಗಳ ಅಡಿಯಲ್ಲಿ ಚಿತ್ರಗಳನ್ನು ನಿರ್ಮಿಸಿದ್ದಾರೆ ಮತ್ತು ಸಹ-ನಿರ್ಮಿಸಿದ್ದಾರೆ. ಅವರು ಪ್ರಧಾನವಾಗಿ ಮಲಯಾಳಂ ಚಲನಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ, ಆದರೆ ಅವರ ಅಭಿನಯ ಕ್ರೆಡಿಟ್ಗಳು ಕೆಲವು ಬಾಲಿವುಡ್, ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳನ್ನು ಸಹ ಒಳಗೊಂಡಿವೆ.<ref>{{cite web |last=Warrier |first=Shobha |title=I celebrate whether a film is a hit or a flop |url=http://www.rediff.com/entertai/apr/04mohn.htm |work=[[Rediff.com]] |access-date=27 March 2016 |archive-url=https://web.archive.org/web/20141107034816/http://www.rediff.com/entertai/apr/04mohn.htm |archive-date=7 November 2014 |date=4 April 1997 |url-status=live}}</ref> ಮೋಹನ್ಲಾಲ್ ಸಾಂದರ್ಭಿಕವಾಗಿ ಕೆಲವು ವೃತ್ತಿಪರ ನಾಟಕಗಳಲ್ಲಿ ನಟಿಸಿದ್ದಾರೆ ಮತ್ತು ಕೆಲವು ಸಣ್ಣ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅವರು ೩೧ ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಅವರು ನಟಿಸಿದ ಚಿತ್ರಗಳಿಗಾಗಿ. ದೂರದರ್ಶನದಲ್ಲಿ, ಮೋಹನ್ಲಾಲ್ ಮೊದಲ ಸೀಸನ್ನ ಪ್ರಾರಂಭದಿಂದಲೂ ಏಷ್ಯಾನೆಟ್ನಲ್ಲಿ ರಿಯಾಲಿಟಿ ಶೋ 'ಬಿಗ್ ಬಾಸ್' ನ ಆತಿಥ್ಯವನ್ನು ವಹಿಸಿದ್ದಾರೆ.<ref>{{cite news|title=Bigg Boss Malayalam: Mohanlal is super excited to host the show | newspaper=The Times of India|date=16 May 2018|url=https://timesofindia.indiatimes.com/tv/news/malayalam/bigg-boss-malayalam-mohanlal-is-super-excited-to-host-the-show/articleshow/64188898.cms|access-date=14 June 2011}}</ref>
{{Infobox filmography list
| name = ಮೋಹನ್ಲಾಲ್
| image = Super Star Mohanlal BNC.jpg
| image_upright = 1
| alt =
| caption = 2015 ರಲ್ಲಿ ಮೋಹನ್ಲಾಲ್
| film = 366
| television_series = 1
| web_series =
| television_show = 5
| radio_show = 2
| documentary =
| hosting = 5
| music_videos = 2
| narrating = 18
| theatre = 7
| advertising =
| others = 10
}}
ಮೋಹನ್ಲಾಲ್ ಭಾರತೀಯ ನಟ, ನಿರ್ಮಾಪಕ, ವಿತರಕ, ಆತಿಥೇಯ ಮತ್ತು ಹಿನ್ನೆಲೆ ಗಾಯಕರಾಗಿದ್ದು, ಅವರು ಮುಖ್ಯವಾಹಿನಿಯ ಬ್ಲಾಕ್ಬಸ್ಟರ್ ಮತ್ತು ಕಲಾತ್ಮಕ ಚಿತ್ರಗಳಲ್ಲಿ ನಟಿಸಿದ್ದಾರೆ.<ref>{{cite web |last=Warrier |first=Shobha |date=4 April 1997 |title=I celebrate whether a film is a hit or a flop |url=http://www.rediff.com/entertai/apr/04mohn.htm |url-status=live |archive-url=https://web.archive.org/web/20141107034816/http://www.rediff.com/entertai/apr/04mohn.htm |archive-date=7 November 2014 |access-date=27 March 2016 |work=[[Rediff.com]]}}</ref> ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ ೩೬೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಮುಖ್ಯವಾಗಿ ಮಲಯಾಳಂ ಚಲನಚಿತ್ರರಂಗದಲ್ಲಿ ಮತ್ತು ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿಯೂ ಸಹ.<ref name="34films">{{cite news |last=James |first=Anu |date=21 May 2015 |title=Mohanlal Turns 55; Notable Facts about 'the Complete Actor' [PHOTOS] |url=http://www.ibtimes.co.in/mohanlal-turns-55-notable-facts-about-complete-actor-photos-633117 |url-status=live |archive-url=https://web.archive.org/web/20151223202135/http://www.ibtimes.co.in/mohanlal-turns-55-notable-facts-about-complete-actor-photos-633117 |archive-date=23 December 2015 |access-date=1 January 2016 |work=[[International Business Times]]}}</ref>
ಮೋಹನ್ಲಾಲ್ ೧೮ ನೇ ವಯಸ್ಸಿನಲ್ಲಿ 'ತಿರನೋಟ್ಟಂ' (೧೯೭೮) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಲು ಪ್ರಾರಂಭಿಸಿದರು, ಇದು ಒಂದು ಶತಮಾನದ ನಂತರ ಬಿಡುಗಡೆಯಾಯಿತು. ೧೯೮೦ ರಲ್ಲಿ ಪ್ರಣಯ ಥ್ರಿಲ್ಲರ್ 'ಮಂಜಿಲ್ ವಿರಿಂಜ ಪೂಕ್ಕಲ್' ನಲ್ಲಿ ಪ್ರತಿನಾಯಕನಾಗಿ ಅವರು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು.<ref name="ActingAlone">{{cite web |last=Warrier |first=Shobha |date=3 September 2003 |title=Life is not about acting alone |url=http://www.rediff.com/movies/2003/sep/03mohanlal.htm |url-status=live |archive-url=https://web.archive.org/web/20151216230036/http://www.rediff.com/movies/2003/sep/03mohanlal.htm |archive-date=16 December 2015 |access-date=1 January 2016 |work=[[Rediff.com]]}}</ref> ನರೇಂದ್ರನ್ ಎಂಬ ಸ್ಯಾಡಿಸ್ಟಿಕ್ ಪತಿಯ ಪಾತ್ರವು ಅವರಿಗೆ ಮನ್ನಣೆಯನ್ನು ತಂದುಕೊಟ್ಟಿತು ಮತ್ತು ಈ ಚಿತ್ರವು ಕ್ಲಾಸಿಕ್ ಸ್ಥಾನಮಾನವನ್ನು ಗಳಿಸಿತು.<ref name="team48">{{cite web |last=Ranjitha |date=1 September 1998 |title=Team of 48 |url=http://www.rediff.com/movies/1998/sep/01hari1.htm |url-status=live |archive-url=https://web.archive.org/web/20040318112351/http://www.rediff.com/movies/1998/sep/01hari1.htm |archive-date=18 March 2004 |access-date=1 January 2016 |work=[[Rediff.com]]}}</ref><ref>{{cite web |last=Moviebuzz (Sify) |date=14 May 2013 |title=Mohanlal & Poornima are together again! |url=http://www.sify.com/movies/mohanlal-poornima-are-together-again-news-malayalam-nfoqliiejfbsi.html |url-status=dead |archive-url=https://web.archive.org/web/20160219153421/http://www.sify.com/movies/mohanlal-poornima-are-together-again-news-malayalam-nfoqliiejfbsi.html |archive-date=19 February 2016 |access-date=1 January 2016 |website=[[Sify]]}}</ref> ನಂತರ ಅವರು ಹಲವಾರು ಚಿತ್ರಗಳಲ್ಲಿ ಖಳನಾಯಕ ಪಾತ್ರಗಳಲ್ಲಿ ನಟಿಸಿದರು. 'ಪಾದಯೋಟ್ಟಂ' (೧೯೮೨) ಅವರು ಚಿತ್ರದ ಪ್ರಮುಖ ಪ್ರತಿನಾಯಕರಲ್ಲಿ ಒಬ್ಬರ ಮಗನಾಗಿ ಪ್ರಮುಖ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ಮೊದಲ ೭೦ ಎಂಎಂ ಚಿತ್ರವಾಗಿದೆ.<ref name="team48" /> ಕೌಟುಂಬಿಕ ನಾಟಕ 'ಆಟ್ಟಕಳಶಂ' ಅವರನ್ನು ಮಲಯಾಳಂ ಚಲನಚಿತ್ರರಂಗದ ಪ್ರಮುಖ ನಟನಾಗಿ ಸ್ಥಾಪಿಸಿತು.<ref>{{cite news |last=Menon |first=Neelima |date=23 July 2019 |title=Can Mohanlal And Mammootty Keep Up With New-Gen Malayalam Films? |url=https://www.huffingtonpost.in/entry/can-mohanlal-mammootty-keep-up-with-new-gen-malayalam-films_in_5d32e125e4b004b6adb05aa6 |access-date=23 July 2019 |work=[[HuffPost]]}}</ref> ೧೯೮೪ ರಲ್ಲಿ ಅವರು 'ಪೂಚಕ್ಕೊರು ಮೂಕ್ಕುತಿ' ಎಂಬ ಹಾಸ್ಯ ಚಿತ್ರದಲ್ಲಿ ನಟಿಸಿದರು, ಅದರ ಯಶಸ್ಸು ಒಂದು ಪ್ರವೃತ್ತಿಯನ್ನು ಸೃಷ್ಟಿಸಿತು ಮತ್ತು ೧೯೮೦ ರ ದಶಕದಲ್ಲಿ ಪ್ರಕಾರವನ್ನು ಜನಪ್ರಿಯಗೊಳಿಸಿತು.<ref name="25years">{{cite web |last=Warrier |first=Shobha |date=3 September 2003 |title=25 years, 25 landmarks |url=http://www.rediff.com/movies/2003/sep/03mohan1.htm |url-status=live |archive-url=https://web.archive.org/web/20160121020441/http://www.rediff.com/movies/2003/sep/03mohan1.htm |archive-date=21 January 2016 |access-date=1 January 2016 |work=[[Rediff.com]]}}</ref><ref>{{cite news |last=Times News Network |date=12 May 2007 |title=Priyan's remake Darshan |url=http://articles.economictimes.indiatimes.com/2007-05-12/news/28443490_1_priyadarshan-remakes-hindi-film |url-status=dead |archive-url=https://web.archive.org/web/20151222161539/http://articles.economictimes.indiatimes.com/2007-05-12/news/28443490_1_priyadarshan-remakes-hindi-film |archive-date=22 December 2015 |access-date=1 January 2016 |work=[[The Economic Times]]}}</ref> ೧೯೮೪ ರಲ್ಲಿ ಐ.ವಿ. ಶಶಿ ನಿರ್ದೇಶನದ 'ಉಯರಂಗಲಿಲ್' ನಲ್ಲಿ ಅವರು ಪ್ರತಿನಾಯಕನ ಪಾತ್ರವನ್ನು ನಿರ್ವಹಿಸಿದರು, ಇದಕ್ಕಾಗಿ ಅವರು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು.<ref name="MT84">{{cite news |last=Kumar |first=P. K. Ajith |date=19 July 2013 |title=MT film being retold |url=http://www.thehindu.com/todays-paper/tp-national/tp-kerala/mt-film-being-retold/article4930509.ece |url-status=live |archive-url=https://web.archive.org/web/20140831035142/http://www.thehindu.com/todays-paper/tp-national/tp-kerala/mt-film-being-retold/article4930509.ece |archive-date=31 August 2014 |access-date=16 December 2015 |work=[[The Hindu]]}}</ref> ಅದೇ ವರ್ಷ, ಅವರು ಕ್ಯಾಸಿನೊ ಫಿಲ್ಮ್ಸ್ ಅನ್ನು ಸಹ-ಸ್ಥಾಪಿಸಿದರು, ಇದು ನಂತರ ಅವರ ಹಾಸ್ಯ ಚಿತ್ರಗಳಾದ 'ಗಾಂಧಿನಗರ್ 2ನೇ ಸ್ಟ್ರೀಟ್' (೧೯೮೬) ಮತ್ತು 'ನಾಡೋಡಿಕ್ಕಟ್ಟು' (೧೯೮೭) ಅನ್ನು ನಿರ್ಮಿಸಿತು.<ref name="casino">{{cite news |last=N |first=Sethumadhavan |date=26 July 2015 |title=In Search of Greener Pastures |url=https://bangaloremirror.indiatimes.com/entertainment/south-masala/In-search-of-greener-pastures/articleshow/48228444.cms |url-status=live |archive-url=https://web.archive.org/web/20151222095311/http://www.bangaloremirror.com/entertainment/south-masala/In-search-of-greener-pastures/articleshow/48228444.cms |archive-date=22 December 2015 |access-date=31 December 2015 |work=[[Bangalore Mirror]]}}</ref>
'ಒನ್ನಾನಂ ಕುನ್ನಿಲ್ ಒರಡಿ ಕುನ್ನಿಲ್' (೧೯೮೫) ಚಿತ್ರಕ್ಕಾಗಿ "ಸಿಂಧೂರ ಮೇಘಂ" ಹಾಡಿನ ಮೂಲಕ ಅವರು ಹಿನ್ನೆಲೆ ಗಾಯಕರಾಗಿ ತಮ್ಮ ಮೊದಲ ಹಾಡನ್ನು ರೆಕಾರ್ಡ್ ಮಾಡಿದರು.<ref name="25years" /> ೧೯೮೬ ರಲ್ಲಿ ಅವರು ೩೪ ಚಿತ್ರಗಳಲ್ಲಿ ನಟಿಸಿದರು.<ref name="34films" /> ಕಾಮಿಡಿ-ನಾಟಕ 'ಟಿ.ಪಿ. ಬಾಲಗೋಪಾಲನ್ ಎಂ.ಎ.' (೧೯೮೬) ನಲ್ಲಿ ಕೆಳಮಟ್ಟದ ಉದ್ಯೋಗಿಯ ಟಿ.ಪಿ. ಬಾಲಗೋಪಾಲನ್ ಅವರ ಚಿತ್ರಣವು ಅವರಿಗೆ ೨೬ ನೇ ವಯಸ್ಸಿನಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ತಂದುಕೊಟ್ಟಿತು. ಇದು ಕಿರಿಯ ವಿಜೇತರಾಗುವ ದಾಖಲೆಯಾಗಿದ್ದು, ೨೦೦೬ ರವರೆಗೆ ಅವರು ಈ ದಾಖಲೆಯನ್ನು ಹೊಂದಿದ್ದರು.<ref>{{cite news |last=Vasudevan |first=Aishwarya |date=10 January 2012 |title=Prithviraj: Lesser known facts |url=http://timesofindia.indiatimes.com/entertainment/malayalam/movies/Prithviraj-Lesser-known-facts/photostory/48958589.cms |url-status=live |archive-url=https://web.archive.org/web/20160219154704/http://timesofindia.indiatimes.com/entertainment/malayalam/movies/Prithviraj-Lesser-known-facts/photostory/48958589.cms |archive-date=19 February 2016 |access-date=4 January 2016 |work=[[The Times of India]]}}</ref> ಅದೇ ವರ್ಷ ಅವರು ತಮ್ಮ ಎರಡನೇ ನಿರ್ಮಾಣ ಕಂಪನಿಯಾದ ಚೀರ್ಸ್ ಫಿಲ್ಮ್ಸ್ ಅನ್ನು ಸಹ-ಸ್ಥಾಪಿಸಿದರು. ಅಪರಾಧ ನಾಟಕ 'ರಾಜವಿಂಟೆ ಮಕನ್' (೧೯೮೬) ಯಶಸ್ಸಿನೊಂದಿಗೆ ಮೋಹನ್ಲಾಲ್ ಅವರ ಸ್ಟಾರ್ಡಮ್ ಹೆಚ್ಚಾಯಿತು.<ref>{{cite news |last=PTI |date=19 April 2012 |title=Will do a Hindi film only if it's irresistible: Mohanlal |url=http://www.firstpost.com/bollywood/will-do-a-hindi-film-only-if-its-irresistible-mohanlal-280540.html |url-status=live |archive-url=https://web.archive.org/web/20160304151910/http://www.firstpost.com/bollywood/will-do-a-hindi-film-only-if-its-irresistible-mohanlal-280540.html |archive-date=4 March 2016 |access-date=4 March 2016 |work=[[Firstpost]]}}</ref> 'ಇರುಪತಂ ನೂಟ್ಟಾಂಡು' (೧೯೮೭) ನಲ್ಲಿ ಅವರು ಮಾಫಿಯಾ ಮುಖ್ಯಸ್ಥ ಸಾಗರ್ ಅಲಿಯಾಸ್ ಜಾಕಿ ಪಾತ್ರವನ್ನು ನಿರ್ವಹಿಸಿದರು ಮತ್ತು ಅದರ ಬಿಡುಗಡೆಯ ನಂತರ ಅವರು ಕ್ಲಾಸಿಕ್ ವ್ಯಕ್ತಿಯಾಗಿ ಮಾರ್ಪಟ್ಟರು.<ref>{{cite news |last=Onmanorama Desk |date=18 June 2015 |title=Sagar Alias Jacky: Mohanlal joins Dubsmash craze |url=http://english.manoramaonline.com/entertainment/entertainment-news/mohanlal-joins-dubsmash-craze.html |url-status=live |archive-url=https://web.archive.org/web/20151213014353/http://english.manoramaonline.com/entertainment/entertainment-news/mohanlal-joins-dubsmash-craze.html |archive-date=13 December 2015 |access-date=25 March 2016 |work=[[Malayala Manorama]]}}</ref> ೧೯೮೮ ರಲ್ಲಿ ಅವರ ದುರಂತ ಹಾಸ್ಯ 'ಚಿತ್ರಂ' ೫೮ ವಾರಗಳ ನಿರಂತರ ಪ್ರದರ್ಶನದ ದಾಖಲೆಯನ್ನು ಹೊಂದಿತ್ತು.<ref name="milestone">{{cite web |date=21 May 2005 |title=Milestones in Mohanlal's career |url=http://www.sify.com/movies/milestones-in-mohanlal-s-career-news-malayalam-kkfv4xbabjgsi.html |url-status=dead |archive-url=https://web.archive.org/web/20160204162519/http://www.sify.com/movies/milestones-in-mohanlal-s-career-news-malayalam-kkfv4xbabjgsi.html |archive-date=4 February 2016 |access-date=5 January 2016 |website=[[Sify]]}}</ref> ೧೯೮೯ ರಲ್ಲಿ, 'ಕಿರೀಡಂ' ನಲ್ಲಿನ ಅವರ ಅಭಿನಯವು ೩೭ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಉಲ್ಲೇಖವನ್ನು ಗಳಿಸಿಕೊಟ್ಟಿತು.<ref>{{cite web |last=Warrier |first=Shobha |date=20 April 2012 |title=Special: The A-Z of Malayalam cinema |url=http://www.rediff.com/movies/slide-show/slide-show-1-south-a-z-of-malayalam-cinema/20120420.htm#11 |url-status=live |archive-url=https://web.archive.org/web/20131019192242/http://www.rediff.com/movies/slide-show/slide-show-1-south-a-z-of-malayalam-cinema/20120420.htm#11 |archive-date=19 October 2013 |access-date=5 January 2016 |work=[[Rediff.com]]}}</ref>
೧೯೯೦ ರಲ್ಲಿ, ಮೋಹನ್ಲಾಲ್ ತಮ್ಮ ಸ್ವಂತ ಚಲನಚಿತ್ರ ನಿರ್ಮಾಣ ಕಂಪನಿ ಪ್ರಣವಂ ಆರ್ಟ್ಸ್ ಅನ್ನು ಸ್ಥಾಪಿಸಿದರು.<ref name="25years" /> ಇದು ಸಂಗೀತ ಥ್ರಿಲ್ಲರ್ 'ಹಿಸ್ ಹೈನೆಸ್ ಅಬ್ದುಲ್ಲಾ' ಮೂಲಕ ಪಾದಾರ್ಪಣೆ ಮಾಡಿತು, ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು ಮತ್ತು ಆ ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು.<ref>{{cite news |last=Vasudevan |first=Aishwarya |date=24 July 2015 |title=Musical hits of Malayalam film industry |url=http://timesofindia.indiatimes.com/entertainment/malayalam/movies/Musical-hits-of-Malayalam-film-industry/photostory/48522892.cms |url-status=live |archive-url=https://web.archive.org/web/20160219154005/http://timesofindia.indiatimes.com/entertainment/malayalam/movies/Musical-hits-of-Malayalam-film-industry/photostory/48522892.cms |archive-date=19 February 2016 |access-date=24 January 2016 |work=[[The Times of India]]}}</ref> ಪ್ರಣವಂ ಆರ್ಟ್ಸ್ ಅಡಿಯಲ್ಲಿ ಎರಡನೇ ಚಿತ್ರ 'ಭರತಂ' (೧೯೯೧), ಇದು ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ತಂದುಕೊಟ್ಟಿತು ಮತ್ತು 'ಫೋರ್ಬ್ಸ್ ಇಂಡಿಯಾ' ಅದನ್ನು "ಭಾರತೀಯ ಸಿನೆಮಾದ ೨೫ ಶ್ರೇಷ್ಠ ಅಭಿನಯ ಪ್ರದರ್ಶನಗಳು" ಪಟ್ಟಿಯಲ್ಲಿ ಸೇರಿಸಿತು.<ref>{{cite web |last1=Prasad |first1=Shishir |last2=Ramnath |first2=N.S. |last3=Mitter |first3=Sohini |date=27 April 2013 |title=Forbes India Magazine – 25 Greatest Acting Performances of Indian Cinema |url=http://forbesindia.com/article/100-years-of-indian-cinema/25-greatest-acting-performances-of-indian-cinema/35125/0 |url-status=dead |archive-url=https://web.archive.org/web/20160112014841/http://forbesindia.com/article/100-years-of-indian-cinema/25-greatest-acting-performances-of-indian-cinema/35125/0 |archive-date=12 January 2016 |access-date=24 January 2016 |work=[[Forbes India]]}}</ref> ಅವರ ಚಿತ್ರ, ಆಧ್ಯಾತ್ಮಿಕ ಕಾಲ್ಪನಿಕ 'ಗುರು' (೧೯೯೭), ಅತ್ಯುತ್ತಮ ವಿದೇಶಿ ಭಾಷಾ ಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗೆ ಸಲ್ಲಿಸಲಾದ ಮೊದಲ ಮಲಯಾಳಂ ಚಿತ್ರವಾಗಿದೆ.<ref>{{cite news |last=IBN LIVE |date=23 September 2012 |title=From 'Saaransh' to 'Barfi': India's past Oscar entries in Foreign Language Film category |url=http://www.ibnlive.com/photogallery/movies/from-saaransh-to-barfi-indias-past-oscar-entries-in-foreign-language-film-category-854695.html |url-status=live |archive-url=https://web.archive.org/web/20160323110433/http://www.ibnlive.com/photogallery/movies/from-saaransh-to-barfi-indias-past-oscar-entries-in-foreign-language-film-category-854695.html |archive-date=23 March 2016 |access-date=6 February 2016 |work=[[IBN Live]]}}</ref> ೧೯೯೭ ರಲ್ಲಿ, ಅವರು ಮಣಿರತ್ನಂ ನಿರ್ದೇಶನದ ತಮಿಳು ಚಿತ್ರ 'ಇರುವರ್' ನಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು.<ref>{{cite web |last=Srinivasan |first=Pavithra |date=14 June 2010 |title=Mohanlal in Iruvar |url=http://www.rediff.com/movies/slide-show/slide-show-1-south-best-performances-in-mani-ratnam-films/20100614.htm#1 |url-status=live |archive-url=https://web.archive.org/web/20151106081325/http://www.rediff.com/movies/slide-show/slide-show-1-south-best-performances-in-mani-ratnam-films/20100614.htm#1 |archive-date=6 November 2015 |access-date=7 February 2016 |work=[[Rediff.com]]}}</ref> ೧೯೯೯ ರ ಕಾನ್ಸ್ ಚಲನಚಿತ್ರೋತ್ಸವದ ಅನ್ ಸರ್ಟನ್ ರೆಗಾರ್ಡ್ ವಿಭಾಗದಲ್ಲಿ ಪ್ರದರ್ಶನಗೊಂಡ 'ವನಪ್ರಸ್ಥಂ' ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಚಿತ್ರ (ನಿರ್ಮಾಪಕ) ಆಗಿ ತಂದುಕೊಟ್ಟಿತು.<ref name="milestone" /><ref>{{cite news |last=Dhingra |first=Manisha |date=14 May 2014 |title=The History of India at Cannes |url=http://movies.ndtv.com/bollywood/the-history-of-india-at-cannes-639287 |url-status=live |archive-url=https://web.archive.org/web/20150912153645/http://movies.ndtv.com/bollywood/the-history-of-india-at-cannes-639287 |archive-date=12 September 2015 |access-date=7 February 2016 |work=[[NDTV]]}}</ref>
೨೦೦೦ ರಲ್ಲಿ, ಅವರು ಆಕ್ಷನ್ ನಾಟಕ 'ನರಸಿಂಹಂ' ನಲ್ಲಿ ನಟಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು. ಅವರ ಪಾತ್ರವಾದ ಇಂದುಚೂಡನ್ ನಂತರ ಒಂದು ಕ್ಲಾಸಿಕ್ ಅನುಯಾಯಿಗಳನ್ನು ಆಕರ್ಷಿಸಿದೆ.<ref>{{cite web |last=Vikram |first=Raj |date=21 October 2014 |title='Narasimham' to return after 15 years. |url=http://www.metromatinee.com/news-articles/narasimham-to-return-after-15-years-9681 |url-status=dead |archive-url=https://web.archive.org/web/20150107140546/http://www.metromatinee.com/news-articles/narasimham-to-return-after-15-years-9681 |archive-date=7 January 2015 |access-date=8 February 2016}}</ref> ೨೦೦೧ ರಲ್ಲಿ, ಅವರು ಕವಲಾಂ ನಾರಾಯಣ ಪಣಿಕ್ಕರ್ ನಿರ್ದೇಶನದ ಸಂಸ್ಕೃತ ನಾಟಕ 'ಕರ್ಣಭಾರಂ' ನಲ್ಲಿ ಕರ್ಣನ ಪಾತ್ರವನ್ನು ನಿರ್ವಹಿಸಿದರು.<ref>{{cite news |last=Viswanath |first=Chandrakanth |date=20 January 2016 |title=Battle for the Lone |url=http://www.newindianexpress.com/entertainment/malayalam/Battle-for-the-Lone/2016/01/20/article3234763.ece |url-status=dead |archive-url=https://web.archive.org/web/20160215192951/http://www.newindianexpress.com/entertainment/malayalam/Battle-for-the-Lone/2016/01/20/article3234763.ece |archive-date=15 February 2016 |access-date=8 February 2016 |work=[[The New Indian Express]]}}</ref> ೨೦೦೩ ರಲ್ಲಿ, ಅವರು 'ಕಂಪನಿ' (೨೦೦೨) ಹಿಂದಿ ಚಿತ್ರದಲ್ಲಿನ ಪಾತ್ರಕ್ಕಾಗಿ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಯನ್ನು ಅತ್ಯುತ್ತಮ ಪೋಷಕ ನಟನಾಗಿ ಗೆದ್ದರು.<ref>{{cite news |last=Press Trust Of India |date=17 April 2012 |title=I have nothing to prove in Bollywood: Mohanlal |url=http://movies.ndtv.com/regional/i-have-nothing-to-prove-in-bollywood-mohanlal-624585 |url-status=live |archive-url=https://web.archive.org/web/20160215235858/http://movies.ndtv.com/regional/i-have-nothing-to-prove-in-bollywood-mohanlal-624585 |archive-date=15 February 2016 |access-date=8 February 2016 |work=[[NDTV]]}}</ref> ೨೦೦೫ ರಲ್ಲಿ, ಅವರು ಬಿಜೋಯ್ ನಂಬಿಯಾರ್ ನಿರ್ದೇಶನದ ಮೌನ ಸಣ್ಣ ಚಿತ್ರ 'ರಿಫ್ಲೆಕ್ಷನ್ಸ್' ನಲ್ಲಿ ನಟಿಸಿದರು.<ref>{{cite news |last=Rajpal |first=Ryoktim |date=21 May 2015 |title=Happy birthday Mohanlal: 7 relatively unknown facts about the megastar's life |url=http://www.ibnlive.com/news/movies/happy-birthday-mohanlal-7-relatively-unknown-facts-about-the-megastars-life-994765.html |url-status=live |archive-url=https://web.archive.org/web/20160128124241/http://www.ibnlive.com/news/movies/happy-birthday-mohanlal-7-relatively-unknown-facts-about-the-megastars-life-994765.html |archive-date=28 January 2016 |access-date=8 February 2016 |work=[[IBN Live]]}}</ref> 'ತನ್ಮಾತ್ರ' (೨೦೦೫) ನಲ್ಲಿ ಅಲ್ಝೈಮರ್ ಕಾಯಿಲೆಯ ರೋಗಿಯ ಚಿತ್ರಣವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು ಮತ್ತು ಭಾರತೀಯ ವೈದ್ಯಕೀಯ ಸಂಘದಿಂದ ಗೌರವ ಪ್ರಶಸ್ತಿಯನ್ನು ಗಳಿಸಿತು.<ref name="MohanlalTelegraph">{{cite news |last=Jayan |first=T.V. |date=9 March 2014 |title=Actors live between the two worlds of 'action' and 'cut' |url=http://www.telegraphindia.com/1140309/jsp/7days/18061240.jsp |url-status=dead |archive-url=https://web.archive.org/web/20150708110422/http://www.telegraphindia.com/1140309/jsp/7days/18061240.jsp |archive-date=8 July 2015 |access-date=15 January 2016 |work=[[The Telegraph (Calcutta)|The Telegraph]] |location=India}}</ref> 'ಕೀರ್ತಿ ಚಕ್ರ' (೨೦೦೬) ಮತ್ತು ಅದರ ಅನುಕ್ರಮ 'ಕುರುಕ್ಷೇತ್ರ' (೨೦೦೮) ಯುದ್ಧ ಚಿತ್ರಗಳಲ್ಲಿ ಮೇಜರ್ ಮಹಾದೇವನ್ ಪಾತ್ರಕ್ಕಾಗಿ ಭಾರತೀಯ ಟೆರಿಟೋರಿಯಲ್ ಆರ್ಮಿ ಅವರಿಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿತು.<ref>{{cite news |last=Sai Kiran |first=K. P. |date=20 October 2009 |title=Lt Col Mohanlal makes his mark in Territorial Army |url=http://www.newindianexpress.com/nation/article141454.ece |url-status=dead |archive-url=https://web.archive.org/web/20160215191528/http://www.newindianexpress.com/nation/article141454.ece |archive-date=15 February 2016 |access-date=8 February 2016 |work=[[The New Indian Express]] |location=[[New Delhi]]}}</ref> ೨೦೦೮ ರಲ್ಲಿ, ಅವರು 'ಟ್ವೆಂಟಿ:೨೦' ನಲ್ಲಿ ನಟಿಸಿದರು. ಇದು ಮಲಯಾಳಂ ಚಲನಚಿತ್ರ ನಟರ ಸಂಘವಾದ ಅಮ್ಮದ ಬಹುತೇಕ ಎಲ್ಲಾ ನಟರನ್ನು ಒಳಗೊಂಡ ಮೈಲಿಗಲ್ಲಿನ ಚಿತ್ರವಾಗಿದೆ.<ref>{{cite news |last=V. P |first=Nicy |date=7 October 2014 |title=Shaji Kailas Confirms Next Film with Mohanlal and Mammootty |url=http://www.ibtimes.co.in/shaji-kailas-confirms-next-film-mohanlal-mammootty-610700 |url-status=live |archive-url=https://web.archive.org/web/20160216110732/http://www.ibtimes.co.in/shaji-kailas-confirms-next-film-mohanlal-mammootty-610700 |archive-date=16 February 2016 |access-date=8 February 2016 |work=[[International Business Times]]}}</ref>
'ದೃಶ್ಯಂ' (೨೦೧೩), ಅದರಲ್ಲಿ ಅವರು ಸಾಧಾರಣ ವ್ಯಕ್ತಿಯಾದ ಜಾರ್ಜ್ಕುಟ್ಟಿಯ ಪಾತ್ರವನ್ನು ನಿರ್ವಹಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.<ref>{{cite news |last=James |first=Anu |date=9 September 2015 |title='Drishyam' Director Jeethu Joseph Says He Was Unhappy with Mohanlal Starrer's Hindi Remake Cast |url=http://www.ibtimes.co.in/drishyam-director-jeethu-joseph-says-he-was-unhappy-mohanlal-starrers-hindi-remake-cast-646005 |url-status=live |archive-url=https://web.archive.org/web/20160216111310/http://www.ibtimes.co.in/drishyam-director-jeethu-joseph-says-he-was-unhappy-mohanlal-starrers-hindi-remake-cast-646005 |archive-date=16 February 2016 |access-date=8 February 2016 |work=[[International Business Times]]}}</ref><ref>{{cite news |last=Pillai |first=Radhika C |date=21 December 2013 |title=Mollywood praises Mohanlal for Drishyam's success |url=http://timesofindia.indiatimes.com/entertainment/malayalam/movies/news/Mollywood-praises-Mohanlal-for-Drishyams-success/articleshow/27721249.cms |url-status=live |archive-url=https://web.archive.org/web/20160304151131/http://timesofindia.indiatimes.com/entertainment/malayalam/movies/news/Mollywood-praises-Mohanlal-for-Drishyams-success/articleshow/27721249.cms |archive-date=4 March 2016 |access-date=4 March 2016 |work=[[The Times of India]]}}</ref> ೨೦೧೬ ರಲ್ಲಿ, ಅವರು 'ಪುಲಿಮುರುಗನ್' ಆಕ್ಷನ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಇದು ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು ಮತ್ತು ಬಾಕ್ಸ್ ಆಫೀಸ್ನಲ್ಲಿ ೧೦೦ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿದ ಮೊದಲ ಮಲಯಾಳಂ ಚಿತ್ರವಾಗಿದೆ.<ref>{{cite news |last=Viswanath |first=Chandrakanth |date=7 November 2016 |title=Mohanlal's Pulimurugan breaches the Rs 100 crore mark |url=http://www.newindianexpress.com/entertainment/malayalam/2016/nov/07/mohanlals-pulimurugan-breaches-the-rs-100-crore-mark-1536006--2.html |url-status=dead |archive-url=https://web.archive.org/web/20161111194211/http://www.newindianexpress.com/entertainment/malayalam/2016/nov/07/mohanlals-pulimurugan-breaches-the-rs-100-crore-mark-1536006--2.html |archive-date=11 November 2016 |access-date=11 November 2016 |work=[[The New Indian Express]]}}</ref> ೨೦೧೯ ರಲ್ಲಿ, ಅವರು ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ 'ಲೂಸಿಫರ್' ನಲ್ಲಿ ನಟಿಸಿದರು, ಮತ್ತು ಈ ಚಿತ್ರವು ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. ೨೦೨೩ ರಲ್ಲಿ, ಅವರು 'ನೇರು' ನಲ್ಲಿ ನಟಿಸಿದರು, ಇದು ವಾಣಿಜ್ಯ ಯಶಸ್ಸು ಗಳಿಸಿತು. ೨೦೨೫ ರಲ್ಲಿ, ಅವರು 'ಎಲ್೨: ಎಂಪುರಾನ್' ನಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರು ಮತ್ತು ನಂತರದ ಚಿತ್ರವು 'ತುದಾರುಂ' ಆಗಿತ್ತು; ಎರಡೂ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ.<ref>{{Cite web |date=26 April 2025 |title=Kerala Box Office: Mohanlal's L2 Empuraan plummets with OTT premiere; likely to end theatrical run behind Tovino Thomas starrer 2018 |url=https://www.pinkvilla.com/entertainment/box-office/kerala-box-office-mohanlals-l2-empuraan-plummets-with-ott-premiere-likely-to-end-theatrical-run-behind-tovino-thomas-starrer-2018-1384193 |access-date=28 April 2025 |website=[[Pinkvilla]] |language=en}}</ref><ref>{{Cite web |last=Sawlani |first=Kush |date=14 May 2025 |title=Top 5 Indian Films Of 2025 At The Worldwide Box Office So Far: Chhaava reigns supreme; L2 Empuraan and others follow suit |url=https://www.pinkvilla.com/entertainment/box-office/top-5-indian-films-of-2025-at-the-worldwide-box-office-so-far-chhaava-reigns-supreme-l2-empuraan-and-others-follow-suit-1387656 |access-date=14 May 2025 |website=[[Pinkvilla]]}}</ref>
== ಚಿತ್ರಗಳು ==
{{pending films key}}
{| class="wikitable plainrowheaders sortable"
|+ ಮೋಹನ್ಲಾಲ್ ಚಲನಚಿತ್ರ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! class="unsortable" scope="col" | ಟಿಪ್ಪಣಿಗಳು
! class="unsortable" scope="col" | {{ref heading}}
|-
| 1980
! scope="row" | ''[[ಮಂಜಿಲ್ ವಿರಿಂಜ ಪೂಕ್ಕಲ್]]''
| ನರೇಂದ್ರನ್
|
|<ref>{{cite news |last=Express News Service |date=24 April 2012 |title=The Camera that Captured a Star |url=http://www.newindianexpress.com/entertainment/malayalam/article387139.ece |url-status=dead |archive-url=https://web.archive.org/web/20151224195251/http://www.newindianexpress.com/entertainment/malayalam/article387139.ece |archive-date=24 December 2015 |access-date=15 December 2015 |work=[[The New Indian Express]]}}</ref>
|-
| rowspan="8" | 1981
! scope="row" | ''[[ಸಂಚಾರಿ]]''
| ಡಾ. ಶೇಖರ್
|
|<ref>{{cite news |last=ഭാനുപ്രകാശ് |date=16 November 2017 |title=സംഘട്ടനരംഗങ്ങള്ക്ക് ഇറങ്ങുമ്പോള് ജയൻ കൊടുത്ത ആ ഉപദേശമാണ് ഇപ്പോഴും മോഹന്ലാലിന്റെ മനസ്സില് |url=http://www.mathrubhumi.com/movies-music/flashback/jayan-mohanlal-malayalam-movie-stunt-action-hero-action-scenes-1.2391456 |url-status=live |archive-url=https://archive.today/20171130154334/http://www.mathrubhumi.com/movies-music/flashback/jayan-mohanlal-malayalam-movie-stunt-action-hero-action-scenes-1.2391456 |archive-date=30 November 2017 |access-date=15 December 2015 |work=[[Mathrubhumi]] |language=ml}}</ref>
|-
! scope="row" | ''[[ತಕಿಲು ಕೊಟ್ಟಂಪುರಂ]]''
| ವಕೀಲ ಪಾಲ್
|
|<ref>{{cite news |last=Hindu |date=21 July 2011 |title=They set the trend... |url=http://www.thehindu.com/todays-paper/tp-features/tp-metroplus/they-set-the-trend/article2278114.ece |url-status=live |archive-url=https://web.archive.org/web/20160219154201/http://www.thehindu.com/todays-paper/tp-features/tp-metroplus/they-set-the-trend/article2278114.ece |archive-date=19 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ಧನ್ಯಾ]]''
| ಮೋಹನ್ಲಾಲ್
|
|<ref>{{cite news |last=Sidhardhan |first=Sanjith |date=13 June 2012 |title=Mohanlal, Kunchacko to team up |url=http://timesofindia.indiatimes.com/entertainment/malayalam/movies/news/Mohanlal-Kunchacko-to-team-up/articleshow/14058883.cms |url-status=live |archive-url=https://archive.today/20171130151756/https://timesofindia.indiatimes.com/entertainment/malayalam/movies/news/Mohanlal-Kunchacko-to-team-up/articleshow/14058883.cms |archive-date=30 November 2017 |access-date=19 December 2015 |work=[[The Times of India]]}}</ref>
|-
! scope="row" | ''[[ಧ್ರುವಸಂಗಮಂ]]''
| ಶಂಕರನ್ಕುಟ್ಟಿ
|
|<ref name="sasikumar">{{cite news |last=മാത്യു ആർത്താറ്റ് |first=മനോജ് |date=19 July 2014 |title=മായാത്ത ശശികല |url=http://www.mathrubhumi.com/movies-music/features/%E0%B4%AE%E0%B4%BE%E0%B4%AF%E0%B4%BE%E0%B4%A4%E0%B5%8D%E0%B4%A4-%E0%B4%B6%E0%B4%B6%E0%B4%BF%E0%B4%95%E0%B4%B2-1.184372 |url-status=live |archive-url=https://web.archive.org/web/20151222150952/http://www.mathrubhumi.com/movies-music/features/%E0%B4%AE%E0%B4%BE%E0%B4%AF%E0%B4%BE%E0%B4%A4%E0%B5%8D%E0%B4%A4-%E0%B4%B6%E0%B4%B6%E0%B4%BF%E0%B4%95%E0%B4%B2-1.184372 |archive-date=22 December 2015 |access-date=21 December 2015 |work=[[Mathrubhumi]]}}</ref>
|-
! scope="row" | ''[[ಅತ್ತಿಮಾರಿ]]''
| ಶಾನ್
|
|<ref>{{cite news |last=Kumar |first=P. K. AJITH |date=8 January 2015 |title=A fan's tribute to a legend |url=http://www.thehindu.com/news/cities/kozhikode/a-fans-tribute-to-a-legend/article6766196.ece |url-status=live |archive-url=https://web.archive.org/web/20160327175432/http://www.thehindu.com/news/cities/kozhikode/a-fans-tribute-to-a-legend/article6766196.ece |archive-date=27 March 2016 |access-date=15 December 2015 |work=[[The Hindu]]}}</ref>
|-
! scope="row" | ''[[ತೇನುಂ ವಯಂಬುಂ]]''
| ವರ್ಮಾ
|
|<ref>{{cite news |last=Roshith |first=Sivalakshmi |date=14 March 2014 |title='Maash was a God-gifted Musician' |url=http://www.newindianexpress.com/entertainment/malayalam/Maash-was-a-God-gifted-Musician/2014/03/14/article2107583.ece |url-status=dead |archive-url=https://web.archive.org/web/20151222124726/http://www.newindianexpress.com/entertainment/malayalam/Maash-was-a-God-gifted-Musician/2014/03/14/article2107583.ece |archive-date=22 December 2015 |access-date=15 December 2015 |work=[[The New Indian Express]]}}</ref>
|-
! scope="row" | ''[[ಊತಿಕಾಚಿಯ ಪೊನ್ನು]]''
| ನಂದನ್
|
|<ref>{{cite web |last=ഹരികൃഷ്ണൻ [Harikrishnan] |first=ജി. [G.] |date=3 December 2015 |script-title=ml:തകരാറുള്ള ഹൃദയം, തളരാത്ത കഥകൾ |trans-title=A Broken heart, tireless stories |url=http://mangalam.pc.cdn.bitgravity.com/print-edition/keralam/383501 |url-status=dead |archive-url=https://web.archive.org/web/20151222130244/http://mangalam.pc.cdn.bitgravity.com/print-edition/keralam/383501 |archive-date=22 December 2015 |access-date=20 December 2015 |publisher=[[Mangalam Publications]] |language=ml}}</ref>
|-
! scope="row" | ''[[ಅಹಿಂಸಾ]]''
| ಮೋಹನನ್
|
|
|-
| rowspan="14" | 1982
! scope="row" | ''[[ಕೆಳಕ್ಕಾತ ಸಬ್ದಂ]]''
| ಬಾಬು
|
|<ref>{{cite news |last=Santhosh |first=K. |date=19 August 2011 |title=Music director Johnson passes away |url=http://www.thehindu.com/todays-paper/tp-national/tp-kerala/music-director-johnson-passes-away/article2371682.ece |url-status=live |archive-url=https://web.archive.org/web/20160220081700/http://www.thehindu.com/todays-paper/tp-national/tp-kerala/music-director-johnson-passes-away/article2371682.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಫುಟ್ಬಾಲ್]]''
| ಬಾಲಕೃಷ್ಣನ್
|
|<ref>{{cite news |last=Pradeep |first=K. |date=2 March 2007 |title=Artistic director |url=http://www.thehindu.com/todays-paper/tp-features/tp-fridayreview/artistic-director/article2271656.ece |url-status=live |archive-url=https://web.archive.org/web/20160220081700/http://www.thehindu.com/todays-paper/tp-features/tp-fridayreview/artistic-director/article2271656.ece |archive-date=20 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ಪಾದಯೋಟ್ಟಂ]]''
| ಕಣ್ಣನ್
|
|<ref>{{cite news |last=Pillai |first=Sreedhar |date=16 October 2013 |title=Padayottam set to be the biggest thing in films in south India |url=https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |url-status=live |archive-url=https://web.archive.org/web/20151222142054/http://indiatoday.intoday.in/story/padayottam-set-to-be-the-biggest-thing-in-films-in-south-india/1/391560.html |archive-date=22 December 2015 |access-date=15 December 2015 |work=[[India Today]]}}</ref>
|-
! scope="row" | ''[[ಎಂತಿನೋ ಪೂಕ್ಕುನ್ನ ಪೂಕ್ಕಳ್]]''
| ಸುರೇಂದ್ರನ್
|
|<ref>{{cite news |last=Mathrubhumi |date=2 December 2015 |title=തിരക്കഥാകൃത്ത് ആലപ്പി ഷെരീഫ് അന്തരിച്ചു |url=http://www.mathrubhumi.com/movies-music/news/alleppey-sheriff-passes-away-malayalam-news-1.709572 |url-status=live |archive-url=https://web.archive.org/web/20151222165019/http://www.mathrubhumi.com/movies-music/news/alleppey-sheriff-passes-away-malayalam-news-1.709572 |archive-date=22 December 2015 |access-date=20 December 2015 |work=[[Mathrubhumi]]}}</ref>
|-
! scope="row" | ''[[ಕಳಿಯಾಮರ್ದನಂ]]''
| ಜಾನಿ
|
|<ref name="backto">{{cite news |last=K |first=Aswathy |date=1 January 2015 |title=Back to Where He Belongs |url=http://www.newindianexpress.com/entertainment/malayalam/Back-to-Where-He-Belongs/2015/01/01/article2597596.ece |url-status=dead |archive-url=https://web.archive.org/web/20151222125300/http://www.newindianexpress.com/entertainment/malayalam/Back-to-Where-He-Belongs/2015/01/01/article2597596.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಮದ್ರಾಸಿಲೆ ಮೋನ್]]''
| ಮೋಹನ್ಲಾಲ್
|
|<ref>{{cite news |author=TNM staff |date=19 June 2017 |title=Not just Sukumara Kurup: 6 spine-chilling real-life murders have inspired Malayalam films |url=http://www.thenewsminute.com/article/not-just-sukumara-kurup-6-spine-chilling-real-life-murders-have-inspired-malayalam-films |url-status=live |archive-url=https://archive.today/20171130152301/http://www.thenewsminute.com/article/not-just-sukumara-kurup-6-spine-chilling-real-life-murders-have-inspired-malayalam-films |archive-date=30 November 2017 |access-date=15 December 2015 |work=[[The News Minute]]}}</ref>
|-
! scope="row" | ''[[ಆಕ್ರೋಶಂ]]''
| ಮೋಹನಚಂದ್ರನ್
|
|<ref>{{cite news |last=Hindu |date=23 November 2015 |title=TV programme listings (23/11/2015) |url=http://www.thehindu.com/features/metroplus/radio-and-tv/article7905504.ece |url-status=live |archive-url=https://web.archive.org/web/20160220070220/http://www.thehindu.com/features/metroplus/radio-and-tv/article7905504.ece |archive-date=20 February 2016 |access-date=22 December 2015 |work=[[The Hindu]]}}</ref>
|-
! scope="row" | ''[[ಎನಿಕ್ಕುಂ ಒರು ದಿವಸಂ]]''
| ಬಾಬು
|
|<ref name="enikkum">{{cite news |last=Hindu |date=1 October 2004 |title=Actor Shivaji dead |url=http://www.thehindu.com/2004/10/01/stories/2004100113800300.htm |url-status=dead |archive-url=https://web.archive.org/web/20160219154609/http://www.thehindu.com/2004/10/01/stories/2004100113800300.htm |archive-date=19 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ಶ್ರೀ ಅಯ್ಯಪ್ಪನುಂ ವಾವರುಂ]]''
| ಕದುತ
|ಅತಿಥಿ ಪಾತ್ರ
|<ref>{{cite news |last=Vijayakumar |first=B. |date=21 November 2015 |title=Sree Ayyappanum Vavarum: 1982 |url=http://www.thehindu.com/features/metroplus/society/sree-ayyappanum-vavarum-film-on-sabarimala/article7903888.ece |url-status=live |archive-url=https://web.archive.org/web/20160220070620/http://www.thehindu.com/features/metroplus/society/sree-ayyappanum-vavarum-film-on-sabarimala/article7903888.ece |archive-date=20 February 2016 |access-date=30 December 2015 |work=[[The Hindu]]}}</ref>
|-
! scope="row" | ''[[ಕುರುಕ್ಕಂಟೆ ಕಲ್ಯಾಣಂ]]''
| ಸೈನಾಬಾ ಅವರ ಪತಿ
|
|<ref>{{cite news |last=Soman |first=Deepa |date=26 March 2015 |title=I like to believe I am young: Sathyan Anthikad |url=http://timesofindia.indiatimes.com/entertainment/malayalam/movies/news/I-like-to-believe-I-am-young-Sathyan-Anthikad/articleshow/46701986.cms? |url-status=live |archive-url=https://web.archive.org/web/20160220070328/http://timesofindia.indiatimes.com/entertainment/malayalam/movies/news/I-like-to-believe-I-am-young-Sathyan-Anthikad/articleshow/46701986.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''ಞಾನ್ ಒನ್ನು ಪರಯಟ್ಟೆ''
| ಶೇಖರನ್ಕುಟ್ಟಿ
|
|<ref name="lalvasantham">{{cite news |last=Manoramaonline |date=21 May 2011 |title=Manorama Online. Metro Manorama. Lal Vasantham |url=http://specials.manoramaonline.com/Movie/2014/lal-vasantham/filimography.htm |url-status=live |archive-url=https://web.archive.org/web/20151223063201/http://specials.manoramaonline.com/Movie/2014/lal-vasantham/filimography.htm |archive-date=23 December 2015 |access-date=22 December 2015 |work=[[Malayala Manorama]]}}</ref>
|-
! scope="row" | ''[[ಎಂಟೆ ಮೊಹಂಗಲ್ ಪೂವನಿಂಜು]]''
| ಜಯನ್
|
|<ref>{{cite news |last=Kumar |first=P. K. Ajith |date=26 June 2010 |title=The circle of life |url=http://www.thehindu.com/features/cinema/the-circle-of-life/article487320.ece |url-status=live |archive-url=https://web.archive.org/web/20160220081700/http://www.thehindu.com/features/cinema/the-circle-of-life/article487320.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಆ ದಿವಸಂ]]''
| ಬಾಸ್
|
|<ref name="may2011">{{cite news |last=Manoramaonline |date=21 May 2011 |title=Mohanlal Birthday:Filmography |url=http://mymanorama.manoramaonline.com/advt/movie/Mohanlal_Birthday_2011/filmography.htm |url-status=dead |archive-url=https://web.archive.org/web/20110806151012/http://mymanorama.manoramaonline.com/advt/movie/Mohanlal_Birthday_2011/filmography.htm |archive-date=6 August 2011 |access-date=23 February 2016 |work=[[Malayala Manorama]]}}</ref>
|-
! scope="row" | ''[[ಸಿಂದೂರ ಸಂಧ್ಯಾಕ್ಕು ಮೌನಂ]]''
| ಕಿಶೋರ್
|
|<ref name="DG">{{cite news |date=11 October 2016 |title=The Priyan you never knew |url=http://www.deepikaglobal.com/News.aspx?ID=89412 |url-status=live |archive-url=https://archive.today/20171130145706/http://www.deepikaglobal.com/News.aspx?ID=89412 |archive-date=30 November 2017 |access-date=30 November 2017 |work=[[Deepika (newspaper)|Deepika]]}}</ref>
|-
| rowspan="26" | 1983
! scope="row" | ''[[ಭೂಕಂಬಂ]]''
| ರಘು
|
|<ref>{{cite news |last=Nair |first=Unni R |date=25 March 2011 |title=Malayalam Cinema's THREE Team UP |url=http://archive.indianexpress.com/news/malayalam-cinemas-three-team-up/766894/ |url-status=live |archive-url=https://www.webcitation.org/6feYsCkH8?url=http://archive.indianexpress.com/news/malayalam-cinemas-three-team-up/766894/ |archive-date=29 February 2016 |access-date=29 February 2016 |work=[[The Indian Express]]}}</ref>
|-
! scope="row" | ''[[ಹೆಲೋ ಮದ್ರಾಸ್ ಗರ್ಲ್]]''
| ಲಾಲ್
|
|<ref name="DG" />
|-
! scope="row" | ''[[ಸಂಧ್ಯಾಕ್ಕು ವಿರಿಂಜ ಪೂವು]]''
| ರಾಮು
|
|<ref>{{cite news |last=Kumar |first=S. R. Ashok |date=27 November 2010 |title=Grill Mill: Seema |url=http://www.thehindu.com/features/cinema/grill-mill-seema/article917579.ece |url-status=live |archive-url=https://web.archive.org/web/20160220071107/http://www.thehindu.com/features/cinema/grill-mill-seema/article917579.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಕುಯಿಲಿನೆ ತೇದಿ]]''
| ತಂಪುರನ್ ಕುಟ್ಟಿ
|
|<ref>{{cite news |last=Kumar |first=P. K. Ajith |date=11 August 2011 |title=Back in action |url=http://www.thehindu.com/features/cinema/back-in-action/article2346718.ece |url-status=live |archive-url=https://web.archive.org/web/20160220070806/http://www.thehindu.com/features/cinema/back-in-action/article2346718.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ನಸೀಮಾ]]''
| ಸೈತಾಲಿ
|
|<ref>{{cite news |last=Viswanath |first=Chandrakanth |date=3 December 2015 |title='Avalude Ravukal' was a Turning Point in Sheriff's Career |url=http://www.newindianexpress.com/states/kerala/Avalude-Ravukal-was-a-Turning-Point-in-Sheriff%E2%80%99s-Career/2015/12/03/article3158247.ece |url-status=dead |archive-url=https://web.archive.org/web/20151222112605/http://www.newindianexpress.com/states/kerala/Avalude-Ravukal-was-a-Turning-Point-in-Sheriff%E2%80%99s-Career/2015/12/03/article3158247.ece |archive-date=22 December 2015 |access-date=17 December 2015 |work=[[The New Indian Express]]}}</ref>
|-
! scope="row" | ''[[ಹಿಮವಾಹಿನಿ]]''
| ಪಾಪಿ
|
|<ref name="may2011" />
|-
! scope="row" | ''[[ಗುರು ದಕ್ಷಿಣಾ]]''
| ಸಚಿವ ಪ್ರಭಾಕರನ್
|
|<ref name="may2011" />
|-
! scope="row" | ''[[ಚಕ್ರವಾಳಂ ಚುವನ್ನಪ್ಪೋಲ್]]''
| ಸುರೇಶ್
|
|<ref>{{cite news |last=Hindu |date=14 September 2015 |title=TV programme listings (14/09/2015) |url=http://www.thehindu.com/features/metroplus/radio-and-tv/article7648382.ece |url-status=live |archive-url=https://web.archive.org/web/20160220070947/http://www.thehindu.com/features/metroplus/radio-and-tv/article7648382.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ತಾವಾಳಂ]]''
| ರಾಜಪ್ಪನ್
|
|<ref name="may2011" />
|-
! scope="row" | ''[[ವೀಸಾ]]''
| ಸನ್ನಿ
|
|<ref name="may2011" />
|-
! scope="row" | ''ಆಧಿಪತ್ಯಂ''
| ಮೋಹನ್
|
|<ref>{{cite news |last=Naha |first=Abdul Latheef |date=30 November 2003 |title=Multifaceted film-maker |url=http://www.thehindu.com/lf/2003/11/30/stories/2003113000140200.htm |url-status=dead |archive-url=https://web.archive.org/web/20160220070740/http://www.thehindu.com/lf/2003/11/30/stories/2003113000140200.htm |archive-date=20 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ಎಂಟೆ ಕಥಾ]]''
| ರಮೇಶ್
|
|<ref name="lalvasantham" />
|-
! scope="row" | ''[[ಒರು ಮುಖಂ ಪಾಲ ಮುಖಂ]]''
| ಸುಕುಮಾರನ್ ತಂಪಿ
|
|<ref name="unitedfilms" />
|-
! scope="row" | ''[[ಪಿನ್ನಿಲಾವು]]''
| ರಘು
|
|<ref>{{cite news |last=Venkiteswaran |first=C. S |date=13 September 2012 |title=Madhavan Nair: An actor for all seasons |url=http://www.thehindu.com/features/cinema/madhavan-nair-an-actor-for-all-seasons/article3893139.ece |url-status=live |archive-url=https://web.archive.org/web/20160113191742/http://www.thehindu.com/features/cinema/madhavan-nair-an-actor-for-all-seasons/article3893139.ece |archive-date=13 January 2016 |access-date=16 December 2015 |work=[[The Hindu]]}}</ref>
|-
! scope="row" | ''[[ಅರಬ್ಬೀಕಡಲ್]]''
| ರವಿ
|
|<ref name="sasikumar" />
|-
! scope="row" | ''ಶೇಷಂ ಕಳ್ಚಯಿಲ್''
| ಪೊಲೀಸ್ ಇನ್ಸ್ಪೆಕ್ಟರ್
|
|<ref>{{cite news |last=Nagarajan |first=Saraswathy |date=6 August 2015 |title=Frankly speaking... |url=http://www.thehindu.com/features/friday-review/balachandra-menons-new-film-njan-samvidhanam-cheyyum/article7507550.ece |url-status=live |archive-url=https://web.archive.org/web/20160220070850/http://www.thehindu.com/features/friday-review/balachandra-menons-new-film-njan-samvidhanam-cheyyum/article7507550.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಇನಿಯೆಂಗಿಲುಮ್]]''
| ರವಿ
|
|<ref>{{cite news |last=Pillai |first=Sreedhar |date=17 July 2013 |title=Poor patchwork |url=https://www.indiatoday.in/magazine/society-and-the-arts/films/story/19830915-iniyenkilum-starring-mammootty-mohan-lal-seema-is-a-badly-made-film-771014-2013-07-17 |url-status=live |archive-url=https://web.archive.org/web/20160306142039/http://indiatoday.intoday.in/story/iniyenkilum-starring-mammootty-mohan-lal-seema-is-a-badly-made-film/1/371951.html |archive-date=6 March 2016 |access-date=29 February 2016 |work=[[India Today]]}}</ref>
|-
! scope="row" | ''[[ಮರಕ್ಕಿಲ್ಲೊರಿಕ್ಕಲುಂ]]''
| ಮುರಳಿ
|
|<ref name="lalvasantham" />
|-
! scope="row" | ''[[ಎಂಟೆ ಮಾಮಟ್ಟುಕ್ಕುಟ್ಟಿಯಮ್ಮಕ್ಕು]]''
| ಅಲೆಕ್ಸ್
|
|<ref>{{cite news |last=Manmadhan |first=Prema |date=5 December 2010 |title=He loves courting risks |url=http://www.thehindu.com/life-and-style/money-and-careers/he-loves-courting-risks/article931599.ece |url-status=live |archive-url=https://web.archive.org/web/20160219155140/http://www.thehindu.com/life-and-style/money-and-careers/he-loves-courting-risks/article931599.ece |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ಎಂಗನೆ ನೀ ಮರಕ್ಕುಮ್]]''
| ಶಂಬು
|
|<ref name="lalvasantham" />
|-
! scope="row" | ''[[ನನಯಂ]]''
| ಬಾಬು
|
|<ref name="unitedfilms" />
|-
! scope="row" | ''[[ಅಸ್ತ್ರಂ]]''
| ದಾಸ್
|
|<ref>{{cite news |last=Staff Reporter |date=10 September 2008 |title=Film-maker P.N. Menon dead |url=http://www.thehindu.com/todays-paper/tp-national/tp-kerala/filmmaker-pn-menon-dead/article1335136.ece |url-status=live |archive-url=https://web.archive.org/web/20160229105428/http://www.thehindu.com/todays-paper/tp-national/tp-kerala/filmmaker-pn-menon-dead/article1335136.ece |archive-date=29 February 2016 |access-date=29 February 2016 |work=[[The Hindu]]}}</ref>
|-
! scope="row" | ''[[ಅಟ್ಟಕಳಶಂ]]''
| ಸಂತೋಷ್ ಬಾಬು
|
|<ref>{{cite news |last=Indo-Asian News Service |date=17 July 2014 |title=Ace film director Sasikumar dead |url=https://www.indiatoday.in/movies/regional-cinema/story/ace-film-director-sasikumar-dead-200766-2014-07-17 |url-status=live |archive-url=https://web.archive.org/web/20151222135438/http://indiatoday.intoday.in/story/ace-film-director-sasikumar-dead/1/372899.html |archive-date=22 December 2015 |access-date=19 December 2015 |work=[[India Today]]}}</ref>
|-
! scope="row" | ''[[ಕೊಲಕ್ಕೊಂಬನ್]]''
| ಗೋಪಿ
|
|<ref name="sasikumar" />
|-
! scope="row" | ''[[ಕಟ್ಟತೆ ಕಿಲಿಕ್ಕೂಡು]]''
| ಉನ್ನಿ ಕೃಷ್ಣನ್
|
|<ref>{{cite news |last=Nagarajan |first=Saraswathy |date=31 March 2012 |title=Master of political thrillers |url=http://www.thehindu.com/features/cinema/master-of-political-thrillers/article3258326.ece |url-status=live |archive-url=https://web.archive.org/web/20160219154936/http://www.thehindu.com/features/cinema/master-of-political-thrillers/article3258326.ece |archive-date=19 February 2016 |access-date=16 December 2015 |work=[[The Hindu]]}}</ref>
|-
! scope="row" | ''[[ಚಂಗಾತಂ]]''
| ಎಸ್.ಟಿ. ಡೇನಿಯಲ್
|
|<ref name="unitedfilms">{{cite web |last=Vikram |first=Raj |date=19 April 2015 |title=When Mammootty and Mohanlal unite! |url=http://www.metromatinee.com/news-articles/-when-mammootty-and-mohanlal-unite-11094 |url-status=dead |archive-url=https://web.archive.org/web/20151222124407/http://www.metromatinee.com/news-articles/-when-mammootty-and-mohanlal-unite-11094 |archive-date=22 December 2015 |access-date=21 December 2015 |publisher=Metromatinee.com}}</ref>
|-
| rowspan="25" | 1984
! scope="row" | ''[[ಅಕ್ಕರೆ]]''
| ಸುಧಾಕರನ್
|
|<ref>{{cite news |last=Nambidi |first=Parvathy |date=2 October 2014 |title=A Tale of Innocence |url=http://www.newindianexpress.com/entertainment/malayalam/A-Tale-of-Innocence/2014/10/02/article2458562.ece |url-status=dead |archive-url=https://web.archive.org/web/20151222111710/http://www.newindianexpress.com/entertainment/malayalam/A-Tale-of-Innocence/2014/10/02/article2458562.ece |archive-date=22 December 2015 |access-date=20 December 2015 |work=[[The New Indian Express]]}}</ref>
|-
! scope="row" | ''[[ಒರು ಕೊಚು ಸ್ವಪ್ನಂ]]''
| ಗಿಲ್ಬರ್ಟ್
|
|<ref>{{cite news |last=Kumar |first=P. K. Ajith |date=12 March 2014 |title=Of MBS, melodies, memories... |url=http://www.thehindu.com/todays-paper/tp-national/tp-kerala/of-mbs-melodies-memories/article5775696.ece |url-status=live |archive-url=https://web.archive.org/web/20160220072352/http://www.thehindu.com/todays-paper/tp-national/tp-kerala/of-mbs-melodies-memories/article5775696.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಮನಸರಿಯತೆ]]''
| ಮಮ್ಮೂಟ್ಟಿ
|
|<ref>{{cite news |date=7 July 2016 |title=മമ്മൂട്ടി -ആരുമറിയാത്ത 45 കാര്യങ്ങള് |url=http://www.mathrubhumi.com/movies-music/features/45-unknown-factors-about-mammootty-malayalam-news-1.1184876 |url-status=live |archive-url=https://archive.today/20171129112805/http://www.mathrubhumi.com/movies-music/features/45-unknown-factors-about-mammootty-malayalam-news-1.1184876 |archive-date=29 November 2017 |access-date=30 November 2017 |work=[[Mathrubhumi]] |language=ml}}</ref>
|-
! scope="row" | ''[[ಸ್ವಂಥಮೇವಿಡೆ ಬಂಧಮೇವಿಡೆ]]''
| ರಾಜೇಂದ್ರನ್
|
|<ref>{{cite news |last=Pradeep |first=K. |date=16 July 2009 |title=Tall and handsome 'bad man' |url=http://www.thehindu.com/todays-paper/tp-features/tp-metroplus/tall-and-handsome-bad-man/article638536.ece |url-status=live |archive-url=https://web.archive.org/web/20160220071226/http://www.thehindu.com/todays-paper/tp-features/tp-metroplus/tall-and-handsome-bad-man/article638536.ece |archive-date=20 February 2016 |access-date=16 December 2015 |work=[[The Hindu]]}}</ref>
|-
! scope="row" | ''[[ಆಲ್ಕ್ಕೂಟ್ಟತಿಲ್ ತನಿಯೆ]]''
| ಅನಿಲ್ ಕುಮಾರ್
|
|<ref>{{cite news |last=Kumar |first=P. K. Ajith |date=26 September 2014 |title=Screenplays for ever |url=http://www.thehindu.com/entertainment/screenplays-for-ever/article6449094.ece |url-status=live |archive-url=https://web.archive.org/web/20160220071645/http://www.thehindu.com/entertainment/screenplays-for-ever/article6449094.ece |archive-date=20 February 2016 |access-date=16 December 2015 |work=[[The Hindu]]}}</ref>
|-
! scope="row" | ''[[ಪೂಚಕ್ಕೊರು ಮೂಕ್ಕುತಿ]]''
| ಗೋಪಾಲಕೃಷ್ಣನ್
|
|<ref>{{cite news |last=Times News Network |date=12 May 2007 |title=Priyan's remake Darshan |url=http://articles.economictimes.indiatimes.com/2007-05-12/news/28443490_1_priyadarshan-remakes-hindi-film |url-status=dead |archive-url=https://web.archive.org/web/20151222161539/http://articles.economictimes.indiatimes.com/2007-05-12/news/28443490_1_priyadarshan-remakes-hindi-film |archive-date=22 December 2015 |access-date=16 December 2015 |work=[[The Economic Times|Economic Times]]}}</ref>
|-
! scope="row" | ''[[ಅಪ್ಪುನ್ನಿ]]''
| ಮೇನನ್ ಮಾಷ್
|
|<ref>{{cite news |last=Menon |first=Neelima |date=31 May 2009 |title=One's own copycat |url=http://www.newindianexpress.com/entertainment/tamil/article124536.ece |url-status=dead |archive-url=https://web.archive.org/web/20160229110324/http://www.newindianexpress.com/entertainment/tamil/article124536.ece |archive-date=29 February 2016 |access-date=29 February 2016 |work=[[The New Indian Express]]}}</ref>
|-
! scope="row" | ''[[ಅತಿರಾತ್ರಂ]]''
| ಪ್ರಸಾದ್
|
|<ref>{{cite news |last=Sidhardhan |first=Sanjith |date=8 September 2011 |title=Mashups in Mollywood! |url=http://timesofindia.indiatimes.com/others/news-interviews/Mashups-in-Mollywood/articleshow/9911371.cms |url-status=live |archive-url=https://web.archive.org/web/20160220082827/http://timesofindia.indiatimes.com/others/news-interviews/Mashups-in-Mollywood/articleshow/9911371.cms |archive-date=20 February 2016 |access-date=16 December 2015 |work=[[The Times of India]]}}</ref>
|-
! scope="row" | ''[[ಉನಾರೂ]]''
| ರಾಮು
|
|<ref>{{cite news |last=Ramachandran |first=Mythily |date=15 April 2015 |title=Mani Ratnam's 'O Kadhal Kanmani' out on Friday |url=http://gulfnews.com/life-style/celebrity/desi-news/south-india/mani-ratnam-s-o-kadhal-kanmani-out-on-friday-1.1492175 |url-status=live |archive-url=https://web.archive.org/web/20151123023156/http://gulfnews.com/life-style/celebrity/desi-news/south-india/mani-ratnam-s-o-kadhal-kanmani-out-on-friday-1.1492175 |archive-date=23 November 2015 |access-date=16 December 2015 |work=[[Gulf News]]}}</ref>
|-
! scope="row" | ''[[ಕಳಿಯಿಲ್ ಅಲ್ಪಂ ಕಾರ್ಯಂ]]''
| ವಿನಯನ್
|
|<ref name="may2011" />
|-
! scope="row" | ''[[ಕಿಳಿಕ್ಕೊಂಚಲ್]]''
| ರತೀಶ್
|
|<ref name="may2011" />
|-
! scope="row" | ''[[ಪಾವಂ ಪೂರ್ಣಿಮಾ]]''
| ಅಣ್ಣನ್ ತಂಪುರನ್
|
|<ref name="reghukumar">{{cite web |last=DC |date=20 February 2014 |title=സംഗീത സംവിധയകാൻ രഘുകുമാർ അന്ധരിച്ചു |url=http://www.dcbooks.com/music-director-raghu-kumar-passed-away.html |url-status=dead |archive-url=https://web.archive.org/web/20151222121950/http://www.dcbooks.com/music-director-raghu-kumar-passed-away.html |archive-date=22 December 2015 |access-date=21 December 2015 |publisher=[[DC Books]]}}</ref>
|-
! scope="row" | ''[[ಲಕ್ಷ್ಮಣ ರೇಖಾ]]''
| ಸುಧಾಕರನ್ ನಾಯರ್
|
|<ref name="may2011" />
|-
! scope="row" | ''[[ವನಿತಾ ಪೊಲೀಸ್]]''
| ಅಚುತನ್
|
|<ref>{{cite news |last=Hindu |date=11 June 2014 |title=TV programme listings (11/06/2014) |url=http://www.thehindu.com/features/metroplus/radio-and-tv/article6101171.ece |url-status=live |archive-url=https://web.archive.org/web/20160220071335/http://www.thehindu.com/features/metroplus/radio-and-tv/article6101171.ece |archive-date=20 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ವೆಟ್ಟಾ]]''
| ಬಾಲನ್
|
|<ref>{{cite news |last=James |first=Anu |date=1 March 2016 |title=After Rajesh Pillai, director Mohanroop of 1984 'Vetta' fame passes away |url=http://www.ibtimes.co.in/after-rajesh-pillai-director-Mohanroop-1984-vetta-fame-passes-away-668894 |url-status=dead |archive-url=https://web.archive.org/web/20160301174119/http://www.ibtimes.co.in/after-rajesh-pillai-director-Mohanroop-1984-vetta-fame-passes-away-668894 |archive-date=1 March 2016 |access-date=1 March 2016 |work=[[International Business Times]]}}</ref>
|-
! scope="row" | ''[[ಇವಿಡೆ ತುಡಂಗುನ್ನು]]''
| ಕೃಷ್ಣಕುಮಾರ್
|
|<ref name="sasikumar" />
|-
! scope="row" | ''[[ಶ್ರೀಕೃಷ್ಣ ಪರುಂತು]]''
| ಕುಮಾರನ್
|
|
|-
! scope="row" | ''[[ಕುರುಶಿಯುದ್ಧಂ]]''
| ಜಾನಿ
|
|<ref>{{cite news |last=Kumar |first=P. K. Ajith |date=25 April 2013 |title=Architect of blockbusters |url=http://www.thehindu.com/features/cinema/architect-of-blockbusters/article4653559.ece |url-status=live |archive-url=https://web.archive.org/web/20160220083225/http://www.thehindu.com/features/cinema/architect-of-blockbusters/article4653559.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಇಥಾ ಇನ್ನು ಮುತಲ್]]''
| ಸ್ವತಃ
|ಅತಿಥಿ ಪಾತ್ರ
|<ref>{{cite news |last=Staff Reporter |date=24 April 2010 |title=Actor Sreenath found dead in hotel |url=http://www.thehindu.com/todays-paper/tp-national/tp-kerala/actor-sreenath-found-dead-in-hotel/article755384.ece |url-status=live |archive-url=https://web.archive.org/web/20160220072235/http://www.thehindu.com/todays-paper/tp-national/tp-kerala/actor-sreenath-found-dead-in-hotel/article755384.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಅರಿಯಾತ ವೀತಿಕಳ್]]''
| ಬಾಲನ್
|
|<ref name="may2011" />
|-
! scope="row" | ''[[ಅದುತದುತು]]''
| ವಿಷ್ಣು ಮೋಹನ್
|
|<ref>{{cite web |last=MetroMatinee |date=25 September 1984 |title=Aduthaduthu |url=http://www.metromatinee.com/movie/aduthaduthu-3101 |url-status=dead |archive-url=https://web.archive.org/web/20160223162223/http://www.metromatinee.com/movie/aduthaduthu-3101 |archive-date=23 February 2016 |access-date=22 December 2015 |publisher=Metromatinee.com}}</ref>
|-
! scope="row" | ''[[ತಿರಕಳ್]]''
| ಜೇಮ್ಸ್ ಜಾರ್ಜ್
|
|<ref name="lalvasantham" />
|-
! scope="row" | ''[[ಉಯರಂಗಲಿಲ್]]''
| ಪಿ.ಕೆ. ಜಯರಾಜನ್
|
|<ref name="MT84" />
|-
! scope="row" | ''[[ಆದಿಯೋಳುಕ್ಕುಕಳ್]]''
| ಗೋಪಿ
|
|<ref name="unitedfilms" />
|-
! scope="row" | ''[[ಒನ್ನಾನು ನಮ್ಮಳ್]]''
| ನಂದಗೋಪಾಲ್
|
|<ref>{{cite news |last=പ്രകാശ് |first=ഭാനു |date=7 June 2013 |script-title=ml:'ഗുഡ് ഈവെനിംഗ്, മിസ്സിസ് പ്രഭാ നരേന്ദ്രൻ...' |trans-title='Good evening, Mrs. Prabha Narendran...' |url=http://mathrubhumi.com/movies/welcome/366675/ |url-status=dead |archive-url=https://web.archive.org/web/20160310032529/http://mathrubhumi.com/movies/welcome/366675/ |archive-date=10 March 2016 |access-date=29 February 2016 |work=[[Mathrubhumi]] |language=ml}}</ref>
|-
| rowspan="25" | 1985
! scope="row" | ''[[ಅವಿದತೆಪೋಲೆ ಇವಿದೆಯುಂ]]''
| ಸುಕುಮಾರನ್
|
|<ref>{{cite news |last=Sebastian |first=Shevlin |date=28 November 2009 |title=It's all about being Innocent |url=http://www.newindianexpress.com/entertainment/malayalam/article161560.ece |url-status=dead |archive-url=https://web.archive.org/web/20151222131937/http://www.newindianexpress.com/entertainment/malayalam/article161560.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ನೊಕ್ಕೆತ ಡೂರತು ಕಣ್ಣುಂ ನಟ್ಟು]]''
| ಶ್ರೀಕುಮಾರ್
|
|<ref>{{cite news |last=Wire |first=Sampurn |date=8 May 2010 |title=Nadiya switches attention to TV now |url=http://www.newindianexpress.com/entertainment/tamil/article268513.ece?pageToolsFontSize=70%25 |url-status=dead |archive-url=https://web.archive.org/web/20160220071909/http://www.newindianexpress.com/entertainment/tamil/article268513.ece |archive-date=20 February 2016 |access-date=19 December 2015 |work=[[The New Indian Express]]}}</ref>
|-
! scope="row" | ''[[ಒಮಾನಿಕ್ಕನ್ ಒರ್ಮವೈಕ್ಕನ್]]''
| ದೇವ ಕುಮಾರ್
|
|<ref name="lalvasantham" />
|-
! scope="row" | ''[[ನಾಯಕನ್]]''
| ಕೃಷ್ಣದಾಸ್
|
|<ref name="lalvasantham" />
|-
! scope="row" | ''[[ಅನುಬಂಧಂ]]''
| ಭಾಸ್ಕರನ್
|
|<ref>{{cite news |last=K S |first=Aravind |date=23 June 2015 |title=Slices Panning of Life |url=http://www.newindianexpress.com/entertainment/malayalam/Slices-Panning-of-Life/2015/06/23/article2881125.ece |url-status=dead |archive-url=https://web.archive.org/web/20151222080909/http://www.newindianexpress.com/entertainment/malayalam/Slices-Panning-of-Life/2015/06/23/article2881125.ece |archive-date=22 December 2015 |access-date=16 December 2015 |work=[[The New Indian Express]]}}</ref>
|-
! scope="row" | ''[[ಒನ್ನಾನಂ ಕುನ್ನಿಲ್ ಒರಡಿ ಕುನ್ನಿಲ್]]''
| ನಿತಿನ್
|
|<ref>{{cite news |last=Pradeep |first=K. |date=28 November 2008 |title=Notes of nostalgia |url=http://www.thehindu.com/todays-paper/tp-features/tp-fridayreview/notes-of-nostalgia/article1436492.ece |url-status=live |archive-url=https://web.archive.org/web/20160220072434/http://www.thehindu.com/todays-paper/tp-features/tp-fridayreview/notes-of-nostalgia/article1436492.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ಜೀವಂತೆ ಜೀವನ್]]''
| ಜಯನ್
|
|<ref name="lalvasantham" />
|-
! scope="row" | ''[[ಅಂಗಡಿಕ್ಕಪ್ಪುರತು]]''
| ಬಾಬು
|
|<ref name="may2011" />
|-
! scope="row" | ''[[ರಂಗಂ]]''
| ಅಪ್ಪುನ್ನಿ
|
|<ref>{{cite news |last=Mahesh |first=Chitra |date=1 May 2014 |title=Life on her own terms |url=http://www.thehindu.com/features/friday-review/dance/life-on-her-own-terms/article5966113.ece |url-status=live |archive-url=https://web.archive.org/web/20160220083641/http://www.thehindu.com/features/friday-review/dance/life-on-her-own-terms/article5966113.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಕೂಡುಂ ತೇದಿ]]''
| ಪೀಟರ್
|
|<ref>{{cite news |last=Jayakumar |first=G. |date=30 January 2009 |title=Master of suspense |url=http://www.thehindu.com/todays-paper/tp-features/tp-fridayreview/master-of-suspense/article657180.ece |url-status=live |archive-url=https://web.archive.org/web/20160220072557/http://www.thehindu.com/todays-paper/tp-features/tp-fridayreview/master-of-suspense/article657180.ece |archive-date=20 February 2016 |access-date=22 December 2015 |work=[[The Hindu]]}}</ref>
|-
! scope="row" | ''[[ಎಳು ಮುತಲ್ ಒನ್ಪತು ವರೆ]]''
| ಆನಂದ್
|
|<ref name="sasikumar" />
|-
! scope="row" | ''[[ಅರಂ + ಅರಂ = ಕಿನ್ನರಂ]]''
| ನಾರಾಯಣನ್ ಕುಟ್ಟಿ
|
|<ref>{{cite news |last=Sathyendran |first=Nita |date=10 July 2014 |title=Talking the talk... on the small screen |url=http://www.thehindu.com/features/metroplus/radio-and-tv/talking-the-talk-on-the-small-screen/article6197228.ece |url-status=live |archive-url=https://web.archive.org/web/20160220083335/http://www.thehindu.com/features/metroplus/radio-and-tv/talking-the-talk-on-the-small-screen/article6197228.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಮುಲಮೂಟ್ಟಿಲ್ ಆದಿಮ]]''
| ಆದಿಮಕನ್ನೆ
|
|<ref name="may2011" />
|-
! scope="row" | ''[[ಇದನಿಲಂಗಳ್]]''
| ಬಾಲನ್
|
|<ref>{{cite news |last=Kumar |first=Aswin J |date=24 December 2014 |title=A director who could foresee the future |url=http://timesofindia.indiatimes.com/entertainment/tamil/movies/news/A-director-who-could-foresee-the-future/articleshow/45629663.cms |url-status=live |archive-url=https://web.archive.org/web/20160220072631/http://timesofindia.indiatimes.com/entertainment/tamil/movies/news/A-director-who-could-foresee-the-future/articleshow/45629663.cms |archive-date=20 February 2016 |access-date=21 December 2015 |work=[[The Times of India]]}}</ref>
|-
! scope="row" | ''[[ಬೋಯಿಂಗ್ ಬೋಯಿಂಗ್]]''
| ಶ್ಯಾಮ್
|
|<ref>{{cite news |last=Sidhardhan |first=Sanjith |date=22 November 2011 |title='No other language can match Malayalam comedy' |url=http://timesofindia.indiatimes.com/others/news-interviews/No-other-language-can-match-Malayalam-comedy/articleshow/10842071.cms |url-status=live |archive-url=https://web.archive.org/web/20141001204830/http://timesofindia.indiatimes.com/others/news-interviews/No-other-language-can-match-Malayalam-comedy/articleshow/10842071.cms |archive-date=1 October 2014 |access-date=17 December 2015 |work=[[The Times of India]]}}</ref>
|-
! scope="row" | ''[[ಞಾನ್ ಪಿರನ್ನ ನಾಟ್ಟಿಲ್]]''
| ಇನ್ಸ್ಪೆಕ್ಟರ್ ರಾಜಶೇಖರನ್
|
|<ref name="lalvasantham" />
|-
! scope="row" | ''[[ಅಧ್ಯಾಯಂ ಒನ್ನು ಮುತಲ್]]''
| ವಿಷ್ಣು
|
|<ref>{{cite web |last=MetroMatinee |date=22 December 1985 |title=Adhyayam Onnu Muthal Malayalam Movie |url=http://www.metromatinee.com/movie/adhyayam-onnu-muthal-221 |url-status=dead |archive-url=https://web.archive.org/web/20151223034720/http://www.metromatinee.com/movie/adhyayam-onnu-muthal-221 |archive-date=23 December 2015 |access-date=22 December 2015 |publisher=www.metromatinee.com}}</ref>
|-
! scope="row" | ''[[ಪಥಮುದಯಂ]]''
| ಜಯಮೋಹನ್ ಮತ್ತು ವಿಕ್ರಮನ್
|
|<ref>{{cite web |last=DC |date=9 September 2013 |title=എസ് രമേശൻ നായർക്ക് ചങ്ങമ്പുഴ പുരസ്കാരം |url=http://www.dcbooks.com/changampuzha-award-for-s-ramesan-nair.html |url-status=dead |archive-url=https://web.archive.org/web/20151222112635/http://www.dcbooks.com/changampuzha-award-for-s-ramesan-nair.html |archive-date=22 December 2015 |access-date=20 December 2015 |publisher=[[DC Books]]}}</ref>
|-
! scope="row" | ''[[ಗುರುಜಿ ಒರು ವಾಕ್ಕು]]''
| ಸುಧಾಕರನ್ ನಾಯರ್
|
|<ref>{{cite news |last=Kumar |first=P. K. Ajith |date=15 April 2014 |title=Seasons could not wither his snow-fresh songs |url=http://www.thehindu.com/news/cities/Thiruvananthapuram/seasons-could-not-wither-his-snowfresh-songs/article5914258.ece |url-status=live |archive-url=https://web.archive.org/web/20160220072520/http://www.thehindu.com/news/cities/Thiruvananthapuram/seasons-could-not-wither-his-snowfresh-songs/article5914258.ece |archive-date=20 February 2016 |access-date=22 December 2015 |work=[[The Hindu]]}}</ref>
|-
! scope="row" | ''[[ವಸಂತ ಸೇನಾ]]''
| ದೇವನ್
|
|<ref name="may2011" />
|-
! scope="row" | ''[[ಕರಿಂಪಿನ್ ಪೂವಿನಕ್ಕರೆ]]''
| ಭದ್ರನ್
|
|<ref>{{cite news |last=Hindu |date=3 August 2014 |title=TV programme listings (03/08/2014) |url=http://www.thehindu.com/features/metroplus/radio-and-tv/article6275306.ece |url-status=live |archive-url=https://web.archive.org/web/20160220083423/http://www.thehindu.com/features/metroplus/radio-and-tv/article6275306.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''ಅಳಿಯಾತ ಬಂಧಂಗಳ್''
| ಬಾಲಕೃಷ್ಣನ್
|
|
|-
! scope="row" | ''[[ಉಯರುಂ ಞಾನ್ ನಡಕೆ]]''
| ದಾರಪ್ಪನ್
|
|<ref>{{cite news |last=Kumar |first=P. K. AJITH |date=18 January 2008 |title=Charmed by Mohanam |url=http://www.thehindu.com/todays-paper/tp-features/tp-fridayreview/charmed-by-mohanam/article1432882.ece |url-status=live |archive-url=https://web.archive.org/web/20160220083555/http://www.thehindu.com/todays-paper/tp-features/tp-fridayreview/charmed-by-mohanam/article1432882.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಪರಾಯನುಂವಯ್ಯ ಪರಯತಿರಿಕ್ಕನುಂವಯ್ಯ]]''
| ಕರೆಂಟ್ ಹಂಸ
|
|<ref>{{cite news |last=Soman |first=Deepa |date=13 August 2014 |title=No film with Mohanlal and Mammootty immediately: Priyadarshan |url=http://timesofindia.indiatimes.com/Entertainment/Malayalam/Movies/News/No-film-with-Mohanlal-and-Mammootty-immediately-Priyadarshan/articleshow/40193331.cms |url-status=live |archive-url=https://web.archive.org/web/20140817081806/http://timesofindia.indiatimes.com/Entertainment/Malayalam/Movies/News/No-film-with-Mohanlal-and-Mammootty-immediately-Priyadarshan/articleshow/40193331.cms |archive-date=17 August 2014 |access-date=20 December 2015 |work=[[The Times of India]]}}</ref>
|-
! scope="row" | ''[[ಕಂಡು ಕಂಡರಿಂಜು]]''
| ಉನ್ನಿ ಕೃಷ್ಣನ್ ಉನ್ನಿ
|
|<ref>{{cite news |last=Soman |first=Deepa |date=21 August 2015 |title=M- Town's own booze playlist |url=http://timesofindia.indiatimes.com/entertainment/malayalam/movies/news/M-Towns-own-booze-playlist/articleshow/48556134.cms? |url-status=live |archive-url=https://web.archive.org/web/20160219135324/http://timesofindia.indiatimes.com/entertainment/malayalam/movies/news/M-Towns-own-booze-playlist/articleshow/48556134.cms |archive-date=19 February 2016 |access-date=12 December 2015 |work=[[The Times of India]]}}</ref>
|-
| rowspan="34" | 1986
! scope="row" | ''[[ಪಪ್ಪನ್ ಪ್ರಿಯಪ್ಪೆಟ್ಟ ಪಪ್ಪನ್]]''
| ಇನ್ಸ್ಪೆಕ್ಟರ್ ದೇವದಾಸ್
|
|<ref>{{cite news |last=Manmadhan |first=Prema |date=18 September 2011 |title=Backed by 'Bodyguard' |url=http://www.thehindu.com/features/cinema/backed-by-bodyguard/article2462130.ece |url-status=live |archive-url=https://web.archive.org/web/20160220083830/http://www.thehindu.com/features/cinema/backed-by-bodyguard/article2462130.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಡೂರೆ ಡೂರೆ ಒರು ಕೂಡು ಕೂಟ್ಟಂ]]''
| ದಿವಾಕರನ್
|
|<ref>{{cite news |last=Jayaram |first=Deepika |date=20 December 2015 |title=Salt Mango Tree might release on November 6 |url=http://timesofindia.indiatimes.com/entertainment/malayalam/movies/news/Salt-Mango-Tree-might-release-on-November-6/articleshow/49538875.cms? |url-status=live |archive-url=https://web.archive.org/web/20160220084206/http://timesofindia.indiatimes.com/entertainment/malayalam/movies/news/Salt-Mango-Tree-might-release-on-November-6/articleshow/49538875.cms |archive-date=20 February 2016 |access-date=26 October 2015 |work=[[The Times of India]]}}</ref>
|-
! scope="row" | ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]''
| ಶಂಬು
| 100 ನೇ ಚಿತ್ರ
|<ref>{{cite news |last=George |first=P. G. |date=21 August 2008 |title=Jest like that |url=http://www.thehindu.com/todays-paper/tp-features/tp-metroplus/jest-like-that/article1423161.ece |url-status=live |archive-url=https://web.archive.org/web/20160220083908/http://www.thehindu.com/todays-paper/tp-features/tp-metroplus/jest-like-that/article1423161.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಪಂಚಾಗ್ನಿ]]''
| ರಶೀದ್
|
|<ref>{{cite web |last=Warrier |first=Shobha |date=29 August 2000 |title=Hariharan speaks about Mohanlal |url=http://www.rediff.com/entertai/2000/aug/29hari.htm |url-status=live |archive-url=https://web.archive.org/web/20151006003044/http://www.rediff.com/entertai/2000/aug/29hari.htm |archive-date=6 October 2015 |access-date=16 December 2015 |work=[[Rediff.com]]}}</ref>
|-
! scope="row" | ''[[ಅಭಯಂ ತೇದಿ]]''
| ಅಪ್ಪು
|
|<ref name="lalvasantham" />
|-
! scope="row" | ''[[ಟಿ.ಪಿ. ಬಾಲಗೋಪಾಲನ್ ಎಂ.ಎ.]]''
| ಬಾಲಗೋಪಾಲನ್
|ಕೇರಳ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ
|<ref>{{cite news |last=Kumar |first=P. K. Ajith |date=15 October 2007 |title=Time for celebrations |url=http://www.thehindu.com/todays-paper/tp-national/tp-kerala/time-for-celebrations/article1929968.ece |url-status=live |archive-url=https://web.archive.org/web/20160220084631/http://www.thehindu.com/todays-paper/tp-national/tp-kerala/time-for-celebrations/article1929968.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ದೇಶಾದನಕ್ಕಿಳಿ ಕರಯಾರಿಲ್ಲ]]''
| ಹರಿಶಂಕರ್
|
|<ref>{{cite news |last=Ramnath |first=Nandini |date=8 February 2014 |title=The Love Issue. To be or not to be? |url=http://www.livemint.com/Leisure/5Le56nRXCDyIN0ZqtVHmsM/The-Love-Issue--To-be-or-not-to-be.html |url-status=live |archive-url=https://web.archive.org/web/20151222095312/http://www.livemint.com/Leisure/5Le56nRXCDyIN0ZqtVHmsM/The-Love-Issue--To-be-or-not-to-be.html |archive-date=22 December 2015 |access-date=20 December 2015 |work=[[Mint (newspaper)|Mint]]}}</ref>
|-
! scope="row" | ''[[ವಾರ್ಥಾ]]''
| ಪರೋಲ್ ವಾಸು
|
|<ref>{{cite news |last=Pillai |first=Sreedhar |date=28 February 1987 |title=Malayalam film makers in Kerala transposes real life into reel life |url=https://www.indiatoday.in/magazine/society-and-the-arts/films/story/19870228-malayalam-film-makers-in-kerala-transposes-real-life-into-reel-life-798594-1987-02-27 |url-status=live |archive-url=https://web.archive.org/web/20151222091736/http://indiatoday.intoday.in/story/malayalam-film-makers-in-kerala-transposes-real-life-into-reel-life/1/336768.html |archive-date=22 December 2015 |access-date=16 December 2015 |work=[[India Today]]}}</ref>
|-
! scope="row" | ''[[ಇನಿಯುಂ ಕುರುಕ್ಷೇತ್ರಂ]]''
| ಸುರೇಶ್ ಬಾಬು
|
|<ref name="sasikumar" />
|-
! scope="row" | ''[[ರೇವತಿಕ್ಕೊರು ಪಾವಕ್ಕುಟ್ಟಿ]]''
| ಡಾ. ಮಾಧವನ್ಕುಟ್ಟಿ
|
|<ref>{{cite news |last=Anthikad |first=Sathyan |date=29 January 2013 |title=അവസാനത്തെ 'ഭരത്' അഥവാ ഭരത് ഗോപി |url=http://www.mathrubhumi.com/books/memories/%E0%B4%85%E0%B4%B5%E0%B4%B8%E0%B4%BE%E0%B4%A8%E0%B4%A4%E0%B5%8D%E0%B4%A4%E0%B5%86-%E0%B4%AD%E0%B4%B0%E0%B4%A4%E0%B5%8D-%E0%B4%85%E0%B4%A5%E0%B4%B5%E0%B4%BE-%E0%B4%AD%E0%B4%B0%E0%B4%A4%E0%B5%8D-%E0%B4%97%E0%B5%8B%E0%B4%AA%E0%B4%BF-1.178792 |url-status=live |archive-url=https://web.archive.org/web/20151222153730/http://www.mathrubhumi.com/books/memories/%E0%B4%85%E0%B4%B5%E0%B4%B8%E0%B4%BE%E0%B4%A8%E0%B4%A4%E0%B5%8D%E0%B4%A4%E0%B5%86-%E0%B4%AD%E0%B4%B0%E0%B4%A4%E0%B5%8D-%E0%B4%85%E0%B4%A5%E0%B4%B5%E0%B4%BE-%E0%B4%AD%E0%B4%B0%E0%B4%A4%E0%B5%8D-%E0%B4%97%E0%B5%8B%E0%B4%AA%E0%B4%BF-1.178792 |archive-date=22 December 2015 |access-date=21 December 2015 |work=[[Mathrubhumi]]}}</ref>
|-
! scope="row" | ''[[ಕರಿಯಿಲಕ್ಕಟ್ಟುಪೋಲೆ]]''
| ಇನ್ಸ್ಪೆಕ್ಟರ್ ಅಚುತನ್ಕುಟ್ಟಿ
|
|<ref>{{cite web |last=Ravindranath |first=Sarita |date=5 August 2014 |title=Murder and the Malayalee |url=http://www.sify.com/movies/murder-and-the-malayalee-news-malayalam-oifmk1jaejjfg.html |url-status=dead |archive-url=https://web.archive.org/web/20151224010605/http://www.sify.com/movies/murder-and-the-malayalee-news-malayalam-oifmk1jaejjfg.html |archive-date=24 December 2015 |access-date=20 December 2015 |website=[[Sify]]}}</ref>
|-
! scope="row" | ''[[ಕುಂಜಟ್ಟಕ್ಕಿಳಿಕಳ್]]''
| ಬಾಲಕೃಷ್ಣನ್
|
|<ref name="sasikumar" />
|-
! scope="row" | ''[[ಹೆಲ್ಲೋ ಮೈ ಡಿಯರ್ ರಾಂಗ್ ನಂಬರ್]]''
| ವೇಣುಗೋಪಾಲ್
|
|<ref>{{cite news |last1=Mehrotra |first1=Rohit |last2=Nair |first2=Vipin |date=3 November 2014 |title=Ringing Endorsement |url=http://www.outlookindia.com/article/ringing-endorsement/292342 |url-status=live |archive-url=https://web.archive.org/web/20151222075026/http://www.outlookindia.com/article/ringing-endorsement/292342 |archive-date=22 December 2015 |access-date=20 December 2015 |work=[[Outlook (Indian magazine)|Outlook]]}}</ref>
|-
! scope="row" | ''[[ಎಂಟೆ ಎಂತೆತು ಮಾತ್ರಂ]]''
| ಮಿಸ್ಟರ್ ಮೇನನ್
|
|<ref name="sasikumar" />
|-
! scope="row" | ''[[ನೇರಂ ಪುಳರುಂಬೋಲ್]]''
| ಗಾಡ್ ಫ್ರೀ
|
|<ref>{{cite news |last=Kumar |first=P. K. Ajith |date=30 June 2008 |title=When masters of melody reunite |url=http://www.thehindu.com/todays-paper/tp-national/tp-kerala/when-masters-of-melody-reunite/article1286946.ece |url-status=live |archive-url=https://web.archive.org/web/20160220083948/http://www.thehindu.com/todays-paper/tp-national/tp-kerala/when-masters-of-melody-reunite/article1286946.ece |archive-date=20 February 2016 |access-date=22 December 2015 |work=[[The Hindu]]}}</ref>
|-
! scope="row" | ''[[ಪೂಮುಖಪ್ಪದಿಯಿಲ್ ನಿನ್ನೆಯುಂ ಕಥು]]''
| ಪೌಲಿ
| ಅತಿಥಿ ಪಾತ್ರ
|<ref name="unitedfilms" />
|-
! scope="row" | ''[[ಕಾವೇರಿ]]''
| ಬಾಲಚಂದ್ರನ್ ನಾಯರ್
|
|<ref>{{cite news |last=Nagarajan |first=Saraswathy |date=22 January 2015 |title=Platter of flavours |url=http://www.thehindu.com/features/friday-review/platter-of-flavours/article6811350.ece |url-status=live |archive-url=https://web.archive.org/web/20160229105735/http://www.thehindu.com/features/friday-review/platter-of-flavours/article6811350.ece |archive-date=29 February 2016 |access-date=29 February 2016 |work=[[The Hindu]]}}</ref>
|-
! scope="row" | ''[[ಮಿಳಿನೀರ್ಪ್ಪೂವುಕಳ್]]''
| ರಿಚರ್ಡ್
|
|<ref>{{cite news |last=Shivaprasad |first=S |date=10 May 2012 |title=He cast a 3-D spell |url=http://www.thehindu.com/features/cinema/he-cast-a-3d-spell/article3404301.ece |url-status=live |archive-url=https://web.archive.org/web/20160220084036/http://www.thehindu.com/features/cinema/he-cast-a-3d-spell/article3404301.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಗಾಂಧಿನಗರ್ 2ನೇ ಸ್ಟ್ರೀಟ್]]''
| ಸೇತು / ರಾಮ್ ಸಿಂಗ್
|
|<ref>{{cite news |last=Menon |first=Neelima |date=6 November 2011 |title=The director with the golden touch |url=http://www.newindianexpress.com/entertainment/malayalam/article240024.ece |url-status=dead |archive-url=https://web.archive.org/web/20160229065642/http://www.newindianexpress.com/entertainment/malayalam/article240024.ece |archive-date=29 February 2016 |access-date=29 February 2016 |work=[[The New Indian Express]]}}</ref>
|-
! scope="row" | ''[[ರಾಜವಿಂಟೆ ಮಕನ್]]''
| ವಿನ್ಸೆಂಟ್ ಗೊಮೆಜ್
|
|<ref>{{cite news |last=B S |first=Shibu |date=7 February 2010 |title=The prince returns |url=http://www.newindianexpress.com/cities/thiruvananthapuram/article178273.ece |url-status=dead |archive-url=https://web.archive.org/web/20151222092859/http://www.newindianexpress.com/cities/thiruvananthapuram/article178273.ece |archive-date=22 December 2015 |access-date=20 December 2015 |work=[[The New Indian Express]]}}</ref>
|-
! scope="row" | ''[[ಯುವಜನೋತ್ಸವಂ]]''
| ಜಯನ್
|
|<ref>{{cite news |last=<!--staff byline--> |date=17 December 2015 |title=Singer in uniform delights patients |url=http://www.thehindu.com/news/national/kerala/singer-in-uniform-delights-patients/article7998820.ece |url-status=live |archive-url=https://web.archive.org/web/20160220084304/http://www.thehindu.com/news/national/kerala/singer-in-uniform-delights-patients/article7998820.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಸುಖಮೋ ದೇವಿ]]''
| ಸನ್ನಿ
|
|<ref>{{cite news |last=Menon |first=Harish C |date=10 September 2010 |title=Obituary: Venu Nagavally |url=http://www.newindianexpress.com/entertainment/interviews/article299990.ece |url-status=dead |archive-url=https://web.archive.org/web/20151224112419/http://www.newindianexpress.com/entertainment/interviews/article299990.ece |archive-date=24 December 2015 |access-date=16 December 2015 |work=[[The New Indian Express]]}}</ref>
|-
! scope="row" | ''[[ನಮುಕ್ಕು ಪಾರ್ಕ್ಕನ್ ಮುಂತಿರಿತೊಪ್ಪುಕಳ್]]''
| ಸಾಲೋಮನ್
|
|<ref>{{cite web |last=Nair |first=Patcy |date=1 December 2006 |title=Five great Malayalam movies Bollywood should make |url=http://www.rediff.com/movies/2006/dec/26slide4.htm |url-status=live |archive-url=https://web.archive.org/web/20160105122044/http://www.rediff.com/movies/2006/dec/26slide4.htm |archive-date=5 January 2016 |access-date=20 December 2015 |work=[[Rediff.com]]}}</ref>
|-
! scope="row" | ''[[ನಿಮಿಷಂಗಳ್]]''
| ಮುರಳಿ
|
|<ref name="lalvasantham" />
|-
! scope="row" | ''[[ಮನಸಿಲ್ಲೊರು ಮಣಿಮುತು]]''
| ಮೋಹನ್
|
|<ref>{{cite news |last=Hindu |date=20 December 2012 |title=TV programme listings (20/12/2012) |url=http://www.thehindu.com/features/metroplus/radio-and-tv/article4217457.ece |url-status=live |archive-url=https://web.archive.org/web/20160220084457/http://www.thehindu.com/features/metroplus/radio-and-tv/article4217457.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಒಪ್ಪಂ ಒಪ್ಪಾತಿನೊಪ್ಪಂ]]''
| ಕೃಷ್ಣನ್ ಕುಟ್ಟಿ
|
|<ref name="lalvasantham" />
|-
! scope="row" | ''[[ನಿನ್ನಿಷ್ಟಂ ಎನ್ನಿಷ್ಟಂ]]''
| ಶ್ರೀಕುಮಾರ್
|
|
|-
! scope="row" | ''[[ತಾಲವಟ್ಟಂ]]''
| ವಿನೋದ್
|
|<ref>{{cite news |last=Sharma |first=Nandini |date=1 October 2015 |title=Did you know that these popular Hindi movies that were actually copied from South Indian films? |url=http://www.businessinsider.in/Did-you-know-that-these-popular-Hindi-movies-that-were-actually-copied-from-South-Indian-films/articleshow/49183038.cms |url-status=live |archive-url=https://web.archive.org/web/20151225165922/http://www.businessinsider.in/Did-you-know-that-these-popular-Hindi-movies-that-were-actually-copied-from-South-Indian-films/articleshow/49183038.cms |archive-date=25 December 2015 |access-date=16 December 2015 |work=[[Business Insider]]}}</ref>
|-
! scope="row" | ''[[ಗೀತಂ]]''
| ಜಗದೀಶ್ ನಾಯರ್
|
|<ref name="unitedfilms" />
|-
! scope="row" | ''[[ಒನ್ನು ಮುತಲ್ ಪೂಜ್ಯಂ ವರೆ]]''
| ಟೆಲಿಫೋನ್ ಅಂಕಲ್
|
|<ref>{{cite news |last=Sidhardhan |first=Sanjith |date=14 November 2015 |title=Story behind M Town's most iconic child roles |url=http://timesofindia.indiatimes.com/entertainment/malayalam/movies/news/Story-behind-M-Towns-most-iconic-child-roles/articleshow/49770221.cms? |url-status=live |archive-url=https://web.archive.org/web/20160220084409/http://timesofindia.indiatimes.com/entertainment/malayalam/movies/news/Story-behind-M-Towns-most-iconic-child-roles/articleshow/49770221.cms |archive-date=20 February 2016 |access-date=15 December 2015 |work=[[The Times of India]]}}</ref>
|-
! scope="row" | ''[[ಸನ್ಮಾನಸ್ಸುಳ್ಳವರ್ಕ್ಕು ಸಮಾಧಾನಂ]]''
| ಗೋಪಾಲಕೃಷ್ಣ ಪಣಿಕ್ಕರ್
|
|<ref>{{cite news |last=Anand |first=Shilpa Nair |date=28 November 2014 |title=Living spaces: a house to many top films |url=http://www.thehindu.com/features/metroplus/society/living-spaces-a-house-to-many-top-films/article6643602.ece |url-status=live |archive-url=https://web.archive.org/web/20160220084547/http://www.thehindu.com/features/metroplus/society/living-spaces-a-house-to-many-top-films/article6643602.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಪದಯಾನಿ]]''
| ರಮೇಶ್
|
|<ref>{{cite news |date=30 November 2015 |title=Childhood of Mohanlal by Indrajith? |url=http://www.cinemascoop.net/news/movienews/4185-childhood-of-mohanlal-by-indrajith-in-padayani |url-status=live |archive-url=https://web.archive.org/web/20151222103710/http://www.cinemascoop.net/news/movienews/4185-childhood-of-mohanlal-by-indrajith-in-padayani |archive-date=22 December 2015 |access-date=19 December 2015 |work=Cinemascoop.com}}</ref>
|-
! scope="row" | ''[[ಆದಿವೇರುಕಳ್]]''
| ಬಾಲಕೃಷ್ಣನ್
|
|<ref>{{cite news |last=Pillai |first=Radhika C |date=20 December 2013 |title=Mohanlal to play a retired Army officer |url=http://timesofindia.indiatimes.com/entertainment/malayalam/movies/news/Mohanlal-to-play-a-retired-Army-officer/articleshow/27673505.cms? |url-status=live |archive-url=https://web.archive.org/web/20160229065946/http://timesofindia.indiatimes.com/entertainment/malayalam/movies/news/Mohanlal-to-play-a-retired-Army-officer/articleshow/27673505.cms |archive-date=29 February 2016 |access-date=29 February 2016 |work=[[The Times of India]]}}</ref>
|-
! scope="row" | ''[[ಶೋಭ್ರಾಜ್]]''
| ಶೋಭರಾಜ್ ಮತ್ತು ಧರ್ಮರಾಜ್
|
|<ref>{{cite news |last=Express Web Desk |date=30 October 2015 |title=Four films that perfectly capture the 'devil genius' Charles Sobhraj |url=http://indianexpress.com/article/trending/trending-in-india/four-films-that-perfectly-capture-the-devil-genius-charles-sobhraj/ |url-status=dead |archive-url=https://web.archive.org/web/20151222084036/http://indianexpress.com/article/trending/trending-in-india/four-films-that-perfectly-capture-the-devil-genius-charles-sobhraj/ |archive-date=22 December 2015 |access-date=15 December 2015 |work=[[The Indian Express]]}}</ref>
|-
| rowspan="13" | 1987
! scope="row" | ''ಕೈಯೆತುಂ ದೂರತು''
| ವಿನೋದ್
|
|<ref>{{cite web |last=DC |date=18 May 2013 |title=ആദ്യ ഡയലോഗുമായി വീണ്ടും മോഹൻലാൽ |url=http://www.dcbooks.com/mohanlal-again-with-his-first-dialogue.html |url-status=dead |archive-url=https://web.archive.org/web/20151222130334/http://www.dcbooks.com/mohanlal-again-with-his-first-dialogue.html |archive-date=22 December 2015 |access-date=21 December 2015 |publisher=[[DC Books]]}}</ref>
|-
! scope="row" | ''[[ಜನವರಿ ಒರು ಒರ್ಮ]]''
| ರಾಜು
|
|<ref>{{cite news |last=T |first=Nandakumar |date=22 October 2004 |title=Life Thiruvananthapuram : Pooja 'specials' on a platter |url=http://www.thehindu.com/lf/2004/10/22/stories/2004102200860200.htm |url-status=dead |archive-url=https://web.archive.org/web/20160220084715/http://www.thehindu.com/lf/2004/10/22/stories/2004102200860200.htm |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''ಇವಿಡೆ ಎಲ್ಲಾವರ್ಕ್ಕುಂ ಸುಘಂ''
| ಅಪ್ಪು
|
|<ref name="lalvasantham" />
|-
! scope="row" | ''[[ಅಮೃತಂ ಗಮಯ]]''
| ಡಾ. ಪಿ.ಕೆ. ಹರಿದಾಸ್
|
|<ref>{{cite news |last=Prakash |first=Asha |date=13 February 2015 |title=Drugs, not new in Malayalam Cinema |url=http://timesofindia.indiatimes.com/entertainment/malayalam/movies/news/Drugs-not-new-in-Malayalam-Cinema/articleshow/46213904.cms |url-status=live |archive-url=https://web.archive.org/web/20150219205235/http://timesofindia.indiatimes.com/entertainment/malayalam/movies/news/Drugs-not-new-in-Malayalam-Cinema/articleshow/46213904.cms |archive-date=19 February 2015 |access-date=16 December 2015 |work=[[The Times of India]]}}</ref>
|-
! scope="row" | ''[[ಆದಿಮಕಳ್ ಉದಮಕಳ್]]''
| ಮೋಹನ್ ಚೆರಿಯನ್
|
|<ref>{{cite news |last=Kumar |first=P. K. Ajith |date=28 March 2012 |title=Malayalam scriptwriter Damodaran dead |url=http://www.thehindu.com/news/national/kerala/malayalam-scriptwriter-damodaran-dead/article3253792.ece |url-status=live |archive-url=https://web.archive.org/web/20160220084800/http://www.thehindu.com/news/national/kerala/malayalam-scriptwriter-damodaran-dead/article3253792.ece |archive-date=20 February 2016 |access-date=16 December 2015 |work=[[The Hindu]]}}</ref>
|-
! scope="row" | ''[[ಸರ್ವಕಳಾಶಾಲ]]''
| ಲಾಲ್
|
|<ref>{{cite news |last=Jayaram |first=Deepika |date=11 August 2015 |title=A slice of life from college corridors |url=http://timesofindia.indiatimes.com/entertainment/malayalam/movies/news/A-slice-of-life-from-college-corridors/articleshow/48439607.cms |url-status=live |archive-url=https://web.archive.org/web/20160220084843/http://timesofindia.indiatimes.com/entertainment/malayalam/movies/news/A-slice-of-life-from-college-corridors/articleshow/48439607.cms |archive-date=20 February 2016 |access-date=16 December 2015 |work=[[The Times of India]]}}</ref>
|-
! scope="row" | ''[[ಇರುಪತಂ ನೂಟ್ಟಾಂಡು]]''
| ಸಾಗರ್ ಅಲಿಯಾಸ್ ಜಾಕಿ
|
|<ref>{{cite news |last=Deccan Chronicle |date=19 June 2015 |title=Mohanlal's dubsmash video goes viral |url=https://www.deccanchronicle.com/150619/entertainment-mollywood/article/mohanlal%E2%80%99s-dubsmash-video-goes-viral |url-status=live |archive-url=https://web.archive.org/web/20150622203840/http://deccanchronicle.com/150619/entertainment-mollywood/article/mohanlal%E2%80%99s-dubsmash-video-goes-viral |archive-date=22 June 2015 |access-date=25 March 2016 |work=[[Deccan Chronicle]]}}</ref>
|-
! scope="row" | ''[[ಚೆಪ್ಪು]]''
| ರಾಮಚಂದ್ರನ್
|
|<ref>{{cite news |last=Indo-Asian News Service |date=8 August 2011 |title=Mohanlal set for his 300th film |url=http://www.newindianexpress.com/entertainment/malayalam/article481448.ece |url-status=dead |archive-url=https://web.archive.org/web/20151222111713/http://www.newindianexpress.com/entertainment/malayalam/article481448.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಭೂಮಿಯಿಲೆ ರಾಜಕ್ಕನ್ಮರ್]]''
| ರಾಜಾ ಮಹೇಂದ್ರ ವರ್ಮಾ
|
|<ref name="lalvasantham" />
|-
! scope="row" | ''[[ಉನ್ನಿಕಳೆ ಒರು ಕಧಾ ಪರಯಂ]]''
| ಅಬಿ
|
|<ref>{{cite news |last=Express News Service |date=19 May 2013 |title=They cast a spell on Kochiites |url=http://www.newindianexpress.com/cities/kochi/They-cast-a-spell-on-Kochiites/2013/05/19/article1596548.ece |url-status=dead |archive-url=https://web.archive.org/web/20151222091711/http://www.newindianexpress.com/cities/kochi/They-cast-a-spell-on-Kochiites/2013/05/19/article1596548.ece |archive-date=22 December 2015 |access-date=18 December 2015 |work=[[The New Indian Express]]}}</ref>
|-
! scope="row" | ''[[ತೂವನತ್ತುಂಬಿಕಲ್]]''
| ಮನ್ನಾರತೋಡಿ ಜಯಕೃಷ್ಣನ್
|
|<ref>{{cite news |last=P |first=Divya |date=26 May 2015 |title=Happy birthday Mohanlal: A look at the actor's iconic roles |url=http://english.manoramaonline.com/entertainment/entertainment-news/malayalam-film-actor-mohanlal-birthday-kerala.html |url-status=live |archive-url=https://web.archive.org/web/20160229111156/http://english.manoramaonline.com/entertainment/entertainment-news/malayalam-film-actor-mohanlal-birthday-kerala.html |archive-date=29 February 2016 |access-date=29 February 2016 |work=[[Malayala Manorama]]}}</ref>
|-
! scope="row" | ''[[ವಾಳಿಯೊರಕ್ಕಾಳ್ಚಕಳ್]]''
| ರಾಘವನ್ / ಆಂಟೋನಿ ಐಸಾಕ್
|
|<ref name="may2011" />
|-
! scope="row" | ''[[ನಾಡೋಡಿಕ್ಕಟ್ಟು]]''
| ದಾಸನ್
|
|<ref>{{cite news |last=Kumar |first=M K Sunil |date=2 February 2012 |title=Blast from the past: The duo who stole our hearts |url=http://timesofindia.indiatimes.com/city/kochi/Blast-from-the-past-The-duo-who-stole-our-hearts/articleshow/11722642.cms |url-status=live |archive-url=https://web.archive.org/web/20150711100814/http://timesofindia.indiatimes.com/city/kochi/Blast-from-the-past-The-duo-who-stole-our-hearts/articleshow/11722642.cms |archive-date=11 July 2015 |access-date=17 December 2015 |work=[[The Times of India]]}}</ref>
|-
| rowspan="12" | 1988
! scope="row" | ''[[ಮುಕುಂತೆಟ್ಟ ಸುಮಿತ್ರಾ ವಿಳಿಕ್ಕುನ್ನು]]''
| ಮುಕುಂದನ್ ಕೆ. ಕಾರ್ತಾ
|
|<ref>{{cite news |last=Sudhish |first=Navamy |date=24 September 2013 |title=People still call me Kalyani: Ranjini |url=http://www.newindianexpress.com/entertainment/malayalam/People-still-call-me-Kalyani-Ranjini/2013/09/24/article1799897.ece |url-status=dead |archive-url=https://web.archive.org/web/20160215203012/http://www.newindianexpress.com/entertainment/malayalam/People-still-call-me-Kalyani-Ranjini/2013/09/24/article1799897.ece |archive-date=15 February 2016 |access-date=17 December 2015 |work=[[The New Indian Express]]}}</ref>
|-
! scope="row" | ''[[ಅಯಿತಂ]]''
| ಶಂಕರನ್
|
|<ref>{{cite news |last=Pradeep |first=K. |date=2 September 2009 |title=End of a journey |url=http://www.thehindu.com/features/friday-review/dance/end-of-a-journey/article13646.ece |url-status=dead |archive-url=https://web.archive.org/web/20160220084925/http://www.thehindu.com/features/friday-review/dance/end-of-a-journey/article13646.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ಮನು ಅಂಕಲ್]]''
| ಸ್ವತಃ
| ಅತಿಥಿ ಪಾತ್ರ
|<ref>{{cite news |last=Nagarajan |first=Saraswathy |date=9 December 2015 |title=I am...Gopakumar C. |url=http://www.thehindu.com/features/metroplus/society/meet-gopakumar-c-first-assistant-in-films/article7966315.ece |url-status=live |archive-url=https://web.archive.org/web/20160220085031/http://www.thehindu.com/features/metroplus/society/meet-gopakumar-c-first-assistant-in-films/article7966315.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ಒರ್ಕ್ಕಪ್ಪುರತು]]''
| ಫ್ರೆಡ್ಡಿ ನಿಕೋಲಸ್
|
|<ref>{{cite news |last=Devasia |first=T. K. |date=27 December 2014 |title=Malayalam film actor Balakrishnan passes away – Khaleej Times |url=http://www.khaleejtimes.com/article/20141227/ARTICLE/312279945/1028 |url-status=live |archive-url=https://web.archive.org/web/20151222082411/http://www.khaleejtimes.com/article/20141227/ARTICLE/312279945/1028 |archive-date=22 December 2015 |access-date=17 December 2015 |work=[[Khaleej Times]]}}</ref>
|-
! scope="row" | ''[[ಪಟ್ಟನಪ್ರವೇಶಂ]]''
| ಸಿಐಡಿ ರಾಮದಾಸ್ / ದಾಸನ್
|
|<ref>{{cite news |last=Sidhardhan |first=Sanjith |date=20 September 2011 |title=Scoring with sequels |url=http://timesofindia.indiatimes.com/others/news-interviews/Scoring-with-sequels/articleshow/10053641.cms |url-status=live |archive-url=https://web.archive.org/web/20160226165234/http://timesofindia.indiatimes.com/others/news-interviews/Scoring-with-sequels/articleshow/10053641.cms |archive-date=26 February 2016 |access-date=26 February 2016 |work=[[The Times of India]]}}</ref>
|-
! scope="row" | ''[[ಪಾದ ಮುದ್ರ]]''
| ಮತು ಪಾಂಡರಂ ಮತ್ತು ಸೋಪ್ ಕುಟ್ಟಪ್ಪನ್
|
|<ref name="sketch">{{cite news |last=Kumar |first=P. K. AJITH |date=12 October 2007 |title=Sketch of the Guru |url=http://www.thehindu.com/todays-paper/tp-features/tp-fridayreview/sketch-of-the-guru/article2273938.ece |url-status=live |archive-url=https://web.archive.org/web/20160220085129/http://www.thehindu.com/todays-paper/tp-features/tp-fridayreview/sketch-of-the-guru/article2273938.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ಆರ್ಯನ್]]''
| ದೇವನಾರಾಯಣನ್
| style="text-align:center;" |
|<ref>{{cite news |last=Viswanath |first=Chandrkanth |date=27 May 2012 |title=Adieu to the exotic villain |url=http://www.newindianexpress.com/entertainment/malayalam/article528449.ece |url-status=dead |archive-url=https://web.archive.org/web/20151224225314/http://www.newindianexpress.com/entertainment/malayalam/article528449.ece |archive-date=24 December 2015 |access-date=17 December 2015 |work=[[The New Indian Express]]}}</ref>
|-
! scope="row" | ''[[ಅನುರಾಗಿ]]''
| ಸಾಮು
|
|<ref>{{cite news |last=Kaumudi |date=2 December 2015 |title=Script writer Alleppey Sherif no more |url=http://www.kaumudi.com/innerpage1.php?newsid=72022 |url-status=live |archive-url=https://web.archive.org/web/20151222164246/http://www.kaumudi.com/innerpage1.php?newsid=72022 |archive-date=22 December 2015 |access-date=17 December 2015 |work=[[Kerala Kaumudi]]}}</ref>
|-
! scope="row" | ''[[ಮೂನ್ನಾಂ ಮುರ]]''
| ಅಲಿ ಇಮ್ರಾನ್
|
|<ref>{{cite news |last=Menon |first=Anasuya |date=4 December 2011 |title=A dekko into past glory |url=http://www.thehindu.com/features/friday-review/history-and-culture/a-dekko-into-past-glory/article2686817.ece |url-status=live |archive-url=https://web.archive.org/web/20160220085210/http://www.thehindu.com/features/friday-review/history-and-culture/a-dekko-into-past-glory/article2686817.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ವೆಲ್ಲನಕಳುಡೆ ನಾಡು]]''
| ಸಿ. ಪವಿತ್ರನ್ "ಸಿ.ಪಿ." ನಾಯರ್
|
|<ref>{{cite news |last=Indo-Asian News Service |date=1 July 2010 |title=No dancing around trees in 'Khatta Meetha': Trisha |url=http://zeenews.india.com/entertainment/bollywood/no-dancing-around-trees-in-khatta-meetha-trisha_64872.html |url-status=live |archive-url=https://web.archive.org/web/20151222110801/http://zeenews.india.com/entertainment/bollywood/no-dancing-around-trees-in-khatta-meetha-trisha_64872.html |archive-date=22 December 2015 |access-date=17 December 2015 |work=[[Zee News]]}}</ref>
|-
! scope="row" | ''[[ಉಲ್ಸವಪಿಟ್ಟೆನ್ನು]]''
| ಅನಿಯನ್ಕುಟ್ಟನ್
|
|<ref>{{cite web |last=Warrier |first=Shobha |date=29 January 2008 |title=Goodbye, Mr Bharat Gopi |url=http://www.rediff.com/movies/2008/jan/29gopi.htm |url-status=live |archive-url=https://web.archive.org/web/20150721234517/http://www.rediff.com/movies/2008/jan/29gopi.htm |archive-date=21 July 2015 |access-date=17 December 2015 |work=[[Rediff.com]]}}</ref>
|-
! scope="row" | ''[[ಚಿತ್ರಂ]]''
| ವಿಷ್ಣು
|
|<ref>{{cite news |last=Ramachandran |first=Mythily |date=16 April 2014 |title=Catching up with actress Ranjini |url=http://gulfnews.com/life-style/celebrity/catching-up-with-actress-ranjini-1.1320172 |url-status=live |archive-url=https://web.archive.org/web/20151222091411/http://gulfnews.com/life-style/celebrity/catching-up-with-actress-ranjini-1.1320172 |archive-date=22 December 2015 |access-date=17 December 2015 |work=[[Gulf News]]}}</ref>
|-
| rowspan="10" | 1989
! scope="row" | ''[[ದೌತ್ಯಂ]]''
| ಕ್ಯಾಪ್ಟನ್ ರಾಯ್ ಜಾಕೋಬ್ ಥಾಮಸ್
|
|<ref>{{cite news |last=Sidhardhan |first=Sanjith |date=6 May 2013 |title=Mohanlal to play a military officer once more |url=http://timesofindia.indiatimes.com/entertainment/malayalam/movies/news/Mohanlal-to-play-a-military-officer-once-more/articleshow/19895566.cms? |url-status=live |archive-url=https://web.archive.org/web/20160220085344/http://timesofindia.indiatimes.com/entertainment/malayalam/movies/news/Mohanlal-to-play-a-military-officer-once-more/articleshow/19895566.cms |archive-date=20 February 2016 |access-date=16 December 2015 |work=[[The Times of India]]}}</ref>
|-
! scope="row" | ''[[ಸೀಸನ್]]''
| ಜೀವನ್
|
|<ref>{{cite web |last=Vikram |first=Raj |date=26 October 2010 |title=Prithviraj to do "Season" remake.. |url=http://www.metromatinee.com/news-articles/prithviraj-to-do-season-remake-2698 |url-status=dead |archive-url=https://web.archive.org/web/20160226174149/http://www.metromatinee.com/news-articles/prithviraj-to-do-season-remake-2698 |archive-date=26 February 2016 |access-date=26 February 2016 |publisher=Metromatinee.com}}</ref>
|-
! scope="row" | ''[[ವರವೇಲ್ಪು]]''
| ಮುರಳಿಧರನ್
|
|<ref>{{cite news |last=Sanandakumar |first=S |date=14 July 2013 |title=Kerala's non-resident tycoons investing in massive projects back home |url=http://articles.economictimes.indiatimes.com/2013-07-14/news/40554381_1_nrks-yusuffali-ma-gulf-countries |url-status=dead |archive-url=https://web.archive.org/web/20150627200024/http://articles.economictimes.indiatimes.com/2013-07-14/news/40554381_1_nrks-yusuffali-ma-gulf-countries |archive-date=27 June 2015 |access-date=16 December 2015 |work=[[The Economic Times|Economic Times]]}}</ref>
|-
! scope="row" | ''[[ನಾಡುವಾಳಿಕಳ್]]''
| ಅರ್ಜುನ್
|
|<ref>{{cite news |last=Sidhardhan |first=Sanjith |date=18 June 2012 |title=One more film inspired by The Godfather |url=http://timesofindia.indiatimes.com/entertainment/malayalam/movies/news/One-more-film-inspired-by-The-Godfather/articleshow/14207849.cms |url-status=live |archive-url=https://web.archive.org/web/20150404004133/http://timesofindia.indiatimes.com/entertainment/malayalam/movies/news/One-more-film-inspired-by-The-Godfather/articleshow/14207849.cms |archive-date=4 April 2015 |access-date=16 December 2015 |work=[[The Times of India]]}}</ref>
|-
! scope="row" | ''[[ವಂದನಂ]]''
| ಉನ್ನಿಕೃಷ್ಣನ್
|
|<ref>{{cite news |last=Krishnakumar |first=R |date=27 July 2014 |title=Bangalore woos filmmakers |url=http://www.deccanherald.com/content/422054/bangalore-woos-filmmakers.html |url-status=live |archive-url=https://web.archive.org/web/20151222122931/http://www.deccanherald.com/content/422054/bangalore-woos-filmmakers.html |archive-date=22 December 2015 |access-date=17 December 2015 |work=[[Deccan Herald]]}}</ref>
|-
! scope="row" | ''[[ಪೆರುವಣ್ಣಪುರತೆ ವಿಶೇಷಂಗಳ್]]''
| ಅಚುತ ಕುರುಪ್
| ಅತಿಥಿ ಪಾತ್ರ
|<ref>{{cite news |last=Soman |first=Deepa |date=9 November 2013 |title=In Mollywood, cameo roles are on the rise |url=http://timesofindia.indiatimes.com/entertainment/malayalam/movies/news/In-Mollywood-cameo-roles-are-on-the-rise/articleshow/25445574.cms? |url-status=live |archive-url=https://web.archive.org/web/20160220085428/http://timesofindia.indiatimes.com/entertainment/malayalam/movies/news/In-Mollywood-cameo-roles-are-on-the-rise/articleshow/25445574.cms |archive-date=20 February 2016 |access-date=17 December 2015 |work=[[The Times of India]]}}</ref>
|-
! scope="row" | ''[[ಕಿರೀಡಂ]]''
| ಸೇತುಮಾಧವನ್
|ರಾಷ್ಟ್ರೀಯ ಚಲನಚಿತ್ರ ವಿಶೇಷ ಉಲ್ಲೇಖ
|<ref>{{cite news |last=Krishnakumar |first=R |date=20 July 2014 |title=Birth of a tragic hero |url=http://www.deccanherald.com/content/420608/birth-tragic-hero.html |url-status=live |archive-url=https://web.archive.org/web/20160113163614/http://www.deccanherald.com/content/420608/birth-tragic-hero.html |archive-date=13 January 2016 |access-date=17 December 2015 |work=[[Deccan Herald]]}}</ref>
|-
! scope="row" | ''[[ಲಾಲ್ ಅಮೆರಿಕಯಿಲ್]]''
| ವಿನೋದ್
| ವಿಳಂಬ ಬಿಡುಗಡೆ; 1986 ರಲ್ಲಿ ಚಿತ್ರೀಕರಿಸಲಾಗಿದೆ
|<ref>{{cite news |last=Sidhardhan |first=Sanjith |date=14 April 2012 |title=Mollywood goes to America |url=http://timesofindia.indiatimes.com/others/news-interviews/Mollywood-goes-to-America/articleshow/12651112.cms? |url-status=live |archive-url=https://web.archive.org/web/20160220085256/http://timesofindia.indiatimes.com/others/news-interviews/Mollywood-goes-to-America/articleshow/12651112.cms |archive-date=20 February 2016 |access-date=16 December 2015 |work=[[The Times of India]]}}</ref>
|-
! scope="row" | ''[[ಆಧಿಪನ್]]''
| ವಕೀಲ ಶ್ಯಾಮ್ ಪ್ರಕಾಶ್
|
|<ref>{{cite news |last=Sidhardhan |first=Sanjith |date=16 September 2015 |title='Mohanlal's mischief attracted me' |url=http://timesofindia.indiatimes.com/entertainment/malayalam/movies/news/Mohanlals-mischief-attracted-me/articleshow/48982100.cms? |url-status=live |archive-url=https://web.archive.org/web/20160220085515/http://timesofindia.indiatimes.com/entertainment/malayalam/movies/news/Mohanlals-mischief-attracted-me/articleshow/48982100.cms |archive-date=20 February 2016 |access-date=17 December 2015 |work=[[The Times of India]]}}</ref>
|-
! scope="row" | ''[[ದಶರಥಂ]]''
| ರಾಜೀವ್ ಮೇನನ್
|
|<ref>{{cite news |last=Diwakar |first=Gitanjali |date=29 July 2015 |title=Surrogacy: Narrated through motion pictures |url=http://english.manoramaonline.com/lifestyle/health/surrogacy-narrated-through-motion-pictures.html |url-status=dead |archive-url=https://web.archive.org/web/20151222144515/http://english.manoramaonline.com/lifestyle/health/surrogacy-narrated-through-motion-pictures.html |archive-date=22 December 2015 |access-date=16 December 2015 |work=[[Malayala Manorama]]}}</ref>
|-
| rowspan="11" | 1990
! scope="row" | ''[[ಅಕ್ಕರೆ ಅಕ್ಕರೆ ಅಕ್ಕರೆ]]''
| ಸಿಐಡಿ ರಾಮದಾಸ್/ದಾಸನ್
|
|<ref>{{cite news |last=Soman |first=Deepa |date=31 October 2013 |title=Sequel fever in Malayalam cinema |url=http://timesofindia.indiatimes.com/entertainment/malayalam/movies/news/Sequel-fever-in-Malayalam-cinema/articleshow/25044473.cms? |url-status=live |archive-url=https://web.archive.org/web/20160220085618/http://timesofindia.indiatimes.com/entertainment/malayalam/movies/news/Sequel-fever-in-Malayalam-cinema/articleshow/25044473.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಆಯೆ ಆಟೋ]]''
| ಸುಧಿ
|
|<ref>{{cite news |last=Sharadhaa |first=A |date=8 May 2013 |title=When the autowale grab all the limelight |url=http://www.newindianexpress.com/entertainment/kannada/When-the-autowale-grab-all-the-limelight/2013/05/08/article1580345.ece |url-status=dead |archive-url=https://web.archive.org/web/20151225025020/http://www.newindianexpress.com/entertainment/kannada/When-the-autowale-grab-all-the-limelight/2013/05/08/article1580345.ece |archive-date=25 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ನಂ.20 ಮದ್ರಾಸ್ ಮೇಲ್]]''
| ಟೋನಿ ಕುರಿಶಿಂಗಲ್
|
|<ref>{{cite news |last=Pilla |first=Radhika C |date=16 June 2015 |title=Mohanlal's kissing pic goes viral! |url=http://timesofindia.indiatimes.com/entertainment/malayalam/movies/news/Mohanlals-kissing-pic-goes-viral/articleshow/47685999.cms? |url-status=live |archive-url=https://web.archive.org/web/20150624005733/http://timesofindia.indiatimes.com/entertainment/malayalam/movies/news/Mohanlals-kissing-pic-goes-viral/articleshow/47685999.cms |archive-date=24 June 2015 |access-date=19 December 2015 |work=[[The Times of India]]}}</ref>
|-
! scope="row" | ''[[ಮುಖಂ]]''
| ಹರಿಪ್ರಸಾದ್
|
|<ref>{{cite news |last=Kurian |first=Shiba |date=15 September 2013 |title=Ranjini and Mohanlal to share screen space after two decades |url=http://timesofindia.indiatimes.com/entertainment/malayalam/movies/news/Ranjini-and-Mohanlal-to-share-screen-space-after-two-decades/articleshow/22590895.cms |url-status=live |archive-url=https://web.archive.org/web/20160220085836/http://timesofindia.indiatimes.com/entertainment/malayalam/movies/news/Ranjini-and-Mohanlal-to-share-screen-space-after-two-decades/articleshow/22590895.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಹಿಸ್ ಹೈನೆಸ್ ಅಬ್ದುಲ್ಲಾ]]''
| ಅಬ್ದುಲ್ಲಾ / ಆನಂದನ್ ನಂಪೂತಿರಿ
|
|<ref>{{cite news |last=Kumar |first=P. K. Ajith |date=31 March 2015 |title=Silver milestone for a golden song |url=http://www.thehindu.com/news/national/kerala/silver-milestone-for-a-golden-song/article7051341.ece |url-status=live |archive-url=https://web.archive.org/web/20160220085706/http://www.thehindu.com/news/national/kerala/silver-milestone-for-a-golden-song/article7051341.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಕದತನಾಡನ್ ಅಂಬಾಡಿ]]''
| ಕದತನಾಡನ್ ಅಂಬಾಡಿ
| ವಿಳಂಬ ಬಿಡುಗಡೆ; 1987 ರಲ್ಲಿ ಚಿತ್ರೀಕರಿಸಲಾಗಿದೆ
|<ref>{{cite news |last=Mathew |first=Dennis Marcus |date=2 February 2011 |title=Malayalam cinema's Sarangapani is no more |url=http://www.thehindu.com/news/national/kerala/malayalam-cinemas-sarangapani-is-no-more/article1149198.ece |url-status=live |archive-url=https://web.archive.org/web/20160220085928/http://www.thehindu.com/news/national/kerala/malayalam-cinemas-sarangapani-is-no-more/article1149198.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ತಾಲ್ವರಂ]]''
| ಬಾಲನ್
|
|<ref>{{cite news |last=Kumar |first=P. K. Ajith |date=26 September 2014 |title=Screenplays for ever |url=http://www.thehindu.com/entertainment/screenplays-for-ever/article6449094.ece |url-status=live |archive-url=https://web.archive.org/web/20160220071645/http://www.thehindu.com/entertainment/screenplays-for-ever/article6449094.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಅರ್ಹತ]]''
| ದೇವರಾಜ್
|
|<ref>{{cite news |last=B S |first=Shibu |date=9 September 2011 |title=Big Ms take an Onam break |url=http://www.newindianexpress.com/cities/kochi/article360273.ece |url-status=dead |archive-url=https://web.archive.org/web/20151222110712/http://www.newindianexpress.com/cities/kochi/article360273.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಇಂದ್ರಜಾಲಂ]]''
| ಕಣ್ಣನ್ ನಾಯರ್
|
|<ref>{{cite news |last=Jhunjhunwala |first=Udita |date=9 September 2015 |title='When I saw Masaan, I realised Vicky Kaushal really is an actor' |url=http://www.hindustantimes.com/brunch/when-i-saw-masaan-i-realised-vicky-kaushal-really-is-an-actor/story-sb85fgziQzB6AplP1aiaDL.html |url-status=live |archive-url=https://web.archive.org/web/20151222111046/http://www.hindustantimes.com/brunch/when-i-saw-masaan-i-realised-vicky-kaushal-really-is-an-actor/story-sb85fgziQzB6AplP1aiaDL.html |archive-date=22 December 2015 |access-date=19 December 2015 |work=[[Hindustan Times]]}}</ref>
|-
! scope="row" | ''[[ಅಪ್ಪು]]''
| ಅಪ್ಪು
|
|<ref>{{cite news |last=Ayyappan |first=R |date=7 August 2009 |title=Irreverence personified |url=http://www.newindianexpress.com/states/kerala/article66699.ece |url-status=dead |archive-url=https://web.archive.org/web/20151222114921/http://www.newindianexpress.com/states/kerala/article66699.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಲಾಲ್ ಸಲಾಂ]]''
| ನೆಟ್ಟೂರ್ ಸ್ಟೀಫನ್
|
|<ref>{{cite news |last=Venkiteswaram |first=C. S. |date=17 September 2010 |title=The unconventional hero |url=http://www.thehindu.com/todays-paper/tp-features/tp-fridayreview/the-unconventional-hero/article673252.ece |url-status=live |archive-url=https://web.archive.org/web/20160220090206/http://www.thehindu.com/todays-paper/tp-features/tp-fridayreview/the-unconventional-hero/article673252.ece |archive-date=20 February 2016 |access-date=19 December 2015 |work=[[The Hindu]]}}</ref>
|-
| rowspan="10" | 1991
! scope="row" | ''[[ಧನಂ]]''
| ಶಿವಶಂಕರನ್
|
|<ref>{{cite web |last=George |first=Meghna |date=29 June 2009 |title=A K Lohithadas (1955–2009): Tribute to a legend |url=http://movies.rediff.com/report/2009/jun/29/a-k-lohithadas-tribute-to-a-legend.htm |url-status=live |archive-url=https://web.archive.org/web/20151222173555/http://movies.rediff.com/report/2009/jun/29/a-k-lohithadas-tribute-to-a-legend.htm |archive-date=22 December 2015 |access-date=19 December 2015 |work=[[Rediff.com]]}}</ref>
|-
! scope="row" | ''[[ಗೋಪುರ ವಾಸಲಿಲೆ]]''
| ಅಕಾರ್ಡಿಯನ್ ವಾದಕ
| ತಮಿಳು ಚಿತ್ರ; "ಕೆಲಾದಿ ಎನ್ ಪಾವಾಯೇ" ಹಾಡಿನಲ್ಲಿ ವಿಶೇಷ ಪಾತ್ರ
|<ref>{{cite news |last=Kurian |first=Shiba |date=20 May 2012 |title=Lady luck has not been kind to all Mollywood actors |url=http://timesofindia.indiatimes.com/entertainment/malayalam/movies/news/Lady-luck-has-not-been-kind-to-all-Mollywood-actors/articleshow/13298071.cms |url-status=live |archive-url=https://archive.today/20170610081159/http://timesofindia.indiatimes.com/entertainment/malayalam/movies/news/Lady-luck-has-not-been-kind-to-all-Mollywood-actors/articleshow/13298071.cms |archive-date=10 June 2017 |access-date=11 December 2015 |work=[[The Times of India]]}}</ref>
|-
! scope="row" | ''[[ಭರತಂ]]''
| ಕಲ್ಲೂರ್ "ಗೋಪಿ" ಗೋಪಿನಾಥನ್
|ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ
|<ref>{{cite news |last=Pillai |first=Radhika C |date=15 December 2013 |title=Mammooty and Mohanlal in Forbe's list |url=http://timesofindia.indiatimes.com/entertainment/malayalam/movies/news/Mammooty-and-Mohanlal-in-Forbes-list/articleshow/27407829.cms? |url-status=live |archive-url=https://web.archive.org/web/20160220090330/http://timesofindia.indiatimes.com/entertainment/malayalam/movies/news/Mammooty-and-Mohanlal-in-Forbes-list/articleshow/27407829.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ವಿಷ್ಣುಲೋಕಂ]]''
| ಶಂಕು
|
|<ref>{{cite news |last=Gauri |first=Deepa |date=10 April 2014 |title=Expat focus: T.A. Razak is scouting for talent in Dubai |url=http://www.khaleejtimes.com/article/20140410/ARTICLE/304109963/1057 |url-status=live |archive-url=https://web.archive.org/web/20151222113301/http://www.khaleejtimes.com/article/20140410/ARTICLE/304109963/1057 |archive-date=22 December 2015 |access-date=19 December 2015 |work=[[Khaleej Times]]}}</ref>
|-
! scope="row" | ''[[ವಸ್ತುಹಾರ]]''
| ವೇಣುಗೋಪಾಲ್
|
|<ref>{{cite news |last=<!--staff byline--> |date=16 March 2012 |title=Aravindan's Vasthuhara to be screened |url=http://www.thehindu.com/todays-paper/tp-national/tp-kerala/aravindans-vasthuhara-to-be-screened/article3001153.ece |url-status=live |archive-url=https://web.archive.org/web/20160220090251/http://www.thehindu.com/todays-paper/tp-national/tp-kerala/aravindans-vasthuhara-to-be-screened/article3001153.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಉಲ್ಲಾಡಕ್ಕಂ]]''
| ಡಾ. ಸನ್ನಿ
|
|<ref>{{cite news |last=Ranjithaa |date=14 June 2000 |title=Kamal joins the rat race |url=http://www.rediff.com/movies/2000/jun/14spice.htm |url-status=live |archive-url=https://web.archive.org/web/20160129003006/http://www.rediff.com/movies/2000/jun/14spice.htm |archive-date=29 January 2016 |access-date=19 December 2015 |work=[[Rediff.com]]}}</ref>
|-
! scope="row" | ''[[ಅಂಕಲ್ ಬನ್]]''
| ಚಾರ್ಲಿ ಚಾಕೋ
|
|<ref>{{cite news |last=Pillai |first=Radhika C |date=5 January 2015 |title=Actress Monica is getting married |url=http://timesofindia.indiatimes.com/entertainment/malayalam/movies/news/Actress-Monica-is-getting-married/articleshow/45759943.cms |url-status=live |archive-url=https://web.archive.org/web/20150108130217/http://timesofindia.indiatimes.com/entertainment/malayalam/movies/news/Actress-Monica-is-getting-married/articleshow/45759943.cms |archive-date=8 January 2015 |access-date=19 December 2015 |work=[[The Times of India]]}}</ref>
|-
! scope="row" | ''[[ಕಿಲುಕ್ಕಂ]]''
| ಜೋಜಿ
|
|<ref>{{cite news |last=Gauri |first=Deepa |date=7 November 2015 |title=Romance returns to Malayalam cinema |url=http://khaleejtimes.com/citytimes/south-stars/romance-returns-to-malayalam-cinema |url-status=live |archive-url=https://web.archive.org/web/20160115165342/http://khaleejtimes.com/citytimes/south-stars/romance-returns-to-malayalam-cinema |archive-date=15 January 2016 |access-date=19 December 2015 |work=[[Khaleej Times]]}}</ref>
|-
! scope="row" | ''[[ಕಿಳಕ್ಕುನರುಂ ಪಕ್ಷಿ]]''
| ಆನಂದ್ ಮೂರ್ತಿ
|
|<ref name="backto" />
|-
! scope="row" | ''[[ಅಭಿಮನ್ಯು]]''
| ಹರಿಕೃಷ್ಣನ್
|
|<ref>{{cite web |last=Moviebuzz (Sify) |date=19 May 2006 |title=Thalainagaram |url=http://www.sify.com/movies/thalainagaram-review-tamil-pclvUXecbjefa.html |url-status=dead |archive-url=https://web.archive.org/web/20160226173547/http://www.sify.com/movies/thalainagaram-review-tamil-pclvUXecbjefa.html |archive-date=26 February 2016 |access-date=26 February 2016 |website=[[Sify]]}}</ref>
|-
| rowspan="9" | 1992
! scope="row" | ''[[ಸದಯಂ]]''
| ಸತ್ಯನಾಧನ್
|
|<ref>{{cite news |last=Karthikeyan |first=Shruti |date=4 July 2014 |title=Filmmakers go 'behind bars' |url=http://timesofindia.indiatimes.com/entertainment/malayalam/movies/news/Filmmakers-go-behind-bars/articleshow/37904077.cms |url-status=live |archive-url=https://web.archive.org/web/20140728174744/http://timesofindia.indiatimes.com/entertainment/malayalam/movies/news/Filmmakers-go-behind-bars/articleshow/37904077.cms |archive-date=28 July 2014 |access-date=19 December 2015 |work=[[The Times of India]]}}</ref>
|-
! scope="row" | ''[[ಸೂರ್ಯ ಗಾಯತ್ರಿ]]''
| ಡಾ. ಬಾಲಸುಬ್ರಮಣಿಯನ್
|
|<ref>{{cite news |last=Kurian |first=Shiba |date=16 July 2012 |title=No more ragging woes for freshers at college |url=http://timesofindia.indiatimes.com/life-style/people/No-more-ragging-woes-for-freshers-at-college/articleshow/14951936.cms? |url-status=live |archive-url=https://web.archive.org/web/20120716215132/http://timesofindia.indiatimes.com/life-style/people/No-more-ragging-woes-for-freshers-at-college/articleshow/14951936.cms |archive-date=16 July 2012 |access-date=19 December 2015 |work=[[The Times of India]]}}</ref>
|-
! scope="row" | ''[[ಕಮಲದಳಂ]]''
| ನಂದಗೋಪನ್
|
|<ref>{{cite news |last=Gauri |first=Deepa |date=21 April 2015 |title=Dedication is key to success for Asha – Khaleej Times |url=http://www.khaleejtimes.com/article/20150421/ARTICLE/304219994/1057 |url-status=live |archive-url=https://web.archive.org/web/20151222110848/http://www.khaleejtimes.com/article/20150421/ARTICLE/304219994/1057 |archive-date=22 December 2015 |access-date=19 December 2015 |work=[[Khaleej Times]]}}</ref>
|-
! scope="row" | ''[[ಅಹಂ]]''
| ಸಿದ್ಧಾರ್ಥನ್
|
|<ref>{{cite news |last=K S |first=Aravind |date=22 January 2015 |title=In Retrospect |url=http://www.newindianexpress.com/entertainment/malayalam/In-Retrospect/2015/01/22/article2630485.ece |url-status=dead |archive-url=https://web.archive.org/web/20151222120239/http://www.newindianexpress.com/entertainment/malayalam/In-Retrospect/2015/01/22/article2630485.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ರಾಜಶಿಲ್ಪಿ]]''
| ಶಂಭು
|
|<ref name="sketch" />
|-
! scope="row" | ''[[ಯೋಧ]]''
| ತೈಪರಂಬಿಲ್ ಅಶೋಕನ್
|
|<ref>{{cite news |last=George |first=Anjana |date=16 November 2015 |title=I want to act with Mohanlal : Siddhartha Lama |url=http://timesofindia.indiatimes.com/entertainment/malayalam/movies/news/I-want-to-act-with-Mohanlal-Siddhartha-Lama/articleshow/49790893.cms? |url-status=live |archive-url=https://web.archive.org/web/20160220090505/http://timesofindia.indiatimes.com/entertainment/malayalam/movies/news/I-want-to-act-with-Mohanlal-Siddhartha-Lama/articleshow/49790893.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಅದ್ವೈತಂ]]''
| ಶಿವಪ್ರಸಾದ್
|
|<ref>{{cite news |last=Express News Service |date=2 September 2009 |title=No Onam gala; cinemas go dry |url=http://www.newindianexpress.com/entertainment/malayalam/article147328.ece? |url-status=dead |archive-url=https://web.archive.org/web/20160220090543/http://www.newindianexpress.com/entertainment/malayalam/article147328.ece |archive-date=20 February 2016 |access-date=19 December 2015 |work=[[The New Indian Express]]}}</ref>
|-
! scope="row" | ''[[ನಾಡೋಡಿ]]''
| ಸಚಿದಾನಂದನ್ ಮತ್ತು ಬಾಲಕೃಷ್ಣನ್ ಭಾಗವತರ್
|
|<ref>{{cite web |last=Amazon India |date=26 February 2016 |title=Nadodi |url=https://www.amazon.in/Nadodi-Mohanlal/dp/B00SH54C8Q |url-status=live |archive-url=https://web.archive.org/web/20160226163812/http://www.amazon.in/Nadodi-Mohanlal/dp/B00SH54C8Q |archive-date=26 February 2016 |access-date=26 February 2016}}</ref>
|-
! scope="row" | ''[[ವಿಯೆಟ್ನಾಂ ಕಾಲೋನಿ]]''
| ಜಿ. ಕೃಷ್ಣಮೂರ್ತಿ
|
|<ref>{{cite news |last=Krishna |first=Gayathri |date=30 June 2013 |title=Two decades later, Vietnam Colony set to be remade |url=http://archives.deccanchronicle.com/130630/entertainment-mollywood/article/two-decades-later-vietnam-colony-set-be-remade |url-status=dead |archive-url=https://web.archive.org/web/20151223122325/http://archives.deccanchronicle.com/130630/entertainment-mollywood/article/two-decades-later-vietnam-colony-set-be-remade |archive-date=23 December 2015 |access-date=19 December 2015 |work=[[Deccan Chronicle]]}}</ref>
|-
| rowspan="8" | 1993
! scope="row" | ''[[ಮಿಧುನಂ]]''
| ಸೇಧುಮಾಧವನ್
|
|<ref>{{cite news |last=Anand |first=Shilpa Nair |date=10 April 2014 |title=The way the cookie crumbles |url=http://www.thehindu.com/features/friday-review/the-way-the-cookie-crumbles/article5895841.ece |url-status=live |archive-url=https://web.archive.org/web/20160220093025/http://www.thehindu.com/features/friday-review/the-way-the-cookie-crumbles/article5895841.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ದೇವಾಸುರಂ]]''
| ಮಂಗಳಸ್ಸೇರಿ ನೀಲಕಂಠನ್
|
|<ref>{{cite news |last=Kurian |first=Shiba |date=2 April 2014 |title=Mohanlal shoots at Varikaserry Mana |url=http://timesofindia.indiatimes.com/entertainment/malayalam/movies/news/Mohanlal-shoots-at-Varikaserry-Mana/articleshow/33127108.cms? |url-status=live |archive-url=https://web.archive.org/web/20160220092652/http://timesofindia.indiatimes.com/entertainment/malayalam/movies/news/Mohanlal-shoots-at-Varikaserry-Mana/articleshow/33127108.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಬಟರ್ಫ್ಲೈಸ್]]''
| ಪ್ರಿನ್ಸ್
|
|<ref>{{cite news |last=Nair |first=Shoba |date=6 May 2005 |title=The Hollywood link |url=http://www.thehindu.com/thehindu/fr/2005/05/06/stories/2005050602600100.htm |url-status=dead |archive-url=https://web.archive.org/web/20160220092731/http://www.thehindu.com/thehindu/fr/2005/05/06/stories/2005050602600100.htm |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಮಾಯ ಮಯೂರಂ]]''
| ಕೃಷ್ಣನ್ ಉನ್ನಿ ಮತ್ತು ನರೇಂದ್ರನ್
|
|<ref>{{cite news |last=Pradeep |first=K. |date=27 February 2014 |title=Standing the test of time |url=http://www.thehindu.com/features/cinema/standing-the-test-of-time/article5732192.ece |url-status=live |archive-url=https://web.archive.org/web/20160220093242/http://www.thehindu.com/features/cinema/standing-the-test-of-time/article5732192.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಗಂಧರ್ವಂ]]''
| ಸ್ಯಾಮ್ಯುಯೆಲ್ ಅಲೆಕ್ಸಾಂಡರ್
|
|<ref>{{cite news |last=Kumar |first=P. K. Ajith |date=13 June 2013 |title=Rolling out comedy |url=http://www.thehindu.com/features/cinema/cinema-reviews/rolling-out-comedy/article4810058.ece |url-status=live |archive-url=https://web.archive.org/web/20160220092938/http://www.thehindu.com/features/cinema/cinema-reviews/rolling-out-comedy/article4810058.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಚೆಂಕೋಲ್]]''
| ಸೇತುಮಾಧವನ್
|
|<ref>{{cite news |last=Express News Service |date=22 September 2011 |title=A musical tribute to Johnson Master |url=http://www.newindianexpress.com/cities/kochi/article365809.ece |url-status=dead |archive-url=https://web.archive.org/web/20151222101115/http://www.newindianexpress.com/cities/kochi/article365809.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಕಳಿಪ್ಪಟ್ಟಂ]]''
| ವೇಣು
|
|<ref>{{cite news |last=സ്വന്തം ലേഖകൻ |date=12 November 2015 |title=കളിപ്പാട്ടമായ് കൺമണി നിന്റെ മുന്നിൽ... |url=http://www.manoramaonline.com/music/songs-of-the-day/kalippattamy-kanmani-song-in-the-movie-kalippattam.html |url-status=live |archive-url=https://web.archive.org/web/20160216153038/http://www.manoramaonline.com/music/songs-of-the-day/kalippattamy-kanmani-song-in-the-movie-kalippattam.html |archive-date=16 February 2016 |access-date=19 December 2015 |work=[[Malayala Manorama]]}}</ref>
|-
! scope="row" | ''[[ಮಣಿಚಿತ್ರತಾಳು]]''
| ಡಾ. ಸನ್ನಿ ಜೋಸೆಫ್
| 200 ನೇ ಚಿತ್ರ
|<ref>{{cite news |last1=Broadbent |first1=Giles |last2=Scott |first2=Patrick |date=30 October 2015 |title=How many of these 100 best horror films have you seen? |url=http://www.wharf.co.uk/whats-on/film-news/how-many-100-best-horror-10357350 |url-status=live |archive-url=https://web.archive.org/web/20151222110732/http://www.wharf.co.uk/whats-on/film-news/how-many-100-best-horror-10357350 |archive-date=22 December 2015 |access-date=19 December 2015 |work=[[The Wharf (newspaper)|The Wharf]]}}</ref>
|-
| rowspan="6" | 1994
! scope="row" | ''[[ಪವಿತ್ರಂ]]''
| ಉನ್ನಿಕೃಷ್ಣನ್
|
|<ref>{{cite news |last=Pradeep |first=K. |date=16 October 2015 |title=Retrace a worthy path |url=http://www.thehindu.com/features/metroplus/society/documentary-filmmaker-binuraj-kalapeetom/article7770306.ece |url-status=live |archive-url=https://web.archive.org/web/20160220093325/http://www.thehindu.com/features/metroplus/society/documentary-filmmaker-binuraj-kalapeetom/article7770306.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ತೇನ್ಮಾವಿನ್ ಕೊಂಬತ್]]''
| ಮಣಿಕ್ಯನ್
|
|<ref>{{cite news |last=Kumar |first=P. K. Ajith |date=1 July 2007 |title=Changing dynamics of screenplay |url=http://www.thehindu.com/todays-paper/tp-national/tp-kerala/changing-dynamics-of-screenplay/article1864285.ece |url-status=live |archive-url=https://web.archive.org/web/20160220092806/http://www.thehindu.com/todays-paper/tp-national/tp-kerala/changing-dynamics-of-screenplay/article1864285.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಪಿಂಗಾಮಿ]]''
| ಕ್ಯಾಪ್ಟನ್ ವಿಜಯ್ ಮೇನನ್
|
|<ref>{{cite news |last=Nambidi |first=Parvathy |date=19 September 2013 |title=A love story with a difference |url=http://www.newindianexpress.com/entertainment/malayalam/A-love-story-with-a-difference/2013/09/19/article1791830.ece |url-status=dead |archive-url=https://web.archive.org/web/20151222091713/http://www.newindianexpress.com/entertainment/malayalam/A-love-story-with-a-difference/2013/09/19/article1791830.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಪಕ್ಷೆ]]''
| ಬಾಲಚಂದ್ರನ್
|
|<ref>{{cite news |last=Krishnaraj |first=Prasanna |date=7 February 2013 |title=My five... |url=http://www.thehindu.com/features/metroplus/my-five/article4389319.ece |url-status=live |archive-url=https://web.archive.org/web/20160220093547/http://www.thehindu.com/features/metroplus/my-five/article4389319.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಗಂಧೀವಂ]]''
| ಕ್ಯಾಪ್ಟನ್
| ತೆಲುಗು ಚಿತ್ರ; "ಗೋರುವಂಕ ವಲಗನೆ" ಹಾಡಿನಲ್ಲಿ ವಿಶೇಷ ಪಾತ್ರ
|<ref>{{cite news |last=Indo-Asian News Service |date=26 August 2015 |title=Mohanlal to re-enter Telugu films with 'Nuvve Na Pranamani' |url=http://www.ibnlive.com/news/movies/mohanlal-to-re-enter-telugu-films-with-nuvve-na-pranamani-1051635.html |url-status=live |archive-url=https://web.archive.org/web/20160128055505/http://www.ibnlive.com/news/movies/mohanlal-to-re-enter-telugu-films-with-nuvve-na-pranamani-1051635.html |archive-date=28 January 2016 |access-date=11 December 2015 |work=[[IBN Live]]}}</ref>
|-
! scope="row" | ''[[ಮಿನ್ನಾರಂ]]''
| ಬಾಬಿ
|
|<ref>{{cite news |last=Vasudevan |first=Aishwarya |date=13 March 2012 |title=Priyadarshan – Mohanlal: Best films of the duo |url=http://timesofindia.indiatimes.com/entertainment/malayalam/movies/Priyadarshan-Mohanlal-Best-films-of-the-duo/photostory/48783890.cms |url-status=live |archive-url=https://web.archive.org/web/20160304152231/http://timesofindia.indiatimes.com/entertainment/malayalam/movies/Priyadarshan-Mohanlal-Best-films-of-the-duo/photostory/48783890.cms |archive-date=4 March 2016 |access-date=4 March 2016 |work=[[The Times of India]]}}</ref>
|-
| rowspan="5" | 1995
! scope="row" | ''[[ನಿರ್ಣಯಂ]]''
| ಡಾ. ರಾಯ್ ಅಲೆಕ್ಸ್
|
|<ref>{{cite news |last=Indo-Asian News Service |date=10 May 2013 |title=Sangeeth Sivan: Would love to work with Mohanlal |url=http://movies.ndtv.com/bollywood/sangeeth-sivan-would-love-to-work-with-mohanlal-633124 |url-status=live |archive-url=https://web.archive.org/web/20151222104905/http://movies.ndtv.com/bollywood/sangeeth-sivan-would-love-to-work-with-mohanlal-633124 |archive-date=22 December 2015 |access-date=19 December 2015 |work=[[NDTV]]}}</ref>
|-
! scope="row" | ''[[ಸ್ಪಡಿಕಂ]]''
| ಥಾಮಸ್ "ಆಡು ಥೋಮ" ಚಾಕೋ
|
|<ref>{{cite news |last=Times News Network |date=20 February 2015 |title=Spadikam to re- release in digital format ? |url=http://timesofindia.indiatimes.com/entertainment/malayalam/movies/news/Spadikam-to-re-release-in-digital-format-/articleshow/46311319.cms? |url-status=live |archive-url=https://web.archive.org/web/20160220093417/http://timesofindia.indiatimes.com/entertainment/malayalam/movies/news/Spadikam-to-re-release-in-digital-format-/articleshow/46311319.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ತಾಚೋಳಿ ವರ್ಘೀಸ್ ಚೇಕವರ್]]''
| ತಾಚೋಳಿ ವರ್ಘೀಸ್ ಚೇಕವರ್
|
|<ref>{{cite news |last=Prakash |first=Asha |date=27 August 2013 |title=Mollywood packs a punch with martial arts |url=http://timesofindia.indiatimes.com/entertainment/malayalam/movies/news/Mollywood-packs-a-punch-with-martial-arts/articleshow/22067426.cms |url-status=live |archive-url=https://web.archive.org/web/20160220093457/http://timesofindia.indiatimes.com/entertainment/malayalam/movies/news/Mollywood-packs-a-punch-with-martial-arts/articleshow/22067426.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಮಂತ್ರಿಕಂ]]''
| ಸ್ಟೀಫನ್ ರೊನಾಲ್ಡ್ / ಆಲ್ಬಿ ರೋಮಿಯೋ ಹಿಗುಟ್ಟಾ
|
|<ref>{{cite news |last=Anand |first=Shilpa Nair |date=5 June 2013 |title=On the super hero trail |url=http://www.thehindu.com/features/cinema/on-the-super-hero-trail/article4784550.ece |url-status=live |archive-url=https://web.archive.org/web/20160220093636/http://www.thehindu.com/features/cinema/on-the-super-hero-trail/article4784550.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಅಗ್ನಿದೇವನ್]]''
| ಅನಿಯನ್ಕುಟ್ಟನ್ / ರವಿ ವರ್ಮಾ
|
|<ref>{{cite news |last=Express News Service |date=11 February 2010 |title=An acknowledged prince among lyricists |url=http://www.newindianexpress.com/states/kerala/article180069.ece |url-status=dead |archive-url=https://web.archive.org/web/20151222120507/http://www.newindianexpress.com/states/kerala/article180069.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
| rowspan="2" | 1996
! scope="row" | ''[[ಕಾಲಪಾನಿ]]''
| ಡಾ. ಗೋವರ್ಧನ್ ಮೇನನ್
|
|<ref>{{cite news |last=Rajpal |first=Roktim |date=21 May 2015 |title=Mohanlal turns 55: 8 performances that prove he is the most bankable, successful star of Indian cinema |url=http://www.ibnlive.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html |url-status=live |archive-url=https://web.archive.org/web/20160310045435/http://www.ibnlive.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html |archive-date=10 March 2016 |access-date=29 February 2016 |work=[[IBN Live]]}}</ref>
|-
! scope="row" | ''[[ದಿ ಪ್ರಿನ್ಸ್]]''
| ಜೀವಾ
|
|<ref>{{cite news |last=B S |first=Shibu |date=9 September 2011 |title=No M&M this Onam |url=http://www.newindianexpress.com/entertainment/malayalam/article359915.ece |url-status=dead |archive-url=https://web.archive.org/web/20151224231632/http://www.newindianexpress.com/entertainment/malayalam/article359915.ece |archive-date=24 December 2015 |access-date=19 December 2015 |work=[[The New Indian Express]]}}</ref>
|-
| rowspan="6" | 1997
! scope="row" | ''[[ಇರುವರ್]]''
| ಆನಂದನ್
| ತಮಿಳು ಚಿತ್ರ
|<ref>{{cite news |last=James |first=Anu |date=28 February 2015 |title=Mani Ratnam-AR Rahman: 'Roja', 'Bombay', 'Iruvar' and Other Tamil Films of the Duo with Hit Songs |url=http://www.ibtimes.co.in/mani-ratnam-ar-rahman-roja-bombay-iruvar-other-tamil-films-duo-hit-songs-624822 |url-status=live |archive-url=https://web.archive.org/web/20151222084447/http://www.ibtimes.co.in/mani-ratnam-ar-rahman-roja-bombay-iruvar-other-tamil-films-duo-hit-songs-624822 |archive-date=22 December 2015 |access-date=11 December 2015 |work=[[International Business Times]]}}</ref>
|-
!scope="row" | ''[[ವರ್ಣಪಕಿಟ್ಟು]]''
| ಸನ್ನಿ ಪಾಲಮಟ್ಟಂ
|
|<ref>{{cite news |last=Hindu |date=18 March 2011 |title=Regional channels |url=http://www.thehindu.com/todays-paper/tp-features/tp-fridayreview/regional-channels/article1548401.ece |url-status=live |archive-url=https://web.archive.org/web/20160220093722/http://www.thehindu.com/todays-paper/tp-features/tp-fridayreview/regional-channels/article1548401.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಚಂದ್ರಲೇಖಾ]]''
| ಅಪ್ಪುಕುಟ್ಟನ್ / ಆಲ್ಫಿ
|
|<ref>{{cite news |last=Narayan |first=Shoba |date=18 January 2011 |title=Why do Arabic rhythms sound so sweet to Indian ears? |url=http://www.thenational.ae/thenationalconversation/comment/why-do-arabic-rhythms-sound-so-sweet-to-indian-ears |url-status=dead |archive-url=https://web.archive.org/web/20151222095758/http://www.thenational.ae/thenationalconversation/comment/why-do-arabic-rhythms-sound-so-sweet-to-indian-ears |archive-date=22 December 2015 |access-date=19 December 2015 |work=[[The National (Abu Dhabi)|The National]]}}</ref>
|-
! scope="row" | ''[[ಗುರು]]''
| ರಘುರಾಮನ್
|
|<ref>{{cite news |last=Times News Network |date=16 July 2015 |title=Guru was nominated for the Oscars |url=http://timesofindia.indiatimes.com/entertainment/malayalam/movies/did-you-know-/Guru-was-nominated-for-the-Oscars/articleshow/48095864.cms |url-status=live |archive-url=https://web.archive.org/web/20160219150322/http://timesofindia.indiatimes.com/entertainment/malayalam/movies/did-you-know-/Guru-was-nominated-for-the-Oscars/articleshow/48095864.cms |archive-date=19 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಒರು ಯಾತ್ರಮೊಳಿ]]''
| ಗೋವಿಂದನ್ಕುಟ್ಟಿ
|
|<ref name="yathramozhi">{{cite news |last=Sidhardhan |first=Sanjith |date=19 November 2012 |title=When Mollywood meets Kollywood |url=http://timesofindia.indiatimes.com/entertainment/malayalam/movies/news/When-Mollywood-meets-Kollywood/articleshow/17266196.cms? |url-status=live |archive-url=https://web.archive.org/web/20160220093805/http://timesofindia.indiatimes.com/entertainment/malayalam/movies/news/When-Mollywood-meets-Kollywood/articleshow/17266196.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಆರಾಂ ತಂಪುರನ್]]''
| ಜಗನ್ನಾಧನ್
|
|<ref>{{cite news |last=M |first=Athira |date=26 September 2013 |title=Going great guns |url=http://www.thehindu.com/features/cinema/going-great-guns/article5171425.ece |url-status=live |archive-url=https://web.archive.org/web/20160219150642/http://www.thehindu.com/features/cinema/going-great-guns/article5171425.ece |archive-date=19 February 2016 |access-date=19 December 2015 |work=[[The Hindu]]}}</ref>
|-
| rowspan="5" | 1998
! scope="row" | ''[[ಕನ್ಮದಂ]]''
| ವಿಶ್ವನಾಥನ್
|
|<ref>{{cite news |last=Menon |first=Neelima |date=5 July 2009 |title=That thin line between sanity and lunacy |url=http://www.newindianexpress.com/magazine/article91020.ece |url-status=dead |archive-url=https://web.archive.org/web/20151224231206/http://www.newindianexpress.com/magazine/article91020.ece |archive-date=24 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಹರಿಕೃಷ್ಣನ್ಸ್]]''
| ವಕೀಲ ಕೃಷ್ಣನ್
|
|<ref>{{cite news |last=Times News Network |date=8 March 2015 |title=Harikrishnan's multiple climaxes |url=http://timesofindia.indiatimes.com/entertainment/malayalam/movies/did-you-know-/Harikrishnans-multiple-climaxes/articleshow/46493185.cms |url-status=live |archive-url=https://web.archive.org/web/20150602204857/http://timesofindia.indiatimes.com/entertainment/malayalam/movies/did-you-know-/Harikrishnans-multiple-climaxes/articleshow/46493185.cms |archive-date=2 June 2015 |access-date=19 December 2015 |work=[[The Times of India]]}}</ref>
|-
! scope="row" | ''[[ಸಮ್ಮರ್ ಇನ್ ಬೆತ್ಲೆಹೆಮ್]]''
| ನಿರಂಜನ್
|ಅತಿಥಿ ಪಾತ್ರ
|<ref>{{cite news |last=V. P |first=Nicy |date=4 November 2014 |title=Manju Warrier's New Look from Mohanlal-Sathyan Anthikkad Film is Out [PHOTOS] |url=http://www.ibtimes.co.in/manju-warriers-new-look-mohanlal-sathyan-anthikkad-film-out-photos-613056 |url-status=live |archive-url=https://web.archive.org/web/20151121162934/http://www.ibtimes.co.in/manju-warriers-new-look-mohanlal-sathyan-anthikkad-film-out-photos-613056 |archive-date=21 November 2015 |access-date=19 December 2015 |work=[[International Business Times]]}}</ref>
|-
! scope="row" | ''[[ರಕ್ತಸಾಕ್ಷಿಕಳ್ ಸಿಂದಾಬಾದ್]]''
| ಶಿವ ಸುಬ್ರಹ್ಮಣ್ಯ ಅಯ್ಯರ್
|
|<ref>{{cite news |last=Express News Service |date=3 March 2009 |title='Making political films no longer possible' |url=http://www.newindianexpress.com/entertainment/tamil/article42460.ece |url-status=dead |archive-url=https://web.archive.org/web/20151222081800/http://www.newindianexpress.com/entertainment/tamil/article42460.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಅಯಾಲ್ ಕಧಾ ಎಳುತುಕಯಾನು]]''
| ಸಾಗರ್ ಕೊಟ್ಟಪ್ಪುರಂ / ವಿದ್ಯಾಸಾಗರ್
|
|<ref>{{cite news |last=Nayar |first=Parvathy S |date=21 July 2012 |title=Bhavana to do an Urmila in her next? |url=http://timesofindia.indiatimes.com/entertainment/kannada/movies/news/Bhavana-to-do-an-Urmila-in-her-next/articleshow/15055365.cms |url-status=live |archive-url=https://web.archive.org/web/20160219151701/http://timesofindia.indiatimes.com/entertainment/kannada/movies/news/Bhavana-to-do-an-Urmila-in-her-next/articleshow/15055365.cms |archive-date=19 February 2016 |access-date=19 December 2015 |work=[[The Times of India]]}}</ref>
|-
| rowspan="3" | 1999
! scope="row" | ''[[ಉಸ್ತಾದ್]]''
| ಪರಮೇಶ್ವರನ್ / ಉಸ್ತಾದ್
|
|<ref>{{cite news |last=Kumar |first=P. K. Ajith |date=3 September 2013 |title=How the comeback was scripted |url=http://www.thehindu.com/todays-paper/tp-national/tp-kerala/how-the-comeback-was-scripted/article5087829.ece |url-status=live |archive-url=https://web.archive.org/web/20160226174708/http://www.thehindu.com/todays-paper/tp-national/tp-kerala/how-the-comeback-was-scripted/article5087829.ece |archive-date=26 February 2016 |access-date=26 February 2016 |work=[[The Hindu]]}}</ref>
|-
! scope="row" | ''[[ಒಲಿಂಪಿಯನ್ ಆಂಥೋನಿ ಆಡಮ್]]''
| ಎಸ್ಪಿ ಆಂಥೋನಿ ಚಕ್ಕುಮ್ಮೂಟ್ಟಿಲ್ ವರ್ಗೀಸ್ ಐಪಿಎಸ್
|
|<ref>{{cite news |last=Kurian |first=Shiba |date=19 June 2014 |title=Mohanlal gets a surprise visitor in the US |url=http://timesofindia.indiatimes.com/entertainment/malayalam/movies/news/Mohanlal-gets-a-surprise-visitor-in-the-US/articleshow/36815656.cms |url-status=live |archive-url=https://web.archive.org/web/20160219150841/http://timesofindia.indiatimes.com/entertainment/malayalam/movies/news/Mohanlal-gets-a-surprise-visitor-in-the-US/articleshow/36815656.cms |archive-date=19 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ವನಪ್ರಸ್ಥಂ]]''
| ಕುಂಜಿಕುಟ್ಟನ್
|ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ
|<ref>{{cite news |last=Ramachandran |first=Mythily |date=7 December 2013 |title=Diff: a Malayalam film that dances with drama |url=http://gulfnews.com/life-style/celebrity/diff-a-malayalam-film-that-dances-with-drama-1.1264154 |url-status=live |archive-url=https://web.archive.org/web/20151222112842/http://gulfnews.com/life-style/celebrity/diff-a-malayalam-film-that-dances-with-drama-1.1264154 |archive-date=22 December 2015 |access-date=19 December 2015 |work=[[Gulf News]]}}</ref>
|-
| rowspan="4" | 2000
! scope="row" | ''[[ನರಸಿಂಹಂ]]''
| ಪೂವಳ್ಳಿ ಇಂದ್ರಚೂಡನ್
|
|<ref>{{cite news |last=James |first=Anu |date=23 January 2016 |title=Narasimham returns: Mohanlal starrer to be re-released in 7 theatres on Republic Day |url=http://www.ibtimes.co.in/narasimham-returns-mohanlal-starrer-be-re-released-7-theatres-republic-day-664264 |url-status=live |archive-url=https://web.archive.org/web/20160130092954/http://www.ibtimes.co.in/narasimham-returns-mohanlal-starrer-be-re-released-7-theatres-republic-day-664264 |archive-date=30 January 2016 |access-date=26 February 2016 |work=[[International Business Times]]}}</ref>
|-
! scope="row" | ''[[ಲೈಫ್ ಈಸ್ ಬ್ಯೂಟಿಫುಲ್]]''
| ವಿನಯ ಚಂದ್ರನ್
|
|<ref>{{cite web |last1=Warrier |first1=Shobha |date=12 July 2000 |title='Life itself is a daily celebration' |url=http://www.rediff.com/entertai/2000/jul/12lal.htm |url-status=live |archive-url=https://web.archive.org/web/20150521061130/http://www.rediff.com/entertai/2000/jul/12lal.htm |archive-date=21 May 2015 |access-date=26 February 2016 |work=[[Rediff.com]]}}</ref>
|-
! scope="row" | ''[[ಶ್ರಾದ್ಧ]]''
| ಗಂಗಾಪ್ರಸಾದ್ ಐಪಿಎಸ್
|
|<ref name="year2000">{{cite web |last=Ayyappan |first=R |date=24 January 2001 |title=Sleaze time, folks! |url=http://www.rediff.com/movies/2001/jan/24mallu.htm |url-status=live |archive-url=https://web.archive.org/web/20100411035302/http://www.rediff.com/movies/2001/jan/24mallu.htm |archive-date=11 April 2010 |access-date=26 February 2016 |work=[[Rediff.com]]}}</ref>
|-
! scope="row" | ''[[ದೇವದೂತನ್]]''
| ವಿಶಾಲ್ ಕೃಷ್ಣಮೂರ್ತಿ
|
|<ref name="year2000" />
|-
| rowspan="5" | 2001
! scope="row" | ''[[ಕಕ್ಕಕುಯಿಲ್]]''
| ಶಿವರಾಮನ್
|
|<ref>{{cite news |last=Karthikeyan |first=Shruti |date=29 April 2015 |title=Amala was happy shooting for Lailaa O Lailaa |url=http://timesofindia.indiatimes.com/entertainment/malayalam/movies/news/Amala-was-happy-shooting-for-Lailaa-O-Lailaa/articleshow/47085153.cms |url-status=live |archive-url=https://web.archive.org/web/20160219151228/http://timesofindia.indiatimes.com/entertainment/malayalam/movies/news/Amala-was-happy-shooting-for-Lailaa-O-Lailaa/articleshow/47085153.cms |archive-date=19 February 2016 |access-date=15 December 2015 |work=[[The Times of India]]}}</ref>
|-
! scope="row" | ''[[ರಾವಣಪ್ರಭು]]''
| ಮಂಗಳಸ್ಸೇರಿ ನೀಲಕಂಠನ್ ಮತ್ತು ಕಾರ್ತಿಕೇಯನ್
|
|<ref>{{cite news |last=Zachariah |first=Ammu |date=29 July 2013 |title=Like father, like son |url=http://timesofindia.indiatimes.com/entertainment/malayalam/movies/news/Like-father-like-son/articleshow/21423588.cms |url-status=live |archive-url=https://web.archive.org/web/20160219151442/http://timesofindia.indiatimes.com/entertainment/malayalam/movies/news/Like-father-like-son/articleshow/21423588.cms |archive-date=19 February 2016 |access-date=15 December 2015 |work=[[The Times of India]]}}</ref>
|-
! scope="row" | ''[[ಪ್ರಜಾ]]''
| ಜಾಕಿರ್ ಅಲಿ ಹುಸೇನ್
|
|<ref>{{cite news |last=Karthikeyan |first=Shruti |date=23 August 2014 |title=Mammootty and Mohanlal to share screen space? |url=http://timesofindia.indiatimes.com/Entertainment/Malayalam/Movies/News/Mammootty-and-Mohanlal-to-share-screen-space/articleshow/40694989.cms |url-status=live |archive-url=https://web.archive.org/web/20140828192648/http://timesofindia.indiatimes.com/Entertainment/Malayalam/Movies/News/Mammootty-and-Mohanlal-to-share-screen-space/articleshow/40694989.cms |archive-date=28 August 2014 |access-date=15 December 2015 |work=[[The Times of India]]}}</ref>
|-
! scope="row" | ''[[ಅಚ್ಚನೆಯನೆನಿಕ್ಕಿಷ್ಟಂ]]''
| ಮಹಾದೇವನ್
| rowspan="2" |ಅತಿಥಿ ಪಾತ್ರ
|<ref>{{cite news |last=PM |date=16 September 2002 |title=Ready with Vasanthamalika |url=http://www.thehindu.com/thehindu/mp/2002/09/16/stories/2002091600250400.htm |url-status=dead |archive-url=https://web.archive.org/web/20160219153056/http://www.thehindu.com/thehindu/mp/2002/09/16/stories/2002091600250400.htm |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ಉನ್ನತಂಗಳಿಲ್]]''
| ವಿವೇಕ್
|<ref>{{cite news |last=C. |first=B. |date=18 March 2002 |title=From the ramp to the screen |url=http://www.thehindu.com/thehindu/mp/2002/03/18/stories/2002031800940200.htm |url-status=dead |archive-url=https://web.archive.org/web/20160219153150/http://www.thehindu.com/thehindu/mp/2002/03/18/stories/2002031800940200.htm |archive-date=19 February 2016 |access-date=15 December 2015 |work=[[The Hindu]]}}</ref>
|-
| rowspan="4" | 2002
! scope="row" | ''[[ಕಂಪನಿ]]''
| ಐಜಿ ವೀರಪ್ಪಳ್ಳಿ ಶ್ರೀನಿವಾಸನ್ ಐಪಿಎಸ್
| ಹಿಂದಿ ಚಿತ್ರ
|<ref>{{cite news |last=Ayaz |first=Shaikh |date=29 April 2012 |title=Mohanlal, the 'Company' actor |url=http://www.newindianexpress.com/entertainment/malayalam/article390773.ece |url-status=dead |archive-url=https://web.archive.org/web/20151222085635/http://www.newindianexpress.com/entertainment/malayalam/article390773.ece |archive-date=22 December 2015 |access-date=11 December 2015 |work=[[The New Indian Express]]}}</ref>
|-
! scope="row" | ''[[ಒನ್ನಾಮನ್]]''
| ರವಿಶಂಕರ್
|
|<ref>{{cite web |last=Iype |first=George |date=23 April 2002 |title=Mohanlal's Company's hero in Kerala |url=http://www.rediff.com/entertai/2002/apr/23mohan.htm |url-status=live |archive-url=https://web.archive.org/web/20160105191537/http://www.rediff.com/entertai/2002/apr/23mohan.htm |archive-date=5 January 2016 |access-date=15 December 2015 |work=[[Rediff.com]]}}</ref>
|-
! scope="row" | ''[[ತಂಡವಂ]]''
| ಕಾಶಿನಾಥನ್
|
|<ref>{{cite news |last=Joseph |first=Mini K. |date=3 September 2002 |title=Engine oil powers Mohanlal movie, and vice versa |url=http://timesofindia.indiatimes.com/city/thiruvananthapuram/Engine-oil-powers-Mohanlal-movie-and-vice-versa/articleshow/21090328.cms |url-status=live |archive-url=https://web.archive.org/web/20160219152803/http://timesofindia.indiatimes.com/city/thiruvananthapuram/Engine-oil-powers-Mohanlal-movie-and-vice-versa/articleshow/21090328.cms |archive-date=19 February 2016 |access-date=15 December 2015 |work=[[The Times of India]]}}</ref>
|-
! scope="row" | ''[[ಚತುರಂಗಂ]]''
| ಆಟಿಪ್ರಾಕಲ್ ಜಿಮ್ಮಿ ಜಾಕೋಬ್
|
|<ref>{{cite web |last=Moviebuzz (Sify) |date=25 December 2002 |title=Review: Chathurangam |url=http://www.sify.com/movies/chathurangam-review-malayalam-pclurfibgahdh.html |url-status=dead |archive-url=https://web.archive.org/web/20151224070756/http://www.sify.com/movies/chathurangam-review-malayalam-pclurfibgahdh.html |archive-date=24 December 2015 |access-date=15 December 2015 |website=[[Sify]]}}</ref>
|-
| rowspan="5" | 2003
! scope="row" | ''[[ಪಾಪ್ ಕಾರ್ನ್]]''
| ವಿಕ್ರಮಾದಿತ್ಯ
| ತಮಿಳು ಚಿತ್ರ
|<ref>{{cite news |last=Kamath |first=Sudhish |date=23 January 2002 |title=Pop goes Nasser's carnival |url=http://www.thehindu.com/lf/2002/01/23/stories/2002012300400200.htm |url-status=dead |archive-url=https://web.archive.org/web/20160219142013/http://www.thehindu.com/lf/2002/01/23/stories/2002012300400200.htm |archive-date=19 February 2016 |access-date=11 December 2015 |work=[[The Hindu]]}}</ref>
|-
! scope="row" | ''[[ಮಿಸ್ಟರ್ ಬ್ರಹ್ಮಚಾರಿ]]''
| ಆನಂದನ್ ತಂಪಿ
|
|<ref>{{cite web |last=Warrier |first=Shobha |date=26 April 2003 |title='I may be the first actor brand of pickles!' |url=http://www.rediff.com/movies/2003/apr/26mohan.htm |url-status=live |archive-url=https://web.archive.org/web/20160105191108/http://www.rediff.com/movies/2003/apr/26mohan.htm |archive-date=5 January 2016 |access-date=15 December 2015 |work=[[Rediff.com]]}}</ref>
|-
! scope="row" | ''[[ಕಿಲಿಚುಂದನ್ ಮಂಪಳಂ]]''
| ಅಬ್ದುಲ್ ಖಾದರ್
|
|<ref>{{cite web |last1=Warrier |first1=Shobha |last2=Riti |first2=M D |date=19 April 2004 |title='Filmstars should not join politics' |url=http://www.rediff.com/movies/2004/apr/18soundarya.htm |url-status=live |archive-url=https://web.archive.org/web/20160105121944/http://www.rediff.com/movies/2004/apr/18soundarya.htm |archive-date=5 January 2016 |access-date=15 December 2015 |work=[[Rediff.com]]}}</ref>
|-
! scope="row" | ''[[ಬಾಲೆಟ್ಟನ್]]''
| ಅತನಿಪ್ಪರಂಬಿಲ್ ಬಾಲಚಂದ್ರನ್
|
|<ref>{{cite news |last=Kumar |first=P. K. Ajith |date=29 September 2012 |title=Shahid told simple tales |url=http://www.thehindu.com/news/national/kerala/shahid-told-simple-tales/article3946183.ece |url-status=live |archive-url=https://web.archive.org/web/20160219152535/http://www.thehindu.com/news/national/kerala/shahid-told-simple-tales/article3946183.ece |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ಹರಿಹರನ್ ಪಿಲ್ಲೈ ಹ್ಯಾಪಿ ಆಣು]]''
| ಹರಿಹರನ್ ಪಿಲ್ಲೈ
|
|<ref>{{cite news |last=Abhijath |first=Ram |date=27 November 2003 |title=Short-lived happiness |url=https://www.thehindu.com/todays-paper/tp-features/tp-metroplus/short-lived-happiness/article28457664.ece |access-date=15 December 2015 |work=[[The Hindu]]}}</ref>
|-
| rowspan="6" | 2004
! scope="row" | ''[[ವಾಮನಪುರಂ ಬಸ್ ರೂಟ್]]''
| ಲೆವರ್ ಜಾನಿ
|
|<ref>{{cite news |last=Pillai |first=Sreedhar |date=19 January 2004 |title=Mohanlal turns NRI |url=http://www.thehindu.com/thehindu/mp/2004/01/19/stories/2004011900260200.htm |url-status=dead |archive-url=https://web.archive.org/web/20160219152441/http://www.thehindu.com/thehindu/mp/2004/01/19/stories/2004011900260200.htm |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ವಿಸ್ಮಯತ್ತುಂಬತು]]''
| ಶ್ರೀಕುಮಾರ್
|
|<ref>{{cite web |last=Moviebuzz (Sify) |date=10 April 2004 |title=Vismayathumbathu |url=http://www.sify.com/movies/vismayathumbathu-review-malayalam-pclv2digcbjhj.html |url-status=dead |archive-url=https://web.archive.org/web/20151121134325/http://www.sify.com/movies/vismayathumbathu-review-malayalam-pclv2digcbjhj.html |archive-date=21 November 2015 |access-date=26 February 2016 |website=[[Sify]]}}</ref>
|-
! scope="row" | ''[[ಪ್ರೀತಿ]]''
| ಮೋಹನ್ ನಾಯರ್
| ಕನ್ನಡ ಚಿತ್ರ; ಅತಿಥಿ ಪಾತ್ರ
|<ref>{{cite web |last=Vijayasarathy |first=R.G. |date=2 July 2004 |title=No homework for me: Mohanlal |url=http://www.sify.com/movies/malayalam/interview.php?id=13512329&cid=2406 |url-status=dead |archive-url=https://web.archive.org/web/20040816002022/http://sify.com/movies/malayalam/interview.php?id=13512329&cid=2406 |archive-date=16 August 2004 |access-date=25 February 2016 |website=[[Sify]]}}</ref>
|-
! scope="row" | ''[[ವಾಂಟೆಡ್]]''
| ನಾರಾಯಣ ಸ್ವಾಮಿ ಐಪಿಎಸ್
|
|<ref>{{Cite web |date=17 July 2004 |title=Review: (2004) |url=https://www.sify.com/movies/wanted-review-malayalam-pclv46cfbhfhd.html |url-status=dead |archive-url=https://web.archive.org/web/20210818210537/https://www.sify.com/movies/wanted-review-malayalam-pclv46cfbhfhd.html |archive-date=18 August 2021 |work=Sify}}</ref>
|-
! scope="row" | ''[[ನಟ್ಟುರಾಜವು]]''
| ಪುಳಿಕ್ಕಟ್ಟಿಲ್ ಚಾರ್ಲಿ
|
|<ref>{{cite news |last=Krishnakumar |first=G. |date=11 August 2004 |title=Hoping for a box office revival |url=http://www.thehindu.com/lf/2004/08/11/stories/2004081100930200.htm |url-status=dead |archive-url=https://web.archive.org/web/20160219152323/http://www.thehindu.com/lf/2004/08/11/stories/2004081100930200.htm |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ಮಂಬಳಕ್ಕಾಲಂ]]''
| ಪುರಮನಾಯಿಲ್ ಚಂದ್ರನ್
|
|<ref>{{cite web |last=Moviebuzz (Sify) |date=3 November 2004 |title='Aroma' Mani's big gamble |url=http://www.sify.com/movies/aroma-mani-s-big-gamble-news-malayalam-kkfvFmeageasi.html |url-status=dead |archive-url=https://web.archive.org/web/20150811084645/http://www.sify.com/movies/aroma-mani-s-big-gamble-news-malayalam-kkfvFmeageasi.html |archive-date=11 August 2015 |access-date=15 December 2015 |website=[[Sify]]}}</ref>
|-
| rowspan="6" | 2005
! scope="row" | ''[[ಉದಯನಾಣು ತಾರಂ]]''
| ಉದಯಭಾನು
|
|<ref>{{cite web |last=Moviebuzz (Sify) |date=12 February 2005 |title='Udayan' bigger than 'Narasimham'! |url=http://www.sify.com/movies/udayan-bigger-than-narasimham-news-malayalam-kkfv86jfhecsi.html |url-status=dead |archive-url=https://web.archive.org/web/20151223184905/http://www.sify.com/movies/udayan-bigger-than-narasimham-news-malayalam-kkfv86jfhecsi.html |archive-date=23 December 2015 |access-date=14 December 2015 |website=[[Sify]]}}</ref>
|-
! scope="row" | ''[[ಚಂದ್ರೋಲ್ಸವಂ]]''
| ಚಿರಕ್ಕಲ್ ಶ್ರೀಹರಿ
|
|<ref>{{cite web |last=Moviebuzz (Sify) |date=20 April 2005 |title='Chandramukhi' trounces 'Chandrolsavam'! |url=http://www.sify.com/movies/chandramukhi-trounces-chandrolsavam-news-malayalam-kkfv51dceigsi.html |url-status=dead |archive-url=https://web.archive.org/web/20151224212711/http://www.sify.com/movies/chandramukhi-trounces-chandrolsavam-news-malayalam-kkfv51dceigsi.html |archive-date=24 December 2015 |access-date=15 December 2015 |website=[[Sify]]}}</ref>
|-
! scope="row" | ''[[ತಿರನೋಟ್ಟಂ]]''
| ಕುಟ್ಟಪ್ಪನ್
| ವಿಳಂಬ ಬಿಡುಗಡೆ; 1978 ರಲ್ಲಿ ಚಿತ್ರೀಕರಿಸಲಾಗಿದೆ
|<ref name="ActingAlone" /><ref name="MohanlalTelegraph" />
|-
! scope="row" | ''[[ಉದಯೋನ್]]''
| ಶೂರನಾಡ್ ಪಪ್ಪೋಯಿ ಮತ್ತು ಶೂರನಾಡ್ ಕುಂಜು
|
|<ref>{{cite news |last=Pillai |first=Sreedhar |date=20 May 2005 |title=The Mohanlal effect |url=http://www.thehindu.com/thehindu/fr/2005/05/20/stories/2005052003000100.htm |url-status=dead |archive-url=https://web.archive.org/web/20160219152141/http://www.thehindu.com/thehindu/fr/2005/05/20/stories/2005052003000100.htm |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ನಾರನ್]]''
| ಮುಲ್ಲಂಕೊಳ್ಳಿ ವೇಲಾಯುಧನ್
|
|<ref>{{cite web |last=Moviebuzz (Sify) |date=3 September 2005 |title=Naran |url=http://www.sify.com/movies/naran-review-malayalam-pclvMljccbicj.html |url-status=dead |archive-url=https://web.archive.org/web/20160226124459/http://www.sify.com/movies/naran-review-malayalam-pclvMljccbicj.html |archive-date=26 February 2016 |access-date=26 February 2016 |website=[[Sify]]}}</ref>
|-
! scope="row" | ''[[ತನ್ಮಾತ್ರ]]''
| ರಮೇಶನ್ ನಾಯರ್
|
|<ref>{{cite news |last=Prakash |first=Asha |date=12 June 2015 |title=Mohanlal in Class X Biology textbook |url=http://timesofindia.indiatimes.com/entertainment/malayalam/movies/news/Mohanlal-in-Class-X-Biology-textbook/articleshow/47638850.cms |url-status=live |archive-url=https://web.archive.org/web/20150616115021/http://timesofindia.indiatimes.com/entertainment/malayalam/movies/news/Mohanlal-in-Class-X-Biology-textbook/articleshow/47638850.cms |archive-date=16 June 2015 |access-date=15 December 2015 |work=[[The Times of India]]}}</ref>
|-
| rowspan="7" | 2006
! scope="row" | ''[[ಕಿಲುಕ್ಕಂ ಕಿಲುಕಿಲುಕ್ಕಂ]]''
| ಜೋಜಿ
|ಅತಿಥಿ ಪಾತ್ರ
|
|-
! scope="row" | ''[[ರಸತಂತ್ರಂ]]''
| ಪ್ರೇಮಚಂದ್ರನ್
|
|<ref>{{cite news |last=Gopalakrishnan |first=K. K. |date=17 March 2006 |title=Getting the right equation |url=http://www.thehindu.com/todays-paper/tp-features/tp-fridayreview/getting-the-right-equation/article3217527.ece |url-status=live |archive-url=https://web.archive.org/web/20160219145549/http://www.thehindu.com/todays-paper/tp-features/tp-fridayreview/getting-the-right-equation/article3217527.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ವಡಕ್ಕುಮ್ನಾಥನ್]]''
| ಇರಿಂಗನ್ನೂರ್ ಭರತ ಪಿಶಾರಡಿ
|
|<ref>{{cite web |last=Palicha |first=Paresh C |date=23 May 2006 |title=Watch Vadakkumnathan only for Mohanlal |url=http://www.rediff.com/movies/review/vada/20060523.htm |url-status=live |archive-url=https://web.archive.org/web/20160226130310/http://www.rediff.com/movies/review/vada/20060523.htm |archive-date=26 February 2016 |access-date=26 February 2016 |work=[[Rediff.com]]}}</ref>
|-
! scope="row" | ''[[ಕೀರ್ತಿ ಚಕ್ರ]]''
| ಮೇಜರ್ ಮಹಾದೇವನ್
|
|<ref>{{cite web |last=Palicha |first=Paresh C |date=5 August 2006 |title=Keerthichakra: commendable |url=http://www.rediff.com/movies/2006/aug/05mal.htm |url-status=live |archive-url=https://web.archive.org/web/20160226130526/http://www.rediff.com/movies/2006/aug/05mal.htm |archive-date=26 February 2016 |access-date=26 February 2016 |work=[[Rediff.com]]}}</ref>
|-
! scope="row" | ''[[ಮಹಾಸಮುದ್ರಂ]]''
| ಇಸಹಾಕ್ ವೆಲಂಕನ್ನಿ
|
|<ref>{{cite news |last=Soman |first=Deepa |date=9 June 2014 |title=Mohanlal off to Brazil to catch World Cup climax |url=http://timesofindia.indiatimes.com/entertainment/malayalam/movies/news/Mohanlal-off-to-Brazil-to-catch-World-Cup-climax/articleshow/38057093.cms |url-status=live |archive-url=https://web.archive.org/web/20160226125141/http://timesofindia.indiatimes.com/entertainment/malayalam/movies/news/Mohanlal-off-to-Brazil-to-catch-World-Cup-climax/articleshow/38057093.cms |archive-date=26 February 2016 |access-date=26 February 2016 |work=[[The Times of India]]}}</ref>
|-
! scope="row" | ''[[ಫೋಟೋಗ್ರಾಫರ್]]''
| ದಿಜೊ ಜಾನ್ ಮತ್ತು ಜಾಯ್ ಜಾನ್
|
|<ref>{{cite news |last=Pillai |first=Sreedhar |date=20 October 2006 |title=Clash of the titans |url=http://www.thehindu.com/todays-paper/tp-features/tp-fridayreview/clash-of-the-titans/article3231056.ece |url-status=live |archive-url=https://web.archive.org/web/20160219145306/http://www.thehindu.com/todays-paper/tp-features/tp-fridayreview/clash-of-the-titans/article3231056.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಬಾಬಾ ಕಲ್ಯಾಣಿ]]''
| ಬಾಬಾ ಕಲ್ಯಾಣಿ ಐಪಿಎಸ್
|
|<ref>{{cite news |last=George |first=Vijay |date=27 October 2006 |title=The plot of a thriller |url=http://www.thehindu.com/todays-paper/tp-features/tp-fridayreview/the-plot-of-a-thriller/article3231125.ece |url-status=live |archive-url=https://web.archive.org/web/20160226125429/http://www.thehindu.com/todays-paper/tp-features/tp-fridayreview/the-plot-of-a-thriller/article3231125.ece |archive-date=26 February 2016 |access-date=26 February 2016 |work=[[The Hindu]]}}</ref>
|-
| rowspan="7" | 2007
! scope="row" | ''[[ಚೋಟ್ಟಾ ಮುಂಬೈ]]''
| ವಾಸ್ಕೊ ಡಾ "ತಾಲಾ" ಗಾಮಾ
|
|<ref>{{cite web |last=Moviebuzz (Sify) |date=2 April 2007 |title=Vishu-Change of dates |url=http://www.sify.com/movies/vishu-change-of-dates-news-malayalam-kkfvbgigfhasi.html |url-status=dead |archive-url=https://web.archive.org/web/20151223222020/http://www.sify.com/movies/vishu-change-of-dates-news-malayalam-kkfvbgigfhasi.html |archive-date=23 December 2015 |access-date=14 December 2015 |website=[[Sify]]}}</ref>
|-
! scope="row" | ''[[ಹಾಲೋ]]''
| ಶಿವರಾಮನ್
|
|<ref>{{cite web |last=Palicha |first=Paresh C |date=6 July 2007 |title=Mohanlal rocks in Hallo |url=http://www.rediff.com/movies/2007/jul/06sshallo.htm |url-status=live |archive-url=https://web.archive.org/web/20160105191031/http://www.rediff.com/movies/2007/jul/06sshallo.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ಅಲಿಬಾಯ್]]''
| ಅನ್ವರ್ "ಅಲಿ ಭಾಯ್" ಅಲಿ
|
|<ref>{{cite news |last=Kumar |first=P. K. Ajith |date=6 July 2007 |title=For fans of Mohanlal |url=http://www.thehindu.com/todays-paper/tp-features/tp-fridayreview/for-fans-of-mohanlal/article2272957.ece |url-status=live |archive-url=https://web.archive.org/web/20160219143835/http://www.thehindu.com/todays-paper/tp-features/tp-fridayreview/for-fans-of-mohanlal/article2272957.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ರಾಮ್ ಗೋಪಾಲ್ ವರ್ಮಾ ಕಿ ಆಗ್]]''
| ಇನ್ಸ್ಪೆಕ್ಟರ್ ನರಸಿಂಹ
| ಹಿಂದಿ ಚಿತ್ರ
|<ref>{{cite news |last=Nair |first=Manoj |date=1 September 2007 |title=Mohanlal the saving grace in Ram Gopal Varma's Aag |url=http://economictimes.indiatimes.com/magazines/business-of-bollywood/mohanlal-the-saving-grace-in-ram-gopal-varmas-aag/articleshow/2328428.cms |url-status=live |archive-url=https://web.archive.org/web/20160219140307/http://economictimes.indiatimes.com/magazines/business-of-bollywood/mohanlal-the-saving-grace-in-ram-gopal-varmas-aag/articleshow/2328428.cms |archive-date=19 February 2016 |access-date=11 December 2015 |work=[[The Economic Times]]}}</ref>
|-
! scope="row" | ''[[ಪರದೇಸಿ]]''
| ವಾಲಿಯಕತು ಮೂಸಾ
|
|<ref>{{cite web |last=Palicha |first=Paresh C |date=15 October 2007 |title=Paradeshi review |url=http://www.rediff.com/movies/2007/oct/15pardeshi.htm |url-status=live |archive-url=https://web.archive.org/web/20160105122112/http://www.rediff.com/movies/2007/oct/15pardeshi.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ರಾಕ್ ಎನ್' ರೋಲ್]]''
| ಚಂದ್ರಮೌಲಿ
|
|<ref>{{cite web |last=Palicha |first=Paresh C |date=19 November 2007 |title=Nothing musical about Rock n' Roll |url=http://www.rediff.com/movies/2007/nov/19rock.htm |url-status=live |archive-url=https://web.archive.org/web/20090413173924/http://rediff.com/movies/2007/nov/19rock.htm |archive-date=13 April 2009 |access-date=26 February 2016 |work=[[Rediff.com]]}}</ref>
|-
! scope="row" | ''[[ಫ್ಲಾಷ್]]''
| ಡಾ. ಮಿಧುನ್ ಮಾಧವ್
|
|<ref>{{cite news |last=Kumar |first=P. K. Ajith |date=2 November 2007 |title=Flash of suspense |url=http://www.thehindu.com/todays-paper/tp-features/tp-fridayreview/flash-of-suspense/article2274176.ece |url-status=live |archive-url=https://web.archive.org/web/20160219145021/http://www.thehindu.com/todays-paper/tp-features/tp-fridayreview/flash-of-suspense/article2274176.ece |archive-date=19 February 2016 |access-date=14 December 2015 |work=[[The Hindu]]}}</ref>
|-
| rowspan="9" | 2008
! scope="row" | ''[[ಹಲ್ಲಾ ಬೋಲ್]]''
| ಸ್ವತಃ
| ಹಿಂದಿ ಚಿತ್ರ; ಅತಿಥಿ ಪಾತ್ರ
|<ref>{{cite news |title=Halla Bol Movie Review {3/5}: Critic Review of Halla Bol by Times of India |url=https://timesofindia.indiatimes.com/entertainment/hindi/movie-reviews/halla-bol/movie-review/2693447.cms |website=[[The Times of India]]}}</ref>
|-
! scope="row" | ''[[ಕಾಲೇಜ್ ಕುಮಾರನ್]]''
| ಕ್ಯಾಪ್ಟನ್ ಶ್ರೀಕುಮಾರ್ / ಕ್ಯಾಂಟೀನ್ ಕುಮಾರನ್ / ಕಾಲೇಜ್ ಕುಮಾರನ್
|
|<ref>{{cite news |last=George |first=Vijay |date=25 January 2008 |title=Clash of titans |url=http://www.thehindu.com/todays-paper/tp-features/tp-fridayreview/clash-of-titans/article1432903.ece |access-date=26 February 2016 |work=[[The Hindu]]}}</ref>
|-
! scope="row" | ''[[ಇನ್ನಾತೆ ಚಿಂತ ವಿಶಯಂ]]''
| ಗೋಪಾಕುಮಾರ್ "ಜಿ.ಕೆ."
|
|<ref>{{cite news |last=George |first=Vijay |date=11 April 2008 |title=Battling for the box office |url=http://www.thehindu.com/todays-paper/tp-features/tp-fridayreview/battling-for-the-box-office/article1433815.ece |url-status=live |archive-url=https://web.archive.org/web/20160219144604/http://www.thehindu.com/todays-paper/tp-features/tp-fridayreview/battling-for-the-box-office/article1433815.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಮಿಳಿಕಳ್ ಸಾಕ್ಷಿ]]''
| ಪ್ರೊಫೆಸರ್ ಸಯೀದ್ ಅಹ್ಮದ್
|
|<ref>{{cite web |last=Palicha |first=Paresh C |date=23 June 2008 |title=Mizhikal Sakshi is melodramatic |url=http://www.rediff.com/movies/review/ssms/20080623.htm |url-status=live |archive-url=https://web.archive.org/web/20160105190949/http://www.rediff.com/movies/review/ssms/20080623.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ಮದಾಂಪಿ]]''
| ಪುತ್ತನ್ ಪುರಕ್ಕಲ್ ಗೋಪಾಲಕೃಷ್ಣ ಪಿಳ್ಳೈ
|
|<ref>{{cite news |last=Nagarajan |first=Saraswathy |date=4 July 2008 |title=Of banks and bankers |url=http://www.thehindu.com/todays-paper/tp-features/tp-fridayreview/of-banks-and-bankers/article1434742.ece |url-status=live |archive-url=https://web.archive.org/web/20160219144313/http://www.thehindu.com/todays-paper/tp-features/tp-fridayreview/of-banks-and-bankers/article1434742.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಆಕಾಶ ಗೋಪುರಂ]]''
| ಆಲ್ಬರ್ಟ್ ಸ್ಯಾಮ್ಸನ್
|
|<ref>{{cite news |last=Zaman |first=Rana Siddiqui |date=22 August 2008 |title=A castle of his own |url=http://www.thehindu.com/todays-paper/tp-features/tp-fridayreview/a-castle-of-his-own/article1435337.ece |url-status=live |archive-url=https://web.archive.org/web/20160219143539/http://www.thehindu.com/todays-paper/tp-features/tp-fridayreview/a-castle-of-his-own/article1435337.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಕುರುಕ್ಷೇತ್ರ]]''
| ಕರ್ನಲ್ ಮಹಾದೇವನ್
|
|<ref>{{cite news |last=Pillai |first=Sreedhar |date=4 October 2008 |title=Marking a new trend |url=http://timesofindia.indiatimes.com/entertainment/hindi/bollywood/news/Marking-a-new-trend/articleshow/3556813.cms |url-status=live |archive-url=https://web.archive.org/web/20160219144731/http://timesofindia.indiatimes.com/entertainment/hindi/bollywood/news/Marking-a-new-trend/articleshow/3556813.cms |archive-date=19 February 2016 |access-date=14 December 2015 |work=[[The Times of India]]}}</ref>
|-
! scope="row" | ''[[ಟ್ವೆಂಟಿ:೨೦]]''
| ದೇವರಾಜ ಪ್ರತಾಪ ವರ್ಮಾ
|
|<ref>{{cite web |last=Palicha |first=Paresh C |date=6 November 2008 |title=Twenty: 20 is surprisingly good |url=http://www.rediff.com/movies/2008/nov/06sst.htm |url-status=live |archive-url=https://web.archive.org/web/20160207165042/http://www.rediff.com/movies/2008/nov/06sst.htm |archive-date=7 February 2016 |access-date=26 February 2016 |work=[[Rediff.com]]}}</ref>
|-
! scope="row" | ''[[ಪಾಕಲ್ ನಕ್ಷತ್ರಂಗಳ್]]''
| ಸಿದ್ಧಾರ್ಥನ್
|
|<ref>{{cite web |last=Palicha |first=Paresh C |date=1 December 2008 |title=Review: Pakal Nakshatrangal |url=http://www.rediff.com/movies/2008/dec/01review-pakal-nakshatrangal.htm |url-status=live |archive-url=https://web.archive.org/web/20160105122050/http://www.rediff.com/movies/2008/dec/01review-pakal-nakshatrangal.htm |archive-date=5 January 2016 |access-date=14 December 2015 |work=[[Rediff.com]]}}</ref>
|-
| rowspan="7" | 2009
! scope="row" | ''[[ರೆಡ್ ಚಿಲ್ಲೀಸ್]]''
| ಒಯ್ಯಾರತು ಮದತಿಲ್ "ಒ.ಎಂ.ಆರ್" ರಾಮನಾಥನ್
|
|<ref>{{cite web |last=Moviebuzz (Sify) |date=12 February 2009 |title=Valentine weekend- Kunchacko v/s Red Chillies |url=http://www.sify.com/movies/valentine-weekend-kunchacko-v-s-red-chillies-news-malayalam-kkfsvhhchggsi.html |url-status=dead |archive-url=https://web.archive.org/web/20151224093841/http://www.sify.com/movies/valentine-weekend-kunchacko-v-s-red-chillies-news-malayalam-kkfsvhhchggsi.html |archive-date=24 December 2015 |access-date=14 December 2015 |website=[[Sify]]}}</ref>
|-
! scope="row" | ''[[ಸಾಗರ್ ಅಲಿಯಾಸ್ ಜಾಕಿ ರೀಲೋಡೆಡ್]]''
| ಸಾಗರ್ ಅಲಿಯಾಸ್ ಜಾಕಿ
|
|<ref>{{cite news |last=George |first=Vijay |date=27 March 2009 |title=Amal Neerad alias Action |url=http://www.thehindu.com/todays-paper/tp-features/tp-fridayreview/amal-neerad-alias-action/article657897.ece |url-status=live |archive-url=https://web.archive.org/web/20160219143143/http://www.thehindu.com/todays-paper/tp-features/tp-fridayreview/amal-neerad-alias-action/article657897.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಭಗವಾನ್]]''
| ಡಾ. ಬಾಲಗೋಪಾಲನ್
|
|<ref>{{cite news |last=Bureau |first=Spicezee |date=10 December 2008 |title=South superstar Mohanlal's 'Bhagavan' shot in 12 hours flat! |url=http://zeenews.india.com/home/south-superstar-mohanlals-bhagavan-shot-in-12-hours-flat_489751.html |url-status=live |archive-url=https://web.archive.org/web/20151222164359/http://zeenews.india.com/home/south-superstar-mohanlals-bhagavan-shot-in-12-hours-flat_489751.html |archive-date=22 December 2015 |access-date=14 December 2015 |work=[[Zee News]]}}</ref>
|-
! scope="row" | ''[[ಭ್ರಮರಂ]]''
| ಶಿವನ್ಕುಟ್ಟಿ
|
|<ref>{{cite web |last=Palicha |first=Paresh C |date=26 June 2009 |title=Watch Bhramaram for Mohanlal |url=http://www.rediff.com/movies/review/watch-bhramaram-for-mohanlal/20090626.htm |url-status=live |archive-url=https://web.archive.org/web/20160105191415/http://www.rediff.com/movies/review/watch-bhramaram-for-mohanlal/20090626.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ಉನ್ನೈಪೋಲ್ ಒರುವನ್]]''
| ಡಿಜಿಪಿ ಗೋವಿಂದ ರಾಘವನ್ ಮಾರಾರ್ ಐಪಿಎಸ್
|ತಮಿಳು ಚಿತ್ರ
|<ref>{{cite web |last=Rediff |date=6 August 2009 |title=Kamal, Mohanlal in Tamil's A Wednesday |url=http://movies.rediff.com/report/2009/aug/06/kamal-mohanlal-intamils-a-wednesday.htm |url-status=live |archive-url=https://web.archive.org/web/20151222111711/http://movies.rediff.com/report/2009/aug/06/kamal-mohanlal-intamils-a-wednesday.htm |archive-date=22 December 2015 |access-date=11 December 2015 |work=[[Rediff.com]]}}</ref>
|-
! scope="row" | ''[[ಏಂಜೆಲ್ ಜಾನ್]]''
| ಏಂಜೆಲ್ ಜಾನ್
|
|<ref>{{cite web |last=Palicha |first=Paresh C |date=23 October 2009 |title=Review: Angel John is no Bruce Almighty |url=http://movies.rediff.com/report/2009/oct/23/south-malayalam-movie-review-angel-john.htm |url-status=live |archive-url=https://web.archive.org/web/20151222134350/http://movies.rediff.com/report/2009/oct/23/south-malayalam-movie-review-angel-john.htm |archive-date=22 December 2015 |access-date=14 December 2015 |work=[[Rediff.com]]}}</ref>
|-
! scope="row" | ''[[ಎವಿಡಂ ಸ್ವರ್ಗಮಾಣು]]''
| ಮ್ಯಾಥ್ಯೂಸ್ ಜೆರೆಮಿಯಾಸ್
|
|<ref>{{cite web |last=Palicha |first=Paresh C |date=28 December 2009 |title=Review: Ividam Swargamanu is worth watching |url=http://www.rediff.com/movies/review/south-review-ividam-swargamanu/20091228.htm |url-status=live |archive-url=https://web.archive.org/web/20160105121838/http://www.rediff.com/movies/review/south-review-ividam-swargamanu/20091228.htm |archive-date=5 January 2016 |access-date=14 December 2015 |work=[[Rediff.com]]}}</ref>
|-
| rowspan="5" | 2010
! scope="row" | ''[[ಜನಕನ್]]''
| ವಕೀಲ ಸೂರ್ಯ ನಾರಾಯಣನ್
|
|<ref>{{cite web |last=Palicha |first=Paresh C |date=9 April 2010 |title=Review: Janakan is promising |url=http://movies.rediff.com/review/2010/apr/09/south-malayalam-movie-review-janakan.htm |url-status=live |archive-url=https://web.archive.org/web/20151222080401/http://movies.rediff.com/review/2010/apr/09/south-malayalam-movie-review-janakan.htm |archive-date=22 December 2015 |access-date=14 December 2015 |work=[[Rediff.com]]}}</ref>
|-
! scope="row" | ''[[ಅಲೆಕ್ಸಾಂಡರ್ ದಿ ಗ್ರೇಟ್]]''
| ಅಲೆಕ್ಸಾಂಡರ್ ವರ್ಮಾ
|
|<ref>{{cite news |last=IBN Live |date=6 May 2010 |title=Malayalam industry lifts ban on new releases |url=http://www.ibnlive.com/news/india/malayalam-industry-lifts-ban-338025.html |url-status=live |archive-url=https://web.archive.org/web/20160128055501/http://www.ibnlive.com/news/india/malayalam-industry-lifts-ban-338025.html |archive-date=28 January 2016 |access-date=14 December 2015 |work=[[IBN Live]]}}</ref>
|-
! scope="row" | ''[[ಒರು ನಾಳ್ ವರುಮ್]]''
| ಕುಳಪ್ಪುಳ್ಳಿ ಸುಕುಮಾರನ್ / ಡಿವೈಎಸ್ಪಿ ನಂದಕುಮಾರ್
|
|<ref>{{cite news |last=Media |first=Sampurn |date=27 April 2010 |title=Oru Naal Varum to release on May 7 |url=http://www.newindianexpress.com/entertainment/malayalam/article198029.ece |url-status=dead |archive-url=https://web.archive.org/web/20160219142600/http://www.newindianexpress.com/entertainment/malayalam/article198029.ece |archive-date=19 February 2016 |access-date=14 December 2015 |work=[[The New Indian Express]]}}</ref>
|-
! scope="row" | ''[[ಶಿಕ್ಕರ್]]''
| ಬಾಲರಾಮನ್
|
|<ref>{{cite news |last=Wire |first=Sampurn |date=2 October 2010 |title='Shikkar' wins the Ramzan race |url=http://www.newindianexpress.com/entertainment/malayalam/article286778.ece |url-status=dead |archive-url=https://web.archive.org/web/20150722051403/http://www.newindianexpress.com/entertainment/malayalam/article286778.ece |archive-date=22 July 2015 |access-date=14 December 2015 |work=[[The New Indian Express]]}}</ref>
|-
! scope="row" | ''[[ಕಾಂದಹಾರ್]]''
| ಮೇಜರ್ ಮಹಾದೇವನ್
|
|<ref>{{cite web |last=George |first=Meghna |date=17 December 2010 |title=Review: Big B, Mohanlal shine in Kandahar |url=http://www.rediff.com/movies/review/south-review-kandahar/20101217.htm |url-status=live |archive-url=https://web.archive.org/web/20151117102735/http://www.rediff.com/movies/review/south-review-kandahar/20101217.htm |archive-date=17 November 2015 |access-date=14 December 2015 |work=[[Rediff.com]]}}</ref>
|-
| rowspan="5" | 2011
! scope="row" | ''[[ಕ್ರಿಶ್ಚಿಯನ್ ಬ್ರದರ್ಸ್]]''
| ಕ್ರಿಸ್ಟಿ ವರ್ಗೀಸ್ ಮಪ್ಪಿಳ್ಳ ಅಲಿಯಾಸ್ ಶೆರ್ಸನ್
|
|<ref>{{cite news |last=B S |first=Shibu |date=26 February 2011 |title='Christian Brothers' to spread the good word |url=http://www.newindianexpress.com/entertainment/malayalam/article400741.ece |url-status=dead |archive-url=https://web.archive.org/web/20151224232022/http://www.newindianexpress.com/entertainment/malayalam/article400741.ece |archive-date=24 December 2015 |access-date=14 December 2015 |work=[[The New Indian Express]]}}</ref>
|-
! scope="row" | ''[[ಚೈನಾ ಟೌನ್]]''
| ಮಥುಕುಟ್ಟಿ ಮತ್ತು ಕ್ಸೇವಿಯರ್
|
|<ref>{{cite web |last=Moviebuzz (Sify) |date=17 February 2010 |title=China Town is Mohanlal's Onam release! |url=http://www.sify.com/movies/china-town-is-mohanlals-onam-release-news-malayalam-kkfqRAheehisi.html |url-status=dead |archive-url=https://web.archive.org/web/20151222091652/http://www.sify.com/movies/china-town-is-mohanlals-onam-release-news-malayalam-kkfqRAheehisi.html |archive-date=22 December 2015 |access-date=14 December 2015 |website=[[Sify]]}}</ref>
|-
! scope="row" | ''[[ಪ್ರಣಯಂ]]''
| ಮ್ಯಾಥ್ಯೂಸ್
|
|<ref>{{cite news |last=Velayanikal |first=Malavika |date=11 September 2011 |title='Pranayam', a film you can take home with you |url=http://www.dnaindia.com/entertainment/report-pranayam-a-film-you-can-take-home-with-you-1585909 |url-status=live |archive-url=https://web.archive.org/web/20160226123629/http://www.dnaindia.com/entertainment/report-pranayam-a-film-you-can-take-home-with-you-1585909 |archive-date=26 February 2016 |access-date=26 February 2016 |work=[[Daily News and Analysis]]}}</ref>
|-
! scope="row" | ''[[ಸ್ನೇಹವೀಡು]]''
| ಅಜಯನ್ ಮೇನನ್
|
|<ref>{{cite web |last=George |first=Meghna |date=26 September 2011 |title=Mohanlal hits 300 with Snehaveedu |url=http://www.rediff.com/movies/slide-show/slide-show-1-mohanlal-gears-up-with-landmark-film/20110926.htm |url-status=live |archive-url=https://web.archive.org/web/20111230223238/http://www.rediff.com/movies/slide-show/slide-show-1-mohanlal-gears-up-with-landmark-film/20110926.htm |archive-date=30 December 2011 |access-date=14 December 2015 |work=[[Rediff.com]]}}</ref>
|-
! scope="row" | ''[[ಒರು ಮರುಭೂಮಿಕ್ಕಾಧ]]''
| ಪಿ. ಮಾಧವನ್ ನಾಯರ್
|
|<ref>{{cite news |last=Nagarajan |first=Saraswathy |date=20 October 2011 |title=An Arabian comedy |url=http://www.thehindu.com/features/cinema/an-arabian-comedy/article2555143.ece |url-status=live |archive-url=https://web.archive.org/web/20160219142431/http://www.thehindu.com/features/cinema/an-arabian-comedy/article2555143.ece |archive-date=19 February 2016 |access-date=14 December 2015 |work=[[The Hindu]]}}</ref>
|-
| rowspan="6" | 2012
! scope="row" | ''[[ಕಸನೋವ್ವಾ]]''
| ಕಸನೋವ್ವಾ
|
|<ref>{{cite news |last=Mid-Day |date=6 February 2012 |title=Ajay vs Aamir – Who will play Casanova in south remake? – NDTV Movies |url=http://movies.ndtv.com/bollywood/ajay-vs-aamir-who-will-play-casanova-in-south-remake-603474 |url-status=live |archive-url=https://web.archive.org/web/20151222111951/http://movies.ndtv.com/bollywood/ajay-vs-aamir-who-will-play-casanova-in-south-remake-603474 |archive-date=22 December 2015 |access-date=14 December 2015 |work=[[NDTV]]}}</ref>
|-
! scope="row" | ''[[ಟೆಜ್]]''
| ಶಿವನ್ ಮೇನನ್
| ಹಿಂದಿ ಚಿತ್ರ; ಅತಿಥಿ ಪಾತ್ರ
|<ref>{{cite news |last1=Srivastava |first1=Priyanka |last2=Varma |first2=Lipika |date=25 January 2012 |title=Mohanlal's fans want more |url=https://www.indiatoday.in/movies/bollywood/story/mohanlal-tezz-priyadarshans-action-film-90855-2012-01-24 |url-status=live |archive-url=https://web.archive.org/web/20140129181953/http://indiatoday.intoday.in/story/mohanlal-tezz-priyadarshans-action-film/1/170483.html |archive-date=29 January 2014 |access-date=11 December 2015 |work=[[India Today]]}}</ref>
|-
! scope="row" | ''[[ಗ್ರಾಂಡ್ಮಾಸ್ಟರ್]]''
| ಐಜಿ ಚಂದ್ರಶೇಖರ್ ಐಪಿಎಸ್
|
|<ref>{{cite web |last=Palicha |first=Paresh C |date=4 May 2012 |title=Review: Mohanlal excels in Grandmaster |url=http://www.rediff.com/movies/report/south-review-mohanlal-excels-in-grandmaster/20120504.htm |url-status=live |archive-url=https://web.archive.org/web/20160105121854/http://www.rediff.com/movies/report/south-review-mohanlal-excels-in-grandmaster/20120504.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ಸ್ಪಿರಿಟ್]]''
| ರಘು ನಂದನ್
|
|<ref>{{cite news |last=IBN Live |date=20 September 2012 |title=Spirit: Completes 100 day run on Box office |url=http://www.ibnlive.com/news/india/spirit-completes-100-day-run-on-box-office-509793.html |url-status=live |archive-url=https://web.archive.org/web/20160128055507/http://www.ibnlive.com/news/india/spirit-completes-100-day-run-on-box-office-509793.html |archive-date=28 January 2016 |access-date=14 December 2015 |work=[[IBN Live]]}}</ref>
|-
! scope="row" | ''[[ರನ್ ಬೇಬಿ ರನ್]]''
| ವೇಣು
|
|<ref>{{cite news |last=IBN Live |date=31 August 2012 |title=Malayalam Review: 'Run Baby Run' is a gripping thriller |url=http://www.ibnlive.com/news/india/malayalam-review-run-baby-run-is-a-gripping-thriller-503350.html |url-status=live |archive-url=https://web.archive.org/web/20160128124258/http://www.ibnlive.com/news/india/malayalam-review-run-baby-run-is-a-gripping-thriller-503350.html |archive-date=28 January 2016 |access-date=14 December 2015 |work=[[IBN Live]]}}</ref>
|-
! scope="row" | ''[[ಕರ್ಮಯೋಧ]]''
| ಡಿಸಿಪಿ ಮಾಧವ "ಮ್ಯಾಡ್ ಮ್ಯಾಡಿ" ಮೇನನ್ ಐಪಿಎಸ್
|
|<ref>{{cite news |last=Kurian |first=Shiba |date=19 December 2012 |title=Mohanlal's 'Karmayodha' courts trouble |url=http://timesofindia.indiatimes.com/entertainment/malayalam/movies/news/Mohanlals-Karmayodha-courts-trouble/articleshow/17675330.cms? |url-status=live |archive-url=https://web.archive.org/web/20160219142226/http://timesofindia.indiatimes.com/entertainment/malayalam/movies/news/Mohanlals-Karmayodha-courts-trouble/articleshow/17675330.cms |archive-date=19 February 2016 |access-date=14 December 2015 |work=[[The Times of India]]}}</ref>
|-
| rowspan="6" | 2013
! scope="row" | ''[[ಲೋಕ್ಪಾಲ್]]''
| ನಂದಗೋಪಾಲ್ / ಲೋಕ್ಪಾಲ್
|
|<ref>{{cite news |last=IBN Live |date=9 February 2013 |title='Lokpal' Review: The Malayalam film is a one time watch |url=http://www.ibnlive.com/news/india/lokpal-review-the-malayalam-film-is-a-one-time-watch-589835.html |url-status=live |archive-url=https://web.archive.org/web/20160126052846/http://www.ibnlive.com/news/india/lokpal-review-the-malayalam-film-is-a-one-time-watch-589835.html |archive-date=26 January 2016 |access-date=14 December 2015 |work=[[IBN Live]]}}</ref>
|-
! scope="row" | ''[[ರೆಡ್ ವೈನ್]]''
| ಎಸಿಪಿ ರತೀಶ್ ವಾಸುದೇವನ್ ಐಪಿಎಸ್
|
|<ref>{{cite news |last=Kurian |first=Shiba |date=26 March 2013 |title=Red Wine's climax changed after its release? |url=http://timesofindia.indiatimes.com/entertainment/malayalam/movies/news/Red-Wines-climax-changed-after-its-release/articleshow/19214416.cms |url-status=live |archive-url=https://web.archive.org/web/20160219142104/http://timesofindia.indiatimes.com/entertainment/malayalam/movies/news/Red-Wines-climax-changed-after-its-release/articleshow/19214416.cms |archive-date=19 February 2016 |access-date=14 December 2015 |work=[[The Times of India]]}}</ref>
|-
! scope="row" | ''[[ಲೇಡೀಸ್ ಅಂಡ್ ಜೆಂಟಲ್ಮನ್]]''
| ಚಂದ್ರಬೋಸ್
|
|<ref>{{cite news |last=Saseendran |first=Sajila |date=23 March 2013 |title=Dubai is my second home: Mohanlal – Khaleej Times |url=http://www.khaleejtimes.com/article/20130323/ARTICLE/303239974/1057 |url-status=live |archive-url=https://web.archive.org/web/20151118041835/http://www.khaleejtimes.com/article/20130323/ARTICLE/303239974/1057 |archive-date=18 November 2015 |access-date=14 December 2015 |work=[[Khaleej Times]]}}</ref>
|-
! scope="row" | ''[[ಕಡಲ್ ಕಡನ್ನು ಒರು ಮಾತುಕುಟ್ಟಿ]]''
| ಸ್ವತಃ
|ಅತಿಥಿ ಪಾತ್ರ
|<ref>{{cite news |last=Karthikeyan |first=Shruti |date=23 August 2014 |title=Mammootty and Mohanlal to share screen space? |url=http://timesofindia.indiatimes.com/Entertainment/Malayalam/Movies/News/Mammootty-and-Mohanlal-to-share-screen-space/articleshow/40694989.cms |url-status=live |archive-url=https://web.archive.org/web/20140828192648/http://timesofindia.indiatimes.com/Entertainment/Malayalam/Movies/News/Mammootty-and-Mohanlal-to-share-screen-space/articleshow/40694989.cms |archive-date=28 August 2014 |access-date=20 December 2015 |work=[[The Times of India]]}}</ref>
|-
! scope="row" | ''[[ಗೀತಾಂಜಲಿ]]''
| ಡಾ. ಸನ್ನಿ ಜೋಸೆಫ್
|
|<ref>{{cite news |last=Nagarajan |first=Saraswathy |date=14 November 2013 |title=Ghostbuster returns |url=http://www.thehindu.com/features/cinema/ghostbuster-returns/article5350923.ece |url-status=live |archive-url=https://web.archive.org/web/20131114180638/http://www.thehindu.com/features/cinema/ghostbuster-returns/article5350923.ece |archive-date=14 November 2013 |access-date=26 February 2016 |work=[[The Hindu]]}}</ref>
|-
! scope="row" | ''[[ದೃಶ್ಯಂ]]''
| ಜಾರ್ಜ್ಕುಟ್ಟಿ
|
|<ref>{{cite news |last=Seshagiri |first=Sangeetha |date=12 February 2014 |title='Drishyam' Box Office Collection: Mohanlal Starrer is Mega Blockbuster in India, Performs Well in UK |url=http://www.ibtimes.co.in/039drishyam039-box-office-collection-mohanlal-starrer-is-mega-blockbuster-in-india-performs-well-in-uk-538490 |url-status=live |archive-url=https://web.archive.org/web/20150803002040/http://www.ibtimes.co.in/039drishyam039-box-office-collection-mohanlal-starrer-is-mega-blockbuster-in-india-performs-well-in-uk-538490 |archive-date=3 August 2015 |access-date=14 December 2015 |work=[[International Business Times]]}}</ref>
|-
| rowspan="4" | 2014
! scope="row" | ''[[ಜಿಲ್ಲಾ]]''
| ಶಿವನ್
| ತಮಿಳು ಚಿತ್ರ
|<ref>{{cite news |last=Bhaskaran |first=Gautaman |date=11 January 2014 |title=Movie review: Watch Jilla for Mohanlal's performance, Vijay's charisma |url=http://www.hindustantimes.com/regional-movies/movie-review-watch-jilla-for-mohanlal-s-performance-vijay-s-charisma/story-YdCiVl9QPOInca7Odd13BI.html |url-status=live |archive-url=https://web.archive.org/web/20160127123601/http://www.hindustantimes.com/regional-movies/movie-review-watch-jilla-for-mohanlal-s-performance-vijay-s-charisma/story-YdCiVl9QPOInca7Odd13BI.html |archive-date=27 January 2016 |access-date=11 December 2015 |work=[[Hindustan Times]]}}</ref>
|-
! scope="row" | ''[[ಮಿಸ್ಟರ್ ಫ್ರಾಡ್]]''
| ಭಾಯಿ ಜಿ / ಜಾನ್ ಕ್ಲಿಫ್ / ಶಿವರಾಮ್
|
|<ref>{{cite news |last=Press Trust of India |date=28 April 2014 |title=Malayalam films won't release till ban on Mohanlal's 'Mr Fraud' is lifted: FEFKA |url=http://indianexpress.com/article/entertainment/entertainment-others/malayalam-films-wont-release-till-ban-on-mohanlals-mr-fraud-is-lifted-fefka/ |url-status=live |archive-url=https://web.archive.org/web/20151222170549/http://indianexpress.com/article/entertainment/entertainment-others/malayalam-films-wont-release-till-ban-on-mohanlals-mr-fraud-is-lifted-fefka/ |archive-date=22 December 2015 |access-date=14 December 2015 |work=[[The Indian Express]]}}</ref>
|-
! scope="row" | ''[[ಕೂತಾರ]]''
| ಉಸ್ತಾದ್ ಸಾಲಿ
| ವಿಸ್ತೃತ ಅತಿಥಿ ಪಾತ್ರ
|<ref>{{cite news |last=V. P |first=Nicy |date=12 June 2014 |title=New Malayalam Movie Releases: 'Koothara', 'Angry Babies in Love' Set to Roll by Weekend |url=http://www.ibtimes.co.in/new-malayalam-movie-releases-koothara-angry-babies-love-set-roll-by-weekend-602128 |url-status=live |archive-url=https://web.archive.org/web/20151222120709/http://www.ibtimes.co.in/new-malayalam-movie-releases-koothara-angry-babies-love-set-roll-by-weekend-602128 |archive-date=22 December 2015 |access-date=14 December 2015 |work=[[International Business Times]]}}</ref>
|-
! scope="row" | ''[[ಪೆರುಚಾಳಿ]]''
| ಜಗನ್ನಾಥನ್
|
|<ref>{{cite news |last=Sathish |first=V M |date=2 September 2014 |title=Malayalam superstar Mohanlal's 'Peruchazhi' to premiere in Dubai |url=http://www.emirates247.com/entertainment/malayalam-superstar-mohanlal-s-peruchazhi-to-premiere-in-dubai-2014-09-02-1.561510 |url-status=live |archive-url=https://web.archive.org/web/20150702005605/http://www.emirates247.com/entertainment/malayalam-superstar-mohanlal-s-peruchazhi-to-premiere-in-dubai-2014-09-02-1.561510 |archive-date=2 July 2015 |access-date=14 December 2015 |work=[[Emirates 24/7]]}}</ref>
|-
| rowspan="6" | 2015
! scope="row" | ''[[ರಸಂ]]''
| ಸ್ವತಃ
|ಅತಿಥಿ ಪಾತ್ರ
|<ref>{{cite news |last=Indo-Asian News Service |date=5 January 2015 |title=Malayalam film 'Rasam', shot in Qatar to release soon |url=http://indianexpress.com/article/entertainment/regional/malayalam-film-rasam-shot-in-qatar-to-release-soon/ |url-status=live |archive-url=https://web.archive.org/web/20160210011326/http://indianexpress.com/article/entertainment/regional/malayalam-film-rasam-shot-in-qatar-to-release-soon/ |archive-date=10 February 2016 |access-date=14 December 2015 |work=[[The Indian Express]]}}</ref>
|-
! scope="row" | ''[[ಮೈಥ್ರಿ]]''
| ಮಹಾದೇವ್ ಗೋಡ್ಕೆ
| ಕನ್ನಡ ಚಿತ್ರ; ಅತಿಥಿ ಪಾತ್ರ; ಮಲಯಾಳಂನಲ್ಲಿ 'ಮೈ ಹೀರೋ ಮೈಥ್ರಿ' ಎಂದು ಭಾಗಶಃ ಮರುನಿರ್ಮಾಣ
|<ref>{{cite news |last=Sharadhaa |first=A |date=17 February 2015 |title=Mythri Creates Ripples |url=http://www.newindianexpress.com/entertainment/kannada/Mythri-Creates-Ripples/2015/02/17/article2671918.ece |url-status=dead |archive-url=https://web.archive.org/web/20151222074633/http://www.newindianexpress.com/entertainment/kannada/Mythri-Creates-Ripples/2015/02/17/article2671918.ece |archive-date=22 December 2015 |access-date=11 December 2015 |work=[[The New Indian Express]]}}</ref>
|-
! scope="row" | ''[[ಎನ್ನುಮ್ ಎಪ್ಪೋಳುಂ]]''
| ವಿನೀತ್ ಎನ್. ಪಿಳ್ಳೈ
|
|<ref>{{cite news |last=Online Desk |date=28 March 2015 |title=5 reasons to watch 'Ennum Eppozhum' |url=http://english.manoramaonline.com/entertainment/entertainment-news/ennum-eppozhum-mohanlal-manju-warrier-sathyan-anthikad-box-office-reasons-to-watch.html |url-status=live |archive-url=https://web.archive.org/web/20151209174649/http://english.manoramaonline.com/entertainment/entertainment-news/ennum-eppozhum-mohanlal-manju-warrier-sathyan-anthikad-box-office-reasons-to-watch.html |archive-date=9 December 2015 |access-date=14 December 2015 |work=[[Malayala Manorama]]}}</ref>
|-
! scope="row" | ''[[ಲೈಲಾ ಓ ಲೈಲಾ]]''
| ಏಜೆಂಟ್ ಜೈ ಮೋಹನ್
|
|<ref>{{cite news |last=Khan |first=Ujala Ali |date=19 May 2015 |title=Dubai film Lailaa O Lailaa, with Malayalam superstar Mohanlal, aims for local premiere |url=https://www.thenationalnews.com/arts-culture/dubai-film-lailaa-o-lailaa-with-malayalam-superstar-mohanlal-aims-for-local-premiere-1.126415/ |url-status=live |archive-url=https://web.archive.org/web/20151227223332/http://www.thenational.ae/arts-lifestyle/film/dubai-film-lailaa-o-lailaa-with-malayalam-superstar-mohanlal-aims-for-local-premiere |archive-date=27 December 2015 |access-date=14 December 2015 |work=[[The National (Abu Dhabi)|The National]]}}</ref>
|-
! scope="row" | ''[[ಲೋಹಂ]]''
| ರಾಜೀವ್ "ರಾಜು" ಸತ್ಯಮೂರ್ತಿ
|
|<ref>{{cite news |last=James |first=Anu |date=21 August 2015 |title=Mohanlal's 'Loham' Review: Live Audience Response |url=http://www.ibtimes.co.in/mohanlal-starrer-loham-review-live-audience-response-643552 |url-status=live |archive-url=https://web.archive.org/web/20151223142243/http://www.ibtimes.co.in/mohanlal-starrer-loham-review-live-audience-response-643552 |archive-date=23 December 2015 |access-date=14 December 2015 |work=[[International Business Times]]}}</ref>
|-
! scope="row" | ''[[ಕನಾಲ್]]''
| ಜಾನ್ ಡೇವಿಡ್
|
|<ref>{{cite news |last=James |first=Anu |date=22 October 2015 |title=Mohanlal's 'Kanal' review: Live audience response |url=http://www.ibtimes.co.in/mohanlals-kanal-review-live-audience-response-651514 |url-status=live |archive-url=https://web.archive.org/web/20151122065356/http://www.ibtimes.co.in/mohanlals-kanal-review-live-audience-response-651514 |archive-date=22 November 2015 |access-date=14 December 2015 |work=[[International Business Times]]}}</ref>
|-
| rowspan="4" | 2016
! scope="row" | ''[[ಮನಮಂತ]]''
| ಸಾಯಿ ರಾಮ್
| ತೆಲುಗು ಚಿತ್ರ; ಮಲಯಾಳಂನಲ್ಲಿ 'ವಿಸ್ಮಯಂ' ಎಂದು ಭಾಗಶಃ ಮರುನಿರ್ಮಾಣ
|<ref>{{cite news |last=Sidhardhan |first=Sanjith |date=14 January 2016 |title=Mohanlal wraps up filming his Telugu movie |url=http://timesofindia.indiatimes.com/entertainment/malayalam/movies/news/Mohanlal-wraps-up-filming-his-Telugu-movie/articleshow/50574492.cms |url-status=live |archive-url=https://web.archive.org/web/20160225180814/http://timesofindia.indiatimes.com/entertainment/malayalam/movies/news/Mohanlal-wraps-up-filming-his-Telugu-movie/articleshow/50574492.cms |archive-date=25 February 2016 |access-date=25 February 2016}}</ref>
|-
! scope="row" | ''[[ಜನತಾ ಗ್ಯಾರೇಜ್]]''
| ಸತ್ಯಮ್
| ತೆಲುಗು ಚಿತ್ರ
|<ref>{{cite news |last=Jonnalagedda |first=Pranita |date=26 November 2016 |title=Mohanlal is NTR's peddananna |url=http://timesofindia.indiatimes.com/entertainment/telugu/movies/news/Mohanlal-is-NTRs-peddananna/articleshow/49934152.cms? |url-status=live |archive-url=https://web.archive.org/web/20160219141527/http://timesofindia.indiatimes.com/entertainment/telugu/movies/news/Mohanlal-is-NTRs-peddananna/articleshow/49934152.cms |archive-date=19 February 2016 |access-date=1 December 2015 |work=[[The Times of India]]}}</ref>
|-
! scope="row" | ''[[ಒಪ್ಪಂ]]''
| ಜಯರಾಮನ್
|
|<ref>{{cite news |last=Sidhardhan |first=Sanjith |date=6 March 2016 |title=Mohanlal's Oppam starts filming in Kochi |url=http://timesofindia.indiatimes.com/entertainment/malayalam/Mohanlals-Oppam-starts-filming-in-Kochi/articleshow/51275090.cms |url-status=live |archive-url=https://web.archive.org/web/20160308192944/http://timesofindia.indiatimes.com/entertainment/malayalam/Mohanlals-Oppam-starts-filming-in-Kochi/articleshow/51275090.cms |archive-date=8 March 2016 |access-date=8 March 2016 |work=[[The Times of India]]}}</ref>
|-
! scope="row" | ''[[ಪುಲಿಮುರುಗನ್]]''
| ಮುರುಗನ್
|
|<ref>{{cite news |last=James |first=Anu |date=26 February 2016 |title=Mohanlal's 'Pulimurugan' to be released in 3,000 screens? |url=http://www.ibtimes.co.in/mohanlals-pulimurugan-be-released-3000-screens-668379 |url-status=live |archive-url=https://web.archive.org/web/20160227105254/http://www.ibtimes.co.in/mohanlals-pulimurugan-be-released-3000-screens-668379 |archive-date=27 February 2016 |access-date=29 February 2016 |work=[[International Business Times]]}}</ref>
|-
| rowspan="4" | 2017
! scope="row" | ''[[ಮುಂತಿರಿವಳ್ಳಿಕಲ್ ತಾಲಿರ್ಕ್ಕುಂಬೋಲ್]]''
| ಉಳಹನ್ನನ್ "ಉನ್ನಚನ್"
|
|<ref>{{cite news |last1=James |first1=Anu |date=15 July 2016 |title=Mohanlal, Meena start shooting for untitled Jibu Jacob movie [PHOTOS] |url=http://www.ibtimes.co.in/mohanlal-meena-start-shooting-untitled-jibu-jacob-movie-photos-686732 |access-date=17 July 2016 |work=[[International Business Times]]}}</ref>
|-
! scope="row" | ''[[1971: ಬಿಯಾಂಡ್ ಬಾರ್ಡರ್ಸ್]]''
| ಕರ್ನಲ್ ಮಹಾದೇವನ್ ಮತ್ತು ಮೇಜರ್ ಸಹದೇವನ್
|
|<ref>{{cite news |title=Mohanlal starts shooting for Major Ravi's next |url=http://timesofindia.indiatimes.com/entertainment/malayalam/movies/news/Mohanlal-starts-shooting-for-Major-Ravis-next/articleshow/55204172.cms |access-date=7 November 2016 |work=The Times of India}}</ref>
|-
! scope="row" | ''[[ವೇಲಿಪದಿಂಟೆ ಪುಸ್ತಕಂ]]''
| ಮೈಕೆಲ್ ಇಡಿಕುಲ
|
|<ref>{{Cite news |date=26 May 2017 |title=Mohanlal reveals his look from Lal Jose's Velipadinte Pustakam. See photo |url=http://indianexpress.com/article/entertainment/malayalam/mohanlal-reveals-his-look-from-lal-jose-velipadinte-pustakam-see-photo-4675302/ |url-status=live |archive-url=https://archive.today/20170606140309/http://indianexpress.com/article/entertainment/malayalam/mohanlal-reveals-his-look-from-lal-jose-velipadinte-pustakam-see-photo-4675302/ |archive-date=6 June 2017 |access-date=6 June 2017 |work=The Indian Express}}</ref>
|-
! scope="row" | ''[[ವಿಲನ್]]''
| ಎಡಿಜಿಪಿ ಮ್ಯಾಥ್ಯೂ ಮಂಜೂರನ್ ಐಪಿಎಸ್
|
|<ref>{{cite news |title=Mohanlal in as villain in B Unnikrishan's next: Here's the first poster and it's badass |url=http://timesofindia.indiatimes.com/entertainment/malayalam/movies/news/mohanlal-in-as-villain-in-b-unnikrishans-next-heres-the-first-poster-and-its-badass/articleshow/57518330.cms |access-date=7 March 2017 |work=[[The Times of India]]}}</ref>
|-
| rowspan="5" | 2018
! scope="row" | ''[[ಆದಿ]]''
| ಸ್ವತಃ
|ಅತಿಥಿ ಪಾತ್ರ
|<ref>{{cite news |date=28 January 2018 |title=Aadhi movie review: Pranav parkours to stardom |url=https://www.deccanchronicle.com/entertainment/movie-reviews/280118/aadhi-movie-review-pranav-parkours-to-stardom.html |url-status=live |archive-url=https://web.archive.org/web/20180128071836/http://www.deccanchronicle.com/entertainment/movie-reviews/280118/aadhi-movie-review-pranav-parkours-to-stardom.html |archive-date=28 January 2018 |access-date=28 January 2018 |work=[[Deccan Chronicle]]}}</ref>
|-
! scope="row" | ''[[ನೀರಳಿ]]''
| ಸನ್ನಿ ಜಾರ್ಜ್
|
|<ref>{{cite news |author=സ്വന്തം ലേഖകൻ |date=10 January 2018 |title=ഈ മോഹൻലാൽ ചിത്രത്തിന് പ്രത്യേകതകൾ നിരവധി |url=https://www.manoramaonline.com/movies/movie-news/2018/01/10/mohanlal-ajoy-varma-movie-cast-list.html |access-date=26 May 2018 |work=[[Malayala Manorama]] |language=ml}}</ref>
|-
! scope="row" | ''[[ಕಾಯಂಕುಲಂ ಕೊಚುನ್ನಿ]]''
| ಇತ್ತಿಕ್ಕರ ಪಕ್ಕಿ
|
|<ref>{{cite news |last=Sidhardhan |first=Sanjith |date=9 January 2018 |title=Mohanlal's Ithikkara Pakki will be a revelation: Rosshan Andrrews |url=https://timesofindia.indiatimes.com/entertainment/malayalam/movies/news/mohanlals-ithikkara-pakki-will-be-a-revelation-rosshan-andrrews/articleshow/62427874.cms |access-date=9 January 2018 |work=[[The Times of India]]}}</ref>
|-
! scope="row" | ''[[ಡ್ರಾಮಾ]]''
| ರಾಜಗೋಪಾಲ್
|
|<ref>{{cite web |last=Smith |first=Alan |date=29 May 2018 |title=Mohanlal meets Margaret Preedy |url=http://www.kentonline.co.uk/maidstone/news/mohanlal-meets-margaret-preedy-183744/ |access-date=29 May 2018 |publisher=Kent Online}}</ref>
|-
! scope="row" | ''[[ಒಡಿಯಾನ್]]''
| ಒಡಿಯಾನ್ ಮಣಿಕ್ಯನ್
|
|<ref>{{cite news |last=James |first=Anu |date=4 October 2017 |title=Mohanlal on a roll: After Odiyan, superstar announces his next biggie |url=http://www.ibtimes.co.in/mohanlal-roll-after-odiyan-superstar-announces-his-next-biggie-744269 |access-date=28 January 2018 |work=[[International Business Times]]}}</ref>
|-
| rowspan="3" | 2019
! scope="row" | ''[[ಲೂಸಿಫರ್]]''
| ಸ್ಟೀಫನ್ ನೆಡುಂಪಲ್ಲಿ / ಖುರೇಶಿ ಅಬ್'ರಾಮ್
|
|<ref>{{cite web |date=4 June 2019 |title=Mohanlal's Lucifer storms into Rs 200 crore club, first for Malayalam cinema |url=https://www.hindustantimes.com/regional-movies/mohanlal-s-lucifer-storms-into-rs-200-crore-club-first-for-malayalam-cinema/story-vTm7JXaAdz0FWFTllE4n2I.html |access-date=16 February 2020 |website=Hindustan Times}}</ref>
|-
! scope="row" | ''[[ಇಟ್ಟಿಮಾನಿ: ಮೇಡ್ ಇನ್ ಚೈನಾ]]''
| ಇಟ್ಟಿಮಾನಿ ಮತ್ತು ಇಟ್ಟಿಮಾಥನ್
|
|<ref>{{cite news |date=24 April 2019 |title='Ittimani Made in China' puja in Kochi |url=https://timesofindia.indiatimes.com/entertainment/events/kochi/ittimani-made-in-china-puja-in-kochi/articleshow/69021700.cms?from=mdr |access-date=21 May 2019 |work=[[The Times of India]]}}</ref>
|-
! scope="row" | ''[[ಕಾಪ್ಪಾನ್]]''
| ಪಿಎಂ ಚಂದ್ರಕಾಂತ್ ವರ್ಮಾ
| ತಮಿಳು ಚಿತ್ರ
|<ref>{{Cite web |date=20 September 2019 |title=Mohanlal is the greatest actor we have in our country: Suriya on his 'Kaappaan' co-star |url=https://www.newindianexpress.com/entertainment/tamil/2019/sep/14/mohanlal-is-the-greatest-actor-we-have-in-our-country-suriya-on-his-kaappaan-co-star-2033651.html |website=The New Indian Express}}</ref>
|-
| 2020
! scope="row" | ''[[ಬಿಗ್ ಬ್ರದರ್]]''
| ಸಚಿದಾನಂದನ್
|
|<ref>{{cite web |date=11 October 2018 |title=Mohanlal's film with Siddique titled 'Big Brother' |url=https://www.thenewsminute.com/article/mohanlal-s-film-siddique-titled-big-brother-89829 |url-status=live |archive-url=https://web.archive.org/web/20190525133404/https://www.thenewsminute.com/article/mohanlal-s-film-siddique-titled-big-brother-89829 |archive-date=25 May 2019 |accessdate=25 May 2019 |website=The News Minute}}</ref>
|-
| rowspan="2" | 2021
! scope="row" | ''[[ದೃಶ್ಯಂ ೨]]''
| ಜಾರ್ಜ್ಕುಟ್ಟಿ
|
|<ref>{{Cite web |date=21 September 2020 |title=In Pics: Mohanlal's Drishyam 2 Goes on the Floors |url=https://www.news18.com/news/movies/in-pics-mohanlals-drishyam-2-goes-on-the-floors-2894603.html |website=News18}}</ref>
|-
! scope="row" | ''[[ಮರಕ್ಕರ್: ಅರಬಿಕ್ಕಡಲಿಂಟೆ ಸಿಂಹಂ]]''
| ಕುಂಜಾಲಿ ಮರಕ್ಕರ್
|
|<ref>{{cite news |date=2 September 2019 |title=Mohanlal: We are dedicating Marakkar to the Indian Navy |url=https://timesofindia.indiatimes.com/entertainment/malayalam/movies/news/mohanlal-we-are-dedicating-marakkar-to-the-indian-navy/articleshow/70945908.cms |url-status=live |archive-url=https://web.archive.org/web/20210410140701/https://timesofindia.indiatimes.com/entertainment/malayalam/movies/news/mohanlal-we-are-dedicating-marakkar-to-the-indian-navy/articleshow/70945908.cms |archive-date=10 April 2021 |access-date=30 March 2021 |work=[[Times of India]]}}</ref>
|-
| rowspan="4" | 2022
! scope="row"|''[[ಬ್ರೋ ಡ್ಯಾಡಿ]]''
| ಜಾನ್ ಚಾಕೋ ಕಟ್ಟಾಡಿ
|
|<ref>{{cite news |title=Mohanlal to lead in Prthviraj Sukumaran's Bro Daddy |url=https://www.indiatoday.in/movies/regional-cinema/story/prithviraj-sukumaran-announces-his-second-directorial-bro-daddy-with-mohanlal-1816663-2021-06-18}}</ref>
|-
! scope="row" |''[[ಆರಾಟ್ಟು]]''
| ಗಣಭೂಷಣಂ ನೆಯ್ಯಟ್ಟಿಂಕರ ಗೋಪನ್ / ಕರ್ನಲ್ ಸೂರ್ಯಚಂದ್ರ ಲಾಲ್ / ಏಜೆಂಟ್ X
|
|<ref>{{cite news |last=George |first=Anjana |date=12 October 2021 |title=Mohanlal, Unnikrishnan team up for a rustic entertainer |url=https://timesofindia.indiatimes.com/entertainment/malayalam/movies/news/mohanlal-unnikrishnan-team-up-for-a-rustic-entertainer/articleshow/78618723.cms |access-date=13 April 2021 |work=[[The Times of India]]}}</ref>
|-
! scope="row" |''[[12ನೇ ಮನುಷ್ಯ]]''
|ಡಿವೈಎಸ್ಪಿ ಚಂದ್ರಶೇಖರ್
|
|<ref>{{cite news |author=Express News Service |date=16 September 2021 |title=Mohanlal joins sets of Jeethu Joseph's 'The 12th Man' |url=https://www.newindianexpress.com/entertainment/malayalam/2021/sep/16/mohanlal-joins-sets-of-jeethu-josephs-the-12th-man-2359258.html |access-date=31 October 2021 |work=[[The New Indian Express]]}}</ref>
|-
! scope="row" |''[[ಮಾನ್ಸ್ಟರ್]]''
|ಲಕಿ ಸಿಂಗ್ / ಶಿವದೇವ್ ಸುಬ್ರಮಣಿಯಂ ಐಪಿಎಸ್
|
|<ref>{{cite news |date=10 November 2021 |title=Mohanlal announces new film 'Monster' |url=https://www.thehindu.com/entertainment/movies/mohanlal-announces-new-film-monster/article37417344.ece |work=The Hindu}}</ref>
|-
| rowspan="3" |2023
! scope="row" |''[[ಅಲೋನ್]]''
| ಕಾಳಿದಾಸ್
|
|<ref>{{Cite news |title=Mohanlal starrer 'Alone' finishes its shoot in just 18 days! – Times of India |url=https://timesofindia.indiatimes.com/entertainment/malayalam/movies/news/mohanlal-starrer-alone-finishes-its-shoot-in-just-18-days/articleshow/87223483.cms |access-date=1 December 2021 |website=The Times of India |language=en}}</ref>
|-
! scope="row" |''[[ಜೈಲರ್]]''
| ಮ್ಯಾಥ್ಯೂ
| ತಮಿಳು ಚಿತ್ರ; ಅತಿಥಿ ಪಾತ್ರ
|<ref>{{Cite web |date=6 January 2023 |title=Mohanlal to have a cameo in Rajinikanth's Jailer, fans call it 'iconic moment' |url=https://www.hindustantimes.com/entertainment/tamil-cinema/mohanlal-to-have-a-cameo-in-rajinikanth-s-jailer-fans-call-it-iconic-moment-101672988696266.html |url-status=live |archive-url=https://web.archive.org/web/20230106094648/https://www.hindustantimes.com/entertainment/tamil-cinema/mohanlal-to-have-a-cameo-in-rajinikanth-s-jailer-fans-call-it-iconic-moment-101672988696266.html |archive-date=6 January 2023 |access-date=6 January 2023 |website=[[Hindustan Times]]}}</ref>
|-
! scope="row" | ''[[ನೇರು]]''
|ವಕೀಲ ವಿಜಯಮೋಹನ್
|
|<ref>{{Cite web |date=5 October 2023 |title=Filming of Mohanlal's Neru wraps up |url=https://www.cinemaexpress.com/malayalam/news/2023/oct/05/filming-of-mohanlals-neru-wraps-up-48335.html |access-date=26 November 2023 |website=[[Cinema Express]] |language=en}}</ref>
|-
| rowspan="2" |2024
! scope="row" | ''[[ಮಲೈಕೋಟ್ಟೈ ವಾಲಿಬನ್]]''
| ಮಲೈಕೋಟ್ಟೈ ವಾಲಿಬನ್ / ಮಲೈಕೋಟ್ಟೈ ಮಲಯನ್
|
|<ref>{{cite news |date=18 January 2023 |title=Mohanlal-Lijo Jose Pellissery's 'Malaikottai Valiban' goes on floors in Rajasthan |url=https://timesofindia.indiatimes.com/entertainment/malayalam/movies/news/mohanlal-lijo-jose-pellisserys-malaikottai-valiban-goes-on-floors-in-rajasthan/articleshow/97086061.cms |access-date=19 January 2023 |newspaper=[[The Times of India]]}}</ref>
|-
! scope="row" | ''[[ಬರೋಜ್ 3D]]''
| ಬರೋಜ್
| ಸಹ ನಿರ್ದೇಶಕ
|<ref>{{Cite web |date=23 February 2021 |title=Mohanlal commences work on 'Barroz' |url=https://www.newindianexpress.com/entertainment/malayalam/2021/feb/23/mohanlal-commences-work-on-barroz-2267471.html |access-date=1 March 2021 |website=[[The New Indian Express]]}}</ref>
|-
| rowspan="6" |2025
! scope="row" | ''[[ಎಲ್೨: ಎಂಪುರಾನ್]]''
| ಖುರೇಶಿ ಅಬ್'ರಾಮ್ / ಸ್ಟೀಫನ್ ನೆಡುಂಪಲ್ಲಿ
|
|<ref>{{Cite web |date=1 December 2024 |title=Empuraan release date: Prithviraj wraps up shoot of Mohanlal's L2: Empuraan: 'What an incredible 14-month journey across 8 states and 4 countries' |url=https://indianexpress.com/article/entertainment/malayalam/prithviraj-sukumaran-wraps-up-shoot-of-mohanlals-l2-empuraan-9699956/ |access-date=25 December 2024 |website=[[The Indian Express]]}}</ref>
|-
! scope="row" | ''[[ತುದಾರುಂ]]''
| ಶಣ್ಮುಘಂ "ಬೆಂಜ್"
|
|<ref>{{Cite web |date=8 November 2024 |title=Mohanlal's 'L360' gets official title 'Thudarum', featuring a long-awaited reunion with Shobana |url=https://english.mathrubhumi.com/movies-music/news/mohanlal-l360-movie-title-shobana-tharun-moorthy-m-renjith-1.10059842 |access-date=23 November 2024 |website=[[Mathrubhumi]]}}</ref>
|-
! scope="row" | ''[[ಕಣ್ಣಪ್ಪ]]''
|ಕಿರಾತ || ತೆಲುಗು ಚಿತ್ರ; ಅತಿಥಿ ಪಾತ್ರ
|<ref>{{Cite news |date=19 August 2023 |title=Vishnu Manchu Begins His Dream Project Kannappa |url=https://www.deccanchronicle.com/entertainment/tollywood/180823/vishnu-manchu-begins-his-dream-project-kannappa.html |access-date=19 August 2023 |work=[[Deccan Chronicle]]}}</ref>
|-
! scope="row" | ''[[ಹೃದಯಪೂರ್ವಂ]]''
| ಸಂದೀಪ್ ಬಾಲಕೃಷ್ಣನ್ ||
|<ref>{{cite news |date=10 February 2025 |title=Hridayapoorvam: Mohanlal and Sathyan Anthikad's film goes on floors |url=https://www.thehindu.com/entertainment/movies/hridayapoorvam-mohanlal-and-sathyan-anthikads-film-goes-on-floors/article69202663.ece}}</ref>
|-
! scope="row" | ''[[ಭಾ ಭಾ ಬಾ]]''
| ಘಿಲ್ಲಿ ಬಾಲಾ
| ಅತಿಥಿ ಪಾತ್ರ
|<ref>{{cite news |date=20 July 2025 |title=Mohanlal's grand dance track in 'Bha Bha Ba' could be Malayalam cinema's costliest song yet - DEETS inside |url=https://timesofindia.indiatimes.com/entertainment/malayalam/movies/news/mohanlals-grand-dance-track-in-bha-bha-ba-could-be-malayalam-cinemas-costliest-song-yet-deets-inside/articleshow/122798898.cms |newspaper=The Times of India}}</ref>
|-
! scope="row" | ''[[ವೃಷಭ]]''
| ರಾಜಾ ವಿಜಯೇಂದ್ರ ವೃಷಭ / ಆದಿ ದೇವ ವರ್ಮಾ
| ದ್ವಿಭಾಷಾ ಚಿತ್ರ
|<ref>{{cite news |date=23 July 2023 |title=Vrushabha: Mohanlal's pan-India bilingual film goes on floors |url=https://timesofindia.indiatimes.com/entertainment/telugu/movies/news/vrushabha-mohanlals-pan-india-bilingual-film-goes-on-floors/articleshow/102058032.cms |newspaper=The Times of India}}</ref>
|-
| rowspan="8" |2026
! scope="row" | ''[[ಪ್ಯಾಟ್ರಿಯಾಟ್]]''
| ಕರ್ನಲ್ ರಹೀಂ ನಾಯಕ್
|ವಿಸ್ತೃತ ಅತಿಥಿ ಪಾತ್ರ
|<ref>{{Cite news |date=20 November 2024 |title=Mohanlal, Mammootty, Fahadh Faasil and Kunchacko Boban; Mahesh Narayanan's multi-starrer starts rolling |url=https://timesofindia.indiatimes.com/entertainment/malayalam/movies/news/mohanlal-mammootty-nayantharafahadh-faasil-and-more-mahesh-narayanans-multi-starrer-starts-rolling/articleshow/115474717.cms |access-date=21 November 2024 |work=The Times of India}}</ref>
|-
!scope="row" |''[[ದೃಶ್ಯಂ ೩]]''
|ಜಾರ್ಜ್ಕುಟ್ಟಿ
|
|<ref>{{Cite web |date=25 September 2025 |title=Mohanlal begins Drishyam 3 shoot a day after receiving Dadasaheb Phalke Award |url=https://www.cinemaexpress.com/malayalam/news/2025/Sep/25/mohanlal-begins-drishyam-3-shoot-a-day-after-receiving-dadasaheb-phalke-award |access-date=28 September 2025 |website=[[Cinema Express]] |language=en}}</ref>
|-
!scope="row"|''[[ತುಡಕ್ಕಂ]]''
| ಮಾಸ್ಟರ್
| rowspan="5" |ಅತಿಥಿ ಪಾತ್ರ
|<ref>{{Cite web |author=<!--Unlisted--> |date=2026-05-10 |title=Thudakkam, starring Vismaya Mohanlal, gets release date |url=https://www.cinemaexpress.com/malayalam/news/2026/May/10/thudakkam-starring-vismaya-mohanlal-gets-release-date |access-date=2026-05-10 |website=Cinema Express |language=en}}</ref>
|-
|{{Pending film|ಖಲೀಫಾ: ಭಾಗ I - ದಿ ಇಂಟ್ರೋ}}
|ಮಂಬರಾಯಕ್ಕಲ್ ಅಹಮದ್ ಅಲಿ
|<ref>{{Cite web |last=The Hollywood Reporter India |date=8 December 2025 |title=Mohanlal to star as Mambaraykkal Ahmad Ali in Prithviraj's ''Khalifa'' |url=https://www.hollywoodreporterindia.com/features/insight/mohanlal-to-act-in-prithviraj-sukumarans-khalifa/amp}}</ref>
|-
| {{Pending film|ಹೈವಾನ್}}
| {{TableTBA}}
|<ref>{{cite news |last1= |first1= |title='Haiwaan': Akshay Kumar and Saif Ali Khan reunite after 17 years for a Priyadarshan film |url=https://www.thehindu.com/entertainment/movies/haiwaan-akshay-kumar-saif-ali-khan-priyadarshan-17-years-oppam-remake/article69818435}}</ref>
|-
|{{Pending film|[[ಜೈಲರ್ 2]]}}
|ಮ್ಯಾಥ್ಯೂ
|<ref>{{Cite web |last=Entertainment Desk |first=TOI |date=5 December 2025 |title=''Jailer 2'' gets bigger - Malayalam superstar Mohanlal and Vinayakan are set to reprise their roles from the first film! |url=https://timesofindia.indiatimes.com/entertainment/malayalam/movies/news/jailer-2-gets-bigger-vinayakan-confirms-comeback-mohanlal-jets-off-to-join-rajinikanths-sequel-shoot/articleshow/125730992.cms |website=Times of India: Entertainment Desk}}</ref>
|-
|{{Pending film|[[ಕಥನಾರ್ - ದಿ ವೈಲ್ಡ್ ಸಾರ್ಸೆರರ್]]}}
|ಮಾರ್ ಅಬೋ
|<ref>{{Cite web |last=A Manu |first=Hridayambika |date=January 6, 2026 |title=ഇനി ഇത് നീലിയും വിറക്കും. ജയസൂര്യയുടെ കത്തനാറിൽ മാർ അബോ ആയി മോഹൻലാൽ |url=https://malayalam.indianexpress.com/social/kathanar-mohanlal-cameo-fan-made-poster-jayasurya-10975167}}</ref>
|-
| {{Pending film|italic=no|''ಅತಿಮನೋಹರಂ''}}
|ಎಸ್ಐ ಟಿ.ಎಸ್. ಲವೆಲಜನ್
| ಚಿತ್ರೀಕರಣ
|<ref>{{Cite news |date=23 January 2026 |title=Mohanlal returns to his classic moustache look for 'L366'|url=https://www.onmanorama.com/entertainment/entertainment-news/2026/01/23/mohanlal-joins-new-movie-sets-tharun-moorthy.html|access-date=24 January 2026 |work=Onmanorama}}</ref>
|-
| rowspan="2" |2027
|scope="row"{{Pending film|italic=no|''L367''}}
|<small>TBA</small>
|ಪೂರ್ವ-ನಿರ್ಮಾಣ
|<ref>{{Cite news |date=26 January 2026 |title=Mohanlal announces 'L367' with National Award winner Vishnu Mohan; FIRST LOOK poster out: 'Looking forward to this new chapter'|url=https://timesofindia.indiatimes.com/entertainment/malayalam/movies/news/mohanlal-announces-l367-with-national-award-winner-vishnu-mohan-first-look-poster-out-looking-forward-to-this-new-chapter/articleshow/127547504.cms|work=Times Entertainment}}</ref>
|-
|{{Pending film|ನೆಡುಂಕಂಡಂ ಮಿರಾಕಲ್}}
| {{TableTBA}}
| ಪೂರ್ವ-ನಿರ್ಮಾಣ
|<ref>{{Cite web |last=News |first=Reporter |title=ലാലേട്ടനൊപ്പം ഇനി പോത്തേട്ടൻസ് ബ്രില്യൻസ്; വരുന്നു 'നെടുങ്കണ്ടം മിറാക്കിൾ', അണിയറയിലും വമ്പന്മാർ |url=https://www.reporterlive.com/entertainment/entertainment-news/2026/07/03/dileesh-pothans-new-movie-with-mohanlal-nedukandam-miracle-announced |access-date=2026-07-03 |website=ReporterNews |language=ml}}</ref>
|-
|{{TBA}}
|{{Pending film|ಖಲೀಫಾ: ಭಾಗ II - ಹಿಸ್ ರೇನ್}}
|ಮಂಬರಾಯಕ್ಕಲ್ ಅಹಮದ್ ಅಲಿ
|''ಖಲೀಫಾ: ಭಾಗ I - ದಿ ಇಂಟ್ರೋ'' ನ ಪ್ರೀಕ್ವೆಲ್
|
|-
| {{TBA}}
! scope="row" {{pending film|italic=no| ''[[ರಾಮ್]]''}}
| ರಾಮ್ ಮೋಹನ್
| ವಿಳಂಬ
|<ref name="timesofindia.indiatimes.com">{{Cite news |title=Mohanlal looks super cool and stylish as he shoots for 'RAM' – Times of India |url=https://timesofindia.indiatimes.com/entertainment/malayalam/movies/news/mohanlal-looks-super-cool-and-stylish-as-he-shoots-for-ram/articleshow/73274437.cms |access-date=17 January 2020 |website=The Times of India |language=en}}</ref>
|}
== ನಿರ್ಮಾಪಕ ==
{| class="wikitable plainrowheaders sortable" style="margin-right: 0;"
|+ ಮೋಹನ್ಲಾಲ್ ನಿರ್ಮಾಪಕರಾಗಿ ಚಲನಚಿತ್ರ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ನಿರ್ಮಾಣ
! scope="col" | {{ref heading}}
|-
| 1984
! scope="row" | ''[[ಆದಿಯೋಳುಕ್ಕುಕಳ್]]''
| rowspan="3" |ಕ್ಯಾಸಿನೊ ಫಿಲ್ಮ್ಸ್
| rowspan="19"|<ref>{{Cite web |last=Suresh |first=Anandu |date=21 May 2025 |title=Forget the actor, it's Mohanlal the producer who should make a comeback; the one behind both his National Awards for Best Actor |url=https://indianexpress.com/article/entertainment/malayalam/forget-the-actor-its-mohanlal-the-producer-who-should-make-a-comeback-10017351/ |access-date=22 May 2025 |website=[[The Indian Express]]}}</ref>
|-
| 1985
! scope="row" | ''[[ಕರಿಂಬಿನ್ ಪೂವಿನಕ್ಕರೆ]]''
|-
| rowspan="2"| 1986
! scope="row" | ''[[ಗಾಂಧಿನಗರ್ 2ನೇ ಸ್ಟ್ರೀಟ್]]''
|-
! scope="row" | ''[[ಆದಿವೇರುಕಳ್]]''
| ಚೀರ್ಸ್ ಫಿಲ್ಮ್ಸ್
|-
| rowspan="2"| 1987
! scope="row" | ''[[ನಾಡೋಡಿಕ್ಕಟ್ಟು]]''
| ಕ್ಯಾಸಿನೊ ಫಿಲ್ಮ್ಸ್
|-
! scope="row" | ''[[ಉನ್ನಿಕಳೆ ಒರು ಕಧಾ ಪರಯಂ]]''
| rowspan="3" | ಚೀರ್ಸ್ ಫಿಲ್ಮ್ಸ್
|-
| rowspan="2"| 1988
! scope="row" | ''[[ಒರ್ಕ್ಕಪ್ಪುರತು]]''
|-
! scope="row" | ''[[ಆರ್ಯನ್]]''
|-
| 1990
! scope="row" | ''[[ಹಿಸ್ ಹೈನೆಸ್ ಅಬ್ದುಲ್ಲಾ]]''
| rowspan="11" | ಪ್ರಣವಂ ಆರ್ಟ್ಸ್ ಇಂಟರ್ನ್ಯಾಷನಲ್
|-
| 1991
! scope="row" | ''[[ಭರತಂ]]''
|-
| 1992
! scope="row" | ''[[ಕಮಲದಳಂ]]''
|-
| 1993
! scope="row" | ''[[ಮಿಧುನಂ]]''
|-
| 1994
! scope="row" | ''[[ಪಿಂಗಾಮಿ]]''
|-
| 1996
! scope="row" | ''[[ಕಾಲಪಾನಿ]]''
|-
| rowspan="2"| 1998
! scope="row" | ''[[ಕನ್ಮದಂ]]''
|-
! scope="row" | ''[[ಹರಿಕೃಷ್ಣನ್ಸ್]]''
|-
| rowspan="2"| 1999
! scope="row" | ''[[ಒಲಿಂಪಿಯನ್ ಆಂಥೋನಿ ಆಡಮ್]]''
|-
! scope="row" | ''[[ವನಪ್ರಸ್ಥಂ]]''
|-
| 2010
! scope="row" | ''[[ಕಾಂದಹಾರ್]]''
|}
== ನಿರೂಪಕ / ಧ್ವನಿ ==
{| class="wikitable plainrowheaders sortable" style="margin-right: 0;"
|+ ಮೋಹನ್ಲಾಲ್ ನಿರೂಪಕ ಅಥವಾ ಧ್ವನಿಯಾಗಿ ಚಲನಚಿತ್ರ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" class="unsortable" | ಟಿಪ್ಪಣಿಗಳು
! scope="col" class="unsortable" | {{ref heading}}
|-
| 1989
! scope="row"|''[[ಸೀಸನ್]]''
| rowspan="2" |ಪ್ರಮುಖ ನಟನಾಗಿಯೂ
|
|-
| 1990
! scope="row"|''[[ಇಂದ್ರಜಾಲಂ]]''
|
|-
| 1998
! scope="row" | ''[[ಕಲ್ಲು ಕೊಂಡೊರು ಪೆನ್ನು]]''
| ಚಿತ್ರಮಂದಿರ ಆವೃತ್ತಿ ಮಾತ್ರ
| style="text-align:center;"|<ref>{{cite news |author=Deepa Soman |date=15 October 2014 |title=Voice overs are in vogue in Mollywood |url=http://timesofindia.indiatimes.com/entertainment/malayalam/movies/news/Voice-overs-are-in-vogue-in-Mollywood/articleshow/44821451.cms |url-status=live |archive-url=https://web.archive.org/web/20141018235107/http://timesofindia.indiatimes.com/entertainment/malayalam/movies/news/Voice-overs-are-in-vogue-in-Mollywood/articleshow/44821451.cms |archive-date=18 October 2014 |access-date=11 December 2015 |work=[[The Times of India]]}}</ref>
|-
|2002
! scope="row" | ''[[ಒನ್ನಾಮನ್]]''
| rowspan="2" |ಪ್ರಮುಖ ನಟನಾಗಿಯೂ
|
|-
| 2007
! scope="row" | ''[[ಚೋಟ್ಟಾ ಮುಂಬೈ]]''
|
|-
| 2008
! scope="row" | ''[[ಸ್ವರ್ಣಂ]]''
|
| style="text-align:center;"|<ref>{{cite news |last=V. P. |first=Nicy |date=15 November 2014 |title=Mohanlal Turns Narrator for Priyadarshan's 'Aamayum Muyalum' |url=http://www.ibtimes.co.in/mohanlal-turns-narrator-priyadarshans-aamayum-muyalum-614103 |url-status=live |archive-url=https://web.archive.org/web/20151222094116/http://www.ibtimes.co.in/mohanlal-turns-narrator-priyadarshans-aamayum-muyalum-614103 |archive-date=22 December 2015 |access-date=25 February 2016 |work=[[International Business Times]]}}</ref>
|-
| 2009
! scope="row" | ''[[ಕೇರಳ ವರ್ಮಾ ಪಳಸ್ಸಿ ರಾಜಾ]]''
|
| style="text-align:center;"|<ref>{{cite news |last=Media |first=Sampurn |date=16 September 2009 |title=Mohanlal to do Pazhassi Raja's narration |url=http://www.newindianexpress.com/entertainment/malayalam/article153158.ece |url-status=dead |archive-url=https://web.archive.org/web/20151222133222/http://www.newindianexpress.com/entertainment/malayalam/article153158.ece |archive-date=22 December 2015 |access-date=19 February 2016 |work=[[The New Indian Express]]}}</ref>
|-
| 2010
!scope="row" | ''[[ಜನಕನ್]]''
|ಪ್ರಮುಖ ನಟನಾಗಿಯೂ
|
|-
| rowspan="2" | 2012
! scope="row" | ''[[ದಿ ಹಿಟ್ ಲಿಸ್ಟ್]]''
|
| style="text-align:center;"|<ref>{{cite news |last=V. P |first=Nicy |date=2 December 2014 |title=Priyadarshan-Jayasurya Film 'Aamayum Muyalum' Set to Release on 19 December |url=http://www.ibtimes.co.in/priyadarshan-jayasurya-film-aamayum-muyalum-set-release-19-december-615869 |url-status=live |archive-url=https://web.archive.org/web/20151222112240/http://www.ibtimes.co.in/priyadarshan-jayasurya-film-aamayum-muyalum-set-release-19-december-615869 |archive-date=22 December 2015 |access-date=11 December 2015 |work=[[International Business Times]]}}</ref>
|-
! scope="row" | ''[[ನಮುಕ್ಕು ಪಾರ್ಕ್ಕನ್]]''
|
| style="text-align:center;"|<ref>{{cite news |last=V. P |first=Nicy |date=15 November 2014 |title=Mohanlal Turns Narrator for Priyadarshan's 'Aamayum Muyalum' |url=http://www.ibtimes.co.in/mohanlal-turns-narrator-priyadarshans-aamayum-muyalum-614103 |url-status=live |archive-url=https://web.archive.org/web/20151222094116/http://www.ibtimes.co.in/mohanlal-turns-narrator-priyadarshans-aamayum-muyalum-614103 |archive-date=22 December 2015 |work=[[International Business Times]]}}</ref>
|-
| 2014
! scope="row" | ''[[ಆಮಯುಂ ಮುಯಲುಂ]]''
|
| style="text-align:center;"|<ref>{{cite news |last=Soman |first=Deepa |date=15 November 2015 |title=Mohanlal to introduce Aamayum Muyalum characters |url=http://timesofindia.indiatimes.com/entertainment/malayalam/movies/news/Mohanlal-to-introduce-Aamayum-Muyalum-characters/articleshow/45147882.cms |url-status=live |archive-url=https://web.archive.org/web/20141118095316/http://timesofindia.indiatimes.com/entertainment/malayalam/movies/news/Mohanlal-to-introduce-Aamayum-Muyalum-characters/articleshow/45147882.cms |archive-date=18 November 2014 |access-date=25 February 2016 |work=[[The Times of India]]}}</ref>
|-
| rowspan="2" | 2015
! scope="row" | ''[[ಎನ್ನುಮ್ ಎಪ್ಪೋಳುಂ]]''
| ಪ್ರಮುಖ ನಟನಾಗಿಯೂ
|
|-
! scope="row" | ''[[ಪಿಕೆಟ್ 43]]''
|
| style="text-align:center;"|<ref>{{cite web |last=Vikram |first=Raj |date=23 January 2015 |title=Picket 43 Movie Review |url=http://www.metromatinee.com/movie-review/picket-43-movie-review-556 |url-status=dead |archive-url=https://web.archive.org/web/20150506040812/http://www.metromatinee.com/movie-review/picket-43-movie-review-556 |archive-date=6 May 2015 |access-date=25 February 2016 |publisher=Metromatinee.com}}</ref>
|-
| rowspan="3" | 2017
! scope="row" | ''[[ಸಿ/ಓ ಸೈರಾ ಬಾನು]]''
| ಧ್ವನಿ ಪಾತ್ರ: ಪೀಟರ್ ಜಾರ್ಜ್
|
|-
! scope="row" | ''[[ತಿಯಾನ್]]''
| "ಸಮಯ" ದ ಧ್ವನಿ
| style="text-align:center;"|<ref>{{cite news |last=Thomas |first=Elizabeth |date=9 July 2017 |title=Tiyaan movie review: In the name of faith |url=https://www.deccanchronicle.com/entertainment/movie-reviews/090717/tiyaan-movie-review-in-the-name-of-faith.html |access-date=7 April 2020 |work=[[Deccan Chronicle]]}}</ref>
|-
! scope="row" | ''[[ಆಕಾಶಮಿತ್ತಾಯಿ]]''
|
| style="text-align:center;"|<ref>{{cite news |last1=Sreenivasan |first1=Deepthi |date=31 August 2017 |title=Appa comes to Mollywood |url=https://www.deccanchronicle.com/entertainment/mollywood/310817/appa-comes-to-mollywood.html |access-date=7 April 2020 |work=[[Deccan Chronicle]]}}</ref>
|-
|2018
! scope="row" | ''[[ಕಾಯಂಕುಲಂ ಕೊಚುನ್ನಿ]]''
| ಸಹ ನಟ
|
|-
| rowspan="3" | 2019
! scope="row" | ''[[ನೆಯುಂ ಞಾನುಂ]]''
|
|
|-
! scope="row" | ''100 ಇಯರ್ಸ್ ಆಫ್ ಕ್ರಿಸೊಸ್ಟಮ್''
| ಸಾಕ್ಷ್ಯಚಿತ್ರ; ಗಿನ್ನೆಸ್ ವಿಶ್ವ ದಾಖಲೆಗೆ ಪ್ರವೇಶ
| style="text-align:center;"|<ref>{{cite news |author=<!--staff byline--> |date=20 August 2019 |title=Guinness entry of docu on Chrysostom celebrated |url=https://www.thehindu.com/news/national/kerala/guinness-entry-of-docu-on-chrysostom-celebrated/article29184940.ece |access-date=7 April 2020 |work=[[The Hindu]]}}</ref>
|-
! scope="row" | ''[[ಸ್ಯೇ ರಾ ನರಸಿಂಹ ರೆಡ್ಡಿ]]''
|ಮಲಯಾಳಂ ಡಬ್ ಆವೃತ್ತಿ
| style="text-align:center;"|<ref>{{cite news |author=India Today Web Desk |date=20 August 2019 |title=Sye Raa Narasimha Reddy: Rajinikanth and Mohanlal to lend their voices for Chiranjeevi's film? |url=https://www.indiatoday.in/movies/regional-cinema/story/sye-raa-narasimha-reddy-rajinikanth-and-mohanlal-to-lend-their-voices-for-chiranjeevi-s-film-1582598-2019-08-20 |access-date=7 April 2020 |work=[[India Today]]}}</ref>
|-
|2022
! scope="row" | ''[[ಪಥೋನ್ಪಥಂ ನೂಟ್ಟಾಂಡು]]''
|
|
|-
|2023
! scope="row" | ''[[ಕಿಂಗ್ ಆಫ್ ಕೊಥಾ]]''
|
|
|-
| rowspan="2" |2024
! scope="row" | ''[[ಗು]]''
|
|<ref>{{cite news |author=India Today Web Desk |date=7 May 2024 |title=Trailer Of Saiju Kurup's Gu Promises Spine-chilling Horror |url=https://www.news18.com/movies/trailer-of-saiju-kurups-gu-promises-spine-chilling-horror-8881446.html |work=[[News 18]]}}</ref>
|-
! scope="row" | ''[[ಎಆರ್ಎಂ]]''
| ವಿಶ್ವ ಸೃಷ್ಟಿಕರ್ತನ ಧ್ವನಿ
|<ref>{{cite news |date=12 September 2024 |title=Mohanlal joins Tovino Thomas in 'Ajayante Randam Moshanam', surprise revealed |url=https://english.mathrubhumi.com/movies-music/news/mohanlal-joins-tovino-thomas-ajayante-randam-moshanam-voiceover-1.9895462 |work=[[Mathrubhumi News]]}}</ref>
|-
| 2026
! scope="row" | ''[[ಕೆಡಿ: ದಿ ಡೆವಿಲ್]]''
|ಮಲಯಾಳಂ ಡಬ್ ಆವೃತ್ತಿ
|
|}
== ರಂಗಭೂಮಿ ==
{| class="wikitable plainrowheaders sortable" style="margin-right: 0;"
|+ ಮೋಹನ್ಲಾಲ್ ರಂಗಭೂಮಿ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ನಾಟಕ
! scope="col" | ಪಾತ್ರ
! scope="col" | ಭಾಷೆ
! scope="col" | ಪ್ರಥಮ ಪ್ರದರ್ಶನ
! scope="col" class="unsortable" | {{ref heading}}
|-
| 2001
! scope="row" | ''[[ಕರ್ಣಭಾರಂ]]''
| [[ಕರ್ಣ]]
| [[ಸಂಸ್ಕೃತ]]
| ಸಿರಿ ಫೋರ್ಟ್ ಆಡಿಟೋರಿಯಂ, ನ್ಯೂ ಡೆಲ್ಲಿ
| style="text-align:center;"|<ref>{{cite web |last=Jose |first=D |date=13 March 2001 |title=Mohanlal's new obsession |url=http://www.rediff.com/movies/2001/mar/13mohan.htm |url-status=live |archive-url=https://web.archive.org/web/20160105190842/http://www.rediff.com/movies/2001/mar/13mohan.htm |archive-date=5 January 2016 |access-date=13 March 2010 |work=[[Rediff.com]]}}</ref>
|-
| 2003
! scope="row" | ''ಕಥಾಯಟ್ಟಂ''{{efn|''ಕಥಾಯಟ್ಟಂ'' ನಲ್ಲಿ, ಮೋಹನ್ಲಾಲ್ ಮಲಯಾಳಂ ಸಾಹಿತ್ಯದಿಂದ ಆಯ್ಕೆ ಮಾಡಲಾದ ಹತ್ತು ಕಾದಂಬರಿಗಳಿಂದ ಹತ್ತು ಶ್ರೇಷ್ಠ ಪಾತ್ರಗಳು ಮತ್ತು ಸಂದರ್ಭಗಳನ್ನು ನಿರ್ವಹಿಸಿದರು. ಅವುಗಳನ್ನು ಒಯ್ಯಾರತ್ತು ಚಂದು ಮೇನನ್ (''ಇಂದುಲೇಖ''), ಸಿ.ವಿ. ರಾಮನ್ ಪಿಳ್ಳೈ (''ಧರ್ಮರಾಜ''), ಎಸ್.ಕೆ. ಪೊಟ್ಟೆಕ್ಕಟ್ಟ್ (''ನಾಡನ್ ಪ್ರೇಮಂ''), ತಕ್ಕಳಿ ಶಿವಶಂಕರ ಪಿಳ್ಳೈ (''ಚೆಮ್ಮೀನ್''), ಪಿ. ಕೇಸವದೇವ್ (''ಒಡಯಿಲ್ ನಿನ್ನು''), ವೈಕಂ ಮುಹಮ್ಮದ್ ಬಷೀರ್, ಉರೂಬ್ (''ಉಮ್ಮಚು''), ಒ.ವಿ. ವಿಜಯನ್ (''ಖಾಸಕ್ಕಿಂಟೆ ಇತಿಹಾಸಂ''), ಎಂ. ಮುಕುಂದನ್ (''ಮಯ್ಯಳಿಪ್ಪುಳಯುಡೆ ತೀರಂಗಳಿಲ್''), ಮತ್ತು ಎಂ.ಟಿ. ವಾಸುದೇವನ್ ನಾಯರ್ (''ರಂಡಾಮೂಳಂ'') ಬರೆದಿದ್ದಾರೆ.<ref>{{cite news |date=4 December 2004 |title=Mohanlal to enact characters from Malayalam literature |url=http://www.thehindubusinessline.com/2004/12/04/stories/2004120402091700.htm |url-status=live |archive-url=https://web.archive.org/web/20090607065324/http://www.thehindubusinessline.com/2004/12/04/stories/2004120402091700.htm |archive-date=7 June 2009 |access-date=16 February 2016 |work=[[The Hindu]]}}</ref><ref name="kadhayattam" />}}
|
* ಸೂರಿ ನಂಬೂತಿರಿಪಾಡು
* ಚಂದ್ರಕರನ್
* ಪಪ್ಪು
* ಇಕ್ಕೊರನ್
* ಚೆಂಬನ್ ಕುಂಜು
* ಮಾಯನ್
* ಅಲ್ಲಪಿಚಾ ಮೊಲ್ಲಾಕಾ
* ದಾಸನ್
* ಭೀಮ
* ವೈಕಂ ಮುಹಮ್ಮದ್ ಬಷೀರ್
| [[ಮಲಯಾಳಂ]]
| ಸೆನೆಟ್ ಹಾಲ್, ಕೇರಳ ವಿಶ್ವವಿದ್ಯಾಲಯ
| style="text-align:center;"|<ref name="kadhayattam">{{cite news |date=28 October 2003 |title=Document for rejuvenating Malayalam to be released |url=http://www.thehindu.com/2003/10/28/stories/2003102807480400.htm |url-status=dead |archive-url=https://web.archive.org/web/20160219141233/http://www.thehindu.com/2003/10/28/stories/2003102807480400.htm |archive-date=19 February 2016 |access-date=28 October 2011 |work=[[The Hindu]]}}</ref>
|-
| rowspan="2" | 2008
! scope="row" | ''ಚಾಯಮುಖಿ''
| [[ಭೀಮ]]
| ಮಲಯಾಳಂ
| ಲುಲು ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರ, ತ್ರಿಶೂರ್
| style="text-align:center;"|<ref>{{cite news |last=Santhosh |first=K. |date=13 March 2008 |title=Mirroring the pangs of love |url=http://www.thehindu.com/todays-paper/tp-national/tp-kerala/mirroring-the-pangs-of-love/article1218835.ece |url-status=live |archive-url=https://web.archive.org/web/20160219140152/http://www.thehindu.com/todays-paper/tp-national/tp-kerala/mirroring-the-pangs-of-love/article1218835.ece |archive-date=19 February 2016 |access-date=10 December 2015 |work=[[The Hindu]]}}</ref>
|-
! scope="row" | ''ಮಾಯಾ ರಾವಣ'' (ಬ್ಯಾಲೆ)
| [[ಹನುಮಂತ]] (ಧ್ವನಿ)
| ಇಂಗ್ಲಿಷ್
| ನೆಹರು ಕೇಂದ್ರ, ಮುಂಬೈ
| style="text-align:center;"|<ref>{{cite news |last=Varma |first=Sivadas |date=12 May 2009 |title=Mayaravan unveiled |url=http://www.newindianexpress.com/cities/kochi/article117561.ece |url-status=dead |archive-url=https://web.archive.org/web/20151224105226/http://www.newindianexpress.com/cities/kochi/article117561.ece |archive-date=24 December 2015 |access-date=12 December 2015 |work=[[The New Indian Express]]}}{{indent|3}}{{cite news |last=Trivedi |first=Mihir |title=Celebs give full marks to Shobhana's Maya Ravan |url=http://www.ibnlive.com/videos/india/shobhanas-ravan-296253.html |archive-url=https://www.webcitation.org/6fQmer4DD?url=http://www.ibnlive.com/videos/india/shobhanas-ravan-296253.html |archive-date=20 February 2016 |access-date=12 December 2015 |agency=[[IBN Live]] |date=1 September 2008 |url-status=dead}}{{indent|3}}{{cite news |last=Arunachalam |first=Jayashree |title=Tale of epic grandeur |url=http://www.thehindu.com/features/friday-review/dance/tale-of-epic-grandeur/article26008.ece |archive-url=https://web.archive.org/web/20160219135057/http://www.thehindu.com/features/friday-review/dance/tale-of-epic-grandeur/article26008.ece |archive-date=19 February 2016 |access-date=12 December 2015 |agency=[[The Hindu]] |date=28 September 2009 |url-status=live}}</ref>
|-
| 2009
! scope="row" | ''[[ದಿ ಟೆಂಪೆಸ್ಟ್]]''
| [[ಪ್ರಾಸ್ಪೆರೊ]]
| ಮಲಯಾಳಂ
| ಜೋಸ್ ಥಾಮಸ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್
| style="text-align:center;"|<ref>{{cite news |last=Manmadhan |first=Prema |date=29 January 2009 |title=Mohanlal to play Prospero |url=http://www.thehindu.com/todays-paper/tp-features/tp-metroplus/mohanlal-to-play-prospero/article656373.ece |url-status=live |archive-url=https://web.archive.org/web/20160219140551/http://www.thehindu.com/todays-paper/tp-features/tp-metroplus/mohanlal-to-play-prospero/article656373.ece |archive-date=19 February 2016 |access-date=10 December 2015 |work=[[The Hindu]]}}</ref>
|-
| 2010
! scope="row" | ''[[ವಿಕ್ರಮೋರ್ವಶೀಯಂ]]''
| [[ಪುರುರವಸ]]
| ಸಂಸ್ಕೃತ
| ಉಜ್ಜಯಿನಿ, ಮಧ್ಯ ಪ್ರದೇಶ
| style="text-align:center;"|<ref>{{cite news |last=PTI |date=19 March 2010 |title=Mohanlal to return to stage with Kalidasa's play |url=http://www.thehindu.com/features/friday-review/theatre/mohanlal-to-return-to-stage-with-kalidasas-play/article258115.ece |url-status=live |archive-url=https://web.archive.org/web/20160219140004/http://www.thehindu.com/features/friday-review/theatre/mohanlal-to-return-to-stage-with-kalidasas-play/article258115.ece |archive-date=19 February 2016 |work=[[The Hindu]]}}</ref>
|-
| 2015
! scope="row" | ''ನಾಗ''
| scope="row" | ನಿರೂಪಕ
| ಮಲಯಾಳಂ
| ಪ್ಯಾರಿಷ್ ಹಾಲ್, ಸೇಂಟ್ ಜಾರ್ಜ್ ಚರ್ಚ್, ಕಳಡಿ
| style="text-align:center;"|<ref>{{cite news |last=Kallungal |first=Dhinesh |date=8 August 2015 |title=Mohanlal, Mukesh to Set Stage Afire with 'Naga' |url=http://www.newindianexpress.com/cities/kochi/Mohanlal-Mukesh-to-Set-Stage-Afire-with-Naga/2015/08/08/article2963127.ece |url-status=dead |archive-url=https://web.archive.org/web/20151222083204/http://www.newindianexpress.com/cities/kochi/Mohanlal-Mukesh-to-Set-Stage-Afire-with-Naga/2015/08/08/article2963127.ece |archive-date=22 December 2015 |access-date=10 December 2015 |work=[[The New Indian Express]]}}</ref>
|}
== ಸಣ್ಣ ಚಿತ್ರಗಳು ==
{| class="wikitable plainrowheaders sortable" style="margin-right: 0;"
|+ ಮೋಹನ್ಲಾಲ್ ಸಣ್ಣ ಚಿತ್ರ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! scope="col" class="unsortable" | ಟಿಪ್ಪಣಿಗಳು
! scope="col" class="unsortable" | {{ref heading}}
|-
| 2005
! scope="row" | ''[[ರಿಫ್ಲೆಕ್ಷನ್ಸ್]]''
| ಏಕಾಂಗಿ
|
| style="text-align:center;"|<ref>{{cite web |last=N |first=Patcy |date=20 May 2008 |title=From Mohanlal to Hollywood |url=http://www.rediff.com/movies/2008/may/20bejoy.htm |url-status=live |archive-url=https://web.archive.org/web/20160105121645/http://www.rediff.com/movies/2008/may/20bejoy.htm |archive-date=5 January 2016 |access-date=20 May 2008 |work=[[Rediff.com]]}}</ref>
|-
| 2010
! scope="row" | ''ವಿಲ್ಸನ್ ಪೆರೆಯಿರಾ''
| {{Hlist | ವಿಲ್ಸನ್ ಪೆರೆಯಿರಾ | ಅಳಿಲು | ಮೀನು | ಕಾಗೆ}}
| ಅನಿಮೇಷನ್ ಚಿತ್ರ; ನಿರೂಪಕ (ಕಾಗೆ) ಆಗಿಯೂ
| style="text-align:center;"|<ref>{{cite news |author=Staff Reporter |date=10 October 2010 |title=Kochiite makes it big in animation |url=http://www.thehindu.com/todays-paper/tp-national/tp-kerala/kochiite-makes-it-big-in-animation/article823145.ece |url-status=live |archive-url=https://web.archive.org/web/20160219141412/http://www.thehindu.com/todays-paper/tp-national/tp-kerala/kochiite-makes-it-big-in-animation/article823145.ece |archive-date=19 February 2016 |access-date=10 October 2011 |work=[[The Hindu]]}}</ref>
|-
| 2015
! scope="row" | ''[[ಪುಂಚಿರಿಕ್ಕು ಪರಸ್ಪರಂ]]''
| rowspan="5" | ಸ್ವತಃ
| rowspan="4" | ಅತಿಥಿ ಪಾತ್ರ
| style="text-align:center;"|<ref>{{cite news |last=Staff |first=Onmanorama |date=1 November 2015 |title=Mohanlal acts in short film to light up world with smile |url=http://english.manoramaonline.com/entertainment/entertainment-news/mohanlal-acts-in-short-film-punchirikkoo-parasparam-to-light-up-world-with-smile.html |url-status=live |archive-url=https://web.archive.org/web/20151222130521/http://english.manoramaonline.com/entertainment/entertainment-news/mohanlal-acts-in-short-film-punchirikkoo-parasparam-to-light-up-world-with-smile.html |archive-date=22 December 2015 |access-date=11 December 2015 |work=[[Malayala Manorama]]}}</ref>
|-
| 2016
! scope="row" | ''ಲೋಡಲ್ ಲೋಡಾ ಲೋಡಾಲು''
| style="text-align:center;"|<ref>{{cite news |last=Sidhardhan |first=Sanjith |date=14 June 2016 |title=Mohanlal makes time to dub for a children's short film – Times of India |url=http://timesofindia.indiatimes.com/entertainment/malayalam/Mohanlal-makes-time-to-dub-for-a-childrens-short-film/articleshow/52744558.cms |url-status=live |archive-url=https://web.archive.org/web/20160616190659/http://timesofindia.indiatimes.com/entertainment/malayalam/Mohanlal-makes-time-to-dub-for-a-childrens-short-film/articleshow/52744558.cms |archive-date=16 June 2016 |access-date=16 June 2016 |work=[[The Times of India]]}}</ref>
|-
| rowspan="2" | 2017
! scope="row" | ''ಅಮರ್ ಜವಾನ್ ಅಮರ್ ಭರತ್''
|
|-
! scope="row" | ''ಹ್ಯಾಪಿ ನ್ಯೂ ಇಯರ್''
| style="text-align:center;"|<ref>{{cite news |author=TNM Staff |date=27 December 2016 |title=A world without child abuse: Mohanlal dares to dream in Malayalam short film |url=http://www.thenewsminute.com/article/world-without-child-abuse-mohanlal-dares-dream-malayalam-short-film-54874 |access-date=1 January 2017 |work=[[The News Minute]]}}</ref>
|-
| 2020
! scope="row" | ''ಫ್ಯಾಮಿಲಿ''
| ಸೋನಿಗಾಗಿ ಸಣ್ಣ ಚಿತ್ರ
| style="text-align:center;"|<ref>{{cite news |last=Raghuvanshi |first=Aakanksha |date=7 April 2020 |title=Short Film Family, Featuring Rajinikanth, Amitabh Bachchan, Priyanka Chopra, Mohanlal, Chiranjeevi And Others, Gets A Big Shout-Out From Karan Johar |url=https://www.ndtv.com/entertainment/short-film-family-featuring-rajinikanth-amitabh-bachchan-priyanka-chopra-mohanlal-chiranjeevi-and-ot-2207269 |access-date=7 April 2020 |work=[[NDTV]]}}</ref>
|}
== ದೂರದರ್ಶನ ==
{{pending series key}}
{| class="wikitable plainrowheaders sortable"
|+ ಮೋಹನ್ಲಾಲ್ ದೂರದರ್ಶನ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! scope="col" | ವಾಹಿನಿ
! scope="col" | ಭಾಷೆ
! scope="col" class="unsortable" | {{ref heading}}
|-
| 2013
! scope="row" | ''[[ಬಡೈ ಬಂಗಲೋ]]''
| ಅತಿಥಿ
| [[ಏಷ್ಯಾನೆಟ್]]
| [[ಸಂಭಾಷಣಾ ಕಾರ್ಯಕ್ರಮ]]
|<ref>{{Cite news |title=Badai Bungalow: When Mohanlal spoke about the first time he was called 'Lalettan' |url=https://timesofindia.indiatimes.com/tv/news/malayalam/badai-bungalow-when-mohanlal-spoke-about-the-first-time-he-was-called-lalettan/articleshow/96360973.cms |work=The Times of India}}</ref>
|-
|2015
! scope="row" | ''ಸಂಸ್ಕೃತ ನ್ಯೂಸ್''
|ವರದಿಗಾರ
|[[ಜನಂ ಟಿವಿ]]
|ಉದ್ಘಾಟನಾ ಸಂಚಿಕೆ
|
|-
| 2017–2018
! scope="row" | ''[[ಲಾಲ್ ಸಲಾಂ]]''
| ಆತಿಥೇಯ
| [[ಅಮೃತ ಟಿವಿ]]
| ಸಂಭಾಷಣಾ ಕಾರ್ಯಕ್ರಮ; ಮೀರಾ ನಂದನ್ ಜೊತೆ ಸಹ-ಆತಿಥ್ಯ
|<ref>{{Cite news |title=Lalsalam: All you need to know about Mohanlal's new television show |url=http://www.ibtimes.co.in/lalsalam-all-you-need-know-about-mohanlals-new-television-show-videos-737929 |work=International Business Times}}</ref>
|-
|2018{{endash}} present
! scope="row" | ''[[ಬಿಗ್ ಬಾಸ್ ಮಲಯಾಳಂ|ಬಿಗ್ ಬಾಸ್]]''
|ಆತಿಥೇಯ
|[[ಏಷ್ಯಾನೆಟ್]]
|ರಿಯಾಲಿಟಿ ಶೋ
|<ref>{{cite news |date=2 June 2018 |title=Bigg Boss Malayalam: Mohanlal's show to begin from June 24. |url=https://indianexpress.com/article/entertainment/television/bigg-boss-malayalam-mohanlal-show-to-begin-from-june-24-5201679/ |work=The Indian Express}}</ref>
|-
|2019
! scope="row" | ''[[ಟಾಪ್ ಸಿಂಗರ್ ಸೀಸನ್ 1]]''
|ಅತಿಥಿ
|[[ಫ್ಲವರ್ಸ್ ಟಿವಿ]]
|ರಿಯಾಲಿಟಿ ಶೋ
|<ref>{{Cite news |date=6 September 2019 |title=Mohanlal will be the Onam guest of Top Singer kids |url=https://timesofindia.indiatimes.com/tv/news/malayalam/mohanlal-mesmerises-the-kids-on-top-singer/articleshow/70979373.cms |access-date=19 September 2019 |newspaper=[[Times of India]]}}</ref>
|-
|rowspan=3|2020
! scope="row" | ''ಫಸ್ಟ್ ಬೆಲ್''
|ಆತಿಥೇಯ (ಸಂಚಿಕೆ – [[ಪ್ರಾಜೆಕ್ಟ್ ಟೈಗರ್]])
|[[ವಿಕ್ಟರ್ಸ್ ಟಿವಿ]]
|ಶೈಕ್ಷಣಿಕ ಕಾರ್ಯಕ್ರಮ||
|-
! scope="row" | ''ಲಲೋನಮ್ ನಲ್ಲೋನಮ್''
|ಆತಿಥೇಯ / ವಿವಿಧ ಪಾತ್ರಗಳು
|[[ಏಷ್ಯಾನೆಟ್]]
|ಓಣಂ ವಿಶೇಷ ಕಾರ್ಯಕ್ರಮ
|
|-
! scope="row" | ''ಉತ್ಸವಂ ವಿತ್ ಲಾಲೆಟ್ಟನ್''
|ವಿವಿಧ ಪಾತ್ರಗಳು
|[[ಫ್ಲವರ್ಸ್ ಟಿವಿ]]
|ಕ್ರಿಸ್ಮಸ್ ವಿಶೇಷ ಕಾರ್ಯಕ್ರಮ
|
|-
|Rowspan=2|2021
! scope="row" | ''ಒನಾವಿಲ್ಲು''
|ಆತಿಥೇಯ
|[[ಏಷ್ಯಾನೆಟ್]]
|ಓಣಂ ವಿಶೇಷ ಕಾರ್ಯಕ್ರಮ
|
|-
! scope="row" | ''[[ಟಾಪ್ ಸಿಂಗರ್ ಸೀಸನ್ 2]]''
|ಅತಿಥಿ
|[[ಫ್ಲವರ್ಸ್ ಟಿವಿ]]
|ರಿಯಾಲಿಟಿ ಶೋ
|
|-
|2023
! scope="row" | ಮಳವಿಲ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ 2023
|ಅತಿಥಿ||[[ಮಳವಿಲ್ ಮನೋರಮ]]||||
|-
|Rowspan=4|2024
!scope="row" | ''[[ಟಾಪ್ ಸಿಂಗರ್ ಸೀಸನ್ 4]]''
|ಅತಿಥಿ
|[[ಫ್ಲವರ್ಸ್ ಟಿವಿ]]
|ರಿಯಾಲಿಟಿ ಶೋ
|<ref>{{cite web |date=17 September 2024 |title=Top Singer 4 winner: Droupadi Santhosh wins the title; takes home gold worth 15 lakhs |url=https://timesofindia.indiatimes.com/tv/news/malayalam/top-singer-4-winner-droupadi-santhosh-wins-the-title-takes-home-gold-worth-15-lakhs/articleshow/113422375.cms |work=[[The Times of India]]}}</ref>
|-
! scope="row" | ''[[ಮನೋರಥಂಗಳ್]]''
|| ಬಾಪುಟ್ಟಿ ||[[ಜೀ5]] || ಸಮಾಹಾರ ಸರಣಿ <br /> ವಿಭಾಗ: "[[ಒಲವುಂ ತೀರವುಂ]]" ||<ref>{{cite web |title=Priyadarshan's 'Olavum Theeravum' shot in black and white |url=https://www.onmanorama.com/entertainment/entertainment-news/2022/07/19/priyadarshan-olavum-theeravum-movie.html}}</ref><ref>{{cite web |date=14 July 2024 |title=MT Vasudevan Nair's Anthology Series Gets A Title, Trailer Release On This Date! |url=https://www.timesnownews.com/entertainment-news/malayalam/mt-vasudevan-nairs-anthology-series-gets-a-title-trailer-release-on-this-date-article-111726840 |work=[[Times Now]]}}</ref>
|-
! scope="row" | ಮಳವಿಲ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ 2024
|ಅತಿಥಿ||[[ಮಳವಿಲ್ ಮನೋರಮ]]||||
|-
! scope="row" | [[ವನಿತಾ ಫಿಲ್ಮ್ ಅವಾರ್ಡ್ಸ್]] 2024
|ಅತಿಥಿ||[[ಮಳವಿಲ್ ಮನೋರಮ]]||||
|-
|2025
!scope="row" | ''[[ಸ್ಟಾರ್ ಸಿಂಗರ್ ಸೀಸನ್ 10]]''
|ಅತಿಥಿ
|[[ಏಷ್ಯಾನೆಟ್]]
|ರಿಯಾಲಿಟಿ ಶೋ
|<ref>{{cite web |date=20 July 2025 |title=Mohanlal to make a smashing entry on 'Star Singer'; Fans anticipate Bigg Boss Malayalam 7 announcement |url=https://timesofindia.indiatimes.com/tv/news/malayalam/mohanlal-to-make-a-smashing-entry-on-star-singer-fans-anticipate-bigg-boss-malayalam-7-announcement/articleshow/122768759.cms |work=[[The Times of India]]}}</ref>
|-
|}
== ರೇಡಿಯೋ ನಾಟಕ ==
{| class="wikitable plainrowheaders" style="margin-right: 0;"
|+ ಮೋಹನ್ಲಾಲ್ ರೇಡಿಯೋ ನಾಟಕ ಕ್ರೆಡಿಟ್ಗಳ ಪಟ್ಟಿ
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! scope="col" | ಪ್ರಸಾರಕ
! scope="col" class="unsortable" | ಟಿಪ್ಪಣಿಗಳು
! scope="col" class="unsortable" | {{ref heading}}
|-
| 1987
! scope="row" | ''ಜೀವನುಲ್ಲ ಪ್ರತಿಮಕಳ್''
| {{Unknown}}
| [[ಆಲ್ ಇಂಡಿಯಾ ರೇಡಿಯೋ]]
| 27 ಸೆಪ್ಟೆಂಬರ್ 2010 ರಂದು ಮರುಪ್ರಸಾರ
| style="text-align:center;"|<ref>{{cite web |last=Varma |first=Sivadas |date=21 September 2010 |title=Go back in time with radio plays |url=http://www.newindianexpress.com/states/kerala/article489054.ece |url-status=dead |archive-url=https://web.archive.org/web/20151225042658/http://www.newindianexpress.com/states/kerala/article489054.ece |archive-date=25 December 2015 |access-date=21 September 2010 |publisher=[[The New Indian Express]]}}</ref>
|-
| 2024
! scope="row" | ''AiDEN - ದಿ ಎಐ ಸ್ಪಿರಿಟ್''
| ರಘು ಉತಾಮನ್
| [[94.3 ಕ್ಲಬ್ ಎಫ್ಎಂ]]
|
| style="text-align:center;"|<ref>{{cite web |last=Varma |first=Sivadas |date=19 July 2024 |title=Mohanlal's magical sound to premiere through Club FM's 'Aiden-The AI Spirit' |url=https://english.mathrubhumi.com/movies-music/news/mohanlal-makes-radio-debut-in-club-fm-aiden-the-ai-spirit-1.9738935 |access-date=20 July 2024 |publisher=Mathrubhumi News}}</ref>
|}
==ಪ್ರಶಸ್ತಿಗಳು==
[[File:Padmabhushan Mohanlal.jpg|upright|thumb|alt=Mohanlal at Rashtrapati Bhavan|ಮೋಹನ್ಲಾಲ್ ಅವರು [[ರಾಮ್ ನಾಥ್ ಕೋವಿಂದ್]], ಅಂದಿನ [[ಭಾರತದ ರಾಷ್ಟ್ರಪತಿ]] ಅವರಿಂದ [[ಪದ್ಮಭೂಷಣ]] ಸ್ವೀಕರಿಸುತ್ತಿರುವುದು]]
{{Main|List of awards and nominations received by Mohanlal}}
ಸುಮಾರು ನಲವತ್ತು ವರ್ಷಗಳ ವೃತ್ತಿಜೀವನದಲ್ಲಿ, ಮೋಹನ್ಲಾಲ್ ಅವರು ಸ್ಪರ್ಧಾತ್ಮಕ ಮತ್ತು ಗೌರವಾನ್ವಿತ ಎರಡೂ ರೀತಿಯ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ, ಅವುಗಳಲ್ಲಿ ಐದು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], ಒಂಬತ್ತು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] ಮತ್ತು [[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]] ಸೇರಿವೆ. ಕಲೆಗೆ ನೀಡಿದ ಕೊಡುಗೆಗಳಿಗಾಗಿ [[ಭಾರತ ಸರ್ಕಾರ]]ವು 2001 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ [[ಪದ್ಮಶ್ರೀ]] ಮತ್ತು 2019 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ [[ಪದ್ಮಭೂಷಣ]] ಪ್ರಶಸ್ತಿಯನ್ನು ನೀಡಿ ಗೌರವಿಸಿತು.<ref name="Padmabhushan2"/> 2025 ರಲ್ಲಿ, [[ಭಾರತ ಸರ್ಕಾರ]]ವು [[71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ]] ಭಾರತೀಯ ಸಿನೆಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ [[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]ಯನ್ನು ಅವರಿಗೆ ನೀಡಿ ಗೌರವಿಸಿತು.<ref name="Malayalam actor Mohanlal to be conferred Dadasaheb Phalke Award for 2023"/> 2010 ರಲ್ಲಿ [[ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ]]ದಿಂದ<ref name="auto"/><ref>[http://www.indianoftheyear.com/2007/judging_council.html CNN-IBN – INDIAN OF THE YEAR 2007] {{webarchive|url=https://web.archive.org/web/20111013161549/http://www.indianoftheyear.com/2007/judging_council.html |date=13 October 2011 }}. Indianoftheyear.com. Retrieved on 6 May 2012.</ref> ಮತ್ತು 2018 ರಲ್ಲಿ [[ಕ್ಯಾಲಿಕಟ್ ವಿಶ್ವವಿದ್ಯಾಲಯ]]ದಿಂದ<ref>{{cite news|title=Calicut University confers D.Litt on Mohanlal, P.T.Usha|url=http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html|access-date=29 January 2018|work=[[Business Standard]]|date=29 January 2018|archive-url=https://web.archive.org/web/20180129195119/http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html|archive-date=29 January 2018|url-status=live}}</ref> ಗೌರವಾನ್ವಿತ [[ಡಾಕ್ಟರ್ ಆಫ್ ಲೆಟರ್ಸ್]] ಪ್ರಶಸ್ತಿಯನ್ನು ಪಡೆದರು.
2008 ರಲ್ಲಿ, ಅವರು [[ಭಾರತೀಯ ಸೇನೆ|ಭಾರತೀಯ ಸೇನೆಯ]] ಅಧಿಕಾರಿಯಾಗಿ ಅಭಿನಯಿಸಿದ ''[[ಕುರುಕ್ಷೇತ್ರ (2008 ಚಲನಚಿತ್ರ)|ಕುರುಕ್ಷೇತ್ರ]]'' ಚಿತ್ರೀಕರಣದ ಸಮಯದಲ್ಲಿ, ಮೋಹನ್ಲಾಲ್ [[ಭಾರತದ ಪ್ರಾದೇಶಿಕ ಸೇನೆ]]ಗೆ ಸೇರುವ ಆಸಕ್ತಿಯನ್ನು ವ್ಯಕ್ತಪಡಿಸಿದರು. ಆದರೆ 42 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಸ್ವಯಂಸೇವಕ ಪಡೆಗೆ ಸೇರಲು ಅರ್ಹರಲ್ಲದ ಕಾರಣ ಅವರಿಗೆ ಸಾಧ್ಯವಾಗಲಿಲ್ಲ.<ref>[http://ibnlive.in.com/news/mohanlal-wants-to-join-territorial-army/77204-8.html Mohanlal wants to join Territorial Army – Movies News News – IBNLive] {{Webarchive|url=https://web.archive.org/web/20110728130958/http://ibnlive.in.com/news/mohanlal-wants-to-join-territorial-army/77204-8.html |date=28 July 2011 }}. Ibnlive.in.com. 1 November 2008. Retrieved on 6 May 2012.</ref> 9 ಜುಲೈ 2008 ರಂದು, ಅಂದಿನ ಸೇನಾ ಮುಖ್ಯಸ್ಥ [[ದೀಪಕ್ ಕಪೂರ್]] ಅವರಿಂದ ಗೌರವಾನ್ವಿತ [[ಲೆಫ್ಟಿನೆಂಟ್ ಕರ್ನಲ್]] ಹುದ್ದೆಯಲ್ಲಿ ಅವರನ್ನು ಪ್ರಾದೇಶಿಕ ಸೇನೆಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಲಾಯಿತು. ಈ ಗೌರವವನ್ನು ಪಡೆದ ಮೊದಲ ನಟಿ ಇವರು.<ref>Thiruvananthapuram [http://www.hindustantimes.com/Mohanlal-to-join-Territorial-Army/Article1-429999.aspx Mohanlal to join Territorial Army] {{webarchive|url=https://web.archive.org/web/20101201053052/http://www.hindustantimes.com/Mohanlal-to-join-Territorial-Army/Article1-429999.aspx |date=1 December 2010 }}. Hindustan Times. 8 July 2009</ref><ref>{{cite news | url=http://www.hindu.com/2009/07/10/stories/2009071056411800.htm | location=[[Chennai]] | work=[[The Hindu]] | title=Mohanlal joins Territorial Army | date=10 July 2009 | access-date=29 May 2011 | archive-url=https://web.archive.org/web/20090913052237/http://www.hindu.com/2009/07/10/stories/2009071056411800.htm | archive-date=13 September 2009 | url-status=dead }}</ref> 2012 ರಲ್ಲಿ, ದಕ್ಷಿಣ ಕೊರಿಯಾದ [[ಕುಕ್ಕಿವಾನ್]] ನಿಂದ [[ಟೇಕ್ವಾಂಡೋ]] ನಲ್ಲಿ ಗೌರವಾನ್ವಿತ [[ಕಪ್ಪು ಪಟ್ಟಿ (ಸಮರ ಕಲೆಗಳು)|ಕಪ್ಪು ಪಟ್ಟಿ]] ಬಿರುದನ್ನು ನೀಡಲಾಯಿತು. ಈ ಬಿರುದನ್ನು ಪಡೆದ ಮೊದಲ [[ದಕ್ಷಿಣ ಭಾರತ]]ದ ನಟಿ ಇವರು.<ref name = blackbelt/><ref>{{Cite news|url = https://www.indiatoday.in/movies/celebrities/story/mohanlal-blackbelt-119610-2012-10-24|title = Blackbelt for Mohanlal!|date = 25 October 2012|work = [[India Today]]|access-date = 6 October 2014|archive-url = https://web.archive.org/web/20141015210145/http://indiatoday.intoday.in/story/mohanlal-blackbelt/1/226217.html|archive-date = 15 October 2014|url-status = live}}</ref>
{| class="infobox" style="width:14em; text-align:left; font-size:90%; vertical-align:middle; background:#eef;"
|+ <span style="font-size: 10pt">[[ಮೋಹನ್ಲಾಲ್]] ಪಡೆದ ಪ್ರಶಸ್ತಿಗಳ ಪಟ್ಟಿ</span>
|- style="background:white;"
| colspan="3" style="text-align:center;" | [[File:Actor Mohanlal.jpg|thumb|2018 ರಲ್ಲಿ ಮೋಹನ್ಲಾಲ್]]
|-
| colspan="3" |
{| class="collapsible collapsed" style="width:100%;"
! colspan="3" style="background:#d9e8ff; text-align:center;"| ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
|- style="background:#d9e8ff; text-align:center;"
!style="vertical-align: middle;"| ಪ್ರಶಸ್ತಿ
| style="background:#cec; font-size:9pt; width:40px;"| ಗೆಲುವು
| style="background:#ecc; font-size:9pt; width:40px;"| ನಾಮನಿರ್ದೇಶನಗಳು
|-
| style="text-align:left;"|
;ಬಿರುದುಗಳು ಮತ್ತು ಗೌರವಗಳು
|{{won|7}}
|{{nom|7}}
|-
| style="text-align:left;"|
;[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]
|{{won|6}}
|{{nom|37}}
|-
| style="text-align:left;"|
;[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]
|{{won|9}}
|{{nom|30}}
|-
| style="text-align:left;"|
;[[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]]
|{{won|9}}
|{{nom|12}}
|-
| style="text-align:left;"|
;[[ನಂದಿ ಪ್ರಶಸ್ತಿಗಳು]]
|{{won|1}}
|{{nom|1}}
|-
| style="text-align:left;"|
;[[ಫಿಲ್ಮ್ಫೇರ್ ಪ್ರಶಸ್ತಿಗಳು]]
|{{won|0}}
|{{nom|11}}
|-
| style="text-align:left;"|
;[[ಸ್ಕ್ರೀನ್ ಪ್ರಶಸ್ತಿಗಳು]]
|{{won|1}}
|{{nom|1}}
|-
| style="text-align:left;"|
;ಸ್ಕ್ರೀನ್ ಪ್ರಶಸ್ತಿಗಳು ದಕ್ಷಿಣ
|{{won|1}}
|{{nom|1}}
|-
| style="text-align:left;"|
;[[ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು]]
|{{won|1}}
|{{nom|1}}
|-
| style="text-align:left;"|
;[[IIFA ಉತ್ಸವಂ]]
|{{won|0}}
|{{nom|2}}
|-
| style="text-align:left;"|
;[[ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]
|{{won|5}}
|{{nom|9}}
|-
| style="text-align:left;"|
;[[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]]
|{{won|12}}
|{{nom|19}}
|-
| style="text-align:left;"|
;[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]]
|{{won|15}}
|{{nom|15}}
|-
| style="text-align:left;"|
;[[ವನಿತಾ ಚಲನಚಿತ್ರ ಪ್ರಶಸ್ತಿಗಳು]]
|{{won|9}}
|{{nom|9}}
|-
| style="text-align:left;"|
;[[ಏಷ್ಯಾವಿಷನ್ ಪ್ರಶಸ್ತಿಗಳು]]
|{{won|6}}
|{{nom|6}}
|-
| style="text-align:left;"|
;ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು
|{{won|6}}
|{{nom|6}}
|-
| style="text-align:left;"|
;ಅಮೃತ ಚಲನಚಿತ್ರ ಪ್ರಶಸ್ತಿಗಳು
|{{won|5}}
|{{nom|5}}
|-
| style="text-align:left;"|
;ಇತರ ಪ್ರಶಸ್ತಿಗಳು, ಗೌರವಗಳು ಮತ್ತು ಮನ್ನಣೆಗಳು
|{{won|57}}
|{{nom|0}}
|}
|- style="background-color:#d9e8ff;"
| colspan="3" style="text-align:center;" | ಒಟ್ಟು
|-
| {{won|ಗೆಲುವುಗಳು}}
| colspan="2" width=50 {{won|150}}
|-
|- style="background:#d9e8ff;"
| colspan="3" style="font-size: smaller; text-align:center;" | [[#References|ಉಲ್ಲೇಖಗಳು]]
|}
[[ಮೋಹನ್ಲಾಲ್]] ಅವರು ಭಾರತೀಯ ನಟ, [[ಪ್ಲೇಬ್ಯಾಕ್ ಗಾಯಕ]] ಮತ್ತು [[ಚಲನಚಿತ್ರ ನಿರ್ಮಾಪಕ|ನಿರ್ಮಾಪಕ]] ಅವರು ಪ್ರಧಾನವಾಗಿ [[ಮಲಯಾಳಂ ಚಲನಚಿತ್ರ]]ಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು [[ಮೋಹನ್ಲಾಲ್ ಚಲನಚಿತ್ರಗಳ ಪಟ್ಟಿ|350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ]] ಅಭಿನಯಿಸಿದ್ದಾರೆ. ಅವರು [[ಭಾರತೀಯ ಸಿನೆಮಾ]]ದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಶ್ರೇಷ್ಠ ನಟರಲ್ಲಿ ಒಬ್ಬರಾಗಿ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಅವರು ಎರಡು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]], ಒಂದು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ (ವೈಶಿಷ್ಟ್ಯ ಚಲನಚಿತ್ರ)]], ಒಂದು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯ ಚಲನಚಿತ್ರ)]] ಮತ್ತು ನಿರ್ಮಾಪಕರಾಗಿ [[ಅತ್ಯುತ್ತಮ ವೈಶಿಷ್ಟ್ಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]], ಒಂಬತ್ತು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] (ಆರರಲ್ಲಿ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]] ಸೇರಿದೆ), ಒಂದು [[ನಂದಿ ಪ್ರಶಸ್ತಿಗಳು|ನಂದಿ ಪ್ರಶಸ್ತಿ]], ಒಂಬತ್ತು [[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]], ಎರಡು [[ಸ್ಕ್ರೀನ್ ಪ್ರಶಸ್ತಿಗಳು]], ಒಂದು [[ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು|ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ]], ನಾಲ್ಕು [[ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], ಮತ್ತು ಹನ್ನೊಂದು [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]] ಮತ್ತು ಹಲವಾರು ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮೋಹನ್ಲಾಲ್ ಅವರು 1978 ರಲ್ಲಿ ಪ್ರಣಯ ಚಲನಚಿತ್ರ ''[[ಮಂಜಿಲ್ ವಿರಿಂಜ ಪೂಕ್ಕಲ್]]'' ನಲ್ಲಿ ವಿರೋಧಿ ಪಾತ್ರದಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಅಂತಹ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಂಡ ನಂತರ, ಅವರು 1980 ರ ದಶಕದ ಮಧ್ಯಭಾಗದಲ್ಲಿ ಪ್ರಮುಖ ನಟನಾಗಿ ಸ್ಥಾಪಿತರಾದರು. 1986 ರಲ್ಲಿ, ಅವರು ಹಾಸ್ಯ ನಾಟಕ ''[[ಟಿ. ಪಿ. ಬಾಲಗೋಪಾಲನ್ ಎಂ. ಎ.]]'' ನಲ್ಲಿ ನಟಿಸಿದರು, ಇದಕ್ಕಾಗಿ ಅವರು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]] ಗೆದ್ದರು. ಅದೇ ವರ್ಷ ಹಾಸ್ಯ ನಾಟಕ ''[[ಸನ್ಮನಸ್ಸುಳ್ಳವರ್ಕ್ಕು ಸಮಾಧಾನಂ]]'' ನಲ್ಲಿನ ಅಭಿನಯಕ್ಕಾಗಿ [[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಮಲಯಾಳಂ]] ಅನ್ನು ಸಹ ಪಡೆದರು. ನಾಟಕ ಚಲನಚಿತ್ರ ''[[ಕಿರೀಡಂ (1989 ಚಲನಚಿತ್ರ)|ಕಿರೀಡಂ]]'' (1989) ನಲ್ಲಿನ ಅವರ ಪಾತ್ರವು ಅವರಿಗೆ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ (ವೈಶಿಷ್ಟ್ಯ ಚಲನಚಿತ್ರ)|ವಿಶೇಷ ಉಲ್ಲೇಖ]] ಪ್ರಶಸ್ತಿಯನ್ನು ತಂದುಕೊಟ್ಟಿತು.
1991 ರಲ್ಲಿ, ಅವರು ಸಂಗೀತ ಚಲನಚಿತ್ರ ''[[ಭಾರತಂ]]'' ಅನ್ನು ನಿರ್ಮಿಸಿದರು ಮತ್ತು ನಟಿಸಿದರು, ಇದು ಅವರಿಗೆ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]] ಪ್ರಶಸ್ತಿಯನ್ನು ತಂದುಕೊಟ್ಟಿತು. 2013 ರಲ್ಲಿ ಭಾರತೀಯ ಚಲನಚಿತ್ರ ಉದ್ಯಮದ ಶತಮಾನೋತ್ಸವದ ಸಂದರ್ಭದಲ್ಲಿ ಸಂಕಲಿಸಲಾದ "ಭಾರತೀಯ ಸಿನೆಮಾದ 25 ಶ್ರೇಷ್ಠ ಅಭಿನಯ ಪ್ರದರ್ಶನಗಳು" ಪಟ್ಟಿಯಲ್ಲಿ ''[[ಫೋರ್ಬ್ಸ್ ಇಂಡಿಯಾ]]'' ಅವರ ಪಾತ್ರವನ್ನು ಸೇರಿಸಿತು. 1997 ರಲ್ಲಿ ಬಿಡುಗಡೆಯಾದ ಅವರ ನಾಲ್ಕು ಚಲನಚಿತ್ರಗಳು{{mdash}}''[[ಚಂದ್ರಲೇಖಾ (1997 ಚಲನಚಿತ್ರ)|ಚಂದ್ರಲೇಖಾ]]'', ''[[ಗುರು (1997 ಚಲನಚಿತ್ರ)|ಗುರು]]'', ''[[ಒರು ಯಾತ್ರಮೊಳಿ]]'', ಮತ್ತು ''[[ಆರಾಂ ತಂಪುರನ್]]'' ಅವರಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಸ್ಕ್ರೀನ್ ಪ್ರಶಸ್ತಿಗಳು ದಕ್ಷಿಣವನ್ನು ತಂದುಕೊಟ್ಟವು. ಅವರು ನಾಟಕ ಚಲನಚಿತ್ರ ''[[ವನಪ್ರಸ್ಥಂ]]'' (1999) ಅನ್ನು ಸಹ-ನಿರ್ಮಿಸಿದರು ಮತ್ತು ನಟಿಸಿದರು, [[ಕಥಕ್ಕಳಿ]] ಕಲಾವಿದನಾಗಿ ಅವರ ಪಾತ್ರವು ಅವರಿಗೆ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]], [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]], [[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]], ಮತ್ತು [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿ]] ಗಳನ್ನು ತಂದುಕೊಟ್ಟಿತು. [[File:Padmabhushan Mohanlal.jpg|upright|thumb|ಮೋಹನ್ಲಾಲ್ ಅವರು [[ರಾಮ್ ನಾಥ್ ಕೋವಿಂದ್]], [[ಭಾರತದ ರಾಷ್ಟ್ರಪತಿ]] ಅವರಿಂದ [[ಪದ್ಮಭೂಷಣ]] ಸ್ವೀಕರಿಸುತ್ತಿರುವುದು]]
ಅವರ [[ಬಾಲಿವುಡ್|ಹಿಂದಿ]] ಚೊಚ್ಚಲ ಚಿತ್ರ ''[[ಕಂಪನಿ (2002 ಚಲನಚಿತ್ರ)|ಕಂಪನಿ]]'' (2002) ಗಾಗಿ [[ಫಿಲ್ಮ್ಫೇರ್ ಪ್ರಶಸ್ತಿ]]ಗೆ ನಾಮನಿರ್ದೇಶನಗೊಂಡರು ಮತ್ತು ಅಪರಾಧ ನಾಟಕದಲ್ಲಿನ ಅಭಿನಯವು ಅವರಿಗೆ [[ಸ್ಕ್ರೀನ್ ಪ್ರಶಸ್ತಿ]] ಮತ್ತು [[ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು|ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ]] ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರು 2005 ರ ನಾಟಕ ಚಲನಚಿತ್ರ ''[[ಥನ್ಮತ್ರ]]'' ದಲ್ಲಿ [[ಅಲ್ಝೈಮರ್ ಕಾಯಿಲೆ]]ಯಿಂದ ಬಳಲುತ್ತಿರುವ ರೋಗಿಯ ಪಾತ್ರವನ್ನು ನಿರ್ವಹಿಸಿದರು, ಇದಕ್ಕಾಗಿ ಅವರು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]] ಮತ್ತು [[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಮಲಯಾಳಂ]] ಪ್ರಶಸ್ತಿಗಳನ್ನು ಪಡೆದರು.
ಅವರು 2011 ರ ಪ್ರಣಯ ನಾಟಕ ''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]'' ನಲ್ಲಿ ವಯಸ್ಸಾದ ಹಾಸಿಗೆ ಹಿಡಿದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಅವರ ಪಾತ್ರವು ಅವರಿಗೆ [[ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]] ಅತ್ಯುತ್ತಮ ನಟ ಪ್ರಶಸ್ತಿ ಮತ್ತು [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]], [[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]], [[ವನಿತಾ ಚಲನಚಿತ್ರ ಪ್ರಶಸ್ತಿಗಳು]], ಮತ್ತು [[ಮಾತೃಭೂಮಿ]] ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಇತರ ಪ್ರಶಸ್ತಿಗಳನ್ನು ತಂದುಕೊಟ್ಟಿತು. 2013 ರಲ್ಲಿ, ಅವರು ಥ್ರಿಲ್ಲರ್ ಚಲನಚಿತ್ರ ''[[ದೃಶ್ಯಂ]]'' ನಲ್ಲಿ ನಟಿಸಿದರು, ಇದಕ್ಕಾಗಿ ಅವರು [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]] ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. 2013 ರಲ್ಲಿ [[CNN-IBN]] ನಡೆಸಿದ "ಭಾರತೀಯ ಸಿನೆಮಾದ 100 ವರ್ಷಗಳು" ಸಮೀಕ್ಷೆಯಲ್ಲಿ, "ಭಾರತದ ಶ್ರೇಷ್ಠ ನಟರು" ಪಟ್ಟಿಯಲ್ಲಿ ನಟರಲ್ಲಿ ಅವರು ಮೂರನೇ ಸ್ಥಾನ ಪಡೆದರು. 2017 ರಲ್ಲಿ, ''[[ಜನತಾ ಗ್ಯಾರೇಜ್]]'', ''[[ಮುಂತಿರಿವಳ್ಳಿಕಲ್ ಥಾಲಿರ್ಕ್ಕುಂಬೋಲ್]]'', ಮತ್ತು ''[[ಪುಲಿಮುರುಗನ್]]'' ಚಲನಚಿತ್ರಗಳಲ್ಲಿನ ಅಭಿನಯಕ್ಕಾಗಿ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯ ಚಲನಚಿತ್ರ)|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ]] ಗೆದ್ದರು.
ಅಭಿನಯದ ಪ್ರಶಸ್ತಿಗಳ ಜೊತೆಗೆ, [[ಭಾರತ ಸರ್ಕಾರ]]ವು ಕಲೆಗೆ ನೀಡಿದ ಕೊಡುಗೆಗಳಿಗಾಗಿ 2001 ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ [[ಭಾರತೀಯ ಗೌರವ ಪದ್ಧತಿ|ನಾಗರಿಕ ಪ್ರಶಸ್ತಿ]]ಯಾದ [[ಪದ್ಮಶ್ರೀ]] ಮತ್ತು 2019 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ [[ಪದ್ಮಭೂಷಣ]] ಪ್ರಶಸ್ತಿಯನ್ನು ನೀಡಿ ಗೌರವಿಸಿತು. 2009 ರಲ್ಲಿ [[ಭಾರತೀಯ ಪ್ರಾದೇಶಿಕ ಸೇನೆ]]ಯಿಂದ ಗೌರವಾನ್ವಿತ [[ಲೆಫ್ಟಿನೆಂಟ್ ಕರ್ನಲ್]] ಹುದ್ದೆಯನ್ನು ನೀಡಲಾಯಿತು. ಮೋಹನ್ಲಾಲ್ ಅವರಿಗೆ [[ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ]] (2010) ಮತ್ತು [[ಕ್ಯಾಲಿಕಟ್ ವಿಶ್ವವಿದ್ಯಾಲಯ]] (2018) ರಿಂದ ಗೌರವಾನ್ವಿತ [[ಡಾಕ್ಟರ್ ಆಫ್ ಲೆಟರ್ಸ್]] ಪ್ರಶಸ್ತಿ, ಹಾಗೆಯೇ ಹಲವಾರು ಇತರ ಮನ್ನಣೆಗಳನ್ನು ನೀಡಲಾಯಿತು.
== ಗೌರವಗಳು ==
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:10%;"| ಗೌರವ
! scope="col" style="width:10%;"| ಗೌರವ ನೀಡುವ ಸಂಸ್ಥೆ
! scope="col" style="width:15%;"| ಪ್ರದಾನ ಮಾಡಿದವರು
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2001
|[[ಪದ್ಮಶ್ರೀ]]
|[[ಭಾರತ ಸರ್ಕಾರ]]
|[[ಕೆ. ಆರ್. ನಾರಾಯಣನ್]], [[ಭಾರತದ ರಾಷ್ಟ್ರಪತಿ]]
|style="text-align:center;"|<ref>{{Cite web |title=Mohanlal nominated for Padma Bhushan |url=http://asianetindia.com/mohanlal-nominated-for-padma-bhushan/ |url-status=dead |archive-url=https://web.archive.org/web/20150419132031/http://asianetindia.com/mohanlal-nominated-for-padma-bhushan/ |archive-date=19 April 2015 |website=[[Asianet Satellite Communications|Asianet]] |access-date=14 November 2014 }}</ref>
|-
! scope="row"| 2009
|ಗೌರವಾನ್ವಿತ [[ಲೆಫ್ಟಿನೆಂಟ್ ಕರ್ನಲ್]]
|[[ಭಾರತದ ಪ್ರಾದೇಶಿಕ ಸೇನೆ|ಭಾರತೀಯ ಪ್ರಾದೇಶಿಕ ಸೇನೆ]]
|[[ದೀಪಕ್ ಕಪೂರ್]], [[ಭಾರತದ ಸೇನಾ ಮುಖ್ಯಸ್ಥ]]
|style="text-align:center;"|<ref>{{Cite web |last=Thapar |first=Vishal |date=10 July 2009 |title=Meet Lt Colonel Mohanlal, actor in the Army |url=http://ibnlive.in.com/news/meet-lt-colonel-mohanlal-actor-in-the-army/96788-8.html |url-status=dead |archive-url=https://web.archive.org/web/20090714180011/http://ibnlive.in.com/news/meet-lt-colonel-mohanlal-actor-in-the-army/96788-8.html |archive-date=14 July 2009 |website=[[IBNLive]]}}</ref>
|-
! scope="row"| 2010
|ಗೌರವಾನ್ವಿತ [[ಡಾಕ್ಟರೇಟ್]] ([[ಡಾಕ್ಟರ್ ಆಫ್ ಲೆಟರ್ಸ್|D.Litt]])
|[[ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ]]
|[[ಆರ್. ಎಸ್. ಗವಾಯಿ]], [[ಕೇರಳದ ರಾಜ್ಯಪಾಲರ ಪಟ್ಟಿ|ಕೇರಳದ ರಾಜ್ಯಪಾಲರು]]
|style="text-align:center;"|<ref>{{cite web |url=http://movies.ndtv.com/movie_Story.aspx?id=ENTEN20100135288&keyword=&subcatg=&cp |archive-url=https://archive.today/20120714031203/http://movies.ndtv.com/movie_Story.aspx?id=ENTEN20100135288&keyword=&subcatg=&cp |url-status=dead |archive-date=14 July 2012 |title=Mohanlal, Resul receive D.Litt |website=NDTVmovies.com |date=18 March 2010}}</ref>
|-
! scope="row"| 2013
|[[ಟೇಕ್ವಾಂಡೋ]] ನಲ್ಲಿ ಗೌರವಾನ್ವಿತ [[ಕಪ್ಪು ಪಟ್ಟಿ (ಸಮರ ಕಲೆಗಳು)|ಕಪ್ಪು ಪಟ್ಟಿ]]
|[[ಕುಕ್ಕಿವಾನ್|ವರ್ಲ್ಡ್ ಟೇಕ್ವಾಂಡೋ ಪ್ರಧಾನ ಕಚೇರಿ]], [[ದಕ್ಷಿಣ ಕೊರಿಯಾ]]
|[[ಗ್ರ್ಯಾಂಡ್ಮಾಸ್ಟರ್ (ಸಮರ ಕಲೆಗಳು)|ಗ್ರ್ಯಾಂಡ್ಮಾಸ್ಟರ್]] ಲೀ ಜಿಯೋಂಗ್ಹೀ, ಸ್ಪೋರ್ಟ್ಸ್ [[ಜನರಲ್ ಮ್ಯಾನೇಜರ್|GM]], ಭಾರತೀಯ [[ದಕ್ಷಿಣ ಕೊರಿಯಾ|ROK]] ರಾಯಭಾರ ಕಚೇರಿ
|style="text-align:center;"|<ref>{{Cite web|url=https://www.newindianexpress.com/entertainment/malayalam/2012/oct/24/black-belt-for-mohanlal-418347.html|title=Black belt for Mohanlal|website=The New Indian Express|date=24 October 2012 |access-date=2020-09-20|archive-date=2019-03-28|archive-url=https://web.archive.org/web/20190328192154/http://www.newindianexpress.com/entertainment/malayalam/2012/oct/24/black-belt-for-mohanlal-418347.html|url-status=live}}</ref>
|-
! scope="row"| 2018
|ಗೌರವಾನ್ವಿತ ಡಾಕ್ಟರೇಟ್ (D.Litt)
|[[ಕ್ಯಾಲಿಕಟ್ ವಿಶ್ವವಿದ್ಯಾಲಯ]]
|[[ಪಿ. ಸತಶಿವಮ್]], ಕೇರಳದ ರಾಜ್ಯಪಾಲರು
|style="text-align:center;"|<ref>{{cite web |url=http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html |title=Calicut University confers D.Litt on Mohanlal, P.T.Usha |website=business-standard.com |date=29 January 2018 |access-date=2018-01-29 |archive-date=2018-01-29 |archive-url=https://web.archive.org/web/20180129195119/http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html |url-status=live }}</ref>
|-
! scope="row"| 2019
|[[ಪದ್ಮಭೂಷಣ]]
|ಭಾರತ ಸರ್ಕಾರ
|[[ರಾಮ್ ನಾಥ್ ಕೋವಿಂದ್]], ಭಾರತದ ರಾಷ್ಟ್ರಪತಿ
|style="text-align:center;"|<ref>{{cite web |url=https://padmaawards.gov.in/PDFS/2019AwardeesList.pdf |title=2019 Padma Awards |date=2019-01-25 |website=Padmaawards.gov.in |access-date=2019-01-25 |archive-date=2019-01-26 |archive-url=https://web.archive.org/web/20190126060850/https://padmaawards.gov.in/PDFS/2019AwardeesList.pdf |url-status=live }}</ref>
|-
! scope="row"| 2025
|[[COAS ಕೊಂಡಾಟ್ ಕಾರ್ಡ್]]
|[[ಭಾರತೀಯ ಸೇನೆ]]
|[[ಉಪೇಂದ್ರ ದ್ವಿವೇದಿ]], ಸೇನಾ ಮುಖ್ಯಸ್ಥ
| style="text-align: center;" |<ref>{{Cite web |date=2025-10-07 |title=Mohanlal receives commendation from Army Chief: 'A moment of immense pride and gratitude' |url=https://indianexpress.com/article/entertainment/malayalam/mohanlal-receives-commendation-from-army-chief-a-moment-of-immense-pride-and-gratitude-10293241/ |access-date=2025-10-07 |website=The Indian Express |language=en}}</ref>
|}
== ವಿಶ್ವ ದಾಖಲೆಗಳು ==
* ಜಗತ್ತಿನ ಅತಿದೊಡ್ಡ ದಾನ ಪೆಟ್ಟಿಗೆಯನ್ನು ಮಾಡುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದ ವಿಶ್ವದ ಮೊದಲ ಅಭಿಮಾನಿಗಳ ಸಂಘ<ref>{{Cite web|url=https://www.guinnessworldrecords.com/world-records/largest-wooden-chest|title=Largest wooden chest|access-date=2020-05-29|archive-date=2021-01-27|archive-url=https://web.archive.org/web/20210127211750/https://www.guinnessworldrecords.com/world-records/largest-wooden-chest|url-status=live}}</ref><ref>{{Cite web|url=http://lalcaresqatar.com/home/|title=Home – Lal Cares Qatar|access-date=2020-05-29|archive-date=2021-01-27|archive-url=https://web.archive.org/web/20210127211750/http://lalcaresqatar.com/home/|url-status=live}}</ref>
* 3D ಚಲನಚಿತ್ರ ಪ್ರದರ್ಶನದಲ್ಲಿ ಅತಿ ಹೆಚ್ಚು ಹಾಜರಾತಿ<ref>{{Cite web|url=https://www.guinnessworldrecords.com/world-records/largest-attendance-at-a-3d-film-screening|title=Largest attendance at a 3D film screening|website=Guinness World Records|access-date=2020-05-28|archive-date=2017-12-27|archive-url=https://web.archive.org/web/20171227113036/http://www.guinnessworldrecords.com/world-records/largest-attendance-at-a-3d-film-screening|url-status=live}}</ref>
* ಇಲ್ಲಿಯವರೆಗೆ ಜಗತ್ತಿನಲ್ಲಿ ನಿರ್ಮಿಸಲಾದ ಅತಿ ಉದ್ದದ ಸಾಕ್ಷ್ಯಚಿತ್ರಕ್ಕೆ ತಮ್ಮ ಧ್ವನಿಯನ್ನು ನೀಡಿದ್ದಾರೆ.<ref name="newscoopz.com">{{Cite web|url=https://www.newscoopz.com/third-time-guinness-world-record-for-mohanlal/|title=Mohanlal becomes a part of Guinness world record for the 3rd time in his career|date=21 August 2019|access-date=28 May 2020|archive-date=20 September 2020|archive-url=https://web.archive.org/web/20200920071410/https://www.newscoopz.com/third-time-guinness-world-record-for-mohanlal/|url-status=live}}</ref><ref name="Kuttoor">{{Cite news|url=https://www.thehindu.com/news/national/kerala/its-official-the-longest-docu-is-on-mar-chrysostum/article27097855.ece|title=It's official, the longest docu is on Mar Chrysostum|first=Radhakrishnan|last=Kuttoor|newspaper=The Hindu |date=10 May 2019|via=www.thehindu.com|access-date=18 June 2020|archive-date=27 January 2021|archive-url=https://web.archive.org/web/20210127211748/https://www.thehindu.com/news/national/kerala/its-official-the-longest-docu-is-on-mar-chrysostum/article27097855.ece|url-status=live}}</ref>
== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ==
1954 ರಲ್ಲಿ ಸ್ಥಾಪಿಸಲಾದ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], [[ಭಾರತ ಸರ್ಕಾರ]]ದ [[ಚಲನಚಿತ್ರೋತ್ಸವಗಳ ನಿರ್ದೇಶನಾಲಯ]]ದಿಂದ ನಿರ್ವಹಿಸಲ್ಪಡುತ್ತದೆ. ಮೋಹನ್ಲಾಲ್ ಆರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:20%;"| ವರ್ಗ
! scope="col" style="width:30%;"| ಭಾಷೆ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row" | 1989
| ''[[ಕಿರೀಡಂ (1989 ಚಲನಚಿತ್ರ)|ಕಿರೀಡಂ]]''
| [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ (ವೈಶಿಷ್ಟ್ಯ ಚಲನಚಿತ್ರ)|ವಿಶೇಷ ಉಲ್ಲೇಖ]]
| rowspan="4" scope="row" | ಮಲಯಾಳಂ
|style="text-align:center;"|<ref name="37thawardPDF">{{cite web|url=http://dff.nic.in/images/Documents/80_37thNfacatalogue.pdf|title=37th National Film Awards|publisher=[[Directorate of Film Festivals]]|accessdate=12 July 2020|archive-date=9 July 2020|archive-url=https://web.archive.org/web/20200709165915/http://dff.nic.in/images/Documents/80_37thNfacatalogue.pdf|url-status=live}}</ref>
|-
! scope="row" | 1991
| ''[[ಭಾರತಂ]]''
| [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|style="text-align:center;"|<ref>{{cite web|url=http://iffi.nic.in/Dff2011/Frm39thNFAAward.aspx?PdfName=39NFA.pdf|title=39th National Film Award (1991)|publisher=diff.nic.in|access-date=2014-11-14|archive-date=2011-07-21|archive-url=https://web.archive.org/web/20110721170014/http://iffi.nic.in/Dff2011/Frm39thNFAAward.aspx?PdfName=39NFA.pdf|url-status=dead}}</ref>
|-
! scope="row" rowspan="2"| 1999
| rowspan="2" | ''[[ವನಪ್ರಸ್ಥಂ]]''
|[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ವೈಶಿಷ್ಟ್ಯ ಚಲನಚಿತ್ರ|ಅತ್ಯುತ್ತಮ ವೈಶಿಷ್ಟ್ಯ ಚಲನಚಿತ್ರ]] (ನಿರ್ಮಾಪಕ)
|style="text-align:center;" rowspan="2"|<ref name="47th National Film Award 1999">{{cite web|url = http://iffi.nic.in/Dff2011/Frm47NFAAward.aspx?PdfName=47NFA.pdf|title = 47th National Film Award (1999)|publisher = diff.nic.in|access-date = 2014-11-14|archive-date = 2011-09-28|archive-url = https://web.archive.org/web/20110928072346/http://iffi.nic.in/Dff2011/Frm47NFAAward.aspx?PdfName=47NFA.pdf|url-status = dead}}</ref>
|-
|[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ|ಅತ್ಯುತ್ತಮ ನಟ]]
|-
! rowspan="3" scope="row" | 2016
|''[[ಜನತಾ ಗ್ಯಾರೇಜ್]]''
| rowspan="3" scope="row" | [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯ ಚಲನಚಿತ್ರ)|ವಿಶೇಷ ತೀರ್ಪುಗಾರರ ಪ್ರಶಸ್ತಿ]]
| ತೆಲುಗು
| rowspan="3" style="text-align:center;" |<ref name=":3">{{cite news|title=64th National Film Awards: Here's the complete list of winners|url=https://www.hindustantimes.com/bollywood/64th-national-film-awards-here-s-the-complete-list-of-winners/story-2o8HmEbUZ8kmvhfx2XE64I.html|accessdate=10 August 2020|work=[[Hindustan Times]]|date=7 April 2017|archive-date=17 September 2020|archive-url=https://web.archive.org/web/20200917031535/https://www.hindustantimes.com/bollywood/64th-national-film-awards-here-s-the-complete-list-of-winners/story-2o8HmEbUZ8kmvhfx2XE64I.html|url-status=live}}</ref>
|-
|''[[ಮುಂತಿರಿವಳ್ಳಿಕಲ್ ಥಾಲಿರ್ಕ್ಕುಂಬೋಲ್]]''
| rowspan="2" |ಮಲಯಾಳಂ
|-
|''[[ಪುಲಿಮುರುಗನ್]]''
|-
! scope="row" | 2023
|''ಜೀವಮಾನ ಸಾಧನೆ''
|[[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]
|—
|style="text-align:center;"|<ref name="Malayalam actor Mohanlal to be conferred Dadasaheb Phalke Award for 2023">{{cite news |last1= |first1= |title=Malayalam actor Mohanlal to be conferred Dadasaheb Phalke Award for 2023 |url=https://www.thehindu.com/entertainment/movies/actor-mohanlal-to-be-conferred-dadasaheb-phalke-award-for-2023/article70073864.ece |access-date=20 September 2025 |publisher=The Hindu |date=20 September 2025 |archive-url=https://web.archive.org/web/20250920160340/https://www.thehindu.com/entertainment/movies/actor-mohanlal-to-be-conferred-dadasaheb-phalke-award-for-2023/article70073864.ece |archive-date=20 September 2025 |language=en-IN}}</ref>
|}
== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ==
[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] ಮಲಯಾಳಂ ಚಲನಚಿತ್ರದಲ್ಲಿನ ಉತ್ಕೃಷ್ಟತೆಗಾಗಿ [[ಕೇರಳ ಸರ್ಕಾರ]]ದ [[ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ]]ಯಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1986
|''[[ಟಿ. ಪಿ. ಬಾಲಗೋಪಾಲನ್ M.A.]]''
|[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|{{won}}
|style="text-align:center;"|<ref name="State Film Awards">{{cite web |url=http://www.prd.kerala.gov.in/stateawards2.htm |title=State Film Awards |publisher=prd.kerala.gov.in |url-status=dead |archive-url=https://web.archive.org/web/20160303234213/http://www.prd.kerala.gov.in/stateawards2.htm |archive-date=3 March 2016 |df=dmy-all}}</ref>
|-
! scope="row"| 1988
|''[[ಪದಮುದ್ರಾ (ಚಲನಚಿತ್ರ)|ಪದಮುದ್ರಾ]], [[ಚಿತ್ರಂ]], [[ಉಲ್ಸವಪಿಟ್ಟೇನ್ನು]], [[ಆರ್ಯನ್ (1988 ಚಲನಚಿತ್ರ)|ಆರ್ಯನ್]], [[ವೆಲ್ಲನಾಕಳುಡೆ ನಾಡು]]''
|[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ (ವಿಶೇಷ ತೀರ್ಪುಗಾರರ ಪ್ರಶಸ್ತಿ)|ವಿಶೇಷ ತೀರ್ಪುಗಾರರ ಪ್ರಶಸ್ತಿ]]
|{{won}}
|style="text-align:center;"|<ref name="State Film Awards" />
|-
! scope="row" rowspan="2"| 1991
|''[[ಭಾರತಂ]]''
|[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಎರಡನೇ ಅತ್ಯುತ್ತಮ ಚಲನಚಿತ್ರ|ಎರಡನೇ ಅತ್ಯುತ್ತಮ ಚಲನಚಿತ್ರ]] {{small|(ನಿರ್ಮಾಪಕ)}}
|{{won}}
|style="text-align:center;"|<ref name="prd.kerala.gov.in">{{cite web |url=http://www.prd.kerala.gov.in/stateawards3.htm |title=State Film Awards |publisher=prd.kerala.gov.in |url-status=dead |archive-url=https://web.archive.org/web/20160303234157/http://www.prd.kerala.gov.in/stateawards3.htm |archive-date=3 March 2016 |df=dmy-all}}</ref>
|-
|''[[ಅಭಿಮನ್ಯು (1991 ಚಲನಚಿತ್ರ)|ಅಭಿಮನ್ಯು]], [[ಕಿಳುಕ್ಕಂ]], [[ಉಳ್ಳಡಕ್ಕಂ]]''
| rowspan="2" |[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|{{won}}
|style="text-align:center;"|<ref name="prd.kerala.gov.in" />
|-
! scope="row" rowspan="2"| 1995
|''[[ಸ್ಪಡಿಕಂ]], [[ಕಾಲಪಾನಿ]]''
|{{won}}
|style="text-align:center;"|<ref name="prd.kerala.gov.in" />
|-
|''[[ಕಾಲಪಾನಿ]]''
|[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಎರಡನೇ ಅತ್ಯುತ್ತಮ ಚಲನಚಿತ್ರ|ಎರಡನೇ ಅತ್ಯುತ್ತಮ ಚಲನಚಿತ್ರ]] {{small|(ನಿರ್ಮಾಪಕ)}}
|{{won}}
|style="text-align:center;"|<ref name="prd.kerala.gov.in" />
|-
! scope="row"| 1999
|''[[ವನಪ್ರಸ್ಥಂ]]''
| rowspan="3" |[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|{{won}}
|style="text-align:center;"|<ref name="prd.kerala.gov.in" />
|-
! scope="row"| 2005
|''[[ಥನ್ಮತ್ರ]]''
|{{won}}
|style="text-align:center;"|<ref name="ReferenceA">{{cite web |url=http://www.prd.kerala.gov.in/stateawards4.htm |title=State Film Awards |publisher=prd.kerala.gov.in |url-status=dead |archive-url=https://web.archive.org/web/20150707210332/http://www.prd.kerala.gov.in/stateawards4.htm |archive-date=7 July 2015 |df=dmy-all}}</ref>
|-
! scope="row"| 2007
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]''
|{{won}}
|style="text-align:center;"|<ref name="ReferenceA" />
|}
== ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ==
[[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]] ಮಲಯಾಳಂ ಚಲನಚಿತ್ರದಲ್ಲಿನ ಉತ್ಕೃಷ್ಟತೆಗಾಗಿ [[ಕೇರಳ ಚಲನಚಿತ್ರ ವಿಮರ್ಶಕರ ಸಂಘ]]ದಿಂದ ಪ್ರತಿ ವರ್ಷವೂ (1977 ರಿಂದ) ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1988
|''[[ಪದಮುದ್ರಾ (ಚಲನಚಿತ್ರ)|ಪದಮುದ್ರಾ]]'', ''[[ಚಿತ್ರಂ]]''
| rowspan="3" |[[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|{{won}}
|style="text-align:center;"|<ref name=criticsaward>{{cite news |author1=G. Hari Sundar |title=Mohanlal weaves a filmic web |url=http://www.thehindu.com/thehindu/lf/2002/05/19/stories/2002051901540200.htm |accessdate=12 January 2016 |work=[[The Hindu]] |date=19 May 2002 |archive-date=27 January 2021 |archive-url=https://web.archive.org/web/20210127211748/https://www.thehindu.com/archive/print/2002/05/19/ |url-status=live }}</ref>
|-
! scope="row"| 1991
|''[[ಭಾರತಂ]]'', ''[[ಉಳ್ಳಡಕ್ಕಂ]]''
|{{won}}
|style="text-align:center;"|<ref name=criticsaward />
|-
! scope="row"| 1999
|''[[ವನಪ್ರಸ್ಥಂ]]''
|{{won}}
|style="text-align:center;"|<ref name=criticsaward />
|-
! scope="row"| 2001
|''ಮಲಯಾಳಂ ಸಿನೆಮಾಗೆ ಕೊಡುಗೆ''
|ನಟನ ರತ್ನ ಪ್ರಶಸ್ತಿ
|
|style="text-align:center;"|<ref>{{Cite web |title=Mohanlal - Awards and Recognition |url=https://www.thecompleteactor.com/mohanlal-awards-recognition |access-date=2024-07-18 |website=TheCompleteActor.com}}</ref>
|-
! scope="row"| 2003
|''ಜೀವಮಾನ ಸಾಧನೆ ಪ್ರಶಸ್ತಿ''
|[[ಚಲಚಿತ್ರ ರತ್ನ ಪ್ರಶಸ್ತಿ]]
|
|style="text-align:center;"|<ref>{{Cite web |title=1993-2018 Chalachitra Ratnam Awards |url=https://www.keralafilmcritics.com/2020/10/1993.html |url-status=live |archive-url=https://web.archive.org/web/20231130133343/https://www.keralafilmcritics.com/2020/10/1993.html |archive-date=2023-11-30 |access-date=2024-07-18 |website=[[Kerala Film Critics Association]]}}</ref>
|-
! scope="row"| 2005
|''[[ನರನ್ (ಚಲನಚಿತ್ರ)|ನರನ್]], [[ಥನ್ಮತ್ರ]]''
|ಅತ್ಯಂತ ಜನಪ್ರಿಯ ನಟ
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-kerala/film-critics-awards-announced/article3173236.ece |title=Film Critics awards announced |date=3 February 2006 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127045903/http://www.thehindu.com/todays-paper/tp-national/tp-kerala/film-critics-awards-announced/article3173236.ece |url-status=live }}</ref>
|-
! scope="row"| 2007
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]''
| rowspan="6" |ಅತ್ಯುತ್ತಮ ನಟ
|{{won}}
|style="text-align:center;"|<ref>{{Cite news |url=http://articles.economictimes.indiatimes.com/2008-01-31/news/28412366_1_playback-singer-special-award-critics-awards |title='Ore Kadal', 'Thaniye' share critics award for best film |last=PTI |date=31 January 2008 |publisher=economictimes.indiatimes.com |access-date=2014-11-14 |archive-date=2014-12-16 |archive-url=https://web.archive.org/web/20141216094445/http://articles.economictimes.indiatimes.com/2008-01-31/news/28412366_1_playback-singer-special-award-critics-awards |url-status=dead }}</ref>
|-
! scope="row"| 2008
|''[[ಕುರುಕ್ಷೇತ್ರ (2008 ಚಲನಚಿತ್ರ)|ಕುರುಕ್ಷೇತ್ರ]], [[ಪಕಲ್ ನಕ್ಷತ್ರಂಗಳ್]], [[ಆಕಾಶ ಗೋಪುರಂ|ಆಕಾಶಗೋಪುರಂ]]''
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-kerala/mohanlal-sukumari-adjudged-best-actors/article386178.ece |title=Mohanlal, Sukumari adjudged best actors |date=31 January 2009 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127050528/http://www.thehindu.com/todays-paper/tp-national/tp-kerala/mohanlal-sukumari-adjudged-best-actors/article386178.ece |url-status=live }}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|{{won}}
|style="text-align:center;"|<ref>{{Cite web|url=http://www.mathrubhumi.com/english/movies/malayalam/123816/|archive-url=https://web.archive.org/web/20120529040906/http://www.mathrubhumi.com/english/movies/malayalam/123816/|url-status=dead|title=Mohanlal, Blessy bag Critics award|archive-date=29 May 2012}}</ref>
|-
! scope="row"| 2013
|''[[ದೃಶ್ಯಂ]]''
|{{won}}
|style="text-align:center;"|<ref>{{Cite news |url=http://www.newindianexpress.com/entertainment/malayalam/Drishyam-Bags-Kerala-Film-Critics-Association-Awards/2014/01/30/article2027269.ece |title='Drishyam' Bags Kerala Film Critics Association Awards |date=30 January 2014 |accessdate=13 Nov 2014 |publisher=[[The New Indian Express]] |archive-date=22 December 2014 |archive-url=https://web.archive.org/web/20141222164923/http://www.newindianexpress.com/entertainment/malayalam/Drishyam-Bags-Kerala-Film-Critics-Association-Awards/2014/01/30/article2027269.ece |url-status=dead }}</ref>
|-
! scope="row"| 2016
|''[[ಒಪ್ಪಂ]]''
|{{won}}
|style="text-align:center;"|<ref>{{cite news |title=Film critics awards announced |url=http://www.thehindu.com/news/cities/Thiruvananthapuram/film-critics-awards-announced/article17419650.ece |accessdate=7 March 2017 |work=[[The Hindu]] |date=7 March 2017 |archive-date=21 December 2019 |archive-url=https://web.archive.org/web/20191221165143/https://www.thehindu.com/news/cities/Thiruvananthapuram/film-critics-awards-announced/article17419650.ece |url-status=live }}</ref>
|-
! scope="row"| 2025
|''[[ತುದರುಂ]]''
|{{won}}
|style="text-align:center;"|<ref>{{cite news|title=Kerala Film Critics Awards announced|url=https://www.newindianexpress.com/entertainment/malayalam/2019/apr/09/kerala-film-critics-awards-announced-1962020.html|access-date=18 July 2019|work=[[The New Indian Express]]|date=9 April 2019|archive-date=22 July 2019|archive-url=https://web.archive.org/web/20190722031652/http://www.newindianexpress.com/entertainment/malayalam/2019/apr/09/kerala-film-critics-awards-announced-1962020.html|url-status=live}}</ref>
|}
== ನಂದಿ ಪ್ರಶಸ್ತಿಗಳು ==
[[ನಂದಿ ಪ್ರಶಸ್ತಿಗಳು]] [[ಆಂಧ್ರಪ್ರದೇಶ ಸರ್ಕಾರ]]ವು [[ತೆಲುಗು ಸಿನೆಮಾ]]ದಲ್ಲಿ ಕಲಾತ್ಮಕ ಕೌಶಲ್ಯಗಳನ್ನು ಗೌರವಿಸಲು ಪ್ರದಾನ ಮಾಡುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:27%;"| ನಾಮನಿರ್ದೇಶಿತ ಕೃತಿ
! scope="col" style="width:20%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2016
|''[[ಜನತಾ ಗ್ಯಾರೇಜ್]]''
|[[ನಂದಿ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ|ಅತ್ಯುತ್ತಮ ಪೋಷಕ ನಟ]]
|{{won}}
|style="text-align:center;"|<ref>{{cite news |last=Hooli |first=Shekhar H. |title=Nandi Awards 2014, 15 and 16 winners list: Mahesh Babu, Jr NTR, Balakrishna bag best actor awards |url=http://www.ibtimes.co.in/nandi-awards-2014-15-16-winners-list-revealed-mahesh-babu-jr-ntr-balakrishna-bag-best-actors-749398 |accessdate=14 November 2017 |work=[[International Business Times]] |date=14 November 2017 |archive-date=15 November 2017 |archive-url=https://web.archive.org/web/20171115014950/http://www.ibtimes.co.in/nandi-awards-2014-15-16-winners-list-revealed-mahesh-babu-jr-ntr-balakrishna-bag-best-actors-749398 |url-status=live }}</ref>
|}
== ಫಿಲ್ಮ್ಫೇರ್ ಪ್ರಶಸ್ತಿಗಳು ==
[[ಫಿಲ್ಮ್ಫೇರ್ ಪ್ರಶಸ್ತಿಗಳು]] [[ಹಿಂದಿ ಸಿನೆಮಾ]]ದಲ್ಲಿ ಸಿನೆಮಾಟಿಕ್ ಸಾಧನೆಗಳ ಉತ್ಕೃಷ್ಟತೆಗಾಗಿ [[ದಿ ಟೈಮ್ಸ್ ಗ್ರೂಪ್]] ನಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2002
|''[[ಕಂಪನಿ (2002 ಚಲನಚಿತ್ರ)|ಕಂಪನಿ]]''
|[[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ|ಅತ್ಯುತ್ತಮ ಪೋಷಕ ನಟ]]
|{{Nominated}}
|style="text-align:center;"|<ref>{{cite news |last=Rajpal |first=Roktim |title=Mohanlal turns 55: 8 performances that prove he is the most bankable, successful star of Indian cinema |url=http://www.ibnlive.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html |accessdate=26 March 2016 |work=[[IBN Live]] |date=21 May 2015 |location=New Delhi |archive-date=10 March 2016 |archive-url=https://web.archive.org/web/20160310045435/http://www.ibnlive.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html |url-status=live }}</ref>
|}
== ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ==
[[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]]ವು [[ಫಿಲ್ಮ್ಫೇರ್ ಪ್ರಶಸ್ತಿಗಳ]] ಒಂದು ಭಾಗವಾಗಿದ್ದು, ಇದನ್ನು ದಕ್ಷಿಣ ಭಾರತೀಯ ಚಲನಚಿತ್ರೋದ್ಯಮಕ್ಕೆ ನೀಡಲಾಗುತ್ತದೆ, ಇದು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮಗಳನ್ನು ಒಳಗೊಂಡಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಭಾಷೆ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1986
|''[[ಸನ್ಮನಸ್ಸುಳ್ಳವರ್ಕ್ಕು ಸಮಾಧಾನಂ]]''
| rowspan="8" |[[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಮಲಯಾಳಂ|ಅತ್ಯುತ್ತಮ ನಟ]]
| rowspan="11" |[[ಮಲಯಾಳಂ]]
|{{won}}
|style="text-align:center;"|<ref name="Filmfare">{{cite news |url=http://specials.manoramaonline.com/Movie/2014/mohanlal-2013/quick-info.html |title=Vismayangalude Lal |agency=[[Manoramaonline.com]] |accessdate=23 May 2015 |archive-date=16 October 2015 |archive-url=https://web.archive.org/web/20151016174547/http://specials.manoramaonline.com/Movie/2014/mohanlal-2013/quick-info.html |url-status=live }}</ref>
|-
! scope="row"| 1988
|''[[ಪದಮುದ್ರಾ (ಚಲನಚಿತ್ರ)|ಪದಮುದ್ರಾ]]''
|{{won}}
|style="text-align:center;"|<ref name=Filmfare />
|-
! scope="row"| 1993
|''[[ದೇವಾಸುರಂ]]''
|{{won}}
|style="text-align:center;"|<ref name=Filmfare />
|-
! scope="row"| 1994
|''[[ಪವಿತ್ರಂ (1994 ಚಲನಚಿತ್ರ)|ಪವಿತ್ರಂ]]''
|{{won}}
|style="text-align:center;"|<ref name=Filmfare />
|-
! scope="row"| 1995
|''[[ಸ್ಪಡಿಕಂ]]''
|{{won}}
|style="text-align:center;"|<ref name=Filmfare />
|-
! scope="row"| 1999
|''[[ವನಪ್ರಸ್ಥಂ]]''
|{{won}}
|style="text-align:center;"|<ref>{{Cite news |url=http://www.thehindu.com/thehindu/2000/04/15/stories/09150651.htm |title=Star-spangled show on cards |date=15 April 2000 |work=[[The Hindu]] |access-date=14 November 2014 |archive-date=17 July 2014 |archive-url=https://archive.today/20140717201000/http://www.thehindu.com/thehindu/2000/04/15/stories/09150651.htm |url-status=dead }}</ref>
|-
! scope="row"| 2005
|''[[ಥನ್ಮತ್ರ]]''
|{{won}}
|style="text-align:center;"|<ref>{{cite web |url=http://www.indiaglitz.com/channels/malayalam/gallery/Events/10441.html |archive-url=https://web.archive.org/web/20061118182553/http://www.indiaglitz.com/channels/malayalam/gallery/Events/10441.html |url-status=dead |archive-date=18 November 2006 |title=The 53rd Film Fare Awards |date=11 September 2006 |work=indiaglitz.com |access-date=14 November 2014 }}</ref>
|-
! scope="row"| 2007
|[[ಪರದೇಸಿ (2007 ಚಲನಚಿತ್ರ)|''ಪರದೇಸಿ'']]
|{{won}}
|style="text-align:center;"|<ref>{{Cite news |url=http://timesofindia.indiatimes.com/city/chennai/55th-annual-Tiger-Balm-South-Filmfare-Awards/articleshow/3228046.cms |title=55th annual Tiger Balm South Filmfare Awards |last=Chuman Das |date=13 July 2008 |agency=[[The Times of India]] |access-date=23 May 2015 |archive-date=8 July 2016 |archive-url=https://web.archive.org/web/20160708120930/http://timesofindia.indiatimes.com/city/chennai/55th-annual-Tiger-Balm-South-Filmfare-Awards/articleshow/3228046.cms |url-status=live }}</ref>
|-
! scope="row"| 2009
|''[[ಭ್ರಮರಂ]]''
|[[ಫಿಲ್ಮ್ಫೇರ್ ವಿಶೇಷ ಪ್ರಶಸ್ತಿ - ದಕ್ಷಿಣ|ವಿಶೇಷ ತೀರ್ಪುಗಾರರ ಪ್ರಶಸ್ತಿ]]
|{{won}}
|style="text-align:center;"|<ref>{{cite web|last=Ravi|first=Bhama Devi|title=South's best in spotlight|url=http://epaper.timesofindia.com/Default/Scripting/ArticleWin.asp?From=Archive&Source=Page&Skin=TOINEW&BaseHref=TOICH/2010/08/08&PageLabel=4&EntityId=Ar00400&ViewMode=GIF&GZ=T|archive-url=https://web.archive.org/web/20120612110912/http://epaper.timesofindia.com/Default/Scripting/ArticleWin.asp?From=Archive&Source=Page&Skin=TOINEW&BaseHref=TOICH/2010/08/08&PageLabel=4&EntityId=Ar00400&ViewMode=GIF&GZ=T|url-status=dead|archive-date=12 June 2012|work=[[The Times of India]]|access-date=20 July 2012}}</ref>
|-
! scope="row"| 2013
|''[[ದೃಶ್ಯಂ]]''
| rowspan="2" |[[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಮಲಯಾಳಂ|ಅತ್ಯುತ್ತಮ ನಟ]]
|{{nom}}
|style="text-align:center;"|<ref name="Filmfare_2014-07-08">{{cite web |last=Editorial |first=Filmfare |title=61st Idea Filmfare Awards (South) Nomination list |url=http://www.filmfare.com/features/60th-idea-filmfare-awards-south-nomination-list-6638.html |publisher=Filmfare.com |accessdate=26 March 2016 |date=8 July 2014 |archive-date=6 April 2016 |archive-url=https://web.archive.org/web/20160406210925/http://www.filmfare.com/features/60th-idea-filmfare-awards-south-nomination-list-6638.html |url-status=live }}</ref>
|-
! scope="row" rowspan="2"| 2016
|''[[ಒಪ್ಪಂ]]''
|{{nom}}
|style="text-align:center;"|<ref name="Filmfare_2014-07-08" />
|-
|''[[ಜನತಾ ಗ್ಯಾರೇಜ್]]''
|[[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ - ತೆಲುಗು|ಅತ್ಯುತ್ತಮ ಪೋಷಕ ನಟ]]
|[[ತೆಲುಗು ಭಾಷೆ|ತೆಲುಗು]]
|{{nom}}
|style="text-align:center;"|<ref name="Filmfare_2014-07-08" />
|}
== ಸ್ಕ್ರೀನ್ ಪ್ರಶಸ್ತಿಗಳು ==
[[ಸ್ಕ್ರೀನ್ ಪ್ರಶಸ್ತಿಗಳು]] ಹಿಂದಿ ಮತ್ತು ಮರಾಠಿ ಸಿನೆಮಾದಲ್ಲಿ ಸಿನೆಮಾಟಿಕ್ ಸಾಧನೆಗಳ ಉತ್ಕೃಷ್ಟತೆಯನ್ನು ಗೌರವಿಸಲು [[ಇಂಡಿಯನ್ ಎಕ್ಸ್ಪ್ರೆಸ್ ಲಿಮಿಟೆಡ್]] ನಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:28%;"| ನಾಮನಿರ್ದೇಶಿತ ಕೃತಿ
! scope="col" style="width:14%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಕಂಪನಿ (2002 ಚಲನಚಿತ್ರ)|ಕಂಪನಿ]]''
|[[ಸ್ಕ್ರೀನ್ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ|ಅತ್ಯುತ್ತಮ ಪೋಷಕ ನಟ]]
|{{won}}
|style="text-align:center;"|<ref>{{cite news |author=Press Trust Of India |title=I have nothing to prove in Bollywood: Mohanlal |url=http://movies.ndtv.com/regional/i-have-nothing-to-prove-in-bollywood-mohanlal-624585 |accessdate=16 August 2015 |agency=[[Ndtv.com]] |date=17 April 2012 |location=[[Mumbai]] |archive-date=15 February 2016 |archive-url=https://web.archive.org/web/20160215235858/http://movies.ndtv.com/regional/i-have-nothing-to-prove-in-bollywood-mohanlal-624585 |url-status=live }}</ref>
|}
== ಸ್ಕ್ರೀನ್ ಪ್ರಶಸ್ತಿಗಳು ದಕ್ಷಿಣ ==
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಭಾಷೆ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1997
|''[[ಆರಾಂ ತಂಪುರನ್]], [[ಒರು ಯಾತ್ರಮೊಳಿ]], [[ಗುರು (1997 ಚಲನಚಿತ್ರ)|ಗುರು]], [[ಚಂದ್ರಲೇಖಾ (1997 ಚಲನಚಿತ್ರ)|ಚಂದ್ರಲೇಖಾ]]''
|ಅತ್ಯುತ್ತಮ ನಟ
|ಮಲಯಾಳಂ
|{{won}}
|style="text-align:center;"|<ref>{{Cite web|url=http://www.screenindia.com/old/apr17/cover2.htm|title=Screen south awards|access-date=2011-04-10|archive-date=2021-01-27|archive-url=https://web.archive.org/web/20210127211750/https://indianexpress.com/section/entertainment/|url-status=dead}}</ref>
|}
== ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು ==
[[ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು]] (IIFA) [[ಬಾಲಿವುಡ್|ಹಿಂದಿ ಸಿನೆಮಾ]]ದಲ್ಲಿನ ಉತ್ಕೃಷ್ಟತೆಯನ್ನು ಗೌರವಿಸಲು ವಿಜ್ಕ್ರಾಫ್ಟ್ ಇಂಟರ್ನ್ಯಾಷನಲ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಆಯೋಜಿಸುವ ವಾರ್ಷಿಕ ಕಾರ್ಯಕ್ರಮವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:27%;"| ನಾಮನಿರ್ದೇಶಿತ ಕೃತಿ
! scope="col" style="width:20%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಕಂಪನಿ (2002 ಚಲನಚಿತ್ರ)|ಕಂಪನಿ]]''
|[[IIFA ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ|ಅತ್ಯುತ್ತಮ ಪೋಷಕ ನಟ]]
|{{won}}
|style="text-align:center;"|<ref>{{cite web |url=http://iifa.com/iifa-years/iifa-years-2003/ |title=IIFA Through the Years – IIFA 2003 : South Africa |website=IIFA.com |access-date=2015-05-24 |archive-url=https://web.archive.org/web/20150208124732/http://iifa.com/iifa-years/iifa-years-2003/ |archive-date=2015-02-08 |url-status=dead }}</ref>
|}
== IIFA ಉತ್ಸವಂ ==
[[IIFA ಉತ್ಸವಂ]] ಎಂಬುದು [[ತೆಲುಗು ಸಿನೆಮಾ|ತೆಲುಗು]], [[ತಮಿಳು ಸಿನೆಮಾ|ತಮಿಳು]], [[ಮಲಯಾಳಂ ಸಿನೆಮಾ|ಮಲಯಾಳಂ]], ಮತ್ತು [[ಕನ್ನಡ ಸಿನೆಮಾ|ಕನ್ನಡ]] ಸಿನೆಮಾವನ್ನು ಒಳಗೊಂಡ ದಕ್ಷಿಣ ಭಾರತೀಯ ಸಿನೆಮಾದಲ್ಲಿನ ಕಲಾತ್ಮಕ ಮತ್ತು ತಾಂತ್ರಿಕ ಸಾಧನೆಗಳನ್ನು ಪ್ರತಿಫಲಿಸಲು ವಿಜ್ಕ್ರಾಫ್ಟ್ ಇಂಟರ್ನ್ಯಾಷನಲ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಆಯೋಜಿಸುವ ಕಾರ್ಯಕ್ರಮವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:25%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:20%;"| ಭಾಷೆ
! scope="col" style="width:3%;"| ಫಲಿತಾಂಶ
|-
| scope="row" rowspan="2"|2017
| ''[[ಜನತಾ ಗ್ಯಾರೇಜ್]]''
| ಪೋಷಕ ಪಾತ್ರದಲ್ಲಿ ಅತ್ಯುತ್ತಮ ಪ್ರದರ್ಶನ - ಪುರುಷ
| [[ತೆಲುಗು ಭಾಷೆ|ತೆಲುಗು]]
| {{nom}}
|-
| ''[[ಒಪ್ಪಂ]]'', ''[[ಪುಲಿಮುರುಗನ್]]''
| ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಪ್ರದರ್ಶನ - ಪುರುಷ
| [[ಮಲಯಾಳಂ]]
| {{nom}}
|}
== ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ==
[[ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]] (SIIMA) [[ತೆಲುಗು ಸಿನೆಮಾ|ತೆಲುಗು]], [[ತಮಿಳು ಸಿನೆಮಾ|ತಮಿಳು]], [[ಮಲಯಾಳಂ ಸಿನೆಮಾ|ಮಲಯಾಳಂ]], ಮತ್ತು [[ಕನ್ನಡ ಸಿನೆಮಾ|ಕನ್ನಡ]] ಚಲನಚಿತ್ರೋದ್ಯಮಗಳಲ್ಲಿನ ಅತ್ಯುತ್ತಮ ಕೆಲಸವನ್ನು ಗುರುತಿಸಲು ವಿಬ್ರಿ ಮೀಡಿಯಾ ಪ್ರತಿ ವರ್ಷವೂ ಪ್ರದಾನ ಮಾಡುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:10%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:12%;"| ಭಾಷೆ
! scope="col" style="width:2%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|[[SIIMA ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
| rowspan="5" |[[ಮಲಯಾಳಂ]]
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-features/tp-cinemaplus/the-south-shines/article3589844.ece |title=The South Shines |last=K. R. Manigandan |date=1 July 2012 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127032831/http://www.thehindu.com/todays-paper/tp-features/tp-cinemaplus/the-south-shines/article3589844.ece |url-status=live }}</ref>
|-
! scope="row" rowspan="2"| 2012
|''[[ರನ್ ಬೇಬಿ ರನ್]]''
|ಅತ್ಯುತ್ತಮ ಪುರುಷ ಪ್ಲೇಬ್ಯಾಕ್ ಗಾಯಕ
|{{nom}}
|
|-
|''[[ಸ್ಪಿರಿಟ್ (2012 ಚಲನಚಿತ್ರ)|ಸ್ಪಿರಿಟ್]]''
| rowspan="3" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.siima.in/winners-2012.php |title=Siima awards: 2012 winners |publisher=siima.in |url-status=dead |archive-url=https://web.archive.org/web/20141019172549/http://www.siima.in/winners-2012.php |archive-date=19 October 2014}}</ref>
|-
! scope="row"| 2013
|''[[ದೃಶ್ಯಂ]]''
|{{nom}}
|style="text-align:center;"|<ref name="ibtimes1">{{cite news |last=V. P. |first=Nicy |title=SIIMA 2014 Malayalam Nominations: Mohanlal, Mammootty, Fahadh, Prithviraj, Dileep Get the Nod |url=http://www.ibtimes.co.in/siima-2014-malayalam-nominations-mohanlal-mammootty-fahadh-prithviraj-dileep-get-nod-604897 |accessdate=26 March 2016 |work=[[International Business Times]] |date=20 July 2014 |archive-date=22 March 2016 |archive-url=https://web.archive.org/web/20160322181232/http://www.ibtimes.co.in/siima-2014-malayalam-nominations-mohanlal-mammootty-fahadh-prithviraj-dileep-get-nod-604897 |url-status=live }}</ref>
|-
! scope="row" rowspan=2| 2016
|''[[ಪುಲಿಮುರುಗನ್]]''
|{{won}}
|style="text-align:center;"|<ref name="ibtimes1" />
|-
|''[[ಜನತಾ ಗ್ಯಾರೇಜ್]]''
|ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ
|[[ತೆಲುಗು ಭಾಷೆ|ತೆಲುಗು]]
|{{nom}}
|style="text-align:center;"|<ref name="ibtimes1" />
|-
! scope="row" rowspan="2"| 2018
| -
|[[ಮಧ್ಯಪ್ರಾಚ್ಯ]]ದಲ್ಲಿ ಅತ್ಯಂತ ಜನಪ್ರಿಯ ತಾರೆ
| -
|{{won}}
|style="text-align:center;"|<ref name="auto">{{cite news|last=Saleem|first=Fazeena|title=Malayalam, Tamil film industry legends wow audience at South Indian movie awards show|url=https://www.thepeninsulaqatar.com/article/17/08/2019/Malayalam,-Tamil-film-industry-legends-wow-audience-at-South-Indian-movie-awards-show|accessdate=17 August 2019|work=[[The Peninsula Qatar]]|date=17 August 2019|archive-date=17 August 2019|archive-url=https://web.archive.org/web/20190817073126/https://www.thepeninsulaqatar.com/article/17/08/2019/Malayalam,-Tamil-film-industry-legends-wow-audience-at-South-Indian-movie-awards-show|url-status=live}}</ref>
|-
|''[[ಒಡಿಯನ್]]''
| rowspan="2" |ಅತ್ಯುತ್ತಮ ನಟ
| rowspan="2" |ಮಲಯಾಳಂ
|{{nom}}
|style="text-align:center;"|<ref name="auto" />
|-
!scope="row"| 2019
|[[ಲೂಸಿಫರ್ (2019 ಭಾರತೀಯ ಚಲನಚಿತ್ರ)|''ಲೂಸಿಫರ್'']]
|{{won}}
|<ref>{{Cite web|date=2021-09-19|title=Mohanlal, Dhanush, Manju Warrier, Samantha Akkineni among big winners at SIIMA 2021|url=https://indianexpress.com/article/entertainment/regional/mohanlal-dhanush-manju-warrier-samantha-akkineni-among-big-winners-at-siima-2021-7519773/|access-date=2021-09-20|website=The Indian Express|language=en}}</ref>
|}
== ಆನಂದ ವಿಕಟನ್ ಸಿನೆಮಾ ಪ್ರಶಸ್ತಿಗಳು ==
ಆನಂದ ವಿಕಟನ್ ಸಿನೆಮಾ ಪ್ರಶಸ್ತಿಗಳು ತಮಿಳು ಚಲನಚಿತ್ರೋದ್ಯಮದ ಜನರಿಗಾಗಿ ನಡೆಸುವ ವಾರ್ಷಿಕ ಪ್ರಶಸ್ತಿ ಸಮಾರಂಭವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2009
|''[[ಉನ್ನೈಪೋಲ್ ಒರುವನ್ (2009 ಚಲನಚಿತ್ರ)|ಉನ್ನೈಪೋಲ್ ಒರುವನ್]]''
|ಅತ್ಯುತ್ತಮ ನಟ
|{{won}}
|style="text-align:center;"|
|}
== ಆಲ್ ಇಂಡಿಯಾ ರೇಡಿಯೋ ಪ್ರಶಸ್ತಿಗಳು ==
[[ಆಲ್ ಇಂಡಿಯಾ ರೇಡಿಯೋ]] (ಅಥವಾ ಆಕಾಶವಾಣಿ) ಭಾರತದ ರಾಷ್ಟ್ರೀಯ [[ಸಾರ್ವಜನಿಕ ಪ್ರಸಾರ|ಸಾರ್ವಜನಿಕ ರೇಡಿಯೋ ಪ್ರಸಾರಕ]] ಮತ್ತು [[ಪ್ರಸಾರ್ ಭಾರತಿ]]ಯ ಒಂದು ವಿಭಾಗವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2007
|''[[ರಸಾಂತತ್ರಂ]]'', ''[[ವಡಕ್ಕುಮ್ನಾಧನ್]]'', ''[[ಕೀರ್ತಿ ಚಕ್ರ (ಚಲನಚಿತ್ರ)|ಕೀರ್ತಿ ಚಕ್ರ]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{cite news |title=AIR awards for Mohanlal, Padma Priya |url=http://www.thehindu.com/todays-paper/tp-national/tp-kerala/air-awards-for-mohanlal-padma-priya/article1932128.ece |accessdate=16 August 2015 |agency=[[The Hindu]] |date=18 October 2007 |location=[[Thiruvananthapuram]] |archive-date=27 January 2021 |archive-url=https://web.archive.org/web/20210127211750/https://www.thehindu.com/todays-paper/tp-national/tp-kerala/AIR-awards-for-Mohanlal-Padma-Priya/article14859143.ece |url-status=live }}</ref>
|}
== ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು ==
[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]] [[ದಿ ವಾಲ್ಟ್ ಡಿಸ್ನಿ ಕಂಪನಿ]]ಯ ಸಹಾಯಕ ಸಂಸ್ಥೆಯಾದ [[ಸ್ಟಾರ್ ಇಂಡಿಯಾ]] ಒಡೆತನದ [[ಏಷ್ಯಾನೆಟ್ (ಟಿವಿ ಚಾನೆಲ್)|ಏಷ್ಯಾನೆಟ್]] ದೂರದರ್ಶನ ಜಾಲದಿಂದ ಪ್ರತಿ ವರ್ಷವೂ (1998 ರಿಂದ) ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಬಾಲೆಟ್ಟನ್]]''
| rowspan="3" |ಅತ್ಯುತ್ತಮ ನಟ
|{{won}}
|style="text-align:center;"|<ref>{{Cite news |url=http://www.thehindu.com/2004/03/08/stories/2004030808370400.htm |title=Star-studded show marks award nite |date=8 March 2004 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127032201/http://www.thehindu.com/2004/03/08/stories/2004030808370400.htm |url-status=dead }}</ref>
|-
! scope="row"| 2005
|''[[ಥನ್ಮತ್ರ]]'', ''[[ಉದಯನಾನು ಥಾರಂ]]''
|{{won}}
|style="text-align:center;"|<ref>{{Cite news |url=http://www.hindustantimes.com/nm7/mohanlal-bags-ujala-asianet-film-award/article1-74116.aspx |archive-url=https://web.archive.org/web/20150527001920/http://www.hindustantimes.com/nm7/mohanlal-bags-ujala-asianet-film-award/article1-74116.aspx |archive-date=2015-05-27 |title=Mohanlal bags Ujala-Asianet film award |date=11 March 2006 |url-status=dead |agency=[[Hindustan Times]]}}</ref>
|-
! scope="row"| 2006
|''[[ಕೀರ್ತಿಚಕ್ರ]]''
|{{won}}
|style="text-align:center;"|<ref>{{cite news |title=Ujala-Asianet awards announced |url=http://www.thehindu.com/todays-paper/tp-national/tp-kerala/ujalaasianet-awards-announced/article1785448.ece |accessdate=16 August 2015 |agency=[[The Hindu]] |date=21 January 2007 |location=[[Thiruvananthapuram]] |archive-date=27 January 2021 |archive-url=https://web.archive.org/web/20210127211749/https://www.thehindu.com/todays-paper/tp-national/tp-kerala/Ujala-Asianet-awards-announced/article14708969.ece |url-status=live }}</ref>
|-
! scope="row"| 2007
|[[ಹಲೋ (2007 ಚಲನಚಿತ್ರ)|''ಹಲೋ'']], ''[[ಚೋಟ್ಟ ಮುಂಬೈ]]''
|ಅತ್ಯಂತ ಜನಪ್ರಿಯ ನಟ
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-features/tp-fridayreview/in-the-starlight/article1432897.ece |title=In the starlight |date=25 January 2008 |agency=[[The Hindu]] |access-date=26 May 2015 |archive-date=27 January 2021 |archive-url=https://web.archive.org/web/20210127211824/https://www.thehindu.com/todays-paper/tp-features/tp-fridayreview/In-the-starlight/article15397312.ece |url-status=live }}</ref>
|-
! scope="row"| 2008
|''[[ಮಡಂಪಿ]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.thehindu.com/todays-paper/tp-national/tp-kerala/Asianet-film-awards-2009-announced/article16349659.ece |title=Asianet film awards 2009 announced |date=4 December 2017 |work=The Hindu |access-date=4 December 2017 |archive-date=21 December 2019 |archive-url=https://web.archive.org/web/20191221153315/https://www.thehindu.com/todays-paper/tp-national/tp-kerala/Asianet-film-awards-2009-announced/article16349659.ece |url-status=live }}</ref>
|-
! scope="row"| 2009
|''[[ಭ್ರಮರಂ]], [[ಎವಿಡಂ ಸ್ವರ್ಗಮಾನು]]''
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-kerala/article676380.ece |title='Pazhassi Raja' selected as best film |date=4 January 2010 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127050252/http://www.thehindu.com/todays-paper/tp-national/tp-kerala/article676380.ece |url-status=live }}</ref>
|-
! scope="row"| 2010
|{{mdash}}
|ಗೋಲ್ಡನ್ ಸ್ಟಾರ್ ಪ್ರಶಸ್ತಿ
|{{won}}
|style="text-align:center;"|<ref>{{cite web |url=http://www.keralatv.in/2011/01/ujala-asianet-film-awards-2010/ |title=Ujala Asianet Film Awards 2011 |date=11 January 2011 |publisher=keralatv.in |access-date=14 November 2014 |archive-date=29 November 2014 |archive-url=https://web.archive.org/web/20141129020812/http://www.keralatv.in/2011/01/ujala-asianet-film-awards-2010/ |url-status=live }}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]], [[ಸ್ನೇಹವೀಡು]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://kerala9.com/news/ujala-asianet-film-awards-2012-winners-list/ |title=Ujala Asianet Film Awards 2012 Winners List |date=7 January 2012 |publisher=kerala9.com |access-date=14 November 2014 |archive-url=https://web.archive.org/web/20120110025652/http://kerala9.com/news/ujala-asianet-film-awards-2012-winners-list/ |archive-date=10 January 2012 |url-status=dead }}</ref>
|-
! scope="row"| 2012
|''[[ಸ್ಪಿರಿಟ್ (2012 ಚಲನಚಿತ್ರ)|ಸ್ಪಿರಿಟ್]], [[ಗ್ರ್ಯಾಂಡ್ಮಾಸ್ಟರ್ (2012 ಚಲನಚಿತ್ರ)|ಗ್ರ್ಯಾಂಡ್ಮಾಸ್ಟರ್]], [[ರನ್ ಬೇಬಿ ರನ್]]''
|{{won}}
|style="text-align:center;"|<ref>{{cite web |url=http://www.filmibeat.com/malayalam/news/2013/asianet-film-awards-2013-winners-list-102810.html |title=Asianet Film Awards 2013 – Winners List |date=21 January 2013 |publisher=filmibeat.com |author=Smitha |access-date=14 November 2014 |archive-date=7 November 2014 |archive-url=https://web.archive.org/web/20141107151040/http://www.filmibeat.com/malayalam/news/2013/asianet-film-awards-2013-winners-list-102810.html |url-status=live }}</ref><ref>{{cite web |title=Asianet Film Awards 2013 Winners |url=http://www.keralatv.in/2013/01/asianet-film-awards-2013-winners/ |date=21 January 2013 |publisher=keralatv.in |access-date=14 November 2014 |archive-url=https://web.archive.org/web/20141129020808/http://www.keralatv.in/2013/01/asianet-film-awards-2013-winners/ |archive-date=29 November 2014 |url-status=dead }}</ref>
|-
! scope="row"| 2013
| {{mdash}}
|ಸಹಸ್ರಮಾನದ ನಟ ಪ್ರಶಸ್ತಿ
|{{won}}
|style="text-align:center;"|<ref>[https://web.archive.org/web/20160401204601/http://www.metromatinee.com/MetromatineMoviewNews/newsoverview.php?NEWSId=16th-ujala-asianet-film-awards-2014-winners-list-7548%2F16th-ujala-asianet-film-awards-2014-winners-list-7548 16th Ujala Asianet Film Awards 2014 – Winners List]. Web.archive.org. Retrieved on 2017-05-31.</ref>
|-
! scope="row"| 2014
| {{mdash}}
| 'ಮಲಯಾಳಂ ಚಲನಚಿತ್ರೋದ್ಯಮದಲ್ಲಿ 35 ವರ್ಷಗಳು' ವಿಶೇಷ ಸ್ಮಾರಕ
|{{won}}
|style="text-align:center;"|<ref>{{cite web |author1=Akhila Menon |title=PHOTOS: Stars At 17th Ujala Asianet Film Awards |url=http://www.filmibeat.com/malayalam/news/2015/photos-stars-at-17-ujala-asianet-film-awards-170333.html |website=[[Filmibeat]].com |accessdate=9 February 2016 |date=13 January 2015 |archive-date=4 March 2016 |archive-url=https://web.archive.org/web/20160304002523/http://www.filmibeat.com/malayalam/news/2015/photos-stars-at-17-ujala-asianet-film-awards-170333.html |url-status=live }}</ref>
|-
! scope="row"| 2015
| {{mdash}}
|"ಸಹಸ್ರಮಾನದ ಸೂಪರ್ಸ್ಟಾರ್" ಎಂದು ಕಿರೀಟಧಾರಣೆ
|{{won}}
|style="text-align:center;"|<ref>{{cite news |author=Anu James |title=18th Asianet Film Awards: Vikram, Trisha, Prithviraj, Mohanlal, Nivin Pauly bag awards [Full winners' list+photos] |url=http://www.ibtimes.co.in/18th-asianet-film-awards-vikram-trisha-prithviraj-mohanlal-nivin-pauly-bag-awards-full-666090 |accessdate=9 February 2016 |agency=[[International Business Times]] |date=8 February 2016 |archive-date=21 December 2019 |archive-url=https://web.archive.org/web/20191221170748/https://www.ibtimes.co.in/18th-asianet-film-awards-vikram-trisha-prithviraj-mohanlal-nivin-pauly-bag-awards-full-666090 |url-status=live }}</ref>
|-
! scope="row"| 2016
|''[[ಒಪ್ಪಂ]]'', ''[[ಪುಲಿಮುರುಗನ್]]''
| rowspan="3" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite news |title=Asiavision Movie Awards 2016 announced: and the winners are... |url=http://english.manoramaonline.com/entertainment/entertainment-news/asiavision-movie-awards-2016-nivin-pauly-manju-warrier-mohanlal.html |archive-url=https://web.archive.org/web/20161116145545/http://english.manoramaonline.com/entertainment/entertainment-news/asiavision-movie-awards-2016-nivin-pauly-manju-warrier-mohanlal.html |archive-date=16 November 2016 |accessdate=25 November 2016 |work=[[Malayala Manorama]] |date=16 November 2016 |url-status=live}}</ref>
|-
! scope="row"| 2018
|''[[ಒಡಿಯನ್]]'', ''[[ಕಾಯಂಕುಳಂ ಕೊಚುನ್ನುನಿ (2018 ಚಲನಚಿತ್ರ)|ಕಾಯಂಕುಳಂ ಕೊಚುನ್ನುನಿ]]''
|{{won}}
|style="text-align:center;"|
|-
! scope="row"| 2019
|''[[ಲೂಸಿಫರ್ (2019 ಭಾರತೀಯ ಚಲನಚಿತ್ರ)|ಲೂಸಿಫರ್]]''
|{{won}}
|style="text-align:center;"|<ref>{{cite news|title=മോഹന്ലാല് മികച്ച നടന്, പാര്വതി നടി, മഞ്ജു തമിഴ് നടി, പൃഥ്വിരാജ് സംവിധായകന്; ഏഷ്യാനെറ്റ് ഫിലിം അവാര്ഡ്|url=https://www.asianetnews.com/entertainment-news/asianet-film-awards-2020-full-list-q5dwhx|accessdate=10 February 2020|work=[[Asianet News]]|date=8 February 2020|language=ml|archive-date=10 February 2020|archive-url=https://web.archive.org/web/20200210160821/https://www.asianetnews.com/entertainment-news/asianet-film-awards-2020-full-list-q5dwhx|url-status=live}}</ref>
|}
== ಸಿನೆಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು ==
[[ಸಿನೆಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು]] [[ಸಿನೆಮಾ ಎಕ್ಸ್ಪ್ರೆಸ್]] ಚಲನಚಿತ್ರ ನಿಯತಕಾಲಿಕೆಯ ಪರವಾಗಿ [[ಇಂಡಿಯನ್ ಎಕ್ಸ್ಪ್ರೆಸ್ ಲಿಮಿಟೆಡ್|ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪ್]] ನಿಂದ ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದಲ್ಲಿನ ವೃತ್ತಿಪರರ ಕಲಾತ್ಮಕ ಉತ್ಕೃಷ್ಟತೆಯನ್ನು ಗೌರವಿಸಲು ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
|[[7ನೇ ಸಿನೆಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು|1986]]
|''[[ಪಂಚಾಗ್ನಿ]]''
|ಅತ್ಯುತ್ತಮ ನಟ
|{{won}}
|<ref>{{Cite news |date=13 April 1987 |title=Cine artistes asked to broaden talents |pages=3 |work=[[The Indian Express]] |url=https://news.google.com/newspapers?id=y4plAAAAIBAJ&sjid=f54NAAAAIBAJ&pg=787%2C2870744 |access-date=28 May 2025}}{{cbignore}}</ref>
|}
== ವನಿತಾ ಚಲನಚಿತ್ರ ಪ್ರಶಸ್ತಿಗಳು ==
[[ವನಿತಾ ಚಲನಚಿತ್ರ ಪ್ರಶಸ್ತಿಗಳು]] [[ಮಲಯಾಳ ಮನೋರಮ]] ಸಮೂಹದ ಭಾಗವಾದ ಮಹಿಳಾ ನಿಯತಕಾಲಿಕೆ ''[[ವನಿತಾ]]'' 1998 ರಿಂದ ಪ್ರತಿ ವರ್ಷವೂ ಆಯೋಜಿಸುವ ವಾರ್ಷಿಕ ಪ್ರಶಸ್ತಿ ಸಮಾರಂಭವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಬಾಲೆಟ್ಟನ್]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref name="Balettan">{{cite web |url=http://www.filmibeat.com/malayalam/movies/balettan/awards.html |title=Balettan |publisher=filmibeat.com |access-date=2014-11-14 |archive-date=2014-11-26 |archive-url=https://web.archive.org/web/20141126115336/http://www.filmibeat.com/malayalam/movies/balettan/awards.html |url-status=live }}</ref>
|-
! scope="row"| 2005
|''[[ಥನ್ಮತ್ರ]]''
|{{won}}
|
|-
! scope="row"| 2007
|''[[ಹಲೋ (ಮಲಯಾಳಂ ಚಲನಚಿತ್ರ)|ಹಲೋ]], [[ಚೋಟ್ಟ ಮುಂಬೈ]]''
|ಅತ್ಯಂತ ಜನಪ್ರಿಯ ನಟ
|{{won}}
|style="text-align:center;"|<ref>{{cite web |url=https://www.indiaglitz.com/vanitha-awards-for-mammootty-meera-jasmine-malayalam-news-36410 |title=Vanitha awards for Mammootty, Meera Jasmine |date=7 February 2008 |work=indiaglitz.com |access-date=14 November 2014 |archive-date=24 September 2015 |archive-url=https://web.archive.org/web/20150924190651/http://www.indiaglitz.com/vanitha-awards-for-mammootty-meera-jasmine-malayalam-news-36410 |url-status=live }}</ref>
|-
! scope="row"| 2008
| ''[[ಟ್ವೆಂಟಿ:20 (ಚಲನಚಿತ್ರ)|ಟ್ವೆಂಟಿ:20]], [[ಮಡಂಪಿ]], [[ಆಕಾಶ ಗೋಪುರಂ]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |title=Nippon has announced the vanitha film awards |url=http://www.metromatinee.com/news-articles/nippon-has-announced-the-vanitha-film-awards-592 |publisher=metromatinee.com |date=19 February 2009 |accessdate=3 Nov 2014 |url-status=dead |archive-url=https://web.archive.org/web/20141103133303/http://www.metromatinee.com/news-articles/nippon-has-announced-the-vanitha-film-awards-592 |archive-date=3 November 2014}}</ref>
|-
! scope="row"| 2009
|''[[ಭ್ರಮರಂ]], [[ಎವಿಡಂ ಸ್ವರ್ಗಮಾನು]]''
|ಅತ್ಯಂತ ಜನಪ್ರಿಯ ನಟ
|{{won}}
|style="text-align:center;"|<ref>{{cite web |url=http://www.keralatv.in/2010/03/vanitha-film-awards-2010-on-surya-tv/ |title=Vanitha Film Awards 2010 on Surya TV |date=27 March 2010 |accessdate=13 Nov 2014 |publisher=keralatv.in |archive-date=29 November 2014 |archive-url=https://web.archive.org/web/20141129020935/http://www.keralatv.in/2010/03/vanitha-film-awards-2010-on-surya-tv/ |url-status=live }}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
| rowspan="4" |ಅತ್ಯುತ್ತಮ ನಟ
|{{won}}
|style="text-align:center;"|<ref name="kerals1">{{cite web |url=http://www.kerals.com/kerala/vanitha-film-awards-2012-announced/ |title=Vanitha Film Awards 2012 announced! |date=14 February 2012 |publisher=kerals.com |access-date=14 November 2014 |archive-date=25 December 2014 |archive-url=https://web.archive.org/web/20141225144558/http://www.kerals.com/kerala/vanitha-film-awards-2012-announced/ |url-status=live }}</ref>
|-
! scope="row"| 2016
|''[[ಒಪ್ಪಂ]], [[ಪುಲಿಮುರುಗನ್]]''
|{{won}}
|style="text-align:center;"|<ref name="kerals1" />
|-
! scope="row"| 2018
|''[[ಒಡಿಯನ್]]''
|{{won}}
|style="text-align:center;"|<ref>{{cite news|title=Vanitha Film Awards: Mohanlal wins Best Actor, Manju Warrier is Best Actress|url=https://english.manoramaonline.com/entertainment/entertainment-news/2019/03/02/vanitha-film-awards-winners-list-live-show-kochi.html|work=[[Malayala Manorama]]|date=3 March 2019|access-date=12 April 2019|archive-date=12 April 2019|archive-url=https://web.archive.org/web/20190412155933/https://english.manoramaonline.com/entertainment/entertainment-news/2019/03/02/vanitha-film-awards-winners-list-live-show-kochi.html|url-status=live}}</ref>
|-
! scope="row"| 2019
|''[[ಲೂಸಿಫರ್ (2019 ಭಾರತೀಯ ಚಲನಚಿತ್ರ)|ಲೂಸಿಫರ್]]''
|{{won}}
|style="text-align:center;"|<ref>{{cite news|author=സ്വന്തം ലേഖകൻ|title=മോഹൻലാൽ മികച്ച നടൻ, മഞ്ജു വാരിയർ മികച്ച നടി; ജനപ്രിയ താരങ്ങളായി ആസിഫ് അലിയും പാർവതിയും!|url=https://www.vanitha.in/specials/vanitha-film-awards-2020/magic-moments/vfa-awards-announced-kochi-bristo-ground-february.html|accessdate=10 February 2020|work=[[Vanitha]]|date=10 February 2020|language=ml|archive-date=10 February 2020|archive-url=https://web.archive.org/web/20200210160516/https://www.vanitha.in/specials/vanitha-film-awards-2020/magic-moments/vfa-awards-announced-kochi-bristo-ground-february.html|url-status=live}}</ref>
|}
== ಏಷ್ಯಾವಿಷನ್ ಪ್ರಶಸ್ತಿಗಳು ==
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:28%;"| ನಾಮನಿರ್ದೇಶಿತ ಕೃತಿ
! scope="col" style="width:14%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2008
|''[[ಇನ್ನತೆ ಚಿಂತ ವಿಷಯಂ]], [[ಮಡಂಪಿ]], [[ಕುರುಕ್ಷೇತ್ರ (2008 ಚಲನಚಿತ್ರ)|ಕುರುಕ್ಷೇತ್ರ]], [[ಪಕಲ್ ನಕ್ಷತ್ರಂಗಳ್]]''
| rowspan="3" |ಅತ್ಯುತ್ತಮ ನಟ
|{{won}}
|
|-
! scope="row"| 2009
|''[[ಭ್ರಮರಂ]]''
|{{won}}
|
|-
! scope="row" rowspan="3"| 2012
|''[[ಸ್ಪಿರಿಟ್ (2012 ಚಲನಚಿತ್ರ)|ಸ್ಪಿರಿಟ್]]'', ''[[ರನ್ ಬೇಬಿ ರನ್ (2012 ಚಲನಚಿತ್ರ)|ರನ್ ಬೇಬಿ ರನ್]]''
|{{won}}
|
|-
|''-''
|ಅತ್ಯಂತ ಪ್ರಭಾವಶಾಲಿ ಮಲಯಾಳಿ<ref>{{Cite web |url=https://www.youtube.com/watch?v=YHNTYKG-5rs |title=Mohanlal receiving "Most Influential Malayali" Award in Asiavision TV Awards – YouTube |website=[[YouTube]] |date=23 June 2012 |access-date=2020-05-26 |archive-date=2016-04-16 |archive-url=https://web.archive.org/web/20160416083407/https://www.youtube.com/watch?v=YHNTYKG-5rs |url-status=live }}</ref>
|{{won}}
|
|-
|''[[ರನ್ ಬೇಬಿ ರನ್ (2012 ಚಲನಚಿತ್ರ)|ರನ್ ಬೇಬಿ ರನ್]]''
|ಗಾಯನದಲ್ಲಿ ಹೊಸ ಸಂವೇದನೆ – ಪುರುಷ
|{{won}}
|
|-
! scope="row"| 2016
|''[[ಒಪ್ಪಂ]]'', ''[[ಪುಲಿಮುರುಗನ್]]''
|ಜನಪ್ರಿಯ ನಟ
|{{won}}
|
|}
== ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು ==
ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು ದೈನಂದಿನ ವಾರ್ತಾಪತ್ರಿಕೆ [[ಮಾತೃಭೂಮಿ]]ಯಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1999
|''[[ವನಪ್ರಸ್ಥಂ]]''
| rowspan="3" |ಅತ್ಯುತ್ತಮ ನಟ
|{{won}}
|
|-
! scope="row"| 2003
|''[[ಬಾಲೆಟ್ಟನ್]]''
|{{won}}
|style="text-align:center;"|<ref>{{cite news |title=Padam Onnu Oru Vilapam bags four awards |url=http://timesofindia.indiatimes.com/city/Padam-Onnu-Oru-Vilapam-bags-four-awards/articleshow/570241.cms |accessdate=16 August 2015 |work=[[India Times]] |agency=[[The Times of India]] |date=19 March 2004 |location=[[Chennai]] |archive-date=26 December 2016 |archive-url=https://web.archive.org/web/20161226173400/http://timesofindia.indiatimes.com/city/Padam-Onnu-Oru-Vilapam-bags-four-awards/articleshow/570241.cms |url-status=live }}</ref>
|-
! scope="row"| 2005
|''[[ಥನ್ಮತ್ರ]]''
|{{won}}
|
|-
! scope="row"| 2006
|''[[ವಡಕ್ಕುಮ್ನಾಧನ್|ವಡಕ್ಕುಮ್ನಾಥನ್]]''
|ಅಭಿನಯದಲ್ಲಿ ಉತ್ಕೃಷ್ಟತೆ
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-tamilnadu/mathrubhumi-film-awards-announced/article1911794.ece |title=Mathrubhumi film awards announced |date=15 September 2007 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127045757/http://www.thehindu.com/todays-paper/tp-national/tp-tamilnadu/mathrubhumi-film-awards-announced/article1911794.ece |url-status=live }}</ref>
|-
! scope="row"| 2008
|''[[ಆಕಾಶ ಗೋಪುರಂ]], [[ಕುರುಕ್ಷೇತ್ರ (2008 ಚಲನಚಿತ್ರ)|ಕುರುಕ್ಷೇತ್ರ]], [[ಪಕಲ್ ನಕ್ಷತ್ರಂಗಳ್]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.afaqs.com/perl/media/media_newslets/index.html?id=40008 |title=Amrita TV to telecast Idea Mathrubhumi Amrita Film Awards |publisher=afaqs.com |url-status=dead |archive-url=https://web.archive.org/web/20141125032131/http://www.afaqs.com/perl/media/media_newslets/index.html?id=40008 |archive-date=25 November 2014}}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|{{won}}
|style="text-align:center;"|<ref>{{cite web |url=http://www.keralatv.in/2012/02/mathrubhumi-kalyan-silks-film-awards-2012-winners/ |title=Mathrubhumi Kalyan Silks Film Awards 2012 Winners |date=16 February 2012 |publisher=keralatv.in |access-date=14 November 2014 |archive-date=29 November 2014 |archive-url=https://web.archive.org/web/20141129020805/http://www.keralatv.in/2012/02/mathrubhumi-kalyan-silks-film-awards-2012-winners/ |url-status=live }}</ref>
|}
== ಅಮೃತ ಚಲನಚಿತ್ರ ಪ್ರಶಸ್ತಿಗಳು ==
ಅಮೃತ ಚಲನಚಿತ್ರ ಪ್ರಶಸ್ತಿಗಳು [[ಅಮೃತ ಟಿವಿ]] ದೂರದರ್ಶನ ಚಾನೆಲ್ನಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2006
|''[[ಕೀರ್ತಿ ಚಕ್ರ (ಚಲನಚಿತ್ರ)|ಕೀರ್ತಿ ಚಕ್ರ]]'', ''[[ವಡಕ್ಕುಮ್ನಾಧನ್|ವಡಕ್ಕುಮ್ನಾಥನ್]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-kerala/amrita-film-awards-announced/article1838347.ece |title=Amrita film awards announced |date=5 May 2007 |agency=[[The Hindu]] |access-date=26 May 2015 |archive-date=27 January 2021 |archive-url=https://web.archive.org/web/20210127211902/https://www.thehindu.com/todays-paper/tp-national/tp-kerala/Amrita-film-awards-announced/article14759558.ece |url-status=live }}</ref>
|-
! scope="row"| 2010
|{{mdash}}
|ಅಭಿನಯ ಕೀರ್ತಿ ಪ್ರಶಸ್ತಿ
|{{won}}
|style="text-align:center;"|<ref>{{cite news |url=http://www.bestmediainfo.com/2011/06/amrita-fefka-film-awards-announced/ |title=Amrita FEFKA Film Awards Announced |date=2 June 2011 |publisher=Best Media Info |accessdate=2 June 2011 |archive-date=3 June 2011 |archive-url=https://web.archive.org/web/20110603135529/http://www.bestmediainfo.com/2011/06/amrita-fefka-film-awards-announced/ |url-status=live }}</ref><ref>{{cite web |url=http://www.indiaglitz.com/channels/malayalam/article/67286.html |title=Amritha awards for Mammootty, Kavya and T D Dasan |date=2 June 2011 |work=Indiaglitz |accessdate=2 June 2011 |archive-date=27 January 2021 |archive-url=https://web.archive.org/web/20210127205023/https://www.indiaglitz.com/malayalam |url-status=dead }}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
| rowspan="3" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.keralatv.in/2012/04/winners-of-amrita-film-awards-2012/ |title=Winners Of Amrita Film Awards 2012 Announced |date=30 April 2012 |publisher=keralatv.in |access-date=14 November 2014 |archive-date=29 November 2014 |archive-url=https://web.archive.org/web/20141129020803/http://www.keralatv.in/2012/04/winners-of-amrita-film-awards-2012/ |url-status=live }}</ref>
|-
! scope="row"| 2012
|''[[ಸ್ಪಿರಿಟ್ (2012 ಚಲನಚಿತ್ರ)|ಸ್ಪಿರಿಟ್]]''
|{{won}}
|style="text-align:center;"|<ref>{{cite web |url=http://www.keralatv.in/2013/05/amrita-film-awards-2013-telecast-details/ |title=Amrita Film Awards To be Telecast on May 31st, June 1st & 2nd |date=30 May 2013 |publisher=keralatv.in |access-date=14 November 2014 |archive-date=29 November 2014 |archive-url=https://web.archive.org/web/20141129020811/http://www.keralatv.in/2013/05/amrita-film-awards-2013-telecast-details/ |url-status=live }}</ref>
|-
! scope="row"| 2013
|''[[ದೃಶ್ಯಂ]]''
|{{won}}
|style="text-align:center;"|<ref>{{cite web |url=http://www.amritatv.com/afa2014/awardcatogories.html |archive-url=https://web.archive.org/web/20160321013952/http://www.amritatv.com/afa2014/awardcatogories.html |archive-date=2016-03-21 |title=Amrita film awards |publisher=amritatv.com}}</ref>
|}
== ಜೈಹಿಂದ್ ಚಲನಚಿತ್ರ ಪ್ರಶಸ್ತಿಗಳು ==
ಜೈಹಿಂದ್ ಚಲನಚಿತ್ರ ಪ್ರಶಸ್ತಿಗಳು [[ಜೈಹಿಂದ್ ಟಿವಿ]] ದೂರದರ್ಶನ ಚಾನೆಲ್ನಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2007
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.kerala.com/news_kerala_Chandy_game_for_8_1969.html |title=Jaihind film awards announced |publisher=kerala.com |access-date=2014-11-14 |archive-date=2014-11-29 |archive-url=https://web.archive.org/web/20141129014612/http://www.kerala.com/news_kerala_Chandy_game_for_8_1969.html |url-status=live }}</ref>
|-
! scope="row"| 2010
|{{mdash}}
|ಚಲಚಿತ್ರ ರತ್ನ ಪ್ರಶಸ್ತಿ
|{{won}}
|style="text-align:center;"|<ref>{{cite web |url=https://www.indiaglitz.com/jai-hind-film-awards-announced-tamilfont-news-58720 |title=Jai Hind Film Awards announced |date=20 July 2010 |accessdate=14 Nov 2014 |work=indiaglitz.com |archive-date=24 September 2015 |archive-url=https://web.archive.org/web/20150924172810/http://www.indiaglitz.com/jai-hind-film-awards-announced-tamilfont-news-58720 |url-status=live }}</ref><ref>{{cite web |url=http://www.metromatinee.com/news-articles/jai-hind-film-awards-2010-announced-2451 |archive-url=https://web.archive.org/web/20160406081142/http://www.metromatinee.com/news-articles/jai-hind-film-awards-2010-announced-2451 |archive-date=2016-04-06 |title=Jai Hind Film Awards 2010 announced !! |date=25 July 2010 |publisher=metromatinee.com}}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
| rowspan="2" |ಅತ್ಯುತ್ತಮ ನಟ
|{{won}}
|
|-
! scope="row"| 2013
|''[[ದೃಶ್ಯಂ]]''
|{{won}}
|
|}
== ಜನ್ಮಭೂಮಿ ಸಿನೆಮಾ ಪ್ರಶಸ್ತಿಗಳು ==
ಜನ್ಮಭೂಮಿ ಸಿನೆಮಾ ಪ್ರಶಸ್ತಿಗಳು ದೈನಂದಿನ ವಾರ್ತಾಪತ್ರಿಕೆ [[ಜನ್ಮಭೂಮಿ]]ಯಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2016
|''[[ಒಪ್ಪಂ]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref>{{Cite web|url=https://keralaonlinenews.com/|title=||website=keralaonlinenews.com|access-date=2020-09-20|archive-date=2020-09-01|archive-url=https://web.archive.org/web/20200901234355/https://keralaonlinenews.com/|url-status=live}}</ref>
|-
! scope="row"| 2018
|''[[ಒಡಿಯನ್]]''
|{{won}}
|style="text-align:center;"|<ref>{{cite news|title=Janmabhumi Cinema Awards 2018: Mohanlal Actor and Nimisha Sajayan Actress|url=https://global.janmabhumidaily.com/news861146|accessdate=18 July 2019|work=[[Janmabhumi]]|date=12 July 2019|archive-date=18 July 2019|archive-url=https://web.archive.org/web/20190718092211/https://global.janmabhumidaily.com/news861146|url-status=live}}</ref>
|}
== ದಿ ಕೊಚ್ಚಿ ಟೈಮ್ಸ್ ಚಲನಚಿತ್ರ ಪ್ರಶಸ್ತಿಗಳು ==
ದಿ ಕೊಚ್ಚಿ ಟೈಮ್ಸ್ ಚಲನಚಿತ್ರ ಪ್ರಶಸ್ತಿಗಳು [[ದಿ ಟೈಮ್ಸ್ ಆಫ್ ಇಂಡಿಯಾ]]ನ ಕೊಚ್ಚಿ ಟೈಮ್ಸ್ ಸುದ್ದಿ ವಿಭಾಗದಿಂದ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|ಅತ್ಯುತ್ತಮ ನಟ – ಪುರುಷ
|{{won}}
|style="text-align:center;"|<ref>{{cite news |url=https://timesofindia.indiatimes.com/entertainment/regional/malayalam/news-and-interviews/The-Kochi-Times-Film-Awards-2011/articleshow/14341029.cms |title=The Kochi Times Film Awards 2011 |date=23 June 2012 |access-date=2013-07-04 |archive-date=2013-10-04 |archive-url=https://web.archive.org/web/20131004233019/http://articles.timesofindia.indiatimes.com/2012-06-23/news-and-interviews/32369964_1_video-mohanlal-kavya-madhavan |work=[[The Times of India]] |url-status=live }}</ref>
|}
== ಕೇರಳ ಚಲನಚಿತ್ರ ಪ್ರೇಕ್ಷಕ ಮಂಡಳಿ ಪ್ರಶಸ್ತಿಗಳು ==
ಕೇರಳ ಚಲನಚಿತ್ರ ಪ್ರೇಕ್ಷಕ ಮಂಡಳಿ ಪ್ರಶಸ್ತಿಗಳು ಕೇರಳ ಚಲನಚಿತ್ರ ಪ್ರೇಕ್ಷಕ ಮಂಡಳಿಯಿಂದ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಬಾಲೆಟ್ಟನ್]]''
| rowspan="4" |ಅತ್ಯುತ್ತಮ ನಟ
|{{won}}
|style="text-align:center;"|<ref name="Balettan" />
|-
! scope="row"| 2004
|''[[ವಿಸ್ಮಯಥುಂಬಾತು]]'', ''[[ಮಂಪಳಕ್ಕಾಲಂ]]''
|{{won}}
|
|-
! scope="row"| 2005
|''[[ಥನ್ಮತ್ರ]]''
|{{won}}
|
|-
! scope="row"| 2007
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]''
|{{won}}
|style="text-align:center;"|<ref>{{cite web |url=https://www.indiaglitz.com/audience-council-award-for-mohanlal-kavya-madhavan-malayalam-news-36730 |title=Audience council award for Mohanlal, Kavya Madhavan |date=21 February 2008 |work=indiaglitz.com |access-date=14 November 2014 |archive-date=24 September 2015 |archive-url=https://web.archive.org/web/20150924061450/http://www.indiaglitz.com/audience-council-award-for-mohanlal-kavya-madhavan-malayalam-news-36730 |url-status=live }}</ref>
|}
== ವಿ. ಶಾಂತಾರಾಮ್ ಪ್ರಶಸ್ತಿಗಳು ==
1993 ರಲ್ಲಿ ಸ್ಥಾಪಿಸಲಾದ ವಿ. ಶಾಂತಾರಾಮ್ ಪ್ರಶಸ್ತಿಗಳು, [[ಭಾರತ ಸರ್ಕಾರ]], [[ಮಹಾರಾಷ್ಟ್ರ ಸರ್ಕಾರ]], ಮತ್ತು ವಿ. ಶಾಂತಾರಾಮ್ ಮೋಷನ್ ಪಿಕ್ಚರ್ ಸೈಂಟಿಫಿಕ್ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಶನ್ ಸ್ಥಾಪಿಸಿದವು.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2008
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]'', ''[[ಆಕಾಶ ಗೋಪುರಂ]]''
| rowspan="2" |ಅತ್ಯುತ್ತಮ ನಟ
|{{nom}}
|style="text-align:center;"|<ref>{{cite web |url=http://businessofcinema.com/bollywood-news/nominations-announced-for-v-shantaram-awards-2008/25824 |title=Nominations announced for V Shantaram Awards 2008 |publisher=Business of Cinema |date=19 November 2008 |accessdate=5 April 2016 |last=BOC Editorial |archive-date=22 April 2016 |archive-url=https://web.archive.org/web/20160422002454/http://businessofcinema.com/bollywood-news/nominations-announced-for-v-shantaram-awards-2008/25824 |url-status=live }}</ref>
|-
! scope="row"| 2009
|''[[ಭ್ರಮರಂ]]''
|{{nom}}
|style="text-align:center;"|<ref>{{cite news |url=http://www.dnaindia.com/entertainment/report-actress-sandhya-to-be-honoured-at-v-shantaram-awards-1325669 |title=Actress Sandhya to be Honoured at V Shantaram Awards |work=[[Daily News and Analysis]] |date=20 December 2009 |accessdate=5 April 2016 |last=Press Trust of India |location=Mumbai |archive-date=8 August 2016 |archive-url=https://web.archive.org/web/20160808032030/http://www.dnaindia.com/entertainment/report-actress-sandhya-to-be-honoured-at-v-shantaram-awards-1325669 |url-status=live }}</ref>
|}
== [[ರಾಮು ಕಾರಿಯಾತ್]] ಪ್ರಶಸ್ತಿಗಳು ==
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"|2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{cite web|url=http://cinemadoctor.blogspot.com/2012/01/ramu-karyat-award-for-mohan-lal-kavya.html|title=Ramu Kariat Awards|access-date=27 January 2012|archive-date=30 January 2012|archive-url=https://web.archive.org/web/20120130131254/http://cinemadoctor.blogspot.com/2012/01/ramu-karyat-award-for-mohan-lal-kavya.html|url-status=live}}</ref>
|}
== ಇತರ ಪ್ರಶಸ್ತಿಗಳು ಮತ್ತು ಮನ್ನಣೆಗಳು ==
* 1977-78 ಕೇರಳ ರಾಜ್ಯ ಕುಸ್ತಿ ಚಾಂಪಿಯನ್<ref name="blackbelt">[http://newindianexpress.com/entertainment/malayalam/article1310726.ece "Blackbelt for Mohanlal"] {{Webarchive|url=https://web.archive.org/web/20130413204428/http://newindianexpress.com/entertainment/malayalam/article1310726.ece |date=2013-04-13 }}. ''[[The New Indian Express]]''. 23 October 2012. Retrieved 24 October 2012.</ref>
* 2003 [[ಭಾರತೀಯ ವೈದ್ಯಕೀಯ ಸಂಘ]]ದಿಂದ ''ವರ್ಷದ ಕೊಡುಗೆದಾರ'' ಗೌರವ<ref>{{Cite web |date=2003-05-13 |title=IMA Award for Mohanlal |url=https://mohanlalonline.com/Content/ima_award_for_mohanlal./ |url-status=live |archive-url=https://web.archive.org/web/20231003180421/https://mohanlalonline.com/Content/ima_award_for_mohanlal./ |archive-date=2023-10-03 |access-date=2024-07-26 |website=MohanlalOnline}}</ref>
* 2005 [[ಜೆ.ಸಿ. ಡೇನಿಯಲ್#ಜೆ.ಸಿ. ಫೌಂಡೇಶನ್ ಪ್ರಶಸ್ತಿ|ಜೆ.ಸಿ. ಫೌಂಡೇಶನ್ ಪ್ರಶಸ್ತಿಗಳು]] ಅತ್ಯುತ್ತಮ ನಟ – [[ಥನ್ಮತ್ರ]]<ref name=":0">{{Citation|title=Thanmathra|date=2021-05-10|url=https://en.wikipedia.org/w/index.php?title=Thanmathra&oldid=1022432269|work=Wikipedia|language=en|access-date=2021-07-09}}</ref>
* 2005 ಕಲಾ ಕೇರಳಂ ಪ್ರಶಸ್ತಿ ಅತ್ಯುತ್ತಮ ನಟ – [[ಥನ್ಮತ್ರ]]<ref name=":0" />
* 2005 ರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಅತ್ಯುತ್ತಮ ನಟ – [[ಥನ್ಮತ್ರ]]<ref name=":0" />
* 2006 [[CNN-IBN]] ಸಮೀಕ್ಷೆ – ಅತ್ಯಂತ ಜನಪ್ರಿಯ ಕೇರಳಿ ಪ್ರಶಸ್ತಿ<ref>{{Cite news |url=http://ibnlive.in.com/news/mohanlal-tops-popular-keralite-poll/25523-3.html |title=Mohanlal tops popular Keralite poll |publisher=CNN-IBN |date=6 November 2006 |work=ibnlive.in.com |url-status=dead |archive-url=https://web.archive.org/web/20141010015646/http://ibnlive.in.com/news/mohanlal-tops-popular-keralite-poll/25523-3.html |archive-date=10 October 2014}}</ref>
* 2007 ಕೇರಳ [[HIV/AIDS|ಏಡ್ಸ್]] ನಿಯಂತ್ರಣ ಸೊಸೈಟಿ – ಸದ್ಭಾವನಾ ರಾಯಭಾರಿ<ref>{{Cite news |url=http://zeenews.india.com/home/mohanlal-goodwill-ambassador-for-aids-awareness-prog_359645.html |title=Mohanlal goodwill ambassador for AIDS awareness prog |date=12 March 2007 |agency=[[Zee News]] |access-date=24 May 2015 |archive-date=24 May 2015 |archive-url=https://web.archive.org/web/20150524213445/http://zeenews.india.com/home/mohanlal-goodwill-ambassador-for-aids-awareness-prog_359645.html |url-status=live }}</ref>
* 2009 ಕೇರಳ ರಾಜ್ಯ ಅಥ್ಲೆಟಿಕ್ಸ್ – ಸದ್ಭಾವನಾ ರಾಯಭಾರಿ<ref>{{Cite news |url=http://www.thehindu.com/todays-paper/tp-sports/actor-mohanlal-runs-for-kerala-athletes/article129968.ece |title=Actor Mohanlal runs for Kerala athletes |date=1 November 2009 |access-date=24 May 2015 |archive-date=27 January 2021 |archive-url=https://web.archive.org/web/20210127211831/https://www.thehindu.com/todays-paper/tp-sports/Actor-Mohanlal-runs-for-Kerala-athletes/article16470312.ece |url-status=live }}</ref>
* 2009 [[ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್]] "ವರ್ಷದ ವ್ಯಕ್ತಿಗಳು" ಪ್ರಶಸ್ತಿ<ref name="onlookers">{{Cite web |title=Interesting Facts about Mohanlal |date=27 January 2015 |url=http://onlookersmedia.in/onlookerslive/10-interesting-facts-about-mohanlal/ |url-status=live |archive-url=https://web.archive.org/web/20190908133435/http://onlookersmedia.in/onlookerslive/10-interesting-facts-about-mohanlal |archive-date=2019-09-08 |access-date=2020-05-07}}</ref>
* 2009 [[ಚಿತ್ರ ತಿರುನಾಳ್ ಬಲರಾಮ ವರ್ಮ#ಶ್ರೀ ಚಿತ್ರ ತಿರುನಾಳ್ ರಾಷ್ಟ್ರೀಯ ಪ್ರಶಸ್ತಿ|ಶ್ರೀ ಚಿತ್ರ ತಿರುನಾಳ್ ರಾಷ್ಟ್ರೀಯ ಪ್ರಶಸ್ತಿ]]<ref>{{Cite web |date=19 September 2009 |title=Chithira Tirunal award for Mohanlal |url=https://www.thehindu.com/news/cities/Thiruvananthapuram/Chithira-Tirunal-award-for-Mohanlal/article16882326.ece |url-status=live |archive-url=https://web.archive.org/web/20210127211310/https://www.thehindu.com/news/cities/Thiruvananthapuram/Chithira-Tirunal-award-for-Mohanlal/article16882326.ece |archive-date=27 January 2021 |website=[[The Hindu]]}}</ref>
* 2009 ವಾರ್ಷಿಕ ಮಲಯಾಳಂ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ನಟ – [[ಭ್ರಮರಂ]]<ref name=":1">{{Citation|title=Bhramaram|date=2021-06-20|url=https://en.wikipedia.org/w/index.php?title=Bhramaram&oldid=1029569132|work=Wikipedia|language=en|access-date=2021-07-09}}</ref>
* 2009 [[ಕೈರಳಿ ಟಿವಿ]] ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ನಟ – [[ಭ್ರಮರಂ]]<ref name=":1" />
* 2009 ಜೇಸೀ ಪ್ರಶಸ್ತಿ ಅತ್ಯುತ್ತಮ ನಟ – [[ಭ್ರಮರಂ]]<ref name=":1" />
* 2010 [[ರೀಡರ್ಸ್ ಡೈಜೆಸ್ಟ್]] ಅವರನ್ನು "100 ಅತ್ಯಂತ ವಿಶ್ವಾಸಾರ್ಹ ಭಾರತೀಯರು" ಪಟ್ಟಿಯಲ್ಲಿ ಸೇರಿಸಿತು.<ref>{{Cite news |url=http://www.hindustantimes.com/newdelhi/kalam-ratan-tata-india-s-most-trusted-mayawati-least/article1-514441.aspx |title=Kalam, Ratan Tata India's most trusted, Mayawati least |last=IANS |date=2 March 2010 |agency=[[Hindustan Times]] |url-status=dead |archive-url=https://web.archive.org/web/20150524194509/http://www.hindustantimes.com/newdelhi/kalam-ratan-tata-india-s-most-trusted-mayawati-least/article1-514441.aspx |archive-date=24 May 2015}}</ref>
* 2010 [[ಥಿಕ್ಕುರಿಸ್ಸಿ ಸುಕುಮಾರನ್ ನಾಯರ್]] ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಅವರ ಭಾರತೀಯ ಸಿನೆಮಾಗೆ ನೀಡಿದ ಕೊಡುಗೆಗಳಿಗಾಗಿ.<ref>{{cite news |url=http://www.newindianexpress.com/entertainment/malayalam/article479225.ece |title=Thikkurissy award for Mohanlal |publisher=[[The New Indian Express]] |date=29 September 2010 |access-date=5 April 2016 |archive-date=18 April 2016 |archive-url=https://web.archive.org/web/20160418060119/http://www.newindianexpress.com/entertainment/malayalam/article479225.ece |url-status=dead }}</ref>
* 2010 ಕೇರಳ [[ಕೈಮಗ್ಗ]] ಉದ್ಯಮ – ಸದ್ಭಾವನಾ ರಾಯಭಾರಿ<ref>{{cite web |url=http://movies.ndtv.com/movie_Story.aspx?id=ENTEN20100142599 |archive-url=https://archive.today/20120729054009/http://movies.ndtv.com/movie_Story.aspx?id=ENTEN20100142599 |url-status=dead |archive-date=29 July 2012 |title=Mohanlal made goodwill ambassador of handloom textiles |website=NDTVmovies.com |date=31 May 2010}}</ref>
* 2011 [[ಡೆಕ್ಕನ್ ಕ್ರಾನಿಕಲ್]] ಸಮೀಕ್ಷೆ – ಅತ್ಯಂತ ಜನಪ್ರಿಯ ಕೇರಳಿ<ref>{{Cite web|url=http://malayalamfilimnews.blogspot.com/2011/03/mohanlal-most-popular-keralite-2011.html|title=Malayalam Film News: Mohanlal – Most Popular Keralite 2011 Survey By Deccan Chronicle.|date=28 March 2011|access-date=13 May 2020|archive-date=27 January 2021|archive-url=https://web.archive.org/web/20210127211825/http://malayalamfilimnews.blogspot.com/2011/03/mohanlal-most-popular-keralite-2011.html|url-status=live}}</ref>
* 2011 ಕೇರಳ ಚಲನಚಿತ್ರ ನಿರ್ಮಾಪಕರ ಸಂಘ ಅತ್ಯುತ್ತಮ ನಟ – [[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]<ref name=":2">{{Citation|title=Pranayam|date=2021-05-11|url=https://en.wikipedia.org/w/index.php?title=Pranayam&oldid=1022658419|work=Wikipedia|language=en|access-date=2021-07-09}}</ref>
* 2011 ವೀವರ್ಸ್ ಚಾಯ್ಸ್ ಪ್ರಶಸ್ತಿಗಳು ಅತ್ಯುತ್ತಮ ನಟ – [[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]<ref name=":2" />
* 2011 ನಾನಾ ಚಲನಚಿತ್ರ ಪ್ರಶಸ್ತಿಗಳು ವಿಶೇಷ ತೀರ್ಪುಗಾರರ ಉಲ್ಲೇಖ – [[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]<ref name=":2" />
* 2011 ರಿಪೋರ್ಟರ್ ಟಿವಿ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ನಟ – [[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]<ref name=":2" />
* 2012 ಅವರ ಚಲನಚಿತ್ರ [[ಇರುವರ್]] ಅನ್ನು [[ಬ್ರಿಟಿಷ್ ಫಿಲ್ಮ್ ಇನ್ಸ್ಟಿಟ್ಯೂಟ್]] [[ಸೈಟ್ ಅಂಡ್ ಸೌಂಡ್]] "ಎಲ್ಲಾ ಕಾಲದ 1000 ಶ್ರೇಷ್ಠ ಚಲನಚಿತ್ರಗಳು" ಪಟ್ಟಿಯಲ್ಲಿ ಸೇರಿಸಲಾಯಿತು.
* 2013 ''[[ಔಟ್ಲುಕ್ (ಭಾರತೀಯ ನಿಯತಕಾಲಿಕೆ)|ಔಟ್ಲುಕ್ ಇಂಡಿಯಾ]]'' – "ಕೇರಳದಿಂದ ಅತ್ಯಂತ ಪ್ರಭಾವಶಾಲಿ ಭಾರತೀಯ".<ref>{{cite web |url=http://www.outlookindia.com/content11168.asp#I-Day%20Special:%20India%27s%20Most%20Influential |title=India's most influential |publisher=OutlookIndia.com |accessdate=15 August 2013 |url-status=dead |archive-url=https://web.archive.org/web/20130814000623/http://www.outlookindia.com/content11168.asp |archive-date=14 August 2013}}</ref><ref>{{cite web |url=http://www.outlookindia.com/article.aspx?287338 |title=Mohanlal – The Most Inflential Indian from Kerala |publisher=OutlookIndia.com |accessdate=15 August 2013 |author=Minu Ittyipe |archive-date=14 August 2013 |archive-url=https://web.archive.org/web/20130814172031/http://www.outlookindia.com/article.aspx?287338 |url-status=live }}</ref>
* 2013 ''[[ಫೋರ್ಬ್ಸ್ (ಭಾರತ)|ಫೋರ್ಬ್ಸ್ ಇಂಡಿಯಾ]]'' 1991 ರಲ್ಲಿ ''ಭಾರತಂ'' ನಲ್ಲಿ ಅವರ ಪಾತ್ರವನ್ನು "ಭಾರತೀಯ ಸಿನೆಮಾದ 25 ಶ್ರೇಷ್ಠ ಅಭಿನಯ ಪ್ರದರ್ಶನಗಳು" ಪಟ್ಟಿಯಲ್ಲಿ ಸೇರಿಸಿತು.<ref>Prasad, Shishir. (2013-04-27) [http://forbesindia.com/article/100-years-of-indian-cinema/25-greatest-acting-performances-of-indian-cinema/35125/0 Forbes India Magazine – 25 Greatest Acting Performances of Indian Cinema] {{Webarchive|url=https://web.archive.org/web/20150519053125/http://forbesindia.com/article/100-years-of-indian-cinema/25-greatest-acting-performances-of-indian-cinema/35125/0 |date=2015-05-19 }}. Forbesindia.com. Retrieved on 2017-05-31.</ref>
* 2013 [[CNN-IBN]] "ಭಾರತೀಯ ಸಿನೆಮಾದ 100 ವರ್ಷಗಳು" ಸಮೀಕ್ಷೆಯಲ್ಲಿ – ಭಾರತದ ಶ್ರೇಷ್ಠ ನಟರಲ್ಲಿ 3ನೇ ಸ್ಥಾನ.<ref>[http://news.entecity.com/mohanlal-comes-3rd-among-indias-great-actorscnn-ibn/ Mohanlal comes 3rd among India's great actors;CNN-IBN Survey] {{Webarchive|url=https://web.archive.org/web/20130314022727/http://news.entecity.com/mohanlal-comes-3rd-among-indias-great-actorscnn-ibn/ |date=2013-03-14 }}. News.entecity.com (2013-03-10). Retrieved on 2017-05-31.</ref>
* 2015 ಆಲ್-ಕೇರಳ ಅಡ್ವರ್ಟೈಸರ್ಸ್ ಏಜೆನ್ಸೀಸ್ ಅಸೋಸಿಯೇಷನ್ ಅವರ ಜಾಹೀರಾತು ಪ್ರಪಂಚಕ್ಕೆ ನೀಡಿದ ಕೊಡುಗೆಗಳಿಗಾಗಿ "ಕೇರಳದ ಬ್ರ್ಯಾಂಡ್ ಐಕಾನ್" ಎಂಬ ಬಿರುದನ್ನು ನೀಡಿ ಗೌರವಿಸಿತು.<ref>{{cite news |title=Business Honchos to Put Heads Together |url=http://www.newindianexpress.com/cities/kochi/Business-Honchos-to-Put-Heads-Together/2015/11/26/article3146884.ece |work=[[The New Indian Express]] |date=26 November 2015 |accessdate=28 March 2016 |archive-date=9 April 2016 |archive-url=https://web.archive.org/web/20160409014621/http://www.newindianexpress.com/cities/kochi/Business-Honchos-to-Put-Heads-Together/2015/11/26/article3146884.ece |url-status=dead }}</ref>
* 2016 ಕೇರಳ ಅಂಗಾಂಗ ದಾನ ಕಾರ್ಯಕ್ರಮ – ಸದ್ಭಾವನಾ ರಾಯಭಾರಿ.<ref>{{Cite web|date=|title=Kerala CM site|url=https://www.keralacm.gov.in/mrithasanjeevani/|url-status=live|archive-url=https://web.archive.org/web/20200718002415/http://www.keralacm.gov.in/mrithasanjeevani/|archive-date=2020-07-18|access-date=|website=}}</ref>
* 2016 "[[ಮನೋರಮ ನ್ಯೂಸ್]]ಮೇಕರ್ ಆಫ್ ದಿ ಇಯರ್" ಪ್ರಶಸ್ತಿ, ಹೆಚ್ಚಿನ ಶೀರ್ಷಿಕೆಗಳನ್ನು ಗಳಿಸಿದ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದ [[ಕೇರಳಿ]] ವ್ಯಕ್ತಿಗೆ ನೀಡಲಾಗುವ ಬಿರುದು.<ref>{{cite news |title='Complete Actor' Mohanlal wins Manorama News Newsmaker 2016 award |url=http://english.manoramaonline.com/news/kerala/manorama-news-newsmaker-2016-mohanlal.html |accessdate=15 January 2017 |work=[[Malayala Manorama]] |date=15 January 2017 |archive-date=16 January 2017 |archive-url=https://web.archive.org/web/20170116170404/http://english.manoramaonline.com/news/kerala/manorama-news-newsmaker-2016-mohanlal.html |url-status=live }}</ref>
* 2017 "ಇಂಡಿಯನ್ ಐಕಾನ್ 2017" ಪ್ರಶಸ್ತಿ ಬಹ್ರೈನ್ ಸ್ನೇಹಿತರಿಂದ.<ref>{{cite news |title='ഫ്രണ്ട്സ് ഓഫ് ബഹ്റൈന് ഇന്ത്യന് ഐക്കണ് പുരസ്കാരം മോഹന്ലാലിന്' ഫ്രണ്ട്സ് ഓഫ് ബഹ്റൈന് ഇന്ത്യന് ഐക്കണ് പുരസ്കാരം മോഹന്ലാലിന് |url=https://www.mathrubhumi.com/gulf/bahrain/mohanlal-friends-of-bahrain-indian-icon-award-1.1947551 |accessdate=19 May 2017 |archive-date=19 May 2017 |archive-url=https://web.archive.org/web/20170519103915/http://www.mathrubhumi.com/gulf/bahrain/mohanlal-friends-of-bahrain-indian-icon-award-1.1947551 |url-status=live }}</ref>
* 2018 [[ಪಿ. ಕೇಶವದೇವ್#ಕೇಶವದೇವ್ ಪ್ರಶಸ್ತಿಗಳು|ಪಿ. ಕೇಶವದೇವ್ ಡಯಾಬ್ಸ್ಕ್ರೀನ್ ಕೇರಳ ಪ್ರಶಸ್ತಿ]]<ref>{{cite web|title=Mohanlal receives P Keshav Dev Award 2018|url=https://timesofindia.indiatimes.com/entertainment/events/kochi/mohanlal-receives-p-keshav-dev-award-2018/articleshow/64961942.cms|work=[[The Times of India]]|date=14 July 2018|accessdate=13 May 2020|archive-date=4 February 2020|archive-url=https://web.archive.org/web/20200204195919/https://timesofindia.indiatimes.com/entertainment/events/kochi/mohanlal-receives-p-keshav-dev-award-2018/articleshow/64961942.cms|url-status=live}}</ref><ref>{{cite web |title=11 July 2018: 14th P.Kesavadev Awards|url=http://diabscreenkerala.net/prgms/2018/july_11_2018.html |date=11 July 2018|accessdate=13 May 2020}}</ref>
* 2019 ''ಪ್ರಣವಪಥ್ಮಂ ಪುರಸ್ಕಾರಂ'' [[ಸಂತಿಗಿರಿ|ಸಂತಿಗಿರಿ ಆಶ್ರಮ]]ದಿಂದ<ref>{{cite news |url=https://www.manoramaonline.com/news/latest-news/2019/03/25/mohanlal-receives-pranava-pathmam-award-by-santhigiri.html |title=3 സ്ഥാനാർഥികളും സാക്ഷി; ശാന്തിഗിരി പ്രണവപത്മം ഏറ്റുവാങ്ങി മോഹൻലാൽ }}</ref>
* 2019 [[ಮಳವಿಲ್ ಮನೋರಮ|ಮಳವಿಲ್]] ಮನರಂಜನಾ ಪ್ರಶಸ್ತಿಗಳು – ಅಲ್ಟಿಮೇಟ್ ಎಂಟರ್ಟೈನರ್ ನಟ<ref>{{cite web|title=Mazhavil Entertainment Awards 2019: here's the list of winners|url=https://www.onmanorama.com/entertainment/entertainment-news/2019/05/07/mazhavil-entertainment-awards-2019-list-of-winners.html|date=7 May 2019|work=[[Manorama Online]]|access-date=5 August 2020|archive-date=30 October 2020|archive-url=https://web.archive.org/web/20201030145444/https://www.onmanorama.com/entertainment/entertainment-news/2019/05/07/mazhavil-entertainment-awards-2019-list-of-winners.html|url-status=live}}</ref>
* 2020 ಪಿ. ವಿ. ಸಾಮಿ ಸ್ಮಾರಕ ಕೈಗಾರಿಕಾ ಮತ್ತು ಸಾಮಾಜಿಕ-ಸಾಂಸ್ಕೃತಿಕ ಪ್ರಶಸ್ತಿ, ಕಳೆದ ನಾಲ್ಕು ದಶಕಗಳಲ್ಲಿ [[ಮಲಯಾಳಂ ಸಿನೆಮಾ]]ಗೆ ನೀಡಿದ ಕೊಡುಗೆಗಳು ಮತ್ತು [[ವಿಶ್ವಶಾಂತಿ ಫೌಂಡೇಶನ್]] ಮೂಲಕ ದಾನಕ್ಕೆ ನೀಡಿದ ಕೊಡುಗೆಗಳಿಗಾಗಿ<ref>{{Cite news|last=Award|first=PV Sami|title=Mathrubhumi News|url=https://english.mathrubhumi.com/movies-music/movie-news/pv-sami-memorial-award-for-mohanlal-1.5013632}}</ref>
* 2021 [[ಕೇರಳ ಸರ್ಕಾರ]]ದ ಆರೋಗ್ಯ ಇಲಾಖೆಯಿಂದ [[ಕ್ಷಯರೋಗ]] ನಿರ್ಮೂಲನೆ ಅಭಿಯಾನದ ಸದ್ಭಾವನಾ ರಾಯಭಾರಿ<ref>{{Cite news|date=|title=The news minute|work=|url=https://www.thenewsminute.com/article/mohanlal-be-goodwill-ambassador-keralas-tuberculosis-eradication-programme-141935|url-status=live|access-date=|archive-date=2021-01-22|archive-url=https://web.archive.org/web/20210122064725/https://www.thenewsminute.com/article/mohanlal-be-goodwill-ambassador-keralas-tuberculosis-eradication-programme-141935}}</ref>
* 2022 [[ಮಳವಿಲ್ ಮನೋರಮ|ಮಳವಿಲ್]] ಮನರಂಜನಾ ಪ್ರಶಸ್ತಿಗಳು – ಮಾಸ್ಟರ್ ಎಂಟರ್ಟೈನರ್ ಅಭಿನಯ<ref>{{cite web | url=https://www.keralatv.in/mazhavil-entertainment-awards-winners/ | title=Mazhavil Entertainment Awards 2022 Winners Are Mohanlal, Manju Warrier | date=29 August 2022 }}</ref>
* 2024 [[ಶ್ರೀಕುಮಾರನ್ ತಂಪಿ]] ಫೌಂಡೇಶನ್ ಪ್ರಶಸ್ತಿ ಅಭಿನಯದಲ್ಲಿನ ಉತ್ಕೃಷ್ಟತೆಗಾಗಿ<ref>{{Cite web |last=SV |first=Swathi |date=2024-07-03 |title=Sreekumaran Thambi Foundation award to Actor Mohanlal |url=https://en.thekarmanews.com/sreekumaran-thambi-foundation-award-to-actor-mohanlal/ |url-status=live |archive-url=https://web.archive.org/web/20240706100529/https://en.thekarmanews.com/sreekumaran-thambi-foundation-award-to-actor-mohanlal/ |archive-date=2024-07-06 |access-date=2024-07-06 |website=Karma News}}</ref>
* 2024 [[ಕಲಾಭವನ್ ಮಣಿ]] ಸ್ಮಾರಕ ಪ್ರಶಸ್ತಿಗಳು - [[ಬರ್ರೋಜ್ 3D]] ಗಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ.<ref>{{Cite web|url=https://www.southlive.in/movie/film-news/mohanlal-wins-kalabhavan-mani-memorial-award-for-best-debut-director#amp_tf=From%20%251%24s&aoh=17474666917826&referrer=https%3A%2F%2Fwww.google.com&share=https%3A%2F%2Fwww.southlive.in%2Fmovie%2Ffilm-news%2Fmohanlal-wins-kalabhavan-mani-memorial-award-for-best-debut-director|title=മികച്ച നവാഗത സംവിധായകന് മോഹന്ലാല്; കലാഭവന് മണി മെമ്മോറിയല് പുരസ്കാരം|website=SouthLive}}</ref>
* 2025 ''[[ತುದರುಂ]]'' ಗಾಗಿ ಮಲಯಾಳ ಪುರಸ್ಕಾರ ಸಮಿತಿಯ ಮಲಯಾಳ ಪುರಸ್ಕಾರಂ 1201 ರ ಅತ್ಯುತ್ತಮ ನಟ<ref>{{Cite web |date=2025-08-17 |title=ഒമ്പതാമത് മലയാള പുരസ്കാരങ്ങൾ: മോഹൻലാലിനും സിബി മലയിലിനും അഭിലാഷ് മോഹനനും അവാര്ഡ് |url=https://www.mathrubhumi.com/movies-music/news/malayalam-puraskaram-2025-winners-1.10839857 |access-date=2025-08-17 |website=[[Mathrubhumi]]}}</ref>
* 2025 [[ಮಳವಿಲ್ ಮನೋರಮ|ಮಳವಿಲ್]] ಮನರಂಜನಾ ಪ್ರಶಸ್ತಿಗಳು – ವರ್ಷದ ಮನರಂಜಕ<ref>{{Cite web |title=Mazhavil Entertainment Awards: Mohanlal wins Entertainer of the Year for 'Thudarum' |url=https://www.onmanorama.com/entertainment/entertainment-news/2025/08/18/mazhavil-entertainment-awards-malayalam-cinema-star-studded-event.html |access-date=2025-09-22 |website=Mazhavil Entertainment Awards: Mohanlal wins Entertainer of the Year for 'Thudarum' |language=en}}</ref>
==ಉಲ್ಲೇಖಗಳು==
{{notelist}}
{{Reflist}}
==ಬಾಹ್ಯ ಕೊಂಡಿಗಳು==
{{Commons category}}
* [http://www.thecompleteactor.com ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20190829082013/https://www.thecompleteactor.com/ |date=29 August 2019 }}
* {{IMDb name|0482320|name=Mohanlal}}
* {{Rotten-tomatoes-person|mohanlal|Mohanlal}}
{{Authority control}}
{{DEFAULTSORT:ಮೋಹನ್ಲಾಲ್}}
[[ವರ್ಗ:ಮೋಹನ್ಲಾಲ್| ]]
[[ವರ್ಗ:1960 ರ ಜನನಗಳು]]
[[ವರ್ಗ:ಜೀವಂತ ಜನರು]]
[[ವರ್ಗ:ಕೇರಳದ ಚಲನಚಿತ್ರ ಜನರು]]
[[ವರ್ಗ:ಭಾರತೀಯ ಪುರುಷ ಚಲನಚಿತ್ರ ನಟರು]]
[[ವರ್ಗ:ಭಾರತೀಯ ಪುರುಷ ರಂಗಭೂಮಿ ನಟರು]]
[[ವರ್ಗ:ಕೇರಳದ ಪುರುಷ ನಟರು]]
[[ವರ್ಗ:ತಿರುವನಂತಪುರದ ಪುರುಷ ನಟರು]]
[[ವರ್ಗ:ಪತನಂತಿಟ್ಟದ ಪುರುಷ ನಟರು]]
[[ವರ್ಗ:ಮಲಯಾಳಂ ಚಿತ್ರರಂಗದ ಪುರುಷ ನಟರು]]
[[ವರ್ಗ:ತಮಿಳು ಚಿತ್ರರಂಗದ ಪುರುಷ ನಟರು]]
[[ವರ್ಗ:ಹಿಂದಿ ಸಿನೆಮಾದಲ್ಲಿ ಪುರುಷ ನಟರು]]
[[ವರ್ಗ:ತೆಲುಗು ಸಿನೆಮಾದಲ್ಲಿ ಪುರುಷ ನಟರು]]
[[ವರ್ಗ:ಕನ್ನಡ ಸಿನೆಮಾದಲ್ಲಿ ಪುರುಷ ನಟರು]]
[[ವರ್ಗ:ತಿರುವನಂತಪುರದ ಚಲನಚಿತ್ರ ನಿರ್ಮಾಪಕರು]]
[[ವರ್ಗ:ಮಲಯಾಳಂ ಚಲನಚಿತ್ರ ನಿರ್ಮಾಪಕರು]]
[[ವರ್ಗ:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಕಲೆಗಳು]]
[[ವರ್ಗ:ಕಲೆಗಳಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ವಿಜೇತರು]]
[[ವರ್ಗ:ದಕ್ಷಿಣ ಭಾರತೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯ ಚಲನಚಿತ್ರ) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ವಿಶೇಷ ಉಲ್ಲೇಖ (ವೈಶಿಷ್ಟ್ಯ ಚಲನಚಿತ್ರ) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಸ್ಕ್ರೀನ್ ಪ್ರಶಸ್ತಿ ವಿಜೇತರು]]
[[ವರ್ಗ:ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ ವಿಜೇತರು]]
[[ವರ್ಗ:20 ನೇ ಶತಮಾನದ ಭಾರತೀಯ ಪುರುಷ ನಟರು]]
[[ವರ್ಗ:21 ನೇ ಶತಮಾನದ ಭಾರತೀಯ ಪುರುಷ ನಟರು]]
[[ವರ್ಗ:20 ನೇ ಶತಮಾನದ ಭಾರತೀಯ ಉದ್ಯಮಿಗಳು]]
[[ವರ್ಗ:21 ನೇ ಶತಮಾನದ ಭಾರತೀಯ ಉದ್ಯಮಿಗಳು]]
[[ವರ್ಗ:21 ನೇ ಶತಮಾನದ ಭಾರತೀಯ ಉದ್ಯಮಿಗಳು]]
[[ವರ್ಗ:ಗೌರವ ಭಾರತೀಯ ಸೇನಾ ಅಧಿಕಾರಿಗಳು]]
6ndqob5seat3i1wj89u6zs5xmvflx70
1379568
1379567
2026-08-09T05:21:21Z
A826
72368
Filled in 3 bare reference(s) with reFill 2
1379568
wikitext
text/x-wiki
{{databox}}
{{Infobox person
| years_active = 1978–ಪ್ರಸ್ತುತ
| name = ಮೋಹನ್ಲಾಲ್
| native_name =
| image = Mohanlal (cropped).jpg
| image_size =
| caption = 2022 ರಲ್ಲಿ ಮೋಹನ್ಲಾಲ್
| birth_name = ಮೋಹನ್ಲಾಲ್ ವಿಶ್ವನಾಥನ್
| other_names = ಲಾಲ್, ಲಾಲು, ಲಾಲೆಟ್ಟನ್
| birth_date = {{Birth date and age|df=yes|1960|05|21}}
| birth_place = ಎಲಂತೂರ್, ಕೊಲ್ಲಂ ಜಿಲ್ಲೆ, ಕೇರಳ (ಪ್ರಸ್ತುತ ಪಥನಮ್ಥಿಟ್ಟ ಜಿಲ್ಲೆ, ಕೇರಳ, ಭಾರತ)
| education = ಮಹಾತ್ಮಾ ಗಾಂಧಿ ಕಾಲೇಜು (ಬಿಕಾಂ)
| occupation = {{hlist|ನಟ|ನಿರ್ದೇಶಕ|ನಿರ್ಮಾಪಕ|ವಿತರಕ|ಹಿನ್ನೆಲೆ ಗಾಯಕ}}
| works = ಮೋಹನ್ಲಾಲ್ ಚಲನಚಿತ್ರಗಳ ಪಟ್ಟಿ
| spouse = {{marriage|ಸುಚಿತ್ರ|1988}}
| children = ಪ್ರಣವ್ ಮೋಹನ್ಲಾಲ್, ವಿಸ್ಮಯಾ ಮೋಹನ್ಲಾಲ್
| relatives = ಕೆ. ಬಾಲಾಜಿ {{small|(ಮಾವ)}}<br />ಸುರೇಶ್ ಬಾಲಾಜೆ {{small|(ಭಾವ)}}<br />ಬಿ. ಉನ್ನಿಕೃಷ್ಣನ್ {{small|(ಸಂಬಂಧಿ)}}<ref name="YouTube Channel Name">{{cite video |people=24 News |date=2025-03-23 |title=പ്രകൃതിയോട് ചേർന്ന് പഴമ കൈവിടാതെ മോഹൻലാലിൻറെ തറവാട് വീട് |url=https://www.youtube.com/watch?si=1zTaC-AaaBdWUAAy&v=H8iRlz__KC4&feature=youtu.be |access-date=2025-03-23 |time=6:13 |publisher=YouTube Channel Name}}</ref>
| website = {{URL|thecompleteactor.com}}
| awards = ಮೋಹನ್ಲಾಲ್ ಸ್ವೀಕರಿಸಿದ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳ ಪಟ್ಟಿ
| honours = {{plainlist|
* ಪದ್ಮಶ್ರೀ (2001)
* ಪದ್ಮಭೂಷಣ (2019)
* ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2023)
}}
| module = {{Infobox officeholder
| embed = yes
| allegiance = {{flag|India}}
| branch = {{army|India}}
| service_years = 2009–ಪ್ರಸ್ತುತ
| rank = [[File:Lieutenant Colonel of the Indian Army.svg|10px]] [[ಲೆಫ್ಟಿನೆಂಟ್ ಕರ್ನಲ್]] (ಗೌರವ)
| unit = {{flagicon image|Territorial Army (Flag).svg}} [[ಟೆರಿಟೋರಿಯಲ್ ಆರ್ಮಿ (ಭಾರತ)|ಟೆರಿಟೋರಿಯಲ್ ಆರ್ಮಿ]]
}}
}}
'''ಮೋಹನ್ಲಾಲ್ ವಿಶ್ವನಾಥನ್''' ({{IPA|ml|moːhɐnlaːl ʋiʃʋʷɐn̪aːt̪ʰɐn|IPA}}; ಜನನ ೨೧ ಮೇ ೧೯೬೦), ಇವರು ಏಕನಾಮಧೇಯವಾಗಿ ಮೋಹನ್ಲಾಲ್ ಎಂದು ಪ್ರಸಿದ್ಧರಾಗಿರುವ ಭಾರತೀಯ ನಟ ಮತ್ತು ಚಲನಚಿತ್ರ ನಿರ್ಮಾಪಕ. ಇವರು ಪ್ರಧಾನವಾಗಿ ಮಲಯಾಳಂ ಚಲನಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಮತ್ತು ಸಾಂದರ್ಭಿಕವಾಗಿ ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.<ref name="thehindu.com">{{Cite news|last=Kumar|first=P. k Ajith|date=21 May 2020|title=On Mohanlal's 60th birthday, remembering 10 of his finest performances|language=en-IN|work=The Hindu|url=https://www.thehindu.com/entertainment/movies/on-mohanlals-60th-birthday-remembering-10-of-his-finest-performances/article31638507.ece|access-date=28 August 2020|issn=0971-751X|archive-date=12 June 2020|archive-url=https://web.archive.org/web/20200612102647/https://www.thehindu.com/entertainment/movies/on-mohanlals-60th-birthday-remembering-10-of-his-finest-performances/article31638507.ece|url-status=live}}</ref><ref name="Kumar">{{Cite news|last=Kumar|first=P. k Ajith|date=20 May 2020|title=Mohanlal at 60: An actor par excellence|language=en-IN|work=The Hindu|url=https://www.thehindu.com/entertainment/movies/mohanlal-at-60-an-actor-par-excellence/article31633617.ece|access-date=28 August 2020|issn=0971-751X|archive-date=19 June 2020|archive-url=https://web.archive.org/web/20200619123905/https://www.thehindu.com/entertainment/movies/mohanlal-at-60-an-actor-par-excellence/article31633617.ece|url-status=live}}</ref><ref name="india.com">{{Cite web|date=21 May 2020|title=Happy Birthday, Mohanlal: 11 Lesser-Known And Interesting Facts About The Top Malayalam Star|url=https://www.india.com/entertainment/malayalam-news-happy-birthday-mohanlal-11-lesser-known-and-interesting-facts-about-the-top-malayalam-star-4035296/|access-date=28 August 2020|website=India News, Breaking News, Entertainment News {{!}} India.com|language=en|archive-date=9 June 2020|archive-url=https://web.archive.org/web/20200609145515/https://www.india.com/entertainment/malayalam-news-happy-birthday-mohanlal-11-lesser-known-and-interesting-facts-about-the-top-malayalam-star-4035296/|url-status=live}}</ref> ಮೋಹನ್ಲಾಲ್ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನವನ್ನು ಹೊಂದಿದ್ದು, ಈ ಅವಧಿಯಲ್ಲಿ ಅವರು ೪೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.<ref name="Kumar"/><ref>{{Cite news |date=21 May 2022 |title='The complete actor' is not just a sobriquet, but Mohanlal's legacy |url=https://indianexpress.com/article/entertainment/malayalam/the-complete-actor-is-not-just-a-sobriquet-but-mohanlal-legacy-7926705/ |access-date=21 May 2022 |work=The Indian Express |language=en |archive-date=21 May 2022 |archive-url=https://web.archive.org/web/20220521064533/https://indianexpress.com/article/entertainment/malayalam/the-complete-actor-is-not-just-a-sobriquet-but-mohanlal-legacy-7926705/ |url-status=live }}</ref> ಭಾರತ ಸರ್ಕಾರವು ಅವರಿಗೆ ೨೦೦೧ ರಲ್ಲಿ ಪದ್ಮಶ್ರೀ<ref name="Padma Awards2">{{cite web|date=2015|title=Padma Awards|url=http://mha.nic.in/sites/upload_files/mha/files/LST-PDAWD-2013.pdf|url-status=dead|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015|publisher=Ministry of Home Affairs, Government of India}}</ref> ಮತ್ತು ೨೦೧೯ ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿತು. ಇವು ಭಾರತದ ನಾಲ್ಕನೇ ಮತ್ತು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ.<ref name="Padmabhushan2">{{Cite web|date=25 January 2019|title=Mohanlal conferred with Padma Bhushan|url=https://indianexpress.com/article/entertainment/entertainment-others/mohanlal-padma-bhushan-kader-khan-manoj-bajpayee-prabhudheva-shankar-mahadevan-5555516/|url-status=live|archive-url=https://web.archive.org/web/20190126001318/https://indianexpress.com/article/entertainment/entertainment-others/mohanlal-padma-bhushan-kader-khan-manoj-bajpayee-prabhudheva-shankar-mahadevan-5555516/|archive-date=26 January 2019|access-date=25 January 2019|website=[[The New Indian Express]]}}</ref> ೨೦೦೯ ರಲ್ಲಿ, ಭಾರತೀಯ ಚಲನಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪಡೆದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು.<ref>{{Cite web|date=9 July 2009|title=Malayalam superstar Mohanlal joins Territorial Army|url=https://www.hindustantimes.com/india/malayalam-superstar-mohanlal-joins-territorial-army/story-O6L4Kpu19jVG6wi0uejIAK.html|access-date=25 July 2021|website=Hindustan Times|language=en|archive-date=25 July 2021|archive-url=https://web.archive.org/web/20210725181929/https://www.hindustantimes.com/india/malayalam-superstar-mohanlal-joins-territorial-army/story-O6L4Kpu19jVG6wi0uejIAK.html|url-status=live}}</ref><ref>{{Cite web|title=Mohanlal enters Territorial Army training unit|url=https://www.newindianexpress.com/states/kerala/2010/mar/26/mohanlal-enters-territorial-army-training-unit-142466.html|access-date=25 July 2021|website=The New Indian Express|archive-date=25 July 2021|archive-url=https://web.archive.org/web/20210725181928/https://www.newindianexpress.com/states/kerala/2010/mar/26/mohanlal-enters-territorial-army-training-unit-142466.html|url-status=dead}}</ref> "ಭಾರತೀಯ ಸಿನೆಮಾದ ಮುಖವನ್ನು ಬದಲಾಯಿಸಿದ ಪುರುಷರು" ಎಂದು ಸಿಎನ್ಎನ್ ಮೋಹನ್ಲಾಲ್ ಅವರನ್ನು ಹೆಸರಿಸಿದೆ.<ref>{{Cite web |title=100 Years of Cinema: The men who changed the face of Indian films |url=https://www.news18.com/photogallery/movies/100-years-of-cinema-the-men-who-changed-the-face-of-indian-films-894555.html |access-date=8 January 2023 |website=News18 |language=en |archive-date=8 January 2023 |archive-url=https://web.archive.org/web/20230108064500/https://www.news18.com/photogallery/movies/100-years-of-cinema-the-men-who-changed-the-face-of-indian-films-894555.html |url-status=live }}</ref> ೨೦೨೫ ರಲ್ಲಿ, ಭಾರತ ಸರ್ಕಾರವು ಅವರಿಗೆ ಭಾರತೀಯ ಸಿನೆಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು.<ref name="Malayalam actor Mohanlal to be conferred Dadasaheb Phalke Award for 2023">{{cite news |title=Malayalam actor Mohanlal to be conferred Dadasaheb Phalke Award for 2023 |url=https://www.thehindu.com/entertainment/movies/actor-mohanlal-to-be-conferred-dadasaheb-phalke-award-for-2023/article70073864.ece |access-date=20 September 2025 |work=The Hindu |date=20 September 2025 |archive-url=https://web.archive.org/web/20250920160340/https://www.thehindu.com/entertainment/movies/actor-mohanlal-to-be-conferred-dadasaheb-phalke-award-for-2023/article70073864.ece |archive-date=20 September 2025 |language=en-IN}}</ref><ref name="Mohanlal honoured with Dadasaheb Phalke award at 71st National Film Awards ceremony">{{cite news |title=Mohanlal honoured with Dadasaheb Phalke award at 71st National Film Awards ceremony |url=https://www.newindianexpress.com/nation/2025/Sep/23/mohanlal-honoured-with-dadasaheb-phalke-award-at-71st-national-film-awards-ceremony |access-date=24 September 2025 |publisher=The New Indian Express |date=23 September 2025 |archive-url=https://web.archive.org/web/20250924041846/https://www.newindianexpress.com/nation/2025/Sep/23/mohanlal-honoured-with-dadasaheb-phalke-award-at-71st-national-film-awards-ceremony |archive-date=24 September 2025 |language=en}}</ref>
ಮೋಹನ್ಲಾಲ್ ಅವರು ೧೯೭೮ ರಲ್ಲಿ ಮಲಯಾಳಂ ಚಿತ್ರ 'ತಿರನೋಟ್ಟಂ' ಮೂಲಕ ೧೮ ನೇ ವಯಸ್ಸಿನಲ್ಲಿ ಅಭಿನಯಕ್ಕೆ ಪಾದಾರ್ಪಣೆ ಮಾಡಿದರು, ಆದರೆ ಸೆನ್ಸಾರ್ ಸಮಸ್ಯೆಗಳಿಂದಾಗಿ ಈ ಚಿತ್ರವು ೨೫ ವರ್ಷಗಳ ಕಾಲ ಬಿಡುಗಡೆಯಾಗದೆ ಉಳಿಯಿತು. ೧೯೮೦ ರಲ್ಲಿ ಬಂದ ಪ್ರಣಯ ಚಿತ್ರ 'ಮಂಜಿಲ್ ವಿರಿಂಜ ಪೂಕ್ಕಲ್' ನಲ್ಲಿ ಅವರ ಪರದೆಯ ಮೇಲಿನ ಮೊದಲ ಚಿತ್ರವಾಗಿತ್ತು, ಇದರಲ್ಲಿ ಅವರು ಪ್ರತಿನಾಯಕನ ಪಾತ್ರವನ್ನು ನಿರ್ವಹಿಸಿದ್ದರು.<ref name="rediff"/><ref name="thiranottam">{{cite news|title=I have nothing to prove in Bollywood: Mohanlal|url=http://www.deccanherald.com/content/242650/i-have-nothing-prove-bollywood.html|access-date=11 January 2017|work=[[Deccan Herald]]|agency=[[Press Trust of India]]|date=17 April 2012|archive-url=https://web.archive.org/web/20170113014138/http://www.deccanherald.com/content/242650/i-have-nothing-prove-bollywood.html|archive-date=13 January 2017|url-status=live}}</ref> ಅವರು ಖಳನಾಯಕನ ಪಾತ್ರಗಳನ್ನು ಮುಂದುವರೆಸಿದರು ಮತ್ತು ನಂತರದ ವರ್ಷಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಿಗೆ ಏರಿದರು. ೧೯೮೦ ರ ದಶಕದ ಮಧ್ಯಭಾಗದ ವೇಳೆಗೆ, ಅವರು ವಿಶ್ವಾಸಾರ್ಹ ಪ್ರಮುಖ ನಟನಾಗಿ ಸ್ಥಾಪಿತರಾದರು ಮತ್ತು ೧೯೮೬ ರಲ್ಲಿ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ ನಂತರ ಸ್ಟಾರ್ಡಮ್ ಅನ್ನು ಗಳಿಸಿದರು; ಆ ವರ್ಷ ಬಿಡುಗಡೆಯಾದ ಅಪರಾಧ ನಾಟಕ 'ರಾಜವಿಂಟೆ ಮಕನ್' ಅವರ ಸ್ಟಾರ್ಡಮ್ ಅನ್ನು ಹೆಚ್ಚಿಸಿತು.<ref name="rediff">{{cite web|last=Warrier|first=Shobha|title=25 years, 25 landmarks|url=https://www.rediff.com/movies/report/mohan1/20030903.htm|work=[[Rediff.com]]|access-date=21 July 2020|archive-date=21 July 2020|archive-url=https://web.archive.org/web/20200721123434/https://www.rediff.com/movies/report/mohan1/20030903.htm|url-status=live}}</ref> ಮೋಹನ್ಲಾಲ್ ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಲು ಆದ್ಯತೆ ನೀಡುತ್ತಾರೆ, ಆದರೆ ಅವರು ಇತರ ಭಾಷೆಯ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅವರ ಕೆಲವು ಪ್ರಸಿದ್ಧ ಅನ್ಯಭಾಷಾ ಚಿತ್ರಗಳೆಂದರೆ ತಮಿಳು ರಾಜಕೀಯ ನಾಟಕ 'ಇರುವರ್' (೧೯೯೭), ಹಿಂದಿ ಅಪರಾಧ ನಾಟಕ 'ಕಂಪನಿ' (೨೦೦೨) ಮತ್ತು ತೆಲುಗು ಚಿತ್ರ 'ಜನತಾ ಗ್ಯಾರೇಜ್' (೨೦೧೬).<ref>{{cite news|last=Khan|first=Ujala Ali|title=Reigning southern stars|url=https://www.thenationalnews.com/arts-culture/film/reigning-southern-stars-1.260566/|access-date=11 January 2017|work=[[The National (Abu Dhabi)|The National]]|date=14 September 2013|archive-url=https://web.archive.org/web/20170113092556/http://www.thenational.ae/arts-culture/bollywood/reigning-southern-stars|archive-date=13 January 2017|url-status=live}}</ref><ref>{{cite news|last=Rajpal|first=Roktim|title=Mohanlal turns 55: 8 performances that prove he is the most bankable, successful star of Indian cinema|url=http://www.news18.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html|access-date=11 January 2017|work=[[News18]]|date=21 May 2015|archive-url=https://web.archive.org/web/20170113195555/http://www.news18.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html|archive-date=13 January 2017|url-status=live}}</ref>
ಮೋಹನ್ಲಾಲ್ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ — ಎರಡು ಅತ್ಯುತ್ತಮ ನಟ ಪ್ರಶಸ್ತಿಗಳು, ಒಂದು ವಿಶೇಷ ಉಲ್ಲೇಖ ಮತ್ತು ಅಭಿನಯಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ, ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿ (ನಿರ್ಮಾಪಕರಾಗಿ) ಪ್ರಶಸ್ತಿ, ಜೊತೆಗೆ ಒಂಬತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ಹಲವಾರು ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ೨೦೧೦ ರಲ್ಲಿ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದಿಂದ<ref name="auto">{{cite news|url=http://www.hindu.com/2010/03/17/stories/2010031760500700.htm|title=Mohanlal, Pookutty get D.Litt.|date=17 March 2010|access-date=18 May 2010|work=[[The Hindu]]|location=Chennai, India|archive-url=https://web.archive.org/web/20100611191903/http://www.hindu.com/2010/03/17/stories/2010031760500700.htm|archive-date=11 June 2010|url-status=dead}}</ref> ಮತ್ತು ೨೦೧೮ ರಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರು.<ref>{{cite news|url=http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html|title=Calicut University confers D.Litt on Mohanlal, P.T.Usha|newspaper=Business Standard India|date=29 January 2018|access-date=29 January 2018|archive-url=https://web.archive.org/web/20180129195119/http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html|archive-date=29 January 2018|url-status=live}}</ref>
ಮೋಹನ್ಲಾಲ್ ಅವರು ತಮ್ಮ ಪರೋಪಕಾರಿ ಪ್ರಯತ್ನಗಳಿಗೂ ಹೆಸರುವಾಸಿಯಾಗಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಹೆಚ್ಚಿನ ಪರಿಣಾಮ ಮತ್ತು ಕೇಂದ್ರೀಕೃತ ಕಾರ್ಯಕ್ರಮಗಳನ್ನು ರಚಿಸಲು ಮತ್ತು ತಲುಪಿಸಲು ಅವರು ವಿಶ್ವಶಾಂತಿ ಫೌಂಡೇಶನ್ ಅನ್ನು ಸ್ಥಾಪಿಸಿದರು.<ref>{{cite news|author=Express News Service|title=Mohanlal donates robot for fighting Covid-19|url=https://www.newindianexpress.com/cities/kochi/2020/apr/26/mohanlal-donates-robot-for-fighting-covid-19-2135358.html|access-date=21 July 2020|work=[[The New Indian Express]]|date=26 April 2020|archive-date=21 July 2020|archive-url=https://web.archive.org/web/20200721123426/https://www.newindianexpress.com/cities/kochi/2020/apr/26/mohanlal-donates-robot-for-fighting-covid-19-2135358.html|url-status=live}}</ref><ref>{{Cite web|title=ViswaSanthi Foundation|url=https://www.viswasanthifoundation.com/about/founder-message|access-date=16 July 2021|website=www.viswasanthifoundation.com|archive-date=16 July 2021|archive-url=https://web.archive.org/web/20210716073121/https://www.viswasanthifoundation.com/about/founder-message|url-status=live}}</ref><ref>{{cite news|title=Mohanlal launches project to raise aid for children's heart surgeries|url=https://english.mathrubhumi.com/movies-music/movie-news/mohanlal-launches-project-to-raise-aid-for-children-s-heart-surgeries-kerala-1.4019081|access-date=21 July 2020|work=[[Mathrubhumi]]|date=6 August 2019|archive-date=21 July 2020|archive-url=https://web.archive.org/web/20200721123429/https://english.mathrubhumi.com/movies-music/movie-news/mohanlal-launches-project-to-raise-aid-for-children-s-heart-surgeries-kerala-1.4019081|url-status=live}}</ref>
==ಆರಂಭಿಕ ಜೀವನ==
ಮೋಹನ್ಲಾಲ್ ವಿಶ್ವನಾಥನ್<ref>{{cite web|author=President of India|title=President Kovind presents Padma Bhushan to Mohanlal|url=https://www.youtube.com/watch?v=m9LwAdl84ys|website=[[YouTube]]|publisher=[[President of India]]|access-date=29 September 2022|date=22 March 2019|archive-date=29 September 2022|archive-url=https://web.archive.org/web/20220929110315/https://www.youtube.com/watch?v=m9LwAdl84ys&gl=US&hl=en|url-status=live}}</ref><ref>{{cite news |date=25 August 2020 |title=തനിക്ക് ജാതിവാൽ ഇല്ലാത്തതിന് കാരണം പറഞ്ഞ് മോഹൻലാൽ |trans-title=Mohanlal explains the reason for not having a caste surname |url=https://www.madhyamam.com/entertainment/movie-news/actor-mohanlal-reveals-the-secret-of-his-name-558738 |url-status=live |archive-url=https://web.archive.org/web/20220929113918/https://www.madhyamam.com/entertainment/movie-news/actor-mohanlal-reveals-the-secret-of-his-name-558738 |archive-date=29 September 2022 |access-date=29 September 2022 |work=[[Madhyamam]] |language=ml}}</ref> ಅವರು ೧೯೬೦ ರ ಮೇ ೨೧ ರಂದು ಕೇರಳದ ಕೊಲ್ಲಂ ಜಿಲ್ಲೆಯ (ಪ್ರಸ್ತುತ ಪಥನಮ್ಥಿಟ್ಟ ಜಿಲ್ಲೆ) ಎಲಂತೂರ್ ಗ್ರಾಮದಲ್ಲಿ ಜನಿಸಿದರು. ಅವರು ಮಾಜಿ ನೌಕರಶಾಹಿ ಮತ್ತು ಕೇರಳ ಸರ್ಕಾರದ ಕಾನೂನು ಕಾರ್ಯದರ್ಶಿಯಾಗಿದ್ದ ವಿಶ್ವನಾಥನ್ ನಾಯರ್ ಮತ್ತು ಸಂತಕುಮಾರಿ ದಂಪತಿಗಳ ಕಿರಿಯ ಮಗ.<ref>[http://www.manoramaonline.com/homestyle/spot-light/2017/04/22/mohanlal-visited-ancestral-home-punnackal-tharavadu.html Mohanlal Birth Place] {{Webarchive|url=https://web.archive.org/web/20170425025030/http://www.manoramaonline.com/homestyle/spot-light/2017/04/22/mohanlal-visited-ancestral-home-punnackal-tharavadu.html |date=25 April 2017 }}. Manoramaonline.com (22 April 2017). Retrieved on 24 July 2017.</ref><ref>{{cite news|title=Happy Birthday Mohanlal: The South Indian Superstar's Health Mantra|url=https://food.ndtv.com/health/mohanlal-diet-and-fitness-1694810|access-date=23 December 2017|work=[[NDTV]]|date=21 May 2017|archive-url=https://web.archive.org/web/20171223142407/https://food.ndtv.com/health/mohanlal-diet-and-fitness-1694810|archive-date=23 December 2017|url-status=live}}</ref> ಅವರಿಗೆ ಪ್ಯಾರಿಲಾಲ್ ಎಂಬ ಹಿರಿಯ ಸಹೋದರನಿದ್ದನು, ಅವರು ೨೦೦೦ ರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದ ನಿಧನರಾದರು.<ref name="ReferenceA">{{cite web | url=https://malayalam.oneindia.com/news/2000/08/23/ker-pyarilal.html | title=മോഹന്ലാലിന്റെ സഹോദരന് അന്തരിച്ചു | date=23 August 2000 }}</ref> ನಿರ್ದೇಶಕ ಬಿ. ಉನ್ನಿಕೃಷ್ಣನ್ ಅವರು ಮೋಹನ್ಲಾಲ್ ಅವರ ನಿಕಟ ಮಾತೃ ಬಂಧು.<ref name="YouTube Channel Name"/>
ಮೋಹನ್ಲಾಲ್ ಅವರು ತಿರುವನಂತಪುರದಲ್ಲಿರುವ ತಮ್ಮ ಪಿತೃತ್ವದ ಮನೆಯಲ್ಲಿ ಮುದವನ್ಮುಗಲ್ನಲ್ಲಿ ಬೆಳೆದರು. ಅವರು ತಿರುವನಂತಪುರದ ಸರ್ಕಾರಿ ಮಾದರಿ ಬಾಲಕರ ಪ್ರೌಢಶಾಲೆಯಲ್ಲಿ ಓದಿದರು ಮತ್ತು ತಿರುವನಂತಪುರದ ಮಹಾತ್ಮಾ ಗಾಂಧಿ ಕಾಲೇಜಿನಿಂದ ವಾಣಿಜ್ಯದಲ್ಲಿ ಪದವಿ ಪಡೆದರು.<ref>{{cite web|last1=Entertainment|first1=Art &|title=Mohanlal Biography|url=http://lifestyle.iloveindia.com/lounge/mohanlal-biography-4023.html|website=LIFESTYLE LOUNGE|publisher=iloveindia.com.|access-date=5 January 2015|archive-url=https://web.archive.org/web/20141021010753/http://lifestyle.iloveindia.com/lounge/mohanlal-biography-4023.html|archive-date=21 October 2014|url-status=dead}}</ref><ref>{{cite web|last1=.com|first1=Mohanlalonline|title=LAL'S BIOGRAPHY|url=http://www.mohanlalonline.com/Content/Biography/|website=Mohanlalonline.com|access-date=5 January 2015|archive-url=https://web.archive.org/web/20150105104009/http://www.mohanlalonline.com/Content/Biography/|archive-date=5 January 2015|url-status=dead}}</ref> ಮೋಹನ್ಲಾಲ್ ಅವರ ಮೊದಲ ಪಾತ್ರವು ಆರನೇ ತರಗತಿಯಲ್ಲಿದ್ದಾಗ 'ಕಂಪ್ಯೂಟರ್ ಬಾಯ್' ಎಂಬ ರಂಗಭೂಮಿ ನಾಟಕದಲ್ಲಿತ್ತು, ಅದರಲ್ಲಿ ಅವರು ತೊಂಬತ್ತು ವರ್ಷದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದರು.<ref>{{cite news |url=http://www.hindu.com/2009/05/25/stories/2009052558020300.htm |title=Kerala / Thiruvananthapuram News : Centenary celebrations of Model School inaugurated |date=25 May 2009 |access-date=12 September 2013 |location=Chennai, India |archive-url=https://web.archive.org/web/20090530061910/http://www.hindu.com/2009/05/25/stories/2009052558020300.htm |archive-date=30 May 2009 |work=[[The Hindu]] |url-status=dead }}</ref>
೧೯೭೭ ಮತ್ತು ೧೯೭೮ ರ ಸಮಯದಲ್ಲಿ ಅವರು ಕೇರಳ ರಾಜ್ಯ ಕುಸ್ತಿ ಚಾಂಪಿಯನ್ ಆಗಿದ್ದರು.<ref>{{Cite news|url = http://timesofindia.indiatimes.com/entertainment/malayalam/movies/news/After-SRK-Mohanlal-to-get-a-Taekwondo-blackbelt/articleshow/16940066.cms|title = After SRK, Mohanlal to get a Taekwondo blackbelt|author = Prakash, Asha|date = 25 October 2012|access-date = 6 October 2014|work = [[The Times of India]]|archive-url = https://web.archive.org/web/20160204084353/http://timesofindia.indiatimes.com/entertainment/malayalam/movies/news/After-SRK-Mohanlal-to-get-a-Taekwondo-blackbelt/articleshow/16940066.cms|archive-date = 4 February 2016|url-status = live}}</ref>
ಮೋಹನ್ಲಾಲ್ ಅವರಿಗೆ ಅವರ ಮಾತೃ ಚಿಕ್ಕಪ್ಪ ಗೋಪಿನಾಥನ್ ನಾಯರ್ ಅವರು ಹೆಸರಿಟ್ಟರು. ಅವರು ಆರಂಭದಲ್ಲಿ ರೋಷನ್ಲಾಲ್ ಎಂದು ಹೆಸರಿಡಲು ನಿರ್ಧರಿಸಿದ್ದರು, ನಂತರ "ಮೋಹನ್ಲಾಲ್" ಅನ್ನು ಆಯ್ಕೆ ಮಾಡಿದರು.<ref>{{cite web|author=The Cue|title='ആദ്യം നല്കാന് ഉദ്ദേശിച്ച പേര് റോഷന് ലാല്, പേരിനൊപ്പം ജാതി വേണ്ടെന്നത് അച്ഛന്റെ തീരുമാനം'; മോഹന്ലാല്|date=25 August 2020|url=https://www.thecue.in/entertainment/film-news/actor-mohanlal-about-his-name|publisher=The Cue|access-date=29 September 2022|language=ml|archive-date=29 September 2022|archive-url=https://web.archive.org/web/20220929110316/https://www.thecue.in/entertainment/film-news/actor-mohanlal-about-his-name|url-status=live}}</ref>
==ಚಲನಚಿತ್ರ ವೃತ್ತಿಜೀವನ==
===ಆರಂಭಿಕ ವರ್ಷಗಳು (1978–1985)===
ಮೋಹನ್ಲಾಲ್ ಅವರು ೧೯೭೮ ರಲ್ಲಿ 'ತಿರನೋಟ್ಟಂ' ಚಿತ್ರದ ಮೂಲಕ ತಮ್ಮ ಅಭಿನಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರವನ್ನು ಮೋಹನ್ಲಾಲ್ ಮತ್ತು ಅವರ ಸ್ನೇಹಿತರು — ಮಣಿಯನ್ ಪಿಳ್ಳ ರಾಜು, ಸುರೇಶ್ ಕುಮಾರ್, ಉನ್ನಿ, ಪ್ರಿಯದರ್ಶನ್, ರವಿಕುಮಾರ್ ಮತ್ತು ಇತರ ಕೆಲವರು ನಿರ್ಮಿಸಿ ನಿರ್ದೇಶಿಸಿದ್ದರು. ಮೋಹನ್ಲಾಲ್ ಮಾನಸಿಕವಾಗಿ ವಿಕಲಚೇತನ ಸೇವಕ ಕುಟ್ಟಪ್ಪನ್ ಪಾತ್ರವನ್ನು ನಿರ್ವಹಿಸಿದ್ದರು. ಸೆನ್ಸಾರ್ ಸಮಸ್ಯೆಗಳಿಂದಾಗಿ, ಚಿತ್ರವು ಸಮಯಕ್ಕೆ ಬಿಡುಗಡೆಯಾಗಲಿಲ್ಲ. ಚಿತ್ರ ಬಿಡುಗಡೆಯಾಗಲು ೨೫ ವರ್ಷಗಳೇ ಬೇಕಾಯಿತು.<ref name="thiranottam"/>
೧೯೮೦ ರಲ್ಲಿ, ಮೋಹನ್ಲಾಲ್ ಅವರು ಫಾಜಿಲ್ ಅವರ ನಿರ್ದೇಶನದ ಚೊಚ್ಚಲ ಚಿತ್ರ 'ಮಂಜಿಲ್ ವಿರಿಂಜ ಪೂಕ್ಕಲ್' ನಲ್ಲಿ ಪ್ರಮುಖ ಪ್ರತಿನಾಯಕನ ಪಾತ್ರಕ್ಕಾಗಿ ಆಯ್ಕೆಯಾದರು. ಈ ಚಿತ್ರವು ದೊಡ್ಡ ಯಶಸ್ಸನ್ನು ಗಳಿಸಿತು.<ref name="toi1">{{cite news|title=Destiny made me an actor: Mohanlal|url=http://timesofindia.indiatimes.com/entertainment/hindi/bollywood/news/Destiny-made-me-an-actor-Mohanlal/articleshow/199817.cms|work=[[The Times of India]]|last=Maya|first=M.|date=24 September 2003|access-date=30 September 2003|archive-url=https://web.archive.org/web/20161130123747/http://timesofindia.indiatimes.com/entertainment/hindi/bollywood/news/Destiny-made-me-an-actor-Mohanlal/articleshow/199817.cms|archive-date=30 November 2016|url-status=live}}</ref> ಮೋಹನ್ಲಾಲ್ ಅವರ ಸ್ನೇಹಿತರು ನವೋದಯ ಸ್ಟುಡಿಯೋ ಬಿಡುಗಡೆ ಮಾಡಿದ ಜಾಹೀರಾತಿಗೆ ಪ್ರತಿಕ್ರಿಯೆಯಾಗಿ ಅವರ ಅರ್ಜಿಯನ್ನು ಕಳುಹಿಸಿದ್ದರು.<ref name="mathrubhumi">{{cite news|author=Mathrubhumi|title=മഞ്ഞിൽ വിരിയുന്ന ഓർമ്മകൾ...|trans-title=Remembrance Bloomed in the Mist|url=http://www.mathrubhumi.com/travel/columns/mohanlal/mohanlal-malayalam-news-1.36450|work=[[Mathrubhumi]]|language=ml|date=23 February 2011|access-date=6 May 2012|archive-url=https://web.archive.org/web/20161115230814/http://www.mathrubhumi.com/travel/columns/mohanlal/mohanlal-malayalam-news-1.36450|archive-date=15 November 2016|url-status=live}}</ref> ಅವರು ವೃತ್ತಿಪರ ನಿರ್ದೇಶಕರನ್ನು ಒಳಗೊಂಡ ಸಮಿತಿಯ ಮುಂದೆ ಆಡಿಷನ್ ನೀಡಿದರು. ಅವರ ನೋಟದಿಂದ ಅಸಮಾಧಾನಗೊಂಡ ಇಬ್ಬರು ಅವರಿಗೆ ಕಡಿಮೆ ಅಂಕಗಳನ್ನು ನೀಡಿದರು, ಆದರೆ ಫಾಜಿಲ್ ಮತ್ತು ಜಿಜೊ ಅಪ್ಪಚನ್ ಅವರು ೧೦೦ ರಲ್ಲಿ ೯೦ ಮತ್ತು ೯೫ ಅಂಕಗಳನ್ನು ನೀಡಿದರು.<ref>{{cite news|url=http://www.thehindu.com/thehindu/fr/2005/12/23/stories/2005122301990100.htm|title=His experiments with cinema|last=Manmadhan|first=Prema|work=[[The Hindu]]|date=23 December 2005|access-date=3 March 2011|archive-url=https://web.archive.org/web/20161130130934/http://www.thehindu.com/thehindu/fr/2005/12/23/stories/2005122301990100.htm|archive-date=30 November 2016|url-status=dead}}</ref> ೨೦೦೪ ರಲ್ಲಿ ರೀಡರ್ಸ್ ಡೈಜೆಸ್ಟ್ಗೆ ನೀಡಿದ ಸಂದರ್ಶನದಲ್ಲಿ, ಮೋಹನ್ಲಾಲ್ ಅವರು ಯುವಕನಾಗಿದ್ದಾಗ ತಮ್ಮ ನೋಟವು ಖಳನಾಯಕನ ಚಿತ್ರಣಕ್ಕೆ ಸರಿಹೊಂದುತ್ತದೆ ಎಂದು ಹೇಳಿದರು.<ref name="rd">{{cite web|title=You Cool Cat|url=http://www.rd-india.com/newsite/other/facetoface_july04.asp|publisher=[[Reader's Digest]]|last=Sivanand|first=Mohan|author-link=Mohan Sivanand|access-date=19 April 2010|date=July 2004|archive-url=https://web.archive.org/web/20060523070740/http://www.rd-india.com/newsite/other/facetoface_july04.asp|archive-date=23 May 2006}}</ref> ಅವರ ಪ್ರಶಂಸನೀಯ ಋಣಾತ್ಮಕ ಪಾತ್ರಗಳಲ್ಲಿ 'ಸಂಧ್ಯಾಕ್ಕು ವಿರಿಂಜ ಪೂವು' ಮತ್ತು 'ಕುಯಿಲಿನೆ ತೇದಿ' ಸೇರಿವೆ.<ref>{{Cite news |date=11 August 2011 |title=Back in action |language=en-IN |work=The Hindu |url=https://www.thehindu.com/features/cinema/back-in-action/article2346718.ece |access-date=21 March 2023 |issn=0971-751X |archive-date=2 February 2021 |archive-url=https://web.archive.org/web/20210202062049/https://www.thehindu.com/features/cinema/back-in-action/article2346718.ece |url-status=live }}</ref>
೧೯೮೩ ರ ವೇಳೆಗೆ, ಮೋಹನ್ಲಾಲ್ ೨೫ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು, ಹೆಚ್ಚಿನವುಗಳಲ್ಲಿ ಅವರು ಋಣಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದರು.<ref name="rd"/> 'ಎಂಟೆ ಮೊಹಂಗಲ್ ಪೂವನಿಂಜು', 'ಇನಿಯೆಂಗಿಲುಮ್', 'ವೀಸಾ', 'ಅಟ್ಟಕಳಶಂ', 'ಕಳಿಯಿಲ್ ಅಲ್ಪಂ ಕಾರ್ಯಂ', 'ಎಂಟೆ ಮಾಮಟ್ಟುಕ್ಕುಟ್ಟಿಯಮ್ಮಕ್ಕು', 'ಎಂಗನೆ ನೀ ಮರಕ್ಕುಮ್', 'ಉನಾರೂ' ಮತ್ತು 'ಶ್ರೀಕೃಷ್ಣ ಪರುಂತು' ಮುಂತಾದ ಚಿತ್ರಗಳು ಅವರ ಚಿತ್ರಣವನ್ನು ಬದಲಾಯಿಸಿದವು. ಶಶಿಕುಮಾರ್ ಅವರ 'ಇವಿಡೆ ತುಡಂಗುನ್ನು' ಮೂಲಕ, ಅವರು "ಒಳ್ಳೆಯ ಹೃದಯ" ಹೊಂದಿರುವ ಯಶಸ್ವಿ ನಾಯಕರಾದರು. ಮೋಹನ್ಲಾಲ್ ೧೯೮೪ ರ ಹಾಸ್ಯ ಚಿತ್ರ 'ಪೂಚಕ್ಕೊರು ಮೂಕ್ಕುತಿ' ಯಲ್ಲಿ ಪ್ರಿಯದರ್ಶನ್ ನಿರ್ದೇಶನದಲ್ಲಿ ತಮ್ಮ ಮೊದಲ ಹಾಸ್ಯ ಪ್ರಮುಖ ಪಾತ್ರವನ್ನು ತಂಡದಲ್ಲಿ ನಿರ್ವಹಿಸಿದರು. ಇದರಲ್ಲಿ ಅವರು ಶ್ರೀಮಂತಳೆಂದು ತಪ್ಪಾಗಿ ಭಾವಿಸಿದ ಹುಡುಗಿಯೊಬ್ಬಳನ್ನು ಪ್ರೀತಿಸುವ ಯುವಕನ ಪಾತ್ರವನ್ನು ನಿರ್ವಹಿಸಿದರು.<ref name="25yrs">{{cite web|url=http://www.rediff.com/movies/2003/sep/03mohan1.htm|title=25 years, 25 landmarks|work=[[Rediff.com]]|last=Warrior|first=Shobha|date=3 September 2003|access-date=3 March 2011|archive-url=https://web.archive.org/web/20161130134455/http://www.rediff.com/movies/2003/sep/03mohan1.htm|archive-date=30 November 2016|url-status=live}}</ref> ಇದು ಮೋಹನ್ಲಾಲ್-ಪ್ರಿಯದರ್ಶನ್ ಜೋಡಿಯ ಪ್ರಾರಂಭವನ್ನು ಗುರುತಿಸಿತು, ಇವರು ೨೦೧೬ ರ ಹೊತ್ತಿಗೆ ೪೪ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.<ref>{{cite news|title=Priyan-Mohanlal back after eight years for a comedy|url=http://www.deccanherald.com/content/141489/priyan-mohanlal-back-eight-years.html|work=[[Deccan Herald]]|agency=[[Indo-Asian News Service]]|access-date=6 May 2012|date=27 February 2011|archive-url=https://web.archive.org/web/20161130135839/http://www.deccanherald.com/content/141489/priyan-mohanlal-back-eight-years.html|archive-date=30 November 2016|url-status=live}}</ref>
೧೯೮೫ ರಲ್ಲಿ, ಅವರು 'ಒನ್ನಾನಂ ಕುನ್ನಿಲ್ ಒರಡಿ ಕುನ್ನಿಲ್' ಚಿತ್ರಕ್ಕಾಗಿ ಹಾಡನ್ನು ರೆಕಾರ್ಡ್ ಮಾಡಿದರು.<ref name="25yrs"/> 'ಉಯರಂಗಲಿಲ್', 'ನೊಕ್ಕೆತ ಡೂರತು ಕಣ್ಣುಂ ನಟ್ಟು', 'ಬೋಯಿಂಗ್ ಬೋಯಿಂಗ್' ಮತ್ತು 'ಅರಂ + ಅರಂ = ಕಿನ್ನರಂ' ಈ ಅವಧಿಯ ಅವರ ಕೆಲವು ಚಿತ್ರಗಳಾಗಿವೆ.
===ಸ್ಥಾಪಿತ ನಟ (1986–1999)===
[[File:Mohanlal and mammootty.JPG|thumb|ಮೋಹನ್ಲಾಲ್ ಮತ್ತು ಮಮ್ಮೂಟ್ಟಿ ಜೊತೆಗೆ, ಮಲಯಾಳಂ ಸಿನೆಮಾದ ಇಬ್ಬರು ಪ್ರಭಾವಶಾಲಿ ನಟರು]]
ಈ ಅವಧಿಯಲ್ಲಿ, ಮೋಹನ್ಲಾಲ್ ಅವರು "ಮಹಾನ್ ಗುರುಗಳು" ಎಂದು ಕರೆಯಲ್ಪಡುವ ಜಿ. ಅರವಿಂದನ್, ಹರಿಹರನ್, ಎಂ.ಟಿ. ವಾಸುದೇವನ್ ನಾಯರ್, ಪದ್ಮರಾಜನ್, ಭರತನ್ ಮತ್ತು ಲೋಹಿತದಾಸ್ ಅವರ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದರು.<ref name="hinduinterview"/> ಮೋಹನ್ಲಾಲ್, ನಟ ಮತ್ತು ಚಿತ್ರಕಥೆಗಾರ ಶ್ರೀನಿವಾಸನ್ ಅವರೊಂದಿಗೆ, ಹಲವಾರು ವಾಸ್ತವಿಕ ಸಾಮಾಜಿಕ ವಿಡಂಬನೆಗಳಲ್ಲಿ ಪ್ರತಿಕೂಲ ವಾತಾವರಣಕ್ಕೆ ಹೊಂದಿಕೊಳ್ಳಲು ಒತ್ತಾಯಿಸಲ್ಪಟ್ಟ ನಿರುದ್ಯೋಗಿ, ವಿದ್ಯಾವಂತ ಮಲಯಾಳಿ ಯುವಕರ ಆಕ್ರೋಶವನ್ನು ಪ್ರದರ್ಶಿಸಿದರು.<ref name="toi2">{{cite news|url=http://timesofindia.indiatimes.com/home/sunday-toi/Too-bad-if-you-dont-know-this-man/articleshow/1173425.cms|work=[[The Times of India]]|title=Too bad if you don't know this man|last=B.|first=Viju|date=14 January 2007|access-date=20 January 2008|archive-url=https://web.archive.org/web/20110120042753/http://timesofindia.indiatimes.com/home/sunday-toi/Too-bad-if-you-dont-know-this-man/articleshow/1173425.cms|archive-date=20 January 2011|url-status=live}}</ref> ಇವುಗಳಲ್ಲಿ ಕೆಲವನ್ನು ಶ್ರೀನಿವಾಸನ್ ಸ್ವತಃ ಬರೆದಿದ್ದರು.<ref name="udayan">{{cite news|url=http://hindu.com/thehindu/fr/2005/05/20/stories/2005052003000100.htm|work=[[The Hindu]]|last=Pillai|first=Sreedhar|title=The Mohanlal effect|date=20 May 2005|access-date=22 May 2009|archive-url=https://web.archive.org/web/20161204154816/http://www.thehindu.com/thehindu/fr/2005/05/20/stories/2005052003000100.htm|archive-date=4 December 2016|url-status=dead}}</ref>
೧೯೮೬ ರಲ್ಲಿ, ಅವರು ಸತ್ಯನ್ ಅಂತಿಕ್ಕಾಡ್ ನಿರ್ದೇಶನದ 'ಟಿ.ಪಿ. ಬಾಲಗೋಪಾಲನ್ ಎಂ.ಎ.' ಚಿತ್ರದಲ್ಲಿ ನಟಿಸಿದರು, ಇದಕ್ಕಾಗಿ ಅವರು ತಮ್ಮ ಮೊದಲ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ಪಡೆದರು.<ref name="award1">{{cite web|title=State Film Awards (1986)|url=http://www.prd.kerala.gov.in/stateawards2.htm|publisher=Department of Information and Public Relations|access-date=6 May 2012|url-status=dead|archive-url=https://web.archive.org/web/20091119014326/http://www.prd.kerala.gov.in/stateawards2.htm|archive-date=19 November 2009}}</ref> ಅವರು ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊತ್ತ ನಿರುದ್ಯೋಗಿ ಯುವಕನ ಪಾತ್ರವನ್ನು ನಿರ್ವಹಿಸಿದರು. ಅದೇ ವರ್ಷ, 'ಸನ್ಮಾನಸ್ಸುಳ್ಳವರ್ಕ್ಕು ಸಮಾಧಾನಂ' ನಲ್ಲಿ ಪೀಡಿತ ಮನೆಯ ಮಾಲೀಕನ ಪಾತ್ರಕ್ಕಾಗಿ ಅವರು ಫಿಲ್ಮ್ಫೇರ್ ಅತ್ಯುತ್ತಮ ನಟ (ಮಲಯಾಳಂ) ಪ್ರಶಸ್ತಿಯನ್ನು ಗೆದ್ದರು. ೧೯೮೬ ರಲ್ಲಿ 'ರಾಜವಿಂಟೆ ಮಕನ್' ನ ಬಾಕ್ಸ್ ಆಫೀಸ್ ಯಶಸ್ಸಿನ ನಂತರ ಮೋಹನ್ಲಾಲ್ ಅವರಿಗೆ ಜನತೆಯಿಂದ ಹೊಸ ಮಲಯಾಳಂ ಸೂಪರ್ಸ್ಟಾರ್ ಸ್ಥಾನವು ದೊರೆಯಿತು. ಅದರಲ್ಲಿ ಅವರು ಅಂಡರ್ ವರ್ಲ್ಡ್ ಡಾನ್ ವಿನ್ಸೆಂಟ್ ಗೊಮೆಜ್ ಆಗಿ ನಟಿಸಿದ್ದರು. ಅವರು ದುರಂತ ಚಿತ್ರ 'ತಾಲವಟ್ಟಂ' ನಲ್ಲೂ ನಟಿಸಿದರು. ಇದರಲ್ಲಿ ಅವರು ತಮ್ಮ ಪ್ರೇಯಸಿಯ ಸಾಕ್ಷಿಯಾದಾಗ ಮಾನಸಿಕವಾಗಿ ಅಸ್ವಸ್ಥನಾಗುವ ಯುವಕ ವಿನೋದ್ ಪಾತ್ರವನ್ನು ನಿರ್ವಹಿಸಿದರು. ಪದ್ಮರಾಜನ್ ಅವರ 'ನಮುಕ್ಕು ಪಾರ್ಕ್ಕನ್ ಮುಂತಿರಿತೊಪ್ಪುಕಳ್' ನಲ್ಲಿ ಅವರು ಸಾಲೋಮನ್ ಪಾತ್ರವನ್ನು ನಿರ್ವಹಿಸಿದರು. ಪದ್ಮರಾಜನ್ ಜೊತೆಗಿನ ಮೋಹನ್ಲಾಲ್ ಅವರ ಸಹಭಾಗಿತ್ವವು ಬಹಳ ಗಮನಾರ್ಹವಾಗಿತ್ತು ಏಕೆಂದರೆ ಅವರ ಚಿತ್ರಗಳು ಆ ಸಮಯದಲ್ಲಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿದ್ದ ಅನೇಕ ಸಾಂಪ್ರದಾಯಿಕ ಸ್ಟೀರಿಯೊಟೈಪ್ಗಳನ್ನು ಮುರಿದ ಕಥೆಗಳನ್ನು ಹೇಳುತ್ತಿದ್ದವು. ೧೯೮೬ ರಲ್ಲಿ ಮಾತ್ರ, ಮೋಹನ್ಲಾಲ್ ೩೬ ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡರು.<ref name="hinduinterview"/>
ಮರು ವರ್ಷ, ಮೋಹನ್ಲಾಲ್ ಸತ್ಯನ್ ಅಂತಿಕ್ಕಾಡ್ ಅವರ ಹಾಸ್ಯ ಚಿತ್ರ 'ನಾಡೋಡಿಕ್ಕಟ್ಟು' ನಲ್ಲಿ ಶ್ರೀನಿವಾಸನ್ ಮತ್ತು ಶೋಭನಾ ಅವರೊಂದಿಗೆ ನಟಿಸಿದರು. ಇದು ಬಾಕ್ಸ್ ಆಫೀಸ್ ಯಶಸ್ಸು ಗಳಿಸಿತು. ಮೋಹನ್ಲಾಲ್ ಮತ್ತು ಶ್ರೀನಿವಾಸನ್ ಅವರು ತಮ್ಮ ಅನುಕ್ರಮ ಚಿತ್ರಗಳಾದ 'ಪಟ್ಟನಪ್ರವೇಶಂ' (೧೯೮೮) ಮತ್ತು 'ಅಕ್ಕರೆ ಅಕ್ಕರೆ ಅಕ್ಕರೆ' (೧೯೯೦) ನಲ್ಲಿ ಕ್ರಮವಾಗಿ ಪತ್ತೇದಾರಿ ದಾಸನ್ ಮತ್ತು ವಿಜಯನ್ ಪಾತ್ರಗಳನ್ನು ಪುನರಾವರ್ತಿಸಿದರು. ಪದ್ಮರಾಜನ್ ನಿರ್ದೇಶನದ 'ತೂವನತ್ತುಂಬಿಕಲ್' ನಲ್ಲಿ ಅವರು ತಮ್ಮ ಎರಡು ಪ್ರೇಮಾಸಕ್ತಿಗಳ ನಡುವೆ ಸಿಲುಕಿಕೊಂಡ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ಭಾರತೀಯ ಚಿತ್ರಗಳಲ್ಲಿನ ಅನೇಕ ಸ್ಟೀರಿಯೊಟೈಪ್ಗಳನ್ನು ಮುರಿಯಿತು.<ref name="toi2"/><ref>{{cite news|title=Mohanlal, still raring to go at 53|url=http://movies.ndtv.com/photos/mohanlal-still-raring-to-go-at-53-10492|access-date=21 May 2013|work=[[NDTV]]|date=21 May 2013|archive-url=https://web.archive.org/web/20161204155948/http://movies.ndtv.com/photos/mohanlal-still-raring-to-go-at-53-10492|archive-date=4 December 2016|url-status=live}}</ref> ೧೯೮೮ ರಲ್ಲಿ ಬಿಡುಗಡೆಯಾದ ಪ್ರಣಯ ಹಾಸ್ಯ 'ಚಿತ್ರಂ', ೩೬೬ ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡು, ಅತಿ ಹೆಚ್ಚು ದಿನಗಳ ಕಾಲ ಪ್ರದರ್ಶನಗೊಂಡ ಮಲಯಾಳಂ ಚಿತ್ರವಾಯಿತು.<ref name="25yrs"/> ೧೯೮೮ ರಲ್ಲಿ 'ಪದಮುದ್ರ', 'ಆರ್ಯನ್', 'ವೆಲ್ಲನಕಳುಡೆ ನಾಡು', 'ಉಲ್ಸವಪಿಟ್ಟೆನ್ನು' ಮತ್ತು 'ಚಿತ್ರಂ' ಚಿತ್ರಗಳಲ್ಲಿನ ಅಭಿನಯಕ್ಕಾಗಿ ಮೋಹನ್ಲಾಲ್ ಕೇರಳ ರಾಜ್ಯ ವಿಶೇಷ ತೀರ್ಪುಗಾರ ಪ್ರಶಸ್ತಿಯನ್ನು ಗೆದ್ದರು.<ref name="award1"/>
೧೯೮೯ ರಲ್ಲಿ, ಬರಹಗಾರ ಲೋಹಿತದಾಸ್ ಮತ್ತು ನಿರ್ದೇಶಕ ಸಿಬಿ ಮಲಯಿಲ್ ಅವರ ಸಂಯೋಜನೆಯು ದುರಂತ ಚಿತ್ರ 'ಕಿರೀಡಂ' ನಲ್ಲಿ ಪೊಲೀಸ್ ಅಧಿಕಾರಿಯಾಗುವ ಕನಸು ಕಾಣುವ, ಆದರೆ ಅಪರಾಧಿಯಾಗಿ ಕೊನೆಗೊಳ್ಳುವ ಸೇತುಮಾಧವನ್ ಪಾತ್ರವನ್ನು ಸೃಷ್ಟಿಸಿತು. ಈ ಪಾತ್ರವು ಮೋಹನ್ಲಾಲ್ ಅವರಿಗೆ ರಾಷ್ಟ್ರೀಯ ಚಲನಚಿತ್ರ ವಿಶೇಷ ತೀರ್ಪುಗಾರರ ಉಲ್ಲೇಖವನ್ನು ಗಳಿಸಿಕೊಟ್ಟಿತು.<ref name="25yrs"/> ಮೋಹನ್ಲಾಲ್ ನಂತರ ನೆನಪಿಸಿಕೊಂಡರು, ಸೇತುಮಾಧವನ್ ಅವರ ಮಾನಸಿಕ ಸಂಕಟದ ಚಿತ್ರಣವು ಸ್ವಾಭಾವಿಕವಾಗಿದೆ ಮತ್ತು "ನನ್ನ ಪಾತ್ರವಾದ ಸೇತುಮಾಧವನ್ ಅಂತಹ ಸಂದರ್ಭದಲ್ಲಿ ಏನು ಮಾಡುತ್ತಿದ್ದನೋ ಅದನ್ನೇ ನಾನು ಮಾಡಿದೆ" ಎಂದು ಹೇಳಿದರು. ಅಭಿನಯವು "ಇನ್ನೊಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸುವುದಕ್ಕೆ ಹೋಲುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.<ref name="hinduinterview"/> ಅದೇ ವರ್ಷ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ 'ವರವೇಲ್ಪು' ಚಿತ್ರದಲ್ಲಿ ನಟಿಸಿದರು. ಇದು ಪರ್ಷಿಯನ್ ಗಲ್ಫ್ನಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿ ತನ್ನ ಕುಟುಂಬದೊಂದಿಗೆ ಜೀವನವನ್ನು ಆನಂದಿಸಲು ಮನೆಗೆ ಬಂದ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಅವರು ಬಸ್ ಖರೀದಿಸಿದರು, ಅದು ಅಂತಿಮವಾಗಿ ಅವರನ್ನು ತೊಂದರೆಗೆ ಸಿಲುಕಿಸಿತು. ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ೨೦೦೩ ರ ಜನವರಿ ೧೮ ರಂದು ಕೊಚ್ಚಿಯಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟರ್ ಮೀಟ್ನ ಉದ್ಘಾಟನಾ ಸಮಾರಂಭದಲ್ಲಿ ಜಾಗತಿಕ ಆರ್ಥಿಕ ಬದಲಾವಣೆಗಳ ಬಗ್ಗೆ ಮಲಯಾಳಿಗಳ ಅಜ್ಞಾನಕ್ಕೆ ಉದಾಹರಣೆಯಾಗಿ ಈ ಚಿತ್ರವನ್ನು ಉಲ್ಲೇಖಿಸಿದರು.<ref>{{cite web|url=http://www.rediff.com/money/2003/jan/18gim.htm|title=Kerala ignores global economic changes: PM|work=[[Rediff.com]]|date=18 January 2003|access-date=20 January 2008|author=Press Trust of India|author-link=Press Trust of India|archive-url=https://web.archive.org/web/20161204162257/http://www.rediff.com/money/2003/jan/18gim.htm|archive-date=4 December 2016|url-status=live}}</ref><ref>{{cite press release|author=<!--Staff writer(s); no by-line.-->|title=PIB Press Releases: Prime Minister Inaugurates Global Investors Meet|url=http://pib.nic.in/archive/releases98/lyr2003/rjan2003/18012003/r180120031.html|location=[[Kochi]]|publisher=[[Press Information Bureau]]|date=18 January 2003|access-date=18 January 2003|archive-url=https://web.archive.org/web/20161204172357/http://pib.nic.in/archive/releases98/lyr2003/rjan2003/18012003/r180120031.html|archive-date=4 December 2016|url-status=live}}</ref> ೧೯೮೯ ರಲ್ಲಿ, ಅವರು ಪದ್ಮರಾಜನ್ ಅವರ ಮತ್ತೊಂದು ಚಿತ್ರ 'ಸೀಸನ್' ನಲ್ಲಿ ನಟಿಸಿದರು.
೧೯೯೦ ರ ದಶಕದ ಆರಂಭದಲ್ಲಿ, ಮೋಹನ್ಲಾಲ್ ಹಲವಾರು ವಾಣಿಜ್ಯ ಚಿತ್ರಗಳಲ್ಲಿ ನಟಿಸಿದರು, ಅವುಗಳಲ್ಲಿ 'ಹಿಸ್ ಹೈನೆಸ್ ಅಬ್ದುಲ್ಲಾ', 'ಮಿಧುನಂ' ಮತ್ತು 'ನಂ.20 ಮದ್ರಾಸ್ ಮೇಲ್' ಸೇರಿವೆ. 'ಹಿಸ್ ಹೈನೆಸ್ ಅಬ್ದುಲ್ಲಾ' ಮೋಹನ್ಲಾಲ್ ಅವರ ಕಂಪನಿ ಪ್ರಣವಂ ಆರ್ಟ್ಸ್ ಇಂಟರ್ನ್ಯಾಷನಲ್ ಅಡಿಯಲ್ಲಿ ಅವರ ಮೊದಲ ಸ್ವತಂತ್ರ ನಿರ್ಮಾಣವಾಗಿದೆ. ಮೋಹನ್ಲಾಲ್ ೧೯೯೦ ರಲ್ಲಿ ಭರತನ್ ಅವರ 'ತಾಳ್ವರಂ' ನಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ತಮ್ಮ ಅತ್ಯಂತ ವಿಶ್ವಾಸಾರ್ಹ ಸ್ನೇಹಿತನಿಂದ ತಮ್ಮ ಪತ್ನಿಯ ಕೊಲೆಗೆ ಪ್ರತೀಕಾರವನ್ನು ಬಯಸುವ ವಿಧುರನ ಪಾತ್ರವನ್ನು ನಿರ್ವಹಿಸಿದರು. ೧೯೯೧ ರಲ್ಲಿ ಅವರ ಪ್ರಣಯ ಹಾಸ್ಯ 'ಕಿಲುಕ್ಕಂ' ಅವರಿಗೆ ಅತ್ಯುತ್ತಮ ನಟನಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಚಿತ್ರವು ಮಲಯಾಳಂನ ಎಲ್ಲಾ ಕಾಲದ ಶ್ರೇಷ್ಠ ಹಾಸ್ಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವೂ ಆಯಿತು. ೧೯೯೧ ರಲ್ಲಿ, ಮೋಹನ್ಲಾಲ್ 'ಭರತಂ' ಅನ್ನು ನಿರ್ಮಿಸಿ ನಟಿಸಿದರು. ಇದನ್ನು ರಾಮಾಯಣದ ಆಧುನಿಕ ರೂಪಾಂತರವೆಂದು ಭರತನ ದೃಷ್ಟಿಕೋನದಿಂದ ವ್ಯಾಖ್ಯಾನಿಸಲಾಗಿದೆ. ಈ ಚಿತ್ರವು ವಿಮರ್ಶಾತ್ಮಕ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಅಸೂಯೆ ಪಟ್ಟ ಸಹೋದರನಿಂದ ಹೊರೆಯಾದ ಕರ್ನಾಟಕ ಗಾಯಕನ ಪಾತ್ರಕ್ಕಾಗಿ ಅವರು ಆ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ಪಡೆದರು.<ref name="ndtvgoodtimes">{{cite news|url=http://goodtimes.ndtv.com/PhotoDetail.aspx?Page=2&ID=10492&AlbumType=PG#talk|title=Malayalam cinema's invincible star turns 51|work=[[NDTV Good Times]]|date=21 May 2011|access-date=6 May 2012|archive-url=https://web.archive.org/web/20120401141453/http://goodtimes.ndtv.com/PhotoDetail.aspx?Page=2&ID=10492&AlbumType=PG#talk|archive-date=1 April 2012|url-status=live}}</ref><ref>{{cite web|last=Warrier|first=Shobha|title=An interview with Lohitadas, director of the Malayalam film, Bhoothakkannadi|url=http://www.rediff.com/entertai/aug/11lo1.htm|work=[[Rediff.com]]|access-date=24 January 2016|date=22 August 1997|archive-url=https://web.archive.org/web/20160220111815/http://www.rediff.com/entertai/aug/11lo1.htm|archive-date=20 February 2016|url-status=live}}</ref> ೧೯೯೨ ರಲ್ಲಿ ಅವರು 'ಕಮಲದಳಂ' ನಲ್ಲಿ ಭರತನಾಟ್ಯ ನರ್ತಕನ ಪಾತ್ರವನ್ನು ನಿರ್ವಹಿಸಿದರು. ನೃತ್ಯ ದೃಶ್ಯಗಳನ್ನು ನಿರ್ವಹಿಸಲು ಅವರು ತಮ್ಮ ನೃತ್ಯ ಸಂಯೋಜಕ ಮತ್ತು ಸಹ-ನಟರು ಮತ್ತು ವೃತ್ತಿಪರ ನರ್ತಕರಾದ ವಿನೀತ್ ಮತ್ತು ಮೋನಿಶಾ ಅವರ ಸಹಾಯವನ್ನು ಪಡೆದರು.<ref name = "hinduinterview">{{cite news|url=http://www.thehindu.com/todays-paper/tp-features/tp-fridayreview/acting-is-a-bit-like-meditation/article2273126.ece|title=Acting is a bit like meditation|work=[[The Hindu]]|last=Kumar|first=P. K. Ajith|date=27 July 2007|access-date=27 July 2007|archive-url=https://web.archive.org/web/20161204170644/http://www.thehindu.com/todays-paper/tp-features/tp-fridayreview/acting-is-a-bit-like-meditation/article2273126.ece|archive-date=4 December 2016|url-status=live}}</ref> 'ರಾಜಶಿಲ್ಪಿ', 'ಸದಯಂ', 'ಯೋಧ' ಮತ್ತು 'ವಿಯೆಟ್ನಾಂ ಕಾಲೋನಿ' ೧೯೯೨ ರಲ್ಲಿ ಬಿಡುಗಡೆಯಾದ ಅವರ ಇತರ ಚಿತ್ರಗಳಾಗಿವೆ. ರಂಜಿತ್ ಬರೆದು ಐ.ವಿ. ಶಶಿ ನಿರ್ದೇಶನದ 'ದೇವಾಸುರಂ' (೧೯೯೩) ಮೋಹನ್ಲಾಲ್ ಅವರ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ ಮತ್ತು ಇದನ್ನು ಕ್ಲಾಸಿಕ್ ಎಂದು ಪರಿಗಣಿಸಲಾಗಿದೆ.<ref name="ndtvgoodtimes"/>
೧೯೯೪ ರಲ್ಲಿ, ಮೋಹನ್ಲಾಲ್ ಫಾಜಿಲ್ ನಿರ್ದೇಶನದ ಶ್ರೇಷ್ಠ 'ಮಣಿಚಿತ್ರತಾಳು' ನಲ್ಲಿ ಪ್ರಮುಖ ಪಾತ್ರವಾದ ಮನೋವೈದ್ಯ ಡಾ. ಸನ್ನಿ ಜೋಸೆಫ್ ಆಗಿ ನಟಿಸಿದರು. ಇದು ಅತ್ಯಂತ ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದ್ದು, ಕೆಲವು ಚಿತ್ರಮಂದಿರಗಳಲ್ಲಿ ೩೬೫ ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡಿತು.<ref>{{Cite news |date=31 May 2016 |title=10 Mollywood films that ran for the longest time |work=[[The Times of India]] |agency=Times News Network |url=http://timesofindia.indiatimes.com/entertainment/malayalam/movies/10-Mollywood-films-that-ran-for-the-longest-time/10-Mollywood-films-that-ran-for-the-longest-time/photostory/52523456.cms |url-status=live |access-date=28 July 2016 |archive-url=https://web.archive.org/web/20160728160923/http://timesofindia.indiatimes.com/entertainment/malayalam/movies/10-Mollywood-films-that-ran-for-the-longest-time/10-Mollywood-films-that-ran-for-the-longest-time/photostory/52523456.cms |archive-date=28 July 2016}}</ref> ಈ ಚಿತ್ರವು ನಂತರ ಕ್ಲಾಸಿಕ್ ಸ್ಥಾನಮಾನವನ್ನು ಗಳಿಸಿತು ಮತ್ತು ಇದು ಭಾರತೀಯ ಸಿನೆಮಾದ ಅತ್ಯುತ್ತಮ ಮಾನಸಿಕ ಥ್ರಿಲ್ಲರ್ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.<ref>{{Cite web |title=India's 'best' psychological thriller turns 25 |url=https://www.theweek.in/news/entertainment/2018/03/12/25-years-manichitrathazhu-still-best-psychological-thriller-india-has-produced.html |access-date=2024-02-19 |website=The Week |language=en}}</ref><ref>{{Cite news |title=25 years of Manichitrathazhu: Why this Malayalam classic remains unsurpassed |work=The News Minute |url=https://www.thenewsminute.com/article/25-years-manichitrathazhu-why-malayalam-classic-remains-unsurpassed-93441 |access-date=15 April 2022 |archive-date=25 March 2022 |archive-url=https://web.archive.org/web/20220325162342/https://www.thenewsminute.com/article/25-years-manichitrathazhu-why-malayalam-classic-remains-unsurpassed-93441 |url-status=live }}</ref> 'ಸ್ಪಡಿಕಂ' ೧೯೯೫ ರ ಕೃತಿಯಾಗಿದ್ದು, ಇದಕ್ಕಾಗಿ ಅವರು ತಮ್ಮ ಮೂರನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ಮತ್ತು ಐದನೇ ಫಿಲ್ಮ್ಫೇರ್ ಪ್ರಶಸ್ತಿಯನ್ನು ಅತ್ಯುತ್ತಮ ನಟ (ಮಲಯಾಳಂ) ಆಗಿ ಗೆದ್ದರು. ಅವರು ಥಾಮಸ್ "ಆಡು ಥೋಮ" ಚಾಕೋ ಪಾತ್ರಕ್ಕಾಗಿ, ತಂದೆಯ ಹೆಚ್ಚಿನ ನಿರೀಕ್ಷೆಗಳನ್ನು ಪೂರೈಸಲು ವಿಫಲವಾದಾಗ, ತಂದೆಯಿಂದ ದೂರವಾದ ಗುಂಡುಗಾರನಾಗುವ ಯುವಕನ ಪಾತ್ರವನ್ನು ನಿರ್ವಹಿಸಿದರು.<ref>{{Cite web |date=2018-03-30 |title='Spadikam': 23 years on, this Mohanlal film remains a favourite Malayalam action flick |url=https://www.thenewsminute.com/article/spadikam-23-years-mohanlal-film-remains-favourite-malayalam-action-flick-78731 |access-date=2023-02-09 |website=The News Minute |language=en |archive-date=9 February 2023 |archive-url=https://web.archive.org/web/20230209200924/https://www.thenewsminute.com/article/spadikam-23-years-mohanlal-film-remains-favourite-malayalam-action-flick-78731 |url-status=live }}</ref> ೧೯೯೬ ರಲ್ಲಿ, ಮೋಹನ್ಲಾಲ್ ಪ್ರಿಯದರ್ಶನ್ ಅವರ 'ಕಾಲಪಾನಿ' ಯಲ್ಲಿ ನಟಿಸಿದರು. ಇದು ಪೋರ್ಟ್ ಬ್ಲೇರ್ನ ಸೆಲ್ಯುಲಾರ್ ಜೈಲಿನ ಕೈದಿಗಳ ಬಗ್ಗೆ ಮಹಾಕಾವ್ಯದ ಚಿತ್ರವಾಗಿದೆ ಮತ್ತು ೧೯೯೮ ರಲ್ಲಿ ಲೋಹಿತದಾಸ್ ಅವರ 'ಕನ್ಮದಂ' ನಲ್ಲಿ ನಟಿಸಿದರು. ೧೯೯೭ ರಲ್ಲಿ ರಾಜೀವ್ ಅಂಚಲ್ ನಿರ್ದೇಶನದ 'ಗುರು' ಚಿತ್ರದಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ೧೯೯೭ ರ ಅತ್ಯುತ್ತಮ ವಿದೇಶಿ ಭಾಷಾ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯ ನಾಮನಿರ್ದೇಶನಕ್ಕೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಯಿತು.<ref>{{cite web|last1=Jose|first1=D|title=Blind man's buff|url=http://www.rediff.com/entertai/1998/mar/16guru.htm|work=[[Rediff.com]]|access-date=4 August 2016|date=16 March 1998}}</ref>
ಮೋಹನ್ಲಾಲ್ ೧೯೯೭ ರಲ್ಲಿ ಮಣಿರತ್ನಂ ನಿರ್ದೇಶನದ ತಮಿಳು ಜೀವನಚರಿತ್ರೆಯ ಚಿತ್ರ 'ಇರುವರ್' ನಲ್ಲಿ ತಮ್ಮ ಮೊದಲ ಅನ್ಯಭಾಷಾ ಚಿತ್ರದಲ್ಲಿ ನಟಿಸಿದರು.<ref>{{cite web|url=http://www.rediff.com/movies/2002/dec/07ash.htm|title=Ash's Hollywood debut in mid-2003|work=[[Rediff.com]]|last=Chand|first=Fakir|date=7 December 2002|access-date=6 May 2012|archive-url=https://web.archive.org/web/20161204172636/http://www.rediff.com/movies/2002/dec/07ash.htm|archive-date=4 December 2016|url-status=live}}</ref> ಮೋಹನ್ಲಾಲ್ ರಾಜಕೀಯಕ್ಕೆ ತಿರುಗುವ ನಟನನ್ನು ಚಿತ್ರಿಸಿದ ಈ ಚಿತ್ರವು (ಎಂ.ಜಿ. ರಾಮಚಂದ್ರನ್ ಅವರ ಜೀವನವನ್ನು ಆಧರಿಸಿ) ವಿಮರ್ಶಾತ್ಮಕ ಯಶಸ್ಸನ್ನು ಗಳಿಸಿತು ಮತ್ತು ಬೆಲ್ಗ್ರೇಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಮತ್ತು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.<ref>{{cite news|url=http://www.cscsarchive.org:8081/MediaArchive/art.nsf/%28docid%29/F4AF25E8DDFA9E8F6525694100207BAB|title=Censors refer Iruvar to home dept|work=[[The Times of India]]|date=28 February 1997|access-date=6 May 2012|url-status=dead|archive-url=https://web.archive.org/web/20120405022505/http://www.cscsarchive.org:8081/MediaArchive/art.nsf/%28docid%29/F4AF25E8DDFA9E8F6525694100207BAB|archive-date=5 April 2012}}</ref><ref>{{cite web|url=http://movies.rediff.com/slide-show/2010/jun/09/slide-show-1-looking-at-mani-ratnams-landmark-movies.htm|title=Looking at Mani Ratnam's landmark movies|work=[[Rediff.com]]|date=9 June 2010|access-date=6 May 2012|first=Pavithra|last=Srinivasan|archive-url=https://web.archive.org/web/20161204173521/http://movies.rediff.com/slide-show/2010/jun/09/slide-show-1-looking-at-mani-ratnams-landmark-movies.htm|archive-date=4 December 2016|url-status=live}}</ref> ೧೯೯೮ ರಲ್ಲಿ, ಅವರು 'ಹರಿಕೃಷ್ಣನ್ಸ್' ಅನ್ನು ನಿರ್ಮಿಸಿ ನಟಿಸಿದರು, ಇದರಲ್ಲಿ ಮಮ್ಮೂಟ್ಟಿ ಮತ್ತು ಜೂಹಿ ಚಾವ್ಲಾ ಸಹ ನಟಿಸಿದ್ದರು. ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ವಿಮರ್ಶಕರಿಂದ ಉತ್ತಮ ಸ್ವೀಕಾರ ಪಡೆಯಲಿಲ್ಲ.<ref>{{cite web|url=http://www.rediff.com/movies/1999/mar/11moh1.htm|title=Nothing, neither criticism nor compliment, affects me|work=[[Rediff.com]]|last=Warrier|first=Shobha|date=11 March 1999|access-date=6 May 2012|archive-url=https://web.archive.org/web/20161204174203/http://www.rediff.com/movies/1999/mar/11moh1.htm|archive-date=4 December 2016|url-status=live}}</ref> ಈ ಚಿತ್ರವು ಎರಡು ಕ್ಲೈಮ್ಯಾಕ್ಸ್ಗಳನ್ನು ಹೊಂದಿತ್ತು, ಅವುಗಳನ್ನು ಪ್ರತಿಯೊಂದು ಪ್ರದೇಶದಲ್ಲಿ ಎರಡು ಪ್ರಮುಖ ನಟರ ಜನಪ್ರಿಯತೆಯ ಆಧಾರದ ಮೇಲೆ ವಿವಿಧ ಪ್ರದೇಶಗಳಲ್ಲಿ ಪ್ರದರ್ಶಿಸಲಾಯಿತು.<ref>{{cite web|url=http://www.rediff.com/movies/1998/sep/14hari.htm|title=The win-win situation|work=[[Rediff.com]]|last=Jose|first=D.|date=14 September 1998|access-date=6 May 2012|archive-url=https://web.archive.org/web/20161204174523/http://www.rediff.com/movies/1998/sep/14hari.htm|archive-date=4 December 2016|url-status=live}}</ref> ಆದಾಗ್ಯೂ, ಇದು ವಿವಾದಾತ್ಮಕವಾಯಿತು ಮತ್ತು ಹಿಂದೂ ಪ್ರಧಾನ ಪ್ರದೇಶಗಳಲ್ಲಿ ಪ್ರದರ್ಶಿಸಲಾದ ಪ್ರತಿಗಳು ಮೋಹನ್ಲಾಲ್ ನಾಯಕಿಯನ್ನು ಮದುವೆಯಾಗುವುದನ್ನು ತೋರಿಸಿದೆ ಎಂದು ಹೇಳಿ ಮೊಕದ್ದಮೆಗಳನ್ನು ಹೂಡಲಾಯಿತು, ಆದರೆ ಮುಸ್ಲಿಂ ಪ್ರಧಾನ ಪ್ರದೇಶಗಳಲ್ಲಿ ಮಮ್ಮೂಟ್ಟಿ ಅವಳನ್ನು ಮದುವೆಯಾಗುವುದನ್ನು ತೋರಿಸಲಾಯಿತು. ಪ್ರಮುಖ ಸಮಸ್ಯೆಯೆಂದರೆ, ಸೆನ್ಸಾರ್ ಮಂಡಳಿಗೆ ಸಲ್ಲಿಸಿದ ಚಿತ್ರದ ಆವೃತ್ತಿಯು ಮೋಹನ್ಲಾಲ್ ಪ್ರಮುಖ ನಟಿಯನ್ನು ಗೆಲ್ಲುವ ಆವೃತ್ತಿಯಾಗಿತ್ತು. ಆದ್ದರಿಂದ ಅವರು ಮಮ್ಮೂಟ್ಟಿ ಆವೃತ್ತಿಯನ್ನು ಚಿತ್ರಮಂದಿರಗಳಿಂದ ತೆಗೆದುಹಾಕಲು ಒತ್ತಾಯಿಸಲಾಯಿತು, ಅದನ್ನು ಮೂಲ ಆವೃತ್ತಿಯಿಂದ ಬದಲಾಯಿಸಲಾಯಿತು. ಆದಾಗ್ಯೂ, ದೂರದರ್ಶನ ಪ್ರಥಮ ಪ್ರದರ್ಶನಗಳಲ್ಲಿ, ಎರಡೂ ಚಿತ್ರ ಆವೃತ್ತಿಗಳನ್ನು ತೋರಿಸಲಾಗಿದೆ.<ref>{{cite web|url=http://www.rediff.com/movies/1998/oct/06hari.htm|title=Double trouble|work=[[Rediff.com]]|last=Jose|first=D.|date=6 October 1998|access-date=6 May 2012|archive-url=https://web.archive.org/web/20161204174801/http://www.rediff.com/movies/1998/oct/06hari.htm|archive-date=4 December 2016|url-status=live}}</ref>
ಮೋಹನ್ಲಾಲ್ ೧೯೯೯ ರ ಇಂಡೋ-ಫ್ರೆಂಚ್ ಐತಿಹಾಸಿಕ ನಾಟಕ 'ವನಪ್ರಸ್ಥಂ' ನಲ್ಲಿ ಕಥಕಳಿ ಕಲಾವಿದನ ಪಾತ್ರವನ್ನು ನಿರ್ವಹಿಸಿದರು. ಇದನ್ನು ಅವರು ನಿರ್ಮಿಸಿದರು ಮತ್ತು ಶಾಜಿ ಎನ್. ಕರುಣ್ ನಿರ್ದೇಶಿಸಿದರು. ಇದು ಅವರಿಗೆ ಎರಡನೇ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು ಮತ್ತು ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಅವರಿಗೆ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟ ಮೊದಲ ಚಿತ್ರವಾಗಿದೆ. ಈ ಚಿತ್ರವು ಕಾನ್ಸ್ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಯಿತು ಮತ್ತು ಅವರ ಅಭಿನಯವನ್ನು ವಿಮರ್ಶಕರು ಪ್ರಶಂಸಿಸಿದರು. ಇದು ಅವರಿಗೆ ನಾಲ್ಕನೇ ಕೇರಳ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ, ಎರಡನೇ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಆರನೇ ಫಿಲ್ಮ್ಫೇರ್ ಅತ್ಯುತ್ತಮ ನಟ (ಮಲಯಾಳಂ) ಪ್ರಶಸ್ತಿಯನ್ನು ತಂದುಕೊಟ್ಟಿತು.<ref name="rd"/><ref>{{cite news|url=http://www.thehindu.com/2000/07/28/stories/09280226.htm|title=Accolades are a norm|work=[[The Hindu]]|last=Narasimham|first=M. L.|date=28 July 2000|access-date=6 May 2012|archive-url=https://web.archive.org/web/20161204175519/http://www.thehindu.com/2000/07/28/stories/09280226.htm|archive-date=4 December 2016|url-status=dead}}</ref><ref>{{cite news|url=http://www.thehindu.com/2000/07/14/stories/09140221.htm|title=On a winning spree|work=[[The Hindu]]|last=Santhosh|first=K.|date=14 July 2000|access-date=6 May 2012|archive-url=https://web.archive.org/web/20161204175307/http://www.thehindu.com/2000/07/14/stories/09140221.htm|archive-date=4 December 2016|url-status=dead}}</ref> 'ವನಪ್ರಸ್ಥಂ' ಅನ್ನು ಅಮೆರಿಕನ್ ಫಿಲ್ಮ್ ಇನ್ಸ್ಟಿಟ್ಯೂಟ್ ಫೆಸ್ಟ್ನಲ್ಲಿ ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಯಿತು.<ref>{{cite news|last=Philip|first=Benson|title=Must Watch International Award Winning Malayalam Films|url=http://timesofindia.indiatimes.com/entertainment/malayalam/movies/must-watch-international-award-winning-malayalam-films/photostory/52255815.cms|access-date=11 January 2017|work=[[The Times of India]]|date=13 May 2016|archive-url=https://web.archive.org/web/20170113194956/http://timesofindia.indiatimes.com/entertainment/malayalam/movies/must-watch-international-award-winning-malayalam-films/photostory/52255815.cms|archive-date=13 January 2017|url-status=live}}</ref> ೨೦೧೪ ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಭಾರತೀಯ ಸಿನೆಮಾದಲ್ಲಿ ನೃತ್ಯವನ್ನು ಆಚರಿಸುವುದು' ವಿಭಾಗದಲ್ಲಿ 'ವನಪ್ರಸ್ಥಂ' ಅನ್ನು ಹಿಂದಿನ ಪ್ರದರ್ಶನದಲ್ಲಿ ತೋರಿಸಲಾಯಿತು.<ref>{{cite web|title=Indian Cinema Catalogue 2014|url=http://www.iffi.nic.in/Indian%20Cinema%20Catalogue%202014.pdf|publisher=[[International Film Festival of India]]|date=20 November 2014|access-date=16 September 2016|archive-url=https://web.archive.org/web/20160316163822/http://www.iffi.nic.in/Indian%20Cinema%20Catalogue%202014.pdf|archive-date=16 March 2016|url-status=dead}}</ref>
===ವೃತ್ತಿ ವಿಸ್ತರಣೆ ಮತ್ತು ಸ್ಟಾರ್ಡಮ್ (2000–2009)===
[[File:Mohanlal and Madhu.jpg|thumb|alt=Mohanlal talking to actor Madhu
|ಮೋಹನ್ಲಾಲ್ ಮತ್ತು ಮಧು ಅವರು 2008 ರಲ್ಲಿ ಅಮ್ಮ ಸಾಮಾನ್ಯ ಸಭೆಯಲ್ಲಿ]]
೨೦೦೦ ರಲ್ಲಿ, ಮೋಹನ್ಲಾಲ್ 'ನರಸಿಂಹಂ' ನಲ್ಲಿ ನಟಿಸಿದರು. ಇದರಲ್ಲಿ ಅವರು ಒಳ್ಳೆಯ ಹೃದಯದ ದುಷ್ಟನ ಪಾತ್ರವನ್ನು ನಿರ್ವಹಿಸಿದರು.<ref>{{cite web|url=http://www.frontline.in/static/html/fl1715/17151210.htm|publisher=[[Frontline (magazine)|Frontline]]|title=Greasepaint, and beyond|last=Krishnankumar|first=R.|date=22 July 2000|access-date=20 March 2008|archive-url=https://web.archive.org/web/20161204190956/http://www.frontline.in/static/html/fl1715/17151210.htm|archive-date=4 December 2016 |url-status=live}}</ref> ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.<ref name="narasimham">{{cite web|url=http://www.rediff.com/entertai/2001/jan/24mallu.htm|title=Sleaze time, folks!|work=[[Rediff.com]]|last=Ayyappan|first=R.|date=24 January 2001|access-date=3 March 2011|archive-url=https://web.archive.org/web/20161204191304/http://www.rediff.com/entertai/2001/jan/24mallu.htm|archive-date=4 December 2016 |url-status=live}}</ref> ಮುಂದಿನ ಎರಡು ವರ್ಷಗಳಲ್ಲಿ, ಮೋಹನ್ಲಾಲ್ ಅವರು 'ರಾವಣಪ್ರಭು' (೨೦೦೧), 'ಪ್ರಜಾ' (೨೦೦೧), 'ಒನ್ನಾಮನ್' (೨೦೦೨), 'ತಂಡವಂ' (೨೦೦೨) ಮತ್ತು 'ಚತುರಂಗಂ' (೨೦೦೨) ನಂತಹ ಚಿತ್ರಗಳಲ್ಲಿ ಇದೇ ರೀತಿಯ ಜೀವನಕ್ಕಿಂತ ದೊಡ್ಡದಾದ ಆಕ್ಷನ್ ಹೀರೋ ಪಾತ್ರಗಳಲ್ಲಿ ಟೈಪ್ ಕಾಸ್ಟ್ ಆಗಿದ್ದರು. 'ರಾವಣಪ್ರಭು' ಹೊರತುಪಡಿಸಿ, ಈ ಚಿತ್ರಗಳು ಅವುಗಳ ಪುನರಾವರ್ತಿತ ಕಥಾವಸ್ತು, ಅಶ್ಲೀಲ ಸಂಭಾಷಣೆಗಳು, ಪಂಚ್ ಲೈನ್ಗಳು ಮತ್ತು ಪುರುಷ ಪ್ರಧಾನ ದೃಷ್ಟಿಕೋನಕ್ಕಾಗಿ ವ್ಯಾಪಕವಾಗಿ ಟೀಕಿಸಲ್ಪಟ್ಟವು.<ref name="narasimham"/><ref>{{cite web|url=http://www.sify.com/movies/thandavam-review-malayalam-pclutucejjhjc.html|title=Thandavam|website=[[Sify]]|date=16 August 2002|access-date=6 May 2012|author=Moviebuzz|archive-url=https://web.archive.org/web/20161204191733/http://www.sify.com/movies/thandavam-review-malayalam-pclutucejjhjc.html|archive-date=4 December 2016 |url-status=dead}}</ref><ref>{{cite web|url=http://www.sify.com/movies/praja-review-malayalam-pclunFceecebe.html|title=Praja|website=[[Sify]]|author=Moviebuzz|date=24 December 2001|access-date=6 May 2012|archive-url=https://web.archive.org/web/20161204191837/http://www.sify.com/movies/praja-review-malayalam-pclunFceecebe.html|archive-date=4 December 2016 |url-status=dead}}</ref> 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ನ ವಿಮರ್ಶಕರೊಬ್ಬರು "ನರಸಿಂಹಂನ ಅತಿಯಾದ ಪ್ರಭಾವವು ಅತಿಯಾಗಿ ಬಲವಾಗಿದೆ ಮತ್ತು ಅದು ಸದ್ಯಕ್ಕೆ ಉತ್ತಮ ಚಿತ್ರಗಳ ಸಾಧ್ಯತೆಗಳನ್ನು ಕೊಂದಿದೆ. 'ಮಳ', 'ಮಧುರನೊಂಬರಕಟ್ಟು' ಮುಂತಾದ ಉತ್ತಮವಾಗಿ ನಿರ್ಮಿಸಲಾದ ಮಹಿಳಾ ಪ್ರಧಾನ ಚಿತ್ರಗಳ ವೈಫಲ್ಯಕ್ಕೆ ಬೇರೆ ಕಾರಣವನ್ನು ನಾನು ಕಾಣುತ್ತಿಲ್ಲ" ಎಂದು ಬರೆದರು.<ref name="narasimham"/>
೨೦೦೨ ರಲ್ಲಿ, ಮೋಹನ್ಲಾಲ್ ಅವರ ಮೊದಲ ಬಾಲಿವುಡ್ ಚಿತ್ರ 'ಕಂಪನಿ'ಯಲ್ಲಿ ಐಪಿಎಸ್ ಶ್ರೀನಿವಾಸನ್, ಮುಂಬೈ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದರು.<ref name="rd"/> ಇದು ಅವರನ್ನು ಭಾರತದ ಹಿಂದಿ ಮಾತನಾಡುವ ಪ್ರೇಕ್ಷಕರಿಗೆ ಪರಿಚಯಿಸಿತು ಮತ್ತು ಇದಕ್ಕಾಗಿ ಅವರು ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು ಮತ್ತು ಸ್ಟಾರ್ ಸ್ಕ್ರೀನ್ ಪ್ರಶಸ್ತಿಯನ್ನು ಅತ್ಯುತ್ತಮ ಪೋಷಕ ನಟನಾಗಿ ಗೆದ್ದರು.<ref>{{cite news|url=http://www.thehindu.com/todays-paper/tp-features/tp-fridayreview/bold-themes-different-roles/article3218428.ece|title=Bold themes, different roles|work=[[The Hindu]]|date=9 June 2006|access-date=3 March 2011|last=Nagarajan|first=Saraswathy|archive-url=https://web.archive.org/web/20161204192315/http://www.thehindu.com/todays-paper/tp-features/tp-fridayreview/bold-themes-different-roles/article3218428.ece|archive-date=4 December 2016|url-status=live}}</ref><ref>{{cite news|url=http://www.bbc.co.uk/shropshire/content/image_galleries/iifa_red_carpet_gallery.shtml?4|title=Stars arrive at IIFA awards|work=[[BBC]]|access-date=3 March 2011|archive-date=22 July 2012|archive-url=https://archive.today/20120722194226/http://www.bbc.co.uk/shropshire/content/image_galleries/iifa_red_carpet_gallery.shtml?4|url-status=dead}}</ref> ಈ ಚಿತ್ರವು ಮುಂಬೈನಲ್ಲಿ ಆಳ್ವಿಕೆ ನಡೆಸಿದ ಇಬ್ಬರು ಅಂಡರ್ ವರ್ಲ್ಡ್ ಡಾನ್ಗಳ (ಅಜಯ್ ದೇವ್ಗನ್ ಮತ್ತು ವಿವೇಕ್ ಒಬೆರಾಯ್ ನಟಿಸಿದ್ದಾರೆ) ನೈಜ ಜೀವನದ ಕಥೆಯನ್ನು ಆಧರಿಸಿದೆ. ಮೋಹನ್ಲಾಲ್ ಅವರ ಅಭಿನಯವನ್ನು ಚೆನ್ನಾಗಿ ಸ್ವೀಕರಿಸಲಾಯಿತು. 'ದಿ ಹಿಂದೂ' ಅವರು "ತಮ್ಮ ನೈಸರ್ಗಿಕ ಶ್ರೇಷ್ಠತೆಯಲ್ಲಿದ್ದಾರೆ" ಮತ್ತು "ಮೊದಲ ಬಾರಿಗೆ ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡಾಗ ಇತರ ದಕ್ಷಿಣ ಭಾರತೀಯ ನಟರು ಮಾಡುವಂತೆ ಸ್ತಬ್ಧ ಅಥವಾ ಆತಂಕಿತರಾಗಿ ಕಾಣುತ್ತಿಲ್ಲ" ಎಂದು ಗಮನಿಸಿದರು.<ref>{{cite news| url=http://www.thehindu.com/thehindu/mp/2002/04/22/stories/2002042200750300.htm|work=[[The Hindu]]|last=Palicha|first=Paresh C.|title=Mohanlal at ease in Company|date=22 April 2002|access-date=20 April 2009|archive-url=https://web.archive.org/web/20161204193002/http://www.thehindu.com/thehindu/mp/2002/04/22/stories/2002042200750300.htm|archive-date=4 December 2016 |url-status=dead}}</ref> ೨೦೧೦ ರಲ್ಲಿ ಹಿಂದಿಫಿಲ್ಮ್ನ್ಯೂಸ್.ಕಾಮ್ನ ಆನ್ಲೈನ್ ಸಮೀಕ್ಷೆಯಲ್ಲಿ, 'ಕಂಪನಿ' ಯಲ್ಲಿನ ಮೋಹನ್ಲಾಲ್ ಅವರ ಅಭಿನಯವನ್ನು "ಕಳೆದ ದಶಕದಲ್ಲಿ (೨೦೦೧-೨೦೧೦) ಬಾಲಿವುಡ್ ನಟನ ಅತ್ಯುತ್ತಮ ಅಭಿನಯ" ಎಂದು ಆಯ್ಕೆ ಮಾಡಲಾಯಿತು. ಅವರು ಪ್ರೇಕ್ಷಕರ ಪಟ್ಟಿಯಲ್ಲಿ ನಂ.೧ ಮತ್ತು ವಿಮರ್ಶಕರ ಪಟ್ಟಿಯಲ್ಲಿ ನಂ.೬ ಸ್ಥಾನದಲ್ಲಿದ್ದರು.<ref>{{cite web|url=http://www.hindifilmnews.com/polls-2/poll-5-the-finest-performance-of-a-bollywood-actor-in-the-last-decade-2001-2010/#.UNNmrXdTGSo|title=Poll-5: The Finest Performance of a Bollywood Actor in the Last Decade (2001–2010)|publisher=Hindifilmnews.com|access-date=21 December 2012|url-status=dead|archive-url=https://web.archive.org/web/20130627120413/http://www.hindifilmnews.com/polls-2/poll-5-the-finest-performance-of-a-bollywood-actor-in-the-last-decade-2001-2010/#.UNNmrXdTGSo|archive-date=27 June 2013}}</ref>
ಮರು ವರ್ಷ, ಮೋಹನ್ಲಾಲ್ ತಮ್ಮ ಆಕ್ಷನ್ ಹೀರೋ ಚಿತ್ರಣವನ್ನು ಬದಲಾಯಿಸಲು ಪ್ರಯತ್ನಿಸುತ್ತಾ,<ref>{{cite news|url=http://www.thehindu.com/thehindu/mp/2002/11/28/stories/2002112800890403.htm|work=[[The Hindu]]|title=Superstars running scared?|date=28 November 2002|access-date=22 May 2009|archive-url=https://web.archive.org/web/20161204200806/http://www.thehindu.com/thehindu/mp/2002/11/28/stories/2002112800890403.htm|archive-date=4 December 2016 |url-status=dead}}</ref> 'ಕಿಲಿಚುಂದನ್ ಮಂಪಳಂ', 'ಬಾಲೆಟ್ಟನ್', 'ಹರಿಹರನ್ ಪಿಲ್ಲೈ ಹ್ಯಾಪಿ ಆಣು' ಮತ್ತು 'ಮಿಸ್ಟರ್ ಬ್ರಹ್ಮಚಾರಿ' ಯಂತಹ ಹಾಸ್ಯ ಪಾತ್ರಗಳಿಗೆ ಮರಳಿದರು. ನಟನಿಗೆ ಮರಳುವ ವಾಹನವೆಂದು ಪ್ರಚಾರ ಮಾಡಲ್ಪಟ್ಟ 'ಕಿಲಿಚುಂದನ್ ಮಂಪಳಂ' ಉತ್ತಮ ವಿಮರ್ಶೆಗಳನ್ನು ಮತ್ತು ಯೋಗ್ಯ ಬಾಕ್ಸ್ ಆಫೀಸ್ ಸಂಗ್ರಹವನ್ನು ಪಡೆಯಿತು.<ref>{{cite news|url=http://www.thehindu.com/thehindu/mp/2003/04/24/stories/2003042400120203.htm|work=[[The Hindu]]|last=Pillai|first=Sreedhar|title=Box-office update|date=28 April 2003|access-date=24 April 2010|archive-url=https://web.archive.org/web/20161204201012/http://www.thehindu.com/thehindu/mp/2003/04/24/stories/2003042400120203.htm|archive-date=4 December 2016 |url-status=dead}}</ref><ref>{{cite web|url=http://www.sify.com/movies/kilichundan-mambazham-review-malayalam-pclu1idhbfgij.html|title=Kilichundan Mambazham|website=[[Sify]]|access-date=6 May 2012|archive-url=https://web.archive.org/web/20161204202732/http://www.sify.com/movies/kilichundan-mambazham-review-malayalam-pclu1idhbfgij.html|archive-date=4 December 2016 |url-status=dead}}</ref> ವಿ.ಎಂ. ವಿನು ನಿರ್ದೇಶನದ 'ಬಾಲೆಟ್ಟನ್' ಕೂಡ ವಾಣಿಜ್ಯಿಕ ಯಶಸ್ಸು ಗಳಿಸಿತು.<ref>{{cite news|url=http://www.thehindubusinessline.com/2004/01/01/stories/2004010101290200.htm|title=Tinsel world sees a bright picture|work=[[The Hindu Business Line]]|last1=Venkatraman|first1=Latha|last2=Radhakrishnan|first2=Sankar|date=1 January 2004|access-date=6 May 2012|archive-url=https://web.archive.org/web/20100307015933/http://www.thehindubusinessline.com/2004/01/01/stories/2004010101290200.htm|archive-date=7 March 2010|url-status=live}}</ref> ಮೋಹನ್ಲಾಲ್ ಅತನಿಪ್ಪರಂಬಿಲ್ ಬಾಲಚಂದ್ರನ್ ಪಾತ್ರವನ್ನು ನಿರ್ವಹಿಸಿದರು. ಇವರು ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುವ ಬ್ಯಾಂಕ್ ಉದ್ಯೋಗಿ, ಅವರ ತಂದೆಯ ಮರಣದ ನಂತರ ಅನೇಕ ರಹಸ್ಯಗಳನ್ನು ಮರೆಮಾಡಲು ಒತ್ತಾಯಿಸಲ್ಪಡುತ್ತಾರೆ, ಇದು ಅವರ ಕುಟುಂಬದ ಅಪನಂಬಿಕೆಗೆ ಕಾರಣವಾಗುತ್ತದೆ.<ref name="balettan">{{cite news|url=http://www.hindu.com/mp/2003/09/04/stories/2003090401100200.htm|work=[[The Hindu]]|title=Mohanlal back to 'chammal' role|last1=Abhijath|last2=Ram|date=4 September 2003|access-date=6 May 2012|archive-url=https://web.archive.org/web/20060628023259/http://www.hindu.com/mp/2003/09/04/stories/2003090401100200.htm|archive-date=28 June 2006|url-status=dead}}</ref> ೨೦೦೪ ರಲ್ಲಿ, 'ನಟ್ಟುರಾಜವು' ಮತ್ತು 'ಮಂಬಳಕ್ಕಾಲಂ' ಮಾತ್ರ ಅವರ ಯಶಸ್ಸುಗಳಾಗಿವೆ.<ref>{{cite web|url=http://www.sify.com/movies/malayalam-cinema-analysis-2004-news-malayalam-kkfvAKceaeasi.html|title=Malayalam cinema- Analysis 2004!|website=[[Sify]]|author=Moviebuzz|date=1 January 2005|access-date=6 May 2012|archive-url=https://web.archive.org/web/20161204202246/http://www.sify.com/movies/malayalam-cinema-analysis-2004-news-malayalam-kkfvAKceaeasi.html|archive-date=4 December 2016 |url-status=dead}}</ref>
ಮೋಹನ್ಲಾಲ್ ೨೦೦೫ ರಲ್ಲಿ 'ಉದಯನಾಣು ತಾರಂ' ಎಂಬ ಕಪ್ಪು ಹಾಸ್ಯದಲ್ಲಿ ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ದೇಶಕನಾಗಿ ಕಾಣಿಸಿಕೊಂಡರು. ಇದು ವಿಮರ್ಶಕರಿಂದ ಉತ್ತಮ ಸ್ವೀಕಾರ ಪಡೆಯಿತು ಮತ್ತು ವಡೋದರಾ, ರಾಜ್ಕೋಟ್, ಪುಣೆ ಮತ್ತು ಅಹಮದಾಬಾದ್ನಂತಹ ಮಲಯಾಳಂ ಚಿತ್ರಗಳು ನಿಯಮಿತವಾಗಿ ಪ್ರದರ್ಶನಗೊಳ್ಳದ ಸ್ಥಳಗಳಲ್ಲೂ ಉತ್ತಮ ಪ್ರದರ್ಶನ ನೀಡಿತು.<ref name="udayan"/> ಅದೇ ವರ್ಷ, ಅವರು ನಿರ್ದೇಶಕ ಬ್ಲೆಸ್ಸಿ ಅವರ ಎರಡನೇ ಚಿತ್ರ 'ತನ್ಮಾತ್ರ' ದಲ್ಲಿ ಕಾಣಿಸಿಕೊಂಡರು. ಇದು ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಮೋಹನ್ಲಾಲ್ ಅವರ ಅಭಿನಯವನ್ನು ವಿಮರ್ಶಕರು ಹೆಚ್ಚು ಪ್ರಶಂಸಿಸಿದರು.<ref name="thanmatra">{{cite web|url=http://specials.rediff.com/movies/2006/feb/15sd1.htm|title=Exclusive! Mohanlal on Thanmatra|work=[[Rediff.com]]|last=Warrier|first=Shobha|access-date=6 May 2012|archive-url=https://web.archive.org/web/20161204195922/http://specials.rediff.com/movies/2006/feb/15sd1.htm|archive-date=4 December 2016 |url-status=live}}</ref> ಈ ಅಭಿನಯಕ್ಕಾಗಿ ಮೋಹನ್ಲಾಲ್ ತಮ್ಮ ಐದನೇ ಕೇರಳ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಏಳನೇ ಫಿಲ್ಮ್ಫೇರ್ ಅತ್ಯುತ್ತಮ ನಟ (ಮಲಯಾಳಂ) ಪ್ರಶಸ್ತಿಯನ್ನು ಗೆದ್ದರು. ಚಿತ್ರದಲ್ಲಿ, ಅವರ ಪಾತ್ರವು ಎರಡನೇ ಭಾಗದಲ್ಲಿ ಮಾತನಾಡುವುದಿಲ್ಲ.<ref name="thanmatra"/><ref name="hindu2"/><ref>{{cite web|url=http://www.rediff.com/movies/report/blessy/20060308.htm|title=Blessy: Thrilled about winning|work=[[Rediff.com]]|first=Paresh C.|last=Palicha|date=8 March 2006|access-date=6 May 2012|archive-url=https://web.archive.org/web/20161204195711/http://www.rediff.com/movies/report/blessy/20060308.htm|archive-date=4 December 2016 |url-status=live}}</ref>
೨೦೦೬ ರಲ್ಲಿ, ಅವರು ನಿರ್ದೇಶಕ ಸತ್ಯನ್ ಅಂತಿಕ್ಕಾಡ್ ಅವರೊಂದಿಗೆ ಕೌಟುಂಬಿಕ ನಾಟಕ 'ರಸತಂತ್ರಂ' ನಲ್ಲಿ ಕೆಲಸ ಮಾಡಿದರು. ಮೋಹನ್ಲಾಲ್ ಮೇಜರ್ ರವಿ ನಿರ್ದೇಶನದ 'ಕೀರ್ತಿ ಚಕ್ರ' ದಲ್ಲೂ ನಟಿಸಿದರು. ಇದರಲ್ಲಿ ಅವರು ಭಾರತೀಯ ಸೇನಾ ಅಧಿಕಾರಿ ಮೇಜರ್ ಮಹಾದೇವನ್ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಯಿತು ಮತ್ತು ಇದು ಗಮನಾರ್ಹ ವಾಣಿಜ್ಯ ಯಶಸ್ಸು ಗಳಿಸಿತು.<ref>{{cite news|url=http://www.thehindu.com/todays-paper/tp-features/tp-fridayreview/superstars-continue-their-reign/article3231843.ece|work=[[The Hindu]]|title=Superstars continue their reign|date=29 December 2006|access-date=30 May 2009|archive-url=https://web.archive.org/web/20161204195419/http://www.thehindu.com/todays-paper/tp-features/tp-fridayreview/superstars-continue-their-reign/article3231843.ece|archive-date=4 December 2016 |url-status=live}}</ref> ಈ ಚಿತ್ರದ ಡಬ್ ಮಾಡಲಾದ ತಮಿಳು ಆವೃತ್ತಿಯು ತಮಿಳುನಾಡಿನಲ್ಲಿ 'ಅರನ್' ಎಂದು ಬಿಡುಗಡೆಯಾಯಿತು, ಆದರೆ ಅವರ ಧ್ವನಿಯನ್ನು ಬಳಸದ ಕಾರಣ ಮೋಹನ್ಲಾಲ್ ಅವರು ಈ ಚಿತ್ರದಿಂದ ದೂರವಿದ್ದರು, "ಚಿತ್ರದಲ್ಲಿ ನನ್ನ ಪಾತ್ರಕ್ಕಾಗಿ ನಾನು ಮಾತನಾಡಲು ಬಯಸುತ್ತೇನೆ" ಎಂದು ಹೇಳಿದರು.<ref>{{cite news|url=http://www.thehindu.com/todays-paper/tp-national/tp-tamilnadu/mohanlal-dissociates-himself-from-aran/article3087136.ece|work=[[The Hindu]]|title=Mohanlal dissociates himself from 'Aran'|last=Kumar|first=S. R. Ashok|date=8 August 2006|access-date=8 May 2008|archive-url=https://web.archive.org/web/20161204195238/http://www.thehindu.com/todays-paper/tp-national/tp-tamilnadu/mohanlal-dissociates-himself-from-aran/article3087136.ece|archive-date=4 December 2016 |url-status=live}}</ref> ಮೋಹನ್ಲಾಲ್ ಮೇಜರ್ ಮಹಾದೇವನ್ ಸರಣಿಯಲ್ಲಿ 'ಕುರುಕ್ಷೇತ್ರ' (೨೦೦೮) ಮತ್ತು 'ಕಾಂದಹಾರ್' (೨೦೧೦) ಅನುಕ್ರಮ ಚಿತ್ರಗಳಲ್ಲೂ ನಟಿಸಿದರು. ೨೦೦೯ ರಲ್ಲಿ, ಭಾರತ ಸರ್ಕಾರವು ಅವರಿಗೆ ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿತು.<ref>{{cite news|url=https://www.newindianexpress.com/entertainment/malayalam/2013/sep/04/mohanlals-fb-page-crosses-one-million-fans-513324.html|title=Mohanlal's FB page crosses one million fans|work=[[The New Indian Express]]|date=4 September 2013|access-date=20 December 2015|archive-url=https://web.archive.org/web/20161204195045/http://www.newindianexpress.com/entertainment/malayalam/2013/sep/04/Mohanlals-FB-page-crosses-one-million-fans-513324.html|archive-date=4 December 2016 |url-status=live}}</ref>
೨೦೦೭ ರಲ್ಲಿ, ಮೋಹನ್ಲಾಲ್ ಪಿ.ಟಿ. ಕುಂಜು ಮುಹಮ್ಮದ್ ನಿರ್ದೇಶನದ 'ಪರದೇಸಿ' ಯಲ್ಲಿನ ಅಭಿನಯಕ್ಕಾಗಿ ಕೇರಳ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರು. 'ಸಿಫಿ.ಕಾಮ್' "ಮೋಹನ್ಲಾಲ್ ಮಂತ್ರಮುಗ್ಧಗೊಳಿಸುವವರಾಗಿದ್ದಾರೆ ಮತ್ತು ಭಾವನೆಯೊಂದಿಗೆ ಮತ್ತೊಮ್ಮೆ ಅಭಿನಯದ ಭಾಷೆಯನ್ನು ಮರುಶೋಧಿಸುತ್ತಾರೆ" ಎಂದು ಹೇಳಿತು. ಅವರ ಜುಲೈ ಬಿಡುಗಡೆಯಾದ 'ಹಾಲೋ' ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>[https://web.archive.org/web/20100305075728/http://www.bharatwaves.com/news/Mohanlal%E2%80%99s-Hello:-biggest-Mollywood-hit-of-2007-7964.html "Malayalam Cinema News : Mohanlal's 'Hello': biggest Mollywood hit of 2007".] Bharatwaves.com. Retrieved 15 January 2011.</ref><ref>[http://www.sify.com/movies/pardesi-review-malayalam-14542769.html Movie Review:Pardesi] {{Webarchive|url=https://web.archive.org/web/20131222221213/http://www.sify.com/movies/pardesi-review-malayalam-14542769.html |date=22 December 2013 }}. Sify.com. Retrieved on 6 May 2012.</ref> ಆಗಸ್ಟ್ನಲ್ಲಿ, ಅವರು ತಮ್ಮ ಎರಡನೇ ಬಾಲಿವುಡ್ ಚಿತ್ರ 'ಆಗ್' (ಇದನ್ನು 'ರಾಮ್ ಗೋಪಾಲ್ ವರ್ಮಾ ಕಿ ಆಗ್' ಎಂದೂ ಕರೆಯುತ್ತಾರೆ) ನಲ್ಲಿ ಕಾಣಿಸಿಕೊಂಡರು. ಇದು ಬಾಲಿವುಡ್ ಕ್ಲಾಸಿಕ್ 'ಶೋಲೆ' (೧೯೭೫) ನ ಪುನರ್ನಿರ್ಮಾಣವಾಗಿದೆ. ಮೋಹನ್ಲಾಲ್ ಮೂಲ ಚಿತ್ರದಲ್ಲಿ ಸಂಜೀವ್ ಕುಮಾರ್ ನಿರ್ವಹಿಸಿದ ಪಾತ್ರವನ್ನು ಪುನರಾವರ್ತಿಸಿದರು.<ref>{{cite web |url=http://www.boxofficeindia.com/showProd.php?itemCat=214 |title=Boxofficeindia.com |publisher=[[Box Office India]] |access-date=12 September 2013 |archive-url=https://web.archive.org/web/20131109040918/http://www.boxofficeindia.com/showProd.php?itemCat=214 |archive-date=9 November 2013 |url-status=live }}</ref> ೨೦೦೮ ರಲ್ಲಿ, ಮೋಹನ್ಲಾಲ್ ಬಹುನಕ್ಷತ್ರ ಬ್ಲಾಕ್ಬಸ್ಟರ್ 'ಟ್ವೆಂಟಿ:೨೦' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು ಮತ್ತು ೨೦೦೯ ರಲ್ಲಿ, ಅವರು ತಮಿಳು ಚಿತ್ರ 'ಉನ್ನೈಪೋಲ್ ಒರುವನ್' ನಲ್ಲಿ ಕಮಲ್ ಹಾಸನ್ ಜೊತೆ ಸಹ ನಟಿಸಿದರು. ಆ ವರ್ಷದ ಅವರ ಕೊನೆಯ ಚಿತ್ರ 'ಎವಿಡಂ ಸ್ವರ್ಗಮಾಣು' ನಿರ್ದೇಶಕ ರೋಷನ್ ಆಂಡ್ರ್ಯೂಸ್ ಅವರದ್ದಾಗಿತ್ತು.
### ಮುಂದುವರಿದ ವಾಣಿಜ್ಯ ಯಶಸ್ಸು (2010–2015)
[[File:Bachan mohanlal.jpg|thumb|ಮೋಹನ್ಲಾಲ್ ಮತ್ತು ಅಮಿತಾಬ್ ಬಚ್ಚನ್ ಜೊತೆಗೆ|alt=Mohanlal with the Bollywood actor Amitabh Bachchan]]
೨೦೧೦ ರಲ್ಲಿ, ಅವರು ಐದು ಚಿತ್ರಗಳಲ್ಲಿ ನಟಿಸಿದರು. ಮೊದಲನೆಯದು 'ಜನಕನ್', ಇದು ಅಪರಾಧ ಥ್ರಿಲ್ಲರ್ ಆಗಿದ್ದು, ಅದರಲ್ಲಿ ಅವರು ಸುರೇಶ್ ಗೋಪಿ ಜೊತೆ ಸಹ ನಟಿಸಿದರು. ಇದನ್ನು ಎಸ್.ಎನ್. ಸ್ವಾಮಿ ಬರೆದಿದ್ದಾರೆ. ಈ ಚಿತ್ರದಲ್ಲಿ, ಅವರು ವಕೀಲ ಸೂರ್ಯ ನಾರಾಯಣನ್ ಪಾತ್ರವನ್ನು ನಿರ್ವಹಿಸಿದರು. ಅವರು ನ್ಯಾಯಕ್ಕಾಗಿ ತಮ್ಮನ್ನು ಸಮೀಪಿಸುವ ಕೆಲವು ಪರಾರಿಯಾದ ಶಂಕಿತರನ್ನು ಎದುರಿಸುತ್ತಾರೆ. ಮುರಳಿ ನಾಗವಲ್ಲಿ ನಿರ್ದೇಶನದ 'ಅಲೆಕ್ಸಾಂಡರ್ ದಿ ಗ್ರೇಟ್' ಮೇ ತಿಂಗಳಲ್ಲಿ ಬಿಡುಗಡೆಯಾದ ಹಾಸ್ಯಮಯ ಚಟುವಟಿಕೆಯ ಮನರಂಜನಾ ಚಿತ್ರವಾಗಿದೆ. ಟಿ.ಕೆ. ರಾಜೀವ್ ಕುಮಾರ್ ನಿರ್ದೇಶನದ, ಶ್ರೀನಿವಾಸನ್ ಚಿತ್ರಕಥೆ ಬರೆದ ಮತ್ತು ಮಣಿಯನ್ ಪಿಳ್ಳ ರಾಜು ನಿರ್ಮಿಸಿದ 'ಒರು ನಾಳ್ ವರುಮ್', ಭಾರತದಲ್ಲಿ ಭ್ರಷ್ಟಾಚಾರದ ಬಗ್ಗೆ ಸಾಮಾಜಿಕ ವಿಡಂಬನೆಯಾಗಿದೆ. ಇದು ಪರದೆಯ ಮೇಲೆ ಮೋಹನ್ಲಾಲ್-ಶ್ರೀನಿವಾಸನ್ ಅವರ ಪ್ರೀತಿಯ ಶ್ರೇಷ್ಠ ಸಂಯೋಜನೆಯನ್ನು ಪುನರೇಕಿಸಿತು. ಅವರ ಮುಂದಿನ ಚಿತ್ರ 'ಶಿಕ್ಕರ್', ಎಂ. ಪದ್ಮಕುಮಾರ್ ನಿರ್ದೇಶನದ ಕತ್ತಲೆಯ ಪ್ರತೀಕಾರದ ಥ್ರಿಲ್ಲರ್ ಆಗಿದ್ದು, ಇದರಲ್ಲಿ ಅವರು ತಮ್ಮ ಭೂತಕಾಲದಿಂದ ಪೀಡಿತರಾಗಿರುವ ಲಾರಿ ಚಾಲಕನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ರಂಜಾನ್ ಬಾಕ್ಸ್ ಆಫೀಸ್ನಲ್ಲಿ ಅಗ್ರಸ್ಥಾನದಲ್ಲಿತ್ತು.<ref>{{cite web|url = http://www.sify.com/movies/boxoffice.php?id=14957248&cid=14625530|title = Kerala Box-Office (September 1 to 16)|date = 18 September 2010|access-date = 11 October 2014|website = [[Sify]]|archive-url = https://web.archive.org/web/20141028080936/http://www.sify.com/movies/boxoffice.php?id=14957248&cid=14625530|archive-date = 28 October 2014|url-status = dead}}</ref> ನಂತರ ಮೇಜರ್ ರವಿ ನಿರ್ದೇಶನದ ಯುದ್ಧ ಚಿತ್ರ 'ಕಾಂದಹಾರ್' ಬಂದಿತು. ಇದು ೧೯೯೯ ರಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ೮೧೪ ರ ಅಪಹರಣವನ್ನು ಆಧರಿಸಿದೆ. ಮೋಹನ್ಲಾಲ್ ಈ ಚಿತ್ರದಲ್ಲಿ ಮೇಜರ್ ಮಹಾದೇವನ್ ಪಾತ್ರವನ್ನು ಪುನರಾವರ್ತಿಸಿದರು. ಇದು ಮೇಜರ್ ಮಹಾದೇವನ್ ಚಿತ್ರ ಸರಣಿಯ ಮೂರನೇ ಕಂತು ಮತ್ತು ಅಮಿತಾಬ್ ಬಚ್ಚನ್ ಅವರ ಮೊದಲ ಮಲಯಾಳಂ ಚಿತ್ರವಾಗಿದೆ.
ಮೋಹನ್ಲಾಲ್ ಅವರ ೨೦೧೧ ರ ಮೊದಲ ಬಿಡುಗಡೆಯು ಬಹುನಕ್ಷತ್ರ 'ಕ್ರಿಶ್ಚಿಯನ್ ಬ್ರದರ್ಸ್' ಆಗಿದ್ದು, ಇದು ಜೋಷಿ ನಿರ್ದೇಶನದ ಮತ್ತು ಉದಯಕೃಷ್ಣ-ಶಿಬಿ ಕೆ. ಥಾಮಸ್ ಚಿತ್ರಕಥೆ ಬರೆದ ಆಕ್ಷನ್ ನಾಟಕವಾಗಿದೆ. ಇದರಲ್ಲಿ ಅವರು ಸುರೇಶ್ ಗೋಪಿ, ದಿಲೀಪ್ ಮತ್ತು ಸರತ್ ಕುಮಾರ್ ಅವರೊಂದಿಗೆ ಸಹ ನಟಿಸಿದ್ದರು. ಮಾರ್ಚ್ನಲ್ಲಿ ೩೦೦ ಪರದೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರವು ಆ ಸಮಯದಲ್ಲಿ ಮಲಯಾಳಂ ಚಿತ್ರಕ್ಕೆ ಅತಿದೊಡ್ಡ ಬಿಡುಗಡೆಯಾಗಿತ್ತು.<ref>{{Cite news|url = http://timesofindia.indiatimes.com/entertainment/tamil/movies/news/Can-Mohanlal-pull-it-off/articleshow/7734697.cms|title = Can Mohanlal pull it off?|date = 18 March 2011|work = [[The Times of India]]|access-date = 12 October 2014|archive-url = https://web.archive.org/web/20161205101608/http://timesofindia.indiatimes.com/entertainment/tamil/movies/news/Can-Mohanlal-pull-it-off/articleshow/7734697.cms|archive-date = 5 December 2016|url-status = live}}</ref> ಈ ವೇಗದ ಚಿತ್ರವು ವಾಣಿಜ್ಯಿಕ ಯಶಸ್ಸು ಮತ್ತು ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ.<ref>{{cite web|url = http://www.rediff.com/movies/review/south-review-christian-brothers/20110318.htm|title = Review: Christian Brothers is entertaining|date = 18 March 2011|work = rediff.com|access-date = 12 October 2014|archive-url = https://web.archive.org/web/20141019005606/http://www.rediff.com/movies/review/south-review-christian-brothers/20110318.htm|archive-date = 19 October 2014|url-status = live}}</ref> ಅವರ ವಿಷು (ಏಪ್ರಿಲ್) ಬಿಡುಗಡೆಯು ರಫಿ ಮೆಕಾರ್ಟಿನ್ ನಿರ್ದೇಶನದ ಹಾಸ್ಯ ಚಿತ್ರ 'ಚೈನಾ ಟೌನ್' ಆಗಿದ್ದು, ಇದರಲ್ಲಿ ಅವರು ಜಯರಾಂ ಮತ್ತು ದಿಲೀಪ್ ಅವರೊಂದಿಗೆ ಸಹ ನಟಿಸಿದರು. ವಿಮರ್ಶೆಗಳು ಮಿಶ್ರವಾಗಿದ್ದರೂ, ಈ ಚಿತ್ರವು ೧೦೦ ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನಗೊಂಡು ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>{{Cite news|url = http://ibnlive.in.com/news/2011-was-troublesome-for-malayalam-films/217739-8-70.html|title = 2011 was troublesome for Malayalam films|publisher = ibnlive.in.com|access-date = 12 October 2014|archive-url = https://web.archive.org/web/20141023221826/http://ibnlive.in.com/news/2011-was-troublesome-for-malayalam-films/217739-8-70.html|archive-date = 23 October 2014|url-status = dead}}</ref> ಅವರು ಆಗಸ್ಟ್ನಲ್ಲಿ ಬಿಡುಗಡೆಯಾದ 'ಪ್ರಣಯಂ' ನಲ್ಲಿ ನಟಿಸಿದರು. ಇದು ಬ್ಲೆಸ್ಸಿ ನಿರ್ದೇಶನದ ವಿಲಕ್ಷಣ ಪ್ರಣಯ ನಾಟಕವಾಗಿದೆ. ಇದು ಮೋಹನ್ಲಾಲ್, ಅನುಪಮ್ ಖೇರ್ ಮತ್ತು ಜಯಪ್ರದಾ ನಟಿಸಿದ ಮೂರು ವಯಸ್ಸಾದ ಪಾತ್ರಗಳ ನಡುವಿನ ಪ್ರೇಮಕಥೆಯಾಗಿದೆ. ಈ ಚಿತ್ರವು ವಿಮರ್ಶಕರಿಂದ ಹೆಚ್ಚು ಮೆಚ್ಚುಗೆ ಪಡೆಯಿತು ಮತ್ತು ಮೋಹನ್ಲಾಲ್ ಅವರ ಮ್ಯಾಥ್ಯೂಸ್ ಪಾತ್ರವನ್ನು ಚೆನ್ನಾಗಿ ಪ್ರಶಂಸಿಸಲಾಯಿತು.<ref>{{Cite news|url=http://www.mathrubhumi.com/english/movies/malayalam/123816/ |title=Mohanlal, Blessy bag Critics award |date=18 May 2012 |publisher=mathrubhumi.com |url-status=dead |archive-url=https://web.archive.org/web/20120529040906/http://www.mathrubhumi.com/english/movies/malayalam/123816/ |archive-date=29 May 2012}}</ref> ಅವರ ಮುಂದಿನ ಚಿತ್ರ 'ಸ್ನೇಹವೀಡು', ಸತ್ಯನ್ ಅಂತಿಕ್ಕಾಡು ನಿರ್ದೇಶನದ ಕೌಟುಂಬಿಕ ಚಿತ್ರವಾಗಿದ್ದು, ಪಾಲಕ್ಕಾಡ್ನ ಹಳ್ಳಿಯ ಹಿನ್ನೆಲೆಯಲ್ಲಿದೆ.<ref>[http://www.sify.com/movies/snehaveedu-review-malayalam-14980318.html Movie Review: Snehaveedu] {{Webarchive|url=https://web.archive.org/web/20131011085931/http://www.sify.com/movies/snehaveedu-review-malayalam-14980318.html |date=11 October 2013 }}. Sify.com. Retrieved on 6 May 2012.</ref> ಮೊದಲ ಬಾರಿಗೆ, ನಟಿ ಶೀಲಾ ಮೋಹನ್ಲಾಲ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡರು. ಅವರು ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದರು. 'ಸ್ನೇಹವೀಡು' ಅವರ ೩೦೦ ನೇ ಚಿತ್ರವೆಂದು ಹೇಳಲಾಗುತ್ತದೆ.<ref>{{cite web|url = http://www.sify.com/movies/sneha-veedu-mohanlal-s-300th-film-imagegallery-malayalam-ljtmomdedidsi.html|title = Sneha Veedu Mohanlal's 300th film|access-date = 12 October 2014|website = [[Sify]]|archive-url = https://web.archive.org/web/20141028081228/http://www.sify.com/movies/sneha-veedu-mohanlal-s-300th-film-imagegallery-malayalam-ljtmomdedidsi.html|archive-date = 28 October 2014|url-status = dead}}</ref> ಈ ಚಿತ್ರವು ಹಿಟ್ ಆಯಿತು.<ref>{{cite web|url = http://www.sify.com/movies/boxoffice.php?id=14981090&cid=14625530|title = Kerala Box-Office- September 12 to October 8|date = 12 October 2011|website = [[Sify]]|access-date = 12 October 2014|archive-url = https://web.archive.org/web/20141028081231/http://www.sify.com/movies/boxoffice.php?id=14981090&cid=14625530|archive-date = 28 October 2014|url-status = dead}}</ref> ಆ ವರ್ಷದ ಅವರ ಕೊನೆಯ ಚಿತ್ರ 'ಒರು ಮರುಭೂಮಿಕ್ಕಾಧ'. ಇದು ಪ್ರಿಯದರ್ಶನ್ ನಿರ್ದೇಶನದ ಸಂಪೂರ್ಣ ಮಧ್ಯಪ್ರಾಚ್ಯದಲ್ಲಿ ಸೆಟ್ ಮಾಡಲಾದ ಆಕ್ಷನ್ ಹಾಸ್ಯ ಥ್ರಿಲ್ಲರ್ ಆಗಿದೆ. ಇದು ೧೯೮೦ ರ ದಶಕದ ಉತ್ತರಾರ್ಧ ಮತ್ತು ೯೦ ರ ದಶಕದ ಪ್ರಿಯದರ್ಶನ್-ಮೋಹನ್ಲಾಲ್-ಮುಕೇಶ್ ಸಂಯೋಜನೆಯ ಮರಳುವಿಕೆಯನ್ನು ಗುರುತಿಸಿತು. ಈ ಚಿತ್ರವು ಕ್ರಿಸ್ಮಸ್-ಹೊಸ ವರ್ಷದ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡಿತು.<ref>{{cite web|url = http://www.sify.com/movies/boxoffice.php?id=14989183&cid=14625530|title = Kerala Box-Office – Dec 16 to Jan 11|date = 19 January 2012|access-date = 12 October 2014|website = [[Sify]]|archive-url = https://web.archive.org/web/20141028081233/http://www.sify.com/movies/boxoffice.php?id=14989183&cid=14625530|archive-date = 28 October 2014|url-status = dead}}</ref>
೨೦೧೨ ರಲ್ಲಿ, ಅವರು ಆರು ಚಿತ್ರಗಳಲ್ಲಿ ನಟಿಸಿದರು. ಅವರ ಮೊದಲ ಬಿಡುಗಡೆಯು ಬಹು ನಿರೀಕ್ಷಿತ ದೊಡ್ಡ ಬಜೆಟ್ ಪ್ರಣಯ ಥ್ರಿಲ್ಲರ್ 'ಕಸನೋವ್ವಾ' ಆಗಿದ್ದು, ಇದನ್ನು ರೋಷನ್ ಆಂಡ್ರ್ಯೂಸ್ ನಿರ್ದೇಶಿಸಿದ್ದಾರೆ ಮತ್ತು ಬಾಬಿ-ಸಂಜಯ್ ಬರೆದಿದ್ದಾರೆ. ಅವರು ಕಸನೋವಾ ಪಾತ್ರವನ್ನು ನಿರ್ವಹಿಸಿದರು. ಇವರು ಸರಣಿ ಮಹಿಳಾ ಪ್ರಿಯ ಮತ್ತು ಕಸನೋವಾಸ್ ಇಟರ್ನಲ್ ಸ್ಪ್ರಿಂಗ್ - ಹೂವಿನ ಬುಟೀಕುಗಳ ಅಂತರರಾಷ್ಟ್ರೀಯ ಸರಪಳಿಯ ಮಾಲೀಕರಾಗಿದ್ದಾರೆ. ನಂತರ, ಅವರು ಏಪ್ರಿಲ್ನಲ್ಲಿ ಬಿಡುಗಡೆಯಾದ ಮತ್ತು ಪ್ರಿಯದರ್ಶನ್ ನಿರ್ದೇಶನದ ಬಾಲಿವುಡ್ ಚಿತ್ರ 'ಟೆಜ್' ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅವರ ಮುಂದಿನ ಚಿತ್ರ ಬಿ. ಉನ್ನಿಕೃಷ್ಣನ್ ನಿರ್ದೇಶನದ 'ಗ್ರಾಂಡ್ಮಾಸ್ಟರ್' ಆಗಿದ್ದು, ಇದು ಸರಣಿ ಕೊಲೆಗಳನ್ನು ತನಿಖೆ ಮಾಡಲು ಒತ್ತಾಯಿಸಲ್ಪಟ್ಟ ಪೊಲೀಸ್ ಅಧಿಕಾರಿಯ ಬಗ್ಗೆ ನವ-ನೊಯಿರ್ ಅಪರಾಧ ಥ್ರಿಲ್ಲರ್ ಆಗಿದೆ. ಮೋಹನ್ಲಾಲ್ ಅವರ ಸಮಚಿತ್ತ, ಶಾಂತ ಮತ್ತು ಸಂಯಮದ ಅಭಿನಯವನ್ನು ವಿಮರ್ಶಕರು ಪ್ರಶಂಸಿಸಿದರು.<ref>{{cite web|url = http://www.rediff.com/movies/review/south-review-mohanlal-excels-in-grandmaster/20120504.htm|title = Review: Mohanlal excels in Grandmaster|date = 4 May 2012|access-date = 12 October 2014|work = rediff.com|archive-url = https://web.archive.org/web/20141018235924/http://www.rediff.com/movies/review/south-review-mohanlal-excels-in-grandmaster/20120504.htm|archive-date = 18 October 2014|url-status = live}}</ref> ಯುಟಿವಿ ಮೋಷನ್ ಪಿಕ್ಚರ್ಸ್ ನಿರ್ಮಿಸಿದ ಇದು ನೆಟ್ಫ್ಲಿಕ್ಸ್ ಮೂಲಕ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವಾಗಿದ್ದು, ಇದನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಲಭ್ಯವಾಗುವಂತೆ ಮಾಡಲಾಯಿತು.<ref>{{cite news|last=Prakash|first=Asha|title=How about paying for viewing films online?|url=http://timesofindia.indiatimes.com/entertainment/malayalam/movies/news/How-about-paying-for-viewing-films-online/articleshow/16322780.cms|access-date=24 November 2016|work=[[The Times of India]]|date=10 September 2012|archive-url=https://web.archive.org/web/20171031085616/https://timesofindia.indiatimes.com/entertainment/malayalam/movies/news/How-about-paying-for-viewing-films-online/articleshow/16322780.cms|archive-date=31 October 2017|url-status=live}}</ref> ರಂಜಿತ್ ನಿರ್ದೇಶನದ 'ಸ್ಪಿರಿಟ್' ಕೇರಳದಲ್ಲಿ ಹೆಚ್ಚುತ್ತಿರುವ ಮದ್ಯಪಾನದ ಅಭ್ಯಾಸದ ಬಗ್ಗೆ ಮಾತನಾಡಿದೆ. ಸಮಾಜದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದ್ದಕ್ಕಾಗಿ ರಾಜ್ಯ ಸರ್ಕಾರವು ಈ ಚಿತ್ರವನ್ನು ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಿತು.<ref>{{Cite news|url = http://ibnlive.in.com/news/malayalam-film-spirit-exempted-from-tax/267983-71-210.html|title = Malayalam film 'Spirit' exempted from tax|date = 26 June 2012|publisher = ibnlive.in.com|access-date = 12 October 2014|archive-url = https://web.archive.org/web/20141023161143/http://ibnlive.in.com/news/malayalam-film-spirit-exempted-from-tax/267983-71-210.html|archive-date = 23 October 2014|url-status = dead}}</ref> ಈ ಚಿತ್ರವು ಕೇರಳದಲ್ಲಿ ೧೨೫-ದಿನಗಳ ಚಿತ್ರಮಂದಿರ ಪ್ರದರ್ಶನವನ್ನು ಪೂರ್ಣಗೊಳಿಸಿತು ಮತ್ತು ವಾಣಿಜ್ಯಿಕ ಯಶಸ್ಸು ಗಳಿಸಿತು.<ref>{{Cite news|url = http://ibnlive.in.com/news/spirit-completes-100-day-run-on-box-office/293536-71-210.html|title = Spirit: Completes 100 day run on Box office|date = 20 September 2012|publisher = ibnlive.in.com|access-date = 12 October 2014|archive-url = https://web.archive.org/web/20141023115500/http://ibnlive.in.com/news/spirit-completes-100-day-run-on-box-office/293536-71-210.html|archive-date = 23 October 2014|url-status = dead}}</ref> ಓಣಂ ಹಬ್ಬದ ಸಮಯದಲ್ಲಿ ಬಿಡುಗಡೆಯಾದ 'ರನ್ ಬೇಬಿ ರನ್' ಜೋಷಿ ನಿರ್ದೇಶನದ ಹಾಸ್ಯ ಥ್ರಿಲ್ಲರ್ ಆಗಿತ್ತು. ಇದು ಸುದ್ದಿ ಮಾಧ್ಯಮವನ್ನು ಹಿನ್ನೆಲೆಯಾಗಿ ಹೊಂದಿತ್ತು. ಈ ಚಿತ್ರವು ವಿಮರ್ಶಕರಿಂದ ಚೆನ್ನಾಗಿ ಮೆಚ್ಚುಗೆ ಪಡೆಯಿತು, ಇದು ಉತ್ತಮವಾಗಿ ರಚಿಸಲ್ಪಟ್ಟ ಥ್ರಿಲ್ಲರ್ಗೆ ಉದಾಹರಣೆಯಾಗಿದೆ ಎಂದು ಹೇಳಲಾಯಿತು.<ref>{{Cite news|url = http://ibnlive.in.com/news/malayalam-review-run-baby-run-is-gripping-thriller/287092-71-212.html|title = Malayalam Review: 'Run Baby Run' is a gripping thriller|date = 31 August 2012|access-date = 12 October 2014|publisher = ibnlive.in.com|archive-url = https://web.archive.org/web/20141023161149/http://ibnlive.in.com/news/malayalam-review-run-baby-run-is-gripping-thriller/287092-71-212.html|archive-date = 23 October 2014|url-status = dead}}</ref> ಇದು ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>{{Cite news|url = http://ibnlive.in.com/news/run-baby-run-to-trivandrum-lodge-mohanlal-is-giving-back-to-back-hits/299788-71-210.html|title = 'Run Baby Run' to 'Trivandrum lodge', Mohanlal is giving back to back hits|date = 10 October 2012|publisher = ibnlive.in.com|access-date = 12 October 2014|archive-url = https://web.archive.org/web/20141023161157/http://ibnlive.in.com/news/run-baby-run-to-trivandrum-lodge-mohanlal-is-giving-back-to-back-hits/299788-71-210.html|archive-date = 23 October 2014|url-status = dead}}</ref> ವರ್ಷವು ಕ್ರಿಸ್ಮಸ್ ಬಿಡುಗಡೆಯಾದ 'ಕರ್ಮಯೋಧ' ದೊಂದಿಗೆ ಕೊನೆಗೊಂಡಿತು. ಇದನ್ನು ಮೇಜರ್ ರವಿ ನಿರ್ದೇಶಿಸಿದ್ದಾರೆ. ಇದು ಆಕ್ಷನ್ ಥ್ರಿಲ್ಲರ್ ಆಗಿದ್ದು, ಅದರಲ್ಲಿ ಅವರು ಮ್ಯಾಡ್ ಮ್ಯಾಡಿ ಎಂಬ ಎನ್ಕೌಂಟರ್ ತಜ್ಞರಾಗಿ ನಟಿಸಿದ್ದಾರೆ. ಮುಂಬೈನಲ್ಲಿ ಹದಿಹರೆಯದ ಶಾಲಾ ಬಾಲಕಿಯೊಬ್ಬಳು ಕಣ್ಮರೆಯಾಗುವುದನ್ನು ತನಿಖೆ ಮಾಡಲು ಅವರಿಗೆ ನಿಯೋಜಿಸಲಾಗಿದೆ. ಈ ಚಿತ್ರವು ಮಹಿಳೆಯರ ವಿರುದ್ಧದ ತಾರತಮ್ಯವನ್ನು ಕುರಿತದ್ದಾಗಿದೆ.
[[File:Mohanlal.jpg|thumb|upright|left|alt=Photograph taken from an angle highlighting his face|2012 ರಲ್ಲಿ 17 ನೇ ಅಂತರರಾಷ್ಟ್ರೀಯ ಕೇರಳ ಚಲನಚಿತ್ರೋತ್ಸವದಲ್ಲಿ ಮೋಹನ್ಲಾಲ್]]
೨೦೧೩ ಮೋಹನ್ಲಾಲ್ ಅವರಿಗೆ ಗಮನಾರ್ಹ ವರ್ಷವಾಗಿತ್ತು. ಈ ವರ್ಷವೇ ಮಲಯಾಳಂ ಚಿತ್ರದ ಆಲ್ ಟೈಮ್ ಬ್ಲಾಕ್ಬಸ್ಟರ್ 'ದೃಶ್ಯಂ' ಬಿಡುಗಡೆಯಾಯಿತು. ಆ ವರ್ಷದ ಅವರ ಮೊದಲ ಚಿತ್ರ 'ಲೋಕ್ಪಾಲ್', ಇದು ವಿಜಿಲೆಂಟ್ ಥ್ರಿಲ್ಲರ್ ಆಗಿದ್ದು, ಅದರಲ್ಲಿ ಅವರು "ಲೋಕ್ಪಾಲ್" ಎಂದು ಅಡ್ಡಹೆಸರುಳ್ಳ ವಿಜಿಲೆಂಟ್ ಪಾತ್ರವನ್ನು ನಿರ್ವಹಿಸಿದರು. ಇದನ್ನು ಜೋಷಿ ನಿರ್ದೇಶಿಸಿದ್ದರು ಮತ್ತು ಎಸ್.ಎನ್. ಸ್ವಾಮಿ ಬರೆದಿದ್ದರು. ಸಲಾಂ ಬಪ್ಪು ನಿರ್ದೇಶನದ 'ರೆಡ್ ವೈನ್' ರಾಜಕೀಯ ಕೊಲೆಯ ಆಧಾರಿತ ರೇಖಾತ್ಮಕವಲ್ಲದ ತನಿಖಾ ಥ್ರಿಲ್ಲರ್ ಆಗಿತ್ತು. ಸಿದ್ದಿಕ್ ನಿರ್ದೇಶನದ 'ಲೇಡೀಸ್ ಅಂಡ್ ಜೆಂಟಲ್ಮನ್' ಐಟಿ ಕಂಪನಿಗಳ ಹಿನ್ನೆಲೆಯಲ್ಲಿ ಸೆಟ್ ಮಾಡಲಾದ ಪ್ರಣಯ ಹಾಸ್ಯ ಚಿತ್ರವಾಗಿದೆ. ಪ್ರಿಯದರ್ಶನ್ ನಿರ್ದೇಶನದ 'ಗೀತಾಂಜಲಿ' ಮಲಯಾಳಂ ಕ್ಲಾಸಿಕ್ 'ಮಣಿಚಿತ್ರತಾಳು' ನ ಸ್ಪಿನ್-ಆಫ್ ಆಗಿರುವ ಹಾರರ್ ಥ್ರಿಲ್ಲರ್ ಆಗಿದ್ದು, ಅದರಲ್ಲಿ ಅವರು ಮೂಲ ಚಿತ್ರದ ಡಾ. ಸನ್ನಿ ಪಾತ್ರವನ್ನು ಪುನರಾವರ್ತಿಸಿದರು. ಅವರ ಕೊನೆಯ ಬಿಡುಗಡೆಯು ಜೀತು ಜೋಸೆಫ್ ನಿರ್ದೇಶನದ 'ದೃಶ್ಯಂ' ಆಗಿತ್ತು. ಇದು ವಿಶ್ವದಾದ್ಯಂತ ೬೨ ಕೋಟಿ ರೂಪಾಯಿ ಗಳಿಸಿತು ಮತ್ತು ೨೦೧೬ ರವರೆಗೆ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.<ref>{{cite news|author=DC|title=Mohanlal's Pulimurugan becomes first Malayalam film to gross over 100 crore rupees|url=https://www.deccanchronicle.com/entertainment/mollywood/071116/mohanlals-pulimurugan-becomes-first-malayalam-film-to-gross-over-100-crore-rupees.html|access-date=12 January 2017|work=[[Deccan Chronicle]]|date=7 November 2016|archive-url=https://web.archive.org/web/20161122062944/http://www.deccanchronicle.com/entertainment/mollywood/071116/mohanlals-pulimurugan-becomes-first-malayalam-film-to-gross-over-100-crore-rupees.html|archive-date=22 November 2016|url-status=live}}</ref>
೨೦೧೪ ರಲ್ಲಿ, ಅವರು ಸಿ. ಜೋಸೆಫ್ ವಿಜಯ್ ಅವರೊಂದಿಗೆ ತಮಿಳು ಆಕ್ಷನ್-ನಾಟಕ 'ಜಿಲ್ಲಾ' ದಲ್ಲಿ ನಟಿಸಿದರು. ಇದನ್ನು ಆರ್.ಟಿ. ನೀಸನ್ ನಿರ್ದೇಶಿಸಿದ್ದರು ಮತ್ತು ಆರ್.ಬಿ. ಚೌಧರಿ ನಿರ್ಮಿಸಿದ್ದರು.<ref>{{cite news|title=First Day Box Office Collections of 'Jilla' and 'Veeram'|url=http://www.deccanchronicle.com/140111/entertainment-kollywood/article/first-day-box-office-collections-jilla-and-veeram|publisher=[[Deccan Chronicle]]|date=15 January 2014|access-date=17 October 2014|archive-url=https://web.archive.org/web/20141006104616/http://www.deccanchronicle.com/140111/entertainment-kollywood/article/first-day-box-office-collections-jilla-and-veeram|archive-date=6 October 2014|url-status=dead}}</ref><ref>{{cite news|title=Pongal releases 'Jilla', 'Veeram' gold spinners|url=http://timesofindia.indiatimes.com/entertainment/tamil/movies/news/Pongal-releases-Jilla-Veeram-gold-spinners/articleshow/28882331.cms|publisher=[[The Times of India]]|author=IANS|date=16 January 2014|access-date=17 October 2014|archive-url=https://web.archive.org/web/20170801011522/http://timesofindia.indiatimes.com/entertainment/tamil/movies/news/Pongal-releases-Jilla-Veeram-gold-spinners/articleshow/28882331.cms|archive-date=1 August 2017|url-status=live}}</ref> ಈ ಚಿತ್ರವು ವಿಶ್ವದಾದ್ಯಂತ ೮೫ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿ ವಾಣಿಜ್ಯಿಕ ಯಶಸ್ಸು ಗಳಿಸಿತು<ref>{{cite news|last=Mehta|first=Ankita|title='Jilla' Box Office Collection: Vijay-Mohanlal Starrer Wins BO Battle|url=http://www.ibtimes.co.in/jilla-box-office-collection-vijay-mohanlal-starrer-wins-bo-battle-537429|access-date=12 January 2017|work=[[International Business Times]]|date=5 February 2014|archive-url=https://web.archive.org/web/20170215001253/http://www.ibtimes.co.in/jilla-box-office-collection-vijay-mohanlal-starrer-wins-bo-battle-537429|archive-date=15 February 2017|url-status=live}}</ref> ಮತ್ತು ತಮಿಳುನಾಡಿನ ಚೆನ್ನೈನಲ್ಲಿ ೧೦೦ ದಿನಗಳ ಚಿತ್ರಮಂದಿರ ಪ್ರದರ್ಶನವನ್ನು ಪೂರ್ಣಗೊಳಿಸಿತು.<ref>{{cite news|title='Ilayathalapathy' Vijay-Mohanlal's 'Jilla' Set to Complete 100-Day Theatrical Run|url=http://www.ibtimes.co.in/039ilayathalapathy039-vijay-mohanlal039s-039jilla039-set-to-complete-100-day-theatrical-run-548546|work=[[International Business Times]]|author=Sangeetha Seshagiri|date=17 April 2014|access-date=17 October 2014|archive-url=https://web.archive.org/web/20141011225222/http://www.ibtimes.co.in/039ilayathalapathy039-vijay-mohanlal039s-039jilla039-set-to-complete-100-day-theatrical-run-548546|archive-date=11 October 2014|url-status=live}}</ref> ೨೦೧೪ ರಲ್ಲಿ ಮೋಹನ್ಲಾಲ್ ಅವರ ಮೊದಲ ಮಲಯಾಳಂ ಬಿಡುಗಡೆಯು ಬಿ. ಉನ್ನಿಕೃಷ್ಣನ್ ನಿರ್ದೇಶನದ ಹೀಸ್ಟ್ ಚಿತ್ರ 'ಮಿಸ್ಟರ್ ಫ್ರಾಡ್' ಆಗಿತ್ತು. ಅವರು ತಮ್ಮ ಮುಂದಿನ ಚಿತ್ರ 'ಕೂತಾರ' ದಲ್ಲಿ ವಿಸ್ತೃತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಶ್ರೀನಾಥ್ ರಾಜೇಂದ್ರನ್ ನಿರ್ದೇಶನದ, ಹೇಳಲಾಗದ ಕಾಲಘಟ್ಟದಲ್ಲಿ ಸೆಟ್ ಮಾಡಲಾದ ಪ್ರೌಢಾವಸ್ಥೆಯ ಮಿಸ್ಟರಿ ಚಿತ್ರವಾಗಿದೆ. ಪ್ರಾಯೋಗಿಕ ಚಿತ್ರದಲ್ಲಿ ಅವರು ನಿಗೂಢ ಪಾತ್ರವನ್ನು ನಿರ್ವಹಿಸಿದರು, ಚಿತ್ರದ ಕೊನೆಯಲ್ಲಿ ಅವರು ಮರ್ಮನ್ ಆಗಿ ಬಹಿರಂಗಗೊಳ್ಳುತ್ತಾರೆ. ಅವರ ಮುಂದಿನದು ಅರುಣ್ ವೈದ್ಯನಾಥನ್ ಬರೆದು ನಿರ್ದೇಶನದ ಹಾಸ್ಯಮಯ ರಾಜಕೀಯ ವಿಡಂಬನೆ ಚಿತ್ರ 'ಪೆರುಚಾಳಿ'. ಅವರು ಯುವ ರಾಜಕೀಯ ಕಿಂಗ್ ಮೇಕರ್ ಪಾತ್ರವನ್ನು ನಿರ್ವಹಿಸಿದರು. ಕ್ಯಾಲಿಫೋರ್ನಿಯಾ ರಾಜ್ಯ ಗವರ್ನರ್ ಚುನಾವಣೆಯಲ್ಲಿ ಗೆಲ್ಲಲು ಗವರ್ನರ್ ಅಭ್ಯರ್ಥಿಗೆ ಅವರಿಗೆ ನಿಯೋಜಿಸಲಾಗುತ್ತದೆ. ಅಲ್ಲಿ ಅವರು ಯುಎಸ್ಎ ಚುನಾವಣೆಯನ್ನು ಗೆಲ್ಲಲು ಪ್ರಮಾಣಿತ ಭಾರತೀಯ ರಾಜಕೀಯ ತಂತ್ರಗಳನ್ನು ಬಳಸುತ್ತಾರೆ.
೨೦೧೫ ರಲ್ಲಿ, ಅವರ ಮೊದಲ ಬಿಡುಗಡೆಯು ಕನ್ನಡ ಚಿತ್ರ 'ಮೈಥ್ರಿ' ಆಗಿತ್ತು. ಪ್ರತೀಕಾರ ಬಯಸುವ ಆರ್ಡಿಆರ್ಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ವಿಜ್ಞಾನಿ ಮಹಾದೇವ್ ಪಾತ್ರದಲ್ಲಿ ಅವರ ಅಭಿನಯವನ್ನು ವಿಮರ್ಶಕರು ಚೆನ್ನಾಗಿ ಪ್ರಶಂಸಿಸಿದರು. ಅವರ ಮೊದಲ ಮಲಯಾಳಂ ಬಿಡುಗಡೆಯು 'ರಸಂ' ನಲ್ಲಿ ಅತಿಥಿ ಪಾತ್ರವಾಗಿತ್ತು. ಸತ್ಯನ್ ಅಂತಿಕ್ಕಾಡ್ ನಿರ್ದೇಶನದ 'ಎನ್ನುಮ್ ಎಪ್ಪೋಳುಂ' ಆ ವರ್ಷದ ಅವರ ಮೊದಲ ಪ್ರಮುಖ ಪಾತ್ರವಾಗಿದ್ದು, ಅದರಲ್ಲಿ ಮಂಜು ವಾರಿಯರ್ ಸಹ ನಟಿಸಿದ್ದರು. ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಯಿತು. ನಂತರ ಜೋಷಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಲೈಲಾ ಓ ಲೈಲಾ' ಬಂದಿತು. ಇವೆರಡೂ ಬಾಕ್ಸ್ ಆಫೀಸ್ನಲ್ಲಿ ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾದವು. ಅವರ ಮುಂದಿನದು ರಂಜಿತ್ ನಿರ್ದೇಶನದ ಥ್ರಿಲ್ಲರ್ 'ಲೋಹಂ'. ಇದು ಮಿಶ್ರ ವಿಮರ್ಶಾತ್ಮಕ ಪ್ರತಿಕ್ರಿಯೆಗಳನ್ನು ಎದುರಿಸಿದರೂ, ಚಿತ್ರವು ವಾಣಿಜ್ಯಿಕ ಯಶಸ್ಸು ಗಳಿಸಿತು.<ref>{{cite news|author=IBTimes|title=Charlie, I, Puli, Loham, Amar Akbar Anthony among top 5 movies with good opening day collection at Kerala box office|url=http://www.ibtimes.co.in/charlie-i-puli-loham-amar-akbar-anthony-among-top-5-movies-good-opening-day-collection-kerala-661271|access-date=12 January 2017|work=[[International Business Times]]|date=29 December 2015|archive-url=https://web.archive.org/web/20170106102142/http://www.ibtimes.co.in/charlie-i-puli-loham-amar-akbar-anthony-among-top-5-movies-good-opening-day-collection-kerala-661271|archive-date=6 January 2017|url-status=live}}</ref> ಪ್ರತೀಕಾರದ ಥ್ರಿಲ್ಲರ್ 'ಕನಾಲ್' ಆ ವರ್ಷದ ಅವರ ಕೊನೆಯ ಚಿತ್ರವಾಗಿತ್ತು. ಇದು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು.
[[File:Mohanlal 1.jpg|thumb|48 ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ]]
===ವೃತ್ತಿ ಪ್ರಗತಿ ಮತ್ತು ವಾಣಿಜ್ಯ ಏರಿಳಿತಗಳು (2016–2024)===
೨೦೧೬ ರಲ್ಲಿ, ಮೋಹನ್ಲಾಲ್ ನಾಲ್ಕು ಬಿಡುಗಡೆಗಳನ್ನು ಹೊಂದಿದ್ದರು, ಇವುಗಳ ಒಟ್ಟು ಸಂಗ್ರಹವು ವಿಶ್ವದಾದ್ಯಂತ ೩೭೮ ಕೋಟಿ ರೂಪಾಯಿಗಳಾಗಿದ್ದು, ಈ ವರ್ಷದಲ್ಲಿ ಆಮಿರ್ ಖಾನ್, ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರ ನಂತರ ಅತಿ ಹೆಚ್ಚು ಬಾಕ್ಸ್ ಆಫೀಸ್ ಗಳಿಕೆಯ ಭಾರತೀಯ ನಟರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು.<ref name="top5">{{cite news|last=Nair|first=Sree Prasad|title=2016 Box Office Kings : Mohanlal is the only Malayalam actor among top 5, Aamir Khan tops the list, followed by Akshay Kumar and Salman Khan|url=http://www.catchnews.com/regional-cinema/2016-box-office-kings-mohanlal-is-the-only-malayalam-actor-among-top-5-aamir-khan-tops-the-list-followed-by-akshay-kumar-and-salman-khan-1483966620.html|access-date=12 January 2017|work=Catch News|date=9 January 2017|archive-url=https://web.archive.org/web/20170112061634/http://www.catchnews.com/regional-cinema/2016-box-office-kings-mohanlal-is-the-only-malayalam-actor-among-top-5-aamir-khan-tops-the-list-followed-by-akshay-kumar-and-salman-khan-1483966620.html|archive-date=12 January 2017|url-status=live}}</ref> ಆ ವರ್ಷದ ಅವರ ಮೊದಲ ಬಿಡುಗಡೆಯು ಚಂದ್ರಶೇಖರ್ ಯೆಲೇಟಿ ನಿರ್ದೇಶನದ ತೆಲುಗು ಕೌಟುಂಬಿಕ ನಾಟಕ 'ಮನಮಂತ' ಆಗಿತ್ತು. ಈ ಚಿತ್ರಕ್ಕಾಗಿ ಅವರು ತೆಲುಗಿನಲ್ಲಿ ಡಬ್ ಮಾಡಿದರು.<ref>{{cite news|last=Jayaram|first=Deepika|title=It's a pleasure to learn and dub in Telugu: Mohanlal|url=http://timesofindia.indiatimes.com/entertainment/malayalam/movies/news/Its-a-pleasure-to-learn-and-dub-in-Telugu-Mohanlal/articleshow/52851841.cms|access-date=22 June 2016|work=[[The Times of India]]|date=21 June 2016|archive-date=30 September 2022|archive-url=https://web.archive.org/web/20220930005823/https://timesofindia.indiatimes.com/entertainment/malayalam/movies/news/Its-a-pleasure-to-learn-and-dub-in-Telugu-Mohanlal/articleshow/52851841.cms|url-status=live}}</ref><ref>{{cite web|title=Mohanlal dubbing for 'Manamantha'|url=http://www.sify.com/movies/mohanlal-dubbing-for-manamantha-news-telugu-qgvjDfdchajhg.html|archive-url=https://web.archive.org/web/20160621103338/http://www.sify.com/movies/mohanlal-dubbing-for-manamantha-news-telugu-qgvjDfdchajhg.html|url-status=dead|archive-date=21 June 2016|website=[[Sify]]|access-date=22 June 2016|date=21 June 2016}}</ref> ಅವರ ನಂತರದ ಬಿಡುಗಡೆಯು ಕೊರಟಾಲ ಶಿವ ನಿರ್ದೇಶನದ ಮತ್ತೊಂದು ತೆಲುಗು ಚಿತ್ರ 'ಜನತಾ ಗ್ಯಾರೇಜ್' ಆಗಿದ್ದು, ಇದು ಆಕ್ಷನ್ ನಾಟಕವಾಗಿದೆ.<ref>{{cite web|url=https://www.firstpost.com/entertainment/janatha-garage-review-this-mohanlal-jr-ntr-film-is-an-entertaining-ride-for-the-most-part-2986476.html|title=Janatha Garage review: This Mohanlal, Jr NTR film is an entertaining ride for the most part|website=Firstpost|date=September 2016 }}</ref> ಇದು ೨೦೧೬ ರ ಅತಿ ಹೆಚ್ಚು ಗಳಿಕೆಯ ತೆಲುಗು ಚಿತ್ರವಾಯಿತು ಮತ್ತು ಅತಿ ಹೆಚ್ಚು ಗಳಿಕೆಯ ತೆಲುಗು ಚಿತ್ರಗಳಲ್ಲಿ ಒಂದಾಗಿದೆ,<ref>{{cite news|last=Hooli|first=Shekhar H|title=Janatha Garage 3rd week box office collection: Jr NTR film emerges as the highest grosser of 2016|url=http://www.ibtimes.co.in/janatha-garage-3rd-week-box-office-collection-jr-ntr-film-emerges-highest-grosser-2016-694855|access-date=26 September 2016|work=[[International Business Times]]|date=23 September 2016|archive-url=https://web.archive.org/web/20160926023119/http://www.ibtimes.co.in/janatha-garage-3rd-week-box-office-collection-jr-ntr-film-emerges-highest-grosser-2016-694855|archive-date=26 September 2016|url-status=live}}</ref> ವಿಶ್ವದಾದ್ಯಂತ ೧೩೫ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಕೆ ಮಾಡಿದೆ.<ref name="JG">{{cite news|author=DC|title=6 South Indian films that turned out to be game-changers in 2016|url=https://www.deccanchronicle.com/entertainment/bollywood/301216/6-south-indian-films-that-turned-out-to-be-game-changers-in-2016.html|access-date=12 January 2017|work=[[Deccan Chronicle]]|date=30 December 2016|archive-url=https://web.archive.org/web/20170113012015/http://www.deccanchronicle.com/entertainment/bollywood/301216/6-south-indian-films-that-turned-out-to-be-game-changers-in-2016.html|archive-date=13 January 2017|url-status=live}}</ref> ಆ ವರ್ಷದ ಅವರ ಮೊದಲ ಮಲಯಾಳಂ ಬಿಡುಗಡೆಯು ಪ್ರಿಯದರ್ಶನ್ ನಿರ್ದೇಶನದ ಅಪರಾಧ-ಥ್ರಿಲ್ಲರ್ 'ಒಪ್ಪಂ' ಆಗಿದ್ದು, ಅದರಲ್ಲಿ ಅವರು ಕುರುಡನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ೨೦೧೬ ರ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>{{cite news|last=Nair|first=Sree Prasad|title=Kerala Box Office: Mohanlal's Oppam is now highest grosser of 2016, beats Jacobinte Swargarajyam|url=http://www.catchnews.com/regional-cinema/kerala-box-office-mohanlal-s-oppam-is-now-highest-grosser-of-2016-beats-jacobinte-swargarajyam-1474716416.html|access-date=26 September 2016|work=Catch News|date=24 September 2016|archive-url=https://web.archive.org/web/20160927001833/http://www.catchnews.com/regional-cinema/kerala-box-office-mohanlal-s-oppam-is-now-highest-grosser-of-2016-beats-jacobinte-swargarajyam-1474716416.html|archive-date=27 September 2016|url-status=live}}</ref> ಇದು ಒಂದೂವರೆ ತಿಂಗಳೊಳಗೆ ಬಾಕ್ಸ್ ಆಫೀಸ್ನಲ್ಲಿ ೫೦ ಕೋಟಿ ರೂಪಾಯಿ ಗಡಿಯನ್ನು ದಾಟಿತು,<ref>{{cite web|author=Moviebuzz|title=Mohanlal has two 50 crore blockbusters in his kitty!|url=http://www.sify.com/movies/mohanlal-has-two-50-crore-blockbusters-in-his-kitty-news-malayalam-qkssadjifbbdc.html|website=[[Sify]]|access-date=11 November 2016|date=18 October 2016|archive-url=https://web.archive.org/web/20161025204019/http://www.sify.com/movies/mohanlal-has-two-50-crore-blockbusters-in-his-kitty-news-malayalam-qkssadjifbbdc.html|archive-date=25 October 2016|url-status=dead}}</ref> ಮತ್ತು ವಿಶ್ವದಾದ್ಯಂತ ೬೫ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿತು.<ref>{{cite news|last=Nair|first=Sree Prasad|title=After Drishyam, Ajay Devgn to reprise Mohanlal's role in Oppam|url=http://www.catchnews.com/regional-cinema/after-drishyam-ajay-devgn-to-reprise-mohanlal-s-role-in-oppam-1482872134.html|access-date=12 January 2017|work=Catch News|date=28 December 2016|archive-url=https://web.archive.org/web/20170114184512/http://www.catchnews.com/regional-cinema/after-drishyam-ajay-devgn-to-reprise-mohanlal-s-role-in-oppam-1482872134.html|archive-date=14 January 2017|url-status=live}}</ref> ಅವರು ಆ ವರ್ಷದ ಕೊನೆಯ ಬಿಡುಗಡೆಯಾದ ಆಕ್ಷನ್ ಚಿತ್ರ 'ಪುಲಿಮುರುಗನ್' ನಲ್ಲಿ ಬೇಟೆಗಾರನ ಪಾತ್ರವನ್ನು ನಿರ್ವಹಿಸಿದರು. ಇದು ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು ಮತ್ತು ಬಾಕ್ಸ್ ಆಫೀಸ್ನಲ್ಲಿ ೧೦೦ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿದ ಮೊದಲ ಮಲಯಾಳಂ ಚಿತ್ರವಾಗಿದೆ.<ref>{{cite news|last=Viswanath|first=Chandrakanth|title=Mohanlal's Pulimurugan breaches the Rs 100 crore mark|url=http://www.newindianexpress.com/entertainment/malayalam/2016/nov/07/mohanlals-pulimurugan-breaches-the-rs-100-crore-mark-1536006--2.html|access-date=11 November 2016|work=[[The New Indian Express]]|date=7 November 2016|archive-url=https://web.archive.org/web/20161111194211/http://www.newindianexpress.com/entertainment/malayalam/2016/nov/07/mohanlals-pulimurugan-breaches-the-rs-100-crore-mark-1536006--2.html|archive-date=11 November 2016|url-status=dead}}</ref> ಈ ಚಿತ್ರವು ಇದುವರೆಗೆ ವಿಶ್ವದಾದ್ಯಂತ ೧೫೨ ಕೋಟಿ ರೂಪಾಯಿ ಸಂಗ್ರಹಿಸಿದೆ.<ref>{{cite news|last=R.|first=Manoj Kumar|title=Pulimurugan box office: Mohanlal-starrer breaking records, making history|url=http://indianexpress.com/article/regional/pulimurugan-box-office-mohanlal-starrer-breaking-records-making-history-3075509/|access-date=10 October 2016|work=[[The Indian Express]]|date=10 October 2016|url-status=live|archive-url=https://web.archive.org/web/20161010203623/http://indianexpress.com/article/regional/pulimurugan-box-office-mohanlal-starrer-breaking-records-making-history-3075509/|archive-date=10 October 2016|df=dmy-all}}</ref> ಈ ಚಿತ್ರವು ಅವರ ಅಭಿನಯಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು ಮತ್ತು ಪರೇಶ್ ಸಿ. ಪಾಲಿಚಾ ಅವರು "ಈ ಥ್ರಿಲ್ಲರ್ ಅನ್ನು ನಿಜವಾಗಿಯೂ ರೋಮಾಂಚಕಾರಿ ಅನುಭವವನ್ನಾಗಿ ಮಾಡುವುದು ಮೋಹನ್ಲಾಲ್ ಅವರ ಪ್ರತಿಭೆ" ಎಂದು ಹೇಳಿದರು.<ref>{{cite web|last=Palicha|first=Paresh C.|title=Review: Pulimurugan is a thrilling experience|url=http://www.rediff.com/movies/report/review-pulimurugan-is-a-thrilling-experience/20161012.htm|work=[[Rediff.com]]|access-date=18 November 2016|date=12 October 2016|archive-url=https://web.archive.org/web/20161118155436/http://www.rediff.com/movies/report/review-pulimurugan-is-a-thrilling-experience/20161012.htm|archive-date=18 November 2016|url-status=live}}</ref> ಮುಂದಿನ ವರ್ಷ ೨೦೧೭ ರಲ್ಲಿ, ಅವರು 'ಮುಂತಿರಿವಳ್ಳಿಕಲ್ ತಾಲಿರ್ಕ್ಕುಂಬೋಲ್' (೨೦೧೬) ನಲ್ಲಿ ನಟಿಸಿದರು. ಇದು ಬಾಕ್ಸ್ ಆಫೀಸ್ನಲ್ಲಿ ೫೦ ಕೋಟಿ ಗಳಿಸಿತು.<ref name="top5"/> ನಂತರ ಅವರು ಮೇಜರ್ ರವಿ ನಿರ್ದೇಶನದ '೧೯೭೧: ಬಿಯಾಂಡ್ ಬಾರ್ಡರ್ಸ್' ನಲ್ಲಿ ಕಾಣಿಸಿಕೊಂಡರು. ಇದು ೧೯೭೧ ರ ಭಾರತ-ಪಾಕಿಸ್ತಾನ ಯುದ್ಧವನ್ನು ಆಧರಿಸಿದೆ.<ref>{{cite news|last=Sidhardhan|first=Sanjith|title=Mohanlal is a busy bee|url=http://timesofindia.indiatimes.com/entertainment/malayalam/movies/news/Nikki-to-play-a-Tamil-belle-in-Major-Ravis-war-drama/articleshow/55923840.cms|access-date=18 January 2017|work=[[The Times of India]]|date=12 December 2016}}</ref> ಅವರು ಕರ್ನಲ್ ಮಹಾದೇವನ್ ಮತ್ತು ಮೇಜರ್ ಸಹದೇವನ್ ಅವರ ದ್ವಿಪಾತ್ರಗಳನ್ನು ನಿರ್ವಹಿಸಿದರು.<ref>{{cite news|last=Upadhyaya|first=Prakash|title=Rockline Venkatesh ventures into Malayalam; to produce Mohanlal's next film|url=http://www.ibtimes.co.in/rockline-venkatesh-ventures-into-malayalam-produce-mohanlals-next-film-713760|access-date=5 February 2017|work=[[International Business Times]]|date=27 January 2017}}</ref> ಅವರು ನಟಿಸಿದ ಮುಂದಿನ ಚಿತ್ರವು ಲಾಲ್ ಜೋಸ್ ನಿರ್ದೇಶನದ 'ವೇಲಿಪದಿಂಟೆ ಪುಸ್ತಕಂ' ಆಗಿದ್ದು, ಇದು ಅವರ ಮೊದಲ ಸಹಯೋಗವಾಗಿದೆ.<ref>{{cite news|last=Mishra|first=Nivedita|title=From Baahubali's Prabhas to Mersal's Vijay, these south stars were the newsmakers in 2017|url=https://www.hindustantimes.com/regional-movies/from-baahubali-s-prabhas-to-mersal-s-vijay-these-south-stars-were-the-newsmakers-in-2017/story-0YgCfdolIM7LoTzfvlXSJL.html|access-date=28 August 2019|work=[[Hindustan Times]]|date=28 December 2017|archive-date=28 August 2019|archive-url=https://web.archive.org/web/20190828073547/https://www.hindustantimes.com/regional-movies/from-baahubali-s-prabhas-to-mersal-s-vijay-these-south-stars-were-the-newsmakers-in-2017/story-0YgCfdolIM7LoTzfvlXSJL.html|url-status=live}}</ref> ನಂತರ ಬಿ. ಉನ್ನಿಕೃಷ್ಣನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ವಿಲನ್' ಬಂದಿತು.<ref>{{cite news|last=Soman|first=Deepa|title=Mohanlal to be the lead in B Unnikrishnan's next film too!|url=https://timesofindia.indiatimes.com/entertainment/malayalam/movies/news/Mohanlal-to-be-the-lead-in-B-Unnikrishnans-next-film-too/articleshow/35440215.cms|access-date=28 April 2018|work=[[The Times of India]]|date=22 May 2014}}</ref> ಇದು ಆ ವರ್ಷದ ಅವರ ಕೊನೆಯ ಬಿಡುಗಡೆಯಾಗಿದ್ದು, ಅವರ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಒಂದಾಯಿತು.<ref>{{cite news|author=Speed News Desk|title=Kerala Box Office: Mohanlal's Villain had a humongous opening weekend, emerges 3rd all-time opener after Baahubali 2 and Pulimurugan|url=http://www.catchnews.com/regional-cinema/kerala-box-office-mohanlal-s-villain-had-a-humongous-opening-weekend-emerges-3rd-all-time-opener-after-baahubali-2-and-pulimurugan-87449.html|access-date=4 November 2017|work=Catch News|date=30 October 2017|url-status=live|archive-url=https://web.archive.org/web/20171107011529/http://www.catchnews.com/regional-cinema/kerala-box-office-mohanlal-s-villain-had-a-humongous-opening-weekend-emerges-3rd-all-time-opener-after-baahubali-2-and-pulimurugan-87449.html|archive-date=7 November 2017|df=dmy-all}}</ref><ref>{{cite web|author=Forbes India|title=Mohanlal: Strong and steady|url=http://www.forbesindia.com/article/2017-celebrity-100/mohanlal-strong-and-steady/49033/1|work=[[Forbes India]]|date=1 January 2018}}</ref>
೨೦೧೮ ರಲ್ಲಿ, ಮೋಹನ್ಲಾಲ್ 'ಆದಿ' ಮತ್ತು 'ಕಾಯಂಕುಲಂ ಕೊಚುನ್ನಿ' ಯಲ್ಲಿ ಅತಿಥಿ ಪಾತ್ರಗಳನ್ನು ಮಾಡಿದರು. ಅಲ್ಲಿ ಅವರು ಕೊಚುನ್ನಿಯ ಸಮಕಾಲೀನ ಕಳ್ಳ ಇತ್ತಿಕ್ಕರ ಪಕ್ಕಿ ಪಾತ್ರವನ್ನು ನಿರ್ವಹಿಸಿದರು.<ref>{{cite news|author=Express Web Desk|title=Mohanlal on Aadhi: Pranav has done a good job|url=http://indianexpress.com/article/entertainment/malayalam/mohanlal-on-aadhi-pranav-has-done-a-good-job-5043453/|access-date=30 January 2018|work=[[The Indian Express]]|date=29 January 2018|archive-url=https://web.archive.org/web/20180129115528/http://indianexpress.com/article/entertainment/malayalam/mohanlal-on-aadhi-pranav-has-done-a-good-job-5043453/|archive-date=29 January 2018|url-status=live}}</ref><ref>{{cite news|author=Onmanorama staff|title=Mohanlal joins Nivin Pauly's 'Kayamkulam Kochunni,' Rosshan reveals role|url=http://english.manoramaonline.com/entertainment/entertainment-news/2018/01/09/mohanlal-joins-nivin-paulys-kayamkulam-kochunni-rosshan-reveals-.html|access-date=9 January 2018|work=[[Malayala Manorama]]|date=9 January 2018}}</ref><ref>{{cite news|last=Soman|first=Deepa|title=Mohanlal joins the sets of Kayamkulam Kochunni|url=https://timesofindia.indiatimes.com/entertainment/malayalam/movies/news/mohanlal-joins-the-sets-of-kayamkulam-kochunni/articleshow/62916059.cms|access-date=15 February 2018|work=[[The Times of India]]|date=14 February 2018}}</ref> ಅವರ ಮುಂದಿನ ಎರಡು ಬಿಡುಗಡೆಗಳಾದ 'ನೀರಳಿ' ಮತ್ತು 'ಡ್ರಾಮಾ' ಬಾಕ್ಸ್ ಆಫೀಸ್ನಲ್ಲಿ ವಿಫಲವಾದವು.<ref>{{cite news |last=Sidhardhan |first=Sanjith |title=Mohanlal teams up with Bollywood filmmaker for a thriller |url=https://timesofindia.indiatimes.com/entertainment/malayalam/movies/news/mohanlal-teams-up-with-bollywood-filmmaker-for-a-thriller/articleshow/60938490.cms |access-date=28 January 2018 |work=[[The Times of India]] |date=4 October 2017}}</ref><ref>{{cite news |last=Kumar R. |first=Manoj |title=Mohanlal promises a lot of action in his next film, see photo |url=http://indianexpress.com/article/entertainment/malayalam/mohanlal-ajoy-varma-5035695/ |access-date=28 January 2018 |work=[[The Indian Express]] |date=23 January 2018}}</ref><ref>{{cite news|title=Ranjith's 'Drama' starring Mohanlal to release on November 1|url=https://www.newindianexpress.com/entertainment/malayalam/2018/sep/11/ranjiths-drama-starring-mohanlal-to-release-on-november-1-1870225.html|access-date=24 September 2018|work=[[The New Indian Express]]|agency=Express News Service|date=11 September 2018}}</ref> ನಂತರ ಮೋಹನ್ಲಾಲ್ ವಿ.ಎ. ಶ್ರೀಕುಮಾರ್ ಮೇನನ್ ನಿರ್ದೇಶನದ ಕಾಲ್ಪನಿಕ ನಾಟಕ ಚಿತ್ರ 'ಒಡಿಯಾನ್' ನಲ್ಲಿ ನಟಿಸಿದರು. ಇದು ಒಡಿಯಾನ್ ಕುಲದ ದಂತಕಥೆಯನ್ನು ಆಧರಿಸಿದೆ. ಈ ಚಿತ್ರವು ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು ಮತ್ತು ೨೦೧೮ ರಲ್ಲಿ ಅವರ ಏಕೈಕ ಬಾಕ್ಸ್ ಆಫೀಸ್ ಯಶಸ್ಸು.<ref>{{cite news|author=<!--staff writer-->|title=Odiyan: Mohanlal shoots in Varanasi, tells us more about his character Manikyan. Watch video|url=https://www.hindustantimes.com/regional-movies/odiyan-mohanlal-shoots-in-varanasi-tells-us-more-about-his-character-manikyan-watch-video/story-KRL8vkUip0HFwYTcpXovyH.html|access-date=15 November 2018|work=[[Hindustan Times]]|date=7 September 2017}}</ref><ref>{{cite news|last=M. K.|first=Surendhar|title=Odiyan sets industry record with Rs 21.5 cr domestic opening weekend total; 2.0 stacks up more records |url=https://www.firstpost.com/entertainment/odiyan-sets-industry-record-with-rs-21-5-cr-domestic-opening-weekend-total-2-0-stacks-up-more-records-5751571.html|access-date=19 December 2018|work=Firstpost|date=19 December 2018}}</ref> ಮೋಹನ್ಲಾಲ್ ೨೦೧೯ ರ ತಮ್ಮ ಮೊದಲ ಚಿತ್ರ 'ಲೂಸಿಫರ್' ನಲ್ಲಿ ಅಪರಾಧ ಸಿಂಡಿಕೇಟ್ ನಾಯಕನ ಪಾತ್ರವನ್ನು ನಿರ್ವಹಿಸಿದರು. ಇದನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದಾರೆ.<ref>{{cite news|author=Express Web Desk|title=Mohanlal-Prithviraj film Lucifer goes on floor|url=https://indianexpress.com/article/entertainment/malayalam/mohanlal-prithviraj-film-lucifer-goes-on-floor-5262195/|access-date=25 September 2018|work=The Indian Express|date=16 July 2018}}</ref> ಲಕ್ಷಣಾ ಎನ್. ಪಾಲಾತ್ ಅವರು 'ಇಂಡಿಯಾ ಟುಡೇ' ನಲ್ಲಿ " 'ಲೂಸಿಫರ್' ಮೋಹನ್ಲಾಲ್ ಫ್ಯಾನ್ಫಿಕ್ಷನ್ ಪರದೆಯ ಮೇಲೆ ಜೀವಂತಗೊಳಿಸಿದಂತಿದೆ. ನೀವು ಮೋಹನ್ಲಾಲ್ ಅವರನ್ನು ನಂಬಿದರೆ, ಅದಕ್ಕೆ ಹೋಗಿ." ಎಂದು ಹೇಳಿದರು.<ref>{{Cite magazine|author=Lakshana N. Palat |date=March 29, 2019 |title=Lucifer Movie Review: New Prithviraj film is for diehard Mohanlal fans|url=https://www.indiatoday.in/movies/reviews/story/lucifer-movie-review-new-prithviraj-film-is-for-diehard-mohanlal-fans-1489097-2019-03-29|access-date=2021-11-24|magazine=India Today|language=en}}</ref> ಆಲ್ ಟೈಮ್ನ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾದ ಇದು ೨೦೦ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿತು, ಇದರಲ್ಲಿ ಬಾಕ್ಸ್ ಆಫೀಸ್ ಸಂಗ್ರಹಗಳು ಮತ್ತು ಅದರ ಉಪಗ್ರಹ ಹಕ್ಕುಗಳು, ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳು ಮತ್ತು ಇತರ ಭಾಷೆಗಳಲ್ಲಿ ಟಿವಿ ಹಕ್ಕುಗಳ ಮಾರಾಟದಿಂದ ಬಂದ ಗಳಿಕೆಗಳು ಸೇರಿವೆ.<ref>{{Cite web|url=https://indianexpress.com/article/entertainment/malayalam/lucifer-box-office-mohanlal-film-collects-rs-100-crore-worldwide-5665523/|title=Lucifer box office: Mohanlal film collects Rs 100 crore worldwide|date=8 April 2019|access-date=30 April 2019|archive-url=https://web.archive.org/web/20190409131841/https://indianexpress.com/article/entertainment/malayalam/lucifer-box-office-mohanlal-film-collects-rs-100-crore-worldwide-5665523/|archive-date=9 April 2019|url-status=live}}</ref><ref>{{Cite web|date=4 June 2019|title=Mohanlal's Lucifer storms into Rs 200 crore club, first for Malayalam cinema|url=https://www.hindustantimes.com/regional-movies/mohanlal-s-lucifer-storms-into-rs-200-crore-club-first-for-malayalam-cinema/story-vTm7JXaAdz0FWFTllE4n2I.html|access-date=16 July 2021|website=Hindustan Times|language=en|archive-date=11 June 2019|archive-url=https://web.archive.org/web/20190611022057/https://www.hindustantimes.com/regional-movies/mohanlal-s-lucifer-storms-into-rs-200-crore-club-first-for-malayalam-cinema/story-vTm7JXaAdz0FWFTllE4n2I.html|url-status=live}}</ref> ನಂತರ ಅವರು 'ಇಟ್ಟಿಮಾನಿ: ಮೇಡ್ ಇನ್ ಚೈನಾ' ನಲ್ಲಿ ಕಾಣಿಸಿಕೊಂಡರು, ಇದು ಮಧ್ಯಮ ಯಶಸ್ಸು ಗಳಿಸಿತು.<ref>{{cite news|last=Pillai|first=Sreedhar|title=Ittymaani: Made In China, Love Action Drama, Brothers Day, Finals: Why Onam 2019 releases failed at the box-office|url=https://www.firstpost.com/entertainment/ittymaani-made-in-china-love-action-drama-brothers-day-finals-why-onam-2019-releases-failed-at-the-box-office-7341581.html|access-date=29 September 2019|work=[[Firstpost]]|date=15 September 2019}}</ref> ನಂತರ ಅವರು ತಮಿಳು ಚಿತ್ರ 'ಕಾಪ್ಪಾನ್' ನಲ್ಲಿ ಪ್ರಧಾನ ಮಂತ್ರಿಯ ಪಾತ್ರವನ್ನು ನಿರ್ವಹಿಸಿದರು, ಇದು ವಾಣಿಜ್ಯ ಯಶಸ್ಸು ಗಳಿಸಿತು.<ref>{{Cite web|url=https://www.firstpost.com/entertainment/kaappaan-tops-tn-kerala-box-office-in-opening-weekend-gaddalakonda-ganesh-earns-rs-25-cr-globally-7398541.html|title=Mohanlal starrer Kaappaan tops TN, Kerala box office in opening weekend; Gaddalakonda Ganesh earns Rs 55 cr globally|date=2019-09-25|website=Firstpost|language=en|access-date=2020-04-19|archive-date=19 August 2020|archive-url=https://web.archive.org/web/20200819131706/https://www.firstpost.com/entertainment/kaappaan-tops-tn-kerala-box-office-in-opening-weekend-gaddalakonda-ganesh-earns-rs-25-cr-globally-7398541.html|url-status=live}}</ref><ref>{{Cite web|url=https://www.news18.com/news/movies/kaappaan-movie-review-despite-stellar-star-cast-suriya-mohanlal-starrer-loses-focus-2316599.html|title=Kaappaan Movie Review: Despite Stellar Star Cast, Mohanlal-Suriya Starrer Loses Focus|website=News18|date=2019-09-20|access-date=2019-10-26|archive-date=26 October 2019|archive-url=https://web.archive.org/web/20191026175438/https://www.news18.com/news/movies/kaappaan-movie-review-despite-stellar-star-cast-suriya-mohanlal-starrer-loses-focus-2316599.html|url-status=live}}</ref> ೨೦೨೦ ರಲ್ಲಿ ಅವರ ಏಕೈಕ ಚಿತ್ರ 'ಬಿಗ್ ಬ್ರದರ್' ಆಗಿದ್ದು, ಅದರಲ್ಲಿ ಅವರು ಜೈಲಿನಿಂದ ಬಿಡುಗಡೆಯಾದ ನಂತರ ತಮ್ಮ ಕುಟುಂಬಕ್ಕೆ ಮರಳುವ ಮಾಜಿ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು.<ref>{{cite news|title=Mohanlal and Siddique to team up for project titled 'Big Brother'|url=https://www.thenewsminute.com/article/mohanlal-and-siddique-team-project-titled-big-brother-82520|access-date=26 May 2019|work=[[The News Minute]]|date=5 June 2018|archive-url=https://web.archive.org/web/20190526181945/https://www.thenewsminute.com/article/mohanlal-and-siddique-team-project-titled-big-brother-82520|archive-date=26 May 2019|url-status=live}}</ref><ref>{{cite news|last=Sidhardhan|first=Sanjith|title=Mohanlal, Siddique to team up for an action-comedy|url=https://timesofindia.indiatimes.com/entertainment/malayalam/movies/news/mohanlal-siddique-to-team-up-for-an-action-comedy/articleshow/64435104.cms|access-date=26 May 2019|work=[[The Times of India]]|date=3 June 2018|archive-date=11 October 2023|archive-url=https://web.archive.org/web/20231011091015/https://timesofindia.indiatimes.com/entertainment/malayalam/movies/news/mohanlal-siddique-to-team-up-for-an-action-comedy/articleshow/64435104.cms|url-status=live}}</ref>
ಮೋಹನ್ಲಾಲ್ ೨೦೨೧ ರಲ್ಲಿ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಜೀತು ಜೋಸೆಫ್ ನಿರ್ದೇಶನದ ಅನುಕ್ರಮ ಚಿತ್ರ 'ದೃಶ್ಯಂ ೨' ನಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರು.<ref>{{Cite web|date=6 February 2021|title=Drishyam 2 trailer: Ghost from the past comes to haunt Mohanlal|url=https://indianexpress.com/article/entertainment/malayalam/drishyam-2-trailer-the-ghost-from-the-past-comes-to-haunt-mohanlal-7177482/|access-date=8 February 2021|website=The Indian Express|language=en|archive-date=27 February 2021|archive-url=https://web.archive.org/web/20210227153724/https://indianexpress.com/article/entertainment/malayalam/drishyam-2-trailer-the-ghost-from-the-past-comes-to-haunt-mohanlal-7177482/|url-status=live}}</ref> ಹರಿಚರನ್ ಪುದಿಪ್ಪೇಡಿ ಅವರು "ಮೋಹನ್ಲಾಲ್ ಜಾರ್ಜ್ಕುಟ್ಟಿಯ ಪಾತ್ರಕ್ಕೆ ಸಂಯಮದ ಅಭಿನಯವನ್ನು ತರುತ್ತಾರೆ. ಈ ಬಾರಿ ಅವರು ಹೆಚ್ಚು ಶಾಂತ ವ್ಯಕ್ತಿಯಂತೆ ಕಾಣುತ್ತಾರೆ ಆದರೆ ಅವರ ಮನಸ್ಸಿನಲ್ಲಿ ಏನು ಕುದಿಯುತ್ತಿದೆ ಎಂಬುದರ ಬಗ್ಗೆ ಯಾರಿಗೂ ಕಲ್ಪನೆಯಿಲ್ಲ." ಎಂದು ಗಮನಿಸಿದರು.<ref>{{Cite news |last=Pudippedi |first=Haricharan |date=19 February 2021 |title=Drishyam 2 review: Mohanlal, Jeethu Joseph reunite for one of the best sequels ever |work=[[Hindustan Times]] |url=https://www.hindustantimes.com/entertainment/others/drishyam-2-review-mohanlal-jeethu-joseph-reunite-for-one-of-the-best-sequels-ever-101613707672069.html |access-date=19 February 2021 |archive-date=19 February 2021 |archive-url=https://web.archive.org/web/20210219042754/https://www.hindustantimes.com/entertainment/others/drishyam-2-review-mohanlal-jeethu-joseph-reunite-for-one-of-the-best-sequels-ever-101613707672069.html |url-status=live }}</ref> ನಂತರ ಅವರು 'ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ' ನಲ್ಲಿ ಮುಸ್ಲಿಂ ಯೋಧ ಕುಂಜಾಲಿ ಮರಕ್ಕರ್ IV ಪಾತ್ರವನ್ನು ನಿರ್ವಹಿಸಿದರು. ಇದು ಬಾಕ್ಸ್ ಆಫೀಸ್ನಲ್ಲಿ ಕಡಿಮೆ ಪ್ರದರ್ಶನ ನೀಡಿತು. ಆದಾಗ್ಯೂ, ಇದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.<ref>{{cite web |title=Box Office: Analyzing theatrical performance of Mohanlal's post-pandemic movies, Marakkar to L2 Empuraan |url=https://www.pinkvilla.com/entertainment/box-office/box-office-analysing-theatrical-performance-of-mohanlals-post-pandemic-movies-from-marakkar-to-l2-empuraan-1384093 |website=PINKVILLA |access-date=26 April 2025 |language=en |date=23 April 2025}}</ref><ref>{{cite news|last=Punnoose|first=Aby|date=11 November 2021|title=67th National Film Awards: Marakkar: Lion of the Arabian Sea wins Best Feature Film at National Film Awards|url=https://timesofindia.indiatimes.com/entertainment/malayalam/movies/news/67th-national-film-awards-marakkar-arabikkadalinte-simham-wins-the-best-feature-film-award/articleshow/81633289.cms|access-date=11 November 2021|website=Times of India|language=en|archive-date=11 November 2021|archive-url=https://web.archive.org/web/20211111163303/https://timesofindia.indiatimes.com/entertainment/malayalam/movies/news/67th-national-film-awards-marakkar-arabikkadalinte-simham-wins-the-best-feature-film-award/articleshow/81633289.cms|url-status=live}}</ref> ೨೦೨೨ ರಲ್ಲಿ ಅವರ ಮೊದಲ ಚಿತ್ರ 'ಬ್ರೋ ಡ್ಯಾಡಿ' ಆಗಿದ್ದು, ಅದರಲ್ಲಿ ಅವರು ಪೃಥ್ವಿರಾಜ್ ಸುಕುಮಾರನ್ ಅವರಿಗೆ ಸಂತೋಷದ ತಂದೆಯ ಪಾತ್ರವನ್ನು ನಿರ್ವಹಿಸಿದರು.<ref>{{cite news |last=Palisetty |first=Ramya |title=Prithviraj Sukumaran announces his second directorial Bro Daddy with Mohanlal |url=https://www.indiatoday.in/movies/regional-cinema/story/prithviraj-sukumaran-announces-his-second-directorial-bro-daddy-with-mohanlal-1816663-2021-06-18 |access-date=15 July 2021 |work=[[India Today]] |date=18 June 2021 |archive-date=19 June 2021 |archive-url=https://web.archive.org/web/20210619201702/https://www.indiatoday.in/movies/regional-cinema/story/prithviraj-sukumaran-announces-his-second-directorial-bro-daddy-with-mohanlal-1816663-2021-06-18 |url-status=live }}</ref> ಜನನಿ ಕೆ. "ಮೋಹನ್ಲಾಲ್ ಈ ಚಿತ್ರದಲ್ಲಿ ತುಂಬಾ ಮಜಾ ಮಾಡಿದ್ದಾರೆ. ಅವರ ಸೂಕ್ಷ್ಮ ಅಭಿವ್ಯಕ್ತಿಗಳು ಮತ್ತು ಅವರ ಹಾಸ್ಯ ಸಮಯವು ದೋಷರಹಿತವಾಗಿದೆ." ಎಂದು ಹೇಳಿದರು.<ref>{{cite news |last=K. |first=Janani |title=Bro Daddy Movie Review: Mohanlal, Prithviraj's fun family drama is not Badhaai Ho, but better |url=https://www.indiatoday.in/movies/regional-cinema/story/bro-daddy-movie-review-mohanlal-prithviraj-fun-family-drama-is-full-of-life-1904564-2022-01-26 |access-date=26 January 2022 |work=[[India Today]] |date=26 January 2022 |archive-date=26 January 2022 |archive-url=https://web.archive.org/web/20220126070054/https://www.indiatoday.in/movies/regional-cinema/story/bro-daddy-movie-review-mohanlal-prithviraj-fun-family-drama-is-full-of-life-1904564-2022-01-26 |url-status=live }}</ref> ಅವರ ಮುಂದಿನ ಎರಡು ಬಿಡುಗಡೆಗಳಾದ 'ಆರಾಟ್ಟು' ಮತ್ತು 'ಮಾನ್ಸ್ಟರ್' ಬಾಕ್ಸ್ ಆಫೀಸ್ ವಿಫಲಗಳಾಗಿದ್ದವು.<ref>{{Cite web |title='Thank You', 'Radhe Shyam', 'Aaraattu': A Look At The Biggest Flops Of South Cinema - Films That Fizzled Out |url=https://economictimes.indiatimes.com/magazines/panache/thank-you-radhe-shyam-liger-a-look-at-the-biggest-flops-of-south-cinema/aaraattu/slideshow/95660122.cms?from=mdr |access-date=2025-01-20 |website=The Economic Times}}</ref><ref>{{cite web |title=Monster box office collection Day 3: Mohanlal's film underperforms on Sunday|url=https://www.indiatoday.in/movies/regional-cinema/story/monster-box-office-collection-day-3-mohanlals-film-underperforms-on-sunday-2288889-2022-10-24|website=[[India Today]]|date=24 October 2022 |access-date=24 October 2022|quote=the film has been having a lukewarm response from the critics and the audiences.}}</ref> ನಂತರ ಅವರು '೧೨ನೇ ಮನುಷ್ಯ' ನಲ್ಲಿ ಕಾಣಿಸಿಕೊಂಡರು, ಇದು ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಡಿಜಿಟಲ್ ಆಗಿ ಬಿಡುಗಡೆಯಾಯಿತು.<ref>{{cite news | url=https://timesofindia.indiatimes.com/web-series/reviews/malayalam/12th-man/ottmoviereview/91669767.cms | title=12th Man Review: A entertaining, delicious whodunnit | website=[[The Times of India]] | last1=Mathews | first1=Anna }}</ref> ೨೦೨೩ ರಲ್ಲಿ, ಮೋಹನ್ಲಾಲ್ ಅವರ ಮೊದಲ ಚಿತ್ರ 'ಅಲೋನ್' ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು.<ref>{{Cite news |date=2023-01-31 |title='Alone' box office collection day 4: Mohanlal starrer stays low, mints only Rs 65 lakhs|work=The Times of India |url=https://timesofindia.indiatimes.com/entertainment/malayalam/movies/news/alone-box-office-collection-day-4-mohanlal-starrer-stays-low-mints-only-rs-68-lakhs/articleshow/97484057.cms}}</ref> ನಂತರ ಅವರು ತಮಿಳು ಚಿತ್ರ 'ಜೈಲರ್' ನಲ್ಲಿ ಅತಿಥಿ ಪಾತ್ರವನ್ನು ಮಾಡಿದರು.<ref name="auto1">{{Cite web |date=6 January 2023 |title=Mohanlal to have a cameo in Rajinikanth's Jailer, fans call it 'iconic moment' |url=https://www.hindustantimes.com/entertainment/tamil-cinema/mohanlal-to-have-a-cameo-in-rajinikanth-s-jailer-fans-call-it-iconic-moment-101672988696266.html |url-status=live |archive-url=https://web.archive.org/web/20230106094648/https://www.hindustantimes.com/entertainment/tamil-cinema/mohanlal-to-have-a-cameo-in-rajinikanth-s-jailer-fans-call-it-iconic-moment-101672988696266.html |archive-date=6 January 2023 |access-date=6 January 2023 |website=[[Hindustan Times]]}}</ref> ಮೋಹನ್ಲಾಲ್ ನಂತರ 'ನೇರು' ನಲ್ಲಿ ವಕೀಲನ ಪಾತ್ರವನ್ನು ನಿರ್ವಹಿಸಿದರು, ಇದು ಆ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು.<ref>{{cite news|last=Chakraborty|first=Saikat|title=Mohanlal teams up with Drishyam director Jeethu Joseph for legal drama Neru|url=https://www.telegraphindia.com/entertainment/mohanlal-teams-up-with-drishyam-director-jeethu-joseph-for-legal-drama-neru/cid/1958941|access-date=26 November 2023|work=[[Telegraph India]]|date=14 August 2023|archive-date=26 November 2023|archive-url=https://web.archive.org/web/20231126092959/https://www.telegraphindia.com/entertainment/mohanlal-teams-up-with-drishyam-director-jeethu-joseph-for-legal-drama-neru/cid/1958941|url-status=live}}</ref><ref>{{Cite news |date=2024-01-18 |title='Neru' box office collections day 27: Mohanlal's film dominates overseas; mints more than Rs 32 crores |url=https://timesofindia.indiatimes.com/entertainment/malayalam/movies/news/neru-box-office-collections-mohanlals-film-dominates-overseas/articleshow/106949938.cms?from=mdr |access-date=2024-01-21 |work=The Times of India |issn=0971-8257}}</ref> ಎಸ್.ಆರ್. ಪ್ರವೀಣ್ ಅವರು ಮೋಹನ್ಲಾಲ್ "ಸಂಯಮದ ಅಭಿನಯ" ದೊಂದಿಗೆ ಫಾರ್ಮ್ಗೆ ಮರಳಿದ್ದಾರೆ ಎಂದು ಹೇಳಿದರು.<ref>{{cite news|last=Praveen|first=S. R.|title='Neru' movie review: Jeethu Joseph and Mohanlal's courtroom drama almost delivers a cathartic high|url=https://www.thehindu.com/entertainment/movies/neru-movie-review-jeethu-joseph-and-mohanlals-courtroom-drama-almost-delivers-a-cathartic-high/article67661846.ece|access-date=22 December 2023|work=[[The Hindu]]|date=21 December 2023|archive-date=21 December 2023|archive-url=https://web.archive.org/web/20231221135645/https://www.thehindu.com/entertainment/movies/neru-movie-review-jeethu-joseph-and-mohanlals-courtroom-drama-almost-delivers-a-cathartic-high/article67661846.ece|url-status=live}}</ref> ೨೦೨೪ ರಲ್ಲಿ ಅವರ ಎರಡೂ ಚಿತ್ರಗಳು: 'ಮಲೈಕೋಟ್ಟೈ ವಾಲಿಬನ್' ಮತ್ತು 'ಬರೋಜ್ 3D' ಬಾಕ್ಸ್ ಆಫೀಸ್ನಲ್ಲಿ ವಿಫಲವಾದವು, ಇದು ಮೋಹನ್ಲಾಲ್ ಅವರಿಗೆ ವಾಣಿಜ್ಯ ವೈಫಲ್ಯಗಳ ಸರಣಿಗೆ ಕಾರಣವಾಯಿತು.<ref>{{cite web | url=https://indianexpress.com/article/entertainment/malayalam/malaikottai-vaaliban-box-office-collection-day-5-mohanlal-lijo-jose-pellissery-film-hits-a-new-low-9133901/#:~:text=So%20far%2C%20the%20film%20has%20grossed%20Rs%2021.75%20crore%20worldwide.&text=On%20Monday%2C%20Malaikottai%20Vaaliban%20experienced,dipped%20to%2010.35%20per%20cent | title=Malaikottai Vaaliban box office collection Day 5: Mohanlal and Lijo Jose Pellissery's film hits a new low on first Monday; earns 90% less than opening day | date=30 January 2024 }}</ref><ref>{{cite web |access-date=31 December 2024 |title=Mohanlal reacts to Barroz's box office failure after film collects Rs 9 cr in 6 days: 'Not made for the numbers'|url=https://indianexpress.com/article/entertainment/malayalam/mohanlal-reacts-to-barroz-box-office-failure-after-film-collects-rs-9-cr-in-6-days-not-made-for-the-numbers-9752550/ |work=Indian Express|date=30 December 2024|archive-url=https://web.archive.org/web/20250103190259/https://indianexpress.com/article/entertainment/malayalam/mohanlal-reacts-to-barroz-box-office-failure-after-film-collects-rs-9-cr-in-6-days-not-made-for-the-numbers-9752550/|archive-date=3 January 2025|url-status=live}}</ref>
### ಮತ್ತಷ್ಟು ಯಶಸ್ಸು ಮತ್ತು ಪುನರುತ್ಥಾನ (2025–ಪ್ರಸ್ತುತ)
ಮೋಹನ್ಲಾಲ್ ಅವರ ವೃತ್ತಿಜೀವನವು ೨೦೨೫ ರಲ್ಲಿ ಮತ್ತೆ ಚೇತರಿಸಿಕೊಂಡಿತು. ಅವರು ಮೊದಲು 'ಎಲ್೨: ಎಂಪುರಾನ್' ಅನುಕ್ರಮ ಚಿತ್ರದಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರು.<ref>{{Cite news |date=6 October 2023 |title=Mohanlal-Prithviraj film Empuraan starts rolling |url=https://www.newindianexpress.com/entertainment/malayalam/2023/oct/06/mohanlal-prithviraj-film-empuraan-starts-rolling-2621183.html |url-status=live |archive-url=https://web.archive.org/web/20231103160033/https://www.newindianexpress.com/entertainment/malayalam/2023/oct/06/mohanlal-prithviraj-film-empuraan-starts-rolling-2621183.html |archive-date=3 November 2023 |access-date=13 November 2023 |work=[[The New Indian Express]]}}</ref> ಫಸ್ಟ್ಪೋಸ್ಟ್ನ ಗಣೇಶ್ ಆಗ್ಲವ್ ಅವರು "ಮೋಹನ್ಲಾಲ್ ಅದ್ಭುತರಾಗಿರಬೇಕೆಂದು ನಿರೀಕ್ಷಿಸಲಾಗಿದೆ, ಮತ್ತು ಅವರು ಯಾವುದೇ ಸಂದೇಹವಿಲ್ಲದೆ ಅದ್ಭುತರಾಗಿದ್ದಾರೆ. ಅವರು ಸ್ವಾಗ್ ಅನ್ನು ಸುರಿಸುತ್ತಾರೆ ಮತ್ತು ಪ್ರತಿಯೊಂದು ಭಾವನೆಯನ್ನು ಸೂಕ್ಷ್ಮ ಆದರೆ ಪ್ರಭಾವಶಾಲಿ ಮನಸ್ಥಿತಿಯೊಂದಿಗೆ ಸುಂದರವಾಗಿ ವ್ಯಕ್ತಪಡಿಸುತ್ತಾರೆ." ಎಂದು ಗಮನಿಸಿದರು.<ref>{{Cite web |date=27 March 2025 |title=L2: Empuraan movie review: Mohanlal & Prithviraj Sukumaran starrer action-thriller is high on swag, charisma & technical brilliance |url=https://www.firstpost.com/entertainment/l2-empuraan-movie-review-mohanlal-prithviraj-sukumaran-starrer-action-thriller-is-high-on-swag-charisma-technical-brilliance-13874843.html |url-status=live |archive-url=https://web.archive.org/web/20250327085309/https://www.firstpost.com/entertainment/l2-empuraan-movie-review-mohanlal-prithviraj-sukumaran-starrer-action-thriller-is-high-on-swag-charisma-technical-brilliance-13874843.html |archive-date=27 March 2025 |access-date=27 March 2025 |website=Firstpost |language=en-us}}</ref> ಇದು ವಾಣಿಜ್ಯ ಯಶಸ್ಸನ್ನು ಗಳಿಸಿ, ಆ ವರ್ಷದ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು.<ref>{{Cite news |date=29 March 2025 |title=L2 Empuraan worldwide box office collection day 2: Mohanlal film is the fastest Malayalam film to cross ₹100 crore |url=https://www.hindustantimes.com/entertainment/others/l2-empuraan-worldwide-box-office-collection-day-2-mohanlal-film-is-the-fastest-malayalam-film-to-cross-100-crore-101743229690067.html |url-status=live |archive-url=https://web.archive.org/web/20250329081943/https://www.hindustantimes.com/entertainment/others/l2-empuraan-worldwide-box-office-collection-day-2-mohanlal-film-is-the-fastest-malayalam-film-to-cross-100-crore-101743229690067.html |archive-date=29 March 2025 |access-date=2 April 2025 |work=Hindustan Times |language=en-us}}</ref> ನಂತರ ಅವರು 'ತುದಾರುಂ' ನಲ್ಲಿ ಟ್ಯಾಕ್ಸಿ ಚಾಲಕನ ಪಾತ್ರವನ್ನು ನಿರ್ವಹಿಸಿದರು.<ref>{{Cite news |last=India Today Entertainment Desk |date=22 April 2024 |title=Pics: Mohanlal, Shobana reunite for his 360th film with director Tharun Moorthy |url=https://www.indiatoday.in/movies/regional-cinema/story/pics-mohanlal-shobana-reunite-for-his-360th-film-with-director-tharun-moorthy-produced-by-m-renjith-under-rejaputhra-visual-media-2530133-2024-04-22 |url-status=live |archive-url=https://web.archive.org/web/20241203133250/https://www.indiatoday.in/movies/regional-cinema/story/pics-mohanlal-shobana-reunite-for-his-360th-film-with-director-tharun-moorthy-produced-by-m-renjith-under-rejaputhra-visual-media-2530133-2024-04-22 |archive-date=3 December 2024 |access-date=30 November 2024 |work=[[India Today]]}}</ref> ಹಿಂದೂಸ್ತಾನ್ ಟೈಮ್ಸ್ನ ಲತಾ ಶ್ರೀನಿವಾಸನ್ ಅವರು "ಮೋಹನ್ಲಾಲ್ ಅತ್ಯುತ್ತಮ ಸ್ಥಿತಿಯಲ್ಲಿದ್ದಾರೆ ಮತ್ತು ಅವರು ಇರುವ ಪ್ರತಿಯೊಂದು ದೃಶ್ಯವೂ ಅವರು ಎಂಥಾ ಶ್ರೇಷ್ಠ ನಟ ಎಂಬುದನ್ನು ತೋರಿಸುತ್ತದೆ." ಎಂದು ಗಮನಿಸಿದರು.<ref>{{Cite web |last=Srinivasan |first=Latha |date=25 April 2025 |title=Thudarum movie review: A top-form Mohanlal shines in fan boy Tharun Moorthy's gripping directorial |url=https://www.hindustantimes.com/entertainment/others/thudarum-movie-review-a-top-form-mohanlal-shines-in-fan-boy-tharun-moorthys-gripping-directorial-101745582170234.html |access-date=27 April 2025 |website=[[Hindustan Times]]}}</ref> ತುದಾರುಂ ನಂತರ, ಮೋಹನ್ಲಾಲ್ ಸಂದೀಪ್ ಪಾತ್ರವನ್ನು ನಿರ್ವಹಿಸಿದರು. ಅವರು ಹೃದಯ ಕಸಿಗೆ ಒಳಗಾದವರಾಗಿದ್ದು, ತಮ್ಮ ಹೃದಯವನ್ನು ಪಡೆದ ಕರ್ನಲ್ನ ಮಗಳ ನಿಶ್ಚಿತಾರ್ಥಕ್ಕೆ ಹಾಜರಾಗಲು ಒತ್ತಾಯಿಸಲ್ಪಡುತ್ತಾರೆ. ಈ ಚಿತ್ರವು 'ಹೃದಯಪೂರ್ವಂ' ಬಾಕ್ಸ್ ಆಫೀಸ್ ಯಶಸ್ಸು ಗಳಿಸಿತು ಮತ್ತು 'ಎಲ್೨: ಎಂಪುರಾನ್' ಮತ್ತು 'ತುದಾರುಂ' ಜೊತೆಗೆ, 'ಹೃದಯಪೂರ್ವಂ' ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು.<ref>{{Cite web |title=Hridayapoorvam Box Office Collection Day 12: Mohanlal Starrer Is A Success, Set To Beat Officer On Duty! |url=https://www.imdb.com/news/ni65467996/ |access-date=2025-09-21 |website=IMDb |language=en-US}}</ref> ನಂತರ ಅವರು 'ಭಾ ಭಾ ಬಾ' ನಲ್ಲಿ ವಿಸ್ತೃತ ಅತಿಥಿ ಪಾತ್ರವನ್ನು ಮಾಡಿದರು.{{Citation needed|date=March 2026}}
==ಇತರೆ ಯೋಜನೆಗಳು==
=== ರಂಗಭೂಮಿ ಪ್ರದರ್ಶನಗಳು ===
[[File:Acclaimed Malayalam film actor Mohan Lal joined the Territorial Army on July 09, 2009 in the rank of an Honorary Lt. Colonel. The Defence Minister, Shri A. K. Antony is seen greeting Shri Mohan Lal soon after his induction.jpg|thumb|upright|left|alt=Mohanlal in Indian Army Uniform|ಮೋಹನ್ಲಾಲ್ ಅವರು ಭಾರತೀಯ ಟೆರಿಟೋರಿಯಲ್ ಆರ್ಮಿಗೆ ಸೇರ್ಪಡೆಯಾದ ನಂತರ ಭಾರತದ ರಕ್ಷಣಾ ಸಚಿವ ಎ.ಕೆ. ಆ್ಯಂಟೋನಿ ಅವರನ್ನು ಭೇಟಿಯಾಗುತ್ತಿರುವುದು]]
ಮೋಹನ್ಲಾಲ್ ಚಿತ್ರಗಳಿಗೆ ಪ್ರವೇಶಿಸುವ ಮೊದಲು ಹಲವಾರು ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸಿದ್ದರು. ೨೦೦೧ ರಲ್ಲಿ, ಅವರು ಭಾರತೀಯ ಮಹಾಕಾವ್ಯ ಮಹಾಭಾರತದ ಪಾತ್ರವಾದ ಕರ್ಣನ ಪಾತ್ರವನ್ನು ನಿರ್ವಹಿಸಿ ಕವಲಾಂ ನಾರಾಯಣ ಪಣಿಕ್ಕರ್ ನಿರ್ದೇಶನದ ಸಂಸ್ಕೃತ ಭಾಷೆಯ ನಾಟಕ 'ಕರ್ಣಭಾರಂ' ನಲ್ಲಿ ವೃತ್ತಿಪರ ನಾಟಕಕ್ಕೆ ಪಾದಾರ್ಪಣೆ ಮಾಡಿದರು. ಇದು ೨೦೦೧ ರ ಮಾರ್ಚ್ ೨೯ ರಂದು ನ್ಯೂ ಡೆಲ್ಲಿ ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ರಾಷ್ಟ್ರೀಯ ನಾಟಕೋತ್ಸವದ ಭಾಗವಾಗಿ ಪ್ರಥಮ ಪ್ರದರ್ಶನಗೊಂಡಿತು. ಈ ನಾಟಕವು ಕುರುಕ್ಷೇತ್ರ ಯುದ್ಧಕ್ಕೆ ಒಂದು ದಿನ ಮೊದಲು ಕರ್ಣನ ಮಾನಸಿಕ ಸಂಕಟವನ್ನು ಚಿತ್ರಿಸುತ್ತದೆ, ಅವನು ತನ್ನ ಹಿಂದಿನ ಮತ್ತು ತನ್ನ ನಂಬಿಕೆಯ ಬಗ್ಗೆ ಯೋಚಿಸುತ್ತಾನೆ. ಮೋಹನ್ಲಾಲ್ ಹೀಗೆ ಹೇಳಿದರು: "ಕವಲಾಮ್ನ ನಾಟಕವನ್ನು ನಾನು ಮಾಡಿದ ಹವ್ಯಾಸಿ ನಾಟಕಗಳೊಂದಿಗೆ ಹೋಲಿಸಲಾಗುವುದಿಲ್ಲ. ನಾಟಕದಲ್ಲಿ ಇತರ ಪಾತ್ರಗಳಿದ್ದರೂ, ಕಥಾವಸ್ತುವು ಕರ್ಣನ ಸುತ್ತ ಸುತ್ತುತ್ತದೆ. ಇದು ಬಹುತೇಕ ಏಕವ್ಯಕ್ತಿ ಪ್ರದರ್ಶನದಂತಿದೆ. ಕೆಲವು ದೃಶ್ಯಗಳು ನಿಜಕ್ಕೂ ಸ್ಪರ್ಶಿಸುವ ಮತ್ತು ಸವಾಲಿನವು" ಎಂದರು.<ref>{{cite web|url=http://www.rediff.com/entertai/2001/mar/13mohan.htm|title=Mohanlal's new obsession|work=[[Rediff.com]]|last=Jose|first=D.|date=13 March 2001|access-date=12 September 2013|archive-url=https://web.archive.org/web/20170215005226/http://www.rediff.com/entertai/2001/mar/13mohan.htm|archive-date=15 February 2017|url-status=live}}</ref> ಅವರು ಯಾವುದೇ ಸಂಭಾವನೆಯಿಲ್ಲದೆ ಅಭಿನಯಿಸಿದರು: "ನಾನು ಅದರ ಸಂತೋಷಕ್ಕಾಗಿ ಪ್ರದರ್ಶನ ನೀಡಿದೆ... ನಮ್ಮ ಇತಿಹಾಸದ ಮೇಲಿನ ಪ್ರೀತಿಗಾಗಿ".<ref name="rd"/>
'ಕಥಾಯಟ್ಟಂ' ಮೋಹನ್ಲಾಲ್ ಅವರಿಂದ ಪ್ರದರ್ಶಿಸಲ್ಪಟ್ಟ ಪ್ರಸ್ತುತಿಯಾಗಿದ್ದು, ೧೦೦ ವರ್ಷಗಳ ಅವಧಿಯಲ್ಲಿ ಒಯ್ಯಾರತ್ತು ಚಂದು ಮೇನನ್, ಸಿ.ವಿ. ರಾಮನ್ ಪಿಳ್ಳೈ, ಎಸ್.ಕೆ. ಪೊಟ್ಟೆಕ್ಕಟ್ಟ್, ತಕ್ಕಳಿ ಶಿವಶಂಕರ ಪಿಳ್ಳೈ, ಪಿ. ಕೇಸವದೇವ್, ವೈಕಂ ಮುಹಮ್ಮದ್ ಬಷೀರ್, ಉರೂಬ್, ಒ.ವಿ. ವಿಜಯನ್, ಎಂ. ಮುಕುಂದನ್ ಮತ್ತು ಎಂ.ಟಿ. ವಾಸುದೇವನ್ ನಾಯರ್ ಬರೆದ ಹತ್ತು ಮಲಯಾಳಂ ಕಾದಂಬರಿಗಳಿಂದ ಆಯ್ಕೆ ಮಾಡಲಾದ ಹತ್ತು ಶ್ರೇಷ್ಠ ಪಾತ್ರಗಳು ಮತ್ತು ಸಂದರ್ಭಗಳನ್ನು ಪ್ರದರ್ಶಿಸಲಾಗಿದೆ. ಟಿ.ಕೆ. ರಾಜೀವ್ ಕುಮಾರ್ ನಿರ್ದೇಶನದ ಈ ನಾಟಕವು ೨೦೦೩ ರ ನವೆಂಬರ್ ೧ ರಂದು ಕೇರಳ ವಿಶ್ವವಿದ್ಯಾಲಯದ ಸೆನೆಟ್ ಹಾಲ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು ನಂತರ ಕೋಜಿಕ್ಕೋಡ್, ಬೆಂಗಳೂರು, ಚೆನ್ನೈ ಮತ್ತು ದೆಹಲಿಗಳಲ್ಲಿ ಪ್ರದರ್ಶನಗೊಂಡಿತು.<ref>{{cite news|url=http://www.thehindu.com/2003/10/28/stories/2003102807480400.htm|title=Document for rejuvenating Malayalam to be released|work=[[The Hindu]]|date=28 October 2003|archive-url=https://web.archive.org/web/20161205135557/http://www.thehindu.com/2003/10/28/stories/2003102807480400.htm|archive-date=5 December 2016|url-status=dead}}</ref><ref>{{cite news|title=Mohanlal to enact characters from Malayalam literature|url=http://www.thehindubusinessline.com/2004/12/04/stories/2004120402091700.htm|archive-url=https://web.archive.org/web/20090607065324/http://www.thehindubusinessline.com/2004/12/04/stories/2004120402091700.htm|archive-date=7 June 2009|work=[[The Hindu Business Line]]|date=4 December 2004|access-date=9 December 2016|url-status=live}}</ref> ೨೦೦೮ ರಲ್ಲಿ, ಮೋಹನ್ಲಾಲ್ ಮುಕೇಶ್ ಜೊತೆಗೆ 'ಚಾಯಮುಖಿ' ನಲ್ಲಿ ಪ್ರದರ್ಶನ ನೀಡಿದರು. ಇದನ್ನು ಪ್ರಶಾಂತ್ ನಾರಾಯಣನ್ ಬರೆದು ನಿರ್ದೇಶಿಸಿದರು. ಮೋಹನ್ಲಾಲ್ ಮತ್ತು ಮುಕೇಶ್ ಕ್ರಮವಾಗಿ ಮಹಾಭಾರತದ ಪಾತ್ರಗಳಾದ ಭೀಮ ಮತ್ತು ಕೀಚಕ ಪಾತ್ರಗಳನ್ನು ನಿರ್ವಹಿಸಿದರು. ಇದು ನಾಟಕದೊಳಗಿನ ನಾಟಕದ ನಿರೂಪಣಾ ಶೈಲಿಯನ್ನು ಹೊಂದಿತ್ತು. ೨೦೦೮ ರ ಮಾರ್ಚ್ ೧೨ ರಂದು ತ್ರಿಶೂರ್ನ ಲುಲು ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಪ್ರಥಮ ಪ್ರದರ್ಶನಗೊಂಡಿತು,<ref>{{cite news|url=http://www.thehindu.com/todays-paper/tp-national/tp-kerala/mirroring-the-pangs-of-love/article1218835.ece|archive-url=https://web.archive.org/web/20160219140152/http://www.thehindu.com/todays-paper/tp-national/tp-kerala/mirroring-the-pangs-of-love/article1218835.ece|archive-date=19 February 2016|title=Mirroring the pangs of love|work=[[The Hindu]]|date=13 March 2008|access-date=10 December 2016|last=Santhosh|first=K.|url-status=live}}</ref> ಮತ್ತು ನಂತರ ತಿರುವನಂತಪುರ, ಬೆಂಗಳೂರು, ಕೊಲ್ಲಂ, ಕೊಚ್ಚಿ ಮತ್ತು ಕೋಜಿಕ್ಕೋಡ್ಗಳಲ್ಲಿ ಪ್ರದರ್ಶನಗೊಂಡಿತು. 'ದಿ ಹಿಂದೂ' ನ ವಿಮರ್ಶಕರು "'ಚಾಯಮುಖಿ' ಇತ್ತೀಚಿನ ಕಾಲದ ಮಲಯಾಳಂ ರಂಗಭೂಮಿಯ ಅತ್ಯುತ್ತಮ ಕೃತಿ" ಎಂದು ಬರೆದರು.<ref>{{cite news|url=http://www.thehindu.com/todays-paper/tp-national/tp-kerala/chayamukhi-to-be-staged-today/article119204.ece|title='Chayamukhi' to be staged today|work=[[The Hindu]]|last=Kumar|first=P. K. Ajith|date=20 December 2009|access-date=3 February 2015|archive-url=https://web.archive.org/web/20161205135749/http://www.thehindu.com/todays-paper/tp-national/tp-kerala/chayamukhi-to-be-staged-today/article119204.ece|archive-date=5 December 2016|url-status=live}}</ref> ಅದೇ ವರ್ಷ, ಮೋಹನ್ಲಾಲ್ ಶೋಭನಾ ನಿರ್ದೇಶನದ ಇಂಗ್ಲಿಷ್ ಬ್ಯಾಲೆ 'ಮಾಯಾ ರಾವಣ' ನಲ್ಲಿ ಹನುಮಂತನಿಗೆ ಧ್ವನಿ ನೀಡಿದರು.<ref>{{cite news|url=https://www.newindianexpress.com/cities/kochi/2009/may/12/mayaravan-unveiled-48387.html|title=Mayaravan unveiled|work=[[The New Indian Express]]|date=12 May 2009|access-date=10 December 2016|last=Varma|first=Sivadas|archive-url=https://web.archive.org/web/20151224105226/http://www.newindianexpress.com/cities/kochi/article117561.ece|archive-date=24 December 2015|url-status=live}}</ref>
೨೦೧೪ ರಲ್ಲಿ, ಮೋಹನ್ಲಾಲ್ ಮತ್ತು ಸಂಗೀತಗಾರ ರತೀಶ್ ವೇಗ ಅವರು ಲಾಲಿಸಮ್ - ದಿ ಲಾಲ್ ಎಫೆಕ್ಟ್ ಎಂಬ ಸಂಗೀತ ತಂಡವನ್ನು ರಚಿಸಿದರು.<ref>{{cite news|url=https://www.newindianexpress.com/states/kerala/2014/nov/05/cult-lalisom-set-to-rock-lalettan-fans-679003.html|title=Cult Lalisom Set to Rock Lalettan Fans|work=[[The New Indian Express]]|agency=Express News Service|archive-url=https://web.archive.org/web/20161205142519/http://www.newindianexpress.com/states/kerala/2014/nov/05/Cult-Lalisom-Set-to-Rock-Lalettan-Fans-679003.html|archive-date=5 December 2016|url-status=live}}</ref> ಇದರ ಮೊದಲ ಪ್ರದರ್ಶನವು ೨೦೧೫ ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿತ್ತು. ಆರಂಭದಲ್ಲಿ ೧.೬೩ ಕೋಟಿ ರೂಪಾಯಿ ಶುಲ್ಕ ವಿಧಿಸಿದ್ದಕ್ಕಾಗಿ ಮತ್ತು ನಂತರ ಲಿಪ್-ಸಿಂಕ್ ಮಾಡಿದ್ದಕ್ಕಾಗಿ ಈ ತಂಡವು ಸಾಮಾಜಿಕ ಮಾಧ್ಯಮದಿಂದ ಟೀಕೆಗೆ ಗುರಿಯಾಯಿತು.<ref>{{cite news|url=http://www.ndtv.com/kerala-news/under-social-media-pressure-actor-mohanlal-offers-to-give-back-national-games-performance-money-736535|title=Under Social Media Pressure, Actor Mohanlal Offers to Return National Games Performance Fee|work=[[NDTV]]|last=Koshy|first=Sneha Mary|date=3 February 2015|access-date=15 February 2015|archive-url=https://web.archive.org/web/20161205143154/http://www.ndtv.com/kerala-news/under-social-media-pressure-actor-mohanlal-offers-to-give-back-national-games-performance-money-736535|archive-date=5 December 2016|url-status=live}}</ref> ಟೀಕೆಯ ನಂತರ, ಮೋಹನ್ಲಾಲ್ ಆ ಮೊತ್ತವನ್ನು ಸರ್ಕಾರಕ್ಕೆ ಹಿಂದಿರುಗಿಸಿದರು, ಆದರೆ ಸರ್ಕಾರವು ನಿರಾಕರಿಸಿತು, ಏಕೆಂದರೆ ಸರ್ಕಾರದ ನೈತಿಕತೆಯು ಅವರಿಂದ ಹಣವನ್ನು ಮರಳಿ ಪಡೆಯಲು ಅನುಮತಿಸುವುದಿಲ್ಲ ಮತ್ತು ಮೋಹನ್ಲಾಲ್ ಅವರು ಸ್ವೀಕರಿಸಿದ ಮೊತ್ತದಿಂದ ವೈಯಕ್ತಿಕವಾಗಿ ಲಾಭ ಪಡೆಯಲಿಲ್ಲ, ಏಕೆಂದರೆ ಅದು ವೇದಿಕೆಯ ವೆಚ್ಚಗಳು ಮತ್ತು ಕಲಾವಿದರಿಗೆ ಸಂಭಾವನೆಯನ್ನು ಪೂರೈಸಲು ಉದ್ದೇಶಿಸಲಾಗಿತ್ತು.<ref>{{cite news|url=http://www.thehindu.com/sport/govt-rejects-mohanlals-offer-to-return-money/article6856750.ece|title=Govt rejects Mohanlal's offer to return money|agency=[[Press Trust of India]]|date=4 February 2015|work=[[The Hindu]]|access-date=6 February 2015|archive-url=https://web.archive.org/web/20161205144127/http://www.thehindu.com/sport/govt-rejects-mohanlals-offer-to-return-money/article6856750.ece|archive-date=5 December 2016|url-status=live}}</ref> ಅದರ ಹೊರತಾಗಿಯೂ, ಮೋಹನ್ಲಾಲ್ ಅವರು ಕಳುಹಿಸಿದ ಹಣವನ್ನು ಹಿಂತೆಗೆದುಕೊಳ್ಳಲಿಲ್ಲ.<ref>{{cite news|title=Lalisom fiasco: Mohanlal refuses to take back remuneration of Rs 1.63 crore|url=http://www.dnaindia.com/entertainment/report-lalisom-fiasco-mohanlal-refuses-to-take-back-remuneration-of-rs-163-crore-2058887|access-date=23 July 2017|work=[[Daily News and Analysis]]|agency=[[Press Trust of India]]|date=7 February 2015|archive-url=https://web.archive.org/web/20171204122424/http://www.dnaindia.com/entertainment/report-lalisom-fiasco-mohanlal-refuses-to-take-back-remuneration-of-rs-163-crore-2058887|archive-date=4 December 2017|url-status=live}}</ref>
೨೦೧೫ ರಲ್ಲಿ, ಅವರು ಮುಕೇಶ್ ಜೊತೆ ಮತ್ತೊಮ್ಮೆ 'ನಾಗ' ಗಾಗಿ ಸಹಕರಿಸಿದರು, ಆದರೆ ಈ ಬಾರಿ ನಿರೂಪಕರಾಗಿ. ಗಿರೀಶ್ ಕಾರ್ನಾಡ್ ಅವರ ಕನ್ನಡ ನಾಟಕ 'ನಾಗಮಂಡಲ'ವನ್ನು ಆಧರಿಸಿದ ಈ ನಾಟಕವನ್ನು ಸುವೀರನ್ ನಿರ್ದೇಶಿಸಿದ್ದಾರೆ. 'ನಾಗ' ಪುರಾಣ, ಮೂಢನಂಬಿಕೆ, ವಾಸ್ತವ ಮತ್ತು ಫ್ಯಾಂಟಸಿಯ ಸಂಯೋಜನೆಯಾಗಿದೆ. ೨೦೧೫ ರ ಆಗಸ್ಟ್ ೯ ರಂದು ಸೇಂಟ್ ಜಾರ್ಜ್ ಚರ್ಚ್, ಕಳಡಿಯ ಪ್ಯಾರಿಷ್ ಹಾಲ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು.<ref>{{cite news|url=http://www.newindianexpress.com/cities/kochi/Mohanlal-Mukesh-to-Set-Stage-Afire-with-Naga/2015/08/08/article2963127.ece | title=Mohanlal, Mukesh to Set Stage Afire with 'Naga'|work=[[The New Indian Express]]|date=8 August 2015|access-date=10 December 2016|last=Kallungal|first=Dhinesh|archive-url=https://web.archive.org/web/20151222083204/http://www.newindianexpress.com/cities/kochi/Mohanlal-Mukesh-to-Set-Stage-Afire-with-Naga/2015/08/08/article2963127.ece|archive-date=22 December 2015|url-status=dead}}</ref>
### ಸದ್ಭಾವನಾ ದೂತ ಮತ್ತು ಬ್ರಾಂಡ್ ರಾಯಭಾರಿ
ಮೋಹನ್ಲಾಲ್ ಸರ್ಕಾರ ಮತ್ತು ಇತರ ಲಾಭರಹಿತ ಸಂಸ್ಥೆಗಳ ಸದ್ಭಾವನಾ ದೂತರಾಗಿದ್ದಾರೆ, ಮುಖ್ಯವಾಗಿ ಸಾರ್ವಜನಿಕ ಸೇವಾ ಜಾಹೀರಾತುಗಳು ಮತ್ತು ಮಾನವೀಯ ಕಾರ್ಯಗಳಿಗಾಗಿ. ೨೦೦೭ ರ ಮಾರ್ಚ್ನಲ್ಲಿ, ಕೇರಳ ಏಡ್ಸ್ ನಿಯಂತ್ರಣ ಸೊಸೈಟಿಯು ಎಚ್ಐವಿ/ಏಡ್ಸ್ ಜಾಗೃತಿ ಅಭಿಯಾನದ ಸದ್ಭಾವನಾ ದೂತರನ್ನಾಗಿ ನೇಮಿಸಿತು, ಇದಕ್ಕಾಗಿ ಅವರು ಸಣ್ಣ ಜಾಗೃತಿ ವೀಡಿಯೊಗಳಲ್ಲಿ ನಟಿಸಿದರು.<ref>{{cite news|url=http://www.thehindu.com/todays-paper/tp-national/tp-kerala/Mohanlal-joins-AIDS-awareness-drive/article14733228.ece|work=[[The Hindu]]|title=Mohanlal joins AIDS awareness drive|author=<!--Staff writer(s); no by-line.-->|date=13 March 2007|access-date=30 October 2010|archive-url=https://web.archive.org/web/20161205140525/http://www.thehindu.com/todays-paper/tp-national/tp-kerala/Mohanlal-joins-AIDS-awareness-drive/article14733228.ece|archive-date=5 December 2016|url-status=live}}</ref> ೨೦೦೯ ರ ಅಕ್ಟೋಬರ್ನಲ್ಲಿ, ಕೇರಳ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಮೋಹನ್ಲಾಲ್ ಅವರನ್ನು ಕೇರಳ ರಾಜ್ಯ ಅಥ್ಲೆಟಿಕ್ಸ್ನ ಸದ್ಭಾವನಾ ದೂತರನ್ನಾಗಿ ನೇಮಿಸಿತು.<ref name="IPL">{{cite news|url=http://timesofindia.indiatimes.com/news/Mohanlal-may-bid-for-IPL-team/articleshow/5184365.cms|work=[[The Times of India]]|title=Mohanlal may bid for IPL team|agency=[[Press Trust of India]]|date=31 October 2009|access-date=31 October 2009|archive-url=https://web.archive.org/web/20161205140208/http://timesofindia.indiatimes.com/news/Mohanlal-may-bid-for-IPL-team/articleshow/5184365.cms|archive-date=5 December 2016|url-status=live}}</ref> ೨೦೧೦ ರ ಮಾರ್ಚ್ನಲ್ಲಿ, ಮೋಹನ್ಲಾಲ್ ಕೇರಳ ಸರ್ಕಾರದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಮನವಿಯನ್ನು ಒಪ್ಪಿಕೊಂಡು ಕೇರಳದ ಕೈಮಗ್ಗ ಉದ್ಯಮದ ಸದ್ಭಾವನಾ ದೂತರಾಗಿ ನೇಮಕಗೊಂಡರು.<ref>{{cite news|title=Mohanlal to be khadi goodwill ambassador|url=http://www.thehindu.com/todays-paper/tp-national/tp-kerala/Mohanlal-to-be-khadi-goodwill-ambassador/article15995736.ecee|access-date=5 December 2016|work=[[The Hindu]]|date=3 March 2010|archive-url=https://web.archive.org/web/20161210122445/http://www.thehindu.com/todays-paper/tp-national/tp-kerala/Mohanlal-to-be-khadi-goodwill-ambassador/article15995736.ece|archive-date=10 December 2016|url-status=dead}}</ref> ೨೦೧೫ ರ ಜುಲೈನಲ್ಲಿ, ಕೇರಳ ಸರ್ಕಾರವು ಅವರನ್ನು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಅಭಿವೃದ್ಧಿಪಡಿಸಿದ "ಸುಭಯಾತ್ರಾ ೨೦೧೫" ಯೋಜನೆಯ ಸದ್ಭಾವನಾ ದೂತರನ್ನಾಗಿ ಮಾಡಿತು.<ref>{{cite news|title=Actor Mohanlal goodwill ambassador of 'Subhayatra' drive|url=http://www.business-standard.com/article/pti-stories/actor-mohanlal-goodwill-ambassador-of-subhayatra-drive-115070601022_1.html|access-date=10 December 2016|work=[[Business Standard]]|agency=[[Press Trust of India]]|date=6 July 2015|archive-url=https://web.archive.org/web/20160507203320/http://www.business-standard.com/article/pti-stories/actor-mohanlal-goodwill-ambassador-of-subhayatra-drive-115070601022_1.html|archive-date=7 May 2016|url-status=live}}</ref> ೨೦೧೬ ರ ಸೆಪ್ಟೆಂಬರ್ನಲ್ಲಿ, ಕೇರಳ ಸರ್ಕಾರದ ಮತ್ತೊಂದು ಯೋಜನೆಯಾದ "ಮೃತಸಂಜೀವನಿ" ಯ ಸದ್ಭಾವನಾ ದೂತರನ್ನಾಗಿ ನೇಮಿಸಲಾಯಿತು. ಇದು ರಾಜ್ಯದಲ್ಲಿ ಅಂಗ ದಾನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.<ref>{{cite news|last=James|first=Anu|title=Pinarayi Vijayan introduces Mohanlal as goodwill ambassador of Mrithasanjeevani programme in Kerala|url=http://www.ibtimes.co.in/pinarayi-vijayan-introduces-mohanlal-goodwill-ambassador-mrithasanjeevani-programme-kerala-695626|access-date=10 December 2016|work=[[International Business Times]]|date=28 September 2016|archive-url=https://web.archive.org/web/20161210133620/http://www.ibtimes.co.in/pinarayi-vijayan-introduces-mohanlal-goodwill-ambassador-mrithasanjeevani-programme-kerala-695626|archive-date=10 December 2016|url-status=live}}</ref> ೨೦೨೧ ರ ಜನವರಿಯಲ್ಲಿ, ಕೇರಳ ಸರ್ಕಾರದ ಆರೋಗ್ಯ ಇಲಾಖೆಯು ಕ್ಷಯರೋಗ ನಿರ್ಮೂಲನ ಅಭಿಯಾನದ ಸದ್ಭಾವನಾ ದೂತರನ್ನಾಗಿ ನೇಮಿಸಿತು.<ref>{{Cite web |date=22 January 2021 |title=Mohanlal to be ambassador of TB eradication drive |url=https://www.newindianexpress.com/states/kerala/2021/jan/22/mohanlal-to-be-ambassador-of-tb-eradication-drive-2253344.html |url-status=live |archive-url=https://web.archive.org/web/20210122032018/https://www.newindianexpress.com/states/kerala/2021/jan/22/mohanlal-to-be-ambassador-of-tb-eradication-drive-2253344.html |archive-date=22 January 2021 |access-date=27 January 2021 |website=[[The Indian Express]]}}</ref>
ಅವರು ಹಲವಾರು ದೂರದರ್ಶನ ಜಾಹೀರಾತುಗಳು ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಓಷಿಯಾನಸ್ ಇತ್ಯಾದಿಗಳ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.<ref name="indiatoday">{{cite news|url=https://www.indiatoday.in/magazine/states/kerala/story/20100315-sniping-superstars-742241-2010-03-03|title=Sniping superstars|work=[[India Today]]|last=Radhakrishnan|first=M. G.|date=4 March 2010|access-date=6 May 2012|archive-url=https://web.archive.org/web/20161205141342/http://indiatoday.intoday.in/story/Sniping+superstars/1/86696.html|archive-date=5 December 2016|url-status=live}}</ref> ೨೦೦೧ ರಲ್ಲಿ ಅವರು ಎಮ್ಸಿಆರ್ನ ಬ್ರಾಂಡ್ ರಾಯಭಾರಿಯಾದ ನಂತರ ಭಾರತದಲ್ಲಿ ಧೋತಿಯನ್ನು ಎಂಡೋರ್ಸ್ ಮಾಡಿದ ಮೊದಲ ಚಲನಚಿತ್ರ ತಾರೆ ಮೋಹನ್ಲಾಲ್. ಎಮ್ಸಿಆರ್ ೩೦,೦೦೦ ಬಣ್ಣದ ಧೋತಿಗಳನ್ನು ತಯಾರಿಸಿತು, ಅವುಗಳು 'ನರಸಿಂಹಂ' (೨೦೦೦) ಚಿತ್ರದಲ್ಲಿ ಕಾಣಿಸಿಕೊಂಡಿದ್ದವು, ಇದು ಮಾರುಕಟ್ಟೆಯಲ್ಲಿ ಯಶಸ್ಸನ್ನು ಗಳಿಸಿತು. ಅವರು ಎಮ್ಸಿಆರ್ನ ಮುಖ್ಯ ಬ್ರಾಂಡ್ ರಾಯಭಾರಿಯಾಗಿ ಮುಂದುವರೆದಿದ್ದಾರೆ.<ref>{{cite news|last=Shoba|first=V.|title=Tamil Wrap Star|url=http://indianexpress.com/article/entertainment/regional/tamil-wrap-star/|access-date=13 December 2016|work=[[The Indian Express]]|date=3 August 2014|archive-url=https://web.archive.org/web/20161220221518/http://indianexpress.com/article/entertainment/regional/tamil-wrap-star/|archive-date=20 December 2016|url-status=live}}</ref> ಮೋಹನ್ಲಾಲ್ ೨೦೦೨ ರಲ್ಲಿ ಟಾಟಾ ಗ್ಲೋಬಲ್ ಬೆವರೇಜಸ್ ಒಡೆತನದ ಚಹಾ ಬ್ರಾಂಡ್ ಕಾನನ್ ದೇವನ್ ಅವರ ಬ್ರಾಂಡ್ ರಾಯಭಾರಿಯಾಗಿ ಸಹಿ ಹಾಕಿದರು. ೨೦೧೪ ರಲ್ಲಿ ಅದರ ಮರು-ಬ್ರಾಂಡಿಂಗ್ ನಂತರ ಅವರ ಒಪ್ಪಂದವನ್ನು ನವೀಕರಿಸಲಾಯಿತು.<ref>{{cite news|title=Tata tea relaunches Kannan Devan in Kerala|url=http://www.thehindubusinessline.com/economy/agri-business/tata-tea-relaunches-kannan-devan-in-kerala/article6419941.ece|access-date=12 December 2016|work=[[The Hindu Business Line]]|date=17 September 2014}}</ref> ೨೦೧೦ ರ ಜುಲೈನಲ್ಲಿ, ಎಲ್ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಕೇರಳ ಗ್ರಾಹಕರಿಗೆ ಸೆಪ್ಟೆಂಬರ್ ೨೦೧೦ ರವರೆಗೆ ಬ್ರಾಂಡ್ನ ಓಣಂ ಹಬ್ಬದ ಕೊಡುಗೆಗಳನ್ನು ಎಂಡೋರ್ಸ್ ಮಾಡಲು ಮೋಹನ್ಲಾಲ್ ಅವರನ್ನು ನೇಮಿಸಿತು.<ref>{{cite news|url=https://www.indiatoday.in/business/world/story/lg-eyes-19kcr-sales-turnover-78237-2010-07-06|title=LG eyes 19K-cr sales turnover|work=[[India Today]]|agency=[[Press Trust of India]]|date=7 July 2010|access-date=12 September 2013|archive-url=https://web.archive.org/web/20161205141745/http://indiatoday.intoday.in/story/lg-eyes-19kcr-sales-turnover/1/104560.html|archive-date=5 December 2016|url-status=live}}</ref> ಅದೇ ವರ್ಷ, ಅವರು ಬ್ಯಾಂಕೇತರ ಹಣಕಾಸು ಕಂಪನಿಯಾದ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ನ ರಾಜ್ಯದ ಬ್ರಾಂಡ್ ರಾಯಭಾರಿಯಾಗಿ ಸಹಿ ಹಾಕಿದರು.<ref>{{cite news|title=Manappuram to take QIP route to raise Rs 1,000 crore|url=http://economictimes.indiatimes.com/markets/stocks/news/manappuram-to-take-qip-route-to-raise-rs-1000-crore/articleshow/6333929.cms|access-date=13 December 2016|work=[[The Economic Times]]|agency=ET Bureau|date=19 August 2010|archive-date=11 October 2020|archive-url=https://web.archive.org/web/20201011170913/https://economictimes.indiatimes.com/markets/stocks/news/manappuram-to-take-qip-route-to-raise-rs-1000-crore/articleshow/6333929.cms|url-status=live}}</ref> ೨೦೧೩ ರಲ್ಲಿ ಮೋಹನ್ಲಾಲ್ ಕೆಎಲ್ಎಫ್ ಕೊಕೊನಾಡ್ ತೆಂಗಿನ ಎಣ್ಣೆ ಬ್ರಾಂಡ್ ಅನ್ನು ಎಂಡೋರ್ಸ್ ಮಾಡಿದರು.<ref>{{cite news|last=Sathish|first=V. M.|title=Doctors slam Mohanlal's 'cholesterol-free' oil|url=http://www.emirates247.com/news/emirates/doctors-slam-mohanlal-s-cholesterol-free-oil-2013-05-01-1.504620|access-date=13 December 2016|work=[[Emirates 24/7]]|date=1 May 2013|archive-url=https://web.archive.org/web/20161220130513/http://www.emirates247.com/news/emirates/doctors-slam-mohanlal-s-cholesterol-free-oil-2013-05-01-1.504620|archive-date=20 December 2016|url-status=live}}</ref>
೨೦೧೩ ರ ಸೆಪ್ಟೆಂಬರ್ನಲ್ಲಿ, ನೇರ-ಪ್ರಸಾರ ಉಪಗ್ರಹ ದೂರದರ್ಶನ ಸೇವಾ ಪೂರೈಕೆದಾರ ಟಾಟಾ ಸ್ಕೈ ಮೋಹನ್ಲಾಲ್ ಅವರನ್ನು ತಮ್ಮ ಕೇರಳ ಮಾರುಕಟ್ಟೆಗೆ ಬ್ರಾಂಡ್ ಎಂಡೋರ್ಸರ್ ಆಗಿ ಘೋಷಿಸಿತು.<ref>{{cite news|title=Mohanlal roped in as Tata Sky brand ambassador|url=http://www.business-standard.com/article/news-ians/mohanlal-roped-in-as-tata-sky-brand-ambassador-113090900650_1.html|access-date=5 December 2016|work=[[Business Standard]]|agency=[[Press Trust of India]]|date=9 September 2013|archive-url=https://web.archive.org/web/20161205141922/http://www.business-standard.com/article/news-ians/mohanlal-roped-in-as-tata-sky-brand-ambassador-113090900650_1.html|archive-date=5 December 2016|url-status=live}}</ref> ಮೋಹನ್ಲಾಲ್, ಮಿಲ್ಕಾ ಸಿಂಗ್ ಮತ್ತು ಪಿ.ಟಿ. ಉಷಾ ಅವರೊಂದಿಗೆ ೨೦೧೩ ರಲ್ಲಿ ಕೊಚ್ಚಿ ಇಂಟರ್ನ್ಯಾಷನಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮದ ಬ್ರಾಂಡ್ ರಾಯಭಾರಿಗಳಾಗಿದ್ದರು. ಇದು ಕೊಚ್ಚಿ ಮ್ಯುನಿಸಿಪಲ್ ಕಾರ್ಪೊರೇಷನ್ ಮತ್ತು ಪುಷ್ ಇಂಟಿಗ್ರೇಟೆಡ್ ಕಮ್ಯುನಿಕೇಷನ್ ಪ್ರೈ. ಲಿಮಿಟೆಡ್ ಆಯೋಜಿಸಿದ್ದ ಅರ್ಧ ಮ್ಯಾರಥಾನ್ ಆಗಿತ್ತು.<ref>{{cite news|author=<!--Staff writer(s); no by-line.-->|title=Kochi to turn marathon city|url=http://www.thehindu.com/todays-paper/tp-national/tp-kerala/kochi-to-turn-marathon-city/article5362889.ece|access-date=13 December 2016|work=[[The Hindu]]|date=18 November 2013|archive-url=https://web.archive.org/web/20140830164521/http://www.thehindu.com/todays-paper/tp-national/tp-kerala/kochi-to-turn-marathon-city/article5362889.ece|archive-date=30 August 2014|url-status=live}}</ref> ೨೦೧೪ ರಲ್ಲಿ ಅದರ ಎರಡನೇ ಆವೃತ್ತಿಯಲ್ಲಿಯೂ ಅವರು ಮುಂದುವರೆದರು, ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರೊಂದಿಗೆ.<ref>{{cite news|title=Harbhajan, Mohanlal to be brand ambassadors for Kochi Marathon|url=http://www.business-standard.com/article/pti-stories/harbhajan-mohanlal-to-be-brand-ambassadors-for-kochi-marathon-114092300940_1.html|access-date=13 December 2016|work=[[Business Standard]]|agency=[[Press Trust of India]]|date=23 September 2014|archive-url=https://web.archive.org/web/20161220110910/http://www.business-standard.com/article/pti-stories/harbhajan-mohanlal-to-be-brand-ambassadors-for-kochi-marathon-114092300940_1.html|archive-date=20 December 2016|url-status=live}}</ref> ೨೦೧೬ ರ ಮೇ ತಿಂಗಳಲ್ಲಿ, ಮನರಂಜನಾ ಕಂಪನಿ ಹಾಟ್ಸ್ಟಾರ್ ತನ್ನ ಮಾರುಕಟ್ಟೆಯನ್ನು ದಕ್ಷಿಣ ಭಾರತದ ಪ್ರೇಕ್ಷಕರಿಗೆ ವಿಸ್ತರಿಸುವ ಭಾಗವಾಗಿ, ತನ್ನ ಮಲಯಾಳಂ ವಿಷಯಕ್ಕೆ ಮೋಹನ್ಲಾಲ್ ಅವರನ್ನು ಬ್ರಾಂಡ್ ರಾಯಭಾರಿಯನ್ನಾಗಿ ಘೋಷಿಸಿತು. ದೂರದರ್ಶನ, ಮುದ್ರಣ, ಹೊರಾಂಗಣ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಅವರ ಆರು ವಾರಗಳ ಬಹು-ಮಾಧ್ಯಮ ಜಾಹೀರಾತು ಅಭಿಯಾನವನ್ನು ಅವರು ಎಂಡೋರ್ಸ್ ಮಾಡಿದರು.<ref>{{cite news|title=Hotstar campaign to reach out to market in South|url=http://www.thehindubusinessline.com/news/hotstar-campaign-to-reach-out-to-market-in-south/article8594052.ece|access-date=11 December 2016|work=[[The Hindu Business Line]]|date=13 May 2016|archive-date=16 September 2021|archive-url=https://web.archive.org/web/20210916163234/https://www.thehindubusinessline.com/news/hotstar-campaign-to-reach-out-to-market-in-south/article8594052.ece|url-status=live}}</ref><ref>{{Cite news|url=https://timesofindia.indiatimes.com/entertainment/malayalam/movies/news/mohanlal-takes-on-volleyball-for-army/articleshow/62725974.cms|title=Mohanlal takes on volleyball for army|work=The Times of India|access-date=2 February 2018|archive-url=https://web.archive.org/web/20180602050839/https://timesofindia.indiatimes.com/entertainment/malayalam/movies/news/mohanlal-takes-on-volleyball-for-army/articleshow/62725974.cms|archive-date=2 June 2018|url-status=live}}</ref>
೨೦೨೬ ರಲ್ಲಿ, ಅವರು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಸದ್ಭಾವನಾ ದೂತರಾದರು ಮತ್ತು ಪ್ರಿಯದರ್ಶನ್ ನಿರ್ದೇಶನದ ಜಾಹೀರಾತು ಚಿತ್ರದಲ್ಲಿ ಯಾವುದೇ ಸಂಭಾವನೆಯಿಲ್ಲದೆ ನಟಿಸಿದರು.<ref>{{Cite news|url=https://keralakaumudi.com/news/mobile/news.php?id=1710724&u=minister-kb-ganesh-kumar-interview|title=കെഎസ്ആർടിസി പരസ്യത്തിൽ അഭിനയിക്കാൻ മോഹൻലാൽ എത്ര രൂപ വാങ്ങി? തുറന്നുപറഞ്ഞ് ഗണേശ് കുമാർ|work=Kerala Kaumudi|access-date=7 March 2026|date=6 March 2026}}</ref>
### ವ್ಯಾಪಾರ ಮತ್ತು ಇತರ ಉದ್ಯಮಗಳು
[[File:Mohanlal CCL 3 Opening.jpg|thumb|upright|CCL 3 ಉದ್ಘಾಟನೆಯಲ್ಲಿ ಮೋಹನ್ಲಾಲ್|alt=Mohanlal singing at the CCL opening ceremony]]
ಮೋಹನ್ಲಾಲ್ ಚಲನಚಿತ್ರ ನಿರ್ಮಾಣ ಮತ್ತು ವಿತರಣೆ, ರೆಸ್ಟೋರೆಂಟ್ಗಳು ಮತ್ತು ಪ್ಯಾಕೇಜ್ ಮಸಾಲೆಗಳು ಸೇರಿದಂತೆ ಹಲವಾರು ವ್ಯಾಪಾರ ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಸಂಯೋಜಿಸಿದ್ದಾರೆ. ೧೯೮೦ ರ ದಶಕದಲ್ಲಿ ಅವರು ಮಮ್ಮೂಟ್ಟಿ, ಐ.ವಿ. ಶಶಿ, ಸೀಮಾ ಮತ್ತು ಸೆಂಚುರಿ ಕೊಚುಮನ್ ಜೊತೆಗೆ ಕ್ಯಾಸಿನೋ ಎಂಬ ನಿರ್ಮಾಣ ಕಂಪನಿಯನ್ನು ಸಹ-ಮಾಲೀಕತ್ವ ಹೊಂದಿದ್ದರು. ಈ ನಿರ್ಮಾಣ ಸಂಸ್ಥೆಯು 'ಆದಿಯೋಳುಕ್ಕುಕಳ್' (೧೯೮೪), 'ಕರಿಂಪಿನ್ ಪೂವಿನಕ್ಕರೆ' (೧೯೮೫), 'ಗಾಂಧಿನಗರ್ ೨ನೇ ಸ್ಟ್ರೀಟ್' (೧೯೮೬) ಮತ್ತು 'ನಾಡೋಡಿಕ್ಕಟ್ಟು' (೧೯೮೭) ನಂತಹ ವಾಣಿಜ್ಯಿಕವಾಗಿ ಯಶಸ್ವಿ ಚಿತ್ರಗಳನ್ನು ನಿರ್ಮಿಸಿತು.<ref>{{Cite web|date=2 August 2016|title=When Mammootty And Mohanlal Produced Films For Each Other!|url=https://www.filmibeat.com/malayalam/news/2016/when-mammootty-and-mohanlal-produced-films-for-each-other-236031.html|access-date=20 July 2021|work=filmibeat.com|language=en|archive-date=16 July 2021|archive-url=https://web.archive.org/web/20210716105401/https://www.filmibeat.com/malayalam/news/2016/when-mammootty-and-mohanlal-produced-films-for-each-other-236031.html|url-status=live}}</ref><ref>{{cite news |title=Mammootty owned a production house with Mohanlal! |url=https://timesofindia.indiatimes.com/entertainment/malayalam/movies/did-you-know/mammootty-owned-a-production-house-with-mohanlal/articleshow/45345886.cms |website=The Times of India |archive-url=https://web.archive.org/web/20220706175210/https://timesofindia.indiatimes.com/entertainment/malayalam/movies/did-you-know/mammootty-owned-a-production-house-with-mohanlal/articleshow/45345886.cms |archive-date=6 July 2022}}</ref> ಅವರು ಮ್ಯಾಕ್ಸ್ಲ್ಯಾಬ್ ಸಿನೆಮಾಸ್ ಮತ್ತು ಎಂಟರ್ಟೈನ್ಮೆಂಟ್ಸ್ ಅನ್ನು ಹೊಂದಿದ್ದಾರೆ, ಇದು ಚಲನಚಿತ್ರ ವಿತರಣಾ ಕಂಪನಿಯಾಗಿದೆ.<ref>{{cite web |last=Moviebuzz |title=No MG for Mohanlal! |url=http://www.sify.com/movies/no-mg-for-mohanlal-news-malayalam-kkfspcefdfdsi.html |archive-url=https://web.archive.org/web/20151224085327/http://www.sify.com/movies/no-mg-for-mohanlal-news-malayalam-kkfspcefdfdsi.html |archive-date=24 December 2015 |website=[[Sify]] |access-date=6 December 2015 |date=13 March 2009 |url-status=dead}}</ref> ಅವರು ವಿಸ್ಮಯಾಸ್ ಮ್ಯಾಕ್ಸ್ ಅನ್ನು ಪ್ರಾರಂಭಿಸಿದರು. ಇದು ತಿರುವನಂತಪುರದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಚಿತ್ರದ ಪೂರ್ವ ಮತ್ತು ನಂತರದ ನಿರ್ಮಾಣ ಸ್ಟುಡಿಯೋ ಮತ್ತು ತಿರುವನಂತಪುರದ ಕಿನ್ಫ್ರಾ ಚಲನಚಿತ್ರ ಮತ್ತು ವಿಡಿಯೋ ಪಾರ್ಕ್ನಲ್ಲಿ ಡಬ್ಬಿಂಗ್ ಕಲಾವಿದರಿಗಾಗಿ ಕಾಲೇಜಾಗಿದೆ. ಕಂಪನಿಯ ನಿರ್ವಹಣೆಯನ್ನು ನಂತರ ಏರೀಸ್ ಗುಂಪಿನ ಸೋಹನ್ ರಾಯ್ ವಹಿಸಿಕೊಂಡರು, ಇದನ್ನು ಈಗ ಏರೀಸ್ ವಿಸ್ಮಯಾಸ್ ಮ್ಯಾಕ್ಸ್ ಎಂದು ಮರುನಾಮಕರಣ ಮಾಡಲಾಗಿದೆ. ಮೋಹನ್ಲಾಲ್ ಅದರ ಬ್ರಾಂಡ್ ರಾಯಭಾರಿಯಾಗಿ ಮುಂದುವರೆದಿದ್ದಾರೆ. ಅವರು ಪ್ರಣವಂ ಆರ್ಟ್ಸ್ ಇಂಟರ್ನ್ಯಾಷನಲ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಚಿತ್ರಗಳನ್ನು ನಿರ್ಮಿಸಿದ್ದಾರೆ.<ref>{{cite news|url=http://indianexpress.com/article/entertainment/regional/mohanlals-vismayas-max-studio-taken-over-by-aries-group/|title=Mohanlal's Vismayas Max Studio taken over by Aries group|work=[[The Indian Express]]|agency=[[Indo-Asian News Service]]|date=11 July 2014|access-date=12 July 2014|archive-url=https://web.archive.org/web/20161205145400/http://indianexpress.com/article/entertainment/regional/mohanlals-vismayas-max-studio-taken-over-by-aries-group/|archive-date=5 December 2016|url-status=live}}</ref>
ಅವರು ಭಾರತ ಮತ್ತು ವಿದೇಶಗಳಲ್ಲಿ ರೆಸ್ಟೋರೆಂಟ್ಗಳನ್ನು ಹೊಂದಿದ್ದಾರೆ. ೨೦೦೨ ರಲ್ಲಿ ಸ್ಥಾಪಿಸಲಾದ ದುಬೈನಲ್ಲಿ ಮೋಹನ್ಲಾಲ್ಸ್ ಟೇಸ್ಟ್ಬಡ್ಸ್ ಎಂಬ ಸರಪಳಿ ಮತ್ತು ೨೦೦೪ ರ ಫೆಬ್ರವರಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಅದೇ ಹೆಸರಿನ ಮಸಾಲೆಗಳು, ಉಪ್ಪಿನಕಾಯಿಗಳು, ಮಸಾಲೆಗಳು ಮತ್ತು ಕರಿಮಸಾಲೆ ಪುಡಿ ಬ್ರಾಂಡ್ ಅನ್ನು ಪ್ರಾರಂಭಿಸಿದರು. ೨೦೦೭ ರಿಂದ, ಈಸ್ಟರ್ನ್ ಗ್ರೂಪ್ ಬ್ರಾಂಡ್ನಲ್ಲಿ ಬಹುಪಾಲು ಪಾಲನ್ನು ಹೊಂದಿದೆ.<ref>{{cite news|url=http://timesofindia.indiatimes.com/business/india-business/Mohanlal-sells-Taste-Buds-to-Eastern-group/articleshow/2605816.cms|title=Mohanlal sells Taste Buds to Eastern group|work=[[The Times of India]]|last=Tejaswi|first=Mini Joseph|date=8 December 2007|access-date=8 May 2009|archive-url=https://web.archive.org/web/20161205145850/http://timesofindia.indiatimes.com/business/india-business/Mohanlal-sells-Taste-Buds-to-Eastern-group/articleshow/2605816.cms|archive-date=5 December 2016|url-status=live}}</ref> ೨೦೦೬ ರಲ್ಲಿ, ಅವರು ಬೆಂಗಳೂರಿನಲ್ಲಿ 'ದಿ ಹಾರ್ಬರ್ ಮಾರ್ಕೆಟ್' ಎಂಬ ಸಮುದ್ರಾಹಾರ ರೆಸ್ಟೋರೆಂಟ್ ಅನ್ನು ತೆರೆದರು<ref>{{cite news|last=Chibber|first=Mini Anthikad|title=Stirring it up with Mohanlal|url=http://www.thehindu.com/todays-paper/tp-features/tp-metroplus/stirring-it-up-with-mohanlal/article3190569.ece|access-date=13 January 2017|work=[[The Hindu]]|date=8 April 2006|archive-url=https://web.archive.org/web/20170113183016/http://www.thehindu.com/todays-paper/tp-features/tp-metroplus/stirring-it-up-with-mohanlal/article3190569.ece|archive-date=13 January 2017|url-status=live}}</ref> ಮತ್ತು ಕೊಚ್ಚಿಯಲ್ಲಿ ಟ್ರಾವೆನ್ಕೋರ್ ಕೋರ್ಟ್ ಎಂಬ ಹೋಟೆಲ್ ಅನ್ನು ತೆರೆದರು.<ref>{{cite news|last=Nair|first=R. Madhavan|title=Colourful feast for the eyes|url=http://www.thehindu.com/todays-paper/tp-features/tp-fridayreview/colourful-feast-for-the-eyes/article3231281.ece|access-date=13 January 2017|work=[[The Hindu]]|date=10 November 2006|archive-date=6 January 2024|archive-url=https://web.archive.org/web/20240106052349/https://www.thehindu.com/todays-paper/tp-features/tp-fridayreview/colourful-feast-for-the-eyes/article3231281.ece|url-status=live}}</ref> ಅವರ ಇತರ ವ್ಯಾಪಾರ ಉದ್ಯಮಗಳಲ್ಲಿ ಯುನಿರಾಯಲ್ ಮರೀನ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ ಸೇರಿವೆ — ಇದು ಕೋಝಿಕ್ಕೋಡ್ ಮೂಲದ ಸಮುದ್ರಾಹಾರ ರಫ್ತು ಕಂಪನಿಯಾಗಿದ್ದು, ೧೯೯೨ ರಿಂದ ಅವರು ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದಾರೆ.<ref>{{cite web|author=Bloomberg|title=V. Mohanlal: Executive Profile & Biography|url=https://www.bloomberg.com/research/stocks/people/person.asp?personId=24929476&capId=20387802|publisher=[[Bloomberg L.P.]]|access-date=13 January 2017|date=21 August 1992|archive-url=https://web.archive.org/web/20170116162824/http://www.bloomberg.com/research/stocks/people/person.asp?personId=24929476&capId=20387802|archive-date=16 January 2017|url-status=live}}</ref> ಅವರು ೨೦೦೯ ರಲ್ಲಿ ಸ್ಥಾಪಿಸಲಾದ ಕೊಚ್ಚಿಯ ತ್ರಿಪ್ಪುನಿತುರಾದಲ್ಲಿನ ಜೋಸ್ ಥಾಮಸ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ನ ಸಹ-ಸ್ಥಾಪಕ, ಪಾಲುದಾರ ಮತ್ತು ಅಧ್ಯಕ್ಷರಾಗಿದ್ದಾರೆ.<ref>{{cite news|url=https://www.indiatoday.in/magazine/leisure/story/20090413-creativity-at-a-new-address-739410-2009-04-02|title=Creativity at a new address|work=[[India Today]]|last=Ravindran|first=Nirmala|date=3 April 2009|access-date=6 May 2012|archive-url=https://web.archive.org/web/20161205153355/http://indiatoday.intoday.in/story/Creativity+at+a+new+address/1/35066.html|archive-date=5 December 2016|url-status=live}}</ref> ಅವರು ಕ್ಲೀನರ್ಜೆನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದು ಜೈವಿಕ ಅನಿಲೀಕರಣಕ್ಕಾಗಿ ಜೈವಿಕ ವಸ್ತುಗಳ ಉತ್ಪಾದನೆ ಮತ್ತು ಪೂರೈಕೆಗಾಗಿ ಕಂಪನಿಯಾಗಿದೆ.<ref>{{cite press release|last=Hatfield|first=Jessica|title=Clenergen India Private Limited Appoints Mohanlal As Its Non-Executive Director|url=http://www.free-press-release.com/news-clenergen-india-private-limited-appoints-mohanlal-as-its-non-executive-director-1272920150.html|location=United States|publisher=Clenergen India|agency=Free Press Release|date=6 April 2014|access-date=6 May 2014|archive-date=11 October 2020|archive-url=https://web.archive.org/web/20201011170919/https://www.tptptp.com/|url-status=live}}</ref>
೨೦೦೯ ರಲ್ಲಿ, ಮೋಹನ್ಲಾಲ್ ಪ್ರಿಯದರ್ಶನ್ ಜೊತೆಗೆ ಕೊಚ್ಚಿ ಮೂಲದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡಕ್ಕೆ ಬಿಡ್ ಮಾಡಲು ಪ್ರಯತ್ನಿಸಿದರು; ನಿಯಮಗಳಲ್ಲಿನ ಬದಲಾವಣೆಯ ನಂತರ ಸಾಕಷ್ಟು ಹಣವನ್ನು ಸಂಗ್ರಹಿಸಲು ವಿಫಲವಾದ ಕಾರಣ ಅವರು ಬಿಡ್ ಅನ್ನು ಹಿಂತೆಗೆದುಕೊಂಡರು.<ref name="IPL"/><ref>{{cite news|url=http://timesofindia.indiatimes.com/news/Keralas-dream-to-have-IPL-team-suffers-reversal/articleshow/5648755.cms|work=[[The Times of India]]|title=Kerala's dream to have IPL team suffers reversal|agency=[[Press Trust of India]]|date=5 March 2010|access-date=10 March 2010|archive-url=https://web.archive.org/web/20161205153942/http://timesofindia.indiatimes.com/news/Keralas-dream-to-have-IPL-team-suffers-reversal/articleshow/5648755.cms|archive-date=5 December 2016|url-status=live}}</ref> ೨೦೧೨ ಮತ್ತು ೨೦೧೩ ರಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಮೋಹನ್ಲಾಲ್ ಕೇರಳ ಸ್ಟ್ರೈಕರ್ಸ್ ತಂಡದ ನಾಯಕರಾಗಿದ್ದರು.<ref>[http://keralastrikers.in/ Official site — Kerala Strikers]{{Dead link|date=July 2026 |bot=InternetArchiveBot }}</ref>
===ಪಲಾಯನ ಕಲೆ===
೨೦೦೮ ರಲ್ಲಿ, ಮೋಹನ್ಲಾಲ್ ತಿರುವನಂತಪುರದಲ್ಲಿ "ಬರ್ನಿಂಗ್ ಇಲ್ಯೂಷನ್" ಎಂಬ ಸ್ಟಂಟ್ ಅನ್ನು ನಿರ್ವಹಿಸಲು ಮಾಂತ್ರಿಕ ಗೋಪಿನಾಥ್ ಮುತುಕಾಡ್ ಅವರ ಅಡಿಯಲ್ಲಿ ೧೮ ತಿಂಗಳುಗಳ ಕಾಲ ಗುಪ್ತ ಪಲಾಯನ ಕಲಾವಿದ ತರಬೇತಿಗೆ ಒಳಗಾದರು.<ref>{{cite news|url=https://nmp1toi.indiatimes.com/entertainment/malayalam/movies/did-you-know/Mohanlal-as-escape-artist/articleshow/45650012.cms|archive-url=https://web.archive.org/web/20230901133010/https://nmp1toi.indiatimes.com/entertainment/malayalam/movies/did-you-know/Mohanlal-as-escape-artist/articleshow/45650012.cms|url-status=dead|archive-date=1 September 2023|title=Mohanlal as escape artist!|work=[[India Times]]|access-date=21 November 2019}}</ref> ಆದಾಗ್ಯೂ, ಅಭಿಮಾನಿಗಳು ಮತ್ತು ಸಮಕಾಲೀನರ ಒತ್ತಡದಿಂದಾಗಿ, ಈ ಕೃತ್ಯವನ್ನು ರದ್ದುಗೊಳಿಸಲಾಯಿತು. ಈ ಕಾರ್ಯಕ್ರಮವನ್ನು ಕೇರಳ ಪೊಲೀಸ್, ಪ್ರವಾಸೋದ್ಯಮ ಇಲಾಖೆ ಮತ್ತು ಕೇರಳ ರಾಜ್ಯ ಯುವ ಕಲ್ಯಾಣ ಮಂಡಳಿಯು 'ವಿಸ್ಮಯಂ ೨೦೦೮' ರ ಭಾಗವಾಗಿ ಸಂಯೋಜಿಸಿತ್ತು, ಇದು ಮಾಂತ್ರಿಕರ ಅಂತರರಾಷ್ಟ್ರೀಯ ಸಮ್ಮೇಳನವಾಗಿತ್ತು. ಈ ಸ್ಟಂಟ್ ಮೋಹನ್ಲಾಲ್ ಅವರನ್ನು ಕೈಕೋಳಗಳಿಗೆ ಸಿಲುಕಿಸಿ ಸರಪಳಿಗಳಲ್ಲಿ ಸುತ್ತಿ, ಪೆಟ್ಟಿಗೆಯೊಳಗೆ ಇರಿಸಿ, ಬೆಂಕಿಯ ಚೆಂಡಿನಲ್ಲಿ ಎಸೆಯುವುದನ್ನು ಒಳಗೊಂಡಿತ್ತು. ಅದರಿಂದ ಅವರು ಪಾರಾಗಬೇಕಾಗಿತ್ತು.<ref>{{cite news|url=http://www.dnaindia.com/india/report-mohanlal-gives-up-his-shot-at-magic-1161104|title=Mohanlal gives up his shot at magic|work=[[Daily News and Analysis]]|date=23 April 2008|access-date=8 November 2014|agency=[[Press Trust of India]]|archive-url=https://web.archive.org/web/20161205155253/http://www.dnaindia.com/india/report-mohanlal-gives-up-his-shot-at-magic-1161104|archive-date=5 December 2016|url-status=live}}</ref>
ಮಾಂತ್ರಿಕ ಸಾಮ್ರಾಜ್ ಮೋಹನ್ಲಾಲ್ ಅವರಿಗೆ ಸ್ಟಂಟ್ ವಿರುದ್ಧ ಸಲಹೆ ನೀಡಿದರು ಮತ್ತು ಅದನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡರು.<ref>{{cite news|url=http://www.news18.com/news/india/mohanlal-plans-daredevil-stunt-magicians-frown-287683.html|title=Mohanlal plans daredevil stunt, magicians frown|work=[[CNN-News18]]|date=21 April 2008|access-date=6 May 2012|archive-url=https://web.archive.org/web/20161205155533/http://www.news18.com/news/india/mohanlal-plans-daredevil-stunt-magicians-frown-287683.html|archive-date=5 December 2016|url-status=live}}</ref> ಅಮ್ಮ ಅಧ್ಯಕ್ಷ ಇನ್ನೋಸೆಂಟ್ ಕೂಡ ಮೋಹನ್ಲಾಲ್ ಅವರನ್ನು ಅಪಾಯಕಾರಿ ಪ್ರದರ್ಶನದಿಂದ ದೂರವಿರಲು ಒತ್ತಾಯಿಸಿದರು.<ref>{{cite news|url=http://www.hindustantimes.com/regional-movies/mohanlal-wilts-under-pressure-withdraws-from-stunt-act/story-UtjgWjYVRcwwbMThmGTkiI.html|title=Mohanlal wilts under pressure, withdraws from stunt act|agency=[[Indo-Asian News Service]]|date=24 April 2008|access-date=12 May 2009|work=[[Hindustan Times]]|archive-url=https://web.archive.org/web/20161205160018/http://www.hindustantimes.com/regional-movies/mohanlal-wilts-under-pressure-withdraws-from-stunt-act/story-UtjgWjYVRcwwbMThmGTkiI.html|archive-date=5 December 2016|url-status=live}}</ref> ಈ ಸ್ಟಂಟ್ನ ಉದ್ದೇಶವು ಯುವಕರಿಗೆ ಜೀವನದ ಸವಾಲುಗಳನ್ನು ಎದುರಿಸಲು ಪ್ರೇರೇಪಿಸುವುದಾಗಿತ್ತು. ಮೋಹನ್ಲಾಲ್ ೫೦-೫೦ ಅಪಾಯವನ್ನು ಒಪ್ಪಿಕೊಂಡರು ಆದರೆ ಯಶಸ್ಸಿನ ಭರವಸೆ ವ್ಯಕ್ತಪಡಿಸಿದರು.<ref>{{cite news|url=http://www.thehindu.com/todays-paper/tp-national/tp-kerala/lsquoEscape-act-a-big-challengersquo/article15205851.ece|title='Escape act a big challenge'|author=<!--Not stated--> reporter|date=18 April 2008|work=[[The Hindu]]|access-date=8 November 2014|archive-url=https://web.archive.org/web/20161205160229/http://www.thehindu.com/todays-paper/tp-national/tp-kerala/lsquoEscape-act-a-big-challengersquo/article15205851.ece|archive-date=5 December 2016|url-status=live}}</ref> ಮುತುಕಾಡ್ ಒತ್ತಿಹೇಳಿದರು, ಬೆಂಕಿ ಪಲಾಯನವು ಅತ್ಯಂತ ಅಪಾಯಕಾರಿ ಕೃತ್ಯಗಳಲ್ಲಿ ಒಂದಾಗಿದ್ದರೂ, ಮೋಹನ್ಲಾಲ್ ಅದನ್ನು ಪರಿಪೂರ್ಣಗೊಳಿಸಲು ಅಭ್ಯಾಸ ಮಾಡುತ್ತಿದ್ದಾರೆ.<ref>{{cite news|url=http://www.hindustantimes.com/entertainment/regional/actor-mohanlal-s-stint-with-magic/article1-303913.aspx|title=Actor Mohanlal's stint with magic|agency=[[Indo-Asian News Service]]|date=11 April 2008|work=[[Hindustan Times]]|access-date=8 November 2014|archive-url=https://web.archive.org/web/20141108192317/http://www.hindustantimes.com/entertainment/regional/actor-mohanlal-s-stint-with-magic/article1-303913.aspx|archive-date=8 November 2014}}</ref>
೨೦೧೪ ರಲ್ಲಿ, ಮೋಹನ್ಲಾಲ್ ಮುತುಕಾಡ್ ಸ್ಥಾಪಿಸಿದ ತಿರುವನಂತಪುರದಲ್ಲಿ ಮ್ಯಾಜಿಕ್ ಥೀಮ್ ಸಂಕೀರ್ಣವಾದ ಮ್ಯಾಜಿಕ್ ಪ್ಲಾನೆಟ್ನ ಉದ್ಘಾಟನಾ ಸಮಾರಂಭದಲ್ಲಿ ಅಪಾಯ-ಮುಕ್ತ ಮ್ಯಾಜಿಕ್ ಅನ್ನು ಪ್ರದರ್ಶಿಸಿದರು. ಕೇರಳದ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮತ್ತು ಮೋಹನ್ಲಾಲ್ ಅವರ ಕೃತ್ಯವು ಹುಡುಗಿಯೊಬ್ಬಳನ್ನು ಲೆವಿಟೇಟ್ ಮಾಡುವುದನ್ನು ಒಳಗೊಂಡಿತ್ತು.<ref>{{cite news|url=https://www.newindianexpress.com/cities/thiruvananthapuram/2014/nov/01/actor-turns-magician-at-magic-planets-inaugural-677674.html|title=Actor Turns Magician at Magic Planet's Inaugural|agency=Express News Service|date=1 November 2014|work=[[The New Indian Express]]|access-date=8 November 2014|archive-url=https://web.archive.org/web/20161205161221/http://www.newindianexpress.com/cities/thiruvananthapuram/2014/nov/01/Actor-Turns-Magician-at-Magic-Planets-Inaugural-677674.html|archive-date=5 December 2016|url-status=live}}</ref>
==ಮಾಧ್ಯಮ ಚಿತ್ರಣ ಮತ್ತು ಕಲಾತ್ಮಕತೆ==
[[File:Mohanlal with the team.jpg|upright|thumb|alt=Mohanlal sitting in a chair|2006 ರಲ್ಲಿ ಪುಸ್ತಕ ಅನಾವರಣ ಸಮಾರಂಭದಲ್ಲಿ ಮೋಹನ್ಲಾಲ್]]
ಮೋಹನ್ಲಾಲ್ ಅವರನ್ನು ಭಾರತೀಯ ಮಾಧ್ಯಮದಲ್ಲಿ ಅತ್ಯಂತ ಬಹುಮುಖ ನಟರಲ್ಲಿ ಒಬ್ಬರೆಂದು ವಿವರಿಸಲಾಗಿದೆ ಮತ್ತು ಅವರ ನೈಸರ್ಗಿಕ ಅಭಿನಯ ಶೈಲಿಗಾಗಿ ಪ್ರಶಂಸಿಸಲಾಗಿದೆ.<ref name="ndtvgoodtimes"/><ref name="hindu2">{{cite news | url=http://www.hindu.com/thehindu/mag/2006/02/19/stories/2006021900500500.htm | location=Chennai | title=In for the long haul | date=19 February 2006 | access-date=28 May 2011 | archive-url=https://web.archive.org/web/20111208094212/http://www.hindu.com/thehindu/mag/2006/02/19/stories/2006021900500500.htm | archive-date=8 December 2011 | work=[[The Hindu]]|url-access=subscription | url-status=dead }}</ref><ref name="aag">[https://timesofindia.indiatimes.com/entertainment/hindi/movie-details/ram-gopal-varma-ki-aag/movieshow/61258127.cms Ram Gopal Varma ki.. Aag!] {{Webarchive|url=https://web.archive.org/web/20180812191738/https://timesofindia.indiatimes.com/entertainment/hindi/movie-details/ram-gopal-varma-ki-aag/movieshow/61258127.cms |date=12 August 2018 }}. Indiatimes.com. August 2007. Retrieved on 6 May 2012.</ref><ref>{{cite news | url=http://www.hindu.com/thehindu/gallery/1222/ | location=Chennai | work=The Hindu|url-access=subscription | title=Rare Honour: Mohanlal joins Territorial Army | access-date=29 May 2011 | archive-url=https://web.archive.org/web/20110809095012/http://www.hindu.com/thehindu/gallery/1222/ | archive-date=9 August 2011 | url-status=live }}</ref><ref>[http://www.hindu.com/thehindu/mp/2003/06/23/stories/2003062300110202.htm The Hindu : New action hero?] {{Webarchive|url=https://web.archive.org/web/20101129091013/http://hindu.com/thehindu/mp/2003/06/23/stories/2003062300110202.htm|date=29 November 2010}} (23 June 2003)</ref> ಮೋಹನ್ಲಾಲ್ ಅವರ "ಲಾಲೆಟ್ಟನ್" ಎಂಬ ಅಡ್ಡಹೆಸರಿನಿಂದಲೂ ಕರೆಯಲ್ಪಡುತ್ತಾರೆ.<ref>{{cite web|url=https://www.deccanchronicle.com/entertainment/mollywood/030717/lalettan-to-grace-small-screen.html|title=Lalettan to grace small screen|date=3 July 2017|website=Deccan Chronicle|access-date=23 January 2019|archive-url=https://web.archive.org/web/20180722214154/https://www.deccanchronicle.com/entertainment/mollywood/030717/lalettan-to-grace-small-screen.html|archive-date=22 July 2018|url-status=live}}</ref> ರೀಡರ್ಸ್ ಡೈಜೆಸ್ಟ್ ಇಂಡಿಯಾ ಅವರನ್ನು ೨೦೦೪ ರಲ್ಲಿ "ಸಿನೆಮಾದ ಎಲ್ಲಾ ವ್ಯಾಪಾರಗಳ ಜಾಕ್ ಮತ್ತು ಅನೇಕ ಮಾಸ್ಟರ್ಸ್" ಎಂದು ವಿವರಿಸಿತು.<ref name="rd"/> ೨೦೧೦ ರಲ್ಲಿ ರೀಡರ್ಸ್ ಡೈಜೆಸ್ಟ್ ನಡೆಸಿದ ಸಮೀಕ್ಷೆಯಲ್ಲಿ ಅವರು ಭಾರತದ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳ ಪಟ್ಟಿಯಲ್ಲಿ ೮೦ ನೇ ಸ್ಥಾನದಲ್ಲಿದ್ದರು.<ref>[http://www.sify.com/news/list-of-reader-s-digest-s-india-s-most-trusted-to-go-with-abdul-kalam-ratan-tata-are-india-s-most-trusted-survey-news-national-kdcsacchfhf.html List of Reader's Digest's India's Most Trusted (To go with Abdul Kalam, Ratan Tata are India's most trusted: Survey)] {{Webarchive|url=https://web.archive.org/web/20120816040706/http://www.sify.com/news/list-of-reader-s-digest-s-india-s-most-trusted-to-go-with-abdul-kalam-ratan-tata-are-india-s-most-trusted-survey-news-national-kdcsacchfhf.html |date=16 August 2012 }}. Sify.com (2 March 2010). Retrieved on 6 May 2012.</ref> ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೋಹನ್ಲಾಲ್ ಅವರನ್ನು "ಯಾವುದೇ ಪಾತ್ರಕ್ಕೆ ಸುಲಭವಾಗಿ ಹೊಂದಿಕೊಳ್ಳಬಲ್ಲ ದೇಶದ ಅತ್ಯುತ್ತಮ ನಟರಲ್ಲಿ ಒಬ್ಬರು" ಎಂದು ವಿವರಿಸಿದ್ದಾರೆ.<ref>{{cite news | url=http://www.hindu.com/mp/2003/09/18/stories/2003091800800200.htm | location=[[Chennai]] | work=[[The Hindu]]|url-access=subscription | title=Lal salaam! | date=18 September 2003 | access-date=25 May 2011 | archive-url=https://web.archive.org/web/20080401073340/http://www.hindu.com/mp/2003/09/18/stories/2003091800800200.htm | archive-date=1 April 2008 | url-status=dead }}</ref> ಭಾರತೀಯ ಚಲನಚಿತ್ರೋದ್ಯಮದಲ್ಲಿ ಅವರ ಸಮಕಾಲೀನರು ಮಲಯಾಳಂ ಚಲನಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಅವರನ್ನು ಹೆಚ್ಚಾಗಿ ಪ್ರಶಂಸಿಸಿದ್ದಾರೆ.<ref>{{Cite web|title=Mohanlal is India's pride, Kerala's treasure: Vijay to Dhanush, best quotes by Tamil actors on the Malayalam superstar. Rajinikanth, Suriya and more...|url=https://www.newindianexpress.com/galleries/entertainment/2020/may/20/mohanlal-is-indias-pride-keralas-treasure-vijay-to-dhanush-best-quotes-by-tamil-actors-on-the-m-102872.html|access-date=7 September 2021|website=The New Indian Express|date=20 May 2020 |archive-date=3 June 2020|archive-url=https://web.archive.org/web/20200603124847/https://www.newindianexpress.com/galleries/entertainment/2020/may/20/mohanlal-is-indias-pride-keralas-treasure-vijay-to-dhanush-best-quotes-by-tamil-actors-on-the-m-102872.html|url-status=live}}</ref><ref>{{Cite web|title=Mohanlal is the greatest actor we have in our country: Suriya on his 'Kaappaan' co-star|url=https://www.newindianexpress.com/entertainment/tamil/2019/sep/14/mohanlal-is-the-greatest-actor-we-have-in-our-country-suriya-on-his-kaappaan-co-star-2033651.html|access-date=2 July 2021|website=The New Indian Express|date=20 September 2019 |archive-date=9 July 2021|archive-url=https://web.archive.org/web/20210709182722/https://www.newindianexpress.com/entertainment/tamil/2019/sep/14/mohanlal-is-the-greatest-actor-we-have-in-our-country-suriya-on-his-kaappaan-co-star-2033651.html|url-status=live}}</ref><ref>{{Cite news|title=My admiration increases: Amitabh Bachchan after watching the trailer of Mohanlal's Marakkar|url=https://timesofindia.indiatimes.com/entertainment/malayalam/movies/news/my-admiration-increases-amitabh-bachchan-after-watching-the-trailer-of-mohanlals-marakkar/articleshow/74546739.cms|access-date=2 July 2021|website=The Times of India|language=en|archive-date=9 July 2021|archive-url=https://web.archive.org/web/20210709214758/https://timesofindia.indiatimes.com/entertainment/malayalam/movies/news/my-admiration-increases-amitabh-bachchan-after-watching-the-trailer-of-mohanlals-marakkar/articleshow/74546739.cms|url-status=live}}</ref>
೨೦೦೩ ರಲ್ಲಿ, ಮೋಹನ್ಲಾಲ್ ಅವರ ಚಲನಚಿತ್ರ ವೃತ್ತಿಯ ೨೫ ನೇ ವಾರ್ಷಿಕೋತ್ಸವದಂದು, ತಿರುವನಂತಪುರದಲ್ಲಿ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಒಂದು ವಾರದ ಆಚರಣೆ ಮತ್ತು ವೇದಿಕೆ ಪ್ರದರ್ಶನವನ್ನು ನಡೆಸಿದರು. ವೇದಿಕೆ ಪ್ರದರ್ಶನದಿಂದ ಬಂದ ಹಣವನ್ನು ದಾನಕ್ಕೆ ನೀಡಲಾಯಿತು.<ref>{{cite news | url=http://www.hindu.com/thehindu/mp/2003/08/21/stories/2003082100220202.htm | location=[[Chennai]] | work=[[The Hindu]]|url-access=subscription | title=Down memory lane | date=21 August 2003 | access-date=31 May 2011 | archive-url=https://web.archive.org/web/20101129052038/http://hindu.com/thehindu/mp/2003/08/21/stories/2003082100220202.htm | archive-date=29 November 2010 | url-status=dead }}</ref> ಮಲಯಾಳಂ ದೂರದರ್ಶನ ವಾಹಿನಿಗಳಾದ ಏಷ್ಯಾನೆಟ್ ಮತ್ತು ಸೂರ್ಯ ಟಿವಿ ಸಹ ವಾರ್ಷಿಕೋತ್ಸವವನ್ನು ಆಚರಿಸಲು ಪ್ರತ್ಯೇಕ ವೇದಿಕೆ ಪ್ರದರ್ಶನಗಳನ್ನು ನಡೆಸಿದವು.<ref>{{cite news | url=http://www.hindu.com/mp/2003/12/22/stories/2003122200220200.htm | location=[[Chennai]] | work=[[The Hindu]]|url-access=subscription | title=Showtime | date=22 December 2003 | access-date=31 May 2011 | archive-url=https://web.archive.org/web/20090925032600/http://www.hindu.com/mp/2003/12/22/stories/2003122200220200.htm | archive-date=25 September 2009 | url-status=dead }}</ref>
೧೯೮೦ ರ ದಶಕದಲ್ಲಿ, ಮೋಹನ್ಲಾಲ್ ಮತ್ತು ಮಮ್ಮೂಟ್ಟಿ ಮಲಯಾಳಂ ಚಲನಚಿತ್ರರಂಗದಲ್ಲಿ "ಸೂಪರ್ಸ್ಟಾರ್"ಗಳಾಗಿ ಹೊರಹೊಮ್ಮಿದರು, ಇದು ಉದ್ಯಮದಲ್ಲಿ ಅಭೂತಪೂರ್ವ ವಿದ್ಯಮಾನವನ್ನು ಗುರುತಿಸಿತು. ಇದು ಮಲಯಾಳಂ ಚಲನಚಿತ್ರರಂಗದ ಬದಲಾವಣೆಗೆ ಕಾರಣವಾಯಿತು, ಬಾಲಿವುಡ್ ಮತ್ತು ತಮಿಳು ಚಲನಚಿತ್ರ ಸಂಸ್ಕೃತಿಗಳನ್ನು ನೆನಪಿಸುವ ನಟ-ಪ್ರಧಾನ ಚಿತ್ರಗಳು ರೂಢಿಯಾದವು. ೧೯೮೮ ರಲ್ಲಿ 'ಇಂಡಿಯಾ ಟುಡೇ' ಗಮನಿಸಿದಂತೆ, ಚಲನಚಿತ್ರ ನಿರ್ಮಾಪಕರು ಈ ಸೂಪರ್ಸ್ಟಾರ್ಗಳಿಗೆ ಸರಿಹೊಂದುವಂತೆ ಪಾತ್ರಗಳನ್ನು ರೂಪಿಸಿದರು. ನಿರ್ದೇಶಕ ಐ.ವಿ. ಶಶಿ ಅವರು ಪ್ರೇಮ್ ನಜೀರ್ ಕೂಡ ಮೋಹನ್ಲಾಲ್ ಮತ್ತು ಮಮ್ಮೂಟ್ಟಿಯ ಜನಪ್ರಿಯತೆಯನ್ನು ಹೊಂದಿರಲಿಲ್ಲ ಎಂದು ಹೇಳಿದರು. ಅವರು "ವಿರಳ ಮತ್ತು ಸರಿಯಾದ ಮಿಶ್ರಣವಾದ ಮೋಡಿ ಮತ್ತು ಅಭಿನಯ ಸಾಮರ್ಥ್ಯ" ವನ್ನು ಹೊಂದಿದ್ದಾರೆ. ೧೯೮೮ ರಲ್ಲಿ, ಚಲನಚಿತ್ರ ನಿರ್ದೇಶಕ ಫಾಜಿಲ್ "ಮೋಹನ್ಲಾಲ್ ಇಂದು ದೇಶದ ಅತ್ಯಂತ ಹೊಂದಿಕೊಳ್ಳುವ ಮತ್ತು ಸೂಕ್ಷ್ಮ ನಟ. ಡಸ್ಟಿನ್ ಹಾಫ್ಮನ್ 'ಟೂಟ್ಸೀ' ನಲ್ಲಿ ಅಥವಾ ಸಿಲ್ವೆಸ್ಟರ್ ಸ್ಟಾಲೋನ್ 'ರಾಂಬೊ' ನಲ್ಲಿ ಮಾಡಿದ್ದನ್ನು ಅವರು ಸುಲಭವಾಗಿ ಮಾಡಬಲ್ಲರು" ಎಂದು ಹೇಳಿದರು.<ref>{{Cite web|url=https://www.indiatoday.in/magazine/society-the-arts/films/story/19881231-mammootty-and-mohan-lal-emerge-as-unprecedented-superstars-of-malayalam-films-798061-1988-12-31|archive-url = https://web.archive.org/web/20190918142917/https://www.indiatoday.in/magazine/society-the-arts/films/story/19881231-mammootty-and-mohan-lal-emerge-as-unprecedented-superstars-of-malayalam-films-798061-1988-12-31|archive-date = 18 September 2019|title = Mammootty and Mohan Lal emerge as unprecedented superstars of Malayalam films| date=31 December 1988 }}</ref>
೨೦೦೫ ರಲ್ಲಿ, ಮೋಹನ್ಲಾಲ್, ಮಮ್ಮೂಟ್ಟಿ ಮತ್ತು ದಿಲೀಪ್ ಅವರ ಚಿತ್ರಗಳು ಮಲಯಾಳಂ ಚಲನಚಿತ್ರರಂಗದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ೯೫ ಪ್ರತಿಶತವನ್ನು ಹೊಂದಿದ್ದವು. 'ದಿ ಹಿಂದೂ' "ಮಲಯಾಳಂ ಚಲನಚಿತ್ರವು ಅವರ ಸುತ್ತ ಸುತ್ತುತ್ತದೆ ಮತ್ತು ಅವರ ವಯಸ್ಸು ಮತ್ತು ಚಿತ್ರಣವನ್ನು ಮನಸ್ಸಿನಲ್ಲಿಟ್ಟುಕೊಂಡು ಚಿತ್ರಕಥೆಗಳನ್ನು ಬರೆಯಲಾಗುತ್ತದೆ" ಎಂದು ಬರೆಯಿತು. ಅವರು ವಿಶಿಷ್ಟ ಶೈಲಿಯ ಉಡುಪು, ಸಂಭಾಷಣೆ, ನೃತ್ಯ ಮತ್ತು ಹೋರಾಟದ ಅನುಕ್ರಮಗಳೊಂದಿಗೆ ಜೀವನಕ್ಕಿಂತ ದೊಡ್ಡದಾದ ಪಾತ್ರಗಳನ್ನು ನಿರ್ವಹಿಸಿದರು.<ref>[http://www.hindu.com/fr/2005/12/09/stories/2005120901230100.htm The Hindu : Entertainment Thiruvananthapuram / Cinema : Whither the heroine?] {{Webarchive|url=https://web.archive.org/web/20130928042749/http://www.hindu.com/fr/2005/12/09/stories/2005120901230100.htm|date=28 September 2013}} (9 December 2005)</ref><ref>T. N. Gopakumar [http://www.cscsarchive.org:8081/MediaArchive/art.nsf/94ff8a4a35a9b8876525698d002642a9/46344d1a8344a1f9652572df003429af/$FILE/A0190307.pdf Malayalam Cinema Faces a Threat] {{webarchive|url=https://web.archive.org/web/20110725213203/http://www.cscsarchive.org:8081/MediaArchive/art.nsf/94ff8a4a35a9b8876525698d002642a9/46344d1a8344a1f9652572df003429af/$FILE/A0190307.pdf |date=25 July 2011 }}</ref> ಕೇರಳದಾದ್ಯಂತ ಇರುವ ಮೋಹನ್ಲಾಲ್ ಅವರ ಅನೇಕ ಅಭಿಮಾನಿ ಸಂಘಗಳು ಹೊಸ ಬಿಡುಗಡೆಗಳ ಸುತ್ತ ಸದ್ದು ಮಾಡಲು ಮತ್ತು ಚಲನಚಿತ್ರ ಪರದೆಗಳಲ್ಲಿ ಉತ್ತಮ ಆರಂಭವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ. ಇದು ಕೇರಳದಲ್ಲಿ ಚಿತ್ರಗಳ ಯಶಸ್ಸಿಗೆ ನಿರ್ಣಾಯಕ ಅಂಶವಾಗಿದೆ.<ref>[http://www.hindu.com/fr/2005/12/30/stories/2005123001380100.htm The Hindu : Entertainment Thiruvananthapuram : Boom year for Mollywood] {{Webarchive|url=https://web.archive.org/web/20070921125535/http://www.hindu.com/fr/2005/12/30/stories/2005123001380100.htm|date=21 September 2007}} (30 December 2005)</ref> ೨೦೦೭ ರಲ್ಲಿ, ಕೆಲವು ಸಾಮಾಜಿಕ ಕಾರ್ಯಕರ್ತರು ವಿಸ್ಕಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮೋಹನ್ಲಾಲ್ ವಿರುದ್ಧ ಪ್ರತಿಭಟಿಸಿದರು, ಅದಕ್ಕೆ ಅವರು ಅನೇಕ ಇತರ ಭಾರತೀಯ ನಟರು ಅದೇ ರೀತಿ ಮಾಡುವಾಗ ತಮ್ಮನ್ನು ಮಾತ್ರ ಗುರಿಯಾಗಿಸುವುದು ಅನ್ಯಾಯ ಎಂದು ಪ್ರತಿಕ್ರಿಯಿಸಿದರು.<ref>{{cite news | url=https://news.bbc.co.uk/2/hi/south_asia/6364165.stm | work=[[BBC News]] | first=John | last=Mary | title=Trouble brews over alcohol ads | date=15 February 2007 | access-date=26 May 2011 | archive-url=https://web.archive.org/web/20110525140434/http://news.bbc.co.uk/2/hi/south_asia/6364165.stm | archive-date=25 May 2011 | url-status=live }}</ref>
೨೦೧೨ ರಲ್ಲಿ, ಅರಣ್ಯ ಇಲಾಖೆಯು ಮೋಹನ್ಲಾಲ್ ಅವರ ಮನೆಯಲ್ಲಿ ಆದಾಯ ತೆರಿಗೆ ದಾಳಿಯ ವೇಳೆ ಪತ್ತೆಯಾದ ಆನೆಯ ದಂತಗಳನ್ನು ಹೊಂದಿದ್ದಕ್ಕಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ, ೧೯೭೨ ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿತು.<ref>{{cite news| url=http://timesofindia.indiatimes.com/entertainment/regional/malayalam/news-and-interviews/Superstar-Mohanlal-booked-for-possessing-elephant-tusk/articleshow/14144301.cms | title= Superstar Mohanlal booked for possessing elephant tusk| date=15 June 2012 | work=[[The Times of India]]}}</ref> ನಂತರ, ದಂತಗಳನ್ನು ಮೋಹನ್ಲಾಲ್ ಅವರಿಗೆ ಹಿಂದಿರುಗಿಸಲಾಯಿತು.<ref>{{cite news|last=K. P.|first=Bhavadas|title=Court wonders whether the elephant tusk case is for publicity.|url=http://www.metromatinee.com/news-articles/court-wonders-whether-the-elephant-tusk-case-is-for-publicity-7651|access-date=5 January 2015|agency=Metromatinee|publisher=Metromatinee|date=22 January 2014|archive-url=https://web.archive.org/web/20150105113435/http://www.metromatinee.com/news-articles/court-wonders-whether-the-elephant-tusk-case-is-for-publicity-7651|archive-date=5 January 2015|url-status=dead}}</ref> ಕೆಳ ಅದಾಲತುಗಳು ಮತ್ತು ಕೇರಳ ಉಚ್ಚ ನ್ಯಾಯಾಲಯದಲ್ಲಿ, ರಾಜ್ಯ ಸರ್ಕಾರ ಮತ್ತು ಇಲಾಖೆ ಅಧಿಕಾರಿಗಳು ಮೋಹನ್ಲಾಲ್ ಪಕ್ಷಪಾತವನ್ನು ಆರೋಪಿಸಿ ಮತ್ತು ಈ ವಿಷಯದ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಹಲವಾರು ಅರ್ಜಿಗಳನ್ನು ವಜಾ ಮಾಡಲಾಯಿತು.<ref name="Bennett, Coleman & Co. Ltd"/><ref name="2013HC"/> ೨೦೧೩ ರಲ್ಲಿ, ಅರ್ಜಿಯನ್ನು ವಜಾಗೊಳಿಸುತ್ತಾ, "ರಾಜ್ಯ ಸರ್ಕಾರ ಅಥವಾ ಅದರ ಅಧಿಕಾರಿಗಳು ನಟನ ಪರವಾಗಿ ವರ್ತಿಸಿದ್ದಾರೆ ಎಂದು ತೋರಿಸಲು ಏನೂ ಇಲ್ಲ. ಅಲ್ಲದೆ, ಅರ್ಜಿದಾರರು ತನಿಖೆಯಲ್ಲಿ ಯಾವುದೇ ಅಕ್ರಮ ಅಥವಾ ಕ್ರಮಬಾಹಿರತೆಯನ್ನು ಸೂಚಿಸಲು ಸಾಧ್ಯವಾಗಿಲ್ಲ" ಎಂದು ಉಚ್ಚ ನ್ಯಾಯಾಲಯವು ತೀರ್ಮಾನಿಸಿತು.<ref name="2013HC">{{cite news |title=Tusk seizure case: court rules out graft |url=https://www.thehindu.com/news/national/kerala/tusk-seizure-case-court-rules-out-graft/article4827284.ece |access-date=20 May 2023 |work=[[The Hindu]] |date=19 June 2013 |archive-url=https://web.archive.org/web/20180702060445/https://www.thehindu.com/news/national/kerala/tusk-seizure-case-court-rules-out-graft/article4827284.ece|archive-date=2 July 2018|url-status=live}}</ref> ಅದೇ ರೀತಿ, ೨೦೧೪ ರಲ್ಲಿ, ಉಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಜಾಗೊಳಿಸಿತು ಮತ್ತು ಅರ್ಜಿದಾರರನ್ನು ಟೀಕಿಸಿತು, "ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ, ಆದರೆ ಅದು ಪ್ರಚಾರಕ್ಕಾಗಿ ಮಾತ್ರ" ಎಂದು ಹೇಳಿತು.<ref name="Bennett, Coleman & Co. Ltd">{{cite news|title=Are petitions against Mohanlal aimed at publicity, asks HC|url=http://timesofindia.indiatimes.com/city/kochi/Are-petitions-against-Mohanlal-aimed-at-publicity-asks-HC/articleshow/29125683.cms|access-date=5 January 2015|work=[[The Times of India]]|date=21 January 2014|archive-url=https://web.archive.org/web/20140131022328/http://timesofindia.indiatimes.com/city/kochi/Are-petitions-against-Mohanlal-aimed-at-publicity-asks-HC/articleshow/29125683.cms|archive-date=31 January 2014|url-status=live}}</ref>
'ಭರತಂ' ನಲ್ಲಿನ ಮೋಹನ್ಲಾಲ್ ಅವರ ಅಭಿನಯವನ್ನು ೧೦೦ ವರ್ಷಗಳ ಭಾರತೀಯ ಸಿನೆಮಾವನ್ನು ಆಚರಿಸುವ ಸಂದರ್ಭದಲ್ಲಿ 'ಫೋರ್ಬ್ಸ್ ಇಂಡಿಯಾ' "ಭಾರತೀಯ ಸಿನೆಮಾದ ೨೫ ಶ್ರೇಷ್ಠ ಅಭಿನಯ ಪ್ರದರ್ಶನಗಳು" ಪಟ್ಟಿಯಲ್ಲಿ ಸೇರಿಸಲಾಗಿದೆ.<ref>{{cite web|last1=Prasad|first1=Shishir|last2=Ramanath|first2=N. S.|last3=Mitter|first3=Sohini|title=25 Greatest Acting Performances of Indian Cinema|url=http://www.forbesindia.com/article/100-years-of-indian-cinema/25-greatest-acting-performances-of-indian-cinema/35125/0|work=[[Forbes India]]|access-date=11 January 2017|date=27 April 2013|archive-url=https://archive.today/20141028052937/http://forbesindia.com/article/100-years-of-indian-cinema/25-greatest-acting-performances-of-indian-cinema/35125/0|archive-date=28 October 2014|url-status=live}}</ref> 'ದೃಶ್ಯಂ' ನಲ್ಲಿನ ಅವರ ಅಭಿನಯವನ್ನು 'ಫಿಲ್ಮ್ ಕಂಪ್ಯಾನಿಯನ್' "ದಶಕದ ೧೦೦ ಶ್ರೇಷ್ಠ ಅಭಿನಯಗಳು" ಎಂದು ಪರಿಗಣಿಸಿದೆ.<ref>{{Cite web |title=100 Greatest Performances of the Decade |url=https://filmcompanion.in/best-of-the-decade/100-best-performances-indian-cinema.html |archive-url=https://web.archive.org/web/20191219043509/https://www.filmcompanion.in/best-of-the-decade/100-best-performances-indian-cinema.html |url-status=dead |archive-date=19 December 2019 |access-date=14 November 2020 |website=[[Film Companion]] |language=en}}</ref> ೨೦೨೪ ರಲ್ಲಿ, ಅವರು ಐಎಂಡಿಬಿಯ ೧೦೦ ಅತ್ಯಂತ ವೀಕ್ಷಿತ ಭಾರತೀಯ ತಾರೆಯರ ಪಟ್ಟಿಯಲ್ಲಿ ೪೮ ನೇ ಸ್ಥಾನದಲ್ಲಿದ್ದರು.<ref>{{Cite web |access-date=29 August 2024 |title=Deepika Padukone, Shah Rukh Khan Top IMDb's List of Most Viewed Indian Stars |url=https://variety.com/2024/film/news/deepika-padukone-shah-rukh-khan-imdb-indian-stars-list-1236018332/ |url-status=live |archive-url=https://web.archive.org/web/20241122092159/https://variety.com/2024/film/news/deepika-padukone-shah-rukh-khan-imdb-indian-stars-list-1236018332/ |archive-date=22 November 2024 |website=Variety |date=29 May 2024 }}</ref>
==ವೈಯಕ್ತಿಕ ಜೀವನ==
ಮೋಹನ್ಲಾಲ್ ಅವರು ೨೮ ಏಪ್ರಿಲ್ ೧೯೮೮ ರಂದು ತಮಿಳು ಚಲನಚಿತ್ರ ನಿರ್ಮಾಪಕ ಕೆ. ಬಾಲಾಜಿ ಅವರ ಪುತ್ರಿ ಸುಚಿತ್ರಾ ಅವರನ್ನು ವಿವಾಹವಾದರು.<ref>[http://www.sify.com/movies/actor-producer-k-balaji-passes-away-news-tamil-kkfsbLfgjbg.html Actor-producer K Balaji passes away] {{Webarchive|url=https://web.archive.org/web/20140109185630/http://www.sify.com/movies/actor-producer-k-balaji-passes-away-news-tamil-kkfsbLfgjbg.html |date=9 January 2014 }}. Sify.com (3 May 2009). Retrieved on 6 May 2012.</ref> ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ – ಪ್ರಣವ್ ಮೋಹನ್ಲಾಲ್ ಮತ್ತು ವಿಸ್ಮಯಾ ಮೋಹನ್ಲಾಲ್. ಪ್ರಣವ್ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ, ಮೋಹನ್ಲಾಲ್ ಅವರ 'ಒನ್ನಾಮನ್' (೨೦೦೧) ನಲ್ಲಿ ಪಾದಾರ್ಪಣೆ ಮಾಡಿದರು.<ref name="rediff.com">[http://www.rediff.com/movies/2002/apr/13pran.htm Movies: Introducing Mohanlal's son-Pranav] {{Webarchive|url=https://web.archive.org/web/20101017172106/http://www.rediff.com/movies/2002/apr/13pran.htm |date=17 October 2010 }}. [[Rediff.com]] (13 April 2002). Retrieved on 6 May 2012.</ref> ಮೋಹನ್ಲಾಲ್ ಅವರು ತಮ್ಮ ಮಗ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸಿದಾಗ ಅದನ್ನು ವಿರೋಧಿಸಲಿಲ್ಲ, ಏಕೆಂದರೆ "ಮಕ್ಕಳಿಗೆ ಅಂತಹ ಅನೇಕ ಆಸೆಗಳಿರಬಹುದು. ಅವರಿಗೆ ಏನನ್ನಾದರೂ ಸಾಧಿಸಲು ನಾವು ಸಹಾಯ ಮಾಡಬಹುದಾದರೆ, ಸಮಸ್ಯೆ ಏನು?"<ref name="rediff.com"/> ಅವರು ಕೊಚ್ಚಿಯಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಅವರು ತೇವರಾ,<ref>{{cite news | url=https://www.onmanorama.com/lifestyle/decor/2018/06/27/mohanlal-kochi-home-thevara.html | work=[[Malayala Manorama]] | title=Welcome to actor Mohanlal's home! | date=28 June 2018 | access-date=26 December 2020 | archive-date=27 January 2021 | archive-url=https://web.archive.org/web/20210127213814/https://www.onmanorama.com/lifestyle/decor/2018/06/27/mohanlal-kochi-home-thevara.html | url-status=live }}</ref> ಎಳಮಕ್ಕರ<ref>{{cite news | url=https://timesofindia.indiatimes.com/entertainment/malayalam/movies/news/beans-tomato-lettuce-fill-mohanlals-organic-farm-at-his-elamakkara-house/articleshow/78389488.cms | work=[[The Times of India]] | title=Beans, tomato, lettuce fill Mohanlal's organic farm at his Elamakkara house | date=29 September 2020 | access-date=26 December 2020 | archive-date=5 January 2021 | archive-url=https://web.archive.org/web/20210105080959/https://timesofindia.indiatimes.com/entertainment/malayalam/movies/news/beans-tomato-lettuce-fill-mohanlals-organic-farm-at-his-elamakkara-house/articleshow/78389488.cms | url-status=live }}</ref> ಮತ್ತು ಕುಂದನ್ನೂರ್<ref>{{cite news | url=https://www.onmanorama.com/lifestyle/decor/2022/07/08/mohalal-new-luxury-duplex-flat-kochi.html | work=[[Malayala Manorama]] |title=Actor Mohanlal's new luxury duplex flat in Kochi is magnificent | date=8 July 2022 | access-date=9 March 2025 }}</ref>ಗಳಲ್ಲಿ ಮನೆಗಳನ್ನು ಹೊಂದಿದ್ದಾರೆ. ಅವರು ಚೆನ್ನೈ, ತಮ್ಮ ಸ್ವಂತ ಊರು ತಿರುವನಂತಪುರ, ಊಟಿ,<ref>{{Cite web|title=Income Tax officials search Mohanlal's residence|url=https://www.rediff.com/movies/report/income-tax-officials-search-mohanlals-house/20110726.htm|access-date=2 August 2021|website=Rediff|language=en|archive-date=2 August 2021|archive-url=https://web.archive.org/web/20210802021153/https://www.rediff.com/movies/report/income-tax-officials-search-mohanlals-house/20110726.htm|url-status=live}}</ref> ಮಹಾಬಲಿಪುರಂ, ಅರೇಬಿಯನ್ ರಾಂಚಸ್ನಲ್ಲಿ ವಿಲ್ಲಾ ಮತ್ತು ದುಬೈನಲ್ಲಿ ಬುರ್ಜ್ ಖಲೀಫಾದಲ್ಲಿ ಅಪಾರ್ಟ್ಮೆಂಟ್ ಅನ್ನು ಸಹ ಹೊಂದಿದ್ದಾರೆ.<ref>{{Cite news|url=https://economictimes.indiatimes.com/malayalam-matinee-idol-mohanlal-buying-apartment-in-worlds-tallest-towerburj-khalifa/articleshow/8602725.cms|title=Malayalam matinee idol Mohanlal buying apartment in world's tallest tower, Burj Khalifa|date=27 May 2011|newspaper=The Economic Times|access-date=22 July 2018|archive-url=https://web.archive.org/web/20180722184730/https://economictimes.indiatimes.com/malayalam-matinee-idol-mohanlal-buying-apartment-in-worlds-tallest-towerburj-khalifa/articleshow/8602725.cms|archive-date=22 July 2018|url-status=live}}</ref>
ಮೋಹನ್ಲಾಲ್ ತಮ್ಮನ್ನು ತಾವು ಆಹಾರ ಪ್ರಿಯರು ಎಂದು ವಿವರಿಸಿಕೊಳ್ಳುತ್ತಾರೆ.<ref>{{cite news | url=http://www.hindu.com/mp/2006/04/08/stories/2006040803360300.htm | location=Chennai, India | work=[[The Hindu]] |url-access=subscription| title=Stirring it up with Mohanlal | date=8 April 2006 | access-date=25 May 2011 | archive-url=https://web.archive.org/web/20071127035120/http://www.hindu.com/mp/2006/04/08/stories/2006040803360300.htm | archive-date=27 November 2007 | url-status=dead }}</ref> ಅವರು ಮಧುರ ಸಂಗೀತವನ್ನು ಸಹ ಆನಂದಿಸುತ್ತಾರೆ. ಮೋಹನ್ಲಾಲ್ ಅದೃಷ್ಟ ಮತ್ತು ಆಧ್ಯಾತ್ಮಿಕತೆಯಲ್ಲಿ ಬಲವಾದ ನಂಬಿಕೆಯುಳ್ಳವರು. ಅವರು ಧಾರ್ಮಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿ ಎಂದು ತಮ್ಮನ್ನು ವಿವರಿಸುತ್ತಾರೆ,<ref>{{cite web|title=Mohanlal about Pranav Mohanlal's perspectives about spirituality|url=http://onlookersmedia.in/latestnews/mohanlal-pranav-mohanlals-perspectives-spirituality/|website=onlookersmedia.in|access-date=9 April 2017|archive-url=https://web.archive.org/web/20170404130810/http://onlookersmedia.in/latestnews/mohanlal-pranav-mohanlals-perspectives-spirituality/|archive-date=4 April 2017|url-status=dead}}</ref> ಮತ್ತು ಓಶೋ, ಜೆ. ಕೃಷ್ಣಮೂರ್ತಿ, ಅರವಿಂದ ಮತ್ತು ರಮಣ ಮಹರ್ಷಿಗಳನ್ನು ಓದಲು ಇಷ್ಟಪಡುತ್ತಾರೆ.{{citation needed|date=January 2026}} ಅವರು ತಮ್ಮ ಜೀವನದಲ್ಲಿ ನಡೆದ ಘಟನೆಗಳು, ಅವರ ಚಲನಚಿತ್ರ ವೃತ್ತಿಯನ್ನು ಒಳಗೊಂಡಂತೆ, ಆಕಸ್ಮಿಕ ಎಂದು ಆಗಾಗ್ಗೆ ಹೇಳಿದ್ದಾರೆ.{{citation needed|date=January 2026}}
==ಚಲನಚಿತ್ರ ಪಟ್ಟಿ ಮತ್ತು ಧ್ವನಿಮುದ್ರಿಕೆ==
ಮೋಹನ್ಲಾಲ್ ಅವರ ವೃತ್ತಿಜೀವನವು ನಾಲ್ಕು ದಶಕಗಳವರೆಗೆ ವ್ಯಾಪಿಸಿದ್ದು, ಈ ಅವಧಿಯಲ್ಲಿ ಅವರು ೩೨೫ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಕ್ಯಾಸಿನೊ ಫಿಲ್ಮ್ಸ್, ಚೀರ್ಸ್ ಫಿಲ್ಮ್ಸ್ ಮತ್ತು ಪ್ರಣವಂ ಆರ್ಟ್ಸ್ ಇಂಟರ್ನ್ಯಾಷನಲ್ ಎಂಬ ಮೂರು ನಿರ್ಮಾಣ ಸಂಸ್ಥೆಗಳ ಅಡಿಯಲ್ಲಿ ಚಿತ್ರಗಳನ್ನು ನಿರ್ಮಿಸಿದ್ದಾರೆ ಮತ್ತು ಸಹ-ನಿರ್ಮಿಸಿದ್ದಾರೆ. ಅವರು ಪ್ರಧಾನವಾಗಿ ಮಲಯಾಳಂ ಚಲನಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ, ಆದರೆ ಅವರ ಅಭಿನಯ ಕ್ರೆಡಿಟ್ಗಳು ಕೆಲವು ಬಾಲಿವುಡ್, ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳನ್ನು ಸಹ ಒಳಗೊಂಡಿವೆ.<ref>{{cite web |last=Warrier |first=Shobha |title=I celebrate whether a film is a hit or a flop |url=http://www.rediff.com/entertai/apr/04mohn.htm |work=[[Rediff.com]] |access-date=27 March 2016 |archive-url=https://web.archive.org/web/20141107034816/http://www.rediff.com/entertai/apr/04mohn.htm |archive-date=7 November 2014 |date=4 April 1997 |url-status=live}}</ref> ಮೋಹನ್ಲಾಲ್ ಸಾಂದರ್ಭಿಕವಾಗಿ ಕೆಲವು ವೃತ್ತಿಪರ ನಾಟಕಗಳಲ್ಲಿ ನಟಿಸಿದ್ದಾರೆ ಮತ್ತು ಕೆಲವು ಸಣ್ಣ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅವರು ೩೧ ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಅವರು ನಟಿಸಿದ ಚಿತ್ರಗಳಿಗಾಗಿ. ದೂರದರ್ಶನದಲ್ಲಿ, ಮೋಹನ್ಲಾಲ್ ಮೊದಲ ಸೀಸನ್ನ ಪ್ರಾರಂಭದಿಂದಲೂ ಏಷ್ಯಾನೆಟ್ನಲ್ಲಿ ರಿಯಾಲಿಟಿ ಶೋ 'ಬಿಗ್ ಬಾಸ್' ನ ಆತಿಥ್ಯವನ್ನು ವಹಿಸಿದ್ದಾರೆ.<ref>{{cite news|title=Bigg Boss Malayalam: Mohanlal is super excited to host the show | newspaper=The Times of India|date=16 May 2018|url=https://timesofindia.indiatimes.com/tv/news/malayalam/bigg-boss-malayalam-mohanlal-is-super-excited-to-host-the-show/articleshow/64188898.cms|access-date=14 June 2011}}</ref>
{{Infobox filmography list
| name = ಮೋಹನ್ಲಾಲ್
| image = Super Star Mohanlal BNC.jpg
| image_upright = 1
| alt =
| caption = 2015 ರಲ್ಲಿ ಮೋಹನ್ಲಾಲ್
| film = 366
| television_series = 1
| web_series =
| television_show = 5
| radio_show = 2
| documentary =
| hosting = 5
| music_videos = 2
| narrating = 18
| theatre = 7
| advertising =
| others = 10
}}
ಮೋಹನ್ಲಾಲ್ ಭಾರತೀಯ ನಟ, ನಿರ್ಮಾಪಕ, ವಿತರಕ, ಆತಿಥೇಯ ಮತ್ತು ಹಿನ್ನೆಲೆ ಗಾಯಕರಾಗಿದ್ದು, ಅವರು ಮುಖ್ಯವಾಹಿನಿಯ ಬ್ಲಾಕ್ಬಸ್ಟರ್ ಮತ್ತು ಕಲಾತ್ಮಕ ಚಿತ್ರಗಳಲ್ಲಿ ನಟಿಸಿದ್ದಾರೆ.<ref>{{cite web |last=Warrier |first=Shobha |date=4 April 1997 |title=I celebrate whether a film is a hit or a flop |url=http://www.rediff.com/entertai/apr/04mohn.htm |url-status=live |archive-url=https://web.archive.org/web/20141107034816/http://www.rediff.com/entertai/apr/04mohn.htm |archive-date=7 November 2014 |access-date=27 March 2016 |work=[[Rediff.com]]}}</ref> ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ ೩೬೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಮುಖ್ಯವಾಗಿ ಮಲಯಾಳಂ ಚಲನಚಿತ್ರರಂಗದಲ್ಲಿ ಮತ್ತು ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿಯೂ ಸಹ.<ref name="34films">{{cite news |last=James |first=Anu |date=21 May 2015 |title=Mohanlal Turns 55; Notable Facts about 'the Complete Actor' [PHOTOS] |url=http://www.ibtimes.co.in/mohanlal-turns-55-notable-facts-about-complete-actor-photos-633117 |url-status=live |archive-url=https://web.archive.org/web/20151223202135/http://www.ibtimes.co.in/mohanlal-turns-55-notable-facts-about-complete-actor-photos-633117 |archive-date=23 December 2015 |access-date=1 January 2016 |work=[[International Business Times]]}}</ref>
ಮೋಹನ್ಲಾಲ್ ೧೮ ನೇ ವಯಸ್ಸಿನಲ್ಲಿ 'ತಿರನೋಟ್ಟಂ' (೧೯೭೮) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಲು ಪ್ರಾರಂಭಿಸಿದರು, ಇದು ಒಂದು ಶತಮಾನದ ನಂತರ ಬಿಡುಗಡೆಯಾಯಿತು. ೧೯೮೦ ರಲ್ಲಿ ಪ್ರಣಯ ಥ್ರಿಲ್ಲರ್ 'ಮಂಜಿಲ್ ವಿರಿಂಜ ಪೂಕ್ಕಲ್' ನಲ್ಲಿ ಪ್ರತಿನಾಯಕನಾಗಿ ಅವರು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು.<ref name="ActingAlone">{{cite web |last=Warrier |first=Shobha |date=3 September 2003 |title=Life is not about acting alone |url=http://www.rediff.com/movies/2003/sep/03mohanlal.htm |url-status=live |archive-url=https://web.archive.org/web/20151216230036/http://www.rediff.com/movies/2003/sep/03mohanlal.htm |archive-date=16 December 2015 |access-date=1 January 2016 |work=[[Rediff.com]]}}</ref> ನರೇಂದ್ರನ್ ಎಂಬ ಸ್ಯಾಡಿಸ್ಟಿಕ್ ಪತಿಯ ಪಾತ್ರವು ಅವರಿಗೆ ಮನ್ನಣೆಯನ್ನು ತಂದುಕೊಟ್ಟಿತು ಮತ್ತು ಈ ಚಿತ್ರವು ಕ್ಲಾಸಿಕ್ ಸ್ಥಾನಮಾನವನ್ನು ಗಳಿಸಿತು.<ref name="team48">{{cite web |last=Ranjitha |date=1 September 1998 |title=Team of 48 |url=http://www.rediff.com/movies/1998/sep/01hari1.htm |url-status=live |archive-url=https://web.archive.org/web/20040318112351/http://www.rediff.com/movies/1998/sep/01hari1.htm |archive-date=18 March 2004 |access-date=1 January 2016 |work=[[Rediff.com]]}}</ref><ref>{{cite web |last=Moviebuzz (Sify) |date=14 May 2013 |title=Mohanlal & Poornima are together again! |url=http://www.sify.com/movies/mohanlal-poornima-are-together-again-news-malayalam-nfoqliiejfbsi.html |url-status=dead |archive-url=https://web.archive.org/web/20160219153421/http://www.sify.com/movies/mohanlal-poornima-are-together-again-news-malayalam-nfoqliiejfbsi.html |archive-date=19 February 2016 |access-date=1 January 2016 |website=[[Sify]]}}</ref> ನಂತರ ಅವರು ಹಲವಾರು ಚಿತ್ರಗಳಲ್ಲಿ ಖಳನಾಯಕ ಪಾತ್ರಗಳಲ್ಲಿ ನಟಿಸಿದರು. 'ಪಾದಯೋಟ್ಟಂ' (೧೯೮೨) ಅವರು ಚಿತ್ರದ ಪ್ರಮುಖ ಪ್ರತಿನಾಯಕರಲ್ಲಿ ಒಬ್ಬರ ಮಗನಾಗಿ ಪ್ರಮುಖ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ಮೊದಲ ೭೦ ಎಂಎಂ ಚಿತ್ರವಾಗಿದೆ.<ref name="team48" /> ಕೌಟುಂಬಿಕ ನಾಟಕ 'ಆಟ್ಟಕಳಶಂ' ಅವರನ್ನು ಮಲಯಾಳಂ ಚಲನಚಿತ್ರರಂಗದ ಪ್ರಮುಖ ನಟನಾಗಿ ಸ್ಥಾಪಿಸಿತು.<ref>{{cite news |last=Menon |first=Neelima |date=23 July 2019 |title=Can Mohanlal And Mammootty Keep Up With New-Gen Malayalam Films? |url=https://www.huffingtonpost.in/entry/can-mohanlal-mammootty-keep-up-with-new-gen-malayalam-films_in_5d32e125e4b004b6adb05aa6 |access-date=23 July 2019 |work=[[HuffPost]]}}</ref> ೧೯೮೪ ರಲ್ಲಿ ಅವರು 'ಪೂಚಕ್ಕೊರು ಮೂಕ್ಕುತಿ' ಎಂಬ ಹಾಸ್ಯ ಚಿತ್ರದಲ್ಲಿ ನಟಿಸಿದರು, ಅದರ ಯಶಸ್ಸು ಒಂದು ಪ್ರವೃತ್ತಿಯನ್ನು ಸೃಷ್ಟಿಸಿತು ಮತ್ತು ೧೯೮೦ ರ ದಶಕದಲ್ಲಿ ಪ್ರಕಾರವನ್ನು ಜನಪ್ರಿಯಗೊಳಿಸಿತು.<ref name="25years">{{cite web |last=Warrier |first=Shobha |date=3 September 2003 |title=25 years, 25 landmarks |url=http://www.rediff.com/movies/2003/sep/03mohan1.htm |url-status=live |archive-url=https://web.archive.org/web/20160121020441/http://www.rediff.com/movies/2003/sep/03mohan1.htm |archive-date=21 January 2016 |access-date=1 January 2016 |work=[[Rediff.com]]}}</ref><ref>{{cite news |last=Times News Network |date=12 May 2007 |title=Priyan's remake Darshan |url=http://articles.economictimes.indiatimes.com/2007-05-12/news/28443490_1_priyadarshan-remakes-hindi-film |url-status=dead |archive-url=https://web.archive.org/web/20151222161539/http://articles.economictimes.indiatimes.com/2007-05-12/news/28443490_1_priyadarshan-remakes-hindi-film |archive-date=22 December 2015 |access-date=1 January 2016 |work=[[The Economic Times]]}}</ref> ೧೯೮೪ ರಲ್ಲಿ ಐ.ವಿ. ಶಶಿ ನಿರ್ದೇಶನದ 'ಉಯರಂಗಲಿಲ್' ನಲ್ಲಿ ಅವರು ಪ್ರತಿನಾಯಕನ ಪಾತ್ರವನ್ನು ನಿರ್ವಹಿಸಿದರು, ಇದಕ್ಕಾಗಿ ಅವರು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು.<ref name="MT84">{{cite news |last=Kumar |first=P. K. Ajith |date=19 July 2013 |title=MT film being retold |url=http://www.thehindu.com/todays-paper/tp-national/tp-kerala/mt-film-being-retold/article4930509.ece |url-status=live |archive-url=https://web.archive.org/web/20140831035142/http://www.thehindu.com/todays-paper/tp-national/tp-kerala/mt-film-being-retold/article4930509.ece |archive-date=31 August 2014 |access-date=16 December 2015 |work=[[The Hindu]]}}</ref> ಅದೇ ವರ್ಷ, ಅವರು ಕ್ಯಾಸಿನೊ ಫಿಲ್ಮ್ಸ್ ಅನ್ನು ಸಹ-ಸ್ಥಾಪಿಸಿದರು, ಇದು ನಂತರ ಅವರ ಹಾಸ್ಯ ಚಿತ್ರಗಳಾದ 'ಗಾಂಧಿನಗರ್ 2ನೇ ಸ್ಟ್ರೀಟ್' (೧೯೮೬) ಮತ್ತು 'ನಾಡೋಡಿಕ್ಕಟ್ಟು' (೧೯೮೭) ಅನ್ನು ನಿರ್ಮಿಸಿತು.<ref name="casino">{{cite news |last=N |first=Sethumadhavan |date=26 July 2015 |title=In Search of Greener Pastures |url=https://bangaloremirror.indiatimes.com/entertainment/south-masala/In-search-of-greener-pastures/articleshow/48228444.cms |url-status=live |archive-url=https://web.archive.org/web/20151222095311/http://www.bangaloremirror.com/entertainment/south-masala/In-search-of-greener-pastures/articleshow/48228444.cms |archive-date=22 December 2015 |access-date=31 December 2015 |work=[[Bangalore Mirror]]}}</ref>
'ಒನ್ನಾನಂ ಕುನ್ನಿಲ್ ಒರಡಿ ಕುನ್ನಿಲ್' (೧೯೮೫) ಚಿತ್ರಕ್ಕಾಗಿ "ಸಿಂಧೂರ ಮೇಘಂ" ಹಾಡಿನ ಮೂಲಕ ಅವರು ಹಿನ್ನೆಲೆ ಗಾಯಕರಾಗಿ ತಮ್ಮ ಮೊದಲ ಹಾಡನ್ನು ರೆಕಾರ್ಡ್ ಮಾಡಿದರು.<ref name="25years" /> ೧೯೮೬ ರಲ್ಲಿ ಅವರು ೩೪ ಚಿತ್ರಗಳಲ್ಲಿ ನಟಿಸಿದರು.<ref name="34films" /> ಕಾಮಿಡಿ-ನಾಟಕ 'ಟಿ.ಪಿ. ಬಾಲಗೋಪಾಲನ್ ಎಂ.ಎ.' (೧೯೮೬) ನಲ್ಲಿ ಕೆಳಮಟ್ಟದ ಉದ್ಯೋಗಿಯ ಟಿ.ಪಿ. ಬಾಲಗೋಪಾಲನ್ ಅವರ ಚಿತ್ರಣವು ಅವರಿಗೆ ೨೬ ನೇ ವಯಸ್ಸಿನಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ತಂದುಕೊಟ್ಟಿತು. ಇದು ಕಿರಿಯ ವಿಜೇತರಾಗುವ ದಾಖಲೆಯಾಗಿದ್ದು, ೨೦೦೬ ರವರೆಗೆ ಅವರು ಈ ದಾಖಲೆಯನ್ನು ಹೊಂದಿದ್ದರು.<ref>{{cite news |last=Vasudevan |first=Aishwarya |date=10 January 2012 |title=Prithviraj: Lesser known facts |url=http://timesofindia.indiatimes.com/entertainment/malayalam/movies/Prithviraj-Lesser-known-facts/photostory/48958589.cms |url-status=live |archive-url=https://web.archive.org/web/20160219154704/http://timesofindia.indiatimes.com/entertainment/malayalam/movies/Prithviraj-Lesser-known-facts/photostory/48958589.cms |archive-date=19 February 2016 |access-date=4 January 2016 |work=[[The Times of India]]}}</ref> ಅದೇ ವರ್ಷ ಅವರು ತಮ್ಮ ಎರಡನೇ ನಿರ್ಮಾಣ ಕಂಪನಿಯಾದ ಚೀರ್ಸ್ ಫಿಲ್ಮ್ಸ್ ಅನ್ನು ಸಹ-ಸ್ಥಾಪಿಸಿದರು. ಅಪರಾಧ ನಾಟಕ 'ರಾಜವಿಂಟೆ ಮಕನ್' (೧೯೮೬) ಯಶಸ್ಸಿನೊಂದಿಗೆ ಮೋಹನ್ಲಾಲ್ ಅವರ ಸ್ಟಾರ್ಡಮ್ ಹೆಚ್ಚಾಯಿತು.<ref>{{cite news |last=PTI |date=19 April 2012 |title=Will do a Hindi film only if it's irresistible: Mohanlal |url=http://www.firstpost.com/bollywood/will-do-a-hindi-film-only-if-its-irresistible-mohanlal-280540.html |url-status=live |archive-url=https://web.archive.org/web/20160304151910/http://www.firstpost.com/bollywood/will-do-a-hindi-film-only-if-its-irresistible-mohanlal-280540.html |archive-date=4 March 2016 |access-date=4 March 2016 |work=[[Firstpost]]}}</ref> 'ಇರುಪತಂ ನೂಟ್ಟಾಂಡು' (೧೯೮೭) ನಲ್ಲಿ ಅವರು ಮಾಫಿಯಾ ಮುಖ್ಯಸ್ಥ ಸಾಗರ್ ಅಲಿಯಾಸ್ ಜಾಕಿ ಪಾತ್ರವನ್ನು ನಿರ್ವಹಿಸಿದರು ಮತ್ತು ಅದರ ಬಿಡುಗಡೆಯ ನಂತರ ಅವರು ಕ್ಲಾಸಿಕ್ ವ್ಯಕ್ತಿಯಾಗಿ ಮಾರ್ಪಟ್ಟರು.<ref>{{cite news |last=Onmanorama Desk |date=18 June 2015 |title=Sagar Alias Jacky: Mohanlal joins Dubsmash craze |url=http://english.manoramaonline.com/entertainment/entertainment-news/mohanlal-joins-dubsmash-craze.html |url-status=live |archive-url=https://web.archive.org/web/20151213014353/http://english.manoramaonline.com/entertainment/entertainment-news/mohanlal-joins-dubsmash-craze.html |archive-date=13 December 2015 |access-date=25 March 2016 |work=[[Malayala Manorama]]}}</ref> ೧೯೮೮ ರಲ್ಲಿ ಅವರ ದುರಂತ ಹಾಸ್ಯ 'ಚಿತ್ರಂ' ೫೮ ವಾರಗಳ ನಿರಂತರ ಪ್ರದರ್ಶನದ ದಾಖಲೆಯನ್ನು ಹೊಂದಿತ್ತು.<ref name="milestone">{{cite web |date=21 May 2005 |title=Milestones in Mohanlal's career |url=http://www.sify.com/movies/milestones-in-mohanlal-s-career-news-malayalam-kkfv4xbabjgsi.html |url-status=dead |archive-url=https://web.archive.org/web/20160204162519/http://www.sify.com/movies/milestones-in-mohanlal-s-career-news-malayalam-kkfv4xbabjgsi.html |archive-date=4 February 2016 |access-date=5 January 2016 |website=[[Sify]]}}</ref> ೧೯೮೯ ರಲ್ಲಿ, 'ಕಿರೀಡಂ' ನಲ್ಲಿನ ಅವರ ಅಭಿನಯವು ೩೭ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಉಲ್ಲೇಖವನ್ನು ಗಳಿಸಿಕೊಟ್ಟಿತು.<ref>{{cite web |last=Warrier |first=Shobha |date=20 April 2012 |title=Special: The A-Z of Malayalam cinema |url=http://www.rediff.com/movies/slide-show/slide-show-1-south-a-z-of-malayalam-cinema/20120420.htm#11 |url-status=live |archive-url=https://web.archive.org/web/20131019192242/http://www.rediff.com/movies/slide-show/slide-show-1-south-a-z-of-malayalam-cinema/20120420.htm#11 |archive-date=19 October 2013 |access-date=5 January 2016 |work=[[Rediff.com]]}}</ref>
೧೯೯೦ ರಲ್ಲಿ, ಮೋಹನ್ಲಾಲ್ ತಮ್ಮ ಸ್ವಂತ ಚಲನಚಿತ್ರ ನಿರ್ಮಾಣ ಕಂಪನಿ ಪ್ರಣವಂ ಆರ್ಟ್ಸ್ ಅನ್ನು ಸ್ಥಾಪಿಸಿದರು.<ref name="25years" /> ಇದು ಸಂಗೀತ ಥ್ರಿಲ್ಲರ್ 'ಹಿಸ್ ಹೈನೆಸ್ ಅಬ್ದುಲ್ಲಾ' ಮೂಲಕ ಪಾದಾರ್ಪಣೆ ಮಾಡಿತು, ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು ಮತ್ತು ಆ ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು.<ref>{{cite news |last=Vasudevan |first=Aishwarya |date=24 July 2015 |title=Musical hits of Malayalam film industry |url=http://timesofindia.indiatimes.com/entertainment/malayalam/movies/Musical-hits-of-Malayalam-film-industry/photostory/48522892.cms |url-status=live |archive-url=https://web.archive.org/web/20160219154005/http://timesofindia.indiatimes.com/entertainment/malayalam/movies/Musical-hits-of-Malayalam-film-industry/photostory/48522892.cms |archive-date=19 February 2016 |access-date=24 January 2016 |work=[[The Times of India]]}}</ref> ಪ್ರಣವಂ ಆರ್ಟ್ಸ್ ಅಡಿಯಲ್ಲಿ ಎರಡನೇ ಚಿತ್ರ 'ಭರತಂ' (೧೯೯೧), ಇದು ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟನಾಗಿ ತಂದುಕೊಟ್ಟಿತು ಮತ್ತು 'ಫೋರ್ಬ್ಸ್ ಇಂಡಿಯಾ' ಅದನ್ನು "ಭಾರತೀಯ ಸಿನೆಮಾದ ೨೫ ಶ್ರೇಷ್ಠ ಅಭಿನಯ ಪ್ರದರ್ಶನಗಳು" ಪಟ್ಟಿಯಲ್ಲಿ ಸೇರಿಸಿತು.<ref>{{cite web |last1=Prasad |first1=Shishir |last2=Ramnath |first2=N.S. |last3=Mitter |first3=Sohini |date=27 April 2013 |title=Forbes India Magazine – 25 Greatest Acting Performances of Indian Cinema |url=http://forbesindia.com/article/100-years-of-indian-cinema/25-greatest-acting-performances-of-indian-cinema/35125/0 |url-status=dead |archive-url=https://web.archive.org/web/20160112014841/http://forbesindia.com/article/100-years-of-indian-cinema/25-greatest-acting-performances-of-indian-cinema/35125/0 |archive-date=12 January 2016 |access-date=24 January 2016 |work=[[Forbes India]]}}</ref> ಅವರ ಚಿತ್ರ, ಆಧ್ಯಾತ್ಮಿಕ ಕಾಲ್ಪನಿಕ 'ಗುರು' (೧೯೯೭), ಅತ್ಯುತ್ತಮ ವಿದೇಶಿ ಭಾಷಾ ಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗೆ ಸಲ್ಲಿಸಲಾದ ಮೊದಲ ಮಲಯಾಳಂ ಚಿತ್ರವಾಗಿದೆ.<ref>{{cite news |last=IBN LIVE |date=23 September 2012 |title=From 'Saaransh' to 'Barfi': India's past Oscar entries in Foreign Language Film category |url=http://www.ibnlive.com/photogallery/movies/from-saaransh-to-barfi-indias-past-oscar-entries-in-foreign-language-film-category-854695.html |url-status=live |archive-url=https://web.archive.org/web/20160323110433/http://www.ibnlive.com/photogallery/movies/from-saaransh-to-barfi-indias-past-oscar-entries-in-foreign-language-film-category-854695.html |archive-date=23 March 2016 |access-date=6 February 2016 |work=[[IBN Live]]}}</ref> ೧೯೯೭ ರಲ್ಲಿ, ಅವರು ಮಣಿರತ್ನಂ ನಿರ್ದೇಶನದ ತಮಿಳು ಚಿತ್ರ 'ಇರುವರ್' ನಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು.<ref>{{cite web |last=Srinivasan |first=Pavithra |date=14 June 2010 |title=Mohanlal in Iruvar |url=http://www.rediff.com/movies/slide-show/slide-show-1-south-best-performances-in-mani-ratnam-films/20100614.htm#1 |url-status=live |archive-url=https://web.archive.org/web/20151106081325/http://www.rediff.com/movies/slide-show/slide-show-1-south-best-performances-in-mani-ratnam-films/20100614.htm#1 |archive-date=6 November 2015 |access-date=7 February 2016 |work=[[Rediff.com]]}}</ref> ೧೯೯೯ ರ ಕಾನ್ಸ್ ಚಲನಚಿತ್ರೋತ್ಸವದ ಅನ್ ಸರ್ಟನ್ ರೆಗಾರ್ಡ್ ವಿಭಾಗದಲ್ಲಿ ಪ್ರದರ್ಶನಗೊಂಡ 'ವನಪ್ರಸ್ಥಂ' ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಚಿತ್ರ (ನಿರ್ಮಾಪಕ) ಆಗಿ ತಂದುಕೊಟ್ಟಿತು.<ref name="milestone" /><ref>{{cite news |last=Dhingra |first=Manisha |date=14 May 2014 |title=The History of India at Cannes |url=http://movies.ndtv.com/bollywood/the-history-of-india-at-cannes-639287 |url-status=live |archive-url=https://web.archive.org/web/20150912153645/http://movies.ndtv.com/bollywood/the-history-of-india-at-cannes-639287 |archive-date=12 September 2015 |access-date=7 February 2016 |work=[[NDTV]]}}</ref>
೨೦೦೦ ರಲ್ಲಿ, ಅವರು ಆಕ್ಷನ್ ನಾಟಕ 'ನರಸಿಂಹಂ' ನಲ್ಲಿ ನಟಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು. ಅವರ ಪಾತ್ರವಾದ ಇಂದುಚೂಡನ್ ನಂತರ ಒಂದು ಕ್ಲಾಸಿಕ್ ಅನುಯಾಯಿಗಳನ್ನು ಆಕರ್ಷಿಸಿದೆ.<ref>{{cite web |last=Vikram |first=Raj |date=21 October 2014 |title='Narasimham' to return after 15 years. |url=http://www.metromatinee.com/news-articles/narasimham-to-return-after-15-years-9681 |url-status=dead |archive-url=https://web.archive.org/web/20150107140546/http://www.metromatinee.com/news-articles/narasimham-to-return-after-15-years-9681 |archive-date=7 January 2015 |access-date=8 February 2016}}</ref> ೨೦೦೧ ರಲ್ಲಿ, ಅವರು ಕವಲಾಂ ನಾರಾಯಣ ಪಣಿಕ್ಕರ್ ನಿರ್ದೇಶನದ ಸಂಸ್ಕೃತ ನಾಟಕ 'ಕರ್ಣಭಾರಂ' ನಲ್ಲಿ ಕರ್ಣನ ಪಾತ್ರವನ್ನು ನಿರ್ವಹಿಸಿದರು.<ref>{{cite news |last=Viswanath |first=Chandrakanth |date=20 January 2016 |title=Battle for the Lone |url=http://www.newindianexpress.com/entertainment/malayalam/Battle-for-the-Lone/2016/01/20/article3234763.ece |url-status=dead |archive-url=https://web.archive.org/web/20160215192951/http://www.newindianexpress.com/entertainment/malayalam/Battle-for-the-Lone/2016/01/20/article3234763.ece |archive-date=15 February 2016 |access-date=8 February 2016 |work=[[The New Indian Express]]}}</ref> ೨೦೦೩ ರಲ್ಲಿ, ಅವರು 'ಕಂಪನಿ' (೨೦೦೨) ಹಿಂದಿ ಚಿತ್ರದಲ್ಲಿನ ಪಾತ್ರಕ್ಕಾಗಿ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಯನ್ನು ಅತ್ಯುತ್ತಮ ಪೋಷಕ ನಟನಾಗಿ ಗೆದ್ದರು.<ref>{{cite news |last=Press Trust Of India |date=17 April 2012 |title=I have nothing to prove in Bollywood: Mohanlal |url=http://movies.ndtv.com/regional/i-have-nothing-to-prove-in-bollywood-mohanlal-624585 |url-status=live |archive-url=https://web.archive.org/web/20160215235858/http://movies.ndtv.com/regional/i-have-nothing-to-prove-in-bollywood-mohanlal-624585 |archive-date=15 February 2016 |access-date=8 February 2016 |work=[[NDTV]]}}</ref> ೨೦೦೫ ರಲ್ಲಿ, ಅವರು ಬಿಜೋಯ್ ನಂಬಿಯಾರ್ ನಿರ್ದೇಶನದ ಮೌನ ಸಣ್ಣ ಚಿತ್ರ 'ರಿಫ್ಲೆಕ್ಷನ್ಸ್' ನಲ್ಲಿ ನಟಿಸಿದರು.<ref>{{cite news |last=Rajpal |first=Ryoktim |date=21 May 2015 |title=Happy birthday Mohanlal: 7 relatively unknown facts about the megastar's life |url=http://www.ibnlive.com/news/movies/happy-birthday-mohanlal-7-relatively-unknown-facts-about-the-megastars-life-994765.html |url-status=live |archive-url=https://web.archive.org/web/20160128124241/http://www.ibnlive.com/news/movies/happy-birthday-mohanlal-7-relatively-unknown-facts-about-the-megastars-life-994765.html |archive-date=28 January 2016 |access-date=8 February 2016 |work=[[IBN Live]]}}</ref> 'ತನ್ಮಾತ್ರ' (೨೦೦೫) ನಲ್ಲಿ ಅಲ್ಝೈಮರ್ ಕಾಯಿಲೆಯ ರೋಗಿಯ ಚಿತ್ರಣವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು ಮತ್ತು ಭಾರತೀಯ ವೈದ್ಯಕೀಯ ಸಂಘದಿಂದ ಗೌರವ ಪ್ರಶಸ್ತಿಯನ್ನು ಗಳಿಸಿತು.<ref name="MohanlalTelegraph">{{cite news |last=Jayan |first=T.V. |date=9 March 2014 |title=Actors live between the two worlds of 'action' and 'cut' |url=http://www.telegraphindia.com/1140309/jsp/7days/18061240.jsp |url-status=dead |archive-url=https://web.archive.org/web/20150708110422/http://www.telegraphindia.com/1140309/jsp/7days/18061240.jsp |archive-date=8 July 2015 |access-date=15 January 2016 |work=[[The Telegraph (Calcutta)|The Telegraph]] |location=India}}</ref> 'ಕೀರ್ತಿ ಚಕ್ರ' (೨೦೦೬) ಮತ್ತು ಅದರ ಅನುಕ್ರಮ 'ಕುರುಕ್ಷೇತ್ರ' (೨೦೦೮) ಯುದ್ಧ ಚಿತ್ರಗಳಲ್ಲಿ ಮೇಜರ್ ಮಹಾದೇವನ್ ಪಾತ್ರಕ್ಕಾಗಿ ಭಾರತೀಯ ಟೆರಿಟೋರಿಯಲ್ ಆರ್ಮಿ ಅವರಿಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿತು.<ref>{{cite news |last=Sai Kiran |first=K. P. |date=20 October 2009 |title=Lt Col Mohanlal makes his mark in Territorial Army |url=http://www.newindianexpress.com/nation/article141454.ece |url-status=dead |archive-url=https://web.archive.org/web/20160215191528/http://www.newindianexpress.com/nation/article141454.ece |archive-date=15 February 2016 |access-date=8 February 2016 |work=[[The New Indian Express]] |location=[[New Delhi]]}}</ref> ೨೦೦೮ ರಲ್ಲಿ, ಅವರು 'ಟ್ವೆಂಟಿ:೨೦' ನಲ್ಲಿ ನಟಿಸಿದರು. ಇದು ಮಲಯಾಳಂ ಚಲನಚಿತ್ರ ನಟರ ಸಂಘವಾದ ಅಮ್ಮದ ಬಹುತೇಕ ಎಲ್ಲಾ ನಟರನ್ನು ಒಳಗೊಂಡ ಮೈಲಿಗಲ್ಲಿನ ಚಿತ್ರವಾಗಿದೆ.<ref>{{cite news |last=V. P |first=Nicy |date=7 October 2014 |title=Shaji Kailas Confirms Next Film with Mohanlal and Mammootty |url=http://www.ibtimes.co.in/shaji-kailas-confirms-next-film-mohanlal-mammootty-610700 |url-status=live |archive-url=https://web.archive.org/web/20160216110732/http://www.ibtimes.co.in/shaji-kailas-confirms-next-film-mohanlal-mammootty-610700 |archive-date=16 February 2016 |access-date=8 February 2016 |work=[[International Business Times]]}}</ref>
'ದೃಶ್ಯಂ' (೨೦೧೩), ಅದರಲ್ಲಿ ಅವರು ಸಾಧಾರಣ ವ್ಯಕ್ತಿಯಾದ ಜಾರ್ಜ್ಕುಟ್ಟಿಯ ಪಾತ್ರವನ್ನು ನಿರ್ವಹಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು.<ref>{{cite news |last=James |first=Anu |date=9 September 2015 |title='Drishyam' Director Jeethu Joseph Says He Was Unhappy with Mohanlal Starrer's Hindi Remake Cast |url=http://www.ibtimes.co.in/drishyam-director-jeethu-joseph-says-he-was-unhappy-mohanlal-starrers-hindi-remake-cast-646005 |url-status=live |archive-url=https://web.archive.org/web/20160216111310/http://www.ibtimes.co.in/drishyam-director-jeethu-joseph-says-he-was-unhappy-mohanlal-starrers-hindi-remake-cast-646005 |archive-date=16 February 2016 |access-date=8 February 2016 |work=[[International Business Times]]}}</ref><ref>{{cite news |last=Pillai |first=Radhika C |date=21 December 2013 |title=Mollywood praises Mohanlal for Drishyam's success |url=http://timesofindia.indiatimes.com/entertainment/malayalam/movies/news/Mollywood-praises-Mohanlal-for-Drishyams-success/articleshow/27721249.cms |url-status=live |archive-url=https://web.archive.org/web/20160304151131/http://timesofindia.indiatimes.com/entertainment/malayalam/movies/news/Mollywood-praises-Mohanlal-for-Drishyams-success/articleshow/27721249.cms |archive-date=4 March 2016 |access-date=4 March 2016 |work=[[The Times of India]]}}</ref> ೨೦೧೬ ರಲ್ಲಿ, ಅವರು 'ಪುಲಿಮುರುಗನ್' ಆಕ್ಷನ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಇದು ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಯಿತು ಮತ್ತು ಬಾಕ್ಸ್ ಆಫೀಸ್ನಲ್ಲಿ ೧೦೦ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿದ ಮೊದಲ ಮಲಯಾಳಂ ಚಿತ್ರವಾಗಿದೆ.<ref>{{cite news |last=Viswanath |first=Chandrakanth |date=7 November 2016 |title=Mohanlal's Pulimurugan breaches the Rs 100 crore mark |url=http://www.newindianexpress.com/entertainment/malayalam/2016/nov/07/mohanlals-pulimurugan-breaches-the-rs-100-crore-mark-1536006--2.html |url-status=dead |archive-url=https://web.archive.org/web/20161111194211/http://www.newindianexpress.com/entertainment/malayalam/2016/nov/07/mohanlals-pulimurugan-breaches-the-rs-100-crore-mark-1536006--2.html |archive-date=11 November 2016 |access-date=11 November 2016 |work=[[The New Indian Express]]}}</ref> ೨೦೧೯ ರಲ್ಲಿ, ಅವರು ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ 'ಲೂಸಿಫರ್' ನಲ್ಲಿ ನಟಿಸಿದರು, ಮತ್ತು ಈ ಚಿತ್ರವು ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. ೨೦೨೩ ರಲ್ಲಿ, ಅವರು 'ನೇರು' ನಲ್ಲಿ ನಟಿಸಿದರು, ಇದು ವಾಣಿಜ್ಯ ಯಶಸ್ಸು ಗಳಿಸಿತು. ೨೦೨೫ ರಲ್ಲಿ, ಅವರು 'ಎಲ್೨: ಎಂಪುರಾನ್' ನಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರು ಮತ್ತು ನಂತರದ ಚಿತ್ರವು 'ತುದಾರುಂ' ಆಗಿತ್ತು; ಎರಡೂ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ.<ref>{{Cite web |date=26 April 2025 |title=Kerala Box Office: Mohanlal's L2 Empuraan plummets with OTT premiere; likely to end theatrical run behind Tovino Thomas starrer 2018 |url=https://www.pinkvilla.com/entertainment/box-office/kerala-box-office-mohanlals-l2-empuraan-plummets-with-ott-premiere-likely-to-end-theatrical-run-behind-tovino-thomas-starrer-2018-1384193 |access-date=28 April 2025 |website=[[Pinkvilla]] |language=en}}</ref><ref>{{Cite web |last=Sawlani |first=Kush |date=14 May 2025 |title=Top 5 Indian Films Of 2025 At The Worldwide Box Office So Far: Chhaava reigns supreme; L2 Empuraan and others follow suit |url=https://www.pinkvilla.com/entertainment/box-office/top-5-indian-films-of-2025-at-the-worldwide-box-office-so-far-chhaava-reigns-supreme-l2-empuraan-and-others-follow-suit-1387656 |access-date=14 May 2025 |website=[[Pinkvilla]]}}</ref>
== ಚಿತ್ರಗಳು ==
{{pending films key}}
{| class="wikitable plainrowheaders sortable"
|+ ಮೋಹನ್ಲಾಲ್ ಚಲನಚಿತ್ರ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! class="unsortable" scope="col" | ಟಿಪ್ಪಣಿಗಳು
! class="unsortable" scope="col" | {{ref heading}}
|-
| 1980
! scope="row" | ''[[ಮಂಜಿಲ್ ವಿರಿಂಜ ಪೂಕ್ಕಲ್]]''
| ನರೇಂದ್ರನ್
|
|<ref>{{cite news |last=Express News Service |date=24 April 2012 |title=The Camera that Captured a Star |url=http://www.newindianexpress.com/entertainment/malayalam/article387139.ece |url-status=dead |archive-url=https://web.archive.org/web/20151224195251/http://www.newindianexpress.com/entertainment/malayalam/article387139.ece |archive-date=24 December 2015 |access-date=15 December 2015 |work=[[The New Indian Express]]}}</ref>
|-
| rowspan="8" | 1981
! scope="row" | ''[[ಸಂಚಾರಿ]]''
| ಡಾ. ಶೇಖರ್
|
|<ref>{{cite news |last=ഭാനുപ്രകാശ് |date=16 November 2017 |title=സംഘട്ടനരംഗങ്ങള്ക്ക് ഇറങ്ങുമ്പോള് ജയൻ കൊടുത്ത ആ ഉപദേശമാണ് ഇപ്പോഴും മോഹന്ലാലിന്റെ മനസ്സില് |url=http://www.mathrubhumi.com/movies-music/flashback/jayan-mohanlal-malayalam-movie-stunt-action-hero-action-scenes-1.2391456 |url-status=live |archive-url=https://archive.today/20171130154334/http://www.mathrubhumi.com/movies-music/flashback/jayan-mohanlal-malayalam-movie-stunt-action-hero-action-scenes-1.2391456 |archive-date=30 November 2017 |access-date=15 December 2015 |work=[[Mathrubhumi]] |language=ml}}</ref>
|-
! scope="row" | ''[[ತಕಿಲು ಕೊಟ್ಟಂಪುರಂ]]''
| ವಕೀಲ ಪಾಲ್
|
|<ref>{{cite news |last=Hindu |date=21 July 2011 |title=They set the trend... |url=http://www.thehindu.com/todays-paper/tp-features/tp-metroplus/they-set-the-trend/article2278114.ece |url-status=live |archive-url=https://web.archive.org/web/20160219154201/http://www.thehindu.com/todays-paper/tp-features/tp-metroplus/they-set-the-trend/article2278114.ece |archive-date=19 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ಧನ್ಯಾ]]''
| ಮೋಹನ್ಲಾಲ್
|
|<ref>{{cite news |last=Sidhardhan |first=Sanjith |date=13 June 2012 |title=Mohanlal, Kunchacko to team up |url=http://timesofindia.indiatimes.com/entertainment/malayalam/movies/news/Mohanlal-Kunchacko-to-team-up/articleshow/14058883.cms |url-status=live |archive-url=https://archive.today/20171130151756/https://timesofindia.indiatimes.com/entertainment/malayalam/movies/news/Mohanlal-Kunchacko-to-team-up/articleshow/14058883.cms |archive-date=30 November 2017 |access-date=19 December 2015 |work=[[The Times of India]]}}</ref>
|-
! scope="row" | ''[[ಧ್ರುವಸಂಗಮಂ]]''
| ಶಂಕರನ್ಕುಟ್ಟಿ
|
|<ref name="sasikumar">{{cite news |last=മാത്യു ആർത്താറ്റ് |first=മനോജ് |date=19 July 2014 |title=മായാത്ത ശശികല |url=http://www.mathrubhumi.com/movies-music/features/%E0%B4%AE%E0%B4%BE%E0%B4%AF%E0%B4%BE%E0%B4%A4%E0%B5%8D%E0%B4%A4-%E0%B4%B6%E0%B4%B6%E0%B4%BF%E0%B4%95%E0%B4%B2-1.184372 |url-status=live |archive-url=https://web.archive.org/web/20151222150952/http://www.mathrubhumi.com/movies-music/features/%E0%B4%AE%E0%B4%BE%E0%B4%AF%E0%B4%BE%E0%B4%A4%E0%B5%8D%E0%B4%A4-%E0%B4%B6%E0%B4%B6%E0%B4%BF%E0%B4%95%E0%B4%B2-1.184372 |archive-date=22 December 2015 |access-date=21 December 2015 |work=[[Mathrubhumi]]}}</ref>
|-
! scope="row" | ''[[ಅತ್ತಿಮಾರಿ]]''
| ಶಾನ್
|
|<ref>{{cite news |last=Kumar |first=P. K. AJITH |date=8 January 2015 |title=A fan's tribute to a legend |url=http://www.thehindu.com/news/cities/kozhikode/a-fans-tribute-to-a-legend/article6766196.ece |url-status=live |archive-url=https://web.archive.org/web/20160327175432/http://www.thehindu.com/news/cities/kozhikode/a-fans-tribute-to-a-legend/article6766196.ece |archive-date=27 March 2016 |access-date=15 December 2015 |work=[[The Hindu]]}}</ref>
|-
! scope="row" | ''[[ತೇನುಂ ವಯಂಬುಂ]]''
| ವರ್ಮಾ
|
|<ref>{{cite news |last=Roshith |first=Sivalakshmi |date=14 March 2014 |title='Maash was a God-gifted Musician' |url=http://www.newindianexpress.com/entertainment/malayalam/Maash-was-a-God-gifted-Musician/2014/03/14/article2107583.ece |url-status=dead |archive-url=https://web.archive.org/web/20151222124726/http://www.newindianexpress.com/entertainment/malayalam/Maash-was-a-God-gifted-Musician/2014/03/14/article2107583.ece |archive-date=22 December 2015 |access-date=15 December 2015 |work=[[The New Indian Express]]}}</ref>
|-
! scope="row" | ''[[ಊತಿಕಾಚಿಯ ಪೊನ್ನು]]''
| ನಂದನ್
|
|<ref>{{cite web |last=ഹരികൃഷ്ണൻ [Harikrishnan] |first=ജി. [G.] |date=3 December 2015 |script-title=ml:തകരാറുള്ള ഹൃദയം, തളരാത്ത കഥകൾ |trans-title=A Broken heart, tireless stories |url=http://mangalam.pc.cdn.bitgravity.com/print-edition/keralam/383501 |url-status=dead |archive-url=https://web.archive.org/web/20151222130244/http://mangalam.pc.cdn.bitgravity.com/print-edition/keralam/383501 |archive-date=22 December 2015 |access-date=20 December 2015 |publisher=[[Mangalam Publications]] |language=ml}}</ref>
|-
! scope="row" | ''[[ಅಹಿಂಸಾ]]''
| ಮೋಹನನ್
|
|
|-
| rowspan="14" | 1982
! scope="row" | ''[[ಕೆಳಕ್ಕಾತ ಸಬ್ದಂ]]''
| ಬಾಬು
|
|<ref>{{cite news |last=Santhosh |first=K. |date=19 August 2011 |title=Music director Johnson passes away |url=http://www.thehindu.com/todays-paper/tp-national/tp-kerala/music-director-johnson-passes-away/article2371682.ece |url-status=live |archive-url=https://web.archive.org/web/20160220081700/http://www.thehindu.com/todays-paper/tp-national/tp-kerala/music-director-johnson-passes-away/article2371682.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಫುಟ್ಬಾಲ್]]''
| ಬಾಲಕೃಷ್ಣನ್
|
|<ref>{{cite news |last=Pradeep |first=K. |date=2 March 2007 |title=Artistic director |url=http://www.thehindu.com/todays-paper/tp-features/tp-fridayreview/artistic-director/article2271656.ece |url-status=live |archive-url=https://web.archive.org/web/20160220081700/http://www.thehindu.com/todays-paper/tp-features/tp-fridayreview/artistic-director/article2271656.ece |archive-date=20 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ಪಾದಯೋಟ್ಟಂ]]''
| ಕಣ್ಣನ್
|
|<ref>{{cite news |last=Pillai |first=Sreedhar |date=16 October 2013 |title=Padayottam set to be the biggest thing in films in south India |url=https://www.indiatoday.in/magazine/society-and-the-arts/films/story/19820415-padayottam-set-to-be-the-biggest-thing-in-films-in-south-india-771662-2013-10-16 |url-status=live |archive-url=https://web.archive.org/web/20151222142054/http://indiatoday.intoday.in/story/padayottam-set-to-be-the-biggest-thing-in-films-in-south-india/1/391560.html |archive-date=22 December 2015 |access-date=15 December 2015 |work=[[India Today]]}}</ref>
|-
! scope="row" | ''[[ಎಂತಿನೋ ಪೂಕ್ಕುನ್ನ ಪೂಕ್ಕಳ್]]''
| ಸುರೇಂದ್ರನ್
|
|<ref>{{cite news |last=Mathrubhumi |date=2 December 2015 |title=തിരക്കഥാകൃത്ത് ആലപ്പി ഷെരീഫ് അന്തരിച്ചു |url=http://www.mathrubhumi.com/movies-music/news/alleppey-sheriff-passes-away-malayalam-news-1.709572 |url-status=live |archive-url=https://web.archive.org/web/20151222165019/http://www.mathrubhumi.com/movies-music/news/alleppey-sheriff-passes-away-malayalam-news-1.709572 |archive-date=22 December 2015 |access-date=20 December 2015 |work=[[Mathrubhumi]]}}</ref>
|-
! scope="row" | ''[[ಕಳಿಯಾಮರ್ದನಂ]]''
| ಜಾನಿ
|
|<ref name="backto">{{cite news |last=K |first=Aswathy |date=1 January 2015 |title=Back to Where He Belongs |url=http://www.newindianexpress.com/entertainment/malayalam/Back-to-Where-He-Belongs/2015/01/01/article2597596.ece |url-status=dead |archive-url=https://web.archive.org/web/20151222125300/http://www.newindianexpress.com/entertainment/malayalam/Back-to-Where-He-Belongs/2015/01/01/article2597596.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಮದ್ರಾಸಿಲೆ ಮೋನ್]]''
| ಮೋಹನ್ಲಾಲ್
|
|<ref>{{cite news |author=TNM staff |date=19 June 2017 |title=Not just Sukumara Kurup: 6 spine-chilling real-life murders have inspired Malayalam films |url=http://www.thenewsminute.com/article/not-just-sukumara-kurup-6-spine-chilling-real-life-murders-have-inspired-malayalam-films |url-status=live |archive-url=https://archive.today/20171130152301/http://www.thenewsminute.com/article/not-just-sukumara-kurup-6-spine-chilling-real-life-murders-have-inspired-malayalam-films |archive-date=30 November 2017 |access-date=15 December 2015 |work=[[The News Minute]]}}</ref>
|-
! scope="row" | ''[[ಆಕ್ರೋಶಂ]]''
| ಮೋಹನಚಂದ್ರನ್
|
|<ref>{{cite news |last=Hindu |date=23 November 2015 |title=TV programme listings (23/11/2015) |url=http://www.thehindu.com/features/metroplus/radio-and-tv/article7905504.ece |url-status=live |archive-url=https://web.archive.org/web/20160220070220/http://www.thehindu.com/features/metroplus/radio-and-tv/article7905504.ece |archive-date=20 February 2016 |access-date=22 December 2015 |work=[[The Hindu]]}}</ref>
|-
! scope="row" | ''[[ಎನಿಕ್ಕುಂ ಒರು ದಿವಸಂ]]''
| ಬಾಬು
|
|<ref name="enikkum">{{cite news |last=Hindu |date=1 October 2004 |title=Actor Shivaji dead |url=http://www.thehindu.com/2004/10/01/stories/2004100113800300.htm |url-status=dead |archive-url=https://web.archive.org/web/20160219154609/http://www.thehindu.com/2004/10/01/stories/2004100113800300.htm |archive-date=19 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ಶ್ರೀ ಅಯ್ಯಪ್ಪನುಂ ವಾವರುಂ]]''
| ಕದುತ
|ಅತಿಥಿ ಪಾತ್ರ
|<ref>{{cite news |last=Vijayakumar |first=B. |date=21 November 2015 |title=Sree Ayyappanum Vavarum: 1982 |url=http://www.thehindu.com/features/metroplus/society/sree-ayyappanum-vavarum-film-on-sabarimala/article7903888.ece |url-status=live |archive-url=https://web.archive.org/web/20160220070620/http://www.thehindu.com/features/metroplus/society/sree-ayyappanum-vavarum-film-on-sabarimala/article7903888.ece |archive-date=20 February 2016 |access-date=30 December 2015 |work=[[The Hindu]]}}</ref>
|-
! scope="row" | ''[[ಕುರುಕ್ಕಂಟೆ ಕಲ್ಯಾಣಂ]]''
| ಸೈನಾಬಾ ಅವರ ಪತಿ
|
|<ref>{{cite news |last=Soman |first=Deepa |date=26 March 2015 |title=I like to believe I am young: Sathyan Anthikad |url=http://timesofindia.indiatimes.com/entertainment/malayalam/movies/news/I-like-to-believe-I-am-young-Sathyan-Anthikad/articleshow/46701986.cms? |url-status=live |archive-url=https://web.archive.org/web/20160220070328/http://timesofindia.indiatimes.com/entertainment/malayalam/movies/news/I-like-to-believe-I-am-young-Sathyan-Anthikad/articleshow/46701986.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''ಞಾನ್ ಒನ್ನು ಪರಯಟ್ಟೆ''
| ಶೇಖರನ್ಕುಟ್ಟಿ
|
|<ref name="lalvasantham">{{cite news |last=Manoramaonline |date=21 May 2011 |title=Manorama Online. Metro Manorama. Lal Vasantham |url=http://specials.manoramaonline.com/Movie/2014/lal-vasantham/filimography.htm |url-status=live |archive-url=https://web.archive.org/web/20151223063201/http://specials.manoramaonline.com/Movie/2014/lal-vasantham/filimography.htm |archive-date=23 December 2015 |access-date=22 December 2015 |work=[[Malayala Manorama]]}}</ref>
|-
! scope="row" | ''[[ಎಂಟೆ ಮೊಹಂಗಲ್ ಪೂವನಿಂಜು]]''
| ಜಯನ್
|
|<ref>{{cite news |last=Kumar |first=P. K. Ajith |date=26 June 2010 |title=The circle of life |url=http://www.thehindu.com/features/cinema/the-circle-of-life/article487320.ece |url-status=live |archive-url=https://web.archive.org/web/20160220081700/http://www.thehindu.com/features/cinema/the-circle-of-life/article487320.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಆ ದಿವಸಂ]]''
| ಬಾಸ್
|
|<ref name="may2011">{{cite news |last=Manoramaonline |date=21 May 2011 |title=Mohanlal Birthday:Filmography |url=http://mymanorama.manoramaonline.com/advt/movie/Mohanlal_Birthday_2011/filmography.htm |url-status=dead |archive-url=https://web.archive.org/web/20110806151012/http://mymanorama.manoramaonline.com/advt/movie/Mohanlal_Birthday_2011/filmography.htm |archive-date=6 August 2011 |access-date=23 February 2016 |work=[[Malayala Manorama]]}}</ref>
|-
! scope="row" | ''[[ಸಿಂದೂರ ಸಂಧ್ಯಾಕ್ಕು ಮೌನಂ]]''
| ಕಿಶೋರ್
|
|<ref name="DG">{{cite news |date=11 October 2016 |title=The Priyan you never knew |url=http://www.deepikaglobal.com/News.aspx?ID=89412 |url-status=live |archive-url=https://archive.today/20171130145706/http://www.deepikaglobal.com/News.aspx?ID=89412 |archive-date=30 November 2017 |access-date=30 November 2017 |work=[[Deepika (newspaper)|Deepika]]}}</ref>
|-
| rowspan="26" | 1983
! scope="row" | ''[[ಭೂಕಂಬಂ]]''
| ರಘು
|
|<ref>{{cite news |last=Nair |first=Unni R |date=25 March 2011 |title=Malayalam Cinema's THREE Team UP |url=http://archive.indianexpress.com/news/malayalam-cinemas-three-team-up/766894/ |url-status=live |archive-url=https://www.webcitation.org/6feYsCkH8?url=http://archive.indianexpress.com/news/malayalam-cinemas-three-team-up/766894/ |archive-date=29 February 2016 |access-date=29 February 2016 |work=[[The Indian Express]]}}</ref>
|-
! scope="row" | ''[[ಹೆಲೋ ಮದ್ರಾಸ್ ಗರ್ಲ್]]''
| ಲಾಲ್
|
|<ref name="DG" />
|-
! scope="row" | ''[[ಸಂಧ್ಯಾಕ್ಕು ವಿರಿಂಜ ಪೂವು]]''
| ರಾಮು
|
|<ref>{{cite news |last=Kumar |first=S. R. Ashok |date=27 November 2010 |title=Grill Mill: Seema |url=http://www.thehindu.com/features/cinema/grill-mill-seema/article917579.ece |url-status=live |archive-url=https://web.archive.org/web/20160220071107/http://www.thehindu.com/features/cinema/grill-mill-seema/article917579.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಕುಯಿಲಿನೆ ತೇದಿ]]''
| ತಂಪುರನ್ ಕುಟ್ಟಿ
|
|<ref>{{cite news |last=Kumar |first=P. K. Ajith |date=11 August 2011 |title=Back in action |url=http://www.thehindu.com/features/cinema/back-in-action/article2346718.ece |url-status=live |archive-url=https://web.archive.org/web/20160220070806/http://www.thehindu.com/features/cinema/back-in-action/article2346718.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ನಸೀಮಾ]]''
| ಸೈತಾಲಿ
|
|<ref>{{cite news |last=Viswanath |first=Chandrakanth |date=3 December 2015 |title='Avalude Ravukal' was a Turning Point in Sheriff's Career |url=http://www.newindianexpress.com/states/kerala/Avalude-Ravukal-was-a-Turning-Point-in-Sheriff%E2%80%99s-Career/2015/12/03/article3158247.ece |url-status=dead |archive-url=https://web.archive.org/web/20151222112605/http://www.newindianexpress.com/states/kerala/Avalude-Ravukal-was-a-Turning-Point-in-Sheriff%E2%80%99s-Career/2015/12/03/article3158247.ece |archive-date=22 December 2015 |access-date=17 December 2015 |work=[[The New Indian Express]]}}</ref>
|-
! scope="row" | ''[[ಹಿಮವಾಹಿನಿ]]''
| ಪಾಪಿ
|
|<ref name="may2011" />
|-
! scope="row" | ''[[ಗುರು ದಕ್ಷಿಣಾ]]''
| ಸಚಿವ ಪ್ರಭಾಕರನ್
|
|<ref name="may2011" />
|-
! scope="row" | ''[[ಚಕ್ರವಾಳಂ ಚುವನ್ನಪ್ಪೋಲ್]]''
| ಸುರೇಶ್
|
|<ref>{{cite news |last=Hindu |date=14 September 2015 |title=TV programme listings (14/09/2015) |url=http://www.thehindu.com/features/metroplus/radio-and-tv/article7648382.ece |url-status=live |archive-url=https://web.archive.org/web/20160220070947/http://www.thehindu.com/features/metroplus/radio-and-tv/article7648382.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ತಾವಾಳಂ]]''
| ರಾಜಪ್ಪನ್
|
|<ref name="may2011" />
|-
! scope="row" | ''[[ವೀಸಾ]]''
| ಸನ್ನಿ
|
|<ref name="may2011" />
|-
! scope="row" | ''ಆಧಿಪತ್ಯಂ''
| ಮೋಹನ್
|
|<ref>{{cite news |last=Naha |first=Abdul Latheef |date=30 November 2003 |title=Multifaceted film-maker |url=http://www.thehindu.com/lf/2003/11/30/stories/2003113000140200.htm |url-status=dead |archive-url=https://web.archive.org/web/20160220070740/http://www.thehindu.com/lf/2003/11/30/stories/2003113000140200.htm |archive-date=20 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ಎಂಟೆ ಕಥಾ]]''
| ರಮೇಶ್
|
|<ref name="lalvasantham" />
|-
! scope="row" | ''[[ಒರು ಮುಖಂ ಪಾಲ ಮುಖಂ]]''
| ಸುಕುಮಾರನ್ ತಂಪಿ
|
|<ref name="unitedfilms" />
|-
! scope="row" | ''[[ಪಿನ್ನಿಲಾವು]]''
| ರಘು
|
|<ref>{{cite news |last=Venkiteswaran |first=C. S |date=13 September 2012 |title=Madhavan Nair: An actor for all seasons |url=http://www.thehindu.com/features/cinema/madhavan-nair-an-actor-for-all-seasons/article3893139.ece |url-status=live |archive-url=https://web.archive.org/web/20160113191742/http://www.thehindu.com/features/cinema/madhavan-nair-an-actor-for-all-seasons/article3893139.ece |archive-date=13 January 2016 |access-date=16 December 2015 |work=[[The Hindu]]}}</ref>
|-
! scope="row" | ''[[ಅರಬ್ಬೀಕಡಲ್]]''
| ರವಿ
|
|<ref name="sasikumar" />
|-
! scope="row" | ''ಶೇಷಂ ಕಳ್ಚಯಿಲ್''
| ಪೊಲೀಸ್ ಇನ್ಸ್ಪೆಕ್ಟರ್
|
|<ref>{{cite news |last=Nagarajan |first=Saraswathy |date=6 August 2015 |title=Frankly speaking... |url=http://www.thehindu.com/features/friday-review/balachandra-menons-new-film-njan-samvidhanam-cheyyum/article7507550.ece |url-status=live |archive-url=https://web.archive.org/web/20160220070850/http://www.thehindu.com/features/friday-review/balachandra-menons-new-film-njan-samvidhanam-cheyyum/article7507550.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಇನಿಯೆಂಗಿಲುಮ್]]''
| ರವಿ
|
|<ref>{{cite news |last=Pillai |first=Sreedhar |date=17 July 2013 |title=Poor patchwork |url=https://www.indiatoday.in/magazine/society-and-the-arts/films/story/19830915-iniyenkilum-starring-mammootty-mohan-lal-seema-is-a-badly-made-film-771014-2013-07-17 |url-status=live |archive-url=https://web.archive.org/web/20160306142039/http://indiatoday.intoday.in/story/iniyenkilum-starring-mammootty-mohan-lal-seema-is-a-badly-made-film/1/371951.html |archive-date=6 March 2016 |access-date=29 February 2016 |work=[[India Today]]}}</ref>
|-
! scope="row" | ''[[ಮರಕ್ಕಿಲ್ಲೊರಿಕ್ಕಲುಂ]]''
| ಮುರಳಿ
|
|<ref name="lalvasantham" />
|-
! scope="row" | ''[[ಎಂಟೆ ಮಾಮಟ್ಟುಕ್ಕುಟ್ಟಿಯಮ್ಮಕ್ಕು]]''
| ಅಲೆಕ್ಸ್
|
|<ref>{{cite news |last=Manmadhan |first=Prema |date=5 December 2010 |title=He loves courting risks |url=http://www.thehindu.com/life-and-style/money-and-careers/he-loves-courting-risks/article931599.ece |url-status=live |archive-url=https://web.archive.org/web/20160219155140/http://www.thehindu.com/life-and-style/money-and-careers/he-loves-courting-risks/article931599.ece |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ಎಂಗನೆ ನೀ ಮರಕ್ಕುಮ್]]''
| ಶಂಬು
|
|<ref name="lalvasantham" />
|-
! scope="row" | ''[[ನನಯಂ]]''
| ಬಾಬು
|
|<ref name="unitedfilms" />
|-
! scope="row" | ''[[ಅಸ್ತ್ರಂ]]''
| ದಾಸ್
|
|<ref>{{cite news |last=Staff Reporter |date=10 September 2008 |title=Film-maker P.N. Menon dead |url=http://www.thehindu.com/todays-paper/tp-national/tp-kerala/filmmaker-pn-menon-dead/article1335136.ece |url-status=live |archive-url=https://web.archive.org/web/20160229105428/http://www.thehindu.com/todays-paper/tp-national/tp-kerala/filmmaker-pn-menon-dead/article1335136.ece |archive-date=29 February 2016 |access-date=29 February 2016 |work=[[The Hindu]]}}</ref>
|-
! scope="row" | ''[[ಅಟ್ಟಕಳಶಂ]]''
| ಸಂತೋಷ್ ಬಾಬು
|
|<ref>{{cite news |last=Indo-Asian News Service |date=17 July 2014 |title=Ace film director Sasikumar dead |url=https://www.indiatoday.in/movies/regional-cinema/story/ace-film-director-sasikumar-dead-200766-2014-07-17 |url-status=live |archive-url=https://web.archive.org/web/20151222135438/http://indiatoday.intoday.in/story/ace-film-director-sasikumar-dead/1/372899.html |archive-date=22 December 2015 |access-date=19 December 2015 |work=[[India Today]]}}</ref>
|-
! scope="row" | ''[[ಕೊಲಕ್ಕೊಂಬನ್]]''
| ಗೋಪಿ
|
|<ref name="sasikumar" />
|-
! scope="row" | ''[[ಕಟ್ಟತೆ ಕಿಲಿಕ್ಕೂಡು]]''
| ಉನ್ನಿ ಕೃಷ್ಣನ್
|
|<ref>{{cite news |last=Nagarajan |first=Saraswathy |date=31 March 2012 |title=Master of political thrillers |url=http://www.thehindu.com/features/cinema/master-of-political-thrillers/article3258326.ece |url-status=live |archive-url=https://web.archive.org/web/20160219154936/http://www.thehindu.com/features/cinema/master-of-political-thrillers/article3258326.ece |archive-date=19 February 2016 |access-date=16 December 2015 |work=[[The Hindu]]}}</ref>
|-
! scope="row" | ''[[ಚಂಗಾತಂ]]''
| ಎಸ್.ಟಿ. ಡೇನಿಯಲ್
|
|<ref name="unitedfilms">{{cite web |last=Vikram |first=Raj |date=19 April 2015 |title=When Mammootty and Mohanlal unite! |url=http://www.metromatinee.com/news-articles/-when-mammootty-and-mohanlal-unite-11094 |url-status=dead |archive-url=https://web.archive.org/web/20151222124407/http://www.metromatinee.com/news-articles/-when-mammootty-and-mohanlal-unite-11094 |archive-date=22 December 2015 |access-date=21 December 2015 |publisher=Metromatinee.com}}</ref>
|-
| rowspan="25" | 1984
! scope="row" | ''[[ಅಕ್ಕರೆ]]''
| ಸುಧಾಕರನ್
|
|<ref>{{cite news |last=Nambidi |first=Parvathy |date=2 October 2014 |title=A Tale of Innocence |url=http://www.newindianexpress.com/entertainment/malayalam/A-Tale-of-Innocence/2014/10/02/article2458562.ece |url-status=dead |archive-url=https://web.archive.org/web/20151222111710/http://www.newindianexpress.com/entertainment/malayalam/A-Tale-of-Innocence/2014/10/02/article2458562.ece |archive-date=22 December 2015 |access-date=20 December 2015 |work=[[The New Indian Express]]}}</ref>
|-
! scope="row" | ''[[ಒರು ಕೊಚು ಸ್ವಪ್ನಂ]]''
| ಗಿಲ್ಬರ್ಟ್
|
|<ref>{{cite news |last=Kumar |first=P. K. Ajith |date=12 March 2014 |title=Of MBS, melodies, memories... |url=http://www.thehindu.com/todays-paper/tp-national/tp-kerala/of-mbs-melodies-memories/article5775696.ece |url-status=live |archive-url=https://web.archive.org/web/20160220072352/http://www.thehindu.com/todays-paper/tp-national/tp-kerala/of-mbs-melodies-memories/article5775696.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಮನಸರಿಯತೆ]]''
| ಮಮ್ಮೂಟ್ಟಿ
|
|<ref>{{cite news |date=7 July 2016 |title=മമ്മൂട്ടി -ആരുമറിയാത്ത 45 കാര്യങ്ങള് |url=http://www.mathrubhumi.com/movies-music/features/45-unknown-factors-about-mammootty-malayalam-news-1.1184876 |url-status=live |archive-url=https://archive.today/20171129112805/http://www.mathrubhumi.com/movies-music/features/45-unknown-factors-about-mammootty-malayalam-news-1.1184876 |archive-date=29 November 2017 |access-date=30 November 2017 |work=[[Mathrubhumi]] |language=ml}}</ref>
|-
! scope="row" | ''[[ಸ್ವಂಥಮೇವಿಡೆ ಬಂಧಮೇವಿಡೆ]]''
| ರಾಜೇಂದ್ರನ್
|
|<ref>{{cite news |last=Pradeep |first=K. |date=16 July 2009 |title=Tall and handsome 'bad man' |url=http://www.thehindu.com/todays-paper/tp-features/tp-metroplus/tall-and-handsome-bad-man/article638536.ece |url-status=live |archive-url=https://web.archive.org/web/20160220071226/http://www.thehindu.com/todays-paper/tp-features/tp-metroplus/tall-and-handsome-bad-man/article638536.ece |archive-date=20 February 2016 |access-date=16 December 2015 |work=[[The Hindu]]}}</ref>
|-
! scope="row" | ''[[ಆಲ್ಕ್ಕೂಟ್ಟತಿಲ್ ತನಿಯೆ]]''
| ಅನಿಲ್ ಕುಮಾರ್
|
|<ref>{{cite news |last=Kumar |first=P. K. Ajith |date=26 September 2014 |title=Screenplays for ever |url=http://www.thehindu.com/entertainment/screenplays-for-ever/article6449094.ece |url-status=live |archive-url=https://web.archive.org/web/20160220071645/http://www.thehindu.com/entertainment/screenplays-for-ever/article6449094.ece |archive-date=20 February 2016 |access-date=16 December 2015 |work=[[The Hindu]]}}</ref>
|-
! scope="row" | ''[[ಪೂಚಕ್ಕೊರು ಮೂಕ್ಕುತಿ]]''
| ಗೋಪಾಲಕೃಷ್ಣನ್
|
|<ref>{{cite news |last=Times News Network |date=12 May 2007 |title=Priyan's remake Darshan |url=http://articles.economictimes.indiatimes.com/2007-05-12/news/28443490_1_priyadarshan-remakes-hindi-film |url-status=dead |archive-url=https://web.archive.org/web/20151222161539/http://articles.economictimes.indiatimes.com/2007-05-12/news/28443490_1_priyadarshan-remakes-hindi-film |archive-date=22 December 2015 |access-date=16 December 2015 |work=[[The Economic Times|Economic Times]]}}</ref>
|-
! scope="row" | ''[[ಅಪ್ಪುನ್ನಿ]]''
| ಮೇನನ್ ಮಾಷ್
|
|<ref>{{cite news |last=Menon |first=Neelima |date=31 May 2009 |title=One's own copycat |url=http://www.newindianexpress.com/entertainment/tamil/article124536.ece |url-status=dead |archive-url=https://web.archive.org/web/20160229110324/http://www.newindianexpress.com/entertainment/tamil/article124536.ece |archive-date=29 February 2016 |access-date=29 February 2016 |work=[[The New Indian Express]]}}</ref>
|-
! scope="row" | ''[[ಅತಿರಾತ್ರಂ]]''
| ಪ್ರಸಾದ್
|
|<ref>{{cite news |last=Sidhardhan |first=Sanjith |date=8 September 2011 |title=Mashups in Mollywood! |url=http://timesofindia.indiatimes.com/others/news-interviews/Mashups-in-Mollywood/articleshow/9911371.cms |url-status=live |archive-url=https://web.archive.org/web/20160220082827/http://timesofindia.indiatimes.com/others/news-interviews/Mashups-in-Mollywood/articleshow/9911371.cms |archive-date=20 February 2016 |access-date=16 December 2015 |work=[[The Times of India]]}}</ref>
|-
! scope="row" | ''[[ಉನಾರೂ]]''
| ರಾಮು
|
|<ref>{{cite news |last=Ramachandran |first=Mythily |date=15 April 2015 |title=Mani Ratnam's 'O Kadhal Kanmani' out on Friday |url=http://gulfnews.com/life-style/celebrity/desi-news/south-india/mani-ratnam-s-o-kadhal-kanmani-out-on-friday-1.1492175 |url-status=live |archive-url=https://web.archive.org/web/20151123023156/http://gulfnews.com/life-style/celebrity/desi-news/south-india/mani-ratnam-s-o-kadhal-kanmani-out-on-friday-1.1492175 |archive-date=23 November 2015 |access-date=16 December 2015 |work=[[Gulf News]]}}</ref>
|-
! scope="row" | ''[[ಕಳಿಯಿಲ್ ಅಲ್ಪಂ ಕಾರ್ಯಂ]]''
| ವಿನಯನ್
|
|<ref name="may2011" />
|-
! scope="row" | ''[[ಕಿಳಿಕ್ಕೊಂಚಲ್]]''
| ರತೀಶ್
|
|<ref name="may2011" />
|-
! scope="row" | ''[[ಪಾವಂ ಪೂರ್ಣಿಮಾ]]''
| ಅಣ್ಣನ್ ತಂಪುರನ್
|
|<ref name="reghukumar">{{cite web |last=DC |date=20 February 2014 |title=സംഗീത സംവിധയകാൻ രഘുകുമാർ അന്ധരിച്ചു |url=http://www.dcbooks.com/music-director-raghu-kumar-passed-away.html |url-status=dead |archive-url=https://web.archive.org/web/20151222121950/http://www.dcbooks.com/music-director-raghu-kumar-passed-away.html |archive-date=22 December 2015 |access-date=21 December 2015 |publisher=[[DC Books]]}}</ref>
|-
! scope="row" | ''[[ಲಕ್ಷ್ಮಣ ರೇಖಾ]]''
| ಸುಧಾಕರನ್ ನಾಯರ್
|
|<ref name="may2011" />
|-
! scope="row" | ''[[ವನಿತಾ ಪೊಲೀಸ್]]''
| ಅಚುತನ್
|
|<ref>{{cite news |last=Hindu |date=11 June 2014 |title=TV programme listings (11/06/2014) |url=http://www.thehindu.com/features/metroplus/radio-and-tv/article6101171.ece |url-status=live |archive-url=https://web.archive.org/web/20160220071335/http://www.thehindu.com/features/metroplus/radio-and-tv/article6101171.ece |archive-date=20 February 2016 |access-date=21 December 2015 |work=[[The Hindu]]}}</ref>
|-
! scope="row" | ''[[ವೆಟ್ಟಾ]]''
| ಬಾಲನ್
|
|<ref>{{cite news |last=James |first=Anu |date=1 March 2016 |title=After Rajesh Pillai, director Mohanroop of 1984 'Vetta' fame passes away |url=http://www.ibtimes.co.in/after-rajesh-pillai-director-Mohanroop-1984-vetta-fame-passes-away-668894 |url-status=dead |archive-url=https://web.archive.org/web/20160301174119/http://www.ibtimes.co.in/after-rajesh-pillai-director-Mohanroop-1984-vetta-fame-passes-away-668894 |archive-date=1 March 2016 |access-date=1 March 2016 |work=[[International Business Times]]}}</ref>
|-
! scope="row" | ''[[ಇವಿಡೆ ತುಡಂಗುನ್ನು]]''
| ಕೃಷ್ಣಕುಮಾರ್
|
|<ref name="sasikumar" />
|-
! scope="row" | ''[[ಶ್ರೀಕೃಷ್ಣ ಪರುಂತು]]''
| ಕುಮಾರನ್
|
|
|-
! scope="row" | ''[[ಕುರುಶಿಯುದ್ಧಂ]]''
| ಜಾನಿ
|
|<ref>{{cite news |last=Kumar |first=P. K. Ajith |date=25 April 2013 |title=Architect of blockbusters |url=http://www.thehindu.com/features/cinema/architect-of-blockbusters/article4653559.ece |url-status=live |archive-url=https://web.archive.org/web/20160220083225/http://www.thehindu.com/features/cinema/architect-of-blockbusters/article4653559.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಇಥಾ ಇನ್ನು ಮುತಲ್]]''
| ಸ್ವತಃ
|ಅತಿಥಿ ಪಾತ್ರ
|<ref>{{cite news |last=Staff Reporter |date=24 April 2010 |title=Actor Sreenath found dead in hotel |url=http://www.thehindu.com/todays-paper/tp-national/tp-kerala/actor-sreenath-found-dead-in-hotel/article755384.ece |url-status=live |archive-url=https://web.archive.org/web/20160220072235/http://www.thehindu.com/todays-paper/tp-national/tp-kerala/actor-sreenath-found-dead-in-hotel/article755384.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಅರಿಯಾತ ವೀತಿಕಳ್]]''
| ಬಾಲನ್
|
|<ref name="may2011" />
|-
! scope="row" | ''[[ಅದುತದುತು]]''
| ವಿಷ್ಣು ಮೋಹನ್
|
|<ref>{{cite web |last=MetroMatinee |date=25 September 1984 |title=Aduthaduthu |url=http://www.metromatinee.com/movie/aduthaduthu-3101 |url-status=dead |archive-url=https://web.archive.org/web/20160223162223/http://www.metromatinee.com/movie/aduthaduthu-3101 |archive-date=23 February 2016 |access-date=22 December 2015 |publisher=Metromatinee.com}}</ref>
|-
! scope="row" | ''[[ತಿರಕಳ್]]''
| ಜೇಮ್ಸ್ ಜಾರ್ಜ್
|
|<ref name="lalvasantham" />
|-
! scope="row" | ''[[ಉಯರಂಗಲಿಲ್]]''
| ಪಿ.ಕೆ. ಜಯರಾಜನ್
|
|<ref name="MT84" />
|-
! scope="row" | ''[[ಆದಿಯೋಳುಕ್ಕುಕಳ್]]''
| ಗೋಪಿ
|
|<ref name="unitedfilms" />
|-
! scope="row" | ''[[ಒನ್ನಾನು ನಮ್ಮಳ್]]''
| ನಂದಗೋಪಾಲ್
|
|<ref>{{cite news |last=പ്രകാശ് |first=ഭാനു |date=7 June 2013 |script-title=ml:'ഗുഡ് ഈവെനിംഗ്, മിസ്സിസ് പ്രഭാ നരേന്ദ്രൻ...' |trans-title='Good evening, Mrs. Prabha Narendran...' |url=http://mathrubhumi.com/movies/welcome/366675/ |url-status=dead |archive-url=https://web.archive.org/web/20160310032529/http://mathrubhumi.com/movies/welcome/366675/ |archive-date=10 March 2016 |access-date=29 February 2016 |work=[[Mathrubhumi]] |language=ml}}</ref>
|-
| rowspan="25" | 1985
! scope="row" | ''[[ಅವಿದತೆಪೋಲೆ ಇವಿದೆಯುಂ]]''
| ಸುಕುಮಾರನ್
|
|<ref>{{cite news |last=Sebastian |first=Shevlin |date=28 November 2009 |title=It's all about being Innocent |url=http://www.newindianexpress.com/entertainment/malayalam/article161560.ece |url-status=dead |archive-url=https://web.archive.org/web/20151222131937/http://www.newindianexpress.com/entertainment/malayalam/article161560.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ನೊಕ್ಕೆತ ಡೂರತು ಕಣ್ಣುಂ ನಟ್ಟು]]''
| ಶ್ರೀಕುಮಾರ್
|
|<ref>{{cite news |last=Wire |first=Sampurn |date=8 May 2010 |title=Nadiya switches attention to TV now |url=http://www.newindianexpress.com/entertainment/tamil/article268513.ece?pageToolsFontSize=70%25 |url-status=dead |archive-url=https://web.archive.org/web/20160220071909/http://www.newindianexpress.com/entertainment/tamil/article268513.ece |archive-date=20 February 2016 |access-date=19 December 2015 |work=[[The New Indian Express]]}}</ref>
|-
! scope="row" | ''[[ಒಮಾನಿಕ್ಕನ್ ಒರ್ಮವೈಕ್ಕನ್]]''
| ದೇವ ಕುಮಾರ್
|
|<ref name="lalvasantham" />
|-
! scope="row" | ''[[ನಾಯಕನ್]]''
| ಕೃಷ್ಣದಾಸ್
|
|<ref name="lalvasantham" />
|-
! scope="row" | ''[[ಅನುಬಂಧಂ]]''
| ಭಾಸ್ಕರನ್
|
|<ref>{{cite news |last=K S |first=Aravind |date=23 June 2015 |title=Slices Panning of Life |url=http://www.newindianexpress.com/entertainment/malayalam/Slices-Panning-of-Life/2015/06/23/article2881125.ece |url-status=dead |archive-url=https://web.archive.org/web/20151222080909/http://www.newindianexpress.com/entertainment/malayalam/Slices-Panning-of-Life/2015/06/23/article2881125.ece |archive-date=22 December 2015 |access-date=16 December 2015 |work=[[The New Indian Express]]}}</ref>
|-
! scope="row" | ''[[ಒನ್ನಾನಂ ಕುನ್ನಿಲ್ ಒರಡಿ ಕುನ್ನಿಲ್]]''
| ನಿತಿನ್
|
|<ref>{{cite news |last=Pradeep |first=K. |date=28 November 2008 |title=Notes of nostalgia |url=http://www.thehindu.com/todays-paper/tp-features/tp-fridayreview/notes-of-nostalgia/article1436492.ece |url-status=live |archive-url=https://web.archive.org/web/20160220072434/http://www.thehindu.com/todays-paper/tp-features/tp-fridayreview/notes-of-nostalgia/article1436492.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ಜೀವಂತೆ ಜೀವನ್]]''
| ಜಯನ್
|
|<ref name="lalvasantham" />
|-
! scope="row" | ''[[ಅಂಗಡಿಕ್ಕಪ್ಪುರತು]]''
| ಬಾಬು
|
|<ref name="may2011" />
|-
! scope="row" | ''[[ರಂಗಂ]]''
| ಅಪ್ಪುನ್ನಿ
|
|<ref>{{cite news |last=Mahesh |first=Chitra |date=1 May 2014 |title=Life on her own terms |url=http://www.thehindu.com/features/friday-review/dance/life-on-her-own-terms/article5966113.ece |url-status=live |archive-url=https://web.archive.org/web/20160220083641/http://www.thehindu.com/features/friday-review/dance/life-on-her-own-terms/article5966113.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಕೂಡುಂ ತೇದಿ]]''
| ಪೀಟರ್
|
|<ref>{{cite news |last=Jayakumar |first=G. |date=30 January 2009 |title=Master of suspense |url=http://www.thehindu.com/todays-paper/tp-features/tp-fridayreview/master-of-suspense/article657180.ece |url-status=live |archive-url=https://web.archive.org/web/20160220072557/http://www.thehindu.com/todays-paper/tp-features/tp-fridayreview/master-of-suspense/article657180.ece |archive-date=20 February 2016 |access-date=22 December 2015 |work=[[The Hindu]]}}</ref>
|-
! scope="row" | ''[[ಎಳು ಮುತಲ್ ಒನ್ಪತು ವರೆ]]''
| ಆನಂದ್
|
|<ref name="sasikumar" />
|-
! scope="row" | ''[[ಅರಂ + ಅರಂ = ಕಿನ್ನರಂ]]''
| ನಾರಾಯಣನ್ ಕುಟ್ಟಿ
|
|<ref>{{cite news |last=Sathyendran |first=Nita |date=10 July 2014 |title=Talking the talk... on the small screen |url=http://www.thehindu.com/features/metroplus/radio-and-tv/talking-the-talk-on-the-small-screen/article6197228.ece |url-status=live |archive-url=https://web.archive.org/web/20160220083335/http://www.thehindu.com/features/metroplus/radio-and-tv/talking-the-talk-on-the-small-screen/article6197228.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಮುಲಮೂಟ್ಟಿಲ್ ಆದಿಮ]]''
| ಆದಿಮಕನ್ನೆ
|
|<ref name="may2011" />
|-
! scope="row" | ''[[ಇದನಿಲಂಗಳ್]]''
| ಬಾಲನ್
|
|<ref>{{cite news |last=Kumar |first=Aswin J |date=24 December 2014 |title=A director who could foresee the future |url=http://timesofindia.indiatimes.com/entertainment/tamil/movies/news/A-director-who-could-foresee-the-future/articleshow/45629663.cms |url-status=live |archive-url=https://web.archive.org/web/20160220072631/http://timesofindia.indiatimes.com/entertainment/tamil/movies/news/A-director-who-could-foresee-the-future/articleshow/45629663.cms |archive-date=20 February 2016 |access-date=21 December 2015 |work=[[The Times of India]]}}</ref>
|-
! scope="row" | ''[[ಬೋಯಿಂಗ್ ಬೋಯಿಂಗ್]]''
| ಶ್ಯಾಮ್
|
|<ref>{{cite news |last=Sidhardhan |first=Sanjith |date=22 November 2011 |title='No other language can match Malayalam comedy' |url=http://timesofindia.indiatimes.com/others/news-interviews/No-other-language-can-match-Malayalam-comedy/articleshow/10842071.cms |url-status=live |archive-url=https://web.archive.org/web/20141001204830/http://timesofindia.indiatimes.com/others/news-interviews/No-other-language-can-match-Malayalam-comedy/articleshow/10842071.cms |archive-date=1 October 2014 |access-date=17 December 2015 |work=[[The Times of India]]}}</ref>
|-
! scope="row" | ''[[ಞಾನ್ ಪಿರನ್ನ ನಾಟ್ಟಿಲ್]]''
| ಇನ್ಸ್ಪೆಕ್ಟರ್ ರಾಜಶೇಖರನ್
|
|<ref name="lalvasantham" />
|-
! scope="row" | ''[[ಅಧ್ಯಾಯಂ ಒನ್ನು ಮುತಲ್]]''
| ವಿಷ್ಣು
|
|<ref>{{cite web |last=MetroMatinee |date=22 December 1985 |title=Adhyayam Onnu Muthal Malayalam Movie |url=http://www.metromatinee.com/movie/adhyayam-onnu-muthal-221 |url-status=dead |archive-url=https://web.archive.org/web/20151223034720/http://www.metromatinee.com/movie/adhyayam-onnu-muthal-221 |archive-date=23 December 2015 |access-date=22 December 2015 |publisher=www.metromatinee.com}}</ref>
|-
! scope="row" | ''[[ಪಥಮುದಯಂ]]''
| ಜಯಮೋಹನ್ ಮತ್ತು ವಿಕ್ರಮನ್
|
|<ref>{{cite web |last=DC |date=9 September 2013 |title=എസ് രമേശൻ നായർക്ക് ചങ്ങമ്പുഴ പുരസ്കാരം |url=http://www.dcbooks.com/changampuzha-award-for-s-ramesan-nair.html |url-status=dead |archive-url=https://web.archive.org/web/20151222112635/http://www.dcbooks.com/changampuzha-award-for-s-ramesan-nair.html |archive-date=22 December 2015 |access-date=20 December 2015 |publisher=[[DC Books]]}}</ref>
|-
! scope="row" | ''[[ಗುರುಜಿ ಒರು ವಾಕ್ಕು]]''
| ಸುಧಾಕರನ್ ನಾಯರ್
|
|<ref>{{cite news |last=Kumar |first=P. K. Ajith |date=15 April 2014 |title=Seasons could not wither his snow-fresh songs |url=http://www.thehindu.com/news/cities/Thiruvananthapuram/seasons-could-not-wither-his-snowfresh-songs/article5914258.ece |url-status=live |archive-url=https://web.archive.org/web/20160220072520/http://www.thehindu.com/news/cities/Thiruvananthapuram/seasons-could-not-wither-his-snowfresh-songs/article5914258.ece |archive-date=20 February 2016 |access-date=22 December 2015 |work=[[The Hindu]]}}</ref>
|-
! scope="row" | ''[[ವಸಂತ ಸೇನಾ]]''
| ದೇವನ್
|
|<ref name="may2011" />
|-
! scope="row" | ''[[ಕರಿಂಪಿನ್ ಪೂವಿನಕ್ಕರೆ]]''
| ಭದ್ರನ್
|
|<ref>{{cite news |last=Hindu |date=3 August 2014 |title=TV programme listings (03/08/2014) |url=http://www.thehindu.com/features/metroplus/radio-and-tv/article6275306.ece |url-status=live |archive-url=https://web.archive.org/web/20160220083423/http://www.thehindu.com/features/metroplus/radio-and-tv/article6275306.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''ಅಳಿಯಾತ ಬಂಧಂಗಳ್''
| ಬಾಲಕೃಷ್ಣನ್
|
|
|-
! scope="row" | ''[[ಉಯರುಂ ಞಾನ್ ನಡಕೆ]]''
| ದಾರಪ್ಪನ್
|
|<ref>{{cite news |last=Kumar |first=P. K. AJITH |date=18 January 2008 |title=Charmed by Mohanam |url=http://www.thehindu.com/todays-paper/tp-features/tp-fridayreview/charmed-by-mohanam/article1432882.ece |url-status=live |archive-url=https://web.archive.org/web/20160220083555/http://www.thehindu.com/todays-paper/tp-features/tp-fridayreview/charmed-by-mohanam/article1432882.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಪರಾಯನುಂವಯ್ಯ ಪರಯತಿರಿಕ್ಕನುಂವಯ್ಯ]]''
| ಕರೆಂಟ್ ಹಂಸ
|
|<ref>{{cite news |last=Soman |first=Deepa |date=13 August 2014 |title=No film with Mohanlal and Mammootty immediately: Priyadarshan |url=http://timesofindia.indiatimes.com/Entertainment/Malayalam/Movies/News/No-film-with-Mohanlal-and-Mammootty-immediately-Priyadarshan/articleshow/40193331.cms |url-status=live |archive-url=https://web.archive.org/web/20140817081806/http://timesofindia.indiatimes.com/Entertainment/Malayalam/Movies/News/No-film-with-Mohanlal-and-Mammootty-immediately-Priyadarshan/articleshow/40193331.cms |archive-date=17 August 2014 |access-date=20 December 2015 |work=[[The Times of India]]}}</ref>
|-
! scope="row" | ''[[ಕಂಡು ಕಂಡರಿಂಜು]]''
| ಉನ್ನಿ ಕೃಷ್ಣನ್ ಉನ್ನಿ
|
|<ref>{{cite news |last=Soman |first=Deepa |date=21 August 2015 |title=M- Town's own booze playlist |url=http://timesofindia.indiatimes.com/entertainment/malayalam/movies/news/M-Towns-own-booze-playlist/articleshow/48556134.cms? |url-status=live |archive-url=https://web.archive.org/web/20160219135324/http://timesofindia.indiatimes.com/entertainment/malayalam/movies/news/M-Towns-own-booze-playlist/articleshow/48556134.cms |archive-date=19 February 2016 |access-date=12 December 2015 |work=[[The Times of India]]}}</ref>
|-
| rowspan="34" | 1986
! scope="row" | ''[[ಪಪ್ಪನ್ ಪ್ರಿಯಪ್ಪೆಟ್ಟ ಪಪ್ಪನ್]]''
| ಇನ್ಸ್ಪೆಕ್ಟರ್ ದೇವದಾಸ್
|
|<ref>{{cite news |last=Manmadhan |first=Prema |date=18 September 2011 |title=Backed by 'Bodyguard' |url=http://www.thehindu.com/features/cinema/backed-by-bodyguard/article2462130.ece |url-status=live |archive-url=https://web.archive.org/web/20160220083830/http://www.thehindu.com/features/cinema/backed-by-bodyguard/article2462130.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಡೂರೆ ಡೂರೆ ಒರು ಕೂಡು ಕೂಟ್ಟಂ]]''
| ದಿವಾಕರನ್
|
|<ref>{{cite news |last=Jayaram |first=Deepika |date=20 December 2015 |title=Salt Mango Tree might release on November 6 |url=http://timesofindia.indiatimes.com/entertainment/malayalam/movies/news/Salt-Mango-Tree-might-release-on-November-6/articleshow/49538875.cms? |url-status=live |archive-url=https://web.archive.org/web/20160220084206/http://timesofindia.indiatimes.com/entertainment/malayalam/movies/news/Salt-Mango-Tree-might-release-on-November-6/articleshow/49538875.cms |archive-date=20 February 2016 |access-date=26 October 2015 |work=[[The Times of India]]}}</ref>
|-
! scope="row" | ''[[ಮಳ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು]]''
| ಶಂಬು
| 100 ನೇ ಚಿತ್ರ
|<ref>{{cite news |last=George |first=P. G. |date=21 August 2008 |title=Jest like that |url=http://www.thehindu.com/todays-paper/tp-features/tp-metroplus/jest-like-that/article1423161.ece |url-status=live |archive-url=https://web.archive.org/web/20160220083908/http://www.thehindu.com/todays-paper/tp-features/tp-metroplus/jest-like-that/article1423161.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಪಂಚಾಗ್ನಿ]]''
| ರಶೀದ್
|
|<ref>{{cite web |last=Warrier |first=Shobha |date=29 August 2000 |title=Hariharan speaks about Mohanlal |url=http://www.rediff.com/entertai/2000/aug/29hari.htm |url-status=live |archive-url=https://web.archive.org/web/20151006003044/http://www.rediff.com/entertai/2000/aug/29hari.htm |archive-date=6 October 2015 |access-date=16 December 2015 |work=[[Rediff.com]]}}</ref>
|-
! scope="row" | ''[[ಅಭಯಂ ತೇದಿ]]''
| ಅಪ್ಪು
|
|<ref name="lalvasantham" />
|-
! scope="row" | ''[[ಟಿ.ಪಿ. ಬಾಲಗೋಪಾಲನ್ ಎಂ.ಎ.]]''
| ಬಾಲಗೋಪಾಲನ್
|ಕೇರಳ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ
|<ref>{{cite news |last=Kumar |first=P. K. Ajith |date=15 October 2007 |title=Time for celebrations |url=http://www.thehindu.com/todays-paper/tp-national/tp-kerala/time-for-celebrations/article1929968.ece |url-status=live |archive-url=https://web.archive.org/web/20160220084631/http://www.thehindu.com/todays-paper/tp-national/tp-kerala/time-for-celebrations/article1929968.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ದೇಶಾದನಕ್ಕಿಳಿ ಕರಯಾರಿಲ್ಲ]]''
| ಹರಿಶಂಕರ್
|
|<ref>{{cite news |last=Ramnath |first=Nandini |date=8 February 2014 |title=The Love Issue. To be or not to be? |url=http://www.livemint.com/Leisure/5Le56nRXCDyIN0ZqtVHmsM/The-Love-Issue--To-be-or-not-to-be.html |url-status=live |archive-url=https://web.archive.org/web/20151222095312/http://www.livemint.com/Leisure/5Le56nRXCDyIN0ZqtVHmsM/The-Love-Issue--To-be-or-not-to-be.html |archive-date=22 December 2015 |access-date=20 December 2015 |work=[[Mint (newspaper)|Mint]]}}</ref>
|-
! scope="row" | ''[[ವಾರ್ಥಾ]]''
| ಪರೋಲ್ ವಾಸು
|
|<ref>{{cite news |last=Pillai |first=Sreedhar |date=28 February 1987 |title=Malayalam film makers in Kerala transposes real life into reel life |url=https://www.indiatoday.in/magazine/society-and-the-arts/films/story/19870228-malayalam-film-makers-in-kerala-transposes-real-life-into-reel-life-798594-1987-02-27 |url-status=live |archive-url=https://web.archive.org/web/20151222091736/http://indiatoday.intoday.in/story/malayalam-film-makers-in-kerala-transposes-real-life-into-reel-life/1/336768.html |archive-date=22 December 2015 |access-date=16 December 2015 |work=[[India Today]]}}</ref>
|-
! scope="row" | ''[[ಇನಿಯುಂ ಕುರುಕ್ಷೇತ್ರಂ]]''
| ಸುರೇಶ್ ಬಾಬು
|
|<ref name="sasikumar" />
|-
! scope="row" | ''[[ರೇವತಿಕ್ಕೊರು ಪಾವಕ್ಕುಟ್ಟಿ]]''
| ಡಾ. ಮಾಧವನ್ಕುಟ್ಟಿ
|
|<ref>{{cite news |last=Anthikad |first=Sathyan |date=29 January 2013 |title=അവസാനത്തെ 'ഭരത്' അഥവാ ഭരത് ഗോപി |url=http://www.mathrubhumi.com/books/memories/%E0%B4%85%E0%B4%B5%E0%B4%B8%E0%B4%BE%E0%B4%A8%E0%B4%A4%E0%B5%8D%E0%B4%A4%E0%B5%86-%E0%B4%AD%E0%B4%B0%E0%B4%A4%E0%B5%8D-%E0%B4%85%E0%B4%A5%E0%B4%B5%E0%B4%BE-%E0%B4%AD%E0%B4%B0%E0%B4%A4%E0%B5%8D-%E0%B4%97%E0%B5%8B%E0%B4%AA%E0%B4%BF-1.178792 |url-status=live |archive-url=https://web.archive.org/web/20151222153730/http://www.mathrubhumi.com/books/memories/%E0%B4%85%E0%B4%B5%E0%B4%B8%E0%B4%BE%E0%B4%A8%E0%B4%A4%E0%B5%8D%E0%B4%A4%E0%B5%86-%E0%B4%AD%E0%B4%B0%E0%B4%A4%E0%B5%8D-%E0%B4%85%E0%B4%A5%E0%B4%B5%E0%B4%BE-%E0%B4%AD%E0%B4%B0%E0%B4%A4%E0%B5%8D-%E0%B4%97%E0%B5%8B%E0%B4%AA%E0%B4%BF-1.178792 |archive-date=22 December 2015 |access-date=21 December 2015 |work=[[Mathrubhumi]]}}</ref>
|-
! scope="row" | ''[[ಕರಿಯಿಲಕ್ಕಟ್ಟುಪೋಲೆ]]''
| ಇನ್ಸ್ಪೆಕ್ಟರ್ ಅಚುತನ್ಕುಟ್ಟಿ
|
|<ref>{{cite web |last=Ravindranath |first=Sarita |date=5 August 2014 |title=Murder and the Malayalee |url=http://www.sify.com/movies/murder-and-the-malayalee-news-malayalam-oifmk1jaejjfg.html |url-status=dead |archive-url=https://web.archive.org/web/20151224010605/http://www.sify.com/movies/murder-and-the-malayalee-news-malayalam-oifmk1jaejjfg.html |archive-date=24 December 2015 |access-date=20 December 2015 |website=[[Sify]]}}</ref>
|-
! scope="row" | ''[[ಕುಂಜಟ್ಟಕ್ಕಿಳಿಕಳ್]]''
| ಬಾಲಕೃಷ್ಣನ್
|
|<ref name="sasikumar" />
|-
! scope="row" | ''[[ಹೆಲ್ಲೋ ಮೈ ಡಿಯರ್ ರಾಂಗ್ ನಂಬರ್]]''
| ವೇಣುಗೋಪಾಲ್
|
|<ref>{{cite news |last1=Mehrotra |first1=Rohit |last2=Nair |first2=Vipin |date=3 November 2014 |title=Ringing Endorsement |url=http://www.outlookindia.com/article/ringing-endorsement/292342 |url-status=live |archive-url=https://web.archive.org/web/20151222075026/http://www.outlookindia.com/article/ringing-endorsement/292342 |archive-date=22 December 2015 |access-date=20 December 2015 |work=[[Outlook (Indian magazine)|Outlook]]}}</ref>
|-
! scope="row" | ''[[ಎಂಟೆ ಎಂತೆತು ಮಾತ್ರಂ]]''
| ಮಿಸ್ಟರ್ ಮೇನನ್
|
|<ref name="sasikumar" />
|-
! scope="row" | ''[[ನೇರಂ ಪುಳರುಂಬೋಲ್]]''
| ಗಾಡ್ ಫ್ರೀ
|
|<ref>{{cite news |last=Kumar |first=P. K. Ajith |date=30 June 2008 |title=When masters of melody reunite |url=http://www.thehindu.com/todays-paper/tp-national/tp-kerala/when-masters-of-melody-reunite/article1286946.ece |url-status=live |archive-url=https://web.archive.org/web/20160220083948/http://www.thehindu.com/todays-paper/tp-national/tp-kerala/when-masters-of-melody-reunite/article1286946.ece |archive-date=20 February 2016 |access-date=22 December 2015 |work=[[The Hindu]]}}</ref>
|-
! scope="row" | ''[[ಪೂಮುಖಪ್ಪದಿಯಿಲ್ ನಿನ್ನೆಯುಂ ಕಥು]]''
| ಪೌಲಿ
| ಅತಿಥಿ ಪಾತ್ರ
|<ref name="unitedfilms" />
|-
! scope="row" | ''[[ಕಾವೇರಿ]]''
| ಬಾಲಚಂದ್ರನ್ ನಾಯರ್
|
|<ref>{{cite news |last=Nagarajan |first=Saraswathy |date=22 January 2015 |title=Platter of flavours |url=http://www.thehindu.com/features/friday-review/platter-of-flavours/article6811350.ece |url-status=live |archive-url=https://web.archive.org/web/20160229105735/http://www.thehindu.com/features/friday-review/platter-of-flavours/article6811350.ece |archive-date=29 February 2016 |access-date=29 February 2016 |work=[[The Hindu]]}}</ref>
|-
! scope="row" | ''[[ಮಿಳಿನೀರ್ಪ್ಪೂವುಕಳ್]]''
| ರಿಚರ್ಡ್
|
|<ref>{{cite news |last=Shivaprasad |first=S |date=10 May 2012 |title=He cast a 3-D spell |url=http://www.thehindu.com/features/cinema/he-cast-a-3d-spell/article3404301.ece |url-status=live |archive-url=https://web.archive.org/web/20160220084036/http://www.thehindu.com/features/cinema/he-cast-a-3d-spell/article3404301.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಗಾಂಧಿನಗರ್ 2ನೇ ಸ್ಟ್ರೀಟ್]]''
| ಸೇತು / ರಾಮ್ ಸಿಂಗ್
|
|<ref>{{cite news |last=Menon |first=Neelima |date=6 November 2011 |title=The director with the golden touch |url=http://www.newindianexpress.com/entertainment/malayalam/article240024.ece |url-status=dead |archive-url=https://web.archive.org/web/20160229065642/http://www.newindianexpress.com/entertainment/malayalam/article240024.ece |archive-date=29 February 2016 |access-date=29 February 2016 |work=[[The New Indian Express]]}}</ref>
|-
! scope="row" | ''[[ರಾಜವಿಂಟೆ ಮಕನ್]]''
| ವಿನ್ಸೆಂಟ್ ಗೊಮೆಜ್
|
|<ref>{{cite news |last=B S |first=Shibu |date=7 February 2010 |title=The prince returns |url=http://www.newindianexpress.com/cities/thiruvananthapuram/article178273.ece |url-status=dead |archive-url=https://web.archive.org/web/20151222092859/http://www.newindianexpress.com/cities/thiruvananthapuram/article178273.ece |archive-date=22 December 2015 |access-date=20 December 2015 |work=[[The New Indian Express]]}}</ref>
|-
! scope="row" | ''[[ಯುವಜನೋತ್ಸವಂ]]''
| ಜಯನ್
|
|<ref>{{cite news |last=<!--staff byline--> |date=17 December 2015 |title=Singer in uniform delights patients |url=http://www.thehindu.com/news/national/kerala/singer-in-uniform-delights-patients/article7998820.ece |url-status=live |archive-url=https://web.archive.org/web/20160220084304/http://www.thehindu.com/news/national/kerala/singer-in-uniform-delights-patients/article7998820.ece |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''[[ಸುಖಮೋ ದೇವಿ]]''
| ಸನ್ನಿ
|
|<ref>{{cite news |last=Menon |first=Harish C |date=10 September 2010 |title=Obituary: Venu Nagavally |url=http://www.newindianexpress.com/entertainment/interviews/article299990.ece |url-status=dead |archive-url=https://web.archive.org/web/20151224112419/http://www.newindianexpress.com/entertainment/interviews/article299990.ece |archive-date=24 December 2015 |access-date=16 December 2015 |work=[[The New Indian Express]]}}</ref>
|-
! scope="row" | ''[[ನಮುಕ್ಕು ಪಾರ್ಕ್ಕನ್ ಮುಂತಿರಿತೊಪ್ಪುಕಳ್]]''
| ಸಾಲೋಮನ್
|
|<ref>{{cite web |last=Nair |first=Patcy |date=1 December 2006 |title=Five great Malayalam movies Bollywood should make |url=http://www.rediff.com/movies/2006/dec/26slide4.htm |url-status=live |archive-url=https://web.archive.org/web/20160105122044/http://www.rediff.com/movies/2006/dec/26slide4.htm |archive-date=5 January 2016 |access-date=20 December 2015 |work=[[Rediff.com]]}}</ref>
|-
! scope="row" | ''[[ನಿಮಿಷಂಗಳ್]]''
| ಮುರಳಿ
|
|<ref name="lalvasantham" />
|-
! scope="row" | ''[[ಮನಸಿಲ್ಲೊರು ಮಣಿಮುತು]]''
| ಮೋಹನ್
|
|<ref>{{cite news |last=Hindu |date=20 December 2012 |title=TV programme listings (20/12/2012) |url=http://www.thehindu.com/features/metroplus/radio-and-tv/article4217457.ece |url-status=live |archive-url=https://web.archive.org/web/20160220084457/http://www.thehindu.com/features/metroplus/radio-and-tv/article4217457.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಒಪ್ಪಂ ಒಪ್ಪಾತಿನೊಪ್ಪಂ]]''
| ಕೃಷ್ಣನ್ ಕುಟ್ಟಿ
|
|<ref name="lalvasantham" />
|-
! scope="row" | ''[[ನಿನ್ನಿಷ್ಟಂ ಎನ್ನಿಷ್ಟಂ]]''
| ಶ್ರೀಕುಮಾರ್
|
|
|-
! scope="row" | ''[[ತಾಲವಟ್ಟಂ]]''
| ವಿನೋದ್
|
|<ref>{{cite news |last=Sharma |first=Nandini |date=1 October 2015 |title=Did you know that these popular Hindi movies that were actually copied from South Indian films? |url=http://www.businessinsider.in/Did-you-know-that-these-popular-Hindi-movies-that-were-actually-copied-from-South-Indian-films/articleshow/49183038.cms |url-status=live |archive-url=https://web.archive.org/web/20151225165922/http://www.businessinsider.in/Did-you-know-that-these-popular-Hindi-movies-that-were-actually-copied-from-South-Indian-films/articleshow/49183038.cms |archive-date=25 December 2015 |access-date=16 December 2015 |work=[[Business Insider]]}}</ref>
|-
! scope="row" | ''[[ಗೀತಂ]]''
| ಜಗದೀಶ್ ನಾಯರ್
|
|<ref name="unitedfilms" />
|-
! scope="row" | ''[[ಒನ್ನು ಮುತಲ್ ಪೂಜ್ಯಂ ವರೆ]]''
| ಟೆಲಿಫೋನ್ ಅಂಕಲ್
|
|<ref>{{cite news |last=Sidhardhan |first=Sanjith |date=14 November 2015 |title=Story behind M Town's most iconic child roles |url=http://timesofindia.indiatimes.com/entertainment/malayalam/movies/news/Story-behind-M-Towns-most-iconic-child-roles/articleshow/49770221.cms? |url-status=live |archive-url=https://web.archive.org/web/20160220084409/http://timesofindia.indiatimes.com/entertainment/malayalam/movies/news/Story-behind-M-Towns-most-iconic-child-roles/articleshow/49770221.cms |archive-date=20 February 2016 |access-date=15 December 2015 |work=[[The Times of India]]}}</ref>
|-
! scope="row" | ''[[ಸನ್ಮಾನಸ್ಸುಳ್ಳವರ್ಕ್ಕು ಸಮಾಧಾನಂ]]''
| ಗೋಪಾಲಕೃಷ್ಣ ಪಣಿಕ್ಕರ್
|
|<ref>{{cite news |last=Anand |first=Shilpa Nair |date=28 November 2014 |title=Living spaces: a house to many top films |url=http://www.thehindu.com/features/metroplus/society/living-spaces-a-house-to-many-top-films/article6643602.ece |url-status=live |archive-url=https://web.archive.org/web/20160220084547/http://www.thehindu.com/features/metroplus/society/living-spaces-a-house-to-many-top-films/article6643602.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಪದಯಾನಿ]]''
| ರಮೇಶ್
|
|<ref>{{cite news |date=30 November 2015 |title=Childhood of Mohanlal by Indrajith? |url=http://www.cinemascoop.net/news/movienews/4185-childhood-of-mohanlal-by-indrajith-in-padayani |url-status=live |archive-url=https://web.archive.org/web/20151222103710/http://www.cinemascoop.net/news/movienews/4185-childhood-of-mohanlal-by-indrajith-in-padayani |archive-date=22 December 2015 |access-date=19 December 2015 |work=Cinemascoop.com}}</ref>
|-
! scope="row" | ''[[ಆದಿವೇರುಕಳ್]]''
| ಬಾಲಕೃಷ್ಣನ್
|
|<ref>{{cite news |last=Pillai |first=Radhika C |date=20 December 2013 |title=Mohanlal to play a retired Army officer |url=http://timesofindia.indiatimes.com/entertainment/malayalam/movies/news/Mohanlal-to-play-a-retired-Army-officer/articleshow/27673505.cms? |url-status=live |archive-url=https://web.archive.org/web/20160229065946/http://timesofindia.indiatimes.com/entertainment/malayalam/movies/news/Mohanlal-to-play-a-retired-Army-officer/articleshow/27673505.cms |archive-date=29 February 2016 |access-date=29 February 2016 |work=[[The Times of India]]}}</ref>
|-
! scope="row" | ''[[ಶೋಭ್ರಾಜ್]]''
| ಶೋಭರಾಜ್ ಮತ್ತು ಧರ್ಮರಾಜ್
|
|<ref>{{cite news |last=Express Web Desk |date=30 October 2015 |title=Four films that perfectly capture the 'devil genius' Charles Sobhraj |url=http://indianexpress.com/article/trending/trending-in-india/four-films-that-perfectly-capture-the-devil-genius-charles-sobhraj/ |url-status=dead |archive-url=https://web.archive.org/web/20151222084036/http://indianexpress.com/article/trending/trending-in-india/four-films-that-perfectly-capture-the-devil-genius-charles-sobhraj/ |archive-date=22 December 2015 |access-date=15 December 2015 |work=[[The Indian Express]]}}</ref>
|-
| rowspan="13" | 1987
! scope="row" | ''ಕೈಯೆತುಂ ದೂರತು''
| ವಿನೋದ್
|
|<ref>{{cite web |last=DC |date=18 May 2013 |title=ആദ്യ ഡയലോഗുമായി വീണ്ടും മോഹൻലാൽ |url=http://www.dcbooks.com/mohanlal-again-with-his-first-dialogue.html |url-status=dead |archive-url=https://web.archive.org/web/20151222130334/http://www.dcbooks.com/mohanlal-again-with-his-first-dialogue.html |archive-date=22 December 2015 |access-date=21 December 2015 |publisher=[[DC Books]]}}</ref>
|-
! scope="row" | ''[[ಜನವರಿ ಒರು ಒರ್ಮ]]''
| ರಾಜು
|
|<ref>{{cite news |last=T |first=Nandakumar |date=22 October 2004 |title=Life Thiruvananthapuram : Pooja 'specials' on a platter |url=http://www.thehindu.com/lf/2004/10/22/stories/2004102200860200.htm |url-status=dead |archive-url=https://web.archive.org/web/20160220084715/http://www.thehindu.com/lf/2004/10/22/stories/2004102200860200.htm |archive-date=20 February 2016 |access-date=20 December 2015 |work=[[The Hindu]]}}</ref>
|-
! scope="row" | ''ಇವಿಡೆ ಎಲ್ಲಾವರ್ಕ್ಕುಂ ಸುಘಂ''
| ಅಪ್ಪು
|
|<ref name="lalvasantham" />
|-
! scope="row" | ''[[ಅಮೃತಂ ಗಮಯ]]''
| ಡಾ. ಪಿ.ಕೆ. ಹರಿದಾಸ್
|
|<ref>{{cite news |last=Prakash |first=Asha |date=13 February 2015 |title=Drugs, not new in Malayalam Cinema |url=http://timesofindia.indiatimes.com/entertainment/malayalam/movies/news/Drugs-not-new-in-Malayalam-Cinema/articleshow/46213904.cms |url-status=live |archive-url=https://web.archive.org/web/20150219205235/http://timesofindia.indiatimes.com/entertainment/malayalam/movies/news/Drugs-not-new-in-Malayalam-Cinema/articleshow/46213904.cms |archive-date=19 February 2015 |access-date=16 December 2015 |work=[[The Times of India]]}}</ref>
|-
! scope="row" | ''[[ಆದಿಮಕಳ್ ಉದಮಕಳ್]]''
| ಮೋಹನ್ ಚೆರಿಯನ್
|
|<ref>{{cite news |last=Kumar |first=P. K. Ajith |date=28 March 2012 |title=Malayalam scriptwriter Damodaran dead |url=http://www.thehindu.com/news/national/kerala/malayalam-scriptwriter-damodaran-dead/article3253792.ece |url-status=live |archive-url=https://web.archive.org/web/20160220084800/http://www.thehindu.com/news/national/kerala/malayalam-scriptwriter-damodaran-dead/article3253792.ece |archive-date=20 February 2016 |access-date=16 December 2015 |work=[[The Hindu]]}}</ref>
|-
! scope="row" | ''[[ಸರ್ವಕಳಾಶಾಲ]]''
| ಲಾಲ್
|
|<ref>{{cite news |last=Jayaram |first=Deepika |date=11 August 2015 |title=A slice of life from college corridors |url=http://timesofindia.indiatimes.com/entertainment/malayalam/movies/news/A-slice-of-life-from-college-corridors/articleshow/48439607.cms |url-status=live |archive-url=https://web.archive.org/web/20160220084843/http://timesofindia.indiatimes.com/entertainment/malayalam/movies/news/A-slice-of-life-from-college-corridors/articleshow/48439607.cms |archive-date=20 February 2016 |access-date=16 December 2015 |work=[[The Times of India]]}}</ref>
|-
! scope="row" | ''[[ಇರುಪತಂ ನೂಟ್ಟಾಂಡು]]''
| ಸಾಗರ್ ಅಲಿಯಾಸ್ ಜಾಕಿ
|
|<ref>{{cite news |last=Deccan Chronicle |date=19 June 2015 |title=Mohanlal's dubsmash video goes viral |url=https://www.deccanchronicle.com/150619/entertainment-mollywood/article/mohanlal%E2%80%99s-dubsmash-video-goes-viral |url-status=live |archive-url=https://web.archive.org/web/20150622203840/http://deccanchronicle.com/150619/entertainment-mollywood/article/mohanlal%E2%80%99s-dubsmash-video-goes-viral |archive-date=22 June 2015 |access-date=25 March 2016 |work=[[Deccan Chronicle]]}}</ref>
|-
! scope="row" | ''[[ಚೆಪ್ಪು]]''
| ರಾಮಚಂದ್ರನ್
|
|<ref>{{cite news |last=Indo-Asian News Service |date=8 August 2011 |title=Mohanlal set for his 300th film |url=http://www.newindianexpress.com/entertainment/malayalam/article481448.ece |url-status=dead |archive-url=https://web.archive.org/web/20151222111713/http://www.newindianexpress.com/entertainment/malayalam/article481448.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಭೂಮಿಯಿಲೆ ರಾಜಕ್ಕನ್ಮರ್]]''
| ರಾಜಾ ಮಹೇಂದ್ರ ವರ್ಮಾ
|
|<ref name="lalvasantham" />
|-
! scope="row" | ''[[ಉನ್ನಿಕಳೆ ಒರು ಕಧಾ ಪರಯಂ]]''
| ಅಬಿ
|
|<ref>{{cite news |last=Express News Service |date=19 May 2013 |title=They cast a spell on Kochiites |url=http://www.newindianexpress.com/cities/kochi/They-cast-a-spell-on-Kochiites/2013/05/19/article1596548.ece |url-status=dead |archive-url=https://web.archive.org/web/20151222091711/http://www.newindianexpress.com/cities/kochi/They-cast-a-spell-on-Kochiites/2013/05/19/article1596548.ece |archive-date=22 December 2015 |access-date=18 December 2015 |work=[[The New Indian Express]]}}</ref>
|-
! scope="row" | ''[[ತೂವನತ್ತುಂಬಿಕಲ್]]''
| ಮನ್ನಾರತೋಡಿ ಜಯಕೃಷ್ಣನ್
|
|<ref>{{cite news |last=P |first=Divya |date=26 May 2015 |title=Happy birthday Mohanlal: A look at the actor's iconic roles |url=http://english.manoramaonline.com/entertainment/entertainment-news/malayalam-film-actor-mohanlal-birthday-kerala.html |url-status=live |archive-url=https://web.archive.org/web/20160229111156/http://english.manoramaonline.com/entertainment/entertainment-news/malayalam-film-actor-mohanlal-birthday-kerala.html |archive-date=29 February 2016 |access-date=29 February 2016 |work=[[Malayala Manorama]]}}</ref>
|-
! scope="row" | ''[[ವಾಳಿಯೊರಕ್ಕಾಳ್ಚಕಳ್]]''
| ರಾಘವನ್ / ಆಂಟೋನಿ ಐಸಾಕ್
|
|<ref name="may2011" />
|-
! scope="row" | ''[[ನಾಡೋಡಿಕ್ಕಟ್ಟು]]''
| ದಾಸನ್
|
|<ref>{{cite news |last=Kumar |first=M K Sunil |date=2 February 2012 |title=Blast from the past: The duo who stole our hearts |url=http://timesofindia.indiatimes.com/city/kochi/Blast-from-the-past-The-duo-who-stole-our-hearts/articleshow/11722642.cms |url-status=live |archive-url=https://web.archive.org/web/20150711100814/http://timesofindia.indiatimes.com/city/kochi/Blast-from-the-past-The-duo-who-stole-our-hearts/articleshow/11722642.cms |archive-date=11 July 2015 |access-date=17 December 2015 |work=[[The Times of India]]}}</ref>
|-
| rowspan="12" | 1988
! scope="row" | ''[[ಮುಕುಂತೆಟ್ಟ ಸುಮಿತ್ರಾ ವಿಳಿಕ್ಕುನ್ನು]]''
| ಮುಕುಂದನ್ ಕೆ. ಕಾರ್ತಾ
|
|<ref>{{cite news |last=Sudhish |first=Navamy |date=24 September 2013 |title=People still call me Kalyani: Ranjini |url=http://www.newindianexpress.com/entertainment/malayalam/People-still-call-me-Kalyani-Ranjini/2013/09/24/article1799897.ece |url-status=dead |archive-url=https://web.archive.org/web/20160215203012/http://www.newindianexpress.com/entertainment/malayalam/People-still-call-me-Kalyani-Ranjini/2013/09/24/article1799897.ece |archive-date=15 February 2016 |access-date=17 December 2015 |work=[[The New Indian Express]]}}</ref>
|-
! scope="row" | ''[[ಅಯಿತಂ]]''
| ಶಂಕರನ್
|
|<ref>{{cite news |last=Pradeep |first=K. |date=2 September 2009 |title=End of a journey |url=http://www.thehindu.com/features/friday-review/dance/end-of-a-journey/article13646.ece |url-status=dead |archive-url=https://web.archive.org/web/20160220084925/http://www.thehindu.com/features/friday-review/dance/end-of-a-journey/article13646.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ಮನು ಅಂಕಲ್]]''
| ಸ್ವತಃ
| ಅತಿಥಿ ಪಾತ್ರ
|<ref>{{cite news |last=Nagarajan |first=Saraswathy |date=9 December 2015 |title=I am...Gopakumar C. |url=http://www.thehindu.com/features/metroplus/society/meet-gopakumar-c-first-assistant-in-films/article7966315.ece |url-status=live |archive-url=https://web.archive.org/web/20160220085031/http://www.thehindu.com/features/metroplus/society/meet-gopakumar-c-first-assistant-in-films/article7966315.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ಒರ್ಕ್ಕಪ್ಪುರತು]]''
| ಫ್ರೆಡ್ಡಿ ನಿಕೋಲಸ್
|
|<ref>{{cite news |last=Devasia |first=T. K. |date=27 December 2014 |title=Malayalam film actor Balakrishnan passes away – Khaleej Times |url=http://www.khaleejtimes.com/article/20141227/ARTICLE/312279945/1028 |url-status=live |archive-url=https://web.archive.org/web/20151222082411/http://www.khaleejtimes.com/article/20141227/ARTICLE/312279945/1028 |archive-date=22 December 2015 |access-date=17 December 2015 |work=[[Khaleej Times]]}}</ref>
|-
! scope="row" | ''[[ಪಟ್ಟನಪ್ರವೇಶಂ]]''
| ಸಿಐಡಿ ರಾಮದಾಸ್ / ದಾಸನ್
|
|<ref>{{cite news |last=Sidhardhan |first=Sanjith |date=20 September 2011 |title=Scoring with sequels |url=http://timesofindia.indiatimes.com/others/news-interviews/Scoring-with-sequels/articleshow/10053641.cms |url-status=live |archive-url=https://web.archive.org/web/20160226165234/http://timesofindia.indiatimes.com/others/news-interviews/Scoring-with-sequels/articleshow/10053641.cms |archive-date=26 February 2016 |access-date=26 February 2016 |work=[[The Times of India]]}}</ref>
|-
! scope="row" | ''[[ಪಾದ ಮುದ್ರ]]''
| ಮತು ಪಾಂಡರಂ ಮತ್ತು ಸೋಪ್ ಕುಟ್ಟಪ್ಪನ್
|
|<ref name="sketch">{{cite news |last=Kumar |first=P. K. AJITH |date=12 October 2007 |title=Sketch of the Guru |url=http://www.thehindu.com/todays-paper/tp-features/tp-fridayreview/sketch-of-the-guru/article2273938.ece |url-status=live |archive-url=https://web.archive.org/web/20160220085129/http://www.thehindu.com/todays-paper/tp-features/tp-fridayreview/sketch-of-the-guru/article2273938.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ಆರ್ಯನ್]]''
| ದೇವನಾರಾಯಣನ್
| style="text-align:center;" |
|<ref>{{cite news |last=Viswanath |first=Chandrkanth |date=27 May 2012 |title=Adieu to the exotic villain |url=http://www.newindianexpress.com/entertainment/malayalam/article528449.ece |url-status=dead |archive-url=https://web.archive.org/web/20151224225314/http://www.newindianexpress.com/entertainment/malayalam/article528449.ece |archive-date=24 December 2015 |access-date=17 December 2015 |work=[[The New Indian Express]]}}</ref>
|-
! scope="row" | ''[[ಅನುರಾಗಿ]]''
| ಸಾಮು
|
|<ref>{{cite news |last=Kaumudi |date=2 December 2015 |title=Script writer Alleppey Sherif no more |url=http://www.kaumudi.com/innerpage1.php?newsid=72022 |url-status=live |archive-url=https://web.archive.org/web/20151222164246/http://www.kaumudi.com/innerpage1.php?newsid=72022 |archive-date=22 December 2015 |access-date=17 December 2015 |work=[[Kerala Kaumudi]]}}</ref>
|-
! scope="row" | ''[[ಮೂನ್ನಾಂ ಮುರ]]''
| ಅಲಿ ಇಮ್ರಾನ್
|
|<ref>{{cite news |last=Menon |first=Anasuya |date=4 December 2011 |title=A dekko into past glory |url=http://www.thehindu.com/features/friday-review/history-and-culture/a-dekko-into-past-glory/article2686817.ece |url-status=live |archive-url=https://web.archive.org/web/20160220085210/http://www.thehindu.com/features/friday-review/history-and-culture/a-dekko-into-past-glory/article2686817.ece |archive-date=20 February 2016 |access-date=17 December 2015 |work=[[The Hindu]]}}</ref>
|-
! scope="row" | ''[[ವೆಲ್ಲನಕಳುಡೆ ನಾಡು]]''
| ಸಿ. ಪವಿತ್ರನ್ "ಸಿ.ಪಿ." ನಾಯರ್
|
|<ref>{{cite news |last=Indo-Asian News Service |date=1 July 2010 |title=No dancing around trees in 'Khatta Meetha': Trisha |url=http://zeenews.india.com/entertainment/bollywood/no-dancing-around-trees-in-khatta-meetha-trisha_64872.html |url-status=live |archive-url=https://web.archive.org/web/20151222110801/http://zeenews.india.com/entertainment/bollywood/no-dancing-around-trees-in-khatta-meetha-trisha_64872.html |archive-date=22 December 2015 |access-date=17 December 2015 |work=[[Zee News]]}}</ref>
|-
! scope="row" | ''[[ಉಲ್ಸವಪಿಟ್ಟೆನ್ನು]]''
| ಅನಿಯನ್ಕುಟ್ಟನ್
|
|<ref>{{cite web |last=Warrier |first=Shobha |date=29 January 2008 |title=Goodbye, Mr Bharat Gopi |url=http://www.rediff.com/movies/2008/jan/29gopi.htm |url-status=live |archive-url=https://web.archive.org/web/20150721234517/http://www.rediff.com/movies/2008/jan/29gopi.htm |archive-date=21 July 2015 |access-date=17 December 2015 |work=[[Rediff.com]]}}</ref>
|-
! scope="row" | ''[[ಚಿತ್ರಂ]]''
| ವಿಷ್ಣು
|
|<ref>{{cite news |last=Ramachandran |first=Mythily |date=16 April 2014 |title=Catching up with actress Ranjini |url=http://gulfnews.com/life-style/celebrity/catching-up-with-actress-ranjini-1.1320172 |url-status=live |archive-url=https://web.archive.org/web/20151222091411/http://gulfnews.com/life-style/celebrity/catching-up-with-actress-ranjini-1.1320172 |archive-date=22 December 2015 |access-date=17 December 2015 |work=[[Gulf News]]}}</ref>
|-
| rowspan="10" | 1989
! scope="row" | ''[[ದೌತ್ಯಂ]]''
| ಕ್ಯಾಪ್ಟನ್ ರಾಯ್ ಜಾಕೋಬ್ ಥಾಮಸ್
|
|<ref>{{cite news |last=Sidhardhan |first=Sanjith |date=6 May 2013 |title=Mohanlal to play a military officer once more |url=http://timesofindia.indiatimes.com/entertainment/malayalam/movies/news/Mohanlal-to-play-a-military-officer-once-more/articleshow/19895566.cms? |url-status=live |archive-url=https://web.archive.org/web/20160220085344/http://timesofindia.indiatimes.com/entertainment/malayalam/movies/news/Mohanlal-to-play-a-military-officer-once-more/articleshow/19895566.cms |archive-date=20 February 2016 |access-date=16 December 2015 |work=[[The Times of India]]}}</ref>
|-
! scope="row" | ''[[ಸೀಸನ್]]''
| ಜೀವನ್
|
|<ref>{{cite web |last=Vikram |first=Raj |date=26 October 2010 |title=Prithviraj to do "Season" remake.. |url=http://www.metromatinee.com/news-articles/prithviraj-to-do-season-remake-2698 |url-status=dead |archive-url=https://web.archive.org/web/20160226174149/http://www.metromatinee.com/news-articles/prithviraj-to-do-season-remake-2698 |archive-date=26 February 2016 |access-date=26 February 2016 |publisher=Metromatinee.com}}</ref>
|-
! scope="row" | ''[[ವರವೇಲ್ಪು]]''
| ಮುರಳಿಧರನ್
|
|<ref>{{cite news |last=Sanandakumar |first=S |date=14 July 2013 |title=Kerala's non-resident tycoons investing in massive projects back home |url=http://articles.economictimes.indiatimes.com/2013-07-14/news/40554381_1_nrks-yusuffali-ma-gulf-countries |url-status=dead |archive-url=https://web.archive.org/web/20150627200024/http://articles.economictimes.indiatimes.com/2013-07-14/news/40554381_1_nrks-yusuffali-ma-gulf-countries |archive-date=27 June 2015 |access-date=16 December 2015 |work=[[The Economic Times|Economic Times]]}}</ref>
|-
! scope="row" | ''[[ನಾಡುವಾಳಿಕಳ್]]''
| ಅರ್ಜುನ್
|
|<ref>{{cite news |last=Sidhardhan |first=Sanjith |date=18 June 2012 |title=One more film inspired by The Godfather |url=http://timesofindia.indiatimes.com/entertainment/malayalam/movies/news/One-more-film-inspired-by-The-Godfather/articleshow/14207849.cms |url-status=live |archive-url=https://web.archive.org/web/20150404004133/http://timesofindia.indiatimes.com/entertainment/malayalam/movies/news/One-more-film-inspired-by-The-Godfather/articleshow/14207849.cms |archive-date=4 April 2015 |access-date=16 December 2015 |work=[[The Times of India]]}}</ref>
|-
! scope="row" | ''[[ವಂದನಂ]]''
| ಉನ್ನಿಕೃಷ್ಣನ್
|
|<ref>{{cite news |last=Krishnakumar |first=R |date=27 July 2014 |title=Bangalore woos filmmakers |url=http://www.deccanherald.com/content/422054/bangalore-woos-filmmakers.html |url-status=live |archive-url=https://web.archive.org/web/20151222122931/http://www.deccanherald.com/content/422054/bangalore-woos-filmmakers.html |archive-date=22 December 2015 |access-date=17 December 2015 |work=[[Deccan Herald]]}}</ref>
|-
! scope="row" | ''[[ಪೆರುವಣ್ಣಪುರತೆ ವಿಶೇಷಂಗಳ್]]''
| ಅಚುತ ಕುರುಪ್
| ಅತಿಥಿ ಪಾತ್ರ
|<ref>{{cite news |last=Soman |first=Deepa |date=9 November 2013 |title=In Mollywood, cameo roles are on the rise |url=http://timesofindia.indiatimes.com/entertainment/malayalam/movies/news/In-Mollywood-cameo-roles-are-on-the-rise/articleshow/25445574.cms? |url-status=live |archive-url=https://web.archive.org/web/20160220085428/http://timesofindia.indiatimes.com/entertainment/malayalam/movies/news/In-Mollywood-cameo-roles-are-on-the-rise/articleshow/25445574.cms |archive-date=20 February 2016 |access-date=17 December 2015 |work=[[The Times of India]]}}</ref>
|-
! scope="row" | ''[[ಕಿರೀಡಂ]]''
| ಸೇತುಮಾಧವನ್
|ರಾಷ್ಟ್ರೀಯ ಚಲನಚಿತ್ರ ವಿಶೇಷ ಉಲ್ಲೇಖ
|<ref>{{cite news |last=Krishnakumar |first=R |date=20 July 2014 |title=Birth of a tragic hero |url=http://www.deccanherald.com/content/420608/birth-tragic-hero.html |url-status=live |archive-url=https://web.archive.org/web/20160113163614/http://www.deccanherald.com/content/420608/birth-tragic-hero.html |archive-date=13 January 2016 |access-date=17 December 2015 |work=[[Deccan Herald]]}}</ref>
|-
! scope="row" | ''[[ಲಾಲ್ ಅಮೆರಿಕಯಿಲ್]]''
| ವಿನೋದ್
| ವಿಳಂಬ ಬಿಡುಗಡೆ; 1986 ರಲ್ಲಿ ಚಿತ್ರೀಕರಿಸಲಾಗಿದೆ
|<ref>{{cite news |last=Sidhardhan |first=Sanjith |date=14 April 2012 |title=Mollywood goes to America |url=http://timesofindia.indiatimes.com/others/news-interviews/Mollywood-goes-to-America/articleshow/12651112.cms? |url-status=live |archive-url=https://web.archive.org/web/20160220085256/http://timesofindia.indiatimes.com/others/news-interviews/Mollywood-goes-to-America/articleshow/12651112.cms |archive-date=20 February 2016 |access-date=16 December 2015 |work=[[The Times of India]]}}</ref>
|-
! scope="row" | ''[[ಆಧಿಪನ್]]''
| ವಕೀಲ ಶ್ಯಾಮ್ ಪ್ರಕಾಶ್
|
|<ref>{{cite news |last=Sidhardhan |first=Sanjith |date=16 September 2015 |title='Mohanlal's mischief attracted me' |url=http://timesofindia.indiatimes.com/entertainment/malayalam/movies/news/Mohanlals-mischief-attracted-me/articleshow/48982100.cms? |url-status=live |archive-url=https://web.archive.org/web/20160220085515/http://timesofindia.indiatimes.com/entertainment/malayalam/movies/news/Mohanlals-mischief-attracted-me/articleshow/48982100.cms |archive-date=20 February 2016 |access-date=17 December 2015 |work=[[The Times of India]]}}</ref>
|-
! scope="row" | ''[[ದಶರಥಂ]]''
| ರಾಜೀವ್ ಮೇನನ್
|
|<ref>{{cite news |last=Diwakar |first=Gitanjali |date=29 July 2015 |title=Surrogacy: Narrated through motion pictures |url=http://english.manoramaonline.com/lifestyle/health/surrogacy-narrated-through-motion-pictures.html |url-status=dead |archive-url=https://web.archive.org/web/20151222144515/http://english.manoramaonline.com/lifestyle/health/surrogacy-narrated-through-motion-pictures.html |archive-date=22 December 2015 |access-date=16 December 2015 |work=[[Malayala Manorama]]}}</ref>
|-
| rowspan="11" | 1990
! scope="row" | ''[[ಅಕ್ಕರೆ ಅಕ್ಕರೆ ಅಕ್ಕರೆ]]''
| ಸಿಐಡಿ ರಾಮದಾಸ್/ದಾಸನ್
|
|<ref>{{cite news |last=Soman |first=Deepa |date=31 October 2013 |title=Sequel fever in Malayalam cinema |url=http://timesofindia.indiatimes.com/entertainment/malayalam/movies/news/Sequel-fever-in-Malayalam-cinema/articleshow/25044473.cms? |url-status=live |archive-url=https://web.archive.org/web/20160220085618/http://timesofindia.indiatimes.com/entertainment/malayalam/movies/news/Sequel-fever-in-Malayalam-cinema/articleshow/25044473.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಆಯೆ ಆಟೋ]]''
| ಸುಧಿ
|
|<ref>{{cite news |last=Sharadhaa |first=A |date=8 May 2013 |title=When the autowale grab all the limelight |url=http://www.newindianexpress.com/entertainment/kannada/When-the-autowale-grab-all-the-limelight/2013/05/08/article1580345.ece |url-status=dead |archive-url=https://web.archive.org/web/20151225025020/http://www.newindianexpress.com/entertainment/kannada/When-the-autowale-grab-all-the-limelight/2013/05/08/article1580345.ece |archive-date=25 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ನಂ.20 ಮದ್ರಾಸ್ ಮೇಲ್]]''
| ಟೋನಿ ಕುರಿಶಿಂಗಲ್
|
|<ref>{{cite news |last=Pilla |first=Radhika C |date=16 June 2015 |title=Mohanlal's kissing pic goes viral! |url=http://timesofindia.indiatimes.com/entertainment/malayalam/movies/news/Mohanlals-kissing-pic-goes-viral/articleshow/47685999.cms? |url-status=live |archive-url=https://web.archive.org/web/20150624005733/http://timesofindia.indiatimes.com/entertainment/malayalam/movies/news/Mohanlals-kissing-pic-goes-viral/articleshow/47685999.cms |archive-date=24 June 2015 |access-date=19 December 2015 |work=[[The Times of India]]}}</ref>
|-
! scope="row" | ''[[ಮುಖಂ]]''
| ಹರಿಪ್ರಸಾದ್
|
|<ref>{{cite news |last=Kurian |first=Shiba |date=15 September 2013 |title=Ranjini and Mohanlal to share screen space after two decades |url=http://timesofindia.indiatimes.com/entertainment/malayalam/movies/news/Ranjini-and-Mohanlal-to-share-screen-space-after-two-decades/articleshow/22590895.cms |url-status=live |archive-url=https://web.archive.org/web/20160220085836/http://timesofindia.indiatimes.com/entertainment/malayalam/movies/news/Ranjini-and-Mohanlal-to-share-screen-space-after-two-decades/articleshow/22590895.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಹಿಸ್ ಹೈನೆಸ್ ಅಬ್ದುಲ್ಲಾ]]''
| ಅಬ್ದುಲ್ಲಾ / ಆನಂದನ್ ನಂಪೂತಿರಿ
|
|<ref>{{cite news |last=Kumar |first=P. K. Ajith |date=31 March 2015 |title=Silver milestone for a golden song |url=http://www.thehindu.com/news/national/kerala/silver-milestone-for-a-golden-song/article7051341.ece |url-status=live |archive-url=https://web.archive.org/web/20160220085706/http://www.thehindu.com/news/national/kerala/silver-milestone-for-a-golden-song/article7051341.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಕದತನಾಡನ್ ಅಂಬಾಡಿ]]''
| ಕದತನಾಡನ್ ಅಂಬಾಡಿ
| ವಿಳಂಬ ಬಿಡುಗಡೆ; 1987 ರಲ್ಲಿ ಚಿತ್ರೀಕರಿಸಲಾಗಿದೆ
|<ref>{{cite news |last=Mathew |first=Dennis Marcus |date=2 February 2011 |title=Malayalam cinema's Sarangapani is no more |url=http://www.thehindu.com/news/national/kerala/malayalam-cinemas-sarangapani-is-no-more/article1149198.ece |url-status=live |archive-url=https://web.archive.org/web/20160220085928/http://www.thehindu.com/news/national/kerala/malayalam-cinemas-sarangapani-is-no-more/article1149198.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ತಾಲ್ವರಂ]]''
| ಬಾಲನ್
|
|<ref>{{cite news |last=Kumar |first=P. K. Ajith |date=26 September 2014 |title=Screenplays for ever |url=http://www.thehindu.com/entertainment/screenplays-for-ever/article6449094.ece |url-status=live |archive-url=https://web.archive.org/web/20160220071645/http://www.thehindu.com/entertainment/screenplays-for-ever/article6449094.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಅರ್ಹತ]]''
| ದೇವರಾಜ್
|
|<ref>{{cite news |last=B S |first=Shibu |date=9 September 2011 |title=Big Ms take an Onam break |url=http://www.newindianexpress.com/cities/kochi/article360273.ece |url-status=dead |archive-url=https://web.archive.org/web/20151222110712/http://www.newindianexpress.com/cities/kochi/article360273.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಇಂದ್ರಜಾಲಂ]]''
| ಕಣ್ಣನ್ ನಾಯರ್
|
|<ref>{{cite news |last=Jhunjhunwala |first=Udita |date=9 September 2015 |title='When I saw Masaan, I realised Vicky Kaushal really is an actor' |url=http://www.hindustantimes.com/brunch/when-i-saw-masaan-i-realised-vicky-kaushal-really-is-an-actor/story-sb85fgziQzB6AplP1aiaDL.html |url-status=live |archive-url=https://web.archive.org/web/20151222111046/http://www.hindustantimes.com/brunch/when-i-saw-masaan-i-realised-vicky-kaushal-really-is-an-actor/story-sb85fgziQzB6AplP1aiaDL.html |archive-date=22 December 2015 |access-date=19 December 2015 |work=[[Hindustan Times]]}}</ref>
|-
! scope="row" | ''[[ಅಪ್ಪು]]''
| ಅಪ್ಪು
|
|<ref>{{cite news |last=Ayyappan |first=R |date=7 August 2009 |title=Irreverence personified |url=http://www.newindianexpress.com/states/kerala/article66699.ece |url-status=dead |archive-url=https://web.archive.org/web/20151222114921/http://www.newindianexpress.com/states/kerala/article66699.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಲಾಲ್ ಸಲಾಂ]]''
| ನೆಟ್ಟೂರ್ ಸ್ಟೀಫನ್
|
|<ref>{{cite news |last=Venkiteswaram |first=C. S. |date=17 September 2010 |title=The unconventional hero |url=http://www.thehindu.com/todays-paper/tp-features/tp-fridayreview/the-unconventional-hero/article673252.ece |url-status=live |archive-url=https://web.archive.org/web/20160220090206/http://www.thehindu.com/todays-paper/tp-features/tp-fridayreview/the-unconventional-hero/article673252.ece |archive-date=20 February 2016 |access-date=19 December 2015 |work=[[The Hindu]]}}</ref>
|-
| rowspan="10" | 1991
! scope="row" | ''[[ಧನಂ]]''
| ಶಿವಶಂಕರನ್
|
|<ref>{{cite web |last=George |first=Meghna |date=29 June 2009 |title=A K Lohithadas (1955–2009): Tribute to a legend |url=http://movies.rediff.com/report/2009/jun/29/a-k-lohithadas-tribute-to-a-legend.htm |url-status=live |archive-url=https://web.archive.org/web/20151222173555/http://movies.rediff.com/report/2009/jun/29/a-k-lohithadas-tribute-to-a-legend.htm |archive-date=22 December 2015 |access-date=19 December 2015 |work=[[Rediff.com]]}}</ref>
|-
! scope="row" | ''[[ಗೋಪುರ ವಾಸಲಿಲೆ]]''
| ಅಕಾರ್ಡಿಯನ್ ವಾದಕ
| ತಮಿಳು ಚಿತ್ರ; "ಕೆಲಾದಿ ಎನ್ ಪಾವಾಯೇ" ಹಾಡಿನಲ್ಲಿ ವಿಶೇಷ ಪಾತ್ರ
|<ref>{{cite news |last=Kurian |first=Shiba |date=20 May 2012 |title=Lady luck has not been kind to all Mollywood actors |url=http://timesofindia.indiatimes.com/entertainment/malayalam/movies/news/Lady-luck-has-not-been-kind-to-all-Mollywood-actors/articleshow/13298071.cms |url-status=live |archive-url=https://archive.today/20170610081159/http://timesofindia.indiatimes.com/entertainment/malayalam/movies/news/Lady-luck-has-not-been-kind-to-all-Mollywood-actors/articleshow/13298071.cms |archive-date=10 June 2017 |access-date=11 December 2015 |work=[[The Times of India]]}}</ref>
|-
! scope="row" | ''[[ಭರತಂ]]''
| ಕಲ್ಲೂರ್ "ಗೋಪಿ" ಗೋಪಿನಾಥನ್
|ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ
|<ref>{{cite news |last=Pillai |first=Radhika C |date=15 December 2013 |title=Mammooty and Mohanlal in Forbe's list |url=http://timesofindia.indiatimes.com/entertainment/malayalam/movies/news/Mammooty-and-Mohanlal-in-Forbes-list/articleshow/27407829.cms? |url-status=live |archive-url=https://web.archive.org/web/20160220090330/http://timesofindia.indiatimes.com/entertainment/malayalam/movies/news/Mammooty-and-Mohanlal-in-Forbes-list/articleshow/27407829.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ವಿಷ್ಣುಲೋಕಂ]]''
| ಶಂಕು
|
|<ref>{{cite news |last=Gauri |first=Deepa |date=10 April 2014 |title=Expat focus: T.A. Razak is scouting for talent in Dubai |url=http://www.khaleejtimes.com/article/20140410/ARTICLE/304109963/1057 |url-status=live |archive-url=https://web.archive.org/web/20151222113301/http://www.khaleejtimes.com/article/20140410/ARTICLE/304109963/1057 |archive-date=22 December 2015 |access-date=19 December 2015 |work=[[Khaleej Times]]}}</ref>
|-
! scope="row" | ''[[ವಸ್ತುಹಾರ]]''
| ವೇಣುಗೋಪಾಲ್
|
|<ref>{{cite news |last=<!--staff byline--> |date=16 March 2012 |title=Aravindan's Vasthuhara to be screened |url=http://www.thehindu.com/todays-paper/tp-national/tp-kerala/aravindans-vasthuhara-to-be-screened/article3001153.ece |url-status=live |archive-url=https://web.archive.org/web/20160220090251/http://www.thehindu.com/todays-paper/tp-national/tp-kerala/aravindans-vasthuhara-to-be-screened/article3001153.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಉಲ್ಲಾಡಕ್ಕಂ]]''
| ಡಾ. ಸನ್ನಿ
|
|<ref>{{cite news |last=Ranjithaa |date=14 June 2000 |title=Kamal joins the rat race |url=http://www.rediff.com/movies/2000/jun/14spice.htm |url-status=live |archive-url=https://web.archive.org/web/20160129003006/http://www.rediff.com/movies/2000/jun/14spice.htm |archive-date=29 January 2016 |access-date=19 December 2015 |work=[[Rediff.com]]}}</ref>
|-
! scope="row" | ''[[ಅಂಕಲ್ ಬನ್]]''
| ಚಾರ್ಲಿ ಚಾಕೋ
|
|<ref>{{cite news |last=Pillai |first=Radhika C |date=5 January 2015 |title=Actress Monica is getting married |url=http://timesofindia.indiatimes.com/entertainment/malayalam/movies/news/Actress-Monica-is-getting-married/articleshow/45759943.cms |url-status=live |archive-url=https://web.archive.org/web/20150108130217/http://timesofindia.indiatimes.com/entertainment/malayalam/movies/news/Actress-Monica-is-getting-married/articleshow/45759943.cms |archive-date=8 January 2015 |access-date=19 December 2015 |work=[[The Times of India]]}}</ref>
|-
! scope="row" | ''[[ಕಿಲುಕ್ಕಂ]]''
| ಜೋಜಿ
|
|<ref>{{cite news |last=Gauri |first=Deepa |date=7 November 2015 |title=Romance returns to Malayalam cinema |url=http://khaleejtimes.com/citytimes/south-stars/romance-returns-to-malayalam-cinema |url-status=live |archive-url=https://web.archive.org/web/20160115165342/http://khaleejtimes.com/citytimes/south-stars/romance-returns-to-malayalam-cinema |archive-date=15 January 2016 |access-date=19 December 2015 |work=[[Khaleej Times]]}}</ref>
|-
! scope="row" | ''[[ಕಿಳಕ್ಕುನರುಂ ಪಕ್ಷಿ]]''
| ಆನಂದ್ ಮೂರ್ತಿ
|
|<ref name="backto" />
|-
! scope="row" | ''[[ಅಭಿಮನ್ಯು]]''
| ಹರಿಕೃಷ್ಣನ್
|
|<ref>{{cite web |last=Moviebuzz (Sify) |date=19 May 2006 |title=Thalainagaram |url=http://www.sify.com/movies/thalainagaram-review-tamil-pclvUXecbjefa.html |url-status=dead |archive-url=https://web.archive.org/web/20160226173547/http://www.sify.com/movies/thalainagaram-review-tamil-pclvUXecbjefa.html |archive-date=26 February 2016 |access-date=26 February 2016 |website=[[Sify]]}}</ref>
|-
| rowspan="9" | 1992
! scope="row" | ''[[ಸದಯಂ]]''
| ಸತ್ಯನಾಧನ್
|
|<ref>{{cite news |last=Karthikeyan |first=Shruti |date=4 July 2014 |title=Filmmakers go 'behind bars' |url=http://timesofindia.indiatimes.com/entertainment/malayalam/movies/news/Filmmakers-go-behind-bars/articleshow/37904077.cms |url-status=live |archive-url=https://web.archive.org/web/20140728174744/http://timesofindia.indiatimes.com/entertainment/malayalam/movies/news/Filmmakers-go-behind-bars/articleshow/37904077.cms |archive-date=28 July 2014 |access-date=19 December 2015 |work=[[The Times of India]]}}</ref>
|-
! scope="row" | ''[[ಸೂರ್ಯ ಗಾಯತ್ರಿ]]''
| ಡಾ. ಬಾಲಸುಬ್ರಮಣಿಯನ್
|
|<ref>{{cite news |last=Kurian |first=Shiba |date=16 July 2012 |title=No more ragging woes for freshers at college |url=http://timesofindia.indiatimes.com/life-style/people/No-more-ragging-woes-for-freshers-at-college/articleshow/14951936.cms? |url-status=live |archive-url=https://web.archive.org/web/20120716215132/http://timesofindia.indiatimes.com/life-style/people/No-more-ragging-woes-for-freshers-at-college/articleshow/14951936.cms |archive-date=16 July 2012 |access-date=19 December 2015 |work=[[The Times of India]]}}</ref>
|-
! scope="row" | ''[[ಕಮಲದಳಂ]]''
| ನಂದಗೋಪನ್
|
|<ref>{{cite news |last=Gauri |first=Deepa |date=21 April 2015 |title=Dedication is key to success for Asha – Khaleej Times |url=http://www.khaleejtimes.com/article/20150421/ARTICLE/304219994/1057 |url-status=live |archive-url=https://web.archive.org/web/20151222110848/http://www.khaleejtimes.com/article/20150421/ARTICLE/304219994/1057 |archive-date=22 December 2015 |access-date=19 December 2015 |work=[[Khaleej Times]]}}</ref>
|-
! scope="row" | ''[[ಅಹಂ]]''
| ಸಿದ್ಧಾರ್ಥನ್
|
|<ref>{{cite news |last=K S |first=Aravind |date=22 January 2015 |title=In Retrospect |url=http://www.newindianexpress.com/entertainment/malayalam/In-Retrospect/2015/01/22/article2630485.ece |url-status=dead |archive-url=https://web.archive.org/web/20151222120239/http://www.newindianexpress.com/entertainment/malayalam/In-Retrospect/2015/01/22/article2630485.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ರಾಜಶಿಲ್ಪಿ]]''
| ಶಂಭು
|
|<ref name="sketch" />
|-
! scope="row" | ''[[ಯೋಧ]]''
| ತೈಪರಂಬಿಲ್ ಅಶೋಕನ್
|
|<ref>{{cite news |last=George |first=Anjana |date=16 November 2015 |title=I want to act with Mohanlal : Siddhartha Lama |url=http://timesofindia.indiatimes.com/entertainment/malayalam/movies/news/I-want-to-act-with-Mohanlal-Siddhartha-Lama/articleshow/49790893.cms? |url-status=live |archive-url=https://web.archive.org/web/20160220090505/http://timesofindia.indiatimes.com/entertainment/malayalam/movies/news/I-want-to-act-with-Mohanlal-Siddhartha-Lama/articleshow/49790893.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಅದ್ವೈತಂ]]''
| ಶಿವಪ್ರಸಾದ್
|
|<ref>{{cite news |last=Express News Service |date=2 September 2009 |title=No Onam gala; cinemas go dry |url=http://www.newindianexpress.com/entertainment/malayalam/article147328.ece? |url-status=dead |archive-url=https://web.archive.org/web/20160220090543/http://www.newindianexpress.com/entertainment/malayalam/article147328.ece |archive-date=20 February 2016 |access-date=19 December 2015 |work=[[The New Indian Express]]}}</ref>
|-
! scope="row" | ''[[ನಾಡೋಡಿ]]''
| ಸಚಿದಾನಂದನ್ ಮತ್ತು ಬಾಲಕೃಷ್ಣನ್ ಭಾಗವತರ್
|
|<ref>{{cite web |last=Amazon India |date=26 February 2016 |title=Nadodi |url=https://www.amazon.in/Nadodi-Mohanlal/dp/B00SH54C8Q |url-status=live |archive-url=https://web.archive.org/web/20160226163812/http://www.amazon.in/Nadodi-Mohanlal/dp/B00SH54C8Q |archive-date=26 February 2016 |access-date=26 February 2016}}</ref>
|-
! scope="row" | ''[[ವಿಯೆಟ್ನಾಂ ಕಾಲೋನಿ]]''
| ಜಿ. ಕೃಷ್ಣಮೂರ್ತಿ
|
|<ref>{{cite news |last=Krishna |first=Gayathri |date=30 June 2013 |title=Two decades later, Vietnam Colony set to be remade |url=http://archives.deccanchronicle.com/130630/entertainment-mollywood/article/two-decades-later-vietnam-colony-set-be-remade |url-status=dead |archive-url=https://web.archive.org/web/20151223122325/http://archives.deccanchronicle.com/130630/entertainment-mollywood/article/two-decades-later-vietnam-colony-set-be-remade |archive-date=23 December 2015 |access-date=19 December 2015 |work=[[Deccan Chronicle]]}}</ref>
|-
| rowspan="8" | 1993
! scope="row" | ''[[ಮಿಧುನಂ]]''
| ಸೇಧುಮಾಧವನ್
|
|<ref>{{cite news |last=Anand |first=Shilpa Nair |date=10 April 2014 |title=The way the cookie crumbles |url=http://www.thehindu.com/features/friday-review/the-way-the-cookie-crumbles/article5895841.ece |url-status=live |archive-url=https://web.archive.org/web/20160220093025/http://www.thehindu.com/features/friday-review/the-way-the-cookie-crumbles/article5895841.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ದೇವಾಸುರಂ]]''
| ಮಂಗಳಸ್ಸೇರಿ ನೀಲಕಂಠನ್
|
|<ref>{{cite news |last=Kurian |first=Shiba |date=2 April 2014 |title=Mohanlal shoots at Varikaserry Mana |url=http://timesofindia.indiatimes.com/entertainment/malayalam/movies/news/Mohanlal-shoots-at-Varikaserry-Mana/articleshow/33127108.cms? |url-status=live |archive-url=https://web.archive.org/web/20160220092652/http://timesofindia.indiatimes.com/entertainment/malayalam/movies/news/Mohanlal-shoots-at-Varikaserry-Mana/articleshow/33127108.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಬಟರ್ಫ್ಲೈಸ್]]''
| ಪ್ರಿನ್ಸ್
|
|<ref>{{cite news |last=Nair |first=Shoba |date=6 May 2005 |title=The Hollywood link |url=http://www.thehindu.com/thehindu/fr/2005/05/06/stories/2005050602600100.htm |url-status=dead |archive-url=https://web.archive.org/web/20160220092731/http://www.thehindu.com/thehindu/fr/2005/05/06/stories/2005050602600100.htm |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಮಾಯ ಮಯೂರಂ]]''
| ಕೃಷ್ಣನ್ ಉನ್ನಿ ಮತ್ತು ನರೇಂದ್ರನ್
|
|<ref>{{cite news |last=Pradeep |first=K. |date=27 February 2014 |title=Standing the test of time |url=http://www.thehindu.com/features/cinema/standing-the-test-of-time/article5732192.ece |url-status=live |archive-url=https://web.archive.org/web/20160220093242/http://www.thehindu.com/features/cinema/standing-the-test-of-time/article5732192.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಗಂಧರ್ವಂ]]''
| ಸ್ಯಾಮ್ಯುಯೆಲ್ ಅಲೆಕ್ಸಾಂಡರ್
|
|<ref>{{cite news |last=Kumar |first=P. K. Ajith |date=13 June 2013 |title=Rolling out comedy |url=http://www.thehindu.com/features/cinema/cinema-reviews/rolling-out-comedy/article4810058.ece |url-status=live |archive-url=https://web.archive.org/web/20160220092938/http://www.thehindu.com/features/cinema/cinema-reviews/rolling-out-comedy/article4810058.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಚೆಂಕೋಲ್]]''
| ಸೇತುಮಾಧವನ್
|
|<ref>{{cite news |last=Express News Service |date=22 September 2011 |title=A musical tribute to Johnson Master |url=http://www.newindianexpress.com/cities/kochi/article365809.ece |url-status=dead |archive-url=https://web.archive.org/web/20151222101115/http://www.newindianexpress.com/cities/kochi/article365809.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಕಳಿಪ್ಪಟ್ಟಂ]]''
| ವೇಣು
|
|<ref>{{cite news |last=സ്വന്തം ലേഖകൻ |date=12 November 2015 |title=കളിപ്പാട്ടമായ് കൺമണി നിന്റെ മുന്നിൽ... |url=http://www.manoramaonline.com/music/songs-of-the-day/kalippattamy-kanmani-song-in-the-movie-kalippattam.html |url-status=live |archive-url=https://web.archive.org/web/20160216153038/http://www.manoramaonline.com/music/songs-of-the-day/kalippattamy-kanmani-song-in-the-movie-kalippattam.html |archive-date=16 February 2016 |access-date=19 December 2015 |work=[[Malayala Manorama]]}}</ref>
|-
! scope="row" | ''[[ಮಣಿಚಿತ್ರತಾಳು]]''
| ಡಾ. ಸನ್ನಿ ಜೋಸೆಫ್
| 200 ನೇ ಚಿತ್ರ
|<ref>{{cite news |last1=Broadbent |first1=Giles |last2=Scott |first2=Patrick |date=30 October 2015 |title=How many of these 100 best horror films have you seen? |url=http://www.wharf.co.uk/whats-on/film-news/how-many-100-best-horror-10357350 |url-status=live |archive-url=https://web.archive.org/web/20151222110732/http://www.wharf.co.uk/whats-on/film-news/how-many-100-best-horror-10357350 |archive-date=22 December 2015 |access-date=19 December 2015 |work=[[The Wharf (newspaper)|The Wharf]]}}</ref>
|-
| rowspan="6" | 1994
! scope="row" | ''[[ಪವಿತ್ರಂ]]''
| ಉನ್ನಿಕೃಷ್ಣನ್
|
|<ref>{{cite news |last=Pradeep |first=K. |date=16 October 2015 |title=Retrace a worthy path |url=http://www.thehindu.com/features/metroplus/society/documentary-filmmaker-binuraj-kalapeetom/article7770306.ece |url-status=live |archive-url=https://web.archive.org/web/20160220093325/http://www.thehindu.com/features/metroplus/society/documentary-filmmaker-binuraj-kalapeetom/article7770306.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ತೇನ್ಮಾವಿನ್ ಕೊಂಬತ್]]''
| ಮಣಿಕ್ಯನ್
|
|<ref>{{cite news |last=Kumar |first=P. K. Ajith |date=1 July 2007 |title=Changing dynamics of screenplay |url=http://www.thehindu.com/todays-paper/tp-national/tp-kerala/changing-dynamics-of-screenplay/article1864285.ece |url-status=live |archive-url=https://web.archive.org/web/20160220092806/http://www.thehindu.com/todays-paper/tp-national/tp-kerala/changing-dynamics-of-screenplay/article1864285.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಪಿಂಗಾಮಿ]]''
| ಕ್ಯಾಪ್ಟನ್ ವಿಜಯ್ ಮೇನನ್
|
|<ref>{{cite news |last=Nambidi |first=Parvathy |date=19 September 2013 |title=A love story with a difference |url=http://www.newindianexpress.com/entertainment/malayalam/A-love-story-with-a-difference/2013/09/19/article1791830.ece |url-status=dead |archive-url=https://web.archive.org/web/20151222091713/http://www.newindianexpress.com/entertainment/malayalam/A-love-story-with-a-difference/2013/09/19/article1791830.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಪಕ್ಷೆ]]''
| ಬಾಲಚಂದ್ರನ್
|
|<ref>{{cite news |last=Krishnaraj |first=Prasanna |date=7 February 2013 |title=My five... |url=http://www.thehindu.com/features/metroplus/my-five/article4389319.ece |url-status=live |archive-url=https://web.archive.org/web/20160220093547/http://www.thehindu.com/features/metroplus/my-five/article4389319.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಗಂಧೀವಂ]]''
| ಕ್ಯಾಪ್ಟನ್
| ತೆಲುಗು ಚಿತ್ರ; "ಗೋರುವಂಕ ವಲಗನೆ" ಹಾಡಿನಲ್ಲಿ ವಿಶೇಷ ಪಾತ್ರ
|<ref>{{cite news |last=Indo-Asian News Service |date=26 August 2015 |title=Mohanlal to re-enter Telugu films with 'Nuvve Na Pranamani' |url=http://www.ibnlive.com/news/movies/mohanlal-to-re-enter-telugu-films-with-nuvve-na-pranamani-1051635.html |url-status=live |archive-url=https://web.archive.org/web/20160128055505/http://www.ibnlive.com/news/movies/mohanlal-to-re-enter-telugu-films-with-nuvve-na-pranamani-1051635.html |archive-date=28 January 2016 |access-date=11 December 2015 |work=[[IBN Live]]}}</ref>
|-
! scope="row" | ''[[ಮಿನ್ನಾರಂ]]''
| ಬಾಬಿ
|
|<ref>{{cite news |last=Vasudevan |first=Aishwarya |date=13 March 2012 |title=Priyadarshan – Mohanlal: Best films of the duo |url=http://timesofindia.indiatimes.com/entertainment/malayalam/movies/Priyadarshan-Mohanlal-Best-films-of-the-duo/photostory/48783890.cms |url-status=live |archive-url=https://web.archive.org/web/20160304152231/http://timesofindia.indiatimes.com/entertainment/malayalam/movies/Priyadarshan-Mohanlal-Best-films-of-the-duo/photostory/48783890.cms |archive-date=4 March 2016 |access-date=4 March 2016 |work=[[The Times of India]]}}</ref>
|-
| rowspan="5" | 1995
! scope="row" | ''[[ನಿರ್ಣಯಂ]]''
| ಡಾ. ರಾಯ್ ಅಲೆಕ್ಸ್
|
|<ref>{{cite news |last=Indo-Asian News Service |date=10 May 2013 |title=Sangeeth Sivan: Would love to work with Mohanlal |url=http://movies.ndtv.com/bollywood/sangeeth-sivan-would-love-to-work-with-mohanlal-633124 |url-status=live |archive-url=https://web.archive.org/web/20151222104905/http://movies.ndtv.com/bollywood/sangeeth-sivan-would-love-to-work-with-mohanlal-633124 |archive-date=22 December 2015 |access-date=19 December 2015 |work=[[NDTV]]}}</ref>
|-
! scope="row" | ''[[ಸ್ಪಡಿಕಂ]]''
| ಥಾಮಸ್ "ಆಡು ಥೋಮ" ಚಾಕೋ
|
|<ref>{{cite news |last=Times News Network |date=20 February 2015 |title=Spadikam to re- release in digital format ? |url=http://timesofindia.indiatimes.com/entertainment/malayalam/movies/news/Spadikam-to-re-release-in-digital-format-/articleshow/46311319.cms? |url-status=live |archive-url=https://web.archive.org/web/20160220093417/http://timesofindia.indiatimes.com/entertainment/malayalam/movies/news/Spadikam-to-re-release-in-digital-format-/articleshow/46311319.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ತಾಚೋಳಿ ವರ್ಘೀಸ್ ಚೇಕವರ್]]''
| ತಾಚೋಳಿ ವರ್ಘೀಸ್ ಚೇಕವರ್
|
|<ref>{{cite news |last=Prakash |first=Asha |date=27 August 2013 |title=Mollywood packs a punch with martial arts |url=http://timesofindia.indiatimes.com/entertainment/malayalam/movies/news/Mollywood-packs-a-punch-with-martial-arts/articleshow/22067426.cms |url-status=live |archive-url=https://web.archive.org/web/20160220093457/http://timesofindia.indiatimes.com/entertainment/malayalam/movies/news/Mollywood-packs-a-punch-with-martial-arts/articleshow/22067426.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಮಂತ್ರಿಕಂ]]''
| ಸ್ಟೀಫನ್ ರೊನಾಲ್ಡ್ / ಆಲ್ಬಿ ರೋಮಿಯೋ ಹಿಗುಟ್ಟಾ
|
|<ref>{{cite news |last=Anand |first=Shilpa Nair |date=5 June 2013 |title=On the super hero trail |url=http://www.thehindu.com/features/cinema/on-the-super-hero-trail/article4784550.ece |url-status=live |archive-url=https://web.archive.org/web/20160220093636/http://www.thehindu.com/features/cinema/on-the-super-hero-trail/article4784550.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಅಗ್ನಿದೇವನ್]]''
| ಅನಿಯನ್ಕುಟ್ಟನ್ / ರವಿ ವರ್ಮಾ
|
|<ref>{{cite news |last=Express News Service |date=11 February 2010 |title=An acknowledged prince among lyricists |url=http://www.newindianexpress.com/states/kerala/article180069.ece |url-status=dead |archive-url=https://web.archive.org/web/20151222120507/http://www.newindianexpress.com/states/kerala/article180069.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
| rowspan="2" | 1996
! scope="row" | ''[[ಕಾಲಪಾನಿ]]''
| ಡಾ. ಗೋವರ್ಧನ್ ಮೇನನ್
|
|<ref>{{cite news |last=Rajpal |first=Roktim |date=21 May 2015 |title=Mohanlal turns 55: 8 performances that prove he is the most bankable, successful star of Indian cinema |url=http://www.ibnlive.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html |url-status=live |archive-url=https://web.archive.org/web/20160310045435/http://www.ibnlive.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html |archive-date=10 March 2016 |access-date=29 February 2016 |work=[[IBN Live]]}}</ref>
|-
! scope="row" | ''[[ದಿ ಪ್ರಿನ್ಸ್]]''
| ಜೀವಾ
|
|<ref>{{cite news |last=B S |first=Shibu |date=9 September 2011 |title=No M&M this Onam |url=http://www.newindianexpress.com/entertainment/malayalam/article359915.ece |url-status=dead |archive-url=https://web.archive.org/web/20151224231632/http://www.newindianexpress.com/entertainment/malayalam/article359915.ece |archive-date=24 December 2015 |access-date=19 December 2015 |work=[[The New Indian Express]]}}</ref>
|-
| rowspan="6" | 1997
! scope="row" | ''[[ಇರುವರ್]]''
| ಆನಂದನ್
| ತಮಿಳು ಚಿತ್ರ
|<ref>{{cite news |last=James |first=Anu |date=28 February 2015 |title=Mani Ratnam-AR Rahman: 'Roja', 'Bombay', 'Iruvar' and Other Tamil Films of the Duo with Hit Songs |url=http://www.ibtimes.co.in/mani-ratnam-ar-rahman-roja-bombay-iruvar-other-tamil-films-duo-hit-songs-624822 |url-status=live |archive-url=https://web.archive.org/web/20151222084447/http://www.ibtimes.co.in/mani-ratnam-ar-rahman-roja-bombay-iruvar-other-tamil-films-duo-hit-songs-624822 |archive-date=22 December 2015 |access-date=11 December 2015 |work=[[International Business Times]]}}</ref>
|-
!scope="row" | ''[[ವರ್ಣಪಕಿಟ್ಟು]]''
| ಸನ್ನಿ ಪಾಲಮಟ್ಟಂ
|
|<ref>{{cite news |last=Hindu |date=18 March 2011 |title=Regional channels |url=http://www.thehindu.com/todays-paper/tp-features/tp-fridayreview/regional-channels/article1548401.ece |url-status=live |archive-url=https://web.archive.org/web/20160220093722/http://www.thehindu.com/todays-paper/tp-features/tp-fridayreview/regional-channels/article1548401.ece |archive-date=20 February 2016 |access-date=19 December 2015 |work=[[The Hindu]]}}</ref>
|-
! scope="row" | ''[[ಚಂದ್ರಲೇಖಾ]]''
| ಅಪ್ಪುಕುಟ್ಟನ್ / ಆಲ್ಫಿ
|
|<ref>{{cite news |last=Narayan |first=Shoba |date=18 January 2011 |title=Why do Arabic rhythms sound so sweet to Indian ears? |url=http://www.thenational.ae/thenationalconversation/comment/why-do-arabic-rhythms-sound-so-sweet-to-indian-ears |url-status=dead |archive-url=https://web.archive.org/web/20151222095758/http://www.thenational.ae/thenationalconversation/comment/why-do-arabic-rhythms-sound-so-sweet-to-indian-ears |archive-date=22 December 2015 |access-date=19 December 2015 |work=[[The National (Abu Dhabi)|The National]]}}</ref>
|-
! scope="row" | ''[[ಗುರು]]''
| ರಘುರಾಮನ್
|
|<ref>{{cite news |last=Times News Network |date=16 July 2015 |title=Guru was nominated for the Oscars |url=http://timesofindia.indiatimes.com/entertainment/malayalam/movies/did-you-know-/Guru-was-nominated-for-the-Oscars/articleshow/48095864.cms |url-status=live |archive-url=https://web.archive.org/web/20160219150322/http://timesofindia.indiatimes.com/entertainment/malayalam/movies/did-you-know-/Guru-was-nominated-for-the-Oscars/articleshow/48095864.cms |archive-date=19 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಒರು ಯಾತ್ರಮೊಳಿ]]''
| ಗೋವಿಂದನ್ಕುಟ್ಟಿ
|
|<ref name="yathramozhi">{{cite news |last=Sidhardhan |first=Sanjith |date=19 November 2012 |title=When Mollywood meets Kollywood |url=http://timesofindia.indiatimes.com/entertainment/malayalam/movies/news/When-Mollywood-meets-Kollywood/articleshow/17266196.cms? |url-status=live |archive-url=https://web.archive.org/web/20160220093805/http://timesofindia.indiatimes.com/entertainment/malayalam/movies/news/When-Mollywood-meets-Kollywood/articleshow/17266196.cms |archive-date=20 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ಆರಾಂ ತಂಪುರನ್]]''
| ಜಗನ್ನಾಧನ್
|
|<ref>{{cite news |last=M |first=Athira |date=26 September 2013 |title=Going great guns |url=http://www.thehindu.com/features/cinema/going-great-guns/article5171425.ece |url-status=live |archive-url=https://web.archive.org/web/20160219150642/http://www.thehindu.com/features/cinema/going-great-guns/article5171425.ece |archive-date=19 February 2016 |access-date=19 December 2015 |work=[[The Hindu]]}}</ref>
|-
| rowspan="5" | 1998
! scope="row" | ''[[ಕನ್ಮದಂ]]''
| ವಿಶ್ವನಾಥನ್
|
|<ref>{{cite news |last=Menon |first=Neelima |date=5 July 2009 |title=That thin line between sanity and lunacy |url=http://www.newindianexpress.com/magazine/article91020.ece |url-status=dead |archive-url=https://web.archive.org/web/20151224231206/http://www.newindianexpress.com/magazine/article91020.ece |archive-date=24 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಹರಿಕೃಷ್ಣನ್ಸ್]]''
| ವಕೀಲ ಕೃಷ್ಣನ್
|
|<ref>{{cite news |last=Times News Network |date=8 March 2015 |title=Harikrishnan's multiple climaxes |url=http://timesofindia.indiatimes.com/entertainment/malayalam/movies/did-you-know-/Harikrishnans-multiple-climaxes/articleshow/46493185.cms |url-status=live |archive-url=https://web.archive.org/web/20150602204857/http://timesofindia.indiatimes.com/entertainment/malayalam/movies/did-you-know-/Harikrishnans-multiple-climaxes/articleshow/46493185.cms |archive-date=2 June 2015 |access-date=19 December 2015 |work=[[The Times of India]]}}</ref>
|-
! scope="row" | ''[[ಸಮ್ಮರ್ ಇನ್ ಬೆತ್ಲೆಹೆಮ್]]''
| ನಿರಂಜನ್
|ಅತಿಥಿ ಪಾತ್ರ
|<ref>{{cite news |last=V. P |first=Nicy |date=4 November 2014 |title=Manju Warrier's New Look from Mohanlal-Sathyan Anthikkad Film is Out [PHOTOS] |url=http://www.ibtimes.co.in/manju-warriers-new-look-mohanlal-sathyan-anthikkad-film-out-photos-613056 |url-status=live |archive-url=https://web.archive.org/web/20151121162934/http://www.ibtimes.co.in/manju-warriers-new-look-mohanlal-sathyan-anthikkad-film-out-photos-613056 |archive-date=21 November 2015 |access-date=19 December 2015 |work=[[International Business Times]]}}</ref>
|-
! scope="row" | ''[[ರಕ್ತಸಾಕ್ಷಿಕಳ್ ಸಿಂದಾಬಾದ್]]''
| ಶಿವ ಸುಬ್ರಹ್ಮಣ್ಯ ಅಯ್ಯರ್
|
|<ref>{{cite news |last=Express News Service |date=3 March 2009 |title='Making political films no longer possible' |url=http://www.newindianexpress.com/entertainment/tamil/article42460.ece |url-status=dead |archive-url=https://web.archive.org/web/20151222081800/http://www.newindianexpress.com/entertainment/tamil/article42460.ece |archive-date=22 December 2015 |access-date=19 December 2015 |work=[[The New Indian Express]]}}</ref>
|-
! scope="row" | ''[[ಅಯಾಲ್ ಕಧಾ ಎಳುತುಕಯಾನು]]''
| ಸಾಗರ್ ಕೊಟ್ಟಪ್ಪುರಂ / ವಿದ್ಯಾಸಾಗರ್
|
|<ref>{{cite news |last=Nayar |first=Parvathy S |date=21 July 2012 |title=Bhavana to do an Urmila in her next? |url=http://timesofindia.indiatimes.com/entertainment/kannada/movies/news/Bhavana-to-do-an-Urmila-in-her-next/articleshow/15055365.cms |url-status=live |archive-url=https://web.archive.org/web/20160219151701/http://timesofindia.indiatimes.com/entertainment/kannada/movies/news/Bhavana-to-do-an-Urmila-in-her-next/articleshow/15055365.cms |archive-date=19 February 2016 |access-date=19 December 2015 |work=[[The Times of India]]}}</ref>
|-
| rowspan="3" | 1999
! scope="row" | ''[[ಉಸ್ತಾದ್]]''
| ಪರಮೇಶ್ವರನ್ / ಉಸ್ತಾದ್
|
|<ref>{{cite news |last=Kumar |first=P. K. Ajith |date=3 September 2013 |title=How the comeback was scripted |url=http://www.thehindu.com/todays-paper/tp-national/tp-kerala/how-the-comeback-was-scripted/article5087829.ece |url-status=live |archive-url=https://web.archive.org/web/20160226174708/http://www.thehindu.com/todays-paper/tp-national/tp-kerala/how-the-comeback-was-scripted/article5087829.ece |archive-date=26 February 2016 |access-date=26 February 2016 |work=[[The Hindu]]}}</ref>
|-
! scope="row" | ''[[ಒಲಿಂಪಿಯನ್ ಆಂಥೋನಿ ಆಡಮ್]]''
| ಎಸ್ಪಿ ಆಂಥೋನಿ ಚಕ್ಕುಮ್ಮೂಟ್ಟಿಲ್ ವರ್ಗೀಸ್ ಐಪಿಎಸ್
|
|<ref>{{cite news |last=Kurian |first=Shiba |date=19 June 2014 |title=Mohanlal gets a surprise visitor in the US |url=http://timesofindia.indiatimes.com/entertainment/malayalam/movies/news/Mohanlal-gets-a-surprise-visitor-in-the-US/articleshow/36815656.cms |url-status=live |archive-url=https://web.archive.org/web/20160219150841/http://timesofindia.indiatimes.com/entertainment/malayalam/movies/news/Mohanlal-gets-a-surprise-visitor-in-the-US/articleshow/36815656.cms |archive-date=19 February 2016 |access-date=19 December 2015 |work=[[The Times of India]]}}</ref>
|-
! scope="row" | ''[[ವನಪ್ರಸ್ಥಂ]]''
| ಕುಂಜಿಕುಟ್ಟನ್
|ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ
|<ref>{{cite news |last=Ramachandran |first=Mythily |date=7 December 2013 |title=Diff: a Malayalam film that dances with drama |url=http://gulfnews.com/life-style/celebrity/diff-a-malayalam-film-that-dances-with-drama-1.1264154 |url-status=live |archive-url=https://web.archive.org/web/20151222112842/http://gulfnews.com/life-style/celebrity/diff-a-malayalam-film-that-dances-with-drama-1.1264154 |archive-date=22 December 2015 |access-date=19 December 2015 |work=[[Gulf News]]}}</ref>
|-
| rowspan="4" | 2000
! scope="row" | ''[[ನರಸಿಂಹಂ]]''
| ಪೂವಳ್ಳಿ ಇಂದ್ರಚೂಡನ್
|
|<ref>{{cite news |last=James |first=Anu |date=23 January 2016 |title=Narasimham returns: Mohanlal starrer to be re-released in 7 theatres on Republic Day |url=http://www.ibtimes.co.in/narasimham-returns-mohanlal-starrer-be-re-released-7-theatres-republic-day-664264 |url-status=live |archive-url=https://web.archive.org/web/20160130092954/http://www.ibtimes.co.in/narasimham-returns-mohanlal-starrer-be-re-released-7-theatres-republic-day-664264 |archive-date=30 January 2016 |access-date=26 February 2016 |work=[[International Business Times]]}}</ref>
|-
! scope="row" | ''[[ಲೈಫ್ ಈಸ್ ಬ್ಯೂಟಿಫುಲ್]]''
| ವಿನಯ ಚಂದ್ರನ್
|
|<ref>{{cite web |last1=Warrier |first1=Shobha |date=12 July 2000 |title='Life itself is a daily celebration' |url=http://www.rediff.com/entertai/2000/jul/12lal.htm |url-status=live |archive-url=https://web.archive.org/web/20150521061130/http://www.rediff.com/entertai/2000/jul/12lal.htm |archive-date=21 May 2015 |access-date=26 February 2016 |work=[[Rediff.com]]}}</ref>
|-
! scope="row" | ''[[ಶ್ರಾದ್ಧ]]''
| ಗಂಗಾಪ್ರಸಾದ್ ಐಪಿಎಸ್
|
|<ref name="year2000">{{cite web |last=Ayyappan |first=R |date=24 January 2001 |title=Sleaze time, folks! |url=http://www.rediff.com/movies/2001/jan/24mallu.htm |url-status=live |archive-url=https://web.archive.org/web/20100411035302/http://www.rediff.com/movies/2001/jan/24mallu.htm |archive-date=11 April 2010 |access-date=26 February 2016 |work=[[Rediff.com]]}}</ref>
|-
! scope="row" | ''[[ದೇವದೂತನ್]]''
| ವಿಶಾಲ್ ಕೃಷ್ಣಮೂರ್ತಿ
|
|<ref name="year2000" />
|-
| rowspan="5" | 2001
! scope="row" | ''[[ಕಕ್ಕಕುಯಿಲ್]]''
| ಶಿವರಾಮನ್
|
|<ref>{{cite news |last=Karthikeyan |first=Shruti |date=29 April 2015 |title=Amala was happy shooting for Lailaa O Lailaa |url=http://timesofindia.indiatimes.com/entertainment/malayalam/movies/news/Amala-was-happy-shooting-for-Lailaa-O-Lailaa/articleshow/47085153.cms |url-status=live |archive-url=https://web.archive.org/web/20160219151228/http://timesofindia.indiatimes.com/entertainment/malayalam/movies/news/Amala-was-happy-shooting-for-Lailaa-O-Lailaa/articleshow/47085153.cms |archive-date=19 February 2016 |access-date=15 December 2015 |work=[[The Times of India]]}}</ref>
|-
! scope="row" | ''[[ರಾವಣಪ್ರಭು]]''
| ಮಂಗಳಸ್ಸೇರಿ ನೀಲಕಂಠನ್ ಮತ್ತು ಕಾರ್ತಿಕೇಯನ್
|
|<ref>{{cite news |last=Zachariah |first=Ammu |date=29 July 2013 |title=Like father, like son |url=http://timesofindia.indiatimes.com/entertainment/malayalam/movies/news/Like-father-like-son/articleshow/21423588.cms |url-status=live |archive-url=https://web.archive.org/web/20160219151442/http://timesofindia.indiatimes.com/entertainment/malayalam/movies/news/Like-father-like-son/articleshow/21423588.cms |archive-date=19 February 2016 |access-date=15 December 2015 |work=[[The Times of India]]}}</ref>
|-
! scope="row" | ''[[ಪ್ರಜಾ]]''
| ಜಾಕಿರ್ ಅಲಿ ಹುಸೇನ್
|
|<ref>{{cite news |last=Karthikeyan |first=Shruti |date=23 August 2014 |title=Mammootty and Mohanlal to share screen space? |url=http://timesofindia.indiatimes.com/Entertainment/Malayalam/Movies/News/Mammootty-and-Mohanlal-to-share-screen-space/articleshow/40694989.cms |url-status=live |archive-url=https://web.archive.org/web/20140828192648/http://timesofindia.indiatimes.com/Entertainment/Malayalam/Movies/News/Mammootty-and-Mohanlal-to-share-screen-space/articleshow/40694989.cms |archive-date=28 August 2014 |access-date=15 December 2015 |work=[[The Times of India]]}}</ref>
|-
! scope="row" | ''[[ಅಚ್ಚನೆಯನೆನಿಕ್ಕಿಷ್ಟಂ]]''
| ಮಹಾದೇವನ್
| rowspan="2" |ಅತಿಥಿ ಪಾತ್ರ
|<ref>{{cite news |last=PM |date=16 September 2002 |title=Ready with Vasanthamalika |url=http://www.thehindu.com/thehindu/mp/2002/09/16/stories/2002091600250400.htm |url-status=dead |archive-url=https://web.archive.org/web/20160219153056/http://www.thehindu.com/thehindu/mp/2002/09/16/stories/2002091600250400.htm |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ಉನ್ನತಂಗಳಿಲ್]]''
| ವಿವೇಕ್
|<ref>{{cite news |last=C. |first=B. |date=18 March 2002 |title=From the ramp to the screen |url=http://www.thehindu.com/thehindu/mp/2002/03/18/stories/2002031800940200.htm |url-status=dead |archive-url=https://web.archive.org/web/20160219153150/http://www.thehindu.com/thehindu/mp/2002/03/18/stories/2002031800940200.htm |archive-date=19 February 2016 |access-date=15 December 2015 |work=[[The Hindu]]}}</ref>
|-
| rowspan="4" | 2002
! scope="row" | ''[[ಕಂಪನಿ]]''
| ಐಜಿ ವೀರಪ್ಪಳ್ಳಿ ಶ್ರೀನಿವಾಸನ್ ಐಪಿಎಸ್
| ಹಿಂದಿ ಚಿತ್ರ
|<ref>{{cite news |last=Ayaz |first=Shaikh |date=29 April 2012 |title=Mohanlal, the 'Company' actor |url=http://www.newindianexpress.com/entertainment/malayalam/article390773.ece |url-status=dead |archive-url=https://web.archive.org/web/20151222085635/http://www.newindianexpress.com/entertainment/malayalam/article390773.ece |archive-date=22 December 2015 |access-date=11 December 2015 |work=[[The New Indian Express]]}}</ref>
|-
! scope="row" | ''[[ಒನ್ನಾಮನ್]]''
| ರವಿಶಂಕರ್
|
|<ref>{{cite web |last=Iype |first=George |date=23 April 2002 |title=Mohanlal's Company's hero in Kerala |url=http://www.rediff.com/entertai/2002/apr/23mohan.htm |url-status=live |archive-url=https://web.archive.org/web/20160105191537/http://www.rediff.com/entertai/2002/apr/23mohan.htm |archive-date=5 January 2016 |access-date=15 December 2015 |work=[[Rediff.com]]}}</ref>
|-
! scope="row" | ''[[ತಂಡವಂ]]''
| ಕಾಶಿನಾಥನ್
|
|<ref>{{cite news |last=Joseph |first=Mini K. |date=3 September 2002 |title=Engine oil powers Mohanlal movie, and vice versa |url=http://timesofindia.indiatimes.com/city/thiruvananthapuram/Engine-oil-powers-Mohanlal-movie-and-vice-versa/articleshow/21090328.cms |url-status=live |archive-url=https://web.archive.org/web/20160219152803/http://timesofindia.indiatimes.com/city/thiruvananthapuram/Engine-oil-powers-Mohanlal-movie-and-vice-versa/articleshow/21090328.cms |archive-date=19 February 2016 |access-date=15 December 2015 |work=[[The Times of India]]}}</ref>
|-
! scope="row" | ''[[ಚತುರಂಗಂ]]''
| ಆಟಿಪ್ರಾಕಲ್ ಜಿಮ್ಮಿ ಜಾಕೋಬ್
|
|<ref>{{cite web |last=Moviebuzz (Sify) |date=25 December 2002 |title=Review: Chathurangam |url=http://www.sify.com/movies/chathurangam-review-malayalam-pclurfibgahdh.html |url-status=dead |archive-url=https://web.archive.org/web/20151224070756/http://www.sify.com/movies/chathurangam-review-malayalam-pclurfibgahdh.html |archive-date=24 December 2015 |access-date=15 December 2015 |website=[[Sify]]}}</ref>
|-
| rowspan="5" | 2003
! scope="row" | ''[[ಪಾಪ್ ಕಾರ್ನ್]]''
| ವಿಕ್ರಮಾದಿತ್ಯ
| ತಮಿಳು ಚಿತ್ರ
|<ref>{{cite news |last=Kamath |first=Sudhish |date=23 January 2002 |title=Pop goes Nasser's carnival |url=http://www.thehindu.com/lf/2002/01/23/stories/2002012300400200.htm |url-status=dead |archive-url=https://web.archive.org/web/20160219142013/http://www.thehindu.com/lf/2002/01/23/stories/2002012300400200.htm |archive-date=19 February 2016 |access-date=11 December 2015 |work=[[The Hindu]]}}</ref>
|-
! scope="row" | ''[[ಮಿಸ್ಟರ್ ಬ್ರಹ್ಮಚಾರಿ]]''
| ಆನಂದನ್ ತಂಪಿ
|
|<ref>{{cite web |last=Warrier |first=Shobha |date=26 April 2003 |title='I may be the first actor brand of pickles!' |url=http://www.rediff.com/movies/2003/apr/26mohan.htm |url-status=live |archive-url=https://web.archive.org/web/20160105191108/http://www.rediff.com/movies/2003/apr/26mohan.htm |archive-date=5 January 2016 |access-date=15 December 2015 |work=[[Rediff.com]]}}</ref>
|-
! scope="row" | ''[[ಕಿಲಿಚುಂದನ್ ಮಂಪಳಂ]]''
| ಅಬ್ದುಲ್ ಖಾದರ್
|
|<ref>{{cite web |last1=Warrier |first1=Shobha |last2=Riti |first2=M D |date=19 April 2004 |title='Filmstars should not join politics' |url=http://www.rediff.com/movies/2004/apr/18soundarya.htm |url-status=live |archive-url=https://web.archive.org/web/20160105121944/http://www.rediff.com/movies/2004/apr/18soundarya.htm |archive-date=5 January 2016 |access-date=15 December 2015 |work=[[Rediff.com]]}}</ref>
|-
! scope="row" | ''[[ಬಾಲೆಟ್ಟನ್]]''
| ಅತನಿಪ್ಪರಂಬಿಲ್ ಬಾಲಚಂದ್ರನ್
|
|<ref>{{cite news |last=Kumar |first=P. K. Ajith |date=29 September 2012 |title=Shahid told simple tales |url=http://www.thehindu.com/news/national/kerala/shahid-told-simple-tales/article3946183.ece |url-status=live |archive-url=https://web.archive.org/web/20160219152535/http://www.thehindu.com/news/national/kerala/shahid-told-simple-tales/article3946183.ece |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ಹರಿಹರನ್ ಪಿಲ್ಲೈ ಹ್ಯಾಪಿ ಆಣು]]''
| ಹರಿಹರನ್ ಪಿಲ್ಲೈ
|
|<ref>{{cite news |last=Abhijath |first=Ram |date=27 November 2003 |title=Short-lived happiness |url=https://www.thehindu.com/todays-paper/tp-features/tp-metroplus/short-lived-happiness/article28457664.ece |access-date=15 December 2015 |work=[[The Hindu]]}}</ref>
|-
| rowspan="6" | 2004
! scope="row" | ''[[ವಾಮನಪುರಂ ಬಸ್ ರೂಟ್]]''
| ಲೆವರ್ ಜಾನಿ
|
|<ref>{{cite news |last=Pillai |first=Sreedhar |date=19 January 2004 |title=Mohanlal turns NRI |url=http://www.thehindu.com/thehindu/mp/2004/01/19/stories/2004011900260200.htm |url-status=dead |archive-url=https://web.archive.org/web/20160219152441/http://www.thehindu.com/thehindu/mp/2004/01/19/stories/2004011900260200.htm |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ವಿಸ್ಮಯತ್ತುಂಬತು]]''
| ಶ್ರೀಕುಮಾರ್
|
|<ref>{{cite web |last=Moviebuzz (Sify) |date=10 April 2004 |title=Vismayathumbathu |url=http://www.sify.com/movies/vismayathumbathu-review-malayalam-pclv2digcbjhj.html |url-status=dead |archive-url=https://web.archive.org/web/20151121134325/http://www.sify.com/movies/vismayathumbathu-review-malayalam-pclv2digcbjhj.html |archive-date=21 November 2015 |access-date=26 February 2016 |website=[[Sify]]}}</ref>
|-
! scope="row" | ''[[ಪ್ರೀತಿ]]''
| ಮೋಹನ್ ನಾಯರ್
| ಕನ್ನಡ ಚಿತ್ರ; ಅತಿಥಿ ಪಾತ್ರ
|<ref>{{cite web |last=Vijayasarathy |first=R.G. |date=2 July 2004 |title=No homework for me: Mohanlal |url=http://www.sify.com/movies/malayalam/interview.php?id=13512329&cid=2406 |url-status=dead |archive-url=https://web.archive.org/web/20040816002022/http://sify.com/movies/malayalam/interview.php?id=13512329&cid=2406 |archive-date=16 August 2004 |access-date=25 February 2016 |website=[[Sify]]}}</ref>
|-
! scope="row" | ''[[ವಾಂಟೆಡ್]]''
| ನಾರಾಯಣ ಸ್ವಾಮಿ ಐಪಿಎಸ್
|
|<ref>{{Cite web |date=17 July 2004 |title=Review: (2004) |url=https://www.sify.com/movies/wanted-review-malayalam-pclv46cfbhfhd.html |url-status=dead |archive-url=https://web.archive.org/web/20210818210537/https://www.sify.com/movies/wanted-review-malayalam-pclv46cfbhfhd.html |archive-date=18 August 2021 |work=Sify}}</ref>
|-
! scope="row" | ''[[ನಟ್ಟುರಾಜವು]]''
| ಪುಳಿಕ್ಕಟ್ಟಿಲ್ ಚಾರ್ಲಿ
|
|<ref>{{cite news |last=Krishnakumar |first=G. |date=11 August 2004 |title=Hoping for a box office revival |url=http://www.thehindu.com/lf/2004/08/11/stories/2004081100930200.htm |url-status=dead |archive-url=https://web.archive.org/web/20160219152323/http://www.thehindu.com/lf/2004/08/11/stories/2004081100930200.htm |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ಮಂಬಳಕ್ಕಾಲಂ]]''
| ಪುರಮನಾಯಿಲ್ ಚಂದ್ರನ್
|
|<ref>{{cite web |last=Moviebuzz (Sify) |date=3 November 2004 |title='Aroma' Mani's big gamble |url=http://www.sify.com/movies/aroma-mani-s-big-gamble-news-malayalam-kkfvFmeageasi.html |url-status=dead |archive-url=https://web.archive.org/web/20150811084645/http://www.sify.com/movies/aroma-mani-s-big-gamble-news-malayalam-kkfvFmeageasi.html |archive-date=11 August 2015 |access-date=15 December 2015 |website=[[Sify]]}}</ref>
|-
| rowspan="6" | 2005
! scope="row" | ''[[ಉದಯನಾಣು ತಾರಂ]]''
| ಉದಯಭಾನು
|
|<ref>{{cite web |last=Moviebuzz (Sify) |date=12 February 2005 |title='Udayan' bigger than 'Narasimham'! |url=http://www.sify.com/movies/udayan-bigger-than-narasimham-news-malayalam-kkfv86jfhecsi.html |url-status=dead |archive-url=https://web.archive.org/web/20151223184905/http://www.sify.com/movies/udayan-bigger-than-narasimham-news-malayalam-kkfv86jfhecsi.html |archive-date=23 December 2015 |access-date=14 December 2015 |website=[[Sify]]}}</ref>
|-
! scope="row" | ''[[ಚಂದ್ರೋಲ್ಸವಂ]]''
| ಚಿರಕ್ಕಲ್ ಶ್ರೀಹರಿ
|
|<ref>{{cite web |last=Moviebuzz (Sify) |date=20 April 2005 |title='Chandramukhi' trounces 'Chandrolsavam'! |url=http://www.sify.com/movies/chandramukhi-trounces-chandrolsavam-news-malayalam-kkfv51dceigsi.html |url-status=dead |archive-url=https://web.archive.org/web/20151224212711/http://www.sify.com/movies/chandramukhi-trounces-chandrolsavam-news-malayalam-kkfv51dceigsi.html |archive-date=24 December 2015 |access-date=15 December 2015 |website=[[Sify]]}}</ref>
|-
! scope="row" | ''[[ತಿರನೋಟ್ಟಂ]]''
| ಕುಟ್ಟಪ್ಪನ್
| ವಿಳಂಬ ಬಿಡುಗಡೆ; 1978 ರಲ್ಲಿ ಚಿತ್ರೀಕರಿಸಲಾಗಿದೆ
|<ref name="ActingAlone" /><ref name="MohanlalTelegraph" />
|-
! scope="row" | ''[[ಉದಯೋನ್]]''
| ಶೂರನಾಡ್ ಪಪ್ಪೋಯಿ ಮತ್ತು ಶೂರನಾಡ್ ಕುಂಜು
|
|<ref>{{cite news |last=Pillai |first=Sreedhar |date=20 May 2005 |title=The Mohanlal effect |url=http://www.thehindu.com/thehindu/fr/2005/05/20/stories/2005052003000100.htm |url-status=dead |archive-url=https://web.archive.org/web/20160219152141/http://www.thehindu.com/thehindu/fr/2005/05/20/stories/2005052003000100.htm |archive-date=19 February 2016 |access-date=15 December 2015 |work=[[The Hindu]]}}</ref>
|-
! scope="row" | ''[[ನಾರನ್]]''
| ಮುಲ್ಲಂಕೊಳ್ಳಿ ವೇಲಾಯುಧನ್
|
|<ref>{{cite web |last=Moviebuzz (Sify) |date=3 September 2005 |title=Naran |url=http://www.sify.com/movies/naran-review-malayalam-pclvMljccbicj.html |url-status=dead |archive-url=https://web.archive.org/web/20160226124459/http://www.sify.com/movies/naran-review-malayalam-pclvMljccbicj.html |archive-date=26 February 2016 |access-date=26 February 2016 |website=[[Sify]]}}</ref>
|-
! scope="row" | ''[[ತನ್ಮಾತ್ರ]]''
| ರಮೇಶನ್ ನಾಯರ್
|
|<ref>{{cite news |last=Prakash |first=Asha |date=12 June 2015 |title=Mohanlal in Class X Biology textbook |url=http://timesofindia.indiatimes.com/entertainment/malayalam/movies/news/Mohanlal-in-Class-X-Biology-textbook/articleshow/47638850.cms |url-status=live |archive-url=https://web.archive.org/web/20150616115021/http://timesofindia.indiatimes.com/entertainment/malayalam/movies/news/Mohanlal-in-Class-X-Biology-textbook/articleshow/47638850.cms |archive-date=16 June 2015 |access-date=15 December 2015 |work=[[The Times of India]]}}</ref>
|-
| rowspan="7" | 2006
! scope="row" | ''[[ಕಿಲುಕ್ಕಂ ಕಿಲುಕಿಲುಕ್ಕಂ]]''
| ಜೋಜಿ
|ಅತಿಥಿ ಪಾತ್ರ
|
|-
! scope="row" | ''[[ರಸತಂತ್ರಂ]]''
| ಪ್ರೇಮಚಂದ್ರನ್
|
|<ref>{{cite news |last=Gopalakrishnan |first=K. K. |date=17 March 2006 |title=Getting the right equation |url=http://www.thehindu.com/todays-paper/tp-features/tp-fridayreview/getting-the-right-equation/article3217527.ece |url-status=live |archive-url=https://web.archive.org/web/20160219145549/http://www.thehindu.com/todays-paper/tp-features/tp-fridayreview/getting-the-right-equation/article3217527.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ವಡಕ್ಕುಮ್ನಾಥನ್]]''
| ಇರಿಂಗನ್ನೂರ್ ಭರತ ಪಿಶಾರಡಿ
|
|<ref>{{cite web |last=Palicha |first=Paresh C |date=23 May 2006 |title=Watch Vadakkumnathan only for Mohanlal |url=http://www.rediff.com/movies/review/vada/20060523.htm |url-status=live |archive-url=https://web.archive.org/web/20160226130310/http://www.rediff.com/movies/review/vada/20060523.htm |archive-date=26 February 2016 |access-date=26 February 2016 |work=[[Rediff.com]]}}</ref>
|-
! scope="row" | ''[[ಕೀರ್ತಿ ಚಕ್ರ]]''
| ಮೇಜರ್ ಮಹಾದೇವನ್
|
|<ref>{{cite web |last=Palicha |first=Paresh C |date=5 August 2006 |title=Keerthichakra: commendable |url=http://www.rediff.com/movies/2006/aug/05mal.htm |url-status=live |archive-url=https://web.archive.org/web/20160226130526/http://www.rediff.com/movies/2006/aug/05mal.htm |archive-date=26 February 2016 |access-date=26 February 2016 |work=[[Rediff.com]]}}</ref>
|-
! scope="row" | ''[[ಮಹಾಸಮುದ್ರಂ]]''
| ಇಸಹಾಕ್ ವೆಲಂಕನ್ನಿ
|
|<ref>{{cite news |last=Soman |first=Deepa |date=9 June 2014 |title=Mohanlal off to Brazil to catch World Cup climax |url=http://timesofindia.indiatimes.com/entertainment/malayalam/movies/news/Mohanlal-off-to-Brazil-to-catch-World-Cup-climax/articleshow/38057093.cms |url-status=live |archive-url=https://web.archive.org/web/20160226125141/http://timesofindia.indiatimes.com/entertainment/malayalam/movies/news/Mohanlal-off-to-Brazil-to-catch-World-Cup-climax/articleshow/38057093.cms |archive-date=26 February 2016 |access-date=26 February 2016 |work=[[The Times of India]]}}</ref>
|-
! scope="row" | ''[[ಫೋಟೋಗ್ರಾಫರ್]]''
| ದಿಜೊ ಜಾನ್ ಮತ್ತು ಜಾಯ್ ಜಾನ್
|
|<ref>{{cite news |last=Pillai |first=Sreedhar |date=20 October 2006 |title=Clash of the titans |url=http://www.thehindu.com/todays-paper/tp-features/tp-fridayreview/clash-of-the-titans/article3231056.ece |url-status=live |archive-url=https://web.archive.org/web/20160219145306/http://www.thehindu.com/todays-paper/tp-features/tp-fridayreview/clash-of-the-titans/article3231056.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಬಾಬಾ ಕಲ್ಯಾಣಿ]]''
| ಬಾಬಾ ಕಲ್ಯಾಣಿ ಐಪಿಎಸ್
|
|<ref>{{cite news |last=George |first=Vijay |date=27 October 2006 |title=The plot of a thriller |url=http://www.thehindu.com/todays-paper/tp-features/tp-fridayreview/the-plot-of-a-thriller/article3231125.ece |url-status=live |archive-url=https://web.archive.org/web/20160226125429/http://www.thehindu.com/todays-paper/tp-features/tp-fridayreview/the-plot-of-a-thriller/article3231125.ece |archive-date=26 February 2016 |access-date=26 February 2016 |work=[[The Hindu]]}}</ref>
|-
| rowspan="7" | 2007
! scope="row" | ''[[ಚೋಟ್ಟಾ ಮುಂಬೈ]]''
| ವಾಸ್ಕೊ ಡಾ "ತಾಲಾ" ಗಾಮಾ
|
|<ref>{{cite web |last=Moviebuzz (Sify) |date=2 April 2007 |title=Vishu-Change of dates |url=http://www.sify.com/movies/vishu-change-of-dates-news-malayalam-kkfvbgigfhasi.html |url-status=dead |archive-url=https://web.archive.org/web/20151223222020/http://www.sify.com/movies/vishu-change-of-dates-news-malayalam-kkfvbgigfhasi.html |archive-date=23 December 2015 |access-date=14 December 2015 |website=[[Sify]]}}</ref>
|-
! scope="row" | ''[[ಹಾಲೋ]]''
| ಶಿವರಾಮನ್
|
|<ref>{{cite web |last=Palicha |first=Paresh C |date=6 July 2007 |title=Mohanlal rocks in Hallo |url=http://www.rediff.com/movies/2007/jul/06sshallo.htm |url-status=live |archive-url=https://web.archive.org/web/20160105191031/http://www.rediff.com/movies/2007/jul/06sshallo.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ಅಲಿಬಾಯ್]]''
| ಅನ್ವರ್ "ಅಲಿ ಭಾಯ್" ಅಲಿ
|
|<ref>{{cite news |last=Kumar |first=P. K. Ajith |date=6 July 2007 |title=For fans of Mohanlal |url=http://www.thehindu.com/todays-paper/tp-features/tp-fridayreview/for-fans-of-mohanlal/article2272957.ece |url-status=live |archive-url=https://web.archive.org/web/20160219143835/http://www.thehindu.com/todays-paper/tp-features/tp-fridayreview/for-fans-of-mohanlal/article2272957.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ರಾಮ್ ಗೋಪಾಲ್ ವರ್ಮಾ ಕಿ ಆಗ್]]''
| ಇನ್ಸ್ಪೆಕ್ಟರ್ ನರಸಿಂಹ
| ಹಿಂದಿ ಚಿತ್ರ
|<ref>{{cite news |last=Nair |first=Manoj |date=1 September 2007 |title=Mohanlal the saving grace in Ram Gopal Varma's Aag |url=http://economictimes.indiatimes.com/magazines/business-of-bollywood/mohanlal-the-saving-grace-in-ram-gopal-varmas-aag/articleshow/2328428.cms |url-status=live |archive-url=https://web.archive.org/web/20160219140307/http://economictimes.indiatimes.com/magazines/business-of-bollywood/mohanlal-the-saving-grace-in-ram-gopal-varmas-aag/articleshow/2328428.cms |archive-date=19 February 2016 |access-date=11 December 2015 |work=[[The Economic Times]]}}</ref>
|-
! scope="row" | ''[[ಪರದೇಸಿ]]''
| ವಾಲಿಯಕತು ಮೂಸಾ
|
|<ref>{{cite web |last=Palicha |first=Paresh C |date=15 October 2007 |title=Paradeshi review |url=http://www.rediff.com/movies/2007/oct/15pardeshi.htm |url-status=live |archive-url=https://web.archive.org/web/20160105122112/http://www.rediff.com/movies/2007/oct/15pardeshi.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ರಾಕ್ ಎನ್' ರೋಲ್]]''
| ಚಂದ್ರಮೌಲಿ
|
|<ref>{{cite web |last=Palicha |first=Paresh C |date=19 November 2007 |title=Nothing musical about Rock n' Roll |url=http://www.rediff.com/movies/2007/nov/19rock.htm |url-status=live |archive-url=https://web.archive.org/web/20090413173924/http://rediff.com/movies/2007/nov/19rock.htm |archive-date=13 April 2009 |access-date=26 February 2016 |work=[[Rediff.com]]}}</ref>
|-
! scope="row" | ''[[ಫ್ಲಾಷ್]]''
| ಡಾ. ಮಿಧುನ್ ಮಾಧವ್
|
|<ref>{{cite news |last=Kumar |first=P. K. Ajith |date=2 November 2007 |title=Flash of suspense |url=http://www.thehindu.com/todays-paper/tp-features/tp-fridayreview/flash-of-suspense/article2274176.ece |url-status=live |archive-url=https://web.archive.org/web/20160219145021/http://www.thehindu.com/todays-paper/tp-features/tp-fridayreview/flash-of-suspense/article2274176.ece |archive-date=19 February 2016 |access-date=14 December 2015 |work=[[The Hindu]]}}</ref>
|-
| rowspan="9" | 2008
! scope="row" | ''[[ಹಲ್ಲಾ ಬೋಲ್]]''
| ಸ್ವತಃ
| ಹಿಂದಿ ಚಿತ್ರ; ಅತಿಥಿ ಪಾತ್ರ
|<ref>{{cite news |title=Halla Bol Movie Review {3/5}: Critic Review of Halla Bol by Times of India |url=https://timesofindia.indiatimes.com/entertainment/hindi/movie-reviews/halla-bol/movie-review/2693447.cms |website=[[The Times of India]]}}</ref>
|-
! scope="row" | ''[[ಕಾಲೇಜ್ ಕುಮಾರನ್]]''
| ಕ್ಯಾಪ್ಟನ್ ಶ್ರೀಕುಮಾರ್ / ಕ್ಯಾಂಟೀನ್ ಕುಮಾರನ್ / ಕಾಲೇಜ್ ಕುಮಾರನ್
|
|<ref>{{cite news |last=George |first=Vijay |date=25 January 2008 |title=Clash of titans |url=http://www.thehindu.com/todays-paper/tp-features/tp-fridayreview/clash-of-titans/article1432903.ece |access-date=26 February 2016 |work=[[The Hindu]]}}</ref>
|-
! scope="row" | ''[[ಇನ್ನಾತೆ ಚಿಂತ ವಿಶಯಂ]]''
| ಗೋಪಾಕುಮಾರ್ "ಜಿ.ಕೆ."
|
|<ref>{{cite news |last=George |first=Vijay |date=11 April 2008 |title=Battling for the box office |url=http://www.thehindu.com/todays-paper/tp-features/tp-fridayreview/battling-for-the-box-office/article1433815.ece |url-status=live |archive-url=https://web.archive.org/web/20160219144604/http://www.thehindu.com/todays-paper/tp-features/tp-fridayreview/battling-for-the-box-office/article1433815.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಮಿಳಿಕಳ್ ಸಾಕ್ಷಿ]]''
| ಪ್ರೊಫೆಸರ್ ಸಯೀದ್ ಅಹ್ಮದ್
|
|<ref>{{cite web |last=Palicha |first=Paresh C |date=23 June 2008 |title=Mizhikal Sakshi is melodramatic |url=http://www.rediff.com/movies/review/ssms/20080623.htm |url-status=live |archive-url=https://web.archive.org/web/20160105190949/http://www.rediff.com/movies/review/ssms/20080623.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ಮದಾಂಪಿ]]''
| ಪುತ್ತನ್ ಪುರಕ್ಕಲ್ ಗೋಪಾಲಕೃಷ್ಣ ಪಿಳ್ಳೈ
|
|<ref>{{cite news |last=Nagarajan |first=Saraswathy |date=4 July 2008 |title=Of banks and bankers |url=http://www.thehindu.com/todays-paper/tp-features/tp-fridayreview/of-banks-and-bankers/article1434742.ece |url-status=live |archive-url=https://web.archive.org/web/20160219144313/http://www.thehindu.com/todays-paper/tp-features/tp-fridayreview/of-banks-and-bankers/article1434742.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಆಕಾಶ ಗೋಪುರಂ]]''
| ಆಲ್ಬರ್ಟ್ ಸ್ಯಾಮ್ಸನ್
|
|<ref>{{cite news |last=Zaman |first=Rana Siddiqui |date=22 August 2008 |title=A castle of his own |url=http://www.thehindu.com/todays-paper/tp-features/tp-fridayreview/a-castle-of-his-own/article1435337.ece |url-status=live |archive-url=https://web.archive.org/web/20160219143539/http://www.thehindu.com/todays-paper/tp-features/tp-fridayreview/a-castle-of-his-own/article1435337.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಕುರುಕ್ಷೇತ್ರ]]''
| ಕರ್ನಲ್ ಮಹಾದೇವನ್
|
|<ref>{{cite news |last=Pillai |first=Sreedhar |date=4 October 2008 |title=Marking a new trend |url=http://timesofindia.indiatimes.com/entertainment/hindi/bollywood/news/Marking-a-new-trend/articleshow/3556813.cms |url-status=live |archive-url=https://web.archive.org/web/20160219144731/http://timesofindia.indiatimes.com/entertainment/hindi/bollywood/news/Marking-a-new-trend/articleshow/3556813.cms |archive-date=19 February 2016 |access-date=14 December 2015 |work=[[The Times of India]]}}</ref>
|-
! scope="row" | ''[[ಟ್ವೆಂಟಿ:೨೦]]''
| ದೇವರಾಜ ಪ್ರತಾಪ ವರ್ಮಾ
|
|<ref>{{cite web |last=Palicha |first=Paresh C |date=6 November 2008 |title=Twenty: 20 is surprisingly good |url=http://www.rediff.com/movies/2008/nov/06sst.htm |url-status=live |archive-url=https://web.archive.org/web/20160207165042/http://www.rediff.com/movies/2008/nov/06sst.htm |archive-date=7 February 2016 |access-date=26 February 2016 |work=[[Rediff.com]]}}</ref>
|-
! scope="row" | ''[[ಪಾಕಲ್ ನಕ್ಷತ್ರಂಗಳ್]]''
| ಸಿದ್ಧಾರ್ಥನ್
|
|<ref>{{cite web |last=Palicha |first=Paresh C |date=1 December 2008 |title=Review: Pakal Nakshatrangal |url=http://www.rediff.com/movies/2008/dec/01review-pakal-nakshatrangal.htm |url-status=live |archive-url=https://web.archive.org/web/20160105122050/http://www.rediff.com/movies/2008/dec/01review-pakal-nakshatrangal.htm |archive-date=5 January 2016 |access-date=14 December 2015 |work=[[Rediff.com]]}}</ref>
|-
| rowspan="7" | 2009
! scope="row" | ''[[ರೆಡ್ ಚಿಲ್ಲೀಸ್]]''
| ಒಯ್ಯಾರತು ಮದತಿಲ್ "ಒ.ಎಂ.ಆರ್" ರಾಮನಾಥನ್
|
|<ref>{{cite web |last=Moviebuzz (Sify) |date=12 February 2009 |title=Valentine weekend- Kunchacko v/s Red Chillies |url=http://www.sify.com/movies/valentine-weekend-kunchacko-v-s-red-chillies-news-malayalam-kkfsvhhchggsi.html |url-status=dead |archive-url=https://web.archive.org/web/20151224093841/http://www.sify.com/movies/valentine-weekend-kunchacko-v-s-red-chillies-news-malayalam-kkfsvhhchggsi.html |archive-date=24 December 2015 |access-date=14 December 2015 |website=[[Sify]]}}</ref>
|-
! scope="row" | ''[[ಸಾಗರ್ ಅಲಿಯಾಸ್ ಜಾಕಿ ರೀಲೋಡೆಡ್]]''
| ಸಾಗರ್ ಅಲಿಯಾಸ್ ಜಾಕಿ
|
|<ref>{{cite news |last=George |first=Vijay |date=27 March 2009 |title=Amal Neerad alias Action |url=http://www.thehindu.com/todays-paper/tp-features/tp-fridayreview/amal-neerad-alias-action/article657897.ece |url-status=live |archive-url=https://web.archive.org/web/20160219143143/http://www.thehindu.com/todays-paper/tp-features/tp-fridayreview/amal-neerad-alias-action/article657897.ece |archive-date=19 February 2016 |access-date=14 December 2015 |work=[[The Hindu]]}}</ref>
|-
! scope="row" | ''[[ಭಗವಾನ್]]''
| ಡಾ. ಬಾಲಗೋಪಾಲನ್
|
|<ref>{{cite news |last=Bureau |first=Spicezee |date=10 December 2008 |title=South superstar Mohanlal's 'Bhagavan' shot in 12 hours flat! |url=http://zeenews.india.com/home/south-superstar-mohanlals-bhagavan-shot-in-12-hours-flat_489751.html |url-status=live |archive-url=https://web.archive.org/web/20151222164359/http://zeenews.india.com/home/south-superstar-mohanlals-bhagavan-shot-in-12-hours-flat_489751.html |archive-date=22 December 2015 |access-date=14 December 2015 |work=[[Zee News]]}}</ref>
|-
! scope="row" | ''[[ಭ್ರಮರಂ]]''
| ಶಿವನ್ಕುಟ್ಟಿ
|
|<ref>{{cite web |last=Palicha |first=Paresh C |date=26 June 2009 |title=Watch Bhramaram for Mohanlal |url=http://www.rediff.com/movies/review/watch-bhramaram-for-mohanlal/20090626.htm |url-status=live |archive-url=https://web.archive.org/web/20160105191415/http://www.rediff.com/movies/review/watch-bhramaram-for-mohanlal/20090626.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ಉನ್ನೈಪೋಲ್ ಒರುವನ್]]''
| ಡಿಜಿಪಿ ಗೋವಿಂದ ರಾಘವನ್ ಮಾರಾರ್ ಐಪಿಎಸ್
|ತಮಿಳು ಚಿತ್ರ
|<ref>{{cite web |last=Rediff |date=6 August 2009 |title=Kamal, Mohanlal in Tamil's A Wednesday |url=http://movies.rediff.com/report/2009/aug/06/kamal-mohanlal-intamils-a-wednesday.htm |url-status=live |archive-url=https://web.archive.org/web/20151222111711/http://movies.rediff.com/report/2009/aug/06/kamal-mohanlal-intamils-a-wednesday.htm |archive-date=22 December 2015 |access-date=11 December 2015 |work=[[Rediff.com]]}}</ref>
|-
! scope="row" | ''[[ಏಂಜೆಲ್ ಜಾನ್]]''
| ಏಂಜೆಲ್ ಜಾನ್
|
|<ref>{{cite web |last=Palicha |first=Paresh C |date=23 October 2009 |title=Review: Angel John is no Bruce Almighty |url=http://movies.rediff.com/report/2009/oct/23/south-malayalam-movie-review-angel-john.htm |url-status=live |archive-url=https://web.archive.org/web/20151222134350/http://movies.rediff.com/report/2009/oct/23/south-malayalam-movie-review-angel-john.htm |archive-date=22 December 2015 |access-date=14 December 2015 |work=[[Rediff.com]]}}</ref>
|-
! scope="row" | ''[[ಎವಿಡಂ ಸ್ವರ್ಗಮಾಣು]]''
| ಮ್ಯಾಥ್ಯೂಸ್ ಜೆರೆಮಿಯಾಸ್
|
|<ref>{{cite web |last=Palicha |first=Paresh C |date=28 December 2009 |title=Review: Ividam Swargamanu is worth watching |url=http://www.rediff.com/movies/review/south-review-ividam-swargamanu/20091228.htm |url-status=live |archive-url=https://web.archive.org/web/20160105121838/http://www.rediff.com/movies/review/south-review-ividam-swargamanu/20091228.htm |archive-date=5 January 2016 |access-date=14 December 2015 |work=[[Rediff.com]]}}</ref>
|-
| rowspan="5" | 2010
! scope="row" | ''[[ಜನಕನ್]]''
| ವಕೀಲ ಸೂರ್ಯ ನಾರಾಯಣನ್
|
|<ref>{{cite web |last=Palicha |first=Paresh C |date=9 April 2010 |title=Review: Janakan is promising |url=http://movies.rediff.com/review/2010/apr/09/south-malayalam-movie-review-janakan.htm |url-status=live |archive-url=https://web.archive.org/web/20151222080401/http://movies.rediff.com/review/2010/apr/09/south-malayalam-movie-review-janakan.htm |archive-date=22 December 2015 |access-date=14 December 2015 |work=[[Rediff.com]]}}</ref>
|-
! scope="row" | ''[[ಅಲೆಕ್ಸಾಂಡರ್ ದಿ ಗ್ರೇಟ್]]''
| ಅಲೆಕ್ಸಾಂಡರ್ ವರ್ಮಾ
|
|<ref>{{cite news |last=IBN Live |date=6 May 2010 |title=Malayalam industry lifts ban on new releases |url=http://www.ibnlive.com/news/india/malayalam-industry-lifts-ban-338025.html |url-status=live |archive-url=https://web.archive.org/web/20160128055501/http://www.ibnlive.com/news/india/malayalam-industry-lifts-ban-338025.html |archive-date=28 January 2016 |access-date=14 December 2015 |work=[[IBN Live]]}}</ref>
|-
! scope="row" | ''[[ಒರು ನಾಳ್ ವರುಮ್]]''
| ಕುಳಪ್ಪುಳ್ಳಿ ಸುಕುಮಾರನ್ / ಡಿವೈಎಸ್ಪಿ ನಂದಕುಮಾರ್
|
|<ref>{{cite news |last=Media |first=Sampurn |date=27 April 2010 |title=Oru Naal Varum to release on May 7 |url=http://www.newindianexpress.com/entertainment/malayalam/article198029.ece |url-status=dead |archive-url=https://web.archive.org/web/20160219142600/http://www.newindianexpress.com/entertainment/malayalam/article198029.ece |archive-date=19 February 2016 |access-date=14 December 2015 |work=[[The New Indian Express]]}}</ref>
|-
! scope="row" | ''[[ಶಿಕ್ಕರ್]]''
| ಬಾಲರಾಮನ್
|
|<ref>{{cite news |last=Wire |first=Sampurn |date=2 October 2010 |title='Shikkar' wins the Ramzan race |url=http://www.newindianexpress.com/entertainment/malayalam/article286778.ece |url-status=dead |archive-url=https://web.archive.org/web/20150722051403/http://www.newindianexpress.com/entertainment/malayalam/article286778.ece |archive-date=22 July 2015 |access-date=14 December 2015 |work=[[The New Indian Express]]}}</ref>
|-
! scope="row" | ''[[ಕಾಂದಹಾರ್]]''
| ಮೇಜರ್ ಮಹಾದೇವನ್
|
|<ref>{{cite web |last=George |first=Meghna |date=17 December 2010 |title=Review: Big B, Mohanlal shine in Kandahar |url=http://www.rediff.com/movies/review/south-review-kandahar/20101217.htm |url-status=live |archive-url=https://web.archive.org/web/20151117102735/http://www.rediff.com/movies/review/south-review-kandahar/20101217.htm |archive-date=17 November 2015 |access-date=14 December 2015 |work=[[Rediff.com]]}}</ref>
|-
| rowspan="5" | 2011
! scope="row" | ''[[ಕ್ರಿಶ್ಚಿಯನ್ ಬ್ರದರ್ಸ್]]''
| ಕ್ರಿಸ್ಟಿ ವರ್ಗೀಸ್ ಮಪ್ಪಿಳ್ಳ ಅಲಿಯಾಸ್ ಶೆರ್ಸನ್
|
|<ref>{{cite news |last=B S |first=Shibu |date=26 February 2011 |title='Christian Brothers' to spread the good word |url=http://www.newindianexpress.com/entertainment/malayalam/article400741.ece |url-status=dead |archive-url=https://web.archive.org/web/20151224232022/http://www.newindianexpress.com/entertainment/malayalam/article400741.ece |archive-date=24 December 2015 |access-date=14 December 2015 |work=[[The New Indian Express]]}}</ref>
|-
! scope="row" | ''[[ಚೈನಾ ಟೌನ್]]''
| ಮಥುಕುಟ್ಟಿ ಮತ್ತು ಕ್ಸೇವಿಯರ್
|
|<ref>{{cite web |last=Moviebuzz (Sify) |date=17 February 2010 |title=China Town is Mohanlal's Onam release! |url=http://www.sify.com/movies/china-town-is-mohanlals-onam-release-news-malayalam-kkfqRAheehisi.html |url-status=dead |archive-url=https://web.archive.org/web/20151222091652/http://www.sify.com/movies/china-town-is-mohanlals-onam-release-news-malayalam-kkfqRAheehisi.html |archive-date=22 December 2015 |access-date=14 December 2015 |website=[[Sify]]}}</ref>
|-
! scope="row" | ''[[ಪ್ರಣಯಂ]]''
| ಮ್ಯಾಥ್ಯೂಸ್
|
|<ref>{{cite news |last=Velayanikal |first=Malavika |date=11 September 2011 |title='Pranayam', a film you can take home with you |url=http://www.dnaindia.com/entertainment/report-pranayam-a-film-you-can-take-home-with-you-1585909 |url-status=live |archive-url=https://web.archive.org/web/20160226123629/http://www.dnaindia.com/entertainment/report-pranayam-a-film-you-can-take-home-with-you-1585909 |archive-date=26 February 2016 |access-date=26 February 2016 |work=[[Daily News and Analysis]]}}</ref>
|-
! scope="row" | ''[[ಸ್ನೇಹವೀಡು]]''
| ಅಜಯನ್ ಮೇನನ್
|
|<ref>{{cite web |last=George |first=Meghna |date=26 September 2011 |title=Mohanlal hits 300 with Snehaveedu |url=http://www.rediff.com/movies/slide-show/slide-show-1-mohanlal-gears-up-with-landmark-film/20110926.htm |url-status=live |archive-url=https://web.archive.org/web/20111230223238/http://www.rediff.com/movies/slide-show/slide-show-1-mohanlal-gears-up-with-landmark-film/20110926.htm |archive-date=30 December 2011 |access-date=14 December 2015 |work=[[Rediff.com]]}}</ref>
|-
! scope="row" | ''[[ಒರು ಮರುಭೂಮಿಕ್ಕಾಧ]]''
| ಪಿ. ಮಾಧವನ್ ನಾಯರ್
|
|<ref>{{cite news |last=Nagarajan |first=Saraswathy |date=20 October 2011 |title=An Arabian comedy |url=http://www.thehindu.com/features/cinema/an-arabian-comedy/article2555143.ece |url-status=live |archive-url=https://web.archive.org/web/20160219142431/http://www.thehindu.com/features/cinema/an-arabian-comedy/article2555143.ece |archive-date=19 February 2016 |access-date=14 December 2015 |work=[[The Hindu]]}}</ref>
|-
| rowspan="6" | 2012
! scope="row" | ''[[ಕಸನೋವ್ವಾ]]''
| ಕಸನೋವ್ವಾ
|
|<ref>{{cite news |last=Mid-Day |date=6 February 2012 |title=Ajay vs Aamir – Who will play Casanova in south remake? – NDTV Movies |url=http://movies.ndtv.com/bollywood/ajay-vs-aamir-who-will-play-casanova-in-south-remake-603474 |url-status=live |archive-url=https://web.archive.org/web/20151222111951/http://movies.ndtv.com/bollywood/ajay-vs-aamir-who-will-play-casanova-in-south-remake-603474 |archive-date=22 December 2015 |access-date=14 December 2015 |work=[[NDTV]]}}</ref>
|-
! scope="row" | ''[[ಟೆಜ್]]''
| ಶಿವನ್ ಮೇನನ್
| ಹಿಂದಿ ಚಿತ್ರ; ಅತಿಥಿ ಪಾತ್ರ
|<ref>{{cite news |last1=Srivastava |first1=Priyanka |last2=Varma |first2=Lipika |date=25 January 2012 |title=Mohanlal's fans want more |url=https://www.indiatoday.in/movies/bollywood/story/mohanlal-tezz-priyadarshans-action-film-90855-2012-01-24 |url-status=live |archive-url=https://web.archive.org/web/20140129181953/http://indiatoday.intoday.in/story/mohanlal-tezz-priyadarshans-action-film/1/170483.html |archive-date=29 January 2014 |access-date=11 December 2015 |work=[[India Today]]}}</ref>
|-
! scope="row" | ''[[ಗ್ರಾಂಡ್ಮಾಸ್ಟರ್]]''
| ಐಜಿ ಚಂದ್ರಶೇಖರ್ ಐಪಿಎಸ್
|
|<ref>{{cite web |last=Palicha |first=Paresh C |date=4 May 2012 |title=Review: Mohanlal excels in Grandmaster |url=http://www.rediff.com/movies/report/south-review-mohanlal-excels-in-grandmaster/20120504.htm |url-status=live |archive-url=https://web.archive.org/web/20160105121854/http://www.rediff.com/movies/report/south-review-mohanlal-excels-in-grandmaster/20120504.htm |archive-date=5 January 2016 |access-date=14 December 2015 |work=[[Rediff.com]]}}</ref>
|-
! scope="row" | ''[[ಸ್ಪಿರಿಟ್]]''
| ರಘು ನಂದನ್
|
|<ref>{{cite news |last=IBN Live |date=20 September 2012 |title=Spirit: Completes 100 day run on Box office |url=http://www.ibnlive.com/news/india/spirit-completes-100-day-run-on-box-office-509793.html |url-status=live |archive-url=https://web.archive.org/web/20160128055507/http://www.ibnlive.com/news/india/spirit-completes-100-day-run-on-box-office-509793.html |archive-date=28 January 2016 |access-date=14 December 2015 |work=[[IBN Live]]}}</ref>
|-
! scope="row" | ''[[ರನ್ ಬೇಬಿ ರನ್]]''
| ವೇಣು
|
|<ref>{{cite news |last=IBN Live |date=31 August 2012 |title=Malayalam Review: 'Run Baby Run' is a gripping thriller |url=http://www.ibnlive.com/news/india/malayalam-review-run-baby-run-is-a-gripping-thriller-503350.html |url-status=live |archive-url=https://web.archive.org/web/20160128124258/http://www.ibnlive.com/news/india/malayalam-review-run-baby-run-is-a-gripping-thriller-503350.html |archive-date=28 January 2016 |access-date=14 December 2015 |work=[[IBN Live]]}}</ref>
|-
! scope="row" | ''[[ಕರ್ಮಯೋಧ]]''
| ಡಿಸಿಪಿ ಮಾಧವ "ಮ್ಯಾಡ್ ಮ್ಯಾಡಿ" ಮೇನನ್ ಐಪಿಎಸ್
|
|<ref>{{cite news |last=Kurian |first=Shiba |date=19 December 2012 |title=Mohanlal's 'Karmayodha' courts trouble |url=http://timesofindia.indiatimes.com/entertainment/malayalam/movies/news/Mohanlals-Karmayodha-courts-trouble/articleshow/17675330.cms? |url-status=live |archive-url=https://web.archive.org/web/20160219142226/http://timesofindia.indiatimes.com/entertainment/malayalam/movies/news/Mohanlals-Karmayodha-courts-trouble/articleshow/17675330.cms |archive-date=19 February 2016 |access-date=14 December 2015 |work=[[The Times of India]]}}</ref>
|-
| rowspan="6" | 2013
! scope="row" | ''[[ಲೋಕ್ಪಾಲ್]]''
| ನಂದಗೋಪಾಲ್ / ಲೋಕ್ಪಾಲ್
|
|<ref>{{cite news |last=IBN Live |date=9 February 2013 |title='Lokpal' Review: The Malayalam film is a one time watch |url=http://www.ibnlive.com/news/india/lokpal-review-the-malayalam-film-is-a-one-time-watch-589835.html |url-status=live |archive-url=https://web.archive.org/web/20160126052846/http://www.ibnlive.com/news/india/lokpal-review-the-malayalam-film-is-a-one-time-watch-589835.html |archive-date=26 January 2016 |access-date=14 December 2015 |work=[[IBN Live]]}}</ref>
|-
! scope="row" | ''[[ರೆಡ್ ವೈನ್]]''
| ಎಸಿಪಿ ರತೀಶ್ ವಾಸುದೇವನ್ ಐಪಿಎಸ್
|
|<ref>{{cite news |last=Kurian |first=Shiba |date=26 March 2013 |title=Red Wine's climax changed after its release? |url=http://timesofindia.indiatimes.com/entertainment/malayalam/movies/news/Red-Wines-climax-changed-after-its-release/articleshow/19214416.cms |url-status=live |archive-url=https://web.archive.org/web/20160219142104/http://timesofindia.indiatimes.com/entertainment/malayalam/movies/news/Red-Wines-climax-changed-after-its-release/articleshow/19214416.cms |archive-date=19 February 2016 |access-date=14 December 2015 |work=[[The Times of India]]}}</ref>
|-
! scope="row" | ''[[ಲೇಡೀಸ್ ಅಂಡ್ ಜೆಂಟಲ್ಮನ್]]''
| ಚಂದ್ರಬೋಸ್
|
|<ref>{{cite news |last=Saseendran |first=Sajila |date=23 March 2013 |title=Dubai is my second home: Mohanlal – Khaleej Times |url=http://www.khaleejtimes.com/article/20130323/ARTICLE/303239974/1057 |url-status=live |archive-url=https://web.archive.org/web/20151118041835/http://www.khaleejtimes.com/article/20130323/ARTICLE/303239974/1057 |archive-date=18 November 2015 |access-date=14 December 2015 |work=[[Khaleej Times]]}}</ref>
|-
! scope="row" | ''[[ಕಡಲ್ ಕಡನ್ನು ಒರು ಮಾತುಕುಟ್ಟಿ]]''
| ಸ್ವತಃ
|ಅತಿಥಿ ಪಾತ್ರ
|<ref>{{cite news |last=Karthikeyan |first=Shruti |date=23 August 2014 |title=Mammootty and Mohanlal to share screen space? |url=http://timesofindia.indiatimes.com/Entertainment/Malayalam/Movies/News/Mammootty-and-Mohanlal-to-share-screen-space/articleshow/40694989.cms |url-status=live |archive-url=https://web.archive.org/web/20140828192648/http://timesofindia.indiatimes.com/Entertainment/Malayalam/Movies/News/Mammootty-and-Mohanlal-to-share-screen-space/articleshow/40694989.cms |archive-date=28 August 2014 |access-date=20 December 2015 |work=[[The Times of India]]}}</ref>
|-
! scope="row" | ''[[ಗೀತಾಂಜಲಿ]]''
| ಡಾ. ಸನ್ನಿ ಜೋಸೆಫ್
|
|<ref>{{cite news |last=Nagarajan |first=Saraswathy |date=14 November 2013 |title=Ghostbuster returns |url=http://www.thehindu.com/features/cinema/ghostbuster-returns/article5350923.ece |url-status=live |archive-url=https://web.archive.org/web/20131114180638/http://www.thehindu.com/features/cinema/ghostbuster-returns/article5350923.ece |archive-date=14 November 2013 |access-date=26 February 2016 |work=[[The Hindu]]}}</ref>
|-
! scope="row" | ''[[ದೃಶ್ಯಂ]]''
| ಜಾರ್ಜ್ಕುಟ್ಟಿ
|
|<ref>{{cite news |last=Seshagiri |first=Sangeetha |date=12 February 2014 |title='Drishyam' Box Office Collection: Mohanlal Starrer is Mega Blockbuster in India, Performs Well in UK |url=http://www.ibtimes.co.in/039drishyam039-box-office-collection-mohanlal-starrer-is-mega-blockbuster-in-india-performs-well-in-uk-538490 |url-status=live |archive-url=https://web.archive.org/web/20150803002040/http://www.ibtimes.co.in/039drishyam039-box-office-collection-mohanlal-starrer-is-mega-blockbuster-in-india-performs-well-in-uk-538490 |archive-date=3 August 2015 |access-date=14 December 2015 |work=[[International Business Times]]}}</ref>
|-
| rowspan="4" | 2014
! scope="row" | ''[[ಜಿಲ್ಲಾ]]''
| ಶಿವನ್
| ತಮಿಳು ಚಿತ್ರ
|<ref>{{cite news |last=Bhaskaran |first=Gautaman |date=11 January 2014 |title=Movie review: Watch Jilla for Mohanlal's performance, Vijay's charisma |url=http://www.hindustantimes.com/regional-movies/movie-review-watch-jilla-for-mohanlal-s-performance-vijay-s-charisma/story-YdCiVl9QPOInca7Odd13BI.html |url-status=live |archive-url=https://web.archive.org/web/20160127123601/http://www.hindustantimes.com/regional-movies/movie-review-watch-jilla-for-mohanlal-s-performance-vijay-s-charisma/story-YdCiVl9QPOInca7Odd13BI.html |archive-date=27 January 2016 |access-date=11 December 2015 |work=[[Hindustan Times]]}}</ref>
|-
! scope="row" | ''[[ಮಿಸ್ಟರ್ ಫ್ರಾಡ್]]''
| ಭಾಯಿ ಜಿ / ಜಾನ್ ಕ್ಲಿಫ್ / ಶಿವರಾಮ್
|
|<ref>{{cite news |last=Press Trust of India |date=28 April 2014 |title=Malayalam films won't release till ban on Mohanlal's 'Mr Fraud' is lifted: FEFKA |url=http://indianexpress.com/article/entertainment/entertainment-others/malayalam-films-wont-release-till-ban-on-mohanlals-mr-fraud-is-lifted-fefka/ |url-status=live |archive-url=https://web.archive.org/web/20151222170549/http://indianexpress.com/article/entertainment/entertainment-others/malayalam-films-wont-release-till-ban-on-mohanlals-mr-fraud-is-lifted-fefka/ |archive-date=22 December 2015 |access-date=14 December 2015 |work=[[The Indian Express]]}}</ref>
|-
! scope="row" | ''[[ಕೂತಾರ]]''
| ಉಸ್ತಾದ್ ಸಾಲಿ
| ವಿಸ್ತೃತ ಅತಿಥಿ ಪಾತ್ರ
|<ref>{{cite news |last=V. P |first=Nicy |date=12 June 2014 |title=New Malayalam Movie Releases: 'Koothara', 'Angry Babies in Love' Set to Roll by Weekend |url=http://www.ibtimes.co.in/new-malayalam-movie-releases-koothara-angry-babies-love-set-roll-by-weekend-602128 |url-status=live |archive-url=https://web.archive.org/web/20151222120709/http://www.ibtimes.co.in/new-malayalam-movie-releases-koothara-angry-babies-love-set-roll-by-weekend-602128 |archive-date=22 December 2015 |access-date=14 December 2015 |work=[[International Business Times]]}}</ref>
|-
! scope="row" | ''[[ಪೆರುಚಾಳಿ]]''
| ಜಗನ್ನಾಥನ್
|
|<ref>{{cite news |last=Sathish |first=V M |date=2 September 2014 |title=Malayalam superstar Mohanlal's 'Peruchazhi' to premiere in Dubai |url=http://www.emirates247.com/entertainment/malayalam-superstar-mohanlal-s-peruchazhi-to-premiere-in-dubai-2014-09-02-1.561510 |url-status=live |archive-url=https://web.archive.org/web/20150702005605/http://www.emirates247.com/entertainment/malayalam-superstar-mohanlal-s-peruchazhi-to-premiere-in-dubai-2014-09-02-1.561510 |archive-date=2 July 2015 |access-date=14 December 2015 |work=[[Emirates 24/7]]}}</ref>
|-
| rowspan="6" | 2015
! scope="row" | ''[[ರಸಂ]]''
| ಸ್ವತಃ
|ಅತಿಥಿ ಪಾತ್ರ
|<ref>{{cite news |last=Indo-Asian News Service |date=5 January 2015 |title=Malayalam film 'Rasam', shot in Qatar to release soon |url=http://indianexpress.com/article/entertainment/regional/malayalam-film-rasam-shot-in-qatar-to-release-soon/ |url-status=live |archive-url=https://web.archive.org/web/20160210011326/http://indianexpress.com/article/entertainment/regional/malayalam-film-rasam-shot-in-qatar-to-release-soon/ |archive-date=10 February 2016 |access-date=14 December 2015 |work=[[The Indian Express]]}}</ref>
|-
! scope="row" | ''[[ಮೈಥ್ರಿ]]''
| ಮಹಾದೇವ್ ಗೋಡ್ಕೆ
| ಕನ್ನಡ ಚಿತ್ರ; ಅತಿಥಿ ಪಾತ್ರ; ಮಲಯಾಳಂನಲ್ಲಿ 'ಮೈ ಹೀರೋ ಮೈಥ್ರಿ' ಎಂದು ಭಾಗಶಃ ಮರುನಿರ್ಮಾಣ
|<ref>{{cite news |last=Sharadhaa |first=A |date=17 February 2015 |title=Mythri Creates Ripples |url=http://www.newindianexpress.com/entertainment/kannada/Mythri-Creates-Ripples/2015/02/17/article2671918.ece |url-status=dead |archive-url=https://web.archive.org/web/20151222074633/http://www.newindianexpress.com/entertainment/kannada/Mythri-Creates-Ripples/2015/02/17/article2671918.ece |archive-date=22 December 2015 |access-date=11 December 2015 |work=[[The New Indian Express]]}}</ref>
|-
! scope="row" | ''[[ಎನ್ನುಮ್ ಎಪ್ಪೋಳುಂ]]''
| ವಿನೀತ್ ಎನ್. ಪಿಳ್ಳೈ
|
|<ref>{{cite news |last=Online Desk |date=28 March 2015 |title=5 reasons to watch 'Ennum Eppozhum' |url=http://english.manoramaonline.com/entertainment/entertainment-news/ennum-eppozhum-mohanlal-manju-warrier-sathyan-anthikad-box-office-reasons-to-watch.html |url-status=live |archive-url=https://web.archive.org/web/20151209174649/http://english.manoramaonline.com/entertainment/entertainment-news/ennum-eppozhum-mohanlal-manju-warrier-sathyan-anthikad-box-office-reasons-to-watch.html |archive-date=9 December 2015 |access-date=14 December 2015 |work=[[Malayala Manorama]]}}</ref>
|-
! scope="row" | ''[[ಲೈಲಾ ಓ ಲೈಲಾ]]''
| ಏಜೆಂಟ್ ಜೈ ಮೋಹನ್
|
|<ref>{{cite news |last=Khan |first=Ujala Ali |date=19 May 2015 |title=Dubai film Lailaa O Lailaa, with Malayalam superstar Mohanlal, aims for local premiere |url=https://www.thenationalnews.com/arts-culture/dubai-film-lailaa-o-lailaa-with-malayalam-superstar-mohanlal-aims-for-local-premiere-1.126415/ |url-status=live |archive-url=https://web.archive.org/web/20151227223332/http://www.thenational.ae/arts-lifestyle/film/dubai-film-lailaa-o-lailaa-with-malayalam-superstar-mohanlal-aims-for-local-premiere |archive-date=27 December 2015 |access-date=14 December 2015 |work=[[The National (Abu Dhabi)|The National]]}}</ref>
|-
! scope="row" | ''[[ಲೋಹಂ]]''
| ರಾಜೀವ್ "ರಾಜು" ಸತ್ಯಮೂರ್ತಿ
|
|<ref>{{cite news |last=James |first=Anu |date=21 August 2015 |title=Mohanlal's 'Loham' Review: Live Audience Response |url=http://www.ibtimes.co.in/mohanlal-starrer-loham-review-live-audience-response-643552 |url-status=live |archive-url=https://web.archive.org/web/20151223142243/http://www.ibtimes.co.in/mohanlal-starrer-loham-review-live-audience-response-643552 |archive-date=23 December 2015 |access-date=14 December 2015 |work=[[International Business Times]]}}</ref>
|-
! scope="row" | ''[[ಕನಾಲ್]]''
| ಜಾನ್ ಡೇವಿಡ್
|
|<ref>{{cite news |last=James |first=Anu |date=22 October 2015 |title=Mohanlal's 'Kanal' review: Live audience response |url=http://www.ibtimes.co.in/mohanlals-kanal-review-live-audience-response-651514 |url-status=live |archive-url=https://web.archive.org/web/20151122065356/http://www.ibtimes.co.in/mohanlals-kanal-review-live-audience-response-651514 |archive-date=22 November 2015 |access-date=14 December 2015 |work=[[International Business Times]]}}</ref>
|-
| rowspan="4" | 2016
! scope="row" | ''[[ಮನಮಂತ]]''
| ಸಾಯಿ ರಾಮ್
| ತೆಲುಗು ಚಿತ್ರ; ಮಲಯಾಳಂನಲ್ಲಿ 'ವಿಸ್ಮಯಂ' ಎಂದು ಭಾಗಶಃ ಮರುನಿರ್ಮಾಣ
|<ref>{{cite news |last=Sidhardhan |first=Sanjith |date=14 January 2016 |title=Mohanlal wraps up filming his Telugu movie |url=http://timesofindia.indiatimes.com/entertainment/malayalam/movies/news/Mohanlal-wraps-up-filming-his-Telugu-movie/articleshow/50574492.cms |url-status=live |archive-url=https://web.archive.org/web/20160225180814/http://timesofindia.indiatimes.com/entertainment/malayalam/movies/news/Mohanlal-wraps-up-filming-his-Telugu-movie/articleshow/50574492.cms |archive-date=25 February 2016 |access-date=25 February 2016}}</ref>
|-
! scope="row" | ''[[ಜನತಾ ಗ್ಯಾರೇಜ್]]''
| ಸತ್ಯಮ್
| ತೆಲುಗು ಚಿತ್ರ
|<ref>{{cite news |last=Jonnalagedda |first=Pranita |date=26 November 2016 |title=Mohanlal is NTR's peddananna |url=http://timesofindia.indiatimes.com/entertainment/telugu/movies/news/Mohanlal-is-NTRs-peddananna/articleshow/49934152.cms? |url-status=live |archive-url=https://web.archive.org/web/20160219141527/http://timesofindia.indiatimes.com/entertainment/telugu/movies/news/Mohanlal-is-NTRs-peddananna/articleshow/49934152.cms |archive-date=19 February 2016 |access-date=1 December 2015 |work=[[The Times of India]]}}</ref>
|-
! scope="row" | ''[[ಒಪ್ಪಂ]]''
| ಜಯರಾಮನ್
|
|<ref>{{cite news |last=Sidhardhan |first=Sanjith |date=6 March 2016 |title=Mohanlal's Oppam starts filming in Kochi |url=http://timesofindia.indiatimes.com/entertainment/malayalam/Mohanlals-Oppam-starts-filming-in-Kochi/articleshow/51275090.cms |url-status=live |archive-url=https://web.archive.org/web/20160308192944/http://timesofindia.indiatimes.com/entertainment/malayalam/Mohanlals-Oppam-starts-filming-in-Kochi/articleshow/51275090.cms |archive-date=8 March 2016 |access-date=8 March 2016 |work=[[The Times of India]]}}</ref>
|-
! scope="row" | ''[[ಪುಲಿಮುರುಗನ್]]''
| ಮುರುಗನ್
|
|<ref>{{cite news |last=James |first=Anu |date=26 February 2016 |title=Mohanlal's 'Pulimurugan' to be released in 3,000 screens? |url=http://www.ibtimes.co.in/mohanlals-pulimurugan-be-released-3000-screens-668379 |url-status=live |archive-url=https://web.archive.org/web/20160227105254/http://www.ibtimes.co.in/mohanlals-pulimurugan-be-released-3000-screens-668379 |archive-date=27 February 2016 |access-date=29 February 2016 |work=[[International Business Times]]}}</ref>
|-
| rowspan="4" | 2017
! scope="row" | ''[[ಮುಂತಿರಿವಳ್ಳಿಕಲ್ ತಾಲಿರ್ಕ್ಕುಂಬೋಲ್]]''
| ಉಳಹನ್ನನ್ "ಉನ್ನಚನ್"
|
|<ref>{{cite news |last1=James |first1=Anu |date=15 July 2016 |title=Mohanlal, Meena start shooting for untitled Jibu Jacob movie [PHOTOS] |url=http://www.ibtimes.co.in/mohanlal-meena-start-shooting-untitled-jibu-jacob-movie-photos-686732 |access-date=17 July 2016 |work=[[International Business Times]]}}</ref>
|-
! scope="row" | ''[[1971: ಬಿಯಾಂಡ್ ಬಾರ್ಡರ್ಸ್]]''
| ಕರ್ನಲ್ ಮಹಾದೇವನ್ ಮತ್ತು ಮೇಜರ್ ಸಹದೇವನ್
|
|<ref>{{cite news |title=Mohanlal starts shooting for Major Ravi's next |url=http://timesofindia.indiatimes.com/entertainment/malayalam/movies/news/Mohanlal-starts-shooting-for-Major-Ravis-next/articleshow/55204172.cms |access-date=7 November 2016 |work=The Times of India}}</ref>
|-
! scope="row" | ''[[ವೇಲಿಪದಿಂಟೆ ಪುಸ್ತಕಂ]]''
| ಮೈಕೆಲ್ ಇಡಿಕುಲ
|
|<ref>{{Cite news |date=26 May 2017 |title=Mohanlal reveals his look from Lal Jose's Velipadinte Pustakam. See photo |url=http://indianexpress.com/article/entertainment/malayalam/mohanlal-reveals-his-look-from-lal-jose-velipadinte-pustakam-see-photo-4675302/ |url-status=live |archive-url=https://archive.today/20170606140309/http://indianexpress.com/article/entertainment/malayalam/mohanlal-reveals-his-look-from-lal-jose-velipadinte-pustakam-see-photo-4675302/ |archive-date=6 June 2017 |access-date=6 June 2017 |work=The Indian Express}}</ref>
|-
! scope="row" | ''[[ವಿಲನ್]]''
| ಎಡಿಜಿಪಿ ಮ್ಯಾಥ್ಯೂ ಮಂಜೂರನ್ ಐಪಿಎಸ್
|
|<ref>{{cite news |title=Mohanlal in as villain in B Unnikrishan's next: Here's the first poster and it's badass |url=http://timesofindia.indiatimes.com/entertainment/malayalam/movies/news/mohanlal-in-as-villain-in-b-unnikrishans-next-heres-the-first-poster-and-its-badass/articleshow/57518330.cms |access-date=7 March 2017 |work=[[The Times of India]]}}</ref>
|-
| rowspan="5" | 2018
! scope="row" | ''[[ಆದಿ]]''
| ಸ್ವತಃ
|ಅತಿಥಿ ಪಾತ್ರ
|<ref>{{cite news |date=28 January 2018 |title=Aadhi movie review: Pranav parkours to stardom |url=https://www.deccanchronicle.com/entertainment/movie-reviews/280118/aadhi-movie-review-pranav-parkours-to-stardom.html |url-status=live |archive-url=https://web.archive.org/web/20180128071836/http://www.deccanchronicle.com/entertainment/movie-reviews/280118/aadhi-movie-review-pranav-parkours-to-stardom.html |archive-date=28 January 2018 |access-date=28 January 2018 |work=[[Deccan Chronicle]]}}</ref>
|-
! scope="row" | ''[[ನೀರಳಿ]]''
| ಸನ್ನಿ ಜಾರ್ಜ್
|
|<ref>{{cite news |author=സ്വന്തം ലേഖകൻ |date=10 January 2018 |title=ഈ മോഹൻലാൽ ചിത്രത്തിന് പ്രത്യേകതകൾ നിരവധി |url=https://www.manoramaonline.com/movies/movie-news/2018/01/10/mohanlal-ajoy-varma-movie-cast-list.html |access-date=26 May 2018 |work=[[Malayala Manorama]] |language=ml}}</ref>
|-
! scope="row" | ''[[ಕಾಯಂಕುಲಂ ಕೊಚುನ್ನಿ]]''
| ಇತ್ತಿಕ್ಕರ ಪಕ್ಕಿ
|
|<ref>{{cite news |last=Sidhardhan |first=Sanjith |date=9 January 2018 |title=Mohanlal's Ithikkara Pakki will be a revelation: Rosshan Andrrews |url=https://timesofindia.indiatimes.com/entertainment/malayalam/movies/news/mohanlals-ithikkara-pakki-will-be-a-revelation-rosshan-andrrews/articleshow/62427874.cms |access-date=9 January 2018 |work=[[The Times of India]]}}</ref>
|-
! scope="row" | ''[[ಡ್ರಾಮಾ]]''
| ರಾಜಗೋಪಾಲ್
|
|<ref>{{cite web |last=Smith |first=Alan |date=29 May 2018 |title=Mohanlal meets Margaret Preedy |url=http://www.kentonline.co.uk/maidstone/news/mohanlal-meets-margaret-preedy-183744/ |access-date=29 May 2018 |publisher=Kent Online}}</ref>
|-
! scope="row" | ''[[ಒಡಿಯಾನ್]]''
| ಒಡಿಯಾನ್ ಮಣಿಕ್ಯನ್
|
|<ref>{{cite news |last=James |first=Anu |date=4 October 2017 |title=Mohanlal on a roll: After Odiyan, superstar announces his next biggie |url=http://www.ibtimes.co.in/mohanlal-roll-after-odiyan-superstar-announces-his-next-biggie-744269 |access-date=28 January 2018 |work=[[International Business Times]]}}</ref>
|-
| rowspan="3" | 2019
! scope="row" | ''[[ಲೂಸಿಫರ್]]''
| ಸ್ಟೀಫನ್ ನೆಡುಂಪಲ್ಲಿ / ಖುರೇಶಿ ಅಬ್'ರಾಮ್
|
|<ref>{{cite web |date=4 June 2019 |title=Mohanlal's Lucifer storms into Rs 200 crore club, first for Malayalam cinema |url=https://www.hindustantimes.com/regional-movies/mohanlal-s-lucifer-storms-into-rs-200-crore-club-first-for-malayalam-cinema/story-vTm7JXaAdz0FWFTllE4n2I.html |access-date=16 February 2020 |website=Hindustan Times}}</ref>
|-
! scope="row" | ''[[ಇಟ್ಟಿಮಾನಿ: ಮೇಡ್ ಇನ್ ಚೈನಾ]]''
| ಇಟ್ಟಿಮಾನಿ ಮತ್ತು ಇಟ್ಟಿಮಾಥನ್
|
|<ref>{{cite news |date=24 April 2019 |title='Ittimani Made in China' puja in Kochi |url=https://timesofindia.indiatimes.com/entertainment/events/kochi/ittimani-made-in-china-puja-in-kochi/articleshow/69021700.cms?from=mdr |access-date=21 May 2019 |work=[[The Times of India]]}}</ref>
|-
! scope="row" | ''[[ಕಾಪ್ಪಾನ್]]''
| ಪಿಎಂ ಚಂದ್ರಕಾಂತ್ ವರ್ಮಾ
| ತಮಿಳು ಚಿತ್ರ
|<ref>{{Cite web |date=20 September 2019 |title=Mohanlal is the greatest actor we have in our country: Suriya on his 'Kaappaan' co-star |url=https://www.newindianexpress.com/entertainment/tamil/2019/sep/14/mohanlal-is-the-greatest-actor-we-have-in-our-country-suriya-on-his-kaappaan-co-star-2033651.html |website=The New Indian Express}}</ref>
|-
| 2020
! scope="row" | ''[[ಬಿಗ್ ಬ್ರದರ್]]''
| ಸಚಿದಾನಂದನ್
|
|<ref>{{cite web |date=11 October 2018 |title=Mohanlal's film with Siddique titled 'Big Brother' |url=https://www.thenewsminute.com/article/mohanlal-s-film-siddique-titled-big-brother-89829 |url-status=live |archive-url=https://web.archive.org/web/20190525133404/https://www.thenewsminute.com/article/mohanlal-s-film-siddique-titled-big-brother-89829 |archive-date=25 May 2019 |accessdate=25 May 2019 |website=The News Minute}}</ref>
|-
| rowspan="2" | 2021
! scope="row" | ''[[ದೃಶ್ಯಂ ೨]]''
| ಜಾರ್ಜ್ಕುಟ್ಟಿ
|
|<ref>{{Cite web |date=21 September 2020 |title=In Pics: Mohanlal's Drishyam 2 Goes on the Floors |url=https://www.news18.com/news/movies/in-pics-mohanlals-drishyam-2-goes-on-the-floors-2894603.html |website=News18}}</ref>
|-
! scope="row" | ''[[ಮರಕ್ಕರ್: ಅರಬಿಕ್ಕಡಲಿಂಟೆ ಸಿಂಹಂ]]''
| ಕುಂಜಾಲಿ ಮರಕ್ಕರ್
|
|<ref>{{cite news |date=2 September 2019 |title=Mohanlal: We are dedicating Marakkar to the Indian Navy |url=https://timesofindia.indiatimes.com/entertainment/malayalam/movies/news/mohanlal-we-are-dedicating-marakkar-to-the-indian-navy/articleshow/70945908.cms |url-status=live |archive-url=https://web.archive.org/web/20210410140701/https://timesofindia.indiatimes.com/entertainment/malayalam/movies/news/mohanlal-we-are-dedicating-marakkar-to-the-indian-navy/articleshow/70945908.cms |archive-date=10 April 2021 |access-date=30 March 2021 |work=[[Times of India]]}}</ref>
|-
| rowspan="4" | 2022
! scope="row"|''[[ಬ್ರೋ ಡ್ಯಾಡಿ]]''
| ಜಾನ್ ಚಾಕೋ ಕಟ್ಟಾಡಿ
|
|<ref>{{Cite web|url=https://www.indiatoday.in/movies/regional-cinema/story/prithviraj-sukumaran-announces-his-second-directorial-bro-daddy-with-mohanlal-1816663-2021-06-18|title=Prithviraj Sukumaran announces his second directorial Bro Daddy with Mohanlal|first=Ramya|last=Palisetty|date=ಜೂನ್ 18, 2021|website=India Today}}</ref>
|-
! scope="row" |''[[ಆರಾಟ್ಟು]]''
| ಗಣಭೂಷಣಂ ನೆಯ್ಯಟ್ಟಿಂಕರ ಗೋಪನ್ / ಕರ್ನಲ್ ಸೂರ್ಯಚಂದ್ರ ಲಾಲ್ / ಏಜೆಂಟ್ X
|
|<ref>{{cite news |last=George |first=Anjana |date=12 October 2021 |title=Mohanlal, Unnikrishnan team up for a rustic entertainer |url=https://timesofindia.indiatimes.com/entertainment/malayalam/movies/news/mohanlal-unnikrishnan-team-up-for-a-rustic-entertainer/articleshow/78618723.cms |access-date=13 April 2021 |work=[[The Times of India]]}}</ref>
|-
! scope="row" |''[[12ನೇ ಮನುಷ್ಯ]]''
|ಡಿವೈಎಸ್ಪಿ ಚಂದ್ರಶೇಖರ್
|
|<ref>{{cite news |author=Express News Service |date=16 September 2021 |title=Mohanlal joins sets of Jeethu Joseph's 'The 12th Man' |url=https://www.newindianexpress.com/entertainment/malayalam/2021/sep/16/mohanlal-joins-sets-of-jeethu-josephs-the-12th-man-2359258.html |access-date=31 October 2021 |work=[[The New Indian Express]]}}</ref>
|-
! scope="row" |''[[ಮಾನ್ಸ್ಟರ್]]''
|ಲಕಿ ಸಿಂಗ್ / ಶಿವದೇವ್ ಸುಬ್ರಮಣಿಯಂ ಐಪಿಎಸ್
|
|<ref>{{cite news |date=10 November 2021 |title=Mohanlal announces new film 'Monster' |url=https://www.thehindu.com/entertainment/movies/mohanlal-announces-new-film-monster/article37417344.ece |work=The Hindu}}</ref>
|-
| rowspan="3" |2023
! scope="row" |''[[ಅಲೋನ್]]''
| ಕಾಳಿದಾಸ್
|
|<ref>{{Cite news |title=Mohanlal starrer 'Alone' finishes its shoot in just 18 days! – Times of India |url=https://timesofindia.indiatimes.com/entertainment/malayalam/movies/news/mohanlal-starrer-alone-finishes-its-shoot-in-just-18-days/articleshow/87223483.cms |access-date=1 December 2021 |website=The Times of India |language=en}}</ref>
|-
! scope="row" |''[[ಜೈಲರ್]]''
| ಮ್ಯಾಥ್ಯೂ
| ತಮಿಳು ಚಿತ್ರ; ಅತಿಥಿ ಪಾತ್ರ
|<ref name="auto1"/>
|-
! scope="row" | ''[[ನೇರು]]''
|ವಕೀಲ ವಿಜಯಮೋಹನ್
|
|<ref>{{Cite web |date=5 October 2023 |title=Filming of Mohanlal's Neru wraps up |url=https://www.cinemaexpress.com/malayalam/news/2023/oct/05/filming-of-mohanlals-neru-wraps-up-48335.html |access-date=26 November 2023 |website=[[Cinema Express]] |language=en}}</ref>
|-
| rowspan="2" |2024
! scope="row" | ''[[ಮಲೈಕೋಟ್ಟೈ ವಾಲಿಬನ್]]''
| ಮಲೈಕೋಟ್ಟೈ ವಾಲಿಬನ್ / ಮಲೈಕೋಟ್ಟೈ ಮಲಯನ್
|
|<ref>{{cite news |date=18 January 2023 |title=Mohanlal-Lijo Jose Pellissery's 'Malaikottai Valiban' goes on floors in Rajasthan |url=https://timesofindia.indiatimes.com/entertainment/malayalam/movies/news/mohanlal-lijo-jose-pellisserys-malaikottai-valiban-goes-on-floors-in-rajasthan/articleshow/97086061.cms |access-date=19 January 2023 |newspaper=[[The Times of India]]}}</ref>
|-
! scope="row" | ''[[ಬರೋಜ್ 3D]]''
| ಬರೋಜ್
| ಸಹ ನಿರ್ದೇಶಕ
|<ref>{{Cite web |date=23 February 2021 |title=Mohanlal commences work on 'Barroz' |url=https://www.newindianexpress.com/entertainment/malayalam/2021/feb/23/mohanlal-commences-work-on-barroz-2267471.html |access-date=1 March 2021 |website=[[The New Indian Express]]}}</ref>
|-
| rowspan="6" |2025
! scope="row" | ''[[ಎಲ್೨: ಎಂಪುರಾನ್]]''
| ಖುರೇಶಿ ಅಬ್'ರಾಮ್ / ಸ್ಟೀಫನ್ ನೆಡುಂಪಲ್ಲಿ
|
|<ref>{{Cite web |date=1 December 2024 |title=Empuraan release date: Prithviraj wraps up shoot of Mohanlal's L2: Empuraan: 'What an incredible 14-month journey across 8 states and 4 countries' |url=https://indianexpress.com/article/entertainment/malayalam/prithviraj-sukumaran-wraps-up-shoot-of-mohanlals-l2-empuraan-9699956/ |access-date=25 December 2024 |website=[[The Indian Express]]}}</ref>
|-
! scope="row" | ''[[ತುದಾರುಂ]]''
| ಶಣ್ಮುಘಂ "ಬೆಂಜ್"
|
|<ref>{{Cite web |date=8 November 2024 |title=Mohanlal's 'L360' gets official title 'Thudarum', featuring a long-awaited reunion with Shobana |url=https://english.mathrubhumi.com/movies-music/news/mohanlal-l360-movie-title-shobana-tharun-moorthy-m-renjith-1.10059842 |access-date=23 November 2024 |website=[[Mathrubhumi]]}}</ref>
|-
! scope="row" | ''[[ಕಣ್ಣಪ್ಪ]]''
|ಕಿರಾತ || ತೆಲುಗು ಚಿತ್ರ; ಅತಿಥಿ ಪಾತ್ರ
|<ref>{{Cite news |date=19 August 2023 |title=Vishnu Manchu Begins His Dream Project Kannappa |url=https://www.deccanchronicle.com/entertainment/tollywood/180823/vishnu-manchu-begins-his-dream-project-kannappa.html |access-date=19 August 2023 |work=[[Deccan Chronicle]]}}</ref>
|-
! scope="row" | ''[[ಹೃದಯಪೂರ್ವಂ]]''
| ಸಂದೀಪ್ ಬಾಲಕೃಷ್ಣನ್ ||
|<ref>{{cite news |date=10 February 2025 |title=Hridayapoorvam: Mohanlal and Sathyan Anthikad's film goes on floors |url=https://www.thehindu.com/entertainment/movies/hridayapoorvam-mohanlal-and-sathyan-anthikads-film-goes-on-floors/article69202663.ece}}</ref>
|-
! scope="row" | ''[[ಭಾ ಭಾ ಬಾ]]''
| ಘಿಲ್ಲಿ ಬಾಲಾ
| ಅತಿಥಿ ಪಾತ್ರ
|<ref>{{cite news |date=20 July 2025 |title=Mohanlal's grand dance track in 'Bha Bha Ba' could be Malayalam cinema's costliest song yet - DEETS inside |url=https://timesofindia.indiatimes.com/entertainment/malayalam/movies/news/mohanlals-grand-dance-track-in-bha-bha-ba-could-be-malayalam-cinemas-costliest-song-yet-deets-inside/articleshow/122798898.cms |newspaper=The Times of India}}</ref>
|-
! scope="row" | ''[[ವೃಷಭ]]''
| ರಾಜಾ ವಿಜಯೇಂದ್ರ ವೃಷಭ / ಆದಿ ದೇವ ವರ್ಮಾ
| ದ್ವಿಭಾಷಾ ಚಿತ್ರ
|<ref>{{cite news |date=23 July 2023 |title=Vrushabha: Mohanlal's pan-India bilingual film goes on floors |url=https://timesofindia.indiatimes.com/entertainment/telugu/movies/news/vrushabha-mohanlals-pan-india-bilingual-film-goes-on-floors/articleshow/102058032.cms |newspaper=The Times of India}}</ref>
|-
| rowspan="8" |2026
! scope="row" | ''[[ಪ್ಯಾಟ್ರಿಯಾಟ್]]''
| ಕರ್ನಲ್ ರಹೀಂ ನಾಯಕ್
|ವಿಸ್ತೃತ ಅತಿಥಿ ಪಾತ್ರ
|<ref>{{Cite news |date=20 November 2024 |title=Mohanlal, Mammootty, Fahadh Faasil and Kunchacko Boban; Mahesh Narayanan's multi-starrer starts rolling |url=https://timesofindia.indiatimes.com/entertainment/malayalam/movies/news/mohanlal-mammootty-nayantharafahadh-faasil-and-more-mahesh-narayanans-multi-starrer-starts-rolling/articleshow/115474717.cms |access-date=21 November 2024 |work=The Times of India}}</ref>
|-
!scope="row" |''[[ದೃಶ್ಯಂ ೩]]''
|ಜಾರ್ಜ್ಕುಟ್ಟಿ
|
|<ref>{{Cite web |date=25 September 2025 |title=Mohanlal begins Drishyam 3 shoot a day after receiving Dadasaheb Phalke Award |url=https://www.cinemaexpress.com/malayalam/news/2025/Sep/25/mohanlal-begins-drishyam-3-shoot-a-day-after-receiving-dadasaheb-phalke-award |access-date=28 September 2025 |website=[[Cinema Express]] |language=en}}</ref>
|-
!scope="row"|''[[ತುಡಕ್ಕಂ]]''
| ಮಾಸ್ಟರ್
| rowspan="5" |ಅತಿಥಿ ಪಾತ್ರ
|<ref>{{Cite web |author=<!--Unlisted--> |date=2026-05-10 |title=Thudakkam, starring Vismaya Mohanlal, gets release date |url=https://www.cinemaexpress.com/malayalam/news/2026/May/10/thudakkam-starring-vismaya-mohanlal-gets-release-date |access-date=2026-05-10 |website=Cinema Express |language=en}}</ref>
|-
|{{Pending film|ಖಲೀಫಾ: ಭಾಗ I - ದಿ ಇಂಟ್ರೋ}}
|ಮಂಬರಾಯಕ್ಕಲ್ ಅಹಮದ್ ಅಲಿ
|<ref>{{Cite web |last=The Hollywood Reporter India |date=8 December 2025 |title=Mohanlal to star as Mambaraykkal Ahmad Ali in Prithviraj's ''Khalifa'' |url=https://www.hollywoodreporterindia.com/features/insight/mohanlal-to-act-in-prithviraj-sukumarans-khalifa/amp}}</ref>
|-
| {{Pending film|ಹೈವಾನ್}}
| {{TableTBA}}
|<ref>{{cite news |last1= |first1= |title='Haiwaan': Akshay Kumar and Saif Ali Khan reunite after 17 years for a Priyadarshan film |url=https://www.thehindu.com/entertainment/movies/haiwaan-akshay-kumar-saif-ali-khan-priyadarshan-17-years-oppam-remake/article69818435}}</ref>
|-
|{{Pending film|[[ಜೈಲರ್ 2]]}}
|ಮ್ಯಾಥ್ಯೂ
|<ref>{{Cite web |last=Entertainment Desk |first=TOI |date=5 December 2025 |title=''Jailer 2'' gets bigger - Malayalam superstar Mohanlal and Vinayakan are set to reprise their roles from the first film! |url=https://timesofindia.indiatimes.com/entertainment/malayalam/movies/news/jailer-2-gets-bigger-vinayakan-confirms-comeback-mohanlal-jets-off-to-join-rajinikanths-sequel-shoot/articleshow/125730992.cms |website=Times of India: Entertainment Desk}}</ref>
|-
|{{Pending film|[[ಕಥನಾರ್ - ದಿ ವೈಲ್ಡ್ ಸಾರ್ಸೆರರ್]]}}
|ಮಾರ್ ಅಬೋ
|<ref>{{Cite web |last=A Manu |first=Hridayambika |date=January 6, 2026 |title=ഇനി ഇത് നീലിയും വിറക്കും. ജയസൂര്യയുടെ കത്തനാറിൽ മാർ അബോ ആയി മോഹൻലാൽ |url=https://malayalam.indianexpress.com/social/kathanar-mohanlal-cameo-fan-made-poster-jayasurya-10975167}}</ref>
|-
| {{Pending film|italic=no|''ಅತಿಮನೋಹರಂ''}}
|ಎಸ್ಐ ಟಿ.ಎಸ್. ಲವೆಲಜನ್
| ಚಿತ್ರೀಕರಣ
|<ref>{{Cite news |date=23 January 2026 |title=Mohanlal returns to his classic moustache look for 'L366'|url=https://www.onmanorama.com/entertainment/entertainment-news/2026/01/23/mohanlal-joins-new-movie-sets-tharun-moorthy.html|access-date=24 January 2026 |work=Onmanorama}}</ref>
|-
| rowspan="2" |2027
|scope="row"{{Pending film|italic=no|''L367''}}
|<small>TBA</small>
|ಪೂರ್ವ-ನಿರ್ಮಾಣ
|<ref>{{Cite news |date=26 January 2026 |title=Mohanlal announces 'L367' with National Award winner Vishnu Mohan; FIRST LOOK poster out: 'Looking forward to this new chapter'|url=https://timesofindia.indiatimes.com/entertainment/malayalam/movies/news/mohanlal-announces-l367-with-national-award-winner-vishnu-mohan-first-look-poster-out-looking-forward-to-this-new-chapter/articleshow/127547504.cms|work=Times Entertainment}}</ref>
|-
|{{Pending film|ನೆಡುಂಕಂಡಂ ಮಿರಾಕಲ್}}
| {{TableTBA}}
| ಪೂರ್ವ-ನಿರ್ಮಾಣ
|<ref>{{Cite web |last=News |first=Reporter |title=ലാലേട്ടനൊപ്പം ഇനി പോത്തേട്ടൻസ് ബ്രില്യൻസ്; വരുന്നു 'നെടുങ്കണ്ടം മിറാക്കിൾ', അണിയറയിലും വമ്പന്മാർ |url=https://www.reporterlive.com/entertainment/entertainment-news/2026/07/03/dileesh-pothans-new-movie-with-mohanlal-nedukandam-miracle-announced |access-date=2026-07-03 |website=ReporterNews |language=ml}}</ref>
|-
|{{TBA}}
|{{Pending film|ಖಲೀಫಾ: ಭಾಗ II - ಹಿಸ್ ರೇನ್}}
|ಮಂಬರಾಯಕ್ಕಲ್ ಅಹಮದ್ ಅಲಿ
|''ಖಲೀಫಾ: ಭಾಗ I - ದಿ ಇಂಟ್ರೋ'' ನ ಪ್ರೀಕ್ವೆಲ್
|
|-
| {{TBA}}
! scope="row" {{pending film|italic=no| ''[[ರಾಮ್]]''}}
| ರಾಮ್ ಮೋಹನ್
| ವಿಳಂಬ
|<ref name="timesofindia.indiatimes.com">{{Cite news |title=Mohanlal looks super cool and stylish as he shoots for 'RAM' – Times of India |url=https://timesofindia.indiatimes.com/entertainment/malayalam/movies/news/mohanlal-looks-super-cool-and-stylish-as-he-shoots-for-ram/articleshow/73274437.cms |access-date=17 January 2020 |website=The Times of India |language=en}}</ref>
|}
== ನಿರ್ಮಾಪಕ ==
{| class="wikitable plainrowheaders sortable" style="margin-right: 0;"
|+ ಮೋಹನ್ಲಾಲ್ ನಿರ್ಮಾಪಕರಾಗಿ ಚಲನಚಿತ್ರ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ನಿರ್ಮಾಣ
! scope="col" | {{ref heading}}
|-
| 1984
! scope="row" | ''[[ಆದಿಯೋಳುಕ್ಕುಕಳ್]]''
| rowspan="3" |ಕ್ಯಾಸಿನೊ ಫಿಲ್ಮ್ಸ್
| rowspan="19"|<ref>{{Cite web |last=Suresh |first=Anandu |date=21 May 2025 |title=Forget the actor, it's Mohanlal the producer who should make a comeback; the one behind both his National Awards for Best Actor |url=https://indianexpress.com/article/entertainment/malayalam/forget-the-actor-its-mohanlal-the-producer-who-should-make-a-comeback-10017351/ |access-date=22 May 2025 |website=[[The Indian Express]]}}</ref>
|-
| 1985
! scope="row" | ''[[ಕರಿಂಬಿನ್ ಪೂವಿನಕ್ಕರೆ]]''
|-
| rowspan="2"| 1986
! scope="row" | ''[[ಗಾಂಧಿನಗರ್ 2ನೇ ಸ್ಟ್ರೀಟ್]]''
|-
! scope="row" | ''[[ಆದಿವೇರುಕಳ್]]''
| ಚೀರ್ಸ್ ಫಿಲ್ಮ್ಸ್
|-
| rowspan="2"| 1987
! scope="row" | ''[[ನಾಡೋಡಿಕ್ಕಟ್ಟು]]''
| ಕ್ಯಾಸಿನೊ ಫಿಲ್ಮ್ಸ್
|-
! scope="row" | ''[[ಉನ್ನಿಕಳೆ ಒರು ಕಧಾ ಪರಯಂ]]''
| rowspan="3" | ಚೀರ್ಸ್ ಫಿಲ್ಮ್ಸ್
|-
| rowspan="2"| 1988
! scope="row" | ''[[ಒರ್ಕ್ಕಪ್ಪುರತು]]''
|-
! scope="row" | ''[[ಆರ್ಯನ್]]''
|-
| 1990
! scope="row" | ''[[ಹಿಸ್ ಹೈನೆಸ್ ಅಬ್ದುಲ್ಲಾ]]''
| rowspan="11" | ಪ್ರಣವಂ ಆರ್ಟ್ಸ್ ಇಂಟರ್ನ್ಯಾಷನಲ್
|-
| 1991
! scope="row" | ''[[ಭರತಂ]]''
|-
| 1992
! scope="row" | ''[[ಕಮಲದಳಂ]]''
|-
| 1993
! scope="row" | ''[[ಮಿಧುನಂ]]''
|-
| 1994
! scope="row" | ''[[ಪಿಂಗಾಮಿ]]''
|-
| 1996
! scope="row" | ''[[ಕಾಲಪಾನಿ]]''
|-
| rowspan="2"| 1998
! scope="row" | ''[[ಕನ್ಮದಂ]]''
|-
! scope="row" | ''[[ಹರಿಕೃಷ್ಣನ್ಸ್]]''
|-
| rowspan="2"| 1999
! scope="row" | ''[[ಒಲಿಂಪಿಯನ್ ಆಂಥೋನಿ ಆಡಮ್]]''
|-
! scope="row" | ''[[ವನಪ್ರಸ್ಥಂ]]''
|-
| 2010
! scope="row" | ''[[ಕಾಂದಹಾರ್]]''
|}
== ನಿರೂಪಕ / ಧ್ವನಿ ==
{| class="wikitable plainrowheaders sortable" style="margin-right: 0;"
|+ ಮೋಹನ್ಲಾಲ್ ನಿರೂಪಕ ಅಥವಾ ಧ್ವನಿಯಾಗಿ ಚಲನಚಿತ್ರ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" class="unsortable" | ಟಿಪ್ಪಣಿಗಳು
! scope="col" class="unsortable" | {{ref heading}}
|-
| 1989
! scope="row"|''[[ಸೀಸನ್]]''
| rowspan="2" |ಪ್ರಮುಖ ನಟನಾಗಿಯೂ
|
|-
| 1990
! scope="row"|''[[ಇಂದ್ರಜಾಲಂ]]''
|
|-
| 1998
! scope="row" | ''[[ಕಲ್ಲು ಕೊಂಡೊರು ಪೆನ್ನು]]''
| ಚಿತ್ರಮಂದಿರ ಆವೃತ್ತಿ ಮಾತ್ರ
| style="text-align:center;"|<ref>{{cite news |author=Deepa Soman |date=15 October 2014 |title=Voice overs are in vogue in Mollywood |url=http://timesofindia.indiatimes.com/entertainment/malayalam/movies/news/Voice-overs-are-in-vogue-in-Mollywood/articleshow/44821451.cms |url-status=live |archive-url=https://web.archive.org/web/20141018235107/http://timesofindia.indiatimes.com/entertainment/malayalam/movies/news/Voice-overs-are-in-vogue-in-Mollywood/articleshow/44821451.cms |archive-date=18 October 2014 |access-date=11 December 2015 |work=[[The Times of India]]}}</ref>
|-
|2002
! scope="row" | ''[[ಒನ್ನಾಮನ್]]''
| rowspan="2" |ಪ್ರಮುಖ ನಟನಾಗಿಯೂ
|
|-
| 2007
! scope="row" | ''[[ಚೋಟ್ಟಾ ಮುಂಬೈ]]''
|
|-
| 2008
! scope="row" | ''[[ಸ್ವರ್ಣಂ]]''
|
| style="text-align:center;"|<ref>{{cite news |last=V. P. |first=Nicy |date=15 November 2014 |title=Mohanlal Turns Narrator for Priyadarshan's 'Aamayum Muyalum' |url=http://www.ibtimes.co.in/mohanlal-turns-narrator-priyadarshans-aamayum-muyalum-614103 |url-status=live |archive-url=https://web.archive.org/web/20151222094116/http://www.ibtimes.co.in/mohanlal-turns-narrator-priyadarshans-aamayum-muyalum-614103 |archive-date=22 December 2015 |access-date=25 February 2016 |work=[[International Business Times]]}}</ref>
|-
| 2009
! scope="row" | ''[[ಕೇರಳ ವರ್ಮಾ ಪಳಸ್ಸಿ ರಾಜಾ]]''
|
| style="text-align:center;"|<ref>{{cite news |last=Media |first=Sampurn |date=16 September 2009 |title=Mohanlal to do Pazhassi Raja's narration |url=http://www.newindianexpress.com/entertainment/malayalam/article153158.ece |url-status=dead |archive-url=https://web.archive.org/web/20151222133222/http://www.newindianexpress.com/entertainment/malayalam/article153158.ece |archive-date=22 December 2015 |access-date=19 February 2016 |work=[[The New Indian Express]]}}</ref>
|-
| 2010
!scope="row" | ''[[ಜನಕನ್]]''
|ಪ್ರಮುಖ ನಟನಾಗಿಯೂ
|
|-
| rowspan="2" | 2012
! scope="row" | ''[[ದಿ ಹಿಟ್ ಲಿಸ್ಟ್]]''
|
| style="text-align:center;"|<ref>{{cite news |last=V. P |first=Nicy |date=2 December 2014 |title=Priyadarshan-Jayasurya Film 'Aamayum Muyalum' Set to Release on 19 December |url=http://www.ibtimes.co.in/priyadarshan-jayasurya-film-aamayum-muyalum-set-release-19-december-615869 |url-status=live |archive-url=https://web.archive.org/web/20151222112240/http://www.ibtimes.co.in/priyadarshan-jayasurya-film-aamayum-muyalum-set-release-19-december-615869 |archive-date=22 December 2015 |access-date=11 December 2015 |work=[[International Business Times]]}}</ref>
|-
! scope="row" | ''[[ನಮುಕ್ಕು ಪಾರ್ಕ್ಕನ್]]''
|
| style="text-align:center;"|<ref>{{cite news |last=V. P |first=Nicy |date=15 November 2014 |title=Mohanlal Turns Narrator for Priyadarshan's 'Aamayum Muyalum' |url=http://www.ibtimes.co.in/mohanlal-turns-narrator-priyadarshans-aamayum-muyalum-614103 |url-status=live |archive-url=https://web.archive.org/web/20151222094116/http://www.ibtimes.co.in/mohanlal-turns-narrator-priyadarshans-aamayum-muyalum-614103 |archive-date=22 December 2015 |work=[[International Business Times]]}}</ref>
|-
| 2014
! scope="row" | ''[[ಆಮಯುಂ ಮುಯಲುಂ]]''
|
| style="text-align:center;"|<ref>{{cite news |last=Soman |first=Deepa |date=15 November 2015 |title=Mohanlal to introduce Aamayum Muyalum characters |url=http://timesofindia.indiatimes.com/entertainment/malayalam/movies/news/Mohanlal-to-introduce-Aamayum-Muyalum-characters/articleshow/45147882.cms |url-status=live |archive-url=https://web.archive.org/web/20141118095316/http://timesofindia.indiatimes.com/entertainment/malayalam/movies/news/Mohanlal-to-introduce-Aamayum-Muyalum-characters/articleshow/45147882.cms |archive-date=18 November 2014 |access-date=25 February 2016 |work=[[The Times of India]]}}</ref>
|-
| rowspan="2" | 2015
! scope="row" | ''[[ಎನ್ನುಮ್ ಎಪ್ಪೋಳುಂ]]''
| ಪ್ರಮುಖ ನಟನಾಗಿಯೂ
|
|-
! scope="row" | ''[[ಪಿಕೆಟ್ 43]]''
|
| style="text-align:center;"|<ref>{{cite web |last=Vikram |first=Raj |date=23 January 2015 |title=Picket 43 Movie Review |url=http://www.metromatinee.com/movie-review/picket-43-movie-review-556 |url-status=dead |archive-url=https://web.archive.org/web/20150506040812/http://www.metromatinee.com/movie-review/picket-43-movie-review-556 |archive-date=6 May 2015 |access-date=25 February 2016 |publisher=Metromatinee.com}}</ref>
|-
| rowspan="3" | 2017
! scope="row" | ''[[ಸಿ/ಓ ಸೈರಾ ಬಾನು]]''
| ಧ್ವನಿ ಪಾತ್ರ: ಪೀಟರ್ ಜಾರ್ಜ್
|
|-
! scope="row" | ''[[ತಿಯಾನ್]]''
| "ಸಮಯ" ದ ಧ್ವನಿ
| style="text-align:center;"|<ref>{{cite news |last=Thomas |first=Elizabeth |date=9 July 2017 |title=Tiyaan movie review: In the name of faith |url=https://www.deccanchronicle.com/entertainment/movie-reviews/090717/tiyaan-movie-review-in-the-name-of-faith.html |access-date=7 April 2020 |work=[[Deccan Chronicle]]}}</ref>
|-
! scope="row" | ''[[ಆಕಾಶಮಿತ್ತಾಯಿ]]''
|
| style="text-align:center;"|<ref>{{cite news |last1=Sreenivasan |first1=Deepthi |date=31 August 2017 |title=Appa comes to Mollywood |url=https://www.deccanchronicle.com/entertainment/mollywood/310817/appa-comes-to-mollywood.html |access-date=7 April 2020 |work=[[Deccan Chronicle]]}}</ref>
|-
|2018
! scope="row" | ''[[ಕಾಯಂಕುಲಂ ಕೊಚುನ್ನಿ]]''
| ಸಹ ನಟ
|
|-
| rowspan="3" | 2019
! scope="row" | ''[[ನೆಯುಂ ಞಾನುಂ]]''
|
|
|-
! scope="row" | ''100 ಇಯರ್ಸ್ ಆಫ್ ಕ್ರಿಸೊಸ್ಟಮ್''
| ಸಾಕ್ಷ್ಯಚಿತ್ರ; ಗಿನ್ನೆಸ್ ವಿಶ್ವ ದಾಖಲೆಗೆ ಪ್ರವೇಶ
| style="text-align:center;"|<ref>{{cite news |author=<!--staff byline--> |date=20 August 2019 |title=Guinness entry of docu on Chrysostom celebrated |url=https://www.thehindu.com/news/national/kerala/guinness-entry-of-docu-on-chrysostom-celebrated/article29184940.ece |access-date=7 April 2020 |work=[[The Hindu]]}}</ref>
|-
! scope="row" | ''[[ಸ್ಯೇ ರಾ ನರಸಿಂಹ ರೆಡ್ಡಿ]]''
|ಮಲಯಾಳಂ ಡಬ್ ಆವೃತ್ತಿ
| style="text-align:center;"|<ref>{{cite news |author=India Today Web Desk |date=20 August 2019 |title=Sye Raa Narasimha Reddy: Rajinikanth and Mohanlal to lend their voices for Chiranjeevi's film? |url=https://www.indiatoday.in/movies/regional-cinema/story/sye-raa-narasimha-reddy-rajinikanth-and-mohanlal-to-lend-their-voices-for-chiranjeevi-s-film-1582598-2019-08-20 |access-date=7 April 2020 |work=[[India Today]]}}</ref>
|-
|2022
! scope="row" | ''[[ಪಥೋನ್ಪಥಂ ನೂಟ್ಟಾಂಡು]]''
|
|
|-
|2023
! scope="row" | ''[[ಕಿಂಗ್ ಆಫ್ ಕೊಥಾ]]''
|
|
|-
| rowspan="2" |2024
! scope="row" | ''[[ಗು]]''
|
|<ref>{{cite news |author=India Today Web Desk |date=7 May 2024 |title=Trailer Of Saiju Kurup's Gu Promises Spine-chilling Horror |url=https://www.news18.com/movies/trailer-of-saiju-kurups-gu-promises-spine-chilling-horror-8881446.html |work=[[News 18]]}}</ref>
|-
! scope="row" | ''[[ಎಆರ್ಎಂ]]''
| ವಿಶ್ವ ಸೃಷ್ಟಿಕರ್ತನ ಧ್ವನಿ
|<ref>{{cite news |date=12 September 2024 |title=Mohanlal joins Tovino Thomas in 'Ajayante Randam Moshanam', surprise revealed |url=https://english.mathrubhumi.com/movies-music/news/mohanlal-joins-tovino-thomas-ajayante-randam-moshanam-voiceover-1.9895462 |work=[[Mathrubhumi News]]}}</ref>
|-
| 2026
! scope="row" | ''[[ಕೆಡಿ: ದಿ ಡೆವಿಲ್]]''
|ಮಲಯಾಳಂ ಡಬ್ ಆವೃತ್ತಿ
|
|}
== ರಂಗಭೂಮಿ ==
{| class="wikitable plainrowheaders sortable" style="margin-right: 0;"
|+ ಮೋಹನ್ಲಾಲ್ ರಂಗಭೂಮಿ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ನಾಟಕ
! scope="col" | ಪಾತ್ರ
! scope="col" | ಭಾಷೆ
! scope="col" | ಪ್ರಥಮ ಪ್ರದರ್ಶನ
! scope="col" class="unsortable" | {{ref heading}}
|-
| 2001
! scope="row" | ''[[ಕರ್ಣಭಾರಂ]]''
| [[ಕರ್ಣ]]
| [[ಸಂಸ್ಕೃತ]]
| ಸಿರಿ ಫೋರ್ಟ್ ಆಡಿಟೋರಿಯಂ, ನ್ಯೂ ಡೆಲ್ಲಿ
| style="text-align:center;"|<ref>{{cite web |last=Jose |first=D |date=13 March 2001 |title=Mohanlal's new obsession |url=http://www.rediff.com/movies/2001/mar/13mohan.htm |url-status=live |archive-url=https://web.archive.org/web/20160105190842/http://www.rediff.com/movies/2001/mar/13mohan.htm |archive-date=5 January 2016 |access-date=13 March 2010 |work=[[Rediff.com]]}}</ref>
|-
| 2003
! scope="row" | ''ಕಥಾಯಟ್ಟಂ''{{efn|''ಕಥಾಯಟ್ಟಂ'' ನಲ್ಲಿ, ಮೋಹನ್ಲಾಲ್ ಮಲಯಾಳಂ ಸಾಹಿತ್ಯದಿಂದ ಆಯ್ಕೆ ಮಾಡಲಾದ ಹತ್ತು ಕಾದಂಬರಿಗಳಿಂದ ಹತ್ತು ಶ್ರೇಷ್ಠ ಪಾತ್ರಗಳು ಮತ್ತು ಸಂದರ್ಭಗಳನ್ನು ನಿರ್ವಹಿಸಿದರು. ಅವುಗಳನ್ನು ಒಯ್ಯಾರತ್ತು ಚಂದು ಮೇನನ್ (''ಇಂದುಲೇಖ''), ಸಿ.ವಿ. ರಾಮನ್ ಪಿಳ್ಳೈ (''ಧರ್ಮರಾಜ''), ಎಸ್.ಕೆ. ಪೊಟ್ಟೆಕ್ಕಟ್ಟ್ (''ನಾಡನ್ ಪ್ರೇಮಂ''), ತಕ್ಕಳಿ ಶಿವಶಂಕರ ಪಿಳ್ಳೈ (''ಚೆಮ್ಮೀನ್''), ಪಿ. ಕೇಸವದೇವ್ (''ಒಡಯಿಲ್ ನಿನ್ನು''), ವೈಕಂ ಮುಹಮ್ಮದ್ ಬಷೀರ್, ಉರೂಬ್ (''ಉಮ್ಮಚು''), ಒ.ವಿ. ವಿಜಯನ್ (''ಖಾಸಕ್ಕಿಂಟೆ ಇತಿಹಾಸಂ''), ಎಂ. ಮುಕುಂದನ್ (''ಮಯ್ಯಳಿಪ್ಪುಳಯುಡೆ ತೀರಂಗಳಿಲ್''), ಮತ್ತು ಎಂ.ಟಿ. ವಾಸುದೇವನ್ ನಾಯರ್ (''ರಂಡಾಮೂಳಂ'') ಬರೆದಿದ್ದಾರೆ.<ref>{{cite news |date=4 December 2004 |title=Mohanlal to enact characters from Malayalam literature |url=http://www.thehindubusinessline.com/2004/12/04/stories/2004120402091700.htm |url-status=live |archive-url=https://web.archive.org/web/20090607065324/http://www.thehindubusinessline.com/2004/12/04/stories/2004120402091700.htm |archive-date=7 June 2009 |access-date=16 February 2016 |work=[[The Hindu]]}}</ref><ref name="kadhayattam" />}}
|
* ಸೂರಿ ನಂಬೂತಿರಿಪಾಡು
* ಚಂದ್ರಕರನ್
* ಪಪ್ಪು
* ಇಕ್ಕೊರನ್
* ಚೆಂಬನ್ ಕುಂಜು
* ಮಾಯನ್
* ಅಲ್ಲಪಿಚಾ ಮೊಲ್ಲಾಕಾ
* ದಾಸನ್
* ಭೀಮ
* ವೈಕಂ ಮುಹಮ್ಮದ್ ಬಷೀರ್
| [[ಮಲಯಾಳಂ]]
| ಸೆನೆಟ್ ಹಾಲ್, ಕೇರಳ ವಿಶ್ವವಿದ್ಯಾಲಯ
| style="text-align:center;"|<ref name="kadhayattam">{{cite news |date=28 October 2003 |title=Document for rejuvenating Malayalam to be released |url=http://www.thehindu.com/2003/10/28/stories/2003102807480400.htm |url-status=dead |archive-url=https://web.archive.org/web/20160219141233/http://www.thehindu.com/2003/10/28/stories/2003102807480400.htm |archive-date=19 February 2016 |access-date=28 October 2011 |work=[[The Hindu]]}}</ref>
|-
| rowspan="2" | 2008
! scope="row" | ''ಚಾಯಮುಖಿ''
| [[ಭೀಮ]]
| ಮಲಯಾಳಂ
| ಲುಲು ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರ, ತ್ರಿಶೂರ್
| style="text-align:center;"|<ref>{{cite news |last=Santhosh |first=K. |date=13 March 2008 |title=Mirroring the pangs of love |url=http://www.thehindu.com/todays-paper/tp-national/tp-kerala/mirroring-the-pangs-of-love/article1218835.ece |url-status=live |archive-url=https://web.archive.org/web/20160219140152/http://www.thehindu.com/todays-paper/tp-national/tp-kerala/mirroring-the-pangs-of-love/article1218835.ece |archive-date=19 February 2016 |access-date=10 December 2015 |work=[[The Hindu]]}}</ref>
|-
! scope="row" | ''ಮಾಯಾ ರಾವಣ'' (ಬ್ಯಾಲೆ)
| [[ಹನುಮಂತ]] (ಧ್ವನಿ)
| ಇಂಗ್ಲಿಷ್
| ನೆಹರು ಕೇಂದ್ರ, ಮುಂಬೈ
| style="text-align:center;"|<ref>{{cite news |last=Varma |first=Sivadas |date=12 May 2009 |title=Mayaravan unveiled |url=http://www.newindianexpress.com/cities/kochi/article117561.ece |url-status=dead |archive-url=https://web.archive.org/web/20151224105226/http://www.newindianexpress.com/cities/kochi/article117561.ece |archive-date=24 December 2015 |access-date=12 December 2015 |work=[[The New Indian Express]]}}{{indent|3}}{{cite news |last=Trivedi |first=Mihir |title=Celebs give full marks to Shobhana's Maya Ravan |url=http://www.ibnlive.com/videos/india/shobhanas-ravan-296253.html |archive-url=https://www.webcitation.org/6fQmer4DD?url=http://www.ibnlive.com/videos/india/shobhanas-ravan-296253.html |archive-date=20 February 2016 |access-date=12 December 2015 |agency=[[IBN Live]] |date=1 September 2008 |url-status=dead}}{{indent|3}}{{cite news |last=Arunachalam |first=Jayashree |title=Tale of epic grandeur |url=http://www.thehindu.com/features/friday-review/dance/tale-of-epic-grandeur/article26008.ece |archive-url=https://web.archive.org/web/20160219135057/http://www.thehindu.com/features/friday-review/dance/tale-of-epic-grandeur/article26008.ece |archive-date=19 February 2016 |access-date=12 December 2015 |agency=[[The Hindu]] |date=28 September 2009 |url-status=live}}</ref>
|-
| 2009
! scope="row" | ''[[ದಿ ಟೆಂಪೆಸ್ಟ್]]''
| [[ಪ್ರಾಸ್ಪೆರೊ]]
| ಮಲಯಾಳಂ
| ಜೋಸ್ ಥಾಮಸ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್
| style="text-align:center;"|<ref>{{cite news |last=Manmadhan |first=Prema |date=29 January 2009 |title=Mohanlal to play Prospero |url=http://www.thehindu.com/todays-paper/tp-features/tp-metroplus/mohanlal-to-play-prospero/article656373.ece |url-status=live |archive-url=https://web.archive.org/web/20160219140551/http://www.thehindu.com/todays-paper/tp-features/tp-metroplus/mohanlal-to-play-prospero/article656373.ece |archive-date=19 February 2016 |access-date=10 December 2015 |work=[[The Hindu]]}}</ref>
|-
| 2010
! scope="row" | ''[[ವಿಕ್ರಮೋರ್ವಶೀಯಂ]]''
| [[ಪುರುರವಸ]]
| ಸಂಸ್ಕೃತ
| ಉಜ್ಜಯಿನಿ, ಮಧ್ಯ ಪ್ರದೇಶ
| style="text-align:center;"|<ref>{{cite news |last=PTI |date=19 March 2010 |title=Mohanlal to return to stage with Kalidasa's play |url=http://www.thehindu.com/features/friday-review/theatre/mohanlal-to-return-to-stage-with-kalidasas-play/article258115.ece |url-status=live |archive-url=https://web.archive.org/web/20160219140004/http://www.thehindu.com/features/friday-review/theatre/mohanlal-to-return-to-stage-with-kalidasas-play/article258115.ece |archive-date=19 February 2016 |work=[[The Hindu]]}}</ref>
|-
| 2015
! scope="row" | ''ನಾಗ''
| scope="row" | ನಿರೂಪಕ
| ಮಲಯಾಳಂ
| ಪ್ಯಾರಿಷ್ ಹಾಲ್, ಸೇಂಟ್ ಜಾರ್ಜ್ ಚರ್ಚ್, ಕಳಡಿ
| style="text-align:center;"|<ref>{{cite news |last=Kallungal |first=Dhinesh |date=8 August 2015 |title=Mohanlal, Mukesh to Set Stage Afire with 'Naga' |url=http://www.newindianexpress.com/cities/kochi/Mohanlal-Mukesh-to-Set-Stage-Afire-with-Naga/2015/08/08/article2963127.ece |url-status=dead |archive-url=https://web.archive.org/web/20151222083204/http://www.newindianexpress.com/cities/kochi/Mohanlal-Mukesh-to-Set-Stage-Afire-with-Naga/2015/08/08/article2963127.ece |archive-date=22 December 2015 |access-date=10 December 2015 |work=[[The New Indian Express]]}}</ref>
|}
== ಸಣ್ಣ ಚಿತ್ರಗಳು ==
{| class="wikitable plainrowheaders sortable" style="margin-right: 0;"
|+ ಮೋಹನ್ಲಾಲ್ ಸಣ್ಣ ಚಿತ್ರ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! scope="col" class="unsortable" | ಟಿಪ್ಪಣಿಗಳು
! scope="col" class="unsortable" | {{ref heading}}
|-
| 2005
! scope="row" | ''[[ರಿಫ್ಲೆಕ್ಷನ್ಸ್]]''
| ಏಕಾಂಗಿ
|
| style="text-align:center;"|<ref>{{cite web |last=N |first=Patcy |date=20 May 2008 |title=From Mohanlal to Hollywood |url=http://www.rediff.com/movies/2008/may/20bejoy.htm |url-status=live |archive-url=https://web.archive.org/web/20160105121645/http://www.rediff.com/movies/2008/may/20bejoy.htm |archive-date=5 January 2016 |access-date=20 May 2008 |work=[[Rediff.com]]}}</ref>
|-
| 2010
! scope="row" | ''ವಿಲ್ಸನ್ ಪೆರೆಯಿರಾ''
| {{Hlist | ವಿಲ್ಸನ್ ಪೆರೆಯಿರಾ | ಅಳಿಲು | ಮೀನು | ಕಾಗೆ}}
| ಅನಿಮೇಷನ್ ಚಿತ್ರ; ನಿರೂಪಕ (ಕಾಗೆ) ಆಗಿಯೂ
| style="text-align:center;"|<ref>{{cite news |author=Staff Reporter |date=10 October 2010 |title=Kochiite makes it big in animation |url=http://www.thehindu.com/todays-paper/tp-national/tp-kerala/kochiite-makes-it-big-in-animation/article823145.ece |url-status=live |archive-url=https://web.archive.org/web/20160219141412/http://www.thehindu.com/todays-paper/tp-national/tp-kerala/kochiite-makes-it-big-in-animation/article823145.ece |archive-date=19 February 2016 |access-date=10 October 2011 |work=[[The Hindu]]}}</ref>
|-
| 2015
! scope="row" | ''[[ಪುಂಚಿರಿಕ್ಕು ಪರಸ್ಪರಂ]]''
| rowspan="5" | ಸ್ವತಃ
| rowspan="4" | ಅತಿಥಿ ಪಾತ್ರ
| style="text-align:center;"|<ref>{{cite news |last=Staff |first=Onmanorama |date=1 November 2015 |title=Mohanlal acts in short film to light up world with smile |url=http://english.manoramaonline.com/entertainment/entertainment-news/mohanlal-acts-in-short-film-punchirikkoo-parasparam-to-light-up-world-with-smile.html |url-status=live |archive-url=https://web.archive.org/web/20151222130521/http://english.manoramaonline.com/entertainment/entertainment-news/mohanlal-acts-in-short-film-punchirikkoo-parasparam-to-light-up-world-with-smile.html |archive-date=22 December 2015 |access-date=11 December 2015 |work=[[Malayala Manorama]]}}</ref>
|-
| 2016
! scope="row" | ''ಲೋಡಲ್ ಲೋಡಾ ಲೋಡಾಲು''
| style="text-align:center;"|<ref>{{cite news |last=Sidhardhan |first=Sanjith |date=14 June 2016 |title=Mohanlal makes time to dub for a children's short film – Times of India |url=http://timesofindia.indiatimes.com/entertainment/malayalam/Mohanlal-makes-time-to-dub-for-a-childrens-short-film/articleshow/52744558.cms |url-status=live |archive-url=https://web.archive.org/web/20160616190659/http://timesofindia.indiatimes.com/entertainment/malayalam/Mohanlal-makes-time-to-dub-for-a-childrens-short-film/articleshow/52744558.cms |archive-date=16 June 2016 |access-date=16 June 2016 |work=[[The Times of India]]}}</ref>
|-
| rowspan="2" | 2017
! scope="row" | ''ಅಮರ್ ಜವಾನ್ ಅಮರ್ ಭರತ್''
|
|-
! scope="row" | ''ಹ್ಯಾಪಿ ನ್ಯೂ ಇಯರ್''
| style="text-align:center;"|<ref>{{cite news |author=TNM Staff |date=27 December 2016 |title=A world without child abuse: Mohanlal dares to dream in Malayalam short film |url=http://www.thenewsminute.com/article/world-without-child-abuse-mohanlal-dares-dream-malayalam-short-film-54874 |access-date=1 January 2017 |work=[[The News Minute]]}}</ref>
|-
| 2020
! scope="row" | ''ಫ್ಯಾಮಿಲಿ''
| ಸೋನಿಗಾಗಿ ಸಣ್ಣ ಚಿತ್ರ
| style="text-align:center;"|<ref>{{cite news |last=Raghuvanshi |first=Aakanksha |date=7 April 2020 |title=Short Film Family, Featuring Rajinikanth, Amitabh Bachchan, Priyanka Chopra, Mohanlal, Chiranjeevi And Others, Gets A Big Shout-Out From Karan Johar |url=https://www.ndtv.com/entertainment/short-film-family-featuring-rajinikanth-amitabh-bachchan-priyanka-chopra-mohanlal-chiranjeevi-and-ot-2207269 |access-date=7 April 2020 |work=[[NDTV]]}}</ref>
|}
== ದೂರದರ್ಶನ ==
{{pending series key}}
{| class="wikitable plainrowheaders sortable"
|+ ಮೋಹನ್ಲಾಲ್ ದೂರದರ್ಶನ ಕ್ರೆಡಿಟ್ಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! scope="col" | ವಾಹಿನಿ
! scope="col" | ಭಾಷೆ
! scope="col" class="unsortable" | {{ref heading}}
|-
| 2013
! scope="row" | ''[[ಬಡೈ ಬಂಗಲೋ]]''
| ಅತಿಥಿ
| [[ಏಷ್ಯಾನೆಟ್]]
| [[ಸಂಭಾಷಣಾ ಕಾರ್ಯಕ್ರಮ]]
|<ref>{{Cite news |title=Badai Bungalow: When Mohanlal spoke about the first time he was called 'Lalettan' |url=https://timesofindia.indiatimes.com/tv/news/malayalam/badai-bungalow-when-mohanlal-spoke-about-the-first-time-he-was-called-lalettan/articleshow/96360973.cms |work=The Times of India}}</ref>
|-
|2015
! scope="row" | ''ಸಂಸ್ಕೃತ ನ್ಯೂಸ್''
|ವರದಿಗಾರ
|[[ಜನಂ ಟಿವಿ]]
|ಉದ್ಘಾಟನಾ ಸಂಚಿಕೆ
|
|-
| 2017–2018
! scope="row" | ''[[ಲಾಲ್ ಸಲಾಂ]]''
| ಆತಿಥೇಯ
| [[ಅಮೃತ ಟಿವಿ]]
| ಸಂಭಾಷಣಾ ಕಾರ್ಯಕ್ರಮ; ಮೀರಾ ನಂದನ್ ಜೊತೆ ಸಹ-ಆತಿಥ್ಯ
|<ref>{{Cite news |title=Lalsalam: All you need to know about Mohanlal's new television show |url=http://www.ibtimes.co.in/lalsalam-all-you-need-know-about-mohanlals-new-television-show-videos-737929 |work=International Business Times}}</ref>
|-
|2018{{endash}} present
! scope="row" | ''[[ಬಿಗ್ ಬಾಸ್ ಮಲಯಾಳಂ|ಬಿಗ್ ಬಾಸ್]]''
|ಆತಿಥೇಯ
|[[ಏಷ್ಯಾನೆಟ್]]
|ರಿಯಾಲಿಟಿ ಶೋ
|<ref>{{cite news |date=2 June 2018 |title=Bigg Boss Malayalam: Mohanlal's show to begin from June 24. |url=https://indianexpress.com/article/entertainment/television/bigg-boss-malayalam-mohanlal-show-to-begin-from-june-24-5201679/ |work=The Indian Express}}</ref>
|-
|2019
! scope="row" | ''[[ಟಾಪ್ ಸಿಂಗರ್ ಸೀಸನ್ 1]]''
|ಅತಿಥಿ
|[[ಫ್ಲವರ್ಸ್ ಟಿವಿ]]
|ರಿಯಾಲಿಟಿ ಶೋ
|<ref>{{Cite news |date=6 September 2019 |title=Mohanlal will be the Onam guest of Top Singer kids |url=https://timesofindia.indiatimes.com/tv/news/malayalam/mohanlal-mesmerises-the-kids-on-top-singer/articleshow/70979373.cms |access-date=19 September 2019 |newspaper=[[Times of India]]}}</ref>
|-
|rowspan=3|2020
! scope="row" | ''ಫಸ್ಟ್ ಬೆಲ್''
|ಆತಿಥೇಯ (ಸಂಚಿಕೆ – [[ಪ್ರಾಜೆಕ್ಟ್ ಟೈಗರ್]])
|[[ವಿಕ್ಟರ್ಸ್ ಟಿವಿ]]
|ಶೈಕ್ಷಣಿಕ ಕಾರ್ಯಕ್ರಮ||
|-
! scope="row" | ''ಲಲೋನಮ್ ನಲ್ಲೋನಮ್''
|ಆತಿಥೇಯ / ವಿವಿಧ ಪಾತ್ರಗಳು
|[[ಏಷ್ಯಾನೆಟ್]]
|ಓಣಂ ವಿಶೇಷ ಕಾರ್ಯಕ್ರಮ
|
|-
! scope="row" | ''ಉತ್ಸವಂ ವಿತ್ ಲಾಲೆಟ್ಟನ್''
|ವಿವಿಧ ಪಾತ್ರಗಳು
|[[ಫ್ಲವರ್ಸ್ ಟಿವಿ]]
|ಕ್ರಿಸ್ಮಸ್ ವಿಶೇಷ ಕಾರ್ಯಕ್ರಮ
|
|-
|Rowspan=2|2021
! scope="row" | ''ಒನಾವಿಲ್ಲು''
|ಆತಿಥೇಯ
|[[ಏಷ್ಯಾನೆಟ್]]
|ಓಣಂ ವಿಶೇಷ ಕಾರ್ಯಕ್ರಮ
|
|-
! scope="row" | ''[[ಟಾಪ್ ಸಿಂಗರ್ ಸೀಸನ್ 2]]''
|ಅತಿಥಿ
|[[ಫ್ಲವರ್ಸ್ ಟಿವಿ]]
|ರಿಯಾಲಿಟಿ ಶೋ
|
|-
|2023
! scope="row" | ಮಳವಿಲ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ 2023
|ಅತಿಥಿ||[[ಮಳವಿಲ್ ಮನೋರಮ]]||||
|-
|Rowspan=4|2024
!scope="row" | ''[[ಟಾಪ್ ಸಿಂಗರ್ ಸೀಸನ್ 4]]''
|ಅತಿಥಿ
|[[ಫ್ಲವರ್ಸ್ ಟಿವಿ]]
|ರಿಯಾಲಿಟಿ ಶೋ
|<ref>{{cite web |date=17 September 2024 |title=Top Singer 4 winner: Droupadi Santhosh wins the title; takes home gold worth 15 lakhs |url=https://timesofindia.indiatimes.com/tv/news/malayalam/top-singer-4-winner-droupadi-santhosh-wins-the-title-takes-home-gold-worth-15-lakhs/articleshow/113422375.cms |work=[[The Times of India]]}}</ref>
|-
! scope="row" | ''[[ಮನೋರಥಂಗಳ್]]''
|| ಬಾಪುಟ್ಟಿ ||[[ಜೀ5]] || ಸಮಾಹಾರ ಸರಣಿ <br /> ವಿಭಾಗ: "[[ಒಲವುಂ ತೀರವುಂ]]" ||<ref>{{Cite web|url=https://www.onmanorama.com/entertainment/entertainment-news/2022/07/19/priyadarshan-olavum-theeravum-movie.html|title=Priyadarshan's 'Olavum Theeravum' shot in black and white|website=Priyadarshan's 'Olavum Theeravum' shot in black and white}}</ref><ref>{{cite web |date=14 July 2024 |title=MT Vasudevan Nair's Anthology Series Gets A Title, Trailer Release On This Date! |url=https://www.timesnownews.com/entertainment-news/malayalam/mt-vasudevan-nairs-anthology-series-gets-a-title-trailer-release-on-this-date-article-111726840 |work=[[Times Now]]}}</ref>
|-
! scope="row" | ಮಳವಿಲ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ 2024
|ಅತಿಥಿ||[[ಮಳವಿಲ್ ಮನೋರಮ]]||||
|-
! scope="row" | [[ವನಿತಾ ಫಿಲ್ಮ್ ಅವಾರ್ಡ್ಸ್]] 2024
|ಅತಿಥಿ||[[ಮಳವಿಲ್ ಮನೋರಮ]]||||
|-
|2025
!scope="row" | ''[[ಸ್ಟಾರ್ ಸಿಂಗರ್ ಸೀಸನ್ 10]]''
|ಅತಿಥಿ
|[[ಏಷ್ಯಾನೆಟ್]]
|ರಿಯಾಲಿಟಿ ಶೋ
|<ref>{{cite web |date=20 July 2025 |title=Mohanlal to make a smashing entry on 'Star Singer'; Fans anticipate Bigg Boss Malayalam 7 announcement |url=https://timesofindia.indiatimes.com/tv/news/malayalam/mohanlal-to-make-a-smashing-entry-on-star-singer-fans-anticipate-bigg-boss-malayalam-7-announcement/articleshow/122768759.cms |work=[[The Times of India]]}}</ref>
|-
|}
== ರೇಡಿಯೋ ನಾಟಕ ==
{| class="wikitable plainrowheaders" style="margin-right: 0;"
|+ ಮೋಹನ್ಲಾಲ್ ರೇಡಿಯೋ ನಾಟಕ ಕ್ರೆಡಿಟ್ಗಳ ಪಟ್ಟಿ
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! scope="col" | ಪ್ರಸಾರಕ
! scope="col" class="unsortable" | ಟಿಪ್ಪಣಿಗಳು
! scope="col" class="unsortable" | {{ref heading}}
|-
| 1987
! scope="row" | ''ಜೀವನುಲ್ಲ ಪ್ರತಿಮಕಳ್''
| {{Unknown}}
| [[ಆಲ್ ಇಂಡಿಯಾ ರೇಡಿಯೋ]]
| 27 ಸೆಪ್ಟೆಂಬರ್ 2010 ರಂದು ಮರುಪ್ರಸಾರ
| style="text-align:center;"|<ref>{{cite web |last=Varma |first=Sivadas |date=21 September 2010 |title=Go back in time with radio plays |url=http://www.newindianexpress.com/states/kerala/article489054.ece |url-status=dead |archive-url=https://web.archive.org/web/20151225042658/http://www.newindianexpress.com/states/kerala/article489054.ece |archive-date=25 December 2015 |access-date=21 September 2010 |publisher=[[The New Indian Express]]}}</ref>
|-
| 2024
! scope="row" | ''AiDEN - ದಿ ಎಐ ಸ್ಪಿರಿಟ್''
| ರಘು ಉತಾಮನ್
| [[94.3 ಕ್ಲಬ್ ಎಫ್ಎಂ]]
|
| style="text-align:center;"|<ref>{{cite web |last=Varma |first=Sivadas |date=19 July 2024 |title=Mohanlal's magical sound to premiere through Club FM's 'Aiden-The AI Spirit' |url=https://english.mathrubhumi.com/movies-music/news/mohanlal-makes-radio-debut-in-club-fm-aiden-the-ai-spirit-1.9738935 |access-date=20 July 2024 |publisher=Mathrubhumi News}}</ref>
|}
==ಪ್ರಶಸ್ತಿಗಳು==
[[File:Padmabhushan Mohanlal.jpg|upright|thumb|alt=Mohanlal at Rashtrapati Bhavan|ಮೋಹನ್ಲಾಲ್ ಅವರು [[ರಾಮ್ ನಾಥ್ ಕೋವಿಂದ್]], ಅಂದಿನ [[ಭಾರತದ ರಾಷ್ಟ್ರಪತಿ]] ಅವರಿಂದ [[ಪದ್ಮಭೂಷಣ]] ಸ್ವೀಕರಿಸುತ್ತಿರುವುದು]]
{{Main|List of awards and nominations received by Mohanlal}}
ಸುಮಾರು ನಲವತ್ತು ವರ್ಷಗಳ ವೃತ್ತಿಜೀವನದಲ್ಲಿ, ಮೋಹನ್ಲಾಲ್ ಅವರು ಸ್ಪರ್ಧಾತ್ಮಕ ಮತ್ತು ಗೌರವಾನ್ವಿತ ಎರಡೂ ರೀತಿಯ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ, ಅವುಗಳಲ್ಲಿ ಐದು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], ಒಂಬತ್ತು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] ಮತ್ತು [[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]] ಸೇರಿವೆ. ಕಲೆಗೆ ನೀಡಿದ ಕೊಡುಗೆಗಳಿಗಾಗಿ [[ಭಾರತ ಸರ್ಕಾರ]]ವು 2001 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ [[ಪದ್ಮಶ್ರೀ]] ಮತ್ತು 2019 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ [[ಪದ್ಮಭೂಷಣ]] ಪ್ರಶಸ್ತಿಯನ್ನು ನೀಡಿ ಗೌರವಿಸಿತು.<ref name="Padmabhushan2"/> 2025 ರಲ್ಲಿ, [[ಭಾರತ ಸರ್ಕಾರ]]ವು [[71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ]] ಭಾರತೀಯ ಸಿನೆಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ [[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]ಯನ್ನು ಅವರಿಗೆ ನೀಡಿ ಗೌರವಿಸಿತು.<ref name="Malayalam actor Mohanlal to be conferred Dadasaheb Phalke Award for 2023"/> 2010 ರಲ್ಲಿ [[ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ]]ದಿಂದ<ref name="auto"/><ref>[http://www.indianoftheyear.com/2007/judging_council.html CNN-IBN – INDIAN OF THE YEAR 2007] {{webarchive|url=https://web.archive.org/web/20111013161549/http://www.indianoftheyear.com/2007/judging_council.html |date=13 October 2011 }}. Indianoftheyear.com. Retrieved on 6 May 2012.</ref> ಮತ್ತು 2018 ರಲ್ಲಿ [[ಕ್ಯಾಲಿಕಟ್ ವಿಶ್ವವಿದ್ಯಾಲಯ]]ದಿಂದ<ref>{{cite news|title=Calicut University confers D.Litt on Mohanlal, P.T.Usha|url=http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html|access-date=29 January 2018|work=[[Business Standard]]|date=29 January 2018|archive-url=https://web.archive.org/web/20180129195119/http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html|archive-date=29 January 2018|url-status=live}}</ref> ಗೌರವಾನ್ವಿತ [[ಡಾಕ್ಟರ್ ಆಫ್ ಲೆಟರ್ಸ್]] ಪ್ರಶಸ್ತಿಯನ್ನು ಪಡೆದರು.
2008 ರಲ್ಲಿ, ಅವರು [[ಭಾರತೀಯ ಸೇನೆ|ಭಾರತೀಯ ಸೇನೆಯ]] ಅಧಿಕಾರಿಯಾಗಿ ಅಭಿನಯಿಸಿದ ''[[ಕುರುಕ್ಷೇತ್ರ (2008 ಚಲನಚಿತ್ರ)|ಕುರುಕ್ಷೇತ್ರ]]'' ಚಿತ್ರೀಕರಣದ ಸಮಯದಲ್ಲಿ, ಮೋಹನ್ಲಾಲ್ [[ಭಾರತದ ಪ್ರಾದೇಶಿಕ ಸೇನೆ]]ಗೆ ಸೇರುವ ಆಸಕ್ತಿಯನ್ನು ವ್ಯಕ್ತಪಡಿಸಿದರು. ಆದರೆ 42 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಸ್ವಯಂಸೇವಕ ಪಡೆಗೆ ಸೇರಲು ಅರ್ಹರಲ್ಲದ ಕಾರಣ ಅವರಿಗೆ ಸಾಧ್ಯವಾಗಲಿಲ್ಲ.<ref>[http://ibnlive.in.com/news/mohanlal-wants-to-join-territorial-army/77204-8.html Mohanlal wants to join Territorial Army – Movies News News – IBNLive] {{Webarchive|url=https://web.archive.org/web/20110728130958/http://ibnlive.in.com/news/mohanlal-wants-to-join-territorial-army/77204-8.html |date=28 July 2011 }}. Ibnlive.in.com. 1 November 2008. Retrieved on 6 May 2012.</ref> 9 ಜುಲೈ 2008 ರಂದು, ಅಂದಿನ ಸೇನಾ ಮುಖ್ಯಸ್ಥ [[ದೀಪಕ್ ಕಪೂರ್]] ಅವರಿಂದ ಗೌರವಾನ್ವಿತ [[ಲೆಫ್ಟಿನೆಂಟ್ ಕರ್ನಲ್]] ಹುದ್ದೆಯಲ್ಲಿ ಅವರನ್ನು ಪ್ರಾದೇಶಿಕ ಸೇನೆಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಲಾಯಿತು. ಈ ಗೌರವವನ್ನು ಪಡೆದ ಮೊದಲ ನಟಿ ಇವರು.<ref>Thiruvananthapuram [http://www.hindustantimes.com/Mohanlal-to-join-Territorial-Army/Article1-429999.aspx Mohanlal to join Territorial Army] {{webarchive|url=https://web.archive.org/web/20101201053052/http://www.hindustantimes.com/Mohanlal-to-join-Territorial-Army/Article1-429999.aspx |date=1 December 2010 }}. Hindustan Times. 8 July 2009</ref><ref>{{cite news | url=http://www.hindu.com/2009/07/10/stories/2009071056411800.htm | location=[[Chennai]] | work=[[The Hindu]] | title=Mohanlal joins Territorial Army | date=10 July 2009 | access-date=29 May 2011 | archive-url=https://web.archive.org/web/20090913052237/http://www.hindu.com/2009/07/10/stories/2009071056411800.htm | archive-date=13 September 2009 | url-status=dead }}</ref> 2012 ರಲ್ಲಿ, ದಕ್ಷಿಣ ಕೊರಿಯಾದ [[ಕುಕ್ಕಿವಾನ್]] ನಿಂದ [[ಟೇಕ್ವಾಂಡೋ]] ನಲ್ಲಿ ಗೌರವಾನ್ವಿತ [[ಕಪ್ಪು ಪಟ್ಟಿ (ಸಮರ ಕಲೆಗಳು)|ಕಪ್ಪು ಪಟ್ಟಿ]] ಬಿರುದನ್ನು ನೀಡಲಾಯಿತು. ಈ ಬಿರುದನ್ನು ಪಡೆದ ಮೊದಲ [[ದಕ್ಷಿಣ ಭಾರತ]]ದ ನಟಿ ಇವರು.<ref name = blackbelt/><ref>{{Cite news|url = https://www.indiatoday.in/movies/celebrities/story/mohanlal-blackbelt-119610-2012-10-24|title = Blackbelt for Mohanlal!|date = 25 October 2012|work = [[India Today]]|access-date = 6 October 2014|archive-url = https://web.archive.org/web/20141015210145/http://indiatoday.intoday.in/story/mohanlal-blackbelt/1/226217.html|archive-date = 15 October 2014|url-status = live}}</ref>
{| class="infobox" style="width:14em; text-align:left; font-size:90%; vertical-align:middle; background:#eef;"
|+ <span style="font-size: 10pt">[[ಮೋಹನ್ಲಾಲ್]] ಪಡೆದ ಪ್ರಶಸ್ತಿಗಳ ಪಟ್ಟಿ</span>
|- style="background:white;"
| colspan="3" style="text-align:center;" | [[File:Actor Mohanlal.jpg|thumb|2018 ರಲ್ಲಿ ಮೋಹನ್ಲಾಲ್]]
|-
| colspan="3" |
{| class="collapsible collapsed" style="width:100%;"
! colspan="3" style="background:#d9e8ff; text-align:center;"| ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
|- style="background:#d9e8ff; text-align:center;"
!style="vertical-align: middle;"| ಪ್ರಶಸ್ತಿ
| style="background:#cec; font-size:9pt; width:40px;"| ಗೆಲುವು
| style="background:#ecc; font-size:9pt; width:40px;"| ನಾಮನಿರ್ದೇಶನಗಳು
|-
| style="text-align:left;"|
;ಬಿರುದುಗಳು ಮತ್ತು ಗೌರವಗಳು
|{{won|7}}
|{{nom|7}}
|-
| style="text-align:left;"|
;[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]
|{{won|6}}
|{{nom|37}}
|-
| style="text-align:left;"|
;[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]]
|{{won|9}}
|{{nom|30}}
|-
| style="text-align:left;"|
;[[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]]
|{{won|9}}
|{{nom|12}}
|-
| style="text-align:left;"|
;[[ನಂದಿ ಪ್ರಶಸ್ತಿಗಳು]]
|{{won|1}}
|{{nom|1}}
|-
| style="text-align:left;"|
;[[ಫಿಲ್ಮ್ಫೇರ್ ಪ್ರಶಸ್ತಿಗಳು]]
|{{won|0}}
|{{nom|11}}
|-
| style="text-align:left;"|
;[[ಸ್ಕ್ರೀನ್ ಪ್ರಶಸ್ತಿಗಳು]]
|{{won|1}}
|{{nom|1}}
|-
| style="text-align:left;"|
;ಸ್ಕ್ರೀನ್ ಪ್ರಶಸ್ತಿಗಳು ದಕ್ಷಿಣ
|{{won|1}}
|{{nom|1}}
|-
| style="text-align:left;"|
;[[ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು]]
|{{won|1}}
|{{nom|1}}
|-
| style="text-align:left;"|
;[[IIFA ಉತ್ಸವಂ]]
|{{won|0}}
|{{nom|2}}
|-
| style="text-align:left;"|
;[[ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]
|{{won|5}}
|{{nom|9}}
|-
| style="text-align:left;"|
;[[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]]
|{{won|12}}
|{{nom|19}}
|-
| style="text-align:left;"|
;[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]]
|{{won|15}}
|{{nom|15}}
|-
| style="text-align:left;"|
;[[ವನಿತಾ ಚಲನಚಿತ್ರ ಪ್ರಶಸ್ತಿಗಳು]]
|{{won|9}}
|{{nom|9}}
|-
| style="text-align:left;"|
;[[ಏಷ್ಯಾವಿಷನ್ ಪ್ರಶಸ್ತಿಗಳು]]
|{{won|6}}
|{{nom|6}}
|-
| style="text-align:left;"|
;ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು
|{{won|6}}
|{{nom|6}}
|-
| style="text-align:left;"|
;ಅಮೃತ ಚಲನಚಿತ್ರ ಪ್ರಶಸ್ತಿಗಳು
|{{won|5}}
|{{nom|5}}
|-
| style="text-align:left;"|
;ಇತರ ಪ್ರಶಸ್ತಿಗಳು, ಗೌರವಗಳು ಮತ್ತು ಮನ್ನಣೆಗಳು
|{{won|57}}
|{{nom|0}}
|}
|- style="background-color:#d9e8ff;"
| colspan="3" style="text-align:center;" | ಒಟ್ಟು
|-
| {{won|ಗೆಲುವುಗಳು}}
| colspan="2" width=50 {{won|150}}
|-
|- style="background:#d9e8ff;"
| colspan="3" style="font-size: smaller; text-align:center;" | [[#References|ಉಲ್ಲೇಖಗಳು]]
|}
[[ಮೋಹನ್ಲಾಲ್]] ಅವರು ಭಾರತೀಯ ನಟ, [[ಪ್ಲೇಬ್ಯಾಕ್ ಗಾಯಕ]] ಮತ್ತು [[ಚಲನಚಿತ್ರ ನಿರ್ಮಾಪಕ|ನಿರ್ಮಾಪಕ]] ಅವರು ಪ್ರಧಾನವಾಗಿ [[ಮಲಯಾಳಂ ಚಲನಚಿತ್ರ]]ಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು [[ಮೋಹನ್ಲಾಲ್ ಚಲನಚಿತ್ರಗಳ ಪಟ್ಟಿ|350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ]] ಅಭಿನಯಿಸಿದ್ದಾರೆ. ಅವರು [[ಭಾರತೀಯ ಸಿನೆಮಾ]]ದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಶ್ರೇಷ್ಠ ನಟರಲ್ಲಿ ಒಬ್ಬರಾಗಿ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಅವರು ಎರಡು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]], ಒಂದು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ (ವೈಶಿಷ್ಟ್ಯ ಚಲನಚಿತ್ರ)]], ಒಂದು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯ ಚಲನಚಿತ್ರ)]] ಮತ್ತು ನಿರ್ಮಾಪಕರಾಗಿ [[ಅತ್ಯುತ್ತಮ ವೈಶಿಷ್ಟ್ಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]], ಒಂಬತ್ತು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] (ಆರರಲ್ಲಿ [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]] ಸೇರಿದೆ), ಒಂದು [[ನಂದಿ ಪ್ರಶಸ್ತಿಗಳು|ನಂದಿ ಪ್ರಶಸ್ತಿ]], ಒಂಬತ್ತು [[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]], ಎರಡು [[ಸ್ಕ್ರೀನ್ ಪ್ರಶಸ್ತಿಗಳು]], ಒಂದು [[ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು|ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ]], ನಾಲ್ಕು [[ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], ಮತ್ತು ಹನ್ನೊಂದು [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]] ಮತ್ತು ಹಲವಾರು ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮೋಹನ್ಲಾಲ್ ಅವರು 1978 ರಲ್ಲಿ ಪ್ರಣಯ ಚಲನಚಿತ್ರ ''[[ಮಂಜಿಲ್ ವಿರಿಂಜ ಪೂಕ್ಕಲ್]]'' ನಲ್ಲಿ ವಿರೋಧಿ ಪಾತ್ರದಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಅಂತಹ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಂಡ ನಂತರ, ಅವರು 1980 ರ ದಶಕದ ಮಧ್ಯಭಾಗದಲ್ಲಿ ಪ್ರಮುಖ ನಟನಾಗಿ ಸ್ಥಾಪಿತರಾದರು. 1986 ರಲ್ಲಿ, ಅವರು ಹಾಸ್ಯ ನಾಟಕ ''[[ಟಿ. ಪಿ. ಬಾಲಗೋಪಾಲನ್ ಎಂ. ಎ.]]'' ನಲ್ಲಿ ನಟಿಸಿದರು, ಇದಕ್ಕಾಗಿ ಅವರು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]] ಗೆದ್ದರು. ಅದೇ ವರ್ಷ ಹಾಸ್ಯ ನಾಟಕ ''[[ಸನ್ಮನಸ್ಸುಳ್ಳವರ್ಕ್ಕು ಸಮಾಧಾನಂ]]'' ನಲ್ಲಿನ ಅಭಿನಯಕ್ಕಾಗಿ [[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಮಲಯಾಳಂ]] ಅನ್ನು ಸಹ ಪಡೆದರು. ನಾಟಕ ಚಲನಚಿತ್ರ ''[[ಕಿರೀಡಂ (1989 ಚಲನಚಿತ್ರ)|ಕಿರೀಡಂ]]'' (1989) ನಲ್ಲಿನ ಅವರ ಪಾತ್ರವು ಅವರಿಗೆ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ (ವೈಶಿಷ್ಟ್ಯ ಚಲನಚಿತ್ರ)|ವಿಶೇಷ ಉಲ್ಲೇಖ]] ಪ್ರಶಸ್ತಿಯನ್ನು ತಂದುಕೊಟ್ಟಿತು.
1991 ರಲ್ಲಿ, ಅವರು ಸಂಗೀತ ಚಲನಚಿತ್ರ ''[[ಭಾರತಂ]]'' ಅನ್ನು ನಿರ್ಮಿಸಿದರು ಮತ್ತು ನಟಿಸಿದರು, ಇದು ಅವರಿಗೆ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]] ಪ್ರಶಸ್ತಿಯನ್ನು ತಂದುಕೊಟ್ಟಿತು. 2013 ರಲ್ಲಿ ಭಾರತೀಯ ಚಲನಚಿತ್ರ ಉದ್ಯಮದ ಶತಮಾನೋತ್ಸವದ ಸಂದರ್ಭದಲ್ಲಿ ಸಂಕಲಿಸಲಾದ "ಭಾರತೀಯ ಸಿನೆಮಾದ 25 ಶ್ರೇಷ್ಠ ಅಭಿನಯ ಪ್ರದರ್ಶನಗಳು" ಪಟ್ಟಿಯಲ್ಲಿ ''[[ಫೋರ್ಬ್ಸ್ ಇಂಡಿಯಾ]]'' ಅವರ ಪಾತ್ರವನ್ನು ಸೇರಿಸಿತು. 1997 ರಲ್ಲಿ ಬಿಡುಗಡೆಯಾದ ಅವರ ನಾಲ್ಕು ಚಲನಚಿತ್ರಗಳು{{mdash}}''[[ಚಂದ್ರಲೇಖಾ (1997 ಚಲನಚಿತ್ರ)|ಚಂದ್ರಲೇಖಾ]]'', ''[[ಗುರು (1997 ಚಲನಚಿತ್ರ)|ಗುರು]]'', ''[[ಒರು ಯಾತ್ರಮೊಳಿ]]'', ಮತ್ತು ''[[ಆರಾಂ ತಂಪುರನ್]]'' ಅವರಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಸ್ಕ್ರೀನ್ ಪ್ರಶಸ್ತಿಗಳು ದಕ್ಷಿಣವನ್ನು ತಂದುಕೊಟ್ಟವು. ಅವರು ನಾಟಕ ಚಲನಚಿತ್ರ ''[[ವನಪ್ರಸ್ಥಂ]]'' (1999) ಅನ್ನು ಸಹ-ನಿರ್ಮಿಸಿದರು ಮತ್ತು ನಟಿಸಿದರು, [[ಕಥಕ್ಕಳಿ]] ಕಲಾವಿದನಾಗಿ ಅವರ ಪಾತ್ರವು ಅವರಿಗೆ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]], [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]], [[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]], ಮತ್ತು [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿ]] ಗಳನ್ನು ತಂದುಕೊಟ್ಟಿತು. [[File:Padmabhushan Mohanlal.jpg|upright|thumb|ಮೋಹನ್ಲಾಲ್ ಅವರು [[ರಾಮ್ ನಾಥ್ ಕೋವಿಂದ್]], [[ಭಾರತದ ರಾಷ್ಟ್ರಪತಿ]] ಅವರಿಂದ [[ಪದ್ಮಭೂಷಣ]] ಸ್ವೀಕರಿಸುತ್ತಿರುವುದು]]
ಅವರ [[ಬಾಲಿವುಡ್|ಹಿಂದಿ]] ಚೊಚ್ಚಲ ಚಿತ್ರ ''[[ಕಂಪನಿ (2002 ಚಲನಚಿತ್ರ)|ಕಂಪನಿ]]'' (2002) ಗಾಗಿ [[ಫಿಲ್ಮ್ಫೇರ್ ಪ್ರಶಸ್ತಿ]]ಗೆ ನಾಮನಿರ್ದೇಶನಗೊಂಡರು ಮತ್ತು ಅಪರಾಧ ನಾಟಕದಲ್ಲಿನ ಅಭಿನಯವು ಅವರಿಗೆ [[ಸ್ಕ್ರೀನ್ ಪ್ರಶಸ್ತಿ]] ಮತ್ತು [[ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು|ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ]] ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರು 2005 ರ ನಾಟಕ ಚಲನಚಿತ್ರ ''[[ಥನ್ಮತ್ರ]]'' ದಲ್ಲಿ [[ಅಲ್ಝೈಮರ್ ಕಾಯಿಲೆ]]ಯಿಂದ ಬಳಲುತ್ತಿರುವ ರೋಗಿಯ ಪಾತ್ರವನ್ನು ನಿರ್ವಹಿಸಿದರು, ಇದಕ್ಕಾಗಿ ಅವರು [[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ]] ಮತ್ತು [[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಮಲಯಾಳಂ]] ಪ್ರಶಸ್ತಿಗಳನ್ನು ಪಡೆದರು.
ಅವರು 2011 ರ ಪ್ರಣಯ ನಾಟಕ ''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]'' ನಲ್ಲಿ ವಯಸ್ಸಾದ ಹಾಸಿಗೆ ಹಿಡಿದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಅವರ ಪಾತ್ರವು ಅವರಿಗೆ [[ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]] ಅತ್ಯುತ್ತಮ ನಟ ಪ್ರಶಸ್ತಿ ಮತ್ತು [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]], [[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]], [[ವನಿತಾ ಚಲನಚಿತ್ರ ಪ್ರಶಸ್ತಿಗಳು]], ಮತ್ತು [[ಮಾತೃಭೂಮಿ]] ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಇತರ ಪ್ರಶಸ್ತಿಗಳನ್ನು ತಂದುಕೊಟ್ಟಿತು. 2013 ರಲ್ಲಿ, ಅವರು ಥ್ರಿಲ್ಲರ್ ಚಲನಚಿತ್ರ ''[[ದೃಶ್ಯಂ]]'' ನಲ್ಲಿ ನಟಿಸಿದರು, ಇದಕ್ಕಾಗಿ ಅವರು [[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]] ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. 2013 ರಲ್ಲಿ [[CNN-IBN]] ನಡೆಸಿದ "ಭಾರತೀಯ ಸಿನೆಮಾದ 100 ವರ್ಷಗಳು" ಸಮೀಕ್ಷೆಯಲ್ಲಿ, "ಭಾರತದ ಶ್ರೇಷ್ಠ ನಟರು" ಪಟ್ಟಿಯಲ್ಲಿ ನಟರಲ್ಲಿ ಅವರು ಮೂರನೇ ಸ್ಥಾನ ಪಡೆದರು. 2017 ರಲ್ಲಿ, ''[[ಜನತಾ ಗ್ಯಾರೇಜ್]]'', ''[[ಮುಂತಿರಿವಳ್ಳಿಕಲ್ ಥಾಲಿರ್ಕ್ಕುಂಬೋಲ್]]'', ಮತ್ತು ''[[ಪುಲಿಮುರುಗನ್]]'' ಚಲನಚಿತ್ರಗಳಲ್ಲಿನ ಅಭಿನಯಕ್ಕಾಗಿ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯ ಚಲನಚಿತ್ರ)|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ]] ಗೆದ್ದರು.
ಅಭಿನಯದ ಪ್ರಶಸ್ತಿಗಳ ಜೊತೆಗೆ, [[ಭಾರತ ಸರ್ಕಾರ]]ವು ಕಲೆಗೆ ನೀಡಿದ ಕೊಡುಗೆಗಳಿಗಾಗಿ 2001 ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ [[ಭಾರತೀಯ ಗೌರವ ಪದ್ಧತಿ|ನಾಗರಿಕ ಪ್ರಶಸ್ತಿ]]ಯಾದ [[ಪದ್ಮಶ್ರೀ]] ಮತ್ತು 2019 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ [[ಪದ್ಮಭೂಷಣ]] ಪ್ರಶಸ್ತಿಯನ್ನು ನೀಡಿ ಗೌರವಿಸಿತು. 2009 ರಲ್ಲಿ [[ಭಾರತೀಯ ಪ್ರಾದೇಶಿಕ ಸೇನೆ]]ಯಿಂದ ಗೌರವಾನ್ವಿತ [[ಲೆಫ್ಟಿನೆಂಟ್ ಕರ್ನಲ್]] ಹುದ್ದೆಯನ್ನು ನೀಡಲಾಯಿತು. ಮೋಹನ್ಲಾಲ್ ಅವರಿಗೆ [[ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ]] (2010) ಮತ್ತು [[ಕ್ಯಾಲಿಕಟ್ ವಿಶ್ವವಿದ್ಯಾಲಯ]] (2018) ರಿಂದ ಗೌರವಾನ್ವಿತ [[ಡಾಕ್ಟರ್ ಆಫ್ ಲೆಟರ್ಸ್]] ಪ್ರಶಸ್ತಿ, ಹಾಗೆಯೇ ಹಲವಾರು ಇತರ ಮನ್ನಣೆಗಳನ್ನು ನೀಡಲಾಯಿತು.
== ಗೌರವಗಳು ==
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:10%;"| ಗೌರವ
! scope="col" style="width:10%;"| ಗೌರವ ನೀಡುವ ಸಂಸ್ಥೆ
! scope="col" style="width:15%;"| ಪ್ರದಾನ ಮಾಡಿದವರು
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2001
|[[ಪದ್ಮಶ್ರೀ]]
|[[ಭಾರತ ಸರ್ಕಾರ]]
|[[ಕೆ. ಆರ್. ನಾರಾಯಣನ್]], [[ಭಾರತದ ರಾಷ್ಟ್ರಪತಿ]]
|style="text-align:center;"|<ref>{{Cite web |title=Mohanlal nominated for Padma Bhushan |url=http://asianetindia.com/mohanlal-nominated-for-padma-bhushan/ |url-status=dead |archive-url=https://web.archive.org/web/20150419132031/http://asianetindia.com/mohanlal-nominated-for-padma-bhushan/ |archive-date=19 April 2015 |website=[[Asianet Satellite Communications|Asianet]] |access-date=14 November 2014 }}</ref>
|-
! scope="row"| 2009
|ಗೌರವಾನ್ವಿತ [[ಲೆಫ್ಟಿನೆಂಟ್ ಕರ್ನಲ್]]
|[[ಭಾರತದ ಪ್ರಾದೇಶಿಕ ಸೇನೆ|ಭಾರತೀಯ ಪ್ರಾದೇಶಿಕ ಸೇನೆ]]
|[[ದೀಪಕ್ ಕಪೂರ್]], [[ಭಾರತದ ಸೇನಾ ಮುಖ್ಯಸ್ಥ]]
|style="text-align:center;"|<ref>{{Cite web |last=Thapar |first=Vishal |date=10 July 2009 |title=Meet Lt Colonel Mohanlal, actor in the Army |url=http://ibnlive.in.com/news/meet-lt-colonel-mohanlal-actor-in-the-army/96788-8.html |url-status=dead |archive-url=https://web.archive.org/web/20090714180011/http://ibnlive.in.com/news/meet-lt-colonel-mohanlal-actor-in-the-army/96788-8.html |archive-date=14 July 2009 |website=[[IBNLive]]}}</ref>
|-
! scope="row"| 2010
|ಗೌರವಾನ್ವಿತ [[ಡಾಕ್ಟರೇಟ್]] ([[ಡಾಕ್ಟರ್ ಆಫ್ ಲೆಟರ್ಸ್|D.Litt]])
|[[ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ]]
|[[ಆರ್. ಎಸ್. ಗವಾಯಿ]], [[ಕೇರಳದ ರಾಜ್ಯಪಾಲರ ಪಟ್ಟಿ|ಕೇರಳದ ರಾಜ್ಯಪಾಲರು]]
|style="text-align:center;"|<ref>{{cite web |url=http://movies.ndtv.com/movie_Story.aspx?id=ENTEN20100135288&keyword=&subcatg=&cp |archive-url=https://archive.today/20120714031203/http://movies.ndtv.com/movie_Story.aspx?id=ENTEN20100135288&keyword=&subcatg=&cp |url-status=dead |archive-date=14 July 2012 |title=Mohanlal, Resul receive D.Litt |website=NDTVmovies.com |date=18 March 2010}}</ref>
|-
! scope="row"| 2013
|[[ಟೇಕ್ವಾಂಡೋ]] ನಲ್ಲಿ ಗೌರವಾನ್ವಿತ [[ಕಪ್ಪು ಪಟ್ಟಿ (ಸಮರ ಕಲೆಗಳು)|ಕಪ್ಪು ಪಟ್ಟಿ]]
|[[ಕುಕ್ಕಿವಾನ್|ವರ್ಲ್ಡ್ ಟೇಕ್ವಾಂಡೋ ಪ್ರಧಾನ ಕಚೇರಿ]], [[ದಕ್ಷಿಣ ಕೊರಿಯಾ]]
|[[ಗ್ರ್ಯಾಂಡ್ಮಾಸ್ಟರ್ (ಸಮರ ಕಲೆಗಳು)|ಗ್ರ್ಯಾಂಡ್ಮಾಸ್ಟರ್]] ಲೀ ಜಿಯೋಂಗ್ಹೀ, ಸ್ಪೋರ್ಟ್ಸ್ [[ಜನರಲ್ ಮ್ಯಾನೇಜರ್|GM]], ಭಾರತೀಯ [[ದಕ್ಷಿಣ ಕೊರಿಯಾ|ROK]] ರಾಯಭಾರ ಕಚೇರಿ
|style="text-align:center;"|<ref>{{Cite web|url=https://www.newindianexpress.com/entertainment/malayalam/2012/oct/24/black-belt-for-mohanlal-418347.html|title=Black belt for Mohanlal|website=The New Indian Express|date=24 October 2012 |access-date=2020-09-20|archive-date=2019-03-28|archive-url=https://web.archive.org/web/20190328192154/http://www.newindianexpress.com/entertainment/malayalam/2012/oct/24/black-belt-for-mohanlal-418347.html|url-status=live}}</ref>
|-
! scope="row"| 2018
|ಗೌರವಾನ್ವಿತ ಡಾಕ್ಟರೇಟ್ (D.Litt)
|[[ಕ್ಯಾಲಿಕಟ್ ವಿಶ್ವವಿದ್ಯಾಲಯ]]
|[[ಪಿ. ಸತಶಿವಮ್]], ಕೇರಳದ ರಾಜ್ಯಪಾಲರು
|style="text-align:center;"|<ref>{{cite web |url=http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html |title=Calicut University confers D.Litt on Mohanlal, P.T.Usha |website=business-standard.com |date=29 January 2018 |access-date=2018-01-29 |archive-date=2018-01-29 |archive-url=https://web.archive.org/web/20180129195119/http://www.business-standard.com/article/news-ians/calicut-university-confers-d-litt-on-mohanlal-p-t-usha-118012900409_1.html |url-status=live }}</ref>
|-
! scope="row"| 2019
|[[ಪದ್ಮಭೂಷಣ]]
|ಭಾರತ ಸರ್ಕಾರ
|[[ರಾಮ್ ನಾಥ್ ಕೋವಿಂದ್]], ಭಾರತದ ರಾಷ್ಟ್ರಪತಿ
|style="text-align:center;"|<ref>{{cite web |url=https://padmaawards.gov.in/PDFS/2019AwardeesList.pdf |title=2019 Padma Awards |date=2019-01-25 |website=Padmaawards.gov.in |access-date=2019-01-25 |archive-date=2019-01-26 |archive-url=https://web.archive.org/web/20190126060850/https://padmaawards.gov.in/PDFS/2019AwardeesList.pdf |url-status=live }}</ref>
|-
! scope="row"| 2025
|[[COAS ಕೊಂಡಾಟ್ ಕಾರ್ಡ್]]
|[[ಭಾರತೀಯ ಸೇನೆ]]
|[[ಉಪೇಂದ್ರ ದ್ವಿವೇದಿ]], ಸೇನಾ ಮುಖ್ಯಸ್ಥ
| style="text-align: center;" |<ref>{{Cite web |date=2025-10-07 |title=Mohanlal receives commendation from Army Chief: 'A moment of immense pride and gratitude' |url=https://indianexpress.com/article/entertainment/malayalam/mohanlal-receives-commendation-from-army-chief-a-moment-of-immense-pride-and-gratitude-10293241/ |access-date=2025-10-07 |website=The Indian Express |language=en}}</ref>
|}
== ವಿಶ್ವ ದಾಖಲೆಗಳು ==
* ಜಗತ್ತಿನ ಅತಿದೊಡ್ಡ ದಾನ ಪೆಟ್ಟಿಗೆಯನ್ನು ಮಾಡುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದ ವಿಶ್ವದ ಮೊದಲ ಅಭಿಮಾನಿಗಳ ಸಂಘ<ref>{{Cite web|url=https://www.guinnessworldrecords.com/world-records/largest-wooden-chest|title=Largest wooden chest|access-date=2020-05-29|archive-date=2021-01-27|archive-url=https://web.archive.org/web/20210127211750/https://www.guinnessworldrecords.com/world-records/largest-wooden-chest|url-status=live}}</ref><ref>{{Cite web|url=http://lalcaresqatar.com/home/|title=Home – Lal Cares Qatar|access-date=2020-05-29|archive-date=2021-01-27|archive-url=https://web.archive.org/web/20210127211750/http://lalcaresqatar.com/home/|url-status=live}}</ref>
* 3D ಚಲನಚಿತ್ರ ಪ್ರದರ್ಶನದಲ್ಲಿ ಅತಿ ಹೆಚ್ಚು ಹಾಜರಾತಿ<ref>{{Cite web|url=https://www.guinnessworldrecords.com/world-records/largest-attendance-at-a-3d-film-screening|title=Largest attendance at a 3D film screening|website=Guinness World Records|access-date=2020-05-28|archive-date=2017-12-27|archive-url=https://web.archive.org/web/20171227113036/http://www.guinnessworldrecords.com/world-records/largest-attendance-at-a-3d-film-screening|url-status=live}}</ref>
* ಇಲ್ಲಿಯವರೆಗೆ ಜಗತ್ತಿನಲ್ಲಿ ನಿರ್ಮಿಸಲಾದ ಅತಿ ಉದ್ದದ ಸಾಕ್ಷ್ಯಚಿತ್ರಕ್ಕೆ ತಮ್ಮ ಧ್ವನಿಯನ್ನು ನೀಡಿದ್ದಾರೆ.<ref name="newscoopz.com">{{Cite web|url=https://www.newscoopz.com/third-time-guinness-world-record-for-mohanlal/|title=Mohanlal becomes a part of Guinness world record for the 3rd time in his career|date=21 August 2019|access-date=28 May 2020|archive-date=20 September 2020|archive-url=https://web.archive.org/web/20200920071410/https://www.newscoopz.com/third-time-guinness-world-record-for-mohanlal/|url-status=live}}</ref><ref name="Kuttoor">{{Cite news|url=https://www.thehindu.com/news/national/kerala/its-official-the-longest-docu-is-on-mar-chrysostum/article27097855.ece|title=It's official, the longest docu is on Mar Chrysostum|first=Radhakrishnan|last=Kuttoor|newspaper=The Hindu |date=10 May 2019|via=www.thehindu.com|access-date=18 June 2020|archive-date=27 January 2021|archive-url=https://web.archive.org/web/20210127211748/https://www.thehindu.com/news/national/kerala/its-official-the-longest-docu-is-on-mar-chrysostum/article27097855.ece|url-status=live}}</ref>
== ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ==
1954 ರಲ್ಲಿ ಸ್ಥಾಪಿಸಲಾದ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], [[ಭಾರತ ಸರ್ಕಾರ]]ದ [[ಚಲನಚಿತ್ರೋತ್ಸವಗಳ ನಿರ್ದೇಶನಾಲಯ]]ದಿಂದ ನಿರ್ವಹಿಸಲ್ಪಡುತ್ತದೆ. ಮೋಹನ್ಲಾಲ್ ಆರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:20%;"| ವರ್ಗ
! scope="col" style="width:30%;"| ಭಾಷೆ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row" | 1989
| ''[[ಕಿರೀಡಂ (1989 ಚಲನಚಿತ್ರ)|ಕಿರೀಡಂ]]''
| [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ (ವೈಶಿಷ್ಟ್ಯ ಚಲನಚಿತ್ರ)|ವಿಶೇಷ ಉಲ್ಲೇಖ]]
| rowspan="4" scope="row" | ಮಲಯಾಳಂ
|style="text-align:center;"|<ref name="37thawardPDF">{{cite web|url=http://dff.nic.in/images/Documents/80_37thNfacatalogue.pdf|title=37th National Film Awards|publisher=[[Directorate of Film Festivals]]|accessdate=12 July 2020|archive-date=9 July 2020|archive-url=https://web.archive.org/web/20200709165915/http://dff.nic.in/images/Documents/80_37thNfacatalogue.pdf|url-status=live}}</ref>
|-
! scope="row" | 1991
| ''[[ಭಾರತಂ]]''
| [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|style="text-align:center;"|<ref>{{cite web|url=http://iffi.nic.in/Dff2011/Frm39thNFAAward.aspx?PdfName=39NFA.pdf|title=39th National Film Award (1991)|publisher=diff.nic.in|access-date=2014-11-14|archive-date=2011-07-21|archive-url=https://web.archive.org/web/20110721170014/http://iffi.nic.in/Dff2011/Frm39thNFAAward.aspx?PdfName=39NFA.pdf|url-status=dead}}</ref>
|-
! scope="row" rowspan="2"| 1999
| rowspan="2" | ''[[ವನಪ್ರಸ್ಥಂ]]''
|[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ವೈಶಿಷ್ಟ್ಯ ಚಲನಚಿತ್ರ|ಅತ್ಯುತ್ತಮ ವೈಶಿಷ್ಟ್ಯ ಚಲನಚಿತ್ರ]] (ನಿರ್ಮಾಪಕ)
|style="text-align:center;" rowspan="2"|<ref name="47th National Film Award 1999">{{cite web|url = http://iffi.nic.in/Dff2011/Frm47NFAAward.aspx?PdfName=47NFA.pdf|title = 47th National Film Award (1999)|publisher = diff.nic.in|access-date = 2014-11-14|archive-date = 2011-09-28|archive-url = https://web.archive.org/web/20110928072346/http://iffi.nic.in/Dff2011/Frm47NFAAward.aspx?PdfName=47NFA.pdf|url-status = dead}}</ref>
|-
|[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ|ಅತ್ಯುತ್ತಮ ನಟ]]
|-
! rowspan="3" scope="row" | 2016
|''[[ಜನತಾ ಗ್ಯಾರೇಜ್]]''
| rowspan="3" scope="row" | [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯ ಚಲನಚಿತ್ರ)|ವಿಶೇಷ ತೀರ್ಪುಗಾರರ ಪ್ರಶಸ್ತಿ]]
| ತೆಲುಗು
| rowspan="3" style="text-align:center;" |<ref name=":3">{{cite news|title=64th National Film Awards: Here's the complete list of winners|url=https://www.hindustantimes.com/bollywood/64th-national-film-awards-here-s-the-complete-list-of-winners/story-2o8HmEbUZ8kmvhfx2XE64I.html|accessdate=10 August 2020|work=[[Hindustan Times]]|date=7 April 2017|archive-date=17 September 2020|archive-url=https://web.archive.org/web/20200917031535/https://www.hindustantimes.com/bollywood/64th-national-film-awards-here-s-the-complete-list-of-winners/story-2o8HmEbUZ8kmvhfx2XE64I.html|url-status=live}}</ref>
|-
|''[[ಮುಂತಿರಿವಳ್ಳಿಕಲ್ ಥಾಲಿರ್ಕ್ಕುಂಬೋಲ್]]''
| rowspan="2" |ಮಲಯಾಳಂ
|-
|''[[ಪುಲಿಮುರುಗನ್]]''
|-
! scope="row" | 2023
|''ಜೀವಮಾನ ಸಾಧನೆ''
|[[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]
|—
|style="text-align:center;"|<ref>{{cite news |last1= |first1= |title=Malayalam actor Mohanlal to be conferred Dadasaheb Phalke Award for 2023 |url=https://www.thehindu.com/entertainment/movies/actor-mohanlal-to-be-conferred-dadasaheb-phalke-award-for-2023/article70073864.ece |access-date=20 September 2025 |publisher=The Hindu |date=20 September 2025 |archive-url=https://web.archive.org/web/20250920160340/https://www.thehindu.com/entertainment/movies/actor-mohanlal-to-be-conferred-dadasaheb-phalke-award-for-2023/article70073864.ece |archive-date=20 September 2025 |language=en-IN}}</ref>
|}
== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ==
[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು]] ಮಲಯಾಳಂ ಚಲನಚಿತ್ರದಲ್ಲಿನ ಉತ್ಕೃಷ್ಟತೆಗಾಗಿ [[ಕೇರಳ ಸರ್ಕಾರ]]ದ [[ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ]]ಯಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1986
|''[[ಟಿ. ಪಿ. ಬಾಲಗೋಪಾಲನ್ M.A.]]''
|[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|{{won}}
|style="text-align:center;"|<ref name="State Film Awards">{{cite web |url=http://www.prd.kerala.gov.in/stateawards2.htm |title=State Film Awards |publisher=prd.kerala.gov.in |url-status=dead |archive-url=https://web.archive.org/web/20160303234213/http://www.prd.kerala.gov.in/stateawards2.htm |archive-date=3 March 2016 |df=dmy-all}}</ref>
|-
! scope="row"| 1988
|''[[ಪದಮುದ್ರಾ (ಚಲನಚಿತ್ರ)|ಪದಮುದ್ರಾ]], [[ಚಿತ್ರಂ]], [[ಉಲ್ಸವಪಿಟ್ಟೇನ್ನು]], [[ಆರ್ಯನ್ (1988 ಚಲನಚಿತ್ರ)|ಆರ್ಯನ್]], [[ವೆಲ್ಲನಾಕಳುಡೆ ನಾಡು]]''
|[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ (ವಿಶೇಷ ತೀರ್ಪುಗಾರರ ಪ್ರಶಸ್ತಿ)|ವಿಶೇಷ ತೀರ್ಪುಗಾರರ ಪ್ರಶಸ್ತಿ]]
|{{won}}
|style="text-align:center;"|<ref name="State Film Awards" />
|-
! scope="row" rowspan="2"| 1991
|''[[ಭಾರತಂ]]''
|[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಎರಡನೇ ಅತ್ಯುತ್ತಮ ಚಲನಚಿತ್ರ|ಎರಡನೇ ಅತ್ಯುತ್ತಮ ಚಲನಚಿತ್ರ]] {{small|(ನಿರ್ಮಾಪಕ)}}
|{{won}}
|style="text-align:center;"|<ref name="prd.kerala.gov.in">{{cite web |url=http://www.prd.kerala.gov.in/stateawards3.htm |title=State Film Awards |publisher=prd.kerala.gov.in |url-status=dead |archive-url=https://web.archive.org/web/20160303234157/http://www.prd.kerala.gov.in/stateawards3.htm |archive-date=3 March 2016 |df=dmy-all}}</ref>
|-
|''[[ಅಭಿಮನ್ಯು (1991 ಚಲನಚಿತ್ರ)|ಅಭಿಮನ್ಯು]], [[ಕಿಳುಕ್ಕಂ]], [[ಉಳ್ಳಡಕ್ಕಂ]]''
| rowspan="2" |[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|{{won}}
|style="text-align:center;"|<ref name="prd.kerala.gov.in" />
|-
! scope="row" rowspan="2"| 1995
|''[[ಸ್ಪಡಿಕಂ]], [[ಕಾಲಪಾನಿ]]''
|{{won}}
|style="text-align:center;"|<ref name="prd.kerala.gov.in" />
|-
|''[[ಕಾಲಪಾನಿ]]''
|[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಎರಡನೇ ಅತ್ಯುತ್ತಮ ಚಲನಚಿತ್ರ|ಎರಡನೇ ಅತ್ಯುತ್ತಮ ಚಲನಚಿತ್ರ]] {{small|(ನಿರ್ಮಾಪಕ)}}
|{{won}}
|style="text-align:center;"|<ref name="prd.kerala.gov.in" />
|-
! scope="row"| 1999
|''[[ವನಪ್ರಸ್ಥಂ]]''
| rowspan="3" |[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|{{won}}
|style="text-align:center;"|<ref name="prd.kerala.gov.in" />
|-
! scope="row"| 2005
|''[[ಥನ್ಮತ್ರ]]''
|{{won}}
|style="text-align:center;"|<ref>{{cite web |url=http://www.prd.kerala.gov.in/stateawards4.htm |title=State Film Awards |publisher=prd.kerala.gov.in |url-status=dead |archive-url=https://web.archive.org/web/20150707210332/http://www.prd.kerala.gov.in/stateawards4.htm |archive-date=7 July 2015 |df=dmy-all}}</ref>
|-
! scope="row"| 2007
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]''
|{{won}}
|style="text-align:center;"|<ref name="ReferenceA" />
|}
== ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು ==
[[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿಗಳು]] ಮಲಯಾಳಂ ಚಲನಚಿತ್ರದಲ್ಲಿನ ಉತ್ಕೃಷ್ಟತೆಗಾಗಿ [[ಕೇರಳ ಚಲನಚಿತ್ರ ವಿಮರ್ಶಕರ ಸಂಘ]]ದಿಂದ ಪ್ರತಿ ವರ್ಷವೂ (1977 ರಿಂದ) ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1988
|''[[ಪದಮುದ್ರಾ (ಚಲನಚಿತ್ರ)|ಪದಮುದ್ರಾ]]'', ''[[ಚಿತ್ರಂ]]''
| rowspan="3" |[[ಕೇರಳ ಚಲನಚಿತ್ರ ವಿಮರ್ಶಕರ ಸಂಘ ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
|{{won}}
|style="text-align:center;"|<ref name=criticsaward>{{cite news |author1=G. Hari Sundar |title=Mohanlal weaves a filmic web |url=http://www.thehindu.com/thehindu/lf/2002/05/19/stories/2002051901540200.htm |accessdate=12 January 2016 |work=[[The Hindu]] |date=19 May 2002 |archive-date=27 January 2021 |archive-url=https://web.archive.org/web/20210127211748/https://www.thehindu.com/archive/print/2002/05/19/ |url-status=live }}</ref>
|-
! scope="row"| 1991
|''[[ಭಾರತಂ]]'', ''[[ಉಳ್ಳಡಕ್ಕಂ]]''
|{{won}}
|style="text-align:center;"|<ref name=criticsaward />
|-
! scope="row"| 1999
|''[[ವನಪ್ರಸ್ಥಂ]]''
|{{won}}
|style="text-align:center;"|<ref name=criticsaward />
|-
! scope="row"| 2001
|''ಮಲಯಾಳಂ ಸಿನೆಮಾಗೆ ಕೊಡುಗೆ''
|ನಟನ ರತ್ನ ಪ್ರಶಸ್ತಿ
|
|style="text-align:center;"|<ref>{{Cite web |title=Mohanlal - Awards and Recognition |url=https://www.thecompleteactor.com/mohanlal-awards-recognition |access-date=2024-07-18 |website=TheCompleteActor.com}}</ref>
|-
! scope="row"| 2003
|''ಜೀವಮಾನ ಸಾಧನೆ ಪ್ರಶಸ್ತಿ''
|[[ಚಲಚಿತ್ರ ರತ್ನ ಪ್ರಶಸ್ತಿ]]
|
|style="text-align:center;"|<ref>{{Cite web |title=1993-2018 Chalachitra Ratnam Awards |url=https://www.keralafilmcritics.com/2020/10/1993.html |url-status=live |archive-url=https://web.archive.org/web/20231130133343/https://www.keralafilmcritics.com/2020/10/1993.html |archive-date=2023-11-30 |access-date=2024-07-18 |website=[[Kerala Film Critics Association]]}}</ref>
|-
! scope="row"| 2005
|''[[ನರನ್ (ಚಲನಚಿತ್ರ)|ನರನ್]], [[ಥನ್ಮತ್ರ]]''
|ಅತ್ಯಂತ ಜನಪ್ರಿಯ ನಟ
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-kerala/film-critics-awards-announced/article3173236.ece |title=Film Critics awards announced |date=3 February 2006 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127045903/http://www.thehindu.com/todays-paper/tp-national/tp-kerala/film-critics-awards-announced/article3173236.ece |url-status=live }}</ref>
|-
! scope="row"| 2007
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]''
| rowspan="6" |ಅತ್ಯುತ್ತಮ ನಟ
|{{won}}
|style="text-align:center;"|<ref>{{Cite news |url=http://articles.economictimes.indiatimes.com/2008-01-31/news/28412366_1_playback-singer-special-award-critics-awards |title='Ore Kadal', 'Thaniye' share critics award for best film |last=PTI |date=31 January 2008 |publisher=economictimes.indiatimes.com |access-date=2014-11-14 |archive-date=2014-12-16 |archive-url=https://web.archive.org/web/20141216094445/http://articles.economictimes.indiatimes.com/2008-01-31/news/28412366_1_playback-singer-special-award-critics-awards |url-status=dead }}</ref>
|-
! scope="row"| 2008
|''[[ಕುರುಕ್ಷೇತ್ರ (2008 ಚಲನಚಿತ್ರ)|ಕುರುಕ್ಷೇತ್ರ]], [[ಪಕಲ್ ನಕ್ಷತ್ರಂಗಳ್]], [[ಆಕಾಶ ಗೋಪುರಂ|ಆಕಾಶಗೋಪುರಂ]]''
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-kerala/mohanlal-sukumari-adjudged-best-actors/article386178.ece |title=Mohanlal, Sukumari adjudged best actors |date=31 January 2009 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127050528/http://www.thehindu.com/todays-paper/tp-national/tp-kerala/mohanlal-sukumari-adjudged-best-actors/article386178.ece |url-status=live }}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|{{won}}
|style="text-align:center;"|<ref>{{Cite web|url=http://www.mathrubhumi.com/english/movies/malayalam/123816/|archive-url=https://web.archive.org/web/20120529040906/http://www.mathrubhumi.com/english/movies/malayalam/123816/|url-status=dead|title=Mohanlal, Blessy bag Critics award|archive-date=29 May 2012}}</ref>
|-
! scope="row"| 2013
|''[[ದೃಶ್ಯಂ]]''
|{{won}}
|style="text-align:center;"|<ref>{{Cite news |url=http://www.newindianexpress.com/entertainment/malayalam/Drishyam-Bags-Kerala-Film-Critics-Association-Awards/2014/01/30/article2027269.ece |title='Drishyam' Bags Kerala Film Critics Association Awards |date=30 January 2014 |accessdate=13 Nov 2014 |publisher=[[The New Indian Express]] |archive-date=22 December 2014 |archive-url=https://web.archive.org/web/20141222164923/http://www.newindianexpress.com/entertainment/malayalam/Drishyam-Bags-Kerala-Film-Critics-Association-Awards/2014/01/30/article2027269.ece |url-status=dead }}</ref>
|-
! scope="row"| 2016
|''[[ಒಪ್ಪಂ]]''
|{{won}}
|style="text-align:center;"|<ref>{{cite news |title=Film critics awards announced |url=http://www.thehindu.com/news/cities/Thiruvananthapuram/film-critics-awards-announced/article17419650.ece |accessdate=7 March 2017 |work=[[The Hindu]] |date=7 March 2017 |archive-date=21 December 2019 |archive-url=https://web.archive.org/web/20191221165143/https://www.thehindu.com/news/cities/Thiruvananthapuram/film-critics-awards-announced/article17419650.ece |url-status=live }}</ref>
|-
! scope="row"| 2025
|''[[ತುದರುಂ]]''
|{{won}}
|style="text-align:center;"|<ref>{{cite news|title=Kerala Film Critics Awards announced|url=https://www.newindianexpress.com/entertainment/malayalam/2019/apr/09/kerala-film-critics-awards-announced-1962020.html|access-date=18 July 2019|work=[[The New Indian Express]]|date=9 April 2019|archive-date=22 July 2019|archive-url=https://web.archive.org/web/20190722031652/http://www.newindianexpress.com/entertainment/malayalam/2019/apr/09/kerala-film-critics-awards-announced-1962020.html|url-status=live}}</ref>
|}
== ನಂದಿ ಪ್ರಶಸ್ತಿಗಳು ==
[[ನಂದಿ ಪ್ರಶಸ್ತಿಗಳು]] [[ಆಂಧ್ರಪ್ರದೇಶ ಸರ್ಕಾರ]]ವು [[ತೆಲುಗು ಸಿನೆಮಾ]]ದಲ್ಲಿ ಕಲಾತ್ಮಕ ಕೌಶಲ್ಯಗಳನ್ನು ಗೌರವಿಸಲು ಪ್ರದಾನ ಮಾಡುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:27%;"| ನಾಮನಿರ್ದೇಶಿತ ಕೃತಿ
! scope="col" style="width:20%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2016
|''[[ಜನತಾ ಗ್ಯಾರೇಜ್]]''
|[[ನಂದಿ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ|ಅತ್ಯುತ್ತಮ ಪೋಷಕ ನಟ]]
|{{won}}
|style="text-align:center;"|<ref>{{cite news |last=Hooli |first=Shekhar H. |title=Nandi Awards 2014, 15 and 16 winners list: Mahesh Babu, Jr NTR, Balakrishna bag best actor awards |url=http://www.ibtimes.co.in/nandi-awards-2014-15-16-winners-list-revealed-mahesh-babu-jr-ntr-balakrishna-bag-best-actors-749398 |accessdate=14 November 2017 |work=[[International Business Times]] |date=14 November 2017 |archive-date=15 November 2017 |archive-url=https://web.archive.org/web/20171115014950/http://www.ibtimes.co.in/nandi-awards-2014-15-16-winners-list-revealed-mahesh-babu-jr-ntr-balakrishna-bag-best-actors-749398 |url-status=live }}</ref>
|}
== ಫಿಲ್ಮ್ಫೇರ್ ಪ್ರಶಸ್ತಿಗಳು ==
[[ಫಿಲ್ಮ್ಫೇರ್ ಪ್ರಶಸ್ತಿಗಳು]] [[ಹಿಂದಿ ಸಿನೆಮಾ]]ದಲ್ಲಿ ಸಿನೆಮಾಟಿಕ್ ಸಾಧನೆಗಳ ಉತ್ಕೃಷ್ಟತೆಗಾಗಿ [[ದಿ ಟೈಮ್ಸ್ ಗ್ರೂಪ್]] ನಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2002
|''[[ಕಂಪನಿ (2002 ಚಲನಚಿತ್ರ)|ಕಂಪನಿ]]''
|[[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ|ಅತ್ಯುತ್ತಮ ಪೋಷಕ ನಟ]]
|{{Nominated}}
|style="text-align:center;"|<ref>{{cite news |last=Rajpal |first=Roktim |title=Mohanlal turns 55: 8 performances that prove he is the most bankable, successful star of Indian cinema |url=http://www.ibnlive.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html |accessdate=26 March 2016 |work=[[IBN Live]] |date=21 May 2015 |location=New Delhi |archive-date=10 March 2016 |archive-url=https://web.archive.org/web/20160310045435/http://www.ibnlive.com/news/movies/mohanlal-turns-55-8-performances-that-prove-he-is-the-most-bankable-successful-star-of-indian-cinema-994811.html |url-status=live }}</ref>
|}
== ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ==
[[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]]ವು [[ಫಿಲ್ಮ್ಫೇರ್ ಪ್ರಶಸ್ತಿಗಳ]] ಒಂದು ಭಾಗವಾಗಿದ್ದು, ಇದನ್ನು ದಕ್ಷಿಣ ಭಾರತೀಯ ಚಲನಚಿತ್ರೋದ್ಯಮಕ್ಕೆ ನೀಡಲಾಗುತ್ತದೆ, ಇದು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮಗಳನ್ನು ಒಳಗೊಂಡಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಭಾಷೆ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1986
|''[[ಸನ್ಮನಸ್ಸುಳ್ಳವರ್ಕ್ಕು ಸಮಾಧಾನಂ]]''
| rowspan="8" |[[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಮಲಯಾಳಂ|ಅತ್ಯುತ್ತಮ ನಟ]]
| rowspan="11" |[[ಮಲಯಾಳಂ]]
|{{won}}
|style="text-align:center;"|<ref name="Filmfare">{{cite news |url=http://specials.manoramaonline.com/Movie/2014/mohanlal-2013/quick-info.html |title=Vismayangalude Lal |agency=[[Manoramaonline.com]] |accessdate=23 May 2015 |archive-date=16 October 2015 |archive-url=https://web.archive.org/web/20151016174547/http://specials.manoramaonline.com/Movie/2014/mohanlal-2013/quick-info.html |url-status=live }}</ref>
|-
! scope="row"| 1988
|''[[ಪದಮುದ್ರಾ (ಚಲನಚಿತ್ರ)|ಪದಮುದ್ರಾ]]''
|{{won}}
|style="text-align:center;"|<ref name=Filmfare />
|-
! scope="row"| 1993
|''[[ದೇವಾಸುರಂ]]''
|{{won}}
|style="text-align:center;"|<ref name=Filmfare />
|-
! scope="row"| 1994
|''[[ಪವಿತ್ರಂ (1994 ಚಲನಚಿತ್ರ)|ಪವಿತ್ರಂ]]''
|{{won}}
|style="text-align:center;"|<ref name=Filmfare />
|-
! scope="row"| 1995
|''[[ಸ್ಪಡಿಕಂ]]''
|{{won}}
|style="text-align:center;"|<ref name=Filmfare />
|-
! scope="row"| 1999
|''[[ವನಪ್ರಸ್ಥಂ]]''
|{{won}}
|style="text-align:center;"|<ref>{{Cite news |url=http://www.thehindu.com/thehindu/2000/04/15/stories/09150651.htm |title=Star-spangled show on cards |date=15 April 2000 |work=[[The Hindu]] |access-date=14 November 2014 |archive-date=17 July 2014 |archive-url=https://archive.today/20140717201000/http://www.thehindu.com/thehindu/2000/04/15/stories/09150651.htm |url-status=dead }}</ref>
|-
! scope="row"| 2005
|''[[ಥನ್ಮತ್ರ]]''
|{{won}}
|style="text-align:center;"|<ref>{{cite web |url=http://www.indiaglitz.com/channels/malayalam/gallery/Events/10441.html |archive-url=https://web.archive.org/web/20061118182553/http://www.indiaglitz.com/channels/malayalam/gallery/Events/10441.html |url-status=dead |archive-date=18 November 2006 |title=The 53rd Film Fare Awards |date=11 September 2006 |work=indiaglitz.com |access-date=14 November 2014 }}</ref>
|-
! scope="row"| 2007
|[[ಪರದೇಸಿ (2007 ಚಲನಚಿತ್ರ)|''ಪರದೇಸಿ'']]
|{{won}}
|style="text-align:center;"|<ref>{{Cite news |url=http://timesofindia.indiatimes.com/city/chennai/55th-annual-Tiger-Balm-South-Filmfare-Awards/articleshow/3228046.cms |title=55th annual Tiger Balm South Filmfare Awards |last=Chuman Das |date=13 July 2008 |agency=[[The Times of India]] |access-date=23 May 2015 |archive-date=8 July 2016 |archive-url=https://web.archive.org/web/20160708120930/http://timesofindia.indiatimes.com/city/chennai/55th-annual-Tiger-Balm-South-Filmfare-Awards/articleshow/3228046.cms |url-status=live }}</ref>
|-
! scope="row"| 2009
|''[[ಭ್ರಮರಂ]]''
|[[ಫಿಲ್ಮ್ಫೇರ್ ವಿಶೇಷ ಪ್ರಶಸ್ತಿ - ದಕ್ಷಿಣ|ವಿಶೇಷ ತೀರ್ಪುಗಾರರ ಪ್ರಶಸ್ತಿ]]
|{{won}}
|style="text-align:center;"|<ref>{{cite web|last=Ravi|first=Bhama Devi|title=South's best in spotlight|url=http://epaper.timesofindia.com/Default/Scripting/ArticleWin.asp?From=Archive&Source=Page&Skin=TOINEW&BaseHref=TOICH/2010/08/08&PageLabel=4&EntityId=Ar00400&ViewMode=GIF&GZ=T|archive-url=https://web.archive.org/web/20120612110912/http://epaper.timesofindia.com/Default/Scripting/ArticleWin.asp?From=Archive&Source=Page&Skin=TOINEW&BaseHref=TOICH/2010/08/08&PageLabel=4&EntityId=Ar00400&ViewMode=GIF&GZ=T|url-status=dead|archive-date=12 June 2012|work=[[The Times of India]]|access-date=20 July 2012}}</ref>
|-
! scope="row"| 2013
|''[[ದೃಶ್ಯಂ]]''
| rowspan="2" |[[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಮಲಯಾಳಂ|ಅತ್ಯುತ್ತಮ ನಟ]]
|{{nom}}
|style="text-align:center;"|<ref name="Filmfare_2014-07-08">{{cite web |last=Editorial |first=Filmfare |title=61st Idea Filmfare Awards (South) Nomination list |url=http://www.filmfare.com/features/60th-idea-filmfare-awards-south-nomination-list-6638.html |publisher=Filmfare.com |accessdate=26 March 2016 |date=8 July 2014 |archive-date=6 April 2016 |archive-url=https://web.archive.org/web/20160406210925/http://www.filmfare.com/features/60th-idea-filmfare-awards-south-nomination-list-6638.html |url-status=live }}</ref>
|-
! scope="row" rowspan="2"| 2016
|''[[ಒಪ್ಪಂ]]''
|{{nom}}
|style="text-align:center;"|<ref name="Filmfare_2014-07-08" />
|-
|''[[ಜನತಾ ಗ್ಯಾರೇಜ್]]''
|[[ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ - ತೆಲುಗು|ಅತ್ಯುತ್ತಮ ಪೋಷಕ ನಟ]]
|[[ತೆಲುಗು ಭಾಷೆ|ತೆಲುಗು]]
|{{nom}}
|style="text-align:center;"|<ref name="Filmfare_2014-07-08" />
|}
== ಸ್ಕ್ರೀನ್ ಪ್ರಶಸ್ತಿಗಳು ==
[[ಸ್ಕ್ರೀನ್ ಪ್ರಶಸ್ತಿಗಳು]] ಹಿಂದಿ ಮತ್ತು ಮರಾಠಿ ಸಿನೆಮಾದಲ್ಲಿ ಸಿನೆಮಾಟಿಕ್ ಸಾಧನೆಗಳ ಉತ್ಕೃಷ್ಟತೆಯನ್ನು ಗೌರವಿಸಲು [[ಇಂಡಿಯನ್ ಎಕ್ಸ್ಪ್ರೆಸ್ ಲಿಮಿಟೆಡ್]] ನಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:28%;"| ನಾಮನಿರ್ದೇಶಿತ ಕೃತಿ
! scope="col" style="width:14%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಕಂಪನಿ (2002 ಚಲನಚಿತ್ರ)|ಕಂಪನಿ]]''
|[[ಸ್ಕ್ರೀನ್ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ|ಅತ್ಯುತ್ತಮ ಪೋಷಕ ನಟ]]
|{{won}}
|style="text-align:center;"|<ref>{{cite news |author=Press Trust Of India |title=I have nothing to prove in Bollywood: Mohanlal |url=http://movies.ndtv.com/regional/i-have-nothing-to-prove-in-bollywood-mohanlal-624585 |accessdate=16 August 2015 |agency=[[Ndtv.com]] |date=17 April 2012 |location=[[Mumbai]] |archive-date=15 February 2016 |archive-url=https://web.archive.org/web/20160215235858/http://movies.ndtv.com/regional/i-have-nothing-to-prove-in-bollywood-mohanlal-624585 |url-status=live }}</ref>
|}
== ಸ್ಕ್ರೀನ್ ಪ್ರಶಸ್ತಿಗಳು ದಕ್ಷಿಣ ==
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಭಾಷೆ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1997
|''[[ಆರಾಂ ತಂಪುರನ್]], [[ಒರು ಯಾತ್ರಮೊಳಿ]], [[ಗುರು (1997 ಚಲನಚಿತ್ರ)|ಗುರು]], [[ಚಂದ್ರಲೇಖಾ (1997 ಚಲನಚಿತ್ರ)|ಚಂದ್ರಲೇಖಾ]]''
|ಅತ್ಯುತ್ತಮ ನಟ
|ಮಲಯಾಳಂ
|{{won}}
|style="text-align:center;"|<ref>{{Cite web|url=http://www.screenindia.com/old/apr17/cover2.htm|title=Screen south awards|access-date=2011-04-10|archive-date=2021-01-27|archive-url=https://web.archive.org/web/20210127211750/https://indianexpress.com/section/entertainment/|url-status=dead}}</ref>
|}
== ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು ==
[[ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು]] (IIFA) [[ಬಾಲಿವುಡ್|ಹಿಂದಿ ಸಿನೆಮಾ]]ದಲ್ಲಿನ ಉತ್ಕೃಷ್ಟತೆಯನ್ನು ಗೌರವಿಸಲು ವಿಜ್ಕ್ರಾಫ್ಟ್ ಇಂಟರ್ನ್ಯಾಷನಲ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಆಯೋಜಿಸುವ ವಾರ್ಷಿಕ ಕಾರ್ಯಕ್ರಮವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:27%;"| ನಾಮನಿರ್ದೇಶಿತ ಕೃತಿ
! scope="col" style="width:20%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಕಂಪನಿ (2002 ಚಲನಚಿತ್ರ)|ಕಂಪನಿ]]''
|[[IIFA ಪ್ರಶಸ್ತಿ - ಅತ್ಯುತ್ತಮ ಪೋಷಕ ನಟ|ಅತ್ಯುತ್ತಮ ಪೋಷಕ ನಟ]]
|{{won}}
|style="text-align:center;"|<ref>{{cite web |url=http://iifa.com/iifa-years/iifa-years-2003/ |title=IIFA Through the Years – IIFA 2003 : South Africa |website=IIFA.com |access-date=2015-05-24 |archive-url=https://web.archive.org/web/20150208124732/http://iifa.com/iifa-years/iifa-years-2003/ |archive-date=2015-02-08 |url-status=dead }}</ref>
|}
== IIFA ಉತ್ಸವಂ ==
[[IIFA ಉತ್ಸವಂ]] ಎಂಬುದು [[ತೆಲುಗು ಸಿನೆಮಾ|ತೆಲುಗು]], [[ತಮಿಳು ಸಿನೆಮಾ|ತಮಿಳು]], [[ಮಲಯಾಳಂ ಸಿನೆಮಾ|ಮಲಯಾಳಂ]], ಮತ್ತು [[ಕನ್ನಡ ಸಿನೆಮಾ|ಕನ್ನಡ]] ಸಿನೆಮಾವನ್ನು ಒಳಗೊಂಡ ದಕ್ಷಿಣ ಭಾರತೀಯ ಸಿನೆಮಾದಲ್ಲಿನ ಕಲಾತ್ಮಕ ಮತ್ತು ತಾಂತ್ರಿಕ ಸಾಧನೆಗಳನ್ನು ಪ್ರತಿಫಲಿಸಲು ವಿಜ್ಕ್ರಾಫ್ಟ್ ಇಂಟರ್ನ್ಯಾಷನಲ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಆಯೋಜಿಸುವ ಕಾರ್ಯಕ್ರಮವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:25%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:20%;"| ಭಾಷೆ
! scope="col" style="width:3%;"| ಫಲಿತಾಂಶ
|-
| scope="row" rowspan="2"|2017
| ''[[ಜನತಾ ಗ್ಯಾರೇಜ್]]''
| ಪೋಷಕ ಪಾತ್ರದಲ್ಲಿ ಅತ್ಯುತ್ತಮ ಪ್ರದರ್ಶನ - ಪುರುಷ
| [[ತೆಲುಗು ಭಾಷೆ|ತೆಲುಗು]]
| {{nom}}
|-
| ''[[ಒಪ್ಪಂ]]'', ''[[ಪುಲಿಮುರುಗನ್]]''
| ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಪ್ರದರ್ಶನ - ಪುರುಷ
| [[ಮಲಯಾಳಂ]]
| {{nom}}
|}
== ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ==
[[ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]] (SIIMA) [[ತೆಲುಗು ಸಿನೆಮಾ|ತೆಲುಗು]], [[ತಮಿಳು ಸಿನೆಮಾ|ತಮಿಳು]], [[ಮಲಯಾಳಂ ಸಿನೆಮಾ|ಮಲಯಾಳಂ]], ಮತ್ತು [[ಕನ್ನಡ ಸಿನೆಮಾ|ಕನ್ನಡ]] ಚಲನಚಿತ್ರೋದ್ಯಮಗಳಲ್ಲಿನ ಅತ್ಯುತ್ತಮ ಕೆಲಸವನ್ನು ಗುರುತಿಸಲು ವಿಬ್ರಿ ಮೀಡಿಯಾ ಪ್ರತಿ ವರ್ಷವೂ ಪ್ರದಾನ ಮಾಡುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:10%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:12%;"| ಭಾಷೆ
! scope="col" style="width:2%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|[[SIIMA ಪ್ರಶಸ್ತಿ - ಅತ್ಯುತ್ತಮ ನಟ|ಅತ್ಯುತ್ತಮ ನಟ]]
| rowspan="5" |[[ಮಲಯಾಳಂ]]
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-features/tp-cinemaplus/the-south-shines/article3589844.ece |title=The South Shines |last=K. R. Manigandan |date=1 July 2012 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127032831/http://www.thehindu.com/todays-paper/tp-features/tp-cinemaplus/the-south-shines/article3589844.ece |url-status=live }}</ref>
|-
! scope="row" rowspan="2"| 2012
|''[[ರನ್ ಬೇಬಿ ರನ್]]''
|ಅತ್ಯುತ್ತಮ ಪುರುಷ ಪ್ಲೇಬ್ಯಾಕ್ ಗಾಯಕ
|{{nom}}
|
|-
|''[[ಸ್ಪಿರಿಟ್ (2012 ಚಲನಚಿತ್ರ)|ಸ್ಪಿರಿಟ್]]''
| rowspan="3" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.siima.in/winners-2012.php |title=Siima awards: 2012 winners |publisher=siima.in |url-status=dead |archive-url=https://web.archive.org/web/20141019172549/http://www.siima.in/winners-2012.php |archive-date=19 October 2014}}</ref>
|-
! scope="row"| 2013
|''[[ದೃಶ್ಯಂ]]''
|{{nom}}
|style="text-align:center;"|<ref name="ibtimes1">{{cite news |last=V. P. |first=Nicy |title=SIIMA 2014 Malayalam Nominations: Mohanlal, Mammootty, Fahadh, Prithviraj, Dileep Get the Nod |url=http://www.ibtimes.co.in/siima-2014-malayalam-nominations-mohanlal-mammootty-fahadh-prithviraj-dileep-get-nod-604897 |accessdate=26 March 2016 |work=[[International Business Times]] |date=20 July 2014 |archive-date=22 March 2016 |archive-url=https://web.archive.org/web/20160322181232/http://www.ibtimes.co.in/siima-2014-malayalam-nominations-mohanlal-mammootty-fahadh-prithviraj-dileep-get-nod-604897 |url-status=live }}</ref>
|-
! scope="row" rowspan=2| 2016
|''[[ಪುಲಿಮುರುಗನ್]]''
|{{won}}
|style="text-align:center;"|<ref name="ibtimes1" />
|-
|''[[ಜನತಾ ಗ್ಯಾರೇಜ್]]''
|ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ
|[[ತೆಲುಗು ಭಾಷೆ|ತೆಲುಗು]]
|{{nom}}
|style="text-align:center;"|<ref name="ibtimes1" />
|-
! scope="row" rowspan="2"| 2018
| -
|[[ಮಧ್ಯಪ್ರಾಚ್ಯ]]ದಲ್ಲಿ ಅತ್ಯಂತ ಜನಪ್ರಿಯ ತಾರೆ
| -
|{{won}}
|style="text-align:center;"|<ref>{{cite news|last=Saleem|first=Fazeena|title=Malayalam, Tamil film industry legends wow audience at South Indian movie awards show|url=https://www.thepeninsulaqatar.com/article/17/08/2019/Malayalam,-Tamil-film-industry-legends-wow-audience-at-South-Indian-movie-awards-show|accessdate=17 August 2019|work=[[The Peninsula Qatar]]|date=17 August 2019|archive-date=17 August 2019|archive-url=https://web.archive.org/web/20190817073126/https://www.thepeninsulaqatar.com/article/17/08/2019/Malayalam,-Tamil-film-industry-legends-wow-audience-at-South-Indian-movie-awards-show|url-status=live}}</ref>
|-
|''[[ಒಡಿಯನ್]]''
| rowspan="2" |ಅತ್ಯುತ್ತಮ ನಟ
| rowspan="2" |ಮಲಯಾಳಂ
|{{nom}}
|style="text-align:center;"|<ref name="auto" />
|-
!scope="row"| 2019
|[[ಲೂಸಿಫರ್ (2019 ಭಾರತೀಯ ಚಲನಚಿತ್ರ)|''ಲೂಸಿಫರ್'']]
|{{won}}
|<ref>{{Cite web|date=2021-09-19|title=Mohanlal, Dhanush, Manju Warrier, Samantha Akkineni among big winners at SIIMA 2021|url=https://indianexpress.com/article/entertainment/regional/mohanlal-dhanush-manju-warrier-samantha-akkineni-among-big-winners-at-siima-2021-7519773/|access-date=2021-09-20|website=The Indian Express|language=en}}</ref>
|}
== ಆನಂದ ವಿಕಟನ್ ಸಿನೆಮಾ ಪ್ರಶಸ್ತಿಗಳು ==
ಆನಂದ ವಿಕಟನ್ ಸಿನೆಮಾ ಪ್ರಶಸ್ತಿಗಳು ತಮಿಳು ಚಲನಚಿತ್ರೋದ್ಯಮದ ಜನರಿಗಾಗಿ ನಡೆಸುವ ವಾರ್ಷಿಕ ಪ್ರಶಸ್ತಿ ಸಮಾರಂಭವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2009
|''[[ಉನ್ನೈಪೋಲ್ ಒರುವನ್ (2009 ಚಲನಚಿತ್ರ)|ಉನ್ನೈಪೋಲ್ ಒರುವನ್]]''
|ಅತ್ಯುತ್ತಮ ನಟ
|{{won}}
|style="text-align:center;"|
|}
== ಆಲ್ ಇಂಡಿಯಾ ರೇಡಿಯೋ ಪ್ರಶಸ್ತಿಗಳು ==
[[ಆಲ್ ಇಂಡಿಯಾ ರೇಡಿಯೋ]] (ಅಥವಾ ಆಕಾಶವಾಣಿ) ಭಾರತದ ರಾಷ್ಟ್ರೀಯ [[ಸಾರ್ವಜನಿಕ ಪ್ರಸಾರ|ಸಾರ್ವಜನಿಕ ರೇಡಿಯೋ ಪ್ರಸಾರಕ]] ಮತ್ತು [[ಪ್ರಸಾರ್ ಭಾರತಿ]]ಯ ಒಂದು ವಿಭಾಗವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2007
|''[[ರಸಾಂತತ್ರಂ]]'', ''[[ವಡಕ್ಕುಮ್ನಾಧನ್]]'', ''[[ಕೀರ್ತಿ ಚಕ್ರ (ಚಲನಚಿತ್ರ)|ಕೀರ್ತಿ ಚಕ್ರ]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{cite news |title=AIR awards for Mohanlal, Padma Priya |url=http://www.thehindu.com/todays-paper/tp-national/tp-kerala/air-awards-for-mohanlal-padma-priya/article1932128.ece |accessdate=16 August 2015 |agency=[[The Hindu]] |date=18 October 2007 |location=[[Thiruvananthapuram]] |archive-date=27 January 2021 |archive-url=https://web.archive.org/web/20210127211750/https://www.thehindu.com/todays-paper/tp-national/tp-kerala/AIR-awards-for-Mohanlal-Padma-Priya/article14859143.ece |url-status=live }}</ref>
|}
== ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು ==
[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು]] [[ದಿ ವಾಲ್ಟ್ ಡಿಸ್ನಿ ಕಂಪನಿ]]ಯ ಸಹಾಯಕ ಸಂಸ್ಥೆಯಾದ [[ಸ್ಟಾರ್ ಇಂಡಿಯಾ]] ಒಡೆತನದ [[ಏಷ್ಯಾನೆಟ್ (ಟಿವಿ ಚಾನೆಲ್)|ಏಷ್ಯಾನೆಟ್]] ದೂರದರ್ಶನ ಜಾಲದಿಂದ ಪ್ರತಿ ವರ್ಷವೂ (1998 ರಿಂದ) ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಬಾಲೆಟ್ಟನ್]]''
| rowspan="3" |ಅತ್ಯುತ್ತಮ ನಟ
|{{won}}
|style="text-align:center;"|<ref>{{Cite news |url=http://www.thehindu.com/2004/03/08/stories/2004030808370400.htm |title=Star-studded show marks award nite |date=8 March 2004 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127032201/http://www.thehindu.com/2004/03/08/stories/2004030808370400.htm |url-status=dead }}</ref>
|-
! scope="row"| 2005
|''[[ಥನ್ಮತ್ರ]]'', ''[[ಉದಯನಾನು ಥಾರಂ]]''
|{{won}}
|style="text-align:center;"|<ref>{{Cite news |url=http://www.hindustantimes.com/nm7/mohanlal-bags-ujala-asianet-film-award/article1-74116.aspx |archive-url=https://web.archive.org/web/20150527001920/http://www.hindustantimes.com/nm7/mohanlal-bags-ujala-asianet-film-award/article1-74116.aspx |archive-date=2015-05-27 |title=Mohanlal bags Ujala-Asianet film award |date=11 March 2006 |url-status=dead |agency=[[Hindustan Times]]}}</ref>
|-
! scope="row"| 2006
|''[[ಕೀರ್ತಿಚಕ್ರ]]''
|{{won}}
|style="text-align:center;"|<ref>{{cite news |title=Ujala-Asianet awards announced |url=http://www.thehindu.com/todays-paper/tp-national/tp-kerala/ujalaasianet-awards-announced/article1785448.ece |accessdate=16 August 2015 |agency=[[The Hindu]] |date=21 January 2007 |location=[[Thiruvananthapuram]] |archive-date=27 January 2021 |archive-url=https://web.archive.org/web/20210127211749/https://www.thehindu.com/todays-paper/tp-national/tp-kerala/Ujala-Asianet-awards-announced/article14708969.ece |url-status=live }}</ref>
|-
! scope="row"| 2007
|[[ಹಲೋ (2007 ಚಲನಚಿತ್ರ)|''ಹಲೋ'']], ''[[ಚೋಟ್ಟ ಮುಂಬೈ]]''
|ಅತ್ಯಂತ ಜನಪ್ರಿಯ ನಟ
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-features/tp-fridayreview/in-the-starlight/article1432897.ece |title=In the starlight |date=25 January 2008 |agency=[[The Hindu]] |access-date=26 May 2015 |archive-date=27 January 2021 |archive-url=https://web.archive.org/web/20210127211824/https://www.thehindu.com/todays-paper/tp-features/tp-fridayreview/In-the-starlight/article15397312.ece |url-status=live }}</ref>
|-
! scope="row"| 2008
|''[[ಮಡಂಪಿ]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.thehindu.com/todays-paper/tp-national/tp-kerala/Asianet-film-awards-2009-announced/article16349659.ece |title=Asianet film awards 2009 announced |date=4 December 2017 |work=The Hindu |access-date=4 December 2017 |archive-date=21 December 2019 |archive-url=https://web.archive.org/web/20191221153315/https://www.thehindu.com/todays-paper/tp-national/tp-kerala/Asianet-film-awards-2009-announced/article16349659.ece |url-status=live }}</ref>
|-
! scope="row"| 2009
|''[[ಭ್ರಮರಂ]], [[ಎವಿಡಂ ಸ್ವರ್ಗಮಾನು]]''
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-kerala/article676380.ece |title='Pazhassi Raja' selected as best film |date=4 January 2010 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127050252/http://www.thehindu.com/todays-paper/tp-national/tp-kerala/article676380.ece |url-status=live }}</ref>
|-
! scope="row"| 2010
|{{mdash}}
|ಗೋಲ್ಡನ್ ಸ್ಟಾರ್ ಪ್ರಶಸ್ತಿ
|{{won}}
|style="text-align:center;"|<ref>{{cite web |url=http://www.keralatv.in/2011/01/ujala-asianet-film-awards-2010/ |title=Ujala Asianet Film Awards 2011 |date=11 January 2011 |publisher=keralatv.in |access-date=14 November 2014 |archive-date=29 November 2014 |archive-url=https://web.archive.org/web/20141129020812/http://www.keralatv.in/2011/01/ujala-asianet-film-awards-2010/ |url-status=live }}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]], [[ಸ್ನೇಹವೀಡು]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://kerala9.com/news/ujala-asianet-film-awards-2012-winners-list/ |title=Ujala Asianet Film Awards 2012 Winners List |date=7 January 2012 |publisher=kerala9.com |access-date=14 November 2014 |archive-url=https://web.archive.org/web/20120110025652/http://kerala9.com/news/ujala-asianet-film-awards-2012-winners-list/ |archive-date=10 January 2012 |url-status=dead }}</ref>
|-
! scope="row"| 2012
|''[[ಸ್ಪಿರಿಟ್ (2012 ಚಲನಚಿತ್ರ)|ಸ್ಪಿರಿಟ್]], [[ಗ್ರ್ಯಾಂಡ್ಮಾಸ್ಟರ್ (2012 ಚಲನಚಿತ್ರ)|ಗ್ರ್ಯಾಂಡ್ಮಾಸ್ಟರ್]], [[ರನ್ ಬೇಬಿ ರನ್]]''
|{{won}}
|style="text-align:center;"|<ref>{{cite web |url=http://www.filmibeat.com/malayalam/news/2013/asianet-film-awards-2013-winners-list-102810.html |title=Asianet Film Awards 2013 – Winners List |date=21 January 2013 |publisher=filmibeat.com |author=Smitha |access-date=14 November 2014 |archive-date=7 November 2014 |archive-url=https://web.archive.org/web/20141107151040/http://www.filmibeat.com/malayalam/news/2013/asianet-film-awards-2013-winners-list-102810.html |url-status=live }}</ref><ref>{{cite web |title=Asianet Film Awards 2013 Winners |url=http://www.keralatv.in/2013/01/asianet-film-awards-2013-winners/ |date=21 January 2013 |publisher=keralatv.in |access-date=14 November 2014 |archive-url=https://web.archive.org/web/20141129020808/http://www.keralatv.in/2013/01/asianet-film-awards-2013-winners/ |archive-date=29 November 2014 |url-status=dead }}</ref>
|-
! scope="row"| 2013
| {{mdash}}
|ಸಹಸ್ರಮಾನದ ನಟ ಪ್ರಶಸ್ತಿ
|{{won}}
|style="text-align:center;"|<ref>[https://web.archive.org/web/20160401204601/http://www.metromatinee.com/MetromatineMoviewNews/newsoverview.php?NEWSId=16th-ujala-asianet-film-awards-2014-winners-list-7548%2F16th-ujala-asianet-film-awards-2014-winners-list-7548 16th Ujala Asianet Film Awards 2014 – Winners List]. Web.archive.org. Retrieved on 2017-05-31.</ref>
|-
! scope="row"| 2014
| {{mdash}}
| 'ಮಲಯಾಳಂ ಚಲನಚಿತ್ರೋದ್ಯಮದಲ್ಲಿ 35 ವರ್ಷಗಳು' ವಿಶೇಷ ಸ್ಮಾರಕ
|{{won}}
|style="text-align:center;"|<ref>{{cite web |author1=Akhila Menon |title=PHOTOS: Stars At 17th Ujala Asianet Film Awards |url=http://www.filmibeat.com/malayalam/news/2015/photos-stars-at-17-ujala-asianet-film-awards-170333.html |website=[[Filmibeat]].com |accessdate=9 February 2016 |date=13 January 2015 |archive-date=4 March 2016 |archive-url=https://web.archive.org/web/20160304002523/http://www.filmibeat.com/malayalam/news/2015/photos-stars-at-17-ujala-asianet-film-awards-170333.html |url-status=live }}</ref>
|-
! scope="row"| 2015
| {{mdash}}
|"ಸಹಸ್ರಮಾನದ ಸೂಪರ್ಸ್ಟಾರ್" ಎಂದು ಕಿರೀಟಧಾರಣೆ
|{{won}}
|style="text-align:center;"|<ref>{{cite news |author=Anu James |title=18th Asianet Film Awards: Vikram, Trisha, Prithviraj, Mohanlal, Nivin Pauly bag awards [Full winners' list+photos] |url=http://www.ibtimes.co.in/18th-asianet-film-awards-vikram-trisha-prithviraj-mohanlal-nivin-pauly-bag-awards-full-666090 |accessdate=9 February 2016 |agency=[[International Business Times]] |date=8 February 2016 |archive-date=21 December 2019 |archive-url=https://web.archive.org/web/20191221170748/https://www.ibtimes.co.in/18th-asianet-film-awards-vikram-trisha-prithviraj-mohanlal-nivin-pauly-bag-awards-full-666090 |url-status=live }}</ref>
|-
! scope="row"| 2016
|''[[ಒಪ್ಪಂ]]'', ''[[ಪುಲಿಮುರುಗನ್]]''
| rowspan="3" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite news |title=Asiavision Movie Awards 2016 announced: and the winners are... |url=http://english.manoramaonline.com/entertainment/entertainment-news/asiavision-movie-awards-2016-nivin-pauly-manju-warrier-mohanlal.html |archive-url=https://web.archive.org/web/20161116145545/http://english.manoramaonline.com/entertainment/entertainment-news/asiavision-movie-awards-2016-nivin-pauly-manju-warrier-mohanlal.html |archive-date=16 November 2016 |accessdate=25 November 2016 |work=[[Malayala Manorama]] |date=16 November 2016 |url-status=live}}</ref>
|-
! scope="row"| 2018
|''[[ಒಡಿಯನ್]]'', ''[[ಕಾಯಂಕುಳಂ ಕೊಚುನ್ನುನಿ (2018 ಚಲನಚಿತ್ರ)|ಕಾಯಂಕುಳಂ ಕೊಚುನ್ನುನಿ]]''
|{{won}}
|style="text-align:center;"|
|-
! scope="row"| 2019
|''[[ಲೂಸಿಫರ್ (2019 ಭಾರತೀಯ ಚಲನಚಿತ್ರ)|ಲೂಸಿಫರ್]]''
|{{won}}
|style="text-align:center;"|<ref>{{cite news|title=മോഹന്ലാല് മികച്ച നടന്, പാര്വതി നടി, മഞ്ജു തമിഴ് നടി, പൃഥ്വിരാജ് സംവിധായകന്; ഏഷ്യാനെറ്റ് ഫിലിം അവാര്ഡ്|url=https://www.asianetnews.com/entertainment-news/asianet-film-awards-2020-full-list-q5dwhx|accessdate=10 February 2020|work=[[Asianet News]]|date=8 February 2020|language=ml|archive-date=10 February 2020|archive-url=https://web.archive.org/web/20200210160821/https://www.asianetnews.com/entertainment-news/asianet-film-awards-2020-full-list-q5dwhx|url-status=live}}</ref>
|}
== ಸಿನೆಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು ==
[[ಸಿನೆಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು]] [[ಸಿನೆಮಾ ಎಕ್ಸ್ಪ್ರೆಸ್]] ಚಲನಚಿತ್ರ ನಿಯತಕಾಲಿಕೆಯ ಪರವಾಗಿ [[ಇಂಡಿಯನ್ ಎಕ್ಸ್ಪ್ರೆಸ್ ಲಿಮಿಟೆಡ್|ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪ್]] ನಿಂದ ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದಲ್ಲಿನ ವೃತ್ತಿಪರರ ಕಲಾತ್ಮಕ ಉತ್ಕೃಷ್ಟತೆಯನ್ನು ಗೌರವಿಸಲು ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
|[[7ನೇ ಸಿನೆಮಾ ಎಕ್ಸ್ಪ್ರೆಸ್ ಪ್ರಶಸ್ತಿಗಳು|1986]]
|''[[ಪಂಚಾಗ್ನಿ]]''
|ಅತ್ಯುತ್ತಮ ನಟ
|{{won}}
|<ref>{{Cite news |date=13 April 1987 |title=Cine artistes asked to broaden talents |pages=3 |work=[[The Indian Express]] |url=https://news.google.com/newspapers?id=y4plAAAAIBAJ&sjid=f54NAAAAIBAJ&pg=787%2C2870744 |access-date=28 May 2025}}{{cbignore}}</ref>
|}
== ವನಿತಾ ಚಲನಚಿತ್ರ ಪ್ರಶಸ್ತಿಗಳು ==
[[ವನಿತಾ ಚಲನಚಿತ್ರ ಪ್ರಶಸ್ತಿಗಳು]] [[ಮಲಯಾಳ ಮನೋರಮ]] ಸಮೂಹದ ಭಾಗವಾದ ಮಹಿಳಾ ನಿಯತಕಾಲಿಕೆ ''[[ವನಿತಾ]]'' 1998 ರಿಂದ ಪ್ರತಿ ವರ್ಷವೂ ಆಯೋಜಿಸುವ ವಾರ್ಷಿಕ ಪ್ರಶಸ್ತಿ ಸಮಾರಂಭವಾಗಿದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಬಾಲೆಟ್ಟನ್]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref name="Balettan">{{cite web |url=http://www.filmibeat.com/malayalam/movies/balettan/awards.html |title=Balettan |publisher=filmibeat.com |access-date=2014-11-14 |archive-date=2014-11-26 |archive-url=https://web.archive.org/web/20141126115336/http://www.filmibeat.com/malayalam/movies/balettan/awards.html |url-status=live }}</ref>
|-
! scope="row"| 2005
|''[[ಥನ್ಮತ್ರ]]''
|{{won}}
|
|-
! scope="row"| 2007
|''[[ಹಲೋ (ಮಲಯಾಳಂ ಚಲನಚಿತ್ರ)|ಹಲೋ]], [[ಚೋಟ್ಟ ಮುಂಬೈ]]''
|ಅತ್ಯಂತ ಜನಪ್ರಿಯ ನಟ
|{{won}}
|style="text-align:center;"|<ref>{{cite web |url=https://www.indiaglitz.com/vanitha-awards-for-mammootty-meera-jasmine-malayalam-news-36410 |title=Vanitha awards for Mammootty, Meera Jasmine |date=7 February 2008 |work=indiaglitz.com |access-date=14 November 2014 |archive-date=24 September 2015 |archive-url=https://web.archive.org/web/20150924190651/http://www.indiaglitz.com/vanitha-awards-for-mammootty-meera-jasmine-malayalam-news-36410 |url-status=live }}</ref>
|-
! scope="row"| 2008
| ''[[ಟ್ವೆಂಟಿ:20 (ಚಲನಚಿತ್ರ)|ಟ್ವೆಂಟಿ:20]], [[ಮಡಂಪಿ]], [[ಆಕಾಶ ಗೋಪುರಂ]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |title=Nippon has announced the vanitha film awards |url=http://www.metromatinee.com/news-articles/nippon-has-announced-the-vanitha-film-awards-592 |publisher=metromatinee.com |date=19 February 2009 |accessdate=3 Nov 2014 |url-status=dead |archive-url=https://web.archive.org/web/20141103133303/http://www.metromatinee.com/news-articles/nippon-has-announced-the-vanitha-film-awards-592 |archive-date=3 November 2014}}</ref>
|-
! scope="row"| 2009
|''[[ಭ್ರಮರಂ]], [[ಎವಿಡಂ ಸ್ವರ್ಗಮಾನು]]''
|ಅತ್ಯಂತ ಜನಪ್ರಿಯ ನಟ
|{{won}}
|style="text-align:center;"|<ref>{{cite web |url=http://www.keralatv.in/2010/03/vanitha-film-awards-2010-on-surya-tv/ |title=Vanitha Film Awards 2010 on Surya TV |date=27 March 2010 |accessdate=13 Nov 2014 |publisher=keralatv.in |archive-date=29 November 2014 |archive-url=https://web.archive.org/web/20141129020935/http://www.keralatv.in/2010/03/vanitha-film-awards-2010-on-surya-tv/ |url-status=live }}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
| rowspan="4" |ಅತ್ಯುತ್ತಮ ನಟ
|{{won}}
|style="text-align:center;"|<ref name="kerals1">{{cite web |url=http://www.kerals.com/kerala/vanitha-film-awards-2012-announced/ |title=Vanitha Film Awards 2012 announced! |date=14 February 2012 |publisher=kerals.com |access-date=14 November 2014 |archive-date=25 December 2014 |archive-url=https://web.archive.org/web/20141225144558/http://www.kerals.com/kerala/vanitha-film-awards-2012-announced/ |url-status=live }}</ref>
|-
! scope="row"| 2016
|''[[ಒಪ್ಪಂ]], [[ಪುಲಿಮುರುಗನ್]]''
|{{won}}
|style="text-align:center;"|<ref name="kerals1" />
|-
! scope="row"| 2018
|''[[ಒಡಿಯನ್]]''
|{{won}}
|style="text-align:center;"|<ref>{{cite news|title=Vanitha Film Awards: Mohanlal wins Best Actor, Manju Warrier is Best Actress|url=https://english.manoramaonline.com/entertainment/entertainment-news/2019/03/02/vanitha-film-awards-winners-list-live-show-kochi.html|work=[[Malayala Manorama]]|date=3 March 2019|access-date=12 April 2019|archive-date=12 April 2019|archive-url=https://web.archive.org/web/20190412155933/https://english.manoramaonline.com/entertainment/entertainment-news/2019/03/02/vanitha-film-awards-winners-list-live-show-kochi.html|url-status=live}}</ref>
|-
! scope="row"| 2019
|''[[ಲೂಸಿಫರ್ (2019 ಭಾರತೀಯ ಚಲನಚಿತ್ರ)|ಲೂಸಿಫರ್]]''
|{{won}}
|style="text-align:center;"|<ref>{{cite news|author=സ്വന്തം ലേഖകൻ|title=മോഹൻലാൽ മികച്ച നടൻ, മഞ്ജു വാരിയർ മികച്ച നടി; ജനപ്രിയ താരങ്ങളായി ആസിഫ് അലിയും പാർവതിയും!|url=https://www.vanitha.in/specials/vanitha-film-awards-2020/magic-moments/vfa-awards-announced-kochi-bristo-ground-february.html|accessdate=10 February 2020|work=[[Vanitha]]|date=10 February 2020|language=ml|archive-date=10 February 2020|archive-url=https://web.archive.org/web/20200210160516/https://www.vanitha.in/specials/vanitha-film-awards-2020/magic-moments/vfa-awards-announced-kochi-bristo-ground-february.html|url-status=live}}</ref>
|}
== ಏಷ್ಯಾವಿಷನ್ ಪ್ರಶಸ್ತಿಗಳು ==
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:28%;"| ನಾಮನಿರ್ದೇಶಿತ ಕೃತಿ
! scope="col" style="width:14%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2008
|''[[ಇನ್ನತೆ ಚಿಂತ ವಿಷಯಂ]], [[ಮಡಂಪಿ]], [[ಕುರುಕ್ಷೇತ್ರ (2008 ಚಲನಚಿತ್ರ)|ಕುರುಕ್ಷೇತ್ರ]], [[ಪಕಲ್ ನಕ್ಷತ್ರಂಗಳ್]]''
| rowspan="3" |ಅತ್ಯುತ್ತಮ ನಟ
|{{won}}
|
|-
! scope="row"| 2009
|''[[ಭ್ರಮರಂ]]''
|{{won}}
|
|-
! scope="row" rowspan="3"| 2012
|''[[ಸ್ಪಿರಿಟ್ (2012 ಚಲನಚಿತ್ರ)|ಸ್ಪಿರಿಟ್]]'', ''[[ರನ್ ಬೇಬಿ ರನ್ (2012 ಚಲನಚಿತ್ರ)|ರನ್ ಬೇಬಿ ರನ್]]''
|{{won}}
|
|-
|''-''
|ಅತ್ಯಂತ ಪ್ರಭಾವಶಾಲಿ ಮಲಯಾಳಿ<ref>{{Cite web |url=https://www.youtube.com/watch?v=YHNTYKG-5rs |title=Mohanlal receiving "Most Influential Malayali" Award in Asiavision TV Awards – YouTube |website=[[YouTube]] |date=23 June 2012 |access-date=2020-05-26 |archive-date=2016-04-16 |archive-url=https://web.archive.org/web/20160416083407/https://www.youtube.com/watch?v=YHNTYKG-5rs |url-status=live }}</ref>
|{{won}}
|
|-
|''[[ರನ್ ಬೇಬಿ ರನ್ (2012 ಚಲನಚಿತ್ರ)|ರನ್ ಬೇಬಿ ರನ್]]''
|ಗಾಯನದಲ್ಲಿ ಹೊಸ ಸಂವೇದನೆ – ಪುರುಷ
|{{won}}
|
|-
! scope="row"| 2016
|''[[ಒಪ್ಪಂ]]'', ''[[ಪುಲಿಮುರುಗನ್]]''
|ಜನಪ್ರಿಯ ನಟ
|{{won}}
|
|}
== ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು ==
ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು ದೈನಂದಿನ ವಾರ್ತಾಪತ್ರಿಕೆ [[ಮಾತೃಭೂಮಿ]]ಯಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 1999
|''[[ವನಪ್ರಸ್ಥಂ]]''
| rowspan="3" |ಅತ್ಯುತ್ತಮ ನಟ
|{{won}}
|
|-
! scope="row"| 2003
|''[[ಬಾಲೆಟ್ಟನ್]]''
|{{won}}
|style="text-align:center;"|<ref>{{cite news |title=Padam Onnu Oru Vilapam bags four awards |url=http://timesofindia.indiatimes.com/city/Padam-Onnu-Oru-Vilapam-bags-four-awards/articleshow/570241.cms |accessdate=16 August 2015 |work=[[India Times]] |agency=[[The Times of India]] |date=19 March 2004 |location=[[Chennai]] |archive-date=26 December 2016 |archive-url=https://web.archive.org/web/20161226173400/http://timesofindia.indiatimes.com/city/Padam-Onnu-Oru-Vilapam-bags-four-awards/articleshow/570241.cms |url-status=live }}</ref>
|-
! scope="row"| 2005
|''[[ಥನ್ಮತ್ರ]]''
|{{won}}
|
|-
! scope="row"| 2006
|''[[ವಡಕ್ಕುಮ್ನಾಧನ್|ವಡಕ್ಕುಮ್ನಾಥನ್]]''
|ಅಭಿನಯದಲ್ಲಿ ಉತ್ಕೃಷ್ಟತೆ
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-tamilnadu/mathrubhumi-film-awards-announced/article1911794.ece |title=Mathrubhumi film awards announced |date=15 September 2007 |work=[[The Hindu]] |access-date=14 November 2014 |archive-date=27 November 2014 |archive-url=https://web.archive.org/web/20141127045757/http://www.thehindu.com/todays-paper/tp-national/tp-tamilnadu/mathrubhumi-film-awards-announced/article1911794.ece |url-status=live }}</ref>
|-
! scope="row"| 2008
|''[[ಆಕಾಶ ಗೋಪುರಂ]], [[ಕುರುಕ್ಷೇತ್ರ (2008 ಚಲನಚಿತ್ರ)|ಕುರುಕ್ಷೇತ್ರ]], [[ಪಕಲ್ ನಕ್ಷತ್ರಂಗಳ್]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.afaqs.com/perl/media/media_newslets/index.html?id=40008 |title=Amrita TV to telecast Idea Mathrubhumi Amrita Film Awards |publisher=afaqs.com |url-status=dead |archive-url=https://web.archive.org/web/20141125032131/http://www.afaqs.com/perl/media/media_newslets/index.html?id=40008 |archive-date=25 November 2014}}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|{{won}}
|style="text-align:center;"|<ref>{{cite web |url=http://www.keralatv.in/2012/02/mathrubhumi-kalyan-silks-film-awards-2012-winners/ |title=Mathrubhumi Kalyan Silks Film Awards 2012 Winners |date=16 February 2012 |publisher=keralatv.in |access-date=14 November 2014 |archive-date=29 November 2014 |archive-url=https://web.archive.org/web/20141129020805/http://www.keralatv.in/2012/02/mathrubhumi-kalyan-silks-film-awards-2012-winners/ |url-status=live }}</ref>
|}
== ಅಮೃತ ಚಲನಚಿತ್ರ ಪ್ರಶಸ್ತಿಗಳು ==
ಅಮೃತ ಚಲನಚಿತ್ರ ಪ್ರಶಸ್ತಿಗಳು [[ಅಮೃತ ಟಿವಿ]] ದೂರದರ್ಶನ ಚಾನೆಲ್ನಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2006
|''[[ಕೀರ್ತಿ ಚಕ್ರ (ಚಲನಚಿತ್ರ)|ಕೀರ್ತಿ ಚಕ್ರ]]'', ''[[ವಡಕ್ಕುಮ್ನಾಧನ್|ವಡಕ್ಕುಮ್ನಾಥನ್]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{Cite news |url=http://www.thehindu.com/todays-paper/tp-national/tp-kerala/amrita-film-awards-announced/article1838347.ece |title=Amrita film awards announced |date=5 May 2007 |agency=[[The Hindu]] |access-date=26 May 2015 |archive-date=27 January 2021 |archive-url=https://web.archive.org/web/20210127211902/https://www.thehindu.com/todays-paper/tp-national/tp-kerala/Amrita-film-awards-announced/article14759558.ece |url-status=live }}</ref>
|-
! scope="row"| 2010
|{{mdash}}
|ಅಭಿನಯ ಕೀರ್ತಿ ಪ್ರಶಸ್ತಿ
|{{won}}
|style="text-align:center;"|<ref>{{cite news |url=http://www.bestmediainfo.com/2011/06/amrita-fefka-film-awards-announced/ |title=Amrita FEFKA Film Awards Announced |date=2 June 2011 |publisher=Best Media Info |accessdate=2 June 2011 |archive-date=3 June 2011 |archive-url=https://web.archive.org/web/20110603135529/http://www.bestmediainfo.com/2011/06/amrita-fefka-film-awards-announced/ |url-status=live }}</ref><ref>{{cite web |url=http://www.indiaglitz.com/channels/malayalam/article/67286.html |title=Amritha awards for Mammootty, Kavya and T D Dasan |date=2 June 2011 |work=Indiaglitz |accessdate=2 June 2011 |archive-date=27 January 2021 |archive-url=https://web.archive.org/web/20210127205023/https://www.indiaglitz.com/malayalam |url-status=dead }}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
| rowspan="3" |ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.keralatv.in/2012/04/winners-of-amrita-film-awards-2012/ |title=Winners Of Amrita Film Awards 2012 Announced |date=30 April 2012 |publisher=keralatv.in |access-date=14 November 2014 |archive-date=29 November 2014 |archive-url=https://web.archive.org/web/20141129020803/http://www.keralatv.in/2012/04/winners-of-amrita-film-awards-2012/ |url-status=live }}</ref>
|-
! scope="row"| 2012
|''[[ಸ್ಪಿರಿಟ್ (2012 ಚಲನಚಿತ್ರ)|ಸ್ಪಿರಿಟ್]]''
|{{won}}
|style="text-align:center;"|<ref>{{cite web |url=http://www.keralatv.in/2013/05/amrita-film-awards-2013-telecast-details/ |title=Amrita Film Awards To be Telecast on May 31st, June 1st & 2nd |date=30 May 2013 |publisher=keralatv.in |access-date=14 November 2014 |archive-date=29 November 2014 |archive-url=https://web.archive.org/web/20141129020811/http://www.keralatv.in/2013/05/amrita-film-awards-2013-telecast-details/ |url-status=live }}</ref>
|-
! scope="row"| 2013
|''[[ದೃಶ್ಯಂ]]''
|{{won}}
|style="text-align:center;"|<ref>{{cite web |url=http://www.amritatv.com/afa2014/awardcatogories.html |archive-url=https://web.archive.org/web/20160321013952/http://www.amritatv.com/afa2014/awardcatogories.html |archive-date=2016-03-21 |title=Amrita film awards |publisher=amritatv.com}}</ref>
|}
== ಜೈಹಿಂದ್ ಚಲನಚಿತ್ರ ಪ್ರಶಸ್ತಿಗಳು ==
ಜೈಹಿಂದ್ ಚಲನಚಿತ್ರ ಪ್ರಶಸ್ತಿಗಳು [[ಜೈಹಿಂದ್ ಟಿವಿ]] ದೂರದರ್ಶನ ಚಾನೆಲ್ನಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2007
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{cite web |url=http://www.kerala.com/news_kerala_Chandy_game_for_8_1969.html |title=Jaihind film awards announced |publisher=kerala.com |access-date=2014-11-14 |archive-date=2014-11-29 |archive-url=https://web.archive.org/web/20141129014612/http://www.kerala.com/news_kerala_Chandy_game_for_8_1969.html |url-status=live }}</ref>
|-
! scope="row"| 2010
|{{mdash}}
|ಚಲಚಿತ್ರ ರತ್ನ ಪ್ರಶಸ್ತಿ
|{{won}}
|style="text-align:center;"|<ref>{{cite web |url=https://www.indiaglitz.com/jai-hind-film-awards-announced-tamilfont-news-58720 |title=Jai Hind Film Awards announced |date=20 July 2010 |accessdate=14 Nov 2014 |work=indiaglitz.com |archive-date=24 September 2015 |archive-url=https://web.archive.org/web/20150924172810/http://www.indiaglitz.com/jai-hind-film-awards-announced-tamilfont-news-58720 |url-status=live }}</ref><ref>{{cite web |url=http://www.metromatinee.com/news-articles/jai-hind-film-awards-2010-announced-2451 |archive-url=https://web.archive.org/web/20160406081142/http://www.metromatinee.com/news-articles/jai-hind-film-awards-2010-announced-2451 |archive-date=2016-04-06 |title=Jai Hind Film Awards 2010 announced !! |date=25 July 2010 |publisher=metromatinee.com}}</ref>
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
| rowspan="2" |ಅತ್ಯುತ್ತಮ ನಟ
|{{won}}
|
|-
! scope="row"| 2013
|''[[ದೃಶ್ಯಂ]]''
|{{won}}
|
|}
== ಜನ್ಮಭೂಮಿ ಸಿನೆಮಾ ಪ್ರಶಸ್ತಿಗಳು ==
ಜನ್ಮಭೂಮಿ ಸಿನೆಮಾ ಪ್ರಶಸ್ತಿಗಳು ದೈನಂದಿನ ವಾರ್ತಾಪತ್ರಿಕೆ [[ಜನ್ಮಭೂಮಿ]]ಯಿಂದ ಪ್ರತಿ ವರ್ಷವೂ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2016
|''[[ಒಪ್ಪಂ]]''
| rowspan="2" |ಅತ್ಯುತ್ತಮ ನಟ
|{{won}}
|style="text-align:center;"|<ref>{{Cite web|url=https://keralaonlinenews.com/|title=||website=keralaonlinenews.com|access-date=2020-09-20|archive-date=2020-09-01|archive-url=https://web.archive.org/web/20200901234355/https://keralaonlinenews.com/|url-status=live}}</ref>
|-
! scope="row"| 2018
|''[[ಒಡಿಯನ್]]''
|{{won}}
|style="text-align:center;"|<ref>{{cite news|title=Janmabhumi Cinema Awards 2018: Mohanlal Actor and Nimisha Sajayan Actress|url=https://global.janmabhumidaily.com/news861146|accessdate=18 July 2019|work=[[Janmabhumi]]|date=12 July 2019|archive-date=18 July 2019|archive-url=https://web.archive.org/web/20190718092211/https://global.janmabhumidaily.com/news861146|url-status=live}}</ref>
|}
== ದಿ ಕೊಚ್ಚಿ ಟೈಮ್ಸ್ ಚಲನಚಿತ್ರ ಪ್ರಶಸ್ತಿಗಳು ==
ದಿ ಕೊಚ್ಚಿ ಟೈಮ್ಸ್ ಚಲನಚಿತ್ರ ಪ್ರಶಸ್ತಿಗಳು [[ದಿ ಟೈಮ್ಸ್ ಆಫ್ ಇಂಡಿಯಾ]]ನ ಕೊಚ್ಚಿ ಟೈಮ್ಸ್ ಸುದ್ದಿ ವಿಭಾಗದಿಂದ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|ಅತ್ಯುತ್ತಮ ನಟ – ಪುರುಷ
|{{won}}
|style="text-align:center;"|<ref>{{cite news |url=https://timesofindia.indiatimes.com/entertainment/regional/malayalam/news-and-interviews/The-Kochi-Times-Film-Awards-2011/articleshow/14341029.cms |title=The Kochi Times Film Awards 2011 |date=23 June 2012 |access-date=2013-07-04 |archive-date=2013-10-04 |archive-url=https://web.archive.org/web/20131004233019/http://articles.timesofindia.indiatimes.com/2012-06-23/news-and-interviews/32369964_1_video-mohanlal-kavya-madhavan |work=[[The Times of India]] |url-status=live }}</ref>
|}
== ಕೇರಳ ಚಲನಚಿತ್ರ ಪ್ರೇಕ್ಷಕ ಮಂಡಳಿ ಪ್ರಶಸ್ತಿಗಳು ==
ಕೇರಳ ಚಲನಚಿತ್ರ ಪ್ರೇಕ್ಷಕ ಮಂಡಳಿ ಪ್ರಶಸ್ತಿಗಳು ಕೇರಳ ಚಲನಚಿತ್ರ ಪ್ರೇಕ್ಷಕ ಮಂಡಳಿಯಿಂದ ಪ್ರದಾನ ಮಾಡಲಾಗುತ್ತದೆ.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2003
|''[[ಬಾಲೆಟ್ಟನ್]]''
| rowspan="4" |ಅತ್ಯುತ್ತಮ ನಟ
|{{won}}
|style="text-align:center;"|<ref name="Balettan" />
|-
! scope="row"| 2004
|''[[ವಿಸ್ಮಯಥುಂಬಾತು]]'', ''[[ಮಂಪಳಕ್ಕಾಲಂ]]''
|{{won}}
|
|-
! scope="row"| 2005
|''[[ಥನ್ಮತ್ರ]]''
|{{won}}
|
|-
! scope="row"| 2007
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]''
|{{won}}
|style="text-align:center;"|<ref>{{cite web |url=https://www.indiaglitz.com/audience-council-award-for-mohanlal-kavya-madhavan-malayalam-news-36730 |title=Audience council award for Mohanlal, Kavya Madhavan |date=21 February 2008 |work=indiaglitz.com |access-date=14 November 2014 |archive-date=24 September 2015 |archive-url=https://web.archive.org/web/20150924061450/http://www.indiaglitz.com/audience-council-award-for-mohanlal-kavya-madhavan-malayalam-news-36730 |url-status=live }}</ref>
|}
== ವಿ. ಶಾಂತಾರಾಮ್ ಪ್ರಶಸ್ತಿಗಳು ==
1993 ರಲ್ಲಿ ಸ್ಥಾಪಿಸಲಾದ ವಿ. ಶಾಂತಾರಾಮ್ ಪ್ರಶಸ್ತಿಗಳು, [[ಭಾರತ ಸರ್ಕಾರ]], [[ಮಹಾರಾಷ್ಟ್ರ ಸರ್ಕಾರ]], ಮತ್ತು ವಿ. ಶಾಂತಾರಾಮ್ ಮೋಷನ್ ಪಿಕ್ಚರ್ ಸೈಂಟಿಫಿಕ್ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಶನ್ ಸ್ಥಾಪಿಸಿದವು.
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"| 2008
|''[[ಪರದೇಸಿ (2007 ಚಲನಚಿತ್ರ)|ಪರದೇಸಿ]]'', ''[[ಆಕಾಶ ಗೋಪುರಂ]]''
| rowspan="2" |ಅತ್ಯುತ್ತಮ ನಟ
|{{nom}}
|style="text-align:center;"|<ref>{{cite web |url=http://businessofcinema.com/bollywood-news/nominations-announced-for-v-shantaram-awards-2008/25824 |title=Nominations announced for V Shantaram Awards 2008 |publisher=Business of Cinema |date=19 November 2008 |accessdate=5 April 2016 |last=BOC Editorial |archive-date=22 April 2016 |archive-url=https://web.archive.org/web/20160422002454/http://businessofcinema.com/bollywood-news/nominations-announced-for-v-shantaram-awards-2008/25824 |url-status=live }}</ref>
|-
! scope="row"| 2009
|''[[ಭ್ರಮರಂ]]''
|{{nom}}
|style="text-align:center;"|<ref>{{cite news |url=http://www.dnaindia.com/entertainment/report-actress-sandhya-to-be-honoured-at-v-shantaram-awards-1325669 |title=Actress Sandhya to be Honoured at V Shantaram Awards |work=[[Daily News and Analysis]] |date=20 December 2009 |accessdate=5 April 2016 |last=Press Trust of India |location=Mumbai |archive-date=8 August 2016 |archive-url=https://web.archive.org/web/20160808032030/http://www.dnaindia.com/entertainment/report-actress-sandhya-to-be-honoured-at-v-shantaram-awards-1325669 |url-status=live }}</ref>
|}
== [[ರಾಮು ಕಾರಿಯಾತ್]] ಪ್ರಶಸ್ತಿಗಳು ==
{| class="wikitable plainrowheaders" style="width:80%;"
|-
! scope="col" style="width:1%;"| ವರ್ಷ
! scope="col" style="width:30%;"| ನಾಮನಿರ್ದೇಶಿತ ಕೃತಿ
! scope="col" style="width:15%;"| ವರ್ಗ
! scope="col" style="width:3%;"| ಫಲಿತಾಂಶ
! scope="col" style="width:1%;"| {{abbr|ಉಲ್ಲೇಖಗಳು|Reference(s)}}
|-
! scope="row"|2011
|''[[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]''
|ಅತ್ಯುತ್ತಮ ನಟ
|{{won}}
|style="text-align:center;"|<ref>{{cite web|url=http://cinemadoctor.blogspot.com/2012/01/ramu-karyat-award-for-mohan-lal-kavya.html|title=Ramu Kariat Awards|access-date=27 January 2012|archive-date=30 January 2012|archive-url=https://web.archive.org/web/20120130131254/http://cinemadoctor.blogspot.com/2012/01/ramu-karyat-award-for-mohan-lal-kavya.html|url-status=live}}</ref>
|}
== ಇತರ ಪ್ರಶಸ್ತಿಗಳು ಮತ್ತು ಮನ್ನಣೆಗಳು ==
* 1977-78 ಕೇರಳ ರಾಜ್ಯ ಕುಸ್ತಿ ಚಾಂಪಿಯನ್<ref name="blackbelt">[http://newindianexpress.com/entertainment/malayalam/article1310726.ece "Blackbelt for Mohanlal"] {{Webarchive|url=https://web.archive.org/web/20130413204428/http://newindianexpress.com/entertainment/malayalam/article1310726.ece |date=2013-04-13 }}. ''[[The New Indian Express]]''. 23 October 2012. Retrieved 24 October 2012.</ref>
* 2003 [[ಭಾರತೀಯ ವೈದ್ಯಕೀಯ ಸಂಘ]]ದಿಂದ ''ವರ್ಷದ ಕೊಡುಗೆದಾರ'' ಗೌರವ<ref>{{Cite web |date=2003-05-13 |title=IMA Award for Mohanlal |url=https://mohanlalonline.com/Content/ima_award_for_mohanlal./ |url-status=live |archive-url=https://web.archive.org/web/20231003180421/https://mohanlalonline.com/Content/ima_award_for_mohanlal./ |archive-date=2023-10-03 |access-date=2024-07-26 |website=MohanlalOnline}}</ref>
* 2005 [[ಜೆ.ಸಿ. ಡೇನಿಯಲ್#ಜೆ.ಸಿ. ಫೌಂಡೇಶನ್ ಪ್ರಶಸ್ತಿ|ಜೆ.ಸಿ. ಫೌಂಡೇಶನ್ ಪ್ರಶಸ್ತಿಗಳು]] ಅತ್ಯುತ್ತಮ ನಟ – [[ಥನ್ಮತ್ರ]]<ref name=":0">{{Citation|title=Thanmathra|date=2021-05-10|url=https://en.wikipedia.org/w/index.php?title=Thanmathra&oldid=1022432269|work=Wikipedia|language=en|access-date=2021-07-09}}</ref>
* 2005 ಕಲಾ ಕೇರಳಂ ಪ್ರಶಸ್ತಿ ಅತ್ಯುತ್ತಮ ನಟ – [[ಥನ್ಮತ್ರ]]<ref name=":0" />
* 2005 ರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಅತ್ಯುತ್ತಮ ನಟ – [[ಥನ್ಮತ್ರ]]<ref name=":0" />
* 2006 [[CNN-IBN]] ಸಮೀಕ್ಷೆ – ಅತ್ಯಂತ ಜನಪ್ರಿಯ ಕೇರಳಿ ಪ್ರಶಸ್ತಿ<ref>{{Cite news |url=http://ibnlive.in.com/news/mohanlal-tops-popular-keralite-poll/25523-3.html |title=Mohanlal tops popular Keralite poll |publisher=CNN-IBN |date=6 November 2006 |work=ibnlive.in.com |url-status=dead |archive-url=https://web.archive.org/web/20141010015646/http://ibnlive.in.com/news/mohanlal-tops-popular-keralite-poll/25523-3.html |archive-date=10 October 2014}}</ref>
* 2007 ಕೇರಳ [[HIV/AIDS|ಏಡ್ಸ್]] ನಿಯಂತ್ರಣ ಸೊಸೈಟಿ – ಸದ್ಭಾವನಾ ರಾಯಭಾರಿ<ref>{{Cite news |url=http://zeenews.india.com/home/mohanlal-goodwill-ambassador-for-aids-awareness-prog_359645.html |title=Mohanlal goodwill ambassador for AIDS awareness prog |date=12 March 2007 |agency=[[Zee News]] |access-date=24 May 2015 |archive-date=24 May 2015 |archive-url=https://web.archive.org/web/20150524213445/http://zeenews.india.com/home/mohanlal-goodwill-ambassador-for-aids-awareness-prog_359645.html |url-status=live }}</ref>
* 2009 ಕೇರಳ ರಾಜ್ಯ ಅಥ್ಲೆಟಿಕ್ಸ್ – ಸದ್ಭಾವನಾ ರಾಯಭಾರಿ<ref>{{Cite news |url=http://www.thehindu.com/todays-paper/tp-sports/actor-mohanlal-runs-for-kerala-athletes/article129968.ece |title=Actor Mohanlal runs for Kerala athletes |date=1 November 2009 |access-date=24 May 2015 |archive-date=27 January 2021 |archive-url=https://web.archive.org/web/20210127211831/https://www.thehindu.com/todays-paper/tp-sports/Actor-Mohanlal-runs-for-Kerala-athletes/article16470312.ece |url-status=live }}</ref>
* 2009 [[ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್]] "ವರ್ಷದ ವ್ಯಕ್ತಿಗಳು" ಪ್ರಶಸ್ತಿ<ref name="onlookers">{{Cite web |title=Interesting Facts about Mohanlal |date=27 January 2015 |url=http://onlookersmedia.in/onlookerslive/10-interesting-facts-about-mohanlal/ |url-status=live |archive-url=https://web.archive.org/web/20190908133435/http://onlookersmedia.in/onlookerslive/10-interesting-facts-about-mohanlal |archive-date=2019-09-08 |access-date=2020-05-07}}</ref>
* 2009 [[ಚಿತ್ರ ತಿರುನಾಳ್ ಬಲರಾಮ ವರ್ಮ#ಶ್ರೀ ಚಿತ್ರ ತಿರುನಾಳ್ ರಾಷ್ಟ್ರೀಯ ಪ್ರಶಸ್ತಿ|ಶ್ರೀ ಚಿತ್ರ ತಿರುನಾಳ್ ರಾಷ್ಟ್ರೀಯ ಪ್ರಶಸ್ತಿ]]<ref>{{Cite web |date=19 September 2009 |title=Chithira Tirunal award for Mohanlal |url=https://www.thehindu.com/news/cities/Thiruvananthapuram/Chithira-Tirunal-award-for-Mohanlal/article16882326.ece |url-status=live |archive-url=https://web.archive.org/web/20210127211310/https://www.thehindu.com/news/cities/Thiruvananthapuram/Chithira-Tirunal-award-for-Mohanlal/article16882326.ece |archive-date=27 January 2021 |website=[[The Hindu]]}}</ref>
* 2009 ವಾರ್ಷಿಕ ಮಲಯಾಳಂ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ನಟ – [[ಭ್ರಮರಂ]]<ref name=":1">{{Citation|title=Bhramaram|date=2021-06-20|url=https://en.wikipedia.org/w/index.php?title=Bhramaram&oldid=1029569132|work=Wikipedia|language=en|access-date=2021-07-09}}</ref>
* 2009 [[ಕೈರಳಿ ಟಿವಿ]] ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ನಟ – [[ಭ್ರಮರಂ]]<ref name=":1" />
* 2009 ಜೇಸೀ ಪ್ರಶಸ್ತಿ ಅತ್ಯುತ್ತಮ ನಟ – [[ಭ್ರಮರಂ]]<ref name=":1" />
* 2010 [[ರೀಡರ್ಸ್ ಡೈಜೆಸ್ಟ್]] ಅವರನ್ನು "100 ಅತ್ಯಂತ ವಿಶ್ವಾಸಾರ್ಹ ಭಾರತೀಯರು" ಪಟ್ಟಿಯಲ್ಲಿ ಸೇರಿಸಿತು.<ref>{{Cite news |url=http://www.hindustantimes.com/newdelhi/kalam-ratan-tata-india-s-most-trusted-mayawati-least/article1-514441.aspx |title=Kalam, Ratan Tata India's most trusted, Mayawati least |last=IANS |date=2 March 2010 |agency=[[Hindustan Times]] |url-status=dead |archive-url=https://web.archive.org/web/20150524194509/http://www.hindustantimes.com/newdelhi/kalam-ratan-tata-india-s-most-trusted-mayawati-least/article1-514441.aspx |archive-date=24 May 2015}}</ref>
* 2010 [[ಥಿಕ್ಕುರಿಸ್ಸಿ ಸುಕುಮಾರನ್ ನಾಯರ್]] ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಅವರ ಭಾರತೀಯ ಸಿನೆಮಾಗೆ ನೀಡಿದ ಕೊಡುಗೆಗಳಿಗಾಗಿ.<ref>{{cite news |url=http://www.newindianexpress.com/entertainment/malayalam/article479225.ece |title=Thikkurissy award for Mohanlal |publisher=[[The New Indian Express]] |date=29 September 2010 |access-date=5 April 2016 |archive-date=18 April 2016 |archive-url=https://web.archive.org/web/20160418060119/http://www.newindianexpress.com/entertainment/malayalam/article479225.ece |url-status=dead }}</ref>
* 2010 ಕೇರಳ [[ಕೈಮಗ್ಗ]] ಉದ್ಯಮ – ಸದ್ಭಾವನಾ ರಾಯಭಾರಿ<ref>{{cite web |url=http://movies.ndtv.com/movie_Story.aspx?id=ENTEN20100142599 |archive-url=https://archive.today/20120729054009/http://movies.ndtv.com/movie_Story.aspx?id=ENTEN20100142599 |url-status=dead |archive-date=29 July 2012 |title=Mohanlal made goodwill ambassador of handloom textiles |website=NDTVmovies.com |date=31 May 2010}}</ref>
* 2011 [[ಡೆಕ್ಕನ್ ಕ್ರಾನಿಕಲ್]] ಸಮೀಕ್ಷೆ – ಅತ್ಯಂತ ಜನಪ್ರಿಯ ಕೇರಳಿ<ref>{{Cite web|url=http://malayalamfilimnews.blogspot.com/2011/03/mohanlal-most-popular-keralite-2011.html|title=Malayalam Film News: Mohanlal – Most Popular Keralite 2011 Survey By Deccan Chronicle.|date=28 March 2011|access-date=13 May 2020|archive-date=27 January 2021|archive-url=https://web.archive.org/web/20210127211825/http://malayalamfilimnews.blogspot.com/2011/03/mohanlal-most-popular-keralite-2011.html|url-status=live}}</ref>
* 2011 ಕೇರಳ ಚಲನಚಿತ್ರ ನಿರ್ಮಾಪಕರ ಸಂಘ ಅತ್ಯುತ್ತಮ ನಟ – [[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]<ref name=":2">{{Citation|title=Pranayam|date=2021-05-11|url=https://en.wikipedia.org/w/index.php?title=Pranayam&oldid=1022658419|work=Wikipedia|language=en|access-date=2021-07-09}}</ref>
* 2011 ವೀವರ್ಸ್ ಚಾಯ್ಸ್ ಪ್ರಶಸ್ತಿಗಳು ಅತ್ಯುತ್ತಮ ನಟ – [[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]<ref name=":2" />
* 2011 ನಾನಾ ಚಲನಚಿತ್ರ ಪ್ರಶಸ್ತಿಗಳು ವಿಶೇಷ ತೀರ್ಪುಗಾರರ ಉಲ್ಲೇಖ – [[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]<ref name=":2" />
* 2011 ರಿಪೋರ್ಟರ್ ಟಿವಿ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ನಟ – [[ಪ್ರಣಯಂ (2011 ಚಲನಚಿತ್ರ)|ಪ್ರಣಯಂ]]<ref name=":2" />
* 2012 ಅವರ ಚಲನಚಿತ್ರ [[ಇರುವರ್]] ಅನ್ನು [[ಬ್ರಿಟಿಷ್ ಫಿಲ್ಮ್ ಇನ್ಸ್ಟಿಟ್ಯೂಟ್]] [[ಸೈಟ್ ಅಂಡ್ ಸೌಂಡ್]] "ಎಲ್ಲಾ ಕಾಲದ 1000 ಶ್ರೇಷ್ಠ ಚಲನಚಿತ್ರಗಳು" ಪಟ್ಟಿಯಲ್ಲಿ ಸೇರಿಸಲಾಯಿತು.
* 2013 ''[[ಔಟ್ಲುಕ್ (ಭಾರತೀಯ ನಿಯತಕಾಲಿಕೆ)|ಔಟ್ಲುಕ್ ಇಂಡಿಯಾ]]'' – "ಕೇರಳದಿಂದ ಅತ್ಯಂತ ಪ್ರಭಾವಶಾಲಿ ಭಾರತೀಯ".<ref>{{cite web |url=http://www.outlookindia.com/content11168.asp#I-Day%20Special:%20India%27s%20Most%20Influential |title=India's most influential |publisher=OutlookIndia.com |accessdate=15 August 2013 |url-status=dead |archive-url=https://web.archive.org/web/20130814000623/http://www.outlookindia.com/content11168.asp |archive-date=14 August 2013}}</ref><ref>{{cite web |url=http://www.outlookindia.com/article.aspx?287338 |title=Mohanlal – The Most Inflential Indian from Kerala |publisher=OutlookIndia.com |accessdate=15 August 2013 |author=Minu Ittyipe |archive-date=14 August 2013 |archive-url=https://web.archive.org/web/20130814172031/http://www.outlookindia.com/article.aspx?287338 |url-status=live }}</ref>
* 2013 ''[[ಫೋರ್ಬ್ಸ್ (ಭಾರತ)|ಫೋರ್ಬ್ಸ್ ಇಂಡಿಯಾ]]'' 1991 ರಲ್ಲಿ ''ಭಾರತಂ'' ನಲ್ಲಿ ಅವರ ಪಾತ್ರವನ್ನು "ಭಾರತೀಯ ಸಿನೆಮಾದ 25 ಶ್ರೇಷ್ಠ ಅಭಿನಯ ಪ್ರದರ್ಶನಗಳು" ಪಟ್ಟಿಯಲ್ಲಿ ಸೇರಿಸಿತು.<ref>Prasad, Shishir. (2013-04-27) [http://forbesindia.com/article/100-years-of-indian-cinema/25-greatest-acting-performances-of-indian-cinema/35125/0 Forbes India Magazine – 25 Greatest Acting Performances of Indian Cinema] {{Webarchive|url=https://web.archive.org/web/20150519053125/http://forbesindia.com/article/100-years-of-indian-cinema/25-greatest-acting-performances-of-indian-cinema/35125/0 |date=2015-05-19 }}. Forbesindia.com. Retrieved on 2017-05-31.</ref>
* 2013 [[CNN-IBN]] "ಭಾರತೀಯ ಸಿನೆಮಾದ 100 ವರ್ಷಗಳು" ಸಮೀಕ್ಷೆಯಲ್ಲಿ – ಭಾರತದ ಶ್ರೇಷ್ಠ ನಟರಲ್ಲಿ 3ನೇ ಸ್ಥಾನ.<ref>[http://news.entecity.com/mohanlal-comes-3rd-among-indias-great-actorscnn-ibn/ Mohanlal comes 3rd among India's great actors;CNN-IBN Survey] {{Webarchive|url=https://web.archive.org/web/20130314022727/http://news.entecity.com/mohanlal-comes-3rd-among-indias-great-actorscnn-ibn/ |date=2013-03-14 }}. News.entecity.com (2013-03-10). Retrieved on 2017-05-31.</ref>
* 2015 ಆಲ್-ಕೇರಳ ಅಡ್ವರ್ಟೈಸರ್ಸ್ ಏಜೆನ್ಸೀಸ್ ಅಸೋಸಿಯೇಷನ್ ಅವರ ಜಾಹೀರಾತು ಪ್ರಪಂಚಕ್ಕೆ ನೀಡಿದ ಕೊಡುಗೆಗಳಿಗಾಗಿ "ಕೇರಳದ ಬ್ರ್ಯಾಂಡ್ ಐಕಾನ್" ಎಂಬ ಬಿರುದನ್ನು ನೀಡಿ ಗೌರವಿಸಿತು.<ref>{{cite news |title=Business Honchos to Put Heads Together |url=http://www.newindianexpress.com/cities/kochi/Business-Honchos-to-Put-Heads-Together/2015/11/26/article3146884.ece |work=[[The New Indian Express]] |date=26 November 2015 |accessdate=28 March 2016 |archive-date=9 April 2016 |archive-url=https://web.archive.org/web/20160409014621/http://www.newindianexpress.com/cities/kochi/Business-Honchos-to-Put-Heads-Together/2015/11/26/article3146884.ece |url-status=dead }}</ref>
* 2016 ಕೇರಳ ಅಂಗಾಂಗ ದಾನ ಕಾರ್ಯಕ್ರಮ – ಸದ್ಭಾವನಾ ರಾಯಭಾರಿ.<ref>{{Cite web|date=|title=Kerala CM site|url=https://www.keralacm.gov.in/mrithasanjeevani/|url-status=live|archive-url=https://web.archive.org/web/20200718002415/http://www.keralacm.gov.in/mrithasanjeevani/|archive-date=2020-07-18|access-date=|website=}}</ref>
* 2016 "[[ಮನೋರಮ ನ್ಯೂಸ್]]ಮೇಕರ್ ಆಫ್ ದಿ ಇಯರ್" ಪ್ರಶಸ್ತಿ, ಹೆಚ್ಚಿನ ಶೀರ್ಷಿಕೆಗಳನ್ನು ಗಳಿಸಿದ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದ [[ಕೇರಳಿ]] ವ್ಯಕ್ತಿಗೆ ನೀಡಲಾಗುವ ಬಿರುದು.<ref>{{cite news |title='Complete Actor' Mohanlal wins Manorama News Newsmaker 2016 award |url=http://english.manoramaonline.com/news/kerala/manorama-news-newsmaker-2016-mohanlal.html |accessdate=15 January 2017 |work=[[Malayala Manorama]] |date=15 January 2017 |archive-date=16 January 2017 |archive-url=https://web.archive.org/web/20170116170404/http://english.manoramaonline.com/news/kerala/manorama-news-newsmaker-2016-mohanlal.html |url-status=live }}</ref>
* 2017 "ಇಂಡಿಯನ್ ಐಕಾನ್ 2017" ಪ್ರಶಸ್ತಿ ಬಹ್ರೈನ್ ಸ್ನೇಹಿತರಿಂದ.<ref>{{cite news |title='ഫ്രണ്ട്സ് ഓഫ് ബഹ്റൈന് ഇന്ത്യന് ഐക്കണ് പുരസ്കാരം മോഹന്ലാലിന്' ഫ്രണ്ട്സ് ഓഫ് ബഹ്റൈന് ഇന്ത്യന് ഐക്കണ് പുരസ്കാരം മോഹന്ലാലിന് |url=https://www.mathrubhumi.com/gulf/bahrain/mohanlal-friends-of-bahrain-indian-icon-award-1.1947551 |accessdate=19 May 2017 |archive-date=19 May 2017 |archive-url=https://web.archive.org/web/20170519103915/http://www.mathrubhumi.com/gulf/bahrain/mohanlal-friends-of-bahrain-indian-icon-award-1.1947551 |url-status=live }}</ref>
* 2018 [[ಪಿ. ಕೇಶವದೇವ್#ಕೇಶವದೇವ್ ಪ್ರಶಸ್ತಿಗಳು|ಪಿ. ಕೇಶವದೇವ್ ಡಯಾಬ್ಸ್ಕ್ರೀನ್ ಕೇರಳ ಪ್ರಶಸ್ತಿ]]<ref>{{cite web|title=Mohanlal receives P Keshav Dev Award 2018|url=https://timesofindia.indiatimes.com/entertainment/events/kochi/mohanlal-receives-p-keshav-dev-award-2018/articleshow/64961942.cms|work=[[The Times of India]]|date=14 July 2018|accessdate=13 May 2020|archive-date=4 February 2020|archive-url=https://web.archive.org/web/20200204195919/https://timesofindia.indiatimes.com/entertainment/events/kochi/mohanlal-receives-p-keshav-dev-award-2018/articleshow/64961942.cms|url-status=live}}</ref><ref>{{cite web |title=11 July 2018: 14th P.Kesavadev Awards|url=http://diabscreenkerala.net/prgms/2018/july_11_2018.html |date=11 July 2018|accessdate=13 May 2020}}</ref>
* 2019 ''ಪ್ರಣವಪಥ್ಮಂ ಪುರಸ್ಕಾರಂ'' [[ಸಂತಿಗಿರಿ|ಸಂತಿಗಿರಿ ಆಶ್ರಮ]]ದಿಂದ<ref>{{Cite web|url=https://www.manoramaonline.com/news/latest-news/2019/03/25/mohanlal-receives-pranava-pathmam-award-by-santhigiri.html|title=3 സ്ഥാനാർഥികളും സാക്ഷി; ശാന്തിഗിരി പ്രണവപത്മം ഏറ്റുവാങ്ങി മോഹൻലാൽ|website=3 സ്ഥാനാർഥികളും സാക്ഷി; ശാന്തിഗിരി പ്രണവപത്മം ഏറ്റുവാങ്ങി മോഹൻലാൽ}}</ref>
* 2019 [[ಮಳವಿಲ್ ಮನೋರಮ|ಮಳವಿಲ್]] ಮನರಂಜನಾ ಪ್ರಶಸ್ತಿಗಳು – ಅಲ್ಟಿಮೇಟ್ ಎಂಟರ್ಟೈನರ್ ನಟ<ref>{{cite web|title=Mazhavil Entertainment Awards 2019: here's the list of winners|url=https://www.onmanorama.com/entertainment/entertainment-news/2019/05/07/mazhavil-entertainment-awards-2019-list-of-winners.html|date=7 May 2019|work=[[Manorama Online]]|access-date=5 August 2020|archive-date=30 October 2020|archive-url=https://web.archive.org/web/20201030145444/https://www.onmanorama.com/entertainment/entertainment-news/2019/05/07/mazhavil-entertainment-awards-2019-list-of-winners.html|url-status=live}}</ref>
* 2020 ಪಿ. ವಿ. ಸಾಮಿ ಸ್ಮಾರಕ ಕೈಗಾರಿಕಾ ಮತ್ತು ಸಾಮಾಜಿಕ-ಸಾಂಸ್ಕೃತಿಕ ಪ್ರಶಸ್ತಿ, ಕಳೆದ ನಾಲ್ಕು ದಶಕಗಳಲ್ಲಿ [[ಮಲಯಾಳಂ ಸಿನೆಮಾ]]ಗೆ ನೀಡಿದ ಕೊಡುಗೆಗಳು ಮತ್ತು [[ವಿಶ್ವಶಾಂತಿ ಫೌಂಡೇಶನ್]] ಮೂಲಕ ದಾನಕ್ಕೆ ನೀಡಿದ ಕೊಡುಗೆಗಳಿಗಾಗಿ<ref>{{Cite news|last=Award|first=PV Sami|title=Mathrubhumi News|url=https://english.mathrubhumi.com/movies-music/movie-news/pv-sami-memorial-award-for-mohanlal-1.5013632}}</ref>
* 2021 [[ಕೇರಳ ಸರ್ಕಾರ]]ದ ಆರೋಗ್ಯ ಇಲಾಖೆಯಿಂದ [[ಕ್ಷಯರೋಗ]] ನಿರ್ಮೂಲನೆ ಅಭಿಯಾನದ ಸದ್ಭಾವನಾ ರಾಯಭಾರಿ<ref>{{Cite news|date=|title=The news minute|work=|url=https://www.thenewsminute.com/article/mohanlal-be-goodwill-ambassador-keralas-tuberculosis-eradication-programme-141935|url-status=live|access-date=|archive-date=2021-01-22|archive-url=https://web.archive.org/web/20210122064725/https://www.thenewsminute.com/article/mohanlal-be-goodwill-ambassador-keralas-tuberculosis-eradication-programme-141935}}</ref>
* 2022 [[ಮಳವಿಲ್ ಮನೋರಮ|ಮಳವಿಲ್]] ಮನರಂಜನಾ ಪ್ರಶಸ್ತಿಗಳು – ಮಾಸ್ಟರ್ ಎಂಟರ್ಟೈನರ್ ಅಭಿನಯ<ref>{{cite web | url=https://www.keralatv.in/mazhavil-entertainment-awards-winners/ | title=Mazhavil Entertainment Awards 2022 Winners Are Mohanlal, Manju Warrier | date=29 August 2022 }}</ref>
* 2024 [[ಶ್ರೀಕುಮಾರನ್ ತಂಪಿ]] ಫೌಂಡೇಶನ್ ಪ್ರಶಸ್ತಿ ಅಭಿನಯದಲ್ಲಿನ ಉತ್ಕೃಷ್ಟತೆಗಾಗಿ<ref>{{Cite web |last=SV |first=Swathi |date=2024-07-03 |title=Sreekumaran Thambi Foundation award to Actor Mohanlal |url=https://en.thekarmanews.com/sreekumaran-thambi-foundation-award-to-actor-mohanlal/ |url-status=live |archive-url=https://web.archive.org/web/20240706100529/https://en.thekarmanews.com/sreekumaran-thambi-foundation-award-to-actor-mohanlal/ |archive-date=2024-07-06 |access-date=2024-07-06 |website=Karma News}}</ref>
* 2024 [[ಕಲಾಭವನ್ ಮಣಿ]] ಸ್ಮಾರಕ ಪ್ರಶಸ್ತಿಗಳು - [[ಬರ್ರೋಜ್ 3D]] ಗಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ.<ref>{{Cite web|url=https://www.southlive.in/movie/film-news/mohanlal-wins-kalabhavan-mani-memorial-award-for-best-debut-director#amp_tf=From%20%251%24s&aoh=17474666917826&referrer=https%3A%2F%2Fwww.google.com&share=https%3A%2F%2Fwww.southlive.in%2Fmovie%2Ffilm-news%2Fmohanlal-wins-kalabhavan-mani-memorial-award-for-best-debut-director|title=മികച്ച നവാഗത സംവിധായകന് മോഹന്ലാല്; കലാഭവന് മണി മെമ്മോറിയല് പുരസ്കാരം|website=SouthLive}}</ref>
* 2025 ''[[ತುದರುಂ]]'' ಗಾಗಿ ಮಲಯಾಳ ಪುರಸ್ಕಾರ ಸಮಿತಿಯ ಮಲಯಾಳ ಪುರಸ್ಕಾರಂ 1201 ರ ಅತ್ಯುತ್ತಮ ನಟ<ref>{{Cite web |date=2025-08-17 |title=ഒമ്പതാമത് മലയാള പുരസ്കാരങ്ങൾ: മോഹൻലാലിനും സിബി മലയിലിനും അഭിലാഷ് മോഹനനും അവാര്ഡ് |url=https://www.mathrubhumi.com/movies-music/news/malayalam-puraskaram-2025-winners-1.10839857 |access-date=2025-08-17 |website=[[Mathrubhumi]]}}</ref>
* 2025 [[ಮಳವಿಲ್ ಮನೋರಮ|ಮಳವಿಲ್]] ಮನರಂಜನಾ ಪ್ರಶಸ್ತಿಗಳು – ವರ್ಷದ ಮನರಂಜಕ<ref>{{Cite web |title=Mazhavil Entertainment Awards: Mohanlal wins Entertainer of the Year for 'Thudarum' |url=https://www.onmanorama.com/entertainment/entertainment-news/2025/08/18/mazhavil-entertainment-awards-malayalam-cinema-star-studded-event.html |access-date=2025-09-22 |website=Mazhavil Entertainment Awards: Mohanlal wins Entertainer of the Year for 'Thudarum' |language=en}}</ref>
==ಉಲ್ಲೇಖಗಳು==
{{notelist}}
{{Reflist}}
==ಬಾಹ್ಯ ಕೊಂಡಿಗಳು==
{{Commons category}}
* [http://www.thecompleteactor.com ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20190829082013/https://www.thecompleteactor.com/ |date=29 August 2019 }}
* {{IMDb name|0482320|name=Mohanlal}}
* {{Rotten-tomatoes-person|mohanlal|Mohanlal}}
{{Authority control}}
{{DEFAULTSORT:ಮೋಹನ್ಲಾಲ್}}
[[ವರ್ಗ:ಮೋಹನ್ಲಾಲ್| ]]
[[ವರ್ಗ:1960 ರ ಜನನಗಳು]]
[[ವರ್ಗ:ಜೀವಂತ ಜನರು]]
[[ವರ್ಗ:ಕೇರಳದ ಚಲನಚಿತ್ರ ಜನರು]]
[[ವರ್ಗ:ಭಾರತೀಯ ಪುರುಷ ಚಲನಚಿತ್ರ ನಟರು]]
[[ವರ್ಗ:ಭಾರತೀಯ ಪುರುಷ ರಂಗಭೂಮಿ ನಟರು]]
[[ವರ್ಗ:ಕೇರಳದ ಪುರುಷ ನಟರು]]
[[ವರ್ಗ:ತಿರುವನಂತಪುರದ ಪುರುಷ ನಟರು]]
[[ವರ್ಗ:ಪತನಂತಿಟ್ಟದ ಪುರುಷ ನಟರು]]
[[ವರ್ಗ:ಮಲಯಾಳಂ ಚಿತ್ರರಂಗದ ಪುರುಷ ನಟರು]]
[[ವರ್ಗ:ತಮಿಳು ಚಿತ್ರರಂಗದ ಪುರುಷ ನಟರು]]
[[ವರ್ಗ:ಹಿಂದಿ ಸಿನೆಮಾದಲ್ಲಿ ಪುರುಷ ನಟರು]]
[[ವರ್ಗ:ತೆಲುಗು ಸಿನೆಮಾದಲ್ಲಿ ಪುರುಷ ನಟರು]]
[[ವರ್ಗ:ಕನ್ನಡ ಸಿನೆಮಾದಲ್ಲಿ ಪುರುಷ ನಟರು]]
[[ವರ್ಗ:ತಿರುವನಂತಪುರದ ಚಲನಚಿತ್ರ ನಿರ್ಮಾಪಕರು]]
[[ವರ್ಗ:ಮಲಯಾಳಂ ಚಲನಚಿತ್ರ ನಿರ್ಮಾಪಕರು]]
[[ವರ್ಗ:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಕಲೆಗಳು]]
[[ವರ್ಗ:ಕಲೆಗಳಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ವಿಜೇತರು]]
[[ವರ್ಗ:ದಕ್ಷಿಣ ಭಾರತೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ವಿಶೇಷ ತೀರ್ಪುಗಾರರ ಪ್ರಶಸ್ತಿ (ವೈಶಿಷ್ಟ್ಯ ಚಲನಚಿತ್ರ) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ವಿಶೇಷ ಉಲ್ಲೇಖ (ವೈಶಿಷ್ಟ್ಯ ಚಲನಚಿತ್ರ) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[ವರ್ಗ:ಸ್ಕ್ರೀನ್ ಪ್ರಶಸ್ತಿ ವಿಜೇತರು]]
[[ವರ್ಗ:ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ ವಿಜೇತರು]]
[[ವರ್ಗ:20 ನೇ ಶತಮಾನದ ಭಾರತೀಯ ಪುರುಷ ನಟರು]]
[[ವರ್ಗ:21 ನೇ ಶತಮಾನದ ಭಾರತೀಯ ಪುರುಷ ನಟರು]]
[[ವರ್ಗ:20 ನೇ ಶತಮಾನದ ಭಾರತೀಯ ಉದ್ಯಮಿಗಳು]]
[[ವರ್ಗ:21 ನೇ ಶತಮಾನದ ಭಾರತೀಯ ಉದ್ಯಮಿಗಳು]]
[[ವರ್ಗ:21 ನೇ ಶತಮಾನದ ಭಾರತೀಯ ಉದ್ಯಮಿಗಳು]]
[[ವರ್ಗ:ಗೌರವ ಭಾರತೀಯ ಸೇನಾ ಅಧಿಕಾರಿಗಳು]]
3qppm7d5un1y9w5xuzg5g6wmmj1rxhx
ಕಾಗ್ನಿಜ಼ಂಟ್
0
27746
1379544
1373543
2026-08-08T22:51:59Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379544
wikitext
text/x-wiki
{{Refimprove|date=January 2010}}
{{Infobox company
|company_name = Cognizant Technology Solutions Corporation
|company_type = [[Public company|Public]] ({{Nasdaq|CTSH}})
|company_logo = [[ಚಿತ್ರ:Cognizant Logo.svg|200px|Cognizant Technology Solutions Logo]]
|company_slogan = "Passion for building stronger businesses"
|foundation = 1994
|founder = [[Kumar Mahadeva]]
|location = [[Teaneck, New Jersey]], United States
|key_people = [[Francisco D'Souza]] ([[President]] & [[CEO]]) <br /> [[Lakshmi Narayanan]]<br /> ([[Vice Chairman]])
|num_employees = 100,000 (2010)
|revenue = {{profit}} $4.50 billion <small>(2010)</small><ref name="financialtables">{{cite web |url=http://investors.cognizant.com/|title=News Room |publisher=Cognizant Technology Solutions Investor Relations |accessdate=2010-02-13}}</ref>
|net_income = {{profit}} $671 million <small>(2010)</small><ref name="financialtables" />
|assets = {{profit}} $3.33800 billion <small>(2009)</small><ref name="financialtables" />
|equity = {{profit}} $2.65300 million <small>(2009)</small><ref name="financialtables" />
|operating_income = {{profit}} $618.49000 million <small>(2009)</small><ref name="financialtables" />
|industry = [[IT service management|IT services]]<br />[[Information Technology Consulting|IT consulting]]
|market cap = 3.9 Billion [[USD]]<ref>[https://finance.yahoo.com/q?s=symbol=CTSH&page=quotesearch Company Profile for Cognizant Technology Solutions Corp (CTSH) accessed 2010-02-13]</ref>
|homepage = [http://www.cognizant.com/html/home.asp Cognizant.com]
|intl = yes
}}
ಕಾಗ್ನಿಜ಼ಂಟ್ ''' ಟೆಕ್ನಾಲಜಿ ಸಲ್ಯೂಷನ್ಸ್''' ('''ಕಾಗ್ನಿಜ಼ಂಟ್''' ) ({{Nasdaq|CTSH}}) ಎಂಬುದು, ವ್ಯಾಪಾರ, ತಂತ್ರಜ್ಞಾನ, ಸಲಹಾ ಸೇವೆಗಳನ್ನು ಒದಗಿಸುವ U.S.- ಮೂಲದ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಇದರ ಕೇಂದ್ರ ಕಾರ್ಯಾಲಯ [[ಅಮೇರಿಕ ಸಂಯುಕ್ತ ಸಂಸ್ಥಾನ]]ದ ನ್ಯೂಜೆರ್ಸಿ ಟೀನೆಕ್ ನಲ್ಲಿದೆ. ''ಫಾರ್ಚ್ಯೂನ್'' ಎಂಬ ನಿಯತಕಾಲಿಕೆ ಸತತ ಎಂಟನೆ ವರ್ಷಕ್ಕಾಗಿ ನಡೆಸಿದ,ಅಂದರೆ 2010 ರ ವರ್ಷದಲ್ಲಿ ಅತ್ಯಂತ ಕ್ಷಿಪ್ರವಾಗಿ ಪ್ರಗತಿ ಸಾಧಿಸಿದ 100 ಕಂಪನಿಗಳ ಪಟ್ಟಿಯಲ್ಲಿ ಕಾಗ್ನಿಜಂಟ್ ಹೆಸರನ್ನು ಕೂಡ ಸೇರಿಸಿದೆ.<ref>[http://money.cnn.com/magazines/fortune/fortunefastestgrowing/2009/snapshots/9Ï0.html Fortune 100 Fastest-Growing Companies 2010]{{Dead link|date=ಮೇ 2026 |bot=InternetArchiveBot |fix-attempted=yes }}</ref> ಕಾಗ್ನಿಜಂಟ್ ನ ಹೆಸರನ್ನು ಫಾರ್ಚ್ಯೂನ್ 1000 ಮತ್ತು ಫೋರ್ಬ್ಸ್ ಗ್ಲೋಬಲ್ ನ 2000 ಪಟ್ಟಿಗಳಲ್ಲಿ ಸೇರಿಸಲಾಗಿದೆ. ಹೀಗೆ 2010ರಲ್ಲಿ ಅತ್ಯುತ್ತಮ ವಹಿವಾಟು ಕಂಡ U.S. ಕಂಪನಿಗಳ ''ಬಿಸ್ ನೆಸ್ ವೀಕ್'' ನ 50 ಹೆಸರುಗಳುಳ್ಳ ಪಟ್ಟಿಯಲ್ಲಿ ಇದರ ಹೆಸರು ಸೇರಿದೆ; ಅಲ್ಲದೇ ಬಿಸ್ ನೆಸ್ ವೀಕ್ ನ ಹಾಟೆಸ್ಟ್ ಟೆಕ್ ಕಂಪನಿಗಳು ಎಂಬುದರಲ್ಲಿ, ಮತ್ತು ''ಅಮೇರಿಕದಲ್ಲಿ ಅತ್ಯಂತ ಕ್ಷಿಪ್ರ ಪ್ರಗತಿ ಸಾಧಿಸಿದ 25 ತಂತ್ರಜ್ಞಾನ ಕಂಪನಿಗಳ'' ಫೋರ್ಬ್ಸ್ ಫಾಸ್ಟ್ ಟೆಕ್ ನ 2010 ರ ಪಟ್ಟಿಯನ್ನೊಳಗೊಂಡಂತೆ ಹಲವು ವೇಗವಾಗಿ ಪ್ರಗತಿ ಸಾಧಿಸಿದ ಕಂಪನಿಗಳಲ್ಲಿ ಇದು ಸುಸ್ಥಿರ ಸ್ಥಾನ ಹೊಂದಿದೆ.
== ಇತಿಹಾಸ ==
ಕಾಗ್ನಿಜ಼ಂಟ್ ಅನ್ನು ಡುನ್ ಅಂಡ್ ಬ್ರಾಡ್ ಸ್ಟ್ರೀಟ್ ಕಾರ್ಪೊರೇಷನ್ ನ IT (ಮಾಹಿತಿ ತಂತ್ರಜ್ಞಾನ)ಅಭಿವೃದ್ಧಿ ಮತ್ತು ನಿರ್ವಹಣಾ ಸೇವೆಗಳಿಗಾಗಿ 1994 ರಲ್ಲಿ ಸ್ಥಾಪಿಸಲಾಯಿತು. ಕುಮಾರ್ ಮಹದೇವ<ref>{{Cite web |url=http://www.alumni.hbs.edu/bulletin/2003/september/mahadeva.html |title=ಆರ್ಕೈವ್ ನಕಲು |access-date=2011-02-11 |archive-date=2011-07-16 |archive-url=https://web.archive.org/web/20110716060017/http://www.alumni.hbs.edu/bulletin/2003/september/mahadeva.html |url-status=dead }}</ref> ಇದರ CEO ಮತ್ತು ಅಧ್ಯಕ್ಷರಾದರು.<ref>http://www.rediff.com/money/2003/dec/22cognizant.htm</ref> ಕಂಪನಿಯು ಎರಡು ವರ್ಷಗಳ ನಂತರ ಸ್ವತಂತ್ರ ಸಂಘಟನೆ,ವ್ಯಾಪಾರಿ ಸಂಸ್ಥೆಯಾಗಿ ಹೊರಹೊಮ್ಮಿತು. ಲಕ್ಷ್ಮಿ ನಾರಾಯಣ್ ಅವರು ಈ ಕಂಪನಿಯ CEO ಹುದ್ದೆಗೇರಿದಾಗ, ಕುಮಾರ್ ಮಹದೇವ 2003 ರಲ್ಲಿ ರಾಜೀನಾಮೆ ನೀಡಿದರು.<ref>{{cite web|url=http://www.thehindubusinessline.com/2003/12/23/stories/2003122302000700.htm |title=Cognizant founder steps down |publisher=The Hindu Business Line |date= |accessdate=2010-09-27}}</ref> ಕಾಗ್ನಿಜ಼ಂಟ್, ಆದ್ಯ ಕೈಗಾರಿಕಾ ವಲಯ ಮತ್ತು ತಂತ್ರಜ್ಞಾನದ ವಲಯದಲ್ಲಿ ಸಂಘಟಿಸಲಾದ ಮೊದಲ IT ಸೇವಾ ಕಂಪನಿಗಳಲ್ಲಿ ಒಂದಾಗಿದೆ. ಇದು ಪ್ರಸ್ತುತ ಬಿಸ್ ನೆಸ್ ಪ್ರೋಸೆಸ್ ಔಟ್ ಸೋರ್ಸಿಂಗ್(BPO) ಅನ್ನು ಒಳಗೊಂಡಂತೆ ಬೃಹತ್ ಮಟ್ಟದ ವ್ಯವಹಾರ, ತಂತ್ರಜ್ಞಾನ ಮತ್ತು ಸಲಹಾ ಸೇವೆಗಳನ್ನು ಒದಗಿಸುತ್ತಿದೆ. ಅಲ್ಲದೇ ಬ್ಯಾಂಕಿಂಗ್ ನಲ್ಲಿ ಗಮನಾರ್ಹ ವ್ಯವಹಾರ, ಹಣಕಾಸಿನ ಸೇವೆಗಳು, ಸಂಪರ್ಕ, ಗ್ರಾಹಕರ ಸರಕು, ಇಂಧನ ಮತ್ತು ಬಳಕೆಗಳು, ಆರೋಗ್ಯ ಸಂರಕ್ಷಣೆ, ಮಾಹಿತಿ, ಮಾಧ್ಯಮ ಮತ್ತು ಮನರಂಜನೆ, [[ವಿಮೆ|ವಿಮಾ]], ಜೀವ ವಿಜ್ಞಾನಗಳು, ಉತ್ಪಾದನೆ, ಸಗಟು ವ್ಯಾಪಾರ, ತಂತ್ರಜ್ಞಾನ, ಸಾರಿಗೆ ವ್ಯವಸ್ಥೆ ಮತ್ತು ವ್ಯವಸ್ಥಾಪನ ತಂತ್ರ ಹಾಗು ಪ್ರವಾಸ ಮತ್ತು ಆತಿಥ್ಯ ಸೇವೆಗಳನ್ನು ಹೊಂದಿದೆ.
== ಆರ್ಥಿಕ ಸ್ಥಿತಿ ==
ಕಾಗ್ನಿಜ಼ಂಟ್ ಅನ್ನು 1998 ರಲ್ಲಿ NASDAQ ನಲ್ಲಿ ಹಾಗು 2004 ರಲ್ಲಿ NASDAQ-100 ಸೂಚ್ಯಾಂಕ ಪಟ್ಟಿಯಲ್ಲಿ ಸೇರಿಸಲಾಯಿತು. ಕಂಪನಿಯು 2006 ರ ನವೆಂಬರ್ 16 ರಂದು ಕಂಡ ಅಂತಿಮ ವಹಿವಾಟು ನಂತರ, ಸ್ಟಾಂಡರ್ಡ್ ಅಂಡ್ ಪೂವರ್ಸ್ S&P 400 ಶೇರು ಮುಖ ಬೆಲೆಯಿಂದ ಕಾಗ್ನಿಜಂಟ್, S&P 500 ಗೆ ತಲುಪಿತು.ಹೀಗೆ ಅದರ ಶೇರು ಬೆಲೆಗಳಲ್ಲಿ ಗಣನೀಯತೆ ಕಾಣಿಸಿತು.
== ನಿರ್ವಹಣೆ ==
'''ನಿರ್ವಹಣೆ: ನಿರ್ವಾಹಕ ತಂಡ
'''
* ಫ್ರಾನ್ಸಿಸ್ಕೊ ಡಿಸೋಜಾ:ಅಧ್ಯಕ್ಷರು ಮತ್ತು ಪ್ರಧಾನ ನಿರ್ವಹಣಾ ಅಧಿಕಾರಿ
* ಲಕ್ಷ್ಮಿ ನಾರಾಯಣ್: ಉಪಾಧ್ಯಕ್ಷರು
* ಗೊರ್ಡಾನ್ ಕೊಬರ್ನ: ಪ್ರಧಾನ ಹಣಕಾಸು ಮತ್ತು ನಿರ್ವಾಹಕ ಅಧಿಕಾರಿ
* ಚಂದ್ರಶೇಖರನ್: ಗ್ಲೋಬಲ್ ಡಿಲಿವರಿಯ ಅಧ್ಯಕ್ಷರು ಮತ್ತು ನಿರ್ವಾಹಕ ನಿರ್ದೇಶಕ
* ರಾಜೀವ್ ಮೆಹ್ತಾ: ಗ್ಲೋಬಲ್ ಕ್ಲೈಂಟ್ ಸರ್ವೀಸಸ್ ನ ಪ್ರಧಾನ ನಿರ್ವಾಹಕ ಅಧಿಕಾರಿ<ref>{{Cite web |url=http://www.cognizant.com/html/aboutus/management.asp |title=ಕಾಗ್ನಿಜಂಟ್ |access-date=2011-02-11 |archive-date=2010-12-14 |archive-url=https://web.archive.org/web/20101214193754/http://cognizant.com/html/aboutus/management.asp |url-status=dead }}</ref>
== ಸೇವೆಗಳು ==
ಕಾಗ್ನಿಜ಼ಂಟ್, ವ್ಯಾಪಾರ ಮತ್ತು ತಂತ್ರಜ್ಞಾನ ಸಲಹಾ ಸೇವೆ, ಸಂಕೀರ್ಣ ವ್ಯವಸ್ಥೆಗಳ ಏಕೀಕರಣ, ಅನ್ವಯಿಕೆ ಅಭಿವೃದ್ಧಿ ಮತ್ತು ನಿರ್ವಹಣೆ, ಬಿಸ್ ನೆಸ್ ಪ್ರೋಸೆಸ್ ಔಟ್ ಸೋರ್ಸಿಂಗ್, IT ಮೂಲ ಸೌಕರ್ಯ ಸೇವೆಗಳು, ವಿಶ್ಲೇಷಣಾತ್ಮಕಗಳು, ಜಾಲ ವಿಶ್ಲೇಷಣಾತ್ಮಕಗಳು, ಬಿಸ್ ನೆಸ್ ಇಂಟಲಿಜೆನ್ಸ್, ಡೇಟಾ ವೇರ್ ಹೌಸಿಂಗ್, CRM ಮತ್ತು ಸಾಮಾಜಿಕ CRM, ಸಪ್ಲೇ ಚೈನ್ ಮ್ಯಾನೇಜ್ಮೆಂಟ್, ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ಸಲ್ಯೂಷನ್ಸ್, ERP, R&D ಔಟ್ ಸೋರ್ಸಿಂಗ್, ಮತ್ತು ಟೆಸ್ಟಿಂಗ್ ಸಲ್ಯೂಷನ್ಸ್ ಗಳನ್ನು ಒಳಗೊಂಡಂತೆ, ಬೃಹತ್ ಮಟ್ಟದ ಮಾಹಿತಿ ತಂತ್ರಜ್ಞಾನವನ್ನು, ಸಲಹೆ ಮತ್ತು ಬಿಸ್ ನೆಸ್ ಪ್ರೋಸೆಸಿಂಗ್ ಔಟ್ ಸೋರ್ಸಿಂಗ್ (BPO) ಸೇವೆಗಳನ್ನು ಒದಗಿಸುತ್ತಿದೆ.
== U.S. ನಲ್ಲಿ ಆಫ್ ಶೋರಿಂಗ್ ಅಂಡ್ ಹೈರಿಂಗ್ (ಕಂಪನಿಯನ್ನು ವಿದೇಶಕ್ಕೆ ಸ್ಥಳಾಂತರ ಮತ್ತು ವಿದೇಶಿಯರ ನೇಮಕ) ==
ಅಮೇರಿಕ ಸಂಯುಕ್ತ ಸಂಸ್ಥಾನಕ್ಕೆ ವಿದೇಶಿ ನೌಕರರನ್ನು ಕರೆತರಲು L1 ವೀಸಾವನ್ನು ಪಡೆಯುವ ಅಗ್ರ 10 ಕಂಪನಿಗಳಲ್ಲಿ ಕಾಗ್ನಿಜಂಟ್ ಕೂಡ ಒಂದಾಗಿದೆ. ಅದಕ್ಕಾಗಿ 2008 ರ ನವೆಂಬರ್ ನಲ್ಲಿ ನೀಡಿದ SEC 10-Q ಫೈಲಿಂಗ್ ನಲ್ಲಿ, "ನಮ್ಮ ಭವಿಷ್ಯದ ಯಶಸ್ಸು, ತಾಂತ್ರಿಕ ಮತ್ತು ಯೋಜನಾ ನಿರ್ವಹಣ ಕೌಶಲದೊಂದಿಗೆ, ನೌಕರರನ್ನು ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಅದರಲ್ಲೂ ವಿಶೇಷವಾಗಿ ಭಾರತದಿಂದ ಆಕರ್ಷಿಸುವ ಮತ್ತು ಅವರನ್ನಿಲ್ಲಿ ಉಳಿಸಿಕೊಳ್ಳುವ ನಮ್ಮ ಸಾಮರ್ಥ್ಯದ ಮೇಲೆ ಅವಲಂಬಿಸಿದೆ. ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಯುರೋಪ್ ನಲ್ಲಿ ಇರುವ ಬಹುಪಾಲು IT ವೃತ್ತಿಪರರು ಭಾರತೀಯ ಪ್ರಜೆಗಳಾಗಿದ್ದಾರೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮತ್ತು ಯುರೋಪ್ ನಲ್ಲಿ ಕಾರ್ಯನಿರ್ವಹಿಸಲು ಭಾರತೀಯರ ಸಾಮರ್ಥ್ಯವು ಅವರ ಸಾಮರ್ಥ್ಯದ ಮೇಲೆ, ಹಾಗು ಅಗತ್ಯ ವೀಸಾ ಮತ್ತು ಕೆಲಸದ ಪರವಾನಗಿಯನ್ನು ಪಡೆಯುವ ನಮ್ಮ ಸಾಮರ್ಥ್ಯದ ಮೇಲೆ ಅವಲಂಬಿಸಿರುತ್ತದೆ ಎಂದು ಕಂಪನಿ ಹೇಳಿತು."<ref>[http://ctsh.edgarpro.com/edgar_conv_html%5C2008%5C11%5C07%5C0001193125-08-229956.html#D10Q_HTM_TX93203_11 SEC ಫೈಲಿಂಗ್ - ರಿಸ್ಕ್ ಫ್ಯಾಕ್ಟರ್ಸ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
ಕಂಪನಿಯು ಅದರ U.S. ಕಾರ್ಯಪಡೆಯನ್ನು ವಿಸ್ತರಿಸುತ್ತಿದೆ. ಹೀಗೆ 2011 ರ ಜನವರಿಯಲ್ಲಿ, ಕಂಪನಿಯು ಆರಿಜೋನದ ಫೋನಿಕ್ಸ್ ನಲ್ಲಿ ಹೊಸ 1,000 ವ್ಯಕ್ತಿಗತ ಸೌಲಭ್ಯ ಒಳಗೊಂಡಂತೆ, ಅದರ U.S. ವಿತರಣಾ ಕೇಂದ್ರ(ಡಿಲಿವರಿ ಸೆಂಟರ್)ಗಳನ್ನು ವಿಸ್ತರಿಸುವ ಯೋಜನೆಯನ್ನು ಪ್ರಕಟಿಸಿತು.<ref name="news.cognizant.com">[http://news.cognizant.com/index.php?s=14083&item=20272 ]</ref>
== ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ==
<ul type="circle"></ul>
<li>ಕಾಗ್ನಿಜ಼ಂಟ್ ಪರೋಪಕಾರಿ ದತ್ತಿಸಂಸ್ಥೆಯ ಹಣಕಾಸು ಮತ್ತು ಆಡಳಿತಾತ್ಮಕ ಬೆಂಬಲದ ಮುಖಾಂತರ ಅಲ್ಲದೇ ಕಾಗ್ನಿಜಂಟ್ ನ ನೌಕರ ಸ್ವಪ್ರಯತ್ನದ ಮೂಲಕ, ಕಾಗ್ನಿಜಂಟ್ ನ ಪ್ರತಿಷ್ಟಾನ, ಲೋಕೋಪಕಾರೀ ಕಾರ್ಯಗಳನ್ನು ಪ್ರಪಂಚದಾದ್ಯಂತ ನಿರ್ವಹಿಸುತ್ತಿದೆ. ಈ ಕಂಪನಿಯು 2005 ರ ಮಾರ್ಚ್ ನಲ್ಲಿ ಭಾರತೀಯ ಕಂಪನಿಗಳ ಕಾಯ್ದೆಯಡಿ "ದತ್ತಿ ಸಂಸ್ಥೆಯಾಗಿ" ನೋಂದಾಯಿಸಲ್ಪಟ್ಟಿತು. ಈ ಮೂಲಕ '''ಕಾಗ್ನಿಜಂಟ್ ದತ್ತಿಸಂಸ್ಥೆ''' ಯು,ಸಮಾಜದ ಕಡಿಮೆ ಸವಲತ್ತಿನ ಜನರಿಗೆ ಹಣಕಾಸು ಮತ್ತು ತಾಂತ್ರಿಕ ಬೆಂಬಲ ನೀಡುವ ಮೂಲಕ ಅವರು ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸಂರಕ್ಷಣೆ ಪಡೆಯಲು ಸಹಾಯ ಮಾಡುತ್ತಿದೆ; ಶೈಕ್ಷಣಿಕ ಮತ್ತು ಆರೋಗ್ಯ ಸಂರಕ್ಷಣಾ ಸುಧಾರಣೆಯ ಕಾರ್ಯಕ್ರಮಗಳ ರೂಪ ರೇಖೆ ರಚನೆ ಮತ್ತು ಜಾರಿಗೆ ತರುವುದು; ಹಾಗು ಸರ್ಕಾರೇತರ ಸಂಸ್ಥೆಗಳು (NGOs),ಶೈಕ್ಷಣಿಕ ಸಂಸ್ಥೆಗಳು, ಆರೋಗ್ಯ ಸಂರಕ್ಷಣೆಯ ಸಂಸ್ಥೆಗಳು, ಸರ್ಕಾರದ ನಿಯೋಗಗಳು ಮತ್ತು ಕಾರ್ಪೊರೇಷನ್ ಗಳೊಂದಿಗೆ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತದೆ.</li>
<li>ಇದರ ಯೋಜನೆ,'''ಪ್ರೊಜೆಕ್ಟ್ ಔಟ್ ರೀಚ್ ''' ನಡಿ, 400 ಕ್ಕಿಂತ ಹೆಚ್ಚು ಅದರ ಪ್ರವರ್ತನ ಸಂಸ್ಥೆಗಳು ಬೆಂಬಲ ಪಡೆದಿವೆ.ಇವು ಪ್ರಪಂಚದಾದ್ಯಂತ 200,000ಕ್ಕಿಂತ ಹೆಚ್ಚು ಮಕ್ಕಳನ್ನು ತಲುಪುವ ಮೂಲಕ, ಕಾಗ್ನಿಜಂಟ್ ಶಾಲೆಗಳಿಗೆ ಮತ್ತು ಅನಾಥಾಲಯಗಳಿಗೆ ಬೆಂಬಲ ನೀಡುತ್ತಿದೆ.</li>
<li>ಕಾಗ್ನಿಜ಼ಂಟ್ ನ ಈ ಪೋಷಣಾ ಪ್ರಯತ್ನ ಕಾರ್ಯವು '''"ಗೊ ಗ್ರೀನ್"''' ಸಹಾಯಕ ಉಪಕ್ರಮವನ್ನೂ ಒಳಗೊಂಡಿದೆ. ಇದನ್ನು 2008 ರಲ್ಲಿ ಆರಂಭಿಸಲಾಗಿದ್ದು, ಇದು ಇಂಧನ ಸಂರಕ್ಷಣೆ, [[ಮರುಬಳಕೆ|ಮರು ಬಳಕೆ]], ಮತ್ತು ಹೊಣೆಗಾರಿಕೆಯ ತ್ಯಾಜ್ಯ ನಿರ್ವಹಣೆಯ ಕಡೆಗೆ ಹೆಚ್ಚು ಗಮನಹರಿಸಿದೆ.
</li>
== ಕಾಗ್ನಿಜ಼ಂಟ್ ಅಕಾಡೆಮಿ ==
ಕಾಗ್ನಿಜಂಟ್ ಅಕಾಡೆಮಿಯ ಆಂತರಿಕ ತರಬೇತಿ ಕೇಂದ್ರದ ಮೂಲಕ ಕಲಿಕೆಯ ಎಲ್ಲಾ ಕಾರ್ಯಕ್ರಮಗಳನ್ನು ನಿರ್ದೇಶಿಸಲಾಗುತ್ತದೆ.
ಪ್ರಮುಖ ನಾಲ್ಕು ಶೈಕ್ಷಣಿಕ ಉಪಕ್ರಮಗಳು ಕೆಳಕಂಡಂತಿವೆ: ಶಿಕ್ಷಣ ಮುಂದುವರಿಕೆ, ಸಾಮಾಜಿಕ ಪಾತ್ರ ಆಧಾರಿತ ತರಬೇತಿ,
ಕಾರ್ಯನಿರ್ವಾಹಕ ತರಬೇತಿ ಕಾರ್ಯಕ್ರಮ, ಪ್ರಮಾಣಿಕರಣ. ಆಂತರಿಕ ತರಬೇತಿ ಕಾರ್ಯಕ್ರಮಗಳ ಜೊತೆಯಲ್ಲಿ, ಸಹೋದ್ಯೋಗಿಗಳು ಹಾರ್ವರ್ಡ್ ವಿಶ್ವವಿದ್ಯಾನಿಲಯ, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗಳನ್ನು ಒಳಗೊಂಡಂತೆ ಗಮನಾರ್ಹ ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತ ನಿರ್ದಿಷ್ಟಗೊಳಿಸಿದ ತರಬೇತಿ ಪಡೆಯುತ್ತಾರೆ. ತರಗತಿಯ ಕೊಠಡಿಯಲ್ಲಿ ನಡೆಯುವ ಔಪಚಾರಿಕ ಕಲಿಕೆಯ ಜೊತೆಯಲ್ಲಿ, ಕಾಗ್ನಿಜ಼ಂಟ್ ಅಕಾಡೆಮಿ ತನ್ನ ಸಿಬ್ಬಂದಿಗೆ ಕಲಿಕೆಯಲ್ಲಿ ಡೆಸ್ಕ್ ಟಾಪ್ ಅನ್ನು ಕೂಡ ಅಳವಡಿಕೆಗೆ ತಂದಿದೆ. ಅವರು ಬಹುಮಾದರಿಯ ಮೂಲದ ಕಲಿಕೆ ಮತ್ತು ತಂತ್ರಜ್ಞಾನ ಆಧಾರಿತ ತರಬೇತಿ(TBT) ಕಾರ್ಯಕ್ರಮವನ್ನು ಉಪಯೋಗಿಸುತ್ತಾರೆ.<ref>{{Cite web |url=http://www.cognizant.com/html/aboutus/cognizant-academy.asp |title=ಕಾಗ್ನಿಜಂಟ್ |access-date=2011-02-11 |archive-date=2010-12-14 |archive-url=https://web.archive.org/web/20101214193418/http://cognizant.com/html/aboutus/cognizant-academy.asp |url-status=dead }}</ref>
== ಜಾಗತಿಕ ಕಛೇರಿಗಳು ==
<ul type="circle">
<li>N.J. ಯ ಟೀನೆಕ್ ನಲ್ಲಿರುವ ಇದರ ಕೇಂದ್ರ ಕಾರ್ಯಾಲಯಗಳು ಮತ್ತು ವಿತರಣಾ ಕೇಂದ್ರಗಳ ಜೊತೆಯಲ್ಲಿ, ಕಾಗ್ನಿಜ಼ಂಟ್ '''ಅಮೇರಿಕ ಸಂಯುಕ್ತ ಸಂಸ್ಥಾನ''' ದಲ್ಲಿ ಇನ್ನೂ ಅಧಿಕ ಐದು ವಿತರಣಾ ಕೇಂದ್ರಗಳನ್ನು ಒಳಗೊಂಡಿದೆ: ಅರ್ಕ್ಯಾನ್ಸಸ್ ನಲ್ಲಿರುವ ಬೆಂಟಾನ್ ವಿಲ್ಲೆ; ನ್ಯೂಜೆರ್ಸಿಯಲ್ಲಿರುವ ಬ್ರಿಡ್ಜ್ ವಾಟರ್; ಚಿಕಾಗೋ, ಇಲಿನಾಯ್; ಮ್ಯಾಸಚುಸೆಟ್ಸ್ ನ ಹಾಲಿಸ್ಟನ್; ಮತ್ತು ಆರಿಜೋನ್ ನ ಫೋನಿಕ್ಸ್ <br />
<li>ಕಂಪನಿಯು UK, ಯುರೋಪ್, [[ಭಾರತ]], [[ಚೀನಾ]], ಫಿಲಿಪ್ಪೀನ್ಸ್, [[ಕೆನಡಾ]], [[ಅರ್ಜೆಂಟೀನ]] ಮತ್ತು [[ಮೆಕ್ಸಿಕೋ|ಮೆಕ್ಸಿಕೊ]] ದಲ್ಲಿ ಸ್ಥಳೀಯ, ಪ್ರಾದೇಶಿಕ ಮತ್ತು ಜಾಗತಿಕ ವಿತರಣಾ ಕೇಂದ್ರಗಳನ್ನು ಕೂಡ ಒಳಗೊಂಡಿದೆ.<br />
<li>ಕಂಪನಿಯ ಬಹುಪಾಲು ನೌಕರರು '''ಭಾರತ''' ದಲ್ಲಿದ್ದಾರೆ: [[ಚೆನ್ನೈ]], ಕೊಯಂಬತ್ತೂರ್, [[ಕೊಲ್ಕತ್ತ|ಕೊಲ್ಕತ್ತಾ]], [[ಬೆಂಗಳೂರು]], [[ಹೈದರಾಬಾದ್, ಆಂಧ್ರ ಪ್ರದೇಶ|ಹೈದ್ರಾಬಾದ್]], [[ಪುಣೆ]], [[ಮುಂಬಯಿ]], ಗುರಗಾಂವ್ ಮತ್ತು ಕೊಚ್ಚಿನ್.
</li></li></li></ul>
<gallery>
File:Cognizant-Pune.jpg|ಭಾರತದ ಪುಣೆಯಲ್ಲಿರುವ ಕಾಗ್ನಿಜ಼ಂಟ್ ನ ವಿತರಣಾ ಕೇಂದ್ರ.
File:Cognizant-Chennai.jpg|ಭಾರತದ ಚೆನ್ನೈನಲ್ಲಿರುವ ಕಾಗ್ನಿಜ಼ಂಟ್ ನ ವಿತರಣಾ ಕೇಂದ್ರ.
</gallery>
== ಇತ್ತೀಚಿನ ಸುದ್ದಿಗಳು ==
ಕಾಗ್ನಿಜ಼ಂಟ್ ಪತ್ರಿಕಾ ಪ್ರಕಟಣೆಯ ಪೂರ್ಣ ಪಟ್ಟಿಗಾಗಿ, ದಯವಿಟ್ಟು [http://news.cognizant.com/index.php?s=14083 ಇಲ್ಲಿ] ಕ್ಲಿಕ್ ಮಾಡಿ.
1. ಕಾಗ್ನಿಜ಼ಂಟ್, ಆಯಾ ಋತುವಿನಲ್ಲಿ ಅತ್ಯಂತ ಭರಾಟೆಯ ಹೆಚ್ಚು ವ್ಯಾಪಾರ ನಡೆಯುವ ಕಾಲಾವಧಿಗೆ ಯಶಸ್ವಿಯಾಗಿ ಸ್ಪಂದಿಸುವ ಮೂಲಕ ಜಾಗತಿಕ ಬಿಡಿ ವ್ಯಾಪಾರಿಗಳಿಗೆ ಸಹಾಯ ಮಾಡುತ್ತದೆ<ref>[http://news.cognizant.com/index.php?s=14083&item=20275 ]</ref>
2. ಮಾರಾಟ ಮತ್ತು ಮಾರಾಟಗಾರಿಕೆಯ ಪರಿಣಾಮಕಾರಿತ್ವ ಮತ್ತು ವ್ಯಾಪಾರ ಪ್ರದರ್ಶನ ಹೆಚ್ಚಿಸಲು ಕಮರ್ಷಿಯಲ್ ಆಪರೇಷನ್ಸ್ ಸಲ್ಯೂಷನ್ ಗಾಗಿ ಲಿಲಿ ಕಾಗ್ನಿಜ಼ಂಟ್ ಅನ್ನು ಆಯ್ಕೆ ಮಾಡಿತು.<ref>[http://news.cognizant.com/index.php?s=14083&item=20274 ]</ref>
3. ಕ್ಷಿಪ್ರ ಅಭಿವೃದ್ಧಿ ಹೊಂದಲು ಕಾಗ್ನಿಜ಼ಂಟ್ ಉತ್ತರ ಅಮೇರಿಕದ ವಿತರಣಾ ಕೇಂದ್ರದ ತನ್ನ ಹೆಜ್ಜೆ ಗುರುತನ್ನೂ ವಿಸ್ತರಿಸಿತು.<ref name="news.cognizant.com"/>
== ಉಲ್ಲೇಖಗಳು ==
{{Reflist|2}}
== ಬಾಹ್ಯ ಕೊಂಡಿಗಳು ==
* [http://www.cognizant.com/html/home.asp ಕಾಗ್ನಿಜ಼ಂಟ್ ಅಫೀಷಿಯಲ್ ವೆಬ್ ಸೈಟ್] {{Webarchive|url=https://web.archive.org/web/20110208153928/http://www.cognizant.com/html/home.asp |date=2011-02-08 }}
* [http://twitter.com/Cognizant ಕಾಗ್ನಿಜ಼ಂಟ್ ಸ್ ಅಫೀಷಿಯಲ್ ಟ್ವಿಟರ್ ಅಕೌಂಟ್]
* [https://www.youtube.com/user/cognizant ಕಾಗ್ನಿಜಂಟ್ ಸ್ ಅಫೀಷಿಯಲ್ ಯುಟ್ಯೂಬ್ ಅಕೌಂಟ್ ]
{{Portal|Companies}}
{{NASDAQ-100}}
{{Interwikineeded}}
[[ವರ್ಗ:ನ್ಯೂಜರ್ಸಿ ಮೂಲದ ಕಂಪನಿಗಳು]]
[[ವರ್ಗ:1994ರಲ್ಲಿ ಸ್ಥಾಪಿಸಲಾದ ಕಂಪನಿಗಳು]]
[[ವರ್ಗ:ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಲಹಾ ಸಂಸ್ಥೆಗಳು]]
[[ವರ್ಗ:ಮಾಹಿತಿ ತಂತ್ರಜ್ಞಾನ ಸಲಹಾ ಸಂಸ್ಥೆಗಳು]]
[[ವರ್ಗ:ICT ಸೇವೆ ಒದಗಿಸುವವರು]]
[[ವರ್ಗ:ಕಾಲ್ ಸೆಂಟರ್ ಕಂಪನಿಗಳು]]
[[ವರ್ಗ:ತಂತ್ರಜ್ಞಾನ]]
[[ವರ್ಗ:ಮಾಹಿತಿ ತಂತ್ರಜ್ಞಾನ ಕಂಪನಿಗಳು]]
hug76hvk24kf032qhqhbq2d4y2t324t
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಸ್ಥಳೀಯ (ಮೂಲನಿವಾಸಿ) ಅಮೆರಿಕನ್ನರು
0
27976
1379445
1378644
2026-08-08T12:03:47Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379445
wikitext
text/x-wiki
{{Dablink|This article is about the indigenous people of the United States. For other indigenous people see [[Indigenous peoples by geographic regions]]}}
{{Infobox Ethnic group
|group = Native Americans
|image =<div style="white-space:nowrap;"><!--If taşaksız swap out an image, change the "x##px" entry for EACH image in the row so that the width of the row lines up with the others-->
[[Image:Joseph Brant by Gilbert Stuart 1786.jpg|x97px]][[Image:Sequoyah.jpg|x97px]][[Image:Pushmataha high resolution.jpg|x97px]]<br/>[[Image:Tecumseh02.jpg|x113px]][[Image:Touch the Clouds 1877a.gif|x113px]][[Image:Sitting Bull.jpg|x113px]]<br/>[[Image:ChiefJoseph.jpeg|x99px]][[File:Charles eastman smithsonian gn 03462a-cropped.jpg|x99px]]<br/>[[File:Billy Bowlegs III.jpg|79px]][[Image:Jim Thorpe football.png|x112px]][[Image:JohnBHarrington.jpg|x112px]]
|caption = Native Americans of the United States (from top left):<br />
[[Joseph Brant]]{{·}}[[Sequoyah]]{{·}}[[Pushmataha]]<br />[[Tecumseh]]{{·}}[[Touch the Clouds]]{{·}}[[Sitting Bull]]<br />[[Chief Joseph]]{{·}} [[Charles Eastman]] {{·}} [[Holmes Colbert]]<br />[[Billy Bowlegs III]]{{·}}[[Jim Thorpe]]{{·}} [[John Herrington]]
|population = '''American Indian and Alaska Native'''<br />'''One race''': 2.5 million are registered <ref name="census-OO">U.S. Census Bureau. (2001–2005). ''[http://www.census.gov/prod/cen2000/dp1/2kh00.pdf Profiles of General Demographic Characteristics 2000: 2000 Census of Population and Housing.]'' U.S. Census Bureau. Retrieved on 2007-05-23.</ref><br />'''In combination with one or more other races''': 1.6 million are registered <ref name="census-OOb">U.S. Census Bureau. (2001–2005). ''[http://www.census.gov/prod/cen2000/dp1/2kh00.pdf Profiles of General Demographic Characteristics 2000: 2000 Census of Population and Housing.]'' U.S. Census Bureau. Retrieved on 2007-05-23. "In combination with one or more of the other races listed." Figure here derived by subtracting figure for "One race (American Indian and Alaska Native)": 2,475,956, from figure for "Race alone or in combination with one or more other races (American Indian and Alaska Native)": 4,119,301, giving the result 1,643,345. Other races counted in the census include: "White"; "Black or African American"; "Asian"; "Native Hawaiian and Other Pacific Islander"; and "Some other race."</ref><br><small>'''1.37% of the U.S. population'''</small>
|popplace = Predominantly in the [[Western United States]]
|languages = [[American English]], [[Native American languages]]
|religions = [[Native American Church]]<br />[[Protestant]]<br />[[Roman Catholic]]<br />[[Russian Orthodox]]<br />Traditional Ceremonial Ways<br/>(Unique to Specific Tribe or Band)
|related = [[Indigenous peoples of the Americas]]
}}
'''ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಸ್ಥಳೀಯ ಅಮೆರಿಕನ್ನರು''', ಇಂದಿನ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನ]]ದ ಭೂಖಂಡದಲ್ಲಿರುವ [[ಅಲಾಸ್ಕ|ಅಲಾಸ್ಕಾ]]ದ ಕೆಲ ಭಾಗಗಳು, ಹಾಗು [[ಹವಾಯಿ]] ದ್ವೀಪದ, [[ಉತ್ತರ ಅಮೇರಿಕ|ಉತ್ತರ ಅಮೆರಿಕಾ]]ದಲ್ಲಿರುವ [[ಅಮೇರಿಕ ಖಂಡಗಳ ಸ್ಥಳೀಯ ಜನ|ಸ್ಥಳೀಯ ನಿವಾಸಿಗಳಾಗಿದ್ದಾರೆ]]. ಅವರು ಅನೇಕ ವಿಭಿನ್ನ ಬುಡಕಟ್ಟು ಜನಾಂಗಗಳು, [[ದೇಶ|ರಾಜ್ಯಗಳು]] ಮತ್ತು ಜನಾಂಗೀಯ ಗುಂಪುಗಳಿಗೆ ಸೇರಿದವರಾಗಿದ್ದಾರೆ. ಇವುಗಳಲ್ಲಿ ಹಲವು ಸಂಪೂರ್ಣವಾಗಿ ರಾಜಕೀಯ ಸಮುದಾಯಗಳಾಗಿ ಅಸ್ತಿತ್ವದಲ್ಲಿವೆ. ಸ್ಥಳೀಯ ಅಮೆರಿಕನ್ನರನ್ನು ಸೂಚಿಸಲು ಬಳಸುವ ಪದಗಳು ವಿವಾದಾಸ್ಪದವಾಗಿವೆ;ಈ 1995ರ US ಜನಗಣತಿ ವಿಭಾಗದ ಮನೆ ಮನೆಗಳ ಸಂದರ್ಶನಗಳಲ್ಲಿ, ಪ್ರತಿಕ್ರಿಯಿಸಿದ ಬಹುಪಾಲು ಜನರು ತಮ್ಮನ್ನು '''ಅಮೆರಿಕನ್ ಇಂಡಿಯನ್''' ಅಥವಾ '''ಇಂಡಿಯನ್ನ''' ರೆಂದು ಗುರುತಿಸಿಕೊಳ್ಳಲು ಬಯಸುತ್ತಾರೆ.
ಕೊನೆಯ 500 ವರ್ಷಗಳಲ್ಲಿ, ಅಮೆರಿಕಕ್ಕೆ ವಲಸೆ ಬಂದ ಆಫ್ರೊ-ಯುರೇಷಿಯನ್ನರು, ಹಳೆಯ ಮತ್ತು ಹೊಸ ಜಗತ್ತಿನ ಸಮುದಾಯಗಳ ನಡುವೆ ಶತಮಾನಗಳ ಹೋರಾಟ ಮತ್ತು ಹೊಂದಾಣಿಕೆಯನ್ನು ಮಾಡಿಕೊಂಡರು. ಸ್ಥಳೀಯ ಅಮೆರಿಕನ್ನರ ಬಗ್ಗೆ ಇರುವ ಬಹುಪಾಲು ಐತಿಹಾಸಿಕ ದಾಖಲೆಗಳು, ಅಮೆರಿಕಕ್ಕೆ ಯುರೋಪಿಯನ್ನರು ವಲಸೆ ಬಂದ ನಂತರ ರೂಪಿಸಿರುವ ದಾಖಲೆಗಳಾಗಿವೆ.<ref name="test">[http://www.americanheritage.com/articles/magazine/ah/2009/1/ ಕೊಲಿನ್ ಜಿ ಕ್ಯಾಲ್ಲೊವೇ] {{Webarchive|url=https://web.archive.org/web/20101129115541/http://americanheritage.com/articles/magazine/ah/2009/1/ |date=2010-11-29 }} "ನೇಟಿವ್ ಅಮೆರಿಕನ್ಸ್ ಫರ್ಸ್ಟ್ ವಿವ್ಯೂ ವೈಟ್ಸ್ ಫ್ರಮ್ ದಿ ಶೋರ್," ''ಅಮೆರಿಕನ್ ಹೆರಿಟೇಜ್'', ಸ್ಪ್ರಿಂಗ್ 2009.</ref> ಅನೇಕ ಸ್ಥಳೀಯ ಅಮೆರಿಕನ್ನರು ಬೇಟೆಗಾರ-ಸಂಗ್ರಹಗಾರ ಸಮುದಾಯಗಳಂತೆ ಬದುಕಿದ್ದರು. ಆದರೂ ಕೂಡ ಅನೇಕ ಗುಂಪುಗಳಲ್ಲಿ ಮಹಿಳೆ ವಿಭಿನ್ನ ಉತ್ಪನ್ನಗಳ ಮೇಲೆ ಸುಸಂಸ್ಕೃತ ಕೃಷಿ ಮಾಡಿದ್ದಾಳೆ: ಮುಸುಕಿನ ಜೋಳ, ಬೀನ್ಸ್ ಮತ್ತು ಕುಂಬಳಕಾಯಿ ಜಾತಿಯ ತರಕಾರಿ ಇತ್ಯಾದಿ ಇದರಲ್ಲಿ ಸೇರಿವೆ. ಇವರ ಸಂಸ್ಕೃತಿಗಳು ಪಶ್ಚಿಮ ಯುರೇಷಿಯದ ಮೂಲ-ಕೈಗಾರಿಕಾ ವಲಸಿಗರು ಮತ್ತು ಕೃಷಿಕರಿಗಿಂತ ಭಿನ್ನವಾಗಿವೆ. ದೀರ್ಘಸ್ಥಾಪಿತ ಸ್ಥಳೀಯ ಅಮೆರಿಕನ್ನರು ಮತ್ತು ವಲಸೆ ಬಂದ ಯುರೋಪಿಯನ್ನರ ನಡುವಿನ ಸಾಂಸ್ಕೃತಿಕ ಭಿನ್ನತೆಗಳು, ಹಾಗು ಪ್ರತಿ ಸಂಸ್ಕೃತಿಯ ವಿಭಿನ್ನ ರಾಷ್ಟ್ರಗಳಲ್ಲಿ ಉಂಟಾಗುವ ಬದಲಾವಣೆಗಳು, ರಾಜಕೀಯ ಬಿಕ್ಕಟ್ಟು ಮತ್ತು ಜನಾಂಗೀಯ ಹಿಂಸಾಚಾರಕ್ಕೆ ಕಾರಣವಾದವು. ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ನಿಯೋಜಿಸುವ ಪೂರ್ವ-ಕೊಲಂಬಿಯನ್ ಜನಸಂಖ್ಯೆ ಗಮನಾರ್ಹವಾಗಿ 1 ಮಿಲಿಯನ್ ನಿಂದ 18 ಮಿಲಿಯನ್ ವರೆಗಿತ್ತೆಂದು ಅಂದಾಜು ಮಾಡಲಾಗಿದೆ.<ref name="ggbook">{{Cite book|url=https://books.google.com/?id=yiKgBuSUPUIC&lpg=RA1-PA44&dq=%22north%20america%22%20%22pre-columbian%22%20population%20million&pg=RA1-PA44 |title=The Native Peoples of North America |author= Bruce E. Johansen |accessdate=June 28, 2009 |publisher==[[Rutgers University Press]] | isbn=9780813538990 |date=2006-11}}</ref><ref name="encbrit">{{cite web|url=http://www.britannica.com/EBchecked/topic/1357826/Native-American/273135/North-America-and-Europe-circa-1492 |title=Native American |accessdate=June 28, 2009 |publisher==[[Encyclopaedia Britannica]]}}</ref>
ವಸಾಹತುಗಳು ಗ್ರೇಟ್ ಬ್ರಿಟನ್ ನ ಮೇಲೆ ದಂಗೆಯೆದ್ದ ನಂತರ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ಸ್ಥಾಪಿಸಿದ ನಂತರ, ರಾಷ್ಟ್ರಾಧ್ಯಕ್ಷ [[ಜಾರ್ಜ್ ವಾಷಿಂಗ್ಟನ್]] ಮತ್ತು ಹೆನ್ರಿ ನಾಕ್ಸ್, ಅಮೆರಿಕಾ ಸಂಯುಕ್ತ ಸಂಸ್ಥಾನದ ಪೌರತ್ವ ಪಡೆಯಲು ಸಿದ್ಧರಾಗಲೆಂದು, ಸ್ಥಳೀಯ ಅಮೆರಿಕನ್ನರನ್ನು "ನಾಗರಿಕಗೊಳಿಸುವ" ಆಲೋಚನೆಯನ್ನು ಪ್ರಕಟಪಡಿಸಿದರು.<ref name="perdue">
{{Cite book
| last = Perdue
| first = Theda
| title = Mixed Blood Indians: Racial Construction in the Early South
| publisher= = The University of Georgia Press
| chapter = Chapter 2 "Both White and Red"
| page = 51
| isbn = 0-8203-2731-X
| year = 2003
}}
</ref><ref name="remini_reform_begins">
{{Cite book
| last = Remini
| first = Robert
| title = Andrew Jackson
| publisher= = History Book Club
| chapter = "The Reform Begins"
| page = 201
| isbn = 0060801328
| year = 1977, 1998
}}</ref><ref name="remini_submit_adoption">
{{Cite book
| last = Remini
| first = Robert
| title = Andrew Jackson
| publisher= = History Book Club
| chapter = "Brothers, Listen... You Must Submit"
| page = 258
| isbn = 0060801328
| year = 1977, 1998
}}</ref><ref name="eric_miller">
{{cite web
| url = http://www.dreric.org/library/northwest.shtml
| title = George Washington and Indians
| accessdate = 2008-05-02
| author = Eric Miller
| last = Miller
| first = Eric
| year = 1994
| chapter = Washington and the Northwest War, Part One
| publisher= = Eric Miller
}}
</ref><ref name="Tom_Jewett">
{{cite web
| url = http://www.earlyamerica.com/review/2002_summer_fall/tj_views.htm
| title = Thomas Jefferson's Views Concerning Native Americans
| accessdate = 2009-02-17
| author = Tom Jewett
| last = Jewett
| first = Tom
| year = 1996–2009
| publisher= = Archiving America
}}
</ref> ಹೊಂದಾಣಿಕೆಯು (ಚಾಕ್ಟವ್ ನೊಂದಿಗೆ ಸ್ವಇಚ್ಛೆಯಿಂದ,<ref name="us_congress2">
{{Cite news
| title = An Indian Candidate for Congress
| publisher= = Christian Mirror and N.H. Observer, Shirley, Hyde & Co.
| date = July 15, 1830
}}</ref><ref name="us_citizenship">{{cite web
| url = http://digital.library.okstate.edu/kappler/Vol2/treaties/cho0310.htm
| title = Indian affairs: laws and treaties Vol. II, Treaties
| accessdate = 2008-04-16
| author = Charles Kappler
| last = Kappler
| first = Charles
| year = 1904
| publisher = = Government Printing Office
| archive-date = 2008-05-17
| archive-url = https://web.archive.org/web/20080517182743/http://digital.library.okstate.edu/kappler/Vol2/treaties/cho0310.htm
| url-status = dead
}}</ref> ಅಥವಾ ಬಲವಂತವಾಗಿ) ಅಮೆರಿಕದ ಆಡಳಿತಗಳ ಮೂಲಕ ಹೊಂದಿಕೊಳ್ಳುವ ನೀತಿಯಾಯಿತು. ಆಗಿನ 19ನೇ ಶತಮಾನದ ಸಂದರ್ಭದಲ್ಲಿ, ಮ್ಯಾನಿಫೆಸ್ಟ್ ಡೆಸ್ಟಿನಿ ನಂಬಿಕೆಯು ಅಮೆರಿಕನ್ ರಾಷ್ಟ್ರೀಯತವಾದಿ ಚಳವಳಿಗೆ ಮುಖ್ಯವಾಯಿತು. ಅಮೆರಿಕನ್ ಕ್ರಾಂತಿಯ ನಂತರ ಯುರೋಪಿಯನ್-ಅಮೆರಿಕನ್ ಜನಸಂಖ್ಯೆಯ ವಿಸ್ತರಣೆಯಿಂದಾಗಿ, ಸ್ಥಳೀಯ ಅಮೆರಿಕನ್ ಭೂಮಿಯ ಮೇಲೆ ಒತ್ತಡ, ಗುಂಪುಗಳ ನಡುವೆ ಸಮರ ಮತ್ತು ಬಿಕ್ಕಟ್ಟುಗಳು ಹೆಚ್ಚಿದವು. ಆಗ 1830ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನ ಕಾಂಗ್ರೆಸ್ ಇಂಡಿಯನ್ ರಿಮೂವಲ್ ಆಕ್ಟ್ (ಇಂಡಿಯನ್ ಸ್ಥಳಾಂತರ ಕಾಯ್ದೆ)ಅನ್ನು ಹೊರಡಿಸಿತು. ಈ ಕಾನೂನು ಸರ್ಕಾರಕ್ಕೆ, ಅಮೆರಿಕಾ ಸಂಯುಕ್ತ ಸಂಸ್ಥಾನದಿಂದ ಯುರೋಪಿಯನ್-ಅಮೆರಿಕನ್ ವಿಸ್ತರಣೆಯನ್ನು ಮಾಡಲು, ಮಿಸಿಸಿಪ್ಪಿ ನದಿಯ ಪೂರ್ವದ ಡೀಪ್ ಸೌತ್ ನ ಸ್ಥಳೀಯ ಅಮೆರಿಕನ್ನರನ್ನು ಅವರ ತಾಯ್ನಾಡಿನಿಂದ ಬೇರೆಡೆಗೆ ಸಾಗಿಸುವ ಹಕ್ಕನ್ನು ನೀಡಿತ್ತು. ಸರ್ಕಾರಿ ಅಧಿಕಾರಿಗಳು, ಗುಂಪುಗಳ ನಡುವಿನ ಕದನ ಕಡಿಮೆ ಮಾಡುವ ಮೂಲಕ ಉಳಿದಿರುವ ಇಂಡಿಯನ್ನರಿಗೂ ಸಹಾಯ ಮಾಡಬಹುದೆಂದು ಭಾವಿಸಿದರು. ಉಳಿದ ಗುಂಪುಗಳು ದಕ್ಷಿಣದುದ್ದಕ್ಕೂ ಬದುಕುತ್ತಿರುವ ಸಂತತಿಗಳನ್ನು ಹೊಂದಿವೆ. ಅಲ್ಲದೇ 20 ನೇ ಶತಮಾನದ ಉತ್ತರಾರ್ಧದಿಂದ ಅನೇಕ ರಾಜ್ಯಗಳು, ಮತ್ತು ಕೆಲವೊಂದು ಸಂದರ್ಭಗಳಲ್ಲಿ ಫೆಡರಲ್ ಸರ್ಕಾರ, ಇವರನ್ನು ಬುಡಕಟ್ಟು ಜನಾಂಗದವರೆಂದು ಗುರುತಿಸಿತು.
ಮೊದಲ ಯುರೋಪಿಯನ್ ಅಮೆರಿಕನ್ನರು, ತುಪ್ಪಳದ ವ್ಯಾಪಾರಿಗಳ ರೂಪದಲ್ಲಿ ಪಶ್ಚಿಮದ ಬುಡಕಟ್ಟು ಜನಾಂಗದವರನ್ನು ಸಂಧಿಸಿದರು. ಅಮೆರಿಕಾ ಸಂಯುಕ್ತ ಸಂಸ್ಥಾನದ ವಿಸ್ತರಣೆಯು ಪಾಶ್ಚಾತ್ಯ ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ತಲುಪಿದಂತೆ, ವಸಾಹತುಗಾರರು ಮತ್ತು ಗಣಿಕೆಲಸದ ವಲಸೆಗಾರರು, ಗ್ರೇಟ್ ಪ್ಲೇನ್ ನ ಬುಡಕಟ್ಟು ಜನಾಂಗದವರೊಂದಿಗಿನ ಕದನದ ಪ್ರಮಾಣವನ್ನು ಹೆಚ್ಚಿಸಿಕೊಂಡರು. ಇವು ಸಂಕೀರ್ಣವಾದ ಅಲೆಮಾರಿ ಸಂಸ್ಕೃತಿಗಳಾಗಿದ್ದು, ಕುದುರೆಗಳನ್ನು ಬಳಸಿಕೊಂಡು, ಕಾಡೆಮ್ಮೆಯನ್ನು ಬೇಟೆಯಾಡಲು ಕಾಲೋಚಿತವಾಗಿ ಪ್ರಯಾಣ ಬೆಳೆಸುವುದರ ಮೇಲೆ ಇವರ ವಹಿವಾಟು ಆಧರಿಸಿತ್ತು. ಇವರು ಅಮೆರಿಕನ್ ಆಂತರಿಕ ಕದನದ ನಂತರ ದಶಕಗಳ ವರೆಗೆ ನಡೆದ "ಇಂಡಿಯನ್ ಕದನ" ದಲ್ಲಿ ಅಮೆರಿಕದ ಆಕ್ರಮಣಕ್ಕೆ ಪ್ರಬಲವಾದ ವಿರೋಧ ವ್ಯಕ್ತಪಡಿಸಿದರು. ಈ ಕದನವು 1890 ರ ವರೆಗೆ ನಿರಂತರವಾಗಿ ನಡೆಯುತ್ತಲೇ ಇತ್ತು. ಖಂಡಾಂತರ ರೈಲು ಮಾರ್ಗದ ನಿರ್ಮಿತಿಯು ಪಶ್ಚಿಮದ ಬುಡಕಟ್ಟು ಜನಾಂಗದವರ ಮೇಲೆ ಒತ್ತಡ ಹೆಚ್ಚಿಸಿತು. ಸಮಯ ಕಳೆದಂತೆ ಅಮೆರಿಕಾ ಸಂಯುಕ್ತ ಸಂಸ್ಥಾನ, ಬುಡಕಟ್ಟು ಜನಾಂಗದವರು ಸರಣಿ ಒಪ್ಪಂದಗಳನ್ನು ಮಾಡಿಕೊಳ್ಳುವಂತೆ ಮತ್ತು ಜಮೀನನ್ನು ಕಾನೂನು ರೀತ್ಯ ಒಪ್ಪಿಸುವಂತೆ ಒತ್ತಾಯಪಡಿಸಿತು. ಅಲ್ಲದೇ ಅನೇಕ ಪಶ್ಚಿಮ ರಾಜ್ಯಗಳಲ್ಲಿ ಅವರಿಗೆ ಮೀಸಲು ಪ್ರದೇಶ ಒದಗಿಸಿತು. ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರತಿನಿಧಿಗಳು ಸ್ಥಳೀಯ ಅಮೆರಿಕನ್ನರಿಗೆ ಯುರೋಪಿಯನ್ ಶೈಲಿಯ ಕೃಷಿಯನ್ನು ಮತ್ತು ಇದಕ್ಕೆ ಸದೃಶವಾಗಿರುವ ಕಸುಬನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿದರು. ಆದರೆ ಜಮೀನುಗಳು ಅಂತಹ ಬಳಕೆಗಳಿಗೆ ಬೆಂಬಲ ನೀಡುವಷ್ಟು ಫಲವತ್ತಾಗಿರಲಿಲ್ಲ.
ಸಮಕಾಲೀನ ಸ್ಥಳೀಯ ಅಮೆರಿಕನ್ನರು ಅಮೆರಿಕಾ ಸಂಯುಕ್ತ ಸಂಸ್ಥಾನದೊಡನೆ ಇಂದು ವಿಶೇಷ ಸಂಬಂಧ ಹೊಂದಿದ್ದಾರೆ. ಏಕೆಂದರೆ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರದಿಂದ ಪರಮಾಧಿಕಾರ ಅಥವಾ ಸ್ವತಂತ್ರವನ್ನು ಪಡೆದ ರಾಷ್ಟ್ರ, ಇಲ್ಲವೇ ಬುಡಕಟ್ಟು, ಅಥವಾ ಸ್ಥಳೀಯ ಅಮೆರಿಕನ್ನರ ತಂಡದ ಸದಸ್ಯರಾಗಿರಬಹುದು. ಅವರ ಸಮುದಾಯಗಳು ಮತ್ತು ಸಂಸ್ಕೃತಿಗಳು ವಲಸೆಗಾರರ (ಸ್ವ ಇಚ್ಛೆಯಿಂದ ಮತ್ತು ಗುಲಾಮ) ಸಂತತಿಯ ಬೃಹತ್ ಜನಸಂಖ್ಯೆಯೊಳಗೆ ಬೆಳೆದಿವೆ: ಆಫ್ರಿಕನ್, ಏಷ್ಯನ್, ಮಧ್ಯಪ್ರಾಚ್ಯ ಮತ್ತು ಯುರೋಪಿಯನ್ ಜನರು. ಮೊದಲೇ ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಲ್ಲದ ಸ್ಥಳೀಯ ಅಮೆರಿಕನ್ನರಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ 1924 ರಲ್ಲಿ ಪೌರತ್ವ ನೀಡಿತು.
==ಇತಿಹಾಸ==
===ಪೂರ್ವ-ಕೊಲಂಬಿಯನ್===
{{further|[[Settlement of the Americas]]|[[Paleo-Indians]]|[[Pre-Columbian era]]}}
[[File:Poblamiento de America - Teoría P Tardío.png|thumb|300px|ಮಂಜು ಮುಕ್ತ ಕಾರಿಡಾರ್ ಮತ್ತು ನಿರ್ದಿಷ್ಟ ಪೇಲಿಯೊಇಂಡಿಯನ್ ಪ್ರದೇಶಗಳ ಅಂದಾಜು ಸ್ಥಳವನ್ನು ತೋರಿಸುವ ನಕ್ಷೆ (ಕ್ಲೊವಿಸ್ ಸಿದ್ಧಾಂತ).]]
ಇನ್ನೂ ಚರ್ಚಿಸಲಾಗುತ್ತಿರುವ ಅಮೆರಿಕಾದ ವಸಾಹತೀಕರಣದ ಪ್ರಕಾರ, ಯುರೇಷಿಯದಿಂದ ಅಮೆರಿಕಾಕ್ಕೆ ವಲಸೆ ಬಂದ ಜನರು ಬರಿಂಜಿಯಾದ ಮೂಲಕ ಬಂದರು. ಇದು ಹಿಂದೆ ಬರಿಂಜ್ ಜಲಸಂಧಿಯುದ್ದಕ್ಕೂ ಎರಡು ಖಂಡಗಳನ್ನು ಸೇರಿಸುತ್ತಿದ್ದ ಭೂಸೇತುವೆಯಾಗಿದೆ.<ref name="ReferenceA">ಎಹ್ಲರ್ಸ್ ಜೆ. ಮತ್ತು ಪಿ. ಎಲ್. ಗಿಬ್ಬಾರ್ಡ್, 2004a, ''ಕ್ವಾಟರ್ನರಿ ಗ್ಲ್ಯಾಸಿಯೇಶನ್ಸ್: ಎಕ್ಸ್ಟೆಂಟ್ ಆಂಡ್ ಕ್ರೋನೋಲಜಿ 2: ಪಾರ್ಟ್ II ನಾರ್ತ್ ಅಮೆರಿಕಾ'', ಎಲ್ಸೆವಿಯರ್, ಆಮ್ಸ್ಟರ್ಡ್ಯಾಮ್. ISBN 0-444-51462-7</ref> ಕುಸಿಯುತ್ತಿರುವ ಸಮುದ್ರ ಮಟ್ಟವು ಬರಿಂಜ್ ಭೂ ಸೇತುವೆಯನ್ನು ಸೃಷ್ಟಿಸಿತು. ಇದು [[ಸೈಬೀರಿಯಾ]]ವನ್ನು [[ಅಲಾಸ್ಕ|ಅಲಾಸ್ಕಾ]]ಕ್ಕೆ ಸೇರಿಸುತ್ತದೆ. ಈ ಕ್ರಿಯೆಯು ಸುಮಾರು 60,000 – 25,000 ವರ್ಷಗಳ ಹಿಂದೆ ಪ್ರಾರಂಭವಾಗಿತ್ತು.<ref name="ReferenceA" /><ref>{{cite web|url=https://www.cambridgedna.com/genealogy-dna-ancient-migrations-slideshow.php?view=step7|title=An mtDNA view of the peopling of the world by Homo sapiens|publisher==Cambridge DNA Services|year=2007|accessdate=2011-06-01|archive-date=2011-05-11|archive-url=https://web.archive.org/web/20110511091253/https://www.cambridgedna.com/genealogy-dna-ancient-migrations-slideshow.php?view=step7|url-status=dead}}</ref> ಈ ವಲಸೆಯನ್ನು, ಬಗೆಹರಿಸದ ವಾದದೊಂದಿಗೆ (ಅಥವಾ ತುಂಬ ಮುಂಚೆ)ಸುಮಾರು 12,000 ಸಾವಿರ ವರ್ಷಗಳ ಹಿಂದೆ ನಡೆದಿದೆ, ಎಂದು ದೃಢಪಡಿಸಲಾಗಿದೆ.<ref name="SpencerWells2">{{Cite book|first1=Spencer |last1=Wells |first2=Mark |last2=Read |title=The Journey of Man - A Genetic Odyssey|url=https://books.google.com/books?id=WAsKm-_zu5sC&lpg=PP1&dq=The%20Journey%20of%20Man&pg=PA138#v=onepage&q&f=true|format=Digitised online by Google books|publisher==Random House|isbn= 0812971469|accessdate=2009-11-21|year=2002|pages=138–140}}</ref><ref>ಡೈಕ್ ಎ. ಎಸ್. ಮತ್ತು ಪ್ರೆಸ್ಟ್ ವಿ.ಕೆ. (1986). ''ಲೇಟ್ ವಿಸ್ಕನ್ಸಿನಿಯನ್ ಆಂಡ್ ಹೋಲೊಸೀನ್ ರಿಟ್ರೀಟ್ ಆಫ್ ದಿ ಲ್ಯಾರೆಂಟೈಡ್ ಐಸ್ ಶೀಟ್: ಜಿಯೊಲಾಜಿಕಲ್ ಸರ್ವೆ ಆಫ್ ಕೆನಡಾ ಮ್ಯಾಪ್'' 1702A</ref> ಮುಂಚಿನ ಈ ಪ್ರಾಗೈತಿಹಾಸಿಕ ಅಮೆರಿಕನ್ನರು, ಸಾಂಸ್ಕೃತಿಕವಾಗಿ ಭಿನ್ನವಾಗಿರುವ ನೂರಾರು ರಾಷ್ಟ್ರಗಳನ್ನು ಮತ್ತು ಬುಡಕಟ್ಟು ಜನಾಂಗಗಳ ವಿಕೇಂದ್ರೀಕರಣದ ಮೂಲಕ, ಶೀಘ್ರದಲ್ಲೆ ಅಮೆರಿಕಾದಲ್ಲೆಲ್ಲಾ ವ್ಯಾಪಿಸಿದರು.<ref>ಡಿಕ್ಯಾಸನ್, ಆಲಿವ್. ''ಕೆನಡಾಸ್ ಫರ್ಸ್ಟ್ ನೇಶನ್ಸ್: ಎ ಹಿಸ್ಟರಿ ಆಫ್ ಜಿ ಫೌಂಡಿಂಗ್ ಪೀಪಲ್ಸ್ ಫ್ರಮ್ ದಿ ಅರ್ಲಿಯೆಸ್ಟ್ ಟೈಮ್ಸ್''. 2ನೇ ಆವೃತ್ತಿ. ಟೊರೊಂಟೊ: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, 1997.</ref> ಉತ್ತರ ಅಮೆರಿಕಾದ ವಾತಾವರಣವನ್ನು ಅಂತಿಮವಾಗಿ 8000 BCEಯಿಂದ ಸ್ಥಿರಗೊಳಿಸಲಾಯಿತು;ಹವಾಮಾನದ ಸ್ಥಿತಿಯು ಇಂದಿನ ಹವಾಮಾನದ ಸ್ಥಿತಿಗೆ ಹೆಚ್ಚು ಸದೃಶ್ಯವಾಗಿದೆ.<ref name="icaage">ಜೆ. ಇಂಬ್ರೀ ಮತ್ತು ಕೆ.ಪಿ. ಇಂಬ್ರೀ, ''ಐಸ್ ಏಜಸ್: ಸಾಲ್ವಿಂಗ್ ದಿ ಮಿಸ್ಟರಿ'' (ಶಾರ್ಟ್ ಹಿಲ್ಸ್, NJ: ಎನ್ಸ್ಲೊ ಪಬ್ಲೀಷರ್ಸ್) 1979.</ref> ಇದು ವ್ಯಾಪಕವಾಗಿ ವಲಸೆಬರುವಂತೆ, ಬೆಳೆಗಳನ್ನು ಬೆಳೆಯಲು ಹಾಗು ಅಮೆರಿಕದ ಎಲ್ಲಾ ಕಡೆಗಳಲ್ಲೂ ಜನಸಂಖ್ಯೆಯಲ್ಲಿ ಹೆಚ್ಚಳವಾಗುವಂತೆ ಮಾಡಿತು.
ಬೇಟೆಯಾಡುವ ದೊಡ್ಡ ಆಟದ ಸಂಸ್ಕೃತಿಯನ್ನು ಕ್ಲೊವಿಸ್ ಸಂಸ್ಕೃತಿ ಎಂದು ಕರೆಯಲಾಯಿತು. ಈ ಸಂಸ್ಕೃತಿಯನ್ನು ಆಗ ಕಲ್ಲನ್ನು ಕೊರೆದು ತಯಾರಿಸಲಾದ ಚೂಪಾದ ಸಾಧನವನ್ನು ಬಳಸುವುದರೊಂದಿಗೆ ಗುರುತಿಸಲಾಗುತ್ತದೆ. ಈ ಸಂಸ್ಕೃತಿಗೆ ನ್ಯೂ ಮೆಕ್ಸಿಕೊದ ಕ್ಲೊವಿಸ್ ನ ಸಮೀಪದಲ್ಲಿ ದೊರೆತಿರುವ ಕರಕುಶಲ ವಸ್ತುಗಳಿಂದಾಗಿ ಈ ಹೆಸರನ್ನು ಇಡಲಾಗಿದೆ; ಈ ಸಾಧನ ಸಂಕೀರ್ಣದ ಮೊದಲ ಸಾಕ್ಷಿಯನ್ನು 1932 ರಲ್ಲಿ ಉತ್ಖನಿಸಲಾಯಿತು. ಕ್ಲೊವಿಸ್ ಸಂಸ್ಕೃತಿಯು ಉತ್ತರ ಅಮೆರಿಕದ ಬಹುಪಾಲು ಭಾಗಗಳಲ್ಲಿ ಹರಡಿದೆ. ಅಲ್ಲದೇ ದಕ್ಷಿಣ ಅಮೆರಿಕಾದಲ್ಲೂ ಕೂಡ ಕಂಡುಬಂದಿದೆ. ಈ ಸಂಸ್ಕೃತಿಯನ್ನು ವಿಭಿನ್ನ ಕ್ಲೊವಿಸ್ ಅಂಶದಿಂದ ಗುರುತಿಸಲಾಗುತ್ತದೆ. ಕೊರೆದು ಬಿಲ್ಲೆಮಾಡಿದ ಚೂಪಾದ ತುದಿಹೊಂದಿರುವ ಚಕಮಕಿ ಕಲ್ಲನ್ನು ಬಾಣದೊಳಗೆ ಸೇರಿಸಲಾಗುತ್ತಿತ್ತು. ಕ್ಲೊವಿಸ್ ವಸ್ತುಗಳು ಯಾವ ಕಾಲಕ್ಕೆ ಸೇರಿವೆ ಎಂಬುದನ್ನು ಪ್ರಾಣಿಗಳ ಮೂಳೆಗಳೊಂದಿಗೆ ಹೋಲಿಸುವ ಮೂಲಕ ಹಾಗು ಕಾರ್ಬನ್ ಡೇಟಿಂಗ್ ವಿಧಾನವನ್ನು ಬಳಸುವ ಮೂಲಕ ನಿರ್ಧರಿಸಲಾಗುತ್ತದೆ. ಅಭಿವೃದ್ಧಿಪಡಿಸಲಾದ ಕಾರ್ಬನ್ ಡೇಟಿಂಗ್ ವಿಧಾನವನ್ನು ಬಳಸಿ ಇತ್ತೀಚೆಗೆ ಮಾಡಲಾದ ಕ್ಲೊವಿಸ್ ವಸ್ತುಗಳ ಪುನರ್ಪರಿಶೀಲನೆ, ಇವು 11,050 ಮತ್ತು 10,800 ರೇಡಿಯೋ ಕಾರ್ಬನ್ ವರ್ಷ B.P.ಗೆ (ಸರಿಸುಮಾರಾಗಿ 9100 ಯಿಂದ 8850 BCಯ ವರೆಗೆ) ಸೇರಿವೆ ಎಂಬ ಫಲಿತಾಂಶ ನೀಡಿದೆ.
ಪ್ರಾಗೈತಿಹಾಸಿಕ ಕಾಲದ ಅನೇಕ ಸಂಸ್ಕೃತಿಗಳು ಉತ್ತರ ಅಮೆರಿಕಾವನ್ನು ಆವರಿಸಿವೆ. ಇವುಗಳಲ್ಲಿ ಕೆಲವನ್ನು ಗ್ರೇಟ್ ಪ್ಲೇನ್ಸ್ ಮತ್ತು ಅಮೆರಿಕಾದ ಆಧುನಿಕ ಅಮೆರಿಕಾ ಸಂಯುಕ್ತ ಸಂಸ್ಥಾನದ [[ಮಹಾ ಸರೋವರಗಳು|ಗ್ರೇಟ್ ಲೇಕ್]] ಮತ್ತು [[ಕೆನಡಾ]] ಹಾಗು ಪಶ್ಚಿಮ ಮತ್ತು ನೈಋತ್ಯದ ನೆರೆಹೊರೆಯ ಪ್ರದೇಶಗಳಲ್ಲಿ ನಿರ್ಬಂಧಿಸಲಾಗಿದೆ. ಅಮೆರಿಕಾದ ಅನೇಕ ಸ್ಥಳಿಯ ಜನರ ಮೌಖಿಕ ಇತಿಹಾಸಗಳ ಪ್ರಕಾರ, ಅವರು ಹುಟ್ಟಿದಾಗಿನಿಂದಲೂ ಅಲ್ಲಿಯೇ ಜೀವಿಸುತ್ತಿದ್ದಾರೆಂದು, ಬೃಹತ್ ಮಟ್ಟದ ಸಾಂಪ್ರದಾಯಿಕ ಸೃಷ್ಟಿ ಕಾರಣಗಳ ಮೂಲಕ ವಿವರಿಸಲಾಗಿದೆ.<ref>ಡೆಲೋರಿಯಾ, ವಿ. ಜೂನಿಯರ್, (1997) ''ರೆಡ್ ಅರ್ತ್ ವೈಟ್ ಲೈಸ್: ನೇಟಿವ್ ಅಮೆರಿಕನ್ಸ್ ಆಂಡ್ ದಿ ಮಿತ್ ಆಫ್ ಸೈಂಟಿಫಿಕ್ ಫ್ಯಾಕ್ಟ್''.</ref> ಫೊಲ್ಸಮ್ ನ ಸಂಪ್ರದಾಯವನ್ನು ಫೊಲ್ಸಮ್ ಅಂಶಗಳನ್ನು ಬಳಸುವ ಮೂಲಕ ವಿವರಿಸಲಾಗಿದೆ. ನೋದಕ ಅಂಶಗಳಿಂದ ಹಾಗು ಕಾಡೆಮ್ಮೆಯನ್ನು ಬಲಿಕೊಡುವುದು ಮತ್ತು ಹತ್ಯಾ ತಾಣಗಳಿಂದಾಗಿ ಹೆಸರುವಾಸಿಯಾದ ಇಂತಹ ಅಂಶಗಳ ಮೂಲಕ ನಿರೂಪಿಸಲಾಗುತ್ತದೆ. ಫೊಲ್ಸಮ್ ಸಾಧನಗಳು 9000 BCE ಮತ್ತು 8000 BCE ಗಿಂತ ಹಿಂದಿನವಾಗಿವೆ.<ref>ಹಿಲ್ಲರ್ಮ್ಯಾನ್, ಆಂಟೋನಿ ಜಿ. (1973). "ದಿ ಹಂಟ್ ಫಾರ್ ದಿ ಲಾಸ್ಟ್ ಅಮೆರಿಕನ್" - ''ದಿ ಗ್ರೇಟ್ ಟಾವೋಸ್ ಬ್ಯಾಂಕ್ ರಾಬರಿ ಆಂಡ್ ಅದರ್ ಇಂಡಿಯನ್ ಕಂಟ್ರಿ ಅಫೇರ್ಸ್'', ಯೂನಿವರ್ಸಿಟಿ ಆಫ್ ನ್ಯೂಮೆಕ್ಸಿಕೊ ಪ್ರೆಸ್. ISBN 0-8263-0306-4.</ref>
[[File:Folsom point.png|thumb|left|250px|ಈಟಿಯಲ್ಲಿ ಬಳಸುವ ಒಂದು ಚೂಪಾದ ಫೋಲ್ಸಮ್ ಉಪಕರಣ]]
[[ನಾ-ದೆನೆ ಭಾಷೆಗಳು|ನ್ಯಾ-ಡೆನೆ]] ಜನರು ಸುಮಾರು 8000 BCಯಲ್ಲಿ ಪ್ರವೇಶಿಸಲು ಪ್ರಾರಂಭಿಸಿ, ಫೆಸಿಫಿಕ್ ವಾಯವ್ಯ ಭಾಗವನ್ನು 5000 BCE <ref>[http://www.jstor.org/pss/670070 ಡಿ.ಇ. ಡಮ್ಮಂಡ್, "ಟುವರ್ಡ್ ಎ ಪ್ರಿ-ಹಿಸ್ಟರಿ ಆಫ್ ದಿ ನಾ-ಡೆನೆ, ವಿದ್ ಎ ಜನರಲ್ ಕಮೆಂಟ್ ಆನ್ ಪಾಪ್ಯುಲೇಶನ್ ಮೂಮೆಂಟ್ಸ್ ಎಮೋಂಗ್ ನೊಮ್ಯಾಡಿಕ್ ಹಂಟರ್ಸ್"], ಅಮೆರಿಕನ್ ಆಂಥ್ರೊಪೊಲಾಜಿಕಲ್ ಅಸೋಸಿಯೇಶನ್, 1969. 2010ರ ಮಾರ್ಚ್ 30ರಂದು ಪುನಃಸಂಪಾದಿಸಲಾಯಿತು.</ref> ಯಲ್ಲಿ ತಲುಪಿ, ಉತ್ತರ ಅಮೆರಿಕವನ್ನು ಪ್ರವೇಶಿಸಿದರು. ಅಲ್ಲಿಂದ ಫೆಸಿಫಿಕ್ ಕರಾವಳಿಯುದ್ದಕ್ಕೂ ವಲಸೆಹೋಗುವ ಮೂಲಕ ಒಳನಾಡನ್ನು ಪ್ರವೇಶಿಸಿದರು. ಭಾಷಾಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು ಮತ್ತು ಪುರಾತತ್ತ್ವ ಶಾಸ್ತ್ರಜ್ಞರು, ಅವರ ಪೂರ್ವಿಕರು, ಮೊದಲ ಪ್ರಾಗೈತಿಹಾಸಿಕರ ನಂತರ ಉತ್ತರ ಅಮೆರಿಕಕ್ಕೆ ಪ್ರತ್ಯೇಕ ವಲಸೆ ಮಾಡಿದ್ದರೆಂದು ನಂಬುತ್ತಾರೆ. ಮೊದಲು ಅವರು ಈಗಿನ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಕ್ವೀನ್ ಚಾರ್ಲೊಟ್ ಐಲ್ಯಾಂಡ್ ಗಳ ಬಳಿ ನೆಲೆಸಿದ್ದರು. ಇಲ್ಲಿಂದಲೇ ಅವರು ಅಲಾಸ್ಕಾ ಮತ್ತು ಉತ್ತರ ಕೆನಡಾ, ಫೆಸಿಫಿಕ್ ಕರಾವಳಿಯೊಂದಿಗೆ ದಕ್ಷಿಣಕ್ಕೆ ಮತ್ತು ಒಳನಾಡಿಗೆ ವಲಸೆ ಬಂದಿದ್ದರು. ಅವರು, ಇಂದಿನ ಮತ್ತು ಐತಿಹಾಸಿಕ ನ್ಯಾವ್ಜೊ ಮತ್ತು ಅಪಾಚೆ ಬುಡಕಟ್ಟುಗಳನ್ನು ಒಳಗೊಂಡಂತೆ ಅಥಬಾಸ್ಕನ್ ಭಾಷಿಕರ ಹಿಂದಿನ ಪೂರ್ವಿಕರಾಗಿದ್ದಾರೆ. ಇವರ ಹಳ್ಳಿಗಳನ್ನು ಕಾಲೋಚಿತವಾಗಿ ಬಳಸಲಾಗುತ್ತಿದ್ದ ಬಹು ಕುಟುಂಬಗಳು ವಾಸಿಸುವಂತಹ ಮನೆಗಳೊಂದಿಗೆ ನಿರ್ಮಿಸಲಾಗಿತ್ತು. ಜನರು ವರ್ಷವಿಡೀ ಅಲ್ಲಿ ವಾಸಿಸುತ್ತಿರಲಿಲ್ಲ, ಆದರೆ ಚಳಿಗಾಲಕ್ಕಾಗಿ ಆಹಾರ ಸಂಗ್ರಹಿಸಲು ಬೇಸಿಗೆಯಲ್ಲಿ ಬೇಟೆಗೆ ಮತ್ತು ಮೀನು ಹಿಡಿಯಲು ಹೋಗುತ್ತಿದ್ದರು.<ref>ಲೀರ್, ಜೆಫ್, ಡೌಗ್ ಹಿಟ್ಚ್ ಮತ್ತು ಜಾನ್ ರಿಟ್ಟರ್. 2001. ''ಇಂಟೀರಿಯರ್ ಟ್ಲಿಂಗಿಟ್ ನೌನ್ ಡಿಕ್ಷನರಿ: ದಿ ಡಯಾಲೆಕ್ಟ್ಸ್ ಸ್ಪೋಕನ್ ಬೈ ಟ್ಲಿಂಗಿಟ್ ಎಲ್ಡರ್ಸ್ ಆಫ್ ಕಾರ್ಕ್ರಾಸ್ ಆಂಡ್ ಟೆಸ್ಲಿನ್, ಯುಕಾನ್ ಆಂಡ್ ಅಠ್ಲಿನ್, ಬ್ರಿಟಿಷ್ ಕೊಲಂಬಿಯಾ'', ವೈಟ್ಹಾರ್ಸ್, ಯುಕಾನ್ ಟೆರಿಟರಿ: ಯುಕಾನ್ ನೇಟಿವ್ ಲ್ಯಾಂಗ್ವೇಜ್ ಸೆಂಟರ್. ISBN 1-55242-227-5.</ref> ಒಷರಾ ಸಂಪ್ರದಾಯದ ಜನರು 5500 BCE ಯಿಂದ 600 CE ವರೆಗೆ ಜೀವಿಸಿದ್ದರು. ಇದು ನೈಋತ್ಯ ಪ್ರಾಚೀನ ಸಂಸ್ಕೃತಿಯಾಗಿದ್ದು, ಉತ್ತರ- ಮಧ್ಯ ನ್ಯೂ ಮೆಕ್ಸಿಕೊ, ಸ್ಯಾನ್ ಜುನ್ ಬ್ಯಾಸಿನ್, ರಿಯೊ ಗ್ರ್ಯಾಂಡೆ ಕಣಿವೆ, ದಕ್ಷಿಣ ಕಲರಾಡೊ, ಮತ್ತು ಆಗ್ನೇಯದ [[ಯೂಟ|ಉತಹ್]] ದಲ್ಲಿ ನೆಲೆಸಿದ್ದರು.
ಪಾವರ್ಟಿ ಪಾಯಿಂಟ್ ಸಂಸ್ಕೃತಿ ಎಂಬುದು ಪುರಾತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಸಂಸ್ಕೃತಿಯಾಗಿದ್ದು, ಇದರ ಜನರು ಮಿಸಿಸಿಪ್ಪಿಯ ಕೆಳ ಕಣಿವೆಯ ಮತ್ತು ಗಲ್ಫ್ ತೀರದ ಹತ್ತಿರದ ಪ್ರದೇಶದಲ್ಲಿ ವಾಸವಾಗಿದ್ದರು. ಈ ಸಂಸ್ಕೃತಿ ಪ್ರಾಚೀನ ಕಾಲದ ಸಂದರ್ಭದಲ್ಲಿ 2200 BCಯಿಂದ- 700 BC ವರೆಗೆ ಬೆಳೆಯಿತು.<ref>^ ಫೇಗನ್, ಬ್ರಿಯಾನ್ ಎಮ್. 2005. ''ಏನ್ಶಿಯೆಂಟ್ ನಾರ್ತ್ ಅಮೆರಿಕಾ: ದಿ ಆರ್ಕಿಯಾಲಜಿ ಆಫ್ ಎ ಕಾಂಟಿನೆಂಟ್''. ನಾಲ್ಕನೇ ಆವೃತ್ತಿ. ನ್ಯೂಯಾರ್ಕ್. ಥೇಮ್ಸ್ ಆಂಡ್ ಹಡ್ಸನ್ ಇಂಕ್. p418.</ref> ಈ ಸಂಸ್ಕೃತಿಯ ಸಾಕ್ಷ್ಯಾಧಾರಗಳು ಪಾವರ್ಟಿ(ಬಡತನ) ಅಂಶದಿಂದ 100 ಕಿಂತ ಹೆಚ್ಚು ಸ್ಥಳಗಳಲ್ಲಿ ದೊರೆತಿದೆ. ಮೆಸ್ಸಿಸ್ಸಿಪ್ಪಿಯ ಮೆಲ್ಜೊನಿ ಹತ್ತಿರವಿರುವ ಜ್ಯಾಕ್ ಟೌನ್ ನಿಂದ 100 ಮೈಲಿ ದೂರದಲ್ಲಿರುವ ಲೂಸಿಯಾನದಲ್ಲಿ ದೊರೆತಿವೆ.
[[ಉತ್ತರ ಅಮೇರಿಕ|ಉತ್ತರ ಅಮೆರಿಕನ್]] ಪೂರ್ವ-ಕೊಲಂಬಿಯನ್ ಸಂಸ್ಕೃತಿಗಳ ವುಡ್ ಲ್ಯಾಂಡ್ ಕಾಲಾವಧಿ, ಉತ್ತರ ಅಮೆರಿಕದ ಪೂರ್ವ ಭಾಗದಲ್ಲಿ ಸರಿಸುಮಾರಾಗಿ 1000 BC ಯಿಂದ 1000 CE ವರೆಗಿನ ಅವಧಿಯನ್ನು ಸೂಚಿಸುತ್ತದೆ. "ವುಡ್ ಲ್ಯಾಂಡ್" ಪದವನ್ನು 1930ರ ಹೊತ್ತಿನಲ್ಲಿ ರಚಿಸಲಾಗಿದ್ದು, ಇದು ಪ್ರಾಚೀನ ಕಾಲಾವಧಿ ಮತ್ತು ಮಿಸಿಸಿಪ್ಪಿಯನ್ ಸಂಸ್ಕೃತಿಗಳ ಅವಧಿಗಳಿಗೆ ಸೇರಿದ ಪ್ರಾಗೈತಿಹಾಸಿಕ ಸ್ಥಳಗಳನ್ನು ಸೂಚಿಸುತ್ತದೆ. ಹೋಪ್ ವೆಲ್ ಸಂಸ್ಕೃತಿ ಎಂಬುದು ಸ್ಥಳೀಯ ಅಮೆರಿಕನ್ ಸಂಸ್ಕೃತಿಯ ಸಾಮಾನ್ಯ ಅಂಶಗಳನ್ನು ವಿವರಿಸಲು ಬಳಸುವ ಪದವಾಗಿದೆ. ಈ ಸಂಸ್ಕೃತಿಯು ಈಶಾನ್ಯ ಮತ್ತು ಮಧ್ಯಪಶ್ಚಿಮ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನ]]ದಲ್ಲಿ 200 BC ಯಿಂದ 500 CE ವರೆಗೆ ಬೆಳೆಯಿತು.<ref>{{cite web| url = http://www.ohiohistorycentral.org/entry.php?rec=1283 | title = Hopewell-Ohio History Central}}</ref>
ಹೋಪ್ ವೆಲ್ ಸಂಸ್ಕೃತಿಯು ಕೇವಲ ಒಂದು ಸಂಸ್ಕೃತಿ ಅಥವಾ ಸಮಾಜವಲ್ಲ. ಆದರೆ ವ್ಯಾಪಕವಾಗಿ ಚೆದುರಿಹೋದ ಜನಸಮೂಹವಾಗಿದ್ದು, ಇವರು ಹೋಪ್ ವೆಲ್ ವಿನಿಮಯ ವ್ಯವಸ್ಥೆ ಎಂದು ಕರೆಯಲಾಗುವ ವ್ಯಾಪಾರೀ ಮಾರ್ಗಗಳ ಸಾಮಾನ್ಯ ಸಂಪರ್ಕದ ಮೂಲಕ ಇಲ್ಲಿಗೆ ಸೇರಿದರು.<ref name="Price">{{Cite book| author= Douglas T. Price, and Gary M. Feinman | year= 2008 | title= Images of the Past, 5th edition | pages= 274–277 | location= New York | publisher==McGraw-Hill | isbn= 978-0-07-340520-9}}</ref> ಅದರ ಉತ್ತುಂಗದ ಸಮಯದಲ್ಲಿ ''ಹೋಪ್ ವೆಲ್ ವಿನಿಮಯ ವ್ಯವಸ್ಥೆಯು'', ಆಗ್ನೇಯ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನ]] ದಿಂದ ಆಗ್ನೇಯ [[ಕೆನಡಾ]]ದ ಆನ್ ಟಾರಿಯೋ ಸರೋವರದ ಅಂಚಿನವರೆಗೂ ಹಬ್ಬಿತು. ಈ ಪ್ರದೇಶದೊಳಗೆ, ವಿನಿಮಯದ ಕಾರ್ಯಚಟುವಟಿಕೆಯಲ್ಲಿ ಈ ಸಮೂಹದ ಸಮಾಜಗಳು ಜಲಮಾರ್ಗದ ಸೇವೆಗಳೊಂದಿಗೆ ಭಾರಿ ಮಟ್ಟದಲ್ಲಿ ಪಾಲ್ಗೊಂಡವು. ಜಲಮಾರ್ಗವು ಅವರ ಪ್ರಧಾನ ಸಾರಿಗೆ ಸಂಪರ್ಕ ಮಾರ್ಗವಾಗಿತ್ತು. ಹೋಪ್ ವೆಲ್ ವಿನಿಮಯ ವ್ಯವಸ್ಥೆಯು ಅಮೆರಿಕಾ ಸಂಯುಕ್ತ ಸಂಸ್ಥಾನದ ಎಲ್ಲಾ ಕಡೆಗಳಿಂದಲೂ ವಸ್ತುಗಳ ವಹಿವಾಟು ಮಾಡಿತು.
ಕೋಲ್ಸ್ ಕ್ರೀಕ್ ಸಂಸ್ಕೃತಿ ಎಂಬುದು ಪುರಾತತ್ತ್ವ ಶಾಸ್ತ್ರಕ್ಕೆ ಸಂಬಂಧಿಸಿದ ಸಂಸ್ಕೃತಿಯಾಗಿದ್ದು, ಇಂದಿನ ದಕ್ಷಿಣ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಮಿಸಿಸಿಪ್ಪಿ ಕೆಳ ಕಣಿವೆಯಲ್ಲಿ ನೆಲಸಿತ್ತು. ಈ ಅವಧಿಯನ್ನು ಪ್ರದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ತರವಾದ ಬದಲಾವಣೆ ಕಂಡ ಕಾಲಾವಧಿಯಾಗಿದೆ ಎಂದು ಗುರುತಿಸಲಾಗಿದೆ. ಇದ್ದಕ್ಕಿದ್ದಂತೆ ಜನಸಂಖ್ಯೆ ಹೆಚ್ಚಿತು. ಕೋಲ್ಸ್ ಕ್ರೀಕ್ ಕಾಲಾವಧಿ ಮುಗಿಯುವ ವೇಳೆಗೆ, ಬೆಳೆಯುತ್ತಿರುವ ಸಂಸ್ಕೃತಿ ಮತ್ತು ರಾಜಕೀಯ ಸಂಕೀರ್ಣತೆಗೆ ಬಲವಾದ ಸಾಕ್ಷ್ಯಗಳಿವೆ. ರಾಜತ್ವ ಸಮಾಜದ ಅನೇಕ ವಿಶಿಷ್ಟ ಲಕ್ಷಣಗಳನ್ನು ಸ್ಪಷ್ಟಪಡಿಸದಿದ್ದರೂ ಕೂಡ, 1000 CE ಯಿಂದ ಗಣ್ಯನೇತಾರರ ಸರಳ ಆಡಳಿತ ವ್ಯವಸ್ಥೆ ಪ್ರಾರಂಭವಾಯಿತು. ಕೋಲ್ಸ್ ಕ್ರೀಕ್ ಸಂಸ್ಕೃತಿಯ ಸ್ಥಳಗಳು ಅರ್ಕಾನ್ಸಾಸ್, ಲೂಯಿಸಿಯಾನ, [[ಒಕ್ಲಹೋಮ]], ಮಿಸಿಸಿಪ್ಪಿ ಮತ್ತು ಟೆಕ್ಸಾಸ್ ನಲ್ಲಿ ಕಂಡುಬಂದಿವೆ. ಇದನ್ನು ಪ್ಲ್ಯಾಕ್ ಮೈನ್ ಸಾಂಸ್ಕೃತಿಯ ಪೂರ್ವಜ ಎಂದು ಪರಿಗಣಿಸಲಾಗುತ್ತದೆ.
ಹೊಹೊಕ್ಯಾಮ್ ಎಂಬುದು ಈಗಿನ ಅಮೆರಿಕನ್ ನೈಋತ್ಯ ಭಾಗದ ನಾಲ್ಕು ಪ್ರಮುಖ ಪ್ರಾಗೈತಿಹಾಸಿಕ ಪುರಾತತ್ತ್ವ ಸಂಪ್ರದಾಯಗಳಲ್ಲಿ ಒಂದಾಗಿದೆ.<ref name="mark">ಚೆನಾಲ್ಟ್, ಮಾರ್ಕ್, ರಿಕ್ ಆಹ್ಲ್ಸ್ಟ್ರಾಮ್ ಮತ್ತು ಟಾಮ್ ಮಾಟ್ಸಿಂಗರ್, (1993) ''ಇನ್ ದಿ ಶ್ಯಾಡೊ ಆಫ್ ಸೌತ್ ಮೌಂಟೇನ್: ದಿ ಪ್ರಿ-ಕ್ಲ್ಯಾಸಿಕ್ ಹೊಹೊಕ್ಯಾಮ್ ಆಫ್ 'ಲಾ ಸಿಯುಡ್ಯಾಡ್ ಡಿ ಲಾಸ್ ಹಾರ್ನಾಸ್','' ಭಾಗ I ಮತ್ತು II.</ref> ಸರಳವಾದ ಕೃಷಿಕನಂತೆ ಬದುಕುವ ಮೂಲಕ ಅವರು ಜೋಳ ಮತ್ತು ಬೀನ್ಸ್ ಬೆಳೆಯುತ್ತಿದ್ದರು. ಹಿಂದಿನ ಹೊಹೊಕ್ಯಾನ್, ಮಧ್ಯ ಗಿಲಾ ನದಿಯೊಂದಿಗೆ ಸಣ್ಣ ಹಳ್ಳಿಗಳ ಪಂಕ್ತಿಯನ್ನೇ ಹೊಂದಿದ್ದರು. ಸಮುದಾಯಗಳು, ಈ ಕಾಲಾವಧಿಯಲ್ಲಿ ಸಾಮಾನ್ಯವಾಗಿದ್ದ ಒಣಬೇಸಾಯದೊಂದಿಗೆ, ಕೃಷಿಗೆ ಯೋಗ್ಯವಾಗಿರುವ ಉತ್ತಮವಾದ ಜಮೀನಿನ ಸಮೀಪದಲ್ಲಿ ನೆಲೆಸಿದ್ದವು.<ref name="mark" /> [[ಬಾವಿ]]ಗಳು ಸಾಮಾನ್ಯವಾಗಿ {{convert|10|ft|m|0}}ಕ್ಕಿಂತ ಕಡಿಮೆ ಆಳ ಹೊಂದಿರುತ್ತಿದ್ದವು. ಇವುಗಳನ್ನು 300 CE ದಿಂದ 500 CEಯ ವರೆಗೆ ಗೃಹಬಳಕೆಯ ನೀರಿನ ಸರಬರಾಜಿಗಾಗಿ ತೋಡಲಾಗುತ್ತಿತ್ತು.<ref name="mark" /> ಹಿಂದಿನ ಹೊಹೊಕ್ಯಾಮ್ ಮನೆಗಳನ್ನು, ಅರೆ ವೃತ್ತಾಕಾರದ ಶೈಲಿಯಲ್ಲಿ ಬಾಗಿಸಿದಂತಹ ಕೊಂಬೆಗಳಿಂದ ನಿರ್ಮಿಸಲಾಗುತ್ತಿತ್ತು. ಅನಂತರ ಸಣ್ಣ ಸಣ್ಣ ಕೊಂಬೆಗಳಿಂದ, ಜೊಂಡುಹುಲ್ಲಿನಿಂದ ಮುಚ್ಚಲಾಗುತ್ತಿತ್ತು, ಹಾಗು ಅಲ್ಲಿ ಮಣ್ಣು ಮತ್ತು ಇತರ ವಸ್ತುಗಳನ್ನು ಗಟ್ಟಿಗೊಳಿಸಲು ಹಾಕಲಾಗುತ್ತಿತ್ತು.<ref name="mark" />
ಆದರೂ ಇದು ದಕ್ಷಿಣ ಭಾಗದಲ್ಲಿದ್ದ ಮುಂದಿನ ಮೆಸೊಅಮೆರಿಕನ್ ನಾಗರಿಕತೆಯಷ್ಟು ಮುಂದುವರೆದಿರಲಿಲ್ಲ. ಇವರು ಉತ್ತರ ಅಮೆರಿಕದಲ್ಲಿ ವಿಕಸನಹೊಂದಿದ್ದ ಸ್ಥಿರವಾಗಿ ಒಂದೆಡೆ ನೆಲೆಸುವ, ಸುಸಂಸ್ಕೃತ ಪೂರ್ವ-ಕೊಲಂಬಿಯನ್ ಸಮಾಜಗಳಾಗಿವೆ. ಸೌತ್ ಈಸ್ಟರ್ನ್ ಸೆರೆಮೊನಿಯಲ್ ಕಾಂಪ್ಲೆಕ್ಸ್ ಎಂಬುದು, ಕರಕುಶಲ ವಸ್ತುಗಳು, ಮೂರ್ತಿಶಿಲ್ಪ, ಧಾರ್ಮಿಕ ಕ್ರಿಯೆಗಳು ಮತ್ತು ಮಿಸಿಸಿಪ್ಪಿಯನ್ ಸಂಸ್ಕೃತಿಯ [[ಪುರಾಣ|ಪೌರಾಣಿಕ ಸಾಹಿತ್ಯ]]ದ ಪ್ರಾದೇಶಿಕ ಶೈಲಿಯ ಸದೃಶ್ಯತೆಗೆ ಪುರಾತತ್ತ್ವಶಾಸ್ತ್ರಜ್ಞರು ನೀಡಿದ ಹೆಸರಾಗಿದೆ. ಇದು [[ಮೆಕ್ಕೆ ಜೋಳ|ಜೋಳದ]] ವ್ಯವಸಾಯ ಮತ್ತು ನಾಯಕತ್ವ ಪದ್ಧತಿಯನ್ನು ಅಳವಡಿಸಿಕೊಂಡ ಜನರೊಂದಿಗೆ ಸದೃಶವಾಗಿದೆ-ಇದು 1200 CE ಯಿಂದ 1650 CE ವರೆಗೆ ಇದ್ದ ಅಧಿಕಾರ ಜಾಲದ,ಸಂಕೀರ್ಣತೆಯ ಸಾಮಾಜಿಕ ಸಂಸ್ಥೆಯಾಗಿದೆ.<ref>{{cite web| url = http://www.siu.edu/~anthro/muller/SECC/sld008.htm| title = Connections| 3 = author muller| access-date = 2011-02-25| archive-date = 2006-09-14| archive-url = https://web.archive.org/web/20060914003946/http://www.siu.edu/~anthro/muller/SECC/sld008.htm| url-status = dead}}</ref><ref>{{Cite book| last = Townsend | first = Richard F., and Robert V. Sharp, eds. | title = Hero, Hawk, and Open Hand| publisher= = [[The Art Institute of Chicago and Yale University Press]] | year = 2004 | isbn = 0300106017}}</ref> ಪ್ರಸಿದ್ಧ ನಂಬಿಕೆಗೆ ವಿರುದ್ಧವಾಗಿ, ಈ ಅಭಿವೃದ್ಧಿಯು ಮೆಸೊಅಮೆರಿಕದೊಂದಿಗೆ ನೇರ ಸಂಬಂಧ ಹೊಂದಿದ್ದಂತೆ ಕಂಡುಬರುತ್ತದೆ. ಇದು, ಶೇಷ ಜೋಳದ ಸಂಗ್ರಹ, ದಟ್ಟ, ನಿಬಿಡ ಜನಸಂಖ್ಯೆ ಮತ್ತು ಕೌಶಲಗಳ ಪರಿಣತೆಯ ಮೇಲೆ ಉಂಟಾದ ಬದಲಾವಣೆಯೊಂದಿಗೆ ಸ್ವತಂತ್ರವಾಗಿ ಅಭಿವೃದ್ಧಿ ಹೊಂದಿತ್ತು.{{Dubious|date=September 2009}} ಈ ಜೌಪಚಾರಿಕ ಸಂಕೀರ್ಣತೆಯು, ಮಿಸಿಸಿಪ್ಪಿಯನ್ ಜನರ [[ಧರ್ಮ|ಧಾರ್ಮಿಕತೆ]]ಯ ಪ್ರಮುಖ ಅಂಶವನ್ನು ಪ್ರತಿನಿಧಿಸುತ್ತದೆ. ಅಲ್ಲದೇ ಅವರ ಧಾರ್ಮಿಕತೆಯನ್ನು ಅರ್ಥಮಾಡಿಕೊಳ್ಳಲು ಇರುವ ಮೂಲಗಳಲ್ಲಿ ಇದೂ ಕೂಡ ಒಂದಾಗಿದೆ.<ref>{{Cite book| editors = F. Kent Reilly and James Garber | title = Ancient Objects and Sacred Realms| publisher= = [[University of Texas Press]] | year = 2007 | isbn = 9780292713475}}</ref>
ಮಿಸಿಸಿಪ್ಪಿಯನ್ ಸಂಸ್ಕೃತಿಯು, ಉತ್ತರ ಅಮೆರಿಕದ ಮೆಕ್ಸಿಕೊ ಉತ್ತರ ಭಾಗದಲ್ಲಿ ಬಹುದೊಡ್ಡ ಮಣ್ಣಿನ ದಿಬ್ಬಗಳನ್ನು ನಿರ್ಮಿಸಿದೆ. ಪ್ರಮುಖವಾಗಿ ಕಾಹೊಕಿಯಾದಲ್ಲಿ ನೋಡಬಹುದಾಗಿದೆ. ಇವುಗಳನ್ನು ಈಗಿನ ಇಲಿನಾಯ್ಸ್ ನಲ್ಲಿರುವ ಮಿಸಿಸಿಪ್ಪಿ ನದಿಯ ಉಪನದಿಯ ಆಧಾರದ ಮೇಲೆ ನಿರ್ಮಿಸುತ್ತಿದ್ದರು. ಇವುಗಳ 10-ವೃತ್ತಾಂತಗಳುಳ್ಳ ಮಾಂಕ್ಸ್ ಮೌಂಡ್, ಟಿಯೊತಿಹುಕ್ಯಾನ್ ನಲ್ಲಿರುವ ಪಿರಮಿಡ್ ಆಫ್ ದಿ ಸನ್ ಗಿಂತ ಅಥವಾ [[ಈಜಿಪ್ಟ್]] ನಲ್ಲಿರುವ ಗ್ರೇಟ್ ಪಿರಮಿಡ್ ಗಿಂತ ಅತ್ಯಂತ ಹೆಚ್ಚು ಕ್ಷೇತ್ರಫಲ ಹೊಂದಿವೆ. ಜನರ ವಿಶ್ವವಿಜ್ಞಾನದ ಖಗೋಳ ಶಾಸ್ತ್ರವನ್ನು ಆಧರಿಸಿ, ಆರು ಚದರ ಮೈಲಿ ದೂರದಲ್ಲಿ ನಗರ ಸಂಕೀರ್ಣ ನಿರ್ಮಿಸಲಾಗಿತ್ತು. ಅಲ್ಲದೇ ಇದು 100 ಕ್ಕಿಂತ ಹೆಚ್ಚು ಸುಂದರ ದಿಬ್ಬಗಳನ್ನೂ ಹೊಂದಿತ್ತು, ಇವು [[ಖಗೋಳಶಾಸ್ತ್ರ|ಖಗೋಳ ವಿಜ್ಞಾನ]]ದ ಬಗೆಗಿನ ಅವರ ಜ್ಞಾನವನ್ನು ಸೂಚಿಸುತ್ತವೆ. ಇದು ಮರದ ಸ್ಮಾರಕವೊಂದನ್ನು ಒಳಗೊಂಡಿತ್ತು, ಇವುಗಳ ಪವಿತ್ರ ಸಿಡರ್ ಕಂಬಗಳನ್ನು, [[ಕರ್ಕಾಟಕ ರಾಶಿ|ಕರ್ಕಾಟಕ]] ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಗಳನ್ನು ಮತ್ತು ಮೇಷ ಸಂಕ್ರಾಂತಿಯನ್ನು ಗುರುತಿಸಲು ನೆಡಲಾಗುತ್ತಿತ್ತು. ಇದು 1250 AD ಯಲ್ಲಿ 30,000 ದಿಂದ 40,000 ದಷ್ಟು ಜನರನ್ನು ಹೊಂದಿತ್ತು. ಇಂದಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಯಾವುದೇ ನಗರದ ಜನಸಂಖ್ಯೆ 1800 ರ ನಂತರ ಈ ಜನಸಂಖ್ಯೆಗೆ ಸಮನಾಗಿಲ್ಲ. ಇದರ ಜೊತೆಯಲ್ಲಿ, ಕಾಹೊಕಿಯಾವು ನಾಯಕನ ಅಧಿಕಾರಕ್ಕೊಳಪಟ್ಟ ಪ್ರಧಾನ ಪ್ರಾದೇಶಿಕ ಪ್ರದೇಶವಾಗಿದ್ದು, ಗ್ರೇಟ್ ಲೇಕ್ಸ್ ನಿಂದ ಮೆಕ್ಸಿಕೊದ ಗಲ್ಫ್ ವರೆಗೆ ಹಬ್ಬಿದ್ದಂತಹ, ವ್ಯಾಪಾರ ಮತ್ತು ನಾಯಕತ್ವಕ್ಕೆ ಒಳಪಟ್ಟ ಉಪಪ್ರದೇಶಗಳನ್ನು ಒಳಗೊಂಡಿತ್ತು.
ಇರೊಕ್ವಾಯ್ಸ್ ಲೀಗ್ ಆಫ್ ನೇಷನ್ಸ್ ಅಥವಾ "ಪೀಪಲ್ ಆಫ್ ದಿ ಲಾಂಗ್ ಹೌಸ್", ಮೈತ್ರಿ ಮಾದರಿ ಹೊಂದಿತ್ತು, ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಜಾಪ್ರಭುತ್ವ ತತ್ವಪಾಲನೆಯ ಸರ್ಕಾರದ, ಅನಂತರದ ಅಭಿವೃದ್ಧಿಯ ಸಂದರ್ಭದಲ್ಲಿ ರಾಜಕೀಯ ಆಲೋಚನೆಗೆ ಕೊಡುಗೆ ನೀಡಲು ಪ್ರತಿಪಾದಿಸಲಾಯಿತು. ಯುರೋಪಿಯನ್ನರು ನಡೆದು ಬಂದ ಪ್ರಬಲ ರಾಜಪ್ರಭುತ್ವದಿಂದ ನಿರ್ಗಮಿಸಿ ಸದಸ್ಯರನ್ನಾಗಿಸಿಕೊಳ್ಳುವ ಅವರ ವ್ಯವಸ್ಥೆಯು ಒಂದು ರೀತಿಯ ಒಕ್ಕೂಟವಾಗಿದೆ.<ref>{{cite book|title=33 questions about American history you're not supposed to ask|first=Thomas E|url=http://books.google.ca/books?id=dCMcnBRKR-0C&pg=PA62#v=onepage&q&f=false|last= Woods|page= 62|publisher==Crown Forum|year=2007|isbn=9780307346681|accessdate=2010-10-31}}</ref><ref>{{cite book | last = Wright | first = R | year = 2005 | title = Stolen Continents: 500 Years of Conquest and Resistance in the Americas | publisher= = Mariner Books | isbn = 0-618-49240-2}}</ref> ನಾಯಕತ್ವವನ್ನು 50 ಪ್ರತಿಷ್ಠಿತ ಸೇಚಮ್ ನಾಯಕರ ಗುಂಪಿಗೆ ಸೀಮಿತಗೊಳಿಸಲಾಗಿತ್ತು. ಇದರಲ್ಲಿನ ಪ್ರತಿಯೊಬ್ಬರೂ ಬುಡಕಟ್ಟು ಜನಾಂಗದೊಳಗೆ ಒಂದು ಗುಂಪನ್ನು ಪ್ರತಿನಿಧಿಸುತ್ತಿದ್ದರು; ಬುಡುಕಟ್ಟುಗಳಾದ ಒನ್ ಐಡಾಸ್ ಮತ್ತು ಮೊಹಾಕ್ ಜನ ಒಂಭತ್ತು ಸ್ಥಾನಗಳನ್ನು ಹೊಂದಿದ್ದರೆ, ಆನ್ ಆನ್ಡಗಾಸ್ ಹದಿನಾಲ್ಕು, ಕೆಯುಗಾಸ್ ಹತ್ತು ಮತ್ತು ಸೆನೆಕಾಸ್ ಎಂಟು ಸ್ಥಾನಗಳನ್ನು ಹೊಂದಿದ್ದವು. ಸೆನೆಕಾ ಬುಡಕಟ್ಟು ಜನಾಂಗದವರು, ಇತರ ಬುಡಕಟ್ಟು ಜನಾಂಗದವರನ್ನು ಒಟ್ಟಿಗೆ ಸೇರಿಸಿದರೂ ಕೂಡ ಸಮನಾಗದಷ್ಟು ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದರು. ಪ್ರಾತಿನಿಧ್ಯವು ಜನಸಂಖ್ಯೆಯ ಆಧಾರದ ಮೇಲಿರುತ್ತಿರಲಿಲ್ಲ. ಸೇಚಮ್ ನ ನಾಯಕ ಮರಣಹೊಂದಿದಾಗ, ಆತನ ಬುಡಕಟ್ಟು ಜನಾಂಗದ ಹಿರಿಯ ಮಹಿಳೆಯರು, ಗುಂಪಿನ ಇತರ ಮಹಿಳೆಯರ ಸಲಹೆಯನ್ನು ತೆಗೆದುಕೊಂಡು, ಮುಂದಿನ ಮಾತೃ ಸಂತತಿಯ ಪೀಳಿಗೆಯೊಂದಿಗೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತಿದ್ದರು. ನಿರ್ಧಾರಗಳನ್ನು ಮತಚಲಾಯಿಸುವ ಮೂಲಕ ತೆಗೆದುಕೊಳ್ಳದೆ ಒಮ್ಮತದ ಅಭಿಪ್ರಾಯದೊಂದಿಗೆ ತೆಗೆದುಕೊಳ್ಳುತ್ತಿದ್ದರು. ಇದರ ಜೊತೆಯಲ್ಲಿ ಸೇಚಮ್ ನ ನಾಯಕನು ಸೈದ್ಧಾಂತಿಕ ನಿರಾಕರಣಾಧಿಕಾರವನ್ನು ಹೊಂದಿರುತ್ತಿದ್ದನು. ಆನ್ ಆನ್ಡಗಾಸ್ "ಜ್ವಾಲೆಯನ್ನು ಅರ್ಪಿಸುವವರಾಗಿದ್ದು", ಚರ್ಚಿಸುವ ವಿಷಯಗಳನ್ನು ನೀಡಲು ಜವಾಬ್ದಾರರಾಗಿರುತ್ತಾರೆ. ಅಲ್ಲದೇ ಸಂಪ್ರದಾಯದಂತೆ ಉರಿಯುತ್ತಿರುವ ಬೆಂಕಿಯ ಮೂರು ಬದಿಗಳಲ್ಲಿ (ಬೆಂಕಿಯ ಒಂದು ಕಡೆಯಲ್ಲಿ ಮೊಹಾಕ್ ಗಳು ಮತ್ತು ಸೆನೆಕಾಸ್ ಕುಳಿತುಕೊಳ್ಳುತ್ತಿದ್ದರು; ಅಲ್ಲದೇ ಮತ್ತೊಂದು ಬದಿಯಲ್ಲಿ ಒನ್ ಐಡಾಸ್ ಮತ್ತು ಕೆಯುಗಾಸ್ ಕುಳಿತುಕೊಳ್ಳುತ್ತಿದ್ದರು)ಒಂದು ಕಡೆ ಕುಳಿತುಕೊಳ್ಳುತ್ತಿದ್ದರು.<ref name="Tooker">{{cite book |editor=Clifton JA |title=The Invented Indian: cultural fictions and government policies |url=http://books.google.ca/books?id=ARbVmr941TsC&pg=PA107#v=onepage&q&f=false|publisher==Transaction publisher=s |location=New Brunswick, N.J., U.S.A |year=1990 |pages=107–128 | chapter = The United States Constitution and the Iroquois League |isbn=1-56000-745-1 |oclc= |doi= |accessdate=2010-11-24 | author = Tooker E}}</ref> ಟೆಂಪಲ್ ವಿಶ್ವವಿದ್ಯಾನಿಲಯದಲ್ಲಿ ಮಾನವಶಾಸ್ತ್ರಜ್ಞರಾಗಿರುವ ಎಲಿಜಬೆತ್ ಟೂಕರ್,ಪೂರ್ವಿಕರು ಅಳವಡಿಸಿದ ಸರ್ಕಾರದ ವ್ಯವಸ್ಥೆಯು,ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅಳವಡಿಸಿಕೊಳ್ಳಲಾದ ಅಂತಿಮ ಆಡಳಿತ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗೆ ಹೋಲುತ್ತದೆ. ಅಲ್ಲದೇ ಇದು ಆನುವಂಶಿಕಕ್ಕಿಂತ ಬುಡಕಟ್ಟು ಜನಾಂಗದ ಮಹಿಳಾ ಸದಸ್ಯರು ಆಯ್ಕೆ ಮಾಡುವ ಚುನಾಯಿತ ನಾಯಕತ್ವವನ್ನೂ ಒಳಗೊಂಡಿದೆ. ಅಲ್ಲದೇ ಜನಸಂಖ್ಯೆಯ ಪ್ರಮಾಣವನ್ನು ಲೆಕ್ಕಿಸದೆ ಒಮ್ಮತದ ನಿರ್ಧಾರ ಕೈಗೊಳ್ಳುವಿಕೆಯನ್ನು ಕೂಡ ಒಳಗೊಂಡಿದೆ. ಅಷ್ಟೇ ಅಲ್ಲದೇ ಕೇವಲ ಒಂದು ಗುಂಪು ಮಾತ್ರ ಶಾಸಕಾಂಗದ ಎದುರು ವಿಷಯಗಳನ್ನು ಮಂಡಿಸಬಹುದಾಗಿದೆ,ಎಂದು ಮಾನವಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.<ref name="Tooker" />
ದೂರ ವ್ಯಾಪಾರವು ಸ್ಥಳೀಯ ಜನರ ನಡುವಿನ ಕದನಕ್ಕೆ ತಡೆಯುಂಟು ಮಾಡಲಿಲ್ಲ. ಉದಾಹರಣೆಗೆ, ಪುರಾತತ್ತ್ವಶಾಸ್ತ್ರದ ಮತ್ತು ಬುಡಕಟ್ಟು ಜನಾಂಗಗಳ' ಮೌಖಿಕ ಇತಿಹಾಸಗಳು ಇರೊಕ್ವಾಯ್ಸ್, ಸುಮಾರು 1200 CE ಯಲ್ಲಿ ಇಂದಿನ ಕೆನ್ ಟುಕಿ ಯಲ್ಲಿರುವ ಓಹಿಒ ನದಿ ಪ್ರದೇಶದ ಬುಡಕಟ್ಟು ಜನಾಂಗದವರ ಮೇಲೆ ದಾಳಿ ಮಾಡುತ್ತಿದ್ದರು ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡಿವೆ. ಅಂತಿಮವಾಗಿ ಅವರು, ಅನೇಕರನ್ನು ಐತಿಹಾಸಿಕವಾಗಿ ಅವರ ಸಾಂಪ್ರದಾಯಿಕ ನೆಲೆವಾಸಗಳಾದ ಮಿಸಿಸಿಪ್ಪಿ ನದಿಯ ಪಶ್ಚಿಮ ಭಾಗಕ್ಕೆ ವಲಸೆಗಾಗಿ ಜೊತೆಗೆ ಕರೆದುಕೊಂಡು ಬಂದರು. ಒಸೇಜ್, ಕಾವ್, ಪೊನ್ಕಾ ಮತ್ತು ಒಮಹಾ ಜನರನ್ನು ಒಳಗೊಂಡಂತೆ ಓಹಿಒ ಕಣಿವೆಯಲ್ಲಿ ಹುಟ್ಟಿಬೆಳೆದ ಬುಡಕಟ್ಟು ಜನಾಂಗದವರು ಪಶ್ಚಿಮಕ್ಕೆ ವಲಸೆ ಹೋದರು. ಆಗ 17 ನೇ ಶತಮಾನದ ಮಧ್ಯಾವಧಿಯಲ್ಲಿ ಅವರು ಈಗಿನ, ಕ್ಯಾನ್ ಸಾಸ್, ನೆಬ್ರಾಸ್ಕ್, ಆರ್ಕಾನ್ಸಸ್ ಮತ್ತು [[ಒಕ್ಲಹೋಮ]] ಗಳಲ್ಲಿರುವ ಅವರ ಐತಿಹಾಸಿಕ ಭೂಮಿಗಳಲ್ಲಿ ಪುನಃ ನೆಲಸಿದರು. ಒಸೇಜ್ ಬುಡಕಟ್ಟು ಜನಾಂಗದವರು ಸ್ಥಳೀಯ ಕ್ಯಾಡೊ ಭಾಷೆಯನ್ನು- ಮಾತನಾಡುವ ಸ್ಥಳೀಯ ಅಮೆರಿಕನ್ನರೊಂದಿಗೆ ಯುದ್ಧಮಾಡಿ, 18 ನೇ ಶತಮಾನದ ಮಧ್ಯಾವಧಿಯ ಹೊತ್ತಿಗೆ ಅವರನ್ನು ಸ್ಥಳಾಂತರಿಸಿದರು. ಅಲ್ಲದೇ ಅವರ ಹೊಸ ಐತಿಹಾಸಿಕ ಕ್ಷೇತ್ರಗಳನ್ನು ಆಳಿದರು.<ref>{{cite web | url = http://digital.library.okstate.edu/encyclopedia/entries/O/OS001.html | title = Osage | publisher = = Oklahoma Encyclopedia of History and Culture | accessdate = 2010-11-29 | last = Burns | first = LF | archive-date = 2011-01-02 | archive-url = https://web.archive.org/web/20110102050914/http://digital.library.okstate.edu/encyclopedia/entries/O/OS001.html | url-status = dead }}</ref>
===ಯುರೋಪಿಯನ್ ಪರಿಶೋಧನೆ ಮತ್ತು ವಸಾಹತುಗಾರಿಕೆ===
{{Main|Age of Discovery|European colonization of the Americas}}
[[File:Discovery of the Mississippi.jpg|left|thumb|ವಿಲಿಯಂ ಹೆನ್ರಿ ಪೋವೆಲ್ನ (1823–1879) ಡಿಸ್ಕವರಿ ಆಫ್ ಮಿಸ್ಸಿಸ್ಸಿಪ್ಪಿ, ಇದು ಮಿಸಿಸಿಪ್ಪಿ ನದಿಯನ್ನು ಮೊದಲ ಬಾರಿಗೆ ನೋಡುತ್ತಿರುವ ಡಿ ಸೋಟೊನ ರಮ್ಯ ಚಿತ್ರಣವಾಗಿದೆ.ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಕ್ಯಾಪಿಟಲ್ ಗೋಳಭವನದಲ್ಲಿ ತೂಗುಹಾಕಲಾಗಿದೆ.]]
ಆಗ 1492ರಲ್ಲಿ ಯುರೋಪಿಯನ್ನರು ಅಮೆರಿಕಾವನ್ನು ಪರಿಶೋಧಿಸಿದ (ಕಂಡುಕೊಂಡ)ನಂತರ ಹಳೆಯ ಮತ್ತು ನವ ಜಗತ್ತುಗಳು ಹೇಗೆ ತಮ್ಮನ್ನು ತಾವು ಕಂಡುಕೊಂಡವು ಎಂಬುದನ್ನು ಸೂಚಿಸಿದವು. ಆದರೆ ವಿಜಯಿ ಜುನ್ ಪಾನ್ಸ್ ಡೆ ಲಿಯೊನ್ 1513 ರ ಏಪ್ರಿಲ್ ನಲ್ಲಿ [[ಫ್ಲಾರಿಡ|ಲಾ ಫ್ಲೋರಿಡಾ]]ಗೆ ಬಂದಿಳಿದಾಗ ಅಮೆರಿಕನ್ ಡೀಪ್ ಸೌತ್ ನಲ್ಲಿ ಪ್ರಮುಖ ಸಂಪರ್ಕಗಳಲೊಂದು ಏರ್ಪಟ್ಟಿತು. ಅನಂತರ 1528 ರಲ್ಲಿ ಪ್ಯಾನ್ ಫಿಲ್ಲೊ ಡೆ ನ್ಯಾರ್ವೇಜ್ ಮತ್ತು 1539 ರಲ್ಲಿ ಹೆರ್ನ್ಯಾನ್ಡೊ ಡೆ ಸೊಟೊ ಗಳಂತಹ ಇತರ ಸ್ಪ್ಯಾನಿಷ್ ಪರಿಶೋಧಕರು ಪಾನ್ಸ್ ಡೆ ಲಿಯೊನ್ ನನ್ನು ಅನುಸರಿಸಿದರು. ಅನಂತರ ಉತ್ತರ ಅಮೆರಿಕಕ್ಕೆ ಬಂದಂತಹ ಯುರೋಪಿಯನ್ ವಸಾಹತುಗಾರರು, ಕ್ರೈಸ್ತ ನಾಗರಿಕತೆಯನ್ನು ಹರಡುವ ಮೂಲಕ ಅನಾಗರಿಕ ಮತ್ತು ಅಸಂಸ್ಕೃತ ವಿಶ್ವವನ್ನು ಕಾಪಾಡುತ್ತಾರೆ ಎಂಬ ಕಲ್ಪನೆಯೊಂದಿಗೆ ಸಾಮ್ರಾಜ್ಯದ ವಿಸ್ತರಣೆಗೆ ಮುಂದಾದರು.<ref>{{Cite book
|title=Globalization and educational rights: an intercivilizational analysis
|author=Joel H. Spring
|publisher==Routledge
|year=2001
|isbn=9780805838824
|page=[https://books.google.com/books?id=3lobX1DC_i0C&pg=PA92 92]
|url=https://books.google.com/?id=3lobX1DC_i0C
|postscript=.
}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
ಅಮೆರಿಕದ ಸ್ಪ್ಯಾನಿಷ್ ವಸಾಹತುಗಾರಿಕೆಯಲ್ಲಿ ಇಂಡಿಯನ್ ರಿಡಕ್ಷನ್ಸ್ ನೀತಿಯಿಂದಾಗಿ, ಉತ್ತರ ''ನ್ಯೂವೊ ಎಸ್ಪ್ಯಾನ್'' ನಲ್ಲಿ, [[ಅಮೇರಿಕ ಖಂಡಗಳ ಸ್ಥಳೀಯ ಜನ|ಸ್ಥಳೀಯ ಜನರು]] ದೀರ್ಘಕಾಲದಿಂದ ಆಚರಿಸಿಕೊಂಡು ಬಂದ ಅವರ ಆಧ್ಯಾತ್ಮಿಕ ಮತ್ತು [[ಧರ್ಮ|ಧಾರ್ಮಿಕ ಸಂಪ್ರದಾಯ]]ಗಳಿಂದ ದೂರಾಗುವಂತೆ, ಹಾಗು ತಮ್ಮದೇ ಆದ ಮತಧರ್ಮಶಾಸ್ತ್ರದ ನಂಬಿಕೆಗಳಿಂದ ಮತಾಂತರಗೊಳ್ಳುವಂತೆ ಅವರನ್ನು ಒತ್ತಾಯಿಸಲಾಯಿತು.
====ಸ್ಥಳೀಯ ಜನರ ಮೇಲಾದ ಪರಿಣಾಮ====
ಹೀಗೆ 16 ನೇ ಶತಮಾನದಿಂದ 19 ನೇ ಶತಮಾನದ ಮೂಲಕ ಸ್ಥಳೀಯ ಅಮೆರಿಕನ್ನರ ಜನಸಂಖ್ಯೆಯು ಕೆಳಕಂಡ ಕಾರಣಗಳಿಗಾಗಿ ಇಳಿಮುಖವಾಯಿತು: ಯುರೋಪ್ ನಿಂದ ಬಂದ ಸಾಂಕ್ರಾಮಿಕ ರೋಗ; ಯುರೋಪಿಯನ್ ಶೋಷಕರು, ವಸಾಹತುಗಾರರಿಂದ ನಡೆದ ನರಮೇಧ,ಜನಹತ್ಯೆ ಮತ್ತು ಬುಡಕಟ್ಟು ಜನಾಂಗದವರ ನಡುವೆ ನಡೆದ ಯುದ್ಧ<ref>{{cite web|author=Latest activity 50 minutes ago |url=http://www.amazon.com/dp/0375503749 |title=''The Wild Frontier: Atrocities During the American-Indian War'' |publisher==Amazon.com |date= |accessdate=2010-08-22}}</ref>; ಅವರ ಮೂಲ ವಾಸಸ್ಥಾನಗಳಿಂದ ಅವರನ್ನು ಸ್ಥಳಾಂತರಗೊಳಿಸಿದ್ದು; ಆಂತರಿಕ ಯುದ್ಧ,<ref>{{cite web |url=http://www.nativeamericans.com/Huron.htm |title=Native Americans – Huron Tribe |publisher==Nativeamericans.com |date= |accessdate=2010-08-22 |archive-date=2011-06-13 |archive-url=https://web.archive.org/web/20110613150921/http://www.nativeamericans.com/Huron.htm |url-status=dead }}</ref> ಗುಲಾಮಗಿರಿ; ಮತ್ತು ಅಧಿಕ ಸಂಖ್ಯೆಯ ಅಂತರ್ವಿವಾಹಗಳು ಇತ್ಯಾದಿ.<ref name="accessgenealogy1">[http://www.accessgenealogy.com/native/tribes/history/indianblood.htm "ಇಂಡಿಯನ್ ಮಿಕ್ಸ್ಡ್-ಬ್ಲಡ್"] {{Webarchive|url=https://web.archive.org/web/20130524094536/http://www.accessgenealogy.com/native/tribes/history/indianblood.htm |date=2013-05-24 }}, ಫ್ರೆಡೆರಿಕ್ ಡಬ್ಲ್ಯೂ. ಹಾಡ್ಗೆ, ''ಹ್ಯಾಂಡ್ಬುಕ್ ಆಫ್ ಅಮೆರಿಕನ್ ಇಂಡಿಯನ್ಸ್'', 1906</ref><ref name="uwec1">{{Cite web |url=http://www.uwec.edu/freitard/GroupAndMinority/Albuquerque/History/albuquerqueHistory.htm |title=ಮೈನಾರಿಟಿ ಪಾಲಿಟಿಕ್ಸ್ ಇನ್ ಆಲ್ಬುಕ್ವೆರ್ಕ್ಯೂ – ಹಿಸ್ಟರಿ |access-date=2011-02-25 |archive-date=2008-02-24 |archive-url=https://archive.is/20080224114408/http://www.uwec.edu/freitard/GroupAndMinority/Albuquerque/History/albuquerqueHistory.htm |url-status=dead }}</ref> ಬಹುಪಾಲು ಪ್ರಚಲಿತ ವಿದ್ವಾಂಸರು ಅನೇಕ ಸಹಾಯಕ ಅಂಶಗಳೊಳಗೆ, ಸಾಂಕ್ರಾಮಿಕ ರೋಗವು ಸ್ಥಳೀಯ ಅಮೆರಿಕನ್ನರ ಜನಸಂಖ್ಯೆಯಲ್ಲಿ ಕುಸಿತ ಉಂಟಾಗಲು ಮುಖ್ಯ ಕಾರಣವಾಗಿತ್ತು ಎಂದು ನಂಬುತ್ತಾರೆ. ಏಕೆಂದರೆ ಯುರೋಪ್ ನಿಂದ ಬಂದ ಹೊಸ ರೋಗವನ್ನು ತಡೆದುಕೊಳ್ಳಲು ಅವರಲ್ಲಿದ್ದ ರೋಗ ನಿರೋಧಕ ಶಕ್ತಿಯ ಕೊರತೆಯೇ ಕಾರಣವೆನ್ನುತ್ತಾರೆ.<ref>{{cite web|url=http://www.bbc.co.uk/history/british/empire_seapower/smallpox_01.shtml |title=Smallpox: Eradicating the Scourge |publisher==Bbc.co.uk |date=2009-11-05 |accessdate=2010-08-22}}</ref><ref>{{cite web |url=http://www.libby-genealogy.com/epidemics.htm |title=Epidemics |publisher==Libby-genealogy.com |date=2009-04-30 |accessdate=2010-08-22 |archive-date=2013-07-22 |archive-url=https://web.archive.org/web/20130722144136/http://www.libby-genealogy.com/epidemics.htm |url-status=dead }}</ref><ref>{{cite web|url=http://www.pbs.org/gunsgermssteel/variables/smallpox.html |title=The Story Of... Smallpox—and other Deadly Eurasian Germs |publisher==Pbs.org |date= |accessdate=2010-08-22}}</ref> ಕೆಲವು ಜನಾಂಗಗಳ ಜನಸಂಖ್ಯೆಗಳಲ್ಲಿ ಉಂಟಾದ ಕ್ಷಿಪ್ರ ಕುಸಿತ, ಮತ್ತು ಅವರದೇ ರಾಷ್ಟ್ರಗಳ ನಡುವೆ ಮುಂದುವರೆಸಿದ ಪೈಪೋಟಿಯೊಂದಿಗೆ ಸ್ಥಳೀಯ ಅಮೆರಿಕನ್ನರು ಕೆಲವೊಮ್ಮೆ, ಫ್ಲೋರಿಡಾದ ಸೆಮಿನಾಲ್ಸ್ ಮತ್ತು ಆಲ್ಟಾ ಕ್ಯಾಲಿಫೋರ್ನಿಯಾದ ಮಿಷಿನ್ ಇಂಡಿಯನ್ನರಂತಹ ಹೊಸ ಸಾಂಸ್ಕೃತಿಕ ಗುಂಪುಗಳನ್ನು ರಚಿಸಲು ಪುನಃ ಸಂಘಟಿತವಾದರು.
ಪ್ರಬಲ ಸಾಕ್ಷ್ಯಾಧಾರ ಅಥವಾ ಲಿಖಿತ ದಾಖಲೆಯ ಕೊರತೆಯಿಂದಾಗಿ, ಸ್ಥಳೀಯ ಅಮೆರಿಕನ್ನರ ಜನಸಂಖ್ಯೆಯನ್ನು, ಯುರೋಪಿಯನ್ ಪರಿಶೋಧಕರು ಮತ್ತು ವಸಾಹತುಗಾರರ ಆಗಮನದ ಮೊದಲು, ಅಮೆರಿಕಾದ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿದ್ದಂತಹ, ಜನರ ಸಂಖ್ಯೆ ಎಂದು ಅಂದಾಜುಮಾಡಲಾಗಿದೆ.ಈ ವಿಷಯವು ಇನ್ನೂ ಚರ್ಚೆಗೆ ಒಳಪಟ್ಟಿದೆ. ಮಾನವಶಾಸ್ತ್ರಜ್ಞ ಜೇಮ್ಸ್ ಮೂನಿಯವರು 1890 ರಲ್ಲಿ ಸುಮಾರು 1 ಮಿಲಿಯನ್ ಇದ್ದಿರಬಹುದೆಂದು ಮೊದಲ ಬಾರಿ ಅಂದಾಜುಮಾಡಿದ್ದರು. ಪ್ರತಿ ಸಾಂಸ್ಕೃತಿಕ ಪ್ರದೇಶದ ಜನಸಂಖ್ಯಾ ಸಾಂದ್ರತೆಯನ್ನು ಅವುಗಳ ಬದುಕುವ ಸಾಮರ್ಥ್ಯದ ಆಧಾರದ ಮೇಲೆ ಪರಿಗಣಿಸಲಾಗುವುದು.
ನಂತರ 1965ರಲ್ಲಿ, ಅಮೆರಿಕನ್ ಮಾನವಶಾಸ್ತ್ರಜ್ಞರಾದ ಹೆನ್ರಿ ಡೊಬಾಯ್ಸ್, ನಿಜವಾದ ಜನಸಂಖ್ಯೆ 10 ರಿಂದ 12 ಮಿಲಿಯನ್ ಇದ್ದಿರಬಹುದೆಂದು ಅಂದಾಜು ಮಾಡುವ ಮೂಲಕ ಆ ಕುರಿತ ಅಧ್ಯಯನಗಳನ್ನು ಪ್ರಕಟಿಸಿದರು. ಅದೇನೇ ಆದರೂ 1983ರ ಹೊತ್ತಿಗೆ ಅವರ ಅಂದಾಜನ್ನು, 18 ಮಿಲಿಯನ್ ಗೆ ಏರಿಸಿದರು.<ref>[ಗ್ವೆಂಟರ್ ಲೆವಿ, "ವರ್ ಅಮೆರಿಕನ್ ಇಂಡಿಯನ್ಸ್ ದಿ ವಿಕ್ಟಿಮ್ಸ್ ಆಫ್ ಜೆನೋಸಿಡ್?"], ಹಿಸ್ಟರಿ ನ್ಯೂಸ್ ನೆಟ್ವರ್ಕ್, 11–22–04</ref> ಅವರು, ಯುರೋಪಿಯನ್ ಪರಿಶೋಧಕರು ಮತ್ತು ವಸಾಹತುಗಾರರಿಂದ ಪಸರಿಸಿದ ಸಾಂಕ್ರಾಮಿಕ ರೋಗ ದ ಎದುರು ಸಹಜವಾದ ರೋಗ ನಿರೋಧಕ ಶಕ್ತಿ ಇಲ್ಲದೇ ಮೃತಪಟ್ಟ ಸ್ಥಳೀಯ ಅಮೆರಿಕನ್ನರ ಮರಣ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರು. ಡೊಬೈನ್ಸ, ನಿಜವಾದ ಜನಸಂಖ್ಯೆಯ ನಿರೀಕ್ಷಿಸಬಹುದಾದ ಪ್ರಮಾಣವನ್ನು ಲೆಕ್ಕಹಾಕಲು, ಸ್ಥಳೀಯ ಜನರಲ್ಲಿ ಈ ಕಾಯಿಲೆಯ ಮರಣ ಪ್ರಮಾಣವನ್ನು, 19 ನೇ ಶತಮಾನದ ವಿಶ್ವಸನೀಯ ಜನಸಂಖ್ಯಾ ದಾಖಲೆಯೊಂದಿಗೆ ಸೇರಿಸಿದ್ದಾರೆ.<ref name="ggbook" /><ref name="encbrit" />
ಈ ಸಮಯದಲ್ಲಿ ಸೀತಾಳೆ ಸಿಡುಬು ಮತ್ತು ದಡಾರ, ಸ್ಥಳೀಯವಾಗಿದ್ದರೂ ಕೂಡ ಯುರೋಪಿಯನ್ನರಿಗೆ ಹೆಚ್ಚು ಮಾರಕವಾಗಿರಲಿಲ್ಲ ([[ಏಷ್ಯಾ]]ದಿಂದ ಪರಿಚಯಿಸಿದ ಅನೇಕ ವರ್ಷಗಳ ನಂತರ), ಆದರೆ ಅವು ಸ್ಥಳೀಯ ಅಮೆರಿಕನ್ನರಿಗೆ ಮಾರಕವಾಗಿದ್ದವೆಂಬುದು ಸಾಬೀತಾಗಿದೆ. ವಿಶೇಷವಾಗಿ ಸೀತಾಳೆ ಸ್ಥಳೀಯ ಅಮೆರಿಕನ್ನರಿಗೆ ಮಾರಕವಾಗಿತ್ತೆಂದು ಸಾಬೀತಾಗಿದೆ.<ref>ನೇಟಿವ್ ಅಮೆರಿಕನ್ಸ್ ಹಿಸ್ಟರಿ ಆಂಡ್ ಕಲ್ಚರ್ಸ್, http://www.meredith.edu/nativeam/setribes.htm {{Webarchive|url=https://web.archive.org/web/20120106012228/http://www.meredith.edu/nativeam/setribes.htm |date=2012-01-06 }} ಸುಸಾನ್ ಸ್ಕ್ವೈರ್ಸ್ ಆಂಡ್ ಜಾನ್ ಕಿಂಚೆಲೊ, ಸಿಲೇಬಸ್ ಫಾರ್ HIS 943A, ಮೆರೆಡಿತ್ ಕಾಲೇಜ್, 2005. 2006ರ ಸೆಪ್ಟೆಂಬರ್ 19ರಂದು ಮರುಸಂಪಾದಿಸಲಾಗಿದೆ.</ref> ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಯುರೋಪಿಯನ್ ಪರಿಶೋಧನೆಯ ನಂತರ ಬರುತ್ತಿದ್ದವು. ಅಲ್ಲದೇ ಕೆಲವೊಮ್ಮೆ ಸಂಪೂರ್ಣ ಹಳ್ಳಿಯ ಜನರನ್ನೆಲ್ಲಾ ನಾಶ ಮಾಡಿಬಿಡುತ್ತಿದ್ದವು. ಖಚಿತವಾಗಿ ಮರಣ ಪ್ರಮಾಣದ ಅಂದಾಜನ್ನು ನಿರ್ಧರಿಸಲಾಗದಿದ್ದಾಗ ಕೆಲವು ಇತಿಹಾಸತಜ್ಞರು, ಮೊದಲ ಸಂಪರ್ಕದ ನಂತರ ಯುರೇಷಿಯನ್ ಸಾಂಕ್ರಾಮಿಕ ರೋಗದಿಂದಾಗಿ 80ಪ್ರತಿಶತದಷ್ಟು ಕೆಲವು ಸ್ಥಳೀಯ ಜನಸಮೂಹ ಮರಣಕ್ಕೆ ತುತ್ತಾಯಿತು, ಎಂದು ಅಂದಾಜುಮಾಡಿದ್ದಾರೆ.<ref>ಗ್ರೆಗ್ ಲ್ಯಾಂಗೆ,[http://www.historylink.org/essays/output.cfm?file_id=5100 "ಸ್ಮಾಲ್ಪಾಕ್ಸ್ ಎಪಿಡೆಮಿಕ್ ರೆವೇಜಸ್ ನೇಟಿವ್ ಅಮೆರಿಕನ್ಸ್ ಆನ್ ದಿ ನಾರ್ತ್ವೆಸ್ಟ್ ಕೋಸ್ಟ್ ಆಫ್ ನಾರ್ತ್ ಅಮೆರಿಕಾ ಇನ್ ದಿ 1770"], HistoryLink.org, ''ಆನ್ಲೈನ್ ಎನ್ಸೈಕ್ಲೊಪೀಡಿಯಾ ಆಫ್ ವಾಷಿಂಗ್ಟನ್ ಸ್ಟೇಟ್ ಹಿಸ್ಟರಿ'', 23 ಜನವರಿ 2003. 2008ರ ಜೂನ್ 2ರಂದು ಮರುಸಂಪಾದಿಸಲಾಯಿತು.</ref> ಕೊಲಂಬಿಯನ್ ವಿನಿಮಯದ ಒಂದು ಸಿದ್ಧಾಂತವು, [[ಕ್ರಿಸ್ಟೊಫರ್ ಕೊಲಂಬಸ್]] ನ ಪರಿಶೋಧನೆಯಿಂದ ಬಂದ ಕೆಲವು ಪರಿಶೋಧಕರು ಸ್ಥಳೀಯ ಜನರಿಂದ ಮೇಹರೋಗ ವನ್ನು (ಚರ್ಮರೋಗ) ಸೋಂಕಿಸಿಕೊಂಡು ಯುರೋಪ್ ಗೂ ಕೊಂಡೊಯ್ದರು. ಅಲ್ಲಿ ಅದು ವ್ಯಾಪಕವಾಗಿ ಹರಡಿತು.<ref>[http://www.livescience.com/history/080114-syphilis-columbus.html "ಕೊಲಂಬಸ್ ಮೇ ಹ್ಯಾವ್ ಬ್ರೋಟ್ ಸಿಫಿಲಿಸ್ ಟು ಯುರೋಪ್"], ಲೈವ್ಸೈನ್ಸ್, 15 ಜನವರಿ 2008.</ref> ಕೊಲಂಬಸ್ ಮತ್ತು ಆತನ ಸಹಚರರು ಅಮೆರಿಕಾದ ಸ್ಥಳಿಯ ಜನರ ಬಳಿಗೆ ಹೊರಗಿನಿಂದ ಮರಳಿ ಬರುವ ಮೊದಲೇ, ಯುರೋಪ್ ಮತ್ತು [[ಏಷ್ಯಾ|ಏಷ್ಯಾದಲ್ಲಿ]] ರೋಗವು ಅಸ್ತಿತ್ವದಲ್ಲಿತ್ತೆಂದು ಇತರ ಸಂಶೋಧಕರು ನಂಬುತ್ತಾರೆ. ಆದರೆ ಅವರು ಅದನ್ನು ಹೆಚ್ಚು ವಿಷಪೂರಿತ ರೂಪದಲ್ಲಿ ಹಿಂದಕ್ಕೆ ತಂದರು. (''ಮೇಹ ರೋಗ ನೋಡಿ''.)
ಹೀಗೆ 1618–1619 ರಲ್ಲಿ, ಸೀತಾಳೆ 90 ಪ್ರತಿಶತದಷ್ಟು ಮ್ಯಾಸಚುಸೆಟ್ಟ್ಸ್ ಕೊಲ್ಲಿಯ ಸ್ಥಳೀಯ ಅಮೆರಿಕನ್ನರನ್ನು ನಾಶಮಾಡಿತು.<ref>{{Cite web |url=http://www.ucpress.edu/books/pages/9968/9968.ch01.html |title=ಡೇವಿಡ್ ಎ. ಕೊಪ್ಲೊ, '' ಸ್ಮಾಮ್ಪಾಕ್ಸ್: ದಿ ಫ್ಲೈಟ್ ಟು ಎರಾಡಿಕೇಟ್ ಎ ಗ್ಲೋಬಲ್ ಸ್ಕೋರ್ಜ್'' |access-date=2011-02-25 |archive-date=2008-09-07 |archive-url=https://web.archive.org/web/20080907093641/http://www.ucpress.edu/books/pages/9968/9968.ch01.html |url-status=dead }}</ref> ಇತಿಹಾಸಗಾರರು, ಇಂದಿನ ನ್ಯೂಯಾರ್ಕ್ ನಲ್ಲಿದ್ದ ಅನೇಕ ಮೊಹಾಕ್ ಸ್ಥಳೀಯ ಅಮೆರಿಕನ್ನರು, 1634 ರಲ್ಲಿ ಆಲ್ ಬೆನಿಯಲ್ಲಿ ಡಚ್ ವ್ಯಾಪಾರಿಗಳ ಮಕ್ಕಳೊಂದಿಗೆ ಸಂಪರ್ಕಕ್ಕೆ ಬಂದ ನಂತರ ರೋಗ ಪೀಡಿತರಾದರು. ರೋಗವು ಮೊಹಾಕ್ ಹಳ್ಳಿಗಳಿಂದ ವೇಗವಾಗಿ ಪಸರಿಸಿ 1636 ರ ಹೊತ್ತಿಗೆ ಲೇಕ್ ಆನ್ ಟಾರಿಯೊನಲ್ಲಿದ್ದ ಸ್ಥಳೀಯ ಅಮೆರಿಕನ್ನರನ್ನು ಮತ್ತು 1679 ರ ಹೊತ್ತಿಗೆ ಪಶ್ಚಿಮ ಇರೊಕ್ವಿಯನ್ನರನ್ನು ತಲುಪಿತು. ಇದು ಪ್ರವಾಸ ಮತ್ತು ವ್ಯಾಪಾರಕ್ಕಾಗಿ ಹೊರಹೋದ ಮೊಹಾಕ್ ಮತ್ತು ಇತರ ಸ್ಥಳೀಯ ಅಮೆರಿಕನ್ನರಿಂದ ಹರಡಿತ್ತು.<ref>ಎಮ್. ಪಾಲ್ ಕೀಸ್ಲರ್, [http://www.paulkeeslerbooks.com/Chap5Iroquois.html#DutchChildren "ಡಚ್ ಚಿಲ್ಡ್ರನ್ಸ್ ಡಿಸೀಸ್ ಕಿಲ್ಸ್ ಥೌಸಂಡ್ಸ್ ಆಫ್ ಮೊಹಾವ್ಕ್ಸ್"] {{Webarchive|url=https://web.archive.org/web/20071217225720/http://www.paulkeeslerbooks.com/Chap5Iroquois.html#DutchChildren |date=2007-12-17 }}, ''ಮೊಹಾವ್ಕ್: ಡಿಸ್ಕವರಿಂಗ್ ದಿ ವ್ಯಾಲಿ ಆಫ್ ದಿ ಕ್ರಿಸ್ಟಲ್ಸ್'', 2004. 2008ರ ಜೂನ್ 2ರಂದು ಮರುಸಂಪಾದಿಸಲಾಯಿತು.</ref> ಅಧಿಕ ಮರಣ ಸಂಖ್ಯೆಯಿಂದಾಗಿ, ಸ್ಥಳೀಯ ಅಮೆರಿಕನ್ ಸಮಾಜಗಳಲ್ಲಿ ಆರೋಗ್ಯದ ಸ್ಥಿತಿ ನಾಶವಾಯಿತು. ಅಲ್ಲದೇ ಪೀಳಿಗೆಗಳ ಸಾಂಸ್ಕೃತಿಕ ವಿನಿಮಯಕ್ಕೆ ತಡೆಯುಂಟಾಯಿತು.
[[File:Conference Between the French and Indian Leaders Around a Ceremonial Fire by Vernier.jpg|thumb|ಒಂದು ಕರ್ಮಾಚರಣೆ ಅಗ್ನಿಯ ಸುತ್ತ ಸೇರಿದ ಫ್ರೆಂಚ್ ಮತ್ತು ಇಂಡಿಯನ್ ಮುಖಂಡರ ಸಭೆ.]]
ಈ ಹಿಂದೆ 1754 ರಿಂದ 1763 ರ ನಡುವೆ ಅನೇಕ ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗದವರು, ಫ್ರೆಂಚ್ ಪಡೆಯೊಂದಿಗೆ ಬ್ರಿಟಿಷ್ ವಸಾಹತು ಸೈನಿಕಪಡೆಯ ವಿರುದ್ಧ ನಡೆದ ಫ್ರೆಂಚ್ ಮತ್ತು ಇಂಡಿಯನ್ ಯುದ್ಧ/ಏಳು ವರ್ಷಗಳ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಅಮೆರಿಕನ್ನರು ಯುದ್ಧದ ಎರಡೂ ಕಡೆಗಳಲ್ಲಿಯೂ ಹೋರಾಟಮಾಡಿದರು. ಬುಡಕಟ್ಟು ಜನಾಂಗದವರು ಯುರೋಪಿಯನ್ ವಿಸ್ತರಣೆ ತಡೆಗಟ್ಟುವ ಭರವಸೆಯಲ್ಲಿ ಫ್ರೆಂಚ್ ನೊಂದಿಗೆ ಅಧಿಕ ಸಂಖ್ಯೆಯಲ್ಲಿ ಒಟ್ಟಾಗಿ ಹೋರಾಡಿದರು. ಬ್ರಿಟಿಷರು ಕೆಲವು ಮೈತ್ರಿಗಳನ್ನು ಮಾಡಿಕೊಂಡರು. ಆದರೆ ಒಪ್ಪಂದಗಳಿಗೆ ಬೆಂಬಲ ನೀಡುವಲ್ಲಿ ಹೊಂದಾಣಿಕೆ ಮತ್ತು ನಿಷ್ಠೆಯನ್ನು ತೋರಿಸುವಂತೆ ಕೆಲವು ಬುಡಕಟ್ಟು ಜನಾಂಗದವರನ್ನು ಕೋರಿದರು. ಆದರೆ ಅನಂತರ ಇವು ಬುಡಮೇಲಾದಾಗ ಅವರು ನಿರಾಶರಾದರು. ಇದರ ಜೊತೆಯಲ್ಲಿ ಯುರೋಪಿಯನ್ ಶಕ್ತಿಗಳೊಂದಿಗೆ ಅವರ ಮೈತ್ರಿಯನ್ನು ಬಳಸಿಕೊಂಡು ಸಾಂಪ್ರದಾಯಿಕ ಸ್ಥಳೀಯ ಶತ್ರುಗಳೊಂದಿಗೆ, ಹೋರಾಡಲು ಬುಡಕಟ್ಟು ಜನಾಂಗದವರು ಅವರದೇ ಆದ ಉದ್ದೇಶಗಳನ್ನು ಹೊಂದಿದ್ದರು.
ಆದರೆ [[File:Native California population graph.jpg|250px|thumb|right|ಕುಕ್ 1978ರ ಪ್ರಕಾರ ಸ್ಥಳೀಯ ಕ್ಯಾಲಿಫೋರ್ನಿಯಾದ ಜನಸಂಖ್ಯೆ.]]1770 ರಲ್ಲಿ ಯುರೋಪಿಯನ್ ಪರಿಶೋಧಕರು ಪಶ್ಚಿಮ ಕರಾವಳಿಯನ್ನು ತಲುಪಿದ ನಂತರ, ಸೀತಾಳೆ ಕ್ಷಿಪ್ರವಾಗಿ ವಾಯವ್ಯ ಕರಾವಳಿಯ 30 ಪ್ರತಿಶತದಷ್ಟು ಸ್ಥಳೀಯ ಅಮೆರಿಕನ್ ರನ್ನು ಬಲಿತೆಗೆದುಕೊಂಡಿತ್ತು. ಮುಂದಿನ 80 ರಿಂದ 100 ವರ್ಷಗಳಲ್ಲಿ ಸೀತಾಳೆ ಮತ್ತು ಇತರ ರೋಗಗಳು ಈ ಪ್ರದೇಶದಲ್ಲಿ ಸ್ಥಳೀಯ ಜನರನ್ನು ಬಲಿತೆಗೆದುಕೊಂಡವು.<ref>[http://www2.h-net.msu.edu/reviews/showrev.php?id=4547 "ಪ್ಲೇಗ್ಸ್ ಆಂಡ್ ಪೀಪಲ್ಸ್ ಆನ್ ದಿ ನಾರ್ತ್ವೆಸ್ಟ್ ಕೋಸ್ಟ್"] {{Webarchive|url=https://web.archive.org/web/20101227194037/http://www2.h-net.msu.edu/reviews/showrev.php?id=4547 |date=2010-12-27 }} ಹ್ಯುಮಾನಿಟೀಸ್ ಆಂಡ್ ಸೋಷಿಯಲ್ ಸೈನ್ಸಸ್ ಆನ್ಲೈನ್.</ref> ಪುಜೆಟ್ ಸೌಂಡ್ ಪ್ರದೇಶದಲ್ಲಿ ಒಮ್ಮೆ 37,000 ಸಾವಿರ ಜನರಿದ್ದರೆಂದು ಇದು ಅಧಿಕ ಜನಸಂಖ್ಯೆಯೆಂದೂ ಅಂದಾಜು ಮಾಡಲಾಗಿತ್ತು, ಆದರೆ ಈ ಪ್ರಮಾಣ 19 ನೇ ಶತಮಾನದ ಮಧ್ಯಾವಧಿಯಲ್ಲಿ ವಸಾಹತುಗಾರರು ''ಒಟ್ಟಾಗಿ'', ಸಮೂದಾಯವಾಗಿ ಆಗಮಿಸಿದ ಸಮಯದಲ್ಲಿ ಕೇವಲ 9,000 ಕ್ಕೆ ಇಳಿದಿತ್ತು.<ref>ಗ್ರೆಗ್ ಲ್ಯಾಂಗೆ,[http://www.historylink.org/index.cfm?DisplayPage=output.cfm&File_Id=5100 "ಸ್ಮಾಲ್ಪಾಕ್ಸ್ ಎಪಿಡೆಮಿಕ್ ರೆವೇಜಸ್ ನೇಟಿವ್ ಅಮೆರಿಕನ್ಸ್ ಆನ್ ದಿ ನಾರ್ತ್ವೆಸ್ಟ್ ಕೋಸ್ಟ್ ಆಫ್ ದಿ ನಾರ್ತ್ ಅಮೆರಿಕಾ ಇನ್ ದಿ 1770"], ''ದಿ ಆನ್ಲೈನ್ ಎನ್ಸೈಕ್ಲೊಪೀಡಿಯಾ ಆಫ್ ವಾಷಿಂಗ್ಟನ್ ಸ್ಟೇಟ್ ಹಿಸ್ಟರಿ'', 23 ಜನವರಿ 2003. 2008ರ ಆಗಸ್ಟ್ 9ರಂದು ಮರುಸಂಪಾದಿಸಲಾಗಿದೆ.</ref> ಕ್ಯಾಲಿಫೋರ್ನಿಯಾದಲ್ಲಿ ಸ್ಪ್ಯಾನಿಷ್ ಆಯೋಗವು,ಸ್ಥಳೀಯ ಅಮೆರಿಕನ್ ಕ್ಯಾಲಿಫೋರ್ನಿಯನ್ನರ ಜನಸಂಖ್ಯೆಯ ಮೇಲೆ ಗಮನಾರ್ಹ ಪರಿಣಾಮ ಬೀರದಿದ್ದರೂ ಕೂಡ, ಕ್ಯಾಲಿಫೋರ್ನಿಯಾದಲ್ಲಿ ಸ್ಪ್ಯಾನಿಷ್ ವಸಾಹತುಗಳು ಕಾಣಿಸಿಕೊಂಡ ನಂತರ ಅವರ ಜನಸಂಖ್ಯೆಯಲ್ಲಿ ಕುಸಿತ ಕಾಣಿಸಿತು. ಅದರಲ್ಲೂ ವಿಶೇಷವಾಗಿ 19ನೇ ಶತಮಾನದ ಉತ್ತರಾರ್ಧ ಮತ್ತು 20 ನೇ ಶತಮಾನದ ಪ್ರಾರಂಭದಲ್ಲಿ ಭಾರೀ ಮಟ್ಟದ ಕುಸಿತ ಕಾಣಬಹುದಾಗಿದೆ.(ಬಲ ಬದಿಯ ಕೋಷ್ಠಕ ನೋಡಿ).
ಅನಂತರದ 1780–1782 ರಲ್ಲಿ ಮತ್ತು 1837–1838ರಲ್ಲಿ ಬಂದ ಸೀತಾಳೆ ಸಾಂಕ್ರಾಮಿಕ ರೋಗವು ಪ್ಲೇನ್ಸ್ ಇಂಡಿಯನ್ನರ ತೀವ್ರ ನಿರ್ಜನೀಕರಣ ಮತ್ತು ಹಾನಿಗೆ ಕಾರಣವಾಯಿತು.<ref>[http://www.pubmedcentral.nih.gov/articlerender.fcgi?artid=2094753 "ದಿ ಫರ್ಸ್ಟ್ ಸ್ಮಾಲ್ಪಾಕ್ಸ್ ಎಪಿಡೆಮಿಕ್ ಆನ್ ದಿ ಕೆನಡಿಯನ್ ಪ್ಲೇನ್ಸ್: ಇನ್ ದಿ ಫರ್-ಟ್ರೇಡರ್ಸ್ ವರ್ಡ್ಸ್"] {{Webarchive|url=https://web.archive.org/web/20200601214615/http://www.pubmedcentral.nih.gov/articlerender.fcgi?artid=2094753 |date=2020-06-01 }}, ನ್ಯಾಷನಲ್ ಇನ್ಸ್ಟಿಟ್ಯೂಟ್ಸ್ ಆಫ್ ಹೆಲ್ತ್</ref><ref>[http://www.thefurtrapper.com/ "ಮೌಂಟೇನ್ ಮ್ಯಾನ್-ಪ್ಲೇನ್ಸ್ ಇಂಡಿಯನ್ ಫರ್ ಟ್ರೇಡ್"] {{Webarchive|url=https://web.archive.org/web/20110317053022/http://www.thefurtrapper.com/ |date=2011-03-17 }}, ದಿ ಫರ್ ಟ್ರ್ಯಾಪರ್</ref> ಅದಲ್ಲದೇ 1832ರ ಹೊತ್ತಿಗೆ, ಸಂಯುಕ್ತ ಸರ್ಕಾರವು ಸ್ಥಳೀಯ ಅಮೆರಿಕನ್ನರಿಗಾಗಿ (''1832 ರ ಇಂಡಿಯನ್ ಚುಚ್ಚುಮದ್ದಿನ ಕಾಯ್ದೆ'' ) ಸೀತಾಳೆ ಸಿಡುಬು ಚುಚ್ಚುಮದ್ದಿನ ಮೂಲಕ ನಿವಾರಣಾ ಕಾರ್ಯಕ್ರಮವನ್ನು ಆಯೋಜಿಸಿತು. ಇದು ಸ್ಥಳೀಯ ಅಮೆರಿಕನ್ನರ ಆರೋಗ್ಯ ಸಮಸ್ಯೆಗಾಗಿ ಫೆಡರಲ್ ಸರ್ಕಾರ ಹಮ್ಮಿಕೊಂಡ ಮೊದಲ ಕಾರ್ಯಕ್ರಮವಾಗಿದೆ.<ref>[http://muse.jhu.edu/login?uri=/journals/wicazo_sa_review/v018/18.2pearson01.html ರಿವ್ಯೂ ಆಫ್ ಜೆ, ಡೈನೆ ಪಿಯರ್ಸನ್, "ಲೆವಿಸ್ ಕ್ಯಾಸ್ ಆಂಡ್ ದಿ ಪಾಲಿಟಿಕ್ಸ್ ಆಫ್ ಡಿಸೀಸ್: ದಿ ಇಂಡಿಯನ್ ವ್ಯಾಸಿನೇಶನ್ ಆಕ್ಟ್ 1832"] {{Webarchive|url=https://web.archive.org/web/20080205230347/http://muse.jhu.edu/login?uri=%2Fjournals%2Fwicazo_sa_review%2Fv018%2F18.2pearson01.html |date=2008-02-05 }}, ''ಪ್ರಾಜೆಕ್ಟ್ ಮ್ಯೂಸ್'', ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ</ref><ref>[http://links.jstor.org/sici?sici=0749-6427%28200323%2918%3A2%3C9%3ALCATPO%3E2.0.CO%3B2-H&size=LARGE&origin=JSTOR-enlargePage "ದಿ ಪಾಲಿಟಿಕ್ಸ್ ಆಫ್ ಡಿಸೀಸ್",''ವಿಕಾಜೊ ಸಾ ರಿವ್ಯೂ'' : ಸಂಪುಟ 18, ಸಂಖ್ಯೆ 2, (ಆಟಮನ್, 2003), ಪುಟ 9–35],</ref>
====ಪ್ರಾಣಿಗಳ ಪರಿಚಯ====
ಎರಡು ಜಗತ್ತುಗಳ ಸಮ್ಮಿಲನದೊಂದಿಗೆ ಪ್ರಾಣಿಗಳು, ಕೀಟಗಳು ಮತ್ತು ಸಸ್ಯಗಳನ್ನು ಎರಡರ ನಡುವೆ ವಿನಿಮಯ ಮಾಡಿಕೊಳ್ಳಲಾಯಿತು. ಹಳೆಯ ಜಗತ್ತಿನ ಪ್ರಾಣಿಗಳಾದ ಕುರಿ, ಹಂದಿ ಮತ್ತು ಪಶುಗಳನ್ನು ಸಮಕಾಲೀನ ಸ್ಥಳೀಯ ಅಮೆರಿಕನ್ನರಿಗೆ ಪರಿಚಯಿಸಲಾಯಿತು. ಇಂತಹ ಪ್ರಾಣಿಗಳು ಅವರಿಗೆ ಗೊತ್ತಿರಲಿಲ್ಲ.{{Citation needed|date=April 2010}}
ಆದರೆ 16ನೇ ಶತಮಾನದಲ್ಲಿ ಸ್ಪ್ಯೇನ್ ನವರು ಮತ್ತು ಇತರ ಯುರೋಪಿಯನ್ನರು ಅಮೆರಿಕಾಕ್ಕೆ ಕುದುರೆಗಳನ್ನು ತಂದರು.{{Citation needed|date=April 2010}} ಹಿಂದಿನ ಅಮೆರಿಕನ್ ಕುದರೆಯನ್ನು ಭೂಖಂಡದಲ್ಲಿದ ಪ್ರಾಚೀನ ಮಾನವರು ಕ್ರೀಡೆಗಾಗಿ ಬಳಸುತ್ತಿದ್ದರು. ಇವುಗಳನ್ನು ಕೊನೆಯ ಹಿಮಶಿಲಾಯುಗ ಕೊನೆಗೊಂಡ ಕೆಲವೇ ವರ್ಷಗಳ ನಂತರ ಬೇಟೆಯಾಡಿ ಸುಮಾರು 7000 BC ಯ ಹೊತ್ತಿಗೆ ನಾಶ ಮಾಡಲಾಗಿತ್ತು.{{Citation needed|date=April 2010}} ಸ್ಥಳೀಯ ಅಮೆರಿಕನ್ನರಿಗೆ ಕುದುರೆಗಳನ್ನು ಪುನಃ ಪರಿಚಯಿಸಿದ್ದರಿಂದ ಲಾಭವಾಯಿತು.{{Citation needed|date=April 2010}} ಅವರು ಪ್ರಾಣಿಗಳನ್ನು ಬಳಸಲು ಪ್ರಾರಂಭಿಸಿದಂತೆ, ಅವರ ಸಂಸ್ಕೃತಿಯನ್ನು ವಾಸ್ತವಿಕ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಪ್ರಾರಂಭಿಸಿದರು. ಅದರಲ್ಲೂ ವಿಶೇಷವಾಗಿ ಅವರ ವಲಯಗಳನ್ನು ವಿಸ್ತರಿಸುವ ಮೂಲಕ ಅವರ ಸಂಸ್ಕೃತಿಯನ್ನು ಬದಲಾಯಿಸಲು ಆರಂಭಿಸಿದರು.{{Citation needed|date=April 2010}} ಕೆಲವು ಕುದುರೆಗಳು ಅಲ್ಲಿಂದ ಓಡಿ ಹೋದವು, ಹಾಗು ಕೆಲವುಗಳನ್ನು ಸಾಕಲಾಯಿತು. ಅಲ್ಲದೇ ವ್ಯಾಪಕವಾಗಿ ಅವುಗಳ ಸಂಖ್ಯೆಯನ್ನೂ ಹೆಚ್ಚಿಸಲಾಯಿತು.
ಉತ್ತರ ಅಮೆರಿಕಕ್ಕೆ ಕುದುರೆಯನ್ನು ಪುನಃ ಪರಿಚಯಿಸಿದ್ದು, ಗ್ರೇಟ್ ಪ್ಲೇನ್ ನಲ್ಲಿದ್ದ ಸ್ಥಳೀಯ ಅಮೆರಿಕನ್ ಸಂಸ್ಕೃತಿಯ ಮೇಲೆ ಗಮನಾರ್ಹ ಪರಿಣಾಮ ಬೀರಿತು. ಬುಡಕಟ್ಟು ಜನಾಂಗದವರು ಕುದುರೆಗಳನ್ನು ಬಳಸಲು ಕಲಿತರು. ಅಲ್ಲದೇ ಅವುಗಳನ್ನು ಸವಾರಿ ಮಾಡಲು ಮತ್ತು ಮೂಟೆಗಳನ್ನು ಸಾಗಿಸಲು ಅಥವಾ ''ಹೊರೆಬಂಡಿಯನ್ನು'' ಎಳೆಯಲು ಬಳಸಿದರು. ಜನರು ಅವರ ಸಮಾಜಕ್ಕಾಗಿ ಮತ್ತು ಅವರ ಪ್ರಾಂತ್ಯಗಳನ್ನು ವಿಸ್ತರಿಸುವುದಕ್ಕಾಗಿ ಸಂಪೂರ್ಣವಾಗಿ ಕುದುರೆಯ ಬಳಕೆಯನ್ನು ಸಂಘಟಿಸಿದರು. ಅವರು ನೆರೆಹೊರೆಯ ಬುಡಕಟ್ಟು ಜನಾಂಗದವರೊಂದಿಗೆ ವಿನಿಮಯಕ್ಕಾಗಿ ಸರಕು ಸಾಮಾನುಗಳನ್ನು ಸಾಗಿಸಲು ಕುದುರೆಯನ್ನು ಬಳಸುತ್ತಿದ್ದರು. ಅಲ್ಲದೇ ಬೇಟೆ ಆಟಕ್ಕಾಗಿ ಅದರಲ್ಲೂ ವಿಶೇಷವಾಗಿ, ಕಾಡೆಮ್ಮೆಯನ್ನು ಬೇಟೆಯಾಡಲು, ಮತ್ತು ಯುದ್ಧ ಮಾಡಲು ಹಾಗು ಕುದುರೆ ಸವಾರಿಗಾಗಿ ಬಳಸುತ್ತಿದ್ದರು.{{Citation needed|date=April 2010}}
===ಸ್ವತಂತ್ರಕ್ಕಾಗಿ ಬುನಾದಿ===
{{See|Great Law of Peace}}
[[File:Treaty of Penn with Indians by Benjamin West.jpg|thumb|1827ರಲ್ಲಿ ಚಿತ್ರಿಸಿದ ಬೆಂಜಮಿನ್ ವೆಸ್ಟ್ರ ಟ್ರೀಟಿ ಆಫ್ ಪೆನ್ನ್ ವಿತ್ ಇಂಡಿಯನ್ಸ್]]
ಕೆಲವು ಯುರೋಪಿಯನ್ನರು, ಸ್ಥಳೀಯ ಅಮೆರಿಕನ್ ಸಮುದಾಯಗಳನ್ನು ಸುವರ್ಣ ಯುಗದ ಪ್ರತಿನಿಧಿಗಳೆಂದು ಪರಿಗಣಿಸುತ್ತಿದ್ದರು ಎಂಬುದು ಕೇವಲ ಜನಪದ ಇತಿಹಾಸದಿಂದ ಅವರಿಗೆ ತಿಳಿದಿದೆ.<ref name="rousseau_freedom">
{{cite web
|url = http://www.ratical.org/many_worlds/6Nations/EoL/chp4.html
|title = Ennobling 'Savages'
|accessdate = 2008-09-05
|author = Jean Jacques Rousseau
|date = 1700s
}}
</ref> ರಾಜಕೀಯ ಸಿದ್ಧಾಂತಿ ಜೀನ್ ಜ್ಯಾಕ್ಯೂಸ್ ರೊಸ್ಸೆಯೊ, ಸ್ವತಂತ್ರದ ಆಲೋಚನೆ ಮತ್ತು ಪ್ರಜಾಪ್ರಭುತ್ವದ ಆದರ್ಶಗಳು ಅಮೆರಿಕಾದಲ್ಲಿ ಹುಟ್ಟಿದವು, ಏಕೆಂದರೆ ಯುರೋಪಿಯನ್ನರು "ಕೇವಲ ಅಮೆರಿಕಾದಲ್ಲಿ ಮಾತ್ರ" 1500 ರಿಂದ 1776 ರ ವರೆಗೆ "ನಿಜವಾಗಿ ಸ್ವತಂತ್ರವಾಗಿದ್ದ" ಸಮುದಾಯಗಳನ್ನು ನೋಡಿದ್ದರು ಎಂದು ಅವರು ಬರೆದಿದ್ದಾರೆ.<ref name="rousseau_freedom" />
{{cquote|Natural freedom is the only object of the policy of the [Native Americans]; with this freedom do nature and climate rule alone amongst them... [Native Americans] maintain their freedom and find abundant nourishment... [and are] people who live without laws, without police, without religion.|20x|20x|[[Jean Jacques Rousseau]], ''Jesuit and Savage in New France''<ref name=rousseau_freedom />}}
ಇರೊಕ್ವಾಯ್ಸ್ ರಾಷ್ಟ್ರಗಳ ರಾಜಕೀಯ ಒಕ್ಕೂಟ ಮತ್ತು ಪ್ರಜಾಪ್ರಭುತ್ವ [[ಸರಕಾರ|ಸರ್ಕಾರ]]ವು, ಆರ್ಟಿಕಲ್ಸ್ ಆಫ್ ಕನ್ ಫೆಡರೇಷನ್ ಮತ್ತು [[ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ|ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನದ]] ಮೇಲೆ ಪ್ರಭಾವ ಬೀರಿವೆ, ಎಂದು ನಂಬಲಾಗಿವೆ.<ref name="ratical">
{{cite web
|url = http://www.ratical.org/many_worlds/6Nations/index.html
|title = The Six Nations: Oldest Living Participatory Democracy on Earth
|publisher= = Ratical.com
|accessdate = 2007-10-27
}}</ref><ref name="danile_usner_1992">
{{Cite book
|last = Armstrong
|first = Virginia Irving
|title = I Have Spoken: American History Through the Voices of the Indians
|publisher= = Pocket Books
|chapter =
|page = 14
|id = SBN 671-78555-9
|year = 1971
}}
</ref> ಅಸ್ತಿತ್ವದಲ್ಲಿರುವ ಸ್ಥಳೀಯ ಅಮೆರಿಕನ್ ಸರ್ಕಾರದ ಮಾದರಿಗಳಿಂದ, ವಸಾಹತುಗಾರರು ಎಷ್ಟರ ಮಟ್ಟಿಗೆ ಎರವಲು ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಇತಿಹಾಸತಜ್ಞರು ಚರ್ಚಿಸಿದ್ದಾರೆ. ಬುನಾದಿಯನ್ನು ನಿರ್ಮಿಸಿದ ಅನೇಕ ಹಿರಿಯರು ಸ್ಥಳೀಯ ಅಮೆರಿಕನ್ ನಾಯಕರನ್ನು ಸಂಪರ್ಕಿಸಿ, ಅವರ ಸರ್ಕಾರದ ಶೈಲಿಗಳ ಬಗ್ಗೆ ಕಲಿತುಕೊಂಡಿದ್ದರು. ಥಾಮಸ್ ಜೆಫರ್ ಸನ್ ಮತ್ತು [[ಬೆಂಜಮಿನ್ ಫ್ರ್ಯಾಂಕ್ಲಿನ್|ಬೆಂಜಮಿನ್ ಫ್ರಾಂಕ್ಲಿನ್]] ನಂತಹ ಪ್ರಮುಖರು, ನ್ಯೂಯಾರ್ಕ್ ನಲ್ಲಿರುವ ಇರೊಕ್ವಾಯ್ಸ್ ಒಕ್ಕೂಟದ ನಾಯಕರೊಂದಿಗೆ ಹೆಚ್ಚು ತೊಡಗಿಸಿಕೊಂಡಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾದ ಜಾನ್ ರುಟ್ಲೆಡ್ಜ್, ಇತರ ರಚನಕಾರರಿಗಾಗಿ, ಇರೊಕ್ವಿಯನ್ ಕಾನೂನಿನ "ನಾವು, ಜನರು, ಒಕ್ಕೂಟ ರಚನೆ, ಶಾಂತಿ, ಸಮಾನತೆ, ಮತ್ತು ನೀತಿನಿಯಮ ಪ್ರತಿಷ್ಠಾಪನೆಗೆ..." ಎಂಬ ಪದಗಳೊಂದಿಗೆ ಆರಂಭಿಸಿ ದೀರ್ಘ ಲೇಖನಕ್ಕೆ ಮಾರು ಹೋಗಿದ್ದಾರೆ, ಎಂದು ಹೇಳಲಾಗುತ್ತದೆ.<ref>ಮೀ, ಚಾರ್ಲ್ಸ್ ಎಲ್. ಜೂನಿಯರ್, ''ದಿ ಜೀನಿಯಸ್ ಆಫ್ ಜಿ ಪೀಪಲ್''. ನ್ಯೂಯಾರ್ಕ್: ಹಾರ್ಪರ್ ಆಂಡ್ ರೊ, 1987. ಪುಟ 237</ref>
{{cquote|"As powerful, dense [Mound Builder] populations were reduced to weakened, scattered remnants, political readjustments were necessary. New confederacies were formed. One such was to become a pattern called up by Benjamin Franklin when the thirteen colonies struggled to confederate: 'If the Iroquois can do it so can we,' he said in substance."|20x|20x|[[Bob Ferguson (music)|Bob Ferguson]], ''Choctaw Government to 1830''<ref name=Bob_Ferguson>
{{Cite journal
|title = Choctaw Government to 1830
|author = Bob Ferguson
|year = 1980
|postscript =.
}}
</ref>}}
ಇತ್ತೀಚಿಗೆ 1988 ರ ಅಕ್ಟೋಬರ್ ನಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್, ಸಮಾನಹಕ್ಕಿನ ಸಂಕಲ್ಪ 331 ಅನ್ನು ಜಾರಿಗೆ ತಂದಿತು. ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ, ಸಂವಿಧಾನದ ಮತ್ತು ಹಕ್ಕುಗಳ ಮಸೂದೆಯ ಮೇಲೆ ಇರೊಕ್ವಾಯ್ಸ್ ಸಂವಿಧಾನದ ಪ್ರಭಾವವನ್ನು ಗುರುತಿಸಲು ಜಾರಿಗೆ ತರಲಾಯಿತು.<ref>{{cite web | url=http://www.senate.gov/reference/resources/pdf/hconres331.pdf | accessdate=2008-11-23 | title=H. Con. Res. 331, October 21, 1988 | publisher==United States Senate}}</ref> ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನಾತ್ಮಕ ಚರ್ಚಾ ದಾಖಲೆಗಳಲ್ಲಿ ಪ್ರಜಾಪ್ರಭುತ್ವದ ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂಸ್ಥೆಗಳಲ್ಲಿರುವ ಸಾಕ್ಷಿಯ ಕೊರತೆಯಿಂದಾಗಿ, ಇರೊಕ್ವಾಯ್ಸ್ ನ ಪ್ರಭಾವವಿಲ್ಲವೆಂದು ವಾದಿಸುವವರು ಯುರೋಪಿಯನ್ ಆಲೋಚನೆಗಳಲ್ಲಿ ವ್ಯಾಪಕವಾದ ಹಿಂದಿನ ಪ್ರಭಾವಳಿಯನ್ನು ಹೊಂದಿದ್ದಾರೆ.<ref>{{cite web | url=http://hnn.us/articles/12974.html | title=Did the Founding Fathers Really Get Many of Their Ideas of Liberty from the Iroquois? | publisher==George Mason University | accessdate=2010-07-14}}</ref>
===ವಸಾಹತಿಗರ ಪ್ರತಿಭಟನೆ===
[[File:Tomo-chi-chi and other Yamacraws Native Americans.jpg|thumb|250px|1734ರ ಜುಲೈನಲ್ಲಿ ಯಾಮಕ್ರಾವ್ ಕ್ರೀಕ್ ಸ್ಥಳೀಯ ಅಮೆರಿಕನ್ನರು ಇಂಗ್ಲೆಂಡ್ನ ಜಾರ್ಜಿಯಾದ ವಸಾಹತಿನ ಟ್ರಸ್ಟಿಯೊಂದಿಗೆ ಮಾಡಿದ ಭೇಟಿ.ಈ ವರ್ಣಚಿತ್ರವು ಒಬ್ಬ ಸ್ಥಳೀಯ ಅಮೆರಿಕನ್ ಹುಡುಗ (ನೀಲಿ ಕೋಟಿನಲ್ಲಿ) ಮತ್ತು ಮಹಿಳೆಯೊಬ್ಬಳು (ಕೆಂಪು ಪೋಷಾಕಿನಲ್ಲಿ) ಯುರೋಪಿಯನ್ ಉಡುಪಿನಲ್ಲಿರುವುದನ್ನು ತೋರಿಸುತ್ತದೆ.]]
ಅಮೆರಿಕನ್ ಕ್ರಾಂತಿಯ ಸಂದರ್ಭದಲ್ಲಿ, ಹೊಸದಾಗಿ ಘೋಷಿಸಲಾದ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನ]], ಮಿಸಿಸಿಪ್ಪಿ ನದಿಯ ಪೂರ್ವದಲ್ಲಿರುವ ಸ್ಥಳೀಯ ಅಮೆರಿಕನ್ ರಾಷ್ಟ್ರಗಳ ಸ್ವಾಮಿನಿಷ್ಠೆಗಾಗಿ ಬ್ರಿಟಿಷರೊಂದಿಗೆ ಹೋರಾಡಿತು. ಈ ಹೋರಾಟದಲ್ಲಿ ಬ್ರಿಟಿಷರ ಪರವಾಗಿದ್ದ ಬಹುಪಾಲು ಸ್ಥಳೀಯ ಅಮೆರಿಕನ್ನರು, ಸ್ಥಳೀಯ ಅಮೆರಿಕನ್ ಪ್ರದೇಶದಲ್ಲಿ ವಸಾಹತುಗಳ ವಿಸ್ತರಣೆಯನ್ನು ತಾತ್ಕಾಲಿಕವಾಗಿ ತಡೆಯಲು, [[ಅಮೇರಿಕದ ಕ್ರಾಂತಿಕಾರಿ ಯುದ್ಧ|ಅಮೆರಿಕನ್ ಕ್ರಾಂತಿಕಾರಿ ಯುದ್ಧ]] ತಂತ್ರ ಬಳಸಲು ಯೋಜಿಸಿದರು. ಅನೇಕ ಸ್ಥಳೀಯ ಸಮುದಾಯಗಳು ಯುದ್ಧದಲ್ಲಿ ಯಾರ ಪರವಹಿಸಬೇಕೆಂಬುದರ ಮೇಲೆ ವಿಭಜಿಸಲ್ಪಟ್ಟವು. ಲೆನ್ಯಾಪೆ, ಹೊಸ ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದಂತಹ ಮೊದಲ ಸ್ಥಳೀಯ ಸಮುದಾಯವಾಗಿದೆ. ಇರೊಕ್ವಾಯ್ಸ್ ಒಕ್ಕೂಟಕ್ಕಾಗಿ, ಅಮೆರಿಕನ್ ಕ್ರಾಂತಿ [[ಅಂತಃಕಲಹ|ಆಂತರಿಕ ಯುದ್ಧ]]ವಾಗಿ ಮಾರ್ಪಟ್ಟಿತು. ಕೇವಲ ಇರೊಕ್ವಾಯ್ಸ್ ಬುಡಕಟ್ಟು ಜನಾಂಗದವರು ಮಾತ್ರ ಒನ್ ಐಡಾ ಮತ್ತು ತುಸ್ಕರೊರಾ ದಲ್ಲಿದ್ದ ವಸಾಹತಿಗರ ಜೊತೆಗೂಡಿದರು.
ಅಮೆರಿಕನ್ ಕ್ರಾಂತಿಯ ಸಂದರ್ಭದಲ್ಲಿ ನಡೆದ ಗಡಿನಾಡಿನವರ ಯುದ್ಧವು, ಅತ್ಯಂತ ಕ್ರೂರವಾಗಿತ್ತು. ಅಲ್ಲದೇ ವಸಾಹತುಗಾರರು ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರಂತವರು ಅನೇಕ ದುಷ್ಕೃತ್ಯಗಳನ್ನು ಎಸಗಿದರು. ಯೋಧರಲ್ಲದವರೂ ಯುದ್ಧದ ಸಮಯದಲ್ಲಿ ತೀವ್ರವಾಗಿ ನರಳಿದರು. ಮೊಹಾಕ್ ಕಣಿವೆ ಮತ್ತು ಪಶ್ಚಿಮ ನ್ಯೂಯಾರ್ಕ್ ನ ಮೇಲೆ ನಿರಂತರ ದಾಳಿ ನಡೆಸಿ, ಅಲ್ಲಿನ ಜನರ ಯುದ್ಧ ಸಾಮರ್ಥ್ಯವನ್ನು ಕುಂದಿಸಿದಂತೆ, ಎರಡು ಕಡೆಗಳು ನಡೆಸಿದ ಸೈನಿಕ ಕಾರ್ಯಾಚರಣೆಗಳು, ಜನರ ಹೋರಾಟದ ಶಕ್ತಿಯನ್ನು ಕುಂದಿಸಲು ಹಳ್ಳಿಗಳನ್ನು ಮತ್ತು ಆಹಾರ ದೊರೆಯುವ ಮೂಲಗಳನ್ನು ನಾಶ ಮಾಡಿದವು.<ref>[http://www.britannica.com/eb/article-9077648/Wyoming-Massacre ಯೋಮಿಂಗ್ ಮಸ್ಸಾಕ್ರೆ], ''ಎನ್ಸೈಕ್ಲೊಪೀಡಿಯಾ ಬ್ರಿಟಾನಿಕ''</ref> ಆಗ 1779 ರ ಸುಲಿವ್ಯಾನ್ ಸೈನಿಕ ಕಾರ್ಯಚರಣೆಯು, ಎಲ್ಲಾ ಸೈನಿಕ ಕಾರ್ಯಾಚರಣೆಗಳಲ್ಲಿ ಅತ್ಯಂತ ದೊಡ್ಡದಾಗಿದೆ. ಇದರಲ್ಲಿ ಅಮೆರಿಕನ್ ವಸಾಹತು ಸೈನ್ಯಗಳು, ಅಪ್ ಸ್ಟೇಟ್ ನ್ಯೂಯಾರ್ಕ್ ನಲ್ಲಿ ಇರೊಕ್ವಾಯ್ ಗಳ ದಾಳಿಯನ್ನು ಹತ್ತಿಕ್ಕಲು, 40 ಕ್ಕಿಂತ ಹೆಚ್ಚು ಇರೊಕ್ವಾಯ್ಸ್ ಹಳ್ಳಿಗಳನ್ನು ನಾಶ ಮಾಡಿದವು. ಸೈನಿಕ ಕಾರ್ಯಾಚರಣೆಯು ಉದ್ದೇಶಿತ ಸಾಧನೆಯನ್ನು ಮಾಡಲಾಗಲಿಲ್ಲ: ಹೀಗಾಗಿ ಸ್ಥಳೀಯ ಅಮೆರಿಕನ್ ಕಾರ್ಯಚಟುವಟಿಕೆಯು ಮತ್ತಷ್ಟು ದೃಢವಾಯಿತು.
{{quote|American Indians have played a central role in shaping the history of the nation, and they are deeply woven into the social fabric of much of American life.... During the last three decades of the twentieth century, scholars of ethnohistory, of the "new Indian history," and of Native American studies forcefully demonstrated that to understand American history and the American experience, one must include American Indians.|Robbie Ethridge, ''Creek Country''.<ref name=r_ethridge>
{{Cite book
| last = Ethridge
| first = Robbie
| title = Creek Country: The Creek Indians And Their World
| publisher= = The University of North Carolina Press
| chapter = Introduction
| page = 1
| isbn = 0807854956
| year = 2003
}}</ref>}}
ಬ್ರಿಟಿಷರು ಪ್ಯಾರಿಸ್ ಒಪ್ಪಂದದಲ್ಲಿ(173) ಅಮೆರಿಕನ್ನರೊಂದಿಗೆ ಯುದ್ಧವಿರಾಮ ಘೋಷಿಸಿದರು. ಈ ಒಪ್ಪಂದದ ಮೂಲಕ ಅವರು ಸ್ಥಳೀಯ ಅಮೆರಿಕನ್ನರಿಗೆ ತಿಳಿಸದೆಯೇ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ವ್ಯಾಪಕವಾದ ಸ್ಥಳೀಯ ಅಮೆರಿಕನ್ ಪ್ರಾಂತ್ಯಗಳನ್ನು ಬಿಟ್ಟುಕೊಟ್ಟು, ತಕ್ಷಣವೇ ವಾಯವ್ಯ ಇಂಡಿಯನ್ ಯುದ್ಧವನ್ನು ಸಾರಿದರು. ಅಮೆರಿಕಾ ಸಂಯುಕ್ತ ಸಂಸ್ಥಾನ ಆರಂಭದಲ್ಲಿ ಬ್ರಿಟಿಷರೊಂದಿಗೆ ಹೋರಾಡಿದ ಸ್ಥಳೀಯ ಅಮೆರಿಕನ್ನರನ್ನು ಭೂಪ್ರದೇಶ ಕಳೆದುಕೊಂಡ, ಅಧೀನಕ್ಕೆ ಒಳಪಟ್ಟ ಜನರಂತೆ ನೋಡಿತು. ಇರೊಕ್ವಾಯ್ಸ್ ನ ಅನೇಕ ಬುಡಕಟ್ಟು ಜನಾಂಗದವರು ಸ್ವಾಮಿನಿಷ್ಠೆಯನ್ನು ಹೊಂದಿರುವವರೊಂದಿಗೆ ಕೆನಡಾಕ್ಕೆ ತೆರಳಿದರೂ ಕೂಡ, ಇತರರು ನ್ಯೂಯಾರ್ಕ್ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲೆ ಉಳಿಯಲು ಮತ್ತು ಅವರ ಜಮೀನುಗಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದರು. ಆದಾಗ್ಯೂ, ನ್ಯೂಯಾರ್ಕ್ ನ ರಾಜ್ಯ ಇರೊಕ್ವಾಯ್ಸ್ ನೊಂದಿಗೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡಿತು. ಅಲ್ಲದೇ ಹಿಂದೆ ಅವರ ಪ್ರಾಂತ್ಯಗಳಾಗಿದ್ದ ಭೂಪ್ರದೇಶವನ್ನು ಮಾರಾಟ {{convert|5000000|acre|km2}}ಕ್ಕಿಟ್ಟಿತು. ರಾಜ್ಯವು ವಸಾಹತುಗಾರರಿಗೆ ಮಿತ್ರರಾಗಿದ್ದ ಆನ್ ಆನ್ಡಗಾಸ್ ಜನಾಂಗದವರಿಗಾಗಿ ಸೆರಕ್ಯುಸ್ ನ ಬಳಿ ಪ್ರದೇಶವನ್ನು ಮೀಸಲಿರಿಸಿತು.
{{cquote|The Indians presented a reverse image of European civilization which helped America establish a national identity that was neither savage nor civilized.|20x|20x|Charles Sanford, ''The Quest for Paradise''<ref name=Bob_Ferguson>
{{Cite book
|title = The Quest for Paradise
|author = Charles Sanford
|year = 1961
|isbn = ISBN 0-404-60078-6
}}
</ref>}}
ಅಮೆರಿಕಾ ಸಂಯುಕ್ತ ಸಂಸ್ಥಾನ, ಹೊಸ ಪ್ರದೇಶಗಳಲ್ಲಿ ಕೃಷಿ ಮತ್ತು ನೆಲೆಗಳನ್ನು ಅಭಿವೃದ್ಧಿಪಡಿಸಲು ಹಾಗು ಭೂಪ್ರದೇಶಕ್ಕಾಗಿ ಹಂಬಲಿಸಿ ನ್ಯೂ ಇಂಗ್ಲೆಂಡ್ ನಿಂದ ಮತ್ತು ಹೊಸದಾಗಿ ಬಂದ ವಲಸೆಗಾರರನ್ನು ತೃಪ್ತಿಪಡಿಸಲು ಇನ್ನಷ್ಟೂ ವಿಸ್ತಾರಗೊಳ್ಳಲು ಬಯಸಿತು. ರಾಷ್ಟ್ರೀಯ ಸರ್ಕಾರವು ಆರಂಭದಲ್ಲಿ ಒಪ್ಪಂದಗಳ ಮೂಲಕ ಸ್ಥಳೀಯ ಅಮೆರಿಕನ್ ಜಮೀನನ್ನು ಖರೀದಿಸುವ ದಾರಿಯನ್ನು ಕಂಡುಕೊಂಡಿತು. ರಾಜ್ಯಗಳ ಜನರು ಮತ್ತು ವಲಸಿಗರು ಈ ನೀತಿ ಖಂಡಿಸಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು.<ref>[http://www.americanrevolution.org/ind1.html ವಿಲ್ಕಾಂಬ್ ಇ. ವಾಶ್ಬರ್ನ್, "ಇಂಡಿಯನ್ಸ್ ಆಂಡ್ ದಿ ಅಮೆರಿಕನ್ ರೆವಲ್ಯೂಷನ್"], AmericanRevolution.org, ಹಿಸ್ಟರಿ ಚಾನೆಲ್ ನೆಟ್ವರ್ಕ್. 2006ರ ಫೆಬ್ರವರಿ 23ರಂದು ಮರುಸಂಪಾದಿಸಲಾಯಿತು.</ref>
==ಸ್ವಭಾವದಲ್ಲಿ ಬದಲಾವಣೆ ಕಂಡ ಸ್ಥಳೀಯ ಅಮೆರಿಕಾ ==
[[File:Portrait of George Washington-transparent.png|upright|thumb|ಜಾರ್ಜ್ ವಾಷಿಂಗ್ಟನ್ ಸ್ಥಳೀಯ ಅಮೆರಿಕನ್ ಸಮಾಜದ ಪ್ರಗತಿಯನ್ನು ಎತ್ತಿಹಿಡಿದರು. ಅಲ್ಲದೇ ಇಂಡಿಯನ್ನರಿಗೆ ಸ್ವಲ್ಪ ಮಟ್ಟಿನ ಸದ್ಭಾವನೆಯನ್ನು ತೋರಿಸಿದರು."<ref name=knox_to_washington>[118]</ref>]]
ಯುರೋಪಿಯನ್ ರಾಷ್ಟ್ರಗಳು ಸ್ಥಳೀಯ ಅಮೆರಿಕನ್ನರನ್ನು (ಕೆಲವೊಮ್ಮೆ ಅವರ ಇಚ್ಛೆಯ ವಿರುದ್ಧವಾಗಿ)ಕುತೂಹಲದ ವಸ್ತುಗಳೆಂಬಂತೆ ಹಳೆಯ ಜಗತ್ತಿಗೆ ಕಳುಹಿಸಿದವು. ಅವರು ಅಧಿಕ ಗೌರವ ಧನವನ್ನು ಪ್ರೋತ್ಸಾಹಿಸಿದರು. ಅಲ್ಲದೇ ಕೆಲವೊಮ್ಮೆ ವಾಣಿಜ್ಯ ಉದ್ದೇಶಕ್ಕಾಗಿ ಸುಲಿಗೆ ಮಾಡುತ್ತಿದ್ದರು. ಕೆಲವು ಯುರೋಪಿಯನ್ ವಸಾಹತುಗಳಿಗೆ ಸ್ಥಳೀಯ ಅಮೆರಿಕನ್ನರ ಕ್ರೈಸ್ತೀಕರಣವು ಯೋಜಿತ ಉದ್ದೇಶವಾಗಿತ್ತು.
{{cquote|Whereas it hath at this time become peculiarly necessary to warn the citizens of the United States against a violation of the treaties.... I do by these presents require, all officers of the United States, as well civil as military, and all other citizens and inhabitants thereof, to govern themselves according to the treaties and act aforesaid, as they will answer the contrary at their peril.|20px|20px|-George Washington, Proclamation Regarding Treaties, 1790.<ref name=washington_treaty_CCC>
{{cite web
|url = http://avalon.law.yale.edu/18th_century/gwproc13.asp
|title = By the President of the United States of America. A proclamation.
|accessdate = 2010-08-11
|publisher= = Yale Law School
|year = 1790
}}
</ref> }}
ಅಮೆರಿಕನ್ ಕ್ರಾಂತಿಯ ನಂತರವೂ ಅಮೆರಿಕಾ ಸಂಯುಕ್ತ ಸಂಸ್ಥಾನ ಸ್ಥಳೀಯ ಅಮೆರಿಕನ್ನರ ಮೇಲೆ ನಿರ್ಬಂಧ, ನಿಯಮ ಹೇರುವುದನ್ನು ಮುಂದುವರೆಸಿತು. [[ಜಾರ್ಜ್ ವಾಷಿಂಗ್ಟನ್|ಜಾರ್ಜ್ ವಾಷಿಂಗ್ಟನ್]] ಮತ್ತು ಹೆನ್ರಿ ನಾಕ್ಸ್, ಸ್ಥಳೀಯ ಅಮೆರಿಕನ್ನರು ಸಮಾನರೇ, ಆದರೆ ಅವರ ಸಮಾಜವು ಕೆಳಮಟ್ಟದಾಗಿದೆ ಎಂದು ನಂಬುತ್ತಾರೆ. ವಾಷಿಂಗ್ಟನ್, "ನಾಗರಿಕಗೊಳಿಸುವ" ಕಾರ್ಯವಿಧಾನವನ್ನು ಪ್ರೋತ್ಸಾಹಿಸಲು ಸೂತ್ರವೊಂದನ್ನು ರಚಿಸಿದರು.<ref name="remini_reform_begins"/> ವಾಷಿಂಗ್ಟನ್, ನಾಗರಿಕತೆಗೆ ಆರು ಅಂಶಗಳ ಯೋಜನೆ ಹೊಂದಿತ್ತು, ಇವು ಕೆಳಕಂಡಂತಿವೆ:
<blockquote>
1. ಸ್ಥಳೀಯ ಅಮೆರಿಕನ್ನರಿಗೆ ನಿಷ್ಪಕ್ಷಪಾತವಾದ ನ್ಯಾಯ <br>
2. ಸ್ಥಳೀಯ ಅಮೆರಿಕನ್ನರ ಜಮೀನುಗಳ ಕೊಂಡುಕೊಳ್ಳುವಿಕೆಯನ್ನು ನಿಯಂತ್ರಿಸುವುದು <br>
3. ವಾಣಿಜ್ಯಕ್ಕೆ ಬೆಂಬಲ <br>
4. ನಾಗರಿಕಗೊಳಿಸಲು ಮಾಡುವ ಪ್ರಯೋಗಗಳಿಗೆ ಅಥವಾ ಸ್ಥಳೀಯ ಅಮೆರಿಕನ್ ಸಮಾಜವನ್ನು ಸುಧಾರಿಸುವ ಪ್ರಯತ್ನಗಳಿಗೆ ಬೆಂಬಲ <br>
5. ಉಪಸ್ಥಿತಿಗಳನ್ನು ನೀಡಲು ಅಧ್ಯಕ್ಷೀಯ ಅಧಿಕಾರ <br>
6. ಸ್ಥಳೀಯ ಅಮೆರಿಕನ್ ಹಕ್ಕುಗಳನ್ನು ಉಲ್ಲಂಘಿಸುವವರಿಗೆ ಶಿಕ್ಷೆವಿಧಿಸುವುದು.<ref name="eric_miller"/><br>
</blockquote>
[[File:Benjamin Hawkins and the Creek Indians - higher resolution.jpg|250px|left|thumb|ಬೆಂಜಮಿನ್ ಹಾಕಿನ್ಸ್ ತಮ್ಮ ತೋಟದಲ್ಲಿ ಕ್ರೀಕ್ ಸ್ಥಳೀಯ ಅಮೆರಿಕನ್ನರಿಗೆ ಹೇಗೆ ಯುರೋಪಿಯನ್ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೆಂದು ಕಲಿಸಿಕೊಡುತ್ತಿರುವುದು.ಇದನ್ನು 1805ರಲ್ಲಿ ಚಿತ್ರಿಸಲಾಗಿದೆ.]]
ಇತಿಹಾಸತಜ್ಞ ರಾಬರ್ಟ್ ರೆಮಿನಿ, "ಇಂಡಿಯನ್ನರು ಮನೆ ಕಟ್ಟಿಕೊಳ್ಳುವುದು, ಬೇಸಾಯ ಮಾಡುವುದು, ಅವರ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದು, ಕ್ರೈಸ್ತ ಮತವನ್ನು ಅನುಸರಿಸುವಂತಹ ಖಾಸಗಿ ಆಸ್ತಿ ಗಳಿಕೆಯ ಅಭ್ಯಾಸವನ್ನು ಒಮ್ಮೆ ಬೆಳೆಸಿಕೊಂಡರೆಂದರೆ, ಈ ಸ್ಥಳೀಯ ಅಮೆರಿಕನ್ನರು ಬಿಳಿಯ ಅಮೆರಿಕನ್ನರಿಂದ ಸಮ್ಮತಿಯನ್ನು ಗೆಲ್ಲಬಹುದು" ಎಂದು ಬರೆದಿದ್ದಾರೆ.<ref name="remini_submit_adoption"/> ಅಮೆರಿಕಾ ಸಂಯುಕ್ತ ಸಂಸ್ಥಾನ ಬೆಂಜಮಿನ್ ಹಾಕಿನ್ಸ್ ನಂತಹ ಪ್ರತಿನಿಧಿಗಳನ್ನು, ಸ್ಥಳೀಯ ಅಮೆರಿಕನ್ನರ ನಡುವೆ ಬದುಕಲು ಮತ್ತು ಬಿಳಿಯರಂತೆ ಹೇಗೆ ಬದುಕಬೇಕೆಂಬುದನ್ನು ಕಲಿಸಲು ನೇಮಿಸಿದೆ.<ref name="perdue"/>
{{cquote|How different would be the sensation of a philosophic mind to reflect that instead of exterminating a part of the human race by our modes of population that we had persevered through all difficulties and at last had imparted our Knowledge of cultivating and the arts, to the Aboriginals of the Country by which the source of future life and happiness had been preserved and extended. But it has been conceived to be impracticable to civilize the Indians of North America — This opinion is probably more convenient than just.|20px|20px|-Henry Knox to George Washington, 1790s.<ref name=knox_to_washington />}}
===ಹೊಂದಾಣಿಕೆ===
{{details|Native American boarding schools }}
ಹೀಗೆ 18ನೇ ಶತಮಾನದ ಉತ್ತರಾರ್ಧದಲ್ಲಿ ವಾಷಿಂಗ್ಟನ್ ಮತ್ತು ನಾಕ್ಸ್ ರೊಂದಿಗೆ ಪ್ರಾರಂಭವಾಗಿ ಸಮಾಜ ಸುಧಾರಕರು,<ref>''ದಿ ಗ್ರೇಟ್ ಕನ್ಫ್ಯೂಜನ್ ಇನ್ ಇಂಡಿಯನ್ ಅಫೇರ್ಸ್: ನೇಟಿವ್ ಅಮೆರಿಕನ್ಸ್ ಆಂಡ್ ವೈಟ್ಸ್ ಇನ್ ದಿ ಪ್ರೊಗ್ರೆಸ್ಸಿವ್ ಎರಾ'', ಟಾಮ್ ಹಾಲ್ಮ್, http://www.utexas.edu/utpress/excerpts/exholgre.html</ref> ಸ್ಥಳೀಯ ಅಮೆರಿಕನ್ನರನ್ನು "[[ನಾಗರೀಕತೆ|ನಾಗರಿಕರನ್ನಾಗಿಸುವ]]" ಪ್ರಯತ್ನದಲ್ಲಿ ಅಥವಾ ಬೃಹತ್ ಸಮಾಜಕ್ಕೆ(ಅವರನ್ನು ಮೀಸಲಾತಿಗೆ ತಳ್ಳುವ ಬದಲು )ಅವರನ್ನು ಸಮೀಕರಿಸಲು ಸ್ಥಳೀಯ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಬೆಂಬಲ ನೀಡಿದರು. ಆದರೆ 1819 ರ ನಾಗರಿಕತೆ ನಿಧಿ ಕಾನೂನು, ಸ್ಥಳೀಯ ಅಮೇಕನ್ನರ ಸುಧಾರಣೆಗಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಾಜಗಳಿಗೆ(ಬಹುಶಃ ಧಾರ್ಮಿಕ) ಧನ ಸಹಾಯವನ್ನು ಒದಗಿಸುವ ಮೂಲಕ ನಾಗರಿಕರನ್ನಾಗಿಸುವ ನೀತಿಗೆ ಬೆಂಬಲ ನೀಡಿತು.
{{cquote|I rejoice, brothers, to hear you propose to become cultivators of the earth for the maintenance of your families. Be assured you will support them better and with less labor, by raising stock and bread, and by spinning and weaving clothes, than by hunting. A little land cultivated, and a little labor, will procure more provisions than the most successful hunt; and a woman will clothe more by spinning and weaving, than a man by hunting. Compared with you, we are but as of yesterday in this land. Yet see how much more we have multiplied by industry, and the exercise of that reason which you possess in common with us. Follow then our example, brethren, and we will aid you with great pleasure....|20px|20px|President Thomas Jefferson, Brothers of the Choctaw Nation, December 17, 1803<ref name=Jefferson_treaty_CCC>
{{Cite web
|url = http://avalon.law.yale.edu/19th_century/jeffind3.asp
|title = To the Brothers of the Choctaw Nation
|accessdate = 2010-10-24
|publisher= = Yale Law School
|year = 1803
}}
</ref>
}}
ಅಮೆರಿಕನ್ ನಾಗರಿಕ ಯುದ್ದ ಮತ್ತು ಇಂಡಿಯನ್ ಯುದ್ಧಗಳ ನಂತರ 19 ನೇ ಶತಮಾನದ ಉತ್ತರಾರ್ಧದಲ್ಲಿ ಸ್ಥಳೀಯ ಅಮೆರಿಕನ್ ಬೋರ್ಡಿಂಗ್ ಶಾಲೆಗಳನ್ನು ಸ್ಥಾಪಿಸಲಾಯಿತು. ಇವುಗಳನ್ನು ಆರಂಭದಲ್ಲಿ ಕ್ರೈಸ್ತ ಮತಪ್ರಚಾರಕರು ನಡೆಸಿದರು.<ref>{{cite web |url=http://www.authorsden.com/visit/viewarticle.asp?AuthorID=2616&id=7375 |work=authorsden.com |title=What Were Boarding Schools Like for Indian Youth? |accessdate=February 8, 2006 |archive-date=ಫೆಬ್ರವರಿ 14, 2013 |archive-url=https://www.webcitation.org/6EQXuoNgG?url=http://www.authorsden.com/visit/viewarticle.asp?AuthorID=2616 |url-status=dead }}</ref> ಈ ಸಮಯದಲ್ಲಿ ಅಮೆರಿಕನ್ ಸಮಾಜವು, ಸ್ಥಳೀಯ ಅಮೆರಿಕನ್ ಮಕ್ಕಳನ್ನು ಸಾಮಾನ್ಯ ಸಾರ್ವತ್ರಿಕ ಸಮಾಜಕ್ಕೆ ಸೇರಿಸುವ ಅಗತ್ಯವಿದೆ ಎಂದು ಭಾವಿಸಿದರು. ಬೋರ್ಡಿಂಗ್ ಶಾಲೆಯಲ್ಲಿ ಸ್ಥಳೀಯ ಅಮೆರಿಕನ್ ಮಕ್ಕಳಿಗೆ ಅಹಿತಕರ ಅನುಭವವಾಯಿತು. ಈ ಮಕ್ಕಳಿಗೆ ಅವರ ಸ್ಥಳೀಯ ಭಾಷೆಗಳನ್ನು ಆಡದಂತೆ ನಿಷೇಧಿಸಿ, [[ಕ್ರೈಸ್ತ ಧರ್ಮ|ಕ್ರೈಸ್ತ ಮತ]]ವನ್ನು ಭೋಧಿಸಲಾಯಿತು. ಅಲ್ಲದೇ ಅವರ ಸ್ಥಳೀಯ ಧರ್ಮಗಳನ್ನು ಆಚರಿಸುವ ಹಕ್ಕನ್ನು ಕೂಡ ನಿರಾಕರಿಸಿ, ಅನೇಕ ರೀತಿಗಳಲ್ಲಿ ಅವರ ಸ್ಥಳೀಯ ಅಸ್ತಿತ್ವಗಳನ್ನು ತ್ಯಜಿಸುವಂತೆ ಮತ್ತು <ref>{{cite web|url=http://www.sacbee.com/static/archive/news/projects/native/day2_main.html
|work=California's Lost Tribes |title=Long-suffering urban Indians find roots in ancient rituals |accessdate=February 8, 2006 |archiveurl = https://web.archive.org/web/20050829051045/http://sacbee.com/static/archive/news/projects/native/day2_main.html |archivedate = August 29, 2005}}</ref> ಯುರೋಪಿಯನ್-ಅಮೆರಿಕನ್ ಸಂಸ್ಕೃತಿಯನ್ನು ಅನುಸರಿಸುವಂತೆ ಒತ್ತಾಯಿಸಲಾಯಿತು. ಈ ಶಾಲೆಗಳಲ್ಲಿ ಮಕ್ಕಳ ಮೇಲೆ ಲೈಂಗಿಕ, ದೈಹಿಕ ಮತ್ತು ಮಾನಸಿಕ ಹಿಂಸೆಗಳು ನಡೆದಿರುವ ಪ್ರಸಂಗಗಳಿಗೆ ದಾಖಲೆಗಳು ಕೂಡ ದೊರಕಿವೆ.<ref>{{cite web |url=http://www.prsp.bc.ca |work=PRSP Disabilities |title=Developmental and learning disabilities |accessdate=February 8, 2006 |archive-date=ಫೆಬ್ರವರಿ 7, 2006 |archive-url=https://web.archive.org/web/20060207222512/http://www.prsp.bc.ca/ |url-status=dead }}</ref><ref>{{cite web |url=http://www.amnestyusa.org/amnestynow/soulwound.html |work=Amnesty International USA |title=Soul Wound: The Legacy of Native American Schools |accessdate=February 8, 2006 |archive-date=ಫೆಬ್ರವರಿ 8, 2006 |archive-url=https://web.archive.org/web/20060208092347/http://www.amnestyusa.org/amnestynow/soulwound.html |url-status=dead }}</ref>
====ಅಮೆರಿಕನ್ ನಾಗರಿಕರಂತೆ ಸ್ಥಳೀಯ ಅಮೆರಿಕನ್ನರು====
ಆಗ 1857 ರಲ್ಲಿ ಮುಖ್ಯ ನ್ಯಾಯಮೂರ್ತಿ ರೊಜರ್ ಬಿ. ಟ್ಯಾನಿ, ಸ್ಥಳೀಯ ಅಮೆರಿಕನ್ನರು "ಮುಕ್ತ ಮತ್ತು ಸ್ವತಂತ್ರ ಜನರಾದಾಗಿನಿಂದ" ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಾಗಬಲ್ಲರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.<ref name="chiefJustic_taney">
{{cite web
| url = http://lawreview.kentlaw.edu/articles/82-1/Hoxie.pdf
| title = What was Taney thinking? American Indian Citizenship in the era of Dred Scott
| accessdate = 2009-04-15
| author = Frederick e. Hoxie
| last = Hoxie
| first = Frederick
| year = 2007
| format = PDF
| publisher= = Chicago-Kent Law Review
|archiveurl = https://web.archive.org/web/20070915083732/http://lawreview.kentlaw.edu/articles/82-1/Hoxie.pdf |archivedate = September 15, 2007}}
</ref> ಟ್ಯಾನಿ, ಸ್ಥಳೀಯ ಅಮೆರಿಕನ್ನರನ್ನು ದೇಶೀಯರಾಗಿಸಬಹುದು ಹಾಗು ಅಮೆರಿಕಾ ಸಂಯುಕ್ತ ಸಂಸ್ಥಾನದ "ರಾಜಕಿಯ ಸಮುದಾಯ"ವನ್ನು ಸೇರಬಹುದು ಎಂದು ವಾದಿಸಿದ್ದಾರೆ.<ref name="chiefJustic_taney" />
{{cquote|[Native Americans], without doubt, like the subjects of any other foreign Government, be naturalized by the authority of Congress, and become citizens of a State, and of the United States; and if an individual should leave his nation or tribe, and take up his abode among the white population, he would be entitled to all the rights and privileges which would belong to an emigrant from any other foreign people.|20x|20x|Chief Justice Roger B. Taney, 1857, ''What was Taney thinking? American Indian Citizenship in the era of Dred Scott'', Frederick e. Hoxie, April 2007.<ref name=chiefJustic_taney />}}
===== ಅಮೆರಿಕಾ ಸಂಯುಕ್ತ ಸಂಸ್ಥಾನದ ಪೌರತ್ವ =====
ಅಲ್ಲದೇ 1924 ರ ಜೂನ್ 2 ರಂದು ಅಮೆರಿಕಾ ಸಂಯುಕ್ತ ಸಂಸ್ಥಾನ ಗಣರಾಜ್ಯದ ರಾಷ್ಟ್ರಾಧ್ಯಕ್ಷ ಕೆಲ್ವಿನ್ ಕೂಲಿಡ್ಜ್, ಇಂಡಿಯನ್ ಪೌರತ್ವ ಕಾಯ್ದೆಗೆ ಸಹಿ ಹಾಕುವ ಮೂಲಕ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮತ್ತು [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನ]]ಕ್ಕೆ ಸೇರಿರುವ ಅದರ ಪ್ರಾಂತ್ಯಗಳಲ್ಲಿ ಜನಿಸಿ ಮೊದಲೆ ಪೌರತ್ವ ಪಡೆದಿರದ ಎಲ್ಲಾ ಸ್ಥಳೀಯ ಅಮೆರಿಕನ್ನರಿಗೆ ಪೌರತ್ವ ನೀಡಲಾಯಿತು. ಈ ಕಾಯ್ದೆಗೆ ಮೊದಲೇ ಮೂರನೆ ಎರಡು ಭಾಗದಷ್ಟು ಸ್ಥಳೀಯ ಅಮೆರಿಕನ್ನರು ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಾಗಿದ್ದರು.<ref name="2-3_us_citizenship">
{{cite web
| url = http://digital.library.okstate.edu/kappler/vol4/html_files/v4p1165.html
| title = Indian affairs: laws and treaties Vol. IV, Treaties
| accessdate = 2008-10-14
| author = Charles Kappler
| last = Kappler
| first = Charles
| year = 1904
| publisher= = Government Printing Office
}}
</ref> ಸ್ಥಳೀಯ ಅಮೆರಿಕನ್ನರು ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಾದ ಅತ್ಯಂತ ಹಳೆಯ ದಾಖಲೆಗಳೆಂದರೆ, 1831 ರಲ್ಲಿ ಮಿಸಿಸಿಪ್ಪಿ ಯ ಚಾಕ್ಟವ್,(ಬುಡಕಟ್ಟು ಜನಸಮುದಾಯದ ಪ್ರದೇಶ) ಅಮೆರಿಕಾ ಸಂಯುಕ್ತ ಸಂಸ್ಥಾನದ [[ಶಾಸಕಾಂಗ]] ಟ್ರೀಟಿ ಆಫ್ ಡ್ಯಾನ್ ಸಿಂಗ್ ರಾಬಿಟ್ ಕ್ರೀಕ್ ಒಪ್ಪಂದದ ನಂತರ ಪೌರರಾದರು.<ref name="us_citizenship"/><ref name="david_baird">
{{Cite book
| last = Baird
| first = David
| title = The Choctaw People
| publisher= = Indian Tribal Series
| location = United States
| chapter = The Choctaws Meet the Americans, 1783 to 1843
| page = 36
| id = Library of Congress 73-80708
| year = 1973
}}
</ref><ref name="nrc_programs">
{{Cite web
| url = http://www.nrcprograms.org/site/PageServer?pagename=cin_hist_citizenshipact
| title = History & Culture, Citizenship Act - 1924
| accessdate = 2008-05-02
| author = Council of Indian Nations
| year = 2005
| publisher= = Council of Indian Nations
}}
</ref><ref name="MAA_k_carlton">{{Cite web
| url = http://www.msarchaeology.org/maa/carleton.pdf
| title = A Brief History of the Mississippi Band of Choctaw Indians
| accessdate = 2009-05-04
| author = Ken H. Carleton
| last = Carleton
| first = Ken
| year = 2002
| format = PDF
| publisher = = Mississippi Archaeological Association
| archive-date = 2007-07-15
| archive-url = https://web.archive.org/web/20070715115205/http://www.msarchaeology.org/maa/carleton.pdf
| url-status = dead
}}</ref> ಯು.ಎಸ್. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಚಾಕ್ಟವ್ ಪ್ರತಿನಿಧಿಗೆ ಸ್ಥಾನ ನೀಡಲು ಅನುಚ್ಛೇದ 22 ಅನ್ನು ಅನ್ವಯಿಸಲಾಯಿತು.<ref name="us_citizenship"/> ಆ ಒಪ್ಪಂದದ ಅನುಚ್ಛೇದ XIV ಯಡಿಯಲ್ಲಿ ಆಯ್ಕೆಗೊಂಡ ಯಾವ ಚಾಕ್ಟವ್ ನಾದರೂ, ಒಂದುವೇಳೆ ಚಾಕ್ಟವ್ ರಾಷ್ಟ್ರದೊಂದಿಗೆ ಹೋಗಲು ಬಯಸದೇ ಇದ್ದಲ್ಲಿ ಅಂತಹವನು ಅಮೆರಿಕಾದ ನಾಗರಿಕನಾಗಬಲ್ಲನು. ಒಪ್ಪಂದದ ದೃಢೀಕರಣದ ನಂತರ ಆತ ನೋಂದಾಯಿಸಿಕೊಂಡು, ನಿಯೋಜಿತ ಪ್ರದೇಶದಲ್ಲಿ ಐದು ವರ್ಷಗಳ ಕಾಲ ನೆಲೆಸಿದಲ್ಲಿ ಈ ಪೌರತ್ವವನ್ನು ಪಡೆಯಬಲ್ಲನು. ನೆಲೆವಾಸದ ವರ್ಷಗಳ ಮೂಲಕ, ಮತ್ತು ಈ ಕೆಳಕಂಡ ಅಂಶಗಳ ಮೂಲಕ ಸ್ಥಳೀಯ ಅಮೆರಿಕನ್ನರು ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಾಗಬಲ್ಲರು:
<blockquote>
1. ಒಪ್ಪಂದದ ನಿಬಂಧನೆ (ಮಿಸಿಸಿಪ್ಪಿ ಚಾಕ್ಟವ್ ನೊಂದಿಗಾದಂತೆ) <br>
2. 1887 ರ ಫೆಬ್ರವರಿ 8 ರಂದಿನ ಡ್ಯಾವೆಸ್ ಕಾನೂನಿನಡಿಯಲ್ಲಿ ನೋಂದಣಿ ಮತ್ತು ಭೂಮಿ ಹಂಚಿಕೆ<br>
3. ಅನಿರ್ಬಂಧದ ಆಸ್ತಿಯಲ್ಲಿ ಹಕ್ಕುಪತ್ರ ನೀಡುವಿಕೆ <br>
4. ನಾಗರಿಕ ಜೀವನದ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು <br>
5. ವಯಸ್ಕರಲ್ಲದ ಮಕ್ಕಳು <br>
6. ಹುಟ್ಟಿನಿಂದ ದೊರೆಯುವ ಪೌರತ್ವ <br>
7. ಅಮೆರಿಕಾ ಸಂಯುಕ್ತ ಸಂಸ್ಥಾನದ ಯುದ್ಧ ಪಡೆಗಳಲ್ಲಿ ಸೈನಿಕನಾಗುವುದು ಮತ್ತು ನಾವಿಕನಾಗುವುದು <br>
8. ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರನ್ನು ಮದುವೆಯಾಗುವುದು <br>
9. ಕಾಂಗ್ರೆಸ್ ನ ವಿಶೇಷ ಕಾಯ್ದೆ. <br>
</blockquote>
{{cquote|The Choctaws would ultimately form a territory by themselves, which should be taken under the care of the general government; or that they should become citizens of the State of Mississippi, and thus citizens of the United States.|20x|20x|''-Cherokee Phoenix, and Indians' Advocate, Vol. II, No. 37.'', 1829.<ref name=cherokee_phoenix>{{Cite web
| url = http://anpa.ualr.edu/indexes/cherokee_phoenix_index/Cherokee_Phoenix_Index-images/v02/12231829-no37/12231829-v02n37p01.png
| title = Indians, from the Missionary Herald
| accessdate = 2009-05-08
| editor = E. Boudinott,
| date = December 23, 1829
| format = PNG
| publisher = = Cherokee Phoenix, and Indians' Advocate. New Echota, Cherokee Nation.
| archive-date = 2010-02-13
| archive-url = https://web.archive.org/web/20100213121004/http://anpa.ualr.edu/indexes/cherokee_phoenix_index/Cherokee_Phoenix_Index-images/v02/12231829-no37/12231829-v02n37p01.png
| url-status = dead
}}</ref>}}
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಇಂದು ಅಮೆರಿಕನ್ ಇಂಡಿಯನ್ನರು [[ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ|ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನ]]ದಲ್ಲಿ ನೀಡಲಾಗಿರುವ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ. ಅವರು ಚುನಾವಣೆಗಳಲ್ಲಿ ಮತಚಲಾಯಿಸಬಲ್ಲರು ಮತ್ತು ರಾಜಕೀಯದಲ್ಲಿ ಪಾಲ್ಗೊಳ್ಳಬಲ್ಲರು. ಬುಡಕಟ್ಟು ಜನಾಂಗದವರ ಸಮಸ್ಯೆಗಳು,ಸ್ವತಂತ್ರ ಮತ್ತು ಸಾಂಸ್ಕೃತಿಕ ಪದ್ದತಿಗಳ ಬಗ್ಗೆ ಫೆಡರಲ್ ಸರ್ಕಾರ ಎಷ್ಟರ ಮಟ್ಟಿಗಿನ ನ್ಯಾಯವ್ಯಾಪ್ತಿ ಹೊಂದಿದೆ ಎಂಬುದರ ಮೇಲೆ ವಿವಾದವಿದೆ.<ref>{{Cite book|last=Deloria|first=Vincent|title=American Indian policy in the twentieth century|publisher==University of Oklahoma Press|year=1992|page=91|url=https://books.google.com/?id=VzWIpZBZgA0C|isbn=9780806124247}}</ref>
{{cquote|Be it enacted by the Senate and House of Representatives of the United States of America in Congress assembled, That all noncitizen Native Americans born within the territorial limits of the United States be, and they are hereby, declared to be citizens of the United States: Provided, That the granting of such citizenship shall not in any manner impair or otherwise affect the right of any Native American to tribal or other property.|20x|20x|''Indian Citizenship Act of 1924''}}
===ಅಮೆರಿಕನ್ ವಿಸ್ತರಣೆಯ ಸಮರ್ಥನೆ===
[[File:American Progress (John Gast painting).jpg|thumb|ಕೊಲಂಬಿಯಾದ ಮ್ಯಾನಿಫೆಸ್ಟ್ ಡೆಸ್ಟಿನಿಯ ಸಾಂಕೇತಿಕ ಚಿತ್ರಣದಿಂದ ತೊರೆದುಹೋಗುತ್ತಿರುವ ಸ್ಥಳೀಯ ಅಮೆರಿಕನ್ನರು, ಇದನ್ನು 1872ರಲ್ಲಿ ಜಾನ್ ಗ್ಯಾಸ್ಟ್ ಚಿತ್ರಿಸಿದರು.]]
ಆಗ 1845 ರ ಜುಲೈನಲ್ಲಿ, ನ್ಯೂಯಾರ್ಕ್ ವೃತ್ತ ಪತ್ರಿಕೆಯ ಸಂಪಾದಕರಾದ ಜಾನ್ ಎಲ್. ಒ’ಸುಲಿವ್ಯಾನ್ ರವರು, “ಮ್ಯಾನಿಫೆಸ್ಟ್ ಡೆಸ್ಟಿನಿ” ಎಂಬ ಪದಗುಚ್ಛವನ್ನು ರಚಿಸಿದರು. ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಾಂತೀಯ ವಿಸ್ತರಣೆಗೆ "ಮುಂಜಾಗ್ರತೆಯ ವಿನ್ಯಾಸವು" ಹೇಗೆ ಬೆಂಬಲ ನೀಡುತ್ತದೆ ಎಂಬುದನ್ನು ವಿವರಿಸಲು ರಚಿಸಿದರು.<ref>ವರ್ಲ್ಡ್ಸ್ ಟುಗೆದರ್, ವರ್ಲ್ಡ್ಸ್ ಅಪಾರ್ಟ್, ರಾಬರ್ಟ್ ಟಿಗ್ನರ್, ಜೆರೆಮಿ ಆಡಲ್ಮ್ಯಾನ್, ಸ್ಟೀಫನ್ ಅರಾನ್, ಸ್ಟೀಫನ್ ಕಾಟ್ಕಿನ್, ಸುಜೇನ್ ಮಾರ್ಚ್ಯಾಂಡ್, ಗ್ಯಾನ್ ಪ್ರಕಾಶ್, ಮೈಕೆಲ್ ಟ್ಸಿನ್, ಡಬ್ಲ್ಯೂ.ಡಬ್ಲ್ಯೂ. ನಾರ್ಟನ್ ಆಂಡ್ ಕಂಪನಿ, ನ್ಯೂಯಾರ್ಕ್ 2000, ಪುಟ. 274</ref> ಯಾವಾಗ ಭೂಖಂಡದ ವಿಸ್ತರಣೆಯು ನಿಸ್ಸಂಶಯವಾಗಿ ಸ್ಥಳೀಯ ಅಮೆರಿಕನ್ ಭೂಮಿಯ ಕಸುಬನ್ನು ಉದ್ದೇಶಿಸಿತೋ, ಆಗ ಮ್ಯಾನಿಫೆಸ್ಟ್ ಡೆಸ್ಟಿನಿ ಸ್ಥಳೀಯ ಅಮೆರಿಕನ್ನರ ಮೇಲೆ ಪರಿಣಾಮ ಬೀರಿತು. ಮ್ಯಾನಿಫೆಸ್ಟ್ ಡೆಸ್ಟಿನಿ, ವಿಸ್ತರಣೆಯ ಮತ್ತು ಪಶ್ಚಿಮದ ಚಳವಳಿಯ ವಿವರಣೆ ಅಥವಾ ಸಮರ್ಥನೆಯಾಯಿತು, ಅಥವಾ ಕೆಲವು ಅರ್ಥವಿವರಣೆಗಳಲ್ಲಿ ನಾಗರಿಕತೆಯ ಕಾರ್ಯ ವಿಧಾನಕ್ಕೆ ಬೆಂಬಲ ನೀಡಲು ಸಹಾಯಮಾಡಿದ ಚಿಂತನೆ ಅಥವಾ ಭೋಧನೆಯಾಯಿತು. ಮ್ಯಾನಿಫೆಸ್ಟ್ ಡೆಸ್ಟಿನಿಯ ಸಲಹಾಗಾರರು, ವಿಸ್ತರಣೆ ಕೇವಲ ಒಳ್ಳೆಯದಷ್ಟೇ ಅಲ್ಲದೇ, ಇದು ಸ್ಪಷ್ಟ ಮತ್ತು ನಿಶ್ಚಿತವಾದುದೆಂದು ನಂಬುತ್ತಾರೆ. ಈ ಪದವನ್ನು ಆರಂಭದಲ್ಲಿ 1840 ರ ಹೊತ್ತಿನಲ್ಲಿ ಮೊದಲು ಜ್ಯಾಕ್ ಸೊನಿಯನ್ ಡೆಮೊಕ್ರಾಟ್ಸ್ ರವರು ಈಗಿರುವ ಪಶ್ಚಿಮ ಅಮೆರಿಕಾ ಸಂಯುಕ್ತ ಸಂಸ್ಥಾನದ ವಶಪಡಿಸಿಕೊಳ್ಳುವಿಕೆಗೆ ಬೆಂಬಲ ನೀಡಲು ಬಳಸಿದರು. (ಒರೆಗನ್ ಪ್ರಾಂತ್ಯ, ಟೆಕ್ಸಾಸ್ ವಶಪಡಿಸಿಕೊಳ್ಳುವಿಕೆ ಮತ್ತು ಮೆಕ್ಸಿಕನ್ ವಶಪಡಿಸಿಕೊಳ್ಳುವಿಕೆ).
{{cquote|What a prodigious growth this English race, especially the American branch of it, is having! How soon will it subdue and occupy all the wild parts of this continent and of the islands adjacent. No prophecy, however seemingly extravagant, as to future achievements in this way [is] likely to equal the reality.|20x|20x|Rutherford Birchard Hayes, U.S. President, January 1, 1857, Personal Diary.<ref name=manifestquote>{{cite web
|url = http://www.enotes.com/famous-quotes/what-a-prodigious-growth-this-english-race
|title = Hayes Quotes: What a prodigious growth this English race,...
|accessdate = 2008-09-04
|author = Rutherford Birchard Hayes
|year = 1857
|archive-date = 2009-01-05
|archive-url = https://web.archive.org/web/20090105132255/http://www.enotes.com/famous-quotes/what-a-prodigious-growth-this-english-race
|url-status = dead
}}</ref>}}
ಮ್ಯಾನಿಫೆಸ್ಟ್ ಡೆಸ್ಟಿನಿಯ ಕಾಲವನ್ನು "ಇಂಡಿಯನ್ ರಿಮೂವಲ್" ಮೂಲಕ ಸ್ಥಾಪಿಸಿತೆಂದು ಹೇಳಲಾಯಿತು. ಆದರೂ ರಿಮೂವಲ್ ನ ಕೆಲವು ಮಾನವಹಿತಕಾರಿ ಸಲಹಾಗಾರರು, ಸ್ಥಳೀಯ ಅಮೆರಿಕನ್ನರು ಬಿಳಿಯರಿಂದ ದೂರಹೋದಲ್ಲಿ ಮೊದಲಿಗಿಂತ ಚೆನ್ನಾಗಿರುತ್ತಾರೆ, ಹಾಗು ಹೆಚ್ಚುತ್ತಿರುವ ಅಮೆರಿಕನ್ನರ ಸಂಖ್ಯೆ ಸ್ಥಳೀಯರನ್ನು ಅಮೆರಿಕನ್ ವಿಸ್ತರಣೆಯ ಮಾರ್ಗದಲ್ಲಿ ನಿಂತಿರುವ "ಅನಾಗರಿಕ"ರೆಂದು ಕರೆಯುವರೆಂದು ನಂಬುತ್ತಾರೆ. ಥಾಮಸ್ ಜೆಫರ್ಸನ್, ಸ್ಥಳೀಯ ಅಮೆರಿಕನ್ನರು ಬಿಳಿಯರಷ್ಟೇ ಬುದ್ಧಿಜೀವಿಗಳಾಗಿದ್ದ ಮೇಲೆ, ಅವರು ಬಿಳಿಯರಂತೆ ಬದುಕಬೇಕು ಅಥವಾ ಅನಿವಾರ್ಯವಾಗಿ ಅವರಿಂದ ಪಕ್ಕಕ್ಕೆ ತಳ್ಳಿಸಿಕೊಳ್ಳಬೇಕು ಎಂದು ನಂಬುತ್ತಾರೆ. ಜೆಫರ್ಸನ್, ದಾರ್ಶನಿಕ ಚಳವಳಿಯಲ್ಲಿ ನೆಲೆಸುವ ಮೂಲಕ, ಎಂದಿಗೂ ಅಂತ್ಯಗೊಳ್ಳದ ಏಕ ರಾಷ್ಟ್ರವನ್ನು ಕಟ್ಟಲು ಬಿಳಿಯರು ಮತ್ತು ಸ್ಥಳೀಯ ಅಮೆರಿಕನ್ನರು ಒಟ್ಟಿಗೆ ಸೇರಬೇಕು ಎಂದು ನಂಬುತ್ತಾರೆ. ಅಲ್ಲದೇ ಸ್ಥಳೀಯರು ಮಿಸಿಸಿಪ್ಪಿ ನದಿಯ ಕಡೆಗೆ ವಲಸೆ ಹೋಗಬೇಕು ಮತು ಪ್ರತ್ಯೇಕ ಸಮಾಜವನ್ನು ನಿರ್ಮಿಸಬೇಕೆಂದು ಕೂಡ ಅವರು ನಂಬುತ್ತಾರೆ.{{Citation needed|date=July 2010}}
====1871 ರ ಇಂಡಿಯನ್ ಮೀಸಲಾತಿ ಕಾಯ್ದೆ====
ನಂತರ 1871 ರಲ್ಲಿ ಕಾಂಗ್ರೆಸ್, ಇಂಡಿಯನ್ ಮೀಸಲಾತಿ ಕಾಯ್ದೆಗೆ ಉಪವಿಧಿಯೊಂದನ್ನು ಸೇರಿಸಿತು. ಅಧಿಕ ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗದವರ, ಅಮೆರಿಕಾ ಸಂಯುಕ್ತ ಸಂಸ್ಥಾನದ ಪರಿಗಣನೆಯನ್ನು ಅಂತ್ಯಮಾಡಿತಲ್ಲದೇ ಅಧಿಕ ಒಪ್ಪಂದಗಳನ್ನು ನಿಷೇಧಿಸಿತು.
{{cquote|That hereafter no Indian nation or tribe within the territory of the United States shall be acknowledged or recognized as an independent nation, tribe, or power with whom the United States may contract by treaty: Provided, further, that nothing herein contained shall be construed to invalidate or impair the obligation of any treaty heretofore lawfully made and ratified with any such Indian nation or tribe.|20x|20x|Indian Appropriations Act of 1871<ref name=App_act>
{{cite web
|url = http://law.onecle.com/constitution/article-2/21-indian-treaties.html
|title = Indian Treaties
|accessdate = 2009-03-31
|author = Onecle
|date = Last modified: November 8, 2005
}}
</ref>
}}
===ಪ್ರತಿರೋಧ===
[[File:Tecumseh02.jpg|175px|thumb|upright|ಟೆಕುಮ್ಸೇಹ್ ಟೆಕುಮ್ಸೇಹ್-ಕದನದ ಶಾವ್ನೀ ಮುಖಂಡರಾಗಿದ್ದರು, ಅವರು ಉತ್ತರ ಅಮೆರಿಕಾದಾದ್ಯಂತ ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗಗಳ ಮೈತ್ರಿಕೂಟವೊಂದನ್ನು ಆಯೋಜಿಸಲು ಪ್ರಯತ್ನಿಸಿದರು.<ref>[164]</ref>]]
ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರಿ ಅಧಿಕಾರಗಳು ಈ ಸಮಯದಲ್ಲಿ ಅನೇಕ ಒಪ್ಪಂದಗಳಿಗೆ ಒಳಗಾದರು, ಆದರೆ ಅನಂತರ ಹಲವು ಕಾರಣಗಳಿಗಾಗಿ ಅನೇಕ ಒಪ್ಪಂದಗಳನ್ನು ಮುರಿದರು. ಇತರ ಒಪ್ಪಂದಗಳನ್ನು ಅವುಗಳ ನಿಯಮಗಳನ್ನು ಬದಲಾಯಿಸಬಹುದಾದ "ಜೀವಂತ" ದಾಖಲೆಗಳೆಂದು ಪರಿಗಣಿಸಲಾಯಿತು. ಮಿಸಿಸಿಪ್ಪಿ ನದಿಯ ಪೂರ್ವ ಭಾಗದಲ್ಲಿ ನಡೆದ ಪ್ರಮುಖ ಯುದ್ಧಗಳು ಪೆಕೊಟ್ ಯುದ್ಧ, ಕ್ರೀಕ್ ಯುದ್ಧ, ಮತ್ತು ಸೆಮಿನೊಲೆ ಯುದ್ಧಗಳನ್ನು ಒಳಗೊಂಡಿವೆ. ಗಮನಾರ್ಹವಾಗಿ, ಶಾವ್ನಿ ಬುಡಕಟ್ಟಿನ ನಾಯಕ ಟೆಕ್ಯುಮ್ಸೆ ನಡೆಸಿದ ಬಹು ಬುಡಕಟ್ಟಿನ ಸೈನ್ಯವು, 1811–12 ರ ಸಮಯದಲ್ಲಿ ಅನೇಕ ಹೋರಾಟಗಳನ್ನು ನಡೆಸಿತು. ಇದನ್ನು ಟೆಕ್ಯುಮ್ಸೆ ಯುದ್ಧವೆಂದು ಕರೆಯಲಾಗುತ್ತದೆ. ಅನಂತರದ ಹಂತಗಳಲ್ಲಿ, ಟೆಕ್ಯುಮ್ಸೆ ಯ ಗುಂಪು, 1812 ರ ಕದನದಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿತು. ಅಲ್ಲದೇ ಡೆಟ್ರಾಯ್ಟ್ ನ ವಿಜಯದಲ್ಲಿ ಸಾಧನವಾಯಿತು. ಸೆಂಟ್. ಕ್ಲೇರ್ ನ ಸೋಲು (1791) ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸದಲ್ಲಿಯೇ ಸ್ಥಳೀಯ ಅಮೆರಿಕನ್ನರಿಂದ ಸೋತಂತಹ ಅಮೆರಿಕಾ ಸಂಯುಕ್ತ ಸಂಸ್ಥಾನ ಸೈನ್ಯದ ಅತ್ಯಂತ ಹೀನಾಯ ಪರಾಜಯವಾಗಿದೆ.
ಮಿಸಿಸಿಪ್ಪಿಯ ಪಶ್ಚಿಮದಲ್ಲಿರುವ ಸ್ಥಳೀಯ ಅಮೆರಿಕನ್ ರಾಷ್ಟ್ರಗಳು ಅಧಿಕ ಸಂಖ್ಯೆಯಲ್ಲಿದ್ದವು, ಹಾಗು ಅಮೆರಿಕಾ ಸಂಯುಕ್ತ ಸಂಸ್ಥಾನ ಆಡಳಿತಕ್ಕೆ ಒಪ್ಪಿಸಿದಂತಹ ಕೊನೆಯ ರಾಷ್ಟ್ರಗಳಾಗಿವೆ. ಅಮೆರಿಕನ್ ಸರ್ಕಾರ ಮತ್ತು ಸ್ಥಳೀಯ ಅಮೆರಿಕನ್ ಸಮಾಜಗಳ ನಡುವೆ ನಡೆದ ಯುದ್ಧಗಳನ್ನು "ಇಂಡಿಯನ್ ಯುದ್ಧಗಳೆಂದು" ಕರೆಯಲಾಗುತ್ತದೆ. ಲಿಟ್ಟಲ್ ಬಿಗ್ ಹಾರ್ನ್ ಯುದ್ಧವು (1876), ಸ್ಥಳೀಯ ಅಮೆರಿಕನ್ನರು ಸಾಧಿಸಿದ ಅತಿ ದೊಡ್ಡ ವಿಜಯಗಳಲ್ಲಿ ಒಂದಾಗಿದೆ. ಆಗಿನ 1862 ರ ಸಿ ಆಕ್ಸ್ ಅಪ್ರೈಸಿಂಗ್, ಸ್ಯಾಂಡ್ ಕ್ರೀಕ್ ಮ್ಯಾಸಕ್ರೆ (1864) ಮತ್ತು 1890 ರ ವುಂಡೆಡ್ ನೀ ಯುದ್ಧಗಳಲ್ಲಿ ಇವರು ಜಯಗಳಿಸಿದ್ದಾರೆ.<ref>ರಾಲ್ಪ್, ಕೆ. ಆಂಡ್ರಿಸ್ಟ್.[http://www.americanheritage.com/articles/magazine/ah/1962/3/1962_3_8.shtml] {{Webarchive|url=https://web.archive.org/web/20090718000231/http://www.americanheritage.com/articles/magazine/ah/1962/3/1962_3_8.shtml |date=2009-07-18 }}[http://www.americanheritage.com/articles/magazine/ah/1962/3/1962_3_8.shtml MASSACRE!] {{Webarchive|url=https://web.archive.org/web/20090718000231/http://www.americanheritage.com/articles/magazine/ah/1962/3/1962_3_8.shtml |date=2009-07-18 }}, ''ಅಮೆರಿಕನ್ ಹೆರಿಟೇಜ್'', ಎಪ್ರಿಲ್ 1962</ref> ಈ ಕದನಗಳು ಸ್ಥಳೀಯ ಅಮೆರಿಕನ್ನರ ಪ್ರಧಾನ ಸಂಸ್ಕೃತಿ ಅಳಿಯದಂತೆ ಬದಲಾವಣೆಗಳನ್ನು ತಂದವು. ಆದಾಗ್ಯೂ 1872 ರ ಹೊತ್ತಿಗೆ, ಅಮೆರಿಕಾ ಸಂಯುಕ್ತ ಸಂಸ್ಥಾನ ಸೈನ್ಯವು, ಸ್ಥಳೀಯ ಅಮೆರಿಕನ್ನರು ಶರಣಾಗತರಾಗಲು ಸಮ್ಮತಿಸುವವರೆಗೂ, ಹಾಗು "ಅವರದೇ ಆದ ಕ್ರೈಸ್ತಮತ ಮತ್ತು ಕೃಷಿ ಪದ್ದತಿಯನ್ನು ಅವರು ತಿಳಿಯಪಡಿಸುವ" ಮೀಸಲು ಪ್ರದೇಶಗಳಲ್ಲಿ ಬದುಕಲು ಒಪ್ಪುವವರೆಗೂ ಎಲ್ಲರನ್ನು ನಿರ್ನಾಮ ಮಾಡುವ ಕಾರ್ಯನೀತಿ ಅನುಸರಿಸಿತು.<ref>"[http://www.epcc.edu/nwlibrary/borderlands/18_apache.htm ಅಪೇಕ್ ಇಂಡಿಯನ್ಸ್ ಡಿಫೆಂಡೆಡ್ ಹೋಮ್ಲ್ಯಾಂಡ್ಸ್ ಇನ್ ಸೌತ್ವೆಸ್ಟ್] {{Webarchive|url=https://web.archive.org/web/20061007202003/http://www.epcc.edu/nwlibrary/borderlands/18_apache.htm |date=2006-10-07 }}". ರಿಯೋಸ್, ಎಮ್ಮಾ ಮತ್ತು ಟಾಡ್ ಉಜ್ಜೆಲ್. ಎಲ್ ಪ್ಯಾಸೊ ಕಮ್ಯೂನಿಟಿ ಕಾಲೇಜ್.</ref>
{{cquote|The Indian [was thought] as less than human and worthy only of extermination. We did shoot down defenseless men, and women and children at places like Camp Grant, Sand Creek, and Wounded Knee. We did feed strychnine to red warriors. We did set whole villages of people out naked to freeze in the iron cold of Montana winters. And we did confine thousands in what amounted to concentration camps.|20x|20x|''The Indian Wars of the West, 1934''<ref name=Wellman>
{{Cite book
|last = Wellman
|first = Paul
|title = The Indian Wars of the West
|accessdate = 2008-05-02
|publisher= = Doubleday & Company, INC.
|page = 8
|chapter = Preface
|id = ISBN NONE
|year = 1934
}}
</ref>}}
===ತೆಗೆದುಹಾಕುವಿಕೆ(ಸ್ಥಳಾಂತರಗಳು) ಮತ್ತು ಮೀಸಲಾತಿಗಳು===
{{See|List of Native American reservations in the United States}}
ಕಳೆದ 19 ನೇ ಶತಮಾನದಲ್ಲಿ, ಎಡೆಬಿಡದೆ ನಡೆದ ಅಮೆರಿಕಾ ಸಂಯುಕ್ತ ಸಂಸ್ಥಾನದ ಪಶ್ಚಿಮ ವಿಸ್ತರಣೆಯು, ಮುಂದಿನ ಪಶ್ಚಿಮದ ಭಾಗಗಳಲ್ಲಿ ಮರುನೆಲೆಗೊಳಿಸಲು ಹೆಚ್ಚಿನ ಸಂಖ್ಯೆಯ ಸ್ಥಳೀಯ ಅಮೆರಿಕನ್ನರನ್ನು ಅವರ ಇಚ್ಛೆಯ ವಿರುದ್ಧ ಬಲವಂತವಾಗಿ ಸ್ಥಳಾಂತರಿಸಲಾಯಿತು. ಸ್ಥಳೀಯ ಅಮೆರಿಕನ್ನರು, 1785 ರ ಹೋಪ್ ವೆಲ್ ಒಪ್ಪಂದ ನೀಡಿದ ಬಲವಂತವಾಗಿ ಸ್ಥಳಾಂತರಿಸುವ ನೀತಿಯು ಕಾನೂನು ಬಾಹಿರ ಎಂದು ನಂಬಿದ್ದರು. ರಾಷ್ಟ್ರಾಧ್ಯಕ್ಷ ಆಂಡ್ರೀವ್ ಜ್ಯಾಕ್ ಸನ್ ರವರಡಿಯಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್, 1830 ರ ಇಂಡಿಯನ್ ರಿಮೂವಲ್ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ರಾಷ್ಟ್ರಾಧ್ಯಕ್ಷರಿಗೆ, ಮಿಸಿಸಿಪ್ಪಿ ನದಿಯ ಪಶ್ಚಿಮದ ಭಾಗಗಳಿಗೆ ಪ್ರತಿಯಾಗಿ, ನದಿಯ ಪೂರ್ವ ಭಾಗಗಳಲ್ಲಿರುವ ಸ್ಥಳೀಯ ಅಮೆರಿಕನ್ನರ ಭೂಪ್ರದೇಶದ ವಿನಿಮಯ ಮಾಡಿಕೊಳ್ಳಲು ಒಪ್ಪಂದಗಳನ್ನು ಮಾಡುವಂತಹ ಅಧಿಕಾರ ನೀಡಿತು. ಇಂಡಿಯನ್ ರಿಮೂವಲ್ ನೀತಿಯ ಪರಿಣಾಮವಾಗಿ ಸುಮಾರು 100,000 ದಷ್ಟು ಸ್ಥಳೀಯ ಅಮೆರಿಕನ್ನರನ್ನು ಪಶ್ಚಿಮಕ್ಕೆ ಸ್ಥಳಾಂತರಿಸಲಾಯಿತು. ಈ ಸಿದ್ಧಾಂತದಲ್ಲಿ ವಲಸೆಯು, ಸ್ವ ಇಚ್ಛೆಯಿಂದ ಮಾಡುವಂತಹದ್ದು ಮತ್ತು ಅನೇಕ ಸ್ಥಳೀಯ ಅಮೆರಿಕನ್ನರನ್ನು ಪೂರ್ವದಲ್ಲೇ ಉಳಿಸುವುದು ಎಂದಿತ್ತು. ಆದರೆ ಪ್ರಾಯೋಗಿಕವಾಗಿ, ಈ ಸ್ಥಳಾಂತರ ಒಪ್ಪಂದಗಳಿಗೆ ಸಹಿಹಾಕಲು ಸ್ಥಳೀಯ ಅಮೆರಿಕನ್ ನಾಯಕರ ಮೇಲೆ ಅತ್ಯಧಿಕ ಒತ್ತಡ ಹೇರಲಾಗಿತ್ತು.
ನ್ಯೂ ಎಕೊಟಾ ಒಪ್ಪಂದದಡಿ ಸ್ಥಳಾಂತರ ನೀತಿಯ ಉದ್ದೇಶವನ್ನು ತೀವ್ರವಾಗಿ ವಿರೋಧಿಸಲಾಯಿತು. ಈ ಒಪ್ಪಂದಕ್ಕೆ ಚುನಾಯಿಸಲ್ಪಟ್ಟ ನಾಯಕತ್ವ ಸಹಿಹಾಕದೇ, ಚೆರೋಕೀಯರ ಭಿನ್ನಮತೀಯ ಒಳಪಂಗಡ ಸಹಿಹಾಕಿತು. ರಾಷ್ಟ್ರಾಧ್ಯಕ್ಷ ಜ್ಯಾಕ್ ಸನ್ ಒಪ್ಪಂದವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರು. ಇದರ ಫಲಿತಾಂಶವಾಗಿ ಟೇಲ್ ಆಫ್ ಟಿಯರ್ಸ್ ನಲ್ಲಿ 4,000 ಚೆರೋಕೀಯರು ಮೃತಪಟ್ಟರು, ಎಂದು ಅಂದಾಜು ಮಾಡಲಾಗಿದೆ. ಸುಮಾರು 17,000 ಚೆರೋಕೀಯರೊಂದಿಗೆ ಸರಿಸುಮಾರು 2,000 ದಷ್ಟು ಚೆರೋಕೀಯರು ಹೊಂದಿದ್ದ ಕಪ್ಪು ಗುಲಾಮರನ್ನು ಅವರ ಮನೆಗಳಿಂದ ಹೊರಗಟ್ಟಲಾಯಿತು.<ref>ಕಾರ್ಟರ್ (III), ಸ್ಯಾಮ್ಯುಯೆಲ್ (1976). ''ಚೆರೋಕೀ ಸನ್ಸೆಟ್: ಎ ನೇಶನ್ ಬಿಟ್ರೇಯ್ಡ್'' : ಎ ನರೇಟಿವ್ ಆಫ್ ಟ್ರಾವೈಲ್ ಆಂಡ್ ಟ್ರಿಯಂಫ್, ಪರ್ಸಿಕ್ಯೂಶನ್ ಆಂಡ್ ಎಕ್ಸೈಲ್. ನ್ಯೂಯಾರ್ಕ್: ಡಬಲ್ಡೇ, ಪುಟ 232.</ref>
ಬುಡಕಟ್ಟು ಜನಾಂಗದವರನ್ನು ಸಾಮಾನ್ಯವಾಗಿ, ಸುಲಭವಾಗಿ ಅವರ ಸಾಂಪ್ರದಾಯಿಕ ಜೀವನದಿಂದ ಬೇರ್ಪಡಿಸಬಹುದಾದ ಮತ್ತು ಯುರೋಪಿಯನ್-ಅಮೆರಿಕನ್ ಸಮಾಜಕ್ಕೆ ತಳ್ಳಬಹುದಾದ ಮೀಸಲು ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಕೆಲವು ದಕ್ಷಿಣದ ರಾಜ್ಯಗಳ ಮೇಲೆ 19 ನೇ ಶತಮಾನದಲ್ಲಿ, ಸ್ಥಳೀಯ ಅಮೆರಿಕನ್ನರ ಪ್ರದೇಶಗಳಲ್ಲಿ ಸ್ಥಳೀಯ ಅಮೆರಿಕನ್ನರಲ್ಲದವರನ್ನು ನೆಲೆಗೊಳಿಸುವ ಕ್ರಿಯೆಯನ್ನು ನಿಷೇಧಿಸುವ ಮೂಲಕ ಅಧಿಕ ಕಾನೂನು-ಕಟ್ಟಳೆಗಳನ್ನು ವಿಧಿಸಲಾಯಿತು. ಈ ಕಾನೂನುಗಳನ್ನು ಚೆದುರಿಹೋದ ಸ್ಥಳೀಯ ಅಮೆರಿಕನ್ನರ ಪ್ರತಿಭಟನೆಯ ಶಕ್ತಿಗೆ ಸಹಾನುಭೂತಿಯುಳ್ಳ ಬಿಳಿ ಧರ್ಮಪ್ರಚಾರಕರು ಸಹಾಯ ಮಾಡದಂತೆ ತಡೆಯಲು ಜಾರಿಗೆತರಲಾಗಿತ್ತು.<ref>ಗಮನಿಸಿ ಜೀನೊಸೈಡ್ಸ್ ಇನ್ ಹಿಸ್ಟರಿ#ಅಮೆರಿಕಾಸ್</ref>
==ಸ್ಥಳೀಯ ಅಮೆರಿಕನ್ ಗುಲಾಮಗಿರಿ==
{{details|Slavery among Native Americans in the United States}}
===ಸ್ಥಳೀಯ ಅಮೆರಿಕನ್ ಗುಲಾಮಗಿರಿಯ ಸಂಪ್ರದಾಯಗಳು===
ಉತ್ತರ ಅಮೆರಿಕಾಕ್ಕೆ ಆಫ್ರಿಕನ್ ಗುಲಾಮಗಿರಿಯನ್ನು ಯುರೋಪಿಯನ್ನರು ಪರಿಚಯಿಸುವ ಮೊದಲು, ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗದವರು ಒಂದು ರೀತಿಯ ಗುಲಾಮಗಿರಿ ಪದ್ಧತಿಯನ್ನು ಹೊಂದಿದ್ದರು. ಆದರೆ ಯಾವ ಗುಲಾಮಿ ಕೆಲಸಗಾರನನ್ನು ದೊಡ್ಡ ಮಟ್ಟದಲ್ಲಿ ಶೋಷಿಸಿಲ್ಲ. ಇದರ ಜೊತೆಯಲ್ಲಿ ಸ್ಥಳೀಯ ಅಮೆರಿಕನ್ನರು ವಸಾಹತು ಪೂರ್ವಯುಗದಲ್ಲಿ ಯಾವ ಖೈದಿಯನ್ನೂ ಮಾರಾಟ ಮಾಡಿಲ್ಲ, ಮತ್ತು ಖರೀದಿಸಿಲ್ಲ. ಆದರು ಕೆಲವೊಮ್ಮೆ ಶಾಂತಿ ಸಂಕೇತವಾಗಿ ಅಥವಾ ಅವರ ಸದಸ್ಯರ ವಿಮಿಮಯಕ್ಕಾಗಿ, ಇತರ ಬುಡಕಟ್ಟು ಜನಾಂಗದವರೊಂದಿಗೆ ಗುಲಾಮಗಿರಿಗೆ ಒಳಪಟ್ಟ ವ್ಯಕ್ತಿಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಖೈದಿಗಳನ್ನು ಬಳಸುವ ಅವರ ವ್ಯವಸ್ಥೆಗೆ "ಗುಲಾಮ" ಎಂಬುದು ಖಚಿತವಾದ ಪದವಾಗಿಲ್ಲದಿರಬಹುದು.<ref name="amslav">{{cite web|url=http://mmslibrary.files.wordpress.com/2009/10/slavery-and-native-americans-in-british-north-america-and-the-united-states.pdf|title=Slavery and Native Americans in British North America and the United States: 1600 to 1865|author= Tony Seybert|accessdate=2009-06-20 |year=2009 |publisher==}}</ref>
ಬುಡಕಟ್ಟು ಜನಾಂಗಳಲ್ಲಿ ಗುಲಾಮರನ್ನಿಟುಕೊಂಡಿರುವ ಸ್ಥಳೀಯ ಅಮೆರಿಕನ್ನರ ಷರತ್ತುಗಳು ವಿಭಿನ್ನವಾಗಿರುತ್ತವೆ. ಅನೇಕ ಸಂದರ್ಭಗಳಲ್ಲಿ, ಗುಲಾಮರಾದ ಯುವ ಖೈದಿಗಳನ್ನು, ಯುದ್ಧದಲ್ಲಿ ಅಥವಾ ಕಾಯಿಲೆಯಿಂದ ಮಡಿದ ಸೈನಿಕರ ಸ್ಥಾನ ತುಂಬಲು ಜನಾಂಗದೊಳಗೆ ಸೇರಿಸಿಕೊಳ್ಳಲಾಗುತ್ತಿತ್ತು. ಇತರ ಬುಡಕಟ್ಟಿನವರು ಸಾಲದ ಗುಲಾಮಗಿರಿಯನ್ನು ಅಥವಾ ಅಪರಾಧ ಮಾಡಿದ ಬುಡಕಟ್ಟು ಜನಾಂಗದ ಸದಸ್ಯರ ಮೇಲೆ ಹೇರಲಾದ ಗುಲಾಮಗಿರಿಯನ್ನು ರೂಢಿಸಿಕೊಂಡಿದ್ದರು; ಆದರೆ ಇದು ಕೇವಲ ತಾತ್ಕಾಲಿಕವಾಗಿರುತ್ತಿತ್ತು. ಎಲ್ಲಿಯವರೆಗೆ ಗುಲಾಮನಾದವನು ಬುಟಕಟ್ಟು ಸಮಾಜಕ್ಕೆ ಅವರ ನಿಬಂಧನೆಗಳಿಗೆ ಒಳಪಟ್ಟು ಕೆಲಸಮಾಡಿ ಆತನ ಋಣವನ್ನು ತೀರಿಸುತ್ತಾನೋ ಅಲ್ಲಿವರಿಗಷ್ಟೇ ಆತ ಗುಲಾಮನಾಗಿರುತ್ತಾನೆ.<ref name="amslav" />
ಕೆಲವು ವಾಯವ್ಯ ಪೆಸಿಫಿಕ್ ಬುಡಕಟ್ಟು ಜನಾಂಗಗಳಲ್ಲಿ ಜನಸಂಖ್ಯೆಯ ನಾಲ್ಕುಭಾಗದಷ್ಟು ಜನ ಗುಲಾಮರಾಗಿದ್ದರು.<ref>"[http://www.digitalhistory.uh.edu/database/article_display_printable.cfm?HHID=59 ಸ್ಲಾವೆರಿ ಇನ್ ಹಿಸ್ಟೋರಿಕಲ್ ಪರ್ಸ್ಪೆಕ್ಟಿವ್] {{Webarchive|url=https://web.archive.org/web/20120614062348/http://www.digitalhistory.uh.edu/database/article_display_printable.cfm?HHID=59 |date=2012-06-14 }}". ''ಡಿಜಿಟಲ್ ಹಿಸ್ಟರಿ'', ಯೂನಿವರ್ಸಿಟಿ ಆಫ್ ಹೌಸ್ಟನ್</ref> ಉತ್ತರ ಅಮೆರಿಕಾದಲ್ಲಿ ಗುಲಾಮರನ್ನು ಇಟ್ಟುಕೊಳ್ಳುವ ಇತರ ಬುಡಕಟ್ಟು ಜನಾಂಗದವರೆಂದರೆ ಟೆಕ್ಸಾಸ್ ನ ಕಾಮ್ಚೆ, ಜಾರ್ಜಿಯಾದ ಕ್ರೀಕ್, ಪ್ಯಾವ್ನೀ ಮತ್ತು ಕಲ್ಮತ್ ಎನಿಸಿದ್ದಾರೆ.<ref>"[http://www.britannica.com/blackhistory/article-24156 ಸ್ಲೇವ್-ಓನಿಂಗ್ ಸೊಸೈಟೀಸ್]". ''ಎನ್ಸೈಕ್ಲೊಪೀಡಿಯಾ ಬ್ರಿಟಾನಿಕಾಸ್ ಗೈಡ್ ಟು ಬ್ಲ್ಯಾಕ್ ಹಿಸ್ಟರಿ''.</ref>
===ಯುರೋಪಿಯನ್ ಗುಲಾಮಗಿರಿ===
ಯುರೋಪಿಯನ್ನರು ಉತ್ತರ ಅಮೆರಿಕಕ್ಕೆ ವಸಾಹತುಗಾರರಾಗಿ ಆಗಮಿಸಿದಾಗ, ಸ್ಥಳೀಯ ಅಮೆರಿಕನ್ನರು ಏಕಾಏಕಿ ಅವರ ಗುಲಾಮಗಿರಿ ಪದ್ಧತಿಯನ್ನು ಬದಲಾಯಿಸಿಕೊಂಡರು. ಬ್ರಿಟಿಷ್ ವಸಾಹತಿಗರು ಅದರಲ್ಲೂ ವಿಶೇಷವಾಗಿ ದಕ್ಷಿಣದ ವಸಾಹತುಗಳಲ್ಲಿದ್ದವರು ತಂಬಾಕು, ಅಕ್ಕಿ ಮತ್ತು ಇಂಡಿಗೋವನ್ನು ಬೆಳೆಯುವುದಕ್ಕಾಗಿ, ಸ್ಥಳೀಯ ಅಮೆರಿಕನ್ನರನ್ನು ಉಪಯೋಗಿಸಲು ಅವರನ್ನು ಕೊಂಡುಕೊಳ್ಳುತ್ತಿದ್ದರು ಅಥವಾ ಸೆರೆಹಿಡಿಯುತ್ತಿದ್ದರು. ಸ್ಥಳೀಯ ಅಮೆರಿಕನ್ನರು ಬಿಳಿಯರನ್ನು ಅವರ ಸಮಾಜಗಳೊಳಗೆ ಸೇರಿಸಿಕೊಳ್ಳುವ ಬದಲು ಯುದ್ಧ ಖೈದಿಗಳನ್ನು ಅವರಿಗೆ ಮಾರಾಟ ಮಾಡಲು ಪ್ರಾರಂಭಿಸಿದರು. ವೆಸ್ಟ್ ಇಂಡೀಸ್ ನಲ್ಲಿ ಕಬ್ಬಿನ ಬೇಸಾಯದೊಂದಿಗೆ ಜೀತಗಾರರ ಬೇಡಿಕೆಯೂ ಬೆಳೆಯಿತು. ಯುರೋಪಿಯನ್ನರು "ಸಕ್ಕರೆಯ ಐಲೆಂಡ್" ಗಳಿಗೆ ಸ್ಥಳೀಯ ಅಮೆರಿಕನ್ನರನ್ನು ಕಳುಹಿಸಲೆಂದು ಅವರನ್ನು ಗುಲಾಮರಾಗಿಸಿ ಕೊಳ್ಳುತ್ತಿದ್ದರು. ಎಷ್ಟು ಜನರನ್ನು ಗುಲಾಮರಗಿಸಿಕೊಂಡಿದ್ದರೆಂಬುದಕ್ಕೆ ಖಚಿತವಾದ ದಾಖಲೆಗಳಿಲ್ಲ. ಯುರೋಪಿಯನ್ನರು ಸಾವಿರಾರು ಸ್ಥಳೀಯ ಅಮೆರಿಕನ್ನರನ್ನು ಗುಲಾಮರಾಗಿಸಿಕೊಂಡಿದ್ದರು ಎಂದು ಅಂದಾಜು ಮಾಡಲಾಗಿದೆ.<ref name="amslav" />
ಗುಲಾಮಗಿರಿಯು ಜನಾಂಗದ ವರ್ಣವಾಯಿತು, ವರ್ಜಿನಿಯದ ಜನರಲ್ ಅಸೆಂಬ್ಲಿ 1705 ರಲ್ಲಿ ಕೆಲವು ನಿಯಮಗಳನ್ನು ಮಾಡಿತು: <blockquote>"ಎಲ್ಲಾ ಗುಲಾಮರನ್ನು ರಾಷ್ಟ್ರಕ್ಕೆ ಮರಳಿ ಕರೆತರಲಾಯಿತು... ಅವರ ಸ್ಥಳೀಯ ರಾಷ್ಟ್ರಗಳಲ್ಲಿ ಕ್ರೈಸ್ತಮತಾನುಯಾಯಿ ಅಲ್ಲದವರು... ಅಂತವರನ್ನು ಗುಲಾಮರಾಗಿಯೇ ಇರಲು ಬಿಡಲಾಯಿತು. ಈ ಆಡಳಿತಕ್ಕೆ ಒಳಪಟ್ಟ ಎಲ್ಲಾ ನೀಗ್ರೋ, ಮ್ಯೂಲ್ಯಾಟೋ(ಐರೋಪ್ಯ ವ್ಯಕ್ತಿಗೂ ನೀಗ್ರೋ ವ್ಯಕ್ತಿಗೂ ಜನಿಸಿದವ) ಮತ್ತು ಇಂಡಿಯನ್ ಗುಲಾಮರು.... ರಿಯಲ್ ಎಸ್ಟೇಟ್ (ಸ್ಥಿರಾಸ್ತಿ) ಎಂದು ಪರಿಗಣಿಸಿ ಕರೆತರಲಾಗುತ್ತಿತ್ತು. ಒಂದು ವೇಳೆ ಯಾವನೇ ಗುಲಾಮ ಆತನ ಒಡೆಯನನ್ನು ವಿರೋಧಿಸಿದರೆ... ಅಂತಹ ಗುಲಾಮನನ್ನು ಶಿಕ್ಷಿಸಲಾಗುವುದು, ಅಲ್ಲದೇ ಶಿಕ್ಷಿಸುವಾಗ ಆತನನ್ನು ಕೊಲ್ಲಬಹುದು... ಒಡೆಯನು ಎಲ್ಲಾ ಶಿಕ್ಷೆಗಳಿಂದ ಮುಕ್ತನಾಗಿರುತ್ತಾನೆ... ಆದರೆ ಅಂತಹ ಘಟನೆಯು ಎಂದೂ ನಡೆದಿಲ್ಲ."
– ವರ್ಜಿನಿಯ ಜನರಲ್ ಅಸೆಂಬ್ಲಿ ಘೋಷಣೆ, 1705.<ref name="pbsafna">{{cite web|url=http://www.pbs.org/wgbh/aia/part1/1narr3.html|title=The Terrible Transformation:From Indentured Servitude to Racial Slavery|author=|accessdate=2010-01-07 |year=2009 |publisher==PBS}}</ref></blockquote>
ಸ್ಥಳೀಯ ಅಮೆರಿಕನ್ನರ ಗುಲಾಮಗಿರಿಯ ವ್ಯಾಪಾರವು 1730 ರಲ್ಲಿ ಕೊನೆಕೊಂಡಿತು. ಅಲ್ಲದೇ ಇದು ಯಾಮಸೀ ಕದನ ವನ್ನು ಒಳಗೊಂಡಂತೆ ಬುಡಕಟ್ಟು ಜನಾಂಗದವರ ನಡುವೆ ಅನೇಕ ವಿಧ್ವಂಸಕ ಕದನಗಳಿಗೆ ಕಾರಣವಾಯಿತು. ಆಗ 18ನೇ ಶತಮಾನದ ಪೂರ್ವಾರ್ಧದಲ್ಲಿ ನಡೆದ ಇಂಡಿಯನ್ ಕದನಗಳು, ಹೆಚ್ಚಾದ ಆಫ್ರಿಕನ್ ಗುಲಾಮರ ಆಮದಿನೊಂದಿಗೆ ಸೇರಿ, ಸ್ಥಳೀಯ ಅಮೆರಿಕನ್ನರ ಗುಲಾಮಗಿರಿ ವ್ಯಾಪಾರವನ್ನು 1750 ರಲ್ಲಿ ಕೊನೆಗೊಳಿಸಿದವು. ಸ್ಥಳೀಯ ಅಮೆರಿಕನ್ ಗುಲಾಮರು ಈ ಮೂಲಕ ಸುಲಭವಾಗಿ ತಪ್ಪಿಸಿಕೊಳ್ಳಬಲ್ಲರು ಎಂಬುದನ್ನು ವಸಾಹತುಗಾರರು ಕಂಡುಕೊಂಡರು. ಅಲ್ಲದೇ ಯುದ್ಧಗಳು, ವಸಾಹತುಗಳು ಹೊಂದಿದ್ದ ಅನೇಕ ಗುಲಾಮರ ಬದುಕನ್ನು ಬಲಿತೆಗೆದುಕೊಂಡವು. ಉಳಿದ ಸ್ಥಳೀಯ ಅಮೆರಿಕನ್ ಗುಂಪುಗಳು, ಬಲದ ಮೂಲಕ ಯುರೋಪಿಯನ್ನರನ್ನು ಎದುರಿಸಲು ಒಟ್ಟುಗೂಡಿದವು. ಆಗ್ನೇಯ ಭಾಗದಲ್ಲಿ ವಾಸಿಸುತ್ತಿದ್ದ ಸ್ಥಳೀಯ ಅಮೆರಿಕನ್ ಜನರು ರಕ್ಷಣೆಗಾಗಿ ಚಾಕ್ಟವ್, ಕ್ರೀಕ್ ಮತ್ತು ಕಟವ್ಬ್ ದಂತಹ ಕೂಟಗಳನ್ನು ಸೇರಿದರು.<ref name="amslav" />
ಸ್ಥಳೀಯ ಅಮೆರಿಕನ್ ಮಹಿಳೆಯರು ಗುಲಾಮರಾದರು ಅಥವಾ ಆಗದಿದ್ದರೂ ಕೂಡ ಅತ್ಯಾಚಾರಕ್ಕೆ ಒಳಪಡುವ ಅಪಾಯವನ್ನು ಎದುರಿಸುತ್ತಿದ್ದರು;ದಕ್ಷಿಣದ ಅನೇಕ ಸಮುದಾಯಗಳಲ್ಲಿ ವಸಾಹತು ಪೂರ್ವ ವರ್ಷಗಳಲ್ಲಿ ಪುರುಷರ ಸಂಖ್ಯೆ ಸಮನಾಗಿರಲಿಲ್ಲ. ಹಾಗಾಗಿ ಅವರು ಸ್ಥಳೀಯ ಅಮೆರಿಕನ್ ಮಹಿಳೆಯರನ್ನು ಲೈಂಗಿಕ ಸಂಬಂಧಗಳಿಗಾಗಿ ಬಳಸಲು ಪ್ರಾರಂಭಿಸಿದ್ದರು.<ref name="udayu">{{cite web|url=http://academic.udayton.edu/Race/05intersection/Gender/rape.htm|title="The Realities of Enslaved Female Africans in America", excerpted from ''Failing Our Black Children: Statutory Rape Laws, Moral Reform and the Hypocrisy of Denial''|author=Gloria J. Browne-Marshall|accessdate=2009-06-20|year=2009|publisher==University of Daytona|archive-date=2011-11-05|archive-url=https://web.archive.org/web/20111105133059/http://academic.udayton.edu/race/05intersection/gender/rape.htm|url-status=dead}}</ref> ಸ್ಥಳೀಯ ಅಮೆರಿಕನ್ ಮತ್ತು ಗುಲಾಮಗಿರಿಗೆ ಒಳಪಟ್ಟ ಆಫ್ರಿಕನ್ ಮಹಿಳೆಯರು, ಗುಲಾಮರಾಗಿದ್ದ ಪುರುಷರಿಂದ ಮತ್ತು ಬಿಳಿಯ ಪುರುಷರಿಂದ ಅತ್ಯಾಚಾರಕ್ಕೆ ಮತ್ತು ಲೈಗಿಂಕ ಕಿರುಕುಳಕ್ಕೆ ಬಲಿಯಾಗಿದ್ದರು.<ref name="udayu" />
===ಆಫ್ರಿಕನ್ ಗುಲಾಮಗಿರಿಯನ್ನು ಆಯ್ದುಕೊಂಡ ಸ್ಥಳೀಯ ಅಮೆರಿಕನ್ನರು===
ತಮ್ಮ ಭೂ ಪ್ರದೇಶಗಳನ್ನು ಆಕ್ರಮಿಸುವ ಆಂಗ್ಲೊ-ಅಮೆರಿಕನ್ನರ ಯತ್ನವನ್ನು ಸ್ಥಳೀಯ ಅಮೆರಿಕನ್ನರು ತಡೆಗಟ್ಟಿ, ತಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡರು. ಸ್ಥಳೀಯ ಅಮೆರಿಕನ್ನರು ಹಾಗೂ ಗುಲಾಮಗಿರಿಯಲ್ಲಿದ್ದ ಆಫ್ರಿಕನ್ನರು ಮತ್ತು ಆಫ್ರಿಕನ್-ಅಮೆರಿಕನ್ನರೊಂದಿಗೆ ಹಲವು ಮಟ್ಟಗಳಲ್ಲಿ ಅಂತರ-ಸಂಪರ್ಕದಲ್ಲಿದ್ದರು. ಕಾಲಾನಂತರದಲ್ಲಿ ಇವೆಲ್ಲಾ ಸಂಸ್ಕೃತಿಗಳು ಅಂತರಸಂಪರ್ಕ ಗಳಿಸಿದವು. ಸ್ಥಳೀಯ ಅಮೆರಿಕನ್ನರು ನಿಧಾನವಾಗಿ ಬಿಳಿಯರ ಸಂಸ್ಕೃತಿಯನ್ನು ಆಯ್ದುಕೊಳ್ಳಲಾರಂಭಿಸಿದರು.<ref name="nawomen">{{Cite book|url=https://books.google.com/?id=UYWs-GQDiOkC&pg=PA214&lpg=PA214&dq=indian+women+married+black+men|title=Women in early America|author=Dorothy A. Mays|accessdate=2008-05-29 |year=2008 |publisher==ABC-CLIO | isbn=9781851094295
}}</ref> ಸ್ಥಳೀಯ ಅಮೆರಿಕನ್ನರು ಆಫ್ರಿಕನ್ನರೊಂದಿಗೆ ಕೆಲವು ಅನುಭವಗಳು, ಅದರಲ್ಲೂ ವಿಶಿಷ್ಟವಾಗಿ ಇವೆರಡೂ ಜನಾಂಗದವರು ಗುಲಾಮಗಿರಿಗೆ ಒಳಗಾದಾಗ ಪಡೆದ ಅನುಭವಗಳನ್ನು ಹಂಚಿಕೊಂಡರು.<ref name="afrna">{{cite web|url=http://www.nps.gov/history/ethnography/aah/aaheritage/lowCountry_furthRdg1.htm|title=Park Ethnography: Work, Marriage, Christianity|author=National Park Service| date=2009-05-30|publisher==National Park Service}}</ref>
ಇತರೆ ಯುರೋಪಿಯನ್-ಅಮೆರಿಕನ್ ರೀತಿ-ನೀತಿಗಳನ್ನು ಮೈಗೂಡಿಸಿಕೊಂಡ ಐದೂ ನಾಗರಿಕತೆಯುಳ್ಳ ಪಂಗಡಗಳು, ಗುಲಾಮರ ಸ್ವಾಮ್ಯ ಗಳಿಸುವುದರ ಮೂಲಕ, ಪ್ರಾಬಲ್ಯ ಮೆರೆಯಲು ಯತ್ನಿಸಿದರು. ಚೆರೊಕಿ ಪ್ರದೇಶದಲ್ಲಿ ಗುಲಾಮರ ಒಡೆತನದ ಮನೆಮಂದಿಗಳ ಪೈಕಿ 78%ರಷ್ಟು ತಾವು ಯಾವುದೋ ಒಂದು ಬಿಳಿಯರ ವಂಶಸ್ಥರೆಂದು ಹೇಳಿಕೊಳ್ಳುತ್ತಿದ್ದರು. ಈ ಜನಗಳ ನಡುವಿನ ಅಂತರಸಂಪರ್ಕದ ಸ್ವರೂಪವು, ಸ್ಥಳೀಯ ಅಮೆರಿಕನ್ ಪಂಗಡಗಳ, ಗುಲಾಮಗಿರಿಗೊಳಗಾದ ಜನ ಮತ್ತು ಗುಲಾಮರನ್ನಿಟ್ಟುಕೊಂಡಿದ್ದ ಯುರೋಪಿಯನ್ನರ ಐತಿಹಾಸಿಕ ಲಕ್ಷಣವನ್ನು ಅವಲಂಬಿಸಿತ್ತು. ಸ್ಥಳೀಯ ಅಮೆರಿಕನ್ನರು ಪರಾರಿಯಾಗುತ್ತಿದ್ದ ಗುಲಾಮರಿಗೆ ಆಗಾಗ್ಗೆ ನೆರವು ನೀಡಿದ್ದುಂಟು. ಈ ಪಂಗಡಗಳು, ಅನೇಕ ಹೊದಿಕೆಗಳು ಮತ್ತು ಕುದುರೆಗಳನ್ನು ವ್ಯಾಪಾರ ಮಾಡಿದಂತೆಯೇ ಆಫ್ರಿಕನ್ನರನ್ನು ಬಿಳಿಯರಿಗೆ ಮಾರಿದರು.<ref name="amslav" />
ಯುರೋಪಿಯನ್ನರಂತೆಯೇ, ಸ್ಥಳೀಯ ಅಮೆರಿಕನ್ನರು ಸಹ ಗುಲಾಮಗಿರಿಗೊಳಗಾದವರನ್ನು ಬಹಳ ಕೆಟ್ಟದಾಗಿ ನಡೆಸಿಕೊಂಡದ್ದುಂಟು. ಆದರೂ,ಚಾಟೆಲ್ ಗುಲಾಮಗಿರಿ ಎನ್ನಲಾದ ದಕ್ಷಿಣ ಬಿಳಿಯ ಜೀತಗಾರಿಕೆಯ ತೀರಾ ಕ್ರೂರ ವಿಧಾನಗಳನ್ನು ಹಲವು ಸ್ಥಳೀಯ ಅಮೆರಿಕನ್ ಒಡೆಯರು ತಿರಸ್ಕರಿಸಿದ್ದರು.<ref name="wil">{{cite web |url=http://www.williamlkatz.com/Essays/History/AfricansIndians.php |title=Africans and Indians: Only in America |author=William Loren Katz |accessdate=2008-09-20 |year=2008 |publisher==William Loren Katz |archive-date=2007-05-29 |archive-url=https://web.archive.org/web/20070529122255/http://www.williamlkatz.com/Essays/History/AfricansIndians.php |url-status=dead }}</ref> ಗುಲಾಮರನ್ನಿಟ್ಟುಕೊಂಡ ಸ್ಥಳೀಯ ಅಮೆರಿಕನ್ನರು 3%ಕ್ಕಿಂತಲೂ ಕಡಿಮೆಯಾದರೂ, ಜೀತಗಾರಿಕೆಯು ಸ್ಥಳೀಯ ಅಮೆರಿಕನ್ ಪಂಗಡಗಳ ನಡುವೆ ವಿನಾಶಕಾರಿ ಬಿರುಕು-ಭಿನ್ನಾಭಿಪ್ರಾಯಗಳಿಗೆ ಕಾರಣವಾದವು. ಗುಲಾಮರನ್ನಿಟ್ಟುಕೊಂಡ ಮಿಶ್ರಿತ-ಜನಾಂಗೀಯರು ಯುರೋಪಿಯನ್ ಸಂತತಿಗೆ ಸಂಬಂಧಿತ ವರ್ಗ ಶ್ರೇಣಿಯ ಭಾಗವಾಗಿದ್ದರು. ಆದರೆ, ಅವರ ಅನುಕೂಲವು ತಮ್ಮ ಪೂರ್ವಜರಿಂದ ವರ್ಗಾವಣೆಯಾದ ಸಾಮಾಜಿಕ ಹೂಡಿಕೆಯನ್ನು ಆಧರಿಸಿತ್ತು.<ref name="wil" /> ಅಮೆರಿಕನ್ ಸಂಯುಕ್ತ ಸಂಸ್ಥಾನದ ದಕ್ಷಿಣ ಭಾಗದಲ್ಲಿ ಮಿಶ್ರಿತ-ಜನಾಂಗೀಯ ಸ್ಥಳೀಯ ಅಮೆರಿಕನ್ನರ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ, ಇಂಡಿಯನ್ ಜನಾಂಗದವರ ಮರುಸ್ಥಳಾಂತರದ ಪ್ರಸ್ತಾಪವು ಸಾಂಸ್ಕೃತಿಕ ಬದಲಾವಣೆಗಳ ಉದ್ವೇಗಗಳನ್ನು ಹೆಚ್ಚಿಸಿತು. ತಮ್ಮ ಭೂ ಪ್ರದೇಶಗಳು ಸೇರಿದಂತೆ, ತಮ್ಮ ಸಾಂಪ್ರದಾಯಿಕತೆಗಳನ್ನು ಉಳಿಸಿಕೊಳ್ಳಲು ಮಿಶ್ರಿತವಲ್ಲದ ಶುದ್ಧ ಜನಾಂಗೀಯರು ಕೆಲವೊಮ್ಮೆ ಬಹಳಷ್ಟು ಶ್ರಮಿಸಿದರು. ಬಹಳಷ್ಟು ಗುಲಾಮರನ್ನಿಟ್ಟುಕೊಂಡಿರದ ಸಾಂಪ್ರದಾಯಿಕ ಪಂಗಡ ಸದಸ್ಯರು, ಆಂಗ್ಲೊ-ಅಮೆರಿಕನ್ನರಿಗೆ ಭೂ ಪ್ರದೇಶಗಳನ್ನು ಮಾರುವ ವಿದ್ಯಮಾನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು..<ref name="amslav" />
==ಯುದ್ಧಗಳು==
===ರಾಜ ಫಿಲಿಪ್ನ ಯುದ್ಧ===
ರಾಜಾ ಫಿಲಿಪ್ನ ಯುದ್ಧವನ್ನು ಕೆಲವೊಮ್ಮೆ ಮೆಟಾಕಾಮ್ ಯುದ್ಧ ಅಥವಾ ಮೆಟಾಕಾಮ್ ದಂಗೆ ಎನ್ನಲಾಗುತ್ತಿತ್ತು. ಇಂದಿನ ದಕ್ಷಿಣ ನ್ಯೂ ಇಂಗ್ಲೆಂಡ್ನ ಸ್ಥಳೀಯ ಅಮೆರಿಕನ್ ನಿವಾಸಿಗಳು ಮತ್ತು ಇಂಗ್ಲಿಷ್ ವಸಾಹತುದಾರರು ಹಾಗು ಅವರ ಸ್ಥಳೀಯ ಆಮೆರಿಕನ್ ಮೈತ್ರಿಪಡೆಗಳ ನಡುವೆ 1675-1676ರಲ್ಲಿ ನಡೆದ ಸಶಸ್ತ್ರ ಸಂಘರ್ಷ ಇದಾಗಿತ್ತು. ರಾಜ ಫಿಲಿಪ್ ಹತನಾದ ನಂತರವೂ, ಯುದ್ಧವು ಉತ್ತರ ನ್ಯೂ ಇಂಗ್ಲೆಂಡ್ (ಮುಖ್ಯವಾಗಿ ಮೇಯ್ನ್ ಗಡಿಯಲ್ಲಿ)ನಲ್ಲಿ ಮುಂದುವರೆಯಿತು. ಹೀಗೆ 1678ರ ಏಪ್ರಿಲ್ ತಿಂಗಳಲ್ಲಿ ಕ್ಯಾಸ್ಕೋ ಬೇಯಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕುವುದರೊಂದಿಗೆ ಯುದ್ಧವು ಅಂತ್ಯಗೊಂಡಿತು.{{Citation needed|date=April 2010}} ರಕ್ಷಣಾ ಇಲಾಖೆ, ಜನಗಣತಿ ವಿಭಾಗ ಹಾಗೂ ವಸಾಹತು ಇತಿಹಾಸ ತಜ್ಞ ಫ್ರಾನ್ಸಿಸ್ ಜೆನಿಂಗ್ಸ್ರಂತಹವರ ಕೆಲಸದ ಮೂಲಗಳನ್ನು ಆಧರಿಸಿ, ಷುಲ್ಟ್ಜ್ ಮತ್ತು ಟುಗಿಯಾಸ್ ಬರೆದ 'ಕಿಂಗ್ ಫಿಲಿಪ್ಸ್ ವಾರ್, ದಿ ಹಿಸ್ಟರಿ ಅಂಡ್ ಲೆಗಾಸಿ ಆಫ್ ಅಮೆರಿಕಾಸ್ ಫರ್ಗಾಟನ್ ಕನ್ಫ್ಲಿಕ್ಟ್'ನಲ್ಲಿ ತಿಳಿಸಲಾದ ಒಟ್ಟಾರೆ ಅಂದಾಜುಗಳ ಪ್ರಕಾರ, ನ್ಯೂಇಂಗ್ಲೆಂಡ್ ಪ್ರದೇಶದ ಇಂಗ್ಲಿಷ್ ವಸಾಹತುದಾರರ ಪೈಕಿ 800 ಜನರು (ಪ್ರತಿ 65 ಜನರಲ್ಲಿ ಒಬ್ಬರು) ಹಾಗೂ, 20,000 ಸ್ಥಳೀಯರ ಪೈಕಿ 3000 (ಪ್ರತಿ 20 ಜನರಲ್ಲಿ ಮೂವರು) ಯುದ್ಧದಲ್ಲಿ ಹತರಾದರು. ಇದರಿಂದಾಗಿ, ಪ್ರಮಾಣಾನುಗುಣವಾಗಿ ಅಮೆರಿಕಾದ ಇತಿಹಾಸದಲ್ಲಿ ಇದು ಅತಿ ರಕ್ತಮಯ ಹಾಗೂ ಅತಿ ದುಬಾರಿ ಯುದ್ಧ ಎನ್ನಲಾಗಿತ್ತು.{{Citation needed|date=April 2010}} ನ್ಯೂಇಂಗ್ಲೆಂಡ್ನ ತೊಂಬತ್ತು ಪಟ್ಟಣಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಟ್ಟಣಗಳು ಸ್ಥಳೀಯ ಅಮೆರಿಕನ್ ಯೋಧರಿಂದ ದಾಳಿಗೊಳಗಾದವು. ಉಭಯ ಪಕ್ಷಗಳಲ್ಲಿ ಹತ್ತು ಯೋಧರಲ್ಲಿ ಒಬ್ಬರು ಗಾಯಗೊಂಡಿದ್ದರು ಅಥವಾ ಮೃತಪಟ್ಟರು.<ref>[http://www.militaryhistoryonline.com/horsemusket/kingphilip/default.aspx ಫಿಲಿಪ್ಸ್ ವಾರ್: ಅಮೆರಿಕಾಸ್ ಮೋಸ್ಟ್ ಡಿವಾಸ್ಟೇಟಿಂಗ್ ಕಾನ್ಫ್ಲಿಕ್ಟ್] {{Webarchive|url=https://web.archive.org/web/20110516191654/http://www.militaryhistoryonline.com/horsemusket/kingphilip/default.aspx |date=2011-05-16 }}. ವಾಲ್ಟರ್ ಗೈರ್ಸ್ಬ್ಯಾಚ್. ಮಿಲಿಟರಿ ಹಿಸ್ಟರಿ ಆನ್ಲೈನ್.</ref>
'ಕಿಂಗ್ ಫಿಲಿಪ್' ಎಂದು ಬ್ರಿಟಿಷ್ ಉಲ್ಲೇಖಿಸುತ್ತಿದ್ದ, ಸ್ಥಳೀಯ ಅಮೆರಿಕನ್ ಪಂಗಡದ ಮುಖ್ಯಸ್ಥ ಮೆಟಕಾಮೆಟ್, ಮೆಟಾಕಾಮ್ ಅಥವಾ ಪೊಮೆಟಾಕಾಮ್ನ ಹೆಸರನ್ನು ಈ ಯುದ್ಧಕ್ಕಿಡಲಾಗಿದೆ. ಅವನು ಪೊಕನೊಕೆಟ್ ಪಂಗಡ/ಪೊಕನೊಕೆಟ್ ಒಕ್ಕೂಟ ಮತ್ತು ವಾಂಪನೊವಗ್ ರಾಷ್ಟ್ರದ ಕೊನೆಯ ಮ್ಯಾಸಸೊಯಿಟ್ (ಮಹಾ ನಾಯಕ) ಆಗಿದ್ದ. ವಸಾಹತುದಾರರ ವಿರುದ್ಧ ಯುದ್ಧದಲ್ಲಿ ಸೋತು, ಪೊಕನೊಕೆಟ್ ಪಂಗಡ ಮತ್ತು ರಾಯಲ್ ಲೈನ್ನ ಸಾಮೂಹಿಕ ಹತ್ಯೆ ಯತ್ನದ ಹಿನ್ನೆಲೆಯಲ್ಲಿ, ಹಲವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಭಾಗಕ್ಕೆ ಪಲಾಯನ ಮಾಡಿದರು. ಅಲ್ಲಿ ಅಬನಕಿ ಪಂಗಡಗಳು ಮತ್ತು ವಬನಕಿ ಒಕ್ಕೂಟದ ಪಂಗಡಗಳೊಂದಿಗೆ ಒಗ್ಗೂಡಿ, ಮ್ಯಾಸಚೂಸೆಟ್ಸ್ ಬೇ ಕಾಲೊನಿಯಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಮುಂದುವರೆಸಿದರು.{{Citation needed|date=April 2010}}
===ಅಂತರ್ಯುದ್ಧಗಳು===
{{details|Native Americans in the American Civil War}}
[[File:Ely S. Parker.jpg|125px|thumb|upright|ಎಲಿ ಎಸ್. ಪಾರ್ಕರ್ ಒಬ್ಬ ಯೂನಿಯನ್ ಸಿವಿಲ್ ವಾರ್ ಜನರಲ್, ಅವರು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಅಮೆರಿಕಾದಿಂದ ಹೊರಬಂದ ರಾಜ್ಯಗಳ ಒಕ್ಕೂಟದ ಮಧ್ಯೆ ಶರಣಾಗತಿ ನಿಯಮಗಳನ್ನು ಬರೆದರು.<ref>ಎಲಿ ಪಾರ್ಕರ್ ಫೇಮಸ್ ನೇಟಿವ್ ಅಮೆರಿಕನ್ಸ್</ref> ಅಂತರ್ಯುದ್ಧದ ಸಂದರ್ಭದಲ್ಲಿ ಬ್ರಿಗೇಡಿಯರ್ ಜನರಲ್ ಶ್ರೇಣಿಯನ್ನು ತಲುಪಿದ ಇಬ್ಬರು ಸ್ಥಳೀಯ ಅಮೆರಿಕನ್ನರಲ್ಲಿ ಪಾರ್ಕರ್ ಒಬ್ಬರಾಗಿದ್ದರು.]]
[[ಅಮೇರಿಕಾದ ಅಂತಃಕಲಹ|ಅಂತರ್ಯುದ್ಧ]]ದಲ್ಲಿ ಹಲವು ಸ್ಥಳೀಯ ಅಮೆರಿಕನ್ನರು ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸಿದರು. ಇವರಲ್ಲಿ ಬಹಳಷ್ಟು ಸಂಯುಕ್ತ ಪಡೆಗಳೊಂದಿಗೆ ಸೇರಿದರು.<ref name="clr" /> ಬಿಳಿಯರ ಜೊತೆ ಸೇರಿಕೊಂಡು ಹೋರಾಟ ಮಾಡಿ, ಯುದ್ಧ ಯತ್ನಕ್ಕೆ ಬೆಂಬಲ ಸೂಚಿಸುವ ಮೂಲಕ ಸ್ಥಳೀಯ ಅಮೆರಿಕನ್ನರು ಅಂದಿನ ಸರ್ಕಾರದಿಂದ ಅನುಕೂಲವನ್ನು ಅಪೇಕ್ಷಿಸುತ್ತಿದ್ದರು.<ref name="clr" /><ref name="ab">{{cite web|title=Union and Confederate Indians in the Civil War "Battles and Leaders of the Civil War"|url=http://www.civilwarhome.com/unionconfedindians.htm|date=2009-01-05|accessdate=2009-01-05|publisher==Civil War Potpourri|author=Wiley Britton|archive-date=2009-02-09|archive-url=https://web.archive.org/web/20090209115411/http://civilwarhome.com/unionconfedindians.htm|url-status=dead}}</ref> ಯುದ್ಧದಲ್ಲಿ ಸೇವೆಯಿಂದ ಭೇದ-ಭಾವ ಹಾಗೂ ಪೂರ್ವಜರ ಭೂಸ್ವತ್ತುಗಳಿಂದ ಪಶ್ಚಿಮದ ಪ್ರಾಂತ್ಯಗಳತ್ತ ಮರುಸ್ಥಳಾಂತರವು ಅಂತ್ಯವಾಗುವುದೆಂದು ಅವರು ನಂಬಿದ್ದರು.<ref name="clr" /> ಭಾರಿ ಯುದ್ಧ ನಡೆದು ಆಫ್ರಿಕನ್ ಅಮೆರಿಕನ್ನರು ಸ್ವತಂತ್ರರು ಎಂದು ಘೋಷಿಸಿದಾಗ, ಇತ್ತ ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರವು, ಸ್ಥಳೀಯ ಅಮೆರಿಕನ್ನರ ಬೆರೆಯುವಿಕೆ, ಆಧೀನಗೊಳಿಸುವಿಕೆ, ನಿರಾಶ್ರಿತಗೊಳಿಸುವಿಕೆ ಅಥವಾ ನಾಶಗೊಳಿಸುವ ನೀತಿಗಳನ್ನು ಮುಂದುವರೆಸಿತು.<ref name="clr" />
[[File:Cherokee Confederates Reunion.gif|left|325px|thumb|ಚೆರೋಕೀ 1903ರಲ್ಲಿ ನ್ಯೂಆರ್ಲಿಯನ್ಸ್ನಲ್ಲಿ ಪುನರ್ಮಿಲನ ಕೂಟವನ್ನು ನಡೆಸುತ್ತಿರುವುದು.]]
ಸೆನೆಕಾ ಪಂಗಡದ ಸದಸ್ಯ ಜನರಲ್ ಎಲಿ ಎಸ್. ಪಾರ್ಕರ್ ಶರಣಾಗತಿಯ ವಿಧಿಗಳನ್ನು ರಚಿಸಿದರು. ಇದಕ್ಕೆ ಜನರಲ್ ರಾಬರ್ಟ್ ಇ. ಲೀ 1865ರ ಏಪ್ರಿಲ್ 9ರಂದು ಅಪೊಮಟೊಕ್ಸ್ ಕೋರ್ಟ್ ಹೌಸ್ನಲ್ಲಿ ಸಹಿ ಹಾಕಿದರು. ಜನರಲ್ ಯುಲಿಸಸ್ ಎಸ್. ಗ್ರ್ಯಾಂಟ್ರ ಸೇನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ತರಬೇತಿ ಪಡೆದಿದ್ದ ನ್ಯಾಯವಾದಿಯಾಗಿದ್ದ ಜನರಲ್ ಪಾರ್ಕರ್ ಅವರ ಸಂಯುಕ್ತ ಸೇನಾ ಸೇವೆಗೆ ಸೇರುವ ಅರ್ಜಿಯನ್ನು ಅವರ ಜನಾಂಗೀಯತೆಯ ಆಧಾರದ ಮೇಲೆ ಒಮ್ಮೆ ತಿರಸ್ಕರಿಸಲಾಗಿತ್ತು. ಅಪೊಮಟಾಕ್ಸ್ನಲ್ಲಿ, ಲೀ, 'ಇಲ್ಲಿ ಒಬ್ಬ ನೈಜ ಅಮೆರಿಕನ್ನನನ್ನು ನೋಡಲು ನನಗೆ ಬಹಳ ಖುಷಿಯಾಗಿದೆ' ಎಂದು ಪಾರ್ಕರ್ಗೆ ಹೇಳಿದರು. ಇದಕ್ಕೆ, 'ನಾವೆಲ್ಲರೂ ಸಹ ಅಮೆರಿಕನ್ನರು' ಎಂದು ಪಾರ್ಕರ್ ಪ್ರತಿಕ್ರಿಯಿಸಿದರು.<ref name="clr">{{cite web|title="We are all Americans", Native Americans in the Civil War
|url=http://oha.alexandriava.gov/fortward/special-sections/americans/|date=2009-01-05 |accessdate=2009-01-05|publisher==Native Americans.com|author=W. David Baird et al.}}</ref>
===ಸ್ಪೇನ್ - ಅಮೆರಿಕಾ ಸಮರ===
ಸ್ಪೇನ್-ಅಮೆರಿಕನ್ ಯುದ್ಧವೆಂಬುದು ಸ್ಪೇನ್ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನದ ನಡುವೆ, 1898ರ ಏಪ್ರಿಲ್ನಿಂದ ಆಗಸ್ಟ್ವರೆಗೆ ಸಂಭವಿಸಿದ ಯುದ್ಧ. ಕ್ಯೂಬಾ, ಫಿಲಿಪೀನ್ಸ್ ಮತ್ತು ಪೋರ್ಟೊ ರಿಕೋ ದೇಶಗಳ ಸ್ವಾಧೀನ ವಿಚಾರಗಳ ಬಗ್ಗೆ ಸಂಭವಿಸಿದ ಯುದ್ಧವಿದು. ಕ್ಯೂಬಾ ದೇಶದಲ್ಲಿ ಅಮೆರಿಕಾ ಹಸ್ತಕ್ಷೇಪದಲ್ಲಿ ಅಂದಿನ ಅಮೆರಿಕಾ ರಾಷ್ಟ್ರಾಧ್ಯಕ್ಷ ಥಿಯೊಡೊರ್ ರೂಸ್ವೆಲ್ಟ್ ಸಕ್ರಿಯಾತ್ಮಕ ಪ್ರೋತ್ಸಾಹ ನೀಡಿದರು. ಸ್ವಯಂಸೇವಕರ ಪಡೆಯನ್ನು ಸಂಘಟಿಸಿರೆಂದು ಅಮೆರಿಕಾದ ಭೂಸೇನೆಯ ಮನವೊಲಿಸುವಲ್ಲಿ ರೂಸ್ವೆಲ್ಟ್ ಲಿಯೊನಾರ್ಡ್ ವುಡ್ರೊಂದಿಗೆ ಸಕ್ರಿಯರಾಗಿದ್ದರು. ಇದರ ಫಲವಾಗಿ ಮೊದಲ ಅಮೆರಿಕ ಸಂಯುಕ್ತ ಸಂಸ್ಥಾನದ ಸ್ವಯಂಸೇವಕ ಅಶ್ವದಳ ರಚನೆಯಾಯಿತು. 'ರಫ್ ರೈಡರ್ಸ್' ಎಂದು ಹೆಸರಿಸಲಾದ ಅಮೆರಿಕಾ ಸಂಯುಕ್ತ ಸಂಸ್ಥಾನದ ಮೊದಲ ಸ್ವಯಂಸೇವೆಯ ಅಶ್ವಸೈನ್ಯವು ಯುದ್ಧದಲ್ಲಿ ಸಕ್ರಿಯವಾಗಿದ್ದ ಏಕೈಕ ಪಡೆಯಾಗಿತ್ತು. ಸೈನ್ಯಕ್ಕೆ ಸೇರಿಸಿಕೊಳ್ಳುವವರು ದನಗಾಹಿರಾವುತರು, ಚಿನ್ನ ಅಥವಾ ಗಣಿ ಅನ್ವೇಷಕರು, ಬೇಟೆಗಾರರು, ಜೂಜುಕೋರರು ಮತ್ತು ಸ್ಥಳೀಯ ಅಮೆರಿಕನ್ನರ ವೈವಿದ್ಯದ ಜನರ ಗುಂಪನ್ನು ಒಟ್ಟುಸೇರಿಸಿದರು. ಅರವತ್ತು ಸ್ಥಳೀಯ ಅಮೆರಿಕನ್ನರು 'ರಫ್ ರೈಡರ್ಸ್' ಆಗಿ ಸೇವೆ ಸಲ್ಲಿಸಿದರು.<ref name="Rough_riders">
{{cite web
|url = http://www.spanamwar.com/rrhist.html
|title = A Brief History of the 1st United States Volunteer Cavalry ("Rough Riders")
|accessdate = 2009-06-17
|author = Patrick McSherry
}}
</ref>
===ಎರಡನೆಯ ವಿಶ್ವ ಸಮರ===
{{details|Native Americans and World War II}}
[[File:General douglas macarthur meets american indian troops wwii military pacific navajo pima island hopping.JPG|right|thumb|ನವಾಜೊ, ಪಿಮಾ, ಪಾವ್ನೀ ಮತ್ತು ಇತರ ಸ್ಥಳೀಯ ಅಮೆರಿಕನ್ ಸೈನ್ಯದೊಂದಿಗೆ ಜನರಲ್ ಡೌಗ್ಲಾಸ್ ಮ್ಯಾಕ್ಆರ್ತರ್ರ ಭೇಟಿ.]]
[[ಎರಡನೇ ಮಹಾಯುದ್ಧ|ಎರಡನೆಯ ವಿಶ್ವಯುದ್ಧ]]ದಲ್ಲಿ, ಸುಮಾರು 44,000 ಸ್ಥಳೀಯ ಅಮೆರಿಕನ್ನರು ಅಮೆರಿಕಾ ಸಂಯುಕ್ತ ಸಂಸ್ಥಾನದ ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸಿದರು.<ref name="WorldWarII">{{cite web
|url = http://www.defenselink.mil/specials/nativeamerican01/wwii.html
|title = American Indians in World War II
|accessdate = 2008-02-25
|author = U.S. Department of Defense
|publisher = = www.defenselink.mil
|archive-date = 2008-02-16
|archive-url = https://web.archive.org/web/20080216013652/http://www.defenselink.mil/specials/nativeamerican01/wwii.html
|url-status = dead
}}</ref> ಆಗ 19ನೇ ಶತಮಾನದಲ್ಲಿ ಮರುಸ್ಥಳಾಂತರ ಆರಂಭವಾದಾಗಿನಿಂದಲೂ, ಮೀಸಲು ಪ್ರದೇಶಗಳಿಂದ ಸ್ಥಳೀಯರ ಭಾರೀ ಪ್ರಮಾಣದ ವಲಸೆ ಎಂದು ಬಣ್ಣಿಸಲಾಗಿದ್ದು, ಅಂತಾರಾಷ್ಟ್ರೀಯ ಸಂಘರ್ಷ ಸ್ಥಳೀಯ ಅಮೆರಿಕನ್ನರ ಇತಿಹಾಸದಲ್ಲಿ ಮಹತ್ವದ ತಿರುವಾಗಿತ್ತು. ಇತರೆ ಅಮೆರಿಕನ್ ಪುರುಷರಂತೆಯೇ, ಸ್ಥಳೀಯ ಸಂತತಿಯ ಪುರುಷರನ್ನೂ ಸಹ ಸೇನಾ ಸೇವೆಗಾಗಿ ಸೇರಿಸಿಕೊಳ್ಳಲಾಯಿತು. ಅವರ ಸಹ-ಸೈನಿಕರು ಅವರನ್ನು ಬಹಳ ಗೌರವದಿಂದ ಕಂಡರು, ಏಕೆಂದರೆ, ಅತಿ ಕಠಿಣ ಸ್ಥಳೀಯ ಅಮೆರಿಕನ್ ಯೋಧರ ಕುರಿತು ದಂತಕಥೆಗಳು ಅಮೆರಿಕಾದ ಇತಿಹಾಸದ ಪ್ರಮುಖ ಘಟನಾವಳಿಗಳ ಪಟ್ಟಿಗೆ ಸೇರಿದ್ದವು. ಬಿಳಿಯ ಸೈನಿಕರು ಕೆಲವೊಮ್ಮೆ ಸ್ಥಳೀಯ ಅಮೆರಿಕನ್ ಸಹ-ಸೈನಿಕರನ್ನು 'ಚೀಫ್' ಎಂದು ಹರ್ಷಚಿತ್ತದಿಂದ ಮರ್ಯಾದೆ ಸಲ್ಲಿಸುತ್ತಿದ್ದರು.
ಮೀಸಲು ವ್ಯವಸ್ಥೆಯ ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಹೆಚ್ಚಾದಂತೆಯೇ, ಸ್ಥಳೀಯ ಅಮೆರಿಕನ್ ಸಂಸ್ಕೃತಿಗೆ ವ್ಯಾಪಕ ಬದಲಾವಣೆ ತಂದಿತು. ಅಮೆರಿಕಾ ಸಂಯುಕ್ತ ಸಂಸ್ಥಾನದ ಇಂಡಿಯನ್ ಆಯುಕ್ತರು 1945ರಲ್ಲಿ ನೀಡಿದ ಹೇಳಿಕೆಯಂತೆ, 'ಯುದ್ಧವು ಮೀಸಲು ಯುಗದ ಆರಂಭ ಕಾಲದಿಂದಲೂ ಸ್ಥಳೀಯರ ಜೀವನದ ಮೇಲೆ ಭಾರಿ ಪ್ರಮಾಣದ ಭಂಗ ಉಂಟುಮಾಡಿತು.' ಇದು ಬುಡಕಟ್ಟು ಜನರ ಅಭ್ಯಾಸಗಳು, ದೃಷ್ಟಿಕೋನಗಳು ಮತ್ತು ಆರ್ಥಿಕ ಯೋಗಕ್ಷೇಮದ ಮೇಲೆ ಬಹಳಷ್ಟು ಪರಿಣಾಮ ಬೀರಿತು..<ref>ಬರ್ನ್ಸ್ಟೈನ್, ಪುಟ 131</ref> ಈ ಬದಲಾವಣೆಗಳಲ್ಲಿ ಬಹಳಷ್ಟು ಗಮನಾರ್ಹವಾದದ್ದು, ಯುದ್ಧಕಾಲದಲ್ಲಿ ಶ್ರಮಿಕರ ಕೊರತೆಯ ಫಲವಾಗಿ, ಜನರಿಗೆ ಉತ್ತಮ ವೇತನ ನೀಡಬಲ್ಲ ಕೆಲಸವನ್ನು ಹುಡುಕುವ ಅವಕಾಶ ಸಿಕ್ಕಿತು.. ಆದರೆ ಈ ನಿಟ್ಟಿನಲ್ಲಿ ಹಾನಿಗಳೂ ಉಂಟಾಗಿದ್ದವು. ಒಟ್ಟಾರೆ, 12,00 ಪುಯೆಬ್ಲೊ ಜನರು ಎರಡನೆಯ ವಿಶ್ವಯುದ್ಧದಲ್ಲಿ ಸಕ್ರಿಯರಾಗಿದ್ದರು. ಇವರಲ್ಲಿ ಅರ್ಧದಷ್ಟು ಮಾತ್ರ ಬದುಕುಳಿದು ವಾಪಸಾದರು. ಜೊತೆಗೆ, ಇನ್ನಷ್ಟು ನವಜೊ ಜನಾಂಗದವರು ಪೆಸಿಫಿಕ್ನಲ್ಲಿ ಸೇನೆಗಾಗಿ ಸಂಕೇತ ಭಾಷಿಕರಾಗಿ ಸೇವೆ ಸಲ್ಲಿಸಿದರು. ಅವರು ರಚಿಸಿದ ಸಂಕೇತಗಳು, ಗುಪ್ತಭಾಷಿಕವಾಗಿ ಬಹಳ ಸರಳವಾಗಿದ್ದರೂ ಜಪಾನೀಯರು ಅದನ್ನು ಭೇದಿಸಲಾಗಲಿಲ್ಲ.
==ಇಂದಿನ ಸ್ಥಳೀಯ ಅಮೆರಿಕನ್ನರು==
[[File:NativeAmericansToday.jpg|300px|thumb|left|"ಇಂಡಿಯನ್ ರಾಷ್ಟ್ರ"ದಾದ್ಯಂತದ ವಿವಿಧ ಗುಂಪು, ಬುಡಕಟ್ಟು ಮತ್ತು ಜನಾಂಗದ ಸ್ಥಳೀಯ ಅಮೆರಿಕನ್ನರ ಭಾವಚಿತ್ರ.]]
ಅದೇ ವೇಳೆಗೆ 1975ರಲ್ಲಿ ಇಂಡಿಯನ್ ಸ್ವಯಂ-ನಿರ್ಧಾರಾಧಿಕಾರ ಮತ್ತು ಶಿಕ್ಷಣಾ ನೆರವು ಕಾಯಿದೆಯನ್ನು ಅನುಮೋದಿಸಲಾಯಿತು. ಇದರೊಂದಿಗೆ 15 ವರ್ಷಗಳ ಕಾಲ ನೀತಿ-ಸೂತ್ರಗಳ ಪರಿವರ್ತನೆಗಳ ಅಭಿಯಾನ ಅಂತ್ಯಗೊಂಡಿತು. ನಂತರ 1960ರ ದಶಕದ ಕಾಲದಲ್ಲಿನ ಇಂಡಿಯನ್ ಕ್ರಿಯಾವಾದ, ನಾಗರಿಕ ಹಕ್ಕು ಚಳವಳಿ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಸಮುದಾಯ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿ, ಸ್ಥಳೀಯ ಅಮೆರಿಕನ್ನರ ಸ್ವಯಂ-ನಿರ್ಧಾರಾಧಿಕಾರದ ಅಗತ್ಯವನ್ನು ಈ ಕಾಯಿದೆಯು ಗುರುತಿಸಿತು. ಅಮೆರಿಕಾ ಸಂಯುಕ್ತ ಸಂಸ್ಥಾನ ಸರ್ಕಾರವು ಅಂತ್ಯಗೊಳಿಸುವಿಕೆ(ಟರ್ಮಿನೇಷನ್) ನೀತಿಯನ್ನು ರದ್ದುಗೊಳಿಸಿ, ಸ್ಥಳೀಯ ಅಮೆರಿಕನ್ನರು ಸ್ವಯಮಾಧಿಕಾರ ರಚಿಸುವ ಮತ್ತು ತಮ್ಮ ಭವಿಷ್ಯಗಳನ್ನು ರೂಪಿಸಿಕೊಳ್ಳುವ ಯತ್ನಗಳಿಗೆ ಪ್ರೋತ್ಸಾಹಿಸಿದರು.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ 562 ಸಂಯುಕ್ತವಾಗಿ ಮನ್ನಣೆ ಪಡೆದ ಪಂಗಡ ಸರ್ಕಾರಗಳಿವೆ. ಈ ಪಂಗಡಗಳಿಗೆ ತಮ್ಮದೇ ಆದ ಸರ್ಕಾರ ರಚಿಸಿಕೊಳ್ಳುವ, ನಾಗರಿಕ ಮತ್ತು ಅಪರಾಧಿ-ಸಂಬಂಧಿತ ಕಾನೂನು ಜಾರಿಗೊಳಿಸುವ, ಕಂದಾಯ ವಿಧಿಸುವ, ಸದಸ್ಯತ್ವಕ್ಕೆ ನೀತಿ-ನಿಯಮಾವಳಿಗಳನ್ನು ಸ್ಥಾಪಿಸುವ, ಪರವಾನಗಿ ನೀಡುವುದು ಹಾಗೂ ಚಟುವಟಿಕೆಗಳನ್ನು ನಿಯಂತ್ರಿಸುವ, ಪಂಗಡ ಪ್ರಾಂತ್ಯಗಳಲ್ಲಿ ವ್ಯಕ್ತಿಗಳನ್ನು ಸೇರಿಸಲು ಅಥವಾ ಅವುಗಳಿಂದ ಹೊರಗಿಡಲು ಹಕ್ಕಿದೆ. ಸ್ವ-ಸರ್ಕಾರ ರಚಿಸುವ ಪಂಗಡ ಅಧಿಕಾರಗಳ ಮೇಲೆ ಇತಿಮಿತಿಗಳಲ್ಲಿ ರಾಜ್ಯಗಳಿಗೆ ಅನ್ವಯಿಸುವ ಇತಿಮಿತಿಗಳನ್ನೂ ಒಳಗೊಂಡಿವೆ. ಉದಾಹರಣೆಗೆ, ಪಂಗಡಗಳಾಗಲೀ ರಾಜ್ಯಗಳಿಗಾಗಲೀ ಯುದ್ಧ ನಡೆಸಲು, ಇತರೆ ರಾಷ್ಟ್ರಗಳೊಂದಿಗೆ ಸಂಬಂಧ, ಅಥವಾ ನಗ-ನಾಣ್ಯ ಮುದ್ರಣ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲ.<ref>{{cite web|url=http://www.america.gov/st/washfile-english/2005/January/200501281313241CJsamohT0.7689478.html |work=america.gov |title=The U.S. Relationship To American Indian and Alaska Native Tribes |accessdate=February 8, 2006|archiveurl=https://web.archive.org/web/20090519065837/http://www.america.gov/st/washfile-english/2005/January/200501281313241CJsamohT0.7689478.html|archivedate=May 19, 2009}}</ref>
ತಾನು ಸ್ಥಳೀಯ ಅಮೆರಿಕನ್ ಜನಾಂಗದವರ ಪರಮಾಧಿಕಾರವನ್ನು ಮನ್ನಿಸುತ್ತೇನೆ ಎಂದು ಅಮೆರಿಕಾ ಸಂಯುಕ್ತ ಸಂಸ್ಥಾನ ಸರ್ಕಾರದ ಫೆಡರಲ್ ಸರ್ಕಾರದ ಹೇಳಿಕೆಯು ನಿರೀಕ್ಷಿತ ಮಟ್ಟಕ್ಕೆ ಬರುತ್ತಿಲ್ಲ ಎಂದು ಹಲವು ಸ್ಥಳೀಯ ಅಮೆರಿಕನ್ನರು ಮತ್ತು ಸ್ಥಳೀಯ ಅಮೆರಿಕನ್ ಹಕ್ಕುಗಳ ಸಮರ್ಥಕರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕಾ ಸಂಯುಕ್ತ ಸಂಸ್ಥಾನವು ಈಗಲೂ ಸಹ, ಸ್ಥಳೀಯ ಅಮೆರಿಕನ್ ಜನಾಂಗದ ಆಳ್ವಿಕೆ ಮುಂದುವರೆಸಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾನೂನುಗಳನ್ನು ಅವರಿಗೆ ಅನ್ವಯಿಸುತ್ತಲಿರುವುದೇ ಇದಕ್ಕೆ ಕಾರಣವಾಗಿತ್ತು. ಇಂತಹ ಸಮರ್ಥಕರ ಪ್ರಕಾರ, ಸ್ಥಳೀಯ ಅಮೆರಿಕನ್ನರ ಪರಮಾಧಿಕಾರಕ್ಕಾಗಿ ನಿಜವಾದ ಮರ್ಯಾದೆಯೆಂದರೆ, ಇತರೆ ದೇಶಗಳಂತೆಯೇ, ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂಯುಕ್ತತಾ ಸರ್ಕಾರವೂ ಸಹ ಸ್ಥಳೀಯ ಅಮೆರಿಕನ್ ಜನಾಂಗದವರೊಂದಿಗೆ ವ್ಯವಹರಿಸಿ, ಸ್ಥಳೀಯ ಅಮೆರಿಕನ್ನರ ವಿಚಾರಗಳನ್ನು ಬ್ಯೂರೊ ಆಫ್ ಇಂಡಿಯನ್ ಅಫೇರ್ಸ್ ಬದಲಿಗೆ ರಾಷ್ಟ್ರ ಪ್ರಧಾನ ಕಾರ್ಯದರ್ಶಿಯವರ ಮೂಲಕವೇ ವ್ಯವಹರಿಸಬೇಕು. ಅಮೆರಿಕನ್ ಇಂಡಿಯನ್ನರು, ಇಂಡಿಯನ್ ಪಂಗಡಗಳು ಮತ್ತು ಅಲಾಸ್ಕಾ ಸ್ಥಳೀಯರಿಗಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನವು ಟ್ರಸ್ಟ್ ರೂಪದಲ್ಲಿ ಹೊಂದಿದ್ದ {{convert|55700000|acre|km2}} ಭೂಪ್ರದೇಶದ ಆಡಳಿತ ಮತ್ತು ವ್ಯವಸ್ಥಾಪನೆಯು ತನ್ನ ಸರ್ವೋನ್ನತ ಹೊಣೆಗಾರಿಕೆಯಾಗಿದೆ, ಎಂದು ಬ್ಯೂರೊ ಆಫ್ ಇಂಡಿಯನ್ ಅಫೇರ್ಸ್ ತನ್ನ ಅಂತರಜಾಲತಾಣದಲ್ಲಿ ವರದಿ ಮಾಡಿದೆ.<ref>{{cite web
|url=http://www.doi.gov/bureau-indian-affairs.html
|accessdate=December 25, 2007
|title=Bureau of Indian affairs |archiveurl = https://web.archive.org/web/20071129013254/http://www.doi.gov/bureau-indian-affairs.html |archivedate = November 29, 2007}}</ref> ಇಂತಹ ಭೂಪ್ರದೇಶಗಳು ಟ್ರಸ್ಟ್ ರೂಪದಲ್ಲಿ ಹೊಂದಿರುವುದು ಮತ್ತುಅಮೆರಿಕಾ ಸಂಯುಕ್ತ ಸಂಸ್ಥಾನದ ಫೆಡೆರಲ್ ಸರ್ಕಾರವಾಗಲಿ, ಕೆನಡಾ ಆಗಲಿ ಅಥವಾ ಇತರೆ ಯಾವುದೇ ಸ್ಥಳೀಯ ಅಮೆರಿಕನ್ ಅಲ್ಲದ ಆಡಳಿತ ಮುಂತಾದ ವಿದೇಶೀಶಕ್ತಿ ನಿಯಂತ್ರಿಸುವುದು ತಗ್ಗಿನಡೆದಂತಾಗುತ್ತದೆ ಎಂದು ಹಲವು ಸ್ಥಳೀಯ ಅಮೆರಿಕನ್ನರು ಮತ್ತು ಸ್ಥಳೀಯ ಅಮೆರಿಕನ್ ಹಕ್ಕುಗಳ ಸಮರ್ಥಕರು ನಂಬಿದ್ದಾರೆ.
{{cquote|Forced termination is wrong, in my judgment, for a number of reasons. First, the premises on which it rests are wrong... The second reason for rejecting forced termination is that the practical results have been clearly harmful in the few instances in which termination actually has been tried.... The third argument I would make against forced termination concerns the effect it has had upon the overwhelming majority of tribes which still enjoy a special relationship with the Federal government... The recommendations of this administration represent an historic step forward in Indian policy. We are proposing to break sharply with past approaches to Indian problems.|20x|20x|President Richard Nixon, ''Special Message on Indian Affairs'', July 8, 1970.<ref name=Nixon_termination_of_termination>
{{cite web
| url = http://www.epa.gov/tribalportal/pdf/president-nixon70.pdf
| title = President Nixon, Special Message on Indian Affairs
| publisher= = U.S. Environmental Protection Agency
| accessdate = 2008-03-19
| format = PDF}}
</ref> }}
[[File:Poldine carlo koyukon.jpg|thumb|upright|ಅಲಾಸ್ಕಾದ ಕೊಯುಕಾನ್ ಲೇಖಕ ಪೋಲ್ಡಿನ್ ಕಾರ್ಲೊ]]
ಆಗ 2003ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಜನಗಣತಿ ಮಂಡಳಿ ಅಂದಾಜಿಸಿದ ಪ್ರಕಾರ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ 2,786,652 ಸ್ಥಳೀಯ ಅಮೆರಿಕನ್ನರಲ್ಲಿ ಸುಮಾರು 928884 ಜನರು ಮೂರು ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ: [[ಕ್ಯಾಲಿಫೊರ್ನಿಯ|ಕೆಲಿಫೊರ್ನಿಯಾ]]ದಲ್ಲಿ 413,382, [[ಆರಿಜೋನ|ಅರಿಝೊನಾ]]ದಲ್ಲಿ 294,137 ಹಾಗೂ [[ಒಕ್ಲಹೋಮ|ಒಕ್ಲಹೊಮಾ]]ದಲ್ಲಿ 279,559 ರಷ್ಟು ಸ್ಥಳೀಯ ಅಮೆರಿಕನ್ನರು ವಾಸಿಸುತ್ತಿದ್ದಾರೆ.<ref>{{cite web|url=http://www.census.gov/popest/states/asrh/tables/SC-EST2003-04.pdf |format=PDF|work=US Census.gov |title=Annual Estimates by Race Alone |accessdate=February 8, 2006}}</ref>
ಅದಲ್ಲದೇ 2000ರಲ್ಲಿ, ಜನಸಂಖ್ಯೆಯ ವಿಚಾರದಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಅತಿದೊಡ್ಡ ಪಂಗಡಗಳೆಂದರೆ ನವಜೊ, ಚೆರೊಕಿ, ಚೊಕ್ಟಾ, ಸಿಯುಕ್ಸ್, ಚಿಪ್ಪವಾ, ಅಪ್ಯಾಚ್, ಬ್ಲ್ಯಾಕ್ಫೀಟ್, ಇರೊಕ್ವೊಯಿಸ್ ಮತ್ತು ಪುಯೆಬ್ಲೊ. ಆದಾಗ್ಯೂ 2000ರಲ್ಲಿ, ಸ್ಥಳೀಯ ಅಮೆರಿಕನ್ ಸಂತತಿಯ ಹತ್ತು ಅಮೆರಿಕನ್ನರಲ್ಲಿ ಎಂಟರಲ್ಲಿ ಮಿಶ್ರಿತ ಕುಲದವಾಗಿದ್ದರು. ಮುಂದಿನ 2100ರಷ್ಟರೊಳಗೆ, ಈ ಅನುಪಾತ ಹತ್ತರಲ್ಲಿ ಒಂಬತ್ತಕ್ಕೇರುತ್ತದೆಂದು ಅಂದಾಜಿಸಲಾಗಿದೆ.<ref>{{cite web |url=http://www.law.nyu.edu/kingsburyb/spring04/indigenousPeoples/classmaterials/class10/Class |work=Columbia Law Review |title=Mixing Bodies and Beliefs: The Predicament of Tribes |accessdate=February 8, 2006 |archive-date=ಜೂನ್ 13, 2007 |archive-url=https://web.archive.org/web/20070613230315/http://www.law.nyu.edu/kingsburyb/spring04/indigenousPeoples/classmaterials/class10/Class |url-status=bot: unknown }}</ref>
ಇನ್ನೂ ಹೆಚ್ಚಿಗೆ, ರಾಜ್ಯ ಮಟ್ಟದಲ್ಲಿ ಮಾನ್ಯತೆಯುಳ್ಳ, ಆದರೆ ಸಂಯುಕ್ತ ಸರ್ಕಾರವು ಮಾನ್ಯತೆ ನೀಡಿರದ ಹಲವು ಪಂಗಡಗಳಿವೆ. ರಾಜ್ಯಗಳ ಮಾನ್ಯತೆಯೊಂದಿಗಿನ ಹಕ್ಕು ಮತ್ತು ಸವಲತ್ತುಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುವವು.
ಕೆಲವು ಪಂಗಡ ರಾಷ್ಟ್ರಗಳು ತಮ್ಮ ಪರಂಪರೆಗಳನ್ನು ದೃಢಪಡಿಸಿ ಫೆಡರಲ್ ಮಾನ್ಯತೆ ಗಳಿಸುವಲ್ಲಿ ವಿಫಲವಾಗಿವೆ. ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶದ ಮುವೆಕ್ಮಾ ಒಹ್ಲೊನ್ ಮಾನ್ಯತೆಯಾಗಿ ಸಂಯುಕ್ತತಾ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿವೆ.<ref>{{cite web|url=http://www.muwekma.org |title=The Muwekman Ohlone |accessdate=2007-06-22 |type=html |work=muwekma.org}}</ref> ಪೂರ್ವ ಪ್ರದೇಶದ ಬುಡಕಟ್ಟು ಜನಾಂಗದವರು ತಮ್ಮ ಬುಡಕಟ್ಟು ಸ್ಥಾನಮಾನದ ಬಗ್ಗೆ ಅಧಿಕೃತ ಮಾನ್ಯತೆ ಗಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಮಾನ್ಯತೆಯಿಂದಾಗಿ ಕೆಲವು ಸವಲತ್ತುಗಳು ಲಭಿಸುವವು. ಇವುಗಳಲ್ಲಿ ಕಲಾವಸ್ತು ಮತ್ತು ಕರಕುಶಲ ವಸ್ತುಗಳು ಸ್ಥಳೀಯ ಅಮೆರಿಕನ್ ಎಂದು ಗುರುತಿಸುವ ಹಕ್ಕು ಹಾಗೂ, ಸ್ಥಳೀಯ ಅಮೆರಿಕನ್ನರಿಗಾಗಿ ವಿಶೇಷವಾಗಿ ಮೀಸಲಿರುವ ಅನುದಾನಗಳಿಗಾಗಿ ಅರ್ಜಿ ಸಲ್ಲಿಸಲು ಅನುಮತಿಯೂ ಸೇರಿವೆ. ಆದರೆ, ಒಂದು ಪಂಗಡದ ಮಾನ್ಯತೆ ಗಳಿಸುವುದು ಸುಲಭದ ಕೆಲಸವಲ್ಲ. ಈ ರೀತಿಯ ಮಾನ್ಯತೆ ಗಳಿಸಬೇಕೆಂದಲ್ಲಿ, ಆ ಪಂಗಡದ ಸದಸ್ಯರು ಪಂಗಡದ ವಂಶದ ಬಗ್ಗೆ ವಿಸ್ತಾರವಾದ ವಂಶಪರಂಪರೆಯ ಮಾಹಿತಿ-ಪುರಾವೆಗಳನ್ನು ಸಲ್ಲಿಸಬೇಕಾಗಿದೆ.
[[File:Abandoned Mines Shiprock 2009.jpg|thumb|left|ತಮ್ಮ ಭೂಮಿಯಲ್ಲಿ ಅಥವಾ ಅದರ ಹತ್ತಿರದಲ್ಲಿ ಪರಿತ್ಯಕ್ತ ಯುರೇನಿಯಂ ಗಣಿಗಳ ಉಪಸ್ಥಿ ಕೂಡ ಸ್ಥಳೀಯ ಜನರು ಪರಿಹರಿಸಲು ಯತ್ನಿಸುವ ಸಮಸ್ಯೆಗಳಲ್ಲಿ ಒಳಗೊಂಡಿದೆ.]]
ಬಡತನದ ಮಧ್ಯೆ, ಮೀಸಲು ಪ್ರದೇಶದಲ್ಲಿ, ಅಥವಾ ವಿಸ್ತಾರ ಸಮಾಜದಲ್ಲಿ ಜೀವನ ನಡೆಸಲು ಸ್ಥಳೀಯ ಅಮೆರಿಕನ್ನರ ಹೋರಾಟಗಳು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿವೆ. ಇದರಲ್ಲಿ ಕೆಲವು ಪೌಷ್ಟಿಕಾಂಶ ಮತ್ತು ಆರೋಗ್ಯದ ಸಮಸ್ಯೆಗಳೂ ಉಂಟು. ಈ ಸಮುದಾಯದಲ್ಲಿ ಅತಿಹೆಚ್ಚು ಪ್ರಮಾಣದ [[ಮದ್ಯದ ಗೀಳು|ಮದ್ಯಪಾನ ವ್ಯಸನ]]ದ ಸಮಸ್ಯೆಯಿದೆ.<ref>{{cite web |url=http://erc.msh.org/mainpage.cfm?file=5.4.7e.htm&module=provider&language=English |accessdate=2007-06-22 |title=Challenges to Health and Well-Being of Native American Communities |work=The Provider's Guide to Quality and Culture |archive-date=2003-01-23 |archive-url=https://web.archive.org/web/20030123233808/http://erc.msh.org/mainpage.cfm?file=5.4.7e.htm&module=provider&language=English |url-status=dead }}, ಮ್ಯಾನೇಜ್ಮೆಂಟ್ ಆಫ್ ಸೈನ್ಸ್ ಆಫ್ ಹೆಲ್ತ್</ref> ಸ್ಥಳೀಯ ಅಮೆರಿಕನ್ ಸಮುದಾಯಗಳೊಂದಿಗೆ ಕಾರ್ಯಪ್ರವೃತ್ತ ನಿಯೋಗಗಳು, ಆ ಪಂಗಡಗಳ ಸಂಪ್ರದಾಯ-ಪರಂಪರೆಗಳನ್ನು ಗೌರವಿಸಿ, ತಮ್ಮದೇ ಸಾಂಸ್ಕೃತಿಕ ಔಷಧ ರೀತಿ-ನೀತಿಗಳಲ್ಲಿ ಪಾಶ್ಚಾತ್ಯ ಔಷಧಗಳ ಅನುಕೂಲಗಳನ್ನು ಜೋಡಿಸಲು ಯತ್ನಿಸುತ್ತಿವೆ.
{{quote|"It has long been recognized that Native Americans are dying of diabetes, alcoholism, tuberculosis, suicide, and other health conditions at shocking rates. Beyond disturbingly high mortality rates, Native Americans also suffer a significantly lower health status and disproportionate rates of disease compared with all other Americans."| The U.S. Commission on Civil Rights, September 2004 <ref>[http://www.usccr.gov/pubs/nahealth/nabroken.pdf Broken Promises: Evaluating the Native American Health Care System] by the U.S. Commission on Civil Rights, September 2004</ref>}}
[[File:Americanindiansmapcensusbureau.gif|300px|thumb|ಈ ಜನಗಣತಿ ವಿಭಾಗ ನಕ್ಷೆಯು 2000ರ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಸ್ಥಳೀಯ ಅಮೆರಿಕನ್ನರ ಸ್ಥಳಗಳನ್ನು ತೋರಿಸುತ್ತಿದೆ.]]
ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರದ ಸಂಯುಕ್ತ ಮತ್ತು ಶಾಸಕಾಂಗ ಶಾಖೆಗಳು ಪಂಗಡದ ಆಡಳಿತ ವ್ಯವಸ್ಥೆಯನ್ನು ಅಂತ್ಯಗೊಳಿಸುವುದು ಎಂದು ಶಿಫಾರಸು ಮಾಡಿ ವಾಷಿಂಗ್ಟನ್ ರಿಪಬ್ಲಿಕನ್ ಪಾರ್ಟಿ 2000ರ ಜುಲೈ ತಿಂಗಳಲ್ಲಿ ನಿರ್ಣಯ ಅಂಗೀಕರಿಸಿತು.<ref>{{cite web|url=http://www.indiancountry.com/articles/headline-2000-07-12-01.shtml |archiveurl=https://web.archive.org/web/20000902214724/http://www.indiancountry.com/articles/headline-2000-07-12-01.shtml |archivedate=2000-09-02 |title=Indian Country Today Newspaper - Native American Indian News |publisher==Web.archive.org |date=2000-07-12 |accessdate=2010-08-22}}</ref> ಹೀಗೆ 2007ರಲ್ಲಿ, ಡೆಮೊಕ್ರಾಟಿಕ್ ಪಾರ್ಟಿಯ ಶಾಸನಸಭಾ ಸದಸ್ಯರ ಗುಂಪು, ಚೆರೋಕೀ ರಾಷ್ಟ್ರ ಆಡಳಿತ ವ್ಯವಸ್ಥೆಯನ್ನು ಅಂತ್ಯಗೊಳಿಸಲೆಂದು ಅಮೆರಿಕಾ ಸಂಯುಕ್ತ ಸಂಸ್ಥಾನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಮಸೂದೆ ಮಂಡಿಸಿತು.<ref>{{cite web|url=http://www.tanasijournal.com/main/index.php?option=com_content&task=view&id=365&Itemid=1&ed=53|title=National Congress of American Indians Opposes Bill to Terminate the Cherokee Nation|date=7 July 2007|work=Tanasi Journal|publisher==Wisdom Keepers, Inc.|accessdate=6 November 2009|archive-date=10 ಮೇ 2009|archive-url=https://web.archive.org/web/20090510034518/http://www.tanasijournal.com/main/index.php?option=com_content&task=view&id=365&Itemid=1&ed=53|url-status=dead}}</ref> ಅಲ್ಲದೇ 2004ರಷ್ಟರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಪಶ್ಚಿಮ ಭಾಗದಲ್ಲಿ ಲಭ್ಯವಾದ ಕಲ್ಲಿದ್ದಲು ಮತ್ತು [[ಯುರೇನಿಯಮ್|ಯುರೆನಿಯಮ್]]ನಂತಹ ಸೈಸರ್ಗಿನ ಸಂಪನ್ಮೂಲಗಳನ್ನು ಇತರರು ಕಸಿದುಕೊಳ್ಳುವ ಯತ್ನಗಳ ಕುರಿತು ವಿವಿಧ ಸ್ಥಳೀಯ ಅಮೆರಿಕನ್ನರು ಜಾಗರೂಕರಾಗಿದ್ದರು.<ref>{{cite web|url=http://www.angelfire.com/band/senaaeurope/DRelocation.html |work=Senaa |title=The Genocide and Relocation of the Dine'h (Navajo) |accessdate=February 8, 2006}}</ref><ref>{{cite web |url=http://www.shundahai.org/bigmtbackground.html |work=Shundahai.org |title=The Black Mesa Syndrome: Indian Lands, Black Gold |accessdate=February 8, 2006 |archive-date=ಫೆಬ್ರವರಿ 22, 2011 |archive-url=https://web.archive.org/web/20110222002949/http://www.shundahai.org/bigmtbackground.html |url-status=dead }}</ref><ref>{{cite web|url=http://lists.wayne.edu/cgi-bin/wa?A2=ind9703&L=tamha&F=&S=&P=7661 |work=LISTSERV at Wayne State University|title=Big Mountain Update 1 February 1997 |accessdate=February 8, 2006}}</ref>
[[ವರ್ಜೀನಿಯ|ವರ್ಜಿನಿಯಾ]] ರಾಜ್ಯದಲ್ಲಿ, ಸ್ಥಳೀಯ ಅಮೆರಿಕನ್ನರು ಈ ಸಂದರ್ಭದಲ್ಲಿ ಒಂದು ವಿಶಿಷ್ಟ, ವಿಚಿತ್ರ ಸಮಸ್ಯೆ ಎದುರಿಸುವರು. ವರ್ಜಿನಿಯಾದಲ್ಲಿ ಫೆಡರಲ್ ಮಟ್ಟದಲ್ಲಿ ಮಾನ್ಯತೆ ಪಡೆದ ಪಂಗಡಗಳಿಲ್ಲ. ಆ ರಾಜ್ಯದ ಮಹತ್ವ ಅಂಕಿ ಅಂಶ ಮಂಡಳಿಯ ದಾಖಲೆ ಸಂಗ್ರಹದ ಅಧಿಕಾರಿಯಾಗಿದ್ದ ವಾಲ್ಟರ್ ಆಷ್ಬಿ ಪ್ಲೆಕರ್, ಒನ್ ಡ್ರಾಪ್ ರೂಲ್ನ ತಮ್ಮದೇ ಆದ ವ್ಯಾಖ್ಯಾನ ಅನ್ವಯಿಸಿದ್ದರೆಂದು ಇದಕ್ಕೆ ವಿಶ್ಲೇಷಕರು ಕಾರಣ ನೀಡಿದ್ದಾರೆ. ಇವರು 1912ರಿಂದ 1946ರ ತನಕ ಸೇವೆ ಸಲ್ಲಿಸಿದ್ದರು. "ಬಿಳಿಯರು" ಮತ್ತು "ವರ್ಣೀಯರು" ಎಂಬ ಕೇವಲ ಎರಡೇ ಜನಾಂಗೀಯ ಗುಂಪುಗಳಿಗೆ ಮಾನ್ಯತೆ ನೀಡುವ ಕಾನೂನೊಂದನ್ನು ರಾಜ್ಯದ ಜನರಲ್ ಅಸೆಂಬ್ಲಿ 1920ರಲ್ಲಿ ಅನುಮೋದಿಸಿತು. ಆಫ್ರಿಕನ್ ಅಮೆರಿಕನ್ನರೊಂದಿಗೆ ಅಂತರ್ವಿವಾಹವಾದ ಕಾರಣ ರಾಜ್ಯದ ಸ್ಥಳೀಯ ಅಮೆರಿಕನ್ನರ ಶುದ್ಧ ಜನಾಂಗವನ್ನು ಕಲಬೆರಕೆ ಮಾಡಲಾಗುತ್ತಿದೆ, ಜೊತೆಗೆ ಆಂಶಿಕ ಕಪ್ಪು ವಂಶಪರಂಪರೆಯ ಜನರು ಸ್ಥಳೀಯ ಅಮೆರಿಕನ್ನರಾಗಿ ಮಾನ್ಯತೆ ಪಡೆಯಲು ಯತ್ನಿಸಿದ್ದಾರೆ ಎಂದು ಪ್ಲೆಕರ್ ನಂಬಿದ್ದರು. ಪ್ಲೆಕರ್ ಹೇಳುವಂತೆ, ನೋಡಲು ಅವರು ಹೇಗಾದರೂ ಇರಲಿ ಅಥವಾ ಸಾಂಸ್ಕೃತಿಕ ಗುರುತು ಏನಾದರೂ ಇರಲಿ, ಆಫ್ರಿಕನ್ ವಂಶಪರಂಪರೆಯ ಯಾರೇ ಆದರೂ ಅವರನ್ನು 'ವರ್ಣೀಯರು' ಎಂದೇ ವಿಂಗಡಿಸಬೇಕಾಯಿತು. ತಮ್ಮಲ್ಲಿದ್ದ ಮಾಹಿತಿ ಮತ್ತು ಕಾನೂನಿನ ವ್ಯಾಖ್ಯಾನವನ್ನು ಆಧರಿಸಿ, ಆ ರಾಜ್ಯದಲ್ಲಿರುವ ಎಲ್ಲಾ ಸ್ಥಳೀಯ ಅಮೆರಿಕನ್ನರನ್ನು ವರ್ಣೀಯರು ಎಂದು ವಿಂಗಡಿಸಬೇಕೆಂದು ಪ್ಲೆಕರ್ ಸ್ಥಳೀಯ ಸರ್ಕಾರಗಳನ್ನು ಒತ್ತಾಯಿಸಿದರು. ಮರುವರ್ಗೀಕರಣ ಪರಿಶೀಲನೆಗೆ ಕುಟುಂಬದ ಉಪನಾಮಗಳ ಪಟ್ಟಿಯನ್ನು ಒದಗಿಸಿದರು. ಇದರಿಂದಾಗಿ ರಾಜ್ಯದ ಅಧಿಕಾರಿಗಳು ಸ್ಥಳೀಯ ಅಮೆರಿಕನ್ ಸಮುದಾಯಗಳು ಮತ್ತು ಅವರ ಕುಟುಂಬಗಳಿಗೆ ಸಂಬಂಧಿಸಿದ ನಿಖರ ದಾಖಲೆಗಳೆಲ್ಲವನ್ನೂ ನಾಶಗೊಳಿಸಿದರು. ಕೆಲವೊಮ್ಮೆ ಒಂದೇ ಕುಟುಂಬದ ಬೇರೆಬೇರೆ ಸದಸ್ಯರನ್ನು 'ಬಿಳಿಯರು' ಮತ್ತು 'ವರ್ಣೀಯರು' ಎಂದು ವಿಂಗಡಿಸಲಾಯಿತು. ವ್ಯಕ್ತಿಯೊಬ್ಬರಿಗೆ ತಾವು 'ಸ್ಥಳೀಯ ಅಮೆರಿಕನ್' ಎಂದು ಹೇಳಿಕೊಳ್ಳಲು ಮುಖ್ಯಗುರುತಿಗೆ ಅವಕಾಶವೇ ಇರಲಿಲ್ಲ.<ref name="home.hamptonroads.com">{{cite web |url=http://home.hamptonroads.com/stories/story.cfm?story=74481&ran=162825 |work=Pilotonline.com |title=The black-and-white world of Walter Ashby Plecker |accessdate=February 8, 2006 |archive-date=ಜನವರಿ 3, 2006 |archive-url=https://web.archive.org/web/20060103123937/http://home.hamptonroads.com/stories/story.cfm?story=74481&ran=162825 |url-status=dead }}</ref> ಆದರೂ, ವರ್ಜಿನಿಯಾದಲ್ಲಿರುವ ಪಂಗಡಗಳಿಗೆ ಸಂಯುಕ್ತತಾ,ಒಕ್ಕೂಟ ಮಟ್ಟದ ಮನ್ನಣೆ ನೀಡುವ ಮಸೂದೆಯನ್ನು ಸೆನೇಟ್ ಇಂಡಿಯನ್ ವ್ಯವಹಾರಗಳ ಸಮಿತಿಯು 2009ರಲ್ಲಿ ಅಂಗೀಕರಿಸಿತು.<ref>{{cite web|url=http://www2.timesdispatch.com/rtd/news/state_regional/state_regional_govtpolitics/article/INDI23_20091022-223007/301146//|title=Virginia tribes take another step on road to federal recognition|access-date=2011-02-25|archive-date=2009-10-26|archive-url=https://archive.today/20091026175747/http://www2.timesdispatch.com/rtd/news/state_regional/state_regional_govtpolitics/article/INDI23_20091022-223007/301146/|url-status=dead}}</ref>
ಸಂಯುಕ್ತತಾ ಮನ್ನಣೆ ಹಾಗೂ ಸಂಬಂಧಿತ ಸವಲತ್ತುಗಳನ್ನು ಗಳಿಸಲು, ಪಂಗಡಗಳು ತಾವು 1900ರಿಂದಲೂ ಅಲ್ಲಿ ವಾಸಿಸುತ್ತಿದ್ದೆವು ಎಂಬುದರ ಪುರಾವೆ ಒದಗಿಸಬೇಕಿದೆ. ಸಂಯುಕ್ತತಾ ಸರ್ಕಾರವು ಈ ನಿಯಮವನ್ನು ಕಾಯ್ದುಕೊಂಡು ಬಂದಿದೆ. ಇತರೆ ಜನಾಂಗದವರೂ ಸಹ, ಇದೇ ರೀತಿಯ ಅಗತ್ಯಗಳನ್ನು ಪೂರೈಸಬೇಕು ಎಂದು ಸಂಯುಕ್ತತಾ ಮಟ್ಟದಲ್ಲಿ ಮನ್ನಣೆ ಗಳಿಸಿದ ಪಂಗಡಗಳು ಮಂಡಳಿಗಳು ಮತ್ತು ಸಮಿತಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಹಠ ಹಿಡಿದಿದ್ದು ಇದಕ್ಕೆ ಭಾಗಶಃ ಕಾರಣ.<ref name="home.hamptonroads.com" />
ಹೀಗೆ 21ನೆಯ ಶತಮಾನದ ಆರಂಭಕಾಲದಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಭೂಚಿತ್ರಣದಲ್ಲಿ, ಅಮೆರಿಕನ್ ಆರ್ಥಿಕತೆ ಹಾಗೂ ಸ್ಥಳೀಯ ಅಮೆರಿಕನ್ನರ ಜೀವನದಲ್ಲಿ ಸ್ಥಳೀಯ ಅಮೆರಿಕನ್ ಸಮುದಾಯಗಳು ಬಹಳ ಕಾಲ ಉಳಿದುಕೊಳ್ಳುವಂತಹ ಅಂಶವಾಗಿದೆ. ಅಗ್ನಿಶಮನ, ನೈಸರ್ಗಿಕ ಸಂಪನ್ಮೂಲ ವ್ಯವಸ್ಥಾಪನೆ ಮತ್ತು ಕಾನೂನು ಮತ್ತು ಸುವ್ಯವಸ್ಥಾ ಸೇವೆ ನಿರ್ವಹಿಸುವ ಸರ್ಕಾರಗಳನ್ನು ಇಂತಹ ಸಮುದಾಯಗಳು ಸುಸಂಗತವಾಗಿ ರಚಿಸಿಕೊಂಡಿವೆ. ಬಹಳಷ್ಟು ಸ್ಥಳೀಯ ಅಮೆರಿಕನ್ ಸಮುದಾಯಗಳು ಸ್ಥಳೀಯ ಕಾಯಿದೆಗಳ ವಿಚಾರವಾಗಿ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲು, ನ್ಯಾಯಾಲಯ ವ್ಯವಸ್ಥೆ ಸ್ಥಾಪಿಸಿವೆ. ಹಲವು ಸಮುದಾಯಗಳು, ಸಮುದಾಯಗಳೊಳಗಿನ ಸಾಂಪ್ರದಾಯಿಕ ಅಂಗಗಳಲ್ಲಿರುವ ನೈತಿಕ ಮತ್ತು ಸಾಮಾಜಿಕ ಪ್ರಾಧಿಕಾರಗಳ ವಿವಿಧ ರೂಪಗಳನ್ನು ಆಧರಿಸುತ್ತವೆ. ಸ್ಥಳೀಯ ಅಮೆರಿಕನ್ನರ ವಸತಿ ಅಗತ್ಯಗಳನ್ನು ಪೂರೈಸಲು, ಕಾಂಗ್ರೆಸ್ (ಅಮೆರಿಕಾದಲ್ಲಿನ ರಾಷ್ಟ್ರಮಟ್ಟದ ಶಾಸನಸಭೆ) ''ಸ್ಥಳೀಯ ಅಮೆರಿಕನ್ ವಸತಿ ಮತ್ತು ಸ್ವಯಮಾಧಿಕಾರ ಕಾಯಿದೆ'' (NAHASDA)ಯನ್ನು 1996ರಲ್ಲಿ ಅಂಗೀಕರಿಸಿತು. ಈ ಶಾಸನವನ್ನು ಸಾರ್ವಜನಿಕ ಗೃಹನಿರ್ಮಾಣ ವ್ಯವಸ್ಥೆ ಹಾಗೂ ಇಂಡಿಯನ್ ಗೃಹನಿರ್ಮಾಣ ಪ್ರಾಧಿಕಾರಗಳಿಗಾಗಿ ರಚಿಸಲಾದ 1937 ಇಸವಿಯ ಗೃಹನಿರ್ಮಾಣ ಕಾಯಿದೆಯ ಬದಲಿಗೆ ತರಲಾಯಿತು. ಇದರಲ್ಲಿ ಪಂಗಡಗಳಿಗಾಗಿ ರಚಿಸಲಾದ 'ಬ್ಲಾಕ್ ಗ್ರ್ಯಾಂಟ್ ವ್ಯವಸ್ಥೆ'ಯೂ ಒಳಗೊಂಡಿತ್ತು.
===ಸಮುದಾಯದಲ್ಲಿ ಭೇದಭಾವ, ಜನಾಂಗೀಯತೆ ಮತ್ತು ಘರ್ಷಣೆಗಳು===
{{Indigenous rights}}
[[File:No beer sold to indians.jpg|left|thumb|300px|ಬಾರೊಂದರ ಮೇಲೆ ಪ್ರಕಟಪಡಿಸಲಾದ ಒಂದು ತಾರತಮ್ಯದ ಚಿಹ್ನೆ.ಬಿರ್ನೆ, ಮೋಂಟಾನ, 1941.]]
ಜನನಿಬಿಡತೆಯುಳ್ಳ ಪ್ರಮುಖ ಕೇಂದ್ರಗಳಿಂದ ದೂರವಿರುವ ಮೀಸಲು ಪ್ರದೇಶಗಳಲ್ಲಿ ಬಹಳಷ್ಟು ಪರಿಚಿತ ಸ್ಥಳೀಯ ಅಮೆರಿಕನ್ನರು ವಾಸಿಸುವ ಕಾರಣ, ಸಾರ್ವಜನಿಕರಲ್ಲಿ ಸಮೀಕ್ಷೆ ನಡೆಸಿ, ಸ್ಥಳೀಯ ಅಮೆರಿಕನ್ ಸಮುದಾಯದವರ ಬಗ್ಗೆ ಅವರ ಅಭಿಪ್ರಾಯ ತಿಳಿದುಕೊಳ್ಳುವ ಯತ್ನಗಳನ್ನು ವಿಶ್ವವಿದ್ಯಾನಿಲಯಗಳು ಮಾಡಿಲ್ಲ. ಆಗ 2007ರಲ್ಲಿ, ನಿಷ್ಪಕ್ಷಪಾತಿ ಸಾರ್ವಜನಿಕ ಕಾರ್ಯಸೂಚಿ ಸಂಘಟನೆಯು ಒಂದು ಕೇಂದ್ರೀಕೃತ ಸಮೂಹ ಸಮೀಕ್ಷೆ ನಡೆಸಿತು. ತಮ್ಮ ದೈನಿಕ ಜೀವನದಲ್ಲಿ ತಾವು ಸ್ಥಳೀಯ ಅಮೆರಿಕನ್ನರೊಂದಿಗೆ ಭೇಟಿಯಾದದ್ದು ಬಹಳ ವಿರಳ ಎಂದು ಬಹಳಷ್ಟು ಸ್ಥಳೀಯರಲ್ಲದ ಅಮೆರಿಕನ್ನರು ಒಪ್ಪಿಕೊಂಡರು. ಸ್ಥಳೀಯ ಅಮೆರಿಕನ್ನರತ್ತ ಸಹಾನುಭೂತಿ ವ್ಯಕ್ತಪಡಿಸಿ, ಹಿಂದೆ ಅವರ ವಿರುದ್ಧ ನಡೆದ ಅನ್ಯಾಯಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ ಇತರೆ ಅಮೆರಿಕನ್ನರು, ಇಂದು ಸ್ಥಳೀಯ ಅಮೆರಿಕನ್ನರು ಎದುರಿಸುತ್ತಿರುವ ಸಮಸ್ಯೆಗಳೇನು ಎಂಬುದು ತಮಗೆ ಯಾವುದೇ ನಿಖರ ಕಲ್ಪನೆಯೇ ಇಲ್ಲ ಎಂದು ಹೇಳಿದರು. ತಮ್ಮ ಪಾಲಿಗೆ, ವಿಶಾಲ ಸಮಾಜದಲ್ಲಿ ಇಂದಿಗೂ ಸಹ ಅವರ ವಿರುದ್ಧ ಜನರು ಪೂರ್ವಾಗ್ರಹದ ಧೋರಣೆ ತೋರುತ್ತಾರೆ, ಹಾಗೂ ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯ ಅಮೆರಿಕನ್ನರು ಸಮೀಕ್ಷಕರಿಗೆ ತಿಳಿಸಿದರು.<ref>{{cite web |url=http://www.publicagenda.org/reports/walking-mile-first-step-toward-mutual-understanding |work=Public Agenda |title=Walking a Mile: A Qualitative Study Exploring How Indians and Non-Indians Think About Each Other |accessdate=July 25, 2008 |archive-date=ಸೆಪ್ಟೆಂಬರ್ 19, 2008 |archive-url=https://web.archive.org/web/20080919174041/http://www.publicagenda.org/reports/walking-mile-first-step-toward-mutual-understanding |url-status=dead }}</ref>
{{cquote|He is ignoble—base and treacherous, and hateful in every way. Not even imminent death can startle him into a spasm of virtue. The ruling trait of all savages is a greedy and consuming selfishness, and in our Noble Red Man it is found in its amplest development. His heart is a cesspool of falsehood, of treachery, and of low and devilish instincts... The scum of the earth!'''|20x|20x|[[Mark Twain]], 1870, ''The Noble Red Man'' (a satire on James Fenimore Cooper's portrayals) <ref name=mark_twain>
{{cite web
|url = http://www.bluecorncomics.com/twain.htm
|title = Mark Twain, Indian Hater
|accessdate = 2008-08-26
|author = Mark Twain, Blue Corn Comics
}}
</ref>}}
ಸಂಯುಕ್ತತಾ ಸರ್ಕಾರ ಮತ್ತು ಸ್ಥಳೀಯ ಅಮೆರಿಕನ್ನರ ನಡುವಿನ ಘರ್ಷಣೆಗಳು ಕೆಲವೊಮ್ಮೆ ಹಿಂಸಾಚಾರಕ್ಕೆ ಕಾರಣವಾಗುತ್ತವೆ. ಆಗಿನ 20ನೆಯ ಶತಮಾನದಲ್ಲಿ ನಡೆದ ಅತಿ ಗಮನಾರ್ಹ ಘಟನೆಯೆಂದರೆ, ದಕ್ಷಿಣ ಡಕೋಟಾ ರಾಜ್ಯದ ಒಂದು ಸಣ್ಣ ಪಟ್ಟಣದಲ್ಲಿ ನಡೆದ ವೂಂಡೆಡ್ ನೀ ಘಟನೆ. ನಾಗರಿಕ ಹಕ್ಕುಗಳ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದ ಕಾಲದಲ್ಲಿ, ಅಮೆರಿಕನ್ ಇಂಡಿಯನ್ ಮೂವ್ಮೆಂಟ್(ಎಐಎಮ್)ನ ಸುಮಾರು 200 ಕಾರ್ಯಕರ್ತರು 1973ರ ಫೆಬ್ರವರಿ 27ರಂದು ವೂಂಡೆಡ್ ನೀ ಪ್ರದೇಶವನ್ನು ವಶಪಡಿಸಿಕೊಂಡರು. ಸ್ಥಳೀಯ ಅಮೆರಿಕನ್ ಹಕ್ಕುಗಳು ಮತ್ತು ಸನಿಹದಲ್ಲಿರುವ ಪೈನ್ ರಿಡ್ಜ್ ರಿಸರ್ವೇಷನ್ ಸಂಬಂಧಿತ ವಿಚಾರಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಸಂಯುಕ್ತತಾ ಕಾನೂನು ಅಧಿಕಾರಿಗಳು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಸೈನಿಕರು ಈ ಪಟ್ಟಣವನ್ನು ಸುತ್ತುವರೆದರು. ಮುಂದೆ ಸಂಭವಿಸಿದ ಗುಂಡಿನಚಕಮಕಿಯಲ್ಲಿ, ಎಐಎಮ್ನ ಇಬ್ಬರು ಸೈನಿಕರು ಹತರಾದರು; ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನದ ಮಾರ್ಷಲ್ ಒಬ್ಬರಿಗೆ ಗಾಯವಾಗಿ, ಪಾರ್ಶ್ವವಾಯುವಿಗೆ ತುತ್ತಾದರು.<ref>{{Cite news|url=http://select.nytimes.com/gst/abstract.html?res=F40616FA38551A7493CAAB178FD85F478785F9 |title=Shot Kills Indian At Wounded Knee |publisher==Select.nytimes.com |date= 1973-04-28|accessdate=2010-08-22 | first=Martin | last=Waldron}}</ref> ನಂತರ 1975ರ ಜೂನ್ ತಿಂಗಳಲ್ಲಿ, ಪೈನ್ ರಿಡ್ಜ್ ರಿಸರ್ವೇಷನ್ನಲ್ಲಿ ಸಶಸ್ತ್ರ ದರೋಡೆಕೋರರನ್ನು ಬಂಧಿಸಲು ಹೋದ ಎಫ್ಬಿಐ ಅಧಿಕಾರಿಗಳು ಗುಂಡಿನ ಚಕಮಕಿಯಲ್ಲಿ ಗಾಯಗೊಂಡರು. ಆಗ ತೀರಾ ಹತ್ತಿರದಿಂದ ಹೊಡೆದ ಗುಂಡುಗಳಿಂದ ಹತರಾದರು. ಎಫ್ಬಿಐ ಅಧಿಕಾರಿಗಳ ಸಾವಿಗೆ ಕಾರಣನಾಗಿದ್ದ ಎಐಎಂ ಕಾರ್ಯಕರ್ತ ಲಿಯೊನಾರ್ಡ್ ಪೆಲ್ಷಿಯರ್ಗೆ ಎರಡು ಸತತ ಅವಧಿಗಳ ಜೀವಾವಧಿ ಶಿಕ್ಷೆ ವಿಧಿಸಲಾಯಿತು.<ref>{{cite web|last=Crosson |first=Judith |url=http://www.boston.com/news/nation/articles/2003/11/05/appeals_court_denies_peltiers_parole_bid/ |title=Appeals court denies Peltier's parole bid |publisher==Boston.com |date=2003-11-05 |accessdate=2010-08-22}}</ref>
{{quote|LeCompte also endured taunting on the battlefield. "They ridiculed him and called him a 'drunken Indian.' They said, 'Hey, dude, you look just like a haji—you'd better run.' They call the Arabs 'haji.' I mean, it's one thing to worry for your life, but then to have to worry about friendly fire because you don't know who in the hell will shoot you?|Tammie LeCompte, May 25, 2007, "Soldier highlights problems in U.S. Army"<ref name="Indian Country Today">
{{cite web
|url = http://www.indiancountrytoday.com/archive/28148064.html
|title = Soldier highlights problems in U.S. Army
|accessdate=2008-09-20
|author = Indian Country Today
}}
</ref> }}
'ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರವು ಹಿಂದೆ ಇಂಡಿಯನ್ ಬುಡಕಟ್ಟು ಪಂಗಡಗಳಿಗಾಗಿ ಸರಿಯಿಲ್ಲದ ನೀತಿಗಳನ್ನು ಹೇರಿದಕ್ಕೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ಪರವಾಗಿ ಎಲ್ಲಾ ಸ್ಥಳೀಯ ಅಮೆರಿಕನ್ನರ ಕ್ಷಮೆ ಯಾಚಿಸುವ' ಒಂದು ಜಂಟಿ ನಿರ್ಣಯವನ್ನು ಕನ್ಸಸ್ ಪ್ರದೇಶದ ರಿಪಬ್ಲಿಕನ್ ಪ್ರತಿನಿಧಿ ಸೆನೇಟರ್ ಸ್ಯಾಮ್ ಬ್ರೌನ್ಬ್ಯಾಕ್ 2004ರಲ್ಲಿ ಮಂಡಿಸಿದರು.<ref name="HISTORIC RESOLUTION OF APOLOGY TO NATIVE PEOPLES INTRODUCED IN U.S. CONGRESS May 6, 2004">{{cite web
|url = http://www.nativevillage.org/Messages%20from%20the%20People/resolution_of_apology_to_native_.htm
|title = Senate Joint Resolution 37: APOLOGY TO NATIVE PEOPLES
|accessdate = 2004-05-06
|author = Sam Brownback (R)
|archive-date = 2004-06-14
|archive-url = https://web.archive.org/web/20040614145406/http://www.nativevillage.org/Messages%20from%20the%20People/resolution_of_apology_to_native_.htm
|url-status = dead
}}</ref> ಇತ್ತೀಚಿನ 2010ರ ರಕ್ಷಣಾ ಇಲಾಖೆಯ ವಿನಿಯೋಗ ಮಸೂದೆಯ ವಿಚಾರವು ಇನ್ನಷ್ಟು ಪ್ರಾಮುಖ್ಯ ಪಡೆದ ಕಾರಣ, ರಾಷ್ಟ್ರಾಧ್ಯಕ್ಷ [[ಬರಾಕ್ ಒಬಾಮ|ಬರಾಕ್ ಹುಸೇನ್ ಒಬಾಮಾ]] 2009ರಲ್ಲಿ ಇದಕ್ಕೆ ಸಹಿ ಹಾಕುವುದರೊಂದಿಗೆ ಶಾಸನವು ಕಾನೂನಾಯಿತು.<ref>[http://blogs.wsj.com/washwire/2009/12/22/us-offers-an-official-apology-to-native-americans/ ಯುಎಸ್ ಆಫರ್ಸ್ ಆನ್ ಅಫೀಶಿಯಲ್ ಅಪಾಲಜಿ ಟು ನೇಟಿವ್ ಅಮೆರಿಕನ್ಸ್]</ref>
ಆಗ 1975ರಲ್ಲಿ ಎನ್ ಎಸ್ ಮಿಮಾಕ್ನ್ನು ಹತ್ಯೆ ಮಾಡಿದ್ದ ಎಐಎಮ್ ಕಾರ್ಯಕರ್ತ ಜಾನ್ ಗ್ರಹಾಮ್ನ್ನು ವಿಚಾರಣೆಗೊಳಪಡಿಸಲು, 2007ರಲ್ಲಿ ಕೆನಡಾದಿಂದ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಹಸ್ತಾಂತರಗೊಳಿಸಲಾಯಿತು. ವೂಂಡೆಡ್ ನೀ ಘಟನೆ ಸಂಭವಿಸಿ, ಕೆಲ ವರ್ಷಗಳ ನಂತರ, ಎಫ್ಬಿಐ ಗೂಢಚಾರಿಣಿ ಎಂಬ ಅನುಮಾನದ ಮೇರೆಗೆ, ಸ್ಥಳೀಯ ಅಮೆರಿಕನ್ ಮಹಿಳೆಯನ್ನು ಹತ್ಯೆಗೈಯಲಾಗಿತ್ತು.<ref name="glocan">{{Cite news|date=2004-12-07 |accessdate=2007-06-30 |last=Hume |first=Mark |title=Activist pleaded to live, U.S. says; Extradition hearing in Vancouver told about final days of N.S. Mikmaq killed in 1975 |work=The Globe and Mail (Canada) |publisher==Bell Globemedia Publishing Inc. |page=A12 |type=Newspaper }}</ref><ref name="glocan2">{{Cite news|accessdate=2007-06-30 |date=2007-06-27 |title=Former AIM member loses extradition appeal |last=Mickleburgh |first=Rod |page=A10 |type=Newspaper |work=The Globe and Mail (Canada) |publisher= Bell Globemedia Publishing Inc.}}</ref>
ಈಚೆಗೆ 2010ರಲ್ಲಿ ಸಿಗರೆಟ್ಗಳ ಮೇಲೆ ತೆರಿಗೆ ಹೇರುವ ವಿಚಾರದಲ್ಲಿ ಸೆನೆಕಾ ನೇಷನ್ ಮತ್ತು ನ್ಯೂಯಾರ್ಕ್ ನಗರದ ಮಹಾಪೌರ ಬ್ಲೂಂಬರ್ಗ್ ನಡುವೆ ವಾಗ್ವಾದ ನಡೆಯಿತು. ಸೆನೆಕಾ ನೇಷನ್ ಬ್ಲೂಂಬರ್ಗ್ರ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿಯಿತು. ರೇಡಿಯೊ ಕಾರ್ಯಕ್ರಮವೊಂದರಲ್ಲಿ 'ರಾಜ್ಯಪಾಲ ಪ್ಯಾಟರ್ಸನ್ ದನಗಾಹಿರಾವುತನ ಟೊಪ್ಪಿಗೆ ಮತ್ತು ಗನ್ನು ಹಿಡಿದು ತನಗಾಗಿಯೇ ಹಣ ಬೇಕು' ಎಂದು ಬೇಡಿಕೆಯಿಡತಕ್ಕದ್ದು' ಎಂದು ಬ್ಲೂಂಬರ್ಗ್ ಹೇಳಿದಾಗ, ಸೆಪ್ಟೆಂಬರ್ 1ರಿಂದ ಜಾರಿಗೆ ಬರುವ ಈ ತೆರಿಗೆಯ ಸಂಬಂಧಿತ ವ್ಯಾಜ್ಯವು ಬಹಳಷ್ಟು ಗಮನ ಸೆಳೆಯಿತು.<ref name="cowboyHat">
{{Cite news
|accessdate=2010-08-21
|date=2010-08-21
|title=State & Local American Indian Tribe Miffed by Bloomberg Remark Sues to Block N.Y. Cigarette Tax
|type=Newspaper
|publisher= = FoxNews.com
| url = http://www.foxnews.com/politics/2010/08/21/american-indian-tribe-miffed-bloomberg-remark-sues-block-ny-cigarette-tax/?test=latestnews
}}</ref>
====ವಿಶ್ವಸಂಸ್ಥೆಯ ಮಾನವ ಹಕ್ಕುಗಳಿಂದ ಹೊರತಾದ ಸ್ಥಳೀಯ ಅಮೆರಿಕನ್ನರು====
{{Main|Declaration on the Rights of Indigenous Peoples}}
ಸುಮಾರು 25 ವರ್ಷಗಳ ಚರ್ಚೆಯ ನಂತರ, 2007ರ ಸೆಪ್ಟೆಂಬರ್ 13ರಂದು, ವಿಶ್ವಸಂಸ್ಥೆಯ ಮಹಾಸಭೆಯಲ್ಲಿ 'ಮೂಲನಿವಾಸಿ ಜನರ ಹಕ್ಕುಗಳ ಬಗ್ಗೆ ವಿಶ್ವಸಂಸ್ಥೆಯ ಘೋಷಣೆ'ಯನ್ನು ಅಂಗೀಕರಿಸಿತು. ಈ ಘೋಷಣೆಯಲ್ಲಿನ ಬೆಳವಣಿಗೆಯಲ್ಲಿ ಮೂಲನಿವಾಸಿ ಪ್ರತಿನಿಧಿಗಳು ಪ್ರಮುಖ ಪಾತ್ರ ವಹಿಸಿದರು. ಇದರ ಪರವಾಗಿ 143 ಮತಗಳು ಹಾಗೂ ಕೇವಲ ನಾಲ್ಕು ವಿರೋಧ ಮತಗಳು ಚಲಾವಣೆಯಾದವು. (ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಮೆರಿಕಾ ಸಂಯುಕ್ತ ಸಂಸ್ಥಾನ). ಐತಿಹಾಸಿಕವಾಗಿ, ದಬ್ಬಾಳಿಕೆಗೊಳಗಾದ, ನಾಗರಿಕ ಮತ್ತು ಮತದಾನ ಹಕ್ಕು ತಪ್ಪಿಸಲಾದ ಸಣ್ಣಪ್ರಮಾಣದ ಮೂಲನಿವಾಸಿ ಜನರ ಸಂಖ್ಯೆಯನ್ನು ವಸಾಹತುದಾರರ ಸಂಖ್ಯೆಯು ಅದೆಷ್ಟೋ ಅಂತರದಲ್ಲಿ ಮೀರಿಸಿದ್ದ <ref>{{Cite book
| publisher= = McGill-Queen's University Press
| isbn = 0773530061 9780773530065 0773523324 9780773523326
| last = Hall
| first = Tony
| title = The American Empire and the Fourth World : The bowl with one spoon
| location = Montreal; Ithaca
| series = McGill-Queen's native and northern series, 34.
| year = 2003
}}</ref> ಈ ನಾಲ್ಕೂ ರಾಷ್ಟ್ರಗಳು, ವಿಶ್ವಸಂಸ್ಥೆಯ ಪ್ರಧಾನ ಸಭೆಯಲ್ಲಿ ಮಂಡಿಸಲಾದ ಈ ಘೋಷಣೆಯ ಅಂತಿಮ ಪಠ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದವು. ಆನಂತರ, ವಿರೋಧಿಸಿದ್ದ ಈ ನಾಲ್ಕೂ ರಾಷ್ಟ್ರಗಳ ಪೈಕಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಮ್ಮ ನಿಲುವು ಬದಲಿಸಿ, ಈ ಘೋಷಣೆಯ ಪರ ಮತ ಚಲಾಯಿಸಿದವು.
ವಿಶ್ವಸಂಸ್ಥೆಯಲ್ಲಿ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನ]]ದ ಪ್ರತಿನಿಧಿಯಾಗಿ ಮಾತನಾಡಿದ, ರಿಚರ್ಡ್ ಗ್ರೆನೆಲ್ರ ಸಹಾಯಕ ಸಿಬ್ಬಂದಿ ಹಾಗೂ ವಕ್ತಾರರಾಗಿದ್ದ ಬೆಂಜಮಿನ್ ಚಾಂಗ್ ಹೇಳಿದ್ದು, 'ಇಂದು ಏನು ಮಾಡಲಾಯಿತೋ ಅದು ಅಸ್ಪಷ್ಟ. ಈಗಿರುವ ಸ್ಥಿತಿಯೆಂದರೆ, ಹಲವು ವಿಭಿನ್ನ ವ್ಯಾಖ್ಯಾನಗಳಾಗಬಹುದು. ಇದು ಸ್ಪಷ್ಟ ಸರ್ವತ್ರ ತತ್ತ್ವವನ್ನು ಪ್ರತಿಪಾದಿಸುವುದಿಲ್ಲ.<ref>[https://web.archive.org/web/20070914032842/http://www.iht.com/articles/ap/2007/09/13/news/UN-GEN-UN-Indigenous-Peoples.php ಯುಎನ್ ಅಡಾಪ್ಟ್ಸ್ ಡಿಕ್ಲರೇಶನ್ ಆನ್ ರೈಟ್ಸ್ ಫಾರ್ ಇಂಡೀಜಿನಸ್ ಪೀಪಲ್ಸ್ ವರ್ಲ್ಡ್ವೈಡ್] ''ಇಂಟರ್ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್,'' 13 ಸೆಪ್ಟೆಂಬರ್ 2007.</ref> ಅಮೆರಿಕಾ ಸಂಯುಕ್ತ ಸಂಸ್ಥಾನದ ನಿಯೋಗವೂ ಸಹ ಇನ್ನೊಂದು ಕಡತವನ್ನು ಪ್ರಕಟಿಸಿತು. 'ಮೂಲನಿವಾಸಿ ಜನರ ಹಕ್ಕುಗಳ ಬಗ್ಗೆ ಘೋಷಣೆಗಳ ವಿಚಾರವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಟಿಪ್ಪಣಿಗಳು' ಎಂಬ ಪತ್ರವನ್ನು ಪ್ರಕಟಿಸಿತು. ಈ ಪತ್ರದಲ್ಲಿ ಘೋಷಣೆಗೆ ಆಕ್ಷೇಪಗಳನ್ನು ತಿಳಿಸಲಾಯಿತು. ಇತರೆ ಮೂರು ದೇಶಗಳ ಆಕ್ಷೇಪಗಳನ್ನೇ ಅಮೆರಿಕಾ ಸಂಯುಕ್ತ ಸಂಸ್ಥಾನವೂ ಸಹ ಆಧರಿಸಿದೆ. ಆದರೆ, ಜೊತೆಗೆ, ಘೋಷಣೆಯಲ್ಲಿ ಮೂಲನಿವಾಸದ ಜನರು ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನ ನೀಡುವಲ್ಲಿ ಮತ್ತು ವ್ಯಾಪ್ತಿ ಸೂಚಿಸುವಲ್ಲಿ ಘೋಷಣೆಯು ವಿಫಲವಾಗಿದೆ, ಎಂದು ಅಮೆರಿಕಾ ಸಂಯುಕ್ತ ಸಂಸ್ಥಾನವು ಅಭಿಪ್ರಾಯಪಟ್ಟಿದೆ.<ref>[https://www.un.int/usa/press_releases/20070913_204.html ಎಕ್ಸ್ಪ್ಲನೇಶನ್ ಆಫ್ ವೋಟ್ ಆನ್ ದಿ ಡಿಕ್ಲರೇಶನ್ ಆನ್ ದಿ ರೈಟ್ಸ್ ಆಫ್ ಇಂಡೀಜಿನಸ್ ಪೀಪಲ್ಸ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಯುನೈಟೆಡ್ ಸ್ಟೇಟ್ಸ್ ಟು ದಿ ಯುನೈಟೆಡ್ ನೇಶನ್ಸ್ ಪ್ರೆಸ್ ರಿಲೀಸ್, 13 ಸೆಪ್ಟೆಂಬರ್ 2007.</ref>
====ಕ್ರೀಡಾ ಕ್ಷೇತ್ರಗಳಲ್ಲಿ ಸ್ಥಳೀಯ ಅಮೆರಿಕನ್ನರ ಶುಭಚಿಹ್ನೆಗಳು====
{{Main|Native American mascot controversy}}
[[File:Chief Osceola on Renegade FSU.jpg|thumb|upright|ಒಬ್ಬ ವಿದ್ಯಾರ್ಥಿಯು ಫ್ಲೋರಿಡಾ ಸ್ಟೇಟ್ ವಿಶ್ವವಿದ್ಯಾನಿಲಯದ ಶುಭಚಿಹ್ನೆಯಾದ ಮುಖ್ಯ ಓಸಿಯೋಲವಾಗಿ ನಟಿಸುತ್ತಿರುವುದು]]
ಕ್ರೀಡೆಗಳಲ್ಲಿ ಸ್ಥಳೀಯ ಅಮೆರಿಕನ್ ಲಾಂಛನಗಳ ಬಳಕೆಯು [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನ]] ಮತ್ತು [[ಕೆನಡಾ]] ದೇಶಗಳಲ್ಲಿ ಬಹಳಷ್ಟು ವಿವಾದಕ್ಕೆ ಕಾರಣವಾಗಿದೆ. ಕನಿಷ್ಠ ಪಕ್ಷ 18ನೆಯ ಶತಮಾನದಷ್ಟು ಹಿಂದಿನ ಕಾಲದಿಂದಲೂ 'ಆಟವಾಡುವ ಇಂಡಿಯನ್' ಇತಿಹಾಸವನ್ನು ಅಮೆರಿಕನ್ನರು ಹೊಂದಿದ್ದುಂಟು.<ref name="Calloway">ಫರ್ಸ್ಟ್ ಪೀಪಲ್ಸ್, ಕೊಲಿನ್ ಜಿ. ಕ್ಯಾಲೊವೇ, 2ನೇ ಆವೃತ್ತಿ, 2004</ref> ಹಲವು ವ್ಯಕ್ತಿಗಳು {{Who|date=June 2009}} ಶಾಸ್ತ್ರೀಯ ಸ್ಥಳೀಯ ಅಮೆರಿಕನ್ ಯೋಧನ ವ್ಯಕ್ತಿತ್ವ ಹೊರಸೂಸುವ ಶೂರತ್ವ ಮತ್ತು ರಮ್ಯತೆಗಳನ್ನು ಪ್ರಶಂಶಿಸಿದ್ದಾರೆ. ಆದರೆ, ತಮ್ಮೊಂದಿಗೆ ಸಂಬಂಧಿತ ವಸ್ತುಗಳನ್ನು ಲಾಂಛನ ರೂಪದಲ್ಲಿ ಬಳಸುವುದು ಬಹಳ ಅವಹೇಳನಕಾರಿ ಎಂದು ಹಲವು {{Quantify|date=February 2010}} ಸ್ಥಳೀಯ ಅಮೆರಿಕನ್ನರು {{Which?|date=February 2010}} ಅಭಿಪ್ರಾಯಪಟ್ಟಿದ್ದಾರೆ. ಹಲವು ವಿಶ್ವವಿದ್ಯಾನಿಲಯಗಳು (ಉದಾಹರಣೆಗೆ ನಾರ್ತ್ ಡಕೊಟಾ ಫೈಟಿಂಗ್ ಸಿಯೊಕ್ಸ್ ಆಫ್ ಯುನಿವರ್ಸಿಟಿ ಆಫ್ ನಾರ್ತ್ ಡಕೊಟಾ) ಹಾಗೂ ವೃತ್ತಿಪರ ಕ್ರೀಡಾ ತಂಡಗಳು (ಉದಾಹರಣೆಗೆ ಚೀಫ್ ವಾಹೂ ಆಫ್ ಕ್ಲೆವಿಲೆಂಡ್ ಇಂಡಿಯನ್ಸ್) ಇಂದು ಸ್ಥಳೀಯ ಅಮೆರಿಕನ್ ರಾಷ್ಟ್ರಗಳೊಂದಿಗೆ ಚರ್ಚಿಸದೆ ಲಾಂಛನಗಳನ್ನು ಬಳಸಿಕೊಳ್ಳಲಾರವು. ಆದರೆ ಕೆಲಿಫೊರ್ನಿಯಾದ CA ವಲೆಜೊದಲ್ಲಿರುವ ವಲೆಜೊ ಹೈ ಸ್ಕೂಲ್ ಮತ್ತು ಅದೇ ರಾಜ್ಯದ CA ಕ್ರಾಕೆಟ್ನಲ್ಲಿರುವ ಜಾನ್ ಸ್ವೆಟ್ ಹೈ ಸ್ಕೂಲ್ನಂತಹ ಕೆಳಮಟ್ಟದ ಶಾಲೆಗಳು ಹಾಗೂ ಇತರೆ ಸ್ಥಳೀಯ ಮಟ್ಟದ ಕ್ರೀಡಾ ತಂಡಗಳು {{Which?|date=June 2009}} ಲಾಂಛನಗಳನ್ನು ಇಂದಿಗೂ ಬಳಸುತ್ತಿವೆ. ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿ, ಟೊಮೇಲ್ಸ್ ಬೇ ಹೈ ಸ್ಕೂಲ್ ಮತ್ತು ಸೆಕೊಯಾ ಹೈ ಸ್ಕೂಲ್ ಸೇರಿದಂತೆ ಹಲವು ಪ್ರೌಢಶಾಲೆಗಳು ತಮ್ಮ ಲಾಂಛನಗಳ ಬಳಕೆ ಕೈಬಿಟ್ಟಿವೆ.
{{cquote|(Trudie Lamb Richmond doesn't) know what to say when kids argue, 'I don't care what you say, we are honoring you. We are keeping our Indian.'... What if it were 'our black' or 'our Hispanic'?|20x|20x|-Amy D'orio quoting Trudie Lamb Richmond, March 1996, "Indian Chief Is Mascot No More"<ref name=amy_d>
{{Cite news
|url = http://query.nytimes.com/gst/fullpage.html?res=9805E4DF1239F932A05750C0A960958260&n=Top%2FReference%2FTimes%20Topics%2FSubjects%2FM%2FMascots
|title = Indian Chief Is Mascot No More
|accessdate = 2008-08-26
|author = Amy D'orio
| work=The New York Times
| date=1996-03-31}}</ref> }}
ಇತ್ತೀಚೆಗೆ 2005ರ ಆಗಸ್ಟ್ ತಿಂಗಳಲ್ಲಿ ನ್ಯಾಷನಲ್ ಕಾಲೆಜಿಯೇಟ್ ಅಥ್ಲಿಟಿಕ್ ಅಸೊಸಿಯೇಷನ್ (ಎನ್ಸಿಎಎ) ತನ್ನ ಋತುವಾರು ಪಂದ್ಯಾವಳಿಗಳಲ್ಲಿ ಬಹಳ ಉಗ್ರಸ್ವರೂಪದ ಸ್ಥಳೀಯ ಅಮೆರಿಕನ್ ಲಾಂಛನಗಳ ಬಳಕೆಯನ್ನು ನಿಷೇಧಿಸಿತು.<ref>{{cite web |url=http://www.pbs.org/newshour/bb/sports/july-dec05/mascots_8-25.html |work=Online NewsHour |title=NCAA Bans Indian Mascots |accessdate=February 8, 2006 |archive-date=ಜನವರಿ 25, 2011 |archive-url=https://web.archive.org/web/20110125095014/http://www.pbs.org/newshour/bb/sports/july-dec05/mascots_8-25.html |url-status=dead }}</ref> ಪಂಗಡವು ಅನುಮತಿ ನೀಡುವ ತನಕ ಪಂಗಡದ ಹೆಸರು ಬಳಕೆಗೆ ಅವಕಾಶ ನೀಡುವ ವಿನಾಯಿತಿ ನೀಡಲಾಯಿತು. (ಉದಾಹರಣೆಗೆ ಫ್ಲಾರಿಡಾ ರಾಜ್ಯ ವಿಶ್ವವಿದ್ಯಾನಿಲಯದ ತಂಡಕ್ಕೆ ಫ್ಲಾರಿಡಾದ ಸೆಮಿನೊಲ್ ಪಂಗಡ ತನ್ನ ಹೆಸರನ್ನು ಬಳಸಲು ಅನುಮತಿ ನೀಡಿತು.<ref>{{cite web|url=http://www.iht.com/articles/2005/08/24/sports/COLLEGE.php|title=Florida State wins its battle to remain the Seminoles|author=Powell, Robert Andrew|date=August 25, 2005|publisher==International Herald Tribune|accessdate=9 August 2008|archiveurl=https://web.archive.org/web/20050825185653/http://www.iht.com/articles/2005/08/24/sports/COLLEGE.php|archivedate=25 August 2005}}</ref><ref>{{cite web|url=http://www.fsu.com/pages/2005/06/17/historic_vote.html|title=Florida State University thanks Seminoles for historic vote of support|publisher==Florida State University|accessdate=9 August 2008 |archiveurl = https://web.archive.org/web/20070608224336/http://www.fsu.com/pages/2005/06/17/historic_vote.html |archivedate = June 8, 2007}}</ref> ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವೃತ್ತಿಪರ ಕ್ರೀಡೆಗಳಲ್ಲಿ ಸ್ಥಳೀಯ-ಅಮೆರಿಕನ್-ವಸ್ತುವಿಷಯಗಳುಳ್ಳ ತಂಡಗಳ ಹೆಸರುಗಳ ಬಳಕೆ ವ್ಯಾಪಕವಾಗಿದೆ. ಉದಾಹರಣೆಗೆ, ಚೀಫ್ ವಾಹೂದಂತಹ ಲಾಂಛನ ಮತ್ತು ಕ್ಲೆವಿಲೆಂಡ್ ಇಂಡಿಯನ್ಸ್ ಹಾಗೂ ವಾಷಿಂಗ್ಟನ್ ರೆಡ್ಸ್ಕಿನ್ಸ್ನಂತಹ ತಂಡಗಳು ಬಳಸುವ ಲಾಂಛನಗಳು ಕೆಲವರ ಪ್ರಕಾರ ವಿವಾದಾಸ್ಪದವಾಗಿದೆ.
{{quote|"Could you imagine people mocking African Americans in black face at a game?" he said. "Yet go to a game where there is a team with an Indian name and you will see fans with war paint on their faces. Is this not the equivalent to black face?"|"Native American Mascots Big Issue in College Sports",Teaching Tolerance, May 9, 2001<ref name=teachingTolerance>{{cite web
|url = http://www.tolerance.org/news/article_tol.jsp?id=165
|title = Native American Mascots Big Issue in College Sports
|accessdate = 2008-08-26
|author = Teaching Tolerance
|archive-date = 2008-04-20
|archive-url = https://web.archive.org/web/20080420073332/http://www.tolerance.org/news/article_tol.jsp?id=165
|url-status = dead
}}</ref> }}
===ಯುರೋಪಿಯನ್ನರು ಮತ್ತು ಅಮೆರಿಕನ್ನರಿಂದ ಚಿತ್ರಣ===
[[File:North carolina algonkin-rituale02.jpg|right|240px|thumb|ರೊನೋಕೆ ಇಂಡಿಯನ್ಸ್ನ ಜಾನ್ ವೈಟ್ ಬಿಡಿಸಿದ ರೇಖಾಚಿತ್ರ]]
[[File:UsaP340-5Dollars-1899-altered f.jpg|thumb|250px|ಐದು ಡಾಲರ್ ಸಿಲ್ವರ್ ಸರ್ಟಿಫಿಕೇಟ್ನಲ್ಲಿರುವ ಅಮೆರಿಕನ್ ಇಂಡಿಯನ್, 1899]]
[[File:IndianFigureCityHallTowerc.1892.jpg|240px|thumb|1892ರಲ್ಲಿ ಅಲೆಕ್ಸಾಂಡರ್ ಮಿಲ್ನೆ ಕ್ಯಾಲ್ಡರ್ ರಚಿಸಿದ ಶಿಲ್ಪ, ಇದನ್ನು ಫಿಲಡೆಲ್ಫಿಯಾ ಸಿಟಿ ಹಾಲ್ನಲ್ಲಿ ಇರಿಸಲಾಗಿದೆ.]]
ಅಮೆರಿಕನ್ ಕಲಾವಿದರು ಸ್ಥಳೀಯ ಅಮೆರಿಕನ್ನರನ್ನು ವಿವಿಧ ಐತಿಹಾಸಿಕ ಕಾಲಗಳಲ್ಲಿ ವಿಭಿನ್ನ ರೀತ್ಯಾ ಬಣ್ಣಿಸಿದ್ದಾರೆ. ಆದರೆ 16ನೆಯ ಶತಮಾನದಲ್ಲಿ, ಕಲಾವಿದ ಜಾನ್ ವೈಟ್, ಅಗ್ನೇಯ ರಾಜ್ಯಗಳಲ್ಲಿನ ಸ್ಥಳೀಯ ಅಮೆರಿಕನ್ನರನ್ನು ಬಣ್ಣಿಸಲು ನೀರು-ಮಿಶ್ರಿತ ಜಲವರ್ಣಗಳು ಹಾಗೂ ಕೆತ್ತನೆಗಳನ್ನು ಮಾಡಿದರು. ಜಾನ್ ವೈಟ್ ರಚಿಸಿದ ಕೃತಿಗಳು ಬಹಳಷ್ಟು ಪ್ರಮಾಣದಲ್ಲಿ ತಾವು ಗಮನಿಸಿದ ಸ್ಥಳೀಯ ಅಮೆರಿಕನ್ನರನ್ನು ನಿಖರವಾಗಿಯೇ ಹೋಲುತ್ತಿದ್ದವು.
ಆನಂತರ, '''ಎ ಬ್ರೀಫ್ ಅಂಡ್ ಟ್ರೂ ರಿಪೋರ್ಟ್ ಆಫ್ ದಿ ನ್ಯೂ ಫೌಂಡ್ ಲ್ಯಾಂಡ್ ಆಫ್ ವರ್ಜಿನಿಯಾ'' ' ಎಂಬ ಶಿರೋನಾಮೆಯುಳ್ಳ, ಕೆತ್ತನೆಗಳ ಪುಸ್ತಕಕ್ಕಾಗಿ ಕಲಾವಿದ ಥಿಯೊಡೊರ್ ಡಿ ಬ್ರಿ ವೈಟ್ರ ಮೂಲ ನೀರು-ಮಿಶ್ರಿತ ಬಣ್ಣಗಳನ್ನು ಬಳಸಿದರು. ತಮ್ಮ ಪುಸ್ತಕದಲ್ಲಿ ಡಿ ಬ್ರಿ ವೈಟ್ರ ಕೃತಿಗಳ ಭಂಗಿ ಮತ್ತು ಲಕ್ಷಣಗಳನ್ನು ಆಗಾಗ್ಗೆ ಬದಲಾಯಿಸಿ, ಇನ್ನಷ್ಟು ಯುರೋಪಿಯನ್ ರೂಪ ನೀಡಿದರು. ವೈಟ್ ಮತ್ತು ಡಿ ಬ್ರಿ ಕಾರ್ಯನಿರ್ವಹಿಸುತ್ತಿದ್ದ ಕಾಲದಲ್ಲಿ, ಯುರೋಪಿಯನ್ನರು ಮತ್ತು ಸ್ಥಳೀಯ ಅಮೆರಿಕನ್ನರ ನಡುವಿನ ಅಂತರಸಂಪರ್ಕದ ಆರಂಭದ ಕಾಲವಾಗಿತ್ತು. ಯುರೋಪಿಯನ್ನರು ಸ್ಥಳೀಯ ಅಮೆರಿಕನ್ ಸಂಸ್ಕೃತಿಯಲ್ಲಿ ಅಪಾರ ಆಸಕ್ತಿ ತೋರಿದರು. ಇವರ ಕುತೂಹಲ ಹೆಚ್ಚಾದ ಪರಿಣಾಮವಾಗಿ, ಡಿ ಬ್ರಿ ರಚಿಸಿದ ಪುಸ್ತಕವೂ ಸೇರಿದಂತೆ ಇತರೆ ಪುಸ್ತಕಗಳಿಗಾಗಿ ಬೇಡಿಕೆ ಹೆಚ್ಚಾಯಿತು.
ಆಗ 19ನೆಯ ಮತ್ತು 20ನೆಯ ಶತಮಾನದಲ್ಲಿ, ಸ್ಥಳೀಯ ಸಂಸ್ಕೃತಿಯನ್ನು ಉಳಿಸುವ ಮಹತ್ವಾಕಾಂಕ್ಷೆ ಹೊತ್ತ ಕೆಲವು ಅಮೆರಿಕನ್ ಮತ್ತು ಕೆನಡಿಯನ್ ಚಿತ್ರಕಲಾವಿದರು ಆಗಾಗ್ಗೆ ಸ್ಥಳೀಯ ಅಮೆರಿಕನ್ ವಿಷಯಗಳಲ್ಲಿ ಆಸಕ್ತಿ ವಹಿಸಿ, ನಿಪುಣತೆ ಹೊಂದಿದರು. ಇವರಲ್ಲಿ ಎಲ್ಬ್ರಿಡ್ಜ್ ಅವರ್ ಬರ್ಬ್ಯಾಂಕ್, ಜಾರ್ಜ್ ಕ್ಯಾಟ್ಲಿನ್, ಸೇಠ್ ಅಂಡ್ ಮೇರಿ ಈಸ್ಟ್ಮನ್, ಪಾಲ್ ಕೇನ್, ಡಬ್ಲ್ಯೂ ಲ್ಯಾಂಗ್ಡನ್ ಕಿಹ್ನ್, ಚಾರ್ಲ್ಸ್ ಬರ್ಡ್ ಕಿಂಗ್, ಜೋಸೆಫ್ ಹೆನ್ರಿ ಷಾರ್ಪ್ ಹಾಗೂ ಜಾನ್ ಮಿಕ್ಸ್ ಸ್ಟ್ಯಾನ್ಲಿ ಖ್ಯಾತನಾಮರು.
ನಂತರದ 19ನೆಯ ಶತಮಾನದ ಆರಂಭದಲ್ಲಿ ಕ್ಯಾಪಿಟಲ್ ಭವನದ ನಿರ್ಮಾಣವಾಗುತ್ತಿದ್ದಾಗ, ಅಮೆರಿಕಾ ಸಂಯುಕ್ತ ಸಂಸ್ಥಾನ ಸರ್ಕಾರವು ರೊಟಂಡಾದ ದ್ವಾರದ ಮೇಲೆ ಅಲಂಕಾರಿಕ ಕೃತಿ ಜೋಡಿಸಲು ನಾಲ್ಕು ಪ್ಯಾನೆಲ್ಗಳ ಸರಣಿ ಸೇರಿಸಿತು. ಈ ಪ್ಯಾನೆಲ್ಗಳಲ್ಲಿ, 19ನೆಯ ಶತಮಾನದಲ್ಲಿ ಬಹಳಷ್ಟು ಪೌರಾಣಿಕ ಇತಿಹಾಸದ ಪ್ರಮಾಣಕ್ಕೆ ಬೆಳೆದ ಯುರೂಪಿಯನ್-ಸ್ಥಳೀಯ ಅಮೆರಿಕನ್ ಸಂಬಂಧಗಳ ದೃಷ್ಟಿಯನ್ನು ಕಲ್ಪಿಸಲಾಗಿದೆ. ಈ ನಾಲ್ಕೂ ಪ್ಯಾನೆಲ್ಗಳಲ್ಲಿ ಆಂಟೊನಿಯೊ ಕ್ಯಾಪೆಲನೊರ ''ದಿ ಪ್ರಸರ್ವೇಷನ್ ಆಫ್ ಕ್ಯಾಪ್ಟನ್ ಸ್ಮಿತ್ ಬೈ ಪೊಕಾಹಾಂಟಾಸ್'' (1825), ಎನ್ರಿಕೊ ಕಾಸಿಕಿಯವರ ''ದಿ ಲ್ಯಾಂಡಿಂಗ್ ಆಫ್ ದಿ ಪಿಲ್ಗ್ರಿಮ್ಸ್'' (1825) ಮತ್ತು ''ದಿ ಕಾನ್ಫ್ಲಿಕ್ಟ್ ಆಫ್ ಡೇನಿಯಲ್ ಬೂನ್ ಅಂಡ್ ದಿ ಇಂಡಿಯನ್ಸ್'' (1826–27), ಹಾಗೂ ನಿಕಾಲಸ್ ಜೆವಲೊಟ್ರ ''ವಿಲಿಯಮ್ ಪೆನ್ಸ್ ಟ್ರೀಟಿ ವಿತ್ ದಿ ಇಂಡಿಯನ್ಸ್'' (1827) ಇಲ್ಲಿ ಚಿತ್ರಿತವಾಗಿವೆ. ಈ ಕೆತ್ತನೆಗಳು ಯುರೋಪಿಯನ್ನರು ಮತ್ತು ಸ್ಥಳೀಯ ಅಮೆರಿಕನ್ನರ ಆದರ್ಶೀಕೃತ ರೂಪಗಳನ್ನು ನಿರೂಪಿಸುತ್ತವೆ. ಇದರಲ್ಲಿ ಯುರೋಪಿಯನ್ನರು ಸಜ್ಜನರು ಹಾಗೂ ಸ್ಥಳೀಯರು ಉಗ್ರ ಸ್ವಭಾವದವರೆಂದು ನಿರೂಪಿಸಲಾಗಿದೆ. ಈ ನಾಲ್ಕೂ ಕೆತ್ತನೆಗಳಲ್ಲಿ ನಿರೂಪಿಸಲಾದ ಸಂದೇಶಗಳನ್ನು ಸ್ಥಳೀಯ ಅಮೆರಿಕನ್ನರು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳುವರು ಎಂಬುದನ್ನು [[ವರ್ಜೀನಿಯ|ವರ್ಜಿನಿಯಾ]]ದ ವ್ಹಿಗ್ ಪ್ರತಿನಿಧಿ ಹೆನ್ರಿ ಎ ವೈಸ್ ಚುಟುಕಾಗಿ ವಿವರಿಸಿದ್ದಾರೆ: "ನಾವು ನಿಮಗೆ ಕಾಳು ಕೊಡ್ತೀವಿ, ನೀವು ನಮ್ಮ ಭೂಮಿ ಕಸಿದುಕೊಂಡು ಮೋಸ ಮಾಡ್ತೀರ, ನಾವು ನಿಮ್ಮ ಜೀವ ಕಾಪಾಡ್ತೀವಿ, ನೀವು ನಮ್ಮ ಜೀವ ತೆಗೀತೀರ." ಇದೇ ರೀತಿ, ಸ್ಥಳೀಯ ಅಮೆರಿಕನ್ನರನ್ನು ನಿರೂಪಿಸುವ 19ನೆಯ ಶತಮಾನದ ಹಲವು ಚಿತ್ರಗಳು ನಕಾರಾತ್ಮಕ ನಿರೂಪಣೆ ನೀಡಿದರೂ, ಚಾರ್ಲ್ಸ್ ಬರ್ಡ್ ಕಿಂಗ್ನಂತಹ ಕಲಾವಿದರು ಸ್ಥಳೀಯ ಅಮೆರಿಕನ್ನರ ಬಗ್ಗೆ ಇನ್ನಷ್ಟು ಸಮತೋಲನದ ಚಿತ್ರಣ ನೀಡಬಯಸಿದರು.
ಈ ಸಮಯದಲ್ಲಿ, ಸ್ಥಳೀಯ ಅಮೆರಿಕನ್ ಸಂಪ್ರದಾಯದ ಬಗ್ಗೆ ಬಹಳಷ್ಟು ತಿಳಿದುಕೊಂಡಿರುವ ಕಾಲ್ಪನಿಕ ಕಥಾ ಹಂದರದ ಬರಹಗಾರರಿದ್ದು, ಇವರು ಸಹಾನುಭೂತಿ ಧೋರಣೆಯಿಂದ ಬರೆದರು. ಇಂತಹ ಬರಹಗಾರರಲ್ಲಿ ಮಾರಾ ಎಲಿಸ್ ರಯಾನ್ ಸಹ ಒಬ್ಬರು.
ಇತ್ತೀಚಿನ 20ನೆಯ ಶತಮಾನದಲ್ಲಿ, ಚಲನಚಿತ್ರಗಳು ಹಾಗೂ [[ದೂರದರ್ಶನ|ಕಿರುತೆರೆ]]ಗಳಲ್ಲಿ ಯುರೋಪಿಯನ್-ಅಮೆರಿಕನ್ನರು ಅಣಕು-ಸಾಂಪ್ರದಾಯಿಕ ಉಡುಗೆ ಧರಿಸುವುದರ ಮೂಲಕ ಸ್ಥಳೀಯ ಅಮೆರಿಕನ್ನರನ್ನು ನಿರೂಪಿಸುತ್ತಿದ್ದರು. ಉದಾಹರಣೆಗಳಲ್ಲಿ, ''ದಿ ಲಾಸ್ಟ್ ಅಫ್ ದಿ ಮೊಹಿಕನ್ಸ್'' (1920), ''ಹಾಕೈ ಅಂಡ್ ದಿ ಲಾಸ್ಟ್ ಆಫ್ ದಿ ಮೊಹಿಕನ್ಸ್'' (1957) ಹಾಗೂ ''ಎಫ್ ಟ್ರೂಪ್'' (1965–67) ಸೇರಿವೆ. ಆನಂತರದ ದಶಕಗಳಲ್ಲಿ, ''ದಿ ಲೋನ್ ರೇಂಜರ್'' ಕಿರುತೆರೆ ಸರಣಿಯಲ್ಲಿ (1949–57) ಕಾಣಿಸಿಕೊಂಡ ಜೇ ಸಿಲ್ವರ್ಹೀಲ್ಸ್ ಮುಂತಾದ ಸ್ಥಳೀಯ ಅಮೆರಿಕನ್ ನಟರು ಪ್ರವರ್ಧಮಾನಕ್ಕೆ ಬಂದರು. ಸ್ಥಳೀಯ ಅಮೆರಿಕನ್ನರ ಪಾತ್ರಗಳು ಬಹಳ ಸೀಮಿತವಾಗಿದ್ದು, ಸ್ಥಳೀಯ ಅಮೆರಿಕನ್ ಸಂಸ್ಕೃತಿಯನ್ನು ನಿರೂಪಿಸಿದಂತಿರಲಿಲ್ಲ. ಆಗ 1970ರ ದಶಕದಲ್ಲಿ, ಚಲನಚಿತ್ರಗಳಲ್ಲಿ ಕೆಲವು ಸ್ಥಳೀಯ ಅಮೆರಿಕನ್ ಪಾತ್ರಗಳ ಗುಣಮಟ್ಟವನ್ನು ಉತ್ತಮಗೊಳಿಸಲಾಯಿತು. ''ಲಿಟ್ಲ್ ಬಿಗ್ ಮ್ಯಾನ್'' (1970), ''ಬಿಲ್ಲಿ ಜ್ಯಾಕ್'' (1971) ಹಾಗೂ ''ದಿ ಔಟ್ಲಾ ಜೋಸಿ ವೇಲ್ಸ್'' (1976) ಚಲನಚಿತ್ರಗಳಲ್ಲಿ ಸ್ಥಳೀಯ ಅಮೆರಿಕನ್ನರನ್ನು ಕಿರುಪ್ರಮಾಣದ ಪೋಷಕ ಪಾತ್ರಗಳಲ್ಲಿ ಬಿಂಬಿಸಲಾಯಿತು.
ಬಹಳಷ್ಟು ನಕಾರಾತ್ಮಕ ನಿರೂಪಣೆಗಳ ಜೊತೆಗೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ಕಿರುತೆರೆ ಕಾರ್ಯಕ್ರಮಗಳಲ್ಲಿ ಸ್ಥಳೀಯ ಜನರನ್ನು ಆನುಷಂಗಿಕ ಅಥವಾ ಕೆಳಮಟ್ಟದ ಪಾತ್ರಗಳಿಗೆ ಪರಿಗಣಿಸಲಾಗಿತ್ತು. ''ಬೊನಾನ್ಝಾ'' ಸರಣಿ ಪ್ರಸಾರವಾದ ವರ್ಷಗಳಲ್ಲಿ (1959–1973), ಯಾವುದೇ ಪ್ರಮುಖ ಅಥವಾ ಆನುಷಂಗಿಕ ಸ್ಥಳೀಯ ಪಾತ್ರಗಳು ಸತತವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿಲ್ಲ. ''ದಿ ಲೋನ್ ರೇಂಜರ್'' (1949–1957), ''ಚೇಯೆನ್'' (1957–1963) ಹಾಗೂ ''ಲಾ ಆಫ್ ದಿ ಪ್ಲೇನ್ಸ್ಮ್ಯಾನ್'' (1959–1963) ಸರಣಿಗಳಲ್ಲಿ ಸ್ಥಳೀಯ ಪಾತ್ರಗಳು ಸಾಮಾನ್ಯವಾಗಿ ಕೇಂದ್ರಬಿಂದುವಾಗಿದ್ದ ಬಿಳಿಯರ ಪಾತ್ರಗಳಿಗೆ ಸಹಯೋಗಿಗಳಾಗಿದ್ದವಷ್ಟೆ. ಈ ಪಾತ್ರವಿನ್ಯಾಸವು ಆನಂತರದ ವರ್ಷಗಳಲ್ಲಿ ಕಿರುತೆರೆಯ ಪಾತ್ರವಿನ್ಯಾಸ ಮತ್ತು ''ಹೌ ದಿ ವೆಸ್ಟ್ ವಾಸ್ ವನ್'' ನಂತಹ ಕಾರ್ಯಕ್ರಮಗಳಲ್ಲಿ ಪಾತ್ರವಿನ್ಯಾಸಕ್ಕೆ ಆಧಾರವಾಯಿತು. ಎಲ್ಲಾ ಷೊಹತ್ ಮತ್ತು ರಾಬರ್ಟ್ ಸ್ಟ್ಯಾಮ್ ಪ್ರಕಾರ, ಸಹಾನುಭೂತಿಯುಳ್ಳ ಆದರೆ ತದ್ವಿರುದ್ಧದ ಚಿತ್ರಕಥೆಯಿದ್ದ, ''ಡ್ಯಾನ್ಸಸ್ ವಿತ್ ವುಲ್ವ್ಸ್'' ಚಲನಚಿತ್ರ 1990ರಲ್ಲಿ ತೆರೆಕಂಡಿತು. ಲಕೋಟಾಸ್ ಕಥೆಯನ್ನು ನಿರೂಪಿಸಲು, ಯುರೊ-ಅಮೆರಿಕನ್ ಧ್ವನಿಯನ್ನು ಬಳಸಲಾಯಿತು. ಬಹಳಷ್ಟು ವೀಕ್ಷಕರನ್ನು ಸಂಪಾದಿಸಲು ಈ ರೀತಿ ಮಾಡಲಾಯಿತು, ಎನ್ನಲಾಗಿದೆ.<ref>ಶೊಹಾತ್, ಎಲ್ಲಾ ಮತ್ತು ಸ್ಟ್ಯಾಮ್, ರಾಬರ್ಟ್. ''ಅನ್ಥಿಂಕಿಂಗ್ ಯೂರೊಸೆಂಟ್ರಿಸಮ್: ಮಲ್ಟಿಕಲ್ಚರಲಿಸಮ್ ಆಂಡ್ ದಿ ಮೀಡಿಯಾ''. ನ್ಯೂಯಾರ್ಕ್ : ರೂಟ್ಲೆಡ್ಜ್, 2004.</ref>
ಈ ಹಿಂದೆ 1992ರಲ್ಲಿ ಬಿಡುಗಡೆಯಾದ ''ದಿ ಲಾಸ್ಟ್ ಆಫ್ ದಿ ಮೊಹಿಕನ್ಸ್'' ಚಲನಚಿತ್ರದ ರಿಮೇಕ್ ಮತ್ತು ''[[Geronimo: An American Legend]]'' (1993), ''ಡ್ಯಾನ್ಸ್ ವಿತ್ ವುಲ್ವ್ಸ್'' ಸಹ ಹಲವು ಸ್ಥಳೀಯ ಅಮೆರಿಕನ್ ನಟರನ್ನು ಬಳಸಿಕೊಂಡಿತು. ಇದರಲ್ಲಿ ಮೂಲನಿವಾಸಿ ಭಾಷೆಗಳನ್ನು ಬಿಂಬಿಸುವ ಯತ್ನ ನಡೆಯಿತು.
ಇದೇ ಮಾದರಿಯಲ್ಲಿ 2004ರಲ್ಲಿ, ಸಹ-ನಿರ್ಮಾಪಕ ಗಯ್ ಪೆರೊಟಾ ''[[Mystic Voices: The Story of the Pequot War]]'' ಕಿರುತೆರೆ ಸಾಕ್ಷ್ಯಚಿತ್ರವನ್ನು ಪ್ರಸ್ತುತಗೊಳಿಸಿದರು. ವಸಾಹತುದಾರರು ಹಾಗೂ ಅಮೆರಿಕಾ ಖಂಡಗಳಲ್ಲಿನ ಸ್ಥಳೀಯರ ನಡುವೆ ನಡೆದ ಮೊಟ್ಟಮೊದಲ ಭಾರಿ ಯುದ್ಧದ ಬಗ್ಗೆ ಕಿರುತೆರೆ ಸಾಕ್ಷ್ಯಚಿತ್ರವಾಗಿತ್ತು. ಪೆರೊಟಾ ಮತ್ತು ಚಾರ್ಲ್ಸ್ ಕ್ಲೆಮನ್ಸ್ ಈ ಆರಂಭಿಕ ಘಟನೆಯ ಮಹತ್ವದ ಬಗ್ಗೆ ಸಾರ್ವಜನಿಕ ತಿಳಿವಳಿಕೆ ಹೆಚ್ಚಿಸಲು ಉದ್ದೇಶಿಸಿದ್ದರು. ಈಶಾನ್ಯ ಸ್ಥಳೀಯ ಜನರು ಹಾಗೂ ಇಂಗ್ಲಿಷ್ ಮತ್ತು ಡಚ್ ವಸಾಹತುದಾರರ ವಂಶಸ್ಥರಿಗೆ ಮಾತ್ರವಲ್ಲ, ಒಟ್ಟಾರೆ ಇಂದಿನ ಎಲ್ಲ ಅಮೆರಿಕನ್ನರಿಗೂ ಇದು ಅರ್ಥಪೂರ್ಣವಾಗಿದೆ ಎಂದು ನಂಬಿದ್ದರು. ನಿರ್ಮಾಪಕರು ಈ ಸಾಕ್ಷ್ಯಚಿತ್ರವನ್ನು ಐತಿಹಾಸಿಕವಾಗಿ ನಿಖರ ಹಾಗೂ ಆದಷ್ಟು ನಿಷ್ಪಕ್ಷಪಾತವಾಗಿ ನಿರೂಪಿಸಿಸಲು ಬಯಸಿದ್ದರು. ವಿವಿಧ ಕ್ಷೇತ್ರಗಳಿಗೆ ಸಂಬಂಧಿತ ಸಲಹಾ ಮಂಡಳಿಯನ್ನು ಆಮಂತ್ರಿಸಿ, ಕಥೆ ವಿವರಿಸಿ ಹೆಣೆಯುವಲ್ಲಿ ಸಲಹೆ ಪಡೆಯಲು ವಿದ್ವಾಂಸರು, ಸ್ಥಳೀಯ ಅಮೆರಿಕನ್ನರು, ಹಾಗೂ ವಸಾಹತುದಾರರ ವಂಶಸ್ಥರನ್ನು ಕರೆಸಿದರು. ಸಮಕಾಲೀನ ಅಮೆರಿಕನ್ನರಿಂದಲೂ ಸಹ ವೈಯಕ್ತಿಕ ಹಾಗೂ ಆಗಾಗ್ಗೆ ಬಾವೋದ್ರಿಕ್ತ ದೃಷ್ಟಿಕೋನಗಳನ್ನು ಅವು ಹುಟ್ಟಿಸಿದವು. ನಿರ್ಮಾಣವು ವಿವಿಧ ಮೌಲ್ಯ ವ್ಯವಸ್ಥೆಗಳ ನಡುವೆ ಸಂಘರ್ಷವನ್ನು ನಿರೂಪಿಸಿತು. ಇದರಲ್ಲಿ ಪೆಕ್ವಟ್ಗಳು ಮಾತ್ರವಲ್ಲ, ಹಲವು ಸ್ಥಳೀಯ ಅಮೆರಿಕನ್ ಪಂಗಡಗಳು ಸಹ ಒಳಗೊಂಡಿದ್ದವು. ಇವುಗಳಲ್ಲಿ ಬಹಳಷ್ಟು ಪಂಗಡಗಳು ಇಂಗ್ಲಿಷ್ ಜನರೊಂದಿಗೆ ಮೈತ್ರಿ ಬೆಳೆಸಿದ್ದವು. ಇದು ನಿಜ ಮಾಹಿತಿಯನ್ನು ಪ್ರಸ್ತುತಗೊಳಿಸುವುದಲ್ಲದೆ, ಯುದ್ಧ ಮಾಡಿದ ಜನರ ಬಗ್ಗೆ ಜನರು ಇನ್ನಷ್ಟು ತಿಳಿದುಕೊಳ್ಳಲು ಈ ಚಿತ್ರವು ನೆರವಾಗುತ್ತದೆ.
ಆಗ 2009ರಲ್ಲಿ ರಿಕ್ ಬರ್ನ್ಸ್ ರಚಿಸಿದ, ಅಮೆರಿಕನ್ ಎಕ್ಸ್ಪೀರಿಯನ್ಸ್ ಸರಣಿಯ ಭಾಗವಾದ '''ವಿ ಷಲ್ ರಿಮೇನ್'' ' (2009) ಎಂಬ ಕಿರುತೆರೆ ಸಾಕ್ಷ್ಯಚಿತ್ರವು, ಐದು ಕಂತುಗಳ ಸರಣಿಯೊಂದನ್ನು 'ಜಾಗತಿಕ ಅಮೆರಿಕನ್ ದೃಷ್ಟಿಕೋನದಿಂದ' ಪ್ರಸ್ತುತಪಡಿಸಿತು. ಸ್ಥಳೀಯ ಹಾಗೂ ಸ್ಥಳೀಯರಲ್ಲದ ಚಲನಚಿತ್ರಕರ್ತರ ನಡುವಿನ ಅಭೂತಪೂರ್ವ ಸಹಯೋಗವನ್ನು ನಿರೂಪಿಸಿತು. ಜೊತೆಗೆ, ಈ ನಿರ್ಮಾಣದ ಎಲ್ಲಾ ಹಂತಗಳಲ್ಲಿಯೂ ಸ್ಥಳೀಯ ಸಲಹೆಗಾರರು ಮತ್ತು ವಿದ್ವಾಂಸರನ್ನು ಒಳಗೊಂಡಿದೆ.'<ref>{{Cite news | first= | last= | coauthors= | authorlink= | title=About the Project: We Shall Remain | date= | publisher== | url=http://www.pbs.org/wgbh/amex/weshallremain/the_films/about | work= | pages= | accessdate=2009-06-16 | language= | archive-date=2009-06-07 | archive-url=https://web.archive.org/web/20090607044606/http://www.pbs.org/wgbh/amex/weshallremain/the_films/about | url-status=dead }}</ref> ಐದು ಕಂತುಗಳು ಈಶಾನ್ಯ ಪಂಗಡಗಳ ವಿರುದ್ಧ ರಾಜ ಫಿಲಿಪ್ನ ಯುದ್ಧದ ಪರಿಣಾಮ ಪರಿಶೋಧಿಸುತ್ತದೆ, ಟೆಕುಂಸೆಹ್ ಯುದ್ಧದಲ್ಲಿ ಸ್ಥಳೀಯ ಅಮೆರಿಕನ್ ಕೂಟ, ಅತ್ಯಂತ ದುಃಖದಾಯಕ ಸ್ಥಳಾಂತರ (ಟ್ರೇಲ್ ಆಫ್ ಟಿಯರ್ಸ್), ಜೆರೊನಿಮೊನನ್ನು ಬೆನ್ನಟ್ಟಿ ಸೆರೆಹಿಡಿಯುವುದು ಮತ್ತು ಅಪ್ಯಾಷ್ ವಾರ್ಸ್, ಹಾಗೂ ವೂಂಡೆಡ್ ನೀ ಘಟನೆಯಲ್ಲಿ ಅಮೆರಿಕನ್ ಇಂಡಿಯನ್ ಮೂವ್ಮೆಂಟ್ನ ಒಳಗೊಳ್ಳುವಿಕೆ ಹಾಗೂ ತದನಂತರ ಆಧುನಿಕ ಸ್ಥಳೀಯ ಸಂಸ್ಕೃತಿಗಳ ಪುನರುತ್ಥಾನದಲ್ಲಿ ಕೊನೆಗೊಳ್ಳುತ್ತದೆ.
===ಪಾರಿಭಾಷಿಕ ವ್ಯತ್ಯಾಸಗಳು===
{{further|[[Native American name controversy]]}}
====ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸಾಮಾನ್ಯ ಬಳಕೆ====
ಸ್ಥಳೀಯ ಅಮೆರಿಕನ್ನರನ್ನು ಸಾಮಾನ್ಯವಾಗಿ ಇಂಡಿಯನ್ನರು ಅಥವಾ ಅಮೆರಿಕನ್ ಇಂಡಿಯನ್ನರು ಎನ್ನಲಾಗಿದೆ. ಇವರನ್ನು ಬುಡಕಟ್ಟು (ಅಬೊರಿಜಿನಲ್) ಅಮೆರಿಕನ್ನರು, ಅಮೆರಿಂಡಿಯನ್ನರು, ಅಮೆರಿಂಡ್ಸ್, ವರ್ಣೀಯರು,<ref name="clr" /><ref name="osv">{{cite web|title=OSV Documents – Historical Background on People of Color in Rural New England in the Early 19th Century|url=http://www.osv.org/explore_learn/document_viewer.php?DocID=2044|year=2003|accessdate=2009-06-12|publisher==Old Sturbridge Inc|author=Jack Larkin|archive-date=2012-01-11|archive-url=https://web.archive.org/web/20120111153359/http://www.osv.org/explore_learn/document_viewer.php?DocID=2044|url-status=dead}}</ref> ಪ್ರಪ್ರಥಮ ಅಮೆರಿಕನ್ನರು, ಸ್ಥಳೀಯ ಇಂಡಿಯನ್ನರು, ಮೂಲನಿವಾಸಿಗಳು, ಮೂಲ ಅಮೆರಿಕನ್ನರು, ರೆಡ್ ಇಂಡಿಯನ್ನರು, ಕೆಂಪುಚರ್ಮದವರು (ರೆಡ್ಸ್ಕಿನ್ಸ್) ಅಥವಾ ರೆಡ್ ಮೆನ್ ಎನ್ನಲಾಗುತ್ತದೆ.
ನೇಟಿವ್ ಅಮೆರಿಕನ್ ಪದವನ್ನು ಮೂಲತಃ [[ಅಮೆರಿಕ]] ದಲ್ಲಿ ಶಿಕ್ಷಣತಜ್ಞರು ಇಂಡಿಯನ್ ಎಂಬ ಪದಕ್ಕೆ ಆದ್ಯತೆಯಾಗಿ ಪರಿಚಯಿಸಿದರು. ಭಾರತದ ಜನರು ಮತ್ತು [[ಅಮೆರಿಕದ ಮೂಲನಿವಾಸಿ ಜನಗಳ]] ನಡುವೆ ವ್ಯತ್ಯಾಸ ಗುರುತಿಸಲು ಮತ್ತು ಇಂಡಿಯನ್ ಎಂಬ ಪದದೊಂದಿಗೆ ಬಹುಶಃ ಸಂಬಂಧಿಸಿರಬಹುದಾದ ನಕಾರಾತ್ಮಕ ಮನೋದೃಷ್ಟಿಗಳನ್ನು ನಿವಾರಿಸಲು ಆ ಪದವನ್ನು ಪರಿಚಯಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಈ ಹೊಸ ಉಕ್ತಿಯ ಸ್ವೀಕೃತಿಯಿಂದಾಗಿ, '''ಇಂಡಿಯನ್ನರು'' ' ಎಂಬ ಪದವನ್ನು ಹಳತಾದದ್ದು ಅಥವ ಅಪರಾಧ ಎಂದು ಪರಗಣಿಸಿತಕ್ಕದ್ದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ,ಅನೇಕ ವಾಸ್ತವ ಮೂಲವಾಸಿ ಅಮೆರಿಕನ್ನರು ತಮ್ಮನ್ನು ''ಅಮೆರಿಕನ್ ಇಂಡಿಯನ್ನರು'' ಎಂದು ಉಲ್ಲೇಖಿಸುವುದಕ್ಕೆ ಆದ್ಯತೆ ನೀಡತ್ತಾರೆ. ಜೊತೆಗೆ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಹುಟ್ಟಿದ ಯಾರೇ ಆದರೂ, ಅವರು ಆ ದೇಶಕ್ಕೆ ಸ್ಥಳೀಯರಾಗುವರು; ''ಸ್ಥಳೀಯ ಅಮೆರಿಕನ್'' ಎಂಬ ಉಕ್ತಿಯನ್ನು ಮೊದಲು ಉತ್ತೇಜಿಸಿದ ತಜ್ಞರು ಬಹುಶಃ indigenous'' ಎಂಬ(ಮೂಲನಿವಾಸಿಗಳು) ಪದದೊಂದಿಗೆ ''ಸ್ಥಳೀಯ'' ಎಂಬ ಪದವನ್ನು ತಪ್ಪಾಗಿ ಗ್ರಹಿಸಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಜನರು ಹಾಗೂ ಅವರ ವಂಶಸ್ಥರಾಗಿದ್ದು ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಾಗಿದ್ದಲ್ಲಿ, ಅವರನ್ನು ''ಇಂಡಿಯನ್ ಅಮೆರಿಕನ್ನರು'' ಅಥವಾ ''ಏಷ್ಯನ್ ಇಂಡಿಯನ್ನರು'' ಎಂದು ಉಲ್ಲೇಖಿಸಲಾಗುತ್ತದೆ.
[[File:Martha gradolf hochunk.jpg|thumb|left|upright|ಇಂಡಿಯಾನದ ಹೊಚುಂಕ್ ನೆಯ್ಗೆಕಾರ ಮಾರ್ತ ಗ್ರ್ಯಾಡಾಲ್ಫ್.]]
ಆದರೂ, ''ಸ್ಥಳೀಯ ಅಮೆರಿಕನ್'' ಎಂಬ ನವಪದ ಪ್ರಯೋಗದ ಟೀಕೆಯು ವಿಭಿನ್ನ ಮೂಲಗಳಿಂದ ಬರುತ್ತವೆ. ಹಲವು ಅಮೆರಿಕನ್ ಇಂಡಿಯನ್ನರು ''ಸ್ಥಳೀಯ ಅಮೆರಿಕನ್'' ಎಂಬ ಉಕ್ತಿಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಅಮೆರಿಕನ್ ಇಂಡಿಯನ್ ಕಾರ್ಯಕರ್ತ ರಸೆಲ್ ಮೀನ್ಸ್' ''ಸ್ಥಳೀಯ ಅಮೆರಿಕನ್'' ಎಂಬ ಉಕ್ತಿಯನ್ನು ವಿರೋಧಿಸಿದರು.ಸರ್ಕಾರವು ಅಮೆರಿಕನ್ ಇಂಡಿಯನ್ನರೊಂದಿಗೆ ಚರ್ಚಿಸದೆ ಈ ಉಕ್ತಿಯನ್ನು ಹೇರಿತು ಎಂದರು. ಇಂಡಿಯನ್ ಎಂಬ ಪದದ ಬಳಕೆಯು [[ಭಾರತ|ಇಂಡಿಯಾ]] ದ ತಪ್ಪುಗ್ರಹಿಕೆಯಿಂದಾಗಿ ಹುಟ್ಟಿದ್ದಲ್ಲ, ಬದಲಿಗೆ ''En Dio'' (ಅರ್ಥ: ದೇವರಲ್ಲಿ) ಎಂಬ [[ಸ್ಪ್ಯಾನಿಷ್ ಭಾಷೆ|ಸ್ಪ್ಯಾನಿಷ್]] ಉಕ್ತಿಯಿಂದ ಪಡೆಯಲಾಗಿದೆ ಎಂದು ವಾದಿಸಿದ್ದಾರೆ.<ref>ರಸ್ಸೆಲ್ ಮೀನ್ಸ್ನ ಹೇಳಿಕೆ ಹೀಗಿದೆ - "ನಾನೊಬ್ಬ ಅಮೆರಿಕನ್ ಇಂಡಿಯನ್, ಸ್ಥಳೀಯ ಅಮೆರಿಕನ್ ಅಲ್ಲ!" ಇದರಲ್ಲಿ ಲಭ್ಯಯಿಲ್ಲ - http://www.peaknet.net/~aardvark/means.html {{Webarchive|url=https://web.archive.org/web/20090503130744/http://www.peaknet.net/~aardvark/means.html |date=2009-05-03 }} or at http://www.russellmeans.com/russell.html; ದಿನಾಂಕ ಮತ್ತು ಪ್ರಕಾಶಕ (ಟ್ರೀಟಿ ಪ್ರೊಡಕ್ಷನ್ಸ್, 1996) ಹಾಗೂ ಉಲ್ಲೇಖವನ್ನು ಇಲ್ಲಿ [http://www.learnnc.org/lp/editions/nc-american-indians/5526] {{Webarchive|url=https://web.archive.org/web/20120111165927/http://www.learnnc.org/lp/editions/nc-american-indians/5526 |date=2012-01-11 }} ಮತ್ತು ಇಲ್ಲಿ [http://www.pbs.org/wgbh/roadshow/fts/bismarck_200504A16.html] {{Webarchive|url=https://web.archive.org/web/20100425153313/http://www.pbs.org/wgbh/roadshow/fts/bismarck_200504A16.html |date=2010-04-25 }} ನೀಡಲಾಗಿದೆ. ಅವು ಸಾಮಾನ್ಯ ವಿಷಯ ಮತ್ತು ಮೀನ್ಸ್ನ ಕೆಲವು ಕೊಡುಗೆಯನ್ನು ವಿವರಿಸುತ್ತವೆ. ಆದರೆ "ಎನ್ ಡಿಯೊ"ಗೆ ಯಾವುದೇ ಉಲ್ಲೇಖವಿಲ್ಲ ಮತ್ತು ಅದಕ್ಕೆ ಕೇವಲ ಕೆಲಸ-ಮಾಡದ ಕೊಂಡಿಗಳಿವೆ. 2010-06-14ರಂದು ಕೊಂಡಿಯನ್ನು ಕಂಡುಹಿಡಿಯಲಾಯಿತು.</ref> ಇನ್ನೂ ಹೆಚ್ಚಿಗೆ, ಕೆಲವು ಅಮೆರಿಕನ್ ಇಂಡಿಯನ್ನರು {{Who|date=October 2009}} ''ಸ್ಥಳೀಯ ಅಮೆರಿಕನ್ನರು'' ಎಂಬ ಉಕ್ತಿಯನ್ನು ಪ್ರಶ್ನಿಸಿದ್ದಾರೆ. ಏಕೆಂದರೆ, ಹಿಂದೆ ಅಮೆರಿಕನ್ ಇಂಡಿಯನ್ನರ ವಿರುದ್ಧದ ಅನ್ಯಾಯಗಳ ವಿಚಾರವಾಗಿ, ವರ್ತಮಾನದಿಂದ ಇಂಡಿಯನ್ನರು ಎಂಬ ಪದವನ್ನು ಅಳಿಸಿಹಾಕುವ ಮೂಲಕ ಬಿಳಿಯ ಅಮೆರಿಕಾದ ಆತ್ಮಸಾಕ್ಷಿಗೆ ಸಮಾಧಾನ ಉಂಟುಮಾಡುತ್ತದೆ ಎಂಬುದು ಈ ಅಮೆರಿಕನ್ ಇಂಡಿಯನ್ನರ ವಾದ.<ref>{{cite web |url=http://www.allthingscherokee.com/atc_sub_culture_feat_events_070101.html |work=All Things Cherokee |title=What's in a Name? Indians and Political Correctness |accessdate=February 8, 2006 |archive-date=ಫೆಬ್ರವರಿ 28, 2006 |archive-url=https://web.archive.org/web/20060228101053/http://www.allthingscherokee.com/atc_sub_culture_feat_events_070101.html |url-status=dead }}</ref> '''ಸ್ಥಳೀಯ ಅಮೆರಿಕನ್'' ಎಂಬ ಉಕ್ತಿಯು ಬಹಳ ಗೊಂದಲಮಯವಾಗಿದೆ. ಏಕೆಂದರೆ ಸ್ಥಳೀಯ ಎಂದರೆ 'ಅಲ್ಲೇ ಹುಟ್ಟಿದ' ಎಂಬರ್ಥ ನೀಡುತ್ತದೆ, ಹಾಗಾಗಿ, ಅಮೆರಿಕಾ ಖಂಡಗಳಲ್ಲಿ ಹುಟ್ಟಿದ ಯಾರೇ ಆದರೂ, ಸ್ಥಳೀಯರಾಗಿಬಿಡಬಹುದು' ಎಂದು ಇನ್ನೂ ಕೆಲವರು (ಇಂಡಿಯನ್ನರು ಮತ್ತು ಇಂಡಿಯನ್ನೇತರರು {{Who|date=October 2009}}) ವಾದಿಸುತ್ತಾರೆ. ಆದರೂ, ಆಗಾಗ್ಗೆ ಸಂಕೀರ್ಣ ಉಕ್ತಿಯಾದ Native American ಉಕ್ತಿಯಲ್ಲಿ ಮೊದಲ ಅಕ್ಷರಗಳನ್ನು ದೊಡ್ಡ ಅಕ್ಷರಗಳಲ್ಲಿ ನಮೂದಿಸುವ ಮೂಲಕ, ಇತರೆ ಅರ್ಥಗಳಿಂದ ಭಿನ್ನವಾಗಿಸಬಹುದು. ಇದೇ ರೀತಿ, native (ಸಣ್ಣ n ಅಕ್ಷರ) ಎಂದರೆ "native-born" ಸೂತ್ರೀಕರಣದೊಂದಿಗೆ ನಿರೂಪಿಸಬಹುದು. ಅದರ ಉದ್ದೇಶಿತ ಅರ್ಥವು ವ್ಯಕ್ತಿ ಹುಟ್ಟಿದ ಸ್ಥಳ ಅಥವಾ ಮೂಲವನ್ನು ಸೂಚಿಸುವುದಾಗಿದೆ.
ಅದರೆ 1995ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಜನಗಣತಿ ಮಂಡಳಿ ನಡೆಸಿದ ಸಮೀಕ್ಷೆಯ ಪ್ರಕಾರ, ಆ ದೇಶದಲ್ಲಿ ಬಹಳಷ್ಟು ಸ್ಥಳೀಯ ಅಮೆರಿಕನ್ನರು ತಮ್ಮನ್ನು ''ಸ್ಥಳೀಯ ಅಮೆರಿಕನ್ನರು'' ಎಂದು ಉಲ್ಲೇಖಿಸಿಕೊಳ್ಳುವ ಬದಲು ''ಅಮೆರಿಕನ್ ಇಂಡಿಯನ್'' ಎನಿಸಿಕೊಳ್ಳಲು ಇಚ್ಛಿಸುತ್ತಾರೆ.<ref>{{cite web|url=http://www.infoplease.com/ipa/A0762158.html |work=Infoplease|title=Preference for Racial or Ethnic Terminology |accessdate=February 8, 2006}}
</ref> ಅದೇನೇ ಇರಲಿ, ಬಹಳಷ್ಟು ಅಮೆರಿಕನ್ ಇಂಡಿಯನ್ನರು ''ಇಂಡಿಯನ್'', ''ಅಮೆರಿಕನ್ ಇಂಡಿಯನ್'' ಮತ್ತು ''ಸ್ಥಳೀಯ ಅಮೆರಿಕನ್'' ಎಂಬ ಉಕ್ತಿಗಳ ಬಳಕೆ ಬಗ್ಗೆ ನಿರಾಳಮನಸ್ಸಿನವರಾಗಿದ್ದಾರೆ. ಈ ಉಕ್ತಿಗಳನ್ನು ಒಂದರ ಬದಲಿಗೆ ಇನ್ನೊಂದನ್ನು ಸಾಮಾನ್ಯವಾಗಿ ಬಳಸಲಾಗಿದೆ.<ref>{{cite web|url=http://www.infoplease.com/spot/aihmterms.html |work=Infoplease|title=''American Indian'' versus ''Native American'' |accessdate=February 8, 2006}}</ref> ಆಗ 2004ರಲ್ಲಿ [[ವಾಷಿಂಗ್ಟನ್, ಡಿ.ಸಿ.|ವಾಷಿಂಗ್ಟನ್ ಡಿಸಿ]]ಯ ಮಾಲ್ಲ್ಲಿ ತೆರೆದ ರಾಷ್ಟ್ರೀಯ ಅಮೆರಿಕನ್ ಇಂಡಿಯನ್ ವಸ್ತು ಪ್ರದರ್ಶನಾಲಯಕ್ಕ ಆಯ್ಕೆ ಮಾಡಲಾದ ಹೆಸರಿನಲ್ಲಿ ಸಾಂಪ್ರದಾಯಿಕ ಉಕ್ತಿಯು ಬಿಂಬಿತವಾಗಿದೆ.
ಗೊಂದಲ ತಪ್ಪಿಸಲು, ಅಮೆರಿಕಾ ಸಂಯುಕ್ತ ಸಂಸ್ಥಾನ ಜನಗಣತಿ ಮಂಡಳಿಯು ಇತ್ತೀಚೆಗೆ 'ಏಷ್ಯನ್ ಇಂಡಿಯನ್ ಎಂಬ ವರ್ಗವನ್ನು ಹೊಸದಾಗಿ ಪರಿಚಯಿಸಿದೆ.
===ಜೂಜಿನ ಉದ್ಯಮ===
[[File:Sandia Casino, detail.jpg|thumb|ನ್ಯೂಮೆಕ್ಸಿಕೊದ ಸ್ಯಾಂಡಿಯಾ ಪ್ಯುಯೆಬ್ಲೊಗೆ ಸೇರಿದ ಸ್ಯಾಂಡಿಯಾ ಕ್ಯಾಸಿನೊ]]
{{Main|Native American gambling enterprises}}
ಜೂಜಾಟವು ಪ್ರಮುಖ ಕ್ಷೇತ್ರವಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಹಲವು ಸ್ಥಳೀಯ ಅಮೆರಿಕನ್ ಸರ್ಕಾರಗಳು ನಡೆಸುತ್ತಿರುವ ಜೂಜುಮಂದಿರಗಳು(ಕ್ಯಾಸಿನೊ), ಜೂಜಿನಿಂದ ಆದಾಯದ ಹೊಳೆ ಹರಿಸುತ್ತಿದೆ. ಕೆಲವು ಸಮುದಾಯಗಳು ವಿವಿಧ ಆರ್ಥಿಕತೆಗಳ ಬಲವನ್ನು ನಿರ್ಮಿಸಲು ಈ ಮಾರ್ಗ ಅನುಸರಿಸುತ್ತಿವೆ. ಸ್ವಯಮಾಧಿಕಾರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯ ಹಕ್ಕುಗಳ ವಿಚಾರವಾಗಿ, ಸ್ಥಳೀಯ ಅಮೆರಿಕನ್ ಸಮುದಾಯಗಳು ಕಾನೂನು ಮೊಕದ್ದಮೆ ಹೂಡಿ ಜಯಗಳಿಸಿವೆ. ಒಡಂಬಡಿಕೆ ಹಕ್ಕುಗಳು ಎನ್ನಲಾದ ಇಂತಹ ಕೆಲವು ಹಕ್ಕುಗಳನ್ನು, ಅಂದು ಹೊಸದಾಗಿದ್ದ ಅಮೆರಿಕಾ ಸಂಯುಕ್ತ ಸಂಸ್ಥಾನ ಸರ್ಕಾರದೊಂದಿಗೆ ಸಹಿ ಹಾಕಲಾದ ಒಡಂಬಡಿಕೆಗಳಲ್ಲಿ ನಮೂದಿಸಲಾಗಿದೆ. ರಾಷ್ಟ್ರೀಯ ಶಾಸಕಾಂಗ ನೀತಿಗಳಲ್ಲಿ, ಬುಡಕಟ್ಟು ಜನಾಂಗಗಳ ಪರಮಾಧಿಕಾರವು ಅಮೆರಿಕನ್ ನ್ಯಾಯಶಾಸ್ತ್ರದ ಆಧಾರಸ್ಥಂಭಗಳಲ್ಲಿ ಒಂದಾಗಿದೆ. ಹಲವು ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗದವರು ಜೂಜುಮಂದಿರಗಳನ್ನು ಹೊಂದಿದ್ದರೂ, ಸ್ಥಳೀಯ ಅಮೆರಿಕನ್ ಜೂಜಾಟದ ಪ್ರಭಾವದ ಬಗೆಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಜೂಜುಮಂದಿರಗಳು ಮತ್ತು ಅದರ ಆದಾಯಗಳು ಒಳಗಿನ ಸಂಸ್ಕೃತಿಯನ್ನು ಹಾಳು ಮಾಡುತ್ತವೆ ಎಂದು ಕ್ಯಾಲಿಫೋರ್ನಿಯಾದ ರೆಡ್ಡಿಂಗ್ನ ವಿನ್ಮೆಮ್ ವಿಂಟು ಸೇರಿದಂತೆ ಕೆಲವು ಪಂಗಡಗಳು(ಬುಡಕಟ್ಟುಗಳು) ಅಭಿಪ್ರಾಯಪಟ್ಟಿವೆ. ಈ ಪಂಗಡಗಳು ಜೂಜಾಟದ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ನಿರಾಕರಿಸುತ್ತಿವೆ.
==ಸಮಾಜ, ಭಾಷೆ ಮತ್ತು ಸಂಸ್ಕೃತಿ==
===ಜನಾಂಗೀಯ-ಭಾಷಿಕ ವರ್ಗೀಕರಣ===
{{Main|Classification of indigenous peoples of the Americas|Indigenous languages of the Americas|}}
ಏಕೈಕ ಜನಾಂಗೀಯ ಗುಂಪು ಆಗುವ ಬದಲು, ಸ್ಥಳೀಯ ಅಮೆರಿಕನ್ನರನ್ನು ಹಲವು ನೂರು ಜನಾಂಗೀಯ-ಭಾಷಿಕ ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಇವುಗಳಲ್ಲಿ ಹಲವನ್ನು ನಾ-ಡೆನೆ (ಅಥಬಸ್ಕನ್), ಆಲ್ಜಿಕ್ (ಅಲ್ಗಾನ್ಕ್ವಿಯಾನ್ ಸೇರಿದಂತೆ), ಉಟೊ-ಅಝ್ಟೆಕನ್, ಇರೊಕೊಯಿಯನ್, ಸಿಯೊಯನ್-ಕಟಾಬಾನ್, ಯೊಕ್-ಉಟಿಯನ್, ಸಲಿಷನ್ ಮತ್ತು ಯುಮನ್-ಕೊಚಿಮಿ ಗುಂಪುಗಳು, ಜೊತೆಗೆ ಇತರೆ ಹಲವು ಸಣ್ಣ-ಪ್ರಮಾಣದ ಗುಂಪುಗಳು ಮತ್ತು ಹಲವು ಭಾಷಾ-ಪ್ರತ್ಯೇಕತೆಗಳನ್ನಾಗಿ ವಿಂಗಡಿಸಲಾಯಿತು. ಉತ್ತರ ಅಮೆರಿಕಾದಲ್ಲಿ ಭಾಷಾವಾರು ವೈವಿಧ್ಯ ವ್ಯಾಪಕವಾಗಿರುವ ಕಾರಣ, ತಳಿಯ ಸಂಬಂಧಗಳನ್ನು ಪ್ರದರ್ಶಿಸುವುದು ಕಷ್ಟವಾಗಿದೆ.
ಉತ್ತರ ಅಮೆರಿಕಾದ ಮೂಲನಿವಾಸಿ ಜನರನ್ನು ವಿಶಾಲ ಸಾಂಸ್ಕೃತಿಕ ಪ್ರದೇಶಗಳ ಮೇರೆಗೆ ವರ್ಗೀಕರಿಸಲಾಗಿದೆ:
[[File:Early Localization Native Americans USA.jpg|thumb|right|350px|USನಲ್ಲಿದ್ದ ಆರಂಭಿಕ ಇಂಡಿಯನ್ ಭಾಷೆಗಳು]]
*ಅಲಾಸ್ಕಾ ಸ್ಥಳೀಯರು
**ಆರ್ಕ್ಟಿಕ್: ಎಸ್ಕಿಮೊ-ಅಲೂಟ್
**ಉಪ-ಆರ್ಕ್ಟಿಕ್: ಉತ್ತರ ಅಥಬಸ್ಕನ್
*ಅಮೆರಿಕಾ ಸಂಯುಕ್ತ ಸಂಸ್ಥಾನದ ಪಶ್ಚಿಮ ವಲಯ
**ಕ್ಯಾಲಿಫೋರ್ನಿಯನ್ ಪಂಗಡಗಳು (ಉತ್ತರ ವಲಯ): ಯೊಕ್-ಉಟಿಯನ್, ಪ್ರಶಾಂತ ಸಾಗರ ತೀರ ಅಥಬಸ್ಕನ್, ಕೋಸ್ಟ್ ಮಿವೊಕ್, ಯುರೊಕ್, ಪಲೇಹ್ನಿಹನ್, ಚುಮಷನ್, ಉಟೊ-ಅಝ್ಟೆಕನ್
**ಪ್ರಸ್ಥಭೂಮಿ ಪಂಗಡಗಳು: ಒಳನಾಡ ಸಲಿಷ್, ಪ್ರಸ್ಥಭೂಮಿ ಪೆನುಷಿಯನ್
**ಗ್ರೇಟ್ ಬೇಸಿನ್ ಪಂಗಡಗಳು: ಉಟೊ-ಅಝ್ಟೆಕನ್
**ಶಾಂತಸಾಗರದ ವಾಯುವ್ಯ ತೀರ: ಪೆಸಿಫಿಕ್ ಕೋಸ್ಟ್ ಅಥಬಸ್ಕನ್, ಕೋಸ್ಟ್ ಸಲಿಷ್
**ನೈಋತ್ಯ ಪಂಗಡಗಳು: ಯುಟೊ-ಅಝ್ಟೆಕನ್, ಯುಮನ್, ಸದರ್ನ್ ಅಥಬಸ್ಕನ್
*ಅಮೆರಿಕಾ ಸಂಯುಕ್ತ ಸಂಸ್ಥಾನದ ಮಧ್ಯವಲಯ
**ಬಯಲುಸೀಮೆ ಇಂಡಿಯನ್ನರು: ಸಿಯುಯನ್, ಪ್ಲೇನ್ಸ್ ಅಲ್ಗಾನ್ಕ್ವಿಯನ್, ಸದರ್ನ್ ಅಥಬಸ್ಕನ್
*ಅಮೆರಿಕಾ ಸಂಯುಕ್ತ ಸಂಸ್ಥಾನ ಪೂರ್ವ ವಲಯ
**ಈಷಾನ್ಯ ಕಾಡುಪ್ರದೇಶ ಪಂಗಡಗಳು: ಇರೊಕ್ವಿಯನ್, ಸೆಂಟ್ರಲ್ ಅಲ್ಗಾಂಕ್ವಿಯನ್, ಈಸ್ಟರ್ನ್ ಅಲ್ಗಾಂಕ್ವಿಯನ್
**ಅಗ್ನೇಯ ಪಂಗಡಗಳು: ಮುಸ್ಕೊಗಿಯನ್, ಸಿಯುಯನ್, ಕಟಾಬನ್, ಇರೊಕ್ವಿಯನ್
ಸುಮಾರು 1.5 ದಶಲಕ್ಷ ನಹುವಟಿ ಭಾಷಿಕರಿರುವ ಕಾರಣ, ಮೆಕ್ಸಿಕೊ ದೇಶದ ಭಾಷೆಗಳನ್ನು ಪರಿಗಣಿಸಿದರೆ, ಉಳಿದುಕೊಂಡಿರುವ ಭಾಷೆಗಳಲ್ಲಿ, ಅತ್ಯಧಿಕ ಜನರುಯುಟೊ-ಅಝ್ಟೆಕನ್ ಭಾಷೆ ಮಾತನಾಡುವರು (1.95 ದಶಲಕ್ಷ); ಎರಡನೆಯ ಸ್ಥಾನದಲ್ಲಿ 180,200 ಭಾಷಿಕರುಳ್ಳ ನಡೆನೆ (ಇವರಲ್ಲಿ 148,500 ಜನರು ನವಜೊ ಮೂಲದ ಭಾಷಿಕರು). ನ-ಡೆನೆ ಮತ್ತು ಅಲ್ಜಿಕ್ ಅತಿ ಹೆಚ್ಚು ಭೌಗೋಳಿಕವಾಗಿ ಹರಡಿಕೊಂಡಿದೆ: ಅಲ್ಜಿಕ್ ಸದ್ಯಕ್ಕೆ ಈಶಾನ್ಯ ಕೆನಡಾದಿಂದ ಹಿಡಿದು ಇಡೀ ಖಂಡಕ್ಕೂ ಹರಡಿ ಈಶಾನ್ಯ ಮೆಕ್ಸಿಕೊದ ತನಕ ವ್ಯಾಪಿಸಿದೆ. (ಕಿಕಪೂನವರ ಆನಂತರದ ವಲಸೆ ಹಾಗೂ [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯಾ]]ದಲ್ಲಿ ಎರಡು ಕಡೆ (ಯುರೋಕ್ ಮತ್ತು ವಿಯೋಟ್) ಹೊರವಾಸಿಗಳು); ನ-ಡೆನೆ ಭಾಷೆ ಅಲಾಸ್ಕಾದಿಂದ ಹಿಡಿದು ಪಶ್ಚಿಮ [[ಕೆನಡಾ]], ವಾಷಿಂಗ್ಟನ್, [[ಆರೆಗನ್|ಒರೆಗಾನ್]] ಮತ್ತು ಕ್ಯಾಲಿಫೋರ್ನಿಯಾ, ಅಮೆರಿಕಾ ಸಂಯುಕ್ತ ಸಂಸ್ಥಾನದ ನೈಋತ್ಯ ಭಾಗ ಹಾಗೂ ಮೆಕ್ಸಿಕೊ ದೇಶದ ಉತ್ತರ ಭಾಗ (ಬಯಲುಸೀಮೆ ಪ್ರದೇಶದಲ್ಲಿ ಒಂದು ಹೊರವಾಸಿ ಪ್ರದೇಶ) ವರೆಗೂ ವ್ಯಾಪಿಸಿದೆ.
ಗಮನಾರ್ಹ ವೈವಿಧ್ಯವುಳ್ಳ ಇನ್ನೊಂದು ಪ್ರದೇಶವೆಂದರೆ ಅಗ್ನೇಯ ವಲಯ. ಆದರೂ ಯುರೋಪಿಯನ್ನರು ಆಗಮಿಸಿ ಅವರೊಂದಿಗಿನ ಅಂತರಸಂಪರ್ಕವುಂಟಾದ ಕಾರಣ, ಇಂತಹ ಭಾಷೆಗಳಲ್ಲಿ ಹಲವು ಅಳಿದುಹೋದವು. ಇದರ ಪರಿಣಾಮವಾಗಿ, ಇವು ಐತಿಹಾಸಿಕ ದಾಖಲೆಗಳಲ್ಲ.
===ಸಾಂಸ್ಕೃತಿಕ ಅಂಶಗಳು===
[[File:Hopi woman dressing hair of unmarried girl.jpg|thumb|ಹೋಪಿ ಮಹಿಳೆಯೊಬ್ಬಳು 1900ರ ಅವಧಿಯ ಚಿತ್ರದಲ್ಲಿ ಅವಿವಾಹಿತ ಹುಡುಗಿಯ ತಲೆಕೂದಲನ್ನು ಕಟ್ಟುತ್ತಿರುವುದು.]]
[[File:Navajo Sheep.jpg|thumb|200px|right|ಕುರಿಯು ನವಾಜೊ ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲಿ ಒಂದು ಪ್ರಮುಖ ಅಂಶವಾಗಿ ಉಳಿದಿದೆ.]]
ಸಾಂಸ್ಕೃತಿಕ ಲಕ್ಷಣಗಳು, ಭಾಷೆ, ಉಡುಪು ಮತ್ತು ಪದ್ಧತಿಗಳು ಒಂದು ಪಂಗಡದಿಂದ ಇನ್ನೊಂದಕ್ಕೆ ಬಹಳಷ್ಟು ವ್ಯತ್ಯಾಸಗೊಂಡರೂ, ಕೆಲವು ನಿರ್ದಿಷ್ಟ ಅಂಶಗಳು ಹಲವು ಪಂಗಡಗಳಲ್ಲಿ ಸರ್ವೇಸಾಮಾನ್ಯವಾಗಿವೆ.
''''''' '''
ಸುಮಾರು 10,000 ವರ್ಷಗಳ ಹಿಂದೆ, ಆರಂಭಿಕ ಬೇಟೆಗಾರ-ಸಂಗ್ರಹಕಾರರು ಕಲ್ಲಿನಿಂದ ಆಯುಧಗಳನ್ನು ತಯಾರಿಸುತ್ತಿದ್ದರು. [[ಲೋಹಶಾಸ್ತ್ರ|ಲೋಹವಿಜ್ಞಾನ]] ಉಗಮವಾದಾಗ, ಹೊಸ ತಂತ್ರಜ್ಞಾನಗಳನ್ನು ಬಳಸಲಾಯಿತು. ಇನ್ನಷ್ಟು ಒಳ್ಳೆಯ ಕ್ಷಮತೆಯುಳ್ಳ ಶಸ್ತ್ರಗಳನ್ನು ತಯಾರಿಸಲಾಯಿತು. ಯುರೋಪಿಯನ್ನರು ಅಮೆರಿಕಾ ಖಂಡಕ್ಕೆ ಆಗಮಿಸುವ ಮೊದಲು, ಹಲವು ಪಂಗಡಗಳು ಇದೇ ರೀತಿಯ ಆಯುಧಗಳನ್ನು ಬಳಸುತ್ತಿದ್ದರು. ಬಿಲ್ಲು-ಬಾಣ, ಗದೆ ಮತ್ತು ಈಟಿಗಳು ಸಾಮಾನ್ಯ ಬಳಕೆಯ ಆಯುಧಗಳಾಗಿದ್ದವು. ಆದರೆ ಗುಣಮಟ್ಟ, ವಸ್ತು ಮತ್ತು ವಿನ್ಯಾಸಗಳಲ್ಲಿ ವ್ಯಾಪಕ ವಿಭಿನ್ನತೆಗಳಿದ್ದವು. ಸ್ಥಳೀಯ ಅಮೆರಿಕನ್ನರು ಬಳಸುತ್ತಿದ್ದ ಅಗ್ನಿ, [[ಆಹಾರ|ಅಹಾರ]] ಒದಗಿಸುವಿಕೆ ಮತ್ತು ತಯಾರಿಕೆಗೆ ಎರಡಕ್ಕೂ ಬಹಳ ಸಹಾಯಕವಾದವು. ಇದು ಜನಸಂಖ್ಯೆ ಹೆಚ್ಚಿಸಲು ಅಮೆರಿಕಾ ಖಂಡದ ಭೂಚಿತ್ರಣವನ್ನು ಬದಲಾಯಿಸಿತು.
ಕ್ರಿಸ್ತಪೂರ್ವ ಸುಮಾರು 8000ರೊಳಗೆ [[ಮ್ಯಾಮತ್|ಬೃಹದ್ಗಜ]]ಗಳು ಮತ್ತು ಶಂಕುದಂತವುಗಳು ಅಳಿದುಹೋಗಿದ್ದವು. ಸ್ಥಳೀಯ ಅಮೆರಿಕನ್ನರು ಕಾಡುಕೋಣ ಹಾಗೂ ಇತರೆ ದೊಡ್ಡ ಪ್ರಾಣಿಗಳನ್ನು ಬೇಟೆಯಾಡತೊಡಗಿದ್ದರು. ಮಹಾ ಬಯಲುಸೀಮೆ ಪಂಗಡಗಳು ಆಗ ಇನ್ನೂ ಕಾಡುಕೋಣಗಳನ್ನು ಬೇಟೆಯಾಡುತ್ತಿದ್ದಾಗ, ಮೊದಲ ಬಾರಿಗೆ ಯುರೋಪಿಯನ್ನರನ್ನು ಪೈಪೋಟಿಯಲ್ಲಿ ಎದುರುಗೊಂಡರು. 17ನೆಯ ಶತಮಾನದಲ್ಲಿ ಸ್ಪ್ಯಾನಿಷ್ ಜನರು ಕುದುರೆಯನ್ನು ಉತ್ತರ ಅಮೆರಿಕಾದಲ್ಲಿ ಪುನಃ ಪರಿಚಯಿಸಿದ ಫಲವಾಗಿ, ಸ್ಥಳೀಯ ಅಮೆರಿಕನ್ನರು ಕುದುರೆ ಸವಾರಿ ಕಲಿತರು. ಅವರು ದೊಡ್ಡ ಗಾತ್ರದ ಬೇಟೆ ಹಿಡಿಯುವ ವಿಧಾನವೂ ಸೇರಿ, ಸ್ಥಳೀಯ ಪಂಗಡದವರ ಸಂಸ್ಕೃತಿಯನ್ನು ಬಹಳಷ್ಟು ಬದಲಾಯಿಸಿತು. (ಸ್ಪ್ಯಾನಿಷ್ ಜನರು ಆಗಮಿಸುವ ಮುನ್ನ, ಪ್ರಾಗೈತಿಹಾಸಿಕ ಕುದುರೆಗಳ ಸಾಕ್ಷ್ಯಗಳು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಗರದಲ್ಲಿ ಲಾ ಬ್ರಿಯ ಟಾರ್ ಪಿಟ್ಸ್ನಲ್ಲಿ ಲಭಿಸಿದವು.<ref name="KCBS">{{Cite news |title=Cache Of Ice Age Fossils Found Near Tar Pits |url=http://cbs2.com/local/ice.age.fossils.2.937436.html |agency=[[Associated Press]] |publisher==[[KCBS-TV]] |location=[[Los Angeles]] |date=February 18, 2009 |accessdate=February 18, 2009 |archive-date=ಫೆಬ್ರವರಿ 20, 2009 |archive-url=https://web.archive.org/web/20090220060922/http://cbs2.com/local/ice.age.fossils.2.937436.html |url-status=dead }}</ref><ref name="LA TIMES">{{Cite news|author=Thomas H. Maugh II |title=Major cache of fossils unearthed in L.A. |url=http://www.latimes.com/news/local/la-sci-fossils18-2009feb18,0,2746763.story |work=[[Los Angeles Times]] |location=[[Los Angeles]] |date=February 18, 2009 |accessdate=February 18, 2009 }}</ref>) ಜೊತೆಗೆ, ಸ್ಥಳೀಯ ಪಂಗಡದವರ ಜೀವನದಲ್ಲಿ ಕುದುರೆಗಳು ಅದೆಷ್ಟು ಅಮೂಲ್ಯ, ಕೇಂದ್ರೀಯ ಅಂಶವಾಯಿತೆಂದರೆ, ಅವನ್ನು ಸಂಪತ್ತಿನ ಅಳತೆಯೆಂದು ಪರಿಗಣಿಸಲಾಯಿತು.
===ಸಂಘಟನೆ===
[[File:Zuni-girl-with-jar2.png|thumb|upright|1909ರಲ್ಲಿ ತಲೆಯಲ್ಲಿ ಮಣ್ಣಿನ ಹೂಜಿಯನ್ನು ಹೊತ್ತುಕೊಂಡಿರುವ ಜುನಿ ಹುಡುಗಿ]]
====ಬಣದ ರಚನೆ====
ಪಂಗಡಗಳು ರಚನೆಯಾಗುವ ಮುಂಚೆ, ಸ್ಥಳೀಯ ಅಮೆರಿಕನ್ನರ ಸಮಾಜದಲ್ಲಿ ಕುಲಗಳು ಅಥವಾ ಬಣಗಳು ಪ್ರಾಬಲ್ಯ ಮೆರೆದಿದ್ದವು, ಎಂದು ಆರಂಭ ಯುಗೀಯ ಯುರೋಪಿಯನ್ ಅಮೆರಿಕನ್ ಪಂಡಿತರು ವಿವರಿಸಿದ್ದರು. ಕೆಳಕಂಡಂತೆ ಕೆಲವು ಸಾಮಾನ್ಯ ಗುಣಲಕ್ಷಣಗಳಿದ್ದವು:
* ತಮ್ಮ ಪರಮೋಚ್ಚ ನಾಯಕ ಮತ್ತು ಮುಖಂಡರನ್ನು ಚುನಾಯಿಸುವ ಹಕ್ಕು
* ತಮ್ಮ ಪರಮೋಚ್ಚ ನಾಯಕ ಹಾಗೂ ಮುಖಂಡರನ್ನು ಕೆಳಗಿಳಿಸುವ ಅಧಿಕಾರ
* ಅದೇ ಬಣದೊಳಗೆ ವಿವಾಹವಾಗಬಾರದೆಂಬ ಕಟ್ಟುಪಾಡು.
* ನಿಧನರಾದ ಸದಸ್ಯರ ಸ್ವತ್ತಿನ ಉತ್ತರಾಧಿಕಾರ ಪಡೆಯಲು ಪರಸ್ಪರ ಹಕ್ಕುಗಳು.
* ಪರಸ್ಪರ ಸಹಾಯ, ರಕ್ಷಣಾತ್ಮಕ ವಿಧಾನಗಳಲ್ಲಿ ಗಾಯಗಳಾದಲ್ಲಿ ಮತ್ತು ಅವುಗಳ ಸೂಕ್ತ ಪರಿಹಾರಕ್ಕಾಗಿ ಕಟ್ಟುಪಾಡುಗಳು.
* ಪಂಗಡದ ಸದಸ್ಯಸರಿಗೆ ಹೆಸರು ನೀಡುವ ಹಕ್ಕು.
* ಅಪರಿಚಿತರನ್ನು ಬಣದೊಳಗೆ ಸೇರಿಸಿಕೊಳ್ಳುವ ಅಧಿಕಾರ.
* ಒಂದೇ ರೀತಿಯ ಧಾರ್ಮಿಕ ಹಕ್ಕುಗಳು ಮತ್ತು ವಿಚಾರಣೆಗಳು.
* ಶವ ಹೂಳಲು ಸರ್ವೆಸಮಾನ್ಯ ಸಾರ್ವಜನಿಕ ಜಾಗ.
* ಬಣದ ಮಂಡಳಿ.<ref name="Morgan1907">{{Cite book
|last=Morgan
|first=Lewis H.
|authorlink=Lewis H. Morgan
|title=Ancient Society
|publisher==Charles H. Kerr & Company
|year=1907
|location=Chicago
|pages=70–71, 113 }}</ref>
====ಪಂಗಡದ ರಚನೆ====
ಹಲವು ಗುಂಪುಗಳ ನಡುವೆ ಉಪ-ವಿಭಜನೆ ಮತ್ತು ಭಿನ್ನತೆ ಪ್ರಕ್ರಿಯೆ ನಡೆದವು. ಉತ್ತರ ಅಮೆರಿಕಾದಲ್ಲಿ ನಲವತ್ತಕ್ಕೂ ಹೆಚ್ಚು ಮೂಲ ಭಾಷೆಗಳು ಅಭಿವೃದ್ಧಿಯಾದವು. ಪ್ರತಿಯೊಂದು ಸ್ವತಂತ್ರ ಪಂಗಡವೂ ಆ ಭಾಷೆಗಳಲ್ಲಿ ಒಂದರ ಆಡುಭಾಷೆ ಬಳಸುವುದು. ಪಂಗಡಗಳ ಕೆಲವು ಕಾರ್ಯಗಳು ಮತ್ತು ಲಕ್ಷಣಗಳು ಕೆಳಕಂಡಂತಿವೆ:
* ಬಣಗಳ ಸ್ವಾಮ್ಯ.
* ಈ ಬಣಗಳ ಪರಮೋಚ್ಚನಾಯಕ ಮತ್ತು ಮುಖಂಡರನ್ನು ಕೆಳಗಿಳಿಸುವ ಹಕ್ಕು.
* ಧಾರ್ಮಿಕ ಪಂಥ ಮತ್ತು ಪೂಜೆಯ ಅನುಸರಣ.
* ಮುಖ್ಯಸ್ಥರ ಮಂಡಳಿಗಳುಳ್ಳ ಪರಮೋಚ್ಚ ಸರ್ಕಾರ.
* ಕೆಲವು ನಿದರ್ಶನಗಳಲ್ಲಿ ಪಂಗಡದ ಪರಮೋಚ್ಚ ನಾಯಕ.<ref name="Morgan1907" />
===ಸಮಾಜ ಮತ್ತು ಕಲೆ===
{{See|petroglyph|pictogram|petroform|Native American art}}
[[ಮಹಾ ಸರೋವರಗಳು|ಐದು ಮಹಾ ಕೆರೆಗಳು]] ಹಾಗೂ ಆ ಪ್ರದೇಶದ ಪೂರ್ವ ಮತ್ತು ಉತ್ತರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಇರೊಕೊಯಿಸ್ ಪಂಗಡದವರು ''ವಾಂಪಮ್'' ಎಂಬ ದಾರ ಅಥವಾ ಪಟ್ಟಿಗಳನ್ನು ಬಳಸುತ್ತಿದ್ದರು. ಇವುಗಳು ಎರಡು ಉಪಯುಕ್ತತೆಗಳನ್ನು ಹೊಂದಿದ್ದವು: ಗಂಟುಗಳು ಮತ್ತು ಮಣಿಗಳುಳ್ಳ ವಿನ್ಯಾಸಗಳು ಪಂಗಡದ ಕಥೆಗಳು ಮತ್ತು ಪುರಾಣ ಕಥೆಗಳ ಸ್ಮೃತಿವರ್ಧಕ ವೃತ್ತಾಂತಗಳಿಂದ ಕೂಡಿದ್ದು, ವಿನಿಮಯದ ಮಾಧ್ಯಮ ಹಾಗೂ ಅಳತೆಯ ಪರಿಮಾಣವನ್ನಾಗಿಯೂ ಬಳಸಲಾಗುತ್ತಿತ್ತು. ಈ ವಸ್ತುಗಳ ಪಾಲಕರನ್ನು ಪಂಗಡದ ಗಣ್ಯರೆಂದು ಪರಿಗಣಿಸಲಾಗುತ್ತಿತ್ತು.<ref>[http://www.tolatsga.org/iro.html ಇರೋಕ್ಯೋಯಿಸ್ ಹಿಸ್ಟರಿ] {{Webarchive|url=https://web.archive.org/web/20110218151003/http://www.tolatsga.org/iro.html |date=2011-02-18 }}. 2006ರ ಫೆಬ್ರವರಿ 23ರಂದು ಮರುಸಂಪಾದಿಸಲಾಯಿತು.</ref>
ಪುಯೆಬ್ಲೊ ಜನರು ತಮ್ಮ ಧಾರ್ಮಿಕ ಸಮಾರಂಭಗಳಿಗೆ ಸಂಬಂಧಿತ ಆಕರ್ಷಕ ವಸ್ತುಗಳ ಕಲಾಕೃತಿ ರಚಿಸಿದರು. ''ಕಚಿನಾ'' ನೃತ್ಯಕಲಾವಿದರು ಬಹಳ ವಿಸ್ತಾರವಾಗಿ ಬಣ್ಣ ಬಳಿಯಲಾದ ಮತ್ತು ಅಲಂಕರಿಸಲಾದ ಮುಖವಾಡಗಳನ್ನು ಧರಿಸಿ, ಶಾಸ್ತ್ರೋಕ್ತವಾಗಿ ವಿವಿಧ ಪೂರ್ವಜ ಆತ್ಮಗಳನ್ನು ಅನುಕರಿಸಿ ನರ್ತಿಸುತ್ತಿದ್ದರು. ಶಿಲ್ಪಕಲಾಕೃತಿ ಕ್ಷೇತ್ರವು ಅಷ್ಟೇನೂ ಅಭಿವೃದ್ಧಿ ಹೊಂದಿರಲಿಲ್ಲ. ಆದರೂ, ಕೆತ್ತನೆ ಮಾಡಲಾದ ಕಲ್ಲು ಮತ್ತು ಮರದ ವಸ್ತುಗಳನ್ನು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಉತ್ತಮ ಗುಣಮಟ್ಟದ ನೇಯ್ಗೆ, ಕಸೂತಿ-ವಿನ್ಯಾಸಗಳು ಮತ್ತು ಸಮೃದ್ಧ ವರ್ಣಗಳು ಜವಳಿ ಕಲೆಗಳ ಪ್ರಮುಖಾಂಶಗಳಾಗಿದ್ದವು. ಟರ್ಕೋಯಿಸ್(ನೀಲಿ ಖನಿಜ) ಮತ್ತು ಚಿಪ್ಪಿನ ಆಭರಣಗಳು ಹಾಗೂ ಅತ್ಯುತ್ತಮ ಗುಣಮಟ್ಟದ ಕುಂಬಾರಿಕೆ ಮತ್ತು ರೂಪಪ್ರಾಧಾನ್ಯಗೊಳಿಸಲಾದ ಚಿತ್ರ ಕಲೆಗಳನ್ನು ರಚಿಸಲಾಯಿತು.
ನವಜೊ ಆಧ್ಯಾತ್ಮಿಕತೆಯು ಆಧ್ಯಾತ್ಮಿಕ ಲೋಕದೊಂದಿಗೆ ಸಂಯಮದ ಸಂಬಂಧ ಕಾಯ್ದುಕೊಳ್ಳುವತ್ತ ಗಮನ ಕೇಂದ್ರೀಕರಿಸಿತು. ಇದನ್ನು ಸಾಮಾನ್ಯವಾಗಿ, ರಂಗೋಲಿ ಕಲಾಕೃತಿ ಸೇರಿದಂತೆ ಸಮಾರಂಭದ ವಿಧಾನಗಳ ಮೂಲಕ ನಡೆಸಲಾಗುತ್ತಿತ್ತು. ಮರಳು, ಇದ್ದಿಲು, ಜೋಳದ ಹಿಟ್ಟು ಮತ್ತು ಪರಾಗದಿಂದ ತಯಾರಿಸಲಾದ ಬಣ್ಣಗಳು ವಿಶಿಷ್ಟ ಉತ್ಸಾಹಗಳನ್ನು ನಿರೂಪಿಸುತ್ತಿದ್ದವು. ಈ ಪ್ರಮುಖ, ಉಜ್ವಲ, ಗಹನ ಮತ್ತು ವಿವಿಧ-ಬಣ್ಣಗಳುಳ್ಳ ಮರಳು ಕಲಾಕೃತಿಗಳನ್ನು ಸಮಾರಂಭದ ಅಂತ್ಯದಲ್ಲಿ ಅಳಿಸಲಾಗುತ್ತಿತ್ತು.
===ಕೃಷಿ===
{{See|Native American cuisine}}
[[File:Zea mays.jpg|thumb|right|upright|ಸ್ಥಳೀಯ ಅಮೆರಿಕನ್ನರು ಬೆಳೆದ ಮೆಕ್ಕೆಜೋಳ]]
[[File:1940 govt photo minnesota farming scene chippewa baby teething on magazine indians at work.jpg|thumb|left|upright|ಹೆತ್ತವರು ಬತ್ತದ ಬೆಳೆಗಳನ್ನು ನೋಡಿಕೊಳ್ಳುವಾಗ ಚಿಪ್ಪೇವ ಮಗು ಕ್ರ್ಯಾಡಲ್ಬೋರ್ಡ್ನಲ್ಲಿ ಕಾಯುತ್ತಿರುವುದು (ಮಿನ್ನೆಸೊಟ,1940).]]
ಕುಂಬಳಕಾಯಿ ಜಾತಿಯ, ಸೌತೆಕಾಯಿಯನ್ನು ಹೋಲುವ ತರಕಾರಿಯು ಸ್ಥಳೀಯ ಅಮೆರಿಕನ್ನರು ಆರಂಭಕಾಲದಲ್ಲಿ ಬೆಳೆಸುತ್ತಿದ್ದರು. ಆರಂಭಿಕ ಕಾಲದ ಇತರೆ ಫಸಲುಗಳಲ್ಲಿ [[ಹತ್ತಿ]], ಸೂರ್ಯಕಾಂತಿ, ಕುಂಬಳಕಾಯಿ, ತಂಬಾಕು, ಹುಳಿ-ಓಮ, ಹೊಸೆಜೊಂಡು ಮತ್ತು ಸಂಪ್ ವೀಡ್ ಸೇರಿದ್ದವು.
ವ್ಯಾಪಾರಿಗಳು ಮೆಕ್ಸಿಕೊದಿಂದ ಕಲ್ಟಿಜನ್ಗಳನ್ನು ತರುವುದರೊಂದಿಗೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ನೈಋತ್ಯ ವಲಯದಲ್ಲಿ ಕೃಷಿ ಚಟುವಟಿಕೆಗಳು ಸುಮಾರು 4,000 ವರ್ಷಗಳ ಹಿಂದೆ ಆರಂಭವಾಯಿತು. ಬಹಳಷ್ಟು ಬದಲಾಗುವ ಹವಾಮಾನದ ಕಾರಣ, ಕೃಷಿ ಸಫಲವಾಗಲು ಸ್ವಲ್ಪ ಮಟ್ಟದ ಮುಕ್ತ ಮನಸ್ಸಿನ ಅಗತ್ಯವಿತ್ತು. ಅಮೆರಿಕಾ ಸಂಯುಕ್ತ ಸಂಸ್ಥಾನದ ನೈಋತ್ಯ ವಲಯದಲ್ಲಿನ ಹವಾಮಾನವು ತಣ್ಣನೆಯ, ತೇವವುಳ್ಳ ಗುಡ್ಡಗಾಡು ಪ್ರದೇಶಗಳಿಂದ ಹಿಡಿದು, ಒಣ, ಮರಳು-ಮರಳಾದ ಮಣ್ಣಿನ ಮರುಭೂಮಿಯ ಹವಾಮಾನದವರೆಗೂ ಇತ್ತು. ಒಣ ಪ್ರದೇಶಗಳಿಗೆ ನೀರು ಒಯ್ಯಲು ನೀರಾವರಿ ಹಾಗೂ ಬೀಜ ಬೀರುವ ಬೆಳೆಯುವ ಗಿಡಗಳ ಲಕ್ಷಣಗಳ ಆಧರಿಸಿ ಬೀಜಗಳ ಆಯ್ಕೆಯು, ಆ ಕಾಲದ ನಾವೀನ್ಯವುಳ್ಳ ವಿಧಾನಗಳಾಗಿದ್ದವು. ನೈಋತ್ಯ ವಲಯದಲ್ಲಿ, ಸ್ವಾವಲಂಬಿ ಕಾಳುಗಳನ್ನು ಇಂದು ಬೆಳೆಸುವ ರೀತಿಯಲ್ಲೇ ಬೆಳೆಸುತ್ತಿದ್ದರು.
ಆದರೆ, ಪೂರ್ವದಲ್ಲಿ, ಅವುಗಳನ್ನು ಜೋಳದ ಪಕ್ಕದಲ್ಲಿಯೇ ಅವುಗಳನ್ನೂ ಬೆಳೆಸಲಾಗುತ್ತಿತ್ತು. ಇದರಿಂದ, ಬಳ್ಳಿಗಳು ಜೋಳ ಫಸಲಿನ ಕಾಂಡವನ್ನು ಸುತ್ತಿಕೊಂಡು ಬೆಳೆಯಬಹುದು. ಸ್ಥಳೀಯ ಅಮೆರಿಕನ್ನರು ಬೆಳೆಸಿದ ಅತಿಮುಖ್ಯ ಫಸಲೆಂದರೆ [[ಮೆಕ್ಕೆ ಜೋಳ|ಮೆಕ್ಕೆ-ಜೋಳ]]. ಇದರ ಕೃಷಿಯನ್ನು ಮೊದಲಿಗೆ ಮಧ್ಯಯುಗೀಯ ಅಮೆರಿಕಾದಲ್ಲಿ ಆರಂಭಿಸಿ ನಂತರ ಉತ್ತರ ದಿಕ್ಕಿನತ್ತ ಹರಡಿಸಲಾಯಿತು. ಇದು ಸುಮಾರು 2,000 ವರ್ಷಗಳ ಹಿಂದೆ ಪೂರ್ವ ಅಮೆರಿಕಾ ವಲಯ ತಲುಪಿತು. ದೈನಿಕ ಆಹಾರದ ಬಹುಮುಖ್ಯ ಅಂಗವಾಗಿದ್ದ ಕಾರಣ, ಮೆಕ್ಕೆ-ಜೋಳವು ಸ್ಥಳೀಯ ಅಮೆರಿಕನ್ನರಿಗೆ ಬಹಳ ಮುಖ್ಯ ಫಸಲಾಗಿತ್ತು. ಚಳಿಗಾಲದ ಹವಾಮಾನದಲ್ಲಿ ಈ ಫಸಲನ್ನು ಭೂಮಿಯಡಿಯ ಗುಂಡಿಗಳಲ್ಲಿ ಶೇಖರಿಸಿಡಬಹುದಾಗಿತ್ತು. ಸ್ವಲ್ಪವನ್ನೂ ಪೋಲು ಮಾಡುತ್ತಿರಲಿಲ್ಲ. ಇದರ ಹೊಟ್ಟನ್ನು ಕಲಾಕೃತಿಗಳನ್ನಾಗಿ ಮಾಡಲಾಗುತ್ತಿತ್ತು. ಇದರ ದಿಂಡನ್ನು ಉರಿಸಿ ಇಂಧನವನ್ನಾಗಿ ಬಳಸಲಾಗುತ್ತಿತ್ತು. ಕ್ರಿಸ್ತಶಕ 800ರಷ್ಟರೊಳಗೆ, ಸ್ಥಳೀಯ ಅಮೆರಿಕನ್ನರು ಮೂರು ಪ್ರಮುಖ ಫಸಲುಗಳಾದ ಕಾಳು, ಕುಂಬಳಕಾಯಿ ಜಾತಿಯ ಸೌತೆಕಾಯಿಯಂತಹ ತರಕಾರಿ ಮತ್ತು ಜೋಳವನ್ನು ಫಸಲಾಗಿ ಬೆಳೆಸುತ್ತಿದ್ದರು. ಇದನ್ನು ಮೂರು ಸಹೋದರಿಯರು ಎನ್ನಲಾಗುತ್ತಿತ್ತು.
ಕೃಷಿ ಕ್ಷೇತ್ರದಲ್ಲಿ ಸ್ಥಳೀಯ ಅಮೆರಿಕನ್ ಪುರುಷರು ಮತ್ತು ಸ್ತ್ರೀಯರ ಪಾತ್ರಗಳು ವಲಯದಿಂದ ವಲಯಕ್ಕೆ ಬದಲಾಗುತ್ತಿತ್ತು. ನೈಋತ್ಯ ವಲಯದಲ್ಲಿ ಪುರುಷರು ಸಲಿಕೆ ಬಳಸಿ ಮಣ್ಣನ್ನು ಸಿದ್ಧಗೊಳಿಸುತ್ತಿದ್ದರು. ಮಹಿಳೆಯರು ಫಸಲು ನೆಡುವುದು, ಕಳೆ ಕಿತ್ತುವುದು ಹಾಗೂ ಫಸಲುಗಳನ್ನು ಕೊಯ್ಲು ಮಾಡುವ ಕೆಲಸ ಮಾಡುತ್ತಿದ್ದರು. ಹಲವು ಇತರೆ ಪ್ರದೇಶಗಳಲ್ಲಿ, ಮಹಿಳೆಯರು ತಮ್ಮ ಹೊಲಗಳನ್ನು ಸ್ವಚ್ಛಗೊಳಿಸುವ ಕೆಲಸ ಸೇರಿದಂತೆ ಎಲ್ಲಾ ರೀತಿಯ ಕಾರ್ಯಗಳನ್ನೂ ನಿರ್ವಹಿಸುತ್ತಿದ್ದರು. ಹೊಲಗದ್ದೆಗಳನ್ನು ಸ್ವಚ್ಘಗೊಳಿಸುವುದು ಬಹಳ ದೊಡ್ಡ ಕೆಲಸವಾಗಿತ್ತು, ಏಕೆಂದರೆ ಸ್ಥಳೀಯ ಅಮೆರಿಕನ್ನರು ಆಗಾಗ್ಗೆ ಗದ್ದೆಗಳನ್ನು ಬದಲಾಯಿಸುತ್ತಿದ್ದರು. ರಸಗೊಬ್ಬರದಂತಹ ಪಾತ್ರ ವಹಿಸಲು ಗದ್ದೆಗಳಲ್ಲಿ ಮೀನುಗಳನ್ನು ಹಾಕುವುದು ಹೇಗೆ ಎಂಬುದನ್ನು ನ್ಯೂಇಂಗ್ಲೆಂಡ್ನಲ್ಲಿ ಸ್ಕ್ವಾಂಟೊ ತೀರ್ಥಯಾತ್ರಿಗಳಿಗೆ ತೋರಿಸಿಕೊಟ್ಟನೆಂಬ ಸಾಂಪ್ರದಾಯಿಕ ಕಥೆಯಿದೆ. ಆದರೆ ಈ ಕಥೆಯ ಸತ್ಯಾಧಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸ್ಥಳೀಯ ಅಮೆರಿಕನ್ನರು ಜೋಳದ ಪಕ್ಕ ಕಾಳು ಫಸಲು ನೆಟ್ಟಿದ್ದರು. ಆದರೆ, ಜೋಳವು ಭೂಮಿಯಿಂದ ತೆಗೆದುಕೊಳ್ಳುವ [[ಸಾರಜನಕ]]ವನ್ನು ಬದಲಾಯಿಸುತ್ತಿತ್ತು, ಅಲ್ಲದೆ, ಹತ್ತಲು ಜೋಳದ ಕಾಂಡಗಳನ್ನು ಆಸರೆಗಾಗಿ ಬಳಸುತ್ತಿತ್ತು. ಸ್ಥಳೀಯ ಅಮೆರಿಕನ್ನರು ಕಳೆಗಳನ್ನು ಸುಡಲು ಮತ್ತು ಗದ್ದೆಗಳನ್ನು ಸ್ವಚ್ಛಗೊಳಿಸಲು ನಿಯಂತ್ರಿತ ರೀತಿಯಲ್ಲಿ ಸುಡುತ್ತಿದ್ದರು. ಇದರ ಮೂಲಕ ಪೌಷ್ಟಿಕಾಂಶವನ್ನು ಪುನಃ ಭೂಮಿಯೊಳಗೆ ಮರಳಿಸಿದಂತಾಯಿತು. ಈ ಕ್ರಮ-ವಿಧಾನಗಳು ವಿಫಲವಾದಲ್ಲಿ, ಅವರು ಈ ಗದ್ದೆಯನ್ನು ಹಾಗೆಯೇ ಸುಮ್ಮನೆ ತೊರೆದು, ಉಳುಮೆ ಮಾಡಲು ಬೇರೆ ಗದ್ದೆಯನ್ನು ಹುಡುಕುತ್ತಿದ್ದರು.
ಖಂಡದ ಪೂರ್ವ ಭಾಗದಲ್ಲಿ, ಹೊಲಗದ್ದೆಗಳನ್ನಾಗಿ ಮಾಡಿ ಫಸಲು ಬೆಳೆಸಲು, ಸ್ಥಳೀಯರು ವಿಸ್ತಾರ ಭೂಪ್ರದೇಶಗಳನ್ನು ತೆರವುಗೊಳಿಸುತ್ತಿದ್ದನ್ನು ಯುರೋಪಿಯನ್ನರು ಗಮನಿಸಿದರು. ನ್ಯೂಇಂಗ್ಲೆಂಡ್ನಲ್ಲಿ ತಮ್ಮ ಹೊಲಗದ್ದೆಗಳು ಕೆಲವೊಮ್ಮೆ ನೂರಾರು ಎಕರೆಗಳಷ್ಟು ವ್ಯಾಪಿಸಿದ್ದವು. ಸ್ಥಳೀಯ ಅಮರಿಕನ್ನರು ಸಾವಿರಾರು ಎಕರೆಗಳಲ್ಲಿ ಉಳುಮೆ ಮಾಡುತ್ತಿರುವುದನ್ನು ವರ್ಜಿನಿಯಾದ ವಸಾಹತುದಾರರು ಗಮನಿಸಿದರು.<ref name="Krech">{{Cite book|last=Krech III|first=Shepard|title=The ecological Indian: myth and history|publisher==W. W. Norton & Company, Inc.|location=New York, New York|year=1999|edition=1|page=107|isbn=0-393-04755-5}}</ref>
ಸ್ಥಳೀಯ ಅಮೆರಿಕನ್ನರು ಸಾಮಾನ್ಯವಾಗಿ ಸಲಿಕೆ, ಸುತ್ತಿಗೆ ಮತ್ತು ಸೈಂಗೋಲು ಸಲಕರಣೆ ಬಳಸಿ ಕೃಷಿ ಕೆಲಸ ಮಾಡುತ್ತಿದ್ದರು. ಭೂಮಿಯನ್ನು ಉಳುಮೆ ಮಾಡಿ, ಬೀಜ ಬಿತ್ತಲು, ಸಲಿಕೆ ಪ್ರಮುಖ ಸಲಕರಣೆಯಾಗಿತ್ತು. ನಂತರ ಕಳೆ ಕಿತ್ತಲು ಸಹ ಬಳಸಲಾಗುತ್ತಿತ್ತು. ಸಲಿಕೆಯ ಆರಂಭಿಕ ಆವೃತ್ತಿಗಳು ಮರ ಅಥವಾ ಕಲ್ಲಿನದಾಗಿದ್ದವು. ವಸಾಹತುದಾರರು ಕಬ್ಬಿಣ ತಂದಾಗ, ಸ್ಥಳೀಯ ಅಮೆರಿಕನ್ನರು ಕಬ್ಬಿಣದ ಸಲಿಕೆ ಮತ್ತು ಮಚ್ಚು ಬಳಸಲಾರಂಭಿಸಿದರು. ಬೀಜ ನೆಡಲೆಂದು ಭೂಮಿ ಅಗೆಯಲು ಸೈಂಗೋಲು ಬಳಸಲಾಗುತ್ತಿತ್ತು. ಫಸಲುಗಳನ್ನು ಕೊಯ್ಲು ಮಾಡಿದಾಗ, ಮಹಿಳೆಯರು ಖಾದ್ಯ ಪದಾರ್ಥವಾಗಿಸಲು ಇದರ ಉತ್ಪನ್ನವನ್ನು ಸಿದ್ಧಗೊಳಿಸುತ್ತಿದ್ದರು. ಜೋಳವನ್ನು ಪುಡಿ ಮಾಡಲು ಸುತ್ತಿಗೆ ಬಳಸುತ್ತಿದ್ದರು. ಅದನ್ನು ಬೇಯಿಸಿ ಆ ರೀತಿಯಲ್ಲಿ ತಿನ್ನುತ್ತಿದ್ದರು, ಅಥವಾ ಜೋಳದ ಬ್ರೆಡ್ ರೂಪದಲ್ಲಿ ಸುಟ್ಟು ತಿನ್ನುತ್ತಿದ್ದರು.<ref>{{cite web|url=http://www.answers.com/topic/agriculture-american-indians? |work=Answers.com|title=American Indian Agriculture |accessdate=February 8, 2008}}</ref>
===ಧಾರ್ಮಿಕತೆ===
{{See|Native American religion}}
[[File:Baptism of Pocahontas.jpg|320px|thumb|right|ಬ್ಯಾಪ್ಟಿಸಮ್ ಆಫ್ ಪೊಕಾಹೊಂಟಾಸ್ಅನ್ನು 1840ರಲ್ಲಿ ಚಿತ್ರಿಸಲಾಯಿತು.ಇದರಲ್ಲಿ ಜಾನ್ ಗ್ಯಾಡ್ಸ್ಬಿ ಚ್ಯಾಪ್ಮ್ಯಾನ್ ವರ್ಜಿನಿಯಾದ ಜೇಮ್ಟೌನ್ನಲ್ಲಿ ಆಂಗ್ಲಿಕನ್ ಮಂತ್ರಿ ಅಲೆಕ್ಸಾಂಡರ್ ವೈಟೀಕರ್ನಿಂದ ರೆಬೆಕ್ಕಾ ದೀಕ್ಷಾಸ್ನಾನ ಮಾಡಿಸಲ್ಪಡುತ್ತಿರುವ, ಬಿಳಿಬಟ್ಟೆಯನ್ನು ಧರಿಸಿದ ಪೊಕಾಹೊಂಟಾಸ್ರನ್ನು ಚಿತ್ರಿಸಿದ್ದಾರೆ; ಈ ಘಟನೆಯು 1613 ಅಥವಾ 1614ರಲ್ಲಿ ನಡೆದಿರಬಹುದೆಂದು ನಂಬಲಾಗುತ್ತದೆ.]]
ಸ್ಥಳೀಯ ಅಮೆರಿಕನ್ನರ ಸಾಂಪ್ರದಾಯಿಕ ಧಾರ್ಮಿಕ ಕ್ರಿಯೆಗಳನ್ನು ಈಗಲೂ ಅನೇಕ ಬುಡಕಟ್ಟು ಜನಾಂಗಗಳು ಮತ್ತು ಗುಂಪುಗಳು ಆಚರಿಸುತ್ತವೆ. ಅನೇಕ "ಸಾಂಪ್ರದಾಯಿಕ" ಜನರು ಈಗಲೂ ಹಳೆಯ ದೇವತಾಶಾಸ್ತ್ರಕ್ಕೆ ಸಂಬಂಧಿಸಿದ ಧರ್ಮಶ್ರದ್ಧೆ ವ್ಯವಸ್ಥೆಗಳನ್ನು ಹೊಂದಿದ್ದಾರೆ.{{Specify|date=July 2009}} ಈ ಆಧ್ಯಾತ್ಮಿಕತೆಗಳು ಇನ್ನೊಂದು ಧರ್ಮಕ್ಕೆ ನಿಷ್ಠೆಯಿಂದ ಕೂಡಿರಬಹುದು ಅಥವಾ ವ್ಯಕ್ತಿಯ ಮುಖ್ಯ ಧಾರ್ಮಿಕ ಗುರುತನ್ನು ಪ್ರತಿನಿಧಿಸಬಹುದು. ಹೆಚ್ಚು ಸ್ಥಳೀಯ ಅಮೆರಿಕದ ಆಧ್ಯಾತ್ಮಿಕತೆಯು ಬುಡಕಟ್ಟು ಸಂಸ್ಕೃತಿಯ ನಿರಂತತೆಯಲ್ಲಿ ಅಸ್ತಿತ್ವದಲ್ಲಿದ್ದು, ಬುಡಕಟ್ಟು ಗುರುತಿನಿಂದ ಸುಲಭವಾಗಿ ಪ್ರತ್ಯೇಕಿಸಲು ಸಾಧ್ಯವಿಲ್ಲ. "ಸಾಂಪ್ರದಾಯಿಕ" ಸ್ಥಳೀಯ ಅಮೆರಿಕದ ವೃತ್ತಿಗಾರರಲ್ಲಿ ಕೆಲವು ಸ್ಫುಟ ಬೆಳವಣಿಗೆಗಳು ಉದ್ಭವಿಸಿದವು. ಇವುಗಳನ್ನು ಪ್ರಾಯೋಗಿಕ ಪ್ರಜ್ಞೆಯಲ್ಲಿ ಧರ್ಮಗಳು ಎಂದು ಗುರುತಿಸಲಾಗಿದೆ. ಕೆಲವು ಬುಡಕಟ್ಟುಗಳ ಸಾಂಪ್ರದಾಯಿಕ ಪದ್ಧತಿಗಳಲ್ಲಿ ಪವಿತ್ರ ಗಿಡಮೂಲಿಕೆಗಳಾದ ತಂಬಾಕು, ಸ್ವೀಟ್ಗ್ರಾಸ್ ಅಥವಾ ಸುಗಂಧಮೂಲಿಕೆ ಬಳಕೆ ಒಳಗೊಂಡಿವೆ. ಅನೇಕ ಸಮತಟ್ಟು ಪ್ರದೇಶದ ಬುಡಕಟ್ಟು ಜನರು ಸ್ವೇದಗೃಹ ಧಾರ್ಮಿಕ ಕ್ರಿಯೆಗಳನ್ನು ಹೊಂದಿದ್ದರು. ಆದರೂ ಬುಡಕಟ್ಟು ಜನರ ನಡುವೆ ಧಾರ್ಮಿಕ ಕ್ರಿಯೆಯ ಲಕ್ಷಣಗಳು ವ್ಯತ್ಯಾಸ ಹೊಂದಿರುತ್ತದೆ. ಉಪವಾಸ ಮಾಡುವುದು, ಅವರ ಜನರ ಪ್ರಾಚೀನ ಬಾಷೆಗಳಲ್ಲಿ ಹಾಡುವುದು ಮತ್ತು ಪ್ರಾರ್ಥನೆ ಮತ್ತು ಕೆಲವುಬಾರಿ ಡ್ರಮ್ಮಿಂಗ್(ಡ್ರಮ್ ಬಾರಿಸುವುದು) ಕೂಡ ಸಾಮಾನ್ಯವಾಗಿದೆ.
ಮಿಡ್ವಿವಿನ್ ಲಾಜ್ ಸಾಂಪ್ರದಾಯಿಕ ಔಷಧಿ ಸಮಾಜವಾಗಿದ್ದು, ಓಜಿಬ್ವಾ(ಚಿಪ್ಪೇವಾ)ಮತ್ತು ಸಂಬಂಧಿತ ಬುಡಕಟ್ಟುಗಳ ಮೌಖಿಕ ಸಂಪ್ರದಾಯಗಳು ಮತ್ತು ಭವಿಷ್ಯನುಡಿಗಳಿಂದ ಪ್ರೇರೇಪಣೆ ಹೊಂದಿವೆ.
ಸ್ಥಳೀಯ ಜನರ ನಡುವೆ ಇನ್ನೊಂದು ಗಮನಾರ್ಹ ಧಾರ್ಮಿಕ ಸಂಸ್ಥೆಯು ಸ್ಥಳೀಯ ಅಮೆರಿಕದ ಚರ್ಚ್ ಎಂದು ಹೆಸರಾಗಿದೆ. ಇದೊಂದು ಸಮನ್ವಯವಾದಿ ಚರ್ಚ್ ಆಗಿದ್ದು, ವಿವಿಧ ಬುಡಕಟ್ಟುಗಳಿಂದ ಸ್ಥಳೀಯ ಧಾರ್ಮಿಕ ಆಚರಣೆಯ ಅಂಶಗಳನ್ನು ಮತ್ತು [[ಕ್ರೈಸ್ತ ಧರ್ಮ|ಕ್ರೈಸ್ತಧರ್ಮ]]ದಿಂದ ಸಾಂಕೇತಿಕ ಅಂಶಗಳನ್ನು ಒಳಗೊಂಡಿದೆ. ಅದರ ಮುಖ್ಯ ಮತಾಚರಣೆಯು ಪಿಯೋಟೆ ಧಾರ್ಮಿಕ ಕ್ರಿಯೆಯಾಗಿದೆ. 1890ಕ್ಕೆ ಮುಂಚೆ, ಸಾಂಪ್ರದಾಯಿಕ ಧಾರ್ಮಿಕ ನಂಬಿಕೆಗಳಲ್ಲಿ ವಾಕನ್ ಟಾಂಕಾ ಸೇರಿವೆ. ಅಮೆರಿಕಾದ ನೈರುತ್ಯ ಭಾಗದಲ್ಲಿ ವಿಶೇಷವಾಗಿ ನ್ಯೂಮೆಕ್ಸಿಕೊದಲ್ಲಿ, ಸ್ಪೇನಿನ ಧರ್ಮಪ್ರಚಾರಕರು ತಂದಿರುವ ಕ್ಯಾಥೋಲಿಕ ಚರ್ಚ್ನ ಸಿದ್ಧಾಂತ ಮತ್ತು ಸ್ಥಳೀಯ ಧರ್ಮದ ನಡುವೆ ಸಮನ್ವಯತೆ ಸಾಮಾನ್ಯವಾಗಿದೆ. ಪ್ಯುಬ್ಲೊ ಜನರ ಧಾರ್ಮಿಕ ಡ್ರಮ್ಗಳು,ಗಾಯನಗಳು ಮತ್ತು ನೃತ್ಯಗಳು [[ಸಾಂಟಾ ಫೆ|ಸಾಂಟಾ ಫೆನ]] [[ಸಂತ ಫ್ರಾನ್ಸಿಸ್ ಕೆಥೆಡ್ರಲ್|ಸಂತ ಫ್ರಾನ್ಸಿಸ್ ಕೆಥೆಡ್ರಲ್ನ]] [[ಸಮೂಹಪ್ರಾರ್ಥನೆ|ಸಮೂಹಪ್ರಾರ್ಥನೆಗಳಲ್ಲಿ]] ನಿಯಮಿತ ಭಾಗವಾಗಿದೆ.<ref>[http://www.csp.org/communities/docs/fikes-nac_history.html ಎ ಬ್ರೀಫ್ ಹಿಸ್ಟರಿ ಆಫ್ ದಿ ನೇಟಿವ್ ಅಮೆರಿಕನ್ ಚರ್ಚ್] {{Webarchive|url=https://web.archive.org/web/20070821191748/http://www.csp.org/communities/docs/fikes-nac_history.html |date=2007-08-21 }} - ಜೇ ಫೈಕ್ಸ್. 2006ರ ಫೆಬ್ರವರಿ 22ರಂದು ಮರುಸಂಪಾದಿಸಲಾಯಿತು.</ref> ಸ್ಥಳೀಯ ಅಮೆರಿಕಾದ ಕ್ಯಾಥೋಲಿಕ್ ಸಮನ್ವಯತೆಯು ಅಮೆರಿಕಾ ಸಂಯುಕ್ತ ಸಂಸ್ಥಾನದ ಇತರ ಕಡೆ ಕೂಡ ಕಂಡುಬಂದಿದೆ.(ಉದಾ, ನ್ಯೂಯಾರ್ಕ್, ಫೊಂಡಾದ ರಾಷ್ಟ್ರೀಯ ಕಟೇರಿ ಟೆಕಕ್ವಿಥಾ ಪ್ರಾರ್ಥನಾಮಂದಿರ ಮತ್ತು ನ್ಯೂಯಾರ್ಕ್,ಆರಿಸ್ವಿಲ್ಲೆಯಲ್ಲಿರುವ ಉತ್ತರ ಅಮೆರಿಕಾದ ಹುತಾತ್ಮರ ರಾಷ್ಟ್ರೀಯ ಪ್ರಾರ್ಥನಾಮಂದಿರ.
ಫೆಡರಲ್ ವಿಧಾನದಿಂದ ಮಾನ್ಯತೆ ಗಳಿಸಿದ ಬುಡಕಟ್ಟು ಜನಾಂಗದಲ್ಲಿ ನೋಂದಣಿಯಾದ ಪ್ರಮಾಣೀಕರಿಸಬಲ್ಲ ಸ್ಥಳೀಯ ಅಮೆರಿಕಾದ ಸಂತತಿಯ ವ್ಯಕ್ತಿಗಳು ಧಾರ್ಮಿಕ ಅಥವಾ ಆಧ್ಯಾತ್ಮಿಕ ಬಳಕೆಗೆ ಹದ್ದಿನ ಗರಿಗಳನ್ನು ಪಡೆಯಲು ಕಾನೂನುಬದ್ಧವಾಗಿ ಅಧಿಕಾರ ಹೊಂದಿರುತ್ತಾರೆ ಎಂದು ಈಗಲ್ ಫೆದರ್ ಕಾನೂನು (ಫೆಡರಲ್ ನಿಬಂಧನೆಗಳ ಸಂಹಿತೆಯ ಶೀರ್ಷಿಕೆ 50 ಭಾಗ 22) ನಿಗದಿ ಮಾಡಿದೆ. ಕಾನೂನಿನಲ್ಲಿ ಸ್ಥಳೀಯ ಅಮೆರಿಕನ್ನರು ಸ್ಥಳೀಯರಲ್ಲದ ಅಮೆರಿಕನ್ನರಿಗೆ ಹದ್ದಿನ ಗರಿಗಳನ್ನು ಕೊಡಲು ಅವಕಾಶ ನೀಡುವುದಿಲ್ಲ.
===ಲಿಂಗಾಧಾರಿತ ಪಾತ್ರಗಳು===
{{Main|Gender roles in First Nations and Native American tribes}}
[[File:Doctor.susan.la.flesche.picotte.jpg|thumb|upright|left|ಡಾ. ಸುಸಾನ್ ಲಾ ಫ್ಲೆಸ್ಚೆ ಪಿಕೊಟ್ಟೆ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವೈದ್ಯೆಯಾದ ಮೊದಲ ಸ್ಥಳೀಯ ಅಮೆರಿಕನ್ ಮಹಿಳೆಯಾಗಿದ್ದಾರೆ.]]
ಬಹುತೇಕ ಸ್ಥಳೀಯ ಅಮೆರಿಕಾದ ಬುಡಕಟ್ಟು ಜನರು ಸಾಂಪ್ರದಾಯಿಕ ಲಿಂಗಾಧಾರಿತ ಪಾತ್ರಗಳನ್ನು ಹೊಂದಿದ್ದರು.{{Citation needed|date=July 2010}} ಇರೋಕೊಯಿಸ್ ಮುಂತಾದ ಕೆಲವು ಬುಡಕಟ್ಟುಗಳಲ್ಲಿ, ರಾಷ್ಟ್ರ, ಸಾಮಾಜಿಕ ಮತ್ತು ಕುಲದ ಸಂಬಂಧಗಳು ಮಾತೃಸಂತತಿ ಮತ್ತು/ಅಥವಾ ಮಾತೃಪ್ರಧಾನವಾಗಿವೆ. ಆದರೂ ಅನೇಕ ವಿವಿಧ ವ್ಯವಸ್ಥೆಗಳು ಬಳಕೆಯಲ್ಲಿವೆ. ಒಂದು ಉದಾಹರಣೆಯು ಪತ್ನಿಯರು ಕುಟುಂಬದ ಆಸ್ತಿಯ ಮಾಲೀಕತ್ವ ಹೊಂದುವ ಚೆರೋಕಿ ಸಂಪ್ರದಾಯ. ಪುರುಷರು ಬೇಟೆಯಾಡುತ್ತಿದ್ದರು, ವ್ಯಾಪಾರ ಮತ್ತು ಯುದ್ಧ ಮಾಡುತ್ತಿದ್ದರು. ಆದರೆ ಮಹಿಳೆಯರು ಸಸ್ಯಗಳನ್ನು ಸಂಗ್ರಹಿಸುತ್ತಿದ್ದರು, ಕಿರಿಯರು ಮತ್ತು ಹಿರಿಯವಯಸ್ಕರ ಆರೈಕೆ ಮಾಡುವುದು, ವಸ್ತ್ರಗಳು ಮತ್ತು ಉಪಕರಣಗಳ ವಿನ್ಯಾಸ ಮತ್ತು ಮಾಂಸದ ಸಂಸ್ಕರಣೆ ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು. ಕೆಲಸ ಮಾಡುವಾಗ ಅಥವಾ ಪ್ರಯಾಣ ಮಾಡುವಾಗ ತಾಯಂದಿರು ತಮ್ಮ ಮಕ್ಕಳನ್ನು ಸಾಗಿಸಲು ಕ್ರೇಡಲ್ಬೋರ್ಡ್ಗಳನ್ನು ಬಳಸುತ್ತಿದ್ದರು.<ref>[http://college.hmco.com/history/readerscomp/naind/html/na_013100_gender.htm ಜಂಡರ್] {{Webarchive|url=https://web.archive.org/web/20030302141755/http://college.hmco.com/history/readerscomp/naind/html/na_013100_gender.htm |date=2003-03-02 }}, ಎನ್ಸೈಕ್ಲೊಪೀಡಿಯಾ ಆಫ್ ನಾರ್ತ್ ಅಮೆರಿಕನ್ ಇಂಡಿಯನ್ಸ್ - ಬಿಯಾಟ್ರಿಸ್ ಮೆಡಿಸಿನ್. 2006ರ ಫೆಬ್ರವರಿ 99ರಂದು ಮರುಸಂಪಾದಿಸಲಾಯಿತು.</ref> ಕೆಲವು(ಆದರೆ ಎಲ್ಲವೂ ಅಲ್ಲದ)ಬುಡಕಟ್ಟು ಜನಾಂಗಗಳಲ್ಲಿ ದ್ವಿಮನೋಧರ್ಮ(ಮಿಶ್ರಿತ ಲಿಂಗದ ಪಾತ್ರ) ವ್ಯಕ್ತಿಗಳು ಮಿಶ್ರಿತ ಅಥವಾ ಮೂರನೇ ಲಿಂಗದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.
ಕನಿಷ್ಠ 12 ಬುಡಕಟ್ಟು ಜನಾಂಗಗಳು ಸಹೋದರಿಯರಿಗೆ ಬಹುಪತ್ನೀತ್ವಕ್ಕೆ ವಿಧಿವಿಧಾನ ಮತ್ತು ಆರ್ಥಿಕ ಮಿತಿಗಳೊಂದಿಗೆ ಅವಕಾಶ ನೀಡಿದ್ದರು.<ref name="Morgan1907" />
ಮನೆಯನ್ನು ನೋಡಿಕೊಳ್ಳುವುದಲ್ಲದೇ, ಮಹಿಳೆಯರು ಬುಡಕಟ್ಟುಗಳು ಉಳಿಯುವುದಕ್ಕೆ ಅಗತ್ಯವಾದ ಅನೇಕ ಕೆಲಸಗಳನ್ನು ಹೊಂದಿದ್ದರು. ಅವರು ಅಸ್ತ್ರಗಳನ್ನು ಮತ್ತು ಸಾಧನಗಳನ್ನು ತಯಾರಿಸಿದರು. ಅವರ ಮನೆಗಳ ಛಾವಣಿಗಳ ಬಗ್ಗೆ ನಿಗಾವಹಿಸುತ್ತಿದ್ದರು ಮತ್ತು ಅವರ ಪುರುಷರು ಬೈಸನ್(ಕಾಡೆಮ್ಮೆ/ ಕಾಡುಕೋಣ)ಬೇಟೆಗೆ ಸಾಮಾನ್ಯವಾಗಿ ನೆರವು ನೀಡುತ್ತಿದ್ದರು.<ref>[http://www.indians.org/articles/native-american-women.html], ನೇಟಿವ್ ಅಮೆರಿಕನ್ ವುಮೆನ್, Indians.org. 2007ರ ಜನವರಿ 11ರಂದು ಮರುಸಂಪಾದಿಸಲಾಗಿದೆ.</ref>
ಕೆಲವು ಸಮತಟ್ಟು ಪ್ರದೇಶಗಳ ಭಾರತೀಯ ಬುಡಕಟ್ಟುಗಳಲ್ಲಿ ಔಷಧಿ ನೀಡುವ ಮಹಿಳೆಯರಿದ್ದು, ಅವರು ಗಿಡಮೂಲಿಕೆಗಳನ್ನು ಸಂಗ್ರಹಿಸಿ ರೋಗಿಗಳನ್ನು ಗುಣಪಡಿಸುತ್ತಿದ್ದರು.<ref>[http://www.bluecloud.org/medicine.html] {{Webarchive|url=https://web.archive.org/web/20120618091306/http://www.bluecloud.org/medicine.html |date=2012-06-18 }}, ಮೆಡಿಸಿನ್ ವುಮೆನ್, Bluecloud.org. 2007ರ ಜನವರಿ 11ರಂದು ಮರುಸಂಪಾದಿಸಲಾಗಿದೆ.</ref>
ಸಿಯೋಕ್ಸ್ ಮುಂತಾದ ಕೆಲವು ಬುಡಕಟ್ಟುಗಳಲ್ಲಿ ಬಾಲಕಿಯರಿಗೆ ಸವಾರಿ, ಬೇಟೆ ಮತ್ತು ಹೋರಾಟ ಕಲಿಯಲು ಪ್ರೋತ್ಸಾಹಿಸಲಾಯಿತು.<ref>ಜಿನ್, ಹೊವಾರ್ಡ್ (2005). ಎ ಪೀಪಲ್ಸ್ ಹಿಸ್ಟರಿ ಆಫ್ ದಿ ಯುನೈಟೆಡ್ ಸ್ಟೇಟ್ಸ್: 1492–ಇತ್ತೀಚಿನವರೆಗೆ. ಹಾರ್ಪರ್ ಪೆರೆನ್ನಿಯಲ್ ಮಾಡರ್ನ್ ಕ್ಲಾಸಿಕ್ಸ್. ISBN 0-06-083865-5.</ref> ಹೋರಾಟವನ್ನು ಬಹುಮಟ್ಟಿಗೆ ಬಾಲಕರಿಗೆ ಮತ್ತು ಪುರುಷರಿಗೆ ಬಿಡಲಾಗಿದ್ದರೂ, ಮಹಿಳೆಯರು ಅವರ ಜತೆಗೆ ಹೋರಾಡಿದ ಪ್ರಕರಣಗಳಿವೆ. ವಿಶೇಷವಾಗಿ ಬುಡಕಟ್ಟಿನ ಅಸ್ತಿತ್ವಕ್ಕೆ ಬೆದರಿಕೆ ಉಂಟಾದಾಗ ಈ ರೀತಿಯಾಗಿದೆ.<ref>[http://www.bluecloud.org/battle.html] {{Webarchive|url=https://web.archive.org/web/20120618203223/http://www.bluecloud.org/battle.html |date=2012-06-18 }}, ವುಮೆನ್ ಇನ್ ಬ್ಯಾಟಲ್, Bluecloud.org. 2007ರ ಜನವರಿ 11ರಂದು ಮರುಸಂಪಾದಿಸಲಾಗಿದೆ.</ref>
===ಕ್ರೀಡೆಗಳು===
ಸ್ಥಳೀಯ ಅಮೆರಿಕನ್ನರ ಬಿಡುವಿನ ಕಾಲದಿಂದ ಸ್ಪರ್ಧಾತ್ಮಕ ವ್ಯಕ್ತಿಗೆ ಮತ್ತು ತಂಡದ ಕ್ರೀಡೆಗಳಿಗೆ ದಾರಿಕಲ್ಪಿಸಿತು. ಜಿಮ್ ಥಾರ್ಪ್,, ನೋಟಾ ಬೇಗಯ್III, ಜ್ಯಾಕೋಬಿ ಎಲ್ಸ್ಬರಿ, ಮತ್ತುಬಿಲ್ಲಿ ಮಿಲ್ಸ್ ಖ್ಯಾತ ವೃತ್ತಿಪರ ಕ್ರೀಡಾಪಟುಗಳಾಗಿದ್ದಾರೆ.
====ತಂಡ ಆಧಾರಿತ====
[[File:Ball players.jpg|thumb|1830ರಲ ದಶಕದಲ್ಲಿ ಜಾರ್ಜ್ ಕ್ಯಾಟ್ಲಿನ್ ಚಿತ್ರಿಸಿದ ಚೊಕ್ಟಾವ್ ಮತ್ತು ಲಕೋಟ ಬುಡಕಟ್ಟು ಜನಾಂಗದ ಚೆಂಡು ಆಟಗಾರರು]]
ಸ್ಥಳೀಯ ಅಮೆರಿಕಾದ ಚೆಂಡಿನ ಕ್ರೀಡೆಗಳು, ಕೆಲವು ಬಾರಿ ಲ್ಯಾಕ್ರೋಸ್ ಎಂದು ಉಲ್ಲೇಖಿಸಲಾಗುವ, ಸ್ಟಿಕ್ಬಾಲ್ ಅಥವಾ ಬಾಗ್ಗಟಾವೇಯನ್ನು ಯುದ್ಧಕ್ಕೆ ಹೋಗುವ ಬದಲಿಗೆ ವಿವಾದಗಳನ್ನು ಇತ್ಯರ್ಥಗೊಳಿಸಲು ಬಳಸಲಾಗುತ್ತಿತ್ತು. ಸಂಭವನೀಯ ಸಂಘರ್ಷವನ್ನು ಇತ್ಯರ್ಥ ಮಾಡಲು ಇದೊಂದು ನಾಗರಿಕ ವಿಧಾನವಾಗಿತ್ತು. ಚೋಕ್ಟಾ ಅದನ್ನು ISITOBOLI (ಯುದ್ಧದ ಕಿರಿಯ ಸಹೋದರ)ಎಂದು ಕರೆದರು.<ref name="choctaw_stickball">
{{cite web
| url = http://www.indians.org/articles/choctaw-indians.html
| title = Choctaw Indians
| accessdate = 2008-05-02
| year = 2006
}}
</ref> ಒನೊನ್ಡಾಗಾ ಹೆಸರು DEHUNTSHIGWA'ES ("ಪುರುಷರು ಗುಂಡನೆಯ ವಸ್ತುವಿಗೆ ಗುರಿಯಿಡುವುದು"). ಅವುಗಳಲ್ಲಿ ಮೂರು ರೂಪಾಂತರಗಳಿದ್ದು, ಗ್ರೇಟ್ ಲೇಕ್ಸ್, ಇರೋಕ್ವಿಯಾನ್ ಮತ್ತು ಸದರನ್ ಎಂದು ವರ್ಗೀಕರಿಸಲಾಗಿದೆ.<ref name="three_stickball">{{cite web
| url = http://www.uslacrosse.org/museum/history.phtml
| title = History of Native American Lacrossee
| author = Thomas Vennum Jr., author of American Indian Lacrosse: Little Brother of War
| accessdate = 2008-09-11
| year = 2002–2005
| archive-date = 2009-04-11
| archive-url = https://web.archive.org/web/20090411215231/http://www.uslacrosse.org/museum/history.phtml
| url-status = dead
}}</ref> ಕ್ರೀಡೆಯನ್ನು ಒಂದು ಅಥವಾ ಎರಡು ರಾಕೆಟ್ಗಳು/ದಾಂಡುಗಳು ಮತ್ತು ಒಂದು ಚೆಂಡಿನ ಜತೆಯಲ್ಲಿ ಆಡಲಾಗುತ್ತಿತ್ತು. ಕ್ರೀಡೆಯ ಉದ್ದೇಶವು ಎದುರಾಳಿ ತಂಡದ ಗೋಲಿನೊಳಕ್ಕೆ ಚೆಂಡನ್ನು ಹಾಕುವ(ಏಕ ಕಂಬ ಅಥವಾ ನೆಟ್)ಮೂಲಕ ಸ್ಕೋರ್ ಮಾಡುವುದು ಮತ್ತು ನಿಮ್ಮ ಗೋಲಿನಲ್ಲಿ ಎದುರಾಳಿ ತಂಡ ಸ್ಕೋರು ಮಾಡದಂತೆ ತಡೆಯುವುದು. ಈ ಕ್ರೀಡೆಯು ಕೆಲವು 20 ಜನರಿಂದ 300ರಷ್ಟು ಅನೇಕ ಆಟಗಾರರನ್ನು ಒಳಗೊಂಡಿದ್ದು, ಎತ್ತರ ಅಥವಾ ತೂಕದ ನಿರ್ಬಂಧಗಳಿರುವುದಿಲ್ಲ ಮತ್ತು ರಕ್ಷಣಾತ್ಮಕ ಉಪಕರಣವಿರುವುದಿಲ್ಲ. ಗೋಲುಗಳು ಕೆಲವು ನೂರು ಅಡಿಗಳಿಂದ ಕೆಲವು ಮೈಲುಗಳ ಅಂತರದಲ್ಲಿ ಇರುತ್ತದೆ. ಲ್ಯಾಕ್ರೋಸ್ನಲ್ಲಿ ಮೈದಾನವು 110ಗಜಗಳ ವಿಸ್ತೀರ್ಣವನ್ನು ಹೊಂದಿರುತ್ತದೆ. ಕ್ರೈಸ್ತ ಪಾದ್ರಿಯೊಬ್ಬರು 1729ರಲ್ಲಿ ಸ್ಟಿಕ್ಬಾಲ್ ಕುರಿತು ಉಲ್ಲೇಖಿಸಿದ್ದರು ಮತ್ತು ಜಾರ್ಜ್ ಕ್ಯಾಟ್ಲಿನ್ ಈ ವಿಷಯವನ್ನು ಚಿತ್ರಿಸಿದ್ದರು.{{Who|date=August 2009}}
====ವ್ಯಕ್ತಿ ಆಧಾರಿತ====
ಚಂಕಿ ಕಲ್ಲಿನ ಆಕಾರದ, 1 -2ಇಂಚುಗಳ ವ್ಯಾಸದ ಬಿಲ್ಲೆಯನ್ನು ಒಳಗೊಂಡ ಆಟವಾಗಿದೆ. ಬಿಲ್ಲೆಯನ್ನು ಕಾರಿಡರ್(ಪ್ರವೇಶದ ಮುಖ್ಯ ಮಾರ್ಗ) ಕೆಳಗೆ{{convert|200|ft|m|sing=on}} ಎಸೆಯುವುದರಿಂದ ವೇಗವಾಗಿ ಆಟಗಾರರನ್ನು ದಾಟಿಕೊಂಡು ಉರುಳುತ್ತವೆ. ಬಿಲ್ಲೆಯು ಕಾರಿಡರ್ ಕೆಳಗೆ ಉರುಳುತ್ತಿದ್ದಂತೆ, ಆಟಗಾರರು ಚಲಿಸುವ ಬಿಲ್ಲೆಯತ್ತ ಮರದ ಈಟಿಗಳನ್ನು ಎಸೆಯುತ್ತಾರೆ. ಆಟದ ಉದ್ದೇಶವು ಬಿಲ್ಲೆಗೆ ಗುರಿಯಿಟ್ಟು ಹೊಡೆಯುವುದು ಅಥವಾ ಇತರೆ ಆಟಗಾರರು ಅದಕ್ಕೆ ಹೊಡೆಯದಂತೆ ತಪ್ಪಿಸುವುದಾಗಿದೆ.
====ಅಮೆರಿಕಾ ಸಂಯುಕ್ತ ಸಂಸ್ಥಾನ ಒಲಿಂಪಿಕ್ಸ್====
[[File:Jim Thorpe 1913b-cr.jpg|thumb|ಜಿಮ್ ತೋರ್ಪ್ ಸ್ವೀಡನ್ನ ರಾಜ ಗುಸ್ತಾಫ್ ವಿ.ಯಿಂದ "ಪ್ರಪಂಚದಲ್ಲೇ ಅತ್ಯುತ್ತಮ ಕ್ರೀಡಾಪಟು" ಎಂದು ಕರೆಯಿಸಿಕೊಂಡಿದ್ದರು]]
[[File:BillyMills Crossing Finish Line 1964Olympics.jpg|thumb|right|1964ರ ಟೋಕಿಯೊ ಒಲಿಂಪಿಕ್ಸ್ನಲ್ಲಿ 10,000 ಮೀಟರ್ ಓಟದಲ್ಲಿ ಅಂತಿಮ ಗೆರೆಯನ್ನು ದಾಟುತ್ತಿರುವ ಬಿಲ್ಲಿ ಮಿಲ್ಸ್]]
ಸಾಕ್ ಮತ್ತು ಫಾಕ್ಸ್ ಸ್ಥಳೀಯ ಅಮೆರಿಕನ್ನರಾದ ಜಿಮ್ ಥಾರ್ಪ್, 20ನೇ ಶತಮಾನದ ಪೂರ್ವದಲ್ಲಿ ಫುಟ್ಬಾಲ್ ಮತ್ತು ಬೇಸ್ಬಾಲ್ ಆಡುತ್ತಿದ್ದ ಬಹುಮುಖ ಸಾಮರ್ಥ್ಯದ ಅಥ್ಲೇಟ್ ಆಗಿದ್ದರು. ಯುವಕ ಥಾರ್ಪ್ನನ್ನು ನಿಭಾಯಿಸುವಾಗ ಮುಂದಿನ ರಾಷ್ಟ್ರಾಧ್ಯಕ್ಷರಾಗಿದ್ದ ಡಿವೈಟ್ ಐಸೆನ್ಹೋವರ್ ಮಂಡಿಗೆ ಗಾಯಮಾಡಿಕೊಂಡಿದ್ದರು. 1961ರಭಾಷಣದಲ್ಲಿ ಐಸೆನ್ಹೋವರ್ ಥಾರ್ಪ್ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಅಲ್ಲಲ್ಲಿ ಕೆಲವು ಜನರಿರುತ್ತಾರೆ. ಅವರು ಅತ್ಯುಚ್ಚವಾಗಿ ಪ್ರತಿಭಾಸಂಪನ್ನರಾಗಿರುತ್ತಾರೆ. ಜಿಮ್ಮ ಥಾರ್ಪ್ ಬಗ್ಗೆ ನನ್ನ ನೆನಪು ಆವರಿಸುತ್ತದೆ. ಅವನು ಜೀವಮಾನದಲ್ಲಿ ಎಂದಿಗೂ ಆಟದ ಅಭ್ಯಾಸ ಮಾಡಿಲ್ಲ. ಆದರೆ ನಾನು ನೋಡಿದ ಯಾವುದೇ ಫುಟ್ಬಾಲ್ ಆಟಗಾರನಿಗಿಂತ ಅವನು ಚೆನ್ನಾಗಿ ಆಡಬಲ್ಲ."<ref name="CNN">ಬೊಟೆಲ್ಹೊ, ಗ್ರೆಗ್. [http://www.cnn.com/2004/WORLD/europe/07/09/jim.thorpe/ ರೋಲರ್-ಕೋಸ್ಟರ್ ಲೈಫ್ ಆಫ್ ಇಂಡಿಯನ್ ಐಕಾನ್, ಸ್ಪೋರ್ಟ್ಸ್ ಫರ್ಸ್ಟ್ ಸ್ಟಾರ್], CNN.com, ಜುಲೈ 14, 2004. 2007ರ ಎಪ್ರಿಲ್ 23ರಂದು ಮರುಸಂಪಾದಿಸಲಾಗಿದೆ.</ref>
1912ರ ಒಲಿಂಪಿಕ್ಸ್ನಲ್ಲಿ, ಥಾರ್ಪ್ 100 ಗಜ ದೂರವನ್ನು 10 ಸೆಕೆಂಡುಗಳಲ್ಲಿ ಓಡಲು ಸಾಧ್ಯವಾಗಿತ್ತು, 220ಗಜ ದೂರವನ್ನು 21.8ಸೆಕೆಂಡುಗಳು,440ನ್ನು 51.8ಸೆಕೆಂಡುಗಳಲ್ಲಿ, 880ನ್ನು 1 ನಿಮಿಷ 57ಸೆಕೆಂಡುನಲ್ಲಿ, ಒಂದು ಮೈಲನ್ನು 4:35ರಲ್ಲಿ, 120 ಗಜ ದೂರದ ಹೆಚ್ಚು ಎತ್ತರದ ಹರ್ಡಲ್ಗಳನ್ನು 15ಸೆಕೆಂಡುಗಳಲ್ಲಿ ಮತ್ತು220ಗಜ ದೂರದ ಕಡಿಮೆ ಎತ್ತರದ ಹರ್ಡಲ್ಗಳನ್ನು 24 ಸೆಕೆಂಡುಗಳಲ್ಲಿ ಓಡಲು ಸಾಧ್ಯವಾಗಿತ್ತು.<ref name="NYTobit">[http://select.nytimes.com/gst/abstract.html?res=F40A15FF3D59107A93CBAB1788D85F478585F9 ಜಿಮ್ ಥೋರ್ಪೆ ಈಸ್ ಡೆಡ್ ಆನ್ ವೆಸ್ಟ್ ಕೋಸ್ಟ್ ಅಟ್ 64], ''ದಿ ನ್ಯೂಯಾರ್ಕ್ ಟೈಮ್ಸ್'', ಮಾರ್ಚ್ 29, 1953. 2007ರ ಎಪ್ರಿಲ್ 23ರಂದು ಮರುಸಂಪಾದಿಸಲಾಗಿದೆ.</ref> ಅವರು, 23ಅಡಿ 6ಇಂಚುಗಳಷ್ಟು ದೂರದ ಜಿಗಿತವನ್ನು ಮತ್ತು 6ಅಡಿ 5ಇಂಚು ಎತ್ತರದ ಜಿಗಿತವನ್ನು ಮಾಡಲು ಸಾಧ್ಯವಾಗಿತ್ತು.<ref name="NYTobit" /> ಅವರು 11ಅಡಿ ಎತ್ತರಕ್ಕೆ ಪೋಲ್ ವಾಲ್ಟ್ ಜಿಗಿಯಲು ಸಾಧ್ಯವಾಗಿತ್ತು. ಶಾಟ್ ಪುಟ್ 47ಅಡಿ 9ಇಂಚುಗಳು, ಜಾವೆಲಿನ್ ಎಸೆತವನ್ನು 163ಅಡಿ ದೂರ ಮತ್ತು ಡಿಸ್ಕಸ್ 136ಅಡಿ ದೂರ ಎಸೆಯಲು ಸಮರ್ಥರಾಗಿದ್ದರು.<ref name="NYTobit" /> ಪೆಂಟಾಥ್ಲಾನ್ ಮತ್ತು ಡೆಕಾಥ್ಲಾನ್ ಎರಡಕ್ಕೂ ಥಾರ್ಪ್ ಅಮೆರಿಕಾ ಸಂಯುಕ್ತ ಸಂಸ್ಥಾನದ ಒಲಿಂಪಿಕ್ ಅಭ್ಯಾಸಪಂದ್ಯಗಳಿಗೆ ಪ್ರವೇಶಿಸಿದ್ದರು.
ಲಾಕೋಟ ಮತ್ತು USMC ಅಧಿಕಾರಿ ಬಿಲ್ಲಿ ಮಿಲ್ಸ್ 1964ರ ಟೋಕಿಯೊ ಒಲಿಂಪಿಕ್ಸ್ನಲ್ಲಿ 10,000ಮೀಟರುಗಳ ಓಟದ ಚಿನ್ನದ ಪದಕ ವಿಜೇತರಾಗಿದ್ದರು. ಈ ಸ್ಪರ್ಧೆಯಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದ ಏಕೈಕ ಅಮೆರಿಕಾ ಸ್ಪರ್ಧಿ ಅವರಾಗಿದ್ದಾರೆ. ಒಲಿಂಪಿಕ್ಸ್ಗೆ ಮುಂಚೆ ಅಜ್ಞಾತರಾಗಿದ್ದ ಮಿಲ್ಸ್ ಅಮೆರಿಕಾ ಸಂಯುಕ್ತ ಸಂಸ್ಥಾನ ಒಲಿಂಪಿಕ್ ಅಭ್ಯಾಸಪಂದ್ಯಗಳಲ್ಲಿ ಎರಡನೇ ಸ್ಥಾನ ಗಳಿಸಿದರು.
ವರ್ಮೋಂಟ್ನ ಆಂಶಿಕ ಅಬೆನಾಕಿ ಬುಡಕಟ್ಟಿಗೆ ಸೇರಿದ ಬಿಲ್ಲಿ ಕಿಡ್ ಒಲಿಂಪಿಕ್ಸ್ನ ಆಲ್ಪೈನ್ ಸ್ಕೀಯಿಂಗ್(ಹಿಮದಲ್ಲಿ ಜಾರುವಿಕೆ) ಅಮೆರಿಕಾದ ಪುರುಷ ಪದಕ ವಿಜೇತರಾಗಿದ್ದು, [[ಆಸ್ಟ್ರಿಯ]]ದ ಇನ್ಸ್ಬ್ರಕ್ನ 1964ರ ಚಳಿಗಾಲದ ಒಲಿಂಪಿಕ್ಸ್ನ ಸ್ಲಾಲೋಮ್ ಸ್ಕೀಯಿಂಗ್ನಲ್ಲಿ 20ವರ್ಷ ವಯಸ್ಸಿನಲ್ಲೇ ಬೆಳ್ಳಿಪದಕ ವಿಜೇತರಾಗಿದ್ದರು.<br>ಆರು ವರ್ಷಗಳ ನಂತರ,1970ರ ವಿಶ್ವಚಾಂಪಿಯನ್ಷಿಪ್ನಲ್ಲಿ, ಕಿಡ್ ಸಂಯೋಜಿತ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾದರು ಮತ್ತು ಸ್ಲಾಲೋಮ್ ಸ್ಕೀಯಿಂಗ್ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.
===ಸಂಗೀತ ಮತ್ತು ಕಲೆ===
{{Main|Native American music|Native American art}}
[[File:Jake fragua jemez pueblo.jpg|thumb|upright|ನ್ಯೂಮೆಕ್ಸಿಕೊದ ಜೇಕ್ ಫ್ರ್ಯಾಗ್ವಾ ಜೆಮೆಜ್ ಪ್ಯುಯೆಬ್ಲೊ]]
ಸಾಂಪ್ರದಾಯಿಕ ಸ್ಥಳೀಯ ಅಮೆರಿಕಾದ ಸಂಗೀತ ಬಹುಮಟ್ಟಿಗೆ ಸಂಪೂರ್ಣ ಏಕಧ್ವನಿಕವಾಗಿದ್ದು, ಕೆಲವು ಗಮನಾರ್ಹ ಅಪವಾದಗಳಿವೆ. ಸ್ಥಳೀಯ ಅಮೆರಿಕಾದ ಸಂಗೀತದಲ್ಲಿ ಸಾಮಾನ್ಯವಾಗಿ ಡ್ರಮ್ ಬಾರಿಸುವುದು ಮತ್ತು /ಅಥವಾ ರಾಟಲ್ಗಳನ್ನು ನುಡಿಸುವುದು ಅಥವಾ ಇತರೆ ತಾಳವಾದ್ಯಗಳನ್ನು ಒಳಗೊಂಡಿರುತ್ತದೆ. ಆದರೆ ಇತರೆ ವಾದ್ಯಗಳು ಕಡಿಮೆಯಿರುತ್ತದೆ. ಮರ, ಬಿದಿರು ಅಥವಾ ಮೂಳೆಯಿಂದ ತಯಾರಿಸಿದ ಕೊಳಲುಗಳು ಮತ್ತು ಸೀಟಿಗಳನ್ನು ಕೂಡ ಸಾಮಾನ್ಯವಾಗಿ ವ್ಯಕ್ತಿಗಳು ನುಡಿಸುತ್ತಾರೆ. ಆದರೆ ಮುಂಚಿನ ಕಾಲಗಳಲ್ಲಿ ದೊಡ್ಡ ಮೇಳಭಾಗದಿಂದಲೂ ನುಡಿಸಲಾಗುತ್ತದೆ(ಸ್ಪೇನ್ ಸಾಹಸಿ ಡಿ ಸೊಟೊ ಟಿಪ್ಪಣಿ ಮಾಡಿರುವ ಪ್ರಕಾರ). ಈ ಕೊಳಲುಗಳ ಶ್ರುತಿಯು ನಿಖರವಾಗಿಲ್ಲ ಮತ್ತು ಬಳಸಿದ ಮರದ ಉದ್ದವನ್ನು ಮತ್ತು ಉದ್ದೇಶಿತ ನುಡಿಸುವವರ ಕೈ ವ್ಯಾಪ್ತಿಯನ್ನು ಅವಲಂಬಿಸಿದೆ. ಆದರೆ ಬೆರಳಿನ ರಂಧ್ರಗಳು ಬಹುತೇಕ ಬಾರಿ ಇಡೀ ಸ್ವರಾವಧಿಯಷ್ಟು ದೂರವಿರುತ್ತದೆ ಮತ್ತು ಕನಿಷ್ಠ ಉತ್ತರ ಕ್ಯಾಲಿಫೋರ್ನಿಯದಲ್ಲಿ ಅರ್ಧ ಸ್ವರಾವಧಿಗೆ ಹತ್ತಿರದ ಅಂತರವಿದ್ದರೆ ಕೊಳಲನ್ನು ಬಳಸಲಾಗುವುದಿಲ್ಲ.
ಸ್ಥಳೀಯ ಅಮೆರಿಕದ ವಂಶಾವಳಿಯ ಪ್ರದರ್ಶಕರು ಅಮೆರಿಕದ ಜನಪ್ರಿಯ ಸಂಗೀತದಲ್ಲಿ ಸಾಂದರ್ಭಿಕವಾಗಿ ಕಾಣಿಸಿಕೊಂಡಿದ್ದಾರೆ. ಉದಾಹರಣೆಗೆ ರಾಬ್ಬಿ ರಾಬರ್ಟ್ಸನ್ (ದಿ ಬ್ಯಾಂಡ್), ರೀಟಾ ಕೂಲಿಜ್, ವಾಯ್ನೆ ನ್ಯೂಟನ್, ಜೀನ್ ಕ್ಲಾರ್ಕ್, ಬಫಿ ಸೇಂಟ್-ಮೇರಿ, ಬ್ಲಾಕ್ಫೂಟ್, ಟೋರಿ ಅಮೋಸ್, ರೆಡ್ಬೋನ್, ಮತ್ತು ಕೊಕೊರೋಸಿ. ಜಾನ್ ಟ್ರಡೆಲ್ ಮುಂತಾದವರು ಸ್ಥಳೀಯ ಅಮೆರಿಕದಲ್ಲಿ ಜೀವನದ ಬಗ್ಗೆ ಪ್ರತಿಕ್ರಿಯಿಸಲು ಸಂಗೀತವನ್ನು ಬಳಸಿಕೊಂಡಿದ್ದಾರೆ. ಆರ್. ಕಾರ್ಲೋಸ್ ನಕಾಯ್ ಮುಂತಾದವರು ಸಂಗೀತೋಪಕರಣಗಳ ಧ್ವನಿಮುದ್ರಣಗಳಲ್ಲಿ ಸಾಂಪ್ರದಾಯಿಕ ಶಬ್ದಗಳನ್ನು ಆಧುನಿಕ ಶಬ್ದಗಳ ಜತೆ ಸಂಯೋಜಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ಗಾತ್ರದ ಧ್ವನಿಮುದ್ರಣ ಕಂಪೆನಿಗಳು ಯುವ ಮತ್ತು ವಯಸ್ಸಾದ ಸ್ಥಳೀಯ ಅಮೆರಿಕ ಪ್ರದರ್ಶಕರಿಂದ ಇತ್ತೀಚಿನ ಹೇರಳ ಸಂಗೀತವನ್ನು ಒದಗಿಸುತ್ತವೆ. ಪೌ-ವೌ ಡ್ರಮ್ ಸಂಗೀತದಿಂದ ಹಿಡಿದು ಪ್ರಬಲ ರಾಕ್-ಎಂಡ್-ರೋಲ್ ಮತ್ತು ರಾಪ್ ಸಂಗೀತದವರೆಗೆ ಒದಗಿಸುತ್ತವೆ.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸ್ಥಳೀಯ ಅಮೆರಿಕನ್ನರ ನಡುವೆ ಅತ್ಯಂತ ವ್ಯಾಪಕವಾಗಿ ರೂಢಿಯಲ್ಲಿರುವ ಸಾರ್ವಜನಿಕ ಸಂಗೀತ ರೂಪವು ಪೌ-ವೌವ್ ಆಗಿದೆ. ನ್ಯೂ ಮೆಕ್ಸಿಕೊದ ಆಲ್ಬುಕರ್ಕಿಯಲ್ಲಿ ವಾರ್ಷಿಕ ರಾಷ್ಟ್ರಗಳ ಕೂಟ ಪೌವ್-ವೊವ್ಗಳಲ್ಲಿ, ದೊಡ್ಡ ಡ್ರಮ್ ಸುತ್ತ ವೃತ್ತಾಕಾರದಲ್ಲಿ ಡ್ರಮ್ ಗುಂಪಿನ ಸದಸ್ಯರು ಕುಳಿತುಕೊಳ್ಳುತ್ತಾರೆ. ಡ್ರಮ್ ಗುಂಪುಗಳು ಸ್ಥಳೀಯ ಭಾಷೆಯಲ್ಲಿ ಹಾಡುವಾಗ ಒಂದೇ ಸಂಗೀತದ ಶ್ರುತಿಯನ್ನು ನುಡಿಸುತ್ತವೆ ಮತ್ತು ನರ್ತಕರು ವರ್ಣರಂಜಿತ ಅಲಂಕೃತ ಬಟ್ಟೆಯೊಂದಿಗೆ ಮಧ್ಯದಲ್ಲಿ ಡ್ರಮ್ ಗುಂಪುಗಳ ಸುತ್ತ ಪ್ರದಕ್ಷಿಣವಾಗಿ(ಕ್ಲಾಕ್ವೈಸ್)ನೃತ್ಯಮಾಡುತ್ತವೆ. ಪರಿಚಿತ ಪೌವ್-ವೋವ್ ಹಾಡುಗಳು, ಗೌರವದ ಹಾಡುಗಳು, ಅಂತರಬುಡಕಟ್ಟು ಹಾಡುಗಳು, ಕ್ರೊ-ಹಾಪ್ಸ್, ಸ್ನೀಕ್-ಅಪ್ ಹಾಡುಗಳು, ಗ್ರಾಸ್ ನೃತ್ಯಗಳು, ಎರಡು-ಸ್ವರಾವಧಿಗಳು, ಸ್ವಾಗತ ಹಾಡುಗಳು, ಮನೆಗೆ ತೆರಳುವ ಹಾಡುಗಳು ಮತ್ತು ಯುದ್ಧಗೀತೆಗಳನ್ನು ಒಳಗೊಂಡಿವೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಬಹುತೇಕ ದೇಶೀಯ ಸಮುದಾಯಗಳು ಕೂಡ ಸಾಂಪ್ರದಾಯಿಕ ಹಾಡುಗಳನ್ನು ಮತ್ತು ಧಾರ್ಮಿಕ ಕ್ರಿಯೆಗಳನ್ನು ನಿರ್ವಹಿಸುತ್ತವೆ. ಕೆಲವನ್ನು ಹಂಚಿಕೊಂಡು ಸಮುದಾಯದೊಳಕ್ಕೆ ವಿಶೇಷವಾಗಿ ಆಚರಿಸಲಾಗುತ್ತದೆ.<ref>{{Cite book|author=Bierhosrt, John |title=A Cry from the Earth: Music of North American Indians |publisher==Ancient City Press |year=1992}}</ref>
ಸ್ಥಳೀಯ ಅಮೆರಿಕ ಕಲೆಯು ವಿಶ್ವ ಕಲಾ ಸಂಗ್ರಹದಲ್ಲಿ ಪ್ರಮುಖ ವರ್ಗವನ್ನು ಒಳಗೊಂಡಿವೆ. ಸ್ಥಳೀಯ ಅಮೆರಿಕನ್ನನ ಕೊಡುಗೆಗಳಲ್ಲಿ ಕುಂಬಾರಿಕೆ(ಸ್ಥಳೀಯ ಅಮೆರಿಕನ್ ಕುಂಬಾರಿಕೆ), [[ಚಿತ್ರಕಲೆ|ವರ್ಣಚಿತ್ರ]]ಗಳು, ಆಭರಣಗಳು, ನೇಯ್ಗೆಗಳು, ಶಿಲ್ಪಕೃತಿಗಳು, ಬುಟ್ಟಿ, ಮತ್ತುಕೆತ್ತನೆಗಳು ಸೇರಿವೆ. ಪ್ರಾಂಕ್ಲಿನ್ ಗ್ರಿಟ್ಸ್ ಚೆರೋಕೀ ಕಲಾವಿದರಾಗಿದ್ದು, ಸ್ಥಳೀಯ ಅಮೆರಿಕನ್ ಚಿತ್ರಕಲಾವಿದರ ''ಸುವರ್ಣ ಯುಗ'' ವಾದ 1940ರ ದಶಕದಲ್ಲಿ ಹ್ಯಾಸ್ಕೆಲ್ ಇನ್ಸ್ಟಿಟ್ಯೂಟ್ನ(ಈಗ ಹ್ಯಾಸ್ಕೆಲ್ ಇಂಡಿಯನ್ ನೇಷನ್ಸ್ ಯೂನಿವರ್ಸಿಟಿ) ಅನೇಕ ಬುಡಕಟ್ಟು ಜನಾಂಗಗಳ ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ.
ಕೆಲವು ಸ್ಥಳೀಯ ಅಮೆರಿಕ ಕಲಾಕೃತಿಗಳ ಪ್ರಾಮಾಣಿಕತೆಯನ್ನು ಕಾಂಗ್ರೆಸ್ನ ಕಾಯ್ದೆಯೊಂದರಿಂದ ರಕ್ಷಿಸಲಾಗಿದೆ. ನೋಂದಣಿಯಾದ ಸ್ಥಳೀಯ ಅಮೆರಿಕದ ಕಲಾವಿದರು ತಯಾರಿಸಿರದ ಕಲಾಕೃತಿಯನ್ನು ಸ್ಥಳೀಯ ಅಮೆರಿಕದ್ದೆಂದು ಬಿಂಬಿಸುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.
===ಆರ್ಥಿಕ ಸ್ಥಿತಿ===
ಇನ್ಯೂಟ್ ಅಥವಾ ಎಸ್ಕಿಮೊಗಳು ಒಣ ಮಾಂಸ ಮತ್ತು ಮೀನಿನ ಅಧಿಕ ಪ್ರಮಾಣವನ್ನು ಸಿದ್ಧಗೊಳಿಸಿ ಹೂತಿಡುತ್ತಿದ್ದರು. ವಾಯವ್ಯ ಪೆಸಿಫಿಕ್ ಬುಡಕಟ್ಟುಗಳು ಸಮುದ್ರಯಾನಕ್ಕೆ 40-50ಅಡಿ ಉದ್ದದ ತೋಡುದೋಣಿಗಳನ್ನು ಮೀನುಗಾರಿಕೆ ಸಲುವಾಗಿ ನಿರ್ಮಿಸುತ್ತಿದ್ದರು. ಪೂರ್ವ ವುಡ್ಲ್ಯಾಂಡ್ಸ್ನ ರೈತರು ಕಳೆಗುದ್ದಲಿಗಳು ಮತ್ತು ಅಗೆಯುವ ಸಾಧನಗಳಿಂದ ಜೋಳದ ಗದ್ದೆಗಳನ್ನು ನಿರ್ವಹಿಸುತ್ತಿದ್ದರು. ಆದರೆ ನೆರೆಯ ಆಗ್ನೇಯದಲ್ಲಿರುವ ಜನರು ತಂಬಾಕು ಮತ್ತು ಆಹಾರ ಬೆಳೆಗಳನ್ನು ಬೆಳೆಯುತ್ತಾರೆ. ಕೆಲವು ಸಮತಟ್ಟು ಪ್ರದೇಶಗಳಲ್ಲಿ, ಕೆಲವು ಬುಡಕಟ್ಟು ಜನರು ಕೃಷಿಯಲ್ಲಿ ನಿರತರಾಗಿರುತ್ತಾರೆ ಮತ್ತು ಕಾಡುಕೋಣ/ಕಾಡೆಮ್ಮೆಯ ಬೇಟೆಯನ್ನು ಕೂಡ ಯೋಜಿಸುತ್ತಾರೆ. ಇದರಲ್ಲಿ ಹಿಂಡುಗಳನ್ನು ಭೂಶಿರಗಳ ಮೇಲೆ ಅಟ್ಟಲಾಗುತ್ತದೆ. ನೈಋತ್ಯ ಮರಳುಗಾಡುಗಳ ನಿವಾಸಿಗಳು ಸಣ್ಣ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು ಮತ್ತು ಓಕ್ ಮರದ ಹಣ್ಣಿನ(ಅಕಾರ್ನ್) ಬೀಜಗಳನ್ನು ಸಂಗ್ರಹಿಸಿ ಅದನ್ನು ಹಿಟ್ಟಾಗಿ ಪುಡಿಮಾಡಿ ಅದರಿಂದ ಕಾದ ಕಲ್ಲುಗಳ ಮೇಲೆ ತುಂಬ ತೆಳುವಾದ ಬ್ರೆಡ್ ಬೇಯಿಸುತ್ತಿದ್ದರು. ಕೆಲವು ಗುಂಪುಗಳು ಪ್ರದೇಶದ ಕಡಿದಾದ ಪಕ್ಕಗುಳುಳ್ಳ ಪ್ರಸ್ಥಭೂಮಿಯಲ್ಲಿ ನೀರಾವರಿ ತಂತ್ರಗಳನ್ನು ಅಭಿವೃದ್ಧಿಪಡಿಸಿದರು ಮತ್ತು ಪ್ರದೇಶದಲ್ಲಿ ಅಡಿಗಡಿಗೆ ಸಂಭವಿಸುವ ಬರಗಾಲಗಳಿಂದ ರಕ್ಷಣೆ ಪಡೆಯಲು ಉಗ್ರಾಣಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸುತ್ತಿದ್ದರು.
ಪೂರ್ವದ ವರ್ಷಗಳಲ್ಲಿ, ಈ ಸ್ಥಳೀಯ ಜನರು ಯುರೋಪಿನ ಪರಿಶೋಧಕರು ಮತ್ತು ನಿವಾಸಿಗಳನ್ನು ಸಂಧಿಸಿ ವ್ಯಾಪಾರದಲ್ಲಿ ನಿರತರಾದರು. ಅವರು ಆಹಾರ, ಕರಕುಶಲ ವಸ್ತುಗಳು ಮತ್ತು ಕಂಬಳಿಗಳಿಗೆ ತುಪ್ಪಳಗಳು, ಕಬ್ಬಿಣ ಮತ್ತು ಉಕ್ಕಿನ ಉಪಕರಣಗಳು, ಕುದುರೆಗಳು, ಅಲ್ಪಬೆಲೆಯ ಆಭರಣಗಳು, ಬಂದೂಕು ಮತ್ತು ಆಲ್ಕೋಹಾಲ್ ಪಾನೀಯಗಳನ್ನು ವಿನಿಮಯ ಮಾಡಿಕೊಂಡರು.
====ಆರ್ಥಿಕ ಅಭಿವೃದ್ಧಿಗೆ ತೊಡಕುಗಳು====
[[File:The King of the Seas in the Hands of the Makahs - 1910.jpg|thumb|"ಮಕಾಹ್ ಜನರ ಕೈಯಲ್ಲಿ ಸಮುದ್ರರಾಜ(ತಿಮಿಂಗಿಲ)" ಛಾಯಾಚಿತ್ರವನ್ನು 1910ರಲ್ಲಿ ಮಕಾಹ್ ಸ್ಥಳೀಯ ಅಮೆರಿಕನ್ನರು ತೆಗೆದರು]]
ಇಂದು, ಬುಡಕಟ್ಟುಗಳಲ್ಲದ ಜನರು ಕ್ಯಾಸಿನೊ(ಜೂಜುಮಂದಿರ)ಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದರೆ, ಬುಡಕಟ್ಟು ಜನರು ಹೆಣಗಾಡುತ್ತಿದ್ದಾರೆ. ಅಂದಾಜು 2.1ದಶಲಕ್ಷ ಸ್ಥಳೀಯ ಅಮೆರಿಕನ್ನರಿದ್ದು, ಎಲ್ಲಾ ಜನಾಂಗೀಯ ಗುಂಪುಗಳ ಪೈಕಿ ಅವರು ಅತ್ಯಂತ ದುರ್ಬಲರಾಗಿದ್ದಾರೆ. 2000ನೇ ಜನಗಣತಿ ಪ್ರಕಾರ, ಅಂದಾಜು 400,000ಸ್ಥಳೀಯ ಅಮೆರಿಕನ್ನರು ಮೀಸಲು ಪ್ರದೇಶದಲ್ಲಿ ವಾಸವಿದ್ದಾರೆ. ಕೆಲವು ಬುಡಕಟ್ಟು ಜನರು ಜೂಜಾಟ(ಗೇಮಿಂಗ್)ದಲ್ಲಿ ಯಶಸ್ವಿಯಾಗಿದ್ದರೆ, ಫೆಡರಲ್ ಸರ್ಕಾರದಿಂದ ಮಾನ್ಯತೆ ಪಡೆದ 562 ಬುಡಕಟ್ಟುಗಳಲ್ಲಿ ಶೇಕಡ 40ರಷ್ಟು ಮಾತ್ರ ಕ್ಯಾಸಿನೊಗಳನ್ನು ನಿರ್ವಹಿಸುತ್ತಾರೆ.<ref name="NIGA">{{cite web |url=http://www.indiangaming.org/library/indian-gaming-facts/index.shtml |title=NIGA: Indian Gaming Facts |access-date=2011-02-25 |archive-date=2013-03-02 |archive-url=https://web.archive.org/web/20130302072505/http://www.indiangaming.org/library/indian-gaming-facts/index.shtml |url-status=dead }}</ref> ಅಮೆರಿಕಾ ಸಂಯುಕ್ತ ಸಂಸ್ಥಾನದ ಸಣ್ಣ ಉದ್ಯಮ ಆಡಳಿತದ 2007ನೇ ಸಮೀಕ್ಷೆ ಪ್ರಕಾರ, ಸ್ಥಳೀಯ ಅಮೆರಿಕನ್ನರಲ್ಲಿ ಶೇಕಡ 1ರಷ್ಟು ಜನರು ಮಾತ್ರ ವ್ಯಾಪಾರದ ಮಾಲೀಕರಾಗಿ ನಿರ್ವಹಿಸುತ್ತಾರೆ.<ref name="SBA">{{cite web|url=http://www.america.gov/st/diversity-english/2007/December/20071221175918ABretnuH0.3369257.html|title=Number of U.S. [[minority group|Minority]] Owned Businesses Increasing|archiveurl=https://web.archive.org/web/20080605074024/http://www.america.gov/st/diversity-english/2007/December/20071221175918ABretnuH0.3369257.html|archivedate=2008-06-05}}</ref> ಪ್ರತಿಯೊಂದು ಸಾಮಾಜಿಕ ಅಂಕಿಅಂಶದಲ್ಲಿ ಸ್ಥಳೀಯ ಅಮೆರಿಕನ್ನರು ಕೆಳಗಿನ ಶ್ರೇಣಿಯಲ್ಲಿದ್ದಾರೆ, ಪ್ರತಿ 100,000ಜನರ ಪೈಕಿ 18.5ಶೇಕಡದೊಂದಿಗೆ ಎಲ್ಲ ಅಲ್ಪಸಂಖ್ಯಾತರ ಪೈಕಿ ಅತ್ಯಧಿಕ ಹದಿವಯಸ್ಕರ ಆತ್ಮಹತ್ಯೆ ಪ್ರಮಾಣವನ್ನು ಒಳಗೊಂಡಿದೆ. ಹದಿವಯಸ್ಕರ ಗರ್ಭಧರಿಸುವಿಕೆಯಲ್ಲಿ ಅತ್ಯಧಿಕ ಪ್ರಮಾಣ, ಪ್ರೌಢಶಾಲೆಯಲ್ಲಿ ವ್ಯಾಸಂಗ ತ್ಯಜಿಸುವವರ ಪೈಕಿ ಶೇಕಡ 54 ಅತ್ಯಧಿಕ ಪ್ರಮಾಣ, ಅತೀ ಕಡಿಮೆ ತಲಾದಾಯ ಮತ್ತು ಶೇಕಡ 50 ಮತ್ತು ಶೇಕಡ 90ರ ನಡುವೆ [[ನಿರುದ್ಯೋಗ]]ದ ಪ್ರಮಾಣಗಳು.
ಸ್ಥಳೀಯ ಅಮೆರಿಕನ್ನರ ಮೀಸಲು ಪ್ರದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ತೊಡಕುಗಳನ್ನು ಸಾಮಾನ್ಯವಾಗಿ ಇತರರು ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಮೆರಿಕನ್ ಇಂಡಿಯನ್ ಆರ್ಥಿಕ ಅಭಿವೃದ್ಧಿ ಕುರಿತು ಹಾರ್ವರ್ಡ್ ಯೋಜನೆಯ ಇಬ್ಬರು ತಜ್ಞರಾದ ಜೋಸೆಫ್ ಕಾಲ್ಟ್<ref>{{cite web|url=http://www.hks.harvard.edu/hpaied/people/kalt.htm |title=Harvard Project on American Indian Economic Development |accessdate=2008-06-17 |last=Kalt |first=Joseph }}</ref> ಮತ್ತು ಸ್ಟೀಫನ್ ಕಾರ್ನೆಲ್<ref>{{cite web |url=http://udallcenter.arizona.edu/staff/scornell.html |title=Co-director, Harvard Project on American Indian Economic Development |accessdate=2008-06-17 |last=Cornell |first=Stephen |archive-date=2008-06-19 |archive-url=https://web.archive.org/web/20080619015224/http://udallcenter.arizona.edu/staff/scornell.html |url-status=dead }}</ref> ತಮ್ಮ ಶ್ರೇಷ್ಠ ವರದಿ ''ವಾಟ್ ಕ್ಯಾನ್ ಟ್ರೈಬ್ಸ್ ಡು?'' ನಲ್ಲಿ ಉದಾಹರಿಸಿದ್ದಾರೆ.''ಸ್ಟ್ರಾಟಜೀಸ್ ಎಂಡ್ ಇನ್ಸ್ಟಿಟ್ಯೂಷನ್ಸ್ ಇನ್ ಅಮೆರಿಕನ್ ಇಂಡಿಯನ್ ಎಕಾನಾಮಿಕ್ ಡೆವಲಪ್ಮೆಂಟ್'' <ref>{{cite web |url=http://www.ksg.harvard.edu/hpaied/docs/reloading%20the%20dice.pdf |title=What Can Tribes Do? Strategies and Institutions in American Indian Economic Development |accessdate=2008-06-17 |last=Cornell, S. |first=Kalt, J. |archive-date=2004-04-07 |archive-url=https://web.archive.org/web/20040407025730/http://www.ksg.harvard.edu/hpaied/docs/reloading%20the%20dice.pdf |url-status=bot: unknown }}</ref> ಈ ಕೆಳಗಿನಂತಿವೆ(ಅಪೂರ್ಣ ಪಟ್ಟಿ, ನೋಡಿ ಪೂರ್ಣ ಕಾಲ್ಟ್ &ಕಾರ್ನೆಲ್ ವರದಿ):
* ಬಂಡವಾಳಕ್ಕೆ ಅವಕಾಶದ ಕೊರತೆ
* ಮಾನವ ಬಂಡವಾಳದ ಕೊರತೆ (ಶಿಕ್ಷಣ, ಕೌಶಲಗಳು, ತಾಂತ್ರಿಕ ತಜ್ಞತೆ) ಮತ್ತು ಅಭಿವೃದ್ಧಿಗೆ ಮಾರ್ಗಗಳು.
* ಮೀಸಲು ಪ್ರದೇಶಗಳು ಪರಿಣಾಮಕಾರಿ ಯೋಜನೆಯ ಕೊರತೆಯನ್ನು ಹೊಂದಿದೆ.
* ನೈಸರ್ಗಿಕ ಸಂಪನ್ಮೂಲಗಳಲ್ಲಿ ಮೀಸಲು ಪ್ರದೇಶಗಳು ಕಳಪೆಯಾಗಿವೆ.
* ಮೀಸಲು ಪ್ರದೇಶಗಳು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿವೆ, ಆದರೆ ಸಾಕಷ್ಟು ನಿಯಂತ್ರಣದ ಕೊರತೆಯನ್ನು ಒಳಗೊಂಡಿದೆ.
* ಮೀಸಲು ಪ್ರದೇಶಗಳು ಮಾರುಕಟ್ಟೆಗಳಿಂದ ದೂರವಿದ್ದು, ಸಾಗಾಣಿಕೆಯ ಅತ್ಯಧಿಕ ವೆಚ್ಚಗಳಿಂದ ಅನನುಕೂಲವನ್ನು ಹೊಂದಿವೆ.
* ಸ್ಥಳೀಯೇತರ ಅಮೆರಿಕದ ಸಮುದಾಯಗಳಿಂದ ತೀವ್ರ ಸ್ಪರ್ಧೆ ಎದುರಿಸಿದ ಕಾರಣ ಮೀಸಲು ಪ್ರದೇಶಗಳಲ್ಲಿ ನೆಲೆಹೊಂದುವಂತೆ ಬಂಡವಾಳದಾರರಿಗೆ ಬುಡಕಟ್ಟು ಜನಾಂಗಗಳು ಮನವೊಲಿಸಲು ಸಾಧ್ಯವಾಗಿಲ್ಲ.
* ಮೀಸಲು ಪ್ರದೇಶ ಅಭಿವೃದ್ಧಿಯಲ್ಲಿ ಇಂಡಿಯನ್ ಅಫೇರ್ಸ್ ಬ್ಯೂರೊ ಅರ್ಥಶೂನ್ಯ, ಭ್ರಷ್ಟ ಮತ್ತು/ಅಥವಾ ನಿರಾಸಕ್ತಿಯಿಂದ ಕೂಡಿತ್ತು.
* ಬುಡಕಟ್ಟು ರಾಜಕಾರಣಿಗಳು ಮತ್ತು ಆಡಳಿತಾಧಿಕಾರಿಗಳು ಅರ್ಥಶೂನ್ಯತೆ ಅಥವಾ ಭ್ರಷ್ಟತೆಯಿಂದ ಕೂಡಿದ್ದರು.
* ಮೀಸಲು ಪ್ರದೇಶ ಕುರಿತ ಗುಂಪುಗುಳಿತನವು ಬುಡಕಟ್ಟು ನಿರ್ಧಾರಗಳಲ್ಲಿ ಸ್ಥಿರತೆಯನ್ನು ನಾಶಮಾಡಿದೆ.
* ಬುಡಕಟ್ಟು ಸರ್ಕಾರದ ಅಸ್ಥಿರತೆ ಹೊರಗಿನವರನ್ನು ಬಂಡವಾಳ ಹೂಡುವುದರಿಂದ ದೂರವಿಟ್ಟಿದೆ.
* ಉದ್ಯಮಶೀಲತೆಯ ಕೌಶಲಗಳು ಮತ್ತು ಅನುಭವ ದುರ್ಲಭವಾಗಿವೆ.
* ಬುಡಕಟ್ಟು ಸಂಸ್ಕೃತಿಗಳು ಅಡ್ಡಬರುತ್ತವೆ.
ಆರ್ಥಿಕ ಪೈಪೋಟಿಯಲ್ಲಿ ಮೇಲುಗೈಯಾಗಲು ಪ್ರಮುಖ ತೊಡಕುಗಳಲ್ಲಿ ಒಂದೆಂದರೆ, ಉದ್ಯಮಶೀಲತೆಯ ಜ್ಞಾನದ ಕೊರತೆ ಮತ್ತು ಇಂಡಿಯನ್ ಮೀಸಲು ಪ್ರದೇಶಗಳಲ್ಲಿ ಅನುಭವದ ಕೊರತೆ. “ಸಾಮಾನ್ಯವಾಗಿ ಶಿಕ್ಷಣದ ಕೊರತೆ ಮತ್ತು ವ್ಯವಹಾರದ ಬಗ್ಗೆ ಅನುಭವದ ಕೊರತೆಯು ಭವಿಷ್ಯದ ಉದ್ಯಮಿಗಳಿಗೆ ಗಮನಾರ್ಹ ಸವಾಲಾಗಿದೆ”ಎಂದು 2004ರಲ್ಲಿ ನಾರ್ತ್ವೆಸ್ಟ್ ಏರಿಯ ಫೌಂಡೇಶನ್ನ ಸ್ಥಳೀಯ ಅಮೆರಿಕದ ಉದ್ಯಮಶೀಲತೆಯ ಇನ್ನೊಂದು ವರದಿ ತಿಳಿಸುತ್ತದೆ. ಉದ್ಯಮಶೀಲತೆ ಸಂಪ್ರದಾಯಗಳು ಮತ್ತು ಇತ್ತೀಚಿನ ಅನುಭವಗಳ ಕೊರತೆ ಹೊಂದಿರುವ ಸ್ಥಳೀಯ ಅಮೆರಿಕನ್ನರ ಸಮುದಾಯಗಳು ಉದ್ಯಮಿಗಳಿಗೆ ಅಭಿವೃದ್ದಿಯಾಗಲು ಅಗತ್ಯವಾದ ಬೆಂಬಲವನ್ನು ಸಾಮಾನ್ಯವಾಗಿ ನೀಡುವುದಿಲ್ಲ. ಇದರ ಪರಿಣಾಮವಾಗಿ, ಶಾಲೆಯ ಪಠ್ಯಕ್ರಮದಲ್ಲಿ ಮತ್ತು ಶಾಲೆಯ ನಂತರ ಮತ್ತು ಸಮುದಾಯದ ಚಟುವಟಿಕೆಗಳಲ್ಲಿ ಪ್ರಾಯೋಗಿಕ ಉದ್ಯಮಶೀಲತೆ ಶಿಕ್ಷಣವು ಒಳಗೊಳ್ಳುವ ಅಗತ್ಯವಿದೆ. ಇದರಿಂದ ಕಿರಿಯ ವಯಸ್ಸಿನಲ್ಲೇ ಉದ್ಯಮಶೀಲತೆಯ ಅವಶ್ಯಕ ಅಂಶಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುತ್ತದೆ ಮತ್ತು ಜೀವನಪೂರ್ತಿ ಈ ಅಂಶಗಳನ್ನು ಬಳಸಿಕೊಳ್ಳಲು ಅವರಿಗೆ ಉತ್ತೇಜನ ನೀಡುತ್ತದೆ.<ref name="CFED">{{cite web |url=http://www.energizingentrepreneurs.org/content/cr.php?id=4&sel=5 |title=Native Entrepreneurship: Challenges and opportunities for rural communities — CFED, Northwest Area Foundation December 2004 |access-date=2011-02-25 |archive-date=2013-02-22 |archive-url=https://web.archive.org/web/20130222151900/http://www.energizingentrepreneurs.org/content/cr.php?id=4&sel=5 |url-status=dead }}</ref> ಒಂದು ಪ್ರಕಟಣೆಯು ''ರೆಜ್ ಬಿಜ್'' ನಿಯತಕಾಲಿಕೆಯಲ್ಲಿ ಈ ವಿಷಯಗಳನ್ನು ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ಮೀಸಲಾಗಿದೆ.
===ಸ್ಥಳೀಯ ಅಮೆರಿಕನ್ನರು, ಯುರೋಪಿಯನ್ನರು ಮತ್ತು ಆಫ್ರಿಕನ್ನರು===
[[File:Portrait (Front) of Lillian Gross, Niece of Susan Sanders (Mixed Blood) 1906.jpg|200px|right|thumb|ಸ್ಮಿತ್ಸೋನಿಯನ್ ಮೂಲದಿಂದ "ಮಿಶ್ರ ರಕ್ತ"ವೆಂದು ವಿವರಿಸಲ್ಪಡುವ ಲಿಲ್ಲಿಯನ್ ಗ್ರೋಸ್ ಸ್ಥಳೀಯ ಅಮೆರಿಕನ್ ಮತ್ತು ಯುರೋಪಿಯನ್/ಅಮೆರಿಕನ್ ಪರಂಪರೆಯವರಾಗಿದ್ದಾರೆ.ಅವರು ತನ್ನ ಚೆರೋಕೀ ಸಂಸ್ಕೃತಿಯಿಂದ ಗುರುತಿಸಲ್ಪಡುತ್ತಾರೆ.]]
ಸ್ಥಳೀಯ ಅಮೆರಿಕನ್ನರು, ಯುರೋಪಿಯನ್ನರು ಮತ್ತು ಆಫ್ರಿಕನ್ನರ ನಡುವೆ ಅಂತರ್ಜನಾಂಗೀಯ ಸಂಬಂಧಗಳು ಜಟಿಲ ವಿಷಯವಾಗಿದ್ದು, ಅಂತರ್ಜನಾಂಗೀಯ ಸಂಬಂಧಗಳನ್ನು ಕುರಿತು ಕೆಲವೇ ಆಳವಾದ ಅಧ್ಯಯನಗಳಿಂದ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ.<ref name="lin">{{Cite news|url=http://findarticles.com/p/articles/mi_m1546/is_n4_v11/ai_18953815|title=The Indian connection|author=Mary A. Dempsey|accessdate=2008-09-19|year=1996|publisher== American Visions|archive-date=2010-05-02|archive-url=https://web.archive.org/web/20100502001011/http://findarticles.com/p/articles/mi_m1546/is_n4_v11/ai_18953815/|url-status=dead}}</ref><ref name="takingAssToHeart">{{Cite book|url=https://books.google.com/?id=3VCc9XEiFt4C&pg=PA176&lpg=PA176&dq=native+american+and+white+interracial+affairs|title=Taking assimilation to heart|author=Katherine Ellinghaus | isbn=9780803218291 | year=2006 | publisher==U of Nebraska Press}}</ref> ಯುರೋಪಿಯನ್/ಸ್ಥಳೀಯ ಅಮೆರಿಕನ್ ಅಂತರ್ವಿವಾಹಗಳು ಮತ್ತು ಸಂಪರ್ಕದ ಕೆಲವು ಪ್ರಥಮ ದಾಖಲೆಯಿಂದ ಕೂಡಿದ ಪ್ರಕರಣಗಳು ಕೊಲಂಬಿಯನ್ ಅವಧಿಯ ನಂತರದ [[ಮೆಕ್ಸಿಕೋ|ಮೆಕ್ಸಿಕೊ]]ದಲ್ಲಿ ದಾಖಲಾಗಿವೆ. ಒಂದು ಪ್ರಕರಣವು [[ಸ್ಪೇನ್|ಸ್ಪೇನ್]]ನ ಯುರೋಪ್ ಪ್ರಜೆ ಗೊಂಜಾಲೊ ಗುರೆರೊಗೆ ಸಂಬಂಧಿಸಿದ್ದು, ಯುಕಾಟನ್ ಪರ್ಯಾಯದ್ವೀಪದಲ್ಲಿ ಅವನ ಹಡಗು ನಾಶವಾಯಿತು ಮತ್ತು ಮಾಯನ್ ಕುಲೀನ ಸ್ತ್ರೀಯಿಂದ ಮೂವರು ಮೆಸ್ಟಿಜೊ(ಮಿಶ್ರಿತ ಯುರೋಪ್ ಮತ್ತು ಸ್ಥಳೀಯ ಅಮೆರಿಕದ ಪೀಳಿಗೆ) ಮಕ್ಕಳಿಗೆ ತಂದೆಯಾದ. ಇನ್ನೊಂದು ಪ್ರಕರಣವು ಹರ್ನನ್ ಕಾರ್ಟೆಸ್ ಮತ್ತು ಅವನ ಪ್ರೇಯಸಿ ಲಾ ಮೆರಿಂಚೆ ಅವರದ್ದಾಗಿದ್ದು, ಅಮೆರಿಕದಲ್ಲಿ ಇನ್ನೊಂದು ಪ್ರಥಮ ಬಹುಜನಾಂಗೀಯ ಪೀಳಿಗೆ ಹುಟ್ಟಲು ಕಾರಣರಾಗಿದ್ದಾರೆ.<ref name="rebecca">{{cite web
| url = http://www.virtualschool.edu/mon/SocialConstruction/SexualityAndInvasion.html
| title = Sexuality and the Invasion of America: 1492–1806
| accessdate = 2009-05-19
| publisher = = http://www.virtualschool.edu
| archive-date = 1997-10-23
| archive-url = https://web.archive.org/web/19971023042838/http://www.virtualschool.edu/mon/SocialConstruction/SexualityAndInvasion.html
| url-status = dead
}}</ref>
====ಸ್ಥಳೀಯ ಅಮೆರಿಕನ್ನರು ಮತ್ತು ಯುರೋಪಿಯನ್ನರ ಜತೆ ಸಮೀಕರಣ ಸ್ವೀಕಾರ====
ವಸಾಹತುಗಳ ಸ್ಥಾಪನೆ ಮತ್ತು ರಾಷ್ಟ್ರತ್ವದ ಮುಂಚಿನ ವರ್ಷಗಳಲ್ಲಿ ಸ್ಥಳೀಯ ಅಮೆರಿಕನ್ನರ ಜತೆ ಸಂಪರ್ಕ ಹೊಂದಿದ ಯಾವುದೇ ಜನಾಂಗಕ್ಕಿಂತ ಐರೋಪ್ಯ ಪರಿಣಾಮವು ತಕ್ಷಣದ,ವ್ಯಾಪಕವಾಗಿ ಹರಡಿದ ಮತ್ತು ಗಹನತೆಯಿಂದ ಕೂಡಿತ್ತು. ಸ್ಥಳೀಯ ಅಮೆರಿಕನ್ನರ ಮಧ್ಯದಲ್ಲಿ ವಾಸಿಸುತ್ತಿದ್ದ ಯುರೋಪಿಯನ್ನರನ್ನು ಸಾಮಾನ್ಯವಾಗಿ "ವೈಟ್ ಇಂಡಿಯನ್ನರು" ಎಂದು ಕರೆಯಲಾಗುತ್ತದೆ. ಅವರು ಸ್ಥಳೀಯ ಸಮುದಾಯಗಳಲ್ಲಿ ವರ್ಷಗಟ್ಟಲೆ ವಾಸಿಸಿದರು, ಸ್ಥಳೀಯ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವುದನ್ನು ಕಲಿತರು, ಸ್ಥಳೀಯ ಮಂಡಳಿಗಳಲ್ಲಿ ಭಾಗವಹಿಸಿದರು ಮತ್ತು ಸ್ಥಳೀಯ ಸಂಗಡಿಗರ ಪಕ್ಕದಲ್ಲಿ ಹೋರಾಟ ಮಾಡಿದರು.<ref name="white_indians">
{{cite web
| url = http://www.galafilm.com/1812/e/background/nat_white_ind.html
| title = Sharing Choctaw History
| accessdate = 2008-02-05
| publisher= = A First Nations Perspective, Galafilm
}}
</ref>
[[File:Fort-orleans-return.jpg|275px|thumb|left|ಫ್ರಾನ್ಸ್ನ ಪ್ಯಾರಿಸ್ನ ಪ್ರವಾಸದಿಂದ 1725ರಲ್ಲಿ ಹಿಂದಿರುಗಿದ ಓಸೇಜ್ ಮದುಮಗಳುಆ ಓಸೇಜ್ ಮಹಿಳೆಯು ಫ್ರೆಂಚ್ ಸೈನಿಕನನ್ನು ಮದುವೆಯಾಗುತ್ತಾಳೆ.]]
ಮುಂಚಿನ ಸಂಪರ್ಕಗಳು ಸಾಮಾನ್ಯವಾಗಿ ಉದ್ವೇಗ ಮತ್ತು ಭಾವವಿಕಾರಗಳಿಂದ ಕೂಡಿತ್ತು. ಆದರೆ ಸ್ನೇಹತ್ವ, ಸಹಕಾರ ಮತ್ತು ನಿಕಟತೆಯ ಕ್ಷಣಗಳಿಂದ ಕೂಡ ಕೂಡಿದ್ದವು.<ref name="white_red_relations1">{{cite web
| url = http://www.artsofcitizenship.umich.edu/sos/topics/native/early.html
| title = Native Americans: Early Contact
| accessdate = 2009-05-19
| publisher = = Students on Site
| archive-date = 2008-05-10
| archive-url = https://web.archive.org/web/20080510222953/http://www.artsofcitizenship.umich.edu/sos/topics/native/early.html
| url-status = dead
}}</ref> ಐರೋಪ್ಯ ಪುರುಷರು ಮತ್ತು ಸ್ಥಳೀಯ ಮಹಿಳೆಯರ ನಡುವೆ ಇಂಗ್ಲೀಷ್, ಸ್ಪೇನ್ ಮತ್ತು ಫ್ರೆಂಚ್ ವಸಾಹತುಗಳಲ್ಲಿ ವಿವಾಹಗಳು ಜರುಗಿದವು. 1528ರಲ್ಲಿ ಮಾಕ್ಟೆಜುಮಾ IIಉತ್ತರಾಧಿಕಾರಿಣಿ ಇಸಾಬೆಲ್ ಡೆ ಮಾಕ್ಟೆಜುಮಾ ಸ್ಪೇನ್ ಸಾಹಸಿ ಅಲೋನ್ಸೊ ಡೆ ಗ್ರಾಡೊ ಅವರನ್ನು ವಿವಾಹವಾದರು. ಅವರ ಸಾವಿನ ನಂತರ ಜಾನ್ ಕ್ಯಾನೊ ಡೆ ಸಾವೆಡ್ರಾ ಅವರನ್ನು ವಿವಾಹವಾದರು. ಅವರಿಗೆ ಒಟ್ಟು ಐವರು ಮಕ್ಕಳು ಜನಿಸಿದರು. ಬಹುಕಾಲದ ನಂತರ, 1614ರ ಏಪ್ರಿಲ್ 5ರಂದು ಪೊಕಾಹೊಂಟಾಸ್ ಇಂಗ್ಲೀಷ್ ಪ್ರಜೆ ಜಾನ್ ರಾಲ್ಫ್ ಅವರನ್ನು ವಿವಾಹವಾದರು. ಅವರಿಗೆ ಥಾಮಸ್ ರಾಲ್ಫ್ ಎಂಬ ಮಗು ಜನಿಸಿತು. ಚಕ್ರವರ್ತಿ ಎರಡನೇ ಮಾಕ್ಟೆಜುಮಾನ ಅನೇಕ ಉತ್ತರಾಧಿಕಾರಿಗಳನ್ನು ಸ್ಪೇನ್ ರಾಜಪ್ರಭುತ್ವವು ಮನ್ನಣೆ ನೀಡಿತು. ಅವರಿಗೆ ಡ್ಯೂಕ್ ಆಫ್ ಮಾಕ್ಟೆಜುಮಾ ಡಿ ಟುಲ್ಟೆಂಗೊ ಸೇರಿದಂತೆ ಅನೇಕ ಬಿರುದುಗಳನ್ನು ದಯಪಾಲಿಸಿತು.
ಸ್ಥಳೀಯ ಅಮೆರಿಕನ್ನರು ಮತ್ತು ಯುರೋಪಯನ್ನರ ನಡುವೆ ನಿಕಟ ಸಂಬಂಧಗಳು ವ್ಯಾಪಕವಾಗಿ ಬೆಳೆಯಿತು. ಇದು ಫ್ರೆಂಚ್ ಮತ್ತು ಸ್ಪೇನ್ ಪರಿಶೋಧಕರು ಮತ್ತು ಟ್ರಾಪರ್(ಕಾಡುಪ್ರಾಣಿಗಳನ್ನು ಹಿಡಿಯುವವರು)ಗಳಿಂದ ಆರಂಭವಾಯಿತು. ಉದಾಹರಣೆಗೆ 19ನೇ ಶತಮಾನದ ಪೂರ್ವದಲ್ಲಿ ಸ್ಥಳೀಯ ಅಮೆರಿಕದ ಮಹಿಳೆಯಾದ ಸಕಾಗಾವಿ, ಲೆವಿಸ್ ಮತ್ತು ಕ್ಲಾರ್ಕ್ ಯಾತ್ರೆಯನ್ನು ಅನುವಾದಿಸಲು ನೆರವಾಗಿದ್ದು, ಫ್ರೆಂಚ್ ಟ್ರಾಪರ್ ಟೌಸೇಂಟ್ ಚಾರ್ಬೋನಿಯನ್ನು ವಿವಾಹವಾಗಿದ್ದರು. ಅವರಿಗೆ ಜೀನ್ ಬಾಪ್ಟಿಸ್ಟೆ ಚಾರ್ಬೊನಿ ಎಂಬ ಪುತ್ರ ಜನಿಸಿದರು. ಇದು ವ್ಯಾಪಾರಿಗಳು ಮತ್ತು ಟ್ರಾಪರ್ಗಳ ನಡುವೆ ಅತ್ಯಂತ ವಿಶಿಷ್ಟ ನಮೂನೆಯಾಗಿತ್ತು.
[[File:Five Indians and a Captive.jpg|250px|thumb|right|ಫೈವ್ ಇಂಡಿಯನ್ಸ್ ಆಂಡ್ ಎ ಕ್ಯಾಪ್ಟಿವ್, ಇದನ್ನು 1855ರಲ್ಲಿ ಕಾರ್ಲ್ ವಿಮಾರ್ ಚಿತ್ರಿಸಿದರು]]
ಅನೇಕ ನಿವಾಸಿಗಳು ಸ್ಥಳೀಯ ಅಮೆರಿಕನ್ನರ ಬಗ್ಗೆ ಭಯಪಟ್ಟಿದ್ದರು. ಏಕೆಂದರೆ ಅವರು ಭಿನ್ನಸ್ವರೂಪದಿಂದ ಕೂಡಿದ್ದರು.<ref name="white_red_relations1" /> ಅವರ ವಿಧಾನಗಳು ಬಿಳಿಯರಿಗೆ ಅನಾಗರಿಕವೆನಿಸಿದವು ಮತ್ತು ಅವರಿಗೆ ಅರ್ಥವಾಗದ ಸಂಸ್ಕೃತಿ ಬಗ್ಗೆ ಅನುಮಾನ ಹೊಂದಿದ್ದರು.<ref name="white_red_relations1" /> ಒಬ್ಬ ಸ್ಥಳೀಯ ಅಮೆರಿಕನ್ ಲೇಖಕ ಆಂಡ್ರಿವ್ ಜೆ. ಬ್ಲಾಕ್ಬರ್ಡ್ 1897ರಲ್ಲಿ, ಬಿಳಿಯ ನಿವಾಸಿಗಳು ಸ್ಥಳೀಯ ಅಮೆರಿಕದ ಬುಡಕಟ್ಟುಗಳಲ್ಲಿ ಅನೈತಿಕತೆಗಳನ್ನು ಪರಿಚಯಿಸಿದ್ದನ್ನು ಕಂಡುಕೊಂಡಿದ್ದಾರೆ.<ref name="white_red_relations1"/>
ಅವರು ತಮ್ಮ ಪುಸ್ತಕ ಹಿಸ್ಟರಿ ಆಫ್ ದಿ ಒಟ್ಟಾವ ಎಂಡ್ ಚಿಪ್ಪೇವಾ ಇಂಡಿಯನ್ಸ್ ಆಫ್ ಮಿಚಿಗನ್ನಲ್ಲಿ ಹೀಗೆ ಬರೆದಿದ್ದಾರೆ,
<blockquote>
"ಒಟ್ಟಾವಾಗಳು ಮತ್ತು ಚಿಪ್ಪೇವಾಗಳು ತಮ್ಮ ಆದಿಕಾಲದ ರಾಜ್ಯದಲ್ಲಿ ಸದ್ಗುಣಿಗಳಾಗಿದ್ದರು. ನಮ್ಮ ಹಳೆಯ ಸಂಪ್ರದಾಯಗಳಲ್ಲಿ ಯಾವುದೇ ಅಕ್ರಮ ಸಂಬಂಧದಿಂದ ಜನಿಸಿದ ಮಕ್ಕಳ ಬಗ್ಗೆ ವರದಿಯಾಗಿರಲಿಲ್ಲ. ಆದರೆ ತೀರಾ ಇತ್ತೀಚೆಗೆ ಈ ದುಷ್ಟಪ್ರವೃತ್ತಿಯು ಒಟ್ಟಾವಗಳಲ್ಲಿ ಕಾಣಿಸಿದ್ದು, ಆರ್ಬರ್ ಕ್ರೋಚ್ನ ಒಟ್ಟಾವಗಳ ನಡುವೆ ಎರಡನೇ ಪ್ರಕರಣವು 1897ರಲ್ಲಿ ಇನ್ನೂ ಜೀವಂತವಿತ್ತು. ಆಗಿನಿಂದ ಈ ಕೆಡುಕುಗಳು ಆಗಾಗ್ಗೆ ಕಾಣಿಸಿಕೊಂಡಿತು. ದುಷ್ಟ ಬಿಳಿಯ ಜನರು ಬುಡಕಟ್ಟು ಜನರಲ್ಲಿ ದುಷ್ಟ ಪ್ರವೃತ್ತಿಗಳನ್ನು ಪರಿಚಯಿಸಿದರು.<ref name="white_red_relations1" /></blockquote>
ಅಮೆರಿಕ ಸಂಯುಕ್ತ ಸಂಸ್ಥಾನದ ಸರ್ಕಾರ ಸ್ಥಳೀಯ ಅಮೆರಿಕನ್ನರ ಜತೆ ಭೂ ಒಪ್ಪಂದಗಳನ್ನು ಮಾಡಿಕೊಂಡಾಗ, ಮನಸ್ಸಿನಲ್ಲಿ ಎರಡು ಉದ್ದೇಶಗಳನ್ನು ಹೊಂದಿತ್ತು. ಮೊದಲಿಗೆ ಅವರು ಬಿಳಿಯರ ನೆಲೆಗಳಿಗೆ ಹೆಚ್ಚು ಭೂಮಿಯನ್ನು ನೀಡಲು ಬಯಸಿದ್ದರು.<ref name="white_red_relations22">{{cite web| url= http://www.artsofcitizenship.umich.edu/sos/topics/native/claiming.html| title= Native Americans: Early Contact| accessdate= 2009-05-19| publisher= = Students on Site| archive-date= 2008-05-10| archive-url= https://web.archive.org/web/20080510222953/http://www.artsofcitizenship.umich.edu/sos/topics/native/early.html| url-status= dead}}</ref> ಎರಡನೆಯದಾಗಿ, ಸ್ಥಳೀಯರಿಗೆ ಬಿಳಿಯ ಜನರ ರೀತಿಯಲ್ಲೇ ಭೂಮಿಯ ಬಳಕೆಗೆ ಬಲವಂತ ಮಾಡುವ ಮೂಲಕ ಬಿಳಿಯರು ಮತ್ತು ಸ್ಥಳೀಯ ಅಮೆರಿಕನ್ನರ ನಡುವೆ ಉದ್ವಿಗ್ನತೆಗಳನ್ನು ಶಮನ ಮಾಡಲು ಬಯಸಿದ್ದರು.<ref name="white_red_relations22" /> ಈ ಗುರಿಗಳನ್ನು ಸಾಧಿಸಲು ಸರ್ಕಾರವು ವಿವಿಧ ಕಾರ್ಯತಂತ್ರಗಳನ್ನು ಹೊಂದಿತ್ತು. ಅನೇಕ ಒಪ್ಪಂದಗಳಲ್ಲಿ ತಮ್ಮ ಭೂಮಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸ್ಥಳೀಯ ಅಮೆರಿಕನ್ನರು ಕೃಷಿಕರಾಗುವ ಅಗತ್ಯದ ಬಗ್ಗೆ ತಿಳಿಸಲಾಗಿತ್ತು.<ref name="white_red_relations22" /> ಸ್ಥಳೀಯ ಅಮೆರಿಕನ್ನರನ್ನು ಸಹಿ ಹಾಕುವಂತೆ ಬಲಪ್ರಯೋಗಿಸಿದ ದಾಖಲೆಗಳನ್ನು ಸರ್ಕಾರಿ ಅಧಿಕಾರಿಗಳು ಸಾಮಾನ್ಯವಾಗಿ ತರ್ಜುಮೆ ಮಾಡುತ್ತಿರಲಿಲ್ಲ. ಸ್ಥಳೀಯ ಮುಖಂಡರಿಗೂ ಕೂಡ ತಾವು ಸಹಿ ಹಾಕುವುದು ಯಾವುದಕ್ಕೆ ಎಂಬ ಕಲ್ಪನೆಯೂ ಇರಲಿಲ್ಲ ಅಥವಾ ಕಡಿಮೆ ಕಲ್ಪನೆ ಹೊಂದಿದ್ದರು.<ref name="white_red_relations22" />
ಸ್ಥಳೀಯ ಅಮೆರಿಕದ ಪುರುಷ ಬಿಳಿಯವರ್ಣೀಯ ಮಹಿಳೆಯನ್ನು ವಿವಾಹವಾಗಬೇಕಾದರೆ,"ಉತ್ತಮ ಮನೆಯಲ್ಲಿ ಬಿಳಿಯವರ್ಣೀಯ ಮಹಿಳೆಗೆ ಆಸರೆಯಾಗಿರುವುದನ್ನು ಸಾಬೀತು ಮಾಡುವವರೆಗೆ" ತಂದೆತಾಯಿಗಳ ಅನುಮತಿಯನ್ನು ಪಡೆಯಬೇಕಾಗಿತ್ತು.<ref name="white_reds">
{{Cite book| url = https://books.google.com/?id=3VCc9XEiFt4C&pg=PA176&lpg=PA176&dq=native+american+and+white+interracial+affairs| title = Taking assimilation to heart | first=Katherine | last=Ellinghaus | isbn=9780803218291 | year=2006 | publisher==U of Nebraska Press}}
</ref> 19ನೇ ಶತಮಾನದ ಪೂರ್ವದಲ್ಲಿ, ಸ್ಥಳೀಯ ಅಮೆರಿಕನ್ ಟೆಕುಮ್ಸೆ ಮತ್ತು ಹೊಂಬಣ್ಣದ ಕೂದಲಿನ ನೀಲಿ ಕಣ್ಣಿನ ರೆಬೆಕ್ಕಾ ಗ್ಯಾಲೋವೇ ಅಂತರ ಜನಾಂಗೀಯ ಸಂಬಂಧವನ್ನು ಹೊಂದಿದ್ದರು. 19ನೇ ಶತಮಾನದ ಕೊನೆಯಲ್ಲಿ, ಹ್ಯಾಂಪ್ಟನ್ ಸಂಸ್ಥೆಯು ಸ್ಥಳೀಯ ಅಮೆರಿಕದ ಕಾರ್ಯಕ್ರಮವನ್ನು ನಿರ್ವಹಿಸಿದ ಸಂದರ್ಭದಲ್ಲಿ ಮೂವರು ಸ್ಥಳೀಯ ಅಮೆರಿಕದ ಪುರುಷರನ್ನು ಭೇಟಿ ಮಾಡಿದ ಐರೋಪ್ಯ-ಅಮೆರಿಕದ ಮಧ್ಯಮ ವರ್ಗದ ಮಹಿಳಾ ಸಿಬ್ಬಂದಿಯು ಅವರನ್ನು ವಿವಾಹವಾದರು.<ref name="white_red_marriages">{{cite web
| url = http://www.vahistorical.org/publications/Abstract_1083_ellinghaus.htm
| title = Virginia Magazine of History and Biography
| accessdate = 2009-05-19
| publisher = = Virginia Historical Society
| archive-date = 2008-10-18
| archive-url = https://web.archive.org/web/20081018202023/http://www.vahistorical.org/publications/Abstract_1083_ellinghaus.htm
| url-status = dead
}}</ref> ಚಾರ್ಲೆಸ್ ಈಸ್ಟ್ಮನ್ ಐರೋಪ್ಯ-ಅಮೆರಿಕನ್ ಪತ್ನಿ ಎಲೈನ್ ಗೂಡೇಲ್ ಅವರನ್ನು ವಿವಾಹವಾದರು. ಗೂಡೇಲ್ ಮೀಸಲು ಪ್ರದೇಶಗಳಲ್ಲಿ ಸ್ಥಳೀಯ ಅಮೆರಿಕನ್ನರ ಶಿಕ್ಷಣದ ಸೂಪರಿಂಟೆಂಡೆಂಟ್ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದಾಗ ಡಕೋಟಾ ಪ್ರದೇಶದಲ್ಲಿ ಈಸ್ಟ್ಮನ್ ಭೇಟಿಯಾಗಿದ್ದರು. ಅವರಿಗೆ ಒಟ್ಟು ಆರು ಮಂದಿ ಮಕ್ಕಳಿದ್ದರು.
====ಸ್ಥಳೀಯ ಅಮೆರಿಕನ್ನರ ಮತ್ತು ಆಫ್ರಿಕನ್ನರ ಸಂಬಂಧಗಳು====
{{See|Black Indians}}
ಆಫ್ರಿಕನ್ನರು ಮತ್ತು ಸ್ಥಳೀಯ ಅಮೆರಿಕನ್ನರು ಶತಮಾನಗಳವರೆಗೆ ಪರಸ್ಪರ ಪ್ರಭಾವ ಬೀರಿದ್ದರು. ಆಫ್ರಿಕನ್ನರ ಮತ್ತು ಸ್ಥಳೀಯ ಅಮೆರಿಕನ್ನರ ಸಂಪರ್ಕದ ಬಗ್ಗೆ 1502ರ ಏಪ್ರಿಲ್ನಲ್ಲಿ ಅತೀ ಪ್ರಾಚೀನ ದಾಖಲೆಯನ್ನು ಹೊಂದಿದೆ. ಪ್ರಥಮ ಆಫ್ರಿಕನ್ನರನ್ನು ಗುಲಾಮರಾಗಿ ದುಡಿಸಿಕೊಳ್ಳಲು ಹಿಸ್ಪಾನಿಯೋಲಾಗೆ ಕರೆತರಲಾಯಿತು.<ref>''ಮುಸ್ಲಿಮ್ಸ್ ಇನ್ ಅಮೆರಿಕನ್ ಹಿಸ್ಟರಿ: ಎ ಫೊರ್ಗಾಟನ್ ಲೆಗಸಿ'' -ಜೆರಾಲ್ಡ್ ಎಫ್. ಡಿರ್ಕ್ಸ್. ISBN 1-59008-044-0 ಪುಟ 204.</ref>
ಕೆಲವು ಬಾರಿ ಸ್ಥಳೀಯ ಅಮೆರಿಕನ್ನರು ಆಫ್ರಿಕದ ಅಮೆರಿಕನ್ನರ ಉಪಸ್ಥಿತಿ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.<ref name="Red, White pg. 99">ಕೆಂಪು, ಬಿಳಿ ಮತ್ತು ಕಪ್ಪು, ಪುಟ 99. ISBN 0-8203-0308-9</ref> ಒಂದು ವಿವರಣೆಯಲ್ಲಿ "1752ರಲ್ಲಿ ಆಫ್ರಿಕದ ಅಮೆರಿಕನ್ ಪ್ರಜೆ ಅವರ ನಡುವೆ ವ್ಯಾಪಾರಿಯಾಗಿ ಆಗಮಿಸಿದಾಗ ಕಾಟಾವಾಬಾ ಬುಡಕಟ್ಟು ಜನಾಂಗ ತೀವ್ರ ಕೋಪ ಮತ್ತು ಅಸಮಾಧಾನ ಹೊಂದಿದ್ದರು".<ref name="Red, White pg. 99" /> ಯುರೋಪಿಯನ್ನರ ಒಲವನ್ನು ಗಳಿಸಲು ಎಲ್ಲ ಸ್ಥಳೀಯ ಅಮೆರಿಕನ್ನರ ಬಗ್ಗೆ ಪ್ರಬಲವಾದ ವರ್ಣ ಪೂರ್ವಗ್ರಹ ಕಲ್ಪನೆಯನ್ನು ಚೆರೋಕೀ ಹೊಂದಿತ್ತು.<ref>ಕೆಂಪು, ಬಿಳಿ ಮತ್ತು ಕಪ್ಪು, ಪುಟ 99, ISBN 0-8203-0308-9</ref> ಸ್ಥಳೀಯ ಅಮೆರಿಕನ್ನರು ಮತ್ತು ಆಫ್ರಿಕದ ಅಮೆರಿಕನ್ನರು ಒಟ್ಟಿಗೆ ಬಂಡಾಯ ಏಳಬಹುದೆಂಬ ಯುರೋಪ್ ಭಯವೇ ಈ ಶತ್ರುತ್ವ ಉಂಟುಮಾಡಲು ಕಾರಣವಾಗಿತ್ತು. ಆಫ್ರಿಕದ ಅಮೆರಿಕನ್ನರು ಸ್ಥಳೀಯ ಅಮೆರಿಕನ್ನರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆಂದು ಮನವರಿಕೆ ಮಾಡಲು ಬಿಳಿಯರು ಯತ್ನಿಸಿದರು." <ref>ಕೆಂಪು, ಬಿಳಿ ಮತ್ತು ಕಪ್ಪು, ಪುಟ 105, ISBN 0-8203-0308-9</ref> 1751ರಲ್ಲಿ,ದಕ್ಷಿಣ ಕರೋಲಿನ ಕಾನೂನು ಹೇಳಿಕೆ ನೀಡಿತು: <blockquote>
"ಇಂಡಿಯನ್ನರ ನಡುವೆ ನೀಗ್ರೋಗಳನ್ನು ಒಯ್ಯುವುದು ಹಾನಿಕರ ಎಂದು ಭಾವಿಸಲಾಗಿದ್ದು, ಅವರ ನಡುವೆ ಸಾಮೀಪ್ಯತೆಯನ್ನು ತಪ್ಪಿಸಬೇಕು"<ref name="hid">{{cite web|url=http://www.colorq.org/MeltingPot/article.aspx?d=America&x=blackIndians|title=Black Indians (Afro-Native Americans)|author=ColorQ|accessdate=2009-05-29|year=2009|publisher==ColorQ|archive-date=2020-06-06|archive-url=https://web.archive.org/web/20200606063141/http://www.colorq.org/MeltingPot/article.aspx?d=America&x=blackIndians|url-status=dead}}</ref>
</blockquote> ಯುರೋಪಿಯನ್ನರು ಎರಡೂ ಜನಾಂಗದವರನ್ನು ಕೆಳದರ್ಜೆಯವರೆಂದು ಪರಿಗಣಿಸಿದ್ದರು ಮತ್ತು ಸ್ಥಳೀಯ ಅಮೆರಿಕನ್ನರು ಮತ್ತು ಆಫ್ರಿಕನ್ನರು ಇಬ್ಬರೂ ಶತ್ರುಗಳೆಂದು ಬಿಂಬಿಸುವ ಪ್ರಯತ್ನಗಳನ್ನು ಮಾಡಿದರು.<ref name="nawomen" /> ತಪ್ಪಿಸಿಕೊಂಡ ಗುಲಾಮರನ್ನು ವಾಪಸು ಕರೆತಂದರೆ ಸ್ಥಳೀಯ ಅಮೆರಿಕನ್ನರಿಗೆ ಬಹುಮಾನಗಳನ್ನು ನೀಡಲಾಗುತ್ತಿತ್ತು ಮತ್ತು ಇಂಡಿಯನ್ ಯುದ್ಧಗಳಲ್ಲಿ ಹೋರಾಟ ಮಾಡಿದರೆ ಆಫ್ರಿಕದ ಅಮೆರಿಕನ್ನರಿಗೆ ಬಹುಮಾನ ನೀಡಲಾಗುತ್ತಿತ್ತು.<ref name="nawomen" /><ref name="cherslav" /><ref name="infr">{{Cite book|url=https://books.google.com/?id=sHJMNVV31T0C&pg=PA3&lpg=PA3&dq=american+indians+married+blacks|title=Race and the Cherokee Nation|author=Fay A. Yarbrough|accessdate=2009-05-30|year=2007 |publisher==Univ of Pennsylvania Press | isbn=9780812240566
}}</ref>
[[File:Ras k dee pomo.jpg|thumb|left|upright|ರಾಸ್ ಕೆ ಡೀ, ಕ್ಯಾಲಿಫೋರ್ನಿಯಾದ ಪೋಮೊ-ಕೀನ್ಯದ ಗಾಯಕ ಮತ್ತು ಸಂಪಾದಕ]]
"ಆಫ್ರಿಕನ್ನರು ಮೊದಲ ಜನಾಂಗೀಯ ಗುಲಾಮರಾದ ಬದಲಾವಣೆಯ ಅವಧಿಯಲ್ಲಿ ಸ್ಥಳೀಯ ಅಮೆರಿಕನ್ನರೂ ಸಹ ಗುಲಾಮರಾದರು ಮತ್ತು ದಾಸ್ಯದ ಒಂದು ಸಾಮಾನ್ಯ ಅನುಭವವನ್ನು ಹಂಚಿಕೊಂಡರು. ಅವರು ಒಟ್ಟಿಗೆ ಕೆಲಸ ಮಾಡಿದರು, ಸಾಮುದಾಯಿಕ ವಸತಿಗಳಲ್ಲಿ ಜೊತೆಯಾಗಿ ವಾಸಿಸಿದರು, ಸಾಮೂಹಿಕ ಪಾಕವಿಧಾನಗಳನ್ನು ಸೃಷ್ಟಿಸಿದರು, ಮೂಲಿಕೆಗಳಿಂದ ರೋಗವನ್ನು ಗುಣಪಡಿಸುವ ಚಿಕಿತ್ಸೆ, ಪುರಾಣ ಕಥೆಗಳು ಮತ್ತು ದಂತಕಥೆಗಳನ್ನು ಹಂಚಿಕೊಂಡರು ಹಾಗೂ ಕೊನೆಯಲ್ಲಿ ಅವರು ಅಂತರ್ವಿವಾಹ ಮಾಡಿಕೊಂಡರು."<ref name="afrna" /> ಈ ಕಾರಣದಿಂದಾಗಿ ಹೆಚ್ಚಿನ ಬುಡಕಟ್ಟು ಜನಾಂಗಗಳು ಎರಡು ಸಮುದಾಯಗಳ ನಡುವಿನ ವಿವಾಹವನ್ನು ಪ್ರೋತ್ಸಾಹಿಸಿದರು, ಅವರು ಈ ಮಿಲನಗಳಿಂದ ಬಲಿಷ್ಠ, ಆರೋಗ್ಯವಂತ ಮಕ್ಕಳು ಹುಟ್ಟುತ್ತವೆ ಎಂಬ ಭಾವನೆಯನ್ನು ಹೊಂದಿದ್ದರು.<ref name="nadis">{{cite web|url=http://www.djembe.dk/no/19/08biwapi.html|title=Black Indians want a place in history|author=Nomad Winterhawk|accessdate=2009-05-29|year=1997|publisher== Djembe Magazine|archive-date=2009-07-14|archive-url=https://web.archive.org/web/20090714113317/http://www.djembe.dk/no/19/08biwapi.html|url-status=dead}}</ref> 18ನೇ ಶತಮಾನದಲ್ಲಿ, ಸ್ಥಳೀಯ ಅಮೆರಿಕನ್ನರ ಹಳ್ಳಿಗಳಲ್ಲಿ ಪುರುಷರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾದ್ದರಿಂದ ಹೆಚ್ಚಿನ ಸ್ಥಳೀಯ ಅಮೆರಿಕನ್ ಮಹಿಳೆಯರು ಬಂಧಮುಕ್ತರಾದ ಅಥವಾ ಗುಲಾಮಗಿರಿಯಿಂದ ತಪ್ಪಿಸಿಕೊಂಡ ಆಫ್ರಿಕನ್ ಪುರುಷರೊಂದಿಗೆ ವಿವಾಹವಾದರು.<ref name="nawomen" /> ಇದರ ಜತೆಗೆ ಅನೇಕ ಸ್ಥಳೀಯ ಅಮೆರಿಕನ್ ಮಹಿಳೆಯರು ಆಫ್ರಿಕನ್ ಪುರುಷರನ್ನು ವಾಸ್ತವವಾಗಿ ಕೊಂಡುಕೊಳ್ಳುತ್ತಿದ್ದರು, ಆದರೆ ಆ ಮಹಿಳೆಯರು ಐರೋಪ್ಯ ಮಾರಾಟಗಾರರ ತಿಳಿವಳಿಕೆಯಿಲ್ಲದೇ ಈ ಪುರುಷರನ್ನು ಬಂಧಮುಕ್ತಗೊಳಿಸಿ ತಮ್ಮ ಬುಡಕಟ್ಟಿಗೆ ಸೇರಿಸಿಕೊಂಡು ವಿವಾಹವಾಗುತ್ತಿದ್ದರೆಂದು ದಾಖಲೆಗಳು ತೋರಿಸಿಕೊಡುತ್ತವೆ.<ref name="nawomen" /> ಆಫ್ರಿಕನ್ ಪುರುಷರಿಗೆ ಸ್ಥಳೀಯ ಅಮೆರಿಕನ್ ಮಹಿಳೆಯರನ್ನು ಮದುವೆಯಾಗುವುದು ಅಥವಾ ಅವರಿಂದ ಮಕ್ಕಳನ್ನು ಪಡೆಯುವುದು ಪ್ರಯೋಜನಕಾರಿಯಾಗಿತ್ತು ಏಕೆಂದರೆ ಒಬ್ಬ ಗುಲಾಮಳಲ್ಲದ ತಾಯಿಗೆ ಹುಟ್ಟಿದ ಮಕ್ಕಳು ಗುಲಾಮಗಿರಿಯಿಂದ ಸ್ವತಂತ್ರವಾಗಿರುತ್ತಿದ್ದರು.<ref name="nawomen" /> ಯುರೋಪಿಯನ್ ವಸಾಹತುಶಾಹಿಗಳು ಹೆಚ್ಚಾಗಿ ಸಂಧಾನಗಳನ್ನು ನಡೆಸಿ ಓಡಿಹೋದ ಗುಲಾಮರನ್ನು ಹಿಂದಿರುಗುವಂತೆ ಕೇಳಿಕೊಳ್ಳುತ್ತಿದ್ದರು. 1726ರಲ್ಲಿ, ನ್ಯೂಯಾರ್ಕ್ನ ಬ್ರಿಟಿಷ್ ಗವರ್ನರ್, ಇರಾಕೊಯಿಸ್ ಜತೆ ಸೇರಿಕೊಂಡಿರುವ ಎಲ್ಲ ಓಡಿಹೋದ ಗುಲಾಮರನ್ನು ಹಿಂದಿರುಗುಗಿಸುವಂತೆ ಅವರಿಂದ ಭರವಸೆಯನ್ನು ಪಡೆದುಕೊಂಡರು.<ref name="Katz">ಕಾಟ್ಜ್ WL 1997 ಪುಟ 103</ref> 1760ರ ದಶಕದ ಮಧ್ಯಾವಧಿಯಲ್ಲಿ, ಹ್ಯುರಾನ್ ಮತ್ತು ದೇಲಾವೇರ್ ಸ್ಥಳೀಯ ಅಮೆರಿಕನ್ನರನ್ನೂ ಸಹ ಓಡಿಹೋದ ಗುಲಾಮರನ್ನು ಹಿಂದಿರುಗಿಸುವಂತೆ ಕೇಳಿಕೊಳ್ಳಲಾಯಿತು, ಆದರೆ ಗುಲಾಮರು ಹಿಂದಿರುಗಿದ ಬಗ್ಗೆ ಯಾವುದೇ ದಾಖಲೆಗಳು ಕಂಡುಬರಲಿಲ್ಲ.<ref name="Katzs">ಕಾಟ್ಡ್ WL 1997 ಪುಟ 104</ref> ಗುಲಾಮರು ಹಿಂದಿರುಗುವಂತೆ ಮಾಡಲು ಜಾಹೀರಾತುಗಳನ್ನು ಬಳಸಿಕೊಳ್ಳಲಾಯಿತು.
[[File:Two Black Indians.jpg|thumb|200px|right|ಎಡದಿಂದ ಬಲಕ್ಕೆ: ಅಮೋಸ್ ಚ್ಯಾಪ್ಮ್ಯಾನ್, ಆಕೆಯ ಮಗಳು, ಸಹೋದರಿ (ಎಲ್ಲರೂ ಚೆಯೆನ್ನೆ ಮತ್ತು ಒಬ್ಬ ಗುರುತಿಸದ ಆಫ್ರಿಕನ್-ಅಮೆರಿಕನ್ ಹುಡುಗಿ. 1886<ref>[404]</ref>]]
ಗುಲಾಮರ ಮಾಲಿಕತ್ವ ಹೊಂದುವುದು ಕೆಲವು ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗಗಳಲ್ಲಿ ವಿಶೇಷವಾಗಿ ಚೆರೋಕೀ, ಚೊಕ್ಟಾವ್ ಮತ್ತು ಕ್ರೀಕ್ ಜನರು ವಾಸಿಸುತ್ತಿದ್ದ ಆಗ್ನೇಯ ಭಾಗದಲ್ಲಿ ಹೆಚ್ಚು ಚಾಲ್ತಿಯಲ್ಲಿತ್ತು. 3%ಗಿಂತಲೂ ಕಡಿಮೆ ಸ್ಥಳೀಯ ಅಮೆರಿಕನ್ನರು ಗುಲಾಮರ ಒಡೆತನ ಹೊಂದಿದ್ದರೂ, ಜೀತಗಾರಿಕೆ ಪದ್ಧತಿಗಳು ಸ್ಥಳೀಯ ಅಮೆರಿಕನ್ನರಲ್ಲಿ ಹಾನಿಕಾರಕ ವಿಭಜನೆಗಳನ್ನು ಉಂಟುಮಾಡಿದವು.<ref name="wil"/> ಚೆರೋಕೀ ಬುಡಕಟ್ಟು ಜನಾಂಗದಲ್ಲಿ ಗುಲಾಮರ ಒಡೆಯರು ಹೆಚ್ಚಾಗಿ ಯುರೋಪಿಯನ್ ಪುರುಷರ ಮಕ್ಕಳಾಗಿದ್ದರು, ಅದು ಅವರ ಮಕ್ಕಳಿಗೆ ಗುಲಾಮತನದ ಆರ್ಥಿಕತೆಯನ್ನು ತೋರಿಸಿಕೊಟ್ಟಿತು ಎಂದು ದಾಖಲೆಗಳು ಸೂಚಿಸುತ್ತವೆ.<ref name="cherslav">{{cite web|url=http://www.coax.net/people/lwf/SLAVE_RV.HTM|title=CHEROKEE SLAVE REVOLT OF 1842|author=Art T. Burton|accessdate=2009-05-29|year=1996|publisher==LWF COMMUNICATIONS|archive-date=2009-09-29|archive-url=https://web.archive.org/web/20090929002527/http://coax.net/people/lwf/SLAVE_RV.HTM|url-status=dead}}</ref> ಯುರೋಪಿಯನ್ನರ ವಿಸ್ತರಣೆ ಅಧಿಕವಾದಂತೆ ಹೆಚ್ಚೆಚ್ಚು ಆಫ್ರಿಕನ್ ಮತ್ತು ಸ್ಥಳೀಯ ಅಮೆರಿಕನ್ ವಿವಾಹಗಳು ಪ್ರಾಮುಖ್ಯತೆ ಪಡೆದವು.<ref name="nawomen" />
ಹೆಚ್ಚಿನ ಆಫ್ರಿಕನ್-ಅಮೆರಿಕನ್ನರು ಸ್ಥಳೀಯ ಅಮೆರಿಕನ್ನರ ಆನುವಂಶಿಕ ಲಕ್ಷಣವನ್ನು ಹೊಂದಿದ್ದಾರೆಂದು ಕೆಲವು ಇತಿಹಾಸಕಾರರು ಹೇಳುತ್ತಾರೆ.<ref name="dstu">{{cite web|url=http://www.rlnn.com/ArtOct06/MoreBlacksAfricanAmerNativeAmerConnection.html|title=More Blacks are Exploring the African-American/Native American Connection|author=Sherrel Wheeler Stewart|accessdate=2008-08-06|year=2008|publisher==BlackAmericaWeb.com|archive-date=2006-10-31|archive-url=https://web.archive.org/web/20061031200938/http://www.rlnn.com/ArtOct06/MoreBlacksAfricanAmerNativeAmerConnection.html|url-status=dead}}</ref> ತಳಿವಿಜ್ಞಾನಿಗಳ ಕೆಲಸದ ಆಧಾರದ ಮೇಲೆ, ಆಫ್ರಿಕನ್ ಅಮೆರಿಕನ್ನರನ್ನು ಕುರಿತ PBS ಸರಣಿಯೊಂದು, ಹೆಚ್ಚಿನ ಆಫ್ರಿಕನ್ ಅಮೆರಿಕನ್ನರು ಮಿಶ್ರಿತ ಜನಾಂಗಕ್ಕೆ ಸೇರಿದ್ದು, ಅವರು ಸ್ಥಳೀಯ ಅಮೆರಿಕನ್ ಸಂತತಿಯನ್ನು ಹೊಂದುವುದು ಅತಿವಿರಳವಾಗಿರುತ್ತದೆ ಎಂದು ವಿವರಿಸಿದೆ.<ref name="African American Lives">{{cite web
|url=http://racerelations.about.com/od/ahistoricalviewofrace/a/dnaandrace.htm
|title=DNA Testing: review, ''African American Lives'', About.com
|access-date=2011-02-25
|archive-date=2009-03-13
|archive-url=https://web.archive.org/web/20090313231943/http://racerelations.about.com/od/ahistoricalviewofrace/a/dnaandrace.htm
|url-status=dead
}}</ref><ref name="African American Lives PBS">{{cite web|url=http://www.pbs.org/wnet/aalives/dna/index.html
|title=African American Lives 2}}</ref> ಈ PBS ಸರಣಿಯ ಪ್ರಕಾರ, ಹೆಚ್ಚು ಸಾಮಾನ್ಯವಾದ "ಕರಿಯರಲ್ಲದ" ಮಿಶ್ರಣವೆಂದರೆ ಇಂಗ್ಲಿಷ್ ಮತ್ತು ಸ್ಕಾಟ್ಸ್-ಐರಿಷ್.<ref name="African American Lives" /><ref name="African American Lives PBS" /> ಆದರೆ ನೇರ-ಮಾರ್ಗದ ಗಂಡು ಮತ್ತು ಹೆಣ್ಣಿನ ಪೂರ್ವಿಕರ Y-ಕ್ರೋಮೊಸೋಮ್ ಮತ್ತು mtDNA (ಮೈಟೊಕಾಂಡ್ರಿಯಲ್ DNA) ಪರೀಕ್ಷಾ ಪ್ರಕ್ರಿಯೆಗಳು ಅನೇಕ ಪೂರ್ವಜರ ಆನುವಂಶಿಕ ಲಕ್ಷಣವನ್ನು ಕಂಡುಹಿಡಿಯುವಲ್ಲಿ ವಿಫಲಗೊಳ್ಳಬಹುದು. (ಆನುವಂಶಿಕ ಲಕ್ಷಣದ ಅಂದಾಜಿನಲ್ಲಿ DNA ಪರೀಕ್ಷೆಯ ಮಿತಿಗಳನ್ನು PBS ಸರಣಿಯು ತೃಪ್ತಿಕರವಾದ ರೀತಿಯಲ್ಲಿ ವಿವರಿಸಿಲ್ಲವೆಂದು ಕೆಲವು ವಿಮರ್ಶಕರು ಹೇಳಿದ್ದಾರೆ.)<ref name="hur">{{cite web|url=http://www.geneticsandsociety.org/article.php?id=3908|title=Deep Roots and Tangled Branches|author=Troy Duster|accessdate=2008-10-02 |year=2008 |publisher==Chronicle of Higher Education}}</ref> ತುಲನಾತ್ಮಕವಾಗಿ ಕೆಲವು ಸ್ಥಳೀಯ ಅಮೆರಿಕನ್ನರು ಆಫ್ರಿಕನ್-ಅಮೆರಿಕನ್ನರ ಪರಂಪರೆಯನ್ನು ಹೊಂದಿದ್ದಾರೆಂದು ಮತ್ತೊಂದು ಅಧ್ಯಯನವು ಸೂಚಿಸುತ್ತದೆ.<ref name="AJHG1">{{cite web|url=http://www.cell.com/AJHG/abstract/S0002-9297(07)61628-0
|title=Estimating African American Admixture Proportions by Use of Population-Specific Alleles|author=Esteban Parra, et al|publisher==American Journal of Human Genetics}}</ref> ''ದಿ ಅಮೆರಿಕನ್ ಜರ್ನಲ್ ಆಫ್ ಹ್ಯೂಮನ್ ಜೆನೆಟಿಕ್ಸ್'' ನಲ್ಲಿ ವರದಿಯಾದ ಅಧ್ಯಯನವೊಂದು ಹೀಗೆಂದು ಸೂಚಿಸುತ್ತದೆ - "ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಆಫ್ರಿಕನ್ ಸಂತತಿಯ 10 ಜನಸಂಖ್ಯೆಗಳಲ್ಲಿ ಯುರೋಪಿಯನ್ನರ ಆನುವಂಶಿಕ ಕೊಡುಗೆಯ ಬಗ್ಗೆ ನಾವು ವಿಶ್ಲೇಷಿಸಿದ್ದೇವೆ (ಮೇವುಡ್, ಇಲಿನಾಯ್ಸ್; ಡೆಟ್ರಾಯಿಟ್; ನ್ಯೂಯಾರ್ಕ್; ಫಿಲಡೆಲ್ಫಿಯಾ; ಪಿಟ್ಸ್ಬರ್ಗ್; ಬ್ಯಾಲ್ಟಿಮೋರ್; ಚಾರ್ಲೆಸ್ಟನ್, ದಕ್ಷಿಣ ಕ್ಯಾರೋಲಿನ; ನ್ಯೂ ಆರ್ಲಿಯನ್ಸ್; ಮತ್ತು ಹೌಸ್ಟನ್). 10 ಜನಸಂಖ್ಯೆಗಳಲ್ಲಿ ಯಾವುದಕ್ಕೂ ಗಮನಾರ್ಹವಾದ ಮಾತೃಸಂಬಂಧದ ಅಮೆರಿಂಡಿಯನ್(ಅಮೆರಿಕನ್ ಇಂಡಿಯನ್) ಕೊಡುಗೆಗೆ ಸಾಕ್ಷ್ಯವಿಲ್ಲವೆಂದು mtDNA ಹ್ಯಾಪ್ಲೊಗ್ರೂಪ್ಸ್ ವಿಶ್ಲೇಷಣೆಯು ತೋರಿಸುತ್ತದೆ."<ref name="AJHG">{{cite web|url=http://www.cell.com/AJHG/abstract/S0002-9297(07)61628-0
|title=Estimating African American Admixture Proportions by Use of Population|author= |publisher==The American Journal of Human Genetics}}</ref>
ಆನುವಂಶಿಕ ಸಂತತಿಯ DNA ಪರೀಕ್ಷೆಯು ಮಿತಿಗಳನ್ನು ಹೊಂದಿರುತ್ತದೆ ಮತ್ತು ಆನುವಂಶಿಕ ಲಕ್ಷಣದ ಬಗೆಗಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ವ್ಯಕ್ತಿಗಳು ಅದನ್ನು ಅವಲಂಬಿಸಬಾರದೆಂದು ಸಂಶೋಧಕರು ಎಚ್ಚರಿಸುತ್ತಾರೆ.<ref name="hur" /><ref name="bldl1">{{cite web|url=https://www.sciencedaily.com/releases/2007/10/071018145955.htm|title=Genetic Ancestral Testing Cannot Deliver On Its Promise, Study Warns|author=ScienceDaily|accessdate=2008-10-02 |year=2008 |publisher==ScienceDaily}}</ref> ಪರೀಕ್ಷೆಯಿಂದ ಪ್ರತ್ಯೇಕ ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗಗಳ ಮಧ್ಯೆ ವ್ಯತ್ಯಾಸ ಕಲ್ಪಿಸಲು ಸಾಧ್ಯವಿಲ್ಲ. ಬುಡಕಟ್ಟಿನಲ್ಲಿನ ಸದಸ್ಯತ್ವವನ್ನು ದೃಢಪಡಿಸಲು ಇದನ್ನು ಮಾತ್ರ ಬಳಸುವುದು ಸಾಧ್ಯವಾಗುವುದಿಲ್ಲ.<ref name="genej">{{cite web|url=http://www.ipcb.org/publications/briefing_papers/files/identity.html|title=Genetic Markers Not a Valid Test of Native Identity|author=Brett Lee Shelton, J.D. and Jonathan Marks, Ph.D.
|accessdate=2008-10-02 |year=2008 |publisher==Counsel for Responsible Genetics}}</ref>
====ರಕ್ತ ಪರಿಮಾಣ====
{{Main|Blood quantum laws}}
{{See|Cherokee Freedmen Controversy}}
ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗಗಳಲ್ಲಿ ಅಂತರ-ಬುಡಕಟ್ಟಿನ ಮಿಶ್ರಣವು ಸಾಮಾನ್ಯವಾಗಿತ್ತು. ಆದ್ದರಿಂದ ಜನರು ಒಂದಕ್ಕಿಂತ ಹೆಚ್ಚು ಬುಡಕಟ್ಟುಗಳ ವಂಶಜರೆಂದು ಹೇಳಬಹುದಿತ್ತು.<ref name="accessgenealogy1" /><ref name="uwec1" /> ಹವಾಗುಣ, ಕಾಯಿಲೆ ಮತ್ತು ಯುದ್ಧದ ಒತ್ತಡಗಳಿಗೆ ಪ್ರತಿಕ್ರಿಯೆಯಾಗಿ ಕೆಲವೊಮ್ಮೆ ಗುಂಪುಗಳು ಅಥವಾ ಸಂಪೂರ್ಣ ಬುಡಕಟ್ಟುಗಳು ವಿಭಾಗಗೊಂಡು ಅಥವಾ ವಿಲೀನವಾಗಿ ಹೆಚ್ಚು ಜೀವಶಕ್ತಿಯುಳ್ಳ ಗುಂಪುಗಳಾಗಿ ರಚನೆಯಾಗುತ್ತಿದ್ದವು.<ref name="eurekalert.org">[http://www.eurekalert.org/pub_releases/2008-07/uoia-ycs071508.php "Y ಕ್ರೋಮೊಸೋಮ್ ಸ್ಟಡಿ ಶೆಡ್ಸ್ ಲೈಟ್ ಆನ್ ಅತಪ್ಯಾಸ್ಕನ್ ಮೈಗ್ರೇಶನ್ ಟು ಸೌತ್ಈಸ್ಟ್ ಯುಎಸ್"] {{Webarchive|url=https://web.archive.org/web/20110607161806/http://www.eurekalert.org/pub_releases/2008-07/uoia-ycs071508.php |date=2011-06-07 }}, ''ಯುರೇಕಾ ಅಲರ್ಟ್'', ಡಿಪಾರ್ಟ್ಮೆಂಟ್ ಆಫ್ ಎನರ್ಜಿ ಪಬ್ಲಿಕ್ ನ್ಯೂಸ್ಲಿಸ್ಟ್</ref> ಹಲವಾರು ಬುಡಕಟ್ಟು ಜನಾಂಗಗಳು ಯುದ್ಧದಲ್ಲಿ ಸೆರೆಹಿಡಿಯಲ್ಪಟ್ಟ ಅಥವಾ ಮೃತರಾದವರ ಬದಲಿಗೆ ಸಾಂಪ್ರದಾಯಿಕವಾಗಿ ಸೆರೆಯಾಳುಗಳನ್ನು ತಮ್ಮ ಗುಂಪಿನಲ್ಲಿ ಸೇರಿಸಿಕೊಳ್ಳುತ್ತಿದ್ದರು. ಈ ಸೆರೆಯಾಳುಗಳು ವಿರೋಧಿ ಬುಡಕಟ್ಟುಗಳಿಂದ ಮತ್ತು ನಂತರ ಯುರೋಪಿಯನ್ ನೆಲಸಿಗರಿಂದ ಆಗಮಿಸಿದ್ದರು. ಕೆಲವು ಬುಡಕಟ್ಟುಗಳು ಬಿಳಿಯ ವ್ಯಾಪಾರಿಗಳು ಹಾಗೂ ಓಡಿಹೋದ ಗುಲಾಮರು ಮತ್ತು ಸ್ಥಳೀಯ ಅಮೆರಿಕನ್-ಒಡೆತನದ ಗುಲಾಮರಿಗೂ ಸಹ ಆಶ್ರಯ ನೀಡುತ್ತಿದ್ದರು ಅಥವಾ ಸ್ವೀಕರಿಸುತ್ತಿದ್ದರು. ಯುರೋಪಿಯನ್ನರೊಂದಿಗೆ ದೀರ್ಘಕಾಲದ ವ್ಯಾಪಾರದ ಇತಿಹಾಸವನ್ನು ಹೊಂದಿರುವ ಬುಡಕಟ್ಟುಗಳು ಹೆಚ್ಚಿನ ಪ್ರಮಾಣದ ಯುರೋಪಿಯನ್ ಮಿಶ್ರಣವನ್ನು ತೋರಿಸುತ್ತವೆ. ಇದು ಯುರೋಪಿಯನ್ ಪುರುಷರು ಮತ್ತು ಸ್ಥಳೀಯ ಅಮೆರಿಕನ್ ಮಹಿಳೆಯರ ನಡುವಿನ ಹಲವಾರು ವರ್ಷಗಳ ಅಂತರ್ವಿವಾಹವನ್ನು ಬಿಂಬಿಸುತ್ತದೆ.<ref name="eurekalert.org" /> ಆದ್ದರಿಂದ ಸ್ಥಳೀಯ ಅಮೆರಿಕನ್ನರಲ್ಲಿ ಆನುವಂಶಿಕ ವೈವಿಧ್ಯತೆಗೆ ಹಲವಾರು ಮಾರ್ಗಗಳು ಅಸ್ತಿತ್ವದಲ್ಲಿದ್ದವು.
[[File:Creeks in Oklahoma.png|250px|thumb|1877ರ ಸರಿಸುಮಾರು ಒಕ್ಲಹೋಮಾದ ಕ್ರೀಕ್ (ಮುಸ್ಕೊಗೀ) ರಾಷ್ಟ್ರದ ಸದಸ್ಯರು, ಅವರೊಂದಿಗೆ ಕೆಲವು ಯುರೋಪಿಯನ್ ಮತ್ತು ಆಫ್ರಿಕನ್ ಸಂತತಿಯವರು.<ref>ಚಾರ್ಲ್ಸ್ ಹಡ್ಸನ್, ದಿ ಸೌತ್ಈಸ್ಟರ್ನ್ ಇಂಡಿಯನ್ಸ್, 1976, ಪುಟ 479</ref>]]
ಇತ್ತೀಚೆಗೆ ಕೆಲವು ವ್ಯಾಖ್ಯಾನಕಾರರು ಸ್ಥಳೀಯ ಅಮೆರಿಕನ್ನರು ಮತ್ತು ಆಫ್ರಿಕನ್ ಅಮೆರಿಕನ್ನರ ನಡುವೆ ಹೆಚ್ಚಿನ ಪ್ರಮಾಣದ ಮಿಶ್ರಣವಿದೆ ಎಂದು ಸೂಚಿಸಿದರೆ, ತಳೀಯ ವಂಶಪರಂಪರಾಶಾಸ್ತ್ರಜ್ಞರು ಕಡಿಮೆ ಪ್ರಮಾಣದ ಮಿಶ್ರಣವಿದೆಯೆಂದು ಹೇಳಿದ್ದಾರೆ. ಕೇವಲ 5 ಪ್ರತಿಶತದಷ್ಟು ಆಫ್ರಿಕನ್ ಅಮೆರಿಕನ್ನರು ಕನಿಷ್ಠ 12.5 ಪ್ರತಿಶತದಷ್ಟು ಸ್ಥಳೀಯ ಅಮೆರಿಕನ್ ವಂಶಪರಂಪರೆಯನ್ನು (ಒಬ್ಬ ಮುತ್ತಜ್ಜ/ಮುತ್ತಜ್ಜಿಗೆ ಸಮನಾದ) ಹೊಂದಿದ್ದಾರೆಂದು ವಾದಿಸುವ ತಜ್ಞರಿಗೆ ಸಾಹಿತ್ಯಕ ವಿಮರ್ಶಕ ಮತ್ತು ಲೇಖಕ ಹೆನ್ರಿ ಲೂಯಿಸ್ ಗೇಟ್ಸ್ ಜೂನಿಯರ್ ಆಧಾರ ಕೊಡುತ್ತಾರೆ. ಅಂದರೆ ಹೆಚ್ಚಿನ ಶೇಕಡಾವಾರು ಜನರು ಅತಿ ಕಡಿಮೆ ವಂಶಪರಂಪರೆಯನ್ನು ಹೊಂದಿರಬಹುದು, ಆದರೆ ಇದು ಮಿಶ್ರಣದ ಹಿಂದಿನ ಅಂದಾಜುಗಳು ತುಂಬಾ ಹೆಚ್ಚಾಗಿರಬಹುದೆಂಬುದನ್ನೂ ಸೂಚಿಸುತ್ತದೆ.<ref>ಹೆನ್ರಿ ಲೂಯಿಸ್ ಗೇಟ್ಸ್, ಜೂನಿಯರ್, ''ಇನ್ ಸರ್ಚ್ ಆಫ್ ಅವರ್ ರೂಟ್ಸ್: ಹೌ 19 ಎಕ್ಸ್ಟ್ರಾಆರ್ಡಿನರಿ ಆಫ್ರಿಕನ್ ಅಮೆರಿಕನ್ಸ್ ರೀಕ್ಲೇಮ್ಡ್ ದೈಯರ್ ಪಾಸ್ಟ್'', ನ್ಯೂಯಾರ್ಕ್: ಕ್ರೌನ್ ಪಬ್ಲಿಷರ್ಸ್, 2009, ಪುಟಗಳು 20-21</ref> ಕೆಲವು ಆನುವಂಶಿಕ ಪರೀಕ್ಷೆಗಳು ಕೇವಲ ನೇರ ಗಂಡು ಅಥವಾ ಹೆಣ್ಣಿನ ಪೂರ್ವಜರನ್ನು ನಿರ್ಣಯಿಸುವುದರಿಂದ, ಸ್ಥಳೀಯ ಅಮೆರಿಕನ್ ವಂಶಪರಂಪರೆಯನ್ನು ಇತರ ಪೂರ್ವಜರಿಂದ ಕಂಡುಹಿಡಿಯಲಾಗುವುದಿಲ್ಲ. ಒಬ್ಬ ವ್ಯಕ್ತಿಯ 64 4xಮುತ್ತಜ್ಜ/ಮುತ್ತಜ್ಜಿಯರಲ್ಲಿ, ನೇರ ಪರೀಕ್ಷೆಯು ಕೇವಲ ಇಬ್ಬರ DNA ಆಧಾರವನ್ನು ಮಾತ್ರ ನೀಡುತ್ತದೆ.<ref name="hur" /><ref name="bldl1" /><ref name="bldl2">{{cite web|url=http://www.weyanoke.org/historyculture/hc-DNAandIndianAncestry.html|title=Can DNA Determine Who is American Indian?|author=Kim TallBear, Phd., Associate, Red Nation Consulting|accessdate=2009-10-27|year=2008|publisher==The WEYANOKE Association|archive-date=2011-07-24|archive-url=https://web.archive.org/web/20110724191733/http://www.weyanoke.org/historyculture/hc-DNAandIndianAncestry.html|url-status=dead}}</ref>
ಕೇವಲ ಗಂಡು ಮತ್ತು ಹೆಣ್ಣಿನ ನೇರ-ಪೂರ್ವಜರನ್ನು ಪರೀಕ್ಷಿಸಬಹುದಾದ ಮಿತಿಗಳಿಗೆ ಹೆಚ್ಚುವರಿಯಾಗಿ, DNA ಪರೀಕ್ಷೆಯನ್ನು ಬುಡಕಟ್ಟು ಜನಾಂಗದ ಸದಸ್ಯತ್ವವನ್ನು ನಿರ್ಧರಿಸಲು ಬಳಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಅದು ಸ್ಥಳೀಯ ಅಮೆರಿಕನ್ ಗುಂಪುಗಳ ಮಧ್ಯೆ ವ್ಯತ್ಯಾಸ ತೋರಿಸುವುದಿಲ್ಲ. ಸ್ಥಳೀಯ ಅಮೆರಿಕನ್ನರ ಗುರುತು ಐತಿಹಾಸಿಕವಾಗಿ ಕೇವಲ ಜೀವ-ವಿಜ್ಞಾನವನ್ನು ಮಾತ್ರವಲ್ಲದೆ ಸಂಸ್ಕೃತಿಯನ್ನೂ ಆಧರಿಸಿದೆ. ದಿ ಇಂಡೀಜಿನಸ್ ಪೀಪಲ್ಸ್ ಕೌನ್ಸಿಲ್ ಆನ್ ಬಯೊಕೊಲೊನಿಯಲಿಸಮ್ (IPCB) ಹೀಗೆಂದು ಸೂಚಿಸುತ್ತದೆ:<blockquote>"ಸ್ಥಳೀಯ ಅಮೆರಿಕನ್ ಗುರುತುಗಳು" ಕೇವಲ ಸ್ಥಳೀಯ ಅಮೆರಿಕನ್ನರಲ್ಲಿ ಮಾತ್ರ ಕಂಡುಬರುವುದಿಲ್ಲ. ಅವು ಹೆಚ್ಚಾಗಿ ಸ್ಥಳೀಯ ಅಮೆರಿಕನ್ನರಲ್ಲಿ ಕಂಡುಬರುವುದು ಮಾತ್ರವಲ್ಲದೆ ಪ್ರಪಂಚದ ಇತರ ಭಾಗಗಳ ಜನರಲ್ಲೂ ಕಂಡುಬರುತ್ತವೆ.<ref name="bldl2" /></blockquote>
ತಳಿವಿಜ್ಞಾನಿಗಳೂ ಹೀಗೆಂದು ಹೇಳುತ್ತಾರೆ:<blockquote>ಸಿಡುಬು ಮೊದಲಾದ ಕಾಯಿಲೆಗಳಿಂದಾಗಿ ಹಲವಾರು ಮಂದಿ ಸಾವನ್ನಪ್ಪಿದರಿಂದ ಎಲ್ಲಾ ಸ್ಥಳೀಯ ಅಮೆರಿಕನ್ನರನ್ನು ಪರೀಕ್ಷಿಸಲಾಗಿಲ್ಲ. ತಾಯಿಯ ಅಥವಾ ತಂದೆಯ ವಂಶಜರು ಸ್ಥಳೀಯೇತರ ಅಮೆರಿಕನ್ನರನ್ನು ಒಳಗೊಂಡಿಲ್ಲದಿದ್ದರೂ ಸ್ಥಳೀಯ ಅಮೆರಿಕನ್ನರು ಮಾತ್ರ ಅವರು ಗುರುತಿಸಿದ ಆನುವಂಶಿಕ ಗುರುತುಗಳನ್ನು ಹೊಂದಿದ್ದಾರೆ ಎಂಬುದು ಅಸಂಭವವಾಗಿದೆ.<ref name="hur" /><ref name="bldl1" /></blockquote>
ಬುಡಕಟ್ಟು ಜನಾಂಗಗಳಿಂದ ಸೇವೆಯನ್ನು ಪಡೆಯಲು, ಸ್ಥಳೀಯ ಅಮೆರಿಕನ್ನರು ಮಾನ್ಯತೆ ಪಡೆದ ಬುಡಕಟ್ಟು ಸಂಘಟನೆಗೆ ಸೇರಿರಬೇಕು ಮತ್ತು ದೃಢೀಕರಣವಾಗಿರಬೇಕು. ಪ್ರತಿಯೊಂದು ಬುಡಕಟ್ಟು ಸರ್ಕಾರವು ನಾಗರಿಕರಿಗೆ ಅಥವಾ ಬುಡಕಟ್ಟು ಜನಾಂಗದ ಸದಸ್ಯರಿಗೆ ಅದರದೇ ಆದ ಸ್ವಂತ ನಿಯಮಗಳನ್ನು ವಿಧಿಸುತ್ತದೆ. ಫೆಡರಲ್ ಸರ್ಕಾರವು ಅಂಗೀಕೃತ ಸ್ಥಳೀಯ ಅಮೆರಿಕನ್ನರಿಗೆ ಲಭ್ಯವಿರುವ ಸೇವೆಗಳಿಗೆ ಸಂಬಂಧಿಸಿದ ಪ್ರಮಾಣಕಗಳನ್ನು ಹೊಂದಿದೆ. ಉದಾಹರಣೆಗೆ, ಸ್ಥಳೀಯ ಅಮೆರಿಕನ್ನರು ಫೆಡರಲ್ ವಿದ್ಯಾರ್ಥಿವೇತನವನ್ನು ಪಡೆಯಬೇಕಾದರೆ ಆ ವಿದ್ಯಾರ್ಥಿಯು ಫೆಡರಲ್ ಸರ್ಕಾರದಿಂದ ಮಾನ್ಯತೆ ಪಡೆದ ಬುಡಕಟ್ಟು ಜನಾಂಗಕ್ಕೆ ಸೇರಿದವನಾಗಿರಬೇಕು ಮತ್ತು ಕನಿಷ್ಠ ಕಾಲು ಭಾಗ ಸ್ಥಳೀಯ ಅಮೆರಿಕನ್ ಸಂತತಿಯನ್ನು (ಒಬ್ಬ ಮುತ್ತಜ್ಜ/ಮುತ್ತಜ್ಜಿಗೆ ಸಮನಾದ) ಹೊಂದಿರಬೇಕು, ಅದು ಇಂಡಿಯನ್ ಬ್ಲಡ್ ಕಾರ್ಡ್ನ ಡಿಗ್ರಿ ಪ್ರಮಾಣಪತ್ರ(ಸ್ಥಳೀಯ ಅಮೆರಿಕನ್ ರಕ್ತದ ಗುಂಪನ್ನು ಹಂಚಿಕೊಂಡ ದಾಖಲೆ)ದಿಂದ ದೃಢೀಕರಿಸಲ್ಪಟ್ಟಿರಬೇಕು. ಬುಡಕಟ್ಟು ಜನಾಂಗಗಳಲ್ಲಿ, ಅರ್ಹತೆಯು ಮಾನ್ಯತೆಯನ್ನು ಕೋರುವ ವ್ಯಕ್ತಿಯಲ್ಲಿ ಅವಶ್ಯಕ ಪ್ರತಿಶತದಷ್ಟು ಸ್ಥಳೀಯ ಅಮೆರಿಕನ್ "ರಕ್ತದಗುಂಪನ್ನು" ಅಥವಾ "ರಕ್ತ ಪರಿಮಾಣ"ವನ್ನು ಆಧರಿಸಿರಬಹುದು.
ಖಚಿತತೆಯನ್ನು ಕಾಪಾಡಲು, ಕೆಲವು ಬುಡಕಟ್ಟು ಜನಾಂಗಗಳು ವಂಶಪರಂಪರೆಯ DNA ಪರೀಕ್ಷೆಯ ಅಗತ್ಯವಿದೆಯೆಂದು ಹೇಳಲು ಆರಂಭಿಸಿವೆ. ಆದರೆ ಇದು ಸಾಮಾನ್ಯವಾಗಿ ದೃಢೀಕೃತ ಸದಸ್ಯರಿಂದ ವಂಶ ಅಥವಾ ನೇರ ಪೀಳಿಗೆಯನ್ನು ಸಾಬೀತು ಮಾಡುವುದಕ್ಕೆ ಸಂಬಂಧಿಸಿದೆ.<ref>[http://www.racesci.org/racescinow/genetics,race,and%20ancestry/5.html ಆನ್ಸೆಸ್ಟ್ರಿ ಇನ್ ಎ ಡ್ರಾಪ್ ಆಫ್ ಬ್ಲಡ್] {{Webarchive|url=https://web.archive.org/web/20120216190231/http://www.racesci.org/racescinow/genetics%2Crace%2Cand%20ancestry/5.html |date=2012-02-16 }} (ಆಗಸ್ಟ್ 30, 2005)-ಕ್ಯಾರೆನ್ ಕ್ಯಾಪ್ಲನ್. 2006ರ ಫೆಬ್ರವರಿ 20ರಂದು ಮರುಸಂಪಾದಿಸಲಾಯಿತು.</ref> ಬುಡಕಟ್ಟು ಜನಾಂಗದ ಸದಸ್ಯತ್ವದ ಅಗತ್ಯತೆಗಳು ವ್ಯಾಪಕವಾಗಿ ಬುಡಕಟ್ಟಿನಿಂದ ಬುಡಕಟ್ಟಿಗೆ ವ್ಯತ್ಯಾಸಗೊಳ್ಳುತ್ತದೆ. ಚೆರೋಕೀ ಜನಾಂಗಕ್ಕೆ ಆರಂಭಿಕ 1906ರ ಡ್ಯಾವೆಸ್ ರೋಲ್ಸ್ನಲ್ಲಿ ಪಟ್ಟಿಮಾಡಲಾದ ಸ್ಥಳೀಯ ಅಮೆರಿಕನ್ನರ ವಂಶಪರಂಪರೆಯ ಸಂತತಿಯ ಪ್ರಮಾಣೀಕೃತ ದಾಖಲೆ ಅಗತ್ಯವಿರುತ್ತದೆ. ಬಹು ಬುಡಕಟ್ಟುಗಳಿಂದ ವಂಶಪರಂಪರೆಯನ್ನು ಹೊಂದಿರುವ ಸದಸ್ಯರನ್ನು ಅಂಗೀಕರಿಸುವುದಕ್ಕೆ ಸಂಬಂಧಿಸಿದ ಬುಡಕಟ್ಟು ಜನಾಂಗದ ನಿಯಮಗಳು ವೈವಿಧ್ಯಮಯವಾಗಿವೆ ಮತ್ತು ಸಂಕೀರ್ಣವಾಗಿವೆ.
ಬುಡಕಟ್ಟು ಜನಾಂಗದ ಸದಸ್ಯತ್ವದ ಸಂಘರ್ಷಗಳು ಅಸಂಖ್ಯಾತ ಕಾನೂನಿನ ವಿವಾದಗಳು, ನ್ಯಾಯಾಲಯ ಕೇಸುಗಳು ಮತ್ತು ತೀವ್ರವಾದಿ ಗುಂಪುಗಳ ರಚನೆಗೆ ಕಾರಣವಾದವು. ಇದಕ್ಕೆ ಒಂದು ಉದಾಹರಣೆಯೆಂದರೆ ಚೆರೋಕೀ ಮುಕ್ತ ಗುಲಾಮರು. ಇಂದು ಅವರಲ್ಲಿ ಚೆರೋಕೀಯರಿಂದ ಗುಲಾಮಗಿರಿಗೆ ಒಳಪಟ್ಟ ಆಫ್ರಿಕನ್ ಅಮೆರಿಕನ್ನರ ಸಂತತಿಯವರನ್ನು ಒಳಗೊಂಡಿದ್ದಾರೆ.[[ಅಮೇರಿಕಾದ ಅಂತಃಕಲಹ|ಅಂತರ್ಯುದ್ಧ]]ದ ನಂತರ ಐತಿಹಾಸಿಕ ಚೆರೋಕೀ ರಾಷ್ಟ್ರದಲ್ಲಿ ಮುಕ್ತ ಗುಲಾಮರೆಂದು ಪೌರತ್ವವನ್ನು ಫೆಡರಲ್ ಒಪ್ಪಂದದ ಮೂಲಕ ಅವರಿಗೆ ನೀಡಲಾಗಿತ್ತು. 1980ರ ದಶಕದ ಆರಂಭದಲ್ಲಿ ಆಧುನಿಕ ಚೆರೋಕೀ ರಾಷ್ಟ್ರವು ಡ್ಯಾವೆಸ್ ರೋಲ್ಸ್ನಲ್ಲಿ ಪಟ್ಟಿಮಾಡಲಾದ ಚೆರೋಕೀ ಸ್ಥಳೀಯ ಅಮೆರಿಕನ್ನರ(ಕೇವಲ ಗುಲಾಮಗಿರಿಯಿಂದ ಮುಕ್ತರಾಗುವುದಲ್ಲ) ಸಂತತಿಗೆ ಸೇರಿದವರೆಂದು ದೃಢಪಡಿಸಲು ಸಾಧ್ಯವಾಗದಿದ್ದರೆ, ಅವರನ್ನು ಪೌರತ್ವದಿಂದ ಹೊರಗಿಡಲಾಗಿತ್ತು.
20ನೇ ಶತಮಾನದಲ್ಲಿ, ಹೆಚ್ಚಿನ ಸಂಖ್ಯೆಯ ಬಿಳಿಯ-ಅಮೆರಿಕನ್ನರು ಸ್ಥಳೀಯ ಅಮೆರಿಕನ್ನರ ಸಂತತಿಯನ್ನು ಹೊಂದಿರುವುದಾಗಿ ಪ್ರತಿಪಾದಿಸಲು ಹೆಚ್ಚು ಆಸಕ್ತಿ ತೋರಿಸಿದರು. ಹೆಚ್ಚಿನವರು ಚೆರೋಕೀಗಳ ಸಂತತಿಯನ್ನು ಹೊಂದಿರುವುದಾಗಿ ಪ್ರತಿಪಾದಿಸಿದರು.<ref>[http://blog.eogn.com/eastmans_online_genealogy/2006/02/the_truth_about.html] {{Webarchive|url=https://web.archive.org/web/20110429151901/http://blog.eogn.com/eastmans_online_genealogy/2006/02/the_truth_about.html |date=2011-04-29 }},ಇವನ್ನೂ ಗಮನಿಸಿ {{cite web |url=http://www.genealogy.com/90_carmack.html |title=Genealogy.com: Family Legends and Myths |publisher==Genealogy.com |accessdate=2008-11-06 |archive-date=2010-11-24 |archive-url=https://web.archive.org/web/20101124020406/http://genealogy.com/90_carmack.html |url-status=dead }} ಮತ್ತು [http://www.amerindgen.com/notevry.html] {{Webarchive|url=https://web.archive.org/web/20110318195621/http://www.amerindgen.com/notevry.html |date=2011-03-18 }}</ref>
[[File:Tekakwitha.jpg|thumb|upright|ಪರಿಸರಶಾಸ್ತ್ರಜ್ಞರು, ದೇಶಭ್ರಷ್ಟರು ಮತ್ತು ಅನಾಥರ ಆಶ್ರಯದಾತ ಕ್ಯಾಟೆರಿ ಟೆಕಾಕ್ವಿತಾ ರೋಮನ್ ಕ್ಯಾಥೋಲಿಕ್ ಚರ್ಚ್ನಿಂದ ಪರಮಪದ ಮತ್ತು ಸಂತಪದವಿಯನ್ನು ಪಡೆದರು.]]
[[File:Little Turtle.jpg|thumb|upright|ಮಿಶಿಕಿನಾಕ್ವ ("ಸಣ್ಣ ಕಡಲಾಮೆ")ನ ಸೈನ್ಯಗಳು 1791ರ ವಾಬಾಶ್ ಯುದ್ಧದಲ್ಲಿ ಸುಮಾರು 1000 U.ಸ ಸೇನೆಯ ಸೈನಿಕರಿಂದ ಕೂಡಿದ ಅಮೆರಿಕನ್ ಸೈನ್ಯವನ್ನು ಸೋಲಿಸಿತು ಮತ್ತು ಇತರ ಸಾವುನೋವುಗಳನ್ನು ಉಂಟುಮಾಡಿತು.]]
[[File:Charles eastman smithsonian gn 03462a.jpg|thumb|upright|ಚಾರ್ಲ್ಸ್ ಈಸ್ಟ್ಮ್ಯಾನ್ ಪಾಶ್ಚಿಮಾತ್ಯ ವೈದ್ಯರಾದ ಮೊದಲ ಸ್ಥಳೀಯ ಅಮೆರಿಕನ್ನರಾಗಿದ್ದಾರೆ.<ref>[448]</ref><ref>[449]</ref>]]
===ಜನಸಂಖ್ಯೆ===
2006ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ 0.8 ಪ್ರತಿಶತದಷ್ಟು ಜನರು [[ಅಮೇರಿಕ ಖಂಡಗಳ ಸ್ಥಳೀಯ ಜನ|ಅಮೆರಿಕನ್ ಇಂಡಿಯನ್]] ಅಥವಾ ಅಲಾಸ್ಕಾ ಸ್ಥಳೀಯ ಸಂತತಿಯೆಂದು ಅಮೆರಿಕಾ ಸಂಯುಕ್ತ ಸಂಸ್ಥಾನದ ಜನಗಣತಿ ವಿಭಾಗವು ಅಂದಾಜಿಸಿದೆ. ಈ ಜನಸಂಖ್ಯೆಯು ರಾಷ್ಟ್ರದಾದ್ಯಂತ ಸರಿಸಮಾನವಾಗಿಲ್ಲದೆ ಹಂಚಿಕೆಯಾಗಿದೆ.<ref name="census1">{{cite web |author=American FactFinder, United States Census Bureau |url=http://factfinder.census.gov/servlet/GRTTable?_bm=y&-geo_id=01000US&-_box_head_nbr=R0203&-ds_name=ACS_2006_EST_G00_&-format=US-30 |title=US census |publisher==Factfinder.census.gov |date= |accessdate=2010-08-22 |archive-date=2020-02-13 |archive-url=https://archive.today/20200213084757/http://factfinder.census.gov/servlet/GRTTable?_bm=y&-geo_id=01000US&-_box_head_nbr=R0203&-ds_name=ACS_2006_EST_G00_&-format=US-30 |url-status=dead }}</ref> 2006ರ ಅಂದಾಜುಗಳ ಆಧಾರದಲ್ಲಿ, ಎಲ್ಲಾ 50 ರಾಜ್ಯಗಳು ಮಾತ್ರವಲ್ಲದೆ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಮತ್ತು ಪೋರ್ಟೊ ರಿಕೊ ಮೊದಲಾದವನ್ನು [[ಅಮೇರಿಕ ಖಂಡಗಳ ಸ್ಥಳೀಯ ಜನ|ಅಮೆರಿಕನ್ ಇಂಡಿಯನ್]] ಅಥವಾ ಅಲಾಸ್ಕಾ ಸ್ಥಳೀಯ ಪೀಳಿಗೆಯಿಂದ ಉಲ್ಲೇಖಿಸಲಾದ ನಿವಾಸಿಗಳ ಅನುಪಾತದಿಂದ ಕೆಳಗಿನಂತೆ ಪಟ್ಟಿಮಾಡಲಾಯಿತು:
<div style="width:60%">
: [[ಅಲಾಸ್ಕ|ಅಲಾಸ್ಕಾ]]-13.1% 101,352
: ನ್ಯೂಮೆಕ್ಸಿಕೊ-9.7% 165,944
: ದಕ್ಷಿಣ ಡಕೋಟ – 8.6% 60,358
: [[ಒಕ್ಲಹೋಮ]] – 6.8% 262,581
: ಮೋಂಟಾನ – 6.3% 57,225
: ಉತ್ತರ ಡಕೋಟ – 5.2% 30,552
: [[ಆರಿಜೋನ|ಅರಿಜೋನ]] – 4.5% 261,168
: [[ವಯೋಮಿಂಗ್|ವ್ಯೋಮಿಂಗ್]] – 2.2% 10,867
: [[ಆರೆಗನ್|ಒರೆಗನ್]] – 1.8% 45,633
: ವಾಷಿಂಗ್ಟನ್ – 1.5% 104,819
: ನೇವಾಡ – 1.2%
: ಇಡಾಹೊ – 1.1%
: ಉತ್ತರ ಕ್ಯಾರೋಲಿನ – 1.1%
: [[ಯೂಟ|ಉತಾಹ್]] – 1.1%
: ಮಿನ್ನೆಸೊಟ – 1.0%
: ಕೊಲೊರಾಡೊ – 0.9%
: ಕ್ಯಾನ್ಸಾಸ್ – 0.9%
: ನೆಬ್ರಾಸ್ಕ – 0.9%
: [[ವಿಸ್ಕೊನ್ಸಿನ್|ವಿಸ್ಕೋನ್ಸಿನ್]] – 0.9%
: ಅರ್ಕಾನ್ಸಸ್ – 0.8%
: [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯಾ]] 0.7%
: ಲೂಯಿಸಿಯಾನ – 0.6%
: ಮೈನ್ – 0.5%
: ಮಿಚಿಗನ್ – 0.5%
: ಟೆಕ್ಸಾಸ್ – 0.5%
: [[ಅಲಬಾಮ]] – 0.4%
: ಮಿಸಿಸಿಪ್ಪಿ – 0.4%
: [[ಮಿಸೌರಿ|ಮಿಸ್ಸೌರಿ]] – 0.4%
: ರೋಡೆ ದ್ವೀಪ – 0.4%
: ವರ್ಮಂಟ್ – 0.4%
: [[ಫ್ಲಾರಿಡ|ಪ್ಲೋರಿಡಾ]] – 0.3%
: ಡೆಲಾವೇರ್ – 0.3%
: [[ಹವಾಯಿ]] – 0.3%
: ಅಯೋವ – 0.3%
: [[ನ್ಯೂ ಯಾರ್ಕ್|ನ್ಯೂಯಾರ್ಕ್]] - 0.3%
: ದಕ್ಷಿಣ ಕ್ಯಾರೊಲಿನಾ – 0.3%
: ಟೆನ್ನೆಸ್ಸೀ – 0.3%
: [[ಜಾರ್ಜಿಯ (ಅಮೇರಿಕ ದೇಶದ ರಾಜ್ಯ)|ಜಾರ್ಜಿಯಾ]] – 0.2%
: [[ವರ್ಜೀನಿಯ|ವರ್ಜಿನಿಯಾ]] – 0.2%
: ಕನೆಕ್ಟಿಕಟ್ – 0.2%
: ಇಲಿನಾಯ್ಸ್ – 0.2%
: ಇಂಡಿಯಾನ – 0.2%
: ಕೆಂಟುಕಿ – 0.2%
: [[ಮೇರಿಲ್ಯಾಂಡ್|ಮೆರಿಲ್ಯಾಂಡ್]] – 0.2%
: ಮಸ್ಸಾಚ್ಯುಸೆಟ್ಸ್ – 0.2%
: ನ್ಯೂಹ್ಯಾಂಪ್ಶೈರ್ – 0.2%
: ನ್ಯೂ ಜೆರ್ಸಿ - 0.2%
: ಓಹಿಯೊ – 0.2%
: ಪಶ್ಚಿಮ ವರ್ಜಿನಿಯಾ – 0.2%
: ಪೆನ್ನಿಸಿಲ್ವೇನಿಯಾ – 0.1%
: ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ – 0.3%
: ಪೋರ್ಟೊ ರಿಕೊ – 0.2%
</div>
2006ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಒಟ್ಟು ಜನಸಂಖ್ಯೆಯ ಸುಮಾರು 1.0 ಪ್ರತಿಶತಕ್ಕಿಂತಲೂ ಕಡಿಮೆ ಜನರು ಸ್ಥಳೀಯ ಹವಾಯಿಯನ್ ಅಥವಾ ಪೆಸಿಫಿಕ್ ದ್ವೀಪದವರ ಸಂತತಿಯವರಾಗಿದ್ದಾರೆಂದು ಅಮೆರಿಕಾ ಸಂಯುಕ್ತ ಸಂಸ್ಥಾನದ ಜನಗಣತಿ ವಿಭಾಗವು ಅಂದಾಜಿಸಿದೆ. ಈ ಜನಸಂಖ್ಯೆಯು 26 ರಾಜ್ಯಗಳಾದ್ಯಂತ ಅಸಮಾನವಾಗಿ ಹರಡಿಕೊಂಡಿದ್ದಾರೆ.<ref name="census1" /> ಕನಿಷ್ಠ 0.1%ಅನ್ನು ಹೊಂದಿರುವ 26 ರಾಜ್ಯಗಳನ್ನು ಕೆಳಗೆ ಸೂಚಿಸಲಾಗಿದೆ. ಅವನ್ನು 2006ರ ಅಂದಾಜುಗಳ ಆಧಾರದಲ್ಲಿ ಸ್ಥಳೀಯ ಹವಾಯಿಯನ್ ಅಥವಾ ಪೆಸಿಫಿಕ್ ದ್ವೀಪದವರ ಪೀಳಿಗೆಯನ್ನು ಹೊಂದಿರುವ ನಿವಾಸಿಗಳ ಅನುಪಾತದಿಂದ ಪಟ್ಟಿಮಾಡಲಾಗಿದೆ:
<div style="width:60%">
: [[ಹವಾಯಿ]] – 8.7
: [[ಯೂಟ|ಉತಾಹ್]] – 0.7
: [[ಅಲಾಸ್ಕ|ಅಲಾಸ್ಕಾ]] – 0.6
: [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯಾ]] – 0.4
: ನೇವಾಡಾ – 0.4
: ವಾಷಿಂಗ್ಟನ್ – 0.4
: [[ಆರಿಜೋನ|ಅರಿಜೋನ]] – 0.2
: [[ಆರೆಗನ್|ಒರೆಗನ್]] – 0.2
: [[ಅಲಬಾಮ]] – 0.1
: ಅರ್ಕ್ಯಾನ್ಸಸ್ – 0.1
: ಕೊಲೊರಾಡೊ – 0.1
: [[ಫ್ಲಾರಿಡ|ಫ್ಲೋರಿಡಾ]] – 0.1
: ಇದಾಹೊ – 0.1
: ಕೆಂಟುಕಿ – 0.1
: [[ಮೇರಿಲ್ಯಾಂಡ್]] – 0.1
: ಮಸ್ಸಾಚ್ಯುಸೆಟ್ಸ್ – 0.1
: [[ಮಿಸೌರಿ|ಮಿಸ್ಸೌರಿ]] – 0.1
: ಮೊಂಟಾನ – 0.1
: ನ್ಯೂಮೆಕ್ಸಿಕೊ – 0.1
: ಉತ್ತರ ಕ್ಯಾರೊಲಿನಾ – 0.1
: [[ಒಕ್ಲಹೋಮ]] – 0.1
: ದಕ್ಷಿಣ ಕ್ಯಾರೊಲಿನಾ – 0.1
: ಟೆಕ್ಸಾಸ್ – 0.1
: [[ವರ್ಜೀನಿಯ|ವರ್ಜಿನಿಯಾ]] – 0.1
: ಪಶ್ಚಿಮ ವರ್ಜಿನಿಯಾ – 0.1
: [[ವಯೋಮಿಂಗ್|ವ್ಯೋಮಿಂಗ್]] – 0.1
</div>
===ಜನಸಂಖ್ಯಾ ವಿತರಣೆ===
ಆಯ್ದ ಬುಡಕಟ್ಟು-ಜನಾಂಗಗಳ ವರ್ಗೀಕರಣ:2000<ref>{{cite web|title=2000 Summary File 1 - US Census Bureau|url=http://www.census.gov/prod/cen2000/doc/sf1.pdf|format=pdf|publisher==US Census Bureau|year=2007|accessdate=2010-11-01}}</ref>
{| class="standard sortable"
| ಬುಡಕಟ್ಟು-ಜನಾಂಗಗಳ ವರ್ಗೀಕರಣ
| ಅಮೆರಿಕನ್ ಮತ್ತು ಅಲಾಸ್ಕಾ ಸ್ಥಳೀಯರು ಮಾತ್ರ
| ಅಮೆರಿಕನ್ ಮತ್ತು ಅಲಾಸ್ಕಾ ಸ್ಥಳೀಯರು ಮಾತ್ರ
| ಒಂದು ಅಥವಾ ಅದಕ್ಕಿಂತ ಹೆಚ್ಚು ಜನಾಂಗಗಳೊಂದಿಗೆ ಜತೆಗೂಡಿರುವ ಅಮೆರಿಕನ್-ಇಂಡಿಯನ್ ಮತ್ತು ಅಲಾಸ್ಕಾ ಸ್ಥಳೀಯರು
| ಒಂದು ಅಥವಾ ಅದಕ್ಕಿಂತ ಹೆಚ್ಚು ಜನಾಂಗಗಳೊಂದಿಗೆ ಜತೆಗೂಡಿರುವ ಅಮೆರಿಕನ್-ಇಂಡಿಯನ್ ಮತ್ತು ಅಲಾಸ್ಕಾ ಸ್ಥಳೀಯರು
| ಅಮೆರಿಕನ್ ಇಂಡಿಯನ್ ಮತ್ತು ಅಲಾಸ್ಕಾ ಸ್ಥಳೀಯ ಬುಡಕಟ್ಟು ಜನಾಂಗಗಳ ಏಕೈಕ ವರ್ಗೀಕರಣ ಅಥವಾ ಯಾವುದಾದರೂ ಸಂಯೋಗ
|-
| ಬುಡಕಟ್ಟು-ಜನಾಂಗಗಳ ವರ್ಗೀಕರಣ
| ಒಂದು ಬುಡಕಟ್ಟು-ಜನಾಂಗದ ವರ್ಗೀಕರಣ ವರದಿಯಾಗಿದೆ
| ಒಂದಕ್ಕಿಂತ ಹೆಚ್ಚು ಬುಡಕಟ್ಟು ಜನಾಂಗಗಳ ವರ್ಗೀಕರಣ ವರದಿಯಾಗಿದೆ
| ಒಂದು ಬುಡಕಟ್ಟು-ಜನಾಂಗದ ವರ್ಗೀಕರಣ ವರದಿಯಾಗಿದೆ
| ಒಂದಕ್ಕಿಂತ ಹೆಚ್ಚು ಬುಡಕಟ್ಟು-ಜನಾಂಗದ ವರ್ಗೀಕರಣ ವರದಿಯಾಗಿದೆ
|-
| ಒಟ್ಟು
| 2,423,531
| 52,425
| 1,585,396
| 57,949
| 4,119,301
|-
| ಅಪೇಕ್
| 57,060
| 7,917
| 24,947
| 6,909
| 96,833
|-
| ಬ್ಲ್ಯಾಕ್ಫೀಟ್
| 27,104
| 4,358
| 41,389
| 12,899
| 85,750
|-
| ಚೆರೋಕೀ
| 281,069
| 18,793
| 390,902
| 38,769
| 729,533
|-
| ಚೆಯೆನ್ನೆ
| 11,191
| 1,365
| 4,655
| 993
| 18,204
|-
| ಚಿಕಸಾವ್
| 20,887
| 3,014
| 12,025
| 2,425
| 38,351
|-
| ಚಿಪ್ಪೇವ
| 105,907
| 2,730
| 38,635
| 2,397
| 149,669
|-
| ಚೊಕ್ಟಾವ್
| 87,349
| 9,552
| 50,123
| 11,750
| 158,774
|-
| ಕೊಲ್ವಿಲ್ಲೆ
| 7,833
| 193
| 1,308
| 59
| 9,393
|-
| ಕೊಮ್ಯಾಂಚ್
| 10,120
| 1,568
| 6,120
| 1,568
| 19,376
|-
| ಕ್ರೀ
| 2,488
| 724
| 3,577
| 945
| 7,734
|-
| ಕ್ರೀಕ್
| 40,223
| 5,495
| 21,652
| 3,940
| 71,310
|-
| ಕ್ರೊ
| 9,117
| 574
| 2,812
| 891
| 13,394
|-
| ಡೆಲಾವೇರ್
| 8,304
| 602
| 6,866
| 569
| 16,341
|-
| ಹೌಮ
| 6,798
| 79
| 1,794
| 42
| 8,713
|-
| ಇರಾಕಿಯಾಸ್
| 45,212
| 2,318
| 29,763
| 3,529
| 80,822
|-
| ಕಿಯೋವ
| 8,559
| 1,130
| 2,119
| 434
| 12,242
|-
| ಲ್ಯಾಟಿನ್ ಅಮೆರಿಕನ್ ಇಂಡಿಯನ್
| 104,354
| 1,850
| 73,042
| 1,694
| 180,940
|-
| ಲುಂಬೀ
| 51,913
| 642
| 4,934
| 379
| 57,868
|-
| ಮೆನೊಮಿನೀ
| 7,883
| 258
| 1,551
| 148
| 9,840
|-
| ನವಾಜೊ
| 269,202
| 6,789
| 19,491
| 2,715
| 298,197
|-
| ಒಸೇಗ್
| 7,658
| 1,354
| 5,491
| 1,394
| 15,897
|-
| ಒಟ್ಟಾವಾ
| 6,432
| 623
| 3,174
| 448
| 10,677
|-
| ಪೈಯುಟೆ
| 9,705
| 1,163
| 2,315
| 349
| 13,532
|-
| ಪಿಮಾ
| 8,519
| 999
| 1,741
| 234
| 11,493
|-
| ಪೊಟಾವಟೋಮಿ
| 15,817
| 592
| 8,602
| 584
| 25,595
|-
| ಪ್ಯುಯೆಲ್ಬೊ
| 59,533
| 3,527
| 9,943
| 1,082
| 74,085
|-
| ಪುಗೆಟ್ ಸೌಂಡ್ ಸ್ಯಾಲಿಶ್
| 11,034
| 226
| 3,212
| 159
| 14,631
|-
| ಸೆಮಿನೋಲ್
| 12,431
| 2,982
| 9,505
| 2,513
| 27,431
|-
| ಶೊಶೋನ್
| 7,739
| 714
| 3,039
| 534
| 12,026
|-
| ಸಿಯೋಕ್ಸ್
| 108,272
| 4,794
| 35,179
| 5,115
| 153,360
|-
| ಟೊಹೋನೊ ಓಡ್ಹ್ಯಾಮ್
| 17,466
| 714
| 1,748
| 159
| 20,087
|-
| ಉಟೆ
| 7,309
| 715
| 1,944
| 417
| 10,385
|-
| ಯಕಾಮ
| 8,481
| 561
| 1,619
| 190
| 10,851
|-
| ಯಾಕ್ಯು
| 15,224
| 1,245
| 5,184
| 759
| 22,412
|-
| ಯುಮ್ಯಾನ್
| 7,295
| 526
| 1,051
| 104
| 8,976
|-
| ಇತರ ನಮೂದಿತ ಅಮೆರಿಕನ್ ಇಂಡಿಯನ್ ಬುಡಕಟ್ಟು ಜನಾಂಗಗಳು
| 240,521
| 9,468
| 100,346
| 7,323
| 357,658
|-
| ನಮೂದಿಸಿರದ ಅಮೆರಿಕನ್ ಇಂಡಿಯನ್ ಬುಡಕಟ್ಟು ಜನಾಂಗ
| 109,644
| 57
| 86,173
| 28
| 195,902
|-
| ಅಲಾಸ್ಕಾ ಅತಬ್ಯಾಸ್ಕನ್
| 14,520
| 815
| 3,218
| 285
| 18,838
|-
| ಅಲ್ಯುಟ್
| 11,941
| 832
| 3,850
| 355
| 16,978
|-
| ಎಸ್ಕಿಮೊ
| 45,919
| 1,418
| 6,919
| 505
| 54,761
|-
| ಟ್ಲಿಂಗಿಟ್-ಹೈಡ
| 14,825
| 1,059
| 6,047
| 434
| 22,365
|-
| ಇತರ ನಮೂದಿಸಿದ ಅಲಾಸ್ಕಾ ಸ್ಥಳೀಯ ಬುಡಕಟ್ಟು ಜನಾಂಗಗಳು
| 2,552
| 435
| 841
| 145
| 3,973
|-
| ನಮೂದಿಸಿಲ್ಲದ ಅಲಾಸ್ಕಾ ಸ್ಥಳೀಯ ಬುಡಕಟ್ಟು ಜನಾಂಗ
| 6,161
| 370
| 2,053
| 118
| 8,702
|-
| ನಮೂದಿಸಿರದ ಅಮೆರಿಕನ್ ಇಂಡಿಯನ್ ಅಥವಾ ಅಲಾಸ್ಕಾ ಸ್ಥಳೀಯ ಬುಡಕಟ್ಟು-ಜನಾಂಗಗಳು
| 511,960
| (X)
| 544,497
| (X)
| 1,056,457
|-
|}
==ತಳಿವಿಜ್ಞಾನ==
{{details|Genetic history of indigenous peoples of the Americas}}
[[File:Neighbor-joining Tree-2, falsely promoting scientific racism by using Negroid, Mongoloid and Australoid.png|thumb|left|300px|A genetic tree of 18 world human groups by a neighbour-joining autosomal relationships.|alt=ಐದು ಬಣ್ಣದ ಚೌಕಗಳನ್ನು ಹೊಂದಿರುವ ಒಂದು ನಕ್ಷೆಯು ಪ್ರಪಂಚದ 18 ವಿವಿಧ ಜನರ ಗುಂಪುಗಳ ನಡುವಿನ ಆನುವಂಶಿಕ ವಿಭಜನೆಯನ್ನು ಬಿಂಬಿಸುತ್ತದೆ.]]
ಅಮೆರಿಕಾದ ಸ್ಥಳೀಯ ಜನರ ಆನುವಂಶಿಕ ಇತಿಹಾಸವು ಮುಖ್ಯವಾಗಿ ಮಾನವರ Y-ಕ್ರೋಮೊಸೋಮ್ DNA ಹ್ಯಾಪ್ಲೊಗ್ರೂಪ್ಗಳು ಮತ್ತು ಮಾನವರ ಮೈಟೊಕಾಂಡ್ರಿಯಲ್ DNA ಹ್ಯಾಪ್ಲೊಗ್ರೂಪ್ಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. "Y-DNA" ತಂದೆಯಿಂದ ಮಗನಿಗೆ ಕೇವಲ ಪಿತೃವಂಶಕ್ರಮದೊಂದಿಗೆ ಮಾತ್ರ ಸಾಗುತ್ತದೆ. ಅದೇ "mtDNA" ಮಾತೃವಂಶಕ್ರಮದೊಂದಿಗೆ ತಾಯಿಯಿಂದ ಎರಡೂ ಲಿಂಗಗಳ ಮಕ್ಕಳಿಗೆ ಸಾಗುತ್ತದೆ. ಅವು ಮರುಸಂಯೋಗಹೊಂದುವುದಿಲ್ಲ ಹಾಗೂ ಆದ್ದರಿಂದ Y-DNA ಮತ್ತು mtDNA ತಂದೆ ಯಾ ತಾಯಿಯ ಆನುವಂಶಿಕ ಅಂಶದ ಅಂತರಮಿಶ್ರಣವಿಲ್ಲದೆ ಪ್ರತಿ ಪೀಳಿಗೆಯಲ್ಲಿ ಅನಿರೀಕ್ಷಿತ ಹೊಸಪರಿವರ್ತನೆಯಿಂದ ಮಾತ್ರ ಬದಲಾವಣೆಗೊಳ್ಳುತ್ತದೆ.<ref name="nomenclature">{{cite web|year=2002|url=http://www.genome.org/cgi/content/full/12/2/339|title=A Nomenclature System for the Tree of Human Y-Chromosomal Binary Haplogroups|publisher== Genome Research|pages=Vol. '''12'''(2), 339–348|doi=10.1101/gr.217602|accessdate=2010-01-19|archive-date=2008-07-25|archive-url=https://web.archive.org/web/20080725113246/http://www.genome.org/cgi/content/full/12/2/339|url-status=dead}}[http://genome.cshlp.org/content/12/2/339/F1.large.jpg (ಡೀಟೈಲ್ಡ್ ಹೈಯರಾರ್ಕಿಕಲ್ ಚಾರ್ಟ್)] {{Webarchive|url=https://web.archive.org/web/20161215033222/http://genome.cshlp.org/content/12/2/339/F1.large.jpg |date=2016-12-15 }}</ref> ಅಲಿಂಗ ಕ್ರೋಮೊಸೋಮ್ "atDNA" ಗುರುತುಗಳನ್ನೂ ಬಳಸಲಾಗುತ್ತದೆ, ಆದರೆ mtDNA ಅಥವಾ Y-DNAಗಿಂತ ವ್ಯತ್ಯಾಸದಿಂದ ಕೂಡಿರುತ್ತವೆ, ಇದರಲ್ಲಿ ಅವು ಗಮನಾರ್ಹವಾಗಿ ಒಂದರ ಮೇಲೊಂದು ಪ್ರಸರಿಸುತ್ತವೆ.<ref name="Griffiths" /> AtDNAಅನ್ನು ಸಾಮಾನ್ಯವಾಗಿ ಇಡೀ ಮಾನವನ ಜೀನೋಮ್ ಮತ್ತು ಸಂಬಂಧಿತ ಪ್ರತ್ಯೇಕ ಜನಸಂಖ್ಯೆಗಳಲ್ಲಿರುವ ಪೀಳಿಗೆಯ ಆನುವಂಶಿಕ ಮಿಶ್ರಣದ ಭೂಖಂಡದ ಸರಾಸರಿಯನ್ನು ಅಳೆಯಲು ಬಳಸಲಾಗುತ್ತದೆ.<ref name="Griffiths">{{Cite book| last=Griffiths | first=Anthony J. F. | coauthors= | title=An Introduction to genetic analysis | year=1999 | publisher==W.H. Freeman | location=New York | isbn=071673771X | pages= | url=http://www.ncbi.nlm.nih.gov/books/bv.fcgi?highlight=autosome&rid=iga.section.222|accessdate=2010-02-03}}</ref>
ಆನುವಂಶಿಕ ವಿನ್ಯಾಸವು ಸ್ಥಳೀಯ ಅಮೆರಿಕನ್ನರು ಎರಡು ವಿಭಿನ್ನ ಆನುವಂಶಿಕ ಘಟನೆಗಳನ್ನು ಅನುಭವಿಸಿದ್ದಾರೆಂದು ಸೂಚಿಸುತ್ತದೆ; ಮೊದಲನೆಯದು ಅಮೆರಿಕಾದ ಆರಂಭಿಕ-ಜನರೊಂದಿಗೆ ಮತ್ತು ಎರಡನೆಯದು ಅಮೆರಿಕಾದ ಯುರೋಪಿಯನ್ ವಸಾಹತುಗಾರಿಕೆಯೊಂದಿಗೆ.<ref name="SpencerWells2"/><ref name="Genebase">{{cite web |title=Learn about Y-DNA Haplogroup Q. Genebase Tutorials |first=Wendy Tymchuk Senior Technical Editor |url=http://www.genebase.com/tutorial/item.php?tuId=16 |format=Verbal tutorial possible |publisher==Genebase Systems |year=2008 |accessdate=2009-11-21 |archive-date=2010-06-22 |archive-url=https://web.archive.org/web/20100622001311/http://www.genebase.com/tutorial/item.php?tuId=16 |url-status=dead }}</ref><ref>{{Cite journal|author=Orgel L |title=Prebiotic chemistry and the origin of the RNA world | url=http://www.d.umn.edu/~pschoff/documents/OrgelRNAWorld.pdf |journal=Crit Rev Biochem Mol Biol |volume=39 |issue=2 |pages=99–123 |pmid=15217990 | doi = 10.1080/10409230490460765|format=PDF |year=2004|accessdate=2010-01-19}}</ref> ಅಮೆರಿಕಾದ ಆರಂಭಿಕ-ಜನರೊಂದಿಗಿನ ಘಟನೆಯು ಅನೇಕ ಜೀನ್ ವಂಶ ಪರಂಪರೆ, ಜೈಗೊಸಿಟಿ(ಜೀವಿಯ ಲಕ್ಷಣದಲ್ಲಿ ಜೀನ್ಗಳ ಸಾಮ್ಯತೆ) ಹೊಸ-ಪರಿವರ್ತನೆ ಮತ್ತು ಇಂದಿನ ಸ್ಥಳೀಯ ಅಮೆರಿಂಡಿಯನ್ ಜನರಲ್ಲಿರುವ ಹ್ಯಾಪ್ಲೊಟೈಪ್ಗಳ ಕಂಡುಬರುವಿಕೆಗೆ ನಿರ್ಣಾಯಕ ಅಂಶವಾಗಿದೆ.<ref name="Genebase" />
ನವ ಜಗತ್ತಿನ ಮಾನವರ ನೆಲೆಯು ಬೆರಿಂಗ್ ಸಮುದ್ರದ ಕರಾವಳಿಯಿಂದ ಹಂತಗಳಲ್ಲಿ ಉಂಟಾಯಿತು. ಆರಂಭಿಕ 15,000ದಿಂದ 20,000-ವರ್ಷದ ಬಿಡುವಿನಲ್ಲಿ ಬೆರಿಂಜಿಯಾದಲ್ಲಿ ಸಣ್ಣ ಪ್ರಮಾಣದ ಜನಸಂಖ್ಯೆಯು ಅಸ್ತಿತ್ವದಲ್ಲಿತ್ತು.<ref name="SpencerWells2" /><ref name="First">{{Cite document | title = First Americans Endured 20,000-Year Layover — Jennifer Viegas, Discovery News | url =http://dsc.discovery.com/news/2008/02/13/beringia-native-american.html | accessdate = 2009-11-18 | publisher= = [[Discovery Channel]] | postscript = <!--None-->}} [http://dsc.discovery.com/news/2008/02/13/beringia-native-american-02.html ಪೇಜ್ 2]</ref><ref name="first2">{{cite web|title=New World Settlers Took 20,000-Year Pit Stop|first=Ker |last=Than|url=http://news.nationalgeographic.com/news/2008/02/080214-america-layover.html|publisher==National Geographic Society|year=2008|accessdate=2010-01-23}}</ref> ಮೈಕ್ರೋ-ಸ್ಯಾಟಲೈಟ್(ಸರಳ ಅನುಕ್ರಮ ಪುನರಾವರ್ತನೆಗಳು) ವೈವಿಧ್ಯತೆ ಮತ್ತು [[ದಕ್ಷಿಣ ಅಮೇರಿಕ|ದಕ್ಷಿಣ ಅಮೆರಿಕಾ]]ಕ್ಕೆ ನಿರ್ದಿಷ್ಟಪಡಿಸಿದ Y ವಂಶ-ಪರಂಪರೆಯ ಹಂಚಿಕೆಗಳು, ಆ ಪ್ರದೇಶದ ಆರಂಭಿಕ ವಸಾಹತುಗಾರಿಕೆಯಿಂದಾಗಿ ಕೆಲವು ಅಮೆರಿಂಡಿಯನ್ ಜನರು ಪ್ರತ್ಯೇಕವಾದರು ಎಂಬುದನ್ನು ಸೂಚಿಸುತ್ತದೆ.<ref name="subclades">{{cite web|title=Summary of knowledge on the subclades of Haplogroup Q|url=http://64.40.115.138/file/lu/6/52235/NTIyMzV9K3szNTc2Nzc=.jpg?download=1|publisher== Genebase Systems|year=2009|accessdate=2009-11-22|archive-date=2011-05-10|archive-url=https://web.archive.org/web/20110510204204/http://64.40.115.138/file/lu/6/52235/NTIyMzV9K3szNTc2Nzc%3D.jpg?download=1|url-status=dead}}</ref> ನಾ-ಡೆನೆ, ಇನ್ಯೂಟ್ ಮತ್ತು ಸ್ಥಳೀಯ ಅಲಸ್ಕನ್ ಜನಸಂಖ್ಯೆಗಳು ಹ್ಯಾಪ್ಲೊಗ್ರೂಪ್ Q (Y-DNA) ಹೊಸ-ಪರಿವರ್ತನೆಗಳನ್ನು ತೋರಿಸುತ್ತವೆ. ಆದಾಗ್ಯೂ, ಅವರು ಅನೇಕ mtDNA ಮತ್ತು atDNA ಹೊಸ-ಪರಿವರ್ತನೆಗಳನ್ನು ಹೊಂದಿರುವ ಇತರ ಸ್ಥಳೀಯ ಅಮೆರಿಂಡಿಯನ್ನರಿಂದ ಭಿನ್ನವಾಗಿದ್ದಾರೆ.<ref name="NaDene">{{Cite journal|doi=10.1073/pnas.95.23.13994 |author=Ruhlen M |title=The origin of the Na-Dene |journal=Proceedings of the National Academy of Sciences of the United States of America |volume=95 |issue=23 |pages=13994–6 |year=1998 |month=November |pmid=9811914 |pmc=25007 |url=http://www.pnas.org/cgi/pmidlookup?view=long&pmid=9811914}}</ref><ref name="Zhivotovsky">{{Cite journal|author=Zegura SL, Karafet TM, Zhivotovsky LA, Hammer MF |title=High-resolution SNPs and microsatellite haplotypes point to a single, recent entry of Native American Y chromosomes into the Americas |url=https://archive.org/details/sim_molecular-biology-and-evolution_2004-01_21_1/page/164 |journal=Molecular Biology and Evolution |volume=21 |issue=1 |pages=164–75 |year=2004 |month=January |pmid=14595095 |doi=10.1093/molbev/msh009}}</ref><ref name="inuit">{{cite web|title=mtDNA Variation among Greenland Eskimos. The Edge of the Beringian Expansion|url=http://www.cell.com/AJHG/abstract/S0002-9297%2807%2963257-1 |first=Juliette Saillard, Peter Forster, Niels Lynnerup1, Hans-Jürgen Bandelt and Søren Nørby|work=Laboratory of Biological Anthropology, Institute of Forensic Medicine, University of Copenhagen, Copenhagen, McDonald Institute for Archaeological Research,University of Cambridge, Cambridge, University of Hamburg, Hamburg|year=2000|doi=10.1086/303038|accessdate=2009-11-22}}</ref> ಇದು [[ಉತ್ತರ ಅಮೇರಿಕ|ಉತ್ತರ ಅಮೆರಿಕಾ]] ಮತ್ತು [[ಗ್ರೀನ್ಲ್ಯಾಂಡ್|ಗ್ರೀನ್ಲ್ಯಾಂಡ್]]ನ ತೀರಾ ಉತ್ತರ ಭಾಗಕ್ಕೆ ಬಂದ ಆರಂಭಿಕ ವಲಸೆಗಾರರನ್ನು ನಂತರ ವಲಸೆ ಬಂದವರು ಶೋಧಸಿದ್ದಾರೆ.<ref>{{cite web|title=The peopling of the New World — Perspectives from Molecular Anthropology|url=http://arjournals.annualreviews.org/doi/abs/10.1146/annurev.anthro.33.070203.143932?journalCode=anthro|work=Department of Anthropology, University of Pennsylvania |publisher==
Annual Review of Anthropology|year=2004|pages Vol. 33, 551-583|doi=10.1146/annurev.anthro.33.070203.143932|accessdate=2010-02-03}}</ref><ref name="Nadene1">{{cite web|title=Native American Mitochondrial DNA Analysis Indicates That the Amerind and the Nadene Populations Were Founded by Two Independent Migrations|url=http://www.genetics.org/cgi/reprint/130/1/153|first=A. Torroni, T. G. Schurr, C. C. Yang, EJE. Szathmary, R. C. Williams, M. S. Schanfield, G. A. Troup, W. C. Knowler, D. N. Lawrence, K. M. Weiss and D. C. Wallace|work=Center for Genetics and Molecular Medicine and Departments of Biochemistry and Anthropology, Emory University School of Medicine, Atlanta, Georgia|publisher==Genetics Society of America. Vol 130, 153-162|accessdate=2009-11-28}}</ref>
{{Clear}}
==ಇವನ್ನೂ ಗಮನಿಸಿ==
{{Col-begin}}
{{Col-3}}
*ಕೆನಡಾದ ಸ್ಥಳೀಯ ಜನರು
*ಅಮೆರಿಕನ್ ಇಂಡಿಯನ್ ಕಾಲೇಜ್ ಫಂಡ್
*ಮಕ್ಕಳ ಸಾಹಿತ್ಯದಲ್ಲಿ ಅಮೆರಿಕನ್ ಇಂಡಿಯನ್ನರು
*ಸ್ಥಳೀಯ ಜನರಿಂದ ಹುಟ್ಟಿಕೊಂಡ ಕಂಪನಿ/ಉತ್ಪನ್ನದ ಹೆಸರು
*ಇಂಡಿಯನ್ ಕ್ಯಾಂಪೇನ್ ಮೆಡಲ್
*ಇಂಡಿಯನ್ ಕ್ಲೇಮುಗಳ ಆಯೋಗ
*ಇಂಡಿಯನ್ ಹತ್ಯಾಕಾಂಡಗಳು
*ಇಂಡಿಯನ್ ಓಲ್ಡ್ ಫೀಲ್ಡ್
*ಇಂಡಿಯನ್ ಮರುಸಂಘಟನೆ ಕಾಯ್ದೆ
*ಇಂಡಿಯನ್ ಮೀಸಲು
*ಇಂಡಿಯನ್ ಪ್ರದೇಶ
*ಅಂತರ-ಬುಡಕಟ್ಟು ಪರಿಸರ ಮಂಡಳಿ (ITEC)
*ಅಮೆರಿಕಾದ ಸ್ಥಳೀಯ ಭಾಷೆಗಳಿಂದ ಪಡೆದ ಇಂಗ್ಲಿಷ್ ಪದಗಳ ಪಟ್ಟಿ
*ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಇಂಡಿಯನ್ ಮೀಸಲುಪ್ರದೇಶಗಳ ಪಟ್ಟಿ
*ಸ್ಥಳೀಯ ಅಮೆರಿಕನ್ನರ ಪಟ್ಟಿ
*ಪೂರ್ವ-ಕೊಲಂಬಿಯನ್ ನಾಗರಿಕತೆಗಳ ಪಟ್ಟಿ
*ಅಮೆರಿಕಾದ ಸ್ಥಳೀಯ ಜನರಿಂದ ಲೇಖಕರ ಪಟ್ಟಿ
*ಮಿಸಿಸಿಪ್ಪಿಯ ಸಂಸ್ಕೃತಿ
*ಸ್ಥಳೀಯ ಅಮೆರಿಕನ್ನರ ಆಧುನಿಕ ಸಾಮಾಜಿಕ ಅಂಕಿಅಂಶಗಳು
*ದಿಬ್ಬ ಕಟ್ಟುವ(ಜನರು)
{{Col-3}}
*ಅಮೆರಿಕನ್ ಇಂಡಿಯನ್ನರ ರಾಷ್ಟ್ರೀಯ ವಸ್ತುಸಂಗ್ರಹಾಲಯ
*ಸ್ಥಳೀಯ ಅಮೆರಿಕನ್ ಕಲೆ
*ಸ್ಥಳೀಯ ಅಮೆರಿಕನ್ ಚರ್ಚ್
*ಸ್ಥಳೀಯ ಅಮೆರಿಕನ್ ಜೂಜಾಟದ ಕೇಂದ್ರಗಳು
*ಸ್ಥಳೀಯ ಅಮೆರಿಕನ್ ಭಾಷೆಗಳು
*ಸ್ಥಳೀಯ ಅಮೆರಿಕನ್ ಶುಭಚಿಹ್ನೆಯ ವಿವಾದ
*ಸ್ಥಳೀಯ ಅಮೆರಿಕನ್ ಪುರಾಣಕಥೆ
*ಸ್ಥಳೀಯ ಅಮೆರಿಕನ್ನರ ಹೆಸರಿನ ವಿವಾದ
*ಸ್ಥಳೀಯ ಅಮೆರಿಕನ್ ಕುಂಬಾರಿಕೆ
*ನೆಬ್ರಾಸ್ಕದಲ್ಲಿರುವ ಸ್ಥಳೀಯ ಅಮೆರಿಕನ್ ಬುಡಕಟ್ಟು-ಜನಾಂಗಗಳು
*ಸ್ಥಳೀಯ ಅಮೆರಿಕನ್ನರು ಮತ್ತು ವಿಶ್ವ ಸಮರ II
*ಅಮೆರಿಕಾದ ಸ್ಥಳೀಯ ಜನಸಂಖ್ಯೆಯ ಇತಿಹಾಸ
*ಟುಲ್ಸಾ ಒಲಿಂಪಿಕ್ಸ್
*ವಸತಿ ಶಾಲೆ
* ಸ್ಥಳೀಯ ಜನರಿಂದ ಪಡೆದ ಕ್ರೀಡಾ ತಂಡದ ಹೆಸರುಗಳು/ಶುಭಚಿಹ್ನೆಗಳು
* ರಾಜ್ಯ ಅಂಗೀಕೃತ ಬುಡಕಟ್ಟು-ಜನಾಂಗಗಳು
* ಅಮೆರಿಕಾ ಸಂಯುಕ್ತ ಸಂಸ್ಥಾನದ ಒಪ್ಪಂದಗಳು {{smaller|(includes Native American treaties)}}
* ಟು-ಸ್ಪಿರಿಟ್(ದ್ವಿ ಮನೋಧರ್ಮ)
* ಸಂಪರ್ಕರಹಿತ ಜನರು
* ಅಂಗೀಕಾರವಾಗದ ಬುಡಕಟ್ಟು-ಜನಾಂಗಗಳು
{{Col-3}}
{{Portal box|Indigenous peoples of North America|United States}}
{{Col-end}}
==ಉಲ್ಲೇಖಗಳು==
{{Reflist|colwidth=30em}}
<div style="font-size:90%">
* ಆಡಮ್ಸ್, ಡೇವಿಡ್ ವ್ಯಾಲ್ಲೇಸ್. ''ಎಜುಕೇಶನ್ ಫಾರ್ ಎಕ್ಸ್ಟಿಂಕ್ಷನ್: ಅಮೆರಿಕನ್ ಇಂಡಿಯನ್ಸ್ ಆಂಡ್ ದಿ ಬೋರ್ಡಿಂಗ್ ಸ್ಕೂಲ್ ಎಕ್ಸ್ಪೀರಿಯನ್ಸ್ 1875–1928'', [http://www.kansaspress.ku.edu/ ಯೂನಿವರ್ಸಿಟಿ ಪ್ರೆಸ್ ಆಫ್ ಕನ್ಸಾಸ್], 1975. ISBN 0-7006-0735-8 (hbk); ISBN 0-7006-0838-9 (pbk).
* ಬೈರ್ಹಾರ್ಸ್ಟ್, ಜಾನ್. ''ಎ ಕ್ರೈ ಫ್ರಮ್ ದಿ ಅರ್ತ್: ಮ್ಯೂಸಿಕ್ ಆಫ್ ನಾರ್ತ್ ಅಮೆರಿಕನ್ ಇಂಡಿಯನ್ಸ್''. ISBN 0-941270-53-X.
* ಡೆಲೋರಿಯಾ, ವಿನೆ. 1969. ''ಕಸ್ಟರ್ ಡೈಡ್ ಫಾರ್ ಯುವರ್ ಸಿನ್ಸ್: ಆನ್ ಇಂಡಿಯನ್ ಮ್ಯಾನಿಫೆಸ್ಟೊ.'' ನ್ಯೂಯಾರ್ಕ್: ಮ್ಯಾಕ್ಮಿಲ್ಲನ್.
*ಎಲೆಕ್ಟ್ರೋನಿಕ್ ಕೋಡ್ ಆಫ್ ಫೆಡರಲ್ ರೆಗ್ಯುಲೇಶನ್ಸ್ (e-CFR), ಟೈಟಲ್ 50: ವೈಲ್ಡ್ಲೈಫ್ ಆಂಡ್ ಫಿಶರೀಸ್ ಪಾರ್ಟ್ 22-ಈಗಲ್ ಪರ್ಮಿಟ್ಸ್ {{cite web |url=http://ecfr.gpoaccess.gov/cgi/t/text/text-idx?c=ecfr&tpl=/ecfrbrowse/Title50/50cfr22_main_02.tpl |title=Electronic Code of Federal Regulations: |publisher==Ecfr.gpoaccess.gov |date=2007-02-27 |accessdate=2010-08-22 |archive-date=2007-06-10 |archive-url=https://web.archive.org/web/20070610034613/http://ecfr.gpoaccess.gov/cgi/t/text/text-idx?c=ecfr&tpl=%2Fecfrbrowse%2FTitle50%2F50cfr22_main_02.tpl |url-status=dead }}
*ಹರ್ಸ್ಚ್ಫೆಲ್ಡರ್, ಅರ್ಲೆನೆ ಬಿ.; ಬೈಲರ್, ಮೇರಿ ಜಿ.; & ಡೋರಿಸ್, ಮೈಕೆಲ್. ''ಗೈಡ್ ಟು ರಿಸರ್ಚ್ ಆನ್ ನಾರ್ತ್ ಅಮೆರಿಕನ್ ಇಂಡಿಯನ್ಸ್''. ಅಮೆರಿಕನ್ ಲೈಬ್ರರಿ ಅಸೋಸಿಯೇಶನ್ (1983). ISBN 0-8389-0353-3.
*ಜಾನ್ಸ್ಟನ್, ಎರಿಕ್ ಎಫ್. ''ದಿ ಲೈಫ್ ಆಫ್ ದಿ ನೇಟಿವ್ ಅಮೆರಿಕನ್'', ಅಟ್ಲಾಂಟ, GA: ಟ್ರೇಡ್ವಿಂಡ್ಸ್ ಪ್ರೆಸ್ (2003).
*ಜಾನ್ಸ್ಟನ್, ಎರಿಕ್. ''ದಿ ಲೈಫ್ ಆಫ್ ದಿ ನೇಟಿವ್''. ಫಿಲಡೆಲ್ಫಿಯಾ, PA: ಇ. ಸಿ. ಬಿಡಲ್, ಇತ್ಯಾದಿ. 1836–44. ಯೂನಿವರ್ಸಿಟಿ ಆಫ್ ಜಾರ್ಜಿಯಾ ಲೈಬ್ರರಿ.
*ಜಾನ್ಸ್, ಪೀಟರ್ ಎನ್. ''ರೆಸ್ಪೆಕ್ಟ್ ಫಾರ್ ದಿ ಏನ್ಸಿಸ್ಟರ್ಸ್: ಅಮೆರಿಕನ್ ಇಂಡಿಯನ್ ಕಲ್ಚರಲ್ ಅಫಿಲಿಯೇಶನ್ ಇನ್ ದಿ ಅಮೆರಿಕನ್ ವೆಸ್ಟ್''. ಬೌಲ್ಡರ್, CO: ಬಯೂ ಪ್ರೆಸ್ (2005). ISBN 0-9721349-2-1.
* {{cite book | last1=Kroeber |first1= Alfred L. |title= Cultural and Natural Areas of Native North America |publisher== University of California Publications in American Archaeology and Ethnology | year=1939 | url=https://books.google.com/books?id=_M70pNlgDf0C }}
*ನಿಕೋಲ್ಸ್, ರೋಜರ್ ಎಲ್. ''ಇಂಡಿಯನ್ಸ್ ಇನ್ ದಿ ಯುನೈಟೆಡ್ ಸ್ಟೇಟ್ಸ್ ಆಂಡ್ ಕೆನಡಾ, ಎ ಕಂಪೇರೆಟಿವ್ ಹಿಸ್ಟರಿ''. ಯೂನಿವರ್ಸಿಟಿ ಆಫ್ ನೆಬ್ರಾಸ್ಕಾ ಪ್ರೆಸ್ (1998). ISBN 0-8032-8377-6.
*{{cite book | last1=Pohl | first1=Frances K. | url=http://www.thamesandhudsonusa.com/new/fall02/523792.htm | title=Framing America: A Social History of American Art | location=New York | publisher==Thames & Hudson | year=2002 | pages=54–56, 105–106 & 110–111 | isbn=0500237921 | access-date=2011-02-25 | archive-date=2007-08-08 | archive-url=https://web.archive.org/web/20070808010902/http://www.thamesandhudsonusa.com/new/fall02/523792.htm | url-status=dead }}
*{{cite journal | last1 = Shanley | first1 = Kathryn Winona | year = 2004 | title = The Paradox of Native American Indian Intellectualism and Literature | url = http://www.questia.com/PM.qst?a=o&se=gglsc&d=5008600865 | journal = Melus | volume = 29 | issue = }}
*{{cite journal | last1 = Shanley | first1 = Kathryn Winona | url=http://www.questia.com/PM.qst?a=o&d=76961328 |title=The Indians America Loves to Love and Read: American Indian Identity and Cultural Appropriation | journal=American Indian Quarterly |volume= 21 |issue= 4 |month=Autumn |year= 1997 |pages=675–702 | doi=10.2307/1185719 }}
*ಕ್ರೆಚ್, ಶೆಪಾರ್ಡ್. ''ದಿ ಇಕಲಾಜಿಕಲ್ ಇಂಡಿಯನ್: ಮಿತ್ ಆಂಡ್ ಹಿಸ್ಟರಿ'', ನ್ಯೂಯಾರ್ಕ್: W.W. ನಾರ್ಟನ್, 1999. 352 ಪುಟ. ISBN 0-393-04755-5
*{{cite book | last1=Shohat |first1= Ella |last2= Stam |first2= Robert | title= Unthinking Eurocentrism: Multiculturalism and the Media |location= New York |publisher== Routledge |year= 1994 | isbn=0415063248 }}
* ಸ್ಲೆಟ್ಚರ್, ಮೈಕೆಲ್, "ನಾರ್ತ್ ಅಮೆರಿಕನ್ ಇಂಡಿಯನ್ಸ್", ವಿಲ್ ಕಾಫ್ಮ್ಯಾನ್ ಮತ್ತು ಹೈಡಿ ಮ್ಯಾಕ್ಫರ್ಸನ್ ಸಂಪಾದಕರು, ''ಬ್ರಿಟನ್ ಆಂಡ್ ದಿ ಅಮೆರಿಕಾಸ್: ಕಲ್ಚರ್, ಪಾಲಿಟಿಕ್ಸ್ ಆಂಡ್ ಹಿಸ್ಟರಿ'', ನ್ಯೂಯಾರ್ಕ್: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, 2005, 2 ಸಂಪುಟಗಳು.
* {{cite book | last1=Snipp |first1= C.M. |title=American Indians: The first of this land | location = New York |publisher== Russell Sage Foundation |year= 1989 | url=https://books.google.com/books?id=E0CsvVoVA90C | isbn=0871548224 }}
* ಸ್ಟರ್ಟೆವಂಟ್, ವಿಲಿಯಂ ಸಿ. (ಸಂಪಾದಕರು). ''ಹ್ಯಾಂಡ್ಬುಕ್ ಆಫ್ ನಾರ್ತ್ ಅಮೆರಿಕನ್ ಇಂಡಿಯನ್ಸ್'' (ಸಂಪುಟ 1–20). ವಾಷ್ಟಿಂಗ್ಟನ್, ಡಿ.ಸಿ.: ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಷನ್. (ಸಂಪುಟಗಳು 1–3, 16, 18–20 ಇದುವರೆಗೆ ಪ್ರಕಟವಾಗಿಲ್ಲ), (1978–ಇತ್ತೀಚಿನವರೆಗೆ).
* ಟಿಲ್ಲರ್, ವೆರೋನಿಕಾ ಇ. (ಸಂಪಾದಕರು). ''ಡಿಸ್ಕವರ್ ಇಂಡಿಯನ್ ರಿಸರ್ವೇಶನ್ಸ್ USA: ಎ ವಿಸಿಟರ್ಸ್ ವೆಲ್ಕಮ್ ಗೈಡ್''. ಫೋರ್ವರ್ಡ್ ಬೈ ಬೆನ್ ನೈಟ್ಹಾರ್ಸ್ ಕ್ಯಾಂಪ್ಬೆಲ್. ಡೆನ್ವರ್, CO: ಕೌನ್ಸಿಲ್ ಪಬ್ಲಿಕೇಷನ್ಸ್, 1992. ISBN 0-9632580-0-1.
</div>
==ಬಾಹ್ಯ ಕೊಂಡಿಗಳು==
{{Commons|Native Americans}}
* [http://www.archives.gov/research/arc/topics/native-americans/ ನೇಟಿವ್ ಅಮೆರಿಕನ್ ಹಿಸ್ಟೋರಿಕಲ್ ರೆಕಾರ್ಡ್ಸ್] {{Webarchive|url=https://web.archive.org/web/20110319165658/http://www.archives.gov/research/arc/topics/native-americans/ |date=2011-03-19 }} - ನ್ಯಾಷನಲ್ ಆರ್ಕೈವ್ಸ್ ಆಂಡ್ ರೆಕಾರ್ಡ್ಸ್ ಅಡ್ಮಿನಿಸ್ಟ್ರೇಶನ್ನ [http://www.archives.gov/research/arc/ ಆರ್ಕೈವಲ್ ರಿಸರ್ಚ್ ಕ್ಯಾಟಲಾಗ್] {{Webarchive|url=https://web.archive.org/web/20130810205039/http://www.archives.gov/research/arc/ |date=2013-08-10 }}ನಲ್ಲಿ ಲಭ್ಯವಿದೆ
* [http://www.LostWorlds.org ಪ್ರಿಕೊಲಂಬಿಯನ್ ನೇಟಿವ್ ಅಮೆರಿಕನ್ ಹಿಸ್ಟರಿ, ಆರ್ಟ್ ಆಂಡ್ ಕಲ್ಚರ್ @ LostWorlds.org]
* [http://www.sc.edu/library/digital/collections/bonneville.html ಬೊನೆವಿಲ್ಲೆ ಕಲೆಕ್ಷನ್ ಆಫ್ 19th ಸೆಂಚುರಿ ಫೋಟೊಗ್ರಾಫ್ಸ್ ಆಫ್ ನೇಟಿವ್ ಅಮೆರಿಕನ್ಸ್] - ಯೂನಿವರ್ಸಿಟಿ ಆಫ್ ಸೌತ್ ಕ್ಯಾರೋಲಿನಾ ಲೈಬ್ರರಿಸ್ ಡಿಜಿಟಲ್ ಕಲೆಕ್ಷನ್ಸ್ ಪೇಜ್
* [http://college.hmco.com/history/readerscomp/naind/html/na_000107_entries.htm ಹಫ್ಟನ್ ಮಿಫ್ಲಿನ್ ಎನ್ಸೈಕ್ಲೊಪೀಡಿಯಾ ಆಫ್ ನಾರ್ತ್ ಅಮೆರಿಕನ್ ಇಂಡಿಯನ್ಸ್] {{Webarchive|url=https://web.archive.org/web/20060315035215/http://college.hmco.com/history/readerscomp/naind/html/na_000107_entries.htm |date=2006-03-15 }}
* [http://ucblibraries.colorado.edu/govpubs/us/native.htm ನೇಟಿವ್ ಅಮೆರಿಕನ್ ಟ್ರೀಟೀಸ್ ಆಂಡ್ ಇನ್ಫರ್ಮೇಶನ್] - ''UCB ಲೈಬ್ರರೀಸ್ ಗೌಪಬ್ಸ್''
* [http://memory.loc.gov/ammem/browse/ListSome.php?category=Native%20American%20History ನೇಟಿವ್ ಅಮೆರಿಕನ್ ಹಿಸ್ಟರಿ] - ಲೈಬ್ರರಿ ಆಫ್ ಕಾಂಗ್ರೆಸ್ ಅಮೆರಿಕನ್ ಮೆಮರಿ ಪ್ರಾಜೆಕ್ಟ್ನಿಂದ.
*{{dmoz|Society/Ethnicity/The_Americas/Indigenous/Native_Americans}}
* [http://www.firstnationsseeker.ca ಫರ್ಸ್ಟ್ ನೇಶನ್ಸ್ ಸೀಕರ್] ಉತ್ತರ ಅಮೆರಿಕಾದ್ಯಂತ ಸ್ಥಳೀಯ ಅಮೆರಿಕನ್ ಸಮುದಾಯಗಳನ್ನು ಭೇಟಿ ಮಾಡಿ ಅವರ ಇತಿಹಾಸವನ್ನು ಪತ್ತೆಮಾಡಿ.
{{-}}
{{Template group|list =
{{Demographics of the United States}}
{{Race in the 2000 U.S. Census}}
{{Indigenous peoples of the Americas}}
{{Native American rights}}
{{Cultural areas of indigenous North Americans}}
{{Indigenous peoples by continent}}
}}
{{Commonscat|Indigenous peoples of North America}}
{{DEFAULTSORT:Native Americans In The United States}}
[[ವರ್ಗ:ಸ್ಥಳೀಯ ಅಮೆರಿಕನ್ ವಿಷಯಗಳು]]
[[ವರ್ಗ:ಸ್ಥಳೀಯ ಅಮೆರಿಕನ್ ಸಂಸ್ಕೃತಿ]]
[[ವರ್ಗ:ಸ್ಥಳೀಯ ಅಮೆರಿಕನ್ ಇತಿಹಾಸ]]
[[ವರ್ಗ:ಉತ್ತರ ಅಮೆರಿಕಾದ ಸ್ಥಳೀಯರು]]
[[ವರ್ಗ:ಅಮೆರಿಕಾ ಸಂಯುಕ್ತ ಸಂಸ್ಥಾನದ ಜನಾಂಗೀಯ ಗುಂಪುಗಳು]]
[[ವರ್ಗ:ಆಫ್ರಿಕನ್ – ಸ್ಥಳೀಯ ಅಮೆರಿಕನ್ ಸಂಬಂಧಗಳು]]
[[ವರ್ಗ:ಅಮೆರಿಕನ್ ಸಂಸ್ಕ್ರತಿ]]
[[ವರ್ಗ:ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕ ಹಕ್ಕುಗಳ ಇತಿಹಾಸ]]
[[ವರ್ಗ:ಹದಿಮೂರು ವಸಾಹತುಗಳ ಇತಿಹಾಸ]]
[[ವರ್ಗ:ಉತ್ತರ ಅಮೆರಿಕಾದ ಇತಿಹಾಸ]]
[[ವರ್ಗ:ಅಮೆರಿಕಾ ಸಂಯುಕ್ತ ಸಂಸ್ಥಾನದ ಸಾಮಾಜಿಕ ಇತಿಹಾಸ]]
[[ca:Amerindi nord-americà]]
[[de:Indianer Nordamerikas]]
[[en:Native Americans in the United States]]
[[eo:Usonaj indianoj]]
[[es:Pueblos nativos de los Estados Unidos]]
[[fa:سرخپوستان ایالات متحده آمریکا]]
[[fr:Amérindiens aux États-Unis]]
[[it:Nativi americani degli Stati Uniti]]
[[ja:インディアン]]
[[ko:미국내 아메리카 원주민]]
[[pl:Tubylczy Amerykanie]]
[[pt:Povos nativos dos Estados Unidos da América]]
[[ru:Коренные народы США]]
[[simple:Native Americans in the United States]]
[[sv:USA:s ursprungsbefolkning]]
[[ta:ஐக்கிய அமெரிக்காவிலுள்ள தொல்குடி அமெரிக்கர்]]
[[th:กลุ่มชนพื้นเมืองอเมริกันในสหรัฐอเมริกา]]
[[tr:Kızılderili]]
[[zh:印第安人]]
plju921jgx22tin1g1cveq40mjfyurf
ಗಿರೀಶ್ ರಾವ್ ಹತ್ವಾರ್
0
38515
1379563
1344903
2026-08-09T04:29:45Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1379563
wikitext
text/x-wiki
{{Infobox Writer
| name = ಜೋಗಿ (ಗಿರೀಶ ರಾವ್ ಹತ್ವಾರ್)
| image = jogi1.jpg
| imagesize = 150px
| caption = ಜೋಗಿ
| pseudonym = ಜೋಗಿ
| birth_date = ನವೆಂಬರ್ ೧೬, ೧೯೬೫
| birth_place = ಮೈಸೂರು
| occupation = ಪುರವಣಿ ಸಂಪಾದಕ, ಕನ್ನಡಪ್ರಭ
| nationality = ಭಾರತೀಯ
| genre = ಕಥೆ, ಕವನ, ಕಾದಂಬರಿ, ಅಂಕಣ, ವಿಮರ್ಶೆ
| subject = ಕರ್ನಾಟಕ, ಗ್ರಾಮಜೀವನ, ಆಧ್ಯಾತ್ಮ, ನಗರ ಜೀವನ
| movement = ನವ್ಯೋತ್ತರ
| debut_works = (ಕೆಸರು- ಸಣ್ಣಕತೆ)
}}
'''ಜೋಗಿ''' ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ '''ಗಿರೀಶ್ ರಾವ್ ಹತ್ವಾರ್'''. ಇವರು ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದಾರೆ.
==ಹಿನ್ನೆಲೆ ಹಾಗೂ ಜೀವನ==
ಹುಟ್ಟೂರು [[ಮಂಗಳೂರು|ಮಂಗಳೂರಿ]]ನ [[ಸುರತ್ಕಲ್]] ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು [[ಉಪ್ಪಿನಂಗಡಿ]]ಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು [[ವೈಎನ್ ಕೆ]]. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
==ಸಾಹಿತ್ಯ ಕೃಷಿ==
ಜೋಗಿ [[ಕನ್ನಡಪ್ರಭ]] ಪತ್ರಿಕೆಗೆ '[[ಬಾಲಿವುಡ್]] ಘಾಸಿಪ್' ಎಂಬ ಅಂಕಣ ಬರೆಯುತ್ತಿದ್ದರು. [[ಹಾಯ್ ಬೆಂಗಳೂರ್]] ಪತ್ರಿಕೆಯಲ್ಲಿ 'ರವಿ ಕಾಣದ್ದು' ಅಂಕಣ ಬರೆಯುತ್ತಿದ್ದ ಜೋಗಿ ಅದೇ ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಅನೇಕ ವರುಷಗಳಿಂದ ಹಾಯ್ ಬೆಂಗಳೂರ್ ಪತ್ರಿಕೆಗೆ ಸತತವಾಗಿ ಅಂಕಣ ಬರೆಯುತ್ತಾ ಬಂದವರು ಜೋಗಿ. 'ಅಚ್ಚರಿ' ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. '''ಜೋಗಿ, ಜಾನಕಿ, ಗಿರೀಶ್ ರಾವ್ ಹತ್ವಾರ್, ಎಚ್ ಗಿರೀಶ ರಾವ್, ಸತ್ಯವ್ರತ ಹೊಸಬೆಟ್ಟು''' ಹೀಗೆ ಅನೇಕ ಕಾವ್ಯನಾಮಗಳಲ್ಲಿ ಬರೆಯುತ್ತಿರುವ ಜೋಗಿ ಕನ್ನಡಪ್ರಭ ಪತ್ರಿಕೆಯಲ್ಲಿ ಸಹ ಪುರವಣಿ ಸಂಪಾದಕರಾಗಿ ಕೆಲಸ ಮಾಡಿದವರು. ತಮ್ಮ ಚುರುಕಾದ ಚಲನಚಿತ್ರ ವಿಮರ್ಶೆಗಳಿಂದ, ಪುಸ್ತಕ ವಿಮರ್ಶೆಯಿಂದ ಗಮನ ಸೆಳೆದರು. ಅದರ ಜೊತೆಗೇ ಕತೆಗಾರರಾಗಿಯೂ ಹೊರಹೊಮ್ಮಿದ ಅವರು, ಕ್ರಮೇಣ ಕಾದಂಬರಿಗಳ ರಚನೆಯಲ್ಲೂ ತೊಡಗಿದರು.
ಪತ್ರಿಕೋದ್ಯಮ ಮತ್ತು ಸಾಹಿತ್ಯದ ಜೊತೆಗೇ ಜೋಗಿ ಕಿರುತೆರೆ ಧಾರವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ಶಕ್ತಿ, ಯಶವಂತ ಚಿತ್ತಾಲರ ಶಿಕಾರಿ, ಬೆಳ್ಳಿತೆರೆ, ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇಬರತಾವ ಕಾಲ, ಶುಭಮಂಗಳ - ಅವರು ಸಂಭಾಷಣೆ ಬರೆದ ಕೆಲವು ಧಾರಾವಾಹಿಗಳು. ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆಗಳನ್ನೂ ಬರೆದ ಜೋಗಿ [[ಅನಂತಮೂರ್ತಿ]]ಯವರ 'ಮೌನಿ' ಕತೆಯನ್ನು ತೆರೆಗೆ ಅಳವಡಿಸುವಲ್ಲಿ ಚಿತ್ರಕತೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ. ಅವರದೇ ಕತೆ '''[[ಕಾಡಬೆಳದಿಂಗಳು]]''' ಚಿತ್ರವಾಗಿದೆ. ಅದಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಕತೆ ಪ್ರಶಸ್ತಿಯೂ ಲಭಿಸಿದೆ.
[[ಮಯೂರ]], [[ತರಂಗ]], [[ತುಷಾರ]], [[ಸುಧಾ]], [[ಕನ್ನಡಪ್ರಭ]], [[ಪ್ರಜಾವಾಣಿ]], ಓ ಮನಸೇ ಮುಂತಾದ ಪತ್ರಿಕೆಗಳಲ್ಲಿ ಕತೆಗಳನ್ನು ಪ್ರಕಟಿಸಿದ ಜೋಗಿ [[ಲಂಕೇಶ್ ಪತ್ರಿಕೆ]]ಗೆ ಎಚ್.ಗಿರೀಶ ಹೆಸರಲ್ಲಿ ಪ್ರಬಂಧಗಳನ್ನು ಬರೆಯುತ್ತಿದ್ದರು. ಅನಾಮಧೇಯ ಹೆಸರಲ್ಲಿ ಪುಸ್ತಕ ವಿಮರ್ಶೆ ಮಾಡುತ್ತಿದ್ದರು. ಮಣಿಪಾಲ ಸಮೂಹದ [[ರೂಪತಾರಾ]] ಪತ್ರಿಕೆಯ ರೂವಾರಿಯಾಗಿದ್ದರು. [[ಕನ್ನಡಪ್ರಭ]] ಪತ್ರಿಕೆಯ ಪ್ರಧಾನ ಪುರವಣಿ ಸಂಪಾದಕರಾಗಿ ದುಡಿಯುತ್ತಿದ್ದಾರೆ (೨೦೨೩). ಪ್ರವಾಸ ಪ್ರೇಮಿಯಾದ ಜೋಗಿ ಅಮೆರಿಕಾ, [[ಶ್ರೀಲಂಕಾ]], [[ನೇಪಾಳ]], [[ಥೈಲ್ಯಾಂಡ್]], [[ಸಿಂಗಾಪುರ್]], [[ಮಲೇಷಿಯಾ]] ಮುಂತಾದ ದೇಶಗಳನ್ನು ಸುತ್ತಾಡಿದ್ದಾರೆ.
==ಜೋಗಿ ಕೃತಿ ಮಾಲೆ==
{{Col-begin}}
{{Col-break}}
===ಕಾದಂಬರಿ===
# ನದಿಯ ನೆನಪಿನ ಹಂಗು
# ಯಾಮಿನಿ
# ಚಿಟ್ಟೆ ಹೆಜ್ಜೆ ಜಾಡು
# ಹಿಟ್ ವಿಕೆಟ್
# ಊರ್ಮಿಳಾ
# ಮಾಯಾಕಿನ್ನರಿ
# ಗುರುವಾಯನಕೆರೆ
# ದೇವರ ಹುಚ್ಚು
# ಚಿಕ್ಕಪ್ಪ
# ಚೈತ್ರ ವೈಶಾಖ ವಸಂತ
# ಎಲ್ಲಾನು ಮಾಡುವುದು ಹೊಟ್ಟೆಗಾಗಿ
# ವಿರಹದ ಸಂಕ್ಷಿಪ್ತ ಪದಕೋಶ
# ಬೆಂಗಳೂರು
# ಬಿ ಕ್ಯಾಪಿಟಲ್
# ಸಲಾಂ ಬೆಂಗಳೂರು
# ಎಲ್
# ಅಶ್ವತ್ಥಾಮನ್
# ಹಸ್ತಿನಾವತಿ
===ಕಥಾಸಂಕಲನ===
# ಸೀಳುನಾಲಿಗೆ
# ಜೋಗಿ ಕತೆಗಳು
# ಕಾಡು ಹಾದಿಯ ಕತೆಗಳು
# ರಾಯಭಾಗದ ರಹಸ್ಯ ರಾತ್ರಿ
# ಜರಾಸಂಧ
# ಸೂಫಿ ಕತೆಗಳು
# ಕಥಾ ಸಮಯ
# ಫೇಸ್ ಬುಕ್ ಡಾಟ್ ಕಾಮ್-ಮಾನಸಜೋಶಿ
# ನಾಳೆ ಬಾ
#ಉಳಿದ ವಿವರಗಳು ಲಭ್ಯವಿಲ್ಲ
{{Col-break|width=50%}}
===ಅಂಕಣ ಸಾಹಿತ್ಯ===
# ಬಾಲಿವುಡ್ ಘಾಸಿಪ್
# ರವಿ ಕಾಣದ್ದು- ರವಿ ಕಂಡದ್ದು
# ಜಾನಕಿ ಕಾಲಂ-1
# ಜಾನಕಿ ಕಾಲಂ-2
# ರವಿ ಕಾಣದ್ದು
# ಜೋಗಿಮನೆ
# ಜೋಗಿ ಕಾಲಂ
# ರೂಪರೇಖೆ
# ಸೀಕ್ರೆಟ್ ಡೈರಿ
# ಮಹಾನಗರ
# ನೋಟ್ ಬುಕ್
# ಅರೆ ಬೆಳಕು
# ಜಾನಕಿ ಕಾಲಂ
# ಅಂಕಣಗಾಳಿಯಾಟ
#ಮಸಾಲೆ ದೋಸೆಗೆ ಕೆಂಪು ಚಟ್ನಿ
#ಸಹಜ ಖುಷಿ
=== ಓದಲು ಹಚ್ಚುವ ಕೃತಿಗಳು ===
# ಲೈಫ್ ಈಸ್ ಬ್ಯೂಟಿಫುಲ್
# ತಂದೆ ತಾಯಿ ದೇವರಲ್ಲ
# ಪ್ರೀತಿಸುವವರನ್ನು ಕೊಂದುಬಿಡಿ
# ಒಂದಾನೊಂದು ಊರಲ್ಲಿ
# ನೀವು ದೇವರನ್ನು ನಂಬಬೇಡಿ
# ಸಾವು<ref>{{cite news |title=ಸಾವು ಹುಟ್ಟಿದ್ದು ಹೇಗೆ? |url=https://vijaykarnataka.com/news/vk-special/savu-book-exclusive-interview-with-author-girish-rao-hatwar-jogi/videoshow/95010617.cms |accessdate=22 October 2022 |publisher=Vijaya Karnataka}}</ref>
# ಅವರು ಇವರು ದೇವರು<ref>{{Cite web |url=https://www.bookbrahma.com/book/ivaru-avaru-devaru |title=ಆರ್ಕೈವ್ ನಕಲು |access-date=2023-01-15 |archive-date=2023-01-15 |archive-url=https://web.archive.org/web/20230115155440/https://www.bookbrahma.com/book/ivaru-avaru-devaru |url-status=dead }}</ref>
# ಸೈಜ್ ಜೀರೋ- ದೇಹದ ಜೊತೆ ನನ್ನ ಪ್ರಯೋಗಗಳು<ref>{{Cite web |url=https://www.bookbrahma.com/book/size-zero |title=ಆರ್ಕೈವ್ ನಕಲು |access-date=2023-01-15 |archive-date=2023-01-15 |archive-url=https://web.archive.org/web/20230115152433/https://www.bookbrahma.com/book/size-zero |url-status=dead }}</ref>
=== ವೈವಿಧ್ಯಮಯ ಕೃತಿಗಳು ===
# ಎಂ. ರಂಗರಾವ್ (ವ್ಯಕ್ತಿ ಚಿತ್ರ)
# ಸದಾಶಿವ ಅವರ ಆಯ್ದ ಕತೆಗಳು (ಸಂಪಾದಿತ) - ನುಡಿ ಪುಸ್ತಕ
# ಜೋಗಿ ರೀಡರ್ (ಜೋಗಿ ಬರಹಗಳ ವಾಚಿಕೆ- ಸಂಧ್ಯಾರಾಣಿ ಸಂಪಾದಿತ)
# ಮಾತು ಮೌನ ಧ್ಯಾನ ವಿಷ್ಣುವರ್ಧನ- ಪತ್ರಕರ್ತನ ಅನಿಸಿಕೆ -2018 ಸೆಪ್ಟೆಂಬರ್
=== ನಾಟಕ ===
# ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ
# ಸು ಬಿಟ್ರೆ ಬಣ್ಣ ಬ ಬಿಟ್ರೆ ಸುಣ್ಣ (ನೀನಾಸಂ ತಿರುಗಾಟ ೨೦೧೭)
=== ಕಲಿಯುವ ಆಸಕ್ತರಿಗೆ ಬರೆದ ಕೃತಿಗಳು ===
# ಹಲಗೆ ಬಳಪ (ಹೊಸ ಬರಹಗಾರರಿಗೆ ಪಾಠ)
# ಕತೆ ಚಿತ್ರಕಥೆ ಸಂಭಾಷಣೆ ''(೧೮ ನಿರ್ದೇಶಕರ ಬರಹ ಸಹಿತ)''
{{Col-end}}
==ಪ್ರಶಸ್ತಿಗಳು==
# ಕಾಡಬೆಳದಿಂಗಳು ಸಿನಿಮದ ಕಥೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ <ref>{{cite web |title=Karnataka State Film Awards – 2006-2007 |url=http://www.altfg.com/blog/awards/kamataka-state-film-awards-2006-2007/ |website=Alt Film Guide |publisher=Alt Film Guide |access-date=10 January 2022 |archive-url=https://web.archive.org/web/20110831085929/http://www.altfg.com/blog/awards/kamataka-state-film-awards-2006-2007/ |archive-date=31 August 2011 |url-status=dead}}</ref>
# ಪತ್ರಿಕೋದ್ಯಮಕ್ಕೆ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ<ref>{{cite web |title=Udupi: Girish Rao Hatwar to be presented Vaddarse Raghuram Shetty Journalism Award on Aug 5 |url=https://www.daijiworld.com/news/newsDisplay.aspx?newsID=522140 |website=[[Daijiworld]] |date=3 August 2018 |access-date=7 March 2022 |archive-url=https://web.archive.org/web/20180804170801/http://www.daijiworld.com/news/newsDisplay.aspx?newsID=522140 |archive-date=4 August 2018 |url-status=live}}</ref>
# ಬೆಂಗಳೂರು ಲಿಟರೇಚರ್ ಫೆಸ್ಟಿವಲ್ ಪುಸ್ತಕ ಪ್ರಶಸ್ತಿ, 2021<ref>{{cite web |title=Atta Galatta Bangalore Literature Festival Book Prize 2021 |url=https://agblfprize.in/2021.php |publisher=Atta Galatta |access-date=7 March 2022 |archive-url=https://web.archive.org/web/20220111091629/https://agblfprize.in/2021.php |archive-date=11 January 2022 |url-status=live}}</ref>
# ಸಾಹಿತ್ಯ ರತ್ನ<ref>{{cite web |title=ಕನ್ನಡಪ್ರಭದ ಜೋಗಿ ಸೇರಿ ಮೂವರಿಗೆ ಬರಹಗಾರರ ಸಂಘದ ಪ್ರಶಸ್ತಿ |url=https://kannada.asianetnews.com/state/karnataka-writers-association-award-three-including-kannada-prabha-jogi-grg-r1o2r3 |lang=kn |publisher=[[Suvarna News]] |date=28 October 2021 |access-date=7 March 2022 |archive-url=https://web.archive.org/web/20220110042802/https://kannada.asianetnews.com/state/karnataka-writers-association-award-three-including-kannada-prabha-jogi-grg-r1o2r3 |archive-date=10 January 2022 |url-status=live}}</ref>
# ೨೦೨೧ ನೆ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ.<ref>{{cite news |title=ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ: ಜೋಗಿ ಸೇರಿ 10 ಮಂದಿಗೆ 'ಸಾಹಿತ್ಯ ಶ್ರೀ' |url=https://kannada.asianetnews.com/bengaluru-urban/karnataka-sahitya-academy-award-announced-well-know-writer-jogi-and-10-other-writer-got-sahityashree-awrd-akb-r9mjr5 |accessdate=22 October 2022 |publisher=Kannada Asianet News}}</ref>
==ಹೊರಗಿನ ಕೊಂಡಿಗಳು==
* ಜೋಗಿ [http://jogimane.blogspot.in/ ಬ್ಲಾಗ್]
* ಉದಯವಾಣಿಯಲ್ಲಿ [http://www.udayavani.com/kannada/category/ಜೋಗಿ-ಕಾಲಂ ಜೋಗಿ ಕಾಲಂ] {{Webarchive|url=https://web.archive.org/web/20150610152004/http://www.udayavani.com/kannada/category/%E0%B2%9C%E0%B3%8B%E0%B2%97%E0%B2%BF-%E0%B2%95%E0%B2%BE%E0%B2%B2%E0%B2%82 |date=2015-06-10 }}
* ಅವಧಿ ಜಾಲತಾಣದಲ್ಲಿ [http://avadhimag.com/category/ಅಂಕಣ/ಜೋಗಿಮನೆ/ ಜೋಗಿಮನೆ]
==ಉಲ್ಲೇಖಗಳು==
<references/>
{{Interwikineeded}}
[[ವರ್ಗ:ಕನ್ನಡ ಸಾಹಿತಿಗಳು]]
[[ವರ್ಗ:ಲೇಖಕರು]]
[[ವರ್ಗ:ಪತ್ರಕರ್ತರು]]
ie8iu8j6x0qp0yjn4u95m1bkcyuao78
ಎಂ. ಎಸ್. ಪ್ರಭಾಕರ
0
39564
1379496
1338749
2026-08-08T17:43:31Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379496
wikitext
text/x-wiki
{{Infobox writer <!-- For more information see [[:Template:Infobox Writer/doc]]. -->
| image = M.S.Prabhakara1.jpg
| image_size =
| alt =
| caption = ಎಂ. ಎಸ್. ಪ್ರಭಾಕರ
| pseudonym =
| birth_name =
| birth_date = <!-- {{Birth date and age|YYYY|MM|DD}} --> ೧೯೩೬
| birth_place =
| death_date = <!-- {{Death date and age|YYYY|MM|DD|YYYY|MM|DD}} -->
| death_place =
| resting_place =
| occupation = ಲೇಖಕರು
| language = [[ಕನ್ನಡ]]
| nationality = [[ಭಾರತೀಯ]]
| ethnicity =
| citizenship = [[ಭಾರತೀಯ]]
| education =
| alma_mater =
| period =
| genre =
| subject =
| movement =
| notableworks =
| spouse =
| partner =
| children =
| relatives =
| influences =
| influenced =
| awards =
| signature =
| signature_alt =
| website =
| portaldisp =
}}
'''ಎಂ. ಎಸ್. ಪ್ರಭಾಕರ''' ಅವರು ತಮ್ಮ ಕಾವ್ಯನಾಮ "ಕಾಮರೂಪಿ" ಯಿಂದ ನಾಡಿನ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಪೂರ್ಣ ಹೆಸರು ಮೊಟ್ಣಹಳ್ಳಿ ಸೂರಪ್ಪ ಪ್ರಭಾಕರ (ಎಂ.ಎಸ್. ಪ್ರಭಾಕರ). ಇವರು ಹುಟ್ಟಿದ್ದು ೧೯೩೬ ನೇ ಇಸವಿಯಲ್ಲಿ.<ref>{{Cite web |url=http://newstrack24x7.com/media-award-for-m-s-prabhakar/ |title=Media award for M.S Prabhakar, newstrack24x7.com |access-date=2017-03-16 |archive-date=2016-03-11 |archive-url=https://web.archive.org/web/20160311084830/http://newstrack24x7.com/media-award-for-m-s-prabhakar/ |url-status=dead }}</ref>
== ವಿದ್ಯಾಭ್ಯಾಸ ಹಾಗು ವೃತ್ತಿ ==
[[ಬೆಂಗಳೂರು|ಬೆಂಗಳೂರಿನ]] ಸೆಂಟ್ರಲ್ ಕಾಲೇಜಿನಿಂದ ಆಂಗ್ಲ ಸಾಹಿತ್ಯದಲ್ಲಿ ಪದವಿ ಪಡೆದ ಇವರು ತಮ್ಮ ಪಿಎಚ್.ಡಿ. ಪದವಿಯನ್ನು [[ಕರ್ನಾಟಕ]] ವಿಶ್ವವಿದ್ಯಾಲಯದಿಂದ ಪಡೆದರು. ೧೯೬೨ ರಿಂದ ೧೯೬೫ರವರೆಗೆ ಗೌಹಾತಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ [[ಅಧ್ಯಾಪಕ]]ರಾಗಿ, ರೀಡರ್ ಆಗಿದ್ದ ಇವರು, ೧೯೭೫ ರಿಂದ ೧೯೮೩ ರವರೆಗೆ '''`ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ`''' ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ನಂತರ '''`ದಿ ಹಿಂದೂ`''' ಪತ್ರಿಕೆಯಲ್ಲಿ ಈಶಾನ್ಯ [[ಭಾರತ]] ಹಾಗೂ [[ದಕ್ಷಿಣ ಆಫ್ರಿಕ]]ದ ವಿಶೇಷ ಬಾತ್ಮೀದಾರರಾಗಿ ಸೇವೆ ಸಲ್ಲಿಸಿ ೨೦೦೨ರಲ್ಲಿ ನಿವೃತ್ತರಾದರು. ಪ್ರಸ್ತುತ [[ಕೋಲಾರ]]ದಲ್ಲಿ ನೆಲೆಸಿರುವ ಇವರು,'''"ಕಾಮರೂಪಿ"''' ಬ್ಲಾಗ್ ಮೂಲಕ ತಮ್ಮ ಬರವಣಿಗೆ ಕೃಷಿ ಮಾಡುತ್ತಿದ್ದಾರೆ.
== ಕೃತಿಗಳು ==
* `ಒಂದು ತೊಲ ಪುನುಗು ಮತ್ತು ಇತರ ಕತೆಗಳು'
* `ಕುದುರೆ ಮೊಟ್ಟೆ' ' - ಕಿರು ಕಾದಂಬರಿ
* `ಅಂಜಿಕಿನ್ಯಾತಕಯ್ಯೊ' - ಕಿರು ಕಾದಂಬರಿ
* ಕಾಮರೂಪಿ ಸಮಗ್ರ - ಕಾಮರೂಪಿಯವರ ಕಥೆ, ಕಾದಂಬರಿ, ಕವನ, ಬರಹ, ಬ್ಲಾಗ್ ಬರಹಗಳನ್ನೊಳಗೊಂಡ ಕೃತಿ (ಸಂಚಯ ಪುಸ್ತಕದವರಿಂದ ಪ್ರಕಟ)
== ಅವರ ಸಾಹಿತ್ಯದ ವಿಮರ್ಶೆ ==
"ಕಾಮರೂಪಿಯವರು `ಏಲಿಯನೇಷನ್' ಎಂಬ ಮಾರ್ಕ್ಸ್ವಾದೀ ಪರಿಕಲ್ಪನೆಯಿಂದ ಪ್ರಭಾವಿತರಾಗಿ ವ್ಯಕ್ತಿವಿಶಿಷ್ಟತೆಗೆ ಒತ್ತುಕೊಡದ, ಮನೋವಿಶ್ಲೇಷಣೆಯನ್ನು ತ್ಯಜಿಸುವ ಹೊಸ ಬಗೆಯ ಕತೆ, ಕಾದಂಬರಿಗಳನ್ನು ಬರೆದರು.
ಕಾಮರೂಪಿ ಎಂ.ಎಸ್. ಪ್ರಭಾಕರರ ಕಾವ್ಯನಾಮವಷ್ಟೆ. ಪ್ರಾಚೀನ ಅಸ್ಸಾಂನ ಹೆಸರು ಕಾಮರೂಪ. ಇಂದು ಕೂಡ ಆ ರಾಜ್ಯದಲ್ಲಿ ಕಾಮರೂಪ ಎಂಬ ಜಿಲ್ಲೆಯೊಂದಿದೆ. ಸುದೀರ್ಘ ಕಾಲ ಅಸ್ಸಾಂನಲ್ಲಿದ್ದುದರಿಂದಲೋ ಏನೊ, ಪ್ರಭಾಕರರಿಗೆ ಆ ಹೆಸರು ಪ್ರಿಯವಾಗಿರಬೇಕು.ಪ್ರಭಾಕರರು ಬರೆದದ್ದು ಅತ್ಯಲ್ಪ. `ಒಂದು ತೊಲ ಪುನುಗು ಮತ್ತು ಇತರ ಕತೆಗಳು', ಕಿರು ಕಾದಂಬರಿಗಳಾದ `ಕುದುರೆ ಮೊಟ್ಟೆ' ಮತ್ತು `ಅಂಜಿಕಿನ್ಯಾತಕಯ್ಯೊ', ಇಷ್ಟೇ ಅವರ ಸಮಗ್ರ ಸಾಹಿತ್ಯ. ನನ್ನ ಮಟ್ಟಿಗೆ ನಾನು ಒಬ್ಬ ಆಕಸ್ಮಿಕ ಬರೆಹಗಾರ. ಇಂಗ್ಲಿಷ್ನಲ್ಲಿ ಹೇಳಿದರೆ ಆಕ್ಸಿಡೆಂಟಲ್ ರೈಟರ್. ಸ್ಕೂಲು ಕಾಲೇಜಿನಲ್ಲಿ ಓದುತ್ತಿದ್ದ ಕೋಲಾರದ ಒರಟು ದಿನಗಳಿಂದಲೇ ಓದುವ ಹವ್ಯಾಸ, ಅಭ್ಯಾಸ ಹಚ್ಚಿಕೊಂಡಿದ್ದರೂ, ಬರೆಯುವ ಅಭ್ಯಾಸ ಹಚ್ಚಿಕೊಳ್ಳಲಿಲ್ಲ. ನಾನು ಪುಸ್ತಕಗಳನ್ನು ಬರೆಯುತ್ತೇನೆ, ಆ ಪುಸ್ತಕಗಳು ಪ್ರಕಟಗೊಳ್ಳುತ್ತವೆ ಎಂತಲೂ ಎಂದೂ ಅಂದುಕೊಂಡಿರಲಿಲ್ಲ. ಬೆಂಗಳೂರಿನ ಸೆಂಟ್ರಲ್ ಕಾಲೆಜಿನಲ್ಲಿ ಇಂಗ್ಲಿಷ್ ಆನರ್ಸ್ ಓದುತ್ತಿದ್ದಾಗ ಸಣ್ಣಪುಟ್ಟ ರೀತಿಯಲ್ಲಿ ಬರೆಯಲು ಯತ್ನ ಮಾಡಿದ್ದರೂ ಆ ದಿನಗಳಲ್ಲಿ ಬರೆದ ಚೂರುಪಾರುಗಳೆಲ್ಲಾ ಅಣಕ, ಹುಡುಗಾಟ, ಬರಹಗಾರರಾಗಬೇಕೆಂದು ಹಂಬಲ ಹೊಂದಿದ್ದ ಗೆಳೆಯರಿಗೆ ಕಾಟ ಕೊಡುವ ವ್ಯಂಗ್ಯ ತುಂಟತನದ ಬರವಣಿಗೆಗಳು ಎಂದು ಅವರೇ ಹೇಳಿಕೊಂಡಿದ್ದಾರೆ. ಅಣಕ, ವ್ಯಂಗ್ಯ, ಕೀಟಲೆ, ಗಾಂಭೀರ್ಯದ ಬಲೂನನ್ನು ಚುಚ್ಚುವ ಧಾರ್ಷ್ಟ್ಯ, ಇವೆಲ್ಲ ಅವರ ಮೂರು ಕೃತಿಗಳಲ್ಲಿ ತಕ್ಕಮಟ್ಟಿಗಿದ್ದರೂ ಅವು ಕನ್ನಡ ಕಥನ ಸಾಹಿತ್ಯಕ್ಕೆ ತಂದುಕೊಟ್ಟ ಹೊಸ ಸಂವೇದನೆ, ನಿರೂಪಣಾ ತಂತ್ರ, ಕಾಣ್ಕೆ ಮೊದಲಾದುವುಗಳಿಂದಾಗಿ ಮುಖ್ಯವಾಗುತ್ತವೆ". ಇದು ಕನ್ನಡ ಹಿರಿಯ ಕಥೆಗಾರ, ವಿಮರ್ಶಕ ಶ್ರೀ [[ಎಸ್.ದಿವಾಕರ]] ಕಾಮರೂಪಿಯವರ ಬಗ್ಗೆ ಹೇಳಿರುವ ಮಾತುಗಳು.
<ref>{{citeweb|url=http://www.prajavani.net/article/%E0%B2%85%E0%B2%A8%E0%B2%A8%E0%B3%8D%E0%B2%AF-%E0%B2%B2%E0%B3%87%E0%B2%96%E0%B2%95-%E0%B2%95%E0%B2%BE%E0%B2%AE%E0%B2%B0%E0%B3%82%E0%B2%AA%E0%B2%BF|title=ಅನನ್ಯ ಲೇಖಕ ಕಾಮರೂಪಿ|publisher= prajavani.net|date=|accessdate=4-3-2014}}</ref>
`''ಕಾಮರೂಪಿ ಅವರ ಪುಸ್ತಕದಲ್ಲಿ ಪ್ರಾಮಾಣಿಕತೆ ಶೇ 80ರಷ್ಟು ಇದೆ. ಇಲ್ಲಿರುವ ಪ್ರತಿ ವಾಕ್ಯ ಕಲಾಕೃತಿಯಂತೆ ಇದೆ. ಇಲ್ಲಿನ ವಿಷಯ ಹಾಗೂ ಭಾಷೆ ಅದ್ಭುತವಾಗಿದೆ. ಕಡಿಮೆ ಬರೆಯುವವರು ಚೆನ್ನಾಗಿ ಬರೆಯುತ್ತಾರೆ. ಕೆಲವು ಪ್ರಾಧ್ಯಾಪಕರು ೧೫೦-೧೬೦ ಪುಸ್ತಕಗಳನ್ನು ಬರೆಯುತ್ತಾರೆ. ಈ ಪುಸ್ತಕಗಳ ಪ್ರಮಾಣ ಅದ್ಭುತವಾದುದು. ಆದರೆ, ಈ ಪುಸ್ತಕಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡುತ್ತದೆ. ಕಾಮರೂಪಿ ಅವರು ಕಡಿಮೆ ಬರೆದ ಕಾರಣ ಅವರ ಕೃತಿಗಳೆಲ್ಲ ಚೆನ್ನಾಗಿವೆ''`. ಇದು ಹಿರಿಯ ಇತಿಹಾಸಕಾರ ಶ್ರೀ [[ಷ.ಶೆಟ್ಟರ್]] ಅವರ ಮಾತುಗಳು.
<ref>{{citeweb|url= http://www.prajavani.net/article/%E0%B2%86%E0%B2%A4%E0%B3%8D%E0%B2%AE%E0%B2%95%E0%B2%A5%E0%B3%86%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF-%E0%B2%AA%E0%B3%8D%E0%B2%B0%E0%B2%BE%E0%B2%AE%E0%B2%BE%E0%B2%A3%E0%B2%BF%E0%B2%95%E0%B2%A4%E0%B3%86-%E0%B2%95%E0%B3%8A%E0%B2%B0%E0%B2%A4%E0%B3%86-%E0%B2%B5%E0%B2%BF%E0%B2%B7%E0%B2%BE%E0%B2%A6|title=ಆತ್ಮಕಥೆಗಳಲ್ಲಿ ಪ್ರಾಮಾಣಿಕತೆ ಕೊರತೆ|publisher=prajavani.net|date=07-29-2013|accessdate=4-3-2014}}</ref>
ಕನ್ನಡದ ಮತ್ತೊಬ್ಬ ವಿಮರ್ಶಕರಾದ ಶ್ರೀ [[ರಹಮತ್ ತರೀಕೆರೆ]] ಅವರು ಕಾಮರೂಪಿಯವರ ಬಗ್ಗೆ ಹೀಗೆ ಅಭಿಪ್ರಾಯ ಪಡುತ್ತಾರೆ. `''ಕಾಮರೂಪಿ ಬರಹಗಳಲ್ಲಿ ತಾಜಾತನ ಇದೆ. ಅವರ ಜೀವನದೃಷ್ಟಿ ಮತ್ತೆ ಮತ್ತೆ ಹುಡುಕುವುದು ಹಾಗೂ ಪ್ರಯಾಣ. ಕಿಲಾಡಿತನ ಹಾಗೂ ಜಗಳಗಂಟತನ ಅವರ ಬರಹದ ವೈಶಿಷ್ಟ್ಯ. ಮಾತುಕತೆಗಳ ಮೂಲಕವೇ ಅವರು ಕಥೆಗಳನ್ನು ಬೆಳೆಸುತ್ತಾರೆ. ವ್ಯಂಗ್ಯ ಹಾಗೂ ತಮಾಷೆಯ ಮೂಲಕವೇ ಜೀವನವನ್ನು ನೋಡುವ ದೃಷ್ಟಿಕೋನದಿಂದ ಈ ಬರಹಕ್ಕೆ ವಿಶೇಷ ಶಕ್ತಿ ತಂದುಕೊಟ್ಟಿದೆ. ಕಾಮರೂಪಿ ಅವರು ಬರಹದ ಮೂಲಕ ವ್ಯಕ್ತಿಯ ಕೃತ್ರಿಮತೆ, ಆಷಾಢಭೂತಿತನ ವಿರುದ್ಧ ಯಾವಾಗಲೂ ದಾಳಿ ಮಾಡುತ್ತಾರೆ. ಅವರ ಬರಹಗಳಲ್ಲಿ ಐಡೆಂಟಿಟಿಗಾಗಿ ಹುಡುಕಾಟವನ್ನು ಕಾಣಬಹುದು'.''
<ref>[http://www.prajavani.net/article/%E0%B2%86%E0%B2%A4%E0%B3%8D%E0%B2%AE%E0%B2%95%E0%B2%A5%E0%B3%86%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF-%E0%B2%AA%E0%B3%8D%E0%B2%B0%E0%B2%BE%E0%B2%AE%E0%B2%BE%E0%B2%A3%E0%B2%BF%E0%B2%95%E0%B2%A4%E0%B3%86-%E0%B2%95%E0%B3%8A%E0%B2%B0%E0%B2%A4%E0%B3%86-%E0%B2%B5%E0%B2%BF%E0%B2%B7%E0%B2%BE%E0%B2%A6]</ref>
== ಚಿತ್ರ ಶಾಲೆ ==
<gallery>
File:M.S.Prabhakara1.jpg|ಕಾಮರೂಪಿ
File:M.S.Prabhakara 2.jpg|ಕಾಮರೂಪಿ
File:M.S.Prabhakara 3.jpg|ಕಾಮರೂಪಿ
File:M.S.Prabhakara 4.jpg|ಕಾಮರೂಪಿ
File:M.S.Prabhakara 5.jpg|ಕಾಮರೂಪಿ
File:ಎಂ.ಎಸ್.ಪ್ರಭಾಕರ.JPG|umbಕಾಮರೂಪಿ
</gallery>
== ಉಲ್ಲೇಖಗಳು ==
{{reflist|1}}
== ಬಾಹ್ಯ ಕೊಂಡಿಗಳು ==
{{commons category|M. S. Prabhakara}}
* [http://kamaroopi.wordpress.com/ ಎಂ. ಎಸ್. ಪ್ರಭಾಕರ ಅವರ ಬ್ಲಾಗ್ ವಿಳಾಸ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
*[http://www.epw.in/authors/m-s-prabhakara ಎಂ. ಎಸ್. ಪ್ರಭಾಕರ ಅವರ ಇಂಗ್ಲೀಷ್ ಲೇಖನಗಳ ಕೊಂಡಿ] {{Webarchive|url=https://web.archive.org/web/20131216175455/http://www.epw.in/authors/m-s-prabhakara |date=2013-12-16 }}
* [http://chukkubukku.com/kagada/1374648056 ಎಂ. ಎಸ್. ಪ್ರಭಾಕರ ಅವರ ಸಮಗ್ರ ಕೃತಿಯ ಕುರಿತ ಅವರ ಮುನ್ನುಡಿ] {{Webarchive|url=https://web.archive.org/web/20130922063307/http://chukkubukku.com/kagada/1374648056 |date=2013-09-22 }}
* [http://www.prajavani.net/article/%E0%B2%85%E0%B2%A8%E0%B2%A8%E0%B3%8D%E0%B2%AF-%E0%B2%B2%E0%B3%87%E0%B2%96%E0%B2%95-%E0%B2%95%E0%B2%BE%E0%B2%AE%E0%B2%B0%E0%B3%82%E0%B2%AA%E0%B2%BF ಎಂ. ಎಸ್. ಪ್ರಭಾಕರ ಅವರ ಬಗ್ಗೆ ಪ್ರಜಾವಾಣಿಯಲ್ಲಿ ಬಂದ ಲೇಖನದ ಕೊಂಡಿ]
* [http://kendasampige.com/article.php?id=6424 ಕೆಂಡಸಂಪಿಗೆಯಲ್ಲಿ ಪ್ರಕಟವಾದ ಕಾಮರೂಪಿಯವರ "ಉಪಪತ್ತಿಯೋಗ" ಕಥೆಯ ಕೊಂಡಿ] {{Webarchive|url=https://web.archive.org/web/20130813235012/http://kendasampige.com/article.php?id=6424 |date=2013-08-13 }}
* [http://www.kendasampige.com/writer_profile.php?id=611 ಕೆಂಡಸಂಪಿಗೆಯಲ್ಲಿ ಪ್ರಕಟವಾದ ಕಾಮರೂಪಿಯವರ ಬರಹಗಳ ಕೊಂಡಿ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
{{Interwikineeded}}
[[ವರ್ಗ:ಕನ್ನಡ ಸಾಹಿತಿಗಳು]]
[[ವರ್ಗ:ಪತ್ರಕರ್ತರು]]
3wosy6adyu1liarmw7cc0934puqyd0i
ಕ್ರೈಸ್ಟ್ ಯೂನಿವರ್ಸಿಟಿ
0
39648
1379555
1378426
2026-08-09T03:04:27Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379555
wikitext
text/x-wiki
{{wikify}}
{{Infobox University
|image =
|image_caption =
|imagesize = 250 px
|name = ಕ್ರೈಸ್ಟ್ ವಿಶ್ವವಿದ್ಯಾಲಯ
|caption =
|motto = ಶ್ರೇಷ್ಟತೆ ಮತ್ತು ಸೇವೆ
|established = ೧೫ ಜುಲೈ ೧೯೬೯<ref>https://www.google.co.in/search?q=establishment+of+Christ+University&oq=establishment+of+Christ+University&aqs=chrome..69i57j0l3.15375j0j7&client=ms-android-lenovo&sourceid=chrome-mobile&ie=UTF-8</ref>
|vice_chancellor = ಡಾ{{!}}ವಂ{{!}} ಥೋಮಸ್ ಸಿ.ಥೋಮಸ್, ಸಿಎಂಐ<ref>{{cite web|title=CII speaker profile 2013|url=http://www.cii-iq.in/cii/events/NSQE2012/speakers_Profile.pdf|work=website|accessdate=24 March 2014|archive-date=4 ಅಕ್ಟೋಬರ್ 2012|archive-url=https://web.archive.org/web/20121004051531/http://www.cii-iq.in/CII/events/NSQE2012/speakers_Profile.pdf|url-status=dead}}</ref>
|city= [[ಬೆಂಗಳೂರು]]
|state=[[ಕರ್ನಾಟಕ]]<ref>https://www.google.co.in/search?q=location+of+christ+university&oq=location+of+Christ&aqs=chrome.1.69i57j0l3.7604j0j7&client=ms-android-lenovo&sourceid=chrome-mobile&ie=UTF-8</ref>
|country = ಭಾರತ
|students = 12000
|coor = {{Coord|12|56|5|N|77|36|19|E|type:edu_region:IN-KA|display=inline,title}}
|type = [[ಖಾಸಗೀ ವಿಶ್ವವಿದ್ಯಾಲಯ|ಖಾಸಗೀ]]
|campus = ನಗರ
|affiliations =
|website= {{URL|www.christuniversity.in}}
}}
[[File:Christ University Hosur road Bangalore 4819.JPG|thumb|ಕ್ರೈಸ್ಟ್ ವಿಶ್ವವಿದ್ಯಾಲಯ]]
[[File:Christ University Auditorium.jpg|thumb|ಪ್ರಧಾನ ಆಡಿಟೋರಿಯಂನ ಒಳಾಂಗಣ ನೋಟ]]
'''ಕ್ರೈಸ್ಟ್ ವಿಶ್ವವಿದ್ಯಾಲಯ''' ವಿಶ್ವವಿದ್ಯಾಲಯ' ಇದು ಭಾರತದ ಕರ್ನಾಟಕದಲ್ಲಿನ [[ಬೆಂಗಳೂರು]]ನಲ್ಲಿದೆ. ಈ ಸಂಸ್ಥೆಯು ೧೯೬೯ ರಲ್ಲಿ ಸ್ಥಾಪಿತಗೊಂಡಿದ್ಧು,೨೦೦೮ ರಲ್ಲಿ ಈ ಕಾಲೇಜಿಗೆ 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' (ಡೀಮ್ಡ್ ಟು ಬಿ ಯೂನಿರ್ವಸಿಟಿ) <ref>https://www.google.co.in/search?client=ms-android-lenovo&ei=_-ODW9qYD4y-rQGyp7f4BQ&q=christ+referred+as+deemed+to+be+university+&oq=christ+referred+as+deemed+to+be+university+&gs_l=mobile-gws-wiz-serp.3..35i39j33i22i29i30l4.30158.35609..39103...0.0..0.307.1995.0j4j4j1......0....1.........0i71.y9SThLZQtSA</ref> ಎಂಬ ಮಾನ್ಯತೆ ದೊರಕಿದೆ. ದೇಶದ ಅನೇಕ ಶೀಕ್ಷಣಕ್ಕೆ ಸಂಬಂಧಿಸಿದ ಸಮೀಕ್ಷೆಗಳಲ್ಲಿ ಇದನ್ನು ಉತ್ತಮವಾದ ಶೈಕ್ಷಣಿಕ ಸಂಸ್ಥೆ ಎಂದು ಪಟ್ಟಿ ಮಾಡಲಾಗಿದೆ. ೨೦೧೪ರಲ್ಲಿ ನಡೆದ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಈ ಸಂಸ್ಥೆಯು ವಿಜ್ಞಾನ, ಕಲಾ, ವಾಣೀಜ್ಯ ಹಾಗೂ ಕಾನೂನು ವಿಭಾಗಗಳಲ್ಲಿ ಹತ್ತು ಸ್ಥಾನಗಳಲ್ಲಿ ಒಂದಾಗಿದೆ. ೨೦೧೪ರ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವು ಬಿ.ಬಿ.ಎ. ೧ನೇ ಸ್ಥಾನ, ಕಲಾ ವಿಭಾಗ ೬ನೇ ಸ್ಥಾನ, ವಿಜ್ಞಾನ ವಿಭಾಗ ೪ನೇ ಸ್ಥಾನ ಮತ್ತು ೪ನೇ ಸ್ಥಾನದಲ್ಲಿ ವಾಣಿಜ್ಯ ಹಾಗೂ ಕಾನೂನು ೧೦ನೇ ಸ್ಥಾನಗಳನ್ನು ಪಡೆದಿದೆ.<ref>{{Cite web |url=http://indiatoday.intoday.in/bestcolleges/2014/ranks.jsp |title=ಆರ್ಕೈವ್ ನಕಲು |access-date=2015-08-31 |archive-date=2015-09-07 |archive-url=https://web.archive.org/web/20150907013436/http://indiatoday.intoday.in/bestcolleges/2014/ranks.jsp |url-status=dead }}</ref>
[[File:Aerial view of Taverekere, shot from Christ University, Bangalore.jpg|thumb|ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಬ್ಲಾಕ್-೧, ಬ್ಲಾಕ್-೨ ಹಾಗೂ ಮುಖ್ಯ ಲೈಬ್ರರಿಯ ಮತ್ತು ತಾವರೆಕೆರೆ ಪ್ರದೇಶದ ವೈಮಾನಿಕ ನೋಟ]]
ವಿಶ್ವವಿದ್ಯಾಲಯವು ರಾಷ್ಟ್ರೀಯ ಹಾಗೂ ಅಂರ್ತರಾಷ್ಟ್ರೀಯ ಮಾನ್ಯತೆ ಹೊಂದಿದ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು(ಕೋರ್ಸುಗಳನ್ನು) ತನ್ನ ವಿವಿಧ ವಿಭಾಗಗಳಾದ ಕಾನೂನು, ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್, ವಾಣಿಜ್ಯ, ಮ್ಯಾನೇಜ್ಮೆಂಟ್, ಮಾನವಿಕ, ವಿಜ್ಞಾನ, ಹಾಗೂ ಸಾಮಾಜಿಕ ವಿಜ್ಞಾನಗಳಲ್ಲಿ ಸೇರಿಸಿದೆ. ಇದರ ಜೊತೆಯಲ್ಲಿಯೇ, ಅನೇಕ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಗಣಕ(ಕಂಪ್ಯೂಟರ್) ಅನ್ವಯಗಳು(ಆಪ್ಲಿಕೇಶನ್ಸ್), ಹೊಟೇಲ್ ನಿರ್ವಹಣೆ(ಮ್ಯಾನೇಜ್ಮೆಂಟ್), ಸಮೂಹ ಸಂವಹನ, ಸಮಾಜ ಸೇವೆ, ಎಂಜಿನಿಯರಿಂಗ್ ಮತ್ತು ಪ್ರವಾಸೋದ್ಯಮಗಳನ್ನು ಕೋರ್ಸುಗಳನ್ನು ಹೊಂದಿದೆ.<ref>http://indiatoday.intoday.in/story/india-today-best-colleges-2013-christ-university/1/280166.html</ref><ref>{{Cite web |url=http://www.christuniversity.in/uploadimages/International%20Office%20(v1).pdf |title=ಆರ್ಕೈವ್ ನಕಲು |access-date=2014-12-01 |archive-date=2015-03-18 |archive-url=https://web.archive.org/web/20150318163954/http://christuniversity.in/uploadimages/International%20Office%20(v1).pdf |url-status=dead }}</ref>
೧೭ ಜೂನ್ ೧೯೭೨ ರಂದು ಕ್ರೈಸ್ಟ್ ಕಾಲೇಜು ಭಾರತದ [[ವಿಶ್ವವಿದ್ಯಾಲಯ ಧನಸಹಾಯ ಆಯೋಗ]]ದ (ಯುಜಿಸಿ), ಮಾನ್ಯತೆ ಪಡೆದಿದೆ. ೧೯೯೮ರಲ್ಲಿ ಈ ಸಂಸ್ಥೆಯನ್ನು ಪರೀಕ್ಷಾ ಮಾನ್ಯತೆಗೆ [[ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಶನ್]] (ಎನ್ಎಎಸಿ), ಒಂದು ಯುಜಿಸಿ-ಅನುದಾನಿತ ಅಂಗ ಸಂಸ್ಥೆ, ಎಂದು ಗುರುತಿಸಲಾಯಿತು. ಮತ್ತ್ತು ೨೦೦೫ರಲ್ಲಿ ಇದನ್ನು ಮರು-ಮಾನ್ಯತೆಗೆ ಪಡೆದಿದೆ. ಪ್ರಸ್ತುತ ಈ ವಿಶ್ವವಿದ್ಯಾಲಯವನ್ನು ಎನ್ಎಎಸಿ-ಯಿಂದ A+ ಪಡೆದಿದೆ.<ref name=UGC06>{{cite web|publisher=UGC|title=Selection of colleges under CPE scheme|url=http://www.ugc.ac.in/oldpdf/colleges/Press_release06CPE.pdf|accessdate=10 March 2014}}</ref>
==ಕ್ಯಾಂಪಸ್ (ಸಂಸ್ಥೆ ಆವರಣ)==
ಕ್ರೈಸ್ಟ್ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ನಾಲ್ಕು ವಿವಿಧ ಕ್ಯಾಂಪಸ್ ಗಳನ್ನು ಕೋರಮಂಗಲ, ಬನ್ನೇರುಘಟ್ಟ ರಸ್ತೆ, ಕೆಂಗೇರಿ ಮತ್ತು ಯಶವಂತಪುರಗಳಲ್ಲಿ ಹೊಂದಿರುವುದರ ಜೊತೆಗೆ ಮಹಾರಾಷ್ಟ್ರದ ಪುಣೆ ಬಳಿಯ ಲವಾಸಾದಲ್ಲಿ ಒಂದು ಕ್ಯಾಂಪಸ್ ಮತ್ತು ದೆಹಲಿಯ ಎನ್ ಸಿ ಆರ್ ನಲ್ಲಿ ಮತ್ತೊಂದು ಕ್ಯಾಂಪಸ್ ಹೊಂದಿದೆ. ದೇಶಾದ್ಯಂತ ಒಟ್ಟು ಆರು ಕ್ಯಾಂಪಸ್ ಗಳು ಕಾರ್ಯನಿರ್ವಹಿಸುತ್ತಿವೆ.
ಆವರಣವು ಶೂನ್ಯ ತ್ಯಾಜ್ಯ ಪರಿಸರವನ್ನು ಹೊಂದಿದ್ದು, ಇಲ್ಲಿ ಉಪಯೋಗಿಸಿದ ಕಾಗದ ಹಾಗೂ ದ್ರವ ರೂಪದ ವಸ್ತುಗಳನ್ನು ಮರುಬಳಕೆಯ ವಸ್ತುಗಳನ್ನಾಗಿ ಮಾರ್ಪಡಿಸಲಾಗುತ್ತದೆ.<ref>{{cite news|last=PS|first=Ramya|title=It's time for Bangalore colleges to go green|url=http://www.dnaindia.com/bangalore/report-it-s-time-for-bangalore-colleges-to-go-green-1438140|accessdate=23 March 2014|newspaper=DNA|date=15 September 2010}}</ref> ಗುರುತಿನ ಚೀಟಿ ಹಾಗೂ ಡೆಬಿಟ್ ಕಾರ್ಡ್-ಗಳನ್ನು ಒಂದರಲ್ಲೇ ನಮೂದಿಸಿ ಕ್ಯಾಂಪಸ್-ನಲ್ಲಿ ದ್ರವರೂಪದ ಹಣದ ಉಪಯೋಗವನ್ನು ಕಡಿಮೆ ಮಾಡಲಾಗಿದೆ. ಈ ಗುರುತಿನ ಚೀಟಿ ಹೊಂದಿದ ಸ್ಮಾರ್ಟ್ ಎಟಿಎಂ ಕಾರ್ಡ್-ನ್ನು ಸೌತ್ ಇಂಡಿಯನ್ ಬ್ಯಾಂಕು ಒದಗಿಸುತ್ತದೆ [[ಸೌತ್ ಇಂಡಿಯನ್ ಬ್ಯಾಂಕ್]]<ref>{{cite news|last=Kumar|first=Chethan|title=Christ campus goes cashless|url=http://www.deccanherald.com/content/182379/christ-campus-goes-cashless.html|accessdate=23 March 2014|newspaper=Deccan Herald|date=8 August 2013}}</ref>
<gallery>[[File:Christ university during Christmas.jpg|Christ university during Christmas]]</gallery>
===ವಾಸ್ತುಶಿಲ್ಪ===
ಕ್ರೈಸ್ಟ್ ವಿಶ್ವವಿದ್ಯಾಲಯದ ಕೋರಮಂಗಲ ಕ್ಯಾಂಪಸ್ ನಲ್ಲಿ ೬ ಕಟ್ಟಡಗಳಿದ್ದು, ಅವುಗಳನ್ನು ಬ್ಲಾಕ್-೧, ಬ್ಲಾಕ್-೨, ಬ್ಲಾಖ್-೩, ಬ್ಲಾಖ್-೪, ಕೇಂದ್ರೀಯ ಕಟ್ಟಡ, ಆಡಿಟೋರಿಯಂ ಕಟ್ಟಡ ಎಂದು ಹೆಸರಿಸಲಾಗಿದೆ. ಬ್ಲಾಕ್-೧'ರಲ್ಲಿ ಮೊದಲ ವರ್ಷದ ಬಿ.ಎ. ಮತ್ತು ಬಿ.ಎಸ್ಸಿ ತರಗತಿಗಳು ನಡೆಯುತ್ತವೆ. ಈ ಕಟ್ಟಡವು ಕ್ರೈಸ್ಟ್ ಕಾಲೇಜು ವಿಶ್ವವಿದ್ಯಾಲಯವಾಗುವಕ್ಕಿಂತಲೂ ಮುಂಚೆ ಕ್ರೈಸ್ಟ್ ಕಾಲೇಜಿನ ಮುಖ್ಯ ಆಡಳಿತ ಕಟ್ಟಡವಾಗಿತ್ತು. ಬ್ಲಾಕ್-೨ ಕಟ್ಟಡದಲ್ಲಿ, ಬಿ.ಕಾಂ. ಹಾಗೂ ಕೆಲವೊಂದು ಬಿ.ಎಸ್ಸಿ. ತರಗತಿಗಳು ನಡೆಯುತ್ತವೆ. ಬ್ಲಾಕ್-೩'ರಲ್ಲಿ ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಬ್ಲಾಕ್-೪'ರಲ್ಲಿ ಪ್ರವಾಸೋದ್ಯಮ ಮತ್ತು ಗೌರವವಾನ್ವಿತ ಕೋರ್ಸುಗಳನ್ನು ಕಲಿಸಲಾಗುತ್ತದೆ. ಕೇಂದ್ರ ಕಟ್ಟಡವು ಸ್ನಾತಕೋತ್ತರ, ಕಾನೂನು ಮತ್ತು ವಿಶ್ವವಿದ್ಯಾಲಯದ ಪ್ರಮುಖ ಆಡಳಿತ ಮಂಡಳಿಯ ಕಛೇರಿಗಳಾದ, ಉಪ-ಕುಲಪತಿಗಳ ಕಛೇರಿ, ವಿಶ್ವವಿದ್ಯಾಲಯದ ಕಛೇರಿ ಮತ್ತು ಐಪಿಎಂ-ಗಳನ್ನು ಹೊಂದಿದೆ. ಇದರಲ್ಲಿ ಪ್ರಪಂಚದಾದ್ಯಂತ ಬಿತ್ತರಿಸಿದ ೧,೮೦,೦೦೦ ಪುಸ್ತಕ, ೪೦೦ ಪತ್ರಿಕೆ-ಪ್ರಕಟಣೆಗಳನ್ನು ಜ್ಞಾನ ಕೇಂದ್ರವೂ ಇದೆ.<ref>{{Cite web |url=https://christuniversitylibrary.wordpress.com/library-statistics/ |title=ಆರ್ಕೈವ್ ನಕಲು |access-date=2015-08-31 |archive-date=2015-07-14 |archive-url=https://web.archive.org/web/20150714070228/https://christuniversitylibrary.wordpress.com/library-statistics/ |url-status=dead }}</ref> ಆಡಿಟೋರಿಯಂನ ಕಟ್ಟಡದಲ್ಲಿ ಕ್ರೈಸ್ಟ್ ಪದವಿಫೂರ್ವ ಕಾಲೇಜು ಹಾಗೂ ಇದೇ ಕಟ್ಟಡದಲ್ಲಿ ೪,೦೦೦ ಪ್ರೇಕ್ಷಕರಿಗೆ ಏಕಕಾಲದಲ್ಲಿ ಆಸೀನವನ್ನು ಒದಗಿಸುವ ಕ್ರೈಸ್ಟ್ ವಿಶ್ವವಿದ್ಯಾಲಯದ ಮುಖ್ಯ ಆಡಿಟೋರಿಯಂ ಸಹ ಇದೆ.
===ವಸತಿ===
ಮುಖ್ಯ ಕ್ಯಾಂಪಸ್-ನಲ್ಲಿ ೩೦೦ ವಿದ್ಯಾರ್ಥಿನಿಯರು ವಾಸಿಸುವ ಜೋನಾಸ್ ಸಭಾಂಗಣ ಮತ್ತು ೨೬೦ ವಿದ್ಯಾರ್ಥಿಗಳು(ಹುಡುಗರು) ವಾಸಿಸುವ ಕ್ರೈಸ್ಟ್ ಸಭಾಂಗಣವನ್ನು ನಿರಮ್ಇಸಲಾಗಿದೆ. ೧೦೦೦ ಹುಡುಗ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಒದಗಿಸುವ ದೆವಡನ್ ಸಭಾಂಣವು ವಿಶ್ವವಿದ್ಯಾಲಯದ ಕೆಂಗೇರಿ ಆವರಣದಲ್ಲಿದ್ದು, ಕ್ರೈಸ್ಟ್ ವಿಶ್ವವಿದ್ಯಾಲಯವು ೨೦೦ ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ವಸತಿಯನ್ನು ಕಲ್ಪಿಸುತ್ತದೆ. ವಿಶ್ವವಿದ್ಯಾಲಯವು ೫೦೦ ಹುಡುಗ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಸತಿಯನ್ನು ಆವರಣದ ಹೊರಗಿನ ಪ್ರದೇಶದಲ್ಲಿ ಕಲ್ಪಿಸುತ್ತದೆ.{{Citation needed|date=ಮಾರ್ಚ್ ೨೦೧೪}}
===ಸಂಸ್ಥೆ ಮತ್ತು ಆಡಳಿತ===
ವಿಶ್ವವಿದ್ಯಾಲಯದ ಆವರಣವು ಬೆ<ಗಳೂರಿನ ಕೇದ್ರ ಭಾಗದಲ್ಲಿದ್ದು ಬಹು ವಿಸ್ರೀರ್ಣತೆಯನ್ನು ಹೊಂದಿದೆ. {{ಪರಿರ್ವತಿತ|೨೫|ಎಕರೆ|ha}} ಇದು {{convert|100|acre|ha|adj=on}} ಧರ್ಮರಾಂ ಕಾಲೇಜಿನ(ವಿದ್ಯಾಕ್ಷೇತ್ರಂ)ಆವರಣದ [[ಬೆಂಗಳೂರು]] ನಗರ ವ್ಯಾಪ್ತಿಯಲ್ಲಿದೆ. ಈ ಆವರಣದ ವಿಸ್ತರಣೆಯು [[ರಾಷ್ಟ್ರೀಯ ಹೆದ್ದಾರಿ 7 (ಭಾರತ)|ಹೊಸೂರು ರಸ್ತೆ (NH 7)]] ಬೆಂಗಳೂ ಡೈರಿ ಫ್ಲೈಓವರ್-ನ ವಿರುದ್ದ ದಿಕ್ಕಿನಲ್ಲಿದೆ.
೨೦೦೯ರಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವು ೭೫ ಎಕರೆ ಜಮೀನನಲ್ಲಿ ಪರಿಸರ ಸ್ನೇಹಿ ಆವರಣವನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ [[ಕೆಂಗೇರಿ]] [[ರಾಜ್ಯ ಹೆದ್ದಾರಿ 17 (ಕರ್ನಾಟಕ)|SH 17]]ಕಾರ್ಯಾರಂಭಗೊಳಿಸಿತು. ಇದರಲ್ಲಿ ಎಂಜಿನೀಯರಿಂಗ್, ಪದವಿಫೂರ್ವ ವಸತಿ ಕಾಲೇಜು ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ (ಸಿಯುಐಎಂ) ಕೋರ್ಸುಗಳನ್ನು ಪ್ರಾರಂಭಿಸಿದೆ.
ನಗರದಲ್ಲಿರುವ ಕಾಲೇಜು ಆವರಣವು ಬೆಂಗಳೂರಿನ ಪ್ರಮುಖ ವಸತಿ ಹಾಗೂ ವಾಣಿಜ್ಯ ತಾಣಗಳಾದ ಬಿಟಿಎಂ ವಸತಿ ಸಮುಚ್ಚಯಕ್ಕೆ ಬಲು ಹತ್ತಿರವಾಗಿದ್ದು, ನಗರದ ಪ್ರಖ್ಯಾತ ವಸತಿ ನಿಲಯಗಳ ಪೈಕಿ ಒಂದಾದ [[ಕೋರಮಂಗಲ]], ಹಾಗೂ [[ಜಯನಗರ]].ವಿಶ್ಚವಿದ್ಯಾಲಯವು ಭಾರತದ ವಿವಿಧ ಪ್ರದೇಶಗಳಿಂದ ಹಾಗೂ ಪ್ರಪಂಚದ ಕೆಲವು ಭಾಗಗಳಿಂದ ಬಂದಂತಹ ೧೨,೦೦೦ ವಿದ್ಯಾರ್ಥಿ ವೃಂದ ಮತ್ತು ೫೦೦ ಮಂದಿಯ ಶಿಕ್ಚಕ ವರ್ಗವನ್ನು ಹೊಂದಿದೆ.
==ಶೈಕ್ಷಣಿಕ==
ಕ್ರೈಸ್ಟ್ ವಿಶ್ವವಿದ್ಯಾಲಯ ಪ್ರಮಾಣೀಕೃತ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಮತ್ತು ಸಂಶೋಧನೆ, ಕೋರ್ಸುಗಳನ್ನು ತನ್ನ ಶೈಕ್ಷಣಿಕ ಪರಿಧಿಗೊಳಪಟ್ಟ ವಿಭಾಗಗಳಾದ ಕಾನೂನು ಶಾಲೆ, ಶಿಕ್ಷಣ, ವಿಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ವಿವಿಧ ಭಾಷೆಗಳು, ವಾಣೀಜ್ಯ ಮತ್ತು ಮ್ಯಾನೇಜ್ಮೆಂಟ್ ಹಾಗೂ ಎಂಜಿನಿಯರಿಂಗ್-ನಲ್ಲಿ ಶೀಕ್ಷಣವನ್ನು ನೀಡುತ್ತಿದೆ.<ref name=Admissions01>{{cite web|title=Admissions|url=http://christuniversity.in/secmenudisp.php?mid=2&subid=14|work=Website|publisher=Christ University|accessdate=14 July 2013|archive-date=17 ಜುಲೈ 2013|archive-url=https://web.archive.org/web/20130717040325/http://christuniversity.in/secmenudisp.php?mid=2&subid=14|url-status=dead}}</ref> ೨೦೦೫ರಲ್ಲಿ, ಆಗಿನ ಕ್ರೈಸ್ಟ್ ಕಾಲೇಜು (ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯ) [[ರಾಷ್ಟ್ರೀಯ ಪರೀಕ್ಷೆ ಹಾಗೂ ಮಾನ್ಯತಾ|ಎನ್ಎಎಸಿ]]ಯಿಂದ A+ ಪಡೆದ ದಕ್ಷಿಣ ಬಾರತದಲ್ಲೇ ಪ್ರಥಮ ಹಾಗೂ ಏಕೈಕ ಶೀಕ್ಷಣ ಸಂಸ್ಥೆಯಾಗಿದೆ.
===ಪದವಿ ಕೋರ್ಸುಗಳು===
ವಿಶ್ವವಿದ್ಯಾಲಯವು ೪೫ ಪದಿ ಕೋರ್ಸುಗಳನ್ನು ಮಾನವಿಕ, ಸಾಮಾಜಿಕ ವಿಜ್ಞಾನ, ವಿಜ್ಞಾನ, ವಾಣಿಜ್ಯ ಮತ್ತು ಮ್ಯಾನೇಜ್ಮೆಂಟ್, ಕಾನೂನು, ಶಿಕ್ಷಣ, ಹಾಗೂ ಎಂಜಿನಿಯರಿಂಗ್ ವಿಭಅಗಗಳಲ್ಲಿ ಪರಿಚಯಿಸಿದೆ. ಪದವಿ ಕೋರ್ಸುಗಳು ಮೂರು ವರ್ಷಗಳ ಕಾರ್ಯಕ್ರಮವನ್ನು ಹೊಂದಿದ್ದು ಇದರಲ್ಲಿ [[ಶೀಕ್ಷಣ ಪದವಿ]] (ಬಿ.ಎಡ್, ಎರಡು ವರ್ಷ), ಹೊಟೇಲ್ ಮ್ಯಾನೇಜ್ಮೆಂಟ್ ಪದವಿ (ಬಿ.ಹೆಚ್.ಎಮ್, ನಾಲ್ಕು ವರ್ಷ), [[ಕಾನೂನು ಪದವಿ]] (ಎಲ್.ಎಲ್.ಬಿ, ಐದು ವರ್ಷ), [[ತಾಂತ್ರಿಕ ಪದವಿ]] (ಬಿ.ಟೆಕ್, ನಾಲ್ಕು ವರ್ಷ) ಮತ್ತು ಸಮಗ್ರ ಬಿ.ಟೆಕ್ / ಎಮ್.ಟೆಕ್ ಅಥವಾ ಎಂ.ಬಿ.ಎ. (ಐದು ವರ್ಷ)ಆಗಿರುತ್ತದೆ.
ಮೂರು ಕೋರ್ಸುಗಳನ್ನು ಅಂದರೆ ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್ (ಬಿ.ಬಿ.ಎ), [[ವಾಣಿಜ್ಯ ಪದವಿ]] (ಬಿಕಾಂ), ಕಲಾ ಪದವಿ (ಬಿಎ) ಮತ್ತು ವಿಜ್ಞಾನ ಪದವಿ (ಬಿಎಸ್ಸಿ) ಹೊರತುಪಡಿಸಿ [[ಮೂರು ಪ್ರಮುಖ]] ಎಲ್ಲವುದಕ್ಕೂ ಒಂದು ವ್ಯವಸ್ಥೆಯಿಂದ ಕೂಡಿವೆ.
====ಪದವಿ ಕೋರ್ಸುಗಳಲ್ಲಿ ವಿಕಿಪೀಡಿಯ====
[[File:ChristUnivWikiUGProgram 03.jpg|thumb|ದ್ವಿತೀಯ ಭಾಷಾ ವಿದ್ಯಾರ್ಥಿಗಳಿಗೆ ವಿಕಿಪೀಡಿಯ ಕಾರ್ಯಾಗಾರ]]
ವಿಶ್ವವಿದ್ಯಾಲಯವು, ಬೆಂಗಳೂರಿನಲ್ಲಿರುವ ಅಂರ್ತಜಾಲ ಮತ್ತು ಸಮಾಜ ಸಂಸ್ಥ (ಸಿಎಸ್ಐ)ಜೊತೆಗೂಡಿ ಮಾಡಿದ ಒಪ್ಪಂದ(ಎಂಒಯು)ದ ಮೇರೆಗೆ, ೧೬೦೦ ವಿದ್ಯಾರ್ಥಿಗಳು ವಿಕಿಪೀಡಯ ಅಂರ್ತಜಾಲಕ್ಕೆ ನಿರಂತರವಾಗಿ ಹಿಂದಿ, ಕನ್ನಡ, ತಮಿಳು, ಸಂಸ್ಕೃತ, ಮತ್ತು ಉರ್ದು ಭಾಷೆಗಳಲ್ಲಿ ಲೇಖನಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವಿಕಿಪೀಡಿಯಾದ ಮೊದಲ ಟ್ಯುಟೋರಿಯಲ್ಸ್ ಚಿತ್ರೀಕರಣವನ್ನು ವಿಶ್ಚವಿದ್ಯಾಲಯದ ಸ್ಟುಡಿಯೋದಲ್ಲಿ ಮಾಡಲಾಗಿದೆ.<ref name=cis012014>{{cite web|last=Muzammiluddin|first=Syed|title=Wikipedia at Forefront in Christ University|url=http://cis-india.org/openness/blog/wikipedia-at-forefront-in-christ-university|accessdate=20 March 2014|archive-date=8 ಫೆಬ್ರವರಿ 2014|archive-url=https://web.archive.org/web/20140208060803/http://cis-india.org/openness/blog/wikipedia-at-forefront-in-christ-university|url-status=dead}}</ref>
The [[ಹಿಂದಿ]] and [[ಕನ್ನಡ]] ಲೇಖನಗಳನ್ನು ಇಲ್ಲಿ ಓದಬಹುದು [[:hi:विकिपीडिया:विकिपरियोजना क्राइस्ट विश्वविद्यालय|collection of Hindi articles]] and [[:kn:ವಿಕಿಪೀಡಿಯ:ಯೋಜನೆ/ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ|ಕನ್ನಡ ಲೇಖನಗಳ ಸಂಗ್ರಹ]]
===ಪದವಿ ಕೋರ್ಸುಗಳು===
ವಿಶ್ವವಿದ್ಯಾಲಯವು ೪೪ ಸ್ನಾತಕೋತ್ತರ, ೧೬ ಎಂ.ಫಿಲ್ ಮತ್ತು ೧೭ ಪಿ.ಹೆಚ್.ಡಿ ಕಾರ್ಯಕ್ರಮಗಳನ್ನು ಮಾನವಿಕ, ಸಾಮಾಜಿಕ ವಿಜ್ಞಾನ, ವಿಜ್ಞಾನ, ಕಾನೂನು, ಶೀಕ್ಷಣ, ವಾಣೀಜ್ಯ ಮತ್ತು ಮ್ಯಾನೇಜ್ಮೆಂಟ್, ಹಾಗೂ ಎಂಜಿನಿಯರಿಂಗ್ ವಿಭಾಗಗಳಲ್ಲಿ ಕೋರ್ಸುಗಳನ್ನು ನೀಡುತ್ತಿದೆ. ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳು ಎರಡು ವರ್ಷ ಅವಧಿಯನ್ನು ಹೊಂದಿದ್ದೂ, ಇದರಲ್ಲಿ ಕಂಪ್ಯೂಟರ್ ಸ್ನಾತಕೋತ್ತರ ಮತ್ತು ಕಾನೂನು ಸ್ನಾತಕೋತ್ತರ ಪದವಿಗಳು ಕ್ರಮೇಣವಾಗಿ ಮೂರು ವರ್ಷ ಹಾಗೂ ಒಂದು ಅವಧಿಯನ್ನು ಹೊಂದಿರುತ್ತದೆ.
===ಉನ್ನತ ಶಿಕ್ಷಣ ಶ್ರೇಯಾಂಕಗಳು===
[[ಇಂಡಿಯಾ ಟುಡೇ]] ಕೆಳಗೆ ವಿಸ್ತರಿಸಿದ ಪಟ್ಟಿಗಳಲ್ಲಿ 'ಇಂಡಿಯಾ ಟುಡೇ' ವಾರ ಪ್ತ್ರಿಕೆಯು ನಡೆಸಿದ ಶೈಕ್ಷಣಿಕ ಸಮೀಕ್ಷೆಯಲ್ಲಿ ೨೦೧೫ರವರೆಗೆ ಭಾರತದಲ್ಲಿ ವಿಶ್ವವಿದ್ಯಾಲಯಕ್ಕೆ ಸಿಕ್ಕಿದ ವಿವಿಧ ಶ್ರೇಣಿ ಹಾಗೂ ಅದರ ಕ್ರಮಾಂಕಗಳ ಸಂಕ್ಷಿಪ್ತ ವಿವರವನ್ನು ನೀಡಲಾಗಿದೆ. ಬಿಬಿಎ ಮತ್ತು ಬಿಸಿಎ ಕೋರ್ಸುಗಳನ್ನು ಉತ್ತಮ ಭಾರತದಲ್ಲಿ ಕಾರ್ಯಕ್ರಗಳೆಂದು ಇಲ್ಲಿ ಗುರುತಿಸಲಾಗಿದೆ. ವಿಶ್ವವಿದ್ಯಾಲಯವು ೨೦೧೨ ಸಮೀಕ್ಷೆಯಲ್ಲಿ ೩೧ನೇ ಸ್ಥಾನದಲ್ಲಿದ್ದು ಪ್ರಸ್ತುತ ೨೦೧೩ರ ಸಮೀಕ್ಷಯಲ್ಲಿ ೨೩ನೇ ಸ್ಥಾನವನ್ನು ಪಡೆದಿದೆ. ಇದೊಂದು ಖಾಸಗೀ ವಿಶ್ವವಿದ್ಯಾಲವಾಗಿದ್ದರೂ ಇದನ್ನು ಸರ್ಕಾರಿ ವಿಶ್ವವಿದ್ಯಾಲಯಗಳಷ್ಟೇ ಪ್ರಾಮುಖ್ಯತೆಯಿಂದ ನೋಡಿಕೊಳ್ಳುವುದು ಈ ಕ್ರೈಸ್ಟ್ ವಿಶ್ವವಿದ್ಯಾಲಯದ ವೈಶಿಷ್ಟ್ಯತೆಯನ್ನು ತೋರಿಸುತ್ತದೆ.
೨೦೧೫ ರ 'ಇಂಡಿಯಾ ಟುಡೇ' ನಡೆಸಿದ ಖಾಸಗೀ ವಿಶ್ವವಿದ್ಯಾಲಯಗಳಲ್ಲಿ, ಕ್ರೈಸ್ಟ್ ವಿಶ್ವವಿದ್ಯಾಲಯವು <ref name=ITJuly15>{{cite news|last1=Deka|first1=Kaushik|title=Time to take the next big leap|work=Magazine|publisher=India Today|date=13 July 2015|pages=65–67}}</ref> ಮೊದಲ ಸ್ಥಾನವನ್ನು ಪಡೆದಿರುತ್ತದೆ.
{| style="text-align:center; float:right; font-size:85%; margin-left:2em;" class="wikitable sortable "
|+ ''ಇಂಡಿಯಾ ಟುಡೇ ವಿಶ್ವವಿದ್ಯಾಲಯಗಳ ಶ್ರೇಯಾಂಕ''
<ref name=ITUR>{{cite web|last=Nayyar|first=Dhiraj|title=India Today ranks India's best universities for 2013|url=http://indiatoday.intoday.in/story/india-best-universities-ranking-private-sector-survey/1/272876.html|work=Magazine|accessdate=20 March 2014|date=24 May 2013}}</ref>
!Year !! Rank
|-
! ೨೦೧೫
| ೧೧
|-
! ೨೦೧೪
| ೧೮
|-
! ೨೦೧೩
| ೨೩
|-
! ೨೦೧೨
| ೩೧
|}
{| style="text-align:center; float:centre; font-size:80%; margin-left:2em;" class="wikitable sortable "
|+ ''ಇಂಡಿಯಾ ಟುಡೇ ಸ್ನಾತಕೋತ್ತರ ಪದವಿ ಶ್ರೇಯಾಂಕ''
<ref name=IT13>{{cite book|title=The Best Colleges of India|date=24 June 2013|publisher=India Today}}</ref>
!Course !! ಶ್ರೇಯಾಂಕ ೨೦೦೫ !! ಶ್ರೇಯಾಂಕ ೨೦೦೬ !! ಶ್ರೇಯಾಂಕ ೨೦೦೭ !! ಶ್ರೇಯಾಂಕ ೨೦೦೮ !! ಶ್ರೇಯಾಂಕ ೨೦೦೯ !! ಶ್ರೇಯಾಂಕ ೨೦೧೦ !! ಶ್ರೇಯಾಂಕ ೨೦೧೧ !! ಶ್ರೇಯಾಂಕ ೨೦೧೨ !! ಶ್ರೇಯಾಂಕ ೨೦೧೩ !! ಶ್ರೇಯಾಂಕ ೨೦೧೪ !! ಶ್ರೇಯಾಂಕ ೨೦೧೫
|-
! [[ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಪದವಿ]]
| -
| -
| -
| -
| -
| -
| -
| -
| ೧
| ೧
| ೧
|-
! [[ಕಂಪ್ಯೂಟರ್ ವಿಜ್ಞಾನ ಪದವಿ]]
| -
| -
| -
| -
| -
| -
| -
| -
| ೧
| ೧
| ೧
|-
! ಸಮೂಹ ಸಂವಹನ
| -
| -
| -
| -
| -
| -
| -
| -
| ೩
| ೩
| ೩
|-
! ವಿಜ್ಞಾನ
| ೧೦
| ೧೦
| ೧೦
| ೮
| ೧೩
| ೭
| ೬
| ೬
| ೪
| ೪
| ೩
|-
! ವಾಣಿಜ್ಯ
| -
| -
| ೫
| ೬
| ೪
| ೫
| ೫
| ೬
| ೫
| ೪
| ೪
|-
! [[ಮಾನವವೀಯ]]
| -
| ೧೨
| ೮
| ೬
| ೬
| ೮
| ೫
| ೬
| ೧೦
| ೬
| ೪
|-
! ಕಾನೂನು
| -
| -
| -
| -
| -
| -
| ೧೫
| ೧೬
| ೧೩
| ೧೨
| ೧೨
|}
[[ದಿ ವೀಕ್]]ಹಂಸ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ, ದಿ ವೀಕ್-ಹಂಸ ಸಂಶೋಧನಾ ಸಮೀಕ್ಷಯನ್ನು ಹಮ್ಮಿಕೊಂದ್ದು, ಈ ಆಧಾರದ ಮೇರೆಗೆ ೨೦೧೫ರ ಪಟ್ಟಿಯನ್ನು ಕೆಳಗಡೆ ವಿಸ್ತರಿಸಲಾಗಿದೆ.
{| style="text-align:center; float:left; font-size:85%; margin-left:2em;" class="wikitable sortable "
|+ ''ದಿ ವೀಕ್-ಹಂಸ ಸಂಶೋಧನಾ ಸಮೀಕ್ಷೆ ೨೦೧೫''<ref>{{cite news|title=A brave new ‘blended’ world|url=http://beta.theweek.in/theweek/cover/Best-colleges-2015.html|accessdate=22 August 2015|publisher=The Week|date=21 June 2015|first=Sharmista|last=Chaudhury|archive-date=18 ಆಗಸ್ಟ್ 2015|archive-url=https://web.archive.org/web/20150818145237/http://beta.theweek.in/theweek/cover/Best-colleges-2015.html|url-status=dead}}</ref>
!Course !! Rank 2015
|-
! ಕಲೆ
| ೯
|-
! ವಾಣಿಜ್ಯ
| ೬
|-
! ವಿಜ್ಞಾನ
| ೮
|-
! ಕಾನೂನು
| ೨೬
|-
! ಹೋಟೆಲ್ ಮ್ಯಾನೇಜ್ಮೆಂಟ್
| ೧೫
|}
==ಸಹಯೋಗ==
ಕ್ರೈಸ್ಟ್ ವಿಶ್ವವಿದ್ಯಾಲಯವು, ವಿದೇಶೀ ವಿಶ್ವವಿದ್ಯಾಲಯಗಳ ಒಕ್ಕೂಟದ ಸದಸ್ಯ ಸಂಸ್ಥೆಯಾಗಿದೆ(ಯುಎಸ್ಎಸಿ) ಪ್ರಾನ್ಸ್-ನಲ್ಲಿ ಮತ್ತು ನೆದರ್ಲ್ಯಾಂಡ್ ದೇಶದ ಎ.ನ್.ಹೆಚ್.ಟಿ.ವಿ. ವಿಶ್ವವಿದ್ಯಾಲಯದ of ಅಪ್ಲೈಡ್ ವಿಜ್ಞಾನ. ೨೦೧೩ರಲ್ಲಿ ಕೊರಿಯಾ ದೇಶದ ೬ ವಿಶ್ವವಿದ್ಯಾಲಯಗಳೊಂದಿಗೆ ಪರಸ್ಪರ ವಿನಿಮಯ ಒಪ್ಪಂದವನ್ನು ಮಾಡಲಾಗಿದೆ.
==ಭಾರತ ಗೇಟ್ವೇ ಕಾರ್ಯಕ್ರಮ==
ವಿದೇಶೀ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಭಾರತ ವೀಕ್ಷಣೆಯನ್ನು ನೀಡುವ ಸಲುವಾಗಿ ಭಾರತ ಗೇಟ್ವೇ (ಐಜಿಪಿ)ಎಂಬ ಕಿರು-ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. (IGP).<ref>{{cite web|title=India Higher Education – Christ University|url=http://www.highereducationinindia.com/universities/christ-university.php|work=website|accessdate=25 March 2014|archive-date=25 ಮಾರ್ಚ್ 2014|archive-url=https://web.archive.org/web/20140325091347/http://www.highereducationinindia.com/universities/christ-university.php|url-status=dead}}</ref><ref>{{cite web|title=India Gateway Program|url=http://christuniversity.in/display_article.php?fid=74&arid=14&f=2|work=website|accessdate=25 March 2014|archive-date=25 ಮಾರ್ಚ್ 2014|archive-url=https://web.archive.org/web/20140325090420/http://christuniversity.in/display_article.php?fid=74&arid=14&f=2|url-status=dead}}</ref>
===ಲೈಬ್ರರಿಗಳು===
ನಗರದ ಆವರಣದಲ್ಲಿ ಎರಡು ಲೈಬ್ರರಿಗಳು ಇವೆ: ಮುಖ್ಯ ಲೈಬ್ರರಿ ಮತ್ತು 'ಜ್ಞಾನ ಕೇಂದ್ರ' ವು ಕೇಂದ್ರ ಕಟ್ಟಡದ ಆರು, ಏಳು, ಎಂಟು ಮತ್ತು ಒಂಭತ್ತನೇ ಮಳಿಗೆಗಳಿಗೆ ವಿಸ್ತರಿಸಿದೆ.<ref name=ITDK />
===ಸಂಶೋಧನೆ===
ವಿಶ್ವವಿದ್ಯಾಲಯವು ಮಾಸ್ಟರ್ ಆಫ್ ಫಿಲೋಸಫಿ (ಎಂಫಿಲ್) ಕೋರ್ಸಿನ ಮುಖಾಂತರ ಒಂದು ವರ್ಷ ಆರು ತಿಂಗಳ ಅವಧಿಗೆ ಸಂಶೋಧನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಿ.ಹೆಚ್.ಡಿ ಕಾರ್ಯಕ್ರಮವನ್ನು ೫ ವರ್ಷ್ಗಳ ಅವಧಿಗೆ ವಿಸ್ತರಿಸಿದೆ. ದೊಡ್ಡ ಮತ್ತು ಕಿತು ಸಂಶೋಧನಾ ಯೋಜನೆಗಳನ್ನು ಮಾಡಲು ವಿಶ್ವವಿದ್ಯಾಲಯದ ಶಿಕ್ಷಕ ವೃಂದಕ್ಕೆ ಸಂಶೋಧನಾ ಕೇಂದ್ರದ ಮುಖಾಂತರ ಅನುವು ಮಾಡಿಕೊಡಲಾಗಿದೆ. ಸಂಶೋಧನಾ ಪ್ರಬಂಧ ಹಾಗೂ ಪ್ರಕಟಣೆಗಳಿಗೂ ಅವಕಾಶವನ್ನು ಕಲ್ಪಿಸಲಾಗಿದೆ.
== ಪ್ರಕಟಣೆ ==
ವಿಶ್ವವಿದ್ಯಾಲಯವು ಕನ್ನಡ ಸಂಘದಿಂದ ಸುಮಾರು ೨೨೦ [[ಕನ್ನಡ]]ಪುಸ್ತಕಗಳನ್ನು, ಇದೊಂದು ಲಾಭ-ರಹಿತ ವಿಶ್ವವಿದ್ಯಾಲಯದ ಸಂಘವಾಗಿದ್ದು ಕನ್ನಡವನ್ನು ಪ್ರಪಂಚದಾದ್ಯಂತ ಪಸರಿಸಲು ಪ್ರಯತ್ನಗಳನ್ನು ಮಾಡುತ್ತಿದ್ದುದಲ್ಲದೇ ಆರು ವಿರ್ಮಶಣಾ ಪತ್ರಿಕಾ ನಿಯತಕಾಲಿಕಗಳನ್ನು ಪ್ರಕಟಿಸಿದೆ:<ref name=ITDK>{{cite news|last=Aleem|first=Ayesha|title=Different Keystrokes|url=http://indiatoday.intoday.in/story/india-today-best-colleges-2013-christ-university/1/280166.html|accessdate=12 March 2014|newspaper=India Today|date=24 June 2013}}</ref>
==ಸಂಸ್ಕೃತಿ ಮತ್ತು ವಿದ್ಯಾರ್ಥಿ ಚಟುವಟಿಕೆಗಳು==
===ಭಾಷಾ ಉತ್ಸವ===
ವಿವಿಧ ಸಂಸ್ಕೃತಿ, ವೈವಿದ್ಯಮಯ ಕಲೆಗಳ ಆಚರಣೆ-ಅನಾವರಣೇ ಭಾಷಾ ಉತ್ಸವ. ಇದರಲ್ಲಿ ಡೊಳ್ಳು-ಕುಣಿತ, ಬಯಲಾಟ ಮತ್ತು ಇತರ ನೃತ್ಯ ಪದರ್ಶನಗಳು ಕಂಡುಬರುತ್ತದೆ. ಈ ಹಬ್ಬ ಭಾರತ ದೇಶದ ವಿವಧ ಸಂಸ್ಕೃತಿಯನ್ನು ತೋರ್ಪಡಿಸುತ್ತದೆ.<ref>{{cite news|title=Bhasha utsav|url=http://www.hindu.com/2008/09/09/stories/2008090955080500.htm|accessdate=21 March 2014|newspaper=The Hindu|date=9 September 2008|location=Chennai, India|archive-date=15 ಜೂನ್ 2009|archive-url=https://web.archive.org/web/20090615041511/http://www.hindu.com/2008/09/09/stories/2008090955080500.htm|url-status=dead}}</ref> ಹಿಂದಿನ ವರ್ಷಗಳಲ್ಲಿ ಗಾರುಡಿ ಗೊಂಬೆ, ಚೆಂಡೆ ಸಿಂಗಾರ ಮೇಳ, ಕಳರಿಯಪಟ್ಟು, ವೇದ ಪಠಣ, ತಿರುವತ್ತಿರಕ್ಕಲ್, ರಬೀಂದ್ರ ಸಂಗೀತ, the ಕೇರಳ ನಟನಂ(ಕುಣೀತ), ಮೋಹಿನಿಯಾಟ್ಟಂ ಮತ್ತು ಕಥಕ್ಕಳಿಯ ತುಣುಕುಗಳನ್ನು ಪ್ರದರ್ಶಿಸಲಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತೀ ವರ್ಷದಲ್ಲಿ ಒಂದು ದಿನದ ಆಚರಣೆಯಾಗಿದ್ದು ವಿದ್ಯಾರ್ಥಿಗಳು ತಮ್ಮ-ತಮ್ಮ ಸಂಪ್ರದಾಯದ ಉಡುಪುಗಳನ್ನು ಧರಿಸಿ ಸಂಗೀತಗಾರರ ತಾಳಕ್ಕೆ ಹೆಜ್ಜೆ ಹಾಕುತ್ತಾರೆ.<ref>{{cite news|title=ಸಾಂಸಸ್ಕೃತಿಕ ಹಬ್ಬ ಭಾಷಾ ಉತ್ಸವ|url=http://www.deccanherald.com/content/24343/content/219337/F|accessdate=21 March 2014|newspaper=Deccan Herald|date=9 September 2009}}</ref>
===ರಂಗ-ಪ್ರಯೋಗ (ಥಿಯೇಟರ್)===
ವಿಶ್ವವಿದ್ಯಾಲಯದಲ್ಲಿ ಕ್ರೀಯಾಶೀಲ ರಂಗತಂಡವಿದ್ದು, ವರ್ಷಕ್ಕೊಂದು ರಂಗಪ್ರಯೋಗವನ್ನು ಮಾಡಲಾಗುತ್ತದೆ. 'ಅಭಿಷೇಕ'(೨೦೧೪) ನಡೆಸಿದಂತಹ ಅತಿ ದೊಡ್ಡ ರಂಗಪ್ರಯೋಗವಾಗಿರುತ್ತದೆ.<ref>{{cite news|last=Philip|first=Zoya|title=Answering the curtain call |newspaper=Deccan Chronicle|date=2 March 2014}}</ref>
==ಸದಸ್ಯತ್ವ==
ವಿಶ್ವವಿದ್ಯಾಲಯವು ಭಾರತೀಯ ವಿಶ್ವವಿದ್ಯಾಲಯಗಳ ಸದಸ್ಯತ್ವವನ್ನು ಹೊಂದಿದೆ.<ref>http://www.aiuweb.org/Members/MembersC.asp</ref>
== ವಿಶ್ವ ದಾಖಲೆಗಳು ==
೧೦ ಜನವರಿ ೨೦೧೧ರಂದು, ಕ್ರೈಸ್ಟ್ ಪದವಿಪೂರ್ವ ಕಾಲೇಜು, ಬೆಂಗಳೂರು, ಇಲ್ಲಿ ನಿರ್ದೇಶಕ ವಿನೀತ್ ವಿನ್ಸೆಂಟ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮ 'ನೀವು ಬೀಟ್ ಬಾಕ್ಸ್ ಹೇಳಬಲ್ಲಿರಾ?' -ಇದು ೨೧೩೬ ಜನರ ಬಹುದೊಡ್ಡ ಭಾಗವಹಿಸುವಿಕೆಯಿಂದ ಲಿಮ್ಕಾ ವಿಶ್ವ ದಾಖಲೆ ಪುಸ್ತಕವನ್ನು ಸೇರಿತು.<ref>{{cite web | title=This world record will be a mouthful | url=http://www.mid-day.com/news/2011/jan/100111-News-Bangalore-Christ-University-beat-boxing-Vineeth-Vincent.htm| accessdate=1 June 2011}}</ref><ref>{{cite web | title=Christ College Sets National Beatboxing Record | url=http://nh7.in/indiecision/2011/01/13/christ-college-sets-national-beatboxing-record/ | accessdate=1 June 2011 | archive-date=29 ಜನವರಿ 2011 | archive-url=https://web.archive.org/web/20110129050616/http://nh7.in/indiecision/2011/01/13/christ-college-sets-national-beatboxing-record/ | url-status=dead }}</ref><ref>{{cite news | title=Christ University students attempt record in beatboxing | url=http://www.hindu.com/2011/01/11/stories/2011011162820400.htm | accessdate=1 June 2011 | location=Chennai, India | work=The Hindu | date=11 January 2011 | archive-date=9 ನವೆಂಬರ್ 2012 | archive-url=https://web.archive.org/web/20121109230229/http://www.hindu.com/2011/01/11/stories/2011011162820400.htm | url-status=dead }}</ref><ref>{{cite web | title=Christ Junior College beatboxers aim to set a new record |url=http://www.dnaindia.com/bangalore/report_christ-junior-college-beatboxers-aim-to-set-a-new-record_1492618 | accessdate=2 June 2011}}</ref>
ವಿಶ್ವ ಗಿನ್ನೆಸ್ ದಾಖಲೆ ಪುಸ್ತಕದ ಪ್ರಕಾರ, ಅತ್ಯಂತ ಹೆಚ್ಚು ಜನರು ಭಅಗವಹಿಸಿದ ಬೀಟ್ ಬಾಕ್ಸ್ ಕಾರ್ಯಕ್ರಮ<ref>{{cite web|title=Largest human beatbox ensemble |url=http://www.guinnessworldrecords.com/Search/Details/Largest-human-beatbox-ensemble/57859.htm | accessdate=31 May 2011}}</ref> ಕ್ರೈಸ್ಟ್ ವಿಶ್ವವಿದ್ಯಾಲಯದ ಸಾಧನೆ (India) in [[ಬೆಂಗಳೂರು]], ಕರ್ನಾಟಕ, ಭಾರತ, on ೫ ಫೆಬ್ರುವರಿ ೨೦೧೧ under ಸಮಗ್ರ ನಿರ್ದೇಶಕರಾದ [[ವಿನೀತ್ ವಿನಸ್ಎಂಟ್]] ಅವರ ನೇತ್ರತ್ವದಲ್ಲಿ ೧,೨೪೬ಜನರ ಭಾಗವಹಿಸುವಿಕೆ. ೧೪ ನವೆಂಬರ್ ೨೦೧೧ರಲ್ಲಿ [[Shlomo (human beatbox)|ಶ್ಲೊಮೊ]] ೨,೦೮೧ ಜನರ ಭಾಗವಹಿಸುವಿಕೆಯಿಂದ ಈ ದಾಖಲೆಯು ಮುರಿಯಲ್ಪಟ್ಟಿತು.<ref>{{cite web|title=Largest human beatbox ensemble |url=http://www.guinnessworldrecords.com/records-2000/largest-human-beatbox-ensemble/ | accessdate=27 March 2012}}</ref>
==ವಿವಾದಗಳು==
ಪ್ರಮಾನೀಕೃತ ವಿಶ್ವವಿದ್ಯಾಲಯ ಎಂಬ ಪತ್ರ ಪಡೆಯುವುದರಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವು ವಿವಾದಕ್ಕೊಳಪಟ್ಟಿದೆ. ವಿಶ್ವವಿದ್ಯಾಲಯ ಎಂಬ ಪ್ರಮಾಣೀಕೃತ ಪತ್ರ ಸಿಗುವ ಮೊದಲು, ಇದು([[ಬೆಂಗಳೂರು ವಿಶ್ವವಿದ್ಯಾಲಯ]] ಈ ಮೊಕದ್ದಮೆ) ವ್ಯಾಪ್ತಿಗೊಳಟ್ಟಿದ್ದು ಇದು "ಆಕ್ಷೇಪಣಾ ರಹಿತ ಪತ್ರ" (ಎನ್ಒಸಿ)ವನ್ನು ಯುಜಿಸಿಗೆ ಕಳುಹಿಸಿಕೊಡಬೇಕಿತ್ತು. ಎನ್ಒಸಿ ಪತ್ರವನ್ನು ನೀಡಲು ರಾಜ್ಯ ಸರ್ಕಾರ ತಿರಸಕರಿಸಿತು ಅಲದ್ಲೇ, ಬೆಂಗಳೂರು ವಿಶ್ವವಿದ್ಯಾಲಯವು ಅಧಿಕೃತ ಎನ್ಒಸಿ-ಯನ್ನೂ ಕಳುಹಿಸಲಿಲ್ಲ. ಯುಜಿಸಿ-ಯು, ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕಳುಹಿಸಿದ ಪತ್ರದ ಮೆಲೆ ಅವಲಂಬಿಸಿತು.<ref>{{cite news | url=http://www.hindu.com/2008/08/06/stories/2008080655780600.htm | location=Chennai, India | work=The Hindu | title=Deemed status: Bangalore University breaks its own rules? | date=6 August 2008 | access-date=31 ಆಗಸ್ಟ್ 2015 | archive-date=10 ಆಗಸ್ಟ್ 2008 | archive-url=https://web.archive.org/web/20080810033125/http://www.hindu.com/2008/08/06/stories/2008080655780600.htm | url-status=dead }}</ref> ಈ ಪತ್ರವು ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ೪೪ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸೇರಿಸಿ 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' ಎಂದು ಘೋಷಿಸಿತು.<ref>{{cite web |url= http://www.ndtv.com/news/india/centre_to_derecognise_44_deemed_universities.php |title=Centre to derecognise 44 deemed universities |work=ndtv.com|accessdate=22 January 2012}}</ref> ಜುಲೈ ೨೦೧೪ ರಲ್ಲಿ ಯುಜಿಸಿ ಪ್ರಕಟಿಸಿದ ಅಂತಿಮ ಪಟ್ಟಿಯಲ್ಲಿ, ಕ್ರೈಸ್ಟ್ ವಿಶ್ಚವಿದ್ಯಾಲಯವನ್ನು ೪೪ ವಿಶ್ಚವಿದ್ಯಾಲಯಗಳಲ್ಲಿ ಒಂದಾಗಿ ಪ್ರಕಟಿಸಿತು.<ref>http://www.careerindia.com/news/ugc-asks-34-blacklisted-deemed-universities-start-functioning-012255.html</ref><ref>{{Cite web |url=http://courtnic.nic.in/supremecourt/temp/wc%20142rpt.txt |title=ಆರ್ಕೈವ್ ನಕಲು |access-date=2015-08-31 |archive-date=2014-12-19 |archive-url=https://web.archive.org/web/20141219072015/http://courtnic.nic.in/supremecourt/temp/wc%20142rpt.txt |url-status=dead }}</ref>
==ಉಲ್ಲೇಖಗಳು==
{{Reflist|2}}
==ಬಾಹ್ಯ ಆಧಾರಗಳು==
{{commons category|Christ University, Bangalore}}
* [http://www.christuniversity.in/ Christ University website]
* [http://icareeradvice.com/christ-university-results-2013-christuniversity-in/ Christ University Results] {{Webarchive|url=https://web.archive.org/web/20130912102019/http://icareeradvice.com/christ-university-results-2013-christuniversity-in/ |date=2013-09-12 }}
* [[:kn:ಕ್ರೈಸ್ಟ್ ಯೂನಿವರ್ಸಿಟಿ|On Christ University in Kannada Wikipedia]]
* [http://cis-india.org/openness/blog/wikipedia-at-forefront-in-christ-university/ Wikipedia in Education Experiment at Christ University] {{Webarchive|url=https://web.archive.org/web/20150714080734/http://cis-india.org/openness/blog/wikipedia-at-forefront-in-christ-university |date=2015-07-14 }}
{{ಕರ್ನಾಟಕದ ವಿಶ್ವವಿದ್ಯಾಲಯಗಳು}}
{{Interwikineeded}}
[[ವರ್ಗ:ವಿಶ್ವವಿದ್ಯಾಲಯಗಳು]]
dk4811qb8hloi5vdq0jh4rtmxkjxcf3
ಅಲುವಾ
0
39930
1379449
1377494
2026-08-08T13:00:56Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379449
wikitext
text/x-wiki
{{databox}}
{{Infobox settlement
| name = ಆಲುವ
| other_name = ಅಲ್ವಾಯ್ (ವಸಾಹತುಶಾಹಿ ಹೆಸರು)
| native_name =
| settlement_type = [[ಕೇರಳದ ಪುರಸಭೆಗಳು|ಪುರಸಭೆ]] [[ಕೊಚ್ಚಿ]]ನಲ್ಲಿ<ref name="auto">{{cite web |url=https://lsgkerala.gov.in/system/files/2017-10/localbodies.pdf |title=ಗ್ರಾಮ ಪಂಚಾಯತ್ಗಳು |website=lsgkerala.gov.in |access-date=2025-04-16}}</ref>
| image_skyline = {{Photomontage
| photo1a = Aluva manappuram temple - panoramio.jpg
| photo2a = Statue of Mahathma Gandhi Aluva.JPG
| photo2b = Aluva New Bridge.jpg
| photo3a = Federal bank head office aluva.JPG
| photo3b = Aluva metro station, Kerala, India.jpg
| photo4a = Aluva Puzha from railway bridge.jpg
| photo4b = Marthandavarma bridge Aluva 1.JPG
| photo5a = Aluva Municipal Office.JPG
| spacing = 2
| space = 2
| position = centre
| color_border = white
| color = white
| size = 270
| foot_montage = ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಆಲುವಾ ಮಹಾದೇವ ದೇವಸ್ಥಾನ|ಮಹಾದೇವ ದೇವಸ್ಥಾನ]]; ಹೊಸ ಸೇತುವೆ; [[ಆಲುವಾ ಮೆಟ್ರೋ ನಿಲ್ದಾಣ]]; ಮಾರ್ತಾಂಡವರ್ಮ ಸೇತುವೆ; ನಗರಸಭೆ ಕಚೇರಿ; [[ಪೆರಿಯಾರ್ ನದಿ]]; [[ಫೆಡರಲ್ ಬ್ಯಾಂಕ್]] ಪ್ರಧಾನ ಕಚೇರಿ; ಗಾಂಧಿ ಪ್ರತಿಮೆ
}}
| image_alt =
| image_caption =
| nickname =
| image_map =
| map_alt =
| map_caption =
| pushpin_map = India Kerala#India
| pushpin_map_alt =
| pushpin_map_caption = ಕೇರಳ, ಭಾರತದಲ್ಲಿ ಸ್ಥಳ
| coordinates = {{coord|10.1167|N|76.3500|E|display=inline,title}}
| subdivision_type = ದೇಶ
| subdivision_name = {{flag|India}}
| subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| subdivision_name1 = [[ಕೇರಳ]]
| subdivision_type2 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| subdivision_name2 = [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ]]
| established_title = ಸ್ಥಾಪನೆ
| established_date = 1921
| founder =
| named_for =
| government_type = [[ಪುರಸಭೆ]]
| governing_body = ಆಲುವಾ ಪುರಸಭೆ
| leader_party = INC
| leader_title = ಅಧ್ಯಕ್ಷರು
| leader_name = ಸೈಜಿ ಜಾಲಿ
| leader_title1 =
| leader_name1 =
| unit_pref = ಮೆಟ್ರಿಕ್
| area_footnotes =
| area_total_km2 = 7.18
| area_rank =
| elevation_footnotes =
| elevation_m = 8
| population_total = 22428
| population_as_of = 2011
| population_footnotes =
| population_density_km2 = 3358
| population_rank =
| population_demonym =
| demographics_type1 = ಭಾಷೆಗಳು
| demographics1_title1 = ಅಧಿಕೃತ
| timezone1 = [[ಭಾರತೀಯ ಪ್ರಮಾಣಿತ ಸಮಯ|IST]]
| utc_offset1 = +5:30
| postal_code_type = [[ಭಾರತೀಯ ಅಂಚೆ ಸೂಚ್ಯಂಕ ಸಂಖ್ಯೆ|PIN]]
| postal_code = 6831xx
| area_code = 0484
| area_code_type = ದೂರವಾಣಿ ಕೋಡ್
| registration_plate = KL 41
| blank1_name_sec1 = [[ಲಿಂಗಾನುಪಾತ]]
| blank1_info_sec1 = 1000:1050 [[ಪುರುಷ|♂]]/[[ಸ್ತ್ರೀ|♀]]
| website = {{URL|https://aluvamunicipality.lsgkerala.gov.in/en}}
| footnotes =
| demographics1_info1 = [[ಮಲಯಾಳಂ ಭಾಷೆ|ಮಲಯಾಳಂ]], ಇಂಗ್ಲಿಷ್
| leader_name2 = TBD
| leader_title2 = ಉಪಾಧ್ಯಕ್ಷರು
| official_name =
}}
'''ಆಲುವಾ''' ({{IPA|ml|ɐːluʋɐ}}), ಹಿಂದೆ '''ಅಲ್ವಾಯ್''' ಎಂದು ಕರೆಯಲ್ಪಡುತ್ತಿದ್ದು, ಭಾರತದ [[ಕೇರಳ]] ರಾಜ್ಯದ [[ಕೊಚ್ಚಿ ಮಹಾನಗರ ಪ್ರದೇಶ]]ದ ಉತ್ತರ ಭಾಗದಲ್ಲಿರುವ ಒಂದು ಪ್ರಮುಖ ಪಟ್ಟಣ ಮತ್ತು [[ಕೇರಳದ ಪುರಸಭೆಗಳು|ಪುರಸಭೆಯಾಗಿದೆ]].<ref name="auto"/> [[ಪೆರಿಯಾರ್ ನದಿ]]ಯ ದಡದಲ್ಲಿರುವ ಈ ಪಟ್ಟಣವು [[ಎರ್ನಾಕುಲಂ ಜಿಲ್ಲೆ]]ಯಲ್ಲಿ ಪ್ರಮುಖ ವಸತಿ, ವಾಣಿಜ್ಯ ಮತ್ತು ಸಾರಿಗೆ ಕೇಂದ್ರವಾಗಿದ್ದು, ಆಲುವಾ ತಾಲೂಕಿನ ಆಡಳಿತ ಕೇಂದ್ರವಾಗಿದೆ. ಮಧ್ಯ [[ಕೊಚ್ಚಿ]]ಯ ಈಶಾನ್ಯದಲ್ಲಿರುವ ಆಲುವಾ, [[ಕೊಚ್ಚಿ]] ಮತ್ತು ಮಧ್ಯ ಕೇರಳದ ನಡುವಿನ ಪ್ರವೇಶದ್ವಾರವಾಗಿ ದೀರ್ಘಕಾಲದಿಂದ ಗುರುತಿಸಲ್ಪಟ್ಟಿದೆ.
ಆಲುವಾ ತನ್ನ ಸಾಂಸ್ಕೃತಿಕ, ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಇದು ಕೇರಳದ ಅತಿದೊಡ್ಡ ಧಾರ್ಮಿಕ ಸಮ್ಮೇಳನಗಳಲ್ಲಿ ಒಂದಾದ ವಾರ್ಷಿಕ [[ಆಲುವಾ ಶಿವರಾತ್ರಿ ಉತ್ಸವ]]ಕ್ಕೆ ಹೆಸರುವಾಸಿಯಾಗಿದೆ, ಇದು ಪೆರಿಯಾರ್ ನದಿಯ ಮರಳು ದಂಡೆಗಳಲ್ಲಿ ನಡೆಯುತ್ತದೆ.<ref>{{cite web|url=http://www.kerala-tourism.org/kerala-monuments/alwaye-palace.html |title=ಅಲ್ವಾಯ್ ಅರಮನೆ ಆಲುವಾ – ಆಲುವಾ ಅರಮನೆ ಕೇರಳ |publisher=Kerala-tourism.org |access-date=26 March 2014}}</ref> ಇದು [[ನಾರಾಯಣ ಗುರು|ಶ್ರೀ ನಾರಾಯಣ ಗುರು]] ಅವರೊಂದಿಗೆ ನಿಕಟ ಸಂಬಂಧ ಹೊಂದಿದೆ, ಅವರು 1913 ರಲ್ಲಿ ಆಲುವಾದಲ್ಲಿ [[ಅಲ್ವಾಯ್ ಅದ್ವೈತ ಆಶ್ರಮ|ಅದ್ವೈತ ಆಶ್ರಮ]]ವನ್ನು ಸ್ಥಾಪಿಸಿದರು, ಇದು ಪಟ್ಟಣವನ್ನು ಸಾಮಾಜಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಚಿಂತನೆಯ ಪ್ರಮುಖ ಕೇಂದ್ರವನ್ನಾಗಿ ಮಾಡಿತು.<ref>{{cite web |url=http://www.sndp.org/Html/BiographyByDrSOmana.html#ADVAITA-ASHRAM |title=ಡಾ. ಎಸ್. ಓಮನಾ ಅವರ ಜೀವನಚರಿತ್ರೆ |publisher=Sndp.org |date=20 September 1928 |access-date=26 March 2014 |archive-url=https://web.archive.org/web/20000903124015/http://www.sndp.org/Html/BiographyByDrSOmana.html#ADVAITA-ASHRAM |archive-date=3 September 2000 |url-status=dead}}</ref> ಐತಿಹಾಸಿಕವಾಗಿ, ಆಲುವಾ ಪೆರಿಯಾರ್ ನದಿಯ ಉದ್ದಕ್ಕೂ ಪ್ರಮುಖ ವಸಾಹತುವಾಗಿ ಅಭಿವೃದ್ಧಿ ಹೊಂದಿತು ಮತ್ತು ವ್ಯಾಪಾರ, ಶಿಕ್ಷಣ ಮತ್ತು ಕೈಗಾರಿಕೆಗೆ ಕೇಂದ್ರವಾಯಿತು.
ಆಲುವಾ ಆಲುವಾ [[ತಾಲೂಕು]]ನ ಆಡಳಿತ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. 1956 ರಲ್ಲಿ, ಮುಕುಂದಪುರಂ, ಕನಯನ್ನೂರ್, [[ಕುನ್ನತ್ತುನಾಡು (ರಾಜ್ಯ ವಿಧಾನಸಭಾ ಕ್ಷೇತ್ರ)|ಕುನತ್ತುನಾಡು]] ಮತ್ತು [[ಉತ್ತರ ಪರವೂರ್]] ಗ್ರಾಮಗಳ ತಾಲೂಕುಗಳನ್ನು ಸೇರಿಸಿ ಆಲುವಾ ತಾಲೂಕನ್ನು ರಚಿಸಲಾಯಿತು. ಕೊಚ್ಚಿ ನಗರ ಸಮೂಹದ ಭಾಗವಾಗಿದ್ದರೂ, ಆಲುವಾ ಸ್ವಾಯತ್ತ ಪುರಸಭೆಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ ಮತ್ತು ಕೇರಳದ ಪ್ರಮುಖ ನಗರ ಕೇಂದ್ರಗಳಲ್ಲಿ ಒಂದಾಗಿ ಉಳಿದಿದೆ. ಎರ್ನಾಕುಲಂ ಗ್ರಾಮೀಣ ಪೊಲೀಸ್ ಜಿಲ್ಲೆಯ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕಚೇರಿ, PWD (ರಸ್ತೆಗಳು) ನ ಮುಖ್ಯ ಎಂಜಿನಿಯರ್ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯೂ ಇಲ್ಲಿದೆ. ಹೆಚ್ಚುವರಿಯಾಗಿ, ಆಲುವಾ [[ಕೊಚ್ಚಿ ಮೆಟ್ರೋ]] ರೈಲಿನ ಮೊದಲ ಹಂತದ ಉತ್ತರದ ಪ್ರಾರಂಭಿಕ ಬಿಂದುವಾಗಿದೆ, ಇದು ಜೂನ್ 2017 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
== ವ್ಯುತ್ಪತ್ತಿ ==
ಪಟ್ಟಣದ ಹೆಸರಿನ ವ್ಯುತ್ಪತ್ತಿಯು ಶತಮಾನಗಳಿಂದಲೂ ಊಹಾಪೋಹಕ್ಕೆ ಒಳಪಟ್ಟಿದೆ. ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಒಂದು ಆವೃತ್ತಿಯು ಹಿಂದೂ ದೇವರು [[ಶಿವ]]ನು ಜಗತ್ತನ್ನು ಉಳಿಸಲು [[ಹಲಾಹಲ|ಕಾಲಕೂಟಂ]] ವಿಷವನ್ನು ಕುಡಿದ ದಂತಕಥೆಗೆ ಸಂಬಂಧಿಸಿದೆ. ವಿಷವನ್ನು (ಆಲಂ) ಅವನ ಬಾಯಿಯಲ್ಲಿ (ವಾ) ಹಿಡಿದಿಟ್ಟುಕೊಂಡು, ಶಿವನು ಆಲುವಾದ ದೇವಸ್ಥಾನದಲ್ಲಿ ನೆಲೆಸಿದ ದೇವತೆಯಾಗಿ ರೂಪಾಂತರಗೊಂಡನು ಎಂದು ಹೇಳಲಾಗುತ್ತದೆ.<ref name="aluvamunicipality.in">{{cite web |title=ಆಮುಖಂ | ಆಲುವಾ ಪುರಸಭೆ |url=http://www.aluvamunicipality.in/about |access-date=26 March 2014 |publisher=Aluvamunicipality.in}}</ref> ಶಿವರಾತ್ರಿ ಹಬ್ಬವನ್ನು ಅವನ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಕೆಲವು ಕರಪತ್ರಗಳು ಮತ್ತು ವೆಬ್ಸೈಟ್ಗಳು ಇನ್ನೂ ಪಟ್ಟಣವನ್ನು ಅದರ ವಸಾಹತುಶಾಹಿ ಹೆಸರಾದ ಅಲ್ವಾಯ್ ಎಂದು ಉಲ್ಲೇಖಿಸುತ್ತವೆ.
== ಇತಿಹಾಸ ==
ಪುರಾತತ್ತ್ವ ಶಾಸ್ತ್ರದ ಪುರಾವೆಗಳು ಆಲುವಾದಲ್ಲಿ ಕ್ರಿ.ಪೂ. 250 ರಷ್ಟು ಹಿಂದೆಯೇ ವಸಾಹತುಗಳು ಅಸ್ತಿತ್ವದಲ್ಲಿದ್ದವು ಎಂದು ಸೂಚಿಸುತ್ತವೆ.<ref>{{cite web|url=http://www.aluvamunicipality.in/ml/history |title=ಚರಿತ್ರಂ | ಆಲುವಾ ಪುರಸಭೆ |publisher=Aluvamunicipality.in |access-date=26 March 2014}}</ref> ಕ್ರಿ.ಶ. 1341 ರವರೆಗೆ, ಆಲುವಾ ಕಕ್ಕನಾಡು ಮತ್ತು ಅಲಂಗಾಡನ್ನು ವ್ಯಾಪಿಸಿದ ನಿರಂತರ ಭೂಪ್ರದೇಶವನ್ನು ಒಳಗೊಂಡಿತ್ತು. ಆ ಸಮಯದ ವೇಳೆಗೆ, ಪಟ್ಟಣವು ಜನಸಂದಣಿಯಿಂದ ಕೂಡಿತ್ತು ಮತ್ತು ರಜಾ ತಾಣ ಮತ್ತು ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿತ್ತು.<ref>{{cite web|url=http://www.ashextourism.com/kerala/aluva_kerala.htm |title=ಕೇರಳ |publisher=Ashextourism.com |date=13 May 1999 |access-date=26 March 2014}}</ref> ಆಲುವಾದಲ್ಲಿ ಕವಲೊಡೆಯುವ ಪೆರಿಯಾರ್ನ ಶಾಖೆಯಾದ ಮಂಗಳಪುಳ್ಳವು ದಕ್ಷಿಣ ಭಾರತದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಹೆಸರುವಾಸಿಯಾಗಿತ್ತು. ಭಾರತದ ಸ್ವಾತಂತ್ರ್ಯದ ಮೊದಲು, ಆಲುವಾ [[ತಿರುವಾಂಕೂರು]] ಸಾಮ್ರಾಜ್ಯದ ಭಾಗವಾಗಿತ್ತು ಮತ್ತು ಅದರ ರಾಜಮನೆತನದ ಅಧಿಕೃತ ಬೇಸಿಗೆ ನಿವಾಸವಾಗಿ ಸೇವೆ ಸಲ್ಲಿಸಿತು. ಇಪ್ಪತ್ತನೇ ಶತಮಾನದಲ್ಲಿ, ಯಹೂದಿಗಳ ಸಮುದಾಯವು ಕೊಚ್ಚಿಯಲ್ಲಿ ವಾಸಿಸುತ್ತಿದ್ದಾಗ, ಕೆಲವು ವ್ಯಕ್ತಿಗಳು ಪೆರಿಯಾರ್ ನದಿಯ ದಡದಲ್ಲಿ ಆಲುವಾದಲ್ಲಿ ಬೇಸಿಗೆ ಮನೆಗಳನ್ನು ಹೊಂದಿದ್ದರು.<ref>Weil, S. 2009 'ದಿ ಪ್ಲೇಸ್ ಆಫ್ ಅಲ್ವಾಯ್ ಇನ್ ಮಾಡರ್ನ್ ಕೊಚಿನ್ ಯಹೂದಿ ಹಿಸ್ಟರಿ', ಜರ್ನಲ್ ಆಫ್ ಮಾಡರ್ನ್ ಯಹೂದಿ ಸ್ಟಡೀಸ್ 8 (3): 319–335.</ref>
== ರಾಜಕೀಯ ==
ಆಲುವಾ [[ಕೇರಳ ವಿಧಾನಸಭೆ]]ಯಲ್ಲಿನ ಒಂದು ಕ್ಷೇತ್ರವಾಗಿದೆ ಮತ್ತು [[ಚಾಲಕ್ಕುಡಿ]] (ಲೋಕಸಭಾ ಕ್ಷೇತ್ರ)ದ ಭಾಗವಾಗಿದೆ; [[ಅನ್ವರ್ ಸದತ್]] 2011 ರಿಂದ ಆಲುವಾದ [[ಶಾಸನಸಭಾ ಸದಸ್ಯ (ಭಾರತ)|ಶಾಸಕ]]ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.<ref>{{cite web |url=http://archive.eci.gov.in/se2001/background/S11/KL_Dist_PC_AC.pdf |title=ವಿಧಾನಸಭಾ ಕ್ಷೇತ್ರಗಳು – ಅನುಗುಣವಾದ ಜಿಲ್ಲೆಗಳು ಮತ್ತು ಸಂಸತ್ ಕ್ಷೇತ್ರಗಳು |access-date=19 October 2008 |work=Kerala |publisher=Election Commission of India |archive-url=https://web.archive.org/web/20081030085443/http://archive.eci.gov.in/se2001/background/S11/KL_Dist_PC_AC.pdf |archive-date=30 October 2008 |url-status=dead }}</ref> ಇದು [[ಚಾಲಕ್ಕುಡಿ (ಲೋಕಸಭಾ ಕ್ಷೇತ್ರ)]]ದ ಭಾಗವಾಗಿದೆ, ಇದನ್ನು [[ಲೋಕಸಭಾ ಸದಸ್ಯ|ಸಂಸದ]] [[ಬೆನ್ನಿ ಬೆಹನಾನ್]] ಪ್ರತಿನಿಧಿಸುತ್ತಾರೆ.
ಆಡಳಿತಾತ್ಮಕವಾಗಿ, ಆಲುವಾ [[ಪುರಸಭೆ]]ಯಾಗಿ ಆಡಳಿತ ನಡೆಸಲ್ಪಡುತ್ತದೆ.<ref name=municipality>{{cite web|url=http://ernakulam.nic.in/admin.asp?typ=2&titl=Local%20Administration|title=ಸ್ಥಳೀಯ ಆಡಳಿತ – ಎರ್ನಾಕುಲಂ ಜಿಲ್ಲೆ|publisher=NIC Ernakulam (Govt. of India)|access-date=21 April 2011|archive-url=https://web.archive.org/web/20110719051111/http://ernakulam.nic.in/admin.asp?typ=2&titl=Local%20Administration|archive-date=19 July 2011|url-status=dead}}</ref> ಪ್ರಸ್ತುತ ಪುರಸಭಾ ಮಂಡಳಿಯು ಡಿಸೆಂಬರ್ 2025 ರಲ್ಲಿ ಆಯ್ಕೆಯಾದ ಸೈಜಿ ಜಾಲಿ ಅವರ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ನಡೆಸಲ್ಪಡುತ್ತಿದೆ.
== ಪ್ರಯಾಣ ==
ಆಲುವಾ ವಾಯು, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಭಾರತದ ಇತರ ಭಾಗಗಳಿಗೆ ಉತ್ತಮವಾಗಿ ಸಂಪರ್ಕ ಹೊಂದಿದೆ.
=== ವಾಯು ===
ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪಟ್ಟಣ ಕೇಂದ್ರದಿಂದ {{convert|15|km|mi|abbr=on}} ದೂರದಲ್ಲಿದೆ ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಒದಗಿಸುತ್ತದೆ.<ref>{{Cite web |last=E |first=Krishna Kumar K. |date=2025-08-16 |title=ವಿಮಾನ ನಿಲ್ದಾಣವು ಬಹುಮಾದರಿ ಸಂಪರ್ಕವನ್ನು ಪಡೆಯುವ ಹಾದಿಯಲ್ಲಿದೆ |url=https://www.newindianexpress.com/cities/kochi/2025/Aug/16/airport-on-course-to-get-multimodal-connectivity |access-date=2026-06-11 |website=The New Indian Express |language=en}}</ref> [[File:Aluva Railway Station.JPG|thumb|ಆಲುವಾ ರೈಲ್ವೇ ನಿಲ್ದಾಣ]]
=== ರೈಲು ===
==== ರೈಲು ====
[[File:Aluva Railway Station.jpg|thumb|ಆಲುವಾ ರೈಲ್ವೇ ನಿಲ್ದಾಣದ ಪ್ರವೇಶ]]
[[ಆಲುವಾ ರೈಲ್ವೇ ನಿಲ್ದಾಣ|ಆಲುವಾ ರೈಲ್ವೇ ನಿಲ್ದಾಣ]] (IR ಕೋಡ್: AWY) ಒಂದು ಗ್ರೇಡ್-ಎ ನಿಲ್ದಾಣವಾಗಿದ್ದು, [[ಎರ್ನಾಕುಲಂ ಜಂಕ್ಷನ್ ರೈಲ್ವೇ ನಿಲ್ದಾಣ]] ಮತ್ತು [[ಎರ್ನಾಕುಲಂ ಟೌನ್ ರೈಲ್ವೇ ನಿಲ್ದಾಣ]]ದ ನಂತರ ಕೊಚ್ಚಿಯಲ್ಲಿ ಮೂರನೇ ಅತ್ಯಂತ ಜನನಿಬಿಡ ನಿಲ್ದಾಣವಾಗಿದೆ. ದಕ್ಷಿಣ ಕೇರಳಕ್ಕೆ ಹೋಗುವ ಪ್ರತಿಯೊಂದು ಪ್ರಯಾಣಿಕ ಮತ್ತು ಎಕ್ಸ್ಪ್ರೆಸ್ ರೈಲು ಇಲ್ಲಿ ನಿಲ್ಲುತ್ತದೆ. ಇಡುಕ್ಕಿ ಜಿಲ್ಲೆಯ ಪ್ರಯಾಣಿಕರು ಸಾಮಾನ್ಯವಾಗಿ ಆಲುವಾ ರೈಲ್ವೇ ನಿಲ್ದಾಣವನ್ನು ಬಳಸುತ್ತಾರೆ, ಏಕೆಂದರೆ ಇಡುಕ್ಕಿಯ ಭೌಗೋಳಿಕತೆಯು ಜಿಲ್ಲೆಗೆ ರೈಲ್ವೇ ನಿಲ್ದಾಣವನ್ನು ಹೊಂದಲು ಅನುಮತಿಸುವುದಿಲ್ಲ. ಗಮನಾರ್ಹವಾಗಿ, ಆಲುವಾ ರೈಲ್ವೇ ನಿಲ್ದಾಣದಲ್ಲಿ ಯಾವುದೇ ರೈಲುಗಳು ಪ್ರಾರಂಭವಾಗುವುದಿಲ್ಲ ಅಥವಾ ಕೊನೆಗೊಳ್ಳುವುದಿಲ್ಲ. ಹೆಚ್ಚುವರಿಯಾಗಿ, ಚೌವಾರಾ ಎಂಬ ಸಣ್ಣ ನಿಲ್ದಾಣವು ಆಲುವಾ ರೈಲ್ವೇ ನಿಲ್ದಾಣದಿಂದ ಸರಿಸುಮಾರು {{Convert|4|km|mi|abbr=on}} ದೂರದಲ್ಲಿದೆ.
==== ಮೆಟ್ರೋ ====
[[ಕೊಚ್ಚಿ ಮೆಟ್ರೋ]] ಹಂತ 1 ಆಲುವಾ ಬೈಪಾಸ್ನಲ್ಲಿ ಪ್ರಾರಂಭವಾಗಿ [[ತ್ರಿಪ್ಪುಣಿತುರಾ|ತ್ರಿಪುಣಿತುರಾ]]ವರೆಗೆ ಕಾರ್ಯನಿರ್ವಹಿಸುತ್ತದೆ. ಯೋಜನೆಯ ನಿರ್ಮಾಣವು 2013 ರ ಮಧ್ಯದಲ್ಲಿ ಪ್ರಾರಂಭವಾಯಿತು ಮತ್ತು 19 ಜೂನ್ 2017 ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.<ref name="Greeshma Sukumaran-2017">{{cite news |last=Greeshma Sukumaran |date=17 June 2017 |title=ಕೊಚ್ಚಿ ಮೆಟ್ರೋ ಉದ್ಘಾಟನೆ: ಪ್ರಧಾನಿ ಮೋದಿ ರೈಲು ಸೇವೆಗೆ ಧ್ವಜ ಹಾರಿಸಿದರು, ಸಿಎಂ ಪಿನರಾಯಿ ವಿಜಯನ್, 'ಮೆಟ್ರೋ ಮ್ಯಾನ್' ಶ್ರೀಧರನ್ ಅವರೊಂದಿಗೆ ಮೊದಲ ಪ್ರಯಾಣ ನಡೆಸಿದರು |work=International Business Times |url=http://www.ibtimes.co.in/kochi-metro-inauguration-live-pm-modi-flag-off-rail-service-today-cm-pinarayi-metro-man-731109 |access-date=3 September 2017}}</ref> [[ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್]] ಆಲುವಾ ಫ್ಲೈಓವರ್ ಹೊರತಾಗಿ [[ಕೊಚ್ಚಿ ಮೆಟ್ರೋ#DMRC ಯ ಪಾತ್ರದ ವಿವಾದ|DMRC]] ಯಿಂದ ಕೈಗೊಳ್ಳಲಾದ ಕೇರಳ ಸರ್ಕಾರದ ಯೋಜನೆಯಾಗಿದೆ. [[ಆಲುವಾ ಮೆಟ್ರೋ ನಿಲ್ದಾಣ]]ವು ಹಂತ 1 ರ ಉತ್ತರದ ಕೊನೆಯ ಹಂತವಾಗಿದೆ.<ref name="Greeshma Sukumaran-2017" /> ಮೆಟ್ರೋ ವ್ಯವಸ್ಥೆಯ ಮೂರನೇ ಹಂತವು [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ಕ್ಕೆ ಸಂಪರ್ಕಿಸಲು ಆಲುವಾದಿಂದ ಉತ್ತರಕ್ಕೆ [[ಅಂಗಮಾಲಿ]] ಉಪನಗರಕ್ಕೆ ಮಾರ್ಗವನ್ನು ವಿಸ್ತರಿಸುವುದು ಎಂದು ಭಾವಿಸಲಾಗಿದೆ.[[File:Train at Aluva Metro Station.jpg|thumb|ಆಲುವಾ ಮೆಟ್ರೋ ನಿಲ್ದಾಣದಲ್ಲಿ ರೈಲು]]
=== ಬಸ್ ===
[[File:Municipal Bus station aluva.JPG|300px|thumb|ರಾಜೀವ್ ಗಾಂಧಿ ಬಸ್ ನಿಲ್ದಾಣ]]
[[File:Aluva Bus terminal.jpg|300px|thumb |ನವೀಕರಿಸಿದ ಆಲುವಾ KSRTC ಬಸ್ ಟರ್ಮಿನಲ್]]
ರಾಜೀವ್ ಗಾಂಧಿ ಕೇಂದ್ರ ಬಸ್ ನಿಲ್ದಾಣವು ಕೊಚ್ಚಿ ಮತ್ತು ಕೇರಳದ ಅತಿದೊಡ್ಡ ಖಾಸಗಿ ಬಸ್ ಟರ್ಮಿನಲ್ಗಳಲ್ಲಿ ಒಂದಾಗಿದೆ. ಇದು [[ಫೋರ್ಟ್ ಕೊಚ್ಚಿ]], [[ತ್ರಿಪುಣಿತುರಾ]], [[ಕಕ್ಕನಾಡು]] ಮುಂತಾದ ನಗರ ಪ್ರದೇಶಗಳಿಗೆ ಅಂತರ-ನಗರ ಸೇವೆಗಳೊಂದಿಗೆ ಕೊಚ್ಚಿ ನಗರ ಬಸ್ಗಳಿಗೆ ನೋಡ್ ಆಗಿ ಕಾರ್ಯನಿರ್ವಹಿಸುತ್ತದೆ. [[ಆಲುವಾ KSRTC ಬಸ್ ನಿಲ್ದಾಣ]]ವು ಮಧ್ಯ ಕೇರಳದ ಪ್ರಮುಖ KSRTC ಬಸ್ ನಿಲ್ದಾಣಗಳಲ್ಲಿ ಒಂದಾಗಿದೆ.<ref name="KSRTC Aluva Depo">{{cite web|url=http://www.keralartc.com/html/unit.html|title=KSRTC ಆಲುವಾ ಡಿಪೋ|publisher=KSRTC ಆಲುವಾ ಡಿಪೋ ಸಂಪರ್ಕಗಳು|access-date=8 March 2017|archive-url=https://web.archive.org/web/20171107221531/http://keralartc.com/html/unit.html|archive-date=7 November 2017|url-status=dead}}</ref> ಕರ್ನಾಟಕ RTC ಮತ್ತು ತಮಿಳುನಾಡಿನ SETC ಯ ದೈನಂದಿನ ಪ್ರಯಾಣಿಕ ಬಸ್ಗಳು ಮೈಸೂರು, ಮಂಗಳೂರು, ಬೆಂಗಳೂರು, ತಿರುಚಿ, ಕೊಯಮತ್ತೂರು, ಸೇಲಂ, ಪಳನಿ ಮತ್ತು ಕೊಡೈಕನಾಲ್ನಂತಹ ಸ್ಥಳಗಳಿಗೆ ಮಾರ್ಗಗಳನ್ನು ಹೊಂದಿವೆ.
ಖಾಸಗಿಯಾಗಿ ನಡೆಸಲ್ಪಡುವ ಅಂತರ-ರಾಜ್ಯ ಬಸ್ಗಳು<ref name="Interstate Private Bus Service">{{cite web|url=http://www.sonatravels.in/|title=ಸೋನಾ ಟ್ರಾವೆಲ್ಸ್|publisher=ಖಾಸಗಿ ಬಸ್ ನಿರ್ವಾಹಕ ಆಲುವಾ|access-date=2026-07-28|archive-date=2025-10-05|archive-url=https://web.archive.org/web/20251005121838/http://sonatravels.in/|url-status=dead}}</ref> ಬೆಂಗಳೂರು, ಚೆನ್ನೈ, ಮೈಸೂರು, ಮುಂಬೈ ಮತ್ತು ಇತರ ನಗರಗಳಿಗೆ ಆಲುವಾದ ಬಿಂದುಗಳಲ್ಲಿ ನಿಲ್ದಾಣಗಳನ್ನು ಹೊಂದಿವೆ. [[ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್]] [[ಎಲೆಕ್ಟ್ರಿಕ್ ಬಸ್]] ಬಳಸಿ [[ಆಲುವಾ ಮೆಟ್ರೋ ನಿಲ್ದಾಣ]]ದಿಂದ [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ಕ್ಕೆ ಫೀಡರ್ ಬಸ್ ಸೇವೆಯನ್ನು ಸಹ ನಡೆಸುತ್ತದೆ.
=== ದೋಣಿ ===
ಆಲುವಾ ರಾಷ್ಟ್ರೀಯ ಜಲಮಾರ್ಗ 3 ರ ನಿಲ್ದಾಣವಾಗಿದೆ; ಜಲಮಾರ್ಗವು ದಕ್ಷಿಣಕ್ಕೆ ತಿರುವನಂತಪುರಕ್ಕೆ ಮತ್ತು ಉತ್ತರಕ್ಕೆ ಕೊಟ್ಟಪುರಂ (ತೃಶೂರ್) ಗೆ ಸಂಪರ್ಕಿಸುತ್ತದೆ.{{Citation needed|date=November 2023}}
'''ಹೆಗ್ಗುರುತುಗಳು'''
* [[ಮಾರ್ತಾಂಡ ವರ್ಮ ಸೇತುವೆ|ಮಾರ್ತಾಂಡ ವರ್ಮ ಸೇತುವೆ ಆಲುವಾ]]
* [[ಆಲುವಾ ಮಹಾದೇವ ದೇವಸ್ಥಾನ]]
*
== ಸಂಸ್ಕೃತಿ ==
ಆಲುವಾದ ಸಂಸ್ಕೃತಿಯು ಅದರ ಸ್ಥಳೀಯ ಜನರು ಮತ್ತು ಪೆರಿಯಾರ್ ನದಿಯ ಸಾಮೀಪ್ಯದಂತಹ ಅಂಶಗಳಿಂದಾಗಿ ಅದರ ಕಡೆಗೆ ಆಕರ್ಷಿತರಾದವರಿಂದ ಪ್ರಭಾವಿತವಾಗಿದೆ.
ಹಲವಾರು ಮಲಯಾಳಂ ಚಲನಚಿತ್ರ ಗೀತೆಗಳು ಪೆರಿಯಾರ್ ನದಿಗೆ ಸಮರ್ಪಿತವಾಗಿವೆ. [[ಚಂಗಂಪುಳ್ಳ ಕೃಷ್ಣ ಪಿಳ್ಳೈ|ಚಂಗಪುಜಾ ಕೃಷ್ಣ ಪಿಳ್ಳೈ]], [[ಜಿ. ಶಂಕರ ಕುರುಪ್]], [[ಬಾಲಚಂದ್ರನ್ ಚುಳ್ಳಿಕ್ಕಾಡು]], ವಿಮರ್ಶಕ ಕುಟ್ಟಿಪುಜಾ ಕೃಷ್ಣಪಿಳ್ಳ ಮತ್ತು ಕಾದಂಬರಿಕಾರ [[ಸುಭಾಷ್ ಚಂದ್ರನ್|ಸುಭಾಷ್ ಚಂದ್ರನ್]] ಅವರಂತಹ ಕವಿಗಳು ಆಲುವಾದವರಾಗಿದ್ದು, ಅಲ್ಲಿ ವಾಸಿಸುತ್ತಿದ್ದರು. ಆಲುವಾ ಪ್ರದೇಶದವರಲ್ಲದಿದ್ದರೂ, [[ವಯಲಾರ್ ರಾಮವರ್ಮ]] ಮತ್ತು [[ಒ. ಎನ್. ವಿ. ಕುರುಪ್|ಒ.ಎನ್.ವಿ. ಕುರುಪ್]] ಅವರು ಸಹ ಪೆರಿಯಾರ್ ಬಗ್ಗೆ ಬರೆದಿದ್ದಾರೆ, ಏಕೆಂದರೆ ಆಲುವಾ ಅವರ ಬರವಣಿಗೆಯ ಮೇಲೆ ಪ್ರಭಾವ ಬೀರಿತು.<ref>{{Cite web |title=ಪ್ರೇಮಮ್ ಆಲುವಾ ಪುಝಾ ಹಾಡು, ft. ನಿವಿನ್ ಪೌಲಿ, ಅನುಪಮಾ ಪರಮೇಶ್ವರನ್ |url=https://timesofindia.indiatimes.com/premam-aluva-puzha-song-ft-nivin-pauly-anupama-parameswaran/videoshow/61186943.cms |access-date=2026-06-11 |website=The Times of India |language=en}}</ref>
ಮುದ್ರಣ ಯುಗದಲ್ಲಿ ಆಲುವಾದಲ್ಲಿ ಹಲವಾರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಪ್ರಕಟವಾದವು. ಪ್ರಕಟಿತ ಬರವಣಿಗೆಯ ಸಂಪ್ರದಾಯವನ್ನು ಮುಂದುವರೆಸುತ್ತಾ, puzha.com ನಿಂದ ಆಲುವಾದಲ್ಲಿ ಮೊದಲ ಆನ್ಲೈನ್ ನಿಯತಕಾಲಿಕೆ ಮತ್ತು ಬ್ಲಾಗಿಂಗ್ ವೇದಿಕೆಯನ್ನು ಪ್ರಾರಂಭಿಸಲಾಯಿತು, ಇದು ಇನ್ನೂ ಇಂಟರ್ನೆಟ್ನಲ್ಲಿ ಅಸ್ತಿತ್ವದಲ್ಲಿದೆ.{{when|date=November 2023}}
== ವ್ಯಾಪಾರ ==
[[File:Federal bank head office aluva.JPG|thumb|ಫೆಡರಲ್ ಬ್ಯಾಂಕ್ ಪ್ರಧಾನ ಕಚೇರಿ, ಆಲುವಾ]]{{Unreferenced section|date=November 2023}}
ಆಲುವಾ ಅನೇಕ ವ್ಯಾಪಾರ ಪ್ರಧಾನ ಕಚೇರಿಗಳ ನೆಲೆಯಾಗಿದೆ. ಆಲುವಾ ತನ್ನ "ಆಲುವಾ ಪುಕಯಿಲ್ಲಾತ ಅಡುಪ್ಪು" (ಹೊಗೆರಹಿತ ಒಲೆ) ಗೆ ಹೆಸರುವಾಸಿಯಾಗಿದೆ, ಇದನ್ನು ಅಲ್ವಾಯ್ ಸೆಟ್ಲ್ಮೆಂಟ್ ಚರ್ಚ್ ಕಂಡುಹಿಡಿದಿದೆ. [[ಫೆಡರಲ್ ಬ್ಯಾಂಕ್]] ತನ್ನ ಪ್ರಧಾನ ಕಚೇರಿಯನ್ನು ಆಲುವಾದಲ್ಲಿ ಹೊಂದಿದೆ. ಹೆಚ್ಚುವರಿಯಾಗಿ, ಕೇರಳ ರಾಜ್ಯ ಸಿವಿಲ್ ಸೇವಾ ಅಕಾಡೆಮಿಯು ಆಲುವಾದಲ್ಲಿ ಒಂದು ಶಾಖೆಯನ್ನು ಸ್ಥಾಪಿಸಿದೆ.
== ಆಲುವಾದ ಗಮನಾರ್ಹ ವ್ಯಕ್ತಿಗಳು ==
{{columns-list|
* [[ದಿಲೀಪ್ (ನಟ)|ದಿಲೀಪ್]] (ಚಲನಚಿತ್ರ ನಟ)
* [[ಜಾನ್ ಅಬ್ರಹಾಂ]] (ಬಾಲಿವುಡ್ ನಟ)
* [[ನಿವಿನ್ ಪೌಲಿ]] (ಚಲನಚಿತ್ರ ನಟ)
* [[ಅಮಲಾ ಪಾಲ್]] (ಚಲನಚಿತ್ರ ನಟಿ)
* [[ಪಿಯರ್ಲ್ ಮಾನಿ]] (ಚಲನಚಿತ್ರ ನಟಿ, ಟಿವಿ ನಿರೂಪಕಿ)
* [[ವರ್ಗೀಸ್ ಪಯ್ಯಪ್ಪಿಲ್ಲಿ ಪಾಲಕ್ಕಪ್ಪಿಲ್ಲಿ]]
* [[ಬಾಬುರಾಜ್ (ನಟ)]]
* [[ಎಂ. ಕೆ. ಮಕ್ಕರ್ ಪಿಳ್ಳೈ]] (ಉದ್ಯಮಿ)
* [[ಎಂ. ಎಂ. ಅಬ್ದುಲ್ ಖಾದರ್]] (ಮಾಜಿ ಕೇರಳ ಅಡ್ವೊಕೇಟ್ ಜನರಲ್)
* [[ಎಂ. ಎಂ. ಪರೀದ್ ಪಿಳ್ಳೈ]] (ಮಾಜಿ ಕೇರಳ ಮುಖ್ಯ ನ್ಯಾಯಾಧೀಶರು)
* [[ಕಲಾಮಂಡಲಂ ಹರಿದಾಸ್]] (ಸಂಗೀತಗಾರ)
* [[ಸೈನುದ್ದೀನ್ (ನಟ)|ಸೈನುದ್ದೀನ್]] (ನಟ)
* [[ಸಿಜು ವಿಲ್ಸನ್]] (ಚಲನಚಿತ್ರ ನಟ)
* [[ಎನ್. ಎಫ್. ವರ್ಗೀಸ್]] (ಚಲನಚಿತ್ರ ನಟ)
* [[ಅಜ್ಮಲ್ ಅಮೀರ್]] (ಚಲನಚಿತ್ರ ನಟ)
* [[ಆಲ್ಫೋನ್ಸ್ ಪುತ್ರನ್]] (ಚಲನಚಿತ್ರ ನಿರ್ದೇಶಕ)
* [[ಶರಾಫ್ ಉದೀನ್]] (ಚಲನಚಿತ್ರ ನಟ)
* [[ಶಬರೀಶ್ ವರ್ಮ]] (ಚಲನಚಿತ್ರ ನಟ, ಕವಿ, ಗಾಯಕ)
* [[ವೇಣು ವಿ. ದೇಸಮ್]] (ಕವಿ)
* [[ಟಿನಿ ಟಾಮ್]] (ಚಲನಚಿತ್ರ ನಟ, ಹಾಸ್ಯನಟ)
* [[ಸೀತಾರಾಮನ್ ಶಂಕರನಾರಾಯಣ ಅಯ್ಯರ್]] (ಪರಿಸರ ಕಾರ್ಯಕರ್ತ)
* [[ಎನ್. ಕೆ. ದೇಸಮ್]] (ಕವಿ)
* [[ಜಿ.ಎನ್. ಗೋಪಾಲ್]] (ಚೆಸ್ ಆಟಗಾರ)
* [[ಕೃಷ್ಣ ಶಂಕರ್]] (ಚಲನಚಿತ್ರ ನಟ)
* [[ಸಜಿನ್ ಗೋಪು]] (ನಟ)
*[[ಶೃತಾ ಶಿವದಾಸ್]] (ನಟ)
}}
== ಗ್ಯಾಲರಿ ==
<gallery mode=packed>
File:Rajagiri Hospital.jpg|[[ರಾಜಗಿರಿ ಆಸ್ಪತ್ರೆ|ರಾಜಗಿರಿ ಆಸ್ಪತ್ರೆ, ಆಲುವಾ]]
File:AluvaShivaTemple.JPG|ಆಲುವಾ ಮಣಪುರಂ
File:Aluva Municipal Office.JPG|ನಗರಸಭೆ ಕಚೇರಿ ಆಲುವಾ
File:Aluva muncipailty.jpg|ಖಾಸಗಿ ಬಸ್ ಟರ್ಮಿನಲ್ ಆಲುವಾ
File:Aluva Guest House Entrance.JPG|ಆಲುವಾ ಅರಮನೆ ಪ್ರವೇಶ
File:Aluva Sree Krishna Swami Temple Front.JPG|ಶ್ರೀ ಕೃಷ್ಣ ದೇವಸ್ಥಾನ ಆಲುವಾ
File:Federal bank head office aluva.JPG|ಫೆಡರಲ್ ಬ್ಯಾಂಕ್ HO ಆಲುವಾ
File:UC College Aluva.JPG|UC ಕಾಲೇಜು ಆಲುವಾ
File:Mahathma Gandhi Municipal Town Hall Aluva.JPG|ಟೌನ್ ಹಾಲ್ ಆಲುವಾ
File:Aluva-Bridge.JPG|ಮಾರ್ತಾಂಡ ವರ್ಮ ಸೇತುವೆ ಆಲುವಾ
</gallery>
== ಇವನ್ನೂ ನೋಡಿ ==
* [[ಆಲುವಾ ಶಿವರಾತ್ರಿ ಉತ್ಸವ]]
* [[ಆಲುವಾ ರೈಲ್ವೇ ನಿಲ್ದಾಣ]]
* [[ಮಾರ್ತಾಂಡ ವರ್ಮ ಸೇತುವೆ]]
* [[ಮಂಗಳಪುಳ್ಳ ಸೇತುವೆ]]
== ಸ್ಥಳ ==
{{Geographic Location
|title = '''ಆಲುವಾದ ನೆರೆಯ ಪ್ರದೇಶಗಳು'''
|Northwest = [[ಉತ್ತರ ಪರವೂರ್]]
|North = [[ಚೆಂಗಮನಾಡು, ಎರ್ನಾಕುಲಂ ಜಿಲ್ಲೆ|ಚೆಂಗಮನಾಡು]]
|Northeast = [[ಅಂಗಮಾಲಿ]]
|West = [[ಕಳಮಶ್ಶೇರಿ]]
|Centre = ಆಲುವಾ
|East = [[ಪೆರುಂಬಾವೂರು]]
|Southwest = [[ವೈಟಿಲ]]
|South = [[ಕಕ್ಕನಾಡು]], [[ತ್ರಿಪುಣಿತುರಾ]]
|Southeast = [[ಮುವತ್ತುಪುಳ್ಳ]], [[ಪಿರಾವೊಂ]]
}}
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* [https://web.archive.org/web/20191013043120/https://keralapanchayatelection2020.keralas.info/ ಆಲುವಾ ಪುರಸಭೆ ಚುನಾವಣೆ 2020 ಗೆ ಉಳಿದ ದಿನಾಂಕ]
* [http://dattaanjaneya.org/ ಆಲುವಾದ ದೇವಾಲಯಗಳು]
* [http://dattaanjaneya.org/ ಕೇರಳದ ಹನುಮಾನ್ ದೇವಾಲಯಗಳು]
* [http://dattaanjaneya.org/famous-temple-india ಕೊಚ್ಚಿಯ ದೇವಾಲಯಗಳು]
{{Commons category}}
{{Wikivoyage|Aluva}}
{{Contains special characters|Indic}}
{{ಕೇರಳ}}
{{ಎರ್ನಾಕುಲಂ ಜಿಲ್ಲೆ}}
[[ವರ್ಗ:ಆಲುವಾ| ]]
[[ವರ್ಗ:ಕೊಚ್ಚಿಯ ನೆರೆಹೊರೆಗಳು]]
[[ವರ್ಗ:1921 ರಲ್ಲಿ ಸ್ಥಾಪಿಸಲಾದ ಜನವಸತಿ ಪ್ರದೇಶಗಳು]]
[[ವರ್ಗ:1921 ರಲ್ಲಿ ಭಾರತದಲ್ಲಿ ಸ್ಥಾಪನೆಗಳು]]
jnjt5x0s5u8vstfyxtodye64xuuplj1
ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬
0
79755
1379444
1371857
2026-08-08T12:00:00Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379444
wikitext
text/x-wiki
{{Quote_box|width=22em |align=|right|quote=
[[File:Flag of the United States.svg|120px|center|thumb]]
'''<big>ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ, 2016</big>'''
*[[File:Hillary Clinton crop.jpg|center|200x200px|thumb|'''<big>[[ಹಿಲರಿ ಕ್ಲಿಂಟನ್]]</big> (ಡೆಮಾಕ್ರಟಿಕ್''')]]
*ಅದ್ಯಕ್ಷ ಅಭ್ಯರ್ಥಿ ಹೆಸರು = '''ಹಿಲರಿ ರೋಧಾಮ್ ಕ್ಲಿಂಟನ್'''
*ಜನನ ದಿನಾಂಕ = 26-101947
*ದೇಶ = ಯುನೈಟೆಡ್ ಸ್ಟೇಟ್ಸ್
*ಯಾವ ಅಭ್ಯರ್ಥಿ =ಡೆಮಾಕ್ರಟಿಕ್ ಪಾರ್ಟಿ ಅಧ್ಯಕ್ಷೀಯ ಅಭ್ಯರ್ಥಿ 2016
*ಚುನಾವಣೆ = ನವೆಂಬರ್ 8, 2016
*ಪಕ್ಷ = ಡೆಮಾಕ್ರಟಿಕ್ ಪಾರ್ಟಿ
*ರಾಜ್ಯ = [[ನ್ಯೂಯಾರ್ಕ್]]
*upto:19-07-2016
*ಬಹುಮತ ಗಳಿಸಿದ ರಾಜ್ಯಗಳು=34
*ಮತ ನಿರೀಕ್ಷೆ =ಭರವಸೆಯದು 2204
*ನಿರೀಕ್ಷೆಯದು =+560 ಒಟ್ಟು=4,764
*ಗೆಲುವಿಗೆ ಅಗತ್ಯ ಮತಗಳು = 2383
*ಬೆಂಬಲಗಳಿಕೆ = 55.20%+
*೫೫೫೫೫೫೫೫೫
[[File:Tim Kaine crop.jpg|120px|thumb|'''ಟಿಮ್ ಕೈನೆ''']]
*ಅದೇ ಪಕ್ಷದ '''ಉಪಾಧ್ಯಕ್ಷ ಅಭ್ಯರ್ಥಿ'''= '''ಟಿಮ್ ಕೈನೆ'''
*ಸ್ಥಾನ = ಸೆನೆಟರ್ (ವರ್ಜೀನಿಯ)
*ಸೆನೆಟರ್ = 2೦13 ರಿಂದಅ
.}}
==ಯು.ಎಸ್.ಎ ಅಧ್ಯಕ್ಷರ ಚುನಾವಣೆ==
{{Quote_box|width=22em|align=|right|quote=
*'''<big>ಚುನಾವಣೆ ಹೆಸರು:ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ, 2016</big>'''
*[[File:Donald Trump August 19, 2015 (cropped).jpg|x200px|center|thumb|'''ಡೊನಾಲ್ಡ್ ಟ್ರಂಪ್ (ರಿಪಬ್ಲಿಕನ್)''']]
೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫
*ಅದ್ಯಕ್ಷ ಅಭ್ಯರ್ಥಿ ಹೆಸರು = '''ಡೊನಾಲ್ಡ್ ಟ್ರಂಪ್'''
*ಪಕ್ಷ = ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ [[ಅಭ್ಯರ್ಥಿಗಳ]] ಚುನಾವಣೆ ೨೦೧೬
*ಜನನ ದಿನಾಂಕ = 14-6-1946
*ದೇಶ = ಯುನೈಟೆಡ್ ಸ್ಟೇಟ್ಸ್
*ಅಭ್ಯರ್ಥಿ =ರಿಪಬ್ಲಿಕನ್' ಪಾರ್ಟಿ ಅಧ್ಯಕ್ಷೀಯ ಅಭ್ಯರ್ಥಿ 2016
*ಚುನಾವಣೆ = ನವೆಂಬರ್ 8, 2016
*ಪಕ್ಷ = ರಿಪಬ್ಲಿಕನ್' ಪಾರ್ಟಿ
*ರಾಜ್ಯ = [[ನ್ಯೂಯಾರ್ಕ್]]
*ಬಹುಮತ ಗಳಿಸಿದ ರಾಜ್ಯಗಳು=37
*ಮತ ನಿರೀಕ್ಷೆ =ಭರವಸೆಯದು 1441
*ನಿರೀಕ್ಷೆಯದು = 1,237
*ಗೆಲುವಿಗೆ ಅಗತ್ಯ ಮತಗಳು = 1,237
*ಬೆಂಬಲಗಳಿಕೆ = 44.2%
೫೫೫೫೫೫೫೫೫೫೫೫೫೫೫೫೫೫
[[File:Mike Pence February 2015 cropped color corrected.jpg|120px|thumb|ಮೈಕ್ ಪೆನ್ಸ್ (ಫೆ. 2015)]]
*ಅದೇ ಪಕ್ಷದ '''ಉಪಾಧ್ಯಕ್ಷ ಅಭ್ಯರ್ಥಿ'''= '''ಮೈಕ್ ಪೆನ್ಸ್'''
*ಸ್ಥಾನ = ಗೌರ್ನರ್ (ಇಂಡಿಯಾನ)
*ಗೌರ್ನರ್ = 2೦13 ರಿಂದ.
.}}
*ಮುಖ್ಯ ಲೇಖನ:'''ಅಭ್ಯರ್ಥಿಗಳ ಚುನಾವಣೆ''': [[ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬]]
2016 [[ಅಮೆರಿಕ ಸಂಯುಕ್ತ ಸಂಸ್ಥಾನ]]ದ ಅಧ್ಯಕ್ಷೀಯ ಚುನಾವಣೆಯನ್ನು, '''8, ನವೆಂಬರ್ 2016 ಮಂಗಳವಾರ''', ನಡೆಸಲು ನಿರ್ಧರಿಸಲಾಯಿತು. ಇದು 58 ನೇ ಚತುರ್ವಾರ್ಷಿಕ ಅಮೇರಿಕಾದ ರಾಷ್ಟ್ರಪತಿಯ ಚುನಾವಣೆ. ಮತದಾರರು ‘ಅಧ್ಯಕ್ಷೀಯ ಚುನಾಯಕ’ ರನ್ನು (ಮತದಾರ ಪ್ರತಿನಿಧಿಗಳನ್ನು) ಆಯ್ಕೆ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ‘ಚುನಾವಣಾ ಕಾಲೇಜ್’ ಮೂಲಕ ಮತದಾರ ಪ್ರತಿನಿಧಿಗಳು ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವರು. ಅಧ್ಯಕ್ಷರ ಅವಧಿಯ ಮಿತಿಯನ್ನು ಅಮೆರಿಕ ಸಂಯುಕ್ತ ಸಂಸ್ಥಾನದ (ಯುನೈಟೆಡ್ ಸ್ಟೇಟ್ಸ್) ಸಂವಿಧಾನದ ಟ್ವೆಂಟಿ ತಿದ್ದುಪಡಿಯಲ್ಲಿ ಇರವಂತೆ ಒಬ್ಭರೇ ಮೂರನೇ ಅವಧಿಗೆ ಚುನಾಯಿತರಾಗುವ ಆವಕಾಶವಿಲ್ಲದೇ ಇರುವುರಿಂದ, ಡೆಮಾಕ್ರಟಿಕ್ ಪಕ್ಷದ ಸ್ಥಾನಿಕ ಅಧ್ಯಕ್ಷ, ಬರಾಕ್ ಒಬಾಮಾ, ಅವರು ಪುನಃ ಸ್ಪರ್ಧೆ ಮಾಡದಂತೆ ಈ ನಿಯಮ ತಡೆಯುತ್ತದೆ. ಅಧ್ಯಕ್ಷೀಯ ‘ಪ್ರಾಥಮಿಕ ಚುನಾವಣೆ’ ಮತ್ತು ಸಭೆಗಳು ಸರಣಿಯಲ್ಲಿ ಫೆಬ್ರವರಿ 1 ಮತ್ತು ಜೂನ್ 14, 2016 ರ ನಡುವೆ ನಡೆದಿದೆ.
===ಟ್ರಂಪ್ ಮುಂದಿನ ಅಧ್ಯಕ್ಷ===
{| class="wikitable sortable "
|-bgcolor="Yellow"
|ಮಂಗಳವಾರ, ನವೆಂಬರ್ 8, 2016 ರಂದು ನಡೆದ 2016 ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ, [[ಡೊನಾಲ್ಡ್ ಟ್ರಂಪ್]] ಅವರು [[ಹಿಲರಿ ಕ್ಲಿಂಟನ್]] ರನ್ನು ಸೋಲಿಸಿ, ಜನವರಿ 20, 2017 ರಂದು ಅಮೆರಿಕದ 45 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಇದು 58 ನೇ ಮತ್ತು ಅತ್ಯಂತ ಇತ್ತೀಚಿನ ನಾಲ್ಕು ವರ್ಷಕ್ಕೊಮ್ಮೆ ಬರುವ ಅಮೇರಿಕಾ ರಾಷ್ಟ್ರಪತಿ ಚುನಾವಣೆ ಆಗಿತ್ತು.
ಮತದಾರರು ಇದರ ಪ್ರಕಾರ ಅಧ್ಯಕ್ಷೀಯ ಮತದಾರರ ಚುನಾವಣಾ ಕಾಲೇಜ್ ಮೂಲಕ ಹೊಸ '''ಅಧ್ಯಕ್ಷ ಮತ್ತು ಉಪಾಧ್ಯಕ್ಷ'''ರನ್ನು ಆರಿಸಿದರು; ಮತದಾರರು ತಮ್ಮ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಮಾಡಿದ ಮತದಾನವನ್ನು ಫಲಿತಾಂಶಗಳು ಆಧರಿಸಿವೆ.::ಫಲಿತಾಂಶದ ವಿವರ ಕೆಳಗೆ ಕೊಟ್ಟಿದೆ:
*'''ವಿಶೇಷವೆಂದರೆ ನವೆಂಬರ ೨೦೧೬ರ ಸಂಸತ್ ಚುನಾವಣೆಯಲ್ಲಿಯೂ ಟ್ರಂಪ್ರ ರಿಪಬ್ಲಿಕನ್ ಪಕ್ಷ ಜನಪ್ರತಿನಿಧಿಸಭೆ ಮತ್ತು ಸೆನೆಟ್ಗಳಲ್ಲಿ ಬಹುಮತ ಪಡೆದಿದೆ.(ಕೊನೆಯಲ್ಲಿ ಕೊಟ್ಟಿರುವ ಅಂಕಣ ಪೆಟ್ಟಿಗೆ ನೋಡಿ.)'''*
*'''ಇನ್ನೂ ಹೆಚ್ಚಿನ ವಿಶೇಷವೆಂದರೆ ಹಿಲರಿಯವರಿಗೆ ಜನಪ್ರಿಯ ಮತ ಟ್ರಂಪ್ಅವರಿಗಿಂತ ಸ್ವಲ್ಪ ಹೆಚ್ಚಿಗೆ (0.16%) ಇದೆ. ಆದರೆ ಅಧ್ಯಕ್ಷರ ಆಯ್ಕೆಗೆ ಚುನಾವಣಾ ಕಾಲೇಜಿನ ಮತಗಳನ್ನು ಮಾತ್ರಾ ಗಣನೆಗೆ ತೆಗೆದುಕೊಳ್ಳುವರು'''.
|-
|}
<ref>[http://www.prajavani.net/news/article/2016/11/09/450858.html ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ]</ref><ref name="ಉಲ್ಲೇಖನ ೦" />
==ಫಲಿತಾಂಶದ ವಿವರ==
{| class="wikitable sortable ".
|-
! ನಾಮಿನಿ→ !!♦!! [[ಡೊನಾಲ್ಡ್ ಟ್ರಂಪ್]] !!♦ ♦ !! [[ಹಿಲರಿ ಕ್ಲಿಂಟನ್]]
|-
| ಪಕ್ಷ →||♦||ರಿಪಬ್ಲಿಕನ್|| ♦|| ಡೆಮೋಕ್ರಾಟಿಕ್
|-
| ವಾಸದ ರಾಜ್ಯ→|| ♦||ನ್ಯೂಯಾರ್ಕ್||♦ || ನ್ಯೂಯಾರ್ಕ್
|-
| ಸಂಗಾತಿ-(ಉಪಾಧ್ಯಕ್ಷ)→||♦|| ಮೈಕ್ ಪೆನ್ಸ್ ||♦ ||ಟಿಮ್ ಕೈನ್
|-
|ಯೋಜಿತ ಮತ→||♦|| 306 ||♦ ||232
|-
|ಪಡೆದ ಚುನಾವಣಾ ಮತ →||♦||304 || ♦||227**
|-
| ಜನಪ್ರಿಯ ಮತ→||♦|| 62.980.160 ||♦ || 65.845.063
|-
| ಶೇಕಡಾವಾರು→|| ♦|| 45.9% || ♦|| 48.0%**
|-
|ಸ್ಟೇಟ್ಸ್ ||♦||30 -02 ||♦||20 + ಡಿಸಿ
|-
|}
*ಪುನರ್ವಿಮರ್ಶಿತ:
<ref>[http://timesofindia.indiatimes.com/ How Donald Trump rewrote political playbook to beat Hillary Clinton]</ref>
**[http://timesofindia.indiatimes.com/us-elections-2016/usresults.cms]
*ರಾಜ್ಯವಾರು ಮತದಾನದ ವಿವರದ ನಕ್ಷೆ ಕೆಳಗೆ ಕೊಟ್ಟಿದೆ.
==ಡೊನಾಲ್ಡ್ ಟ್ರಂಪ್ ಆಯ್ಕೆ ಅಧಿಕೃತ==
*21 Dec, 2016;ವಾಷಿಂಗ್ಟನ್:
*ಗೆಲುವಿಗೆ ಅಗತ್ಯವಿದ್ದ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆಯುವ ಮೂಲಕ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 45ನೇ ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಆರು ವಾರಗಳ ಬಳಿಕ ಎಲೆಕ್ಟೋರಲ್ ಕಾಲೇಜ್ ಇದಕ್ಕೆ ಅಧಿಕೃತ ಮುದ್ರೆ ಒತ್ತಿದೆ. ಎಲೆಕ್ಟೋರಲ್ ಕಾಲೇಜ್ನ ಸದಸ್ಯರು ಅಧ್ಯಕ್ಷರನ್ನು ಅಧಿಕೃತವಾಗಿ ಆಯ್ಕೆ ಮಾಡಲು ತಮ್ಮ ತಮ್ಮ ರಾಜ್ಯಗಳ ರಾಜಧಾನಿಗಳಲ್ಲಿ ಸಭೆ ಸೇರಿದ್ದರು.
*'''ಹಿಲರಿ 227 ಹಾಗೂ ಟ್ರಂಪ್ 304 ಎಲೆಕ್ಟೋರಲ್ ಮತ ಪಡೆದಿದ್ದಾರೆ.'''
<ref>{{Cite web |url=http://www.prajavani.net/news/article/2016/12/21/460385.html |title=ಡೊನಾಲ್ಡ್ ಟ್ರಂಪ್ ಆಯ್ಕೆ ಅಧಿಕೃತ;21 Dec, 2016 |access-date=2016-12-21 |archive-date=2016-12-21 |archive-url=https://web.archive.org/web/20161221134404/http://www.prajavani.net/news/article/2016/12/21/460385.html |url-status=dead }}</ref>
==ಅಭ್ಯರ್ಥಿಗಳ ಚುನಾವಣೆಯ ಖರ್ಚು==
*ಅಮೆರಿಕದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಚುನಾವಣೆ ಸಂದರ್ಭ ಒಟ್ಟು ರೂ.14 ಸಾವಿರ ಕೋಟಿ ಖರ್ಚು ಮಾಡಿದ್ದಾರೆ ಎಂದು ಅಧ್ಯಯನ ತಿಳಿಸಿದೆ.
*ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ ಹಾಗೂ ಬೆಂಬಲಿಗರು ರೂ.5161 ಕೋಟಿ ಖರ್ಚು ಮಾಡಿದ್ದಾರೆ.
*ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಬೆಂಬಲಿಗರು ರೂ.2781 ಕೋಟಿ ಖರ್ಚು ಮಾಡಿದ್ದಾರೆ.
*ಡೆಮಾಕ್ರಟಿಕ್ ಪಕ್ಷ, ರಿಪಬ್ಲಿಕನ್ ಟ್ರಂಪ್ ಅವರಿಗಿಂತ ಸುಮಾರು ರೂ.2,300 ಕೋಟಿಯಷ್ಟು ಅಧಿಕ ಹಣ ವ್ಯಯಿಸಿದ್ದಾರೆ.
*ಡೆಮಾಕ್ರಟಿಕ್ ಪಕ್ಷದ ಬೆರ್ನಿ ಸ್ಯಾಂಡರ್ಸ್ ರೂ.1,577 ಕೋಟಿ ಖರ್ಚು ಮಾಡಿದ್ದಾರೆ.
*ರಿಪಬ್ಲಿಕನ್ ಪಕ್ಷದ ಟೆಡ್ ಕ್ರೂಜ್ ರೂ.1.094 ಕೋಟಿ ಹಣ ವ್ಯಯಿಸಿದ್ದಾರೆ.
<ref>{{Cite web |url=http://www.prajavani.net/news/article/2016/12/29/462313.html |title=ಅಮೆರಿಕ ಚುನಾವಣೆ: ಅಭ್ಯರ್ಥಿಗಳು ಖರ್ಚು |access-date=2016-12-29 |archive-date=2016-12-29 |archive-url=https://web.archive.org/web/20161229143358/http://www.prajavani.net/news/article/2016/12/29/462313.html |url-status=dead }}</ref>
==ಅಮೆರಿಕ ಅಧ್ಯಕ್ಷ ಟ್ರಂಪ್ ವಾರ್ಷಿಕ ವೇತನ 1 ಡಾಲರ್!==
*ಅಮೆರಿಕದ ಅಧ್ಯಕ್ಷರಿಗೆ ಸಿಗುವ ವಾರ್ಷಿಕ ವೇತನ 4 ಲಕ್ಷ ಡಾಲರ್ (ಅಂದಾಜು ರೂ.2 ಕೋಟಿ 70 ಲಕ್ಷ). ಆದರೆ, ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೇವಲ ಒಂದು ಡಾಲರ್ (ರೂ.67) ವೇತನ ಪಡೆಯುವುದಾಗಿ ಘೋಷಿಸಿದ್ದಾರೆ.ಅಧ್ಯಕ್ಷ ಗಾದಿಗೆ ಏರಿದರೆ ವೇತನ ಪಡೆಯುವುದಿಲ್ಲ ಎಂದು ಸೆಪ್ಟೆಂಬರ್ನಲ್ಲಿ ನಡೆದ ಚುನಾವಣಾ ರ್ಯಾಲಿಯ ವೇಳೆ ಟ್ರಂಪ್ ಅಮೆರಿಕನ್ನರಿಗೆ ಭರವಸೆ ನೀಡಿದ್ದರು.‘ಕಾನೂನಿನ ಪ್ರಕಾರ ವೇತನ ಪಡೆಯಬೇಕಾಗಿರುವುದರಿಂದ ನಾನು ವಾರ್ಷಿಕ ಒಂದು ಡಾಲರ್ ವೇತನ ಪಡೆಯುತ್ತೇನೆ’ ಎಂದು ಟ್ರಂಪ್ ಭಾನುವಾರ ಪ್ರಸಾರವಾದ ಸಂದರ್ಶನದಲ್ಲಿ ತಿಳಿಸಿದ್ದಾರೆ.<ref>[http://www.prajavani.net/news/article/2016/11/15/452123.html ವಾರ್ಷಿಕ ವೇತನ 1 ಡಾಲರ್15 Nov, 2016]</ref>
==ಟ್ರಂಪ್ ಅಧಿಕಾರ ಸ್ವೀಕಾರ==
*[[ಡೊನಾಲ್ಡ್ ಟ್ರಂಪ್]] ಅವರು ಶುಕ್ರವಾರ ಮಧ್ಯಾಹ್ನ ಅಮೆರಿಕದ 45ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸ್ಥಳೀಯ ಕಾಲಮಾನ ಶುಕ್ರವಾರ ಮಧ್ಯಾಹ್ನ 12ಕ್ಕೆ (ಭಾರತೀಯ ಕಾಲಮಾನ – ಶನಿವಾರ ಬೆಳಿಗ್ಗೆ 10.30 ಗಂಟೆ) ಟ್ರಂಪ್ ಪ್ರಮಾಣವಚನ ಸ್ವೀಕರಿಸಿದ್ದಾರೆ.<ref>http://www.prajavani.net/news/article/2017/01/20/467073.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
*ಶುಕ್ರವಾರ ಜನವರಿ 20 2017 ರಂದು ಎಂಟು ಲಕ್ಷಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಟ್ರಂಪ್, ‘ಅಧಿಕಾರವನ್ನು ವಾಷಿಂಗ್ಟನ್ ಡಿ.ಸಿಯಿಂದ ದೇಶದ ಇತರ ಭಾಗಗಳ ಜನರ ಕೈಗೆ ಮರಳಿಸುತ್ತಿದ್ದೇವೆ’ ಎಂದು ಹೇಳಿದರು. ಈ ದಿನವನ್ನು ಜನರೇ ಅಮೆರಿಕದ ಆಡಳಿತಗಾರರಾಗಿರುವ ದಿನ ಎಂದು ಮುಂದೆ ನೆನಪಿಸಿಕೊಳ್ಳಲಾಗುತ್ತದೆ’ ಎಂದು ಟ್ರಂಪ್ ಹೇಳಿದರು. ತಮ್ಮ ಅಧ್ಯಕ್ಷತೆಯು ಅಮೆರಿಕಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಹೊಸ ದಿಕ್ಕೊಂದನ್ನು ತೋರಲಿದೆ ಎಂದರು.
===ಪದಗ್ರಹಣ ಸಮಾರಂಭ ಯೊಜನೆ===
*ಪದಗ್ರಹಣ ಸಮಾರಂಭ ಗುರುವಾರದಿಂದ ಶನಿವಾರದವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುವವು.
* ಶುಕ್ರವಾರ ಬೆಳಿಗ್ಗೆ 8ಕ್ಕೆ (ಭಾರತೀಯ ಕಾಲಮಾನ ಸಂಜೆ 6.30) ನಿಯೋಜಿತ ಅಧ್ಯಕ್ಷ ಟ್ರಂಪ್ ಒಬಾಮ ಅವರೊಂದಿಗೆ ಕಾಫಿ ಸೇವನೆ ಮಾಡುವರು.
* 10 ಗಂಟೆ – ಅಮೆರಿಕದ ಕ್ಯಾಪಿಟೋಲ್ ಭವನದಲ್ಲಿ ಪ್ರಮಾಣವಚನ ಸಮಾರಂಭ ಆರಂಭವಾಗುವುದು.
* ಮಧ್ಯಾಹ್ನ 12ಗಂಟೆಗೆ ಪ್ರಮಾಣವಚನ ಸ್ವೀಕಾರ.
* 1.30ಕ್ಕೆ – ಕುಟುಂಬದವರೊಂದಿಗೆ ಶ್ವೇತ ಭವನದವರೆಗೆ ಮೆರವಣಿಗೆ.
* ಸಂಜೆ 5.30ಕ್ಕೆ – ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳು.
===ಅಧಿಕಾರ ಸ್ವೀಕಾರ ವಿಧಿ-ವಿಧಾನ===
*ಶ್ವೇತ ಭವನ ಪ್ರವೇಶಕ್ಕೂ ಮುನ್ನ:
* ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಬರಾಕ್ ಒಬಾಮ ಮತ್ತು ಮಿಷೆಲ್ ಒಬಾಮರನ್ನು ಡೊನಾಲ್ಡ್ ಟ್ರಂಪ್ ದಂಪತಿ ಭೇಟಿಮಾಡಿದರು;
* ಶ್ವೇತಭವನದ ಮೆಟ್ಟಿಲುಗಳ ಮೇಲಿನ ವೇದಿಕೆಯಲ್ಲಿ ಡೊನಾಲ್ಡ್ ಮತ್ತು ಮೆಲಾನಿಯಾ ಟ್ರಂಪ್ ಅವರಿಗೆ ಒಬಾಮ ದಂಪತಿ ಶುಭ ಕೋರಿದರು;
* ಮಿಷೆಲ್ ಅವರಿಗೆ ದುಬಾರಿ ‘ಟಿಫಾನಿ ಆಭರಣ’ವನ್ನು ಉಡುಗೊರೆಯಾಗಿ ಮೆಲಾನಿಯಾ ನೀಡಿದರು;
* ಉಡುಗೊರೆಯನ್ನು ಸಹಾಯಕರಿಗೆ ಹಸ್ತಾಂತರಿಸಲು ವೇದಿಕೆಯಿಂದ ಸ್ವತಃ ಒಬಾಮ ತಾವೇ ಇಳಿದು ಹೋದರು;
* ವೇದಿಕೆ ಮೇಲೆ ಒಬಾಮ, ಮಿಷೆಲ್, ಮೆಲಾನಿಯಾ ಮತ್ತು ಟ್ರಂಪ್ ಒಟ್ಟಾಗಿ ನಿಂತು ಚಿತ್ರ ತೆಗೆಸಿಕೊಂಡರು;
* ಒಬಾಮ ಮಿಷೆಲ್, ಮೆಲಾನಿಯಾ ಮತ್ತು ಟ್ರಂಪ್ ಶ್ವೇತಭವನದಲ್ಲಿ ಕುಳಿತು ಚಹಾ ಹೀರಿದರು,
* ಹೊಸ ಅಧ್ಯಕ್ಷರಿಗೆ ಬರೆದ ಪತ್ರವನ್ನು ಸಂಪ್ರದಾಯದಂತೆ ಗೃಹ ಕಚೇರಿಯ ‘ರೆಸಲ್ಯೂಟ್’ ಮೇಜಿನ ಮೇಲೆ ಒಬಾಮ ಇರಿಸಿದರು;
* ಒಬಾಮ ಅಮೆರಿಕನ್ನರಿಗೆ ಧನ್ಯವಾದ ಹೇಳಿದರು;
* ನೂತನ ಉಪಾಧ್ಯಕ್ಷರಾಗಿ ಮೈಕ್ ಪೆನ್ಸ್ ಪ್ರಮಾಣ ವಚನ ಸ್ವೀಕರಿಸಿದರು;
* ಡೊನಾಲ್ಡ್ ಟ್ರಂಪ್ ‘ಅಬ್ರಾಹಂ ಲಿಂಕನ್ ಬೈಬಲ್’ ಮೇಲೆ ಕೈಇರಿಸಿ ಪ್ರಮಾಣ ವಚನ ಸ್ವೀಕರಿಸಿದರು;
* ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರಮಾಣ ವಚನ ಭೋದಿಸಿದರು;
* ಸುಮಾರು 8 ಲಕ್ಷ ಜನ ಪ್ರಮಾಣ ವಚನ ಸ್ವೀಕಾರಕ್ಕೆ ಸಾಕ್ಷಿಯಾದರು.<ref>[http://www.prajavani.net/news/article/2017/01/21/467334.html ಅಮೆರಿಕ ಮೊದಲು: ಟ್ರಂಪ್ ನೀತಿ;ಪಿಟಿಐ;21 Jan, 2017]</ref>
==ಟ್ರಂಪ್ ಅಧಿಕಾರ ಸ್ವೀಕಾರದ ಭಾಷಣ==
*[http://www.prajavani.net/news/article/2017/01/21/467334.html ಅಮೆರಿಕ ಮತ್ತು ಜಗತ್ತಿಗೆ ಹೊಸ ದಿಕ್ಕು ತೋರುವ ಭರವಸೆ.ಅಮೆರಿಕ ಮೊದಲು: ಟ್ರಂಪ್ ನೀತಿ;ಪಿಟಿಐ;21 Jan, 2017]
*ಅಧಿಕಾರ ಸ್ವೀಕಾರ:[http://www.prajavani.net/news/article/2017/01/20/467241.html ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರಪ್ರಸಾರ;20 Jan, 2017]
===ಟ್ರಂಪ್ ವಿರುದ್ಧದ ಪ್ರತಿಭಟನೆ===
*21 Jan, 2017
*ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ಸ್ವೀಕರಿಸುತ್ತಿರುವುದನ್ನು ವಿರೋಧಿಸಿ ಜನ ಬೀದಿಗಿಳಿದು ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದು, ಈ ಸಂಬಂಧ 217 ಮಂದಿಯನ್ನು ಬಂಧಿಸಲಾಗಿದೆ. ಟ್ರಂಪ್ ಅವರು ಶುಕ್ರವಾರ ಅಧಿಕಾರಿ ಸ್ವೀಕರಿಸುತ್ತಿರುವುದನ್ನು ಖಂಡಿಸಿ ರಾಜಧಾನಿಯಲ್ಲಿ ರಸ್ತೆಗಿಳಿದ ಜನರು ಪ್ರತಿಭಟನೆ ನಡೆಸಿ, ಟ್ರಂಪ್ ವಿರುದ್ಧ ಘೋಷಣೆ ಕೂಗಿ, ಫಲಕಗಳನ್ನು ಪ್ರದರ್ಶಿಸಿದ್ದಾರೆ. ಇಷ್ಟಕ್ಕೆ ಸಮಾಧಾನಗೊಳ್ಳದ ಜನ, ಟ್ರಂಪ್ ಅವರ ಪ್ರತಿಕೃತಿ ಹದಿಸಿದ್ದಾರೆ. ಕಾರು ಇತರ ವಾಹನಗಳಿಗೆ ಬೆಂಕಿಹಚ್ಚಿದ್ದಾರೆ. ಆರಕ್ಕೂ ಹೆಚ್ಚು ಮಳಿಗೆಗಳಿಗೆ ಹಾನಿ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಬಳಿಸಿದ್ದಾರೆ. ಘಟನೆ ಸಂಬಂದ 200ಕ್ಕೂ ಹೆಚ್ಚು ಜನರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಆರು ಪೋಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.<ref>[http://www.prajavani.net/news/article/2017/01/21/467467.html ಹಿಂಸಾರೂಪ ಪಡೆದ ಟ್ರಂಪ್ ವಿರುದ್ಧದ ಪ್ರತಿಭಟನೆ: 217 ಮಂದಿ ಬಂಧನ;ಪಿಟಿಐ;21 Jan, 2017]</ref>
==ಅಧ್ಯಕ್ಷೀಯ ಚುನಾವಣೆ: ಪೀಠಿಕೆ==
ಸಂಯುಕ್ತ ಸಂಸ್ಥಾನವು ಜಗತ್ತಿನ ಅತೀ ಹಳೆಯ ಒಕ್ಕೂಟರಾಷ್ಟ್ರವಾಗಿದೆ. ಇದು ಸಾಂವಿಧಾನಿಕ ಪ್ರಜಾಪ್ರಭುತ್ವವಾಗಿದೆ. ಇದರಲ್ಲಿ ಕಾನೂನಿಂದ ರಕ್ಷಿಸಿಲ್ಪಟ್ಟ ಅಲ್ಪಸಂಖ್ಯಾತರ ಹಕ್ಕುಗಳು, ಬಹುಸಂಖ್ಯಾತರ ಆಡಳಿತವನ್ನು ಮೃದುಗೊಳಿಸುತ್ತವೆ. ಇದು ಮೂಲಭೂತವಾಗಿ ಪ್ರತಿನಿಧಿ ಪ್ರಜಾಪ್ರಭುತ್ವದ ರಚನೆಯನ್ನು ಹೊಂದಿದೆ. ಆದರೂ ಸಂಯುಕ್ತ ಸಂಸ್ಥಾನದ ಭೂಪ್ರದೇಶದಲ್ಲಿ ನೆಲೆಸಿದ ನಾಗರಿಕರು ಸಂಯುಕ್ತ ಸಂಸ್ಥಾನದ (ಫೆಡರಲ್) ಅಧಿಕಾರಿಗಳ ಮತದಾನದಲ್ಲಿ ಭಾಗವಹಿಸುವಂತಿಲ್ಲ. ಸಂಯುಕ್ತ ಸಂಸ್ಥಾನ ಸಂವಿಧಾನದ ವ್ಯಾಖ್ಯಾನದಂತೆ, ಸರ್ಕಾರವು ಚೆಕ್ಸ್ ಮತ್ತು ಬ್ಯಾಲೆನ್ಸ್ ವ್ಯವಸ್ಥೆಯಿಂದ ನಿಯಂತ್ರಿಸಲ್ಪಟ್ಟಿದೆ. ಈ ಸಂವಿಧಾನ ದೇಶದ ಸರ್ವೋಚ್ಛ ಕಾನೂನುಬದ್ಧ ದಾಖಲೆಯಾಗಿದೆ. ಅಮೆರಿಕದ ಸಂಯುಕ್ತ ರಾಜ್ಯಗಳ (ಫೆಡರಲಿಸ್ಟ್) ವ್ಯವಸ್ಥೆಯಲ್ಲಿ ನಾಗರಿಕರು ಫೆಡರಲ್, ರಾಜ್ಯ ಮತ್ತು ಸ್ಥಳೀಯ ಎಂಬ ಮೂರು ಹಂತದ ಸರ್ಕಾರದ ಆಡಳಿತಕ್ಕೆ ಒಳಪಡುತ್ತಾರೆ. ಸ್ಥಳೀಯ ಸರ್ಕಾರದ ಕೆಲಸವು ಸಾಮಾನ್ಯವಾಗಿ ಜಿಲ್ಲೆ (ಕೌಂಟಿ) ಮತ್ತು ಪೌರಸಂಸ್ಥೆಯ ಆಡಳಿತದ ಮಧ್ಯೆ ಹಂಚಲ್ಪಟ್ಟಿರುತ್ತದೆ. ಸಾಮಾನ್ಯವಾಗಿ ಎಲ್ಲ ಸಂದರ್ಭಗಳಲ್ಲಿಯೂ ಕಾರ್ಯಾಂಗ ಮತ್ತು ಶಾಸಕಾಂಗದ ಅಧಿಕಾರಿಗಳು ಚುನಾವಣೆಯಲ್ಲಿ ಜಿಲ್ಲೆಯ (ಡಿಸ್ಟ್ರಿಕ್ಟ್ನ) ನಾಗರಿಕರ ಬಹುಮತದಿಂದ ಆರಿಸಿ ಬಂದವರಾಗಿರುತ್ತಾರೆ. ಸಂಯುಕ್ತ ರಾಜ್ಯಗಳ (ಫೆಡರಲ್) ಹಂತದಲ್ಲಿ ಜನರ ನೇರ ಆಯ್ಕೆಯ (ಅನುಪಾತದ) ಪ್ರಾತಿನಿಧಿತ್ವ ಇರುವುದಿಲ್ಲ ಹಾಗೂ ಕೆಳ ಹಂತದಲ್ಲಿ ತುಂಬ ಕಡಿಮೆ ಸಂದರ್ಭಗಳಲ್ಲಿ ಇರುತ್ತದೆ. ಸಂಯುಕ್ತ ರಾಜ್ಯಗಳ ಸಭೆ (ಫೆಡರಲ್) ಮತ್ತು ರಾಜ್ಯ, ನ್ಯಾಯಾಂಗ ಹಾಗೂ ಮಂತ್ರಿಮಂಡಲದ ಅಧಿಕಾರಿಗಳು ಕಾರ್ಯಾಂಗದಿಂದ ನಾಮಾಂಕಿತರಾಗಿರುತ್ತಾರೆ ಮತ್ತು ಶಾಸಕಾಂಗದಿಂದ ಅನುಮೋದಿಸಲ್ಪಟ್ಟವರಾಗಿರುತ್ತಾರೆ. ಹಾಗಿದ್ದರೂ ಕೆಲವು ರಾಜ್ಯ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಜನರಿಂದ ಚುನಾಯಿಸಲ್ಪಟ್ಟವರಾಗಿರುತ್ತಾರೆ.
===ಸಂಯುಕ್ತ ಸರ್ಕಾರದ ಮೂರು ಶಾಖೆಗಳು===
*ಶಾಸಕಾಂಗ: ಸೆನೆಟ್ ಮತ್ತು ಪ್ರತಿನಿಧಿಗಳ ಮನೆಯಾದಂತಹ ಉಭಯ ಸದನಗಳ ಸಮ್ಮಿಳನವು ಫೆಡರಲ್ ಕಾನೂನುಗಳ ರಚನೆ, ಸಮರ ಸಾರುವಿಕೆ ಹಾಗೂ ಒಪ್ಪಂದಗಳಿಗೆ ಒಪ್ಪಿಗೆಯನ್ನು ನೀಡುವಂತದ್ದಾಗಿರುತ್ತದೆ. ಅದು ಹಣಕಾಸಿನ ಶಕ್ತಿ ಹಾಗೂ ಸರ್ಕಾರದಲ್ಲಿನ ಸದಸ್ಯರನ್ನು ತೆಗೆದುಹಾಕುವಂತಹ ದೋಷಾರೋಪಿಸುವ ಶಕ್ತಿಯನ್ನೂ ಕೂಡಾ ಹೊಂದಿರುತ್ತದೆ.
*ಕಾರ್ಯಾಂಗ: ಅಧ್ಯಕ್ಷರು ಸೇನೆಯ ಮುಖ್ಯಸ್ಥರಾಗಿರುತ್ತಾರೆ, ಶಾಸಕಾಂಗದ ಮಸೂದೆಗಳು ಕಾನೂನಾಗಿ ಮಾರ್ಪಾಡಾಗುವ ಮುಂಚೆಯೇ ಅದರ ಮೇಲೆ ನಿರಾಕರಣಾಧಿಕಾರವನ್ನು ಹೊಂದಿರುತ್ತಾರೆ, ಹಾಗೂ ಫೆಡರಲ್ ಕಾನೂನು ಮತ್ತು ನಿಯಮಗಳನ್ನು ನಿಯಂತ್ರಿಸುವ, ಸಂಪುಟ ಮತ್ತು ಇತರೆ ಅಧಿಕಾರಿಗಳನ್ನು ನೇಮಿಸುತ್ತಾರೆ.
*ನ್ಯಾಯಾಂಗ: ಕಾನೂನಿನ ಅರ್ಥವಿವರಣೆ ನೀಡುವ ಮತ್ತು ಅಸಾಂವಿಧಾನಿಕ ಎಂದು ಕಂಡುಬಂದವುಗಳನ್ನು ಸರಿತಿರುಗಿಸುವಸರ್ವೋಚ್ಛ ನ್ಯಾಯಾಲಯದ ಮತ್ತು ಕೆಳ ಹಂತದಲ್ಲಿನ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶರು ಅಧ್ಯಕ್ಷ ಮತ್ತು ಸಂಪುಟದಿಂದ ನೇಮಿಸಲ್ಪಟ್ಟವರಾಗಿರುತ್ತಾರೆ.
<ref>{{Cite web |url=https://www.whitehouse.gov/1600/legislative-branch |title='The Legislative Branch' |access-date=2016-06-08 |archive-date=2016-03-12 |archive-url=https://web.archive.org/web/20160312094235/https://www.whitehouse.gov/1600/legislative-branch |url-status=dead }}</ref><ref>[http://www.house.gov/house/MemberWWW_by_State.shtml]</ref><ref>AP count: Clinton has delegates to win Democratic nomination". Associated Press. June 6, 2016. Retrieved June 7, 2016</ref>
==ಅಮೇರಿಕಾ ಸಂಸತ್ತು==
*ಅಮೇರಿಕಾದ ಸಂಸತ್ತನ್ನು ಕಾಂಗ್ರೆಸ್ ಎಂದು ಕರೆಯುವರು, ನಮ್ಮಲ್ಲಿರುವ ಮೇಲ್ಮನೆ ಹಾಗು ಕೆಳಮನೆಗಳಂತೆ ಸೆನೆಟ್(Senate) ಹಾಗು ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಗಳು(House of Representatives – 'ಹೌಸ್' ಎಂದು ಚಿಕ್ಕದಾಗಿ ಕರೆಯುತ್ತಾರೆ) ಕಾಂಗ್ರೆಸ್ನ ಬಾಗಗಳು. ಪ್ರತಿ ರಾಜ್ಯದ ಮಂದಿಯೆಣಿಕೆಯ ಆದಾರದ ಮೇಲೆ ಹಲವು ವಲಯಗಳನ್ನಾಗಿ ಮಾಡಲಾಗಿರುತ್ತದೆ. ಹೀಗಿರುವ ಪ್ರತಿಯೊಂದು ವಲಯದಿಂದ ಹುರಿಯಾಳುಗಳು ಹೌಸ್ ಗೆ ಆಯ್ಕೆಯಾಗಿ ಬಂದಿರುತ್ತಾರೆ. ಈಗ ಅಮೇರಿಕಾದ ಸಂಸತ್ತಿನಲ್ಲಿ ಒಟ್ಟು 435 ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಇದ್ದಾರೆ. ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಅವರ ಅದಿಕಾರದ ಕಾಲಮಿತಿ ಎರೆಡು ವರುಷಗಳಾಗಿರುತ್ತದೆ.
*ಇನ್ನು ಪ್ರತಿಯೊಂದು ರಾಜ್ಯದಿಂದ ಇಬ್ಬರು ಸೆನೆಟರ್ ಗಳು ಆಯ್ಕೆಯಾಗಿ ಬರುತ್ತಾರೆ. ಇದಕ್ಕೆ ಯಾವುದೇ ಮತದಾರರ ಲೆಕ್ಕಚಾರವಿರುವುದಿಲ್ಲ, ಹಾಗಾಗಿ ಒಟ್ಟು 100 ಸೆನೆಟರ್ ಗಳು ಆಯ್ಕೆಯಾಗಿ ಇರುತ್ತಾರೆ. ಸೆನೆಟರ್ ಗಳ ಅದಿಕಾರದ ಕಾಲಮಿತಿ ಆರು ವರುಷಗಳಾಗಿರುತ್ತದೆ. ಪ್ರತಿ ಎರೆಡು ವರುಷಗಳಿಗೊಮ್ಮೆ 1/3 ರಶ್ಟು ಸೆನೆಟರ್ ಗಳ (ಒಟ್ಟು 100 ಮಂದಿ ಸೆನೆಟರ್ ಗಳಲ್ಲಿ ಸುಮಾರು 33 ಮಂದಿ) ಅದಿಕಾರದ ಕಾಲಮಿತಿ ಮುಗಿಯುತ್ತದೆ. ಹಾಗಾಗಿ ಪ್ರತಿ ಎರೆಡು ವರುಷಕ್ಕೆ 1/3 ರಷ್ಟು ಸೆನೆಟ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಸೆನೆಟ್ ಹಾಗು ಹೌಸ್'ಗೆ ಅದರದ್ದೇ ಆದ ವಿಶಿಷ್ಟ ಅದಿಕಾರಗಳಿವೆ.
*ಇನ್ನು ಚುನಾವಣೆಯ ವಿಷಯಕ್ಕೆ ಬರೋಣ, ಅಮೇರಿಕಾದ ಅಧ್ಯಕ್ಷರ ಅದಿಕಾರದ ಕಾಲಮಿತಿ ನಾಲ್ಕು ವರ್ಷಗಳು, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಧ್ಯಕ್ಷೀಯ ಚುನಾವಣೆಯು ನಡೆದು ಅಧ್ಯಕ್ಷರ ಆಯ್ಕೆ ಆಗುತ್ತದೆ. ಈ ನಾಲ್ಕು ವರುಷಗಳ ನಡು ಬಾಗದಲ್ಲಿ ಅಂದರೆ ಎರೆಡು ವರುಷಕ್ಕೆ ಒಂದು ಚುನಾವಣೆ ಆಗುತ್ತದೆ ಅದನ್ನು ನಡುಗಾಲದ ಚುನಾವಣೆ ಎನ್ನಲಾಗುತ್ತದೆ. ಈ ನಡುಗಾಲದ ಚುನಾವಣೆಯಲ್ಲಿ ಅದ್ಯಕ್ಶರ ಚುನಾವಣೆ ಆಗುವುದಿಲ್ಲ.
*ನಡುಗಾಲದ ಚುನಾವಣೆಯೇ ಇರಲಿ ಇಲ್ಲವೇ ನಾಲ್ಕು ವರ್ಷದ ಅದ್ಯಕ್ಶರ ಚುನಾವಣೆಯೇ ಇರಲಿ, ಪ್ರತಿ ಎರೆಡು ವರ್ಷದ ಈ ಚುನಾವಣೆಯಲ್ಲಿ ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ನ ಎಲ್ಲಾ 435 ಸ್ತಾನಗಳಿಗೆ ಮತ್ತು 1/3 ರಷ್ಟು ಸೆನೆಟ್ ಸ್ತಾನಗಳಿಗೆ ಚುನಾವಣೆ ನಡೆಯುತ್ತದೆ. ಇದಲ್ಲದೇ, ಕೆಲವು ಸಂಸತ್ತಿನ ಹುದ್ದೆಗಳು ಮತ್ತು ಗವರ್ನರ್ ಹುದ್ದೆಗಳಿಗೆ ಇದೇ ಹೊತ್ತಿನಲ್ಲಿ ಚುನಾವಣೆ ನಡೆಯುತ್ತದೆ.<ref>Section 7 of Article 1 of the Constitution of USA</ref>
<ref>Section 2 of Article 1 of the Constitution of USA</ref><ref>Article 1, Section 2, and in the 12th Amendment of the Constitution of USA</ref><ref>[[:en:Iowa Democratic caucuses, 2016|Iowa Democratic caucuses, 2016]]</ref>
==[[ಅಮೇರಿಕಾ ಸಂಯುಕ್ತ ಸಂಸ್ಥಾನ]]ದ ಅಧ್ಯಕ್ಷ ಉಪಾಧ್ಯಕ್ಷರನ್ನು ಚುನಾಯಿಸುವ ವಿಧಾನ==
[[File:ElectoralCollege2016.svg|460px|right|thumb| ಜನಗಣತಿ ಬ್ಯೂರೋ ಮೂಲಕ ಬಿಡುಗಡೆಮಾಡಿದ (ದಶಮಾಂಶ ಬಳಸಿಕೊಂಡ) 2012, 2016 ಮತ್ತು 2020 ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗೆ ಉಪಯೋಗಿಸುವ ಚುನಾವಣಾ ಕಾಲೇಜ್ ನಕ್ಷೆ.]]
*ಸಂಯುಕ್ತ ಸಂಸ್ಥಾನದ “'''ಚುನಾಯಿಕರ ಕೂಟ'''” (ಎಲೆಕ್ಟೋರಲ್ ಕಾಲೇಜು: [[:en:Electoral College|Electoral College) ಪ್ರತಿ ಅಮೇರಿಕಾ ಸಂಯುಕ್ತ ಸಂಸ್ಥಾನದ (ಯುನೈಟೆಡ್ ಸ್ಟೇಟ್ಸ್) ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನಾಲ್ಕು ವರ್ಷಗಳ ಅವಧಿಗೆ ಆಯ್ಕೆ ಮಾಡುವ ಒಂದು ಸಂಸ್ಥೆಯಾಗಿದೆ. [[ಅಮೇರಿಕಾ ಸಂಯುಕ್ತ ಸಂಸ್ಥಾನ]]ದ ನಾಗರಿಕರು ನೇರವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ; ಬದಲಿಗೆ, ಮತದಾರರು ನೇರವಾಗಿ ಯಾವಾಗಲೂ ನಿರ್ದಿಷ್ಟ ಅಧ್ಯಕ್ಷೀಯ ಹಾಗು ಉಪಾಧ್ಯಕ್ಷೀಯ ಅಭ್ಯರ್ಥಿಗಳಿಗಾಗಿ ಮತ ವಾಗ್ದಾನ ಮಾಡಿದ ( ಈ ಮತದಾರರ ಪ್ರತಿನಿಧಿಗಳು ಒಂದು ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಲು ವಾಗ್ದಾನ ಮಾಡಿರುತ್ತಾರೆ: ವಾಗ್ದಾನ ವಿಲ್ಲದ /ಮೀರುವ ಚುನಾಯಕರು ಇರಲು ಸಾಧ್ಯ; ಆದರೂ),"ಮತದಾರರ ಪ್ರತಿನಿಧಿಗಳು" ಎಂದರೆ “ಚುನಾಯಕರ” {[[:en:electors|electors,)ನ್ನು ಆರಿಸುವರು.(ಇವರು ಗೊತ್ತುಪಡಿಸಿದ ಮಧ್ಯವರ್ತಿಗಳು) ಅವರನ್ನು ಪ್ರತಿ ರಾಜ್ಯದ ನಿರ್ದಿಷ್ಟ ಕಾನೂನಿನ ಪ್ರಕಾರ ಆಯ್ಕೆ ಮಾಡುತ್ತಾರೆ. ಆ “ಚುನಾಯಕರನ್ನು” 50 ರಾಜ್ಯಗಳು ಮತ್ತು ಕೊಲಂಬಿಯಾ ಜಿಲ್ಲೆ - ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ (ವಾಷಿಂಗ್ಟನ್ ಡಿ.ಸಿ. ಎಂದು ಕರೆಯಲಾಗುತ್ತದೆ)ಗಳಿಂದ ಆರಿಸುವರು. ಪ್ರತಿ ರಾಜ್ಯದಲ್ಲಿ ‘ಚುನಾಯಕ’ರ ಸಂಖ್ಯೆ ಆ ರಾಜ್ಯದಿಂದ ಅಮೇರಿಕಾ ಸಂಸತ್ತಿನ “ಪ್ರತಿನಿಧಿ ಸಭೆ”ಗೆ ಮತ್ತು ಸೆನೆಟಿಗೆ ಆಯ್ಕೆಯಾಗುವ ಪ್ರನಿಧಿಗಳ ಸಂಖ್ಯೆಯಷ್ಟೆ ಇರುತ್ತದೆ.(is equal to the number of members of Congress). ಇಪ್ಪತ್ತಮೂರನೇ ತಿದ್ದುಪಡಿಯು ಕೊಲಂಬಿಯಾ ಜಿಲ್ಲೆಗೆ, ಕನಿಷ್ಠ ಪ್ರತಿನಿಧಿಗಳನ್ನು ಹೊಂದಿದ ರಾಜ್ಯದ ಸಂಖ್ಯೆಯಷ್ಟೇ ಚುನಾಯಕರನ್ನು ಹೊಂದಲು ಅವಕಾಶನೀಡುತ್ತದೆ. ಈ ಸಂದರ್ಭದಲ್ಲಿ ಕನಿಷ್ಟ ಜನಸಂಖ್ಯೆಯ ರಾಜ್ಯವು ಪ್ರಸ್ತುತ ಮೂರು ಕಾಂಗ್ರೆಸ್ ಸದಸ್ಯರನ್ನು ಹೊಂದಿದೆ. ಅದರಂತೆ ಕೊಲಂಬಿಯಾ ಜಿಲ್ಲೆಯು ಮೂರು ಜನ '''ಚುನಾಯಕ'''ರನ್ನು ಆರಿಸಬಹುದು. ಆದ್ದರಿಂದ, ಇಂದು ಒಟ್ಟು ಚುನಾಯಕರ ಸಂಖ್ಯೆ 538 ಆಗುತ್ತದೆ. ಸಂಸತ್ತಿಹ ಪ್ರತಿನಿಧಿ ಸಭೆಯ 435 ಸದಸ್ಯರು ಮತ್ತು 100 ಜನ ಸೆನೆಟರ್ಸ್ ಜೊತೆಗೆ ಕೊಲಂಬಿಯಾ ಜಿಲ್ಲೆಯಿಂದ ಮೂರು ಹೆಚ್ಚುವರಿ 'ಚುನಾಯಕ'ರು ಇದರಲ್ಲಿ ಸೇರುತ್ತಾರೆ. ಸಂವಿಧಾನಬದ್ಧವಾಗಿ ಆಯ್ಕೆಯಾದವರು ಅಥವಾ ನೇಮಕವಾದ ಅಧಿಕಾರಿ ಚುನಾಯಕನಾಗಿ ಆಯ್ಕೆಯಾಗಲು ಸಂವಿಧಾನ ನಿಷೇಧಿಸುತ್ತದೆ. ಆದ್ದರಿಂದ '''ಗೆಲ್ಲಲು 270 ಚುನಾವಣಾ ಮತಗಳನ್ನು ಪಡೆಯುವ ಅಗತ್ಯವಿದೆ.''' <ref>https://www.law.cornell.edu/uscode/text/3/1</ref>
*ಮೈನೆ ಮತ್ತು ನೆಬ್ರಸ್ಕಾ (Maine and Nebraska) ಪ್ರದೇಶದ ಚುನಾಯಕರನ್ನು ಬಿಟ್ಟು, ಚುನಾಯಕರನ್ನು ಒಂದು "ವಿಜೇತನಿಗೆ-ಎಲ್ಲಾ ಮತ" ಎಂಬ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅದೆಂದರೆ, ರಾಜ್ಯದ ಹೆಚ್ಚು ಮತಗಳನ್ನು ಗಳಿಸಿದ ಅಧ್ಯಕ್ಷೀಯ ಅಭ್ಯರ್ಥಿಗೆ ಆ ರಾಜ್ಯದ ಎಲ್ಲಾ ('ಚುನಾಯಕ'ರ) ಮತಗಳೂ ಬಂದಂತೆ,ಎಂಬ ನಿಯಮ. ಆದರೆ ಮೈನೆ ಮತ್ತು ನೆಬ್ರಸ್ಕಾಗಳಲ್ಲಿ ಪ್ರತಿನಿಧಿ ಸಭೆಯ ಪ್ರಾತಿನಿಧಿಕ ಜಿಲ್ಲಿಗೆ ಒಂದರಂತೆ ("ಕಾಂಗ್ರೆಸ್ ಜಿಲ್ಲಾ ವಿಧಾನ" ಬಳಸಿ) ಚುನಾಯಕರನ್ನು ಆಯ್ಕೆ ಮಾಡುವರು ಮತ್ತು ಸೆನೇಟ್``ನ 2 ಪ್ರತಿನಿಧಿಗಳ ಲೆಕ್ಕಕೆ ಇಡೀ ರಾಜ್ಯಾದ್ಯಂತ ಜನಮತದ ಮೂಲಕ ಎರಡು ಚುನಾಯಕರನ್ನು (ಜನಪ್ರಿಯ ಮತದಾನದ ಮೂಲಕ 2 ಮತದಾರ ಪ್ರತಿನಿಧಿಗಳನ್ನು) ಆಯ್ಕೆ ಮಾಡುವರು. 'ಚುನಾಯಕ'ನು ವಾಗ್ದಾನವನ್ನು (ಇದೇ ಪಕ್ಷದ ಅಭ್ಯರ್ತಿಗೆ ಮತನೀಡಬೇಕೆಂಬ ನಿಯಮ) ಪಾಲಿಸಲು ಯಾವುದೇ ಫೆಡರಲ್ ಕಾನೂನು ಇಲ್ಲ. ಚುನಾಯಕನು ವಾಗ್ದಾನಕ್ಕೆ ವಿರುದ್ಧವಾಗಿ ಕೆಲವೇ ಸಂದರ್ಭಗಳಲ್ಲಿ ಮತ ನೀಡಿದ್ದಾನೆ). ಹನ್ನೆರಡನೆಯ ತಿದ್ದುಪಡಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಹೇಗೆ ಆಯ್ಕೆ ಮಾಡಬೇಕೆಂದು ಹೇಳುತ್ತದೆ. ಅದರಂತೆ 'ಚುನಾಯಕ'ನು, ಅಧ್ಯಕ್ಷನಿಗೆ ಆಯ್ಕೆಗೆ ಒಂದು ಮತ ಮತ್ತು ಉಪಾಧ್ಯಕ್ಷನ ಆಯ್ಕೆಗೆ ಮತ್ತೊಂದು ಮತವನ್ನು ನೀಡಬೇಕಾಗುತ್ತದೆ.<ref>http://www.nbcnews.com/politics/2016-election/viewers-guide-next-year-presidential-politics-n455971</ref>
==ಅರ್ಹತೆ ಮತ್ತು ಸಮುದಾಯ==
*'''ಅಧ್ಯಕ್ಷರಾಗಲು ಅರ್ಹತೆ:'''
* 1.ಅಮೆರಿಕ ದಲ್ಲಿ ಜನಿಸಿದವರು
* ಅಮೆರಿಕ ಪೌರತ್ವ ಹೊಂದಿದ ದಳಪತಿಯ ಮಗ ಅಥವಾ ಮಗಳಾಗಿರಬೇಕು.
* ಪೋಷಕರಲ್ಲಿ ಒಬ್ಬರು ಅಮೇರಿಕಾದ ಪ್ರಜೆಯಾಗಿರಬೇಕು.
* ಪೋಷಕರಲ್ಲಿ ಒಬ್ಬರು ಅಮೇರಿಕಾದ ಪ್ರಜೆಯಾಗಿದ್ದು, ಅಭ್ಯರ್ಥಿ ಆಕಾಂಕ್ಷಿ ವಿದೇಶದಲ್ಲಿ ಜನಿಸಿದ್ದರೂ ಅಡ್ಡಿಯಿಲ್ಲ.
* 2. 35 ವರ್ಷ ವಯಸ್ಸಾಗಿರಬೇಕು.
* 3..ಅಮೇರಿಕದ ಪ್ರಜೆಯಾದರೂ ಕನಿಷ್ಠ 14 ವರ್ಷ ಅಮೇರಿಕದಲ್ಲಿ ವಾಸವಗಿರಬೇಕು.
[[File:ElectoralCollege2016.svg|right|420px|thumb|§ '''ರಾಜ್ಯವಾರು ಮತದಾನದ ನಕ್ಷೆ''' §*ಕೆಂಪು ಬಣ್ಣ ಟ್ರಂಪ್ / ಪೆನ್ಸ್,ಗೂ; ನೀಲಿ ಕ್ಲಿಂಟನ್ / ಕೈನ್ ಗೂ ಯೋಜಿತ ಮತಗಳನ್ನು ಸೂಚಿಸುತ್ತದೆ. ಸಂಖ್ಯೆಗಳು ಪ್ರತಿ ರಾಜ್ಯದ ವಿಜೇತರಿಗೆ ಮಂಜೂರಾದ ಮತದಾರರ ಮತಗಳನ್ನು ಸೂಚಿಸುತ್ತದೆ. ಚುನಾವಣಾ ಕಾಲೇಜ್: ಡಿಸೆಂಬರ್ 19, 2016 ಮತದಾನ.]]
===ಜನಸಂಕ್ಯೆ ಮತ್ತು ಸಮುದಾಯ===
* 1.ಅಮೆರಿಕದ ಜನಸಂಕ್ಯೆ : 32.2 ಕೋಟಿ
* ಬಿಳಿಯರ ಸಂಖ್ಯೆ 24.6 ಕೋಟಿ,
* ಆಫ್ರಿಕನ್ ಅಮೇರಿಕನ್ನರ ಸಂಖ್ಯೆ :4.1 ಕೋಟಿ
* ಮುಸ್ಲಿಮರ ಸಂಖ್ಯೆ : 27.5 ಲಕ್ಷ.
===ಪಾರ್ಟಿ ಲೊಗೊಗಳು===
{| class="wikitable sortable "
|-
!ರಿಪಬ್ಲಿಕನ್ ಪಾರ್ಟಿ ಚಿನ್ಹೆ !! ಡೆಮೊಕ್ರಟಿಕ್ ಪಾರ್ಟಿ ಚಿನ್ಹೆ
|-
|[[File:Republicanlogo.svg|120px|left|thumb|Republicanlogo]]||[[File:Democratic Logo.png|120px|left|thumb]]
|-
|[[File:GOP logo (2004–2015).svg|120px|right|thumb]] || [[File:Democratslogo.svg|120px|right|thumb]]
|-
| ಆನೆ ಮತ್ತು ಜಿ. ಒ. ಪಿ.|| ಕತ್ತೆ ಮತ್ತು ಒದೆಯುವ ಕತ್ತೆ
|-
|}
<ref>{{Cite web |url=http://www.prajavani.net/news/article/2016/11/03/449425.html |title=ಅಮೆರಿಕ ಅಧ್ಯಕ್ಷ ಗಾದಿಯ ಹಾದಿ |access-date=2016-11-03 |archive-date=2016-11-03 |archive-url=https://web.archive.org/web/20161103130301/http://www.prajavani.net/news/article/2016/11/03/449425.html |url-status=dead }}</ref>
==ಹಿಲರಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ==
;ದಿ.28th Jul, 2016:
{|class="wikitable sortable "| align="right"
|-
|[[File:Hillary Clinton by Gage Skidmore 2.jpg|center|200x200px|thumb|[[ಹಿಲರಿ ಕ್ಲಿಂಟನ್]] ]]||[[File:Donald Trump August 19, 2015 3 by 2.jpg|x200px|thumb|ಡೊನಾಲ್ಡ್ ಟ್ರಂಪ್]]
|-
|}
*ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗದ [[ಹಿಲರಿ ಕ್ಲಿಂಟನ್]] ದಿ.07-06-2016 ಮಂಗಳವಾರದ ಪ್ರಾಥಮಿಕ ಚುನಾವಣೆಗಳಲ್ಲಿ ಅವರು ನ್ಯೂಜೆರ್ಸಿ, ನ್ಯೂ ಮೆಕ್ಸಿಕೊ ಮತ್ತು ಸೌತ್ ಡಕೋಟಾ ರಾಜ್ಯಗಳಲ್ಲಿ ಗೆಲುವು ಕಾಣುವ ಮೂಲಕ '''ಡೆಮಾಕ್ರಟಿಕ್ನ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡು''' ಇತಿಹಾಸ ಸೃಷ್ಟಿಸಿದ್ದಾರೆ.
*ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಸ್ಥಾನಕ್ಕೆ ನಾಮನಿರ್ದೇಶನಗೊಳ್ಳಲು ಅಗತ್ಯವಾಗಿದ್ದ '''2,383''' ಪ್ರತಿನಿಧಿಗಳ ಬೆಂಬಲವನ್ನು ಹಿಲರಿ ಪಡೆದಿರುವರು.
*ಹಿಲರಿ ಪ್ರತಿಸ್ಪರ್ಧಿ ಬೆರ್ನಿ ಸ್ಯಾಂಡರ್ಸ್ ತಮ್ಮ ಸೋಲು ಒಪ್ಪಿಕೊಂಡಿಲ್ಲ. ಹಿಲರಿ ಅವರು 2,755 ಪ್ರತಿನಿಧಿಗಳ ಬೆಂಬಲ ಹೊಂದಿದ್ದರೆ, ಸ್ಯಾಂಡರ್ಸ್ ಅವರಿಗೆ 1,852 ಪ್ರತಿನಿಧಿಗಳ ಬೆಂಬಲವಿದೆ.<ref>9-6-2015-ಪ್ರಜಾವಾಣಿ[[:w:prajavani.net/article/ಅಮೆರಿಕ-ಇತಿಹಾಸ-ಸೃಷ್ಟಿಸಿದ-ಹಿಲರಿ]]</ref>
*ಇದರಿಂದ ನವೆಂಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಮತ್ತು ರಿಪಬ್ಲಿಕನ್ ಪಕ್ಷದ ವಿವಾದಿತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ ನಡೆಯುವುದು ನಿಚ್ಚಳವಾಗಿದೆ.
===ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ಆಯ್ಕೆ===
*ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ಆಯ್ಕೆಯಾಗಿದ್ದಾರೆ. ಅವರಿಗೆ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿರುವ 4,764 ಪ್ರತಿನಿಧಿಗಳು ಅಧಿಕೃತವಾಗಿ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಹಿಲರಿ ಅವರು, ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆಯಾದ ಪ್ರಥಮ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.
*ನವೆಂಬರ್ 8ರಂದು ನಡೆಯಲಿರುವ ಚುನಾವಣೆಯಲ್ಲಿ ಹಿಲರಿ ಒಂದು ವೇಳೆ ಗೆಲುವು ಸಾಧಿಸಿದಲ್ಲಿ '''ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ''' ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
<ref>{{Cite web |url=http://www.prajavani.net/categories/%E0%B2%B5%E0%B2%BF%E0%B2%A6%E0%B3%87%E0%B2%B6 |title=ಹಿಲರಿ ಮೊದಲ ಮಹಿಳಾ ಅಭ್ಯರ್ಥಿ:28th Jul, 2016 |access-date=2016-07-28 |archive-date=2016-11-12 |archive-url=https://web.archive.org/web/20161112020140/http://www.prajavani.net/categories/%E0%B2%B5%E0%B2%BF%E0%B2%A6%E0%B3%87%E0%B2%B6 |url-status=dead }}</ref>
==ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿ==
*21/07/2016:
*ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಬುಧವಾರ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಈ ಬಗ್ಗೆ ಔಪಚಾರಿಕ ಘೋಷಣೆ ಮಾಡಲಾಯಿತು. ಅಧ್ಯಕ್ಷರ ಚುನಾವಣೆ ನವೆಂಬರ್ 8 ರಂದು ನಡೆಯಲಿದೆ. ಆಗ ಅವರು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರನ್ನು ಎದುರಿಸಲಿದ್ದಾರೆ.
*70 ವರ್ಷದ ಟ್ರಂಪ್ ಮೂಲತಃ ಉದ್ಯಮಿ. ಒಂದು ವರ್ಷದ ಹಿಂದೆ ಅವರು ರಾಜಕೀಯ ಪ್ರವೇಶಿಸಿದ್ದರು. ಅನುಭವಿ ರಾಜಕಾರಣಿಗಳಾದ ಜಾನ್ ಕಸಿಚ್ ಮತ್ತು ಜೆಬ್ ಬುಷ್ ಸೇರಿದಂತೆ 16 ಪ್ರಮುಖ ಸ್ಪರ್ಧಿಗಳನ್ನು ಪಕ್ಷದೊಳಗೆ ಎದುರಿಸಿದ್ದರು. ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಲು ಅಗತ್ಯವಿದ್ದ 1,237 ಪ್ರತಿನಿಧಿಗಳ ಮತಗಳನ್ನು ಪಡೆಯುವ ಮೂಲಕ ತಮ್ಮ ಹಾದಿಯನ್ನು ಸುಗಮಗೊಳಿಸಿಕೊಂಡರು.
==ಲಿಬರ್ಟೇರಿಯನ್ ಮತ್ತು ಗ್ರೀನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳು==
{|class="wikitable sortable "| align="right"
|-
|[[File:Gary Johnson June 2016.jpg|150px|thumb| ಗ್ಯಾರಿ ಜಾನ್ಸನ್ (June 2016)]]||[[File:Jill Stein by Gage Skidmore.jpg|150px|thumb| ಜಿಲ್ ಸ್ಟೀನ್]]
|-
|}
*ಹಿಲರಿ ಕ್ಲಿಂಟನ್ ಮತ್ತು ಟ್ರಂಪ್ ಅಲ್ಲದೆ ಲಿಬರ್ಟೇರಿಯನ್ ಪಕ್ಷ ಮತ್ತು ಗ್ರೀನ್ ಪೀಸ್ ಪಕ್ಷಗಳಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಿನಿಯಾಗಿ ನ್ಯೂ ಮೆಕ್ಸಿಕೋದ ಗ್ಯಾರಿ ಜಾನ್ಸನ್ ಮತ್ತು ಮ್ಯಾಸಚೂಸೆಟ್ಸ್ ಜಿಲ್ ಸ್ಟೀನ್(ಸಂಭಾವ್ಯ)ಅವರೂ ಸ್ಪರ್ಧಿಸಿದ್ದಾರೆ.
{|class="wikitable sortable "
|-
|ಅಧ್ಯಕ್ಷ ನಾಮಿನಿ= '''ಗ್ಯಾರಿ ಜಾನ್ಸನ್''' ||'''ಜಿಲ್ ಸ್ಟೀನ್'''(ಸಂಭಾವ್ಯ)
|-
|ಪಕ್ಷ = '''ಲಿಬರ್ಟೇರಿಯನ್''' ||ಪಕ್ಷ ='''ಗ್ರೀನ್ ಪೀಸ್'''
|-
|ಗೃಹ ರಾಜ್ಯ= '''ನ್ಯೂ ಮೆಕ್ಸಿಕೋ''' ||ಗೃಹ ರಾಜ್ಯ='''ಮ್ಯಾಸಚೂಸೆಟ್ಸ್'''
|-
|}
==ಅಭ್ಯರ್ಥಿಗಳ ಪ್ರಚಾರ==
{{Quote_box| width=22em|align=|right|quote=
<center>'''ಗೆಲುವನ್ನು ಎಲೆಕ್ಟೋರಲ್ ಕಾಲೇಜ್ (ಚುನಾಯಿಕರ ಕೂಟ) ಮತಗಳು ನಿರ್ಣಯಿಸುತ್ತವೆ'''</center>.
*ಯಾವುದೇ ರಾಜ್ಯದ ಎಲೆಕ್ಟೋರಲ್ ಮತಗಳ ಸಂಖ್ಯೆ, ಆ ರಾಜ್ಯದಿಂದ ಅಮೆರಿಕದ ಕಾಂಗ್ರೆಸ್ಸಿನ ಮೇಲ್ಮನೆ ಮತ್ತು ಕೆಳಮನೆಗಳಿಗೆ ಆಯ್ಕೆಯಾದ ಸದಸ್ಯರ ಒಟ್ಟು ಸಂಖ್ಯೆಗೆ ಸಮನಾಗಿರುತ್ತದೆ. ಈ ಸಂಖ್ಯೆ ರಾಜ್ಯದ ಜನಸಂಖ್ಯೆಯ ಮೇಲೆ ನಿರ್ಧರಿತವಾಗಿರುತ್ತದೆ. ಒಟ್ಟಾರೆಯಾಗಿ ಅಮೆರಿಕ ಕಾಂಗ್ರೆಸ್ಸಿನ ಸದಸ್ಯರ ಸಂಖ್ಯೆ 538 ಇದೆ. ಅದರಲ್ಲಿ 100 ಮೇಲ್ಮನೆ ಪ್ರತಿನಿಧಿಗಳು, 435 ಕೆಳಮನೆ ಸದಸ್ಯರು ಮತ್ತು ಕೊಲಂಬಿಯಾದ 3 ಹೆಚ್ಚುವರಿ ಚುನಾಯಿಕರು.
*ಈ 538 ಮತಗಳು ಅಧ್ಯಕ್ಷ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತವೆ. ಹಾಗಂತ ಪ್ರತಿ ಸದಸ್ಯನೂ ತನ್ನ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮುಕ್ತ ಸ್ವಾತಂತ್ರ್ಯ ಹೊಂದಿರುವುದಿಲ್ಲ. ಅದು ಆಯಾ ರಾಜ್ಯದ ಜನಪ್ರಿಯ ಮತಗಳ ಮೇಲೆ ಅವಲಂಬಿತವಾಗಿರುತ್ತದೆ. (?ಉದಾ: ಒಂದು ರಾಜ್ಯದಲ್ಲಿ ಚಲಾವಣೆಯಾದ ಜನ ಮತಗಳಲ್ಲಿ ಶೇಕಡ 51ರಷ್ಟು ಪಡೆದ ಅಭ್ಯರ್ಥಿ, ಆ ರಾಜ್ಯದ ಅಷ್ಟೂ ಎಲೆಕ್ಟೋರಲ್ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾನೆ.?)
*ಹಾಗಾಗಿ ಯಾವುದೇ ರಾಜ್ಯದಲ್ಲಿ ಶೇ 51ರಷ್ಟು ಮತಗಳ ಮೇಲೆ ಕಣ್ಣಿಟ್ಟಿದ್ದರೆ ಸಾಕು. ಹೆಚ್ಚಿನ ಮತಗಳಿಕೆಗೆ ತ್ರಾಸಪಡಬೇಕಿಲ್ಲ. ಹೆಚ್ಚಿನ ಮತ ಬುಟ್ಟಿಗೆ ಬಿದ್ದರೂ ಉಪಯೋಗವಿಲ್ಲ.
*ಮುಖ್ಯವಾಗಿ ಅಮೆರಿಕದ ಆರು ರಾಜ್ಯಗಳು ಜನಸಂಖ್ಯೆಯ ಆಧಾರದಲ್ಲಿ ಹೆಚ್ಚು ಜನಪ್ರತಿನಿಧಿಗಳನ್ನು ಹೊಂದಿವೆ. ಅಮೆರಿಕದ ಒಟ್ಟು ಜನಸಂಖ್ಯೆಯ ಶೇಕಡ 12ರಷ್ಟು ಜನ ಕ್ಯಾಲಿಪೋರ್ನಿಯಾ ಒಂದರಲ್ಲೇ ಇದ್ದಾರೆ. ಹಾಗಾಗಿ ಆ ರಾಜ್ಯದಿಂದ 55 ಪ್ರತಿನಿಧಿಗಳು ಕಾಂಗ್ರೆಸ್ಸಿಗೆ ಆರಿಸಿ ಬರುತ್ತಾರೆ. ಅಂತೆಯೇ ಟೆಕ್ಸಾಸ್ 38, ನ್ಯೂಯಾರ್ಕ್ 29, ಫ್ಲಾರಿಡಾ 29, ಇಲಿನಾಯ್ಸ್ 20, ಪೆನ್ಸಿಲ್ವೇನಿಯಾ 20 ಪ್ರತಿನಿಧಿಗಳನ್ನು ಕಾಂಗ್ರೆಸ್ಸಿಗೆ ಕಳುಹಿಸುತ್ತವೆ.
*ಹೀಗೆ ವಿವಿಧ ರಾಜ್ಯಗಳಲ್ಲಿ ಒಟ್ಟುಗೂಡಿದ 538 ಎಲೆಕ್ಟೋರಲ್ ಮತಗಳ ಪೈಕಿ 270 ಮತಗಳಿಸಿದ ಅಭ್ಯರ್ಥಿ, ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ.<ref>{{Cite web |url=http://www.prajavani.net/news/article/2016/10/14/444718.html |title=ಇದು ಆರು ರಾಜ್ಯಗಳು ಬರೆಯುವ ಹಣೆಬರಹ;ಸುಧೀಂದ್ರ ಬುಧ್ಯ; |access-date=2016-10-14 |archive-date=2016-10-18 |archive-url=https://web.archive.org/web/20161018064119/http://www.prajavani.net/news/article/2016/10/14/444718.html |url-status=dead }}</ref>
*'''ಹಿಲರಿ ಕ್ಲಿಂಟನ್:'''
::'''ಮುಖ್ಯಾಂಶಗಳು'''
*ಎಲ್ಲರಿಗೂ ಉದ್ಯೋಗ
* ಸಮಗ್ರ ವಲಸೆ ನೀತಿ
* ವಲಸೆ ಕಾರ್ಮಿಕರಿಗೆ ಪೌರತ್ವ
*ಫಿಲಡೆಲ್ಫಿಯಾದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದಿಂದ ನಾಮನಿರ್ದೇಶನವನ್ನು ಅಧಿಕೃತವಾಗಿ ಸ್ವೀಕರಿಸಿದ ನಂತರ ಹಿಲರಿ ಕ್ಲಿಂಟನ್ ಅವರು ಮಾಡಿದ ಭಾಷಣದಲ್ಲಿ ಹಲವು ಸುಧಾರಣಾ ನೀತಿಗಳನ್ನು ಪ್ರಸ್ತಾಪಿಸಿದರು. ತಮ್ಮ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರ ಒಡೆದು ಆಳುವ ನೀತಿಗಳ ವಿರುದ್ಧ ಅಮೆರಿಕನ್ನರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹಿಲರಿ ಕರೆ ನೀಡಿದರು.
*ಎಲ್ಲ ಅಮೆರಿಕನ್ನರಿಗೂ ಉದ್ಯೋಗ ದೊರಕಿಸುವುದು ಹಾಗೂ ದೇಶದ ಆರ್ಥಿಕತೆಗೆ ನೆರವಾಗಿರುವ ದಾಖಲೆ ಯಿಲ್ಲದ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಪೌರತ್ವ ಪಡೆಯುವ ಅವಕಾಶ ಕಲ್ಪಿಸುವ ಭರವಸೆಯನ್ನು ಅವರು ನೀಡಿದರು.
*ಟ್ರಂಪ್ ಅವರು ರಿಪಬ್ಲಿಕನ್ ಪಕ್ಷವನ್ನು ಅಮೆರಿಕದಿಂದ ಬಹುದೂರ ಕೊಂಡೊಯ್ದಿದ್ದಾರೆ. ಅವರ ಅನಿಯಮಿತ ಭರವಸೆಗಳು ಅಪಾಯ ಒಡ್ಡುವ ಸಾಧ್ಯತೆಗಳೇ ಹೆಚ್ಚು. ಭವಿಷ್ಯವನ್ನು ಭಯದಿಂದ ನೋಡುವುದು, ಪರ ಸ್ಪರರು ಭಯದಿಂದ ಬದುಕುವುದನ್ನು ಅವರು ಬಯಸುತ್ತಿದ್ದಾರೆ’ ಎಂದು ಹಿಲರಿ ಟ್ರಂಪ್ರನ್ನು ಟೀಕೆ ಮಾಡಿದರು.
*ಸಮಗ್ರ ವಲಸೆ ನೀತಿ: ‘ಯಾವುದೇ ಧರ್ಮವನ್ನು ನಾವು ನಿಷೇಧಿಸುವುದಿಲ್ಲ. ಎಲ್ಲ ಅಮೆರಿಕನ್ನರ ಜತೆಯಾಗಿ ಕೆಲಸ ಮಾಡುತ್ತೇವೆ. ಭಯೋತ್ಪಾದನೆ ವಿರುದ್ಧ ಮಾತ್ರವೇ ನಮ್ಮ ಹೋರಾಟ’ ಎಂದು ಹಿಲರಿ ಸ್ಪಷ್ಟಪಡಿಸಿದ್ದಾರೆ.
*ದೇಶದ ವಲಸಿಗರನ್ನು ಹೊರದಬ್ಬು ವುದು ಮಾನವೀಯತೆ ಅಲ್ಲ. ಸಮಗ್ರ ವಲಸೆ ಸುಧಾರಣೆ ಜಾರಿಗೊಳಿಸುವ ಮೂಲಕ ಆರ್ಥಿಕತೆ ಬಲಪಡಿಸುವುದು ಮತ್ತು ಅವರ ಕುಟುಂಬ ಜತೆಯಾಗಿರುವಂತೆ ನೋಡಿಕೊಳ್ಳುವ ಭರವಸೆಯನ್ನೂ ಹಿಲರಿ ನೀಡಿದರು.
*ಟ್ರಂಪ್ ಅಮೆರಿಕನ್ ಅಲ್ಲ ಎಂದು ಅವರನ್ನು ಖಂಡಿಸಿದರು. ‘ಟ್ರಂಪ್ ಅಮೆರಿಕಕ್ಕೆ ಅರ್ಹ ವ್ಯಕ್ತಿ ಅಲ್ಲ. ಅವರ ಟೈಗಳು ಚೀನಾದಲ್ಲಿ, ಸೂಟ್ಗಳು ಮಿಚಿಗನ್ ಬದಲಾಗಿ ಮೆಕ್ಸಿಕೋದಲ್ಲಿ ಹಾಗೂ ಅವರ ಫೋಟೊ ಫ್ರೇಮ್ಗಳು ಭಾರತ ತಯಾರಾಗುತ್ತವೆ. ಅಮೆರಿಕಕ್ಕೆ ಆದ್ಯತೆ ನೀಡಬೇಕು ಎಂಬುದು ಅವರ ಮನಸ್ಸಿನಲ್ಲಿಯೇ ಇಲ್ಲ’ ಎಂದು ಹಿಲರಿ ಟೀಕಿಸಿದರು.
*ಅಮೆರಿಕದಲ್ಲಿ ಯಾವುದೇ ಧರ್ಮವನ್ನು ನಿಷೇಧಿಸಲು ಅನುಮತಿ ನೀಡಬಾರದು. ಜನರ ಮಧ್ಯೆ ಗೋಡೆಗಳನ್ನು ನಿರ್ಮಿಸುವಂಥಾ ರಾಜಕಾರಣ ಒಪ್ಪುವಂಥದ್ದಲ್ಲ.ಎಲ್ಲ ಜನರಿಗೂ ನೀತಿ ಲಭಿಸುವಂತೆ ಮಾಡಲು ನಾನು ಯತ್ನಿಸುತ್ತೇನೆ. ಪುರುಷ ಮತ್ತು ಮಹಿಳೆಯರನ್ನು ಒಂದೇ ರೀತಿ ಗೌರವಿಸಲು ನಾವು ಕಲಿಯಬೇಕಿದೆ ಎಂದಿದ್ದಾರೆ.
*ಅಮೆರಿಕದ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದ ಭಾರತ ಮೂಲದ ಶ್ರುತಿ ಪಳನಿಯಪ್ಪನ್ (18) ಅವರು ಅತಿ ಕಿರಿಯ ವಯಸ್ಸಿನ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
====ಡೊನಾಲ್ಡ್ ಟ್ರಂಪ್:====
*ಹಿಲರಿ ಕ್ಲಿಂಟನ್ ಅವರ ನಾಮನಿರ್ದೇಶನ ಸ್ವೀಕಾರ ಸಮಾರಂಭದ ಭಾಷಣವನ್ನು ರಿಪಬ್ಲಿಕನ್ ಪಕ್ಷದ ನಾಮನಿರ್ದೇಶಿತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.
*ಹಿಲರಿ ದೂರದೃಷ್ಟಿಯನ್ನು ಟೀಕಿಸಿದ ಟ್ರಂಪ್, ಅವರು ಉದ್ಯೋಗ ಹಾಗೂ ಸುರಕ್ಷತೆಯಿಲ್ಲದ, ‘ಗಡಿಗಳಿಲ್ಲದ ಜಗತ್ತನ್ನು’ ಕಲ್ಪಿಸಿಕೊಂಡಿದ್ದಾರೆ ಎಂದಿ ದ್ದಾರೆ. ಇಸ್ಲಾಂ ಮೂಲಭೂತವಾದದ ಬಗ್ಗೆ ಹಿಲರಿ ಅವರು ಎಲ್ಲಿಯೂ ಪ್ರಸ್ತಾಪಿ ಸಿಲ್ಲ ಎಂದೂ ಟ್ರಂಪ್ ಹೇಳಿದ್ದಾರೆ.
*‘ನಮ್ಮ ಜೀವನವು ಇಸ್ಲಾಂ ಮೂಲಭೂತವಾದದ ಭೀತಿಯಲ್ಲಿ ನಡೆಯುತ್ತಿದೆ. ಈ ಮಧ್ಯೆ ನಿರಾಶ್ರಿತರ ಪ್ರಮಾಣವನ್ನು ಶೇ 550ರಷ್ಟು ಹೆಚ್ಚಿಸುವ ಆಲೋಚನೆ ಹೊಂದಿರುವುದು ದೇಶವನ್ನು ಅಪಾಯಕ್ಕೆ ತಳ್ಳುತ್ತದೆ. ಹಿಲರಿ ನಿಜಕ್ಕೂ ದೇಶವನ್ನು ಮುನ್ನಡೆಸಲು ಅರ್ಹ ವ್ಯಕ್ತಿ ಅಲ್ಲ’ ಎಂದು ಟ್ರಂಪ್ ಟ್ವಿಟರ್ನಲ್ಲಿ ಹೇಳಿದ್ದಾರೆ.
*‘ಹಿಲರಿಯಿಂದ ವಾಲ್ಸ್ಟ್ರೀಟ್ ಸುಧಾರಣೆ ಸಾಧ್ಯವಿಲ್ಲ. ಹಿಲರಿಗಿಂತ ಕೆಟ್ಟ ತೀರ್ಪು ಕೈಗೊಳ್ಳುವವರು ಮತ್ಯಾರೂ ಇರಲಿಕ್ಕಿಲ್ಲ. ಅವರು ಎಲ್ಲಿಯೇ ಹೋದರೂ ಭ್ರಷ್ಟಾಚಾರ ಹಾಗೂ ವಿನಾಶಗಳು ಅವರನ್ನು ಹಿಂಬಾಲಿ ಸುತ್ತವೆ’ ಎಂದು ಟ್ರಂಪ್ ನುಡಿದಿದ್ದಾರೆ.<ref>{{Cite web |url=http://www.prajavani.net/categories/%E0%B2%B5%E0%B2%BF%E0%B2%A6%E0%B3%87%E0%B2%B6 |title=ಸಮಗ್ರ ಸುಧಾರಣಾ ನೀತಿಗೆ ಒತ್ತು: ಹಿಲರಿ30th Jul, 2016 |access-date=2016-07-28 |archive-date=2016-11-12 |archive-url=https://web.archive.org/web/20161112020140/http://www.prajavani.net/categories/%E0%B2%B5%E0%B2%BF%E0%B2%A6%E0%B3%87%E0%B2%B6 |url-status=dead }}</ref>
==ಹಿಲರಿ ಕ್ಲಿಂಟನ್ ಗೆ ಮುನ್ನಡೆ==
*2 Sep, 2016:ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರಿಗಿಂತ ಶೇಕಡ 2ರಷ್ಟು ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಸಮೀಕ್ಷೆಯೊಂದು ಹೇಳಿದೆ.
*ಈ ಕುರಿತು ‘ಫಾಕ್ಸ್ ನ್ಯೂಸ್’ ಸುದ್ದಿಸಂಸ್ಥೆ ರಾಷ್ಟ್ರೀಯ ಮತದಾನದ ವಿವರಗಳನ್ನು ಪ್ರಕಟಿಸಿದೆ. ಕ್ಲಿಂಟನ್ ಅವರು ಶೇಕಡ 41ರಷ್ಟು ಹಾಗೂ ಟ್ರಂಪ್ ಶೇಕಡ 39ರಷ್ಟು ಮತ ಪಡೆದಿದ್ದಾರೆ ಎಂದು ತಿಳಿಸಿದೆ.
*ಲಿಬರೇಷನ್ ಪಕ್ಷದ ಗೆರಿ ಜಾನ್ಸನ್ ಅವರು ಶೇಕಡ 9ರಷ್ಟು ಮತಗಳನ್ನು ಪಡೆದಿದ್ದು, ಗ್ರೀನ್ ಪಕ್ಷದ ಅಭ್ಯರ್ಥಿ ಜಿಲ್ ಸ್ಟೈನ್ ಅವರು ಶೇಕಡ 4ರಷ್ಟು ಮತ ಪಡೆದಿದ್ದಾರೆ. ಶ್ವೇತಭವನದ ಹಾದಿ ತುಂಬ ಕಠಿಣವಾಗಿದ್ದು, ಹಿಲರಿ ಹಾಗೂ ಕ್ಲಿಂಟನ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ವಿವಾದಗಳ ನಡುವೆಯೂ ಟ್ರಂಪ್ ಅವರು, ಮತಗಳನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದ್ದು, ಹಿಲರಿ ಅವರಿಗಿಂತ ಸ್ವಲ್ಪ ಹಿಂದೆ ಇದ್ದಾರೆ.
*ಹಿಲರಿ ಟೀಕೆ: ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ವಿದೇಶಾಂಗ ನೀತಿಯ ಮೊದಲ ಪರೀಕ್ಷೆಯಲ್ಲಿಯೇ ವಿಫಲರಾಗಿದ್ದಾರೆ ಎಂದು ಹಿಲರಿ ಕ್ಲಿಂಟನ್ ವ್ಯಂಗವಾಡಿದ್ದಾರೆ. ಮೆಕ್ಸಿಕೊ ಅಧ್ಯಕ್ಷರನ್ನು ಭೇಟಿ ಮಾಡಿ ಬಂದಿರುವ ಟ್ರಂಪ್ ಅವರ ಮೊದಲ ವಿದೇಶ ಪ್ರವಾಸ ಫಲಪ್ರದವಾಗಿಲ್ಲ ಎಂದಿರುವ ಹಿಲರಿ, ವಿದೇಶಾಂಗ ವ್ಯವಹಾರಗಳನ್ನು ನಿಭಾಯಿಸುವುದು ಸುಲಭವಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಒಬಾಮ ಸರ್ಕಾರದ ಮೊದಲ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಹಿಲರಿಗೆ ಹೋಲಿಸಿದರೆ, ಟ್ರಂಪ್ಗೆ ಯಾವುದೇ ಅನುಭವ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮೆಕ್ಸಿಕೊ ಮತ್ತು ಅಮೆರಿಕದ ಗಡಿಯುದ್ದಕ್ಕೂ ತಡೆಗೋಡೆ ನಿರ್ಮಿಸಲಾಗುವುದು ಎಂದು ಟ್ರಂಪ್ ನೀಡಿರುವ ಹೇಳಿಕೆಯನ್ನು ಹಿಲರಿ ಟೀಕಿಸಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.<ref>{{Cite web |url=http://www.prajavani.net/news/article/2016/09/02/435432.html |title=ಆರ್ಕೈವ್ ನಕಲು |access-date=2016-09-09 |archive-date=2016-09-04 |archive-url=https://web.archive.org/web/20160904140013/http://www.prajavani.net/news/article/2016/09/02/435432.html |url-status=dead }}</ref>
*ನ್ಯೂಯಾರ್ಕ್ನಲ್ಲಿ ದಿ. ಸೆ.8-ರಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತೆ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾಗಿಂತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೆಚ್ಚು ಸಮರ್ಥರು ಎಂದು ಹೇಳಿದ್ದಾರೆ. ನ್ಯೂಯಾರ್ಕ್ನಲ್ಲಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಟ್ರಂಪ್, ತಾವು ಅಧಿಕಾರಕ್ಕೆ ಬಂದರೆ ರಷ್ಯಾದ ಬಲಿಷ್ಠ ವ್ಯಕ್ತಿ ಪುಟಿನ್ ಜತೆ ತುಂಬ ಉತ್ತಮ ಸಂಬಂಧ ಹೊಂದುವುದಾಗಿ ಹೇಳಿದ್ದಾರೆ.<ref>{{Cite web |url=http://m.dailyhunt.in/news/india/kannada/eesanje-epaper-eesanje/obaamaaginta-putin-hechhu-samartha-tramp-tike-newsid-57679815 |title=ಒಬಾಮಾಗಿಂತ ಪುಟಿನ್ ಹೆಚ್ಚು ಸಮರ್ಥ: ಟ್ರಂಪ್ ಟೀಕೆ |access-date=2016-09-09 |archive-date=2022-01-23 |archive-url=https://web.archive.org/web/20220123035057/https://m.dailyhunt.in/news/india/kannada/eesanje-epaper-eesanje/obaamaaginta-putin-hechhu-samartha-tramp-tike-newsid-57679815 |url-status=dead }}</ref>
==ಆಗಸ್ಟ್ 26,2016 ರ ಸಮೀಕ್ಷೆ==
*ಅರ್ಧಕ್ಕಿಂತ ಹೆಚ್ಚು ಹೊಸ ಸಮೀಕ್ಷೆಗೆ ಪ್ರತಿಕ್ರಿಯಿಸಿದವರು ಹಿಲರಿ ಕ್ಲಿಂಟನ್ ಮತ ಹಾಕುವುದಾಗಿ ಹೇಳಿದರು - ಮೊದಲ ಬಾರಿಗೆ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಎಲ್ಲಾ ಪ್ರಮುಖ 50% ರ ಗಡಿಯನ್ನು ದಾಟಿದ್ದಾರೆ. ಎಂದು ಕ್ವಿನಪಿಯಾಕ್ ವಿಶ್ವವಿದ್ಯಾಲಯ ಗುರುವಾರ ಬಿಡುಗಡೆ ಮಾಡಿದ ಸಮೀಕ್ಷೆಯಲ್ಲಿ ಹೇಳಿದೆ. ಅದು ನೇರ ಮುಖಾಮುಖಿಯಲ್ಲಿ ದೇಶದ ಮಾಜಿ ಕಾರ್ಯದರ್ಶಿಯ.51% ಕ್ಕೆ ಟ್ರಂಪ್ 41% ಮತ ಕಂಡುಬಂದಿದೆ ಎಂದಿದೆ. ಕ್ವಿನಪಿಯಾಕ್ ವಿಶ್ವವಿದ್ಯಾಲಯದ ಟಿಮ್ ಮಿಲಾಯಿ, ಪೋಲ್ ಸಹಾಯಕ ನಿರ್ದೇಶಕ "ನಾವು ಹಿಲರಿ ಕ್ಲಿಂಟನ್ ಅವರ 10 ಅಂಕಗಳ ಮುನ್ನಡೆ ಒಂದು ದೊಡ್ಡ ಜಯದ ಸಣ್ಣ ನೆಡೆಯ ಸದ್ದು ಎಂದು ಹೇಳಿದರು. ಡೊನಾಲ್ಡ್ ಟ್ರಂಪ್ ಕೆಳಕ್ಕೆಇಳಿಯುವ ಸುಳಿಯಲ್ಲಿರುವ ಪುರಾವೆ ಇದು ಎಂದು" ಹೇಳಿದ್ದಾರೆ.
*ತೃತೀಯ ಅಭ್ಯರ್ಥಿಗಳ ಸಮೀಕರಣದ ಮಾಡಲಾಗುತ್ತದೆ; ಆ ವೇಳೆ ಕ್ಲಿಂಟನ್ ಬೆಂಬಲ 50% ಗಿಂತ ಕೆಳಗಿನ ಹಂತಕ್ಕೆ ಬರಬಹುದು. ಮಾಜಿ ಪ್ರಥಮ ಮಹಿಳೆ ಲಿಬರ್ಟರೇನ್ ಪಾರ್ಟಿ ಅಭ್ಯರ್ಥಿ ಗ್ಯಾರಿ ಜಾನ್ಸನ್ ಮತ್ತು ಗ್ರೀನ್ ಪಾರ್ಟಿ ಸ್ಪರ್ಧಿಯಾಗಿ ಜಿಲ್ ಸ್ಟೀನ್ ಸೇರಿಸಿ ಲೆಕ್ಕ ಮಾಡಿದಾಗ, ಅವರು 45% ಮತ ಪಡೆಯುತ್ತಾರೆ; ಟ್ರಂಪ್ ಗೆ ಮತದಾನ 38% ರಷ್ಟು.ಬರುವುದು. ಜಾನ್ಸನ್ 10% ಮತ ಪಡೆಯುವರು. ಮತ್ತು ಸ್ಟೀನ್ ಗೆ 4% ಮತ. ಇದು ಕ್ವಿನಪಿಯಾಕ್ ವಿಶ್ವವಿದ್ಯಾಲಯದ ಸಮೀಕ್ಷೆ.<ref>[http://www.hindustantimes.com/us-presidential-election/in-a-first-clinton-tops-50-support-from-us-voters-in-poll-trump-41/story-ur3uZGEL1vchHvcWgs20gL.html In a first, Clinton tops 50% support from US voters in poll; Trump 41% AFP, Washington:Aug 26, 2016]</ref>
===ಟ್ರಂಪ್ – ಹಿಲರಿ ದಾಖಲೆ ಸಂವಾದ===
*29 Sep, 2016 ರಂದು ನ್ಯೂಯಾರ್ಕ್ ನಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಸೋಮವಾರ ನಡೆದ ಮೊದಲನೇ ಸಂವಾದ ದಾಖಲೆ ನಿರ್ಮಿಸಿದೆ. ಸಂವಾದನ್ನು 8.4 ಕೋಟಿ ಜನ ವೀಕ್ಷಿಸಿದ್ದಾರೆ. ಇದರಿಂದ 36 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಂತಾಗಿದೆ. 1980ರಲ್ಲಿ ಡೆಮೊಕ್ರಾಟ್ ಪಕ್ಷದ ಅಭ್ಯರ್ಥಿ ಜಿಮ್ಮಿ ಕಾರ್ಟರ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ರೊನಾಲ್ಡ್ ರೇಗನ್ ನಡುವೆ ನಡೆದಿದ್ದ ಸಂವಾದವನ್ನು 8.06 ಕೋಟಿ ಜನ ವೀಕ್ಷಿಸಿದ್ದರು.
*‘ರಿಯಾಲಿಟಿ ಷೋ ಅಲ್ಲ’: ‘ಶ್ವೇತಭವನಕ್ಕಾಗಿನ ತಮ್ಮ ಸ್ಪರ್ಧೆ ನೈಜವಾದದ್ದೇ ವಿನಃ ಟಿವಿ ರಿಯಾಲಿಟಿ ಷೋ ಅಲ್ಲ’ ಎಂದು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹೇಳಿದರು. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಉದ್ದೇಶಿಸಿ ಹಿಲರಿ ಈ ಹೇಳಿಕೆ ನೀಡಿದ್ದಾರೆ.<ref>http://www.prajavani.net/news/article/2016/09/29/441380.html</ref>
===ಡೊನಾಲ್ಡ್ ಟ್ರಂಪ್ ತಿರಸ್ಕರಿಸಿ ‘ಯುಎಸ್ಎ ಟುಡೆ’ ಕರೆ===
*ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಅಪಾಯಕಾರಿ ಪುಡಾರಿ ಎಂದು ಅಮೆರಿಕದ ಪ್ರಮುಖ ಪತ್ರಿಕೆ ‘ಯುಎಸ್ಎ ಟುಡೆ’ ಟೀಕಿಸಿದ್ದು, ಅವರಿಗೆ ಮತ ನೀಡದಂತೆ ಓದುಗರಿಗೆ ಸೂಚಿಸಿದೆ.
*ವಾಷಿಂಗ್ಟನ್ (ಎಎಫ್ಪಿ): ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಅಪಾಯಕಾರಿ ಪುಡಾರಿ ಎಂದು ಅಮೆರಿಕದ ಪ್ರಮುಖ ಪತ್ರಿಕೆ ‘ಯುಎಸ್ಎ ಟುಡೆ’ ಟೀಕಿಸಿದ್ದು, ಅವರಿಗೆ ಮತ ನೀಡದಂತೆ ಓದುಗರಿಗೆ ಸೂಚಿಸಿದೆ.
*ಸಂಪ್ರದಾಯವನ್ನು ಮುರಿದು ಇದೇ ಮೊದಲ ಬಾರಿ ಪತ್ರಿಕೆ ಓದುಗರಿಗೆ ಈ ರೀತಿ ಸೂಚಿಸಿದೆ. 34 ವರ್ಷಗಳ ಇತಿಹಾಸದಲ್ಲಿ ಹಿಂದೆಂದೂ ಯುಎಸ್ಎ ಟುಡೆ ಅಧ್ಯಕ್ಷೀಯ ಅಭ್ಯರ್ಥಿಗಳ ವಿರುದ್ಧ ನಿರ್ಣಯ ಕೈಗೊಂಡಿರಲಿಲ್ಲ. ಆದರೆ ಈ ಬಾರಿ, ಟ್ರಂಪ್ ಅಧ್ಯಕ್ಷರಾಗಲು ಅನರ್ಹರು ಎಂದು ಪತ್ರಿಕೆಯ ಸಂಪಾದಕ ಮಂಡಳಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ.<ref>{{Cite web |url=http://www.prajavani.net/news/article/2016/10/01/441917.html |title=ಯುಎಸ್ಎ ಟುಡೆ |access-date=2016-10-01 |archive-date=2016-10-01 |archive-url=https://web.archive.org/web/20161001144209/http://www.prajavani.net/news/article/2016/10/01/441917.html |url-status=dead }}</ref>
==ಟ್ರಂಪ್ ಸಂಕಷ್ಡದಲ್ಲಿ==
*ಮಹಿಳೆಯರ ಬಗೆಗೆ ಲಘುವಾಗಿ ಮಾತನಾಡಿದ್ದು: ಬಹಳ ಜನರ ವಿರೋಧ:
*(ಉದಯವಾಣಿ, Oct 09, 2016:ವಾಷಿಂಗ್ಟನ್:)ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಅವರು ಮಹಿಳೆಯರ ಬಗ್ಗೆ ತೀರಾ ಅಸಭ್ಯ ಮಾತುಗಳನ್ನು ಆಡಿದ್ದ 11 ವರ್ಷಗಳ ಹಳೆಯ ವಿಡಿಯೋವೊಂದು ಇದೀಗ ಪ್ರತ್ಯಕ್ಷವಾಗಿದೆ. ಇದರಿಂದಾಗಿ ಟ್ರಂಪ್ ಅವರಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ಇದು ಅರಿವಾಗುತ್ತಿದ್ದಂತೆ ಅಪರೂಪಕ್ಕೆಂಬಂತೆ ಟ್ರಂಪ್ ಅವರು ಕ್ಷಮೆ ಯಾಚಿಸಿದ್ದಾರೆ.
*"ನಾನು ಮಹಿಳೆಯರಿಗೆ ಮುತ್ತು ಕೊಡುತ್ತೇನೆ. ಅದೊಂದು ರೀತಿ ಅಯಸ್ಕಾಂತ ಇದ್ದಂತೆ. ಅದಕ್ಕೆ ನಾನು ಕಾಯುವುದಿಲ್ಲ. ನೀವು ಸ್ಟಾರ್ ಆಗಿದ್ದರೆ, ಕಿಸ್ ಮಾಡಲು ಮಹಿಳೆಯರೇ ಬಿಡುತ್ತಾರೆ. ಅದರಾಚೆಗೆ ನೀವು ಏನು ಬೇಕಾದರು ಮಾಡಬಹುದು' ಎಂದು 3 ನಿಮಿಷಗಳ ಈ ವಿಡಿಯೋದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಹಿಳೆಯರಿಗೆ ನಾನು ಹೊಡೆಯುತ್ತಿದ್ದೆ. ನಾನು ಶ್ರೀಮಂತ ಹಾಗೂ ಪ್ರಸಿದ್ಧ ವ್ಯಕ್ತಿ ಎಂಬ ಕಾರಣಕ್ಕೆ ಮಹಿಳೆಯರು ಅದಕ್ಕೆಲ್ಲಾ ಅವಕಾಶ ಕೊಡುತ್ತಿದ್ದರು ಎಂದು ಟ್ರಂಪ್ ಹೇಳುವ ವಿಡಿಯೋ ವಾಷಿಂಗ್ಟನ್ ಪೋಸ್ಟ್ಗೆ ಲಭ್ಯವಾಗಿದೆ.
*ಈ ಕುರಿತು ಸ್ಪಷ್ಟನೆ ನೀಡಿರುವ ಟ್ರಂಪ್, "ತಮಾಷೆಗಾಗಿ ಖಾಸಗಿಯಾಗಿ ಮಾತನಾಡುತ್ತಾ ಈ ಮಾತುಗಳನ್ನು ಆಡಿದ್ದೇನೆ. ಆದರೆ ಹಿಲರಿ ಕ್ಲಿಂಟನ್ರ ಪತಿ ಬಿಲ್ ಕ್ಲಿಂಟನ್ ಅವರು ನನಗಿಂತ ಕೆಟ್ಟ ಮಾತುಗಳನ್ನು ಆಡಿದ್ದಾರೆ. ಒಂದು ವೇಳೆ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ' ಎಂದು ತಿಳಿಸಿದ್ದಾರೆ.
*ಆದರೆ ಈ ಕ್ಷಮೆಯನ್ನು ಟ್ರಂಪ್ ಪಕ್ಷದವರೇ ತಿರಸ್ಕರಿಸಿರುವುದರಿಂದ ಅವರಿಗೆ ಮುಖಭಂಗವಾಗಿದೆ.ಅವರ ಪತ್ನಿಯೂ ವಿರೋಧಿಸಿದ್ದಾರೆ.<ref>{{Cite web |url=http://www.udayavani.com/kannada/news/world-news/172921/trump-rude-note-about-women#PBbKVy9GrMERbhEq.99 |title=ಮಹಿಳೆಯರ ಬಗೆಗೆ ಲಘು ಟೀಕೆ |access-date=2016-10-11 |archive-date=2016-10-10 |archive-url=https://web.archive.org/web/20161010193806/http://www.udayavani.com/kannada/news/world-news/172921/trump-rude-note-about-women#PBbKVy9GrMERbhEq.99 |url-status=dead }}</ref>
==ಹಿಲರಿ==
*19 Oct, 2016
ಸಮೀಕ್ಷೆಯಲ್ಲಿ ಹಿಲರಿ ಮುಂದೆ: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿ ಸಿಬಿಎಸ್ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಶೇ 9 ಮತಗಳ ಮುನ್ನಡೆ ಸಾಧಿಸಿದ್ದಾರೆ. ಕ್ಲಿಂಟನ್ ಪರ ಶೇ 47ರಷ್ಟು ಮತ ಚಲಾವಣೆಯಾಗಿದ್ದರೆ, ಟ್ರಂಪ್ ಪರ ಶೇ 38ರಷ್ಟು ಮತ ಚಲಾವಣೆಯಾಗಿದೆ.<ref>{{Cite web |url=http://www.prajavani.net/news/article/2016/10/19/445938.html |title=ರಿಪಬ್ಲಿಕನ್ ಪಕ್ಷದತ್ತ ಭಾರತೀಯರ ಒಲವು |access-date=2016-10-19 |archive-date=2016-10-20 |archive-url=https://web.archive.org/web/20161020080327/http://www.prajavani.net/news/article/2016/10/19/445938.html |url-status=dead }}</ref>
==ಟ್ರಂಪ್ ಚರ್ಚೆಯಲ್ಲಿ ಮೇಲುಗೈ==
*27 Oct, 2016
*‘ನಾನು ಅಧ್ಯಕ್ಷನಾದರೆ, ನಿಮ್ಮ ಇ-ಮೇಲ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶೇಷ ಫಿರ್ಯಾದಿಯನ್ನು ನೇಮಿಸುತ್ತೇನೆ. ನೀವು ಜೈಲಿಗೆ ಹೋಗಬೇಕಾಗುತ್ತದೆ.’ ಇದು ಎರಡನೆಯ ಸಂವಾದದಲ್ಲಿ ಡೊನಾಲ್ಡ್ ಟ್ರಂಪ್ ಅವರು ಹಿಲರಿ ಕ್ಲಿಂಟನ್ ಕುರಿತು ಆಡಿದ ಮಾತು. ಈ ಮಾತಿನಿಂದಲೇ ಟ್ರಂಪ್ ಚರ್ಚೆಯಲ್ಲಿ ಮೇಲುಗೈ ಸಾಧಿಸಿದರು.<ref>{{Cite web |url=http://www.prajavani.net/news/article/2016/10/27/448070.html |title=ಟ್ರಂಪ್-ಮೇಲುಗೈ |access-date=2016-10-27 |archive-date=2016-10-27 |archive-url=https://web.archive.org/web/20161027132341/http://www.prajavani.net/news/article/2016/10/27/448070.html |url-status=dead }}</ref>
=== Monday, 24 october 2016 ===
* ಅಮೇರಿಕಾದ ಅಭಿಪ್ರಾಯಗಳು
* ಯಾರು ಅಮೇರಿಕಾದ ಅಧ್ಯಕ್ಷೀಯ ಚುನಾವಣೆ 2016 ಗೆಲ್ಲುವರು?
* ಹಿಲರಿ ಕ್ಲಿಂಟನ್ - 55.6%
* ಡೊನಾಲ್ಡ್ ಟ್ರಂಪ್ - 44.4%
* ಒಟ್ಟು ಮತಗಳನ್ನು: 602
*[http://infoelections.com/infoelection/index.php/national/8061-simultaneous-elections-in-up-punjab-3-other-states-likely-in-feb-march-says-eci.html]{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}
==ಟ್ರಂಪ್ ಮುನ್ನೆಡೆ==
Nov 1, 2016,
*ಟ್ರಂಪ್>< ಕ್ಲಿಂಟನ್ ಎಬಿಸಿ ನ್ಯೂಸ್ / ವಾಷಿಂಗ್ಟನ್ ಪೋಸ್ಟ್: ಇದರ ಪ್ರಕಾರ, ಟ್ರ್ಯಾಕಿಂಗ್ ಸಮೀಕ್ಷೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಕ್ಲಿಂಟನ್ರಿಗಿಂತ ಮುಂದಿದೆ ರಾಜ್ಯದ ಮಾಜಿ ಕಾರ್ಯದರ್ಶಿ 45 ರಷ್ಟು ಮತದ ವಿರುದ್ಧ, ಟ್ರಂಪ್ ಶೇ 46 ರಷ್ಟು ಮತದಾರರ ಬೆಂಬಲವನ್ನು ಹೊಂದಿದ್ದಾರೆ.
*"ವಿಶೇಷವಾಗಿ ಶುಕ್ರವಾರದಿಂದ ಭಾನುವಾರ ತನಕ, ಟ್ರ್ಯಾಕಿಂಗ್ನಲ್ಲಿ ಆರಂಭದಿಂದಲೂ ಕ್ಲಿಂಟನ್ ಏಳು ಅಂಕಗಳನ್ನು ಕಳೆದುಕೊಂಡಿದ್ದಾರೆ. ಈ ಪರಿಣಾಮ ಬಹುಶಃ ರಾಜ್ಯದ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ತನ್ನ ಖಾಸಗಿ ಇಮೇಲ್ ಸರ್ವರ್ ಬಳಕೆ ವಿವಾದದ ವಿಷಯದ ನಂತರ, ಆಗಿದೆ.<ref>[http://timesofindia.indiatimes.com/united-states-elections-2016-us-elections-news-results-polls/Donald-Trump-edges-ahead-of-Hillary-Clinton-poll-finds/articleshow/55185472.cms ಕ್ಲಿಂಟನ್ ಏಳು ಅಂಕಗಳನ್ನು ಕಳೆದುಕೊಂಡಿದ್ದಾರೆ]</ref>
==ಮಾಧ್ಯಮ ಪಕ್ಷಪಾತದ ಬಗೆಗೆ ಟ್ರಂಪ್==
*ನ್ಯೂಯಾರ್ಕ್ ನಲ್ಲಿ ಆಯೋಜನೆಗೊಂಡಿದ್ದ ಭೋಜನಕೂಟದಲ್ಲಿ, ಹಿಲರಿ ಮತ್ತು ಟ್ರಂಪ್ ಭಾಗವಹಿಸಿದ್ದರು. ಟ್ರಂಪ್ ಮಾತನಾಡುತ್ತಾ, ‘ಇದು ಅಭ್ಯರ್ಥಿಗಳ ಸಮಾಗಮವಷ್ಟೇ ಅಲ್ಲ, ನಮ್ಮ ಗೆಲುವಿಗೆ ಶ್ರಮ ಪಡುತ್ತಿರುವ ಎರಡು ತಂಡಗಳೂ ಇಲ್ಲಿವೆ. ಹಿಲರಿ ಪರ ಸಾಕಷ್ಟು ಕಷ್ಟಪಟ್ಟು ದುಡಿಯುತ್ತಿರುವ NBC, CNN, CBS, ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಮುಖ್ಯಸ್ಥರೂ ಇಲ್ಲಿದ್ದಾರೆ’ ಎಂದು ಚಟಾಕಿ ಹಾರಿಸಿದ್ದರು. ಟ್ರಂಪ್ ಅವರ ಮಾತು ಕೇವಲ ವ್ಯಂಗ್ಯೋಕ್ತಿ ಆಗಿರಲಿಕ್ಕಿಲ್ಲ.<ref>[http://www.prajavani.net/news/article/2016/10/29/448680.html ಮಾಧ್ಯಮ ಪಕ್ಷಪಾತ]</ref>
==ಹಿಲರಿಗೆ ಶೇಕಡ ಎರಡರಷ್ಟು ಮುನ್ನಡೆ==
*6 Nov, 2016
*ಶ್ವೇತಭವನಕ್ಕೆ ಪ್ರವೇಶಿಸುವ ಉತ್ಸಾಹದಲ್ಲಿರುವ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವಣ ಪೈಪೋಟಿ ಬಿಗಿಗೊಳ್ಳುವ ಸೂಚನೆ ಕಂಡುಬಂದಿದ್ದು, ಚುನಾವಣಾ ಪೂರ್ವ ಜನಮತ ಸಂಗ್ರಹದಲ್ಲಿ ಹಿಲರಿ ಅವರು ಟ್ರಂಪ್ ಅವರಿಗಿಂತ ಕೇವಲ ಶೇಕಡ 2ರಷ್ಟು ಮುನ್ನಡೆ ಪಡೆದುಕೊಂಡಿದ್ದಾರೆ.ಫಾಕ್ಸ್ ನ್ಯೂಸ್ ಶುಕ್ರವಾರ ಬಿಡುಗಡೆ ಮಾಡಿರುವ ಚುನಾವಣಾ ಸಮೀಕ್ಷೆಯ ವರದಿಯಲ್ಲಿ ಹಿಲರಿ ಅವರು ಶೇಕಡ 45ರಷ್ಟು ಮತಗಳನ್ನು ಪಡೆದಿದ್ದರೆ, ಟ್ರಂಪ್ ಶೇಕಡ 43ರಷ್ಟು ಮತಗಳನ್ನು ಪಡೆದಿದ್ದಾರೆ.<ref>[http://www.prajavani.net/news/article/2016/11/06/450109.html ಹಿಲರಿಗೆ ಶೇಕಡ ಎರಡರಷ್ಟು ಮುನ್ನಡೆ]</ref>
==ಹಿಲರಿಗೆ ಮುನ್ನಡೆ==
*7/8 Nov, 2016
*ಮತದಾನಕ್ಕೆ ಮುನ್ನಾದಿನ ‘ಸಿಬಿಎಸ್ ನ್ಯೂಸ್’ ನಡೆಸಿದ ಸಮೀಕ್ಷೆಯಲ್ಲಿ ಹಿಲರಿ ಅವರು ಟ್ರಂಪ್ ಅವರಿಗಿಂತ ಶೇ ನಾಲ್ಕರಷ್ಟು ಹೆಚ್ಚು ಮತಗಳನ್ನು ಪಡೆದಿದ್ದಾರೆ. ಹಿಲರಿ ಅವರಿಗೆ ಶೇ.45 ಮತ್ತು ಟ್ರಂಪ್ ಅವರಿಗೆ ಶೇ.41ರಷ್ಟು ಮತಗಳು ಬಂದಿವೆ.
*ಕಳೆದ ವಾರದ ಸಮೀಕ್ಷೆಯ ಲ್ಲಿಯೂ ಹಿಲರಿ ಅವರಿಗೆ ಮುನ್ನಡೆ ಇತ್ತು. ಪದವಿಗಿಂತ ಕಡಿಮೆ ವಿದ್ಯಾ ಭ್ಯಾಸದ ಬಿಳಿಯರು ಮತ್ತು ಹಿರಿಯ ನಾಗರಿಕರು ಟ್ರಂಪ್ ಪರವಾಗಿದ್ದಾರೆ. ಮಹಿಳೆಯರು, ಆಫ್ರಿಕಾ–ಅಮೆರಿಕ ನ್ನರು ಮತ್ತು ಯುವ ಜನರ ಬೆಂಬಲ ಹಿಲರಿಗೆ ಅವರಿಗೆ ಹೆಚ್ಚಾಗಿದೆ ಎಂದು ಸಿಬಿಎಸ್ ನ್ಯೂಸ್ ಹೇಳಿದೆ.
*ಮುಖ್ಯಾಂಶಗಳು
*ಈ ಚುನಾವಣೆ 48ನೇ ಉಪಾಧ್ಯಕ್ಷರನ್ನೂ ಆಯ್ಕೆ ಮಾಡಲಿದೆ. ಉಪಾಧ್ಯಕ್ಷ ಹುದ್ದೆಗೆ ರಿಪಬ್ಲಿಕನ್ ಪಕ್ಷದಿಂದ ಮೈಕ್ ಪೆನ್ಸ್ ಹಾಗೂ ಡೆಮಾಕ್ರಟಿಕ್ ಪಕ್ಷದಿಂದ ಟಿಮ್ ಕೇನ್ ಕಣದಲ್ಲಿದ್ದಾರೆ.
==ಮತದಾನ==
*ನ್ಯೂಯಾರ್ಕ್ನಲ್ಲಿ ಮಂಗಳವಾರ ಬೆಳಿಗ್ಗೆ 6ರಿಂದ 7 ಗಂಟೆ ಒಳಗೆ ಮತದಾನ ಆರಂಭವಾಗಲಿದೆ. (ಭಾರತೀಯ ಕಾಲಮಾನ ಮಂಗಳವಾರ ಸಂಜೆ 4.30 ರಿಂದ 5.30). ಎರಡು ರಾಜ್ಯಗಳಲ್ಲಿ ಮಾತ್ರ ರಾತ್ರಿ 9 ಗಂಟೆವರೆಗೂ ಮತದಾನ (ಅಲ್ಲಿನ ಕಾಲಮಾನ) ಮುಂದುವರಿ ಯಲಿದೆ. ಅಂದಾಜು 12 ಕೋಟಿ ಜನರು ಮತ ಚಲಾಯಿಸುವ ನಿರೀಕ್ಷೆ ಇದೆ.
* ಮಂಗಳವಾರ ಬೆಳಗ್ಗೆ ಮತದಾನ ಆರಂಭ (ಭಾರತೀಯ ಕಾಲಮಾನ ಮಂಗಳವಾರ ಸಂಜೆ 4.30ರ ನಂತರ)
* ಒಟ್ಟು ಮತದಾರರ ಸಂಖ್ಯೆ 20 ಕೋಟಿಗೂ ಹೆಚ್ಚು; 12 ಕೋಟಿ ಜನರಿಂದ ಮತದಾನ ನಿರೀಕ್ಷೆ
==ಹಿಲರಿ ದೋಷಮುಕ್ತ==
*ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾಗ ಖಾಸಗಿ ಇ– ಮೇಲ್ ಬಳಕೆ ಮಾಡಿದ ಆರೋಪ ಎದುರಿಸುತ್ತಿದ್ದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಎಫ್ಬಿಐ ಸೋಮವಾರ ದೋಷಮುಕ್ತಗೊಳಿಸಿದೆ.<ref>[http://www.prajavani.net/news/article/2016/11/08/450533.html ಅಧ್ಯಕ್ಷತೆಗೆ ಇಂದು ಮತದಾನ;8 Nov, 2016]</ref>
==ಫಲಿತಾಂಶ==
*ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ನಡುವಿನ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಗೆಲುವು ಸಾಧಿಸುವ ಮೂಲಕ ಟ್ರಂಪ್ ಅಮೆರಿಕದ ಅಧ್ಯಕ್ಷ ಸ್ಥಾನವನ್ನೇರಿದ್ದಾರೆ.
*ಅಮೆರಿಕದ ಅಧ್ಯಕ್ಷರಾಗಲು 270 ಪ್ರತಿನಿಧಿಗಳ ಬೆಂಬಲ ಬೇಕಿತ್ತು. ಆದರೆ ಇಲ್ಲಿ ಟ್ರಂಪ್ 276 ಮತಗಳನ್ನು ಗಳಿಸಿ ಅಧ್ಯಕ್ಷ ಪಟ್ಟಕ್ಕೇರಿದ್ದಾರೆ. ಅಮೆರಿಕದ 45ನೇ ಅಧ್ಯಕ್ಷರಾಗಿದ್ದಾರೆ ಟ್ರಂಪ್
*23 ಪ್ರಾಂತ್ಯಗಳಲ್ಲಿ ಗೆಲುವು ಸಾಧಿಸಿದ ಟ್ರಂಪ್ ಒಟ್ಟು 276 ಮತಗಳನ್ನು ಗಳಿಸಿ ಅಮೆರಿಕ ಅಧ್ಯಕ್ಷರಾಗಲು ಅರ್ಹತೆ ಗಿಟ್ಟಿಸಿದ್ದಾರೆ. ಇತ್ತ, 13 ಪ್ರಾಂತ್ಯಗಳಲ್ಲಿ ಗೆಲುವು ಸಾಧಿಸಿದ್ದ ಹಿಲರಿ 218 ಮತಗಳನ್ನು ಗಳಿಸಿದ್ದಾರೆ.<ref>[http://www.prajavani.net/news/article/2016/11/09/450858.html ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ;ಪ್ರಜಾವಾಣಿ ವಾರ್ತೆ;9 Nov, 2016]</ref>
*ಹೊರಗಿನ ಅಭಿಪ್ರಾಯಗಳು ಛಿದ್ರ ಅಭಿಪ್ರಾಯ ಕೊಟ್ಟವು; ರಾಷ್ಟ್ರವ್ಯಾಪಿ ಮಹಿಳೆಯರು ಕ್ಲಿಂಟನ್ ಬೆಂಬಲಿಸಿದರೆ, ಪುರುಷರು ಟ್ರಂಪ್ ರನ್ನು ಬೆಂಬಲಿಸಿದರು. ಗಮನಾರ್ಹವಾಗಿ ಹೆಚ್ಚು ಇದ್ದುದರಿಂದ ಎರಡು ಅಂಕಿಯ ಅಂತರದಿಂದ ಬೆಂಬಲ ಸಿಕ್ಕಿದೆ. ಸುಮಾರು 10 ರಲ್ಲಿ 9 ಕರಿಯರು ಮತ್ತು ಹಿಸ್ಪಾನಿಕ್ಸ್ ಮೂರರಲ್ಲಿ ಎರಡು ಭಾಗದಷ್ಟು ಡೆಮೋಕ್ರಾಟ್ -ಕ್ಲಿಂಟನ್ನರಿಗೆ ಬೆಂಬಲಿಸಿದರೆ, ಅರ್ಧಕ್ಕಿಂತ ಹೆಚ್ಚು ಬಿಳಿ ಮತದಾರರು ರಿಪಬ್ಲಿಕನ್- ಟ್ರಂಪರನ್ನು ಬೆಂಬಲಿಸಿದರು.(Exit polls underscored the fractures: Women nationwide supported Clinton by a double-digit margin, while men were significantly more likely to back Trump. More than half of white voters backed the Republican, while nearly 9 in 10 blacks and two-thirds of Hispanics voted for the Democrat.)<ref>[http://www.hindustantimes.com/us-presidential-election/trump-pulls-off-shock-win-to-become-45th-us-president-stuns-clinton-supporters/story-xRa9E1DIVPaQaJ34UgVFSI.html Trump towers over White House challenge]</ref>
==ಟ್ರಂಪ್ಗೆ ಅಭನಂದನೆಗಳು==
*ಮಾಸ್ಕೊದಿಂದ, ಅಮೆರಿಕದ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಡೊನಾಲ್ಡ್ ಟ್ರಂಪ್ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಭಿನಂದನೆ ಸಲ್ಲಿಸಿದರು. ರಷ್ಯಾ ಮತ್ತು ಅಮೆರಿಕ ನಡುವಣ ಸಂಬಂಧವನ್ನು ಸುಧಾರಿಸುವ ಭರವಸೆಯನ್ನು ಪುಟಿನ್ ವ್ಯಕ್ತಪಡಿಸಿದರು. ‘ರಷ್ಯಾ ಮತ್ತು ಅಮೆರಿಕ ನಡುವಣ ಸಂಬಂಧ ಈಗ ಚೆನ್ನಾಗಿಲ್ಲ. ಎರಡೂ ದೇಶಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವ, ಅಂತರರಾಷ್ಟ್ರೀಯ ವಿಚಾರ ಗಳಲ್ಲಿ ಹೊಂದಿರುವ ಭಿನ್ನಾಭಿ ಪ್ರಾಯಗಳನ್ನು ಬಗೆಹರಿಸಿಕೊಳ್ಳುವ ವಿಶ್ವಾಸವನ್ನು ಪುಟಿನ್ ವ್ಯಕ್ತಪಡಿಸಿದ್ದಾರೆ’ ಎಂದು ರಷ್ಯಾ ಸರ್ಕಾರದ ಪ್ರಕಟಣೆ ತಿಳಿಸಿದೆ.‘ಅಮೆರಿಕ ಮತ್ತು ರಷ್ಯಾ ನಡುವೆ ಉತ್ತಮ ಸಂಬಂಧ ಸಾಧ್ಯವಾದರೆ, ಎರಡೂ ದೇಶಗಳ ಜನರಿಗೆ ಹಾಗೂ ಇಡೀ ವಿಶ್ವಕ್ಕೆ ಒಳಿತಾಗುತ್ತದೆ ಎಂಬ ಮಾತನ್ನು ಪುಟಿನ್ ಅವರು ಖಚಿತ ದನಿಯಲ್ಲಿ ಹೇಳಿದ್ದಾರೆ’ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
* ಭಾರತ ಮತ್ತು ಅಮೆರಿಕ ನಡುವಣ ಸಂಬಂಧ ಇನ್ನಷ್ಟು ಶಕ್ತಿಯುತಗೊಳ್ಳು ವುದನ್ನು ಎದುರು ನೋಡುತ್ತಿದ್ದೇವೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀವು ಭಾರತದ ಕುರಿತು ತೋರಿದ ಸ್ನೇಹಭಾವವನ್ನು ಶ್ಲಾಘಿಸುತ್ತೇನೆ.–ನರೇಂದ್ರ ಮೋದಿ, ಭಾರತದ ಪ್ರಧಾನಿ.
*ಟ್ರಂಪ್ ಗೆಲವು ಆತಂಕಕಾರಿ: ಟ್ರಂಪ್ ಅವರು ಮುಸ್ಲಿಮರನ್ನು ತಾರತಮ್ಯಕ್ಕೆ ಗುರಿಮಾಡುತ್ತಾರೆ ಎಂಬ ಆತಂಕ ಇದೆ. ಅಮೆರಿಕ ಬಹುಸಂಸ್ಕೃತಿಯ ರಾಷ್ಟ್ರ. ಅಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಟ್ರಂಪ್ ಗೆಲವು ಆತಂಕಕಾರಿ ಎಂದು ಇಂಡೋನೇಷ್ಯಾದ ಪ್ರಾಧ್ಯಾಪಕಿ ದಿಯಾನಿತಾ ಸುಗಿಯೊ ಹೇಳಿದ್ದಾರೆ.
**ಆಶಾಭಾವನೆಯ ಮೇಲೆ ಏಟು ಬಿದ್ದಿದೆ ಎಂದು ಗ್ರೀನ್ಪೀಸ್ ಸಂಸ್ಥೆಯ ಆಗ್ನೇಯ ಏಷ್ಯಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಯೆಬ್ ಸ್ಯಾನೊ ಹೇಳಿದ್ದಾರೆ.
*ಟ್ರಂಪ್ ಗೆಲವು ಆತಂಕಕಾರಿ: ಟ್ರಂಪ್ ಅವರು ಮುಸ್ಲಿಮರನ್ನು ತಾರತಮ್ಯಕ್ಕೆ ಗುರಿಮಾಡುತ್ತಾರೆ ಎಂಬ ಆತಂಕ ಇದೆ. ಅಮೆರಿಕ ಬಹುಸಂಸ್ಕೃತಿಯ ರಾಷ್ಟ್ರ. ಅಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಟ್ರಂಪ್ ಗೆಲವು ಆತಂಕಕಾರಿ ಎಂದು ಇಂಡೋನೇಷ್ಯಾದ ಪ್ರಾಧ್ಯಾಪಕಿ ದಿಯಾನಿತಾ ಸುಗಿಯೊ ಹೇಳಿದ್ದಾರೆ.
*ಹವಾಮಾನ ಬದಲಾವಣೆ ತಡೆ ಅಭಿಯಾನಕ್ಕೆ ಇದೊಂದು ಭಾರಿ ಹೊಡೆತ. ಪ್ಯಾರಿಸ್ ಹವಾಮಾನ ಒಪ್ಪಂದ ನಮ್ಮಲ್ಲಿ ಮೂಡಿಸಿದ್ದ ಆಶಾಭಾವನೆಯ ಮೇಲೆ ಏಟು ಬಿದ್ದಿದೆ ಎಂದು ಗ್ರೀನ್ಪೀಸ್ ಸಂಸ್ಥೆಯ ಆಗ್ನೇಯ ಏಷ್ಯಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಯೆಬ್ ಸ್ಯಾನೊ ಹೇಳಿದ್ದಾರೆ.
==ಟ್ರಂಪ್ ಗೆಲುವಿನ ವಿಮರ್ಶೆ==
*"ಪ್ರಸಕ್ತ ಚುನಾವಣೆಯನ್ನು ಟ್ರಂಪ್ ಅವರ ಗೆಲುವು ಎಂದಷ್ಟೇ ಅಲ್ಲ, ಪಕ್ಷಪಾತಿ ಧೋರಣೆ ತಳೆದ ಮಾಧ್ಯಮಗಳ, ರಾಜಕೀಯ ಪಂಡಿತರ ಸೋಲು ಎಂದೂ ವ್ಯಾಖ್ಯಾನ ಮಾಡಬೇಕಿದೆ.
*ಒಟ್ಟಿನಲ್ಲಿ, ಈ ಫಲಿತಾಂಶದ ಮೂಲಕ ಅಮೆರಿಕನ್ನರು, ಮಹಿಳಾ ಅಧ್ಯಕ್ಷರನ್ನು ಚುನಾಯಿಸಿ ಇತಿಹಾಸ ಬರೆಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಹೊಸ ಮುಖಕ್ಕೆ ಆದ್ಯತೆ ನೀಡಿದ್ದಾರೆ. ಜನಪ್ರಿಯ ಮತಗಳನ್ನು ನೋಡಿದರೆ, ಹಿಲರಿ ಮತ್ತು ಟ್ರಂಪ್ ಅವರ ನಡುವೆ ಹೆಚ್ಚು ಅಂತರವಿಲ್ಲ. ಹಾಗಾಗಿ ರೂಪಿಸಿದ ತಂತ್ರಗಳಷ್ಟೇ ಇಲ್ಲಿ ಗೆದ್ದಿವೆ. ಕಾಂಗ್ರೆಸ್ಸಿನ ಮೇಲ್ಮನೆ ಮತ್ತು ಕೆಳಮನೆಗಳಲ್ಲೂ ರಿಪಬ್ಲಿಕನ್ ಪಕ್ಷ ಬಹುಮತ ಪಡೆದಿರುವುದರಿಂದ, ಟ್ರಂಪ್ ಅವರಿಗೆ ಮತ್ತಷ್ಟು ಶಕ್ತಿ ಬಂದಂತೆ ಆಗಿದೆ.
*ಭಯೋತ್ಪಾದನೆ, ವಲಸೆ, ಹೊರಗುತ್ತಿಗೆ ಬಗ್ಗೆ ಕಠಿಣ ಮಾತುಗಳನ್ನು ಟ್ರಂಪ್ ಅವರು ಆಡಿರುವುದರಿಂದ, ಅಮೆರಿಕದ ವಿದೇಶಾಂಗ ನೀತಿಯಲ್ಲಿ ಸಾಕಷ್ಟು ಬದಲಾವಣೆ ಆಗುವ ಸೂಚನೆ ಇದೆ. ಅಮೆರಿಕದಲ್ಲಿರುವ ಭಾರತೀಯರ ಕೆಲಸಕ್ಕೆ, ಹೊರಗುತ್ತಿಗೆಯ ಮೂಲಕ ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳಿಗೆ ಸಂಚಕಾರ ಬರಲಾರದು. ಭಾರತದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯನ್ನು ಜಾಗತಿಕ ಸನ್ನಿವೇಶ ಸೃಷ್ಟಿಸಿರುವುದರಿಂದ ಅದು ಅಬಾಧಿತ.
*ಒಂದಂತೂ ನಿಜ, [[ಡೊನಾಲ್ಡ್ ಟ್ರಂಪ್]] ತಮ್ಮ ಚುನಾವಣಾ ಪ್ರಚಾರವನ್ನು ಜಾಣ್ಮೆಯಿಂದ ಮುನ್ನಡೆಸಿದಂತೆ, ಅಧ್ಯಕ್ಷರಾದ ಬಳಿಕ ದೇಶವನ್ನು ಮುನ್ನಡೆಸಿದರೆ, ಅಮೆರಿಕಕ್ಕೆ ಯಾವುದೇ ಸಮಸ್ಯೆ ಬರುವುದಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ತನ್ನ ಪಕ್ಷದವರೇ ಬೆಂಬಲ ಸೂಚಿಸದಿದ್ದಾಗಲೂ, ಒಂಟಿ ಸಲಗದಂತೆ ಶ್ವೇತಭವನದತ್ತ ನಡೆದ ಟ್ರಂಪ್, ನಾಲ್ಕು ವರ್ಷಗಳ ಕಾಲ ಮದಗಜದಂತೆ ವರ್ತಿಸದಿದ್ದರೆ, ಜಗತ್ತಿನ ಇತರ ರಾಷ್ಟ್ರಗಳಿಗೆ ಕೆಡುಕಿಲ್ಲ."-'ಸುಧೀಂದ್ರ ಬುಧ್ಯ'<ref>[http://www.prajavani.net/news/article/2016/11/10/450991.html ಒಂಟಿ ಸಲಗ, ಮದ ಏರದಿದ್ದರೆ ವಿಶ್ವಕ್ಕೆ ಕೆಡುಕಿಲ್ಲ]</ref>
==ಹೊಸ ಅಧ್ಯಕ್ಷ ಟ್ರಂಪ್ ಆಯ್ಕೆಗೆ ವಿರೋಧ==
*‘ಸ್ತ್ರೀ ದ್ವೇಷಿ ನಮಗೆ ಬೇಕಿಲ್ಲ’, ‘ಅಮೆರಿಕ ಫ್ಯಾಸಿಸ್ಟ್ ದೇಶವಲ್ಲ’, ‘ಟ್ರಂಪ್ ನಮ್ಮ ಅಧ್ಯಕ್ಷನಲ್ಲ’... ಮಂಗಳವಾರ ನಡೆದ ಮತದಾನದಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಆಯ್ಕೆ ಆಗಿರುವುದನ್ನು ಖಂಡಿಸಿ, ಅಮೆರಿಕದ ವಿವಿಧೆಡೆ ಸಾವಿರಾರು ಜನರು ನಡೆಸಿದ ಪ್ರತಿಭಟನೆಗಳಲ್ಲಿ ಕೇಳಿಬಂದ ಘೋಷಣೆಗಳಿವು.
*ಚುನಾವಣೆಯ ಫಲಿತಾಂಶವನ್ನು ಖಂಡಿಸಿ ‘ಸೋಷಿಯಲಿಸ್ಟ್ ಆಲ್ಟರ್ನೇಟಿವ್ಸ್್’ ಎಂಬ ಸಂಘಟನೆ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಮಕ್ಕಳಿಂದ ವೃದ್ಧರವರೆಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
*ಫಿಲಡೆಲ್ಫಿಯ, ಬಾಸ್ಟನ್, ಸಿಯಾಟಲ್, ಲಾಸ್ ಏಂಜಲೀಸ್, ಅಟ್ಲಾಂಟ, ಆಸ್ಟಿನ್, ಸ್ಯಾನ್ ಫ್ರಾನ್ಸಿಸ್ಕೊಗಳ ಹಲವೆಡೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಟ್ರಂಪ್ ವಿರುದ್ಧ ಘೋಷಣೆ ಕೂಗಿದರು. ಆ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಗುರುವಾರವೂ ವಾಷಿಂಗ್ಟನ್ ಡಿ.ಸಿಯಲ್ಲಿರುವ ಶ್ವೇತಭವನದ ಎದುರು ಕೆಲವರು ಪ್ರತಿಭಟನೆ ನಡೆಸಿದರು. ಬುಧವಾರ ಇಲ್ಲಿ ಮೇಣದಬತ್ತಿ ಬೆಳಗಿ ಪ್ರತಿಭಟನೆ ನಡೆಸಲಾಗಿತ್ತು. ನ್ಯೂಯಾರ್ಕ್ನಲ್ಲಿ ಟ್ರಂಪ್ ಅವರ ಕಚೇರಿ ಇರುವ ಟ್ರಂಪ್ ಟವರ್ ಸಮೀಪ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಇದರಿಂದಾಗಿ ವಹಿವಾಟು ಕೆಲಕಾಲ ಸಂಪೂರ್ಣ ಸ್ಥಗಿತಗೊಂಡಿತ್ತು.
*ಲಾಸ್ ಏಂಜಲೀಸ್ನಲ್ಲಿ ನಡೆದ ಪ್ರತಿಭಟನೆ ವೇಳೆ ಟ್ರಂಪ್ ಪ್ರತಿಕೃತಿಯನ್ನು ಸುಡಲಾಗಿದೆ.
===‘ಕ್ಯಾಲ್ಎಕ್ಸಿಟ್’ ಅಭಿಯಾನ===
*ಕ್ಯಾಲಿಫೋರ್ನಿಯಾದ 55 ಎಲೆಕ್ಟೋರಲ್ ಮತಗಳನ್ನು ಹಿಲರಿ ಗೆದ್ದಿದ್ದಾರೆ. ಆದರೂ ಚುನಾವಣೆಯಲ್ಲಿ ಟ್ರಂಪ್ ಗೆದ್ದು, ಅಮೆರಿಕದ ಅಧ್ಯಕ್ಷರಾಗುತ್ತಿದ್ದಾರೆ. ತಮ್ಮ ಅಭಿಪ್ರಾಯಕ್ಕೆ ಮನ್ನಣೆಯೇ ಸಿಗುತ್ತಿಲ್ಲ ಎಂಬುದು ಇಲ್ಲಿನ ಜನರ ಆಕ್ರೋಶ.
*ಹೀಗಾಗಿ ಅಮೆರಿಕದಿಂದ ಕ್ಯಾಲಿಪೋರ್ನಿಯಾವನ್ನು ಬೇರ್ಪಡಿಸಿ ಎಂಬ ಕೂಗು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಲ್ಎಕ್ಸಿಟ್ (#Calexit) ಅಭಿಯಾನ ಆರಂಭವಾಗಿದೆ.
<ref>[http://www.prajavani.net/news/article/2016/11/11/451228.html ಪ್ರತಿಭಟನೆ;ಅಮೆರಿಕ: ಹೊಸ ಅಧ್ಯಕ್ಷರ ವಿರುದ್ಧ ಬೀದಿಗಿಳಿದ ಜನ;11 Nov, 2016]</ref>
==ಅಮೆರಿಕದ ಸಂಸತ್ತಿನ ಈಗಿನ ಬಲಾಬಲ==
*09-06-2016 ಯು.ಎಸ್.ಎ. ಸಂಸತ್ತು:
{| class="wikitable sortable "
|-
!ಸಭೆ||ಒಟ್ಟು ಸ್ಥಾನ ||ಬಹುಮತ ||ರಿಪಬ್ಲಕನ್ ||ಡೆಮೋಕ್ರಟಿಕ್||ಪಕ್ಷೇತರ ||ಖಾಲಿ
|-
|ಸೆನೆಟ್|| 100 ||51 ||45 ||53 ||2 ||9
|-
|ಜನಪ್ರತಿನಿಧಿ ಸಭೆ||435||218 ||233 ||199 ||0 ||3
|-
|}
== ಯು.ಎಸ್.ಎ. ಸಂಸತ್ತು ಚುನಾವಣೆ ನವೆಂಬರ್ 2016ರ ನಂತರ:==
*<big>'''ಬಲಾಬಲ'''</big>
{| class="wikitable sortable "
|-
!ಸಭೆ||ಒಟ್ಟು ಸ್ಥಾನ ||ಬಹುಮತ ||ರಿಪಬ್ಲಕನ್ ||ಡೆಮೋಕ್ರಟಿಕ್||ಪಕ್ಷೇತರ ||ಖಾಲಿ
|-
|ಸೆನೆಟ್|| 100 ||51 ||R:51 ||D:48 ||1 ||
|-
|ಜನಪ್ರತಿನಿಧಿ ಸಭೆ||435|| 218 ||239||193||0 ||3
|-
|}
*<ref name="ಉಲ್ಲೇಖನ ೦">[http://timesofindia.indiatimes.com/us-elections-2016/usresults.cms US Election Results Complete Coverage]</ref>
==ಅಮೆರಿಕ ಸಂಸತ್ತಿನ ಸೆನೆಟ್ಗೆ ಭಾರತೀಯ ಸಂಜಾತರು==
*10 Nov, 2016
*ಕಾಂಗ್ರೆಸ್ನಲ್ಲಿ ಐವರು ಭಾರತೀಯರು; ಎಲ್ಲರೂ ಡೆಮಾಕ್ರಟಿಕ್ ಪಕ್ಷದ ಸದಸ್ಯರು;
*ಭಾರತ–ಅಮೆರಿಕ ಪ್ರಜೆ '''ಕಮಲಾ ಹ್ಯಾರಿಸ್''' ಅವರು ಅಮೆರಿಕದ ಸೆನೆಟ್ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಈ ಮೂಲಕ ಕ್ಯಾಲಿಫೋರ್ನಿಯಾ ರಾಜ್ಯದಿಂದ ಸೆನೆಟ್ಗೆ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ ಹಾಗೂ ಏಷ್ಯಾ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದಾರೆ.
*ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ಅವರು ಭಾರತದ ಚೆನ್ನೈ ಮೂಲದವರಾಗಿದ್ದು, 1960ರಲ್ಲಿ ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ಬಂದಿದ್ದರು. ಕಮಲಾ ತಂದೆ ಡೊನಾಲ್ಡ್ ಗ್ರೀವ್ ಜಮೈಕಾ ಮೂಲದವರು.
*ಕಮಲಾ ಹೆಗ್ಗಳಿಕೆಗಳು
* ಸೆನೆಟ್ಗೆ ಆಯ್ಕೆಯಾದ ಎರಡನೇ ಕಪ್ಪು ವರ್ಣೀಯ ಮಹಿಳೆ
* ಕಳೆದ 20 ವರ್ಷಗಳಲ್ಲಿ ಸೆನೆಟ್ಗೆ ಆಯ್ಕೆಯಾದ ಏಕೈಕ ಕಪ್ಪು ವರ್ಣೀಯ ಮಹಿಳೆ
* ಸೆನೆಟ್ಗೆ ಆಯ್ಕೆಯಾದ ಆರನೇ ಕಪ್ಪು ವರ್ಣೀಯ ವ್ಯಕ್ತಿ
*'''ಪ್ರಮೀಳಾ ಜಯಪಾಲ್'''
*ಚೆನ್ನೈ ಮೂಲದವರಾದ ಪ್ರಮೀಳಾ ಜಯಪಾಲ್ (51) ಅವರು ತಮ್ಮ ಐದನೇ ವಯಸ್ಸಿನಲ್ಲಿ ಇಂಡೋನೇಷ್ಯಾಗೆ ತೆರಳಿ, ನಂತರ ಸಿಂಗಪುರಕ್ಕೆ ಹೋದರು. ಅಲ್ಲಿಂದ ಅಮೆರಿಕಕ್ಕೆ ತೆರಳಿದ್ದರು. ಈಗ ಸೆನೆಟ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
*'''ಅಮಿ ಬೆರಾ'''
*ಅಮಿ ಬೆರಾ ಅವರು ಈಗಾಗಲೇ ಎರಡು ಬಾರಿ ಜನಪ್ರತಿನಿಧಿಗಳ ಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದು ಅವರಿಗೆ ಮೂರನೇ ಚುನಾವಣೆ.
*'''ರಾಜಾ ಕೃಷ್ಣಮೂರ್ತಿ'''
*ನವದೆಹಲಿ ಮೂಲದವರಾದ ರಾಜಾ ಕೃಷ್ಣಮೂರ್ತಿ ಅವರು ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ.
*'''ರೋಹಿತ್ ಖನ್ನಾ'''
*ಇವರು ರೋ ಖನ್ನಾ ಎಂದೇ ಪ್ರಸಿದ್ಧರು. ಈ ಬಾರಿ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ.
<ref>[http://www.prajavani.net/news/article/2016/11/10/450988.html ಹೊಸ ಮೈಲುಗಲ್ಲು ರೂಪಿಸಿದ ಕಮಲಾ ಹ್ಯಾರಿಸ್]</ref>
<ref>[http://www.prajavani.net/news/article/2016/11/09/450904.html ಅಮೆರಿಕ ಸೆನೆಟ್ಗೆ ಆಯ್ಕೆಯಾದ ಭಾರತೀಯ ಸಂಜಾತರು]</ref>
==ನೋಡಿ==
*[[ಅಮೇರಿಕಾ ಸಂಯುಕ್ತ ಸಂಸ್ಥಾನ]]
*[[ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬]]
*[[ಅಮೇರಿಕ ಸಂಯುಕ್ತ ಸಂಸ್ಥಾನದ ಸರ್ಕಾರ]]
*[[:en:Federal government of the United States|Federal government of the United States]]
*[[:en:Elections in the United States|Elections in the United States]]
*[[:en:Democratic Party presidential primaries, 2016|Democratic Party presidential primaries, 2016]]
*[[:en:Electoral College (United States)|Electoral College (United States)]]
*ಹಿಲರಿ:[[:w:prajavani.net/article/ಮುತ್ಸದ್ದಿ-ಹಿಲರಿ|ಮುತ್ಸದ್ದಿ-ಹಿಲರಿ]]
*[[:en:Republican Party presidential primaries, 2016|Republican Party presidential primaries, 2016]]
*[[:en:United States presidential election, 2016|United States presidential election, 2016]]
*[[:en:United States presidential election|United States presidential election]]
*[[:en:Democratic Party presidential candidates, 2016|Democratic Party presidential candidates, 2016]]
==ಹಿಲರಿ ಸೋಲು==
*ಅಮೆರಿಕದ ಅತ್ಯುನ್ನತ ಹುದ್ದೆಗೆ ಮಹಿಳೆ ಆಯ್ಕೆಯಾಗುತ್ತಾಳೆ ಎಂದು ನಂಬುವುದಕ್ಕೆ ಕಾರಣಗಳೂ ಇದ್ದವು.
*[http://www.prajavani.net/news/article/2016/11/15/452077.html ‘ಗಾಜಿನ ಚಾವಣಿ’ಯಲ್ಲಿ ಮೂಡದ ಬಿರುಕು;ಸಿ.ಜಿ. ಮಂಜುಳಾ;15 Nov, 2016] {{Webarchive|url=https://web.archive.org/web/20161115143624/http://www.prajavani.net/news/article/2016/11/15/452077.html |date=2016-11-15 }}
==ಹೆಚ್ಚಿನ ಓದಿಗೆ==
*ಶ್ವೇತಭವನದ ಉಪ್ಪರಿಗೆಗೆ ಅಯೋವಾ ಮೊದಲ ಮೆಟ್ಟಿಲು:ಸುಧೀಂದ್ರ ಬುಧ್ಯ:7 Oct, 2016:[http://www.prajavani.net/news/article/2016/10/07/443483.html]
*ಯಾರು ಹಿತವರು ಈ ನಾಲ್ವರೊಳಗೆ?;ಸುಧೀಂದ್ರ ಬುಧ್ಯ;6 Oct, 2016 [http://www.prajavani.net/news/article/2016/10/06/443145.html {{Webarchive|url=https://web.archive.org/web/20161006133352/http://www.prajavani.net/news/article/2016/10/06/443145.html |date=2016-10-06 }}]
*ಶ್ವೇತಭವನದ ಓಟಕ್ಕೊಬ್ಬ ಸಾಥಿ, ‘ರನ್ನಿಂಗ್ ಮೇಟ್’:[http://www.prajavani.net/news/article/2016/10/10/444170.html {{Webarchive|url=https://web.archive.org/web/20161010185043/http://www.prajavani.net/news/article/2016/10/10/444170.html |date=2016-10-10 }}]
*ಮುನಿಸು, ಜಗಳಗಳಾಚೆ ಪಕ್ಷ ಗೆಲ್ಲಿಸುವಾಸೆ!13 Oct,2016 [http://www.prajavani.net/news/article/2016/10/13/444583.html {{Webarchive|url=https://web.archive.org/web/20161013134402/http://www.prajavani.net/news/article/2016/10/13/444583.html |date=2016-10-13 }}]
*[http://www.prajavani.net/news/article/2016/10/14/444718.html ಇದು ಆರು ರಾಜ್ಯಗಳು ಬರೆಯುವ ಹಣೆಬರಹ;ಸುಧೀಂದ್ರ ಬುಧ್ಯ;] {{Webarchive|url=https://web.archive.org/web/20161018064119/http://www.prajavani.net/news/article/2016/10/14/444718.html |date=2016-10-18 }}
*[http://www.prajavani.net/news/article/2016/10/15/445018.html ಅಧ್ಯಕ್ಷೀಯ ಸಂವಾದ: - ಮಾತು ಬರಿದಾಗುವ ಹೊತ್ತು] {{Webarchive|url=https://web.archive.org/web/20161018215606/http://www.prajavani.net/news/article/2016/10/15/445018.html |date=2016-10-18 }}
*[http://www.prajavani.net/news/article/2016/10/17/445358.html ಚರ್ಚೆ ಎಂದರೆ ಬರಿಯ ಮಾತಲ್ಲೋ ಅಣ್ಣಾ!;17 Oct, 2016]
*[http://www.prajavani.net/news/article/2016/10/18/445629.html ಚರ್ಚೆಯ ವೇದಿಕೆಯಲ್ಲಿ ನಟನೆಗೂ ಅವಕಾಶವಿದೆ!18 Oct, 2016] {{Webarchive|url=https://web.archive.org/web/20161020074634/http://www.prajavani.net/news/article/2016/10/18/445629.html |date=2016-10-20 }}
*[http://www.prajavani.net/news/article/2016/10/19/445916.html ಹಿಲರಿ, ಟ್ರಂಪ್ ಚರ್ಚೆಯಲ್ಲಿ ಕಂಡಿದ್ದು ಕೇಳಿದ್ದು;ಸುಧೀಂದ್ರ ಬುಧ್ಯ;19 Oct, 2016] {{Webarchive|url=https://web.archive.org/web/20161020073350/http://www.prajavani.net/news/article/2016/10/19/445916.html |date=2016-10-20 }}
*[http://www.prajavani.net/news/article/2016/10/20/446206.html ಟ್ರಂಪ್ ಪಾಲಿಗೆ ಮಾತು ವರ ಮತ್ತು ಶಾಪ]
*[http://www.prajavani.net/news/article/2016/10/26/447772.html ಶ್ವೇತಭವನ ಕೊನೆಯ ನಿಲ್ದಾಣ,] {{Webarchive|url=https://web.archive.org/web/20161027130808/http://www.prajavani.net/news/article/2016/10/26/447772.html |date=2016-10-27 }}
*[http://www.prajavani.net/news/article/2016/10/27/448070.html ಹಿಲರಿ ವೇಗಕ್ಕೆ ನಿಯಂತ್ರಣ, ಮಿಂಚಂಚೆ ಪ್ರಕರಣ;ಸುಧೀಂದ್ರ ಬುಧ್ಯ;27 Oct, 2016] {{Webarchive|url=https://web.archive.org/web/20161027132341/http://www.prajavani.net/news/article/2016/10/27/448070.html |date=2016-10-27 }}
*[http://www.prajavani.net/news/article/2016/10/28/448381.html ಇದು ಟ್ವಿಟರ್ ಯುಗದ ಹ್ಯಾಶ್ ಟ್ಯಾಗ್ ಕಾಳಗ] {{Webarchive|url=https://web.archive.org/web/20161028142831/http://www.prajavani.net/news/article/2016/10/28/448381.html |date=2016-10-28 }}
*[http://www.prajavani.net/news/article/2016/10/29/448680.html ಮಾಧ್ಯಮ ಪಕ್ಷಪಾತ;ಸುಧೀಂದ್ರ ಬುಧ್ಯ;29 Oct,2016]
*[http://www.prajavani.net/news/article/2016/11/01/448960.html ಇದು ಮೊಗೆದಷ್ಟೂ ಮುಗಿಯದ ರೋಚಕ ಕಥನ;ಸುಧೀಂದ್ರ ಬುಧ್ಯ;1 Nov, 2016] {{Webarchive|url=https://web.archive.org/web/20161101124356/http://www.prajavani.net/news/article/2016/11/01/448960.html |date=2016-11-01 }}
*[http://www.prajavani.net/news/article/2016/11/03/449402.html ಉಡಾಫೆಯ,ಅಸಂಬದ್ಧ ಮಾತುಗಳ ಟ್ರಂಪರದಾಟ] {{Webarchive|url=https://web.archive.org/web/20161103131338/http://www.prajavani.net/news/article/2016/11/03/449402.html |date=2016-11-03 }}
*[http://www.prajavani.net/news/article/2016/11/03/449425.html ಅಮೆರಿಕ ಅಧ್ಯಕ್ಷ ಗಾದಿಯ ಹಾದಿ] {{Webarchive|url=https://web.archive.org/web/20161103130301/http://www.prajavani.net/news/article/2016/11/03/449425.html |date=2016-11-03 }}
*[http://www.prajavani.net/news/article/2016/11/03/449413.html ಬಿರುಸು ಪಡೆದ ಜಾಹೀರಾತು ಪ್ರಚಾರ;3 Nov, 2016] {{Webarchive|url=https://web.archive.org/web/20161103142217/http://www.prajavani.net/news/article/2016/11/03/449413.html |date=2016-11-03 }}
*[http://www.prajavani.net/news/article/2016/11/04/449548.html ಸುಧೀಂದ್ರ ಬುಧ್ಯ;ಟ್ರೂಮನ್ ಗೆದ್ದಾಗ, ‘ಷಿಕಾಗೊ ಟ್ರಿಬ್ಯೂನ್’ ಸೋತಿತ್ತು;4 Nov, 2016] {{Webarchive|url=https://web.archive.org/web/20161104155018/http://www.prajavani.net/news/article/2016/11/04/449548.html |date=2016-11-04 }}
*[http://www.prajavani.net/news/article/2016/11/10/450991.html ಒಂಟಿ ಸಲಗ, ಮದ ಏರದಿದ್ದರೆ ವಿಶ್ವಕ್ಕೆ ಕೆಡುಕಿಲ್ಲ;ಸುಧೀಂದ್ರ ಬುಧ್ಯ;10 Nov, 2016]
== ಉಲ್ಲೇಖಗಳು ==
{{reflist| 2}}
{{Interwikineeded}}
[[ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನ|ಸರ್ಕಾರ]]
[[ವರ್ಗ:ಸರ್ಕಾರ]]
[[ವರ್ಗ:ಉತ್ತರ ಅಮೇರಿಕ ಖಂಡದ ದೇಶಗಳು]]
41uvacjsfndz9wblb3l2gh6f300tmtz
ಎವರೆಸ್ಟ್ ಶಿಖರ
0
83446
1379530
1339403
2026-08-08T19:13:56Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379530
wikitext
text/x-wiki
[[File:Everest kalapatthar crop.jpg|thumb|ಎವೆರೆಸತ ಶಿಕರ :Everest kalapatthar crop]]
{{Infobox mountain
| name = Mount Everest
| other_name = {{lang|ne-nep|सगरमाथा}} {{transl|ne|(''Sagarmāthā'')}} <br/>{{lang|bo-tib|ཇོ་མོ་གླང་མ}}</span> {{transl|bo|(''Chomolungma'')}} <br/>{{lang|zh|珠穆朗玛峰}}</span> {{transl|zh|(''Zhūmùlǎngmǎ Fēng'')}}
| photo =File:Mount-Everest.jpg
| photo_size =
| photo_caption = {{small|Everest's north face from the Tibetan plateau}}
| elevation_ref = <!-- This elevation, and the reasons for supporting it, are laid out and referenced in the measurement section, but some editors believe we should support 8844 m or 8850 m instead. If any editor thinks we should change it, could he/she please make the case on the talk page and allow time for discussion before editing. --><ref name="ReferenceB">Based on the 1999 and 2005 surveys of elevation of snow cap, not rock head. For more details, see ''[[#Surveys|Surveys]]''.</ref><br /><small> [[List of highest mountains|Ranked 1st]]</small>
| prominence_ref = <br /><small>[[List of peaks by prominence|Ranked 1st]]</small><br /><small>[[Topographic prominence#Definitions|(Notice special definition for Everest)]]</small>
| map = Nepal
| map_caption = Location on the Sagarmatha Zone, Nepal - Tibet, China border
| label = Mount Everest
| label_position = left
| listing = [[Seven Summits]]<br />[[Eight-thousander]]<br />[[List of countries by highest point|Country high point]]<br />[[Ultra prominent peak|Ultra]]
| location = [[Solukhumbu District]], [[Sagarmatha Zone]], [[Nepal]]; <br />[[Tingri County]], [[Xigazê]], [[Tibet Autonomous Region]], [[China]]<ref>The position of the summit of Everest on the international border is clearly shown on detailed topographic mapping, including official Nepalese mapping.</ref>
| range = [[Mahalangur Himal]], [[Himalayas]]
| lat_d = 27 | lat_m = 59 | lat_s = 17 | lat_NS = N
| long_d = 86 | long_m = 55 | long_s = 31 | long_EW = E
| coordinates_ref =<ref>The [[WGS84]] coordinates given here were calculated using detailed topographic mapping and are in agreement with [http://www.adventurestats.com/tables/8000ergeo.shtml adventurestats] {{Webarchive|url=https://web.archive.org/web/20140108073753/http://www.adventurestats.com/tables/8000ergeo.shtml |date=2014-01-08 }}. They are unlikely to be in error by more than 2". Coordinates showing Everest to be more than a minute further east that appeared on this page until recently, and still appear in Wikipedia in several other languages, are incorrect.</ref>
| first_ascent = 29 May 1953<br />[[Edmund Hillary]] and [[Tenzing Norgay]]<br />(First winter ascent 1980 [[Leszek Cichy]] and [[Krzysztof Wielicki]]<ref name="Starr, Daniel">{{cite web|url=http://www.alpinist.com/doc/web11w/wfeature-polish-winter|title=Golden Decade: The Birth of 8000m Winter Climbing|website=Alpinist.com|date=18 March 2011|accessdate=28 May 2013|author=Starr, Daniel}}</ref><ref name="Mt Everest History and facts">{{cite web|url=http://www.mnteverest.net/history.html|title=Mt Everest History and facts|website=Mnteverest.net|accessdate=17 June 2016|archive-date=8 ಮೇ 1999|archive-url=https://web.archive.org/web/19990508005314/http://www.mnteverest.net/history.html|url-status=dead}}</ref>)
| normal_route = [[South Col|southeast ridge]] (Nepal)
}}
{{Contains Indic text}}
{{Contains Tibetan text}}
{{Contains Chinese text}}
[[File:Mount Everest as seen from Drukair2 PLW edit.jpg|thumb|288px|{{small|Aerial photo from the south, behind Nuptse and Lhotse}}]]
[[File:Tibet and surrounding areas topographic map.png|thumb|288px|[[Tibetan Plateau]] and surrounding areas above 1,600 m with height colour coded<ref name="GLOBE">{{cite web|year=1999|title=Global Land One-kilometer Base Elevation (GLOBE)|volume=1|last1=Hastings|first1=D|first2=PK|last2=Dunbar|url=http://www.ngdc.noaa.gov/mgg/topo/gltiles.html|publisher=National Geophysical Data Center, NOAA|doi=10.7289/V52R3PMS|accessdate=16 March 2015}}</ref><ref name="ETOPO1">{{cite web|last1=Amante|first1=C|first2=BW|last2=Eakins|year=2009|title=ETOPO1 1 Arc-Minute Global Relief Model: Procedures, Data Sources and Analysis|id=NOAA Technical Memorandum NESDIS NGDC-24|url=http://www.ngdc.noaa.gov/mgg/global/global.html|publisher=National Geophysical Data Center, NOAA|doi=10.7289/V5C8276M|accessdate=18 March 2015}}</ref>]]
[[File:The World’s Tallest Mountain (15473492788).jpg|thumb|288px|Top down view showing the location of the summit, and its three main faces/sides]]
'''ಎವರೆಸ್ಟ್ ಶಿಖರ'''ವು ಜಗತ್ತಿನಲ್ಲಿ ಅತ್ಯುನ್ನತ ಪರ್ವತಶಿಖರ<ref name="ReferenceB"/> Mount Everest is in the [[Mahalangur Himal|Mahalangur]] Range.<ref>{{cite web | url=http://www.peakpromotionnepal.com/trekking/ | title=Trekking in Nepal - Everest Khumbu Region | publisher=peakpromotionnepal.com | accessdate=17 June 2016 | archive-date=4 ಮಾರ್ಚ್ 2016 | archive-url=https://web.archive.org/web/20160304070118/http://www.peakpromotionnepal.com/trekking/ | url-status=dead }}</ref><ref>{{cite web|url=http://www.haminepali.com/the-8-of-10-highest-mountains-of-the-world-located-in-nepal/|title=The 8 of 10 Highest Mountains of the World Located in Nepal|website=Hami Nepali|date=|access-date=2017-02-26|archive-date=2017-02-21|archive-url=https://web.archive.org/web/20170221180744/http://www.haminepali.com/the-8-of-10-highest-mountains-of-the-world-located-in-nepal/|url-status=dead}}</ref>. 29,029 ಅಡಿ (8,848 ಮೀಟರುಗಳು). ಪೂರ್ವ ನೇಪಾಲದ ಪೂರ್ವ ಹಿಮಾಲಯಗಳಲ್ಲಿ [[ನೇಪಾಲ]]-ಟಿಬೆಟುಗಳ ಎಲ್ಲೆಯಲ್ಲಿ 280 ಉತ್ತರ ಅಕ್ಷಾಂಶ. 86058ದಿ ಪೂರ್ವ ರೇಖಾಂಶಗಳ ಸಂಧಿಸ್ಥಾನದಲ್ಲಿ ಇದೆ.
==ಹೆಸರು==
ಮೊತ್ತಮೊದಲು ಗುರುತಿಸಿದ್ದು 1856ರಲ್ಲಿ, ತ್ರಿಕೋನಕಲ್ಪ ವಿಧಾನದಿಂದ. [[ಭಾರತ|ಭಾರತದ]] ಸರ್ವೇಯರ್ ಜನರಲ್ ಆಗಿ ಭಾರತದ ಸರ್ವೆ ಇಲಾಖೆಗೆ ಅಪಾರ ಸೇವೆ ಸಲ್ಲಿಸಿದ್ದ ಸರ್ [[ಜಾರ್ಜ್ ಎವರೆಸ್ಟ್]] ಎಂಬಾತನ (1790-1866) ಹೆಸರನ್ನು ಈ ಶಿಖರಕ್ಕೆ ಇಡಲಾಯಿತು<ref>{{cite journal|title=Papers relating to the Himalaya and Mount Everest|journal=Proceedings of the London Royal Geographical Society of London|date=April–May 1857|volume=IX|pages=345–351}}</ref>
. ಹೆಸರಿಸಿದ್ದು 1863ರಲ್ಲಿ. [[ಟಿಬೆಟ್]] ಭಾಷೆಯಲ್ಲಿ ಈ ಶಿಖರದ ಹೆಸರು ಚೊಮೊಲುಂಗ್ಮ. ಅರ್ಥ-ದೇವಿ ಭೂಮಾತೆ. ಇದರ ಆರ್ಷೇಯ ಭಾರತೀಯ ನಾಮಧೇಯ ಗೌರೀಶಂಕರ.
==ರಚನೆ==
[[File:EverestfromKalarPatarcrop.JPG|thumb|right|upright=1.35|400px|Mount Everest with snow melted, showing upper geologic layers in bands. The "yellow band" can be seen stretching across the mountain.]]
[[ಕಣ್ಣು]] ಕೋರೈಸುವ ಶ್ವೇತ ಹಿಮ, ಕೃಷ್ಣ ಶಿಲೆಯ ಒತ್ತು ಗೋಡೆಗಳು, 3347ಮೀ ಗಳಿಗಿಂತಲೂ ಎತ್ತರವಾದ ಕಡಿದಾದ ಶಿಲಾಪ್ರಪಾತಗಳು ಈ ಶಿಖರಪೀಠವನ್ನು ಚಿತ್ತಾಕರ್ಷಕವಾಗಿ ಮಾಡಿವೆ. ಆದರೆ ಎವರೆಸ್ಟ್ ಶಿಖರ ಆ ಸಾಲಿನ ಇತರ ಶಿಖರಗಳಷ್ಟು ವೈಶಿಷ್ಟ್ಯಪುರ್ಣವಾಗಿಲ್ಲ. ಇದೊಂದು ಮುದ್ದೆಮುದ್ದೆಯಾದ ಪಿರಮಿಡ್ಡಿನಂತಿದೆ. ಜಲಜ ಹಾಗೂ ನೈಸ್ ಶಿಲೆಯ ಪೀಠದ ಮೇಲೆ ಪರ್ಮೊಕಾರ್ಬೊನಿಫೆರೆಸ್ ಯುಗದ ಸುಣ್ಣಕಲ್ಲು ಮಿಶ್ರದ ನೈಸ್ ಹಾಗೂ ಪದರುಗಲ್ಲುಗಳಿಂದ ಶಿಖರ ಪೀಠ ನಿರ್ಮಾಣವಾಗಿದೆ. ಓಡೆಲ್ ಮತ್ತು ವೇಗರ್ ಎಂಬುವರು ಈ ಶಿಖರ ಆಂತರಿಕ ಘರ್ಷಣೆಗಳಿಂದ ಲಂಬವಾಗಿ ಮೇಲೆತ್ತಲ್ಪಟ್ಟು ಇಂದಿನ ರೂಪ ಪಡೆದಿದೆಯೆಂದು ತಿಳಿಸುತ್ತಾರೆ. ಬೇರೆ ಕೆಲವರು [[ವಿಜ್ಞಾನಿ|ವಿಜ್ಞಾನಿಗಳು]] ಈ ಶಿಖರ ನ್ಯಾಪೆ ರೀತಿಯಲ್ಲಿ ನಿರ್ಮಾಣವಾಗಿ ಹಿಮಸಂಚಯನಗಳಿಂದ ಬೇರೆಯಾಗಿ, ಇಂದಿನ ರೂಪ ಪಡೆದಿದೆಯೆಂದು ತಿಳಿಸುತ್ತಾರೆ. ಆಂತರಿಕ ಘರ್ಷಣೆ ಇನ್ನೂ ಮುಂದುವರಿಯುತ್ತಿದ್ದು, ಪ್ರತಿವರ್ಷವೂ ಶಿಖರದ ಎತ್ತರ ಹೆಚ್ಚಾಗುತ್ತಿದೆಯೆಂದೂ ಅವರ ಅಭಿಪ್ರಾಯ.
==ನದಿಗಳು==
ಎವರೆಸ್ಟಿನ ಹಿಮನದಿಗಳು ಸ್ಯಾಂಗ್ ಪೊ (ಬ್ರಹ್ಮಪುತ್ರ) ನದಿಯ ದಕ್ಷಿಣದಲ್ಲಿನ [[ಹಿಮಾಲಯ|ಹಿಮಾಲಯದ]] ಆಚೆ ಪಕ್ಕದಲ್ಲಿನ ನೆತ್ತಿಯ ಕಣಿವೆಗಳ (ಘಾಟಿ) ಮೇಲೆಲ್ಲ ಹರಡಿ ಹೋಗಿದ್ದುವೆಂದು ನಂಬಲಾಗಿದೆ. ಈಗಿರುವ ಹಿಮನದಿಗಳಲ್ಲಿ ರಂಗ್ಬಕ್ ಮುಖ್ಯವಾದುದು. ಇದು ಎವರೆಸ್ಟಿನಿಂದ ಉತ್ತರದ ಕಡೆಗೆ ಹರಿಯುತ್ತದೆ. 19ಕಿಮೀ ಉದ್ದವಾಗಿದ್ದು, 6673ಮೀ ಎತ್ತರದಿಂದ 5005ಮೀ ತಗ್ಗಿಗೆ ಹರಿಯುವ ಇದು ಪರ್ವತದ ಅಕ್ಷರೇಖೆಗೆ ಸರಿಯಾಗಿ ಅಡ್ಡಹಾಯುತ್ತದೆ.
<ref>{{Cite web |url=http://www.udayavani.com/kannada/news/national-news/148554/army-team-scales-mount-everest |title=ಆರ್ಕೈವ್ ನಕಲು |access-date=2016-10-21 |archive-date=2016-08-04 |archive-url=https://web.archive.org/web/20160804214319/http://www.udayavani.com/kannada/news/national-news/148554/army-team-scales-mount-everest |url-status=dead }}</ref>
==ಹವಾಮಾನ ಮತ್ತು ಬೇಸಾಯ==
ಶಿಖರದ ಸುತ್ತಮುತ್ತಣ ಪ್ರದೇಶದಲ್ಲಿ 4550ಮೀ ಗಳ ವರೆಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿನ [[ವ್ಯವಸಾಯ]], ಪಶುಪಾಲನೆ ಸಾಧ್ಯ. ವರ್ಷದಲ್ಲಿ ಹೆಚ್ಚು ಕಾಲ ಹಿಮಾಚ್ಛಾದಿತವಾದ ಈ ಪ್ರದೇಶದಲ್ಲಿ ಜನಜೀವನ ಬಲು ಕಷ್ಟಕರವಾದುದು. ಸದಾ ಹಿಮದಿಂದ ತುಂಬಿರುವ ಈ ಪರ್ವತ ಶಿಖರದ ಮೂಲ ಶಿಲೆ ಅಥವಾ ಭೂಭಾಗವನ್ನು ಕಾಣಲಾಗುವುದಿಲ್ಲ. ಇಲ್ಲಿನ ಜನರ ಆಹಾರ ಟ್ಸಂಬ ಎನ್ನುವ ಬಾರ್ಲಿ ಗಂಜಿ, ಹುಳಿ ಹತ್ತಿಸಿದ ಬೀರ್, ಕಮಟು ವಾಸನೆಯ ಬೆಣ್ಣೆ ಮತ್ತು ಉಪ್ಪು ಮಿಶ್ರಣದ ಟೀ. ಪ್ರಕೃತಿ ವಿಕೋಪ ಇಲ್ಲಿ ಸರ್ವೇ ಸಾಮಾನ್ಯ. ಹೀಗಾಗಿ ಇಲ್ಲಿನ ಮಾನವ ಮತ ಧರ್ಮಗಳ ಮೊರೆ ಹೊಕ್ಕರೆ ಆಶ್ಚರ್ಯವಿಲ್ಲ. ಶಿಲೆ, ಹಿಮ, ಸದಾಬೀಸುವ ಗಾಳಿ ಒಂಟಿತನ-ಇವು ಈ ಭಾವನೆಯನ್ನು ಹೆಚ್ಚಿಸುತ್ತವೆ. ಇಲ್ಲಿ ಸಸ್ಯ ಹಾಗೂ ಪ್ರಾಣಿಸಮೂಹ ವಿರಳ, [[ಸಸ್ಯ]] ವರ್ಗ 5157ಮೀಗಳ ವರೆಗೆ ಮಾತ್ರ ಕಂಡು ಬರುತ್ತದೆ, ಅಲ್ಲಿಂದಾಚೆಗೆ ಇಲ್ಲ, ಮಿಡತೆಗಳು 5460ಮೀಗಳ ವರೆಗೂ ನೊಣಗಳು 6643ಮೀ ಗಳವರೆಗೂ ಕಂಡುಬರುತ್ತವೆ. ಎವರೆಸ್ಟ್ ಪರ್ವತಾರೋಹಿಗಳನ್ನು ಅನುಸರಿಸುತ್ತ ಕೆಂಪು ಕಾಲಿನ ಕಾಗೆಗಳು 8190ಮೀಗಳ ವರೆಗೂ ಹೋಗಬಲ್ಲವು. ಅಲ್ಲಿಂದಾಚೆ ನಿರ್ಜೀವ ಹಿಮಾಚ್ಛಾದಿತ ವಸ್ತುಗಳು.
== ಎವರೆಸ್ಟ್ ಶಿಖರಾರೋಹಣ ==
ಸಾಹಸ ಸಾಧನೆಯ ಪ್ರತೀಕವಾದ ಪರ್ವತಾರೋಹಣದ ಪರಿಮಿತಿಯಾದ ಎವರೆಸ್ಟ್ ಶಿಖರಾರೋಹಣ ಇಡೀ ಮಾನವಕುಲಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಸುಮಾರು 100ಕ್ಕೂ ಹೆಚ್ಚು ವರ್ಷಗಳ ಸತತ ಪ್ರಯತ್ನವಾಗಿ ಅನೇಕ ಸಾವು-ನೋವುಗಳನ್ನು ಅನುಭವಿಸಿ ಕಡೆಗೂ ಮಾನವನು ಪಡೆದ ಸಾಧನೆ ಅತ್ಯಂತ ಮಿಗಿಲಾದುದು. ಇದರ ಹಿಂದೆ ಒಂದು ದೊಡ್ಡ ಇತಿಹಾಸವೇ ನಡೆದುಹೋಗಿದೆ. ಇದರ ಆಕರ್ಷಣೆ, ಮಾನವನ ಛಲಗಾರಿಕೆಗೆ ನಿದರ್ಶನ: 1923ರಲ್ಲಿ ಶಿಖರಾರೋಹಣದಲ್ಲಿ ಅತ್ಯಂತ ಆಸಕ್ತಿವಹಿಸುತ್ತಿದ್ದ ಜಾರ್ಜ್ ಮಲ್ಲೋರಿಯವರನ್ನು ಪತ್ರಿಕಾ ವರದಿಗಾರನೊಬ್ಬ ಎವರೆಸ್ಟ್ನ್ನು ಏಕೆ ಹತ್ತುವಿರಿ? ಎಂದು ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ ಬಿಕಾಸ್ ಇಟ್ ಈಸ್ ದೇರ್ (ಅದು ಅಲ್ಲಿರುವುದರಿಂದ)! ಎಂದಿಗೂ ಮರೆಯಲಾಗದ ಅರ್ಥಗರ್ಭಿತ ವೈಚಾರಿಕವಾದ ಉಕ್ತಿ ಇದಾಯಿತು.
[[ಭಾರತ]] ಮತ್ತು ಟಿಬೆಟ್ ನ ಮಧ್ಯಭಾಗದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಸುಮಾರು 2,400 ಕಿಮೀಗಳು ಉತ್ತರದಿಂದ ದಕ್ಷಿಣಕ್ಕೆ ಸುಮಾರು 400 ಕಿಮೀ ವಿಸ್ತೀರ್ಣದಲ್ಲಿ ಹಬ್ಬಿರುವ ಅತಿ ದೊಡ್ಡ ಪರ್ವತಶ್ರೇಣಿ [[ಹಿಮಾಲಯ]]. ಇದರ ಸಾವಿರಾರು ಹಿಮಚ್ಛಾದಿತ ಉನ್ನತ ಶಿಖರಗಳಲ್ಲಿ ಒಂದಾದ ಎವರೆಸ್ಟ್ ಶಿಖರವನ್ನು 1841ರಲ್ಲಿ ಮೊಟ್ಟಮೊದಲಿಗೆ ಗುರುತಿಸಿದವರು ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದ ಬ್ರಿಟಿಷ್ ಸರ್ವೇಯರ್ ಜನರಲ್ ಸರ್ ಜಾರ್ಜ್ ಎವರೆಸ್ಟ್ ಎಂಬುವರು. ಇನ್ನೂ ಹೆಸರಿಸಿಲ್ಲದ ಈ ಶಿಖರವನ್ನು ಪೀಕ್-ಘಿಗಿ ಎಂದು ಕರೆದರು.
1852ರಲ್ಲಿ ನಡೆಸಿದ ಮಾಪನದಲ್ಲಿ ಇದು ಜಗತ್ತಿನ ಅತ್ಯುನ್ನತ ಶಿಖರವೆಂದು ಪರಿಗಣಿಸಲ್ಪಟ್ಟಿತು. 1856ರ ಹೊತ್ತಿಗೆ ಈ ಶಿಖರದ ಎತ್ತರ 29,002 ಅಡಿಗಳೆಂದು ತೀರ್ಮಾನವಾಯಿತು. ಈ ಕಾರ್ಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸರ್ವೇ ಆಫ್ ಇಂಡಿಯಾದ ನಾಥಾಸಿಂಗ್ ಭಾರತೀಯ ನೌಕರನೆಂಬುದು ಹೆಮ್ಮೆಯ ವಿಷಯ. ಪೀಕ್ ಗಳನ್ನು ಶೋಧಿಸಿದ ಕೀರ್ತಿಗಾಗಿ 1865ರಲ್ಲಿ ಸರ್ ಜಾರ್ಜ್ ಎವರೆಸ್ಟ್ರ ಹೆಸರನ್ನೇ ಶಿಖರಕ್ಕೆ ನಾಮಕರಣ ಮಾಡಿ ಮೌಂಟ್ ಎವರೆಸ್ಟ್ ಎಂದು ಕರೆಯಲಾಯಿತು. 1920ರಲ್ಲಿ ಟಿಬೆಟ್ನ [[ದಲಾಯಿ ಲಾಮ]] ಅವರ ಅನುಮತಿಯನ್ನು ಪಡೆದು ಎವರೆಸ್ಟ್ನ ಉತ್ತರ ಭಾಗದ ಪರಿಶೋಧನೆ ಮತ್ತು ಶಿಖರಾರೋಹಣ ಪ್ರಯತ್ನ ಮಾಡಲು ಸರ್ ಫ್ರಾನ್ಸಿಸ್ ಯಂಗ್ ಹಸ್ಬೆಂಡ್ ಅವರ ನೇತೃತ್ವದ ಸಮಿತಿಯೊಂದನ್ನು ರಚಿಸಲಾಯಿತು.
ವಿಶ್ವದ ಎಲ್ಲ ದೇಶಗಳ ಪರ್ವತಾರೋಹಿಗಳ ಗುರಿಯಾಗಿದ್ದ ಎವರೆಸ್ಟ್ ಆರೋಹಣದಲ್ಲಿ ಪ್ರಾರಂಭದಿಂದಲೂ ಬ್ರಿಟಿಷರದು ಮೇಲುಗೈ ಆಗಿತ್ತು. ಇದರ ಫಲವಾಗಿ 1921ರಲ್ಲಿ ಎವರೆಸ್ಟ್ ಶಿಖರಾರೋಹಣದ ಮೊಟ್ಟಮೊದಲ ಸಾಹಸಯಾತ್ರೆ ಕರ್ನಲ್ ಚಾಲ್ರ್ಸ್ ಹೋವಾರ್ಡ್ ಬ್ಯೂರಿ ನಾಯಕತ್ವದ ಬ್ರಿಟಿಷ್ ತಂಡ. ಪ್ರಥಮ ಪ್ರಯತ್ನದಲ್ಲಿಯೇ ತಂಡದ ಗೈ ಬುಲ್ಲಾರ್ ಮತ್ತು ಜಾರ್ಜ್ ಮಲ್ಲೋರಿ 23,000 ಅಡಿಗಳ (7,000 ಮೀ.) ಎತ್ತರದ ಉತ್ತರ ಮೇಲ್ಕಣಿವೆ (ನಾರ್ತ್ ಕೋಲ್)ಯವರೆಗೆ ಆರೋಹಣ ಮಾಡಿ ಶಿಖರದ ತುದಿ ಮುಟ್ಟುವ ಸಾಧ್ಯತೆಯನ್ನು ಕಂಡುಕೊಂಡರು. ಮರುವರ್ಷದಲ್ಲಿಯೇ (1922) ಸಿ ಜಿ ಬ್ರೂಸ್ ನಾಯಕತ್ವದ ತಂಡವು ಹಿಂದಿನ ದಾರಿಯಲ್ಲೇ ಮುಂದುವರೆದು 27,300 ಅಡಿ (8,320 ಮೀ.)ಗಳವರೆಗೆ ಏರಿತು. ಪ್ರಥಮ ಬಾರಿಗೆ ಆಮ್ಲಜನಕವನ್ನು ಬಳಸಲಾಯಿತು.
ದುರದೃಷ್ಟವಶಾತ್ ಈ ಸಾಹಸದಲ್ಲಿ ಏಳು ಜನ ಶೆರ್ಪಾಗಳು ನಾರ್ತ್ಕೋಲ್ನ ಕೆಳಭಾಗದಲ್ಲಿ ಸಂಭವಿಸಿದ ಭೀಕರ ನೀರ್ಗಲ್ಲಿನ ಕುಸಿತದಲ್ಲಿ ಸಿಕ್ಕಿ ಜೀವ ತೆತ್ತರು.
ಮತ್ತೆ 1924ರಲ್ಲಿ 3ನೆಯ ಬ್ರಿಟಿಷ್ ತಂಡ ಸಿದ್ಧವಾಯಿತು. ಜಿ ಬ್ರೂಸ್ರ ಅನಾರೋಗ್ಯದ ಕಾರಣ ನೇತೃತ್ವವನ್ನು ಜಾರ್ಜ್ ಮಲ್ಲೊರಿ ವಹಿಸಿಕೊಂಡರು. ಇದಲ್ಲದೆ ತಂಡಕ್ಕೆ ಹೊಸ ಸದಸ್ಯರುಗಳಾಗಿ ನೋಯೆಲ್ ಇ ಓಡೆಲ್ ಮತ್ತು ಆ್ಯಂಡ್ರ್ಯೂ ಇರ್ವೀನ್ ಸೇರಿಕೊಂಡರು. ತಂಡದ ಎಡ್ವರ್ಡ್ ನಾರ್ಟನ್ ಮತ್ತು ಹೊವಾರ್ಡ್ ಸೋಮರ್ವೆಲ್ ಆಮ್ಲಜನಕವಿಲ್ಲದೆ ಆರೋಹಣ ನಡೆಸಿ, 28,126 ಅಡಿ (8,570 ಮೀ.) ಎತ್ತರವನ್ನು ತಲುಪಿದರು. ಮುಂದಿನ 29 ವರ್ಷಗಳವರೆಗೆ ಯಾರೂ ತಲಪಲಾಗದಿದ್ದ ಎತ್ತರ ಅದಾಗಿತ್ತು. ಆರೋಹಣದ ಮರು ಪ್ರಯತ್ನದಲ್ಲಿ ಜಾರ್ಜ್ ಮಲ್ಲೊರಿ ಮತ್ತು ಆ್ಯಂಡ್ರ್ಯೂ ಇರ್ವೀನ್ ಆಮ್ಲಜನಕ ಸಲಕರಣೆಯೊಂದಿಗೆ ಬಹಳ ಎತ್ತರಕ್ಕೇರಿದರು. ಆಕಾಶದಲ್ಲಿ ಎರಡು ಚುಕ್ಕಿಗಳಂತಿದ್ದ ಇವರನ್ನು ನೋಯೆಲ್ ಓಡೆಲ್ ಕಂಡಿದ್ದರು. ನಂತರ ಕವಿದ ಮಂಜಿನಿಂದ ಮುಂದೇನಾಯಿತೆಂದು ತಿಳಿಯಲೇ ಇಲ್ಲ. ಇವರು ವಾಪಸಾಗಲಿಲ್ಲ. ಈ ಇಬ್ಬರು ಪರ್ವತಾರೋಹಿಗಳು ಎವರೆಸ್ಟ್ ತುದಿ ತಲುಪಿದರು ಎಂದು ಕೆಲವರೆಂದರೆ ತುದಿ ಸೇರುವ ಮೊದಲೇ ಇವರುಗಳು ಸಾವಿಗೀಡಾಗಿರಬಹುದೆಂದು ಕೆಲವರು ಶಂಕಿಸುತ್ತಾರೆ. ಪರ್ವತಾರೋಹಣದಲ್ಲಿ ಆಧಾರಗಳೇ ಪ್ರಮುಖವಾಗಿರುವುದರಿಂದ ಮತ್ತು ಈ ಪರ್ವತಾರೋಹಿಗಳು ತುದಿ ಮುಟ್ಟಿದ ಸೂಚನೆಗಳಿಲ್ಲದುದರಿಂದ ಇವರು ಶಿಖರಾರೋಹಣ ಮಾಡಿರುವರೆಂಬುದು ನಿರ್ಧಾರವಾಗಿಲ್ಲ. ಆನಂತರ 1933ರಲ್ಲಿ ಆ್ಯಂಡ್ರ್ಯೂ ಇರ್ವೀನ್ರ (ಐಸ್ವಿಕ್ಸ್) ಹಿಮಗೊಡಲಿಯನ್ನು ಸುಮಾರು 27,700 ಅಡಿ (8,440 ಮೀ.) ಎತ್ತರದಲ್ಲಿ ಪತ್ತೆ ಮಾಡಲಾಯಿತು. ಇತ್ತೀಚೆಗೆ 1999ರ ಸಂಶೋಧನಾ ತಂಡವು ಮಲ್ಲೊರಿಯವರ ದೇಹವನ್ನು 26,750 ಅಡಿ (8155 ಮೀ.) ಎತ್ತರದಲ್ಲಿ ಪತ್ತೆ ಮಾಡಿದರು. ಈ ದುರಂತಗಳಿಂದ ಬೇಸರಗೊಂಡಿದ್ದ ದಲಾಯಿ ಲಾಮ ಅವರು ಟಿಬೆಟ್ ಮೂಲಕ ಶಿಖರಾರೋಹಣ ಪ್ರಯತ್ನಗಳಿಗೆ ತಡೆಹಾಕಿದರು. ಆದರೂ 9 ವರ್ಷಗಳ ನಂತರ ತಂಡಗಳ ಅತೀವ ಬೇಡಿಕೆಗಳಿಗೆ ಮಣಿದು ಮತ್ತೆ ಪ್ರಯತ್ನಕ್ಕೆ ಅನುಮತಿ ನೀಡಲಾಯಿತು. 1933ರ ನಾಲ್ಕನೆಯ ಬ್ರಿಟಿಷ್ ತಂಡವು ಹ್ಯೂ ರಟ್ಲೆಡ್ಜ್ರ ನೇತೃತ್ವದಲ್ಲಿ ದಿಟ್ಟ ಪ್ರಯತ್ನವನ್ನು ನಡೆಸುವ ಮೂಲಕ, ತಂಡದ ವಿನ್ ಹ್ಯಾರಿಸ್ ಮತ್ತು ಎಲ್ ಆರ್ ವೇಜರ್ ಇದುವರೆಗೂ ತಲಪಿದ್ದ ಅತಿ ಎತ್ತರದ ಜಾಗವನ್ನು ತಲಪಿದರೂ, ಮೇಲ್ಭಾಗದಲ್ಲಿ ಎದುರಾದ ದುರ್ಗಮ ಪ್ರದೇಶವನ್ನು ದಾಟಲಾಗದೆ ಹಿಂದಿರುಗಬೇಕಾಯಿತು. 1935ರ ಬ್ರಿಟಿಷರ ಐದನೆಯ ತಂಡದ ನಾಯಕ ಎರಿಕ್ ಷಿಪ್ಟನ್. ಕಿರಿವಯಸ್ಸಿನ ಹೊರೆಯಾಳಾಗಿ ಬಂದ ತೇನ್ಸಿಂಗ್ ನ ಮೊದಲನೆಯ ತಂಡವೂ ಇದಾಗಿತ್ತು. [[ಮಳೆಗಾಲ|ಮಳೆಗಾಲದ]] ನಂತರ ಮಾಡಿದ ಈ ಪ್ರಯತ್ನವು ಅತೀವ ಹಿಮಪಾತದಿಂದ ವಿಫಲವಾಯಿತು.
1936ರ ಆರನೆಯ ಪ್ರಯತ್ನವೂ ಸಹ ಇದೇ ರೀತಿ ವಿಫಲಗೊಂಡಿತು. 1938ರಲ್ಲಿ ತಂಡದ ನಾಯಕ ಬಿಲ್ ಟಿಲ್ಮ್ಯಾನ್ ಹಾಗೂ ತೇನ್ಸಿಂಗ್ ಸೇರಿದಂತೆ ಏಳು ಜನರ ತಂಡವು 27,900 ಅಡಿ (8,290 ಮೀ.)ವರೆಗೆ ಏರಲು ಮಾತ್ರ ಸಾಧ್ಯವಾಯಿತು. ಈ ಸಮಯಕ್ಕೆ ಎರಡನೆಯ ಮಹಾಯುದ್ಧ ಪ್ರಾರಂಭವಾಗಿ ಮುಂದಿನ 12 ವರ್ಷಗಳ ವರೆಗೆ ಎವರೆಸ್ಟ್ ಪ್ರಯತ್ನಗಳನ್ನು ಕೈ ಬಿಡಬೇಕಾಗಿ ಬಂದಿತು. 1950ರಲ್ಲಿ ಟಿಬೆಟ್ ನ್ನು ಆಕ್ರಮಿಸಿದ ಚೀನಿಯರು ಶಿಖರದ ಉತ್ತರದ ಕಡೆಯಿಂದ ಪ್ರವೇಶ ನಿಷೇಧ ಮಾಡಿದರು. ಆದರೆ ದಕ್ಷಿಣದಿಂದ ಎವರೆಸ್ಟ್ ಏರುವ ತಂಡಗಳಿಗೆ ನೇಪಾಲ ಸರಕಾರ ಅನುಮತಿ ನೀಡಿತು. 1950 ಬ್ರಿಟಿಷ್ ಮತ್ತು ಅಮೆರಿಕೆಯ ಜಂಟಿ ತಂಡವೊಂದು ಪ್ರಯತ್ನ ನಡೆಸಿ ಕುಂಭು ಹಿಮನದಿಯವರೆಗೆ ತಲಪಲು ಸಾಧ್ಯವಾಯಿತು. 1951ರಲ್ಲಿ ಎರಿಕ್ ಷಿಪ್ಟನ್ ನ ಮುಂದಾಳ್ವಿಕೆಯ ತಂಡವು ಕುಂಭು ಹಿಮನದಿಯನ್ನು ಭೇದಿಸುವ ಪ್ರಯತ್ನ ಮಾಡಿ ಹಿಂತಿರುಗಿತು. ಈ ತಂಡಕ್ಕೆ ಮೊದಲಬಾರಿಗೆ ಸೇರಿದವರು ನ್ಯೂಜಿಲ್ಯಾಂಡ್ ನ [[ಎಡ್ಮಂಡ್ ಹಿಲರಿ]].
ಎವರೆಸ್ಟ್ ವಿಜಯ ಸಾಧನೆಯ ಓಟದಲ್ಲಿ ಬ್ರಿಟಿಷರನ್ನು ಹಿಂದೆ ಹಾಕಲು ಹಾತೊರೆಯುತ್ತಿದ್ದ ಸ್ವಿಸ್ (ಸ್ವಿಟ್ಜರ್ಲೆಂಡ್) ತಂಡಗಳು 1952ರಲ್ಲಿ ದಿಟ್ಟ ಪ್ರಯತ್ನವನ್ನು ಮಾಡಿದುವು. ವಸಂತಕಾಲದ ಮೊದಲ ಪ್ರಯತ್ನದಲ್ಲಿ ಈ ವಿನ್ ಡ್ಯೂನಾಂಟ್ ನೇತೃತ್ವದ ತಂಡವು ಕುಂಭು ಹಿಮನದಿಯನ್ನು ಸಫಲವಾಗಿ ಭೇದಿಸಿ, ದಕ್ಷಿಣ ಪೂರ್ವದ ದಾರಿಯನ್ನು ಮಾಡಿ 27,550 ಅಡಿ (8,382 ಮೀ.) ಎತ್ತರದಲ್ಲಿ 7ನೆಯ ಶಿಬಿರವನ್ನು ಸ್ಥಾಪಿಸಿತು. ಹೊರೆಯಾಳುಗಳ ನಾಯಕ (ಸರದಾರ) ತೇನ್ಸಿಂಗ್ ಮತ್ತು ರೇಮಂಡ್ ಲ್ಯಾಂಬರ್ಟ್ [[ಆಮ್ಲಜನಕ|ಆಮ್ಲಜನಕದ]] ಉಪಕರಣದೊಂದಿಗೆ ಎವರೆಸ್ಟ್ನ ದಕ್ಷಿಣ ಶಿಖರದ ಕೆಳಭಾಗದಲ್ಲಿ 28,210 ಅಡಿ (8,595 ಮೀ.) ವರೆಗೆ ಏರಿ ಹಿಂದಿರುಗಿದರು. ಅದೇ ವರ್ಷದ ಮಳೆಗಾಲದ ನಂತರ ಹೊರಟ ಜಿ ಚಿವಾಲ್ಲೆ ನಾಯಕತ್ವದ ಸ್ವಿಸ್ ತಂಡ ಲೊಟ್ಸೆ ಶಿಖರದ ಏರಿನ ಮೇಲೆ ಆರೋಹಣ ಮಾಡಿತು. ನೀರ್ಗಲ್ಲು ಕುಸಿತದಲ್ಲಿ ಶೆರ್ಷಾ ಮಿಂಗ್ಮಾ ದೊರ್ಜಿಯ ಸಾವಿನಿಂದಲೂ, ಹಗ್ಗ ಸಡಿಲಗೊಂಡು ತಂಡವು ಸುಮಾರು 600 ಅಡಿಗಳ ಕೆಳಗೆ ಉರುಳಿದರಿಂದಲೂ ತಂಡವು ಹಿಮ್ಮೆಟ್ಟಬೇಕಾಯಿತಾದರೂ ಈ ತಂಡ ತೆರೆದ ಮಾರ್ಗವೇ ಮುಂದಿನ ವರ್ಷಗಳಲ್ಲಿ ಯಶಸ್ವಿಯಾದ ದಾರಿಯಾಯಿತು. ಇಂದಿಗೂ ಇದು ಬಹಳಷ್ಟು ತಂಡಗಳು ಬಳಸುವ ಮಾರ್ಗ.
1953 ಎವರೆಸ್ಟ್ ವಿಜಯದ ವರ್ಷ. ಮತ್ತೆ ಪ್ರಯತ್ನಕ್ಕಿಳಿದ ಕರ್ನಲ್ ಜಾನ್ ಹಂಟ್ ನಾಯಕತ್ವದ ಬ್ರಿಟಿಷ್ ತಂಡ ಸ್ವಿಸ್ ತಂಡವು ಸ್ಥಾಪಿಸಿದ್ದ ಮಾರ್ಗವಾಗಿ ಮುಂದುವರೆದು ದಕ್ಷಿಣ ಮೇಲ್ಕಣಿವೆಯನ್ನು (ಸೌತ್ಕೋಲ್) ತಲುಪಿತು. ಇಲ್ಲಿಂದ ಶಿಖರದ ತುದಿಗೇರಲು ಇಬ್ಬಿಬ್ಬರ ತಂಡಗಳನ್ನು ಮಾಡಲಾಗಿ, ಮೇ 26ರಂದು ಮೊದಲಿಗೆ ಹೊರಟ ಆರ್ ಸಿ ಈವಾನ್ಸ್ ಮತ್ತು ಟಿ ಬೋರ್ಡಿಲಾನ್ ಜೋಡಿ ದಕ್ಷಿಣ ಶಿಖರವನ್ನು ಮದ್ಯಾಹ್ನ ಒಂದು ಘಂಟೆಯ ಹೊತ್ತಿಗೆ ಸೇರಿತು. ಆದರೆ, ಆಮ್ಲಜನಕದ ಕೊರತೆ ಹಾಗೂ ಅಂದು ಮಧ್ಯಾಹ್ನ ಪ್ರಾರಂಭವಾದ ಬಿರುಗಾಳಿಯಿಂದಾಗಿ ಹಿಂತಿರುಗಬೇಕಾಯಿತು. ಇದರ ಫಲವಾಗಿ, ಎರಡನೆಯ ಜೋಡಿ ಹಿಲೇರಿ ಮತ್ತು ತೇನ್ಸಿಂಗ್ ಅವರಿಗೆ ಎವರೆಸ್ಟ್ ತುದಿ ಮುಟ್ಟುವ ಪ್ರಯತ್ನದ ಸುವರ್ಣಾವಕಾಶ ಒದಗಿತು. 29ರಂದು ಮುಂಜಾನೆಯೇ ಹೊರಟ ಇವರು 9 ಘಂಟೆಗೆ ದಕ್ಷಿಣ ಶಿಖರವನ್ನು ತಲುಪಿ, 40 ಅಡಿ ಎತ್ತರದ (ಈಗ ಹಿಲೇರಿ ಸ್ಟೆಪ್ ಎಂದು ನಾಮಾಂಕಿತವಾಗಿರುವ) ಬಂಡೆಯನ್ನು ಏರಿ, ಬೆಳಗಿನ 11.30 ಘಂಟೆಗೆ ಎವರೆಸ್ಟ್ ಶಿಖರದ ತುದಿಯನ್ನು ತಲುಪಿ ವಿಜಯದ ಕಹಳೆಯನ್ನೂದಿದರು. ಕಾಕತಾಳೀಯ ಎಂಬಂತೆ ಎವರೆಸ್ಟ್ನ್ನು ಶೋಧಿಸಿದ 100 ವರ್ಷಗಳಿಗೆ ಸರಿಯಾಗಿ ಶಿಖರವನ್ನೇರಿದ ವಿಶ್ವದ ಮೊದಲಿಗರಾದ ಎಡ್ಮಂಡ್ ಹಿಲೇರಿ ಮತ್ತು ತೇನ್ಸಿಂಗ್ ನಾರ್ಗೆ ಇಡೀ ಮಾನವಕುಲವೇ ಹೆಮ್ಮೆಪಡುವಂತಹ ಸಾಧನೆ ಮಾಡಿದರು. ಪ್ರಸ್ತುತ ಕಾಲದಲ್ಲಿ ಲಭ್ಯವಿರುವ ಯಾವ ವಿಶೇಷ ಉಪಕರಣಗಳಿಲ್ಲದೆ, ಜೀವವನ್ನೇ ಪಣತೊಟ್ಟು ಉನ್ನತ ಸಾಧನೆಗೈದ ಈ ವೀರರ ಹೆಸರುಗಳು ಸುವರ್ಣಾಕ್ಷರಗಳಲ್ಲಿ ಬರೆಯುವಂತಹವು. ಹಿಲೇರಿಯವರಿಗೆ ಸರ್ ಬಿರುದು ನೀಡಿ ಗೌರವಿಸಲಾಯಿತು. ಪರ್ವತಾರೋಹಣವು ಬೆಳೆದಂತೆ, ಮುಂದಿನ ದಶಕಗಳಲ್ಲಿ ವಿಶ್ವದ ವಿವಿಧ ದೇಶಗಳ ತಂಡಗಳು ಶಿಖರಾರೋಹಣವನ್ನು ನಡೆಸುತ್ತಾ ಬಂದು ಈವರೆಗೆ ಸುಮಾರು 2,800ಕ್ಕೂ ಹೆಚ್ಚು ಪರ್ವತಾರೋಹಿಗಳು ಶಿಖರವನ್ನು ಏರಿದ್ದರೆ, ಈ ಸಾಹಸದಲ್ಲಿ ಅಸು ನೀಗಿದವರು 180ಕ್ಕೂ ಹೆಚ್ಚು. ಎವರೆಸ್ಟ್ ಏರಲು ಮುಖ್ಯವಾಗಿ ನಾರ್ತ್ಕೋಲ್ ಮತ್ತು ಸೌತ್ಕೋಲ್ ಮಾರ್ಗಗಳಾಗಿದ್ದರೂ, ಒಟ್ಟು 15 ಕಡೆಯಿಂದ ಶಿಖರಾರೋಹಣ ಮಾಡಲಾಗಿದೆ. ಅನೇಕ ದಾಖಲೆಗಳೂ ಸ್ಥಾಪಿತವಾಗಿವೆ (ದಾಖಲೆಗಳನ್ನು ನೋಡಿ).
ತೇನ್ಸಿಂಗ್ರ ಸಾಹಸದ ಅನಂತರ 1957ರಲ್ಲಿ ಭಾರತೀಯ ತಂಡವು ಆರನೆಯ ಉನ್ನತ ಪರ್ವತವಾದ ಚೋ ಓಯು ವನ್ನು ಏರಿದ ಹಿನ್ನೆಲೆಯಲ್ಲಿ ಭಾರತೀಯ ಪರ್ವತಾರೋಹಣ ಸಂಸ್ಥೆ (ಇಂಡಿಯನ್ ಮೌಂಟನಿಯರಿಂಗ್ ಫೌಂಡೇಷನ್) ನವದೆಹಲಿಯಲ್ಲಿ ಸ್ಥಾಪಿತವಾಯಿತು. 1960ರಲ್ಲಿ ಬ್ರಿಗೇಡಿಯರ್ ಗ್ಯಾನ್ಸಿಂಗ್ ನೇತೃತ್ವದ ಮೊದಲನೆಯ ಭಾರತೀಯ ತಂಡವು ಎವರೆಸ್ಟ್ ಆರೋಹಣ ಪ್ರಯತ್ನಿಸಿತು. ಶಿಖರವು ಕೇವಲ 700 ಅಡಿ ದೂರವಿದ್ದಾಗ, ಪ್ರತಿಕೂಲ ಹವಾಮಾನದಿಂದ ಹಿಂತಿರುಗಿತು. 1962ರಲ್ಲಿಯೇ ಮೇಜರ್ ಜಾನ್ ಡಯಾಸ್ ನಾಯಕತ್ವದ ತಂಡವು ಶಿಖರದ 400 ಅಡಿ ಕೆಳಭಾಗದವರೆಗೆ ಏರಿ ಹಿಂತಿರುಗಿದರು. ಕೊನೆಗೆ 1965ರಲ್ಲಿ ಕಮ್ಯಾಂಡರ್ ಎಂ ಎಸ್ ಕೊಹ್ಲಿಯವರ ನಾಯಕತ್ವದಲ್ಲಿ 9 ಭಾರತೀಯರು ವಿಜಯಿಗಳಾದರು. ಇವರಲ್ಲೊಬ್ಬರಾದ ನವಾಂಗ್ ಗೊಂಬು 1963ರಲ್ಲಿ ಅಮೆರಿಕನ್ನರ ತಂಡದೊಡನೆ ಒಮ್ಮೆ ಶಿಖರವೇರಿದ್ದು, ಎವರೆಸ್ಟ್ನ್ನು ಎರಡು ಬಾರಿಗೆ ಏರಿದ ವಿಶ್ವದ ಮೊದಲನೆಯ ಪರ್ವತಾರೋಹಿಯಾದರು. ಮುಂದೆ 1984ರಲ್ಲಿ ಮಹಿಳಾ ತಂಡದ [[ಬಚ್ಚೇಂದ್ರಿಪಾಲ್]] ಎವರೆಸ್ಟ್ ಏರಿದ ಭಾರತದ ಪ್ರಥಮ ಮಹಿಳೆಯಾದರು. ಇಷ್ಟೆಲ್ಲಾ ಸಾಧನೆಗಳಾದರೂ, ಎವರೆಸ್ಟ್ನ್ನು ಎಂದಿಗೂ ಯಾರಿಗೂ ಗೆದ್ದೆನೆಂಬ ಭಾವನೆ ಸಲ್ಲದು. ದೈವಸ್ವರೂಪವಾದ ಆ ತಾಯಿ ಮುಗ್ದಮನಸ್ಸಿನಿಂದ ಗೌರವಿಸಿ ಬಂದ ಪರ್ವತಾರೋಹಿಗಳನ್ನು ತನ್ನ ಮಡಿಲಿಗೆ ಕರೆಯುತ್ತಾಳೆ, ಬರಮಾಡಿಕೊಳ್ಳುತ್ತಾಳೆ. ಪ್ರಕೃತಿಯ ಸೃಷ್ಟಿಯ ಅನಂತಾನಂತತೆಯಲ್ಲಿ ಮಾನವ ಕೇವಲ ಒಂದು ಬಿಂದುವಿನಂತೆ.
== ಎವರೆಸ್ಟ್ ದಾಖಲೆಗಳು ==
* 1953 ತೇನ್ಸಿಂಗ್ ನಾರ್ಗೆ ಮತ್ತು ಸರ್ ಎಡ್ಮಂಡ್ ಹಿಲೇರಿ ಶಿಖರವನ್ನೇರಿದ ಮೊದಲ ಪರ್ವತಾರೋಹಿಗಳು.
* 1960 ಚೀನೀಯರ ತಂಡವು ಉತ್ತರದಿಂದ ಶಿಖರವನ್ನೇರಿದ ಮೊದಲಿಗರು.
* 1965 ಭಾರತೀಯ ನವಾಂಗ್ ಗೊಂಬು ಎರಡು ಬಾರಿ ಶಿಖರವನ್ನೇರಿದ ಮೊದಲಿಗರಾದರು.
* 1975 ಜಪಾನ್ ದೇಶದ ಜಂಕೋ ಟೇಬೀ ಶಿಖರವನ್ನೇರಿದ ಪ್ರಥಮ ಮಹಿಳೆ.
* 1980 ರೀನ್ಹೋಲ್ಡ್ ಮೆಸ್ನರ್ ಒಂಟಿಯಾಗಿ ಶಿಖರವೇರಿದ ಮೊದಲಿಗ.
* 1984 ಶಿಖರವೇರಿದ ಪ್ರಥಮ ಭಾರತೀಯ ಮಹಿಳೆ ಬಚ್ಚೇಂದ್ರಿ ಪಾಲ್.
* 1988 ನ್ಯೂಜಿಲ್ಯಾಂಡ್ನ ಲಿಡಿಯಾ ಬ್ರ್ಯಾಡಿ ಆಮ್ಲಜನಕವಿಲ್ಲದೆ ಏರಿದ ಪ್ರಥಮ ಮಹಿಳೆ.
* 1999 ಬಾಬು ಚಿರಿ ಶೆರ್ಪಾ ಶಿಖರದ ಮೇಲೆ ರಾತ್ರಿ ಕಳೆದ ಏಕೈಕ ಪರ್ವತಾರೋಹಿ.
* 2001 ಅಮೆರಿಕದ ಎರಿಕ್ ವೀಹೆನ್ ಮೈಯರ್ ಶಿಖರವೇರಿದ ಮೊದಲನೆಯ ಅಂಧಪರ್ವತಾರೋಹಿ.
* 2002 ಶಾಮ ವಾಕಾನಬೆ (64ರ ಹರೆಯದ) ಶಿಖರವೇರಿದ ಅತ್ಯಂತ ಹಿರಿಯ ಮಹಿಳೆ.
* 2003 70ರ ಹರೆಯದ ಯೂಶಿರೋ ಮಿಯೂರಾ ಶಿಖರವೇರಿದ ಅತ್ಯಂತ ಹಿರಿಯ ವ್ಯಕ್ತಿ
* 2003 ಅಮೆರಿಕದ ಗ್ಯಾರಿ ಗಲ್ಲರ್ ಶಿಖರವೇರಿದ ಒಂದು ಕೈಯಿಲ್ಲದ ಪರ್ವತಾರೋಹಿ.
* 2003 ನೇಪಾಲದ ಲಕ್ಪಾ ಗೇಲು ಶೆರ್ಪಾ ಅತ್ಯಂತ ವೇಗವಾಗಿ ಶಿಖರವನ್ನೇರಿದವರು(ಸಮಯ 10ಘಂ, 56ನಿ, 46ಸೆ.)
* 2003 ಅಮೆರಿಕದ ಜೆಸ್ ರೋಸ್ಕೆಲ್ಲಿ ಶಿಖರವೇರಿದ ಅತಿ ಕಿರಿಯ.
* 2003 ನೇಪಾಲದ ಅಪಾ ಶೆರ್ಪಾ ಅತಿ ಹೆಚ್ಚು ಬಾರಿ ಶಿಖರವೇರಿದವ. (ಈವರೆಗೆ 13 ಬಾರಿ)
* ವಿಶ್ವದ 8,000 ಮೀ.ಗಿಂತ ಎತ್ತರದ 14 ಶಿಖರಗಳನ್ನು ಏರಿದ ಮೊದಲಿಗ ರೀನ್ಹೋಲ್ಡ್ ಮೆಸ್ನರ್.
ಅನಂತರದ ಕೆಲವು ಎವರೆಸ್ಟ್ ಆರೋಹಣದ ದಾಖಲೆಗಳೆಂದರೆ,
* ನೇಪಾಳದ ಅಪಾ ಶೆರ್ಪಾ 2002-2011ರ ಅವಧಿಯಲ್ಲಿ ವರ್ಷ ಬಿಟ್ಟು ವರ್ಷದಂತೆ 10 ಬಾರಿ ಎವರೆಸ್ಟ್ ಶಿಖರವನ್ನು ಏರಿದ್ದಾನೆ.
* ನೇಪಾಳದ ಪೆಮ್ ದೋರ್ಕಿ ತಳಭಾಗದ ಕ್ಯಾಂಪ್ ಸ್ಥಳದಿಂದ ಮೇ 21, 2004ರಂದು ಅತ್ಯಂತ ವೇಗವಾಗಿ, ಅಂದರೆ ಕೇವಲ ಎರಡು ಗಂಟೆ ಹತ್ತು ನಿಮಿಷಗಳ ಅವಧಿಯಲ್ಲಿ ಎವರೆಸ್ಟ್ ಏರಿದ್ದಾನೆ.
* ಮೇ 22, 2010ರಂದು ಎವರೆಸ್ಟ್ ಏರಿದ ಸುಮಾರು 13 ವರ್ಷಗಳ ಅಮೆರಿಕೆಯ ಜೊರ್ಡಾನ್ ರೋಮೆರೊ ಈ ಶಿಖರವನ್ನು ಹತ್ತಿದ ಅತ್ಯಂತ ಕಿರಿಯ ವಯಸ್ಸಿನವನು.
* ಮೇ 23, 2013ರಂದು ಎವರೆಸ್ಟ್ ಹತ್ತಿದ ಜಪಾನಿನ ಯೂಚಿರೊ ಮಿಯೂರಾ ಈ ಸಾಹಸವನ್ನು ಮೆರೆದ ಅತಿ ಹೆಚ್ಚು ವಯಸ್ಸಿನವನು.
* ಮೇ 25, 2014ರಂದು ಎವರೆಸ್ಟ್ ಏರಿ ಭಾರತದ 13 ವಯಸ್ಸಿನ ಹದಿಹರೆಯದ ಮಲವತ್ ಪುರ್ಣ ಈ ಸಾಹಸಕ್ಕೆ ಕೈಹಾಕಿದ ಅತ್ಯಂತ ಕಡಿಮೆ ವಯಸ್ಸಿನ ಬಾಲಕಿ.
* ಏಪ್ರಿಲ್ 21, 2013ರಂದು ಅಮೆರಿಕೆಯ ಲಿಜಿ ಹಾಕರ್ ಎವರೆಸ್ಟಿನ ತಳಮಟ್ಟದಿಂದ ಅತ್ಯಂತ ವೇಗವಾಗಿ, ಅಂದರೆ ಸುಮಾರು 63 ಗಂಟೆಗಳಲ್ಲೇ ಕೆ.ಟಿ.ಎಮ್.ಗೆ ಓಡಿದ ಮೊದಲ ವ್ಯಕ್ತಿ.
* 2007 ವರ್ಷವೊಂದರಲ್ಲೇ ಈ ಮಾಹಾಶಿರವನ್ನು ವಿವಿಧ ವ್ಯಕ್ತಿಗಳು ಏಳು ಬಾರಿ ಏರಿದ್ದಾರೆ.
==ಪುನಃ ಅಳತೆ==
[[File:Mount-Everest.jpg|thumb|Mount-Everest]]
*ಭಾರತೀಯ ಸರ್ವೇಕ್ಷಣಾ ಇಲಾಖೆಯು ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ನ ಎತ್ತರವನ್ನು ಮತ್ತೆ ಅಳೆಯಲು ನಿರ್ಧರಿಸಿದೆ. ಎರಡು ವರ್ಷಗಳ ಹಿಂದೆ ನೇಪಾಳದಲ್ಲಿ ಸಂಭವಿಸಿದ್ದ ಭಾರಿ ಭೂಕಂಪದಿಂದ ಎವರೆಸ್ಟ್ನ ಎತ್ತರ ಕಡಿಮೆಯಾಗಿರಬಹುದು ಎಂದು ಕೆಲವು ತಜ್ಞರು ಅನುಮಾನಪಟ್ಟಿದ್ದರು. ಪರ್ವತದ ಮರು ಅಳತೆ ನಡೆಸುವುದರಿಂದ ವೈಜ್ಞಾನಿಕ ಅಧ್ಯಯನಕ್ಕೆ ನೆರವಾಗಲಿದೆ ಎಂದು ಸರ್ವೇಯರ್ ಜನರಲ್ ಸ್ವರ್ಣ ಸುಬ್ಬಾ ರಾವ್ ಹೇಳಿದ್ದಾರೆ.
*1855 ರಲ್ಲಿ ಎವರೆಸ್ಟ್ನ ಎತ್ತರವನ್ನು ಅಳೆಯಲಾಗಿತ್ತು. ಭಾರತೀಯ ಸರ್ವೇಕ್ಷಣಾ ಇಲಾಖೆ ಮಾತ್ರವಲ್ಲದೆ, ಇತರರು ಕೂಡಾ ಇದರ ಎತ್ತರ ಅಳೆದಿದ್ದರು. ಆದರೆ ಇಲಾಖೆಯ ಬಳಿಯಲ್ಲಿರುವ ಮಾಹಿತಿಯೇ ನಿಖರವಾಗಿದೆ. ಅದರ ಪ್ರಕಾರ ಎವರೆಸ್ಟ್ ಪರ್ವತ 29,028 ಅಡಿ ಎತ್ತರವಿದೆ’ ಎಂದು ತಿಳಿಸಿದ್ದಾರೆ.<ref>[http://www.prajavani.net/news/article/2017/01/25/468095.html ಎವರೆಸ್ಟ್’ನ ಎತ್ತರ ಮರು ಅಳತೆ;ಪ್ರಜಾವಾಣಿ ವಾರ್ತೆ;25 Jan, 2017]</ref>
==೨೦೨೦ ರ ಅಳತೆ.==
*ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ನ ನಿಖರವಾದ ಎತ್ತರ 8848.86 ಮೀಟರ್, (86 Centimeters =2.8215223 Feet: ಎತ್ತರ=29,028 ಅಡಿ+2.821ಅಡಿ= 29030.821ಅಡಿ) ಎಂದು ನೇಪಾಳ ಮತ್ತು ಚೀನಾ ಮಂಗಳವಾರ 8-12-2020 ರಂದು ಜಂಟಿಯಾಗಿ ಹೇಳಿಕೆ ನೀಡಿ ವಿಶ್ವದ ಅತಿ ಎತ್ತರದ ಪರ್ವತದ ಎತ್ತರದ ಬಗ್ಗೆ ದೀರ್ಘಕಾಲದ ಚರ್ಚೆಯನ್ನು ಕೊನೆಗೊಳಿಸುವುದಾಗಿ ಘೋಷಿಸಿತು. ಅಧಿಕೃತ ಎವರೆಸ್ಟ್ ಹಿಮದ ಎತ್ತರವನ್ನು 8,848 ಮೀಟರ್ (29,028 ಅಡಿ) 1954 ರಲ್ಲಿ ಸರ್ವೆ ಆಫ್ ಇಂಡಿಯಾ ಮಾಪನ ಮಾಡಿತು.<ref>[https://www.hindustantimes.com/india-news/mt-everest-s-new-height-is-8-848-86-metres-say-nepal-and-china/story-nzpE6jqjV3IPmkXIG04dSJ.html Mt Everest’s new height is 8,848.86 metres, say Nepal and China Updated: Dec 08, 2020, 15:53 IST]</ref>
==ಉಲ್ಲೇಖಗಳು==
{{reflist}}
{{Interwikineeded}}
[[ವರ್ಗ:ಪರ್ವತಗಳು]]
acjbarzvwwrc0omibfxk62d2x8fbbm5
ಗಿಯಾಂಬಟ್ಟಿಸ್ಟಾ ವಿಕೊ
0
88147
1379561
1344874
2026-08-09T04:22:02Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379561
wikitext
text/x-wiki
{{Infobox philosopher
| region = {{unbulleted list| ಪಾಶ್ಚಾತ್ಯ ತತ್ವಶಾಸ್ತ್ರ| ಇಟಾಲಿಯನ್ ತತ್ವಶಾಸ್ತ್ರ}}
| era = ೧೮ ನೇ ಶತಮಾನದ ತತ್ವಶಾಸ್ತ್ರ
| name = ಗಿಯಾಂಬಟ್ಟಿಸ್ಟಾ ವಿಕೊ
| image = GiambattistaVico.jpg
| alt = Portrait
| caption =
| birth_name = ಜಿಯೋವನ್ ಬಟಿಸ್ಟಾ ವಿಕೊ
| birth_date = {{Birth date|1668|6|23|df=yes}}
| birth_place = ನೇಪಲ್ಸ್, ನೇಪಲ್ಸ್ ಸಾಮ್ರಾಜ್ಯ
| death_date = ೨೩ ಜನವರಿ ೧೭೭೪ (ವಯಸ್ಸು ೭೫)
| death_place = ನೇಪಲ್ಸ್, ನೇಪಲ್ಸ್ ಸಾಮ್ರಾಜ್ಯ
| education = [[University of Naples Federico II|University of Naples]] {{nowrap|([[LL.D.]], 1694)}}
| institutions = ನೇಪಲ್ಸ್ ವಿಶ್ವವಿದ್ಯಾಲಯ
| school_tradition = {{plainlist|
* ಕ್ರಿಶ್ಚಿಯನ್ ಮಾನವತಾವಾದ
* ಪ್ರತಿ-ಜ್ಞಾನೋದಯ
* ಐಟಾಲಿಯನ್ ಜ್ಞಾನೋದಯ
* ನೈಸರ್ಗಿಕ ಕಾನೂನು
* ದೃಷ್ಟಿಕೋನ<ref>{{cite book|last=Gambarota|first=Paola|chapter=Giambattista Vico, the Vernacular, and the Foundations of Modern Italy|title=Irresistible Signs|location=Toronto|publisher=University of Toronto Press|year=2017|pages=99–144|doi=10.3138/9781442695269-004|isbn=9781442695269}}</ref><ref>{{cite journal|last=Lollini|first=Massimo|title=Vico's More than Human Humanism|journal=Annali d'Italianistica|volume=29|year=2011|pages=381–399|jstor=24016434}}</ref>
}}
| main_interests = [[ಜ್ಞಾನಶಾಸ್ತ್ರ]], ಮಾನವಿಕ, [[ನ್ಯಾಯಶಾಸ್ತ್ರ]], ಇತಿಹಾಸದ [[ತತ್ವಶಾಸ್ತ್ರ]], ವಿಜ್ಞಾನದ ತತ್ವಶಾಸ್ತ್ರ, ಕವನ, ರಾಜಕೀಯ ತತ್ವಶಾಸ್ತ್ರ, ವಾಗ್ಮಿ
| notable_ideas = {{plainlist|
* ವರ್ಗ ಹೋರಾಟ<ref name=IEP>{{cite encyclopedia|last=Bertland|first=Alexander|title=Giambattista Vico (1668—1744)|encyclopedia=Internet Encyclopedia of Philosophy|url=https://iep.utm.edu/vico/}}</ref>
* ವೈಚಾರಿಕತೆ ಮತ್ತು ಕಡಿತವಾದದ ಟೀಕೆ
* ಮಾನವಶಾಸ್ತ್ರವು ಮಾನವ ವಿಜ್ಞಾನ ಅಥವಾ ಸಮಾಜ ವಿಜ್ಞಾನ
* ಆದರ್ಶ ಶಾಶ್ವತ ಇತಿಹಾಸ
* ಇತಿಹಾಸದ ತತ್ವಶಾಸ್ತ್ರ
* ರಾಜಕೀಯ ಪುರಾಣಗಳ ಸಿದ್ಧಾಂತ
}}
| notable_works = {{unbulleted list|''[[Principî di Scienza Nuova]]''|''De antiquissima Italorum sapientia''}}
| influences = {{hlist|ಪ್ಲೇಟೋ |ಅರಿಸ್ಟಾಟಲ್ |ಸಿಸೆರೊ |ವರ್ರೊ |ಟ್ಯಾಸಿಟಸ್ |ಅಗಸ್ಟೀನ್ |ಡನ್ಸ್ ಸ್ಕಾಟಸ್ |ಅಕ್ವಿನಾಸ್ |ಡಾಂಟೆ |ಮ್ಯಾಕಿಯಾವೆಲ್ಲಿ |ಸೌರೆಜ್ |ಸೆಲ್ಡೆನ್ |ಹಾಬ್ಸ್ |ಥೆಸಾರೊ<ref>{{cite journal|last=Tedesco|first=Salvatore|pages=257–266|title=La retorica arguta di Emanuele Tesauro e il problema del paralogismo|year=2005|volume=I|issn=1824-9817|journal=Laboratorio dell'ISPF}}</ref>| ಮಾಲೆಬ್ರಾಂಚೆ |ಬೇಕನ್ |ಗ್ರೊಟಿಯಸ್ |ಪಲ್ಲವಿಸಿನೊ<ref>B. Croce, ''Estetica'' (Bari, Laterza, 1922), pp. 253-4; ''Storia della età barocca in Italia'' (Bari, Laterza, 1929), p. 228; F. Nicolini, ''Fonti e riferimenti storici della seconda Scienza Nuova'' (Bari, Laterza, 1931), I, 94.</ref>| ಪುಫೆಂಡಾರ್ಫ್ |ಲೀಬ್ನಿಜ್ |ಹೆರೊಡೋಟಸ್}}
| influenced = {{hlist|ಅಲ್ಬರ್ಡಿ |ಔರ್ಬಾಚ್<ref name="Piperno">{{cite journal |last1=Piperno |first1=Martina |title=Giambattista Vico's 'Constructive' Language and its Post-Revolutionary Readers |journal=Comparative Critical Studies |date=2018 |volume=15 |issue=2 |pages=261–278|doi=10.3366/ccs.2018.0292 |s2cid=149891225 }}</ref>| ಬರ್ಲಿನ್| ಕ್ಯಾಸ್ಟೋರಿಯಾಡಿಸ್| ಕ್ಯಾಟಾನಿಯೊ<ref name="Piperno" />| ಕೋಲ್ರಿಡ್ಜ್| ಕಾಲಿಂಗ್ವುಡ್| ಕಾರ್ಟೆಸ್| ಅಡ್ಡ| ಬಾಣಸಿಗ<ref name="Piperno" />| ಇವೊಲಾ| ಫೆರಾರಿ<ref name="Piperno" />| ಫೋಸ್ಕೋಲೋ<ref name="Piperno" />| ಫ್ರೈ| ಗೋಥೆ<ref>{{Cite web| url=https://www.cmlt.uga.edu/news/stories/2013/vichian-theories-language-genius-and-history-goethes-faust| title=Vichian Theories of Language, Genius, and History in Goethe's FAUST | Comparative Literature}}</ref>| ಗ್ರಾಮ್ಸ್ಕಿ| ಹೆಗೆಲ್| ಹಿಲ್ಮ್ಯಾನ್| ಹೊಸ್ಲೆ| ಜಾಯ್ಸ್| ಲೆವಿ<ref name="Piperno" />| ಲೊಮೊನಾಕೊ<ref name="Piperno" />| ಮಾಸ್ಟರ್| ಮಾರ್ಕ್ಸ್| ಮೆಕ್ಲುಹಾನ್| ಮೈಕೆಲೆಟ್| ಪ್ರೆವೆ| ಕ್ವಿನೆಟ್| ಹೇಳಿದರು| ಸೋರೆಲ್| ವೋಗೆಲಿನ್| ಬಿಳಿ| ಡೆಲ್ ನೋಸ್}}
| signature =
}}
'''ಗಿಯಾಂಬಟ್ಟಿಸ್ಟಾ ವಿಕೊ''' (೨೩ ಜೂನ್ ೧೬೬೮ - ೨೩ ಜನವರಿ ೧೭೪೪) [[ಇಟಾಲಿಯನ್]] ಜ್ಞಾನೋದಯದ ಸಮಯದಲ್ಲಿ ಇಟಾಲಿಯನ್ [[ತತ್ವಜ್ಞಾನಿ]], ವಾಗ್ಮಿ, ಇತಿಹಾಸಕಾರ ಮತ್ತು ನ್ಯಾಯಶಾಸ್ತ್ರಜ್ಞರಾಗಿದ್ದರು. ಆಧುನಿಕ ತರ್ಕಬದ್ಧತೆಯ ವಿಸ್ತರಣೆ ಮತ್ತು ಅಭಿವೃದ್ಧಿಯನ್ನು ಅವರು ಟೀಕಿಸಿದರು, ಕಾರ್ಟೇಶಿಯನ್ ವಿಶ್ಲೇಷಣೆ ಮತ್ತು ಇತರ ರೀತಿಯ ಕಡಿತವಾದವನ್ನು ಮಾನವ ಜೀವನಕ್ಕೆ ಅಪ್ರಾಯೋಗಿಕಗೊಳಿಸಿದರು ಮತ್ತು ಅವರು ಶಾಸ್ತ್ರೀಯ ಪ್ರಾಚೀನತೆ, ಸಾಮಾಜಿಕ [[ವಿಜ್ಞಾನ]], ಸೆಮಿಯೋಟಿಕ್ಸ್ ಮತ್ತು ನವೋದಯ ಮಾನವಿಕತೆಗಳ ಬಗ್ಗೆ ಕ್ಷಮೆಯಾಚಕರಾಗಿದ್ದರು. ಅವರು ಇತಿಹಾಸದಲ್ಲಿ ಮೊದಲ [[:en:Counter-Enlightenment|ಪ್ರತಿ-ಜ್ಞಾನೋದಯ]] ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ.<ref>''Vico and Herder: Two Studies in the History of Ideas''</ref><ref>Giambattista Vico (1976), "The Topics of History: The Deep Structure of the New Science", in Giorgio Tagliacozzo and Donald Philip Verene, eds, ''Science of Humanity'', Baltimore and London: 1976.</ref><ref>''Giambattista Vico: An International Symposium''. Giorgio Tagliacozzo and Hayden V. White, eds. Johns Hopkins University Press: 1969. Attempts to inaugurate a non-historicist interpretation of Vico are in ''Interpretation: A Journal of Political Philosophy'' [http://www.interpretationjournal.com/], Spring 2009, Vol. 36.2, and Spring 2010 37.3; and in ''Historia Philosophica'', Vol. 11, 2013 [http://www.libraweb.net/sommari.php?chiave=5].</ref>
[[ಲ್ಯಾಟಿನ್]] ಪೌರುಷ ವೆರಮ್ ಎಸ್ಸೆ ಇಪ್ಸಮ್ ಫ್ಯಾಕ್ಟಮ್ ("ಸತ್ಯವು ಸ್ವತಃ ಏನಾದರೂ ಮಾಡಲ್ಪಟ್ಟಿದೆ") ವಿಕೊದಿಂದ ರಚಿಸಲ್ಪಟ್ಟಿದೆ, ಇದು ರಚನಾತ್ಮಕ [[ಜ್ಞಾನಶಾಸ್ತ್ರ]]ದ ಆರಂಭಿಕ ನಿದರ್ಶನವಾಗಿದೆ. ಅವರು ಇತಿಹಾಸದ [[ತತ್ತ್ವಶಾಸ್ತ್ರ]]ದ ಆಧುನಿಕ ಕ್ಷೇತ್ರವನ್ನು ಉದ್ಘಾಟಿಸಿದರು ಮತ್ತು [[ಇತಿಹಾಸ]]ದ ತತ್ವಶಾಸ್ತ್ರ ಎಂಬ ಪದವು ಅವರ ಬರಹಗಳಲ್ಲಿಲ್ಲದಿದ್ದರೂ, ವಿಕೊರವರು "ತಾತ್ವಿಕವಾಗಿ ನಿರೂಪಿಸಲ್ಪಟ್ಟ ತತ್ತ್ವಶಾಸ್ತ್ರದ ಇತಿಹಾಸ" ಬಗ್ಗೆ ಮಾತನಾಡಿದರು.ಅವರು ಇತಿಹಾಸಕಾರರಲ್ಲದಿದ್ದರೂ, ವಿಕೊದಲ್ಲಿನ ಸಮಕಾಲೀನ ಆಸಕ್ತಿಯು ಸಾಮಾನ್ಯವಾಗಿ ಇತಿಹಾಸಕಾರರಿಂದ ಪ್ರೇರೇಪಿಸಲ್ಪಟ್ಟಿದೆ, ಉದಾಹರಣೆಗೆ ಇಸೈಯಾ ಬರ್ಲಿನ್, ತತ್ವಜ್ಞಾನಿ ಮತ್ತು ವಿಚಾರಗಳ ಇತಿಹಾಸಕಾರ, ಎಡ್ವರ್ಡ್ ಸೈಡ್, ಸಾಹಿತ್ಯ ವಿಮರ್ಶಕ ಮತ್ತು ಹೇಡನ್ ವೈಟ್, ಮೆಟಾಹಿಸ್ಟೋರಿಯನ್.
ವಿಕೊ ಅವರ ಬೌದ್ಧಿಕ ಶ್ರೇಷ್ಠ ಕೃತಿಯು ಸೈಂಜ ನುವಾ ಅಥವಾ ನ್ಯೂ ಸೈನ್ಸ್ (೧೭೨೫) ಎಂಬ ಪುಸ್ತಕವಾಗಿದೆ. [[ಸಮಾಜ]] ಏಳುವ ಮತ್ತು ಬೀಳುವ ಐತಿಹಾಸಿಕ [[ಚಕ್ರ]]ಗಳನ್ನು ದಾಖಲಿಸುವ ಮತ್ತು ವಿವರಿಸುವ ಏಕೈಕ ವಿಜ್ಞಾನವಾಗಿ ಮಾನವಿಕಗಳ ವ್ಯವಸ್ಥಿತ ಸಂಘಟನೆಯನ್ನು ಪ್ರಯತ್ನಿಸುತ್ತದೆ.<ref>''The Penguin Encyclopedia'' (2006), David Crystal, ed., p. 1,409.</ref>
==ಜೀವನ ಚರಿತ್ರೆ==
ಗಿಯಾಂಬಟ್ಟಿಸ್ಟಾ ವಿಕೊ ಅವರು [[ಜೂನ್]] ೨೩, ೧೬೬೮ ರಂದು ಜನಿಸಿದರು. [[ಇಟಲಿ]]ಯ ನೇಪಲ್ಸ್ನಲ್ಲಿ ಪುಸ್ತಕ ಮಾರಾಟಗಾರನಿಗೆ ಜನಿಸಿದ ಜಿಯೋವನ್ ಬಟಿಸ್ಟಾ ವಿಕೊ ಹಲವಾರು ಶಾಲೆಗಳಲ್ಲಿ ವ್ಯಾಸಂಗ ಮಾಡಿದರು. ಆದರೆ ಅನಾರೋಗ್ಯ ಮತ್ತು ಜೆಸ್ಯೂಟ್ಗಳ ಪಾಂಡಿತ್ಯದ ಬಗೆಗಿನ ಅತೃಪ್ತಿಯಿಂದ ಅವರು ಮನೆಯಲ್ಲಿ ಬೋಧಕರಿಂದ [[ಶಿಕ್ಷಣ]] ಪಡೆದರು. ಅವನ ಆತ್ಮಚರಿತ್ರೆಯ ಕೆಲಸದ ಪುರಾವೆಗಳು, ವಿಕೊ ತಂದೆಯ ಪ್ರಭಾವದಡಿಯಲ್ಲಿ ಶಿಕ್ಷಣ ಪಡೆದ ಸ್ವಯಂಶಿಕ್ಷಕನಾಗಿದ್ದನು ಎಂದು ಸೂಚಿಸುತ್ತದೆ. ಹುಡುಗನಿಗೆ ಏಳು ವರ್ಷ ವಯಸ್ಸಿನವನಾಗಿದ್ದಾಗ ಆಕಸ್ಮಿಕವಾಗಿ ಬಿದ್ದ ಪರಿಣಾಮವಾಗಿ ಶಾಲೆಯಲ್ಲಿ ಮೂರು ವರ್ಷಗಳ ಕಾಲ ಅನುಪಸ್ಥಿತಿಯಲ್ಲಿದ್ದನು.<ref name="SEP">{{cite web|last=Costelloe|first=Timothy|title=Giambattista Vico|url=http://plato.stanford.edu/entries/vico/|work=The Stanford Encyclopedia of Philosophy|date=Fall 2022|access-date=16 June 2024}}</ref> ಜಿಯೋವನ್ ಬಟಿಸ್ಟಾ ಅವರ ಔಪಚಾರಿಕ ಶಿಕ್ಷಣವು ನೇಪಲ್ಸ್ [[ವಿಶ್ವವಿದ್ಯಾನಿಲಯ]]ದಲ್ಲಿತ್ತು, ಅಲ್ಲಿ ಅವರು ೧೬೯೪ ರಲ್ಲಿ ಡಾಕ್ಟರ್ ಆಫ್ ಸಿವಿಲ್ ಮತ್ತು ಕ್ಯಾನನ್ ಲಾ ಆಗಿ ಪದವಿ ಪಡೆದರು.<ref name="SEP" />
೧೬೮೬ ರಲ್ಲಿ, ಟೈಫಸ್ನಿಂದ ಬದುಕುಳಿದ ನಂತರ ಅವರು ಸಲೆರ್ನೊದ [[ದಕ್ಷಿಣ]]ದ ವಟೊಲ್ಲಾದಲ್ಲಿ ಬೋಧಕರಾಗಿ ಕೆಲಸವನ್ನು ಒಪ್ಪಿಕೊಂಡರು, ಇದು ಒಂಬತ್ತು ವರ್ಷಗಳ ವೃತ್ತಿಪರವಾಗಿ ೧೬೯೫ ರವರೆಗೆ ನಡೆಯಿತು.<ref name="SEP" /> ನಾಲ್ಕು ವರ್ಷಗಳ ನಂತರ, ೧೬೯೯ ರಲ್ಲಿ ವಿಕೊ ಬಾಲ್ಯದ ಸ್ನೇಹಿತ ತೆರೇಸಾ ಕ್ಯಾಟೆರಿನಾ ಡೆಸ್ಟಿಟೊ ಅವರನ್ನು ವಿವಾಹವಾದರು.<ref name="SEP" /> ನೇಪಲ್ಸ್ ವಿಶ್ವವಿದ್ಯಾನಿಲಯದಲ್ಲಿ ವಾಕ್ಚಾತುರ್ಯದಿಂದ ಅಲ್ಲಿ ಕುರ್ಚಿಯನ್ನು ಸ್ವೀಕರಿಸಿದರು. ಅವರು ಅನಾರೋಗ್ಯದಿಂದ ನಿವೃತ್ತರಾಗುವವರೆಗೆ ಅಲ್ಲಿ ಇದ್ದರು. ಅವರ ಶೈಕ್ಷಣಿಕ ವೃತ್ತಿಜೀವನದ ಉದ್ದಕ್ಕೂ, ವಿಕೊ ನ್ಯಾಯಶಾಸ್ತ್ರದ ಹೆಚ್ಚು ಗೌರವಾನ್ವಿತ ಕುರ್ಚಿಯನ್ನು ಪಡೆಯಲು ಬಯಸಿದರು, ಆದರೆ ಅದನ್ನು ಎಂದಿಗೂ ಸಾಧಿಸಲಿಲ್ಲ. ಆದಾಗ್ಯೂ, ೧೭೩೪ ರಲ್ಲಿ ಅವರು [[ವಿಶ್ವವಿದ್ಯಾನಿಲಯ]]ದ ಪ್ರಾಧ್ಯಾಪಕರಾಗಿ ಗಳಿಸಿದ್ದಕ್ಕಿಂತ ಹೆಚ್ಚಿನ ಸಂಬಳದಲ್ಲಿ ನೇಪಲ್ಸ್ ರಾಜ ಚಾರ್ಲ್ಸ್ III ರಿಂದ ರಾಯಲ್ ಇತಿಹಾಸಕಾರರಾಗಿ ನೇಮಕಗೊಂಡರು.
==ವಿಕೋರವರ ವಾಕ್ಚಾತುರ್ಯ ಮತ್ತು ಮಾನವತಾವಾದ==
[[File:Casa_Vico.jpg|left|220x220px|"ಈ ಪುಟ್ಟ ಕೋಣೆಯಲ್ಲಿ ಗಿಯಾಂಬಟ್ಟಿಸ್ಟಾ ವಿಕೊ ಅವರು [[ಜೂನ್]] ೨೩, ೧೬೬೮ ರಂದು ಜನಿಸಿದರು. ಇಲ್ಲಿ ಅವರು ಹದಿನೇಳು ವರ್ಷ ವಯಸ್ಸಿನವರೆಗೂ ವಾಸಿಸುತ್ತಿದ್ದರು ಮತ್ತು ಅವರ [[ಪುಸ್ತಕ]] ಮಾರಾಟಗಾರ ತಂದೆಯ ಅಧೀನದ ಚಿಕ್ಕ ಕಾರ್ಯಾಗಾರದಲ್ಲಿ ಅವರು ತಮ್ಮ ಅಧ್ಯಯನದಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದರು. ಅವರ ಭವ್ಯವಾದ ಕೆಲಸದ ಯೌವ್ವನದ ಮುನ್ನಾದಿನ ನೇಪಲ್ಸ್ ನಗರವು ಒಡ್ಡುತ್ತದೆ." ವಯಾ ಸ್ಯಾನ್ ಬಿಯಾಜಿಯೊ ಡೀ ಲಿಬ್ರೈನಲ್ಲಿ ಅವರು ಜನಿಸಿದ ಮನೆಯಲ್ಲಿರುವ ಸಮಾಧಿಯ ಕಲ್ಲು.|alt=|thumb]]
ವಿಕೊ ಅವರ ವಾಕ್ಚಾತುರ್ಯದ ಆವೃತ್ತಿಯು ಅವರ ಮಾನವೀಯ ಮತ್ತು [[ಶಿಕ್ಷಣ]] ಕಾಳಜಿಯ ಉತ್ಪನ್ನವಾಗಿದೆ. ೧೭೦೮ ರ ಪ್ರಾರಂಭದ [[ಭಾಷಣ]]ದಲ್ಲಿ ಡಿ ನಾಸ್ಟ್ರಿ ಟೆಂಪೊರಿಸ್ ಸ್ಟುಡಿಯೊರಮ್ ರೇಶನ್ರವರು (ಆನ್ ದಿ ಆರ್ಡರ್ ಆಫ್ ದಿ ಸ್ಕಾಲರ್ಲಿ ಡಿಸಿಪ್ಲೈನ್ಸ್ ಆಫ್ ಅವರ್ ಟೈಮ್ಸ್),ವಿಕೊ ಅವರು "ಸಾರ್ವಜನಿಕ ಜೀವನದಲ್ಲಿ ವೃತ್ತಿಜೀವನವನ್ನು ಬಯಸುತ್ತಾರೆ, ಅದು ನ್ಯಾಯಾಲಯಗಳು, ಸೆನೆಟ್ ಅಥವಾ ಪಲ್ಪಿಟ್ ಆಗಿರಲಿ" ಇದು "ವಿಷಯಗಳ [[ಕಲೆ]]ಯನ್ನು ಕರಗತ ಮಾಡಿಕೊಳ್ಳಲು ಮತ್ತು ವಿವಾದದ ಎರಡೂ ಬದಿಗಳನ್ನು ರಕ್ಷಿಸಲು ಕಲಿಸಬೇಕು, ಅದು [[ಪ್ರಕೃತಿ]], [[ಮನುಷ್ಯ]] ಅಥವಾ ರಾಜಕೀಯ, ಮುಕ್ತ ಮತ್ತು ಪ್ರಕಾಶಮಾನವಾದ ಅಭಿವ್ಯಕ್ತಿ ಶೈಲಿಯಲ್ಲಿ, ಆದ್ದರಿಂದ ಅವರು ಹೆಚ್ಚು ಸಂಭವನೀಯ ವಾದಗಳನ್ನು ಸೆಳೆಯಲು ಕಲಿಯಬಹುದು ಮತ್ತು ಅತ್ಯಂತ ಶ್ರೇಷ್ಠ ಮಟ್ಟದ ಸತ್ಯಾಸತ್ಯತೆಯನ್ನು ಹೊಂದಿರುತ್ತಾರೆ" ಎಂದು ಹೇಳಿದರು; ಆದರೂ, ಸೈಂಝಾ ನುವಾದಲ್ಲಿ, ವಿಕೊ ವಿವಾದಗಳಲ್ಲಿ ಎರಡೂ ಕಡೆಯವರನ್ನು ಸಮರ್ಥಿಸುವುದನ್ನು ಸುಳ್ಳು ವಾಕ್ಚಾತುರ್ಯವೆಂದು ಖಂಡಿಸಿದರು.
ಲ್ಯಾಟಿನ್ ಎಲೋಕ್ವೆನ್ಸ್ನ ರಾಯಲ್ ಪ್ರೊಫೆಸರ್ ಆಗಿ, ವಿಕೊ [[ಕಾನೂನು]] ಮತ್ತು [[ನ್ಯಾಯಶಾಸ್ತ್ರ]]ದ ಕ್ಷೇತ್ರಗಳಲ್ಲಿ ಉನ್ನತ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದರು; ಹೀಗಾಗಿ, ಅವರ ಪಾಠಗಳು ವಾಕ್ಚಾತುರ್ಯದ ನಿಯಮದ ಔಪಚಾರಿಕ ಅಂಶಗಳ ಬಗ್ಗೆ, ವಾದದ ವ್ಯವಸ್ಥೆ ಮತ್ತು ವಿತರಣೆ ಸೇರಿದಂತೆ. ಆದರೂ ಅವರು ತರ್ಕ ಮತ್ತು ಆಡುಭಾಷೆಯೊಂದಿಗೆ ವಾಕ್ಚಾತುರ್ಯದ ಅರಿಸ್ಟಾಟಲ್ನ ಸಂಪರ್ಕವನ್ನು ಒತ್ತಿಹೇಳಲು ಆಯ್ಕೆ ಮಾಡಿದರು, ಆ ಮೂಲಕ ತಮ್ಮ ಕೇಂದ್ರದಲ್ಲಿ ತುದಿಗಳನ್ನು (ವಾಕ್ಚಾತುರ್ಯ) ಇರಿಸಿದರು. ಆಧುನಿಕ ವಾಕ್ಚಾತುರ್ಯಕ್ಕೆ ವಿಕೊ ಅವರ ಆಕ್ಷೇಪಣೆಯು ಸಾಮಾನ್ಯ [[ಜ್ಞಾನ]]ದಿಂದ (ಸೆನ್ಸಸ್ ಕಮ್ಯುನಿಸ್) ಸಂಪರ್ಕ ಕಡಿತಗೊಂಡಿದೆ, ಇದು ಎಲ್ಲಾ ಪುರುಷರಿಗೆ ಸಾಮಾನ್ಯವಾಗಿರುವ "ಲೌಕಿಕ ಅರ್ಥ" ಎಂದು ವ್ಯಾಖ್ಯಾನಿಸಲಾಗಿದೆ.
ಉಪನ್ಯಾಸಗಳಲ್ಲಿ ಮತ್ತು ಅವರ ಕೆಲಸದಾದ್ಯಂತ, ವಿಕೊ ಅವರ ವಾಕ್ಚಾತುರ್ಯವು ಕೇಂದ್ರ ವಾದದಿಂದ (ಮೀಡಿಯಸ್ ಟರ್ಮಿನಸ್) ಪ್ರಾರಂಭವಾಗುತ್ತದೆ, ಇದು ನಮ್ಮ ಅನುಭವದಲ್ಲಿ ಉದ್ಭವಿಸುವ ವಸ್ತುಗಳ ಕ್ರಮವನ್ನು ಅನುಸರಿಸುವ ಮೂಲಕ ಸ್ಪಷ್ಟಪಡಿಸಬೇಕು. ಸಂಭವನೀಯತೆ ಮತ್ತು ಸನ್ನಿವೇಶವು ಅವುಗಳ ಪ್ರಮಾಣಾನುಗುಣವಾದ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ ಮತ್ತು ಅನ್ವೇಷಣೆ-ವಿಷಯಗಳ ಮೇಲೆ ಅವಲಂಬಿತವಾಗಿದೆ (ಲೋಕಿ) - ಪ್ರತಿಫಲಿತ, ಅಮೂರ್ತ ಚಿಂತನೆಯ ಮೂಲಕ ಪಡೆದ ಮೂಲತತ್ವಗಳನ್ನು ಮೀರಿಸುತ್ತದೆ. ಶಾಸ್ತ್ರೀಯ ರೋಮನ್ ವಾಕ್ಚಾತುರ್ಯದ ಸಂಪ್ರದಾಯದಲ್ಲಿ, ವಿಕೊ ವಾಗ್ಮಿ (ವಾಕ್ಚಾತುರ್ಯ) ಅನ್ನು ಕೇಂದ್ರದಲ್ಲಿ ಅನುಪಾತದ (ಕಾರಣ) ಹೊಂದಿರುವ ಭಾಷಣದ ಟ್ರಾನ್ಸ್ಮಿಟರ್ನಂತೆ ಶಿಕ್ಷಣ ನೀಡಲು ಹೊರಟರು. ವಾಕ್ಚಾತುರ್ಯದ ಕಲೆಗೆ ಅತ್ಯಗತ್ಯವಾದದ್ದು ಸಾಮಾನ್ಯ ಜ್ಞಾನ ಮತ್ತು ವಾಕ್ಚಾತುರ್ಯಕ್ಕೆ ಅನುಗುಣವಾಗಿ ಅಂತ್ಯದ ನಡುವಿನ ಕ್ರಮಬದ್ಧವಾದ ಕೊಂಡಿಯಾಗಿದೆ; ಒಂದು ಅಂತ್ಯವು ಮೇಲಿನಿಂದ ಕಲ್ಪನೆಯ ಮೇಲೆ ಹೇರಲ್ಪಟ್ಟಿಲ್ಲ (ಆಧುನಿಕ ಮತ್ತು ಸಿದ್ಧಾಂತದ ಕ್ರಿಶ್ಚಿಯನ್ ಧರ್ಮದ ರೀತಿಯಲ್ಲಿ), ಆದರೆ ಅದು ಸಾಮಾನ್ಯ ಜ್ಞಾನದಿಂದಲೇ ಸೆಳೆಯಲ್ಪಟ್ಟಿದೆ. ಸಾಕ್ರಟೀಸ್ ಮತ್ತು ಸಿಸೆರೊನ ಸಂಪ್ರದಾಯದಲ್ಲಿ, ವಿದ್ಯಾರ್ಥಿಯ ಮನಸ್ಸಿನಲ್ಲಿರುವ ಅಜ್ಞಾನದಿಂದ "ನಿಜವಾದ" (ಒಂದು ಕಲ್ಪನೆಯಂತೆ) ಹುಟ್ಟುವವರೆಗೆ ವಿಕೋ ಅವರ ನಿಜವಾದ ವಾಗ್ಮಿ ಸೂಲಗಿತ್ತಿಯಾಗಿರುತ್ತಾರೆ.
ಇಂದ್ರಿಯಗಳ "ಅತ್ಯಂತ ಪುರಾತನ ಬುದ್ಧಿವಂತಿಕೆಯ" ಮರುಶೋಧನೆ, ಮಾನವನ ಸ್ಟುಲ್ಟಿಶಿಯಾ ("ಮಾನವ ಮೂರ್ಖತನ") ಬುದ್ಧಿವಂತಿಕೆ, ವಿಕೋ ಅವರ ನಾಗರಿಕ ಜೀವನ ಮತ್ತು ವೃತ್ತಿಪರ ಕಟ್ಟುಪಾಡುಗಳ ಪ್ರಾಮುಖ್ಯತೆಯ ಮೇಲೆ ಮಾನವತಾವಾದಿ ಸಂಪ್ರದಾಯದಲ್ಲಿದೆ. ಅವರು ರೆನೆ ಡೆಸ್ಕಾರ್ಟೆಸ್ ಮತ್ತು ಪೋರ್ಟ್-ರಾಯಲ್-ಡೆಸ್-ಚಾಂಪ್ಸ್ ಅಬ್ಬೆಯಲ್ಲಿನ ತರ್ಕಶಾಸ್ತ್ರಜ್ಞರ "ಜ್ಯಾಮಿತೀಯ ವಿಧಾನ" ಎಂದು ಕರೆದಿದ್ದಲ್ಲಿ, ಸಿದ್ಧಾಂತದ ಆಧುನಿಕ ಸವಲತ್ತಿನ ಧಾನ್ಯದ ವಿರುದ್ಧ ಮೈಯುಟಿಕ್ [[ಭಾಷಣ]] ಕಲೆಗೆ ಕರೆ ನೀಡಿದರು.
==ವೆರಮ್ ಫ್ಯಾಕ್ಟಮ್ ತತ್ವ==
ವಿಕೊ ತನ್ನ ವೆರಮ್ ಫ್ಯಾಕ್ಟಮ್ ತತ್ವಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಮೊದಲು ೧೭೧೦ ರಲ್ಲಿ ಅವರ ಡಿ ಆಂಟಿಕ್ವಿಸ್ಸಿಮಾ ಇಟಾಲೋರಮ್ ಸ್ಯಾಪಿಯೆಂಟಿಯಾ, ಎಕ್ಸ್ ಲಿಂಗ್ವೇ ಲ್ಯಾಟಿನೇ ಒರಿಜಿನಿಬಸ್ ಎರುಯೆಂಡಾ (೧೭೧೦) ("[[ಲ್ಯಾಟಿನ್]] [[ಭಾಷೆ]]ಯ ಮೂಲದಿಂದ ಪತ್ತೆಯಾದ ಇಟಾಲಿಯನ್ನರ ಅತ್ಯಂತ ಪ್ರಾಚೀನ ಬುದ್ಧಿವಂತಿಕೆಯ ಭಾಗವಾಗಿ ರೂಪಿಸಲಾಗಿದೆ").<ref>His wording was "Verum et factum reciprocantur seu convertuntur" ("The true and the made are convertible into each other"), an idea which can be found also in [[occasionalism]] and [[Scotism|Scotist]] [[scholasticism]]</ref> ಡೆಸ್ಕಾರ್ಟೆಸ್ ಪ್ರಕಾರ ವೀಕ್ಷಣೆಯ ಮೂಲಕ ಅಲ್ಲ ಎಂದು ತತ್ವವು ಹೇಳುತ್ತದೆ: "ಸತ್ಯದ ಮಾನದಂಡ ಮತ್ತು ನಿಯಮವು ಅದನ್ನು ಮಾಡಿದೆ. ಅದರ ಪ್ರಕಾರ, ಮನಸ್ಸಿನ ನಮ್ಮ ಸ್ಪಷ್ಟವಾದ ಮತ್ತು ವಿಭಿನ್ನವಾದ ಕಲ್ಪನೆಯು ಮನಸ್ಸಿನ ಮಾನದಂಡವಾಗಿರಲು ಸಾಧ್ಯವಿಲ್ಲ, ಇನ್ನೂ ಕಡಿಮೆ ಇತರ ಸತ್ಯಗಳು. ಏಕೆಂದರೆ ಮನಸ್ಸು ತನ್ನನ್ನು ತಾನೇ ಗ್ರಹಿಸಿದಾಗ, ಅದು ಸ್ವತಃ ಮಾಡುವುದಿಲ್ಲ." [[ಸತ್ಯ]]ದ ಈ ಮಾನದಂಡವು ನಂತರ ವಿಕೊ ಅವರ ಕೃತಿಯಲ್ಲಿ ನಾಗರಿಕತೆಯ ಇತಿಹಾಸವನ್ನು ರೂಪಿಸುತ್ತದೆ, ಸೈನ್ಜಾ ನುವಾ (ದಿ ನ್ಯೂ ಸೈನ್ಸ್, ೧೭೨೫), ಏಕೆಂದರೆ ಅವರು ನಾಗರಿಕ ಜೀವನ-ಗಣಿತದಂತೆ-ಸಂಪೂರ್ಣವಾಗಿ ನಿರ್ಮಿಸಲಾಗಿದೆ ಎಂದು ವಾದಿಸುತ್ತಾರೆ.
==ದಿ ಸೈನ್ಜಾ ನುವಾ==
[[File:Vico La scienza nuova.gif|right|thumb|ಪ್ರಿನ್ಸಿಪ್ಜ್ ಡಿ ಸೈನ್ಜಾ ನುವಾ (೧೭೪೪ ರ ಆವೃತ್ತಿ) ಶೀರ್ಷಿಕೆ ಪುಟ]]
ದಿ ನ್ಯೂ ಸೈನ್ಸ್ (೧೭೨೫, ಸೈಂಜ ನುವಾ) ವಿಕೊ ಅವರ ಪ್ರಮುಖ ಕೆಲಸವಾಗಿದೆ. ಇದು ಇತಿಹಾಸದ [[ತತ್ತ್ವಶಾಸ್ತ್ರ]]ದಲ್ಲಿ ಮತ್ತು ಯೆಶಾಯ ಬರ್ಲಿನ್ ಮತ್ತು ಹೇಡನ್ ವೈಟ್ರಂತಹ ಇತಿಹಾಸಕಾರರಿಗೆ ಹೆಚ್ಚು ಪ್ರಭಾವ ಬೀರಿದೆ.
==ಪ್ರಭಾವಗಳು==
ಸ್ಯಾಮ್ಯುಯೆಲ್ ಬೆಕೆಟ್ನ ಮೊದಲ ಪ್ರಕಟಿತ ಕೃತಿ, ಜೇಮ್ಸ್ ಜಾಯ್ಸ್ ಕುರಿತು ವಿಮರ್ಶಾತ್ಮಕ ಪ್ರಬಂಧಗಳ ಆಯ್ಕೆಯಲ್ಲಿ ನಮ್ಮ ಪರೀಕ್ಷೆಯ ಸುತ್ತಿನ ಕಾರ್ಯವು ಪ್ರಗತಿಯಲ್ಲಿದೆ, ಇದು "ಡಾಂಟೆ... ಬ್ರೂನೋ. ವಿಕೊ.. ಜಾಯ್ಸ್" ಆಗಿದೆ. ಇದರಲ್ಲಿ, ಬೆಕೆಟ್ ವಿಕೊ ಅವರ [[ತತ್ವಶಾಸ್ತ್ರ]] ಮತ್ತು ಕಾವ್ಯಶಾಸ್ತ್ರದ ಆಳವಾದ ಪ್ರಭಾವವನ್ನು ನೋಡುತ್ತಾನೆ-ಹಾಗೆಯೇ ಸೈನ್ಜಾ ನುವೋವಾದ ಆವರ್ತಕ ರೂಪ - ಜಾಯ್ಸ್ ನ ಅವಂತ್-ಗಾರ್ಡ್ ಸಂಯೋಜನೆಗಳ ಮೇಲೆ ಮತ್ತು ವಿಶೇಷವಾಗಿ ವರ್ಕ್ ಇನ್ ಪ್ರೋಗ್ರೆಸ್, ಅಂದರೆ ಫಿನ್ನೆಗನ್ಸ್ ವೇಕ್.
[[ಜ್ಞಾನ]] ಮತ್ತು ಸಾಮಾಜಿಕ ರಚನೆಯಲ್ಲಿ (೧೯೭೪), ಪೀಟರ್ ಹ್ಯಾಮಿಲ್ಟನ್ ವಿಕೊವನ್ನು ಜ್ಞಾನೋದಯದ ಯುಗದ "ನಿದ್ರೆಯ ಪಾಲುದಾರ" ಎಂದು ಗುರುತಿಸಿದ್ದಾರೆ.<ref name=":0">{{Cite book|title = Knowledge and Social Structure|last = Hamilton|first = Peter|publisher = Routledge and Kegan Paul|year = 1974|isbn = 978-0710077462|location = London|pages = [https://archive.org/details/knowledgesocials0000hami/page/4 4]|url = https://archive.org/details/knowledgesocials0000hami/page/4}}</ref> ಅವನ ೧೮ ನೇ ಶತಮಾನದ ಸಮಯದಲ್ಲಿ ತುಲನಾತ್ಮಕವಾಗಿ ತಿಳಿದಿಲ್ಲದಿದ್ದರೂ ಮತ್ತು ಅವನ ಸ್ಥಳೀಯ ನೇಪಲ್ಸ್ನಲ್ಲಿ ಮಾತ್ರ ಓದಿದ್ದರೂ, ವಿಕೊನ ವಿಚಾರಗಳು ಜ್ಞಾನೋದಯದ ಬುದ್ಧಿಜೀವಿಗಳ ಕಲ್ಪನೆಗಳಿಗೆ ಪೂರ್ವವರ್ತಿಗಳಾಗಿವೆ. ಇದಲ್ಲದೆ, ವಿಕೊ ಅವರ ಬೌದ್ಧಿಕ ಪ್ರಭಾವದ ಗುರುತಿಸುವಿಕೆ ೧೯ ನೇ ಶತಮಾನದಲ್ಲಿ ಪ್ರಾರಂಭವಾಯಿತು, [[ಫ್ರೆಂಚ್]] ರೊಮ್ಯಾಂಟಿಕ್ ಇತಿಹಾಸಕಾರರು ಅವರ ಕೃತಿಗಳನ್ನು ಕ್ರಮಶಾಸ್ತ್ರೀಯ ಮಾದರಿಗಳು ಮತ್ತು ಮಾರ್ಗದರ್ಶಿಗಳಾಗಿ ಬಳಸಿದರು.<ref name=":0"/>
ಕ್ಯಾಪಿಟಲ್: ಕ್ರಿಟಿಕ್ ಆಫ್ ಪೊಲಿಟಿಕಲ್ ಎಕಾನಮಿ (೧೮೬೭) ನಲ್ಲಿ, ಕಾರ್ಲ್ ಮಾರ್ಕ್ಸ್ನ ವಿಕೊದ ಉಲ್ಲೇಖವು [[ಇತಿಹಾಸ]], ಐತಿಹಾಸಿಕ ನಟರ ಪಾತ್ರ ಮತ್ತು ಐತಿಹಾಸಿಕ ನಿರೂಪಣೆಯ ವಿಧಾನದ ಬಗ್ಗೆ ಅವರ ಸಮಾನಾಂತರ ದೃಷ್ಟಿಕೋನಗಳನ್ನು ಸೂಚಿಸುತ್ತದೆ.<ref>{{Cite book|title = Capital, Book 1|last = Marx|first = Karl|pages = Book 1, part IV, chapter 13, n. 89 (footnote)}}</ref> ಮಾರ್ಕ್ಸ್ ಮತ್ತು ವಿಕೊ ಸಾಮಾಜಿಕ-ವರ್ಗದ ಯುದ್ಧವನ್ನು ಪುರುಷರು ಸಮಾನ ಹಕ್ಕುಗಳ ಅಂತ್ಯವನ್ನು ಸಾಧಿಸುವ ಸಾಧನವಾಗಿ ನೋಡಿದರು; ವಿಕೊ ಆ ಸಮಯವನ್ನು "ಪುರುಷರ ಯುಗ" ಎಂದು ಕರೆದರು. ಅಂತಹ ಸ್ಥಿತಿಯು ಸಮಾಜದಲ್ಲಿ ಸಾಮಾಜಿಕ ಬದಲಾವಣೆಯ ಅತ್ಯುತ್ತಮ ಅಂತ್ಯವಾಗಿದೆ ಎಂದು ಮಾರ್ಕ್ಸ್ ತೀರ್ಮಾನಿಸಿದರು, ಆದರೆ ಅಂತಹ ಸಂಪೂರ್ಣ ಸಮಾನತೆಯ ಹಕ್ಕುಗಳು ಸಾಮಾಜಿಕ-ರಾಜಕೀಯ ಅವ್ಯವಸ್ಥೆಗೆ ಮತ್ತು ಸಮಾಜದ ಕುಸಿತಕ್ಕೆ ಕಾರಣವಾಗುತ್ತದೆ ಎಂದು ವಿಕೊ ಭಾವಿಸಿದರು. ಆ ಧಾಟಿಯಲ್ಲಿ, ವಿಕೊ ಮಾನವ ಸಮಾಜದಲ್ಲಿ ಕ್ರಮವನ್ನು ಇರಿಸಿಕೊಳ್ಳಲು ಅಲೌಕಿಕ ದೈವಿಕ ಪ್ರಾವಿಡೆನ್ಸ್ಗಾಗಿ [[ಧರ್ಮ]]ದ ಸಾಮಾಜಿಕ ಅಗತ್ಯವನ್ನು ಪ್ರಸ್ತಾಪಿಸಿದರು.<ref>{{cite encyclopedia|last=Chaix-Ruy|first=Jules-Marie|title=Giambattista Vico|url=https://www.britannica.com/EBchecked/topic/627497/Giambattista-Vico|encyclopedia=Encyclopædia Britannica|access-date=6 March 2014}}</ref>
ಓರಿಯಂಟಲಿಸಂನಲ್ಲಿ (೧೯೭೮), ಎಡ್ವರ್ಡ್ ಸೈಡ್ ವಿಕೊಗೆ ತನ್ನ ವಿದ್ವಾಂಸರ ಋಣವನ್ನು ಒಪ್ಪಿಕೊಂಡರು, ಅವರ ಆಲೋಚನೆಗಳು "ನಾನು ಉಲ್ಲೇಖಿಸಲಿರುವ ಜರ್ಮನ್ ಚಿಂತಕರ ಸಾಲನ್ನು ನಿರೀಕ್ಷಿಸುತ್ತವೆ ಮತ್ತು ನಂತರ ನುಸುಳುತ್ತವೆ.<ref name="Orientalism">{{Cite book|title = Orientalism|last = Said|first = Edward|publisher = Penguin Classics|year = 2003 |orig-year=1978|pages = xviii, 4–5}}</ref> ಅವರು ಹರ್ಡರ್ ಮತ್ತು ವುಲ್ಫ್ ಯುಗಕ್ಕೆ ಸೇರಿದವರು, ನಂತರ ಗೊಥೆ ಅನುಸರಿಸುತ್ತಾರೆ, ಹಂಬೋಲ್ಟ್, ಡಿಲ್ಥೆ, ನೀತ್ಸೆ, ಗಡಾಮರ್ ಮತ್ತು ಅಂತಿಮವಾಗಿ ಇಪ್ಪತ್ತನೇ [[ಶತಮಾನ]]ದ ಶ್ರೇಷ್ಠ ರೋಮ್ಯಾನ್ಸ್ ಭಾಷಾಶಾಸ್ತ್ರಜ್ಞರಾದ ಎರಿಕ್ ಔರ್ಬಾಚ್, ಲಿಯೋ ಸ್ಪಿಟ್ಜರ್ ಮತ್ತು ಅರ್ನ್ಸ್ಟ್ ರಾಬರ್ಟ್ ಕರ್ಟಿಯಸ್."<ref name="Orientalism" /> ಮಾನವತಾವಾದಿ ಮತ್ತು ಆರಂಭಿಕ ಭಾಷಾಶಾಸ್ತ್ರಜ್ಞನಾಗಿ, ವಿಕೊ "ನನ್ನ ಕೆಲಸದಲ್ಲಿ ನನಗೆ ಅತ್ಯಂತ ಮುಖ್ಯವಾದ ವಿಭಿನ್ನವಾದ ಪರ್ಯಾಯ ಮಾದರಿಯನ್ನು" ಪ್ರತಿನಿಧಿಸುತ್ತಾನೆ, ಇದು ಓರಿಯಂಟ್ ವಿರುದ್ಧದ ಮುಖ್ಯವಾಹಿನಿಯ ಪಾಶ್ಚಿಮಾತ್ಯ ಪೂರ್ವಾಗ್ರಹದಿಂದ ಭಿನ್ನವಾಗಿದೆ ಮತ್ತು ಆಧುನಿಕತೆಯೊಂದಿಗೆ ಬಂದ ಮತ್ತು ರಾಷ್ಟ್ರೀಯತೆಯಲ್ಲಿ ಸಮಾಜವಾದ ಉತ್ತುಂಗಕ್ಕೇರಿತು. ಮಾನವ ಇತಿಹಾಸ ಮತ್ತು ಸಂಸ್ಕೃತಿಯ ಪರಸ್ಪರ ಅವಲಂಬನೆಯು [[ವಿದ್ವಾಂಸ]]ರ ಕಾರ್ಯವನ್ನು ಸುಗಮಗೊಳಿಸುತ್ತದೆ, "ಪುರುಷರು ತಮ್ಮದೇ ಆದ ಇತಿಹಾಸವನ್ನು ರಚಿಸುತ್ತಾರೆ, ಅವರು ಏನು ಮಾಡಿದ್ದಾರೆಂದು ಅವರು ತಿಳಿದುಕೊಳ್ಳಬಹುದು ಮತ್ತು ಅದನ್ನು ಭೌಗೋಳಿಕತೆಗೆ ವಿಸ್ತರಿಸುತ್ತಾರೆ ಎಂಬ ವಿಕೊ ಅವರ ಮಹಾನ್ ಅವಲೋಕನವನ್ನು ಗಂಭೀರವಾಗಿ ಪರಿಗಣಿಸಲು.<ref name="Orientalism" /> ಭೌಗೋಳಿಕ ಮತ್ತು ಸಾಂಸ್ಕೃತಿಕ ಘಟಕಗಳಾಗಿ- ಐತಿಹಾಸಿಕ ಘಟಕಗಳ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ - ಅಂತಹ ಸ್ಥಳಗಳು, ಪ್ರದೇಶಗಳು ಮತ್ತು ಭೌಗೋಳಿಕ ವಲಯಗಳು 'ಓರಿಯಂಟ್' ಮತ್ತು 'ಆಕ್ಸಿಡೆಂಟ್' ಮಾನವ ನಿರ್ಮಿತವಾಗಿವೆ."<ref name="Orientalism" />
==ಕೆಲಸಗಳು==
*ಒಪೆರೆ ಡಿ ಜಿ ಬಿ ವಿಕೊ. ಫೌಸ್ಟೊ ನಿಕೊಲಿನಿ (ಸಂ.), ಬಾರಿ: ಲ್ಯಾಟರ್ಜಾ, ೧೯೧೧-೪೧.
*ಡಿ ನಾಸ್ಟ್ರಿ ಟೆಂಪೊರಿಸ್ ಸ್ಟುಡಿಯೊರಮ್ ರೇಷನ್ (೧೭೦೮)
*ಡಿ ಆಂಟಿಕ್ವಿಸ್ಸಿಮಾ ಇಟಾಲೋರಮ್ ಸಪಿಯೆಂಟಿಯಾ ಎಕ್ಸ್ ಲಿಂಗುವೆ ಒರಿಜಿನಿಬಸ್ ಎರುಯೆಂಡಾ ಲಿಬ್ರಿ ಟ್ರೆಸ್ ([[ಲ್ಯಾಟಿನ್]] [[ಭಾಷೆ]]ಯ ಮೂಲದಿಂದ ಪತ್ತೆಯಾದ ಇಟಾಲಿಯನ್ನರ ಅತ್ಯಂತ ಪ್ರಾಚೀನ ಬುದ್ಧಿವಂತಿಕೆಯ ಮೇಲೆ). ೧೭೧೦, ಪಾಮರ್, ಎಲ್. ಎಮ್. ಟ್ರಾನ್ಸ್. ಇಥಾಕಾ: ಕಾರ್ನೆಲ್ ಯುಪಿ, ೧೯೮೮.
*[[ಸಂಸ್ಥೆ]]ಗಳು ಒರೆಟೋರಿಯಾ (ದಿ ಆರ್ಟ್ ಆಫ್ ರೆಟೋರಿಕ್). ೧೭೧೧-೪೧, ಪಿಂಟನ್, ಗಿರೊಗಿಯೊ ಮತ್ತು ಆರ್ಥರ್ ಡಬ್ಲ್ಯೂ. ಶಿಪ್ಪೀ, ಟ್ರಾನ್ಸ್. ಆಂಸ್ಟರ್ಡ್ಯಾಮ್: ಆವೃತ್ತಿಗಳು ರೊಡೋಪಿ ಬಿ.ವಿ., ೧೯೮೪.
* "ಮಾನವೀಯ [[ಶಿಕ್ಷಣ]]ದ ಕುರಿತು", ಟ್ರಾನ್ಸ್. ಜಾರ್ಜಿಯೊ ಅ. ಪಿಂಟನ್ ಮತ್ತು ಆರ್ಥರ್ ಡಬ್ಲ್ಯೂ. ಶಿಪ್ಪೀ. ಇಥಾಕಾ: ಕಾರ್ನೆಲ್ ಯುಪಿ, ೧೯೯೩.
*ನಮ್ಮ ಕಾಲದ ಅಧ್ಯಯನ ವಿಧಾನಗಳ ಕುರಿತು, ಟ್ರಾನ್ಸ್. ಎಲಿಯೊ ಗಿಯಾಂಟುರ್ಕೊ. ಇಥಾಕಾ: ಕಾರ್ನೆಲ್ ಯುಪಿ, ೧೯೯೦.
*ಸಾರ್ವತ್ರಿಕ [[ಹಕ್ಕು]] (ಡಿರಿಟ್ಟೊ ಸಾರ್ವತ್ರಿಕ). ಲ್ಯಾಟಿನ್ ಭಾಷೆಯಿಂದ ಅನುವಾದಿಸಲಾಗಿದೆ ಮತ್ತು ಜಾರ್ಜಿಯೊ ಪಿಂಟನ್ ಮತ್ತು ಮಾರ್ಗರೆಟ್ ಡೀಹ್ಲ್ ಸಂಪಾದಿಸಿದ್ದಾರೆ. ಆಂಸ್ಟರ್ಡ್ಯಾಮ್/ನ್ಯೂಯಾರ್ಕ್, ರೋಡೋಪಿ, ೨೦೦೦.
*ಇಟಾಲಿಯನ್ನರ ಅತ್ಯಂತ ಪ್ರಾಚೀನ ಬುದ್ಧಿವಂತಿಕೆಯ ಕುರಿತು: [[ಲ್ಯಾಟಿನ್]] ಭಾಷೆಯ ಮೂಲದಿಂದ ಅನ್ವೇಷಿಸಲಾಗಿದೆ, ಟ್ರಾನ್ಸ್. ಎಲ್. ಎಮ್. ಪಾಮರ್ ಇಥಾಕಾ, ಕಾರ್ನೆಲ್ ಯುಪಿ, ೧೯೮೮.
*ಸೈಂಜ ನುವಾ (ಮೊದಲ ಹೊಸ ವಿಜ್ಞಾನ). ೧೭೨೫, ಪೊಂಪಾ, ಲಿಯಾನ್, ಟ್ರಾನ್ಸ್. ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯುಪಿ, ೨೦೦೨.
*ಗಿಯಾಂಬಟ್ಟಿಸ್ಟಾ ವಿಕೊದ ಹೊಸ [[ವಿಜ್ಞಾನ]], (೧೭೪೪). ಟ್ರಾನ್ಸ್ ಥಾಮಸ್ ಜಿ. ಬರ್ಗಿನ್ ಮತ್ತು *ಮ್ಯಾಕ್ಸ್ ಎಚ್. ಫಿಶ್. ಇಥಾಕಾ: ಕಾರ್ನೆಲ್ ಯುಪಿ, ೨ನೇ ಆವೃತ್ತಿ, ೧೯೬೮.
*ಡಿ ರೆಬಸ್ ಗೆಸ್ಟಿಸ್ ಆಂಟೊಂಜ್ ಕರಾಫೇಯ್ (೧೭೧೩-೧೭೧೫), ಟ್ರಾನ್ಸ್. ಜಾರ್ಜಿಯೊ ಎ. *ಪಿಂಟನ್, ಸ್ಟೇಟ್ಕ್ರಾಫ್ಟ್: ದಿ ಡೀಡ್ಸ್ ಆಫ್ ಆಂಟೋನಿಯೊ ಕ್ಯಾರಾಫಾ (ಪೀಟರ್ ಲ್ಯಾಂಗ್, ೨೦೦೪), ಆಂಟೋನಿಯೊ ಕರಾಫಾ ಅವರ [[ಜೀವನಚರಿತ್ರೆ]] (೧೬೯೩ ರಲ್ಲಿ ನಿಧನರಾದರು).
==ಸಹ ನೋಡಿ==
*[[:en:Finnegans Wake|ಫಿನ್ನೆಗನ್ಸ್ ವೇಕ್]]
*[[:en:Historic recurrence|ಐತಿಹಾಸಿಕ ಪುನರಾವರ್ತನೆ]]
*[[:en:New Vico Studies|ಹೊಸ ವಿಕೋ ಸ್ಟಡೀಸ್]] (ಇನ್ಸ್ಟಿಟ್ಯೂಟ್ ಫಾರ್ ವಿಕೋ ಸ್ಟಡೀಸ್ ಎಮೊರಿ ಯೂನಿವರ್ಸಿಟಿ)
*[[:en:Recapitulation theory|ಪುನರಾವರ್ತನೆಯ ಸಿದ್ಧಾಂತ]]
==ಉಲ್ಲೇಖಗಳು==
{{reflist}}
==ಬಾಹ್ಯ ಕೊಂಡಿಗಳು ==
{{commons category|Giambattista Vico}}
*{{Gutenberg author | id=42125| name=Giambattista Vico}}
*[http://ivs.emory.edu Institute for Vico Studies] {{Webarchive|url=https://web.archive.org/web/20220418031845/https://ivs.emory.edu/ |date=2022-04-18 }}
*[http://www.iep.utm.edu/vico Entry in the Internet Encyclopedia of Philosophy]
*[http://plato.stanford.edu/entries/vico Entry in the Stanford Encyclopedia of Philosophy]
*[http://www.press.jhu.edu/books/hopkins_guide_to_literary_theory/entries/giambattista_vico.html Entry in the Johns Hopkins Guide to Literary Theory] {{Webarchive|url=https://web.archive.org/web/20020520204450/http://www.press.jhu.edu/books/hopkins_guide_to_literary_theory/giambattista_vico.html |date=2002-05-20 }}
*Verene, Donald Phillip. {{webarchive |url=https://web.archive.org/web/20020520204450/http://www.press.jhu.edu/books/hopkins_guide_to_literary_theory/giambattista_vico.html |date=May 20, 2002 |title=Essay on Vico's humanism }}, archived from Johns Hopkins University Press.
*[http://www.ovimagazine.com/art/1772 Vico's Poetic Philosophy within Europe's Cultural Identity, Emanuel L. Paparella] {{Webarchive|url=https://web.archive.org/web/20230609184608/https://www.ovimagazine.com/art/1772 |date=2023-06-09 }}
*Leon Pompa, [https://web.archive.org/web/20180816065759/http://i-c-r.org.uk/publications/monographarchive.php Vico's Theory of the Causes of Historical Change], archived at The Institute for Cultural Research
*[http://www.giambattistavico.it/ Portale Vico - Vico Portal]
*[https://archive.org/details/newscienceofgiam030174mbp Text of the New Science in multiple formats]
*[http://www.sunypress.edu/p-877-vico-and-joyce.aspx Essays on Vico's creative influence on James Joyce's ''Finnegans Wake''] {{Webarchive|url=https://web.archive.org/web/20130209212425/http://www.sunypress.edu/p-877-vico-and-joyce.aspx |date=2013-02-09 }}
*[https://ourexagmination.wordpress.com/2008/11/12/samuel-becketts-dantebrunovicojoyce/ Samuel Beckett's essay on Vico and Joyce]
*[https://web.archive.org/web/20120820134257/http://www.physicaltv.com.au/PoetryTheWayOutAtLastCycle_653_1458_3_0.html Vico's creative influence on Richard James Allen's ''The Way Out At Last Cycle'']
*[http://lucianofsamosata.info/wiki/doku.php?id=2012:vico-historical-mythology Vico's Historical Mythology] {{Webarchive|url=https://web.archive.org/web/20230505181856/http://lucianofsamosata.info/wiki/doku.php?id=2012:vico-historical-mythology |date=2023-05-05 }}
* {{cite book |last = Rafferty |first = Michael |chapter = VICO (1668-1744) |editor1 = Macdonell, John |editor1-link = John Macdonell (judge)|editor2 = Manson, Edward William Donoghue |title = Great Jurists of the World |place = London |publisher = John Murray |year = 1913 |pages = [https://archive.org/details/in.ernet.dli.2015.13326/page/n376 345]-389 |url = https://archive.org/details/in.ernet.dli.2015.13326|access-date = 11 March 2019 |via = Internet Archive}}
{{Interwikineeded}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
[[ವರ್ಗ:ತತ್ವಜ್ಞಾನಿ]]
[[ವರ್ಗ:ಇತಿಹಾಸ ತಜ್ಞರು]]
pw5duwn0qf7dnm7rjyyonmts7yg7k9s
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ನಟ ಪ್ರಶಸ್ತಿ
0
99184
1379542
1341181
2026-08-08T21:51:58Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1379542
wikitext
text/x-wiki
{| class="wikitable sortable plainrowheaders" border="1"
|-
! scope="col" style="width:50px" | ಚಿಹ್ನೆ
! scope="col" style="width:350px" |ಅರ್ಥ
|-
|align=center style="background-color:#ADD8E6"|{{dagger}}
|ಜಂಟಿ ಪುರಸ್ಕಾರ
|}
{| class="wikitable sortable sortable"
|-
! ವರ್ಷ
! ಪುರಸ್ಕೃತರು
! ಚಿತ್ರ
|-
|2018
! scope="row" | ರಾಘವೇಂದ್ರ ರಾಜಕುಮಾರ್<ref>https://bangaloremirror.indiatimes.com/entertainment/south-masala/karnataka-state-film-awards-2018-raghavendra-rajkumar-and-meghana-raj-bag-top-honours-check-out-all-winners/articleshow/73186197.cms</ref>
| ''ಅಮ್ಮನ ಮನೆ''
|-
|2017
! scope="row" | ವಿಶ್ರುತ್ ನಾಯಕ್
|''ಮಂಜರಿ''
|-
| 2016
! scope="row" | ಅಚ್ಯುತ್ ಕುಮಾರ್<ref>[http://timesofindia.indiatimes.com/entertainment/kannada/movies/news/karnataka-state-film-award-winners-for-2016/articleshow/58130032.cms Karnataka State Film Award Winners for 2016]</ref>
| ''ಅಮರಾವತಿ''
|-
| 2015
! scope="row" | [[ವಿಜಯ ರಾಘವೇಂದ್ರ]]<ref>[http://www.bangaloremirror.com/entertainment/south-masala/Karnataka-State-Film-Awards-2015-Full-List/articleshow/52311976.cms Karnataka State Film Awards, 2015: Full List]</ref>
| ''ಶಿವಯೋಗಿ ಶ್ರೀ ಪುಟ್ಟಯ್ಯಜ್ಜ''
|-
| 2014
! scope="row" | [[ಸಂಚಾರಿ ವಿಜಯ್]]<ref>[http://www.deccanherald.com/content/528628/after-national-honour-harivu-bags.html After national honour, 'Harivu' bags top State film award]</ref>
| ''ನಾನು ಅವನಲ್ಲ...ಅವಳು''
|-
| 2013
! scope="row" | ನಿಖಿಲ್ ಮಂಜು<ref>[http://timesofindia.indiatimes.com/entertainment/kannada/movies/news/Karantaka-State-Film-Awards-announced/articleshow/45756810.cms Karantaka State Film Awards announced]</ref>
| ''ಹಜ್''
|-
| 2012
! scope="row" | [[ದರ್ಶನ್ ತೂಗುದೀಪ]]<ref>{{Cite web |url=http://kannada.oneindia.in/movies/news/karnataka-state-film-awards-2012-darshan-nirmala-best-087220.html |title=ಆರ್ಕೈವ್ ನಕಲು |access-date=2018-04-12 |archive-date=2014-08-26 |archive-url=https://web.archive.org/web/20140826114434/http://kannada.oneindia.in/movies/news/karnataka-state-film-awards-2012-darshan-nirmala-best-087220.html |url-status=dead }}</ref>
| ''[[ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ]]''
|-
| 2011
! scope="row" | [[ಅರ್ಜುನ್ ಸರ್ಜಾ]]<ref>{{Cite web |url=http://articles.timesofindia.indiatimes.com/2013-03-14/news-interviews/37712086_1_second-best-film-basanth-kumar-patil-sunil-kumar-desai |title=ಆರ್ಕೈವ್ ನಕಲು |access-date=2018-04-12 |archive-date=2013-05-18 |archive-url=https://web.archive.org/web/20130518070059/http://articles.timesofindia.indiatimes.com/2013-03-14/news-interviews/37712086_1_second-best-film-basanth-kumar-patil-sunil-kumar-desai |url-status=dead }}</ref>
| ''ಪ್ರಸಾದ್''
|-
|2010-11
! scope="row" | [[ಪುನೀತ್ ರಾಜ್ಕುಮಾರ್]]<ref>http://www.dnaindia.com/entertainment/report_puneeth-rajkumar-gets-best-actor-award_1672249</ref>
| ''[[ಜಾಕಿ]]''
|-
| 2009-10
! scope="row" | [[ಡಾ.ವಿಷ್ಣುವರ್ಧನ್|ವಿಷ್ಣುವರ್ಧನ್]]
| ''[[ಆಪ್ತ ರಕ್ಷಕ]]''
|-
| 2008-09
! scope="row" | ಯೋಗೀಶ್
| ''ಅಂಬಾರಿ''
|-
| 2007-08
! scope="row" | [[ಪುನೀತ್ ರಾಜ್ಕುಮಾರ್]]
| ''[[ಮಿಲನ]]''
|-
| 2006-07
! scope="row" | [[ದುನಿಯಾ ವಿಜಯ್]]<ref>[http://www.altfg.com/blog/awards/kamataka-state-film-awards-2006-2007/ Karnataka State Film Awards – 2006-2007<!-- Bot generated title -->] {{webarchive|url=https://web.archive.org/web/20110831085929/http://www.altfg.com/blog/awards/kamataka-state-film-awards-2006-2007/ |date=2011-08-31 }}</ref>
| ''[[ದುನಿಯಾ]]''
|-
| 2005-06
! scope="row" | [[ಶಿವರಾಜಕುಮಾರ್]]<ref>[http://www.altfg.com/blog/awards/karnataka-state-film-awards-2005-2006/ Karnataka State Film Awards 2006<!-- Bot generated title -->]{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
| ''[[ಜೋಗಿ (ಚಲನಚಿತ್ರ)|ಜೋಗಿ]]''
|-
| 2004-05
! scope="row" | [[ಶ್ರೀಮುರಳಿ]]<ref>{{cite web |url=http://wiki.gandhadagudi.com/wiki/Karnataka_State_Film_Awards_2004-05 |title=Archived copy |accessdate=2010-05-27 |deadurl=yes |archiveurl=https://web.archive.org/web/20090701140516/http://wiki.gandhadagudi.com/wiki/Karnataka_State_Film_Awards_2004-05 |archivedate=2009-07-01 |df= }}</ref>
| ''[[ಕಂಠಿ (ಚಲನಚಿತ್ರ)|ಕಂಠಿ]]''
|-
| 2003-04
! scope="row" |[[ಶಿವರಾಜಕುಮಾರ್]]<ref>{{cite web |url=http://wiki.gandhadagudi.com/wiki/Karnataka_State_Film_Awards_2003-04 |title=Archived copy |accessdate=2010-05-27 |deadurl=yes |archiveurl=https://web.archive.org/web/20090630180129/http://wiki.gandhadagudi.com/wiki/Karnataka_State_Film_Awards_2003-04 |archivedate=2009-06-30 |df= }}</ref>
| ''[[ಚಿಗುರಿದ ಕನಸು]]''
|-
| 2002-03
! scope="row" | [[ಸುದೀಪ್]]<ref name="Karanataka State Film Awards CL">{{cite web | url=http://www.chitraloka.com/awards/2938-2002-03-award-winners-list.html | title=2002-03 Award Winners List | publisher=chitraloka.com | date=June 27, 2002 | accessdate=June 27, 2002 <!-- at 21:25 IST --> | archive-date=ಡಿಸೆಂಬರ್ 17, 2013 | archive-url=https://web.archive.org/web/20131217170018/http://www.chitraloka.com/awards/2938-2002-03-award-winners-list.html | url-status=dead }}</ref><ref name="Karanataka State Film Awards V">{{cite web | url=http://www.viggy.com/english/current_state_award02_03.asp | title=Film Awards 2002-03 | publisher=viggy.com }}</ref><ref name="Karnataka State Film Awards 2002-03 GG">{{cite web | url=http://www.wiki.gandhadagudi.com/index.php?title=Karnataka_State_Film_Awards_2002-03 | title=Karnataka State Film Awards 2002-03 | publisher=wiki.gandhadagudi.com | deadurl=yes | archiveurl=https://web.archive.org/web/20131217174139/http://www.wiki.gandhadagudi.com/index.php?title=Karnataka_State_Film_Awards_2002-03 | archivedate=2013-12-17 | df= }}</ref>
| ''ನಂದಿ''
|-
| 2001-02
! scope="row" | [[ವಿ.ರವಿಚಂದ್ರನ್]]<ref name=autogenerated1>{{cite web |url=http://wiki.gandhadagudi.com/wiki/Karnataka_State_Film_Awards_2002-03 |title=Archived copy |accessdate=2010-05-27 |deadurl=yes |archiveurl=https://web.archive.org/web/20100712130143/http://wiki.gandhadagudi.com/wiki/Karnataka_State_Film_Awards_2002-03 |archivedate=2010-07-12 |df= }}</ref>
| ''[[ಏಕಾಂಗಿ]]''
|-
| 2000-01
! scope="row" | [[ಎಚ್. ಜಿ. ದತ್ತಾತ್ರೇಯ]]
| ''[[ಮುನ್ನುಡಿ]]''
|-
| 1999-2000
! scope="row" | [[ಶಿವರಾಜಕುಮಾರ್]]
| ''ಹೃದಯಾ ಹೃದಯಾ''
|-
| style="background:#add8e6; text-align:center;"| 1998-99 {{dagger}}
! scope="row" | [[ಡಾ.ವಿಷ್ಣುವರ್ಧನ್|ವಿಷ್ಣುವರ್ಧನ್]]
| ''[[ವೀರಪ್ಪನಾಯ್ಕ]]''
|-
| style="background:#add8e6; text-align:center;"| 1998-99 {{dagger}}
! scope="row" | [[ರಮೇಶ್ ಅರವಿಂದ್]]
| ''[[ಹೂಮಳೆ]]''
|-
| 1997-98
! scope="row" | [[ಡಾ.ವಿಷ್ಣುವರ್ಧನ್|ವಿಷ್ಣುವರ್ಧನ್]]
| ''[[ಲಾಲಿ]]''
|-
| 1996-97
! scope="row" | [[ರಮೇಶ್ ಅರವಿಂದ್]]
| ''[[ಅಮೆರಿಕಾ ಅಮೆರಿಕಾ]]''
|-
| 1995-96
! scope="row" | [[ಶಿವರಾಜಕುಮಾರ್]]
| ''[[ಓಂ (ಚಲನಚಿತ್ರ)|ಓಂ]]''
|-
| 1994-95
! scope="row" | [[ಅನಂತ್ ನಾಗ್]]
| ''ಗಂಗವ್ವ ಗಂಗಾಮಾಯಿ''
|-
| 1993-94
! scope="row" | [[ಡಾ.ರಾಜಕುಮಾರ್|ರಾಜಕುಮಾರ್]]
| ''[[ಒಡಹುಟ್ಟಿದವರು]]''
|-
| 1992-93
! scope="row" | [[ಡಾ.ರಾಜಕುಮಾರ್|ರಾಜಕುಮಾರ್]]
| ''[[ಜೀವನ ಚೈತ್ರ]]''
|-
| 1991-92
! scope="row" | ದೇವರಾಜ್
| ''[[ವೀರಪ್ಪನ್ (ಚಲನಚಿತ್ರ)|ವೀರಪ್ಪನ್]]''
|-
| 1990-91
! scope="row" | [[ಡಾ.ವಿಷ್ಣುವರ್ಧನ್|ವಿಷ್ಣುವರ್ಧನ್]]
| ''[[ಲಯನ್ ಜಗಪತಿರಾವ್]]''
|-
| 1989-90
! scope="row" | [[ಶ್ರೀಧರ್]]
| ''[[ಸಂತ ಶಿಶುನಾಳ ಶರೀಫ (ಚಲನಚಿತ್ರ)|ಸಂತ ಶಿಶುನಾಳ ಶರೀಫ]]''
|-
| 1988-89
! scope="row" | [[ಡಾ.ರಾಜಕುಮಾರ್|ರಾಜಕುಮಾರ್]]
| ''[[ದೇವತಾ ಮನುಷ್ಯ]]''
|-
| 1987-88
! scope="row" | [[ಅನಂತ್ ನಾಗ್]]
| ''[[ಅವಸ್ಥೆ]]''
|-
| 1986-87
! scope="row" | ಚಾರು ಹಾಸನ್
| ''[[ತಬರನ ಕಥೆ]]''
|-
| 1985-86
! scope="row" | [[ಅನಂತ್ ನಾಗ್]]
| ''[[ಹೊಸ ನೀರು]]''
|-
| 1984-85
! scope="row" | [[ಡಾ.ವಿಷ್ಣುವರ್ಧನ್|ವಿಷ್ಣುವರ್ಧನ್]]
| ''[[ಬಂಧನ]]''
|-
| 1983-84
! scope="row" | [[ಲೋಕೇಶ್]]
| ''[[ಬ್ಯಾಂಕರ್ ಮಾರ್ಗಯ್ಯ]]''
|-
| 1982-83
! scope="row" | [[ಡಾ.ರಾಜಕುಮಾರ್|ರಾಜಕುಮಾರ್]]
| ''[[ಹಾಲು ಜೇನು]]''
|-
| 1981-82
! scope="row" | [[ಡಾ.ರಾಜಕುಮಾರ್|ರಾಜಕುಮಾರ್]]
| ''[[ಹೊಸ ಬೆಳಕು]]''
|-
| 1980-81
! scope="row" | [[ಶ್ರೀನಾಥ್]]
| ''[[ಶ್ರೀ ರಾಘವೇಂದ್ರ ವೈಭವ]]''
|-
| 1979-80
! scope="row" | [[ಅನಂತ್ ನಾಗ್]]
| ''[[ಮಿಂಚಿನ ಓಟ]]''
|-
| 1978-79
! scope="row" | [[ಲೋಕೇಶ್]]
| ''[[ಪರಸಂಗದ ಗೆಂಡೆತಿಮ್ಮ]]''
|-
| 1977-78
! scope="row" | [[ಡಾ.ವಿಷ್ಣುವರ್ಧನ್|ವಿಷ್ಣುವರ್ಧನ್]]
| ''[[ಹೊಂಬಿಸಿಲು]]''
|-
| 1976-77
! scope="row" | [[ಡಾ.ರಾಜಕುಮಾರ್|ರಾಜಕುಮಾರ್]]
| ''[[ಬಬ್ರುವಾಹನ (ಚಲನಚಿತ್ರ)|ಬಬ್ರುವಾಹನ]]''
|-
| 1975-76
! scope="row" | ಎಂ. ವಿ. ವಾಸುದೇವರಾವ್
| ''[[ಚೋಮನ ದುಡಿ]]''
|-
| 1974-75
! scope="row" | [[ಡಾ.ರಾಜಕುಮಾರ್|ರಾಜಕುಮಾರ್]]
| ''[[ಭಕ್ತ ಕುಂಬಾರ]]''
|-
| 1973-74
! scope="row" | [[ಲೋಕೇಶ್]]
| ''[[ಬೂತಯ್ಯನ ಮಗ ಅಯ್ಯು]]''
|-
| 1972-73
! scope="row" | [[ಡಾ.ವಿಷ್ಣುವರ್ಧನ್|ವಿಷ್ಣುವರ್ಧನ್]]
| ''[[ನಾಗರಹಾವು (ಚಲನಚಿತ್ರ ೧೯೭೨)|ನಾಗರಹಾವು]]''
|-
| 1971-72
! scope="row" | ವೆಂಕಟ ರಾವ್ ತಲಗೇರಿ
| ''[[ವಂಶವೃಕ್ಷ]]''
|-
| 1970-71
! scope="row" | [[ಡಾ.ರಾಜಕುಮಾರ್|ರಾಜಕುಮಾರ್]]
| ''[[ಕುಲಗೌರವ]]''
|-
| 1969-70
! scope="row" | [[ಬಿ.ಆರ್.ಪಂತುಲು]]
| ''[[ಶ್ರೀ ಕೃಷ್ಣದೇವರಾಯ (ಚಲನಚಿತ್ರ)|ಶ್ರೀ ಕೃಷ್ಣದೇವರಾಯ]]''
|-
| 1968-69
! scope="row" | [[ಆರ್.ನಾಗೇಂದ್ರರಾವ್]]
| ''[[ಹಣ್ಣೆಲೆ ಚಿಗುರಿದಾಗ]]''
|-
| 1967-68
! scope="row" | [[ಡಾ.ರಾಜಕುಮಾರ್|ರಾಜಕುಮಾರ್]]
| ''[[ಬಂಗಾರದ ಹೂವು]]''
|}
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
95nqp6drb9xed60vuy4klsn25ih6013
ವಿಕಿಪೀಡಿಯ:ಅರಳಿ ಕಟ್ಟೆ
4
112271
1379521
1378495
2026-08-08T18:42:01Z
Bharathesha Alasandemajalu
26683
/* Documenting the Folk Arts of North Karnataka – Phase 2 (ಉತ್ತರ ಕರ್ನಾಟಕದ ಜಾನಪದ ಕಲೆಗಳ ದಾಖಲಾತಿ – ಹಂತ 2) */
1379521
wikitext
text/x-wiki
[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on [[WP:Newbotrequest|this page]]. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below.
* Admin/other rights can be requested at [[ವಿಕಿಪೀಡಿಯ:ನಿರ್ವಾಹಕ_ಮನವಿ_ಪುಟ]]
{{ಆರ್ಕೈವ್-ಅರಳಿಕಟ್ಟೆ}}
{{clear}}
== ಭಾರತದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ==
[[ಭಾರತದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ]] ಪುಟ Simple English ನ [[:en:Shah Bano case]] ಪುಟಕ್ಕೆ ಲಿಂಕ್ ಆಗಿದೆ, ದಯವಿಟ್ಟು ಯಾರಾದರು ಆ ಪುಟವನ್ನು [[:en:Minority appeasement in India]] ಪುಟಕ್ಕೆ ಲಿಂಕ್ ಮಾಡಿ. Thanks!-[[ಸದಸ್ಯ:Baangla|Baangla]] ([[ಸದಸ್ಯರ ಚರ್ಚೆಪುಟ:Baangla|ಚರ್ಚೆ]]) ೦೯:೪೭, ೧೭ ಡಿಸೆಂಬರ್ ೨೦೨೫ (IST)
:@[[ಸದಸ್ಯ:Baangla|Baangla]] , {{done}} --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೦:೩೭, ೧೭ ಡಿಸೆಂಬರ್ ೨೦೨೫ (IST)
::Thanks!-[[ಸದಸ್ಯ:Baangla|Baangla]] ([[ಸದಸ್ಯರ ಚರ್ಚೆಪುಟ:Baangla|ಚರ್ಚೆ]]) ೧೩:೧೩, ೧೭ ಡಿಸೆಂಬರ್ ೨೦೨೫ (IST)
== {{t|databox}} ==
ವಿಕಿಡೇಟಾದಿಂದ ಡೇಟಾವನ್ನು ಪಡೆಯಲು ಮತ್ತು ಇನ್ಫೋಬಾಕ್ಸ್ನಲ್ಲಿ ಲೈವ್ ಮಾಹಿತಿಯನ್ನು ಒದಗಿಸಲು ಇನ್ಫೋಬಾಕ್ಸ್ ಟೆಂಪ್ಲೇಟ್ಗಳನ್ನು ಸೇರಿಸುವ ಬದಲು ನೀವು {{t|Databox}} ಅನ್ನು ಬಳಸಬಹುದು, ಹೆಚ್ಚಿನ ಮಾಹಿತಿ [[ಟೆಂಪ್ಲೇಟು:Databox/doc]] ಪುಟದಲ್ಲಿ ಇದೆ.--<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೨:೫೨, ೨೨ ಡಿಸೆಂಬರ್ ೨೦೨೫ (IST)
ಇದು ಬಹಳ ಅನುಕೂಲ. ಇದು ಕೆಲಸ ಮಾಡಬೇಕು ಅಂದ್ರೆ,
# ಬರೆವ ಪುಟಕ್ಕೆ ಇಂಗ್ಲೀಷ್ ವಿಕಿಯಲ್ಲಿ ಲೇಖನ ಮತ್ತು ವಿಕಿಡೇಟಾ ವಸ್ತು ಮುಂಚೆಯೇ ಇರಬೇಕು
# ಕನ್ನಡ ಲೇಖನವನ್ನು ವಿಕಿಡೇಟಾದಲ್ಲಿ ಸೇರಿಸಬೇಕು
[[User:Mallikarjunasj|Mallikarjunasj]] ([[User talk:Mallikarjunasj|talk]]) ೦೯:೫೩, ೨೫ ಡಿಸೆಂಬರ್ ೨೦೨೫ (IST)
:@[[ಸದಸ್ಯ:Mallikarjunasj|Mallikarjunasj]] , ಹೌದು, ಡೇಟಾಬಾಕ್ಸ್ ಕೆಲಸ ಮಾಡಲು ವಿಕಿಡೇಟಾ ಐಟಂ ಖಂಡಿತವಾಗಿಯೂ ಅಗತ್ಯವಿದೆ. --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೫:೩೩, ೨೫ ಡಿಸೆಂಬರ್ ೨೦೨೫ (IST)
== Help panel question on [[:ಸದಸ್ಯರ ಚರ್ಚೆಪುಟ:~2025-41292-57|ಸದಸ್ಯರ ಚರ್ಚೆಪುಟ:~2025-41292-57]] (೧೫:೫೬, ೧೬ ಜನವರಿ ೨೦೨೬) ==
ಧನ್ಯವಾದಗಳು ಸರ್ 🙏. ನ. ನಾಗಲಿಂಗ ಸ್ವಾಮಿ ( ಕನ್ನಡ ಯೋಧ. ಕನ್ನಡ ಕ್ರಾಂತಿದಳ) ಇವರ ಚಿತ್ರವನ್ನು ಸೇರಿಸುವ ಕುರಿತು. --[[ಸದಸ್ಯ:Punyavathi nagalingaswmy|Punyavathi nagalingaswmy]] ([[ಸದಸ್ಯರ ಚರ್ಚೆಪುಟ:Punyavathi nagalingaswmy|ಚರ್ಚೆ]]) ೧೫:೫೬, ೧೬ ಜನವರಿ ೨೦೨೬ (IST)
== Thank You for Last Year – Join Wiki Loves Ramadan 2026 ==
Dear Wikimedia communities,
We hope you are doing well, and we wish you a happy New Year.
''Last year, we captured light. This year, we’ll capture legacy.''
In 2025, communities around the world shared the glow of Ramadan nights and the warmth of collective iftars. In 2026, ''Wiki Loves Ramadan'' is expanding, bringing more stories, more cultures, and deeper global connections across Wikimedia projects.
We invite you to explore the ''Wiki Loves Ramadan 2026'' [[m:Special:MyLanguage/Wiki Loves Ramadan 2026|Meta page]] to learn how you can participate and [[m:Special:MyLanguage/Wiki Loves Ramadan 2026/Participating communities|sign up]] your community.
📷 ''Photo campaign on '' [[c:Special:MyLanguage/Commons:Wiki Loves Ramadan 2026|Wikimedia Commons]]
If you have questions about the project, please refer to the FAQs:
* [[m:Special:MyLanguage/Wiki Loves Ramadan/FAQ/|Meta-Wiki]]
* [[c:Special:MyLanguage/Commons:Wiki Loves Ramadan/FAQ|Wikimedia Commons]]
''Early registration for updates is now open via the '''[[m:Special:RegisterForEvent/2710|Event page]]'''''
''Stay connected and receive updates:''
* [https://t.me/WikiLovesRamadan Telegram channel]
* [https://lists.wikimedia.org/postorius/lists/wikilovesramadan.lists.wikimedia.org/ Mailing list]
We look forward to collaborating with you and your community.
'''The Wiki Loves Ramadan 2026 Organizing Team''' ೦೧:೧೫, ೧೭ ಜನವರಿ ೨೦೨೬ (IST)
<!-- Message sent by User:ZI Jony@metawiki using the list at https://meta.wikimedia.org/w/index.php?title=Distribution_list/Non-Technical_Village_Pumps_distribution_list&oldid=29879549 -->
== Feminism and Folklore 2026 starts soon ==
<div style="border:8px maroon ridge;padding:6px;">
[[File:Feminism and Folklore 2026 logo.svg|centre|550px|frameless]]
::<div lang="en" dir="ltr" class="mw-content-ltr">
<div style="text-align: center; width: 100%;">''{{int:please-translate}}''</div>
;Invitation to Organize Feminism and Folklore 2026
Dear Wiki Community,
We are pleased to invite Wikimedia communities, affiliates, and independent contributors to organize the '''[[:m:Feminism and Folklore 2026|Feminism and Folklore 2026]]''' writing competition on your local Wikipedia.
The international campaign will run from '''1 February to 31 March 2026''' and aims to improve coverage of feminism, women’s histories, gender-related topics, and folk culture across Wikipedia projects.
;About the Campaign
'''Feminism and Folklore''' is a global writing initiative that complements the '''[[:c:Commons:Wiki Loves Folklore 2026|Wiki Loves Folklore]]''' photography competition. While Wiki Loves Folklore focuses on visual documentation, this writing campaign addresses the '''gender gap on Wikipedia''' by improving encyclopedic content related to folk culture and marginalized voices.
;What Can Participants Write About?
Communities can contribute by creating, expanding, or translating articles related to:
* Folk festivals, rituals, and celebrations
* Folk dances, music, and traditional performances
* Women and queer figures in folklore
* Women in mythology and oral traditions
* Women warriors, witches, and witch-hunting narratives
* Fairy tales, folk stories, and legends
* Folk games, sports, and cultural practices
Participants may work from curated article lists or generate new article suggestions using campaign tools.
;How to Sign Up as an Organizer
Organizers are requested to complete the following steps to register their community:
# Create a local project page on your wiki [[:m:Feminism and Folklore/Sample|(see sample)]]
# Set up the campaign using the '''CampWiz''' tool
# Prepare a local article list and clearly mention:
#* Campaign timeline
#* Local and international prizes
# Request a site notice from local administrators [[:mr:Template:SN-FNF|(see sample)]]
# Add your local project page and CampWiz link to the '''[[:m:Feminism and Folklore 2026/Project Page|Meta project page]]'''
;Campaign Tools
The Wiki Loves Folklore Tech Team has introduced tools to support organizers and participants:
* '''Article List Generator by Topic''' – Helps identify articles available on English Wikipedia but missing in your local language Wikipedia. The tool allows customized filters and provides downloadable article lists in CSV and wikitable formats.
* '''CampWiz''' – Enables communities to manage writing campaigns effectively, including jury-based evaluation. This will be the third year CampWiz is officially used for Feminism and Folklore.
Both tools are now available for use in the campaign. '''[https://tools.wikilovesfolklore.org/ Click here to access the tools]'''
;Learn More & Get Support
For detailed information about rules, timelines, and prizes, please visit the
'''[[:m:Feminism and Folklore 2026|Feminism and Folklore 2026 project page]]'''.
If you have any questions or need assistance, feel free to reach out via:
* '''[[:m:Talk:Feminism and Folklore 2026/Project Page|Meta talk page]]'''
* Email us using details on the contact page.
;Join Us
We look forward to your collaboration and coordination in making Feminism and Folklore 2026 a meaningful and impactful campaign for closing gender gaps and enriching folk culture content on Wikipedia.
Thank you and best wishes,
'''[[:m:Feminism and Folklore 2026|Feminism and Folklore 2026 International Team]]'''
----
''Stay connected:''
[[File:B&W Facebook icon.png|link=https://www.facebook.com/feminismandfolklore/|30x30px]]
[[File:B&W Twitter icon.png|link=https://twitter.com/wikifolklore|30x30px]]
</div></div>
== Invitation to Host Wiki Loves Folklore 2026 in Your Country ==
<div lang="en" dir="ltr" class="mw-content-ltr">
<div style="text-align: center; width: 100%;">''{{int:please-translate}}''</div>
[[File:Wiki Loves Folklore Logo.svg|right|150px|frameless]]
Hello everyone,
We are delighted to invite Wikimedia affiliates, user groups, and community organizations worldwide to participate in '''Wiki Loves Folklore 2026''', an international initiative dedicated to documenting and celebrating folk culture across the globe.
;About Wiki Loves Folklore
'''Wiki Loves Folklore''' is an annual international photography competition hosted on Wikimedia Commons. The campaign runs from '''1 February to 31 March 2026''' and encourages photographers, cultural enthusiasts, and community members to contribute photographs that highlight:
* Folk traditions and rituals
* Cultural festivals and celebrations
* Traditional attire and crafts
* Performing arts, music, and dance
* Everyday practices rooted in folk heritage
Through this campaign, we aim to preserve and promote diverse folk cultures and make them freely accessible to the world.
[[:c:Commons:Wiki_Loves_Folklore_2026|Project page on Wikimedia Commons]]
; Host a Local Edition
As we celebrate the '''eight edition''' of Wiki Loves Folklore, we warmly invite communities to organize a local edition in their country or region. Hosting a local campaign is a great opportunity to:
* Increase visibility of your region’s folk culture
* Engage new contributors in your community
* Enrich Wikimedia Commons with high-quality cultural content
'''[[:c:Commons:Wiki_Loves_Folklore_2026/Organize|Sign up to organize]]:'''
If your team prefers to organize the competition in ''either February or March only'', please feel free to let us know.
If you are unable to organize, we encourage you to share this opportunity with other interested groups or organizations in your region.
;Get in Touch
If you have any questions, need support, or would like to explore collaboration opportunities, please feel free to contact us via:
* The project Talk pages
* Email: '''support@wikilovesfolklore.org'''
We are also happy to connect via an online meeting if your team would like to discuss planning or coordination in more detail.
Warm regards,
'''The Wiki Loves Folklore International Team'''
</div>
[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೮:೫೧, ೧೮ ಜನವರಿ ೨೦೨೬ (IST)
<!-- Message sent by User:Tiven2240@metawiki using the list at https://meta.wikimedia.org/w/index.php?title=Distribution_list/Global_message_delivery/Wikipedia&oldid=29228188 -->
== <span lang="en" dir="ltr">Annual review of the Universal Code of Conduct and Enforcement Guidelines</span> ==
<div lang="en" dir="ltr">
<section begin="announcement-content" />
I am writing to you to let you know the annual review period for the Universal Code of Conduct and Enforcement Guidelines is open now. You can make suggestions for changes through 9 February 2026. This is the first step of several to be taken for the annual review. [[m:Special:MyLanguage/Universal Code of Conduct/Annual review/2026|Read more information and find a conversation to join on the UCoC page on Meta]].
The [[m:Special:MyLanguage/Universal Code of Conduct/Coordinating Committee|Universal Code of Conduct Coordinating Committee]] (U4C) is a global group dedicated to providing an equitable and consistent implementation of the UCoC. This annual review was planned and implemented by the U4C. For more information and the responsibilities of the U4C, [[m:Special:MyLanguage/Universal Code of Conduct/Coordinating Committee/Charter|you may review the U4C Charter]].
Please share this information with other members in your community wherever else might be appropriate.
-- In cooperation with the U4C, [[m:User:Keegan (WMF)|Keegan (WMF)]] ([[m:User talk:Keegan (WMF)|talk]])<section end="announcement-content" />
</div>
೦೨:೩೧, ೨೦ ಜನವರಿ ೨೦೨೬ (IST)
<!-- Message sent by User:Keegan (WMF)@metawiki using the list at https://meta.wikimedia.org/w/index.php?title=Distribution_list/Global_message_delivery&oldid=29905753 -->
== ಸ್ಪ್ರಿಂಗ್ ಮಂತ್ ಎಡಿಟ್-ಅಥಾನ್ - ೨೦೨೬ ==
ಫೆಬ್ರವರಿ 1ರಿಂದ ಮಾರ್ಚ್ 31, 2026ರವರೆಗೆ ನಡೆಯುವ “ವಿಕಿ ಲವ್ಸ್ ಫೋಕ್ಲೋರ್” ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯನ್ನು ಚಂದ್ರ ನವ ವರ್ಷದ ಅಂಗವಾಗಿ ಮುಖ್ಯಭೂಮಿ ಚೀನಾದಲ್ಲಿ WMGMC ಹಾಗೂ ವಿಕಿಪ್ರಾಜೆಕ್ಟ್ ಚೈನಾ ಕಲ್ಚರಲ್ ಹೆರಿಟೇಜ್ ಸಹ-ಆಯೋಜಿಸುತ್ತಿವೆ; ಇದರೊಂದಿಗೆ ಫೆಬ್ರವರಿ 10ರಿಂದ ಮಾರ್ಚ್ 18ರವರೆಗೆ ಆರನೇ ಸ್ಪ್ರಿಂಗ್ ಮಂತ್ ಎಡಿಟ್-ಅಥಾನ್ ಕೂಡ ನಡೆಯಲಿದ್ದು, ಚೀನಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವಿಶ್ವದ ವಿವಿಧ ಸಮುದಾಯಗಳ ನವ ವರ್ಷದ ಸಂಪ್ರದಾಯಗಳನ್ನು ಬರವಣಿಗೆ ಹಾಗೂ ಛಾಯಾಚಿತ್ರಗಳ ಮೂಲಕ ದಾಖಲಿಸಲು ಆಹ್ವಾನಿಸಲಾಗುತ್ತದೆ, ಈ ಎಡಿಟ್-ಅಥಾನ್ ವುಡ್ ಸ್ನೇಕ್ ವರ್ಷದ ಕೊನೆಯ ಚಂದ್ರ ತಿಂಗಳ ಅವಧಿ (ಫೆಬ್ರವರಿ 10–16) ಮತ್ತು ಫೈರ್ ಹಾರ್ಸ್ ವರ್ಷದ ಮೊದಲ ಚಂದ್ರ ತಿಂಗಳ ಅವಧಿ (ಫೆಬ್ರವರಿ 17–ಮಾರ್ಚ್ 18) ಎಂಬ ಎರಡು ಹಂತಗಳಲ್ಲಿ ನಡೆಯುತ್ತದೆ ಮತ್ತು ಕಾರ್ಯಗಳನ್ನು ಪೂರ್ಣಗೊಳಿಸಿದವರಿಗೆ ವರ್ಚುವಲ್ ಹಾಗೂ ಭೌತಿಕ ಬಹುಮಾನಗಳನ್ನು ನೀಡಲಾಗುತ್ತದೆ.
Page Link: https://kn.wikipedia.org/wiki/%E0%B2%B8%E0%B3%8D%E0%B2%AA%E0%B3%8D%E0%B2%B0%E0%B2%BF%E0%B2%82%E0%B2%97%E0%B3%8D_%E0%B2%AE%E0%B2%82%E0%B2%A4%E0%B3%8D_%E0%B2%8E%E0%B2%A1%E0%B2%BF%E0%B2%9F%E0%B3%8D-%E0%B2%85%E0%B2%A5%E0%B2%BE%E0%B2%A8%E0%B3%8D
ಈ ಸಂಪಾದನೆಗಾಗಿ ಸೈಟ್ ಸೂಚನೆಯನ್ನು ಒದಗಿಸಲು ವಿನಂತಿಸುತ್ತಿದ್ದೇನೆ. [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೭:೦೮, ೩೦ ಜನವರಿ ೨೦೨೬ (IST)
:{{done}} --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೨:೩೯, ೧೧ ಫೆಬ್ರವರಿ ೨೦೨೬ (IST)
==ಸ್ತ್ರೀವಾದ ಮತ್ತು ಜಾನಪದ ೨೦೨೬- ಕನ್ನಡ ವಿಕಿಪೀಡಿಯ==
ನಾನು ಈ ಸ್ಪರ್ದೆಯಲ್ಲಿ ಭಾಗವಹಿಸುತ್ತಿದ್ದೇನೆ. ನನಗೆ ಎರಡು ವಿಷಯಗಳಲ್ಲಿ ಸ್ಪಷ್ಟೀಕರಣ ಬೇಕಾಗಿದೆ.
# ಬ್ಯಾನರ್ ನ ಲಿಂಕ್ ನಲ್ಲಿರುವ ಲೇಖನಗಳ ಪಟ್ಟಿಯಲ್ಲಿರುವ ಲೇಖನಗಳು ಅನರ್ಹ ಹೇಗಾಗುತ್ತದೆ? ಆ ಪಟ್ಟಿ ಸರಿ ಇಲ್ಲದಿದ್ದರೆ ಅದನ್ನು ಪರಿಷ್ಕರಿಸಿ ಪ್ರಕಟಿಸಿದರೆ ನಮ್ಮ ಲೇಖನಗಳು ಅನರ್ಹವಾಗುವುದು ತಪ್ಪುತ್ತದೆ.
# ಸ್ಪರ್ಧೆಯಲ್ಲಿ ಭಾಗವಹಿಸುವವರೇ ಜ್ಯೂರಿಗಳಾಗಿ ಕಾರ್ಯನಿರ್ವಹಿಸುವುದು ಎಷ್ಟು ಸರಿ? Conflict of interest ಆಗುವುದಿಲ್ಲವೇ?
ದಯವಿಟ್ಟು ನಿರ್ವಾಹಕರು ಸ್ಪಷ್ಟೀಕರಣ ಕೊಡಬೇಕಾಗಿ ವಿನಂತಿ.
ದನ್ಯವಾದಗಳು [[ಸದಸ್ಯ:VASANTH S.N.|VASANTH S.N.]] ([[ಸದಸ್ಯರ ಚರ್ಚೆಪುಟ:VASANTH S.N.|ಚರ್ಚೆ]])
::#ಮೊದಲನೆಯದಾಗಿ, ವಿಕಿಪೀಡಿಯ, ಸ್ತ್ರೀವಾದ ಮತ್ತು ಜಾನಪದ ಸ್ಪರ್ಧೆಗೆ ನೀವು ನೀಡಿದ ಕೊಡುಗೆಗೆ ನಾನು ಕೃತಜ್ಞನಾಗಿದ್ದೇನೆ. ಮೇಲಿನ ಪಟ್ಟಿಯಿಂದ ಯಾವುದೇ ಪುಟವನ್ನು ಸ್ಪರ್ಧೆಗೆ ಬಳಸಬಹುದು. ಆದರೆ ಭಾರತೀಯ ಪಾಕಪದ್ಧತಿಯು ಭಾರತೀಯ ಸಂಸ್ಕೃತಿಯ ಅಡಿಯಲ್ಲಿ ಬರುವುದರಿಂದ ಆ ಪುಟಗಳನ್ನು ಪಟ್ಟಿಗೆ ಸೇರಿದೆ. ಆ ಪುಟಗಳನ್ನು ಪರಿಶೀಲಿಸುವುದು ಮತ್ತು ಮೌಲ್ಯಮಾಪನ ಮಾಡುವುದರಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮ. ದಯವಿಟ್ಟು ಸೂಕ್ತವಾದ ಲೇಖನ ಆಯ್ಕೆ ಮಾಡಿ.
::#ಮತ್ತು ನಾನು ಈಗ ಪರಿಶೀಲಿಸಿದಂತೆ ಯಾವುದೇ ಲೇಖನವನ್ನು ಸಲ್ಲಿಸುವವರು ಸ್ವತಃ ಮೌಲ್ಯಮಾಪನ ಮಾಡಿಲ್ಲ, ಆದ್ದರಿಂದ ಹಿತಾಸಕ್ತಿ ಸಂಘರ್ಷ(conflict of interest) ಇಲ್ಲಿ ಅನ್ವಯಿಸುವುದಿಲ್ಲ, ಹಾಗೂ ಕನ್ನಡ ಚಿಕ್ಕದಾದ ಸಮುದಾಯ ಭಾಗವಹಿಸುವಿಕೆ ಇತರ ಭಾಷೆಗಳಿಗೆ ಹೋಲಿಸಿದರೆ ತುಂಬಾ ಕಡಿಮೆ, ಅನೇಕ ಭಾಷೆಗಳ ಹಾಗೆ ಕನ್ನಡದಲ್ಲಿ ತೀರ್ಪುಗಾರರು ಮತ್ತು ಸಂಘಟಕರು ಸಹ ಭಾಗವಹಿಸಬಹುದು.--<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೨೨:೨೧, ೭ ಫೆಬ್ರವರಿ ೨೦೨೬ (IST)
:@[[ಸದಸ್ಯ:VASANTH S.N.|VASANTH S.N.]] , ಪಟ್ಟಿ ಕೇವಲ ಒಂದು ಉದಾಹರಣೆ, ನೀವು ವಿಕಿಗೆ ಸೂಕ್ತವಾದ ಸ್ತ್ರೀವಾದ ಮತ್ತು ಜಾನಪದ ಸಂಬಂಧಿತ ವಿಷಯಗಳನ್ನು ಆಯ್ಕೆ ಮಾಡಬಹುದು. --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೨೨:೨೫, ೭ ಫೆಬ್ರವರಿ ೨೦೨೬ (IST)
== <span lang="en" dir="ltr">Migration to Parsoid</span> ==
<div lang="en" dir="ltr">
<section begin="announcement-content" />
<em>[[m:Special:MyLanguage/Wikimedia Foundation/Product and Technology/Parsoid Read Views/Read View Announcement|Read this in another language]]</em>
Hello everyone! I am glad to inform you that as the next step in the [[mw:Special:MyLanguage/Parsoid/Parser Unification|Parser Unification]] project, Parsoid will soon be turned on as the default article renderer on your wiki. We are gradually increasing the number of wikis using Parsoid, with the intention of making it the default wikitext parser for MediaWiki's next long-term support release. This will make our wikis more reliable and consistent for editors, readers, and tools to use, as well as making the development of future wikitext features easier.
If this disrupts your workflow, don’t worry! You can still opt out through a user preference or turn Parsoid off on the current page using the Tools submenu, as described in the [[mw:Special:MyLanguage/Help:Extension:ParserMigration|Extension:ParserMigration]] documentation.
There is [[mw:Special:MyLanguage/Parsoid/Parser Unification/Confidence Framework|more information about our roll-out strategy]] available, including the testing done before we turn on Parsoid for a new wiki.
To report bugs and issues, please look at our [[mw:Special:MyLanguage/Parsoid/Parser Unification/Known Issues|known issues]] documentation and if you found a new bug please create a phab ticket and tag the [[phab:project/view/5846|Content Transform Team in Phabricator]].
<section end="announcement-content" />
</div>
<bdi lang="en" dir="ltr">[[mw:User:ABreault (WMF)|Content Transform Team]]</bdi> ೦೬:೧೨, ೧೮ ಫೆಬ್ರವರಿ ೨೦೨೬ (IST)
<!-- Message sent by User:ABreault (WMF)@metawiki using the list at https://meta.wikimedia.org/w/index.php?title=Wikimedia_Foundation/Product_and_Technology/Parsoid_Read_Views/2026-02-16_Wikipedias&oldid=30094589 -->
== Request for Comment: VisualEditor automatic reference names ==
<div lang="en" dir="ltr">
Hi, I’m Johannes from [[:m:Wikimedia Deutschland|Wikimedia Deutschland]]’s [[:m:WMDE Technical Wishes|Technical Wishes team]]. Apologies for writing in English. {{Int:Please-translate}}! We are considering to work on [[:m:Community Wishlist/W17|Community Wishlist/W17: Improve VE references' automatic names and reuse]]. This has been a long-term issue for wikitext editors (see e.g. [[:en:WP:VisualEditor/Named references]]) which has been among the top-voted wishes in several [[:m:Community Wishlist Survey|Community Wishlist Surveys]], e.g. [[:m:Community Wishlist Survey 2017/Editing/VisualEditor: Allow editing of auto-generated references before adding them|2017]], [[:m:Community Wishlist Survey 2019/Citations/VisualEditor: Allow references to be named|2019]], [[:m:Community Wishlist Survey 2022/Editing/VisualEditor should use human-like names for references|2022]] or [[:m:Community Wishlist Survey 2023/Editing/VisualEditor should use proper names for references|2023]].
We would like your input on the [[:m:WMDE Technical Wishes/References/VisualEditor automatic reference names#Proposed solutions|solutions]] proposed on our project page: '''[[:m:WMDE Technical Wishes/References/VisualEditor automatic reference names]]'''. We are considering several options, which can be combined if desired by the community.
* Changing the default pattern for automatically generated reference names (currently <code>":n"</code>, e.g. <code>":0"</code>, <code>":1"</code>...) to use the [[:mw:Help:Reference Previews#Exposed reference types|reference type]] instead (e.g. <code>"book_reference-1"</code>).
* Providing a simple mechanism for communities to configure a different default name.
* Generating automatic reference names based on the [[:en:domain name|domain name]] (if it’s a web citation).
* Generating automatic reference names based on template parameters (e.g. "title" or "last"+"first") – defined by the community.
=== Feedback ===
[[:m:WMDE Technical Wishes/References/VisualEditor automatic reference names|Visit our project page]] to read about our proposal in detail and share your thoughts [[:m:Talk:WMDE Technical Wishes/References/VisualEditor automatic reference names#Request for comment|on metawiki]].
'''Please note''': We will only implement a solution if there’s clear consensus among the global community. Our intention is not to build the perfect solution, but to find a simple and lean one that alleviates the pain caused by auto generated names. We are aware that some experienced VisualEditor users might prefer an option to manually change reference names in VisualEditor, but such a UX intervention is difficult to achieve across reference types and thus out of scope for our team, we can only improve the auto-naming mechanism.
We are happy about suggestions for improving certain details of the proposed solutions. Any other feedback and alternative proposals are also welcome – even though it’s out of scope for us, it might still be relevant for future work on this topic.
Please support us interpreting consensus by clearly indicating your opinion (e.g. by using support/neutral/oppose templates). We are aware of [[:en:WP:NOTVOTE]], but given that we are facilitating this discussion with users from different wikis, potentially commenting in their native language, clearly indicating your position helps us avoid misunderstandings.
Thank you for participating!</div> <bdi lang="en" dir="ltr">[[User:Johannes Richter (WMDE)|Johannes Richter (WMDE)]] ([[User talk:Johannes Richter (WMDE)|ಚರ್ಚೆ]])</bdi> ೧೬:೪೫, ೧೯ ಮಾರ್ಚ್ ೨೦೨೬ (IST)
<!-- Message sent by User:Johannes Richter (WMDE)@metawiki using the list at https://meta.wikimedia.org/w/index.php?title=User:Johannes_Richter_(WMDE)/MassMessageRecipients&oldid=30281362 -->
== ವಿಕಿಕಾನ್ಫರೆನ್ಸ್ ಇಂಡಿಯಾ 2026: ವಿದ್ಯಾರ್ಥಿವೇತನಕ್ಕೆ (ಸ್ಕಾಲರ್ಶಿಪ್) ಅರ್ಜಿ ಸಲ್ಲಿಕೆ ಆರಂಭ ==
ಎಲ್ಲರಿಗೂ ನಮಸ್ಕಾರ,
ವಿಕಿಕಾನ್ಫರೆನ್ಸ್ ಇಂಡಿಯಾ 2026 ಸಮ್ಮೇಳನಕ್ಕಾಗಿ ವಿದ್ಯಾರ್ಥಿವೇತನ (ಸ್ಕಾಲರ್ಶಿಪ್) ಅರ್ಜಿಗಳನ್ನು ಈಗ ಆಹ್ವಾನಿಸಲಾಗುತ್ತಿದೆ. ಈ ಸಮ್ಮೇಳನವು ಭಾರತದ ಕೊಚ್ಚಿಯಲ್ಲಿ 2026 ರ ಸೆಪ್ಟೆಂಬರ್ 4 ರಿಂದ 6 ರವರೆಗೆ ನಡೆಯಲಿದೆ.
ವಿಕಿಕಾನ್ಫರೆನ್ಸ್ ಇಂಡಿಯಾವು ಭಾರತ, ದಕ್ಷಿಣ ಏಷ್ಯಾ ಮತ್ತು ಇತರ ಪ್ರದೇಶಗಳ ವಿಕಿಮೀಡಿಯನ್ನರು, ಸಮುದಾಯದ ಸಂಘಟಕರು ಮತ್ತು ಕೊಡುಗೆದಾರರನ್ನು ಒಗ್ಗೂಡಿಸುತ್ತದೆ. ಮುಕ್ತ ಜ್ಞಾನ ಚಳುವಳಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಬ್ಬರನೊಬ್ಬರು ಅರಿಯಲು, ಹೊಸ ವಿಚಾರ ಕಲಿಯಲು, ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಒಟ್ಟಾಗಿ ಕೆಲಸ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ.
ನೀವು ವಿಕಿಮೀಡಿಯಾ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರೆ ಅಥವಾ ಸಮುದಾಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ, ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ನಿಮ್ಮನ್ನು ಪ್ರೋತ್ಸಾಹಿಸಲಾಗುತ್ತದೆ. ವಿವರವಾದ ಪ್ರಕಟಣೆ ಇಲ್ಲಿದೆ. 🙂
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: [15 ಏಪ್ರಿಲ್ 2026, ರಾತ್ರಿ 11:59 ಕ್ಕೆ (IST)]
ಅರ್ಜಿ ಸಲ್ಲಿಸುವ ಕೊಂಡಿ: https://docs.google.com/forms/d/e/1FAIpQLSdA3rR9xX_k31dzJrjM5MTDNYNUIRcAB45S4TflsYCbGJNrzg/viewform
ಹೆಚ್ಚಿನ ಮಾಹಿತಿಗಾಗಿ: [[metawiki:WikiConference_India_2026/Scholarship|WCI 2026 Scholarship]]
ದಯವಿಟ್ಟು ಈ ಪ್ರಕಟಣೆಯನ್ನು ನಿಮ್ಮ ಸಮುದಾಯದ ಇತರರೊಂದಿಗೆ ಹಂಚಿಕೊಳ್ಳಿ.
ಧನ್ಯವಾದಗಳು.
ವಿಕಿಕಾನ್ಫರೆನ್ಸ್ ಇಂಡಿಯಾ 2026 ಆಯೋಜನಾ ಸಮಿತಿ
-[[ಸದಸ್ಯ:Gnoeee|Gnoeee]] ([[ಸದಸ್ಯರ ಚರ್ಚೆಪುಟ:Gnoeee|ಚರ್ಚೆ]]) ೦೨:೩೨, ೨೯ ಮಾರ್ಚ್ ೨೦೨೬ (IST)
== Join the sixth Ukraine’s Cultural Diplomacy Month on Wikipedia! ==
<div lang="en" dir="ltr">
[[File:Ukraine’s Cultural Diplomacy Month on Wikipedia 2026.png|right|250px|thumb|link=https://meta.wikimedia.org/wiki/Ukraine%27s_Cultural_Diplomacy_Month_2026|Join our campaign!]]
{{int:please-translate}}
Dear Wikipedians!
[[:m:Special:MyLanguage/Wikimedia Ukraine|Wikimedia Ukraine]], in cooperation with the [[:en:Ministry of Foreign Affairs of Ukraine|MFA of Ukraine]] and [[:en:Ukrainian Institute|Ukrainian Institute]], has launched the sixth edition of writing challenge "'''[[:m:Special:MyLanguage/Ukraine's Cultural Diplomacy Month 2026|Ukraine's Cultural Diplomacy Month]]'''", which lasts from '''1st April''' until '''30th April 2026'''.
The initiative aims to promote knowledge about Ukrainian culture abroad by creating and improving Wikipedia articles in multiple languages. This year marks the sixth edition of the campaign, which will focus on contemporary culture, making today’s artistic voices and practices more visible to international audiences.
🧩'''How to participate?'''
Choose an article from the suggested list → Write an article in your language, or improve an existing one according to the rules → Add your contribution to the contest page and calculate your points → Win prizes and receive a certificate of participation → Become a promoter of truthful knowledge about Ukraine.
🧩'''[[m:Special:MyLanguage/Ukraine's Cultural Diplomacy Month 2026|Check our main page for more information]]'''.
'''If you are interested in coordinating long-term community engagement for the campaign and becoming a local ambassador, we would love to hear from you! Please let us know your interest.'''
If not, then we encourage you to translate the [[m:Special:MyLanguage/Ukraine's Cultural Diplomacy Month 2026|landing page of the contest]] and [https://meta.wikimedia.org/wiki/Special:MessageGroupStats?group=Centralnotice-tgroup-UCDM2026banner&messages=&language=en&x=D banner] into your own language.
Also, we set up a [[:m:CentralNotice/Request/Ukraine's Cultural Diplomacy Month 2026|banner]] to notify users of the possibility to participate in this challenge!
[[:m:User:OlesiaLukaniuk (WMUA)|OlesiaLukaniuk (WMUA)]] ([[:m:User talk:OlesiaLukaniuk (WMUA)|talk]]) 04:35, 1 April 2026 (UTC)
</div>
<!-- Message sent by User:OlesiaLukaniuk (WMUA)@metawiki using the list at https://meta.wikimedia.org/w/index.php?title=User:OlesiaLukaniuk_(WMUA)/list_of_wikis&oldid=28552112 -->
== Action Required: Update templates/modules for electoral maps (Migrating from P1846 to P14226) ==
Hello everyone,
This is a notice regarding an ongoing data migration on Wikidata that may affect your election-related templates and Lua modules (such as <code>Module:Itemgroup/list</code>).
'''The Change:'''<br />
Currently, many templates pull electoral maps from Wikidata using the property [[:d:Property:P1846|P1846]], combined with the qualifier [[:d:Property:P180|P180]]: [[:d:Q19571328|Q19571328]].
We are migrating this data (across roughly 4,000 items) to a newly created, dedicated property: '''[[:d:Property:P14226|P14226]]'''.
'''What You Need To Do:'''<br />
To ensure your templates and infoboxes do not break or lose their maps, please update your local code to fetch data from [[:d:Property:P14226|P14226]] instead of the old [[:d:Property:P1846|P1846]] + [[:d:Property:P180|P180]] structure. A [[m:Wikidata/Property Migration: P1846 to P14226/List|list of pages]] was generated using Wikimedia Global Search.
'''Deadline:'''<br />
We are temporarily retaining the old data on [[:d:Property:P1846|P1846]] to allow for a smooth transition. However, to complete the data cleanup on Wikidata, the old [[:d:Property:P1846|P1846]] statements will be removed after '''May 1, 2026'''. Please update your modules and templates before this date to prevent any disruption to your wiki's election articles.
Let us know if you have any questions or need assistance with the query logic. Thank you for your help! [[User:ZI Jony|ZI Jony]] using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೨೨:೪೨, ೩ ಏಪ್ರಿಲ್ ೨೦೨೬ (IST)
<!-- Message sent by User:ZI Jony@metawiki using the list at https://meta.wikimedia.org/w/index.php?title=Distribution_list/Non-Technical_Village_Pumps_distribution_list&oldid=29941252 -->
== Invitation to join South Asian Community and the Annual Planning Discussions with WMF ==
"Kindly feel free to translate this text into your own language."
Dear Community member,
We would like to invite you all to the April edition of the South Asia Open Community Call that will focus on a discussion with the leadership of the Wikimedia Foundation on their [[:m:Wikimedia Foundation Annual Plan/2026-2027|Annual Plan (2026-2027)]].
The [[:m:Wikimedia Foundation Annual Plan|Foundation’s Annual Plan]] is a high-level roadmap for what the organisation aims to achieve in the coming year. It includes not only the foundation’s Goals, Progress, and plan but also a summary of Global Trends that impact the present and future of our movement.
This is the right time for the South Asia community to participate and share their thoughts on the Wikimedia Foundation’s annual plan, helping shape it together. Share your hopes, concerns, bold ideas, and specific requests to contribute to the Foundation’s planning.
Hence, the next [[:m:South Asia Open Community Call|South Asia Open Community Call]] will be hosted on the following dates/times. Please mark the same in your calendar and sign up [[:m:Event:South Asia Open Community Call, April 2026|here]].
* Platform: Google Meet
* Date: 17th April, 2026
* Time: 1930-2045 IST (1400-1515 UTC)
* Registration Link: [[:m:Event:South Asia Open Community Call, April 2026|here]]
Note: Only those who have registered will receive the joining link.
Look forward to seeing you on the call,
Best, [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೦:೧೧, ೬ ಏಪ್ರಿಲ್ ೨೦೨೬ (IST)
<!-- Message sent by User:Nitesh Gill@metawiki using the list at https://meta.wikimedia.org/w/index.php?title=User:Nitesh_Gill/lists/Indic_VPs&oldid=29127818 -->
== Request for comment (global AI policy) ==
<bdi lang="en" dir="ltr" class="mw-content-ltr">
Apologies for writing in English. {{int:Please-translate}}
A [[:m:Requests for comment/Artificial intelligence policy|request for comment]] is currently being held to decide on a global AI policy. {{int:Feedback-thanks-title}}
[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೨೭, ೨೬ ಏಪ್ರಿಲ್ ೨೦೨೬ (IST)
</bdi>
<!-- Message sent by User:Codename Noreste@metawiki using the list at https://meta.wikimedia.org/w/index.php?title=Distribution_list/Global_message_delivery&oldid=30424282 -->
== Call for Applications: TTT 2026 (Deadline Extended to 20 May) ==
''<small>Apologies for writing in English. Please feel free to translate this into your language.</small>''
Hello everyone,
We hope you are doing well.
We would like to share that applications for the [[:m:IIITH-OKI/Train the Trainer Program/2026|Train the Trainer (TTT) 2026]] program are currently open. TTT is a capacity-building initiative aimed at supporting Wikimedians in developing training, facilitation, and leadership skills.
We are happy to inform you that the scholarship application deadline has been [[:m:IIITH-OKI/Train the Trainer Program/2026/Scholarship|extended until 20 May 2026]]. We are still receiving applications and encourage interested community members, especially emerging leaders, to [https://docs.google.com/forms/d/17eq6lJNCTVBoKRqz5IdSCiYWv-eHBrYRnx1wXfncwLI/viewform?edit_requested=true&pli=1 apply].
We also request your support in sharing this opportunity within your communities and networks, so that it can reach a wider and more diverse group of participants.
Thank you for your continued support. '''OKI (IIIT-H)''' [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೮:೩೨, ೧೭ ಮೇ ೨೦೨೬ (IST)
<!-- Message sent by User:Nitesh (OKI)@metawiki using the list at https://meta.wikimedia.org/w/index.php?title=User:Nitesh_Gill/lists/Indic_VPs&oldid=30361720 -->
== <span lang="en" dir="ltr">Vote now in the 2026 U4C election</span> ==
<div lang="en" dir="ltr">
<section begin="announcement-content" />
Eligible voters are asked to participate in the 2026 [[m:Special:MyLanguage/Universal_Code_of_Conduct/Coordinating_Committee|Universal Code of Conduct Coordinating Committee]] election. More information–including an eligibility check, voting process information, candidate information, and a link to the vote–are available on Meta at the [[m:Special:MyLanguage/Universal_Code_of_Conduct/Coordinating_Committee/Election/2026|2026 Election information page]]. The vote closes on 2 June 2026 at [https://zonestamp.toolforge.org/1780358400 00:00 UTC].
Please vote if your account is eligible. Results will be available by 14 June 2026. -- In cooperation with the U4C,<section end="announcement-content" />
</div>
[[m:User:Keegan (WMF)|Keegan (WMF)]] ([[m:User talk:Keegan (WMF)|talk]]) ೨೨:೪೪, ೨೭ ಮೇ ೨೦೨೬ (IST)
<!-- Message sent by User:Keegan (WMF)@metawiki using the list at https://meta.wikimedia.org/w/index.php?title=Distribution_list/Global_message_delivery&oldid=30513860 -->
== RFC about AI-generated content in Wikimedia Commons ==
<bdi lang="en" dir="ltr">Apologies for writing in English, please help translate this message to your language. You are invited to participate in a [[c:Commons:Requests for comment/Policy update for AI content|request for comment on Wikimedia Commons about a policy update for AI content]]. This may affect files that are uploaded to Wikimedia Commons for use on this project. Thank you. [[m:User:Codename Noreste|Codename Noreste]] ([[m:User talk:Codename Noreste|ಚರ್ಚೆ]])</bdi> ೨೨:೪೧, ೨೩ ಜೂನ್ ೨೦೨೬ (IST)
<!-- Message sent by User:Codename Noreste@metawiki using the list at https://meta.wikimedia.org/w/index.php?title=Distribution_list/Global_message_delivery&oldid=30513860 -->
== <span lang="en" dir="ltr">Deployment of Legal and Safety Contacts Link in the Footer of Your Wiki</span> ==
<div lang="en" dir="ltr">
<section begin="Message"/>
'''Legal & Safety Contacts'''
Hello community, the Wikimedia Foundation has provided a [[wmf:Special:MyLanguage/Legal:Wikimedia Foundation Legal and Safety Contact Information|single legal and safety contact page]], to be linked in the footer of your wiki, to ensure access to accurate legal information. This is a regulatory requirement. We have already rolled out links to English, German, Italian, Spanish and other wikis and we will deploy to your wiki soon. [[m:Special:MyLanguage/Wikimedia_Foundation_Legal_and_Safety_Contacts_FAQ|Please read more on the project page]] and leave any comments in this thread or on the [[m:Special:MyLanguage/Talk:Wikimedia Foundation Legal and Safety Contacts FAQ|talk page]].
<section end="Message"/>
</div>
-- [[User:Sannita (WMF)|User:Sannita (WMF)]] ([[User talk:Sannita (WMF)|talk]]) ೧೮:೫೯, ೨೫ ಜೂನ್ ೨೦೨೬ (IST)
<!-- Message sent by User:Sannita (WMF)@metawiki using the list at https://meta.wikimedia.org/w/index.php?title=User:Sannita_(WMF)/Mass_sending_test&oldid=30731267 -->
== ವೆಚ್ಚದಲ್ಲಿ ನೋಂದಣಿ (Self-funded Registration) ಹಾಗೂ ಪ್ರಸ್ತಾವನೆಗಳ ಆಹ್ವಾನ (Call for Submissions) ಈಗ ಆರಂಭವಾಗಿದೆ ಎಂಬುದನ್ನು ಸಂತೋಷದಿಂದ ತಿಳಿಸುತ್ತಿದ್ದೇವೆ. ==
ಆತ್ಮೀಯ ಸಮುದಾಯದ ಸದಸ್ಯರೇ,
ವಿಕಿ ಕಾನ್ಫರೆನ್ಸ್ ಇಂಡಿಯಾ 2026ಗಾಗಿ ಸ್ವಂತ ವೆಚ್ಚದಲ್ಲಿ ನೋಂದಣಿ (Self-funded Registration) ಹಾಗೂ ಪ್ರಸ್ತಾವನೆಗಳ ಆಹ್ವಾನ (Call for Submissions) ಈಗ ಆರಂಭವಾಗಿದೆ ಎಂಬುದನ್ನು ಸಂತೋಷದಿಂದ ತಿಳಿಸುತ್ತಿದ್ದೇವೆ.
ವಿಕಿ ಕಾನ್ಫರೆನ್ಸ್ ಇಂಡಿಯಾ 2026, ಸೆಪ್ಟೆಂಬರ್ 4ರಿಂದ 6ರವರೆಗೆ ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಭಾರತದ ಹಾಗೂ ದಕ್ಷಿಣ ಏಷ್ಯಾದ ವಿವಿಧ ಭಾಗಗಳಿಂದ ವಿಕಿಮೀಡಿಯನ್ನರು, ಸಮುದಾಯದ ನಾಯಕರು, ಡೆವಲಪರ್ಗಳು, ಸಂಶೋಧಕರು ಮತ್ತು ಮುಕ್ತ ಜ್ಞಾನದ ಆಸಕ್ತರು ಒಂದೇ ವೇದಿಕೆಯಲ್ಲಿ ಸೇರಿ ಪರಸ್ಪರ ಪರಿಚಯ ಬೆಳೆಸಿ, ಸಹಯೋಗದೊಂದಿಗೆ ಕಾರ್ಯನಿರ್ವಹಿಸಿ, ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ
ವಿಕಿ ಕಾನ್ಫರೆನ್ಸ್ ಇಂಡಿಯಾ 2026ರ ಮುಖ್ಯ ವಿಷಯ (Theme) '''“ಬದಲಾಗುತ್ತಿರುವ ವಿಕಿಮೀಡಿಯಾ ಪರಿಸರದಲ್ಲಿ ಜ್ಞಾನ ಹಂಚಿಕೆಯ ಹೊಸ ಕಲ್ಪನೆ: ಸಮುದಾಯದ ನಾಯಕತ್ವ”''' ಆಗಿದೆ. ಕೃತಕ ಬುದ್ಧಿಮತ್ತೆ (AI) ಹಾಗೂ ಜ್ಞಾನ ಸೃಷ್ಟಿಯ ಹೊಸ ಮಾದರಿಗಳಂತಹ ವೇಗವಾದ ತಾಂತ್ರಿಕ ಬದಲಾವಣೆಗಳ ನಡುವೆ ವಿಕಿಮೀಡಿಯಾ ಚಳವಳಿ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ, ಸಮುದಾಯದ ನಾಯಕತ್ವ, ಜ್ಞಾನ ಸಮಾನತೆ, ಪ್ರಾದೇಶಿಕ ಭಾಷೆಗಳು, ಮುಕ್ತ ಜ್ಞಾನ ಮತ್ತು ಭಾರತ ಹಾಗೂ ದಕ್ಷಿಣ ಏಷ್ಯಾದಲ್ಲಿ ವಿಕಿಮೀಡಿಯಾದ ಭವಿಷ್ಯದ ಕುರಿತು ಚರ್ಚಿಸಲು ಈ ಸಮ್ಮೇಳನವು ಒಂದು ಉತ್ತಮ ವೇದಿಕೆಯನ್ನು ಒದಗಿಸುತ್ತದೆ.
'''ಸ್ವಂತ ವೆಚ್ಚದ ನೋಂದಣಿ (Self-Funded Registration)'''
ಸ್ವಂತ ವೆಚ್ಚದಲ್ಲಿ ಭಾಗವಹಿಸಲು ನೋಂದಣಿ ಪ್ರಕ್ರಿಯೆ ಈಗ '''Pretix''' ನಲ್ಲಿ ಆರಂಭವಾಗಿದೆ.
* '''ನೋಂದಣಿ ಫಾರ್ಮ್:''' [https://pretix.eu/wikimedia-events/WCI2026/<nowiki>] </nowiki>
* '''ವಿವರಗಳು ಹಾಗೂ ಅರ್ಹತಾ ಮಾನದಂಡಗಳು:'''
'''ಪ್ರಸ್ತಾವನೆಗಳ ಆಹ್ವಾನ (Call for Submissions)'''
ಪ್ರಸ್ತಾವನೆಗಳನ್ನು ಸಲ್ಲಿಸಲು ಅವಕಾಶ ಈಗ '''Eventyay''' ನಲ್ಲಿ ಆರಂಭವಾಗಿದೆ.
ಕಾರ್ಯಾಗಾರಗಳು (Workshops), ಚರ್ಚೆಗಳು (Discussions), ಪ್ಯಾನಲ್ ಚರ್ಚೆಗಳು (Panels), ಸಂವಾದಾತ್ಮಕ ಅಧಿವೇಶನಗಳು (Interactive Sessions), ಲೈಟ್ನಿಂಗ್ ಟಾಕ್ಸ್ (Lightning Talks) ಹಾಗೂ ಪೋಸ್ಟರ್ ಪ್ರಸ್ತುತಿಗಳು (Poster Presentations)ಗಾಗಿ ನಿಮ್ಮ ಪ್ರಸ್ತಾವನೆಗಳನ್ನು ಆಹ್ವಾನಿಸುತ್ತಿದ್ದೇವೆ. ನೀವು ಅನುಭವಿ ವಿಕಿಮೀಡಿಯನ್ ಆಗಿರಲಿ ಅಥವಾ ಹೊಸದಾಗಿ ಸಮುದಾಯಕ್ಕೆ ಸೇರಿರುವ ಸದಸ್ಯರಾಗಿರಲಿ, ನಿಮ್ಮ ಆಲೋಚನೆಗಳು, ಅನುಭವಗಳು ಮತ್ತು ಕಲಿಕೆಗಳು ಈ ಸಮ್ಮೇಳನದ ಕಾರ್ಯಕ್ರಮ ರೂಪಿಸಲು ಹಾಗೂ ವಿಕಿಮೀಡಿಯಾ ಚಳವಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆಗಳನ್ನು ನಡೆಸಲು ಮಹತ್ವದ ಕೊಡುಗೆಯಾಗಬಹುದು.
* '''ವಿವರಗಳು ಹಾಗೂ ಮಾರ್ಗಸೂಚಿಗಳು:''' [https://meta.wikimedia.org/wiki/WikiConference_India_2026/Programme<nowiki>] </nowiki>
* '''ಪ್ರಸ್ತಾವನೆ ಸಲ್ಲಿಸುವ ಕೊನೆಯ ದಿನಾಂಕ:''' '''ಜುಲೈ 8, 2026'''
'''ವಿಕಿ ಕಾನ್ಫರೆನ್ಸ್ ಇಂಡಿಯಾ 2026 ಕುರಿತು ಸಂಪೂರ್ಣ ಮಾಹಿತಿಗಾಗಿ''', ಭಾಗವಹಿಸುವಿಕೆ, ಪ್ರಮುಖ ದಿನಾಂಕಗಳು, ಸಮ್ಮೇಳನದ ನವೀಕರಣಗಳು ಹಾಗೂ ಪ್ರಸ್ತಾವನೆ ಸಲ್ಲಿಸುವ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಲು ಅಧಿಕೃತ ಪ್ರಕಟಣೆಯನ್ನು ನೋಡಿ.
* '''ವಿಸ್ತೃತ ಪ್ರಕಟಣೆ:''' [https://diff.wikimedia.org/2026/06/26/shape-the-future-call-for-submissions-open-for-wikiconference-india-2026/<nowiki>] </nowiki>
ನಮ್ಮ ಸಮುದಾಯದ ಸದಸ್ಯರು ನೋಂದಣಿ ಮಾಡಿಕೊಳ್ಳುವಂತೆ, ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಹಾಗೂ ಈ ಪ್ರಕಟಣೆಯನ್ನು ತಮ್ಮ ಜಾಲತಾಣಗಳು ಮತ್ತು ಪರಿಚಯದವರೊಂದಿಗೆ ಹಂಚಿಕೊಳ್ಳುವಂತೆ ವಿನಂತಿಸುತ್ತೇವೆ.
'''ಧನ್ಯವಾದಗಳು,'''
'''ವಿಕಿ ಕಾನ್ಫರೆನ್ಸ್ ಇಂಡಿಯಾ 2026 ಆಯೋಜನಾ ತಂಡ''' [[ಸದಸ್ಯ:Amrit Sufi|Amrit Sufi]] ([[ಸದಸ್ಯರ ಚರ್ಚೆಪುಟ:Amrit Sufi|ಚರ್ಚೆ]]) ೧೫:೪೮, ೩೦ ಜೂನ್ ೨೦೨೬ (IST)
== ಕನ್ನಡ ಮತ್ತು ಕನ್ನಡ ವಿಕಿಪೀಡಿಯದಲ್ಲಿ ಕಪ್ಪೆಗಳ ವಿಷಯ, ವಿಚಾರ ಹೆಚ್ಚಿಸಲು ಒಂದು ಪ್ರಯತ್ನಕ್ಕೆ ನಿಮ್ಮ ಬೆಂಬಲ ಕೋರಿಕೆ ==
ಕನ್ನಡದಲ್ಲಿ ಆನೆಗಳ ಬಗ್ಗೆ, ಇತರ ಪ್ರಾಣಿಗಳ ಬಗ್ಗೆ ವಿಚಾರ ಸಾಕಷ್ಟಿದೆ. ಯುಟ್ಯೂಬ್ ಮುಂತಾದ ಮಾಧ್ಯಮಗಳಲ್ಲಿ ಅವುಗಳ ಫ್ಯಾನ್ಗಳೇ ಇದ್ದಾರೆ ಎಂದರೆ ತಪ್ಪಿಲ್ಲ. ಕಪ್ಪೆಗಳು ಮಲೆನಾಡಿಗರ, ಕರಾವಳಿ ಹಾಗೂ ಒಳನಾಡಿನ ಜನರ, ರೈತರ ಜೀವನಾಡಿಗಳು. ನೈಸರ್ಗಿಕ ಕೀಟನಾಶಕಗಳು ಎಂದರೆ ತಪ್ಪಲ್ಲ. ಪಶ್ಚಿಮ ಘಟ್ಠದ ಹಾಗೂ ಕರ್ನಾಟಕದಲ್ಲಿ ಕಂಡುಬರುವ ವಿಶೇಷ ಕಪ್ಪೆಗಳಾದ ಕುಂಬಾರ, ಡ್ಯಾನ್ಸಿಂಗ್ ಕಪ್ಪೆಗಳು ಮುಂಗಾರಿನ ಮೇಲೆ ಅವಲಂಬಿತ. ಮುಂಗಾರು ಹೆಚ್ಚು ಕಡಿಮೆ ಆಗುತ್ತಿರುವುದರಿಂದ ಅವುಗಳ ಜೀವ ಸಂತತಿಯೇ ನಾಶದಂಚಿಗೆ ಸಾಗುತ್ತಿದೆ. ಅವುಗಳು ಜೀವ ಸಂಕುಲದ ಮುಖ್ಯ ಅಂಗಗಳಾಗಿವೆ. ಅವುಗಳ ಮೇಲೆ ಜನ ಹೆಚ್ಚು ಹೆಚ್ಚು ಆದ್ಯಯನವನ್ನೂ ಮಾಡುತ್ತಿದ್ದಾರೆ. ಕನ್ನಡದಲ್ಲಿ ಮತ್ತು ಕನ್ನಡ ವಿಕಿಪೀಡಿಯದಲ್ಲಿ ಅವುಗಳು ಇರುವ ಜಾಗಕ್ಕೆ ಹೋಗಿ ಚಿತ್ರಗಳನ್ನು ತೆಗೆದು ಮಾಹಿತಿಯನ್ನು ಸೇರಿಸುವುದು ಮತ್ತು ಸಂದರ್ಶನಗಳ ಮೂಲಕ (ಪಾಡ್ಕಾಸ್ಟ್) ವಿಕಿಪೀಡಿಯ ಅಲ್ಲದೇ ಇತರ ಕನ್ನಡ ಮಾಧ್ಯಮಗಳಲ್ಲಿಯೂ ಅದನ್ನು ಪ್ರಚುರಪಡಿಸುವ ಸಲುವಾಗಿ ಒಂದು ಹೊಸ ಪ್ರಯತ್ನವನ್ನು ಮಾಡಬೇಕೆಂದು ಒಂದು [https://meta.wikimedia.org/wiki/Community_Resources_and_Partnerships/India_Rapid_Project/Frogs_of_the_Western_Ghats_-_A_pilot_project ಯೋಜನೆಗೆ ಅರ್ಜಿ ಹಾಕಿದ್ದೇನೆ]. ಇದಕ್ಕೆ [https://meta.wikimedia.org/wiki/Talk:Community_Resources_and_Partnerships/India_Rapid_Project/Frogs_of_the_Western_Ghats_-_A_pilot_project#Please_share_your_feedback_and_endorsements ಬೆಂಬಲ ಸೂಚಿಸಬೇಕಾಗಿ] ವಿನಂತಿ. ನಿಮಗೇನೇ ಸಲಹೆ, ಸಂದೇಹಗಳಿದ್ದರೂ ಯೋಜನೆಯ ಚರ್ಚಾಪುಟದಲ್ಲಿ ಚರ್ಚಿಸಬಹುದು ಅಥವಾ ನನಗೆ ನೇರವಾಗಿಯೂ ಸಂಪರ್ಕಿಸಬಹುದು. -- [[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೬:೪೮, ೬ ಜುಲೈ ೨೦೨೬ (IST)
:ಓಳ್ಳೆಯ ಯೋಜನೆ. ಜೀವ ಸಂಕುಲಗಳ ಉಳಿವಿನ ಕಾಳಜಿಗೆ ಧನ್ಯವಾದಗಳು. ಕಪ್ಪೆಯ ಎಲ್ಲಾ ಸಂತತಿಗಳನ್ನು ಹುಡುಕಿ ಪಟ್ಟಿ ಮಾಡಿದರೆ ವಿವಿಧ ಜೀವಶಾಸ್ತ್ರ ವಿಭಾಗಗಳಿಗೆ ನಿಮ್ಮ ಕೆಲಸ ಸಹಕಾರಿಯಾಗಲಿದೆ. [[ಸದಸ್ಯ:Kavitha G. Kana|Kavitha G. Kana]] ([[ಸದಸ್ಯರ ಚರ್ಚೆಪುಟ:Kavitha G. Kana|ಚರ್ಚೆ]]) ೧೩:೩೮, ೫ ಆಗಸ್ಟ್ ೨೦೨೬ (IST)
:ಕನ್ನಡ ವಿಕಿಪೀಡಿಯದಲ್ಲಿರುವ ಮತ್ತು ಅಭಿವೃದ್ಧಿಪಡಿಸಬೇಕಾದ ಲೇಖನಗಳ ಪಟ್ಟಿ [https://docs.google.com/spreadsheets/d/1ajIpMnxDNIdZt5_F9jEM0YFX3BJhCE9wkBFOb_vo4Xc/edit?gid=1955526827#gid=1955526827 ಇಲ್ಲಿದೆ]. ಇದರ ಬಗ್ಗೆ ಒಂದು ಯೋಜನೆ ಪುಟ ತಯಾರು ಮಾಡಿ ಪಟ್ಟಿಯನ್ನು ವಿಕೀಕರಣ ಮಾಡುತ್ತೇನೆ. [[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೫:೨೧, ೬ ಆಗಸ್ಟ್ ೨೦೨೬ (IST)
== Request for comment (the future of Abstract Wikipedia) ==
<bdi lang="en" dir="ltr" class="mw-content-ltr">
Apologies if this has not yet been translated into your wiki's language. {{int:Please-translate}}
You are invited to voice your opinions in a [[:m:Requests for comment/The future of Abstract Wikipedia|request for comment about the future of Abstract Wikipedia]]. {{Int:Feedback-thanks-title}}
[[:m:User:Kowal2701|Kowal2701]] ([[:m:User talk:Kowal2701|talk]]) ೧೭:೫೪, ೨೪ ಜುಲೈ ೨೦೨೬ (IST)
</bdi>
<!-- Message sent by User:DreamRimmer@metawiki using the list at https://meta.wikimedia.org/w/index.php?title=Distribution_list/Global_message_delivery&oldid=30513860 -->
== Invitation to Participate in Kerala Culture Month 2026 ==
Dear Wikimedia Contributors,
We are excited to announce '''[[m:Kerala_Culture_Month_2026|Kerala Culture Month 2026]]''', a collaborative campaign launched in conjunction with '''[[m:WikiConference_India_2026|WikiConference India 2026]]'''. This initiative aims to expand and enhance content about Kerala across all Wikimedia projects, creating a comprehensive, open-access knowledge base.
'''Campaign Focus:'''
* Expand Wikipedia articles about Kerala in multiple languages
* Improve content quality with citations, images, and comprehensive information
* Populate Wikimedia Commons with freely licensed Kerala media
* Enrich Wikidata with structured information about Kerala-related topics
We invite you to contribute by writing new articles, enhancing existing ones, uploading media, or organizing data on Wikidata. Whether you're an experienced editor or new to Wikimedia, your participation matters.
For more information and to get involved, visit the campaign page: https://meta.wikimedia.org/wiki/Kerala_Culture_Month_2026 on your preferred Wikimedia project.
Best regards, ''Communications Team, WCI 2026''
-- [[ಸದಸ್ಯ:Kuldeepburjbhalaike|Kuldeepburjbhalaike]] ([[ಸದಸ್ಯರ ಚರ್ಚೆಪುಟ:Kuldeepburjbhalaike|ಚರ್ಚೆ]]) ೧೭:೧೪, ೨೬ ಜುಲೈ ೨೦೨೬ (IST)
*[[Project:ಕೇರಳ ಸಂಸ್ಕೃತಿ ತಿಂಗಳು 2026]]--[[ಸದಸ್ಯ:Vinoda mamatharai|Vinoda mamatharai]] ([[ಸದಸ್ಯರ ಚರ್ಚೆಪುಟ:Vinoda mamatharai|ಚರ್ಚೆ]]) ೦೯:೩೩, ೨೭ ಜುಲೈ ೨೦೨೬ (IST)
== Wiki Intership Program in Kannada- Tulu Languages ==
<div style="width: 95%; padding: 0.5em; border: 5px solid transparent; border-image: repeating-linear-gradient(-45deg, #ccc, #ccc 1px, transparent 1px, transparent 3px) 1; margin-bottom: 1em; font-size: 95%; text-align: center;">
<hr style="border: none; height: 5px; background-image: repeating-linear-gradient(-45deg, #ccc, #ccc 1px, transparent 1px, transparent 3px);" />
[[File:KLW-wiki-kn.svg|40px|link=https://klw-2024-25.toolforge.org/]] '''ಕನ್ನಡ–ತುಳು ವಿಕಿಲರ್ನ್ ಇಂಟರ್ನ್ಶಿಪ್ ಕಾರ್ಯಕ್ರಮ'''
<hr style="border: none; height: 5px; background-image: repeating-linear-gradient(-45deg, #ccc, #ccc 1px, transparent 1px, transparent 3px);" />
English:'''[[meta:Kannada-Tulu Wikilearn/Internship_program|Kannada–Tulu WikiLearn Internship Program]]''' is a structured capacity-building initiative based on the 7-week WikiLearn course, where selected interns participate in creating new articles, improving existing articles, proofreading Wikisource pages, creating and enhancing Wikidata items, uploading media files to Commons on Kannada, Tulu Wikipedia, and Wikisource through project-based learning over a 45-day to 3-month period with weekly mentoring and progress check-ins, and successful participants are awarded certificates and community recognition. For more information check this [[meta:Kannada-Tulu Wikilearn/Internship_program]] page.
Kannada:'''[[meta:Kannada-Tulu Wikilearn/Internship_program|ಕನ್ನಡ–ತುಳು ವಿಕಿಲರ್ನ್ ಇಂಟರ್ನ್ಶಿಪ್ ಕಾರ್ಯಕ್ರಮ]]'''ವು ೭-ವಾರಗಳ ವಿಕಿಲರ್ನ್ ಕೋರ್ಸ್ ಅನ್ನು ಆಧರಿಸಿದ ರಚನಾತ್ಮಕ ಸಾಮರ್ಥ್ಯ-ನಿರ್ಮಾಣ ಉಪಕ್ರಮವಾಗಿದ್ದು, ಆಯ್ಕೆಯಾದ ಇಂಟರ್ನ್ಗಳು ಕನ್ನಡ, ತುಳು ವಿಕಿಪೀಡಿಯ ಮತ್ತು ವಿಕಿಸೋರ್ಸ್ಗಳಲ್ಲಿ ಹೊಸ ಲೇಖನಗಳನ್ನು ರಚಿಸುವುದು, ಅಸ್ತಿತ್ವದಲ್ಲಿರುವ ಲೇಖನಗಳನ್ನು ಸುಧಾರಿಸುವುದು, ವಿಕಿಸೋರ್ಸ್ ಪುಟಗಳನ್ನು ಪ್ರೂಫ್ರೀಡ್ ಮಾಡುವುದು, ವಿಕಿಡೇಟಾ ಐಟಂಗಳನ್ನು ರಚಿಸುವುದು ಮತ್ತು ವರ್ಧಿಸುವುದು, ಕಾಮನ್ಸ್ಗೆ ಮಾಧ್ಯಮ ಫೈಲ್ಗಳನ್ನು ಅಪ್ಲೋಡ್ ಮಾಡುವುದು, ಸಾಪ್ತಾಹಿಕ ಮಾರ್ಗದರ್ಶನ ಮತ್ತು ಪ್ರಗತಿ ಪರಿಶೀಲನೆಗಳೊಂದಿಗೆ ೪೫-ದಿನಗಳಿಂದ ೨-ತಿಂಗಳ ಅವಧಿಯಲ್ಲಿ ಯೋಜನಾ-ಆಧಾರಿತ ಕಲಿಕೆಯ ಮೂಲಕ ಭಾಗವಹಿಸುತ್ತಾರೆ, ಮತ್ತು ಯಶಸ್ವಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ [[meta:Kannada-Tulu Wikilearn/Internship_program]] ಪುಟವನ್ನು ನೋಡಿ.
Tulu=
'''[[meta:Kannada-Tulu Wikilearn/Internship_program|ಕನ್ನಡ–ತುಳು ವಿಕಿಲರ್ನ್ ಇಂಟರ್ನ್ಶಿಪ್ ಕಾರ್ಯಕ್ರಮ]]''' ೭-ವಾರೊದ ವಿಕಿಲರ್ನ್ ಕೋರ್ಸ್ನ್ ಆಧಾರಿಸಾದ್ ರೂಪಿಸಾಯಿನ ರಚನಾತ್ಮಕ ಸಾಮರ್ಥ್ಯ-ನಿರ್ಮಾಣ ಉಪಕ್ರಮೊ ಆದಿಪ್ಪುಂಡು, ಆಯ್ಕೆಯಾಯಿನ ಇಂಟರ್ನ್ಗಳು ಕನ್ನಡ, ತುಳು ವಿಕಿಪೀಡಿಯ ಬೊಕ್ಕ ವಿಕಿಸೋರ್ಸ್ಗಳೆಡ್ ಪೊಸ ಲೇಖನೊಲೆನ್ ರಚಿಸುನಿ, ಅಸ್ತಿತ್ವಡಿಪ್ಪುನ ಲೇಖನೊಲೆನ್ ಸುಧಾರಿಸುನಿ, ವಿಕಿಸೋರ್ಸ್ ಪುಟೊಲೆನ್ ಪ್ರೂಫ್ರೀಡ್ ಮಲ್ಪುನಿ, ವಿಕಿಡೇಟಾ ಐಟಂಲೆನ್ ರಚಿಸುನಿ ಬೊಕ್ಕ ವರ್ಧಿಸುನಿ, ಕಾಮನ್ಸ್ಗ್ ಮಾಧ್ಯಮ ಫೈಲ್ಗಳೆನ್ ಅಪ್ಲೋಡ್ ಮಲ್ಪುನಿ, ಸಾಪ್ತಾಹಿಕ ಮಾರ್ಗದರ್ಶನ ಬೊಕ್ಕ ಪ್ರಗತಿ ಪರಿಶೀಲನೆಲೆನೊಟ್ಟಿಗೆ 45-ದಿನೊಡ್ದು 2-ತಿಂಗೊಲು ಅವಧಿಡ್ ಯೋಜನಾ-ಆಧಾರಿತ ಕಲಿಕೆದ ಮೂಲಕ ಭಾಗವಹಿಸುವೆರ್, ಬೊಕ್ಕ ಯಶಸ್ವಿಯಾದ್ ಪೂರ್ಣಗೊಳಿಸವುನಕ್ಲೆಗ್ ಪ್ರಮಾಣಪತ್ರೊಲು ಕೊರ್ಪುವೆರ್. ಜಾಸ್ತಿ ಮಾಹಿತಿಗ್ ಈ [[meta:Kannada-Tulu Wikilearn/Internship_program]] ಪುಟೊನು ತೂಲೆ.
Thank you,ಧನ್ಯವಾದಗಳು,ಸೊಲ್ಮೆಲು ---<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೦:೩೨, ೧ ಆಗೋಸ್ಟು ೨೦೨೬ (IST)
</div>
<!-- Message sent by User:A826@metawiki using the list at https://meta.wikimedia.org/w/index.php?title=User:A826/Kannada-Tulu_Project_talk_pages&oldid=30876200 -->
== Documenting the Folk Arts of North Karnataka – Phase 2 (ಉತ್ತರ ಕರ್ನಾಟಕದ ಜಾನಪದ ಕಲೆಗಳ ದಾಖಲಾತಿ – ಹಂತ 2) ==
ನಮಸ್ಕಾರ ಎಲ್ಲರಿಗೂ,
ನಾನು ಕಳೆದ ವರ್ಷ ವಿಕಿಮೀಡಿಯಾ ಫೌಂಡೇಶನ್ನ ಅನುದಾನದ ಸಹಾಯದಿಂದ "ಉತ್ತರ ಕರ್ನಾಟಕದ ಜಾನಪದ ಕಲೆಗಳ ದಾಖಲಾತಿ" (Documenting the Folk Arts of North Karnataka) ಎಂಬ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೆ. ಈ ಯೋಜನೆಯ ಮುಖ್ಯ ಉದ್ದೇಶ ಉತ್ತರ ಕರ್ನಾಟಕದ ಅಪರೂಪದ ಮತ್ತು ಸಾಂಪ್ರದಾಯಿಕ ಜಾನಪದ ಕಲಾ ಪ್ರಕಾರಗಳನ್ನು ದಾಖಲಿಸಿ, ಅವುಗಳ ಬಗ್ಗೆ ಮುಕ್ತ ಜ್ಞಾನವನ್ನು ವಿಕಿಮೀಡಿಯಾ ಯೋಜನೆಗಳ ಮೂಲಕ ಎಲ್ಲರಿಗೂ ತಲುಪಿಸುವುದಾಗಿತ್ತು.
ಮೊದಲ ಹಂತದಲ್ಲಿ ಡೊಳ್ಳು ಕುಣಿತ, ಡೊಳ್ಳು ಕುಣಿತ, ಚೌಡ್ಕಿ ಪದ, ಗಿಗಿ ಪದ, ಧುರುಂ ಮುರುಗೇರು ಮತ್ತು ಸುಡುಗಾಡು ಸಿದ್ಧರು ಸೇರಿದಂತೆ ಐದು ಜಾನಪದ ಕಲಾ ಪ್ರಕಾರಗಳನ್ನು ಕ್ಷೇತ್ರ ಅಧ್ಯಯನದ ಮೂಲಕ ದಾಖಲಿಸಲಾಯಿತು. ಕಲಾವಿದರ ಪ್ರದರ್ಶನಗಳು, ಛಾಯಾಚಿತ್ರಗಳು, ವಿಡಿಯೊಗಳು ಹಾಗೂ ಮಾಹಿತಿಯನ್ನು ಸಂಗ್ರಹಿಸಿ ವಿಕಿಮೀಡಿಯಾ ಕಾಮನ್ಸ್ಗೆ ಅಪ್ಲೋಡ್ ಮಾಡಲಾಯಿತು. ಅಲ್ಲದೆ ಸಂಬಂಧಿತ ವಿಕಿಪೀಡಿಯ ಲೇಖನಗಳನ್ನು ವಿಸ್ತರಿಸಿ, ಕೆಲವು ಲೇಖನಗಳಲ್ಲಿ ವಿಡಿಯೊಗಳನ್ನು ಸೇರಿಸುವ ಮೂಲಕ ಓದುಗರಿಗೆ ಈ ಕಲಾ ಪ್ರಕಾರಗಳನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
2025ರ ಯೋಜನೆಯ ಲಿಂಕ್: https://meta.wikimedia.org/wiki/Documenting_the_Folk_Arts_of_North_Karnataka#Documenting_the_Folk_Arts_of_North_Karnataka
ಈ ಯೋಜೆಯ ಎರಡನೇ ಹಂತಕ್ಕಾಗಿ (Phase 2) ನಾನು ಮತ್ತೆ ಅನುದಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಈ ಬಾರಿ ಅಳಿವಿನಂಚಿನಲ್ಲಿರುವ ಮತ್ತು ಇನ್ನೂ ವಿಕಿಮೀಡಿಯಾ ಯೋಜನೆಗಳಲ್ಲಿ ಸಮರ್ಪಕವಾಗಿ ದಾಖಲಾಗದ ಹಂತಿ ಪದ, ಪುರವಂತರು, ಗೊಂಡಳಗೇರಿ ಪದ, ವೇಷಗಾರರು, ಕೃಷ್ಣ ಪಾರಿಜಾತ, ಹೇಳುವವರು ಹಾಗೂ ಜೋಗಮ್ಮ ಪದಗಳು ಎಂಬ ಜಾನಪದ ಕಲಾ ಪ್ರಕಾರಗಳನ್ನು ದಾಖಲಿಸುವ ಉದ್ದೇಶ ಹೊಂದಿದ್ದೇನೆ.
ಈ ಕಲಾ ಪ್ರಕಾರಗಳನ್ನು ಆಯ್ಕೆ ಮಾಡಿರುವುದಕ್ಕೆ ಪ್ರಮುಖ ಕಾರಣ, ಇವುಗಳನ್ನು ಪ್ರದರ್ಶಿಸುವ ಕಲಾವಿದರ ಸಂಖ್ಯೆ ಇಂದು ಬಹಳ ಕಡಿಮೆಯಾಗಿದೆ. ಹೊಸ ತಲೆಮಾರಿನ ಆಸಕ್ತಿ ಕಡಿಮೆಯಾಗುತ್ತಿರುವುದರಿಂದ ಮತ್ತು ಈ ಕಲಾ ಪ್ರಕಾರಗಳಿಗೆ ಸೂಕ್ತ ದಾಖಲೆಗಳ ಕೊರತೆಯಿಂದ ಮುಂದಿನ ದಿನಗಳಲ್ಲಿ ಇವು ಸಂಪೂರ್ಣವಾಗಿ ಮರೆಯಾಗುವ ಸಾಧ್ಯತೆಯಿದೆ. ನಾನು ಉತ್ತರ ಕರ್ನಾಟಕದವನಾಗಿರುವುದರಿಂದ ಈ ಕಲಾ ಪರಂಪರೆಯ ಮಹತ್ವವನ್ನು ಹತ್ತಿರದಿಂದ ಅರಿತಿದ್ದೇನೆ. ಆದ್ದರಿಂದ, ಇವುಗಳು ನಶಿಸುವ ಮೊದಲು ಅವುಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಉಳಿಸುವುದು ನನ್ನ ಪ್ರಮುಖ ಉದ್ದೇಶವಾಗಿದೆ.<br>
ಈ ಯೋಜೆಯಲ್ಲಿ ಸಮುದಾಯದ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ. ಈ ಜಾನಪದ ಕಲಾ ಪ್ರಕಾರಗಳ ಬಗ್ಗೆ ವಿಶ್ವಾಸಾರ್ಹ ಮಾಹಿತಿಗಳು, ಪುಸ್ತಕಗಳು, ಸಂಶೋಧನಾ ಲೇಖನಗಳು, ಕಲಾವಿದರ ಸಂಪರ್ಕ ವಿವರಗಳು ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ಹಂಚಿಕೊಳ್ಳುವಂತೆ ವಿನಂತಿಸುತ್ತೇನೆ. ನಿಮ್ಮ ಸಲಹೆಗಳು ಮತ್ತು ಸಹಕಾರವು ಈ ಯೋಜೆಯನ್ನು ಇನ್ನಷ್ಟು ಸಮಗ್ರವಾಗಿಸಲು ಸಹಾಯ ಮಾಡುತ್ತದೆ. <br>
ಧನ್ಯವಾದಗಳು.
Hello everyone,
Last year, with the support of a Wikimedia Foundation grant, I successfully completed the "Documenting the Folk Arts of North Karnataka" project. The primary objective of the project was to preserve and promote the rich folk traditions of North Karnataka by documenting them and making the knowledge freely available through Wikimedia projects.
During Phase 1, we documented five folk art forms—Dollu Kunitha, Chowdki Pada, Gigi pada, Dhuurum murugeru, Sudugadu Siddharu, We conducted field visits, photographed and recorded live performances, and uploaded the media to Wikimedia Commons. We also improved the related Wikipedia articles and embedded videos into relevant pages to help readers better understand these traditional art forms. <br>
2025 Project Link: https://meta.wikimedia.org/wiki/Documenting_the_Folk_Arts_of_North_Karnataka#Documenting_the_Folk_Arts_of_North_Karnataka <br>
I have now applied for Phase 2 of the project. This phase aims to document six endangered folk art forms: Puravantharu, Gondhalageri Pada, Veshagararu, Hanthi Pada, Krishna Parijatha, Heluvavaru and Jogamma Padagalu.
I chose these six folk arts because only a small number of artists continue to practice them today, and there is a real risk that they may disappear if they are not documented now. Since I belong to North Karnataka, I understand the cultural importance of these traditions and feel a personal responsibility to preserve them for future generations. At present, these folk-art forms do not have dedicated documentation on Wikimedia projects, making this initiative even more important. <br>
I would greatly appreciate the support of the Wikimedia community. If anyone has reliable sources, books, photographs, historical information, or contacts with artists related to these folk art forms, please feel free to share them. Your suggestions and contributions will help make this project more comprehensive and ensure that this valuable cultural heritage is preserved as free knowledge for everyone.
Thank you for your continued support. [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೫:೧೦, ೬ ಆಗಸ್ಟ್ ೨೦೨೬ (IST)
== ಸಮುದಾಯ ತಾಂತ್ರಿಕ ಕಾರ್ಯಪಡೆ: ಭಾರತೀಯ ಸಮುದಾಯಗಳಿಗೆ ತಾಂತ್ರಿಕ ಅಗತ್ಯಗಳ ಮೌಲ್ಯಮಾಪನ ==
ಎಲ್ಲರಿಗೂ ನಮಸ್ಕಾರ,
ನೀವೆಲ್ಲರೂ ಕ್ಷೇಮವಾಗಿದ್ದೀರಿ ಎಂದು ಭಾವಿಸುತ್ತೇವೆ!
ಭಾರತದ ವಿವಿಧ ಭಾಷಾ ಸಮುದಾಯಗಳ ತಾಂತ್ರಿಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಹಕಾರವನ್ನು ಬಲಪಡಿಸಲು [[m:Indic_MediaWiki_Developers_User_Group|Indic MediaWiki Developers User Group]] (IMDUG) ಭಾರತದಾದ್ಯಂತ ಇರುವ ವಿಕಿಮೀಡಿಯಾ ಸಮುದಾಯಗಳನ್ನು ಸಂಪರ್ಕಿಸುತ್ತಿದೆ.
ಕಳೆದ ವರ್ಷ, ಎರಡು ಭಾಷಾ ಸಮುದಾಯಗಳೊಂದಿಗೆ ತೊಡಗಿಸಿಕೊಂಡು ಅವರ ತಾಂತ್ರಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಹಕಾರದ ಅವಕಾಶಗಳನ್ನು ಗುರುತಿಸಲು ನಾವು [[m:Indic_Community_Task_Force_2025|Indic Community Task Force 2025]] ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದೆವು. ನಮಗೆ ದೊರೆತ ಅನುಭವ ಮತ್ತು ಉಪಯುಕ್ತ ಸಲಹೆಗಳ ಆಧಾರದ ಮೇಲೆ, ಎಲ್ಲಾ ಭಾರತೀಯ ಸಮುದಾಯಗಳನ್ನು ತಲುಪಲು ಈ ವರ್ಷ ಈ ಯೋಜನೆಯನ್ನು ವಿಸ್ತರಿಸುತ್ತಿದ್ದೇವೆ. ಪ್ರತಿಯೊಂದು ಸಮುದಾಯವನ್ನು ತಲುಪುವುದು ಮತ್ತು ಎಲ್ಲಿ ತಾಂತ್ರಿಕ ಬೆಂಬಲದ ಅತ್ಯಂತ ಹೆಚ್ಚಿನ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನಮ್ಮ ಗುರಿಯಾಗಿದೆ.
=== ನಾವು ಏನನ್ನು ನಿರೀಕ್ಷಿಸುತ್ತಿದ್ದೇವೆ? ===
ನಿಮ್ಮ ಸಮುದಾಯದಿಂದ ಒಬ್ಬರು ಅಥವಾ ಇಬ್ಬರು ಸಂಪರ್ಕ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಲು ಮತ್ತು ಕೆಳಗಿನ ವಿವರಗಳನ್ನು ಹಂಚಿಕೊಳ್ಳಲು ಆಹ್ವಾನಿಸುತ್ತಿದ್ದೇವೆ:
*ನಿಮ್ಮ ವಿಕಿಮೀಡಿಯಾ ಸಮುದಾಯದ ಹೆಸರು.
*ಪ್ರಾಥಮಿಕ ಮತ್ತು ಪರ್ಯಾಯ ಸಮುದಾಯ ಸಂಪರ್ಕ ವ್ಯಕ್ತಿ.
*ನಾಮನಿರ್ದೇಶಿತ ಸಂಪರ್ಕಿತರ ಟೆಲಿಗ್ರಾಮ್ ಬಳಕೆದಾರ ಹೆಸರುಗಳು.
*ನಿಮ್ಮ ಸಮುದಾಯದ ತಾಂತ್ರಿಕ ಸವಾಲುಗಳು, ಅಗತ್ಯಗಳು ಅಥವಾ ಆದ್ಯತೆಗಳ ಸಂಕ್ಷಿಪ್ತ ವಿವರಣೆ.
ಇದು ಕೆಳಗಿನ ಕ್ಷೇತ್ರಗಳನ್ನು ಒಳಗೊಂಡಿರಬಹುದು:
*ತಿದ್ದುಪಡಿ (editing) ಅಥವಾ ಪೇಟ್ರೋಲಿಂಗ್ (patrolling) ಪ್ರಕ್ರಿಯೆಗಳಲ್ಲಿ ಸುಧಾರಿಸಬೇಕಾದ ಅಂಶಗಳು.
*ನಿಮ್ಮ ಸಮುದಾಯಕ್ಕೆ ಅಗತ್ಯವಿರುವ ಗ್ಯಾಜೆಟ್ಗಳು, ಪರಿಕರಗಳು (tools) ಅಥವಾ ಬಾಟ್ಗಳು.
*ಟೆಂಪ್ಲೇಟ್ ಅಥವಾ ಇಂಟರ್ಫೇಸ್ಗೆ ಸಂಬಂಧಿಸಿದ ಸವಾಲುಗಳು.
೮ಕೊಡುಗೆದಾರರು ಎದುರಿಸುತ್ತಿರುವ ತಾಂತ್ರಿಕ ಅಡೆತಡೆಗಳು.
೮ನಿಮ್ಮ ಸಮುದಾಯದ ಇತರ ಯಾವುದೇ ವ್ಯಾಪಕ ತಾಂತ್ರಿಕ ಆದ್ಯತೆಗಳು.
=== ಭಾಗವಹಿಸುವುದು ಹೇಗೆ ===
ದಯವಿಟ್ಟು ಸಮುದಾಯದ ಪ್ರತಿಕ್ರಿಯೆ [https://docs.google.com/forms/d/e/1FAIpQLSdhpPdn0qgHkEiYZCXEumpV-WNWm6n8bZdfR6TIkGTcbuBOew/viewform?usp=dialog form] ಅನ್ನು '''೧೮ನೇ ಆಗಸ್ಟ್''' ರೊಳಗೆ ಭರ್ತಿ ಮಾಡಿ.
ನಿಮ್ಮ ಸಮುದಾಯವು ಬಯಸಿದಲ್ಲಿ, ಈ ಸಂದೇಶಕ್ಕೆ ನೇರವಾಗಿ ಪ್ರತ್ಯುತ್ತರ ನೀಡುವ ಮೂಲಕವೂ ಭಾಗವಹಿಸಬಹುದು.
=== ಮುಂದೆ ಏನಾಗುತ್ತದೆ? ===
ಸಂಗ್ರಹಿಸಿದ ಮಾಹಿತಿಯು ನಮಗೆ ಈ ಕೆಳಗಿನವುಗಳಿಗೆ ಸಹಾಯ ಮಾಡುತ್ತದೆ:
*ಭವಿಷ್ಯದ ತಾಂತ್ರಿಕ ಸಹಕಾರಕ್ಕಾಗಿ ಸಮುದಾಯ ಸಂಪರ್ಕಿತರ ಜಾಲವನ್ನು ನಿರ್ಮಿಸಲು.
*ಭಾರತೀಯ ವಿಕಿಮೀಡಿಯಾ ಸಮುದಾಯಗಳ ತಾಂತ್ರಿಕ ಅಗತ್ಯಗಳನ್ನು ಅರ್ಥಮಾಡಿಕೊಂಡು ಆದ್ಯತೆ ನೀಡಲು.
*ಗಮನಹರಿಸಿದ ತಾಂತ್ರಿಕ ಬೆಂಬಲ ಮತ್ತು ಸಮುದಾಯ ಸಕ್ರಿಯಗೊಳಿಸುವ ಚಟುವಟಿಕೆಗಳನ್ನು ಯೋಜಿಸಲು.
*ಸೂಕ್ತವಾದ ಸಂದರ್ಭಗಳಲ್ಲಿ ಸಮುದಾಯಗಳನ್ನು ಡೆವಲಪರ್ಗಳು ಮತ್ತು ಸಂಬಂಧಿತ ತಾಂತ್ರಿಕ ಉಪಕ್ರಮಗಳೊಂದಿಗೆ ಜೋಡಿಸಲು.
ನೀವು ಸಲ್ಲಿಸುವ ಪ್ರತಿಯೊಂದು ವಿನಂತಿಯನ್ನು ನಾವು ಎಚ್ಚರಿಕೆಯಿಂದ ಪರಿಶೀಲಿಸುತ್ತೇವೆ. ಆದರೆ ಬೆಂಬಲ ನೀಡುವ ನಮ್ಮ ಸಾಮರ್ಥ್ಯವು ವಿನಂತಿಯ ಜಟಿಲತೆ, ಯೂಸರ್ ಗ್ರೂಪ್ನಲ್ಲಿರುವ ತಾಂತ್ರಿಕ ಪರಿಣತಿ, ಸ್ವಯಂಸೇವಕರ ಲಭ್ಯತೆ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಎಲ್ಲಾ ವಿನಂತಿಗಳನ್ನು ತಕ್ಷಣವೇ ಬಗೆಹರಿಸಲು ಸಾಧ್ಯವಾಗದಿರಬಹುದು, ಆದರೆ ಗರಿಷ್ಠ ಸಂಖ್ಯೆಯ ಸಮುದಾಯದ ಅಗತ್ಯಗಳಿಗೆ ಆದ್ಯತೆ ನೀಡಿ ಬೆಂಬಲಿಸಲು ಮತ್ತು ಸೂಕ್ತ ಸ್ಥಳಗಳಲ್ಲಿ ಸಂಬಂಧಿತ ಡೆವಲಪರ್ಗಳು ಅಥವಾ ತಾಂತ್ರಿಕ ಮಾರ್ಗಗಳೊಂದಿಗೆ ಸಂಪರ್ಕಿಸಲು ನಾವು ಸಂಪೂರ್ಣ ಪ್ರಯತ್ನ ಮಾಡುತ್ತೇವೆ.
ನಿಮ್ಮ ಸಮುದಾಯದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಎದುರುನೋಡುತ್ತಿದ್ದೇವೆ!
'''Best wishes,'''
''On behalf of the Indic MediaWiki Developers User Group (IMDUG)''
pb2u4hdpezw86o94c7zev7wfxo5w8p8
ಜಂಟಿ ಪ್ರವೇಶ ಪರೀಕ್ಷೆ
0
128042
1379574
1370970
2026-08-09T08:02:57Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379574
wikitext
text/x-wiki
'''ಜಂಟಿ ಪ್ರವೇಶ ಪರೀಕ್ಷೆ''' ('''ಜೆಇಇ''') [[ಭಾರತ|ಭಾರತದ]] ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ ನಡೆಸಲಾಗುವ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾಗಿದೆ. ಇದನ್ನು ಎರಡು ವಿಭಿನ್ನ ಪರೀಕ್ಷೆಗಳಿಂದ ರಚಿಸಲಾಗಿದೆ - ಜೆಇಇ ಮೇನ್ಸ್ ಮತ್ತು ಜೆಇಇ ಅಡ್ವಾನ್ಸ್ಡ್.
<sup class="noprint Inline-Template Template-Fact" data-ve-ignore="true" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (May 2020)">ಉಲ್ಲೇಖದ ಅಗತ್ಯವಿದೆ</span>]]'' ]</sup>
ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಎಂಎಚ್ಆರ್ಡಿ) ವರದಿಗಳ ಪ್ರಕಾರ, ಭಾರತದಾದ್ಯಂತ ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಿಗೆ [[ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ|ನೀಟ್ನ]] ರೇಖೆಗಳ ಆಧಾರದ ಮೇಲೆ ದೇಶ್ಯಾದ್ಯಂತ ಕೇವಲ ಒಂದು ಸಾಮಾನ್ಯ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯನ್ನು ನಡೆಸಲು ಸರ್ಕಾರ [[ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ|ಚಿಂತಿಸುತ್ತಿದೆ]].<ref>{{Cite web|url=http://www.jagranjosh.com/articles/mhrd-plans-single-entrance-exam-for-all-engineering-colleges-from-2018-1482482657-1|title=MHRD plans single entrance exam for all engineering colleges from 2018|date=10 February 2017}}</ref>
== ಜೆಇಇ ಮೇನ್ಸ್ ==
ಜೆಇಇ ಮೇನ್ ಪ್ರಶ್ನೆಪತ್ರಿಕೆ -1 ಮತ್ತು ಪ್ರಶ್ನೆಪತ್ರಿಕೆ -2 ಎಂಬ ಎರಡು ಪತ್ರಿಕೆಗಳನ್ನು ಹೊಂದಿದೆ. ಅಭ್ಯರ್ಥಿಗಳು ಒಂದು ಅಥವಾ ಎರಡನ್ನೂ ಆಯ್ಕೆ ಮಾಡಬಹುದು. ಎರಡೂ ಪತ್ರಿಕೆಗಳು ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಪೇಪರ್ 1 ಬಿಇ / ಬಿಟೆಕ್ ಕೋರ್ಸ್ಗಳ ಪ್ರವೇಶಕ್ಕಾಗಿ ಮತ್ತು ಆನ್ಲೈನ್ನಲ್ಲಿ ಮಾತ್ರ ನಡೆಸಲಾಗುತ್ತದೆ. ಪೇಪರ್ -2 ಬಿ.ಆರ್ಚ್ ಮತ್ತು ಬಿ.ಪ್ಲಾನಿಂಗ್ ಕೋರ್ಸ್ಗಳಲ್ಲಿ ಪ್ರವೇಶಕ್ಕಾಗಿ ಮತ್ತು ಆಫ್ಲೈನ್ನಲ್ಲಿ ಮಾತ್ರ ನಡೆಸಲಾಗುತ್ತದೆ. ಜನವರಿ 2020 ರಿಂದ ಬಿ. ಪ್ಲ್ಯಾನಿಂಗ್ ಕೋರ್ಸ್ಗಳಿಗೆ ಪ್ರತ್ಯೇಕವಾಗಿ ಹೆಚ್ಚುವರಿ ಪೇಪರ್ - 3 ಅನ್ನು ಪರಿಚಯಿಸಲಾಗುತ್ತಿದೆ.<ref>{{Cite web|url=https://jeemain.nta.nic.in/WebInfo/Handler/FileHandler.ashx?i=File&ii=7&iii=Y|title=Public Notice for JEE Mains 2020|website=NTA JEE Mains|publisher=National Testing Agency|access-date=11 January 2020}}</ref>
ಜೆಇಇ ಮುಖ್ಯ (ಮೇನ್ಸ್), ಜೆಇಇ ಅಡ್ವಾನ್ಸ್ಡ್ ಗಿಂತ ಭಿನ್ನವಾಗಿ, ಸ್ಥಿರ ಪರೀಕ್ಷೆಯ ರಚನೆಯನ್ನು ಹೊಂದಿದೆ ಮತ್ತು ಪ್ರತಿವರ್ಷ ಬದಲಾವಣೆಗೆ ಒಳಪಡುವುದಿಲ್ಲ. ಪೇಪರ್ -1 ಮೂರು ಗಂಟೆಗಳ ಅವಧಿಯನ್ನು ಹೊಂದಿದೆ ಮತ್ತು ಪ್ರತಿ ಮೂರು ವಿಷಯಗಳಲ್ಲಿ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ಮೂವತ್ತು ಬಹು-ಆಯ್ಕೆ (ಒಂದು ಉತ್ತರ ಸರಿಯಾದ) ಪ್ರಶ್ನೆಗಳನ್ನು ಒಳಗೊಂಡಿದೆ. ಸರಿಯಾದ ಉತ್ತರಗಳಿಗಾಗಿ 4 ಅಂಕಗಳನ್ನು ನೀಡಲಾಗುತ್ತದೆ ಮತ್ತು ತಪ್ಪಾದ ಉತ್ತರಗಳಿಗಾಗಿ 1 ಅಂಕವನ್ನು ಕಡಿತಗೊಳಿಸಲಾಗುತ್ತದೆ.
ಪ್ರತಿ ವಿಷಯಕ್ಕೆ 20 + 5 ಪ್ರಶ್ನೆಗಳನ್ನು ಒಳಗೊಂಡಿರುವ ಹೊಸ ಮಾದರಿಯನ್ನು ಜನವರಿ 2020 ರಲ್ಲಿ ಪರಿಚಯಿಸಲಾಗಿದೆ. ಇದರಲ್ಲಿ 20 ಬಹು ಆಯ್ಕೆ ಪ್ರಶ್ನೆಗಳು + 5 ಸಂಖ್ಯಾ ಪ್ರಕಾರದ (ಲೆಕ್ಕಗಳ ರೀತಿಯ) ಪ್ರಶ್ನೆಗಳಿರುತ್ತವೆ. ಬಹು ಆಯ್ಕೆ ಪ್ರಶ್ನೆಗಳಲ್ಲಿ ಸರಿಯಾದ ಉತ್ತರಗಳಿಗಾಗಿ 4 ಅಂಕಗಳನ್ನು ನೀಡಲಾಗುತ್ತದೆ ಮತ್ತು ಸಂಖ್ಯಾ ಪ್ರಕಾರದ ಪ್ರಶ್ನೆಗಳಿಂದ ಯಾವುದೇ ಅಂಕಗಳನ್ನು ಕಡಿತಗೊಳಿಸಲಾಗುವುದಿಲ್ಲ.<ref>{{Cite web|url=https://jeemain.nta.nic.in/WebInfo/Handler/FileHandler.ashx?i=File&ii=7&iii=Y|title=JEE Main Public Notice 2020|website=NTA JEE Main 2020|publisher=National Testing Agency|access-date=11 January 2020}}</ref>
2013 ರಿಂದ 2016 ರವರೆಗೆ, ಜೆಇಇ ಮುಖ್ಯ ಪರೀಕ್ಷೆಯ ಅಖಿಲ ಭಾರತ ర్యాంಕನ್ನು ನಿರ್ಧರಿಸುವಲ್ಲಿ ಹನ್ನೆರಡನೇ ತರಗತಿ ಶಾಲಾ ಮಂಡಳಿ (ಬೋರ್ಡ್) ನಡೆಸುವ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ 40% ಅಂಕಗಳನ್ನು ಪರಿಗಣಿಸಲಾಗುತ್ತದೆ.<ref>{{Cite web|url=http://timesofindia.indiatimes.com/home/education/entrance-exams/40-weightage-to-class-XII-marks-in-JEE/articleshow/16677482.cms|title=40% weightage to class XII marks in JEE|date=Oct 5, 2012|publisher=[[ಟೈಮ್ಸ್ ಆಫ್ ಇಂಡಿಯ]]}}</ref><ref>{{Cite web|url=http://www.hindustantimes.com/education/class-12-marks-will-not-impact-jee-main-rank/story-0TFgk24R6Gt1pougm34peM.html|title=Class 12 marks will not impact JEE Main rank: HRD ministry|date=April 8, 2016|publisher=[[Hindustan Times]]}}</ref>
=== ಪ್ರತಿ ವರ್ಷದ ಅಭ್ಯರ್ಥಿಗಳ ಸಂಖ್ಯೆ ===
ಜೆಇಇ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳ ಸಂಖ್ಯೆಯು ಹಿಂದಿನ ವರ್ಷಗಳಲ್ಲಿ ಬದಲಾಗಿದೆ. ಕೆಳಗಿನ ಕೋಷ್ಟಕದಲ್ಲಿ ತೋರಿಸಿರುವಂತೆ 2016 ರಲ್ಲಿ, ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಕಡಿಮೆ ಆಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದಾರೆ. 2014 ರಲ್ಲಿ ಜೆಇಇ ಮೇನ್ಗಾಗಿ ಅತಿಹೆಚ್ಚು 13.56 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.<ref>{{Cite web|url=http://indiatoday.intoday.in|title=JEE (Mains) 2014: 14 lakh candidates appeared for the exam : News|last=|first=|date=|publisher=}}</ref>
{| class="wikitable"
! ವರ್ಷ
! ವಿದ್ಯಾರ್ಥಿಗಳ ಸಂಖ್ಯೆ
|-
| 2020 (ಏಪ್ರಿಲ್)
| ಮುಂದೂಡಲಾಗಿದೆ ( COVID-19 ಸಾಂಕ್ರಾಮಿಕ )
|-
| 2020 (ಜನವರಿ)
| 921,261 <ref>{{Cite web|url=https://jeemain.nta.nic.in/WebInfo/Handler/FileHandler.ashx?i=File&ii=205&iii=Y}}</ref> {{decrease}}
|-
| 2019
| 929,198 <ref>{{Cite web|url=https://indianexpress.com/article/education/nta-jee-main-april-2019-rise-in-number-of-engineering-exam-takers-total-registration-lesser-5666233|title=JEE Main 2019: In April, 9.35 lakh candidates registered; January was 9.29 lakh -The Indian Express|website=The Indian Express|access-date=2019-04-29}}</ref> {{decrease}}
|-
|-
| 2018
| 1,043,739 <ref>{{Cite web|url=https://timesofindia.indiatimes.com/home/education/news/iit-jee-main-2018-10-5-lakh-students-appeared-for-the-examination/articleshow/63677318.cms|title=IIT JEE Main 2018: 10.5 lakh students appeared for the examination - Times of India|website=The Times of India|access-date=2019-08-15}}</ref> {{decrease}}
|-
| 2017
| 1,186,454 <ref>{{Cite web|url=http://cbse.nic.in/newsite/prunit/Press%20Release%20-%20JEE%20(Main)%202017%20Result.pdf|title=RESULT OF JEE (MAIN) 2017|date=27 April 2017|website=cbse.nic.in|publisher=National Informatics Centre|access-date=7 November 2017}}</ref> {{decrease}}
|-
| 2016
| 1,194,938 <ref name="2016IndiaToday">{{Cite web|url=http://indiatoday.intoday.in/education/story/cbse-jee-main-results-2016/1/652760.html|title=CBSE JEE Main 2016: Check out the result analysis here!|website=27 April 2016|publisher=India Today|access-date=7 November 2017|archive-date=16 ನವೆಂಬರ್ 2017|archive-url=https://web.archive.org/web/20171116010622/http://indiatoday.intoday.in/education/story/cbse-jee-main-results-2016/1/652760.html|url-status=dead}}</ref> {{decrease}}
|-
| 2015
| 1,304,495 <ref name="2015applicant">{{Cite web|url=https://engineering.careers360.com/articles/jee-main-registrations-stats-2014-vs-2015|title=JEE Main Registrations Stats: 2014 vs 2015|website=2 March 2014|publisher=Careers360|access-date=7 November 2017|archive-date=7 ನವೆಂಬರ್ 2017|archive-url=https://web.archive.org/web/20171107171323/https://engineering.careers360.com/articles/jee-main-registrations-stats-2014-vs-2015|url-status=dead}}</ref> {{decrease}}
|-
| 2014
| 1,356,805 <ref name="2014applicant">{{Cite web|url=https://www.shiksha.com/b-tech/articles/jee-main-2014-result-analysis-blogId-8084|title=JEE Main 2014 Result Analysis|website=7 May 2014|publisher=Shiksha|access-date=7 November 2017|archive-date=8 ಮಾರ್ಚ್ 2021|archive-url=https://web.archive.org/web/20210308133323/https://www.shiksha.com/b-tech/articles/jee-main-2014-result-analysis-blogId-8084|url-status=dead}}</ref> {{increase}}
|-
| 2013
| 1,282,000 <ref name="applicant">{{Cite web|url=http://www.jagranjosh.com/articles/number-of-applicants-for-jee-main-decreased-in-2015-1420713121-1|title=Number of applicants for JEE Main decreased in 2015|date=1 April 2017|website=8 January 2016|publisher=Jagran Josh|access-date=29 April 2017|archive-date=29 ಏಪ್ರಿಲ್ 2017|archive-url=https://web.archive.org/web/20170429000805/http://www.jagranjosh.com/articles/number-of-applicants-for-jee-main-decreased-in-2015-1420713121-1|url-status=dead}}</ref> {{increase}}
|-
| 2012
| 479,651 <ref>{{Cite web|url=http://iitk.ac.in/new/data/jee-report/JEE-2012%20Report.pdf|title=JEE 2012 Report|last=|first=|date=|website=|access-date=}}{{Dead link|date=ಅಕ್ಟೋಬರ್ 2025 |bot=InternetArchiveBot |fix-attempted=yes }}</ref>
|}
== ಜೆಇಇ ಅಡ್ವಾನ್ಸ್ಡ್ ==
ಜೆಇಇ-ಮೇನ್ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಜೆಇಇ-ಅಡ್ವಾನ್ಸ್ಡ್ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. 2018 ರಲ್ಲಿ, 224,000 ವಿದ್ಯಾರ್ಥಿಗಳಿಗೆ ಜೆಇಇ-ಅಡ್ವಾನ್ಸ್ಡ್ ತೆಗೆದುಕೊಳ್ಳಲು ಅನುಮತಿ ನೀಡಲಾಯಿತು,<ref>{{Cite web|url=https://www.jeeadv.ac.in/Eligibility-Criteria.html|title=Eligibility Criteria For Indian Nationals (including PIO/OCI For Appearing In Jee (Advanced) 2018|archive-url=https://web.archive.org/web/20180907125209/https://www.jeeadv.ac.in/Eligibility-Criteria.html|archive-date=2018-09-07}}</ref> ಇದು 2017 ರಲ್ಲಿ 220,000 ಮತ್ತು 2016 ರಲ್ಲಿ 200,000 ದಿಂದ ಹೆಚ್ಚಾಗಿದೆ.<ref>{{Cite web|url=http://m.indiatoday.in/education/story/cbse-jee-main-results-2016/1/652760.html|title=CBSE JEE Main 2016: Check out the result analysis here!|date=27 April 2016|publisher=India Today|access-date=23 ಮೇ 2020|archive-date=25 ಅಕ್ಟೋಬರ್ 2017|archive-url=https://web.archive.org/web/20171025190016/http://m.indiatoday.in/education/story/cbse-jee-main-results-2016/1/652760.html|url-status=dead}}</ref>
== ಉಲ್ಲೇಖಗಳು ==
{{Reflist}}
{{Interwikineeded}}
2fk2kvmx69ltc160hpbon2al1gr1yuf
ಕೊಲ್ಲಂ
0
140406
1379552
1378855
2026-08-09T02:03:51Z
InternetArchiveBot
69876
Rescuing 3 sources and tagging 0 as dead.) #IABot (v2.0.9.5
1379552
wikitext
text/x-wiki
{{databox}}
{{Infobox settlement
| name = ಕೊಲ್ಲಂ
| native_name =
| native_name_lang =
| other_name = ಕ್ವಿಲಾನ್
| settlement_type = [[ಮಹಾನಗರ]]
| image_skyline = Kollam_Collage.png
| imagesize = 255px
| image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಅಷ್ಟಮುಡಿ ಸರೋವರ]] & [[ದ ರವಿಜ್]] ನ ವಿಹಂಗಮ ನೋಟ, [[ಥಂಗಸ್ಸೇರಿ ಲೈಟ್ಹೌಸ್]], [[ಸೇಂಟ್ ಥಾಮಸ್ ಕೋಟೆ]]ಯ ಅವಶೇಷಗಳು, [[ಕೊಲ್ಲಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ]] & [[ಕೊಲ್ಲಂ ಕೆಎಸ್ಡಬ್ಲ್ಯೂಟಿಡಿ ಫೆರಿ ಟರ್ಮಿನಲ್|ಕೆಎಸ್ಡಬ್ಲ್ಯೂಟಿಡಿ ದೋಣಿ ಘಟ್ಟ]], [[ಬ್ರಿಟಿಷ್ ರೆಸಿಡೆನ್ಸಿ]], [[ಡೌನ್ಟೌನ್ ಕೊಲ್ಲಂ]] ಪ್ರದೇಶ ([[ಆರ್ಪಿ ಮಾಲ್, ಕೊಲ್ಲಂ|ಆರ್ಪಿ ಮಾಲ್]] ಸೇರಿದಂತೆ), [[ಮನ್ರೋ ದ್ವೀಪ]]ದಲ್ಲಿನ ಪ್ರವಾಸಿಗರು, [[ಅಡ್ವೆಂಚರ್ ಪಾರ್ಕ್, ಕೊಲ್ಲಂ|ಅಡ್ವೆಂಚರ್ ಪಾರ್ಕ್]], [[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ]], [[ಥಂಗಸ್ಸೇರಿ ಬ್ರೇಕ್ ವಾಟರ್ ಟೂರಿಸಂ ಪಾರ್ಕ್|ಬ್ರೇಕ್ ವಾಟರ್ ಟೂರಿಸಂ]] & [[ಕೊಲ್ಲಂ ಬಂದರು]], [[ಕೊಲ್ಲಂ ಬೀಚ್]] ಮತ್ತು [[ಚಿನ್ನಕಡ ಘಂಟಾಗೋಪುರ]]
| etymology = [[ಕರಿಮೆಣಸು]]: ''ಕೊಲ'' ("ಕರಿಮೆಣಸು")
| nicknames = "ಅರೇಬಿಯನ್ ಸಮುದ್ರದ ರಾಜಕುಮಾರ"<br />"ವಿಶ್ವದ ಗೋಡಂಬಿ ರಾಜಧಾನಿ"<ref>{{cite web|url=https://www.thehindu.com/news/national/kerala/kollams-cashew-crunch/article23701507.ece |title=Kollam's cashew crunch |work=The Hindu|date=28 April 2018 |access-date=10 August 2018}}</ref> <br /> "ಬ್ಯಾಕ್ವಾಟರ್ಗಳ ಪ್ರವೇಶದ್ವಾರ" <br />
"[[ಯೌವನದ ಚಿಲುಮೆ]]"<ref>{{cite web | url=https://www.keralatourism.org/kerala-article/2012/kollam-quilon/154 | title=Kollam, Quilon, Land of cashew, coir, backwaters, Kerala Tourism }}</ref><ref>{{cite news | url=https://www.grunge.com/236799/the-tragic-history-of-the-search-for-the-fountain-of-youth/ | title=The Tragic History of the Search for the Fountain of Youth | newspaper=Grunge | date=14 August 2020 }}</ref>
| image_map = Location map India Kollam EN.svg
| mapsize = 250x200px
| map_alt =
| map_caption = [[ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ]]ದೊಳಗಿನ ನಗರದ ಸ್ಥಾನ
| pushpin_map = India#India Kerala
| pushpin_label_position = right
| pushpin_map_alt =
| pushpin_map_caption = ಕೊಲ್ಲಂ ([[ಭಾರತ]])
| coordinates = {{coord|8|53|35.5|N|76|36|50.8|E|display=inline,title}}[https://geohack.toolforge.org/geohack.php?pagename=Kollam¶ms=8_53_35.5_N_76_36_50.8_E_type:city(1342509)_region:IN-KL]
| subdivision_type = [[ದೇಶ]]
| subdivision_name = {{flag|India}}
| subdivision_type1 = [[ಭಾರತದ ಪ್ರದೇಶಗಳ ಪಟ್ಟಿ|ಪ್ರದೇಶ]]
| subdivision_name1 = [[ದಕ್ಷಿಣ ಭಾರತ]]
| subdivision_type2 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| subdivision_name2 = [[ಕೇರಳ]]
| subdivision_type3 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| subdivision_name3 = [[ಕೊಲ್ಲಂ ಜಿಲ್ಲೆ|ಕೊಲ್ಲಂ]]
| established_title = ಸ್ಥಾಪನೆ
| established_date = 823
| founder = [[ಮಾರ್ ಸಬೊರ್ ಮತ್ತು ಮಾರ್ ಪ್ರೋತ್|ಮರುವಾನ್ ಸಪಿರ್ ಐಸೊ]]<ref>Kollam Tarisappalli Copper plates</ref><ref>{{cite work |last=Perczel |first=István |title= The Syriac World|publisher=Routledge |year=2018 |isbn=9781317482116 |editor-last=King |editor-first=Daniel |page=665-671|chapter=Syriac Christianity in India }}</ref><ref>{{Cite book|title=Perumals of Kerala: Brahmin Oligarchy and Ritual Monarchy|last=Narayanan|first=M. G. S.|publisher=CosmoBooks.|year=2013|isbn=9788188765072|location=Thrissur (Kerala)|pages=277, 278, 295, 435–37|orig-year=1972}}</ref> (ಬಂದರು ನಗರವಾಗಿ) <br /> [[ರಾಮ ವರ್ಮ ಕುಲಶೇಖರ]]<ref>{{Cite web |first=M. S. | last = Dhiraj |title=Kollam Pillar Inscription of Rama Kulasekhara: The Last Chera Record of a Jain Perumal of Makothai |url=https://www.heritageuniversityofkerala.com/JournalPDF/Volume6/19.pdf |website=Department of History, Pondicherry Central University | location = Pondicherry, India}}</ref> (ಆಡಳಿತ ರಾಜಧಾನಿಯಾಗಿ)
| leader_party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
| government_type = [[ನಗರ ನಿಗಮ (ಭಾರತ)|ನಗರ ನಿಗಮ]]
| governing_body = [[ಕೊಲ್ಲಂ ನಗರ ಸಭೆ]]
| leader_title = [[ಮೇಯರ್#ಭಾರತ|ಮೇಯರ್]]
| leader_name = ಎ.ಕೆ ಹಫೀಜ್
| unit_pref = Metric
| area_footnotes =
| area_rank = 4
| area_total_km2 = 73.03
| area_land_km2 =
| area_water_km2 =
| elevation_footnotes =
| elevation_m = 38.32
| population_total = 397,419
| population_footnotes = <ref>{{Cite web|url=https://www.citypopulation.de/en/india/kerala/|title = Kerala (India): Districts, Cities and Towns - Population Statistics, Charts and Map}}</ref>
| population_as_of = 2011
| population_rank = [[ಕೇರಳದ ನಗರಗಳ ಪಟ್ಟಿ|5]] ([[ಭಾರತದ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರಸಮೂಹಗಳ ಪಟ್ಟಿ|41ನೇ IN]])
| population_density_km2 = auto
| population_metro = 1,871,086
| population_metro_footnotes = <ref>{{cite web|url=http://www.demographia.com/db-worldua.pdf| title=Demographia World Urban Areas |publisher=Demographia |access-date=23 April 2016}}</ref>
| population_demonym = ಕೊಲ್ಲಮೈಟ್, ಕೊಲ್ಲത്തುಕಾರನ್/ಕಾರಿ, ಕೊಲ್ಲಂಕರನ್/ಕಾರಿ
| demographics_type1 = [[ಭಾಷೆ]]ಗಳು
| demographics1_title1 = ಅಧಿಕೃತ
| demographics1_info1 = {{hlist|[[ಮಲಯಾಳಂ ಭಾಷೆ|ಮಲಯಾಳಂ]]|[[ಇಂಗ್ಲಿಷ್ ಭಾಷೆ|ಇಂಗ್ಲಿಷ್]]}}
| timezone1 = [[ಭಾರತೀಯ ಪ್ರಮಾಣಿತ ಸಮಯ|IST]]
| utc_offset1 = +5:30
| postal_code_type = [[ಪಿನ್ ಕೋಡ್|PIN]]
| postal_code = 691 XXX
| area_code_type = [[ದೂರವಾಣಿ]] ಕೋಡ್
| area_code = +91474xxxxxxx
| registration_plate = ಕೊಲ್ಲಂ- [[ಭಾರತದ RTO ಜಿಲ್ಲೆಗಳ ಪಟ್ಟಿ#KL—ಕೇರಳ|KL]] 02, [[ಕರುನಾಗಪಲ್ಲಿ]]- KL 23, [[ಕೊಟ್ಟಾರಕ್ಕರ]]- KL 24, [[ಪುನಲೂರು]]- KL 25, [[ಕುನ್ನತೂರು, ಕೇರಳ|ಕುನ್ನತೂರು]]- KL 61, [[ಪಥನಾಪುರಂ]]- KL 80, [[ಚಡಯಮಂಗಳಂ]]- KL 82
| blank2_name_sec2 = ಸಾಕ್ಷರತೆ
| blank2_info_sec2 = 91.18%<ref name=Cities1Lakhandabove>{{cite web | url=http://www.censusindia.gov.in/2011-prov-results/paper2/data_files/India2/Table_2_PR_Cities_1Lakh_and_Above.pdf| title=Provisional Population Totals, Census of India 2011; Cities having population 1 lakh and above | publisher=Office of the Registrar General & Census Commissioner, India}}</ref>
| website = {{URL|www.kollam.nic.in}}
| blank_name_sec2 = [[ಮಾನವ ಅಭಿವೃದ್ಧಿ ಸೂಚ್ಯಂಕ|HDI]]
| blank_info_sec2 = <span style="color:#090">ಹೆಚ್ಚು</span>
| blank3_name_sec2 = [[UN/LOCODE]]
| blank3_info_sec2 = '''IN QUI<br />IN KUK'''
| footnotes =
| official_name =
}}
'''ಕೊಲ್ಲಂ''' ({{IPA|ml|kolːɐm|lang|Kollam-pronunciation.ogg}};{{efn|({{IPAc-en|'|k|w|aɪ|.|l|ɒ|n}} {{Respell|KWAI|lon}}; ಸ್ಥಳೀಯವಾಗಿ {{IPAc-en|k|ɔɪ|.|l|ɒ|n}} {{Respell|KOY|lon}} {{audio|Pronunciation of the alternate name "Quilon" of the city Kollam.ogg|ಉಚ್ಚಾರಣೆ}})}}) ಒಂದು ಪ್ರಾಚೀನ ಬಂದರು ಮತ್ತು ಭಾರತದ ಕೇರಳ ರಾಜ್ಯದ [[ಕೇರಳದ ನಗರಗಳು ಮತ್ತು ಪಟ್ಟಣಗಳ ಪಟ್ಟಿ|ನಾಲ್ಕನೇ ಅತಿದೊಡ್ಡ ನಗರವಾಗಿದೆ]]. ಅರೇಬಿಯನ್ ಸಮುದ್ರದ ಮಲಬಾರ್ ಕರಾವಳಿಯ ದಕ್ಷಿಣ ತುದಿಯಲ್ಲಿರುವ ಈ ನಗರವು ಅಷ್ಟಮುಡಿ ಸರೋವರದ ದಡದಲ್ಲಿದೆ ಮತ್ತು [[ತಿರುವನಂತಪುರ]]ದಿಂದ 71 ಕಿಲೋಮೀಟರ್ (44 ಮೈಲಿ) ವಾಯುವ್ಯಕ್ಕೆ ಇದೆ.<ref>{{cite web |title=Kollam - Encyclopaedia Britannica |url=https://www.britannica.com/place/Kollam |access-date=7 February 2020 |publisher=Britannica}}</ref> ಕೊಲ್ಲಂ [[ಭಾರತದ ಪ್ರಾಚೀನ ನಗರಗಳ ಪಟ್ಟಿ|ಭಾರತದ ಅತ್ಯಂತ ಹಳೆಯ, ನಿರಂತರವಾಗಿ ವಾಸಿಸುತ್ತಿರುವ ನಗರಗಳಲ್ಲಿ]] ಒಂದಾಗಿದೆ,<ref>{{cite web |date=16 June 2016 |title=12 Oldest Living and Continuously Inhabited Cities of India |url=http://www.walkthroughindia.com/cities/12-oldest-living-continuously-inhabited-cities-india/ |access-date=11 June 2023 |archive-date=11 June 2023 |archive-url=https://web.archive.org/web/20230611144213/http://www.walkthroughindia.com/cities/12-oldest-living-continuously-inhabited-cities-india/ |url-status=dead }}</ref><ref name="auto">{{cite web |title=History | District Kollam, Government of Kerala | India |url=https://kollam.nic.in/en/history/}}</ref> ಮೆಗಾಲಿಥಿಕ್ ಅವಧಿಯವರೆಗಿನ ವಾಸದ ಪುರಾವೆಗಳಿವೆ. ಈ ನಗರವು ಸಹಸ್ರಮಾನಗಳಿಂದ ಸಮುದ್ರ [[ವ್ಯಾಪಾರ ಕೇಂದ್ರ]]ವಾಗಿದೆ, ಇದರ ಆರಂಭಿಕ ಉಲ್ಲೇಖಗಳು ಫೀನಿಷಿಯನ್ನರು ಮತ್ತು ರೋಮನ್ನರ ಕಾಲದವು.<ref>{{Cite journal |last1=A. |first1=Shaji |last2=H. |first2=Adabiya |date=March 11, 2020 |title=The Early Maritime Trade Relations of Kollam: A Historical Introspection |url=http://www.heritageuniversityofkerala.com/JournalPDF/Volume8.2/23.pdf |journal=Heritage: Journal of Multidisciplinary Studies in Archaeology |volume=8 |issue=2}}</ref> ಇದು [[ಕೇರಳದ ಬ್ಯಾಕ್ವಾಟರ್ಗಳು|ಕೇರಳದ ಬ್ಯಾಕ್ವಾಟರ್ಗಳ]] ಪ್ರವೇಶದ್ವಾರವಾಗಿದೆ,<ref>{{Cite web |title=Ashtamudi Lake, the gateway to the backwaters of Kerala |url=https://www.keralatourism.org/destination/ashtamudi-backwaters/426 |website=Kerala Tourism}}</ref> ಮತ್ತು ಇದು ಗೋಡಂಬಿ ಸಂಸ್ಕರಣೆ, [[ಕೊಯಿರ್]] ತಯಾರಿಕೆ ಮತ್ತು ಪ್ರವಾಸೋದ್ಯಮ ಉದ್ಯಮಗಳಿಗೆ ಹೆಸರುವಾಸಿಯಾಗಿದೆ.<ref>{{Cite web |title=In 2 years, 80% cashew producing units closed in Kollam |url=https://www.downtoearth.org.in/news/agriculture/in-2-years-80-cashew-producing-units-closed-in-kollam-61749 |website=www.downtoearth.org.in|date=28 September 2018 }}</ref><ref>{{Cite web |title=Coir products of Kerala, Kollam, Kerala, India |url=https://www.keralatourism.org/kerala-article/2012/coir-products/161 |website=Kerala Tourism}}</ref>
ಕೊಲ್ಲಂ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಖ್ಯಾತಿಯನ್ನು ಹೊಂದಿದೆ. ಅರಬ್ಬರು, [[ಫೀನಿಷಿಯನ್ನರು]], ಚೀನಿಯರು, ಇಥಿಯೋಪಿಯನ್ನರು, ಸಿರಿಯನ್ನರು, ಯಹೂದಿಗಳು, [[ಕಲ್ಡಿಯನ್ನರು]], ಮತ್ತು ರೋಮನ್ನರು ಸಹಸ್ರಮಾನಗಳಿಂದ ಕೊಲ್ಲಂ ಬಂದರಿನಲ್ಲಿ ವ್ಯಾಪಾರ ನಡೆಸಿದ್ದಾರೆ.<ref>{{cite book |first=K. A. Nilakanta |last=Sasthri |title=History of South India |edition=2nd| publisher=Oxford University Press |year=1958 |orig-year=1935}}</ref> ಚೀನಾದ ವ್ಯಾಪಾರದ ಕಾರಣದಿಂದಾಗಿ, [[ಇಬ್ನ್ ಬತೂತ]] 14 ನೇ ಶತಮಾನದಲ್ಲಿ ಕೊಲ್ಲಂ ಅನ್ನು ತನ್ನ ಇಪ್ಪತ್ನಾಲ್ಕು ವರ್ಷಗಳ ಪ್ರಯಾಣದಲ್ಲಿ ಕಂಡ ಐದು ಭಾರತೀಯ ಬಂದರುಗಳಲ್ಲಿ ಒಂದೆಂದು ಉಲ್ಲೇಖಿಸಿದ್ದಾನೆ.<ref>{{cite web|url=https://www.thebetterindia.com/152778/news-kerala-china-iit-prof-gulis-children/ |title=Kozhikode to China: IIT Prof Unearths 700-YO Link That'll Will Blow Your Mind! |publisher=The Better India |date=26 July 2018 |access-date=7 December 2015}}</ref><ref name="www.mathrubhumi.com">{{Cite web|url=http://www.mathrubhumi.com/travel/article/destination/kollam/1095/|archiveurl=https://web.archive.org/web/20141009210850/http://www.mathrubhumi.com/travel/article/destination/kollam/1095/|url-status=dead|title=Kollam - Mathrubhumi|archivedate=9 October 2014}}</ref> ದೇಸಿಂಗನಾಡಿನ ರಾಜರು ಚೀನೀ ಆಡಳಿತಗಾರರೊಂದಿಗೆ ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡರು, ಆದರೆ ಕೊಲ್ಲಂನಲ್ಲಿ ಅಭಿವೃದ್ಧಿ ಹೊಂದಿದ ಚೀನೀ ವಸಾಹತು ಇತ್ತು. 9 ನೇ ಶತಮಾನದಲ್ಲಿ, ಚೀನಾದ [[ಗುವಾಂಗ್ಝೌ|ಕ್ಯಾಂಟನ್]]ಗೆ ಹೋಗುವ ದಾರಿಯಲ್ಲಿ, ಪರ್ಷಿಯನ್ ವ್ಯಾಪಾರಿ [[ಸುಲೈಮಾನ್ ಅಲ್-ತಾಜಿರ್]] ಕೊಲ್ಲಂ ಭಾರತದ ಏಕೈಕ ಬಂದರಾಗಿದ್ದು, ಅಲ್ಲಿ ಬೃಹತ್ ಚೀನೀ ಜಂಕ್ಗಳು ಭೇಟಿ ನೀಡುತ್ತಿದ್ದವು. [[ಮಾರ್ಕೊ ಪೊಲೊ]], ವೆನಿಸ್ನ ಪ್ರವಾಸಿಗ, 1275 ರಲ್ಲಿ [[ಕುಬ್ಲೈ ಖಾನ್]] ಅಡಿಯಲ್ಲಿ ಚೀನೀ ಸೇವೆಯಲ್ಲಿದ್ದನು, ಅವನು ತನ್ನ ಸಾಮರ್ಥ್ಯದಲ್ಲಿ, ಚೀನೀ ಮ್ಯಾಂಡರಿನ್ ಆಗಿ ಕೊಲ್ಲಂ ಮತ್ತು ಪಶ್ಚಿಮ ಕರಾವಳಿಯ ಇತರ ಪಟ್ಟಣಗಳಿಗೆ ಭೇಟಿ ನೀಡಿದನು.<ref>{{Cite web|url=http://kollam.nic.in/history.html|title=Short History of Kollam}}</ref> [[ಕೊಲ್ಲಂ ಜಿಲ್ಲೆ|ಕೊಲ್ಲಂ]] [[ಥಾಮಸ್ ಅಪೊಸ್ತಲ|ಸಂತ ಥಾಮಸ್]] ಸ್ಥಾಪಿಸಿದ [[ಏഴರಪ್ಳ್ಳಿಕಳ್|ಏಳು ಚರ್ಚುಗಳಲ್ಲಿ]] ಒಂದಕ್ಕೆ ಮತ್ತು [[ಮಲಿಕ್ ದೀನಾರ್]] [[ಕೇರಳ]]ದಲ್ಲಿ ಸ್ಥಾಪಿಸಿದ [[ಇಸ್ಲಾಂ ಧರ್ಮ ಕೇರಳದಲ್ಲಿ|10 ಅತ್ಯಂತ ಹಳೆಯ ಮಸೀದಿಗಳಲ್ಲಿ]] ಒಂದಕ್ಕೆ ನೆಲೆಯಾಗಿದೆ. [[ಕ್ವಿಲಾನ್ನ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]] ಭಾರತದ ಮೊದಲ ಧರ್ಮಪ್ರಾಂತ್ಯವಾಗಿದೆ.<ref>{{Cite web |title=Diocese of Quilon |url=https://www.quilondiocese.com/quilon.php?Pid=16&Mid=89 |access-date=2023-09-07 |website=www.quilondiocese.com |archive-date=7 September 2023 |archive-url=https://web.archive.org/web/20230907162517/https://www.quilondiocese.com/quilon.php?Pid=16&Mid=89 |url-status=dead }}</ref>
[[ವಿ. ನಾಗಮ್ ಅಯ್ಯ]] ತಮ್ಳ ''ಟ್ರಾವಂಕೋರ್ ಸ್ಟೇಟ್ ಮ್ಯಾನ್ಯುಯಲ್'' ನಲ್ಲಿ 822 AD ರಲ್ಲಿ ಇಬ್ಬರು [[ಪೂರ್ವ ಸಿರಿಯಾಕ್ ಸಂಪ್ರದಾಯ|ಪೂರ್ವ ಸಿರಿಯಾಕ್]] ಬಿಷಪ್ಗಳು, [[ಮಾರ್ ಸಬೊರ್ ಮತ್ತು ಮಾರ್ ಪ್ರೋತ್]], ತಮ್ಮ ಅನುಯಾಯಿಗಳೊಂದಿಗೆ ಕ್ವಿಲಾನ್ನಲ್ಲಿ ನೆಲೆಸಿದರು ಎಂದು ದಾಖಲಿಸಿದ್ದಾರೆ. ಎರಡು ವರ್ಷಗಳ ನಂತರ, ಮಲಬಾರ್ ಯುಗ ಪ್ರಾರಂಭವಾಯಿತು (824 AD), ಮತ್ತು ಕ್ವಿಲಾನ್ ಟ್ರಾವಂಕೋರ್ ಮತ್ತು [[ಕೊಚ್ಚಿ]]ಗಿಂತ ಮುನ್ನ ಮಲಬಾರ್ ಪ್ರದೇಶದ ಪ್ರಮುಖ ನಗರವಾಯಿತು.<ref name="Aiyya, V.V Nagom p. 244"/> [[ಕೊಲ್ಲಂ ಬಂದರು]] ಅನ್ನು ಮಾರ್ ಸಬೊರ್ 825 ರಲ್ಲಿ [[ಥಂಗಸ್ಸೇರಿ]]ಯಲ್ಲಿ ಸ್ಥಾಪಿಸಿದರು, ಇದು ಬ್ಯಾಕರೆ (ತೆವಲಕರ) ಬಳಿಯ ಕೊರೆ-ಕೆ-ನಿ ಕೊಲ್ಲಂನ ಒಳನಾಡಿನ ಬಂದರನ್ನು ಪುನಃ ತೆರೆಯಲು ಪರ್ಯಾಯವಾಗಿತ್ತು, ಇದು ರೋಮನ್ನರು ಮತ್ತು ಗ್ರೀಕರಿಗೆ ನೆಲ್ಸಿಂಡಾ ಮತ್ತು ಟಿಂಡಿಸ್ ಎಂದು ಮತ್ತು ತಮಿಳರಿಗೆ ತೊಂಡಿ ಎಂದು ಕರೆಯಲ್ಪಡುತ್ತಿತ್ತು.<ref name="Aiyya, V.V Nagom p. 244">Aiyya, V.V Nagom, State Manual p. 244</ref> [[ತಂಬಿರಾನ್ ವನಕ್ಕಂ]], 20 ಅಕ್ಟೋಬರ್ 1578 ರಂದು ಕೊಲ್ಲಂನಲ್ಲಿ [[ತಮಿಳು ಭಾಷೆ|ತಮಿಳು]] ಭಾಷೆಯಲ್ಲಿ ಮುದ್ರಿತವಾದ ಮೊದಲ ಪುಸ್ತಕವಾಗಿದೆ.<ref>{{Cite news |date=2010-06-20 |title=Tamil saw its first book in 1578 |language=en-IN |work=The Hindu |url=https://www.thehindu.com/news/national/tamil-nadu/Tamil-saw-its-first-book-in-1578/article15685475.ece |access-date=2023-09-07 |issn=0971-751X}}</ref>
[[ಕೊಲ್ಲಂ ನಗರ ಸಭೆ]] ನಗರ ಆಡಳಿತ ಮತ್ತು ಸೇವೆಗಳಿಗಾಗಿ [[ISO 9000#ISO 9001:2015 ವಿಷಯಗಳು|ISO 9001:2015]] ಪ್ರಮಾಣೀಕರಣವನ್ನು ಪಡೆದುಕೊಂಡಿದೆ.<ref>{{cite web|url=http://lsgkerala.gov.in/index.php/en/news-district-news/kollam-corporation-achieved-iso-certification-1636 |title=Kollam Corporation achieved ISO Certification |date=17 May 2019 |access-date=18 June 2019}}</ref> [[ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್|ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (EIU)]] ಜನವರಿ 2020 ರ ಸಮಯದಲ್ಲಿ ನಗರ ಪ್ರದೇಶದ ಬೆಳವಣಿಗೆಯ ಆಧಾರದ ಮೇಲೆ ನಡೆಸಿದ ಸಮೀಕ್ಷೆಯ ಪ್ರಕಾರ, [[ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ|ಕೊಲ್ಲಂ]] 2015 ಮತ್ತು 2020 ರ ನಡುವೆ 31.1% ನಗರ ಬೆಳವಣಿಗೆಯೊಂದಿಗೆ ವಿಶ್ವದ ಹತ್ತನೇ ವೇಗವಾಗಿ ಬೆಳೆಯುತ್ತಿರುವ ನಗರವಾಯಿತು.<ref>{{cite web|url=https://indianexpress.com/article/india/three-of-worlds-ten-fastest-growing-urban-areas-are-in-kerala-6205749/ |title=3 of world's 10 fastest-growing urban areas are in Kerala: Economist ranking |date=8 January 2020 |access-date=8 January 2020}}</ref> ಇದು ಅಷ್ಟಮುಡಿ ಸರೋವರದ ದಡದಲ್ಲಿರುವ ಕರಾವಳಿ ನಗರವಾಗಿದೆ. ನಗರವು [[ಕೊಲ್ಲಂ ಜಿಲ್ಲೆ]]ಯ ಆಡಳಿತ ಕಚೇರಿಗಳನ್ನು ಹೊಂದಿದೆ ಮತ್ತು ರಾಜ್ಯದ ಪ್ರಮುಖ ವ್ಯಾಪಾರ ನಗರವಾಗಿದೆ. ಕೊಲ್ಲಂ ನಗರದಲ್ಲಿ ಮಹಿಳೆಯರ ಮತ್ತು ಪುರುಷರ ಅನುಪಾತವು ಭಾರತದ 500 ಅತಿ ಜನಸಂಖ್ಯೆಯ ನಗರಗಳಲ್ಲಿ ಎರಡನೇ ಅತಿ ಹೆಚ್ಚಾಗಿದೆ.<ref>{{cite web|url=http://www.census2011.co.in/city.php |title=census2011.co.in - Indian Cities |access-date=7 December 2015}}</ref> ಕೊಲ್ಲಂ ಭಾರತದ ಅತ್ಯಂತ ಕಡಿಮೆ ಮಾಲಿನ್ಯಗೊಂಡ ನಗರಗಳಲ್ಲಿ ಒಂದಾಗಿದೆ.<ref>{{cite web|url=http://www.india.com/lifestyle/the-4-least-polluted-cities-in-india-757032/ |title=The 4 Least Polluted Cities in India - India.com |date=7 December 2015 |access-date=7 December 2015}}</ref>
[[ಚೇರ ಸಾಮ್ರಾಜ್ಯ|ಚೇರ]] ರಾಜವಂಶದ ಆಳ್ವಿಕೆಯ ನಂತರದ ಹಂತಗಳಲ್ಲಿ, ಕೊಲ್ಲಂ ವ್ಯಾಪಾರ ಮತ್ತು ರಾಜಕೀಯದ ಕೇಂದ್ರಬಿಂದುವಾಗಿ ಹೊರಹೊಮ್ಮಿತು. ಕೊಲ್ಲಂ ಕೇರಳದ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿ ಮುಂದುವರೆದಿದೆ. ಕೊಲ್ಲಂ ಸುತ್ತಲೂ ನಾಲ್ಕು ಪ್ರಮುಖ ವ್ಯಾಪಾರ ಕೇಂದ್ರಗಳಿವೆ. ಅವುಗಳಲ್ಲಿ [[ಕೊಟ್ಟಾರಕ್ಕರ]], [[ಪುನಲೂರು]], [[ಪರವೂರು, ಕೊಲ್ಲಂ|ಪರವೂರು]], ಮತ್ತು [[ಕರುನಾಗಪಲ್ಲಿ]] ಸೇರಿವೆ. ಕೊಲ್ಲಂ [[ಜಾನ್ ಮ್ಯಾಂಡೆವಿಲ್|ಮ್ಯಾಂಡೆವಿಲ್]] ಅವರ ''[[ಟ್ರಾವೆಲ್ಸ್ ಆಫ್ ಸರ್ ಜಾನ್ ಮ್ಯಾಂಡೆವಿಲ್|ಪ್ರಯಾಣಗಳು]]'' ನಲ್ಲಿ '''ಪಲೋಂಬೆ''' ಎಂದು ಕಾಣಿಸಿಕೊಂಡಿದೆ, ಅಲ್ಲಿ ಅವನು ಅದು [[ಯೌವನದ ಚಿಲುಮೆ]]ಯನ್ನು ಹೊಂದಿದೆ ಎಂದು ಹೇಳಿಕೊಂಡಿದ್ದಾನೆ.<ref>Mandeville, John. ''[http://www.gutenberg.org/cache/epub/782/pg782.txt The Travels of Sir John Mandeville]''. Accessed 24 September 2011.</ref><ref>Kohanski, Tamarah & Benson, C. David (Eds.) ''The Book of John Mandeville''. Medieval Institute Publications (Kalamazoo), 2007. Op. cit. "[http://www.lib.rochester.edu/camelot/teams/tkap2.htm Indexed Glossary of Proper Names]". Accessed 24 September 2011.</ref>
==ವ್ಯುತ್ಪತ್ತಿ==
{{main|ಕೊಲ್ಲಂಗೆ ಹೆಸರುಗಳು}}
ಜನಪ್ರಿಯ ಸಿದ್ಧಾಂತದ ಪ್ರಕಾರ, "ಕೊಲ್ಲಂ" ಎಂಬ ಹೆಸರು ''ಕೊಯಿಲ್ಲಂ'' ಎಂಬ ಪದದಿಂದ ಬಂದಿದೆ, ಇದು ''[[ಕೊವಿಲಕಂ]]'' ("ರಾಜಮನೆತನದ ಅರಮನೆ" ಎಂದರ್ಥ) ಮತ್ತು ''[[ಇಲ್ಲಂ]]'' ([[ಇಲ್ಲತು ನಾಯರ್|ನಾಯರ್ ಶ್ರೀಮಂತರು]] ಅಥವಾ [[ಬ್ರಾಹ್ಮಣ]]ರ ಸಾಂಪ್ರದಾಯಿಕ ಮನೆ) ಸಂಯುಕ್ತವಾಗಿದೆ.<ref>{{Cite web |title=History {{!}} District Kollam, Government of Kerala {{!}} India |url=https://kollam.nic.in/en/history/#:~:text=One%20theory%20has%20it%20that,and%20illam%20(brahmin%20house). |access-date=2025-05-02 |language=en-US}}</ref> ಮತ್ತೊಂದು ಸಿದ್ಧಾಂತವು ಈ ಹೆಸರು [[ಸಂಸ್ಕೃತ]] ಪದ ''ಕೊಲ್ಲಂ'' ನಿಂದ ಬಂದಿದೆ, ಇದರರ್ಥ "ಮೆಣಸು," ಏಕೆಂದರೆ ಈ ಪ್ರದೇಶವು ಐತಿಹಾಸಿಕವಾಗಿ ಮೆಣಸಿನ ವ್ಯಾಪಾರ ಮತ್ತು ರಫ್ತಿಗೆ ಪ್ರಮುಖ ಕೇಂದ್ರವಾಗಿತ್ತು.<ref>{{Cite web |title=History {{!}} District Kollam, Government of Kerala {{!}} India |url=https://kollam.nic.in/en/history/#:~:text=The%20name%20Kollam%20has%20a,and%20exporting%20centre%20for%20pepper. |access-date=2025-05-02 |language=en-US}}</ref>
825 AD ರಲ್ಲಿ, [[ಮಲಯಾಳಂ ಕ್ಯಾಲೆಂಡರ್]], ಅಥವಾ ''ಕೊಲ್ಲವರ್ಷಂ'', ನಗರದಲ್ಲಿ ನಡೆದ ಸಭೆಗಳಲ್ಲಿ ಪ್ರಾರಂಭವಾಯಿತು.<ref>ending with the Royal sanction of Tarissapalli copper plates to Assyrian Monks by Vaishnaite Chera King Rajashekara Varma, against the backdrop of a Shivite revival led by Adi Shankara among the Nampoothiri communities [http://www.kerala.gov.in/statistical/panchayat_statistics2001/klm_shis.htm Kerala government website] {{webarchive|url=https://web.archive.org/web/20071121073245/http://www.kerala.gov.in/statistical/panchayat_statistics2001/klm_shis.htm |date=21 November 2007 }}</ref> ಪ್ರಸ್ತುತ ಮಲಯಾಳಂ ಕ್ಯಾಲೆಂಡರ್ ಅನ್ನು ಬೆಂಕಿಯಿಂದ ನಾಶವಾದ ನಂತರ ಪಟ್ಟಣವನ್ನು ಪುನರ್ನಿರ್ಮಿಸಿದ ನಂತರ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.
ಈ ನಗರವನ್ನು ಅರೇಬಿಕ್ನಲ್ಲಿ ''ಕೂಲಂ'' ಎಂದು ಕರೆಯಲಾಗುತ್ತಿತ್ತು,<ref name="Koolam">{{cite book |author=S. Muhammad Hussain Nainar |url=https://archive.org/details/Tuhfat-al-MujahidinAnHistoricalWorkInTheArabicLanguage |title=Tuhfat-al-Mujahidin: An Historical Work in The Arabic Language |publisher=University of Madras |year=1942}}</ref> ಪೋರ್ಚುಗೀಸ್ನಲ್ಲಿ ''ಕೌಲಾಂ'', ಮತ್ತು ಪ್ರಾಚೀನ ತಮಿಳು ಸಾಹಿತ್ಯದಲ್ಲಿ ''ದೇಸಿಂಗನಾಡು''.<ref name="auto" />
==ಇತಿಹಾಸ==
{{main|ಕೊಲ್ಲಂ ಇತಿಹಾಸ}}
[[File:Periplous of the Erythraean Sea.svg|left|thumbnail|''[[ಪೆರಿಪ್ಲಸ್ ಆಫ್ ದ ಎರಿಥ್ರಿಯನ್ ಸೀ]]'' (1ನೇ ಶತಮಾನ CE) ನ ಹೆಸರುಗಳು, ಮಾರ್ಗಗಳು ಮತ್ತು ಸ್ಥಳಗಳು]]
ಪ್ರಾಚೀನ ನಗರವಾದ ಕ್ವಿಲಾನ್ ಆಗಿ, ಕೊಲ್ಲಂ [[ಪಾಂಡ್ಯ ಸಾಮ್ರಾಜ್ಯ]] (ಸುಮಾರು 3ನೇ ಶತಮಾನ BC–12ನೇ ಶತಮಾನ) ಸಮಯದಲ್ಲಿ ಅಭಿವೃದ್ಧಿ ಹೊಂದಿದ ಬಂದರಾಗಿತ್ತು, ಮತ್ತು ನಂತರ ಸುಮಾರು 825 ರಲ್ಲಿ ಮರುವಾನ್ ಸಪಿರ್ ಐಸೊ ಸ್ಥಾಪಿಸಿದ ಸ್ವತಂತ್ರ [[ವೆನಾಡು ಸಾಮ್ರಾಜ್ಯ|ವೆನಾಡು]] ಅಥವಾ ಕ್ವಿಲಾನ್ ಸಾಮ್ರಾಜ್ಯದ ರಾಜಧಾನಿಯಾಯಿತು. ಕೊಲ್ಲಂ ಅನ್ನು 13 ನೇ ಶತಮಾನದ ಸಮುದ್ರ ವ್ಯಾಪಾರದಲ್ಲಿ ನಾಲ್ಕು ಆರಂಭಿಕ [[ವ್ಯಾಪಾರ ಕೇಂದ್ರ]]ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಈಜಿಪ್ಟ್ನ ಅಲೆಕ್ಸಾಂಡ್ರಿಯಾ ಮತ್ತು ಕೈರೋ, ಚೀನಾ ದೇಶದ [[ಕ್ವಾನ್ಝೌ]] ನಗರ, ಮತ್ತು ಮಲೇಷಿಯನ್ ದ್ವೀಪಸಮೂಹದ [[ಮಲಕ್ಕಾ]] ಸೇರಿದಂತೆ.<ref name=Tignor>{{cite book|last=tignor|first=Robert|title=Worlds together, worlds apart: a history of the world from the beginnings of humankind to the present|year=2010|publisher=W.W. Norton & Co.|location=New York|isbn=978-0-393-93492-2|page=365|url=http://books.wwnorton.com/books/detail.aspx?ID=17166|edition=3rd}}</ref> 1280 ರಲ್ಲಿ, [[ಯುವಾನ್ ರಾಜವಂಶ|ಯುವಾನ್]] ಚೀನಾದ ರಾಯಭಾರಿಗಳು ಕೊಲ್ಲಂಗೆ ಬಂದು ಸ್ಥಳೀಯ ಆಡಳಿತಗಾರ ಮತ್ತು ಚೀನಾ ನಡುವಿನ ಸಂಬಂಧಗಳನ್ನು ಸ್ಥಾಪಿಸಿದ ಉದಾಹರಣೆಯಿದೆ.<ref>{{Cite book|title=Al-Hind, The making of the Indo-Islamic World|publisher=Brill|chapter-url=https://archive.org/details/AndreWinkAlHindTheMakingOfTheIndoIslamKhaledWahsh2FFacebook2FkWahshyahoo.com/page/n24/mode/1up?view=theater&q=Embassy|year=2002|chapter='Trade embassy to Kollam'}}</ref>
===ಪಾಂಡ್ಯ ಆಳ್ವಿಕೆ===
ಕೊಲ್ಲಂನ ಪ್ರಾಚೀನ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವು ಕೇರಳದ ಉಳಿದ ಭಾಗಗಳಿಂದ ಬಹುತೇಕ ಸಂಪೂರ್ಣವಾಗಿ ಸ್ವತಂತ್ರವಾಗಿತ್ತು. [[ಚೇರ ಸಾಮ್ರಾಜ್ಯ]]ವು ದಕ್ಷಿಣದಲ್ಲಿ [[ಆಲಪ್ಪುಳ]] ಮತ್ತು ಉತ್ತರದಲ್ಲಿ [[ಕಾಸರಗೋಡು]] ನಡುವಿನ ಮಲಬಾರ್ ಕರಾವಳಿ ಪ್ರದೇಶವನ್ನು ಆಳಿತು. ಇದು [[ಪಾಲಕ್ಕಾಡ್ ಕಣಿವೆ]], [[ಕೊಯಂಬತ್ತೂರು]], [[ಸೇಲಂ, ತಮಿಳುನಾಡು|ಸೇಲಂ]], ಮತ್ತು [[ಕೊಳ್ಳಿ ಬೆಟ್ಟಗಳು]] ಸೇರಿದಂತೆ. [[ಕೊಯಂಬತ್ತೂರು]] ಸುತ್ತಮುತ್ತಲಿನ ಪ್ರದೇಶವು [[ಸಂಗಮ್ ಅವಧಿ]]ಯಲ್ಲಿ ಸುಮಾರು 1ನೇ ಮತ್ತು 4ನೇ ಶತಮಾನ CE ನಡುವೆ ಚೇರರ ಆಳ್ವಿಕೆಯಲ್ಲಿತ್ತು, ಮತ್ತು ಇದು ಮಲಬಾರ್ ಕರಾವಳಿ ಮತ್ತು [[ತಮಿಳುನಾಡು]] ನಡುವಿನ ಪ್ರಮುಖ ವ್ಯಾಪಾರ ಮಾರ್ಗವಾದ ಪಾಲಕ್ಕಾಡ್ ಕಣಿವೆಗೆ ಪೂರ್ವ ಪ್ರವೇಶದ್ವಾರವಾಗಿ ಕಾರ್ಯನಿರ್ವಹಿಸಿತು.<ref name="Trade">{{cite news|last=Subramanian|first=T. S|title=Roman connection in Tamil Nadu|url=http://www.hindu.com/thehindu/thscrip/print.pl?file=2007012800201800.htm&date=2007/01/28/&prd=th|access-date=28 October 2011|newspaper=[[The Hindu]]|date=28 January 2007|url-status=live|archive-url=https://web.archive.org/web/20130919235748/http://www.hindu.com/thehindu/thscrip/print.pl?file=2007012800201800.htm&date=2007%2F01%2F28%2F&prd=th|archive-date=19 September 2013}}</ref> ಆದಾಗ್ಯೂ, ಪ್ರಸ್ತುತ ಕೇರಳ ರಾಜ್ಯದ ದಕ್ಷಿಣ ಪ್ರದೇಶವು (ತಿರುವನಂತಪುರ ಮತ್ತು ಆಲಪ್ಪುಳ ನಡುವಿನ ಕರಾವಳಿ ಪಟ್ಟಿ) [[ಆಯ್ ರಾಜವಂಶ]]ದ ಆಳ್ವಿಕೆಯಲ್ಲಿತ್ತು, ಇದು ಚೇರರಿಗಿಂತ [[ಮಧುರೈ]]ನ [[ಪಾಂಡ್ಯ ಸಾಮ್ರಾಜ್ಯ]]ಕ್ಕೆ ಹೆಚ್ಚು ಸಂಬಂಧ ಹೊಂದಿತ್ತು.<ref>KA Nilakanta Sastri</ref>
[[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟಸ್]], ಗ್ರೀಕ್ [[ನೆಸ್ಟೋರಿಯನ್ ಕ್ರಿಶ್ಚಿಯನ್|ನೆಸ್ಟೋರಿಯನ್]] ನಾವಿಕ,<ref>{{cite web|author=Roger Pearse |url=http://www.ccel.org/ccel/pearse/morefathers/files/cosmas_00_0_eintro.htm |title=Cosmas Indicopleustes, Christian Topography. Preface to the online edition |publisher=Ccel.org |date=5 July 2003 |access-date=20 April 2013}}</ref> ತನ್ನ ಪುಸ್ತಕ ಕ್ರಿಶ್ಚಿಯನ್ ಟೋಪೋಗ್ರಫಿಯಲ್ಲಿ,<ref>{{cite web|author=Roger Pearse |url=http://www.ccel.org/ccel/pearse/morefathers/files/cosmas_11_book11.htm |title=Cosmas Indicopleustes, Christian Topography (1897) pp. 358–373. Book 11 |publisher=Ccel.org |access-date=20 April 2013}}</ref> 550 ರಲ್ಲಿ ಮಲಬಾರ್ ಕರಾವಳಿಗೆ ಭೇಟಿ ನೀಡಿದ ಅವರು, ''ಮೇಲ್'' (ಮಲಬಾರ್ ಕರಾವಳಿ) ನಲ್ಲಿ ಕ್ರಿಶ್ಚಿಯನ್ ವಿಶ್ವಾಸಿಗಳ ಒಂದು ಸಣ್ಣ ವಸಾಹತು ಇರುವುದನ್ನು ಉಲ್ಲೇಖಿಸಿದ್ದಾರೆ. ಅವರು ಹೀಗೆ ಬರೆಯುತ್ತಾರೆ, "ತಬ್ರೋಪೇನ್ (ಸಿಲೋನ್) ದ್ವೀಪದಲ್ಲಿ, ಕ್ರಿಶ್ಚಿಯನ್ನರ ಚರ್ಚ್, ಪಾದ್ರಿಗಳು ಮತ್ತು ವಿಶ್ವಾಸಿಗಳು ಇದ್ದಾರೆ. ಅಂತೆಯೇ ಮೇಲ್ನಲ್ಲಿ, ಅಲ್ಲಿ ಮೆಣಸು ಬೆಳೆಯುತ್ತದೆ, ಮತ್ತು ಕಲ್ಲಿಯಾನ (ನಿಲ್ಲಕಲ್ನ ಕಲ್ಲಿಯಾನ್ಕಲ್) ಕೃಷಿ ಸಮುದಾಯದಲ್ಲಿ, ಪರ್ಷಿಯಾದಲ್ಲಿ 325 AD ನ ನೈಸಿಯಾ ಸುನ್ನಹಾಡೋಸ್ ಪ್ರಕಾರ ಪ್ರತಿಷ್ಠಿತ ಬಿಷಪ್ ಕೂಡ ಇದ್ದಾರೆ."<ref>Travancore Manual</ref>
ಮರುವಾನ್ ಸಪಿರ್ ಐಸೊ ಕೊಲ್ಲಂ ಬಂದರಿನ ಬಳಿ ಕ್ರಿಶ್ಚಿಯನ್ ಚರ್ಚ್ ಅನ್ನು ಸ್ಥಾಪಿಸಿದರು, ಇದಕ್ಕೆ ವೆನಾಡ್ ರಾಜ ಅಯ್ಯನಾಟಿಕಲ್ ದಾನ ನೀಡಿದರು. [[ತರಿಸಾಪ್ಳ್ಳಿ]] ಎಂದು ಕರೆಯಲ್ಪಡುವ ಚರ್ಚ್, ರಾಜನು ನೀಡಿದ [[ಕೊಲ್ಲಂ ತಾಮ್ರ ಫಲಕಗಳು|ಕೊಲ್ಲಂ ತಾಮ್ರ ಫಲಕ]] ಅನುದಾನವನ್ನು ಪಡೆಯಿತು.
ಕೊಲ್ಲಂ [[ಭಾರತೀಯ ಉಪಖಂಡ]]ದ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದಕ್ಕೆ ನೆಲೆಯಾಗಿದೆ.<ref>{{cite book |author=Jonathan Goldstein |title=The Jews of China |publisher=M. E. Sharpe |year=1999|isbn=9780765601049 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=Edward Simpson|author2=Kai Kresse|title=Struggling with History: Islam and Cosmopolitanism in the Western Indian Ocean|url=https://books.google.com/books?id=w0qHKA7zEaEC&pg=PA333|access-date=24 July 2012 |year=2008|publisher=Columbia University Press|isbn=978-0-231-70024-5|pages=333}}</ref><ref name="Kupferschmidt1987">{{cite book|author=Uri M. Kupferschmidt|title=The Supreme Muslim Council: Islam Under the British Mandate for Palestine|url=https://books.google.com/books?id=ChEVAAAAIAAJ&pg=PA458|access-date=25 July 2012|year=1987|publisher=Brill|isbn=978-90-04-07929-8|pages=458–459}}</ref><ref name="Raṇṭattāṇi2007">{{cite book|author=Husain Raṇṭattāṇi|title=Mappila Muslims: A Study on Society and Anti Colonial Struggles |url=https://books.google.com/books?id=xlb5BrabQd8C&pg=PA179|access-date=25 July 2012|year=2007|publisher=Other Books|isbn=978-81-903887-8-8|pages=179–}}</ref> ''[[ಕ್ವಿಸ್ಸತ್ ಶಕರ್ವತಿ ಫರ್ಮದ್]]'' ಪ್ರಕಾರ, [[ಕೊಡುಂಗಲ್ಲೂರು]], ಕೊಲ್ಲಂ, [[ಮದಾಯಿ]], [[ಬಾರ್ಕೂರು]], [[ಮಂಗಳೂರು]], [[ಕಾಸರಗೋಡು]], [[ಕಣ್ಣೂರು]], [[ಧರ್ಮದಂ]], [[ಕೊಯಿಲಾಂಡಿ|ಪಂಥಲಯಿನಿ]], ಮತ್ತು [[ಚಾಲಿಯಂ]] ಗಳಲ್ಲಿನ [[ಮಸೀದಿ|''ಮಸ್ಜಿದ್'']]ಗಳು [[ಮಲಿಕ್ ದೀನಾರ್]] ಯುಗದಲ್ಲಿ ನಿರ್ಮಿಸಲ್ಪಟ್ಟವು, ಮತ್ತು ಅವು [[ಭಾರತೀಯ ಉಪಖಂಡ]]ದ ಅತ್ಯಂತ ಹಳೆಯ ''ಮಸ್ಜಿದ್''ಗಳಲ್ಲಿ ಸೇರಿವೆ.<ref>Prange, Sebastian R. ''Monsoon Islam: Trade and Faith on the Medieval Malabar Coast.'' Cambridge University Press, 2018. 98.</ref> ಮಲಿಕ್ ದೀನಾರ್ [[ಕಾಸರಗೋಡು]] ಪಟ್ಟಣದ [[ತಲಾಂಗರ]]ದಲ್ಲಿ ನಿಧನರಾದರು ಎಂದು ನಂಬಲಾಗಿದೆ.<ref name="ch">Pg 58, Cultural heritage of Kerala: an introduction, A. Sreedhara Menon, East-West Publications, 1978</ref>
===ವೆನಾಡಿನ ರಾಜಧಾನಿ (9 ನೇ ನಿಂದ 12 ನೇ ಶತಮಾನಗಳು)===
{{see also|ಕೊಲ್ಲಂ ಬಂದರು}}
[[File:Map of Kampili kingdom.png|thumb|300px|1320 CE ನಲ್ಲಿ ದಕ್ಷಿಣ ಏಷ್ಯಾ]]
ಕೊಲ್ಲಂ ಬಂದರು, ನಂತರ ಕ್ವಿಲಾನ್ ಎಂದು ಕರೆಯಲ್ಪಟ್ಟಿತು, ಇದನ್ನು 825 ರಲ್ಲಿ ನೆಸ್ಟೋರಿಯನ್ ಕ್ರಿಶ್ಚಿಯನ್ನರು, [[ಮಾರ್ ಸಬೊರ್ ಮತ್ತು ಮಾರ್ ಪ್ರೋತ್]], ಅಯ್ಯನಾಡಿಕಲ್ ತಿರುವಡಿಕಲ್, ಸ್ವತಂತ್ರ ವೆನಾಡು ಅಥವಾ ಕ್ವಿಲಾನ್ ರಾಜ್ಯದ ರಾಜ, [[ಚೇರ ಸಾಮ್ರಾಜ್ಯ|ಚೇರ]] ಸಾಮ್ರಾಜ್ಯದ ಅಡಿಯಲ್ಲಿದ್ದ ಸಾಮಂತ, ಇವರ ಅನುಮತಿಯೊಂದಿಗೆ ಸ್ಥಾಪಿಸಿದರು.<ref>Kerala Charithram P.59 Sridhara Menon</ref><ref name="Travancore Manual page 244">V. Nagam Aiya (1906), [[Travancore State Manual]], page 244</ref>{{sfnp|Malekandathil|2010}}
ಮಾರ್ ಸಪೊರ್ ಐಸೊ ಅವರು ಬ್ಯಾಕರೆ (ತೆವಲಕರ) ಬಳಿಯ ಕೊಲ್ಲಂ (ಕೊರೆ-ಕೆ-ನಿ) ನ ಬಹುತೇಕ ಕಣ್ಮರೆಯಾದ ಒಳನಾಡಿನ ಬಂದರನ್ನು ಪುನರ್ನಿರ್ಮಿಸಬೇಕೆಂದು ಅವರ ಕೋರಿಕೆಯ ಬದಲಿಗೆ, ಅವರು ಕೊಲ್ಲಂ ಬಳಿ ಹೊಸ ಬಂದರನ್ನು ರಚಿಸುವಂತೆ ಚೇರ ರಾಜನಿಗೆ ಪ್ರಸ್ತಾಪಿಸಿದರು ಎಂದು ನಂಬಲಾಗಿದೆ. ಇದು ರೋಮನ್ನರು ಮತ್ತು ಗ್ರೀಕರಿಗೆ ನೆಲ್ಸಿಂಡಾ ಮತ್ತು ಟಿಂಡಿಸ್ ಎಂದು ಮತ್ತು ತಮಿಳರಿಗೆ ತೊಂಡಿ ಎಂದು ಕರೆಯಲ್ಪಡುತ್ತಿತ್ತು, ಇದು ಹಲವಾರು ಶತಮಾನಗಳಿಂದ ವ್ಯಾಪಾರವಿಲ್ಲದೆ ಇತ್ತು, ಏಕೆಂದರೆ 6 ನೇ ಶತಮಾನದಲ್ಲಿ [[ಪಲ್ಲವ ಸಾಮ್ರಾಜ್ಯ|ಪಲ್ಲವರು]] ಚೇರರನ್ನು ಆಕ್ರಮಿಸಿಕೊಂಡರು, ಇದರಿಂದಾಗಿ ಮಲಬಾರ್ ಕರಾವಳಿಯ ಮಸಾಲೆ ವ್ಯಾಪಾರವು ಕೊನೆಗೊಂಡಿತು. ಇದು ನೆಸ್ಟೋರಿಯನ್ನರಿಗೆ ಚೇರ ಸಾಮ್ರಾಜ್ಯದಲ್ಲಿ ಹಲವಾರು ದಶಕಗಳ ಕಾಲ ಉಳಿಯಲು ಮತ್ತು ಸಿರಿಯನ್ ಆರಾಧನೆಯನ್ನು ಆಧಾರವಾಗಿ ಸಂತ ಥಾಮಸ್ ಸಂಪ್ರದಾಯದಲ್ಲಿ ನಾಂಪೂತಿರಿ ವೈಷ್ಣವರು ಮತ್ತು ನಾಯರ್ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪರಿಚಯಿಸಲು ಅವಕಾಶ ಮಾಡಿಕೊಟ್ಟಿತು, ಇದು ಸಂಸ್ಕೃತ ಮತ್ತು ವೇದ ಪ್ರಾರ್ಥನೆಗಳನ್ನು ಬದಲಾಯಿಸದೆ, ತ್ರಿತ್ವದ ಸಿದ್ಧಾಂತಕ್ಕೆ ಆಧಾರವಾಗಿತ್ತು.<ref>History of Kollam city and Kollam Port [http://www.quilon.com/history.htm Quilon.com]</ref> ಅಯ್ಯನಾಡಿಕಲ್ ತಿರುವಡಿಕಲ್ ಅವರು ಮರುವಾನ್ ಸಪೊರ್ ಐಸೊಗೆ ಪ್ರಸ್ತುತಪಡಿಸಿದ [[ಥರಿಸಾಪ್ಳ್ಳಿ ಫಲಕಗಳು]] ಕ್ರಿಶ್ಚಿಯನ್ನರಿಗೆ ನಗರದಲ್ಲಿ ವಿದೇಶಿ ವ್ಯಾಪಾರದ ಮೇಲ್ವಿಚಾರಣೆಯ ಸವಲತ್ತು ಮತ್ತು ಕ್ವಿಲಾನ್ನ ವ್ಯಾಪಾರ ಮತ್ತು ಸಂಪತ್ತನ್ನು ಹೆಚ್ಚಿಸುವ ಉದ್ದೇಶದಿಂದ ತೂಕ ಮತ್ತು ಅಳತೆಗಳ ಮೇಲಿನ ನಿಯಂತ್ರಣವನ್ನು ನೀಡಿತು. [[ಹರ್ಮನ್ ಗುಂಡರ್ಟ್]] ಮರುವಾನ್ ಸಪಿರ್ ಐಸೊ ಅವರು ಥರಿಸ್ಸಪ್ಳ್ಳಿ ಚರ್ಚ್ ಅನ್ನು ನಿರ್ಮಿಸಲು ಮತ್ತು ಕೊಲ್ಲಂನಲ್ಲಿ [[ಮಣಿಗ್ರಾಮಂ]] ವ್ಯಾಪಾರ ಗಿಲ್ಡ್ ಅನ್ನು ಸಂಘಟಿಸಲು ಭೂಮಿಯನ್ನು ನೀಡಲಾಯಿತು ಎಂದು ಭಾವಿಸುತ್ತಾರೆ.<ref>{{cite book |last=Logan |first=William |title=Malabar Manual |publisher=Asian Educational Services |year=2000 |isbn=978-8120604469 |volume=2 |pages=cxxv–cxxvi, cxxxviii |chapter=Appendix XII (Collection of Deeds)}}</ref> {{sfnp|Malekandathil|2010}}<ref name="Sharma2010">{{cite book|author=Yogesh Sharma|title=Coastal Histories: Society and Ecology in Pre-modern India|url=https://books.google.com/books?id=FTTGWSme30YC|year=2010|publisher=Primus Books|page=78|isbn=978-93-80607-00-9}}</ref>
[[File:Quilon Syrian copper plates (849 AD) PLATE 3.jpg|thumb|'''ಕ್ವಿಲಾನ್ ಸಿರಿಯನ್ ತಾಮ್ರ ಫಲಕಗಳು (849 AD) PLATE 3''']]
ಹೀಗೆ ಮಲಯಾಳಂ ಯುಗ ಪ್ರಾರಂಭವಾಯಿತು, ಇದನ್ನು ನಗರದ ನಂತರ ಕೊಲ್ಲ ವರ್ಷಂ ಎಂದು ಕರೆಯಲಾಗುತ್ತದೆ, ಇದು 9 ನೇ ಶತಮಾನದಲ್ಲಿ ಕೊಲ್ಲಂನ ಮಹತ್ವವನ್ನು ಸೂಚಿಸುತ್ತದೆ.{{sfnp|Malekandathil|2010}} ಸಿರಾಫ್ನ ಪರ್ಷಿಯನ್ ವ್ಯಾಪಾರಿ ಸೊಲೇಮಾನ್ 9 ನೇ ಶತಮಾನದಲ್ಲಿ ಮಲಬಾರ್ಗೆ ಭೇಟಿ ನೀಡಿದನು ಮತ್ತು ಭಾರತದಲ್ಲಿ ಚೀನಾದಿಂದ ಪರ್ಷಿಯನ್ ಕೊಲ್ಲಿಗೆ ಹೋಗುವ ದಾರಿಯಲ್ಲಿ ಸರಕುಗಳ ಸಾಗಾಣಿಕೆಗಾಗಿ ಬೃಹತ್ ಚೀನೀ ಹಡಗುಗಳು ಬಳಸುವ ಏಕೈಕ ಬಂದರಾಗಿ ಕ್ವಿಲಾನ್ ಅನ್ನು ಕಂಡನು. ಕೊಲ್ಲಂನ ಆಡಳಿತಗಾರರು (ಹಿಂದೆ 'ದೇಸಿಂಗನಾಡು' ಎಂದು ಕರೆಯಲ್ಪಟ್ಟಿದ್ದರು) ಚೀನಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದರು ಮತ್ತು ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡರು. [[ಟ್ಯಾಂಗ್ ಸಾಮ್ರಾಜ್ಯ]] (618–913) ದಾಖಲೆಗಳ ಪ್ರಕಾರ,<ref>Travancore Manual, page 244</ref> 7 ನೇ ಶತಮಾನದ ಮೊದಲು ಕ್ವಿಲಾನ್ ಅವರ ಮುಖ್ಯ ಬಂದರಾಗಿತ್ತು. ಚೀನೀ ವ್ಯಾಪಾರವು ಸುಮಾರು 600 ರಲ್ಲಿ ಕಡಿಮೆಯಾಯಿತು ಮತ್ತು 13 ನೇ ಶತಮಾನದಲ್ಲಿ ಮತ್ತೆ ಪುನರುಜ್ಜೀವನಗೊಂಡಿತು. ಬಿಷಪ್ ಕ್ಯಾಟಲಾನಿ ಅವರ ''ಮಿರಾಬಿಲಿಯಾ ಡೆಸ್ಕ್ರಿಪ್ಟಾ'' ಕೊಲ್ಲಂನ ಜೀವನದ ವಿವರಣೆಯನ್ನು ನೀಡುತ್ತದೆ, ಅವರು ಅದನ್ನು ಭಾರತದ ಅತ್ಯಂತ ಹಳೆಯ ಕ್ಯಾಥೋಲಿಕ್ ಧರ್ಮಪ್ರಾಂತ್ಯವಾದ ಕೊಲ್ಲಂಗೆ ಕ್ಯಾಥೋಲಿಕ್ ಬಿಷಪ್ ಆಗಿ ನೋಡಿದರು. [[ಮಾರ್ಕೊ ಪೊಲೊ]] ನಗರಕ್ಕೆ ಭೇಟಿ ನೀಡುವ ಮೊದಲು ಅವರು 'ಇಂಡಿಯಾ ದಿ ಮೇಜರ್' ನಲ್ಲಿನ ಜೀವನದ ನಿಜ ಮತ್ತು ಕಾಲ್ಪನಿಕ ವಿವರಣೆಗಳನ್ನು ಸಹ ನೀಡುತ್ತಾರೆ.<ref>Mirabilia Descripta by Jordanus Catalani circa 1320–1336 (trans Hiracut Society, London)</ref> ಸುಲೈಮಾನ್ ಅಲ್-ತಾಜಿರ್, [[ಸ್ಥಾನು ರವಿ ವರ್ಮ]] (9 ನೇ ಶತಮಾನ CE) ಆಳ್ವಿಕೆಯಲ್ಲಿ ಕೇರಳಕ್ಕೆ ಭೇಟಿ ನೀಡಿದ ಪರ್ಷಿಯನ್ ವ್ಯಾಪಾರಿ, ಆ ಸಮಯದಲ್ಲಿ ಕೇರಳ ಮತ್ತು ಚೀನಾ ನಡುವೆ ಕೊಲ್ಲಂ ಬಂದರಿನ ಆಧಾರದ ಮೇಲೆ ವ್ಯಾಪಕವಾದ ವ್ಯಾಪಾರವಿತ್ತು ಎಂದು ದಾಖಲಿಸಿದ್ದಾರೆ.<ref>{{Cite book|title=India Charitram|last=Menon|first=A. Shreedhara|publisher=DC Books|year=2016|isbn=9788126419395|location=Kottayam|pages=219}}</ref>
=== ಕ್ಯಾಟಲನ್ ಅಟ್ಲಾಸ್ (1375) ನಲ್ಲಿ "ಕೊಲಂಬೊ" ಆಗಿ ಕೊಲ್ಲಂ ===
[[File:Sultan of Delhi (top) and King of Vijayanagar (bottom) in the Catalan Atlas of 1375.jpg|thumb|[[ದೆಹಲಿ ಸುಲ್ತಾನರು|ದೆಹಲಿಯ ಸುಲ್ತಾನ]] (ಮೇಲ್ಭಾಗ, ಧ್ವಜ: [[File:Sultan of Delhi Flag according to the Catalan Atlas (1375).png|15px]]) ಮತ್ತು ಕೆಳಭಾಗದಲ್ಲಿ "ಕೊಲಂಬೊದ ರಾಜ" (ಕೊಲ್ಲಂ) (ಧ್ವಜ: [[File:Flag_of_the_Kigdom_of_Colombo,_Catalan_Atlas_1375.png|15px]], ಅಲ್ಲಿ ಆರಂಭಿಕ [[ಸಂತ ಥಾಮಸ್ ಕ್ರಿಶ್ಚಿಯನ್ನರು|ಸಂತ ಥಾಮಸ್ ಕ್ರಿಶ್ಚಿಯನ್]] ಮತ್ತು 1329 ರಿಂದ [[ಜೋರ್ಡಾನ್ ಕ್ಯಾಟಲಾ|ಜೋರ್ಡಾನಸ್]] ಅಡಿಯಲ್ಲಿ ಕ್ಯಾಥೋಲಿಕ್ ಮಿಷನ್ ಇದ್ದ ಕಾರಣ ಕ್ರಿಶ್ಚಿಯನ್ ಎಂದು ಗುರುತಿಸಲಾಗಿದೆ)<ref name="VL4">{{cite journal |last1=Liščák |first1=Vladimír |title=Mapa mondi (Catalan Atlas of 1375), Majorcan cartographic school, and 14th century Asia |journal=International Cartographic Association |date=2017 |volume=1 |pages=4–5 |doi=10.5194/ica-proc-1-69-2018 |bibcode=2018PrICA...1...69L |url=https://www.proc-int-cartogr-assoc.net/1/69/2018/ica-proc-1-69-2018.pdf |doi-access=free }}</ref> ಸಮಕಾಲೀನ [[ಕ್ಯಾಟಲನ್ ಅಟ್ಲಾಸ್]] 1375 ರಲ್ಲಿ.<ref>{{cite book |last1=Massing |first1=Jean Michel |last2=Albuquerque |first2=Luís de |last3=Brown |first3=Jonathan |last4=González |first4=J. J. Martín |title=Circa 1492: Art in the Age of Exploration |date=1 January 1991 |publisher=Yale University Press |isbn=978-0-300-05167-4 |url=https://books.google.com/books?id=wMK-Ba0-RG4C&pg=PA30 |language=en}}</ref> ಸ್ಥಳದ ಹೆಸರುಗಳಲ್ಲಿ ಹಲವಾರು ನಿಖರವಾಗಿವೆ.<ref>{{cite book |title=Cartography between Christian Europe and the Arabic-Islamic World, 1100-1500: Divergent Traditions |date=17 June 2021 |publisher=BRILL |isbn=978-90-04-44603-8 |page=176 |url=https://books.google.com/books?id=eq0zEAAAQBAJ&pg=PA176 |language=en}}</ref> ದಕ್ಷಿಣ ರಾಜನ ಪಕ್ಕದಲ್ಲಿರುವ ಶೀರ್ಷಿಕೆ: "ಇಲ್ಲಿ ಕೊಲಂಬೊದ ರಾಜ, ಕ್ರಿಶ್ಚಿಯನ್, ಆಳ್ವಿಕೆ ನಡೆಸುತ್ತಾನೆ."<ref>{{cite journal |last1=Liščák |first1=Vladimír |title=Mapa mondi (Catalan Atlas of 1375), Majorcan cartographic school, and 14th century Asia |journal=International Cartographic Association |date=2017 |volume=1 |page=5 |doi=10.5194/ica-proc-1-69-2018 |bibcode=2018PrICA...1...69L |url=https://www.proc-int-cartogr-assoc.net/1/69/2018/ica-proc-1-69-2018.pdf |doi-access=free }}</ref>]]
13 ನೇ ಶತಮಾನ CE ಯಲ್ಲಿ, [[ಮರವರ್ಮನ್ ಕುಲಶೇಖರ ಪಾಂಡ್ಯನ್ I]], [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಆಡಳಿತಗಾರ, ವೆನಾಡಿನಲ್ಲಿ ಯುದ್ಧ ಮಾಡಿ ಕೊಲ್ಲಂ ನಗರವನ್ನು ವಶಪಡಿಸಿಕೊಂಡನು.<ref>KA Nilakanta Sastri, p197</ref> ಈ ನಗರವು 1375 CE ನ ಕ್ಯಾಟಲನ್ ಅಟ್ಲಾಸ್ನಲ್ಲಿ ಕೊಲಂಬೊ ಮತ್ತು ಕೊಲೊಬೊ ಎಂದು ಕಾಣಿಸಿಕೊಂಡಿದೆ. ನಕ್ಷೆಯು ಈ ನಗರವನ್ನು ಕ್ರಿಶ್ಚಿಯನ್ ನಗರವೆಂದು, ಕ್ರಿಶ್ಚಿಯನ್ ಆಡಳಿತಗಾರನಿಂದ ಆಳಲ್ಪಡುತ್ತಿದೆ ಎಂದು ಗುರುತಿಸುತ್ತದೆ.<ref name="VL4"/>
ರಾಜನ ಚಿತ್ರದ ಮೇಲಿನ ಪಠ್ಯವು ಹೇಳುತ್ತದೆ:
{{blockquote|''ಆಸಿ ಸೆನ್ಯೊರೆಜ ಲೊ ರೇ ಕೊಲೊಬೊ, ಕ್ರಿಸ್ಟಿಯಾ. ಪ್ರುವಿನ್ಸಿಯ ಡಿ ಕೊಲಂಬೊ''<br />(ಇಲ್ಲಿ ಲಾರ್ಡ್ ಕಿಂಗ್ ಕೊಲೊಬೊ, ಕ್ರಿಶ್ಚಿಯನ್, ಕೊಲಂಬೊ ಪ್ರಾಂತ್ಯ, ಆಳ್ವಿಕೆ ನಡೆಸುತ್ತಾನೆ).<ref name="VL4"/>}}
ಈ ನಗರವನ್ನು 825 ರಲ್ಲಿ ಮರುವಾನ್ ಸಪಿರ್ ಐಸೊ, ಪರ್ಷಿಯನ್ [[ಪೂರ್ವ ಸಿರಿಯಾಕ್ ಕ್ರಿಶ್ಚಿಯನ್]] ವ್ಯಾಪಾರಿ ಸ್ಥಾಪಿಸಿದರು, ಮತ್ತು ಇದನ್ನು [[ಸಂತ ಥಾಮಸ್ ಕ್ರಿಶ್ಚಿಯನ್ನರು]] ಆರಂಭದಲ್ಲಿಯೇ ಕ್ರಿಶ್ಚಿಯನ್ನರನ್ನಾಗಿ ಮಾಡಿದರು. 1329 CE ಯಲ್ಲಿ, [[ಪೋಪ್ ಜಾನ್ XXII]] ಕೊಲ್ಲಂ / ಕೊಲಂಬೊವನ್ನು ಭಾರತೀಯ ಉಪಖಂಡದ ಮೊದಲ ಮತ್ತು ಏಕೈಕ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯವನ್ನಾಗಿ ಸ್ಥಾಪಿಸಿದರು, ಮತ್ತು [[ಜೋರ್ಡಾನ್ ಕ್ಯಾಟಲಾ|ಕ್ಯಾಟಲೋನಿಯಾದ ಜೋರ್ಡಾನ್]] ಅನ್ನು, [[ಡೊಮಿನಿಕನ್ ಸನ್ಯಾಸಿ]], ಲ್ಯಾಟಿನ್ ಪಂಥದ ಧರ್ಮಪ್ರಾಂತ್ಯದ ಮೊದಲ ಬಿಷಪ್ ಆಗಿ ನೇಮಿಸಿದರು.<ref name="VL4" />
===ಪೋರ್ಚುಗೀಸ್, ಡಚ್ ಮತ್ತು ಬ್ರಿಟಿಷ್ ವ್ಯಾಪಾರ ಮತ್ತು ಪ್ರಭಾವಗಳು (16 ನೇ ನಿಂದ 18 ನೇ ಶತಮಾನಗಳು)===
[[File:Thambiran Vanakkam 1578.JPG|thumbnail|''[[ತಂಬಿರಾನ್ ವನಕ್ಕಂ]]'']]
[[File:Retrato de Afonso de Albuquerque (após 1545) - Autor desconhecido-cortado.png|thumb|ವೈಸ್ರಾಯ್ [[ಅಫೋನ್ಸೊ ಡಿ ಅಲ್ಬುಕ್ವೆರ್ಕ್]]]]
ಪೋರ್ಚುಗೀಸರು [[ಅನ್ವೇಷಣೆಯ ಯುಗ]]ದಲ್ಲಿ 1498 ರಲ್ಲಿ [[ಕಪ್ಪಾಡ್]] [[ಕೋಳಿಕೋಡ್]] ಗೆ ಆಗಮಿಸಿದರು, ಹೀಗಾಗಿ ಯುರೋಪ್ನಿಂದ ಭಾರತಕ್ಕೆ ನೇರ ಸಮುದ್ರ ಮಾರ್ಗವನ್ನು ತೆರೆದರು.<ref>DC Books, Kottayam (2007), A. Sreedhara Menon, A Survey of Kerala History</ref> ಅವರು 1502 ರಲ್ಲಿ ಕೊಲ್ಲಂನ ಥಂಗಸ್ಸೇರಿಯಲ್ಲಿ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದ ಮೊದಲ ಯುರೋಪಿಯನ್ನರು, ಇದು ಅವರ ಮೆಣಸಿನ ವ್ಯಾಪಾರದ ಕೇಂದ್ರವಾಯಿತು.<ref>{{Cite web|url=https://www.keralatourism.org/destination/thangasseri-kollam/296|title=Thangasseri, Kollam, Dutch Quilon, Kerala|website=Kerala Tourism}}</ref> ನಂತರ ಮೂರ್ಸ್/ಅರಬ್ಬರೊಂದಿಗಿನ ಯುದ್ಧಗಳಲ್ಲಿ, ತೆವಲಕರದ ಸಂತ ಥಾಮಸ್ ಸಂಪ್ರದಾಯದ ಪ್ರಾಚೀನ ಚರ್ಚ್ (ದೇವಾಲಯ) ನಾಶವಾಯಿತು. 1517 ರಲ್ಲಿ, ಪೋರ್ಚುಗೀಸರು ಥಂಗಸ್ಸೇರಿಯಲ್ಲಿ ಸೇಂಟ್ ಥಾಮಸ್ ಕೋಟೆಯನ್ನು ನಿರ್ಮಿಸಿದರು, ಅದು ನಂತರ ಡಚ್ಚರೊಂದಿಗಿನ ಯುದ್ಧಗಳಲ್ಲಿ ನಾಶವಾಯಿತು. 1661 ರಲ್ಲಿ, [[ಡಚ್ ಈಸ್ಟ್ ಇಂಡಿಯಾ ಕಂಪನಿ]] ನಗರವನ್ನು ವಶಪಡಿಸಿಕೊಂಡಿತು. ಹಳೆಯ ಪೋರ್ಚುಗೀಸ್ ಕೋಟೆಯ ಅವಶೇಷಗಳು, ನಂತರ ಡಚ್ಚರಿಂದ ನವೀಕರಿಸಲ್ಪಟ್ಟವು, ಥಂಗಸ್ಸೇರಿಯಲ್ಲಿ ಕಾಣಬಹುದು.
18 ನೇ ಶತಮಾನದಲ್ಲಿ, ಟ್ರಾವಂಕೋರ್ ಕೊಲ್ಲಂ ಅನ್ನು ವಶಪಡಿಸಿಕೊಂಡಿತು, ನಂತರ 1795 ರಲ್ಲಿ ಬ್ರಿಟಿಷರು ವಶಪಡಿಸಿಕೊಂಡರು.<ref>{{Cite web|url=https://kollamcity.in/|archiveurl=https://web.archive.org/web/20150602132809/http://kollamcity.in/about-kollam-city|url-status=usurped|title=Kollam City|archivedate=2 June 2015|website=Bebas88}}</ref> ಥಂಗಸ್ಸೇರಿ ಇಂದಿಗೂ ಆಂಗ್ಲೋ-ಭಾರತೀಯ ವಸಾಹತಾಗಿ ಉಳಿದಿದೆ, ಆದಾಗ್ಯೂ ಕೆಲವೇ ಆಂಗ್ಲೋ-ಭಾರತೀಯರು ಉಳಿದಿದ್ದಾರೆ. ಥಂಗಸ್ಸೇರಿಯಲ್ಲಿನ ಇನ್ಫ್ಯಾಂಟ್ ಜೀಸಸ್ ಚರ್ಚ್, ಹಳೆಯ ಪೋರ್ಚುಗೀಸ್-ನಿರ್ಮಿತ ಚರ್ಚ್,<ref>[http://www.ucanindia.in/news/new-proof-for-preportuguese-mission-in-kollam/23928/daily New proof for Pre-Portuguese mission in Kollam]</ref> ಪ್ರದೇಶದ ಪೋರ್ಚುಗೀಸ್ ಆಳ್ವಿಕೆಯ ಸ್ಮಾರಕವಾಗಿ ಉಳಿದಿದೆ.<ref>{{cite web|url=http://tourmet.com/thangassery-fort/ |title=Tourmet - Thangassery, Kollam |date=21 May 2013 |access-date=6 January 2014}}</ref><ref>{{cite web |url=http://indica.co.in/history-of-kollam#.UtZLhNKVO-0 |title=History of Kollam |access-date=15 January 2014 |archive-date=2 June 2015 |archive-url=https://web.archive.org/web/20150602133158/http://indica.co.in/history-of-kollam#.UtZLhNKVO-0 |url-status=dead }}</ref><ref>'Jornada' of Portuguese Bishop Dom Alexis Menezes 1599–1600AD</ref>
<gallery>
File:Quilon 1505 verbessert.jpg|1500 ರ ದಶಕದಲ್ಲಿ ಕೊಲ್ಲಂ
File:Quilon 1670 verbessert.jpg|1661 ರಲ್ಲಿ ಕೊಲ್ಲಂ ವಶಪಡಿಸಿಕೊಳ್ಳುವಿಕೆ
File:A view of Coylang Wellcome L0038178.jpg|1700 ರ ದಶಕದಲ್ಲಿ ಕೊಲ್ಲಂ
</gallery>
===ಕ್ವಿಲಾನ್ ಕದನ===
{{main|ಕ್ವಿಲಾನ್ ಕದನ}}
[[File:1756 Bellin Map of Kollam Fort, Kerala, India - Geographicus - Coylan-bellin-1756.jpg|thumb|1756 ರಲ್ಲಿ ಕೊಲ್ಲಂ ಕೋಟೆಯು ಪೋರ್ಚುಗೀಸ್ ಆಳ್ವಿಕೆಯಿಂದ ಡಚ್ಚರಿಗೆ ಸ್ಥಳಾಂತರಗೊಂಡ ನಂತರ]]
[[ಕ್ವಿಲಾನ್ ಕದನ]]ವು 1809 ರಲ್ಲಿ ಟ್ರಾವಂಕೋರ್ನ ಭಾರತೀಯ ಸಾಮ್ರಾಜ್ಯದ ಸೈನ್ಯದ ನಡುವೆ, ಆಗಿನ ದಳವ (ಪ್ರಧಾನ ಮಂತ್ರಿ) [[ವೇಲು ಥಂಪಿ ದಳವ]] ನೇತೃತ್ವದಲ್ಲಿ, ಮತ್ತು ಕ್ವಿಲಾನ್ನ [[ಕ್ಯಾಂಟನ್ಮೆಂಟ್ ಮೈದಾನ]]ದಲ್ಲಿ ಕರ್ನಲ್ ಚಾಲ್ಮರ್ಸ್ ನೇತೃತ್ವದ [[ಈಸ್ಟ್ ಇಂಡಿಯಾ ಕಂಪನಿ|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯ ನಡುವೆ ಹೋರಾಡಲಾಯಿತು. ಕದನವು ಕೇವಲ ಆರು ಗಂಟೆಗಳ ಕಾಲ ನಡೆಯಿತು<ref>{{cite book|url=https://books.google.com/books?id=YYlC_qF_eB0C&q=History+of+Travancore+by+P.+Shangoony+Menon&pg=PA6 |title=E-book:History of Travancore by P. Shangoony Menon |isbn=9788184650013 |access-date=2014-11-05|last1=David |first1=Maria A. |year=2009 |publisher=ISPCK }}</ref> ಮತ್ತು ಇದು ಕ್ಯಾಂಟನ್ಮೆಂಟ್ ಮೈದಾನದ ಬಳಿ ಇರುವ ಅವರ ಸೈನ್ಯದ ಸ್ಥಳದ ಮೇಲೆ ಈಸ್ಟ್ ಇಂಡಿಯಾ ಕಂಪನಿಯ ಆಕ್ರಮಣದ ಪರಿಣಾಮವಾಗಿತ್ತು. ಕಂಪನಿ ಪಡೆಗಳು ಯುದ್ಧವನ್ನು ಗೆದ್ದವು, ಆದರೆ ಯುದ್ಧದಲ್ಲಿ ಭಾಗವಹಿಸಿದ ಬಂಡುಕೋರರಿಗೆ ಕೋರ್ಟ್-ಮಾರ್ಷಲ್ ಮಾಡಿ ನಂತರ ಮೈದಾನದಲ್ಲಿ ಗಲ್ಲಿಗೇರಿಸಲಾಯಿತು.<ref name="History of Travancore">{{Cite news|url=https://www.thehindu.com/todays-paper/tp-features/tp-fridayreview/a-place-in-history/article3218611.ece|title=A place in history|newspaper=The Hindu |date=29 June 2006|via=www.thehindu.com}}</ref>
===ಟ್ರಾವಂಕೋರ್ ಆಳ್ವಿಕೆ===
18 ನೇ ಶತಮಾನದ ಆರಂಭದಲ್ಲಿ CE, [[ಟ್ರಾವಂಕೋರ್ ರಾಜಮನೆತನ]]ವು [[ಕಣ್ಣೂರು]] ಮೂಲದ [[ಕೊಲತುನಾಡು]] ರಾಜಮನೆತನ ಮತ್ತು ಪ್ರಸ್ತುತ [[ಮಲಪ್ಪುರಂ ಜಿಲ್ಲೆ]]ಯಲ್ಲಿರುವ [[ಪರಪ್ಪನಾಡ್]] ರಾಜಮನೆತನದಿಂದ ಕೆಲವು ಸದಸ್ಯರನ್ನು ದತ್ತು ತೆಗೆದುಕೊಂಡಿತು.<ref>Travancore State Manual</ref>
1755 ರಲ್ಲಿ [[ಪುರಕ್ಕಡ್]] ಕದನದಲ್ಲಿ [[ಕೋಳಿಕೋಡ್ ಇತಿಹಾಸ|ಕೋಳಿಕೋಡ್]] ನ ಪ್ರಬಲ [[ಜಾಮೋರಿನ್]] ಅನ್ನು ಸೋಲಿಸುವ ಮೂಲಕ ಟ್ರಾವಂಕೋರ್ ಕೇರಳದ ಅತ್ಯಂತ ಪ್ರಬಲ ರಾಜ್ಯವಾಯಿತು.<ref name="AHoT 162">{{cite book|last1=Shungoony Menon|first1=P.|title=A History of Travancore from the Earliest Times|date=1878|publisher=Higgin Botham & Co.|location=Madras|pages=[https://archive.org/details/ahistorytravanc00menogoog/page/n212 162]–164|url=https://archive.org/details/ahistorytravanc00menogoog|access-date=5 May 2016|language=en|format=pdf}}</ref> ಸರ್ಕಾರಿ ಕಾರ್ಯದರ್ಶಿ ಕಚೇರಿಯು 1830 ರ ದಶಕದವರೆಗೂ ಕೊಲ್ಲಂನಲ್ಲಿತ್ತು. ಇದನ್ನು [[ಸ್ವಾತಿ ತಿರುನಾಳ್ ರಾಮ ವರ್ಮ|ಸ್ವಾತಿ ತಿರುನಾಳ್]] ಆಳ್ವಿಕೆಯಲ್ಲಿ ತಿರುವನಂತಪುರಕ್ಕೆ ಸ್ಥಳಾಂತರಿಸಲಾಯಿತು.<ref>{{cite web|url=https://www.thenewsminute.com/article/short-history-kerala-secretariat-building-celebrates-150-years-111767 |title=A short history of the Kerala Secretariat as building celebrates 150 years |publisher=The NEWS Minute |date=5 November 2019 |access-date=6 November 2019}}</ref>
===ಕೊಲ್ಲಂ ಬಂದರು ಸಮುದ್ರ ತಳದಲ್ಲಿ ಉತ್ಖನನ===
[[File:Plan of Kollam 1850.jpg|thumb|1850 ರ ದಶಕದಲ್ಲಿ ಕೊಲ್ಲಂನ ಯೋಜನೆ]]
[[ಕೊಲ್ಲಂ ಬಂದರು]] ಆವರಣದಲ್ಲಿ ಫೆಬ್ರವರಿ 2014 ರಿಂದ ಉತ್ಖನನಗಳು ನಡೆಯುತ್ತಿವೆ. ತಂಡವು ಚೀನೀ ಪಿಂಗಾಣಿ ಮತ್ತು ನಾಣ್ಯಗಳು ಸೇರಿದಂತೆ ಹಲವಾರು ಪ್ರಾಚೀನ ಕಲಾಕೃತಿಗಳನ್ನು ಪತ್ತೆ ಮಾಡಿದೆ.<ref>{{cite web|url=http://www.thehindu.com/news/national/kerala/emergence-of-antiques-triggers-treasure-hunt-in-kollam/article5711850.ece |title=Emergence of antiques triggers treasure hunt in Kollam |work=The Hindu|date=21 February 2014 |access-date=11 January 2017}}</ref> ಪ್ಯಾಲೇಸ್ ಮ್ಯೂಸಿಯಂನೊಂದಿಗಿನ ಚೀನೀ ತಂಡ, ಕೇರಳ ಕೌನ್ಸಿಲ್ ಫಾರ್ ಹಿಸ್ಟೋರಿಕಲ್ ರಿಸರ್ಚ್ (KCHR) ನೊಂದಿಗೆ ಭಾರತೀಯ ತಂಡ, ಕೊಲ್ಲಂ ಮತ್ತು ಪ್ರಾಚೀನ ಚೀನಾ ನಡುವಿನ ವ್ಯಾಪಾರ ಸಂಪರ್ಕಗಳನ್ನು ತೋರಿಸುವ ಚೀನೀ ನಾಣ್ಯಗಳು ಮತ್ತು ಕಲಾಕೃತಿಗಳನ್ನು ಕಂಡುಹಿಡಿದಿದೆ.<ref>{{cite news|url=https://www.thehindu.com/news/national/kerala/from-china-on-a-coin-trail/article7192254.ece|date=2015-05-11|title=From China on a coin trail|access-date=2020-11-04|last=Pereira|first=Ignatius|work=The Hindu}}</ref>
==ಭೌಗೋಳಿಕತೆ==
{{Main|ಕೊಲ್ಲಂನ ಭೌಗೋಳಿಕತೆ}}
[[File:Kollam Canal, Jan 2016.jpg|thumb|[[ಕೊಲ್ಲಂ ಕಾಲುವೆ]] ಪರವೂರ್ ಬಳಿ|left]]
ಕೊಲ್ಲಂ ನಗರವು ಉತ್ತರಕ್ಕೆ [[ನೀಂದಕರ]] ಮತ್ತು [[ತ್ರಿಕ್ಕರುವ]] [[ಪಂಚಾಯತಿ ರಾಜ್ ಭಾರತ|ಪಂಚಾಯತ್]]ಗಳು, ದಕ್ಷಿಣಕ್ಕೆ [[ಮಯ್ಯನಾಡ್]], ಮತ್ತು ಪೂರ್ವಕ್ಕೆ [[ತ್ರಿಕ್ಕೋವಿಲ್ವಟ್ಟಂ]] ಮತ್ತು [[ಕೊಟ್ಟಂಕರ]], ಮತ್ತು ಪಶ್ಚಿಮಕ್ಕೆ ಲಕ್ಷದ್ವೀಪ ಸಮುದ್ರದಿಂದ ಸುತ್ತುವರೆದಿದೆ. ಅಷ್ಟಮುಡಿ ಸರೋವರವು ನಗರದ ಮಧ್ಯಭಾಗದಲ್ಲಿದೆ. ನಗರವು ತಿರುವನಂತಪುರದಿಂದ ಸುಮಾರು {{cvt|71|km}}, ಕೊಚ್ಚಿಯಿಂದ {{cvt|140|km}}, ಮತ್ತು [[ಕೋಳಿಕೋಡ್]] ನಿಂದ {{cvt|350|km}} ದೂರದಲ್ಲಿದೆ. [[ರಾಷ್ಟ್ರೀಯ ಜಲಮಾರ್ಗ 3]] ಮತ್ತು [[ಇತ್ತಿಕ್ಕರ ನದಿ]] ನಗರದ ಮೂಲಕ ಹಾದುಹೋಗುವ ಎರಡು ಪ್ರಮುಖ ಜಲಮಾರ್ಗಗಳಾಗಿವೆ. {{cvt|7.7|km|adj=on}} ಉದ್ದದ [[ಕೊಲ್ಲಂ ಕಾಲುವೆ]] ಪರವೂರ್ ಸರೋವರ ಮತ್ತು ಅಷ್ಟಮುಡಿ ಸರೋವರವನ್ನು ಸಂಪರ್ಕಿಸುತ್ತದೆ. ನಗರದ ಉಪನಗರಗಳ ಮೂಲಕ ಹರಿಯುವ ಮತ್ತೊಂದು ನದಿಯಾದ ಕಲ್ಲಡ ನದಿಯು ಅಷ್ಟಮುಡಿ ಸರೋವರಕ್ಕೆ ಸೇರುತ್ತದೆ, ಆದರೆ ಇತ್ತಿಕ್ಕರ ನದಿಯು [[ಪರವೂರ್ ಕಾಯಲ್]] ಗೆ ಹರಿಯುತ್ತದೆ. ಕಟ್ಟಕಾಯಲ್, ನಗರದಲ್ಲಿನ ಸಿಹಿನೀರಿನ ಸರೋವರ, ವಟ್ಟಕ್ಕಾಯಲ್ ಎಂಬ ಮತ್ತೊಂದು ಜಲಾಶಯವನ್ನು ಅಷ್ಟಮುಡಿ ಸರೋವರದೊಂದಿಗೆ ಸಂಪರ್ಕಿಸುತ್ತದೆ.<ref>{{cite web|url=http://www.thehindu.com/2004/09/20/stories/2004092005720300.htm |archive-url=https://archive.today/20140901102439/http://www.thehindu.com/2004/09/20/stories/2004092005720300.htm |url-status=dead |archive-date=1 September 2014 |title=A stream fading into historyg |date=20 September 2004 |work=[[The Hindu]] |access-date=23 January 2020}}</ref><ref>{{cite web |url=http://www.maruthadi.elisting.in/ |title=Maruthadi - Maruthadi.Elisting.in |access-date=23 January 2020 |archive-date=3 ನವೆಂಬರ್ 2016 |archive-url=https://web.archive.org/web/20161103234102/http://www.maruthadi.elisting.in/ |url-status=dead }}</ref><ref>{{cite web |url=http://www.docs.kerala.gov.in/index.php?option=com_docman&task=cat_view&gid=467&Itemid=2707&limitstart=100 |title=Water Resources - Government of Kerala |date=7 March 2015 |access-date=23 January 2020 |archive-date=3 November 2016 |archive-url=https://web.archive.org/web/20161103235948/http://www.docs.kerala.gov.in/index.php?option=com_docman&task=cat_view&gid=467&Itemid=2707&limitstart=100 |url-status=dead }}</ref>
ಮಾರ್ಚ್ 2016 ರಲ್ಲಿ, ''ಇಂಡಿಯಾಟೈಮ್ಸ್'' ಕೊಲ್ಲಂ ಅನ್ನು ಭೂಮಿಯ ಒಂಬತ್ತು ಅತ್ಯಂತ ಕಡಿಮೆ ಮಾಲಿನ್ಯಗೊಂಡ ನಗರಗಳಲ್ಲಿ ಒಂದಾಗಿ ಆಯ್ಕೆ ಮಾಡಿತು.<ref>{{cite web|url=http://www.indiatimes.com/culture/travel/9-of-the-least-polluted-cities-on-earth-you-could-consider-moving-to-251818.html |title=9 of the Least Polluted Cities on Earth You Could Consider Moving To |date=13 March 2016 |publisher=Indiatimes |access-date=21 March 2016}}</ref> ಕೊಲ್ಲಂ [[ಬುಕಿಂಗ್.ಕಾಮ್]] ನ ಪ್ರವಾಸಿಗರ ವಿಮರ್ಶಾ ಪ್ರಶಸ್ತಿಗಳ ಪ್ರಕಾರ 2020 ರ ವರ್ಷಕ್ಕೆ ಭಾರತದ ಅತ್ಯಂತ ಸ್ವಾಗತಾರ್ಹ ಸ್ಥಳಗಳಲ್ಲಿ ಒಂದಾಗಿದೆ.<ref>{{cite web|url=https://www.financialexpress.com/lifestyle/travel-tourism/for-2nd-year-in-row-kerala-tops-list-of-most-welcoming-places-report/1832102/ |title=For 2nd year in row, Kerala tops list of most welcoming places: Report |publisher=Financial Express |date=22 January 2020 |access-date=23 January 2020}}</ref>
ಕೊಲ್ಲಂ ಒಂದು ಪ್ರಾಚೀನ ವ್ಯಾಪಾರ ಪಟ್ಟಣವಾಗಿದೆ – ರೋಮನ್ನರು, ಚೀನಿಯರು, ಅರಬ್ಬರು ಮತ್ತು ಇತರ ಪೂರ್ವ ದೇಶದವರೊಂದಿಗೆ ವ್ಯಾಪಾರ ಮಾಡುತ್ತಿತ್ತು. ಬೈಬಲ್ನ ಕಾಲ ಮತ್ತು ಸೊಲೊಮನ್ ಆಳ್ವಿಕೆಯವರೆಗಿನ ಐತಿಹಾಸಿಕ ಉಲ್ಲೇಖಗಳಲ್ಲಿ ಈ ವಿವರಗಳನ್ನು ಉಲ್ಲೇಖಿಸಲಾಗಿದೆ, ಇದು ಅರೇಬಿಯನ್ ಸಮುದ್ರದ ಕೆಂಪು ಸಮುದ್ರದ ಬಂದರುಗಳೊಂದಿಗೆ ಸಂಪರ್ಕ ಹೊಂದಿದೆ (ಪ್ರಾಚೀನ ರೋಮನ್ ನಾಣ್ಯಗಳ ಪತ್ತೆಯಿಂದ ಬೆಂಬಲಿತವಾಗಿದೆ).<ref>{{cite web|title=The legendary beauty of Kollam|date=28 June 2023 |url=http://www.financialexpress.com/story-print/1159603}}</ref><ref>{{cite web|title=History of Kollam|url=http://paru.in/history-of-kollam|url-status=dead|archive-url=https://web.archive.org/web/20150602135640/http://paru.in/history-of-kollam|archive-date=2 June 2015}}</ref> [[ಅರ್ಯಂಕಾವು|ಅರ್ಯಂಕಾವು ಕಣಿವೆ]] ಮೂಲಕ [[ಸೆಂಗೊಟ್ಟೈ|ಶೆಂಕೊಟ್ಟಾ ಅಂತರ]]ದಲ್ಲಿ ಪ್ರಾಚೀನ ನಗರವನ್ನು ತಮಿಳುನಾಡಿಗೆ ಸಂಪರ್ಕಿಸುವ ಆಂತರಿಕ ವ್ಯಾಪಾರವೂ ಇತ್ತು. ಎತ್ತಿನಗಾಡಿಯ ಮೂಲಕ ಮೆಣಸಿನ ಒಳನಾಡಿನ ವ್ಯಾಪಾರ ಮತ್ತು [[ಆಲಪ್ಪುಳ]] ಮತ್ತು ಕೊಚ್ಚಿಯನ್ನು ಸಂಪರ್ಕಿಸುವ ಜಲಮಾರ್ಗಗಳ ಮೇಲಿನ ವ್ಯಾಪಾರವು ಇದು ಭಾರತದ ಆರಂಭಿಕ ಕೈಗಾರಿಕಾ ಪಟ್ಟಣಗಳಲ್ಲಿ ಒಂದಾಗಿ ಬೆಳೆಯಲು ಅನುವು ಮಾಡಿಕೊಟ್ಟ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಿತು. ನಂತರ ತಮಿಳುನಾಡಿಗೆ ಸ್ಥಾಪಿಸಲಾದ ರೈಲು ಸಂಪರ್ಕಗಳು ಇನ್ನೂ ಪ್ರಬಲವಾದ ವ್ಯಾಪಾರ ಸಂಪರ್ಕಗಳನ್ನು ಬೆಂಬಲಿಸಿದವು. ಸಮುದ್ರ ರಫ್ತುಗಳನ್ನು ಸಂಸ್ಕರಿಸುವ ಕಾರ್ಖಾನೆಗಳು ಮತ್ತು ಗೋಡಂಬಿ ಬೀಜಗಳ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಅದರ ವ್ಯಾಪಾರವನ್ನು ವಿಶ್ವದಾದ್ಯಂತ ವಿಸ್ತರಿಸಿತು.<ref>{{cite web|title=Kollam Tourism - Official Website|url=http://www.kollamtourism.com/history.html/|access-date=6 January 2014|archive-date=27 ಡಿಸೆಂಬರ್ 2013|archive-url=https://web.archive.org/web/20131227075259/http://www.kollamtourism.com/history.html|url-status=dead}}</ref>
{{Weather box
|location= ಕೊಲ್ಲಂ
|metric first= yes
|single line= yes
|width = auto
|temperature colour = pastel
|Jan high C= 31
|Feb high C= 31
|Mar high C= 32
|Apr high C= 32
|May high C= 31
|Jun high C= 29
|Jul high C= 29
|Aug high C= 29
|Sep high C= 29
|Oct high C= 30
|Nov high C= 29
|Dec high C= 30
|Jan low C= 23
|Feb low C= 23
|Mar low C= 25
|Apr low C= 26
|May low C= 25
|Jun low C= 24
|Jul low C= 24
|Aug low C= 24
|Sep low C= 24
|Oct low C= 24
|Nov low C= 24
|Dec low C= 23
|Jan rain mm= 18
|Feb rain mm= 26
|Mar rain mm= 53
|Apr rain mm= 147
|May rain mm= 268
|Jun rain mm= 518
|Jul rain mm= 381
|Aug rain mm= 248
|Sep rain mm= 209
|Oct rain mm= 300
|Nov rain mm= 208
|Dec rain mm= 51
|rain colour = green
|Jan rain days= 1
|Feb rain days= 2
|Mar rain days= 4
|Apr rain days= 8
|May rain days= 11
|Jun rain days= 21
|Jul rain days= 19
|Aug rain days= 16
|Sep rain days= 12
|Oct rain days= 12
|Nov rain days= 8
|Dec rain days= 3
|unit rain days= 0.1 mm
|source= [http://www.weather2travel.com/climate-guides/india/kerala/kollam.php Weather2Travel]
|date= May 2012
}}
==ಜನಸಂಖ್ಯಾ ವಿವರಗಳು==
=== ಜನಸಂಖ್ಯೆ ===
{{As of|2011|alt=2011 ರ ಭಾರತದ ಜನಗಣತಿಯ ಪ್ರಕಾರ,}}<ref name=census>{{Cite web|url=http://www.censusindia.net/results/data/ker_uatowns.PDF|title=Kerala: Population, Population in the age group 0-6 and literates by sex – Urban Agglomeration /Town : 2001 |archive-url=https://web.archive.org/web/20070927004314/http://www.censusindia.net/results/data/ker_uatowns.PDF |archive-date=27 September 2007 }}</ref> ಕೊಲ್ಲಂ ನಗರವು 349,033 ಜನಸಂಖ್ಯೆಯನ್ನು ಹೊಂದಿತ್ತು, ಪ್ರತಿ ಚದರ ಕಿಲೋಮೀಟರ್ಗೆ 5,400 ವ್ಯಕ್ತಿಗಳ ಸಾಂದ್ರತೆಯನ್ನು ಹೊಂದಿತ್ತು. ಲಿಂಗ ಅನುಪಾತ (ಪ್ರತಿ 1,000 ಪುರುಷರಿಗೆ ಮಹಿಳೆಯರ ಸಂಖ್ಯೆ) 1,112 ಆಗಿತ್ತು, ಇದು ರಾಜ್ಯದಲ್ಲಿ ಅತಿ ಹೆಚ್ಚಾಗಿದೆ. [[ಕೊಲ್ಲಂ ಜಿಲ್ಲೆ]]ಯು ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಕೊಲ್ಲಂ ನಗರವು ನಾಲ್ಕನೇ ಸ್ಥಾನದಲ್ಲಿದೆ. {{As of|2010}}, ಕೊಲ್ಲಂ ಸರಾಸರಿ ಸಾಕ್ಷರತಾ ಪ್ರಮಾಣವು 93.77% ಆಗಿತ್ತು,<ref>{{cite web|url=http://kollam.nic.in/edu.html |title=Kollam District |publisher=kollam.nic.in |access-date=24 June 2010}}</ref> ಇದು ರಾಷ್ಟ್ರೀಯ ಸರಾಸರಿ 74.04% ಕ್ಕಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತೆ 95.83% ಮತ್ತು ಮಹಿಳೆಯರದು 91.95%. ಕೊಲ್ಲಂನಲ್ಲಿ, 11% ಜನಸಂಖ್ಯೆಯು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಮೇ 2015 ರಲ್ಲಿ, [[ಕೇರಳ ಸರ್ಕಾರ]]ವು ತ್ರಿಕ್ಕಡವೂರು ಪಂಚಾಯತ್ ಅನ್ನು ವಿಲೀನಗೊಳಿಸುವ ಮೂಲಕ [[ಕೊಲ್ಲಂ ನಗರ ಸಭೆ|ಕೊಲ್ಲಂ ನಗರ ಸಭೆ]]ಯನ್ನು ವಿಸ್ತರಿಸಲು ನಿರ್ಧರಿಸಿತು. ವಿಲೀನದೊಂದಿಗೆ, ಈ ಪ್ರದೇಶವು {{cvt|73.03|km2}} ಆಗಿ ಮತ್ತು ಒಟ್ಟು ನಗರ ಜನಸಂಖ್ಯೆಯು 384,892 ಆಗುವ ನಿರೀಕ್ಷೆಯಿದೆ.<ref>{{cite news|url=http://www.thehindu.com/news/national/kerala/thrikadavur-becomes-part-of-kollam-city/article7300668.ece |title=Thrikadavur becomes part of Kollam city |work=The Hindu|date=9 June 2015 |access-date=11 June 2015}}</ref><ref>{{cite web |url=http://lsgkerala.in/thrikkadavoorpanchayat/general-information/ |title=Thrikadavur Panchayath |publisher=Thrikadavur Panchayath |access-date=11 June 2015 |archive-date=12 June 2015 |archive-url=https://web.archive.org/web/20150612055856/http://lsgkerala.in/thrikkadavoorpanchayat/general-information/ |url-status=dead }}</ref>
ಮಲಯಾಳಂ ಅತ್ಯಂತ ವ್ಯಾಪಕವಾಗಿ ಮಾತನಾಡುವ ಭಾಷೆ ಮತ್ತು ನಗರದ ಅಧಿಕೃತ ಭಾಷೆಯಾಗಿದೆ, ಆದರೆ [[ತಮಿಳು ಭಾಷೆ|ತಮಿಳು]] ನಗರದ ಕೆಲವು ವಿಭಾಗಗಳಲ್ಲಿ ಅರ್ಥವಾಗುತ್ತದೆ. ನಗರದಲ್ಲಿ ನೆಲೆಸಿರುವ [[ಆಂಗ್ಲೋ-ಭಾರತೀಯ]]ರ, [[ಕೊಂಕಣಿ ಜನರು|ಕೊಂಕಣಿ]] ಬ್ರಾಹ್ಮಣರ, [[ತೆಲುಗು ಜನರು|ತೆಲುಗು]] ಚೆಟ್ಟಿ, ಮತ್ತು [[ಬೆಂಗಾಲಿಗಳು|ಬೆಂಗಾಲಿ]] ವಲಸೆ ಕಾರ್ಮಿಕರ ಸಣ್ಣ ಸಮುದಾಯಗಳೂ ಇವೆ. ಆಡಳಿತದ ಸುಲಭತೆಗಾಗಿ, [[ಕೊಲ್ಲಂ ನಗರ ಸಭೆ]]ಯನ್ನು ಪ್ರತಿಯೊಂದಕ್ಕೂ ಸ್ಥಳೀಯ ವಲಯ ಕಚೇರಿಗಳೊಂದಿಗೆ ಆರು ವಲಯಗಳಾಗಿ ವಿಂಗಡಿಸಲಾಗಿದೆ.<ref>{{cite web |url=http://ksudp.org/index.php?option=com_content&view=article&id=268&Itemid=70 |title=Building Permit Management System -Kollam Corporation |access-date=16 December 2014 |archive-date=20 December 2014 |archive-url=https://web.archive.org/web/20141220101846/http://ksudp.org/index.php?option=com_content&view=article&id=268&Itemid=70 |url-status=dead }}</ref>
* ಕೇಂದ್ರ ವಲಯ (''[[ಕೊಲ್ಲಂ ಕ್ಯಾಂಟನ್ಮೆಂಟ್|ಕ್ಯಾಂಟನ್ಮೆಂಟ್]] ನಲ್ಲಿ ಪ್ರಧಾನ ಕಚೇರಿ''), [[ಕೊಲ್ಲಂ ನಗರ ಸಭೆ]]
* [[ಶಕ್ತಿಕುಲಂಗರ]] ವಲಯ, [[ಕೊಲ್ಲಂ ನಗರ ಸಭೆ]]
* [[ವಡಕ್ಕೇವಿಲ]] ವಲಯ, [[ಕೊಲ್ಲಂ ನಗರ ಸಭೆ]]
* [[ಕಿಳಿಕೊಲ್ಲೂರು]] ವಲಯ, [[ಕೊಲ್ಲಂ ನಗರ ಸಭೆ]]
* [[ಇರವಿಪುರಂ]] ವಲಯ, [[ಕೊಲ್ಲಂ ನಗರ ಸಭೆ]]
* ತ್ರಿಕ್ಕಡವೂರು ವಲಯ, [[ಕೊಲ್ಲಂ ನಗರ ಸಭೆ]]
2014 ರಲ್ಲಿ, ಮಾಜಿ ಕೊಲ್ಲಂ ಮೇಯರ್, ಪ್ರಸನ್ನ ಅರ್ನೆಸ್ಟ್, ಟ್ರಿವಾಂಡ್ರಮ್ ರಾಯಲ್ ರೋಟರಿ ಕ್ಲಬ್ ನಿಂದ [[ದಕ್ಷಿಣ ಭಾರತ]]ದ ಅತ್ಯುತ್ತಮ ಮಹಿಳಾ ಮೇಯರ್ ಆಗಿ ಆಯ್ಕೆಯಾದರು.<ref>{{cite web|url=http://www.thehindu.com/todays-paper/tp-national/tp-kerala/award-for-kollam-mayor/article5865568.ece |title=Award for Kollam Mayor |work=[[The Hindu]] |date=2014-04-03 |access-date=2014-06-06}}</ref>
=== ಧರ್ಮ ===
{{See also|ಕೊಲ್ಲಂ ಜಿಲ್ಲೆಯಲ್ಲಿ ಧರ್ಮ}}
{{bar box
|title=ಕೊಲ್ಲಂ ನಗರದಲ್ಲಿ ಧರ್ಮ (2011)<ref name="census2001">{{cite web
| title = Kollam City Census 2011 data
| publisher = Census2011
| url = http://www.census2011.co.in/census/city/461-kollam.html
| access-date =27 January 2016}}
</ref>
|titlebar=#Fcd116
|left1=ಧರ್ಮ
|right1=ಶೇಕಡಾವಾರು
|float=right
|bars=
{{bar percent|[[ಹಿಂದೂ ಧರ್ಮ]]|darkorange|56}}
{{bar percent|[[ಇಸ್ಲಾಂ]]|green|22}}
{{bar percent|[[ಕ್ರೈಸ್ತ ಧರ್ಮ]]|blue|21}}
{{bar percent|ಇತರೆ|black|1}}
|caption=ಧರ್ಮಗಳ ವಿತರಣೆ<br />
†<small>ಹೇಳದಿರುವುದು, [[ಸಿಖ್ ಧರ್ಮ]] (<0.01%), [[ಬೌದ್ಧ ಧರ್ಮ]] (<0.01%) ಸೇರಿದೆ.</small>
}}
[[File:Front Wide Anthonys Church Kollam Kerala Mar22 A7C 01676.jpg|thumb|ಸೇಂಟ್ ಆಂಟನಿ ಚರ್ಚ್, ವಡ್ಡಿ, 1910 ರಲ್ಲಿ ನಿರ್ಮಿಸಲಾಯಿತು]]
ಕೊಲ್ಲಂ ನಗರವು ಕೇರಳ ರಾಜ್ಯದ ಒಂದು ಸೂಕ್ಷ್ಮ ಪ್ರಪಂಚವಾಗಿದೆ, ಇದರ ನಿವಾಸಿಗಳು ವಿವಿಧ ಧಾರ್ಮಿಕ, ಜನಾಂಗೀಯ ಮತ್ತು ಭಾಷಾ ಗುಂಪುಗಳಿಗೆ ಸೇರಿದವರಾಗಿದ್ದಾರೆ.<ref name="A Survey of Kerala History">Menon, A Sreedhara; "A Survey of Kerala History"; DC Books, 1 January 2007 – History – pp 54–56 [https://books.google.com/books?id=FVsw35oEBv4C&q=A+Survey+Of+Kerala+History]</ref> ನಗರ ಮತ್ತು ಅದರ ಉಪನಗರಗಳಲ್ಲಿ ಹಲವಾರು ಪ್ರಾಚೀನ ದೇವಾಲಯಗಳು, ಶತಮಾನಗಳ-ಹಳೆಯ ಚರ್ಚುಗಳು ಮತ್ತು ಮಸೀದಿಗಳಿವೆ. ಕೊಲ್ಲಂ ಕೇರಳದಲ್ಲಿ ಹಿಂದೂ ಬಹುಸಂಖ್ಯಾತ ನಗರವಾಗಿದೆ. ಕೊಲ್ಲಂನ ಒಟ್ಟು ಜನಸಂಖ್ಯೆಯ 56.35% [[ಹಿಂದೂ]] ಸಮುದಾಯಕ್ಕೆ ಸೇರಿದೆ. ಇದಲ್ಲದೆ, ಕೇರಳದಲ್ಲಿ ಬಳಸಲಾಗುವ [[ಸೌರ ಕ್ಯಾಲೆಂಡರ್|ಸೌರ]] ಮತ್ತು [[ನಕ್ಷತ್ರ ಸಮಯ|ನಕ್ಷತ್ರ]] [[ಹಿಂದೂ ಕ್ಯಾಲೆಂಡರ್]] ಆದ [[ಕೊಲ್ಲಂ ಯುಗ]] (''ಮಲಯಾಳಂ ಯುಗ'' ಅಥವಾ ''ಕೊಲ್ಲವರ್ಷಂ'' ಅಥವಾ ''ಮಲಯಾಳಂ ಕ್ಯಾಲೆಂಡರ್'' ಅಥವಾ ''ಮಲಬಾರ್ ಯುಗ'' ಎಂದೂ ಕರೆಯಲ್ಪಡುತ್ತದೆ) 825 CE (ಪೊತು ವರ್ಷಂ) ನಲ್ಲಿ ಕೊಲ್ಲಂ ನಗರದಲ್ಲಿ ಪ್ರಾರಂಭವಾಯಿತು.<ref>{{cite web|title=Kollam Era|url=http://www.new1.dli.ernet.in/data1/upload/insa/INSA_1/20005b5f_93.pdf|url-status=dead|archive-url=https://web.archive.org/web/20150527163650/http://www.new1.dli.ernet.in/data1/upload/insa/INSA_1/20005b5f_93.pdf|archive-date=27 May 2015|access-date=30 December 2014|publisher=Indian Journal History of Science}}</ref><ref>{{Citation|author=Broughton Richmond|title=Time measurement and calendar construction|url=https://books.google.com/books?id=gUlmAAAAMAAJ|page=218|year=1956}}</ref><ref>{{Cite book|author=R. Leela Devi|url=https://books.google.com/books?id=pXpuAAAAMAAJ|title=History of Kerala|publisher=Vidyarthi Mithram Press & Book Depot|year=1986|page=408}}</ref>
[[ಮುಸ್ಲಿಂ]]ಗಳು ಕೊಲ್ಲಂನ ಒಟ್ಟು ಜನಸಂಖ್ಯೆಯ 22.05% ರಷ್ಟಿದ್ದಾರೆ. 2011 ರ ಜನಗಣತಿಯ ಪ್ರಕಾರ, ಕೊಲ್ಲಂನಲ್ಲಿ ಒಟ್ಟು ಮುಸ್ಲಿಂ ಜನಸಂಖ್ಯೆ 80,935 ಆಗಿದೆ.<ref>{{cite web|title=Population of Kollam City - Census 2011 data|url=http://www.census2011.co.in/census/city/461-kollam.html|access-date=25 March 2013|publisher=Census2011}}</ref> ದಕ್ಷಿಣ ಕೇರಳದಲ್ಲಿ ಕ್ರೈಸ್ತರಿಗಿಂತ ಮುಸ್ಲಿಮರು ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ ಏಕೈಕ ಜಿಲ್ಲೆ ಇದಾಗಿದೆ<ref>{{Cite web|url=https://www.census2011.co.in/data/religion/district/283-kollam.html|website=census2011.co.in |date=1 January 2011|title=Kollam District Religion Data - Hindu/Muslim|access-date=18 May 2026}}</ref>. ಕರ್ಬಲಾ ಮೈದಾನ ಮತ್ತು ಪಕ್ಕದ ಮಕಾನಿ ಮಸೀದಿಯು ನಗರದ ಈದ್ಗಾಹ್ ಆಗಿ ಕಾರ್ಯನಿರ್ವಹಿಸುತ್ತದೆ. ಕರುವಾದ 300 ವರ್ಷಗಳ-ಹಳೆಯ ಜುಮಾ-'ಅತ್ ಪಲ್ಲಿಯು ಸೂಫಿ ಸಂತ, ಸಯ್ಯದ್ ಅಬ್ದುರ್ ರಹಮಾನ್ ಜಿಫ್ರಿ ಅವರ ಅವಶೇಷಗಳನ್ನು ಹೊಂದಿದೆ.<ref>{{cite web|title=Important religious centres in Kollam|url=http://kollam.nic.in/reli.html|access-date=6 January 2014}}</ref><ref>{{cite web|title=Juma-Ath-Mosque|url=http://keralapilgrimcenters.com/muslim-juma-ath-palli-kollam-mosques/|archive-url=https://web.archive.org/web/20130608035033/http://keralapilgrimcenters.com/muslim-juma-ath-palli-kollam-mosques/|url-status=usurped|archive-date=8 June 2013|access-date=29 July 2014}}</ref>
ಕ್ರೈಸ್ತರು ಕೊಲ್ಲಂ ನಗರದ ಒಟ್ಟು ಜನಸಂಖ್ಯೆಯ 21.17% ರಷ್ಟಿದ್ದಾರೆ.<ref>{{cite web|title=Kollam City Census 2011 data|url=http://www.census2011.co.in/census/city/461-kollam.html|access-date=25 March 2013|publisher=Census2011}}</ref> [[ಕ್ವಿಲಾನ್ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]] (ಕೊಲ್ಲಂ) ಭಾರತದ ಮೊದಲ ಕ್ಯಾಥೋಲಿಕ್ ಧರ್ಮಪ್ರಾಂತ್ಯವಾಗಿದೆ. ಧರ್ಮಪ್ರಾಂತ್ಯವನ್ನು ಮೊದಲು [[ಪೋಪ್ ಜಾನ್ XXII]] 9 ಆಗಸ್ಟ್ 1329 ರಂದು ಸ್ಥಾಪಿಸಿದರು. ಇದನ್ನು 1 ಸೆಪ್ಟೆಂಬರ್ 1886 ರಂದು ಮರು-ಸ್ಥಾಪಿಸಲಾಯಿತು. ಧರ್ಮಪ್ರಾಂತ್ಯವು {{cvt|1,950|sqkm}} ವಿಸ್ತೀರ್ಣವನ್ನು ಒಳಗೊಂಡಿದೆ ಮತ್ತು 4,879,553 ಜನಸಂಖ್ಯೆಯನ್ನು ಹೊಂದಿದೆ, ಕ್ಯಾಥೋಲಿಕರ ಸಂಖ್ಯೆ 235,922 (4.8%). ಥಂಗಸ್ಸೇರಿಯಲ್ಲಿರುವ ಪ್ರಸಿದ್ಧ [[ಇನ್ಫ್ಯಾಂಟ್ ಜೀಸಸ್ ಕೆಥೆಡ್ರಲ್]], 400 ವರ್ಷಗಳ ಹಳೆಯದು, ಇದು [[ಕ್ವಿಲಾನ್ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]]ದ ಸಹ-ಕೆಥೆಡ್ರಲ್ ಆಗಿದೆ.<ref>{{cite web|title=Roman Catholic Diocese of Quilon|url=http://www.quilondiocese.com/index.php|access-date=25 March 2013|publisher=Kollam Diocese}}</ref> [[ಕೊಲ್ಲಂ-ಕೊಟ್ಟಾರಕ್ಕರ ಧರ್ಮಪ್ರಾಂತ್ಯ, ದಕ್ಷಿಣ ಭಾರತದ ಚರ್ಚ್|CSI ಕೊಲ್ಲಂ-ಕೊಟ್ಟಾರಕ್ಕರ ಧರ್ಮಪ್ರಾಂತ್ಯ]]ವು ದಕ್ಷಿಣ ಭಾರತದ ಚರ್ಚ್ನ ಇಪ್ಪತ್ನಾಲ್ಕು ಧರ್ಮಪ್ರಾಂತ್ಯಗಳಲ್ಲಿ ಒಂದಾಗಿದೆ.<ref>{{cite web|title=CSI Redraws Borders of Dioceses|url=http://www.newindianexpress.com/states/kerala/CSI-Redraws-Borders-of-Dioceses/2015/04/10/article2756962.ece|access-date=19 January 2016|publisher=The New Indian Express|archive-date=4 March 2016|archive-url=https://web.archive.org/web/20160304193822/http://www.newindianexpress.com/states/kerala/CSI-Redraws-Borders-of-Dioceses/2015/04/10/article2756962.ece|url-status=dead}}</ref> ಕೊಟ್ಟಾರಕ್ಕರಕ್ಕಾಗಿ [[ಪೆಂಟೆಕೋಸ್ಟಲ್ ಮಿಷನ್]]ನ ಕೇರಳ ಪ್ರಧಾನ ಕಚೇರಿಯು ಕೊಲ್ಲಂನಲ್ಲಿದೆ.
==ನಾಗರಿಕ ಆಡಳಿತ==
{{Main|ಕೊಲ್ಲಂ ನಗರ ಸಭೆ}}
{{See also|ಕೊಲ್ಲಂ ನಗರ ಪೊಲೀಸ್}}[[File:Location map India Kollam EN.svg|left|thumb|ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶದ ನಕ್ಷೆ]]
ಕೊಲ್ಲಂ ನಿಗಮದ ಪ್ರಸ್ತುತ ಮೇಯರ್ [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)|CPI(M)]] ನ ಅಡ್ವೊಕೇಟ್ [[ವಿ. ರಾಜೇಂದ್ರಬಾಬು]] ಆಗಿದ್ದಾರೆ.<ref>{{cite web|url=http://articles.economictimes.indiatimes.com/2015-11-18/news/68382329_1_cpi-ldf-udf |archive-url=https://web.archive.org/web/20151126072923/http://articles.economictimes.indiatimes.com/2015-11-18/news/68382329_1_cpi-ldf-udf |url-status=dead |archive-date=26 November 2015 |title=CPI(M) rides to power in five of six corporations in Kerala |work=The Economic Times|date=18 November 2015 |access-date=25 November 2015}}</ref>
===ನಗರ ರಚನೆ===
{{Main|ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ}}
ಒಟ್ಟು 1,187,158<ref name="Panchayath Level Statistics - Kollam(2011)">{{cite web | url = http://www.ecostat.kerala.gov.in/docs/pdf/reports/ps/pskollam2011.pdf | title = Kollam District Level Statistics 2011 | access-date = 2014-01-01 | year = 2012 | publisher = ecostat.kerala.gov.in | archive-date = 2 January 2014 | archive-url = https://web.archive.org/web/20140102192758/http://www.ecostat.kerala.gov.in/docs/pdf/reports/ps/pskollam2011.pdf | url-status = dead }}</ref> ನಗರ ಜನಸಂಖ್ಯೆ ಮತ್ತು 349,033 ನಗರ ನಿಗಮ ಜನಸಂಖ್ಯೆಯೊಂದಿಗೆ, ಕೊಲ್ಲಂ ರಾಜ್ಯದಲ್ಲಿ ನಾಲ್ಕನೇ ಅತಿ ಹೆಚ್ಚು ಜನಸಂಖ್ಯೆಯ ನಗರವಾಗಿದೆ ಮತ್ತು [[ಭಾರತದಲ್ಲಿ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರಸಮೂಹಗಳ ಪಟ್ಟಿ|ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ನಗರಸಮೂಹಗಳ ಪಟ್ಟಿಯಲ್ಲಿ]] 49 ನೇ ಸ್ಥಾನದಲ್ಲಿದೆ. {{As of|2011}}, ನಗರದ 154.59% ನಗರ ಬೆಳವಣಿಗೆಯ ಪ್ರಮಾಣವು ರಾಜ್ಯದಲ್ಲಿ ಎರಡನೇ ಅತಿ ಹೆಚ್ಚಾಗಿದೆ.<ref name="Census India-2011 - Kollam">{{cite web | url = http://www.censusindia.gov.in/2011-prov-results/paper2-vol2/data_files/kerala/Analysis_Census_Data.pdf | title = Analysis of Census Date |website=censusindia.gov.in}}</ref> ಕೊಲ್ಲಂನ ಮೆಟ್ರೋಪಾಲಿಟನ್ ಪ್ರದೇಶವು ಉಳಿಯಾಕೋವಿಲ್, [[ಅಡಿಚನಲ್ಲೂರು]], [[ಅಡಿನಾಡ್]], [[ಅಯನಿವೇಲಿಕುಲಂಗರ]], ಚವರ, [[ಚವರ ಥೆಕ್ಕುಂಭಾಗೊಮ್|ಚವರ ದಕ್ಷಿಣ]], [[ಎಲಂಪಲ್ಲೂರು]], [[ಇರವಿಪುರಂ]] (ಭಾಗ), [[ಕಲ್ಲೇಲಿಭಾಗೊಮ್]], [[ಕರುನಾಗಪಲ್ಲಿ]], ಕೊಲ್ಲಂ, ಕೊಟ್ಟಂಕರ, [[ಕುಲಶೇಖರಪುರಂ]], ಮಯ್ಯನಾಡ್, [[ಮೀನಾಡ್]], [[ನೆಡುಂಪನ]], [[ನೀಂದಕರ]], [[ಓಚಿರ]], [[ಪನಾಯಂ]], [[ಪನ್ಮನ]], ಪರವೂರ್, [[ಪೆರಿನಾಡ್]], [[ಪೂತಕ್ಕುಳಂ]], [[ತಾಳುತಲ]], [[ತೊಡಿಯೂರು]], ತ್ರಿಕ್ಕಡವೂರು, ತ್ರಿಕ್ಕರುವ, [[ತ್ರಿಕ್ಕೋವಿಲ್ವಟ್ಟಂ]], ಮತ್ತು [[ವಡಕ್ಕುಂತಲ]] ಸೇರಿವೆ.<ref>{{cite web|url=http://www.census2011.co.in/census/city/461-kollam.html| title=Kollam city population Census |publisher=census2011.co.in |access-date=16 December 2013}}</ref>[[File:British Residency in Asramam, Kollam.jpg|right|thumb|[[ಅಸ್ರಾಮಂ]] ನಲ್ಲಿನ [[ಬ್ರಿಟಿಷ್ ರೆಸಿಡೆನ್ಸಿ, ಕೊಲ್ಲಂ|ಬ್ರಿಟಿಷ್ ರೆಸಿಡೆನ್ಸಿ]], ಕೊಲ್ಲಂ.]]
ಕೇರಳ ಸರ್ಕಾರವು ಕೊಲ್ಲಂ ನಗರವನ್ನು "ಕೇರಳದ ಬಂದರು ನಗರ"ವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. [[ಮಾರುತಡಿ]]-[[ಇರವಿಪುರಂ]] ಪ್ರದೇಶದ ಪುನರುಜ್ಜೀವನ, ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಮನರಂಜನಾ ಯೋಜನೆಗಳಿಗೆ ಸೌಲಭ್ಯಗಳ ನಿರ್ಮಾಣವನ್ನು ಯೋಜನೆಯ ಭಾಗವಾಗಿ ಅಳವಡಿಸಲಾಗುವುದು.<ref name="Kollam - Port City Project - News published in Mathrubhumi Daily">{{cite web | url = http://i1324.photobucket.com/albums/u606/quilonsky/Mathrubhumi_zps52ba640e.png | title = Kollam - Port City Project | year = 2013}}</ref>
==ಆರ್ಥಿಕತೆ==
{{main|ಕೊಲ್ಲಂನ ಆರ್ಥಿಕತೆ}}
[[File:RP Mall, Kollam.jpg|thumb|[[ಆರ್ಪಿ ಮಾಲ್, ಕೊಲ್ಲಂ]]]]
[[File:Dreams Mall(Lulu Market), Kottiyam.jpg|thumb|ಡ್ರೀಮ್ಸ್ ಮಾಲ್ ([[ಲುಲು ಗ್ರೂಪ್ ಇಂಟರ್ನ್ಯಾಷನಲ್|ಲುಲು ಹೈಪರ್ ಮಾರ್ಕೆಟ್]]), [[ಕೊಲ್ಲಂ ಜಿಲ್ಲೆ]]ಯ ಕೊಟ್ಟಿಯಂ]]
[[File:Chinese Fishing Net Raising Birds Sunrise Ashtamudi Kollam Mar22 A7C 01784.jpg|right|thumb|ಕೊಲ್ಲಂ ನಗರದ ಅಷ್ಟಮುಡಿ ಸರೋವರದಲ್ಲಿ ದೊಡ್ಡ [[ಚೀನೀ ಮೀನುಗಾರಿಕಾ ಬಲೆ|ಚೀನೀ ಮೀನುಗಾರಿಕಾ ಬಲೆ]]]]
ಕೊಲ್ಲಂನ ನಗರ ಜೀವನವು ಕಳೆದ ದಶಕದಲ್ಲಿ ಬದಲಾಗಿದೆ. ಆರ್ಥಿಕ ಕಾರ್ಯಕ್ಷಮತೆ ಮತ್ತು [[ತಲಾ ಆದಾಯ]]ದ ವಿಷಯದಲ್ಲಿ, ಕೊಲ್ಲಂ ನಗರವು ಭಾರತದಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು [[ಕೇರಳ ನಗರಗಳ ಪಟ್ಟಿ|ಕೇರಳದಲ್ಲಿ ಮೂರನೇ ಸ್ಥಾನದಲ್ಲಿದೆ]].<ref>{{cite web |url=http://www.hindustantimes.com/newdelhi/delhi-ranked-23rd-in-mega-survey-of-53-indian-cities/article1-1358453.aspx |title=Delhi ranked 23rd in mega survey of 53 Indian cities |work=Hindustan Times |date=14 June 2015 |access-date=26 June 2015 |archive-date=26 June 2015 |archive-url=https://web.archive.org/web/20150626182426/http://www.hindustantimes.com/newdelhi/delhi-ranked-23rd-in-mega-survey-of-53-indian-cities/article1-1358453.aspx |url-status=dead }}</ref> ಕೊಲ್ಲಂ ಅತ್ಯುತ್ತಮ ರಫ್ತು ಹಿನ್ನೆಲೆಯ ನಗರವಾಗಿ ಪ್ರಸಿದ್ಧವಾಗಿದೆ.<ref>{{cite web |url=http://dgft.gov.in/exim/2000/AppANFS2015.pdf |title=Appendices and Aayat Niryat Forms |publisher=Government of India |access-date=1 July 2015 |archive-date=1 July 2015 |archive-url=https://web.archive.org/web/20150701150541/http://dgft.gov.in/exim/2000/AppANFS2015.pdf |url-status=dead }}</ref>
ಹೈನುಗಾರಿಕೆಯು ಸಾಕಷ್ಟು ಅಭಿವೃದ್ಧಿ ಹೊಂದಿದೆ. ನಗರದಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯವೂ ಇದೆ. ಕೊಲ್ಲಂ ಒಂದು ಪ್ರಮುಖ ಸಮುದ್ರ ಮತ್ತು ಬಂದರು ನಗರವಾಗಿದೆ. ಮೀನುಗಾರಿಕೆಯು ಜಿಲ್ಲೆಯ ಆರ್ಥಿಕತೆಯಲ್ಲಿ ಸ್ಥಾನ ಪಡೆದಿದೆ. ನಗರದ ಉಪನಗರಗಳಲ್ಲಿನ ನೀಂದಕರ ಮತ್ತು [[ಶಕ್ತಿಕುಲಂಗರ]] ಗ್ರಾಮಗಳು ಮೀನುಗಾರಿಕೆ ಪ್ರದೇಶಗಳಾಗಿವೆ. ಅಂದಾಜು 134,973 ಜನರು ಮೀನುಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚೆರಿಯಾಜೀಕ್ಕಲ್, ಆಲಪ್ಪಾಡ್, ಪಾಂಡರತುರುತು, ಪುತ್ತೆಂತುರ, [[ನೀಂದಕರ]], ಥಂಗಸ್ಸೇರಿ, [[ಇರವಿಪುರಂ]] ಮತ್ತು ಪರವೂರು 26 ಪ್ರಮುಖ ಮೀನುಗಾರಿಕಾ ಗ್ರಾಮಗಳಲ್ಲಿ ಎಂಟು. 24 ಒಳನಾಡಿನ ಮೀನುಗಾರಿಕಾ ಗ್ರಾಮಗಳಿವೆ. ಸರ್ಕಾರವು ನೀಂದಕರದಲ್ಲಿ ಮೀನುಗಾರಿಕಾ ಬಂದರನ್ನು ಸ್ಥಾಪಿಸಲು ಕ್ರಮಗಳನ್ನು ಪ್ರಾರಂಭಿಸಿದೆ. ಸರಾಸರಿ ಮೀನು ಸಂಪನ್ಮೂಲವು ವರ್ಷಕ್ಕೆ 85,275 ಟನ್ಗಳಷ್ಟು ಅಂದಾಜಿಸಲಾಗಿದೆ. ರಾಜ್ಯದ ಮೀನು ಸಂಪನ್ಮೂಲದ ಮೂರನೇ ಒಂದು ಭಾಗವು ಕೊಲ್ಲಂನಿಂದ ಬರುತ್ತದೆ. ಸುಮಾರು 3000 ಯಾಂತ್ರೀಕೃತ ದೋಣಿಗಳು ಮೀನುಗಾರಿಕಾ ಬಂದರಿನಿಂದ ಕಾರ್ಯನಿರ್ವಹಿಸುತ್ತಿವೆ. FFDA ಮತ್ತು VFFDA ಕ್ರಮವಾಗಿ ಸಿಹಿನೀರಿನ ಮೀನು ಸಾಕಣೆ ಮತ್ತು ಸೀಗಡಿ ಸಾಕಣೆಯನ್ನು ಪ್ರೋತ್ಸಾಹಿಸುತ್ತವೆ. ಇರವಿಪುರಂನಲ್ಲಿ 100 ಮನೆಗಳ ಮೀನುಗಾರಿಕಾ ಗ್ರಾಮವನ್ನು ನಿರ್ಮಿಸಲಾಗುತ್ತಿದೆ. [[ಅಯಿರಂತೆಂಗು]]ನಲ್ಲಿ ಸೀಗಡಿ ಸಾಕಣೆ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ, ಮತ್ತು ಜಲಚರ ಸಾಕಣೆದಾರರ ಅಗತ್ಯಗಳನ್ನು ಪೂರೈಸಲು ಹಲವಾರು ಹೊಸ ಮೊಟ್ಟೆಗಳ ಕಾರ್ಖಾನೆಗಳನ್ನು ಯೋಜಿಸಲಾಗಿದೆ. ಕೇರಳದ ಏಕೈಕ ಟರ್ಕಿ ಸಾಕಣೆ ಕೇಂದ್ರ ಮತ್ತು ಪ್ರಾದೇಶಿಕ ಕೋಳಿ ಸಾಕಣೆ ಕೇಂದ್ರವು [[ಕುರೀಪುಳ (ಪೆರಿನಾಡ್)|ಕುರೀಪುಳ]]ದಲ್ಲಿದೆ.<ref>{{Cite web |url=http://www.old.kerala.gov.in/dept_anihusbandry/modifi.htm |title=Department of Animal Husbandry - Kerala |access-date=13 January 2014 |archive-date=29 October 2014 |archive-url=https://web.archive.org/web/20141029102340/http://www.old.kerala.gov.in/dept_anihusbandry/modifi.htm |url-status=dead }}</ref>
ನಗರದಲ್ಲಿ ಎರಡು ಕೇಂದ್ರ ಸರ್ಕಾರಿ ಕೈಗಾರಿಕಾ ಕಾರ್ಯಾಚರಣೆಗಳಿವೆ, ಇಂಡಿಯನ್ ರೇರ್ ಅರ್ಥ್ಸ್, ಚವರ ಮತ್ತು [[ಪಾರ್ವತಿ ಮಿಲ್ಸ್ ಲಿಮಿಟೆಡ್|ಪಾರ್ವತಿ ಮಿಲ್ಸ್ ಲಿಮಿಟೆಡ್]], ಕೊಲ್ಲಂ. [[ಕುಂದರ]]ದಲ್ಲಿ ಕೇರಳ ಸೆರಾಮಿಕ್ಸ್ ಲಿಮಿಟೆಡ್, [[ಕುಂದರ]]ದಲ್ಲಿ ಕೇರಳ ಎಲೆಕ್ಟ್ರಿಕಲ್ ಮತ್ತು ಅಲೈಡ್ ಇಂಜಿನಿಯರಿಂಗ್ ಕಂಪನಿ, ಚವರದಲ್ಲಿ ಕೇರಳ ಪ್ರೇಮೋ ಪೈಪ್ ಕಾರ್ಖಾನೆ, ಚವರದಲ್ಲಿ ಕೇರಳ ಮಿನರಲ್ಸ್ ಅಂಡ್ ಮೆಟಲ್ಸ್ ಲಿಮಿಟೆಡ್ ಮತ್ತು ಕೊಲ್ಲಂನಲ್ಲಿ ಯುನೈಟೆಡ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಕೇರಳ ಸರ್ಕಾರಿ ಒಡೆತನದ ಕಂಪನಿಗಳಾಗಿವೆ. ಖಾಸಗಿ/ಸಹಕಾರಿ ವಲಯದ ಇತರ ಪ್ರಮುಖ ಕೈಗಾರಿಕೆಗಳೆಂದರೆ [[ಕುಂದರ]]ದಲ್ಲಿ ಅಲ್ಯುಮಿನಿಯಂ ಇಂಡಸ್ಟ್ರೀಸ್ ಲಿಮಿಟೆಡ್, ಕೊಲ್ಲಂನಲ್ಲಿ ಥಾಮಸ್ ಸ್ಟೀಫನ್ & ಕಂ, ಪರವೂರ್ನಲ್ಲಿ ಫ್ಲೋರ್ಕೋ ಮತ್ತು ಚಥನ್ನೂರಿನಲ್ಲಿ ಸಹಕಾರಿ ನೂಲುವ ಮಿಲ್.<ref>{{Cite web |url=http://www.kollamcorporation.gov.in/trade-commerce |title=Kollam - Trade & Commerce |access-date=10 January 2014 |archive-date=22 November 2017 |archive-url=https://web.archive.org/web/20171122192403/http://www.kollamcorporation.gov.in/trade-commerce |url-status=dead }}</ref>
[[File:Kollam technopark, Kundara.jpg|thumb|ಟೆಕ್ನೋಪಾರ್ಕ್ ಕೊಲ್ಲಂ]]
ಕುಂದರ, ಮುಲವನ, ಮತ್ತು ಚಥನ್ನೂರುಗಳಲ್ಲಿ ಚೀನಾ ಕ್ಲೇಯ ದೊಡ್ಡ ನಿಕ್ಷೇಪಗಳ ಜೊತೆಗೆ, ಅಷ್ಟಮುಡಿ ಸರೋವರದಲ್ಲಿ ಸುಣ್ಣದ ಚಿಪ್ಪುಗಳ ನಿಕ್ಷೇಪಗಳು ಮತ್ತು ಅಡಿಚನಲ್ಲೂರಿನಲ್ಲಿ ಬಾಕ್ಸೈಟ್ ನಿಕ್ಷೇಪಗಳಿವೆ.<ref>{{Cite web|url=http://www.kollam.gov.in/reso.html|title=resources - Kollam|access-date=10 January 2014|archive-date=18 January 2014|archive-url=https://web.archive.org/web/20140118081338/http://kollam.gov.in/reso.html|url-status=dead}}</ref>
"ವಿಶ್ವದ ಗೋಡಂಬಿ ರಾಜಧಾನಿ" ಎಂದು ಕರೆಯಲ್ಪಡುವ ಕೊಲ್ಲಂ ತನ್ನ ಸಾಂಪ್ರದಾಯಿಕ ಗೋಡಂಬಿ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ ಮತ್ತು 600 ಕ್ಕೂ ಹೆಚ್ಚು ಗೋಡಂಬಿ ಸಂಸ್ಕರಣಾ ಘಟಕಗಳಿಗೆ ನೆಲೆಯಾಗಿದೆ.<ref>{{cite news
| last = Pereira
| first = Ignatius
| title = Kerala's cashew processing industry in crisis
| newspaper = [[The Hindu]]
| date = 20 November 2016
| url = https://www.thehindu.com/news/national/kerala/Kerala%E2%80%99s-cashew-processing-industry-in-crisis/article16664972.ece
| access-date = 2026-08-04
}}</ref> ಪ್ರತಿ ವರ್ಷ, ಸುಮಾರು 800,000 ಟನ್ಗಳಷ್ಟು ಕಚ್ಚಾ ಗೋಡಂಬಿಗಳನ್ನು ಸಂಸ್ಕರಣೆಗಾಗಿ ನಗರಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ<ref>{{cite web|url=http://www.madhyamam.com/news/313464/141013 |language=ml |script-title=ml:കൊല്ലം തുറമുഖത്തെ കസ്റ്റംസ് ക്ളിയറന്സുകള് ഓണ്ലൈന് സംവിധാനത്തിലേക്ക് |access-date=2014-11-14 |url-status=dead |archive-url=https://web.archive.org/web/20141022170950/http://www.madhyamam.com/news/313464/141013 |archive-date=22 October 2014 }} Online Customs Clearance Facility for Kollam Port to be ready in a month</ref> ಮತ್ತು ಸರಾಸರಿ 130,000 ಟನ್ಗಳಷ್ಟು ಸಂಸ್ಕರಿಸಿದ ಗೋಡಂಬಿಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತದೆ.<ref>[http://www.thehindu.com/news/national/kerala/rise-in-earnings-from-cashew-kernel-exports/article3893095.ece] Rise in earnings from cashew kernel exports - The Hindu</ref> [[ಭಾರತದ ಗೋಡಂಬಿ ರಫ್ತು ಪ್ರೋತ್ಸಾಹಕ ಮಂಡಳಿ]] (CEPCI) 2020 ರ ವೇಳೆಗೆ ರಫ್ತುಗಳು 275,000 ಟನ್ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ, ಇದು ಪ್ರಸ್ತುತ ಅಂಕಿ ಅಂಶಕ್ಕಿಂತ 120 ಪ್ರತಿಶತದಷ್ಟು ಹೆಚ್ಚಳವಾಗಿದೆ.<ref>[http://www.business-standard.com/article/markets/cashew-body-sets-target-to-double-exports-by-2020-108122901044_1.html] CEPCI - Kollam</ref> [[ಕೇರಳ ರಾಜ್ಯ ಗೋಡಂಬಿ ಅಭಿವೃದ್ಧಿ ನಿಗಮ ಲಿಮಿಟೆಡ್]] (KSCDC) ಕೊಲ್ಲಂ ನಗರದ [[ಮುಂಡಕ್ಕಲ್]] ನಲ್ಲಿದೆ. ಕಂಪನಿಯು ಕೇರಳದಾದ್ಯಂತ 30 ಗೋಡಂಬಿ ಕಾರ್ಖಾನೆಗಳನ್ನು ಹೊಂದಿದೆ. ಇವುಗಳಲ್ಲಿ, 24 ಕೊಲ್ಲಂ ಜಿಲ್ಲೆಯಲ್ಲಿವೆ.<ref>{{cite web|url=http://www.cashewcorporation.com/Organization.php |title=:: KSCDC :: |publisher=Cashewcorporation.com |access-date=26 August 2014 |url-status=dead |archive-url=https://web.archive.org/web/20150215062231/http://cashewcorporation.com/Organization.php |archive-date=15 February 2015 }}</ref><ref>{{cite web|url=http://kollamcity.in/kerala-state-cashew-development-corporation |archive-url=https://archive.today/20140806070550/http://kollamcity.in/kerala-state-cashew-development-corporation |url-status=usurped |archive-date=6 August 2014 |title=:: The Kerala State Cashew Development Corporation Limited :: |publisher=Cashewcorporation.com |access-date=29 July 2014}}</ref>
ಕೊಲ್ಲಂ ಈ ವಲಯದಲ್ಲಿ ಹಲವಾರು ಕಂಪನಿಗಳನ್ನು ಹೊಂದಿರುವ ಭಾರತದ ಅನೇಕ ಸಮುದ್ರ ಆಹಾರ ರಫ್ತು ಕೇಂದ್ರಗಳಲ್ಲಿ ಒಂದಾಗಿದೆ. ಇವುಗಳಲ್ಲಿ ಹೆಚ್ಚಿನವು ನಗರದ [[ಮಾರುತಡಿ]], [[ಶಕ್ತಿಕುಲಂಗರ]], [[ಕವನಾಡ್]], [[ನೀಂದಕರ]], [[ಅಸ್ರಾಮಂ]], [[ಕಿಳಿಕೊಲ್ಲೂರು]], [[ತಿರುಮುಲ್ಲವಾರುಂ|ತಿರುಮುಲ್ಲವಾರಂ]] ಮತ್ತು [[ಉಳಿಯಾಕೋವಿಲ್]] ಪ್ರದೇಶಗಳಲ್ಲಿ ನೆಲೆಗೊಂಡಿವೆ.<ref>[http://www.keralaexporters.com/categories/food/] Kerala Exporters</ref><ref>{{cite web |url=http://www.mpeda.com/exporters/IQF/ExportersOtherMarineProducts.htm |title=Other Items |access-date=2014-11-17 |url-status=dead |archive-url=https://web.archive.org/web/20160304043858/http://www.mpeda.com/exporters/IQF/ExportersOtherMarineProducts.htm |archive-date=4 March 2016}} Kollam - Marine Food Exporters</ref> ಕ್ಯಾಪಿಥಾನ್ಸ್, ಕಿಂಗ್ಸ್ ಮರೀನ್ ಎಕ್ಸ್ಪೋರ್ಟರ್ಸ್, ಇಂಡಿಯಾ ಫುಡ್ ಎಕ್ಸ್ಪೋರ್ಟ್ಸ್ ಮತ್ತು ಓಷಿಯಾನಿಕ್ ಫಿಶರೀಸ್ ಸಮುದ್ರ ಆಹಾರ ರಫ್ತುದಾರರಿಗೆ ಉದಾಹರಣೆಗಳಾಗಿವೆ.<ref>[http://e-mpeda.nic.in/registration/Exporter_Item.aspx?pcode=05&product=Live%20other%20than%20ornamental%20fish] {{Webarchive|url=https://web.archive.org/web/20141209205334/http://e-mpeda.nic.in/registration/Exporter_Item.aspx?pcode=05&product=Live%20other%20than%20ornamental%20fish|date=9 December 2014}} Registered Kerala Exporters</ref>
ಕೊಲ್ಲಂನ [[ಅಷ್ಟಮುಡಿ ಸರೋವರ]]ದ ಚಿಪ್ಪು ಮೀನುಗಾರಿಕೆಯು ಭಾರತದಲ್ಲಿ ಮೊದಲ [[ಸಮುದ್ರ ಸ್ಟೀವರ್ಡ್ಶಿಪ್ ಕೌನ್ಸಿಲ್]] (MSC) ಪ್ರಮಾಣೀಕೃತ ಮೀನುಗಾರಿಕೆಯಾಗಿದೆ.<ref>{{cite web|url=http://www.icar.org.in/en/node/8346|title=Ashtamudi short-neck clam fisheries becomes India's first MSC certified fisheries|date=2014-11-05|publisher=[[Indian Council of Agricultural Research]]|access-date=2015-05-16}}</ref>
==ಸಂಸ್ಕೃತಿ==
ಕೊಲ್ಲಂ ಫೆಸ್ಟ್ ಕೊಲ್ಲಂನ ಸ್ವಂತ ವಾರ್ಷಿಕ ಹಬ್ಬವಾಗಿದ್ದು, ಹೆಚ್ಚಾಗಿ ಕೇರಳೀಯರನ್ನು ಆಕರ್ಷಿಸುತ್ತದೆ, ಆದರೆ ನೂರಾರು ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಕೊಲ್ಲಂಗೆ ಆಕರ್ಷಿಸುತ್ತದೆ. ಕೊಲ್ಲಂ ಫೆಸ್ಟ್ನ ಮುಖ್ಯ ಸ್ಥಳವು ಐತಿಹಾಸಿಕ ಮತ್ತು ಬೃಹತ್ ಅಶ್ರಮಂ ಮೈದಾನವಾಗಿದೆ. ಕೊಲ್ಲಂ ಫೆಸ್ಟ್ ಕೊಲ್ಲಂನ ಸಹಿ ಕಾರ್ಯಕ್ರಮವಾಗಿದೆ. ಇದು ಕೊಲ್ಲಂನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ, ಪ್ರವಾಸೋದ್ಯಮ ಸಾಮರ್ಥ್ಯ ಮತ್ತು ಹೊಸ ಉದ್ಯಮಗಳಲ್ಲಿನ ಹೂಡಿಕೆಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತದೆ.<ref>{{cite web|title=Kollam Fest 10 November 2011|url=http://thiraseela.com/static/festivals/Kollam-Fest-2011.php|access-date=3 March 2016|publisher=Thiraseela.com}}</ref>
[[ಕೊಲ್ಲಂ ಪೂರಂ]], [[ಅಸ್ರಾಮಂ ಶ್ರೀ ಕೃಷ್ಣ ಸ್ವಾಮಿ ದೇವಾಲಯ]] ಹಬ್ಬದ ಭಾಗವಾಗಿದೆ, ಇದನ್ನು ಸಾಮಾನ್ಯವಾಗಿ 15 ಏಪ್ರಿಲ್ ರಂದು ನಡೆಸಲಾಗುತ್ತದೆ, ಆದರೆ ಸಾಂದರ್ಭಿಕವಾಗಿ 16 ಏಪ್ರಿಲ್ ರಂದು ನಡೆಸಲಾಗುತ್ತದೆ. ಪೂರಂ ಅನ್ನು ಅಶ್ರಮಂ ಮೈದಾನದಲ್ಲಿ ನಡೆಸಲಾಗುತ್ತದೆ.
[[ರಾಷ್ಟ್ರಪತಿಗಳ ಟ್ರೋಫಿ ದೋಣಿ ಪಂದ್ಯ]] (PTBR) ಕೊಲ್ಲಂನ ಅಷ್ಟಮುಡಿ ಸರೋವರದಲ್ಲಿ ನಡೆಯುವ ವಾರ್ಷಿಕ ರೆಗಟ್ಟಾ ಆಗಿದೆ. ಈ ಕಾರ್ಯಕ್ರಮವನ್ನು ಸೆಪ್ಟೆಂಬರ್ 2011 ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಉದ್ಘಾಟಿಸಿದರು.<ref>{{cite web|title=presidents trophy boat race|url=http://presidentstrophy.gov.in/|access-date=20 April 2013|publisher=Presidentstrophy.gov.in}}{{Dead link|date=June 2025 |bot=InternetArchiveBot |fix-attempted=yes }}</ref><ref>{{cite web|date=24 October 2016|title=President's Trophy boat race on November 1|url=http://www.thehindu.com/news/national/kerala/presidents-trophy-boat-race-on-nov-1/article9260279.ece|access-date=20 April 2013|work=The Hindu}}</ref>
==ಸಾರಿಗೆ==
{{Main|ಕೊಲ್ಲಂನಲ್ಲಿ ಸಾರಿಗೆ}}
===ರಸ್ತೆ===
ಸರ್ಕಾರಿ ಒಡೆತನದ [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)]] ಮತ್ತು ಖಾಸಗಿ ಬಸ್ ನಿರ್ವಾಹಕರು ಕೊಲ್ಲಂ ಅನ್ನು ಸಂಪರ್ಕಿಸುವ ಅಂತರರಾಜ್ಯ ಮತ್ತು ಅಂತರಾಷ್ಟ್ರೀಯ ಬಸ್ ಸೇವೆಗಳನ್ನು ನಡೆಸುತ್ತಾರೆ. ನಗರದಲ್ಲಿ ಮುಖ್ಯವಾಗಿ 3 ಬಸ್ ನಿಲ್ದಾಣಗಳಿವೆ - [[ಕೊಲ್ಲಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ]], [[ಅಂಡಮುಕ್ಕಂ ನಗರ ಬಸ್ ನಿಲ್ದಾಣ|ಅಂಡಮುಕ್ಕಂ ನಗರ ಬಸ್ ನಿಲ್ದಾಣ]], ಮತ್ತು [[ಥಂಗಸ್ಸೇರಿ ಬಸ್ ಟರ್ಮಿನಲ್]].<ref>{{cite web|url=http://timesofindia.indiatimes.com/city/thiruvananthapuram/thiruvananthapuram-ksrtc-executive-directors-in-charge-of-zones/articleshow/56403671.cms| title=Thiruvananthapuram: KSRTC executive directors in-charge of zones |work=The Times of India|date=8 January 2017 |access-date=9 January 2017}}</ref><ref>{{cite web|url=http://www.keralapwd.gov.in/getPage.php?page=NH%20in%20Kerala&pageId=301|title=National Highways in Kerala|publisher=Kerala PWD|access-date=9 August 2016|archive-date=16 August 2016|archive-url=https://web.archive.org/web/20160816023351/http://www.keralapwd.gov.in/getPage.php?page=NH%20in%20Kerala&pageId=301|url-status=dead}}</ref>
{{Multiple image
| align = center
| direction = horizontal
| image1 = Dalavapuram bridgea.jpg
| caption1 = ಕೊಲ್ಲಂ ನಗರದ ಬಳಿಯ [[ಚವರ ಥೆಕ್ಕುಂಭಾಗೊಮ್]] ಸೇತುವೆ - ಈ ಸೇತುವೆಯು ಅಸ್ತಿತ್ವದಲ್ಲಿರುವ ದೋಣಿ ಸೇವೆಗಳ ಜೊತೆಗೆ ಥೆಕ್ಕುಂಭಾಗೊಮ್ ಜನರಿಗೆ ಕೊಲ್ಲಂ ನಗರದೊಂದಿಗೆ ಹೊಸ ಸಂಪರ್ಕ ಮಾರ್ಗವನ್ನು ನೀಡಿದೆ.
| image2 = Kollam Bypass, Feb 2020.jpg
| caption2 = [[ಕೊಲ್ಲಂ ಬೈಪಾಸ್]] - {{cvt|13.141|km|adj=on}} ಉದ್ದದ ಕೊಲ್ಲಂ ಬೈಪಾಸ್ ಯೋಜನೆಯನ್ನು 1975 ರಲ್ಲಿ ಯೋಜಿಸಲಾಗಿತ್ತು ಆದರೆ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಕೆಲಸ ವಿಳಂಬವಾಯಿತು.
| image3 = KSRTC Bus Station, Kollam.jpg
| caption3 = [[ಕೊಲ್ಲಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ]] ಪ್ರಸಿದ್ಧ ಅಷ್ಟಮುಡಿ ಸರೋವರದ ದಡದಲ್ಲಿದೆ. ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಒಂದಾಗಿದ್ದು, ಇದು ಇನ್ನೂ ನವೀಕರಣಕ್ಕಾಗಿ ಕಾಯುತ್ತಿದೆ.
| image4 = Traffic Thevally Bridge Kollam Kerala Mar22 A7C 01797.jpg
| caption4 = ಥೇವಳ್ಳಿಯನ್ನು ಕೊಟ್ಟಯತುಕಡವಿಗೆ ಸಂಪರ್ಕಿಸುವ ಥೇವಳ್ಳಿ ಸೇತುವೆಯ ಮೇಲೆ ಸಂಚಾರ, [[ರಾಷ್ಟ್ರೀಯ ಜಲಮಾರ್ಗ 3]], ಅಷ್ಟಮುಡಿ ಸರೋವರದ ಮೇಲೆ
| total_width =
| alt1 =
}}
===ರೈಲು===
{{see also|ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ}}
[[File:Main terminal of Kollam Junction railway station, Jan 2017.jpg|right|thumb|[[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ]]ದ ಮುಖ್ಯ ಟರ್ಮಿನಲ್]]
[[File:Kollam Railway.jpg|thumb|ಕೊಲ್ಲಂ ರೈಲ್ವೇ ನಿರ್ಮಾಣದಲ್ಲಿದೆ]]
{{rws|ಕೊಲ್ಲಂ ಜಂಕ್ಷನ್}} ಕೇರಳದಲ್ಲಿ ಎರಡನೇ ಅತಿದೊಡ್ಡ ರೈಲ್ವೇ ನಿಲ್ದಾಣವಾಗಿದ್ದು, ಒಟ್ಟು 6 ವೇದಿಕೆಗಳು ಮತ್ತು 17 ರೈಲು ಹಳಿಗಳನ್ನು ಹೊಂದಿದೆ. ಕೊಲ್ಲಂ ನಗರದ ಇತರ ರೈಲ್ವೇ ನಿಲ್ದಾಣಗಳೆಂದರೆ [[ಇರವಿಪುರಂ ರೈಲ್ವೇ ನಿಲ್ದಾಣ|ಇರವಿಪುರಂ]] ಮತ್ತು [[ಕಿಳಿಕೊಲ್ಲೂರು ರೈಲ್ವೇ ನಿಲ್ದಾಣ|ಕಿಳಿಕೊಲ್ಲೂರು]]. ಕೊಲ್ಲಂ ಜಂಕ್ಷನ್ 1180.5 ಮೀಟರ್ (3873 ಅಡಿ) ಅಳತೆಯ ವಿಶ್ವದ ಮೂರನೇ ಅತಿ ಉದ್ದದ ರೈಲ್ವೇ ವೇದಿಕೆಯನ್ನು ಹೊಂದಿದೆ.<ref>{{cite news |url=https://www.independent.co.uk/travel/asia/west-bengal-tea-plantations-and-other-rajera-relics-9835426.html |title=West Bengal: tea plantations and other Raj-era relics|access-date=3 April 2019}}</ref>
{|class="wikitable"
|+ಕೊಲ್ಲಂನಲ್ಲಿ ರೈಲ್ವೇ ನಿಲ್ದಾಣಗಳು
!ಕ್ರ.ಸಂ.
!ನಿಲ್ದಾಣದ ಹೆಸರು
!ವೇದಿಕೆಗಳು
!ಪ್ರದೇಶ
|-
|1
|[[ಇರವಿಪುರಂ ರೈಲ್ವೇ ನಿಲ್ದಾಣ|ಇರವಿಪುರಂ]]
|2
|ದಕ್ಷಿಣ ಕೊಲ್ಲಂ
|-
|2
|[[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ|ಕೊಲ್ಲಂ ಜಂಕ್ಷನ್]]
|6
|ಮಧ್ಯ ಕೊಲ್ಲಂ
|-
|3
|[[ಕಿಳಿಕೊಲ್ಲೂರು ರೈಲ್ವೇ ನಿಲ್ದಾಣ|ಕಿಳಿಕೊಲ್ಲೂರು]]
|2
||ಪೂರ್ವ ಕೊಲ್ಲಂ
|}
ಮುಖ್ಯ ರೈಲು ವಿದ್ಯುತ್ ಬಹು ಘಟಕ ([[MEMU]]) ಕೊಲ್ಲಂ ಜಂಕ್ಷನ್ನಲ್ಲಿ ವಾಹನ ನಿರ್ವಹಣಾ ಶೆಡ್ ಅನ್ನು ಹೊಂದಿದೆ. MEMU ರೈಲು ಸೇವೆಯು ಕೊಲ್ಲಂ ಅನ್ನು ಎರ್ನಾಕುಲಂ (ಆಲಪ್ಪುಳ ಮತ್ತು ಕೊಟ್ಟಾಯಂ ಮೂಲಕ), ಪುನಲೂರು (ಕೊಟ್ಟಾರಕ್ಕರ ಮೂಲಕ), ಮತ್ತು ಕನ್ನಿಯಾಕುಮಾರಿ (ತಿರುವನಂತಪುರ ಮೂಲಕ) ಗೆ ಸಂಪರ್ಕಿಸುತ್ತದೆ.<ref>{{cite web|url=http://www.newindianexpress.com/cities/thiruvananthapuram/article163030.ece|title=Timings of MEMUs included|publisher=The New Indian Express|date=2 July 2010|access-date=9 August 2016|archive-date=13 August 2016|archive-url=https://web.archive.org/web/20160813013003/http://www.newindianexpress.com/cities/thiruvananthapuram/article163030.ece|url-status=dead}}</ref>
===ಜಲ===
[[File:Houseboat Thevally Bridge Ashtamudi Kollam Mar22 R16 05860.jpg|thumb|ಥೇವಳ್ಳಿ ಸೇತುವೆಯಡಿಯಲ್ಲಿ ಹೌಸ್ಬೋಟ್ ಹಾದುಹೋಗುತ್ತಿದೆ]]
[[ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ|ರಾಜ್ಯ ಜಲ ಸಾರಿಗೆ ಇಲಾಖೆ]] [[ಕೊಲ್ಲಂ ಕೆಎಸ್ಡಬ್ಲ್ಯೂಟಿಡಿ ಫೆರಿ ಟರ್ಮಿನಲ್]] ನಿಂದ [[ಪಶ್ಚಿಮ ಕಲ್ಲಡ]], ಮನ್ರೋ ದ್ವೀಪ, ಗುಹಾನಂದಪುರಂ, ಚವರ ಥೆಕ್ಕುಂಭಾಗೊಮ್, ದಲವಾಪುರಂ, ಮತ್ತು ಆಲಪ್ಪುಳಕ್ಕೆ ದೋಣಿ ಸೇವೆಗಳನ್ನು ನಡೆಸುತ್ತದೆ, ಇದು [[ಅಷ್ಟಮುಡಿ ಸರೋವರ]]ದ ದಡದಲ್ಲಿದೆ. ಈ ಸರೋವರವು ಕೇರಳದ ಎರಡನೇ ಅತಿದೊಡ್ಡ ಜೌಗು ಪರಿಸರ ವ್ಯವಸ್ಥೆಯಾಗಿದ್ದು, ಕೊಲ್ಲಂನಲ್ಲಿ ಜಲ ಸಾರಿಗೆಗೆ ಕೇಂದ್ರ ಕೇಂದ್ರವಾಗಿದೆ. ಇದರ ನೀರು ನಗರವನ್ನು ಹಲವಾರು ಸ್ಥಳೀಯ ಸಮುದಾಯಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ರಾಷ್ಟ್ರೀಯ ಜಲಮಾರ್ಗ 3 ರ ಭಾಗವಾಗಿದೆ. ಕೊಲ್ಲಂ ತೋಡು 7.7 ಕಿಲೋಮೀಟರ್ ಉದ್ದದ ಕಾಲುವೆಯಾಗಿದ್ದು, ನಗರದ ಮೂಲಕ ಹಾದುಹೋಗುತ್ತದೆ ಮತ್ತು ಜಲ ಸಾರಿಗೆ ಜಾಲದ ಪ್ರಮುಖ ಅಪಧಮನಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಅಷ್ಟಮುಡಿ ಸರೋವರವನ್ನು ಇತರ ಜಲಾಶಯಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ಮುಖ್ಯ ಕೊಲ್ಲಂ ಬಂದರನ್ನು ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ (IWAI) ಒಳನಾಡು ಟರ್ಮಿನಲ್ಗೆ ಸಂಪರ್ಕಿಸುತ್ತದೆ. ನವೀಕರಣ ಪ್ರಯತ್ನಗಳ ನಂತರ, ಕಾಲುವೆಯು ಪ್ರಯಾಣಿಕರು ಮತ್ತು ಸರಕು ಸಾರಿಗೆ ಮತ್ತು ಪ್ರವಾಸೋದ್ಯಮ ಎರಡನ್ನೂ ಬೆಂಬಲಿಸುವ ಉದ್ದೇಶವನ್ನು ಹೊಂದಿದೆ.
ನಗರದ [[ಅಸ್ರಾಮಂ ಲಿಂಕ್ ರಸ್ತೆ]] ಫೆರಿ ಟರ್ಮಿನಲ್ ಪಕ್ಕದಲ್ಲಿಯೇ ಹಾದುಹೋಗುತ್ತದೆ.<ref name="Introduction-KSWTD">{{cite web |url=http://swtd.gov.in/index.php?langCode=en&compName=general&compView=aboutdept |title=Kerala State Water Transport Department - Introduction |publisher=KSWTD |access-date=2015-01-04 |archive-date=26 December 2014 |archive-url=https://web.archive.org/web/20141226161243/http://swtd.gov.in/index.php?langCode=en&compName=general&compView=aboutdept |url-status=dead }}</ref>
ಕೊಲ್ಲಂನಿಂದ ಸೇವೆಗಳನ್ನು ವಿಶಾಲವಾಗಿ ದೂರದ ಪ್ರಯಾಣಿಕರ ದೋಣಿ ಸೇವೆಗಳು, ಕಡಿಮೆ-ದೂರದ ಸ್ಥಳೀಯ ಪ್ರಯಾಣಿಕರ ದೋಣಿಗಳು, ಮತ್ತು ವಿಶೇಷ ಪ್ರವಾಸಿ ಕ್ರೂಸ್ಗಳಾಗಿ ವರ್ಗೀಕರಿಸಲಾಗಿದೆ.
* ಕೊಲ್ಲಂ-ಆಲಪ್ಪುಳ (ಅಲೆಪ್ಪಿ) ಕ್ರೂಸ್: ಇದು ಪ್ರಮುಖ ಸೇವೆಯಾಗಿದ್ದು, ಸುಮಾರು 55 ಕಿಲೋಮೀಟರ್ಗಳನ್ನು ಅಷ್ಟಮುಡಿ ಸರೋವರ ಮತ್ತು ಅಂತರ್ಸಂಪರ್ಕಿತ ಬ್ಯಾಕ್ವಾಟರ್ ಕಾಲುವೆಗಳ ಮೂಲಕ 8-ಗಂಟೆಗಳ ಸುಂದರ ಕ್ರೂಸ್ ಆಗಿದೆ. ಇದು ಎರಡು ಜಿಲ್ಲೆಗಳ ನಡುವೆ ನೇರ ಸಾರಿಗೆ ಸಂಪರ್ಕವಾಗಿ ಮತ್ತು ಪ್ರಮುಖ ಪ್ರವಾಸಿ ಉತ್ಪನ್ನವಾಗಿ ಕಾರ್ಯನಿರ್ವಹಿಸುತ್ತದೆ.<ref>{{cite web |last1=E |first1=Krishna Kumar K. |title=SWTD unable to resume long-haul boat service on Alappuzha-Kollam waterway |url=https://www.newindianexpress.com/cities/kochi/2025/Jul/14/swtd-unable-to-resume-long-haul-boat-service-on-alappuzha-kollam-waterway |website=The New Indian Express |language=en |date=14 July 2025}}</ref>
* ಸ್ಥಳೀಯ ಮತ್ತು ಕಡಿಮೆ-ದೂರ ಸೇವೆಗಳು: ನಿಯಮಿತ, ಕಡಿಮೆ-ದರದ ದೋಣಿ ಸೇವೆಗಳು ಕೊಲ್ಲಂ ಅನ್ನು ಜಿಲ್ಲೆಯೊಳಗಿನ ವಿವಿಧ ಸ್ಥಳಗಳಿಗೆ ಸಂಪರ್ಕಿಸುತ್ತವೆ, ಇದರಲ್ಲಿ ಅಳುಂಕಡವು, ಗುಹಾನಂದಪುರಂ, ಮತ್ತು ಕಣ್ಣನಲ್ಲೂರು ಮಾರ್ಗಗಳು ಸೇರಿವೆ. ಇವು ಸ್ಥಳೀಯ ನಿವಾಸಿಗಳಿಗೆ ಅಗತ್ಯವಾದ ಸಾರ್ವಜನಿಕ ಸಾರಿಗೆಯಾಗಿ ಕಾರ್ಯನಿರ್ವಹಿಸುತ್ತವೆ.<ref>{{cite web |title=Important places enroute |url=https://swtd.kerala.gov.in/pages-en-IN/placesenroute |publisher=State Water Transport Department |access-date=7 March 2026}}</ref>
* ಪ್ರವಾಸಿ ಮತ್ತು ವಿಶೇಷ ಸೇವೆಗಳು: "ಸೀ ಅಷ್ಟಮುಡಿ" ಪ್ರವಾಸಿ ಸೇವೆ: ಅಷ್ಟಮುಡಿ ಸರೋವರದಲ್ಲಿ 5-ಗಂಟೆಗಳ ವಿಹಾರ ಪ್ರಯಾಣ, ಸಾಂಬ್ರನಿಕ್ಕೋಡಿ ದ್ವೀಪದಲ್ಲಿ ನಿಲುಗಡೆಯೊಂದಿಗೆ. ಇದು ಪ್ರತಿದಿನ ಬೆಳಿಗ್ಗೆ 11:30 ಗಂಟೆಗೆ ಹೊರಡುತ್ತದೆ ಮತ್ತು ಕೆಳಗಿನ ಡೆಕ್ಗೆ ₹400 ಮತ್ತು ಮೇಲಿನ ಡೆಕ್ಗೆ ₹500 ವೆಚ್ಚವಾಗುತ್ತದೆ.<ref>{{cite web |title="SEE ASHTAMUDI" PASSENGER-CUM-TOURIST SERVICE |url=https://swtd.kerala.gov.in/pages-en-IN/placesenroute |publisher=State Water Transport Department |access-date=7 March 2026}}</ref><ref>{{cite web |title='See Ashtamudi' boat service set to complete 2 years; New Solar Boat to join fleet |url=https://english.mathrubhumi.com/lifestyle/travel/see-ashtamudi-travel-in-kollam-solar-boat-soon-backwater-cruise-e5920409 |website=@mathrubhumi |language=en |date=8 March 2025}}</ref><ref>{{cite web |author1=The Hindu Bureau|title='See Ashtamudi' tourist boat service in Kollam to be launched on Friday |url=https://www.thehindu.com/news/national/kerala/see-ashtamudi-tourist-boat-service-in-kollam-to-be-launched-on-friday/article66599527.ece |website=The Hindu |language=en-IN |date=9 March 2023}}</ref> ಅನೇಕ ಖಾಸಗಿ ಪ್ರವಾಸ ನಿರ್ವಾಹಕರು ಮತ್ತು ರೆಸಾರ್ಟ್ಗಳು ಪ್ರವಾಸಿಗರಿಗೆ ಅಷ್ಟಮುಡಿ ಸರೋವರದಲ್ಲಿ ದಿನದ ಕ್ರೂಸ್ಗಳನ್ನು ನೀಡುತ್ತವೆ, ಇದು ಹೌಸ್ಬೋಟ್ಗಳು, ಮೋಟಾರು ದೋಣಿಗಳು, ಮತ್ತು ಕ್ಯಾನೋಗಳಲ್ಲಿ ಪ್ರದೇಶವನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ.<ref>{{cite web |last1=Balan |first1=Saritha S. |title=Deserted homestays, jobless boatmen: Tourism in Kerala's Munroe Island hit hard |url=https://www.thenewsminute.com/kerala/deserted-homestays-jobless-boatmen-tourism-kerala-s-munroe-island-hit-hard-137420 |website=The News Minute |language=en |date=11 November 2020}}</ref>
ದ್ವಿಮಹಡಿಯ ಆಡಂಬರದ ದೋಣಿಗಳು ಕೊಲ್ಲಂ ಮತ್ತು ಅಲೆಪ್ಪೆಯ ನಡುವೆ ಪ್ರತಿದಿನ ಓಡುತ್ತವೆ. ಸರ್ಕಾರ ಮತ್ತು ಖಾಸಗಿ ಮಾಲೀಕರು ನಡೆಸುವ ಆಡಂಬರದ ದೋಣಿಗಳು ಪ್ರವಾಸಿ ಋತುವಿನಲ್ಲಿ ಮುಖ್ಯ ದೋಣಿ ಘಟ್ಟದಿಂದ ಓಡುತ್ತವೆ. ದಕ್ಷಿಣದಲ್ಲಿ ತಿರುವನಂತಪುರದಿಂದ ಪ್ರಾರಂಭವಾಗಿ ಉತ್ತರದಲ್ಲಿ [[ಹೊಸ್ಡುರ್ಗ್]] ನಲ್ಲಿ ಕೊನೆಗೊಳ್ಳುವ ಪಶ್ಚಿಮ ಕರಾವಳಿ ಕಾಲುವೆ ವ್ಯವಸ್ಥೆಯು [[ಪರವೂರು, ಕೊಲ್ಲಂ|ಪರವೂರು]], ಕೊಲ್ಲಂ ನಗರ, ಮತ್ತು ಕರುನಾಗಪಲ್ಲಿ ತಾಲೂಕುಗಳ ಮೂಲಕ ಹಾದುಹೋಗುತ್ತದೆ.<ref name="Corporation of Kollam">{{cite web |url=http://www.kollamcorporation.gov.in/transport |title=Transport - Kollam Corporation |publisher=Kollam Municipal Corporation |access-date=2015-01-04 |archive-date=20 October 2017 |archive-url=https://web.archive.org/web/20171020124744/http://www.kollamcorporation.gov.in/transport |url-status=dead }}</ref><ref name="Routes-KSWTD">{{cite web |url=http://swtd.gov.in/index.php?langCode=en&compName=general&compView=placesnroute |title=Important places enroute - KSWTD |publisher=KSWTD |access-date=2015-01-04 |archive-date=4 March 2016 |archive-url=https://web.archive.org/web/20160304061357/http://swtd.gov.in/index.php?langCode=en&compName=general&compView=placesnroute |url-status=dead }}</ref>
[[ಕೊಲ್ಲಂ ಬಂದರು]] ಕೇರಳದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಸರಕು ನಿರ್ವಹಣಾ ಸೌಲಭ್ಯಗಳು 2013 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.<ref>''[http://www.hindu.com/2009/06/18/stories/2009061855000700.htm Kollam port starts cargo handling]{{dead link|date=April 2021|bot=medic}}{{cbignore|bot=medic}}''. Accessed 29 July 2014.</ref> ವಿದೇಶಿ ಹಡಗುಗಳು ನಿಯಮಿತವಾಗಿ ಬಂದರಿಗೆ ಆಗಮಿಸುತ್ತವೆ, ಆಂಟಿಗುವಾದಲ್ಲಿ ನೋಂದಾಯಿಸಲಾದ {{convert|145|m|adj=on}} ಹಡಗು MV ಅಲಿನಾ 4 {{nbsp}}ಏಪ್ರಿಲ್ 2014 ರಂದು ಬಂದರಿನಲ್ಲಿ ನಿಲ್ಲಿಸಿತು.<ref>{{cite web|url=http://www.newindianexpress.com/states/kerala/Foreign-Ship-Reaches-Kollam-Port/2014/04/05/article2150731.ece#.U0I8V9LHm-0 |archive-url=https://web.archive.org/web/20140408225152/http://www.newindianexpress.com/states/kerala/Foreign-Ship-Reaches-Kollam-Port/2014/04/05/article2150731.ece#.U0I8V9LHm-0 |url-status=dead |archive-date=8 April 2014 |title=Foreign Ship Reaches Kollam Port|publisher=The New Indian Express |date=5 April 2014 |access-date=7 April 2014}}</ref> ಒಮ್ಮೆ ಬಂದರು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ, ಅದು ಕೊಲ್ಲಂ ಮೂಲದ ಗೋಡಂಬಿ ಕಂಪನಿಗಳ ಸಾರಿಗೆ ಚಟುವಟಿಕೆಗಳನ್ನು ಸುಲಭಗೊಳಿಸುತ್ತದೆ.<ref>''[http://www.shippingtribune.com/kollam-cashew-importers-suffering-due-port-congestion-tuticorin-terminal/ Kollam cashew importers suffering due to port congestion at tuticorin terminal] {{Webarchive|url=https://web.archive.org/web/20140814143721/http://www.shippingtribune.com/kollam-cashew-importers-suffering-due-port-congestion-tuticorin-terminal/ |date=14 August 2014 }}''. Accessed 29 July 2014.</ref> ಶ್ರೇಯಸ್ ಶಿಪ್ಪಿಂಗ್ ಕಂಪನಿಯು ಈಗ [[ಕೊಲ್ಲಂ ಬಂದರು]] ಮತ್ತು [[ಕೊಚ್ಚಿ ಬಂದರು|ಕೊಚ್ಚಿ ಬಂದರು]] ನಡುವೆ ನಿಯಮಿತ ಕಂಟೇನರ್ ಸೇವೆಯನ್ನು ನಡೆಸುತ್ತಿದೆ.<ref>''[http://www.thehindubusinessline.com/industry-and-economy/logistics/shreyas-shipping-starts-kochikollam-container-service/article5339784.ece Shreyas Shipping starts Kochi-Kollam container service]''. Accessed 29 July 2014. {{Webarchive|url=https://web.archive.org/web/20140420153237/http://www.thehindubusinessline.com/industry-and-economy/logistics/shreyas-shipping-starts-kochikollam-container-service/article5339784.ece |date=20 ಏಪ್ರಿಲ್ 2014 }}</ref><ref>{{Cite web |title=Exim India::The first & the only national daily on Export, Import, Shipping. |url=https://www.eximin.net/NewsDetails.aspx?name=73939 |archive-url=https://web.archive.org/web/20220117200427/https://www.eximin.net/NewsDetails.aspx?name=73939 |archive-date=2022-01-17 |access-date=2026-01-18 |website=www.eximin.net |language=en}}</ref>
[[File:Old Airport, Kollam.jpg|thumb|right|ಹಳೆಯ [[ಕೊಲ್ಲಂ ವಿಮಾನ ನಿಲ್ದಾಣ]] ಪ್ರದೇಶ, [[ಅಸ್ರಾಮಂ]]]]
ಕೊಲ್ಲಂ ಕಾಲುವೆ (ಅಥವಾ ಕ್ವಿಲಾನ್ ಕಾಲುವೆ ಅಥವಾ ಕೊಲ್ಲಂ ತೋಡು ಎಂದೂ ಕರೆಯಲ್ಪಡುತ್ತದೆ), ಇದು ದೊಡ್ಡ ಪಶ್ಚಿಮ ಕರಾವಳಿ ಕಾಲುವೆ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ, ಇದನ್ನು 1880 ರಲ್ಲಿ ನಿರ್ಮಿಸಲಾಯಿತು. ಇದು ಹಿಂದಿನ ಸಂಸ್ಥಾನ ಟ್ರಾವಂಕೋರ್ನ ಪ್ರಾಥಮಿಕ ವ್ಯಾಪಾರ ಮಾರ್ಗವಾಯಿತು, ಸರಕು ಹಡಗುಗಳು ನಗರದ ಮೂಲಕ ಸರಕುಗಳನ್ನು ಸಾಗಿಸುತ್ತಿದ್ದವು.<ref>{{cite web |title=Renovated Kollam canal now a cesspool |url=https://www.thehindu.com/news/national/kerala/renovated-kollam-canal-now-a-cesspool/article7013897.ece |website=The Hindu |language=en-IN |date=19 March 2015}}</ref>
====ಭವಿಷ್ಯದ ಯೋಜನೆಗಳು====
ಅದರ ಜಲ ಸಾರಿಗೆ ಮೂಲಸೌಕರ್ಯವನ್ನು ಮತ್ತಷ್ಟು ಬಳಸಿಕೊಳ್ಳಲು, ಕೊಲ್ಲಂ ಹಲವಾರು ನಡೆಯುತ್ತಿರುವ ಮತ್ತು ಪ್ರಸ್ತಾವಿತ ಯೋಜನೆಗಳನ್ನು ಹೊಂದಿದೆ:
;ಕೊಲ್ಲಂ ವಾಟರ್ ಮೆಟ್ರೋ: ಕೊಲ್ಲಂನಲ್ಲಿ ವಾಟರ್ ಮೆಟ್ರೋ ವ್ಯವಸ್ಥೆಯನ್ನು ಪರಿಚಯಿಸಲು ಯೋಜನೆಗಳಿವೆ, ಇದು ಕೊಚ್ಚಿಯಲ್ಲಿರುವಂತೆಯೇ ಅಂತರ-ನಗರ ಜಲ ಸಾರಿಗೆ ಜಾಲವನ್ನು ಒದಗಿಸುತ್ತದೆ.<ref>{{cite web |author1=The Hindu Bureau|title=Traffic study on anvil to assess feasibility of launching Water Metro in Kollam and 17 other cities |url=https://www.thehindu.com/news/national/kerala/traffic-study-on-anvil-to-assess-feasibility-of-launching-water-metro-in-kollam-and-17-other-cities/article69471421.ece |website=The Hindu |language=en-IN |date=20 April 2025}}</ref><ref>{{cite web |last1=Hallikeri |first1=G.D. |title=IWAI Board commissions feasibility study for Urban Water Transport System in 17 cities |url=https://www.pib.gov.in/PressReleasePage.aspx?PRID=2105345 |publisher=Ministry of Ports, Shipping and Waterways |access-date=7 March 2026}}</ref>
;ಜಲಮಾರ್ಗ ಅಭಿವೃದ್ಧಿ: ರಾಷ್ಟ್ರೀಯ ಜಲಮಾರ್ಗ 3 ಅನ್ನು 24-ಗಂಟೆಗಳ ನ್ಯಾವಿಗೇಷನ್ಗೆ ಬೆಂಬಲಿಸುವಂತೆ ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಯೋಜನೆಗಳು ನಡೆಯುತ್ತಿವೆ, ಇದರಲ್ಲಿ ಚಾನಲ್ಗಳನ್ನು ಆಳಗೊಳಿಸುವುದು ಮತ್ತು ಟರ್ಮಿನಲ್ಗಳನ್ನು ಸುಧಾರಿಸುವುದು ಸೇರಿದೆ.
===ವಾಯು===
{{See also|ಕೊಲ್ಲಂ ವಿಮಾನ ನಿಲ್ದಾಣ}}
ಕೊಲ್ಲಂ ನಗರ ನಿಗಮವು [[ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ]]ದಿಂದ ಸೇವೆ ಸಲ್ಲಿಸುತ್ತದೆ, ಇದು NH66 ಮೂಲಕ ನಗರದಿಂದ ಸುಮಾರು 56 ಕಿಲೋಮೀಟರ್ ದೂರದಲ್ಲಿದೆ. ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದಲ್ಲಿ ಮೆಟ್ರೋ ಅಲ್ಲದ ನಗರದ ಮೊದಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.<ref>{{cite web|url=http://www.aai.aero/allAirports/thiru_general.jsp|title=TRV Airport|publisher=AAI|access-date=23 August 2016|url-status=dead|archive-url=https://web.archive.org/web/20160902180351/http://www.aai.aero/allAirports/thiru_general.jsp|archive-date=2 September 2016}}</ref>
==ಶಿಕ್ಷಣ==
{{Main|ಕೊಲ್ಲಂ ಜಿಲ್ಲೆಯಲ್ಲಿ ಶಿಕ್ಷಣ}}
[[File:Thangal Kunju Musaliar College of Engineering, Kollam, Kerala.jpg|200px|thumb|[[ಕರಿಕೋಡ್]] ನಲ್ಲಿನ [[ಟಿ.ಕೆ.ಎಂ. ಕಾಲೇಜ್ ಆಫ್ ಇಂಜಿನಿಯರಿಂಗ್|TKM ಇಂಜಿನಿಯರಿಂಗ್ ಕಾಲೇಜ್]]|alt=ಸಾಂಪ್ರದಾಯಿಕ ಮುಘಲ್ ವಾಸ್ತುಶಿಲ್ಪದೊಂದಿಗೆ ಅಲಂಕೃತವಾದ, ಗುಲಾಬಿ-ಬಿಳಿ ಕಟ್ಟಡ|left]]
ಕೊಲ್ಲಂನಲ್ಲಿ ಹಲವಾರು ಕಾಲೇಜುಗಳು, ಶಾಲೆಗಳು ಮತ್ತು ಕಲಿಕಾ ಕೇಂದ್ರಗಳಿವೆ. [[ಟಿ.ಕೆ.ಎಂ. ಕಾಲೇಜ್ ಆಫ್ ಇಂಜಿನಿಯರಿಂಗ್|ಥಂಗಲ್ ಕುಂಜು ಮುಸಲಿಯಾರ್ ಕಾಲೇಜ್ ಆಫ್ ಇಂಜಿನಿಯರಿಂಗ್]], ರಾಜ್ಯದಲ್ಲಿ ತನ್ನ ಪ್ರಕಾರದ ಮೊದಲ ಖಾಸಗಿ ಶಾಲೆಯಾಗಿದ್ದು, ಕೊಲ್ಲಂ ನಗರದಿಂದ ಸುಮಾರು {{cvt|7|km}} ಪೂರ್ವಕ್ಕೆ [[ಕಿಳಿಕೊಲ್ಲೂರು]] ನಲ್ಲಿದೆ, ಮತ್ತು ಇದು ಎಲ್ಲಾ ಕೊಲ್ಲಂವಾಸಿಗಳಿಗೆ ಹೆಮ್ಮೆಯ ಮೂಲವಾಗಿದೆ. ಕೇರಳ ಸರ್ಕಾರವು ನಗರದ ಮತ್ತೊಂದು ಪ್ರತಿಷ್ಠಿತ ಸಂಸ್ಥೆಯಾದ [[ಫಾತಿಮಾ ಮಾತಾ ರಾಷ್ಟ್ರೀಯ ಕಾಲೇಜ್]] ಗೆ ಶೈಕ್ಷಣಿಕ ಸ್ವಾಯತ್ತತೆಯನ್ನು ನೀಡಿದೆ.<ref name="Autonomy: 13 colleges in the list">{{cite web | url = http://www.newindianexpress.com/states/kerala/Autonomy-13-colleges-in-the-final-list/2013/12/24/article1962583.ece | archive-url = https://web.archive.org/web/20140108131951/http://www.newindianexpress.com/states/kerala/Autonomy-13-colleges-in-the-final-list/2013/12/24/article1962583.ece | url-status = dead | archive-date = 8 January 2014 | title = Autonomy: 13 colleges in the list | access-date = 2014-01-08 | year = 2012 | publisher = The New Indian Express}}</ref>
[[File:SN Law College, Kollam.jpg|thumb|right|[[ಕರ್ಬಲ]]ದಲ್ಲಿನ [[ಶ್ರೀ ನಾರಾಯಣ ಗುರು ಕಾನೂನು ಅಧ್ಯಯನ ಕಾಲೇಜು]]]]
[[ಕೇರಳ ರಾಜ್ಯ ವಿನ್ಯಾಸ ಸಂಸ್ಥೆ]] (KSID), [[ಕೇರಳ ಸರ್ಕಾರ]]ದ ಕಾರ್ಮಿಕ ಮತ್ತು ಕೌಶಲ್ಯ ಇಲಾಖೆಯ ಅಡಿಯಲ್ಲಿನ ವಿನ್ಯಾಸ ಸಂಸ್ಥೆಯು ಕೊಲ್ಲಂನ ಚಂದನತೋಪೆಯಲ್ಲಿದೆ. ಇದನ್ನು 2008 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಭಾರತದ ಮೊದಲ ಸರ್ಕಾರಿ ಒಡೆತನದ ವಿನ್ಯಾಸ ಸಂಸ್ಥೆಗಳಲ್ಲಿ ಒಂದಾಗಿದೆ. KSID ಪ್ರಸ್ತುತ [[ಅಹಮದಾಬಾದ್ ನ ರಾಷ್ಟ್ರೀಯ ವಿನ್ಯಾಸ ಸಂಸ್ಥೆ]]ಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ವಿನ್ಯಾಸದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮಗಳನ್ನು ನಡೆಸುತ್ತದೆ.<ref>{{Cite news|url = http://www.newindianexpress.com/cities/thiruvananthapuram/Admission-Process-Starts-at-KSID-for-New-Diploma-Courses/2015/05/14/article2812971.ece|archive-url = https://web.archive.org/web/20150516123319/http://www.newindianexpress.com/cities/thiruvananthapuram/Admission-Process-Starts-at-KSID-for-New-Diploma-Courses/2015/05/14/article2812971.ece|url-status = dead|archive-date = 16 May 2015|title = Admission Process Starts at KSID for New Diploma Courses}}</ref><ref>{{Cite news|url = http://www.thehindu.com/todays-paper/tp-national/tp-kerala/institute-of-design-inaugurated/article1277100.ece|title = Institute of design inaugurated}}</ref>
[[ಭಾರತೀಯ ಮೂಲಸೌಕರ್ಯ ಮತ್ತು ನಿರ್ಮಾಣ ಸಂಸ್ಥೆ|ಭಾರತೀಯ ಮೂಲಸೌಕರ್ಯ ಮತ್ತು ನಿರ್ಮಾಣ ಸಂಸ್ಥೆ (IIIC-ಕೊಲ್ಲಂ)]] ನಿರ್ಮಾಣ-ಸಂಬಂಧಿತ ಉದ್ಯೋಗಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬೆಂಬಲಿಸಲು ಕೊಲ್ಲಂ ನಗರದ [[ಚವರ]]ದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸಂಸ್ಥೆಯಾಗಿದೆ.<ref>{{cite web|url=http://www.skilldevelopment.gov.in/states.html |title=States-Ministry of Skill Development & Entrepreneurship |publisher=Government of India |access-date=27 November 2019}}</ref> [[ಕೇರಳ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ|ಫ್ಯಾಷನ್ ತಂತ್ರಜ್ಞಾನ ಸಂಸ್ಥೆ, ಕೊಲ್ಲಂ]], ಕೇರಳವು ವೆಲ್ಲಿಮೋನ್ನಲ್ಲಿರುವ ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯಾಗಿದ್ದು, [[ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ]] ಮತ್ತು ಜವಳಿ ಸಚಿವಾಲಯದ ತಾಂತ್ರಿಕ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ. ಇದರ ಜೊತೆಗೆ, ನಗರದಲ್ಲಿ ಎರಡು IMK (ಕೇರಳ ವ್ಯವಸ್ಥಾಪನಾ ಸಂಸ್ಥೆ) ವಿಸ್ತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.<ref name="IMK Extension Centres">{{cite web | url = http://www.imk.ac.in/extension.htm | title = IMK Extension Centres - Kerala | access-date = 2014-01-08 | year = 2012 | publisher = imk.ac.in | archive-date = 23 July 2013 | archive-url = https://web.archive.org/web/20130723113518/http://imk.ac.in/extension.htm | url-status = dead }}</ref> [[ಕೇರಳ ಸಮುದ್ರ ಸಂಸ್ಥೆ]] ಕೊಲ್ಲಂ ನಗರದ [[ನೀಂದಕರ]]ದಲ್ಲಿದ್ದು, ಕೇರಳದ ವಿದ್ಯಾರ್ಥಿಗಳಿಗೆ ಸಮುದ್ರ ತರಬೇತಿಯನ್ನು ನೀಡುತ್ತದೆ.<ref>{{cite news|url=http://www.thehindu.com/todays-paper/tp-national/tp-kerala/maritime-institute-to-come-up-at-neendakara/article289620.ece |title=Maritime institute to come up at Neendakara |work=The Hindu|date=23 May 2009 |access-date=27 November 2019}}</ref> 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೋಟ್ ಕ್ರೂ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ನೀಂದಕರ ಸಮುದ್ರ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.<ref>{{cite news|url=https://www.newindianexpress.com/states/kerala/2013/may/08/steps-begun-to-set-up-maritime-university-475431.html | title=Steps begun to set up Maritime university | date=8 May 2013 |newspaper=The New Indian Express |access-date=27 November 2019}}</ref>
ಕಾಲೇಜುಗಳ ಹೊರತಾಗಿ, ಕೊಲ್ಲಂನಲ್ಲಿ ಹಲವಾರು ಬ್ಯಾಂಕ್ ತರಬೇತಿ ಕೇಂದ್ರಗಳಿವೆ.<ref name="Bank test coaching Centres - Kollam">{{cite web | url = http://careeradda.co.in/index.php?topic=3021.0 | title = Which is the best banking coaching centre in India - Kollam | access-date = 2014-08-09}}</ref> ಕೊಲ್ಲಂ ಭಾರತದ ಬ್ಯಾಂಕ್ ಪರೀಕ್ಷಾ ತರಬೇತಿ ಕೇಂದ್ರಗಳ ಕೇಂದ್ರವೆಂದು ಕರೆಯಲ್ಪಡುತ್ತದೆ, ಜಿಲ್ಲೆಯಲ್ಲಿ ಸುಮಾರು 40 ಅಂತಹ ಸಂಸ್ಥೆಗಳಿವೆ.<ref name="Kollam - The bank test coaching hub of India">{{cite news | url = http://timesofindia.indiatimes.com/city/thiruvananthapuram/Engineering-graduates-opt-for-banking-sector/articleshow/16597692.cms | title = Engineering graduates opt for banking sector | access-date = 2014-08-09 |work = Times of India| date = 29 September 2012 }}</ref>
==ಕ್ರೀಡೆ==
ಫುಟ್ಬಾಲ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ನಂತರ ಬಾಕ್ಸಿಂಗ್ ಮತ್ತು ಹಾಕಿ. ಕೊಲ್ಲಂ ಜಿಲ್ಲಾ, ರಾಜ್ಯ, ಮತ್ತು ವಲಯ-ಮಟ್ಟದ ಪಂದ್ಯಗಳಲ್ಲಿ ಭಾಗವಹಿಸುವ ಹಲವಾರು ಸ್ಥಳೀಯ ಫುಟ್ಬಾಲ್, ಹಾಕಿ, ಮತ್ತು ಕ್ರಿಕೆಟ್ ತಂಡಗಳಿಗೆ ನೆಲೆಯಾಗಿದೆ. [[ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ, ಕೊಲ್ಲಂ|ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ]]ವು ನಗರದ [[ಅಸ್ರಾಮಂ]]ನಲ್ಲಿ ಆಸ್ಟ್ರೋ-ಟರ್ಫ್ ಸೌಲಭ್ಯದೊಂದಿಗೆ ಇದೆ. ಇದನ್ನು ರೂ. 13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.<ref>{{cite web|url=http://www.newindianexpress.com/cities/thiruvananthapuram/article86081.ece |archive-url=https://web.archive.org/web/20140905021813/http://www.newindianexpress.com/cities/thiruvananthapuram/article86081.ece |url-status=dead |archive-date=5 September 2014 |title=Astro-turf hockey stadium |publisher=The New Indian Express |access-date=22 February 2018}}</ref> ಕ್ರೀಡಾಂಗಣದ ನಿರ್ಮಾಣಕ್ಕಾಗಿ ಅಸ್ರಾಮಂ, ಕೊಲ್ಲಂನಲ್ಲಿ ಅಂಚೆ ಇಲಾಖೆಯಿಂದ ಭೂಮಿಯನ್ನು ತೆಗೆದುಕೊಳ್ಳಲಾಗಿದೆ. ನಗರವು [[ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ (ಕೊಲ್ಲಂ)|ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ, ಕೊಲ್ಲಂ]] ಎಂಬ ಮತ್ತೊಂದು ಕ್ರೀಡಾಂಗಣವನ್ನು ಹೊಂದಿದೆ. ಇದು ಬಹುಪಯೋಗಿ ಕ್ರೀಡಾಂಗಣವಾಗಿದ್ದು, ರಣಜಿ ಟ್ರೋಫಿ, ಸಂತೋಷ್ ಟ್ರೋಫಿ, ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಂತಹ ಕ್ರೀಡಾ ಕಾರ್ಯಕ್ರಮಗಳನ್ನು ಪದೇ ಪದೇ ಆಯೋಜಿಸಿದೆ.<ref>{{cite web |url=https://cricketarchive.com/Kerala/Grounds/1095_f.html |title=KCA-Cricket Archive |publisher=Cricket Archive |access-date=22 February 2018 |archive-date=7 May 2017 |archive-url=https://web.archive.org/web/20170507020928/http://cricketarchive.com/Kerala/Grounds/1095_f.html |url-status=dead }}</ref> ನಗರದಲ್ಲಿನ ಎರಡು ತೆರೆದ ಮೈದಾನಗಳು, [[ಅಸ್ರಾಮಂ ಮೈದಾನ]] ಮತ್ತು [[ಪೀರಂಕಿ ಮೈದಾನ]] ಕೂಡ ಕ್ರೀಡಾ ಕಾರ್ಯಕ್ರಮಗಳು, ಅಭ್ಯಾಸ ಮತ್ತು ವಾರ್ಮ್-ಅಪ್ ಪಂದ್ಯಗಳಿಗೆ ಬಳಸಲ್ಪಡುತ್ತವೆ.
== ಪ್ರವಾಸಿ ಸ್ಥಳಗಳು ==
{{Expand section|date=October 2025}}
===ಹಿಂದೂ ದೇವಾಲಯಗಳು===
[[File:Kottarakkara Temple(HighResoluion).jpg|thumb|right|ಕೊಟ್ಟಾರಕ್ಕರ ಶ್ರೀ ಮಹಾಗಣಪತಿ ಕ್ಷೇತ್ರಂ]]
*[[ಆನಂದವಲ್ಲೀಶ್ವರಂ ಶ್ರೀ ಮಹಾದೇವರ ದೇವಾಲಯ]] ನಗರದ 400 ವರ್ಷಗಳ ಹಳೆಯ ಪ್ರಾಚೀನ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ 400-ವರ್ಷಗಳ-ಹಳೆಯ [[ಗರ್ಭಗುಡಿ]]ಯನ್ನು ತೇಗದಲ್ಲಿ ಮುಗಿಸಲಾಗಿದೆ.<ref>{{cite news|title=400-year-old sreekovil to be replaced|url=http://www.thehindu.com/news/national/kerala/400yearold-sreekovil-to-be-replaced/article7468835.ece|access-date=13 October 2015|work=The Hindu|date=26 July 2015 }}</ref>
*[[ಅಮ್ಮಚೀವೀಡು ಮೂರ್ತಿ ದೇವಾಲಯ]] ನಗರದ ಮತ್ತೊಂದು ಪ್ರಮುಖ ದೇವಾಲಯವಾಗಿದ್ದು, ಇದನ್ನು ಸುಮಾರು 600 ವರ್ಷಗಳ ಹಿಂದೆ ಕೊಲ್ಲಂನ ಶ್ರೀಮಂತರಾದ ಅಮ್ಮಚಿ ವೀಡು ಕುಟುಂಬವು ಸ್ಥಾಪಿಸಿತು.<ref name="kollamcity1">{{Cite web |title= Ammachiveedu Muhurthi Temple |url=http://www.kollamcity.com/index.php?menu=other&menu1=Religious |archive-url=https://web.archive.org/web/20101115114800/http://www.kollamcity.com/index.php?menu=other&menu1=Religious |archive-date=2010-11-15 | website=Kollam City }}</ref><ref name="thekeralatemples1">{{Cite web |title=Ammachi Veedu Muhurthi |url=https://www.thekeralatemples.com/templeinfo/others/ammachiveedu_muhurthi.htm |access-date=2026-01-18 |website=The Kerala Temples }}</ref>
*ಕೊಲ್ಲಂನ ಪ್ರಮುಖ ಹಬ್ಬವಾದ [[ಕೊಲ್ಲಂ ಪೂರಂ]] ಸಾಮಾನ್ಯವಾಗಿ ಮಧ್ಯ ಏಪ್ರಿಲ್ನಲ್ಲಿ [[ಅಸ್ರಾಮಂ ಶ್ರೀ ಕೃಷ್ಣ ಸ್ವಾಮಿ ದೇವಾಲಯ]]ದ ಹತ್ತು ದಿನಗಳ ಹಬ್ಬದ ಮುಕ್ತಾಯವಾಗಿದೆ.<ref name="Hindu">{{Cite web|url=http://www.hindu.com/2008/04/05/stories/2008040551540300.htm|title=The Hindu : Kerala / Kollam News : Kollam Pooram on April 15|date=9 April 2008|archive-url=https://web.archive.org/web/20080409111532/http://www.hindu.com/2008/04/05/stories/2008040551540300.htm |archive-date=9 April 2008 }}</ref>
*[[ಕೊಟ್ಟಂಕುಲಂಗರ ದೇವಿ ದೇವಾಲಯ]] ಕೇರಳದ ವಿಶ್ವಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದಾಗಿದ್ದು, ಅಲ್ಲಿ ಪುರುಷರು ''ಚಮಯವಿಲಕ್ಕು'' ಆಚರಣೆಗಾಗಿ ಸ್ತ್ರೀ ವೇಷಧಾರಣೆ ಮಾಡುವುದು ಸಾಂಪ್ರದಾಯಿಕ ಹಬ್ಬದ ಭಾಗವಾಗಿದೆ. ಪುರುಷರು ದೊಡ್ಡ ದೀಪಗಳನ್ನು ಸಹ ಹೊರುತ್ತಾರೆ. ಎರಡು ದಿನಗಳ ವೇಷಧಾರಣಾ ಕಾರ್ಯಕ್ರಮದ ಮೊದಲನೆಯದು ಸೋಮವಾರದಂದು ಮುಕ್ತಾಯವಾಯಿತು.<ref>{{cite web|title=Kerala temple: Where the lady with the lamp is a man|url=http://www.ndtv.com/south/kerala-temple-where-the-lady-with-the-lamp-is-a-man-517252|access-date=25 March 2013|publisher=NDTV}}</ref>
*ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶದ ಇತರ ಪ್ರಸಿದ್ಧ ಹಿಂದೂ ಪೂಜಾ ಕೇಂದ್ರಗಳೆಂದರೆ, ಕೊಟ್ಟಾರಕ್ಕರದಲ್ಲಿನ [[ಕೊಟ್ಟಾರಕ್ಕರ ಶ್ರೀ ಮಹಾಗಣಪತಿ ಕ್ಷೇತ್ರಂ]],<ref>{{cite web|title=Of small appam and Kottarakkara|url=http://mathrubhumi.com/travel/article/travel_special/of_small_appam_and_kottarakkara/139317/|access-date=25 March 2013|publisher=Mathrubhumi|archive-date=28 August 2013|archive-url=https://web.archive.org/web/20130828170452/http://www.mathrubhumi.com/travel/article/travel_special/of_small_appam_and_kottarakkara/139317/|url-status=dead}}</ref><ref>{{Cite web|url=https://www.keralatemples.net/klm_subra.html|title=Welcome to the Temples of God's Own Country|website=www.keralatemples.net}}</ref> [[ಪರವೂರು, ಕೊಲ್ಲಂ|ಪರವೂರು]]ನಲ್ಲಿನ [[ಪುಟ್ಟಿಂಗಲ್ ದೇವಾಲಯ|ಪುಟ್ಟಿಂಗಲ್ ದೇವಿ ದೇವಾಲಯ]],<ref>{{cite web|title=Puttingal Devi Temple, aravur|url=http://www.puttingaltemple.org/|access-date=25 March 2013|publisher=Puttingal Devi Temple}}</ref> ಸೂರನಾಡ್ ಉತ್ತರ ಅನಾಯಡಿ ಪಝಯಿದಂ ಶ್ರೀ ನರಸಿಂಹ ಮೂರ್ತಿ ದೇವಾಲಯ, [[ಪೊರುವಳಿ]]ಯಲ್ಲಿನ [[ಪೊರುವಳಿ ಪೆರುವಿರುತಿ ಮಲನಾಡ ದೇವಾಲಯ]],<ref>{{cite news|title=Malanada temple fete draws big crowds|url=http://www.thehindu.com/news/national/kerala/malanada-temple-fete-draws-big-crowds/article3205866.ece|access-date=25 March 2013|work=The Hindu|date=24 March 2012 }}</ref> [[ಶಾಸ್ತಂಕೋಟ್ಟ]]ದಲ್ಲಿನ [[ಶಾಸ್ತಂಕೋಟ್ಟ ಶ್ರೀ ಧರ್ಮ ಶಾಸ್ತ ದೇವಾಲಯ]],<ref>{{cite web|title=Sasthamcotta Sree Dharma Sastha Temple|url=http://www.sasthamcotta.com/Dharmasastha%20Temple.html|access-date=25 March 2013|publisher=Sasthamcotta Sree Dharma Sastha Temple|archive-date=6 December 2013|archive-url=https://web.archive.org/web/20131206180354/http://sasthamcotta.com/Dharmasastha%20Temple.html|url-status=dead}}</ref> ಶಕ್ತಿಕುಲಂಗರ ಶ್ರೀ ಧರ್ಮ ಶಾಸ್ತ ದೇವಾಲಯ,<ref>/Sakthikulangara-sreesharmasastha-karadevasom.com/</ref> ಕಡವೂರಿನ ತ್ರಿಕ್ಕಡವೂರು ಶ್ರೀ ಮಹಾದೇವ ದೇವಾಲಯ ಮತ್ತು ಪೊನ್ಮನದಲ್ಲಿ ಕಟ್ಟಿಲ್ ಮೆಕ್ಕತಿಲ್ ದೇವಿ ದೇವಾಲಯ,<ref>{{cite web|title=Here, bells on tree answer your prayers|url=https://www.deccanchronicle.com/141127/nation-current-affairs/article/here-bells-tree-answer-your-prayers|access-date=25 March 2013|work=Deccan Chronicle}},</ref> ಕರುನಾಗಪಲ್ಲಿ ಪಡನಾಯರ್ಕುಲಂಗರ ಮಹಾದೇವ ದೇವಾಲಯ.<ref>{{cite web|title=No permission for RSS to conduct 'shakha' in temple: Kerala HC told|url=http://timesofindia.indiatimes.com/city/kochi/No-permission-for-RSS-to-conduct-shakha-in-temple-Kerala-HC-told/articleshow/47558696.cms|access-date=25 March 2013|work=The Times of India}}</ref>
=== ಚರ್ಚುಗಳು ===
[[File:Kollam neue Kathedrale.JPG|thumb|right|ಥಂಗಸ್ಸೇರಿಯಲ್ಲಿನ ಇನ್ಫ್ಯಾಂಟ್ ಜೀಸಸ್ ಕೆಥೆಡ್ರಲ್, ಕೊಲ್ಲಂ]]
ಥಂಗಸ್ಸೇರಿಯಲ್ಲಿನ [[ಇನ್ಫ್ಯಾಂಟ್ ಜೀಸಸ್ ಕೆಥೆಡ್ರಲ್]] ಅನ್ನು ಪೋರ್ಚುಗೀಸರು 1614 ರಲ್ಲಿ ಸ್ಥಾಪಿಸಿದರು. ಇದು ಈಗ [[ಕ್ವಿಲಾನ್ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]]ದ ಪ್ರೊ-ಕೆಥೆಡ್ರಲ್ ಆಗಿದೆ – ಇದು ಭಾರತದ ಪ್ರಾಚೀನ ಮತ್ತು ಮೊದಲ ಕ್ಯಾಥೋಲಿಕ್ ಧರ್ಮಪ್ರಾಂತ್ಯವಾಗಿದೆ. ಹಳೆಯ [[ಕ್ವಿಲಾನ್]] ನಗರದ ಪೋರ್ಚುಗೀಸ್ ಆಳ್ವಿಕೆಯ ಸ್ಮಾರಕವಾಗಿ ಚರ್ಚ್ ಉಳಿದಿದೆ.<ref name="Church_Kollam">{{cite news|title=About Kollam City|location=Kollam, India|url=http://kollamcity.in/about-kollam-city|url-status=usurped|access-date=19 January 2016|archive-url=https://web.archive.org/web/20150602132809/http://kollamcity.in/about-kollam-city|archive-date=2 June 2015|quote=About the city of Quilon}}</ref> [[ನೀಂದಕರ]]ದಲ್ಲಿನ [[ಸೇಂಟ್ ಸೆಬಾಸ್ಟಿಯನ್ ರೋಮನ್ ಕ್ಯಾಥೋಲಿಕ್ ಚರ್ಚ್, ನೀಂದಕರ|ಸೇಂಟ್ ಸೆಬಾಸ್ಟಿಯನ್ ಚರ್ಚ್]] ಮತ್ತೊಂದು ಪ್ರಮುಖ ಚರ್ಚ್. [[ಮನ್ರೋ ದ್ವೀಪ|ಮನ್ರೋ ದ್ವೀಪ]]ದಲ್ಲಿನ [[ಡಚ್ ಚರ್ಚ್, ಮನ್ರೋ ದ್ವೀಪ|ಡಚ್ ಚರ್ಚ್]] ಅನ್ನು 1878 ರಲ್ಲಿ [[ಡಚ್ ಜನರು|ಡಚ್ಚರು]] ನಿರ್ಮಿಸಿದರು.<ref>{{cite news|title=The emerald isle|work=The Hindu|url=http://www.thehindu.com/features/metroplus/travel/the-emerald-isle/article4316024.ece|access-date=19 January 2016}}</ref> [[ಕಚೇರಿ]]ಯಲ್ಲಿನ ಅವರ್ ಲೇಡಿ ಆಫ್ ವೆಲಂಕಣ್ಣಿ ದೇಗುಲವು ಕೊಲ್ಲಂ ನಗರದ ಮತ್ತೊಂದು ಪ್ರಮುಖ ಕ್ರಿಶ್ಚಿಯನ್ ಪೂಜಾ ಸ್ಥಳವಾಗಿದೆ. [[ತ್ರಿಕ್ಕಡವೂರು|ಕಡವೂರು]]ನಲ್ಲಿನ ಸೇಂಟ್ ಕಾಸಿಮಿರ್ ಚರ್ಚ್,<ref>{{cite web|title=Church festival from Saturday|url=http://www.thehindu.com/2005/04/22/stories/2005042205760300.htm|work=[[The Hindu]]|date=2005-04-22|access-date=19 January 2016}}{{dead link|date=April 2021|bot=medic}}{{cbignore|bot=medic}}</ref> [[ಕವನಾಡ್]]ನಲ್ಲಿನ ಹೋಲಿ ಫ್ಯಾಮಿಲಿ ಚರ್ಚ್, ತೋಪ್ಪಿನಲ್ಲಿನ ಸೇಂಟ್ ಸ್ಟೀಫನ್ ಚರ್ಚ್,<ref>{{cite web|title=St.Stephen's Church|url=http://ststephenschurchkollam.weebly.com/|access-date=19 January 2016|publisher=Kollam St.Stephen's Church}}</ref> ಮತ್ತು [[ಕಡಪ್ಪಕಡ]]ದಲ್ಲಿನ ಸೇಂಟ್ ಥಾಮಸ್ ಚರ್ಚ್ ಕೊಲ್ಲಂನ ಕೆಲವು ಇತರ ಪ್ರಮುಖ ಕ್ರಿಶ್ಚಿಯನ್ ಚರ್ಚುಗಳಾಗಿವೆ.<ref>{{cite news|title=St.Thomas Church|work=The Hindu|url=http://catholicchurches.in/directory/changanacherry-churches/st-thomas-church-kollam.htm|access-date=19 January 2016}}</ref><ref>{{cite news|title=Piety marks Good Friday observance|url=http://www.thehindu.com/todays-paper/tp-national/tp-kerala/piety-marks-good-friday-observance/article5927794.ece|access-date=19 January 2016|work=The Hindu|date=18 April 2014 }}</ref>
=== ಮಸೀದಿಗಳು ===
[[File:കരുനാഗപ്പള്ളിമുസ്ലീംപള്ളി.jpg|right|thumb|ಕರುನಾಗಪಲ್ಲಿ ಮಸೀದಿ]]
ಚವರದಲ್ಲಿನ ಕೊಟ್ಟುಕಾಡು ಜುಮಾ ಮಸ್ಜಿದ್, ಎಲಂಪಲ್ಲೂರು ಜುಮಾ-ಎ-ಮಸ್ಜಿದ್, ಜೋನಕ್ಕಪುರಂನಲ್ಲಿನ ವಲಿಯಪ್ಳ್ಳಿ, [[ಚಿನ್ನಕಡ]] ಜುಮಾ ಮಸ್ಜಿದ್, ಕೊಲ್ಲೂರುವಿಲದಲ್ಲಿನ ಜುಮಾ-'ಅತ್ ಪಲ್ಲಿ, [[ತಟ್ಟಮಲ]]ದಲ್ಲಿನ ಜುಮಾ-'ಅತ್ ಪಲ್ಲಿ ಮತ್ತು ಚವರದಲ್ಲಿನ ಕೊಯಿವಿಲ ಜುಮಾ ಮಸ್ಜಿದ್ ಕೊಲ್ಲಂನ ಇತರ ಪ್ರಮುಖ ಮಸೀದಿಗಳಾಗಿವೆ.<ref>{{cite web|title=Juma-Ath-Palli|url=http://www.webindia123.com/city/kerala/kollam/destinations/mosque/jumaathpalli.htm|access-date=29 July 2014}}</ref><ref>{{cite web|title=Elampalloor Juma-A-Masjid|url=http://elampalloormuslimjama-ath.org/aboutus.html|access-date=29 July 2014|archive-date=9 August 2014|archive-url=https://web.archive.org/web/20140809144815/http://elampalloormuslimjama-ath.org/aboutus.html|url-status=dead}}</ref>
==ಗಮನಾರ್ಹ ವ್ಯಕ್ತಿಗಳು==
*[[ಕೊಲ್ಲಂನ ಜನರ ಪಟ್ಟಿ]]
<!---♦♦♦ ದಯವಿಟ್ಟು ಇಲ್ಲಿ ಹೆಸರುಗಳನ್ನು ಸೇರಿಸಬೇಡಿ - ಅವರು ಈಗಾಗಲೇ ಇಂಗ್ಲಿಷ್ ವಿಕಿಪೀಡಿಯಾದಲ್ಲಿ ತಮ್ಮದೇ ಆದ ಲೇಖನವನ್ನು ಹೊಂದಿದ್ದರೆ ಅವರನ್ನು [[ಕೊಲ್ಲಂನ ಜನರ ಪಟ್ಟಿ]] ಗೆ ಸೇರಿಸಿ ♦♦♦--->
==ಇವನ್ನೂ ನೋಡಿ==
* [[ಡೌನ್ಟೌನ್ ಕೊಲ್ಲಂ]]
* [[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ]]
* [[ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ]]
* [[ಕೊಲ್ಲಂ ಜಿಲ್ಲೆ]]
* [[ಕೊಲ್ಲಂನಲ್ಲಿ ಗೋಡಂಬಿ ವ್ಯಾಪಾರ]]
* [[GDP ಪ್ರಕಾರ ಅತಿದೊಡ್ಡ ಭಾರತೀಯ ನಗರಗಳು]]
==ಟಿಪ್ಪಣಿಗಳು==
{{notelist}}
==ಉಲ್ಲೇಖಗಳು==
{{Reflist|liststyle=decimal}}
==ಗ್ರಂಥಸೂಚಿ==
* {{cite book | last=Ring | first=Trudy | title=International Dictionary of Historic Places: Asia and Oceania, Volume 5 | year=1994 | publisher=Taylor & Francis | location=United Kingdom | isbn=978-1-884964-05-3}}
* {{cite book | last=Chan | first=Hok-lam | title=The Cambridge History of China, Volume 7: The Ming Dynasty, 1368–1644, Part 1 | year=1998 | publisher=Cambridge University Press | location=Cambridge | isbn=978-0-521-24332-2 | chapter=The Chien-wen, Yung-lo, Hung-hsi, and Hsüan-te reigns, 1399–1435}}
* {{cite book | last=Lin | title=Zheng He's Voyages Down the Western Seas | year=2007 | publisher=China Intercontinental Press | location=Fujian Province | isbn=978-7-5085-0707-1}}
* [[ಎಳಂಕುಲಂ ಕುಂಜನ್ ಪಿಳ್ಳೈ]], ಕೇರಳಥಿಂಡೆ ಎರುಳದನ್ಜ ಎಡುಗಳ್, p. 64,112,117
* Travancore Archaeological Series (T.A.S.) Vol. 6 p. 15
* Diaries and writings of Mathai Kathanar, the 24th generation priest of Thulaserry Manapurathu, based on the ancestral documents and Thaliyolagrandha handed down through generations
* Z.M. Paret, Malankara Nazranikal, vol. 1
* [[ಎಲ್. ಕೆ. ಅನಂತಕೃಷ್ಣ ಅಯ್ಯರ್]], State Manual, p50,52
* Bernard Thoma Kathanar, Marthoma Christyanikal, lines 23,24
* {{cite book|first=Pius |last=Malekandathil|author-link= Pius Malekandathil|title=Maritime India: Trade, Religion and Polity in the Indian Ocean|url=https://books.google.com/books?id=rN69iFj1PJoC|year=2010|publisher=Primus Books|page=43|isbn=978-93-80607-01-6}}
* Narayan, M.G.S, Chera-Pandya conflict in the 8th–9th centuries which led to the birth of Venadu: Pandyan History seminar, Madurai University, 1971
* The Viswavijnanakosam (Malayalam) Vol. 3, p. 523,534
* Narayan M.G.S., Cultural Symbiosis p33
* The handwritten diaries of Pulikottil Mar Dionyius (former supreme head of the [[Malankara Orthodox Syrian Church]] and Chitramezhuthu KM Varghese
==ಹೊರಗಿನ ಕೊಂಡಿಗಳು==
* [https://geohack.toolforge.org/geohack.php?pagename=Kollam¶ms=8_53_35.5_N_76_36_50.8_E_type:city(1342509)_region:IN-KL GeoHack - ಕೊಲ್ಲಂ]
* {{Official website|http://kollam.nic.in/Default.htm}}
{{Navboxes|list=
{{Kerala}}
{{Kerala topics}}
}}
{{Authority control}}
[[ವರ್ಗ: ಕೊಲ್ಲಂ| ]]
[[ವರ್ಗ: ಭಾರತದ ಮಹಾನಗರ ನಗರಗಳು]]
[[ವರ್ಗ: ಕೊಲ್ಲಂನ ಇತಿಹಾಸ]]
[[ವರ್ಗ: ಹಿಂದಿನ ಪೋರ್ಚುಗೀಸ್ ವಸಾಹತುಗಳು]]
[[ವರ್ಗ: ಕೊಲ್ಲಂ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು]]
[[ವರ್ಗ: ಕೇರಳದ ಪ್ರವಾಸೋದ್ಯಮ]]
[[ವರ್ಗ: ಭಾರತದ ಹಿಂದಿನ ರಾಜಧಾನಿಗಳು]]
[[ವರ್ಗ: ಭಾರತದ ಜನನಿಬಿಡ ಕರಾವಳಿ ಸ್ಥಳಗಳು]]
[[ವರ್ಗ: ಭಾರತದ ಬಂದರು ನಗರಗಳು ಮತ್ತು ಪಟ್ಟಣಗಳು]]
i7j1cdq5hymo9h41l9dvdhotc5eydce
ಕೃಷ್ಣರಾಜ ಬುಲೆವಾರ್ಡ್
0
144232
1379547
1342927
2026-08-09T00:38:53Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379547
wikitext
text/x-wiki
[[ಚಿತ್ರ:Oriental_Library,_Mysore,_India.jpg|link=//upload.wikimedia.org/wikipedia/commons/thumb/b/b2/Oriental_Library%2C_Mysore%2C_India.jpg/220px-Oriental_Library%2C_Mysore%2C_India.jpg|thumb| ಓರಿಯಂಟಲ್ ಲೈಬ್ರರಿ]]
[[ಚಿತ್ರ:Center_for_Architecture,_Mysore.2016.jpg|link=//upload.wikimedia.org/wikipedia/commons/thumb/3/3c/Center_for_Architecture%2C_Mysore.2016.jpg/220px-Center_for_Architecture%2C_Mysore.2016.jpg|thumb| ಆರ್ಕಿಟೆಕ್ಚರ್ ಕೇಂದ್ರ]]
[[ಚಿತ್ರ:Court_Park,_Mysore.jpg|link=//upload.wikimedia.org/wikipedia/commons/thumb/6/6e/Court_Park%2C_Mysore.jpg/220px-Court_Park%2C_Mysore.jpg|thumb| ಜಿಲ್ಲಾ ನ್ಯಾಯಾಲಯದ ಅವಳಿ ಉದ್ಯಾನಗಳು]]
'''ಕೃಷ್ಣರಾಜ ಬುಲೆವಾರ್ಡ್''' ಇದೊಂದು [[ಭಾರತ|ಭಾರತದ]] [[ಕರ್ನಾಟಕ]] ರಾಜ್ಯದ [[ಮೈಸೂರು]] ನಗರದ ಪ್ರಮುಖ ರಸ್ತೆಯಾಗಿದೆ.
== ಸ್ಥಳ ==
ಇದು ಮೈಸೂರಿನ ದಕ್ಷಿಣ ಭಾಗದಲ್ಲಿ [[ಸರಸ್ವತಿಪುರಂ]] ಮತ್ತು ಬಲ್ಲಾಳ್ ವೃತ್ತದ ನಡುವೆ ಇದೆ. <ref>{{Cite web|url=https://streets.openalfa.in/streets/krishnaraja-boulevard-chamarajapuram|title=Krishnaraja Boulevard, Chamarajapuram, Mysuru taluk|access-date=2022-08-03|archive-date=2017-03-05|archive-url=https://web.archive.org/web/20170305192539/https://streets.openalfa.in/streets/krishnaraja-boulevard-chamarajapuram|url-status=dead}}</ref> <ref>{{Cite web|url=http://www.callupcontact.com/Krishnaraja-Boulevard-c7777285.html|title=Places close by Krishnaraja Boulevard India|access-date=2022-08-03|archive-date=2022-08-03|archive-url=https://web.archive.org/web/20220803201801/https://www.callupcontact.com/Krishnaraja-Boulevard-c7777285.html|url-status=dead}}</ref> <ref>{{Cite web|url=https://www.google.com/maps/place/12%C2%B018'11.1%22N+76%C2%B038'22.2%22E/@12.303079,76.638414,18z/data=!3m1!4b1!4m5!3m4!1s0x0:0x0!8m2!3d12.303079!4d76.639511|title=Google Maps}}</ref>
== ಇತಿಹಾಸ ==
ಕೃಷ್ಣರಾಜ ಬುಲೆವಾರ್ಡ್ ಮೈಸೂರು ನಗರದ ಐತಿಹಾಸಿಕ ಬೀದಿಗಳಲ್ಲಿ ಒಂದು. ಇದನ್ನು ಮಧ್ಯದ ಮೇಲೆ ಗ್ರಿಲ್ಗಳಿಂದ ನಿರ್ವಹಿಸಲಾಗುತ್ತಿದೆ ಮತ್ತು ಎರಡೂ ಬದಿಗಳಲ್ಲಿ ಹೂವಿನ ಮರಗಳನ್ನು ನೆಡಲಾಗಿದೆ. <ref>{{Cite news|url=http://www.thehindu.com/news/national/karnataka/Krishnaraja-Boulevard-now-a-shadow-of-its-former-self/article14560368.ece|title=Krishnaraja Boulevard, now a shadow of its former self|date=9 August 2016|work=The Hindu}}</ref>
== ಪ್ರಸಿದ್ಧಿ ಕಡಿಮೆಯಾಗುತ್ತಿದೆ ==
ಇತ್ತೀಚೆಗೆ ಈ ಪ್ರಸಿದ್ಧ ರಸ್ತೆಯನ್ನು ಪೌರಕಾರ್ಮಿಕರು ನಿರ್ಲಕ್ಷಿಸಿದ್ದರಿಂದ ಜನರು ವಾಹನಗಳ ನಿಲುಗಡೆ ಸ್ಥಳವಾಗಿ ಬಳಸಲಾರಂಭಿಸಿದ್ದಾರೆ. <ref>{{Cite news|url=http://www.thehindu.com/news/national/karnataka/Krishnaraja-Boulevard-now-a-shadow-of-its-former-self/article14560368.ece|title=Krishnaraja Boulevard, now a shadow of its former self|date=9 August 2016|work=The Hindu}}</ref>
== ಐತಿಹಾಸಿಕ ಕಟ್ಟಡಗಳು ==
ಈ ಡಬಲ್ ರಸ್ತೆಯು [[ಓರಿಯಂಟಲ್ ಸಂಶೋಧನಾ ಸಂಸ್ಥೆ|ಓರಿಯಂಟಲ್ ಲೈಬ್ರರಿ]], [[ಮಹಾರಾಜ ಕಾಲೇಜು]] ಮತ್ತು ಡೆಪ್ಯೂಟಿ ಕಮಿಷನರ್ ಕಛೇರಿ, ಜಿಲ್ಲಾ ನ್ಯಾಯಾಲಯ ಸಂಕೀರ್ಣ, ಉರ್ಸ್ ಬೋರ್ಡಿಂಗ್ ಸ್ಕೂಲ್, ಆರ್ಕಿಟೆಕ್ಚರ್ ಕಾಲೇಜು ಮತ್ತು ಯುವರಾಜ ಕಾಲೇಜುಗಳಂತಹ ಅನೇಕ ಐತಿಹಾಸಿಕ ಕಟ್ಟಡಗಳಿಂದ ಕೂಡಿದೆ. ಕ್ರಾಫರ್ಡ್ ಹಾಲ್ ಎಂದು ಕರೆಯಲ್ಪಡುವ [[ಮೈಸೂರು]] ವಿಶ್ವವಿದ್ಯಾನಿಲಯದ ಮುಖ್ಯ ಕಛೇರಿ ಕೂಡ ಹತ್ತಿರದಲ್ಲಿದೆ.
== ಉದ್ದ ==
ಬಳ್ಳಾಲ್ ವೃತ್ತದ ಬಳಿಯ ಕೆಳಸೇತುವೆ ಜಂಕ್ಷನ್ನಿಂದ ಉತ್ತರ ಭಾಗದಲ್ಲಿ ಹುಣಸೂರು ರಸ್ತೆಯಲ್ಲಿ ಕೊನೆಗೊಳ್ಳುವ ಬುಲೆವಾರ್ಡ್ ಸುಮಾರು ಒಂದು ಕಿ.ಮೀ. ಉದ್ದವಿದೆ. ಪ್ರಸಿದ್ಧ ಪರಂಪರೆ ತಜ್ಞ ಪ್ರೊ.ಎನ್.ಎಸ್.ರಂಗರಾಜು ಅವರ ಪ್ರಕಾರ, ಪಾರಂಪರಿಕ ಮೌಲ್ಯಕ್ಕಾಗಿ ನಗರ ಸಭೆ ಗುರುತಿಸಿರುವ ೧೫ ರಸ್ತೆಗಳಲ್ಲಿ ಬುಲೇವಾರ್ಡ್ ಕೂಡ ಒಂದು. <ref>{{Cite web|url=http://www.worldtvnews.co.in/?p=72518|title=Worldtvnews.co.in|access-date=2022-08-03|archive-date=2017-03-05|archive-url=https://web.archive.org/web/20170305195108/http://www.worldtvnews.co.in/?p=72518|url-status=dead}}</ref>
== ಚಿತ್ರ ಗ್ಯಾಲರಿ ==
<gallery>
ಚಿತ್ರ:Court Park, Mysore.jpg|ಅವಳಿ ಕೋರ್ಟ್ ಪಾರ್ಕ್
ಚಿತ್ರ:Chamarajapuram Railway Station, Mysore.jpg|ಚಾಮರಾಜಪುರಂ ರೈಲು ನಿಲ್ದಾಣ
ಚಿತ್ರ:Maharajas College area.jpg|ಕಾರ್ಪೆಟ್ ಮಾರಾಟಗಾರರು
ಚಿತ್ರ:Maharajas College2.jpg|ಮಹಾರಾಜ ಕಾಲೇಜು
ಚಿತ್ರ:Sambrama Restaurant2.jpg|ನೇತ್ರದಾಮ ಜಂಕ್ಷನ್
ಚಿತ್ರ:Underbridge Junction.jpg|ಕೆಳಸೇತುವೆ ಜಂಕ್ಷನ್
ಚಿತ್ರ:Yuvarajas College.jpg|ಯುವರಾಜ ಕಾಲೇಜು
</gallery>
== ಸಹ ನೋಡಿ ==
* [[ಓರಿಯಂಟಲ್ ಸಂಶೋಧನಾ ಸಂಸ್ಥೆ|ಓರಿಯಂಟಲ್ ಲೈಬ್ರರಿ]]
* [[ಮಹಾರಾಜ ಕಾಲೇಜು]]
== ಉಲ್ಲೇಖಗಳು ==
{{Reflist}}
{{Interwikineeded}}
[[ವರ್ಗ:ಮೈಸೂರು]]
5a7x9yaovt9eymovaxk7hcrtn17j1ri
ಅಮೋಘವರ್ಷ ಜೆಎಸ್
0
146941
1379446
1335277
2026-08-08T12:13:57Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379446
wikitext
text/x-wiki
U{{Infobox person|name=ಅಮೋಘವರ್ಷ ಜೆ.ಎಸ್|image=Amoghavarsha2020.jpg|caption=|education=[[ಬ.ಎಸ್ಸಿ ಗಣಕ ವಿಜ್ಞಾನ]]|occupation=ಚಲನಚಿತ್ರ ನಿರ್ಮಾಪಕ ಮತ್ತು ವನ್ಯಜೀವಿ ಛಾಯಾಗ್ರಾಹಕ|birth_place=[[ಬೆಂಗಳೂರು]], India|website={{url|amoghavarsha.com}}|years active=೨೦೦೫-ಇಲ್ಲಿಯತನಕ|footnotes=}}
'''ಅಮೋಘವರ್ಷ ಜೆಎಸ್''' ಒಬ್ಬ ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ವನ್ಯಜೀವಿ ಛಾಯಾಗ್ರಾಹಕ. ಅವರು ಈ ಹಿಂದೆ [[ನ್ಯಾಷನಲ್ ಜೀಯೊಗ್ರಾಫಿಕ್|ನ್ಯಾಷನಲ್ ಜಿಯಾಗ್ರಫಿಕ್]] ಮತ್ತು [[ಬಿಬಿಸಿ|ಬಿಬಿಸಿಯಂತಹ]] ಕಂಪನಿಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರ ಚಲನಚಿತ್ರಗಳು ೬೭ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು,<ref>{{Cite news|url=https://www.thehindu.com/news/national/karnataka/wild-karnataka-wins-national-award-in-non-feature-category/article34136671.ece|title=67th National Film Award|date=22 March 2021|work=[[The Hindu]]}}</ref> ಇಂಪ್ಯಾಕ್ಟ್ಡಾಕ್ಸ್ ಅವಾರ್ಡ್ ಆಫ್ ಮೆರಿಟ್ <ref>{{Cite web|url=https://www.aiyd.org/team/amoghavarsha-js/|title=Amoghavarsha Js|access-date=2022-11-15|archive-date=2022-11-15|archive-url=https://web.archive.org/web/20221115020209/https://www.aiyd.org/team/amoghavarsha-js/|url-status=dead}}</ref><ref name="Impactdocs award">[http://impactdocsawards.com/winners-january-2016/awards-of-merit/ Impactdocs award]</ref> ಮತ್ತು 2015 ರ ಆಸ್ಟ್ರೇಲಿಯಾ ಇಂಡಿಯಾ ಯೂತ್ ಡೈಲಾಗ್ ಅಲುಮ್ನಿ ಅನುದಾನದಂತಹ ಪ್ರಶಸ್ತಿಗಳನ್ನು ಗೆದ್ದಿವೆ. ಹವಾಮಾನ ಬದಲಾವಣೆಯ ಕುರಿತಾದ ಅವರ ವೀಡಿಯೊ ಕೆಲಸವನ್ನು ಪ್ಯಾರಿಸ್ನಲ್ಲಿ 2015 ರ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಭಾರತದ ಪ್ರಧಾನಿ [[ನರೇಂದ್ರ ಮೋದಿ]] ಮತ್ತು ಫ್ರೆಂಚ್ ಅಧ್ಯಕ್ಷ [[ಫ್ರಾಂಕೋಯಿಸ್ ಹಾಲೆಂಡ್|ಫ್ರಾಂಕೋಯಿಸ್ ಹೊಲಾಂಡ್]] ಅವರು ಪ್ರದರ್ಶಿಸಿದರು.<ref>{{Cite news|url=https://bangaloremirror.indiatimes.com/bangalore/others/PMs-documentary-show-in-Paris-reveals-state-link/articleshow/50017026.cms|title=PM's documentary show in Paris reveals state link|work=[[Bangalore Mirror]]|language=en}}</ref> 2020 ರಲ್ಲಿ ಅವರ ವೈಲ್ಡ್ ಕರ್ನಾಟಕ ಚಲನಚಿತ್ರವನ್ನು ಅಲ್ಲಿ ಪ್ರದರ್ಶಿಸಿದಾಗ ಅವರು ಸ್ವತಃ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯನ್ನು ಉದ್ದೇಶಿಸಿ ಮಾತನಾಡಿದರು.<ref>{{Cite news|url=https://timesofindia.indiatimes.com/entertainment/kannada/wild-karnataka-to-be-screened-at-the-un-headquarters-on-world-wildlife-day/articleshow/74300960.cms|title=Wild Karnataka to be screened at the UN headquarters on World Wildlife Day - Times of India|work=[[The Times of India]]|language=en}}</ref> [[ಶಾರುಖ್ ಖಾನ್ (ಹಿಂದಿ ನಟ)|ಶಾರುಖ್ ಖಾನ್]] ನಡೆಸಿಕೊಡುವ ಸ್ಟಾರ್ ಪ್ಲಸ್ ಶೋ TED ಟಾಕ್ಸ್ ಇಂಡಿಯಾ ನಯೀ ಸೋಚ್ ನಲ್ಲಿ ಅಮೋಘವರ್ಷ ಕಾಣಿಸಿಕೊಂಡಿದ್ದಾರೆ.<ref>{{Cite news|url=https://www.hotstar.com/in/tv/ted-talks-india-nayi-baat/s-1346/reimagining-india-ted-talks/1000197800|title=TED Talks India Nayi Baat - Watch Episode 1 - Re-imagining India - TED Talks on Disney+ Hotstar|work=[[Hotstar]]|language=en|access-date=2022-11-15|archive-date=2020-06-30|archive-url=https://web.archive.org/web/20200630102641/https://www.hotstar.com/in/tv/ted-talks-india-nayi-baat/s-1346/reimagining-india-ted-talks/1000197800|url-status=dead}}</ref> sbs s. Ss sbsbsbsbebebdbdbdbebshwwbbwebbeebe. Ebeebeheh ebwbwbwbwwbjwnwb. E e ebebewnwnwjw sa a. Wjwn
== ಆರಂಭಿಕ ಜೀವನ ==
ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ, ಅವರು [[ಅಮೇಜಾನ್ (ಕಂಪನಿ)|ಅಮೆಜಾನ್ನಲ್ಲಿ]] ಸಾಫ್ಟ್ವೇರ್ ಇಂಜಿನಿಯರ್ ಆಗಿ ಸೇರಿದರು. ನಂತರ ಅವರು ಸ್ಥಳೀಯ ಹುಡುಕಾಟ ಸ್ಟಾರ್ಟ್ಅಪ್ ಅಸ್ಕ್ಲೈಲಾಗೆ ಅದರ ಮೊದಲ ಉದ್ಯೋಗಿಯಾಗಿ ಕೆಲಸ ಮಾಡಿದರು. ವನ್ಯಜೀವಿ ಛಾಯಾಗ್ರಹಣದಲ್ಲಿ ಅವರ ಉತ್ಸಾಹವನ್ನು ಮುಂದುವರಿಸಲು ಅವರು ೨೦೦೮ ರಲ್ಲಿ ತಮ್ಮ ಕೆಲಸವನ್ನು ತೊರೆದರು.
== ಛಾಯಾಗ್ರಹಣ ==
ಅಮೋಘವರ್ಷ ಅವರು ಸರ್ಕಾರದ ಅರಣ್ಯ ಇಲಾಖೆಗಳು, ಲಾಭೋದ್ದೇಶವಿಲ್ಲದ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಸಂರಕ್ಷಣೆ ಮತ್ತು ಶಿಕ್ಷಣ ಯೋಜನೆಗಳಲ್ಲಿ ಕೆಲಸ ಮಾಡುತ್ತಾರೆ. ಅವರು CEE ಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ ಮತ್ತು ವ್ಯಾಖ್ಯಾನ ಕೇಂದ್ರಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದಾರೆ. ಅವರು ''ಸೈನ್ಸ್ ಎಕ್ಸ್ಪ್ರೆಸ್ - ಜೀವವೈವಿಧ್ಯ ವಿಶೇಷ'', ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆಯ ಉಪಕ್ರಮಕ್ಕೆ ಪ್ರಮುಖ ಕೊಡುಗೆದಾರರಲ್ಲಿ ಒಬ್ಬರು, ಇದು ಒಂದು ವರ್ಷಕ್ಕೂ ಹೆಚ್ಚು ಕಾಲ ಭಾರತವನ್ನು ಪ್ರವಾಸ ಮಾಡಿದೆ ಮತ್ತು ೨.೫ ಮಿಲಿಯನ್ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.<ref>[http://epaper.timesofindia.com/Default/Scripting/ArticleWin.asp?From=Archive&Source=Page&Skin=TOINEW&BaseHref=TOIBG%2F2012%2F11%2F19&ViewMode=GIF&PageLabel=25&EntityId=Ar02502&AppName=1 One world]</ref> ಅವರು ಹಂಪಿಯಲ್ಲಿ ಅತ್ಯಾಧುನಿಕ ಡಿಜಿಟಲ್ ನಿರೂಪಣೆಯ ಮಾಧ್ಯಮ ಯೋಜನೆಯಲ್ಲಿ [[ಮೈಕ್ರೋಸಾಫ್ಟ್]] ಸಂಶೋಧನೆಗೆ ಕೊಡುಗೆ ನೀಡಿದ್ದಾರೆ. ಅವರು ಛಾಯಾಗ್ರಹಣ ಕಾರ್ಯಾಗಾರಗಳನ್ನು <ref>[http://www.dnaindia.com/lifestyle/1497204/report-in-search-of-a-perfect-shot In search of a perfect shot]</ref> ಮತ್ತು ದಂಡಯಾತ್ರೆಗಳನ್ನು ನಡೆಸುತ್ತಾರೆ.
ಅವರ ಕೆಲಸವನ್ನು ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗಿದೆ. ಅವರ ಕೆಲಸವನ್ನು ಯುಗ್ಯಾಲರಿ ಮತ್ತು ವಿಲಿಯಮ್ಸ್ ಸೊನೊಮಾ ಕೂಡ ಪ್ರದರ್ಶಿಸಿದ್ದಾರೆ.
== ಚಿತ್ರೀಕರಣ ಯೋಜನೆಗಳು ==
*[https://www.youtube.com/watch?v=S0hzXSx84Yo/ ಭಾರತೀಯ ವನ್ಯಜೀವಿ ರಾಷ್ಟ್ರಗೀತೆ] - ಅಮೋಘವರ್ಷ ಅವರು ಪ್ಯಾನ್-ಇಂಡಿಯಾ ವನ್ಯಜೀವಿ ರಾಷ್ಟ್ರಗೀತೆ ಸಂಗೀತ ವೀಡಿಯೊವನ್ನು ಗ್ರ್ಯಾಮಿ ವಿಜೇತ [[ರಿಕಿ ಕೇಜ್]] ಅವರ ಶಾಂತಿ ಸಂಸಾರ ಆಲ್ಬಂನ ಭಾಗವಾಗಿ ಬಿಡುಗಡೆ ಮಾಡಿದರು.
* ''ಸೀಕ್ರೆಟ್ಸ್ ಆಫ್ ದಿ ಕಿಂಗ್ ಕೋಬ್ರಾ'' - ವಿಶ್ವದ ಅತಿ ದೊಡ್ಡ ವಿಷಪೂರಿತ ಹಾವಿನ ಕುರಿತಾದ ಈ ನ್ಯಾಷನಲ್ ಜಿಯೋಗ್ರಾಫಿಕ್ ಚಲನಚಿತ್ರವು ಅಮೋಘವರ್ಷ ಸಹಾಯಕ ಕ್ಯಾಮರಾಮನ್ ಆಗಿ ಕೆಲಸ ಮಾಡುವುದನ್ನು ನೋಡಿದೆ. ಚಲನಚಿತ್ರವು ಕಿಂಗ್ ಕೋಬ್ರಾವನ್ನು ಅದರ ಜಗತ್ತಿನಲ್ಲಿ ಅನುಸರಿಸುತ್ತದೆ, ಅದು ಏನು ಮಾಡುತ್ತದೆ, ಅದು ಎಲ್ಲಿಗೆ ಹೋಗುತ್ತದೆ ಮತ್ತು ಯಾರೊಂದಿಗೆ ಸಂವಹನ ನಡೆಸುತ್ತದೆ ಎಂಬುದನ್ನು ಬಹಿರಂಗಪಡಿಸುತ್ತದೆ{{By whom|date=November 2022}}<sup class="noprint Inline-Template" data-ve-ignore="true" style="white-space:nowrap;">[ <span title="The material near this tag possibly uses too-vague attribution or weasel words. (November 2022)">ಯಾರು?</span>''</sup> <sup class="noprint Inline-Template" style="white-space:nowrap;">]</sup>.<ref>http://natgeotv.com/in/secrets-of-the-king-cobra</ref>
*[https://www.youtube.com/watch?v=4-zUQGKGjZY/ ಜಯಾ ಹೈ ಕನ್ನಡ ತಾಯೆ] - ಈ ಮ್ಯೂಸಿಕ್ ವೀಡಿಯೋ ಗ್ರ್ಯಾಮಿ ವಿಜೇತ ರಿಕಿ ಕೇಜ್ ಮತ್ತು ಅಮೋಘವರ್ಷ (ನಿರ್ದೇಶಕರಾಗಿ ಮಾತ್ರವಲ್ಲದೆ ಛಾಯಾಗ್ರಹಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ) ಕೈಜೋಡಿಸಿತು. ೬ ಪ್ರಾದೇಶಿಕ ಚಾನೆಲ್ಗಳಲ್ಲಿ ಪ್ರಾರಂಭಿಸಲಾಗಿದ್ದು ಇದು ಭಾರತದ ಮೊದಲ ವೈಲ್ಡ್ಲೈಫ್ ಮ್ಯೂಸಿಕ್ ವಿಡಿಯೋ ಆಗಿದೆ. ಇದು ಒಂದು ವಾರದಲ್ಲಿ ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತು.
*[https://www.youtube.com/watch?v=aVHKAOr1wmo/ ಹುಲಿ: ಹುಲಿಯನ್ನು ಹೇಗೆ ಉಳಿಸುವುದು? (ಹುಲಿ)] : ಟೆಕ್ನಾಲಜಿ ಟು ದಿ ಫ್ರಾಂಟಿಯರ್ಸ್ ಆಫ್ ಟೈಗರ್ ಕನ್ಸರ್ವೇಶನ್)" - ಈ ಕಿರುಚಿತ್ರವು ಭಾರತದ ಪ್ರತಿಷ್ಠಿತ ವನ್ಯಜೀವಿ ಚಲನಚಿತ್ರೋತ್ಸವ ''ಸಿಎಮ್ಎಫ್ ವಟವರನ್ ಪರಿಸರ ಮತ್ತು ವನ್ಯಜೀವಿ ಚಲನಚಿತ್ರೋತ್ಸವ ೨೦೧೩'' ನಲ್ಲಿ ನಾಮನಿರ್ದೇಶನಗೊಂಡಿದೆ. ಇದು ಕರ್ನಾಟಕದ BRT ಹುಲಿ ಸಂರಕ್ಷಿತ ಪ್ರದೇಶಕ್ಕೆ ಆಳವಾಗಿ ಹೋಗುವ ಮೂಲಕ ನಮ್ಮ ಕಾಡುಗಳನ್ನು ರಕ್ಷಿಸುವ ಅರಣ್ಯ ಸಿಬ್ಬಂದಿಯ ಮೇಲೆ ಬೆಳಕು ಚೆಲ್ಲುತ್ತದೆ.
*[https://www.youtube.com/watch?v=JO4qHg2xwe4/ ರಿವರ್ ಟರ್ನ್ಸ್ ಆಫ್ ಭದ್ರ] - ಈ ಚಿತ್ರವು ಬೇಸಿಗೆಯಲ್ಲಿ ಭದ್ರಾ ಹಿನ್ನೀರಿನಲ್ಲಿ ಹರಿಯುವ ಸುಂದರವಾದ ನದಿ ಟರ್ನ್ಗಳ ಜೀವನವನ್ನು ತೋರಿಸುತ್ತದೆ. ಇದು ಕ್ರಿಯೇಟಿವ್ ಕಾಮನ್ಸ್ (ಸೃಜನಶೀಲ ಕೆಲಸವನ್ನು ನೀಡುವ ಹಕ್ಕುಸ್ವಾಮ್ಯ ಅನುಮತಿ) ಅಡಿಯಲ್ಲಿ ಪರವಾನಗಿ ಪಡೆದ ಭಾರತದ ಮೊದಲ ವನ್ಯಜೀವಿ ಚಲನಚಿತ್ರಗಳಲ್ಲಿ ಒಂದಾಗಿದೆ. CMS ವಟವರನ್ ೨೦೧೫ ಚಲನಚಿತ್ರೋತ್ಸವದಲ್ಲಿ ನಾಮನಿರ್ದೇಶನಗೊಂಡಿದೆ,<ref>{{Cite web|url=http://vat2015.cmsvatavaran.org/film_entries/|title=Film Entries 2015 | CMS VATAVARAN|access-date=2022-11-15|archive-date=2022-11-15|archive-url=https://web.archive.org/web/20221115023207/http://vat2015.cmsvatavaran.org/film_entries/|url-status=dead}}</ref> ಚಲನಚಿತ್ರವನ್ನು ಗುಪ್ತ ಕ್ಯಾಮೆರಾ ಟ್ರ್ಯಾಪ್ಗಳು, ನೀರೊಳಗಿನ ಕ್ಯಾಮೆರಾಗಳು ಮತ್ತು ಹೆಚ್ಚಿನ ವೇಗದ ಕ್ಯಾಮೆರಾಗಳನ್ನು ಬಳಸಿ ನಿರ್ಮಿಸಲಾಗಿದೆ. ವನ್ಯಜೀವಿ ಸಪ್ತಾಹವನ್ನು ಆಚರಿಸಲು ಬೆಂಗಳೂರಿನ ಯುಬಿ ಸಿಟಿ ಆಂಫಿಥಿಯೇಟರ್ನಲ್ಲಿ ಪ್ರೀಮಿಯರ್ ಆಗಿದ್ದು, ಚಲನಚಿತ್ರವು ಸಂರಕ್ಷಣೆಯ ಕಾರಣಕ್ಕೆ ಸಹಾಯ ಮಾಡಿತು.
*[https://www.youtube.com/watch?v=RuVnAwkuTVw/ ಕಾಳಿ] <ref>[http://www.deccanherald.com/content/493020/anshi-dandeli-tiger-reserve-may.html anshi dandeli tiger reserve]</ref><ref name="Kali wins global film honour">{{Cite web |url=http://epaperbeta.timesofindia.com/Article.aspx?eid=31806&articlexml=Kali-wins-global-film-honour-02022016006037 |title=Kali wins global film honour |access-date=2022-11-15 |archive-date=2016-02-02 |archive-url=https://web.archive.org/web/20160202125131/http://epaperbeta.timesofindia.com/Article.aspx?eid=31806&articlexml=Kali-wins-global-film-honour-02022016006037 |url-status=dead }}</ref> - ಭಾರತದ ಪಶ್ಚಿಮ ಘಟ್ಟಗಳ ಮೂಲಕ ಹರಿಯುವ [[ಕಾಳಿ ನದಿ|ಕಾಳಿ ನದಿಯ]] ಮೇಲಿನ ಈ ಪ್ರಶಸ್ತಿ ವಿಜೇತ ಚಲನಚಿತ್ರವು ನದಿಯ ಮೂಲಕ್ಕೆ 100 ವರ್ಷ ವಯಸ್ಸಿನ ಅಜ್ಜಿಯ ಪ್ರಯಾಣವನ್ನು ಅನುಸರಿಸುತ್ತದೆ. ಚಲನಚಿತ್ರವನ್ನು ವೀಕ್ಷಿಸಿದ ನಂತರ ನೀತಿ ನಿರೂಪಕರಿಂದ ಸಾರ್ವತ್ರಿಕ ಪ್ರತಿಕ್ರಿಯೆಯನ್ನು ಅನುಸರಿಸಿ, ದಾಂಡೇಲಿ ಅಂಶಿ ಹುಲಿ ಸಂರಕ್ಷಿತ ಪ್ರದೇಶವನ್ನು [[ಅಣಶಿ ರಾಷ್ಟ್ರೀಯ ಉದ್ಯಾನ|ಕಾಳಿ ಹುಲಿ]] ಸಂರಕ್ಷಿತ ಪ್ರದೇಶ ಎಂದು ಮರುನಾಮಕರಣ ಮಾಡಲಾಯಿತು. ಚಲನಚಿತ್ರವು ೨೦೧೬ ರಲ್ಲಿ ಇಂಪ್ಯಾಕ್ಟ್ಡಾಕ್ಸ್ ಪ್ರಶಸ್ತಿಯನ್ನು ಗೆದ್ದಿದೆ.
*[[ವೈಲ್ಡ್ ಕರ್ನಾಟಕ]] <ref>[https://www.thehindu.com/entertainment/movies/a-majestic-celebration/article26429185.ece/ Majestic celebration: Wild Karnataka]</ref> - ಭಾರತದ ಮೊದಲ ಬ್ಲೂ-ಚಿಪ್ ನೈಸರ್ಗಿಕ ಇತಿಹಾಸದ ಚಲನಚಿತ್ರವಾಗಿ, ವೈಲ್ಡ್ ಕರ್ನಾಟಕವು ಭಾರತದ ಕರ್ನಾಟಕ ರಾಜ್ಯದ ಶ್ರೀಮಂತ ಜೀವವೈವಿಧ್ಯವನ್ನು ಪ್ರದರ್ಶಿಸುತ್ತದೆ. ಇದನ್ನು ಸರ್ [[ಡೇವಿಡ್ ಅಟೆನ್ಬರೋ|ಡೇವಿಡ್ ಅಟೆನ್ಬರೋ]] ನಿರೂಪಿಸಿದ್ದಾರೆ. ಇದನ್ನು ಜನವರಿ 2020 ರಲ್ಲಿ ಭಾರತದಲ್ಲಿ PVR ಪರದೆಗಳಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ವಿಶ್ವ ವನ್ಯಜೀವಿ ದಿನದಂದು (ಮಾರ್ಚ್ ೩) ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ವಿಶೇಷ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು.<ref>{{Cite web|url=https://timesofindia.indiatimes.com/entertainment/kannada/wild-karnataka-to-be-screened-at-the-un-headquarters-on-world-wildlife-day/articleshow/74300960.cms|title=Wild Karnataka to be screened at the UN headquarters on World Wildlife Day - Times of India|website=The Times of India}}</ref> ಅಮೋಘವರ್ಷ ಈ 4K ಅಲ್ಟ್ರಾ-ಎಚ್ಡಿ ಚಲನಚಿತ್ರವನ್ನು ಕಲ್ಯಾಣ್ ವರ್ಮಾ ಅವರೊಂದಿಗೆ ಸಹ-ನಿರ್ದೇಶಿಸಿದ್ದಾರೆ. ಇದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ವನ್ಯಜೀವಿ ಚಲನಚಿತ್ರವಾಗಿದೆ <ref>{{Cite web|url=https://theprint.in/features/making-of-wild-karnataka-the-first-indian-wildlife-film-to-be-released-in-theatres/350610/|title=Making of Wild Karnataka, the first Indian wildlife film to be released in theatres|date=18 January 2020}}</ref> ಜೊತೆಗೆ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು.
*[[ಗಂಧದಗುಡಿ (ಚಲನಚಿತ್ರ ೨೦೨೨)|ಗಂಧದ ಗುಡಿ]] - ಇದು ದಿವಂಗತ ನಟ [[ಪುನೀತ್ ರಾಜ್ಕುಮಾರ್|ಪುನೀತ್ ರಾಜ್ಕುಮಾರ್]] ಅವರನ್ನು ಒಳಗೊಂಡ ಚಿತ್ರವಾಗಿದ್ದು, ಅಮೋಘವರ್ಷ ನಿರ್ದೇಶಿಸಲಿದ್ದಾರೆ. ಇದು [[ಪುನೀತ್ ರಾಜ್ಕುಮಾರ್|ಪುನೀತ್ ರಾಜ್ಕುಮಾರ್]] ಅವರ ಕನಸಿನ ಯೋಜನೆಯಾಗಿದ್ದು, ೨೮ನೇ ಅಕ್ಟೋಬರ್ ೨೦೨೨ ರಂದು ಬಿಡುಗಡೆಯಾಗಲಿದೆ. ಈ ಚಲನಚಿತ್ರವು ದಿವಂಗತ ನಟ ಮತ್ತು ಅಮೋಘವರ್ಷ ತನ್ನ ಉಸಿರು ಸೌಂದರ್ಯವನ್ನು ಬಿಚ್ಚಿಡಲು [[ಕರ್ನಾಟಕ|ಕರ್ನಾಟಕದ]] ಆಳವಾದ ಮೂಲೆಗಳಲ್ಲಿ ಸಮುದ್ರಯಾನವನ್ನು ಪ್ರಾರಂಭಿಸುವುದನ್ನು ತೋರಿಸುತ್ತದೆ.<ref>{{Citeweb|url=https://timesofindia.indiatimes.com/entertainment/kannada/movies/news/puneeth-rajkumars-dream-project-with-amoghavarsha-titled-gandhada-gudi/articleshow/88118871.cms|title=Puneeth Rajkumar's dream project with Amoghavarsha titled [[Gandhada Gudi]] - Times of India|website=The Times of India|language=en|access-date=2022-07-28}}</ref><ref>{{Cite web|url=https://www.thequint.com/entertainment/celebrities/puneeth-rajkumar-filmmaker-amoghavarsha-nature-film-karnataka-wildlife-gandhada-gudi-teaser|title=Makers of Late Puneeth Rajkumar's Dream Project [[Gandhada Gudi]] Release Teaser|last=Entertainment|first=Quint|date=2021-12-06|website=TheQuint|language=en|access-date=2022-07-28}}</ref>
* ''ವೈಲ್ಡ್ ಮುಂಬೈ'' - ಮುಂಬರುವ ಈ ನಿರ್ದೇಶನದ ಸಾಹಸವು ವೈಲ್ಡ್ ಕರ್ನಾಟಕವನ್ನು ಹೋಲುವ ಯೋಜನೆಯಾಗಿದೆ. ಅಮೋಘವರ್ಷ ನಿರ್ದೇಶನ ಮಾಡಲಿದ್ದಾರೆ. ಈ ಸಾಕ್ಷ್ಯಚಿತ್ರವು ಆರೆ ಕಾಲೋನಿ, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಮತ್ತು ಸೆವ್ರಿ ಮಡ್ಫ್ಲಾಟ್ಸ್ನಂತಹ ಸ್ಥಳಗಳ ಜೀವವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ.<ref>{{Cite web|url=https://www.ndtv.com/india-news/wild-mumbai-after-karnataka-maharashtra-works-on-wildlife-documentary-2168266|title="Wild Mumbai": After Karnataka, Maharashtra Works on Wildlife Documentary}}</ref>
== ಪ್ರಶಸ್ತಿಗಳು ಮತ್ತು ಮನ್ನಣೆಗಳು ==
* ಅವರ ನಿರ್ದೇಶನದ ಚಿತ್ರ [[ವೈಲ್ಡ್ ಕರ್ನಾಟಕ]] ಅತ್ಯುತ್ತಮ ಅನ್ವೇಷಣೆ/ಸಾಹಸ ಚಲನಚಿತ್ರಕ್ಕಾಗಿ ೬೭ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.<ref>{{Cite web|url=https://timesofindia.indiatimes.com/entertainment/kannada/movies/news/kannada-cinema-at-the-67th-national-film-awards/photostory/81636336.cms|title=National Film Award|date=22 March 2021|website=[[The Times of India]]}}</ref>
* ಆಸ್ಟ್ರೇಲಿಯಾ-ಭಾರತ ಯುವ ಸಂವಾದದ ಭಾಗವಾಗಿ [[ಭಾರತ|ಭಾರತವನ್ನು]] ಪ್ರತಿನಿಧಿಸಲು ಅವರನ್ನು 2013 ಮತ್ತು 2015 ರಲ್ಲಿ [[ಆಸ್ಟ್ರೇಲಿಯ|ಆಸ್ಟ್ರೇಲಿಯಾಕ್ಕೆ]] ಆಹ್ವಾನಿಸಲಾಯಿತು.<ref>{{Cite web|url=http://www.aiyd.org/past-dialogues/2013-dialogue/indian-delegates/|title=AIYD|archive-url=https://web.archive.org/web/20151222090357/http://aiyd.org/past-dialogues/2013-dialogue/indian-delegates/|archive-date=22 December 2015|access-date=14 October 2013}}</ref>
* ಸಂರಕ್ಷಣಾ ಶಿಕ್ಷಣದಲ್ಲಿ ಛಾಯಾಗ್ರಹಣ ಮತ್ತು ಮಾಧ್ಯಮದ ಪ್ರಾಮುಖ್ಯತೆಯ ಕುರಿತು ಮಾತನಾಡಲು ಅವರನ್ನು ೨೦೧೨ ರಲ್ಲಿ ಜೈವಿಕ ವೈವಿಧ್ಯತೆಯ ಸಮಾವೇಶಕ್ಕೆ ಆಹ್ವಾನಿಸಲಾಯಿತು.
* ರಮೇಶ ಶ್ರೀನಿವಾಸನ್ ಅವರು ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯಕ್ಕೆ ಮಾಧ್ಯಮ ಮತ್ತು ಸಂರಕ್ಷಣೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಪ್ರಸ್ತುತಪಡಿಸಲು ಅವರನ್ನು ಆಹ್ವಾನಿಸಿದರು.
* ಅವರ ಚಲನಚಿತ್ರಗಳಾದ ರಿವರ್ ಟರ್ನ್ಸ್ ಆಫ್ ಭದ್ರ <ref name="IMDbRiverTerns">{{Cite web|url=https://www.imdb.com/title/tt3204032/|title=IMDb Title: River Terns of Bhadra|website=[[IMDb]]}}</ref> ಮತ್ತು ಕಾಳಿ <ref name="IMDbKali">{{Cite web|url=https://www.imdb.com/title/tt4953736/|title=IMDb Title: Kali|website=[[IMDb]]}}</ref> ಇವೆರಡೂ ಭಾರತದ ಉನ್ನತ ಪರಿಸರ ಮತ್ತು ವನ್ಯಜೀವಿ ಚಲನಚಿತ್ರೋತ್ಸವ CMS ವಟವರನ್ನಲ್ಲಿ ನಾಮನಿರ್ದೇಶನಗೊಂಡಿವೆ.<ref>{{Cite web |url=http://cmsvatavaran.org/awardees2014.php |title=CMS Vatavaran 2014 |access-date=2022-11-15 |archive-date=2015-11-12 |archive-url=https://web.archive.org/web/20151112013157/http://cmsvatavaran.org/awardees2014.php |url-status=dead }}</ref><ref>{{Cite web |url=http://vat2015.cmsvatavaran.org/nominations-announced/ |title=CMS Vatavaran 2015 |access-date=2022-11-15 |archive-date=2022-11-15 |archive-url=https://web.archive.org/web/20221115020158/http://vat2015.cmsvatavaran.org/nominations-announced/ |url-status=dead }}</ref>
* ೨೦೨೦ ರಲ್ಲಿ, ಅವರು ವಿಶ್ವ ವನ್ಯಜೀವಿ ದಿನದಂದು ಅವರ ವೈಲ್ಡ್ ಕರ್ನಾಟಕ ಚಲನಚಿತ್ರವನ್ನು ಪ್ರದರ್ಶಿಸಿದ ಯುಎನ್ ಪರಿಸರ ಕಾರ್ಯಕ್ರಮದಲ್ಲಿ ( [[ರಿಕಿ ಕೇಜ್]] ಜೊತೆಗೆ) ಪ್ಯಾನಲ್ ಚರ್ಚೆಯ ಭಾಗವಾಗಿದ್ದರು.<ref>{{Cite web|url=https://timesofindia.indiatimes.com/entertainment/kannada/wild-karnataka-to-be-screened-at-the-un-headquarters-on-world-wildlife-day/articleshow/74300960.cms|title=Wild Karnataka to be screened at the UN headquarters on World Wildlife Day - Times of India|website=[[The Times of India]]}}</ref>
* ಜೂನ್ ೨೦೨೦ <ref>{{Cite web|url=https://edge.canon.co.in/photo-mentor/41/details|title=Canon Edge|access-date=2022-11-15|archive-date=2022-11-15|archive-url=https://web.archive.org/web/20221115020159/https://edge.canon.co.in/photo-mentor/41/details|url-status=dead}}</ref> ಕ್ಯಾನನ್ ಇಂಡಿಯಾ ಅವರನ್ನು ತಮ್ಮ ಹೊಸ EOS ರಾಯಭಾರಿ ಎಂದು ಘೋಷಿಸಿತು.
== ಉಲ್ಲೇಖಗಳು ==
{{Reflist}}
== ಬಾಹ್ಯ ಕೊಂಡಿಗಳು ==
* [http://www.amoghavarsha.com ಅಮೋಘವರ್ಷ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20221206004436/https://amoghavarsha.com/ |date=2022-12-06 }}
* [http://www.mudskipper.in ಮಡ್ಸ್ಕಿಪ್ಪರ್ ವೆಬ್ಸೈಟ್] {{Webarchive|url=https://web.archive.org/web/20221115020202/https://www.mudskipper.in/ |date=2022-11-15 }}
* [http://natgeotv.com/in/secrets-of-the-king-cobra ಕಿಂಗ್ ಕೋಬ್ರಾದ ರಹಸ್ಯಗಳು]
* [https://web.archive.org/web/20131217093814/http://www.mudskipper.in/portfolio/indias-first-wildlife-music-video/ ಜಯ ಹೇ ಕನ್ನಡ ತಾಯೇ]
* [https://web.archive.org/web/20131217095323/http://www.mudskipper.in/portfolio/how-to-save-the-tiger/ ಹುಲಿ - ಹುಲಿಯನ್ನು ಉಳಿಸುವುದು ಹೇಗೆ?]
* [http://www.cmsvatavaran.org/filmdt.php?id=44 ಹುಲಿ: ಹುಲಿ ಸಂರಕ್ಷಣೆಯ ಗಡಿಗಳಿಗೆ ತಂತ್ರಜ್ಞಾನ] {{Webarchive|url=https://web.archive.org/web/20131217092536/http://www.cmsvatavaran.org/filmdt.php?id=44 |date=2013-12-17 }}
* [https://web.archive.org/web/20131217093817/http://www.mudskipper.in/portfolio/river-terns/ ಭದ್ರಾ ನದಿಯ ಟರ್ನ್ಸ್]
* [http://www.mudskipper.in/portfolio/kali/ ಕಾಳಿ] {{Webarchive|url=https://web.archive.org/web/20171129021327/http://www.mudskipper.in/portfolio/kali/ |date=2017-11-29 }}
* [https://www.youtube.com/watch?v=QO79orOvYJA/ ವೈಲ್ಡ್ ಕರ್ನಾಟಕ ಅಧಿಕೃತ ಟೀಸರ್]
{{Interwikineeded}}
[[ವರ್ಗ:೧೯೮೩ ಜನನ]]
[[ವರ್ಗ:ಜೀವಂತ ವ್ಯಕ್ತಿಗಳು]]
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ವಿಸ್ತರಿಸಿದ ಲೇಖನ]]
no4or92sljrkrn8gbtlp5f0btuzwcg9
ಕೊಲ್ಲಂ ಜಿಲ್ಲೆ
0
149584
1379553
1378856
2026-08-09T02:04:00Z
InternetArchiveBot
69876
Rescuing 3 sources and tagging 0 as dead.) #IABot (v2.0.9.5
1379553
wikitext
text/x-wiki
{{databox}}
{{Infobox settlement
| name = ಕೊಲ್ಲಂ
| native_name =
| native_name_lang =
| other_name = ಕ್ವಿಲಾನ್
| settlement_type = [[ಮಹಾನಗರ]]
| image_skyline = Kollam_Collage.png
| imagesize = 255px
| image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ: [[ಅಷ್ಟಮುಡಿ ಸರೋವರ]] & [[ದ ರವಿಜ್]] ನ ವಿಹಂಗಮ ನೋಟ, [[ಥಂಗಸ್ಸೇರಿ ಲೈಟ್ಹೌಸ್]], [[ಸೇಂಟ್ ಥಾಮಸ್ ಕೋಟೆ]]ಯ ಅವಶೇಷಗಳು, [[ಕೊಲ್ಲಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ]] & [[ಕೊಲ್ಲಂ ಕೆಎಸ್ಡಬ್ಲ್ಯೂಟಿಡಿ ಫೆರಿ ಟರ್ಮಿನಲ್|ಕೆಎಸ್ಡಬ್ಲ್ಯೂಟಿಡಿ ದೋಣಿ ಘಟ್ಟ]], [[ಬ್ರಿಟಿಷ್ ರೆಸಿಡೆನ್ಸಿ]], [[ಡೌನ್ಟೌನ್ ಕೊಲ್ಲಂ]] ಪ್ರದೇಶ ([[ಆರ್ಪಿ ಮಾಲ್, ಕೊಲ್ಲಂ|ಆರ್ಪಿ ಮಾಲ್]] ಸೇರಿದಂತೆ), [[ಮನ್ರೋ ದ್ವೀಪ]]ದಲ್ಲಿನ ಪ್ರವಾಸಿಗರು, [[ಅಡ್ವೆಂಚರ್ ಪಾರ್ಕ್, ಕೊಲ್ಲಂ|ಅಡ್ವೆಂಚರ್ ಪಾರ್ಕ್]], [[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ]], [[ಥಂಗಸ್ಸೇರಿ ಬ್ರೇಕ್ ವಾಟರ್ ಟೂರಿಸಂ ಪಾರ್ಕ್|ಬ್ರೇಕ್ ವಾಟರ್ ಟೂರಿಸಂ]] & [[ಕೊಲ್ಲಂ ಬಂದರು]], [[ಕೊಲ್ಲಂ ಬೀಚ್]] ಮತ್ತು [[ಚಿನ್ನಕಡ ಘಂಟಾಗೋಪುರ]]
| etymology = [[ಕರಿಮೆಣಸು]]: ''ಕೊಲ'' ("ಕರಿಮೆಣಸು")
| nicknames = "ಅರೇಬಿಯನ್ ಸಮುದ್ರದ ರಾಜಕುಮಾರ"<br />"ವಿಶ್ವದ ಗೋಡಂಬಿ ರಾಜಧಾನಿ"<ref>{{cite web|url=https://www.thehindu.com/news/national/kerala/kollams-cashew-crunch/article23701507.ece |title=Kollam's cashew crunch |work=The Hindu|date=28 April 2018 |access-date=10 August 2018}}</ref> <br /> "ಬ್ಯಾಕ್ವಾಟರ್ಗಳ ಪ್ರವೇಶದ್ವಾರ" <br />
"[[ಯೌವನದ ಚಿಲುಮೆ]]"<ref>{{cite web | url=https://www.keralatourism.org/kerala-article/2012/kollam-quilon/154 | title=Kollam, Quilon, Land of cashew, coir, backwaters, Kerala Tourism }}</ref><ref>{{cite news | url=https://www.grunge.com/236799/the-tragic-history-of-the-search-for-the-fountain-of-youth/ | title=The Tragic History of the Search for the Fountain of Youth | newspaper=Grunge | date=14 August 2020 }}</ref>
| image_map = Location map India Kollam EN.svg
| mapsize = 250x200px
| map_alt =
| map_caption = [[ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ]]ದೊಳಗಿನ ನಗರದ ಸ್ಥಾನ
| pushpin_map = India#India Kerala
| pushpin_label_position = right
| pushpin_map_alt =
| pushpin_map_caption = ಕೊಲ್ಲಂ ([[ಭಾರತ]])
| coordinates = {{coord|8|53|35.5|N|76|36|50.8|E|display=inline,title}}[https://geohack.toolforge.org/geohack.php?pagename=Kollam¶ms=8_53_35.5_N_76_36_50.8_E_type:city(1342509)_region:IN-KL]
| subdivision_type = [[ದೇಶ]]
| subdivision_name = {{flag|India}}
| subdivision_type1 = [[ಭಾರತದ ಪ್ರದೇಶಗಳ ಪಟ್ಟಿ|ಪ್ರದೇಶ]]
| subdivision_name1 = [[ದಕ್ಷಿಣ ಭಾರತ]]
| subdivision_type2 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| subdivision_name2 = [[ಕೇರಳ]]
| subdivision_type3 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| subdivision_name3 = [[ಕೊಲ್ಲಂ ಜಿಲ್ಲೆ|ಕೊಲ್ಲಂ]]
| established_title = ಸ್ಥಾಪನೆ
| established_date = 823
| founder = [[ಮಾರ್ ಸಬೊರ್ ಮತ್ತು ಮಾರ್ ಪ್ರೋತ್|ಮರುವಾನ್ ಸಪಿರ್ ಐಸೊ]]<ref>Kollam Tarisappalli Copper plates</ref><ref>{{cite work |last=Perczel |first=István |title= The Syriac World|publisher=Routledge |year=2018 |isbn=9781317482116 |editor-last=King |editor-first=Daniel |page=665-671|chapter=Syriac Christianity in India }}</ref><ref>{{Cite book|title=Perumals of Kerala: Brahmin Oligarchy and Ritual Monarchy|last=Narayanan|first=M. G. S.|publisher=CosmoBooks.|year=2013|isbn=9788188765072|location=Thrissur (Kerala)|pages=277, 278, 295, 435–37|orig-year=1972}}</ref> (ಬಂದರು ನಗರವಾಗಿ) <br /> [[ರಾಮ ವರ್ಮ ಕುಲಶೇಖರ]]<ref>{{Cite web |first=M. S. | last = Dhiraj |title=Kollam Pillar Inscription of Rama Kulasekhara: The Last Chera Record of a Jain Perumal of Makothai |url=https://www.heritageuniversityofkerala.com/JournalPDF/Volume6/19.pdf |website=Department of History, Pondicherry Central University | location = Pondicherry, India}}</ref> (ಆಡಳಿತ ರಾಜಧಾನಿಯಾಗಿ)
| leader_party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
| government_type = [[ನಗರ ನಿಗಮ (ಭಾರತ)|ನಗರ ನಿಗಮ]]
| governing_body = [[ಕೊಲ್ಲಂ ನಗರ ಸಭೆ]]
| leader_title = [[ಮೇಯರ್#ಭಾರತ|ಮೇಯರ್]]
| leader_name = ಎ.ಕೆ ಹಫೀಜ್
| unit_pref = Metric
| area_footnotes =
| area_rank = 4
| area_total_km2 = 73.03
| area_land_km2 =
| area_water_km2 =
| elevation_footnotes =
| elevation_m = 38.32
| population_total = 397,419
| population_footnotes = <ref>{{Cite web|url=https://www.citypopulation.de/en/india/kerala/|title = Kerala (India): Districts, Cities and Towns - Population Statistics, Charts and Map}}</ref>
| population_as_of = 2011
| population_rank = [[ಕೇರಳದ ನಗರಗಳ ಪಟ್ಟಿ|5]] ([[ಭಾರತದ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರಸಮೂಹಗಳ ಪಟ್ಟಿ|41ನೇ IN]])
| population_density_km2 = auto
| population_metro = 1,871,086
| population_metro_footnotes = <ref>{{cite web|url=http://www.demographia.com/db-worldua.pdf| title=Demographia World Urban Areas |publisher=Demographia |access-date=23 April 2016}}</ref>
| population_demonym = ಕೊಲ್ಲಮೈಟ್, ಕೊಲ್ಲത്തುಕಾರನ್/ಕಾರಿ, ಕೊಲ್ಲಂಕರನ್/ಕಾರಿ
| demographics_type1 = [[ಭಾಷೆ]]ಗಳು
| demographics1_title1 = ಅಧಿಕೃತ
| demographics1_info1 = {{hlist|[[ಮಲಯಾಳಂ ಭಾಷೆ|ಮಲಯಾಳಂ]]|[[ಇಂಗ್ಲಿಷ್ ಭಾಷೆ|ಇಂಗ್ಲಿಷ್]]}}
| timezone1 = [[ಭಾರತೀಯ ಪ್ರಮಾಣಿತ ಸಮಯ|IST]]
| utc_offset1 = +5:30
| postal_code_type = [[ಪಿನ್ ಕೋಡ್|PIN]]
| postal_code = 691 XXX
| area_code_type = [[ದೂರವಾಣಿ]] ಕೋಡ್
| area_code = +91474xxxxxxx
| registration_plate = ಕೊಲ್ಲಂ- [[ಭಾರತದ RTO ಜಿಲ್ಲೆಗಳ ಪಟ್ಟಿ#KL—ಕೇರಳ|KL]] 02, [[ಕರುನಾಗಪಲ್ಲಿ]]- KL 23, [[ಕೊಟ್ಟಾರಕ್ಕರ]]- KL 24, [[ಪುನಲೂರು]]- KL 25, [[ಕುನ್ನತೂರು, ಕೇರಳ|ಕುನ್ನತೂರು]]- KL 61, [[ಪಥನಾಪುರಂ]]- KL 80, [[ಚಡಯಮಂಗಳಂ]]- KL 82
| blank2_name_sec2 = ಸಾಕ್ಷರತೆ
| blank2_info_sec2 = 91.18%<ref name=Cities1Lakhandabove>{{cite web | url=http://www.censusindia.gov.in/2011-prov-results/paper2/data_files/India2/Table_2_PR_Cities_1Lakh_and_Above.pdf| title=Provisional Population Totals, Census of India 2011; Cities having population 1 lakh and above | publisher=Office of the Registrar General & Census Commissioner, India}}</ref>
| website = {{URL|www.kollam.nic.in}}
| blank_name_sec2 = [[ಮಾನವ ಅಭಿವೃದ್ಧಿ ಸೂಚ್ಯಂಕ|HDI]]
| blank_info_sec2 = <span style="color:#090">ಹೆಚ್ಚು</span>
| blank3_name_sec2 = [[UN/LOCODE]]
| blank3_info_sec2 = '''IN QUI<br />IN KUK'''
| footnotes =
| official_name =
}}
'''ಕೊಲ್ಲಂ''' ({{IPA|ml|kolːɐm|lang|Kollam-pronunciation.ogg}};{{efn|({{IPAc-en|'|k|w|aɪ|.|l|ɒ|n}} {{Respell|KWAI|lon}}; ಸ್ಥಳೀಯವಾಗಿ {{IPAc-en|k|ɔɪ|.|l|ɒ|n}} {{Respell|KOY|lon}} {{audio|Pronunciation of the alternate name "Quilon" of the city Kollam.ogg|ಉಚ್ಚಾರಣೆ}})}}) ಒಂದು ಪ್ರಾಚೀನ ಬಂದರು ಮತ್ತು ಭಾರತದ ಕೇರಳ ರಾಜ್ಯದ [[ಕೇರಳದ ನಗರಗಳು ಮತ್ತು ಪಟ್ಟಣಗಳ ಪಟ್ಟಿ|ನಾಲ್ಕನೇ ಅತಿದೊಡ್ಡ ನಗರವಾಗಿದೆ]]. ಅರೇಬಿಯನ್ ಸಮುದ್ರದ ಮಲಬಾರ್ ಕರಾವಳಿಯ ದಕ್ಷಿಣ ತುದಿಯಲ್ಲಿರುವ ಈ ನಗರವು ಅಷ್ಟಮುಡಿ ಸರೋವರದ ದಡದಲ್ಲಿದೆ ಮತ್ತು [[ತಿರುವನಂತಪುರ]]ದಿಂದ 71 ಕಿಲೋಮೀಟರ್ (44 ಮೈಲಿ) ವಾಯುವ್ಯಕ್ಕೆ ಇದೆ.<ref>{{cite web |title=Kollam - Encyclopaedia Britannica |url=https://www.britannica.com/place/Kollam |access-date=7 February 2020 |publisher=Britannica}}</ref> ಕೊಲ್ಲಂ [[ಭಾರತದ ಪ್ರಾಚೀನ ನಗರಗಳ ಪಟ್ಟಿ|ಭಾರತದ ಅತ್ಯಂತ ಹಳೆಯ, ನಿರಂತರವಾಗಿ ವಾಸಿಸುತ್ತಿರುವ ನಗರಗಳಲ್ಲಿ]] ಒಂದಾಗಿದೆ,<ref>{{cite web |date=16 June 2016 |title=12 Oldest Living and Continuously Inhabited Cities of India |url=http://www.walkthroughindia.com/cities/12-oldest-living-continuously-inhabited-cities-india/ |access-date=11 June 2023 |archive-date=11 June 2023 |archive-url=https://web.archive.org/web/20230611144213/http://www.walkthroughindia.com/cities/12-oldest-living-continuously-inhabited-cities-india/ |url-status=dead }}</ref><ref name="auto">{{cite web |title=History | District Kollam, Government of Kerala | India |url=https://kollam.nic.in/en/history/}}</ref> ಮೆಗಾಲಿಥಿಕ್ ಅವಧಿಯವರೆಗಿನ ವಾಸದ ಪುರಾವೆಗಳಿವೆ. ಈ ನಗರವು ಸಹಸ್ರಮಾನಗಳಿಂದ ಸಮುದ್ರ [[ವ್ಯಾಪಾರ ಕೇಂದ್ರ]]ವಾಗಿದೆ, ಇದರ ಆರಂಭಿಕ ಉಲ್ಲೇಖಗಳು ಫೀನಿಷಿಯನ್ನರು ಮತ್ತು ರೋಮನ್ನರ ಕಾಲದವು.<ref>{{Cite journal |last1=A. |first1=Shaji |last2=H. |first2=Adabiya |date=March 11, 2020 |title=The Early Maritime Trade Relations of Kollam: A Historical Introspection |url=http://www.heritageuniversityofkerala.com/JournalPDF/Volume8.2/23.pdf |journal=Heritage: Journal of Multidisciplinary Studies in Archaeology |volume=8 |issue=2}}</ref> ಇದು [[ಕೇರಳದ ಬ್ಯಾಕ್ವಾಟರ್ಗಳು|ಕೇರಳದ ಬ್ಯಾಕ್ವಾಟರ್ಗಳ]] ಪ್ರವೇಶದ್ವಾರವಾಗಿದೆ,<ref>{{Cite web |title=Ashtamudi Lake, the gateway to the backwaters of Kerala |url=https://www.keralatourism.org/destination/ashtamudi-backwaters/426 |website=Kerala Tourism}}</ref> ಮತ್ತು ಇದು ಗೋಡಂಬಿ ಸಂಸ್ಕರಣೆ, [[ಕೊಯಿರ್]] ತಯಾರಿಕೆ ಮತ್ತು ಪ್ರವಾಸೋದ್ಯಮ ಉದ್ಯಮಗಳಿಗೆ ಹೆಸರುವಾಸಿಯಾಗಿದೆ.<ref>{{Cite web |title=In 2 years, 80% cashew producing units closed in Kollam |url=https://www.downtoearth.org.in/news/agriculture/in-2-years-80-cashew-producing-units-closed-in-kollam-61749 |website=www.downtoearth.org.in|date=28 September 2018 }}</ref><ref>{{Cite web |title=Coir products of Kerala, Kollam, Kerala, India |url=https://www.keralatourism.org/kerala-article/2012/coir-products/161 |website=Kerala Tourism}}</ref>
ಕೊಲ್ಲಂ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಖ್ಯಾತಿಯನ್ನು ಹೊಂದಿದೆ. ಅರಬ್ಬರು, [[ಫೀನಿಷಿಯನ್ನರು]], ಚೀನಿಯರು, ಇಥಿಯೋಪಿಯನ್ನರು, ಸಿರಿಯನ್ನರು, ಯಹೂದಿಗಳು, [[ಕಲ್ಡಿಯನ್ನರು]], ಮತ್ತು ರೋಮನ್ನರು ಸಹಸ್ರಮಾನಗಳಿಂದ ಕೊಲ್ಲಂ ಬಂದರಿನಲ್ಲಿ ವ್ಯಾಪಾರ ನಡೆಸಿದ್ದಾರೆ.<ref>{{cite book |first=K. A. Nilakanta |last=Sasthri |title=History of South India |edition=2nd| publisher=Oxford University Press |year=1958 |orig-year=1935}}</ref> ಚೀನಾದ ವ್ಯಾಪಾರದ ಕಾರಣದಿಂದಾಗಿ, [[ಇಬ್ನ್ ಬತೂತ]] 14 ನೇ ಶತಮಾನದಲ್ಲಿ ಕೊಲ್ಲಂ ಅನ್ನು ತನ್ನ ಇಪ್ಪತ್ನಾಲ್ಕು ವರ್ಷಗಳ ಪ್ರಯಾಣದಲ್ಲಿ ಕಂಡ ಐದು ಭಾರತೀಯ ಬಂದರುಗಳಲ್ಲಿ ಒಂದೆಂದು ಉಲ್ಲೇಖಿಸಿದ್ದಾನೆ.<ref>{{cite web|url=https://www.thebetterindia.com/152778/news-kerala-china-iit-prof-gulis-children/ |title=Kozhikode to China: IIT Prof Unearths 700-YO Link That'll Will Blow Your Mind! |publisher=The Better India |date=26 July 2018 |access-date=7 December 2015}}</ref><ref name="www.mathrubhumi.com">{{Cite web|url=http://www.mathrubhumi.com/travel/article/destination/kollam/1095/|archiveurl=https://web.archive.org/web/20141009210850/http://www.mathrubhumi.com/travel/article/destination/kollam/1095/|url-status=dead|title=Kollam - Mathrubhumi|archivedate=9 October 2014}}</ref> ದೇಸಿಂಗನಾಡಿನ ರಾಜರು ಚೀನೀ ಆಡಳಿತಗಾರರೊಂದಿಗೆ ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡರು, ಆದರೆ ಕೊಲ್ಲಂನಲ್ಲಿ ಅಭಿವೃದ್ಧಿ ಹೊಂದಿದ ಚೀನೀ ವಸಾಹತು ಇತ್ತು. 9 ನೇ ಶತಮಾನದಲ್ಲಿ, ಚೀನಾದ [[ಗುವಾಂಗ್ಝೌ|ಕ್ಯಾಂಟನ್]]ಗೆ ಹೋಗುವ ದಾರಿಯಲ್ಲಿ, ಪರ್ಷಿಯನ್ ವ್ಯಾಪಾರಿ [[ಸುಲೈಮಾನ್ ಅಲ್-ತಾಜಿರ್]] ಕೊಲ್ಲಂ ಭಾರತದ ಏಕೈಕ ಬಂದರಾಗಿದ್ದು, ಅಲ್ಲಿ ಬೃಹತ್ ಚೀನೀ ಜಂಕ್ಗಳು ಭೇಟಿ ನೀಡುತ್ತಿದ್ದವು. [[ಮಾರ್ಕೊ ಪೊಲೊ]], ವೆನಿಸ್ನ ಪ್ರವಾಸಿಗ, 1275 ರಲ್ಲಿ [[ಕುಬ್ಲೈ ಖಾನ್]] ಅಡಿಯಲ್ಲಿ ಚೀನೀ ಸೇವೆಯಲ್ಲಿದ್ದನು, ಅವನು ತನ್ನ ಸಾಮರ್ಥ್ಯದಲ್ಲಿ, ಚೀನೀ ಮ್ಯಾಂಡರಿನ್ ಆಗಿ ಕೊಲ್ಲಂ ಮತ್ತು ಪಶ್ಚಿಮ ಕರಾವಳಿಯ ಇತರ ಪಟ್ಟಣಗಳಿಗೆ ಭೇಟಿ ನೀಡಿದನು.<ref>{{Cite web|url=http://kollam.nic.in/history.html|title=Short History of Kollam}}</ref> [[ಕೊಲ್ಲಂ ಜಿಲ್ಲೆ|ಕೊಲ್ಲಂ]] [[ಥಾಮಸ್ ಅಪೊಸ್ತಲ|ಸಂತ ಥಾಮಸ್]] ಸ್ಥಾಪಿಸಿದ [[ಏഴರಪ್ಳ್ಳಿಕಳ್|ಏಳು ಚರ್ಚುಗಳಲ್ಲಿ]] ಒಂದಕ್ಕೆ ಮತ್ತು [[ಮಲಿಕ್ ದೀನಾರ್]] [[ಕೇರಳ]]ದಲ್ಲಿ ಸ್ಥಾಪಿಸಿದ [[ಇಸ್ಲಾಂ ಧರ್ಮ ಕೇರಳದಲ್ಲಿ|10 ಅತ್ಯಂತ ಹಳೆಯ ಮಸೀದಿಗಳಲ್ಲಿ]] ಒಂದಕ್ಕೆ ನೆಲೆಯಾಗಿದೆ. [[ಕ್ವಿಲಾನ್ನ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]] ಭಾರತದ ಮೊದಲ ಧರ್ಮಪ್ರಾಂತ್ಯವಾಗಿದೆ.<ref>{{Cite web |title=Diocese of Quilon |url=https://www.quilondiocese.com/quilon.php?Pid=16&Mid=89 |access-date=2023-09-07 |website=www.quilondiocese.com |archive-date=7 September 2023 |archive-url=https://web.archive.org/web/20230907162517/https://www.quilondiocese.com/quilon.php?Pid=16&Mid=89 |url-status=dead }}</ref>
[[ವಿ. ನಾಗಮ್ ಅಯ್ಯ]] ತಮ್ಳ ''ಟ್ರಾವಂಕೋರ್ ಸ್ಟೇಟ್ ಮ್ಯಾನ್ಯುಯಲ್'' ನಲ್ಲಿ 822 AD ರಲ್ಲಿ ಇಬ್ಬರು [[ಪೂರ್ವ ಸಿರಿಯಾಕ್ ಸಂಪ್ರದಾಯ|ಪೂರ್ವ ಸಿರಿಯಾಕ್]] ಬಿಷಪ್ಗಳು, [[ಮಾರ್ ಸಬೊರ್ ಮತ್ತು ಮಾರ್ ಪ್ರೋತ್]], ತಮ್ಮ ಅನುಯಾಯಿಗಳೊಂದಿಗೆ ಕ್ವಿಲಾನ್ನಲ್ಲಿ ನೆಲೆಸಿದರು ಎಂದು ದಾಖಲಿಸಿದ್ದಾರೆ. ಎರಡು ವರ್ಷಗಳ ನಂತರ, ಮಲಬಾರ್ ಯುಗ ಪ್ರಾರಂಭವಾಯಿತು (824 AD), ಮತ್ತು ಕ್ವಿಲಾನ್ ಟ್ರಾವಂಕೋರ್ ಮತ್ತು [[ಕೊಚ್ಚಿ]]ಗಿಂತ ಮುನ್ನ ಮಲಬಾರ್ ಪ್ರದೇಶದ ಪ್ರಮುಖ ನಗರವಾಯಿತು.<ref name="Aiyya, V.V Nagom p. 244"/> [[ಕೊಲ್ಲಂ ಬಂದರು]] ಅನ್ನು ಮಾರ್ ಸಬೊರ್ 825 ರಲ್ಲಿ [[ಥಂಗಸ್ಸೇರಿ]]ಯಲ್ಲಿ ಸ್ಥಾಪಿಸಿದರು, ಇದು ಬ್ಯಾಕರೆ (ತೆವಲಕರ) ಬಳಿಯ ಕೊರೆ-ಕೆ-ನಿ ಕೊಲ್ಲಂನ ಒಳನಾಡಿನ ಬಂದರನ್ನು ಪುನಃ ತೆರೆಯಲು ಪರ್ಯಾಯವಾಗಿತ್ತು, ಇದು ರೋಮನ್ನರು ಮತ್ತು ಗ್ರೀಕರಿಗೆ ನೆಲ್ಸಿಂಡಾ ಮತ್ತು ಟಿಂಡಿಸ್ ಎಂದು ಮತ್ತು ತಮಿಳರಿಗೆ ತೊಂಡಿ ಎಂದು ಕರೆಯಲ್ಪಡುತ್ತಿತ್ತು.<ref name="Aiyya, V.V Nagom p. 244">Aiyya, V.V Nagom, State Manual p. 244</ref> [[ತಂಬಿರಾನ್ ವನಕ್ಕಂ]], 20 ಅಕ್ಟೋಬರ್ 1578 ರಂದು ಕೊಲ್ಲಂನಲ್ಲಿ [[ತಮಿಳು ಭಾಷೆ|ತಮಿಳು]] ಭಾಷೆಯಲ್ಲಿ ಮುದ್ರಿತವಾದ ಮೊದಲ ಪುಸ್ತಕವಾಗಿದೆ.<ref>{{Cite news |date=2010-06-20 |title=Tamil saw its first book in 1578 |language=en-IN |work=The Hindu |url=https://www.thehindu.com/news/national/tamil-nadu/Tamil-saw-its-first-book-in-1578/article15685475.ece |access-date=2023-09-07 |issn=0971-751X}}</ref>
[[ಕೊಲ್ಲಂ ನಗರ ಸಭೆ]] ನಗರ ಆಡಳಿತ ಮತ್ತು ಸೇವೆಗಳಿಗಾಗಿ [[ISO 9000#ISO 9001:2015 ವಿಷಯಗಳು|ISO 9001:2015]] ಪ್ರಮಾಣೀಕರಣವನ್ನು ಪಡೆದುಕೊಂಡಿದೆ.<ref>{{cite web|url=http://lsgkerala.gov.in/index.php/en/news-district-news/kollam-corporation-achieved-iso-certification-1636 |title=Kollam Corporation achieved ISO Certification |date=17 May 2019 |access-date=18 June 2019}}</ref> [[ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್|ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (EIU)]] ಜನವರಿ 2020 ರ ಸಮಯದಲ್ಲಿ ನಗರ ಪ್ರದೇಶದ ಬೆಳವಣಿಗೆಯ ಆಧಾರದ ಮೇಲೆ ನಡೆಸಿದ ಸಮೀಕ್ಷೆಯ ಪ್ರಕಾರ, [[ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ|ಕೊಲ್ಲಂ]] 2015 ಮತ್ತು 2020 ರ ನಡುವೆ 31.1% ನಗರ ಬೆಳವಣಿಗೆಯೊಂದಿಗೆ ವಿಶ್ವದ ಹತ್ತನೇ ವೇಗವಾಗಿ ಬೆಳೆಯುತ್ತಿರುವ ನಗರವಾಯಿತು.<ref>{{cite web|url=https://indianexpress.com/article/india/three-of-worlds-ten-fastest-growing-urban-areas-are-in-kerala-6205749/ |title=3 of world's 10 fastest-growing urban areas are in Kerala: Economist ranking |date=8 January 2020 |access-date=8 January 2020}}</ref> ಇದು ಅಷ್ಟಮುಡಿ ಸರೋವರದ ದಡದಲ್ಲಿರುವ ಕರಾವಳಿ ನಗರವಾಗಿದೆ. ನಗರವು [[ಕೊಲ್ಲಂ ಜಿಲ್ಲೆ]]ಯ ಆಡಳಿತ ಕಚೇರಿಗಳನ್ನು ಹೊಂದಿದೆ ಮತ್ತು ರಾಜ್ಯದ ಪ್ರಮುಖ ವ್ಯಾಪಾರ ನಗರವಾಗಿದೆ. ಕೊಲ್ಲಂ ನಗರದಲ್ಲಿ ಮಹಿಳೆಯರ ಮತ್ತು ಪುರುಷರ ಅನುಪಾತವು ಭಾರತದ 500 ಅತಿ ಜನಸಂಖ್ಯೆಯ ನಗರಗಳಲ್ಲಿ ಎರಡನೇ ಅತಿ ಹೆಚ್ಚಾಗಿದೆ.<ref>{{cite web|url=http://www.census2011.co.in/city.php |title=census2011.co.in - Indian Cities |access-date=7 December 2015}}</ref> ಕೊಲ್ಲಂ ಭಾರತದ ಅತ್ಯಂತ ಕಡಿಮೆ ಮಾಲಿನ್ಯಗೊಂಡ ನಗರಗಳಲ್ಲಿ ಒಂದಾಗಿದೆ.<ref>{{cite web|url=http://www.india.com/lifestyle/the-4-least-polluted-cities-in-india-757032/ |title=The 4 Least Polluted Cities in India - India.com |date=7 December 2015 |access-date=7 December 2015}}</ref>
[[ಚೇರ ಸಾಮ್ರಾಜ್ಯ|ಚೇರ]] ರಾಜವಂಶದ ಆಳ್ವಿಕೆಯ ನಂತರದ ಹಂತಗಳಲ್ಲಿ, ಕೊಲ್ಲಂ ವ್ಯಾಪಾರ ಮತ್ತು ರಾಜಕೀಯದ ಕೇಂದ್ರಬಿಂದುವಾಗಿ ಹೊರಹೊಮ್ಮಿತು. ಕೊಲ್ಲಂ ಕೇರಳದ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿ ಮುಂದುವರೆದಿದೆ. ಕೊಲ್ಲಂ ಸುತ್ತಲೂ ನಾಲ್ಕು ಪ್ರಮುಖ ವ್ಯಾಪಾರ ಕೇಂದ್ರಗಳಿವೆ. ಅವುಗಳಲ್ಲಿ [[ಕೊಟ್ಟಾರಕ್ಕರ]], [[ಪುನಲೂರು]], [[ಪರವೂರು, ಕೊಲ್ಲಂ|ಪರವೂರು]], ಮತ್ತು [[ಕರುನಾಗಪಲ್ಲಿ]] ಸೇರಿವೆ. ಕೊಲ್ಲಂ [[ಜಾನ್ ಮ್ಯಾಂಡೆವಿಲ್|ಮ್ಯಾಂಡೆವಿಲ್]] ಅವರ ''[[ಟ್ರಾವೆಲ್ಸ್ ಆಫ್ ಸರ್ ಜಾನ್ ಮ್ಯಾಂಡೆವಿಲ್|ಪ್ರಯಾಣಗಳು]]'' ನಲ್ಲಿ '''ಪಲೋಂಬೆ''' ಎಂದು ಕಾಣಿಸಿಕೊಂಡಿದೆ, ಅಲ್ಲಿ ಅವನು ಅದು [[ಯೌವನದ ಚಿಲುಮೆ]]ಯನ್ನು ಹೊಂದಿದೆ ಎಂದು ಹೇಳಿಕೊಂಡಿದ್ದಾನೆ.<ref>Mandeville, John. ''[http://www.gutenberg.org/cache/epub/782/pg782.txt The Travels of Sir John Mandeville]''. Accessed 24 September 2011.</ref><ref>Kohanski, Tamarah & Benson, C. David (Eds.) ''The Book of John Mandeville''. Medieval Institute Publications (Kalamazoo), 2007. Op. cit. "[http://www.lib.rochester.edu/camelot/teams/tkap2.htm Indexed Glossary of Proper Names]". Accessed 24 September 2011.</ref>
==ವ್ಯುತ್ಪತ್ತಿ==
{{main|ಕೊಲ್ಲಂಗೆ ಹೆಸರುಗಳು}}
ಜನಪ್ರಿಯ ಸಿದ್ಧಾಂತದ ಪ್ರಕಾರ, "ಕೊಲ್ಲಂ" ಎಂಬ ಹೆಸರು ''ಕೊಯಿಲ್ಲಂ'' ಎಂಬ ಪದದಿಂದ ಬಂದಿದೆ, ಇದು ''[[ಕೊವಿಲಕಂ]]'' ("ರಾಜಮನೆತನದ ಅರಮನೆ" ಎಂದರ್ಥ) ಮತ್ತು ''[[ಇಲ್ಲಂ]]'' ([[ಇಲ್ಲತು ನಾಯರ್|ನಾಯರ್ ಶ್ರೀಮಂತರು]] ಅಥವಾ [[ಬ್ರಾಹ್ಮಣ]]ರ ಸಾಂಪ್ರದಾಯಿಕ ಮನೆ) ಸಂಯುಕ್ತವಾಗಿದೆ.<ref>{{Cite web |title=History {{!}} District Kollam, Government of Kerala {{!}} India |url=https://kollam.nic.in/en/history/#:~:text=One%20theory%20has%20it%20that,and%20illam%20(brahmin%20house). |access-date=2025-05-02 |language=en-US}}</ref> ಮತ್ತೊಂದು ಸಿದ್ಧಾಂತವು ಈ ಹೆಸರು [[ಸಂಸ್ಕೃತ]] ಪದ ''ಕೊಲ್ಲಂ'' ನಿಂದ ಬಂದಿದೆ, ಇದರರ್ಥ "ಮೆಣಸು," ಏಕೆಂದರೆ ಈ ಪ್ರದೇಶವು ಐತಿಹಾಸಿಕವಾಗಿ ಮೆಣಸಿನ ವ್ಯಾಪಾರ ಮತ್ತು ರಫ್ತಿಗೆ ಪ್ರಮುಖ ಕೇಂದ್ರವಾಗಿತ್ತು.<ref>{{Cite web |title=History {{!}} District Kollam, Government of Kerala {{!}} India |url=https://kollam.nic.in/en/history/#:~:text=The%20name%20Kollam%20has%20a,and%20exporting%20centre%20for%20pepper. |access-date=2025-05-02 |language=en-US}}</ref>
825 AD ರಲ್ಲಿ, [[ಮಲಯಾಳಂ ಕ್ಯಾಲೆಂಡರ್]], ಅಥವಾ ''ಕೊಲ್ಲವರ್ಷಂ'', ನಗರದಲ್ಲಿ ನಡೆದ ಸಭೆಗಳಲ್ಲಿ ಪ್ರಾರಂಭವಾಯಿತು.<ref>ending with the Royal sanction of Tarissapalli copper plates to Assyrian Monks by Vaishnaite Chera King Rajashekara Varma, against the backdrop of a Shivite revival led by Adi Shankara among the Nampoothiri communities [http://www.kerala.gov.in/statistical/panchayat_statistics2001/klm_shis.htm Kerala government website] {{webarchive|url=https://web.archive.org/web/20071121073245/http://www.kerala.gov.in/statistical/panchayat_statistics2001/klm_shis.htm |date=21 November 2007 }}</ref> ಪ್ರಸ್ತುತ ಮಲಯಾಳಂ ಕ್ಯಾಲೆಂಡರ್ ಅನ್ನು ಬೆಂಕಿಯಿಂದ ನಾಶವಾದ ನಂತರ ಪಟ್ಟಣವನ್ನು ಪುನರ್ನಿರ್ಮಿಸಿದ ನಂತರ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.
ಈ ನಗರವನ್ನು ಅರೇಬಿಕ್ನಲ್ಲಿ ''ಕೂಲಂ'' ಎಂದು ಕರೆಯಲಾಗುತ್ತಿತ್ತು,<ref name="Koolam">{{cite book |author=S. Muhammad Hussain Nainar |url=https://archive.org/details/Tuhfat-al-MujahidinAnHistoricalWorkInTheArabicLanguage |title=Tuhfat-al-Mujahidin: An Historical Work in The Arabic Language |publisher=University of Madras |year=1942}}</ref> ಪೋರ್ಚುಗೀಸ್ನಲ್ಲಿ ''ಕೌಲಾಂ'', ಮತ್ತು ಪ್ರಾಚೀನ ತಮಿಳು ಸಾಹಿತ್ಯದಲ್ಲಿ ''ದೇಸಿಂಗನಾಡು''.<ref name="auto" />
==ಇತಿಹಾಸ==
{{main|ಕೊಲ್ಲಂ ಇತಿಹಾಸ}}
[[File:Periplous of the Erythraean Sea.svg|left|thumbnail|''[[ಪೆರಿಪ್ಲಸ್ ಆಫ್ ದ ಎರಿಥ್ರಿಯನ್ ಸೀ]]'' (1ನೇ ಶತಮಾನ CE) ನ ಹೆಸರುಗಳು, ಮಾರ್ಗಗಳು ಮತ್ತು ಸ್ಥಳಗಳು]]
ಪ್ರಾಚೀನ ನಗರವಾದ ಕ್ವಿಲಾನ್ ಆಗಿ, ಕೊಲ್ಲಂ [[ಪಾಂಡ್ಯ ಸಾಮ್ರಾಜ್ಯ]] (ಸುಮಾರು 3ನೇ ಶತಮಾನ BC–12ನೇ ಶತಮಾನ) ಸಮಯದಲ್ಲಿ ಅಭಿವೃದ್ಧಿ ಹೊಂದಿದ ಬಂದರಾಗಿತ್ತು, ಮತ್ತು ನಂತರ ಸುಮಾರು 825 ರಲ್ಲಿ ಮರುವಾನ್ ಸಪಿರ್ ಐಸೊ ಸ್ಥಾಪಿಸಿದ ಸ್ವತಂತ್ರ [[ವೆನಾಡು ಸಾಮ್ರಾಜ್ಯ|ವೆನಾಡು]] ಅಥವಾ ಕ್ವಿಲಾನ್ ಸಾಮ್ರಾಜ್ಯದ ರಾಜಧಾನಿಯಾಯಿತು. ಕೊಲ್ಲಂ ಅನ್ನು 13 ನೇ ಶತಮಾನದ ಸಮುದ್ರ ವ್ಯಾಪಾರದಲ್ಲಿ ನಾಲ್ಕು ಆರಂಭಿಕ [[ವ್ಯಾಪಾರ ಕೇಂದ್ರ]]ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಈಜಿಪ್ಟ್ನ ಅಲೆಕ್ಸಾಂಡ್ರಿಯಾ ಮತ್ತು ಕೈರೋ, ಚೀನಾ ದೇಶದ [[ಕ್ವಾನ್ಝೌ]] ನಗರ, ಮತ್ತು ಮಲೇಷಿಯನ್ ದ್ವೀಪಸಮೂಹದ [[ಮಲಕ್ಕಾ]] ಸೇರಿದಂತೆ.<ref name=Tignor>{{cite book|last=tignor|first=Robert|title=Worlds together, worlds apart: a history of the world from the beginnings of humankind to the present|year=2010|publisher=W.W. Norton & Co.|location=New York|isbn=978-0-393-93492-2|page=365|url=http://books.wwnorton.com/books/detail.aspx?ID=17166|edition=3rd}}</ref> 1280 ರಲ್ಲಿ, [[ಯುವಾನ್ ರಾಜವಂಶ|ಯುವಾನ್]] ಚೀನಾದ ರಾಯಭಾರಿಗಳು ಕೊಲ್ಲಂಗೆ ಬಂದು ಸ್ಥಳೀಯ ಆಡಳಿತಗಾರ ಮತ್ತು ಚೀನಾ ನಡುವಿನ ಸಂಬಂಧಗಳನ್ನು ಸ್ಥಾಪಿಸಿದ ಉದಾಹರಣೆಯಿದೆ.<ref>{{Cite book|title=Al-Hind, The making of the Indo-Islamic World|publisher=Brill|chapter-url=https://archive.org/details/AndreWinkAlHindTheMakingOfTheIndoIslamKhaledWahsh2FFacebook2FkWahshyahoo.com/page/n24/mode/1up?view=theater&q=Embassy|year=2002|chapter='Trade embassy to Kollam'}}</ref>
===ಪಾಂಡ್ಯ ಆಳ್ವಿಕೆ===
ಕೊಲ್ಲಂನ ಪ್ರಾಚೀನ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವು ಕೇರಳದ ಉಳಿದ ಭಾಗಗಳಿಂದ ಬಹುತೇಕ ಸಂಪೂರ್ಣವಾಗಿ ಸ್ವತಂತ್ರವಾಗಿತ್ತು. [[ಚೇರ ಸಾಮ್ರಾಜ್ಯ]]ವು ದಕ್ಷಿಣದಲ್ಲಿ [[ಆಲಪ್ಪುಳ]] ಮತ್ತು ಉತ್ತರದಲ್ಲಿ [[ಕಾಸರಗೋಡು]] ನಡುವಿನ ಮಲಬಾರ್ ಕರಾವಳಿ ಪ್ರದೇಶವನ್ನು ಆಳಿತು. ಇದು [[ಪಾಲಕ್ಕಾಡ್ ಕಣಿವೆ]], [[ಕೊಯಂಬತ್ತೂರು]], [[ಸೇಲಂ, ತಮಿಳುನಾಡು|ಸೇಲಂ]], ಮತ್ತು [[ಕೊಳ್ಳಿ ಬೆಟ್ಟಗಳು]] ಸೇರಿದಂತೆ. [[ಕೊಯಂಬತ್ತೂರು]] ಸುತ್ತಮುತ್ತಲಿನ ಪ್ರದೇಶವು [[ಸಂಗಮ್ ಅವಧಿ]]ಯಲ್ಲಿ ಸುಮಾರು 1ನೇ ಮತ್ತು 4ನೇ ಶತಮಾನ CE ನಡುವೆ ಚೇರರ ಆಳ್ವಿಕೆಯಲ್ಲಿತ್ತು, ಮತ್ತು ಇದು ಮಲಬಾರ್ ಕರಾವಳಿ ಮತ್ತು [[ತಮಿಳುನಾಡು]] ನಡುವಿನ ಪ್ರಮುಖ ವ್ಯಾಪಾರ ಮಾರ್ಗವಾದ ಪಾಲಕ್ಕಾಡ್ ಕಣಿವೆಗೆ ಪೂರ್ವ ಪ್ರವೇಶದ್ವಾರವಾಗಿ ಕಾರ್ಯನಿರ್ವಹಿಸಿತು.<ref name="Trade">{{cite news|last=Subramanian|first=T. S|title=Roman connection in Tamil Nadu|url=http://www.hindu.com/thehindu/thscrip/print.pl?file=2007012800201800.htm&date=2007/01/28/&prd=th|access-date=28 October 2011|newspaper=[[The Hindu]]|date=28 January 2007|url-status=live|archive-url=https://web.archive.org/web/20130919235748/http://www.hindu.com/thehindu/thscrip/print.pl?file=2007012800201800.htm&date=2007%2F01%2F28%2F&prd=th|archive-date=19 September 2013}}</ref> ಆದಾಗ್ಯೂ, ಪ್ರಸ್ತುತ ಕೇರಳ ರಾಜ್ಯದ ದಕ್ಷಿಣ ಪ್ರದೇಶವು (ತಿರುವನಂತಪುರ ಮತ್ತು ಆಲಪ್ಪುಳ ನಡುವಿನ ಕರಾವಳಿ ಪಟ್ಟಿ) [[ಆಯ್ ರಾಜವಂಶ]]ದ ಆಳ್ವಿಕೆಯಲ್ಲಿತ್ತು, ಇದು ಚೇರರಿಗಿಂತ [[ಮಧುರೈ]]ನ [[ಪಾಂಡ್ಯ ಸಾಮ್ರಾಜ್ಯ]]ಕ್ಕೆ ಹೆಚ್ಚು ಸಂಬಂಧ ಹೊಂದಿತ್ತು.<ref>KA Nilakanta Sastri</ref>
[[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟಸ್]], ಗ್ರೀಕ್ [[ನೆಸ್ಟೋರಿಯನ್ ಕ್ರಿಶ್ಚಿಯನ್|ನೆಸ್ಟೋರಿಯನ್]] ನಾವಿಕ,<ref>{{cite web|author=Roger Pearse |url=http://www.ccel.org/ccel/pearse/morefathers/files/cosmas_00_0_eintro.htm |title=Cosmas Indicopleustes, Christian Topography. Preface to the online edition |publisher=Ccel.org |date=5 July 2003 |access-date=20 April 2013}}</ref> ತನ್ನ ಪುಸ್ತಕ ಕ್ರಿಶ್ಚಿಯನ್ ಟೋಪೋಗ್ರಫಿಯಲ್ಲಿ,<ref>{{cite web|author=Roger Pearse |url=http://www.ccel.org/ccel/pearse/morefathers/files/cosmas_11_book11.htm |title=Cosmas Indicopleustes, Christian Topography (1897) pp. 358–373. Book 11 |publisher=Ccel.org |access-date=20 April 2013}}</ref> 550 ರಲ್ಲಿ ಮಲಬಾರ್ ಕರಾವಳಿಗೆ ಭೇಟಿ ನೀಡಿದ ಅವರು, ''ಮೇಲ್'' (ಮಲಬಾರ್ ಕರಾವಳಿ) ನಲ್ಲಿ ಕ್ರಿಶ್ಚಿಯನ್ ವಿಶ್ವಾಸಿಗಳ ಒಂದು ಸಣ್ಣ ವಸಾಹತು ಇರುವುದನ್ನು ಉಲ್ಲೇಖಿಸಿದ್ದಾರೆ. ಅವರು ಹೀಗೆ ಬರೆಯುತ್ತಾರೆ, "ತಬ್ರೋಪೇನ್ (ಸಿಲೋನ್) ದ್ವೀಪದಲ್ಲಿ, ಕ್ರಿಶ್ಚಿಯನ್ನರ ಚರ್ಚ್, ಪಾದ್ರಿಗಳು ಮತ್ತು ವಿಶ್ವಾಸಿಗಳು ಇದ್ದಾರೆ. ಅಂತೆಯೇ ಮೇಲ್ನಲ್ಲಿ, ಅಲ್ಲಿ ಮೆಣಸು ಬೆಳೆಯುತ್ತದೆ, ಮತ್ತು ಕಲ್ಲಿಯಾನ (ನಿಲ್ಲಕಲ್ನ ಕಲ್ಲಿಯಾನ್ಕಲ್) ಕೃಷಿ ಸಮುದಾಯದಲ್ಲಿ, ಪರ್ಷಿಯಾದಲ್ಲಿ 325 AD ನ ನೈಸಿಯಾ ಸುನ್ನಹಾಡೋಸ್ ಪ್ರಕಾರ ಪ್ರತಿಷ್ಠಿತ ಬಿಷಪ್ ಕೂಡ ಇದ್ದಾರೆ."<ref>Travancore Manual</ref>
ಮರುವಾನ್ ಸಪಿರ್ ಐಸೊ ಕೊಲ್ಲಂ ಬಂದರಿನ ಬಳಿ ಕ್ರಿಶ್ಚಿಯನ್ ಚರ್ಚ್ ಅನ್ನು ಸ್ಥಾಪಿಸಿದರು, ಇದಕ್ಕೆ ವೆನಾಡ್ ರಾಜ ಅಯ್ಯನಾಟಿಕಲ್ ದಾನ ನೀಡಿದರು. [[ತರಿಸಾಪ್ಳ್ಳಿ]] ಎಂದು ಕರೆಯಲ್ಪಡುವ ಚರ್ಚ್, ರಾಜನು ನೀಡಿದ [[ಕೊಲ್ಲಂ ತಾಮ್ರ ಫಲಕಗಳು|ಕೊಲ್ಲಂ ತಾಮ್ರ ಫಲಕ]] ಅನುದಾನವನ್ನು ಪಡೆಯಿತು.
ಕೊಲ್ಲಂ [[ಭಾರತೀಯ ಉಪಖಂಡ]]ದ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದಕ್ಕೆ ನೆಲೆಯಾಗಿದೆ.<ref>{{cite book |author=Jonathan Goldstein |title=The Jews of China |publisher=M. E. Sharpe |year=1999|isbn=9780765601049 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=Edward Simpson|author2=Kai Kresse|title=Struggling with History: Islam and Cosmopolitanism in the Western Indian Ocean|url=https://books.google.com/books?id=w0qHKA7zEaEC&pg=PA333|access-date=24 July 2012 |year=2008|publisher=Columbia University Press|isbn=978-0-231-70024-5|pages=333}}</ref><ref name="Kupferschmidt1987">{{cite book|author=Uri M. Kupferschmidt|title=The Supreme Muslim Council: Islam Under the British Mandate for Palestine|url=https://books.google.com/books?id=ChEVAAAAIAAJ&pg=PA458|access-date=25 July 2012|year=1987|publisher=Brill|isbn=978-90-04-07929-8|pages=458–459}}</ref><ref name="Raṇṭattāṇi2007">{{cite book|author=Husain Raṇṭattāṇi|title=Mappila Muslims: A Study on Society and Anti Colonial Struggles |url=https://books.google.com/books?id=xlb5BrabQd8C&pg=PA179|access-date=25 July 2012|year=2007|publisher=Other Books|isbn=978-81-903887-8-8|pages=179–}}</ref> ''[[ಕ್ವಿಸ್ಸತ್ ಶಕರ್ವತಿ ಫರ್ಮದ್]]'' ಪ್ರಕಾರ, [[ಕೊಡುಂಗಲ್ಲೂರು]], ಕೊಲ್ಲಂ, [[ಮದಾಯಿ]], [[ಬಾರ್ಕೂರು]], [[ಮಂಗಳೂರು]], [[ಕಾಸರಗೋಡು]], [[ಕಣ್ಣೂರು]], [[ಧರ್ಮದಂ]], [[ಕೊಯಿಲಾಂಡಿ|ಪಂಥಲಯಿನಿ]], ಮತ್ತು [[ಚಾಲಿಯಂ]] ಗಳಲ್ಲಿನ [[ಮಸೀದಿ|''ಮಸ್ಜಿದ್'']]ಗಳು [[ಮಲಿಕ್ ದೀನಾರ್]] ಯುಗದಲ್ಲಿ ನಿರ್ಮಿಸಲ್ಪಟ್ಟವು, ಮತ್ತು ಅವು [[ಭಾರತೀಯ ಉಪಖಂಡ]]ದ ಅತ್ಯಂತ ಹಳೆಯ ''ಮಸ್ಜಿದ್''ಗಳಲ್ಲಿ ಸೇರಿವೆ.<ref>Prange, Sebastian R. ''Monsoon Islam: Trade and Faith on the Medieval Malabar Coast.'' Cambridge University Press, 2018. 98.</ref> ಮಲಿಕ್ ದೀನಾರ್ [[ಕಾಸರಗೋಡು]] ಪಟ್ಟಣದ [[ತಲಾಂಗರ]]ದಲ್ಲಿ ನಿಧನರಾದರು ಎಂದು ನಂಬಲಾಗಿದೆ.<ref name="ch">Pg 58, Cultural heritage of Kerala: an introduction, A. Sreedhara Menon, East-West Publications, 1978</ref>
===ವೆನಾಡಿನ ರಾಜಧಾನಿ (9 ನೇ ನಿಂದ 12 ನೇ ಶತಮಾನಗಳು)===
{{see also|ಕೊಲ್ಲಂ ಬಂದರು}}
[[File:Map of Kampili kingdom.png|thumb|300px|1320 CE ನಲ್ಲಿ ದಕ್ಷಿಣ ಏಷ್ಯಾ]]
ಕೊಲ್ಲಂ ಬಂದರು, ನಂತರ ಕ್ವಿಲಾನ್ ಎಂದು ಕರೆಯಲ್ಪಟ್ಟಿತು, ಇದನ್ನು 825 ರಲ್ಲಿ ನೆಸ್ಟೋರಿಯನ್ ಕ್ರಿಶ್ಚಿಯನ್ನರು, [[ಮಾರ್ ಸಬೊರ್ ಮತ್ತು ಮಾರ್ ಪ್ರೋತ್]], ಅಯ್ಯನಾಡಿಕಲ್ ತಿರುವಡಿಕಲ್, ಸ್ವತಂತ್ರ ವೆನಾಡು ಅಥವಾ ಕ್ವಿಲಾನ್ ರಾಜ್ಯದ ರಾಜ, [[ಚೇರ ಸಾಮ್ರಾಜ್ಯ|ಚೇರ]] ಸಾಮ್ರಾಜ್ಯದ ಅಡಿಯಲ್ಲಿದ್ದ ಸಾಮಂತ, ಇವರ ಅನುಮತಿಯೊಂದಿಗೆ ಸ್ಥಾಪಿಸಿದರು.<ref>Kerala Charithram P.59 Sridhara Menon</ref><ref name="Travancore Manual page 244">V. Nagam Aiya (1906), [[Travancore State Manual]], page 244</ref>{{sfnp|Malekandathil|2010}}
ಮಾರ್ ಸಪೊರ್ ಐಸೊ ಅವರು ಬ್ಯಾಕರೆ (ತೆವಲಕರ) ಬಳಿಯ ಕೊಲ್ಲಂ (ಕೊರೆ-ಕೆ-ನಿ) ನ ಬಹುತೇಕ ಕಣ್ಮರೆಯಾದ ಒಳನಾಡಿನ ಬಂದರನ್ನು ಪುನರ್ನಿರ್ಮಿಸಬೇಕೆಂದು ಅವರ ಕೋರಿಕೆಯ ಬದಲಿಗೆ, ಅವರು ಕೊಲ್ಲಂ ಬಳಿ ಹೊಸ ಬಂದರನ್ನು ರಚಿಸುವಂತೆ ಚೇರ ರಾಜನಿಗೆ ಪ್ರಸ್ತಾಪಿಸಿದರು ಎಂದು ನಂಬಲಾಗಿದೆ. ಇದು ರೋಮನ್ನರು ಮತ್ತು ಗ್ರೀಕರಿಗೆ ನೆಲ್ಸಿಂಡಾ ಮತ್ತು ಟಿಂಡಿಸ್ ಎಂದು ಮತ್ತು ತಮಿಳರಿಗೆ ತೊಂಡಿ ಎಂದು ಕರೆಯಲ್ಪಡುತ್ತಿತ್ತು, ಇದು ಹಲವಾರು ಶತಮಾನಗಳಿಂದ ವ್ಯಾಪಾರವಿಲ್ಲದೆ ಇತ್ತು, ಏಕೆಂದರೆ 6 ನೇ ಶತಮಾನದಲ್ಲಿ [[ಪಲ್ಲವ ಸಾಮ್ರಾಜ್ಯ|ಪಲ್ಲವರು]] ಚೇರರನ್ನು ಆಕ್ರಮಿಸಿಕೊಂಡರು, ಇದರಿಂದಾಗಿ ಮಲಬಾರ್ ಕರಾವಳಿಯ ಮಸಾಲೆ ವ್ಯಾಪಾರವು ಕೊನೆಗೊಂಡಿತು. ಇದು ನೆಸ್ಟೋರಿಯನ್ನರಿಗೆ ಚೇರ ಸಾಮ್ರಾಜ್ಯದಲ್ಲಿ ಹಲವಾರು ದಶಕಗಳ ಕಾಲ ಉಳಿಯಲು ಮತ್ತು ಸಿರಿಯನ್ ಆರಾಧನೆಯನ್ನು ಆಧಾರವಾಗಿ ಸಂತ ಥಾಮಸ್ ಸಂಪ್ರದಾಯದಲ್ಲಿ ನಾಂಪೂತಿರಿ ವೈಷ್ಣವರು ಮತ್ತು ನಾಯರ್ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪರಿಚಯಿಸಲು ಅವಕಾಶ ಮಾಡಿಕೊಟ್ಟಿತು, ಇದು ಸಂಸ್ಕೃತ ಮತ್ತು ವೇದ ಪ್ರಾರ್ಥನೆಗಳನ್ನು ಬದಲಾಯಿಸದೆ, ತ್ರಿತ್ವದ ಸಿದ್ಧಾಂತಕ್ಕೆ ಆಧಾರವಾಗಿತ್ತು.<ref>History of Kollam city and Kollam Port [http://www.quilon.com/history.htm Quilon.com]</ref> ಅಯ್ಯನಾಡಿಕಲ್ ತಿರುವಡಿಕಲ್ ಅವರು ಮರುವಾನ್ ಸಪೊರ್ ಐಸೊಗೆ ಪ್ರಸ್ತುತಪಡಿಸಿದ [[ಥರಿಸಾಪ್ಳ್ಳಿ ಫಲಕಗಳು]] ಕ್ರಿಶ್ಚಿಯನ್ನರಿಗೆ ನಗರದಲ್ಲಿ ವಿದೇಶಿ ವ್ಯಾಪಾರದ ಮೇಲ್ವಿಚಾರಣೆಯ ಸವಲತ್ತು ಮತ್ತು ಕ್ವಿಲಾನ್ನ ವ್ಯಾಪಾರ ಮತ್ತು ಸಂಪತ್ತನ್ನು ಹೆಚ್ಚಿಸುವ ಉದ್ದೇಶದಿಂದ ತೂಕ ಮತ್ತು ಅಳತೆಗಳ ಮೇಲಿನ ನಿಯಂತ್ರಣವನ್ನು ನೀಡಿತು. [[ಹರ್ಮನ್ ಗುಂಡರ್ಟ್]] ಮರುವಾನ್ ಸಪಿರ್ ಐಸೊ ಅವರು ಥರಿಸ್ಸಪ್ಳ್ಳಿ ಚರ್ಚ್ ಅನ್ನು ನಿರ್ಮಿಸಲು ಮತ್ತು ಕೊಲ್ಲಂನಲ್ಲಿ [[ಮಣಿಗ್ರಾಮಂ]] ವ್ಯಾಪಾರ ಗಿಲ್ಡ್ ಅನ್ನು ಸಂಘಟಿಸಲು ಭೂಮಿಯನ್ನು ನೀಡಲಾಯಿತು ಎಂದು ಭಾವಿಸುತ್ತಾರೆ.<ref>{{cite book |last=Logan |first=William |title=Malabar Manual |publisher=Asian Educational Services |year=2000 |isbn=978-8120604469 |volume=2 |pages=cxxv–cxxvi, cxxxviii |chapter=Appendix XII (Collection of Deeds)}}</ref> {{sfnp|Malekandathil|2010}}<ref name="Sharma2010">{{cite book|author=Yogesh Sharma|title=Coastal Histories: Society and Ecology in Pre-modern India|url=https://books.google.com/books?id=FTTGWSme30YC|year=2010|publisher=Primus Books|page=78|isbn=978-93-80607-00-9}}</ref>
[[File:Quilon Syrian copper plates (849 AD) PLATE 3.jpg|thumb|'''ಕ್ವಿಲಾನ್ ಸಿರಿಯನ್ ತಾಮ್ರ ಫಲಕಗಳು (849 AD) PLATE 3''']]
ಹೀಗೆ ಮಲಯಾಳಂ ಯುಗ ಪ್ರಾರಂಭವಾಯಿತು, ಇದನ್ನು ನಗರದ ನಂತರ ಕೊಲ್ಲ ವರ್ಷಂ ಎಂದು ಕರೆಯಲಾಗುತ್ತದೆ, ಇದು 9 ನೇ ಶತಮಾನದಲ್ಲಿ ಕೊಲ್ಲಂನ ಮಹತ್ವವನ್ನು ಸೂಚಿಸುತ್ತದೆ.{{sfnp|Malekandathil|2010}} ಸಿರಾಫ್ನ ಪರ್ಷಿಯನ್ ವ್ಯಾಪಾರಿ ಸೊಲೇಮಾನ್ 9 ನೇ ಶತಮಾನದಲ್ಲಿ ಮಲಬಾರ್ಗೆ ಭೇಟಿ ನೀಡಿದನು ಮತ್ತು ಭಾರತದಲ್ಲಿ ಚೀನಾದಿಂದ ಪರ್ಷಿಯನ್ ಕೊಲ್ಲಿಗೆ ಹೋಗುವ ದಾರಿಯಲ್ಲಿ ಸರಕುಗಳ ಸಾಗಾಣಿಕೆಗಾಗಿ ಬೃಹತ್ ಚೀನೀ ಹಡಗುಗಳು ಬಳಸುವ ಏಕೈಕ ಬಂದರಾಗಿ ಕ್ವಿಲಾನ್ ಅನ್ನು ಕಂಡನು. ಕೊಲ್ಲಂನ ಆಡಳಿತಗಾರರು (ಹಿಂದೆ 'ದೇಸಿಂಗನಾಡು' ಎಂದು ಕರೆಯಲ್ಪಟ್ಟಿದ್ದರು) ಚೀನಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದರು ಮತ್ತು ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡರು. [[ಟ್ಯಾಂಗ್ ಸಾಮ್ರಾಜ್ಯ]] (618–913) ದಾಖಲೆಗಳ ಪ್ರಕಾರ,<ref>Travancore Manual, page 244</ref> 7 ನೇ ಶತಮಾನದ ಮೊದಲು ಕ್ವಿಲಾನ್ ಅವರ ಮುಖ್ಯ ಬಂದರಾಗಿತ್ತು. ಚೀನೀ ವ್ಯಾಪಾರವು ಸುಮಾರು 600 ರಲ್ಲಿ ಕಡಿಮೆಯಾಯಿತು ಮತ್ತು 13 ನೇ ಶತಮಾನದಲ್ಲಿ ಮತ್ತೆ ಪುನರುಜ್ಜೀವನಗೊಂಡಿತು. ಬಿಷಪ್ ಕ್ಯಾಟಲಾನಿ ಅವರ ''ಮಿರಾಬಿಲಿಯಾ ಡೆಸ್ಕ್ರಿಪ್ಟಾ'' ಕೊಲ್ಲಂನ ಜೀವನದ ವಿವರಣೆಯನ್ನು ನೀಡುತ್ತದೆ, ಅವರು ಅದನ್ನು ಭಾರತದ ಅತ್ಯಂತ ಹಳೆಯ ಕ್ಯಾಥೋಲಿಕ್ ಧರ್ಮಪ್ರಾಂತ್ಯವಾದ ಕೊಲ್ಲಂಗೆ ಕ್ಯಾಥೋಲಿಕ್ ಬಿಷಪ್ ಆಗಿ ನೋಡಿದರು. [[ಮಾರ್ಕೊ ಪೊಲೊ]] ನಗರಕ್ಕೆ ಭೇಟಿ ನೀಡುವ ಮೊದಲು ಅವರು 'ಇಂಡಿಯಾ ದಿ ಮೇಜರ್' ನಲ್ಲಿನ ಜೀವನದ ನಿಜ ಮತ್ತು ಕಾಲ್ಪನಿಕ ವಿವರಣೆಗಳನ್ನು ಸಹ ನೀಡುತ್ತಾರೆ.<ref>Mirabilia Descripta by Jordanus Catalani circa 1320–1336 (trans Hiracut Society, London)</ref> ಸುಲೈಮಾನ್ ಅಲ್-ತಾಜಿರ್, [[ಸ್ಥಾನು ರವಿ ವರ್ಮ]] (9 ನೇ ಶತಮಾನ CE) ಆಳ್ವಿಕೆಯಲ್ಲಿ ಕೇರಳಕ್ಕೆ ಭೇಟಿ ನೀಡಿದ ಪರ್ಷಿಯನ್ ವ್ಯಾಪಾರಿ, ಆ ಸಮಯದಲ್ಲಿ ಕೇರಳ ಮತ್ತು ಚೀನಾ ನಡುವೆ ಕೊಲ್ಲಂ ಬಂದರಿನ ಆಧಾರದ ಮೇಲೆ ವ್ಯಾಪಕವಾದ ವ್ಯಾಪಾರವಿತ್ತು ಎಂದು ದಾಖಲಿಸಿದ್ದಾರೆ.<ref>{{Cite book|title=India Charitram|last=Menon|first=A. Shreedhara|publisher=DC Books|year=2016|isbn=9788126419395|location=Kottayam|pages=219}}</ref>
=== ಕ್ಯಾಟಲನ್ ಅಟ್ಲಾಸ್ (1375) ನಲ್ಲಿ "ಕೊಲಂಬೊ" ಆಗಿ ಕೊಲ್ಲಂ ===
[[File:Sultan of Delhi (top) and King of Vijayanagar (bottom) in the Catalan Atlas of 1375.jpg|thumb|[[ದೆಹಲಿ ಸುಲ್ತಾನರು|ದೆಹಲಿಯ ಸುಲ್ತಾನ]] (ಮೇಲ್ಭಾಗ, ಧ್ವಜ: [[File:Sultan of Delhi Flag according to the Catalan Atlas (1375).png|15px]]) ಮತ್ತು ಕೆಳಭಾಗದಲ್ಲಿ "ಕೊಲಂಬೊದ ರಾಜ" (ಕೊಲ್ಲಂ) (ಧ್ವಜ: [[File:Flag_of_the_Kigdom_of_Colombo,_Catalan_Atlas_1375.png|15px]], ಅಲ್ಲಿ ಆರಂಭಿಕ [[ಸಂತ ಥಾಮಸ್ ಕ್ರಿಶ್ಚಿಯನ್ನರು|ಸಂತ ಥಾಮಸ್ ಕ್ರಿಶ್ಚಿಯನ್]] ಮತ್ತು 1329 ರಿಂದ [[ಜೋರ್ಡಾನ್ ಕ್ಯಾಟಲಾ|ಜೋರ್ಡಾನಸ್]] ಅಡಿಯಲ್ಲಿ ಕ್ಯಾಥೋಲಿಕ್ ಮಿಷನ್ ಇದ್ದ ಕಾರಣ ಕ್ರಿಶ್ಚಿಯನ್ ಎಂದು ಗುರುತಿಸಲಾಗಿದೆ)<ref name="VL4">{{cite journal |last1=Liščák |first1=Vladimír |title=Mapa mondi (Catalan Atlas of 1375), Majorcan cartographic school, and 14th century Asia |journal=International Cartographic Association |date=2017 |volume=1 |pages=4–5 |doi=10.5194/ica-proc-1-69-2018 |bibcode=2018PrICA...1...69L |url=https://www.proc-int-cartogr-assoc.net/1/69/2018/ica-proc-1-69-2018.pdf |doi-access=free }}</ref> ಸಮಕಾಲೀನ [[ಕ್ಯಾಟಲನ್ ಅಟ್ಲಾಸ್]] 1375 ರಲ್ಲಿ.<ref>{{cite book |last1=Massing |first1=Jean Michel |last2=Albuquerque |first2=Luís de |last3=Brown |first3=Jonathan |last4=González |first4=J. J. Martín |title=Circa 1492: Art in the Age of Exploration |date=1 January 1991 |publisher=Yale University Press |isbn=978-0-300-05167-4 |url=https://books.google.com/books?id=wMK-Ba0-RG4C&pg=PA30 |language=en}}</ref> ಸ್ಥಳದ ಹೆಸರುಗಳಲ್ಲಿ ಹಲವಾರು ನಿಖರವಾಗಿವೆ.<ref>{{cite book |title=Cartography between Christian Europe and the Arabic-Islamic World, 1100-1500: Divergent Traditions |date=17 June 2021 |publisher=BRILL |isbn=978-90-04-44603-8 |page=176 |url=https://books.google.com/books?id=eq0zEAAAQBAJ&pg=PA176 |language=en}}</ref> ದಕ್ಷಿಣ ರಾಜನ ಪಕ್ಕದಲ್ಲಿರುವ ಶೀರ್ಷಿಕೆ: "ಇಲ್ಲಿ ಕೊಲಂಬೊದ ರಾಜ, ಕ್ರಿಶ್ಚಿಯನ್, ಆಳ್ವಿಕೆ ನಡೆಸುತ್ತಾನೆ."<ref>{{cite journal |last1=Liščák |first1=Vladimír |title=Mapa mondi (Catalan Atlas of 1375), Majorcan cartographic school, and 14th century Asia |journal=International Cartographic Association |date=2017 |volume=1 |page=5 |doi=10.5194/ica-proc-1-69-2018 |bibcode=2018PrICA...1...69L |url=https://www.proc-int-cartogr-assoc.net/1/69/2018/ica-proc-1-69-2018.pdf |doi-access=free }}</ref>]]
13 ನೇ ಶತಮಾನ CE ಯಲ್ಲಿ, [[ಮರವರ್ಮನ್ ಕುಲಶೇಖರ ಪಾಂಡ್ಯನ್ I]], [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಆಡಳಿತಗಾರ, ವೆನಾಡಿನಲ್ಲಿ ಯುದ್ಧ ಮಾಡಿ ಕೊಲ್ಲಂ ನಗರವನ್ನು ವಶಪಡಿಸಿಕೊಂಡನು.<ref>KA Nilakanta Sastri, p197</ref> ಈ ನಗರವು 1375 CE ನ ಕ್ಯಾಟಲನ್ ಅಟ್ಲಾಸ್ನಲ್ಲಿ ಕೊಲಂಬೊ ಮತ್ತು ಕೊಲೊಬೊ ಎಂದು ಕಾಣಿಸಿಕೊಂಡಿದೆ. ನಕ್ಷೆಯು ಈ ನಗರವನ್ನು ಕ್ರಿಶ್ಚಿಯನ್ ನಗರವೆಂದು, ಕ್ರಿಶ್ಚಿಯನ್ ಆಡಳಿತಗಾರನಿಂದ ಆಳಲ್ಪಡುತ್ತಿದೆ ಎಂದು ಗುರುತಿಸುತ್ತದೆ.<ref name="VL4"/>
ರಾಜನ ಚಿತ್ರದ ಮೇಲಿನ ಪಠ್ಯವು ಹೇಳುತ್ತದೆ:
{{blockquote|''ಆಸಿ ಸೆನ್ಯೊರೆಜ ಲೊ ರೇ ಕೊಲೊಬೊ, ಕ್ರಿಸ್ಟಿಯಾ. ಪ್ರುವಿನ್ಸಿಯ ಡಿ ಕೊಲಂಬೊ''<br />(ಇಲ್ಲಿ ಲಾರ್ಡ್ ಕಿಂಗ್ ಕೊಲೊಬೊ, ಕ್ರಿಶ್ಚಿಯನ್, ಕೊಲಂಬೊ ಪ್ರಾಂತ್ಯ, ಆಳ್ವಿಕೆ ನಡೆಸುತ್ತಾನೆ).<ref name="VL4"/>}}
ಈ ನಗರವನ್ನು 825 ರಲ್ಲಿ ಮರುವಾನ್ ಸಪಿರ್ ಐಸೊ, ಪರ್ಷಿಯನ್ [[ಪೂರ್ವ ಸಿರಿಯಾಕ್ ಕ್ರಿಶ್ಚಿಯನ್]] ವ್ಯಾಪಾರಿ ಸ್ಥಾಪಿಸಿದರು, ಮತ್ತು ಇದನ್ನು [[ಸಂತ ಥಾಮಸ್ ಕ್ರಿಶ್ಚಿಯನ್ನರು]] ಆರಂಭದಲ್ಲಿಯೇ ಕ್ರಿಶ್ಚಿಯನ್ನರನ್ನಾಗಿ ಮಾಡಿದರು. 1329 CE ಯಲ್ಲಿ, [[ಪೋಪ್ ಜಾನ್ XXII]] ಕೊಲ್ಲಂ / ಕೊಲಂಬೊವನ್ನು ಭಾರತೀಯ ಉಪಖಂಡದ ಮೊದಲ ಮತ್ತು ಏಕೈಕ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯವನ್ನಾಗಿ ಸ್ಥಾಪಿಸಿದರು, ಮತ್ತು [[ಜೋರ್ಡಾನ್ ಕ್ಯಾಟಲಾ|ಕ್ಯಾಟಲೋನಿಯಾದ ಜೋರ್ಡಾನ್]] ಅನ್ನು, [[ಡೊಮಿನಿಕನ್ ಸನ್ಯಾಸಿ]], ಲ್ಯಾಟಿನ್ ಪಂಥದ ಧರ್ಮಪ್ರಾಂತ್ಯದ ಮೊದಲ ಬಿಷಪ್ ಆಗಿ ನೇಮಿಸಿದರು.<ref name="VL4" />
===ಪೋರ್ಚುಗೀಸ್, ಡಚ್ ಮತ್ತು ಬ್ರಿಟಿಷ್ ವ್ಯಾಪಾರ ಮತ್ತು ಪ್ರಭಾವಗಳು (16 ನೇ ನಿಂದ 18 ನೇ ಶತಮಾನಗಳು)===
[[File:Thambiran Vanakkam 1578.JPG|thumbnail|''[[ತಂಬಿರಾನ್ ವನಕ್ಕಂ]]'']]
[[File:Retrato de Afonso de Albuquerque (após 1545) - Autor desconhecido-cortado.png|thumb|ವೈಸ್ರಾಯ್ [[ಅಫೋನ್ಸೊ ಡಿ ಅಲ್ಬುಕ್ವೆರ್ಕ್]]]]
ಪೋರ್ಚುಗೀಸರು [[ಅನ್ವೇಷಣೆಯ ಯುಗ]]ದಲ್ಲಿ 1498 ರಲ್ಲಿ [[ಕಪ್ಪಾಡ್]] [[ಕೋಳಿಕೋಡ್]] ಗೆ ಆಗಮಿಸಿದರು, ಹೀಗಾಗಿ ಯುರೋಪ್ನಿಂದ ಭಾರತಕ್ಕೆ ನೇರ ಸಮುದ್ರ ಮಾರ್ಗವನ್ನು ತೆರೆದರು.<ref>DC Books, Kottayam (2007), A. Sreedhara Menon, A Survey of Kerala History</ref> ಅವರು 1502 ರಲ್ಲಿ ಕೊಲ್ಲಂನ ಥಂಗಸ್ಸೇರಿಯಲ್ಲಿ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದ ಮೊದಲ ಯುರೋಪಿಯನ್ನರು, ಇದು ಅವರ ಮೆಣಸಿನ ವ್ಯಾಪಾರದ ಕೇಂದ್ರವಾಯಿತು.<ref>{{Cite web|url=https://www.keralatourism.org/destination/thangasseri-kollam/296|title=Thangasseri, Kollam, Dutch Quilon, Kerala|website=Kerala Tourism}}</ref> ನಂತರ ಮೂರ್ಸ್/ಅರಬ್ಬರೊಂದಿಗಿನ ಯುದ್ಧಗಳಲ್ಲಿ, ತೆವಲಕರದ ಸಂತ ಥಾಮಸ್ ಸಂಪ್ರದಾಯದ ಪ್ರಾಚೀನ ಚರ್ಚ್ (ದೇವಾಲಯ) ನಾಶವಾಯಿತು. 1517 ರಲ್ಲಿ, ಪೋರ್ಚುಗೀಸರು ಥಂಗಸ್ಸೇರಿಯಲ್ಲಿ ಸೇಂಟ್ ಥಾಮಸ್ ಕೋಟೆಯನ್ನು ನಿರ್ಮಿಸಿದರು, ಅದು ನಂತರ ಡಚ್ಚರೊಂದಿಗಿನ ಯುದ್ಧಗಳಲ್ಲಿ ನಾಶವಾಯಿತು. 1661 ರಲ್ಲಿ, [[ಡಚ್ ಈಸ್ಟ್ ಇಂಡಿಯಾ ಕಂಪನಿ]] ನಗರವನ್ನು ವಶಪಡಿಸಿಕೊಂಡಿತು. ಹಳೆಯ ಪೋರ್ಚುಗೀಸ್ ಕೋಟೆಯ ಅವಶೇಷಗಳು, ನಂತರ ಡಚ್ಚರಿಂದ ನವೀಕರಿಸಲ್ಪಟ್ಟವು, ಥಂಗಸ್ಸೇರಿಯಲ್ಲಿ ಕಾಣಬಹುದು.
18 ನೇ ಶತಮಾನದಲ್ಲಿ, ಟ್ರಾವಂಕೋರ್ ಕೊಲ್ಲಂ ಅನ್ನು ವಶಪಡಿಸಿಕೊಂಡಿತು, ನಂತರ 1795 ರಲ್ಲಿ ಬ್ರಿಟಿಷರು ವಶಪಡಿಸಿಕೊಂಡರು.<ref>{{Cite web|url=https://kollamcity.in/|archiveurl=https://web.archive.org/web/20150602132809/http://kollamcity.in/about-kollam-city|url-status=usurped|title=Kollam City|archivedate=2 June 2015|website=Bebas88}}</ref> ಥಂಗಸ್ಸೇರಿ ಇಂದಿಗೂ ಆಂಗ್ಲೋ-ಭಾರತೀಯ ವಸಾಹತಾಗಿ ಉಳಿದಿದೆ, ಆದಾಗ್ಯೂ ಕೆಲವೇ ಆಂಗ್ಲೋ-ಭಾರತೀಯರು ಉಳಿದಿದ್ದಾರೆ. ಥಂಗಸ್ಸೇರಿಯಲ್ಲಿನ ಇನ್ಫ್ಯಾಂಟ್ ಜೀಸಸ್ ಚರ್ಚ್, ಹಳೆಯ ಪೋರ್ಚುಗೀಸ್-ನಿರ್ಮಿತ ಚರ್ಚ್,<ref>[http://www.ucanindia.in/news/new-proof-for-preportuguese-mission-in-kollam/23928/daily New proof for Pre-Portuguese mission in Kollam]</ref> ಪ್ರದೇಶದ ಪೋರ್ಚುಗೀಸ್ ಆಳ್ವಿಕೆಯ ಸ್ಮಾರಕವಾಗಿ ಉಳಿದಿದೆ.<ref>{{cite web|url=http://tourmet.com/thangassery-fort/ |title=Tourmet - Thangassery, Kollam |date=21 May 2013 |access-date=6 January 2014}}</ref><ref>{{cite web |url=http://indica.co.in/history-of-kollam#.UtZLhNKVO-0 |title=History of Kollam |access-date=15 January 2014 |archive-date=2 June 2015 |archive-url=https://web.archive.org/web/20150602133158/http://indica.co.in/history-of-kollam#.UtZLhNKVO-0 |url-status=dead }}</ref><ref>'Jornada' of Portuguese Bishop Dom Alexis Menezes 1599–1600AD</ref>
<gallery>
File:Quilon 1505 verbessert.jpg|1500 ರ ದಶಕದಲ್ಲಿ ಕೊಲ್ಲಂ
File:Quilon 1670 verbessert.jpg|1661 ರಲ್ಲಿ ಕೊಲ್ಲಂ ವಶಪಡಿಸಿಕೊಳ್ಳುವಿಕೆ
File:A view of Coylang Wellcome L0038178.jpg|1700 ರ ದಶಕದಲ್ಲಿ ಕೊಲ್ಲಂ
</gallery>
===ಕ್ವಿಲಾನ್ ಕದನ===
{{main|ಕ್ವಿಲಾನ್ ಕದನ}}
[[File:1756 Bellin Map of Kollam Fort, Kerala, India - Geographicus - Coylan-bellin-1756.jpg|thumb|1756 ರಲ್ಲಿ ಕೊಲ್ಲಂ ಕೋಟೆಯು ಪೋರ್ಚುಗೀಸ್ ಆಳ್ವಿಕೆಯಿಂದ ಡಚ್ಚರಿಗೆ ಸ್ಥಳಾಂತರಗೊಂಡ ನಂತರ]]
[[ಕ್ವಿಲಾನ್ ಕದನ]]ವು 1809 ರಲ್ಲಿ ಟ್ರಾವಂಕೋರ್ನ ಭಾರತೀಯ ಸಾಮ್ರಾಜ್ಯದ ಸೈನ್ಯದ ನಡುವೆ, ಆಗಿನ ದಳವ (ಪ್ರಧಾನ ಮಂತ್ರಿ) [[ವೇಲು ಥಂಪಿ ದಳವ]] ನೇತೃತ್ವದಲ್ಲಿ, ಮತ್ತು ಕ್ವಿಲಾನ್ನ [[ಕ್ಯಾಂಟನ್ಮೆಂಟ್ ಮೈದಾನ]]ದಲ್ಲಿ ಕರ್ನಲ್ ಚಾಲ್ಮರ್ಸ್ ನೇತೃತ್ವದ [[ಈಸ್ಟ್ ಇಂಡಿಯಾ ಕಂಪನಿ|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯ ನಡುವೆ ಹೋರಾಡಲಾಯಿತು. ಕದನವು ಕೇವಲ ಆರು ಗಂಟೆಗಳ ಕಾಲ ನಡೆಯಿತು<ref>{{cite book|url=https://books.google.com/books?id=YYlC_qF_eB0C&q=History+of+Travancore+by+P.+Shangoony+Menon&pg=PA6 |title=E-book:History of Travancore by P. Shangoony Menon |isbn=9788184650013 |access-date=2014-11-05|last1=David |first1=Maria A. |year=2009 |publisher=ISPCK }}</ref> ಮತ್ತು ಇದು ಕ್ಯಾಂಟನ್ಮೆಂಟ್ ಮೈದಾನದ ಬಳಿ ಇರುವ ಅವರ ಸೈನ್ಯದ ಸ್ಥಳದ ಮೇಲೆ ಈಸ್ಟ್ ಇಂಡಿಯಾ ಕಂಪನಿಯ ಆಕ್ರಮಣದ ಪರಿಣಾಮವಾಗಿತ್ತು. ಕಂಪನಿ ಪಡೆಗಳು ಯುದ್ಧವನ್ನು ಗೆದ್ದವು, ಆದರೆ ಯುದ್ಧದಲ್ಲಿ ಭಾಗವಹಿಸಿದ ಬಂಡುಕೋರರಿಗೆ ಕೋರ್ಟ್-ಮಾರ್ಷಲ್ ಮಾಡಿ ನಂತರ ಮೈದಾನದಲ್ಲಿ ಗಲ್ಲಿಗೇರಿಸಲಾಯಿತು.<ref name="History of Travancore">{{Cite news|url=https://www.thehindu.com/todays-paper/tp-features/tp-fridayreview/a-place-in-history/article3218611.ece|title=A place in history|newspaper=The Hindu |date=29 June 2006|via=www.thehindu.com}}</ref>
===ಟ್ರಾವಂಕೋರ್ ಆಳ್ವಿಕೆ===
18 ನೇ ಶತಮಾನದ ಆರಂಭದಲ್ಲಿ CE, [[ಟ್ರಾವಂಕೋರ್ ರಾಜಮನೆತನ]]ವು [[ಕಣ್ಣೂರು]] ಮೂಲದ [[ಕೊಲತುನಾಡು]] ರಾಜಮನೆತನ ಮತ್ತು ಪ್ರಸ್ತುತ [[ಮಲಪ್ಪುರಂ ಜಿಲ್ಲೆ]]ಯಲ್ಲಿರುವ [[ಪರಪ್ಪನಾಡ್]] ರಾಜಮನೆತನದಿಂದ ಕೆಲವು ಸದಸ್ಯರನ್ನು ದತ್ತು ತೆಗೆದುಕೊಂಡಿತು.<ref>Travancore State Manual</ref>
1755 ರಲ್ಲಿ [[ಪುರಕ್ಕಡ್]] ಕದನದಲ್ಲಿ [[ಕೋಳಿಕೋಡ್ ಇತಿಹಾಸ|ಕೋಳಿಕೋಡ್]] ನ ಪ್ರಬಲ [[ಜಾಮೋರಿನ್]] ಅನ್ನು ಸೋಲಿಸುವ ಮೂಲಕ ಟ್ರಾವಂಕೋರ್ ಕೇರಳದ ಅತ್ಯಂತ ಪ್ರಬಲ ರಾಜ್ಯವಾಯಿತು.<ref name="AHoT 162">{{cite book|last1=Shungoony Menon|first1=P.|title=A History of Travancore from the Earliest Times|date=1878|publisher=Higgin Botham & Co.|location=Madras|pages=[https://archive.org/details/ahistorytravanc00menogoog/page/n212 162]–164|url=https://archive.org/details/ahistorytravanc00menogoog|access-date=5 May 2016|language=en|format=pdf}}</ref> ಸರ್ಕಾರಿ ಕಾರ್ಯದರ್ಶಿ ಕಚೇರಿಯು 1830 ರ ದಶಕದವರೆಗೂ ಕೊಲ್ಲಂನಲ್ಲಿತ್ತು. ಇದನ್ನು [[ಸ್ವಾತಿ ತಿರುನಾಳ್ ರಾಮ ವರ್ಮ|ಸ್ವಾತಿ ತಿರುನಾಳ್]] ಆಳ್ವಿಕೆಯಲ್ಲಿ ತಿರುವನಂತಪುರಕ್ಕೆ ಸ್ಥಳಾಂತರಿಸಲಾಯಿತು.<ref>{{cite web|url=https://www.thenewsminute.com/article/short-history-kerala-secretariat-building-celebrates-150-years-111767 |title=A short history of the Kerala Secretariat as building celebrates 150 years |publisher=The NEWS Minute |date=5 November 2019 |access-date=6 November 2019}}</ref>
===ಕೊಲ್ಲಂ ಬಂದರು ಸಮುದ್ರ ತಳದಲ್ಲಿ ಉತ್ಖನನ===
[[File:Plan of Kollam 1850.jpg|thumb|1850 ರ ದಶಕದಲ್ಲಿ ಕೊಲ್ಲಂನ ಯೋಜನೆ]]
[[ಕೊಲ್ಲಂ ಬಂದರು]] ಆವರಣದಲ್ಲಿ ಫೆಬ್ರವರಿ 2014 ರಿಂದ ಉತ್ಖನನಗಳು ನಡೆಯುತ್ತಿವೆ. ತಂಡವು ಚೀನೀ ಪಿಂಗಾಣಿ ಮತ್ತು ನಾಣ್ಯಗಳು ಸೇರಿದಂತೆ ಹಲವಾರು ಪ್ರಾಚೀನ ಕಲಾಕೃತಿಗಳನ್ನು ಪತ್ತೆ ಮಾಡಿದೆ.<ref>{{cite web|url=http://www.thehindu.com/news/national/kerala/emergence-of-antiques-triggers-treasure-hunt-in-kollam/article5711850.ece |title=Emergence of antiques triggers treasure hunt in Kollam |work=The Hindu|date=21 February 2014 |access-date=11 January 2017}}</ref> ಪ್ಯಾಲೇಸ್ ಮ್ಯೂಸಿಯಂನೊಂದಿಗಿನ ಚೀನೀ ತಂಡ, ಕೇರಳ ಕೌನ್ಸಿಲ್ ಫಾರ್ ಹಿಸ್ಟೋರಿಕಲ್ ರಿಸರ್ಚ್ (KCHR) ನೊಂದಿಗೆ ಭಾರತೀಯ ತಂಡ, ಕೊಲ್ಲಂ ಮತ್ತು ಪ್ರಾಚೀನ ಚೀನಾ ನಡುವಿನ ವ್ಯಾಪಾರ ಸಂಪರ್ಕಗಳನ್ನು ತೋರಿಸುವ ಚೀನೀ ನಾಣ್ಯಗಳು ಮತ್ತು ಕಲಾಕೃತಿಗಳನ್ನು ಕಂಡುಹಿಡಿದಿದೆ.<ref>{{cite news|url=https://www.thehindu.com/news/national/kerala/from-china-on-a-coin-trail/article7192254.ece|date=2015-05-11|title=From China on a coin trail|access-date=2020-11-04|last=Pereira|first=Ignatius|work=The Hindu}}</ref>
==ಭೌಗೋಳಿಕತೆ==
{{Main|ಕೊಲ್ಲಂನ ಭೌಗೋಳಿಕತೆ}}
[[File:Kollam Canal, Jan 2016.jpg|thumb|[[ಕೊಲ್ಲಂ ಕಾಲುವೆ]] ಪರವೂರ್ ಬಳಿ|left]]
ಕೊಲ್ಲಂ ನಗರವು ಉತ್ತರಕ್ಕೆ [[ನೀಂದಕರ]] ಮತ್ತು [[ತ್ರಿಕ್ಕರುವ]] [[ಪಂಚಾಯತಿ ರಾಜ್ ಭಾರತ|ಪಂಚಾಯತ್]]ಗಳು, ದಕ್ಷಿಣಕ್ಕೆ [[ಮಯ್ಯನಾಡ್]], ಮತ್ತು ಪೂರ್ವಕ್ಕೆ [[ತ್ರಿಕ್ಕೋವಿಲ್ವಟ್ಟಂ]] ಮತ್ತು [[ಕೊಟ್ಟಂಕರ]], ಮತ್ತು ಪಶ್ಚಿಮಕ್ಕೆ ಲಕ್ಷದ್ವೀಪ ಸಮುದ್ರದಿಂದ ಸುತ್ತುವರೆದಿದೆ. ಅಷ್ಟಮುಡಿ ಸರೋವರವು ನಗರದ ಮಧ್ಯಭಾಗದಲ್ಲಿದೆ. ನಗರವು ತಿರುವನಂತಪುರದಿಂದ ಸುಮಾರು {{cvt|71|km}}, ಕೊಚ್ಚಿಯಿಂದ {{cvt|140|km}}, ಮತ್ತು [[ಕೋಳಿಕೋಡ್]] ನಿಂದ {{cvt|350|km}} ದೂರದಲ್ಲಿದೆ. [[ರಾಷ್ಟ್ರೀಯ ಜಲಮಾರ್ಗ 3]] ಮತ್ತು [[ಇತ್ತಿಕ್ಕರ ನದಿ]] ನಗರದ ಮೂಲಕ ಹಾದುಹೋಗುವ ಎರಡು ಪ್ರಮುಖ ಜಲಮಾರ್ಗಗಳಾಗಿವೆ. {{cvt|7.7|km|adj=on}} ಉದ್ದದ [[ಕೊಲ್ಲಂ ಕಾಲುವೆ]] ಪರವೂರ್ ಸರೋವರ ಮತ್ತು ಅಷ್ಟಮುಡಿ ಸರೋವರವನ್ನು ಸಂಪರ್ಕಿಸುತ್ತದೆ. ನಗರದ ಉಪನಗರಗಳ ಮೂಲಕ ಹರಿಯುವ ಮತ್ತೊಂದು ನದಿಯಾದ ಕಲ್ಲಡ ನದಿಯು ಅಷ್ಟಮುಡಿ ಸರೋವರಕ್ಕೆ ಸೇರುತ್ತದೆ, ಆದರೆ ಇತ್ತಿಕ್ಕರ ನದಿಯು [[ಪರವೂರ್ ಕಾಯಲ್]] ಗೆ ಹರಿಯುತ್ತದೆ. ಕಟ್ಟಕಾಯಲ್, ನಗರದಲ್ಲಿನ ಸಿಹಿನೀರಿನ ಸರೋವರ, ವಟ್ಟಕ್ಕಾಯಲ್ ಎಂಬ ಮತ್ತೊಂದು ಜಲಾಶಯವನ್ನು ಅಷ್ಟಮುಡಿ ಸರೋವರದೊಂದಿಗೆ ಸಂಪರ್ಕಿಸುತ್ತದೆ.<ref>{{cite web|url=http://www.thehindu.com/2004/09/20/stories/2004092005720300.htm |archive-url=https://archive.today/20140901102439/http://www.thehindu.com/2004/09/20/stories/2004092005720300.htm |url-status=dead |archive-date=1 September 2014 |title=A stream fading into historyg |date=20 September 2004 |work=[[The Hindu]] |access-date=23 January 2020}}</ref><ref>{{cite web |url=http://www.maruthadi.elisting.in/ |title=Maruthadi - Maruthadi.Elisting.in |access-date=23 January 2020 |archive-date=3 ನವೆಂಬರ್ 2016 |archive-url=https://web.archive.org/web/20161103234102/http://www.maruthadi.elisting.in/ |url-status=dead }}</ref><ref>{{cite web |url=http://www.docs.kerala.gov.in/index.php?option=com_docman&task=cat_view&gid=467&Itemid=2707&limitstart=100 |title=Water Resources - Government of Kerala |date=7 March 2015 |access-date=23 January 2020 |archive-date=3 November 2016 |archive-url=https://web.archive.org/web/20161103235948/http://www.docs.kerala.gov.in/index.php?option=com_docman&task=cat_view&gid=467&Itemid=2707&limitstart=100 |url-status=dead }}</ref>
ಮಾರ್ಚ್ 2016 ರಲ್ಲಿ, ''ಇಂಡಿಯಾಟೈಮ್ಸ್'' ಕೊಲ್ಲಂ ಅನ್ನು ಭೂಮಿಯ ಒಂಬತ್ತು ಅತ್ಯಂತ ಕಡಿಮೆ ಮಾಲಿನ್ಯಗೊಂಡ ನಗರಗಳಲ್ಲಿ ಒಂದಾಗಿ ಆಯ್ಕೆ ಮಾಡಿತು.<ref>{{cite web|url=http://www.indiatimes.com/culture/travel/9-of-the-least-polluted-cities-on-earth-you-could-consider-moving-to-251818.html |title=9 of the Least Polluted Cities on Earth You Could Consider Moving To |date=13 March 2016 |publisher=Indiatimes |access-date=21 March 2016}}</ref> ಕೊಲ್ಲಂ [[ಬುಕಿಂಗ್.ಕಾಮ್]] ನ ಪ್ರವಾಸಿಗರ ವಿಮರ್ಶಾ ಪ್ರಶಸ್ತಿಗಳ ಪ್ರಕಾರ 2020 ರ ವರ್ಷಕ್ಕೆ ಭಾರತದ ಅತ್ಯಂತ ಸ್ವಾಗತಾರ್ಹ ಸ್ಥಳಗಳಲ್ಲಿ ಒಂದಾಗಿದೆ.<ref>{{cite web|url=https://www.financialexpress.com/lifestyle/travel-tourism/for-2nd-year-in-row-kerala-tops-list-of-most-welcoming-places-report/1832102/ |title=For 2nd year in row, Kerala tops list of most welcoming places: Report |publisher=Financial Express |date=22 January 2020 |access-date=23 January 2020}}</ref>
ಕೊಲ್ಲಂ ಒಂದು ಪ್ರಾಚೀನ ವ್ಯಾಪಾರ ಪಟ್ಟಣವಾಗಿದೆ – ರೋಮನ್ನರು, ಚೀನಿಯರು, ಅರಬ್ಬರು ಮತ್ತು ಇತರ ಪೂರ್ವ ದೇಶದವರೊಂದಿಗೆ ವ್ಯಾಪಾರ ಮಾಡುತ್ತಿತ್ತು. ಬೈಬಲ್ನ ಕಾಲ ಮತ್ತು ಸೊಲೊಮನ್ ಆಳ್ವಿಕೆಯವರೆಗಿನ ಐತಿಹಾಸಿಕ ಉಲ್ಲೇಖಗಳಲ್ಲಿ ಈ ವಿವರಗಳನ್ನು ಉಲ್ಲೇಖಿಸಲಾಗಿದೆ, ಇದು ಅರೇಬಿಯನ್ ಸಮುದ್ರದ ಕೆಂಪು ಸಮುದ್ರದ ಬಂದರುಗಳೊಂದಿಗೆ ಸಂಪರ್ಕ ಹೊಂದಿದೆ (ಪ್ರಾಚೀನ ರೋಮನ್ ನಾಣ್ಯಗಳ ಪತ್ತೆಯಿಂದ ಬೆಂಬಲಿತವಾಗಿದೆ).<ref>{{cite web|title=The legendary beauty of Kollam|date=28 June 2023 |url=http://www.financialexpress.com/story-print/1159603}}</ref><ref>{{cite web|title=History of Kollam|url=http://paru.in/history-of-kollam|url-status=dead|archive-url=https://web.archive.org/web/20150602135640/http://paru.in/history-of-kollam|archive-date=2 June 2015}}</ref> [[ಅರ್ಯಂಕಾವು|ಅರ್ಯಂಕಾವು ಕಣಿವೆ]] ಮೂಲಕ [[ಸೆಂಗೊಟ್ಟೈ|ಶೆಂಕೊಟ್ಟಾ ಅಂತರ]]ದಲ್ಲಿ ಪ್ರಾಚೀನ ನಗರವನ್ನು ತಮಿಳುನಾಡಿಗೆ ಸಂಪರ್ಕಿಸುವ ಆಂತರಿಕ ವ್ಯಾಪಾರವೂ ಇತ್ತು. ಎತ್ತಿನಗಾಡಿಯ ಮೂಲಕ ಮೆಣಸಿನ ಒಳನಾಡಿನ ವ್ಯಾಪಾರ ಮತ್ತು [[ಆಲಪ್ಪುಳ]] ಮತ್ತು ಕೊಚ್ಚಿಯನ್ನು ಸಂಪರ್ಕಿಸುವ ಜಲಮಾರ್ಗಗಳ ಮೇಲಿನ ವ್ಯಾಪಾರವು ಇದು ಭಾರತದ ಆರಂಭಿಕ ಕೈಗಾರಿಕಾ ಪಟ್ಟಣಗಳಲ್ಲಿ ಒಂದಾಗಿ ಬೆಳೆಯಲು ಅನುವು ಮಾಡಿಕೊಟ್ಟ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಿತು. ನಂತರ ತಮಿಳುನಾಡಿಗೆ ಸ್ಥಾಪಿಸಲಾದ ರೈಲು ಸಂಪರ್ಕಗಳು ಇನ್ನೂ ಪ್ರಬಲವಾದ ವ್ಯಾಪಾರ ಸಂಪರ್ಕಗಳನ್ನು ಬೆಂಬಲಿಸಿದವು. ಸಮುದ್ರ ರಫ್ತುಗಳನ್ನು ಸಂಸ್ಕರಿಸುವ ಕಾರ್ಖಾನೆಗಳು ಮತ್ತು ಗೋಡಂಬಿ ಬೀಜಗಳ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಅದರ ವ್ಯಾಪಾರವನ್ನು ವಿಶ್ವದಾದ್ಯಂತ ವಿಸ್ತರಿಸಿತು.<ref>{{cite web|title=Kollam Tourism - Official Website|url=http://www.kollamtourism.com/history.html/|access-date=6 January 2014|archive-date=27 ಡಿಸೆಂಬರ್ 2013|archive-url=https://web.archive.org/web/20131227075259/http://www.kollamtourism.com/history.html|url-status=dead}}</ref>
{{Weather box
|location= ಕೊಲ್ಲಂ
|metric first= yes
|single line= yes
|width = auto
|temperature colour = pastel
|Jan high C= 31
|Feb high C= 31
|Mar high C= 32
|Apr high C= 32
|May high C= 31
|Jun high C= 29
|Jul high C= 29
|Aug high C= 29
|Sep high C= 29
|Oct high C= 30
|Nov high C= 29
|Dec high C= 30
|Jan low C= 23
|Feb low C= 23
|Mar low C= 25
|Apr low C= 26
|May low C= 25
|Jun low C= 24
|Jul low C= 24
|Aug low C= 24
|Sep low C= 24
|Oct low C= 24
|Nov low C= 24
|Dec low C= 23
|Jan rain mm= 18
|Feb rain mm= 26
|Mar rain mm= 53
|Apr rain mm= 147
|May rain mm= 268
|Jun rain mm= 518
|Jul rain mm= 381
|Aug rain mm= 248
|Sep rain mm= 209
|Oct rain mm= 300
|Nov rain mm= 208
|Dec rain mm= 51
|rain colour = green
|Jan rain days= 1
|Feb rain days= 2
|Mar rain days= 4
|Apr rain days= 8
|May rain days= 11
|Jun rain days= 21
|Jul rain days= 19
|Aug rain days= 16
|Sep rain days= 12
|Oct rain days= 12
|Nov rain days= 8
|Dec rain days= 3
|unit rain days= 0.1 mm
|source= [http://www.weather2travel.com/climate-guides/india/kerala/kollam.php Weather2Travel]
|date= May 2012
}}
==ಜನಸಂಖ್ಯಾ ವಿವರಗಳು==
=== ಜನಸಂಖ್ಯೆ ===
{{As of|2011|alt=2011 ರ ಭಾರತದ ಜನಗಣತಿಯ ಪ್ರಕಾರ,}}<ref name=census>{{Cite web|url=http://www.censusindia.net/results/data/ker_uatowns.PDF|title=Kerala: Population, Population in the age group 0-6 and literates by sex – Urban Agglomeration /Town : 2001 |archive-url=https://web.archive.org/web/20070927004314/http://www.censusindia.net/results/data/ker_uatowns.PDF |archive-date=27 September 2007 }}</ref> ಕೊಲ್ಲಂ ನಗರವು 349,033 ಜನಸಂಖ್ಯೆಯನ್ನು ಹೊಂದಿತ್ತು, ಪ್ರತಿ ಚದರ ಕಿಲೋಮೀಟರ್ಗೆ 5,400 ವ್ಯಕ್ತಿಗಳ ಸಾಂದ್ರತೆಯನ್ನು ಹೊಂದಿತ್ತು. ಲಿಂಗ ಅನುಪಾತ (ಪ್ರತಿ 1,000 ಪುರುಷರಿಗೆ ಮಹಿಳೆಯರ ಸಂಖ್ಯೆ) 1,112 ಆಗಿತ್ತು, ಇದು ರಾಜ್ಯದಲ್ಲಿ ಅತಿ ಹೆಚ್ಚಾಗಿದೆ. [[ಕೊಲ್ಲಂ ಜಿಲ್ಲೆ]]ಯು ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಕೊಲ್ಲಂ ನಗರವು ನಾಲ್ಕನೇ ಸ್ಥಾನದಲ್ಲಿದೆ. {{As of|2010}}, ಕೊಲ್ಲಂ ಸರಾಸರಿ ಸಾಕ್ಷರತಾ ಪ್ರಮಾಣವು 93.77% ಆಗಿತ್ತು,<ref>{{cite web|url=http://kollam.nic.in/edu.html |title=Kollam District |publisher=kollam.nic.in |access-date=24 June 2010}}</ref> ಇದು ರಾಷ್ಟ್ರೀಯ ಸರಾಸರಿ 74.04% ಕ್ಕಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತೆ 95.83% ಮತ್ತು ಮಹಿಳೆಯರದು 91.95%. ಕೊಲ್ಲಂನಲ್ಲಿ, 11% ಜನಸಂಖ್ಯೆಯು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಮೇ 2015 ರಲ್ಲಿ, [[ಕೇರಳ ಸರ್ಕಾರ]]ವು ತ್ರಿಕ್ಕಡವೂರು ಪಂಚಾಯತ್ ಅನ್ನು ವಿಲೀನಗೊಳಿಸುವ ಮೂಲಕ [[ಕೊಲ್ಲಂ ನಗರ ಸಭೆ|ಕೊಲ್ಲಂ ನಗರ ಸಭೆ]]ಯನ್ನು ವಿಸ್ತರಿಸಲು ನಿರ್ಧರಿಸಿತು. ವಿಲೀನದೊಂದಿಗೆ, ಈ ಪ್ರದೇಶವು {{cvt|73.03|km2}} ಆಗಿ ಮತ್ತು ಒಟ್ಟು ನಗರ ಜನಸಂಖ್ಯೆಯು 384,892 ಆಗುವ ನಿರೀಕ್ಷೆಯಿದೆ.<ref>{{cite news|url=http://www.thehindu.com/news/national/kerala/thrikadavur-becomes-part-of-kollam-city/article7300668.ece |title=Thrikadavur becomes part of Kollam city |work=The Hindu|date=9 June 2015 |access-date=11 June 2015}}</ref><ref>{{cite web |url=http://lsgkerala.in/thrikkadavoorpanchayat/general-information/ |title=Thrikadavur Panchayath |publisher=Thrikadavur Panchayath |access-date=11 June 2015 |archive-date=12 June 2015 |archive-url=https://web.archive.org/web/20150612055856/http://lsgkerala.in/thrikkadavoorpanchayat/general-information/ |url-status=dead }}</ref>
ಮಲಯಾಳಂ ಅತ್ಯಂತ ವ್ಯಾಪಕವಾಗಿ ಮಾತನಾಡುವ ಭಾಷೆ ಮತ್ತು ನಗರದ ಅಧಿಕೃತ ಭಾಷೆಯಾಗಿದೆ, ಆದರೆ [[ತಮಿಳು ಭಾಷೆ|ತಮಿಳು]] ನಗರದ ಕೆಲವು ವಿಭಾಗಗಳಲ್ಲಿ ಅರ್ಥವಾಗುತ್ತದೆ. ನಗರದಲ್ಲಿ ನೆಲೆಸಿರುವ [[ಆಂಗ್ಲೋ-ಭಾರತೀಯ]]ರ, [[ಕೊಂಕಣಿ ಜನರು|ಕೊಂಕಣಿ]] ಬ್ರಾಹ್ಮಣರ, [[ತೆಲುಗು ಜನರು|ತೆಲುಗು]] ಚೆಟ್ಟಿ, ಮತ್ತು [[ಬೆಂಗಾಲಿಗಳು|ಬೆಂಗಾಲಿ]] ವಲಸೆ ಕಾರ್ಮಿಕರ ಸಣ್ಣ ಸಮುದಾಯಗಳೂ ಇವೆ. ಆಡಳಿತದ ಸುಲಭತೆಗಾಗಿ, [[ಕೊಲ್ಲಂ ನಗರ ಸಭೆ]]ಯನ್ನು ಪ್ರತಿಯೊಂದಕ್ಕೂ ಸ್ಥಳೀಯ ವಲಯ ಕಚೇರಿಗಳೊಂದಿಗೆ ಆರು ವಲಯಗಳಾಗಿ ವಿಂಗಡಿಸಲಾಗಿದೆ.<ref>{{cite web |url=http://ksudp.org/index.php?option=com_content&view=article&id=268&Itemid=70 |title=Building Permit Management System -Kollam Corporation |access-date=16 December 2014 |archive-date=20 December 2014 |archive-url=https://web.archive.org/web/20141220101846/http://ksudp.org/index.php?option=com_content&view=article&id=268&Itemid=70 |url-status=dead }}</ref>
* ಕೇಂದ್ರ ವಲಯ (''[[ಕೊಲ್ಲಂ ಕ್ಯಾಂಟನ್ಮೆಂಟ್|ಕ್ಯಾಂಟನ್ಮೆಂಟ್]] ನಲ್ಲಿ ಪ್ರಧಾನ ಕಚೇರಿ''), [[ಕೊಲ್ಲಂ ನಗರ ಸಭೆ]]
* [[ಶಕ್ತಿಕುಲಂಗರ]] ವಲಯ, [[ಕೊಲ್ಲಂ ನಗರ ಸಭೆ]]
* [[ವಡಕ್ಕೇವಿಲ]] ವಲಯ, [[ಕೊಲ್ಲಂ ನಗರ ಸಭೆ]]
* [[ಕಿಳಿಕೊಲ್ಲೂರು]] ವಲಯ, [[ಕೊಲ್ಲಂ ನಗರ ಸಭೆ]]
* [[ಇರವಿಪುರಂ]] ವಲಯ, [[ಕೊಲ್ಲಂ ನಗರ ಸಭೆ]]
* ತ್ರಿಕ್ಕಡವೂರು ವಲಯ, [[ಕೊಲ್ಲಂ ನಗರ ಸಭೆ]]
2014 ರಲ್ಲಿ, ಮಾಜಿ ಕೊಲ್ಲಂ ಮೇಯರ್, ಪ್ರಸನ್ನ ಅರ್ನೆಸ್ಟ್, ಟ್ರಿವಾಂಡ್ರಮ್ ರಾಯಲ್ ರೋಟರಿ ಕ್ಲಬ್ ನಿಂದ [[ದಕ್ಷಿಣ ಭಾರತ]]ದ ಅತ್ಯುತ್ತಮ ಮಹಿಳಾ ಮೇಯರ್ ಆಗಿ ಆಯ್ಕೆಯಾದರು.<ref>{{cite web|url=http://www.thehindu.com/todays-paper/tp-national/tp-kerala/award-for-kollam-mayor/article5865568.ece |title=Award for Kollam Mayor |work=[[The Hindu]] |date=2014-04-03 |access-date=2014-06-06}}</ref>
=== ಧರ್ಮ ===
{{See also|ಕೊಲ್ಲಂ ಜಿಲ್ಲೆಯಲ್ಲಿ ಧರ್ಮ}}
{{bar box
|title=ಕೊಲ್ಲಂ ನಗರದಲ್ಲಿ ಧರ್ಮ (2011)<ref name="census2001">{{cite web
| title = Kollam City Census 2011 data
| publisher = Census2011
| url = http://www.census2011.co.in/census/city/461-kollam.html
| access-date =27 January 2016}}
</ref>
|titlebar=#Fcd116
|left1=ಧರ್ಮ
|right1=ಶೇಕಡಾವಾರು
|float=right
|bars=
{{bar percent|[[ಹಿಂದೂ ಧರ್ಮ]]|darkorange|56}}
{{bar percent|[[ಇಸ್ಲಾಂ]]|green|22}}
{{bar percent|[[ಕ್ರೈಸ್ತ ಧರ್ಮ]]|blue|21}}
{{bar percent|ಇತರೆ|black|1}}
|caption=ಧರ್ಮಗಳ ವಿತರಣೆ<br />
†<small>ಹೇಳದಿರುವುದು, [[ಸಿಖ್ ಧರ್ಮ]] (<0.01%), [[ಬೌದ್ಧ ಧರ್ಮ]] (<0.01%) ಸೇರಿದೆ.</small>
}}
[[File:Front Wide Anthonys Church Kollam Kerala Mar22 A7C 01676.jpg|thumb|ಸೇಂಟ್ ಆಂಟನಿ ಚರ್ಚ್, ವಡ್ಡಿ, 1910 ರಲ್ಲಿ ನಿರ್ಮಿಸಲಾಯಿತು]]
ಕೊಲ್ಲಂ ನಗರವು ಕೇರಳ ರಾಜ್ಯದ ಒಂದು ಸೂಕ್ಷ್ಮ ಪ್ರಪಂಚವಾಗಿದೆ, ಇದರ ನಿವಾಸಿಗಳು ವಿವಿಧ ಧಾರ್ಮಿಕ, ಜನಾಂಗೀಯ ಮತ್ತು ಭಾಷಾ ಗುಂಪುಗಳಿಗೆ ಸೇರಿದವರಾಗಿದ್ದಾರೆ.<ref name="A Survey of Kerala History">Menon, A Sreedhara; "A Survey of Kerala History"; DC Books, 1 January 2007 – History – pp 54–56 [https://books.google.com/books?id=FVsw35oEBv4C&q=A+Survey+Of+Kerala+History]</ref> ನಗರ ಮತ್ತು ಅದರ ಉಪನಗರಗಳಲ್ಲಿ ಹಲವಾರು ಪ್ರಾಚೀನ ದೇವಾಲಯಗಳು, ಶತಮಾನಗಳ-ಹಳೆಯ ಚರ್ಚುಗಳು ಮತ್ತು ಮಸೀದಿಗಳಿವೆ. ಕೊಲ್ಲಂ ಕೇರಳದಲ್ಲಿ ಹಿಂದೂ ಬಹುಸಂಖ್ಯಾತ ನಗರವಾಗಿದೆ. ಕೊಲ್ಲಂನ ಒಟ್ಟು ಜನಸಂಖ್ಯೆಯ 56.35% [[ಹಿಂದೂ]] ಸಮುದಾಯಕ್ಕೆ ಸೇರಿದೆ. ಇದಲ್ಲದೆ, ಕೇರಳದಲ್ಲಿ ಬಳಸಲಾಗುವ [[ಸೌರ ಕ್ಯಾಲೆಂಡರ್|ಸೌರ]] ಮತ್ತು [[ನಕ್ಷತ್ರ ಸಮಯ|ನಕ್ಷತ್ರ]] [[ಹಿಂದೂ ಕ್ಯಾಲೆಂಡರ್]] ಆದ [[ಕೊಲ್ಲಂ ಯುಗ]] (''ಮಲಯಾಳಂ ಯುಗ'' ಅಥವಾ ''ಕೊಲ್ಲವರ್ಷಂ'' ಅಥವಾ ''ಮಲಯಾಳಂ ಕ್ಯಾಲೆಂಡರ್'' ಅಥವಾ ''ಮಲಬಾರ್ ಯುಗ'' ಎಂದೂ ಕರೆಯಲ್ಪಡುತ್ತದೆ) 825 CE (ಪೊತು ವರ್ಷಂ) ನಲ್ಲಿ ಕೊಲ್ಲಂ ನಗರದಲ್ಲಿ ಪ್ರಾರಂಭವಾಯಿತು.<ref>{{cite web|title=Kollam Era|url=http://www.new1.dli.ernet.in/data1/upload/insa/INSA_1/20005b5f_93.pdf|url-status=dead|archive-url=https://web.archive.org/web/20150527163650/http://www.new1.dli.ernet.in/data1/upload/insa/INSA_1/20005b5f_93.pdf|archive-date=27 May 2015|access-date=30 December 2014|publisher=Indian Journal History of Science}}</ref><ref>{{Citation|author=Broughton Richmond|title=Time measurement and calendar construction|url=https://books.google.com/books?id=gUlmAAAAMAAJ|page=218|year=1956}}</ref><ref>{{Cite book|author=R. Leela Devi|url=https://books.google.com/books?id=pXpuAAAAMAAJ|title=History of Kerala|publisher=Vidyarthi Mithram Press & Book Depot|year=1986|page=408}}</ref>
[[ಮುಸ್ಲಿಂ]]ಗಳು ಕೊಲ್ಲಂನ ಒಟ್ಟು ಜನಸಂಖ್ಯೆಯ 22.05% ರಷ್ಟಿದ್ದಾರೆ. 2011 ರ ಜನಗಣತಿಯ ಪ್ರಕಾರ, ಕೊಲ್ಲಂನಲ್ಲಿ ಒಟ್ಟು ಮುಸ್ಲಿಂ ಜನಸಂಖ್ಯೆ 80,935 ಆಗಿದೆ.<ref>{{cite web|title=Population of Kollam City - Census 2011 data|url=http://www.census2011.co.in/census/city/461-kollam.html|access-date=25 March 2013|publisher=Census2011}}</ref> ದಕ್ಷಿಣ ಕೇರಳದಲ್ಲಿ ಕ್ರೈಸ್ತರಿಗಿಂತ ಮುಸ್ಲಿಮರು ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ ಏಕೈಕ ಜಿಲ್ಲೆ ಇದಾಗಿದೆ<ref>{{Cite web|url=https://www.census2011.co.in/data/religion/district/283-kollam.html|website=census2011.co.in |date=1 January 2011|title=Kollam District Religion Data - Hindu/Muslim|access-date=18 May 2026}}</ref>. ಕರ್ಬಲಾ ಮೈದಾನ ಮತ್ತು ಪಕ್ಕದ ಮಕಾನಿ ಮಸೀದಿಯು ನಗರದ ಈದ್ಗಾಹ್ ಆಗಿ ಕಾರ್ಯನಿರ್ವಹಿಸುತ್ತದೆ. ಕರುವಾದ 300 ವರ್ಷಗಳ-ಹಳೆಯ ಜುಮಾ-'ಅತ್ ಪಲ್ಲಿಯು ಸೂಫಿ ಸಂತ, ಸಯ್ಯದ್ ಅಬ್ದುರ್ ರಹಮಾನ್ ಜಿಫ್ರಿ ಅವರ ಅವಶೇಷಗಳನ್ನು ಹೊಂದಿದೆ.<ref>{{cite web|title=Important religious centres in Kollam|url=http://kollam.nic.in/reli.html|access-date=6 January 2014}}</ref><ref>{{cite web|title=Juma-Ath-Mosque|url=http://keralapilgrimcenters.com/muslim-juma-ath-palli-kollam-mosques/|archive-url=https://web.archive.org/web/20130608035033/http://keralapilgrimcenters.com/muslim-juma-ath-palli-kollam-mosques/|url-status=usurped|archive-date=8 June 2013|access-date=29 July 2014}}</ref>
ಕ್ರೈಸ್ತರು ಕೊಲ್ಲಂ ನಗರದ ಒಟ್ಟು ಜನಸಂಖ್ಯೆಯ 21.17% ರಷ್ಟಿದ್ದಾರೆ.<ref>{{cite web|title=Kollam City Census 2011 data|url=http://www.census2011.co.in/census/city/461-kollam.html|access-date=25 March 2013|publisher=Census2011}}</ref> [[ಕ್ವಿಲಾನ್ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]] (ಕೊಲ್ಲಂ) ಭಾರತದ ಮೊದಲ ಕ್ಯಾಥೋಲಿಕ್ ಧರ್ಮಪ್ರಾಂತ್ಯವಾಗಿದೆ. ಧರ್ಮಪ್ರಾಂತ್ಯವನ್ನು ಮೊದಲು [[ಪೋಪ್ ಜಾನ್ XXII]] 9 ಆಗಸ್ಟ್ 1329 ರಂದು ಸ್ಥಾಪಿಸಿದರು. ಇದನ್ನು 1 ಸೆಪ್ಟೆಂಬರ್ 1886 ರಂದು ಮರು-ಸ್ಥಾಪಿಸಲಾಯಿತು. ಧರ್ಮಪ್ರಾಂತ್ಯವು {{cvt|1,950|sqkm}} ವಿಸ್ತೀರ್ಣವನ್ನು ಒಳಗೊಂಡಿದೆ ಮತ್ತು 4,879,553 ಜನಸಂಖ್ಯೆಯನ್ನು ಹೊಂದಿದೆ, ಕ್ಯಾಥೋಲಿಕರ ಸಂಖ್ಯೆ 235,922 (4.8%). ಥಂಗಸ್ಸೇರಿಯಲ್ಲಿರುವ ಪ್ರಸಿದ್ಧ [[ಇನ್ಫ್ಯಾಂಟ್ ಜೀಸಸ್ ಕೆಥೆಡ್ರಲ್]], 400 ವರ್ಷಗಳ ಹಳೆಯದು, ಇದು [[ಕ್ವಿಲಾನ್ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]]ದ ಸಹ-ಕೆಥೆಡ್ರಲ್ ಆಗಿದೆ.<ref>{{cite web|title=Roman Catholic Diocese of Quilon|url=http://www.quilondiocese.com/index.php|access-date=25 March 2013|publisher=Kollam Diocese}}</ref> [[ಕೊಲ್ಲಂ-ಕೊಟ್ಟಾರಕ್ಕರ ಧರ್ಮಪ್ರಾಂತ್ಯ, ದಕ್ಷಿಣ ಭಾರತದ ಚರ್ಚ್|CSI ಕೊಲ್ಲಂ-ಕೊಟ್ಟಾರಕ್ಕರ ಧರ್ಮಪ್ರಾಂತ್ಯ]]ವು ದಕ್ಷಿಣ ಭಾರತದ ಚರ್ಚ್ನ ಇಪ್ಪತ್ನಾಲ್ಕು ಧರ್ಮಪ್ರಾಂತ್ಯಗಳಲ್ಲಿ ಒಂದಾಗಿದೆ.<ref>{{cite web|title=CSI Redraws Borders of Dioceses|url=http://www.newindianexpress.com/states/kerala/CSI-Redraws-Borders-of-Dioceses/2015/04/10/article2756962.ece|access-date=19 January 2016|publisher=The New Indian Express|archive-date=4 March 2016|archive-url=https://web.archive.org/web/20160304193822/http://www.newindianexpress.com/states/kerala/CSI-Redraws-Borders-of-Dioceses/2015/04/10/article2756962.ece|url-status=dead}}</ref> ಕೊಟ್ಟಾರಕ್ಕರಕ್ಕಾಗಿ [[ಪೆಂಟೆಕೋಸ್ಟಲ್ ಮಿಷನ್]]ನ ಕೇರಳ ಪ್ರಧಾನ ಕಚೇರಿಯು ಕೊಲ್ಲಂನಲ್ಲಿದೆ.
==ನಾಗರಿಕ ಆಡಳಿತ==
{{Main|ಕೊಲ್ಲಂ ನಗರ ಸಭೆ}}
{{See also|ಕೊಲ್ಲಂ ನಗರ ಪೊಲೀಸ್}}[[File:Location map India Kollam EN.svg|left|thumb|ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶದ ನಕ್ಷೆ]]
ಕೊಲ್ಲಂ ನಿಗಮದ ಪ್ರಸ್ತುತ ಮೇಯರ್ [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)|CPI(M)]] ನ ಅಡ್ವೊಕೇಟ್ [[ವಿ. ರಾಜೇಂದ್ರಬಾಬು]] ಆಗಿದ್ದಾರೆ.<ref>{{cite web|url=http://articles.economictimes.indiatimes.com/2015-11-18/news/68382329_1_cpi-ldf-udf |archive-url=https://web.archive.org/web/20151126072923/http://articles.economictimes.indiatimes.com/2015-11-18/news/68382329_1_cpi-ldf-udf |url-status=dead |archive-date=26 November 2015 |title=CPI(M) rides to power in five of six corporations in Kerala |work=The Economic Times|date=18 November 2015 |access-date=25 November 2015}}</ref>
===ನಗರ ರಚನೆ===
{{Main|ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ}}
ಒಟ್ಟು 1,187,158<ref name="Panchayath Level Statistics - Kollam(2011)">{{cite web | url = http://www.ecostat.kerala.gov.in/docs/pdf/reports/ps/pskollam2011.pdf | title = Kollam District Level Statistics 2011 | access-date = 2014-01-01 | year = 2012 | publisher = ecostat.kerala.gov.in | archive-date = 2 January 2014 | archive-url = https://web.archive.org/web/20140102192758/http://www.ecostat.kerala.gov.in/docs/pdf/reports/ps/pskollam2011.pdf | url-status = dead }}</ref> ನಗರ ಜನಸಂಖ್ಯೆ ಮತ್ತು 349,033 ನಗರ ನಿಗಮ ಜನಸಂಖ್ಯೆಯೊಂದಿಗೆ, ಕೊಲ್ಲಂ ರಾಜ್ಯದಲ್ಲಿ ನಾಲ್ಕನೇ ಅತಿ ಹೆಚ್ಚು ಜನಸಂಖ್ಯೆಯ ನಗರವಾಗಿದೆ ಮತ್ತು [[ಭಾರತದಲ್ಲಿ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರಸಮೂಹಗಳ ಪಟ್ಟಿ|ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ನಗರಸಮೂಹಗಳ ಪಟ್ಟಿಯಲ್ಲಿ]] 49 ನೇ ಸ್ಥಾನದಲ್ಲಿದೆ. {{As of|2011}}, ನಗರದ 154.59% ನಗರ ಬೆಳವಣಿಗೆಯ ಪ್ರಮಾಣವು ರಾಜ್ಯದಲ್ಲಿ ಎರಡನೇ ಅತಿ ಹೆಚ್ಚಾಗಿದೆ.<ref name="Census India-2011 - Kollam">{{cite web | url = http://www.censusindia.gov.in/2011-prov-results/paper2-vol2/data_files/kerala/Analysis_Census_Data.pdf | title = Analysis of Census Date |website=censusindia.gov.in}}</ref> ಕೊಲ್ಲಂನ ಮೆಟ್ರೋಪಾಲಿಟನ್ ಪ್ರದೇಶವು ಉಳಿಯಾಕೋವಿಲ್, [[ಅಡಿಚನಲ್ಲೂರು]], [[ಅಡಿನಾಡ್]], [[ಅಯನಿವೇಲಿಕುಲಂಗರ]], ಚವರ, [[ಚವರ ಥೆಕ್ಕುಂಭಾಗೊಮ್|ಚವರ ದಕ್ಷಿಣ]], [[ಎಲಂಪಲ್ಲೂರು]], [[ಇರವಿಪುರಂ]] (ಭಾಗ), [[ಕಲ್ಲೇಲಿಭಾಗೊಮ್]], [[ಕರುನಾಗಪಲ್ಲಿ]], ಕೊಲ್ಲಂ, ಕೊಟ್ಟಂಕರ, [[ಕುಲಶೇಖರಪುರಂ]], ಮಯ್ಯನಾಡ್, [[ಮೀನಾಡ್]], [[ನೆಡುಂಪನ]], [[ನೀಂದಕರ]], [[ಓಚಿರ]], [[ಪನಾಯಂ]], [[ಪನ್ಮನ]], ಪರವೂರ್, [[ಪೆರಿನಾಡ್]], [[ಪೂತಕ್ಕುಳಂ]], [[ತಾಳುತಲ]], [[ತೊಡಿಯೂರು]], ತ್ರಿಕ್ಕಡವೂರು, ತ್ರಿಕ್ಕರುವ, [[ತ್ರಿಕ್ಕೋವಿಲ್ವಟ್ಟಂ]], ಮತ್ತು [[ವಡಕ್ಕುಂತಲ]] ಸೇರಿವೆ.<ref>{{cite web|url=http://www.census2011.co.in/census/city/461-kollam.html| title=Kollam city population Census |publisher=census2011.co.in |access-date=16 December 2013}}</ref>[[File:British Residency in Asramam, Kollam.jpg|right|thumb|[[ಅಸ್ರಾಮಂ]] ನಲ್ಲಿನ [[ಬ್ರಿಟಿಷ್ ರೆಸಿಡೆನ್ಸಿ, ಕೊಲ್ಲಂ|ಬ್ರಿಟಿಷ್ ರೆಸಿಡೆನ್ಸಿ]], ಕೊಲ್ಲಂ.]]
ಕೇರಳ ಸರ್ಕಾರವು ಕೊಲ್ಲಂ ನಗರವನ್ನು "ಕೇರಳದ ಬಂದರು ನಗರ"ವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. [[ಮಾರುತಡಿ]]-[[ಇರವಿಪುರಂ]] ಪ್ರದೇಶದ ಪುನರುಜ್ಜೀವನ, ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಮನರಂಜನಾ ಯೋಜನೆಗಳಿಗೆ ಸೌಲಭ್ಯಗಳ ನಿರ್ಮಾಣವನ್ನು ಯೋಜನೆಯ ಭಾಗವಾಗಿ ಅಳವಡಿಸಲಾಗುವುದು.<ref name="Kollam - Port City Project - News published in Mathrubhumi Daily">{{cite web | url = http://i1324.photobucket.com/albums/u606/quilonsky/Mathrubhumi_zps52ba640e.png | title = Kollam - Port City Project | year = 2013}}</ref>
==ಆರ್ಥಿಕತೆ==
{{main|ಕೊಲ್ಲಂನ ಆರ್ಥಿಕತೆ}}
[[File:RP Mall, Kollam.jpg|thumb|[[ಆರ್ಪಿ ಮಾಲ್, ಕೊಲ್ಲಂ]]]]
[[File:Dreams Mall(Lulu Market), Kottiyam.jpg|thumb|ಡ್ರೀಮ್ಸ್ ಮಾಲ್ ([[ಲುಲು ಗ್ರೂಪ್ ಇಂಟರ್ನ್ಯಾಷನಲ್|ಲುಲು ಹೈಪರ್ ಮಾರ್ಕೆಟ್]]), [[ಕೊಲ್ಲಂ ಜಿಲ್ಲೆ]]ಯ ಕೊಟ್ಟಿಯಂ]]
[[File:Chinese Fishing Net Raising Birds Sunrise Ashtamudi Kollam Mar22 A7C 01784.jpg|right|thumb|ಕೊಲ್ಲಂ ನಗರದ ಅಷ್ಟಮುಡಿ ಸರೋವರದಲ್ಲಿ ದೊಡ್ಡ [[ಚೀನೀ ಮೀನುಗಾರಿಕಾ ಬಲೆ|ಚೀನೀ ಮೀನುಗಾರಿಕಾ ಬಲೆ]]]]
ಕೊಲ್ಲಂನ ನಗರ ಜೀವನವು ಕಳೆದ ದಶಕದಲ್ಲಿ ಬದಲಾಗಿದೆ. ಆರ್ಥಿಕ ಕಾರ್ಯಕ್ಷಮತೆ ಮತ್ತು [[ತಲಾ ಆದಾಯ]]ದ ವಿಷಯದಲ್ಲಿ, ಕೊಲ್ಲಂ ನಗರವು ಭಾರತದಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು [[ಕೇರಳ ನಗರಗಳ ಪಟ್ಟಿ|ಕೇರಳದಲ್ಲಿ ಮೂರನೇ ಸ್ಥಾನದಲ್ಲಿದೆ]].<ref>{{cite web |url=http://www.hindustantimes.com/newdelhi/delhi-ranked-23rd-in-mega-survey-of-53-indian-cities/article1-1358453.aspx |title=Delhi ranked 23rd in mega survey of 53 Indian cities |work=Hindustan Times |date=14 June 2015 |access-date=26 June 2015 |archive-date=26 June 2015 |archive-url=https://web.archive.org/web/20150626182426/http://www.hindustantimes.com/newdelhi/delhi-ranked-23rd-in-mega-survey-of-53-indian-cities/article1-1358453.aspx |url-status=dead }}</ref> ಕೊಲ್ಲಂ ಅತ್ಯುತ್ತಮ ರಫ್ತು ಹಿನ್ನೆಲೆಯ ನಗರವಾಗಿ ಪ್ರಸಿದ್ಧವಾಗಿದೆ.<ref>{{cite web |url=http://dgft.gov.in/exim/2000/AppANFS2015.pdf |title=Appendices and Aayat Niryat Forms |publisher=Government of India |access-date=1 July 2015 |archive-date=1 July 2015 |archive-url=https://web.archive.org/web/20150701150541/http://dgft.gov.in/exim/2000/AppANFS2015.pdf |url-status=dead }}</ref>
ಹೈನುಗಾರಿಕೆಯು ಸಾಕಷ್ಟು ಅಭಿವೃದ್ಧಿ ಹೊಂದಿದೆ. ನಗರದಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯವೂ ಇದೆ. ಕೊಲ್ಲಂ ಒಂದು ಪ್ರಮುಖ ಸಮುದ್ರ ಮತ್ತು ಬಂದರು ನಗರವಾಗಿದೆ. ಮೀನುಗಾರಿಕೆಯು ಜಿಲ್ಲೆಯ ಆರ್ಥಿಕತೆಯಲ್ಲಿ ಸ್ಥಾನ ಪಡೆದಿದೆ. ನಗರದ ಉಪನಗರಗಳಲ್ಲಿನ ನೀಂದಕರ ಮತ್ತು [[ಶಕ್ತಿಕುಲಂಗರ]] ಗ್ರಾಮಗಳು ಮೀನುಗಾರಿಕೆ ಪ್ರದೇಶಗಳಾಗಿವೆ. ಅಂದಾಜು 134,973 ಜನರು ಮೀನುಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚೆರಿಯಾಜೀಕ್ಕಲ್, ಆಲಪ್ಪಾಡ್, ಪಾಂಡರತುರುತು, ಪುತ್ತೆಂತುರ, [[ನೀಂದಕರ]], ಥಂಗಸ್ಸೇರಿ, [[ಇರವಿಪುರಂ]] ಮತ್ತು ಪರವೂರು 26 ಪ್ರಮುಖ ಮೀನುಗಾರಿಕಾ ಗ್ರಾಮಗಳಲ್ಲಿ ಎಂಟು. 24 ಒಳನಾಡಿನ ಮೀನುಗಾರಿಕಾ ಗ್ರಾಮಗಳಿವೆ. ಸರ್ಕಾರವು ನೀಂದಕರದಲ್ಲಿ ಮೀನುಗಾರಿಕಾ ಬಂದರನ್ನು ಸ್ಥಾಪಿಸಲು ಕ್ರಮಗಳನ್ನು ಪ್ರಾರಂಭಿಸಿದೆ. ಸರಾಸರಿ ಮೀನು ಸಂಪನ್ಮೂಲವು ವರ್ಷಕ್ಕೆ 85,275 ಟನ್ಗಳಷ್ಟು ಅಂದಾಜಿಸಲಾಗಿದೆ. ರಾಜ್ಯದ ಮೀನು ಸಂಪನ್ಮೂಲದ ಮೂರನೇ ಒಂದು ಭಾಗವು ಕೊಲ್ಲಂನಿಂದ ಬರುತ್ತದೆ. ಸುಮಾರು 3000 ಯಾಂತ್ರೀಕೃತ ದೋಣಿಗಳು ಮೀನುಗಾರಿಕಾ ಬಂದರಿನಿಂದ ಕಾರ್ಯನಿರ್ವಹಿಸುತ್ತಿವೆ. FFDA ಮತ್ತು VFFDA ಕ್ರಮವಾಗಿ ಸಿಹಿನೀರಿನ ಮೀನು ಸಾಕಣೆ ಮತ್ತು ಸೀಗಡಿ ಸಾಕಣೆಯನ್ನು ಪ್ರೋತ್ಸಾಹಿಸುತ್ತವೆ. ಇರವಿಪುರಂನಲ್ಲಿ 100 ಮನೆಗಳ ಮೀನುಗಾರಿಕಾ ಗ್ರಾಮವನ್ನು ನಿರ್ಮಿಸಲಾಗುತ್ತಿದೆ. [[ಅಯಿರಂತೆಂಗು]]ನಲ್ಲಿ ಸೀಗಡಿ ಸಾಕಣೆ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ, ಮತ್ತು ಜಲಚರ ಸಾಕಣೆದಾರರ ಅಗತ್ಯಗಳನ್ನು ಪೂರೈಸಲು ಹಲವಾರು ಹೊಸ ಮೊಟ್ಟೆಗಳ ಕಾರ್ಖಾನೆಗಳನ್ನು ಯೋಜಿಸಲಾಗಿದೆ. ಕೇರಳದ ಏಕೈಕ ಟರ್ಕಿ ಸಾಕಣೆ ಕೇಂದ್ರ ಮತ್ತು ಪ್ರಾದೇಶಿಕ ಕೋಳಿ ಸಾಕಣೆ ಕೇಂದ್ರವು [[ಕುರೀಪುಳ (ಪೆರಿನಾಡ್)|ಕುರೀಪುಳ]]ದಲ್ಲಿದೆ.<ref>{{Cite web |url=http://www.old.kerala.gov.in/dept_anihusbandry/modifi.htm |title=Department of Animal Husbandry - Kerala |access-date=13 January 2014 |archive-date=29 October 2014 |archive-url=https://web.archive.org/web/20141029102340/http://www.old.kerala.gov.in/dept_anihusbandry/modifi.htm |url-status=dead }}</ref>
ನಗರದಲ್ಲಿ ಎರಡು ಕೇಂದ್ರ ಸರ್ಕಾರಿ ಕೈಗಾರಿಕಾ ಕಾರ್ಯಾಚರಣೆಗಳಿವೆ, ಇಂಡಿಯನ್ ರೇರ್ ಅರ್ಥ್ಸ್, ಚವರ ಮತ್ತು [[ಪಾರ್ವತಿ ಮಿಲ್ಸ್ ಲಿಮಿಟೆಡ್|ಪಾರ್ವತಿ ಮಿಲ್ಸ್ ಲಿಮಿಟೆಡ್]], ಕೊಲ್ಲಂ. [[ಕುಂದರ]]ದಲ್ಲಿ ಕೇರಳ ಸೆರಾಮಿಕ್ಸ್ ಲಿಮಿಟೆಡ್, [[ಕುಂದರ]]ದಲ್ಲಿ ಕೇರಳ ಎಲೆಕ್ಟ್ರಿಕಲ್ ಮತ್ತು ಅಲೈಡ್ ಇಂಜಿನಿಯರಿಂಗ್ ಕಂಪನಿ, ಚವರದಲ್ಲಿ ಕೇರಳ ಪ್ರೇಮೋ ಪೈಪ್ ಕಾರ್ಖಾನೆ, ಚವರದಲ್ಲಿ ಕೇರಳ ಮಿನರಲ್ಸ್ ಅಂಡ್ ಮೆಟಲ್ಸ್ ಲಿಮಿಟೆಡ್ ಮತ್ತು ಕೊಲ್ಲಂನಲ್ಲಿ ಯುನೈಟೆಡ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಕೇರಳ ಸರ್ಕಾರಿ ಒಡೆತನದ ಕಂಪನಿಗಳಾಗಿವೆ. ಖಾಸಗಿ/ಸಹಕಾರಿ ವಲಯದ ಇತರ ಪ್ರಮುಖ ಕೈಗಾರಿಕೆಗಳೆಂದರೆ [[ಕುಂದರ]]ದಲ್ಲಿ ಅಲ್ಯುಮಿನಿಯಂ ಇಂಡಸ್ಟ್ರೀಸ್ ಲಿಮಿಟೆಡ್, ಕೊಲ್ಲಂನಲ್ಲಿ ಥಾಮಸ್ ಸ್ಟೀಫನ್ & ಕಂ, ಪರವೂರ್ನಲ್ಲಿ ಫ್ಲೋರ್ಕೋ ಮತ್ತು ಚಥನ್ನೂರಿನಲ್ಲಿ ಸಹಕಾರಿ ನೂಲುವ ಮಿಲ್.<ref>{{Cite web |url=http://www.kollamcorporation.gov.in/trade-commerce |title=Kollam - Trade & Commerce |access-date=10 January 2014 |archive-date=22 November 2017 |archive-url=https://web.archive.org/web/20171122192403/http://www.kollamcorporation.gov.in/trade-commerce |url-status=dead }}</ref>
[[File:Kollam technopark, Kundara.jpg|thumb|ಟೆಕ್ನೋಪಾರ್ಕ್ ಕೊಲ್ಲಂ]]
ಕುಂದರ, ಮುಲವನ, ಮತ್ತು ಚಥನ್ನೂರುಗಳಲ್ಲಿ ಚೀನಾ ಕ್ಲೇಯ ದೊಡ್ಡ ನಿಕ್ಷೇಪಗಳ ಜೊತೆಗೆ, ಅಷ್ಟಮುಡಿ ಸರೋವರದಲ್ಲಿ ಸುಣ್ಣದ ಚಿಪ್ಪುಗಳ ನಿಕ್ಷೇಪಗಳು ಮತ್ತು ಅಡಿಚನಲ್ಲೂರಿನಲ್ಲಿ ಬಾಕ್ಸೈಟ್ ನಿಕ್ಷೇಪಗಳಿವೆ.<ref>{{Cite web|url=http://www.kollam.gov.in/reso.html|title=resources - Kollam|access-date=10 January 2014|archive-date=18 January 2014|archive-url=https://web.archive.org/web/20140118081338/http://kollam.gov.in/reso.html|url-status=dead}}</ref>
"ವಿಶ್ವದ ಗೋಡಂಬಿ ರಾಜಧಾನಿ" ಎಂದು ಕರೆಯಲ್ಪಡುವ ಕೊಲ್ಲಂ ತನ್ನ ಸಾಂಪ್ರದಾಯಿಕ ಗೋಡಂಬಿ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ ಮತ್ತು 600 ಕ್ಕೂ ಹೆಚ್ಚು ಗೋಡಂಬಿ ಸಂಸ್ಕರಣಾ ಘಟಕಗಳಿಗೆ ನೆಲೆಯಾಗಿದೆ.<ref>{{cite news
| last = Pereira
| first = Ignatius
| title = Kerala's cashew processing industry in crisis
| newspaper = [[The Hindu]]
| date = 20 November 2016
| url = https://www.thehindu.com/news/national/kerala/Kerala%E2%80%99s-cashew-processing-industry-in-crisis/article16664972.ece
| access-date = 2026-08-04
}}</ref> ಪ್ರತಿ ವರ್ಷ, ಸುಮಾರು 800,000 ಟನ್ಗಳಷ್ಟು ಕಚ್ಚಾ ಗೋಡಂಬಿಗಳನ್ನು ಸಂಸ್ಕರಣೆಗಾಗಿ ನಗರಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ<ref>{{cite web|url=http://www.madhyamam.com/news/313464/141013 |language=ml |script-title=ml:കൊല്ലം തുറമുഖത്തെ കസ്റ്റംസ് ക്ളിയറന്സുകള് ഓണ്ലൈന് സംവിധാനത്തിലേക്ക് |access-date=2014-11-14 |url-status=dead |archive-url=https://web.archive.org/web/20141022170950/http://www.madhyamam.com/news/313464/141013 |archive-date=22 October 2014 }} Online Customs Clearance Facility for Kollam Port to be ready in a month</ref> ಮತ್ತು ಸರಾಸರಿ 130,000 ಟನ್ಗಳಷ್ಟು ಸಂಸ್ಕರಿಸಿದ ಗೋಡಂಬಿಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತದೆ.<ref>[http://www.thehindu.com/news/national/kerala/rise-in-earnings-from-cashew-kernel-exports/article3893095.ece] Rise in earnings from cashew kernel exports - The Hindu</ref> [[ಭಾರತದ ಗೋಡಂಬಿ ರಫ್ತು ಪ್ರೋತ್ಸಾಹಕ ಮಂಡಳಿ]] (CEPCI) 2020 ರ ವೇಳೆಗೆ ರಫ್ತುಗಳು 275,000 ಟನ್ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ, ಇದು ಪ್ರಸ್ತುತ ಅಂಕಿ ಅಂಶಕ್ಕಿಂತ 120 ಪ್ರತಿಶತದಷ್ಟು ಹೆಚ್ಚಳವಾಗಿದೆ.<ref>[http://www.business-standard.com/article/markets/cashew-body-sets-target-to-double-exports-by-2020-108122901044_1.html] CEPCI - Kollam</ref> [[ಕೇರಳ ರಾಜ್ಯ ಗೋಡಂಬಿ ಅಭಿವೃದ್ಧಿ ನಿಗಮ ಲಿಮಿಟೆಡ್]] (KSCDC) ಕೊಲ್ಲಂ ನಗರದ [[ಮುಂಡಕ್ಕಲ್]] ನಲ್ಲಿದೆ. ಕಂಪನಿಯು ಕೇರಳದಾದ್ಯಂತ 30 ಗೋಡಂಬಿ ಕಾರ್ಖಾನೆಗಳನ್ನು ಹೊಂದಿದೆ. ಇವುಗಳಲ್ಲಿ, 24 ಕೊಲ್ಲಂ ಜಿಲ್ಲೆಯಲ್ಲಿವೆ.<ref>{{cite web|url=http://www.cashewcorporation.com/Organization.php |title=:: KSCDC :: |publisher=Cashewcorporation.com |access-date=26 August 2014 |url-status=dead |archive-url=https://web.archive.org/web/20150215062231/http://cashewcorporation.com/Organization.php |archive-date=15 February 2015 }}</ref><ref>{{cite web|url=http://kollamcity.in/kerala-state-cashew-development-corporation |archive-url=https://archive.today/20140806070550/http://kollamcity.in/kerala-state-cashew-development-corporation |url-status=usurped |archive-date=6 August 2014 |title=:: The Kerala State Cashew Development Corporation Limited :: |publisher=Cashewcorporation.com |access-date=29 July 2014}}</ref>
ಕೊಲ್ಲಂ ಈ ವಲಯದಲ್ಲಿ ಹಲವಾರು ಕಂಪನಿಗಳನ್ನು ಹೊಂದಿರುವ ಭಾರತದ ಅನೇಕ ಸಮುದ್ರ ಆಹಾರ ರಫ್ತು ಕೇಂದ್ರಗಳಲ್ಲಿ ಒಂದಾಗಿದೆ. ಇವುಗಳಲ್ಲಿ ಹೆಚ್ಚಿನವು ನಗರದ [[ಮಾರುತಡಿ]], [[ಶಕ್ತಿಕುಲಂಗರ]], [[ಕವನಾಡ್]], [[ನೀಂದಕರ]], [[ಅಸ್ರಾಮಂ]], [[ಕಿಳಿಕೊಲ್ಲೂರು]], [[ತಿರುಮುಲ್ಲವಾರುಂ|ತಿರುಮುಲ್ಲವಾರಂ]] ಮತ್ತು [[ಉಳಿಯಾಕೋವಿಲ್]] ಪ್ರದೇಶಗಳಲ್ಲಿ ನೆಲೆಗೊಂಡಿವೆ.<ref>[http://www.keralaexporters.com/categories/food/] Kerala Exporters</ref><ref>{{cite web |url=http://www.mpeda.com/exporters/IQF/ExportersOtherMarineProducts.htm |title=Other Items |access-date=2014-11-17 |url-status=dead |archive-url=https://web.archive.org/web/20160304043858/http://www.mpeda.com/exporters/IQF/ExportersOtherMarineProducts.htm |archive-date=4 March 2016}} Kollam - Marine Food Exporters</ref> ಕ್ಯಾಪಿಥಾನ್ಸ್, ಕಿಂಗ್ಸ್ ಮರೀನ್ ಎಕ್ಸ್ಪೋರ್ಟರ್ಸ್, ಇಂಡಿಯಾ ಫುಡ್ ಎಕ್ಸ್ಪೋರ್ಟ್ಸ್ ಮತ್ತು ಓಷಿಯಾನಿಕ್ ಫಿಶರೀಸ್ ಸಮುದ್ರ ಆಹಾರ ರಫ್ತುದಾರರಿಗೆ ಉದಾಹರಣೆಗಳಾಗಿವೆ.<ref>[http://e-mpeda.nic.in/registration/Exporter_Item.aspx?pcode=05&product=Live%20other%20than%20ornamental%20fish] {{Webarchive|url=https://web.archive.org/web/20141209205334/http://e-mpeda.nic.in/registration/Exporter_Item.aspx?pcode=05&product=Live%20other%20than%20ornamental%20fish|date=9 December 2014}} Registered Kerala Exporters</ref>
ಕೊಲ್ಲಂನ [[ಅಷ್ಟಮುಡಿ ಸರೋವರ]]ದ ಚಿಪ್ಪು ಮೀನುಗಾರಿಕೆಯು ಭಾರತದಲ್ಲಿ ಮೊದಲ [[ಸಮುದ್ರ ಸ್ಟೀವರ್ಡ್ಶಿಪ್ ಕೌನ್ಸಿಲ್]] (MSC) ಪ್ರಮಾಣೀಕೃತ ಮೀನುಗಾರಿಕೆಯಾಗಿದೆ.<ref>{{cite web|url=http://www.icar.org.in/en/node/8346|title=Ashtamudi short-neck clam fisheries becomes India's first MSC certified fisheries|date=2014-11-05|publisher=[[Indian Council of Agricultural Research]]|access-date=2015-05-16}}</ref>
==ಸಂಸ್ಕೃತಿ==
ಕೊಲ್ಲಂ ಫೆಸ್ಟ್ ಕೊಲ್ಲಂನ ಸ್ವಂತ ವಾರ್ಷಿಕ ಹಬ್ಬವಾಗಿದ್ದು, ಹೆಚ್ಚಾಗಿ ಕೇರಳೀಯರನ್ನು ಆಕರ್ಷಿಸುತ್ತದೆ, ಆದರೆ ನೂರಾರು ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಕೊಲ್ಲಂಗೆ ಆಕರ್ಷಿಸುತ್ತದೆ. ಕೊಲ್ಲಂ ಫೆಸ್ಟ್ನ ಮುಖ್ಯ ಸ್ಥಳವು ಐತಿಹಾಸಿಕ ಮತ್ತು ಬೃಹತ್ ಅಶ್ರಮಂ ಮೈದಾನವಾಗಿದೆ. ಕೊಲ್ಲಂ ಫೆಸ್ಟ್ ಕೊಲ್ಲಂನ ಸಹಿ ಕಾರ್ಯಕ್ರಮವಾಗಿದೆ. ಇದು ಕೊಲ್ಲಂನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ, ಪ್ರವಾಸೋದ್ಯಮ ಸಾಮರ್ಥ್ಯ ಮತ್ತು ಹೊಸ ಉದ್ಯಮಗಳಲ್ಲಿನ ಹೂಡಿಕೆಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತದೆ.<ref>{{cite web|title=Kollam Fest 10 November 2011|url=http://thiraseela.com/static/festivals/Kollam-Fest-2011.php|access-date=3 March 2016|publisher=Thiraseela.com}}</ref>
[[ಕೊಲ್ಲಂ ಪೂರಂ]], [[ಅಸ್ರಾಮಂ ಶ್ರೀ ಕೃಷ್ಣ ಸ್ವಾಮಿ ದೇವಾಲಯ]] ಹಬ್ಬದ ಭಾಗವಾಗಿದೆ, ಇದನ್ನು ಸಾಮಾನ್ಯವಾಗಿ 15 ಏಪ್ರಿಲ್ ರಂದು ನಡೆಸಲಾಗುತ್ತದೆ, ಆದರೆ ಸಾಂದರ್ಭಿಕವಾಗಿ 16 ಏಪ್ರಿಲ್ ರಂದು ನಡೆಸಲಾಗುತ್ತದೆ. ಪೂರಂ ಅನ್ನು ಅಶ್ರಮಂ ಮೈದಾನದಲ್ಲಿ ನಡೆಸಲಾಗುತ್ತದೆ.
[[ರಾಷ್ಟ್ರಪತಿಗಳ ಟ್ರೋಫಿ ದೋಣಿ ಪಂದ್ಯ]] (PTBR) ಕೊಲ್ಲಂನ ಅಷ್ಟಮುಡಿ ಸರೋವರದಲ್ಲಿ ನಡೆಯುವ ವಾರ್ಷಿಕ ರೆಗಟ್ಟಾ ಆಗಿದೆ. ಈ ಕಾರ್ಯಕ್ರಮವನ್ನು ಸೆಪ್ಟೆಂಬರ್ 2011 ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಉದ್ಘಾಟಿಸಿದರು.<ref>{{cite web|title=presidents trophy boat race|url=http://presidentstrophy.gov.in/|access-date=20 April 2013|publisher=Presidentstrophy.gov.in}}{{Dead link|date=June 2025 |bot=InternetArchiveBot |fix-attempted=yes }}</ref><ref>{{cite web|date=24 October 2016|title=President's Trophy boat race on November 1|url=http://www.thehindu.com/news/national/kerala/presidents-trophy-boat-race-on-nov-1/article9260279.ece|access-date=20 April 2013|work=The Hindu}}</ref>
==ಸಾರಿಗೆ==
{{Main|ಕೊಲ್ಲಂನಲ್ಲಿ ಸಾರಿಗೆ}}
===ರಸ್ತೆ===
ಸರ್ಕಾರಿ ಒಡೆತನದ [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)]] ಮತ್ತು ಖಾಸಗಿ ಬಸ್ ನಿರ್ವಾಹಕರು ಕೊಲ್ಲಂ ಅನ್ನು ಸಂಪರ್ಕಿಸುವ ಅಂತರರಾಜ್ಯ ಮತ್ತು ಅಂತರಾಷ್ಟ್ರೀಯ ಬಸ್ ಸೇವೆಗಳನ್ನು ನಡೆಸುತ್ತಾರೆ. ನಗರದಲ್ಲಿ ಮುಖ್ಯವಾಗಿ 3 ಬಸ್ ನಿಲ್ದಾಣಗಳಿವೆ - [[ಕೊಲ್ಲಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ]], [[ಅಂಡಮುಕ್ಕಂ ನಗರ ಬಸ್ ನಿಲ್ದಾಣ|ಅಂಡಮುಕ್ಕಂ ನಗರ ಬಸ್ ನಿಲ್ದಾಣ]], ಮತ್ತು [[ಥಂಗಸ್ಸೇರಿ ಬಸ್ ಟರ್ಮಿನಲ್]].<ref>{{cite web|url=http://timesofindia.indiatimes.com/city/thiruvananthapuram/thiruvananthapuram-ksrtc-executive-directors-in-charge-of-zones/articleshow/56403671.cms| title=Thiruvananthapuram: KSRTC executive directors in-charge of zones |work=The Times of India|date=8 January 2017 |access-date=9 January 2017}}</ref><ref>{{cite web|url=http://www.keralapwd.gov.in/getPage.php?page=NH%20in%20Kerala&pageId=301|title=National Highways in Kerala|publisher=Kerala PWD|access-date=9 August 2016|archive-date=16 August 2016|archive-url=https://web.archive.org/web/20160816023351/http://www.keralapwd.gov.in/getPage.php?page=NH%20in%20Kerala&pageId=301|url-status=dead}}</ref>
{{Multiple image
| align = center
| direction = horizontal
| image1 = Dalavapuram bridgea.jpg
| caption1 = ಕೊಲ್ಲಂ ನಗರದ ಬಳಿಯ [[ಚವರ ಥೆಕ್ಕುಂಭಾಗೊಮ್]] ಸೇತುವೆ - ಈ ಸೇತುವೆಯು ಅಸ್ತಿತ್ವದಲ್ಲಿರುವ ದೋಣಿ ಸೇವೆಗಳ ಜೊತೆಗೆ ಥೆಕ್ಕುಂಭಾಗೊಮ್ ಜನರಿಗೆ ಕೊಲ್ಲಂ ನಗರದೊಂದಿಗೆ ಹೊಸ ಸಂಪರ್ಕ ಮಾರ್ಗವನ್ನು ನೀಡಿದೆ.
| image2 = Kollam Bypass, Feb 2020.jpg
| caption2 = [[ಕೊಲ್ಲಂ ಬೈಪಾಸ್]] - {{cvt|13.141|km|adj=on}} ಉದ್ದದ ಕೊಲ್ಲಂ ಬೈಪಾಸ್ ಯೋಜನೆಯನ್ನು 1975 ರಲ್ಲಿ ಯೋಜಿಸಲಾಗಿತ್ತು ಆದರೆ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಕೆಲಸ ವಿಳಂಬವಾಯಿತು.
| image3 = KSRTC Bus Station, Kollam.jpg
| caption3 = [[ಕೊಲ್ಲಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ]] ಪ್ರಸಿದ್ಧ ಅಷ್ಟಮುಡಿ ಸರೋವರದ ದಡದಲ್ಲಿದೆ. ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಒಂದಾಗಿದ್ದು, ಇದು ಇನ್ನೂ ನವೀಕರಣಕ್ಕಾಗಿ ಕಾಯುತ್ತಿದೆ.
| image4 = Traffic Thevally Bridge Kollam Kerala Mar22 A7C 01797.jpg
| caption4 = ಥೇವಳ್ಳಿಯನ್ನು ಕೊಟ್ಟಯತುಕಡವಿಗೆ ಸಂಪರ್ಕಿಸುವ ಥೇವಳ್ಳಿ ಸೇತುವೆಯ ಮೇಲೆ ಸಂಚಾರ, [[ರಾಷ್ಟ್ರೀಯ ಜಲಮಾರ್ಗ 3]], ಅಷ್ಟಮುಡಿ ಸರೋವರದ ಮೇಲೆ
| total_width =
| alt1 =
}}
===ರೈಲು===
{{see also|ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ}}
[[File:Main terminal of Kollam Junction railway station, Jan 2017.jpg|right|thumb|[[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ]]ದ ಮುಖ್ಯ ಟರ್ಮಿನಲ್]]
[[File:Kollam Railway.jpg|thumb|ಕೊಲ್ಲಂ ರೈಲ್ವೇ ನಿರ್ಮಾಣದಲ್ಲಿದೆ]]
{{rws|ಕೊಲ್ಲಂ ಜಂಕ್ಷನ್}} ಕೇರಳದಲ್ಲಿ ಎರಡನೇ ಅತಿದೊಡ್ಡ ರೈಲ್ವೇ ನಿಲ್ದಾಣವಾಗಿದ್ದು, ಒಟ್ಟು 6 ವೇದಿಕೆಗಳು ಮತ್ತು 17 ರೈಲು ಹಳಿಗಳನ್ನು ಹೊಂದಿದೆ. ಕೊಲ್ಲಂ ನಗರದ ಇತರ ರೈಲ್ವೇ ನಿಲ್ದಾಣಗಳೆಂದರೆ [[ಇರವಿಪುರಂ ರೈಲ್ವೇ ನಿಲ್ದಾಣ|ಇರವಿಪುರಂ]] ಮತ್ತು [[ಕಿಳಿಕೊಲ್ಲೂರು ರೈಲ್ವೇ ನಿಲ್ದಾಣ|ಕಿಳಿಕೊಲ್ಲೂರು]]. ಕೊಲ್ಲಂ ಜಂಕ್ಷನ್ 1180.5 ಮೀಟರ್ (3873 ಅಡಿ) ಅಳತೆಯ ವಿಶ್ವದ ಮೂರನೇ ಅತಿ ಉದ್ದದ ರೈಲ್ವೇ ವೇದಿಕೆಯನ್ನು ಹೊಂದಿದೆ.<ref>{{cite news |url=https://www.independent.co.uk/travel/asia/west-bengal-tea-plantations-and-other-rajera-relics-9835426.html |title=West Bengal: tea plantations and other Raj-era relics|access-date=3 April 2019}}</ref>
{|class="wikitable"
|+ಕೊಲ್ಲಂನಲ್ಲಿ ರೈಲ್ವೇ ನಿಲ್ದಾಣಗಳು
!ಕ್ರ.ಸಂ.
!ನಿಲ್ದಾಣದ ಹೆಸರು
!ವೇದಿಕೆಗಳು
!ಪ್ರದೇಶ
|-
|1
|[[ಇರವಿಪುರಂ ರೈಲ್ವೇ ನಿಲ್ದಾಣ|ಇರವಿಪುರಂ]]
|2
|ದಕ್ಷಿಣ ಕೊಲ್ಲಂ
|-
|2
|[[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ|ಕೊಲ್ಲಂ ಜಂಕ್ಷನ್]]
|6
|ಮಧ್ಯ ಕೊಲ್ಲಂ
|-
|3
|[[ಕಿಳಿಕೊಲ್ಲೂರು ರೈಲ್ವೇ ನಿಲ್ದಾಣ|ಕಿಳಿಕೊಲ್ಲೂರು]]
|2
||ಪೂರ್ವ ಕೊಲ್ಲಂ
|}
ಮುಖ್ಯ ರೈಲು ವಿದ್ಯುತ್ ಬಹು ಘಟಕ ([[MEMU]]) ಕೊಲ್ಲಂ ಜಂಕ್ಷನ್ನಲ್ಲಿ ವಾಹನ ನಿರ್ವಹಣಾ ಶೆಡ್ ಅನ್ನು ಹೊಂದಿದೆ. MEMU ರೈಲು ಸೇವೆಯು ಕೊಲ್ಲಂ ಅನ್ನು ಎರ್ನಾಕುಲಂ (ಆಲಪ್ಪುಳ ಮತ್ತು ಕೊಟ್ಟಾಯಂ ಮೂಲಕ), ಪುನಲೂರು (ಕೊಟ್ಟಾರಕ್ಕರ ಮೂಲಕ), ಮತ್ತು ಕನ್ನಿಯಾಕುಮಾರಿ (ತಿರುವನಂತಪುರ ಮೂಲಕ) ಗೆ ಸಂಪರ್ಕಿಸುತ್ತದೆ.<ref>{{cite web|url=http://www.newindianexpress.com/cities/thiruvananthapuram/article163030.ece|title=Timings of MEMUs included|publisher=The New Indian Express|date=2 July 2010|access-date=9 August 2016|archive-date=13 August 2016|archive-url=https://web.archive.org/web/20160813013003/http://www.newindianexpress.com/cities/thiruvananthapuram/article163030.ece|url-status=dead}}</ref>
===ಜಲ===
[[File:Houseboat Thevally Bridge Ashtamudi Kollam Mar22 R16 05860.jpg|thumb|ಥೇವಳ್ಳಿ ಸೇತುವೆಯಡಿಯಲ್ಲಿ ಹೌಸ್ಬೋಟ್ ಹಾದುಹೋಗುತ್ತಿದೆ]]
[[ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ|ರಾಜ್ಯ ಜಲ ಸಾರಿಗೆ ಇಲಾಖೆ]] [[ಕೊಲ್ಲಂ ಕೆಎಸ್ಡಬ್ಲ್ಯೂಟಿಡಿ ಫೆರಿ ಟರ್ಮಿನಲ್]] ನಿಂದ [[ಪಶ್ಚಿಮ ಕಲ್ಲಡ]], ಮನ್ರೋ ದ್ವೀಪ, ಗುಹಾನಂದಪುರಂ, ಚವರ ಥೆಕ್ಕುಂಭಾಗೊಮ್, ದಲವಾಪುರಂ, ಮತ್ತು ಆಲಪ್ಪುಳಕ್ಕೆ ದೋಣಿ ಸೇವೆಗಳನ್ನು ನಡೆಸುತ್ತದೆ, ಇದು [[ಅಷ್ಟಮುಡಿ ಸರೋವರ]]ದ ದಡದಲ್ಲಿದೆ. ಈ ಸರೋವರವು ಕೇರಳದ ಎರಡನೇ ಅತಿದೊಡ್ಡ ಜೌಗು ಪರಿಸರ ವ್ಯವಸ್ಥೆಯಾಗಿದ್ದು, ಕೊಲ್ಲಂನಲ್ಲಿ ಜಲ ಸಾರಿಗೆಗೆ ಕೇಂದ್ರ ಕೇಂದ್ರವಾಗಿದೆ. ಇದರ ನೀರು ನಗರವನ್ನು ಹಲವಾರು ಸ್ಥಳೀಯ ಸಮುದಾಯಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ರಾಷ್ಟ್ರೀಯ ಜಲಮಾರ್ಗ 3 ರ ಭಾಗವಾಗಿದೆ. ಕೊಲ್ಲಂ ತೋಡು 7.7 ಕಿಲೋಮೀಟರ್ ಉದ್ದದ ಕಾಲುವೆಯಾಗಿದ್ದು, ನಗರದ ಮೂಲಕ ಹಾದುಹೋಗುತ್ತದೆ ಮತ್ತು ಜಲ ಸಾರಿಗೆ ಜಾಲದ ಪ್ರಮುಖ ಅಪಧಮನಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಅಷ್ಟಮುಡಿ ಸರೋವರವನ್ನು ಇತರ ಜಲಾಶಯಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ಮುಖ್ಯ ಕೊಲ್ಲಂ ಬಂದರನ್ನು ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ (IWAI) ಒಳನಾಡು ಟರ್ಮಿನಲ್ಗೆ ಸಂಪರ್ಕಿಸುತ್ತದೆ. ನವೀಕರಣ ಪ್ರಯತ್ನಗಳ ನಂತರ, ಕಾಲುವೆಯು ಪ್ರಯಾಣಿಕರು ಮತ್ತು ಸರಕು ಸಾರಿಗೆ ಮತ್ತು ಪ್ರವಾಸೋದ್ಯಮ ಎರಡನ್ನೂ ಬೆಂಬಲಿಸುವ ಉದ್ದೇಶವನ್ನು ಹೊಂದಿದೆ.
ನಗರದ [[ಅಸ್ರಾಮಂ ಲಿಂಕ್ ರಸ್ತೆ]] ಫೆರಿ ಟರ್ಮಿನಲ್ ಪಕ್ಕದಲ್ಲಿಯೇ ಹಾದುಹೋಗುತ್ತದೆ.<ref name="Introduction-KSWTD">{{cite web |url=http://swtd.gov.in/index.php?langCode=en&compName=general&compView=aboutdept |title=Kerala State Water Transport Department - Introduction |publisher=KSWTD |access-date=2015-01-04 |archive-date=26 December 2014 |archive-url=https://web.archive.org/web/20141226161243/http://swtd.gov.in/index.php?langCode=en&compName=general&compView=aboutdept |url-status=dead }}</ref>
ಕೊಲ್ಲಂನಿಂದ ಸೇವೆಗಳನ್ನು ವಿಶಾಲವಾಗಿ ದೂರದ ಪ್ರಯಾಣಿಕರ ದೋಣಿ ಸೇವೆಗಳು, ಕಡಿಮೆ-ದೂರದ ಸ್ಥಳೀಯ ಪ್ರಯಾಣಿಕರ ದೋಣಿಗಳು, ಮತ್ತು ವಿಶೇಷ ಪ್ರವಾಸಿ ಕ್ರೂಸ್ಗಳಾಗಿ ವರ್ಗೀಕರಿಸಲಾಗಿದೆ.
* ಕೊಲ್ಲಂ-ಆಲಪ್ಪುಳ (ಅಲೆಪ್ಪಿ) ಕ್ರೂಸ್: ಇದು ಪ್ರಮುಖ ಸೇವೆಯಾಗಿದ್ದು, ಸುಮಾರು 55 ಕಿಲೋಮೀಟರ್ಗಳನ್ನು ಅಷ್ಟಮುಡಿ ಸರೋವರ ಮತ್ತು ಅಂತರ್ಸಂಪರ್ಕಿತ ಬ್ಯಾಕ್ವಾಟರ್ ಕಾಲುವೆಗಳ ಮೂಲಕ 8-ಗಂಟೆಗಳ ಸುಂದರ ಕ್ರೂಸ್ ಆಗಿದೆ. ಇದು ಎರಡು ಜಿಲ್ಲೆಗಳ ನಡುವೆ ನೇರ ಸಾರಿಗೆ ಸಂಪರ್ಕವಾಗಿ ಮತ್ತು ಪ್ರಮುಖ ಪ್ರವಾಸಿ ಉತ್ಪನ್ನವಾಗಿ ಕಾರ್ಯನಿರ್ವಹಿಸುತ್ತದೆ.<ref>{{cite web |last1=E |first1=Krishna Kumar K. |title=SWTD unable to resume long-haul boat service on Alappuzha-Kollam waterway |url=https://www.newindianexpress.com/cities/kochi/2025/Jul/14/swtd-unable-to-resume-long-haul-boat-service-on-alappuzha-kollam-waterway |website=The New Indian Express |language=en |date=14 July 2025}}</ref>
* ಸ್ಥಳೀಯ ಮತ್ತು ಕಡಿಮೆ-ದೂರ ಸೇವೆಗಳು: ನಿಯಮಿತ, ಕಡಿಮೆ-ದರದ ದೋಣಿ ಸೇವೆಗಳು ಕೊಲ್ಲಂ ಅನ್ನು ಜಿಲ್ಲೆಯೊಳಗಿನ ವಿವಿಧ ಸ್ಥಳಗಳಿಗೆ ಸಂಪರ್ಕಿಸುತ್ತವೆ, ಇದರಲ್ಲಿ ಅಳುಂಕಡವು, ಗುಹಾನಂದಪುರಂ, ಮತ್ತು ಕಣ್ಣನಲ್ಲೂರು ಮಾರ್ಗಗಳು ಸೇರಿವೆ. ಇವು ಸ್ಥಳೀಯ ನಿವಾಸಿಗಳಿಗೆ ಅಗತ್ಯವಾದ ಸಾರ್ವಜನಿಕ ಸಾರಿಗೆಯಾಗಿ ಕಾರ್ಯನಿರ್ವಹಿಸುತ್ತವೆ.<ref>{{cite web |title=Important places enroute |url=https://swtd.kerala.gov.in/pages-en-IN/placesenroute |publisher=State Water Transport Department |access-date=7 March 2026}}</ref>
* ಪ್ರವಾಸಿ ಮತ್ತು ವಿಶೇಷ ಸೇವೆಗಳು: "ಸೀ ಅಷ್ಟಮುಡಿ" ಪ್ರವಾಸಿ ಸೇವೆ: ಅಷ್ಟಮುಡಿ ಸರೋವರದಲ್ಲಿ 5-ಗಂಟೆಗಳ ವಿಹಾರ ಪ್ರಯಾಣ, ಸಾಂಬ್ರನಿಕ್ಕೋಡಿ ದ್ವೀಪದಲ್ಲಿ ನಿಲುಗಡೆಯೊಂದಿಗೆ. ಇದು ಪ್ರತಿದಿನ ಬೆಳಿಗ್ಗೆ 11:30 ಗಂಟೆಗೆ ಹೊರಡುತ್ತದೆ ಮತ್ತು ಕೆಳಗಿನ ಡೆಕ್ಗೆ ₹400 ಮತ್ತು ಮೇಲಿನ ಡೆಕ್ಗೆ ₹500 ವೆಚ್ಚವಾಗುತ್ತದೆ.<ref>{{cite web |title="SEE ASHTAMUDI" PASSENGER-CUM-TOURIST SERVICE |url=https://swtd.kerala.gov.in/pages-en-IN/placesenroute |publisher=State Water Transport Department |access-date=7 March 2026}}</ref><ref>{{cite web |title='See Ashtamudi' boat service set to complete 2 years; New Solar Boat to join fleet |url=https://english.mathrubhumi.com/lifestyle/travel/see-ashtamudi-travel-in-kollam-solar-boat-soon-backwater-cruise-e5920409 |website=@mathrubhumi |language=en |date=8 March 2025}}</ref><ref>{{cite web |author1=The Hindu Bureau|title='See Ashtamudi' tourist boat service in Kollam to be launched on Friday |url=https://www.thehindu.com/news/national/kerala/see-ashtamudi-tourist-boat-service-in-kollam-to-be-launched-on-friday/article66599527.ece |website=The Hindu |language=en-IN |date=9 March 2023}}</ref> ಅನೇಕ ಖಾಸಗಿ ಪ್ರವಾಸ ನಿರ್ವಾಹಕರು ಮತ್ತು ರೆಸಾರ್ಟ್ಗಳು ಪ್ರವಾಸಿಗರಿಗೆ ಅಷ್ಟಮುಡಿ ಸರೋವರದಲ್ಲಿ ದಿನದ ಕ್ರೂಸ್ಗಳನ್ನು ನೀಡುತ್ತವೆ, ಇದು ಹೌಸ್ಬೋಟ್ಗಳು, ಮೋಟಾರು ದೋಣಿಗಳು, ಮತ್ತು ಕ್ಯಾನೋಗಳಲ್ಲಿ ಪ್ರದೇಶವನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ.<ref>{{cite web |last1=Balan |first1=Saritha S. |title=Deserted homestays, jobless boatmen: Tourism in Kerala's Munroe Island hit hard |url=https://www.thenewsminute.com/kerala/deserted-homestays-jobless-boatmen-tourism-kerala-s-munroe-island-hit-hard-137420 |website=The News Minute |language=en |date=11 November 2020}}</ref>
ದ್ವಿಮಹಡಿಯ ಆಡಂಬರದ ದೋಣಿಗಳು ಕೊಲ್ಲಂ ಮತ್ತು ಅಲೆಪ್ಪೆಯ ನಡುವೆ ಪ್ರತಿದಿನ ಓಡುತ್ತವೆ. ಸರ್ಕಾರ ಮತ್ತು ಖಾಸಗಿ ಮಾಲೀಕರು ನಡೆಸುವ ಆಡಂಬರದ ದೋಣಿಗಳು ಪ್ರವಾಸಿ ಋತುವಿನಲ್ಲಿ ಮುಖ್ಯ ದೋಣಿ ಘಟ್ಟದಿಂದ ಓಡುತ್ತವೆ. ದಕ್ಷಿಣದಲ್ಲಿ ತಿರುವನಂತಪುರದಿಂದ ಪ್ರಾರಂಭವಾಗಿ ಉತ್ತರದಲ್ಲಿ [[ಹೊಸ್ಡುರ್ಗ್]] ನಲ್ಲಿ ಕೊನೆಗೊಳ್ಳುವ ಪಶ್ಚಿಮ ಕರಾವಳಿ ಕಾಲುವೆ ವ್ಯವಸ್ಥೆಯು [[ಪರವೂರು, ಕೊಲ್ಲಂ|ಪರವೂರು]], ಕೊಲ್ಲಂ ನಗರ, ಮತ್ತು ಕರುನಾಗಪಲ್ಲಿ ತಾಲೂಕುಗಳ ಮೂಲಕ ಹಾದುಹೋಗುತ್ತದೆ.<ref name="Corporation of Kollam">{{cite web |url=http://www.kollamcorporation.gov.in/transport |title=Transport - Kollam Corporation |publisher=Kollam Municipal Corporation |access-date=2015-01-04 |archive-date=20 October 2017 |archive-url=https://web.archive.org/web/20171020124744/http://www.kollamcorporation.gov.in/transport |url-status=dead }}</ref><ref name="Routes-KSWTD">{{cite web |url=http://swtd.gov.in/index.php?langCode=en&compName=general&compView=placesnroute |title=Important places enroute - KSWTD |publisher=KSWTD |access-date=2015-01-04 |archive-date=4 March 2016 |archive-url=https://web.archive.org/web/20160304061357/http://swtd.gov.in/index.php?langCode=en&compName=general&compView=placesnroute |url-status=dead }}</ref>
[[ಕೊಲ್ಲಂ ಬಂದರು]] ಕೇರಳದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಸರಕು ನಿರ್ವಹಣಾ ಸೌಲಭ್ಯಗಳು 2013 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.<ref>''[http://www.hindu.com/2009/06/18/stories/2009061855000700.htm Kollam port starts cargo handling]{{dead link|date=April 2021|bot=medic}}{{cbignore|bot=medic}}''. Accessed 29 July 2014.</ref> ವಿದೇಶಿ ಹಡಗುಗಳು ನಿಯಮಿತವಾಗಿ ಬಂದರಿಗೆ ಆಗಮಿಸುತ್ತವೆ, ಆಂಟಿಗುವಾದಲ್ಲಿ ನೋಂದಾಯಿಸಲಾದ {{convert|145|m|adj=on}} ಹಡಗು MV ಅಲಿನಾ 4 {{nbsp}}ಏಪ್ರಿಲ್ 2014 ರಂದು ಬಂದರಿನಲ್ಲಿ ನಿಲ್ಲಿಸಿತು.<ref>{{cite web|url=http://www.newindianexpress.com/states/kerala/Foreign-Ship-Reaches-Kollam-Port/2014/04/05/article2150731.ece#.U0I8V9LHm-0 |archive-url=https://web.archive.org/web/20140408225152/http://www.newindianexpress.com/states/kerala/Foreign-Ship-Reaches-Kollam-Port/2014/04/05/article2150731.ece#.U0I8V9LHm-0 |url-status=dead |archive-date=8 April 2014 |title=Foreign Ship Reaches Kollam Port|publisher=The New Indian Express |date=5 April 2014 |access-date=7 April 2014}}</ref> ಒಮ್ಮೆ ಬಂದರು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ, ಅದು ಕೊಲ್ಲಂ ಮೂಲದ ಗೋಡಂಬಿ ಕಂಪನಿಗಳ ಸಾರಿಗೆ ಚಟುವಟಿಕೆಗಳನ್ನು ಸುಲಭಗೊಳಿಸುತ್ತದೆ.<ref>''[http://www.shippingtribune.com/kollam-cashew-importers-suffering-due-port-congestion-tuticorin-terminal/ Kollam cashew importers suffering due to port congestion at tuticorin terminal] {{Webarchive|url=https://web.archive.org/web/20140814143721/http://www.shippingtribune.com/kollam-cashew-importers-suffering-due-port-congestion-tuticorin-terminal/ |date=14 August 2014 }}''. Accessed 29 July 2014.</ref> ಶ್ರೇಯಸ್ ಶಿಪ್ಪಿಂಗ್ ಕಂಪನಿಯು ಈಗ [[ಕೊಲ್ಲಂ ಬಂದರು]] ಮತ್ತು [[ಕೊಚ್ಚಿ ಬಂದರು|ಕೊಚ್ಚಿ ಬಂದರು]] ನಡುವೆ ನಿಯಮಿತ ಕಂಟೇನರ್ ಸೇವೆಯನ್ನು ನಡೆಸುತ್ತಿದೆ.<ref>''[http://www.thehindubusinessline.com/industry-and-economy/logistics/shreyas-shipping-starts-kochikollam-container-service/article5339784.ece Shreyas Shipping starts Kochi-Kollam container service]''. Accessed 29 July 2014. {{Webarchive|url=https://web.archive.org/web/20140420153237/http://www.thehindubusinessline.com/industry-and-economy/logistics/shreyas-shipping-starts-kochikollam-container-service/article5339784.ece |date=20 ಏಪ್ರಿಲ್ 2014 }}</ref><ref>{{Cite web |title=Exim India::The first & the only national daily on Export, Import, Shipping. |url=https://www.eximin.net/NewsDetails.aspx?name=73939 |archive-url=https://web.archive.org/web/20220117200427/https://www.eximin.net/NewsDetails.aspx?name=73939 |archive-date=2022-01-17 |access-date=2026-01-18 |website=www.eximin.net |language=en}}</ref>
[[File:Old Airport, Kollam.jpg|thumb|right|ಹಳೆಯ [[ಕೊಲ್ಲಂ ವಿಮಾನ ನಿಲ್ದಾಣ]] ಪ್ರದೇಶ, [[ಅಸ್ರಾಮಂ]]]]
ಕೊಲ್ಲಂ ಕಾಲುವೆ (ಅಥವಾ ಕ್ವಿಲಾನ್ ಕಾಲುವೆ ಅಥವಾ ಕೊಲ್ಲಂ ತೋಡು ಎಂದೂ ಕರೆಯಲ್ಪಡುತ್ತದೆ), ಇದು ದೊಡ್ಡ ಪಶ್ಚಿಮ ಕರಾವಳಿ ಕಾಲುವೆ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ, ಇದನ್ನು 1880 ರಲ್ಲಿ ನಿರ್ಮಿಸಲಾಯಿತು. ಇದು ಹಿಂದಿನ ಸಂಸ್ಥಾನ ಟ್ರಾವಂಕೋರ್ನ ಪ್ರಾಥಮಿಕ ವ್ಯಾಪಾರ ಮಾರ್ಗವಾಯಿತು, ಸರಕು ಹಡಗುಗಳು ನಗರದ ಮೂಲಕ ಸರಕುಗಳನ್ನು ಸಾಗಿಸುತ್ತಿದ್ದವು.<ref>{{cite web |title=Renovated Kollam canal now a cesspool |url=https://www.thehindu.com/news/national/kerala/renovated-kollam-canal-now-a-cesspool/article7013897.ece |website=The Hindu |language=en-IN |date=19 March 2015}}</ref>
====ಭವಿಷ್ಯದ ಯೋಜನೆಗಳು====
ಅದರ ಜಲ ಸಾರಿಗೆ ಮೂಲಸೌಕರ್ಯವನ್ನು ಮತ್ತಷ್ಟು ಬಳಸಿಕೊಳ್ಳಲು, ಕೊಲ್ಲಂ ಹಲವಾರು ನಡೆಯುತ್ತಿರುವ ಮತ್ತು ಪ್ರಸ್ತಾವಿತ ಯೋಜನೆಗಳನ್ನು ಹೊಂದಿದೆ:
;ಕೊಲ್ಲಂ ವಾಟರ್ ಮೆಟ್ರೋ: ಕೊಲ್ಲಂನಲ್ಲಿ ವಾಟರ್ ಮೆಟ್ರೋ ವ್ಯವಸ್ಥೆಯನ್ನು ಪರಿಚಯಿಸಲು ಯೋಜನೆಗಳಿವೆ, ಇದು ಕೊಚ್ಚಿಯಲ್ಲಿರುವಂತೆಯೇ ಅಂತರ-ನಗರ ಜಲ ಸಾರಿಗೆ ಜಾಲವನ್ನು ಒದಗಿಸುತ್ತದೆ.<ref>{{cite web |author1=The Hindu Bureau|title=Traffic study on anvil to assess feasibility of launching Water Metro in Kollam and 17 other cities |url=https://www.thehindu.com/news/national/kerala/traffic-study-on-anvil-to-assess-feasibility-of-launching-water-metro-in-kollam-and-17-other-cities/article69471421.ece |website=The Hindu |language=en-IN |date=20 April 2025}}</ref><ref>{{cite web |last1=Hallikeri |first1=G.D. |title=IWAI Board commissions feasibility study for Urban Water Transport System in 17 cities |url=https://www.pib.gov.in/PressReleasePage.aspx?PRID=2105345 |publisher=Ministry of Ports, Shipping and Waterways |access-date=7 March 2026}}</ref>
;ಜಲಮಾರ್ಗ ಅಭಿವೃದ್ಧಿ: ರಾಷ್ಟ್ರೀಯ ಜಲಮಾರ್ಗ 3 ಅನ್ನು 24-ಗಂಟೆಗಳ ನ್ಯಾವಿಗೇಷನ್ಗೆ ಬೆಂಬಲಿಸುವಂತೆ ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಯೋಜನೆಗಳು ನಡೆಯುತ್ತಿವೆ, ಇದರಲ್ಲಿ ಚಾನಲ್ಗಳನ್ನು ಆಳಗೊಳಿಸುವುದು ಮತ್ತು ಟರ್ಮಿನಲ್ಗಳನ್ನು ಸುಧಾರಿಸುವುದು ಸೇರಿದೆ.
===ವಾಯು===
{{See also|ಕೊಲ್ಲಂ ವಿಮಾನ ನಿಲ್ದಾಣ}}
ಕೊಲ್ಲಂ ನಗರ ನಿಗಮವು [[ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ]]ದಿಂದ ಸೇವೆ ಸಲ್ಲಿಸುತ್ತದೆ, ಇದು NH66 ಮೂಲಕ ನಗರದಿಂದ ಸುಮಾರು 56 ಕಿಲೋಮೀಟರ್ ದೂರದಲ್ಲಿದೆ. ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದಲ್ಲಿ ಮೆಟ್ರೋ ಅಲ್ಲದ ನಗರದ ಮೊದಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.<ref>{{cite web|url=http://www.aai.aero/allAirports/thiru_general.jsp|title=TRV Airport|publisher=AAI|access-date=23 August 2016|url-status=dead|archive-url=https://web.archive.org/web/20160902180351/http://www.aai.aero/allAirports/thiru_general.jsp|archive-date=2 September 2016}}</ref>
==ಶಿಕ್ಷಣ==
{{Main|ಕೊಲ್ಲಂ ಜಿಲ್ಲೆಯಲ್ಲಿ ಶಿಕ್ಷಣ}}
[[File:Thangal Kunju Musaliar College of Engineering, Kollam, Kerala.jpg|200px|thumb|[[ಕರಿಕೋಡ್]] ನಲ್ಲಿನ [[ಟಿ.ಕೆ.ಎಂ. ಕಾಲೇಜ್ ಆಫ್ ಇಂಜಿನಿಯರಿಂಗ್|TKM ಇಂಜಿನಿಯರಿಂಗ್ ಕಾಲೇಜ್]]|alt=ಸಾಂಪ್ರದಾಯಿಕ ಮುಘಲ್ ವಾಸ್ತುಶಿಲ್ಪದೊಂದಿಗೆ ಅಲಂಕೃತವಾದ, ಗುಲಾಬಿ-ಬಿಳಿ ಕಟ್ಟಡ|left]]
ಕೊಲ್ಲಂನಲ್ಲಿ ಹಲವಾರು ಕಾಲೇಜುಗಳು, ಶಾಲೆಗಳು ಮತ್ತು ಕಲಿಕಾ ಕೇಂದ್ರಗಳಿವೆ. [[ಟಿ.ಕೆ.ಎಂ. ಕಾಲೇಜ್ ಆಫ್ ಇಂಜಿನಿಯರಿಂಗ್|ಥಂಗಲ್ ಕುಂಜು ಮುಸಲಿಯಾರ್ ಕಾಲೇಜ್ ಆಫ್ ಇಂಜಿನಿಯರಿಂಗ್]], ರಾಜ್ಯದಲ್ಲಿ ತನ್ನ ಪ್ರಕಾರದ ಮೊದಲ ಖಾಸಗಿ ಶಾಲೆಯಾಗಿದ್ದು, ಕೊಲ್ಲಂ ನಗರದಿಂದ ಸುಮಾರು {{cvt|7|km}} ಪೂರ್ವಕ್ಕೆ [[ಕಿಳಿಕೊಲ್ಲೂರು]] ನಲ್ಲಿದೆ, ಮತ್ತು ಇದು ಎಲ್ಲಾ ಕೊಲ್ಲಂವಾಸಿಗಳಿಗೆ ಹೆಮ್ಮೆಯ ಮೂಲವಾಗಿದೆ. ಕೇರಳ ಸರ್ಕಾರವು ನಗರದ ಮತ್ತೊಂದು ಪ್ರತಿಷ್ಠಿತ ಸಂಸ್ಥೆಯಾದ [[ಫಾತಿಮಾ ಮಾತಾ ರಾಷ್ಟ್ರೀಯ ಕಾಲೇಜ್]] ಗೆ ಶೈಕ್ಷಣಿಕ ಸ್ವಾಯತ್ತತೆಯನ್ನು ನೀಡಿದೆ.<ref name="Autonomy: 13 colleges in the list">{{cite web | url = http://www.newindianexpress.com/states/kerala/Autonomy-13-colleges-in-the-final-list/2013/12/24/article1962583.ece | archive-url = https://web.archive.org/web/20140108131951/http://www.newindianexpress.com/states/kerala/Autonomy-13-colleges-in-the-final-list/2013/12/24/article1962583.ece | url-status = dead | archive-date = 8 January 2014 | title = Autonomy: 13 colleges in the list | access-date = 2014-01-08 | year = 2012 | publisher = The New Indian Express}}</ref>
[[File:SN Law College, Kollam.jpg|thumb|right|[[ಕರ್ಬಲ]]ದಲ್ಲಿನ [[ಶ್ರೀ ನಾರಾಯಣ ಗುರು ಕಾನೂನು ಅಧ್ಯಯನ ಕಾಲೇಜು]]]]
[[ಕೇರಳ ರಾಜ್ಯ ವಿನ್ಯಾಸ ಸಂಸ್ಥೆ]] (KSID), [[ಕೇರಳ ಸರ್ಕಾರ]]ದ ಕಾರ್ಮಿಕ ಮತ್ತು ಕೌಶಲ್ಯ ಇಲಾಖೆಯ ಅಡಿಯಲ್ಲಿನ ವಿನ್ಯಾಸ ಸಂಸ್ಥೆಯು ಕೊಲ್ಲಂನ ಚಂದನತೋಪೆಯಲ್ಲಿದೆ. ಇದನ್ನು 2008 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಭಾರತದ ಮೊದಲ ಸರ್ಕಾರಿ ಒಡೆತನದ ವಿನ್ಯಾಸ ಸಂಸ್ಥೆಗಳಲ್ಲಿ ಒಂದಾಗಿದೆ. KSID ಪ್ರಸ್ತುತ [[ಅಹಮದಾಬಾದ್ ನ ರಾಷ್ಟ್ರೀಯ ವಿನ್ಯಾಸ ಸಂಸ್ಥೆ]]ಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ವಿನ್ಯಾಸದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮಗಳನ್ನು ನಡೆಸುತ್ತದೆ.<ref>{{Cite news|url = http://www.newindianexpress.com/cities/thiruvananthapuram/Admission-Process-Starts-at-KSID-for-New-Diploma-Courses/2015/05/14/article2812971.ece|archive-url = https://web.archive.org/web/20150516123319/http://www.newindianexpress.com/cities/thiruvananthapuram/Admission-Process-Starts-at-KSID-for-New-Diploma-Courses/2015/05/14/article2812971.ece|url-status = dead|archive-date = 16 May 2015|title = Admission Process Starts at KSID for New Diploma Courses}}</ref><ref>{{Cite news|url = http://www.thehindu.com/todays-paper/tp-national/tp-kerala/institute-of-design-inaugurated/article1277100.ece|title = Institute of design inaugurated}}</ref>
[[ಭಾರತೀಯ ಮೂಲಸೌಕರ್ಯ ಮತ್ತು ನಿರ್ಮಾಣ ಸಂಸ್ಥೆ|ಭಾರತೀಯ ಮೂಲಸೌಕರ್ಯ ಮತ್ತು ನಿರ್ಮಾಣ ಸಂಸ್ಥೆ (IIIC-ಕೊಲ್ಲಂ)]] ನಿರ್ಮಾಣ-ಸಂಬಂಧಿತ ಉದ್ಯೋಗಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬೆಂಬಲಿಸಲು ಕೊಲ್ಲಂ ನಗರದ [[ಚವರ]]ದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸಂಸ್ಥೆಯಾಗಿದೆ.<ref>{{cite web|url=http://www.skilldevelopment.gov.in/states.html |title=States-Ministry of Skill Development & Entrepreneurship |publisher=Government of India |access-date=27 November 2019}}</ref> [[ಕೇರಳ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ|ಫ್ಯಾಷನ್ ತಂತ್ರಜ್ಞಾನ ಸಂಸ್ಥೆ, ಕೊಲ್ಲಂ]], ಕೇರಳವು ವೆಲ್ಲಿಮೋನ್ನಲ್ಲಿರುವ ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯಾಗಿದ್ದು, [[ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ]] ಮತ್ತು ಜವಳಿ ಸಚಿವಾಲಯದ ತಾಂತ್ರಿಕ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ. ಇದರ ಜೊತೆಗೆ, ನಗರದಲ್ಲಿ ಎರಡು IMK (ಕೇರಳ ವ್ಯವಸ್ಥಾಪನಾ ಸಂಸ್ಥೆ) ವಿಸ್ತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.<ref name="IMK Extension Centres">{{cite web | url = http://www.imk.ac.in/extension.htm | title = IMK Extension Centres - Kerala | access-date = 2014-01-08 | year = 2012 | publisher = imk.ac.in | archive-date = 23 July 2013 | archive-url = https://web.archive.org/web/20130723113518/http://imk.ac.in/extension.htm | url-status = dead }}</ref> [[ಕೇರಳ ಸಮುದ್ರ ಸಂಸ್ಥೆ]] ಕೊಲ್ಲಂ ನಗರದ [[ನೀಂದಕರ]]ದಲ್ಲಿದ್ದು, ಕೇರಳದ ವಿದ್ಯಾರ್ಥಿಗಳಿಗೆ ಸಮುದ್ರ ತರಬೇತಿಯನ್ನು ನೀಡುತ್ತದೆ.<ref>{{cite news|url=http://www.thehindu.com/todays-paper/tp-national/tp-kerala/maritime-institute-to-come-up-at-neendakara/article289620.ece |title=Maritime institute to come up at Neendakara |work=The Hindu|date=23 May 2009 |access-date=27 November 2019}}</ref> 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೋಟ್ ಕ್ರೂ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ನೀಂದಕರ ಸಮುದ್ರ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.<ref>{{cite news|url=https://www.newindianexpress.com/states/kerala/2013/may/08/steps-begun-to-set-up-maritime-university-475431.html | title=Steps begun to set up Maritime university | date=8 May 2013 |newspaper=The New Indian Express |access-date=27 November 2019}}</ref>
ಕಾಲೇಜುಗಳ ಹೊರತಾಗಿ, ಕೊಲ್ಲಂನಲ್ಲಿ ಹಲವಾರು ಬ್ಯಾಂಕ್ ತರಬೇತಿ ಕೇಂದ್ರಗಳಿವೆ.<ref name="Bank test coaching Centres - Kollam">{{cite web | url = http://careeradda.co.in/index.php?topic=3021.0 | title = Which is the best banking coaching centre in India - Kollam | access-date = 2014-08-09}}</ref> ಕೊಲ್ಲಂ ಭಾರತದ ಬ್ಯಾಂಕ್ ಪರೀಕ್ಷಾ ತರಬೇತಿ ಕೇಂದ್ರಗಳ ಕೇಂದ್ರವೆಂದು ಕರೆಯಲ್ಪಡುತ್ತದೆ, ಜಿಲ್ಲೆಯಲ್ಲಿ ಸುಮಾರು 40 ಅಂತಹ ಸಂಸ್ಥೆಗಳಿವೆ.<ref name="Kollam - The bank test coaching hub of India">{{cite news | url = http://timesofindia.indiatimes.com/city/thiruvananthapuram/Engineering-graduates-opt-for-banking-sector/articleshow/16597692.cms | title = Engineering graduates opt for banking sector | access-date = 2014-08-09 |work = Times of India| date = 29 September 2012 }}</ref>
==ಕ್ರೀಡೆ==
ಫುಟ್ಬಾಲ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ನಂತರ ಬಾಕ್ಸಿಂಗ್ ಮತ್ತು ಹಾಕಿ. ಕೊಲ್ಲಂ ಜಿಲ್ಲಾ, ರಾಜ್ಯ, ಮತ್ತು ವಲಯ-ಮಟ್ಟದ ಪಂದ್ಯಗಳಲ್ಲಿ ಭಾಗವಹಿಸುವ ಹಲವಾರು ಸ್ಥಳೀಯ ಫುಟ್ಬಾಲ್, ಹಾಕಿ, ಮತ್ತು ಕ್ರಿಕೆಟ್ ತಂಡಗಳಿಗೆ ನೆಲೆಯಾಗಿದೆ. [[ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ, ಕೊಲ್ಲಂ|ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ]]ವು ನಗರದ [[ಅಸ್ರಾಮಂ]]ನಲ್ಲಿ ಆಸ್ಟ್ರೋ-ಟರ್ಫ್ ಸೌಲಭ್ಯದೊಂದಿಗೆ ಇದೆ. ಇದನ್ನು ರೂ. 13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.<ref>{{cite web|url=http://www.newindianexpress.com/cities/thiruvananthapuram/article86081.ece |archive-url=https://web.archive.org/web/20140905021813/http://www.newindianexpress.com/cities/thiruvananthapuram/article86081.ece |url-status=dead |archive-date=5 September 2014 |title=Astro-turf hockey stadium |publisher=The New Indian Express |access-date=22 February 2018}}</ref> ಕ್ರೀಡಾಂಗಣದ ನಿರ್ಮಾಣಕ್ಕಾಗಿ ಅಸ್ರಾಮಂ, ಕೊಲ್ಲಂನಲ್ಲಿ ಅಂಚೆ ಇಲಾಖೆಯಿಂದ ಭೂಮಿಯನ್ನು ತೆಗೆದುಕೊಳ್ಳಲಾಗಿದೆ. ನಗರವು [[ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ (ಕೊಲ್ಲಂ)|ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ, ಕೊಲ್ಲಂ]] ಎಂಬ ಮತ್ತೊಂದು ಕ್ರೀಡಾಂಗಣವನ್ನು ಹೊಂದಿದೆ. ಇದು ಬಹುಪಯೋಗಿ ಕ್ರೀಡಾಂಗಣವಾಗಿದ್ದು, ರಣಜಿ ಟ್ರೋಫಿ, ಸಂತೋಷ್ ಟ್ರೋಫಿ, ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಂತಹ ಕ್ರೀಡಾ ಕಾರ್ಯಕ್ರಮಗಳನ್ನು ಪದೇ ಪದೇ ಆಯೋಜಿಸಿದೆ.<ref>{{cite web |url=https://cricketarchive.com/Kerala/Grounds/1095_f.html |title=KCA-Cricket Archive |publisher=Cricket Archive |access-date=22 February 2018 |archive-date=7 May 2017 |archive-url=https://web.archive.org/web/20170507020928/http://cricketarchive.com/Kerala/Grounds/1095_f.html |url-status=dead }}</ref> ನಗರದಲ್ಲಿನ ಎರಡು ತೆರೆದ ಮೈದಾನಗಳು, [[ಅಸ್ರಾಮಂ ಮೈದಾನ]] ಮತ್ತು [[ಪೀರಂಕಿ ಮೈದಾನ]] ಕೂಡ ಕ್ರೀಡಾ ಕಾರ್ಯಕ್ರಮಗಳು, ಅಭ್ಯಾಸ ಮತ್ತು ವಾರ್ಮ್-ಅಪ್ ಪಂದ್ಯಗಳಿಗೆ ಬಳಸಲ್ಪಡುತ್ತವೆ.
== ಪ್ರವಾಸಿ ಸ್ಥಳಗಳು ==
{{Expand section|date=October 2025}}
===ಹಿಂದೂ ದೇವಾಲಯಗಳು===
[[File:Kottarakkara Temple(HighResoluion).jpg|thumb|right|ಕೊಟ್ಟಾರಕ್ಕರ ಶ್ರೀ ಮಹಾಗಣಪತಿ ಕ್ಷೇತ್ರಂ]]
*[[ಆನಂದವಲ್ಲೀಶ್ವರಂ ಶ್ರೀ ಮಹಾದೇವರ ದೇವಾಲಯ]] ನಗರದ 400 ವರ್ಷಗಳ ಹಳೆಯ ಪ್ರಾಚೀನ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ 400-ವರ್ಷಗಳ-ಹಳೆಯ [[ಗರ್ಭಗುಡಿ]]ಯನ್ನು ತೇಗದಲ್ಲಿ ಮುಗಿಸಲಾಗಿದೆ.<ref>{{cite news|title=400-year-old sreekovil to be replaced|url=http://www.thehindu.com/news/national/kerala/400yearold-sreekovil-to-be-replaced/article7468835.ece|access-date=13 October 2015|work=The Hindu|date=26 July 2015 }}</ref>
*[[ಅಮ್ಮಚೀವೀಡು ಮೂರ್ತಿ ದೇವಾಲಯ]] ನಗರದ ಮತ್ತೊಂದು ಪ್ರಮುಖ ದೇವಾಲಯವಾಗಿದ್ದು, ಇದನ್ನು ಸುಮಾರು 600 ವರ್ಷಗಳ ಹಿಂದೆ ಕೊಲ್ಲಂನ ಶ್ರೀಮಂತರಾದ ಅಮ್ಮಚಿ ವೀಡು ಕುಟುಂಬವು ಸ್ಥಾಪಿಸಿತು.<ref name="kollamcity1">{{Cite web |title= Ammachiveedu Muhurthi Temple |url=http://www.kollamcity.com/index.php?menu=other&menu1=Religious |archive-url=https://web.archive.org/web/20101115114800/http://www.kollamcity.com/index.php?menu=other&menu1=Religious |archive-date=2010-11-15 | website=Kollam City }}</ref><ref name="thekeralatemples1">{{Cite web |title=Ammachi Veedu Muhurthi |url=https://www.thekeralatemples.com/templeinfo/others/ammachiveedu_muhurthi.htm |access-date=2026-01-18 |website=The Kerala Temples }}</ref>
*ಕೊಲ್ಲಂನ ಪ್ರಮುಖ ಹಬ್ಬವಾದ [[ಕೊಲ್ಲಂ ಪೂರಂ]] ಸಾಮಾನ್ಯವಾಗಿ ಮಧ್ಯ ಏಪ್ರಿಲ್ನಲ್ಲಿ [[ಅಸ್ರಾಮಂ ಶ್ರೀ ಕೃಷ್ಣ ಸ್ವಾಮಿ ದೇವಾಲಯ]]ದ ಹತ್ತು ದಿನಗಳ ಹಬ್ಬದ ಮುಕ್ತಾಯವಾಗಿದೆ.<ref name="Hindu">{{Cite web|url=http://www.hindu.com/2008/04/05/stories/2008040551540300.htm|title=The Hindu : Kerala / Kollam News : Kollam Pooram on April 15|date=9 April 2008|archive-url=https://web.archive.org/web/20080409111532/http://www.hindu.com/2008/04/05/stories/2008040551540300.htm |archive-date=9 April 2008 }}</ref>
*[[ಕೊಟ್ಟಂಕುಲಂಗರ ದೇವಿ ದೇವಾಲಯ]] ಕೇರಳದ ವಿಶ್ವಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದಾಗಿದ್ದು, ಅಲ್ಲಿ ಪುರುಷರು ''ಚಮಯವಿಲಕ್ಕು'' ಆಚರಣೆಗಾಗಿ ಸ್ತ್ರೀ ವೇಷಧಾರಣೆ ಮಾಡುವುದು ಸಾಂಪ್ರದಾಯಿಕ ಹಬ್ಬದ ಭಾಗವಾಗಿದೆ. ಪುರುಷರು ದೊಡ್ಡ ದೀಪಗಳನ್ನು ಸಹ ಹೊರುತ್ತಾರೆ. ಎರಡು ದಿನಗಳ ವೇಷಧಾರಣಾ ಕಾರ್ಯಕ್ರಮದ ಮೊದಲನೆಯದು ಸೋಮವಾರದಂದು ಮುಕ್ತಾಯವಾಯಿತು.<ref>{{cite web|title=Kerala temple: Where the lady with the lamp is a man|url=http://www.ndtv.com/south/kerala-temple-where-the-lady-with-the-lamp-is-a-man-517252|access-date=25 March 2013|publisher=NDTV}}</ref>
*ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶದ ಇತರ ಪ್ರಸಿದ್ಧ ಹಿಂದೂ ಪೂಜಾ ಕೇಂದ್ರಗಳೆಂದರೆ, ಕೊಟ್ಟಾರಕ್ಕರದಲ್ಲಿನ [[ಕೊಟ್ಟಾರಕ್ಕರ ಶ್ರೀ ಮಹಾಗಣಪತಿ ಕ್ಷೇತ್ರಂ]],<ref>{{cite web|title=Of small appam and Kottarakkara|url=http://mathrubhumi.com/travel/article/travel_special/of_small_appam_and_kottarakkara/139317/|access-date=25 March 2013|publisher=Mathrubhumi|archive-date=28 August 2013|archive-url=https://web.archive.org/web/20130828170452/http://www.mathrubhumi.com/travel/article/travel_special/of_small_appam_and_kottarakkara/139317/|url-status=dead}}</ref><ref>{{Cite web|url=https://www.keralatemples.net/klm_subra.html|title=Welcome to the Temples of God's Own Country|website=www.keralatemples.net}}</ref> [[ಪರವೂರು, ಕೊಲ್ಲಂ|ಪರವೂರು]]ನಲ್ಲಿನ [[ಪುಟ್ಟಿಂಗಲ್ ದೇವಾಲಯ|ಪುಟ್ಟಿಂಗಲ್ ದೇವಿ ದೇವಾಲಯ]],<ref>{{cite web|title=Puttingal Devi Temple, aravur|url=http://www.puttingaltemple.org/|access-date=25 March 2013|publisher=Puttingal Devi Temple}}</ref> ಸೂರನಾಡ್ ಉತ್ತರ ಅನಾಯಡಿ ಪಝಯಿದಂ ಶ್ರೀ ನರಸಿಂಹ ಮೂರ್ತಿ ದೇವಾಲಯ, [[ಪೊರುವಳಿ]]ಯಲ್ಲಿನ [[ಪೊರುವಳಿ ಪೆರುವಿರುತಿ ಮಲನಾಡ ದೇವಾಲಯ]],<ref>{{cite news|title=Malanada temple fete draws big crowds|url=http://www.thehindu.com/news/national/kerala/malanada-temple-fete-draws-big-crowds/article3205866.ece|access-date=25 March 2013|work=The Hindu|date=24 March 2012 }}</ref> [[ಶಾಸ್ತಂಕೋಟ್ಟ]]ದಲ್ಲಿನ [[ಶಾಸ್ತಂಕೋಟ್ಟ ಶ್ರೀ ಧರ್ಮ ಶಾಸ್ತ ದೇವಾಲಯ]],<ref>{{cite web|title=Sasthamcotta Sree Dharma Sastha Temple|url=http://www.sasthamcotta.com/Dharmasastha%20Temple.html|access-date=25 March 2013|publisher=Sasthamcotta Sree Dharma Sastha Temple|archive-date=6 December 2013|archive-url=https://web.archive.org/web/20131206180354/http://sasthamcotta.com/Dharmasastha%20Temple.html|url-status=dead}}</ref> ಶಕ್ತಿಕುಲಂಗರ ಶ್ರೀ ಧರ್ಮ ಶಾಸ್ತ ದೇವಾಲಯ,<ref>/Sakthikulangara-sreesharmasastha-karadevasom.com/</ref> ಕಡವೂರಿನ ತ್ರಿಕ್ಕಡವೂರು ಶ್ರೀ ಮಹಾದೇವ ದೇವಾಲಯ ಮತ್ತು ಪೊನ್ಮನದಲ್ಲಿ ಕಟ್ಟಿಲ್ ಮೆಕ್ಕತಿಲ್ ದೇವಿ ದೇವಾಲಯ,<ref>{{cite web|title=Here, bells on tree answer your prayers|url=https://www.deccanchronicle.com/141127/nation-current-affairs/article/here-bells-tree-answer-your-prayers|access-date=25 March 2013|work=Deccan Chronicle}},</ref> ಕರುನಾಗಪಲ್ಲಿ ಪಡನಾಯರ್ಕುಲಂಗರ ಮಹಾದೇವ ದೇವಾಲಯ.<ref>{{cite web|title=No permission for RSS to conduct 'shakha' in temple: Kerala HC told|url=http://timesofindia.indiatimes.com/city/kochi/No-permission-for-RSS-to-conduct-shakha-in-temple-Kerala-HC-told/articleshow/47558696.cms|access-date=25 March 2013|work=The Times of India}}</ref>
=== ಚರ್ಚುಗಳು ===
[[File:Kollam neue Kathedrale.JPG|thumb|right|ಥಂಗಸ್ಸೇರಿಯಲ್ಲಿನ ಇನ್ಫ್ಯಾಂಟ್ ಜೀಸಸ್ ಕೆಥೆಡ್ರಲ್, ಕೊಲ್ಲಂ]]
ಥಂಗಸ್ಸೇರಿಯಲ್ಲಿನ [[ಇನ್ಫ್ಯಾಂಟ್ ಜೀಸಸ್ ಕೆಥೆಡ್ರಲ್]] ಅನ್ನು ಪೋರ್ಚುಗೀಸರು 1614 ರಲ್ಲಿ ಸ್ಥಾಪಿಸಿದರು. ಇದು ಈಗ [[ಕ್ವಿಲಾನ್ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ]]ದ ಪ್ರೊ-ಕೆಥೆಡ್ರಲ್ ಆಗಿದೆ – ಇದು ಭಾರತದ ಪ್ರಾಚೀನ ಮತ್ತು ಮೊದಲ ಕ್ಯಾಥೋಲಿಕ್ ಧರ್ಮಪ್ರಾಂತ್ಯವಾಗಿದೆ. ಹಳೆಯ [[ಕ್ವಿಲಾನ್]] ನಗರದ ಪೋರ್ಚುಗೀಸ್ ಆಳ್ವಿಕೆಯ ಸ್ಮಾರಕವಾಗಿ ಚರ್ಚ್ ಉಳಿದಿದೆ.<ref name="Church_Kollam">{{cite news|title=About Kollam City|location=Kollam, India|url=http://kollamcity.in/about-kollam-city|url-status=usurped|access-date=19 January 2016|archive-url=https://web.archive.org/web/20150602132809/http://kollamcity.in/about-kollam-city|archive-date=2 June 2015|quote=About the city of Quilon}}</ref> [[ನೀಂದಕರ]]ದಲ್ಲಿನ [[ಸೇಂಟ್ ಸೆಬಾಸ್ಟಿಯನ್ ರೋಮನ್ ಕ್ಯಾಥೋಲಿಕ್ ಚರ್ಚ್, ನೀಂದಕರ|ಸೇಂಟ್ ಸೆಬಾಸ್ಟಿಯನ್ ಚರ್ಚ್]] ಮತ್ತೊಂದು ಪ್ರಮುಖ ಚರ್ಚ್. [[ಮನ್ರೋ ದ್ವೀಪ|ಮನ್ರೋ ದ್ವೀಪ]]ದಲ್ಲಿನ [[ಡಚ್ ಚರ್ಚ್, ಮನ್ರೋ ದ್ವೀಪ|ಡಚ್ ಚರ್ಚ್]] ಅನ್ನು 1878 ರಲ್ಲಿ [[ಡಚ್ ಜನರು|ಡಚ್ಚರು]] ನಿರ್ಮಿಸಿದರು.<ref>{{cite news|title=The emerald isle|work=The Hindu|url=http://www.thehindu.com/features/metroplus/travel/the-emerald-isle/article4316024.ece|access-date=19 January 2016}}</ref> [[ಕಚೇರಿ]]ಯಲ್ಲಿನ ಅವರ್ ಲೇಡಿ ಆಫ್ ವೆಲಂಕಣ್ಣಿ ದೇಗುಲವು ಕೊಲ್ಲಂ ನಗರದ ಮತ್ತೊಂದು ಪ್ರಮುಖ ಕ್ರಿಶ್ಚಿಯನ್ ಪೂಜಾ ಸ್ಥಳವಾಗಿದೆ. [[ತ್ರಿಕ್ಕಡವೂರು|ಕಡವೂರು]]ನಲ್ಲಿನ ಸೇಂಟ್ ಕಾಸಿಮಿರ್ ಚರ್ಚ್,<ref>{{cite web|title=Church festival from Saturday|url=http://www.thehindu.com/2005/04/22/stories/2005042205760300.htm|work=[[The Hindu]]|date=2005-04-22|access-date=19 January 2016}}{{dead link|date=April 2021|bot=medic}}{{cbignore|bot=medic}}</ref> [[ಕವನಾಡ್]]ನಲ್ಲಿನ ಹೋಲಿ ಫ್ಯಾಮಿಲಿ ಚರ್ಚ್, ತೋಪ್ಪಿನಲ್ಲಿನ ಸೇಂಟ್ ಸ್ಟೀಫನ್ ಚರ್ಚ್,<ref>{{cite web|title=St.Stephen's Church|url=http://ststephenschurchkollam.weebly.com/|access-date=19 January 2016|publisher=Kollam St.Stephen's Church}}</ref> ಮತ್ತು [[ಕಡಪ್ಪಕಡ]]ದಲ್ಲಿನ ಸೇಂಟ್ ಥಾಮಸ್ ಚರ್ಚ್ ಕೊಲ್ಲಂನ ಕೆಲವು ಇತರ ಪ್ರಮುಖ ಕ್ರಿಶ್ಚಿಯನ್ ಚರ್ಚುಗಳಾಗಿವೆ.<ref>{{cite news|title=St.Thomas Church|work=The Hindu|url=http://catholicchurches.in/directory/changanacherry-churches/st-thomas-church-kollam.htm|access-date=19 January 2016}}</ref><ref>{{cite news|title=Piety marks Good Friday observance|url=http://www.thehindu.com/todays-paper/tp-national/tp-kerala/piety-marks-good-friday-observance/article5927794.ece|access-date=19 January 2016|work=The Hindu|date=18 April 2014 }}</ref>
=== ಮಸೀದಿಗಳು ===
[[File:കരുനാഗപ്പള്ളിമുസ്ലീംപള്ളി.jpg|right|thumb|ಕರುನಾಗಪಲ್ಲಿ ಮಸೀದಿ]]
ಚವರದಲ್ಲಿನ ಕೊಟ್ಟುಕಾಡು ಜುಮಾ ಮಸ್ಜಿದ್, ಎಲಂಪಲ್ಲೂರು ಜುಮಾ-ಎ-ಮಸ್ಜಿದ್, ಜೋನಕ್ಕಪುರಂನಲ್ಲಿನ ವಲಿಯಪ್ಳ್ಳಿ, [[ಚಿನ್ನಕಡ]] ಜುಮಾ ಮಸ್ಜಿದ್, ಕೊಲ್ಲೂರುವಿಲದಲ್ಲಿನ ಜುಮಾ-'ಅತ್ ಪಲ್ಲಿ, [[ತಟ್ಟಮಲ]]ದಲ್ಲಿನ ಜುಮಾ-'ಅತ್ ಪಲ್ಲಿ ಮತ್ತು ಚವರದಲ್ಲಿನ ಕೊಯಿವಿಲ ಜುಮಾ ಮಸ್ಜಿದ್ ಕೊಲ್ಲಂನ ಇತರ ಪ್ರಮುಖ ಮಸೀದಿಗಳಾಗಿವೆ.<ref>{{cite web|title=Juma-Ath-Palli|url=http://www.webindia123.com/city/kerala/kollam/destinations/mosque/jumaathpalli.htm|access-date=29 July 2014}}</ref><ref>{{cite web|title=Elampalloor Juma-A-Masjid|url=http://elampalloormuslimjama-ath.org/aboutus.html|access-date=29 July 2014|archive-date=9 August 2014|archive-url=https://web.archive.org/web/20140809144815/http://elampalloormuslimjama-ath.org/aboutus.html|url-status=dead}}</ref>
==ಗಮನಾರ್ಹ ವ್ಯಕ್ತಿಗಳು==
*[[ಕೊಲ್ಲಂನ ಜನರ ಪಟ್ಟಿ]]
<!---♦♦♦ ದಯವಿಟ್ಟು ಇಲ್ಲಿ ಹೆಸರುಗಳನ್ನು ಸೇರಿಸಬೇಡಿ - ಅವರು ಈಗಾಗಲೇ ಇಂಗ್ಲಿಷ್ ವಿಕಿಪೀಡಿಯಾದಲ್ಲಿ ತಮ್ಮದೇ ಆದ ಲೇಖನವನ್ನು ಹೊಂದಿದ್ದರೆ ಅವರನ್ನು [[ಕೊಲ್ಲಂನ ಜನರ ಪಟ್ಟಿ]] ಗೆ ಸೇರಿಸಿ ♦♦♦--->
==ಇವನ್ನೂ ನೋಡಿ==
* [[ಡೌನ್ಟೌನ್ ಕೊಲ್ಲಂ]]
* [[ಕೊಲ್ಲಂ ಜಂಕ್ಷನ್ ರೈಲ್ವೇ ನಿಲ್ದಾಣ]]
* [[ಕೊಲ್ಲಂ ಮೆಟ್ರೋಪಾಲಿಟನ್ ಪ್ರದೇಶ]]
* [[ಕೊಲ್ಲಂ ಜಿಲ್ಲೆ]]
* [[ಕೊಲ್ಲಂನಲ್ಲಿ ಗೋಡಂಬಿ ವ್ಯಾಪಾರ]]
* [[GDP ಪ್ರಕಾರ ಅತಿದೊಡ್ಡ ಭಾರತೀಯ ನಗರಗಳು]]
==ಟಿಪ್ಪಣಿಗಳು==
{{notelist}}
==ಉಲ್ಲೇಖಗಳು==
{{Reflist|liststyle=decimal}}
==ಗ್ರಂಥಸೂಚಿ==
* {{cite book | last=Ring | first=Trudy | title=International Dictionary of Historic Places: Asia and Oceania, Volume 5 | year=1994 | publisher=Taylor & Francis | location=United Kingdom | isbn=978-1-884964-05-3}}
* {{cite book | last=Chan | first=Hok-lam | title=The Cambridge History of China, Volume 7: The Ming Dynasty, 1368–1644, Part 1 | year=1998 | publisher=Cambridge University Press | location=Cambridge | isbn=978-0-521-24332-2 | chapter=The Chien-wen, Yung-lo, Hung-hsi, and Hsüan-te reigns, 1399–1435}}
* {{cite book | last=Lin | title=Zheng He's Voyages Down the Western Seas | year=2007 | publisher=China Intercontinental Press | location=Fujian Province | isbn=978-7-5085-0707-1}}
* [[ಎಳಂಕುಲಂ ಕುಂಜನ್ ಪಿಳ್ಳೈ]], ಕೇರಳಥಿಂಡೆ ಎರುಳದನ್ಜ ಎಡುಗಳ್, p. 64,112,117
* Travancore Archaeological Series (T.A.S.) Vol. 6 p. 15
* Diaries and writings of Mathai Kathanar, the 24th generation priest of Thulaserry Manapurathu, based on the ancestral documents and Thaliyolagrandha handed down through generations
* Z.M. Paret, Malankara Nazranikal, vol. 1
* [[ಎಲ್. ಕೆ. ಅನಂತಕೃಷ್ಣ ಅಯ್ಯರ್]], State Manual, p50,52
* Bernard Thoma Kathanar, Marthoma Christyanikal, lines 23,24
* {{cite book|first=Pius |last=Malekandathil|author-link= Pius Malekandathil|title=Maritime India: Trade, Religion and Polity in the Indian Ocean|url=https://books.google.com/books?id=rN69iFj1PJoC|year=2010|publisher=Primus Books|page=43|isbn=978-93-80607-01-6}}
* Narayan, M.G.S, Chera-Pandya conflict in the 8th–9th centuries which led to the birth of Venadu: Pandyan History seminar, Madurai University, 1971
* The Viswavijnanakosam (Malayalam) Vol. 3, p. 523,534
* Narayan M.G.S., Cultural Symbiosis p33
* The handwritten diaries of Pulikottil Mar Dionyius (former supreme head of the [[Malankara Orthodox Syrian Church]] and Chitramezhuthu KM Varghese
==ಹೊರಗಿನ ಕೊಂಡಿಗಳು==
* [https://geohack.toolforge.org/geohack.php?pagename=Kollam¶ms=8_53_35.5_N_76_36_50.8_E_type:city(1342509)_region:IN-KL GeoHack - ಕೊಲ್ಲಂ]
* {{Official website|http://kollam.nic.in/Default.htm}}
{{Kollam}}
{{Navboxes|list=
{{Kerala}}
{{Kollam district}}
{{Kerala topics}}
{{Million-plus cities in India}}
}}
{{Subject bar|auto=1|voy=Kollam|India|History}}
{{Authority control}}
[[ವರ್ಗ: ಕೊಲ್ಲಂ| ]]
[[ವರ್ಗ: ಭಾರತದ ಮಹಾನಗರ ನಗರಗಳು]]
[[ವರ್ಗ: ಕೊಲ್ಲಂನ ಇತಿಹಾಸ]]
[[ವರ್ಗ: ಹಿಂದಿನ ಪೋರ್ಚುಗೀಸ್ ವಸಾಹತುಗಳು]]
[[ವರ್ಗ: ಕೊಲ್ಲಂ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು]]
[[ವರ್ಗ: ಕೇರಳದ ಪ್ರವಾಸೋದ್ಯಮ]]
[[ವರ್ಗ: ಭಾರತದ ಹಿಂದಿನ ರಾಜಧಾನಿಗಳು]]
[[ವರ್ಗ: ಭಾರತದ ಜನನಿಬಿಡ ಕರಾವಳಿ ಸ್ಥಳಗಳು]]
[[ವರ್ಗ: ಭಾರತದ ಬಂದರು ನಗರಗಳು ಮತ್ತು ಪಟ್ಟಣಗಳು]]
0j8tf3ivokzcqzjt86olye56lp0uaqd
ಕಲ್ಲಿಕೋಟೆ ಜಿಲ್ಲೆ
0
149632
1379543
1378411
2026-08-08T22:32:03Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1379543
wikitext
text/x-wiki
{{databox}}
{{Infobox settlement
| name = ಕಲ್ಲಿಕೋಟೆ ಜಿಲ್ಲೆ
| other_name =
| type = [[ಕೇರಳದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| caption =
| mapframe = yes
| mapframe-point = none
| map_caption = '''[[ಕೇರಳ]]ದಲ್ಲಿ ಸ್ಥಾನ'''
| pushpin_map =
| pushpin_caption =
| coordinates = {{coord|11.25|N|75.77|E|region:IN-KL_type:adm3rd|display=inline,title}}
| image = {{Photomontage
| photo2a = View point of Thamarassery Churam.jpg
| photo2b =
| photo3a = Calicut mini bypass.jpg
| photo3b = HiLITE City - Mixed Use Development Project in Calicut.jpg
| photo4a = IIM Kozhikode Aerial View s.jpg
| photo4b = Chaliyam Harbour, Calicut.jpg
| photo5a = NITC AB.jpg
| spacing = 1
| color_border = black
| color = white
| size = 225
| foot_montage = '''ಮೇಲಿನಿಂದ ಪ್ರದಕ್ಷಿಣಾಕಾರವಾಗಿ:'''<br/>, [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|KSRTC]] ಬಸ್ ನಿಲ್ದಾಣ ಸಂಕೀರ್ಣ, [[ಹಿಲೈಟ್ ಮಾಲ್ ಕಲ್ಲಿಕೋಟೆ|ಹಿಲೈಟ್ ಮಾಲ್]],<br/> [[ಚಾಲಿಯಂ]] ಬಂದರು, [[ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಲ್ಲಿಕೋಟೆ|NIT ಕಲ್ಲಿಕೋಟೆ]]ಯ ಆಡಳಿತಾತ್ಮಕ ಕಟ್ಟಡ, [[IIM ಕೋಝಿಕ್ಕೋಡ್]], ಕಲ್ಲಿಕೋಟೆ ಮಿನಿ ಬೈಪಾಸ್, ಮತ್ತು [[ತಾಮರಶ್ಶೇರಿ ಚುರಂ]].
}}
| subdivision_type = ದೇಶ
| subdivision_name = ಭಾರತ
| subdivision_type1 = ರಾಜ್ಯ
| subdivision_name1 = [[ಕೇರಳ]]
| established_title = <!-- Established -->
| established_date =
| seat_type = ಪ್ರಧಾನ ಕಚೇರಿ
| seat = [[ಕೋಝಿಕ್ಕೋಡ್]]
| parts_type = ಉಪವಿಭಾಗಗಳು
| parts_style = para
| p1 = {{Collapsible list
| title = ರಾಜಸ್ವ ವಿಭಾಗಗಳು: 2
| 1 = [[ಕೋಝಿಕ್ಕೋಡ್]]
| 2 = [[ವಟಕರ]]
}}
{{Collapsible list
| title = ತಾಲೂಕುಗಳು: 4
| 1 = [[ಕೋಝಿಕ್ಕೋಡ್]]
| 2 = [[ವಟಕರ]]
| 3 = [[ಕೊಯಿಲಾಂಡಿ]]
| 4 = [[ತಾಮರಶ್ಶೇರಿ]]
}}
| leader_title1 = ಕಲೆಕ್ಟರ್
| leader_name1 = ಸ್ನೇಹಿಲ್ ಕುಮಾರ್ ಸಿಂಗ್<ref>{{cite web |title=Who's Who|url=https://kozhikode.nic.in/about-district/whos-who/|website=District Kozhikode |access-date=5 June 2023}}</ref>
| leader_title2 = ಜಿಲ್ಲಾ ಪಂಚಾಯತ್ ಅಧ್ಯಕ್ಷರು
| leader_name2 = ಶೀಜಾ ಶಶಿ [[CPI (M)]]<ref>{{Cite web|url=http://kozhikodejillapanchayath.in/index.html|title=District Panchayath Kozhikode|website=kozhikodejillapanchayath.in|access-date=15 February 2020|archive-date=19 February 2020|archive-url=https://web.archive.org/web/20200219021157/http://kozhikodejillapanchayath.in/index.html|url-status=dead}}</ref>
| leader_title3 = ಸಂಸದರು
| leader_name3 = * [[ಎಂ. ಕೆ. ರಾಘವನ್]]
* [[ಶಫಿ ಪರಂಬಿಲ್]]
* [[ಪ್ರಿಯಾಂಕಾ ಗಾಂಧಿ]]
| unit_pref = ಮೆಟ್ರಿಕ್
| area_total_km2 = 2,344
| area_rank = [[ಕೇರಳದ ಜಿಲ್ಲೆಗಳ ಪಟ್ಟಿ|9ನೇ]]
| elevation_footnotes =
| elevation_max_m = 2339
| elevation_max_point = <!-- for denoting the measurement point --> [[ವಾವುಲ್ ಮಲ]]
| population_total = 3,249,761
| population_as_of = 2018
| population_footnotes = <ref name="kkddemo_2018">{{Cite book|title=Annual Vital Statistics Report – 2018|publisher=Department of Economics and Statistics, Government of Kerala|year=2020|location=Thiruvananthapuram|pages=55|url=http://www.ecostat.kerala.gov.in/images/pdf/publications/Vital_Statistics/data/vital_statistics_2018.pdf|access-date=29 October 2020|archive-date=2 November 2021|archive-url=https://web.archive.org/web/20211102023933/http://www.ecostat.kerala.gov.in/images/pdf/publications/Vital_Statistics/data/vital_statistics_2018.pdf|url-status=dead}}</ref>
| population_density_km2 = 1386
| demographics_type1 = ಭಾಷೆಗಳು
| demographics1_title1 = ಅಧಿಕೃತ
| time_zone1 = [[ಭಾರತೀಯ ಪ್ರಮಾಣಿತ ಸಮಯ|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code = 673---
| iso_code = [[ISO 3166-2:IN|IN-KL]]
| registration_plate = '''KL-11''' [[ಕೋಝಿಕ್ಕೋಡ್|ಕಲ್ಲಿಕೋಟೆ ನಗರ]],<br /> '''KL-18''' [[ವಟಕರ]],<br /> '''KL-56''' [[ಕೊಯಿಲಾಂಡಿ]],<br /> '''KL-57''' [[ಕೊಡುವಳ್ಳಿ]],<br /> '''KL-76''' [[ನನ್ಮಂಡ]],<br /> '''KL-77''' [[ಪೆರಾಂಬ್ರ]],<br /> '''KL-85''' [[ರಾಮನಟ್ಟುಕರ]] ([[ಫೆರೋಕೆ]])
| unemployment_rate =
| website = {{URL|kozhikode.nic.in}}
| custom_label_sec1 = {{nowrap|{{increase}} 0.781<ref name="unhdi-gdl">{{Cite web|url=https://www.in.undp.org/content/india/en/home/library/hdr/human-development-reports/State_Human_Development_Reports/Kerala.html|title=Kerala | UNDP in India|website=UNDP|access-date=2026-08-05|archive-date=2022-05-18|archive-url=https://web.archive.org/web/20220518135656/https://www.in.undp.org/content/india/en/home/library/hdr/human-development-reports/State_Human_Development_Reports/Kerala.html|url-status=dead}}</ref> ({{color|Green| ಹೆಚ್ಚು}})}}
| custom_label_sec1 = [[ಮಾನವ ಅಭಿವೃದ್ಧಿ ಸೂಚ್ಯಂಕ|HDI]] {{nobold|(2005)}}
| demographics1_info1 = [[ಮಲಯಾಳಂ ಭಾಷೆ|ಮಲಯಾಳಂ]], ಇಂಗ್ಲಿಷ್
| official_name =
| custom_data_sec2 = {{unbulleted list|
[[ಹೋಪಿಯಾ ಎರೋಸಾ|ಥೆಯ್ಯಕಂ]]|
[[ಮೆಲಸ್ಟೋಮ ಮಲಬಾತ್ರಿಕಮ್|ಅತಿರಾಣಿ]]|
[[ಮ್ಯಾನಿಸ್ ಕ್ರಾಸಿಕೌಡಾಟಾ|ಭಾರತೀಯ ಪ್ಯಾಂಗೊಲಿನ್]]|
[[ಸೆಯಾಕ್ಸ್ ಎರಿಥಾಕಾ|ಮೇನಿಪೋನ್ಮನ್]]|
[[ಪ್ಯಾಚ್ಲಿಯೋಪ್ಟಾ ಪಾಂಡಿಯಾನಾ|ಮಲಬಾರ್ ಗುಲಾಬಿ]]|
[[ಸೈಕಾಸ್ ಸರ್ಸಿನಾಲಿಸ್|ಈಂತು]]|
[[ಲುಟ್ರೋಗೇಲ್ ಪರ್ಸ್ಪಿಸಿಲ್ಲಾಟಾ|ನೀರುನಾಯಿ]]|
[[ಪಾಂಗಿಯೋ ಭುಜಿಯಾ|ಪಾತಾಳ ಪೂಂತರಕನ್]]
}}
| custom_label_sec2 = {{unbulleted list|
ಅಧಿಕೃತ ಮರ<ref>{{Cite news|url=https://www.thehindu.com/news/national/kerala/kozhikode-gets-official-flower-bird-animal-and-tree/article69614425.ece|title=Kozhikode gets official flower, bird, animal and tree|access-date=25 May 2025}}</ref>|
ಅಧಿಕೃತ ಹೂವು|
ಅಧಿಕೃತ ಪ್ರಾಣಿ|
ಅಧಿಕೃತ ಪಕ್ಷಿ|
ಅಧಿಕೃತ ಚಿಟ್ಟೆ|
ಅಧಿಕೃತ ಪರಂಪರೆ ಮರ|
ಅಧಿಕೃತ ಜಲಚರ ಪ್ರಾಣಿ|
ಅಧಿಕೃತ ಮೀನು
}}
}}
'''ಕೋಝಿಕ್ಕೋಡ್ ಜಿಲ್ಲೆ''' ({{IPA|ml|koːɻikːoːɖɨ̆|pron|Kozhikode_mal.ogg}}), [[ಭಾರತ]]ದ [[ಕೇರಳ]] ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳಲ್ಲಿ]] ಒಂದಾಗಿದೆ, ಇದು ಅದರ ನೈಋತ್ಯ [[ಮಲಬಾರ್ ಕರಾವಳಿ]]ಯಲ್ಲಿದೆ. [[ಕೋಝಿಕ್ಕೋಡ್]] ನಗರವನ್ನು ಕಲ್ಲಿಕೋಟೆ ಎಂದೂ ಕರೆಯುತ್ತಾರೆ, ಇದು ಜಿಲ್ಲೆಯ ಪ್ರಧಾನ ಕಚೇರಿಯಾಗಿದೆ.<ref name="up">{{cite news |last=Govind |first=Biju |date=18 April 2018 |title=Kozhikode emerges fastest growing urban district |url=https://www.thehindu.com/news/cities/kozhikode/kozhikode-emerges-fastest-growing-urban-district/article23581284.ece/ |work=The Hindu |location=Kozhikode |access-date=22 June 2022}}</ref>
[[ಕೋಝಿಕ್ಕೋಡ್ ನಗರಸಭಾ ನಿಗಮ]]ವು 609,224<ref name="Census2011cities"/> ರಷ್ಟು ನಿಗಮದ ಮಿತಿಯ ಜನಸಂಖ್ಯೆಯನ್ನು ಹೊಂದಿದೆ ಮತ್ತು 2 ದಶಲಕ್ಷಕ್ಕೂ ಹೆಚ್ಚಿನ ಮಹಾನಗರ ಜನಸಂಖ್ಯೆಯನ್ನು ಹೊಂದಿದೆ, ಇದು [[ಕೋಝಿಕ್ಕೋಡ್ ಮಹಾನಗರ ಪ್ರದೇಶ]]ವನ್ನು [[ಕೇರಳದ ಜನಸಂಖ್ಯಾಶಾಸ್ತ್ರ|ಕೇರಳದಲ್ಲಿ ಎರಡನೇ-ಅತಿದೊಡ್ಡ]] ಮತ್ತು [[ಭಾರತದಲ್ಲಿ ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆಯ ನಗರ ಸಮೂಹಗಳ ಪಟ್ಟಿ|ಭಾರತದಲ್ಲಿ 19ನೇ ಅತಿದೊಡ್ಡ]] ನಗರ ಸಮೂಹವನ್ನಾಗಿ ಮಾಡುತ್ತದೆ.<ref name="ma">{{cite web|title=Urban Agglomerations/Cities having population 1 million and above|url=http://censusindia.gov.in/2011-prov-results/paper2/data_files/india2/Million_Plus_UAs_Cities_2011.pdf|publisher=Office of the Registrar General & Census Commissioner, India|url-status=live|archive-url=https://web.archive.org/web/20111215163132/http://censusindia.gov.in/2011-prov-results/paper2/data_files/india2/Million_Plus_UAs_Cities_2011.pdf|archive-date=15 December 2011}}</ref> ಕಲ್ಲಿಕೋಟೆಯನ್ನು [[ಭಾರತ ಸರ್ಕಾರ]]ವು ಟಿಯರ್ 2 ನಗರವಾಗಿ ವರ್ಗೀಕರಿಸಿದೆ.<ref>{{Cite web|url=https://www.mapsofindia.com/maps/india/tier-1-and-2-cities.html|title=Tier I and Tier II Cities of India, Classification of Indian Cities|website=Mapsofindia.com|access-date=1 March 2022}}</ref> [[ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಲ್ಲಿಕೋಟೆ|NIT ಕಲ್ಲಿಕೋಟೆ]], [[ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ & ಇನ್ಫಾರ್ಮೇಷನ್ ಟೆಕ್ನಾಲಜಿ|NIEIT]] ಮತ್ತು [[IIM ಕೋಝಿಕ್ಕೋಡ್]] ಜಿಲ್ಲೆಯಲ್ಲಿರುವ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಾಗಿವೆ.
[[ಕೋಝಿಕ್ಕೋಡ್]] ಹಿಂದಿನ [[ಮಲಬಾರ್ ಜಿಲ್ಲೆ]]ಯ ಅತಿದೊಡ್ಡ ನಗರವಾಗಿದೆ ಮತ್ತು [[ಬ್ರಿಟಿಷ್ ರಾಜ್]] ಸಮಯದಲ್ಲಿ ಅದರ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಿತು.<ref name="feudal states in early 18th century Kerala"/> ಪ್ರಾಚೀನತೆ ಮತ್ತು ಮಧ್ಯಯುಗದಲ್ಲಿ, [[ಮಸಾಲೆ ವ್ಯಾಪಾರ|ಭಾರತೀಯ ಮಸಾಲೆಗಳ]] ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಕಾರಣ ಕಲ್ಲಿಕೋಟೆಯನ್ನು ''ಮಸಾಲೆಗಳ ನಗರ'' ಎಂದು ಕರೆಯಲಾಗುತ್ತಿತ್ತು.<ref name="purdue1">{{cite web|url=http://www.hort.purdue.edu/newcrop/history/lecture26/lec26.html|archive-url=https://web.archive.org/web/20090716191222/http://www.hort.purdue.edu/newcrop/history/lecture26/lec26.html|url-status=dead|archive-date=16 July 2009|title=Lectures 26–27|date=16 July 2009|access-date=22 June 2019}}</ref> ಇದು [[ಸಾಮೂತಿರಿ]]ಗಳು (ಜಾಮೋರಿನ್ಗಳು) ಆಳಿದ ಸ್ವತಂತ್ರ ಸಾಮ್ರಾಜ್ಯದ ರಾಜಧಾನಿಯಾಗಿತ್ತು, ಇದು 18ನೇ ಶತಮಾನ CE ಯ ಮಧ್ಯದಲ್ಲಿ [[ತಿರುವಾಂಕೂರು]] ವಿಸ್ತರಣೆಗೆ ಮುಂಚಿತವಾಗಿ [[ಕೇರಳ]]ದಲ್ಲಿನ ಅತಿದೊಡ್ಡ ಸಾಮ್ರಾಜ್ಯವಾಗಿತ್ತು.<ref name="feudal states in early 18th century Kerala">{{cite book|last1=Sreedhara Menon|first1=A.|url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82|title=''Kerala Charitram''|date=January 2007|publisher=DC Books|isbn=9788126415885|edition=2007|location=Kottayam|access-date=22 June 2022|language=ml}}</ref> ಕಲ್ಲಿಕೋಟೆಯ ಬಂದರು ಮಧ್ಯಕಾಲೀನ [[ದಕ್ಷಿಣ ಭಾರತ]]ದ ಕರಾವಳಿಗೆ ಚೀನೀಯರು, [[ಅರಬ್ಬರು]], ಪೋರ್ಚುಗೀಸರು, [[ಡಚ್ ಈಸ್ಟ್ ಇಂಡಿಯಾ ಕಂಪನಿ|ಡಚ್]] ಮತ್ತು ಅಂತಿಮವಾಗಿ [[ಈಸ್ಟ್ ಇಂಡಿಯಾ ಕಂಪನಿ|ಬ್ರಿಟಿಷರು]] ಪ್ರವೇಶಿಸಲು ದ್ವಾರವಾಗಿ ಕಾರ್ಯನಿರ್ವಹಿಸಿತು.<ref name="feudal states in early 18th century Kerala"/>
ಕಲ್ಲಿಕೋಟೆ ಜಿಲ್ಲೆಯು ಉತ್ತರದಲ್ಲಿ [[ಕಣ್ಣೂರು]] ಮತ್ತು [[ಮಾಹೆ ಜಿಲ್ಲೆ|ಮಾಹೆ]] ([[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]]) ಜಿಲ್ಲೆಗಳು, ಪೂರ್ವದಲ್ಲಿ [[ವಯನಾಡ್]] ಮತ್ತು ದಕ್ಷಿಣದಲ್ಲಿ [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಜಿಲ್ಲೆಗಳಿಂದ ಸುತ್ತುವರೆದಿದೆ. [[ಅರೇಬಿಯನ್ ಸಮುದ್ರ]]ವು ಪಶ್ಚಿಮಕ್ಕೆ ಮತ್ತು [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳ]] ಪರ್ವತ ಶ್ರೇಣಿಯು ಪೂರ್ವಕ್ಕೆ ವ್ಯಾಪಿಸಿದೆ. [[ವಾವುಲ್ ಮಲ]], ಕಲ್ಲಿಕೋಟೆ, [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]], ಮತ್ತು [[ವಯನಾಡ್ ಜಿಲ್ಲೆ|ವಯನಾಡ್]] ಜಿಲ್ಲೆಗಳ ತ್ರಿಸಂಧಿಸ್ಥಳದಲ್ಲಿರುವ 2,339 ಮೀ ಎತ್ತರದ ಶಿಖರವು ಜಿಲ್ಲೆಯ ಅತ್ಯುನ್ನತ ಎತ್ತರದ ಬಿಂದುವಾಗಿದೆ. ಇದು 11° 08'N ಮತ್ತು 11° 50'N ಅಕ್ಷಾಂಶಗಳು ಮತ್ತು 75° 30'E ಮತ್ತು 76° 8'E ರೇಖಾಂಶಗಳ ನಡುವೆ ಇದೆ. [[ತಾಮರಶ್ಶೇರಿ ಚುರಂ]] [[ಕೋಝಿಕ್ಕೋಡ್]] ನಗರವನ್ನು [[ವಯನಾಡ್ ಜಿಲ್ಲೆ|ವಯನಾಡ್ ಪ್ರಸ್ಥಭೂಮಿಯೊಂದಿಗೆ]] ಸಂಪರ್ಕಿಸುತ್ತದೆ.<ref name="feudal states in early 18th century Kerala"/>
ಜಿಲ್ಲೆಯನ್ನು ನಾಲ್ಕು [[ತಾಲೂಕು]]ಗಳಾಗಿ ವಿಂಗಡಿಸಲಾಗಿದೆ: ಕೋಝಿಕ್ಕೋಡ್, [[ವಟಕರ]], [[ಕೊಯಿಲಾಂಡಿ]] ಮತ್ತು [[ತಾಮರಶ್ಶೇರಿ]]. 2011 ರ ಜನಗಣತಿಯ ಪ್ರಕಾರ 12 ಬ್ಲಾಕ್ ಪಂಚಾಯತ್ಗಳಿವೆ: ಬಾಲುಸ್ಸೇರಿ, ಚೆಳನ್ನೂರು, ಕೊಡುವಳ್ಳಿ, ಕೋಝಿಕ್ಕೋಡ್, ಕುನ್ನಮಂಗಲಂ, ಕುನ್ನುಮ್ಮಲ್, ಮೇಲಾಡಿ, ಪಂತಲಾಯನಿ, ಪೆರಾಂಬ್ರ, ತೊಡನ್ನೂರು, ತುನೇರಿ ಮತ್ತು ವಟಕರ.<ref>{{Cite web|title=Reports of National Panchayat Directory: Block Panchayats of Kozhikode, Kerala|publisher=Ministry of Panchayati Raj, Government of India|url=http://panchayatdirectory.gov.in/adminreps/viewpansumSQL.asp?selstate=561&parenttype=D&ptype=B|archive-url=https://web.archive.org/web/20111113204450/http://panchayatdirectory.gov.in/adminreps/viewpansumSQL.asp?selstate=561&parenttype=D&ptype=B|archive-date=13 November 2011|url-status=dead|access-date=22 April 2013}}</ref> [[NITI Aayog]] ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16 ಆಧಾರಿತ [[ಬಹುಆಯಾಮದ ಬಡತನ ಸೂಚ್ಯಂಕ]] ವರದಿಯು ಕಲ್ಲಿಕೋಟೆಯನ್ನು [[ಕೊಟ್ಟಾಯಂ ಜಿಲ್ಲೆ|ಕೊಟ್ಟಾಯಂ]] ಮತ್ತು [[ಎರ್ನಾಕುಳಂ ಜಿಲ್ಲೆ|ಎರ್ನಾಕುಳಂ]] ನಂತರ ಭಾರತದಲ್ಲಿ ಮೂರನೇ-ಕಡಿಮೆ ಬಡ [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]] ಎಂದು ಘೋಷಿಸಿದೆ, ಇದು ಅತ್ಯಲ್ಪ ಬಹುಆಯಾಮದ ಬಡತನ ಪ್ರಮಾಣವನ್ನು 0.26% ಹೊಂದಿದೆ.<ref name="mpi">{{cite news |last=News Bureau |first=ABP |date=27 November 2021 |title=Kottayam Only District With Zero Poverty: NITI Aayog's Poverty Index Report |url=https://news.abplive.com/states/kottayam-only-district-with-zero-poverty-niti-aayog-s-poverty-index-report-1496078/amp |work=ABP News |location=Chennai |access-date=22 June 2022}}</ref>
==ವ್ಯುತ್ಪತ್ತಿ==
ಕೋಝಿಕ್ಕೋಡ್ ಹೆಸರಿನ ನಿಖರವಾದ ಮೂಲವು ಅನಿಶ್ಚಿತವಾಗಿದೆ. ಅನೇಕ ಮೂಲಗಳ ಪ್ರಕಾರ, ಕೋಝಿಕ್ಕೋಡ್ ಹೆಸರು ''ಕೊಯಿಲ್-ಕೋಟ'' (ಕೋಟೆ) ನಿಂದ ಬಂದಿದೆ, ಇದರರ್ಥ ''ಕೋಟೆಯ ಅರಮನೆ''.<ref>{{Cite book|title=Kerala District Gazetteers: Kozhikode – Gazetteer of India, ''Volume 5 of Kerala District Gazetteers, Kerala (India)''
|first= A. Sreedhara |last= Menon| publisher= Superintendent of Govt. Presses| year= 1965|url=https://books.google.com/books?id=BsO1AAAAIAAJ}}</ref> ''ಕೊಯಿಲ್'' ಅಥವಾ ''ಕೊಯಿಲ್'' ಅಥವಾ ''ಕೋವಿಲ್'' ಎಂಬುದು [[ಹಿಂದೂ ದೇವಾಲಯ]]ಕ್ಕೆ [[ಮಲಯಾಳಂ]]/[[ತಮಿಳು ಭಾಷೆ|ತಮಿಳು]] ಪದವಾಗಿದ್ದು, ಇದು [[ತಾಳಿ ಶಿವ ದೇವಾಲಯ]]ವನ್ನು ಸೂಚಿಸುತ್ತದೆ.<ref name="a-s-menon-1">{{cite book |last1=Menon |first1=A. Sreedhara |title=Kerala History and Its Makers |date=2011 |publisher=DC Books |isbn=9788126437825 |pages=252}}</ref> ''ಕೋಯಿಲ್'' ಮತ್ತು ''ಕೋವಿಲ್'' ಎರಡೂ ಪದಗಳನ್ನು ಪರಸ್ಪರ ಬದಲಿಯಾಗಿ ಬಳಸಲಾಗುತ್ತದೆ. ಈ ಹೆಸರು ''ಕೋಲಿಕೋಡ್'' ಎಂದು ಭ್ರಷ್ಟಗೊಂಡಿದೆ, ಅಥವಾ ಅದರ ಅರೇಬಿಕ್ ಆವೃತ್ತಿ ''ಕಾಲಿಕೂಟ್'' ಮತ್ತು ನಂತರ ಅದರ ಆಂಗ್ಲೀಕೃತ ಆವೃತ್ತಿಯಾದ ಕಲ್ಲಿಕೋಟೆ.<ref name="Krishna-iyer">{{Cite book|title=The Zamorins of Calicut: From the Earliest Times Down to A.D. 1806
|first=K. V. Krishna| last=Ayyar|publisher=Publication Division, University of Calicut; University of Michigan| year=1938|url=https://books.google.com/books?id=BsO1AAAAIAAJ}}</ref>
[[ಅರಬ್ ಜನರು|ಅರಬ್]] ವ್ಯಾಪಾರಿಗಳು ಇದನ್ನು ''ಕಾಲಿಕೂಟ್'' ಎಂದು ಕರೆದರು ([[ಅಂತಾರಾಷ್ಟ್ರೀಯ ಧ್ವನ್ಯಾತ್ಮಕ ವರ್ಣಮಾಲೆ|IPA]]: qˠaːliqˠːuːtˤ).<ref name=Battuta1>{{Cite book |title=A History of India |author=Hermann Kulke, Dietmar Rothermund |chapter=18. Ibn Battuta: International Trade at the Malabar Coast |publisher=Routledge |isbn=9780415485432 |chapter-url=http://cw.routledge.com/textbooks/9780415485432/18.asp |quote=Thence we travelled to the town of Qāliqūṭ. [Calicut], which is one of the chief ports in Mulaibār. |year=2010 |access-date=4 September 2015 |archive-date=27 October 2015 |archive-url=https://web.archive.org/web/20151027035017/http://cw.routledge.com/textbooks/9780415485432/18.asp |url-status=dead }}</ref> ಚೀನೀ ವ್ಯಾಪಾರಿಗಳು ಇದನ್ನು ''ಕೂಲಿಫೋ'' ಎಂದು ಕರೆದರು. ತಮಿಳರು ಇದನ್ನು ಕಲ್ಲಿಕೋಟೈ ಎಂದು ಕರೆದರು.{{sfn|Chandran|2018|p=366}}
ಈ ನಗರವನ್ನು ಮಲಯಾಳಂನಲ್ಲಿ ಅಧಿಕೃತವಾಗಿ ಕೋಝಿಕ್ಕೋಡ್ ಎಂದು ಕರೆಯಲಾಗುತ್ತದೆ, ಮತ್ತು ಇಂಗ್ಲಿಷ್ನಲ್ಲಿ ಇದು ಅದರ ಆಂಗ್ಲೀಕೃತ ಆವೃತ್ತಿಯಾದ ''ಕಲ್ಲಿಕೋಟೆ'' ಯಿಂದ ಕರೆಯಲ್ಪಡುತ್ತದೆ.<ref name="Narayanan.M.G.S. 2006">M.G.S. Narayanan, ''Calicut: The City of Truth'' (2006) Calicut University Press, Kozhikode.</ref>
''[[ಕ್ಯಾಲಿಕೋ (ಜವಳಿ)|ಕ್ಯಾಲಿಕೋ]]'' ಎಂಬ ಪದವು, ಕಲ್ಲಿಕೋಟೆಯ ಬಂದರಿನಿಂದ ರಫ್ತಾಗುತ್ತಿದ್ದ ಕೈ-ನೇಯ್ದ ಹತ್ತಿ ಬಟ್ಟೆಯ ಒಂದು ಉತ್ತಮ ಪ್ರಭೇದವಾಗಿದ್ದು, ಇದನ್ನು ''ಕಲ್ಲಿಕೋಟೆ'' ಎಂಬುದರಿಂದ ಪಡೆಯಲಾಗಿದೆ ಎಂದು ಭಾವಿಸಲಾಗಿದೆ.<ref name=eb-calico>Encyclopædia Britannica (2008). ''calico''</ref> ಕ್ಯಾಲಿಕೋ ಬೆಕ್ಕುಗಳು ಎಂದು ಕರೆಯಲ್ಪಡುವ ಮೂರು ಬಣ್ಣದ ಬೆಕ್ಕುಗಳ ಪದವೂ ಸಹ ಬಟ್ಟೆಯ ಹೆಸರಿನಿಂದ ಪಡೆಯಲಾಗಿದೆ.<ref name=dreamstress>{{Cite web|url=http://thedreamstress.com/search/calico%2C+Muslin%2C+gauze/|title=You searched for calico, Muslin, gauze|access-date=11 June 2023|archive-date=10 April 2023|archive-url=https://web.archive.org/web/20230410075034/https://thedreamstress.com/search/calico,+Muslin,+gauze/|url-status=live}}</ref><ref>{{cite web|url=https://www.collinsdictionary.com/dictionary/english/calico|title=Calico definition and meaning|work=Collins English Dictionary|access-date=10 February 2023|archive-date=1 May 2021|archive-url=https://web.archive.org/web/20210501193908/https://www.collinsdictionary.com/dictionary/english/calico|url-status=live}}</ref>
==ಇತಿಹಾಸ==
[[File:Uru.jpg|thumbnail|left|''[[ಉರು (ದೋಣಿ)|ಉರು]]'', [[ಬೇಪೂರು]], [[ಕಲ್ಲಿಕೋಟೆ|ಕಲ್ಲಿಕೋಟೆ]]ಯಲ್ಲಿ ನಿರ್ಮಿಸಲಾದ ಒಂದು ರೀತಿಯ ಹಡಗು]]
1956 ರಲ್ಲಿ [[ಕೇರಳ]] ರಚನೆಯ ನಂತರ, ಹಿಂದಿನ [[ಮಲಬಾರ್ ಜಿಲ್ಲೆ]]ಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಯಿತು: [[ಕಣ್ಣೂರು ಜಿಲ್ಲೆ]], ಕಲ್ಲಿಕೋಟೆ ಜಿಲ್ಲೆ, ಮತ್ತು [[ಪಾಲಕ್ಕಾಡ್ ಜಿಲ್ಲೆ]].<ref name="1961_kkd">{{Cite book|title=District Census Handbook (2) – Kozhikode (1961)|last=Devassy|first=M. K.|publisher=Government of Kerala|year=1965|location=Ernakulam|url=http://lsi.gov.in:8081/jspui/bitstream/123456789/5665/1/22059_1961_KOZ.pdf}}</ref>
ಆ ಸಮಯದಲ್ಲಿ, ಕಲ್ಲಿಕೋಟೆ ಜಿಲ್ಲೆಯು ಎರಡು [[ಕೇರಳದ ರಾಜಸ್ವ ವಿಭಾಗಗಳು|ರಾಜಸ್ವ ವಿಭಾಗಗಳನ್ನು]] ಹೊಂದಿತ್ತು: ಕಲ್ಲಿಕೋಟೆ ರಾಜಸ್ವ ವಿಭಾಗ ಮತ್ತು ಮಲಪ್ಪುರಂ ರಾಜಸ್ವ ವಿಭಾಗ.<ref name="1961_kkd"/> ಕಲ್ಲಿಕೋಟೆ ರಾಜಸ್ವ ವಿಭಾಗವು ನಾಲ್ಕು ತಾಲೂಕುಗಳನ್ನು ಹೊಂದಿತ್ತು: ವಟಕರ, ಕೊಯಿಲಾಂಡಿ, ಕೋಝಿಕ್ಕೋಡ್, ಮತ್ತು ದಕ್ಷಿಣ ವಯನಾಡ್.<ref name="1961_kkd"/> ಮಲಪ್ಪುರಂ ವಿಭಾಗವು ಎರಡು ತಾಲೂಕುಗಳನ್ನು ಹೊಂದಿತ್ತು: [[ಎರನಾಡ್ ತಾಲೂಕು|ಎರನಾಡ್]] ಮತ್ತು [[ತಿರೂರು ತಾಲೂಕು|ತಿರೂರು]].<ref name="1961_kkd"/>
[[File:Caminho maritimo para a India.png|thumb|1498 ರಲ್ಲಿ [[ವಾಸ್ಕೋ ಡ ಗಾಮಾ]] ಕಲ್ಲಿಕೋಟೆಯನ್ನು ತಲುಪಲು ತೆಗೆದುಕೊಂಡ ಮಾರ್ಗ (ಕಪ್ಪು ರೇಖೆ), ಇದು ಯುರೋಪ್ನಿಂದ ಭಾರತಕ್ಕೆ ಸಮುದ್ರ ಮಾರ್ಗದ [[ಭೌಗೋಳಿಕ ಅನ್ವೇಷಣೆಯ ಯುಗ|ಶೋಧನೆಯಾಗಿದೆ]], ಮತ್ತು ಅಂತಿಮವಾಗಿ [[ಭಾರತೀಯ ಉಪಖಂಡ]]ದ [[ವಸಾಹತುಶಾಹಿ ಭಾರತ|ಯುರೋಪಿಯನ್ ವಸಾಹತುಶಾಹಿಗೆ]] ದಾರಿ ಮಾಡಿಕೊಟ್ಟಿತು.]]
16 ಜೂನ್ 1969 ರಂದು, ಕಲ್ಲಿಕೋಟೆ ಜಿಲ್ಲೆಯ ಮಲಪ್ಪುರಂ ರಾಜಸ್ವ ವಿಭಾಗವು, ಮೂರು ರಾಜಸ್ವ ಗ್ರಾಮಗಳಾದ [[ಫೆರೋಕೆ]], [[ರಾಮನಟ್ಟುಕರ]], ಮತ್ತು [[ಕಡಲುಂಡಿ]]ಯನ್ನು ಹೊರತುಪಡಿಸಿ, [[ಮಲಪ್ಪುರಂ ಜಿಲ್ಲೆ]]ಯನ್ನು ರೂಪಿಸಲು ಪ್ರತ್ಯೇಕಿಸಲಾಯಿತು.<ref name="c1971">{{Cite book|title=District Census Handbook – Malappuram (Part-C) – 1971|last=K. Narayanan|publisher=Directorate of Census Operations, Kerala|year=1972|location=Thiruvananthapuram|pages=3|url=http://lsi.gov.in:8081/jspui/bitstream/123456789/5714/1/51172_1971_MAL.pdf}}</ref>
ಮತ್ತೆ 1 ನವೆಂಬರ್ 1980 ರಂದು, ಕಲ್ಲಿಕೋಟೆ ಜಿಲ್ಲೆಯ ದಕ್ಷಿಣ ವಯನಾಡ್ ತಾಲೂಕನ್ನು [[ವಯನಾಡ್ ಜಿಲ್ಲೆ]]ಯನ್ನು ರೂಪಿಸಲು ಪ್ರತ್ಯೇಕಿಸಲಾಯಿತು.
==ಜನಸಂಖ್ಯಾಶಾಸ್ತ್ರ==
{{historical populations|11=1901|12=6,10,058|13=1911|14=6,54,846|15=1921|16=6,78,122|17=1931|18=7,96,881|19=1941|20=8,92,078|21=1951|22=11,16,391|23=1961|24=14,03,413|25=1971|26=18,21,734|27=1981|28=22,45,265|29=1991|30=26,19,941|31=2001|32=28,79,131|33=2011|34=30,86,293|35=2018|36=32,49,761|percentages=pagr|footnote=source:<ref>{{Cite web|url=http://www.censusindia.gov.in/2011census/PCA/A2_Data_Table.html|title=Decadal Variation In Population Since 1901|access-date=15 February 2020}}</ref>|align=left}}
('ಕೋಝಿಕ್ಕೋಡ್ ಅರ್ಬನ್' ಗಾಗಿ ವಿವರಗಳು ಭಾರತದ ಜನಗಣತಿಯಿಂದ ಪಡೆಯಲಾಗಿದೆ.<ref>{{cite web|url=http://www.censusindiamaps.net/page/Religion_WhizMap1/housemap.htm |title=Census GIS HouseHold |access-date=23 May 2006 |url-status=dead |archive-url=https://web.archive.org/web/20090103061419/http://www.censusindiamaps.net/page/Religion_WhizMap1/housemap.htm |archive-date=3 January 2009 }}</ref>)
[[ಜನನ ಮರಣ ವರ್ಗೀಕರಣ (ಸರ್ಕಾರಿ ದಾಖಲೆಗಳು)|2018 ರ ಅಂಕಿ-ಅಂಶಗಳ ವರದಿ]] ಪ್ರಕಾರ, ಕಲ್ಲಿಕೋಟೆ ಜಿಲ್ಲೆಯು 3,249,761 [[ಭಾರತದ ಜನಸಂಖ್ಯಾಶಾಸ್ತ್ರ|ಜನಸಂಖ್ಯೆಯನ್ನು]] ಹೊಂದಿದೆ,<ref name="kkddemo_2018"/> ಇದು [[ಮಂಗೋಲಿಯಾ]]<ref name="cia">{{cite web | author = US Directorate of Intelligence | title = Country Comparison:Population | url = https://www.cia.gov/library/publications/the-world-factbook/rankorder/2119rank.html | archive-url = https://web.archive.org/web/20070613004507/https://www.cia.gov/library/publications/the-world-factbook/rankorder/2119rank.html | url-status = dead | archive-date = 13 June 2007 | access-date = 1 October 2011 | quote =Mongolia 3,133,318 July 2011 est.
}}</ref> ಅಥವಾ US ರಾಜ್ಯವಾದ [[ಅಯೋವಾ]]ಕ್ಕೆ ಸರಿಸುಮಾರು ಸಮಾನವಾಗಿದೆ.<ref>{{cite web
|url=http://2010.census.gov/2010census/data/apportionment-pop-text.php
|title=2010 Resident Population Data
|publisher=U. S. Census Bureau
|access-date=30 September 2011
|quote=Iowa 3,046,355
|url-status=dead
|archive-url=https://web.archive.org/web/20131019160532/http://2010.census.gov/2010census/data/apportionment-pop-text.php
|archive-date=19 October 2013
}}</ref> [[2011 ಭಾರತದ ಜನಗಣತಿ]] ಜಿಲ್ಲೆಗೆ ಭಾರತದಲ್ಲಿ 115 ನೇ ಸ್ಥಾನವನ್ನು ನೀಡುತ್ತದೆ (ಒಟ್ಟು [[ಭಾರತದ ಜಿಲ್ಲೆಗಳು|640]] ರಲ್ಲಿ).<ref name=districtcensus>{{cite web |title=District Census Hand Book: Kozhikode |url=https://censusindia.gov.in/nada/index.php/catalog/656/download/2272/DH_2011_3204_PART_A_DCHB_KOZHIKODE.pdf |website=[[Census of India]] |publisher=[[Registrar General and Census Commissioner of India]]}}</ref> 2001–2011 ರ ದಶಕದಲ್ಲಿ ಇದರ [[ಭಾರತದಲ್ಲಿ ಕುಟುಂಬ ಯೋಜನೆ|ಜನಸಂಖ್ಯಾ ಬೆಳವಣಿಗೆ ದರ]]ವು 7.31% ಆಗಿತ್ತು.<ref name=districtcensus/> ಕಲ್ಲಿಕೋಟೆಯು ಪ್ರತಿ 1000 ಪುರುಷರಿಗೆ 1097 [[ಭಾರತದಲ್ಲಿ ಮಹಿಳೆಯರು|ಮಹಿಳೆಯರ]] [[ಲಿಂಗಾನುಪಾತ]]ವನ್ನು ಹೊಂದಿದೆ,<ref name=districtcensus/> ಮತ್ತು 95.24% [[ಭಾರತದಲ್ಲಿ ಸಾಕ್ಷರತೆ|ಸಾಕ್ಷರತಾ ಪ್ರಮಾಣವನ್ನು]] ಹೊಂದಿದೆ. 67.15% ಜನಸಂಖ್ಯೆಯು ನಗರ ಪ್ರದೇಶಗಳಲ್ಲಿ ವಾಸಿಸುತ್ತದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಕ್ರಮವಾಗಿ ಜನಸಂಖ್ಯೆಯ 6.45% ಮತ್ತು 0.49% ರಷ್ಟಿದ್ದಾರೆ.<ref name=districtcensus/>
[[ಕೋಝಿಕ್ಕೋಡ್ ಮಹಾನಗರ ಪ್ರದೇಶ]]ವು 2 ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ, ಇದು [[ಕೇರಳದ ಜನಸಂಖ್ಯಾಶಾಸ್ತ್ರ|ಕೇರಳದಲ್ಲಿ ಎರಡನೇ-ಅತಿದೊಡ್ಡ]] ಮತ್ತು [[ಭಾರತದಲ್ಲಿ ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆಯ ನಗರ ಸಮೂಹಗಳ ಪಟ್ಟಿ|ಭಾರತದಲ್ಲಿ 19ನೇ ಅತಿದೊಡ್ಡ]] ನಗರ ಸಮೂಹವಾಗಿದೆ.<ref name="ma"/> [[2011 ಭಾರತದ ಜನಗಣತಿ]]ಯ ಪ್ರಕಾರ, ಕಲ್ಲಿಕೋಟೆ ಜಿಲ್ಲೆಯ ಒಟ್ಟು ಜನಸಂಖ್ಯೆಯ 67.15% ನಗರ ಪ್ರದೇಶಗಳಲ್ಲಿ (ಇದು ನಗರಸಭಾ ನಿಗಮಗಳು, ನಗರಸಭೆಗಳು ಮತ್ತು ಜನಗಣತಿ ಪಟ್ಟಣಗಳನ್ನು ಒಳಗೊಂಡಿದೆ) ವಾಸಿಸುತ್ತಾರೆ.<ref name="up"/>
[[NITI Aayog]] ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16 ಆಧಾರಿತ [[ಬಹುಆಯಾಮದ ಬಡತನ ಸೂಚ್ಯಂಕ]] ವರದಿಯು ಕಲ್ಲಿಕೋಟೆಯನ್ನು [[ಕೊಟ್ಟಾಯಂ ಜಿಲ್ಲೆ|ಕೊಟ್ಟಾಯಂ]] ಮತ್ತು [[ಎರ್ನಾಕುಳಂ ಜಿಲ್ಲೆ|ಎರ್ನಾಕುಳಂ]] ನಂತರ ಭಾರತದಲ್ಲಿ ಮೂರನೇ-ಕಡಿಮೆ ಬಡ [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]] ಎಂದು ಘೋಷಿಸಿದೆ, ಇದು ಅತ್ಯಲ್ಪ ಬಹುಆಯಾಮದ ಬಡತನ ಪ್ರಮಾಣವನ್ನು 0.26% ಹೊಂದಿದೆ.<ref name="mpi"/>
[[ಮಲಯಾಳಂ]] ಪ್ರಬಲ ಭಾಷೆಯಾಗಿದ್ದು, 99.05% ಜನಸಂಖ್ಯೆಯು ಮಾತನಾಡುತ್ತದೆ. ಸಣ್ಣ ಅಲ್ಪಸಂಖ್ಯಾತರು ಪ್ರಧಾನವಾಗಿ ನಗರ ಪ್ರದೇಶಗಳಲ್ಲಿ [[ತಮಿಳು ಭಾಷೆ|ತಮಿಳು]] ಮತ್ತು [[ಹಿಂದಿ]] ಮಾತನಾಡುತ್ತಾರೆ.<ref name="languages">{{Cite web |title=Table C-16 Population by Mother Tongue: Kerala |url=https://censusindia.gov.in/nada/index.php/catalog/10209/download/13321/DDW-C16-STMT-MDDS-3200.XLSX |website=www.censusindia.gov.in |publisher=[[Registrar General and Census Commissioner of India]]}}</ref>
===ಧರ್ಮ===
{{Pie chart
| thumb =
| radius = 101
| caption= ಕಲ್ಲಿಕೋಟೆ ಜಿಲ್ಲೆಯಲ್ಲಿ ಧರ್ಮಗಳು (2011)<ref name="religion"/>
| footer =
| label1 = [[ಕೇರಳದಲ್ಲಿ ಹಿಂದೂ ಧರ್ಮ|ಹಿಂದೂ ಧರ್ಮ]]
| value1 = 56.21
| color1 = orange
| label2 = [[ಕೇರಳದಲ್ಲಿ ಇಸ್ಲಾಂ ಧರ್ಮ|ಇಸ್ಲಾಂ ಧರ್ಮ]]
| value2 = 39.24
| color2 = green
| label3 =[[ಕೇರಳದಲ್ಲಿ ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮ]]
| color3 = dodgerblue
| value3 = 4.26
| label4 = ಇತರೆ ಅಥವಾ ಹೇಳದಿರುವುದು
| color4 = silver
| value4 = 0.29%
}}
2011 ರ ಜನಗಣತಿಯ ಪ್ರಕಾರ, [[ಹಿಂದೂ]]ಗಳು ಜನಸಂಖ್ಯೆಯ ಬಹುಪಾಲು ಭಾಗವನ್ನು ಹೊಂದಿದ್ದಾರೆ, ನಂತರ [[ಮುಸ್ಲಿಂ]] ಮತ್ತು ಕ್ರೈಸ್ತರು. 2011 ರ ಜನಗಣತಿಯಲ್ಲಿನ ಪ್ರಮಾಣವು 56.21% ಹಿಂದೂಗಳು; 39.24% ಮುಸ್ಲಿಮರು ಮತ್ತು 4.26% ಕ್ರೈಸ್ತರು.<ref name="religion">{{Cite web|date=2011|title=Table C-01: Population by religious community: Kerala |url=https://censusindia.gov.in/nada/index.php/catalog/11379/download/14492/DDW32C-01%20MDDS.XLS |website=[[Census of India]] |publisher=[[Registrar General and Census Commissioner of India]]}}</ref>
ಜೈನರು (601), ಸಿಖ್ಖರು (297), ಮತ್ತು ಬೌದ್ಧರು (235) ರ ಸಣ್ಣ ಉಪಸ್ಥಿತಿ ಇದೆ.<ref name=census2011>{{cite web |title=Religion – Kerala, Districts and Sub-districts |url=http://www.censusindia.gov.in/2011census/C-01/DDW32C-01%20MDDS.XLS |work=Census of India 2011 |publisher=Office of the Registrar General}}</ref>
==ಹವಾಮಾನ==
ಜಿಲ್ಲೆಯು ಸಾಮಾನ್ಯವಾಗಿ ಆರ್ದ್ರ ಹವಾಮಾನವನ್ನು ಹೊಂದಿದ್ದು, ಮಾರ್ಚ್ನಿಂದ ಮೇ ವರೆಗೆ ಬಹಳ ಬಿಸಿಯಾದ ಋತುವನ್ನು ಹೊಂದಿದೆ. ಮಳೆಗಾಲವು ನೈಋತ್ಯ [[ಮಾನ್ಸೂನ್]] ಸಮಯದಲ್ಲಿ, ಜೂನ್ನ ಮೊದಲ ವಾರದಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್ ವರೆಗೆ ವಿಸ್ತರಿಸುತ್ತದೆ. ಈಶಾನ್ಯ ಮಾನ್ಸೂನ್ ಅಕ್ಟೋಬರ್ನ ದ್ವಿತೀಯಾರ್ಧದಿಂದ ನವೆಂಬರ್ ಮೂಲಕ ವಿಸ್ತರಿಸುತ್ತದೆ. ಸರಾಸರಿ ವಾರ್ಷಿಕ ಮಳೆಯು {{convert|3266|mm|inch|0|disp=or}} ಆಗಿದೆ. ವರ್ಷದ ಅಂತ್ಯದಲ್ಲಿ, ಡಿಸೆಂಬರ್ ಮತ್ತು ಜನವರಿಯಲ್ಲಿ ಉತ್ತಮ ಹವಾಮಾನವು ಕಂಡುಬರುತ್ತದೆ – ಆಕಾಶವು ಸ್ಪಷ್ಟವಾಗಿರುತ್ತದೆ, ಮತ್ತು ಗಾಳಿಯು ಸ್ಪಷ್ಟವಾಗಿರುತ್ತದೆ. ದಾಖಲಾದ ಅತ್ಯಧಿಕ ತಾಪಮಾನವು ಮಾರ್ಚ್ 1975 ರಲ್ಲಿ {{convert|39.4|°C|°F|1|disp=or}} ಆಗಿದೆ. ಅತ್ಯಂತ ಕಡಿಮೆ {{convert|14|°C|°F|1|disp=or}} ಅನ್ನು 26 ಡಿಸೆಂಬರ್ 1975 ರಂದು ದಾಖಲಿಸಲಾಗಿದೆ.
{{Weather box|width = auto
| location = ಕೋಝಿಕ್ಕೋಡ್
| metric first = Yes
| single line = Yes
| temperature colour = pastel
| Jan high C = 31.6
| Feb high C = 32.0
| Mar high C = 32.7
| Apr high C = 33.1
| May high C = 32.4
| Jun high C = 29.4
| Jul high C = 28.4
| Aug high C = 28.3
| Sep high C = 29.5
| Oct high C = 30.6
| Nov high C = 31.3
| Dec high C = 31.6
| year high C = 30.9
| Jan low C = 22
| Feb low C = 23.4
| Mar low C = 25
| Apr low C = 26.1
| May low C = 25.8
| Jun low C = 24
| Jul low C = 23.5
| Aug low C = 23.5
| Sep low C = 24
| Oct low C = 24
| Nov low C = 23.6
| Dec low C = 22.7
| year low C = 23.8
| Jan rain mm = 2.7
| Feb rain mm = 3.4
| Mar rain mm = 21.4
| Apr rain mm = 90.2
| May rain mm = 310.9
| Jun rain mm = 818.2
| Jul rain mm = 902.5
| Aug rain mm = 447.3
| Sep rain mm = 233.4
| Oct rain mm = 263.5
| Nov rain mm = 136.6
| Dec rain mm = 35
| rain colour = green
| source 1 =<ref>{{cite web|url=http://www.imd.gov.in/section/climate/kozhikode2.htm|title=Kozhikode weather|publisher=India Meteorological Department|access-date=14 November 2010|url-status=dead|archive-url=https://web.archive.org/web/20100505121941/http://www.imd.gov.in/section/climate/kozhikode2.htm|archive-date=5 May 2010}}</ref>
| date = March 2011}}
==ಆಡಳಿತ==
ಜಿಲ್ಲಾ ಆಡಳಿತದ ಪ್ರಧಾನ ಕಚೇರಿಯು ವೆಸ್ಟ್ ಹಿಲ್ನಲ್ಲಿರುವ [[ಕೋಝಿಕ್ಕೋಡ್]] ಸಿವಿಲ್ ಸ್ಟೇಷನ್ ಆಗಿದೆ. ಜಿಲ್ಲಾ ಆಡಳಿತವು [[ಜಿಲ್ಲಾ ಕಲೆಕ್ಟರ್]]ರವರ ನೇತೃತ್ವದಲ್ಲಿದೆ. ಸಾಮಾನ್ಯ ವ್ಯವಹಾರಗಳು, ಭೂ ಸ್ವಾಧೀನ, ರಾಜಸ್ವ ವಸೂಲಿ, ಭೂ ಸುಧಾರಣೆಗಳು ಮತ್ತು ಚುನಾವಣೆಗಳಿಗೆ ಜವಾಬ್ದಾರಿಯುತ ಉಪ ಕಲೆಕ್ಟರ್ಗಳಿಂದ ಅವರಿಗೆ ಸಹಾಯ ಮಾಡಲಾಗುತ್ತದೆ.<ref>[http://www.kerala.gov.in/knowkerala/tvm.htm Administration] {{webarchive |url=https://web.archive.org/web/20090207004457/http://www.kerala.gov.in/knowkerala/tvm.htm |date=7 February 2009 }}</ref>
###ನಗರ ಸ್ಥಳೀಯ ಸಂಸ್ಥೆಗಳು===
{{Main|List of cities and towns in Kerala}}
ಜಿಲ್ಲೆಯಲ್ಲಿ [[ಕೋಝಿಕ್ಕೋಡ್ ನಗರಸಭಾ ನಿಗಮ]]ದ ಜೊತೆಗೆ ಏಳು ನಗರಸಭಾ ಪಟ್ಟಣಗಳಿವೆ, ಇದನ್ನು 1962 ರಲ್ಲಿ ತಿರುವನಂತಪುರದ ನಂತರ ಕೇರಳದ ಎರಡನೇ ನಗರಸಭಾ ನಿಗಮವಾಗಿ ಸ್ಥಾಪಿಸಲಾಯಿತು.<ref>[https://web.archive.org/web/20080209134539/http://www.hindu.com/2008/02/05/stories/2008020561140500.htm Kozhikode Lok Sabha constituency redrawn Delimitation impact], ''The Hindu'' 5 February 2008</ref> ಜಿಲ್ಲೆಯ ನಗರಸಭಾ ಪಟ್ಟಣಗಳು:<ref name="Census2011cities">{{cite web|title=Provisional Population Totals, Census of India 2011|url=http://urbanaffairskerala.org/images/downloads/ulb_population2011.pdf|work=Population of the urban local bodies in Kerala (2011)|publisher=Government of Kerala|access-date=4 December 2020|archive-date=24 ಸೆಪ್ಟೆಂಬರ್ 2020|archive-url=https://web.archive.org/web/20200924173424/http://urbanaffairskerala.org/images/downloads/ulb_population2011.pdf|url-status=dead}}</ref>
{| class="wikitable"
|+ ಕಲ್ಲಿಕೋಟೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು
!ನಗರಸಭೆ
!ಜನಸಂಖ್ಯೆ (2011)
!ವಿಸ್ತೀರ್ಣ (ಕಿಮೀ<sup>2</sup>)
!ಜನಸಾಂದ್ರತೆ (/ಕಿಮೀ<sup>2</sup>)
! ತಾಲೂಕು
|-
! span="row" | [[ವಟಕರ]]
| 75,295 || 21.32 || 3,532 || ವಟಕರ
|-
! span="row" | [[ಕೊಯಿಲಾಂಡಿ]]
| 71,873 || 29.05 || 2,474 || ಕೊಯಿಲಾಂಡಿ
|-
! span="row" | [[ಫೆರೋಕೆ]]
| 54,074 || 15.54 || 3,480 || [[ಕೋಝಿಕ್ಕೋಡ್]]
|-
! span="row" | [[ಪಾಯ್ಯೋಳಿ]]
| 49,470 || 22.34 || 2,214 || [[ಕೊಯಿಲಾಂಡಿ]]
|-
! span="row" | [[ಕೊಡುವಳ್ಳಿ ನಗರಸಭೆ|ಕೊಡುವಳ್ಳಿ]]
| 48,687 || 23.85 || 2,041 || [[ತಾಮರಶ್ಶೇರಿ]]
|-
! span="row" | [[ಮುಕ್ಕಂ]]
| 40,670 || 31.20 || 1,304 || [[ಕೋಝಿಕ್ಕೋಡ್]]
|-
! span="row" | [[ರಾಮನಟ್ಟುಕರ]]
| 35,937 || 11.70 || 3,072 || [[ಕೋಝಿಕ್ಕೋಡ್]]
|}
===ಶಾಸಕಾಂಗ ಪ್ರಾತಿನಿಧ್ಯ===
{{See also|Kerala Legislative Assembly|Lok Sabha}}
[[File:Kozhikode-district-map-en.svg|thumbnail|ಕಲ್ಲಿಕೋಟೆ ಜಿಲ್ಲೆಯಿಂದ 13 [[ಕೇರಳ ವಿಧಾನಸಭೆ]] ಕ್ಷೇತ್ರಗಳ ನಕ್ಷೆ ಅವುಗಳ ಮಿತಿಗಳೊಂದಿಗೆ]]
ಕಲ್ಲಿಕೋಟೆಯಲ್ಲಿ ಮೂರು [[ಲೋಕಸಭಾ]] ಕ್ಷೇತ್ರಗಳಿವೆ: [[ವಟಕರ (ಲೋಕಸಭಾ ಕ್ಷೇತ್ರ)|ವಟಕರ]], [[ಕೋಝಿಕ್ಕೋಡ್ (ಲೋಕಸಭಾ ಕ್ಷೇತ್ರ)|ಕೋಝಿಕ್ಕೋಡ್]], ಮತ್ತು [[ವಯನಾಡ್ (ಲೋಕಸಭಾ ಕ್ಷೇತ್ರ)|ವಯನಾಡ್]].
ಕಲ್ಲಿಕೋಟೆ ಜಿಲ್ಲೆಯಲ್ಲಿ 13 [[ಕೇರಳ ವಿಧಾನಸಭೆ]] ಸ್ಥಾನಗಳಿವೆ.<ref>[http://www.niyamasabha.org/codes/members.htm Niyamsabha official site]</ref>
{| class="sortable wikitable"
|+ ಕಲ್ಲಿಕೋಟೆ ಜಿಲ್ಲೆಯಿಂದ [[ಕೇರಳ ವಿಧಾನಸಭೆ]] ಕ್ಷೇತ್ರಗಳು
! ಕ್ಷೇತ್ರ
! ಸದಸ್ಯ
!ಪಕ್ಷ
!ಮೈತ್ರಿ
|-
|[[ವಟಕರ (ರಾಜ್ಯ ವಿಧಾನಸಭಾ ಕ್ಷೇತ್ರ)|ವಟಕರ]] ||[[ಕೆ. ಕೆ. ರೇಮಾ]] ||style="background:{{party color|Revolutionary Marxist Party of India}}; color:white;"|RMPI||{{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
|[[ಕುಟ್ಟಿಯಾಡಿ (ರಾಜ್ಯ ವಿಧಾನಸಭಾ ಕ್ಷೇತ್ರ)|ಕುಟ್ಟಿಯಾಡಿ]] ||ಕೆ. ಪಿ. ಕುಂಹಾಹಮ್ಮದ್ ಕುಟ್ಟಿ||style="background-color:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ನಡಪುರಂ (ರಾಜ್ಯ ವಿಧಾನಸಭಾ ಕ್ಷೇತ್ರ)|ನಡಪುರಂ]] ||[[ಇ. ಕೆ. ವಿಜಯನ್]]||style="background:{{party color|Communist Party of India}}; color:white;"|CPI||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಕೊಯಿಲಾಂಡಿ (ರಾಜ್ಯ ವಿಧಾನಸಭಾ ಕ್ಷೇತ್ರ)|ಕೊಯಿಲಾಂಡಿ]] ||[[ಕನಾಥಿಲ್ ಜಮೀಲಾ]] ||style="background:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಪೆರಾಂಬ್ರ (ರಾಜ್ಯ ವಿಧಾನಸಭಾ ಕ್ಷೇತ್ರ)|ಪೆರಾಂಬ್ರ]] ||[[ಟಿ. ಪಿ. ರಾಮಕೃಷ್ಣನ್]] ||style="background:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಬಾಲುಸ್ಸೇರಿ (ರಾಜ್ಯ ವಿಧಾನಸಭಾ ಕ್ಷೇತ್ರ)|ಬಾಲುಸ್ಸೇರಿ]] ||[[ಕೆ. ಎಂ. ಸಚಿನ್ ದೇವ್]] ||style="background:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಎಳತ್ತೂರು (ರಾಜ್ಯ ವಿಧಾನಸಭಾ ಕ್ಷೇತ್ರ)|ಎಳತ್ತೂರು]] ||[[ಎ. ಕೆ. ಶಶೀಂದ್ರನ್]] ||style="background:{{party color|Nationalist Congress Party}}; color:white;"|NCP||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಕೋಝಿಕ್ಕೋಡ್ ಉತ್ತರ (ರಾಜ್ಯ ವಿಧಾನಸಭಾ ಕ್ಷೇತ್ರ)|ಕೋಝಿಕ್ಕೋಡ್ ಉತ್ತರ]]||[[ತೊಟ್ಟತ್ತಿಲ್ ರವೀಂದ್ರನ್]]||style="background:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಕೋಝಿಕ್ಕೋಡ್ ದಕ್ಷಿಣ (ರಾಜ್ಯ ವಿಧಾನಸಭಾ ಕ್ಷೇತ್ರ)|ಕೋಝಿಕ್ಕೋಡ್ ದಕ್ಷಿಣ]] ||[[ಅಹಮದ್ ದೇವರ್ಕೋವಿಲ್]]||style="background-color:{{party color|Indian National League}}; color:white;"|INL||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಬೇಪೂರು (ರಾಜ್ಯ ವಿಧಾನಸಭಾ ಕ್ಷೇತ್ರ)|ಬೇಪೂರು]] ||[[ಪಿ. ಎ. ಮೊಹಮ್ಮದ್ ರಿಯಾಸ್]] ||style="background:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಕುನ್ನಮಂಗಲಂ (ರಾಜ್ಯ ವಿಧಾನಸಭಾ ಕ್ಷೇತ್ರ)|ಕುನ್ನಮಂಗಲಂ]] ||[[ಪಿ. ಟಿ. ಎ. ರಹೀಮ್]] ||style="background:{{party color|Left Democratic Front (Kerala)}}; color:white;"|LDF Ind.||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|-
|[[ಕೊಡುವಳ್ಳಿ (ರಾಜ್ಯ ವಿಧಾನಸಭಾ ಕ್ಷೇತ್ರ)|ಕೊಡುವಳ್ಳಿ]] ||[[ಎಂ. ಕೆ. ಮುನೀರ್]]||style="background:{{party color|Indian Union Muslim League}}; color:white;"|IUML||{{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
|[[ತಿರುವಂಬಾಡಿ (ರಾಜ್ಯ ವಿಧಾನಸಭಾ ಕ್ಷೇತ್ರ)|ತಿರುವಂಬಾಡಿ]] ||[[ಲಿಂಟೋ ಜೋಸೆಫ್]]||style="background:{{party color|Communist Party of India (Marxist)}}; color:white;"|CPI(M)||{{legend2|{{party color|Left Democratic Front (Kerala)}}|[[ಎಡ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]]|border=solid 1px #AAAAAA}}
|}
===ಆಡಳಿತ ವಿಭಾಗಗಳು===
{{See also|List of taluks of Kerala}}
{| align="left" class="wikitable"
|-
!ರಾಜಸ್ವ ವಿಭಾಗ<ref name="kkdrvn">{{cite web |url=https://kozhikode.nic.in/revenue-divisions/ |title=Revenue divisions in Kozhikode district |last=District Administration, Kozhikode |website= |publisher=National Informatics Centre, Ministry of Electronics and Information Technology, Government of India |access-date=22 June 2022}}</ref>
!ತಾಲೂಕು
!ವಿಸ್ತೀರ್ಣ (ಕಿಮೀ<sup>2</sup>)
!ಜನಸಂಖ್ಯೆ (2011)<ref name="democalicut">{{cite web |url=https://censusindia.gov.in/2011census/dchb/3204_PART_B_KOZHIKODE.pdf |website=censusindia.gov.in |title= Taluk-wise demography of Kozhikode |access-date= 19 April 2020 |publisher= Directorate of Census Operations, Kerala |pages=161–193}}</ref>
!ಗ್ರಾಮಗಳ ಸಂಖ್ಯೆ<ref name ="kkdvlg">{{cite web |title = Revenue Villages in Kozhikode |url = https://kozhikode.nic.in/villages/ |website = kozhikode.nic.in |last=District Administration, Kozhikode |publisher=National Informatics Centre, Ministry of Electronics and Information Technology, Government of India |access-date = 17 August 2020 }}</ref>
!ಪಟ್ಟಣಗಳು
!ರಾಜಸ್ವ ಗ್ರಾಮಗಳು<ref name ="kkdvlg"/>
|-
! rowspan="2" scope="row" | ವಟಕರ
| [[ವಟಕರ]] || 576 || 687,726 || 28
| {{startflatlist}}
*[[ವಡಕರ]]
*[[ನಡಪುರಂ]]
*[[ಕುಟ್ಟಿಯಾಡಿ]]
*[[ಚೋರೋಡೆ]]
*[[ಎರಮಾಲ]]
*[[ವನಿಮಲ್]]
*[[ಅಳಿಯೂರು]]
{{endflatlist}}
|{{startflatlist}}
* [[ಆಯಂಚೇರಿ|ಆಯಂಚೇರಿ]]<ref name ="kkdvlg"/>
* [[ಅಳಿಯೂರು]]
* [[ಚೆಕ್ಕಿಯಾಡ್]]
* [[ಚೋರೋಡೆ]]
* [[ಎಡಚೇರಿ|ಎಡಚೇರಿ]]
* [[ಎರಮಾಲ]]
* [[ಕವಿಲುಂಪರ]]
* [[ಕಾಯಕ್ಕೋಡಿ|ಕಾಯಕೋಡಿ]]
* [[ಕೊಟ್ಟಪ್ಪಳ್ಳಿ]]
* [[ಕುನ್ನುಮ್ಮಲ್]]
* [[ಕುಟ್ಟಿಯಾಡಿ]]
* [[ಮಣಿಯೂರು]]
* [[ಮರುತೋಂಕರ]]
* ನಡಕ್ಕುತಾಳ
* [[ನಡಪುರಂ]]
* [[ನರಿಪ್ಪಟ್ಟ ಗ್ರಾಮ ಪಂಚಾಯತ್|ನರಿಪ್ಪಟ್ಟ]]
* [[ಒಂಚಿಯಂ]]
* ಪಾಲಾಯಡ್
* [[ಪುರಮೇರಿ]]
* [[ತಿನೂರು]]
* ತಿರುವಳ್ಳೂರು
* [[ತುನೇರಿ]]
* [[ವಟಕರ]]
* [[ವಳಾಯಂ]]
* [[ವನಿಮಲ್|ವನಿಮೇಲ್]]
* [[ವೇಲೋಂ]]
* [[ವಿಳಂಗಾಡ್]]
* [[ವಿಳ್ಳಿಯಪ್ಪಳ್ಳಿ]]
{{endflatlist}}
|-
| [[ಕೊಯಿಲಾಂಡಿ]] || 642 || 645,879 || 31
| {{startflatlist}}
*[[ಕೊಯಿಲಾಂಡಿ]]
*[[ಚೆಮಂಚೇರಿ]]
*[[ಉಳ್ಳಿಯೇರಿ]]
*[[ಬಾಲುಸ್ಸೇರಿ]]
*[[ಪೆರಾಂಬ್ರ]]
{{endflatlist}}
|{{startflatlist}}
* [[ಅರಿಕ್ಕುಳಂ]]<ref name ="kkdvlg"/>
* [[ಅತೋಳಿ, ಕೇರಳ|ಅತೋಳಿ]]
* [[ಅವಿಟನಲ್ಲೂರು]]
* [[ಬಾಲುಸ್ಸೇರಿ]]
* [[ಚಕ್ಕಿಟ್ಟಪರ]]
* [[ಚಂಗರೋತ್]]
* [[ಚೆಮಂಚೇರಿ]]
* [[ಚೆಂಪನೋಡ]]
* [[ಚೆಂಗೊಟ್ಟುಕಾವು]]
* [[ಚೆರುವನ್ನೂರು ಗ್ರಾಮ ಪಂಚಾಯತ್|ಚೆರುವನ್ನೂರು]]
* [[ಎರವಟ್ಟೂರು]]
* [[ಇರಿಂಗಾಲ್]]
* [[ಕಾಯನ್ನ]]
* [[ಕೀಳರಿಯೂರು]]
* [[ಕೂರಚುಂಡು]]
* [[ಕೂತಾಳಿ]]
* [[ಕೊಟ್ಟೂರು, ಕೇರಳ|ಕೊಟ್ಟೂರು]]
* [[ಕೋಳುಕ್ಕಲ್ಲೂರು]]
* ಮೆನ್ನಹನ್ನ್ಯಂ
* [[ಮೆಪ್ಪಾಯೂರು]]
* [[ಮೂಡಾಡಿ]]
* [[ನಡುವನ್ನೂರು]]
* [[ನೋಚಾಡ್]]
* [[ಪಾಲೇರಿ]]
* ಪಂತಲಾಯನಿ
* [[ಪಾಯ್ಯೋಳಿ]]
* [[ಪೆರಾಂಬ್ರ]]
* [[ತಿಕ್ಕೋಡಿ]]
* [[ತುರಾಯೂರು]]
* [[ಉಳ್ಳಿಯೇರಿ]]
* [[ವಿಯ್ಯೂರು (ಕೊಯಿಲಾಂಡಿ ತಾಲೂಕು)|ವಿಯ್ಯೂರು]]
{{endflatlist}}
|-
! rowspan="2" scope="row" | ಕೋಝಿಕ್ಕೋಡ್
| [[ತಾಮರಶ್ಶೇರಿ]] || 574 || 401,831 || 20
| {{startflatlist}}
*[[ತಾಮರಶ್ಶೇರಿ]]
*[[ತಿರುವಂಬಾಡಿ]]
*[[ಕೂಡರಂಜಿ]]
*[[ಕೊಡುವಳ್ಳಿ]]
*[[ಕೊಡೆಂಚೇರಿ]]
*[[ಒಮಸ್ಸೇರಿ]]
*[[ಪೂನೂರು]]
{{endflatlist}}
|{{startflatlist}}
* [[ಎಂಗಪುಳ]]
* [[ಕಂಥಲಾಡ್]]
* [[ಕಟ್ಟಿಪ್ಪರ]]
* [[ಕಿನಾಲೂರು]]
* [[ಕಿಕ್ಕೋತ್]]
* [[ಕೊಡೆಂಚೇರಿ]]
* [[ಕೊಡುವಳ್ಳಿ ನಗರಸಭೆ|ಕೊಡುವಳ್ಳಿ]]
* [[ಕೇಡವೂರು]]
* [[ಕೂಡರಂಜಿ]]
* [[ಕೂಡತಾಯಿ]]
* [[ನರಿಕ್ಕುಣಿ]]
* [[ನೆಲ್ಲಿಪೊಯಿಲ್]]
* [[ಪನಂಗಾಡ್, ಕೋಝಿಕ್ಕೋಡ್|ಪನಂಗಾಡ್]]
* [[ಪುತ್ತುಪ್ಪಾಡಿ]]
* ಪುತ್ತೂರು
* [[ರಾರೋತ್]]
* ಶಿವಪುರಂ
* [[ತಿರುವಂಬಾಡಿ]]
* [[ಉಣ್ಣಿಕುಳಂ]]
* [[ವಾವಾಡ್, ಭಾರತ|ವಾವಾಡ್]]
{{endflatlist}}
|-
| [[ಕೋಝಿಕ್ಕೋಡ್]] || 547 || 1,354,107 || 39
| {{startflatlist}}
*[[ಕೋಝಿಕ್ಕೋಡ್]]
*[[ಕಡಲುಂಡಿ]]
*[[ಫೆರೋಕೆ]]
*[[ರಾಮನಟ್ಟುಕರ]]
*[[ಮುಕ್ಕಂ]]
*[[ಕುನ್ನಮಂಗಲಂ]]
*[[ಬೇಪೂರು]]
{{endflatlist}}
|{{startflatlist}}
* [[ಬೇಪೂರು]]
* [[ಚತ್ತಮಂಗಲಂ]]
* [[ಚೆಳನ್ನೂರು]]
* ಸೆಲಾವೂರು
* [[ಚೆರುವನ್ನೂರು ನಲ್ಲಾಳಂ|ಚೆರುವನ್ನೂರು]]
* ಚೆವಾಯೂರು
* [[ಎಳತ್ತೂರು, ಕೋಝಿಕ್ಕೋಡ್|ಎಳತ್ತೂರು]]
* [[ಫೆರೋಕೆ]]
* ಕಚೇರಿ
* [[ಕಡಲುಂಡಿ]]
* [[ಎನ್. ಎನ್. ಕಕ್ಕಾಡ್]]
* [[ಕಕ್ಕೋಡಿ]]
* [[ಕಕ್ಕೂರು]]
* [[ಕರುವಂತುರುತಿ]]
* ಕಸಬ
* [[ಕೊಡಿಯತ್ತೂರು]]
* [[ಕೊಟ್ಟೂಳಿ ಮತ್ತು ಪೊತ್ತಮ್ಮಲ್|ಕೊಟ್ಟೂಳಿ]]
* ಕುಮಾರನಲ್ಲೂರು
* [[ಕುನ್ನಮಂಗಲಂ]]
* [[ಪರಂಬಿಲ್ ಬಜಾರ್]]
* [[ಕುಟ್ಟಿಕ್ಕಟ್ಟೂರು ಮತ್ತು ವೆಳ್ಳಿಪರಂಬ]]
* [[ಮಡವೂರು, ಕೋಝಿಕ್ಕೋಡ್|ಮಡವೂರು]]
* [[ಮಾವೂರು]]
* ನಗರಂ
* [[ನನ್ಮಂಡ]]
* ನೀಲೇಶ್ವರಂ
* [[ನೆಲ್ಲಿಕೋಡ್ ಭಾಸ್ಕರನ್]]
* [[ಒಳವನ್ನ]]
* [[ಪನ್ನಿಯಂಕರ]]
* [[ಪಂತೀರಂಕಾವು]]
* [[ಪೆರುಮನ್ನ, ಕೋಝಿಕ್ಕೋಡ್|ಪೆರುಮನ್ನ]]
* [[ಪೆರುವಾಯಲ್]]
* [[ಪೂಲಕೋಡ್]]
* [[ಪುತಿಯಂಗಾಡಿ, ಕೋಝಿಕ್ಕೋಡ್|ಪುತಿಯಂಗಾಡಿ]]
* [[ರಾಮನಟ್ಟುಕರ]]
* [[ತಾಳಕ್ಕುಳತ್ತೂರು]]
* [[ತಾಳೆಕೋಡ್, ಕೋಝಿಕ್ಕೋಡ್ ಜಿಲ್ಲೆ|ತಾಳೆಕೋಡ್]]
* [[ವಳಯನಾಡ್]]
* ವೆಂಗೇರಿ
{{endflatlist}}
|}
{{clear}}
== ಆರ್ಥಿಕತೆ ==
{{Main|Economy of Kozhikode district}}
[[File:Malabar District (1951 Census).svg|thumbnail|[[ಕೋಝಿಕ್ಕೋಡ್]] ಹಿಂದಿನ [[ಮಲಬಾರ್ ಜಿಲ್ಲೆ]]ಯ ರಾಜಧಾನಿ ನಗರವಾಗಿತ್ತು]]
[[ಕೋಝಿಕ್ಕೋಡ್]] ಕೇರಳದ ಅತಿದೊಡ್ಡ ಆರ್ಥಿಕ ಕೇಂದ್ರಗಳಲ್ಲಿ ಒಂದಾಗಿದೆ. ರಾಜ್ಯದ ಜನಸಂಖ್ಯೆಯ ಸುಮಾರು 8% ರಷ್ಟನ್ನು ಹೊಂದಿರುವ ಜಿಲ್ಲೆಯು ರಾಜ್ಯದ ಆದಾಯಕ್ಕೆ 12% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಆಧುನಿಕ [[ಕೇರಳ]] ರಾಜ್ಯದ ಮೊದಲ ಮತ್ತು ಅತ್ಯಂತ ಹಳೆಯ ಬ್ಯಾಂಕ್ ಆದ ನೆಡುಂಗಡಿ ಬ್ಯಾಂಕ್ ಅನ್ನು 1899 ರಲ್ಲಿ [[ಕೋಝಿಕ್ಕೋಡ್]] ನಲ್ಲಿ [[ಅಪ್ಪು ನೆಡುಂಗಡಿ]] ಸ್ಥಾಪಿಸಿದರು.{{sfn|Chandran|2018|p=386}} [[ಕೋಝಿಕ್ಕೋಡ್]] ನಲ್ಲಿನ ಸೈಬರ್ಪಾರ್ಕ್ [[ಕೇರಳ]]ದ [[ಮಾಹಿತಿ ತಂತ್ರಜ್ಞಾನ|IT]] ಕೇಂದ್ರಗಳಲ್ಲಿ ಒಂದಾಗಿದೆ. [[ಕೋಝಿಕ್ಕೋಡ್]]ನ ಆರ್ಥಿಕತೆಯು ಅದರ ಸೇವಾ ವಲಯದ ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ.
==ಸಂಸ್ಕೃತಿ==
[[File:Wellington, soldier and statesman, and the revival of the military power of England (1904) (14593177119).jpg|left|thumbnail|1804 ರ ಭಾರತದ ಹಳೆಯ ನಕ್ಷೆ. ಪ್ರಸ್ತುತ [[ಕೇರಳ]] ರಾಜ್ಯದೊಳಗೆ [[ತಲಶ್ಶೇರಿ]], [[ಕೋಝಿಕ್ಕೋಡ್]], ಮತ್ತು [[ಕೊಚ್ಚಿ]] ಮಾತ್ರ ನಗರಗಳಾಗಿ ಗುರುತಿಸಲ್ಪಟ್ಟಿವೆ ಎಂಬುದನ್ನು ಗಮನಿಸಿ]]
===ಮಲಯಾಳಂ ಭಾಷೆ===
[[ಮಲಯಾಳಂ ಭಾಷೆ]] ಮತ್ತು ಸಾಹಿತ್ಯ ಕ್ಷೇತ್ರದಲ್ಲಿ, ಕಲ್ಲಿಕೋಟೆ ಜಿಲ್ಲೆಯು ಅನೇಕ ಮಹತ್ವದ ಕೊಡುಗೆಗಳನ್ನು ನೀಡಿದೆ. 17ನೇ ಶತಮಾನದಲ್ಲಿ, ಹಿಸ್ ಹೈನೆಸ್ ಶ್ರೀ ಸಾಮೂತಿರಿ ಮನವೇದನ್ ಮಹಾರಾಜರು ಎಂಟು ಸಂಪುಟಗಳಲ್ಲಿ ಶ್ರೀಕೃಷ್ಣನ ಬಾಲ್ಯವನ್ನು ವಿವರಿಸುವ ಪ್ರಸಿದ್ಧ ''ಕೃಷ್ಣಾಟ್ಟಂ'' ಎಂಬ [[ಮಣಿಪ್ರವಾಳಂ]] ಗ್ರಂಥವನ್ನು ರಚಿಸಿದರು. ''[[ವಡಕ್ಕನ್ ಪಟ್ಟುಕಳ್]]'' ಎಂದು ಕರೆಯಲ್ಪಡುವ ಜಾನಪದ ಗೀತೆಗಳು ಅಥವಾ ಗೀತೆಗಳಿಗೆ ಜಿಲ್ಲೆಯು ಪ್ರಸಿದ್ಧವಾಗಿದೆ. ಅತ್ಯಂತ ಜನಪ್ರಿಯ ಹಾಡುಗಳು ಥಾಚೋಳಿ ಒತೇನನ್ ಮತ್ತು [[ಉಣ್ಣಿಯಾರ್ಚ]]ರ ಸಾಹಸಗಳನ್ನು ಆಚರಿಸುತ್ತವೆ. ವೇದ ವಿದ್ವಾಂಸರಿಗಾಗಿ ಬೌದ್ಧಿಕ ಚರ್ಚೆ, ಅಲ್ಲಿ ವಿಜೇತರು ''ಪತ್ತನಂ'' ಎಂಬ ಬಿರುದನ್ನು ಪಡೆಯುತ್ತಾರೆ, ಇದು [[ಮಲಯಾಳಂ ಕ್ಯಾಲೆಂಡರ್|ತುಲಾಂ]] ತಿಂಗಳಲ್ಲಿ ತಾಳಿ ದೇವಾಲಯದಲ್ಲಿ ನಡೆಯುತ್ತದೆ. ಕಲ್ಲಿಕೋಟೆ [[ಘಝಲ್]]ಗಳು ಮತ್ತು [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]]ನೊಂದಿಗೆ ಪ್ರಬಲ ಸಂಬಂಧವನ್ನು ಹೊಂದಿದೆ.
===ಮಲಯಾಳಂ ಸಾಹಿತ್ಯ===
[[File:Pottekkatt 1 choosetocount.JPG|thumbnail|150px|right|ಕಲ್ಲಿಕೋಟೆಯ S.M. ರಸ್ತೆಗೆ ಅಭಿಮುಖವಾಗಿರುವ S. K. ಪೊಟ್ಟೆಕ್ಕಾಟ್ ಅವರ ಪ್ರತಿಮೆ]]
ಮಲಯಾಳಂ ಸಾಹಿತ್ಯದ ಅನೇಕ ಪ್ರಮುಖ ಬರಹಗಾರರು ಕಲ್ಲಿಕೋಟೆ ಜಿಲ್ಲೆಯಿಂದ ಬಂದವರು. ಅವರಲ್ಲಿ [[ಎಸ್. ಕೆ. ಪೊಟ್ಟೆಕ್ಕಾಟ್]], [[ಥಿಕ್ಕೋಡಿಯನ್]], [[ಪುನತ್ತಿಲ್ ಕುಂಜಬ್ದುಲ್ಲಾ]], [[ಯು. ಎ. ಖಾದರ್]], [[ಅಕ್ಬರ್ ಕಕ್ಕಟ್ಟಿಲ್]], [[ಎನ್. ಎನ್. ಕಕ್ಕಾಡ್]], [[ಪಿ. ವಲ್ಸಲ]] ಮತ್ತು ಎಂ. ಎನ್. ಕರಸ್ಸೇರಿ ಸೇರಿದ್ದಾರೆ. ಎಸ್. ಕೆ. ಪೊಟ್ಟೆಕ್ಕಾಟ್ ಬಹುಶಃ ಕಲ್ಲಿಕೋಟೆಯ ಅತ್ಯಂತ ಪ್ರಸಿದ್ಧ ಬರಹಗಾರರಾಗಿದ್ದು, ಅವರ ಪ್ರಶಸ್ತಿ ವಿಜೇತ ಕೃತಿ ''[[ಒರು ತೆರುವಿಂತೆ ಕಥ]]'' [[ಎಸ್. ಎಂ. ರಸ್ತೆ]]ಯಲ್ಲಿ ಸೆಟ್ ಮಾಡಲಾಗಿದೆ. ಹಲವಾರು ಪ್ರಮುಖ ಮಲಯಾಳಂ ಪ್ರಕಾಶನ ಸಂಸ್ಥೆಗಳು ನಗರದಲ್ಲಿ ನೆಲೆಗೊಂಡಿವೆ, ಇವುಗಳಲ್ಲಿ ಪೂರ್ಣ, [[ಮಾತೃಭೂಮಿ]], [[ಮಲ್ಬೆರಿ ಪಬ್ಲಿಕೇಷನ್ಸ್|ಮಲ್ಬೆರಿ]], ಲಿಪಿ ಮತ್ತು ಆಲಿವ್ ಸೇರಿವೆ. ನಗರದಲ್ಲಿ ಮತ್ತು ಅದರ ಸುತ್ತಮುತ್ತಲಿನ ಹಲವಾರು ಗ್ರಂಥಾಲಯಗಳಿವೆ. [[ಮಾನಂಚಿರ]]ದಲ್ಲಿರುವ ಕಲ್ಲಿಕೋಟೆ ಸಾರ್ವಜನಿಕ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರವನ್ನು 1996 ರಲ್ಲಿ ನಿರ್ಮಿಸಲಾಯಿತು.<ref>Krishnadas Rajagopal (10 December 2013). [http://www.thehindu.com/news/cities/kozhikode/a-library-in-its-last-chapter/article5443268.ece "A library in its last chapter"]. ''The Hindu''. Retrieved 4 September 2015.</ref> 2023 ರಲ್ಲಿ, ಕಲ್ಲಿಕೋಟೆ ಭಾರತದ ಮೊದಲ UNESCO ಸಾಹಿತ್ಯ ನಗರವಾಯಿತು.<ref>[https://indianexpress.com/article/india/gwalior-kozhikode-unesco-creative-cities-network-9009592/ "Gwalior, Kozhikode join UNESCO Creative Cities Network"]. 1 November 2023. ''Indian Express''. Retrieved 13 March 2024.</ref>
===ಸಂಗೀತ===
ಕಲ್ಲಿಕೋಟೆಯ ವಾರ್ಷಿಕ ಸಾಂಸ್ಕೃತಿಕ ಉತ್ಸವವಾದ ಮಲಬಾರ್ ಮಹೋತ್ಸವದ ಜೊತೆಗೆ,<ref>[http://www.thehindu.com/todays-paper/tp-national/tp-kerala/malabar-mahotsavam-set-for-a-comeback/article674648.ece "Malabar Mahotsavam set for a comeback"]. ''The Hindu''. 1 January 2010. Retrieved 4 September 2015.</ref> ಪ್ರತಿ ವರ್ಷವೂ 1981 ರಿಂದ ತ್ಯಾಗರಾಜ ಆರಾಧನಾ ಟ್ರಸ್ಟ್ [[ತ್ಯಾಗರಾಜ]]ರ ಗೌರವಾರ್ಥವಾಗಿ ಐದು ದಿನಗಳ ಸಂಗೀತ ಉತ್ಸವವನ್ನು ನಡೆಸುತ್ತಿದೆ. ಉತ್ಸವವು ಉಂಚ್ಛವೃತ್ತಿ, ದಿವ್ಯನಾಮ ಕೃತಿಗಳ ಪಠಣ, [[ಪಂಚರತ್ನ ಕೃತಿ]]ಗಳು, ವೃತ್ತಿಪರ ಕಲಾವಿದರ ಮತ್ತು ವಿದ್ಯಾರ್ಥಿಗಳ ಬೆಳಿಗ್ಗೆಯಿಂದ ಸಂಜೆಯವರೆಗಿನ ಸಂಗೀತ ಕಚೇರಿಗಳೊಂದಿಗೆ ಪೂರ್ಣವಾಗಿರುತ್ತದೆ.<ref>[http://tyagaraja-aradhana-calicut.org/ "Paying tribute to Sathguru Sri Tyagaraja"]. Tyagaraja Aradhana Trust. Retrieved 4 September 2015.</ref>
ಕಲ್ಲಿಕೋಟೆಯು [[ಘಝಲ್]] ಮತ್ತು [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ|ಹಿಂದುಸ್ತಾನಿ]] ಸಂಗೀತದ ಸಂಪ್ರದಾಯವನ್ನು ಹೊಂದಿದೆ. ಅನೇಕ ಮಲಯಾಳಂ ಘಝಲ್ಗಳಿವೆ. ಕಲ್ಲಿಕೋಟೆಯ ನಿವಾಸಿಯಾದ ದಿವಂಗತ ಚಲನಚಿತ್ರ ನಿರ್ದೇಶಕ ಮತ್ತು ಪ್ಲೇಬ್ಯಾಕ್ ಗಾಯಕ [[ಎಂ. ಎಸ್. ಬಾಬುರಾಜ್]] ಘಝಲ್ ಮತ್ತು ಹಿಂದುಸ್ತಾನಿಯಿಂದ ಪ್ರಭಾವಿತರಾಗಿದ್ದರು.<ref>Ramin Raveendran (20 October 2013). [https://web.archive.org/web/20151222130004/http://www.newindianexpress.com/cities/thiruvananthapuram/Keeping-the-harmonium-close-to-his-heart/2013/10/20/article1844055.ece "Keeping the harmonium close to his heart"]. ''The New Indian Express''. Retrieved 4 September 2015.</ref>
ಕಲ್ಲಿಕೋಟೆಯ ಹೋಟೆಲ್ಗಳು, ಮಾಲ್ಗಳು, ಪಬ್ಗಳು ಮತ್ತು IT ಪಾರ್ಕ್ಗಳಲ್ಲಿ DJ ಪಾರ್ಟಿಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ. NITC ನಲ್ಲಿ ರಾಗಂ ಮತ್ತು ಧಾತ್ವಾ ಫೆಸ್ಟ್ ಮತ್ತು IIM ನಲ್ಲಿ ವಿಭಿನ್ನ ಉತ್ಸವಗಳು ಅಂತಾರಾಷ್ಟ್ರೀಯ ಬ್ಯಾಂಡ್ಗಳ ಭಾಗವಹಿಸುವಿಕೆಯನ್ನು ಪಡೆಯುತ್ತವೆ.<ref>{{cite web | url=https://unstop.com/festival/ragam-22-national-institute-of-technology-nit-calicut-23169 | title=Unstop – Competitions, Quizzes, Hackathons, Scholarships and Internships for Students and Corporates }}</ref><ref>{{cite web | url=https://unstop.com/festival/echoes21-indian-institute-of-management-iim-kozhikode-10112 | title=Unstop – Competitions, Quizzes, Hackathons, Scholarships and Internships for Students and Corporates }}</ref>
===ಪಾಕಪದ್ಧತಿ===
{{See also|S. M. Street}}
ಕಲ್ಲಿಕೋಟೆಯು ವಿವಿಧ ರೀತಿಯ [[ದಕ್ಷಿಣ ಭಾರತೀಯ ಪಾಕಪದ್ಧತಿ|ದಕ್ಷಿಣ ಭಾರತೀಯ]], [[ಉತ್ತರ ಭಾರತೀಯ ಪಾಕಪದ್ಧತಿ|ಉತ್ತರ ಭಾರತೀಯ]], [[ಯುರೋಪಿಯನ್ ಪಾಕಪದ್ಧತಿ|ಯುರೋಪಿಯನ್]], [[ಚೀನೀ ಪಾಕಪದ್ಧತಿ|ಚೀನೀ]], [[ಅರಬ್ ಪಾಕಪದ್ಧತಿ|ಅರಬ್]], ಗುಜರಾತಿ ಮತ್ತು ಜೈನ ಆಹಾರವನ್ನು ನೀಡುತ್ತದೆ. ನಗರದ ಪಾಕಶಾಲೆಯ ಸಂಸ್ಕೃತಿಯು ಪೋರ್ಚುಗೀಸ್, ಡಚ್, ಫ್ರೆಂಚ್, ಬ್ರಿಟಿಷ್, ಅರಬ್ ಮತ್ತು ಇತರ ಭಾರತೀಯ ಪ್ರಭಾವದಿಂದ ರೂಪುಗೊಂಡಿದೆ. ಇದು ಹೆಚ್ಚಿನ ವೈವಿಧ್ಯತೆಯಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ನೀಡುತ್ತದೆ. ನಗರದಲ್ಲಿ ಮಾಲ್ ಸಂಸ್ಕೃತಿಯು ವೇಗವನ್ನು ಪಡೆದುಕೊಂಡಿದೆ ಮತ್ತು ಫಾಸ್ಟ್ ಫುಡ್ಗಳು ಬಹಳ ಜನಪ್ರಿಯವಾಗಿವೆ. ಹೊಸ ಪೀಳಿಗೆಯು ಚೀನೀ, ಅರಬ್ ಮತ್ತು ಅಮೇರಿಕನ್ ಆಹಾರ ಸಂಸ್ಕೃತಿಗೆ ಹೆಚ್ಚು ಒಲವು ತೋರುತ್ತಿದೆ ಮತ್ತು ಆರೋಗ್ಯ ಕಾರಣಗಳಿಂದಾಗಿ ಸಸ್ಯಾಹಾರದ ಹೊಸ ಪ್ರವೃತ್ತಿಯು ಜನಪ್ರಿಯವಾಗುತ್ತಿದೆ.
ನಗರವು [[ಹಲ್ವಾ#ಭಾರತ|ಹಲುವಾ]]ಗೆ ಸಹ ಪ್ರಸಿದ್ಧವಾಗಿದೆ, ಇದನ್ನು ಯುರೋಪಿಯನ್ನರು ಸಿಹಿಯ ವಿನ್ಯಾಸದಿಂದಾಗಿ ''ಸ್ವೀಟ್ ಮೀಟ್'' ಎಂದು ಕರೆಯುತ್ತಿದ್ದರು. ಕಲ್ಲಿಕೋಟೆಯು ಪಟ್ಟಣದಲ್ಲಿ [[ಎಸ್. ಎಂ. ರಸ್ತೆ]] (''ಮಿಟ್ಟಾಯಿ ತೆರುವು'') ಎಂಬ ಮುಖ್ಯ ರಸ್ತೆಯನ್ನು ಹೊಂದಿದೆ. ಇದು ಈ ಹೆಸರನ್ನು ರಸ್ತೆಯಲ್ಲಿ ಹರಡಿದ್ದ ಹಲವಾರು ''ಹಲ್ವಾ'' ಅಂಗಡಿಗಳಿಂದ ಪಡೆದುಕೊಂಡಿದೆ. ಈ ರಸ್ತೆಯ ಇತಿಹಾಸವು [[ಕಲ್ಲಿಕೋಟೆಯ ಜಾಮೋರಿನ್]]ರ ಕಾಲಕ್ಕೆ ಸೇರಿದ್ದು, ಆಗ ಆಡಳಿತಗಾರನು [[ಗುಜರಾತಿ ಜನರು|ಗುಜರಾತಿ]] ಸಿಹಿ ತಯಾರಕರನ್ನು ನಗರದಲ್ಲಿ ಅಂಗಡಿ ಸ್ಥಾಪಿಸಲು ಆಹ್ವಾನಿಸಿದನು ಮತ್ತು ಅವರ ಅಂಗಡಿಗಳನ್ನು ಅರಮನೆಯ ಗೋಡೆಗಳ ಹೊರಗೆ ಇರಿಸಿದನು.<ref>{{cite news |title=Story of the streets|url=http://www.thehindu.com/features/metroplus/kozhikode-street-names/article6621905.ece|work=The Hindu}}</ref> ಮತ್ತೊಂದು ವಿಶೇಷವೆಂದರೆ [[ಬಾಳೆಹಣ್ಣಿನ ಚಿಪ್ಸ್#ಭಾರತ|ಬಾಳೆಹಣ್ಣಿನ ಚಿಪ್ಸ್]], ಇವುಗಳನ್ನು ಸ್ಪಷ್ಟ ಮತ್ತು ತೆಳುವಾಗಿ ಮಾಡಲಾಗುತ್ತದೆ. ಇತರ ಜನಪ್ರಿಯ ಭಕ್ಷ್ಯಗಳಲ್ಲಿ ಸಮುದ್ರಾಹಾರ ತಯಾರಿಕೆಗಳು (ಸೀಗಡಿ, ಮಸ್ಸೆಲ್ಸ್, ಕೊಳೆಚೆ) ಸೇರಿವೆ. ಸಸ್ಯಾಹಾರಿ ಭಕ್ಷ್ಯಗಳಲ್ಲಿ [[ಸಾಧ್ಯ]] ಸೇರಿದೆ.
===ಚಲನಚಿತ್ರಗಳು===
ಕಲ್ಲಿಕೋಟೆಯ ಚಲನಚಿತ್ರ ಇತಿಹಾಸವು 1950 ರ ದಶಕದ ಹಿಂದಿನದು. ಗೃಹಲಕ್ಷ್ಮಿ ಪ್ರೊಡಕ್ಷನ್ಸ್, ಕಲ್ಪಕ ಮತ್ತು ಸ್ವರ್ಗಚಿತ್ರದಂತಹ ಮಲಯಾಳಂ ಚಲನಚಿತ್ರಗಳ ಕೆಲವು ಪ್ರಮುಖ ನಿರ್ಮಾಣ ಕಂಪನಿಗಳು ಕಲ್ಲಿಕೋಟೆಯಲ್ಲಿ ನೆಲೆಗೊಂಡಿವೆ. [[ಐ. ವಿ. ಶಶಿ]] ಮತ್ತು [[ಟಿ. ದಾಮೋದರನ್]] ನಂತಹ ಪ್ರಮುಖ ಚಲನಚಿತ್ರ ನಿರ್ಮಾಪಕರ ಪ್ರಮುಖ ಕೇಂದ್ರವೂ ಈ ನಗರವಾಗಿತ್ತು. ಕಲ್ಲಿಕೋಟೆಯು [[ಕೆ. ಪಿ. ಉಮ್ಮರ್]], [[ಮಮ್ಮುಕೊಯ]], [[ಬಾಲನ್ ಕೆ. ನಾಯರ್]], [[ಶಾಂತಾ ದೇವಿ]] ಮತ್ತು [[ಕುತಿರವಟ್ಟಂ ಪಪ್ಪು]] ನಂತಹ ಗಮನಾರ್ಹ ನಟರನ್ನು ನಿರ್ಮಿಸಿತು. ಶಾಶ್ವತ ಸಂಗೀತಗಾರ [[ಬಾಬುರಾಜ್]], ಗೀತರಚನೆಕಾರ [[ಗಿರೀಶ್ ಪುತೆಂಚೇರಿ]], ಚಲನಚಿತ್ರ ನಿರ್ಮಾಪಕರು [[ರಂಜಿತ್ (ನಿರ್ದೇಶಕ)|ರಂಜಿತ್]], [[ವಿ. ಎಂ. ವಿನು]], [[ಎ. ವಿನ್ಸೆಂಟ್]], [[ಶಜೂನ್ ಕರಿಯಲ್]] ಮತ್ತು [[ಅಂಜಲಿ ಮೇನನ್]], ಮತ್ತು ಛಾಯಾಗ್ರಾಹಕ [[ಪಿ. ಎಸ್. ನಿವಾಸ್]] ಸಹ ಕಲ್ಲಿಕೋಟೆಯಿಂದ ಬಂದವರು. [[ನೆಲ್ಲಿಕೋಡ್ ಭಾಸ್ಕರನ್]], [[ಅಗಸ್ಟೀನ್]], [[ಮಧುಪಾಲ್]], [[ಅನೂಪ್ ಮೇನನ್]], [[ನೀರಜ್ ಮಾಧವ್]] ಮತ್ತು ವಿಜಯನ್ ಮಲಪರಂಬ ಇತರ ಕೆಲವು ಚಲನಚಿತ್ರ ನಟರು ಕಲ್ಲಿಕೋಟೆಯಿಂದ ಬಂದವರು.
1947 ರ [[ಡೌಗ್ಲಸ್ ಫೇರ್ಬ್ಯಾಂಕ್ಸ್ ಜೂನಿಯರ್]] ಹಾಲಿವುಡ್ ಥ್ರಿಲ್ಲರ್, ''[[ಸಿನ್ಬಾದ್ ದಿ ಸೈಲರ್ (1947 ಚಲನಚಿತ್ರ)|ಸಿನ್ಬಾದ್ ದಿ ಸೈಲರ್]]'', ಕಲ್ಲಿಕೋಟೆಯನ್ನು ಉಲ್ಲೇಖಿಸುತ್ತದೆ.
ಮಲಬಾರ್ ಪ್ರದೇಶದ ಅತಿದೊಡ್ಡ ನಗರವಾದ ಕಲ್ಲಿಕೋಟೆಯು ಮನರಂಜನಾ ವಿಭಾಗದಲ್ಲೂ ಪ್ರಮುಖ ಪಾತ್ರ ವಹಿಸಿದೆ. ನಗರದ ಮೊದಲ ಥಿಯೇಟರ್, ಕಲ್ಲಿಕೋಟೆ ಕ್ರೌನ್, 1925 ರಷ್ಟು ಹಿಂದೆಯೇ ತೆರೆಯಲ್ಪಟ್ಟಿತು. ನಗರವು 10 ಕ್ಕೂ ಹೆಚ್ಚು ಥಿಯೇಟರ್ಗಳು ಮತ್ತು ಎರಡು ಮಲ್ಟಿಪ್ಲೆಕ್ಸ್ಗಳನ್ನು ಹೊಂದಿದೆ, PVS ಫಿಲ್ಮ್ ಸಿಟಿ (ಮಲಬಾರ್ ಪ್ರದೇಶದ ಮೊದಲ ಮಲ್ಟಿಪ್ಲೆಕ್ಸ್) ಮತ್ತು ಕ್ರೌನ್ ಥಿಯೇಟರ್.<ref>{{cite web|url=http://www.pvsfilmcity.in/events.php |title=PVS film city |publisher=Pvsfilmcity.in |access-date=21 March 2013}}</ref>
===ಕ್ರೀಡೆಗಳು===
[[File:Kozhikode EMS Stadium.jpg|thumbnail|[[EMS ಸ್ಟೇಡಿಯಂ]]]]
ಕಲ್ಲಿಕೋಟೆಯನ್ನು ([[ಕೊಲ್ಕತ್ತಾ]] ನಂತರ) ಎರಡನೇ ಮಕ್ಕಾ [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ಎಂದು ಕರೆಯಲಾಗುತ್ತದೆ.<ref>{{cite web|url=http://kozhikode.com/importance.htm|title=football in Calicut}}</ref> ಕಲ್ಲಿಕೋಟೆಯಲ್ಲಿ ಇತರ ಅತ್ಯಂತ ಜನಪ್ರಿಯ ಆಟಗಳೆಂದರೆ [[ಕ್ರಿಕೆಟ್]],<ref name="Sports and Games">{{cite web
|title=Games in Kerala
|publisher=Information and Public relations office of Kerala
|url=http://www.prd.kerala.gov.in/sportsmain.htm
|quote=Football and Cricket – the Most Popular Games
|access-date=12 June 2006
|archive-url=https://web.archive.org/web/20060428081830/http://www.prd.kerala.gov.in/sportsmain.htm
|archive-date=28 April 2006
|url-status=dead
}}</ref> ಫುಟ್ಬಾಲ್, ಬ್ಯಾಸ್ಕೆಟ್ಬಾಲ್, ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್. [[ನಗರಸಭಾ ನಿಗಮ ಸ್ಟೇಡಿಯಂ, ಕಲ್ಲಿಕೋಟೆ|EMS ಸ್ಟೇಡಿಯಂ]] ಹಿಂದೆ ಪ್ರಮುಖ ಫುಟ್ಬಾಲ್ ತಂಡಗಳ ಅನೇಕ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಿತ್ತು. ನಗರವು ಅನೇಕ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರರಿಗೆ ನೆಲೆಯಾಗಿದೆ. ಪ್ರಸಿದ್ಧರಲ್ಲಿ ಒಬ್ಬರು [[ಟಿ. ಅಬ್ದುಲ್ ರಹಮಾನ್|ಒಲಿಂಪಿಯನ್ ಅಬ್ದುರಹ್ಮಾನ್]], ಅವರು ಮೆಲ್ಬೋರ್ನ್ ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶಕ್ಕಾಗಿ ಆಡಿದರು. ಕೆ.ಪಿ. ಸೇತು ಮಾಧವನ್, ಪ್ರೇಮ್ನಾಥ್ ಫಿಲಿಪ್ಸ್, ಮುಹಮದ್ ನಜೀಬ್, ಎಂ ಪ್ರಸನ್ನನ್, ಸುಧೀರ್ ಇತ್ಯಾದಿ ಕಲ್ಲಿಕೋಟೆಯ ಕೆಲವು ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರರು. [[ಕೇರಳದಲ್ಲಿ ಸೆವೆನ್ಸ್ ಫುಟ್ಬಾಲ್|ಏಳು-ಆಟಗಾರರ ಫುಟ್ಬಾಲ್]] ರೂಪವೂ ನಗರದಲ್ಲಿ ಬಹಳ ಪ್ರಸಿದ್ಧವಾಗಿದೆ.
[[ಪಿ. ಟಿ. ಉಷಾ]], ಭಾರತವು ಎಂದಾದರೂ ನಿರ್ಮಿಸಿದ ಅತ್ಯುತ್ತಮ ಕ್ರೀಡಾಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಮತ್ತು ಸಾಮಾನ್ಯವಾಗಿ "ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ನ ರಾಣಿ" ಎಂದು ಕರೆಯಲ್ಪಡುವ ಪ್ರಸಿದ್ಧ ಕ್ರೀಡಾಪಟು. ಅವರನ್ನು [[ಪಾಯ್ಯೋಳಿ]] ಎಕ್ಸ್ಪ್ರೆಸ್ ಎಂದು ಅಡ್ಡಹೆಸರಿಸಲಾಗಿದೆ. ಪ್ರಸ್ತುತ ಅವರು ಕೇರಳದ ಕೊಯಿಲಾಂಡಿಯಲ್ಲಿ [[ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್]] ಅನ್ನು ನಡೆಸುತ್ತಾರೆ.
[[ಟಿ. ಅಬ್ದುಲ್ ರಹಮಾನ್]], ಒಲಿಂಪಿಯನ್ ರಹಮಾನ್ ಎಂದು ಜನಪ್ರಿಯವಾಗಿ ಕರೆಯಲ್ಪಡುವವರು, ಕಲ್ಲಿಕೋಟೆಯ ಭಾರತೀಯ ಒಲಿಂಪಿಯನ್ ಫುಟ್ಬಾಲ್ ಆಟಗಾರರಾಗಿದ್ದರು. ರಹಮಾನ್ 1956 ಮೆಲ್ಬೋರ್ನ್ ಒಲಿಂಪಿಕ್ಸ್ನಲ್ಲಿ ಸೆಮಿ-ಫೈನಲ್ ತಲುಪಿದ ಭಾರತೀಯ ತಂಡದ ಸದಸ್ಯರಾಗಿದ್ದರು.
ಇತರ ಕ್ರೀಡಾ ವ್ಯಕ್ತಿಗಳಲ್ಲಿ ಜಿಮ್ಮಿ ಜಾರ್ಜ್, ಟಾಮ್ ಜೋಸೆಫ್ (ಭಾರತೀಯ ವಾಲಿಬಾಲ್ ಆಟಗಾರ ಮತ್ತು ಭಾರತೀಯ ವಾಲಿಬಾಲ್ ತಂಡದ ನಾಯಕ) ಮತ್ತು ಪ್ರೇಮ್ನಾಥ್ ಫಿಲಿಪ್ಸ್ ಸೇರಿದ್ದಾರೆ.
[[ಜಸೀಲ್ ಪಿ. ಇಸ್ಮಾಯಿಲ್]], [[ವಾಲಿಯವೀಟಿಲ್ ದಿಜು|ವಿ. ದಿಜು]], [[ಅಪರ್ಣ ಬಾಲನ್]] ಮತ್ತು [[ಅರುಣ್ ವಿಷ್ಣು]] ನಗರದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರರು.
ಸ್ಪೋರ್ಟ್ಸ್ & ಎಜುಕೇಷನ್ ಪ್ರಮೋಷನ್ ಟ್ರಸ್ಟ್ (SEPT) ಅನ್ನು ಭಾರತದಲ್ಲಿ ಕ್ರೀಡಾ ಅಭಿವೃದ್ಧಿಯನ್ನು ಉತ್ತೇಜಿಸಲು ಸ್ಥಾಪಿಸಲಾಯಿತು, ಇದರಲ್ಲಿ ಫುಟ್ಬಾಲ್ನತ್ತ ಗಮನಹರಿಸಲಾಗಿದೆ. 2004 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಕಲ್ಲಿಕೋಟೆಯಲ್ಲಿ ನೆಲೆಗೊಂಡಿದೆ, ಟ್ರಸ್ಟ್ ಕೇರಳದ ಹದಿಮೂರು ಜಿಲ್ಲೆಗಳಲ್ಲಿ ಹರಡಿರುವ "ಫುಟ್ಬಾಲ್ ನರ್ಸರಿಗಳು" ಎಂದು ಕರೆಯಲ್ಪಡುವ 52 ಕೇಂದ್ರಗಳನ್ನು ಸ್ಥಾಪಿಸಿದೆ.<ref>{{cite web|url=http://www.sept.in/|title=SEPT Calicut}}</ref> 2010 ರಿಂದ, [[ಕಲ್ಲಿಕೋಟೆ ಮಿನಿ ಮ್ಯಾರಥಾನ್]] ಓಟಗಳನ್ನು IIM ಕೋಝಿಕ್ಕೋಡ್ ಆಯೋಜಿಸುತ್ತದೆ ಮತ್ತು ಪ್ರತಿ ವರ್ಷವೂ ಸುಮಾರು 7000 ಜನರ ಭಾಗವಹಿಸುವಿಕೆಗೆ ಸಾಕ್ಷಿಯಾಗುತ್ತದೆ.
===ರೇಡಿಯೋ===
[[ಆಲ್ ಇಂಡಿಯಾ ರೇಡಿಯೋ]]ದ ಕಲ್ಲಿಕೋಟೆ ರೇಡಿಯೋ ಕೇಂದ್ರವು ಎರಡು ಟ್ರಾನ್ಸ್ಮಿಟರ್ಗಳನ್ನು ಹೊಂದಿದೆ: ಕಲ್ಲಿಕೋಟೆ AM (100 ಕಿಲೋವ್ಯಾಟ್) ಮತ್ತು ಕಲ್ಲಿಕೋಟೆ FM [ವಿವಿಧ್ ಭಾರತಿ] (10 ಕಿಲೋವ್ಯಾಟ್). ಖಾಸಗಿ FM ರೇಡಿಯೋ ಕೇಂದ್ರಗಳು: ಮಲಯಾಳ ಮನೋರಮ ಕಂಪನಿ ಲಿಮಿಟೆಡ್ ನಿರ್ವಹಿಸುವ [[ರೇಡಿಯೋ ಮ್ಯಾಂಗೊ 91.9]] ಮತ್ತು SUN ನೆಟ್ವರ್ಕ್ನ [[ರೆಡ್ FM (ಭಾರತ)|ರೆಡ್ FM 93.5]]. AIR FM ರೇಡಿಯೋ ಕೇಂದ್ರ: ಕಲ್ಲಿಕೋಟೆ – 103.6 MHz; AIR MW ರೇಡಿಯೋ ಕೇಂದ್ರ: ಕಲ್ಲಿಕೋಟೆ – 684 kHz.
===ದೂರದರ್ಶನ===
[[File:MediaOne TV Headquarters And Studio.jpg|thumbnail|ವೆಳ್ಳಿಪರಂಬ, ಕಲ್ಲಿಕೋಟೆಯಲ್ಲಿರುವ [[ಮೀಡಿಯಾ ವನ್ ಟಿವಿ]]ಯ ಪ್ರಧಾನ ಕಚೇರಿ ಮತ್ತು ಸ್ಟುಡಿಯೋ]]
ದೂರದರ್ಶನ ಟ್ರಾನ್ಸ್ಮಿಟರ್ 3 ಜುಲೈ 1984 ರಿಂದ ಕಲ್ಲಿಕೋಟೆಯಲ್ಲಿ ಕಾರ್ಯನಿರ್ವಹಿಸುತ್ತಿದೆ, ಇದು ದೆಹಲಿ ಮತ್ತು [[ತಿರುವನಂತಪುರಂ]] [[ದೂರದರ್ಶನ]]ದಿಂದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ದೂರದರ್ಶನವು ಮೆಡಿಕಲ್ ಕಾಲೇಜಿನಲ್ಲಿರುವ ಕಲ್ಲಿಕೋಟೆಯಲ್ಲಿ ತನ್ನ ಪ್ರಸಾರ ಕೇಂದ್ರವನ್ನು ಹೊಂದಿದೆ. ಕಲ್ಲಿಕೋಟೆಯನ್ನು ಆಧರಿಸಿದ ಮಲಯಾಳಂ ಚಾನೆಲ್ಗಳು [[ಶಾಲೋಮ್ (ಟಿವಿ ಚಾನೆಲ್)|ಶಾಲೋಮ್ ಟೆಲಿವಿಷನ್]], ದರ್ಶನ ಟಿವಿ ಮತ್ತು [[ಮೀಡಿಯಾ ವನ್ ಟಿವಿ]]. ಮಲಯಾಳಂನಲ್ಲಿನ ಎಲ್ಲಾ ಪ್ರಮುಖ ಚಾನೆಲ್ಗಳು viz. [[ಮನೋರಮ ನ್ಯೂಸ್]], [[ಏಷ್ಯಾನೆಟ್ (ಟಿವಿ ಚಾನೆಲ್)|ಏಷ್ಯಾನೆಟ್]], [[ಸೂರ್ಯ ಟಿವಿ]], [[ಕೈರಳಿ ಟಿವಿ]], [[ಅಮೃತ ಟಿವಿ]], [[ಜೀವನ್ ಟಿವಿ]], [[ಇಂಡಿಯಾವಿಷನ್]] ಮತ್ತು [[ಜೈಹಿಂದ್]] ತಮ್ಮ ಸ್ಟುಡಿಯೋಗಳು ಮತ್ತು ನ್ಯೂಸ್ ಬ್ಯೂರೋಗಳನ್ನು ನಗರದಲ್ಲಿ ಹೊಂದಿವೆ. ಉಪಗ್ರಹ ದೂರದರ್ಶನ ಸೇವೆಗಳು [[DD ಡೈರೆಕ್ಟ್+]], [[ಡಿಶ್ ಟಿವಿ]], [[ಸನ್ ಡೈರೆಕ್ಟ್ DTH]] ಮತ್ತು [[ಟಾಟಾ ಸ್ಕೈ]] ಮೂಲಕ ಲಭ್ಯವಿವೆ. ಏಷ್ಯಾನೆಟ್ ಕೇಬಲ್ ವಿಷನ್ ಜನಪ್ರಿಯವಾಗಿ ACV ಎಂದು ಕರೆಯಲ್ಪಡುತ್ತದೆ, ಇದು ದೈನಂದಿನ ನಗರ ಸುದ್ದಿಗಳನ್ನು ಪ್ರಸಾರ ಮಾಡುತ್ತದೆ. ಸ್ಪೈಡರ್ನೆಟ್ ಮತ್ತೊಂದು ಸ್ಥಳೀಯ ಚಾನೆಲ್. ಇತರ ಸ್ಥಳೀಯ ನಿರ್ವಾಹಕರಲ್ಲಿ KCL ಮತ್ತು ಸಿಟಿನೆಟ್ ಸೇರಿವೆ.
ಕಲ್ಲಿಕೋಟೆ ಪ್ರೆಸ್ ಕ್ಲಬ್ 1970 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು ಎಲ್ಲಾ ಮಾಧ್ಯಮ ಚಟುವಟಿಕೆಗಳ ಕೇಂದ್ರವಾಗಿದೆ, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಎರಡೂ. ಸುಮಾರು 70 ಸದಸ್ಯರೊಂದಿಗೆ ಪ್ರಾರಂಭವಾದ ಈ ಪ್ರೆಸ್ ಕ್ಲಬ್, ವರ್ಷಗಳಲ್ಲಿ, ರಾಜ್ಯದ ಪ್ರತಿಷ್ಠಿತ ಮತ್ತು ಜಾಗರೂಕ ಮಾಧ್ಯಮ ಕೇಂದ್ರವಾಯಿತು, ಪ್ರಸ್ತುತ 280 ಕ್ಕೂ ಹೆಚ್ಚಿನ ಸದಸ್ಯತ್ವವನ್ನು ಹೊಂದಿದೆ.<ref name="calicut press club">{{cite web|url=http://www.calicutpressclub.com/aboutus.htm|title=Calicut press club|url-status=dead|archive-url=https://web.archive.org/web/20030623175252/http://www.calicutpressclub.com/aboutus.htm|archive-date=23 June 2003}}</ref>
==ಸಾರಿಗೆ==
===ವಾಯು===
[[File:Flights Parked at Calicut Airport.jpg|thumb|[[ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಕಲ್ಲಿಕೋಟೆ ವಿಮಾನ ನಿಲ್ದಾಣ]]ದಲ್ಲಿ ನಿಂತಿರುವ ವಿಮಾನಗಳು]]
ಕಲ್ಲಿಕೋಟೆಯು [[ಮಲಪ್ಪುರಂ ಜಿಲ್ಲೆ]]ಯ [[ಕರಿಪುರ]]ದಲ್ಲಿರುವ [[ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ದಿಂದ ಸೇವೆ ಸಲ್ಲಿಸುತ್ತದೆ {{Airport codes|CCJ|VOCL}}, ಇದು ಕಲ್ಲಿಕೋಟೆ ನಗರದಿಂದ ಸುಮಾರು {{convert|28|km|0|abbr=off}} ದೂರದಲ್ಲಿದೆ. ವಿಮಾನ ನಿಲ್ದಾಣವು ಏಪ್ರಿಲ್ 1988 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಎರಡು ಟರ್ಮಿನಲ್ಗಳನ್ನು ಹೊಂದಿದೆ, ಒಂದು ದೇಶೀಯ ವಿಮಾನಗಳಿಗೆ ಮತ್ತು ಎರಡನೆಯದು ಅಂತಾರಾಷ್ಟ್ರೀಯ ವಿಮಾನಗಳಿಗೆ.<ref>{{Cite news|url=https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms|title=Silver jubilee does not bring cheer to Karipur airport users | Kozhikode News – Times of India|website=The Times of India|date=2 April 2012 |access-date=15 February 2020}}</ref>
===ರಸ್ತೆ===
ಕಲ್ಲಿಕೋಟೆಯು ರಸ್ತೆಯ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. NH 66 ಮತ್ತು NH 766 ಕಲ್ಲಿಕೋಟೆಯನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.<ref>{{cite web |url=https://www.drishtiias.com/daily-updates/daily-news-analysis/national-highway-766 |title = National Highway-766 – Drishti IAS}}</ref><ref>{{cite web |url=https://www.aspireias.com/daily-news-analysis-current-affairs/NH-66-to-be-redeveloped-as-an-economic-corridor |title = NH 66 to be redeveloped as an economic corridor – AspireIAS}}</ref> ಇದು ಕೇರಳ, ಕರ್ನಾಟಕ, ತಮಿಳುನಾಡಿನ ಎಲ್ಲಾ ಭಾಗಗಳಿಗೆ ಮತ್ತು [[ಹೈದರಾಬಾದ್]] ಮತ್ತು [[ಮುಂಬೈ]] ನಂತಹ ಪ್ರಮುಖ ನಗರಗಳಿಗೆ ಬಸ್ ಸೇವೆಗಳನ್ನು ಹೊಂದಿದೆ.{{citation needed|date=December 2020}}. ಕಲ್ಲಿಕೋಟೆಯಿಂದ ಬೆಂಗಳೂರಿಗೆ ಹೊಸ ರಾಷ್ಟ್ರೀಯ ಹೆದ್ದಾರಿಯನ್ನು ಯೋಜಿಸಲಾಗಿದೆ.<ref>{{cite news | url=https://timesofindia.indiatimes.com/city/mysuru/nhai-starts-dpr-for-new-mysuru-kerala-nh-project/articleshow/89812643.cms | title=NHAI starts DPR for new Mysuru-Kerala NH project | newspaper=The Times of India | date=25 February 2022 }}</ref>
==ಗಮನಾರ್ಹ ವ್ಯಕ್ತಿಗಳು==
{{Main|List of people from Kozhikode}}
{{columns-list|colwidth=22em|
;ಸಾಹಿತ್ಯ
* [[ಎಸ್. ಕೆ. ಪೊಟ್ಟೆಕ್ಕಾಟ್]]
* [[ಎಂ. ಟಿ. ವಾಸುದೇವನ್ ನಾಯರ್]]
* [[ಥಿಕ್ಕೋಡಿಯನ್]]
* [[ಎನ್. ಪಿ. ಮೊಹಮ್ಮದ್]]
* [[ಪುನತ್ತಿಲ್ ಕುಂಜಬ್ದುಲ್ಲಾ]]
* [[ಯು. ಎ. ಖಾದರ್]]
* [[ಅಕ್ಬರ್ ಕಕ್ಕಟ್ಟಿಲ್]]
* [[ಎನ್. ಎನ್. ಕಕ್ಕಾಡ್]]
* [[ಪಿ. ವಲ್ಸಲ]]
* [[ಎನ್. ಪಿ. ಹಫೀಜ್ ಮೊಹಮದ್]]
* [[ಎಂ. ಎನ್. ಕರಸ್ಸೇರಿ]]
;ರಾಜಕೀಯ
* [[ವಿ. ಕೆ. ಕೃಷ್ಣ ಮೇನನ್]]
* [[ಜಾನ್ ಮತ್ತಾಯಿ]]
* [[ಕೆ. ಪಿ. ಉಣ್ಣಿಕೃಷ್ಣನ್]]
;ಉದ್ಯಮ
* [[ವರ್ಘೀಸ್ ಕುರಿಯನ್]]
;ಸಂಗೀತ
* [[ಎಂ. ಎಸ್. ಬಾಬುರಾಜ್]]
* [[ಗಿರೀಶ್ ಪುತೆಂಚೇರಿ]]
;ಚಲನಚಿತ್ರ
* [[ಸುರಭಿ ಲಕ್ಷ್ಮಿ]]
* [[ಐ. ವಿ. ಶಶಿ]]
* [[ಟಿ. ದಾಮೋದರನ್]]
* [[ಉಮ್ಮರ್]]
* [[ಮಮ್ಮುಕೊಯ]]
* [[ಬಾಲನ್ ಕೆ. ನಾಯರ್]]
* [[ಶಾಂತಾ ದೇವಿ]]
* [[ಪಾರ್ವತಿ ತಿರುವೊತ್ತು]]
* [[ಕುತಿರವಟ್ಟಂ ಪಪ್ಪು]]
* [[ರಂಜಿತ್ (ನಿರ್ದೇಶಕ)|ರಂಜಿತ್]]
* [[ವಿ. ಎಂ. ವಿನು]]
* [[ಎ. ವಿನ್ಸೆಂಟ್]]
* [[ಶಜೂನ್ ಕರಿಯಲ್]]
* [[ಅಂಜಲಿ ಮೇನನ್]]
* [[ಪಿ. ಎಸ್. ನಿವಾಸ್]]
* [[ನೀರಜ್ ಮಾಧವ್]]
* [[ಮಧುಪಾಲ್]]
* [[ಅನೂಪ್ ಮೇನನ್]]
* [[ನೆಲ್ಲಿಕೋಡ್ ಭಾಸ್ಕರನ್]]
* [[ಅಗಸ್ಟೀನ್]]
;ಕ್ರೀಡೆ
* [[ಟಿ. ಅಬ್ದುಲ್ ರಹಮಾನ್]]
* [[ಪಿ. ಟಿ. ಉಷಾ]]
* [[ಜಸೀಲ್ ಪಿ. ಇಸ್ಮಾಯಿಲ್]]
* [[ವಾಲಿಯವೀಟಿಲ್ ದಿಜು|ವಿ. ದಿಜು]]
* [[ಅಪರ್ಣ ಬಾಲನ್]]
* [[ಅರುಣ್ ವಿಷ್ಣು]]
* [[ಟಾಮ್ ಜೋಸೆಫ್]]
* [[ರಾಯ್ ಜೋಸೆಫ್]]
* [[ಮಯೂಖ ಜಾನಿ]]
* [[ಪ್ರಶಾಂತ್ ಕರುತದತ್ಕುನಿ]]
* [[ಜಿನ್ಸನ್ ಜಾನ್ಸನ್]]
* [[ಕಿಶೋರ್ ಕುಮಾರ್]]
* [[ರೆಹೆನೇಶ್ TP]]
* [[ಮುಹಮ್ಮದ್ ನೆಮಿಲ್]]
* [[ಗನಿ ನಿಗಮ್]]
* [[ಲಿಯೋನ್ ಅಗಸ್ಟೀನ್]]
;ಇತರರು
*[[ಅಲಿ ಮಣಿಕ್ಫಾನ್]]
*[[ಎಂ. ಪಿ. ಅಹಮ್ಮದ್]]
}}
==ಇವನ್ನೂ ನೋಡಿ==
* [[ಕೋಝಿಕ್ಕೋಡ್]] (ನಗರ)
* [[ಮಲಬಾರ್ ಜಿಲ್ಲೆ|ಮಲಬಾರ್]]
* [[ಜಾಮೋರಿನ್]]
* [[ವಾಸ್ಕೋ ಡ ಗಾಮಾ]]
==ಉಲ್ಲೇಖಗಳು==
{{Reflist}}
{{refbegin}}
* {{Cite book|title=Mathrubhumi Yearbook Plus – 2019|publisher=P. V. Chandran, Managing Editor, Mathrubhumi Printing & Publishing Company Limited, Kozhikode|year=2018|location=Kozhikode|last=Chandran |first=VP|edition=Malayalam}}
{{refend}}
==ಹೆಚ್ಚಿನ ಓದಿಗೆ==
* {{Citation
| author = Government of Madras | year=1953
| title= 1951 Census Handbook- Malabar District | publisher=Madras Government Press
| url= http://lsi.gov.in:8081/jspui/bitstream/123456789/6425/1/20493_1951_MAL.pdf
}}
* {{Citation
| author = M. K. Devassy | year=1965
| title= 1961 Census Handbook- Kozhikode District | publisher=Directorate of Census Operations, Kerala and The Union Territory of Laccadive, Minicoy, and Amindivi Islands
| url= http://lsi.gov.in:8081/jspui/bitstream/123456789/5665/1/22059_1961_KOZ.pdf
}}
* {{Citation
| author = Government of India | year=2014–15
| title= District Census Handbook – Kozhikode (Part-A) 2011 | publisher=Directorate of Census Operations, Kerala
| url= https://censusindia.gov.in/2011census/dchb/3204_PART_A_KOZHIKODE.pdf
}}
* {{Citation
| author = Government of India | year=2014–15
| title= District Census Handbook – Kozhikode (Part-B) 2011 | publisher=Directorate of Census Operations, Kerala
| url= https://censusindia.gov.in/2011census/dchb/3204_PART_B_KOZHIKODE.pdf
}}
{{Commons category|Kozhikode district}}
== ಬಾಹ್ಯ ಕೊಂಡಿಗಳು ==
* {{commons-inline}}
* {{Wikivoyage inline|Kozhikode District}}
* [https://kozhikode.nic.in/ ಕಲ್ಲಿಕೋಟೆ ಜಿಲ್ಲೆಯ ಅಧಿಕೃತ ವೆಬ್ಸೈಟ್]
{{Geographic Location
| Centre = ಕಲ್ಲಿಕೋಟೆ ಜಿಲ್ಲೆ
| North =
| Northeast = [[ವಯನಾಡ್ ಜಿಲ್ಲೆ]]
| East =
| Southeast = [[ಮಲಪ್ಪುರಂ ಜಿಲ್ಲೆ]]
| South =
| Southwest =
| West = ''[[ಲಕ್ಷದ್ವೀಪ ಸಮುದ್ರ]]''
| Northwest = [[ಕಣ್ಣೂರು ಜಿಲ್ಲೆ]]
}}
{{Kerala}}
{{Authority control}}
{{DEFAULTSORT:Kozhikode District}}
[[Category:Kozhikode district| ]]
[[Category:Districts of Kerala]]
g3096rxkuzjqkd4vnicsa2vhf2ev8kn
ಮಲಪ್ಪುರಂ ಜಿಲ್ಲೆ
0
149636
1379559
1379313
2026-08-09T04:14:00Z
Pragathi. BH
88266
1379559
wikitext
text/x-wiki
{{databox}}
{{Infobox settlement
| name = ಮಲಪ್ಪುರಂ ಜಿಲ್ಲೆ
| other_name =
| settlement_type = [[ಕೇರಳದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| image_skyline = {{Photomontage
| photo1a = Manjeri Town Calicut Road View.jpg
| photo2a = Near Cherumb eco village.jpg
| photo2b = Kerala Houseboat (191490747).jpeg
| photo3a = Kadalundi Bridge - A border of Malappuram and Kozhikode.jpg
| photo3b = Nilambur teak forest 3740.JPG
| photo4a = Chamravattam bridge kerala.jpg
| spacing = 1
| color_border = black
| color = white
| size = 210
| foot_montage = '''ಮೇಲಿನಿಂದ ಪ್ರದಕ್ಷಿಣಾಕಾರವಾಗಿ:'''<br/>[[ಮಂಜೇರಿ]] ಪಟ್ಟಣ, [[ಪೊನ್ನಾನಿ]]ಯಲ್ಲಿ ಬಿಯ್ಯಾಂ ಬ್ಯಾಕ್ವಾಟರ್ ಸರೋವರ, [[ನಿಲಂಬೂರ್]]ನಲ್ಲಿ ಕೊನೊಲಿಯ ಪ್ಲಾಟ್, [[ಚಮ್ರವಟ್ಟೊಂ ನಿಯಂತ್ರಕ-ಸೇತುವೆ]], [[ವಲ್ಲಿಕುಣ್ಣು]]ನಲ್ಲಿ [[ಕಡಲುಂಡಿ ನದಿ]] ಮುಖಜಭೂಮಿ, [[ಕರುವರಕುಂಡು]]
}}
| nickname =
| image_map = India Kerala Malappuram district.svg
| mapframe = yes
| mapframe-point = none
| map_caption = '''[[ಕೇರಳ]]ದಲ್ಲಿ ಸ್ಥಳ'''
| pushpin_map =
| pushpin_map_alt =
| pushpin_map_caption =
| coordinates = {{coord|11.03|N|76.05|E|region:IN-KL_type:adm3rd|display=inline,title}}
| subdivision_type = ದೇಶ
| subdivision_name = {{flag|India}}
| subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| subdivision_name1 = {{seal|Kerala}}
| established_title = ಜಿಲ್ಲಾ ರಚನೆ
| subdivision_type2 =
| subdivision_name2 =
| established_date = {{start date and age|df=yes|1969|06|16}}
| seat_type = ಪ್ರಧಾನ ಕಚೇರಿ
| seat = [[ಮಲಪ್ಪುರಂ]]
| founder = [[ಕೇರಳ ಸರ್ಕಾರ]]
| parts_type = [[ಆದಾಯ ವಿಭಾಗ|ಉಪ-ವಿಭಾಗಗಳು]]
| parts_style = para
| p1 = {{collapsible list|title=ತಾಲೂಕುಗಳು (7)|
*[[ಇರನಾಡ್ ತಾಲೂಕು|ಇರನಾಡ್
(ಮಂಜೇರಿ)]]
*[[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
*[[ನಿಲಂಬೂರ್#ನಿಲಂಬೂರ್ ತಾಲೂಕು|ನಿಲಂಬೂರ್]]
*[[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
*[[ಪೊನ್ನಾನಿ ತಾಲೂಕು|ಪೊನ್ನಾನಿ]]
*[[ತಿರೂರ್ ತಾಲೂಕು|ತಿರೂರ್]]
*[[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]|}}
| government_type = ಜಿಲ್ಲಾ ಆಡಳಿತ
| governing_body =
| leader_title = ಜಿಲ್ಲಾ ಉಸ್ತುವಾರಿ ಸಚಿವ
| leader_name = [[ಪಿ. ಕೆ. ಬಷೀರ್]]
| leader_title1 = [[ಜಿಲ್ಲಾ ಕಲೆಕ್ಟರ್]]
| leader_name1 = ಡಾ. ವಿನಯ್ ಗೋಯಲ್ IAS
| unit_pref = ಮೆಟ್ರಿಕ್
| area_footnotes =
| area_total_km2 = 3,554
| area_rank = [[ಕೇರಳದ ಜಿಲ್ಲೆಗಳ ಪಟ್ಟಿ|3ನೇ]]
| elevation_footnotes =
| elevation_m =
| elevation_max_m = 2594
| elevation_max_point = <!-- ಮಾಪನ ಬಿಂದುವನ್ನು ಸೂಚಿಸಲು --> [[ಮುಕುರ್ತಿ]]
| elevation_min_m =
| elevation_min_point = <!-- ಮಾಪನ ಬಿಂದುವನ್ನು ಸೂಚಿಸಲು -->
| population_total = 4,494,998<ref name="mlpdemo_2018">{{Cite book|title=ವಾರ್ಷಿಕ ಪ್ರಾಣಾಂಕ ಅಂಕಿಅಂಶಗಳ ವರದಿ - 2018|publisher=Department of Economics and Statistics, Government of Kerala|year=2020|location=Thiruvananthapuram|pages=55|url=http://www.ecostat.kerala.gov.in/images/pdf/publications/Vital_Statistics/data/vital_statistics_2018.pdf|access-date=29 October 2020|archive-date=27 November 2020|archive-url=https://web.archive.org/web/20201127040140/http://www.ecostat.kerala.gov.in/images/pdf/publications/Vital_Statistics/data/vital_statistics_2018.pdf|url-status=live}}</ref>
| population_as_of = 2018
| population_footnotes =
| population_density_km2 = 1265
| population_rank = [[ಕೇರಳದ ಜಿಲ್ಲೆಗಳ ಪಟ್ಟಿ|1ನೇ]]
| population_demonym =
| population_urban = 44.18%<ref name="CensusMalappuram"/>
| population_metro = 1729522<ref name="CensusMalappuram"/>
| demographics_type1 = ಜನಸಂಖ್ಯಾ ವಿವರಗಳು
| demographics1_title1 = {{nobold|[[ಲಿಂಗಾನುಪಾತ]] (2011)}}
| demographics1_info1 = 1098 [[ಸ್ತ್ರೀ|♀]]/1000[[ಪುರುಷ|♂]]<ref name="CensusMalappuram"/>
| leader_name2 = ಚೈತ್ರಾ ಥೆರೆಸಾ ಜಾನ್ IPS
| leader_title2 = [[ಭಾರತದಲ್ಲಿ ಪೊಲೀಸ್ ಅಧೀಕ್ಷಕ|ಜಿಲ್ಲಾ ಪೊಲೀಸ್ ಮುಖ್ಯಸ್ಥ]]
| demographics1_title2 = {{nobold|[[ಭಾರತದಲ್ಲಿ ಸಾಕ್ಷರತೆ|ಸಾಕ್ಷರತೆ]] (2011)}}
| demographics1_info2 = 93.57%<ref name="CensusMalappuram"/>
| timezone1 = [[ಭಾರತೀಯ ಪ್ರಮಾಣಿತ ಸಮಯ|IST]]
| utc_offset1 = +5:30
| postal_code_type = <!-- [[ಭಾರತೀಯ ಅಂಚೆ ಸೂಚ್ಯಂಕ ಸಂಖ್ಯೆ|PIN]] -->
| postal_code =
| iso_code = {{nobold|[[ISO 3166-2:IN|IN-KL]]}}
| registration_plate = '''KL-10''' [[ಮಲಪ್ಪುರಂ]], <br/> '''KL-53''' [[ಪೆರಿಂತಲ್ಮನ್ನ]], <br/> '''KL-54''' [[ಪೊನ್ನಾನಿ]], <br/> '''KL-55''' [[ತಿರೂರ್]],<br/> '''KL-65''' [[ತಿರೂರಂಗಡಿ]], <br/> '''KL-71''' [[ನಿಲಂಬೂರ್]], <br/> '''KL-84''' [[ಕೊಂಡೊಟ್ಟಿ]]
| website = {{URL|malappuram.nic.in}}
| footnotes =
| blank_info_sec1 = {{nowrap|{{increase}} 0.749<ref name="unhdi-gdl">{{Cite web|url=https://niti.gov.in/planningcommission.gov.in/docs/plans/stateplan/sdr_pdf/shdr_kerala05.pdf|title=ಕೇರಳ | UNDP ಭಾರತದಲ್ಲಿ|website=niti.gov.in|access-date=25 May 2021|archive-date=25 May 2021|archive-url=https://web.archive.org/web/20210525135510/https://niti.gov.in/planningcommission.gov.in/docs/plans/stateplan/sdr_pdf/shdr_kerala05.pdf|url-status=live}}</ref> ({{color|Green| ಉನ್ನತ}})}} ·
| blank_name_sec1 = [[ಮಾನವ ಅಭಿವೃದ್ಧಿ ಸೂಚ್ಯಂಕ|HDI]] {{nobold|(2005)}}
| parts = {{unbulleted list|[[ಪೆರಿಂತಲ್ಮನ್ನ]]|[[ತಿರೂರ್]]|}}
}}
'''ಮಲಪ್ಪುರಂ ಜಿಲ್ಲೆ''' ({{IPA|ml|mɐlɐpːurɐm|lang|Malappuram.ogg}}), [[ಭಾರತ]]ದ [[ಕೇರಳ]] ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳಲ್ಲಿ]] ಒಂದಾಗಿದ್ದು, {{convert|70|km|mi|abbr=on}} ಕರಾವಳಿಯನ್ನು ಹೊಂದಿದೆ. ಕೇರಳದ ಅತಿ ಹೆಚ್ಚು ಜನಸಂಖ್ಯೆಯ ಜಿಲ್ಲೆಯಾದ ಮಲಪ್ಪುರಂ ರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು 13% ರಷ್ಟನ್ನು ಹೊಂದಿದೆ. ಜಿಲ್ಲೆಯನ್ನು 16 ಜೂನ್ 1969 ರಂದು ರಚಿಸಲಾಯಿತು, ಇದು ಸುಮಾರು {{convert|3554|km2|sqmi|0|abbr=on}} ವಿಸ್ತೀರ್ಣವನ್ನು ಹೊಂದಿದೆ. ಇದು ವಿಸ್ತೀರ್ಣದಲ್ಲಿ ಕೇರಳದ ಮೂರನೇ ಅತಿದೊಡ್ಡ ಜಿಲ್ಲೆಯಾಗಿದೆ. ಇದು ಎರಡೂ ಕಡೆ [[ಪಶ್ಚಿಮ ಘಟ್ಟಗಳು]] ಮತ್ತು [[ಅರೇಬಿಯನ್ ಸಮುದ್ರ]]ದಿಂದ ಸುತ್ತುವರೆದಿದೆ. ಜಿಲ್ಲೆಯು ಏಳು [[ತಹಸೀಲ್|ತಾಲೂಕುಗಳಾಗಿ]] ವಿಂಗಡಿಸಲಾಗಿದೆ: [[ಇರನಾಡ್ ತಾಲೂಕು|ಇರನಾಡ್]], [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]], [[ನಿಲಂಬೂರ್#ನಿಲಂಬೂರ್ ತಾಲೂಕು|ನಿಲಂಬೂರ್]], [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]], [[ಪೊನ್ನಾನಿ ತಾಲೂಕು|ಪೊನ್ನಾನಿ]], [[ತಿರೂರ್ ತಾಲೂಕು|ತಿರೂರ್]], ಮತ್ತು [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]].
[[ಮಲಯಾಳಂ]] ಅತ್ಯಂತ ಹೆಚ್ಚು ಮಾತನಾಡುವ ಭಾಷೆಯಾಗಿದೆ. ಜಿಲ್ಲೆಯು ಗಮನಾರ್ಹವಾದ ವಲಸೆಯನ್ನು ಕಂಡಿದೆ, ವಿಶೇಷವಾಗಿ 1970 ಮತ್ತು 1980 ರ ದಶಕದ ಆರಂಭದಲ್ಲಿ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ [[ಪರ್ಷಿಯನ್ ಕೊಲ್ಲಿಯ ಅರಬ್ ರಾಜ್ಯಗಳು|ಪರ್ಷಿಯನ್ ಕೊಲ್ಲಿಯ ಅರಬ್ ರಾಜ್ಯಗಳಿಗೆ]], ಮತ್ತು ಅದರ ಆರ್ಥಿಕತೆಯು ದೊಡ್ಡ [[ಮಲಯಾಳಿ]] [[ವಿದೇಶಿ ನೇರ ಹೂಡಿಕೆ|ವಿದೇಶಿ]] ಸಮುದಾಯದಿಂದ [[ರೆಮಿಟೆನ್ಸ್]]ಗಳನ್ನು ಗಮನಾರ್ಹವಾಗಿ ಅವಲಂಬಿಸಿದೆ.<ref>{{Cite news|last=Radhakrishnan|first=S. Anil|date=14 December 2019|title=ಕೇರಳದ ವಲಸೇತರ ಸಮುದಾಯವನ್ನು ತೊಡಗಿಸಿಕೊಳ್ಳುವುದು|work=The Hindu|url=https://www.thehindu.com/news/national/kerala/engaging-the-diaspora/article30307914.ece|access-date=9 September 2020|issn=0971-751X|archive-date=14 June 2020|archive-url=https://web.archive.org/web/20200614015308/https://www.thehindu.com/news/national/kerala/engaging-the-diaspora/article30307914.ece|url-status=live}}</ref> ಮಲಪ್ಪುರಂ ಭಾರತದ ಮೊದಲ [[ಡಿಜಿಟಲ್ ಸಾಕ್ಷರತೆ|ಇ-ಸಾಕ್ಷರ]] ಮತ್ತು ಮೊದಲ ಸೈಬರ್ ಸಾಕ್ಷರ ಜಿಲ್ಲೆಯಾಗಿದೆ.<ref>{{cite web |url=https://timesofindia.indiatimes.com/india/Log-on-to-Indias-first-e-district/articleshow/818786.cms |website=The Times of India |title=ಭಾರತದ ಮೊದಲ ಇ-ಜಿಲ್ಲೆ |date=18 August 2004 |access-date=3 July 2020 |archive-date=26 January 2021 |archive-url=https://web.archive.org/web/20210126203012/https://timesofindia.indiatimes.com/india/log-on-to-indias-first-e-district/articleshow/818786.cms |url-status=live }}</ref><ref>{{cite news |url=https://www.thehindu.com/news/national/kerala/malappuram-set-to-become-first-cyber-literate-district/article24352909.ece |website=The Hindu |title=ಮಲಪ್ಪುರಂ ಮೊದಲ ಸೈಬರ್ ಸಾಕ್ಷರ ಜಿಲ್ಲೆಯಾಗಲು ಸಿದ್ಧವಾಗಿದೆ |date=6 July 2018 |access-date=3 July 2020 |archive-date=14 October 2023 |archive-url=https://web.archive.org/web/20231014142904/https://www.thehindu.com/news/national/kerala/malappuram-set-to-become-first-cyber-literate-district/article24352909.ece |url-status=live |last1=Naha |first1=Abdul Latheef }}</ref> ಜಿಲ್ಲೆಯು ನಾಲ್ಕು ಪ್ರಮುಖ ನದಿಗಳನ್ನು ಹೊಂದಿದೆ, ಅವುಗಳೆಂದರೆ [[ಭಾರತಪ್ಪುಳ್ಳ]], [[ಚಾಲಿಯಾರ್]], [[ಕಡಲುಂಡಿ ನದಿ|ಕಡಲುಂಡಿಪ್ಪುಳ್ಳ]], ಮತ್ತು [[ತಿರೂರ್ ನದಿ|ತಿರೂರ್ ಪುಳ್ಳ]], ಇವುಗಳಲ್ಲಿ ಮೊದಲ ಮೂರು [[ಕೇರಳದ ನದಿಗಳ ಪಟ್ಟಿ|ಕೇರಳದ ಐದು ಉದ್ದದ ನದಿಗಳಲ್ಲಿ]] ಸೇರಿವೆ.
[[ಮಲಪ್ಪುರಂ ಮಹಾನಗರ ಪ್ರದೇಶ]]ವು [[ಕೇರಳದ ಅತಿ ಹೆಚ್ಚು ಜನಸಂಖ್ಯೆಯ ನಗರ ಸಮೂಹಗಳ ಪಟ್ಟಿ|ಕೊಚ್ಚಿ, ಕಾಲಿಕಟ್, ಮತ್ತು ತೃಶೂರ್ ನಗರ ಪ್ರದೇಶಗಳ ನಂತರ ಕೇರಳದ ನಾಲ್ಕನೇ ಅತಿದೊಡ್ಡ ನಗರ ಸಮೂಹವಾಗಿದೆ]] ಮತ್ತು [[ಭಾರತದ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರ ಸಮೂಹಗಳ ಪಟ್ಟಿ|ಭಾರತದ 25ನೇ ಅತಿದೊಡ್ಡ ನಗರ ಸಮೂಹವಾಗಿದ್ದು]], 1.7 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ.<ref name="census 2011">{{cite web |url=https://www.censusindia.gov.in/2011-prov-results/paper2-vol2/data_files/kerala/Chapter_IV.pdf |website=censusindia.gov.in |title=ಮಲಪ್ಪುರಂ ನಗರ ಸಮೂಹ |access-date=25 June 2020 |archive-date=24 September 2020 |archive-url=https://web.archive.org/web/20200924223843/https://www.censusindia.gov.in/2011-prov-results/paper2-vol2/data_files/kerala/Chapter_IV.pdf |url-status=live }}</ref> 2011 ರ ಭಾರತೀಯ ಜನಗಣತಿಯ ಪ್ರಕಾರ ಜಿಲ್ಲೆಯ 44.2% ಜನಸಂಖ್ಯೆಯು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದೆ. [[ಮಲಪ್ಪುರಂನಲ್ಲಿ ಶಿಕ್ಷಣ|ರಾಜ್ಯದ 4 ವಿಶ್ವವಿದ್ಯಾಲಯಗಳಿಗೆ]] ನೆಲೆಯಾಗಿರುವ [[ಕಾಲಿಕಟ್ ವಿಶ್ವವಿದ್ಯಾಲಯ]] ಸೇರಿದಂತೆ, ಮಲಪ್ಪುರಂ ಕೇರಳದಲ್ಲಿ [[ಕೇರಳದಲ್ಲಿ ಶಿಕ್ಷಣ|ಉನ್ನತ ಶಿಕ್ಷಣದ]] ಕೇಂದ್ರವಾಗಿದೆ. ಜಿಲ್ಲೆಯು 2 [[ಕೇರಳದ ಆದಾಯ ವಿಭಾಗಗಳ ಪಟ್ಟಿ|ಆದಾಯ ವಿಭಾಗಗಳು]], 7 [[ಕೇರಳದ ತಾಲೂಕುಗಳ ಪಟ್ಟಿ|ತಾಲೂಕುಗಳು]], 12 [[ಕೇರಳದ ಪುರಸಭೆಗಳು|ಪುರಸಭೆಗಳು]], 15 [[ಕೇರಳದಲ್ಲಿ ಸ್ಥಳೀಯ ಸರ್ಕಾರ|ಬ್ಲಾಕ್ಗಳು]], 94 [[ಕೇರಳದಲ್ಲಿ ಸ್ಥಳೀಯ ಸರ್ಕಾರ|ಗ್ರಾಮ ಪಂಚಾಯತ್ಗಳು]], ಮತ್ತು 16 [[ಕೇರಳ ವಿಧಾನಸಭಾ]] ಕ್ಷೇತ್ರಗಳನ್ನು ಒಳಗೊಂಡಿದೆ.<ref name=":1">{{Cite web |title=ಭಾರತ – ಭಾರತದ ಜನಗಣತಿ 2011 – ಕೇರಳ – ಸರಣಿ 33 – ಭಾಗ XII A – ಜಿಲ್ಲಾ ಜನಗಣತಿ ಕೈಪಿಡಿ, ಮಲಪ್ಪುರಂ |url=https://censusindia.gov.in/nada/index.php/catalog/658 |access-date=2023-05-05 |website=censusindia.gov.in}}</ref><ref>{{Cite news |date=2020-01-09 |title=ಕೇರಳ: ಮಲಪ್ಪುರಂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ |work=The Times of India |url=https://timesofindia.indiatimes.com/city/kozhikode/malappuram-tops-list-of-worlds-fastest-growing-urban-areas/articleshow/73163346.cms |access-date=2023-05-05 |issn=0971-8257}}</ref><ref>{{Cite journal |last=Census Bureau of India |date=2011 |title=ಭಾರತ, ರಾಜ್ಯಗಳು, ಜಿಲ್ಲೆಗಳು, ಉಪ-ಜಿಲ್ಲೆಗಳು ಮತ್ತು ಪಟ್ಟಣಗಳ ಮೂಲ ಜನಸಂಖ್ಯಾ ಅಂಕಿಅಂಶಗಳು (ವಾರ್ಡ್ ಸಹಿತ), 2011. |url=https://censusindia.gov.in/nada/index.php/catalog/42560/download/46186/2011-IndiaStateDistSbDistTwnWrd-0000.xlsx |journal=[[ಭಾರತದ ಜನಗಣತಿ]]}}</ref><ref>ಭಾರತ, ರಾಜ್ಯಗಳು, ಜಿಲ್ಲೆಗಳು, ಉಪ-ಜಿಲ್ಲೆಗಳು ಮತ್ತು ಪಟ್ಟಣಗಳ ಮೂಲ ಜನಸಂಖ್ಯಾ ಅಂಕಿಅಂಶಗಳು (ವಾರ್ಡ್ ಸಹಿತ), ಜನಗಣತಿ 2011. '''''[[ಭಾರತದ ಜನಗಣತಿ 2011|ಭಾರತದ ಜನಗಣತಿ]]'''''
https://censusindia.gov.in/nada/index.php/catalog/42560/download/46186/2011-IndiaStateDistSbDistTwnWrd-0000.xlsx</ref>
[[ಬ್ರಿಟಿಷ್ ರಾಜ್]] ಸಮಯದಲ್ಲಿ, [[ಮಲಪ್ಪುರಂ]] ವಿದೇಶಿ ಮತ್ತು ಭಾರತೀಯ ಪಡೆಗಳ ಪ್ರಧಾನ ಕಚೇರಿಯಾಯಿತು ಮತ್ತು ನಂತರ 1885 ರಲ್ಲಿ ರಚಿಸಲಾದ [[ಮಲಬಾರ್ ಸ್ಪೆಷಲ್ ಪೊಲೀಸ್]] (M.S.P) ಹಿಂದೆ ಮಲಪ್ಪುರಂ ಸ್ಪೆಷಲ್ ಫೋರ್ಸ್ ಎಂದು ಕರೆಯಲ್ಪಡುತ್ತಿದ್ದ ಪ್ರಧಾನ ಕಚೇರಿಯಾಯಿತು, ಇದು ರಾಜ್ಯದ ಅತ್ಯಂತ ಹಳೆಯ ಸಶಸ್ತ್ರ ಪೊಲೀಸ್ ಬೆಟಾಲಿಯನ್ ಆಗಿದೆ.<ref>{{cite book |last1=C.A. |first1=Innes |title=ಮದ್ರಾಸ್ ಜಿಲ್ಲಾ ಗೆಜೆಟಿಯರ್ಗಳು: ಮಲಬಾರ್ ಮತ್ತು ಅಂಜೆಂಗೊ |date=1908 |publisher=Government Press, Madras |page=371 |url=https://books.google.com/books?id=w806vgAACAAJ |access-date=30 September 2020 |archive-date=20 April 2021 |archive-url=https://web.archive.org/web/20210420020014/https://books.google.com/books?id=w806vgAACAAJ |url-status=live }}</ref><ref name="mal">{{Cite news|title=ಅമ്പತ್ತಿನ ನೆರವಿನಲ್ಲಿ ಮಲಪ್ಪುರಂ; ಮಲಪ್ಪುರಂನ ಮಾನವಿಕ ಮಹಾ ಪಾರಂಪರ್ಯ|url=https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292|last=Leelakrishnan|first=Alamkode|date=17 June 2019|access-date=21 February 2021|work=Mathrubhumi|archive-date=12 February 2021|archive-url=https://web.archive.org/web/20210212220928/https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292|url-status=live}}</ref> ವಿಶ್ವದ ಅತ್ಯಂತ ಹಳೆಯ [[ತೇಗ]] ತೋಟವು ಕೊನೊಲಿಯ ಪ್ಲಾಟ್ನಲ್ಲಿ [[ನಿಲಂಬೂರ್]]ನ [[ಚಾಲಿಯಾರ್]] ಕಣಿವೆಯಲ್ಲಿದೆ. ರಾಜ್ಯದ ಅತ್ಯಂತ ಹಳೆಯ ರೈಲು ಮಾರ್ಗವನ್ನು 1861 ರಲ್ಲಿ [[ತಿರೂರ್ ರೈಲ್ವೇ ನಿಲ್ದಾಣ|ತಿರೂರ್]] ನಿಂದ [[ಚಾಲಿಯಂ]] ಗೆ ಹಾಕಲಾಯಿತು, ಇದು [[ತಾನೂರು, ಮಲಪ್ಪುರಂ|ತಾನೂರು]], [[ಪರಪ್ಪನಂಗಾಡಿ]], ಮತ್ತು [[ವಲ್ಲಿಕುಣ್ಣು]] ಮೂಲಕ ಹಾದುಹೋಗುತ್ತದೆ.<ref name="mpm"/> ರಾಜ್ಯದ ಎರಡನೇ ರೈಲು ಮಾರ್ಗವನ್ನು ಸಹ ಅದೇ ವರ್ಷದಲ್ಲಿ ತಿರೂರ್ನಿಂದ [[ತಿರುನವಾಯ]] ಮೂಲಕ [[ಕುಟ್ಟಿಪುರಂ]] ಗೆ ಹಾಕಲಾಯಿತು.<ref name="mpm"/> ವಸಾಹತುಶಾಹಿ ಯುಗದಲ್ಲಿ ಹಾಕಲಾದ [[ನಿಲಂಬೂರ್-ಶೋರನೂರ್ ಮಾರ್ಗ]]ವು ಭಾರತದ ಅತ್ಯಂತ ಕಡಿಮೆ ಮತ್ತು ಸುಂದರವಾದ ಬ್ರಾಡ್ ಗೇಜ್ ರೈಲು ಮಾರ್ಗಗಳಲ್ಲಿ ಒಂದಾಗಿದೆ.
== ವ್ಯುತ್ಪತ್ತಿ ==
[[File:Valamangalam Pulpetta (386717435).jpg|thumbnail|ಜಿಲ್ಲೆಯ ವಿಶಿಷ್ಟ ಬೆಟ್ಟದ ಪ್ರದೇಶದ ನೋಟ ([[ಪುಲ್ಪಟ್ಟ]] ಬಳಿ)]]
[[File:Chaliyar Edavanna (251932360).jpg|thumbnail|[[ಎಡವನ್ನ]]ದಲ್ಲಿ [[ಚಾಲಿಯಾರ್]] ಬೆಟ್ಟದ ಇಳಿಜಾರು]]
[[ಮಲಯಾಳಂ]]ನಲ್ಲಿ "ಬೆಟ್ಟದ ಮೇಲೆ" ಎಂದರ್ಥವಾಗುವ ''ಮಲಪ್ಪುರಂ'' ಎಂಬ ಪದವು ಜಿಲ್ಲೆಯ ಆಡಳಿತ ಪ್ರಧಾನ ಕಚೇರಿಯಾದ [[ಮಲಪ್ಪುರಂ]]ನ ಭೌಗೋಳಿಕತೆಯಿಂದ ಬಂದಿದೆ.<ref>{{Cite web|url=https://www.nativeplanet.com/travel-guide/malappuram-the-hill-top-town-000626.html|title=ಮಲಪ್ಪುರಂ, ಬೆಟ್ಟದ ತುದಿಯ ಪಟ್ಟಣ|date=30 June 2014|website=nativeplanet.com|access-date=4 July 2020|archive-date=7 June 2020|archive-url=https://web.archive.org/web/20200607002725/https://www.nativeplanet.com/travel-guide/malappuram-the-hill-top-town-000626.html|url-status=live}}</ref><ref>{{Cite web|url=https://www.financialexpress.com/archive/cultural-counterpoint/1092461/|title=ಸಾಂಸ್ಕೃತಿಕ ಪ್ರತಿಬಿಂದು|date=24 March 2013|website=The Financial Express|access-date=4 July 2020|archive-date=7 June 2020|archive-url=https://web.archive.org/web/20200607002847/https://www.financialexpress.com/archive/cultural-counterpoint/1092461/|url-status=live}}</ref> ಜಿಲ್ಲೆಯ ಮಧ್ಯ ಪ್ರದೇಶವು [[ಅರಿಂಬ್ರಾ ಬೆಟ್ಟಗಳು, ಮಲಪ್ಪುರಂ|ಅರಿಂಬ್ರಾ ಬೆಟ್ಟಗಳು]], [[ಕೋಡಿಕುತಿಮಲ|ಅಮ್ಮಿನಿಕ್ಕಾಡನ್ ಬೆಟ್ಟಗಳು]], [[ಊರಕಂ ಬೆಟ್ಟ]], [[ಮಂಕಡ|ಚೇರಿಯಂ ಬೆಟ್ಟಗಳು]], [[ಅನಕ್ಕಯಂ|ಪಾಂಡಲೂರ್ ಬೆಟ್ಟಗಳು]], ಮತ್ತು [[ಎಡವನ್ನ|ಚೆಕ್ಕುಣ್ಣು ಬೆಟ್ಟಗಳು]] ಸೇರಿದಂತೆ ಹಲವಾರು ಏರುತಗ್ಗಿನ ಬೆಟ್ಟಗಳಿಂದ ನಿರೂಪಿಸಲ್ಪಟ್ಟಿದೆ, ಇವೆಲ್ಲವೂ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳಿಂದ]] ದೂರದಲ್ಲಿವೆ.<ref>{{Cite web|url=https://www.nativeplanet.com/travel-guide/must-visit-camping-sites-in-malappuram-district-004762.html|title=ಮಲಪ್ಪುರಂನ ಬೆಟ್ಟ ಪ್ರದೇಶಗಳು|date=7 May 2018|access-date=11 October 2020|website=Native Planet|last=Akash Singh|archive-date=17 October 2020|archive-url=https://web.archive.org/web/20201017165621/https://www.nativeplanet.com/travel-guide/must-visit-camping-sites-in-malappuram-district-004762.html|url-status=live}}</ref> ಆದಾಗ್ಯೂ, ತೆಂಗಿನಕಾಯಿಯಿಂದ ಆವೃತವಾದ ಮರಳಿನ ಕರಾವಳಿ ಪ್ರದೇಶವು ಸಾಮಾನ್ಯ ಬೆಟ್ಟದ ಸ್ವಭಾವಕ್ಕೆ ಹೊರತಾಗಿದೆ.
== ಇತಿಹಾಸ ==
{{main|ಮಲಪ್ಪುರಂ ಜಿಲ್ಲೆಯ ಇತಿಹಾಸ}}
{{See also|ಕಾಲಿಕಟ್ನ ಜಾಮೋರಿನ್|ವಲ್ಲುವನಾಡ್ ಸಾಮ್ರಾಜ್ಯ|ಇರನಾಡ್|ತಾನೂರು ಸಾಮ್ರಾಜ್ಯ|ಪರಪ್ಪನಾಡ್|ಪೊನ್ನಾನಿ|ಕೊಚ್ಚಿ ಸಾಮ್ರಾಜ್ಯ|ನಿಲಂಬೂರ್ ಸಾಮ್ರಾಜ್ಯ|ಪಾಲಕ್ಕಾಡ್|ಮಲಬಾರ್ ಜಿಲ್ಲೆ}}
[[File:TabulaPeutingerianaMuziris.jpg|thumb|[[ಟ್ಯಾಬ್ಯುಲಾ ಪ್ಯೂಟಿಂಗೇರಿಯಾನಾ|ಪ್ಯೂಟಿಂಗರ್ ಟೇಬಲ್]]ನಲ್ಲಿ ಟಿಂಡಿಸ್ (ಟೊಂಡಿಸ್) (ಟೆಂಪಲ್ ಅಗಸ್ಟಿ ಮತ್ತು ಲಾಕಸ್ ಮುಜಿರಿಸ್ ಉತ್ತರದಲ್ಲಿ)]]
[[File:Periplous of the Erythraean Sea.svg|left|thumbnail|''[[ಪೆರಿಪ್ಲಸ್ ಆಫ್ ದಿ ಎರಿಥ್ರಿಯನ್ ಸೀ]]'' (1ನೇ ಶತಮಾನ CE) ನ ಹೆಸರುಗಳು, ಮಾರ್ಗಗಳು ಮತ್ತು ಸ್ಥಳಗಳು]]
ಪ್ರಾಗೈತಿಹಾಸಿಕ ಚಿಹ್ನೆಗಳ ಅವಶೇಷಗಳಾದ [[ಡಾಲ್ಮೆನ್]]ಗಳು, [[ಮೆನ್ಹಿರ್]]ಗಳು, ಮತ್ತು ಬಂಡೆಯ ಕೆತ್ತನೆಯ ಗುಹೆಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಂಡುಬಂದಿವೆ. [[ಕುಳಿಮನ್ನ ಗ್ರಾಮ ಪಂಚಾಯತ್|ಪುಲಿಯಕ್ಕೋಡೆ]], [[ಚೆಮ್ಮಡ್|ತ್ರಿಕ್ಕುಳಂ]], [[ಊರಕಂ]], [[ಮೇಲ್ಮುರಿ]], [[ಪೊನ್ಮಲ]], [[ವಲ್ಲಿಕುಣ್ಣು]], ಮತ್ತು [[ವೆಂಗರ, ಮಲಪ್ಪುರಂ ಜಿಲ್ಲೆ|ವೆಂಗರ]] ಗಳಲ್ಲಿ [[ಬಂಡೆಯ ಕೆತ್ತನೆಯ ವಾಸ್ತುಶಿಲ್ಪ|ಬಂಡೆಯ ಕೆತ್ತನೆಯ ಗುಹೆಗಳು]] ಕಂಡುಬಂದಿವೆ.<ref name="mh">{{cite web |url=http://censusindia.gov.in/2011census/dchb/3205_PART_A_MALAPPURAM.pdf |website=censusindia.gov.in |title=ಮಲಪ್ಪುರಂನ ಇತಿಹಾಸ |access-date=17 April 2020 |archive-date=27 November 2019 |archive-url=https://web.archive.org/web/20191127005243/http://censusindia.gov.in/2011census/dchb/3205_PART_A_MALAPPURAM.pdf |url-status=live }}</ref> [[ಪ್ರಾಚೀನ ರೋಮ್]]ನೊಂದಿಗೆ ವ್ಯಾಪಾರ ಕೇಂದ್ರವಾಗಿದ್ದ ಪ್ರಾಚೀನ ಸಮುದ್ರ ಬಂದರು [[ಟಿಂಡಿಸ್]] ಅನ್ನು [[ಪೊನ್ನಾನಿ]], [[ತಾನೂರು, ಮಲಪ್ಪುರಂ|ತಾನೂರು]], ಮತ್ತು [[ಕಡಲುಂಡಿ]]-[[ವಲ್ಲಿಕುಣ್ಣು]]-[[ಚಾಲಿಯಂ]]-[[ಬೇಪೋರ್]] ಪ್ರದೇಶ ಎಂದು ಸ್ಥೂಲವಾಗಿ ಗುರುತಿಸಲಾಗಿದೆ. ಟಿಂಡಿಸ್ ಚೇರರು ಮತ್ತು [[ರೋಮನ್ ಸಾಮ್ರಾಜ್ಯ]]ದ ನಡುವಿನ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು, ಇದು ಮುಜಿರಿಸ್ಗೆ ಮುಂದಿನ ಸ್ಥಾನದಲ್ಲಿತ್ತು.<ref>ಕರಾವಳಿ ಇತಿಹಾಸಗಳು: ಪ್ರಾಚೀನ ಭಾರತದಲ್ಲಿ ಸಮಾಜ ಮತ್ತು ಪರಿಸರ, ಯೋಗೇಶ್ ಶರ್ಮಾ, ಪ್ರಿಮಸ್ ಪುಸ್ತಕಗಳು 2010</ref> [[ಪ್ಲಿನಿ ದಿ ಎಲ್ಡರ್]] (1ನೇ ಶತಮಾನ CE) ''[[ಟಿಂಡಿಸ್]]'' ಬಂದರು ''ಕೆಪ್ರೊಬೊಟೊಸ್'' ([[ಚೇರ ಸಾಮ್ರಾಜ್ಯ]])ದ ವಾಯುವ್ಯ ಗಡಿಯಲ್ಲಿದೆ ಎಂದು ಹೇಳುತ್ತಾರೆ.<ref name=":2">ಗುರುಕ್ಕಲ್, ಆರ್., & ವಿಟ್ಟೇಕರ್, ಡಿ. (2001). ಮುಜಿರಿಸ್ ಹುಡುಕಾಟದಲ್ಲಿ. ''ಜರ್ನಲ್ ಆಫ್ ರೋಮನ್ ಆರ್ಕಿಯಾಲಜಿ,'' ''14'', 334–350.</ref> ''[[ಟಿಂಡಿಸ್]]'' ಬಂದರಿನ ಉತ್ತರದಲ್ಲಿರುವ ಈ ಪ್ರದೇಶವು [[ಸಂಗಮ್ ಅವಧಿ]]ಯಲ್ಲಿ [[ಎಳಿಮಲ]] ಸಾಮ್ರಾಜ್ಯದ ಆಳ್ವಿಕೆಯಲ್ಲಿತ್ತು.<ref name="odra">ಎ. ಶ್ರೀಧರ ಮೇನನ್, ಎ ಸರ್ವೆ ಆಫ್ ಕೇರಳ ಹಿಸ್ಟರಿ</ref> ''[[ಪೆರಿಪ್ಲಸ್ ಆಫ್ ದಿ ಎರಿಥ್ರಿಯನ್ ಸೀ]]'' ಪ್ರಕಾರ, ''[[ಲಿಮಿರಿಕೆ]]'' ಎಂದು ಕರೆಯಲ್ಪಡುವ ಪ್ರದೇಶವು ''[[ಕಣ್ಣೂರು|ನೌರಾ]]'' ಮತ್ತು ''[[ಟಿಂಡಿಸ್]]'' ನಲ್ಲಿ ಪ್ರಾರಂಭವಾಯಿತು. ಆದಾಗ್ಯೂ [[ಟಾಲೆಮಿ]] ''[[ಟಿಂಡಿಸ್]]'' ಅನ್ನು ಮಾತ್ರ ''[[ಲಿಮಿರಿಕೆ]]''ಯ ಪ್ರಾರಂಭದ ಬಿಂದು ಎಂದು ಉಲ್ಲೇಖಿಸುತ್ತಾನೆ. ಈ ಪ್ರದೇಶವು [[ಕನ್ಯಾಕುಮಾರಿ]]ಯಲ್ಲಿ ಕೊನೆಗೊಂಡಿರಬಹುದು; ಇದು ಸ್ಥೂಲವಾಗಿ ಪ್ರಸ್ತುತ [[ಮಲಬಾರ್ ಕರಾವಳಿ]]ಗೆ ಸಮನಾಗಿರುತ್ತದೆ. ಈ ಪ್ರದೇಶದೊಂದಿಗೆ ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವು ಸುಮಾರು 50,000,000 [[ಸೆಸ್ಟೆರ್ಸ್]] ಎಂದು ಅಂದಾಜಿಸಲಾಗಿದೆ.<ref>[[ಪ್ಲಿನಿ ದಿ ಎಲ್ಡರ್]] ಪ್ರಕಾರ, ಭಾರತದಿಂದ ಬಂದ ಸರಕುಗಳನ್ನು ಸಾಮ್ರಾಜ್ಯದಲ್ಲಿ ಅವುಗಳ ಮೂಲ ಖರೀದಿ ಬೆಲೆಗಿಂತ 100 ಪಟ್ಟು ಹೆಚ್ಚಿಗೆ ಮಾರಾಟ ಮಾಡಲಾಗುತ್ತಿತ್ತು. ನೋಡಿ [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> [[ಪ್ಲಿನಿ ದಿ ಎಲ್ಡರ್]] ''[[ಲಿಮಿರಿಕೆ]]'' ಕಡಲ್ಗಳ್ಳರಿಂದ ಹಾವಳಿಗೆ ಒಳಗಾಗಿತ್ತು ಎಂದು ಉಲ್ಲೇಖಿಸಿದ್ದಾರೆ.<ref>ಬೋಸ್ಟಾಕ್, ಜಾನ್ (1855). "26 (ಭಾರತಕ್ಕೆ ಪ್ರಯಾಣಗಳು)". ಪ್ಲಿನಿ ದಿ ಎಲ್ಡರ್, ದಿ ನ್ಯಾಚುರಲ್ ಹಿಸ್ಟರಿ. ಲಂಡನ್: ಟೇಲರ್ ಮತ್ತು ಫ್ರಾನ್ಸಿಸ್.</ref> [[ಕಾಸ್ಮಾಸ್ ಇಂಡಿಕೊಪ್ಲ್ಯೂಸ್ಟೀಸ್]] ''[[ಲಿಮಿರಿಕೆ]]'' ಮೆಣಸುಗಳ ಮೂಲವಾಗಿತ್ತು ಎಂದು ಉಲ್ಲೇಖಿಸಿದ್ದಾರೆ.<ref>ಇಂಡಿಕೊಪ್ಲ್ಯೂಸ್ಟೀಸ್, ಕಾಸ್ಮಾಸ್ (1897). ಕ್ರಿಶ್ಚಿಯನ್ ಟೋಪೋಗ್ರಫಿ. 11. ಯುನೈಟೆಡ್ ಕಿಂಗ್ಡಮ್: ದಿ ಟೆರ್ಟುಲಿಯನ್ ಪ್ರಾಜೆಕ್ಟ್. ಪುಟಗಳು 358–373.</ref><ref>ದಾಸ್, ಸಂತೋಷ್ ಕುಮಾರ್ (2006). ದಿ ಎಕನಾಮಿಕ್ ಹಿಸ್ಟರಿ ಆಫ್ ಏನ್ಷಿಯಂಟ್ ಇಂಡಿಯಾ. ಜೆನೆಸಿಸ್ ಪಬ್ಲಿಷಿಂಗ್ ಪ್ರೈ. ಲಿ. ಪು. 301.</ref> ನದಿ [[ಭಾರತಪ್ಪುಳ್ಳ]] (ಪೊನ್ನಾನಿ ನದಿ) [[ಸಂಗಮ್ ಅವಧಿ]] (1ನೇ–4ನೇ ಶತಮಾನ CE) ದಿಂದಲೂ ಪ್ರಾಮುಖ್ಯತೆಯನ್ನು ಹೊಂದಿತ್ತು, ಏಕೆಂದರೆ [[ಪಾಲಕ್ಕಾಡ್ ಕಣಿವೆ]] ಇದ್ದು ಅದು [[ಮಲಬಾರ್ ಕರಾವಳಿ]]ಯನ್ನು ಒಳನಾಡಿನ ಮೂಲಕ [[ಕೊರಮಂಡಲ್ ಕರಾವಳಿ]]ಗೆ ಸಂಪರ್ಕಿಸುತ್ತಿತ್ತು.<ref name="Trade">{{cite news|last=Subramanian|first=T. S|title=ತಮಿಳುನಾಡಿನಲ್ಲಿ ರೋಮನ್ ಸಂಪರ್ಕ|url=http://www.hindu.com/thehindu/thscrip/print.pl?file=2007012800201800.htm&date=2007/01/28/&prd=th|access-date=28 October 2011|newspaper=[[The Hindu]]|date=28 January 2007|url-status=live|archive-url=https://web.archive.org/web/20130919235748/http://www.hindu.com/thehindu/thscrip/print.pl?file=2007012800201800.htm&date=2007%2F01%2F28%2F&prd=th|archive-date=19 September 2013}}</ref>
[[File:Kurumathur inscription.jpg|thumbnail|[[ಕುರುಮತ್ತೂರ್ ಶಾಸನ]] (871 CE)]]
[[ಅರೀಕೋಡ್]] ಬಳಿ ಕಂಡುಬಂದ [[ಕುರುಮತ್ತೂರ್ ಶಾಸನ]]ವು 871 CE ಗೆ ಸೇರಿದ್ದು.<ref name="Veluthat">ವೇಲುತ್ತಾಟ್, ಕೆಸವನ್ (1 ಜೂನ್ 2018). "ಒಂದು ಪ್ರದೇಶವನ್ನು ರೂಪಿಸುವಲ್ಲಿ ಇತಿಹಾಸ ಮತ್ತು ಇತಿಹಾಸ ಲೇಖನ: ಕೇರಳದ ಪ್ರಕರಣ". ''ಸ್ಟಡೀಸ್ ಇನ್ ಪೀಪಲ್ಸ್ ಹಿಸ್ಟರಿ''. '''5''' (1): 13–31. [https://doi.org/10.1177/2348448918759852] {{Webarchive|url=https://web.archive.org/web/20210913063330/https://journals.sagepub.com/doi/10.1177/2348448918759852|date=13 September 2021}}</ref> [[ತ್ರಿಪ್ರಂಗೋಡ್]] ([[ತಿರುನವಾಯ]] ಬಳಿ), [[ಕೊಟ್ಟಕ್ಕಲ್]], ಮತ್ತು [[ಚಾಲಿಯಾರ್]] ನಲ್ಲಿ ಕಂಡುಬಂದ 932 CE ಗೆ ಸೇರಿದ ಮೂರು [[ಹಳೆಯ ಮಲಯಾಳಂ]] ಶಾಸನಗಳು [[ಚೇರ ಸಾಮ್ರಾಜ್ಯ]]ದ [[ಗೋಡ ರವಿ]]ಯ ಹೆಸರನ್ನು ಉಲ್ಲೇಖಿಸುತ್ತವೆ.<ref name=":0">ನಾರಾಯಣನ್, ಎಂ. ಜಿ. ಎಸ್. ''[https://books.google.com/books?id=0YDCngEACAAJ&q=Perumals+of+Kerala ಕೇರಳದ ಪೆರುಮಾಳ್ಗಳು: ಬ್ರಾಹ್ಮಣ ಪ್ರಭುತ್ವ ಮತ್ತು ಆಚರಣಾ ರಾಜಪ್ರಭುತ್ವ ಪೆರುಮಾಳ್ಗಳು ಕೇರಳದ] {{Webarchive|url=https://web.archive.org/web/20210129082837/https://books.google.co.in/books?id=0YDCngEACAAJ&dq=Perumals%20of%20Kerala&hl=en&newbks=1&newbks_redir=0&sa=X&ved=2ahUKEwiH-dbD57HuAhXIbn0KHeY5BHkQ6AEwAXoECAYQAQ |date=29 January 2021 }}.'' ತೃಶೂರ್ (ಕೇರಳ): ಕಾಸ್ಮೋಬುಕ್ಸ್, 2013. 438-42.</ref> [[ತ್ರಿಪ್ರಂಗೋಡ್]] ಶಾಸನವು [[ತವನೂರ್]]ನ ಒಪ್ಪಂದದ ಬಗ್ಗೆ ಹೇಳುತ್ತದೆ.<ref name=":0"/> [[ಎಡಪ್ಪಲ್]] ಬಳಿಯ [[ಸುಕಾಪುರಂ]] ನಲ್ಲಿ 10ನೇ ಶತಮಾನ CE ಗೆ ಸೇರಿದ ಹಲವಾರು [[ಹಳೆಯ ಮಲಯಾಳಂ]] ಶಾಸನಗಳು ಕಂಡುಬಂದಿವೆ, ಇದು ಕೇರಳದ 64 ಹಳೆಯ [[ನಂಬೂದಿರಿ]] ಗ್ರಾಮಗಳಲ್ಲಿ ಒಂದಾಗಿದೆ.
[[File:Aalthiyoor Nambi Illam.jpg|300px|left|thumbnail|[[ತಿರೂರ್]] ಬಳಿಯ [[ಅಲತ್ತಿಯೂರು, ಮಲಪ್ಪುರಂ|''ಅಲತ್ತಿಯೂರು ನಂಬಿ ಇಲ್ಲಂ'']]]]
[[ಇರನಾಡ್]] ಮತ್ತು [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವನಾಡ್]] ಪ್ರದೇಶಗಳ ಆಡಳಿತಗಾರರ ಬಗ್ಗೆ ವಿವರಣೆಗಳನ್ನು ಭಾಸ್ಕರ ರವಿ ವರ್ಮನ್ (ಸುಮಾರು 1000 CE) ರ [[ಕೊಚ್ಚಿಯ ಯಹೂದಿ ತಾಮ್ರ ಫಲಕಗಳು|ಯಹೂದಿ ತಾಮ್ರ ಫಲಕಗಳಲ್ಲಿ]] ಮತ್ತು ವೀರ ರಾಘವ ಚಕ್ರವರ್ತಿ (ಸುಮಾರು 1225 CE) ರ [[ವೀರರಾಘವ ತಾಮ್ರ ಫಲಕಗಳಲ್ಲಿ]] ಕಾಣಬಹುದು.<ref name="mh"/> [[ಕಾಲಿಕಟ್ನ ಜಾಮೋರಿನ್]] ಮೂಲತಃ [[ಕೊಂಡೊಟ್ಟಿ]]ಯ [[ನೆಡಿಯಿರುಪ್ಪು]]ಗೆ ಸೇರಿದವರಾಗಿದ್ದು, ನಂತರ ಅವರು ತಮ್ಮ ಸ್ಥಾನವನ್ನು ನೆರೆಯ [[ಕೋಝಿಕ್ಕೋಡ್]] ಗೆ ವರ್ಗಾಯಿಸಿಕೊಂಡರು.<ref name="askh"/> ಇರನಾಡ್ ಅನ್ನು [[ಸಾಮಂತನ್]] ವಂಶಕ್ಕೆ ಸೇರಿದ [[ಎರಾಡಿ]]ಗಳು ಎಂದು ಕರೆಯಲ್ಪಡುವ ಕುಲವು ಆಳುತ್ತಿತ್ತು, ಇದು ನೆರೆಯ [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವನಾಡ್]]ನ [[ಎಂ. ಕೆ. ವೆಲ್ಲೋಡಿ|ವೆಲ್ಲೋಡಿ]]ಗಳು ಮತ್ತು [[ಒಟ್ಟಪ್ಪಾಳಂ|ನೆಡುಂಗನಾಡ್]]ನ ನೆಡುಂಗಡಿಗಳಿಗೆ ಹೋಲುತ್ತದೆ.<ref name="askh"/> ಇರನಾಡಿನ ಆಡಳಿತಗಾರರು ''ಎರಳ್ಪ್ಪಾಡ್''/''ಎರಾಡಿ'' ಎಂಬ ಬಿರುದಿನಿಂದ ಕರೆಯಲ್ಪಡುತ್ತಿದ್ದರು.<ref name="askh"/> ಕಾಲಿಕಟ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಮತ್ತು [[ಮಲಬಾರ್ ಕರಾವಳಿ]]ಯಲ್ಲಿ [[ಕೋಝಿಕ್ಕೋಡ್]] ಅನ್ನು ಪ್ರಮುಖ ಬಂದರು ನಗರವಾಗಿ ಅಭಿವೃದ್ಧಿಪಡಿಸಿದವರು [[ಇರನಾಡ್]]ನ ಆಡಳಿತಗಾರರು ([[ನೆಡಿಯಿರುಪ್ಪು]]ನ ''ಎರಾಡಿ'').<ref name="askh"/> ಅದರ ನಂತರ, [[ಪರಪ್ಪನಾಡ್]] ([[ಪರಪ್ಪನಂಗಾಡಿ]]) ಮತ್ತು [[ತಾನೂರು ಸಾಮ್ರಾಜ್ಯ|ವೆಟ್ಟತ್ತುನಾಡು]] ([[ತಾನೂರು, ಮಲಪ್ಪುರಂ|ತಾನೂರು]]) ಆಡಳಿತಗಾರರು ಜಾಮೋರಿನ್ನ ಸಾಮಂತರಾದರು. [[ಪರಪ್ಪನಾಡ್]] ರಾಜಮನೆತನವು [[ತಿರುವಾಂಕೂರು ರಾಜಮನೆತನ]]ದ ಸೋದರ ಸಂಬಂಧಿ ಸಾಮ್ರಾಜ್ಯವಾಗಿದೆ.<ref name="askh"/> ಇದಲ್ಲದೆ, [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವನಾಡ್]] ಕೋವಿಲಕಂಗಳ (ನಿಲಂಬೂರ್, ಮಂಜೇರಿ, ಮಲಪ್ಪುರಂ, ಕೊಟ್ಟಕ್ಕಲ್, ಮತ್ತು ಪೊನ್ನಾನಿ) ದೊಡ್ಡ ಭಾಗವೂ ಜಾಮೋರಿನ್ನ ಸಾಮಂತರಾದರು.<ref name="askh"/>
[[File:South India in early 11th century AD.jpg|thumbnail|11ನೇ ಶತಮಾನದ ಆರಂಭದಲ್ಲಿ [[ದಕ್ಷಿಣ ಭಾರತ]] (ಸುಮಾರು 1000 CE – ಮಲಪ್ಪುರಂ ಜಿಲ್ಲೆಯು ಎರಡು ಪ್ರಮುಖ ಅಧಿಕಾರ ಕೇಂದ್ರಗಳನ್ನು ಒಳಗೊಂಡಿತ್ತು – ''ಎರಳ ನಾಡು'' ([[ಇರನಾಡ್]]) ಮತ್ತು [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವ ನಾಡು]])]]
ನಂತರ [[ಕೊಚ್ಚಿ ಸಾಮ್ರಾಜ್ಯ]]ವಾದ ''ಪೆರುಂಬಡಪ್ಪು ಸ್ವರೂಪಂ''ನ ಮೂಲ ಪ್ರಧಾನ ಕಚೇರಿಯು [[ಪೊನ್ನಾನಿ ತಾಲೂಕು]]ನಲ್ಲಿ [[ಪುತ್ತುಪೊನ್ನಾನಿ]]ಯಿಂದ 10 ಕಿಮೀ ದಕ್ಷಿಣದಲ್ಲಿ [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]]ನ ವನ್ನೇರಿಯಲ್ಲಿನ ಚಿತ್ರಕೂಡಂನಲ್ಲಿತ್ತು.<ref name="askh"/> ಪೆರುಂಪಡಪ್ಪು [[ಕಾಲಿಕಟ್ನ ಜಾಮೋರಿನ್]] ಸಾಮ್ರಾಜ್ಯದ ಆಡಳಿತಕ್ಕೆ ಬಂದಾಗ, ಪೆರುಂಪಡಪ್ಪಿನ ಆಡಳಿತಗಾರರು [[ಕೊಡುಂಗಲ್ಲೂರ್]]ಗೆ ಪಲಾಯನ ಮಾಡಿದರು, ಮತ್ತು ನಂತರ ಅವರು [[ಕೊಚ್ಚಿ]]ಗೆ ತೆರಳಿದರು, ಅಲ್ಲಿ ಅವರು [[ಕೊಚ್ಚಿ ಸಾಮ್ರಾಜ್ಯ]]ವನ್ನು ಸ್ಥಾಪಿಸಿದರು.<ref name="askh"/> 1250–1300 CE ವೇಳೆಗೆ, ಬಹುತೇಕ ಇಡೀ ಜಿಲ್ಲೆಯು ಜಾಮೋರಿನ್ನ ಆಡಳಿತಕ್ಕೆ ಬಂದಿತು.<ref name="askh"/><ref name="mh"/>
ಮಧ್ಯಕಾಲೀನ ಕೇರಳದಲ್ಲಿ ವಿಶೇಷ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದ್ದ [[ಮಾಮಂಕಂ ಉತ್ಸವ]]ವು [[ಭಾರತಪ್ಪುಳ್ಳ]] ನದಿಯ ಉತ್ತರ ದಡದಲ್ಲಿರುವ [[ತಿರುನವಾಯ]]ದಲ್ಲಿ ನಡೆಯುತ್ತಿತ್ತು.<ref name="askh"/> [[ಕುಂಬಿಡಿ|ಪನ್ನಿಯೂರು]] ಮತ್ತು [[ಸುಕಾಪುರಂ|ಚೋವ್ವರ]] (ಸುಕಾಪುರಂ) ನ [[ನಂಬೂದಿರಿ]] ಗ್ರಾಮಗಳಲ್ಲಿನ [[ನಂಬೂದಿರಿ]]ಗಳ ನಡುವೆ ಅಸ್ತಿತ್ವದಲ್ಲಿದ್ದ ಪೈಪೋಟಿಯು ಮಧ್ಯಕಾಲೀನ ಕೇರಳದಲ್ಲಿ ಹೆಚ್ಚಿನ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿತ್ತು.<ref name="askh"/> [[ಕುಂಬಿಡಿ|ಪನ್ನಿಯೂರು]] [[ಕುಟ್ಟಿಪುರಂ]] ಪಟ್ಟಣದ ಎದುರು ಇದೆ, ಆದರೆ [[ಸುಕಾಪುರಂ]] [[ಎಡಪ್ಪಲ್]]ನಲ್ಲಿದೆ. ಜಾಮೋರಿನ್ಗಳು ಪನ್ನಿಯೂರ್ಕೂರ್ ಮತ್ತು ಚೋವ್ವರಕೂರಿನ ನಂಬೂದಿರಿಗಳ ನಡುವಿನ ''ಕೂರ್ಮತ್ಸರಂ'' ಎಂದು ಕರೆಯಲ್ಪಡುವ ವಿವಾದದಲ್ಲಿ ಮಧ್ಯಪ್ರವೇಶಿಸಿದರು. ಇತ್ತೀಚಿನ ಘಟನೆಯಲ್ಲಿ, ತಿರುಮನಸ್ಸೇರಿ ನಂಬೂದಿರಿಯು ಹತ್ತಿರದ ಪ್ರತಿಸ್ಪರ್ಧಿ ಗ್ರಾಮವನ್ನು ಆಕ್ರಮಣ ಮಾಡಿ ಸುಟ್ಟುಹಾಕಿದ್ದರು. ವಲ್ಲುವನಾಡು ಮತ್ತು [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]] ಆಡಳಿತಗಾರರು ಚೋವ್ವರಂಗೆ ಸಹಾಯ ಮಾಡಲು ಬಂದು ಏಕಕಾಲದಲ್ಲಿ ಪನ್ನಿಯೂರ್ ಮೇಲೆ ದಾಳಿ ಮಾಡಿದರು. ತಿರುಮನಸ್ಸೇರಿ ನಾಡು ದಕ್ಷಿಣ ಮತ್ತು ಪೂರ್ವದ ನೆರೆಯವರಿಂದ ಮುತ್ತಿಕೊಳ್ಳಲ್ಪಟ್ಟಿತು. ತಿರುಮನಸ್ಸೇರಿ ನಂಬೂದಿರಿಯು ಸಹಾಯಕ್ಕಾಗಿ ಜಾಮೋರಿನ್ ಅವರನ್ನು ಕೋರಿದರು, ಮತ್ತು ತಮ್ಮ ರಕ್ಷಣೆಗೆ ಪ್ರತಿಯಾಗಿ [[ಅರೇಬಿಯನ್ ಸಮುದ್ರ]]ದೊಂದಿಗೆ [[ಭಾರತಪ್ಪುಳ್ಳ]] ನದಿಯು ಸೇರುವ [[ಪೊನ್ನಾನಿ]] ಬಂದರನ್ನು ಜಾಮೋರಿನ್ಗೆ ಬಿಟ್ಟುಕೊಡುವುದಾಗಿ ಭರವಸೆ ನೀಡಿದರು. ತಿರುಮನಸ್ಸೇರಿ ನಂಬೂದಿರಿ, ಕೋಝಿಕ್ಕೋಡ್ನ ಕೋಯ, ಮತ್ತು [[ತಾನೂರು ಸಾಮ್ರಾಜ್ಯ|ವೆಟ್ಟತ್ತುನಾಡಿನ]] ಆಡಳಿತಗಾರರು ಜಾಮೋರಿನ್ ಅವರನ್ನು ಬೆಂಬಲಿಸಿದರು. ಅಂತಹ ಅವಕಾಶಕ್ಕಾಗಿ ಹುಡುಕುತ್ತಿದ್ದ ಜಾಮೋರಿನ್, ಆ ಕೊಡುಗೆಯನ್ನು ಸಂತೋಷದಿಂದ ಸ್ವೀಕರಿಸಿದರು.<ref name="KrishnaIyer2"/> ವಲ್ಲುವನಾಡಿನ ಮೇಲಿನ ತಮ್ಮ ಮಿಲಿಟರಿ ಅಭಿಯಾನಗಳಲ್ಲಿ, ಜಾಮೋರಿನ್ ಅವರಿಗೆ [[ಬೇಪೋರ್]], [[ಚಾಲಿಯಂ]], [[ತಾನೂರು, ಮಲಪ್ಪುರಂ|ತಾನೂರು]], ಮತ್ತು [[ಕೊಡುಂಗಲ್ಲೂರ್]]ನ ಮುಸ್ಲಿಂ ಮಧ್ಯಪ್ರಾಚ್ಯ ನಾವಿಕರು ಮತ್ತು ಕೋಝಿಕ್ಕೋಡ್ನ ಕೋಯ ಅವರ ನಿಸ್ಸಂದಿಗ್ಧವಾದ ಸಹಾಯವನ್ನು ಪಡೆದರು.<ref name="VVHaridas">ವಿ. ವಿ., ಹರಿದಾಸ್. ''"ಮಧ್ಯಕಾಲೀನ ಕೇರಳದಲ್ಲಿ ರಾಜ ನ್ಯಾಯಾಲಯ ಮತ್ತು ಸಂಸ್ಕೃತಿ – ಕಾಲಿಕಟ್ನ ಜಾಮೋರಿನ್ಗಳು (AD 1200 ರಿಂದ AD 1767)"''. [http://shodhganga.inflibnet.ac.in/handle/10603/131929] {{Webarchive|url=https://web.archive.org/web/20210913065714/https://shodhganga.inflibnet.ac.in/handle/10603/131929|date=13 September 2021}} ಪ್ರಕಟಿತವಲ್ಲದ ಪಿಎಚ್ಡಿ ಪ್ರಬಂಧ. ಮಂಗಳೂರು ವಿಶ್ವವಿದ್ಯಾಲಯ</ref> ಜಾಮೋರಿನ್ ನೀಡಿದ ಪ್ರತಿಫಲವಾಗಿ, [[ಪೊನ್ನಾನಿ]] ಬಂದರು ಮಧ್ಯಪ್ರಾಚ್ಯ ನಾವಿಕರ ಪ್ರಮುಖ ವ್ಯಾಪಾರ ಮತ್ತು ಸಾಂಸ್ಕೃತಿಕ ಕೇಂದ್ರವಾಯಿತು. ಕೋಝಿಕ್ಕೋಡಿನ ಮುಸ್ಲಿಂ ನ್ಯಾಯಾಧೀಶರು [[ತಿರುನವಾಯ]]ದ ಮೇಲೆ ದಾಳಿ ಮಾಡಲು ಸಾಮೂತಿರಿಗೆ "ಹಣ ಮತ್ತು ಸಾಮಗ್ರಿಗಳಲ್ಲಿ" ಸಹಾಯ ಮಾಡಿದ್ದರು ಎಂದು ತೋರುತ್ತದೆ.<ref name="KrishnaIyer2">ಕೆ. ವಿ. ಕೃಷ್ಣ ಅಯ್ಯರ್, ''ಕಾಲಿಕಟ್ನ ಜಾಮೋರಿನ್ಗಳು: ಆರಂಭಿಕ ಕಾಲದಿಂದ AD 1806 ರವರೆಗೆ''. ಕಾಲಿಕಟ್: ನಾರ್ಮನ್ ಪ್ರಿಂಟಿಂಗ್ ಬ್ಯೂರೋ, 1938.</ref> ಜಾಮೋರಿನ್ ತಮ್ಮ ವಿಜಯವನ್ನು ವಲ್ಲುವನಾಡಿಗೆ ಮುಂದುವರೆಸಿದರು ಮತ್ತು [[ಕೊಟ್ಟಕ್ಕಲ್]], [[ಮಲಪ್ಪುರಂ]], [[ಮಂಜೇರಿ]], ಮತ್ತು [[ನಿಲಂಬೂರ್]] ಪ್ರದೇಶಗಳನ್ನು ವಶಪಡಿಸಿಕೊಂಡರು. ಹೀಗೆ [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]] ಮತ್ತು [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವನಾಡ್]]ನ ದೊಡ್ಡ ಭಾಗವು ಜಾಮೋರಿನ್ನ ಆಡಳಿತಕ್ಕೆ ಬಂದಿತು. ಹೀಗೆ ಜಾಮೋರಿನ್ ಮಾಮಂಕಮ್ನ ''ರಕ್ಷಾ ಪುರುಷ'' ಆದರು, ಮತ್ತು [[ತಿರುನವಾಯ]], ನೆರೆಯ [[ತ್ರಿಪ್ರಂಗೋಡ್]], ಮತ್ತು [[ಪೊನ್ನಾನಿ]]ಯ ಆಡಳಿತಗಾರರಾದರು.<ref name="askh"/>
[[File:Kottakkunnu, Malappuram municipality.jpg|left|thumbnail|[[ಮಲಪ್ಪುರಂ]]ನ [[ಕೊಟ್ಟಕ್ಕುಣ್ಣು]]]]
ಜಾಮೋರಿನ್ ಅಡಿಯಲ್ಲಿ, ಜಿಲ್ಲೆಯ ಭಾಗವಾಗಿದ್ದ ಪ್ರದೇಶಗಳು ಮಧ್ಯಕಾಲೀನ ಕೇರಳದಲ್ಲಿ ಪ್ರಮುಖ ವಿದೇಶಿ ಸಮುದ್ರ ವ್ಯಾಪಾರ ಕೇಂದ್ರಗಳಾಗಿ ಹೊರಹೊಮ್ಮಿದವು. ಜಾಮೋರಿನ್ ತಮ್ಮ ಬಂದರುಗಳ ಮೂಲಕ ಮಸಾಲೆ ವ್ಯಾಪಾರಕ್ಕೆ ತೆರಿಗೆ ವಿಧಿಸುವ ಮೂಲಕ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಗಳಿಸುತ್ತಿದ್ದರು. ಜಾಮೋರಿನ್ ಸಾಮ್ರಾಜ್ಯದ ಪ್ರಮುಖ ಬಂದರುಗಳು [[ಪರಪ್ಪನಂಗಾಡಿ]], [[ತಾನೂರು, ಮಲಪ್ಪುರಂ|ತಾನೂರು]], ಮತ್ತು [[ಪೊನ್ನಾನಿ]] ಸೇರಿದ್ದವು.<ref name="ReferenceB"/><ref name="Kunhali">ಕುಂಹಾಲಿ. ವಿ. "ಕಾಲಿಕಟ್ ಇನ್ ಹಿಸ್ಟರಿ" ಪ್ರಕಟಣಾ ವಿಭಾಗ, ಕಾಲಿಕಟ್ ವಿಶ್ವವಿದ್ಯಾಲಯ (ಕೇರಳ), 2004</ref> 16 ನೇ ಶತಮಾನದ ಐತಿಹಾಸಿಕ ಕೃತಿ ''[[ತುಹ್ಫತ್ ಉಲ್ ಮುಜಾಹಿದೀನ್]]'' ಪ್ರಕಾರ, [[ಪರಪ್ಪನಂಗಾಡಿ]] (''ಬಾರ್ಬುರಂಕಾಡ್''), [[ತಿರೂರಂಗಡಿ]] (''ತಿರುವಾರಂಕಾಡ್''), [[ತಾನೂರು, ಮಲಪ್ಪುರಂ|ತಾನೂರು]], ಮತ್ತು [[ಪೊನ್ನಾನಿ]] (''ಫುನಾನ್'') ಸಹ ಜಾಮೋರಿನ್ ಆಡಳಿತದ ಅಡಿಯಲ್ಲಿ ವ್ಯಾಪಾರ ವಸಾಹತುಗಳಲ್ಲಿ ಮುಖ್ಯವಾದವುಗಳಾಗಿವೆ.<ref name="Makhdoom"/> [[ಪೊನ್ನಾನಿ]]ಯಲ್ಲಿನ ''ತ್ರಿಕ್ಕವಿಲ್ ಕೋವಿಲಕಂ'' ಜಾಮೋರಿನ್ಗೆ ಎರಡನೇ ನೆಲೆಯಾಗಿ ಸೇವೆ ಸಲ್ಲಿಸಿತು. ಪೊನ್ನಾನಿ ಅವರ ಸಾಮ್ರಾಜ್ಯದ ನೌಕಾ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಿತು.<ref name="ReferenceB">ಕೆ. ವಿ. ಕೃಷ್ಣ ಅಯ್ಯರ್ ''ಕಾಲಿಕಟ್ನ ಜಾಮೋರಿನ್ಗಳು: ಆರಂಭಿಕ ಕಾಲದಿಂದ AD 1806 ರವರೆಗೆ''. ಕಾಲಿಕಟ್: ನಾರ್ಮನ್ ಪ್ರಿಂಟಿಂಗ್ ಬ್ಯೂರೋ, 1938</ref> [[ಮಲಪ್ಪುರಂ]] ಜಾಮೋರಿನ್ನ ಸ್ಥಳೀಯ ಪ್ರಧಾನಿಯಾದ ''ಪರ ನಂಬಿ''ಯ ಪ್ರಧಾನ ಕಚೇರಿಯಾಗಿತ್ತು.<ref name="Malabar Manual Appendix">{{cite book |last1=Logan |first1=William |title=ಮಲಬಾರ್ ಮ್ಯಾನ್ಯುಯಲ್: VICTORIA INSTITUTIONS ನಿಂದ ವೇದ್ ಅವರ ವ್ಯಾಖ್ಯಾನದೊಂದಿಗೆ |publisher=VICTORIA INSTITUTIONS, Aaradhana, DEVERKOVIL 673508 |edition=Volume 2 |url=https://books.google.com/books?id=0TJFDwAAQBAJ&pg=PA1 |access-date=12 July 2020 |archive-date=13 September 2021 |archive-url=https://web.archive.org/web/20210913063330/https://books.google.com/books?id=0TJFDwAAQBAJ&pg=PA1 |url-status=live }}</ref> ಜಾಮೋರಿನ್ನ ಇತರ [[ಕೋವಿಲಕಂ|''ಕೋವಿಲಕಂಗಳು'']] [[ಕೊಟ್ಟಕ್ಕಲ್]]ನ ''ಕಿಝಕ್ಕೆ ಕೋವಿಲಕಂ'', [[ಮಂಜೇರಿ]]ಯ ''ಮಂಜೇರಿ ಕೋವಿಲಕಂ'',<ref name="MGS">{{Cite book|url=https://books.google.com/books?id=n6CNHAAACAAJ&q=Perumals+of+Kerala|title=ಕೇರಳದ ಪೆರುಮಾಳ್ಗಳು: ಮಕೋಟೈನ ಚೇರ ಪೆರುಮಾಳ್ಗಳ ಅಡಿಯಲ್ಲಿ ಕೇರಳದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳು (ಸುಮಾರು 800 A.D.-1124 A.D.)|last=Narayanan|first=M. G. S.|date=1996|publisher=Xavier Press|access-date=16 November 2020|archive-date=13 September 2021|archive-url=https://web.archive.org/web/20210913063330/https://books.google.com/books?id=n6CNHAAACAAJ&q=Perumals+of+Kerala|url-status=live}}</ref> ಮತ್ತು [[ನಿಲಂಬೂರ್]]ನ [[ನಿಲಂಬೂರ್ ಸಾಮ್ರಾಜ್ಯ|''ನಿಲಂಬೂರ್ ಕೋವಿಲಕಂ'']] ಸೇರಿದ್ದವು. [[ಪರಪ್ಪನಂಗಾಡಿ]]ಯ ''ಪರಪ್ಪನಾಡ್ ಕೋವಿಲಕಂ'' ಮತ್ತು [[ತಾನೂರು, ಮಲಪ್ಪುರಂ|ತಾನೂರು]]ನ ''ತಾನೂರು ಕೋವಿಲಕಂ'' ಜಾಮೋರಿನ್ನ ಸಾಮಂತ ರಾಜಮನೆತನಗಳಾಗಿದ್ದವು. ಆದಾಗ್ಯೂ [[ಅಂಗಡಿಪುರಂ]] ಬಳಿಯ [[ಮಂಕಡ]]ದ ''ಮಂಕಡ ಕೋವಿಲಕಂ'' [[ವಲ್ಲುವನಾಡ್ ಸಾಮ್ರಾಜ್ಯ|''ವಲ್ಲುವನಾಡ್ ರಾಜರು'']]ನ ಆಡಳಿತ ಮನೆತನದ ಸ್ಥಾನವಾಗಿತ್ತು. ಕೇರಳದ [[ನಂಬೂದಿರಿ]] [[ಬ್ರಾಹ್ಮಣ]]ರ ಪ್ರಮುಖ ನಾಯಕರಾಗಿದ್ದ [[ಅಳ್ವಾಂಚೇರಿ ತಂಪ್ರಕ್ಕಲ್]]ರ ಪ್ರಧಾನ ಕಚೇರಿಯಾದ ''ಅಳ್ವಾಂಚೇರಿ ಮನ''ವು [[ತಿರೂರ್ ತಾಲೂಕು]]ನ [[ಕುಟ್ಟಿಪುರಂ]] ಬಳಿಯ [[ಅತವನಾಡ್]] ನಲ್ಲಿದೆ. ''ಅಳ್ವಾಂಚೇರಿ ತಂಪ್ರಕ್ಕಲ್'' ಮತ್ತು [[ತಾನೂರು ಸಾಮ್ರಾಜ್ಯ]]ದ [[ಕಲ್ಪಕಾಂಚೇರಿ]]ಯ ಒಡೆಯರು ಸಾಮಾನ್ಯವಾಗಿ ಹೊಸ ಜಾಮೋರಿನ್ನ ''ಅರಿಯಿಟ್ಟು ವಳ್ಚ'' (ಪಟ್ಟಾಭಿಷೇಕ) ಸಮಾರಂಭದಲ್ಲಿ ಉಪಸ್ಥಿತರಿರುತ್ತಿದ್ದರು.<ref name="MGS"/> [[ಅರಬ್ಬರು]] ಆರಂಭಿಕ ಮಧ್ಯಯುಗದಲ್ಲಿ ವ್ಯಾಪಾರದ ಏಕಸ್ವಾಮ್ಯವನ್ನು ಹೊಂದಿದ್ದರು.<ref name="MGS"/> ''[[ಪಾಲಕ್ಕಾಡ್]] ರಾಜರ'' ಮೂಲ ಪ್ರಧಾನ ಕಚೇರಿಯೂ [[ಅತವನಾಡ್]] ನಲ್ಲಿತ್ತು.<ref name="mnn">{{Cite book|title='ಕೇರಳ ಚರಿತ್ರಂ|last=ಶ್ರೀಧರ ಮೇನನ್|first=ಎ|publisher=ಡಿಸಿ ಬುಕ್ಸ್|year=2007|isbn=9788126415885|location=ಕೊಟ್ಟಯಂ|page=200|url=https://keralabookstore.com/book/keralacharithram/11148/|access-date=22 April 2020|archive-date=9 July 2020|archive-url=https://web.archive.org/web/20200709123203/https://keralabookstore.com/book/keralacharithram/11148/|url-status=live}}</ref>
[[File:Map of Samoothiris kingdom.jpg|thumbnail|1498 ರಲ್ಲಿ ಜಾಮೋರಿನ್ ಸಾಮ್ರಾಜ್ಯ]]
[[File:Ponnani harbour 2.jpg|left|thumbnail|ಜಾಮೋರಿನ್ನ ಎರಡನೇ ನಿವಾಸವು [[ಪೊನ್ನಾನಿ]]ಯ ''ತ್ರಿಕ್ಕವಿಲ್ ಕೋವಿಲಕಂ'' ನಲ್ಲಿತ್ತು]]
[[File:Caminho maritimo para a India.png|left|thumb|1498 ರಲ್ಲಿ [[ವಾಸ್ಕೋ ಡ ಗಾಮಾ]] [[ಕೋಝಿಕ್ಕೋಡ್]] ತಲುಪಲು ತೆಗೆದುಕೊಂಡ ಮಾರ್ಗ (ಕಪ್ಪು ರೇಖೆ), ಇದು [[ಯುರೋಪ್]] ನಿಂದ [[ಭಾರತ]]ಕ್ಕೆ [[ಸಮುದ್ರ ಮಾರ್ಗ|ಸಮುದ್ರ ಮಾರ್ಗದ]] [[ಭೌಗೋಳಿಕ ಅನ್ವೇಷಣೆಗಳ ಯುಗ|ಶೋಧನೆಯಾಗಿದೆ]], ಮತ್ತು ಅಂತಿಮವಾಗಿ [[ಭಾರತೀಯ ಉಪಖಂಡ]]ದ [[ವಸಾಹತುಶಾಹಿ ಭಾರತ|ಯುರೋಪಿಯನ್ ವಸಾಹತುಶಾಹಿಗೆ]] ದಾರಿ ಮಾಡಿಕೊಟ್ಟಿತು. ಆ ಸಮಯದಲ್ಲಿ, [[ಕಾಲಿಕಟ್]]ನ [[ಜಾಮೋರಿನ್]] ಪೊನ್ನಾನಿಯ ತ್ರಿಕ್ಕವಿಲ್ ಕೋವಿಲಕಂನಲ್ಲಿ ವಾಸಿಸುತ್ತಿದ್ದರು.]]
[[ವಾಸ್ಕೋ ಡ ಗಾಮಾ]]ನ ನೌಕಾಪಡೆಯು 1497 ರಲ್ಲಿ [[ಪೋರ್ಚುಗಲ್]] ಅನ್ನು ತೊರೆಯಿತು, ಕೇಪ್ ಅನ್ನು ಸುತ್ತಿಕೊಂಡು ಪೂರ್ವ ಆಫ್ರಿಕಾದ ಕರಾವಳಿಯಲ್ಲಿ ಮುಂದುವರೆಯಿತು, ಅಲ್ಲಿ ಸ್ಥಳೀಯ ಪೈಲಟ್ ಅನ್ನು ಹಡಗಿನಲ್ಲಿ ಕರೆತರಲಾಯಿತು, ಅವರು ಅವರನ್ನು [[ಹಿಂದೂ ಮಹಾಸಾಗರ]]ದಾದ್ಯಂತ ಮಾರ್ಗದರ್ಶನ ಮಾಡಿದರು, ಮೇ 1498 ರಲ್ಲಿ [[ಕೋಝಿಕ್ಕೋಡ್|ಕಾಲಿಕಟ್]] ತಲುಪಿದರು.<ref>[[#refScammell|ಸ್ಕ್ಯಾಮೆಲ್]], ಪು. 13</ref> [[ವಾಸ್ಕೋ ಡ ಗಾಮಾ]] ಮತ್ತು ಅವರ ಪೋರ್ಚುಗೀಸ್ ನೌಕಾಪಡೆಯು ಕಾಲಿಕಟ್ಗೆ ಆಗಮಿಸುವ ಸಮಯದಲ್ಲಿ, ಕಾಲಿಕಟ್ನ ಜಾಮೋರಿನ್ ಪೊನ್ನಾನಿಯಲ್ಲಿ ವಾಸಿಸುತ್ತಿದ್ದರು.<ref>ಇ. ಜಿ. ರಾವೆನ್ಸ್ಟೈನ್, ಸಂ., ''ಎ ಜರ್ನಲ್ ಆಫ್ ದಿ ಫಸ್ಟ್ ವಾಯೇಜ್ ಆಫ್ ವಾಸ್ಕೋ ಡ ಗಾಮಾ'', ದೆಹಲಿ, 1995, ಪು. 50</ref> ಜಾಮೋರಿನ್ ಪೋರ್ಚುಗೀಸರಿಗೆ ವ್ಯಾಪಾರಕ್ಕಾಗಿ ಎಲ್ಲಾ ಸೌಕರ್ಯಗಳನ್ನು ಒದಗಿಸಿದ್ದರು.<ref name="mh"/> ಆದಾಗ್ಯೂ, [[ಅರಬ್]] ಆಸ್ತಿಗಳ ಮೇಲಿನ ಪೋರ್ಚುಗೀಸ್ ಪ್ರಚೋದನೆಗಳು ಜಾಮೋರಿನ್ ಮತ್ತು ಪೋರ್ಚುಗೀಸರ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಇದಲ್ಲದೆ, ಜಾಮೋರಿನ್ನ ಎರಡನೇ ಪ್ರಧಾನ ಕಚೇರಿಯಾಗಿದ್ದ [[ಪೊನ್ನಾನಿ]] ಪೋರ್ಚುಗೀಸರ ಪ್ರಮುಖ ಗುರಿಯಾಗಿತ್ತು.<ref name="mh"/> [[ಕಾಲಿಕಟ್ನ ಜಾಮೋರಿನ್]]ನ ಸಾಮಂತನಾಗಿದ್ದ [[ತಾನೂರು ಸಾಮ್ರಾಜ್ಯ]]ದ ಆಡಳಿತಗಾರನು ತನ್ನ ಪ್ರಭುವಿಗೆ ವಿರುದ್ಧವಾಗಿ [[ಕೋಝಿಕ್ಕೋಡ್]]ನಲ್ಲಿ ಪೋರ್ಚುಗೀಸರ ಪಕ್ಷ ವಹಿಸಿದನು.<ref name="askh"/> ಪರಿಣಾಮವಾಗಿ, [[ತಾನೂರು ಸಾಮ್ರಾಜ್ಯ]] (''[[ತಿರೂರ್ ತಾಲೂಕು|ವೆಟ್ಟತ್ತುನಾಡು]]'') ಭಾರತದಲ್ಲಿ ಆರಂಭಿಕ ಪೋರ್ಚುಗೀಸ್ ವಸಾಹತುಗಳಲ್ಲಿ ಒಂದಾಯಿತು. [[ತಾನೂರು, ಮಲಪ್ಪುರಂ|ತಾನೂರು]]ನ ಆಡಳಿತಗಾರನು [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿ]]ನ ಪಕ್ಷವನ್ನೂ ವಹಿಸಿದನು.<ref name="askh"/> 16 ಮತ್ತು 17 ನೇ ಶತಮಾನಗಳಲ್ಲಿ ಕೊಚ್ಚಿಯ ರಾಜಮನೆತನದ ಅನೇಕ ಸದಸ್ಯರನ್ನು [[ವೆಟ್ಟೊಂ ಗ್ರಾಮ ಪಂಚಾಯತ್|ವೆಟ್ಟೊಂ]]ನಿಂದ ಆಯ್ಕೆ ಮಾಡಲಾಗುತ್ತಿತ್ತು.<ref name="askh"/> ಆದಾಗ್ಯೂ, [[ತಾನೂರು, ಮಲಪ್ಪುರಂ|ತಾನೂರು]] ಪಡೆಗಳು [[ಕೊಚ್ಚಿ ಕದನ (1504)]] ದಲ್ಲಿ ಕಾಲಿಕಟ್ನ ಜಾಮೋರಿನ್ ಪರವಾಗಿ ಹೋರಾಡಿದವು.<ref name="Logan">{{Cite book|title=ಮಲಬಾರ್ ಮ್ಯಾನ್ಯುಯಲ್ (ಸಂಪುಟ-I)|last=ಲೋಗನ್|first=ವಿಲಿಯಮ್|publisher=ಏಷ್ಯನ್ ಎಜುಕೇಷನಲ್ ಸರ್ವೀಸಸ್|year=2010|isbn=9788120604476|location=ನವ ದೆಹಲಿ|pages=631–666}}</ref> ಆದಾಗ್ಯೂ, [[ತಾನೂರು, ಮಲಪ್ಪುರಂ|ತಾನೂರು]] ಪ್ರದೇಶದ [[ಮಲಬಾರ್ ಮುಸ್ಲಿಮರು|ಮಾಪ್ಪಿಳ್ಳ]] ವ್ಯಾಪಾರಿಗಳ ನಿಷ್ಠೆಯು ಇನ್ನೂ [[ಕಾಲಿಕಟ್ನ ಜಾಮೋರಿನ್]]ನ ಅಡಿಯಲ್ಲೇ ಉಳಿಯಿತು.<ref name="Makhdoom">{{cite book
| author = ಎಸ್. ಮುಹಮ್ಮದ್ ಹುಸೇನ್ ನಯಿನಾರ್ | year=1942
| title= ತುಹ್ಫತ್-ಅಲ್-ಮುಜಾಹಿದೀನ್: ಅರೇಬಿಕ್ ಭಾಷೆಯಲ್ಲಿ ಒಂದು ಐತಿಹಾಸಿಕ ಕೃತಿ | publisher=ಮದ್ರಾಸ್ ವಿಶ್ವವಿದ್ಯಾಲಯ
| url= https://archive.org/details/Tuhfat-al-MujahidinAnHistoricalWorkInTheArabicLanguage
}}</ref> ಆಧುನಿಕ [[ಮಲಯಾಳಂ ಸಾಹಿತ್ಯ]]ದ ಪಿತಾಮಹ ಎಂದು ಪರಿಗಣಿಸಲ್ಪಟ್ಟಿರುವ [[ತುಂಚತ್ತು ಎಝುತ್ತಚನ್]] ಪೋರ್ಚುಗೀಸ್ ಅವಧಿಯಲ್ಲಿ [[ತಿರೂರ್]] (''[[ತಾನೂರು ಸಾಮ್ರಾಜ್ಯ|ವೆಟ್ಟತ್ತುನಾಡು]]'') ನಲ್ಲಿ ಜನಿಸಿದರು.<ref name="askh"/> 14 ಮತ್ತು 16 ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದ ಮಧ್ಯಕಾಲೀನ [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆ]]ಯು ಪ್ರಾಥಮಿಕವಾಗಿ [[ತಾನೂರು ಸಾಮ್ರಾಜ್ಯ|''ವೆಟ್ಟತ್ತುನಾಡು'']] ([[ತಿರೂರ್ ತಾಲೂಕು|ತಿರೂರ್ ಪ್ರದೇಶ]]) ದಲ್ಲಿತ್ತು.<ref name="roy">{{cite journal |last=ರಾಯ್ |first=ರಂಜನ್ |year=1990 |title=ಲೀಬ್ನಿಜ್, ಗ್ರೆಗೊರಿ, ಮತ್ತು ನಿಲಕಂಠರಿಂದ π ಗಾಗಿ ಸರಣಿ ಸೂತ್ರದ ಶೋಧನೆ |url=https://archive.org/details/sim_mathematics-magazine_1990-12_63_5/page/291 |journal=ಗಣಿತ ನಿಯತಕಾಲಿಕೆ |volume=63 |issue=5 |pages=291–306 |doi=10.2307/2690896 |jstor=2690896}}</ref><ref name="Pingree 1992 554–563">{{Citation |last=ಪಿಂಗ್ರೀ |first=ಡೇವಿಡ್ |author-link=ಡೇವಿಡ್ ಪಿಂಗ್ರೀ |title=ಹೆಲ್ಲೆನೊಫಿಲಿಯಾ ವರ್ಸಸ್ ದಿ ಹಿಸ್ಟರಿ ಆಫ್ ಸೈನ್ಸ್ |year=1992 |journal=ಐಸಿಸ್ |volume=83 |issue=4 |pages=554–563 |jstor=234257 |doi=10.1086/356288 |quote=ನಾನು ನಿಮಗೆ ನೀಡಬಹುದಾದ ಒಂದು ಉದಾಹರಣೆಯೆಂದರೆ ಸುಮಾರು 1400 A.D. ರಲ್ಲಿ ಜ್ಯಾಮಿತೀಯ ಮತ್ತು ಬೀಜಗಣಿತದ ವಾದಗಳನ್ನು ಬಳಸಿಕೊಂಡು ತ್ರಿಕೋನಮಿತಿಯ ಕಾರ್ಯಗಳ ಅನಂತ ಶ್ರೇಣಿಯನ್ನು ಭಾರತೀಯ ಮಾಧವನ ಪ್ರದರ್ಶನಕ್ಕೆ ಸಂಬಂಧಿಸಿದೆ. ಇದನ್ನು ಮೊದಲು ಇಂಗ್ಲಿಷ್ನಲ್ಲಿ ಚಾರ್ಲ್ಸ್ ವಿಷ್ ಅವರು 1830 ರ ದಶಕದಲ್ಲಿ ವಿವರಿಸಿದಾಗ, ಅದನ್ನು ಭಾರತೀಯರು ಕಲನಶಾಸ್ತ್ರದ ಆವಿಷ್ಕಾರ ಎಂದು ಸಾರಲಾಯಿತು. ಈ ಹಕ್ಕು ಮತ್ತು ಮಾಧವನ ಸಾಧನೆಗಳನ್ನು ಪಾಶ್ಚಾತ್ಯ ಇತಿಹಾಸಕಾರರು ಕಡೆಗಣಿಸಿದರು, ಬಹುಶಃ ಮೊದಲಿಗೆ ಭಾರತೀಯನು ಕಲನಶಾಸ್ತ್ರವನ್ನು ಕಂಡುಹಿಡಿದನು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ, ಆದರೆ ನಂತರ ರಾಯಲ್ ಏಷ್ಯಾಟಿಕ್ ಸೊಸೈಟಿಯ ವ್ಯವಹಾರಗಳನ್ನು ಯಾರೂ ಓದುತ್ತಿರಲಿಲ್ಲ, ಅದರಲ್ಲಿ ವಿಷ್ ಅವರ ಲೇಖನವನ್ನು ಪ್ರಕಟಿಸಲಾಗಿತ್ತು. ಈ ವಿಷಯವು 1950 ರ ದಶಕದಲ್ಲಿ ಮತ್ತೆ ಕಾಣಿಸಿಕೊಂಡಿತು, ಮತ್ತು ಈಗ ನಾವು ಸಂಸ್ಕೃತ ಪಠ್ಯಗಳನ್ನು ಸರಿಯಾಗಿ ಸಂಪಾದಿಸಿದ್ದೇವೆ, ಮತ್ತು ಮಾಧವನು ''ಕಲನಶಾಸ್ತ್ರವಿಲ್ಲದೆ'' ಶ್ರೇಣಿಯನ್ನು ಹೇಗೆ ಪಡೆದರು ಎಂಬ ಚತುರ ಮಾರ್ಗವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ, ಆದರೆ ಅನೇಕ ಇತಿಹಾಸಕಾರರು ಕಲನಶಾಸ್ತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯದಲ್ಲಿ ಸಮಸ್ಯೆ ಮತ್ತು ಅದರ ಪರಿಹಾರವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವೆಂದು ಕಂಡುಕೊಳ್ಳುತ್ತಾರೆ ಮತ್ತು ಮಾಧವನು ಕಂಡುಕೊಂಡಿದ್ದು ಕಲನಶಾಸ್ತ್ರವೆಂದು ಘೋಷಿಸುತ್ತಾರೆ. ಈ ಸಂದರ್ಭದಲ್ಲಿ, ಮಾಧವನ ಗಣಿತದ ಸೊಬಗು ಮತ್ತು ಪ್ರತಿಭೆಯು ವಿರೂಪಗೊಳ್ಳುತ್ತಿದೆ, ಏಕೆಂದರೆ ಅವನು ಪರ್ಯಾಯ ಮತ್ತು ಪ್ರಬಲ ಪರಿಹಾರವನ್ನು ಕಂಡುಹಿಡಿದ ಸಮಸ್ಯೆಗೆ ಪ್ರಸ್ತುತ ಗಣಿತದ ಪರಿಹಾರದ ಅಡಿಯಲ್ಲಿ ಹೂಳಲಾಗಿದೆ. |bibcode=1992Isis...83..554P|s2cid=68570164 }}</ref>
1507 ರಲ್ಲಿ, ಪೋರ್ಚುಗೀಸ್ ವೈಸ್ರಾಯ್ [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] ಪೊನ್ನಾನಿ ಮೇಲೆ ದಾಳಿ ಮಾಡಿದರು ಮತ್ತು 1585 ರಲ್ಲಿ ಅಲ್ಲಿ ಕೋಟೆಯನ್ನು ನಿರ್ಮಿಸಲು ಪ್ರಾರಂಭಿಸಿದರು.<ref name="mh"/> ಜಿಲ್ಲೆಯು ಮಸಾಲೆ ವ್ಯಾಪಾರದ ಏಕಸ್ವಾಮ್ಯಕ್ಕಾಗಿ ಕೋಝಿಕ್ಕೋಡ್ ನೌಕಾ ಮುಖ್ಯಸ್ಥರು, [[ಕುಂಹಾಲಿ ಮರಕ್ಕರ್]]ಗಳು ಮತ್ತು ಪೋರ್ಚುಗೀಸರ ನಡುವೆ ಹಲವಾರು ಯುದ್ಧಗಳನ್ನು ಕಂಡಿತು. ಕುಂಜಾಲಿ ಮರಕ್ಕರ್ಗಳು ಭಾರತೀಯ ಕರಾವಳಿಯ ಮೊದಲ ನೌಕಾ ರಕ್ಷಣೆಯನ್ನು ಸಂಘಟಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.<ref>{{cite web|title=ಸಾಗರ ಪರಂಪರೆ – ಭಾರತೀಯ ನೌಕಾಪಡೆಗೆ ಸೇರಿ {{!}} ಭಾರತ ಸರ್ಕಾರ|url=https://www.joinindiannavy.gov.in/en/about-us/maritime-heritage.html|website=joinindiannavy.gov.in|access-date=10 March 2020|archive-date=31 March 2020|archive-url=https://web.archive.org/web/20200331151728/https://www.joinindiannavy.gov.in/en/about-us/maritime-heritage.html|url-status=live}}</ref><ref>{{cite news |last=ಸಿಂಗ್ |first=ಅರುಣ್ ಕುಮಾರ್ |title=ಭಾರತೀಯ ನೌಕಾಪಡೆಗೆ ಅದರ ಹಕ್ಕನ್ನು ನೀಡಿ |url=https://www.asianage.com/opinion/columnists/110217/give-indian-navy-its-due.html |access-date=6 March 2020 |work=[[ದಿ ಏಷಿಯನ್ ಏಜ್]] |date=11 February 2017 |archive-date=8 March 2021 |archive-url=https://web.archive.org/web/20210308123207/https://www.asianage.com/opinion/columnists/110217/give-indian-navy-its-due.html |url-status=live }}</ref> [[ತಾನೂರು, ಮಲಪ್ಪುರಂ|ತಾನೂರು]] ಪಟ್ಟಣವು ಭಾರತೀಯ ಉಪಖಂಡದ ಆರಂಭಿಕ ಪೋರ್ಚುಗೀಸ್ ವಸಾಹತುಗಳಲ್ಲಿ ಒಂದಾಗಿತ್ತು. [[ಪೊನ್ನಾನಿ]] ಮತ್ತು [[ಪರಪ್ಪನಂಗಾಡಿ]] ಪಟ್ಟಣಗಳನ್ನು ಕ್ರಮವಾಗಿ 1525 ಮತ್ತು 1573–74 ರಲ್ಲಿ ಪೋರ್ಚುಗೀಸರು ಸುಟ್ಟುಹಾಕಿದರು.<ref name="ReferenceB" /> 16 ನೇ ಶತಮಾನ CE ಯಲ್ಲಿ, ಕೊಚ್ಚಿಯು ಮಲಬಾರ್ ಕರಾವಳಿಯಲ್ಲಿ ಪ್ರಮುಖ ಶಕ್ತಿಯಾದಾಗ, [[ಕೊಚ್ಚಿ ಸಾಮ್ರಾಜ್ಯ]]ದ ಕೆಲವು ರಾಜರನ್ನು ಸಾಮಾನ್ಯವಾಗಿ [[ತಾನೂರು ಸಾಮ್ರಾಜ್ಯ]]ದ ರಾಜಮನೆತನದಿಂದ ಆಯ್ಕೆ ಮಾಡಲಾಗುತ್ತಿತ್ತು.<ref name="askh"/> 1571 ರ [[ಚಾಲಿಯಂ]] ಕೋಟೆಯ ಕದನದೊಂದಿಗೆ ಪೋರ್ಚುಗೀಸರನ್ನು [[ತಾನೂರು ಸಾಮ್ರಾಜ್ಯ]]ದಿಂದ ಹೊರಹಾಕಲಾಯಿತು. [[ಚಾಲಿಯಂ]] [[ತಾನೂರು ಸಾಮ್ರಾಜ್ಯ|ವೆಟ್ಟತ್ತುನಾಡಿನ]] ಉತ್ತರದ ಗಡಿಯಾಗಿತ್ತು. ಆ ಕದನದ ಸಮಯದಲ್ಲಿ, ಜಾಮೋರಿನ್ ಅವರಿಗೆ [[ಪೊನ್ನಾನಿ]], [[ತಾನೂರು, ಮಲಪ್ಪುರಂ|ತಾನೂರು]], ಮತ್ತು [[ಪರಪ್ಪನಂಗಾಡಿ]]ಯ [[ಮಲಬಾರ್ ಮುಸ್ಲಿಮರು|ಮಾಪ್ಪಿಳ್ಳ]]ರ ನಿಸ್ಸಂದಿಗ್ಧವಾದ ಸಹಾಯವನ್ನು ಪಡೆದರು.
[[File:Ponnani harbour.jpg|left|thumbnail|400px|2012 ರಲ್ಲಿ ಚಿತ್ರಿಸಿದ [[ಪೊನ್ನಾನಿ]] ಬಂದರು. ಪೊನ್ನಾನಿ ಬಂದರು [[ತಾನೂರು ಸಾಮ್ರಾಜ್ಯ]]ದ ದಕ್ಷಿಣದ ಕೊನೆಯಾಗಿತ್ತು]]
[[File:From a map by Emanuel Bowen, 1744.jpg|thumb|[[ಇಮ್ಯಾನುಯೆಲ್ ಬೋವೆನ್]] ಅವರ ನಕ್ಷೆಯಿಂದ [[ದಕ್ಷಿಣ ಭಾರತ]] (1744), ಇಂಗ್ಲಿಷ್ ನಕ್ಷಾ ಕೆತ್ತನೆಗಾರ. ನಕ್ಷೆಯಲ್ಲಿ, ಜಾಮೋರಿನ್ ಸಾಮ್ರಾಜ್ಯದೊಳಗೆ [[ತಾನೂರು ಸಾಮ್ರಾಜ್ಯ]]ವನ್ನು ಮಾತ್ರ ಪ್ರತ್ಯೇಕ ಗಡಿಯೊಂದಿಗೆ ತೋರಿಸಲಾಗಿದೆ ಎಂಬುದನ್ನು ಗಮನಿಸಿ]]
16 ನೇ ಶತಮಾನ CE ಯಲ್ಲಿ ಪೊನ್ನಾನಿಯಲ್ಲಿ [[ಜೈನುದ್ದೀನ್ ಮಖ್ದೂಂ II]] (ಸುಮಾರು 1532 ರಲ್ಲಿ ಜನಿಸಿದರು) ಬರೆದ ''[[ತುಹ್ಫತ್ ಉಲ್ ಮುಜಾಹಿದೀನ್]]'' 1498 ರಿಂದ 1583 ರವರೆಗೆ [[ಮಲಬಾರ್ ಕರಾವಳಿ]]ಯನ್ನು ವಸಾಹತುವನ್ನಾಗಿ ಮಾಡಲು ಪೋರ್ಚುಗೀಸರ ಪ್ರಯತ್ನಗಳ ವಿರುದ್ಧ [[ಕುಂಜಾಲಿ ಮರಕ್ಕರ್]] ನೌಕಾಪಡೆಯು ಕಾಲಿಕಟ್ನ ಜಾಮೋರಿನ್ ಜೊತೆಯಲ್ಲಿ ಮಾಡಿದ ಪ್ರತಿರೋಧದ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಇದು [[ಅರೇಬಿಕ್]] ಭಾಷೆಯಲ್ಲಿ ಬರೆಯಲ್ಪಟ್ಟಿದ್ದು, ಕೇರಳದ ಇತಿಹಾಸವನ್ನು ಆಧರಿಸಿದ ಮೊದಲ ಪ್ರಸಿದ್ಧ ಪುಸ್ತಕವಾಗಿದೆ, ಇದನ್ನು ಕೇರಳದವರು ಬರೆದಿದ್ದಾರೆ.<ref name="Noorani">ಎಜಿ ನೂರಾನಿ {{cite web|url=http://www.frontlineonnet.com/fl2704/stories/20100226270407900.htm |title=ಕೇರಳದಲ್ಲಿ ಇಸ್ಲಾಂ |access-date=5 January 2013 |url-status=dead |archive-url=https://web.archive.org/web/20121221021629/http://www.frontlineonnet.com/fl2704/stories/20100226270407900.htm |archive-date=21 December 2012 }}</ref> ಇದನ್ನು ಮೊದಲು [[ಲಿಸ್ಬನ್]] ನಲ್ಲಿ ಮುದ್ರಿಸಿ ಪ್ರಕಟಿಸಲಾಯಿತು. ಈ ಆವೃತ್ತಿಯ ಪ್ರತಿಯನ್ನು [[ಕೈರೋ]]ದ [[ಅಲ್-ಅಝರ್ ವಿಶ್ವವಿದ್ಯಾಲಯ]]ದ ಗ್ರಂಥಾಲಯದಲ್ಲಿ ಸಂರಕ್ಷಿಸಲಾಗಿದೆ.<ref name="A. Sreedhara Menon 2011">ಎ. ಶ್ರೀಧರ ಮೇನನ್. ''ಕೇರಳ ಇತಿಹಾಸ ಮತ್ತು ಅದರ ನಿರ್ಮಾಪಕರು''. ಡಿಸಿ ಬುಕ್ಸ್ (2011)</ref><ref name="frontline.in">[http://www.frontline.in/static/html/fl2704/stories/20100226270407900.htm ಎಜಿ ನೂರಾನಿ. ಕೇರಳದಲ್ಲಿ ಇಸ್ಲಾಂ. ಪುಸ್ತಕಗಳು]</ref><ref>ರೋಲ್ಯಾಂಡ್ ಇ. ಮಿಲ್ಲರ್.
''ಮಾಪ್ಪಿಳ್ಳ ಮುಸ್ಲಿಂ ಸಂಸ್ಕೃತಿ'' SUNY ಪ್ರೆಸ್, 2015</ref> 1532 ರಲ್ಲಿ [[ತಾನೂರು, ಮಲಪ್ಪುರಂ|ತಾನೂರು]]ನ ಆಡಳಿತಗಾರನ ಸಹಾಯದಿಂದ, [[ಚಾಲಿಯಂ]]ನಲ್ಲಿ ಒಂದು ಚಾಪೆಲ್ ಅನ್ನು ನಿರ್ಮಿಸಲಾಯಿತು, ಜೊತೆಗೆ ಕಮಾಂಡರ್ಗಾಗಿ ಒಂದು ಮನೆ, ಸೈನಿಕರಿಗೆ ಬ್ಯಾರಕ್ಗಳು, ಮತ್ತು ವ್ಯಾಪಾರಕ್ಕಾಗಿ ಗೋದಾಮುಗಳನ್ನು ನಿರ್ಮಿಸಲಾಯಿತು. ಜಾಮೋರಿನ್ ಜೊತೆ ಒಪ್ಪಂದವನ್ನು ಮಾತುಕತೆ ನಡೆಸಿದ ಡಿಯಾಗೋ ಡಿ ಪೆರೇರಾ, ಈ ಹೊಸ ಕೋಟೆಯ ಆಜ್ಞೆಯನ್ನು ವಹಿಸಿಕೊಂಡರು, 250 ಜನರ ಗ್ಯಾರಿಸನ್ ಹೊಂದಿದ್ದರು; ಮತ್ತು ಮ್ಯಾನುಯೆಲ್ ಡಿ ಸೌಸಾ ಅವರು ಇಪ್ಪತ್ತೆರಡು ಹಡಗುಗಳ ನೌಕಾಪಡೆಯೊಂದಿಗೆ ಅದರ ಸಮುದ್ರದ ಸುರಕ್ಷತೆಯನ್ನು ಖಚಿತಪಡಿಸಲು ಆದೇಶಗಳನ್ನು ಹೊಂದಿದ್ದರು.<ref name="columbia.edu"/> ಜಾಮೋರಿನ್ ಶೀಘ್ರದಲ್ಲೇ ತಮ್ಮ ಪ್ರಭುತ್ವದಲ್ಲಿ ಈ ಕೋಟೆಯನ್ನು ನಿರ್ಮಿಸಲು ಅನುಮತಿಸಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟರು, ಮತ್ತು [[ಪರಪ್ಪನಂಗಾಡಿ]]ಯ ಆಡಳಿತಗಾರ ಕಾರಾಮನ್ಲಿ ([[ಬೇಪೋರ್]]ನ ರಾಜ?) (ಕೆಲವು ದಾಖಲೆಗಳು ತಾನೂರು ಆಡಳಿತಗಾರನೂ ಅವರೊಂದಿಗೆ ಇದ್ದನು ಎನ್ನುತ್ತವೆ <ref name="columbia.edu">{{Cite web |url=http://www.columbia.edu/itc/mealac/pritchett/00generallinks/kerr/vol06chap01sect07.html |title=Vol06chap01sect07 |access-date=1 May 2021 |archive-date=22 February 2020 |archive-url=https://web.archive.org/web/20200222081409/http://www.columbia.edu/itc/mealac/pritchett/00generallinks/kerr/vol06chap01sect07.html |url-status=live }}</ref>) ಪೋರ್ಚುಗೀಸರೊಂದಿಗೆ ಒಡೆಯಲು ಪ್ರಭಾವವನ್ನು ಬೀರಲು ನಿಷ್ಪ್ರಯೋಜಕ ಪ್ರಯತ್ನಗಳನ್ನು ಮಾಡಿದರು, ಅವರ ವಿರುದ್ಧ ಯುದ್ಧಕ್ಕೂ ಹೋದರು.<ref name="Makhdoom"/> 1571 ರಲ್ಲಿ, [[ತಾನೂರು ಸಾಮ್ರಾಜ್ಯ#ಚಾಲಿಯಂ ಕೋಟೆಯ ಕದನಗಳು|ಚಾಲಿಯಂ ಕೋಟೆಯ ಕದನದಲ್ಲಿ]] ಜಾಮೋರಿನ್ ಪಡೆಗಳು ಪೋರ್ಚುಗೀಸರನ್ನು ಸೋಲಿಸಿದವು.<ref>{{cite book |author=ಕೆ. ಕೆ. ಎನ್. ಕುರುಪ್ |year=1997 |title=ಭಾರತದ ನೌಕಾ ಸಂಪ್ರದಾಯಗಳು: ಕುಂಹಾಲಿ ಮರಕ್ಕರ್ಗಳ ಪಾತ್ರ |url=https://books.google.com/books?id=HKmXcBCKEcAC&pg=PA51 |access-date=9 August 2012 |publisher=ನಾರ್ದರ್ನ್ ಬುಕ್ ಸೆಂಟರ್ |isbn=978-81-7211-083-3 |pages=37–38 |archive-date=27 May 2013 |archive-url=https://web.archive.org/web/20130527084909/http://books.google.com/books?id=HKmXcBCKEcAC&pg=PA51 |url-status=live }}</ref> ಪೋರ್ಚುಗೀಸರು ಒಂದು ಕಡೆ ಮತ್ತು [[ಅರಬ್]] ವ್ಯಾಪಾರಿಗಳು ಮತ್ತು ಸ್ಥಳೀಯ [[ಚೆಕೊರ್]] ಮತ್ತು [[ಮಲಬಾರ್ ಮುಸ್ಲಿಮರು|ಮಾಪ್ಪಿಳ್ಳ]] ಪಡೆಗಳ ಬೆಂಬಲವನ್ನು ಹೊಂದಿದ್ದ ಜಾಮೋರಿನ್ ಮತ್ತೊಂದು ಕಡೆ ನಡೆಸಿದ ನಿರಂತರ ಯುದ್ಧಗಳು, ಅಂತಿಮವಾಗಿ ಕರಾವಳಿ ಪಟ್ಟಣಗಳಲ್ಲಿ ವಿದೇಶಿ ವ್ಯಾಪಾರದ [[ಅರಬ್]] ಏಕಸ್ವಾಮ್ಯದ ಕುಸಿತಕ್ಕೆ ಕಾರಣವಾಯಿತು. ಪೋರ್ಚುಗೀಸ್ ವಿರೋಧವನ್ನು ಲೆಕ್ಕಿಸದೆ, ಜಾಮೋರಿನ್ 11 ನವೆಂಬರ್ 1604 ರಂದು ಡಚ್ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡರು.<ref name="mh"/> ಇದರ ನಂತರ 1608 ರಲ್ಲಿ ಮತ್ತೊಂದು ಒಪ್ಪಂದವಾಯಿತು, ಇದು ಹಿಂದಿನ ಒಪ್ಪಂದವನ್ನು ದೃಢಪಡಿಸಿತು ಮತ್ತು ಡಚ್ಚರು ಪೋರ್ಚುಗೀಸರನ್ನು ಹೊರಹಾಕುವಲ್ಲಿ ಜಾಮೋರಿನ್ಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.<ref name="mh"/> ಡಚ್ ಏಕಸ್ವಾಮ್ಯದ ಉದಯವು ಪೋರ್ಚುಗೀಸ್ ಪ್ರಾಬಲ್ಯವನ್ನು ಕುಸಿಯುವಂತೆ ಮಾಡಿತು. 16 ನೇ ಶತಮಾನದ ಅಶಾಂತಿಯ ನಂತರದ ಸಾಂಸ್ಕೃತಿಕ ಪುನರುಜ್ಜೀವನವು [[ತುಂಚತ್ತು ಎಝುತ್ತಚನ್]] ಮತ್ತು [[ಪೂಂತಾನಂ ನಂಬೂದಿರಿ]]ಯಂತಹ ಕವಿಗಳನ್ನು ಸೃಷ್ಟಿಸಿತು, ಅವರು [[ಮಲಯಾಳಂ ಸಾಹಿತ್ಯ]]ವನ್ನು ಪ್ರಸ್ತುತ ರೂಪಕ್ಕೆ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಮತ್ತು [[ಮೇಲ್ಪತ್ತೂರ್ ನಾರಾಯಣ ಭಟ್ಟಾತಿರಿ]], ಅವರು ಮಧ್ಯಕಾಲೀನ [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆ]]ಯ ಸದಸ್ಯರೂ ಆಗಿದ್ದರು.
17 ನೇ ಶತಮಾನದ ಮಧ್ಯಭಾಗದ ವೇಳೆಗೆ, ಕೇರಳದ ಬಂದರುಗಳಲ್ಲಿ ವಿದೇಶಿ ವ್ಯಾಪಾರದ ಮೇಲೆ ಡಚ್ಚರು ಏಕಸ್ವಾಮ್ಯವನ್ನು ಹೊಂದಿದ್ದರು, [[ಪೊನ್ನಾನಿ]] ಮತ್ತು [[ಕೋಝಿಕ್ಕೋಡ್]]ನಲ್ಲಿ ಸಣ್ಣ ಇಂಗ್ಲಿಷ್ ಕಾರ್ಖಾನೆಗಳನ್ನು ಹೊರತುಪಡಿಸಿ.<ref name="mh"/> 1650 ರಲ್ಲಿ [[ವಿಲಿಯಂ ಕೀಲಿಂಗ್]] ಆಗಮನವು ಈ ಪ್ರದೇಶದಲ್ಲಿ ಬ್ರಿಟಿಷ್ [[ಈಸ್ಟ್ ಇಂಡಿಯಾ ಕಂಪನಿ]]ಯ ಏಕಸ್ವಾಮ್ಯಕ್ಕೆ ನಾಂದಿಯಾಗಿದ್ದರೂ, ಅವರು 1792 ರವರೆಗೆ ಪ್ರಾಬಲ್ಯವನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ.<ref name="mh"/> 18 ನೇ ಶತಮಾನದಲ್ಲಿ, ''ವಾಸ್ತವಿಕ'' [[ಮೈಸೂರು ಸಾಮ್ರಾಜ್ಯ]]ದ ಆಡಳಿತಗಾರರಾದ [[ಹೈದರ್ ಅಲಿ]] ಮತ್ತು [[ಟಿಪ್ಪು ಸುಲ್ತಾನ್]]ರು [[ಮಲಬಾರ್ ಜಿಲ್ಲೆ|ಉತ್ತರ ಕೇರಳ]]ದ ಎಲ್ಲಾ ಸಣ್ಣ ಸಾಮಂತ ರಾಜ್ಯಗಳನ್ನು ಒಂದುಗೂಡಿಸಿದರು ಮತ್ತು ಅವುಗಳನ್ನು [[ಮೈಸೂರು ಸಾಮ್ರಾಜ್ಯ]]ದ ಭಾಗವನ್ನಾಗಿ ಮಾಡಿದರು. 1766 ರಲ್ಲಿ ಅಲ್ಪಾವಧಿಯ ಅವಧಿಗೆ, [[ಮಂಜೇರಿ]] ಸುಲ್ತಾನ್ [[ಹೈದರ್ ಅಲಿ]]ಯ ಪ್ರಧಾನ ಕಚೇರಿಯಾಗಿತ್ತು.<ref name="1961_kkd">{{Cite book|title=ಜಿಲ್ಲಾ ಜನಗಣತಿ ಕೈಪಿಡಿ (2) – ಕೋಝಿಕ್ಕೋಡ್ (1961)|last=ದೇವಸ್ಸಿ|first=ಎಂ. ಕೆ.|publisher=ಕೇರಳ ಸರ್ಕಾರ|year=1965|location=ಎರ್ನಾಕುಲಂ|url=http://lsi.gov.in:8081/jspui/bitstream/123456789/5665/1/22059_1961_KOZ.pdf|access-date=19 December 2020|archive-date=2 February 2021|archive-url=https://web.archive.org/web/20210202005030/http://lsi.gov.in:8081/jspui/bitstream/123456789/5665/1/22059_1961_KOZ.pdf|url-status=live}}</ref> ಕಾಲಿಕಟ್ನ ''ಸಮುತಿರಿ ಕೋವಿಲಕಂ'' ಅನ್ನು [[ಮೈಸೂರು ಸಾಮ್ರಾಜ್ಯ|ಮೈಸೂರು]] ಸುಲ್ತಾನ್ [[ಹೈದರ್ ಅಲಿ|ಹೈದರ್ 'ಅಲಿ]] (18 ನೇ ಶತಮಾನ AD) ಮುತ್ತಿಗೆ ಹಾಕಿದಾಗ, ಜಾಮೋರಿನ್ ತಮ್ಮ ಕುಟುಂಬ ಸದಸ್ಯರನ್ನು ಪೊನ್ನಾನಿಯ ''ತ್ರಿಕ್ಕವಿಲ್ ಕೋವಿಲಕಂ'' ಗೆ ಕಳುಹಿಸಿದರು.<ref>ಪಾಣಿಕ್ಕರ್. ಕೆ.ಎಂ. ''ಎ ಹಿಸ್ಟರಿ ಆಫ್ ಕೇರಳ (1498–1801)'' ಕೊಯಿಮ್ಬತ್ತೂರು (1960) ಪು. 64</ref> [[ತಿರೂರಂಗಡಿ ಕದನ]]ವು [[ಮೂರನೇ ಆಂಗ್ಲೋ-ಮೈಸೂರು ಯುದ್ಧ]]ದ ಸಮಯದಲ್ಲಿ 7 ರಿಂದ 12 ಡಿಸೆಂಬರ್ 1790 ರವರೆಗೆ [[ತಿರೂರಂಗಡಿ]]ಯಲ್ಲಿ ಬ್ರಿಟಿಷ್ ಸೇನೆ ಮತ್ತು ಟಿಪ್ಪು ಸುಲ್ತಾನ್ ನಡುವೆ ನಡೆದ ಸರಣಿ ಘರ್ಷಣೆಗಳಾಗಿವೆ.<ref name=Naravane>{{Cite book |last=ನಾರಾವಣೆ |first=ಎಂ.ಎಸ್. |title=ಮಾನ್ಯ ಈಸ್ಟ್ ಇಂಡಿಯಾ ಕಂಪನಿಯ ಯುದ್ಧಗಳು |publisher=ಎ.ಪಿ.ಹೆಚ್. ಪಬ್ಲಿಷಿಂಗ್ ಕಾರ್ಪೊರೇಷನ್ |year=2014 |isbn=9788131300343 |pages=176}}</ref> 1792 ರಲ್ಲಿ, ಟಿಪ್ಪು ಸುಲ್ತಾನ್ ಮೂರನೇ ಆಂಗ್ಲೋ-ಮೈಸೂರು ಯುದ್ಧದ ಮೂಲಕ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಸೋಲಿಸಲ್ಪಟ್ಟರು, ಮತ್ತು [[ಶ್ರೀರಂಗಪಟ್ಟಣದ ಒಪ್ಪಂದ]]ಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ, ಪ್ರಸ್ತುತ ಮಲಪ್ಪುರಂ ಜಿಲ್ಲೆಯನ್ನು ಒಳಗೊಂಡಂತೆ [[ಮಲಬಾರ್ ಜಿಲ್ಲೆ|ಮಲಬಾರ್ ಪ್ರದೇಶ]]ದ ಹೆಚ್ಚಿನ ಭಾಗವನ್ನು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ವಿಲೀನಗೊಳಿಸಲಾಯಿತು. [[ತಿರುವಾಂಕೂರು]]ನ [[ಕೋಯಿ ತಂಪುರಾನ್]]ಗಳು [[ಪರಪ್ಪನಾಡ್]] ರಾಜಮನೆತನಕ್ಕೆ ಸೇರಿದವರು. ಈ ಮನೆತನದಿಂದಲೇ ಸಾಮಾನ್ಯವಾಗಿ ರಾಣಿಯರ [[ತಿರುವಾಂಕೂರು]] ಮನೆತನದ ಸಂಗಾತಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು.<ref name="1961_kkd"/> ವಿಶ್ವದ ಅತ್ಯಂತ ಹಳೆಯ ತೇಗ ತೋಟವಾದ ಕೊನೊಲಿಯ ಪ್ಲಾಟ್ [[ನಿಲಂಬೂರ್]] ಪಟ್ಟಣದಿಂದ {{cvt|2|km}} ದೂರದಲ್ಲಿದೆ. ಇದನ್ನು ಮಲಬಾರ್ನ ಆಗಿನ ಜಿಲ್ಲಾ ಕಲೆಕ್ಟರ್ [[ಹೆನ್ರಿ ವ್ಯಾಲೆಂಟೈನ್ ಕೊನೊಲಿ]] ಅವರ ಸ್ಮರಣಾರ್ಥವಾಗಿ ಹೆಸರಿಸಲಾಯಿತು.<ref>{{Cite news|title=ವಿಶ್ವದ ಅತ್ಯಂತ ಹಳೆಯ ತೇಗ ತೋಟ, ಕೊನೊಲಿಯ ಪ್ಲಾಟ್, ನಿರ್ವಹಣೆಯ ನಂತರ ಮತ್ತೆ ತೆರೆಯಲಿದೆ|url=https://english.mathrubhumi.com/travel/travel-news/oldest-teak-plantation-conolly-s-plot-to-reopen-after-maintenance-kerala-nilambur-teak-plantations-1.1942105|date=16 May 2017|access-date=12 October 2020|work=Mathrubhumi|archive-date=12 October 2020|archive-url=https://web.archive.org/web/20201012215336/https://english.mathrubhumi.com/travel/travel-news/oldest-teak-plantation-conolly-s-plot-to-reopen-after-maintenance-kerala-nilambur-teak-plantations-1.1942105|url-status=live}}</ref> ರಾಜ್ಯದ ಮೊದಲ ರೈಲು ಮಾರ್ಗವು 12 ಮಾರ್ಚ್ 1861 ರಂದು [[ತಿರೂರ್]] ನಿಂದ [[ಚಾಲಿಯಂ]] ಗೆ [[ತಿರೂರ್ ರೈಲ್ವೇ ನಿಲ್ದಾಣ|ತಿರೂರ್ನಲ್ಲಿನ]] ಅತ್ಯಂತ ಹಳೆಯ ರೈಲ್ವೇ ನಿಲ್ದಾಣದೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.<ref name="ll">{{cite web |url=https://www.thehindu.com/news/national/kerala/lifeline-of-malabar-turns-125/article4250472.ece |website=thehindu.com |title='ಲೈಫ್ಲೈನ್' ಆಫ್ ಮಲಬಾರ್ 125 ತಿರುಗುತ್ತದೆ |date=29 December 2012 |access-date=19 December 2020 |archive-date=30 January 2021 |archive-url=https://web.archive.org/web/20210130150107/https://www.thehindu.com/news/national/kerala/lifeline-of-malabar-turns-125/article4250472.ece |url-status=live }}</ref><ref name="mpm">{{Cite news|title=ആ ചൂളംവിളി പിന്നെയും പിന്നെയും...|url=https://www.mathrubhumi.com/malappuram/specials/50-years-of-malappuram/kerala-first-railway-line-tirur-to-beypore-1.3880175|date=17 June 2019|access-date=19 December 2020|work=Mathrubhumi|archive-date=30 November 2020|archive-url=https://web.archive.org/web/20201130082010/https://www.mathrubhumi.com/malappuram/specials/50-years-of-malappuram/kerala-first-railway-line-tirur-to-beypore-1.3880175|url-status=live}}</ref>
[[File:Canoly hanging bridge nilambur.jpg|left|thumbnail|ವಿಶ್ವದ ಅತ್ಯಂತ ಹಳೆಯ [[ತೇಗ]] ತೋಟಗಳು ಕೊನೊಲಿಯ ಪ್ಲಾಟ್ನಲ್ಲಿ, [[ನಿಲಂಬೂರ್]]]]
ಜಿಲ್ಲೆಯು 1792 ಮತ್ತು 1921 ರ ನಡುವೆ ಮಾಪ್ಪಿಳ್ಳ ದಂಗೆಗಳಿಗೆ (ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ವಿರುದ್ಧವಾಗಿ ಕೇರಳದಲ್ಲಿ ದಂಗೆಗಳು) ಸ್ಥಳವಾಗಿತ್ತು. ಈ ಅವಧಿಯಲ್ಲಿ ಸುಮಾರು 830 ದೊಡ್ಡ ಮತ್ತು ಸಣ್ಣ ಗಲಭೆಗಳು ನಡೆದಿವೆ ಎಂದು ಅಂದಾಜಿಸಲಾಗಿದೆ. 1841–1921 ರ ಅವಧಿಯಲ್ಲಿ ಕೇವಲ ಬ್ರಿಟಿಷ್ ಅಧಿಕಾರಿಗಳ ವಿರುದ್ಧ 86 ಕ್ಕೂ ಹೆಚ್ಚು ದಂಗೆಗಳು ನಡೆದಿವೆ.<ref>ಕೆ. ಮಾಧವನ್, 'ಮಲಯಾಳತ್ತಿಲೆ ಮಾಪ್ಪಿಳ್ಳ ಲಹಳ,' ಮಾತೃಭೂಮಿ, 24 ಮಾರ್ಚ್ 1923.</ref> ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಜಿಲ್ಲೆಯು [[ದಕ್ಷಿಣ ಮಲಬಾರ್]]ನ ಇರನಾಡ್, ವಲ್ಲುವನಾಡ್, ಮತ್ತು ಪೊನ್ನಾನಿ ಉಪ-ಜಿಲ್ಲೆಗಳಲ್ಲಿ ಸೇರಿಸಲ್ಪಟ್ಟಿತ್ತು. [[ಮಲಬಾರ್ ಸ್ಪೆಷಲ್ ಪೊಲೀಸ್]]ನ ಪ್ರಧಾನ ಕಚೇರಿಯು [[ಮಲಪ್ಪುರಂ]]ನಲ್ಲಿತ್ತು. MSP ರಾಜ್ಯದ ಅತ್ಯಂತ ಹಳೆಯ ಸಶಸ್ತ್ರ ಪೊಲೀಸ್ ಬೆಟಾಲಿಯನ್ ಆಗಿದೆ. ಬ್ರಿಟಿಷರು [[ಕಡಲುಂಡಿ ನದಿ]]ಯ ದಡದಲ್ಲಿ ಮಲಪ್ಪುರಂ ನಗರದ ಮೇಲ್ಭಾಗದಲ್ಲಿ ತಮ್ಮ ಪಡೆಗಳನ್ನು ನಿಲ್ಲಿಸಲು ಹೈಗ್ [[ಬ್ಯಾರಕ್]]ಗಳನ್ನು ಸ್ಥಾಪಿಸಿದ್ದರು.<ref>{{Cite web |url=https://www.malappuramtourism.org/history.php |title=ಮಲಪ್ಪುರಂ ಬ್ರಿಟಿಷ್ ಇತಿಹಾಸ |access-date=12 July 2020 |archive-date=10 October 2020 |archive-url=https://web.archive.org/web/20201010035952/https://www.malappuramtourism.org/history.php |url-status=live }}</ref>
[[File:Codacal Tile Factory.jpg|thumbnail|ಕೊಡಕ್ಕಲ್ ಟೈಲ್ ಫ್ಯಾಕ್ಟರಿಯನ್ನು [[ತಿರುನವಾಯ]]ದ ಕೊಡಕ್ಕಲ್ನಲ್ಲಿ ಕಾಮನ್ವೆಲ್ತ್ ಟ್ರಸ್ಟ್ ನಡೆಸುತ್ತಿತ್ತು. 1887 ರಲ್ಲಿ ಪ್ರಾರಂಭವಾದ ಕೊಡಕ್ಕಲ್ನಲ್ಲಿನ ಟೈಲ್ ಫ್ಯಾಕ್ಟರಿ, ಭಾರತದ ಎರಡನೇ ಟೈಲ್-ಉತ್ಪಾದನಾ ಉದ್ಯಮವಾಗಿದೆ. ಮೊದಲ ಟೈಲ್ ಫ್ಯಾಕ್ಟರಿಯು [[ಫೆರೋಕ್]] ನಲ್ಲಿತ್ತು, ಇದು ಆಗ [[ಇರನಾಡ್ ತಾಲೂಕು]]ನ ಭಾಗವಾಗಿತ್ತು]]
28 ಏಪ್ರಿಲ್ 1920 ರಂದು [[ಮಂಜೇರಿ]]ಯಲ್ಲಿ ನಡೆದ ಮಲಬಾರ್ ಜಿಲ್ಲಾ ರಾಜಕೀಯ ಸಮ್ಮೇಳನವು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] [[ಭಾರತೀಯ ಸ್ವಾತಂತ್ರ್ಯ ಚಳುವಳಿ]] ಮತ್ತು [[ಮಲಬಾರ್ ಜಿಲ್ಲೆ|ಬ್ರಿಟಿಷ್ ಮಲಬಾರ್ನಲ್ಲಿ]] ರಾಷ್ಟ್ರೀಯ ಚಳುವಳಿಯನ್ನು ಬಲಪಡಿಸಿತು.<ref name="Manjericonference_1920">{{cite news |title=1920 ರ ಮಂಜೇರಿ ರಾಜಕೀಯ ಸಮ್ಮೇಳನ |url=https://www.deccanchronicle.com/nation/in-other-news/290616/rare-letters-on-historic-meet-found-in-malappuram.html |access-date=18 July 2020 |work=Deccan Chronicle |date=29 June 2016 |archive-date=18 July 2020 |archive-url=https://web.archive.org/web/20200718131229/https://www.deccanchronicle.com/nation/in-other-news/290616/rare-letters-on-historic-meet-found-in-malappuram.html |url-status=live }}</ref> ಆ ಸಮ್ಮೇಳನವು [[ಮಾಂಟಾಗು-ಚೆಲ್ಮ್ಸ್ಫೋರ್ಡ್ ಸುಧಾರಣೆಗಳು]] [[ಬ್ರಿಟಿಷ್ ರಾಜ್|ಬ್ರಿಟಿಷ್ ಭಾರತ]]ದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂದು ಘೋಷಿಸಿತು. ಮಲಬಾರ್ನಲ್ಲಿ ಅಸ್ತಿತ್ವದಲ್ಲಿದ್ದ ಗೇಣಿದಾರಿಕೆಯಿಂದ ಉಂಟಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಇದು ಭೂ ಸುಧಾರಣೆಗೆ ವಾದಿಸಿತು. ಆದಾಗ್ಯೂ, ಈ ನಿರ್ಧಾರವು ಕಾಂಗ್ರೆಸ್ನೊಳಗೆ [[ಸೂರತ್ ವಿಭಜನೆ|ಉಗ್ರವಾದಿಗಳು ಮತ್ತು ಮಧ್ಯಮವಾದಿಗಳ]] ನಡುವಿನ ಅಂತರವನ್ನು ಹೆಚ್ಚಿಸಿತು. ಸಮ್ಮೇಳನವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನೊಂದಿಗೆ ಭೂಮಾಲೀಕರ ಅಸಮಾಧಾನಕ್ಕೆ ಕಾರಣವಾಯಿತು. ಇದು ಮಲಬಾರ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ನಾಯಕತ್ವವು ಕಾರ್ಮಿಕರು ಮತ್ತು ಮಧ್ಯಮ ವರ್ಗದ ಪರವಾಗಿ ನಿಂತ ಉಗ್ರವಾದಿಗಳ ನಿಯಂತ್ರಣಕ್ಕೆ ಬರಲು ಕಾರಣವಾಯಿತು.<ref name="askh">{{cite book |last1=ಶ್ರೀಧರ ಮೇನನ್ |first1=ಎ. |title=ಎ ಸರ್ವೆ ಆಫ್ ಕೇರಳ ಹಿಸ್ಟರಿ |year=2007 |publisher=ಡಿಸಿ ಬುಕ್ಸ್ |location=ಕೊಟ್ಟಯಂ |isbn=9788126415786 |edition=2007 |url=https://dcbookstore.com/books/a-survey-of-kerala-history |access-date=26 July 2020 |archive-date=26 July 2020 |archive-url=https://web.archive.org/web/20200726034742/https://dcbookstore.com/books/a-survey-of-kerala-history |url-status=live }}</ref>
[[File:മലപ്പുറം ജില്ലയിൽ പൊന്നാനിയിലെ ഹാർബർ (1930-37).jpg|left|300px|thumbnail|1930 ರ ದಶಕದ ಮಧ್ಯದಲ್ಲಿ [[ಪೊನ್ನಾನಿ]] ಬಂದರು]]
[[File:Tirurangadi Hajur Kacheri.jpg|thumbnail|[[ತಿರೂರಂಗಡಿ ತಾಲೂಕು ಕಚೇರಿ]]ಯಲ್ಲಿ 1921 ರ ದಂಗೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಬ್ರಿಟಿಷ್ ಸೈನಿಕರ ಸಮಾಧಿಗಳು]]
[[ಮಲಬಾರ್ ದಂಗೆ]]ಯು ದಂಗೆಗಳಲ್ಲಿ ಕೊನೆಯ ಮತ್ತು ಪ್ರಮುಖವಾದದ್ದು. ದಂಗೆಯಲ್ಲಿ [[ಪೂಕ್ಕೋಟ್ಟೂರ್ ಕದನ]]ವು ಪ್ರಮುಖ ಪಾತ್ರವನ್ನು ವಹಿಸುತ್ತದೆ.<ref name="tottenham grf">ಟಾಟೆನ್ಹ್ಯಾಮ್ GRF (ಸಂ), ದಿ ಮಾಪ್ಪಿಳ್ಳ ರೆಬೆಲಿಯನ್ 1921–22, ಗವರ್ನಮೆಂಟ್ ಪ್ರೆಸ್ ಮದ್ರಾಸ್ 1922 ಪು 71</ref><ref name="karim kk">ಕರೀಂ ಕೆಕೆ ಮುಹಮ್ಮದ್ ಅಬ್ದುಲ್, ವರಿಯಂ ಕುನ್ನತ್ತು ಕುಂಜಹ್ಮದ್ ಹಾಜಿ, ಕಲಿಮಾ ಬುಕ್ಸ್, ಕೋಝಿಕ್ಕೋಡ್ 1992 (ಮಲಯಾಳಂ)</ref> ಸೇನೆ, ಪೊಲೀಸ್, ಮತ್ತು ಬ್ರಿಟಿಷ್ ಅಧಿಕಾರಿಗಳು ಪಲಾಯನ ಮಾಡಿದ ನಂತರ, 28 ಆಗಸ್ಟ್ 1921 ರ ವೇಳೆಗೆ [[ಇರನಾಡ್]], [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವನಾಡ್]], [[ಪೊನ್ನಾನಿ]], ಮತ್ತು [[ಕೋಝಿಕ್ಕೋಡ್]] ತಾಲೂಕುಗಳಲ್ಲಿ 200 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸ್ವಾತಂತ್ರ್ಯ ಘೋಷಣೆಯಾಯಿತು.<ref>''ಮಲಬಾರ್ ದേಶೀಯಾತಯುಡೆ ಇಡಪೇಡುಕಲ್''. ಡಾ. ಎಂ. ಟಿ. ಅನ್ಸಾರಿ. ಡಿಸಿ ಬುಕ್ಸ್</ref> ಆದಾಗ್ಯೂ ಸ್ವಾಯತ್ತತೆಯ ಘೋಷಣೆಯ ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಈಸ್ಟ್ ಇಂಡಿಯಾ ಕಂಪನಿಯು ಪ್ರದೇಶವನ್ನು ಮತ್ತೆ ವಶಪಡಿಸಿಕೊಂಡಿತು ಮತ್ತು ಅದನ್ನು [[ಬ್ರಿಟಿಷ್ ರಾಜ್]] ಗೆ ಸೇರಿಸಿತು. [[ವ್ಯಾಗನ್ ದುರಂತ]]ವು ಮಲಬಾರ್ ದಂಗೆಯ ನಂತರ ಸಂಭವಿಸಿತು, ಅಲ್ಲಿ 20 ನವೆಂಬರ್ 1921 ರಂದು 64 ಖೈದಿಗಳು ಸಾವನ್ನಪ್ಪಿದರು.<ref>ಪಾಣಿಕ್ಕರ್, ಕೆ. ಎನ್., ''ಎಗೇನ್ಸ್ಟ್ ಲಾರ್ಡ್ ಅಂಡ್ ಸ್ಟೇಟ್: ರಿಲಿಜನ್ ಅಂಡ್ ಪೆಸೆಂಟ್ ಅಪ್ರೈಸಿಂಗ್ಸ್ ಇನ್ ಮಲಬಾರ್ 1836–1921''</ref>
[[File:കരിപ്പുര് വിമാനത്താവളം.jpg|left|thumbnail|[[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]ಯ [[ಕರಿಪುರ್]]ನಲ್ಲಿ [[ಕಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]]]
[[ಭಾರತೀಯ ಸ್ವಾತಂತ್ರ್ಯ ಕಾಯ್ದೆ 1947|1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ]] ಬಂದ ನಂತರ ಹಿಂದಿನ [[ಮದ್ರಾಸ್ ಪ್ರೆಸಿಡೆನ್ಸಿ]] [[ಮದ್ರಾಸ್ ರಾಜ್ಯ]]ವಾಯಿತು. ಮಲಪ್ಪುರಂ ಆದಾಯ ವಿಭಾಗವು ಹಿಂದಿನ [[ಮಲಬಾರ್ ಜಿಲ್ಲೆ]]ಯ ಐದು ಆದಾಯ ವಿಭಾಗಗಳಲ್ಲಿ ಒಂದಾಗಿತ್ತು, ಇದು ಇರನಾಡ್ (ಮಂಜೇರಿ) ಮತ್ತು ವಲ್ಲುವನಾಡ್ (ಪೆರಿಂತಲ್ಮನ್ನ) ತಾಲೂಕುಗಳ ವ್ಯಾಪ್ತಿಯನ್ನು ಹೊಂದಿತ್ತು. ಮಲಬಾರ್ ಜಿಲ್ಲೆಯ ಇತರ ನಾಲ್ಕು ಆದಾಯ ವಿಭಾಗಗಳು [[ತಲಶ್ಶೇರಿ]], [[ಕೋಝಿಕ್ಕೋಡ್]], [[ಪಾಲಕ್ಕಾಡ್]], ಮತ್ತು [[ಫೋರ್ಟ್ ಕೊಚ್ಚಿ]] ಆಗಿದ್ದವು.<ref name="Malabar">{{Cite book|title=1951 ಜನಗಣತಿ ಕೈಪಿಡಿ – ಮಲಬಾರ್ ಜಿಲ್ಲೆ|publisher=ಮದ್ರಾಸ್ ಸರ್ಕಾರ|year=1953|location=ಚೆನ್ನೈ|pages=1|url=http://lsi.gov.in:8081/jspui/bitstream/123456789/6425/1/20493_1951_MAL.pdf|access-date=27 September 2020|archive-date=8 October 2020|archive-url=https://web.archive.org/web/20201008060411/http://lsi.gov.in:8081/jspui/bitstream/123456789/6425/1/20493_1951_MAL.pdf|url-status=live}}</ref> 1 ನವೆಂಬರ್ 1956 ರಂದು, [[ಕೇರಳ]] ರಾಜ್ಯವು ಭಾಷಾ ಆಧಾರದ ಮೇಲೆ ರೂಪುಗೊಂಡಿತು. ಮಲಪ್ಪುರಂ ಜಿಲ್ಲೆಯು ಆ ಸಮಯದಲ್ಲಿ ನಾಲ್ಕು ಉಪ-ಜಿಲ್ಲೆಗಳು (ಇರನಾಡ್, ಪೆರಿಂತಲ್ಮನ್ನ, ತಿರೂರ್, ಮತ್ತು ಪೊನ್ನಾನಿ), ನಾಲ್ಕು ಪಟ್ಟಣಗಳು, ಹದಿನಾಲ್ಕು ಅಭಿವೃದ್ಧಿ ಬ್ಲಾಕ್ಗಳು, ಮತ್ತು 95 [[ಗ್ರಾಮ ಪಂಚಾಯತ್]]ಗಳೊಂದಿಗೆ ರಚಿಸಲಾಯಿತು.<ref name="c1971">{{Cite book|title=ಜಿಲ್ಲಾ ಜನಗಣತಿ ಕೈಪಿಡಿ – ಮಲಪ್ಪುರಂ (ಭಾಗ-C) – 1971|last=ಕೆ. ನಾರಾಯಣನ್|publisher=ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಷನ್ಸ್, ಕೇರಳ|year=1972|location=ತಿರುವನಂತಪುರಂ|pages=3|url=http://lsi.gov.in:8081/jspui/bitstream/123456789/5714/1/51172_1971_MAL.pdf}}</ref> ನಂತರ, ತಿರೂರ್ ತಾಲೂಕನ್ನು ವಿಭಜಿಸಿ ತಿರೂರಂಗಡಿ ತಾಲೂಕನ್ನು ರಚಿಸಲಾಯಿತು, ಮತ್ತು ಇರನಾಡ್ ತಾಲೂಕನ್ನು ಮೂರು ಭಾಗಗಳಾಗಿ ವಿಭಜಿಸಿ ನಿಲಂಬೂರ್ ಮತ್ತು ಕೊಂಡೊಟ್ಟಿ ಎಂಬ ಎರಡು ತಾಲೂಕುಗಳನ್ನು ರಚಿಸಲಾಯಿತು. [[ಕಾಲಿಕಟ್ ವಿಶ್ವವಿದ್ಯಾಲಯ]], ಇದು ಕೇರಳದ ಎರಡನೇ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯವಾಗಿದೆ, ಮತ್ತು [[ಕಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]], ಇದು ರಾಜ್ಯದ ಎರಡನೇ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವಾಗಿದೆ, ಕ್ರಮವಾಗಿ 1968 ಮತ್ತು 1988 ರಲ್ಲಿ [[ತೆನಿಪಾಲಂ]] ಮತ್ತು [[ಕರಿಪುರ್]] ನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.<ref>{{Cite news|title=ಕಾಲಿಕಟ್ ವಿಮಾನ ನಿಲ್ದಾಣ 80 ತಿರುಗುತ್ತದೆ|url=https://www.thehindu.com/news/cities/kozhikode/calicut-airport-turns-30/article23508804.ece|last=ವಿಶೇಷ ವರದಿಗಾರ|date=12 April 2018|access-date=31 March 2021|work=The Hindu|archive-date=9 November 2020|archive-url=https://web.archive.org/web/20201109042642/https://www.thehindu.com/news/cities/kozhikode/calicut-airport-turns-30/article23508804.ece|url-status=live}}</ref> 1970 ರ ದಶಕದಲ್ಲಿ, [[ಪರ್ಷಿಯನ್ ಕೊಲ್ಲಿಯ ಅರಬ್ ರಾಜ್ಯಗಳು|ಪರ್ಷಿಯನ್ ಕೊಲ್ಲಿ ದೇಶಗಳಲ್ಲಿನ]] ತೈಲ ನಿಕ್ಷೇಪಗಳನ್ನು ವಾಣಿಜ್ಯ ಹೊರತೆಗೆಯುವಿಕೆಗೆ ತೆರೆಯಲಾಯಿತು ಮತ್ತು ಸಾವಿರಾರು ಅಕುಶಲ ಕಾರ್ಮಿಕರು ಕೊಲ್ಲಿಗೆ ವಲಸೆ ಹೋದರು. ಅವರು ಮನೆಗೆ ಹಣವನ್ನು ಕಳುಹಿಸಿದರು, ಗ್ರಾಮೀಣ ಆರ್ಥಿಕತೆಯನ್ನು ಬೆಂಬಲಿಸಿದರು, ಮತ್ತು 20 ನೇ ಶತಮಾನದ ಅಂತ್ಯದ ವೇಳೆಗೆ, ಈ ಪ್ರದೇಶವು [[ಮೊದಲ ಪ್ರಪಂಚದ]] ಆರೋಗ್ಯ ಮಾನದಂಡಗಳು ಮತ್ತು ಸಾರ್ವತ್ರಿಕ ಸಾಕ್ಷರತೆಯನ್ನು ಸಾಧಿಸಿತು.<ref>{{cite magazine| url=http://www.time.com/time/specials/packages/article/0,28804,2084273_2084272_2084259,00.html | archive-url=https://web.archive.org/web/20110722004134/http://www.time.com/time/specials/packages/article/0,28804,2084273_2084272_2084259,00.html | url-status=dead | archive-date=22 July 2011 | magazine=Time | title=ಸಮ್ಮರ್ ಜರ್ನಿ 2011 | date=21 July 2011}}</ref>
ಐತಿಹಾಸಿಕವಾಗಿ, ಮಲಪ್ಪುರಂ ಜಿಲ್ಲೆಯು [[ಅಷ್ಟವೈದ್ಯ]] ಸಂಪ್ರದಾಯದ ಸಂರಕ್ಷಣೆಯ ಕೇಂದ್ರವಾಗಿದೆ, ಇದು [[ಆಯುರ್ವೇದ]]ದ ಎಂಟು ಶಾಖೆಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುವ ಸಾಂಪ್ರದಾಯಿಕವಾಗಿ ಗುರುತಿಸಲ್ಪಟ್ಟ ಎಂಟು [[ನಂಬೂದಿರಿ]] ಬ್ರಾಹ್ಮಣ ಕುಟುಂಬಗಳ ಒಂದು ಗುಂಪಾಗಿದೆ. ಇವುಗಳಲ್ಲಿ, '''ಪುಲಾಮಂತೋಲೆ ಮೂಸ್''' ಕುಟುಂಬವು (ಪೆರಿಂತಲ್ಮನ್ನ ಬಳಿಯ ಪುಲಾಮಂತೋಲೆ ಪ್ರದೇಶಕ್ಕೆ ಸಂಬಂಧಿಸಿದೆ) ಶತಮಾನಗಳಿಂದಲೂ ಆನುವಂಶಿಕ ವೈದ್ಯಕೀಯ ಅಭ್ಯಾಸ ಮತ್ತು [[ಸಂಸ್ಕೃತ]] ವಿದ್ವತ್ತಿನ ಅವಿಚ್ಛಿನ್ನ ವಂಶವನ್ನು ಕಾಪಾಡಿಕೊಂಡು ಬಂದಿದೆ.<ref name="Sreedharan2002">{{cite book |last=ಶ್ರೀಧರನ್ |first=ಎನ್ |title=ಕೇರಳದ ಅಷ್ಟವೈದ್ಯ ಸಂಪ್ರದಾಯ |publisher=ಪಬ್ಲಿಕೇಷನ್ಸ್ ಡಿವಿಷನ್, ಕಾಲಿಕಟ್ ವಿಶ್ವವಿದ್ಯಾಲಯ |year=2002}}</ref>
ಪುಲಾಮಂತೋಲೆ ವಂಶದ ಐತಿಹಾಸಿಕ ಮಹತ್ವವು [[ಚೆಂಬೈ ವೈದ್ಯನಾಥ ಭಾಗವತರು]] ಎಂಬ ಕರ್ನಾಟಕ ಸಂಗೀತಗಾರರೊಂದಿಗಿನ ಸಂಬಂಧದ ಮೂಲಕ ಕೇರಳದ ಸಾಂಸ್ಕೃತಿಕ ಇತಿಹಾಸದಲ್ಲಿ ಗುರುತಿಸಲ್ಪಟ್ಟಿದೆ. 1952 ರಲ್ಲಿ, ಪ್ರದರ್ಶನದ ಸಮಯದಲ್ಲಿ ತಮ್ಮ ಧ್ವನಿಯನ್ನು ಕಳೆದುಕೊಂಡ ನಂತರ, ಚೆಂಬೈ ಅವರು ಪುಲಾಮಂತೋಲೆ ಮೂಸ್ ಕುಟುಂಬದ ಅಡಿಯಲ್ಲಿ ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆಯ ಅವಧಿಗೆ ಒಳಗಾದರು. ಅವರ ನಂತರದ ಚೇತರಿಕೆ ಮತ್ತು ವೇದಿಕೆಗೆ ಮರಳುವಿಕೆಯು ಪ್ರಾದೇಶಿಕ ಜೀವನಚರಿತ್ರೆಗಳಲ್ಲಿ ಚೆನ್ನಾಗಿ ದಾಖಲಿಸಲ್ಪಟ್ಟಿದೆ.<ref name="ChembaiBio">{{cite book |last=ಶರ್ಮಾ |first=ಎಲ್. ಆರ್. ವಿಶ್ವನಾಥ |title=ಚೆಂಬೈ ಸೆಲ್ವಂ |publisher=ಅಮುದಾ ನಿಲಯಂ ಲಿಮಿಟೆಡ್ |year=1954 |location=ಮದ್ರಾಸ್}}</ref>
ಈ ವಂಶದ ಪರಂಪರೆಯು '''ಶ್ರೀ ರುದ್ರ ಧನ್ವಂತರಿ ದೇವಸ್ಥಾನ''' ದ ಮೂಲಕ ಪ್ರಾದೇಶಿಕ ಧಾರ್ಮಿಕ ಇತಿಹಾಸದಲ್ಲಿ ಮತ್ತಷ್ಟು ಸಂಯೋಜಿಸಲ್ಪಟ್ಟಿದೆ. ತುತಪುಳ್ಳ ನದಿಯ ದಡದಲ್ಲಿರುವ ಈ ಐತಿಹಾಸಿಕ ದೇವಾಲಯವು [[ರುದ್ರ]] ಮತ್ತು [[ಧನ್ವಂತರಿ]] ಇಬ್ಬರಿಗೂ ಸಮರ್ಪಿತವಾಗಿರುವ ವಿಶಿಷ್ಟತೆಯನ್ನು ಹೊಂದಿದೆ, ಇದು ಮಲಬಾರ್ ಪ್ರದೇಶದಲ್ಲಿ ಆಧ್ಯಾತ್ಮಿಕ ಸಂಪ್ರದಾಯ ಮತ್ತು ಆಯುರ್ವೇದ ಗುಣಪಡಿಸುವ ಕಲೆಗಳ ಛೇದನಕ್ಕೆ ಕೇಂದ್ರಬಿಂದುವಾಗಿ ಸೇವೆ ಸಲ್ಲಿಸುತ್ತದೆ.<ref name="HeritagePortal">{{cite web |url=https://ayurvedathanal.com/sree-rudhra-dhanwanthari-temple |title=ಶ್ರೀ ರುದ್ರ ಧನ್ವಂತರಿ ದೇವಸ್ಥಾನ ಪರಂಪರೆ |website=ಆಯುರ್ವೇದ ಥಾನಲ್ |access-date=12 May 2026 }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
== ಭೌಗೋಳಿಕತೆ ==
[[File:Cherumb eco tourism village, Karuvarakundu India (3).JPG|left|thumb|alt=ಒಂದು ಗ್ರಾಮ |[[ಕರುವರಕುಂಡು]]ನ ಬೆಟ್ಟ ಪ್ರದೇಶ]]
[[File:Puthuponnani (2).JPG|thumb|alt=ಒಂದು ಕಡಲತೀರ|[[ಪುತ್ತುಪೊನ್ನಾನಿ]] ಮುನಂಬಮ್ ಕಡಲತೀರ]]
ವಾಯುವ್ಯಕ್ಕೆ [[ಕೋಝಿಕ್ಕೋಡ್ ಜಿಲ್ಲೆ]], ಈಶಾನ್ಯಕ್ಕೆ [[ವಯನಾಡ್ ಜಿಲ್ಲೆ]], ಪೂರ್ವಕ್ಕೆ [[ನೀಲಗಿರಿ ಬೆಟ್ಟಗಳು|ನೀಲಗಿರಿ ಬೆಟ್ಟಗಳು]], ಆಗ್ನೇಯಕ್ಕೆ [[ಪಾಲಕ್ಕಾಡ್ ಜಿಲ್ಲೆ]], ನೈಋತ್ಯಕ್ಕೆ [[ತೃಶೂರ್ ಜಿಲ್ಲೆ]], ಮತ್ತು ಪಶ್ಚಿಮಕ್ಕೆ [[ಅರೇಬಿಯನ್ ಸಮುದ್ರ]]ದಿಂದ ಸುತ್ತುವರೆದಿರುವ ಮಲಪ್ಪುರಂ ಒಟ್ಟು 3,554 ಕಿಮೀ<sup>2</sup> ಭೌಗೋಳಿಕ ಪ್ರದೇಶವನ್ನು ಹೊಂದಿದೆ, ಇದು ವಿಸ್ತೀರ್ಣದಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯು ರಾಜ್ಯದ ಒಟ್ಟು ವಿಸ್ತೀರ್ಣದ 9.15% ಅನ್ನು ಹೊಂದಿದೆ. ಜಿಲ್ಲೆಯು ಭೌಗೋಳಿಕ ನಕ್ಷೆಯಲ್ಲಿ 75°E – 77°E ರೇಖಾಂಶ ಮತ್ತು 10°N – 12°N ಅಕ್ಷಾಂಶದಲ್ಲಿದೆ. ಕೇರಳದ ಇತರ ಭಾಗಗಳಂತೆ, ಮಲಪ್ಪುರಂ ಪಶ್ಚಿಮದಲ್ಲಿ [[ಅರೇಬಿಯನ್ ಸಮುದ್ರ]]ದಿಂದ ಸುತ್ತುವರೆದ ಕರಾವಳಿ ಪ್ರದೇಶವನ್ನು (ತಗ್ಗು ನೆಲ), ಮಧ್ಯದಲ್ಲಿ ಮಧ್ಯ ಪ್ರದೇಶವನ್ನು, ಮತ್ತು ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು]] ಸುತ್ತುವರೆದ ಬೆಟ್ಟ ಪ್ರದೇಶವನ್ನು (ಎತ್ತರದ ನೆಲ) ಹೊಂದಿದೆ. ಕೇರಳದ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿ, ಮಧ್ಯ ಪ್ರದೇಶದಲ್ಲಿಯೂ ಬೆಟ್ಟ ಪ್ರದೇಶಗಳು ವ್ಯಾಪಕವಾಗಿ ಕಂಡುಬರುತ್ತವೆ. 2,554 ಮೀ ಎತ್ತರದ [[ಮುಕುರ್ತಿ]] ಶಿಖರವು [[ನಿಲಂಬೂರ್]] ತಾಲೂಕು ಮತ್ತು [[ಊಟಿ]] ತಾಲೂಕಿನ ಗಡಿಯಲ್ಲಿದೆ, ಮತ್ತು ಇದು [[ದಕ್ಷಿಣ ಭಾರತ]]ದ ಐದನೇ ಅತಿ ಎತ್ತರದ ಶಿಖರವಾಗಿದ್ದು, [[ಅನಾಮುಡಿ]] (2,696 ಮೀ) ಮತ್ತು [[ಮೀಸಪುಳಿಮಲ]] (2,651 ಮೀ) ನಂತರ ಕೇರಳದಲ್ಲಿ ಮೂರನೇ ಅತಿ ಎತ್ತರದ ಶಿಖರವಾಗಿದೆ, ಮಲಪ್ಪುರಂ ಜಿಲ್ಲೆಯಲ್ಲಿ ಅತ್ಯಂತ ಎತ್ತರದ ಸ್ಥಳವಾಗಿದೆ. ಇದು [[ಇಡುಕ್ಕಿ ಜಿಲ್ಲೆ]]ಯ ಹೊರಗೆ ಕೇರಳದ ಅತಿ ಎತ್ತರದ ಶಿಖರವಾಗಿದೆ. 2,383 ಮೀ ಎತ್ತರದ [[ಅಂಗಿಂಡ ಶಿಖರ]]ವು ಮಲಪ್ಪುರಂ-[[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]]-[[ನೀಲಗಿರಿ ಜಿಲ್ಲೆ|ನೀಲಗಿರಿ]] ಜಿಲ್ಲೆಗಳ ಗಡಿಗೆ ಹತ್ತಿರದಲ್ಲಿದೆ, ಇದು ಎರಡನೇ ಅತಿ ಎತ್ತರದ ಶಿಖರವಾಗಿದೆ. [[ವಾವುಲ್ ಮಲ]] 2,339 ಮೀ ಎತ್ತರದ ಶಿಖರವಾಗಿದ್ದು, ಮಲಪ್ಪುರಂನ ನಿಲಂಬೂರ್ ತಾಲೂಕು, [[ವಯನಾಡ್ ಜಿಲ್ಲೆ|ವಯನಾಡ್]], ಮತ್ತು [[ಕೋಝಿಕ್ಕೋಡ್ ಜಿಲ್ಲೆ|ಕೋಝಿಕ್ಕೋಡ್]]ನ [[ತಾಮರಶ್ಶೇರಿ]] ತಾಲೂಕುಗಳ ತ್ರಿಸಂಧಿಸ್ಥಳದಲ್ಲಿದೆ, ಇದು ಜಿಲ್ಲೆಯ ಮೂರನೇ ಅತಿ ಎತ್ತರದ ಸ್ಥಳವಾಗಿದೆ.
=== ಗಡಿ ತಾಲೂಕುಗಳು ===
ಮಲಪ್ಪುರಂ ಜಿಲ್ಲೆಯು 5 ಜಿಲ್ಲೆಗಳ 12 ತಾಲೂಕುಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
* ವಯನಾಡ್ ಜಿಲ್ಲೆ: [[ವೈತಿರಿ]] ತಾಲೂಕು.
* ಕೋಝಿಕ್ಕೋಡ್ ಜಿಲ್ಲೆ: [[ಕೋಝಿಕ್ಕೋಡ್]] ಮತ್ತು [[ತಾಮರಶ್ಶೇರಿ]] ತಾಲೂಕುಗಳು.
* ನೀಲಗಿರಿ ಜಿಲ್ಲೆ: [[ಪಾಂಡಲೂರ್ ತಾಲೂಕು|ಪಾಂಡಲೂರ್]], [[ಗೂಡಲೂರು, ನೀಲಗಿರಿ|ಗೂಡಲೂರು]], [[ಊಟಿ]], ಮತ್ತು [[ಕುಂಡಾ ತಾಲೂಕು|ಕುಂಡಾ]] ತಾಲೂಕುಗಳು.
* ಪಾಲಕ್ಕಾಡ್ ಜಿಲ್ಲೆ: [[ಪಟ್ಟಾಂಬಿ]], [[ಒಟ್ಟಪ್ಪಾಳಂ]], ಮತ್ತು [[ಮನ್ನಾರ್ಕ್ಕಾಡ್]] ತಾಲೂಕುಗಳು.
* ತೃಶೂರ್ ಜಿಲ್ಲೆ: [[ಚವಕ್ಕಾಡ್]] ಮತ್ತು [[ಕುನ್ನಂಕುಲಂ]] ತಾಲೂಕುಗಳು.
=== ಸ್ಥಳಾಕೃತಿ ===
ಸ್ಥಳಾಕೃತಿ, ಭೂಗರ್ಭ ಶಾಸ್ತ್ರ, ಮಣ್ಣು, ಹವಾಮಾನ, ಮತ್ತು ನೈಸರ್ಗಿಕ ಸಸ್ಯವರ್ಗದ ಆಧಾರದ ಮೇಲೆ, ಜಿಲ್ಲೆಯನ್ನು 5 ಉಪ-ಸೂಕ್ಷ್ಮ ಪ್ರದೇಶಗಳಾಗಿ ವಿಂಗಡಿಸಲಾಗಿದೆ:
* ಮಲಪ್ಪುರಂ ಕರಾವಳಿ
* ಮಲಪ್ಪುರಂ ಏರುತಗ್ಗಿನ ಬಯಲು
* ಚಾಲಿಯಾರ್ ನದಿ ಜಲಾನಯನ
* ನಿಲಂಬೂರ್ ಅರಣ್ಯ ಬೆಟ್ಟಗಳು
* ಪೆರಿಂತಲ್ಮನ್ನ ಏರುತಗ್ಗಿನ ಮೇಲುನೆಲ.
[[File:Chaliyar - Areekode Bridge.jpg|left|thumb|[[ಅರೀಕೋಡ್]]ನಲ್ಲಿ [[ಚಾಲಿಯಾರ್]] ನದಿ ಜಲಾನಯನ]]
[[File:Map of Malappuram District (April 2021).svg|thumb|ಮಲಪ್ಪುರಂ ಜಿಲ್ಲೆಯ ನಕ್ಷೆ]]
ಮಲಪ್ಪುರಂ ಕರಾವಳಿಯು ಉತ್ತರದಲ್ಲಿ [[ವಲ್ಲಿಕುಣ್ಣು]] ನಿಂದ ದಕ್ಷಿಣದಲ್ಲಿ [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]] ವರೆಗಿನ ಮಲಪ್ಪುರಂನ ಕರಾವಳಿ ಪ್ರದೇಶದ ಉದ್ದಕ್ಕೂ ಇದೆ. ಇದು ಉತ್ತರಕ್ಕೆ ಕೋಝಿಕ್ಕೋಡ್ ಕರಾವಳಿ, ಪೂರ್ವಕ್ಕೆ ಮಲಪ್ಪುರಂ ಏರುತಗ್ಗಿನ ಬಯಲು, ದಕ್ಷಿಣಕ್ಕೆ ತೃಶೂರ್ ಕರಾವಳಿ, ಮತ್ತು ಪಶ್ಚಿಮಕ್ಕೆ [[ಲಕ್ಷದ್ವೀಪ ಸಮುದ್ರ]]ದೊಂದಿಗೆ ಗಡಿಯನ್ನು ಹೊಂದಿದೆ. ಈ ಪ್ರದೇಶವು ಚಾಲಿಯಾರ್, ಕಡಲುಂಡಿ, ಭಾರತಪ್ಪುಳ್ಳ, ತಿರೂರ್ಪುಳ್ಳ, ಇತ್ಯಾದಿ ಪ್ರಮುಖ ನದಿಗಳು, ಕಾಲುವೆಗಳು ಮತ್ತು ಸರೋವರಗಳಿಂದ ಹರಿದುಹೋಗುತ್ತದೆ. ಈ ಪ್ರದೇಶವು ತೆಂಗಿನಕಾಯಿಯಿಂದ ಆವೃತವಾಗಿದೆ. ಕರಾವಳಿ ಬಯಲು ಪಶ್ಚಿಮಕ್ಕೆ ಬಹಳ ನಿಧಾನವಾಗಿ ಇಳಿಜಾರಾಗುತ್ತದೆ.<ref name="geographymalappuram">{{cite web |url=http://censusindia.gov.in/2011census/dchb/3205_PART_A_MALAPPURAM.pdf |website=censusindia.gov.in |title=ಮಲಪ್ಪುರಂನ ಭೌತಿಕ ವಿಭಾಗಗಳು |pages=21–22 |access-date=18 April 2020 |archive-date=27 November 2019 |archive-url=https://web.archive.org/web/20191127005243/http://censusindia.gov.in/2011census/dchb/3205_PART_A_MALAPPURAM.pdf |url-status=live }}</ref> [[ಪೊನ್ನಾನಿ]], [[ಎಡಪ್ಪಲ್]], [[ತಿರೂರ್]], [[ವಳಾಂಚೇರಿ]], [[ಕುಟ್ಟಿಪುರಂ]], [[ತಾನೂರು, ಮಲಪ್ಪುರಂ|ತಾನೂರು]], [[ತಿರೂರಂಗಡಿ]], ಮತ್ತು [[ಪರಪ್ಪನಂಗಾಡಿ]] ಸೇರಿದಂತೆ ಪ್ರಮುಖ ಪಟ್ಟಣಗಳು ಈ ಪ್ರದೇಶದಲ್ಲಿವೆ. ಈ ಪ್ರದೇಶದ ಗರಿಷ್ಠ ಎತ್ತರವು ತಿರೂರ್ ತಾಲೂಕಿನ [[ಕಲ್ಪಕಾಂಚೇರಿ]] ಗ್ರಾಮದಲ್ಲಿದೆ (104 ಮೀ).<ref name="geographymalappuram"/>
ಮಲಪ್ಪುರಂ ಏರುತಗ್ಗಿನ ಬಯಲು, ಕರಾವಳಿಗೆ ಸಮಾನಾಂತರವಾಗಿದ್ದು, ಉತ್ತರಕ್ಕೆ [[ನಾಡಪುರಂ]]-[[ಮಾವೂರು|ಮಾವೂರ್]] ಏರುತಗ್ಗಿನ ಬಯಲು, ಪೂರ್ವಕ್ಕೆ [[ಚಾಲಿಯಾರ್]] ನದಿ ಜಲಾನಯನ ಮತ್ತು ಪೆರಿಂತಲ್ಮನ್ನ ಏರುತಗ್ಗಿನ ಮೇಲುನೆಲ, ದಕ್ಷಿಣಕ್ಕೆ [[ಪಟ್ಟಾಂಬಿ]] ಏರುತಗ್ಗಿನ ಬಯಲು, ಮತ್ತು ಪಶ್ಚಿಮಕ್ಕೆ ಮಲಪ್ಪುರಂ ಕರಾವಳಿಯೊಂದಿಗೆ ಗಡಿಯನ್ನು ಹೊಂದಿದೆ. ಕನ್ನಮಂಗಲಂನ ನೆನ್ಮಿನಿ ಬೆಟ್ಟ (478 ಮೀ) ಅತ್ಯುನ್ನತ ಬಿಂದುವಾಗಿದ್ದು, ಉತ್ತರ ಭಾಗದಲ್ಲಿರುವ [[ವಾಝಯೂರ್]] (95 ಮೀ) ಅತ್ಯಂತ ಕಡಿಮೆ ಬಿಂದುವಾಗಿದೆ. ಕೆಲವು ಬೆಟ್ಟಗಳು ಮತ್ತು ಇಳಿಜಾರುಗಳು ಇಲ್ಲಿ ಕಂಡುಬರುತ್ತವೆ.<ref name="geographymalappuram"/>
[[File:Chekkunnu.jpg|thumb|[[ಎಡವನ್ನ]]ದಲ್ಲಿ ಚೆಕ್ಕುಣ್ಣು ಬೆಟ್ಟಗಳು]]
ಚಾಲಿಯಾರ್ ನದಿ ಜಲಾನಯನವು ಉತ್ತರ ಮತ್ತು ಪೂರ್ವಕ್ಕೆ ನಿಲಂಬೂರ್ ಅರಣ್ಯ ಬೆಟ್ಟಗಳು, ದಕ್ಷಿಣಕ್ಕೆ ಪೆರಿಂತಲ್ಮನ್ನ ಏರುತಗ್ಗಿನ ಮೇಲುನೆಲ, ಮತ್ತು ಪೂರ್ವಕ್ಕೆ ಮಲಪ್ಪುರಂ ಏರುತಗ್ಗಿನ ಬಯಲಿನೊಂದಿಗೆ ಗಡಿಯನ್ನು ಹೊಂದಿದೆ. ಇದು [[ಚಾಲಿಯಾರ್]]ನ ಮಧ್ಯ ಭಾಗದಲ್ಲಿದೆ ಮತ್ತು ಪ್ರತ್ಯೇಕವಾದ ಬೆಟ್ಟಗಳ ರೂಪದಲ್ಲಿ ಏರುತಗ್ಗುಗಳನ್ನು ಹೊಂದಿದೆ.<ref name="geographymalappuram"/>
ನಿಲಂಬೂರ್ ಅರಣ್ಯ ಬೆಟ್ಟಗಳು, ವಸಾಹತುಶಾಹಿ ದಾಖಲೆಗಳಲ್ಲಿ ''ನಿಲಂಬೂರ್ ಕಣಿವೆ'' ಎಂದೂ ಉಲ್ಲೇಖಿಸಲ್ಪಡುತ್ತದೆ, ಇದು ಉತ್ತರಕ್ಕೆ ಕೋಝಿಕ್ಕೋಡ್ ಅರಣ್ಯ ಬೆಟ್ಟಗಳು ಮತ್ತು ವಯನಾಡ್ ಅರಣ್ಯ ಬೆಟ್ಟಗಳು, ಪೂರ್ವಕ್ಕೆ [[ತಮಿಳುನಾಡು]], ದಕ್ಷಿಣಕ್ಕೆ [[ಮನ್ನಾರ್ಕಾಡ್]]-ಪಾಲಕ್ಕಾಡ್ ಅರಣ್ಯ ಬೆಟ್ಟಗಳು, ಮತ್ತು ಪಶ್ಚಿಮಕ್ಕೆ ಚಾಲಿಯಾರ್ ನದಿ ಜಲಾನಯನದೊಂದಿಗೆ ಗಡಿಯನ್ನು ಹೊಂದಿದೆ. ಇದು ಪಶ್ಚಿಮ ಘಟ್ಟಗಳ ಭಾಗವಾಗಿದೆ. ಸಮುದ್ರ ಮಟ್ಟದಿಂದ 1000 ಮೀ ಗಿಂತ ಹೆಚ್ಚು ಎತ್ತರದ ಹಲವಾರು ಶಿಖರಗಳು ಇಲ್ಲಿ ಕಂಡುಬರುತ್ತವೆ.<ref name="geographymalappuram"/> ಈ ಪ್ರದೇಶದ ಅತ್ಯಂತ ಎತ್ತರದ ಸ್ಥಳವು [[ಮುಕುರ್ತಿ]] (2594 ಮೀ) ನಲ್ಲಿದೆ, ಇದು ತಮಿಳುನಾಡಿನೊಂದಿಗೆ ಕೇರಳದ ಗಡಿಯಲ್ಲಿರುವ [[ಕರಿಂಪುಳ್ಳ ವನ್ಯಜೀವಿ ಅಭಯಾರಣ್ಯ]]ದ ಪೂರ್ವದಲ್ಲಿದೆ. ಅತ್ಯಂತ ಕಡಿಮೆ ಬಿಂದುವು [[ಮಂಪಾಡ್]] (115 ಮೀ) ನಲ್ಲಿದೆ.<ref name="geographymalappuram"/> ನಿಲಂಬೂರಿನ ಅರಣ್ಯ ಪ್ರದೇಶವು [[ನೀಲಗಿರಿ ಜೀವಗೋಳ ಮೀಸಲು]]ದ ಭಾಗವನ್ನು ರೂಪಿಸುತ್ತದೆ.
ಪೆರಿಂತಲ್ಮನ್ನ ಏರುತಗ್ಗಿನ ಮೇಲುನೆಲವು ಉತ್ತರಕ್ಕೆ ಚಾಲಿಯಾರ್ ನದಿ ಜಲಾನಯನ, ಪೂರ್ವಕ್ಕೆ ಮನ್ನಾರ್ಕಾಡ್-ಪಾಲಕ್ಕಾಡ್ ಅರಣ್ಯ ಬೆಟ್ಟಗಳು, ದಕ್ಷಿಣಕ್ಕೆ [[ಪಾಲಕ್ಕಾಡ್ ಕಣಿವೆ]], ಮತ್ತು ಪಶ್ಚಿಮಕ್ಕೆ ಮಲಪ್ಪುರಂ ಏರುತಗ್ಗಿನ ಬಯಲಿನೊಂದಿಗೆ ಗಡಿಯನ್ನು ಹೊಂದಿದೆ. ಹಲವಾರು ಸಣ್ಣ ಪ್ರತ್ಯೇಕ ಬೆಟ್ಟಗಳು ಇಲ್ಲಿ ಕಂಡುಬರುತ್ತವೆ. [[ಕೋಡಿಕುತಿಮಲ]] ಅವುಗಳಲ್ಲಿ ಒಂದು. [[ಕಡಲುಂಡಿ ನದಿ]] ಈ ಪ್ರದೇಶವನ್ನು ಹರಿದುಹೋಗುತ್ತದೆ. ಈ ಪ್ರದೇಶದ ಗರಿಷ್ಠ ಎತ್ತರವು [[ವಡಕ್ಕಂಗರ, ಮಂಜೇರಿ|ಮಕ್ಕರಪರಂಬ]] ನಲ್ಲಿ 610 ಮೀ.<ref name="geographymalappuram"/>
=== ಕರಾವಳಿ ===
[[File:Light house in Ponnani.jpg|thumb|[[ಪೊನ್ನಾನಿ]]ಯ [[ದೀಪಸ್ತಂಭ]]]]
ಕೇರಳದ ಜಿಲ್ಲೆಗಳ ನಡುವೆ ಕರಾವಳಿಯ ಉದ್ದದಲ್ಲಿ ಮಲಪ್ಪುರಂ ಐದನೇ ಸ್ಥಾನದಲ್ಲಿದೆ, ಇದು 70 ಕಿಮೀ ಕರಾವಳಿಯನ್ನು ಹೊಂದಿದೆ (ರಾಜ್ಯದ ಒಟ್ಟು ಕರಾವಳಿಯ 11.87%).<ref>{{cite web |url=http://www.kerenvis.nic.in/Database/Coastline_2346.aspx |website=kerenvis.nic.in |title=ಮಲಪ್ಪುರಂನ ಕರಾವಳಿ ಪ್ರದೇಶ |access-date=30 November 2019 |archive-date=23 November 2019 |archive-url=https://web.archive.org/web/20191123153736/http://www.kerenvis.nic.in/Database/Coastline_2346.aspx |url-status=live }}</ref> ಮಲಪ್ಪುರಂನ ಕರಾವಳಿ ಪಟ್ಟಿಯು [[ತಾನೂರು, ಮಲಪ್ಪುರಂ|ತಾನೂರು]], [[ಪೊನ್ನಾನಿ]], ಮತ್ತು [[ಪರಪ್ಪನಂಗಾಡಿ]] ಎಂಬ ಮೂರು ಪುರಸಭಾ ಪಟ್ಟಣಗಳು ಮತ್ತು [[ವಲ್ಲಿಕುಣ್ಣು]], [[ತಾನಲೂರು]], [[ನಿರಮರುತೂರು]], [[ವೆಟ್ಟೊಂ ಗ್ರಾಮ ಪಂಚಾಯತ್|ವೆಟ್ಟೊಂ]], [[ಮಂಗಲಂ, ತಿರೂರ್|ಮಂಗಲಂ]], [[ಪುರತ್ತೂರ್]], [[ವೆಲಿಯಂಕೋಡ್]], ಮತ್ತು [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಬಡಪ್ಪು]] ಎಂಬ ಎಂಟು [[ಗ್ರಾಮ ಪಂಚಾಯತ್]]ಗಳಲ್ಲಿದೆ. ಪೊನ್ನಾನಿ, ತಾನೂರು, ಪರಪ್ಪನಂಗಾಡಿ, ಮತ್ತು [[ಪದಿಂಜಾರೆಕ್ಕರ ಕಡಲತೀರ]] ಇವೆಲ್ಲವೂ ಜಿಲ್ಲೆಯ ಪಶ್ಚಿಮ ಭಾಗದಲ್ಲಿವೆ, ಇವು ಪ್ರಮುಖ ಮೀನುಗಾರಿಕಾ ಕೇಂದ್ರಗಳಾಗಿವೆ. ಜಿಲ್ಲೆಯ ಸಮುದ್ರ ಕರಾವಳಿಯು ಸಮುದ್ರ ಸಂಪತ್ತಿನಿಂದ ತುಂಬಿದೆ.<ref name="geographymalappuram" /> ಹಿಂದೆ ಅರಬ್ ವ್ಯಾಪಾರಿಗಳ ನೆಚ್ಚಿನ ತಾಣವಾಗಿದ್ದುದರ ಜೊತೆಗೆ, ಪೊನ್ನಾನಿಯು ಇಲ್ಲಿ [[ಇಸ್ಲಾಂ]] ಧರ್ಮದ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸಿದ ಅನೇಕ [[ಮುಸ್ಲಿಂ]] ಆಧ್ಯಾತ್ಮಿಕ ನಾಯಕರಿಗೆ ಆಕರ್ಷಕ ತಾಣವಾಗಿತ್ತು. ಈ ಬಂದರು ನಗರವನ್ನು ''ಮಲಬಾರ್ನ ಸಣ್ಣ ಮೆಕ್ಕಾ'' ಮತ್ತು ''[[ಗೋಲ್ಡ್ ದಿನಾರ್|ಗೋಲ್ಡ್ ನಾಣ್ಯಗಳ]] ನಗರ'' ಎಂದೂ ಕರೆಯಲಾಗುತ್ತದೆ.<ref name="pkd">{{cite book
| author=ಎಂ. ಕೆ. ದೇವಸ್ಸಿ
| year=1965
| title=1961 ಜನಗಣತಿ ಕೈಪಿಡಿ- ಪಾಲ್ಘಾಟ್ ಜಿಲ್ಲೆ
| publisher=ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಷನ್ಸ್, ಕೇರಳ ಮತ್ತು ಲಕ್ಕದೀವ್, ಮಿನಿಕಾಯ್, ಮತ್ತು ಅಮಿಂದಿವಿ ದ್ವೀಪಗಳ ಕೇಂದ್ರಾಡಳಿತ ಪ್ರದೇಶ
| url=http://lsi.gov.in:8081/jspui/bitstream/123456789/5667/1/51592_1961_PAL.pdf
| access-date=11 March 2021
| archive-date=8 May 2021
| archive-url=https://web.archive.org/web/20210508155754/http://lsi.gov.in:8081/jspui/bitstream/123456789/5667/1/51592_1961_PAL.pdf
| url-status=live
}}</ref><ref>{{cite web |url=https://www.nativeplanet.com/travel-guide/the-mecca-of-malabar-ponnani-004132.html |website=nativeplanet.com |title=ಪೊನ್ನಾನಿ, ಮಲಬಾರ್ನ ಮೆಕ್ಕಾ |date=24 October 2017 |access-date=19 April 2020 |archive-date=10 May 2021 |archive-url=https://web.archive.org/web/20210510143226/https://www.nativeplanet.com/travel-guide/the-mecca-of-malabar-ponnani-004132.html |url-status=live }}</ref> ಫೆಬ್ರವರಿ/ಏಪ್ರಿಲ್ ತಿಂಗಳುಗಳಲ್ಲಿ, ಸಾವಿರಾರು ವಲಸೆ ಹಕ್ಕಿಗಳು ಇಲ್ಲಿಗೆ ಆಗಮಿಸುತ್ತವೆ. ಪೊನ್ನಾನಿಗೆ ಹತ್ತಿರದಲ್ಲಿರುವ ಬಿಯ್ಯಂ ಕಾಯಲ್, ಜಲ ಕ್ರೀಡಾ ಸೌಲಭ್ಯವನ್ನು ಹೊಂದಿರುವ ಶಾಂತ, ಹಸಿರಿನಿಂದ ಕೂಡಿದ ಜಲಮಾರ್ಗವಾಗಿದೆ. [[ಕೊನೊಲಿ ಕಾಲುವೆ]]ಯು [[ಪುತ್ತುಪೊನ್ನಾನಿ]]ಯಲ್ಲಿ [[ಅರೇಬಿಯನ್ ಸಮುದ್ರ]]ವನ್ನು ಸಂಧಿಸುತ್ತದೆ. ತಾನೂರಿನ ಕರಾವಳಿ ಪಟ್ಟಣವು ಆರಂಭಿಕ ಮಧ್ಯಯುಗದಲ್ಲಿ ''ವೆಟ್ಟತ್ತುನಾಡು ಸಾಮ್ರಾಜ್ಯ''ದ ರಾಜಧಾನಿಯಾಗಿತ್ತು, ಮತ್ತು ಇದು [[ಕೇರಳದೇಶಪುರಂ ದೇವಸ್ಥಾನ]]ಕ್ಕೆ ಹೆಸರುವಾಸಿಯಾಗಿದೆ. ಪರಪ್ಪನಂಗಾಡಿಯು ಆರಂಭಿಕ ಮಧ್ಯಯುಗದಲ್ಲಿ [[ಪರಪ್ಪನಾಡ್]] ಸಾಮ್ರಾಜ್ಯದ ಆಡಳಿತ ಮನೆತನಗಳ ನೆಲೆಯಾಗಿತ್ತು.
=== ನದಿಗಳು ===
[[File:View from Chamravattam Bridge - panoramio.jpg|thumbnail|[[ತ್ರಿಪ್ರಂಗೋಡ್]]ನಲ್ಲಿ [[ಭಾರತಪ್ಪುಳ್ಳ]]]]
[[File:Kadalundi river, Malappuram.jpg|thumb|[[ಮಲಪ್ಪುರಂ]]ನಲ್ಲಿ [[ಕಡಲುಂಡಿ ನದಿ]]]]
ಜಿಲ್ಲೆಯ ಮೂಲಕ ಹರಿಯುವ ಪ್ರಮುಖ ನದಿಗಳು [[ಚಾಲಿಯಾರ್]], [[ಕಡಲುಂಡಿ ನದಿ]], [[ಭಾರತಪ್ಪುಳ್ಳ]], ಮತ್ತು [[ತಿರೂರ್ ನದಿ]]. ಚಾಲಿಯಾರ್ ಸುಮಾರು 168 ಕಿಮೀ ಉದ್ದವನ್ನು ಮತ್ತು {{cvt|2818|km2}} ಒಳಚರಂಡಿ ಪ್ರದೇಶವನ್ನು ಹೊಂದಿದೆ. ಇದು [[ನಿಲಂಬೂರ್]], [[ಮಂಪಾಡ್]], [[ಎಡವನ್ನ]], [[ಅರೀಕೋಡ್]], ಮತ್ತು [[ವಾಝಕ್ಕಾಡ್]] ಮೂಲಕ ಜಿಲ್ಲೆಯಲ್ಲಿ ಹಾದುಹೋಗುತ್ತದೆ ಮತ್ತು ನಂತರ ಕೋಝಿಕ್ಕೋಡ್-ಮಲಪ್ಪುರಂ ಜಿಲ್ಲೆಯ ಗಡಿಯ ಮೂಲಕ ಹರಿದು [[ಚಾಲಿಯಂ]] ನಲ್ಲಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. [[ನಿಲಂಬೂರ್]] ತಾಲೂಕಿನ ಕಣಿವೆಯಲ್ಲಿ ಚಾಲಿಯಾರ್ನ ದೊಡ್ಡ ಮತ್ತು ಸಣ್ಣ ಉಪನದಿಗಳಿವೆ.<ref name="geographymalappuram" /><ref name="river"/> ಚಾಲಿಯಾರ್ನ ಅತಿದೊಡ್ಡ ಉಪನದಿಯಾದ [[ಕರಿಂಪುಳ್ಳ (ಮಲಪ್ಪುರಂ)|ಕರಿಂಪುಳ್ಳ]], ಮತ್ತು ಭಾರತಪ್ಪುಳ್ಳದ ಅತಿದೊಡ್ಡ ಉಪನದಿಗಳಲ್ಲಿ ಒಂದಾದ [[ತುತಪುಳ್ಳ]], ಮತ್ತು ಕಡಲುಂಡಿ ನದಿಯ ಅತಿದೊಡ್ಡ ಉಪನದಿಗಳಲ್ಲಿ ಒಂದಾದ ಒಲಿಪುಳ್ಳ ಸಹ ಜಿಲ್ಲೆಯ ಮೂಲಕ ಹರಿಯುತ್ತವೆ. ಕಡಲುಂಡಿ ನದಿಯು [[ಮೇಲತ್ತೂರ್, ಕೇರಳ|ಮೇಲತ್ತೂರ್]], [[ಕೀಳತ್ತೂರ್]], [[ಪಾಂಡಿಕ್ಕಾಡ್]], [[ಮಂಜೇರಿ]], [[ಮಲಪ್ಪುರಂ]], [[ಪನಕ್ಕಡ್]], [[ಪರಪ್ಪೂರ್]], [[ವೆಂಗರ, ಮಲಪ್ಪುರಂ ಜಿಲ್ಲೆ|ವೆಂಗರ]], [[ತಿರೂರಂಗಡಿ]], [[ಪರಪ್ಪನಂಗಾಡಿ]], [[ವಲ್ಲಿಕುಣ್ಣು]] ಮೂಲಕ ಹಾದುಹೋಗುತ್ತದೆ ಮತ್ತು ಜಿಲ್ಲೆಯ ವಾಯುವ್ಯ ಗಡಿಯಲ್ಲಿರುವ [[ವಲ್ಲಿಕುಣ್ಣು]]ನ ಕಡಲುಂಡಿ ನಗರಂನಲ್ಲಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಇದು ಒಲಿಪ್ಪುಳ್ಳ ನದಿ ಮತ್ತು ವೆಳಿಯಾರ್ ನದಿಗಳ ಸಂಗಮದಿಂದ ರೂಪುಗೊಳ್ಳುತ್ತದೆ. ಕಡಲುಂಡಿ ನದಿಯು [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ|ಸೈಲೆಂಟ್ ವ್ಯಾಲಿ]]ಯ ಪಶ್ಚಿಮ ಗಡಿಯಲ್ಲಿರುವ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳಿಂದ]] ಹುಟ್ಟಿ ಜಿಲ್ಲೆಯ ಮೂಲಕ ಹರಿಯುತ್ತದೆ. ಒಲಿಪ್ಪುಳ್ಳ ಮತ್ತು ವೆಳಿಯಾರ್ [[ಕೀಳತ್ತೂರ್]]ನಲ್ಲಿ ಸೇರಿ ಕಡಲುಂಡಿ ನದಿಯನ್ನು ರೂಪಿಸುತ್ತವೆ. ಕಡಲುಂಡಿ ನದಿಯು [[ಇರನಾಡ್]] ಮತ್ತು [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವನಾಡ್]] ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಇದು 130 ಕಿಮೀ ಉದ್ದವನ್ನು ಹೊಂದಿದ್ದು, {{cvt|1114|km2}} ಒಳಚರಂಡಿ ಪ್ರದೇಶ ಮತ್ತು 2189 ಮಿಲಿಯನ್ ಘನ ಅಡಿ ಒಟ್ಟು ಹರಿವನ್ನು ಹೊಂದಿದೆ.<ref name="geographymalappuram" /><ref name="river"/> ಭಾರತಪ್ಪುಳ್ಳ ಒಟ್ಟು 209 ಕಿಮೀ ಉದ್ದವನ್ನು ಹೊಂದಿದೆ. ಇದು ತನ್ನ ಉಪನದಿಯಾದ [[ತುತಪುಳ್ಳ]] ನದಿಯಾಗಿ ತೂತ, [[ಎಲಂಕುಳಂ, ಮಲಪ್ಪುರಂ|ಎಲಂಕುಳಂ]], [[ಪುಲಾಮಂತೋಲೆ]] ಮೂಲಕ ಮಲಪ್ಪುರಂ-ಪಾಲಕ್ಕಾಡ್ ಜಿಲ್ಲೆಯ ಗಡಿಯಲ್ಲಿ ಹರಿಯುತ್ತದೆ, ಮತ್ತು ಪಳ್ಳಿಪುರಂನಲ್ಲಿ ಮುಖ್ಯ ನದಿಯನ್ನು ಸೇರುತ್ತದೆ. ನಂತರ ಅದು ಕೆಲವು ನೆರೆಯ ಜಿಲ್ಲೆಗಳ ಮೂಲಕ ಹರಿದು [[ತಿರುವೇಗಪ್ಪುರ]]ದಿಂದ [[ಕುಟ್ಟಿಪುರಂ]] ತಲುಪುತ್ತದೆ. ನಂತರ ಅದು ಸಂಪೂರ್ಣವಾಗಿ ಜಿಲ್ಲೆಯ ಮೂಲಕ ಹರಿಯುತ್ತದೆ. ಭಾರತಪ್ಪುಳ್ಳ [[ಪೊನ್ನಾನಿ]]ಯಲ್ಲಿ [[ಅರೇಬಿಯನ್ ಸಮುದ್ರ]]ವನ್ನು ಸೇರುತ್ತದೆ. [[ತಿರುನವಾಯ]], [[ಕುಟ್ಟಿಪುರಂ]], [[ತ್ರಿಪ್ರಂಗೋಡ್]], [[ಇರಿಂಬಿಲಿಯಂ]], [[ತವನೂರ್]], ಮತ್ತು [[ಪೊನ್ನಾನಿ]] ಭಾರತಪ್ಪುಳ್ಳದ ದಡದಲ್ಲಿರುವ ಕೆಲವು ಪ್ರಮುಖ ಪಟ್ಟಣಗಳಾಗಿವೆ.<ref name="geographymalappuram" /><ref name="river"/> ತಿರೂರ್ ನದಿಯು 48 ಕಿಮೀ ಉದ್ದವಿದೆ. ಇದು ಪೊನ್ನಾನಿ ಬಳಿಯ [[ಪುರತ್ತೂರ್|ಪದಿಂಜಾರೆಕರ]]ದಲ್ಲಿ ಭಾರತಪ್ಪುಳ್ಳವನ್ನು ಸೇರುತ್ತದೆ.<ref name="geographymalappuram" /><ref name="river"/> ಈ ದೊಡ್ಡ ನದಿಗಳ ಜೊತೆಗೆ, ಜಿಲ್ಲೆಯು ಪುರಪ್ಪರಂಬ ನದಿ ಎಂಬ ಸಣ್ಣ ನದಿಯನ್ನು ಹೊಂದಿದೆ, ಇದು ಕೇವಲ 8 ಕಿಮೀ ಉದ್ದವಿದೆ. ಇದು [[ಕೊನೊಲಿ ಕಾಲುವೆ]] ಮೂಲಕ ಪ್ರಮುಖ ನದಿಗಳಿಗೆ ಸಂಪರ್ಕ ಹೊಂದಿದೆ.<ref name="geographymalappuram" /><ref name="river">{{cite web |title=ಮಲಪ್ಪುರಂ ಜಿಲ್ಲೆಯ ನದಿಗಳು |url=https://malappuram.nic.in/about-district/ |access-date=23 November 2019 |website=malappuram.nic.in |archive-date=10 February 2020 |archive-url=https://web.archive.org/web/20200210004256/https://malappuram.nic.in/about-district/ |url-status=live }}</ref> ಮೇಲೆ ವಿವರಿಸಿದ ಪ್ರಮುಖ ನದಿಗಳ ಹಲವಾರು ದೊಡ್ಡ ಮತ್ತು ಸಣ್ಣ ಉಪನದಿಗಳು ಮತ್ತು ತೊರೆಗಳು ಸಹ ಜಿಲ್ಲೆಯ ಮೂಲಕ ಹರಿಯುತ್ತವೆ.
{{Panorama
|image = File:Kadalundi Kadavu Bridge.jpg
|height = 175
|alt = [[ವಲ್ಲಿಕುಣ್ಣು]] ಮುಖಜಭೂಮಿಯ ಬಳಿ [[ಕಡಲುಂಡಿ ನದಿ]]ಯ ವಿಹಂಗಮ ನೋಟ
|caption = [[ವಲ್ಲಿಕುಣ್ಣು]] ಮುಖಜಭೂಮಿಯ ಬಳಿ [[ಕಡಲುಂಡಿ ನದಿ]]ಯ ವಿಹಂಗಮ ನೋಟ, ಅಲ್ಲಿ ಅದು [[ಅರೇಬಿಯನ್ ಸಮುದ್ರ]]ವನ್ನು ಸೇರುತ್ತದೆ
}}
ನಾಲ್ಕು ಮುಖಜಭೂಮಿಗಳಿವೆ - [[ಪುರತ್ತೂರ್]]ನ ''ಪದಿಂಜಾರೆಕರ ಅಳಿಮುಖಂ'' ಅಲ್ಲಿ ಭಾರತಪ್ಪುಳ್ಳ ಮತ್ತು ತಿರೂರ್ ನದಿಗಳು ಸೇರಿ ಅರೇಬಿಯನ್ ಸಮುದ್ರವನ್ನು ಸೇರುತ್ತವೆ, [[ಪುತ್ತುಪೊನ್ನಾನಿ]] ಮುಂಚೂಣಿ ಅಲ್ಲಿ ಕೊನೊಲಿ ಕಾಲುವೆಯು ಸಮುದ್ರವನ್ನು ಸೇರುತ್ತದೆ, [[ತಾನೂರು, ಮಲಪ್ಪುರಂ|ತಾನೂರು]]ನ ''ಪುರಪ್ಪುಳ್ಳ ಅಳಿಮುಖಂ'', ಮತ್ತು ಜಿಲ್ಲೆಯ ವಾಯುವ್ಯ ಗಡಿಯಲ್ಲಿರುವ [[ವಲ್ಲಿಕುಣ್ಣು]]ನ ''ಕಡಲುಂಡಿ ನಗರಂ ಅಳಿಮುಖಂ''.<ref name="geographymalappuram" /><ref name="river"/> ಬಿಯ್ಯಂ, ವೆಲಿಯಂಕೋಡ್, ಮನೂರ್, ಮತ್ತು ಕೊಡಿನ್ಹಿ ನಂತಹ ಸರೋವರಗಳು ಕರಾವಳಿ ತಾಲೂಕುಗಳಲ್ಲಿವೆ.<ref name="geographymalappuram" /><ref name="river"/> [[ಬ್ರಿಟಿಷ್ ರಾಜ್]] ಸಮಯದಲ್ಲಿ ಪೊನ್ನಾನಿಯಿಂದ [[ತಿರೂರ್ ರೈಲ್ವೇ ನಿಲ್ದಾಣ]]ಕ್ಕೆ ಸರಕುಗಳನ್ನು ಸಾಗಿಸಲು ಪೊನ್ನಾನಿ ಕಾಲುವೆಯನ್ನು ನಿರ್ಮಿಸಲಾಯಿತು. [[ತಿರುನವಾಯ|ಕೊಡಕ್ಕಲ್]]ನಲ್ಲಿ [[ಬಾಸೆಲ್ ಮಿಷನ್]] ನೌಕರರು ಪೊನ್ನಾನಿ ಕಾಲುವೆಯ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.<ref>{{Cite web |url=http://www.ineszupanov.com/ |title=ಇನೆಸ್ ಜುಪನೋವ್ ಅವರ ವೆಬ್ಸೈಟ್ |access-date=13 September 2021 |archive-date=27 April 2021 |archive-url=https://web.archive.org/web/20210427041408/http://www.ineszupanov.com/ |url-status=live }}</ref>
{{cquote|''...ಇತ್ತೀಚೆಗೆ ಒಂದು ಸ್ಟೀಮ್ಶಿಪ್ ಕಾಲುವೆಯ ಮೂಲಕ ಪೊನ್ನಾನಿ ಮತ್ತು ತಿರೂರ್ ನಡುವೆ ಪ್ರಯಾಣಿಸುತ್ತದೆ, ಅಲ್ಲಿ ಪೊನ್ನಾನಿಗೆ ಅತ್ಯಂತ ಅನುಕೂಲಕರವಾದ ರೈಲ್ವೇ ನಿಲ್ದಾಣವಿದೆ. ದೂರವು 10 ಕಿಮೀ ಆಗಿದ್ದರೂ ಟಿಕೆಟ್ನ ಬೆಲೆ ಕೇವಲ 4 ಅಣ್ಣಗಳು...''}}
=== <span class="anchor" id="Climate chart"></span>ಹವಾಮಾನ ===
[[File:Monsoon Clouds - Manjeri and Pandalloor hill.jpg|left|thumbnail|[[ಮಂಜೇರಿ]] ಬಳಿಯ [[ಅನಕ್ಕಯಂ|ಪಾಂಡಲ್ಲೂರ್ ಬೆಟ್ಟಗಳಲ್ಲಿ]] [[ಮಾನ್ಸೂನ್]] ಮೋಡಗಳು]]
[[File:Ottumpuram Beach.JPG|thumbnail|[[ತಾನೂರು, ಮಲಪ್ಪುರಂ|ತಾನೂರು]]ನ ಒಟ್ಟುಂಪುರಂ ಕಡಲತೀರ]]
ಜಿಲ್ಲೆಯ ಉಷ್ಣಾಂಶವು ವರ್ಷವಿಡೀ ಸ್ಥಿರವಾಗಿರುತ್ತದೆ. ಇದು ಉಷ್ಣವಲಯದ ಹವಾಮಾನವನ್ನು ಹೊಂದಿದೆ. ಇದು ಹೆಚ್ಚಿನ ತಿಂಗಳುಗಳಲ್ಲಿ ಗಮನಾರ್ಹವಾದ ಮಳೆಯನ್ನು ಪಡೆಯುತ್ತದೆ, ಆದರೆ ಅಲ್ಪಾವಧಿಯ ಒಣ ಋತುವನ್ನು ಹೊಂದಿದೆ. ಕೊಪ್ಪೆನ್ ಮತ್ತು ಗೀಗರ್ ಪ್ರಕಾರ, ಈ ಹವಾಮಾನವನ್ನು Am ಎಂದು ವರ್ಗೀಕರಿಸಲಾಗಿದೆ. ಮಲಪ್ಪುರಂನಲ್ಲಿ ಸರಾಸರಿ ವಾರ್ಷಿಕ ಉಷ್ಣಾಂಶವು 27.3 °C ಆಗಿದೆ. ಒಂದು ವರ್ಷದಲ್ಲಿ, ಸರಾಸರಿ ಮಳೆಯು {{convert|2952|mm|in}} ಆಗಿದೆ. ಬೇಸಿಗೆಯು ಸಾಮಾನ್ಯವಾಗಿ ಮಾರ್ಚ್ನಿಂದ ಮೇ ವರೆಗೆ ಇರುತ್ತದೆ; [[ಮಾನ್ಸೂನ್]] ಜೂನ್ನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್ನಲ್ಲಿ ಕೊನೆಗೊಳ್ಳುತ್ತದೆ. ಮಲಪ್ಪುರಂ ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್ ಎರಡನ್ನೂ ಪಡೆಯುತ್ತದೆ. ಚಳಿಗಾಲವು ಡಿಸೆಂಬರ್ನಿಂದ ಫೆಬ್ರವರಿ ವರೆಗೆ ಇರುತ್ತದೆ.<ref name="MSN">{{Cite web| url = http://weather.msn.com/monthly_averages.aspx| title = MSN ಹವಾಮಾನ| access-date = 29 November 2019| archive-url = https://web.archive.org/web/20091009070528/http://weather.msn.com/monthly_averages.aspx| archive-date = 9 October 2009| url-status = dead}}</ref>
<div style="width:75%;">
{{Weather box
| location = ಮಲಪ್ಪುರಂ
| width = 90% <!-- Wikitable ಗಾಗಿ ಅಗಲದ ನಿಯತಾಂಕ, ಪೂರ್ವನಿಯೋಜಿತ ಅಗಲ=90%. ಅಗಲವನ್ನು ವ್ಯಾಖ್ಯಾನಿಸದೆ Wikitable ಗಾಗಿ ಖಾಲಿ ಬಿಡಿ. ಲಭ್ಯವಿರುವ ಮುಂದಿನ ಜಾಗದಲ್ಲಿ ಕೋಷ್ಟಕವನ್ನು ಸ್ವಯಂಚಾಲಿತವಾಗಿ ಹೊಂದಿಸಲು ಅಗಲ=auto ಅನ್ನು ಹೊಂದಿಸಿ. -->
| metric first = yes
| single line = yes
| Jan high C = 32.0
| Feb high C = 32.9
| Mar high C = 34.0
| Apr high C = 33.8
| May high C = 32.7
| Jun high C = 29.3
| Jul high C = 28.1
| Aug high C = 28.7
| Sep high C = 29.7
| Oct high C = 30.3
| Nov high C = 31.1
| Dec high C = 31.4
| year high C = 34.0
| Jan low C = 21.8
| Feb low C = 22.8
| Mar low C = 24.4
| Apr low C = 25.4
| May low C = 25.1
| Jun low C = 23.5
| Jul low C = 22.8
| Aug low C = 23.3
| Sep low C = 23.3
| Oct low C = 23.4
| Nov low C = 23.1
| Dec low C = 21.9
| year low C = 21.8
| Jan precipitation mm = 1
| Feb precipitation mm = 9
| Mar precipitation mm = 16
| Apr precipitation mm = 101
| May precipitation mm = 253
| Jun precipitation mm = 666
| Jul precipitation mm = 830
| Aug precipitation mm = 398
| Sep precipitation mm = 233
| Oct precipitation mm = 281
| Nov precipitation mm = 140
| Dec precipitation mm = 24
| year precipitation mm = 2952
| source =<ref>{{cite web |url = https://en.climate-data.org/asia/india/kerala/malappuram-34234/ |website = en.climate-data.org |title = ಮಲಪ್ಪುರಂನ ಹವಾಮಾನ |access-date = 30 November 2019 |archive-date = 13 September 2021 |archive-url = https://web.archive.org/web/20210913063337/https://en.climate-data.org/asia/india/kerala/malappuram-34234/ |url-status = live }}</ref>
| date = ನವೆಂಬರ್ 2019
}}
</div>
== ಸಸ್ಯ ಮತ್ತು ಪ್ರಾಣಿ ಸಂಪತ್ತು ==
{{multiple image|align=left|direction = vertical|caption_align=left
| image1 = Nilambur Teak Garden.jpg |caption1= [[ತೇಗ ವಸ್ತುಸಂಗ್ರಹಾಲಯ]]| image2 = Green Vallikkunnu.jpg|caption2= [[ವಲ್ಲಿಕುಣ್ಣು]]ನಲ್ಲಿ [[ಉಪ್ಪುನೀರಿನ ಕಾಡುಗಳು]]| image3 = Beeyam Kayal River near Athani.jpg |caption3 = [[ಎಡಪ್ಪಲ್]]ನಲ್ಲಿ [[ತೃಶೂರ್ ಕೋಲೆ ಜೌಗು ಪ್ರದೇಶಗಳು|ಪೊನ್ನಾನಿ ಕೋಲೆ ಜೌಗು ಪ್ರದೇಶಗಳು]]
}}
ಜಿಲ್ಲೆಯು ವೈವಿಧ್ಯಮಯ ವನ್ಯಜೀವಿ ಮತ್ತು ಹಲವಾರು ಸಣ್ಣ ಬೆಟ್ಟಗಳು, ಅರಣ್ಯಗಳು, ನದಿಗಳು ಮತ್ತು ಪಶ್ಚಿಮಕ್ಕೆ ಹರಿಯುವ ತೊರೆಗಳು, [[ಕೇರಳದ ಸರೋವರಗಳು|ಸರೋವರಗಳು]] ಮತ್ತು [[ಭತ್ತ|ಭತ್ತ]], [[ಅಡಕೆ]], [[ಗೋಡಂಬಿ]], [[ಕರಿಮೆಣಸು|ಮೆಣಸು]], [[ಶುಂಠಿ]], [[ದ್ವಿದಳ ಧಾನ್ಯಗಳು|ದ್ವಿದಳ ಧಾನ್ಯಗಳು]], [[ತೆಂಗು]], [[ಬಾಳೆಹಣ್ಣು|ಬಾಳೆ]], [[ಮರಗೆಣಸು]], [[ಚಹಾ]], ಮತ್ತು [[ರಬ್ಬರ್]] ತೋಟಗಳನ್ನು ಹೊಂದಿದೆ. ವಿಶ್ವದ ಅತ್ಯಂತ ಹಳೆಯ [[ತೇಗ]] ತೋಟವಾದ ಕೊನೊಲಿಯ ಪ್ಲಾಟ್ [[ನಿಲಂಬೂರ್]] ನಲ್ಲಿದೆ. ನಿಲಂಬೂರ್ [[ತೇಗ ವಸ್ತುಸಂಗ್ರಹಾಲಯ]]ಕ್ಕೂ ಹೆಸರುವಾಸಿಯಾಗಿದೆ. [[ಬಿದಿರು]] ಮರಗಳು ನಿಲಂಬೂರ್ ತೇಗ ತೋಟಗಳ ಬಳಿ ವ್ಯಾಪಕವಾಗಿ ಕಂಡುಬರುತ್ತವೆ. ತೇಗ ವಸ್ತುಸಂಗ್ರಹಾಲಯದೊಂದಿಗೆ ಜೈವಿಕ ಸಂಪನ್ಮೂಲ ನೈಸರ್ಗಿಕ ಉದ್ಯಾನವನವು ಸಂಬಂಧಿಸಿದೆ. [[ಮದ್ರಾಸ್ ಪ್ರೆಸಿಡೆನ್ಸಿ]]ಯ ಹಳೆಯ ಆಡಳಿತ ದಾಖಲೆಗಳಲ್ಲಿ, ಹಿಂದಿನ [[ಮದ್ರಾಸ್ ಪ್ರೆಸಿಡೆನ್ಸಿ]]ಯಲ್ಲಿ ಸರ್ಕಾರದ ಒಡೆತನದ ಅತ್ಯಂತ ಗಮನಾರ್ಹವಾದ ತೋಟವು 1844 ರಲ್ಲಿ ನೆಡಲಾದ [[ನಿಲಂಬೂರ್]]ನಲ್ಲಿನ ತೇಗ ತೋಟವಾಗಿದೆ ಎಂದು ದಾಖಲಿಸಲಾಗಿದೆ.<ref name="Mbsp">{{cite book |url=https://www.tamildigitallibrary.in/admin/assets/book/TVA_BOK_0023302_The_Madras_Presidency_1881_1931.pdf |title=ಮದ್ರಾಸ್ ಪ್ರೆಸಿಡೆನ್ಸಿ (1881–1931) |last=ಬೋಗ್ |first=ಜಿಟಿ |publisher=ಮದ್ರಾಸ್ ಸರ್ಕಾರ |location=ಮದ್ರಾಸ್ |year=1933 |page=63 |access-date=9 June 2021 |archive-date=9 June 2021 |archive-url=https://web.archive.org/web/20210609102848/https://www.tamildigitallibrary.in/admin/assets/book/TVA_BOK_0023302_The_Madras_Presidency_1881_1931.pdf |url-status=live }}</ref>
ಜಿಲ್ಲೆಯ 3,554 ಕಿಮೀ<sup>2</sup> ವಿಸ್ತೀರ್ಣದಲ್ಲಿ, {{cvt|1034|km2}} (29%) ಅರಣ್ಯ ಪ್ರದೇಶವನ್ನು ಹೊಂದಿದೆ. ಇದು ದಟ್ಟವಾಗಿರಬಹುದು ಅಥವಾ ಕಡಿಮೆ ದಟ್ಟವಾಗಿರಬಹುದು.<ref>{{cite web |url=http://industry.kerala.gov.in/images/pdf/malappuram.pdf |website=industry.kerala.gov.in |title=ಮಲಪ್ಪುರಂನ ಅರಣ್ಯ ಪ್ರದೇಶ |access-date=21 April 2020 |archive-date=26 April 2021 |archive-url=https://web.archive.org/web/20210426034953/http://industry.kerala.gov.in/images/pdf/malappuram.pdf |url-status=live }}</ref> ಜಿಲ್ಲೆಯ ಈಶಾನ್ಯ ಭಾಗವು {{cvt|758.87|km2}} ವ್ಯಾಪಕವಾದ ಅರಣ್ಯ ಪ್ರದೇಶವನ್ನು ಹೊಂದಿದೆ. ಇದರಲ್ಲಿ, {{cvt|325.33|km2}} ಮೀಸಲು ಅರಣ್ಯಗಳು ಮತ್ತು ಉಳಿದವು ಸರ್ಕಾರಿ ಅರಣ್ಯಗಳಾಗಿವೆ. ಇವುಗಳಲ್ಲಿ, 80% [[ಸಮಶೀತೋಷ್ಣ ಪರ್ಣಪಾತಿ ಕಾಡು|ಪರ್ಣಪಾತಿ]] ಮತ್ತು ಉಳಿದವು [[ನಿತ್ಯಹರಿದ್ವರ್ಣ ಕಾಡು|ನಿತ್ಯಹರಿದ್ವರ್ಣ]]ವಾಗಿವೆ. ಅರಣ್ಯ ಪ್ರದೇಶವು ಮುಖ್ಯವಾಗಿ ನಿಲಂಬೂರ್ ಉಪ-ಜಿಲ್ಲೆಯಲ್ಲಿ ಕೇಂದ್ರೀಕೃತವಾಗಿದೆ, ಇದು ಬೆಟ್ಟದ ಜಿಲ್ಲೆ [[ವಯನಾಡ್ ಜಿಲ್ಲೆ|ವಯನಾಡ್]], [[ಪಶ್ಚಿಮ ಘಟ್ಟಗಳು]], ಮತ್ತು [[ತಮಿಳುನಾಡು|ತಮಿಳುನಾಡಿನ]] ಬೆಟ್ಟ ಪ್ರದೇಶಗಳೊಂದಿಗೆ ([[ನೀಲಗಿರಿ ಜಿಲ್ಲೆ|ನೀಲಗಿರಿ]]) ಗಡಿಯನ್ನು ಹಂಚಿಕೊಂಡಿದೆ. [[ತೇಗ]], [[ಡಾಲ್ಬರ್ಗಿಯಾ ಸಿಸ್ಸೂ|ರೋಸ್ವುಡ್]], ಮತ್ತು [[ಮಹೋಗಾನಿ]] ಮರಗಳು ನಿಲಂಬೂರ್ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತವೆ. ಅರಣ್ಯದಲ್ಲಿ ಬಿದಿರಿನ ಬೆಟ್ಟಗಳು ವ್ಯಾಪಕವಾಗಿ ಕಂಡುಬರುತ್ತವೆ. ಜಿಲ್ಲೆಯಲ್ಲಿನ ಕರಿಂಪುಳ್ಳ ವನ್ಯಜೀವಿ ಅಭಯಾರಣ್ಯವು ರಾಜ್ಯದ ಅತಿದೊಡ್ಡ ವನ್ಯಜೀವಿ ಅಭಯಾರಣ್ಯವಾಗಿದೆ.<ref>{{cite web |url=https://www.thehindu.com/news/national/kerala/karimpuzha-sanctuary-comes-into-being/article31984618.ece |website=The Hindu |title=ಕರಿಂಪುಳ್ಳ ವನ್ಯಜೀವಿ ಅಭಯಾರಣ್ಯ |access-date=5 July 2020 |date=3 July 2020 |archive-date=5 July 2020 |archive-url=https://web.archive.org/web/20200705053212/https://www.thehindu.com/news/national/kerala/karimpuzha-sanctuary-comes-into-being/article31984618.ece |url-status=live }}</ref><ref>{{cite web |url=http://touristinindia.com/new-amarambalam-wildlife-sanctuary/ |website=touristinindia.com |title=ಕೇರಳದ ಅತಿದೊಡ್ಡ ವನ್ಯಜೀವಿ ಅಭಯಾರಣ್ಯ |date=19 February 2018 |access-date=5 July 2020 |archive-date=5 July 2020 |archive-url=https://web.archive.org/web/20200705054712/http://touristinindia.com/new-amarambalam-wildlife-sanctuary/ |url-status=live }}</ref> [[ಕರಿಂಪುಳ್ಳ ವನ್ಯಜೀವಿ ಅಭಯಾರಣ್ಯ]]ದ ಭಾಗವಾಗಿರುವ [[ಹೊಸ ಅಮರಂಬಲಂ ಮೀಸಲು ಅರಣ್ಯ]]ವು ವೈವಿಧ್ಯಮಯ ಪ್ರಾಣಿಗಳನ್ನು ಹೊಂದಿದೆ. ಆನೆಗಳು, ಜಿಂಕೆಗಳು, ಹುಲಿಗಳು, ಕೋತಿಗಳು, ಕರಡಿಗಳು, ಹಂದಿಗಳು, ಮೊಲಗಳು, ಹಕ್ಕಿಗಳು, ಮತ್ತು ಸರೀಸೃಪಗಳು ಸೇರಿದಂತೆ ವಿವಿಧ ಪ್ರಾಣಿಗಳು ಅರಣ್ಯಗಳಲ್ಲಿ ಕಂಡುಬರುತ್ತವೆ. ಜೇನು, ಔಷಧೀಯ ಗಿಡಮೂಲಿಕೆಗಳು, ಮತ್ತು ಮಸಾಲೆಗಳಂತಹ ಅರಣ್ಯ ಉತ್ಪನ್ನಗಳನ್ನು ಸಹ ಇಲ್ಲಿ ಸಂಗ್ರಹಿಸಲಾಗುತ್ತದೆ. ನೆಡುಂಕಾಯಂ ಮಳೆಕಾಡು ಸಹ ನಿಲಂಬೂರ್ ಕಣಿವೆಯಲ್ಲಿ ಅಸ್ತಿತ್ವದಲ್ಲಿದೆ. ಅರಣ್ಯಗಳನ್ನು ಎರಡು ವಿಭಾಗಗಳಿಂದ ರಕ್ಷಿಸಲಾಗಿದೆ - ನಿಲಂಬೂರ್ ಉತ್ತರ ಮತ್ತು ನಿಲಂಬೂರ್ ದಕ್ಷಿಣ. [[ಕೇರಳ ಅರಣ್ಯ ಸಂಶೋಧನಾ ಸಂಸ್ಥೆ]] ನಿಲಂಬೂರ್ನಲ್ಲಿ ಉಪ-ಕೇಂದ್ರವನ್ನು ಹೊಂದಿದೆ. ಜಿಲ್ಲೆಯ ಕರಾವಳಿ ಮತ್ತು ಒಳನಾಡಿನ ಪ್ರದೇಶಗಳಲ್ಲಿ ಕಂಡುಬರುವ ಪ್ರಮುಖ ಮೀನುಗಳಲ್ಲಿ [[ಸೀಗಡಿ]], [[ಎಣ್ಣೆ ಸಾರ್ಡಿನ್|ಆಯಿಲ್ ಸಾರ್ಡಿನ್]], [[ಜೆರೆಸ್ ಸಬ್ಫಾಸಿಯೇಟಸ್|ಸಿಲ್ವರ್ ಬೆಲ್ಲಿ]], [[ಶಾರ್ಕ್]], [[ಕ್ಯಾಟ್ಫಿಶ್]], [[ಮ್ಯಾಕೆರೆಲ್]], [[ಸ್ಕೇಟ್ (ಮೀನು)|ಸ್ಕೇಟ್]], ಚೆಂಬ, ಸೋಲ್ ಮೀನು, [[ಇಂಡೋ-ಪೆಸಿಫಿಕ್ ಕಿಂಗ್ ಮ್ಯಾಕೆರೆಲ್|ಸೀರ್ ಮೀನು]], ಮತ್ತು [[ರಿಬ್ಬನ್ಫಿಶ್]] ಸೇರಿವೆ.<ref name="geographymalappuram"/>
ನಿಲಂಬೂರ್ ತೇಗವು ತನ್ನದೇ ಆದ [[ಭೌಗೋಳಿಕ ಸೂಚಕ|GI]] ಟ್ಯಾಗ್ ಅನ್ನು ಪಡೆದ ಮೊದಲ ಅರಣ್ಯ ಉತ್ಪನ್ನವಾಗಿದೆ.<ref>{{Cite news|title=ಅರಣ್ಯ ಉತ್ಪನ್ನಕ್ಕೆ ಮೊದಲ GI ಟ್ಯಾಗ್ ನಿಲಂಬೂರ್ ತೇಗಕ್ಕೆ|url=https://timesofindia.indiatimes.com/city/kochi/first-for-forest-produce-gi-tag-for-nilambur-teak/articleshow/62320961.cms|last=ಟಿ ರಾಮವರ್ಮನ್|date=1 January 2018|access-date=30 October 2020|work=[[The Times of India]]|archive-date=24 October 2020|archive-url=https://web.archive.org/web/20201024042425/https://timesofindia.indiatimes.com/city/kochi/first-for-forest-produce-gi-tag-for-nilambur-teak/articleshow/62320961.cms|url-status=live}}</ref> [[ತಿರೂರ್]]ನಲ್ಲಿ ಕಂಡುಬರುವ ಒಂದು ರೀತಿಯ [[ವೀಳ್ಯದೆಲೆ]]ಯಾದ ''ತಿರೂರ್ ವೆಟ್ಟಿಲ'' ಸಹ [[ಭೌಗೋಳಿಕ ಸೂಚಕ|GI]] ಟ್ಯಾಗ್ ಅನ್ನು ಪಡೆದುಕೊಂಡಿದೆ.<ref>{{cite news |url=https://www.thehindu.com/news/national/kerala/tirur-vettila-obtains-gi-tag/article29214761.ece |website=The Hindu |title=ತಿರೂರ್ ವೆಟ್ಟಿಲ GI ಟ್ಯಾಗ್ ಪಡೆಯುತ್ತದೆ |date=21 August 2019 |access-date=19 April 2020 |archive-date=7 November 2020 |archive-url=https://web.archive.org/web/20201107231046/https://www.thehindu.com/news/national/kerala/tirur-vettila-obtains-gi-tag/article29214761.ece |url-status=live |last1=ಮುರಿಂಗತೇರಿ |first1=ಮಿನಿ }}</ref> ಜಿಲ್ಲೆಯ ಕರಾವಳಿ ಪ್ರದೇಶದಲ್ಲಿರುವ [[ವಲ್ಲಿಕುಣ್ಣು]]ನಲ್ಲಿ ಸುಮಾರು 50 ಎಕರೆ [[ಉಪ್ಪುನೀರಿನ ಕಾಡುಗಳು|ಉಪ್ಪುನೀರಿನ ಕಾಡು]] ಕಂಡುಬರುತ್ತದೆ. [[ಉಪ್ಪುನೀರಿನ ಕಾಡುಗಳು]] ಇತರ ಕರಾವಳಿ ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ಕಂಡುಬರುತ್ತವೆ. [[ಕಡಲುಂಡಿ ಪಕ್ಷಿ ಧಾಮ]]ವು ಜಿಲ್ಲೆಯ [[ವಲ್ಲಿಕುಣ್ಣು]] ಗ್ರಾಮ ಪಂಚಾಯತ್ನಲ್ಲಿದೆ.<ref>{{cite web |title=ಮಲಪ್ಪುರಂನ ಸಸ್ಯ ಮತ್ತು ಪ್ರಾಣಿ ಸಂಪತ್ತು |url=https://malappuram.nic.in/about-district/ |access-date=24 November 2019 |website=malappuram.nic.in |archive-date=10 February 2020 |archive-url=https://web.archive.org/web/20200210004256/https://malappuram.nic.in/about-district/ |url-status=live }}</ref> ಕಡಲುಂಡಿ-ವಲ್ಲಿಕುಣ್ಣು ಸಮುದಾಯ ಮೀಸಲು ಕೇರಳದ ಮೊದಲ [[ಸಂರಕ್ಷಣಾ ಮೀಸಲುಗಳು ಮತ್ತು ಸಮುದಾಯ ಮೀಸಲುಗಳು|ಸಮುದಾಯ ಮೀಸಲು]] ಆಗಿದೆ. ಇದನ್ನು ಈಗ ಪ್ರವಾಸೋದ್ಯಮ ಕೇಂದ್ರವಾಗಿ ಘೋಷಿಸಲಾಗಿದೆ.<ref name="Vallikkunnu">{{cite web |url=https://www.onmanorama.com/travel/kerala/2018/04/04/kadalundi-vallikunnu-community-reserve-ecotourism-centre.html |title=ಕಡಲುಂಡಿ-ವಲ್ಲಿಕುಣ್ಣು ಸಮುದಾಯ ಮೀಸಲು |website=onmanorama.com |date=4 April 2018 |access-date=25 July 2020 |archive-date=25 July 2020 |archive-url=https://web.archive.org/web/20200725065854/https://www.onmanorama.com/travel/getting-about-kerala/kozhikode/2018/04/04/kadalundi-vallikunnu-community-reserve-ecotourism-centre.amp.html |url-status=live }}</ref> [[ಪುರತ್ತೂರ್]]ನ ಪದಿಂಜಾರೆಕರ ಮುಖಜಭೂಮಿಯಲ್ಲಿ 2010 ರಲ್ಲಿ ಒಂದು ಪಕ್ಷಿ ಧಾಮವನ್ನು ಪ್ರಸ್ತಾಪಿಸಲಾಯಿತು.<ref>{{cite news |last1=ಸುಧಿ |first1=ಕೆ. ಎಸ್. |title=ಹಕ್ಕಿಗಳಿಗೆ ರಾಜ್ಯದಲ್ಲಿ 12 ಹೆಚ್ಚುವರಿ ಆಶ್ರಯಗಳು |url=https://www.thehindu.com/news/national/Birds-get-12-more-havens-in-State/article16567247.ece/ |access-date=7 April 2021 |work=The Hindu |date=15 March 2010|archive-date=13 September 2021 |archive-url=https://web.archive.org/web/20210913063337/https://www.thehindu.com/news/national/Birds-get-12-more-havens-in-State/article16567247.ece/amp/ |url-status=live }}</ref> [[ತಿರುನವಾಯ]] ತನ್ನ ತಾವರೆ ಹೊಲಗಳಿಗೆ ಹೆಸರುವಾಸಿಯಾಗಿದೆ.<ref>{{Cite news|title=ತಿರುನವಾಯದ ತಾವರೆ ಹೊಲಗಳು|url=https://www.onmanorama.com/news/kerala/2018/09/03/lotus-farming-muslim-kerala-hindu.html|last=ಅನುಪಮಾ ಮಿಲಿ|date=4 September 2018|access-date=26 July 2020|work=Malayala Manorama|archive-date=26 July 2020|archive-url=https://web.archive.org/web/20200726065643/https://www.onmanorama.com/news/kerala/2018/09/03/lotus-farming-muslim-kerala-hindu.html|url-status=live}}</ref>
== ಆಡಳಿತ ==
{{Main|ಮಲಪ್ಪುರಂ ಜಿಲ್ಲೆಯ ಆಡಳಿತ}}
[[File:Malappuram DownHill Aerial View.jpg|left|thumb|[[ಮಲಪ್ಪುರಂ]], ಜಿಲ್ಲೆಯ ಆಡಳಿತ ಪ್ರಧಾನ ಕಚೇರಿ]]
=== ಆದಾಯ ಆಡಳಿತ ===
ಜಿಲ್ಲಾ ಆಡಳಿತದ ಪ್ರಧಾನ ಕಚೇರಿಯಾದ ಕಲೆಕ್ಟರೇಟ್ [[ಮಲಪ್ಪುರಂ]]ನ ಅಪ್ಹಿಲ್ನಲ್ಲಿದೆ. ಜಿಲ್ಲಾ ಆಡಳಿತವು [[ಜಿಲ್ಲಾ ಕಲೆಕ್ಟರ್]]ರ ನೇತೃತ್ವದಲ್ಲಿರುತ್ತದೆ. ಅವರಿಗೆ ಸಾಮಾನ್ಯ ವಿಷಯಗಳು, ಭೂಸ್ವಾಧೀನ, ಆದಾಯ ವಸೂಲಿ, ಭೂ ಸುಧಾರಣೆ, ಮತ್ತು ಚುನಾವಣೆಗಳಿಗೆ ಜವಾಬ್ದಾರಿಯುತವಾದ ಐದು ಉಪ ಕಲೆಕ್ಟರ್ಗಳು ಸಹಾಯ ಮಾಡುತ್ತಾರೆ. ಡೆಪ್ಯುಟಿ ಕಲೆಕ್ಟರ್ (ಜನರಲ್) ಹುದ್ದೆಯಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಎಲ್ಲಾ ಆಡಳಿತ ಚಟುವಟಿಕೆಗಳಲ್ಲಿ ಜಿಲ್ಲಾ ಕಲೆಕ್ಟರ್ಗೆ ಬೆಂಬಲವನ್ನು ಒದಗಿಸುತ್ತಾರೆ.<ref>{{Cite web|url=https://malappuram.nic.in/collectrate/|title=ಕಲೆಕ್ಟರೇಟ್ ಮಲಪ್ಪುರಂ|access-date=3 October 2020|website=ಮಲಪ್ಪುರಂ ಜಿಲ್ಲೆಯ ಅಧಿಕೃತ ವೆಬ್ಸೈಟ್|archive-date=25 October 2020|archive-url=https://web.archive.org/web/20201025100613/https://malappuram.nic.in/collectrate/|url-status=live}}</ref>
ಮಲಪ್ಪುರಂ ಆದಾಯ ಜಿಲ್ಲೆಯು ಎರಡು ವಿಭಾಗಗಳನ್ನು ಹೊಂದಿದೆ - ತಿರೂರ್ ಮತ್ತು ಪೆರಿಂತಲ್ಮನ್ನ. ಜಿಲ್ಲೆಯನ್ನು ಮತ್ತಷ್ಟು 138 ಗ್ರಾಮಗಳಾಗಿ ವಿಂಗಡಿಸಲಾಗಿದೆ, ಅವು ಒಟ್ಟಾಗಿ 7 ಉಪ-ಜಿಲ್ಲೆಗಳನ್ನು (ತಾಲೂಕುಗಳನ್ನು) ರೂಪಿಸುತ್ತವೆ.<ref>{{cite web
|url = https://malappuram.nic.in/tehsil/
|website = malappuram.nic.in
|title = ಮಲಪ್ಪುರಂ ಜಿಲ್ಲೆಯ ತಾಲೂಕುಗಳು
|access-date = 23 November 2019
|archive-date = 19 February 2020
|archive-url = https://web.archive.org/web/20200219085134/https://malappuram.nic.in/tehsil/
|url-status = live
}}</ref><ref name="admn_mpm">{{cite web
| title= ಮಲಪ್ಪುರಂ ಜಿಲ್ಲೆಯ ಆಡಳಿತ ವಿಭಾಗಗಳು
| url= https://malappuram.nic.in/administrative-setup/
| access-date= 23 November 2019
| website= malappuram.nic.in
| archive-date= 24 August 2019
| archive-url= https://web.archive.org/web/20190824213421/https://malappuram.nic.in/administrative-setup/
| url-status= live
}}</ref>
==== ಆದಾಯ ವಿಭಾಗಗಳು ====
ಜಿಲ್ಲೆಯಲ್ಲಿ ಎರಡು ಆದಾಯ ವಿಭಾಗಗಳಿವೆ: [[ಕೇರಳದ ಆದಾಯ ವಿಭಾಗಗಳ ಪಟ್ಟಿ|ಪೆರಿಂತಲ್ಮನ್ನ]] ಮತ್ತು [[ಕೇರಳದ ಆದಾಯ ವಿಭಾಗಗಳ ಪಟ್ಟಿ|ತಿರೂರ್]]. [[ಪೊನ್ನಾನಿ ತಾಲೂಕು|ಪೊನ್ನಾನಿ]], [[ತಿರೂರ್ ತಾಲೂಕು|ತಿರೂರ್]], [[ತಿರೂರಂಗಡಿ]], ಮತ್ತು [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]] ಉಪ-ಜಿಲ್ಲೆಗಳು ತಿರೂರ್ ಆದಾಯ ವಿಭಾಗದಲ್ಲಿ ಸೇರಿವೆ, ಆದರೆ ಉಳಿದ [[ನಿಲಂಬೂರ್ ತಾಲೂಕು|ನಿಲಂಬೂರ್]], [[ಇರನಾಡ್ ತಾಲೂಕು|ಇರನಾಡ್]] ಮತ್ತು [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]] ಸೇರಿ ಪೆರಿಂತಲ್ಮನ್ನ ಆದಾಯ ವಿಭಾಗವನ್ನು ರೂಪಿಸುತ್ತವೆ. ಆದಾಯ ವಿಭಾಗೀಯ ಕಚೇರಿಯು ಆದಾಯ ವಿಭಾಗದ [[ಉಪ ಕಲೆಕ್ಟರ್]] / ಆದಾಯ ವಿಭಾಗೀಯ ಅಧಿಕಾರಿ (RDO) ನೇತೃತ್ವದಲ್ಲಿರುತ್ತದೆ, ಅವರು ಆದಾಯ ವಿಭಾಗದ [[ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್]] ಆಗಿರುತ್ತಾರೆ. ಆದಾಯ ವಿಭಾಗೀಯ ಕಚೇರಿಗಳು ಕ್ರಮವಾಗಿ [[ತಿರೂರ್]] ಮತ್ತು [[ಪೆರಿಂತಲ್ಮನ್ನ]]ದಲ್ಲಿವೆ.
==== ತಾಲೂಕುಗಳು ====
ತಾಲೂಕು (ಉಪ-ಜಿಲ್ಲೆ) ಒಂದು ಜಿಲ್ಲೆಯೊಳಗಿನ ಆಡಳಿತ ವಿಭಾಗವಾಗಿದೆ. ಮಲಪ್ಪುರಂ ಜಿಲ್ಲೆಯಲ್ಲಿ 7 ತಾಲೂಕುಗಳಿವೆ, ಮತ್ತು ಪ್ರತಿ ತಾಲೂಕು ಭೂ ಆದಾಯ ಆಡಳಿತ ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಕಾರ್ಯಗಳಿಗೆ ಜವಾಬ್ದಾರನಾದ [[ತಹಸೀಲ್ದಾರ್]]ನ ನೇತೃತ್ವದಲ್ಲಿರುತ್ತದೆ.
[[ನಿಲಂಬೂರ್#ನಿಲಂಬೂರ್ ತಾಲೂಕು|ನಿಲಂಬೂರ್]] ಕೇರಳದ ಅತಿದೊಡ್ಡ ಉಪ-ಜಿಲ್ಲೆ ([[ತಾಲೂಕು]]) ಆಗಿದೆ. [[ಪೊನ್ನಾನಿ ತಾಲೂಕು|ಪೊನ್ನಾನಿ]], [[ತಿರೂರ್ ತಾಲೂಕು|ತಿರೂರ್]], ಮತ್ತು [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]] ಉಪ-ಜಿಲ್ಲೆಗಳು ಕರಾವಳಿ ಪ್ರದೇಶದಲ್ಲಿವೆ. [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]], [[ಇರನಾಡ್ ತಾಲೂಕು|ಇರನಾಡ್]], ಮತ್ತು [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]] ಮಧ್ಯ ಪ್ರದೇಶದಲ್ಲಿವೆ, ಆದರೆ [[ನಿಲಂಬೂರ್#ನಿಲಂಬೂರ್ ತಾಲೂಕು|ನಿಲಂಬೂರ್]] ಉಪ-ಜಿಲ್ಲೆಯು ಎತ್ತರದ ಪ್ರದೇಶದಲ್ಲಿದೆ. ಜಿಲ್ಲಾ-ಮಟ್ಟದ ಆಡಳಿತವನ್ನು ಸಂಘಟಿಸಲು ಮಲಪ್ಪುರಂನಲ್ಲಿ ಸಿವಿಲ್ ಸ್ಟೇಷನ್ ಜೊತೆಗೆ, [[ತಹಸೀಲ್|ತಾಲೂಕು]]-ಮಟ್ಟದ ಆಡಳಿತ ಚಟುವಟಿಕೆಗಳನ್ನು ಸಂಘಟಿಸಲು [[ಮಂಜೇರಿ]], [[ನಿಲಂಬೂರ್]], [[ಪೆರಿಂತಲ್ಮನ್ನ]], [[ತಿರೂರಂಗಡಿ]], [[ತಾನೂರು, ಮಲಪ್ಪುರಂ|ತಾನೂರು]], [[ತಿರೂರ್]], [[ಕುಟ್ಟಿಪುರಂ]], ಮತ್ತು [[ಪೊನ್ನಾನಿ]]ಗಳಲ್ಲಿ ಮಿನಿ-ಸಿವಿಲ್ ಸ್ಟೇಷನ್ಗಳಿವೆ.<ref>{{cite web | url=https://malappuram.nic.in/en/tehsil/#:~:text=For%20administrative%20purpose%20the%20district,office%20is%20headed%20by%20Tahsildar | title=ತಹಸೀಲ್ಗಳು / ತಾಲೂಕುಗಳು | ಮಲಪ್ಪುರಂಗೆ ಸ್ವಾಗತ | ಭಾರತ }}</ref>
[[File:Subdistricts of Malappuram (August 2020).svg|thumb|left|ಮಲಪ್ಪುರಂನಲ್ಲಿನ ತಾಲೂಕುಗಳು]]
{| align="left" class="toccolours" cellspacing="1" cellpadding="1" style="margin-right: .5em; margin-top: .4em; font-size: 90%"
|-
|- bgcolor="#cccccc" valign="top"
!ಉಪ-ಜಿಲ್ಲೆ<br/>(''ತಾಲೂಕು'')
!ವಿಸ್ತೀರ್ಣ<br/>(ಚದರ ಕಿಮೀ ನಲ್ಲಿ)
!ಒಟ್ಟು ಜನಸಂಖ್ಯೆ<br/>(2011)
!ಗ್ರಾಮಗಳು
!ನಗರೀಕರಣ<br/>(2011)
|-
| [[ಪೊನ್ನಾನಿ ತಾಲೂಕು|ಪೊನ್ನಾನಿ]] || 200 || 379,798 || 11 || 57.36%
|-
| [[ತಿರೂರ್ ತಾಲೂಕು|ತಿರೂರ್]] || 448 || 928,672 || 30 || 48.73%
|-
| [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]] || 290* || 631,906 || 17 || 90.40%
|-
| [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]] || 258* || 410,577 || 12 || 43.10%
|-
| [[ಇರನಾಡ್ ತಾಲೂಕು|ಇರನಾಡ್]] || 491* || 581,512 || 23 || 37.93%
|-
| [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]] || 506 || 606,396 || 24 || 21.73%
|-
| [[ನಿಲಂಬೂರ್#ನಿಲಂಬೂರ್ ತಾಲೂಕು|ನಿಲಂಬೂರ್]] || 1,343 || 574,059 || 21 || 8.08%
|-
| style="font-size: 80%" colspan=5 bgcolor="#cceeff" align="center"| ಮೂಲಗಳು: [[ಭಾರತದ ಜನಗಣತಿ 2011]],<ref name="demomalapuram">{{cite web |url= http://censusindia.gov.in/2011census/dchb/3205_PART_B_MALAPPURAM.pdf |website=censusindia.gov.in |title= ಮಲಪ್ಪುರಂನ ತಾಲೂಕು-ವಾರು ಜನಸಂಖ್ಯಾಶಾಸ್ತ್ರ |access-date=19 April 2020 |publisher=Directorate of Census Operations, Kerala |pages= 161–193 |archive-date=27 November 2019 |archive-url= https://web.archive.org/web/20191127005248/http://censusindia.gov.in/2011census/dchb/3205_PART_B_MALAPPURAM.pdf |url-status=live}}</ref> ಮಲಪ್ಪುರಂ ಜಿಲ್ಲೆಯ ಅಧಿಕೃತ ವೆಬ್ಸೈಟ್<ref name = Villages_Malappuram>{{cite web |title=ಮಲಪ್ಪುರಂನ ಗ್ರಾಮಗಳು |url = https://malappuram.nic.in/village-panchayats/ |website = malappuram.nic.in |access-date=25 November 2019 |archive-date = 24 August 2019 |archive-url = https://web.archive.org/web/20190824213539/https://malappuram.nic.in/village-panchayats/ |url-status = live }}</ref>
|}
==== ಆದಾಯ ಗ್ರಾಮಗಳು ====
{{See also|ಮಲಪ್ಪುರಂ ಜಿಲ್ಲೆಯ ಗ್ರಾಮಗಳ ಪಟ್ಟಿ|ಮಲಪ್ಪುರಂ ಜಿಲ್ಲೆಯ ದೇಶಗಳ ಪಟ್ಟಿ (1981)}}
[[ಆದಾಯ ಗ್ರಾಮ|ಆದಾಯ ಗ್ರಾಮಗಳು]] ತಾಲೂಕುಗಳ ಉಪವಿಭಾಗವಾಗಿದ್ದು, ಜಿಲ್ಲೆಯ ಆದಾಯ ಆಡಳಿತದ ಅತ್ಯಂತ ಕೆಳಮಟ್ಟದ ಸಂಸ್ಥೆಯಾಗಿದೆ. ಪ್ರತಿ ತಾಲೂಕು ತನ್ನ ವ್ಯಾಪ್ತಿಯಲ್ಲಿ ಹಲವಾರು ಗ್ರಾಮಗಳನ್ನು ಒಳಗೊಂಡಿದೆ. ಮಲಪ್ಪುರಂ ಜಿಲ್ಲೆಯಲ್ಲಿ 138 ಆದಾಯ ಗ್ರಾಮಗಳಿವೆ. ಆದಾಯ ಗ್ರಾಮಗಳನ್ನು ಭೂ ಆದಾಯ ವಿಷಯಗಳಿಗಾಗಿ ಮತ್ತಷ್ಟು ದೇಶಗಳಾಗಿ ವಿಂಗಡಿಸಲಾಗಿದೆ.
* [[ಮಲಪ್ಪುರಂ ಜಿಲ್ಲೆಯ ಗ್ರಾಮಗಳ ಪಟ್ಟಿ]]
* [[ಮಲಪ್ಪುರಂ ಜಿಲ್ಲೆಯ ದೇಶಗಳ ಪಟ್ಟಿ (1981)|ಮಲಪ್ಪುರಂ ಜಿಲ್ಲೆಯ ದೇಶಗಳ ಪಟ್ಟಿ]]
{{clear}}
=== ಜಿಲ್ಲಾ ಯೋಜನಾ ಸಮಿತಿ ===
[[ಭಾರತದಲ್ಲಿ ಜಿಲ್ಲಾ ಯೋಜನಾ ಸಮಿತಿಗಳು|ಮಲಪ್ಪುರಂನ ಜಿಲ್ಲಾ ಯೋಜನಾ ಸಮಿತಿಯು]] ಪುರಸಭೆಗಳಿಂದ ಇಬ್ಬರು ಸದಸ್ಯರು, ಜಿಲ್ಲಾ ಪಂಚಾಯತ್ನಿಂದ 10 ಸದಸ್ಯರು, ಮತ್ತು ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಜೊತೆಗೆ ಒಬ್ಬ ಪಂಚಾಯತ್-ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಿದೆ. ಅಧ್ಯಕ್ಷ ಸ್ಥಾನವು ಜಿಲ್ಲಾ ಪಂಚಾಯತ್ನ ಪದನಿಮಿತ್ತ ಸದಸ್ಯರಿಗೆ ಮೀಸಲಾಗಿದೆ ಮತ್ತು ಕಾರ್ಯದರ್ಶಿ ಸ್ಥಾನವು ಜಿಲ್ಲಾ ಕಲೆಕ್ಟರ್ನ ಪದನಿಮಿತ್ತ ಸದಸ್ಯರಿಗೆ ಮೀಸಲಾಗಿದೆ.<ref>{{Cite web|url=http://sec.kerala.gov.in/index.php/Content/index/lsgd|title=ಜಿಲ್ಲಾ ಯೋಜನಾ ಸಮಿತಿ, ಮಲಪ್ಪುರಂ|access-date=7 November 2020|website=SEC Kerala|archive-date=13 November 2020|archive-url=https://web.archive.org/web/20201113145804/http://sec.kerala.gov.in/index.php/Content/index/lsgd|url-status=live}}</ref>
=== ನ್ಯಾಯಾಂಗ ===
[[File:Perinthalmanna Munsif Court.png|thumbnail|[[ಪೆರಿಂತಲ್ಮನ್ನ]]ದಲ್ಲಿನ ನ್ಯಾಯಾಲಯದ ಸಂಕೀರ್ಣ.]]
ಜಿಲ್ಲೆಯ ನ್ಯಾಯಾಂಗ ಪ್ರಧಾನ ಕಚೇರಿಯು [[ಮಂಜೇರಿ]]ಯಲ್ಲಿದೆ. ಮಂಜೇರಿ, [[ಮಲಪ್ಪುರಂ]], [[ತಿರೂರ್]], [[ಪೆರಿಂತಲ್ಮನ್ನ]], [[ಪರಪ್ಪನಂಗಾಡಿ]], [[ಪೊನ್ನಾನಿ]], ಮತ್ತು [[ನಿಲಂಬೂರ್]] ಸೇರಿದಂತೆ ಮಂಜೇರಿ ನ್ಯಾಯಾಂಗ ಜಿಲ್ಲೆಯಡಿಯಲ್ಲಿ 24 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತವೆ.<ref name="district_police">{{cite web |url=https://districts.ecourts.gov.in/malappuram |website=districts.ecourts.gov.in |title=ಮಲಪ್ಪುರಂನ ನ್ಯಾಯಾಂಗ ಆಡಳಿತ |access-date=17 June 2020 |archive-date=17 June 2020 |archive-url=https://web.archive.org/web/20200617045439/https://districts.ecourts.gov.in/malappuram |url-status=live}}</ref>
ಜೂನ್ 16, 1969 ರಂದು ಮಲಪ್ಪುರಂ ಜಿಲ್ಲೆಯ ಸ್ಥಾಪನೆಯ ನಂತರ, ಮೇ 25, 1970 ರಂದು ಕೋಝಿಕ್ಕೋಡ್ನಲ್ಲಿ ಜಿಲ್ಲಾ ನ್ಯಾಯಾಲಯವು ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ನಂತರ, ಫೆಬ್ರವರಿ 1, 1974 ರಂದು, ನ್ಯಾಯಾಲಯವನ್ನು ಮಂಜೇರಿ ಕೋರ್ಟ್ ಕಾಂಪ್ಲೆಕ್ಸ್ಗೆ ಸ್ಥಳಾಂತರಿಸಲಾಯಿತು.
ಮಂಜೇರಿ ನ್ಯಾಯಾಂಗ ಜಿಲ್ಲೆಯಲ್ಲಿ, ಪ್ರಸ್ತುತ ಮಂಜೇರಿ, ಮಲಪ್ಪುರಂ, ತಿರೂರ್, ಪೆರಿಂತಲ್ಮನ್ನ, ಪರಪ್ಪನಂಗಾಡಿ, ಪೊನ್ನಾನಿ, ತಿರೂರ್, ಮತ್ತು ನಿಲಂಬೂರ್ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 24 ಕಾರ್ಯನಿರ್ವಹಿಸುವ ನ್ಯಾಯಾಲಯಗಳಿವೆ. ಮಲಪ್ಪುರಂನ ನ್ಯಾಯಾಂಗ ಪ್ರಧಾನ ಕಚೇರಿಯು ಮಂಜೇರಿಯಲ್ಲಿದೆ.
ಜಿಲ್ಲೆಯು ಮೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳು, ಎರಡು [[ಕುಟುಂಬ ನ್ಯಾಯಾಲಯ#ಭಾರತ|ಕುಟುಂಬ ನ್ಯಾಯಾಲಯಗಳು]] (ಒಂದು ಮಲಪ್ಪುರಂನಲ್ಲಿ ಮತ್ತು ಇನ್ನೊಂದು ತಿರೂರ್ನಲ್ಲಿ), ಹಾಗೆಯೇ ಎರಡು ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಗಳನ್ನು (ಒಂದು [[ಮಂಜೇರಿ]]ಯಲ್ಲಿ ಮತ್ತು ಇನ್ನೊಂದು ತಿರೂರ್ನಲ್ಲಿ) ಹೊಂದಿದೆ. ಇದಲ್ಲದೆ, ಎರಡು ಉಪ ನ್ಯಾಯಾಲಯಗಳಿವೆ - ಒಂದು [[ಮಂಜೇರಿ]]ಯಲ್ಲಿ ಮತ್ತು ಇನ್ನೊಂದು [[ತಿರೂರ್]]ನಲ್ಲಿ. ಜಿಲ್ಲೆಯು ಎರಡು ಮುನ್ಸಿಫ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳನ್ನು ಸಹ ಹೊಂದಿದೆ, ಒಂದು ಪೊನ್ನಾನಿಯಲ್ಲಿ ಮತ್ತು ಇನ್ನೊಂದು ಪೆರಿಂತಲ್ಮನ್ನದಲ್ಲಿ. ಅಂತಿಮವಾಗಿ, ಮಲಪ್ಪುರಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಒಂಬತ್ತು [[ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು|ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿವೆ]].
=== ಪೊಲೀಸ್ ===
ಮಲಪ್ಪುರಂ ಜಿಲ್ಲಾ ಪೊಲೀಸ್, [[ಕೇರಳ ಪೊಲೀಸ್]]ನ ಒಂದು [[ಪೊಲೀಸ್ ಜಿಲ್ಲೆ]]ಯಾಗಿದ್ದು, ಜಿಲ್ಲೆಯೊಳಗೆ ಕಾನೂನು ಜಾರಿ ಮತ್ತು ತನಿಖೆಗಳ ಕಾರ್ಯವನ್ನು ಹೊಂದಿದೆ. ಜಿಲ್ಲಾ ಪೊಲೀಸ್ ಕಚೇರಿಯು [[ಮಲಪ್ಪುರಂ]]ನಲ್ಲಿದೆ, ಮತ್ತು '''ಜಿಲ್ಲಾ ಪೊಲೀಸ್ ಮುಖ್ಯಸ್ಥ (DPC)''' ನೇತೃತ್ವದಲ್ಲಿದೆ, ಅವರು [[ಪೊಲೀಸ್ ಅಧೀಕ್ಷಕ]] (SP) ಹುದ್ದೆಯಲ್ಲಿರುತ್ತಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಆರು ಪೊಲೀಸ್ ಉಪ-ವಿಭಾಗಗಳು ಮತ್ತು 36 ಪೊಲೀಸ್ ಠಾಣೆಗಳಿವೆ. ಈ ಪೊಲೀಸ್ ಉಪ-ವಿಭಾಗಗಳ ಪ್ರಧಾನ ಕಚೇರಿಗಳು ಈ ಕೆಳಗಿನ ಪ್ರದೇಶಗಳಲ್ಲಿವೆ: [[ಮಲಪ್ಪುರಂ]], [[ಕೊಂಡೊಟ್ಟಿ]], [[ಪೆರಿಂತಲ್ಮನ್ನ]], [[ತಿರೂರ್]], [[ತಾನೂರು, ಮಲಪ್ಪುರಂ|ತಾನೂರು]], ಮತ್ತು [[ನಿಲಂಬೂರ್]]. ಪ್ರತಿ ಪೊಲೀಸ್ ಉಪ-ವಿಭಾಗವು [[ಪೊಲೀಸ್ ಉಪಾಧೀಕ್ಷಕ]] (DySP) ನೇತೃತ್ವದಲ್ಲಿರುತ್ತದೆ, ಮತ್ತು ಪ್ರತಿ ಪೊಲೀಸ್ ಠಾಣೆಯು [[ಠಾಣಾಧಿಕಾರಿ]] (SHO) ನೇತೃತ್ವದಲ್ಲಿರುತ್ತದೆ, ಅವರು [[ಪೊಲೀಸ್ ಇನ್ಸ್ಪೆಕ್ಟರ್]] ಹುದ್ದೆಯಲ್ಲಿರುತ್ತಾರೆ.
ಮಲಪ್ಪುರಂ ಪೊಲೀಸ್ ಜಿಲ್ಲೆ, ಪಾಲಕ್ಕಾಡ್, ತೃಶೂರ್ ಸಿಟಿ, ಮತ್ತು ತೃಶೂರ್ ಗ್ರಾಮೀಣ ಪೊಲೀಸ್ ಜಿಲ್ಲೆಗಳ ಜೊತೆಗೆ, [[ಭಾರತದಲ್ಲಿ ಪೊಲೀಸ್ ಶ್ರೇಣಿಗಳು ಮತ್ತು ಚಿಹ್ನೆಗಳು#ರಾಜ್ಯ ಪೊಲೀಸ್ ಪಡೆಗಳು ಮತ್ತು ಅವುಗಳ ರಚನೆ|ತೃಶೂರ್ ರೇಂಜ್ ಪೊಲೀಸ್]]ನ ವ್ಯಾಪ್ತಿಗೆ ಬರುತ್ತದೆ.<ref>{{Cite web|url=https://keralapolice.gov.in/page/ranges|title=ತೃಶೂರ್ ರೇಂಜ್ ಪೊಲೀಸ್ ಜಿಲ್ಲೆಗಳು|access-date=2 November 2020|website=Kerala Police|archive-date=24 October 2020|archive-url=https://web.archive.org/web/20201024123751/https://keralapolice.gov.in/page/ranges|url-status=live}}</ref> ಜಿಲ್ಲಾ ಪೊಲೀಸ್ ಕಚೇರಿ, ಜಿಲ್ಲಾ ವಿಶೇಷ ಶಾಖೆ, ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋ, ಜಿಲ್ಲಾ 'ಸಿ' ಶಾಖೆ, ಮಾದಕ ದ್ರವ್ಯ ಕೋಶ, ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ, ಸೈಬರ್ ಕೋಶ, ಮಹಿಳಾ ಕೋಶ, ಮತ್ತು ದೂರಸಂಪರ್ಕ ಘಟಕವು [[ಮಲಪ್ಪುರಂ]]ನಲ್ಲಿವೆ. ಕರಾವಳಿ ಪೊಲೀಸ್ ಠಾಣೆಯು [[ಪೊನ್ನಾನಿ]]ಯಲ್ಲಿದ್ದರೆ, ಜಿಲ್ಲಾ ಸಶಸ್ತ್ರ ಮೀಸಲು ಶಿಬಿರವು ಪದಿನ್ಹಟ್ಟುಮ್ಮುರಿಯಲ್ಲಿದೆ. ಮಲಪ್ಪುರಂ ಪೊಲೀಸ್ನ ಸಂಚಾರ ಜಾರಿ ಘಟಕಗಳು ಮಲಪ್ಪುರಂ, ಮಂಜೇರಿ, [[ಕೊಂಡೊಟ್ಟಿ]], ಪೆರಿಂತಲ್ಮನ್ನ, ಮತ್ತು ತಿರೂರ್ನಲ್ಲಿ ಕೇಂದ್ರೀಕೃತವಾಗಿವೆ.<ref>{{cite web |url=https://malappuram.keralapolice.gov.in/wings/general-executive/district-police-office |website=malappuram.keralapolice.gov.in |title=ಮಲಪ್ಪುರಂ ಪೊಲೀಸ್ |access-date=17 June 2020 |archive-date=28 September 2020 |archive-url=https://web.archive.org/web/20200928184347/https://malappuram.keralapolice.gov.in/wings/general-executive/district-police-office |url-status=live}}</ref>
[[ಕೇರಳ ಪೊಲೀಸ್]]ನ ಅಡಿಯಲ್ಲಿ ಒಂದು ಸಶಸ್ತ್ರ ಪೊಲೀಸ್ ಬೆಟಾಲಿಯನ್ ಆಗಿರುವ [[ಮಲಬಾರ್ ಸ್ಪೆಷಲ್ ಪೊಲೀಸ್]]ನ (1884 ರಲ್ಲಿ ರಚಿಸಲಾಯಿತು) ಪ್ರಧಾನ ಕಚೇರಿಯು [[ಮಲಪ್ಪುರಂ]]ನಲ್ಲಿದೆ. ಇದು ರಾಜ್ಯದ ಅತ್ಯಂತ ಹಳೆಯ ಸಶಸ್ತ್ರ ಪೊಲೀಸ್ ಬೆಟಾಲಿಯನ್ ಆಗಿದೆ.<ref name="district_police" /> ಇದು ಜನಸಂದಣಿ ನಿಯಂತ್ರಣ, ಆಂತರಿಕ ಭದ್ರತೆ, ಗಲಭೆ ನಿಯಂತ್ರಣ, ಮತ್ತು VIP ಭದ್ರತೆಯಲ್ಲಿ ಸಿವಿಲ್ ಪೊಲೀಸ್ಗೆ ಸಹಾಯ ಮಾಡುತ್ತದೆ. ಅಗತ್ಯವಿದ್ದಾಗ ಇದನ್ನು ರಾಜ್ಯದ ಹೊರಗೆಯೂ ನಿಯೋಜಿಸಲಾಗುತ್ತದೆ.<ref>{{Cite web |title=ಮಲಬಾರ್ ಸ್ಪೆಷಲ್ ಪೊಲೀಸ್ (MSP), ಕೇರಳದ ಸಶಸ್ತ್ರ ಪೊಲೀಸ್ ಬೆಟಾಲಿಯನ್ಗಳು |url=https://keralapolice.gov.in/page/malabar-special-police |access-date=2026-01-02 |website=keralapolice.gov.in |language=en}}</ref>
== ಸ್ಥಳೀಯ ಸರ್ಕಾರಗಳು ==
ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ: ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ಗಳು (ಗ್ರಾಮೀಣ ಸ್ಥಳೀಯ ಸಂಸ್ಥೆಗಳು).
===ನಗರ ಸ್ಥಳೀಯ ಸಂಸ್ಥೆಗಳು===
ಜಿಲ್ಲೆಯು ನಗರ ಪ್ರದೇಶಗಳನ್ನು ([[town#India|ಶಾಸನಬದ್ಧ ಪಟ್ಟಣಗಳು]]) ಆಡಳಿತ ನಡೆಸಲು 12 ಪುರಸಭೆಗಳನ್ನು ಹೊಂದಿದೆ. ಪ್ರತಿ ಪುರಸಭೆಯು ತನ್ನದೇ ಆದ ನಿರ್ವಾಚಿತ ಮಂಡಳಿಯನ್ನು ಹೊಂದಿದ್ದು, ಸ್ಥಳೀಯ ಆಡಳಿತ, ನಗರ ಯೋಜನೆ, ಮತ್ತು ತನ್ನ ಅನುಗುಣವಾದ ವ್ಯಾಪ್ತಿಯಲ್ಲಿ ಅಗತ್ಯ ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರತಿ ಪುರಸಭೆಯು ಕೌನ್ಸಿಲರ್ಗಳಿಂದ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿರುತ್ತದೆ. ಈ ಪುರಸಭೆಗಳು 505 ವಾರ್ಡ್ಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದರಿಂದ ಐದು ವರ್ಷಗಳ ಅವಧಿಗೆ ಒಬ್ಬ ಕೌನ್ಸಿಲರ್ ಆಯ್ಕೆಯಾಗುತ್ತಾರೆ.<ref>{{Cite news |date=2025-08-12 |title=ಕೇರಳ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಮಿತಿ ವ್ಯಾಯಾಮ ಪೂರ್ಣಗೊಂಡಿದೆ: ರಾಜ್ಯ ಮಿತಿ ಆಯೋಗ |url=https://www.thehindu.com/news/national/kerala/ward-delimitation-exercise-in-kerala-local-bodies-completed-state-delimitation-commission/article69924380.ece |access-date=2025-12-22 |work=The Hindu |language=en-IN |issn=0971-751X}}</ref><ref>{{Cite web|url=https://lsgkerala.gov.in/en/lbelection/electlbrpt/3/10/2015|title=ಮಲಪ್ಪುರಂ – ಪುರಸಭೆಗಳು ಮತ್ತು ವಾರ್ಡ್ಗಳು|access-date=3 October 2020|website=lsgkerala|archive-date=25 August 2021|archive-url=https://web.archive.org/web/20210825132910/https://lsgkerala.gov.in/en/lbelection/electlbrpt/3/10/2015|url-status=live}}</ref><ref>{{Cite web |title=ಪ್ರೆಸ್ ರಿಲೀಸ್ {{!}} ಮಿತಿ ಆಯೋಗ |url=https://delimitation.lsgkerala.gov.in/press_releases |archive-url=https://web.archive.org/web/20250910204304/https://delimitation.lsgkerala.gov.in/press_releases |archive-date=2025-09-10 |access-date=2025-12-22 |website=delimitation.lsgkerala.gov.in}}</ref>
{| align="left" class="toccolours" cellspacing="1" cellpadding="1" style="margin: auto; font-size: 90%; border: 1px solid black; margin-bottom: 5px;"
|-
|- bgcolor="#cccccc" valign="top"
!
! ಪುರಸಭೆ<ref name="Malappuram_municipalities">{{cite web |title=ಮಲಪ್ಪುರಂನ ಪುರಸಭೆಗಳು |url=https://malappuram.nic.in/public-utility-category/municipality/ |url-status=live |archive-url=https://web.archive.org/web/20200229232532/https://malappuram.nic.in/public-utility-category/municipality/ |archive-date=29 February 2020 |access-date=1 December 2019 |website=malappuram.nic.in}}</ref>
! ವಾರ್ಡ್ಗಳು<ref>{{Cite web |title=ವಾರ್ಡ್ ಮ್ಯಾಪಿಂಗ್ |url=https://wardmap.ksmart.live/index.html |access-date=2025-12-22 |website=wardmap.ksmart.live}}</ref>
! ಜನಸಂಖ್ಯೆ<br />(2011)<ref>{{cite web|url=http://urbanaffairskerala.org/images/downloads/ulb_population2011.pdf|title=ನಗರ ಸಂಸ್ಥೆಗಳ ಜನಸಂಖ್ಯೆ|access-date=14 August 2020|website=Urban Affairs Kerala|archive-date=24 September 2020|archive-url=https://web.archive.org/web/20200924173424/http://urbanaffairskerala.org/images/downloads/ulb_population2011.pdf|url-status=live}}</ref>
! ಅಧ್ಯಕ್ಷರು <ref>{{Cite news |date=2025-12-26 |title=UDF ಮಲಪ್ಪುರಂನ 11 ಪುರಸಭೆಗಳಲ್ಲಿ ಅಧಿಕಾರ ವಹಿಸಿಕೊಳ್ಳುತ್ತದೆ |url=https://www.thehindu.com/news/national/kerala/udf-assumes-power-in-11-municipalities-in-malappuram/article70440784.ece |access-date=2025-12-27 |work=The Hindu |language=en-IN |issn=0971-751X}}</ref>
! ರಾಜಕೀಯ <br />ಪಕ್ಷ
! ಪೂರ್ವ-ಚುನಾವಣೆ<br/>ಒಕ್ಕೂಟ
|-
| 1|| [[ಮಂಜೇರಿ]] || 53 || 97,102 || ಅಬ್ದುಲ್ ಮಜೀದ್ ವಿ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 2|| [[ಪೊನ್ನಾನಿ]] || 53 || 90,491 || ಸಿ.ವಿ. ಸುಧಾ|| style="background-color:{{party color|Communist Party of India (Marxist)}};" |[[ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)|<span style="color:white;">CPI(M)</span>]] || {{legend2|{{party color|Left Democratic Front (Kerala)}}|[[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್|LDF]]|border=solid 1px #AAAAAA}}
|-
| 3|| [[ಪರಪ್ಪನಂಗಾಡಿ]] || 46 || 71,239 || ಸುಬೈದಾ ಟೀಚರ್ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 4|| [[ತಾನೂರು, ಮಲಪ್ಪುರಂ|ತಾನೂರು]] || 45 || 69,534 || ನಸ್ಲಾ ಬಷೀರ್ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 5|| [[ಮಲಪ್ಪುರಂ]] || 45 || 68,088 || ವಿ. ರಿನಿಶಾ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 6|| [[ಕೊಂಡೊಟ್ಟಿ]] || 41 || 59,256 || ಯು.ಕೆ. ಮಮ್ಮತ್ತಿಸ್ಸ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 7|| [[ತಿರೂರಂಗಡಿ]] || 40 || 56,632 || ಹಬೀಬಾ ಬಷೀರ್ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 8|| [[ತಿರೂರ್]] || 40 || 56,058 || ಇಬ್ರಾಹಿಂ ಹಾಜಿ ಕೀಳೆದತ್ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 9|| [[ಪೆರಿಂತಲ್ಮನ್ನ]] || 37 || 49,723 || ಸುರಯ್ಯ ಫಾರೂಕ್ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 10|| [[ಕೊಟ್ಟಕ್ಕಲ್ ಪುರಸಭೆ|ಕೊಟ್ಟಕ್ಕಲ್]] || 35 || 48,342 || ಕೆ.ಕೆ. ನಸಾರ್ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 11|| [[ನಿಲಂಬೂರ್]] || 36 || 46,342 || ಪದ್ಮಿನಿ ಗೋಪಿನಾಥ್ || style="background-color:{{party color|Indian National Congress}};" |[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|<span style="color:white;">INC</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 12|| [[ವಳಾಂಚೇರಿ]] || 34 || 44,437 || ಹಸೀನಾ ವತ್ತೋಳಿ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|}
{{clear}}
{{Largest cities
| country = ಮಲಪ್ಪುರಂ ಜಿಲ್ಲೆ, ಕೇರಳ, ಭಾರತ
| stat_ref = ಮೂಲ:<ref name="Malappuram_municipalities" /><ref name="No. of wards in Malappuram">{{cite web |title=ಮಲಪ್ಪುರಂನ ವಾರ್ಡ್ಗಳ ಸಂಖ್ಯೆ |url=https://lsgkerala.gov.in/electionupdates/deStatusLB.php?distID=10 |url-status=live |archive-url=https://web.archive.org/web/20200219141043/http://lsgkerala.gov.in/electionupdates/deStatusLB.php?distID=10 |archive-date=19 February 2020 |access-date=24 June 2020 |website=lsgkerala.gov.in}}</ref>
| list_by_pop =
| div_name =
| div_link = ಕೇರಳದ ತಾಲೂಕುಗಳ ಪಟ್ಟಿ{{!}}ತಾಲೂಕು
| city_1 = ಮಂಜೇರಿ
| div_1 = ಇರನಾಡ್ ತಾಲೂಕು{{!}}ಇರನಾಡ್
| pop_1 = 97,102
| city_2 = ಪೊನ್ನಾನಿ
| div_2 = ಪೊನ್ನಾನಿ ತಾಲೂಕು{{!}}ಪೊನ್ನಾನಿ
| pop_2 = 90,491
| city_3 = ಪರಪ್ಪನಂಗಾಡಿ
| div_3 = ತಿರೂರಂಗಡಿ ತಾಲೂಕು ಕಚೇರಿ{{!}}ತಿರೂರಂಗಡಿ
| pop_3 = 71,239
| city_4 = ತಾನೂರು, ಮಲಪ್ಪುರಂ{{!}}ತಾನೂರು
| div_4 = ತಿರೂರ್ ತಾಲೂಕು{{!}}ತಿರೂರ್
| pop_4 = 69,534
| city_5 = ಮಲಪ್ಪುರಂ
| div_5 = ಇರನಾಡ್ ತಾಲೂಕು{{!}}ಇರನಾಡ್
| pop_5 = 68,088
| city_6 = ಕೊಂಡೊಟ್ಟಿ
| div_6 = ಕೊಂಡೊಟ್ಟಿ ತಾಲೂಕು{{!}}ಕೊಂಡೊಟ್ಟಿ
| pop_6 = 59,256
| city_7 = ತಿರೂರಂಗಡಿ
| div_7 = ತಿರೂರಂಗಡಿ ತಾಲೂಕು ಕಚೇರಿ{{!}}ತಿರೂರಂಗಡಿ
| pop_7 = 56,632
| city_8 = ತಿರೂರ್
| div_8 = ತಿರೂರ್ ತಾಲೂಕು{{!}}ತಿರೂರ್
| pop_8 = 56,058
| city_9 = ಪೆರಿಂತಲ್ಮನ್ನ
| div_9 = ಪೆರಿಂತಲ್ಮನ್ನ ತಾಲೂಕು{{!}}ಪೆರಿಂತಲ್ಮನ್ನ
| pop_9 = 49,723
| city_10 = ಕೊಟ್ಟಕ್ಕಲ್
| div_10 = ತಿರೂರ್ ತಾಲೂಕು{{!}}ತಿರೂರ್
| pop_10 = 48,342
| city_11 = ನಿಲಂಬೂರ್
| div_11 = ನಿಲಂಬೂರ್ ತಾಲೂಕು{{!}}ನಿಲಂಬೂರ್
| pop_11 = 46,342
| city_12 = ವಳಾಂಚೇರಿ
| div_12 = ತಿರೂರ್ ತಾಲೂಕು{{!}}ತಿರೂರ್
| pop_12 = 44,437
}}
===ಗ್ರಾಮೀಣ ಆಡಳಿತ===
{{See also|ಮಲಪ್ಪುರಂ ಜಿಲ್ಲೆಯ ಗ್ರಾಮ ಪಂಚಾಯತ್ಗಳ ಪಟ್ಟಿ}}
ಮಲಪ್ಪುರಂ ಜಿಲ್ಲಾ ಪಂಚಾಯತ್ ಮಲಪ್ಪುರಂ ಜಿಲ್ಲೆಯ ಗ್ರಾಮೀಣ ಆಡಳಿತಕ್ಕೆ ಪ್ರಮುಖ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತದೆ. ಜಿಲ್ಲಾ ಪಂಚಾಯತ್ 33 ವಿಭಾಗಗಳನ್ನು ಹೊಂದಿದ್ದು, ಪ್ರತಿ ವಿಭಾಗದಿಂದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.<ref>{{Cite web |title=ಮಲಪ್ಪುರಂ ಜಿಲ್ಲಾ ಪಂಚಾಯತ್ ಅಂತಿಮ ನಕ್ಷೆ |url=https://wardmap.ksmart.live/FinalN/FinalDP_Malappuram_Malappuram.html |access-date=2025-12-22 |website=wardmap.ksmart.live}}</ref> ಜಿಲ್ಲಾ ಪಂಚಾಯತ್ನ ವ್ಯಾಪ್ತಿಯು ಪುರಸಭಾ ಪ್ರದೇಶಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳನ್ನು ಒಳಗೊಂಡಿದೆ. ಜಿಲ್ಲಾ ಪಂಚಾಯತ್ ಸದಸ್ಯರಿಂದ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿರುತ್ತದೆ, ಮತ್ತು ಅಭಿವೃದ್ಧಿ, ಆರೋಗ್ಯ ಮತ್ತು ಶಿಕ್ಷಣ, ಸಾರ್ವಜನಿಕ ಕಾಮಗಾರಿಗಳು, ಕಲ್ಯಾಣ, ಮತ್ತು ಹಣಕಾಸು ಇಲಾಖೆಗಳಿಗೆ ಐದು ಸ್ಥಾಯಿ ಸಮಿತಿಗಳನ್ನು ಹೊಂದಿದೆ.<ref>{{Cite web |title=ಮಲಪ್ಪುರಂ ಜಿಲ್ಲಾ ಪಂಚಾಯತ್ |url=http://malappuramdistrictpanchayath.kerala.gov.in/general/standingCommittee.htm |archive-url=https://web.archive.org/web/20220617094007/http://malappuramdistrictpanchayath.kerala.gov.in/general/standingCommittee.htm |archive-date=2022-06-17 |access-date=2025-12-26 |website=malappuramdistrictpanchayath.kerala.gov.in}}</ref>
ಬ್ಲಾಕ್ ಮಟ್ಟದ ಆಡಳಿತಕ್ಕಾಗಿ,
ಜಿಲ್ಲೆಯಲ್ಲಿ 15 [[ಬ್ಲಾಕ್ ಪಂಚಾಯತ್]]ಗಳಿವೆ. ಈ ಬ್ಲಾಕ್ ಪಂಚಾಯತ್ಗಳನ್ನು ಮತ್ತಷ್ಟು 250 ವಾರ್ಡ್ಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದನ್ನು ನಿರ್ವಾಚಿತ ಸದಸ್ಯರು ಪ್ರತಿನಿಧಿಸುತ್ತಾರೆ. ಪ್ರತಿ ಬ್ಲಾಕ್ ಪಂಚಾಯತ್ ಸದಸ್ಯರಿಂದ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿರುತ್ತದೆ. [[2025 ಕೇರಳ ಸ್ಥಳೀಯ ಚುನಾವಣೆಗಳು|2025 ರ ಸ್ಥಳೀಯ ಚುನಾವಣೆಗಳಲ್ಲಿ]], [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]] 15 ಬ್ಲಾಕ್ ಪಂಚಾಯತ್ಗಳಲ್ಲಿ 14 ಅನ್ನು ಗೆದ್ದುಕೊಂಡಿತು, ಆದರೆ [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್|LDF]] ಒಂದನ್ನು, ಪೊನ್ನಾನಿ ಬ್ಲಾಕ್ ಪಂಚಾಯತ್ ಅನ್ನು ಗೆದ್ದುಕೊಂಡಿತು.<ref>{{Cite news |date=2025-12-13 |title=ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: UDF ಮಲಪ್ಪುರಂನಲ್ಲಿ ಜಯಭೇರಿ ಬಾರಿಸಿತು |url=https://www.thehindu.com/news/national/kerala/kerala-local-body-polls-udf-sweeps-malappuram/article70391788.ece |access-date=2025-12-26 |work=The Hindu |language=en-IN |issn=0971-751X}}</ref>
ಗ್ರಾಮೀಣ ಜಿಲ್ಲೆಯು 94 ಗ್ರಾಮ ಪಂಚಾಯತ್ಗಳಾಗಿ ವಿಂಗಡಿಸಲಾಗಿದೆ, ಅವು 15 ಬ್ಲಾಕ್ಗಳಲ್ಲಿ ಸೇರಿವೆ, ಅವುಗಳೆಂದರೆ ಅರೀಕೋಡ್, ಕಾಳಿಕಾವು, ಕೊಂಡೊಟ್ಟಿ, [[ಕುಟ್ಟಿಪುರಂ ಬ್ಲಾಕ್ ಪಂಚಾಯತ್|ಕುಟ್ಟಿಪುರಂ]], ಮಲಪ್ಪುರಂ, ಮಂಕಡ, ನಿಲಂಬೂರ್, ಪೆರಿಂತಲ್ಮನ್ನ, ಪೆರುಂಪಡಪ್ಪು, ಪೊನ್ನಾನಿ, ತಾನೂರು, ತಿರೂರ್, ತಿರೂರಂಗಡಿ, ವೆಂಗರ, ಮತ್ತು ವಾಂಡೂರ್.<ref>{{Cite web|url=https://malappuram.nic.in/panchayats/|title=ಮಲಪ್ಪುರಂ ಜಿಲ್ಲೆಯ ಗ್ರಾಮೀಣ ಆಡಳಿತ|access-date=2 August 2020|website=ಮಲಪ್ಪುರಂ ಜಿಲ್ಲೆಯ ಅಧಿಕೃತ ವೆಬ್ಸೈಟ್|archive-date=9 August 2020|archive-url=https://web.archive.org/web/20200809110957/https://malappuram.nic.in/panchayats/|url-status=live}}</ref> ಈ ಬ್ಲಾಕ್ಗಳು ಒಟ್ಟಾಗಿ ಮಲಪ್ಪುರಂ ಜಿಲ್ಲಾ ಪಂಚಾಯತ್ ಅನ್ನು ರೂಪಿಸುತ್ತವೆ, ಇದು ಗ್ರಾಮೀಣ ಆಡಳಿತದ ಪ್ರಮುಖ ಜಿಲ್ಲಾ ಸಂಸ್ಥೆಯಾಗಿದೆ. ಜಿಲ್ಲಾ ಪಂಚಾಯತ್ನ 33 ವಿಭಾಗಗಳಲ್ಲಿ, [[2025 ಕೇರಳ ಸ್ಥಳೀಯ ಚುನಾವಣೆಗಳು|2025 ರ ಚುನಾವಣೆಗಳಲ್ಲಿ]] UDF ಎಲ್ಲಾ 33 ಸ್ಥಾನಗಳನ್ನು ಗೆದ್ದುಕೊಂಡಿತು, ಆದರೆ LDF ಯಾವುದೇ ಸ್ಥಾನವನ್ನು ಗೆಲ್ಲಲಿಲ್ಲ, ಇದರಿಂದಾಗಿ ಯಾವುದೇ ವಿರೋಧ ಪಕ್ಷವಿರಲಿಲ್ಲ.<ref>{{Cite web |title=ಸ್ಥಳೀಯ ಸಂಸ್ಥೆಗಳ ಚುನಾವಣೆ 2025 - ಕೇರಳ ರಾಜ್ಯ ಚುನಾವಣಾ ಆಯೋಗದ ಪ್ರವೃತ್ತಿ |url=https://trend.sec.kerala.gov.in/ |access-date=2025-12-22 |website=trend.sec.kerala.gov.in}}</ref> ಮಲಪ್ಪುರಂ ಜಿಲ್ಲಾ ಪಂಚಾಯತ್ ರಾಜ್ಯದ ಅತಿದೊಡ್ಡ ಜಿಲ್ಲಾ ಪಂಚಾಯತ್ ಮತ್ತು ಅತಿದೊಡ್ಡ ಸ್ಥಳೀಯ ಸಂಸ್ಥೆಯಾಗಿದೆ. 94 ಗ್ರಾಮ ಪಂಚಾಯತ್ಗಳನ್ನು ಮತ್ತಷ್ಟು 2001 ವಾರ್ಡ್ಗಳಾಗಿ ವಿಂಗಡಿಸಲಾಗಿದೆ.<ref>{{Cite web |last=ಡೈಲಿ |first=ಕೇರಳಕೌಮುದಿ |title=ಅಂತಿಮ ಅಧಿಸೂಚನೆ ಹೊರಬಿದ್ದಿದೆ; ಕೇರಳದಲ್ಲಿ 17337 ಹೆಚ್ಚುವರಿ ವಾರ್ಡ್ಗಳು; 1375 ಹೊಸ ವಾರ್ಡ್ಗಳು |url=https://keralakaumudi.com/en/news/news.php?id=1538360&u=final-notification-out-17337-more-wards-in-kerala-1375-new-wards |access-date=2025-12-22 |website=Keralakaumudi Daily |language=en}}</ref> [[ಜನಗಣತಿ ಪಟ್ಟಣ]]ಗಳು (ನಗರ ವೈಶಿಷ್ಟ್ಯಗಳನ್ನು ಹೊಂದಿರುವ ಸಣ್ಣ ಪಟ್ಟಣಗಳು) ಸಹ ಗ್ರಾಮ ಪಂಚಾಯತ್ಗಳ ವ್ಯಾಪ್ತಿಗೆ ಬರುತ್ತವೆ. 2015 ರಲ್ಲಿ [[ಅನಮಂಗಾಡ್]], [[ಅನಂತವೂರ್]], [[ಅರಕ್ಕುಪರಂಬ]], [[ಅರಿಯಲ್ಲೂರ್]], [[ಚೆಂಬ್ರಸ್ಸೇರಿ]], [[ಎಲಂಕೂರ್, ಮಂಜೇರಿ|ಎಲಂಕೂರ್]], [[ಕರಿಪುರ್]], ಕೂಟಾಯಿ, ಕುರುಂಬಲಂಗೋಡ್, [[ಮರುತ, ಭಾರತ|ಮರುತ]], [[ಪಾಂಗ್, ಮಲಪ್ಪುರಂ|ಪಾಂಗ್]], [[ವಣಿಯಂಬಲಂ]], ಮತ್ತು ವೆಲಿಮುಕ್ಕು ಹೊಸ ಗ್ರಾಮ ಪಂಚಾಯತ್ಗಳ ರಚನೆಗೆ ಕರಡು ಅಧಿಸೂಚನೆಗಳನ್ನು ಪ್ರಕಟಿಸಲಾಗಿದ್ದರೂ, ಅವು ಇನ್ನೂ ರೂಪುಗೊಂಡಿಲ್ಲ.<ref>{{Cite web|url=http://delimitation.lsgkerala.gov.in/mlp_notification|title=ಮಲಪ್ಪುರಂನಲ್ಲಿ ಹೊಸ ಸ್ಥಳೀಯ ಸಂಸ್ಥೆಗಳಿಗೆ ಕರಡು ಅಧಿಸೂಚನೆಗಳು|access-date=10 October 2020|website=Delimitation Commission, Kerala|publisher=Government of Kerala|archive-date=25 January 2021|archive-url=https://web.archive.org/web/20210125145004/http://delimitation.lsgkerala.gov.in/mlp_notification|url-status=live}}</ref> ಅವುಗಳ ರಚನೆಯೊಂದಿಗೆ, ಜಿಲ್ಲೆಯ ಗ್ರಾಮ ಪಂಚಾಯತ್ಗಳ ಸಂಖ್ಯೆ 106 ಆಗುತ್ತದೆ.
{| align="left" class="toccolours" cellspacing="1" cellpadding="1" style="margin-right: .5em; margin-top: .4em; font-size: 90%"
|-
|- bgcolor="#cccccc" valign="top"
! colspan="5" |ಮಲಪ್ಪುರಂ ಜಿಲ್ಲೆಯ ಗ್ರಾಮ ಪಂಚಾಯತ್ಗಳು
[[Image:2020 Kerala Local body Elections - Malappuram District (Gram Panchayats and Municipalities).svg|center|250px]]
|- style="background:#efefef;"
! '''ಗ್ರಾಮ ಪಂಚಾಯತ್'''
| style="background: silver" |'''ವಿಸ್ತೀರ್ಣ<br/>(ಚದರ ಕಿಮೀ ನಲ್ಲಿ)'''
| style="background: silver" |'''ಜನಸಂಖ್ಯೆ<br/>(2011)'''
| style="background: silver" |'''ವಾರ್ಡ್ಗಳು'''
{{Small|(2025)}}<ref name="DelimitationKerala2025">
''ಅಂತಿಮ ಅಧಿಸೂಚನೆ'', ಮಿತಿ ಆಯೋಗ, ಕೇರಳ.
[https://wardmap.ksmart.live/index.html ವಾರ್ಡ್ ನಕ್ಷೆ ಪೋರ್ಟಲ್ – KSMART] ಮತ್ತು
[https://delimitation.lsgkerala.gov.in/ ಮಿತಿ – ಸ್ಥಳೀಯ ಸ್ವಯಂ ಆಡಳಿತ ಇಲಾಖೆ, ಕೇರಳ].
</ref>
| style="background: silver" |'''[[ಉಪ-ಜಿಲ್ಲೆ|ತಾಲೂಕು]]'''
|-
| colspan=5 style="text-align: center; background-color: grey; color: white;" | '''ಅರೀಕೋಡ್ ಬ್ಲಾಕ್'''
|-
| [[ಅರೀಕೋಡ್]] || 12.21 || 31,563 || 20 || [[ಇರನಾಡ್ ತಾಲೂಕು|ಇರನಾಡ್]]
|-
| [[ಚೀಕ್ಕೋಡ್]] || 23.96 || 32,867 || 21 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಎಡವನ್ನ]] || 52.10 || 46,128 || 24 || [[ಇರನಾಡ್ ತಾಲೂಕು|ಇರನಾಡ್]]
|-
| [[ಕವನೂರ್]] || 31.30 || 37,977 || 23 || [[ಇರನಾಡ್ ತಾಲೂಕು|ಇರನಾಡ್]]
|-
| [[ಕಿಳುಪರಂಬ]] || 14.99 || 22,062 || 16 || [[ಇರನಾಡ್ ತಾಲೂಕು|ಇರನಾಡ್]]
|-
| [[ಕುಳಿಮನ್ನ ಗ್ರಾಮ ಪಂಚಾಯತ್|ಕುಳಿಮನ್ನ]] || 22.05 || 34,413 || 21 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಪುಲ್ಪಟ್ಟ]] || 30.12 || 42,683 || 24 || [[ಇರನಾಡ್ ತಾಲೂಕು|ಇರನಾಡ್]]
|-
| [[ಉರಂಗಟ್ಟಿರಿ]] || 76.09 || 40,318 || 24 || [[ಇರನಾಡ್ ತಾಲೂಕು|ಇರನಾಡ್]]
|-
| colspan=5 style="text-align: center; background-color: grey; color: white;" | '''ಕಾಳಿಕಾವು ಬ್ಲಾಕ್'''
|-
| [[ಅಮರಂಬಲಂ]] || 84.64 || 35,975 || 22 || [[ನಿಲಂಬೂರ್]]
|-
| [[ಚೊಕ್ಕಾಡ್]] || 76.08 || 32,224 || 20 || [[ನಿಲಂಬೂರ್]]
|-
| [[ಎಡಪ್ಪಟ್ಟ]] || 25.77 || 22,729 || 17 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಕಾಳಿಕಾವು]] || 92.00 || 35,210 || 22 || [[ನಿಲಂಬೂರ್]]
|-
| [[ಕರುಲೈ]] || 131.31 || 23,277 || 17 || [[ನಿಲಂಬೂರ್]]
|-
| [[ಕರುವರಕುಂಡು]] || 78.69 || 41,583 || 24 || [[ನಿಲಂಬೂರ್]]
|-
| [[ತುವ್ವೂರ್]] || 31.38 || 40,297 || 19 || [[ನಿಲಂಬೂರ್]]
|-
| colspan=5 style="text-align: center; background-color: grey; color: white;" | '''ಕೊಂಡೊಟ್ಟಿ ಬ್ಲಾಕ್'''
|-
| [[ಚೆಲೆಂಬ್ರ]] || 15.91 || 34,149 || 21 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಚೆರುಕಾವು]] || 16.87 || 36,773 || 22 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಮುತ್ತುವಲ್ಲೂರ್]] || 21.49 || 26,028 || 18 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಪಳ್ಳಿಕ್ಕಲ್]] || 25.96 || 46,962 || 24 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಪುಳಿಕ್ಕಲ್]] || 28.70 || 40,133 || 24 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ವಾಝಯೂರ್]] || 21.19 || 30,262 || 20 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ವಾಝಕ್ಕಾಡ್]] || 23.89 || 35,774 || 22 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| colspan=5 style="text-align: center; background-color: grey; color: white;" | '''ಕುಟ್ಟಿಪುರಂ ಬ್ಲಾಕ್'''
|-
| [[ಅತವನಾಡ್]] || 26.77 || 41,187 || 24 || [[ತಿರೂರ್ ತಾಲೂಕು|ತಿರೂರ್]]
|-
| [[ಎದಯೂರ್]] || 30.43 || 36,498 || 22 || [[ತಿರೂರ್ ತಾಲೂಕು|ತಿರೂರ್]]
|-
| [[ಇರಿಂಬಿಲಿಯಂ]] || 24.06 || 30,635 || 20 || [[ತಿರೂರ್ ತಾಲೂಕು|ತಿರೂರ್]]
|-
| [[ಕಲ್ಪಕಾಂಚೇರಿ]] || 16.25 || 33,721 || 21 || [[ತಿರೂರ್ ತಾಲೂಕು|ತಿರೂರ್]]
|-
| [[ಕುಟ್ಟಿಪುರಂ]] || 31.32 || 47,023 || 24 || [[ತಿರೂರ್ ತಾಲೂಕು|ತಿರೂರ್]]
|-
| [[ಮರಕ್ಕರ]] || 27.00 || 40,404 || 24 || [[ತಿರೂರ್ ತಾಲೂಕು|ತಿರೂರ್]]
|-
| colspan=5 style="text-align: center; background-color: grey; color: white;" | '''ಮಲಪ್ಪುರಂ ಬ್ಲಾಕ್'''
|-
| [[ಅನಕ್ಕಯಂ]] || 45.23 || 50,634 || 24 || [[ಇರನಾಡ್ ತಾಲೂಕು|ಇರನಾಡ್]]
|-
| [[ಕೊಡೂರ್, ಮಲಪ್ಪುರಂ|ಕೊಡೂರ್]] || 18.42 || 38,258 || 23 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಮೊರಾಯೂರ್]] || 24.57 || 25,261 || 21 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಒತುಕ್ಕುಂಗಲ್]] || 17.28 || 39,139 || 23 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ಪೊನ್ಮಲ]] || 21.65 || 33,922 || 21 || [[ತಿರೂರ್ ತಾಲೂಕು|ತಿರೂರ್]]
|-
| [[ಪೂಕ್ಕೊಟ್ಟೂರ್]] || 20.63 || 28,077 || 23 || [[ಇರನಾಡ್ ತಾಲೂಕು|ಇರನಾಡ್]]
|-
| colspan=5 style="text-align: center; background-color: grey; color: white;" | '''ಮಂಕಡ ಬ್ಲಾಕ್'''
|-
| [[ಕೂಟಿಲಂಗಡಿ]] || 21.54 || 36,602 || 22 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಕುರುವ, ಮಲಪ್ಪುರಂ|ಕುರುವ]] || 35.77 || 45,354 || 24 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ವಡಕ್ಕಂಗರ, ಮಂಜೇರಿ|ಮಕ್ಕರಪರಂಬ]] || 11.17 || 18,702 || 15 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಮಂಕಡ]] || 31.00 || 32,748 || 21 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಮೂರ್ಕನಾಡ್]] || 17.60 || 36,324 || 22 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಪುಳಕ್ಕಟ್ಟಿರಿ]] || 22.72 || 29,886 || 19 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| colspan=5 style="text-align: center; background-color: grey; color: white;" | '''ನಿಲಂಬೂರ್ ಬ್ಲಾಕ್'''
|-
| ಚಾಲಿಯಾರ್ || 125.00 || 20,834 || 16 || [[ನಿಲಂಬೂರ್]]
|-
| [[ಚುಂಗತರ]] || 129.69 || 36,269 || 22 || [[ನಿಲಂಬೂರ್]]
|-
| [[ಎಡಕ್ಕರ]] || 58.09 || 28,162 || 19 || [[ನಿಲಂಬೂರ್]]
|-
| [[ಮೂತೇಡಂ]] || 48.00 || 33,960 || 18 || [[ನಿಲಂಬೂರ್]]
|-
| [[ಪೊತುಕಲ್]] || 77.00 || 29,561 || 19 || [[ನಿಲಂಬೂರ್]]
|-
| [[ವಾಳಿಕ್ಕಡವು]] || 114.00 || 47,322 || 24 || [[ನಿಲಂಬೂರ್]]
|-
| colspan=5 style="text-align: center; background-color: grey; color: white;" | '''ಪೆರಿಂತಲ್ಮನ್ನ ಬ್ಲಾಕ್'''
|-
| [[ಅಲಿಪರಂಬ]] || 34.37 || 41,725 || 24 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಅಂಗಡಿಪುರಂ]] || 38.50 || 56,451 || 24 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಎಲಂಕುಳಂ, ಮಲಪ್ಪುರಂ|ಎಲಂಕುಳಂ]] || 21.31 || 26,456 || 18 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಕೀಳತ್ತೂರ್]] || 40.00 || 36,317 || 22 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಮೇಲತ್ತೂರ್, ಕೇರಳ|ಮೇಲತ್ತೂರ್]] || 27.24 || 27,250 || 18 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಪುಲಾಮಂತೋಲೆ]] || 32.15 || 37,785 || 23 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ತಾೆಕ್ಕೋಡ್, ಮಲಪ್ಪುರಂ ಜಿಲ್ಲೆ|ತಾೆಕ್ಕೋಡ್]] || 45.02 || 41,982 || 24 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ವೆಟ್ಟತ್ತೂರ್]] || 35.84 || 37,456 || 19 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| colspan=5 style="text-align: center; background-color: grey; color: white;" | '''ಪೆರುಂಪಡಪ್ಪು ಬ್ಲಾಕ್'''
|-
| [[ಅಲಂಕೋಡ್, ಎಡಪ್ಪಲ್|ಅಲಂಕೋಡ್]] || 20.50 || 33,918 || 21 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ಮರಾಂಚೇರಿ]] || 20.47 || 35,011 || 22 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ನನ್ನಮುಕ್ಕು]] || 19.35 || 28,989 || 19 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]] || 15.02 || 29,766 || 19 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ವೆಲಿಯಂಕೋಡ್]] || 15.15 || 32,554 || 21 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| colspan=5 style="text-align: center; background-color: grey; color: white;" | '''ಪೊನ್ನಾನಿ ಬ್ಲಾಕ್'''
|-
| [[ಎಡಪ್ಪಲ್]] || 23.70 || 32,550 || 21 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ಕಳಡಿ, ಮಲಪ್ಪುರಂ|ಕಳಡಿ]] || 16.48 || 25,872 || 18 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ತವನೂರ್]] || 25.28 || 34,500 || 21 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ವಟ್ಟಂಕುಳಂ]] || 20.73 || 36,147 || 22 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| colspan=5 style="text-align: center; background-color: grey; color: white;" | '''ತಾನೂರು ಬ್ಲಾಕ್'''
|-
| [[ಚೇರಿಯಮುಂಡಂ]] || 11.95 || 31,212 || 20 || [[ತಿರೂರ್ ತಾಲೂಕು|ತಿರೂರ್]]
|-
| [[ನಿರಮರುತೂರು]] || 9.20 || 29,846 || 19 || [[ತಿರೂರ್ ತಾಲೂಕು|ತಿರೂರ್]]
|-
| [[ಒಳೂರು]] || 15.92 || 34,016 || 21 || [[ತಿರೂರ್ ತಾಲೂಕು|ತಿರೂರ್]]
|-
| [[ಪೆರುಮನ್ನ-ಕ್ಲಾರಿ]] || 11.48 || 27,278 || 18 || [[ತಿರೂರ್ ತಾಲೂಕು|ತಿರೂರ್]]
|-
| [[ಪೊನ್ಮುಂಡಂ]] || 9.16 || 25,855 || 18 || [[ತಿರೂರ್ ತಾಲೂಕು|ತಿರೂರ್]]
|-
| [[ತಾನಲೂರು]] || 15.12 || 47,976 || 24 || [[ತಿರೂರ್ ತಾಲೂಕು|ತಿರೂರ್]]
|-
| [[ವಳವನ್ನೂರ್]] || 15.28 || 33,159 || 21 || [[ತಿರೂರ್ ತಾಲೂಕು|ತಿರೂರ್]]
|-
| colspan=5 style="text-align: center; background-color: grey; color: white;" | '''ತಿರೂರ್ ಬ್ಲಾಕ್'''
|-
| [[ಮಂಗಲಂ, ತಿರೂರ್|ಮಂಗಲಂ]] || 12.17 || 33,442 || 21 || [[ತಿರೂರ್ ತಾಲೂಕು|ತಿರೂರ್]]
|-
| [[ಪುರತ್ತೂರ್]] || 19.50 || 31,915 || 20 || [[ತಿರೂರ್ ತಾಲೂಕು|ತಿರೂರ್]]
|-
| [[ತಲಕ್ಕಾಡ್]] || 16.30 || 35,820 || 22 || [[ತಿರೂರ್ ತಾಲೂಕು|ತಿರೂರ್]]
|-
| [[ತಿರುನವಾಯ]] || 19.59 || 45,848 || 24 || [[ತಿರೂರ್ ತಾಲೂಕು|ತಿರೂರ್]]
|-
| [[ತ್ರಿಪ್ರಂಗೋಡ್]] || 20.67 || 41,167 || 24 || [[ತಿರೂರ್ ತಾಲೂಕು|ತಿರೂರ್]]
|-
| [[ವೆಟ್ಟೊಂ ಗ್ರಾಮ ಪಂಚಾಯತ್|ವೆಟ್ಟೊಂ]] || 13.46 || 28,104 || 22 || [[ತಿರೂರ್ ತಾಲೂಕು|ತಿರೂರ್]]
|-
| colspan=5 style="text-align: center; background-color: grey; color: white;" | '''ತಿರೂರಂಗಡಿ ಬ್ಲಾಕ್'''
|-
| [[ತಲಪ್ಪರ|ಮೂನ್ನಿಯೂರ್]] || 22.66 || 55,535 || 24 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ನನ್ನಂಬ್ರ]] || 18.35 || 40,543 || 24 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ಪೆರುವಲ್ಲೂರ್]] || 21.19 || 34,941 || 21 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ತೆನಿಪಾಲಂ]] || 17.98 || 32,045 || 20 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ವಲ್ಲಿಕುಣ್ಣು]] || 25.14 || 48,006 || 24 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| colspan=5 style="text-align: center; background-color: grey; color: white;" | '''ವೆಂಗರ ಬ್ಲಾಕ್'''
|-
| [[ಅಬ್ದು ರಹಿಮಾನ್ ನಗರ್]] || 14.83 || 41,993 || 24 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ಎದರಿಕೋಡ್]] || 15.65 || 27,356 || 18 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| ಕನ್ನಮಂಗಲಂ || 28.24 || 41,260 || 24 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ಊರಕಂ]] || 21.65 || 29,157 || 19 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ಪರಪ್ಪೂರ್]] || 18.50 || 36,270 || 22 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ತೆನ್ನಲ]] || 10.00 || 29,190 || 19 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ವೆಂಗರ, ಮಲಪ್ಪುರಂ ಜಿಲ್ಲೆ|ವೆಂಗರ]] || 18.66 || 48,600 || 24 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| colspan=5 style="text-align: center; background-color: grey; color: white;" | '''ವಾಂಡೂರ್ ಬ್ಲಾಕ್'''
|-
| [[ಮಂಪಾಡ್]] || 84.67 || 37,221 || 22 || [[ನಿಲಂಬೂರ್]]
|-
| [[ಪಾಂಡಿಕ್ಕಾಡ್]] || 57.01 || 55,213 || 24 || [[ಇರನಾಡ್]]
|-
| [[ಪೊರೂರ್, ಮಲಪ್ಪುರಂ|ಪೊರೂರ್]] || 35.60 || 37,636 || 19 || [[ನಿಲಂಬೂರ್]]
|-
| [[ತಿರುವಾಳಿ]] || 33.83 || 27,734 || 19 || [[ನಿಲಂಬೂರ್]]
|-
| [[ತ್ರಿಕ್ಕಲಂಗೋಡ್]] || 59.99 || 52,090 || 24 || [[ಇರನಾಡ್]]
|-
| [[ವಾಂಡೂರ್]] || 45.45 || 49,013 || 24 || [[ನಿಲಂಬೂರ್]]
|-
| style="font-size: 80%" colspan=6 bgcolor="#cceeff" align="center"| ಮೂಲಗಳು: [[ಭಾರತದ ಜನಗಣತಿ 2011]],<ref name="demomalapuram" /> [[ಕೇರಳ ಸರ್ಕಾರ]]<ref name=Panchayat_Malappuram>{{cite web |title=ಮಲಪ್ಪುರಂನ ಗ್ರಾಮಗಳು |url=https://dop.lsgkerala.gov.in/en/node/1030 |website=lsgkerala.gov.in |access-date=2 August 2020 |archive-date=25 September 2020 |archive-url=https://web.archive.org/web/20200925053634/https://dop.lsgkerala.gov.in/en/node/1030 |url-status=live}}</ref>
|}{{clear}}
== ರಾಜಕೀಯ ==
=== ರಾಜ್ಯ ಶಾಸನಸಭೆ ===
[[ಕೇರಳ ವಿಧಾನಸಭೆ]]ಯಲ್ಲಿ ಮಲಪ್ಪುರಂನ ಪ್ರಾತಿನಿಧ್ಯಕ್ಕಾಗಿ, ಜಿಲ್ಲೆಯಲ್ಲಿ 16 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳನ್ನು 3 ಲೋಕಸಭಾ ಕ್ಷೇತ್ರಗಳಲ್ಲಿ ಸೇರಿಸಲಾಗಿದೆ. ಮಲಪ್ಪುರಂ ರಾಜ್ಯದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಇವುಗಳಲ್ಲಿ, [[ಇರನಾಡ್ (ರಾಜ್ಯ ವಿಧಾನಸಭಾ ಕ್ಷೇತ್ರ)|ಇರನಾಡ್]], [[ನಿಲಂಬೂರ್ (ರಾಜ್ಯ ವಿಧಾನಸಭಾ ಕ್ಷೇತ್ರ)|ನಿಲಂಬೂರ್]] ಮತ್ತು [[ವಾಂಡೂರ್ (ರಾಜ್ಯ ವಿಧಾನಸಭಾ ಕ್ಷೇತ್ರ)|ವಾಂಡೂರ್]] ವಿಧಾನಸಭಾ ಕ್ಷೇತ್ರಗಳು ಒಟ್ಟಾಗಿ [[ವಯನಾಡ್ (ಲೋಕಸಭಾ ಕ್ಷೇತ್ರ)]]ದ ಭಾಗವಾಗಿವೆ, ಆದರೆ [[ತಿರೂರಂಗಡಿ (ರಾಜ್ಯ ವಿಧಾನಸಭಾ ಕ್ಷೇತ್ರ)|ತಿರೂರಂಗಡಿ]], [[ತಾನೂರು (ರಾಜ್ಯ ವಿಧಾನಸಭಾ ಕ್ಷೇತ್ರ)|ತಾನೂರು]], [[ತಿರೂರ್ (ರಾಜ್ಯ ವಿಧಾನಸಭಾ ಕ್ಷೇತ್ರ)|ತಿರೂರ್]], [[ಕೊಟ್ಟಕ್ಕಲ್ (ರಾಜ್ಯ ವಿಧಾನಸಭಾ ಕ್ಷೇತ್ರ)|ಕೊಟ್ಟಕ್ಕಲ್]], [[ತವನೂರ್ (ರಾಜ್ಯ ವಿಧಾನಸಭಾ ಕ್ಷೇತ್ರ)|ತವನೂರ್]] ಮತ್ತು [[ಪೊನ್ನಾನಿ (ರಾಜ್ಯ ವಿಧಾನಸಭಾ ಕ್ಷೇತ್ರ)|ಪೊನ್ನಾನಿ]]ಗಳನ್ನು [[ಪೊನ್ನಾನಿ (ಲೋಕಸಭಾ ಕ್ಷೇತ್ರ)]]ದಲ್ಲಿ ಸೇರಿಸಲಾಗಿದೆ. ಉಳಿದ ಏಳು ವಿಧಾನಸಭಾ ಕ್ಷೇತ್ರಗಳು ಒಟ್ಟಾಗಿ [[ಮಲಪ್ಪುರಂ (ಲೋಕಸಭಾ ಕ್ಷೇತ್ರ)]]ವನ್ನು ರೂಪಿಸುತ್ತವೆ.<ref name="admn_mpm"/><ref>{{cite web |title=ಮಲಪ್ಪುರಂನ ನಿಯಮಸಭಾ ಕ್ಷೇತ್ರಗಳು |url=http://www.ceo.kerala.gov.in/malappuram.html |website=ceo.kerala.gov.in |access-date=25 November 2019 |archive-date=20 August 2019 |archive-url=https://web.archive.org/web/20190820130501/http://www.ceo.kerala.gov.in/malappuram.html |url-status=live }}</ref>
[[ಕೇರಳ ವಿಧಾನಸಭೆ]]ಯ 140 ಸದಸ್ಯರಲ್ಲಿ 16 ಮಂದಿಯನ್ನು ಜಿಲ್ಲೆಯಿಂದ ಆಯ್ಕೆ ಮಾಡಲಾಗುತ್ತದೆ.<ref>{{Cite web|url=http://www.ceo.kerala.gov.in/pdf/03-DELIMITATION/03-DELIMITED-LAC.pdf|title=ಕೇರಳ ವಿಧಾನಸಭೆಗೆ ಕ್ಷೇತ್ರಗಳು – ಜಿಲ್ಲಾವಾರು|access-date=7 November 2020|website=CEO Kerala|archive-date=12 October 2019|archive-url=https://web.archive.org/web/20191012075808/http://www.ceo.kerala.gov.in/pdf/03-DELIMITATION/03-DELIMITED-LAC.pdf|url-status=live}}</ref> [[2026 ಕೇರಳ ವಿಧಾನಸಭಾ ಚುನಾವಣೆ|2026 ರ ಚುನಾವಣೆಗಳಲ್ಲಿ]], [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]] ಜಿಲ್ಲೆಯ ಎಲ್ಲಾ 16 ಸ್ಥಾನಗಳನ್ನು ಗೆದ್ದುಕೊಂಡಿತು.<ref>{{Cite news |last=ನಹಾ |first=ಅಬ್ದುಲ್ ಲತೀಫ್ |date=2026-05-04 |title=ಕೇರಳ ವಿಧಾನಸಭಾ ಚುನಾವಣೆ 2026: IUML ಮಲಬಾರ್ ಪ್ರದೇಶದಲ್ಲಿ UDF ನ ಪುನರಾಗಮನಕ್ಕೆ ಆಧಾರವಾಗಿದೆ |url=https://www.thehindu.com/elections/kerala-assembly/kerala-assembly-polls-2026-iuml-anchors-udfs-comeback-in-malabar-region/article70938892.ece |access-date=2026-05-06 |work=The Hindu |language=en-IN |issn=0971-751X}}</ref>
=== ಸಂಸತ್ ಕ್ಷೇತ್ರಗಳು ===
ಮಲಪ್ಪುರಂ ಜಿಲ್ಲೆಯು ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ: [[ಮಲಪ್ಪುರಂ ಲೋಕಸಭಾ ಕ್ಷೇತ್ರ|ಮಲಪ್ಪುರಂ]] ಮತ್ತು [[ಪೊನ್ನಾನಿ ಲೋಕಸಭಾ ಕ್ಷೇತ್ರ|ಪೊನ್ನಾನಿ]]. ಜಿಲ್ಲೆಯು [[ವಯನಾಡ್ ಲೋಕಸಭಾ ಕ್ಷೇತ್ರ]]ದ ಸಣ್ಣ ಭಾಗವನ್ನು ಸಹ ಹೊಂದಿದೆ.<ref>{{Cite news |author=ಸಿಬ್ಬಂದಿ ವರದಿಗಾರ |date=2021-05-02 |title=ಸಮದಾನಿ ಮಲಪ್ಪುರಂ LS ಉಪಚುನಾವಣೆ ಗೆದ್ದರು|work=The Hindu |url=https://www.thehindu.com/news/national/kerala/malappuram-ls-bypoll-samadani-wins/article34467551.ece |access-date=2023-12-14 |issn=0971-751X}}</ref>
[[ಪಿ. ವಿ. ಅಬ್ದುಲ್ ವಹಾಬ್]], ಕೇರಳವನ್ನು ಪ್ರತಿನಿಧಿಸುವ [[ರಾಜ್ಯಸಭಾ]] ಸಂಸದರು ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಗೆ ಸೇರಿದವರು, ಮಲಪ್ಪುರಂ ಜಿಲ್ಲೆಯ [[ನಿಲಂಬೂರ್]] ನಿಂದ ಬಂದವರು.<ref>{{Cite news |date=2025-02-01 |title=ಎಲ್ಲಾ ವರ್ಗಗಳಿಗೂ ನಿರಾಶಾದಾಯಕ, ವಹಾಬ್ ಹೇಳುತ್ತಾರೆ |url=https://www.thehindu.com/news/national/kerala/disappointing-for-all-sections-alike-says-wahab/article69169277.ece |access-date=2025-12-09 |work=The Hindu |language=en-IN |issn=0971-751X}}</ref>
{| class="toccolours" align="left" cellspacing="1" cellpadding="1" style="margin-right: .5em; margin-top: .4em; font-size: 90%"
|- valign="top" bgcolor="#cccccc"
!ಸಂಸತ್ <br />ಕ್ಷೇತ್ರ
!ರಾಜಕೀಯ <br />ಪಕ್ಷ
!ಪೂರ್ವ-ಚುನಾವಣೆ <br />ಒಕ್ಕೂಟ
!ನಿರ್ವಾಚಿತ <br /> ಪ್ರತಿನಿಧಿ<ref>{{Cite web |title=ಸದಸ್ಯರು - ಕೇರಳ ಶಾಸನಸಭೆ |url=http://www.niyamasabha.org/codes/lokhsabha_members.htm |access-date=2025-12-09 |website=www.niyamasabha.org}}</ref>
|-
| [[ವಯನಾಡ್ (ಲೋಕಸಭಾ ಕ್ಷೇತ್ರ)|ವಯನಾಡ್]] (ಸಣ್ಣ ಭಾಗ)
| style="background-color:{{party color|Indian National Congress}};" |[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|<span style="color:white;">INC</span>]]
| {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
| [[ಪ್ರಿಯಾಂಕಾ ಗಾಂಧಿ]]
|-
| [[ಮಲಪ್ಪುರಂ (ಲೋಕಸಭಾ ಕ್ಷೇತ್ರ)|ಮಲಪ್ಪುರಂ]]
| style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]]
| {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
| [[ಇ. ಟಿ. ಮೊಹಮ್ಮದ್ ಬಷೀರ್]]
|-
| [[ಪೊನ್ನಾನಿ (ಲೋಕಸಭಾ ಕ್ಷೇತ್ರ)|ಪೊನ್ನಾನಿ]] (ಪ್ರಮುಖ ಭಾಗ)
| style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]]
| {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
| [[ಎಂ. ಪಿ. ಅಬ್ದುಸ್ಸಮದ್ ಸಮದಾನಿ]]
|}
{{clear}}
== ಆರ್ಥಿಕತೆ ==
2018–19 ಆರ್ಥಿಕ ವರ್ಷದಲ್ಲಿ ಜಿಲ್ಲೆಯ [[ಸ್ಥೂಲ ಮೌಲ್ಯವರ್ಧನೆ|ಸ್ಥೂಲ ಜಿಲ್ಲಾ ಮೌಲ್ಯವರ್ಧನೆ (GDVA)]] ₹ 698.37 ಬಿಲಿಯನ್ ಎಂದು ಅಂದಾಜಿಸಲಾಗಿದೆ, ಮತ್ತು ಹಿಂದಿನ ವರ್ಷಕ್ಕೆ ಹೋಲಿಸಿದರೆ GDVA ಯಲ್ಲಿನ ಬೆಳವಣಿಗೆಯು 11.30% ಆಗಿದೆ. ಜಿಲ್ಲೆಯು 2018–19 ರಂತೆ [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ]] ಮತ್ತು [[ತಿರುವನಂತಪುರಂ ಜಿಲ್ಲೆ|ತಿರುವನಂತಪುರಂ]] ನಂತರ ಕೇರಳದ ಜಿಲ್ಲೆಗಳಲ್ಲಿ GDVA ಯಲ್ಲಿ ಮೂರನೇ ಸ್ಥಾನದಲ್ಲಿದೆ.<ref name="GDVA_Malappuram">{{cite web |url=http://www.ecostat.kerala.gov.in/index.php/economy-state-mlp |website=ecostat.kerala.gov.in |title=ಮಲಪ್ಪುರಂನ ಆರ್ಥಿಕತೆ |access-date=20 June 2020 |archive-date=1 July 2020 |archive-url=https://web.archive.org/web/20200701171533/http://www.ecostat.kerala.gov.in/index.php/economy-state-mlp |url-status=live }}</ref> 2018–19 ರಲ್ಲಿ ಜಿಲ್ಲೆಯ [[ಮೌಲ್ಯವರ್ಧನೆ|ನಿವ್ವಳ ಜಿಲ್ಲಾ ಮೌಲ್ಯವರ್ಧನೆ (NDVA)]] ₹ 631.90 ಬಿಲಿಯನ್ ಆಗಿದ್ದು, ವಾರ್ಷಿಕ ಬೆಳವಣಿಗೆ ದರವು 11.59% ಆಗಿದೆ. ಪ್ರತಿ ವ್ಯಕ್ತಿ GDVA ಆರ್ಥಿಕ ವರ್ಷದಲ್ಲಿ ₹ 154,463 ಎಂದು ಲೆಕ್ಕಹಾಕಲಾಗಿದೆ. GDVA ಯ ಬೆಳವಣಿಗೆ ದರವು 2017–18 ರಲ್ಲಿ 18.12%, 2016–17 ರಲ್ಲಿ 9.49%, 2015–16 ರಲ್ಲಿ 7.86%, 2014–15 ರಲ್ಲಿ 8.83%, 2013–14 ರಲ್ಲಿ 14.08%, ಮತ್ತು 2012–13 ರಲ್ಲಿ 9.70% ಆಗಿತ್ತು. ಇದು ಏರಿಳಿತದ ಪ್ರವೃತ್ತಿಯನ್ನು ತೋರಿಸುತ್ತದೆ.<ref name="GDVA_Malappuram"/>
ಮಲಪ್ಪುರಂನ ಆರ್ಥಿಕತೆಯು ವಲಸಿಗರ ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ. ಮಲಪ್ಪುರಂನಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ವಲಸಿಗರಿದ್ದಾರೆ. [[ಕೇರಳ ಸರ್ಕಾರ]] ಪ್ರಕಟಿಸಿದ 2016 ರ ಆರ್ಥಿಕ ಸಮೀಕ್ಷಾ ವರದಿಯ ಪ್ರಕಾರ, ಜಿಲ್ಲೆಯ ಪ್ರತಿ 100 ಮನೆಗಳಲ್ಲಿ 54 ಮನೆಗಳು ವಲಸಿಗರ ಮನೆಗಳಾಗಿವೆ.<ref>{{cite web |url=http://spb.kerala.gov.in/EconomicReview2016/web/chapter06_03.php |website=spb.kerala.gov.in |title=ಮಲಪ್ಪುರಂ ಕೇರಳದಿಂದ ವಲಸಿಗರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ |access-date=3 December 2019 |archive-date=21 November 2019 |archive-url=https://web.archive.org/web/20191121020814/http://spb.kerala.gov.in/EconomicReview2016/web/chapter06_03.php |url-status=live}}</ref> ಅವರಲ್ಲಿ ಹೆಚ್ಚಿನವರು [[ಮಧ್ಯಪ್ರಾಚ್ಯ]]ದಲ್ಲಿ ಕೆಲಸ ಮಾಡುತ್ತಾರೆ. ಅವರು ಜಿಲ್ಲಾ ಆರ್ಥಿಕತೆಗೆ ಪ್ರಮುಖ ಕೊಡುಗೆದಾರರಾಗಿದ್ದಾರೆ. [[ಕೇರಳ ಗ್ರಾಮೀಣ ಬ್ಯಾಂಕ್|KGB]] ನ ಪ್ರಧಾನ ಕಚೇರಿಯು ಮಲಪ್ಪುರಂನಲ್ಲಿದೆ.<ref>{{cite web |url=https://www.newindianexpress.com/business/2013/jul/15/kgb-to-expand-operations-in-all-panchayats-496821.html |website=The New Indian Express |title=KGB ಎಲ್ಲಾ ಪಂಚಾಯತ್ಗಳಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ |date=15 July 2013 |access-date=25 June 2020 |archive-date=26 June 2020 |archive-url=https://web.archive.org/web/20200626211219/https://www.newindianexpress.com/business/2013/jul/15/KGB-to-expand-operations-in-all-Panchayats-496821.html |url-status=live}}</ref>
[[File:KGB logo.png|250px|thumb|[[ಕೇರಳ ಗ್ರಾಮೀಣ ಬ್ಯಾಂಕ್|KGB]] ಕೇರಳದ ಅತಿದೊಡ್ಡ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್ ಜಾಲವಾಗಿದೆ]]
=== ಆರ್ಥಿಕ ಖನಿಜಗಳು ===
[[ಲ್ಯಾಟರೈಟ್|ಲ್ಯಾಟರೈಟ್ ಕಲ್ಲು]] ಜಿಲ್ಲೆಯ ಮಧ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. [[ಅಂಗಡಿಪುರಂ ಲ್ಯಾಟರೈಟ್]] [[ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ|ರಾಷ್ಟ್ರೀಯ ಭೂ-ಪರಂಪರೆ ಸ್ಮಾರಕ]]ವಾಗಿ ಗುರುತಿಸಲ್ಪಟ್ಟಿದೆ.<ref name=gsi3>[http://naturalheritage.intach.org/wp-content/uploads/2016/09/Geoheritage-Monograph.pdf ಭಾರತದ ರಾಷ್ಟ್ರೀಯ ಭೂ-ಪರಂಪರೆ] {{Webarchive|url=https://web.archive.org/web/20170111120428/http://naturalheritage.intach.org/wp-content/uploads/2016/09/Geoheritage-Monograph.pdf |date=11 January 2017 }}, [[ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್|INTACH]]</ref> [[ಪರ್ಯಾಯದ್ವೀಪೀಯ ನೈಸ್|ಆರ್ಕಿಯನ್ ನೈಸ್]] ಜಿಲ್ಲೆಯ ಅತ್ಯಂತ ಸಾಮಾನ್ಯ ಭೂವೈಜ್ಞಾನಿಕ ರಚನೆಯಾಗಿದೆ. [[ಮ್ಯಾಗ್ನೆಟೈಟ್|ಕ್ವಾರ್ಟ್ಜ್ ಮ್ಯಾಗ್ನೆಟೈಟ್]], ಇದು [[ಪೊರೂರ್, ಮಲಪ್ಪುರಂ|ಪೊರೂರ್]] ನಲ್ಲಿ ಕಂಡುಬರುತ್ತದೆ, ಇದು ಆರ್ಥಿಕ ಪ್ರಾಮುಖ್ಯತೆಯನ್ನು ಹೊಂದಿರುವ ಖನಿಜಗಳಲ್ಲಿ ಒಂದಾಗಿದೆ. ಕ್ವಾರ್ಟ್ಜ್ ನೈಸ್ಗಳು [[ನಿಲಂಬೂರ್]], [[ಎಡವನ್ನ]], ಮತ್ತು [[ಪಾಂಡಿಕ್ಕಾಡ್]] ಪ್ರದೇಶಗಳಲ್ಲಿ ಕಂಡುಬರುತ್ತವೆ. ಗಾರ್ನೆಲಿಫೋರಸ್ ಕ್ವಾರ್ಟ್ಜ್ [[ಮಂಜೇರಿ]] ಮತ್ತು [[ಕೊಂಡೊಟ್ಟಿ]] ಪ್ರದೇಶಗಳಲ್ಲಿ ಕಂಡುಬರುತ್ತದೆ. [[ಚಾರ್ನೊಕೈಟ್|ಚಾರ್ನೊಕೈಟ್ ಬಂಡೆಗಳು]] ನಿಲಂಬೂರ್ ಮತ್ತು [[ಎಡವನ್ನ]]ಗಳಲ್ಲಿ ಕಂಡುಬರುತ್ತವೆ. [[ಡೈಕ್ (ಭೂವಿಜ್ಞಾನ)|ಡೈಕ್ಗಳು]] ವಿಶಿಷ್ಟವಾದ ಲ್ಯಾಟರೈಟ್ ರಚನೆಯಲ್ಲಿ [[ಪ್ಲೇಜಿಯೋಕ್ಲೇಸ್]], [[ಫೆಲ್ಡ್ಸ್ಪಾರ್]], ಮತ್ತು [[ಪೈರೋಕ್ಸೀನ್]]ಗಳನ್ನು ಒಳಗೊಂಡಿರುತ್ತವೆ, ಇವು ಮಂಜೇರಿಯಲ್ಲಿವೆ. [[ಇರನಾಡ್]] ಪ್ರದೇಶದಿಂದ ಉತ್ತಮ ಗುಣಮಟ್ಟದ ಕಬ್ಬಿಣದ ಅದಿರಿನ ನಿಕ್ಷೇಪಗಳು ವರದಿಯಾಗಿವೆ. ಸುಣ್ಣದ ಚಿಪ್ಪುಗಳ ನಿಕ್ಷೇಪಗಳು ಪೊನ್ನಾನಿ ಮತ್ತು ಕಡಲುಂಡಿನಗರಂನ ಕರಾವಳಿ ಪ್ರದೇಶಗಳಿಂದ ಕಂಡುಬಂದಿವೆ. [[ಪೊನ್ನಾನಿ]] ಮತ್ತು [[ವೆಲಿಯಂಕೋಡ್]]ನ ಕರಾವಳಿ ಮರಳುಗಳು ಹೆಚ್ಚಿನ ಪ್ರಮಾಣದ ಭಾರ ಖನಿಜಗಳು, [[ಇಲ್ಮೆನೈಟ್]] ಮತ್ತು [[ಮೊನಾಜೈಟ್]] ಅನ್ನು ಹೊಂದಿರುತ್ತವೆ. [[ಕಾವೊಲಿನೈಟ್]] ಪೊನ್ನಾನಿ ಮತ್ತು ಪೆರಿಂತಲ್ಮನ್ನ ತಾಲೂಕುಗಳಿಂದ ಕಂಡುಬಂದಿದೆ. [[ಬಾಲ್ ಜೇಡಿಮಣ್ಣು]]ನ ನಿಕ್ಷೇಪಗಳು ತೆಕ್ಕುಮ್ಮುರಿ ಗ್ರಾಮದಿಂದ ಕಂಡುಬಂದಿವೆ. ನಿಲಂಬೂರ್ ಉಪ-ಜಿಲ್ಲೆಯ ಭಾಗಗಳು [[ವಯನಾಡ್]]ನ ಗುಪ್ತ ಚಿನ್ನದ ಗಣಿಗಳಲ್ಲಿ ಸೇರಿವೆ. [[ನಿಲಂಬೂರ್]] ತಾಲೂಕು, [[ವಯನಾಡ್ ಜಿಲ್ಲೆ|ವಯನಾಡ್]] ಮತ್ತು [[ಅಟ್ಟಪ್ಪಾಡಿ]] ಕಣಿವೆಯ ಪಕ್ಕದ ಪ್ರದೇಶಗಳು ನೈಸರ್ಗಿಕ [[ಚಿನ್ನ]]ದ ಗಣಿಗಳಿಗೆ ಹೆಸರುವಾಸಿಯಾಗಿದೆ. ನಿಲಂಬೂರ್ನಲ್ಲಿ [[ಚಾಲಿಯಾರ್]] ನದಿಯ ಕಣಿವೆಯಲ್ಲಿ ಮಾಡಿದ ಅನ್ವೇಷಣೆಗಳು 0.1 ಗ್ರಾಂ ಪ್ರತಿ ಘನ ಮೀಟರ್ಗೆ 2.5 ಮಿಲಿಯನ್ ಘನ ಮೀಟರ್ಗಳಷ್ಟು ಪ್ಲೇಸರ್ಗಳ ಮೀಸಲುಗಳನ್ನು ತೋರಿಸಿವೆ.<ref name="geographymalappuram" /> [[ಬಾಕ್ಸೈಟ್]] [[ಕೊಟ್ಟಕ್ಕಲ್]], ಪರಪ್ಪಿಲ್, [[ಊರಕಂ]], ಮತ್ತು [[ಮೇಲ್ಮುರಿ]] ಸೇರಿದಂತೆ ಜಿಲ್ಲೆಯ ಕೆಲವು ಭಾಗಗಳಿಂದ ಕಂಡುಬಂದಿದೆ.<ref>{{cite web |url=http://industry.kerala.gov.in/images/pdf/malappuram.pdf |website=industry.kerala.gov.in |title=ಮಲಪ್ಪುರಂನ ಖನಿಜಗಳು |page=35 |access-date=21 April 2020 |archive-date=26 April 2021 |archive-url=https://web.archive.org/web/20210426034953/http://industry.kerala.gov.in/images/pdf/malappuram.pdf |url-status=live }}</ref> [[ಕರುವರಕುಂಡು]], ಇದರರ್ಥ "ಕಮ್ಮಾರನ ಸ್ಥಳ", ಕಬ್ಬಿಣದ ಅದಿರು ಕತ್ತರಿಸುವುದು ಮತ್ತು ಕಮ್ಮಾರರ ಕೆಲಸದಿಂದ ವ್ಯುತ್ಪತ್ತಿಯಾಗಿದೆ.<ref>{{cite journal |year=2000 |title=ಭಾರತೀಯ ಇತಿಹಾಸ ಕಾಂಗ್ರೆಸ್ನ ಕಾರ್ಯವಿಧಾನಗಳು |volume=60 |pages=1204 |oclc=1752882 }}</ref>
=== ಕೈಗಾರಿಕೆಗಳು ===
[[File:Manjeri Town Calicut Road View.jpg|thumbnail|[[ಮಂಜೇರಿ]], [[ಮಲಪ್ಪುರಂ ಮಹಾನಗರ ಪ್ರದೇಶ]]ದ ಒಂದು ಘಟಕ ಪಟ್ಟಣ]]
[[ತಿರುನವಾಯ]]ದ ಕೊಡಕ್ಕಲ್ ಟೈಲ್ ಫ್ಯಾಕ್ಟರಿಯನ್ನು 1887 ರಲ್ಲಿ ಸ್ಥಾಪಿಸಲಾಯಿತು, ಇದು ಭಾರತದ ಎರಡನೇ ಟೈಲ್ ಫ್ಯಾಕ್ಟರಿಯಾಗಿದೆ. ಭಾರತದ ಮೊದಲ ಟೈಲ್ ಫ್ಯಾಕ್ಟರಿಯು [[ಫೆರೋಕ್]]ನಲ್ಲಿತ್ತು, ಇದು ಆಗ [[ಇರನಾಡ್ ತಾಲೂಕು]]ನ ಭಾಗವಾಗಿತ್ತು. 2011 ರಲ್ಲಿ ನಡೆಸಿದ ಜನಗಣತಿಯ ಪ್ರಕಾರ, SSI/MMSE ಅಡಿಯಲ್ಲಿ ನೋಂದಾಯಿಸಲಾದ 10,629 ಕೈಗಾರಿಕಾ ಘಟಕಗಳಿವೆ, ಮತ್ತು ಇವುಗಳಲ್ಲಿ 396 ಘಟಕಗಳನ್ನು [[ಪರಿಶಿಷ್ಟ ಜಾತಿಗಳ ಪಟ್ಟಿ|ಪರಿಶಿಷ್ಟ ಜಾತಿಗಳು]], 83 ಅನ್ನು [[ಬುಡಕಟ್ಟು ಜನಾಂಗದವರು|ಪರಿಶಿಷ್ಟ ಪಂಗಡಗಳು]], ಮತ್ತು ಉಳಿದ ಘಟಕಗಳನ್ನು ಸಾಮಾನ್ಯ ವರ್ಗದವರು ಪ್ರೋತ್ಸಾಹಿಸಿದ್ದಾರೆ. ಸ್ವಯಂ ಉದ್ಯೋಗ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ವರ್ಷ ಸುಮಾರು 1,000 ಜನರಿಗೆ ಸಹಾಯ ಮಾಡಲಾಗುತ್ತದೆ. [[ತೆನಿಪಾಲಂ]] ಬಳಿಯ [[ಚೆಲೆಂಬ್ರ|ಕಕ್ಕಾಂಚೇರಿ]]ಯಲ್ಲಿ [[ಕೇರಳ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ|KINFRA]] ಆಹಾರ ಸಂಸ್ಕರಣೆ ಮತ್ತು IT [[ಕೈಗಾರಿಕಾ ಎಸ್ಟೇಟ್]]ಗಳು,<ref>{{cite web | url=http://kinfra.org/departments/kinfra-techno-industrial-park-malappuram | website=kinfra.org | title=KINFRA ಟೆಕ್ನೋ ಇಂಡಸ್ಟ್ರಿಯಲ್ ಪಾರ್ಕ್, ಮಲಪ್ಪುರಂ | access-date=27 November 2019 | archive-date=22 November 2019 | archive-url=https://web.archive.org/web/20191122114925/http://kinfra.org/departments/kinfra-techno-industrial-park-malappuram | url-status=live }}</ref> [[ಮಲಪ್ಪುರಂ]]ನಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ INKEL SME ಪಾರ್ಕ್ ಮತ್ತು [[ಮಂಜೇರಿ]]ಯ [[ಪಯ್ಯನಾಡ್]]ನಲ್ಲಿ ರಬ್ಬರ್ ಪ್ಲಾಂಟ್ ಮತ್ತು ಕೈಗಾರಿಕಾ ಎಸ್ಟೇಟ್ ಇವೆ. [[ಮಲಪ್ಪುರಂ]]ನಲ್ಲಿ 168 ಎಕರೆಗಳಲ್ಲಿ ಹರಡಿರುವ INKEL ಗ್ರೀನ್ಸ್, ಕೈಗಾರಿಕಾ ವಲಯವಾದ 'SME ಪಾರ್ಕ್' ಮತ್ತು ಶೈಕ್ಷಣಿಕ ವಲಯವಾದ 'ಎಜುಸಿಟಿ' ಅನ್ನು ಒಳಗೊಂಡಿದೆ.<ref>{{Cite news|title=ಕೇರಳದ INKEL ₹1000 ಕೋಟಿ ಹೂಡಿಕೆ ತರಲಿದೆ|url=https://economictimes.indiatimes.com/news/economy/infrastructure/keralas-inkel-to-bring-an-invest-of-rs-1000-crore/articleshow/47541323.cms|date=4 June 2015|access-date=6 October 2020|work=The Economic Times|archive-date=13 September 2021|archive-url=https://web.archive.org/web/20210913065709/https://economictimes.indiatimes.com/news/economy/infrastructure/keralas-inkel-to-bring-an-invest-of-rs-1000-crore/articleshow/47541323.cms|url-status=live}}</ref>
MALCOSPIN (ಮಲಪ್ಪುರಂ ಸ್ಪಿನ್ನಿಂಗ್ ಮಿಲ್ಸ್ ಲಿಮಿಟೆಡ್) ರಾಜ್ಯ ಸರ್ಕಾರದ ಅಡಿಯಲ್ಲಿನ ಜಿಲ್ಲೆಯ ಅತ್ಯಂತ ಹಳೆಯ ಕೈಗಾರಿಕಾ ಸ್ಥಾಪನೆಗಳಲ್ಲಿ ಒಂದಾಗಿದೆ. ಮರ-ಸಂಬಂಧಿತ ಕೈಗಾರಿಕೆಗಳು [[ಕೊಟ್ಟಕ್ಕಲ್]], [[ಎಡವನ್ನ]], [[ವಣಿಯಂಬಲಂ]], [[ಕರುಲೈ]], [[ನಿಲಂಬೂರ್]] ಮತ್ತು [[ಮಂಪಾಡ್]]ಗಳಲ್ಲಿ ಸಾಮಾನ್ಯವಾಗಿವೆ. ಗರಗಸದ ಕಾರ್ಖಾನೆಗಳು, ಪೀಠೋಪಕರಣ ತಯಾರಕರು ಮತ್ತು ಮರದ ವ್ಯಾಪಾರವು ಕಳೆದ ದಶಕಗಳವರೆಗೆ ಜಿಲ್ಲೆಯ ಪ್ರಮುಖ ವ್ಯವಹಾರಗಳಾಗಿದ್ದವು. [[ತಿರೂರ್]] ಎಲೆಕ್ಟ್ರಾನಿಕ್ಸ್, ಮೊಬೈಲ್ ಫೋನ್ಗಳು ಮತ್ತು ಇತರ ಗ್ಯಾಜೆಟ್ಗಳಿಗೆ ಪ್ರಮುಖ ಪ್ರಾದೇಶಿಕ ವ್ಯಾಪಾರ ಕೇಂದ್ರವಾಗಿದೆ. [[ನೌಕರರ ರಾಜ್ಯ ವಿಮಾ ನಿಗಮ|ನೌಕರರ ರಾಜ್ಯ ವಿಮೆ]] ತನ್ನ ಶಾಖಾ ಕಚೇರಿಯನ್ನು ಮಲಪ್ಪುರಂನಲ್ಲಿ ಹೊಂದಿದೆ.<ref name="geographymalappuram" /> [[ಕೇರಳ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ|KELTRON]] ಎಲೆಕ್ಟ್ರೋ ಸೆರಾಮಿಕ್ಸ್ (KELCERA) [[ಕುಟ್ಟಿಪುರಂ]]ನಲ್ಲಿ,<ref>{{Cite web|url=http://www.keltronelcera.com/index.php/home.html|title=KELCERA|access-date=30 January 2021|website=keltronelcera|archive-date=5 February 2021|archive-url=https://web.archive.org/web/20210205010009/http://www.keltronelcera.com/index.php/home.html|url-status=live}}</ref> [[ಕೇರಳ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ|KELTRON]] ಟೂಲ್ ರೂಮ್ [[ಕುಟ್ಟಿಪುರಂ]]ನಲ್ಲಿ, [[ಎದರಿಕೋಡ್]]ನ ಎದರಿಕೋಡ್ ಟೆಕ್ಸ್ಟೈಲ್ಸ್, [[ಎಡಪ್ಪಲ್]]ನಲ್ಲಿ [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|KSRTC]] ಬಾಡಿ ವರ್ಕ್ಶಾಪ್, [[ಅತವನಾಡ್]]ನಲ್ಲಿ MALCOTEX (ಮಲಬಾರ್ ಕೋ-ಆಪರೇಟಿವ್ ಟೆಕ್ಸ್ಟೈಲ್ಸ್ ಲಿಮಿಟೆಡ್),<ref>{{Cite web|url=http://www.malcotex.co.in/|title=MALCOTEX|access-date=30 January 2021|website=malcotex|archive-date=13 September 2021|archive-url=https://web.archive.org/web/20210913065710/https://fonts.googleapis.com/css?family=Noto+Serif%3A400%2C400italic%2C700%7COpen+Sans%3A300%2C400%2C600%2C700|url-status=live}}</ref> ಮತ್ತು [[ಅತವನಾಡ್]]ನಲ್ಲಿ KELTEX (ಕೇರಳ ಹೈ-ಟೆಕ್ ಟೆಕ್ಸ್ಟೈಲ್ ಕೋ-ಆಪರೇಟಿವ್ ಲಿಮಿಟೆಡ್),<ref>{{Cite web|url=http://www.keltex.org/|title=KELTEX ಅತವನಾಡ್|access-date=30 January 2021|website=keltex|archive-date=27 January 2021|archive-url=https://web.archive.org/web/20210127203929/http://www.keltex.org/|url-status=live}}</ref> ಸಾರ್ವಜನಿಕ ವಲಯದ ಅಡಿಯಲ್ಲಿನ ಇತರ ಪ್ರಮುಖ ಕೈಗಾರಿಕಾ ಕೇಂದ್ರಗಳಾಗಿವೆ.<ref>{{cite web |url=http://www.msmedithrissur.gov.in/assets/uploads/downloadfile/Malappuram%202017-18.pdf |website=msmedithrissur.gov.in |title=ಮಲಪ್ಪುರಂ ಜಿಲ್ಲೆಯ ಸಂಕ್ಷಿಪ್ತ ಕೈಗಾರಿಕಾ ಪ್ರೊಫೈಲ್ 2017–18 |access-date=13 July 2020 |archive-date=14 July 2020 |archive-url=https://web.archive.org/web/20200714131013/http://www.msmedithrissur.gov.in/assets/uploads/downloadfile/Malappuram%202017-18.pdf |url-status=live }}</ref> ಕೇರಳ ರಾಜ್ಯ ಮಾರ್ಜಕಗಳು ಮತ್ತು ರಾಸಾಯನಿಕಗಳ ಲಿಮಿಟೆಡ್ ಮತ್ತು ಕೇರಳ ರಾಜ್ಯ ಮರ ಕೈಗಾರಿಕೆಗಳ ಲಿಮಿಟೆಡ್ ಕ್ರಮವಾಗಿ [[ಕುಟ್ಟಿಪುರಂ]] ಮತ್ತು [[ನಿಲಂಬೂರ್]]ಗಳಲ್ಲಿ ತಮ್ಮ ಪ್ರಧಾನ ಕಚೇರಿಗಳನ್ನು ಹೊಂದಿವೆ.<ref>{{Cite web|url=https://economictimes.indiatimes.com/company/kerala-state-detergents-and-chemicals-ltd-/U24243KL1976SGC002816|title=ಕೇರಳ ರಾಜ್ಯ ಮಾರ್ಜಕಗಳು ಮತ್ತು ರಾಸಾಯನಿಕಗಳ ಲಿಮಿಟೆಡ್|access-date=29 July 2020|website=The Economic Times|archive-date=13 September 2021|archive-url=https://web.archive.org/web/20210913063631/https://economictimes.indiatimes.com/company/kerala-state-detergents-and-chemicals-ltd/U24243KL1976SGC002816|url-status=live}}</ref><ref>{{Cite web|url=https://economictimes.indiatimes.com/company/kerala-state-wood-industries-ltd-/U36101KL1970SGC003411|title=ಕೇರಳ ರಾಜ್ಯ ಮರ ಕೈಗಾರಿಕೆಗಳ ಲಿಮಿಟೆಡ್|access-date=29 July 2020|website=The Economic Times|archive-date=13 September 2021|archive-url=https://web.archive.org/web/20210913063633/https://economictimes.indiatimes.com/company/kerala-state-wood-industries-ltd/U36101KL1970SGC003411|url-status=live}}</ref> ಪೋಪೀಸ್ ಬೇಬಿ ಕೇರ್, ವಿಶ್ವದ ಅತಿದೊಡ್ಡ ಶಿಶು ವಸ್ತ್ರ ತಯಾರಕ ಬ್ರಾಂಡ್ಗಳಲ್ಲಿ ಒಂದಾಗಿದೆ, ಇದು ಪ್ರಾಥಮಿಕವಾಗಿ ಮಲಪ್ಪುರಂನಲ್ಲಿದೆ.<ref>{{Cite web|url=https://timesofindia.indiatimes.com/city/kozhikode/pvt-firm-gives-out-free-clothes-to-newborns/articleshow/74998448.cms|title=ಪೋಪೀಸ್ ಬೇಬಿ ಕೇರ್|date=6 April 2020|access-date=16 August 2020|website=Times of India|last=TNN|archive-date=13 September 2021|archive-url=https://web.archive.org/web/20210913063642/https://timesofindia.indiatimes.com/city/kozhikode/pvt-firm-gives-out-free-clothes-to-newborns/articleshow/74998448.cms|url-status=live}}</ref>
=== ಕೃಷಿ ===
[[File:Kcaet.JPG|thumb|1963 ರಲ್ಲಿ ಸ್ಥಾಪಿಸಲಾದ [[ತವನೂರ್]]ನಲ್ಲಿನ [[ಕೆಲಪ್ಪಾಜಿ ಕಾಲೇಜ್ ಆಫ್ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ|KCAET]], ರಾಜ್ಯದ ಏಕೈಕ ಕೃಷಿ ಎಂಜಿನಿಯರಿಂಗ್ ಸಂಸ್ಥೆಯಾಗಿದೆ]]
[[File:Agricultural Research Station, Anakkayam - 1.jpg|left|thumb|[[ಅನಕ್ಕಯಂ ಕೃಷಿ ಸಂಶೋಧನಾ ಕೇಂದ್ರ]]]]
[[File:Edappal malappuram(district) kerala infia.jpg|thumbnail|[[ಎಡಪ್ಪಲ್]]ನಲ್ಲಿನ ಒಂದು ಹೊಲ]]
[[ತೆಂಗು]], ತಾಳೆ ಮತ್ತು ಭತ್ತವು ಮುಖ್ಯವಾಗಿ ಮಲಪ್ಪುರಂ ಕರಾವಳಿಯಲ್ಲಿ ಕಂಡುಬರುತ್ತವೆ. [[ಗೋಡಂಬಿ]], ತೆಂಗು, ಮತ್ತು [[ಮರಗೆಣಸು]] ಏರುತಗ್ಗಿನ ಬಯಲಿನಲ್ಲಿ ಕಂಡುಬರುತ್ತವೆ. [[ರಬ್ಬರ್]], ಗೋಡಂಬಿ, [[ಕರಿಮೆಣಸು|ಮೆಣಸು]], ಮತ್ತು ತೆಂಗು ಚಾಲಿಯಾರ್ ನದಿ ಜಲಾನಯನದಲ್ಲಿ ಕಂಡುಬರುವ ಪ್ರಮುಖ ಸಸ್ಯವರ್ಗಗಳಾಗಿವೆ. ನಿಲಂಬೂರ್ ಕಣಿವೆಯು ವ್ಯಾಪಕವಾದ ಪ್ರಭೇದಗಳ ಕೃಷಿಯನ್ನು ಹೊಂದಿದೆ. [[ತೇಗ]]ವು ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಪೆರಿಂತಲ್ಮನ್ನ ಏರುತಗ್ಗಿನ ಮೇಲುನೆಲವು ತೆಂಗು, [[ತಾಳೆ ಮರಗಳು]], ಮೆಣಸು, ರಬ್ಬರ್, ಮತ್ತು ಗೋಡಂಬಿ ಪ್ರಭೇದಗಳ ಕೃಷಿಯನ್ನು ಹೊಂದಿದೆ. ಈ ಪ್ರದೇಶವು [[ಕಡಲುಂಡಿ ನದಿ]]ಯಿಂದ ಹರಿದುಹೋಗುತ್ತದೆ. ಸಾಮಾನ್ಯ ಬೆಳೆಗಳ ಜೊತೆಗೆ, [[ಮಾವು]], [[ಹಲಸು]], [[ಬಾಳೆಹಣ್ಣು|ಬಾಳೆ]], ಇತ್ಯಾದಿ ಪ್ರಭೇದಗಳನ್ನು ಸಹ ಬೆಳೆಯಲಾಗುತ್ತದೆ.<ref name="geographymalappuram"/> ಜಿಲ್ಲೆಯ ಸಾಮಾನ್ಯ ಬೆಟ್ಟದ ಸ್ವಭಾವವು ತಾರಸಿ ಕೃಷಿಯನ್ನು ಬೆಂಬಲಿಸುತ್ತದೆ. [[ತೃಶೂರ್ ಕೋಲೆ ಜೌಗು ಪ್ರದೇಶಗಳು|ತೃಶೂರ್-ಪೊನ್ನಾನಿ ಕೋಲೆ ಜೌಗು ಪ್ರದೇಶಗಳ]] ಒಂದು ಭಾಗವು ಜಿಲ್ಲೆಯ [[ಪೊನ್ನಾನಿ ತಾಲೂಕು]]ನಲ್ಲಿದೆ, ಇದು ಭತ್ತದ ಹೆಚ್ಚು ಉತ್ಪಾದಕ ಕೃಷಿಗೆ ಅನುಕೂಲಕರವಾಗಿದೆ.
2016–17 ರ ಅಂಕಿಅಂಶಗಳ ಪ್ರಕಾರ, ಸ್ಥೂಲ ಬೆಳೆ ಪ್ರದೇಶವು 237,860 ಹೆಕ್ಟೇರ್ಗಳಾಗಿದ್ದರೆ, ನಿವ್ವಳ ಬೆಳೆ ಪ್ರದೇಶವು 173,178 ಹೆಕ್ಟೇರ್ಗಳಾಗಿತ್ತು. ಜಿಲ್ಲೆಯ ಬೆಳೆ ತೀವ್ರತೆಯು 137 ಹೆಕ್ಟೇರ್ಗಳಾಗಿದೆ. 2016–17 ರಲ್ಲಿ ಹೆಚ್ಚು ಉತ್ಪತ್ತಿಯಾದ ಲೆಕ್ಕವಿಲ್ಲದ ಬೆಳೆಯು ಮರಗೆಣಸು (185,880 ಮೆಟ್ರಿಕ್ ಟನ್ಗಳು), ನಂತರ ಬಾಳೆ (58,564 MT), ಮತ್ತು ರಬ್ಬರ್ (40,000 MT). 2016–17 ರಲ್ಲಿ 878 ಮಿಲಿಯನ್ ತೆಂಗಿನಕಾಯಿಗಳು ಮತ್ತು 19 ಮಿಲಿಯನ್ ಹಲಸಿನ ಹಣ್ಣುಗಳನ್ನು ಉತ್ಪಾದಿಸಲಾಯಿತು. ಆದಾಗ್ಯೂ, ಭೂ ಬಳಕೆಯು ತೆಂಗಿನ ಕೃಷಿಗೆ ಗರಿಷ್ಠವಾಗಿತ್ತು (102,836 ಹೆಕ್ಟೇರ್ಗಳು), ನಂತರ ರಬ್ಬರ್ (42,770 ಹೆಕ್ಟೇರ್ಗಳು), ಮತ್ತು ಅಡಕೆ (18,379 ಹೆಕ್ಟೇರ್ಗಳು).<ref>{{cite web |url=http://www.ecostat.kerala.gov.in/index.php/agri-state-mlp |website=ecostat.kerala.gov.in |title=ಮಲಪ್ಪುರಂನಲ್ಲಿ ಕೃಷಿ |access-date=20 June 2020 |archive-date=1 July 2020 |archive-url=https://web.archive.org/web/20200701171416/http://www.ecostat.kerala.gov.in/index.php/agri-state-mlp |url-status=live }}</ref> [[ಅನಕ್ಕಯಂ ಕೃಷಿ ಸಂಶೋಧನಾ ಕೇಂದ್ರ|ಒಂದು ಕೃಷಿ ಸಂಶೋಧನಾ ಕೇಂದ್ರವು]] [[ಅನಕ್ಕಯಂ]]ನಲ್ಲಿ ಕಾರ್ಯನಿರ್ವಹಿಸುತ್ತದೆ. [[ಮುಂದೇರಿ (ಮಲಪ್ಪುರಂ)|ಮುಂದೇರಿ]]ಯಲ್ಲಿನ ಬೀಜ ಉದ್ಯಾನ ಸಂಕೀರ್ಣವು [[ಏಷ್ಯಾ]]ದ ಅತಿದೊಡ್ಡ ಫಾರ್ಮ್ಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ರಾಜ್ಯ ಬೀಜ ಫಾರ್ಮ್ಗಳು [[ಚೊಕ್ಕಾಡ್]], [[ತವನೂರ್]], ಮತ್ತು [[ಅನಕ್ಕಯಂ]]ಗಳಲ್ಲಿವೆ. [[ಚುಂಗತರ]]ದಲ್ಲಿ ಜಿಲ್ಲಾ ಕೃಷಿ ಫಾರ್ಮ್ ಮತ್ತು [[ಪರಪ್ಪನಂಗಾಡಿ]]ಯಲ್ಲಿ ತೆಂಗಿನ ಸಸ್ಯಾಲಯವು ಕಾರ್ಯನಿರ್ವಹಿಸುತ್ತದೆ.<ref>{{Cite web|url=https://www.fibkerala.gov.in/index.php?option=com_content&task=view&id=409&Itemid=156|title=ಮಲಪ್ಪುರಂನ ಪ್ರಮುಖ ಫಾರ್ಮ್ಗಳು|access-date=28 August 2020|website=Farm Information Bureau, Kerala|archive-date=13 September 2021|archive-url=https://web.archive.org/web/20210913063805/https://www.fibkerala.gov.in/index.php?option=com_content&task=view&id=409&Itemid=156|url-status=live}}</ref> [[ತವನೂರ್]]ನಲ್ಲಿನ [[ಕೆಲಪ್ಪಾಜಿ ಕಾಲೇಜ್ ಆಫ್ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ|KCAET]] ರಾಜ್ಯದ ಏಕೈಕ ಕೃಷಿ ಎಂಜಿನಿಯರಿಂಗ್ ಸಂಸ್ಥೆಯಾಗಿದೆ.<ref name=kcaet>{{Cite web|url=http://www.kau.in/kcaet-tavanur|title=ಕೆಲಪ್ಪಾಜಿ ಕಾಲೇಜ್ ಆಫ್ ಅಗ್ರಿಕಲ್ಚರಲ್ ಇಂಜಿನಿಯರಿಂಗ್ & ಟೆಕ್ನಾಲಜಿ, ತವನೂರ್ | ಕೇರಳ ಕೃಷಿ ವಿಶ್ವವಿದ್ಯಾಲಯ|website=kau.in|access-date=30 June 2020|archive-date=2 July 2020|archive-url=https://web.archive.org/web/20200702012845/http://www.kau.in/kcaet-tavanur|url-status=live}}</ref>
== ಸಾರಿಗೆ ==
=== ರಸ್ತೆಗಳು ===
[[File:Wandoor Town 2017.jpg|thumbnail|2017 ರಲ್ಲಿ [[ವಾಂಡೂರ್]] ಪಟ್ಟಣ]]
[[File:Muriyankanni bridge.jpg|thumbnail|[[ಪೆರಿಂತಲ್ಮನ್ನ]]ದ [[ಕರಿಂಕಲ್ಲತ್ತಾನಿ]]ಯಲ್ಲಿ ಮುರಿಯಂಕಣ್ಣಿ ಸೇತುವೆ]]
[[File:Edavannappara.1.jpg|left|thumbnail|[[ಎಲಾಮರಂ]]ನಲ್ಲಿ [[ಚಾಲಿಯಾರ್]] ನದಿಯ ಮೂಲಕ ದೋಣಿ ಸೇವೆ]]
[[File:Bridge -bharatappuzha -kuttippuram (1).jpg|thumb|1953 ರಲ್ಲಿ ನಿರ್ಮಿಸಲಾದ [[ಕುಟ್ಟಿಪುರಂ ಸೇತುವೆ]]]]
ಮಲಪ್ಪುರಂ ರಸ್ತೆಗಳ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ಜಿಲ್ಲೆಯಲ್ಲಿ ನಾಲ್ಕು [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|KSRTC]] ನಿಲ್ದಾಣಗಳಿವೆ.<ref>{{cite web |url=https://www.keralartc.com/unit.html |website=keralartc.com |title=ಮಲಪ್ಪುರಂನ KSRTC ನಿಲ್ದಾಣಗಳು |access-date=6 July 2020 |archive-date=4 June 2021 |archive-url=https://web.archive.org/web/20210604095619/https://www.keralartc.com/unit.html |url-status=live }}</ref> 2 [[ಭಾರತದ ರಾಷ್ಟ್ರೀಯ ಹೆದ್ದಾರಿಗಳು|ರಾಷ್ಟ್ರೀಯ ಹೆದ್ದಾರಿಗಳು]] ಜಿಲ್ಲೆಯ ಮೂಲಕ ಹಾದುಹೋಗುತ್ತವೆ - [[ರಾಷ್ಟ್ರೀಯ ಹೆದ್ದಾರಿ 66 (ಭಾರತ)|NH 66]] ಮತ್ತು [[ರಾಷ್ಟ್ರೀಯ ಹೆದ್ದಾರಿ 966 (ಭಾರತ)|NH 966]]. NH 66 [[ರಾಮನಟ್ಟುಕರ]] ಮೂಲಕ ಜಿಲ್ಲೆಯನ್ನು ತಲುಪುತ್ತದೆ ಮತ್ತು [[ತಿರೂರಂಗಡಿ]], [[ಕಕ್ಕಾಡ್, ಮಲಪ್ಪುರಂ|ಕಕ್ಕಾಡ್]], [[ಕೊಟ್ಟಕ್ಕಲ್]], [[ವಳಾಂಚೇರಿ]], [[ಕುಟ್ಟಿಪುರಂ]], ಮತ್ತು [[ಪೊನ್ನಾನಿ]] ಪಟ್ಟಣಗಳನ್ನು ಸಂಪರ್ಕಿಸುತ್ತದೆ ಮತ್ತು [[ಚವಕ್ಕಾಡ್]] ಮೂಲಕ ಜಿಲ್ಲೆಯಿಂದ ಹೊರಹೋಗುತ್ತದೆ. NH 966 ಮೂಲಕ ಸಂಪರ್ಕ ಹೊಂದಿದ ಪ್ರಮುಖ ನಗರಗಳು/ಪಟ್ಟಣಗಳು [[ಕೊಂಡೊಟ್ಟಿ]] (ಕರಿಪುರ್ ವಿಮಾನ ನಿಲ್ದಾಣ), [[ಮಲಪ್ಪುರಂ]], ಮತ್ತು [[ಪೆರಿಂತಲ್ಮನ್ನ]] ಸೇರಿವೆ. ಜಿಲ್ಲೆಯ [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|ರಾಜ್ಯ ಹೆದ್ದಾರಿಗಳು]] [[ರಾಜ್ಯ ಹೆದ್ದಾರಿ 23 (ಕೇರಳ)|SH 23]] (ಶೋರನೂರ್-ಪೆರಿಂತಲ್ಮನ್ನ), [[ರಾಜ್ಯ ಹೆದ್ದಾರಿ 28 (ಕೇರಳ)|SH 28]] (ಮಲಪ್ಪುರಂ-ವಾಳಿಕ್ಕಡವು), [[ರಾಜ್ಯ ಹೆದ್ದಾರಿ 34 (ಕೇರಳ)|SH 34]] (ಕ್ವಿಲಾಂಡಿ-ಎಡವನ್ನ), [[ರಾಜ್ಯ ಹೆದ್ದಾರಿ 39 (ಕೇರಳ)|SH 39]] (ಪೆರುಂಬಿಳಾವು-ನಿಲಂಬೂರ್), [[ರಾಜ್ಯ ಹೆದ್ದಾರಿ 53 (ಕೇರಳ)|SH 53]] (ಮುಂಡೂರ್-ಪೆರಿಂತಲ್ಮನ್ನ), [[ಹಿಲ್ ಹೆದ್ದಾರಿ (ಕೇರಳ)|ಹಿಲ್ ಹೆದ್ದಾರಿ]], [[ರಾಜ್ಯ ಹೆದ್ದಾರಿ 60 (ಕೇರಳ)|SH 60]] (ಅಂಗಡಿಪುರಂ-ಚೆರುಕರ), [[ರಾಜ್ಯ ಹೆದ್ದಾರಿ 62 (ಕೇರಳ)|SH 62]] (ಗುರುವಾಯೂರ್-ಪೊನ್ನಾನಿ), [[ರಾಜ್ಯ ಹೆದ್ದಾರಿ 65 (ಕೇರಳ)|SH 65]] (ಪರಪ್ಪನಂಗಾಡಿ-ಅರೀಕೋಡ್), [[ರಾಜ್ಯ ಹೆದ್ದಾರಿ 69 (ಕೇರಳ)|SH 69]] (ತೃಶೂರ್-ಕುಟ್ಟಿಪುರಂ), [[ರಾಜ್ಯ ಹೆದ್ದಾರಿ 70 (ಕೇರಳ)|SH 70]] (ಕರುವರಕುಂಡು – ಮೇಲತ್ತೂರ್), [[ರಾಜ್ಯ ಹೆದ್ದಾರಿ 71 (ಕೇರಳ)|SH 71]] (ತಿರೂರ್-ಮಂಜೇರಿ), [[ರಾಜ್ಯ ಹೆದ್ದಾರಿ 72 (ಕೇರಳ)|SH 72]] (ಮಲಪ್ಪುರಂ – ತಿರೂರಂಗಡಿ), ಮತ್ತು [[ರಾಜ್ಯ ಹೆದ್ದಾರಿ 73 (ಕೇರಳ)|SH 73]] (ವಳಾಂಚೇರಿ-ನಿಲಂಬೂರ್). ಜಿಲ್ಲೆಯಲ್ಲಿ ಕೇರಳ PWD ನಿರ್ವಹಿಸುವ ರಸ್ತೆಯ ಉದ್ದವು 2,680 ಕಿಮೀ. ಇದರಲ್ಲಿ, 2,305 ಕಿಮೀ ಜಿಲ್ಲಾ ರಸ್ತೆಗಳನ್ನು ಒಳಗೊಂಡಿದೆ. ಉಳಿದ 375 ಕಿಮೀ ರಾಜ್ಯ ಹೆದ್ದಾರಿಗಳನ್ನು ಒಳಗೊಂಡಿದೆ.<ref>{{Cite web |url=http://www.kerenvis.nic.in/Database/RoadNetworkKerala_2284.aspx |website=kerenvis.nic.in |title=ಮಲಪ್ಪುರಂನಲ್ಲಿ PWD ರಸ್ತೆಗಳ ಉದ್ದ |access-date=19 April 2020 |archive-date=6 March 2020 |archive-url=https://web.archive.org/web/20200306070657/http://www.kerenvis.nic.in/Database/RoadNetworkKerala_2284.aspx |url-status=live }}</ref> ''ನಾಡುಕಾನಿ ಚುರಂ'' [[ಘಾಟ್ ರಸ್ತೆಗಳು|ಘಾಟ್ ರಸ್ತೆ]] ಮಲಪ್ಪುರಂ ಅನ್ನು [[ನೀಲಗಿರಿ ಜಿಲ್ಲೆ|ನೀಲಗಿರಿ]]ಯೊಂದಿಗೆ ಸಂಪರ್ಕಿಸುತ್ತದೆ.<ref name="Nadukani">{{Cite news|title=ನಾಡುಕಾಣಿಚುರಂ ಕರೆಯುತ್ತಿದೆ, ಅಪೂರ್ವ ದೃಶ್ಯಗಳೊಂದಿಗೆ|url=https://www.mathrubhumi.com/travel/kerala/malappuram/rare-beauty-of-nadukani-churam-what-to-see-at-nadukani-pass-1.3901911|last=|date=25 June 2019|access-date=1 March 2021|work=Mathrubhumi|archive-date=28 November 2020|archive-url=https://web.archive.org/web/20201128011007/https://www.mathrubhumi.com/travel/kerala/malappuram/rare-beauty-of-nadukani-churam-what-to-see-at-nadukani-pass-1.3901911|url-status=live}}</ref>
ನಾಡುಕಾನಿ-ಪರಪ್ಪನಂಗಾಡಿ ರಸ್ತೆಯು ಮಲಪ್ಪುರಂ ಜಿಲ್ಲೆಯ ಕರಾವಳಿ ಪ್ರದೇಶವನ್ನು [[ನಿಲಂಬೂರ್]] ಬಳಿ [[ನೀಲಗಿರಿ ಜಿಲ್ಲೆ]]ಯ [[ತಮಿಳುನಾಡು]] ಗಡಿಯಲ್ಲಿರುವ ಪೂರ್ವದ ಅತ್ಯಂತ ಬೆಟ್ಟದ ಗಡಿಯಾದ ''ನಾಡುಕಾನಿ ಚುರಂ'' ಗೆ ಸಂಪರ್ಕಿಸುತ್ತದೆ.<ref name="npr">{{cite news |url=https://www.manoramaonline.com/404.html |title=ನಾಡುಕಾನಿ–ಪರಪ್ಪನಂಗಾಡಿ ರಸ್ತೆ ಟ್ಯಾರಿಂಗ್ ಪ್ರಾರಂಭ; ಅಗಲವರ್ಧನೆ ಮತ್ತು ಒಳಚರಂಡಿ ನಿರ್ಮಾಣ ನಂತರ |date=12 February 2020 |publisher=Manorama Online |access-date=28 March 2021 |archive-date=4 June 2021 |archive-url=https://web.archive.org/web/20210604095618/https://www.manoramaonline.com/district-news/malappuram/2020/02/12/malappuram-tirurangadi-nadukani-parappanangadi-road-taring.amp.html |url-status=live }}</ref> [[ಪರಪ್ಪನಂಗಾಡಿ]]ಯಿಂದ ಪ್ರಾರಂಭವಾಗಿ, ಇದು [[ತಿರೂರಂಗಡಿ]], [[ಮಲಪ್ಪುರಂ]], [[ಮಂಜೇರಿ]], ಮತ್ತು [[ನಿಲಂಬೂರ್]] ಮೂಲಕ ಹಾದುಹೋಗುತ್ತದೆ, ನಂತರ ನಾಡುಕಾನಿ [[ಘಾಟ್ ರಸ್ತೆಗಳು|ಘಾಟ್ ರಸ್ತೆ]] ತಲುಪುತ್ತದೆ.<ref name="npr"/>
ಜಿಲ್ಲೆಯಲ್ಲಿ ಮೊದಲ ಆಧುನಿಕ ರೀತಿಯ ರಸ್ತೆಯನ್ನು ಹದಿನೆಂಟನೇ ಶತಮಾನದಲ್ಲಿ [[ಟಿಪ್ಪು ಸುಲ್ತಾನ್]] ನಿರ್ಮಿಸಿದರು.<ref name="mpm"/> [[ತಿರೂರ್]] ನಿಂದ [[ಚಾಲಿಯಂ]] ವರೆಗಿನ ರಸ್ತೆಯನ್ನು [[ತಾನೂರು, ಮಲಪ್ಪುರಂ|ತಾನೂರು]], [[ಪರಪ್ಪನಂಗಾಡಿ]], ಮತ್ತು [[ವಲ್ಲಿಕುಣ್ಣು]] ಮೂಲಕ ಅವರು ಯೋಜಿಸಿದ್ದರು.<ref name="mpm"/> ಟಿಪ್ಪು ಸುಲ್ತಾನ್ [[ಮಲಪ್ಪುರಂ]] ನಿಂದ [[ತಾಮರಶ್ಶೇರಿ]] ಗೆ, [[ಮಲಪ್ಪುರಂ]] ನಿಂದ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳಿಗೆ]], [[ಫೆರೋಕ್]] ನಿಂದ [[ತಿರೂರಂಗಡಿ]] ಮೂಲಕ [[ಕೊಟ್ಟಕ್ಕಲ್]] ಗೆ, ಮತ್ತು [[ಕೊಟ್ಟಕ್ಕಲ್]] ನಿಂದ [[ಅಂಗಡಿಪುರಂ]] ಗೆ ರಸ್ತೆಗಳನ್ನು ಸಹ ಯೋಜಿಸಿದ್ದರು.<ref name="1961_kkd"/>
{{Panorama
| image = File:GKN Chamravattom Regulator Bridge DSC 0446.JPG
| height = 175
| alt = [[ಚಮ್ರವಟ್ಟೊಂ ನಿಯಂತ್ರಕ-ಸೇತುವೆ]]ಯ ವಿಹಂಗಮ ನೋಟ
| caption = [[ಚಮ್ರವಟ್ಟೊಂ ನಿಯಂತ್ರಕ-ಸೇತುವೆ]]ಯ ವಿಹಂಗಮ ನೋಟ
}}
=== ರೈಲ್ವೇಗಳು ===
[[File:Tirur Railway Station.jpg|thumb|ತಿರೂರ್ನಲ್ಲಿರುವ ರಾಜ್ಯದ ಅತ್ಯಂತ ಹಳೆಯ ರೈಲ್ವೇ ನಿಲ್ದಾಣ. 1861 ರಲ್ಲಿ [[ತಿರೂರ್]] ನಿಂದ [[ಚಾಲಿಯಂ]] ಗೆ ಮೊದಲ ರೈಲು ಮಾರ್ಗವನ್ನು ಹಾಕಲಾಯಿತು]]
[[File:Mankeri kunnu.jpg|thumbnail|[[ಕುಟ್ಟಿಪುರಂ]] ಬಳಿಯ [[ಇರಿಂಬಿಲಿಯಂ]]ನ ಮಂಕೇರಿ ಕುಣ್ಣುವಿನಲ್ಲಿ ರೈಲ್ವೆ]]
[[File:Angadipuram Railway station (2356310689).jpg|left|thumb|[[ಅಂಗಡಿಪುರಂ ರೈಲ್ವೇ ನಿಲ್ದಾಣ]]ವು [[ಮಲಪ್ಪುರಂ]], [[ಪೆರಿಂತಲ್ಮನ್ನ]] ಪಟ್ಟಣಗಳಿಗೆ ಸೇವೆ ಸಲ್ಲಿಸುತ್ತದೆ]]
ಜಿಲ್ಲೆಯ ಮೂಲಕ ಹಾದುಹೋಗುವ ರೈಲು ಮಾರ್ಗದ ಒಟ್ಟು ಉದ್ದವು 142 ಕಿಮೀ.<ref>{{cite web |url=http://industry.kerala.gov.in/images/pdf/malappuram.pdf |website=industry.kerala.gov.in |page=45 |title=ಮಲಪ್ಪುರಂನಲ್ಲಿ ರೈಲ್ವೆ |access-date=21 April 2020 |archive-date=26 April 2021 |archive-url=https://web.archive.org/web/20210426034953/http://industry.kerala.gov.in/images/pdf/malappuram.pdf |url-status=live }}</ref> ಜಿಲ್ಲೆಯಲ್ಲಿನ ರೈಲ್ವೆಯು [[ದಕ್ಷಿಣ ರೈಲ್ವೆ ವಲಯ|ದಕ್ಷಿಣ ರೈಲ್ವೆ]]ಯ ಅಡಿಯಲ್ಲಿನ ಆರು ವಿಭಾಗಗಳಲ್ಲಿ ಒಂದಾದ [[ಪಾಲಕ್ಕಾಡ್ ರೈಲ್ವೆ ವಿಭಾಗ]]ದ ವ್ಯಾಪ್ತಿಗೆ ಬರುತ್ತದೆ. ಕೇರಳದಲ್ಲಿ ರೈಲ್ವೇಗಳ ಇತಿಹಾಸವು ಜಿಲ್ಲೆಯನ್ನು ಹಿಂತಿರುಗಿ ನೋಡುತ್ತದೆ. ರಾಜ್ಯದ ಅತ್ಯಂತ ಹಳೆಯ ರೈಲ್ವೇ ನಿಲ್ದಾಣವು [[ತಿರೂರ್ ರೈಲ್ವೇ ನಿಲ್ದಾಣ|ತಿರೂರ್]] ನಲ್ಲಿದೆ.<ref name="mpm"/> [[ತಾನೂರು ರೈಲ್ವೇ ನಿಲ್ದಾಣ|ತಾನೂರು]], [[ಪರಪ್ಪನಂಗಾಡಿ ರೈಲ್ವೇ ನಿಲ್ದಾಣ|ಪರಪ್ಪನಂಗಾಡಿ]], ಮತ್ತು [[ವಲ್ಲಿಕುಣ್ಣು ರೈಲ್ವೇ ನಿಲ್ದಾಣ|ವಲ್ಲಿಕುಣ್ಣು]] ನಿಲ್ದಾಣಗಳು [[ತಿರೂರ್]] ನಿಂದ [[ಚಾಲಿಯಂ]] ಗೆ ಹಾಕಲಾದ ರಾಜ್ಯದ ಅತ್ಯಂತ ಹಳೆಯ ರೈಲು ಮಾರ್ಗದ ಭಾಗಗಳಾಗಿವೆ.<ref name="mpm"/> ಮಾರ್ಗವನ್ನು 12 ಮಾರ್ಚ್ 1861 ರಂದು ಉದ್ಘಾಟಿಸಲಾಯಿತು.<ref name="ll"/> ಅದೇ ವರ್ಷದಲ್ಲಿ, ಇದನ್ನು [[ತಿರೂರ್]] ನಿಂದ [[ತಿರುನವಾಯ]] ಮೂಲಕ [[ಕುಟ್ಟಿಪುರಂ ರೈಲ್ವೇ ನಿಲ್ದಾಣ|ಕುಟ್ಟಿಪುರಂ]] ಗೆ ವಿಸ್ತರಿಸಲಾಯಿತು.<ref name="mpm"/> ನಂತರ, ಇದನ್ನು 1862 ರಲ್ಲಿ ಕುಟ್ಟಿಪುರಂ ನಿಂದ [[ಪಟ್ಟಾಂಬಿ]] ಗೆ ಮತ್ತಷ್ಟು ವಿಸ್ತರಿಸಲಾಯಿತು, ಮತ್ತು ಅದೇ ವರ್ಷದಲ್ಲಿ ಪಟ್ಟಾಂಬಿ ನಿಂದ [[ಪೊದನೂರು]] ಗೆ ಮತ್ತೆ ವಿಸ್ತರಿಸಲಾಯಿತು.<ref name="mpm"/> ಪ್ರಸ್ತುತ [[ಚೆನ್ನೈ]]-[[ಮಂಗಳೂರು]] ರೈಲು ಮಾರ್ಗವು ನಂತರ ಹೀಗೆ ನಿರ್ಮಿಸಲಾದ [[ಬೇಪೋರ್]] – [[ಪೊದನೂರು]] ಮಾರ್ಗದ ವಿಸ್ತರಣೆಯಾಗಿ ರೂಪುಗೊಂಡಿತು.<ref name="mpm"/>
[[ನಿಲಂಬೂರ್–ಶೋರನೂರ್ ಮಾರ್ಗ]]ವು [[ಭಾರತ]]ದಲ್ಲಿ ಅತ್ಯಂತ ಕಡಿಮೆ ಮತ್ತು ಸುಂದರವಾದ [[ಬ್ರಾಡ್ ಗೇಜ್]] ರೈಲು ಮಾರ್ಗಗಳಲ್ಲಿ ಒಂದಾಗಿದೆ.<ref>{{cite web|url=http://nilamburnews.com/m_train.htm|title=ನಿಲಂಬೂರ್ ನ್ಯೂಸ್|publisher=Kerala Tourism|access-date=13 November 2020|archive-url=https://web.archive.org/web/20160920133828/http://nilamburnews.com/m_train.htm|archive-date=20 September 2016|url-status=dead}}</ref> ಇದನ್ನು ವಸಾಹತುಶಾಹಿ ಯುಗದಲ್ಲಿ ಬ್ರಿಟಿಷರು [[ಕೋಝಿಕ್ಕೋಡ್]] ಮೂಲಕ [[ಯುನೈಟೆಡ್ ಕಿಂಗ್ಡಮ್]] ಗೆ ''ನಿಲಂಬೂರ್ ತೇಗ''ದ ದಿಮ್ಮಿಗಳನ್ನು ಸಾಗಿಸಲು ಹಾಕಿದರು. [[ನಿಲಂಬೂರ್–ನಂಜನಗೂಡು ಮಾರ್ಗ]]ವು ಪ್ರಸ್ತಾವಿತ ರೈಲು ಮಾರ್ಗವಾಗಿದ್ದು, ಇದು [[ನಿಲಂಬೂರ್]] ಅನ್ನು [[ವಯನಾಡ್ ಜಿಲ್ಲೆ|ವಯನಾಡ್]], [[ನೀಲಗಿರಿ ಜಿಲ್ಲೆ|ನೀಲಗಿರಿ]], ಮತ್ತು [[ಮೈಸೂರು ಜಿಲ್ಲೆ|ಮೈಸೂರು]] ಜಿಲ್ಲೆಗಳೊಂದಿಗೆ ಸಂಪರ್ಕಿಸುತ್ತದೆ.<ref>{{cite web |url=https://timesofindia.indiatimes.com/city/thiruvananthapuram/Kerala-govt-inks-deal-on-joint-venture-with-railways/articleshow/53978367.cms |website=The Times of India |title=ನಿಲಂಬೂರ್-ನಂಜನಗೂಡು ಮಾರ್ಗ ಸಾಕಾರಗೊಳ್ಳಲಿದೆ |date=2 September 2016 |access-date=26 June 2020 |archive-date=21 April 2021 |archive-url=https://web.archive.org/web/20210421161817/https://timesofindia.indiatimes.com/city/thiruvananthapuram/Kerala-govt-inks-deal-on-joint-venture-with-railways/articleshow/53978367.cms |url-status=live }}</ref><ref>{{Cite news|title=ನಿಲಂಬೂರ್ ತೇಗ GI ಟ್ಯಾಗ್ ಹೊಂದಿರುವ ಉತ್ಪನ್ನಗಳ ಗಣ್ಯ ಕ್ಲಬ್ಗೆ ಸೇರಲಿದೆ|url=https://www.thehindu.com/news/national/kerala/Nilambur-teak-set-to-enter-elite-club-of-products-with-GI-tag/article17280134.ece|last=ಮುರಿಂಗತೇರಿ|first=ಮಿನಿ|date=10 February 2017|access-date=24 January 2021|work=The Hindu|archive-date=29 January 2021|archive-url=https://web.archive.org/web/20210129101512/https://www.thehindu.com/news/national/kerala/Nilambur-teak-set-to-enter-elite-club-of-products-with-GI-tag/article17280134.ece|url-status=live}}</ref> [[ಗುರುವಾಯೂರ್]]-[[ತಿರುನವಾಯ]] ರೈಲು ಮಾರ್ಗವು ಮತ್ತೊಂದು ಪ್ರಸ್ತಾವಿತ ಯೋಜನೆಯಾಗಿದೆ.<ref>{{Cite news|title=ಗುರುವಾಯೂರ್-ತಿರುನವಾಯ ರೈಲು ಮಾರ್ಗ ಯೋಜನೆ ಮತ್ತೆ ಗಮನ ಸೆಳೆದಿದೆ|url=https://www.thehindu.com/news/cities/kozhikode/guruvayur-thirunavaya-railway-line-project-in-focus-again/article27473510.ece|last=ವಿಶೇಷ ವರದಿಗಾರ|date=4 June 2019|work=The Hindu|access-date=19 May 2021|archive-date=19 May 2021|archive-url=https://web.archive.org/web/20210519071303/https://www.thehindu.com/news/cities/kozhikode/guruvayur-thirunavaya-railway-line-project-in-focus-again/article27473510.ece|url-status=live}}</ref> ರೈಲ್ವೇ ಸಚಿವಾಲಯವು ಕೋಝಿಕ್ಕೋಡ್-ಮಲಪ್ಪುರಂ-ಅಂಗಡಿಪುರಂ ರೈಲು ಮಾರ್ಗವನ್ನು ಸಾಮಾಜಿಕವಾಗಿ ಅಪೇಕ್ಷಣೀಯ ರೈಲು ಮಾರ್ಗವಾಗಿ ತನ್ನ ವಿಷನ್ 2020 ರಲ್ಲಿ ಸೇರಿಸಿದೆ. ಈ ಮಾರ್ಗದಲ್ಲಿ ಈಗಾಗಲೇ ಅನೇಕ ಸಮೀಕ್ಷೆಗಳನ್ನು ಮಾಡಲಾಗಿದೆ. ಭಾರತೀಯ ರೈಲ್ವೆ ಕಂಪ್ಯೂಟರೀಕೃತ ಮೀಸಲಾತಿ ಕೌಂಟರ್ ಡೌನ್ ಹಿಲ್ನಲ್ಲಿರುವ ಫ್ರೆಂಡ್ಸ್ ಜನಸೇವನಾ ಕೇಂದ್ರಂನಲ್ಲಿ ಲಭ್ಯವಿದೆ. ಯಾವುದೇ ರೈಲಿಗೆ ಮೀಸಲಾತಿಯನ್ನು ಇಲ್ಲಿಂದ ಮಾಡಬಹುದು. [[ಮಲಪ್ಪುರಂ]] ನಗರವು [[ಅಂಗಡಿಪುರಂ ರೈಲ್ವೇ ನಿಲ್ದಾಣ|ಅಂಗಡಿಪುರಂ]] ({{cvt|17|km}} ದೂರ), [[ತಿರೂರ್ ರೈಲ್ವೇ ನಿಲ್ದಾಣ|ತಿರೂರ್]], ಮತ್ತು [[ಪರಪ್ಪನಂಗಾಡಿ ರೈಲ್ವೇ ನಿಲ್ದಾಣ|ಪರಪ್ಪನಂಗಾಡಿ]] (ಎರಡೂ 26 ಕಿಮೀ, 40 ನಿಮಿಷಗಳ ಡ್ರೈವ್ ದೂರ) ರೈಲ್ವೇ ನಿಲ್ದಾಣಗಳಿಂದ ಸೇವೆಯನ್ನು ಪಡೆಯುತ್ತದೆ.
{| class="wikitable" style="margin: 1em auto"
|+ಮಲಪ್ಪುರಂ ಜಿಲ್ಲೆಯ ರೈಲ್ವೇ ನಿಲ್ದಾಣಗಳು
|-
| '''[[ಅಂಗಡಿಪುರಂ ರೈಲ್ವೇ ನಿಲ್ದಾಣ|ಅಂಗಡಿಪುರಂ]]'''
| [[ಚೆರುಕರ ರೈಲ್ವೇ ನಿಲ್ದಾಣ|ಚೆರುಕರ]]
| '''[[ಕುಟ್ಟಿಪುರಂ ರೈಲ್ವೇ ನಿಲ್ದಾಣ|ಕುಟ್ಟಿಪುರಂ]]'''
|-
| [[ಮೇಲತ್ತೂರ್ ರೈಲ್ವೇ ನಿಲ್ದಾಣ|ಮೇಲತ್ತೂರ್]]
| '''[[ನಿಲಂಬೂರ್ ರಸ್ತೆ ರೈಲ್ವೇ ನಿಲ್ದಾಣ|ನಿಲಂಬೂರ್ ರಸ್ತೆ]]'''
| [[ಪರಪ್ಪನಂಗಾಡಿ ರೈಲ್ವೇ ನಿಲ್ದಾಣ|ಪರಪ್ಪನಂಗಾಡಿ]]
|-
| [[ಪಟ್ಟಿಕ್ಕಾಡ್ ರೈಲ್ವೇ ನಿಲ್ದಾಣ|ಪಟ್ಟಿಕ್ಕಾಡ್]]
| [[ಕುಟ್ಟಿಪುರಂ|ಪೆರಸ್ಸನ್ನೂರ್]]
| [[ತಾನೂರು ರೈಲ್ವೇ ನಿಲ್ದಾಣ|ತಾನೂರು]]
|-
| [[ಪೊರೂರ್, ಮಲಪ್ಪುರಂ|ಥೋಡಿಕಾಪುಳಂ]]
| [[ತಿರುನ್ನವಾಯ ರೈಲ್ವೇ ನಿಲ್ದಾಣ|ತಿರುನ್ನವಾಯ]]
| '''[[ತಿರೂರ್ ರೈಲ್ವೇ ನಿಲ್ದಾಣ|ತಿರೂರ್]]'''
|-
| [[ತುವ್ವೂರ್ ರೈಲ್ವೇ ನಿಲ್ದಾಣ|ತುವ್ವೂರ್]]
| [[ವಲ್ಲಿಕುಣ್ಣು ರೈಲ್ವೇ ನಿಲ್ದಾಣ|ವಲ್ಲಿಕುಣ್ಣು]]
| [[ವಣಿಯಂಬಲಂ ರೈಲ್ವೇ ನಿಲ್ದಾಣ|ವಣಿಯಂಬಲಂ]]
|}
=== ಮೆಟ್ರೋ ರೈಲು ===
{{Main|ತಿರೂರ್-ನಿಲಂಬೂರ್ ಮೆಟ್ರೋ}}
ಮಲಪ್ಪುರಂ ಜಿಲ್ಲೆಯಲ್ಲಿ, ಜನನಿಬಿಡ [[ಮಲಪ್ಪುರಂ ಮಹಾನಗರ ಪ್ರದೇಶ]]ದ ಸಂಚಾರ ದಟ್ಟಣೆಯನ್ನು ಪರಿಹರಿಸಲು, 2012, 2017 ಮತ್ತು 2025 ರಲ್ಲಿ ವಿವಿಧ ಸಂಸ್ಥೆಗಳು ಮತ್ತು ಶಾಸಕಾಂಗ ಪ್ರತಿನಿಧಿಗಳು ಮೆಟ್ರೋ ರೈಲಿಗೆ ಪ್ರಸ್ತಾವನೆಗಳನ್ನು ಸಲ್ಲಿಸಿದರು. 2025 ರಲ್ಲಿ, [[ತಿರೂರ್ ವಿಧಾನಸಭಾ ಕ್ಷೇತ್ರ]]ದ ಶಾಸಕ [[ಕುರುಕ್ಕೋಲಿ ಮೊಯ್ದೀನ್]] ಅವರು ಕೇರಳ ವಿಧಾನಸಭೆಯಲ್ಲಿ [[ತಿರೂರ್-ನಿಲಂಬೂರ್ ಮೆಟ್ರೋ]] ಪ್ರಸ್ತಾವನೆಯನ್ನು ಮಂಡಿಸಿದರು.<ref>{{cite web | url=https://www.thehindu.com/news/national/kerala/tirur-nilambur-metro-demand-evokes-sharp-riposte-from-cm/article69132501.ece | title=ತಿರೂರ್-ನಿಲಂಬೂರ್ ಮೆಟ್ರೋ ಬೇಡಿಕೆ ಮುಖ್ಯಮಂತ್ರಿಯಿಂದ ತೀಕ್ಷ್ಣ ಪ್ರತಿಪಾದನೆಗೆ ಕಾರಣವಾಯಿತು | work=The Hindu | date=23 January 2025 }}</ref>
=== ವಿಮಾನ ನಿಲ್ದಾಣ ===
[[File:Flights Parked at Calicut Airport.jpg|thumb|[[ಕರಿಪುರ್]]ನ [[ಕಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ದಲ್ಲಿ ನಿಲುಗಡೆ ಮಾಡಲಾದ ವಿಮಾನಗಳು]]
ಮಲಪ್ಪುರಂಗೆ [[ಕರಿಪುರ್]] ನಲ್ಲಿರುವ [[ಕಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]] {{Airport codes|CCJ|VOCL}} ಸೇವೆ ಸಲ್ಲಿಸುತ್ತದೆ, ಇದು ಮಲಪ್ಪುರಂ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ವಿಮಾನ ನಿಲ್ದಾಣವು ಏಪ್ರಿಲ್ 1988 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಎರಡು ಟರ್ಮಿನಲ್ಗಳನ್ನು ಹೊಂದಿದೆ, ಒಂದು ದೇಶೀಯ ವಿಮಾನಗಳಿಗೆ ಮತ್ತು ಇನ್ನೊಂದು ಅಂತಾರಾಷ್ಟ್ರೀಯ ವಿಮಾನಗಳಿಗೆ.<ref>{{Cite news|url=https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms|title=ಬೆಳ್ಳಿ ಹಬ್ಬವು ಕರಿಪುರ್ ವಿಮಾನ ನಿಲ್ದಾಣದ ಬಳಕೆದಾರರಿಗೆ ಸಂತೋಷವನ್ನು ತರುವುದಿಲ್ಲ|work=The Times of India|access-date=13 September 2021|archive-date=4 June 2021|archive-url=https://web.archive.org/web/20210604110846/https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms|url-status=live}}</ref> ವಿಮಾನ ನಿಲ್ದಾಣವು [[ಏರ್ ಇಂಡಿಯಾ ಎಕ್ಸ್ಪ್ರೆಸ್]]ಗೆ ಕಾರ್ಯಾಚರಣೆಯ ನೆಲೆಯಾಗಿ ಸೇವೆ ಸಲ್ಲಿಸುತ್ತದೆ ಮತ್ತು [[ಕೇರಳ]]ದಿಂದ [[ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮದೀನಾ]] ಮತ್ತು [[ರಾಜಾ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಜೆದ್ದಾ]] ಗೆ [[ಹಜ್|ಹಜ್ ಯಾತ್ರಾ]] ಸೇವೆಗಳನ್ನು ನಿರ್ವಹಿಸುತ್ತದೆ. [[ಬೆಂಗಳೂರು]], [[ಚೆನ್ನೈ]], [[ಮುಂಬೈ]], [[ಹೈದರಾಬಾದ್]], [[ಗೋವಾ]], [[ಕೊಚ್ಚಿ]], [[ತಿರುವನಂತಪುರಂ]], [[ಮಂಗಳೂರು]] ಮತ್ತು [[ಕೊಯಿಮತ್ತೂರು]] ಸೇರಿದಂತೆ ಪ್ರಮುಖ ನಗರಗಳಿಗೆ ದೇಶೀಯ ವಿಮಾನ ಸೇವೆಗಳು ಲಭ್ಯವಿದ್ದರೆ, ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಮಲಪ್ಪುರಂ ಅನ್ನು [[ದುಬೈ]], [[ಜೆದ್ದಾ]], [[ರಿಯಾಧ್]], [[ಶಾರ್ಜಾ (ಎಮಿರೇಟ್)|ಶಾರ್ಜಾ]], [[ಅಬು ಧಾಬಿ]], [[ಅಲ್ ಐನ್]], [[ಬಹ್ರೈನ್]], [[ದಮ್ಮಾಮ್]], [[ದೋಹಾ]], [[ಮಸ್ಕತ್, ಒಮಾನ್|ಮಸ್ಕತ್]], [[ಸಲಾಲಾ]] ಮತ್ತು [[ಕುವೈತ್]] ಗಳೊಂದಿಗೆ ಸಂಪರ್ಕಿಸುತ್ತದೆ. ಸಾರಿಗೆಗಾಗಿ ವಿಮಾನ ನಿಲ್ದಾಣಕ್ಕೆ ನೇರ ಬಸ್ಗಳಿವೆ. ಬಸ್ಗಳ ಹೊರತಾಗಿ, ಟ್ಯಾಕ್ಸಿಗಳು, ಆಟೋ ರಿಕ್ಷಾಗಳು ಸಾರಿಗೆಗೆ ಲಭ್ಯವಿವೆ.
[[ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ]] 2019–20 ರಲ್ಲಿ ಒದಗಿಸಿದ ಅಂಕಿಅಂಶಗಳ ಪ್ರಕಾರ, ಇದು ದೇಶದ [[ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ|17ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ]] ಮತ್ತು ರಾಜ್ಯದಲ್ಲಿ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.
== ಜನಸಂಖ್ಯಾಶಾಸ್ತ್ರ ==
=== ಜನಸಂಖ್ಯೆ ===
{{historical populations|11=1901|12=6,82,151|13=1911|14=7,47,929|15=1921|16=7,64,138|17=1931|18=8,74,504|19=1941|20=9,77,085|21=1951|22=11,49,718|23=1961|24=13,87,370|25=1971|26=18,56,357|27=1981|28=24,02,701|29=1991|30=30,96,330|31=2001|32=36,25,471|33=2011|34=41,12,920|35=2018|36=44,94,998|percentages=pagr|footnote=ಮೂಲ:<ref>{{Cite web|url=http://www.censusindia.gov.in/2011census/PCA/A2_Data_Table.html|title=ಭಾರತದ ಜನಗಣತಿ ವೆಬ್ಸೈಟ್ : ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ, ಭಾರತ|website=censusindia.gov.in|access-date=13 September 2021|archive-date=8 August 2019|archive-url=https://web.archive.org/web/20190808131957/http://www.censusindia.gov.in/2011census/PCA/A2_Data_Table.html|url-status=live}}</ref><ref name="mlpdemo_2018"/>|align=center}}
[[File:Distribution of Population in Malappuram District.svg|left|thumbnail|ಸ್ಥಳೀಯ ಸಂಸ್ಥೆಗಳಲ್ಲಿ ಜನಸಂಖ್ಯೆಯ ವಿತರಣೆ (2011)]]
[[ವೈಟಲ್ ಸ್ಟ್ಯಾಟಿಸ್ಟಿಕ್ಸ್ (ಸರ್ಕಾರಿ ದಾಖಲೆಗಳು)|2018 ರ ಅಂಕಿಅಂಶಗಳ ವರದಿ]] ಪ್ರಕಾರ, ಜಿಲ್ಲೆಯು 4,494,998 ಜನಸಂಖ್ಯೆಯನ್ನು ಹೊಂದಿದ್ದು,<ref name="mlpdemo_2018"/> ಇದು ಸ್ಥೂಲವಾಗಿ [[ಮಾರಿಟಾನಿಯಾ]] ಅಥವಾ US ರಾಜ್ಯ [[ಕೆಂಟಕ್ಕಿ]]ಯ ಜನಸಂಖ್ಯೆಗೆ ಸಮಾನವಾಗಿದೆ. ಕೇರಳದ ಒಟ್ಟು ಜನಸಂಖ್ಯೆಯ 12.98% ಮಲಪ್ಪುರಂನಲ್ಲಿ ವಾಸಿಸುತ್ತಿದ್ದಾರೆ.<ref name="mlpdemo_2018"/> ಇದು ಕೇರಳದ ಅತಿ ಹೆಚ್ಚು ಜನಸಂಖ್ಯೆಯ ಜಿಲ್ಲೆಯಾಗಿದೆ ಮತ್ತು ಭಾರತದ 640 ಜಿಲ್ಲೆಗಳಲ್ಲಿ 50ನೇ ಅತಿ ಹೆಚ್ಚು ಜನಸಂಖ್ಯೆಯ ಜಿಲ್ಲೆಯಾಗಿದೆ, ಇದರ ಜನಸಾಂದ್ರತೆಯು {{convert| 1265 |PD/sqkm|PD/sqmi}} ಆಗಿದೆ. 2001 ರಿಂದ 2011 ರವರೆಗಿನ ಜನಸಂಖ್ಯೆಯ ಬೆಳವಣಿಗೆ ದರವು 13.39 ಪ್ರತಿಶತವಾಗಿತ್ತು. [[ಭಾರತದ ಜನಗಣತಿ 2011]] ರ ಪ್ರಕಾರ, ಮಲಪ್ಪುರಂ 1098 ಮಹಿಳೆಯರು 1000 ಪುರುಷರಿಗೆ [[ಮಾನವ ಲಿಂಗಾನುಪಾತ|ಲಿಂಗಾನುಪಾತವನ್ನು]] ಹೊಂದಿದೆ, ಮತ್ತು ಅದರ [[ಭಾರತದಲ್ಲಿ ಸಾಕ್ಷರತೆ|ಸಾಕ್ಷರತಾ ಪ್ರಮಾಣವು]] 93.57 ಪ್ರತಿಶತವಾಗಿದ್ದು, ಇದು ರಾಜ್ಯದ ಸರಾಸರಿ ಸಾಕ್ಷರತಾ ಪ್ರಮಾಣಕ್ಕೆ (93.91%) ಸರಿಸುಮಾರು ಸಮಾನವಾಗಿದೆ. 2011 ರ ಜನಗಣತಿಯ ಒಟ್ಟು ಮಲಪ್ಪುರಂ ಜನಸಂಖ್ಯೆಯಲ್ಲಿ, 44.18 ಪ್ರತಿಶತದಷ್ಟು ಜನರು ಜಿಲ್ಲೆಯ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 2011 ರಲ್ಲಿ, 0–6 ವರ್ಷದೊಳಗಿನ ಮಕ್ಕಳು ಒಟ್ಟು ಜನಸಂಖ್ಯೆಯ 13.96 ಪ್ರತಿಶತವನ್ನು ರೂಪಿಸಿದ್ದಾರೆ, ಇದು 2001 ರಲ್ಲಿ 15.21 ಪ್ರತಿಶತಕ್ಕೆ ಹೋಲಿಸಿದರೆ. ಜನಗಣತಿ 2011 ರ ಪ್ರಕಾರ ಶಿಶು ಲಿಂಗಾನುಪಾತವು 965 ಆಗಿದ್ದು, 2001 ರ ಜನಗಣತಿಯ 960 ಕ್ಕೆ ಹೋಲಿಸಿದರೆ. ಜನಗಣತಿ 2011 ರ ಪ್ರಕಾರ, ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ 0.02% ಮಾತ್ರ ಮನೆಯಿಲ್ಲದವರಾಗಿದ್ದಾರೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಕ್ರಮವಾಗಿ ಜನಸಂಖ್ಯೆಯ 7.50% ಮತ್ತು 0.56% ರಷ್ಟಿದ್ದಾರೆ.<ref name="CensusMalappuram">{{cite web |title=ಜಿಲ್ಲಾ ಜನಗಣತಿ ಕೈಪಿಡಿ: ಮಲಪ್ಪುರಂ |url=https://censusindia.gov.in/nada/index.php/catalog/658/download/2280/DH_2011_3205_PART_A_DCHB_MALAPPURAM.pdf |website=[[ಭಾರತದ ಜನಗಣತಿ]] |publisher=[[ನೋಂದಣಿ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ]]}}</ref>
[[ಪೊನ್ನಾನಿ]] ಪುರಸಭೆಯು ಜಿಲ್ಲೆಯಲ್ಲಿ ಅತಿ ಹೆಚ್ಚು ಜನಸಾಂದ್ರತೆಯ ಸ್ಥಳೀಯ ಸಂಸ್ಥೆಯಾಗಿದ್ದು, ಪ್ರತಿ ಚದರ ಕಿಲೋಮೀಟರ್ಗೆ 3,646 ನಿವಾಸಿಗಳನ್ನು ಹೊಂದಿದೆ, ನಂತರ [[ತಾನೂರು, ಮಲಪ್ಪುರಂ|ತಾನೂರು]] (3,568/ಕಿಮೀ<sup>2</sup>) ಮತ್ತು [[ತಿರೂರ್]] (3,387/ಕಿಮೀ<sup>2</sup>) ಪುರಸಭೆಗಳು 2011 ರಲ್ಲಿ ನಡೆಸಿದ ಜನಗಣತಿಯ ಪ್ರಕಾರ.<ref name="CensusMalappuram"/> ಅತಿ ಕಡಿಮೆ ಜನಸಾಂದ್ರತೆಯ ಸ್ಥಳೀಯ ಸಂಸ್ಥೆಗಳು ಪೂರ್ವದ ಬೆಟ್ಟದ ಪ್ರದೇಶದಲ್ಲಿವೆ.<ref name="CensusMalappuram"/> [[ಚಾಲಿಯಾರ್]] ಕೇವಲ 167 ನಿವಾಸಿಗಳು ಪ್ರತಿ ಚದರ ಕಿಲೋಮೀಟರ್ಗೆ ಅತಿ ಕಡಿಮೆ ಸಾಂದ್ರತೆಯನ್ನು ಹೊಂದಿದೆ, ನಂತರ [[ಕರುಲೈ]] (177/ಕಿಮೀ<sup>2</sup>) ಮತ್ತು [[ಚುಂಗತರ]] (280/ಕಿಮೀ<sup>2</sup>) ಗ್ರಾಮ ಪಂಚಾಯತ್ಗಳು.<ref name="CensusMalappuram"/> ತಾಲೂಕುಗಳಲ್ಲಿ, [[ತಿರೂರಂಗಡಿ]] ಅತಿ ಹೆಚ್ಚು ಜನಸಾಂದ್ರತೆಯನ್ನು ಹೊಂದಿದ್ದರೆ, [[ನಿಲಂಬೂರ್]] ಜನಸಾಂದ್ರತೆಯಲ್ಲಿ ಅತ್ಯಂತ ಕಡಿಮೆ ಸಾಂದ್ರತೆಯನ್ನು ಹೊಂದಿದೆ.<ref name="CensusMalappuram"/> [[ಮಲಪ್ಪುರಂ ಮಹಾನಗರ ಪ್ರದೇಶ]]ವು 1.7 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ.<ref name="census 2011"/> ಜನವರಿ 2020 ರಲ್ಲಿ [[ದಿ ಎಕನಾಮಿಸ್ಟ್]] ಪ್ರಕಟಿಸಿದ ವರದಿಯ ಪ್ರಕಾರ, ಮಲಪ್ಪುರಂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರ ಪ್ರದೇಶವಾಗಿದೆ.<ref>{{cite web |url=https://www.cnbctv18.com/politics/four-of-the-worlds-fastest-growing-cities-in-kerala-5026281.htm |website=cnbctv18.com |title=ಮಲಪ್ಪುರಂ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ |date=9 January 2020 |access-date=28 June 2020 |archive-date=1 July 2020 |archive-url=https://web.archive.org/web/20200701044017/https://www.cnbctv18.com/politics/four-of-the-worlds-fastest-growing-cities-in-kerala-5026281.htm |url-status=live }}</ref><ref>{{cite web |url= https://scroll.in/article/949294/even-with-the-lowest-population-growth-rate-this-indian-state-has-the-worlds-fastest-growing-city |website= scroll.in |title= ಮಲಪ್ಪುರಂ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ |date= 10 January 2020 |access-date= 26 June 2020 |archive-date= 5 August 2020 |archive-url= https://web.archive.org/web/20200805234947/https://scroll.in/article/949294/even-with-the-lowest-population-growth-rate-this-indian-state-has-the-worlds-fastest-growing-city |url-status= live }}</ref><ref>{{cite web |url=https://www.newindianexpress.com/states/kerala/2020/jan/09/malappuram-is-worlds-fastest-growing-city-kozhikode-kollam-also-in-top-10-2087011.html |website=The New Indian Express |title=ಮಲಪ್ಪುರಂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ; ಕೋಝಿಕ್ಕೋಡ್, ಕೊಲ್ಲಂ ಸಹ ಟಾಪ್ 10 ರಲ್ಲಿ |date=9 January 2020 |access-date=26 June 2020 |archive-date=13 January 2020 |archive-url=https://web.archive.org/web/20200113110924/https://www.newindianexpress.com/states/kerala/2020/jan/09/malappuram-is-worlds-fastest-growing-city-kozhikode-kollam-also-in-top-10-2087011.html |url-status=live }}</ref>
=== ನಗರ ರಚನೆ ===
ಮಲಪ್ಪುರಂ [[ನಗರ ಸಮೂಹ]] (UA) ರಾಜ್ಯದಲ್ಲಿ 4ನೇ ಅತಿ ಹೆಚ್ಚು ಜನಸಂಖ್ಯೆಯ UA ಆಗಿದೆ. ಮಲಪ್ಪುರಂ [[ಭಾರತದ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರ ಸಮೂಹಗಳ ಪಟ್ಟಿ|ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ನಗರ ಸಮೂಹಗಳ ಪಟ್ಟಿಯಲ್ಲಿ]] 25ನೇ ಸ್ಥಾನದಲ್ಲಿದೆ. ಇಡೀ ಜಿಲ್ಲೆಯ ಒಟ್ಟು ನಗರ ಜನಸಂಖ್ಯೆಯು ಜಿಲ್ಲೆಯ ಜನಸಂಖ್ಯೆಯ 44.18% ಆಗಿದೆ.<ref name="CensusMalappuram"/> ಮಲಪ್ಪುರಂನ ಮಹಾನಗರ ಪ್ರದೇಶವು [[ಅಬ್ದು ರಹಿಮಾನ್ ನಗರ್]], [[ಅಲಂಕೋಡ್, ಎಡಪ್ಪಲ್|ಅಲಂಕೋಡ್]], [[ಅರಿಯಲ್ಲೂರ್]], [[ಚೆಲೆಂಬ್ರ]], [[ಚೇರಿಯಮುಂಡಂ]], [[ಚೆರುಕಾವು]], [[ಎಡಪ್ಪಲ್]], [[ಇರಿಂಬಿಲಿಯಂ]], [[ಕಳಡಿ, ಮಲಪ್ಪುರಂ|ಕಳಡಿ]], ಕನ್ನಮಂಗಲಂ, [[ಕೊಡೂರ್, ಮಲಪ್ಪುರಂ|ಕೊಡೂರ್]], [[ಕೊಂಡೊಟ್ಟಿ]], [[ಕೂಟಿಲಂಗಡಿ]], [[ಕೊಟ್ಟಕ್ಕಲ್]], [[ಕುಟ್ಟಿಪುರಂ]], [[ಮಂಜೇರಿ]], [[ಮರಾಂಚೇರಿ]], [[ತಲಪ್ಪರ|ಮೂನ್ನಿಯೂರ್]], [[ನಡುವಟ್ಟೊಂ, ಮಲಪ್ಪುರಂ|ನಡುವಟ್ಟೊಂ]], [[ನನ್ನಂಬ್ರ]], [[ನೆದುವ]], [[ಊರಕಂ]], [[ಒತುಕ್ಕುಂಗಲ್]], [[ಪಳ್ಳಿಕ್ಕಲ್ ಬಜಾರ್]], [[ಪರಪ್ಪೂರ್]], [[ಪೆರುಮನ್ನ-ಕ್ಲಾರಿ|ಪೆರುಮನ್ನ]], [[ಪೆರುವಲ್ಲೂರ್]], [[ಪೊನ್ನಾನಿ]], [[ಪೊನ್ಮುಂಡಂ]], [[ತಾನಲೂರು]], [[ತೆನಿಪಾಲಂ]], [[ತಲಕ್ಕಾಡ್]], [[ತೆನ್ನಲ]], [[ತಿರುನವಾಯ]], [[ತಿರೂರ್]], [[ತಿರೂರಂಗಡಿ]], [[ತ್ರಿಕ್ಕಲಂಗೋಡ್]], [[ತ್ರಿಪ್ರಂಗೋಡ್]], [[ವಳಾಂಚೇರಿ]], [[ವಾಝಯೂರ್]], ಮತ್ತು [[ವೆಂಗರ, ಮಲಪ್ಪುರಂ ಜಿಲ್ಲೆ|ವೆಂಗರ]] ಸೇರಿವೆ.<ref name="Mma">{{cite web |url=https://kerala.gov.in/documents/10180/622777/urban |website=kerala.gov.in |title=ಮಲಪ್ಪುರಂ ಮಹಾನಗರ ಪ್ರದೇಶದ ಘಟಕಗಳು |access-date=24 February 2021 |archive-date=30 December 2020 |archive-url=https://web.archive.org/web/20201230044541/https://kerala.gov.in/documents/10180/622777/urban |url-status=live }}</ref>
=== ಧರ್ಮಗಳು ===
{{bar box
|title = ಮಲಪ್ಪುರಂ ಜಿಲ್ಲೆಯಲ್ಲಿ ಧರ್ಮಗಳು (2011)<ref name="religion">{{Cite web|date=2011|title=ಕೋಷ್ಟಕ C-01: ಧಾರ್ಮಿಕ ಸಮುದಾಯದ ಪ್ರಕಾರ ಜನಸಂಖ್ಯೆ: ಕೇರಳ |url=https://censusindia.gov.in/nada/index.php/catalog/11379/download/14492/DDW32C-01%20MDDS.XLS |website=[[ಭಾರತದ ಜನಗಣತಿ]] |publisher=[[ನೋಂದಣಿ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ]]}}</ref>
|titlebar=#Fcd116
|left1=ಧರ್ಮ
|right1=ಶೇಕಡಾವಾರು
|float=left
|bars=
{{bar percent|[[ಕೇರಳದಲ್ಲಿ ಇಸ್ಲಾಂ|ಇಸ್ಲಾಂ]]|green|70.24}}
{{bar percent|[[ಕೇರಳದಲ್ಲಿ ಹಿಂದೂ ಧರ್ಮ|ಹಿಂದೂ ಧರ್ಮ]]|darkorange|27.60}}
{{bar percent|[[ಕೇರಳದಲ್ಲಿ ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮ]]|dodgerblue|1.98}}
{{bar percent|ಇತರೆ ಅಥವಾ ಸೂಚಿಸಲಾಗಿಲ್ಲ|black|0.18}}
}}
ಮಲಪ್ಪುರಂ ಜಿಲ್ಲೆಯ ಪ್ರದೇಶಗಳು ಆರಂಭಿಕ [[ಮಧ್ಯಯುಗ]]ದಿಂದಲೂ ಬಹು-ಜನಾಂಗೀಯ ಮತ್ತು ಬಹು-ಧಾರ್ಮಿಕವಾಗಿವೆ. [[ಅರೇಬಿಯನ್ ಸಮುದ್ರ]]ದಾದ್ಯಂತ ಶತಮಾನಗಳಿಂದ ವ್ಯಾಪಾರವು ಮಲಪ್ಪುರಂಗೆ ವಿಶ್ವವ್ಯಾಪಿ ಜನಸಂಖ್ಯೆಯನ್ನು ನೀಡಿದೆ.<ref>{{Cite book|title=ತುಹ್ಫತ್-ಅಲ್-ಮುಜಾಹಿದೀನ್: ಅರೇಬಿಕ್ ಭಾಷೆಯಲ್ಲಿ ಒಂದು ಐತಿಹಾಸಿಕ ಕೃತಿ|last=ನಯಿನಾರ್|first=ಎಸ್. ಮುಹಮ್ಮದ್ ಹುಸೇನ್|publisher=ಮದ್ರಾಸ್ ವಿಶ್ವವಿದ್ಯಾಲಯ|year=1942|url=https://archive.org/details/Tuhfat-al-MujahidinAnHistoricalWorkInTheArabicLanguage}}</ref> ಜಿಲ್ಲೆಯಲ್ಲಿ ಆಚರಿಸಲಾಗುವ ಧರ್ಮಗಳಲ್ಲಿ [[ಇಸ್ಲಾಂ]], [[ಹಿಂದೂ ಧರ್ಮ]], [[ಕ್ರೈಸ್ತ ಧರ್ಮ]], ಮತ್ತು ಇತರ ಸಣ್ಣ ಧರ್ಮಗಳು ಸೇರಿವೆ.<ref name="ReferenceA">ಪುಟಗಳು 396, ''ಮಲಯಾಳ ಮನೋರಮ ವರ್ಷಪುಸ್ತಕ 2006'', ಕೊಟ್ಟಯಂ, 2006 ISSN 0970-9096</ref> ಮಲಪ್ಪುರಂ [[ದಕ್ಷಿಣ ಭಾರತ]]ದಲ್ಲಿ ಮುಸ್ಲಿಂ ಬಹುಸಂಖ್ಯಾತ ಎರಡು ಜಿಲ್ಲೆಗಳಲ್ಲಿ ಒಂದಾಗಿದೆ, ಇನ್ನೊಂದು [[ಲಕ್ಷದ್ವೀಪ|ಲಕ್ಷದ್ವೀಪ ಜಿಲ್ಲೆ]]. ಜಿಲ್ಲೆಯ ಹೆಚ್ಚಿನ ಕ್ರೈಸ್ತರು 20 ನೇ ಶತಮಾನದಲ್ಲಿ ([[ಮಲಬಾರ್ ವಲಸೆ]]) [[ಉತ್ತರ ವಿಭಾಗ (ತಿರುವಾಂಕೂರು)|ಉತ್ತರ ತಿರುವಾಂಕೂರು]] ನಿಂದ [[ಮಲಬಾರ್ ಜಿಲ್ಲೆ|ಮಲಬಾರ್]] ಗೆ ವಲಸೆ ಬಂದ [[ಸಂತ ಥಾಮಸ್ ಕ್ರೈಸ್ತರು]]ನ ವಂಶಸ್ಥರಾಗಿದ್ದಾರೆ.<ref>{{Cite news|title=ಮಲಬಾರ್ ವಲಸೆ: ಕನಸು ಕೊನೆಗೊಳ್ಳುತ್ತಿದೆಯೇ?|url=https://www.thehindu.com/news/national/kerala/malabar-migration-end-of-a-dream/article30497658.ece|last=ಜೋಸೆಫ್|first=ಮಿಥೋಷ್|date=7 January 2020|access-date=31 October 2020|work=The Hindu|archive-date=10 January 2020|archive-url=https://web.archive.org/web/20200110022037/https://www.thehindu.com/news/national/kerala/malabar-migration-end-of-a-dream/article30497658.ece|url-status=live}}</ref> ಜಿಲ್ಲೆಯಲ್ಲಿನ ಮಲಂಕರ ಆರ್ಥೊಡಾಕ್ಸ್ ಕ್ರೈಸ್ತರನ್ನು [[ಮಲಬಾರ್ ಧರ್ಮಪ್ರಾಂತ್ಯ (ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್)|ಮಲಬಾರ್ ಧರ್ಮಪ್ರಾಂತ್ಯ]] ಪ್ರತಿನಿಧಿಸುತ್ತದೆ, ಇದು ಪ್ರಸ್ತುತ 85 ಪ್ಯಾರಿಷ್ಗಳನ್ನು ಒಳಗೊಂಡಿದೆ. ಮಲಪ್ಪುರಂನಲ್ಲಿನ ಮಲಂಕರ ಆರ್ಥೊಡಾಕ್ಸ್ ಚರ್ಚ್ನ ಅತಿದೊಡ್ಡ ಪ್ಯಾರಿಷ್ [[ಸಂತ ಜಾರ್ಜ್ ಆರ್ಥೊಡಾಕ್ಸ್ ಚರ್ಚ್, ಚುಂಗತರ|ಚುಂಗತರದಲ್ಲಿನ ಸಂತ ಜಾರ್ಜ್ ಆರ್ಥೊಡಾಕ್ಸ್ ಚರ್ಚ್]] ಆಗಿದೆ, ಇದು ವಾರ್ಷಿಕವಾಗಿ ಸಾವಿರಾರು ಮಲಂಕರ ಆರ್ಥೊಡಾಕ್ಸ್ ಕ್ರೈಸ್ತರು ಭಾಗವಹಿಸುವ ಮಲಬಾರ್ನ ಅತಿದೊಡ್ಡ ವಾರ್ಷಿಕ ಆರ್ಥೊಡಾಕ್ಸ್ ಕ್ರೈಸ್ತ ಸಮ್ಮೇಳನದ ಸ್ಥಳವಾಗಿದೆ.
{| class="wikitable sortable"
|+ ಮಲಪ್ಪುರಂ ಜಿಲ್ಲೆಯಲ್ಲಿ ತಾಲೂಕು-ವಾರು ಧರ್ಮ ವಿತರಣೆ (%) (2011 ಜನಗಣತಿ)
|-
! ತಾಲೂಕು !! ಮುಸ್ಲಿಮರು (%) !! ಹಿಂದೂಗಳು (%) !! ಕ್ರೈಸ್ತರು (%) !! ಇತರೆ (%)
|-
| ಇರನಾಡ್ || style="background:#43A047; color:white;" | 72.3 || 26.2 || 1.3 || 0.2
|-
| ಕೊಂಡೊಟ್ಟಿ || style="background:#43A047; color:white;" | 75.9 || 21.7 || 2.4 || 0.0
|-
| ನಿಲಂಬೂರ್ || style="background:#43A047; color:white;" | 57.9 || 33.5 || 8.5 || 0.1
|-
| ಪೆರಿಂತಲ್ಮನ್ನ || style="background:#43A047; color:white;" | 71.1 || 26.9 || 1.8 || 0.2
|-
| ತಿರೂರ್ || style="background:#43A047; color:white;" | 75.5 || 23.8 || 0.5 || 0.2
|-
| ತಿರೂರಂಗಡಿ || style="background:#43A047; color:white;" | 75.5 || 23.9 || 0.5 || 0.1
|-
| ಪೊನ್ನಾನಿ || style="background:#43A047; color:white;" | 59.9 || 39.4 || 0.4 || 0.3
|}
=== ಭಾಷೆಗಳು ===
ಜಿಲ್ಲೆಯಲ್ಲಿ ಬಳಸಲಾಗುವ ಪ್ರಮುಖ ಭಾಷೆಯು [[ಮಲಯಾಳಂ]]. [[ಅರಬಿ ಮಲಯಾಳಂ ಲಿಪಿ]], ''ಪೊನ್ನಾನಿ ಲಿಪಿ'' ಎಂದೂ ಕರೆಯಲ್ಪಡುತ್ತದೆ, ಇದನ್ನು ಕಳೆದ ಶತಮಾನಗಳಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಅಲ್ಪಸಂಖ್ಯಾತ ದ್ರಾವಿಡ ಭಾಷೆಗಳು [[ಅಲ್ಲರ್ ಭಾಷೆ|ಅಲ್ಲರ್]] (ಸುಮಾರು 350 ಮಾತನಾಡುವವರು)<ref name='ethnoallar'>{{cite encyclopedia | editor = ಎಂ. ಪಾಲ್ ಲೆವಿಸ್ | encyclopedia = ಎಥ್ನೋಲೋಗ್: ವಿಶ್ವದ ಭಾಷೆಗಳು | title = ಅಲ್ಲರ್: ಭಾರತದ ಒಂದು ಭಾಷೆ | url = http://www.ethnologue.com/show_language.asp?code=all | access-date = 28 September 2011 | edition = 16th | year = 2009 | publisher = SIL International | location = ಡಲ್ಲಾಸ್, ಟೆಕ್ಸಾಸ್ | archive-date = 5 August 2011 | archive-url = https://web.archive.org/web/20110805101511/http://www.ethnologue.com/show_language.asp?code=all | url-status = live }}</ref> ಮತ್ತು [[ಅರಣದಾನ್ ಭಾಷೆ|ಅರಣದಾನ್]], (ಸುಮಾರು 200 ಮಾತನಾಡುವವರು).<ref name='ethnoaranadan'>{{cite encyclopedia | editor = ಎಂ. ಪಾಲ್ ಲೆವಿಸ್ | encyclopedia = ಎಥ್ನೋಲೋಗ್: ವಿಶ್ವದ ಭಾಷೆಗಳು | title = ಅರಣದಾನ್: ಭಾರತದ ಒಂದು ಭಾಷೆ | url = http://www.ethnologue.com/show_language.asp?code=aaf | access-date = 28 September 2011 | edition = 16th | year = 2009 | publisher = SIL International | location = ಡಲ್ಲಾಸ್, ಟೆಕ್ಸಾಸ್ | archive-date = 11 November 2011 | archive-url = https://web.archive.org/web/20111111015932/http://www.ethnologue.com/show_language.asp?code=aaf | url-status = live }}</ref> [[ತಮಿಳು ಭಾಷೆ|ತಮಿಳು]] ಅನ್ನು ಜನಸಂಖ್ಯೆಯ ಸಣ್ಣ ಭಾಗವು ಮಾತನಾಡುತ್ತದೆ.
[[ಮಲಯಾಳಂ]] ಪ್ರಬಲ ಭಾಷೆಯಾಗಿದ್ದು, 99.46% ಜನಸಂಖ್ಯೆಯು ಮಾತನಾಡುತ್ತಾರೆ.<ref name="languages">{{Cite web |title=ಕೋಷ್ಟಕ C-16 ಮಾತೃಭಾಷೆಯ ಪ್ರಕಾರ ಜನಸಂಖ್ಯೆ: ಕೇರಳ |url=https://censusindia.gov.in/nada/index.php/catalog/10209/download/13321/DDW-C16-STMT-MDDS-3200.XLSX |website=censusindia.gov.in |publisher=[[ನೋಂದಣಿ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ]]}}</ref>
== ಆರೋಗ್ಯ ರಕ್ಷಣೆ ==
[[File:Kottakkal Arya Vaidya Sala OP Block.jpg|left|thumb|[[ಆರ್ಯ ವೈದ್ಯ ಶಾಲೆ|ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಯ]] ಹೊರ ರೋಗಿ ಬ್ಲಾಕ್]]
[[File:പൊന്നാനി 1z .jpg|thumbnail|ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, [[ಪೊನ್ನಾನಿ]]]]
ಆಧುನಿಕ ವೈದ್ಯಕೀಯ, [[ಆಯುರ್ವೇದ]], ಮತ್ತು [[ಹೋಮಿಯೋಪತಿ]] ಜಿಲ್ಲೆಯಲ್ಲಿ ಲಭ್ಯವಿದೆ. [[ಕೇರಳ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ|ಕೇರಳ ಸರ್ಕಾರ]]ದ ಅಡಿಯಲ್ಲಿ ಅಲೋಪತಿಗಾಗಿ ಸಾಮಾನ್ಯ ಆಸ್ಪತ್ರೆ, 3 ಜಿಲ್ಲಾ ಆಸ್ಪತ್ರೆಗಳು, ಮತ್ತು 6 ತಾಲೂಕು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. 2013 ರಲ್ಲಿ ಸ್ಥಾಪಿಸಲಾದ [[ಸರ್ಕಾರಿ ವೈದ್ಯಕೀಯ ಕಾಲೇಜು, ಮಂಜೇರಿ]], ಜಿಲ್ಲೆಯ ಪ್ರಮುಖ ವೈದ್ಯಕೀಯ ಕಾಲೇಜಾಗಿದೆ.<ref>{{cite news |title=31 ವರ್ಷಗಳ ನಂತರ ಕೇರಳದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು |url=https://www.thehindu.com/news/national/kerala/a-new-government-medical-college-in-kerala-after-31-years/article5082996.ece |newspaper=The Hindu |date=2 September 2013 |access-date=13 September 2021 |archive-date=30 August 2021 |archive-url=https://web.archive.org/web/20210830004614/https://www.thehindu.com/news/national/kerala/a-new-government-medical-college-in-kerala-after-31-years/article5082996.ece |url-status=live }}</ref> ಜಿಲ್ಲೆಯಲ್ಲಿ [[ತಿರೂರ್]], [[ಪೆರಿಂತಲ್ಮನ್ನ]], ಮತ್ತು [[ನಿಲಂಬೂರ್]]ಗಳಲ್ಲಿ ಮೂರು ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಿವೆ.<ref name="Malappuram-Public Hospitals – sha">{{Cite web |title=ಮಲಪ್ಪುರಂ-ಸಾರ್ವಜನಿಕ ಆಸ್ಪತ್ರೆಗಳು – sha |url=https://sha.kerala.gov.in/?page_id=530&lang=en |access-date=2025-12-28 |website=sha.kerala.gov.in}}</ref> ಜಿಲ್ಲೆಯಲ್ಲಿ [[ಮಲಪ್ಪುರಂ]], [[ಕೊಂಡೊಟ್ಟಿ]], [[ವಾಂಡೂರ್, ಕೇರಳ|ವಾಂಡೂರ್]], [[ಅರೀಕೋಡ್]], [[ಪೊನ್ನಾನಿ]], ಮತ್ತು [[ತಿರೂರಂಗಡಿ]]ಗಳಲ್ಲಿ ಆರು ಸರ್ಕಾರಿ ತಾಲೂಕು ಆಸ್ಪತ್ರೆಗಳಿವೆ, ಜೊತೆಗೆ [[ಪೊನ್ನಾನಿ]]ಯಲ್ಲಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು [[ಎಡವನ್ನ]]ದಲ್ಲಿ ಸೀತಿಹಾಜಿ ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸಾ ಕೇಂದ್ರವಿದೆ.<ref name="Malappuram-Public Hospitals – sha"/>
ಸ್ಥಳೀಯ ಆರೋಗ್ಯ ಕೇಂದ್ರಗಳ ಜಾಲವು ಸಾರ್ವಜನಿಕ ವಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 66 [[ಪ್ರಾಥಮಿಕ ಆರೋಗ್ಯ ಕೇಂದ್ರ (ಭಾರತ)|ಪ್ರಾಥಮಿಕ ಆರೋಗ್ಯ ಕೇಂದ್ರಗಳು]], 20 ಸರ್ವಕಾಲಿಕ ಕಾರ್ಯನಿರ್ವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 20 [[ಸಮುದಾಯ ಆರೋಗ್ಯ ಕೇಂದ್ರ]]ಗಳು, ಮತ್ತು 2 TBC ಗಳನ್ನು ಒಳಗೊಂಡಿದೆ. 5 ಪ್ರಮುಖ ಸಾರ್ವಜನಿಕ ಆರೋಗ್ಯ ಕೇಂದ್ರಗಳು, 77 ಮಿನಿ ಸಾರ್ವಜನಿಕ ಆರೋಗ್ಯ ಕೇಂದ್ರಗಳು, ಮತ್ತು 565 ಉಪ-ಕೇಂದ್ರಗಳಿವೆ. 3 ಕುಷ್ಠರೋಗ ನಿಯಂತ್ರಣ ಘಟಕಗಳು, 2 ಫೈಲೇರಿಯಾ ನಿಯಂತ್ರಣ ಘಟಕಗಳು, ಇತ್ಯಾದಿಗಳು ಸಾರ್ವಜನಿಕ ವಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಸರ್ಕಾರಿ ಆಸ್ಪತ್ರೆಗಳ ಒಟ್ಟು ಹಾಸಿಗೆ ಸಾಮರ್ಥ್ಯವು 1500 ಆಗಿದೆ. ಅಲೋಪತಿ ಅಡಿಯಲ್ಲಿ ಸೂಪರ್-ಸ್ಪೆಷಾಲಿಟಿ ಘಟಕಗಳನ್ನು ಹೊಂದಿರುವ ಅನೇಕ ಖಾಸಗಿ ಆಸ್ಪತ್ರೆಗಳು ಸಹ ಜಿಲ್ಲೆಯಲ್ಲಿವೆ.<ref>{{cite web |url = http://www.ecostat.kerala.gov.in/index.php/health-state-mlp |website = ecostat.kerala.gov.in |title = ಮಲಪ್ಪುರಂನಲ್ಲಿ ಆರೋಗ್ಯ ರಕ್ಷಣೆ |access-date = 20 June 2020 |archive-date = 28 December 2019 |archive-url = https://web.archive.org/web/20191228215258/http://www.ecostat.kerala.gov.in/index.php/health-state-mlp |url-status = live }}</ref><ref name="Malappuramhealthcare">{{cite web |url = https://malappuram.nic.in/health/ |website = malappuram.nic.in |title = ಮಲಪ್ಪುರಂನಲ್ಲಿ ಆರೋಗ್ಯ ರಕ್ಷಣೆ |access-date = 20 June 2020 |archive-date = 27 September 2020 |archive-url = https://web.archive.org/web/20200927083348/https://malappuram.nic.in/health/ |url-status = live }}</ref>
ಮಲಪ್ಪುರಂ ಜಿಲ್ಲೆಯು ಪೆರಿಂತಲ್ಮನ್ನ ಬಳಿಯ ಪುಲಾಮಂತೋಲೆಯಲ್ಲಿನ ಅಷ್ಟವೈದ್ಯ ವೈದ್ಯರ ಪುಲಾಮಂತೋಲೆ ಮೂಸ್ ವಂಶದ ಮೂಲಕ ಸಾಂಪ್ರದಾಯಿಕ ಆಯುರ್ವೇದ ಅಭ್ಯಾಸದ ಉಪಸ್ಥಿತಿಯನ್ನು ಹೊಂದಿದೆ.<ref>{{cite web |url=https://www.pulamantholemoosshospital.com |title=ಅಷ್ಟವೈದ್ಯನ್ ಪುಲಾಮಂತೋಲೆ ಮೂಸ್ ಆಯುರ್ವೇದ ಆಸ್ಪತ್ರೆ |website=pulamantholemoosshospital.com |access-date=13 May 2026}}</ref>
ಕೊಟ್ಟಕ್ಕಲ್ ಬಳಿಯ [[ಪೊಟ್ಟಿಪ್ಪರ]]ದಲ್ಲಿನ ಸರ್ಕಾರಿ ಆಯುರ್ವೇದ ಸಂಶೋಧನಾ ಸಂಸ್ಥೆ (ಮಾನಸಿಕ ರೋಗಗಳಿಗೆ) [[ಕೇರಳ]]ದ ಏಕೈಕ ಸರ್ಕಾರಿ ಆಯುರ್ವೇದ ಮಾನಸಿಕ ಆಸ್ಪತ್ರೆಯಾಗಿದೆ. ಇದು ದೇಶದ ಸಾರ್ವಜನಿಕ ವಲಯದ ಅಡಿಯಲ್ಲಿ ತನ್ನ ಪ್ರಕಾರದ ಮೊದಲನೆಯದು. ಕೊಟ್ಟಕ್ಕಲ್ ಪ್ರಸಿದ್ಧ ಆಯುರ್ವೇದ ಆರೋಗ್ಯ ಕೇಂದ್ರವಾದ [[ಆರ್ಯ ವೈದ್ಯ ಶಾಲೆ]]ಗೂ ನೆಲೆಯಾಗಿದೆ. ಸರ್ಕಾರಿ ವಲಯದ ಅಡಿಯಲ್ಲಿ, [[ಎದರಿಕೋಡ್]]ನಲ್ಲಿ ಜಿಲ್ಲಾ ಆಯುರ್ವೇದ ಆಸ್ಪತ್ರೆಯು ಕಾರ್ಯನಿರ್ವಹಿಸುತ್ತದೆ. ಮಂಜೇರಿ, [[ತಲಪ್ಪರ|ವೆಲಿಮುಕ್ಕು]], ಪೆರಿಂತಲ್ಮನ್ನ, ಮಲಪ್ಪುರಂ, [[ವೆಂಗರ, ಮಲಪ್ಪುರಂ ಜಿಲ್ಲೆ|ವೆಂಗರ]], [[ಕಲ್ಪಕಾಂಚೇರಿ]], [[ತಿರುವಾಳಿ]], ಮತ್ತು [[ಚೆಲೆಂಬ್ರ]]ಗಳಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳು ಸಹ ಕಾರ್ಯನಿರ್ವಹಿಸುತ್ತವೆ. ಸಾರ್ವಜನಿಕ ವಲಯದ ಅಡಿಯಲ್ಲಿ ಹೋಮಿಯೋಪತಿ ಆಸ್ಪತ್ರೆಗಳು [[ಮಲಪ್ಪುರಂ]], [[ಮಂಜೇರಿ]], [[ವಾಂಡೂರ್]], ಮತ್ತು [[ಕುಟ್ಟಿಪುರಂ]]ಗಳಲ್ಲಿ ಕಾರ್ಯನಿರ್ವಹಿಸುತ್ತವೆ.<ref name ="Malappuramhealthcare" /><ref>{{cite web |url=http://homoeopathy.kerala.gov.in/2018/04/28/malappuram-01/#1525080050368-2f4492de-835c |website=homoeopathy.kerala.gov.in |title=ಮಲಪ್ಪುರಂನಲ್ಲಿ ಹೋಮಿಯೋಪತಿ |access-date=13 July 2020 |archive-date=13 July 2020 |archive-url=https://web.archive.org/web/20200713100512/http://homoeopathy.kerala.gov.in/2018/04/28/malappuram-01/#1525080050368-2f4492de-835c |url-status=live }}</ref> ಅನೇಕ ಆಸ್ಪತ್ರೆಗಳು ಖಾಸಗಿ ವಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.
2003 ರಂತೆ, ಮಲಪ್ಪುರಂ [[ಕೇರಳದ ಜಿಲ್ಲೆಗಳ ಪಟ್ಟಿ|ಕೇರಳದ ಜಿಲ್ಲೆಗಳಲ್ಲಿ]] (13.3) [[ದೇಶಗಳ ಪ್ರಕಾರ ಆತ್ಮಹತ್ಯಾ ಪ್ರಮಾಣ ಪಟ್ಟಿ|ಕಡಿಮೆ ಆತ್ಮಹತ್ಯಾ ಪ್ರಮಾಣವನ್ನು]] ಹೊಂದಿದೆ, ಇದು ರಾಜ್ಯದ ಸರಾಸರಿಗಿಂತ (32.8) ತುಂಬಾ ಕಡಿಮೆಯಾಗಿದೆ.<ref name="unhdi-gdl"/>
== ಶಿಕ್ಷಣ ==
{{Main|ಮಲಪ್ಪುರಂನಲ್ಲಿ ಶಿಕ್ಷಣ}}
{{See also|ಪೆರಿಂತಲ್ಮನ್ನದಲ್ಲಿ ಶಿಕ್ಷಣ}}
[[File:MESCE Kuttippuram.jpg|thumbnail|MESCE ಕುಟ್ಟಿಪುರಂ, ಕೇರಳದ ಮೊದಲ ಸ್ವ-ಹಣಕಾಸು ಎಂಜಿನಿಯರಿಂಗ್ ಕಾಲೇಜು]]
[[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆ]] 14 ಮತ್ತು 16 ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದಿತು. ಖಗೋಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಕೇರಳ ಶಾಲೆಯು ಸ್ವತಂತ್ರವಾಗಿ ಹಲವಾರು ಪ್ರಮುಖ ಗಣಿತ ಪರಿಕಲ್ಪನೆಗಳನ್ನು ಸೃಷ್ಟಿಸಿತು, ಇದರಲ್ಲಿ ತ್ರಿಕೋನಮಿತಿಯ ಕಾರ್ಯಗಳಿಗಾಗಿ [[ಶ್ರೇಣಿ ವಿಸ್ತರಣೆ]] ಸೇರಿದೆ.<ref name="roy" /><ref name="Pingree 1992 554–563"/> ಕೇರಳದ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆಯು [[ತಾನೂರು ಸಾಮ್ರಾಜ್ಯ|''ವೆಟ್ಟತ್ತುನಾಡು'']] ([[ತಿರೂರ್ ತಾಲೂಕು|ತಿರೂರ್ ಪ್ರದೇಶ]]) ದಲ್ಲಿತ್ತು.<ref name="roy"/>
2019–20 ರ ಶಾಲಾ ಅಂಕಿಅಂಶಗಳ ಪ್ರಕಾರ ಜಿಲ್ಲೆಯು ಕೇರಳದಲ್ಲಿ ಅತಿ ಹೆಚ್ಚು ಶಾಲೆಗಳನ್ನು ಹೊಂದಿದೆ. ಜಿಲ್ಲೆಯಲ್ಲಿ 898 ಕೆಳಗಿನ ಪ್ರಾಥಮಿಕ ಶಾಲೆಗಳು,<ref>{{cite web |url=https://sametham.kite.kerala.gov.in/publicView/districtwise/LP |website=sametham.kite.kerala.gov.in |title=ಮಲಪ್ಪುರಂನಲ್ಲಿ LP ಶಾಲೆಗಳು |access-date=17 April 2020 |archive-date=7 August 2020 |archive-url=https://web.archive.org/web/20200807045715/https://sametham.kite.kerala.gov.in/publicView/districtwise/LP |url-status=live }}</ref> 363 ಮೇಲಿನ ಪ್ರಾಥಮಿಕ ಶಾಲೆಗಳು,<ref>{{cite web |url=https://sametham.kite.kerala.gov.in/publicView/districtwise/UP |website=sametham.kite.kerala.gov.in |title=ಮಲಪ್ಪುರಂನಲ್ಲಿ UP ಶಾಲೆಗಳು |access-date=17 April 2020 |archive-date=27 September 2020 |archive-url=https://web.archive.org/web/20200927204905/https://sametham.kite.kerala.gov.in/publicView/districtwise/UP |url-status=live }}</ref> 355 ಪ್ರೌಢಶಾಲೆಗಳು,<ref>{{cite web |url=https://sametham.kite.kerala.gov.in/publicView/districtwise/HS |website=sametham.kite.kerala.gov.in |title=ಮಲಪ್ಪುರಂನಲ್ಲಿ ಪ್ರೌಢಶಾಲೆಗಳು |access-date=17 April 2020 |archive-date=4 August 2020 |archive-url=https://web.archive.org/web/20200804173003/https://sametham.kite.kerala.gov.in/publicView/districtwise/HS |url-status=live }}</ref> 248 ಉನ್ನತ ಮಾಧ್ಯಮಿಕ ಶಾಲೆಗಳು,<ref>{{cite web |url=https://sametham.kite.kerala.gov.in/publicView/schoolconsolidationhse |website=sametham.kite.kerala.gov.in |title=ಮಲಪ್ಪುರಂನಲ್ಲಿ HSE ಶಾಲೆಗಳು |access-date=17 April 2020 |archive-date=4 August 2020 |archive-url=https://web.archive.org/web/20200804174020/https://sametham.kite.kerala.gov.in/publicView/schoolconsolidationhse |url-status=live }}</ref> ಮತ್ತು 27 ವೃತ್ತಿ ಉನ್ನತ ಮಾಧ್ಯಮಿಕ ಶಾಲೆಗಳಿವೆ.<ref>{{cite web |url=https://sametham.kite.kerala.gov.in/publicView/schoolconsolidationvhse |website=sametham.kite.kerala.gov.in |title=ಮಲಪ್ಪುರಂನಲ್ಲಿ VHSE ಶಾಲೆಗಳು |access-date=17 April 2020 |archive-date=21 September 2020 |archive-url=https://web.archive.org/web/20200921171308/https://sametham.kite.kerala.gov.in/publicView/schoolconsolidationvhse |url-status=live }}</ref> ಆದ್ದರಿಂದ ಜಿಲ್ಲೆಯಲ್ಲಿ 1620 ಶಾಲೆಗಳಿವೆ.<ref>{{cite web |url=https://sametham.kite.kerala.gov.in/search/districtWiseSchools/10 |website=sametham.kite.kerala.gov.in |title=ಮಲಪ್ಪುರಂನಲ್ಲಿ ಶಾಲೆಗಳು |access-date=17 April 2020 |archive-date=4 August 2020 |archive-url=https://web.archive.org/web/20200804172322/https://sametham.kite.kerala.gov.in/search/districtWiseSchools/10 |url-status=live }}</ref> ಇವುಗಳ ಜೊತೆಗೆ, 120 [[ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ|CBSE]] ಶಾಲೆಗಳು ಮತ್ತು 3 [[ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ|ICSE]] ಶಾಲೆಗಳಿವೆ.
[[ಕೇರಳ ಸರ್ಕಾರ]]ದಿಂದ ಮಾನ್ಯತೆ ಪಡೆದ 554 ಸರ್ಕಾರಿ ಶಾಲೆಗಳು, 810 ಸಹಾಯಿತ ಶಾಲೆಗಳು, ಮತ್ತು 1 ಸಹಾಯರಹಿತ ಶಾಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.<ref>{{cite web |url=https://sametham.kite.kerala.gov.in/hitech/hitech_reports/advanced_search |website=sametham.kite.kerala.gov.in |title=ಮಲಪ್ಪುರಂನಲ್ಲಿ ಹೈ-ಟೆಕ್ ಶಾಲೆಗಳು |access-date=17 April 2020 |archive-date=2 June 2021 |archive-url=https://web.archive.org/web/20210602221916/https://sametham.kite.kerala.gov.in/hitech/hitech_reports/advanced_search |url-status=live }}</ref> 2019–20 ಶೈಕ್ಷಣಿಕ ವರ್ಷದಲ್ಲಿ, ಕೇರಳ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಓದುತ್ತಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 739,966 – 407,690 ಸಹಾಯಿತ ಶಾಲೆಗಳಲ್ಲಿ, 245,445 ಸರ್ಕಾರಿ ಶಾಲೆಗಳಲ್ಲಿ, ಮತ್ತು 86,831 ಮಾನ್ಯತೆ ಪಡೆದ ಸಹಾಯರಹಿತ ಶಾಲೆಗಳಲ್ಲಿ.<ref>{{cite web|url= https://sametham.kite.kerala.gov.in/welcome/sixthWorkingdayD2019|website= sametham.kite.kerala.gov.in|title= ಮಲಪ್ಪುರಂನಲ್ಲಿ ಶಾಲೆಗಳ ಸಾಮರ್ಥ್ಯ|access-date= 17 April 2020|archive-date= 6 December 2019|archive-url= https://web.archive.org/web/20191206045049/https://sametham.kite.kerala.gov.in/welcome/sixthWorkingdayD2019|url-status= live}}</ref>
ಜಿಲ್ಲೆಯು ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ರಾಜ್ಯದ ಎರಡು ಪ್ರಮುಖ ವಿಶ್ವವಿದ್ಯಾಲಯಗಳಿಗೆ ನೆಲೆಯಾಗಿದೆ - 1968 ರಲ್ಲಿ ಕೇರಳದ ಎರಡನೇ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲಾದ [[ತೆನಿಪಾಲಂ]] ಕೇಂದ್ರೀಕೃತ [[ಕಾಲಿಕಟ್ ವಿಶ್ವವಿದ್ಯಾಲಯ]],<ref>{{cite web |url=https://www.uoc.ac.in/ |website=uoc.ac.in |title=ಕಾಲಿಕಟ್ ವಿಶ್ವವಿದ್ಯಾಲಯ |access-date=28 November 2019 |archive-date=5 March 2020 |archive-url=https://web.archive.org/web/20200305235858/https://uoc.ac.in/ |url-status=live }}</ref> ಮತ್ತು 2012 ರಲ್ಲಿ ಸ್ಥಾಪಿಸಲಾದ [[ತಿರೂರ್ ಪುರಸಭೆ|ತಿರೂರ್]] ಕೇಂದ್ರೀಕೃತ [[ತುಂಚತ್ತ್ ಎಝುತ್ತಚನ್ ಮಲಯಾಳಂ ವಿಶ್ವವಿದ್ಯಾಲಯ]].<ref>{{cite web |url=http://malayalamuniversity.edu.in/en/ |website=malayalamuniversity.edu.in |title=ಮಲಯಾಳಂ ವಿಶ್ವವಿದ್ಯಾಲಯ |access-date=28 November 2019 |archive-date=11 December 2019 |archive-url=https://web.archive.org/web/20191211184029/http://malayalamuniversity.edu.in/en/ |url-status=live }}</ref> [[ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯ]] (AMU) ನ ಮೂರು ಆಫ್-ಕ್ಯಾಂಪಸ್ ಕೇಂದ್ರಗಳಲ್ಲಿ ಒಂದಾದ [[AMU ಮಲಪ್ಪುರಂ ಕ್ಯಾಂಪಸ್|AMU ಮಲಪ್ಪುರಂ]] [[ಚೆರುಕರ]]ದಲ್ಲಿದೆ, ಇದನ್ನು 2010 ರಲ್ಲಿ ಸ್ಥಾಪಿಸಲಾಯಿತು.<ref>{{cite web |url= https://www.amu.ac.in/malappuram/ |website= amu.ac.in |title= ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯ ಮಲಪ್ಪುರಂ ಆಫ್-ಸೆಂಟರ್ |access-date= 28 November 2019 |archive-date= 25 July 2019 |archive-url= https://web.archive.org/web/20190725192823/https://www.amu.ac.in/malappuram/ |url-status= live }}</ref><ref>{{cite web |title=ಮಲಪ್ಪುರಂ ಜಿಲ್ಲೆಯ ವಿಶ್ವವಿದ್ಯಾಲಯಗಳು |url=https://www.malappuramtourism.org/institutions.php |website=malappuramtourism.org |access-date=13 September 2021 |archive-date=5 March 2020 |archive-url=https://web.archive.org/web/20200305125423/https://www.malappuramtourism.org/institutions.php |url-status=live }}</ref> [[ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ]]ದ ಆಫ್-ಕ್ಯಾಂಪಸ್ [[ಪನಕ್ಕಡ್]]ನಲ್ಲಿ ಕಾರ್ಯನಿರ್ವಹಿಸುತ್ತದೆ.<ref>{{cite web |url=https://timesofindia.indiatimes.com/city/kozhikode/Eflu-to-start-courses-in-Malappuram-campus-on-January-31/articleshow/28958910.cms |website=The Times of India |title=ಜನವರಿ-31 ರಂದು ಮಲಪ್ಪುರಂ ಕ್ಯಾಂಪಸ್ನಲ್ಲಿ Eflu ಕೋರ್ಸ್ಗಳನ್ನು ಪ್ರಾರಂಭಿಸಲಿದೆ |date=17 January 2014 |access-date=24 June 2020 |archive-date=9 August 2020 |archive-url=https://web.archive.org/web/20200809211656/https://timesofindia.indiatimes.com/city/kozhikode/Eflu-to-start-courses-in-Malappuram-campus-on-January-31/articleshow/28958910.cms |url-status=live }}</ref> ಜಿಲ್ಲೆಯು [[ತವನೂರ್]]ನಲ್ಲಿ [[ಕೇರಳ ಕೃಷಿ ವಿಶ್ವವಿದ್ಯಾಲಯ]]ದ ಉಪ-ಕೇಂದ್ರವನ್ನು ಮತ್ತು [[ತಿರುನವಾಯ]]ದಲ್ಲಿ [[ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ]]ದ ಉಪ-ಕೇಂದ್ರವನ್ನು ಸಹ ಹೊಂದಿದೆ. [[ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯ]]ದ ಪ್ರಧಾನ ಕಚೇರಿಯು [[ತಿರೂರಂಗಡಿ]]ಯ [[ಚೆಮ್ಮಡ್]] ನಲ್ಲಿದೆ. INKEL ಗ್ರೀನ್ಸ್ ಮಲಪ್ಪುರಂನಲ್ಲಿ ಕೈಗಾರಿಕಾ ವಲಯದೊಂದಿಗೆ ಶೈಕ್ಷಣಿಕ ವಲಯವನ್ನು ಒದಗಿಸುತ್ತದೆ.<ref>{{Cite news|title=Inkel ಗ್ರೀನ್ಸ್ ಮಲಪ್ಪುರಂಗೆ ಕಂಪನಿಗಳನ್ನು ಆಕರ್ಷಿಸುತ್ತದೆ|url=https://www.thehindubusinessline.com/news/national/inkel-greens-beckons-firms-to-malappuram/article8784293.ece|date=28 June 2016|access-date=6 October 2020|work=The Hindu Businessline|archive-date=13 September 2021|archive-url=https://web.archive.org/web/20210913065710/https://www.thehindubusinessline.com/news/national/inkel-greens-beckons-firms-to-malappuram/article8784293.ece|url-status=live}}</ref> [[ಮಂಜೇರಿ]]ಯಲ್ಲಿನ ಇರನಾಡ್ ನಾಲೆಡ್ಜ್ ಸಿಟಿ ರಾಜ್ಯದಲ್ಲಿ ಮೊದಲ ರೀತಿಯ ಯೋಜನೆಯಾಗಿದೆ.<ref>{{Cite web|url=http://www.ekc.edu.in/about|title=ಇರನಾಡ್ ನಾಲೆಡ್ಜ್ ಸಿಟಿ|access-date=4 November 2020|website=eku.edu.in|archive-date=4 June 2020|archive-url=https://web.archive.org/web/20200604171424/http://www.ekc.edu.in/about|url-status=live}}</ref> ಅಲ್ಲದೆ, ಮಲಪ್ಪುರಂ ಭಾರತದ ಮೊದಲ ಇ-ಸಾಕ್ಷರ ಜಿಲ್ಲೆಯಾಗಿದೆ.<ref>ಪಾಸ್ಟ್, ಪ್ರೆಸೆಂಟ್ ಅಂಡ್ ಫ್ಯೂಚರ್ ಆಫ್ ರಿಸರ್ಚ್ ಇನ್ ದಿ ಇನ್ಫರ್ಮೇಷನ್ ಸೊಸೈಟಿ ಬೈ ವೆಸ್ಲಿ ಶ್ರಮ್ ಪು.233</ref>
== ಸಂಸ್ಕೃತಿ ==
[[File:Thunchan Smarakam1.jpg|thumb|[[ತುಂಚತ್ತ್ ಎಝುತ್ತಚನ್]] ಸ್ಮರಣಾರ್ಥವಾಗಿ [[ತಿರೂರ್]]ನಲ್ಲಿನ ''ತುಂಚನ್ ಸ್ಮಾರಕಂ'']]
[[File:Vaidyar.JPG|left|thumb|[[ಕೊಂಡೊಟ್ಟಿ]]ಯಲ್ಲಿನ [[ಮಹಾ ಕವಿ ಮೊಯಿನ್ಕುಟ್ಟಿ ವೈದ್ಯರ್ ಸ್ಮಾರಕ]]]]
ಪ್ರಸ್ತುತ ಅಳವಡಿಸಿಕೊಂಡ ಮಲಯಾಳಂ ವರ್ಣಮಾಲೆಯನ್ನು ಮೊದಲು [[ತುಂಚತ್ತ್ ಎಝುತ್ತಚನ್]] ಅವರು ಸ್ವೀಕರಿಸಿದರು, ಅವರು [[ತಿರೂರ್]] ನಲ್ಲಿ ಜನಿಸಿದರು ಮತ್ತು ಆಧುನಿಕ ಮಲಯಾಳಂ ಭಾಷೆಯ ಪಿತಾಮಹ ಎಂದು ಕರೆಯಲ್ಪಡುತ್ತಾರೆ.<ref name="mal"/> ತಿರೂರ್ ಮಲಯಾಳಂ ಸಂಶೋಧನಾ ಕೇಂದ್ರದ ಪ್ರಧಾನ ಕಚೇರಿಯಾಗಿದೆ. ಅತ್ಯಂತ ಪ್ರಸಿದ್ಧ [[ಮಾಪ್ಪಿಳ್ಳ ಪಾಟ್ಟು]] ಕವಿ [[ಮೊಯಿನ್ಕುಟ್ಟಿ ವೈದ್ಯರ್]] [[ಕೊಂಡೊಟ್ಟಿ]]ಯಲ್ಲಿ ಜನಿಸಿದರು. ಅವರನ್ನು ಮಾಪ್ಪಿಳ್ಳ ಹಾಡುಗಳ ''ಮಹಾಕವಿ'' (ಮಹಾನ್ ಕವಿ ಎಂಬ ಬಿರುದು) ಎಂದು ಪರಿಗಣಿಸಲಾಗುತ್ತದೆ.<ref name="mal"/>
[[ತುಂಚತ್ತ್ ಎಝುತ್ತಚನ್]] ಮತ್ತು [[ಮೊಯಿನ್ಕುಟ್ಟಿ ವೈದ್ಯರ್]] ಅವರ ಜೊತೆಗೆ, [[ಅಚ್ಯುತ ಪಿಷಾರಡಿ]], ಅಲಂಕೋಡ್ ಲೀಲಾಕೃಷ್ಣನ್, [[ಎಡಸ್ಸೇರಿ ಗೋವಿಂದನ್ ನಾಯರ್]], [[ಕೆ. ಪಿ. ರಾಮನುಣ್ಣಿ]], [[ಕುಟ್ಟಿಕೃಷ್ಣ ಮಾರಾರ್]], ಕುಟ್ಟಿಪುರಂ ಕೇಸವನ್ ನಾಯರ್, [[ಮೇಲ್ಪತ್ತೂರ್ ನಾರಾಯಣ ಭಟ್ಟಾತಿರಿ]], ಎನ್. ದಾಮೋದರನ್, [[ನಂದನಾರ್ (ಲೇಖಕ)|ನಂದನಾರ್]], [[ಪೂಂತಾನಂ ನಂಬೂದಿರಿ]], [[ಪುಳಿಕ್ಕೋಟ್ಟಿಲ್ ಹೈದರ್]], [[ಊರೂಬ್]], [[ವಿ. ಸಿ. ಬಾಲಕೃಷ್ಣ ಪಾಣಿಕರ್]], ವಲ್ಲತ್ತೋಲ್ ಗೋಪಾಲ ಮೇನನ್, ಮತ್ತು [[ವಲ್ಲತ್ತೋಲ್ ನಾರಾಯಣ ಮೇನನ್]] ಸೇರಿದಂತೆ [[ಮಲಯಾಳಂ]]ನ ಪ್ರಸಿದ್ಧ ಬರಹಗಾರರು ಜಿಲ್ಲೆಯ ಮೂಲವಾಸಿಗಳಾಗಿದ್ದರು.<ref name="mal"/> [[ಎಂ. ಗೋವಿಂದನ್]], [[ಎಂ. ಟಿ. ವಾಸುದೇವನ್ ನಾಯರ್]], ಮತ್ತು [[ಅಕ್ಕಿತಂ ಅಚ್ಯುತನ್ ನಂಬೂದಿರಿ]] ಅವರು [[ಪೊನ್ನಾನಿ]]ಯಲ್ಲಿನ ''ಪೊನ್ನಾನಿ ಕಲಾರಿ''ಯಿಂದ ಬಂದ ಬರಹಗಾರರು.<ref name="mal"/> [[ನಾಲಪಾಟ್ ನಾರಾಯಣ ಮೇನನ್]], [[ಬಾಲಮಣಿ ಅಮ್ಮ]], [[ವಿ. ಟಿ. ಭಟ್ಟಾತಿರಿಪಾಡ್]], ಮತ್ತು [[ಕಮಲಾ ಸುರಯ್ಯ]] ಕೂಡ ಹಿಂದಿನ [[ಪೊನ್ನಾನಿ ತಾಲೂಕು]]ಗೆ ಸೇರಿದವರು.
ಜಿಲ್ಲೆಯ ಪುಲಾಮಂತೋಲೆ ಪ್ರದೇಶವು ಐತಿಹಾಸಿಕವಾಗಿ ಕೇರಳದಲ್ಲಿ ಆಯುರ್ವೇದದ ಸಾಂಪ್ರದಾಯಿಕ ಅಭ್ಯಾಸದೊಂದಿಗೆ ಸಂಬಂಧಿಸಿದ ಅಷ್ಟವೈದ್ಯ ವಂಶವಾದ ಪುಲಾಮಂತೋಲೆ ಮೂಸ್ ಕುಟುಂಬದೊಂದಿಗೆ ಸಂಬಂಧ ಹೊಂದಿದೆ.<ref>{{Cite web |url=https://www.keralatourism.org/districts/malappuram/ |title=ಮಲಪ್ಪುರಂನ ಜಿಲ್ಲೆ |website=Kerala Tourism}}</ref>
ಮಲಪ್ಪುರಂ ರಾಜ್ಯದಲ್ಲಿ [[ಮಾಪ್ಪಿಳ್ಳ ಪಾಟ್ಟು|''ಮಾಪ್ಪಿಳ್ಳ ಪಾಟ್ಟು'']] ಸಾಹಿತ್ಯದ ಮುಖ್ಯ ಕೇಂದ್ರವಾಗಿತ್ತು.<ref name="mal"/> ಮೊಯಿನ್ಕುಟ್ಟಿ ವೈದ್ಯರ್ ಮತ್ತು ಪುಳಿಕ್ಕೋಟ್ಟಿಲ್ ಹೈದರ್ ಅವರ ಜೊತೆಗೆ, ಕುಲಂಗರ ವೀಟ್ಟಿಲ್ ಮೊಯ್ದು ಮುಸ್ಲಿಯಾರ್ (ಚಕ್ಕೇರಿ ಶುಜಾಯಿ ಎಂದು ಜನಪ್ರಿಯ), ಚಕ್ಕೇರಿ ಮೊಯ್ದೀನ್ಕುಟ್ಟಿ, ಮಾನಕ್ಕರಕ್ಕತ್ ಕುಂಹಿಕೋಯ, ನಲ್ಲಾಳಂ ಬೀರನ್, ಕೆ. ಕೆ. ಮುಹಮ್ಮದ್ ಅಬ್ದುಲ್ ಕರೀಮ್, ಬಾಲಕೃಷ್ಣನ್ ವಲ್ಲಿಕುಣ್ಣು, ಪುನ್ನಾಯೂರ್ಕುಳಂ ಬಾಪು, [[ವೆಲಿಯಂಕೋಡ್ ಉಮರ್ ಖಾಸಿ]], ಇತ್ಯಾದಿ ಹಲವಾರು ''ಮಾಪ್ಪಿಳ್ಳ ಪಾಟ್ಟು'' ಕವಿಗಳು ಮಲಪ್ಪುರಂ ಅನ್ನು ತಮ್ಮ ಕೆಲಸದ ವೇದಿಕೆಯಾಗಿ ಆಯ್ಕೆ ಮಾಡಿಕೊಂಡರು.<ref name="mal"/>
[[File:Tirur, Kerala.jpg|left|thumbnail|[[ತಿರೂರ್]] ಬಳಿಯ ಹಳ್ಳಿಯ ಪ್ರದೇಶ]]
ಜಿಲ್ಲೆಯು ಕೇರಳದ ಶಾಸ್ತ್ರೀಯ ಕಲಾಪ್ರಕಾರವಾದ [[ಕಥಕ್ಕಳಿ]] ಮತ್ತು [[ಆಯುರ್ವೇದ]]ಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ.<ref name="mal"/> [[ಕೊಟ್ಟಕ್ಕಲ್]]ನಲ್ಲಿ [[ವೈದ್ಯರತ್ನಂ ಪಿ. ಎಸ್. ವಾರಿಯರ್]] ಸ್ಥಾಪಿಸಿದ ''ಕೊಟ್ಟಕ್ಕಲ್ ನಾಟ್ಯ ಸಂಗಂ''ದಿಂದ ಬಂದ ಪ್ರಸಿದ್ಧ ಕಥಕ್ಕಳಿ ಕಲಾವಿದರಲ್ಲಿ [[ಕೊಟ್ಟಕ್ಕಲ್ ಚಂದ್ರಶೇಖರನ್]], [[ಕೊಟ್ಟಕ್ಕಲ್ ಶಿವರಾಮನ್]], ಮತ್ತು [[ಕೊಟ್ಟಕ್ಕಲ್ ಮಧು]] ಸೇರಿದ್ದಾರೆ. ಪ್ರಸ್ತುತ ತಿರೂರಂಗಡಿ, ತಿರೂರ್, ಮತ್ತು ಪೊನ್ನಾನಿ ತಾಲೂಕುಗಳ ಭಾಗಗಳನ್ನು ನಿಯಂತ್ರಿಸುತ್ತಿದ್ದ [[ತಾನೂರು ಸಾಮ್ರಾಜ್ಯ|ವೆಟ್ಟತ್ತುನಾಡು]] ಆಡಳಿತಗಾರರು ಕಲೆ ಮತ್ತು ವಿದ್ಯೆಯ ಪ್ರಸಿದ್ಧ ಪೋಷಕರಾಗಿದ್ದರು. ಒಬ್ಬ ವೆಟ್ಟತ್ತುನಾಡು ರಾಜ (1630–1640 ರಲ್ಲಿ ಆಳ್ವಿಕೆ) [[ಕಥಕ್ಕಳಿ]] ಕಲಾಪ್ರಕಾರದಲ್ಲಿ ನಾವೀನ್ಯತೆಗಳನ್ನು ಪರಿಚಯಿಸಿದನೆಂದು ಹೇಳಲಾಗುತ್ತದೆ, ಇದು "ವೆಟ್ಟತ್ತು ಸಂಪ್ರದಾಯ" ಎಂದು ಕರೆಯಲ್ಪಟ್ಟಿತು.<ref>ಮೇನನ್, ಎ ಶ್ರೀಧರ. ''ಎ ಸರ್ವೆ ಆಫ್ ಕೇರಳ ಹಿಸ್ಟರಿ.'' ಕೊಟ್ಟಯಂ: ಡಿಸಿ ಬುಕ್ಸ್, 2007. ಮುದ್ರಣ</ref> ತುಂಚತ್ತ್ ಎಝುತ್ತಚನ್ ಮತ್ತು ವಲ್ಲತ್ತೋಲ್ ನಾರಾಯಣ ಮೇನನ್ ''ವೆಟ್ಟತ್ತುನಾಡಿನಿಂದ'' ಬಂದವರು. ವಲ್ಲತ್ತೋಲ್ ನಾರಾಯಣ ಮೇನನ್ ಅವರನ್ನು ಚೇರುತುರುತಿಯಲ್ಲಿ [[ಕೇರಳ ಕಲಾಮಂಡಲಂ]] ಸ್ಥಾಪನೆಯ ಮೂಲಕ ಆಧುನಿಕ ಕಾಲದಲ್ಲಿ ''ಕಥಕ್ಕಳಿ''ಯ ಪುನರುತ್ಥಾನಕಾರ ಎಂದೂ ಪರಿಗಣಿಸಲಾಗುತ್ತದೆ.<ref name="mal"/> ಪ್ರಮುಖ ''ಕಥಕ್ಕಳಿ'' ತರಬೇತುದಾರರಾದ [[ವಾಝೆಂಕಡ ಕುಂಚು ನಾಯರ್]], ಮತ್ತು ಅತ್ಯಂತ ಜನಪ್ರಿಯ ''ಕಥಕ್ಕಳಿ'' ಗಾಯಕರಲ್ಲಿ ಸೇರಿದ್ದ [[ಶಂಕರನ್ ಎಂಬ್ರಾಂತಿರಿ]] ಮತ್ತು [[ತಿರೂರ್ ನಂಬಿಸ್ಸಾನ್]] ಕೂಡ ಮಲಪ್ಪುರಂನಿಂದ ಬಂದವರು.<ref name="mal"/> ಆಧುನಿಕ ಕೇರಳದಲ್ಲಿ ''ಮೋಹಿನಿಯಾಟ್ಟಂ'' ಅನ್ನು ಪುನರುತ್ಥಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ [[ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ]] ಜಿಲ್ಲೆಯ [[ತಿರುನವಾಯ]]ದಿಂದ ಬಂದವರು.<ref name="mal"/> ಭಾರತೀಯ ಶಾಸ್ತ್ರೀಯ ನರ್ತಕಿಯಾದ [[ಮೃಣಾಲಿನಿ ಸಾರಾಭಾಯ್]] ಹಿಂದಿನ [[ಪೊನ್ನಾನಿ ತಾಲೂಕು]]ಗೆ ಸೇರಿದವರು. [[ಕೊಟ್ಟಕ್ಕಲ್]]ನಲ್ಲಿನ [[ಆರ್ಯ ವೈದ್ಯ ಶಾಲೆ]] ವಿಶ್ವದ ಅತಿದೊಡ್ಡ ಆಯುರ್ವೇದ ಔಷಧೀಯ ಜಾಲಗಳಲ್ಲಿ ಒಂದಾಗಿದೆ.<ref name="mal"/> ಮೊದಲ ಪ್ರಸಿದ್ಧ ಕೇರಳ ಇತಿಹಾಸಕಾರ [[ಜೈನುದ್ದೀನ್ ಮಖ್ದೂಂ II]] ಕೂಡ ಜಿಲ್ಲೆಯಿಂದ ಬಂದವರು.<ref name="mal"/>
[[File:Kottakkal Bypass.jpg|thumbnail|[[ಕೊಟ್ಟಕ್ಕಲ್]], ಪ್ರಸಿದ್ಧ [[ಆರ್ಯ ವೈದ್ಯ ಶಾಲೆ]]ಯ ಕೇಂದ್ರ]]
[[ಕೇರಳ ವರ್ಮ ವಲಿಯ ಕೊಯಿಲ್ ತಂಪುರಾನ್|ಕೇರಳ ವರ್ಮ ವಲಿಯ ಕೋಯಿ ತಂಪುರಾನ್]] (ಕೇರಳ ಕಾಳಿದಾಸನ್), [[ರಾಜ ರಾಜ ವರ್ಮ]] (ಕೇರಳ ಪಾಣಿನಿ) ಮತ್ತು [[ರಾಜ ರವಿ ವರ್ಮ]] (ಪ್ರಸಿದ್ಧ ಚಿತ್ರಕಾರ) ಇವರು [[ಪರಪ್ಪನಾಡ್]] ರಾಜಮನೆತನದ ವಿವಿಧ ಶಾಖೆಗಳಿಗೆ ಸೇರಿದವರು, ಅವರು ನಂತರ [[ಪರಪ್ಪನಂಗಾಡಿ]]ಯಿಂದ ಹರಿಪ್ಪಾಡ್, ಚಂಗನಾಶ್ಶೇರಿ, ಮಾವೆಲಿಕ್ಕರ ಮತ್ತು ಕಿಳಿಮಾನೂರ್ ಗೆ ವಲಸೆ ಬಂದರು.<ref>{{Cite book|title=ವಿಶಾಖಂ ತಿರುನಾಲ್.|date=2012|publisher=Duc|isbn=978-613-9-12064-2|location=[ಪ್ರಕಟಣಾ ಸ್ಥಳ ಗುರುತಿಸಲಾಗಿಲ್ಲ]|oclc=940373421}}</ref> ಕೆಲವು ವಿದ್ವಾಂಸರ ಪ್ರಕಾರ, [[ವೇಲು ತಂಪಿ ದಳವ]]ನ ಪೂರ್ವಜರು ಪರಪ್ಪನಂಗಾಡಿ ಬಳಿಯ [[ವಲ್ಲಿಕುಣ್ಣು]]ಗೆ ಸೇರಿದವರು. ದೈನಂದಿನ "[[ದಿ ಹಿಂದೂ]]" (1898 ರಿಂದ 1905) ನ ಮುಖ್ಯ ಸಂಪಾದಕ ಮತ್ತು "ದಿ ಇಂಡಿಯನ್ ಪೇಟ್ರಿಯಾಟ್" ನ ಸಂಸ್ಥಾಪಕ ಮುಖ್ಯ ಸಂಪಾದಕ ದಿವಾನ್ ಬಹದ್ದೂರ್ ಸಿ. ಕರುಣಾಕರ ಮೇನನ್ (1863–1922) ಕೂಡ ಪರಪ್ಪನಂಗಾಡಿಯಿಂದ ಬಂದವರು.<ref>{{Cite book|url=http://archive.org/details/somemadrasleader00allauoft|title=ಕೆಲವು ಮದ್ರಾಸ್ ನಾಯಕರು|date=1922|publisher=ಅಲಹಾಬಾದ್ ಸ್ಟ್ಯಾಂಡರ್ಡ್ ಪ್ರೆಸ್ನಲ್ಲಿ ಮುದ್ರಿಸಲಾಗಿದೆ}}</ref> [[ಒ. ಚಂದು ಮೇನನ್]] ಪರಪ್ಪನಂಗಾಡಿ ಮುನ್ಸಿಫ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದಾಗ ತಮ್ಮ ಕಾದಂಬರಿಗಳಾದ ''ಇಂದುಲೇಖ'' ಮತ್ತು ''ಶಾರದ'' ಅನ್ನು ಬರೆದರು. ''ಇಂದುಲೇಖ'' [[ಮಲಯಾಳಂ]] ಭಾಷೆಯಲ್ಲಿ ಬರೆಯಲಾದ ಮೊದಲ ಪ್ರಮುಖ ಕಾದಂಬರಿಯಾಗಿದೆ. ''ಮಾತೃಭೂಮಿ'' ದೈನಿಕದ ಸಂಸ್ಥಾಪಕ ಕೆ. ಮಾಧವನ್ ನಾಯರ್ [[ಮಲಪ್ಪುರಂ]]ನಿಂದ ಬಂದವರು. ಪೊನ್ನಾನಿ ಪ್ರದೇಶವು ''ಕೇರಳ ಗಾಂಧಿ'' ಎಂದು ಜನಪ್ರಿಯವಾಗಿರುವ [[ಕೆ. ಕೆಳಪ್ಪನ್]], ಎ. ವಿ. ಕುಟ್ಟಿಮಾಲು ಅಮ್ಮ, ಮತ್ತು [[ಮೊಹಮ್ಮದ್ ಅಬ್ದುರ್ ರಹಿಮಾನ್]], ಮತ್ತು ಹಲವಾರು ಇತರ ಸ್ವಾತಂತ್ರ್ಯ ಹೋರಾಟಗಾರರ ಕೆಲಸದ ವೇದಿಕೆಯಾಗಿತ್ತు.<ref name="mal"/> [[ಪೊನ್ನಾನಿ ತಾಲೂಕು]]ನ ಇತರ ಸ್ವಾತಂತ್ರ್ಯ ಕಾರ್ಯಕರ್ತರಲ್ಲಿ [[ಲಕ್ಷ್ಮೀ ಸೆಹಗಲ್]], [[ವಿ. ಟಿ. ಭಟ್ಟಾತಿರಿಪಾಡ್]], ಮತ್ತು [[ಅಮ್ಮು ಸ್ವಾಮಿನಾಥನ್]] ಸೇರಿದ್ದಾರೆ. [[ಮಹಾತ್ಮ ಗಾಂಧಿ]], [[ಜವಾಹರ್ಲಾಲ್ ನೆಹರು]], ಮತ್ತು [[ಲಾಲ್ ಬಹಾದ್ದೂರ್ ಶಾಸ್ತ್ರಿ]] ಅವರ ಬೂದಿಯನ್ನು [[ಭಾರತಪ್ಪುಳ್ಳ]] ನದಿಯ ದಡದಲ್ಲಿ ಕೇರಳದಲ್ಲಿ [[ತಿರುನವಾಯ]] ದಲ್ಲಿ ಸಮಾಧಿ ಮಾಡಲಾಯಿತು.<ref name="askh"/><ref name="mal"/> ಮಹಾತ್ಮ ಗಾಂಧಿಯವರ ಆತ್ಮಚರಿತ್ರೆಯ ಮಲಯಾಳಂ ಅನುವಾದಕ ಕೆ. ಮಾಧವನಾರ್ ಕೂಡ ಮಲಪ್ಪುರಂನ ಮೂಲವಾಸಿಯಾಗಿದ್ದರು.
[[ಪೊನ್ನಾನಿ]]ಯ ಪ್ರಾಚೀನ ಕಾಲದಿಂದಲೂ ವಿದೇಶಿ ದೇಶಗಳೊಂದಿಗಿನ ವ್ಯಾಪಾರ ಸಂಬಂಧಗಳು ಸಾಂಸ್ಕೃತಿಕ ವಿನಿಮಯಕ್ಕೆ ದಾರಿ ಮಾಡಿಕೊಟ್ಟವು.<ref name="mal"/> ಪರ್ಷಿಯನ್-ಅರಬ್ ಕಲಾ ಪ್ರಕಾರಗಳು ಮತ್ತು ಉತ್ತರ ಭಾರತೀಯ ಸಂಸ್ಕೃತಿಯು ಅಲ್ಲಿಗೆ ಬಂದಿತು. ಭಾಷೆಯಲ್ಲಿಯೂ ಪ್ರತಿಧ್ವನಿಗಳಿದ್ದವು. ಹೀಗೆಯೇ ಹೈಬ್ರಿಡ್ ಭಾಷೆ [[ಅರಬಿ-ಮಲಯಾಳಂ]] ಬಂತು.<ref name="mal"/> ಅನೇಕ ಕವಿತೆಗಳನ್ನು ಈ ಹೈಬ್ರಿಡ್ ಭಾಷೆಯಲ್ಲಿ ಬರೆಯಲಾಗಿದೆ.<ref name="mal"/> ಇಲ್ಲಿ ಸಾಂಸ್ಕೃತಿಕ ವಿನಿಮಯದ ಭಾಗವಾಗಿ ಬಂದ ಹಿಂದೂಸ್ತಾನಿಗಳಿಂದ ಕವ್ವಾಲಿ ಮತ್ತು ಗಝಲ್ಗಳು ಇನ್ನೂ ಪೊನ್ನಾನಿಯಲ್ಲಿ ಬೆಳೆಯುತ್ತಿವೆ. ಇಕೆ ಅಬೂಬಕರ್, ಮೈನ್ ಮತ್ತು ಖಲೀಲ್ ಭಾಯ್ (ಖಲೀಲ್ ರಹಮಾನ್) ಪೊನ್ನಾನಿಯ ಕೆಲವು ಪ್ರಸಿದ್ಧ ಕವ್ವಾಲಿ ಗಾಯಕರಾಗಿದ್ದಾರೆ.
[[File:Nila Nadhi.jpg|left|thumbnail|ಮಧ್ಯಕಾಲೀನ [[ಮಾಮಂಕಂ ಉತ್ಸವ]]ದ ಸ್ಥಾನವಾದ [[ತಿರುನವಾಯ]]]]
ಕೇರಳ [[ನಂಬೂದಿರಿ]] [[ಬ್ರಾಹ್ಮಣ]]ರ ಸರ್ವೋಚ್ಚ ಧಾರ್ಮಿಕ ಮುಖ್ಯಸ್ಥರೆಂದು ಪರಿಗಣಿಸಲ್ಪಟ್ಟಿದ್ದ [[ಅಳ್ವಾಂಚೇರಿ ತಂಪ್ರಕ್ಕಲ್]]ರ ಪ್ರಧಾನ ಕಚೇರಿಯು [[ಅತವನಾಡ್]] ನಲ್ಲಿತ್ತು.<ref name="mal"/> ''[[ಪಾಲಕ್ಕಾಡ್]] ರಾಜರ'' ಮೂಲ ಪ್ರಧಾನ ಕಚೇರಿಯೂ [[ಅತವನಾಡ್]] ನಲ್ಲಿತ್ತು.<ref name="mnn"/> ತಿರೂರ್, ಪೆರಿಂತಲ್ಮನ್ನ, ಮತ್ತು ಪೊನ್ನಾನಿ ತಾಲೂಕುಗಳಲ್ಲಿ ಹಲವಾರು ಶ್ರೀಮಂತ ''ನಂಬೂದಿರಿ ಮನ''ಗಳಿವೆ. ಮಧ್ಯಕಾಲೀನ [[ಮಾಮಂಕಂ ಉತ್ಸವ]]ದ ಸ್ಥಾನವಾದ [[ತಿರುನವಾಯ]] ಜಿಲ್ಲೆಯಲ್ಲಿದೆ. [[ಕೊಚ್ಚಿ ಸಾಮ್ರಾಜ್ಯ]]ದ ಪೂರ್ವಜರ ಪ್ರಧಾನ ಕಚೇರಿಯಾದ [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]], ಮತ್ತು [[ಕಾಲಿಕಟ್ನ ಜಾಮೋರಿನ್]]ನ ಪೂರ್ವಜರ ಪ್ರಧಾನ ಕಚೇರಿಯಾದ [[ನೆಡಿಯಿರುಪ್ಪು]] ಸಹ ಜಿಲ್ಲೆಯಲ್ಲಿವೆ. [[ಕುಂಹಾಲಿ ಮರಕ್ಕರ್]]ಗಳು ಪೊನ್ನಾನಿ, [[ತಾನೂರು, ಮಲಪ್ಪುರಂ|ತಾನೂರು]], ಮತ್ತು ಪರಪ್ಪನಂಗಾಡಿ ಬಂದರು ಪಟ್ಟಣಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು.<ref name="mal"/> 16 ನೇ ಶತಮಾನ CE ಯಲ್ಲಿ, ಕೊಚ್ಚಿಯು [[ಮಲಬಾರ್ ಕರಾವಳಿ]]ಯಲ್ಲಿ ಪ್ರಮುಖ ಶಕ್ತಿಯಾದಾಗ, [[ಕೊಚ್ಚಿ ಸಾಮ್ರಾಜ್ಯ]]ದ ಕೆಲವು ರಾಜರನ್ನು ಸಾಮಾನ್ಯವಾಗಿ [[ತಾನೂರು ಸಾಮ್ರಾಜ್ಯ]]ದ ರಾಜಮನೆತನದಿಂದ ಎರವಲು ಪಡೆಯಲಾಗುತ್ತಿತ್ತು.<ref name="askh"/> [[ತಿರುವಾಂಕೂರು]]ನ ರಾಣಿಯರ ಅನೇಕ ಸಂಗಾತಿಗಳನ್ನು ಸಾಮಾನ್ಯವಾಗಿ [[ಪರಪ್ಪನಾಡ್]] ರಾಜಮನೆತನದಿಂದ ಆಯ್ಕೆ ಮಾಡಲಾಗುತ್ತಿತ್ತು. ಕೇರಳದ ಮೊದಲ ಮುಖ್ಯಮಂತ್ರಿ [[ಇ. ಎಂ. ಎಸ್. ನಂಬೂದಿರಿಪಾಡ್]] ಜಿಲ್ಲೆಯ [[ಪೆರಿಂತಲ್ಮನ್ನ]]ದಿಂದ ಬಂದವರು.<ref name="mal"/> ಮಧ್ಯಕಾಲೀನ [[ವಲ್ಲುವನಾಡ್ ಸಾಮ್ರಾಜ್ಯ]]ದ ಆಡಳಿತ ಮನೆತನಗಳ ಸ್ಥಾನಗಳಾದ [[ಅಂಗಡಿಪುರಂ]] ಮತ್ತು [[ಮಂಕಡ]] ಪೆರಿಂತಲ್ಮನ್ನದ ಪಕ್ಕದಲ್ಲಿವೆ.
ಮಧ್ಯಯುಗದಲ್ಲಿ, ಜಿಲ್ಲೆಯು [[ವೇದ]] ಮತ್ತು [[ಇಸ್ಲಾಂ]] ಅಧ್ಯಯನಗಳ ಕೇಂದ್ರವಾಗಿತ್ತು.<ref name="mal"/> [[ಮಲಿಕ್ ದೀನಾರ್]] ಪೊನ್ನಾನಿ ಬಂದರು ಪಟ್ಟಣಕ್ಕೆ ಭೇಟಿ ನೀಡಿದ್ದಾರೆಂದು ನಂಬಲಾಗಿದೆ.<ref>{{Cite web|url=https://www.keralatourism.org/malabar/ponnani/68|title=ಪೊನ್ನಾನಿಯ ಇತಿಹಾಸ|access-date=12 October 2020|website=Kerala Tourism|archive-date=13 September 2021|archive-url=https://web.archive.org/web/20210913065714/https://www.keralatourism.org/malabar/ponnani/68|url-status=live}}</ref> [[ಪೊನ್ನಾನಿ]]ಯ ''ವಲಿಯ ಜುಮಾ ಮಸ್ಜಿದ್'' ಮಧ್ಯಯುಗದಲ್ಲಿ [[ಏಷ್ಯಾ]]ದ ಅತಿದೊಡ್ಡ ಇಸ್ಲಾಮಿಕ್ ಅಧ್ಯಯನ ಕೇಂದ್ರಗಳಲ್ಲಿ ಒಂದಾಗಿತ್ತು. [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆ]]ಯ ಮುಖ್ಯ ಸದಸ್ಯರಾದ [[ಪರಮೇಶ್ವರ]], [[ನಿಲಕಂಠ ಸೋಮಯಾಜಿ]], [[ಜ್ಯೇಷ್ಠದೇವ]], [[ಅಚ್ಯುತ ಪಿಷಾರಡಿ]], ಮತ್ತು ಮೇಲ್ಪತ್ತೂರ್ ನಾರಾಯಣ ಭಟ್ಟಾತಿರಿ ತಿರೂರ್ ಪ್ರದೇಶದಿಂದ ಬಂದವರು.<ref name="mal"/> [[ಅರಬಿ ಮಲಯಾಳಂ ಲಿಪಿ]], ಇಲ್ಲವೇ ಪೊನ್ನಾನಿ ಲಿಪಿ, 16 ನೇ ಶತಮಾನದ ಅಂತ್ಯ ಮತ್ತು 17 ನೇ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡಿತು.<ref name="mal"/> ಕಳೆದ ಶತಮಾನಗಳಲ್ಲಿ ಈ ಲಿಪಿಯನ್ನು ಜಿಲ್ಲೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು.<ref name="mal"/>
ಜಿಲ್ಲೆಯ ನಾಟಕಕಾರರು ಮತ್ತು ನಟರಲ್ಲಿ [[ಕೆ. ಟಿ. ಮುಹಮ್ಮದ್]], [[ನಿಲಂಬೂರ್ ಬಾಲನ್]], [[ನಿಲಂಬೂರ್ ಆಯಿಷಾ]], [[ಅದಿಲ್ ಇಬ್ರಾಹಿಂ]], [[ಅನೀಶ್ ಜಿ. ಮೇನನ್]], [[ಅಪರ್ಣಾ ನಾಯರ್]], [[ಅನಿಕಾ|ಬೇಬಿ ಅನಿಕಾ]], [[ಧನಿಶ್ ಕಾರ್ತಿಕ್]], [[ಹೇಮಂತ್ ಮೇನನ್]], [[ರಶಿನ್ ರಹಮಾನ್]], [[ರವಿ ವಲ್ಲತ್ತೋಲ್]], [[ಸಂಗೀತಾ ಮಾಧವನ್ ನಾಯರ್]], [[ಶ್ವೇತಾ ಮೇನನ್]], [[ಸೂರಜ್ ತೇಲಕ್ಕಾಡ್]], ಇತ್ಯಾದಿ ಸೇರಿದ್ದಾರೆ. ಮಲಯಾಳಂ ಚಲನಚಿತ್ರೋದ್ಯಮದ ಇಬ್ಬರು ಪ್ರಮುಖ ನಟರು ಹಾಗೂ ಹಿನ್ನೆಲೆ ಗಾಯಕರಾದ [[ಪೃಥ್ವಿರಾಜ್ ಸುಕುಮಾರನ್]] ಮತ್ತು [[ಇಂದ್ರಜಿತ್ ಸುಕುಮಾರನ್]] ಅವರ ಪಿತಾಮಹ [[ಸುಕುಮಾರನ್]] ಕೂಡ ಜಿಲ್ಲೆಯ ಮೂಲವಾಸಿಯಾಗಿದ್ದರು. [[ಕೃಷ್ಣಚಂದ್ರನ್]], [[ಪಾರ್ವತಿ ಜಯದೇವನ್]], [[ಶಹಬಾಜ್ ಅಮನ್]], [[ಸಿತಾರಾ (ಗಾಯಕಿ)|ಸಿತಾರಾ ಕೃಷ್ಣಕುಮಾರ್]], ಸುದೀಪ್ ಪಾಲನಾಡ್, ಮತ್ತು [[ಉಣ್ಣಿ ಮೇನನ್]] ಸೇರಿದಂತೆ ಹಿನ್ನೆಲೆ ಗಾಯಕರು ಸಹ ಜಿಲ್ಲೆಯಿಂದ ಬಂದವರು. ಜಿಲ್ಲೆಯು [[ಅರ್ಯಾಡನ್ ಶೌಕತ್]], [[ದೀಪು ಪ್ರದೀಪ್]], [[ಹರಿ ನಾಯರ್]], [[ಇಕ್ಬಾಲ್ ಕುಟ್ಟಿಪುರಂ]], [[ಮಂಕಡ ರವಿ ವರ್ಮ]], [[ಮುಹಮ್ಮದ್ ಮುಸ್ತಫಾ]], [[ಮುಹ್ಸಿನ್ ಪರಾರಿ]], [[ರಾಜೀವ್ ನಾಯರ್]], [[ಸಲಾಂ ಬಪ್ಪು]], [[ಶಾನವಾಸ್ ಕೆ ಬಾವಕುಟ್ಟಿ]], ಶಾನವಾಸ್ ನಾರಣಿಪ್ಪುಳ್ಳ, [[ಟಿ. ಎ. ರಜಾಕ್]], [[ಟಿ. ಎ. ಶಾಹಿದ್]], [[ವಿನಯ್ ಗೋವಿಂದ್]], ಮತ್ತು [[ಝಕಾರಿಯಾ ಮೊಹಮ್ಮದ್]] ಸೇರಿದಂತೆ ಕೆಲವು ಪ್ರಮುಖ ಚಲನಚಿತ್ರ ನಿರ್ಮಾಪಕರು, ಗೀತರಚನೆಕಾರರು, ಛಾಯಾಗ್ರಾಹಕರು, ಮತ್ತು ನಿರ್ದೇಶಕರನ್ನು ಸಹ ನೀಡಿದೆ. ಜಿಲ್ಲೆಯ ಅತ್ಯಂತ ಪ್ರಮುಖ ಚಿತ್ರಕಾರರಲ್ಲಿ [[ನಂಬೂದಿರಿ (ಕಲಾವಿದ)|ಕಲಾವಿದ ನಂಬೂದಿರಿ]], [[ಕೆ. ಸಿ. ಎಸ್. ಪಾಣಿಕರ್]], ಮತ್ತು [[ಟಿ. ಕೆ. ಪದ್ಮಿನಿ]] ಸೇರಿದ್ದಾರೆ.<ref name="mal"/> ಮತ್ತೊಬ್ಬ ಚಿತ್ರಕಾರ [[ಅಕ್ಕಿತಂ ನಾರಾಯಣನ್]] [[ಕುಮಾರನೆಲ್ಲೂರ್]] ನಿಂದ ಬಂದವರು. ಕೇರಳದ ಅತ್ಯಂತ ಪ್ರಮುಖ ಇತಿಹಾಸಕಾರರಲ್ಲಿ ಒಬ್ಬರಾದ [[ಎಂ. ಜಿ. ಎಸ್. ನಾರಾಯಣನ್]] ಕೂಡ ಇಲ್ಲಿಂದ ಬಂದವರು.<ref name="mal"/> ಜಿಲ್ಲೆಯ ಸಮಾಜ ಸುಧಾರಕರಲ್ಲಿ [[ವೆಲಿಯಂಕೋಡ್ ಉಮರ್ ಖಾಸಿ]] (1757–1852), [[ಚಲಿಲಕತ್ ಕುನಹ್ಮದ್ ಹಾಜಿ]], [[ಇ. ಮೊಯ್ದು ಮೌಲವಿ]], ಮತ್ತು [[ಸಯ್ಯಿದ್ ಸನಾಉಲ್ಲಾ ಮಕ್ತಿ ತಂಗಲ್]] (1847–1912) ಸೇರಿದ್ದಾರೆ.<ref name="mal"/>
=== ಪಾಕಪದ್ಧತಿ ===
[[File:Pathiri.jpg|thumb|upright|''[[ಪಾತಿರಿ]]'', [[ಅಕ್ಕಿ ಹಿಟ್ಟು|ಅಕ್ಕಿ ಹಿಟ್ಟಿನ]] ಪ್ಯಾನ್ಕೇಕ್, ಮಲಪ್ಪುರಂನ ಸಾಮಾನ್ಯ ಉಪಹಾರ ಭಕ್ಷ್ಯಗಳಲ್ಲಿ ಒಂದಾಗಿದೆ]]
ಶತಮಾನಗಳ ಸಮುದ್ರ ವ್ಯಾಪಾರವು ಮಲಪ್ಪುರಂಗೆ ವಿಶ್ವವ್ಯಾಪಿ ಪಾಕಪದ್ಧತಿಯನ್ನು ನೀಡಿದೆ. ಪಾಕಪದ್ಧತಿಯು ಸಾಂಪ್ರದಾಯಿಕ [[ಕೇರಳ]], [[ಇರಾನ್ನ ಪಾಕಪದ್ಧತಿ|ಪರ್ಷಿಯನ್]], [[ಯೆಮೆನಿ ಪಾಕಪದ್ಧತಿ|ಯೆಮೆನಿ]] ಮತ್ತು [[ಅರಬ್]] ಆಹಾರ ಸಂಸ್ಕೃತಿಯ ಮಿಶ್ರಣವಾಗಿದೆ.<ref name="MC"/> ಈ ಪಾಕಪದ್ಧತಿಯ ಮುಖ್ಯ ಅಂಶಗಳಲ್ಲಿ ಒಂದಾದ ''[[ಪಾತಿರಿ]]'', ಇದು ಅಕ್ಕಿ ಹಿಟ್ಟಿನಿಂದ ಮಾಡಿದ ಪ್ಯಾನ್ಕೇಕ್. ''ಪಾತಿರಿ''ಯ ಪ್ರಭೇದಗಳಲ್ಲಿ ''ನೇಪಾತಿರಿ'' (ತುಪ್ಪದಿಂದ ಮಾಡಿದ್ದು), ''ಪೊರಿಚಾ ಪಾತಿರಿ'' (ಬೇಯಿಸುವ ಬದಲು ಹುರಿದದ್ದು), ''ಮೀನ್ ಪಾತಿರಿ'' (ಮೀನಿನಿಂದ ತುಂಬಿದ್ದು), ಮತ್ತು ''ಇರಾಚಿ ಪಾತಿರಿ'' (ಗೋಮಾಂಸದಿಂದ ತುಂಬಿದ್ದು) ಸೇರಿವೆ. [[ಕರಿಮೆಣಸು|ಮೆಣಸು]], [[ಏಲಕ್ಕಿ]], ಮತ್ತು [[ಲವಂಗ]]ದಂತಹ ಮಸಾಲೆಗಳನ್ನು ಮಲಪ್ಪುರಂನ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹಬ್ಬಗಳಲ್ಲಿ ಬಳಸುವ ಮುಖ್ಯ ಭಕ್ಷ್ಯವೆಂದರೆ ಮಲಬಾರ್ ಶೈಲಿಯ [[ಬಿರಿಯಾನಿ]]. [[ಸಾಧ್ಯ]] ಮದುವೆ ಮತ್ತು ಹಬ್ಬದ ಸಂದರ್ಭಗಳಲ್ಲಿಯೂ ಕಂಡುಬರುತ್ತದೆ. ಜಿಲ್ಲೆಯ ಪೊನ್ನಾನಿ ಪ್ರದೇಶವು ವ್ಯಾಪಕವಾದ ಸ್ಥಳೀಯ ಭಕ್ಷ್ಯಗಳನ್ನು ಹೊಂದಿದೆ. ''ಅರಿಕಡುಕ್ಕ'', ''ಚಟ್ಟಿಪಾತಿರಿ'', ''ಮುತ್ತಮಾಲ'', ''ಪಳಂ ನಿರಚತ್ತು'', ಮತ್ತು ''ಉನ್ನಕ್ಕಾಯ''ದಂತಹ ತಿಂಡಿಗಳು ಪೊನ್ನಾನಿಯಲ್ಲಿ ತಮ್ಮದೇ ಆದ ಶೈಲಿಯನ್ನು ಹೊಂದಿವೆ. ಇವುಗಳ ಜೊತೆಗೆ, [[ಕೇರಳ]]ದ ಇತರ ಸಾಮಾನ್ಯ ಆಹಾರ ಪದಾರ್ಥಗಳು ಸಹ ಮಲಪ್ಪುರಂನ ಪಾಕಪದ್ಧತಿಯಲ್ಲಿ ಕಂಡುಬರುತ್ತವೆ.<ref>{{cite web |url=https://www.malappuramtourism.org/mappila-cuisine.php |website=malappuramtourism.org |title=ಮಲಪ್ಪುರಂನ ಪಾಕಪದ್ಧತಿ |access-date=18 April 2020 |archive-date=6 April 2020 |archive-url=https://web.archive.org/web/20200406215142/https://www.malappuramtourism.org/mappila-cuisine.php |url-status=live }}</ref> [[ಮಲಬಾರ್ ಜಿಲ್ಲೆ|ಮಲಬಾರ್]] ಆವೃತ್ತಿಯ [[ಬಿರಿಯಾನಿ]], [[ಮಲಯಾಳಂ]]ನಲ್ಲಿ ''ಕುಳಿ ಮಂದಿ'' ಎಂದು ಜನಪ್ರಿಯವಾಗಿದೆ, ಇದು [[ಯೆಮೆನ್]]ನ ಪ್ರಭಾವವನ್ನು ಹೊಂದಿರುವ ಮತ್ತೊಂದು ಜನಪ್ರಿಯ ಭಕ್ಷ್ಯವಾಗಿದೆ.<ref name="MC">{{Cite news|title=ನೇರವಾಗಿ ಮಲಬಾರ್ ಕರಾವಳಿಯಿಂದ|url=https://www.thehindu.com/life-and-style/food/straight-from-the-malabar-coast/article27942808.ece|last=ಸಬ್ನಾನಿ|first=ಧರ ವೋರಾ|date=14 June 2019|access-date=26 January 2021|work=The Hindu|archive-date=2 February 2021|archive-url=https://web.archive.org/web/20210202121206/https://www.thehindu.com/life-and-style/food/straight-from-the-malabar-coast/article27942808.ece|url-status=live}}</ref>
=== ಮಾಧ್ಯಮ ===
[[File:MANJERI F.M 102.7.jpg|thumbnail|[[AIR ಮಂಜೇರಿ FM]] ರೇಡಿಯೋ ನಿಲ್ದಾಣ]]
''[[ಮಲಯಾಳ ಮನೋರಮ]]'', ''[[ಮಾತೃಭೂಮಿ]]'', ''[[ಮಾಧ್ಯಮಂ]]'', ''[[ಚಂದ್ರಿಕಾ (ಮಲಯಾಳಂ ಪತ್ರಿಕೆ)|ಚಂದ್ರಿಕಾ]]'', ''[[ದೇಶಾಭಿಮಾನಿ]]'', ''[[ಸುಪ್ರಭಾತಂ ದೈನಿಕ|ಸುಪ್ರಭಾತಂ]]'', ಮತ್ತು ''[[ಸಿರಾಜ್ ದೈನಿಕ|ಸಿರಾಜ್]]'' ದಿನಪತ್ರಿಕೆಗಳು [[ಮಲಪ್ಪುರಂ]] ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮ ಮುದ್ರಣ ಕೇಂದ್ರಗಳನ್ನು ಹೊಂದಿವೆ. [[ದಿ ಹಿಂದೂ]] ಮಲಪ್ಪುರಂನಲ್ಲಿ ಆವೃತ್ತಿ ಮತ್ತು ಮುದ್ರಣಾಲಯವನ್ನು ಹೊಂದಿದೆ. ಧರ್ಮ ಮತ್ತು ಸಂಸ್ಕೃತಿಗೆ ಮೀಸಲಾದ ಕೆಲವು ನಿಯತಕಾಲಿಕೆಗಳು-ಮಾಸಿಕ, ಪಾಕ್ಷಿಕ ಮತ್ತು ವಾರಪತ್ರಿಕೆಗಳು ಸಹ ಪ್ರಕಟವಾಗುತ್ತವೆ. ಬಹುತೇಕ ಎಲ್ಲಾ ಮಲಯಾಳಂ ಚಾನೆಲ್ಗಳು ಮತ್ತು ಪತ್ರಿಕೆಗಳು ಅಪ್ ಹಿಲ್ನಲ್ಲಿ ತಮ್ಮ ಬ್ಯೂರೋವನ್ನು ಹೊಂದಿವೆ. ಅನೇಕ ಸ್ಥಳೀಯ ಕೇಬಲ್ ದೃಷ್ಟಿಕೋನಗಳು ಮತ್ತು ಅವುಗಳ ಪ್ರಾದೇಶಿಕ ಮಾಧ್ಯಮಗಳಿವೆ. ಮಲಪ್ಪುರಂ ಪ್ರೆಸ್ ಕ್ಲಬ್ ಸಹ ಅಪ್ ಹಿಲ್ನಲ್ಲಿ ನಗರ ಟೌನ್ ಹಾಲ್ನ ಪಕ್ಕದಲ್ಲಿದೆ. [[ದೂರದರ್ಶನ]]ವು ಮಲಪ್ಪುರಂ ಮತ್ತು ಮಂಜೇರಿಯಲ್ಲಿ ಜಿಲ್ಲೆಯಲ್ಲಿ ಎರಡು ಪ್ರಮುಖ ರಿಲೇ ಕೇಂದ್ರಗಳನ್ನು ಹೊಂದಿದೆ. ಭಾರತ ಸರ್ಕಾರದ [[ಪ್ರಸಾರ ಭಾರತಿ]] ರಾಷ್ಟ್ರೀಯ ಸಾರ್ವಜನಿಕ ಸೇವಾ ಪ್ರಸಾರಕವು ಜಿಲ್ಲೆಯಲ್ಲಿ FM ಕೇಂದ್ರವನ್ನು ಹೊಂದಿದೆ ([[AIR ಮಂಜೇರಿ FM]]), ಇದು 102.7 Mhtz ನಲ್ಲಿ ಪ್ರಸಾರ ಮಾಡುತ್ತದೆ. ಯಾವುದೇ ಖಾಸಗಿ FM ಕೇಂದ್ರಗಳಿಲ್ಲದಿದ್ದರೂ, ಮಲಪ್ಪುರಂ, ಪೊನ್ನಾನಿ, ಮತ್ತು ತಿರೂರ್ ಭಾರತದಲ್ಲಿ ಅತಿ ಹೆಚ್ಚು ರೇಡಿಯೋ ಕೇಳುಗರನ್ನು ಹೊಂದಿರುವ ಹತ್ತು ಪಟ್ಟಣಗಳಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳುತ್ತವೆ.<ref>{{cite web|url=http://www.mapsofindia.com/top-ten-cities-of-india/top-ten-towns-in-highest-radio-listenership.html|title=ಅತಿ ಹೆಚ್ಚು ರೇಡಿಯೋ ಕೇಳುಗರನ್ನು ಹೊಂದಿರುವ ಟಾಪ್ ಟೆನ್ ಪಟ್ಟಣಗಳು|access-date=28 July 2015|archive-date=6 September 2015|archive-url=https://web.archive.org/web/20150906202510/http://www.mapsofindia.com/top-ten-cities-of-india/top-ten-towns-in-highest-radio-listenership.html|url-status=live}}</ref>
=== ಕ್ರೀಡೆಗಳು ===
[[File:Manjeri Stadium 2020.jpg|thumb|[[ಮಲಪ್ಪುರಂ ಜಿಲ್ಲಾ ಕ್ರೀಡಾ ಸಂಕೀರ್ಣ ಕ್ರೀಡಾಂಗಣ]]]]
[[File:Malappuram District Sports Complex Stadium.jpg|thumbnail|[[2013–14 ಭಾರತೀಯ ಫೆಡರೇಶನ್ ಕಪ್]] ಸಮಯದಲ್ಲಿ [[ಮಲಪ್ಪುರಂ ಜಿಲ್ಲಾ ಕ್ರೀಡಾ ಸಂಕೀರ್ಣ ಕ್ರೀಡಾಂಗಣ|MDSC ಕ್ರೀಡಾಂಗಣ]]]]
ಮಲಪ್ಪುರಂ ಅನ್ನು ಹೆಚ್ಚಾಗಿ ''ಕೇರಳ ಫುಟ್ಬಾಲ್ನ ಮೆಕ್ಕಾ'' ಎಂದು ಕರೆಯಲಾಗುತ್ತದೆ.<ref name= "Football_a">{{cite news |url=https://www.thehindu.com/news/national/kerala/malabar-premier-league-to-be-launched-in-malappuram/article6953851.ece |title=ಮಲಬಾರ್ ಪ್ರೀಮಿಯರ್ ಲೀಗ್ ಮಲಪ್ಪುರಂನಲ್ಲಿ ಪ್ರಾರಂಭವಾಗಲಿದೆ |newspaper=The Hindu |date=3 March 2015 |access-date=28 November 2019 |archive-date=28 November 2019 |archive-url=https://web.archive.org/web/20191128180448/https://www.thehindu.com/news/national/kerala/malabar-premier-league-to-be-launched-in-malappuram/article6953851.ece |url-status=live }}</ref><ref name= "Football_b">{{cite web |url=https://www.deccanchronicle.com/sports/in-other-news/180716/football-hub-proposed-in-malappuram.html |title=ಮಲಪ್ಪುರಂನಲ್ಲಿ ಫುಟ್ಬಾಲ್ ಕೇಂದ್ರ ಪ್ರಸ್ತಾಪಿಸಲಾಗಿದೆ |website=Deccan Chronicle |date=18 July 2016 |access-date=28 November 2019 |archive-date=28 November 2019 |archive-url=https://web.archive.org/web/20191128180459/https://www.deccanchronicle.com/sports/in-other-news/180716/football-hub-proposed-in-malappuram.html |url-status=live }}</ref> [[ಮಲಪ್ಪುರಂ ಜಿಲ್ಲಾ ಕ್ರೀಡಾ ಸಂಕೀರ್ಣ ಮತ್ತು ಫುಟ್ಬಾಲ್ ಅಕಾಡೆಮಿ]] [[ಮಂಜೇರಿ]]ಯ [[ಪಯ್ಯನಾಡು, ಮಂಜೇರಿ|ಪಯ್ಯನಾಡು]]ದಲ್ಲಿದೆ. [[ಮಲಪ್ಪುರಂ ಜಿಲ್ಲಾ ಕ್ರೀಡಾ ಸಂಕೀರ್ಣ ಕ್ರೀಡಾಂಗಣ|MDSC ಕ್ರೀಡಾಂಗಣ]]ವು [[2013–14 ಭಾರತೀಯ ಫೆಡರೇಶನ್ ಕಪ್]]ನ [[2013–14 ಭಾರತೀಯ ಫೆಡರೇಶನ್ ಕಪ್ ಗುಂಪು ಹಂತ|ಗುಂಪು ಹಂತ]]ಗಳನ್ನು ಆಯೋಜಿಸಲು [[ಜವಾಹರ್ಲಾಲ್ ನೆಹರು ಕ್ರೀಡಾಂಗಣ, ಕೊಚ್ಚಿ|ಜವಾಹರ್ಲಾಲ್ ನೆಹರು ಕ್ರೀಡಾಂಗಣ]]ದ ಜೊತೆಗೆ ಎರಡು ಕ್ರೀಡಾಂಗಣಗಳಲ್ಲಿ ಒಂದಾಗಿ ಆಯ್ಕೆಯಾಯಿತು.<ref name="Federation Cup 2014">{{cite news|title=ಫೆಡರೇಶನ್ ಕಪ್ 2013–14 ಜನವರಿ 14 ರಂದು ಪ್ರಾರಂಭವಾಗಲಿದೆ|url=https://timesofindia.indiatimes.com/sports/football/top-stories/Federation-Cup-2013-14-to-kickoff-on-January-14/articleshow/27291593.cms|archive-url=https://web.archive.org/web/20140113071115/http://articles.timesofindia.indiatimes.com/2013-12-13/top-stories/45161159_1_federation-cup-january-14-group-c|url-status=live|archive-date=13 January 2014|work=[[The Times of India]]|date=13 December 2013 |access-date=12 January 2014}}</ref> ಕ್ರೀಡಾಂಗಣವು ಗುಂಪು B ಮತ್ತು D ಅನ್ನು ಆಯೋಜಿಸಿತು.<ref name="Federation Cup 2014"/> [[ಕೊಟ್ಟಪ್ಪಾಡಿ ಫುಟ್ಬಾಲ್ ಕ್ರೀಡಾಂಗಣ, ಮಲಪ್ಪುರಂ|ಕೊಟ್ಟಪ್ಪಾಡಿ ಫುಟ್ಬಾಲ್ ಕ್ರೀಡಾಂಗಣ]] ಐತಿಹಾಸಿಕ ಫುಟ್ಬಾಲ್ ಕ್ರೀಡಾಂಗಣವಾಗಿದೆ. ಇತರ ಪ್ರಮುಖ ಕ್ರೀಡಾಂಗಣಗಳಲ್ಲಿ ತಿರೂರ್ನ ರಾಜೀವ್ ಗಾಂಧಿ ಮುನ್ಸಿಪಲ್ ಕ್ರೀಡಾಂಗಣ ಮತ್ತು ಪೆರಿಂತಲ್ಮನ್ನದ ಪೆರಿಂತಲ್ಮನ್ನ ಕ್ರಿಕೆಟ್ ಕ್ರೀಡಾಂಗಣ ಸೇರಿವೆ. ತಿರೂರ್ ಮುನ್ಸಿಪಲ್ ಕ್ರೀಡಾಂಗಣದ ಜೊತೆಗೆ ಸಿಂಥೆಟಿಕ್ ಟ್ರ್ಯಾಕ್ ಇದೆ. ಜಿಲ್ಲೆಯಲ್ಲಿ ಫುಟ್ಬಾಲ್ ಅನ್ನು ಬಲಪಡಿಸಲು [[ಮಲಬಾರ್ ಪ್ರೀಮಿಯರ್ ಲೀಗ್]] ಅನ್ನು 2015 ರಲ್ಲಿ ಪ್ರಾರಂಭಿಸಲಾಯಿತು.<ref>{{cite web |url=https://www.thehindu.com/news/national/kerala/malabar-premier-league-to-be-launched-in-malappuram/article6953851.ece |website=The Hindu |title=ಮಲಬಾರ್ ಪ್ರೀಮಿಯರ್ ಲೀಗ್ |date=3 March 2015 |access-date=24 June 2020 |archive-date=28 November 2019 |archive-url=https://web.archive.org/web/20191128180448/https://www.thehindu.com/news/national/kerala/malabar-premier-league-to-be-launched-in-malappuram/article6953851.ece |url-status=live }}</ref> [[ತೆನಿಪಾಲಂ]]ನಲ್ಲಿನ ಕಾಲಿಕಟ್ ವಿಶ್ವವಿದ್ಯಾಲಯ ಸಿಂಥೆಟಿಕ್ ಟ್ರ್ಯಾಕ್ ಜಿಲ್ಲೆಯ ಪ್ರಮುಖ ಸಿಂಥೆಟಿಕ್ ಟ್ರ್ಯಾಕ್ ಆಗಿದೆ. ಇದು ತೆನಿಪಾಲಂನ ಸಿ. ಎಚ್. ಮುಹಮ್ಮದ್ ಕೋಯಾ ಕ್ರೀಡಾಂಗಣದೊಂದಿಗೆ ಸಂಬಂಧ ಹೊಂದಿದೆ.<ref>{{cite web |url=https://www.deccanchronicle.com/nation/in-other-news/020416/new-calicut-university-synthetic-track-gets-ready-to-host-meets.html |website=Deccan Chronicle |title=ತೆನಿಪಾಲಂ ಸಿಂಥೆಟಿಕ್ ಟ್ರ್ಯಾಕ್ |date=2 April 2016 |access-date=24 June 2020 |archive-date=26 June 2020 |archive-url=https://web.archive.org/web/20200626150923/https://www.deccanchronicle.com/nation/in-other-news/020416/new-calicut-university-synthetic-track-gets-ready-to-host-meets.html |url-status=live }}</ref> ಜಿಲ್ಲೆಯ ಇತರ ಪ್ರಮುಖ ಕ್ರೀಡಾಂಗಣಗಳಲ್ಲಿ [[ಅರೀಕೋಡ್]], [[ಕೊಟ್ಟಕ್ಕಲ್]], ಮತ್ತು [[ಪೊನ್ನಾನಿ]]ಗಳಲ್ಲಿನವು ಸೇರಿವೆ. ಜಿಲ್ಲೆಯ ಎಂಟು ಪ್ರಮುಖ ಫುಟ್ಬಾಲ್ ಕ್ರೀಡಾಂಗಣಗಳನ್ನು ಅಂತಾರಾಷ್ಟ್ರೀಕರಣಗೊಳಿಸಲು ಒಂದು ಫುಟ್ಬಾಲ್ ಕೇಂದ್ರವನ್ನು ಪ್ರಸ್ತಾಪಿಸಲಾಗಿದೆ.<ref>{{cite web |url=https://www.deccanchronicle.com/sports/in-other-news/180716/football-hub-proposed-in-malappuram.html |website=Deccan Chronicle |title=ಮಲಪ್ಪುರಂನಲ್ಲಿ ಫುಟ್ಬಾಲ್ ಕೇಂದ್ರ ಪ್ರಸ್ತಾಪಿಸಲಾಗಿದೆ |date=18 July 2016 |access-date=24 June 2020 |archive-date=28 November 2019 |archive-url=https://web.archive.org/web/20191128180459/https://www.deccanchronicle.com/sports/in-other-news/180716/football-hub-proposed-in-malappuram.html |url-status=live }}</ref> [[ತಾನೂರು, ಮಲಪ್ಪುರಂ|ತಾನೂರು]] ಮತ್ತು [[ನಿಲಂಬೂರ್]]ಗಳಲ್ಲಿ ಎರಡು ಹೊಸ ಕ್ರೀಡಾಂಗಣ ಸಂಕೀರ್ಣಗಳ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ.<ref>{{cite web |url=http://www.newsexperts.in/sports-minister-inaugurate-thanur-nilambur-stadium-complexes/ |website=newsexperts.in |title=ತಾನೂರು ಮತ್ತು ನಿಲಂಬೂರ್ ಕ್ರೀಡಾಂಗಣ ಸಂಕೀರ್ಣಗಳು |date=14 February 2019 |access-date=24 June 2020 |archive-date=26 June 2020 |archive-url=https://web.archive.org/web/20200626213013/http://www.newsexperts.in/sports-minister-inaugurate-thanur-nilambur-stadium-complexes/ |url-status=live }}</ref>
== ಪ್ರವಾಸಿ ಆಕರ್ಷಣೆಗಳು ==
{{multiple image
| align = left
| direction = vertical
| total_width = 150
| caption_align = center
| image1 = Adhyan para water fall.jpg
| caption1 = [[ಅಡ್ಯನ್ಪರಾ ಜಲಪಾತ]]
| image2 = Thamara 1.jpg
| caption2 = [[ತಿರುನವಾಯ ಲೋಟಸ್ ಲೇಕ್ ವೆಟ್ಲ್ಯಾಂಡ್|ತಿರುನವಾಯ ಲೋಟಸ್ ಲೇಕ್ ವೆಟ್ಲ್ಯಾಂಡ್]]
| image3 = Kodikuthimala, Malappuram.jpg
| caption3 = [[ಕೋಡಿಕುತಿಮಲ]]
| image4 = Kottakkunnu mazhaveed.jpg
| caption4 = [[ಕೊಟ್ಟಕ್ಕುಣ್ಣು]]
| image5 = DR0034DSC 6627.jpg
| caption5 = [[ಅಂಗಡಿಪುರಂ ರೈಲ್ವೇ ನಿಲ್ದಾಣ|ಅಂಗಡಿಪುರಂ]] ನಲ್ಲಿ [[ನಿಲಂಬೂರ್–ಶೋರನೂರ್ ಮಾರ್ಗ]]
| image6 = Noor Lake - Tirur, Kerala (2).jpg
| caption6 = ನೂರ್ ಸರೋವರ, [[ತಿರೂರ್]]
| image7 = View of Arimbra mala through old rubber plantation of Late Chakeeri Kunhami Umma1.jpg
| caption7 = [[ಅರಿಂಬ್ರಾ ಬೆಟ್ಟಗಳು, ಮಲಪ್ಪುರಂ|ಅರಿಂಬ್ರಾ ಬೆಟ್ಟಗಳು]]
| image8 = Parappanangadi Beach.JPG
| caption8 = [[ಪರಪ್ಪನಂಗಾಡಿ]]ಯಲ್ಲಿ [[ಅರೇಬಿಯನ್ ಸಮುದ್ರ]]
| image9 = Nedumkayam Forest, nilambur - panoramio.jpg
| caption9 = ನಿಲಂಬೂರ್ ಬಳಿಯ [[ನೆಡುಂಕಾಯಂ]] ಮೀಸಲು ಅರಣ್ಯ
| image10 = Padinharekkara beach.png
| caption10 = [[ಪದಿಂಜಾರೆಕ್ಕರ ಕಡಲತೀರ]] - ತಿರೂರ್
}}
* [[ಅಡ್ಯನ್ಪರಾ ಜಲಪಾತ]] - ಕುರುಂಬಲಂಗೋಡ್ನಲ್ಲಿನ ಜಲಪಾತ.<ref>{{cite web|url=https://www.keralatourism.org/destination/adyanpara-waterfalls/38|website=keralatourism.org|title=ಅಡ್ಯನ್ಪರಾ ಜಲಪಾತಗಳು|access-date=22 June 2020|archive-date=25 June 2020|archive-url=https://web.archive.org/web/20200625104803/https://www.keralatourism.org/destination/adyanpara-waterfalls/38|url-status=live}}</ref>
* [[ಅಂಗಿಂಡ ಶಿಖರ]] – [[ಕರುವರಕುಂಡು]] ಬಳಿಯ 2,383 ಮೀ ಎತ್ತರದ ಶಿಖರ.
* [[ಅರಿಂಬ್ರಾ ಬೆಟ್ಟಗಳು, ಮಲಪ್ಪುರಂ|ಅರಿಂಬ್ರಾ ಬೆಟ್ಟಗಳು]], 'ಮಿನಿ-ಊಟಿ' ಎಂದೂ ಕರೆಯಲ್ಪಡುತ್ತದೆ. ಸಮುದ್ರ ಮಟ್ಟದಿಂದ 1050 ಅಡಿ ಎತ್ತರದಲ್ಲಿದೆ.<ref>{{cite web|title=ಅರಿಂಬ್ರಾ ಬೆಟ್ಟಗಳು ಉಪನಾಮ ಮಿನಿ ಊಟಿ ಆಫ್ ಕೇರಳ|url=http://post.artoflegendindia.com/2013/05/arimbra-hills-aka-mini-ooty-of-kerala.html|website=Art of Legend India|access-date=30 May 2015|archive-url=https://web.archive.org/web/20150530182410/http://post.artoflegendindia.com/2013/05/arimbra-hills-aka-mini-ooty-of-kerala.html|archive-date=30 May 2015|url-status=dead}}</ref>
* [[ಆರ್ಯ ವೈದ್ಯ ಶಾಲೆ|ಆರ್ಯ ವೈದ್ಯ ಶಾಲೆ, ಕೊಟ್ಟಕ್ಕಲ್]] – ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಯಾದ ಆಯುರ್ವೇದದಲ್ಲಿ ಅದರ ಪರಂಪರೆ ಮತ್ತು ಪರಿಣತಿಗೆ ಹೆಸರುವಾಸಿಯಾಗಿದೆ.
* [[ಅಯ್ಯಪನೋವ್ ಜಲಪಾತಗಳು]] – [[ವಳಾಂಚೇರಿ]], [[ಅತವನಾಡ್]] ನಲ್ಲಿನ ಜಲಪಾತ.
* [[ಭಾರತಪ್ಪುಳ್ಳ]] – ಕೇರಳದ ಎರಡನೇ ಅತಿ ಉದ್ದದ ನದಿ. ಪೊನ್ನಾನಿ ನದಿ, ನಿಲ ಮತ್ತು ಪೆರಾರ್ ಎಂಬ ಹೆಸರುಗಳಲ್ಲಿಯೂ ಕರೆಯಲ್ಪಡುತ್ತದೆ.<ref>{{cite web
| title=ಮಾಹಿತಿ ಸತ್ಯಗಳು
| work=ಆಲ್ ಕೇರಳ ರಿವರ್ ಪ್ರೊಟೆಕ್ಷನ್ ಕೌನ್ಸಿಲ್
| url=http://puzhakal0.tripod.com/river.html
| access-date=30 January 2006
| archive-date=16 July 2012
| archive-url=https://web.archive.org/web/20120716182531/http://puzhakal0.tripod.com/river.html
| url-status=live
}}</ref>
* ''ಬಿಯ್ಯಂ ಕಾಯಲ್'' - ಪೊನ್ನಾನಿಯಲ್ಲಿನ ಸರೋವರ<ref>{{cite web |url=https://www.nativeplanet.com/ponnani/attractions/biyyam-kayal/ |website=nativeplanet.com |title=ಪೊನ್ನಾನಿಯ ಬಿಯ್ಯಂ ಸರೋವರಗಳು |access-date=22 June 2020 |archive-date=22 June 2020 |archive-url=https://web.archive.org/web/20200622175347/https://www.nativeplanet.com/ponnani/attractions/biyyam-kayal/ |url-status=live }}</ref>
* [[ಚಾಲಿಯಾರ್]] – ಕೇರಳದ ನಾಲ್ಕನೇ ಅತಿ ಉದ್ದದ ನದಿ. ವಿಶ್ವದ ಅತ್ಯಂತ ಹಳೆಯ ತೇಗ ತೋಟವಾದ ಕೊನೊಲಿಯ ಪ್ಲಾಟ್ ಚಾಲಿಯಾರ್ ಪಕ್ಕದಲ್ಲಿರುವ ಕಣಿವೆಯಲ್ಲಿದೆ.
* [[ಚಮ್ರವಟ್ಟೊಂ ನಿಯಂತ್ರಕ-ಸೇತುವೆ]] – ಕೇರಳದ ಅತಿದೊಡ್ಡ ನಿಯಂತ್ರಕ-ಸೇತುವೆ [[ತಿರೂರ್ ತಾಲೂಕು]] ಅನ್ನು [[ಪೊನ್ನಾನಿ]] ಬಂದರಿನೊಂದಿಗೆ ಸಂಪರ್ಕಿಸುತ್ತದೆ.<ref>{{cite web |url=http://www.mathrubhumi.com/story.php?id=272379 |title=ചമ്രവട്ടം പാലം നാളെ നാടിന്റെ സ്വന്തം – Latest News – Mathrubhumi |access-date=16 May 2012 |url-status=dead |archive-url=https://web.archive.org/web/20120516041713/http://www.mathrubhumi.com/story.php?id=272379|archive-date=16 May 2012 }}</ref>
* ಚೆಕ್ಕುಣ್ಣು ಮಲ – [[ಎಡವನ್ನ]]ನ [[ಚಾಲಿಯಾರ್]] ಬಳಿಯ ಮಂಜು ಮುಸುಕಿದ ಹಸಿರು ಬೆಟ್ಟ.<ref>{{Cite web|url=https://www.onmanorama.com/travel/getting-about-kerala/malappuram/2018/07/22/chekkunnu-malappuram-adventure-trek.html|title=ಚೆಕ್ಕುಣ್ಣು ಮಲಪ್ಪುರಂ|access-date=11 August 2020|website=Onmanorama|archive-date=19 September 2020|archive-url=https://web.archive.org/web/20200919013416/https://www.onmanorama.com/travel/getting-about-kerala/malappuram/2018/07/22/chekkunnu-malappuram-adventure-trek.html|url-status=live}}</ref>
* ಚೆರುಂಬ್ ಪ್ರವಾಸಿ ಗ್ರಾಮ – [[ಕರುವರಕುಂಡು]] ನಲ್ಲಿನ ಪರಿಸರ ಗ್ರಾಮ<ref>{{cite web |url=https://www.tripadvisor.in/Attraction_Review-g12461783-d17735187-Reviews-Cherumb_Echo_Village-Karuvarakundu_Malappuram_District_Kerala.html |website=tripadvisor.in |title=ಚೆರುಂಬ್ |access-date=22 June 2020 |archive-date=24 June 2020 |archive-url=https://web.archive.org/web/20200624174617/https://www.tripadvisor.in/Attraction_Review-g12461783-d17735187-Reviews-Cherumb_Echo_Village-Karuvarakundu_Malappuram_District_Kerala.html |url-status=live }}</ref>
* [[ಕಡಲುಂಡಿ ಪಕ್ಷಿ ಧಾಮ]] – ನೂರಕ್ಕೂ ಹೆಚ್ಚು ಪ್ರಭೇದಗಳ ಸ್ಥಳೀಯ ಪಕ್ಷಿಗಳು ಮತ್ತು 60 ಕ್ಕೂ ಹೆಚ್ಚು ಪ್ರಭೇದಗಳ ವಲಸೆ ಪಕ್ಷಿಗಳ ನೆಲೆ<ref>{{cite web |url=https://www.keralatourism.org/kerala-article/kadalundi-bird-sanctuary/122 |website=keralatourism.org |title=ಕಡಲುಂಡಿಯ ಪಕ್ಷಿಗಳು |access-date=22 June 2020 |archive-date=25 June 2020 |archive-url=https://web.archive.org/web/20200625004216/https://www.keralatourism.org/kerala-article/kadalundi-bird-sanctuary/122 |url-status=live }}</ref>
* ಕಡಲುಂಡಿ-ವಲ್ಲಿಕುಣ್ಣು ಸಮುದಾಯ ಮೀಸಲು – ಕೇರಳದ ಮೊದಲ ಸಮುದಾಯ ಮೀಸಲು ಮತ್ತು ಪ್ರವಾಸೋದ್ಯಮ ತಾಣ.<ref name="Vallikkunnu"/>
* [[ಕಕ್ಕಾಂಪೊಯಿಲ್]] – ಚೆರುಪುಳ್ಳದ ದಡದಲ್ಲಿರುವ ಬೆಟ್ಟದ ಗ್ರಾಮ.
* ಕೇರಳಂಕುಂಡು ಜಲಪಾತಗಳು – [[ಕರುವರಕುಂಡು]] ನಲ್ಲಿ ಸಮುದ್ರ ಮಟ್ಟದಿಂದ 1500 ಅಡಿ ಎತ್ತರದಲ್ಲಿದೆ.<ref>{{cite web |url=https://www.keralatourism.org/video-gallery/keralamkundu-waterfalls/1064 |website=keralatourism.org |title=ಕೇರಳಂಕುಂಡು ಜಲಪಾತಗಳು |access-date=27 June 2020 |archive-date=27 June 2020 |archive-url=https://web.archive.org/web/20200627070438/https://www.keralatourism.org/video-gallery/keralamkundu-waterfalls/1064 |url-status=live }}</ref>
* [[ಕೋಡಿಕುತಿಮಲ]] – ಅಮ್ಮಿನಿಕ್ಕಾಡನ್ ಬೆಟ್ಟಗಳಲ್ಲಿ, ಪೆರಿಂತಲ್ಮನ್ನ. ಮಿನಿ-ಊಟಿ ಎಂದೂ ಕರೆಯಲ್ಪಡುತ್ತದೆ.<ref>{{cite web |url= https://www.keralatourism.org/kerala-article/kodukuthimala/873 |website= keralatourism.org |title= ಕೋಡಿಕುತಿಮಲ |access-date= 22 June 2020 |archive-date= 21 October 2019 |archive-url= https://web.archive.org/web/20191021131640/https://www.keralatourism.org/kerala-article/kodukuthimala/873 |url-status= live }}</ref>
* ಕೊಲ್ಲಂ ಕೊಲ್ಲಿ ಜಲಪಾತಗಳು – [[ಅರೀಕೋಡ್]] ಬಳಿಯ ಜಲಪಾತ.
* [[ಕೊಟ್ಟಕ್ಕುಣ್ಣು]] – ಮಲಪ್ಪುರಂ ನಗರದ ಮಧ್ಯದಲ್ಲಿ. ''ಮಲಪ್ಪುರಂನ ಮರೀನ್ ಡ್ರೈವ್'' ಎಂದೂ ಕರೆಯಲ್ಪಡುತ್ತದೆ. ಇಲ್ಲಿ ಹಳೆಯ ಕೋಟೆ, ಜಲ ಉದ್ಯಾನವನ, ಮತ್ತು ಪ್ರಾಚೀನ ಭಿತ್ತಿಚಿತ್ರಗಳು ಕಂಡುಬರುತ್ತವೆ.<ref>{{cite web|url=https://www.keralatourism.org/destination/kottakkunnu-malappuram/396|website=keralatourism.org|title=ಕೊಟ್ಟಕ್ಕುಣ್ಣು|access-date=22 June 2020|archive-date=22 June 2020|archive-url=https://web.archive.org/web/20200622214435/https://www.keralatourism.org/destination/kottakkunnu-malappuram/396|url-status=live}}</ref>
* [[ಕುಟ್ಟಿಪುರಂ ಸೇತುವೆ]] – [[ಭಾರತಪ್ಪುಳ್ಳ]] ನದಿಯ ಮೇಲೆ ನಿರ್ಮಿಸಲಾದ ಅತಿದೊಡ್ಡ ಮತ್ತು ಅತ್ಯಂತ ಹಳೆಯ ಸೇತುವೆಗಳಲ್ಲಿ ಒಂದಾಗಿದ್ದು, ಇದು [[ಮಲಬಾರ್ ಜಿಲ್ಲೆ|ಮಲಬಾರ್ ಪ್ರದೇಶ]]ವನ್ನು ಹಿಂದಿನ [[ತಿರುವಾಂಕೂರು-ಕೊಚ್ಚಿ]] ಯೊಂದಿಗೆ ರಸ್ತೆಯ ಮೂಲಕ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
* [[ತಿರುನವಾಯ ಲೋಟಸ್ ಲೇಕ್ ವೆಟ್ಲ್ಯಾಂಡ್]] – ಲೋಟಸ್ ಲೇಕ್ ಮತ್ತು ವಲಸೆ ಪಕ್ಷಿಗಳ ಅಭಯಾರಣ್ಯ <ref>{{cite news | url=https://timesofindia.indiatimes.com/city/kozhikode/its-gloom-amid-bloom-for-lotus-farmers/articleshow/74870963.cms | title=ಇದು ತಾವರೆ ರೈತರಿಗೆ ಅರಳುವಿಕೆಯ ನಡುವಿನ ಕತ್ತಲು | newspaper=The Times of India | date=29 March 2020 }}</ref>
* [[ಮುಕುರ್ತಿ]] – ದಕ್ಷಿಣ ಭಾರತದ ಐದನೇ ಅತಿ ಎತ್ತರದ ಶಿಖರ (ಸಮುದ್ರ ಮಟ್ಟದಿಂದ 2,554 ಮೀ).
* ''ನಾಡುಕಾನಿ ಚುರಂ'' – [[ನಿಲಂಬೂರ್]] ತಾಲೂಕಿನ ಈಶಾನ್ಯ ಕೊನೆಯಲ್ಲಿರುವ [[ಘಾಟ್ ರಸ್ತೆಗಳು|ಘಾಟ್ ರಸ್ತೆ]], ಇದು ಮಲಪ್ಪುರಂ ಜಿಲ್ಲೆಯನ್ನು [[ತಮಿಳುನಾಡು]]ನ [[ನೀಲಗಿರಿ ಜಿಲ್ಲೆ|ನೀಲಗಿರಿ]] ಬೆಟ್ಟದ ಜಿಲ್ಲೆಯೊಂದಿಗೆ ಸಂಪರ್ಕಿಸುತ್ತದೆ.<ref name="Nadukani"/>
* ನೆಡುಂಕಾಯಂ ಮಳೆಕಾಡು – [[ನೀಲಗಿರಿ ಜೀವಗೋಳ ಮೀಸಲು]]ದ ಭಾಗ. ಇದು ತನ್ನ ಹಸಿರಿಗೆ ಹೆಸರುವಾಸಿಯಾಗಿದೆ.<ref>{{cite web |url=https://www.keralatourism.org/destination/nedumkayam-rainforest/395 |website=keralatourism.org |title=ನೆಡುಂಕಾಯಂ ಮಳೆಕಾಡು |access-date=22 June 2020 |archive-date=25 June 2020 |archive-url=https://web.archive.org/web/20200625154923/https://www.keralatourism.org/destination/nedumkayam-rainforest/395 |url-status=live }}</ref>
* [[ಹೊಸ ಅಮರಂಬಲಂ ಮೀಸಲು ಅರಣ್ಯ]] – [[ನಿಲಂಬೂರ್]] ಬಳಿಯ ವನ್ಯಜೀವಿ ಅಭಯಾರಣ್ಯ.<ref name="birdlife.org">{{cite web|url=http://www.birdlife.org/datazone/sitefactsheet.php?id=18238|title=ಬರ್ಡ್ಲೈಫ್ ಇಂಟರ್ನ್ಯಾಷನಲ್ (2016) ಪ್ರಮುಖ ಹಕ್ಕಿ ಮತ್ತು ಜೈವಿಕ ವೈವಿಧ್ಯತೆಯ ಪ್ರದೇಶದ ಮಾಹಿತಿ ಪತ್ರ: ಅಮರಂಬಲಂ ವನ್ಯಜೀವಿ ಅಭಯಾರಣ್ಯ – ನಿಲಂಬೂರ್|publisher=[[ಬರ್ಡ್ಲೈಫ್ ಇಂಟರ್ನ್ಯಾಷನಲ್]]|access-date=27 June 2020|archive-date=25 November 2015|archive-url=https://web.archive.org/web/20151125112844/http://www.birdlife.org/datazone/sitefactsheet.php?id=18238|url-status=live}}</ref>
* [[ನಿಲಂಬೂರ್ ಸಾಮ್ರಾಜ್ಯ|''ನಿಲಂಬೂರ್ ಕೋವಿಲಕಂ'']] – ನಿಲಂಬೂರ್ ರಾಜಮನೆತನದ ಪ್ರಧಾನ ಕಚೇರಿ.<ref>{{cite web |url=https://www.keralatourism.org/destination/nilambur-kovilakom-malappuram/560 |website=keralatourism.org |title=ನಿಲಂಬೂರ್ ಕೋವಿಲಕಂ |access-date=22 June 2020 |archive-date=25 June 2020 |archive-url=https://web.archive.org/web/20200625030708/https://www.keralatourism.org/destination/nilambur-kovilakom-malappuram/560 |url-status=live }}</ref>
* [[ನಿಲಂಬೂರ್-ಶೋರನೂರ್ ಮಾರ್ಗ]] – ಭಾರತದ ಅತ್ಯಂತ ಕಡಿಮೆ [[ಬ್ರಾಡ್-ಗೇಜ್ ರೈಲು]] ಮಾರ್ಗಗಳಲ್ಲಿ ಒಂದಾಗಿದೆ, ಹಸಿರಿನಿಂದ ಕೂಡಿದೆ.
* [[ತಿರೂರ್|ನೂರ್ ಸರೋವರ]] – [[ತಿರೂರ್]] ನಲ್ಲಿನ ಸರೋವರ.
* [[ಊರಕಂ ಬೆಟ್ಟ]] – [[ಮಲಪ್ಪುರಂ]] ಬಳಿಯ ಪರ್ವತ.
* [[ಪದಿಂಜಾರೆಕ್ಕರ ಕಡಲತೀರ]] – [[ತಿರೂರ್]]ನ ಕೂಟ್ಟಾಯಿಯಲ್ಲಿನ ಕಡಲತೀರ
* ''ಪೂರಪ್ಪುಳ್ಳ'' ನದಿ – [[ವಲ್ಲಿಕುಣ್ಣು]]-[[ಪರಪ್ಪನಂಗಾಡಿ]]-[[ತಾನೂರು, ಮಲಪ್ಪುರಂ|ತಾನೂರು]] ಪ್ರದೇಶದಲ್ಲಿನ [[ಕಡಲುಂಡಿ ನದಿ]]ಯ ಸುಂದರ ಕರಾವಳಿ ಉಪನದಿ.
* [[ಪುರತ್ತೂರ್|''ಪದಿಂಜಾರೆಕರ ಅಳಿಮುಖಂ'']] ಕಡಲತೀರ – ಎರಡು ನದಿಗಳು ([[ತಿರೂರ್ ನದಿ]] ಮತ್ತು [[ಭಾರತಪ್ಪುಳ್ಳ]]) ಇಲ್ಲಿ [[ಅರೇಬಿಯನ್ ಸಮುದ್ರ]]ವನ್ನು ಸೇರುತ್ತವೆ.<ref>{{cite web |url=https://www.keralatourism.org/video-gallery/padinjarekkara-beach/1067 |website=keralatourism.org |title=ಪದಿಂಜಾರೆಕರ ಕಡಲತೀರ |access-date=22 June 2020 |archive-date=22 June 2020 |archive-url=https://web.archive.org/web/20200622224229/https://www.keralatourism.org/video-gallery/padinjarekkara-beach/1067 |url-status=live }}</ref> [[ಪೊನ್ನಾನಿ]] ಬಂದರಿನ ಎದುರಿಗೆ [[ಪುರತ್ತೂರ್]]ನಲ್ಲಿನ ಕಡಲತೀರ, ಮುಖಜಭೂಮಿ, ಮತ್ತು ವಲಸೆ ಹಕ್ಕಿಗಳ ಕೇಂದ್ರ.
* [[ಪಾಲೂರ್ ಕೊಟ್ಟ ಜಲಪಾತಗಳು]] – [[ಪೆರಿಂತಲ್ಮನ್ನ]] ಬಳಿ [[ಟಿಪ್ಪು ಸುಲ್ತಾನ್]] ನಿರ್ಮಿಸಿದ ಪಾಲೂರ್ ಕೋಟೆಯ ಪಕ್ಕದಲ್ಲಿರುವ ಜಲಪಾತ.<ref>{{Cite web|url=https://english.mathrubhumi.com/travel/kerala/kerala-travel/a-trip-to-paloor-kotta-where-tippu-sulthan-once-sought-asylum-1.4049141|title=ಪಾಲೂರ್ ಕೊಟ್ಟಕ್ಕೆ ಒಂದು ಪ್ರವಾಸ|date=18 August 2019|access-date=10 August 2020|website=Mathrubhumi|last=ರಾಜೇಶ್ ಆರ್.|publisher=english.mathrubhumi.com|archive-date=7 August 2020|archive-url=https://web.archive.org/web/20200807121357/https://english.mathrubhumi.com/travel/kerala/kerala-travel/a-trip-to-paloor-kotta-where-tippu-sulthan-once-sought-asylum-1.4049141|url-status=live}}</ref>
* ಪರಪ್ಪನಂಗಾಡಿ ಕಡಲತೀರ – [[ಪರಪ್ಪನಂಗಾಡಿ]] ಕರಾವಳಿ ಪಟ್ಟಣದಲ್ಲಿನ ಕಡಲತೀರ.
* ಪರವನ್ನ ಕಡಲತೀರ – [[ವೆಟ್ಟೊಂ ಗ್ರಾಮ ಪಂಚಾಯತ್|ವೆಟ್ಟೊಂ]]ನಲ್ಲಿನ ಸುಂದರ ಕಡಲತೀರ.
* ಪೊನ್ನಾನಿ ಕಡಲತೀರ – ಪೊನ್ನಾನಿಯಲ್ಲಿನ ಕಡಲತೀರ.
* ''ಪೂಂತಾನಂ ಇಲ್ಲಂ'' – 16 ನೇ ಶತಮಾನದ ಮಲಯಾಳಂ ಕವಿ [[ಪೂಂತಾನಂ ನಂಬೂದಿರಿ]] ಅವರ ಜನ್ಮಸ್ಥಳ [[ಪೆರಿಂತಲ್ಮನ್ನ]] ಬಳಿ.<ref>{{cite news |url=https://www.thehindu.com/society/history-and-culture/the-charms-of-poonthanam-illam/article25308319.ece/ |title=ಪೂಂತಾನಂ ಇಲ್ಲಂನ ಮೋಡಿಗಳು |last=ಅರುಣ್ ನಾರಾಯಣನ್ |date=25 October 2018 |work=The Hindu |access-date=28 March 2021 |archive-date=10 April 2021 |archive-url=https://web.archive.org/web/20210410144928/https://www.thehindu.com/society/history-and-culture/the-charms-of-poonthanam-illam/article25308319.ece/amp/ |url-status=live }}</ref>
* ''ಪೂರಪ್ಪುಳ್ಳ ಅಳಿಮುಖಂ'' – [[ತಾನೂರು, ಮಲಪ್ಪುರಂ|ತಾನೂರು]]ನಲ್ಲಿನ ಮುಖಜಭೂಮಿ.
* [[ಪುತಂತೇರು]] – ಒಂದು ಸಣ್ಣ ಕರಾವಳಿ ಪಟ್ಟಣ.
* [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]] – [[ಕರುವರಕುಂಡು]] ಬಳಿ ಇದೆ.
*ಶಾಂತಿತೀರಂ ಪಾರ್ಕ್ - ಮಲಪ್ಪುರಂ ಪಟ್ಟಣದಲ್ಲಿದೆ
* [[ತಾನೂರು ಕಡಲತೀರ]] – [[ತಾನೂರು, ಮಲಪ್ಪುರಂ|ತಾನೂರು]]ನಲ್ಲಿನ ಕಡಲತೀರ.
* [[ತೇಗ ವಸ್ತುಸಂಗ್ರಹಾಲಯ]] – ನಿಲಂಬೂರ್ನಲ್ಲಿನ ವಿಶ್ವದ ಮೊದಲ ತೇಗ ತೋಟ.<ref>{{cite web |url=https://www.keralatourism.org/destination/teak-museum-nilambur/344 |website=keralatourism.org |title=ತೇಗ ವಸ್ತುಸಂಗ್ರಹಾಲಯ |access-date=22 June 2020 |archive-date=23 June 2020 |archive-url=https://web.archive.org/web/20200623183504/https://www.keralatourism.org/destination/teak-museum-nilambur/344 |url-status=live }}</ref>
* [[ತಿರೂರ್ನ ತುಂಚನ್ ಪರಂಬು|ತುಂಚನ್ ಪರಂಬು]] – ಇದು ಆಧುನಿಕ ಮಲಯಾಳಂ ಭಾಷೆಯ ಪಿತಾಮಹ ಎಂದು ಕರೆಯಲ್ಪಡುವ [[ತುಂಚತ್ತ್ ಎಝುತ್ತಚನ್]] ಅವರ ಜನ್ಮಸ್ಥಳ.
* [[ತಿರೂರ್ ನದಿ]] – [[ತಿರೂರ್ ತಾಲೂಕು]] ಮೂಲಕ ಹರಿಯುವ ತೆಂಗಿನಕಾಯಿಯಿಂದ ಆವೃತವಾದ ಹಸಿರು ನದಿ. [[ಉಪ್ಪುನೀರಿನ ಕಾಡುಗಳು|ಉಪ್ಪುನೀರಿನ ಕಾಡು]] ತೋಟಗಳು ಮತ್ತು ''ಕಡವು''ಗಳು ಅದರ ದಡದಲ್ಲಿ ಕಂಡುಬರುತ್ತವೆ.
* ಯುನಿಟಿ ಹಿಲ್ ವ್ಯೂಪಾಯಿಂಟ್ – [[ಮಂಜೇರಿ]]ಯಲ್ಲಿನ ವೀಕ್ಷಣಾ ತಾಣ.
* ಉಣ್ಣಿಯಾಲ್ ಕಡಲತೀರ – [[ನಿರಮರುತೂರ್]] ನಲ್ಲಿನ ಕಡಲತೀರ.
* ವಕ್ಕಾಡ್ ಕಡಲತೀರ – ತಿರೂರ್ ಮತ್ತು ಪೊನ್ನಾನಿಯ ನಡುವೆ.<ref>{{cite web |url=https://www.keralatourism.org/related-destinations/vakkad-beach-malappuram/ds543 |website=keralatourism.org |title=ವಕ್ಕಾಡ್ ಕಡಲತೀರ |access-date=27 June 2020 |archive-date=27 June 2020 |archive-url=https://web.archive.org/web/20200627074826/https://www.keralatourism.org/related-destinations/vakkad-beach-malappuram/ds543 |url-status=live }}</ref>
* ವಲ್ಲಿಕುಣ್ಣು ಕಡಲತೀರ – ಜಿಲ್ಲೆಯ ವಾಯುವ್ಯ ಕರಾವಳಿಯಲ್ಲಿನ ತೆಂಗಿನಕಾಯಿಯಿಂದ ಆವೃತವಾದ ಕಡಲತೀರ.<ref>{{cite web |url=https://www.keralatourism.org/destination/vallikunnu-beach-malappuram/515 |website=keralatourism.org |title=ವಲ್ಲಿಕುಣ್ಣು ಕಡಲತೀರ |access-date=25 July 2020 |archive-date=27 June 2020 |archive-url=https://web.archive.org/web/20200627075206/https://www.keralatourism.org/destination/vallikunnu-beach-malappuram/515 |url-status=live }}</ref>
* [[ವಾವುಲ್ ಮಲ]] – [[ಚುಂಗತರ]] ಬಳಿಯ 2,339 ಮೀ ಎತ್ತರದ ಪರ್ವತ ಶ್ರೇಣಿ.
== ಗಮನಾರ್ಹ ವ್ಯಕ್ತಿಗಳು ==
{{columns-list|colwidth=22em|
* [[ಎ. ವಿಜಯರಾಘವನ್]] – [[ರಾಜ್ಯಸಭಾ]] ಮಾಜಿ ಸದಸ್ಯ ಮತ್ತು [[ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)|CPI(M)]] ರಾಜ್ಯ ಕಾರ್ಯದರ್ಶಿ.
* [[ಎ. ಪಿ. ಅನಿಲ್ ಕುಮಾರ್]] – ಕೇರಳದ ಮಾಜಿ ಸಚಿವ.
* [[ಎ. ಆರ್. ರಾಜ ರಾಜ ವರ್ಮ]] – [[ಮಲಯಾಳಂ]] ಕವಿ ಮತ್ತು ವ್ಯಾಕರಣಕಾರ ''ಕೇರಳ ಪಾಣಿನಿ'' ಎಂದು ಕರೆಯಲ್ಪಡುತ್ತಾರೆ ([[ಪರಪ್ಪನಾಡ್]] ರಾಜಮನೆತನಕ್ಕೆ ಸೇರಿದವರು).
* [[ಅಬ್ದುಲ್ ನೆಡಿಯೋಡತ್]] – ಫುಟ್ಬಾಲ್ ಆಟಗಾರ.
* [[ಅಬ್ದುರಹಿಮಾನ್ ರಂಡತಾನಿ]] – ರಾಜಕಾರಣಿ.
* [[ಅಚ್ಯುತ ಪಿಷಾರಡಿ]] – [[ಸಂಸ್ಕೃತ ವ್ಯಾಕರಣ|ಸಂಸ್ಕೃತ ವ್ಯಾಕರಣ]]ಕಾರ, [[ಭಾರತೀಯ ಖಗೋಳಶಾಸ್ತ್ರ|ಖಗೋಳಶಾಸ್ತ್ರಜ್ಞ]] ಮತ್ತು [[ಭಾರತೀಯ ಗಣಿತ|ಗಣಿತಜ್ಞ]].
* [[ಅದಿಲ್ ಇಬ್ರಾಹಿಂ]] – ನಟ.
* [[ಅಹ್ಮದ್ ಕುಟ್ಟಿ]] – ಉತ್ತರ ಅಮೆರಿಕಾದ ಇಸ್ಲಾಮಿಕ್ ವಿದ್ವಾಂಸ.
* [[ಅಜಿಜೇಶ್ ಪಚಾತ್]] – [[ಮಲಯಾಳಂ]] [[ಕಾದಂಬರಿಕಾರ]], [[ಸಣ್ಣ ಕಥೆ]] ಬರಹಗಾರ ಮತ್ತು [[ಅಂಕಣಕಾರ]].
* [[ಅಕ್ಕಿತಂ ಅಚ್ಯುತನ್ ನಂಬೂದಿರಿ]] – [[ಮಲಯಾಳಂ]] ಕವಿ ಮತ್ತು ಪ್ರಬಂಧಕಾರ. ([[ಕುಮಾರನೆಲ್ಲೂರ್]] ನಲ್ಲಿ ಜನಿಸಿದರು, ಇದು ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳ ನಡುವಿನ ಗಡಿ ಗ್ರಾಮ. ಅವರು ''ಪೊನ್ನಾನಿ ಕಲಾರಿ''ಯ ಬರಹಗಾರರು.)
* [[ಅಕ್ಕಿತಂ ನಾರಾಯಣನ್]] – ಚಿತ್ರಕಾರ.
* [[ಅಲಿ ಮುಸ್ಲಿಯಾರ್]] – ಸ್ವಾತಂತ್ರ್ಯ ಕಾರ್ಯಕರ್ತ.
* [[ಅಮ್ಮು ಸ್ವಾಮಿನಾಥನ್]] – ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಸಂವಿಧಾನ ಸಭೆಯ ಸದಸ್ಯ.
* [[ಅನಸ್ ಎಡತ್ತೊಡಿಕ]] – ಭಾರತೀಯ ವೃತ್ತಿಪರ [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ಆಟಗಾರ.
* [[ಅನೀಶ್ ಜಿ. ಮೇನನ್]] – ನಟ.<ref>{{cite news |title=ಸಾಮಾನ್ಯ ಮತ್ತು ಅಸಾಮಾನ್ಯ ನಟನಾಗಿರುವುದು: ಅನೀಶ್ ಜಿ ಮೇನನ್ |url=https://www.deccanchronicle.com/entertainment/mollywood/190917/being-the-usual-and-unusual-actor-aneesh-g-menon.html |work=[[Deccan Chronicle]] |date=19 September 2017|access-date=1 December 2019 |archive-date=21 December 2019 |archive-url=https://web.archive.org/web/20191221152248/https://www.deccanchronicle.com/entertainment/mollywood/190917/being-the-usual-and-unusual-actor-aneesh-g-menon.html |url-status=live }}</ref><ref>{{cite news |last=ಪಿಳ್ಳೈ |first=ರಾಧಿಕಾ ಸಿ |date=9 March 2015 |title=ಪಾತ್ರದ ಉದ್ದವು ನನಗೆ ಮುಖ್ಯವಾಗಿದೆ: ಅನೀಶ್ |url=https://timesofindia.indiatimes.com/entertainment/malayalam/movies/news/Length-of-the-character-matters-to-me-Aneesh/articleshow/46492733.cms |work=[[The Times of India]] |access-date=1 April 2021 |archive-date=18 November 2018 |archive-url=https://web.archive.org/web/20181118040720/https://timesofindia.indiatimes.com/entertainment/malayalam/movies/news/Length-of-the-character-matters-to-me-Aneesh/articleshow/46492733.cms |url-status=live }}</ref>
* [[ಅನಿಕಾ]] – ನಟಿ.
* [[ಅಪರ್ಣಾ ನಾಯರ್]] – ನಟಿ.
* [[ಅರ್ಜುನ್ ಜಯರಾಜ್]] – ವೃತ್ತಿಪರ ಫುಟ್ಬಾಲ್ ಆಟಗಾರ.
* [[ನಂಬೂದಿರಿ (ಕಲಾವಿದ)|ಕಲಾವಿದ ನಂಬೂದಿರಿ]] – [[ಚಿತ್ರಕಲೆ|ಚಿತ್ರಕಾರ]].
* [[ಅರ್ಯಾಡನ್ ಮುಹಮ್ಮದ್]] – ಕೇರಳದ ಮಾಜಿ ಸಚಿವ.
* [[ಅರ್ಯಾಡನ್ ಶೌಕತ್]] – ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ರಾಜಕಾರಣಿ
* [[ಅಶಿಕ್ ಕುರುಣಿಯನ್]] – ಭಾರತೀಯ ವೃತ್ತಿಪರ [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ಆಟಗಾರ.
* [[ಅಸಿಫ್ ಸಹೀರ್]] – ಭಾರತೀಯ ಸಾಕರ್ ಆಟಗಾರ.
* [[ಅಝಾದ್ ಮೂಪನ್]] – ವೈದ್ಯ ಮತ್ತು ಲೋಕೋಪಕಾರಿ.<ref>{{cite web | url=http://www.vccircle.com/news/healthcare-services/2014/02/12/we-are-looking-turnover-1b-2017-azad-moopen-chairman-aster-dm | title=ನಾವು 2017 ರ ವೇಳೆಗೆ $1B ವಹಿವಾಟನ್ನು ನೋಡುತ್ತಿದ್ದೇವೆ: ಅಝಾದ್ ಮೂಪನ್, ಆಸ್ಟರ್ DM ಹೆಲ್ತ್ಕೇರ್ ಅಧ್ಯಕ್ಷರು | publisher=VC Circle | date=12 February 2014 | access-date=5 May 2014 | author=ಜಗ್ವಾನಿ, ಲೋಹಿತ್ | archive-date=5 May 2014 | archive-url=https://web.archive.org/web/20140505162506/http://www.vccircle.com/news/healthcare-services/2014/02/12/we-are-looking-turnover-1b-2017-azad-moopen-chairman-aster-dm | url-status=live }}</ref><ref>[http://www.pib.nic.in/newsite/erelease.aspx?relid=69364 ಪದ್ಮ ಪ್ರಶಸ್ತಿಗಳು ಘೋಷಣೆ] {{Webarchive|url=https://web.archive.org/web/20140222101141/http://www.pib.nic.in/newsite/PrintRelease.aspx?relid=102735 |date=22 February 2014 }} ಗೃಹ ವ್ಯವಹಾರಗಳ ಸಚಿವಾಲಯ, 25 ಜನವರಿ 2011</ref><ref name="forbes1">{{cite web|url=http://english.forbesmiddleeast.com/details.php?list=44480&row=3869 |title=ಯುಎಇಯಲ್ಲಿ ಟಾಪ್ 100 ಭಾರತೀಯ ನಾಯಕರು |work=Forbes |access-date=5 May 2014 |url-status=dead |archive-url=https://web.archive.org/web/20140505172839/http://english.forbesmiddleeast.com/details.php?list=44480&row=3869 |archive-date=5 May 2014 }}</ref>
* [[ಅಳ್ವಾಂಚೇರಿ ತಂಪ್ರಕ್ಕಲ್]] – ಕೇರಳದ [[ನಂಬೂದಿರಿ]]ಗಳ ಮಾಜಿ ಮುಖ್ಯಸ್ಥ.
* [[ಬಿ. ಎಂ. ಕುಟ್ಟಿ]] – ಪತ್ರಕರ್ತ ಮತ್ತು ಕಾರ್ಯಕರ್ತ.
* [[ಬಾಲಮಣಿ ಅಮ್ಮ]] – [[ಮಲಯಾಳಂ ಸಾಹಿತ್ಯ]]ದ ಬರಹಗಾರ.
* [[ಸಿ. ಕರುಣಾಕರ ಮೇನನ್]] – ಪತ್ರಕರ್ತ ಮತ್ತು ರಾಜಕಾರಣಿ.
* [[ಸಿ. ರಾಧಾಕೃಷ್ಣನ್]] – [[ಮಲಯಾಳಂ]] ಭಾಷೆಯ ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ.
* [[ಸಿ. ಎನ್. ಅಹ್ಮದ್ ಮೌಲವಿ]] – [[ಮಲಯಾಳಂ ಸಾಹಿತ್ಯ]]ದ ಭಾರತೀಯ ಬರಹಗಾರ.
* [[ಚಕ್ಕೇರಿ ಅಹ್ಮದ್ ಕುಟ್ಟಿ]] – ಕೇರಳದ ಮಾಜಿ ಸಚಿವ ಮತ್ತು [[ಕೇರಳ ವಿಧಾನಸಭೆ]]ಯ ಮಾಜಿ ಸ್ಪೀಕರ್.
* [[ಚಲಿಲಕತ್ ಕುನಹ್ಮದ್ ಹಾಜಿ]] – ಸಮಾಜ ಸುಧಾರಕ.<ref>{{cite journal |last1=ಎಚ್. ಅಬ್ದುಲ್ ರಹಮಾನ್ |title=ವಕ್ಕೊಂ ಮೌಲವಿ ಮತ್ತು ಮುಸ್ಲಿಮರಲ್ಲಿ ನವೋದಯ ಚಳುವಳಿ |journal=University |date=6 April 2009 |publisher=University of Kerala-Shodhganga |location=Conclusion |page=257 |hdl=10603/164340 |url=https://shodhganga.inflibnet.ac.in/handle/10603/164340 |access-date=21 March 2020 |archive-date=21 March 2020 |archive-url=https://web.archive.org/web/20200321184159/https://shodhganga.inflibnet.ac.in/handle/10603/164340 |url-status=live }}</ref>
* [[ಚೇರುಕಡ್|ಚೇರುಕಡ್ ಗೋವಿಂದ ಪಿಷಾರೋಡಿ]] – ಮಲಯಾಳಂ ನಾಟಕಕಾರ, ಕಾದಂಬರಿಕಾರ, ಕವಿ, ಮತ್ತು ರಾಜಕೀಯ ಕಾರ್ಯಕರ್ತ.
* [[ದಾಮೋದರ]] – ಖಗೋಳಶಾಸ್ತ್ರಜ್ಞ-ಗಣಿತಜ್ಞ.
* [[ದೀಪು ಪ್ರದೀಪ್]] – ಚಿತ್ರಕಥೆಗಾರ.
* [[ದೇವ್ದತ್ತ್ ಪಡಿಕ್ಕಲ್]] – ಭಾರತೀಯ ಕ್ರಿಕೆಟ್ ಆಟಗಾರ.
* [[ಧನಿಶ್ ಕಾರ್ತಿಕ್]] – ನಟ.
* [[ದಿಲೀಪ್ ಕೆ. ನಾಯರ್]] – ಶಿಕ್ಷಣತಜ್ಞ, ಕೌಶಲ್ಯ ಅಭಿವೃದ್ಧಿ ಪ್ರಚಾರಕ, ಸಾಮಾಜಿಕ ಕಾರ್ಯಕರ್ತ, ಮತ್ತು ಪ್ರಕಾಶಕ.
* [[ಇ. ಹರಿಕುಮಾರ್]] – [[ಮಲಯಾಳಂ]] [[ಕಾದಂಬರಿಕಾರ]] ಮತ್ತು [[ಸಣ್ಣ ಕಥೆ]] ಬರಹಗಾರ.
* [[ಇ. ಮೊಯ್ದು ಮೌಲವಿ]] – [[ಭಾರತೀಯ ಸ್ವಾತಂತ್ರ್ಯ ಹೋರಾಟಗಾರ]], ಮತ್ತು ಇಸ್ಲಾಮಿಕ್ ವಿದ್ವಾಂಸ.<ref>{{cite news |title=ರಾಷ್ಟ್ರೀಯತೆ ಈಗ ಗುಂಪು ಮನೋವಿಜ್ಞಾನಕ್ಕೆ ಸಂಬಂಧಿಸಿದೆ |url=https://www.thehindu.com/news/cities/kozhikode/nationalism-now-linked-to-mob-psychology/article18868671.ece |access-date=12 March 2020 |work=The Hindu |date=8 June 2017 |archive-date=4 November 2020 |archive-url=https://web.archive.org/web/20201104213235/https://www.thehindu.com/news/cities/kozhikode/nationalism-now-linked-to-mob-psychology/article18868671.ece |url-status=live }}</ref>
* [[ಇ. ಶ್ರೀಧರನ್]] – ಭಾರತದ ಮೆಟ್ರೋ ಮ್ಯಾನ್.
* [[ಇ. ಕೆ. ಇಂಬಿಚಿ ಬಾವ]] – ರಾಜಕಾರಣಿ.
* [[ಇ. ಎಂ. ಎಸ್. ನಂಬೂದಿರಿಪಾಡ್]] – ಕೇರಳದ ಮೊದಲ ಮುಖ್ಯಮಂತ್ರಿ ಮತ್ತು [[ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)|CPI(M)]] ಸ್ಥಾಪಕ.<ref>{{cite news | url=https://www.independent.co.uk/news/obituaries/obituary-e-m-s-namboodiripad-1153957.html | newspaper=[[The Independent]] | first=ಕುಲ್ದೀಪ್ | last=ಸಿಂಗ್ | date=1 April 1998 | title=ಸ್ಮರಣಾರ್ಥ: ಇ. ಎಂ. ಎಸ್. ನಂಬೂದಿರಿಪಾಡ್ | access-date=20 May 2018 | archive-date=26 December 2017 | archive-url=https://web.archive.org/web/20171226090424/http://www.independent.co.uk/news/obituaries/obituary-e-m-s-namboodiripad-1153957.html | url-status=live }}</ref>
* [[ಇ. ಟಿ. ಮೊಹಮ್ಮದ್ ಬಷೀರ್]] – ಕೇರಳದ ಮಾಜಿ ಸಚಿವ ಮತ್ತು [[ಲೋಕಸಭಾ]] ಸದಸ್ಯ.
* [[ಎಡಸ್ಸೇರಿ ಗೋವಿಂದನ್ ನಾಯರ್]] – ಕವಿ.
* [[ಎಲಾಮರಂ ಕರೀಮ್]] – ಕೇರಳದ ಮಾಜಿ ಸಚಿವ ಮತ್ತು [[ರಾಜ್ಯಸಭಾ]] ಸದಸ್ಯ.
* [[ಫೈಸಲ್ ಕುಟ್ಟಿ]] – ವಕೀಲ, ಶಿಕ್ಷಣತಜ್ಞ, ಬರಹಗಾರ, ಸಾರ್ವಜನಿಕ ವಕ್ತಾರ, ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ.<ref>{{cite web|url=http://www.nwitimes.com/news/local/porter/valparaiso/vu-law-professor-among-world-s-most-influential-muslims/article_b6309641-37be-51a4-a76f-0ed6d1da2066.html|title=VU ಕಾನೂನು ಪ್ರಾಧ್ಯಾಪಕರು ವಿಶ್ವದ ಅತ್ಯಂತ ಪ್ರಭಾವಶಾಲಿ ಮುಸ್ಲಿಮರಲ್ಲಿ|publisher=nwitimes.com|date=31 December 2012|access-date=18 February 2013|archive-date=7 January 2013|archive-url=https://web.archive.org/web/20130107013356/http://www.nwitimes.com/news/local/porter/valparaiso/vu-law-professor-among-world-s-most-influential-muslims/article_b6309641-37be-51a4-a76f-0ed6d1da2066.html|url-status=live}}</ref>
* [[ಗೋಪಿನಾಥ್ ಮುತುಕಾಡ್]] – [[ಮಾಂತ್ರಿಕ (ಭ್ರಮೆ)|ಮಾಂತ್ರಿಕ]], ಮತ್ತು [[ಪ್ರೇರಣಾ ಭಾಷಣಕಾರ]].<ref>{{cite web|title=ಭಾರತೀಯ ಮಾಂತ್ರಿಕ ಹೌದಿನಿ-ಶೈಲಿಯ ತಪ್ಪಿಸಿಕೊಳ್ಳುವಿಕೆಯನ್ನು ಪ್ರದರ್ಶಿಸುತ್ತಾನೆ|url=http://www.rediff.com/news/feb/14magic.htm|work=Rediff.com|access-date=3 May 2017|date=14 February 1997|archive-date=30 May 2010|archive-url=https://web.archive.org/web/20100530120526/http://www.rediff.com//news/feb/14magic.htm|url-status=live}}</ref><ref>{{Cite web|url=http://imsmagic.com/2010_ma/2011_yearbook.php |title=2011 ವರ್ಷಪುಸ್ತಕ |website=[[ಅಂತರಾಷ್ಟ್ರೀಯ ಮಾಂತ್ರಿಕರ ಸೊಸೈಟಿ]] |archive-url=https://web.archive.org/web/20160820194038/http://imsmagic.com/2010_ma/2011_yearbook.php |archive-date=20 August 2016 |access-date=20 August 2016 |url-status=dead }}</ref>
* [[ಗೋವಿಂದ ಭಟ್ಟಾತಿರಿ]] – ಭಾರತೀಯ ಜ್ಯೋತಿಷಿ ಮತ್ತು ಖಗೋಳಶಾಸ್ತ್ರಜ್ಞ.
* [[ಹರಿ ನಾಯರ್]] – ಛಾಯಾಗ್ರಾಹಕ.
* [[ಹೇಮಂತ್ ಮೇನನ್]] – ನಟ.
* [[ಇಕ್ಬಾಲ್ ಕುಟ್ಟಿಪುರಂ]] – ಚಿತ್ರಕಥೆಗಾರ ಮತ್ತು [[ಹೋಮಿಯೋಪತಿ|ಹೋಮಿಯೋಪತಿ ವೈದ್ಯ]].<ref name='khal'>{{Cite web |url=http://www.khaleejtimes.ae/DisplayArticleNew.asp?col=§ion=citytimes&xfile=data%2Fcitytimes%2F2007%2FAugust%2Fcitytimes_August183.xml |title=ಕಥೆಗಳ ಪೆಟ್ಟಿಗೆ |access-date=23 March 2020 |archive-url=https://web.archive.org/web/20110725152540/http://www.khaleejtimes.ae/DisplayArticleNew.asp?col=§ion=citytimes&xfile=data%2Fcitytimes%2F2007%2FAugust%2Fcitytimes_August183.xml |archive-date=25 July 2011 |url-status=dead }}</ref>
* [[ಜಯಶ್ರೀ ಕಲಾತಿಲ್]] – ಬರಹಗಾರ, ಅನುವಾದಕ, ಮಾನಸಿಕ ಆರೋಗ್ಯ ಸಂಶೋಧಕ, ಮತ್ತು ಕಾರ್ಯಕರ್ತ.
* [[ಕೆ. ಎ. ರಹಮಾನ್|ಕೆ. ಅಬ್ದುರಹ್ಮಾನ್]] – [[ಚಾಲಿಯಾರ್]] ಚಳುವಳಿಯ ಸ್ಥಾಪಕ.<ref>{{cite news|url=http://www.hindu.com/2009/01/10/stories/2009011054250300.htm|archive-url=https://web.archive.org/web/20121107084532/http://www.hindu.com/2009/01/10/stories/2009011054250300.htm|url-status=dead|archive-date=7 November 2012|title=ಚಾಲಿಯಾರ್ ದಂತಕಥೆಗೆ ಗೌರವ|date=10 January 2009|newspaper=[[The Hindu]]|access-date=25 January 2021}}</ref>
* [[ಕೆ. ಅವುಕಾದರ್ ಕುಟ್ಟಿ ನಹಾ]] – [[ಕೇರಳ]]ದ ಮಾಜಿ [[ಕೇರಳದ ಉಪಮುಖ್ಯಮಂತ್ರಿಗಳ ಪಟ್ಟಿ|ಉಪಮುಖ್ಯಮಂತ್ರಿ]].
* [[ಕೆ. ಸಿ. ಎಸ್. ಪಾಣಿಕರ್]] – ಅಧ್ಯಾತ್ಮಿಕ ಮತ್ತು [[ಅಮೂರ್ತ|ಅಮೂರ್ತ]] ಚಿತ್ರಕಾರ.
* [[ಕೆ. ಸಿ. ಮಾನವೇದನ್ ರಾಜ]] – ಭಾರತೀಯ [[ಶ್ರೀಮಂತ]].
* [[ಕೆ. ಎಂ. ಅಸಿಫ್]] – ಕ್ರಿಕೆಟ್ ಆಟಗಾರ.
* [[ಕೆ. ಎಂ. ಮೌಲವಿ]] – ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಮತ್ತು [[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|IUML]] ಮಲಬಾರ್ ಜಿಲ್ಲಾ ಸಮಿತಿಯ ಸ್ಥಾಪಕ ಉಪಾಧ್ಯಕ್ಷ.<ref name="SMW19-48-47">{{cite journal |title=ಲೇಖನ |journal=ಸಮಕಾಲಿಕ ಮಲಯಾಳಂ ವೀಕ್ಲಿ |date=22 April 2016 |volume=19 |issue=48 |page=47 |url=http://epaper.malayalamvaarika.com/786340/Malayalam-Vaarika/18042016#page/47/2 |access-date=27 May 2020 |archive-date=17 July 2020 |archive-url=https://web.archive.org/web/20200717035307/https://epaper.malayalamvaarika.com/786340/Malayalam-Vaarika/18042016#page/47/2 |url-status=live }}</ref><ref name="IM115">{{cite book |last1=ಮುಹಮ್ಮದ್ ರಫೀಕ್ |title=ಆಧುನಿಕ ಕಾಲದಲ್ಲಿ ಕೇರಳದಲ್ಲಿ ಇಸ್ಲಾಮಿಕ್ ಚಳುವಳಿಯ ಅಭಿವೃದ್ಧಿ |location=ಇಸ್ಲಾಹಿ ಚಳುವಳಿ |page=115 |url=https://shodhganga.inflibnet.ac.in/bitstream/10603/52387/11/11_chapter%204.pdf#page=28 |access-date=24 October 2019 |archive-date=21 March 2020 |archive-url=https://web.archive.org/web/20200321184205/https://shodhganga.inflibnet.ac.in/bitstream/10603/52387/11/11_chapter%204.pdf#page=28 |url-status=live }}</ref>
* [[ಕೆ. ಪಿ. ಎ. ಮಜೀದ್]] – [[ಕೇರಳ ಸರ್ಕಾರ]]ದ ಮಾಜಿ [[ಮುಖ್ಯ ಸಚೇತಕ]].
* [[ಕೆ. ಪಿ. ರಾಮನುಣ್ಣಿ]] – ಕಾದಂಬರಿಕಾರ ಮತ್ತು ಸಣ್ಣ-ಕಥೆ ಬರಹಗಾರ.<ref>{{cite news|url=http://www.thehindu.com/arts/books/article2520983.ece|title=ವಯಲಾರ್ ಪ್ರಶಸ್ತಿ ಕೆ.ಪಿ. ರಾಮನುಣ್ಣಿ ಅವರಿಗೆ|date=8 October 2011|newspaper=[[The Hindu]]|access-date=12 October 2011|archive-date=11 October 2011|archive-url=https://web.archive.org/web/20111011125321/http://www.thehindu.com/arts/books/article2520983.ece|url-status=live}}</ref><ref>{{cite web|url=http://english.manoramaonline.com/cgi-bin/MMOnline.dll/portal/ep/contentView.do?contentId=10204035&tabId=1&programId=1080132912&channelId=-1073865030&BV_ID=@@@|title=manorama online-english|access-date=12 October 2011|archive-url=https://web.archive.org/web/20120403030848/http://english.manoramaonline.com/cgi-bin/MMOnline.dll/portal/ep/contentView.do?contentId=10204035&tabId=1&programId=1080132912&channelId=-1073865030&BV_ID=@@@|archive-date=3 April 2012|url-status=dead}}</ref>
* [[ಕೆ. ಟಿ. ಇರ್ಫಾನ್]] – ಅಥ್ಲೀಟ್.<ref name=dailysports>{{cite web|title=ಇರ್ಫಾನ್ 20 ಕಿಮೀ ವಾಕ್ನಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದರು. ಅವರು 10 ನೇ ಸ್ಥಾನದಲ್ಲಿ ಫಿನಿಶಿಂಗ್ ಲೈನ್ ಮುಟ್ಟುವ ಮೂಲಕ ವಾಕ್ ಅನ್ನು ಪೂರ್ಣಗೊಳಿಸಿದರು.|url=http://www.dailysports.co/irfan-qualifies-for-olympics-in-20km-walk-2/|publisher=dailysports.co|access-date=2 July 2012|archive-url=https://web.archive.org/web/20140329093542/http://www.dailysports.co/irfan-qualifies-for-olympics-in-20km-walk-2/|archive-date=29 March 2014|url-status=dead}}</ref><ref>{{cite news|title=ಇರ್ಫಾನ್ 20 ಕಿಮೀ ವಾಕ್ನಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ನಂತರ ಖುಷ್ಬೀರ್ ವಿಫಲರಾದರು|url=https://timesofindia.indiatimes.com/sports/more-sports/athletics/Khushbir-fails-after-Irfan-qualifies-for-Olympics-in-20km-walk/articleshow/13121558.cms|archive-url=https://archive.today/20130126110728/http://articles.timesofindia.indiatimes.com/2012-05-13/athletics/31689498_1_london-olympics-federation-cup-olympics-qualification|url-status=live|archive-date=26 January 2013|work=[[The Times of India]]|date=13 May 2012 |access-date=2 July 2012}}</ref><ref>{{cite news|title=ಇರ್ಫಾನ್ ಥೋಡಿ|url=http://timesofindia.indiatimes.com/london-olympics-2012/olympics-2012-teamindia/irfanthodi.cms|access-date=19 July 2013|newspaper=The Times of India|archive-date=5 May 2016|archive-url=https://web.archive.org/web/20160505060142/http://timesofindia.indiatimes.com/london-olympics-2012/olympics-2012-teamindia/irfanthodi.cms|url-status=live}}</ref>
* [[ಕೆ. ಟಿ. ಜಲೀಲ್]] – ಕೇರಳದ ಮಾಜಿ ಸಚಿವ.
* [[ಕೆ. ಟಿ. ಮುಹಮ್ಮದ್]] - ಮಲಯಾಳಂ ನಾಟಕಕಾರ ಮತ್ತು ಚಿತ್ರಕಥೆಗಾರ.
* [[ಕೆ. ವಿ. ರಬಿಯಾ]] – ಸಮಾಜ ಸೇವಕಿ.
* [[ಕೆ. ವಿ. ರಾಮಕೃಷ್ಣನ್]] – ಮಲಯಾಳಂ ಭಾಷೆಯ ಕವಿ ಮತ್ತು ಪತ್ರಕರ್ತ.
* [[ಕಡವನಾಡ್ ಕುಟ್ಟಿಕೃಷ್ಣನ್]] – ಮಲಯಾಳಂ ಕವಿ ಮತ್ತು ಪತ್ರಕರ್ತ.
* [[ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ]] – ಮೋಹಿನಿಯಾಟ್ಟಂನ ಪುನರುತ್ಥಾನಕಾರ.
* [[ಕಮಲಾ ಸುರಯ್ಯ]] – [[ಮಲಯಾಳಂ ಸಾಹಿತ್ಯ]]ದ ಬರಹಗಾರ.
* [[ಕೇರಳ ವರ್ಮ ವಲಿಯ ಕೊಯಿಲ್ ತಂಪುರಾನ್]] – [[ಮಲಯಾಳಂ]] ಕವಿ ಮತ್ತು ಅನುವಾದಕ, ''ಕೇರಳದ ಕಾಳಿದಾಸ'' ಎಂದೂ ಕರೆಯಲ್ಪಡುತ್ತಾರೆ ([[ಪರಪ್ಪನಾಡ್]] ರಾಜಮನೆತನಕ್ಕೆ ಸೇರಿದವರು).
* [[ಕೃಷ್ಣಚಂದ್ರನ್]] – ನಟ, ಡಬ್ಬಿಂಗ್ ಕಲಾವಿದ, ಮತ್ತು ಹಿನ್ನೆಲೆ ಗಾಯಕ.
* [[ಕುಟ್ಟಿಕೃಷ್ಣ ಮಾರಾರ್]] – [[ಮಲಯಾಳಂ ಸಾಹಿತ್ಯ]]ದ [[ಪ್ರಬಂಧಕಾರ]] ಮತ್ತು ಸಾಹಿತ್ಯ ವಿಮರ್ಶಕ.
* [[ಲಕ್ಷ್ಮೀ ಸಾಹಗಲ್]] – ಭಾರತೀಯ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರಿ, [[ಭಾರತೀಯ ರಾಷ್ಟ್ರೀಯ ಸೇನೆ]]ಯ ಅಧಿಕಾರಿ, ಮತ್ತು [[ಆಜಾದ್ ಹಿಂದ್ ಸರ್ಕಾರ|ಆಜಾದ್ ಹಿಂದ್ ಸರ್ಕಾರ]]ದ ಮಹಿಳಾ ವ್ಯವಹಾರಗಳ ಸಚಿವೆ.
* [[ಎಂ. ಗೋವಿಂದನ್]] – [[ಮಲಯಾಳಂ ಸಾಹಿತ್ಯ]]ದ ಬರಹಗಾರ.
* [[ಎಂ. ಸ್ವರಾಜ್]] – ರಾಜಕಾರಣಿ.
* [[ಎಂ. ಜಿ. ಎಸ್. ನಾರಾಯಣನ್]] – ಇತಿಹಾಸಕಾರ, ಮತ್ತು ಶಿಕ್ಷಣತಜ್ಞ ಮತ್ತು ರಾಜಕೀಯ ವಿಮರ್ಶಕ.
* [[ಎಂ. ಕೆ. ವೆಲ್ಲೋಡಿ]] – ಮಾಜಿ ಭಾರತೀಯ ರಾಜತಾಂತ್ರಿಕ.
* [[ಎಂ. ಎಂ. ಅಕ್ಬರ್]] – ಇಸ್ಲಾಮಿಕ್ ವಿದ್ವಾಂಸ, ಮತ್ತು ತುಲನಾತ್ಮಕ ಧರ್ಮದ ತಜ್ಞ.<ref>{{Cite web|url=https://www.arabnews.com/|title=ಅರಬ್ ನ್ಯೂಸ್|website=Arab News|access-date=21 July 2020|archive-date=21 July 2020|archive-url=https://web.archive.org/web/20200721202258/https://www.arabnews.com/|url-status=live}}</ref>
* [[ಎಂ. ಪಿ. ಅಬ್ದುಸ್ಸಮದ್ ಸಮದಾನಿ]] – [[ರಾಜ್ಯಸಭಾ]] ಮಾಜಿ ಸದಸ್ಯ.
* [[ಎಂ. ಪಿ. ಎಂ. ಅಹಮ್ಮದ್ ಕುರಿಕ್ಕಲ್]] – ಕೇರಳದ ಮಾಜಿ ಸಚಿವ.
* [[ಎಂ. ಪಿ. ಎಂ. ಮೇನನ್]] – [[ಭಾರತ]]ೀಯ [[ರಾಜತಾಂತ್ರಿಕ]], ಹಲವಾರು ದೇಶಗಳಿಗೆ [[ರಾಯಭಾರಿ]].<ref>[http://gulfnews.com/news/uae/general/indian-community-in-uae-mourns-death-of-diplomat-1.1146275 "ಯುಎಇಯಲ್ಲಿನ ಭಾರತೀಯ ಸಮುದಾಯ ರಾಜತಾಂತ್ರಿಕನ ಮರಣಕ್ಕೆ ಶೋಕಿಸುತ್ತದೆ"] {{Webarchive|url=https://web.archive.org/web/20210913065712/https://gulfnews.com/uae/indian-community-in-uae-mourns-death-of-diplomat-1.1146275 |date=13 September 2021 }}, ''[[ಗಲ್ಫ್ ನ್ಯೂಸ್]]'', ಅಬು ಧಾಬಿ, 14 ಫೆಬ್ರವರಿ 2013. 14 ಫೆಬ್ರವರಿ 2013 ರಂದು ಮರುಸಂಪಾದಿಸಲಾಗಿದೆ.</ref>
* [[ಎಂ. ಟಿ. ವಾಸುದೇವನ್ ನಾಯರ್]] – [[ಮಲಯಾಳಂ]] ಲೇಖಕ, [[ಚಿತ್ರಕಥೆ]]ಗಾರ ಮತ್ತು ಚಲನಚಿತ್ರ ನಿರ್ದೇಶಕ. ([[ಕುಡಲ್ಲೂರ್]] ನಲ್ಲಿ ಜನಿಸಿದರು, ಇದು ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳ ನಡುವಿನ ಗಡಿ ಗ್ರಾಮ. ಅವರು ''ಪೊನ್ನಾನಿ ಕಲಾರಿ''ಯ ಬರಹಗಾರರು.)
* [[ಮಲಯಾತ್ ಅಪ್ಪುಣ್ಣಿ]] – ಮಲಯಾಳಂ ಭಾಷೆಯ ಕವಿ ಮತ್ತು ಮಕ್ಕಳ ಬರಹಗಾರ.
* [[ಮಂಜಲಂಕುಳಿ ಅಲಿ]] – ಕೇರಳದ ಮಾಜಿ ಸಚಿವ.
* [[ಮಂಕಡ ರವಿ ವರ್ಮ]] – ಛಾಯಾಗ್ರಾಹಕ ಮತ್ತು ನಿರ್ದೇಶಕ.<ref>{{cite news|url=http://www.deccanherald.com/content/112496/directors-cut.html|title=ನಿರ್ದೇಶಕರ ಕಟ್|author=ಎಸ್ ನಂದ ಕುಮಾರ್|newspaper=[[Deccan Herald]]|access-date=23 November 2010|archive-date=22 June 2011|archive-url=https://web.archive.org/web/20110622034945/http://www.deccanherald.com/content/112496/directors-cut.html|url-status=live}}</ref><ref>{{cite news|url=http://www.hindu.com/thehindu/fr/2007/09/07/stories/2007090750230100.htm|archive-url=https://web.archive.org/web/20071203223207/http://www.hindu.com/thehindu/fr/2007/09/07/stories/2007090750230100.htm|url-status=dead|archive-date=3 December 2007|title=ಬೆಳಕಿನಿಂದ ಚಿತ್ರಿಸುವುದು|date=7 September 2007|work=[[The Hindu]]|location=Chennai, India}}</ref><ref>{{cite magazine|url=https://variety.com/2010/film/news/indian-cinematographer-varma-dies-1118027967/|title=ಭಾರತೀಯ ಛಾಯಾಗ್ರಾಹಕ ವರ್ಮ ನಿಧನರಾದರು: ಅವರು ಅದೂರ್ ಗೋಪಾಲಕೃಷ್ಣನ್ ಅವರ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು|date=24 November 2010|magazine=[[Variety (magazine)|Variety]]|first=ಶಾಲಿನಿ|last=ಡೋರ್|access-date=20 February 2020|archive-date=7 November 2012|archive-url=https://web.archive.org/web/20121107052009/http://www.variety.com/article/VR1118027967?refCatId=13|url-status=live}}</ref>
* [[ಮನೋರಮಾ ತಂಪುರಾಟ್ಟಿ]] – [[ಸಂಸ್ಕೃತ]] ಬರಹಗಾರ್ತಿ.
* [[ಮಶೂರ್ ಶೆರೀಫ್]] – ವೃತ್ತಿಪರ ಫುಟ್ಬಾಲ್ ಆಟಗಾರ.
* [[ಮೇಲತ್ತೂರ್ ಸಹದೇವನ್]] – [[ಕರ್ನಾಟಕ ಸಂಗೀತ]] ಗಾಯಕ.
* [[ಮೇಲ್ಪತ್ತೂರ್ ನಾರಾಯಣ ಭಟ್ಟಾತಿರಿ]] – ಗಣಿತ [[ಭಾಷಾಶಾಸ್ತ್ರ]]ಜ್ಞ.
* [[ಮೆರ್ಷೀನಾ ನೀನು]] – ನಟಿ.
* [[ಮೊಹಮ್ಮದ್ ಇರ್ಷಾದ್]] – ವೃತ್ತಿಪರ ಫುಟ್ಬಾಲ್ ಆಟಗಾರ.
* [[ಮೊಹಮದ್ ಸಲಾಹ್ (ಭಾರತೀಯ ಫುಟ್ಬಾಲ್ ಆಟಗಾರ)|ಮೊಹಮದ್ ಸಲಾಹ್]] – ಫುಟ್ಬಾಲ್ ಆಟಗಾರ.
* [[ಮೋಹನಕೃಷ್ಣನ್ ಕಳಡಿ]] – ಮಲಯಾಳಂ ಕವಿ.
* [[ಮೊಯಿನ್ಕುಟ್ಟಿ ವೈದ್ಯರ್]] – [[ಮಾಪ್ಪಿಳ್ಳ ಪಾಟ್ಟು]] ಕವಿ.<ref>{{cite news|url=http://www.hindu.com/2007/03/31/stories/2007033110250500.htm|archive-url=https://web.archive.org/web/20121108104937/http://www.hindu.com/2007/03/31/stories/2007033110250500.htm|url-status=dead|archive-date=8 November 2012|title=ಮಾಪ್ಪಿಳ್ಳ ಹಾಡುಗಳು ಹಿಂದಿನ ಯುಗದ ಸಾಂಸ್ಕೃತಿಕ ಒಸರುಗಳು, MT ಹೇಳುತ್ತಾರೆ|date=31 March 2007|access-date=15 August 2009|work=[[The Hindu]]|location=Chennai, India}}</ref>
* [[ಮೃಣಾಲಿನಿ ಸಾರಾಭಾಯ್]] – ಭಾರತೀಯ ಶಾಸ್ತ್ರೀಯ ನರ್ತಕಿ.
* [[ಮುಹಮ್ಮದ್ ಮುಸ್ತಫಾ]] – ನಟ ಮತ್ತು ನಿರ್ದೇಶಕ.
* [[ಮುಹ್ಸಿನ್ ಪರಾರಿ]] – ನಿರ್ದೇಶಕ, ಬರಹಗಾರ, ಮತ್ತು ಗೀತರಚನೆಕಾರ.
* [[ನಾಲಕತ್ ಸೂಪಿ]] – ಕೇರಳದ ಮಾಜಿ ಸಚಿವ.
* [[ನಾಲಪಾಟ್ ನಾರಾಯಣ ಮೇನನ್]] – [[ಮಲಯಾಳಂ ಸಾಹಿತ್ಯ]]ದ ಬರಹಗಾರ.
* [[ನಂದನಾರ್ (ಲೇಖಕ)|ನಂದನಾರ್]] – [[ಮಲಯಾಳಂ ಸಾಹಿತ್ಯ]]ದ ಬರಹಗಾರ.
* [[ನಿಲಂಬೂರ್ ಆಯಿಷಾ]] – ಮಲಯಾಳಂ ಚಲನಚಿತ್ರೋದ್ಯಮ ಮತ್ತು ನಾಟಕದ ನಟಿ.
* [[ನಿಲಂಬೂರ್ ಬಾಲನ್]] – ಮಲಯಾಳಂ ನಟ.
* [[ನಿರುಪಮಾ ರಾವ್]] – ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ.<ref>[http://www.business-standard.com/india/news/nirupama-rao-takes-over-as-foreign-secy/69625/on ನಿರುಪಮಾ ರಾವ್ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ] {{Webarchive|url=https://web.archive.org/web/20121013134243/http://www.business-standard.com/india/news/nirupama-rao-takes-over-as-foreign-secy/69625/on |date=13 October 2012 }} [[ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ]] / [[ನವ ದೆಹಲಿ]], ''[[ಬಿಸಿನೆಸ್ ಸ್ಟ್ಯಾಂಡರ್ಡ್]]'', 1 ಆಗಸ್ಟ್ 2009.</ref><ref name=toi>[http://timesofindia.indiatimes.com/NEWS/India/Nirupama-Rao-is-Indias-new-foreign-secretary/articleshow/4844580.cms ನಿರುಪಮಾ ರಾವ್ ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿ] {{Webarchive|url=https://web.archive.org/web/20090804072924/http://timesofindia.indiatimes.com/NEWS/India/Nirupama-Rao-is-Indias-new-foreign-secretary/articleshow/4844580.cms |date=4 August 2009 }} ''[[ದಿ ಟೈಮ್ಸ್ ಆಫ್ ಇಂಡಿಯಾ]]'', 1 ಆಗಸ್ಟ್ 2009."ಚೋಕಿಲಾ ಅಯ್ಯರ್ 2001 ರಲ್ಲಿ ಮೊದಲ ಮಹಿಳಾ ಭಾರತೀಯ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು."</ref>
* [[ಪಿ. ಶ್ರೀರಾಮಕೃಷ್ಣನ್]] – [[ಕೇರಳ ವಿಧಾನಸಭೆ]]ಯ ಮಾಜಿ ಸ್ಪೀಕರ್.
* [[ಪಿ. ಸುರೇಂದ್ರನ್]] – ಬರಹಗಾರ, ಅಂಕಣಕಾರ, ಕಲಾ ವಿಮರ್ಶಕ, ಮತ್ತು ಲೋಕೋಪಕಾರಿ.<ref>{{Cite web|title = ಸಣ್ಣ ಕಥೆಗಳಿಗೆ ಪ್ರಶಸ್ತಿ|url = http://www.keralasahityaakademi.org/sp/Writers/ksa/Awards/Stories.htm|website = keralasahityaakademi.org|access-date = 27 October 2015|archive-url = https://web.archive.org/web/20170705154727/http://www.keralasahityaakademi.org/sp/Writers/ksa/Awards/Stories.htm|archive-date = 5 July 2017|url-status = dead}}</ref>
* [[ಪಿ. ಕೆ. ಅಬ್ದು ರಬ್]] – ಕೇರಳದ ಮಾಜಿ ಸಚಿವ.
* [[ಪಿ. ಕೆ. ಕುಂಹಾಲಿಕುಟ್ಟಿ]] – ಕೇರಳದ ಮಾಜಿ ಸಚಿವ.
* [[ಪಿ. ಕೆ. ವಾರಿಯರ್]] – [[ಆಯುರ್ವೇದ|ಆಯುರ್ವೇದ]] ವೈದ್ಯ ಮತ್ತು [[ಪದ್ಮ ಭೂಷಣ]] ಪ್ರಶಸ್ತಿ ವಿಜೇತ.
* [[ಪಿ. ಪಿ. ರಾಮಚಂದ್ರನ್]] – ಮಲಯಾಳಂ ಕವಿ.
* [[ಪಿ. ವಿ. ಅಬ್ದುಲ್ ವಹಾಬ್]] – ಉದ್ಯಮಿ, ಮತ್ತು [[ರಾಜ್ಯಸಭಾ]] ಸದಸ್ಯ.
* [[ಪಾಲೋಲಿ ಮೊಹಮ್ಮದ್ ಕುಟ್ಟಿ]] – ಕೇರಳದ ಮಾಜಿ ಸಚಿವ.
* [[ಪರಮೇಶ್ವರ]] – ಭಾರತೀಯ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ.
* [[ಪಾರ್ವತಿ ಜಯದೇವನ್]] – ಹಿನ್ನೆಲೆ ಗಾಯಕಿ.
* [[ಪೂಂತಾನಂ ನಂಬೂದಿರಿ]] – ಮಲಯಾಳಂ ಕವಿ.<ref>{{cite book|author=ಐ ಕೆ ಕೆ ಮೇನನ್|title=ಕೇರಳದ ಜಾನಪದ ಕಥೆಗಳು|year=1995 |url=https://books.google.com/books?id=pCv2DAAAQBAJ&pg=PT194|publisher=Publications Division Ministry of Information & Broadcasting Government of India|isbn=978-81-230-2188-1|pages=194–|access-date=27 November 2019|archive-date=29 February 2020|archive-url=https://web.archive.org/web/20200229140139/https://books.google.com/books?id=pCv2DAAAQBAJ&pg=PT194|url-status=live}}</ref>
* [[ಪ್ರೇಮ್ಜಿ]] - ಸಮಾಜ ಸುಧಾರಕ, ಸಾಂಸ್ಕೃತಿಕ ನಾಯಕ, ಮತ್ತು ನಟ.
* [[ಪುಲಪ್ರೆ ಬಾಲಕೃಷ್ಣನ್]] – ಅರ್ಥಶಾಸ್ತ್ರಜ್ಞ ಮತ್ತು ಶಿಕ್ಷಣತಜ್ಞ.
* [[ಪುಳಿಕ್ಕೋಟ್ಟಿಲ್ ಹೈದರ್]] – [[ಮಾಪ್ಪಿಳ್ಳ ಪಾಟ್ಟು]] ಕವಿ.<ref name="mlpgov">{{cite web |url=http://www.mlp.kerala.gov.in/heri.htm |title=ಮಲಪ್ಪುರಂ ಜಿಲ್ಲೆಯ ಅಧಿಕೃತ ವೆಬ್ಸೈಟ್ |access-date=25 November 2010 |url-status=dead |archive-url=https://web.archive.org/web/20100629045500/http://www.mlp.kerala.gov.in/heri.htm |archive-date=29 June 2010 }}</ref>
* [[ರಾಜೀವ್ ನಾಯರ್]] – ಬರಹಗಾರ, ಗೀತರಚನೆಕಾರ, ಮತ್ತು ನಿರ್ಮಾಪಕ.
* [[ರಂಜಿತ್ ಪದಿನ್ಹತೀರಿ]] – ಜೈವಿಕ ಭೌತಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ.
* [[ರಹಮಾನ್ (ನಟ)|ರಶಿನ್ ರಹಮಾನ್]] – ನಟ.
* [[ರಾಜ ರವಿ ವರ್ಮ]] – ಭಾರತೀಯ ಚಿತ್ರಕಾರ ಮತ್ತು ಕಲಾವಿದ ([[ಪರಪ್ಪನಾಡ್]] ರಾಜಮನೆತನಕ್ಕೆ ಸೇರಿದವರು).
* [[ರವಿ ಮೇನನ್]] – ನಟ.
* [[ರವಿ ವಲ್ಲತ್ತೋಲ್]] – ನಟ.
* [[ರಿನ್ಷಾದ್ ರೀರಾ]] – ವಿದ್ಯಾರ್ಥಿ ಕಾರ್ಯಕರ್ತ.
* [[ಸಲಾಂ ಬಪ್ಪು]] – ಚಲನಚಿತ್ರ ನಿರ್ದೇಶಕ.
* [[ಸಲ್ಮಾನ್ ಕಲ್ಲಿಯಾತ್]] – ಭಾರತೀಯ ವೃತ್ತಿಪರ ಫುಟ್ಬಾಲ್ ಆಟಗಾರ.
* [[ಸಂಗೀತಾ ಮಾಧವನ್ ನಾಯರ್]] – ನಟಿ.
* [[ಶಂಕರನ್ ಎಂಬ್ರಾಂತಿರಿ]] – [[ಕಥಕ್ಕಳಿ]] ಸಂಗೀತಗಾರ.
* [[ಸಾವಿತ್ರಿ ರಾಜೀವನ್]] – ಭಾರತೀಯ ಕವಿ, ಸಣ್ಣಕಥೆಗಾರ್ತಿ ಮತ್ತು ಚಿತ್ರಕಾರ್ತಿ.
* [[ಸಯ್ಯದ್ ಸನಾವುಲ್ಲಾ ಮಕ್ತಿ ತಂಗಲ್]] – ಸಾಮಾಜಿಕ ಸುಧಾರಕ.<ref>''Journal of Kerala Studies'' Volume 9. (1982): 84.</ref><ref>Mohammed, U. ''Educational Empowerment of Kerala Muslims.'' Calicut (Kerala): Other Books, 2017. 33.</ref>
* [[ಶಹಾಬಾಜ್ ಅಮನ್]] – ಹಿನ್ನೆಲೆ ಗಾಯಕ ಮತ್ತು ಸಂಯೋಜಕ.<ref>{{cite web |url=http://hellobahrain.com/content/shaam-e-ehsas-ghazal-nite-shahabaz-aman |title="Shaam-e-Ehsas" Ghazal Nite by Shahabaz Aman |publisher=Hello Bahrain |date=29 March 2012 |access-date=9 December 2013 |archive-url=https://web.archive.org/web/20131213100614/http://hellobahrain.com/content/shaam-e-ehsas-ghazal-nite-shahabaz-aman |archive-date=13 December 2013 |url-status=dead }}</ref><ref>{{cite news|url=https://timesofindia.indiatimes.com/entertainment/malayalam/music/shahabaz-aman-when-i-die-id-rather-have-people-say-that-malabars-renowned-romantic-passed-away-than-just-a-singer/articleshow/63233070.cms|title=Shahabaz Aman: When I die, I'd rather have people say that Malabar's renowned romantic passed away than just a singer|newspaper=[[The Times of India]]|access-date=14 June 2019|archive-date=15 February 2019|archive-url=https://web.archive.org/web/20190215160141/https://timesofindia.indiatimes.com/entertainment/malayalam/music/shahabaz-aman-when-i-die-id-rather-have-people-say-that-malabars-renowned-romantic-passed-away-than-just-a-singer/articleshow/63233070.cms|url-status=live}}</ref>
* [[ಶಾನವಾಸ್ ಕೆ ಬಾವಕುಟ್ಟಿ]] – ಚಲನಚಿತ್ರ ನಿರ್ದೇಶಕ.
* [[ಶ್ವೇತಾ ಮೆನನ್]] – ಮಾಡೆಲ್, ನಟಿ ಮತ್ತು ಕಿರುತೆರೆ ನಿರೂಪಕಿ.
* [[ಸಿತಾರಾ (ಗಾಯಕಿ)]] – ಹಿನ್ನೆಲೆ ಗಾಯಕಿ, ಸಂಯೋಜಕಿ ಮತ್ತು ನಟಿ.<ref>{{cite news |title=Sithara goes to Kollywood |url=https://timesofindia.indiatimes.com/entertainment/regional/movie-details/news-interviews/sithara-goes-to-kollywood/etarticleshow/12098503.cms |archive-url=https://archive.today/20130216075315/http://articles.timesofindia.indiatimes.com/2012-03-02/news-interviews/31114294_1_kollywood-mollywood-song |url-status=live |archive-date=16 February 2013 |newspaper=[[The Times of India]] |date=2 March 2012}}</ref>
* [[ಸೂರಜ್ ತೇಲಕ್ಕಾಡ್]] – ನಟ.
* [[ಸುಕುಮಾರನ್]] – ಚಲನಚಿತ್ರ ನಟ ಮತ್ತು ನಿರ್ಮಾಪಕ.
* [[ಸನ್ನಿ ವೇನ್]] – ಚಲನಚಿತ್ರ ನಟ (ಉನ್ನತ ಶಿಕ್ಷಣದ ಸಮಯದಲ್ಲಿ ಇಲ್ಲಿದ್ದರು).
* [[ಸಯ್ಯದ್ ಮುಹಮ್ಮದಾಲಿ ಶಿಹಾಬ್ ತಂಗಲ್]] – ಧಾರ್ಮಿಕ ಮುಖಂಡ ಮತ್ತು ರಾಜಕಾರಣಿ.<ref name="articles.timesofindia.indiatimes.com">{{cite news| url=https://timesofindia.indiatimes.com/india/President-PM-Sonia-pay-homage-to-IUML-leader-Thangal/articleshow/4848046.cms | archive-url=https://web.archive.org/web/20120612045904/http://articles.timesofindia.indiatimes.com/2009-08-02/india/28200612_1_iuml-indian-union-muslim-league-homage | url-status=live | archive-date=12 June 2012 | work=[[The Times of India]] | title=President, PM, Sonia pay homage to IUML leader Thangal | date=2 August 2009}}</ref>
* [[ಟಿ. ಎ. ರಜಾಕ್]] – ಚಿತ್ರಕಥೆಗಾರ.
* [[ಟಿ. ಕೆ. ಹಂಸ]] – ಕೇರಳದ ಮಾಜಿ ಸಚಿವರು.
* [[ಟಿ. ಕೆ. ಪದ್ಮಿನಿ]] – ಭಾರತೀಯ ಚಿತ್ರಕಾರ್ತಿ.
* [[ಟಿ. ಎಮ್. ನಾಯರ್]] – [[ದ್ರಾವಿಡ ಚಳವಳಿ]]ಯ ರಾಜಕೀಯ ಕಾರ್ಯಕರ್ತ.
* [[ತುಂಚತ್ತು ಎಳುತಚ್ಚನ್]] - ಮಲಯಾಳಂ ಭಾಷೆಯ ಪಿತಾಮಹ.<ref>Lewis, M. Paul, Gary F. Simons, and Charles D. Fennig (eds.) "[http://www.ethnologue.com/language/mal Malayalam] {{Webarchive|url=https://web.archive.org/web/20160304102619/http://www.ethnologue.com/language/mal |date=4 March 2016 }}" ''Ethnologue: Languages of the World.'' 2014: (Dallas, Texas) Web. 29 September 2014.</ref><ref name="ref002">K. SANTHOSH. [http://www.thehindu.com/news/national/kerala/when-malayalam-found-its-feet/article6217620.ece "When Malayalam found its feet"] {{Webarchive|url=https://web.archive.org/web/20200229125632/http://www.thehindu.com/news/national/kerala/when-malayalam-found-its-feet/article6217620.ece |date=29 February 2020 }} THRISSUR, 17 July 2014 ''The Hindu''</ref>
* [[ತಿರೂರ್ ನಂಬೀಸನ್]] – ''ಕಥಕ್ಕಳಿ'' ಗಾಯಕ.
* [[ಯು. ಎ. ಬೀರನ್]] – ಕೇರಳದ ಮಾಜಿ ಸಚಿವರು.
* [[ಯು. ಶರಫ್ ಅಲಿ]] – ಮಾಜಿ ಭಾರತೀಯ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ.<ref name="hindu_jul09">{{cite news|url=http://www.hindu.com/2009/07/04/stories/2009070456811800.htm|archive-url=https://web.archive.org/web/20090707015857/http://www.hindu.com/2009/07/04/stories/2009070456811800.htm|url-status=dead|archive-date=7 July 2009|title=Minister convenes high-level meet|date=4 July 2009|work=[[The Hindu]]|access-date=10 October 2009}}</ref><ref>{{cite web|url=http://www.universityofcalicut.info/dpe/dpe_stars.htm |title=Department of Physical Education |publisher=[[Calicut University]] |access-date=10 October 2009 |url-status=dead |archive-url=https://web.archive.org/web/20080725053103/http://www.universityofcalicut.info/dpe/dpe_stars.htm |archive-date=25 July 2008 }}</ref>
* [[ಉನ್ನಿ ಮೆನನ್]] – ಹಿನ್ನೆಲೆ ಗಾಯಕ.
* [[ಉರೂಬ್]] – [[ಮಲಯಾಳಂ ಸಾಹಿತ್ಯ]]ದ ಸಾಹಿತಿ.
* [[ವಿ. ಅಬ್ದು ರಹಿಮಾನ್]] – ಕೇರಳದ ಸಚಿವರು.
* [[ವಿ. ಸಿ. ಬಾಲಕೃಷ್ಣ ಪಣಿಕ್ಕರ್]] – ಭಾರತೀಯ ಕವಿ ಮತ್ತು ಬರಹಗಾರ.
* [[ವಿ. ಟಿ. ಭಟ್ಟತಿರಿಪಾಡ್]] – ಸಾಮಾಜಿಕ ಸುಧಾರಕ (ಹಳೆಯ [[ಪೊನ್ನಾನಿ ತಾಲೂಕು]] ಮೂಲದವರು).
* [[ವೈದ್ಯರತ್ನಂ ಪಿ. ಎಸ್. ವಾರಿಯರ್]] – [[ಆಯುರ್ವೇದ]] ವೈದ್ಯರು.<ref name="aryavaidyasala">{{cite web|url=http://www.aryavaidyasala.com/(S(uiytac45y0tizh45dbjufynb))/about_avs.aspx#rec|title=ARYA VAIDYA SALA – Kottakkal|author=mail at aryavaidyasala dot com|publisher=aryavaidyasala.com|access-date=22 March 2015|archive-date=24 March 2015|archive-url=https://web.archive.org/web/20150324015649/http://aryavaidyasala.com/(S(ixhcnwrxysjapimo32dgnx3w))/about_avs.aspx#rec|url-status=live}}</ref>
* [[ವೈದ್ಯರತ್ನಂ ತೃಪ್ರಂಗೋಡ್ ಮೂಸದ್]] – ಆಯುರ್ವೇದ ವೈದ್ಯರು.
* [[ವಳ್ಳತ್ತೋಳ್ ನಾರಾಯಣ ಮೆನನ್]] – ಮಲಯಾಳಂ ಕವಿ.<ref name="Zarrilli">{{cite book |title=Kathakali Dance-Drama: Where Gods and Demons Come to Play |first=Phillip |last=Zarrilli |publisher=Routledge |year=2004 |isbn=9780203197660 |url=https://books.google.com/books?id=eVHCnqglqyoC&pg=PA30 |pages=30–31 |access-date=27 November 2019 |archive-date=28 February 2020 |archive-url=https://web.archive.org/web/20200228232855/https://books.google.com/books?id=eVHCnqglqyoC&pg=PA30 |url-status=live }}</ref>
* [[ವಾರಿಯನ್ ಕುನ್ನತ್ತು ಕುಂಜಹಮ್ಮದ್ ಹಾಜಿ]] – ಭಾರತೀಯ ಸ್ವಾತಂತ್ರ್ಯ ಹೋರಾಟಗಾರ.<ref>{{cite book|title=EncyclopaediaDictionaryIslamMuslimWorld Volume 6|url=https://archive.org/stream/EncyclopaediaDictionaryIslamMuslimWorldEtcGibbKramerScholars.13/06.EncycIslam.NewEdPrepNumLeadOrient.EdEdComCon.BosDonLewPel.etc.UndPatIUA.v6.Mah-Mid.Leid.EJBrill.1990.1991.#page/n481/mode/1up|page=460|year=1988|quote=Contemporary evaluation within India tends to the view that the Malabar Rebellion was a war of liberation, and in 1971 the Kerala Government granted the remaining active participants in the revolt the accolade of Ayagi, "freedom fighter"}}</ref>
* [[ವಾಳೆಂಕಡ ಕುಂಚು ನಾಯರ್]] – [[ಕಥಕ್ಕಳಿ]] ವಿದ್ವಾಂಸ ಮತ್ತು [[ಪದ್ಮಶ್ರೀ]] ಪುರಸ್ಕೃತ.
* [[ವಾಳೆಂಕಡ ವಿಜಯನ್]] – [[ಕೇರಳ ಕಲಾಮಂಡಲಂ]]ನ ನಿವೃತ್ತ ಪ್ರಾಂಶುಪಾಲರು.
* [[ವೆಳಿಯಂಕೋಡ್ ಉಮರ್ ಖಾಜಿ]] – ಸ್ವಾತಂತ್ರ್ಯ ಹೋರಾಟಗಾರ ಮತ್ತು ಕವಿ.
* [[ವಿನಯ್ ಗೋವಿಂದ್]] – ಭಾರತೀಯ ಚಲನಚಿತ್ರ ನಿರ್ದೇಶಕ.
* [[ಜೈನುದ್ದೀನ್ ಮಖ್ದೂಮ್ II]] – [[ತುಹ್ಫತ್ ಉಲ್ ಮುಜಾಹಿದೀನ್]] ಕೃತಿಯ ಲೇಖಕ.
* [[ಜಕರಿಯಾ ಮುಹಮ್ಮದ್]] – ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಟ.<ref>{{Cite news|url=https://timesofindia.indiatimes.com/entertainment/events/kochi/aravindan-puraskaram-awarded-to-zakariya-mohammed/articleshow/68440801.cms|title=Aravindan Puraskaram awarded to Zakariya Mohammed – Times of India|website=The Times of India|date=16 March 2019 |access-date=1 December 2019|archive-date=30 June 2019|archive-url=https://web.archive.org/web/20190630023804/https://timesofindia.indiatimes.com/entertainment/events/kochi/aravindan-puraskaram-awarded-to-zakariya-mohammed/articleshow/68440801.cms|url-status=live}}</ref><ref>{{Cite web|url=https://www.newindianexpress.com/entertainment/malayalam/2019/jun/04/sudani-from-nigeria-wins-audience-choice-award-at-russian-film-festival-1985753.html|title=Sudani from Nigeria wins audience choice award at Russian film festival|website=The New Indian Express|date=4 June 2019 |access-date=1 December 2019|archive-date=31 March 2020|archive-url=https://web.archive.org/web/20200331221711/https://www.newindianexpress.com/entertainment/malayalam/2019/jun/04/sudani-from-nigeria-wins-audience-choice-award-at-russian-film-festival-1985753.html|url-status=live}}</ref>
* [[ಝಕೀರ್ ಮುಂಡಂಪಾರ]] – ಫುಟ್ಬಾಲ್ ಆಟಗಾರ.
* [[ಜೀನತ್]]- ನಟಿ.
}}
== ವಿಭಜನೆಯ ಬೇಡಿಕೆ ==
ಕೆಲವು ವರ್ಷಗಳಿಂದ, [[ತಿರೂರ್]] ಅನ್ನು ಕೇಂದ್ರವಾಗಿಟ್ಟುಕೊಂಡು 'ತಿರೂರ್ ಜಿಲ್ಲೆ' ಎಂಬ ಹೊಸ ಕರಾವಳಿ ಜಿಲ್ಲೆಯನ್ನು ರಚಿಸಬೇಕೆಂಬ ಬೇಡಿಕೆ ಬಲಗೊಳ್ಳುತ್ತಿದೆ. [[ಆಲಪ್ಪುಳ ಜಿಲ್ಲೆ]]ಗಿಂತ ಎರಡರಷ್ಟು ಜನಸಂಖ್ಯೆ ಮತ್ತು ವಿಸ್ತೀರ್ಣವನ್ನು ಹೊಂದಿರುವ ಈ ಜಿಲ್ಲೆಯನ್ನು ಅಭಿವೃದ್ಧಿಯ ದೃಷ್ಟಿಯಿಂದ ಎರಡಾಗಿ ವಿಭಜಿಸುವುದು ಅನಿವಾರ್ಯ ಎಂದು ಅವರು ವಾದಿಸುತ್ತಾರೆ. ಕೇರಳದ ಯಾವುದೇ ಜಿಲ್ಲೆಯಲ್ಲಿಯೂ ಒಂದೇ ಬಾರಿಗೆ ಏಳು ತಾಲೂಕುಗಳು, 94 ಗ್ರಾಮ ಪಂಚಾಯಿತಿಗಳು ಮತ್ತು 12 ಪುರಸಭೆಗಳಿಲ್ಲ. ಇದರ ವಿಸ್ತೀರ್ಣದ ವಿಷಯಕ್ಕೆ ಬಂದರೆ, ತೃಶ್ಶೂರ್ ಜಿಲ್ಲೆಯ ಗಡಿಯಲ್ಲಿರುವ [[ಪೆರುಂಪಡಪ್ಪು, ಮಲಪ್ಪುರಂ]]ಯಿಂದ ತಮಿಳುನಾಡಿನ ಗಡಿಯಲ್ಲಿರುವ [[ವಳಿಕ್ಕಡವು]]ವರೆಗೆ ಪ್ರಯಾಣಿಸಿದರೆ, ಸಾಮಾನ್ಯವಾಗಿ 115 ಕಿಮೀ ದೂರವನ್ನು ಕ್ರಮಿಸಲು 3 ಗಂಟೆಗಿಂತ ಹೆಚ್ಚು ಸಮಯ ಹಿಡಿಯುತ್ತದೆ. ಪರಿಹಾರ ಅಗತ್ಯವಿರುವ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಸಣ್ಣದಲ್ಲ ಎಂಬುದನ್ನೂ ಅವರು ಎತ್ತಿ ತೋರಿಸುತ್ತಾರೆ. ಈ ವಿಷಯವನ್ನು 2019 ರಲ್ಲಿ [[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್]] ಶಾಸಕ [[ಕೆ. ಎನ್. ಎ. ಖಾದರ್]] ಮತ್ತೆ ಪ್ರಸ್ತಾಪಿಸಿದರು.<ref name="auto1">{{cite web | title = The demand for bifurcation of Malappuram | url = https://www.thenewsminute.com/article/demand-bifurcate-malappuram-district-and-political-tussle-around-it-107975 | website = thenewsminute.com | date = 28 August 2019 | access-date = 25 November 2019 | archive-date = 28 August 2019 | archive-url = https://web.archive.org/web/20190828172833/https://www.thenewsminute.com/article/demand-bifurcate-malappuram-district-and-political-tussle-around-it-107975 | url-status = live }}</ref> ಪ್ರಸ್ತುತ ಇರುವ ಮಲಪ್ಪುರಂ ಜಿಲ್ಲೆಯನ್ನು ವಿಭಜಿಸಿ, ಅದರಿಂದ 'ತಿರೂರ್ ಜಿಲ್ಲೆ' ಎಂಬ ಹೊಸ ಜಿಲ್ಲೆಯನ್ನು ರೂಪಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ.<ref name="auto1"/> [[ಕೇರಳ ಕಾಂಗ್ರೆಸ್ (ಎಂ)]] ಪಕ್ಷವು [[ಎಡಪ್ಪಾಳ್]] ಕೇಂದ್ರಿತ ಹೊಸ ಜಿಲ್ಲೆಗಾಗಿ ಪ್ರಚಾರ ಮಾಡುತ್ತಿದೆ.<ref>{{cite web |url=https://timesofindia.indiatimes.com/city/kozhikode/kcm-to-seek-bifurcation-of-malappuram/articleshow/72090008.cms |website=The Times of India |title=KC(M) to raise new Edappal district |date=17 November 2019 |access-date=15 June 2020 |archive-date=7 August 2020 |archive-url=https://web.archive.org/web/20200807211639/https://timesofindia.indiatimes.com/city/kozhikode/kcm-to-seek-bifurcation-of-malappuram/articleshow/72090008.cms |url-status=live }}</ref> ಹಿರಿಯ ಕಾಂಗ್ರೆಸ್ ನಾಯಕ ಆರ್ಯದನ್ ಮುಹಮ್ಮದ್ ಮತ್ತು ಐಯುಎಂಎಲ್ ಜಿಲ್ಲಾ ಕಾರ್ಯದರ್ಶಿ [[ಯು. ಎ. ಲತೀಫ್]] ಸೇರಿದಂತೆ ಕೆಲವರು ಮಲಪ್ಪುರಂ ವಿಭಜನೆಯನ್ನು ವಿರೋಧಿಸುತ್ತಾರೆ.
ಆದಾಗ್ಯೂ, 2013 ಮತ್ತು 2019 ರಲ್ಲಿ ಕೇರಳವನ್ನು ಆಳಿದ ಎರಡು ಸತತ ಸರ್ಕಾರಗಳು ಈ ಬೇಡಿಕೆಯನ್ನು ತಿರಸ್ಕರಿಸಿದವು. ಆದರೆ ಜಿಲ್ಲೆಯ ವಿಭಜನೆಗೆ ಸಂಬಂಧಿಸಿದ ಅಧ್ಯಯನಗಳು ಇಂದಿಗೂ [[ಕೇರಳ ಸರ್ಕಾರ]]ದ ಪರಿಶೀಲನೆಯಲ್ಲಿವೆ.
== ಇವನ್ನೂ ನೋಡಿ ==
* [[ಮಲಪ್ಪುರಂ ಮೆಟ್ರೋಪಾಲಿಟನ್ ಪ್ರದೇಶ]]
* [[ಮಲಪ್ಪುರಂ]]
* [[ಮಲಪ್ಪುರಂ ಜಿಲ್ಲೆಯ ಆಡಳಿತ]]
* [[ಮಲಪ್ಪುರಂ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಪಟ್ಟಿ]]
* [[ಮಲಪ್ಪುರಂನಲ್ಲಿ ಶಿಕ್ಷಣ]]
* [[ಮಲಪ್ಪುರಂ ಜಿಲ್ಲೆಯ ಇತಿಹಾಸ]]
* [[ಮಲಪ್ಪುರಂ ಜಿಲ್ಲೆಯ ವ್ಯಕ್ತಿಗಳ ಪಟ್ಟಿ]]
* [[ಮಲಪ್ಪುರಂ ಜಿಲ್ಲೆಯಲ್ಲಿ ಸಾರಿಗೆ]]
== ಉಲ್ಲೇಖಗಳು ==
{{Reflist}}
== ಹೆಚ್ಚಿನ ಓದಿಗೆ ==
* ''ಮನೋರಮಾ ಇಯರ್ಬುಕ್ 1995'' (ಮಲಯಾಳಂ ಆವೃತ್ತಿ) {{ISSN|0970-9096}}.
* ''ಮನೋರಮಾ ಇಯರ್ಬುಕ್ 2003'' (ಇಂಗ್ಲಿಷ್ ಆವೃತ್ತಿ) {{ISBN|81-900461-8-7}}.
* {{Citation
| author = ಎಸ್. ಮುಹಮ್ಮದ್ ಹುಸೇನ್ ನೈನಾರ್ | year=1942
| title= ತುಹ್ಫತ್-ಅಲ್-ಮುಜಾಹಿದೀನ್: ಆ Arabic Language Work | publisher=ಮದ್ರಾಸ್ ವಿಶ್ವವಿದ್ಯಾಲಯ
| url= https://archive.org/details/Tuhfat-al-MujahidinAnHistoricalWorkInTheArabicLanguage
}}
* {{Citation
| author = ಮದ್ರಾಸ್ ಸರ್ಕಾರ | year=1953
| title= 1951 ಗಣತಿ ಕೈಪಿಡಿ- ಮಲಬಾರ್ ಜಿಲ್ಲೆ | publisher=ಮದ್ರಾಸ್ ಸರ್ಕಾರಿ ಮುದ್ರಣಾಲಯ
| url= http://lsi.gov.in:8081/jspui/bitstream/123456789/6425/1/20493_1951_MAL.pdf
}}
* {{Citation
| author = ಎಮ್. ಕೆ. ದೇವಸ್ಸಿ | year=1965
| title= 1961 ಗಣತಿ ಕೈಪಿಡಿ- ಕೋಝಿಕ್ಕೋಡ್ ಜಿಲ್ಲೆ | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5665/1/22059_1961_KOZ.pdf
}}
* {{Citation
| author = ಎಮ್. ಕೆ. ದೇವಸ್ಸಿ | year=1965
| title= 1961 ಗಣತಿ ಕೈಪಿಡಿ- ಪಾಲ್ಘಾಟ್ (ಪಾಲಕ್ಕಾಡ್) ಜಿಲ್ಲೆ | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5667/1/51592_1961_PAL.pdf
}}
* {{Citation
| author = ಕೆ. ನಾರಾಯಣನ್ | year=1973
| title= 1971 ಗಣತಿ ಕೈಪಿಡಿ- ಮಲಪ್ಪುರಂ ಜಿಲ್ಲೆ (ಭಾಗ-A&B) | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5688/1/25455_1971_MAL.pdf
}}
* {{Citation
| author = ಕೆ. ನಾರಾಯಣನ್ | year=1973
| title= 1971 ಗಣತಿ ಕೈಪಿಡಿ- ಮಲಪ್ಪುರಂ ಜಿಲ್ಲೆ (ಭಾಗ-C) | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5714/1/51172_1971_MAL.pdf
}}
* {{Citation
| author = ಎಮ್. ವಿಜಯನುಣ್ಣಿ | year=1983
| title= 1981 ಗಣತಿ ಕೈಪಿಡಿ- ಮಲಪ್ಪುರಂ ಜಿಲ್ಲೆ (ಭಾಗ-A&B) | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5733/1/29611_1981_MAL.pdf
}}
* {{Citation
| author = ಶೀಲಾ ಥಾಮಸ್ | year=2003
| title= 2001 ಗಣತಿ ಕೈಪಿಡಿ- ಮಲಪ್ಪುರಂ ಜಿಲ್ಲೆ (ಭಾಗ-A&B) | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5814/1/43637_2001_MAL.pdf
}}
* {{Citation
| author = ಭಾರತ ಸರ್ಕಾರ | year=2014–15
| title= ಜಿಲ್ಲಾ ಗಣತಿ ಕೈಪಿಡಿ – ಮಲಪ್ಪುರಂ (ಭಾಗ-A) 2011 | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= https://censusindia.gov.in/2011census/dchb/3205_PART_A_MALAPPURAM.pdf
}}
* {{Citation
| author = ಭಾರತ ಸರ್ಕಾರ | year=2014–15
| title= ಜಿಲ್ಲಾ ಗಣತಿ ಕೈಪಿಡಿ – ಮಲಪ್ಪುರಂ (ಭಾಗ-B) 2011 | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= https://censusindia.gov.in/2011census/dchb/3205_PART_B_MALAPPURAM.pdf
}}
== ಹೊರಗಿನ ಕೊಂಡಿಗಳು ==
{{Commons category|Malappuram district}}
{{Wikivoyage|Malappuram District}}
* {{Official website|http://malappuram.nic.in}}
{{Geographic location
|Centre = ಮಲಪ್ಪುರಂ ಜಿಲ್ಲೆ
|North = [[ವಯನಾಡ್ ಜಿಲ್ಲೆ|Wayanad district]]
|Northeast = [[ನೀಲಗಿರಿ ಜಿಲ್ಲೆ|Nilgiris district]], [[ತಮಿಳುನಾಡು|Tamil Nadu]]
|East =
|Southeast = [[ಪಾಲಕ್ಕಾಡ್ ಜಿಲ್ಲೆ|Palakkad district]]
|South = [[ತ್ರಿಶೂರ್ ಜಿಲ್ಲೆ|Thrissur district]]
|Southwest =
|West = ''[[ಅರೇಬಿಯನ್ ಸಮುದ್ರ|Arabian Sea]]''
|Northwest = [[ಕೋಝಿಕ್ಕೋಡ್ ಜಿಲ್ಲೆ|Kozhikode district]]
}}
{{Kerala}}
{{Authority control}}
{{DEFAULTSORT:Malappuram District}}
[[Category:ಮಲಪ್ಪುರಂ ಜಿಲ್ಲೆ| ]]
[[Category:ಕೇರಳದ ಜಿಲ್ಲೆಗಳು]]
[[Category:1969 ರಲ್ಲಿ ಕೇರಳದಲ್ಲಿ ಸ್ಥಾಪನೆಗೊಂಡವು]]
[[Category:ಭಾರತದಲ್ಲಿನ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳು]]
1gh50q0nu642nqk442ey78nbd6jmf7p
1379560
1379559
2026-08-09T04:15:15Z
Pragathi. BH
88266
1379560
wikitext
text/x-wiki
{{databox}}
{{Infobox settlement
| name = ಮಲಪ್ಪುರಂ ಜಿಲ್ಲೆ
| other_name =
| settlement_type = [[ಕೇರಳದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| image_skyline = {{Photomontage
| photo1a = Manjeri Town Calicut Road View.jpg
| photo2a = Near Cherumb eco village.jpg
| photo2b = Kerala Houseboat (191490747).jpeg
| photo3a = Kadalundi Bridge - A border of Malappuram and Kozhikode.jpg
| photo3b = Nilambur teak forest 3740.JPG
| photo4a = Chamravattam bridge kerala.jpg
| spacing = 1
| color_border = black
| color = white
| size = 210
| foot_montage = '''ಮೇಲಿನಿಂದ ಪ್ರದಕ್ಷಿಣಾಕಾರವಾಗಿ:'''<br/>[[ಮಂಜೇರಿ]] ಪಟ್ಟಣ, [[ಪೊನ್ನಾನಿ]]ಯಲ್ಲಿ ಬಿಯ್ಯಾಂ ಬ್ಯಾಕ್ವಾಟರ್ ಸರೋವರ, [[ನಿಲಂಬೂರ್]]ನಲ್ಲಿ ಕೊನೊಲಿಯ ಪ್ಲಾಟ್, [[ಚಮ್ರವಟ್ಟೊಂ ನಿಯಂತ್ರಕ-ಸೇತುವೆ]], [[ವಲ್ಲಿಕುಣ್ಣು]]ನಲ್ಲಿ [[ಕಡಲುಂಡಿ ನದಿ]] ಮುಖಜಭೂಮಿ, [[ಕರುವರಕುಂಡು]]
}}
| nickname =
| image_map = India Kerala Malappuram district.svg
| mapframe = yes
| mapframe-point = none
| map_caption = '''[[ಕೇರಳ]]ದಲ್ಲಿ ಸ್ಥಳ'''
| pushpin_map =
| pushpin_map_alt =
| pushpin_map_caption =
| coordinates = {{coord|11.03|N|76.05|E|region:IN-KL_type:adm3rd|display=inline,title}}
| subdivision_type = ದೇಶ
| subdivision_name = {{flag|India}}
| subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]
| subdivision_name1 = {{seal|Kerala}}
| established_title = ಜಿಲ್ಲಾ ರಚನೆ
| subdivision_type2 =
| subdivision_name2 =
| established_date = {{start date and age|df=yes|1969|06|16}}
| seat_type = ಪ್ರಧಾನ ಕಚೇರಿ
| seat = [[ಮಲಪ್ಪುರಂ]]
| founder = [[ಕೇರಳ ಸರ್ಕಾರ]]
| parts_type = [[ಆದಾಯ ವಿಭಾಗ|ಉಪ-ವಿಭಾಗಗಳು]]
| parts_style = para
| p1 = {{collapsible list|title=ತಾಲೂಕುಗಳು (7)|
*[[ಇರನಾಡ್ ತಾಲೂಕು|ಇರನಾಡ್
(ಮಂಜೇರಿ)]]
*[[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
*[[ನಿಲಂಬೂರ್#ನಿಲಂಬೂರ್ ತಾಲೂಕು|ನಿಲಂಬೂರ್]]
*[[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
*[[ಪೊನ್ನಾನಿ ತಾಲೂಕು|ಪೊನ್ನಾನಿ]]
*[[ತಿರೂರ್ ತಾಲೂಕು|ತಿರೂರ್]]
*[[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]|}}
| government_type = ಜಿಲ್ಲಾ ಆಡಳಿತ
| governing_body =
| leader_title = ಜಿಲ್ಲಾ ಉಸ್ತುವಾರಿ ಸಚಿವ
| leader_name = [[ಪಿ. ಕೆ. ಬಷೀರ್]]
| leader_title1 = [[ಜಿಲ್ಲಾ ಕಲೆಕ್ಟರ್]]
| leader_name1 = ಡಾ. ವಿನಯ್ ಗೋಯಲ್ IAS
| unit_pref = ಮೆಟ್ರಿಕ್
| area_footnotes =
| area_total_km2 = 3,554
| area_rank = [[ಕೇರಳದ ಜಿಲ್ಲೆಗಳ ಪಟ್ಟಿ|3ನೇ]]
| elevation_footnotes =
| elevation_m =
| elevation_max_m = 2594
| elevation_max_point = <!-- ಮಾಪನ ಬಿಂದುವನ್ನು ಸೂಚಿಸಲು --> [[ಮುಕುರ್ತಿ]]
| elevation_min_m =
| elevation_min_point = <!-- ಮಾಪನ ಬಿಂದುವನ್ನು ಸೂಚಿಸಲು -->
| population_total = 4,494,998<ref name="mlpdemo_2018">{{Cite book|title=ವಾರ್ಷಿಕ ಪ್ರಾಣಾಂಕ ಅಂಕಿಅಂಶಗಳ ವರದಿ - 2018|publisher=Department of Economics and Statistics, Government of Kerala|year=2020|location=Thiruvananthapuram|pages=55|url=http://www.ecostat.kerala.gov.in/images/pdf/publications/Vital_Statistics/data/vital_statistics_2018.pdf|access-date=29 October 2020|archive-date=27 November 2020|archive-url=https://web.archive.org/web/20201127040140/http://www.ecostat.kerala.gov.in/images/pdf/publications/Vital_Statistics/data/vital_statistics_2018.pdf|url-status=live}}</ref>
| population_as_of = 2018
| population_footnotes =
| population_density_km2 = 1265
| population_rank = [[ಕೇರಳದ ಜಿಲ್ಲೆಗಳ ಪಟ್ಟಿ|1ನೇ]]
| population_demonym =
| population_urban = 44.18%<ref name="CensusMalappuram"/>
| population_metro = 1729522<ref name="CensusMalappuram"/>
| demographics_type1 = ಜನಸಂಖ್ಯಾ ವಿವರಗಳು
| demographics1_title1 = {{nobold|[[ಲಿಂಗಾನುಪಾತ]] (2011)}}
| demographics1_info1 = 1098 [[ಸ್ತ್ರೀ|♀]]/1000[[ಪುರುಷ|♂]]<ref name="CensusMalappuram"/>
| leader_name2 = ಚೈತ್ರಾ ಥೆರೆಸಾ ಜಾನ್ IPS
| leader_title2 = [[ಭಾರತದಲ್ಲಿ ಪೊಲೀಸ್ ಅಧೀಕ್ಷಕ|ಜಿಲ್ಲಾ ಪೊಲೀಸ್ ಮುಖ್ಯಸ್ಥ]]
| demographics1_title2 = {{nobold|[[ಭಾರತದಲ್ಲಿ ಸಾಕ್ಷರತೆ|ಸಾಕ್ಷರತೆ]] (2011)}}
| demographics1_info2 = 93.57%<ref name="CensusMalappuram"/>
| timezone1 = [[ಭಾರತೀಯ ಪ್ರಮಾಣಿತ ಸಮಯ|IST]]
| utc_offset1 = +5:30
| postal_code_type = <!-- [[ಭಾರತೀಯ ಅಂಚೆ ಸೂಚ್ಯಂಕ ಸಂಖ್ಯೆ|PIN]] -->
| postal_code =
| iso_code = {{nobold|[[ISO 3166-2:IN|IN-KL]]}}
| registration_plate = '''KL-10''' [[ಮಲಪ್ಪುರಂ]], <br/> '''KL-53''' [[ಪೆರಿಂತಲ್ಮನ್ನ]], <br/> '''KL-54''' [[ಪೊನ್ನಾನಿ]], <br/> '''KL-55''' [[ತಿರೂರ್]],<br/> '''KL-65''' [[ತಿರೂರಂಗಡಿ]], <br/> '''KL-71''' [[ನಿಲಂಬೂರ್]], <br/> '''KL-84''' [[ಕೊಂಡೊಟ್ಟಿ]]
| website = {{URL|malappuram.nic.in}}
| footnotes =
| blank_info_sec1 = {{nowrap|{{increase}} 0.749<ref name="unhdi-gdl">{{Cite web|url=https://niti.gov.in/planningcommission.gov.in/docs/plans/stateplan/sdr_pdf/shdr_kerala05.pdf|title=ಕೇರಳ | UNDP ಭಾರತದಲ್ಲಿ|website=niti.gov.in|access-date=25 May 2021|archive-date=25 May 2021|archive-url=https://web.archive.org/web/20210525135510/https://niti.gov.in/planningcommission.gov.in/docs/plans/stateplan/sdr_pdf/shdr_kerala05.pdf|url-status=live}}</ref> ({{color|Green| ಉನ್ನತ}})}} ·
| blank_name_sec1 = [[ಮಾನವ ಅಭಿವೃದ್ಧಿ ಸೂಚ್ಯಂಕ|HDI]] {{nobold|(2005)}}
| parts = {{unbulleted list|[[ಪೆರಿಂತಲ್ಮನ್ನ]]|[[ತಿರೂರ್]]|}}
}}
'''ಮಲಪ್ಪುರಂ ಜಿಲ್ಲೆ''' ({{IPA|ml|mɐlɐpːurɐm|lang|Malappuram.ogg}}), [[ಭಾರತ]]ದ [[ಕೇರಳ]] ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳಲ್ಲಿ]] ಒಂದಾಗಿದ್ದು, {{convert|70|km|mi|abbr=on}} ಕರಾವಳಿಯನ್ನು ಹೊಂದಿದೆ. ಕೇರಳದ ಅತಿ ಹೆಚ್ಚು ಜನಸಂಖ್ಯೆಯ ಜಿಲ್ಲೆಯಾದ ಮಲಪ್ಪುರಂ ರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು 13% ರಷ್ಟನ್ನು ಹೊಂದಿದೆ. ಜಿಲ್ಲೆಯನ್ನು 16 ಜೂನ್ 1969 ರಂದು ರಚಿಸಲಾಯಿತು, ಇದು ಸುಮಾರು {{convert|3554|km2|sqmi|0|abbr=on}} ವಿಸ್ತೀರ್ಣವನ್ನು ಹೊಂದಿದೆ. ಇದು ವಿಸ್ತೀರ್ಣದಲ್ಲಿ ಕೇರಳದ ಮೂರನೇ ಅತಿದೊಡ್ಡ ಜಿಲ್ಲೆಯಾಗಿದೆ. ಇದು ಎರಡೂ ಕಡೆ [[ಪಶ್ಚಿಮ ಘಟ್ಟಗಳು]] ಮತ್ತು [[ಅರೇಬಿಯನ್ ಸಮುದ್ರ]]ದಿಂದ ಸುತ್ತುವರೆದಿದೆ. ಜಿಲ್ಲೆಯು ಏಳು [[ತಹಸೀಲ್|ತಾಲೂಕುಗಳಾಗಿ]] ವಿಂಗಡಿಸಲಾಗಿದೆ: [[ಇರನಾಡ್ ತಾಲೂಕು|ಇರನಾಡ್]], [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]], [[ನಿಲಂಬೂರ್#ನಿಲಂಬೂರ್ ತಾಲೂಕು|ನಿಲಂಬೂರ್]], [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]], [[ಪೊನ್ನಾನಿ ತಾಲೂಕು|ಪೊನ್ನಾನಿ]], [[ತಿರೂರ್ ತಾಲೂಕು|ತಿರೂರ್]], ಮತ್ತು [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]].
[[ಮಲಯಾಳಂ]] ಅತ್ಯಂತ ಹೆಚ್ಚು ಮಾತನಾಡುವ ಭಾಷೆಯಾಗಿದೆ. ಜಿಲ್ಲೆಯು ಗಮನಾರ್ಹವಾದ ವಲಸೆಯನ್ನು ಕಂಡಿದೆ, ವಿಶೇಷವಾಗಿ 1970 ಮತ್ತು 1980 ರ ದಶಕದ ಆರಂಭದಲ್ಲಿ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ [[ಪರ್ಷಿಯನ್ ಕೊಲ್ಲಿಯ ಅರಬ್ ರಾಜ್ಯಗಳು|ಪರ್ಷಿಯನ್ ಕೊಲ್ಲಿಯ ಅರಬ್ ರಾಜ್ಯಗಳಿಗೆ]], ಮತ್ತು ಅದರ ಆರ್ಥಿಕತೆಯು ದೊಡ್ಡ [[ಮಲಯಾಳಿ]] [[ವಿದೇಶಿ ನೇರ ಹೂಡಿಕೆ|ವಿದೇಶಿ]] ಸಮುದಾಯದಿಂದ [[ರೆಮಿಟೆನ್ಸ್]]ಗಳನ್ನು ಗಮನಾರ್ಹವಾಗಿ ಅವಲಂಬಿಸಿದೆ.<ref>{{Cite news|last=Radhakrishnan|first=S. Anil|date=14 December 2019|title=ಕೇರಳದ ವಲಸೇತರ ಸಮುದಾಯವನ್ನು ತೊಡಗಿಸಿಕೊಳ್ಳುವುದು|work=The Hindu|url=https://www.thehindu.com/news/national/kerala/engaging-the-diaspora/article30307914.ece|access-date=9 September 2020|issn=0971-751X|archive-date=14 June 2020|archive-url=https://web.archive.org/web/20200614015308/https://www.thehindu.com/news/national/kerala/engaging-the-diaspora/article30307914.ece|url-status=live}}</ref> ಮಲಪ್ಪುರಂ ಭಾರತದ ಮೊದಲ [[ಡಿಜಿಟಲ್ ಸಾಕ್ಷರತೆ|ಇ-ಸಾಕ್ಷರ]] ಮತ್ತು ಮೊದಲ ಸೈಬರ್ ಸಾಕ್ಷರ ಜಿಲ್ಲೆಯಾಗಿದೆ.<ref>{{cite web |url=https://timesofindia.indiatimes.com/india/Log-on-to-Indias-first-e-district/articleshow/818786.cms |website=The Times of India |title=ಭಾರತದ ಮೊದಲ ಇ-ಜಿಲ್ಲೆ |date=18 August 2004 |access-date=3 July 2020 |archive-date=26 January 2021 |archive-url=https://web.archive.org/web/20210126203012/https://timesofindia.indiatimes.com/india/log-on-to-indias-first-e-district/articleshow/818786.cms |url-status=live }}</ref><ref>{{cite news |url=https://www.thehindu.com/news/national/kerala/malappuram-set-to-become-first-cyber-literate-district/article24352909.ece |website=The Hindu |title=ಮಲಪ್ಪುರಂ ಮೊದಲ ಸೈಬರ್ ಸಾಕ್ಷರ ಜಿಲ್ಲೆಯಾಗಲು ಸಿದ್ಧವಾಗಿದೆ |date=6 July 2018 |access-date=3 July 2020 |archive-date=14 October 2023 |archive-url=https://web.archive.org/web/20231014142904/https://www.thehindu.com/news/national/kerala/malappuram-set-to-become-first-cyber-literate-district/article24352909.ece |url-status=live |last1=Naha |first1=Abdul Latheef }}</ref> ಜಿಲ್ಲೆಯು ನಾಲ್ಕು ಪ್ರಮುಖ ನದಿಗಳನ್ನು ಹೊಂದಿದೆ, ಅವುಗಳೆಂದರೆ [[ಭಾರತಪ್ಪುಳ್ಳ]], [[ಚಾಲಿಯಾರ್]], [[ಕಡಲುಂಡಿ ನದಿ|ಕಡಲುಂಡಿಪ್ಪುಳ್ಳ]], ಮತ್ತು [[ತಿರೂರ್ ನದಿ|ತಿರೂರ್ ಪುಳ್ಳ]], ಇವುಗಳಲ್ಲಿ ಮೊದಲ ಮೂರು [[ಕೇರಳದ ನದಿಗಳ ಪಟ್ಟಿ|ಕೇರಳದ ಐದು ಉದ್ದದ ನದಿಗಳಲ್ಲಿ]] ಸೇರಿವೆ.
[[ಮಲಪ್ಪುರಂ ಮಹಾನಗರ ಪ್ರದೇಶ]]ವು [[ಕೇರಳದ ಅತಿ ಹೆಚ್ಚು ಜನಸಂಖ್ಯೆಯ ನಗರ ಸಮೂಹಗಳ ಪಟ್ಟಿ|ಕೊಚ್ಚಿ, ಕಾಲಿಕಟ್, ಮತ್ತು ತೃಶೂರ್ ನಗರ ಪ್ರದೇಶಗಳ ನಂತರ ಕೇರಳದ ನಾಲ್ಕನೇ ಅತಿದೊಡ್ಡ ನಗರ ಸಮೂಹವಾಗಿದೆ]] ಮತ್ತು [[ಭಾರತದ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರ ಸಮೂಹಗಳ ಪಟ್ಟಿ|ಭಾರತದ 25ನೇ ಅತಿದೊಡ್ಡ ನಗರ ಸಮೂಹವಾಗಿದ್ದು]], 1.7 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ.<ref name="census 2011">{{cite web |url=https://www.censusindia.gov.in/2011-prov-results/paper2-vol2/data_files/kerala/Chapter_IV.pdf |website=censusindia.gov.in |title=ಮಲಪ್ಪುರಂ ನಗರ ಸಮೂಹ |access-date=25 June 2020 |archive-date=24 September 2020 |archive-url=https://web.archive.org/web/20200924223843/https://www.censusindia.gov.in/2011-prov-results/paper2-vol2/data_files/kerala/Chapter_IV.pdf |url-status=live }}</ref> 2011 ರ ಭಾರತೀಯ ಜನಗಣತಿಯ ಪ್ರಕಾರ ಜಿಲ್ಲೆಯ 44.2% ಜನಸಂಖ್ಯೆಯು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದೆ. [[ಮಲಪ್ಪುರಂನಲ್ಲಿ ಶಿಕ್ಷಣ|ರಾಜ್ಯದ 4 ವಿಶ್ವವಿದ್ಯಾಲಯಗಳಿಗೆ]] ನೆಲೆಯಾಗಿರುವ [[ಕಾಲಿಕಟ್ ವಿಶ್ವವಿದ್ಯಾಲಯ]] ಸೇರಿದಂತೆ, ಮಲಪ್ಪುರಂ ಕೇರಳದಲ್ಲಿ [[ಕೇರಳದಲ್ಲಿ ಶಿಕ್ಷಣ|ಉನ್ನತ ಶಿಕ್ಷಣದ]] ಕೇಂದ್ರವಾಗಿದೆ. ಜಿಲ್ಲೆಯು 2 [[ಕೇರಳದ ಆದಾಯ ವಿಭಾಗಗಳ ಪಟ್ಟಿ|ಆದಾಯ ವಿಭಾಗಗಳು]], 7 [[ಕೇರಳದ ತಾಲೂಕುಗಳ ಪಟ್ಟಿ|ತಾಲೂಕುಗಳು]], 12 [[ಕೇರಳದ ಪುರಸಭೆಗಳು|ಪುರಸಭೆಗಳು]], 15 [[ಕೇರಳದಲ್ಲಿ ಸ್ಥಳೀಯ ಸರ್ಕಾರ|ಬ್ಲಾಕ್ಗಳು]], 94 [[ಕೇರಳದಲ್ಲಿ ಸ್ಥಳೀಯ ಸರ್ಕಾರ|ಗ್ರಾಮ ಪಂಚಾಯತ್ಗಳು]], ಮತ್ತು 16 [[ಕೇರಳ ವಿಧಾನಸಭಾ]] ಕ್ಷೇತ್ರಗಳನ್ನು ಒಳಗೊಂಡಿದೆ.<ref name=":1">{{Cite web |title=ಭಾರತ – ಭಾರತದ ಜನಗಣತಿ 2011 – ಕೇರಳ – ಸರಣಿ 33 – ಭಾಗ XII A – ಜಿಲ್ಲಾ ಜನಗಣತಿ ಕೈಪಿಡಿ, [[ಮಲಪ್ಪುರಂ]] |url=https://censusindia.gov.in/nada/index.php/catalog/658 |access-date=2023-05-05 |website=censusindia.gov.in}}</ref><ref>{{Cite news |date=2020-01-09 |title=ಕೇರಳ: ಮಲಪ್ಪುರಂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ |work=The Times of India |url=https://timesofindia.indiatimes.com/city/kozhikode/malappuram-tops-list-of-worlds-fastest-growing-urban-areas/articleshow/73163346.cms |access-date=2023-05-05 |issn=0971-8257}}</ref><ref>{{Cite journal |last=Census Bureau of India |date=2011 |title=ಭಾರತ, ರಾಜ್ಯಗಳು, ಜಿಲ್ಲೆಗಳು, ಉಪ-ಜಿಲ್ಲೆಗಳು ಮತ್ತು ಪಟ್ಟಣಗಳ ಮೂಲ ಜನಸಂಖ್ಯಾ ಅಂಕಿಅಂಶಗಳು (ವಾರ್ಡ್ ಸಹಿತ), 2011. |url=https://censusindia.gov.in/nada/index.php/catalog/42560/download/46186/2011-IndiaStateDistSbDistTwnWrd-0000.xlsx |journal=[[ಭಾರತದ ಜನಗಣತಿ]]}}</ref><ref>ಭಾರತ, ರಾಜ್ಯಗಳು, ಜಿಲ್ಲೆಗಳು, ಉಪ-ಜಿಲ್ಲೆಗಳು ಮತ್ತು ಪಟ್ಟಣಗಳ ಮೂಲ ಜನಸಂಖ್ಯಾ ಅಂಕಿಅಂಶಗಳು (ವಾರ್ಡ್ ಸಹಿತ), ಜನಗಣತಿ 2011. '''''[[ಭಾರತದ ಜನಗಣತಿ 2011|ಭಾರತದ ಜನಗಣತಿ]]'''''
https://censusindia.gov.in/nada/index.php/catalog/42560/download/46186/2011-IndiaStateDistSbDistTwnWrd-0000.xlsx</ref>
[[ಬ್ರಿಟಿಷ್ ರಾಜ್]] ಸಮಯದಲ್ಲಿ, [[ಮಲಪ್ಪುರಂ]] ವಿದೇಶಿ ಮತ್ತು ಭಾರತೀಯ ಪಡೆಗಳ ಪ್ರಧಾನ ಕಚೇರಿಯಾಯಿತು ಮತ್ತು ನಂತರ 1885 ರಲ್ಲಿ ರಚಿಸಲಾದ [[ಮಲಬಾರ್ ಸ್ಪೆಷಲ್ ಪೊಲೀಸ್]] (M.S.P) ಹಿಂದೆ ಮಲಪ್ಪುರಂ ಸ್ಪೆಷಲ್ ಫೋರ್ಸ್ ಎಂದು ಕರೆಯಲ್ಪಡುತ್ತಿದ್ದ ಪ್ರಧಾನ ಕಚೇರಿಯಾಯಿತು, ಇದು ರಾಜ್ಯದ ಅತ್ಯಂತ ಹಳೆಯ ಸಶಸ್ತ್ರ ಪೊಲೀಸ್ ಬೆಟಾಲಿಯನ್ ಆಗಿದೆ.<ref>{{cite book |last1=C.A. |first1=Innes |title=ಮದ್ರಾಸ್ ಜಿಲ್ಲಾ ಗೆಜೆಟಿಯರ್ಗಳು: ಮಲಬಾರ್ ಮತ್ತು ಅಂಜೆಂಗೊ |date=1908 |publisher=Government Press, Madras |page=371 |url=https://books.google.com/books?id=w806vgAACAAJ |access-date=30 September 2020 |archive-date=20 April 2021 |archive-url=https://web.archive.org/web/20210420020014/https://books.google.com/books?id=w806vgAACAAJ |url-status=live }}</ref><ref name="mal">{{Cite news|title=ಅമ്പತ್ತಿನ ನೆರವಿನಲ್ಲಿ ಮಲಪ್ಪುರಂ; ಮಲಪ್ಪುರಂನ ಮಾನವಿಕ ಮಹಾ ಪಾರಂಪರ್ಯ|url=https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292|last=Leelakrishnan|first=Alamkode|date=17 June 2019|access-date=21 February 2021|work=Mathrubhumi|archive-date=12 February 2021|archive-url=https://web.archive.org/web/20210212220928/https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292|url-status=live}}</ref> ವಿಶ್ವದ ಅತ್ಯಂತ ಹಳೆಯ [[ತೇಗ]] ತೋಟವು ಕೊನೊಲಿಯ ಪ್ಲಾಟ್ನಲ್ಲಿ [[ನಿಲಂಬೂರ್]]ನ [[ಚಾಲಿಯಾರ್]] ಕಣಿವೆಯಲ್ಲಿದೆ. ರಾಜ್ಯದ ಅತ್ಯಂತ ಹಳೆಯ ರೈಲು ಮಾರ್ಗವನ್ನು 1861 ರಲ್ಲಿ [[ತಿರೂರ್ ರೈಲ್ವೇ ನಿಲ್ದಾಣ|ತಿರೂರ್]] ನಿಂದ [[ಚಾಲಿಯಂ]] ಗೆ ಹಾಕಲಾಯಿತು, ಇದು [[ತಾನೂರು, ಮಲಪ್ಪುರಂ|ತಾನೂರು]], [[ಪರಪ್ಪನಂಗಾಡಿ]], ಮತ್ತು [[ವಲ್ಲಿಕುಣ್ಣು]] ಮೂಲಕ ಹಾದುಹೋಗುತ್ತದೆ.<ref name="mpm"/> ರಾಜ್ಯದ ಎರಡನೇ ರೈಲು ಮಾರ್ಗವನ್ನು ಸಹ ಅದೇ ವರ್ಷದಲ್ಲಿ ತಿರೂರ್ನಿಂದ [[ತಿರುನವಾಯ]] ಮೂಲಕ [[ಕುಟ್ಟಿಪುರಂ]] ಗೆ ಹಾಕಲಾಯಿತು.<ref name="mpm"/> ವಸಾಹತುಶಾಹಿ ಯುಗದಲ್ಲಿ ಹಾಕಲಾದ [[ನಿಲಂಬೂರ್-ಶೋರನೂರ್ ಮಾರ್ಗ]]ವು ಭಾರತದ ಅತ್ಯಂತ ಕಡಿಮೆ ಮತ್ತು ಸುಂದರವಾದ ಬ್ರಾಡ್ ಗೇಜ್ ರೈಲು ಮಾರ್ಗಗಳಲ್ಲಿ ಒಂದಾಗಿದೆ.
== ವ್ಯುತ್ಪತ್ತಿ ==
[[File:Valamangalam Pulpetta (386717435).jpg|thumbnail|ಜಿಲ್ಲೆಯ ವಿಶಿಷ್ಟ ಬೆಟ್ಟದ ಪ್ರದೇಶದ ನೋಟ ([[ಪುಲ್ಪಟ್ಟ]] ಬಳಿ)]]
[[File:Chaliyar Edavanna (251932360).jpg|thumbnail|[[ಎಡವನ್ನ]]ದಲ್ಲಿ [[ಚಾಲಿಯಾರ್]] ಬೆಟ್ಟದ ಇಳಿಜಾರು]]
[[ಮಲಯಾಳಂ]]ನಲ್ಲಿ "ಬೆಟ್ಟದ ಮೇಲೆ" ಎಂದರ್ಥವಾಗುವ ''ಮಲಪ್ಪುರಂ'' ಎಂಬ ಪದವು ಜಿಲ್ಲೆಯ ಆಡಳಿತ ಪ್ರಧಾನ ಕಚೇರಿಯಾದ [[ಮಲಪ್ಪುರಂ]]ನ ಭೌಗೋಳಿಕತೆಯಿಂದ ಬಂದಿದೆ.<ref>{{Cite web|url=https://www.nativeplanet.com/travel-guide/malappuram-the-hill-top-town-000626.html|title=ಮಲಪ್ಪುರಂ, ಬೆಟ್ಟದ ತುದಿಯ ಪಟ್ಟಣ|date=30 June 2014|website=nativeplanet.com|access-date=4 July 2020|archive-date=7 June 2020|archive-url=https://web.archive.org/web/20200607002725/https://www.nativeplanet.com/travel-guide/malappuram-the-hill-top-town-000626.html|url-status=live}}</ref><ref>{{Cite web|url=https://www.financialexpress.com/archive/cultural-counterpoint/1092461/|title=ಸಾಂಸ್ಕೃತಿಕ ಪ್ರತಿಬಿಂದು|date=24 March 2013|website=The Financial Express|access-date=4 July 2020|archive-date=7 June 2020|archive-url=https://web.archive.org/web/20200607002847/https://www.financialexpress.com/archive/cultural-counterpoint/1092461/|url-status=live}}</ref> ಜಿಲ್ಲೆಯ ಮಧ್ಯ ಪ್ರದೇಶವು [[ಅರಿಂಬ್ರಾ ಬೆಟ್ಟಗಳು, ಮಲಪ್ಪುರಂ|ಅರಿಂಬ್ರಾ ಬೆಟ್ಟಗಳು]], [[ಕೋಡಿಕುತಿಮಲ|ಅಮ್ಮಿನಿಕ್ಕಾಡನ್ ಬೆಟ್ಟಗಳು]], [[ಊರಕಂ ಬೆಟ್ಟ]], [[ಮಂಕಡ|ಚೇರಿಯಂ ಬೆಟ್ಟಗಳು]], [[ಅನಕ್ಕಯಂ|ಪಾಂಡಲೂರ್ ಬೆಟ್ಟಗಳು]], ಮತ್ತು [[ಎಡವನ್ನ|ಚೆಕ್ಕುಣ್ಣು ಬೆಟ್ಟಗಳು]] ಸೇರಿದಂತೆ ಹಲವಾರು ಏರುತಗ್ಗಿನ ಬೆಟ್ಟಗಳಿಂದ ನಿರೂಪಿಸಲ್ಪಟ್ಟಿದೆ, ಇವೆಲ್ಲವೂ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳಿಂದ]] ದೂರದಲ್ಲಿವೆ.<ref>{{Cite web|url=https://www.nativeplanet.com/travel-guide/must-visit-camping-sites-in-malappuram-district-004762.html|title=ಮಲಪ್ಪುರಂನ ಬೆಟ್ಟ ಪ್ರದೇಶಗಳು|date=7 May 2018|access-date=11 October 2020|website=Native Planet|last=Akash Singh|archive-date=17 October 2020|archive-url=https://web.archive.org/web/20201017165621/https://www.nativeplanet.com/travel-guide/must-visit-camping-sites-in-malappuram-district-004762.html|url-status=live}}</ref> ಆದಾಗ್ಯೂ, ತೆಂಗಿನಕಾಯಿಯಿಂದ ಆವೃತವಾದ ಮರಳಿನ ಕರಾವಳಿ ಪ್ರದೇಶವು ಸಾಮಾನ್ಯ ಬೆಟ್ಟದ ಸ್ವಭಾವಕ್ಕೆ ಹೊರತಾಗಿದೆ.
== ಇತಿಹಾಸ ==
{{main|ಮಲಪ್ಪುರಂ ಜಿಲ್ಲೆಯ ಇತಿಹಾಸ}}
{{See also|ಕಾಲಿಕಟ್ನ ಜಾಮೋರಿನ್|ವಲ್ಲುವನಾಡ್ ಸಾಮ್ರಾಜ್ಯ|ಇರನಾಡ್|ತಾನೂರು ಸಾಮ್ರಾಜ್ಯ|ಪರಪ್ಪನಾಡ್|ಪೊನ್ನಾನಿ|ಕೊಚ್ಚಿ ಸಾಮ್ರಾಜ್ಯ|ನಿಲಂಬೂರ್ ಸಾಮ್ರಾಜ್ಯ|ಪಾಲಕ್ಕಾಡ್|ಮಲಬಾರ್ ಜಿಲ್ಲೆ}}
[[File:TabulaPeutingerianaMuziris.jpg|thumb|[[ಟ್ಯಾಬ್ಯುಲಾ ಪ್ಯೂಟಿಂಗೇರಿಯಾನಾ|ಪ್ಯೂಟಿಂಗರ್ ಟೇಬಲ್]]ನಲ್ಲಿ ಟಿಂಡಿಸ್ (ಟೊಂಡಿಸ್) (ಟೆಂಪಲ್ ಅಗಸ್ಟಿ ಮತ್ತು ಲಾಕಸ್ ಮುಜಿರಿಸ್ ಉತ್ತರದಲ್ಲಿ)]]
[[File:Periplous of the Erythraean Sea.svg|left|thumbnail|''[[ಪೆರಿಪ್ಲಸ್ ಆಫ್ ದಿ ಎರಿಥ್ರಿಯನ್ ಸೀ]]'' (1ನೇ ಶತಮಾನ CE) ನ ಹೆಸರುಗಳು, ಮಾರ್ಗಗಳು ಮತ್ತು ಸ್ಥಳಗಳು]]
ಪ್ರಾಗೈತಿಹಾಸಿಕ ಚಿಹ್ನೆಗಳ ಅವಶೇಷಗಳಾದ [[ಡಾಲ್ಮೆನ್]]ಗಳು, [[ಮೆನ್ಹಿರ್]]ಗಳು, ಮತ್ತು ಬಂಡೆಯ ಕೆತ್ತನೆಯ ಗುಹೆಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಂಡುಬಂದಿವೆ. [[ಕುಳಿಮನ್ನ ಗ್ರಾಮ ಪಂಚಾಯತ್|ಪುಲಿಯಕ್ಕೋಡೆ]], [[ಚೆಮ್ಮಡ್|ತ್ರಿಕ್ಕುಳಂ]], [[ಊರಕಂ]], [[ಮೇಲ್ಮುರಿ]], [[ಪೊನ್ಮಲ]], [[ವಲ್ಲಿಕುಣ್ಣು]], ಮತ್ತು [[ವೆಂಗರ, ಮಲಪ್ಪುರಂ ಜಿಲ್ಲೆ|ವೆಂಗರ]] ಗಳಲ್ಲಿ [[ಬಂಡೆಯ ಕೆತ್ತನೆಯ ವಾಸ್ತುಶಿಲ್ಪ|ಬಂಡೆಯ ಕೆತ್ತನೆಯ ಗುಹೆಗಳು]] ಕಂಡುಬಂದಿವೆ.<ref name="mh">{{cite web |url=http://censusindia.gov.in/2011census/dchb/3205_PART_A_MALAPPURAM.pdf |website=censusindia.gov.in |title=ಮಲಪ್ಪುರಂನ ಇತಿಹಾಸ |access-date=17 April 2020 |archive-date=27 November 2019 |archive-url=https://web.archive.org/web/20191127005243/http://censusindia.gov.in/2011census/dchb/3205_PART_A_MALAPPURAM.pdf |url-status=live }}</ref> [[ಪ್ರಾಚೀನ ರೋಮ್]]ನೊಂದಿಗೆ ವ್ಯಾಪಾರ ಕೇಂದ್ರವಾಗಿದ್ದ ಪ್ರಾಚೀನ ಸಮುದ್ರ ಬಂದರು [[ಟಿಂಡಿಸ್]] ಅನ್ನು [[ಪೊನ್ನಾನಿ]], [[ತಾನೂರು, ಮಲಪ್ಪುರಂ|ತಾನೂರು]], ಮತ್ತು [[ಕಡಲುಂಡಿ]]-[[ವಲ್ಲಿಕುಣ್ಣು]]-[[ಚಾಲಿಯಂ]]-[[ಬೇಪೋರ್]] ಪ್ರದೇಶ ಎಂದು ಸ್ಥೂಲವಾಗಿ ಗುರುತಿಸಲಾಗಿದೆ. ಟಿಂಡಿಸ್ ಚೇರರು ಮತ್ತು [[ರೋಮನ್ ಸಾಮ್ರಾಜ್ಯ]]ದ ನಡುವಿನ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು, ಇದು ಮುಜಿರಿಸ್ಗೆ ಮುಂದಿನ ಸ್ಥಾನದಲ್ಲಿತ್ತು.<ref>ಕರಾವಳಿ ಇತಿಹಾಸಗಳು: ಪ್ರಾಚೀನ ಭಾರತದಲ್ಲಿ ಸಮಾಜ ಮತ್ತು ಪರಿಸರ, ಯೋಗೇಶ್ ಶರ್ಮಾ, ಪ್ರಿಮಸ್ ಪುಸ್ತಕಗಳು 2010</ref> [[ಪ್ಲಿನಿ ದಿ ಎಲ್ಡರ್]] (1ನೇ ಶತಮಾನ CE) ''[[ಟಿಂಡಿಸ್]]'' ಬಂದರು ''ಕೆಪ್ರೊಬೊಟೊಸ್'' ([[ಚೇರ ಸಾಮ್ರಾಜ್ಯ]])ದ ವಾಯುವ್ಯ ಗಡಿಯಲ್ಲಿದೆ ಎಂದು ಹೇಳುತ್ತಾರೆ.<ref name=":2">ಗುರುಕ್ಕಲ್, ಆರ್., & ವಿಟ್ಟೇಕರ್, ಡಿ. (2001). ಮುಜಿರಿಸ್ ಹುಡುಕಾಟದಲ್ಲಿ. ''ಜರ್ನಲ್ ಆಫ್ ರೋಮನ್ ಆರ್ಕಿಯಾಲಜಿ,'' ''14'', 334–350.</ref> ''[[ಟಿಂಡಿಸ್]]'' ಬಂದರಿನ ಉತ್ತರದಲ್ಲಿರುವ ಈ ಪ್ರದೇಶವು [[ಸಂಗಮ್ ಅವಧಿ]]ಯಲ್ಲಿ [[ಎಳಿಮಲ]] ಸಾಮ್ರಾಜ್ಯದ ಆಳ್ವಿಕೆಯಲ್ಲಿತ್ತು.<ref name="odra">ಎ. ಶ್ರೀಧರ ಮೇನನ್, ಎ ಸರ್ವೆ ಆಫ್ ಕೇರಳ ಹಿಸ್ಟರಿ</ref> ''[[ಪೆರಿಪ್ಲಸ್ ಆಫ್ ದಿ ಎರಿಥ್ರಿಯನ್ ಸೀ]]'' ಪ್ರಕಾರ, ''[[ಲಿಮಿರಿಕೆ]]'' ಎಂದು ಕರೆಯಲ್ಪಡುವ ಪ್ರದೇಶವು ''[[ಕಣ್ಣೂರು|ನೌರಾ]]'' ಮತ್ತು ''[[ಟಿಂಡಿಸ್]]'' ನಲ್ಲಿ ಪ್ರಾರಂಭವಾಯಿತು. ಆದಾಗ್ಯೂ [[ಟಾಲೆಮಿ]] ''[[ಟಿಂಡಿಸ್]]'' ಅನ್ನು ಮಾತ್ರ ''[[ಲಿಮಿರಿಕೆ]]''ಯ ಪ್ರಾರಂಭದ ಬಿಂದು ಎಂದು ಉಲ್ಲೇಖಿಸುತ್ತಾನೆ. ಈ ಪ್ರದೇಶವು [[ಕನ್ಯಾಕುಮಾರಿ]]ಯಲ್ಲಿ ಕೊನೆಗೊಂಡಿರಬಹುದು; ಇದು ಸ್ಥೂಲವಾಗಿ ಪ್ರಸ್ತುತ [[ಮಲಬಾರ್ ಕರಾವಳಿ]]ಗೆ ಸಮನಾಗಿರುತ್ತದೆ. ಈ ಪ್ರದೇಶದೊಂದಿಗೆ ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವು ಸುಮಾರು 50,000,000 [[ಸೆಸ್ಟೆರ್ಸ್]] ಎಂದು ಅಂದಾಜಿಸಲಾಗಿದೆ.<ref>[[ಪ್ಲಿನಿ ದಿ ಎಲ್ಡರ್]] ಪ್ರಕಾರ, ಭಾರತದಿಂದ ಬಂದ ಸರಕುಗಳನ್ನು ಸಾಮ್ರಾಜ್ಯದಲ್ಲಿ ಅವುಗಳ ಮೂಲ ಖರೀದಿ ಬೆಲೆಗಿಂತ 100 ಪಟ್ಟು ಹೆಚ್ಚಿಗೆ ಮಾರಾಟ ಮಾಡಲಾಗುತ್ತಿತ್ತು. ನೋಡಿ [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> [[ಪ್ಲಿನಿ ದಿ ಎಲ್ಡರ್]] ''[[ಲಿಮಿರಿಕೆ]]'' ಕಡಲ್ಗಳ್ಳರಿಂದ ಹಾವಳಿಗೆ ಒಳಗಾಗಿತ್ತು ಎಂದು ಉಲ್ಲೇಖಿಸಿದ್ದಾರೆ.<ref>ಬೋಸ್ಟಾಕ್, ಜಾನ್ (1855). "26 (ಭಾರತಕ್ಕೆ ಪ್ರಯಾಣಗಳು)". ಪ್ಲಿನಿ ದಿ ಎಲ್ಡರ್, ದಿ ನ್ಯಾಚುರಲ್ ಹಿಸ್ಟರಿ. ಲಂಡನ್: ಟೇಲರ್ ಮತ್ತು ಫ್ರಾನ್ಸಿಸ್.</ref> [[ಕಾಸ್ಮಾಸ್ ಇಂಡಿಕೊಪ್ಲ್ಯೂಸ್ಟೀಸ್]] ''[[ಲಿಮಿರಿಕೆ]]'' ಮೆಣಸುಗಳ ಮೂಲವಾಗಿತ್ತು ಎಂದು ಉಲ್ಲೇಖಿಸಿದ್ದಾರೆ.<ref>ಇಂಡಿಕೊಪ್ಲ್ಯೂಸ್ಟೀಸ್, ಕಾಸ್ಮಾಸ್ (1897). ಕ್ರಿಶ್ಚಿಯನ್ ಟೋಪೋಗ್ರಫಿ. 11. ಯುನೈಟೆಡ್ ಕಿಂಗ್ಡಮ್: ದಿ ಟೆರ್ಟುಲಿಯನ್ ಪ್ರಾಜೆಕ್ಟ್. ಪುಟಗಳು 358–373.</ref><ref>ದಾಸ್, ಸಂತೋಷ್ ಕುಮಾರ್ (2006). ದಿ ಎಕನಾಮಿಕ್ ಹಿಸ್ಟರಿ ಆಫ್ ಏನ್ಷಿಯಂಟ್ ಇಂಡಿಯಾ. ಜೆನೆಸಿಸ್ ಪಬ್ಲಿಷಿಂಗ್ ಪ್ರೈ. ಲಿ. ಪು. 301.</ref> ನದಿ [[ಭಾರತಪ್ಪುಳ್ಳ]] (ಪೊನ್ನಾನಿ ನದಿ) [[ಸಂಗಮ್ ಅವಧಿ]] (1ನೇ–4ನೇ ಶತಮಾನ CE) ದಿಂದಲೂ ಪ್ರಾಮುಖ್ಯತೆಯನ್ನು ಹೊಂದಿತ್ತು, ಏಕೆಂದರೆ [[ಪಾಲಕ್ಕಾಡ್ ಕಣಿವೆ]] ಇದ್ದು ಅದು [[ಮಲಬಾರ್ ಕರಾವಳಿ]]ಯನ್ನು ಒಳನಾಡಿನ ಮೂಲಕ [[ಕೊರಮಂಡಲ್ ಕರಾವಳಿ]]ಗೆ ಸಂಪರ್ಕಿಸುತ್ತಿತ್ತು.<ref name="Trade">{{cite news|last=Subramanian|first=T. S|title=ತಮಿಳುನಾಡಿನಲ್ಲಿ ರೋಮನ್ ಸಂಪರ್ಕ|url=http://www.hindu.com/thehindu/thscrip/print.pl?file=2007012800201800.htm&date=2007/01/28/&prd=th|access-date=28 October 2011|newspaper=[[The Hindu]]|date=28 January 2007|url-status=live|archive-url=https://web.archive.org/web/20130919235748/http://www.hindu.com/thehindu/thscrip/print.pl?file=2007012800201800.htm&date=2007%2F01%2F28%2F&prd=th|archive-date=19 September 2013}}</ref>
[[File:Kurumathur inscription.jpg|thumbnail|[[ಕುರುಮತ್ತೂರ್ ಶಾಸನ]] (871 CE)]]
[[ಅರೀಕೋಡ್]] ಬಳಿ ಕಂಡುಬಂದ [[ಕುರುಮತ್ತೂರ್ ಶಾಸನ]]ವು 871 CE ಗೆ ಸೇರಿದ್ದು.<ref name="Veluthat">ವೇಲುತ್ತಾಟ್, ಕೆಸವನ್ (1 ಜೂನ್ 2018). "ಒಂದು ಪ್ರದೇಶವನ್ನು ರೂಪಿಸುವಲ್ಲಿ ಇತಿಹಾಸ ಮತ್ತು ಇತಿಹಾಸ ಲೇಖನ: ಕೇರಳದ ಪ್ರಕರಣ". ''ಸ್ಟಡೀಸ್ ಇನ್ ಪೀಪಲ್ಸ್ ಹಿಸ್ಟರಿ''. '''5''' (1): 13–31. [https://doi.org/10.1177/2348448918759852] {{Webarchive|url=https://web.archive.org/web/20210913063330/https://journals.sagepub.com/doi/10.1177/2348448918759852|date=13 September 2021}}</ref> [[ತ್ರಿಪ್ರಂಗೋಡ್]] ([[ತಿರುನವಾಯ]] ಬಳಿ), [[ಕೊಟ್ಟಕ್ಕಲ್]], ಮತ್ತು [[ಚಾಲಿಯಾರ್]] ನಲ್ಲಿ ಕಂಡುಬಂದ 932 CE ಗೆ ಸೇರಿದ ಮೂರು [[ಹಳೆಯ ಮಲಯಾಳಂ]] ಶಾಸನಗಳು [[ಚೇರ ಸಾಮ್ರಾಜ್ಯ]]ದ [[ಗೋಡ ರವಿ]]ಯ ಹೆಸರನ್ನು ಉಲ್ಲೇಖಿಸುತ್ತವೆ.<ref name=":0">ನಾರಾಯಣನ್, ಎಂ. ಜಿ. ಎಸ್. ''[https://books.google.com/books?id=0YDCngEACAAJ&q=Perumals+of+Kerala ಕೇರಳದ ಪೆರುಮಾಳ್ಗಳು: ಬ್ರಾಹ್ಮಣ ಪ್ರಭುತ್ವ ಮತ್ತು ಆಚರಣಾ ರಾಜಪ್ರಭುತ್ವ ಪೆರುಮಾಳ್ಗಳು ಕೇರಳದ] {{Webarchive|url=https://web.archive.org/web/20210129082837/https://books.google.co.in/books?id=0YDCngEACAAJ&dq=Perumals%20of%20Kerala&hl=en&newbks=1&newbks_redir=0&sa=X&ved=2ahUKEwiH-dbD57HuAhXIbn0KHeY5BHkQ6AEwAXoECAYQAQ |date=29 January 2021 }}.'' ತೃಶೂರ್ (ಕೇರಳ): ಕಾಸ್ಮೋಬುಕ್ಸ್, 2013. 438-42.</ref> [[ತ್ರಿಪ್ರಂಗೋಡ್]] ಶಾಸನವು [[ತವನೂರ್]]ನ ಒಪ್ಪಂದದ ಬಗ್ಗೆ ಹೇಳುತ್ತದೆ.<ref name=":0"/> [[ಎಡಪ್ಪಲ್]] ಬಳಿಯ [[ಸುಕಾಪುರಂ]] ನಲ್ಲಿ 10ನೇ ಶತಮಾನ CE ಗೆ ಸೇರಿದ ಹಲವಾರು [[ಹಳೆಯ ಮಲಯಾಳಂ]] ಶಾಸನಗಳು ಕಂಡುಬಂದಿವೆ, ಇದು ಕೇರಳದ 64 ಹಳೆಯ [[ನಂಬೂದಿರಿ]] ಗ್ರಾಮಗಳಲ್ಲಿ ಒಂದಾಗಿದೆ.
[[File:Aalthiyoor Nambi Illam.jpg|300px|left|thumbnail|[[ತಿರೂರ್]] ಬಳಿಯ [[ಅಲತ್ತಿಯೂರು, ಮಲಪ್ಪುರಂ|''ಅಲತ್ತಿಯೂರು ನಂಬಿ ಇಲ್ಲಂ'']]]]
[[ಇರನಾಡ್]] ಮತ್ತು [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವನಾಡ್]] ಪ್ರದೇಶಗಳ ಆಡಳಿತಗಾರರ ಬಗ್ಗೆ ವಿವರಣೆಗಳನ್ನು ಭಾಸ್ಕರ ರವಿ ವರ್ಮನ್ (ಸುಮಾರು 1000 CE) ರ [[ಕೊಚ್ಚಿಯ ಯಹೂದಿ ತಾಮ್ರ ಫಲಕಗಳು|ಯಹೂದಿ ತಾಮ್ರ ಫಲಕಗಳಲ್ಲಿ]] ಮತ್ತು ವೀರ ರಾಘವ ಚಕ್ರವರ್ತಿ (ಸುಮಾರು 1225 CE) ರ [[ವೀರರಾಘವ ತಾಮ್ರ ಫಲಕಗಳಲ್ಲಿ]] ಕಾಣಬಹುದು.<ref name="mh"/> [[ಕಾಲಿಕಟ್ನ ಜಾಮೋರಿನ್]] ಮೂಲತಃ [[ಕೊಂಡೊಟ್ಟಿ]]ಯ [[ನೆಡಿಯಿರುಪ್ಪು]]ಗೆ ಸೇರಿದವರಾಗಿದ್ದು, ನಂತರ ಅವರು ತಮ್ಮ ಸ್ಥಾನವನ್ನು ನೆರೆಯ [[ಕೋಝಿಕ್ಕೋಡ್]] ಗೆ ವರ್ಗಾಯಿಸಿಕೊಂಡರು.<ref name="askh"/> ಇರನಾಡ್ ಅನ್ನು [[ಸಾಮಂತನ್]] ವಂಶಕ್ಕೆ ಸೇರಿದ [[ಎರಾಡಿ]]ಗಳು ಎಂದು ಕರೆಯಲ್ಪಡುವ ಕುಲವು ಆಳುತ್ತಿತ್ತು, ಇದು ನೆರೆಯ [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವನಾಡ್]]ನ [[ಎಂ. ಕೆ. ವೆಲ್ಲೋಡಿ|ವೆಲ್ಲೋಡಿ]]ಗಳು ಮತ್ತು [[ಒಟ್ಟಪ್ಪಾಳಂ|ನೆಡುಂಗನಾಡ್]]ನ ನೆಡುಂಗಡಿಗಳಿಗೆ ಹೋಲುತ್ತದೆ.<ref name="askh"/> ಇರನಾಡಿನ ಆಡಳಿತಗಾರರು ''ಎರಳ್ಪ್ಪಾಡ್''/''ಎರಾಡಿ'' ಎಂಬ ಬಿರುದಿನಿಂದ ಕರೆಯಲ್ಪಡುತ್ತಿದ್ದರು.<ref name="askh"/> ಕಾಲಿಕಟ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಮತ್ತು [[ಮಲಬಾರ್ ಕರಾವಳಿ]]ಯಲ್ಲಿ [[ಕೋಝಿಕ್ಕೋಡ್]] ಅನ್ನು ಪ್ರಮುಖ ಬಂದರು ನಗರವಾಗಿ ಅಭಿವೃದ್ಧಿಪಡಿಸಿದವರು [[ಇರನಾಡ್]]ನ ಆಡಳಿತಗಾರರು ([[ನೆಡಿಯಿರುಪ್ಪು]]ನ ''ಎರಾಡಿ'').<ref name="askh"/> ಅದರ ನಂತರ, [[ಪರಪ್ಪನಾಡ್]] ([[ಪರಪ್ಪನಂಗಾಡಿ]]) ಮತ್ತು [[ತಾನೂರು ಸಾಮ್ರಾಜ್ಯ|ವೆಟ್ಟತ್ತುನಾಡು]] ([[ತಾನೂರು, ಮಲಪ್ಪುರಂ|ತಾನೂರು]]) ಆಡಳಿತಗಾರರು ಜಾಮೋರಿನ್ನ ಸಾಮಂತರಾದರು. [[ಪರಪ್ಪನಾಡ್]] ರಾಜಮನೆತನವು [[ತಿರುವಾಂಕೂರು ರಾಜಮನೆತನ]]ದ ಸೋದರ ಸಂಬಂಧಿ ಸಾಮ್ರಾಜ್ಯವಾಗಿದೆ.<ref name="askh"/> ಇದಲ್ಲದೆ, [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವನಾಡ್]] ಕೋವಿಲಕಂಗಳ (ನಿಲಂಬೂರ್, ಮಂಜೇರಿ, ಮಲಪ್ಪುರಂ, ಕೊಟ್ಟಕ್ಕಲ್, ಮತ್ತು ಪೊನ್ನಾನಿ) ದೊಡ್ಡ ಭಾಗವೂ ಜಾಮೋರಿನ್ನ ಸಾಮಂತರಾದರು.<ref name="askh"/>
[[File:South India in early 11th century AD.jpg|thumbnail|11ನೇ ಶತಮಾನದ ಆರಂಭದಲ್ಲಿ [[ದಕ್ಷಿಣ ಭಾರತ]] (ಸುಮಾರು 1000 CE – ಮಲಪ್ಪುರಂ ಜಿಲ್ಲೆಯು ಎರಡು ಪ್ರಮುಖ ಅಧಿಕಾರ ಕೇಂದ್ರಗಳನ್ನು ಒಳಗೊಂಡಿತ್ತು – ''ಎರಳ ನಾಡು'' ([[ಇರನಾಡ್]]) ಮತ್ತು [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವ ನಾಡು]])]]
ನಂತರ [[ಕೊಚ್ಚಿ ಸಾಮ್ರಾಜ್ಯ]]ವಾದ ''ಪೆರುಂಬಡಪ್ಪು ಸ್ವರೂಪಂ''ನ ಮೂಲ ಪ್ರಧಾನ ಕಚೇರಿಯು [[ಪೊನ್ನಾನಿ ತಾಲೂಕು]]ನಲ್ಲಿ [[ಪುತ್ತುಪೊನ್ನಾನಿ]]ಯಿಂದ 10 ಕಿಮೀ ದಕ್ಷಿಣದಲ್ಲಿ [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]]ನ ವನ್ನೇರಿಯಲ್ಲಿನ ಚಿತ್ರಕೂಡಂನಲ್ಲಿತ್ತು.<ref name="askh"/> ಪೆರುಂಪಡಪ್ಪು [[ಕಾಲಿಕಟ್ನ ಜಾಮೋರಿನ್]] ಸಾಮ್ರಾಜ್ಯದ ಆಡಳಿತಕ್ಕೆ ಬಂದಾಗ, ಪೆರುಂಪಡಪ್ಪಿನ ಆಡಳಿತಗಾರರು [[ಕೊಡುಂಗಲ್ಲೂರ್]]ಗೆ ಪಲಾಯನ ಮಾಡಿದರು, ಮತ್ತು ನಂತರ ಅವರು [[ಕೊಚ್ಚಿ]]ಗೆ ತೆರಳಿದರು, ಅಲ್ಲಿ ಅವರು [[ಕೊಚ್ಚಿ ಸಾಮ್ರಾಜ್ಯ]]ವನ್ನು ಸ್ಥಾಪಿಸಿದರು.<ref name="askh"/> 1250–1300 CE ವೇಳೆಗೆ, ಬಹುತೇಕ ಇಡೀ ಜಿಲ್ಲೆಯು ಜಾಮೋರಿನ್ನ ಆಡಳಿತಕ್ಕೆ ಬಂದಿತು.<ref name="askh"/><ref name="mh"/>
ಮಧ್ಯಕಾಲೀನ ಕೇರಳದಲ್ಲಿ ವಿಶೇಷ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದ್ದ [[ಮಾಮಂಕಂ ಉತ್ಸವ]]ವು [[ಭಾರತಪ್ಪುಳ್ಳ]] ನದಿಯ ಉತ್ತರ ದಡದಲ್ಲಿರುವ [[ತಿರುನವಾಯ]]ದಲ್ಲಿ ನಡೆಯುತ್ತಿತ್ತು.<ref name="askh"/> [[ಕುಂಬಿಡಿ|ಪನ್ನಿಯೂರು]] ಮತ್ತು [[ಸುಕಾಪುರಂ|ಚೋವ್ವರ]] (ಸುಕಾಪುರಂ) ನ [[ನಂಬೂದಿರಿ]] ಗ್ರಾಮಗಳಲ್ಲಿನ [[ನಂಬೂದಿರಿ]]ಗಳ ನಡುವೆ ಅಸ್ತಿತ್ವದಲ್ಲಿದ್ದ ಪೈಪೋಟಿಯು ಮಧ್ಯಕಾಲೀನ ಕೇರಳದಲ್ಲಿ ಹೆಚ್ಚಿನ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿತ್ತು.<ref name="askh"/> [[ಕುಂಬಿಡಿ|ಪನ್ನಿಯೂರು]] [[ಕುಟ್ಟಿಪುರಂ]] ಪಟ್ಟಣದ ಎದುರು ಇದೆ, ಆದರೆ [[ಸುಕಾಪುರಂ]] [[ಎಡಪ್ಪಲ್]]ನಲ್ಲಿದೆ. ಜಾಮೋರಿನ್ಗಳು ಪನ್ನಿಯೂರ್ಕೂರ್ ಮತ್ತು ಚೋವ್ವರಕೂರಿನ ನಂಬೂದಿರಿಗಳ ನಡುವಿನ ''ಕೂರ್ಮತ್ಸರಂ'' ಎಂದು ಕರೆಯಲ್ಪಡುವ ವಿವಾದದಲ್ಲಿ ಮಧ್ಯಪ್ರವೇಶಿಸಿದರು. ಇತ್ತೀಚಿನ ಘಟನೆಯಲ್ಲಿ, ತಿರುಮನಸ್ಸೇರಿ ನಂಬೂದಿರಿಯು ಹತ್ತಿರದ ಪ್ರತಿಸ್ಪರ್ಧಿ ಗ್ರಾಮವನ್ನು ಆಕ್ರಮಣ ಮಾಡಿ ಸುಟ್ಟುಹಾಕಿದ್ದರು. ವಲ್ಲುವನಾಡು ಮತ್ತು [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]] ಆಡಳಿತಗಾರರು ಚೋವ್ವರಂಗೆ ಸಹಾಯ ಮಾಡಲು ಬಂದು ಏಕಕಾಲದಲ್ಲಿ ಪನ್ನಿಯೂರ್ ಮೇಲೆ ದಾಳಿ ಮಾಡಿದರು. ತಿರುಮನಸ್ಸೇರಿ ನಾಡು ದಕ್ಷಿಣ ಮತ್ತು ಪೂರ್ವದ ನೆರೆಯವರಿಂದ ಮುತ್ತಿಕೊಳ್ಳಲ್ಪಟ್ಟಿತು. ತಿರುಮನಸ್ಸೇರಿ ನಂಬೂದಿರಿಯು ಸಹಾಯಕ್ಕಾಗಿ ಜಾಮೋರಿನ್ ಅವರನ್ನು ಕೋರಿದರು, ಮತ್ತು ತಮ್ಮ ರಕ್ಷಣೆಗೆ ಪ್ರತಿಯಾಗಿ [[ಅರೇಬಿಯನ್ ಸಮುದ್ರ]]ದೊಂದಿಗೆ [[ಭಾರತಪ್ಪುಳ್ಳ]] ನದಿಯು ಸೇರುವ [[ಪೊನ್ನಾನಿ]] ಬಂದರನ್ನು ಜಾಮೋರಿನ್ಗೆ ಬಿಟ್ಟುಕೊಡುವುದಾಗಿ ಭರವಸೆ ನೀಡಿದರು. ತಿರುಮನಸ್ಸೇರಿ ನಂಬೂದಿರಿ, ಕೋಝಿಕ್ಕೋಡ್ನ ಕೋಯ, ಮತ್ತು [[ತಾನೂರು ಸಾಮ್ರಾಜ್ಯ|ವೆಟ್ಟತ್ತುನಾಡಿನ]] ಆಡಳಿತಗಾರರು ಜಾಮೋರಿನ್ ಅವರನ್ನು ಬೆಂಬಲಿಸಿದರು. ಅಂತಹ ಅವಕಾಶಕ್ಕಾಗಿ ಹುಡುಕುತ್ತಿದ್ದ ಜಾಮೋರಿನ್, ಆ ಕೊಡುಗೆಯನ್ನು ಸಂತೋಷದಿಂದ ಸ್ವೀಕರಿಸಿದರು.<ref name="KrishnaIyer2"/> ವಲ್ಲುವನಾಡಿನ ಮೇಲಿನ ತಮ್ಮ ಮಿಲಿಟರಿ ಅಭಿಯಾನಗಳಲ್ಲಿ, ಜಾಮೋರಿನ್ ಅವರಿಗೆ [[ಬೇಪೋರ್]], [[ಚಾಲಿಯಂ]], [[ತಾನೂರು, ಮಲಪ್ಪುರಂ|ತಾನೂರು]], ಮತ್ತು [[ಕೊಡುಂಗಲ್ಲೂರ್]]ನ ಮುಸ್ಲಿಂ ಮಧ್ಯಪ್ರಾಚ್ಯ ನಾವಿಕರು ಮತ್ತು ಕೋಝಿಕ್ಕೋಡ್ನ ಕೋಯ ಅವರ ನಿಸ್ಸಂದಿಗ್ಧವಾದ ಸಹಾಯವನ್ನು ಪಡೆದರು.<ref name="VVHaridas">ವಿ. ವಿ., ಹರಿದಾಸ್. ''"ಮಧ್ಯಕಾಲೀನ ಕೇರಳದಲ್ಲಿ ರಾಜ ನ್ಯಾಯಾಲಯ ಮತ್ತು ಸಂಸ್ಕೃತಿ – ಕಾಲಿಕಟ್ನ ಜಾಮೋರಿನ್ಗಳು (AD 1200 ರಿಂದ AD 1767)"''. [http://shodhganga.inflibnet.ac.in/handle/10603/131929] {{Webarchive|url=https://web.archive.org/web/20210913065714/https://shodhganga.inflibnet.ac.in/handle/10603/131929|date=13 September 2021}} ಪ್ರಕಟಿತವಲ್ಲದ ಪಿಎಚ್ಡಿ ಪ್ರಬಂಧ. ಮಂಗಳೂರು ವಿಶ್ವವಿದ್ಯಾಲಯ</ref> ಜಾಮೋರಿನ್ ನೀಡಿದ ಪ್ರತಿಫಲವಾಗಿ, [[ಪೊನ್ನಾನಿ]] ಬಂದರು ಮಧ್ಯಪ್ರಾಚ್ಯ ನಾವಿಕರ ಪ್ರಮುಖ ವ್ಯಾಪಾರ ಮತ್ತು ಸಾಂಸ್ಕೃತಿಕ ಕೇಂದ್ರವಾಯಿತು. ಕೋಝಿಕ್ಕೋಡಿನ ಮುಸ್ಲಿಂ ನ್ಯಾಯಾಧೀಶರು [[ತಿರುನವಾಯ]]ದ ಮೇಲೆ ದಾಳಿ ಮಾಡಲು ಸಾಮೂತಿರಿಗೆ "ಹಣ ಮತ್ತು ಸಾಮಗ್ರಿಗಳಲ್ಲಿ" ಸಹಾಯ ಮಾಡಿದ್ದರು ಎಂದು ತೋರುತ್ತದೆ.<ref name="KrishnaIyer2">ಕೆ. ವಿ. ಕೃಷ್ಣ ಅಯ್ಯರ್, ''ಕಾಲಿಕಟ್ನ ಜಾಮೋರಿನ್ಗಳು: ಆರಂಭಿಕ ಕಾಲದಿಂದ AD 1806 ರವರೆಗೆ''. ಕಾಲಿಕಟ್: ನಾರ್ಮನ್ ಪ್ರಿಂಟಿಂಗ್ ಬ್ಯೂರೋ, 1938.</ref> ಜಾಮೋರಿನ್ ತಮ್ಮ ವಿಜಯವನ್ನು ವಲ್ಲುವನಾಡಿಗೆ ಮುಂದುವರೆಸಿದರು ಮತ್ತು [[ಕೊಟ್ಟಕ್ಕಲ್]], [[ಮಲಪ್ಪುರಂ]], [[ಮಂಜೇರಿ]], ಮತ್ತು [[ನಿಲಂಬೂರ್]] ಪ್ರದೇಶಗಳನ್ನು ವಶಪಡಿಸಿಕೊಂಡರು. ಹೀಗೆ [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]] ಮತ್ತು [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವನಾಡ್]]ನ ದೊಡ್ಡ ಭಾಗವು ಜಾಮೋರಿನ್ನ ಆಡಳಿತಕ್ಕೆ ಬಂದಿತು. ಹೀಗೆ ಜಾಮೋರಿನ್ ಮಾಮಂಕಮ್ನ ''ರಕ್ಷಾ ಪುರುಷ'' ಆದರು, ಮತ್ತು [[ತಿರುನವಾಯ]], ನೆರೆಯ [[ತ್ರಿಪ್ರಂಗೋಡ್]], ಮತ್ತು [[ಪೊನ್ನಾನಿ]]ಯ ಆಡಳಿತಗಾರರಾದರು.<ref name="askh"/>
[[File:Kottakkunnu, Malappuram municipality.jpg|left|thumbnail|[[ಮಲಪ್ಪುರಂ]]ನ [[ಕೊಟ್ಟಕ್ಕುಣ್ಣು]]]]
ಜಾಮೋರಿನ್ ಅಡಿಯಲ್ಲಿ, ಜಿಲ್ಲೆಯ ಭಾಗವಾಗಿದ್ದ ಪ್ರದೇಶಗಳು ಮಧ್ಯಕಾಲೀನ ಕೇರಳದಲ್ಲಿ ಪ್ರಮುಖ ವಿದೇಶಿ ಸಮುದ್ರ ವ್ಯಾಪಾರ ಕೇಂದ್ರಗಳಾಗಿ ಹೊರಹೊಮ್ಮಿದವು. ಜಾಮೋರಿನ್ ತಮ್ಮ ಬಂದರುಗಳ ಮೂಲಕ ಮಸಾಲೆ ವ್ಯಾಪಾರಕ್ಕೆ ತೆರಿಗೆ ವಿಧಿಸುವ ಮೂಲಕ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಗಳಿಸುತ್ತಿದ್ದರು. ಜಾಮೋರಿನ್ ಸಾಮ್ರಾಜ್ಯದ ಪ್ರಮುಖ ಬಂದರುಗಳು [[ಪರಪ್ಪನಂಗಾಡಿ]], [[ತಾನೂರು, ಮಲಪ್ಪುರಂ|ತಾನೂರು]], ಮತ್ತು [[ಪೊನ್ನಾನಿ]] ಸೇರಿದ್ದವು.<ref name="ReferenceB"/><ref name="Kunhali">ಕುಂಹಾಲಿ. ವಿ. "ಕಾಲಿಕಟ್ ಇನ್ ಹಿಸ್ಟರಿ" ಪ್ರಕಟಣಾ ವಿಭಾಗ, ಕಾಲಿಕಟ್ ವಿಶ್ವವಿದ್ಯಾಲಯ (ಕೇರಳ), 2004</ref> 16 ನೇ ಶತಮಾನದ ಐತಿಹಾಸಿಕ ಕೃತಿ ''[[ತುಹ್ಫತ್ ಉಲ್ ಮುಜಾಹಿದೀನ್]]'' ಪ್ರಕಾರ, [[ಪರಪ್ಪನಂಗಾಡಿ]] (''ಬಾರ್ಬುರಂಕಾಡ್''), [[ತಿರೂರಂಗಡಿ]] (''ತಿರುವಾರಂಕಾಡ್''), [[ತಾನೂರು, ಮಲಪ್ಪುರಂ|ತಾನೂರು]], ಮತ್ತು [[ಪೊನ್ನಾನಿ]] (''ಫುನಾನ್'') ಸಹ ಜಾಮೋರಿನ್ ಆಡಳಿತದ ಅಡಿಯಲ್ಲಿ ವ್ಯಾಪಾರ ವಸಾಹತುಗಳಲ್ಲಿ ಮುಖ್ಯವಾದವುಗಳಾಗಿವೆ.<ref name="Makhdoom"/> [[ಪೊನ್ನಾನಿ]]ಯಲ್ಲಿನ ''ತ್ರಿಕ್ಕವಿಲ್ ಕೋವಿಲಕಂ'' ಜಾಮೋರಿನ್ಗೆ ಎರಡನೇ ನೆಲೆಯಾಗಿ ಸೇವೆ ಸಲ್ಲಿಸಿತು. ಪೊನ್ನಾನಿ ಅವರ ಸಾಮ್ರಾಜ್ಯದ ನೌಕಾ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಿತು.<ref name="ReferenceB">ಕೆ. ವಿ. ಕೃಷ್ಣ ಅಯ್ಯರ್ ''ಕಾಲಿಕಟ್ನ ಜಾಮೋರಿನ್ಗಳು: ಆರಂಭಿಕ ಕಾಲದಿಂದ AD 1806 ರವರೆಗೆ''. ಕಾಲಿಕಟ್: ನಾರ್ಮನ್ ಪ್ರಿಂಟಿಂಗ್ ಬ್ಯೂರೋ, 1938</ref> [[ಮಲಪ್ಪುರಂ]] ಜಾಮೋರಿನ್ನ ಸ್ಥಳೀಯ ಪ್ರಧಾನಿಯಾದ ''ಪರ ನಂಬಿ''ಯ ಪ್ರಧಾನ ಕಚೇರಿಯಾಗಿತ್ತು.<ref name="Malabar Manual Appendix">{{cite book |last1=Logan |first1=William |title=ಮಲಬಾರ್ ಮ್ಯಾನ್ಯುಯಲ್: VICTORIA INSTITUTIONS ನಿಂದ ವೇದ್ ಅವರ ವ್ಯಾಖ್ಯಾನದೊಂದಿಗೆ |publisher=VICTORIA INSTITUTIONS, Aaradhana, DEVERKOVIL 673508 |edition=Volume 2 |url=https://books.google.com/books?id=0TJFDwAAQBAJ&pg=PA1 |access-date=12 July 2020 |archive-date=13 September 2021 |archive-url=https://web.archive.org/web/20210913063330/https://books.google.com/books?id=0TJFDwAAQBAJ&pg=PA1 |url-status=live }}</ref> ಜಾಮೋರಿನ್ನ ಇತರ [[ಕೋವಿಲಕಂ|''ಕೋವಿಲಕಂಗಳು'']] [[ಕೊಟ್ಟಕ್ಕಲ್]]ನ ''ಕಿಝಕ್ಕೆ ಕೋವಿಲಕಂ'', [[ಮಂಜೇರಿ]]ಯ ''ಮಂಜೇರಿ ಕೋವಿಲಕಂ'',<ref name="MGS">{{Cite book|url=https://books.google.com/books?id=n6CNHAAACAAJ&q=Perumals+of+Kerala|title=ಕೇರಳದ ಪೆರುಮಾಳ್ಗಳು: ಮಕೋಟೈನ ಚೇರ ಪೆರುಮಾಳ್ಗಳ ಅಡಿಯಲ್ಲಿ ಕೇರಳದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳು (ಸುಮಾರು 800 A.D.-1124 A.D.)|last=Narayanan|first=M. G. S.|date=1996|publisher=Xavier Press|access-date=16 November 2020|archive-date=13 September 2021|archive-url=https://web.archive.org/web/20210913063330/https://books.google.com/books?id=n6CNHAAACAAJ&q=Perumals+of+Kerala|url-status=live}}</ref> ಮತ್ತು [[ನಿಲಂಬೂರ್]]ನ [[ನಿಲಂಬೂರ್ ಸಾಮ್ರಾಜ್ಯ|''ನಿಲಂಬೂರ್ ಕೋವಿಲಕಂ'']] ಸೇರಿದ್ದವು. [[ಪರಪ್ಪನಂಗಾಡಿ]]ಯ ''ಪರಪ್ಪನಾಡ್ ಕೋವಿಲಕಂ'' ಮತ್ತು [[ತಾನೂರು, ಮಲಪ್ಪುರಂ|ತಾನೂರು]]ನ ''ತಾನೂರು ಕೋವಿಲಕಂ'' ಜಾಮೋರಿನ್ನ ಸಾಮಂತ ರಾಜಮನೆತನಗಳಾಗಿದ್ದವು. ಆದಾಗ್ಯೂ [[ಅಂಗಡಿಪುರಂ]] ಬಳಿಯ [[ಮಂಕಡ]]ದ ''ಮಂಕಡ ಕೋವಿಲಕಂ'' [[ವಲ್ಲುವನಾಡ್ ಸಾಮ್ರಾಜ್ಯ|''ವಲ್ಲುವನಾಡ್ ರಾಜರು'']]ನ ಆಡಳಿತ ಮನೆತನದ ಸ್ಥಾನವಾಗಿತ್ತು. ಕೇರಳದ [[ನಂಬೂದಿರಿ]] [[ಬ್ರಾಹ್ಮಣ]]ರ ಪ್ರಮುಖ ನಾಯಕರಾಗಿದ್ದ [[ಅಳ್ವಾಂಚೇರಿ ತಂಪ್ರಕ್ಕಲ್]]ರ ಪ್ರಧಾನ ಕಚೇರಿಯಾದ ''ಅಳ್ವಾಂಚೇರಿ ಮನ''ವು [[ತಿರೂರ್ ತಾಲೂಕು]]ನ [[ಕುಟ್ಟಿಪುರಂ]] ಬಳಿಯ [[ಅತವನಾಡ್]] ನಲ್ಲಿದೆ. ''ಅಳ್ವಾಂಚೇರಿ ತಂಪ್ರಕ್ಕಲ್'' ಮತ್ತು [[ತಾನೂರು ಸಾಮ್ರಾಜ್ಯ]]ದ [[ಕಲ್ಪಕಾಂಚೇರಿ]]ಯ ಒಡೆಯರು ಸಾಮಾನ್ಯವಾಗಿ ಹೊಸ ಜಾಮೋರಿನ್ನ ''ಅರಿಯಿಟ್ಟು ವಳ್ಚ'' (ಪಟ್ಟಾಭಿಷೇಕ) ಸಮಾರಂಭದಲ್ಲಿ ಉಪಸ್ಥಿತರಿರುತ್ತಿದ್ದರು.<ref name="MGS"/> [[ಅರಬ್ಬರು]] ಆರಂಭಿಕ ಮಧ್ಯಯುಗದಲ್ಲಿ ವ್ಯಾಪಾರದ ಏಕಸ್ವಾಮ್ಯವನ್ನು ಹೊಂದಿದ್ದರು.<ref name="MGS"/> ''[[ಪಾಲಕ್ಕಾಡ್]] ರಾಜರ'' ಮೂಲ ಪ್ರಧಾನ ಕಚೇರಿಯೂ [[ಅತವನಾಡ್]] ನಲ್ಲಿತ್ತು.<ref name="mnn">{{Cite book|title='ಕೇರಳ ಚರಿತ್ರಂ|last=ಶ್ರೀಧರ ಮೇನನ್|first=ಎ|publisher=ಡಿಸಿ ಬುಕ್ಸ್|year=2007|isbn=9788126415885|location=ಕೊಟ್ಟಯಂ|page=200|url=https://keralabookstore.com/book/keralacharithram/11148/|access-date=22 April 2020|archive-date=9 July 2020|archive-url=https://web.archive.org/web/20200709123203/https://keralabookstore.com/book/keralacharithram/11148/|url-status=live}}</ref>
[[File:Map of Samoothiris kingdom.jpg|thumbnail|1498 ರಲ್ಲಿ ಜಾಮೋರಿನ್ ಸಾಮ್ರಾಜ್ಯ]]
[[File:Ponnani harbour 2.jpg|left|thumbnail|ಜಾಮೋರಿನ್ನ ಎರಡನೇ ನಿವಾಸವು [[ಪೊನ್ನಾನಿ]]ಯ ''ತ್ರಿಕ್ಕವಿಲ್ ಕೋವಿಲಕಂ'' ನಲ್ಲಿತ್ತು]]
[[File:Caminho maritimo para a India.png|left|thumb|1498 ರಲ್ಲಿ [[ವಾಸ್ಕೋ ಡ ಗಾಮಾ]] [[ಕೋಝಿಕ್ಕೋಡ್]] ತಲುಪಲು ತೆಗೆದುಕೊಂಡ ಮಾರ್ಗ (ಕಪ್ಪು ರೇಖೆ), ಇದು [[ಯುರೋಪ್]] ನಿಂದ [[ಭಾರತ]]ಕ್ಕೆ [[ಸಮುದ್ರ ಮಾರ್ಗ|ಸಮುದ್ರ ಮಾರ್ಗದ]] [[ಭೌಗೋಳಿಕ ಅನ್ವೇಷಣೆಗಳ ಯುಗ|ಶೋಧನೆಯಾಗಿದೆ]], ಮತ್ತು ಅಂತಿಮವಾಗಿ [[ಭಾರತೀಯ ಉಪಖಂಡ]]ದ [[ವಸಾಹತುಶಾಹಿ ಭಾರತ|ಯುರೋಪಿಯನ್ ವಸಾಹತುಶಾಹಿಗೆ]] ದಾರಿ ಮಾಡಿಕೊಟ್ಟಿತು. ಆ ಸಮಯದಲ್ಲಿ, [[ಕಾಲಿಕಟ್]]ನ [[ಜಾಮೋರಿನ್]] ಪೊನ್ನಾನಿಯ ತ್ರಿಕ್ಕವಿಲ್ ಕೋವಿಲಕಂನಲ್ಲಿ ವಾಸಿಸುತ್ತಿದ್ದರು.]]
[[ವಾಸ್ಕೋ ಡ ಗಾಮಾ]]ನ ನೌಕಾಪಡೆಯು 1497 ರಲ್ಲಿ [[ಪೋರ್ಚುಗಲ್]] ಅನ್ನು ತೊರೆಯಿತು, ಕೇಪ್ ಅನ್ನು ಸುತ್ತಿಕೊಂಡು ಪೂರ್ವ ಆಫ್ರಿಕಾದ ಕರಾವಳಿಯಲ್ಲಿ ಮುಂದುವರೆಯಿತು, ಅಲ್ಲಿ ಸ್ಥಳೀಯ ಪೈಲಟ್ ಅನ್ನು ಹಡಗಿನಲ್ಲಿ ಕರೆತರಲಾಯಿತು, ಅವರು ಅವರನ್ನು [[ಹಿಂದೂ ಮಹಾಸಾಗರ]]ದಾದ್ಯಂತ ಮಾರ್ಗದರ್ಶನ ಮಾಡಿದರು, ಮೇ 1498 ರಲ್ಲಿ [[ಕೋಝಿಕ್ಕೋಡ್|ಕಾಲಿಕಟ್]] ತಲುಪಿದರು.<ref>[[#refScammell|ಸ್ಕ್ಯಾಮೆಲ್]], ಪು. 13</ref> [[ವಾಸ್ಕೋ ಡ ಗಾಮಾ]] ಮತ್ತು ಅವರ ಪೋರ್ಚುಗೀಸ್ ನೌಕಾಪಡೆಯು ಕಾಲಿಕಟ್ಗೆ ಆಗಮಿಸುವ ಸಮಯದಲ್ಲಿ, ಕಾಲಿಕಟ್ನ ಜಾಮೋರಿನ್ ಪೊನ್ನಾನಿಯಲ್ಲಿ ವಾಸಿಸುತ್ತಿದ್ದರು.<ref>ಇ. ಜಿ. ರಾವೆನ್ಸ್ಟೈನ್, ಸಂ., ''ಎ ಜರ್ನಲ್ ಆಫ್ ದಿ ಫಸ್ಟ್ ವಾಯೇಜ್ ಆಫ್ ವಾಸ್ಕೋ ಡ ಗಾಮಾ'', ದೆಹಲಿ, 1995, ಪು. 50</ref> ಜಾಮೋರಿನ್ ಪೋರ್ಚುಗೀಸರಿಗೆ ವ್ಯಾಪಾರಕ್ಕಾಗಿ ಎಲ್ಲಾ ಸೌಕರ್ಯಗಳನ್ನು ಒದಗಿಸಿದ್ದರು.<ref name="mh"/> ಆದಾಗ್ಯೂ, [[ಅರಬ್]] ಆಸ್ತಿಗಳ ಮೇಲಿನ ಪೋರ್ಚುಗೀಸ್ ಪ್ರಚೋದನೆಗಳು ಜಾಮೋರಿನ್ ಮತ್ತು ಪೋರ್ಚುಗೀಸರ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಇದಲ್ಲದೆ, ಜಾಮೋರಿನ್ನ ಎರಡನೇ ಪ್ರಧಾನ ಕಚೇರಿಯಾಗಿದ್ದ [[ಪೊನ್ನಾನಿ]] ಪೋರ್ಚುಗೀಸರ ಪ್ರಮುಖ ಗುರಿಯಾಗಿತ್ತು.<ref name="mh"/> [[ಕಾಲಿಕಟ್ನ ಜಾಮೋರಿನ್]]ನ ಸಾಮಂತನಾಗಿದ್ದ [[ತಾನೂರು ಸಾಮ್ರಾಜ್ಯ]]ದ ಆಡಳಿತಗಾರನು ತನ್ನ ಪ್ರಭುವಿಗೆ ವಿರುದ್ಧವಾಗಿ [[ಕೋಝಿಕ್ಕೋಡ್]]ನಲ್ಲಿ ಪೋರ್ಚುಗೀಸರ ಪಕ್ಷ ವಹಿಸಿದನು.<ref name="askh"/> ಪರಿಣಾಮವಾಗಿ, [[ತಾನೂರು ಸಾಮ್ರಾಜ್ಯ]] (''[[ತಿರೂರ್ ತಾಲೂಕು|ವೆಟ್ಟತ್ತುನಾಡು]]'') ಭಾರತದಲ್ಲಿ ಆರಂಭಿಕ ಪೋರ್ಚುಗೀಸ್ ವಸಾಹತುಗಳಲ್ಲಿ ಒಂದಾಯಿತು. [[ತಾನೂರು, ಮಲಪ್ಪುರಂ|ತಾನೂರು]]ನ ಆಡಳಿತಗಾರನು [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿ]]ನ ಪಕ್ಷವನ್ನೂ ವಹಿಸಿದನು.<ref name="askh"/> 16 ಮತ್ತು 17 ನೇ ಶತಮಾನಗಳಲ್ಲಿ ಕೊಚ್ಚಿಯ ರಾಜಮನೆತನದ ಅನೇಕ ಸದಸ್ಯರನ್ನು [[ವೆಟ್ಟೊಂ ಗ್ರಾಮ ಪಂಚಾಯತ್|ವೆಟ್ಟೊಂ]]ನಿಂದ ಆಯ್ಕೆ ಮಾಡಲಾಗುತ್ತಿತ್ತು.<ref name="askh"/> ಆದಾಗ್ಯೂ, [[ತಾನೂರು, ಮಲಪ್ಪುರಂ|ತಾನೂರು]] ಪಡೆಗಳು [[ಕೊಚ್ಚಿ ಕದನ (1504)]] ದಲ್ಲಿ ಕಾಲಿಕಟ್ನ ಜಾಮೋರಿನ್ ಪರವಾಗಿ ಹೋರಾಡಿದವು.<ref name="Logan">{{Cite book|title=ಮಲಬಾರ್ ಮ್ಯಾನ್ಯುಯಲ್ (ಸಂಪುಟ-I)|last=ಲೋಗನ್|first=ವಿಲಿಯಮ್|publisher=ಏಷ್ಯನ್ ಎಜುಕೇಷನಲ್ ಸರ್ವೀಸಸ್|year=2010|isbn=9788120604476|location=ನವ ದೆಹಲಿ|pages=631–666}}</ref> ಆದಾಗ್ಯೂ, [[ತಾನೂರು, ಮಲಪ್ಪುರಂ|ತಾನೂರು]] ಪ್ರದೇಶದ [[ಮಲಬಾರ್ ಮುಸ್ಲಿಮರು|ಮಾಪ್ಪಿಳ್ಳ]] ವ್ಯಾಪಾರಿಗಳ ನಿಷ್ಠೆಯು ಇನ್ನೂ [[ಕಾಲಿಕಟ್ನ ಜಾಮೋರಿನ್]]ನ ಅಡಿಯಲ್ಲೇ ಉಳಿಯಿತು.<ref name="Makhdoom">{{cite book
| author = ಎಸ್. ಮುಹಮ್ಮದ್ ಹುಸೇನ್ ನಯಿನಾರ್ | year=1942
| title= ತುಹ್ಫತ್-ಅಲ್-ಮುಜಾಹಿದೀನ್: ಅರೇಬಿಕ್ ಭಾಷೆಯಲ್ಲಿ ಒಂದು ಐತಿಹಾಸಿಕ ಕೃತಿ | publisher=ಮದ್ರಾಸ್ ವಿಶ್ವವಿದ್ಯಾಲಯ
| url= https://archive.org/details/Tuhfat-al-MujahidinAnHistoricalWorkInTheArabicLanguage
}}</ref> ಆಧುನಿಕ [[ಮಲಯಾಳಂ ಸಾಹಿತ್ಯ]]ದ ಪಿತಾಮಹ ಎಂದು ಪರಿಗಣಿಸಲ್ಪಟ್ಟಿರುವ [[ತುಂಚತ್ತು ಎಝುತ್ತಚನ್]] ಪೋರ್ಚುಗೀಸ್ ಅವಧಿಯಲ್ಲಿ [[ತಿರೂರ್]] (''[[ತಾನೂರು ಸಾಮ್ರಾಜ್ಯ|ವೆಟ್ಟತ್ತುನಾಡು]]'') ನಲ್ಲಿ ಜನಿಸಿದರು.<ref name="askh"/> 14 ಮತ್ತು 16 ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದ ಮಧ್ಯಕಾಲೀನ [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆ]]ಯು ಪ್ರಾಥಮಿಕವಾಗಿ [[ತಾನೂರು ಸಾಮ್ರಾಜ್ಯ|''ವೆಟ್ಟತ್ತುನಾಡು'']] ([[ತಿರೂರ್ ತಾಲೂಕು|ತಿರೂರ್ ಪ್ರದೇಶ]]) ದಲ್ಲಿತ್ತು.<ref name="roy">{{cite journal |last=ರಾಯ್ |first=ರಂಜನ್ |year=1990 |title=ಲೀಬ್ನಿಜ್, ಗ್ರೆಗೊರಿ, ಮತ್ತು ನಿಲಕಂಠರಿಂದ π ಗಾಗಿ ಸರಣಿ ಸೂತ್ರದ ಶೋಧನೆ |url=https://archive.org/details/sim_mathematics-magazine_1990-12_63_5/page/291 |journal=ಗಣಿತ ನಿಯತಕಾಲಿಕೆ |volume=63 |issue=5 |pages=291–306 |doi=10.2307/2690896 |jstor=2690896}}</ref><ref name="Pingree 1992 554–563">{{Citation |last=ಪಿಂಗ್ರೀ |first=ಡೇವಿಡ್ |author-link=ಡೇವಿಡ್ ಪಿಂಗ್ರೀ |title=ಹೆಲ್ಲೆನೊಫಿಲಿಯಾ ವರ್ಸಸ್ ದಿ ಹಿಸ್ಟರಿ ಆಫ್ ಸೈನ್ಸ್ |year=1992 |journal=ಐಸಿಸ್ |volume=83 |issue=4 |pages=554–563 |jstor=234257 |doi=10.1086/356288 |quote=ನಾನು ನಿಮಗೆ ನೀಡಬಹುದಾದ ಒಂದು ಉದಾಹರಣೆಯೆಂದರೆ ಸುಮಾರು 1400 A.D. ರಲ್ಲಿ ಜ್ಯಾಮಿತೀಯ ಮತ್ತು ಬೀಜಗಣಿತದ ವಾದಗಳನ್ನು ಬಳಸಿಕೊಂಡು ತ್ರಿಕೋನಮಿತಿಯ ಕಾರ್ಯಗಳ ಅನಂತ ಶ್ರೇಣಿಯನ್ನು ಭಾರತೀಯ ಮಾಧವನ ಪ್ರದರ್ಶನಕ್ಕೆ ಸಂಬಂಧಿಸಿದೆ. ಇದನ್ನು ಮೊದಲು ಇಂಗ್ಲಿಷ್ನಲ್ಲಿ ಚಾರ್ಲ್ಸ್ ವಿಷ್ ಅವರು 1830 ರ ದಶಕದಲ್ಲಿ ವಿವರಿಸಿದಾಗ, ಅದನ್ನು ಭಾರತೀಯರು ಕಲನಶಾಸ್ತ್ರದ ಆವಿಷ್ಕಾರ ಎಂದು ಸಾರಲಾಯಿತು. ಈ ಹಕ್ಕು ಮತ್ತು ಮಾಧವನ ಸಾಧನೆಗಳನ್ನು ಪಾಶ್ಚಾತ್ಯ ಇತಿಹಾಸಕಾರರು ಕಡೆಗಣಿಸಿದರು, ಬಹುಶಃ ಮೊದಲಿಗೆ ಭಾರತೀಯನು ಕಲನಶಾಸ್ತ್ರವನ್ನು ಕಂಡುಹಿಡಿದನು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ, ಆದರೆ ನಂತರ ರಾಯಲ್ ಏಷ್ಯಾಟಿಕ್ ಸೊಸೈಟಿಯ ವ್ಯವಹಾರಗಳನ್ನು ಯಾರೂ ಓದುತ್ತಿರಲಿಲ್ಲ, ಅದರಲ್ಲಿ ವಿಷ್ ಅವರ ಲೇಖನವನ್ನು ಪ್ರಕಟಿಸಲಾಗಿತ್ತು. ಈ ವಿಷಯವು 1950 ರ ದಶಕದಲ್ಲಿ ಮತ್ತೆ ಕಾಣಿಸಿಕೊಂಡಿತು, ಮತ್ತು ಈಗ ನಾವು ಸಂಸ್ಕೃತ ಪಠ್ಯಗಳನ್ನು ಸರಿಯಾಗಿ ಸಂಪಾದಿಸಿದ್ದೇವೆ, ಮತ್ತು ಮಾಧವನು ''ಕಲನಶಾಸ್ತ್ರವಿಲ್ಲದೆ'' ಶ್ರೇಣಿಯನ್ನು ಹೇಗೆ ಪಡೆದರು ಎಂಬ ಚತುರ ಮಾರ್ಗವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ, ಆದರೆ ಅನೇಕ ಇತಿಹಾಸಕಾರರು ಕಲನಶಾಸ್ತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯದಲ್ಲಿ ಸಮಸ್ಯೆ ಮತ್ತು ಅದರ ಪರಿಹಾರವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವೆಂದು ಕಂಡುಕೊಳ್ಳುತ್ತಾರೆ ಮತ್ತು ಮಾಧವನು ಕಂಡುಕೊಂಡಿದ್ದು ಕಲನಶಾಸ್ತ್ರವೆಂದು ಘೋಷಿಸುತ್ತಾರೆ. ಈ ಸಂದರ್ಭದಲ್ಲಿ, ಮಾಧವನ ಗಣಿತದ ಸೊಬಗು ಮತ್ತು ಪ್ರತಿಭೆಯು ವಿರೂಪಗೊಳ್ಳುತ್ತಿದೆ, ಏಕೆಂದರೆ ಅವನು ಪರ್ಯಾಯ ಮತ್ತು ಪ್ರಬಲ ಪರಿಹಾರವನ್ನು ಕಂಡುಹಿಡಿದ ಸಮಸ್ಯೆಗೆ ಪ್ರಸ್ತುತ ಗಣಿತದ ಪರಿಹಾರದ ಅಡಿಯಲ್ಲಿ ಹೂಳಲಾಗಿದೆ. |bibcode=1992Isis...83..554P|s2cid=68570164 }}</ref>
1507 ರಲ್ಲಿ, ಪೋರ್ಚುಗೀಸ್ ವೈಸ್ರಾಯ್ [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] ಪೊನ್ನಾನಿ ಮೇಲೆ ದಾಳಿ ಮಾಡಿದರು ಮತ್ತು 1585 ರಲ್ಲಿ ಅಲ್ಲಿ ಕೋಟೆಯನ್ನು ನಿರ್ಮಿಸಲು ಪ್ರಾರಂಭಿಸಿದರು.<ref name="mh"/> ಜಿಲ್ಲೆಯು ಮಸಾಲೆ ವ್ಯಾಪಾರದ ಏಕಸ್ವಾಮ್ಯಕ್ಕಾಗಿ ಕೋಝಿಕ್ಕೋಡ್ ನೌಕಾ ಮುಖ್ಯಸ್ಥರು, [[ಕುಂಹಾಲಿ ಮರಕ್ಕರ್]]ಗಳು ಮತ್ತು ಪೋರ್ಚುಗೀಸರ ನಡುವೆ ಹಲವಾರು ಯುದ್ಧಗಳನ್ನು ಕಂಡಿತು. ಕುಂಜಾಲಿ ಮರಕ್ಕರ್ಗಳು ಭಾರತೀಯ ಕರಾವಳಿಯ ಮೊದಲ ನೌಕಾ ರಕ್ಷಣೆಯನ್ನು ಸಂಘಟಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.<ref>{{cite web|title=ಸಾಗರ ಪರಂಪರೆ – ಭಾರತೀಯ ನೌಕಾಪಡೆಗೆ ಸೇರಿ {{!}} ಭಾರತ ಸರ್ಕಾರ|url=https://www.joinindiannavy.gov.in/en/about-us/maritime-heritage.html|website=joinindiannavy.gov.in|access-date=10 March 2020|archive-date=31 March 2020|archive-url=https://web.archive.org/web/20200331151728/https://www.joinindiannavy.gov.in/en/about-us/maritime-heritage.html|url-status=live}}</ref><ref>{{cite news |last=ಸಿಂಗ್ |first=ಅರುಣ್ ಕುಮಾರ್ |title=ಭಾರತೀಯ ನೌಕಾಪಡೆಗೆ ಅದರ ಹಕ್ಕನ್ನು ನೀಡಿ |url=https://www.asianage.com/opinion/columnists/110217/give-indian-navy-its-due.html |access-date=6 March 2020 |work=[[ದಿ ಏಷಿಯನ್ ಏಜ್]] |date=11 February 2017 |archive-date=8 March 2021 |archive-url=https://web.archive.org/web/20210308123207/https://www.asianage.com/opinion/columnists/110217/give-indian-navy-its-due.html |url-status=live }}</ref> [[ತಾನೂರು, ಮಲಪ್ಪುರಂ|ತಾನೂರು]] ಪಟ್ಟಣವು ಭಾರತೀಯ ಉಪಖಂಡದ ಆರಂಭಿಕ ಪೋರ್ಚುಗೀಸ್ ವಸಾಹತುಗಳಲ್ಲಿ ಒಂದಾಗಿತ್ತು. [[ಪೊನ್ನಾನಿ]] ಮತ್ತು [[ಪರಪ್ಪನಂಗಾಡಿ]] ಪಟ್ಟಣಗಳನ್ನು ಕ್ರಮವಾಗಿ 1525 ಮತ್ತು 1573–74 ರಲ್ಲಿ ಪೋರ್ಚುಗೀಸರು ಸುಟ್ಟುಹಾಕಿದರು.<ref name="ReferenceB" /> 16 ನೇ ಶತಮಾನ CE ಯಲ್ಲಿ, ಕೊಚ್ಚಿಯು ಮಲಬಾರ್ ಕರಾವಳಿಯಲ್ಲಿ ಪ್ರಮುಖ ಶಕ್ತಿಯಾದಾಗ, [[ಕೊಚ್ಚಿ ಸಾಮ್ರಾಜ್ಯ]]ದ ಕೆಲವು ರಾಜರನ್ನು ಸಾಮಾನ್ಯವಾಗಿ [[ತಾನೂರು ಸಾಮ್ರಾಜ್ಯ]]ದ ರಾಜಮನೆತನದಿಂದ ಆಯ್ಕೆ ಮಾಡಲಾಗುತ್ತಿತ್ತು.<ref name="askh"/> 1571 ರ [[ಚಾಲಿಯಂ]] ಕೋಟೆಯ ಕದನದೊಂದಿಗೆ ಪೋರ್ಚುಗೀಸರನ್ನು [[ತಾನೂರು ಸಾಮ್ರಾಜ್ಯ]]ದಿಂದ ಹೊರಹಾಕಲಾಯಿತು. [[ಚಾಲಿಯಂ]] [[ತಾನೂರು ಸಾಮ್ರಾಜ್ಯ|ವೆಟ್ಟತ್ತುನಾಡಿನ]] ಉತ್ತರದ ಗಡಿಯಾಗಿತ್ತು. ಆ ಕದನದ ಸಮಯದಲ್ಲಿ, ಜಾಮೋರಿನ್ ಅವರಿಗೆ [[ಪೊನ್ನಾನಿ]], [[ತಾನೂರು, ಮಲಪ್ಪುರಂ|ತಾನೂರು]], ಮತ್ತು [[ಪರಪ್ಪನಂಗಾಡಿ]]ಯ [[ಮಲಬಾರ್ ಮುಸ್ಲಿಮರು|ಮಾಪ್ಪಿಳ್ಳ]]ರ ನಿಸ್ಸಂದಿಗ್ಧವಾದ ಸಹಾಯವನ್ನು ಪಡೆದರು.
[[File:Ponnani harbour.jpg|left|thumbnail|400px|2012 ರಲ್ಲಿ ಚಿತ್ರಿಸಿದ [[ಪೊನ್ನಾನಿ]] ಬಂದರು. ಪೊನ್ನಾನಿ ಬಂದರು [[ತಾನೂರು ಸಾಮ್ರಾಜ್ಯ]]ದ ದಕ್ಷಿಣದ ಕೊನೆಯಾಗಿತ್ತು]]
[[File:From a map by Emanuel Bowen, 1744.jpg|thumb|[[ಇಮ್ಯಾನುಯೆಲ್ ಬೋವೆನ್]] ಅವರ ನಕ್ಷೆಯಿಂದ [[ದಕ್ಷಿಣ ಭಾರತ]] (1744), ಇಂಗ್ಲಿಷ್ ನಕ್ಷಾ ಕೆತ್ತನೆಗಾರ. ನಕ್ಷೆಯಲ್ಲಿ, ಜಾಮೋರಿನ್ ಸಾಮ್ರಾಜ್ಯದೊಳಗೆ [[ತಾನೂರು ಸಾಮ್ರಾಜ್ಯ]]ವನ್ನು ಮಾತ್ರ ಪ್ರತ್ಯೇಕ ಗಡಿಯೊಂದಿಗೆ ತೋರಿಸಲಾಗಿದೆ ಎಂಬುದನ್ನು ಗಮನಿಸಿ]]
16 ನೇ ಶತಮಾನ CE ಯಲ್ಲಿ ಪೊನ್ನಾನಿಯಲ್ಲಿ [[ಜೈನುದ್ದೀನ್ ಮಖ್ದೂಂ II]] (ಸುಮಾರು 1532 ರಲ್ಲಿ ಜನಿಸಿದರು) ಬರೆದ ''[[ತುಹ್ಫತ್ ಉಲ್ ಮುಜಾಹಿದೀನ್]]'' 1498 ರಿಂದ 1583 ರವರೆಗೆ [[ಮಲಬಾರ್ ಕರಾವಳಿ]]ಯನ್ನು ವಸಾಹತುವನ್ನಾಗಿ ಮಾಡಲು ಪೋರ್ಚುಗೀಸರ ಪ್ರಯತ್ನಗಳ ವಿರುದ್ಧ [[ಕುಂಜಾಲಿ ಮರಕ್ಕರ್]] ನೌಕಾಪಡೆಯು ಕಾಲಿಕಟ್ನ ಜಾಮೋರಿನ್ ಜೊತೆಯಲ್ಲಿ ಮಾಡಿದ ಪ್ರತಿರೋಧದ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಇದು [[ಅರೇಬಿಕ್]] ಭಾಷೆಯಲ್ಲಿ ಬರೆಯಲ್ಪಟ್ಟಿದ್ದು, ಕೇರಳದ ಇತಿಹಾಸವನ್ನು ಆಧರಿಸಿದ ಮೊದಲ ಪ್ರಸಿದ್ಧ ಪುಸ್ತಕವಾಗಿದೆ, ಇದನ್ನು ಕೇರಳದವರು ಬರೆದಿದ್ದಾರೆ.<ref name="Noorani">ಎಜಿ ನೂರಾನಿ {{cite web|url=http://www.frontlineonnet.com/fl2704/stories/20100226270407900.htm |title=ಕೇರಳದಲ್ಲಿ ಇಸ್ಲಾಂ |access-date=5 January 2013 |url-status=dead |archive-url=https://web.archive.org/web/20121221021629/http://www.frontlineonnet.com/fl2704/stories/20100226270407900.htm |archive-date=21 December 2012 }}</ref> ಇದನ್ನು ಮೊದಲು [[ಲಿಸ್ಬನ್]] ನಲ್ಲಿ ಮುದ್ರಿಸಿ ಪ್ರಕಟಿಸಲಾಯಿತು. ಈ ಆವೃತ್ತಿಯ ಪ್ರತಿಯನ್ನು [[ಕೈರೋ]]ದ [[ಅಲ್-ಅಝರ್ ವಿಶ್ವವಿದ್ಯಾಲಯ]]ದ ಗ್ರಂಥಾಲಯದಲ್ಲಿ ಸಂರಕ್ಷಿಸಲಾಗಿದೆ.<ref name="A. Sreedhara Menon 2011">ಎ. ಶ್ರೀಧರ ಮೇನನ್. ''ಕೇರಳ ಇತಿಹಾಸ ಮತ್ತು ಅದರ ನಿರ್ಮಾಪಕರು''. ಡಿಸಿ ಬುಕ್ಸ್ (2011)</ref><ref name="frontline.in">[http://www.frontline.in/static/html/fl2704/stories/20100226270407900.htm ಎಜಿ ನೂರಾನಿ. ಕೇರಳದಲ್ಲಿ ಇಸ್ಲಾಂ. ಪುಸ್ತಕಗಳು]</ref><ref>ರೋಲ್ಯಾಂಡ್ ಇ. ಮಿಲ್ಲರ್.
''ಮಾಪ್ಪಿಳ್ಳ ಮುಸ್ಲಿಂ ಸಂಸ್ಕೃತಿ'' SUNY ಪ್ರೆಸ್, 2015</ref> 1532 ರಲ್ಲಿ [[ತಾನೂರು, ಮಲಪ್ಪುರಂ|ತಾನೂರು]]ನ ಆಡಳಿತಗಾರನ ಸಹಾಯದಿಂದ, [[ಚಾಲಿಯಂ]]ನಲ್ಲಿ ಒಂದು ಚಾಪೆಲ್ ಅನ್ನು ನಿರ್ಮಿಸಲಾಯಿತು, ಜೊತೆಗೆ ಕಮಾಂಡರ್ಗಾಗಿ ಒಂದು ಮನೆ, ಸೈನಿಕರಿಗೆ ಬ್ಯಾರಕ್ಗಳು, ಮತ್ತು ವ್ಯಾಪಾರಕ್ಕಾಗಿ ಗೋದಾಮುಗಳನ್ನು ನಿರ್ಮಿಸಲಾಯಿತು. ಜಾಮೋರಿನ್ ಜೊತೆ ಒಪ್ಪಂದವನ್ನು ಮಾತುಕತೆ ನಡೆಸಿದ ಡಿಯಾಗೋ ಡಿ ಪೆರೇರಾ, ಈ ಹೊಸ ಕೋಟೆಯ ಆಜ್ಞೆಯನ್ನು ವಹಿಸಿಕೊಂಡರು, 250 ಜನರ ಗ್ಯಾರಿಸನ್ ಹೊಂದಿದ್ದರು; ಮತ್ತು ಮ್ಯಾನುಯೆಲ್ ಡಿ ಸೌಸಾ ಅವರು ಇಪ್ಪತ್ತೆರಡು ಹಡಗುಗಳ ನೌಕಾಪಡೆಯೊಂದಿಗೆ ಅದರ ಸಮುದ್ರದ ಸುರಕ್ಷತೆಯನ್ನು ಖಚಿತಪಡಿಸಲು ಆದೇಶಗಳನ್ನು ಹೊಂದಿದ್ದರು.<ref name="columbia.edu"/> ಜಾಮೋರಿನ್ ಶೀಘ್ರದಲ್ಲೇ ತಮ್ಮ ಪ್ರಭುತ್ವದಲ್ಲಿ ಈ ಕೋಟೆಯನ್ನು ನಿರ್ಮಿಸಲು ಅನುಮತಿಸಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟರು, ಮತ್ತು [[ಪರಪ್ಪನಂಗಾಡಿ]]ಯ ಆಡಳಿತಗಾರ ಕಾರಾಮನ್ಲಿ ([[ಬೇಪೋರ್]]ನ ರಾಜ?) (ಕೆಲವು ದಾಖಲೆಗಳು ತಾನೂರು ಆಡಳಿತಗಾರನೂ ಅವರೊಂದಿಗೆ ಇದ್ದನು ಎನ್ನುತ್ತವೆ <ref name="columbia.edu">{{Cite web |url=http://www.columbia.edu/itc/mealac/pritchett/00generallinks/kerr/vol06chap01sect07.html |title=Vol06chap01sect07 |access-date=1 May 2021 |archive-date=22 February 2020 |archive-url=https://web.archive.org/web/20200222081409/http://www.columbia.edu/itc/mealac/pritchett/00generallinks/kerr/vol06chap01sect07.html |url-status=live }}</ref>) ಪೋರ್ಚುಗೀಸರೊಂದಿಗೆ ಒಡೆಯಲು ಪ್ರಭಾವವನ್ನು ಬೀರಲು ನಿಷ್ಪ್ರಯೋಜಕ ಪ್ರಯತ್ನಗಳನ್ನು ಮಾಡಿದರು, ಅವರ ವಿರುದ್ಧ ಯುದ್ಧಕ್ಕೂ ಹೋದರು.<ref name="Makhdoom"/> 1571 ರಲ್ಲಿ, [[ತಾನೂರು ಸಾಮ್ರಾಜ್ಯ#ಚಾಲಿಯಂ ಕೋಟೆಯ ಕದನಗಳು|ಚಾಲಿಯಂ ಕೋಟೆಯ ಕದನದಲ್ಲಿ]] ಜಾಮೋರಿನ್ ಪಡೆಗಳು ಪೋರ್ಚುಗೀಸರನ್ನು ಸೋಲಿಸಿದವು.<ref>{{cite book |author=ಕೆ. ಕೆ. ಎನ್. ಕುರುಪ್ |year=1997 |title=ಭಾರತದ ನೌಕಾ ಸಂಪ್ರದಾಯಗಳು: ಕುಂಹಾಲಿ ಮರಕ್ಕರ್ಗಳ ಪಾತ್ರ |url=https://books.google.com/books?id=HKmXcBCKEcAC&pg=PA51 |access-date=9 August 2012 |publisher=ನಾರ್ದರ್ನ್ ಬುಕ್ ಸೆಂಟರ್ |isbn=978-81-7211-083-3 |pages=37–38 |archive-date=27 May 2013 |archive-url=https://web.archive.org/web/20130527084909/http://books.google.com/books?id=HKmXcBCKEcAC&pg=PA51 |url-status=live }}</ref> ಪೋರ್ಚುಗೀಸರು ಒಂದು ಕಡೆ ಮತ್ತು [[ಅರಬ್]] ವ್ಯಾಪಾರಿಗಳು ಮತ್ತು ಸ್ಥಳೀಯ [[ಚೆಕೊರ್]] ಮತ್ತು [[ಮಲಬಾರ್ ಮುಸ್ಲಿಮರು|ಮಾಪ್ಪಿಳ್ಳ]] ಪಡೆಗಳ ಬೆಂಬಲವನ್ನು ಹೊಂದಿದ್ದ ಜಾಮೋರಿನ್ ಮತ್ತೊಂದು ಕಡೆ ನಡೆಸಿದ ನಿರಂತರ ಯುದ್ಧಗಳು, ಅಂತಿಮವಾಗಿ ಕರಾವಳಿ ಪಟ್ಟಣಗಳಲ್ಲಿ ವಿದೇಶಿ ವ್ಯಾಪಾರದ [[ಅರಬ್]] ಏಕಸ್ವಾಮ್ಯದ ಕುಸಿತಕ್ಕೆ ಕಾರಣವಾಯಿತು. ಪೋರ್ಚುಗೀಸ್ ವಿರೋಧವನ್ನು ಲೆಕ್ಕಿಸದೆ, ಜಾಮೋರಿನ್ 11 ನವೆಂಬರ್ 1604 ರಂದು ಡಚ್ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡರು.<ref name="mh"/> ಇದರ ನಂತರ 1608 ರಲ್ಲಿ ಮತ್ತೊಂದು ಒಪ್ಪಂದವಾಯಿತು, ಇದು ಹಿಂದಿನ ಒಪ್ಪಂದವನ್ನು ದೃಢಪಡಿಸಿತು ಮತ್ತು ಡಚ್ಚರು ಪೋರ್ಚುಗೀಸರನ್ನು ಹೊರಹಾಕುವಲ್ಲಿ ಜಾಮೋರಿನ್ಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.<ref name="mh"/> ಡಚ್ ಏಕಸ್ವಾಮ್ಯದ ಉದಯವು ಪೋರ್ಚುಗೀಸ್ ಪ್ರಾಬಲ್ಯವನ್ನು ಕುಸಿಯುವಂತೆ ಮಾಡಿತು. 16 ನೇ ಶತಮಾನದ ಅಶಾಂತಿಯ ನಂತರದ ಸಾಂಸ್ಕೃತಿಕ ಪುನರುಜ್ಜೀವನವು [[ತುಂಚತ್ತು ಎಝುತ್ತಚನ್]] ಮತ್ತು [[ಪೂಂತಾನಂ ನಂಬೂದಿರಿ]]ಯಂತಹ ಕವಿಗಳನ್ನು ಸೃಷ್ಟಿಸಿತು, ಅವರು [[ಮಲಯಾಳಂ ಸಾಹಿತ್ಯ]]ವನ್ನು ಪ್ರಸ್ತುತ ರೂಪಕ್ಕೆ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಮತ್ತು [[ಮೇಲ್ಪತ್ತೂರ್ ನಾರಾಯಣ ಭಟ್ಟಾತಿರಿ]], ಅವರು ಮಧ್ಯಕಾಲೀನ [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆ]]ಯ ಸದಸ್ಯರೂ ಆಗಿದ್ದರು.
17 ನೇ ಶತಮಾನದ ಮಧ್ಯಭಾಗದ ವೇಳೆಗೆ, ಕೇರಳದ ಬಂದರುಗಳಲ್ಲಿ ವಿದೇಶಿ ವ್ಯಾಪಾರದ ಮೇಲೆ ಡಚ್ಚರು ಏಕಸ್ವಾಮ್ಯವನ್ನು ಹೊಂದಿದ್ದರು, [[ಪೊನ್ನಾನಿ]] ಮತ್ತು [[ಕೋಝಿಕ್ಕೋಡ್]]ನಲ್ಲಿ ಸಣ್ಣ ಇಂಗ್ಲಿಷ್ ಕಾರ್ಖಾನೆಗಳನ್ನು ಹೊರತುಪಡಿಸಿ.<ref name="mh"/> 1650 ರಲ್ಲಿ [[ವಿಲಿಯಂ ಕೀಲಿಂಗ್]] ಆಗಮನವು ಈ ಪ್ರದೇಶದಲ್ಲಿ ಬ್ರಿಟಿಷ್ [[ಈಸ್ಟ್ ಇಂಡಿಯಾ ಕಂಪನಿ]]ಯ ಏಕಸ್ವಾಮ್ಯಕ್ಕೆ ನಾಂದಿಯಾಗಿದ್ದರೂ, ಅವರು 1792 ರವರೆಗೆ ಪ್ರಾಬಲ್ಯವನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ.<ref name="mh"/> 18 ನೇ ಶತಮಾನದಲ್ಲಿ, ''ವಾಸ್ತವಿಕ'' [[ಮೈಸೂರು ಸಾಮ್ರಾಜ್ಯ]]ದ ಆಡಳಿತಗಾರರಾದ [[ಹೈದರ್ ಅಲಿ]] ಮತ್ತು [[ಟಿಪ್ಪು ಸುಲ್ತಾನ್]]ರು [[ಮಲಬಾರ್ ಜಿಲ್ಲೆ|ಉತ್ತರ ಕೇರಳ]]ದ ಎಲ್ಲಾ ಸಣ್ಣ ಸಾಮಂತ ರಾಜ್ಯಗಳನ್ನು ಒಂದುಗೂಡಿಸಿದರು ಮತ್ತು ಅವುಗಳನ್ನು [[ಮೈಸೂರು ಸಾಮ್ರಾಜ್ಯ]]ದ ಭಾಗವನ್ನಾಗಿ ಮಾಡಿದರು. 1766 ರಲ್ಲಿ ಅಲ್ಪಾವಧಿಯ ಅವಧಿಗೆ, [[ಮಂಜೇರಿ]] ಸುಲ್ತಾನ್ [[ಹೈದರ್ ಅಲಿ]]ಯ ಪ್ರಧಾನ ಕಚೇರಿಯಾಗಿತ್ತು.<ref name="1961_kkd">{{Cite book|title=ಜಿಲ್ಲಾ ಜನಗಣತಿ ಕೈಪಿಡಿ (2) – ಕೋಝಿಕ್ಕೋಡ್ (1961)|last=ದೇವಸ್ಸಿ|first=ಎಂ. ಕೆ.|publisher=ಕೇರಳ ಸರ್ಕಾರ|year=1965|location=ಎರ್ನಾಕುಲಂ|url=http://lsi.gov.in:8081/jspui/bitstream/123456789/5665/1/22059_1961_KOZ.pdf|access-date=19 December 2020|archive-date=2 February 2021|archive-url=https://web.archive.org/web/20210202005030/http://lsi.gov.in:8081/jspui/bitstream/123456789/5665/1/22059_1961_KOZ.pdf|url-status=live}}</ref> ಕಾಲಿಕಟ್ನ ''ಸಮುತಿರಿ ಕೋವಿಲಕಂ'' ಅನ್ನು [[ಮೈಸೂರು ಸಾಮ್ರಾಜ್ಯ|ಮೈಸೂರು]] ಸುಲ್ತಾನ್ [[ಹೈದರ್ ಅಲಿ|ಹೈದರ್ 'ಅಲಿ]] (18 ನೇ ಶತಮಾನ AD) ಮುತ್ತಿಗೆ ಹಾಕಿದಾಗ, ಜಾಮೋರಿನ್ ತಮ್ಮ ಕುಟುಂಬ ಸದಸ್ಯರನ್ನು ಪೊನ್ನಾನಿಯ ''ತ್ರಿಕ್ಕವಿಲ್ ಕೋವಿಲಕಂ'' ಗೆ ಕಳುಹಿಸಿದರು.<ref>ಪಾಣಿಕ್ಕರ್. ಕೆ.ಎಂ. ''ಎ ಹಿಸ್ಟರಿ ಆಫ್ ಕೇರಳ (1498–1801)'' ಕೊಯಿಮ್ಬತ್ತೂರು (1960) ಪು. 64</ref> [[ತಿರೂರಂಗಡಿ ಕದನ]]ವು [[ಮೂರನೇ ಆಂಗ್ಲೋ-ಮೈಸೂರು ಯುದ್ಧ]]ದ ಸಮಯದಲ್ಲಿ 7 ರಿಂದ 12 ಡಿಸೆಂಬರ್ 1790 ರವರೆಗೆ [[ತಿರೂರಂಗಡಿ]]ಯಲ್ಲಿ ಬ್ರಿಟಿಷ್ ಸೇನೆ ಮತ್ತು ಟಿಪ್ಪು ಸುಲ್ತಾನ್ ನಡುವೆ ನಡೆದ ಸರಣಿ ಘರ್ಷಣೆಗಳಾಗಿವೆ.<ref name=Naravane>{{Cite book |last=ನಾರಾವಣೆ |first=ಎಂ.ಎಸ್. |title=ಮಾನ್ಯ ಈಸ್ಟ್ ಇಂಡಿಯಾ ಕಂಪನಿಯ ಯುದ್ಧಗಳು |publisher=ಎ.ಪಿ.ಹೆಚ್. ಪಬ್ಲಿಷಿಂಗ್ ಕಾರ್ಪೊರೇಷನ್ |year=2014 |isbn=9788131300343 |pages=176}}</ref> 1792 ರಲ್ಲಿ, ಟಿಪ್ಪು ಸುಲ್ತಾನ್ ಮೂರನೇ ಆಂಗ್ಲೋ-ಮೈಸೂರು ಯುದ್ಧದ ಮೂಲಕ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಸೋಲಿಸಲ್ಪಟ್ಟರು, ಮತ್ತು [[ಶ್ರೀರಂಗಪಟ್ಟಣದ ಒಪ್ಪಂದ]]ಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ, ಪ್ರಸ್ತುತ ಮಲಪ್ಪುರಂ ಜಿಲ್ಲೆಯನ್ನು ಒಳಗೊಂಡಂತೆ [[ಮಲಬಾರ್ ಜಿಲ್ಲೆ|ಮಲಬಾರ್ ಪ್ರದೇಶ]]ದ ಹೆಚ್ಚಿನ ಭಾಗವನ್ನು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ವಿಲೀನಗೊಳಿಸಲಾಯಿತು. [[ತಿರುವಾಂಕೂರು]]ನ [[ಕೋಯಿ ತಂಪುರಾನ್]]ಗಳು [[ಪರಪ್ಪನಾಡ್]] ರಾಜಮನೆತನಕ್ಕೆ ಸೇರಿದವರು. ಈ ಮನೆತನದಿಂದಲೇ ಸಾಮಾನ್ಯವಾಗಿ ರಾಣಿಯರ [[ತಿರುವಾಂಕೂರು]] ಮನೆತನದ ಸಂಗಾತಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು.<ref name="1961_kkd"/> ವಿಶ್ವದ ಅತ್ಯಂತ ಹಳೆಯ ತೇಗ ತೋಟವಾದ ಕೊನೊಲಿಯ ಪ್ಲಾಟ್ [[ನಿಲಂಬೂರ್]] ಪಟ್ಟಣದಿಂದ {{cvt|2|km}} ದೂರದಲ್ಲಿದೆ. ಇದನ್ನು ಮಲಬಾರ್ನ ಆಗಿನ ಜಿಲ್ಲಾ ಕಲೆಕ್ಟರ್ [[ಹೆನ್ರಿ ವ್ಯಾಲೆಂಟೈನ್ ಕೊನೊಲಿ]] ಅವರ ಸ್ಮರಣಾರ್ಥವಾಗಿ ಹೆಸರಿಸಲಾಯಿತು.<ref>{{Cite news|title=ವಿಶ್ವದ ಅತ್ಯಂತ ಹಳೆಯ ತೇಗ ತೋಟ, ಕೊನೊಲಿಯ ಪ್ಲಾಟ್, ನಿರ್ವಹಣೆಯ ನಂತರ ಮತ್ತೆ ತೆರೆಯಲಿದೆ|url=https://english.mathrubhumi.com/travel/travel-news/oldest-teak-plantation-conolly-s-plot-to-reopen-after-maintenance-kerala-nilambur-teak-plantations-1.1942105|date=16 May 2017|access-date=12 October 2020|work=Mathrubhumi|archive-date=12 October 2020|archive-url=https://web.archive.org/web/20201012215336/https://english.mathrubhumi.com/travel/travel-news/oldest-teak-plantation-conolly-s-plot-to-reopen-after-maintenance-kerala-nilambur-teak-plantations-1.1942105|url-status=live}}</ref> ರಾಜ್ಯದ ಮೊದಲ ರೈಲು ಮಾರ್ಗವು 12 ಮಾರ್ಚ್ 1861 ರಂದು [[ತಿರೂರ್]] ನಿಂದ [[ಚಾಲಿಯಂ]] ಗೆ [[ತಿರೂರ್ ರೈಲ್ವೇ ನಿಲ್ದಾಣ|ತಿರೂರ್ನಲ್ಲಿನ]] ಅತ್ಯಂತ ಹಳೆಯ ರೈಲ್ವೇ ನಿಲ್ದಾಣದೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.<ref name="ll">{{cite web |url=https://www.thehindu.com/news/national/kerala/lifeline-of-malabar-turns-125/article4250472.ece |website=thehindu.com |title='ಲೈಫ್ಲೈನ್' ಆಫ್ ಮಲಬಾರ್ 125 ತಿರುಗುತ್ತದೆ |date=29 December 2012 |access-date=19 December 2020 |archive-date=30 January 2021 |archive-url=https://web.archive.org/web/20210130150107/https://www.thehindu.com/news/national/kerala/lifeline-of-malabar-turns-125/article4250472.ece |url-status=live }}</ref><ref name="mpm">{{Cite news|title=ആ ചൂളംവിളി പിന്നെയും പിന്നെയും...|url=https://www.mathrubhumi.com/malappuram/specials/50-years-of-malappuram/kerala-first-railway-line-tirur-to-beypore-1.3880175|date=17 June 2019|access-date=19 December 2020|work=Mathrubhumi|archive-date=30 November 2020|archive-url=https://web.archive.org/web/20201130082010/https://www.mathrubhumi.com/malappuram/specials/50-years-of-malappuram/kerala-first-railway-line-tirur-to-beypore-1.3880175|url-status=live}}</ref>
[[File:Canoly hanging bridge nilambur.jpg|left|thumbnail|ವಿಶ್ವದ ಅತ್ಯಂತ ಹಳೆಯ [[ತೇಗ]] ತೋಟಗಳು ಕೊನೊಲಿಯ ಪ್ಲಾಟ್ನಲ್ಲಿ, [[ನಿಲಂಬೂರ್]]]]
ಜಿಲ್ಲೆಯು 1792 ಮತ್ತು 1921 ರ ನಡುವೆ ಮಾಪ್ಪಿಳ್ಳ ದಂಗೆಗಳಿಗೆ (ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ವಿರುದ್ಧವಾಗಿ ಕೇರಳದಲ್ಲಿ ದಂಗೆಗಳು) ಸ್ಥಳವಾಗಿತ್ತು. ಈ ಅವಧಿಯಲ್ಲಿ ಸುಮಾರು 830 ದೊಡ್ಡ ಮತ್ತು ಸಣ್ಣ ಗಲಭೆಗಳು ನಡೆದಿವೆ ಎಂದು ಅಂದಾಜಿಸಲಾಗಿದೆ. 1841–1921 ರ ಅವಧಿಯಲ್ಲಿ ಕೇವಲ ಬ್ರಿಟಿಷ್ ಅಧಿಕಾರಿಗಳ ವಿರುದ್ಧ 86 ಕ್ಕೂ ಹೆಚ್ಚು ದಂಗೆಗಳು ನಡೆದಿವೆ.<ref>ಕೆ. ಮಾಧವನ್, 'ಮಲಯಾಳತ್ತಿಲೆ ಮಾಪ್ಪಿಳ್ಳ ಲಹಳ,' ಮಾತೃಭೂಮಿ, 24 ಮಾರ್ಚ್ 1923.</ref> ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಜಿಲ್ಲೆಯು [[ದಕ್ಷಿಣ ಮಲಬಾರ್]]ನ ಇರನಾಡ್, ವಲ್ಲುವನಾಡ್, ಮತ್ತು ಪೊನ್ನಾನಿ ಉಪ-ಜಿಲ್ಲೆಗಳಲ್ಲಿ ಸೇರಿಸಲ್ಪಟ್ಟಿತ್ತು. [[ಮಲಬಾರ್ ಸ್ಪೆಷಲ್ ಪೊಲೀಸ್]]ನ ಪ್ರಧಾನ ಕಚೇರಿಯು [[ಮಲಪ್ಪುರಂ]]ನಲ್ಲಿತ್ತು. MSP ರಾಜ್ಯದ ಅತ್ಯಂತ ಹಳೆಯ ಸಶಸ್ತ್ರ ಪೊಲೀಸ್ ಬೆಟಾಲಿಯನ್ ಆಗಿದೆ. ಬ್ರಿಟಿಷರು [[ಕಡಲುಂಡಿ ನದಿ]]ಯ ದಡದಲ್ಲಿ ಮಲಪ್ಪುರಂ ನಗರದ ಮೇಲ್ಭಾಗದಲ್ಲಿ ತಮ್ಮ ಪಡೆಗಳನ್ನು ನಿಲ್ಲಿಸಲು ಹೈಗ್ [[ಬ್ಯಾರಕ್]]ಗಳನ್ನು ಸ್ಥಾಪಿಸಿದ್ದರು.<ref>{{Cite web |url=https://www.malappuramtourism.org/history.php |title=ಮಲಪ್ಪುರಂ ಬ್ರಿಟಿಷ್ ಇತಿಹಾಸ |access-date=12 July 2020 |archive-date=10 October 2020 |archive-url=https://web.archive.org/web/20201010035952/https://www.malappuramtourism.org/history.php |url-status=live }}</ref>
[[File:Codacal Tile Factory.jpg|thumbnail|ಕೊಡಕ್ಕಲ್ ಟೈಲ್ ಫ್ಯಾಕ್ಟರಿಯನ್ನು [[ತಿರುನವಾಯ]]ದ ಕೊಡಕ್ಕಲ್ನಲ್ಲಿ ಕಾಮನ್ವೆಲ್ತ್ ಟ್ರಸ್ಟ್ ನಡೆಸುತ್ತಿತ್ತು. 1887 ರಲ್ಲಿ ಪ್ರಾರಂಭವಾದ ಕೊಡಕ್ಕಲ್ನಲ್ಲಿನ ಟೈಲ್ ಫ್ಯಾಕ್ಟರಿ, ಭಾರತದ ಎರಡನೇ ಟೈಲ್-ಉತ್ಪಾದನಾ ಉದ್ಯಮವಾಗಿದೆ. ಮೊದಲ ಟೈಲ್ ಫ್ಯಾಕ್ಟರಿಯು [[ಫೆರೋಕ್]] ನಲ್ಲಿತ್ತು, ಇದು ಆಗ [[ಇರನಾಡ್ ತಾಲೂಕು]]ನ ಭಾಗವಾಗಿತ್ತು]]
28 ಏಪ್ರಿಲ್ 1920 ರಂದು [[ಮಂಜೇರಿ]]ಯಲ್ಲಿ ನಡೆದ ಮಲಬಾರ್ ಜಿಲ್ಲಾ ರಾಜಕೀಯ ಸಮ್ಮೇಳನವು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] [[ಭಾರತೀಯ ಸ್ವಾತಂತ್ರ್ಯ ಚಳುವಳಿ]] ಮತ್ತು [[ಮಲಬಾರ್ ಜಿಲ್ಲೆ|ಬ್ರಿಟಿಷ್ ಮಲಬಾರ್ನಲ್ಲಿ]] ರಾಷ್ಟ್ರೀಯ ಚಳುವಳಿಯನ್ನು ಬಲಪಡಿಸಿತು.<ref name="Manjericonference_1920">{{cite news |title=1920 ರ ಮಂಜೇರಿ ರಾಜಕೀಯ ಸಮ್ಮೇಳನ |url=https://www.deccanchronicle.com/nation/in-other-news/290616/rare-letters-on-historic-meet-found-in-malappuram.html |access-date=18 July 2020 |work=Deccan Chronicle |date=29 June 2016 |archive-date=18 July 2020 |archive-url=https://web.archive.org/web/20200718131229/https://www.deccanchronicle.com/nation/in-other-news/290616/rare-letters-on-historic-meet-found-in-malappuram.html |url-status=live }}</ref> ಆ ಸಮ್ಮೇಳನವು [[ಮಾಂಟಾಗು-ಚೆಲ್ಮ್ಸ್ಫೋರ್ಡ್ ಸುಧಾರಣೆಗಳು]] [[ಬ್ರಿಟಿಷ್ ರಾಜ್|ಬ್ರಿಟಿಷ್ ಭಾರತ]]ದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂದು ಘೋಷಿಸಿತು. ಮಲಬಾರ್ನಲ್ಲಿ ಅಸ್ತಿತ್ವದಲ್ಲಿದ್ದ ಗೇಣಿದಾರಿಕೆಯಿಂದ ಉಂಟಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಇದು ಭೂ ಸುಧಾರಣೆಗೆ ವಾದಿಸಿತು. ಆದಾಗ್ಯೂ, ಈ ನಿರ್ಧಾರವು ಕಾಂಗ್ರೆಸ್ನೊಳಗೆ [[ಸೂರತ್ ವಿಭಜನೆ|ಉಗ್ರವಾದಿಗಳು ಮತ್ತು ಮಧ್ಯಮವಾದಿಗಳ]] ನಡುವಿನ ಅಂತರವನ್ನು ಹೆಚ್ಚಿಸಿತು. ಸಮ್ಮೇಳನವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನೊಂದಿಗೆ ಭೂಮಾಲೀಕರ ಅಸಮಾಧಾನಕ್ಕೆ ಕಾರಣವಾಯಿತು. ಇದು ಮಲಬಾರ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ನಾಯಕತ್ವವು ಕಾರ್ಮಿಕರು ಮತ್ತು ಮಧ್ಯಮ ವರ್ಗದ ಪರವಾಗಿ ನಿಂತ ಉಗ್ರವಾದಿಗಳ ನಿಯಂತ್ರಣಕ್ಕೆ ಬರಲು ಕಾರಣವಾಯಿತು.<ref name="askh">{{cite book |last1=ಶ್ರೀಧರ ಮೇನನ್ |first1=ಎ. |title=ಎ ಸರ್ವೆ ಆಫ್ ಕೇರಳ ಹಿಸ್ಟರಿ |year=2007 |publisher=ಡಿಸಿ ಬುಕ್ಸ್ |location=ಕೊಟ್ಟಯಂ |isbn=9788126415786 |edition=2007 |url=https://dcbookstore.com/books/a-survey-of-kerala-history |access-date=26 July 2020 |archive-date=26 July 2020 |archive-url=https://web.archive.org/web/20200726034742/https://dcbookstore.com/books/a-survey-of-kerala-history |url-status=live }}</ref>
[[File:മലപ്പുറം ജില്ലയിൽ പൊന്നാനിയിലെ ഹാർബർ (1930-37).jpg|left|300px|thumbnail|1930 ರ ದಶಕದ ಮಧ್ಯದಲ್ಲಿ [[ಪೊನ್ನಾನಿ]] ಬಂದರು]]
[[File:Tirurangadi Hajur Kacheri.jpg|thumbnail|[[ತಿರೂರಂಗಡಿ ತಾಲೂಕು ಕಚೇರಿ]]ಯಲ್ಲಿ 1921 ರ ದಂಗೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಬ್ರಿಟಿಷ್ ಸೈನಿಕರ ಸಮಾಧಿಗಳು]]
[[ಮಲಬಾರ್ ದಂಗೆ]]ಯು ದಂಗೆಗಳಲ್ಲಿ ಕೊನೆಯ ಮತ್ತು ಪ್ರಮುಖವಾದದ್ದು. ದಂಗೆಯಲ್ಲಿ [[ಪೂಕ್ಕೋಟ್ಟೂರ್ ಕದನ]]ವು ಪ್ರಮುಖ ಪಾತ್ರವನ್ನು ವಹಿಸುತ್ತದೆ.<ref name="tottenham grf">ಟಾಟೆನ್ಹ್ಯಾಮ್ GRF (ಸಂ), ದಿ ಮಾಪ್ಪಿಳ್ಳ ರೆಬೆಲಿಯನ್ 1921–22, ಗವರ್ನಮೆಂಟ್ ಪ್ರೆಸ್ ಮದ್ರಾಸ್ 1922 ಪು 71</ref><ref name="karim kk">ಕರೀಂ ಕೆಕೆ ಮುಹಮ್ಮದ್ ಅಬ್ದುಲ್, ವರಿಯಂ ಕುನ್ನತ್ತು ಕುಂಜಹ್ಮದ್ ಹಾಜಿ, ಕಲಿಮಾ ಬುಕ್ಸ್, ಕೋಝಿಕ್ಕೋಡ್ 1992 (ಮಲಯಾಳಂ)</ref> ಸೇನೆ, ಪೊಲೀಸ್, ಮತ್ತು ಬ್ರಿಟಿಷ್ ಅಧಿಕಾರಿಗಳು ಪಲಾಯನ ಮಾಡಿದ ನಂತರ, 28 ಆಗಸ್ಟ್ 1921 ರ ವೇಳೆಗೆ [[ಇರನಾಡ್]], [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವನಾಡ್]], [[ಪೊನ್ನಾನಿ]], ಮತ್ತು [[ಕೋಝಿಕ್ಕೋಡ್]] ತಾಲೂಕುಗಳಲ್ಲಿ 200 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸ್ವಾತಂತ್ರ್ಯ ಘೋಷಣೆಯಾಯಿತು.<ref>''ಮಲಬಾರ್ ದേಶೀಯಾತಯುಡೆ ಇಡಪೇಡುಕಲ್''. ಡಾ. ಎಂ. ಟಿ. ಅನ್ಸಾರಿ. ಡಿಸಿ ಬುಕ್ಸ್</ref> ಆದಾಗ್ಯೂ ಸ್ವಾಯತ್ತತೆಯ ಘೋಷಣೆಯ ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಈಸ್ಟ್ ಇಂಡಿಯಾ ಕಂಪನಿಯು ಪ್ರದೇಶವನ್ನು ಮತ್ತೆ ವಶಪಡಿಸಿಕೊಂಡಿತು ಮತ್ತು ಅದನ್ನು [[ಬ್ರಿಟಿಷ್ ರಾಜ್]] ಗೆ ಸೇರಿಸಿತು. [[ವ್ಯಾಗನ್ ದುರಂತ]]ವು ಮಲಬಾರ್ ದಂಗೆಯ ನಂತರ ಸಂಭವಿಸಿತು, ಅಲ್ಲಿ 20 ನವೆಂಬರ್ 1921 ರಂದು 64 ಖೈದಿಗಳು ಸಾವನ್ನಪ್ಪಿದರು.<ref>ಪಾಣಿಕ್ಕರ್, ಕೆ. ಎನ್., ''ಎಗೇನ್ಸ್ಟ್ ಲಾರ್ಡ್ ಅಂಡ್ ಸ್ಟೇಟ್: ರಿಲಿಜನ್ ಅಂಡ್ ಪೆಸೆಂಟ್ ಅಪ್ರೈಸಿಂಗ್ಸ್ ಇನ್ ಮಲಬಾರ್ 1836–1921''</ref>
[[File:കരിപ്പുര് വിമാനത്താവളം.jpg|left|thumbnail|[[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]ಯ [[ಕರಿಪುರ್]]ನಲ್ಲಿ [[ಕಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]]]
[[ಭಾರತೀಯ ಸ್ವಾತಂತ್ರ್ಯ ಕಾಯ್ದೆ 1947|1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ]] ಬಂದ ನಂತರ ಹಿಂದಿನ [[ಮದ್ರಾಸ್ ಪ್ರೆಸಿಡೆನ್ಸಿ]] [[ಮದ್ರಾಸ್ ರಾಜ್ಯ]]ವಾಯಿತು. ಮಲಪ್ಪುರಂ ಆದಾಯ ವಿಭಾಗವು ಹಿಂದಿನ [[ಮಲಬಾರ್ ಜಿಲ್ಲೆ]]ಯ ಐದು ಆದಾಯ ವಿಭಾಗಗಳಲ್ಲಿ ಒಂದಾಗಿತ್ತು, ಇದು ಇರನಾಡ್ (ಮಂಜೇರಿ) ಮತ್ತು ವಲ್ಲುವನಾಡ್ (ಪೆರಿಂತಲ್ಮನ್ನ) ತಾಲೂಕುಗಳ ವ್ಯಾಪ್ತಿಯನ್ನು ಹೊಂದಿತ್ತು. ಮಲಬಾರ್ ಜಿಲ್ಲೆಯ ಇತರ ನಾಲ್ಕು ಆದಾಯ ವಿಭಾಗಗಳು [[ತಲಶ್ಶೇರಿ]], [[ಕೋಝಿಕ್ಕೋಡ್]], [[ಪಾಲಕ್ಕಾಡ್]], ಮತ್ತು [[ಫೋರ್ಟ್ ಕೊಚ್ಚಿ]] ಆಗಿದ್ದವು.<ref name="Malabar">{{Cite book|title=1951 ಜನಗಣತಿ ಕೈಪಿಡಿ – ಮಲಬಾರ್ ಜಿಲ್ಲೆ|publisher=ಮದ್ರಾಸ್ ಸರ್ಕಾರ|year=1953|location=ಚೆನ್ನೈ|pages=1|url=http://lsi.gov.in:8081/jspui/bitstream/123456789/6425/1/20493_1951_MAL.pdf|access-date=27 September 2020|archive-date=8 October 2020|archive-url=https://web.archive.org/web/20201008060411/http://lsi.gov.in:8081/jspui/bitstream/123456789/6425/1/20493_1951_MAL.pdf|url-status=live}}</ref> 1 ನವೆಂಬರ್ 1956 ರಂದು, [[ಕೇರಳ]] ರಾಜ್ಯವು ಭಾಷಾ ಆಧಾರದ ಮೇಲೆ ರೂಪುಗೊಂಡಿತು. ಮಲಪ್ಪುರಂ ಜಿಲ್ಲೆಯು ಆ ಸಮಯದಲ್ಲಿ ನಾಲ್ಕು ಉಪ-ಜಿಲ್ಲೆಗಳು (ಇರನಾಡ್, ಪೆರಿಂತಲ್ಮನ್ನ, ತಿರೂರ್, ಮತ್ತು ಪೊನ್ನಾನಿ), ನಾಲ್ಕು ಪಟ್ಟಣಗಳು, ಹದಿನಾಲ್ಕು ಅಭಿವೃದ್ಧಿ ಬ್ಲಾಕ್ಗಳು, ಮತ್ತು 95 [[ಗ್ರಾಮ ಪಂಚಾಯತ್]]ಗಳೊಂದಿಗೆ ರಚಿಸಲಾಯಿತು.<ref name="c1971">{{Cite book|title=ಜಿಲ್ಲಾ ಜನಗಣತಿ ಕೈಪಿಡಿ – ಮಲಪ್ಪುರಂ (ಭಾಗ-C) – 1971|last=ಕೆ. ನಾರಾಯಣನ್|publisher=ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಷನ್ಸ್, ಕೇರಳ|year=1972|location=ತಿರುವನಂತಪುರಂ|pages=3|url=http://lsi.gov.in:8081/jspui/bitstream/123456789/5714/1/51172_1971_MAL.pdf}}</ref> ನಂತರ, ತಿರೂರ್ ತಾಲೂಕನ್ನು ವಿಭಜಿಸಿ ತಿರೂರಂಗಡಿ ತಾಲೂಕನ್ನು ರಚಿಸಲಾಯಿತು, ಮತ್ತು ಇರನಾಡ್ ತಾಲೂಕನ್ನು ಮೂರು ಭಾಗಗಳಾಗಿ ವಿಭಜಿಸಿ ನಿಲಂಬೂರ್ ಮತ್ತು ಕೊಂಡೊಟ್ಟಿ ಎಂಬ ಎರಡು ತಾಲೂಕುಗಳನ್ನು ರಚಿಸಲಾಯಿತು. [[ಕಾಲಿಕಟ್ ವಿಶ್ವವಿದ್ಯಾಲಯ]], ಇದು ಕೇರಳದ ಎರಡನೇ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯವಾಗಿದೆ, ಮತ್ತು [[ಕಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]], ಇದು ರಾಜ್ಯದ ಎರಡನೇ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವಾಗಿದೆ, ಕ್ರಮವಾಗಿ 1968 ಮತ್ತು 1988 ರಲ್ಲಿ [[ತೆನಿಪಾಲಂ]] ಮತ್ತು [[ಕರಿಪುರ್]] ನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.<ref>{{Cite news|title=ಕಾಲಿಕಟ್ ವಿಮಾನ ನಿಲ್ದಾಣ 80 ತಿರುಗುತ್ತದೆ|url=https://www.thehindu.com/news/cities/kozhikode/calicut-airport-turns-30/article23508804.ece|last=ವಿಶೇಷ ವರದಿಗಾರ|date=12 April 2018|access-date=31 March 2021|work=The Hindu|archive-date=9 November 2020|archive-url=https://web.archive.org/web/20201109042642/https://www.thehindu.com/news/cities/kozhikode/calicut-airport-turns-30/article23508804.ece|url-status=live}}</ref> 1970 ರ ದಶಕದಲ್ಲಿ, [[ಪರ್ಷಿಯನ್ ಕೊಲ್ಲಿಯ ಅರಬ್ ರಾಜ್ಯಗಳು|ಪರ್ಷಿಯನ್ ಕೊಲ್ಲಿ ದೇಶಗಳಲ್ಲಿನ]] ತೈಲ ನಿಕ್ಷೇಪಗಳನ್ನು ವಾಣಿಜ್ಯ ಹೊರತೆಗೆಯುವಿಕೆಗೆ ತೆರೆಯಲಾಯಿತು ಮತ್ತು ಸಾವಿರಾರು ಅಕುಶಲ ಕಾರ್ಮಿಕರು ಕೊಲ್ಲಿಗೆ ವಲಸೆ ಹೋದರು. ಅವರು ಮನೆಗೆ ಹಣವನ್ನು ಕಳುಹಿಸಿದರು, ಗ್ರಾಮೀಣ ಆರ್ಥಿಕತೆಯನ್ನು ಬೆಂಬಲಿಸಿದರು, ಮತ್ತು 20 ನೇ ಶತಮಾನದ ಅಂತ್ಯದ ವೇಳೆಗೆ, ಈ ಪ್ರದೇಶವು [[ಮೊದಲ ಪ್ರಪಂಚದ]] ಆರೋಗ್ಯ ಮಾನದಂಡಗಳು ಮತ್ತು ಸಾರ್ವತ್ರಿಕ ಸಾಕ್ಷರತೆಯನ್ನು ಸಾಧಿಸಿತು.<ref>{{cite magazine| url=http://www.time.com/time/specials/packages/article/0,28804,2084273_2084272_2084259,00.html | archive-url=https://web.archive.org/web/20110722004134/http://www.time.com/time/specials/packages/article/0,28804,2084273_2084272_2084259,00.html | url-status=dead | archive-date=22 July 2011 | magazine=Time | title=ಸಮ್ಮರ್ ಜರ್ನಿ 2011 | date=21 July 2011}}</ref>
ಐತಿಹಾಸಿಕವಾಗಿ, ಮಲಪ್ಪುರಂ ಜಿಲ್ಲೆಯು [[ಅಷ್ಟವೈದ್ಯ]] ಸಂಪ್ರದಾಯದ ಸಂರಕ್ಷಣೆಯ ಕೇಂದ್ರವಾಗಿದೆ, ಇದು [[ಆಯುರ್ವೇದ]]ದ ಎಂಟು ಶಾಖೆಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುವ ಸಾಂಪ್ರದಾಯಿಕವಾಗಿ ಗುರುತಿಸಲ್ಪಟ್ಟ ಎಂಟು [[ನಂಬೂದಿರಿ]] ಬ್ರಾಹ್ಮಣ ಕುಟುಂಬಗಳ ಒಂದು ಗುಂಪಾಗಿದೆ. ಇವುಗಳಲ್ಲಿ, '''ಪುಲಾಮಂತೋಲೆ ಮೂಸ್''' ಕುಟುಂಬವು (ಪೆರಿಂತಲ್ಮನ್ನ ಬಳಿಯ ಪುಲಾಮಂತೋಲೆ ಪ್ರದೇಶಕ್ಕೆ ಸಂಬಂಧಿಸಿದೆ) ಶತಮಾನಗಳಿಂದಲೂ ಆನುವಂಶಿಕ ವೈದ್ಯಕೀಯ ಅಭ್ಯಾಸ ಮತ್ತು [[ಸಂಸ್ಕೃತ]] ವಿದ್ವತ್ತಿನ ಅವಿಚ್ಛಿನ್ನ ವಂಶವನ್ನು ಕಾಪಾಡಿಕೊಂಡು ಬಂದಿದೆ.<ref name="Sreedharan2002">{{cite book |last=ಶ್ರೀಧರನ್ |first=ಎನ್ |title=ಕೇರಳದ ಅಷ್ಟವೈದ್ಯ ಸಂಪ್ರದಾಯ |publisher=ಪಬ್ಲಿಕೇಷನ್ಸ್ ಡಿವಿಷನ್, ಕಾಲಿಕಟ್ ವಿಶ್ವವಿದ್ಯಾಲಯ |year=2002}}</ref>
ಪುಲಾಮಂತೋಲೆ ವಂಶದ ಐತಿಹಾಸಿಕ ಮಹತ್ವವು [[ಚೆಂಬೈ ವೈದ್ಯನಾಥ ಭಾಗವತರು]] ಎಂಬ ಕರ್ನಾಟಕ ಸಂಗೀತಗಾರರೊಂದಿಗಿನ ಸಂಬಂಧದ ಮೂಲಕ ಕೇರಳದ ಸಾಂಸ್ಕೃತಿಕ ಇತಿಹಾಸದಲ್ಲಿ ಗುರುತಿಸಲ್ಪಟ್ಟಿದೆ. 1952 ರಲ್ಲಿ, ಪ್ರದರ್ಶನದ ಸಮಯದಲ್ಲಿ ತಮ್ಮ ಧ್ವನಿಯನ್ನು ಕಳೆದುಕೊಂಡ ನಂತರ, ಚೆಂಬೈ ಅವರು ಪುಲಾಮಂತೋಲೆ ಮೂಸ್ ಕುಟುಂಬದ ಅಡಿಯಲ್ಲಿ ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆಯ ಅವಧಿಗೆ ಒಳಗಾದರು. ಅವರ ನಂತರದ ಚೇತರಿಕೆ ಮತ್ತು ವೇದಿಕೆಗೆ ಮರಳುವಿಕೆಯು ಪ್ರಾದೇಶಿಕ ಜೀವನಚರಿತ್ರೆಗಳಲ್ಲಿ ಚೆನ್ನಾಗಿ ದಾಖಲಿಸಲ್ಪಟ್ಟಿದೆ.<ref name="ChembaiBio">{{cite book |last=ಶರ್ಮಾ |first=ಎಲ್. ಆರ್. ವಿಶ್ವನಾಥ |title=ಚೆಂಬೈ ಸೆಲ್ವಂ |publisher=ಅಮುದಾ ನಿಲಯಂ ಲಿಮಿಟೆಡ್ |year=1954 |location=ಮದ್ರಾಸ್}}</ref>
ಈ ವಂಶದ ಪರಂಪರೆಯು '''ಶ್ರೀ ರುದ್ರ ಧನ್ವಂತರಿ ದೇವಸ್ಥಾನ''' ದ ಮೂಲಕ ಪ್ರಾದೇಶಿಕ ಧಾರ್ಮಿಕ ಇತಿಹಾಸದಲ್ಲಿ ಮತ್ತಷ್ಟು ಸಂಯೋಜಿಸಲ್ಪಟ್ಟಿದೆ. ತುತಪುಳ್ಳ ನದಿಯ ದಡದಲ್ಲಿರುವ ಈ ಐತಿಹಾಸಿಕ ದೇವಾಲಯವು [[ರುದ್ರ]] ಮತ್ತು [[ಧನ್ವಂತರಿ]] ಇಬ್ಬರಿಗೂ ಸಮರ್ಪಿತವಾಗಿರುವ ವಿಶಿಷ್ಟತೆಯನ್ನು ಹೊಂದಿದೆ, ಇದು ಮಲಬಾರ್ ಪ್ರದೇಶದಲ್ಲಿ ಆಧ್ಯಾತ್ಮಿಕ ಸಂಪ್ರದಾಯ ಮತ್ತು ಆಯುರ್ವೇದ ಗುಣಪಡಿಸುವ ಕಲೆಗಳ ಛೇದನಕ್ಕೆ ಕೇಂದ್ರಬಿಂದುವಾಗಿ ಸೇವೆ ಸಲ್ಲಿಸುತ್ತದೆ.<ref name="HeritagePortal">{{cite web |url=https://ayurvedathanal.com/sree-rudhra-dhanwanthari-temple |title=ಶ್ರೀ ರುದ್ರ ಧನ್ವಂತರಿ ದೇವಸ್ಥಾನ ಪರಂಪರೆ |website=ಆಯುರ್ವೇದ ಥಾನಲ್ |access-date=12 May 2026 }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
== ಭೌಗೋಳಿಕತೆ ==
[[File:Cherumb eco tourism village, Karuvarakundu India (3).JPG|left|thumb|alt=ಒಂದು ಗ್ರಾಮ |[[ಕರುವರಕುಂಡು]]ನ ಬೆಟ್ಟ ಪ್ರದೇಶ]]
[[File:Puthuponnani (2).JPG|thumb|alt=ಒಂದು ಕಡಲತೀರ|[[ಪುತ್ತುಪೊನ್ನಾನಿ]] ಮುನಂಬಮ್ ಕಡಲತೀರ]]
ವಾಯುವ್ಯಕ್ಕೆ [[ಕೋಝಿಕ್ಕೋಡ್ ಜಿಲ್ಲೆ]], ಈಶಾನ್ಯಕ್ಕೆ [[ವಯನಾಡ್ ಜಿಲ್ಲೆ]], ಪೂರ್ವಕ್ಕೆ [[ನೀಲಗಿರಿ ಬೆಟ್ಟಗಳು|ನೀಲಗಿರಿ ಬೆಟ್ಟಗಳು]], ಆಗ್ನೇಯಕ್ಕೆ [[ಪಾಲಕ್ಕಾಡ್ ಜಿಲ್ಲೆ]], ನೈಋತ್ಯಕ್ಕೆ [[ತೃಶೂರ್ ಜಿಲ್ಲೆ]], ಮತ್ತು ಪಶ್ಚಿಮಕ್ಕೆ [[ಅರೇಬಿಯನ್ ಸಮುದ್ರ]]ದಿಂದ ಸುತ್ತುವರೆದಿರುವ ಮಲಪ್ಪುರಂ ಒಟ್ಟು 3,554 ಕಿಮೀ<sup>2</sup> ಭೌಗೋಳಿಕ ಪ್ರದೇಶವನ್ನು ಹೊಂದಿದೆ, ಇದು ವಿಸ್ತೀರ್ಣದಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯು ರಾಜ್ಯದ ಒಟ್ಟು ವಿಸ್ತೀರ್ಣದ 9.15% ಅನ್ನು ಹೊಂದಿದೆ. ಜಿಲ್ಲೆಯು ಭೌಗೋಳಿಕ ನಕ್ಷೆಯಲ್ಲಿ 75°E – 77°E ರೇಖಾಂಶ ಮತ್ತು 10°N – 12°N ಅಕ್ಷಾಂಶದಲ್ಲಿದೆ. ಕೇರಳದ ಇತರ ಭಾಗಗಳಂತೆ, ಮಲಪ್ಪುರಂ ಪಶ್ಚಿಮದಲ್ಲಿ [[ಅರೇಬಿಯನ್ ಸಮುದ್ರ]]ದಿಂದ ಸುತ್ತುವರೆದ ಕರಾವಳಿ ಪ್ರದೇಶವನ್ನು (ತಗ್ಗು ನೆಲ), ಮಧ್ಯದಲ್ಲಿ ಮಧ್ಯ ಪ್ರದೇಶವನ್ನು, ಮತ್ತು ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು]] ಸುತ್ತುವರೆದ ಬೆಟ್ಟ ಪ್ರದೇಶವನ್ನು (ಎತ್ತರದ ನೆಲ) ಹೊಂದಿದೆ. ಕೇರಳದ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿ, ಮಧ್ಯ ಪ್ರದೇಶದಲ್ಲಿಯೂ ಬೆಟ್ಟ ಪ್ರದೇಶಗಳು ವ್ಯಾಪಕವಾಗಿ ಕಂಡುಬರುತ್ತವೆ. 2,554 ಮೀ ಎತ್ತರದ [[ಮುಕುರ್ತಿ]] ಶಿಖರವು [[ನಿಲಂಬೂರ್]] ತಾಲೂಕು ಮತ್ತು [[ಊಟಿ]] ತಾಲೂಕಿನ ಗಡಿಯಲ್ಲಿದೆ, ಮತ್ತು ಇದು [[ದಕ್ಷಿಣ ಭಾರತ]]ದ ಐದನೇ ಅತಿ ಎತ್ತರದ ಶಿಖರವಾಗಿದ್ದು, [[ಅನಾಮುಡಿ]] (2,696 ಮೀ) ಮತ್ತು [[ಮೀಸಪುಳಿಮಲ]] (2,651 ಮೀ) ನಂತರ ಕೇರಳದಲ್ಲಿ ಮೂರನೇ ಅತಿ ಎತ್ತರದ ಶಿಖರವಾಗಿದೆ, ಮಲಪ್ಪುರಂ ಜಿಲ್ಲೆಯಲ್ಲಿ ಅತ್ಯಂತ ಎತ್ತರದ ಸ್ಥಳವಾಗಿದೆ. ಇದು [[ಇಡುಕ್ಕಿ ಜಿಲ್ಲೆ]]ಯ ಹೊರಗೆ ಕೇರಳದ ಅತಿ ಎತ್ತರದ ಶಿಖರವಾಗಿದೆ. 2,383 ಮೀ ಎತ್ತರದ [[ಅಂಗಿಂಡ ಶಿಖರ]]ವು ಮಲಪ್ಪುರಂ-[[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]]-[[ನೀಲಗಿರಿ ಜಿಲ್ಲೆ|ನೀಲಗಿರಿ]] ಜಿಲ್ಲೆಗಳ ಗಡಿಗೆ ಹತ್ತಿರದಲ್ಲಿದೆ, ಇದು ಎರಡನೇ ಅತಿ ಎತ್ತರದ ಶಿಖರವಾಗಿದೆ. [[ವಾವುಲ್ ಮಲ]] 2,339 ಮೀ ಎತ್ತರದ ಶಿಖರವಾಗಿದ್ದು, ಮಲಪ್ಪುರಂನ ನಿಲಂಬೂರ್ ತಾಲೂಕು, [[ವಯನಾಡ್ ಜಿಲ್ಲೆ|ವಯನಾಡ್]], ಮತ್ತು [[ಕೋಝಿಕ್ಕೋಡ್ ಜಿಲ್ಲೆ|ಕೋಝಿಕ್ಕೋಡ್]]ನ [[ತಾಮರಶ್ಶೇರಿ]] ತಾಲೂಕುಗಳ ತ್ರಿಸಂಧಿಸ್ಥಳದಲ್ಲಿದೆ, ಇದು ಜಿಲ್ಲೆಯ ಮೂರನೇ ಅತಿ ಎತ್ತರದ ಸ್ಥಳವಾಗಿದೆ.
=== ಗಡಿ ತಾಲೂಕುಗಳು ===
ಮಲಪ್ಪುರಂ ಜಿಲ್ಲೆಯು 5 ಜಿಲ್ಲೆಗಳ 12 ತಾಲೂಕುಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
* ವಯನಾಡ್ ಜಿಲ್ಲೆ: [[ವೈತಿರಿ]] ತಾಲೂಕು.
* ಕೋಝಿಕ್ಕೋಡ್ ಜಿಲ್ಲೆ: [[ಕೋಝಿಕ್ಕೋಡ್]] ಮತ್ತು [[ತಾಮರಶ್ಶೇರಿ]] ತಾಲೂಕುಗಳು.
* ನೀಲಗಿರಿ ಜಿಲ್ಲೆ: [[ಪಾಂಡಲೂರ್ ತಾಲೂಕು|ಪಾಂಡಲೂರ್]], [[ಗೂಡಲೂರು, ನೀಲಗಿರಿ|ಗೂಡಲೂರು]], [[ಊಟಿ]], ಮತ್ತು [[ಕುಂಡಾ ತಾಲೂಕು|ಕುಂಡಾ]] ತಾಲೂಕುಗಳು.
* ಪಾಲಕ್ಕಾಡ್ ಜಿಲ್ಲೆ: [[ಪಟ್ಟಾಂಬಿ]], [[ಒಟ್ಟಪ್ಪಾಳಂ]], ಮತ್ತು [[ಮನ್ನಾರ್ಕ್ಕಾಡ್]] ತಾಲೂಕುಗಳು.
* ತೃಶೂರ್ ಜಿಲ್ಲೆ: [[ಚವಕ್ಕಾಡ್]] ಮತ್ತು [[ಕುನ್ನಂಕುಲಂ]] ತಾಲೂಕುಗಳು.
=== ಸ್ಥಳಾಕೃತಿ ===
ಸ್ಥಳಾಕೃತಿ, ಭೂಗರ್ಭ ಶಾಸ್ತ್ರ, ಮಣ್ಣು, ಹವಾಮಾನ, ಮತ್ತು ನೈಸರ್ಗಿಕ ಸಸ್ಯವರ್ಗದ ಆಧಾರದ ಮೇಲೆ, ಜಿಲ್ಲೆಯನ್ನು 5 ಉಪ-ಸೂಕ್ಷ್ಮ ಪ್ರದೇಶಗಳಾಗಿ ವಿಂಗಡಿಸಲಾಗಿದೆ:
* ಮಲಪ್ಪುರಂ ಕರಾವಳಿ
* ಮಲಪ್ಪುರಂ ಏರುತಗ್ಗಿನ ಬಯಲು
* ಚಾಲಿಯಾರ್ ನದಿ ಜಲಾನಯನ
* ನಿಲಂಬೂರ್ ಅರಣ್ಯ ಬೆಟ್ಟಗಳು
* ಪೆರಿಂತಲ್ಮನ್ನ ಏರುತಗ್ಗಿನ ಮೇಲುನೆಲ.
[[File:Chaliyar - Areekode Bridge.jpg|left|thumb|[[ಅರೀಕೋಡ್]]ನಲ್ಲಿ [[ಚಾಲಿಯಾರ್]] ನದಿ ಜಲಾನಯನ]]
[[File:Map of Malappuram District (April 2021).svg|thumb|ಮಲಪ್ಪುರಂ ಜಿಲ್ಲೆಯ ನಕ್ಷೆ]]
ಮಲಪ್ಪುರಂ ಕರಾವಳಿಯು ಉತ್ತರದಲ್ಲಿ [[ವಲ್ಲಿಕುಣ್ಣು]] ನಿಂದ ದಕ್ಷಿಣದಲ್ಲಿ [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]] ವರೆಗಿನ ಮಲಪ್ಪುರಂನ ಕರಾವಳಿ ಪ್ರದೇಶದ ಉದ್ದಕ್ಕೂ ಇದೆ. ಇದು ಉತ್ತರಕ್ಕೆ ಕೋಝಿಕ್ಕೋಡ್ ಕರಾವಳಿ, ಪೂರ್ವಕ್ಕೆ ಮಲಪ್ಪುರಂ ಏರುತಗ್ಗಿನ ಬಯಲು, ದಕ್ಷಿಣಕ್ಕೆ ತೃಶೂರ್ ಕರಾವಳಿ, ಮತ್ತು ಪಶ್ಚಿಮಕ್ಕೆ [[ಲಕ್ಷದ್ವೀಪ ಸಮುದ್ರ]]ದೊಂದಿಗೆ ಗಡಿಯನ್ನು ಹೊಂದಿದೆ. ಈ ಪ್ರದೇಶವು ಚಾಲಿಯಾರ್, ಕಡಲುಂಡಿ, ಭಾರತಪ್ಪುಳ್ಳ, ತಿರೂರ್ಪುಳ್ಳ, ಇತ್ಯಾದಿ ಪ್ರಮುಖ ನದಿಗಳು, ಕಾಲುವೆಗಳು ಮತ್ತು ಸರೋವರಗಳಿಂದ ಹರಿದುಹೋಗುತ್ತದೆ. ಈ ಪ್ರದೇಶವು ತೆಂಗಿನಕಾಯಿಯಿಂದ ಆವೃತವಾಗಿದೆ. ಕರಾವಳಿ ಬಯಲು ಪಶ್ಚಿಮಕ್ಕೆ ಬಹಳ ನಿಧಾನವಾಗಿ ಇಳಿಜಾರಾಗುತ್ತದೆ.<ref name="geographymalappuram">{{cite web |url=http://censusindia.gov.in/2011census/dchb/3205_PART_A_MALAPPURAM.pdf |website=censusindia.gov.in |title=ಮಲಪ್ಪುರಂನ ಭೌತಿಕ ವಿಭಾಗಗಳು |pages=21–22 |access-date=18 April 2020 |archive-date=27 November 2019 |archive-url=https://web.archive.org/web/20191127005243/http://censusindia.gov.in/2011census/dchb/3205_PART_A_MALAPPURAM.pdf |url-status=live }}</ref> [[ಪೊನ್ನಾನಿ]], [[ಎಡಪ್ಪಲ್]], [[ತಿರೂರ್]], [[ವಳಾಂಚೇರಿ]], [[ಕುಟ್ಟಿಪುರಂ]], [[ತಾನೂರು, ಮಲಪ್ಪುರಂ|ತಾನೂರು]], [[ತಿರೂರಂಗಡಿ]], ಮತ್ತು [[ಪರಪ್ಪನಂಗಾಡಿ]] ಸೇರಿದಂತೆ ಪ್ರಮುಖ ಪಟ್ಟಣಗಳು ಈ ಪ್ರದೇಶದಲ್ಲಿವೆ. ಈ ಪ್ರದೇಶದ ಗರಿಷ್ಠ ಎತ್ತರವು ತಿರೂರ್ ತಾಲೂಕಿನ [[ಕಲ್ಪಕಾಂಚೇರಿ]] ಗ್ರಾಮದಲ್ಲಿದೆ (104 ಮೀ).<ref name="geographymalappuram"/>
ಮಲಪ್ಪುರಂ ಏರುತಗ್ಗಿನ ಬಯಲು, ಕರಾವಳಿಗೆ ಸಮಾನಾಂತರವಾಗಿದ್ದು, ಉತ್ತರಕ್ಕೆ [[ನಾಡಪುರಂ]]-[[ಮಾವೂರು|ಮಾವೂರ್]] ಏರುತಗ್ಗಿನ ಬಯಲು, ಪೂರ್ವಕ್ಕೆ [[ಚಾಲಿಯಾರ್]] ನದಿ ಜಲಾನಯನ ಮತ್ತು ಪೆರಿಂತಲ್ಮನ್ನ ಏರುತಗ್ಗಿನ ಮೇಲುನೆಲ, ದಕ್ಷಿಣಕ್ಕೆ [[ಪಟ್ಟಾಂಬಿ]] ಏರುತಗ್ಗಿನ ಬಯಲು, ಮತ್ತು ಪಶ್ಚಿಮಕ್ಕೆ ಮಲಪ್ಪುರಂ ಕರಾವಳಿಯೊಂದಿಗೆ ಗಡಿಯನ್ನು ಹೊಂದಿದೆ. ಕನ್ನಮಂಗಲಂನ ನೆನ್ಮಿನಿ ಬೆಟ್ಟ (478 ಮೀ) ಅತ್ಯುನ್ನತ ಬಿಂದುವಾಗಿದ್ದು, ಉತ್ತರ ಭಾಗದಲ್ಲಿರುವ [[ವಾಝಯೂರ್]] (95 ಮೀ) ಅತ್ಯಂತ ಕಡಿಮೆ ಬಿಂದುವಾಗಿದೆ. ಕೆಲವು ಬೆಟ್ಟಗಳು ಮತ್ತು ಇಳಿಜಾರುಗಳು ಇಲ್ಲಿ ಕಂಡುಬರುತ್ತವೆ.<ref name="geographymalappuram"/>
[[File:Chekkunnu.jpg|thumb|[[ಎಡವನ್ನ]]ದಲ್ಲಿ ಚೆಕ್ಕುಣ್ಣು ಬೆಟ್ಟಗಳು]]
ಚಾಲಿಯಾರ್ ನದಿ ಜಲಾನಯನವು ಉತ್ತರ ಮತ್ತು ಪೂರ್ವಕ್ಕೆ ನಿಲಂಬೂರ್ ಅರಣ್ಯ ಬೆಟ್ಟಗಳು, ದಕ್ಷಿಣಕ್ಕೆ ಪೆರಿಂತಲ್ಮನ್ನ ಏರುತಗ್ಗಿನ ಮೇಲುನೆಲ, ಮತ್ತು ಪೂರ್ವಕ್ಕೆ ಮಲಪ್ಪುರಂ ಏರುತಗ್ಗಿನ ಬಯಲಿನೊಂದಿಗೆ ಗಡಿಯನ್ನು ಹೊಂದಿದೆ. ಇದು [[ಚಾಲಿಯಾರ್]]ನ ಮಧ್ಯ ಭಾಗದಲ್ಲಿದೆ ಮತ್ತು ಪ್ರತ್ಯೇಕವಾದ ಬೆಟ್ಟಗಳ ರೂಪದಲ್ಲಿ ಏರುತಗ್ಗುಗಳನ್ನು ಹೊಂದಿದೆ.<ref name="geographymalappuram"/>
ನಿಲಂಬೂರ್ ಅರಣ್ಯ ಬೆಟ್ಟಗಳು, ವಸಾಹತುಶಾಹಿ ದಾಖಲೆಗಳಲ್ಲಿ ''ನಿಲಂಬೂರ್ ಕಣಿವೆ'' ಎಂದೂ ಉಲ್ಲೇಖಿಸಲ್ಪಡುತ್ತದೆ, ಇದು ಉತ್ತರಕ್ಕೆ ಕೋಝಿಕ್ಕೋಡ್ ಅರಣ್ಯ ಬೆಟ್ಟಗಳು ಮತ್ತು ವಯನಾಡ್ ಅರಣ್ಯ ಬೆಟ್ಟಗಳು, ಪೂರ್ವಕ್ಕೆ [[ತಮಿಳುನಾಡು]], ದಕ್ಷಿಣಕ್ಕೆ [[ಮನ್ನಾರ್ಕಾಡ್]]-ಪಾಲಕ್ಕಾಡ್ ಅರಣ್ಯ ಬೆಟ್ಟಗಳು, ಮತ್ತು ಪಶ್ಚಿಮಕ್ಕೆ ಚಾಲಿಯಾರ್ ನದಿ ಜಲಾನಯನದೊಂದಿಗೆ ಗಡಿಯನ್ನು ಹೊಂದಿದೆ. ಇದು ಪಶ್ಚಿಮ ಘಟ್ಟಗಳ ಭಾಗವಾಗಿದೆ. ಸಮುದ್ರ ಮಟ್ಟದಿಂದ 1000 ಮೀ ಗಿಂತ ಹೆಚ್ಚು ಎತ್ತರದ ಹಲವಾರು ಶಿಖರಗಳು ಇಲ್ಲಿ ಕಂಡುಬರುತ್ತವೆ.<ref name="geographymalappuram"/> ಈ ಪ್ರದೇಶದ ಅತ್ಯಂತ ಎತ್ತರದ ಸ್ಥಳವು [[ಮುಕುರ್ತಿ]] (2594 ಮೀ) ನಲ್ಲಿದೆ, ಇದು ತಮಿಳುನಾಡಿನೊಂದಿಗೆ ಕೇರಳದ ಗಡಿಯಲ್ಲಿರುವ [[ಕರಿಂಪುಳ್ಳ ವನ್ಯಜೀವಿ ಅಭಯಾರಣ್ಯ]]ದ ಪೂರ್ವದಲ್ಲಿದೆ. ಅತ್ಯಂತ ಕಡಿಮೆ ಬಿಂದುವು [[ಮಂಪಾಡ್]] (115 ಮೀ) ನಲ್ಲಿದೆ.<ref name="geographymalappuram"/> ನಿಲಂಬೂರಿನ ಅರಣ್ಯ ಪ್ರದೇಶವು [[ನೀಲಗಿರಿ ಜೀವಗೋಳ ಮೀಸಲು]]ದ ಭಾಗವನ್ನು ರೂಪಿಸುತ್ತದೆ.
ಪೆರಿಂತಲ್ಮನ್ನ ಏರುತಗ್ಗಿನ ಮೇಲುನೆಲವು ಉತ್ತರಕ್ಕೆ ಚಾಲಿಯಾರ್ ನದಿ ಜಲಾನಯನ, ಪೂರ್ವಕ್ಕೆ ಮನ್ನಾರ್ಕಾಡ್-ಪಾಲಕ್ಕಾಡ್ ಅರಣ್ಯ ಬೆಟ್ಟಗಳು, ದಕ್ಷಿಣಕ್ಕೆ [[ಪಾಲಕ್ಕಾಡ್ ಕಣಿವೆ]], ಮತ್ತು ಪಶ್ಚಿಮಕ್ಕೆ ಮಲಪ್ಪುರಂ ಏರುತಗ್ಗಿನ ಬಯಲಿನೊಂದಿಗೆ ಗಡಿಯನ್ನು ಹೊಂದಿದೆ. ಹಲವಾರು ಸಣ್ಣ ಪ್ರತ್ಯೇಕ ಬೆಟ್ಟಗಳು ಇಲ್ಲಿ ಕಂಡುಬರುತ್ತವೆ. [[ಕೋಡಿಕುತಿಮಲ]] ಅವುಗಳಲ್ಲಿ ಒಂದು. [[ಕಡಲುಂಡಿ ನದಿ]] ಈ ಪ್ರದೇಶವನ್ನು ಹರಿದುಹೋಗುತ್ತದೆ. ಈ ಪ್ರದೇಶದ ಗರಿಷ್ಠ ಎತ್ತರವು [[ವಡಕ್ಕಂಗರ, ಮಂಜೇರಿ|ಮಕ್ಕರಪರಂಬ]] ನಲ್ಲಿ 610 ಮೀ.<ref name="geographymalappuram"/>
=== ಕರಾವಳಿ ===
[[File:Light house in Ponnani.jpg|thumb|[[ಪೊನ್ನಾನಿ]]ಯ [[ದೀಪಸ್ತಂಭ]]]]
ಕೇರಳದ ಜಿಲ್ಲೆಗಳ ನಡುವೆ ಕರಾವಳಿಯ ಉದ್ದದಲ್ಲಿ ಮಲಪ್ಪುರಂ ಐದನೇ ಸ್ಥಾನದಲ್ಲಿದೆ, ಇದು 70 ಕಿಮೀ ಕರಾವಳಿಯನ್ನು ಹೊಂದಿದೆ (ರಾಜ್ಯದ ಒಟ್ಟು ಕರಾವಳಿಯ 11.87%).<ref>{{cite web |url=http://www.kerenvis.nic.in/Database/Coastline_2346.aspx |website=kerenvis.nic.in |title=ಮಲಪ್ಪುರಂನ ಕರಾವಳಿ ಪ್ರದೇಶ |access-date=30 November 2019 |archive-date=23 November 2019 |archive-url=https://web.archive.org/web/20191123153736/http://www.kerenvis.nic.in/Database/Coastline_2346.aspx |url-status=live }}</ref> ಮಲಪ್ಪುರಂನ ಕರಾವಳಿ ಪಟ್ಟಿಯು [[ತಾನೂರು, ಮಲಪ್ಪುರಂ|ತಾನೂರು]], [[ಪೊನ್ನಾನಿ]], ಮತ್ತು [[ಪರಪ್ಪನಂಗಾಡಿ]] ಎಂಬ ಮೂರು ಪುರಸಭಾ ಪಟ್ಟಣಗಳು ಮತ್ತು [[ವಲ್ಲಿಕುಣ್ಣು]], [[ತಾನಲೂರು]], [[ನಿರಮರುತೂರು]], [[ವೆಟ್ಟೊಂ ಗ್ರಾಮ ಪಂಚಾಯತ್|ವೆಟ್ಟೊಂ]], [[ಮಂಗಲಂ, ತಿರೂರ್|ಮಂಗಲಂ]], [[ಪುರತ್ತೂರ್]], [[ವೆಲಿಯಂಕೋಡ್]], ಮತ್ತು [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಬಡಪ್ಪು]] ಎಂಬ ಎಂಟು [[ಗ್ರಾಮ ಪಂಚಾಯತ್]]ಗಳಲ್ಲಿದೆ. ಪೊನ್ನಾನಿ, ತಾನೂರು, ಪರಪ್ಪನಂಗಾಡಿ, ಮತ್ತು [[ಪದಿಂಜಾರೆಕ್ಕರ ಕಡಲತೀರ]] ಇವೆಲ್ಲವೂ ಜಿಲ್ಲೆಯ ಪಶ್ಚಿಮ ಭಾಗದಲ್ಲಿವೆ, ಇವು ಪ್ರಮುಖ ಮೀನುಗಾರಿಕಾ ಕೇಂದ್ರಗಳಾಗಿವೆ. ಜಿಲ್ಲೆಯ ಸಮುದ್ರ ಕರಾವಳಿಯು ಸಮುದ್ರ ಸಂಪತ್ತಿನಿಂದ ತುಂಬಿದೆ.<ref name="geographymalappuram" /> ಹಿಂದೆ ಅರಬ್ ವ್ಯಾಪಾರಿಗಳ ನೆಚ್ಚಿನ ತಾಣವಾಗಿದ್ದುದರ ಜೊತೆಗೆ, ಪೊನ್ನಾನಿಯು ಇಲ್ಲಿ [[ಇಸ್ಲಾಂ]] ಧರ್ಮದ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸಿದ ಅನೇಕ [[ಮುಸ್ಲಿಂ]] ಆಧ್ಯಾತ್ಮಿಕ ನಾಯಕರಿಗೆ ಆಕರ್ಷಕ ತಾಣವಾಗಿತ್ತು. ಈ ಬಂದರು ನಗರವನ್ನು ''ಮಲಬಾರ್ನ ಸಣ್ಣ ಮೆಕ್ಕಾ'' ಮತ್ತು ''[[ಗೋಲ್ಡ್ ದಿನಾರ್|ಗೋಲ್ಡ್ ನಾಣ್ಯಗಳ]] ನಗರ'' ಎಂದೂ ಕರೆಯಲಾಗುತ್ತದೆ.<ref name="pkd">{{cite book
| author=ಎಂ. ಕೆ. ದೇವಸ್ಸಿ
| year=1965
| title=1961 ಜನಗಣತಿ ಕೈಪಿಡಿ- ಪಾಲ್ಘಾಟ್ ಜಿಲ್ಲೆ
| publisher=ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಷನ್ಸ್, ಕೇರಳ ಮತ್ತು ಲಕ್ಕದೀವ್, ಮಿನಿಕಾಯ್, ಮತ್ತು ಅಮಿಂದಿವಿ ದ್ವೀಪಗಳ ಕೇಂದ್ರಾಡಳಿತ ಪ್ರದೇಶ
| url=http://lsi.gov.in:8081/jspui/bitstream/123456789/5667/1/51592_1961_PAL.pdf
| access-date=11 March 2021
| archive-date=8 May 2021
| archive-url=https://web.archive.org/web/20210508155754/http://lsi.gov.in:8081/jspui/bitstream/123456789/5667/1/51592_1961_PAL.pdf
| url-status=live
}}</ref><ref>{{cite web |url=https://www.nativeplanet.com/travel-guide/the-mecca-of-malabar-ponnani-004132.html |website=nativeplanet.com |title=ಪೊನ್ನಾನಿ, ಮಲಬಾರ್ನ ಮೆಕ್ಕಾ |date=24 October 2017 |access-date=19 April 2020 |archive-date=10 May 2021 |archive-url=https://web.archive.org/web/20210510143226/https://www.nativeplanet.com/travel-guide/the-mecca-of-malabar-ponnani-004132.html |url-status=live }}</ref> ಫೆಬ್ರವರಿ/ಏಪ್ರಿಲ್ ತಿಂಗಳುಗಳಲ್ಲಿ, ಸಾವಿರಾರು ವಲಸೆ ಹಕ್ಕಿಗಳು ಇಲ್ಲಿಗೆ ಆಗಮಿಸುತ್ತವೆ. ಪೊನ್ನಾನಿಗೆ ಹತ್ತಿರದಲ್ಲಿರುವ ಬಿಯ್ಯಂ ಕಾಯಲ್, ಜಲ ಕ್ರೀಡಾ ಸೌಲಭ್ಯವನ್ನು ಹೊಂದಿರುವ ಶಾಂತ, ಹಸಿರಿನಿಂದ ಕೂಡಿದ ಜಲಮಾರ್ಗವಾಗಿದೆ. [[ಕೊನೊಲಿ ಕಾಲುವೆ]]ಯು [[ಪುತ್ತುಪೊನ್ನಾನಿ]]ಯಲ್ಲಿ [[ಅರೇಬಿಯನ್ ಸಮುದ್ರ]]ವನ್ನು ಸಂಧಿಸುತ್ತದೆ. ತಾನೂರಿನ ಕರಾವಳಿ ಪಟ್ಟಣವು ಆರಂಭಿಕ ಮಧ್ಯಯುಗದಲ್ಲಿ ''ವೆಟ್ಟತ್ತುನಾಡು ಸಾಮ್ರಾಜ್ಯ''ದ ರಾಜಧಾನಿಯಾಗಿತ್ತು, ಮತ್ತು ಇದು [[ಕೇರಳದೇಶಪುರಂ ದೇವಸ್ಥಾನ]]ಕ್ಕೆ ಹೆಸರುವಾಸಿಯಾಗಿದೆ. ಪರಪ್ಪನಂಗಾಡಿಯು ಆರಂಭಿಕ ಮಧ್ಯಯುಗದಲ್ಲಿ [[ಪರಪ್ಪನಾಡ್]] ಸಾಮ್ರಾಜ್ಯದ ಆಡಳಿತ ಮನೆತನಗಳ ನೆಲೆಯಾಗಿತ್ತು.
=== ನದಿಗಳು ===
[[File:View from Chamravattam Bridge - panoramio.jpg|thumbnail|[[ತ್ರಿಪ್ರಂಗೋಡ್]]ನಲ್ಲಿ [[ಭಾರತಪ್ಪುಳ್ಳ]]]]
[[File:Kadalundi river, Malappuram.jpg|thumb|[[ಮಲಪ್ಪುರಂ]]ನಲ್ಲಿ [[ಕಡಲುಂಡಿ ನದಿ]]]]
ಜಿಲ್ಲೆಯ ಮೂಲಕ ಹರಿಯುವ ಪ್ರಮುಖ ನದಿಗಳು [[ಚಾಲಿಯಾರ್]], [[ಕಡಲುಂಡಿ ನದಿ]], [[ಭಾರತಪ್ಪುಳ್ಳ]], ಮತ್ತು [[ತಿರೂರ್ ನದಿ]]. ಚಾಲಿಯಾರ್ ಸುಮಾರು 168 ಕಿಮೀ ಉದ್ದವನ್ನು ಮತ್ತು {{cvt|2818|km2}} ಒಳಚರಂಡಿ ಪ್ರದೇಶವನ್ನು ಹೊಂದಿದೆ. ಇದು [[ನಿಲಂಬೂರ್]], [[ಮಂಪಾಡ್]], [[ಎಡವನ್ನ]], [[ಅರೀಕೋಡ್]], ಮತ್ತು [[ವಾಝಕ್ಕಾಡ್]] ಮೂಲಕ ಜಿಲ್ಲೆಯಲ್ಲಿ ಹಾದುಹೋಗುತ್ತದೆ ಮತ್ತು ನಂತರ ಕೋಝಿಕ್ಕೋಡ್-ಮಲಪ್ಪುರಂ ಜಿಲ್ಲೆಯ ಗಡಿಯ ಮೂಲಕ ಹರಿದು [[ಚಾಲಿಯಂ]] ನಲ್ಲಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. [[ನಿಲಂಬೂರ್]] ತಾಲೂಕಿನ ಕಣಿವೆಯಲ್ಲಿ ಚಾಲಿಯಾರ್ನ ದೊಡ್ಡ ಮತ್ತು ಸಣ್ಣ ಉಪನದಿಗಳಿವೆ.<ref name="geographymalappuram" /><ref name="river"/> ಚಾಲಿಯಾರ್ನ ಅತಿದೊಡ್ಡ ಉಪನದಿಯಾದ [[ಕರಿಂಪುಳ್ಳ (ಮಲಪ್ಪುರಂ)|ಕರಿಂಪುಳ್ಳ]], ಮತ್ತು ಭಾರತಪ್ಪುಳ್ಳದ ಅತಿದೊಡ್ಡ ಉಪನದಿಗಳಲ್ಲಿ ಒಂದಾದ [[ತುತಪುಳ್ಳ]], ಮತ್ತು ಕಡಲುಂಡಿ ನದಿಯ ಅತಿದೊಡ್ಡ ಉಪನದಿಗಳಲ್ಲಿ ಒಂದಾದ ಒಲಿಪುಳ್ಳ ಸಹ ಜಿಲ್ಲೆಯ ಮೂಲಕ ಹರಿಯುತ್ತವೆ. ಕಡಲುಂಡಿ ನದಿಯು [[ಮೇಲತ್ತೂರ್, ಕೇರಳ|ಮೇಲತ್ತೂರ್]], [[ಕೀಳತ್ತೂರ್]], [[ಪಾಂಡಿಕ್ಕಾಡ್]], [[ಮಂಜೇರಿ]], [[ಮಲಪ್ಪುರಂ]], [[ಪನಕ್ಕಡ್]], [[ಪರಪ್ಪೂರ್]], [[ವೆಂಗರ, ಮಲಪ್ಪುರಂ ಜಿಲ್ಲೆ|ವೆಂಗರ]], [[ತಿರೂರಂಗಡಿ]], [[ಪರಪ್ಪನಂಗಾಡಿ]], [[ವಲ್ಲಿಕುಣ್ಣು]] ಮೂಲಕ ಹಾದುಹೋಗುತ್ತದೆ ಮತ್ತು ಜಿಲ್ಲೆಯ ವಾಯುವ್ಯ ಗಡಿಯಲ್ಲಿರುವ [[ವಲ್ಲಿಕುಣ್ಣು]]ನ ಕಡಲುಂಡಿ ನಗರಂನಲ್ಲಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಇದು ಒಲಿಪ್ಪುಳ್ಳ ನದಿ ಮತ್ತು ವೆಳಿಯಾರ್ ನದಿಗಳ ಸಂಗಮದಿಂದ ರೂಪುಗೊಳ್ಳುತ್ತದೆ. ಕಡಲುಂಡಿ ನದಿಯು [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ|ಸೈಲೆಂಟ್ ವ್ಯಾಲಿ]]ಯ ಪಶ್ಚಿಮ ಗಡಿಯಲ್ಲಿರುವ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳಿಂದ]] ಹುಟ್ಟಿ ಜಿಲ್ಲೆಯ ಮೂಲಕ ಹರಿಯುತ್ತದೆ. ಒಲಿಪ್ಪುಳ್ಳ ಮತ್ತು ವೆಳಿಯಾರ್ [[ಕೀಳತ್ತೂರ್]]ನಲ್ಲಿ ಸೇರಿ ಕಡಲುಂಡಿ ನದಿಯನ್ನು ರೂಪಿಸುತ್ತವೆ. ಕಡಲುಂಡಿ ನದಿಯು [[ಇರನಾಡ್]] ಮತ್ತು [[ವಲ್ಲುವನಾಡ್ ಸಾಮ್ರಾಜ್ಯ|ವಲ್ಲುವನಾಡ್]] ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಇದು 130 ಕಿಮೀ ಉದ್ದವನ್ನು ಹೊಂದಿದ್ದು, {{cvt|1114|km2}} ಒಳಚರಂಡಿ ಪ್ರದೇಶ ಮತ್ತು 2189 ಮಿಲಿಯನ್ ಘನ ಅಡಿ ಒಟ್ಟು ಹರಿವನ್ನು ಹೊಂದಿದೆ.<ref name="geographymalappuram" /><ref name="river"/> ಭಾರತಪ್ಪುಳ್ಳ ಒಟ್ಟು 209 ಕಿಮೀ ಉದ್ದವನ್ನು ಹೊಂದಿದೆ. ಇದು ತನ್ನ ಉಪನದಿಯಾದ [[ತುತಪುಳ್ಳ]] ನದಿಯಾಗಿ ತೂತ, [[ಎಲಂಕುಳಂ, ಮಲಪ್ಪುರಂ|ಎಲಂಕುಳಂ]], [[ಪುಲಾಮಂತೋಲೆ]] ಮೂಲಕ ಮಲಪ್ಪುರಂ-ಪಾಲಕ್ಕಾಡ್ ಜಿಲ್ಲೆಯ ಗಡಿಯಲ್ಲಿ ಹರಿಯುತ್ತದೆ, ಮತ್ತು ಪಳ್ಳಿಪುರಂನಲ್ಲಿ ಮುಖ್ಯ ನದಿಯನ್ನು ಸೇರುತ್ತದೆ. ನಂತರ ಅದು ಕೆಲವು ನೆರೆಯ ಜಿಲ್ಲೆಗಳ ಮೂಲಕ ಹರಿದು [[ತಿರುವೇಗಪ್ಪುರ]]ದಿಂದ [[ಕುಟ್ಟಿಪುರಂ]] ತಲುಪುತ್ತದೆ. ನಂತರ ಅದು ಸಂಪೂರ್ಣವಾಗಿ ಜಿಲ್ಲೆಯ ಮೂಲಕ ಹರಿಯುತ್ತದೆ. ಭಾರತಪ್ಪುಳ್ಳ [[ಪೊನ್ನಾನಿ]]ಯಲ್ಲಿ [[ಅರೇಬಿಯನ್ ಸಮುದ್ರ]]ವನ್ನು ಸೇರುತ್ತದೆ. [[ತಿರುನವಾಯ]], [[ಕುಟ್ಟಿಪುರಂ]], [[ತ್ರಿಪ್ರಂಗೋಡ್]], [[ಇರಿಂಬಿಲಿಯಂ]], [[ತವನೂರ್]], ಮತ್ತು [[ಪೊನ್ನಾನಿ]] ಭಾರತಪ್ಪುಳ್ಳದ ದಡದಲ್ಲಿರುವ ಕೆಲವು ಪ್ರಮುಖ ಪಟ್ಟಣಗಳಾಗಿವೆ.<ref name="geographymalappuram" /><ref name="river"/> ತಿರೂರ್ ನದಿಯು 48 ಕಿಮೀ ಉದ್ದವಿದೆ. ಇದು ಪೊನ್ನಾನಿ ಬಳಿಯ [[ಪುರತ್ತೂರ್|ಪದಿಂಜಾರೆಕರ]]ದಲ್ಲಿ ಭಾರತಪ್ಪುಳ್ಳವನ್ನು ಸೇರುತ್ತದೆ.<ref name="geographymalappuram" /><ref name="river"/> ಈ ದೊಡ್ಡ ನದಿಗಳ ಜೊತೆಗೆ, ಜಿಲ್ಲೆಯು ಪುರಪ್ಪರಂಬ ನದಿ ಎಂಬ ಸಣ್ಣ ನದಿಯನ್ನು ಹೊಂದಿದೆ, ಇದು ಕೇವಲ 8 ಕಿಮೀ ಉದ್ದವಿದೆ. ಇದು [[ಕೊನೊಲಿ ಕಾಲುವೆ]] ಮೂಲಕ ಪ್ರಮುಖ ನದಿಗಳಿಗೆ ಸಂಪರ್ಕ ಹೊಂದಿದೆ.<ref name="geographymalappuram" /><ref name="river">{{cite web |title=ಮಲಪ್ಪುರಂ ಜಿಲ್ಲೆಯ ನದಿಗಳು |url=https://malappuram.nic.in/about-district/ |access-date=23 November 2019 |website=malappuram.nic.in |archive-date=10 February 2020 |archive-url=https://web.archive.org/web/20200210004256/https://malappuram.nic.in/about-district/ |url-status=live }}</ref> ಮೇಲೆ ವಿವರಿಸಿದ ಪ್ರಮುಖ ನದಿಗಳ ಹಲವಾರು ದೊಡ್ಡ ಮತ್ತು ಸಣ್ಣ ಉಪನದಿಗಳು ಮತ್ತು ತೊರೆಗಳು ಸಹ ಜಿಲ್ಲೆಯ ಮೂಲಕ ಹರಿಯುತ್ತವೆ.
{{Panorama
|image = File:Kadalundi Kadavu Bridge.jpg
|height = 175
|alt = [[ವಲ್ಲಿಕುಣ್ಣು]] ಮುಖಜಭೂಮಿಯ ಬಳಿ [[ಕಡಲುಂಡಿ ನದಿ]]ಯ ವಿಹಂಗಮ ನೋಟ
|caption = [[ವಲ್ಲಿಕುಣ್ಣು]] ಮುಖಜಭೂಮಿಯ ಬಳಿ [[ಕಡಲುಂಡಿ ನದಿ]]ಯ ವಿಹಂಗಮ ನೋಟ, ಅಲ್ಲಿ ಅದು [[ಅರೇಬಿಯನ್ ಸಮುದ್ರ]]ವನ್ನು ಸೇರುತ್ತದೆ
}}
ನಾಲ್ಕು ಮುಖಜಭೂಮಿಗಳಿವೆ - [[ಪುರತ್ತೂರ್]]ನ ''ಪದಿಂಜಾರೆಕರ ಅಳಿಮುಖಂ'' ಅಲ್ಲಿ ಭಾರತಪ್ಪುಳ್ಳ ಮತ್ತು ತಿರೂರ್ ನದಿಗಳು ಸೇರಿ ಅರೇಬಿಯನ್ ಸಮುದ್ರವನ್ನು ಸೇರುತ್ತವೆ, [[ಪುತ್ತುಪೊನ್ನಾನಿ]] ಮುಂಚೂಣಿ ಅಲ್ಲಿ ಕೊನೊಲಿ ಕಾಲುವೆಯು ಸಮುದ್ರವನ್ನು ಸೇರುತ್ತದೆ, [[ತಾನೂರು, ಮಲಪ್ಪುರಂ|ತಾನೂರು]]ನ ''ಪುರಪ್ಪುಳ್ಳ ಅಳಿಮುಖಂ'', ಮತ್ತು ಜಿಲ್ಲೆಯ ವಾಯುವ್ಯ ಗಡಿಯಲ್ಲಿರುವ [[ವಲ್ಲಿಕುಣ್ಣು]]ನ ''ಕಡಲುಂಡಿ ನಗರಂ ಅಳಿಮುಖಂ''.<ref name="geographymalappuram" /><ref name="river"/> ಬಿಯ್ಯಂ, ವೆಲಿಯಂಕೋಡ್, ಮನೂರ್, ಮತ್ತು ಕೊಡಿನ್ಹಿ ನಂತಹ ಸರೋವರಗಳು ಕರಾವಳಿ ತಾಲೂಕುಗಳಲ್ಲಿವೆ.<ref name="geographymalappuram" /><ref name="river"/> [[ಬ್ರಿಟಿಷ್ ರಾಜ್]] ಸಮಯದಲ್ಲಿ ಪೊನ್ನಾನಿಯಿಂದ [[ತಿರೂರ್ ರೈಲ್ವೇ ನಿಲ್ದಾಣ]]ಕ್ಕೆ ಸರಕುಗಳನ್ನು ಸಾಗಿಸಲು ಪೊನ್ನಾನಿ ಕಾಲುವೆಯನ್ನು ನಿರ್ಮಿಸಲಾಯಿತು. [[ತಿರುನವಾಯ|ಕೊಡಕ್ಕಲ್]]ನಲ್ಲಿ [[ಬಾಸೆಲ್ ಮಿಷನ್]] ನೌಕರರು ಪೊನ್ನಾನಿ ಕಾಲುವೆಯ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.<ref>{{Cite web |url=http://www.ineszupanov.com/ |title=ಇನೆಸ್ ಜುಪನೋವ್ ಅವರ ವೆಬ್ಸೈಟ್ |access-date=13 September 2021 |archive-date=27 April 2021 |archive-url=https://web.archive.org/web/20210427041408/http://www.ineszupanov.com/ |url-status=live }}</ref>
{{cquote|''...ಇತ್ತೀಚೆಗೆ ಒಂದು ಸ್ಟೀಮ್ಶಿಪ್ ಕಾಲುವೆಯ ಮೂಲಕ ಪೊನ್ನಾನಿ ಮತ್ತು ತಿರೂರ್ ನಡುವೆ ಪ್ರಯಾಣಿಸುತ್ತದೆ, ಅಲ್ಲಿ ಪೊನ್ನಾನಿಗೆ ಅತ್ಯಂತ ಅನುಕೂಲಕರವಾದ ರೈಲ್ವೇ ನಿಲ್ದಾಣವಿದೆ. ದೂರವು 10 ಕಿಮೀ ಆಗಿದ್ದರೂ ಟಿಕೆಟ್ನ ಬೆಲೆ ಕೇವಲ 4 ಅಣ್ಣಗಳು...''}}
=== <span class="anchor" id="Climate chart"></span>ಹವಾಮಾನ ===
[[File:Monsoon Clouds - Manjeri and Pandalloor hill.jpg|left|thumbnail|[[ಮಂಜೇರಿ]] ಬಳಿಯ [[ಅನಕ್ಕಯಂ|ಪಾಂಡಲ್ಲೂರ್ ಬೆಟ್ಟಗಳಲ್ಲಿ]] [[ಮಾನ್ಸೂನ್]] ಮೋಡಗಳು]]
[[File:Ottumpuram Beach.JPG|thumbnail|[[ತಾನೂರು, ಮಲಪ್ಪುರಂ|ತಾನೂರು]]ನ ಒಟ್ಟುಂಪುರಂ ಕಡಲತೀರ]]
ಜಿಲ್ಲೆಯ ಉಷ್ಣಾಂಶವು ವರ್ಷವಿಡೀ ಸ್ಥಿರವಾಗಿರುತ್ತದೆ. ಇದು ಉಷ್ಣವಲಯದ ಹವಾಮಾನವನ್ನು ಹೊಂದಿದೆ. ಇದು ಹೆಚ್ಚಿನ ತಿಂಗಳುಗಳಲ್ಲಿ ಗಮನಾರ್ಹವಾದ ಮಳೆಯನ್ನು ಪಡೆಯುತ್ತದೆ, ಆದರೆ ಅಲ್ಪಾವಧಿಯ ಒಣ ಋತುವನ್ನು ಹೊಂದಿದೆ. ಕೊಪ್ಪೆನ್ ಮತ್ತು ಗೀಗರ್ ಪ್ರಕಾರ, ಈ ಹವಾಮಾನವನ್ನು Am ಎಂದು ವರ್ಗೀಕರಿಸಲಾಗಿದೆ. ಮಲಪ್ಪುರಂನಲ್ಲಿ ಸರಾಸರಿ ವಾರ್ಷಿಕ ಉಷ್ಣಾಂಶವು 27.3 °C ಆಗಿದೆ. ಒಂದು ವರ್ಷದಲ್ಲಿ, ಸರಾಸರಿ ಮಳೆಯು {{convert|2952|mm|in}} ಆಗಿದೆ. ಬೇಸಿಗೆಯು ಸಾಮಾನ್ಯವಾಗಿ ಮಾರ್ಚ್ನಿಂದ ಮೇ ವರೆಗೆ ಇರುತ್ತದೆ; [[ಮಾನ್ಸೂನ್]] ಜೂನ್ನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್ನಲ್ಲಿ ಕೊನೆಗೊಳ್ಳುತ್ತದೆ. ಮಲಪ್ಪುರಂ ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್ ಎರಡನ್ನೂ ಪಡೆಯುತ್ತದೆ. ಚಳಿಗಾಲವು ಡಿಸೆಂಬರ್ನಿಂದ ಫೆಬ್ರವರಿ ವರೆಗೆ ಇರುತ್ತದೆ.<ref name="MSN">{{Cite web| url = http://weather.msn.com/monthly_averages.aspx| title = MSN ಹವಾಮಾನ| access-date = 29 November 2019| archive-url = https://web.archive.org/web/20091009070528/http://weather.msn.com/monthly_averages.aspx| archive-date = 9 October 2009| url-status = dead}}</ref>
<div style="width:75%;">
{{Weather box
| location = ಮಲಪ್ಪುರಂ
| width = 90% <!-- Wikitable ಗಾಗಿ ಅಗಲದ ನಿಯತಾಂಕ, ಪೂರ್ವನಿಯೋಜಿತ ಅಗಲ=90%. ಅಗಲವನ್ನು ವ್ಯಾಖ್ಯಾನಿಸದೆ Wikitable ಗಾಗಿ ಖಾಲಿ ಬಿಡಿ. ಲಭ್ಯವಿರುವ ಮುಂದಿನ ಜಾಗದಲ್ಲಿ ಕೋಷ್ಟಕವನ್ನು ಸ್ವಯಂಚಾಲಿತವಾಗಿ ಹೊಂದಿಸಲು ಅಗಲ=auto ಅನ್ನು ಹೊಂದಿಸಿ. -->
| metric first = yes
| single line = yes
| Jan high C = 32.0
| Feb high C = 32.9
| Mar high C = 34.0
| Apr high C = 33.8
| May high C = 32.7
| Jun high C = 29.3
| Jul high C = 28.1
| Aug high C = 28.7
| Sep high C = 29.7
| Oct high C = 30.3
| Nov high C = 31.1
| Dec high C = 31.4
| year high C = 34.0
| Jan low C = 21.8
| Feb low C = 22.8
| Mar low C = 24.4
| Apr low C = 25.4
| May low C = 25.1
| Jun low C = 23.5
| Jul low C = 22.8
| Aug low C = 23.3
| Sep low C = 23.3
| Oct low C = 23.4
| Nov low C = 23.1
| Dec low C = 21.9
| year low C = 21.8
| Jan precipitation mm = 1
| Feb precipitation mm = 9
| Mar precipitation mm = 16
| Apr precipitation mm = 101
| May precipitation mm = 253
| Jun precipitation mm = 666
| Jul precipitation mm = 830
| Aug precipitation mm = 398
| Sep precipitation mm = 233
| Oct precipitation mm = 281
| Nov precipitation mm = 140
| Dec precipitation mm = 24
| year precipitation mm = 2952
| source =<ref>{{cite web |url = https://en.climate-data.org/asia/india/kerala/malappuram-34234/ |website = en.climate-data.org |title = ಮಲಪ್ಪುರಂನ ಹವಾಮಾನ |access-date = 30 November 2019 |archive-date = 13 September 2021 |archive-url = https://web.archive.org/web/20210913063337/https://en.climate-data.org/asia/india/kerala/malappuram-34234/ |url-status = live }}</ref>
| date = ನವೆಂಬರ್ 2019
}}
</div>
== ಸಸ್ಯ ಮತ್ತು ಪ್ರಾಣಿ ಸಂಪತ್ತು ==
{{multiple image|align=left|direction = vertical|caption_align=left
| image1 = Nilambur Teak Garden.jpg |caption1= [[ತೇಗ ವಸ್ತುಸಂಗ್ರಹಾಲಯ]]| image2 = Green Vallikkunnu.jpg|caption2= [[ವಲ್ಲಿಕುಣ್ಣು]]ನಲ್ಲಿ [[ಉಪ್ಪುನೀರಿನ ಕಾಡುಗಳು]]| image3 = Beeyam Kayal River near Athani.jpg |caption3 = [[ಎಡಪ್ಪಲ್]]ನಲ್ಲಿ [[ತೃಶೂರ್ ಕೋಲೆ ಜೌಗು ಪ್ರದೇಶಗಳು|ಪೊನ್ನಾನಿ ಕೋಲೆ ಜೌಗು ಪ್ರದೇಶಗಳು]]
}}
ಜಿಲ್ಲೆಯು ವೈವಿಧ್ಯಮಯ ವನ್ಯಜೀವಿ ಮತ್ತು ಹಲವಾರು ಸಣ್ಣ ಬೆಟ್ಟಗಳು, ಅರಣ್ಯಗಳು, ನದಿಗಳು ಮತ್ತು ಪಶ್ಚಿಮಕ್ಕೆ ಹರಿಯುವ ತೊರೆಗಳು, [[ಕೇರಳದ ಸರೋವರಗಳು|ಸರೋವರಗಳು]] ಮತ್ತು [[ಭತ್ತ|ಭತ್ತ]], [[ಅಡಕೆ]], [[ಗೋಡಂಬಿ]], [[ಕರಿಮೆಣಸು|ಮೆಣಸು]], [[ಶುಂಠಿ]], [[ದ್ವಿದಳ ಧಾನ್ಯಗಳು|ದ್ವಿದಳ ಧಾನ್ಯಗಳು]], [[ತೆಂಗು]], [[ಬಾಳೆಹಣ್ಣು|ಬಾಳೆ]], [[ಮರಗೆಣಸು]], [[ಚಹಾ]], ಮತ್ತು [[ರಬ್ಬರ್]] ತೋಟಗಳನ್ನು ಹೊಂದಿದೆ. ವಿಶ್ವದ ಅತ್ಯಂತ ಹಳೆಯ [[ತೇಗ]] ತೋಟವಾದ ಕೊನೊಲಿಯ ಪ್ಲಾಟ್ [[ನಿಲಂಬೂರ್]] ನಲ್ಲಿದೆ. ನಿಲಂಬೂರ್ [[ತೇಗ ವಸ್ತುಸಂಗ್ರಹಾಲಯ]]ಕ್ಕೂ ಹೆಸರುವಾಸಿಯಾಗಿದೆ. [[ಬಿದಿರು]] ಮರಗಳು ನಿಲಂಬೂರ್ ತೇಗ ತೋಟಗಳ ಬಳಿ ವ್ಯಾಪಕವಾಗಿ ಕಂಡುಬರುತ್ತವೆ. ತೇಗ ವಸ್ತುಸಂಗ್ರಹಾಲಯದೊಂದಿಗೆ ಜೈವಿಕ ಸಂಪನ್ಮೂಲ ನೈಸರ್ಗಿಕ ಉದ್ಯಾನವನವು ಸಂಬಂಧಿಸಿದೆ. [[ಮದ್ರಾಸ್ ಪ್ರೆಸಿಡೆನ್ಸಿ]]ಯ ಹಳೆಯ ಆಡಳಿತ ದಾಖಲೆಗಳಲ್ಲಿ, ಹಿಂದಿನ [[ಮದ್ರಾಸ್ ಪ್ರೆಸಿಡೆನ್ಸಿ]]ಯಲ್ಲಿ ಸರ್ಕಾರದ ಒಡೆತನದ ಅತ್ಯಂತ ಗಮನಾರ್ಹವಾದ ತೋಟವು 1844 ರಲ್ಲಿ ನೆಡಲಾದ [[ನಿಲಂಬೂರ್]]ನಲ್ಲಿನ ತೇಗ ತೋಟವಾಗಿದೆ ಎಂದು ದಾಖಲಿಸಲಾಗಿದೆ.<ref name="Mbsp">{{cite book |url=https://www.tamildigitallibrary.in/admin/assets/book/TVA_BOK_0023302_The_Madras_Presidency_1881_1931.pdf |title=ಮದ್ರಾಸ್ ಪ್ರೆಸಿಡೆನ್ಸಿ (1881–1931) |last=ಬೋಗ್ |first=ಜಿಟಿ |publisher=ಮದ್ರಾಸ್ ಸರ್ಕಾರ |location=ಮದ್ರಾಸ್ |year=1933 |page=63 |access-date=9 June 2021 |archive-date=9 June 2021 |archive-url=https://web.archive.org/web/20210609102848/https://www.tamildigitallibrary.in/admin/assets/book/TVA_BOK_0023302_The_Madras_Presidency_1881_1931.pdf |url-status=live }}</ref>
ಜಿಲ್ಲೆಯ 3,554 ಕಿಮೀ<sup>2</sup> ವಿಸ್ತೀರ್ಣದಲ್ಲಿ, {{cvt|1034|km2}} (29%) ಅರಣ್ಯ ಪ್ರದೇಶವನ್ನು ಹೊಂದಿದೆ. ಇದು ದಟ್ಟವಾಗಿರಬಹುದು ಅಥವಾ ಕಡಿಮೆ ದಟ್ಟವಾಗಿರಬಹುದು.<ref>{{cite web |url=http://industry.kerala.gov.in/images/pdf/malappuram.pdf |website=industry.kerala.gov.in |title=ಮಲಪ್ಪುರಂನ ಅರಣ್ಯ ಪ್ರದೇಶ |access-date=21 April 2020 |archive-date=26 April 2021 |archive-url=https://web.archive.org/web/20210426034953/http://industry.kerala.gov.in/images/pdf/malappuram.pdf |url-status=live }}</ref> ಜಿಲ್ಲೆಯ ಈಶಾನ್ಯ ಭಾಗವು {{cvt|758.87|km2}} ವ್ಯಾಪಕವಾದ ಅರಣ್ಯ ಪ್ರದೇಶವನ್ನು ಹೊಂದಿದೆ. ಇದರಲ್ಲಿ, {{cvt|325.33|km2}} ಮೀಸಲು ಅರಣ್ಯಗಳು ಮತ್ತು ಉಳಿದವು ಸರ್ಕಾರಿ ಅರಣ್ಯಗಳಾಗಿವೆ. ಇವುಗಳಲ್ಲಿ, 80% [[ಸಮಶೀತೋಷ್ಣ ಪರ್ಣಪಾತಿ ಕಾಡು|ಪರ್ಣಪಾತಿ]] ಮತ್ತು ಉಳಿದವು [[ನಿತ್ಯಹರಿದ್ವರ್ಣ ಕಾಡು|ನಿತ್ಯಹರಿದ್ವರ್ಣ]]ವಾಗಿವೆ. ಅರಣ್ಯ ಪ್ರದೇಶವು ಮುಖ್ಯವಾಗಿ ನಿಲಂಬೂರ್ ಉಪ-ಜಿಲ್ಲೆಯಲ್ಲಿ ಕೇಂದ್ರೀಕೃತವಾಗಿದೆ, ಇದು ಬೆಟ್ಟದ ಜಿಲ್ಲೆ [[ವಯನಾಡ್ ಜಿಲ್ಲೆ|ವಯನಾಡ್]], [[ಪಶ್ಚಿಮ ಘಟ್ಟಗಳು]], ಮತ್ತು [[ತಮಿಳುನಾಡು|ತಮಿಳುನಾಡಿನ]] ಬೆಟ್ಟ ಪ್ರದೇಶಗಳೊಂದಿಗೆ ([[ನೀಲಗಿರಿ ಜಿಲ್ಲೆ|ನೀಲಗಿರಿ]]) ಗಡಿಯನ್ನು ಹಂಚಿಕೊಂಡಿದೆ. [[ತೇಗ]], [[ಡಾಲ್ಬರ್ಗಿಯಾ ಸಿಸ್ಸೂ|ರೋಸ್ವುಡ್]], ಮತ್ತು [[ಮಹೋಗಾನಿ]] ಮರಗಳು ನಿಲಂಬೂರ್ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತವೆ. ಅರಣ್ಯದಲ್ಲಿ ಬಿದಿರಿನ ಬೆಟ್ಟಗಳು ವ್ಯಾಪಕವಾಗಿ ಕಂಡುಬರುತ್ತವೆ. ಜಿಲ್ಲೆಯಲ್ಲಿನ ಕರಿಂಪುಳ್ಳ ವನ್ಯಜೀವಿ ಅಭಯಾರಣ್ಯವು ರಾಜ್ಯದ ಅತಿದೊಡ್ಡ ವನ್ಯಜೀವಿ ಅಭಯಾರಣ್ಯವಾಗಿದೆ.<ref>{{cite web |url=https://www.thehindu.com/news/national/kerala/karimpuzha-sanctuary-comes-into-being/article31984618.ece |website=The Hindu |title=ಕರಿಂಪುಳ್ಳ ವನ್ಯಜೀವಿ ಅಭಯಾರಣ್ಯ |access-date=5 July 2020 |date=3 July 2020 |archive-date=5 July 2020 |archive-url=https://web.archive.org/web/20200705053212/https://www.thehindu.com/news/national/kerala/karimpuzha-sanctuary-comes-into-being/article31984618.ece |url-status=live }}</ref><ref>{{cite web |url=http://touristinindia.com/new-amarambalam-wildlife-sanctuary/ |website=touristinindia.com |title=ಕೇರಳದ ಅತಿದೊಡ್ಡ ವನ್ಯಜೀವಿ ಅಭಯಾರಣ್ಯ |date=19 February 2018 |access-date=5 July 2020 |archive-date=5 July 2020 |archive-url=https://web.archive.org/web/20200705054712/http://touristinindia.com/new-amarambalam-wildlife-sanctuary/ |url-status=live }}</ref> [[ಕರಿಂಪುಳ್ಳ ವನ್ಯಜೀವಿ ಅಭಯಾರಣ್ಯ]]ದ ಭಾಗವಾಗಿರುವ [[ಹೊಸ ಅಮರಂಬಲಂ ಮೀಸಲು ಅರಣ್ಯ]]ವು ವೈವಿಧ್ಯಮಯ ಪ್ರಾಣಿಗಳನ್ನು ಹೊಂದಿದೆ. ಆನೆಗಳು, ಜಿಂಕೆಗಳು, ಹುಲಿಗಳು, ಕೋತಿಗಳು, ಕರಡಿಗಳು, ಹಂದಿಗಳು, ಮೊಲಗಳು, ಹಕ್ಕಿಗಳು, ಮತ್ತು ಸರೀಸೃಪಗಳು ಸೇರಿದಂತೆ ವಿವಿಧ ಪ್ರಾಣಿಗಳು ಅರಣ್ಯಗಳಲ್ಲಿ ಕಂಡುಬರುತ್ತವೆ. ಜೇನು, ಔಷಧೀಯ ಗಿಡಮೂಲಿಕೆಗಳು, ಮತ್ತು ಮಸಾಲೆಗಳಂತಹ ಅರಣ್ಯ ಉತ್ಪನ್ನಗಳನ್ನು ಸಹ ಇಲ್ಲಿ ಸಂಗ್ರಹಿಸಲಾಗುತ್ತದೆ. ನೆಡುಂಕಾಯಂ ಮಳೆಕಾಡು ಸಹ ನಿಲಂಬೂರ್ ಕಣಿವೆಯಲ್ಲಿ ಅಸ್ತಿತ್ವದಲ್ಲಿದೆ. ಅರಣ್ಯಗಳನ್ನು ಎರಡು ವಿಭಾಗಗಳಿಂದ ರಕ್ಷಿಸಲಾಗಿದೆ - ನಿಲಂಬೂರ್ ಉತ್ತರ ಮತ್ತು ನಿಲಂಬೂರ್ ದಕ್ಷಿಣ. [[ಕೇರಳ ಅರಣ್ಯ ಸಂಶೋಧನಾ ಸಂಸ್ಥೆ]] ನಿಲಂಬೂರ್ನಲ್ಲಿ ಉಪ-ಕೇಂದ್ರವನ್ನು ಹೊಂದಿದೆ. ಜಿಲ್ಲೆಯ ಕರಾವಳಿ ಮತ್ತು ಒಳನಾಡಿನ ಪ್ರದೇಶಗಳಲ್ಲಿ ಕಂಡುಬರುವ ಪ್ರಮುಖ ಮೀನುಗಳಲ್ಲಿ [[ಸೀಗಡಿ]], [[ಎಣ್ಣೆ ಸಾರ್ಡಿನ್|ಆಯಿಲ್ ಸಾರ್ಡಿನ್]], [[ಜೆರೆಸ್ ಸಬ್ಫಾಸಿಯೇಟಸ್|ಸಿಲ್ವರ್ ಬೆಲ್ಲಿ]], [[ಶಾರ್ಕ್]], [[ಕ್ಯಾಟ್ಫಿಶ್]], [[ಮ್ಯಾಕೆರೆಲ್]], [[ಸ್ಕೇಟ್ (ಮೀನು)|ಸ್ಕೇಟ್]], ಚೆಂಬ, ಸೋಲ್ ಮೀನು, [[ಇಂಡೋ-ಪೆಸಿಫಿಕ್ ಕಿಂಗ್ ಮ್ಯಾಕೆರೆಲ್|ಸೀರ್ ಮೀನು]], ಮತ್ತು [[ರಿಬ್ಬನ್ಫಿಶ್]] ಸೇರಿವೆ.<ref name="geographymalappuram"/>
ನಿಲಂಬೂರ್ ತೇಗವು ತನ್ನದೇ ಆದ [[ಭೌಗೋಳಿಕ ಸೂಚಕ|GI]] ಟ್ಯಾಗ್ ಅನ್ನು ಪಡೆದ ಮೊದಲ ಅರಣ್ಯ ಉತ್ಪನ್ನವಾಗಿದೆ.<ref>{{Cite news|title=ಅರಣ್ಯ ಉತ್ಪನ್ನಕ್ಕೆ ಮೊದಲ GI ಟ್ಯಾಗ್ ನಿಲಂಬೂರ್ ತೇಗಕ್ಕೆ|url=https://timesofindia.indiatimes.com/city/kochi/first-for-forest-produce-gi-tag-for-nilambur-teak/articleshow/62320961.cms|last=ಟಿ ರಾಮವರ್ಮನ್|date=1 January 2018|access-date=30 October 2020|work=[[The Times of India]]|archive-date=24 October 2020|archive-url=https://web.archive.org/web/20201024042425/https://timesofindia.indiatimes.com/city/kochi/first-for-forest-produce-gi-tag-for-nilambur-teak/articleshow/62320961.cms|url-status=live}}</ref> [[ತಿರೂರ್]]ನಲ್ಲಿ ಕಂಡುಬರುವ ಒಂದು ರೀತಿಯ [[ವೀಳ್ಯದೆಲೆ]]ಯಾದ ''ತಿರೂರ್ ವೆಟ್ಟಿಲ'' ಸಹ [[ಭೌಗೋಳಿಕ ಸೂಚಕ|GI]] ಟ್ಯಾಗ್ ಅನ್ನು ಪಡೆದುಕೊಂಡಿದೆ.<ref>{{cite news |url=https://www.thehindu.com/news/national/kerala/tirur-vettila-obtains-gi-tag/article29214761.ece |website=The Hindu |title=ತಿರೂರ್ ವೆಟ್ಟಿಲ GI ಟ್ಯಾಗ್ ಪಡೆಯುತ್ತದೆ |date=21 August 2019 |access-date=19 April 2020 |archive-date=7 November 2020 |archive-url=https://web.archive.org/web/20201107231046/https://www.thehindu.com/news/national/kerala/tirur-vettila-obtains-gi-tag/article29214761.ece |url-status=live |last1=ಮುರಿಂಗತೇರಿ |first1=ಮಿನಿ }}</ref> ಜಿಲ್ಲೆಯ ಕರಾವಳಿ ಪ್ರದೇಶದಲ್ಲಿರುವ [[ವಲ್ಲಿಕುಣ್ಣು]]ನಲ್ಲಿ ಸುಮಾರು 50 ಎಕರೆ [[ಉಪ್ಪುನೀರಿನ ಕಾಡುಗಳು|ಉಪ್ಪುನೀರಿನ ಕಾಡು]] ಕಂಡುಬರುತ್ತದೆ. [[ಉಪ್ಪುನೀರಿನ ಕಾಡುಗಳು]] ಇತರ ಕರಾವಳಿ ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ಕಂಡುಬರುತ್ತವೆ. [[ಕಡಲುಂಡಿ ಪಕ್ಷಿ ಧಾಮ]]ವು ಜಿಲ್ಲೆಯ [[ವಲ್ಲಿಕುಣ್ಣು]] ಗ್ರಾಮ ಪಂಚಾಯತ್ನಲ್ಲಿದೆ.<ref>{{cite web |title=ಮಲಪ್ಪುರಂನ ಸಸ್ಯ ಮತ್ತು ಪ್ರಾಣಿ ಸಂಪತ್ತು |url=https://malappuram.nic.in/about-district/ |access-date=24 November 2019 |website=malappuram.nic.in |archive-date=10 February 2020 |archive-url=https://web.archive.org/web/20200210004256/https://malappuram.nic.in/about-district/ |url-status=live }}</ref> ಕಡಲುಂಡಿ-ವಲ್ಲಿಕುಣ್ಣು ಸಮುದಾಯ ಮೀಸಲು ಕೇರಳದ ಮೊದಲ [[ಸಂರಕ್ಷಣಾ ಮೀಸಲುಗಳು ಮತ್ತು ಸಮುದಾಯ ಮೀಸಲುಗಳು|ಸಮುದಾಯ ಮೀಸಲು]] ಆಗಿದೆ. ಇದನ್ನು ಈಗ ಪ್ರವಾಸೋದ್ಯಮ ಕೇಂದ್ರವಾಗಿ ಘೋಷಿಸಲಾಗಿದೆ.<ref name="Vallikkunnu">{{cite web |url=https://www.onmanorama.com/travel/kerala/2018/04/04/kadalundi-vallikunnu-community-reserve-ecotourism-centre.html |title=ಕಡಲುಂಡಿ-ವಲ್ಲಿಕುಣ್ಣು ಸಮುದಾಯ ಮೀಸಲು |website=onmanorama.com |date=4 April 2018 |access-date=25 July 2020 |archive-date=25 July 2020 |archive-url=https://web.archive.org/web/20200725065854/https://www.onmanorama.com/travel/getting-about-kerala/kozhikode/2018/04/04/kadalundi-vallikunnu-community-reserve-ecotourism-centre.amp.html |url-status=live }}</ref> [[ಪುರತ್ತೂರ್]]ನ ಪದಿಂಜಾರೆಕರ ಮುಖಜಭೂಮಿಯಲ್ಲಿ 2010 ರಲ್ಲಿ ಒಂದು ಪಕ್ಷಿ ಧಾಮವನ್ನು ಪ್ರಸ್ತಾಪಿಸಲಾಯಿತು.<ref>{{cite news |last1=ಸುಧಿ |first1=ಕೆ. ಎಸ್. |title=ಹಕ್ಕಿಗಳಿಗೆ ರಾಜ್ಯದಲ್ಲಿ 12 ಹೆಚ್ಚುವರಿ ಆಶ್ರಯಗಳು |url=https://www.thehindu.com/news/national/Birds-get-12-more-havens-in-State/article16567247.ece/ |access-date=7 April 2021 |work=The Hindu |date=15 March 2010|archive-date=13 September 2021 |archive-url=https://web.archive.org/web/20210913063337/https://www.thehindu.com/news/national/Birds-get-12-more-havens-in-State/article16567247.ece/amp/ |url-status=live }}</ref> [[ತಿರುನವಾಯ]] ತನ್ನ ತಾವರೆ ಹೊಲಗಳಿಗೆ ಹೆಸರುವಾಸಿಯಾಗಿದೆ.<ref>{{Cite news|title=ತಿರುನವಾಯದ ತಾವರೆ ಹೊಲಗಳು|url=https://www.onmanorama.com/news/kerala/2018/09/03/lotus-farming-muslim-kerala-hindu.html|last=ಅನುಪಮಾ ಮಿಲಿ|date=4 September 2018|access-date=26 July 2020|work=Malayala Manorama|archive-date=26 July 2020|archive-url=https://web.archive.org/web/20200726065643/https://www.onmanorama.com/news/kerala/2018/09/03/lotus-farming-muslim-kerala-hindu.html|url-status=live}}</ref>
== ಆಡಳಿತ ==
{{Main|ಮಲಪ್ಪುರಂ ಜಿಲ್ಲೆಯ ಆಡಳಿತ}}
[[File:Malappuram DownHill Aerial View.jpg|left|thumb|[[ಮಲಪ್ಪುರಂ]], ಜಿಲ್ಲೆಯ ಆಡಳಿತ ಪ್ರಧಾನ ಕಚೇರಿ]]
=== ಆದಾಯ ಆಡಳಿತ ===
ಜಿಲ್ಲಾ ಆಡಳಿತದ ಪ್ರಧಾನ ಕಚೇರಿಯಾದ ಕಲೆಕ್ಟರೇಟ್ [[ಮಲಪ್ಪುರಂ]]ನ ಅಪ್ಹಿಲ್ನಲ್ಲಿದೆ. ಜಿಲ್ಲಾ ಆಡಳಿತವು [[ಜಿಲ್ಲಾ ಕಲೆಕ್ಟರ್]]ರ ನೇತೃತ್ವದಲ್ಲಿರುತ್ತದೆ. ಅವರಿಗೆ ಸಾಮಾನ್ಯ ವಿಷಯಗಳು, ಭೂಸ್ವಾಧೀನ, ಆದಾಯ ವಸೂಲಿ, ಭೂ ಸುಧಾರಣೆ, ಮತ್ತು ಚುನಾವಣೆಗಳಿಗೆ ಜವಾಬ್ದಾರಿಯುತವಾದ ಐದು ಉಪ ಕಲೆಕ್ಟರ್ಗಳು ಸಹಾಯ ಮಾಡುತ್ತಾರೆ. ಡೆಪ್ಯುಟಿ ಕಲೆಕ್ಟರ್ (ಜನರಲ್) ಹುದ್ದೆಯಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಎಲ್ಲಾ ಆಡಳಿತ ಚಟುವಟಿಕೆಗಳಲ್ಲಿ ಜಿಲ್ಲಾ ಕಲೆಕ್ಟರ್ಗೆ ಬೆಂಬಲವನ್ನು ಒದಗಿಸುತ್ತಾರೆ.<ref>{{Cite web|url=https://malappuram.nic.in/collectrate/|title=ಕಲೆಕ್ಟರೇಟ್ ಮಲಪ್ಪುರಂ|access-date=3 October 2020|website=ಮಲಪ್ಪುರಂ ಜಿಲ್ಲೆಯ ಅಧಿಕೃತ ವೆಬ್ಸೈಟ್|archive-date=25 October 2020|archive-url=https://web.archive.org/web/20201025100613/https://malappuram.nic.in/collectrate/|url-status=live}}</ref>
ಮಲಪ್ಪುರಂ ಆದಾಯ ಜಿಲ್ಲೆಯು ಎರಡು ವಿಭಾಗಗಳನ್ನು ಹೊಂದಿದೆ - ತಿರೂರ್ ಮತ್ತು ಪೆರಿಂತಲ್ಮನ್ನ. ಜಿಲ್ಲೆಯನ್ನು ಮತ್ತಷ್ಟು 138 ಗ್ರಾಮಗಳಾಗಿ ವಿಂಗಡಿಸಲಾಗಿದೆ, ಅವು ಒಟ್ಟಾಗಿ 7 ಉಪ-ಜಿಲ್ಲೆಗಳನ್ನು (ತಾಲೂಕುಗಳನ್ನು) ರೂಪಿಸುತ್ತವೆ.<ref>{{cite web
|url = https://malappuram.nic.in/tehsil/
|website = malappuram.nic.in
|title = ಮಲಪ್ಪುರಂ ಜಿಲ್ಲೆಯ ತಾಲೂಕುಗಳು
|access-date = 23 November 2019
|archive-date = 19 February 2020
|archive-url = https://web.archive.org/web/20200219085134/https://malappuram.nic.in/tehsil/
|url-status = live
}}</ref><ref name="admn_mpm">{{cite web
| title= ಮಲಪ್ಪುರಂ ಜಿಲ್ಲೆಯ ಆಡಳಿತ ವಿಭಾಗಗಳು
| url= https://malappuram.nic.in/administrative-setup/
| access-date= 23 November 2019
| website= malappuram.nic.in
| archive-date= 24 August 2019
| archive-url= https://web.archive.org/web/20190824213421/https://malappuram.nic.in/administrative-setup/
| url-status= live
}}</ref>
==== ಆದಾಯ ವಿಭಾಗಗಳು ====
ಜಿಲ್ಲೆಯಲ್ಲಿ ಎರಡು ಆದಾಯ ವಿಭಾಗಗಳಿವೆ: [[ಕೇರಳದ ಆದಾಯ ವಿಭಾಗಗಳ ಪಟ್ಟಿ|ಪೆರಿಂತಲ್ಮನ್ನ]] ಮತ್ತು [[ಕೇರಳದ ಆದಾಯ ವಿಭಾಗಗಳ ಪಟ್ಟಿ|ತಿರೂರ್]]. [[ಪೊನ್ನಾನಿ ತಾಲೂಕು|ಪೊನ್ನಾನಿ]], [[ತಿರೂರ್ ತಾಲೂಕು|ತಿರೂರ್]], [[ತಿರೂರಂಗಡಿ]], ಮತ್ತು [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]] ಉಪ-ಜಿಲ್ಲೆಗಳು ತಿರೂರ್ ಆದಾಯ ವಿಭಾಗದಲ್ಲಿ ಸೇರಿವೆ, ಆದರೆ ಉಳಿದ [[ನಿಲಂಬೂರ್ ತಾಲೂಕು|ನಿಲಂಬೂರ್]], [[ಇರನಾಡ್ ತಾಲೂಕು|ಇರನಾಡ್]] ಮತ್ತು [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]] ಸೇರಿ ಪೆರಿಂತಲ್ಮನ್ನ ಆದಾಯ ವಿಭಾಗವನ್ನು ರೂಪಿಸುತ್ತವೆ. ಆದಾಯ ವಿಭಾಗೀಯ ಕಚೇರಿಯು ಆದಾಯ ವಿಭಾಗದ [[ಉಪ ಕಲೆಕ್ಟರ್]] / ಆದಾಯ ವಿಭಾಗೀಯ ಅಧಿಕಾರಿ (RDO) ನೇತೃತ್ವದಲ್ಲಿರುತ್ತದೆ, ಅವರು ಆದಾಯ ವಿಭಾಗದ [[ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್]] ಆಗಿರುತ್ತಾರೆ. ಆದಾಯ ವಿಭಾಗೀಯ ಕಚೇರಿಗಳು ಕ್ರಮವಾಗಿ [[ತಿರೂರ್]] ಮತ್ತು [[ಪೆರಿಂತಲ್ಮನ್ನ]]ದಲ್ಲಿವೆ.
==== ತಾಲೂಕುಗಳು ====
ತಾಲೂಕು (ಉಪ-ಜಿಲ್ಲೆ) ಒಂದು ಜಿಲ್ಲೆಯೊಳಗಿನ ಆಡಳಿತ ವಿಭಾಗವಾಗಿದೆ. ಮಲಪ್ಪುರಂ ಜಿಲ್ಲೆಯಲ್ಲಿ 7 ತಾಲೂಕುಗಳಿವೆ, ಮತ್ತು ಪ್ರತಿ ತಾಲೂಕು ಭೂ ಆದಾಯ ಆಡಳಿತ ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಕಾರ್ಯಗಳಿಗೆ ಜವಾಬ್ದಾರನಾದ [[ತಹಸೀಲ್ದಾರ್]]ನ ನೇತೃತ್ವದಲ್ಲಿರುತ್ತದೆ.
[[ನಿಲಂಬೂರ್#ನಿಲಂಬೂರ್ ತಾಲೂಕು|ನಿಲಂಬೂರ್]] ಕೇರಳದ ಅತಿದೊಡ್ಡ ಉಪ-ಜಿಲ್ಲೆ ([[ತಾಲೂಕು]]) ಆಗಿದೆ. [[ಪೊನ್ನಾನಿ ತಾಲೂಕು|ಪೊನ್ನಾನಿ]], [[ತಿರೂರ್ ತಾಲೂಕು|ತಿರೂರ್]], ಮತ್ತು [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]] ಉಪ-ಜಿಲ್ಲೆಗಳು ಕರಾವಳಿ ಪ್ರದೇಶದಲ್ಲಿವೆ. [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]], [[ಇರನಾಡ್ ತಾಲೂಕು|ಇರನಾಡ್]], ಮತ್ತು [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]] ಮಧ್ಯ ಪ್ರದೇಶದಲ್ಲಿವೆ, ಆದರೆ [[ನಿಲಂಬೂರ್#ನಿಲಂಬೂರ್ ತಾಲೂಕು|ನಿಲಂಬೂರ್]] ಉಪ-ಜಿಲ್ಲೆಯು ಎತ್ತರದ ಪ್ರದೇಶದಲ್ಲಿದೆ. ಜಿಲ್ಲಾ-ಮಟ್ಟದ ಆಡಳಿತವನ್ನು ಸಂಘಟಿಸಲು ಮಲಪ್ಪುರಂನಲ್ಲಿ ಸಿವಿಲ್ ಸ್ಟೇಷನ್ ಜೊತೆಗೆ, [[ತಹಸೀಲ್|ತಾಲೂಕು]]-ಮಟ್ಟದ ಆಡಳಿತ ಚಟುವಟಿಕೆಗಳನ್ನು ಸಂಘಟಿಸಲು [[ಮಂಜೇರಿ]], [[ನಿಲಂಬೂರ್]], [[ಪೆರಿಂತಲ್ಮನ್ನ]], [[ತಿರೂರಂಗಡಿ]], [[ತಾನೂರು, ಮಲಪ್ಪುರಂ|ತಾನೂರು]], [[ತಿರೂರ್]], [[ಕುಟ್ಟಿಪುರಂ]], ಮತ್ತು [[ಪೊನ್ನಾನಿ]]ಗಳಲ್ಲಿ ಮಿನಿ-ಸಿವಿಲ್ ಸ್ಟೇಷನ್ಗಳಿವೆ.<ref>{{cite web | url=https://malappuram.nic.in/en/tehsil/#:~:text=For%20administrative%20purpose%20the%20district,office%20is%20headed%20by%20Tahsildar | title=ತಹಸೀಲ್ಗಳು / ತಾಲೂಕುಗಳು | ಮಲಪ್ಪುರಂಗೆ ಸ್ವಾಗತ | ಭಾರತ }}</ref>
[[File:Subdistricts of Malappuram (August 2020).svg|thumb|left|ಮಲಪ್ಪುರಂನಲ್ಲಿನ ತಾಲೂಕುಗಳು]]
{| align="left" class="toccolours" cellspacing="1" cellpadding="1" style="margin-right: .5em; margin-top: .4em; font-size: 90%"
|-
|- bgcolor="#cccccc" valign="top"
!ಉಪ-ಜಿಲ್ಲೆ<br/>(''ತಾಲೂಕು'')
!ವಿಸ್ತೀರ್ಣ<br/>(ಚದರ ಕಿಮೀ ನಲ್ಲಿ)
!ಒಟ್ಟು ಜನಸಂಖ್ಯೆ<br/>(2011)
!ಗ್ರಾಮಗಳು
!ನಗರೀಕರಣ<br/>(2011)
|-
| [[ಪೊನ್ನಾನಿ ತಾಲೂಕು|ಪೊನ್ನಾನಿ]] || 200 || 379,798 || 11 || 57.36%
|-
| [[ತಿರೂರ್ ತಾಲೂಕು|ತಿರೂರ್]] || 448 || 928,672 || 30 || 48.73%
|-
| [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]] || 290* || 631,906 || 17 || 90.40%
|-
| [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]] || 258* || 410,577 || 12 || 43.10%
|-
| [[ಇರನಾಡ್ ತಾಲೂಕು|ಇರನಾಡ್]] || 491* || 581,512 || 23 || 37.93%
|-
| [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]] || 506 || 606,396 || 24 || 21.73%
|-
| [[ನಿಲಂಬೂರ್#ನಿಲಂಬೂರ್ ತಾಲೂಕು|ನಿಲಂಬೂರ್]] || 1,343 || 574,059 || 21 || 8.08%
|-
| style="font-size: 80%" colspan=5 bgcolor="#cceeff" align="center"| ಮೂಲಗಳು: [[ಭಾರತದ ಜನಗಣತಿ 2011]],<ref name="demomalapuram">{{cite web |url= http://censusindia.gov.in/2011census/dchb/3205_PART_B_MALAPPURAM.pdf |website=censusindia.gov.in |title= ಮಲಪ್ಪುರಂನ ತಾಲೂಕು-ವಾರು ಜನಸಂಖ್ಯಾಶಾಸ್ತ್ರ |access-date=19 April 2020 |publisher=Directorate of Census Operations, Kerala |pages= 161–193 |archive-date=27 November 2019 |archive-url= https://web.archive.org/web/20191127005248/http://censusindia.gov.in/2011census/dchb/3205_PART_B_MALAPPURAM.pdf |url-status=live}}</ref> ಮಲಪ್ಪುರಂ ಜಿಲ್ಲೆಯ ಅಧಿಕೃತ ವೆಬ್ಸೈಟ್<ref name = Villages_Malappuram>{{cite web |title=ಮಲಪ್ಪುರಂನ ಗ್ರಾಮಗಳು |url = https://malappuram.nic.in/village-panchayats/ |website = malappuram.nic.in |access-date=25 November 2019 |archive-date = 24 August 2019 |archive-url = https://web.archive.org/web/20190824213539/https://malappuram.nic.in/village-panchayats/ |url-status = live }}</ref>
|}
==== ಆದಾಯ ಗ್ರಾಮಗಳು ====
{{See also|ಮಲಪ್ಪುರಂ ಜಿಲ್ಲೆಯ ಗ್ರಾಮಗಳ ಪಟ್ಟಿ|ಮಲಪ್ಪುರಂ ಜಿಲ್ಲೆಯ ದೇಶಗಳ ಪಟ್ಟಿ (1981)}}
[[ಆದಾಯ ಗ್ರಾಮ|ಆದಾಯ ಗ್ರಾಮಗಳು]] ತಾಲೂಕುಗಳ ಉಪವಿಭಾಗವಾಗಿದ್ದು, ಜಿಲ್ಲೆಯ ಆದಾಯ ಆಡಳಿತದ ಅತ್ಯಂತ ಕೆಳಮಟ್ಟದ ಸಂಸ್ಥೆಯಾಗಿದೆ. ಪ್ರತಿ ತಾಲೂಕು ತನ್ನ ವ್ಯಾಪ್ತಿಯಲ್ಲಿ ಹಲವಾರು ಗ್ರಾಮಗಳನ್ನು ಒಳಗೊಂಡಿದೆ. ಮಲಪ್ಪುರಂ ಜಿಲ್ಲೆಯಲ್ಲಿ 138 ಆದಾಯ ಗ್ರಾಮಗಳಿವೆ. ಆದಾಯ ಗ್ರಾಮಗಳನ್ನು ಭೂ ಆದಾಯ ವಿಷಯಗಳಿಗಾಗಿ ಮತ್ತಷ್ಟು ದೇಶಗಳಾಗಿ ವಿಂಗಡಿಸಲಾಗಿದೆ.
* [[ಮಲಪ್ಪುರಂ ಜಿಲ್ಲೆಯ ಗ್ರಾಮಗಳ ಪಟ್ಟಿ]]
* [[ಮಲಪ್ಪುರಂ ಜಿಲ್ಲೆಯ ದೇಶಗಳ ಪಟ್ಟಿ (1981)|ಮಲಪ್ಪುರಂ ಜಿಲ್ಲೆಯ ದೇಶಗಳ ಪಟ್ಟಿ]]
{{clear}}
=== ಜಿಲ್ಲಾ ಯೋಜನಾ ಸಮಿತಿ ===
[[ಭಾರತದಲ್ಲಿ ಜಿಲ್ಲಾ ಯೋಜನಾ ಸಮಿತಿಗಳು|ಮಲಪ್ಪುರಂನ ಜಿಲ್ಲಾ ಯೋಜನಾ ಸಮಿತಿಯು]] ಪುರಸಭೆಗಳಿಂದ ಇಬ್ಬರು ಸದಸ್ಯರು, ಜಿಲ್ಲಾ ಪಂಚಾಯತ್ನಿಂದ 10 ಸದಸ್ಯರು, ಮತ್ತು ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಜೊತೆಗೆ ಒಬ್ಬ ಪಂಚಾಯತ್-ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಿದೆ. ಅಧ್ಯಕ್ಷ ಸ್ಥಾನವು ಜಿಲ್ಲಾ ಪಂಚಾಯತ್ನ ಪದನಿಮಿತ್ತ ಸದಸ್ಯರಿಗೆ ಮೀಸಲಾಗಿದೆ ಮತ್ತು ಕಾರ್ಯದರ್ಶಿ ಸ್ಥಾನವು ಜಿಲ್ಲಾ ಕಲೆಕ್ಟರ್ನ ಪದನಿಮಿತ್ತ ಸದಸ್ಯರಿಗೆ ಮೀಸಲಾಗಿದೆ.<ref>{{Cite web|url=http://sec.kerala.gov.in/index.php/Content/index/lsgd|title=ಜಿಲ್ಲಾ ಯೋಜನಾ ಸಮಿತಿ, ಮಲಪ್ಪುರಂ|access-date=7 November 2020|website=SEC Kerala|archive-date=13 November 2020|archive-url=https://web.archive.org/web/20201113145804/http://sec.kerala.gov.in/index.php/Content/index/lsgd|url-status=live}}</ref>
=== ನ್ಯಾಯಾಂಗ ===
[[File:Perinthalmanna Munsif Court.png|thumbnail|[[ಪೆರಿಂತಲ್ಮನ್ನ]]ದಲ್ಲಿನ ನ್ಯಾಯಾಲಯದ ಸಂಕೀರ್ಣ.]]
ಜಿಲ್ಲೆಯ ನ್ಯಾಯಾಂಗ ಪ್ರಧಾನ ಕಚೇರಿಯು [[ಮಂಜೇರಿ]]ಯಲ್ಲಿದೆ. ಮಂಜೇರಿ, [[ಮಲಪ್ಪುರಂ]], [[ತಿರೂರ್]], [[ಪೆರಿಂತಲ್ಮನ್ನ]], [[ಪರಪ್ಪನಂಗಾಡಿ]], [[ಪೊನ್ನಾನಿ]], ಮತ್ತು [[ನಿಲಂಬೂರ್]] ಸೇರಿದಂತೆ ಮಂಜೇರಿ ನ್ಯಾಯಾಂಗ ಜಿಲ್ಲೆಯಡಿಯಲ್ಲಿ 24 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತವೆ.<ref name="district_police">{{cite web |url=https://districts.ecourts.gov.in/malappuram |website=districts.ecourts.gov.in |title=ಮಲಪ್ಪುರಂನ ನ್ಯಾಯಾಂಗ ಆಡಳಿತ |access-date=17 June 2020 |archive-date=17 June 2020 |archive-url=https://web.archive.org/web/20200617045439/https://districts.ecourts.gov.in/malappuram |url-status=live}}</ref>
ಜೂನ್ 16, 1969 ರಂದು ಮಲಪ್ಪುರಂ ಜಿಲ್ಲೆಯ ಸ್ಥಾಪನೆಯ ನಂತರ, ಮೇ 25, 1970 ರಂದು ಕೋಝಿಕ್ಕೋಡ್ನಲ್ಲಿ ಜಿಲ್ಲಾ ನ್ಯಾಯಾಲಯವು ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ನಂತರ, ಫೆಬ್ರವರಿ 1, 1974 ರಂದು, ನ್ಯಾಯಾಲಯವನ್ನು ಮಂಜೇರಿ ಕೋರ್ಟ್ ಕಾಂಪ್ಲೆಕ್ಸ್ಗೆ ಸ್ಥಳಾಂತರಿಸಲಾಯಿತು.
ಮಂಜೇರಿ ನ್ಯಾಯಾಂಗ ಜಿಲ್ಲೆಯಲ್ಲಿ, ಪ್ರಸ್ತುತ ಮಂಜೇರಿ, ಮಲಪ್ಪುರಂ, ತಿರೂರ್, ಪೆರಿಂತಲ್ಮನ್ನ, ಪರಪ್ಪನಂಗಾಡಿ, ಪೊನ್ನಾನಿ, ತಿರೂರ್, ಮತ್ತು ನಿಲಂಬೂರ್ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 24 ಕಾರ್ಯನಿರ್ವಹಿಸುವ ನ್ಯಾಯಾಲಯಗಳಿವೆ. ಮಲಪ್ಪುರಂನ ನ್ಯಾಯಾಂಗ ಪ್ರಧಾನ ಕಚೇರಿಯು ಮಂಜೇರಿಯಲ್ಲಿದೆ.
ಜಿಲ್ಲೆಯು ಮೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳು, ಎರಡು [[ಕುಟುಂಬ ನ್ಯಾಯಾಲಯ#ಭಾರತ|ಕುಟುಂಬ ನ್ಯಾಯಾಲಯಗಳು]] (ಒಂದು ಮಲಪ್ಪುರಂನಲ್ಲಿ ಮತ್ತು ಇನ್ನೊಂದು ತಿರೂರ್ನಲ್ಲಿ), ಹಾಗೆಯೇ ಎರಡು ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಗಳನ್ನು (ಒಂದು [[ಮಂಜೇರಿ]]ಯಲ್ಲಿ ಮತ್ತು ಇನ್ನೊಂದು ತಿರೂರ್ನಲ್ಲಿ) ಹೊಂದಿದೆ. ಇದಲ್ಲದೆ, ಎರಡು ಉಪ ನ್ಯಾಯಾಲಯಗಳಿವೆ - ಒಂದು [[ಮಂಜೇರಿ]]ಯಲ್ಲಿ ಮತ್ತು ಇನ್ನೊಂದು [[ತಿರೂರ್]]ನಲ್ಲಿ. ಜಿಲ್ಲೆಯು ಎರಡು ಮುನ್ಸಿಫ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳನ್ನು ಸಹ ಹೊಂದಿದೆ, ಒಂದು ಪೊನ್ನಾನಿಯಲ್ಲಿ ಮತ್ತು ಇನ್ನೊಂದು ಪೆರಿಂತಲ್ಮನ್ನದಲ್ಲಿ. ಅಂತಿಮವಾಗಿ, ಮಲಪ್ಪುರಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಒಂಬತ್ತು [[ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು|ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿವೆ]].
=== ಪೊಲೀಸ್ ===
ಮಲಪ್ಪುರಂ ಜಿಲ್ಲಾ ಪೊಲೀಸ್, [[ಕೇರಳ ಪೊಲೀಸ್]]ನ ಒಂದು [[ಪೊಲೀಸ್ ಜಿಲ್ಲೆ]]ಯಾಗಿದ್ದು, ಜಿಲ್ಲೆಯೊಳಗೆ ಕಾನೂನು ಜಾರಿ ಮತ್ತು ತನಿಖೆಗಳ ಕಾರ್ಯವನ್ನು ಹೊಂದಿದೆ. ಜಿಲ್ಲಾ ಪೊಲೀಸ್ ಕಚೇರಿಯು [[ಮಲಪ್ಪುರಂ]]ನಲ್ಲಿದೆ, ಮತ್ತು '''ಜಿಲ್ಲಾ ಪೊಲೀಸ್ ಮುಖ್ಯಸ್ಥ (DPC)''' ನೇತೃತ್ವದಲ್ಲಿದೆ, ಅವರು [[ಪೊಲೀಸ್ ಅಧೀಕ್ಷಕ]] (SP) ಹುದ್ದೆಯಲ್ಲಿರುತ್ತಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಆರು ಪೊಲೀಸ್ ಉಪ-ವಿಭಾಗಗಳು ಮತ್ತು 36 ಪೊಲೀಸ್ ಠಾಣೆಗಳಿವೆ. ಈ ಪೊಲೀಸ್ ಉಪ-ವಿಭಾಗಗಳ ಪ್ರಧಾನ ಕಚೇರಿಗಳು ಈ ಕೆಳಗಿನ ಪ್ರದೇಶಗಳಲ್ಲಿವೆ: [[ಮಲಪ್ಪುರಂ]], [[ಕೊಂಡೊಟ್ಟಿ]], [[ಪೆರಿಂತಲ್ಮನ್ನ]], [[ತಿರೂರ್]], [[ತಾನೂರು, ಮಲಪ್ಪುರಂ|ತಾನೂರು]], ಮತ್ತು [[ನಿಲಂಬೂರ್]]. ಪ್ರತಿ ಪೊಲೀಸ್ ಉಪ-ವಿಭಾಗವು [[ಪೊಲೀಸ್ ಉಪಾಧೀಕ್ಷಕ]] (DySP) ನೇತೃತ್ವದಲ್ಲಿರುತ್ತದೆ, ಮತ್ತು ಪ್ರತಿ ಪೊಲೀಸ್ ಠಾಣೆಯು [[ಠಾಣಾಧಿಕಾರಿ]] (SHO) ನೇತೃತ್ವದಲ್ಲಿರುತ್ತದೆ, ಅವರು [[ಪೊಲೀಸ್ ಇನ್ಸ್ಪೆಕ್ಟರ್]] ಹುದ್ದೆಯಲ್ಲಿರುತ್ತಾರೆ.
ಮಲಪ್ಪುರಂ ಪೊಲೀಸ್ ಜಿಲ್ಲೆ, ಪಾಲಕ್ಕಾಡ್, ತೃಶೂರ್ ಸಿಟಿ, ಮತ್ತು ತೃಶೂರ್ ಗ್ರಾಮೀಣ ಪೊಲೀಸ್ ಜಿಲ್ಲೆಗಳ ಜೊತೆಗೆ, [[ಭಾರತದಲ್ಲಿ ಪೊಲೀಸ್ ಶ್ರೇಣಿಗಳು ಮತ್ತು ಚಿಹ್ನೆಗಳು#ರಾಜ್ಯ ಪೊಲೀಸ್ ಪಡೆಗಳು ಮತ್ತು ಅವುಗಳ ರಚನೆ|ತೃಶೂರ್ ರೇಂಜ್ ಪೊಲೀಸ್]]ನ ವ್ಯಾಪ್ತಿಗೆ ಬರುತ್ತದೆ.<ref>{{Cite web|url=https://keralapolice.gov.in/page/ranges|title=ತೃಶೂರ್ ರೇಂಜ್ ಪೊಲೀಸ್ ಜಿಲ್ಲೆಗಳು|access-date=2 November 2020|website=Kerala Police|archive-date=24 October 2020|archive-url=https://web.archive.org/web/20201024123751/https://keralapolice.gov.in/page/ranges|url-status=live}}</ref> ಜಿಲ್ಲಾ ಪೊಲೀಸ್ ಕಚೇರಿ, ಜಿಲ್ಲಾ ವಿಶೇಷ ಶಾಖೆ, ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋ, ಜಿಲ್ಲಾ 'ಸಿ' ಶಾಖೆ, ಮಾದಕ ದ್ರವ್ಯ ಕೋಶ, ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ, ಸೈಬರ್ ಕೋಶ, ಮಹಿಳಾ ಕೋಶ, ಮತ್ತು ದೂರಸಂಪರ್ಕ ಘಟಕವು [[ಮಲಪ್ಪುರಂ]]ನಲ್ಲಿವೆ. ಕರಾವಳಿ ಪೊಲೀಸ್ ಠಾಣೆಯು [[ಪೊನ್ನಾನಿ]]ಯಲ್ಲಿದ್ದರೆ, ಜಿಲ್ಲಾ ಸಶಸ್ತ್ರ ಮೀಸಲು ಶಿಬಿರವು ಪದಿನ್ಹಟ್ಟುಮ್ಮುರಿಯಲ್ಲಿದೆ. ಮಲಪ್ಪುರಂ ಪೊಲೀಸ್ನ ಸಂಚಾರ ಜಾರಿ ಘಟಕಗಳು ಮಲಪ್ಪುರಂ, ಮಂಜೇರಿ, [[ಕೊಂಡೊಟ್ಟಿ]], ಪೆರಿಂತಲ್ಮನ್ನ, ಮತ್ತು ತಿರೂರ್ನಲ್ಲಿ ಕೇಂದ್ರೀಕೃತವಾಗಿವೆ.<ref>{{cite web |url=https://malappuram.keralapolice.gov.in/wings/general-executive/district-police-office |website=malappuram.keralapolice.gov.in |title=ಮಲಪ್ಪುರಂ ಪೊಲೀಸ್ |access-date=17 June 2020 |archive-date=28 September 2020 |archive-url=https://web.archive.org/web/20200928184347/https://malappuram.keralapolice.gov.in/wings/general-executive/district-police-office |url-status=live}}</ref>
[[ಕೇರಳ ಪೊಲೀಸ್]]ನ ಅಡಿಯಲ್ಲಿ ಒಂದು ಸಶಸ್ತ್ರ ಪೊಲೀಸ್ ಬೆಟಾಲಿಯನ್ ಆಗಿರುವ [[ಮಲಬಾರ್ ಸ್ಪೆಷಲ್ ಪೊಲೀಸ್]]ನ (1884 ರಲ್ಲಿ ರಚಿಸಲಾಯಿತು) ಪ್ರಧಾನ ಕಚೇರಿಯು [[ಮಲಪ್ಪುರಂ]]ನಲ್ಲಿದೆ. ಇದು ರಾಜ್ಯದ ಅತ್ಯಂತ ಹಳೆಯ ಸಶಸ್ತ್ರ ಪೊಲೀಸ್ ಬೆಟಾಲಿಯನ್ ಆಗಿದೆ.<ref name="district_police" /> ಇದು ಜನಸಂದಣಿ ನಿಯಂತ್ರಣ, ಆಂತರಿಕ ಭದ್ರತೆ, ಗಲಭೆ ನಿಯಂತ್ರಣ, ಮತ್ತು VIP ಭದ್ರತೆಯಲ್ಲಿ ಸಿವಿಲ್ ಪೊಲೀಸ್ಗೆ ಸಹಾಯ ಮಾಡುತ್ತದೆ. ಅಗತ್ಯವಿದ್ದಾಗ ಇದನ್ನು ರಾಜ್ಯದ ಹೊರಗೆಯೂ ನಿಯೋಜಿಸಲಾಗುತ್ತದೆ.<ref>{{Cite web |title=ಮಲಬಾರ್ ಸ್ಪೆಷಲ್ ಪೊಲೀಸ್ (MSP), ಕೇರಳದ ಸಶಸ್ತ್ರ ಪೊಲೀಸ್ ಬೆಟಾಲಿಯನ್ಗಳು |url=https://keralapolice.gov.in/page/malabar-special-police |access-date=2026-01-02 |website=keralapolice.gov.in |language=en}}</ref>
== ಸ್ಥಳೀಯ ಸರ್ಕಾರಗಳು ==
ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ: ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ಗಳು (ಗ್ರಾಮೀಣ ಸ್ಥಳೀಯ ಸಂಸ್ಥೆಗಳು).
===ನಗರ ಸ್ಥಳೀಯ ಸಂಸ್ಥೆಗಳು===
ಜಿಲ್ಲೆಯು ನಗರ ಪ್ರದೇಶಗಳನ್ನು ([[town#India|ಶಾಸನಬದ್ಧ ಪಟ್ಟಣಗಳು]]) ಆಡಳಿತ ನಡೆಸಲು 12 ಪುರಸಭೆಗಳನ್ನು ಹೊಂದಿದೆ. ಪ್ರತಿ ಪುರಸಭೆಯು ತನ್ನದೇ ಆದ ನಿರ್ವಾಚಿತ ಮಂಡಳಿಯನ್ನು ಹೊಂದಿದ್ದು, ಸ್ಥಳೀಯ ಆಡಳಿತ, ನಗರ ಯೋಜನೆ, ಮತ್ತು ತನ್ನ ಅನುಗುಣವಾದ ವ್ಯಾಪ್ತಿಯಲ್ಲಿ ಅಗತ್ಯ ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರತಿ ಪುರಸಭೆಯು ಕೌನ್ಸಿಲರ್ಗಳಿಂದ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿರುತ್ತದೆ. ಈ ಪುರಸಭೆಗಳು 505 ವಾರ್ಡ್ಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದರಿಂದ ಐದು ವರ್ಷಗಳ ಅವಧಿಗೆ ಒಬ್ಬ ಕೌನ್ಸಿಲರ್ ಆಯ್ಕೆಯಾಗುತ್ತಾರೆ.<ref>{{Cite news |date=2025-08-12 |title=ಕೇರಳ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಮಿತಿ ವ್ಯಾಯಾಮ ಪೂರ್ಣಗೊಂಡಿದೆ: ರಾಜ್ಯ ಮಿತಿ ಆಯೋಗ |url=https://www.thehindu.com/news/national/kerala/ward-delimitation-exercise-in-kerala-local-bodies-completed-state-delimitation-commission/article69924380.ece |access-date=2025-12-22 |work=The Hindu |language=en-IN |issn=0971-751X}}</ref><ref>{{Cite web|url=https://lsgkerala.gov.in/en/lbelection/electlbrpt/3/10/2015|title=ಮಲಪ್ಪುರಂ – ಪುರಸಭೆಗಳು ಮತ್ತು ವಾರ್ಡ್ಗಳು|access-date=3 October 2020|website=lsgkerala|archive-date=25 August 2021|archive-url=https://web.archive.org/web/20210825132910/https://lsgkerala.gov.in/en/lbelection/electlbrpt/3/10/2015|url-status=live}}</ref><ref>{{Cite web |title=ಪ್ರೆಸ್ ರಿಲೀಸ್ {{!}} ಮಿತಿ ಆಯೋಗ |url=https://delimitation.lsgkerala.gov.in/press_releases |archive-url=https://web.archive.org/web/20250910204304/https://delimitation.lsgkerala.gov.in/press_releases |archive-date=2025-09-10 |access-date=2025-12-22 |website=delimitation.lsgkerala.gov.in}}</ref>
{| align="left" class="toccolours" cellspacing="1" cellpadding="1" style="margin: auto; font-size: 90%; border: 1px solid black; margin-bottom: 5px;"
|-
|- bgcolor="#cccccc" valign="top"
!
! ಪುರಸಭೆ<ref name="Malappuram_municipalities">{{cite web |title=ಮಲಪ್ಪುರಂನ ಪುರಸಭೆಗಳು |url=https://malappuram.nic.in/public-utility-category/municipality/ |url-status=live |archive-url=https://web.archive.org/web/20200229232532/https://malappuram.nic.in/public-utility-category/municipality/ |archive-date=29 February 2020 |access-date=1 December 2019 |website=malappuram.nic.in}}</ref>
! ವಾರ್ಡ್ಗಳು<ref>{{Cite web |title=ವಾರ್ಡ್ ಮ್ಯಾಪಿಂಗ್ |url=https://wardmap.ksmart.live/index.html |access-date=2025-12-22 |website=wardmap.ksmart.live}}</ref>
! ಜನಸಂಖ್ಯೆ<br />(2011)<ref>{{cite web|url=http://urbanaffairskerala.org/images/downloads/ulb_population2011.pdf|title=ನಗರ ಸಂಸ್ಥೆಗಳ ಜನಸಂಖ್ಯೆ|access-date=14 August 2020|website=Urban Affairs Kerala|archive-date=24 September 2020|archive-url=https://web.archive.org/web/20200924173424/http://urbanaffairskerala.org/images/downloads/ulb_population2011.pdf|url-status=live}}</ref>
! ಅಧ್ಯಕ್ಷರು <ref>{{Cite news |date=2025-12-26 |title=UDF ಮಲಪ್ಪುರಂನ 11 ಪುರಸಭೆಗಳಲ್ಲಿ ಅಧಿಕಾರ ವಹಿಸಿಕೊಳ್ಳುತ್ತದೆ |url=https://www.thehindu.com/news/national/kerala/udf-assumes-power-in-11-municipalities-in-malappuram/article70440784.ece |access-date=2025-12-27 |work=The Hindu |language=en-IN |issn=0971-751X}}</ref>
! ರಾಜಕೀಯ <br />ಪಕ್ಷ
! ಪೂರ್ವ-ಚುನಾವಣೆ<br/>ಒಕ್ಕೂಟ
|-
| 1|| [[ಮಂಜೇರಿ]] || 53 || 97,102 || ಅಬ್ದುಲ್ ಮಜೀದ್ ವಿ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 2|| [[ಪೊನ್ನಾನಿ]] || 53 || 90,491 || ಸಿ.ವಿ. ಸುಧಾ|| style="background-color:{{party color|Communist Party of India (Marxist)}};" |[[ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)|<span style="color:white;">CPI(M)</span>]] || {{legend2|{{party color|Left Democratic Front (Kerala)}}|[[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್|LDF]]|border=solid 1px #AAAAAA}}
|-
| 3|| [[ಪರಪ್ಪನಂಗಾಡಿ]] || 46 || 71,239 || ಸುಬೈದಾ ಟೀಚರ್ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 4|| [[ತಾನೂರು, ಮಲಪ್ಪುರಂ|ತಾನೂರು]] || 45 || 69,534 || ನಸ್ಲಾ ಬಷೀರ್ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 5|| [[ಮಲಪ್ಪುರಂ]] || 45 || 68,088 || ವಿ. ರಿನಿಶಾ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 6|| [[ಕೊಂಡೊಟ್ಟಿ]] || 41 || 59,256 || ಯು.ಕೆ. ಮಮ್ಮತ್ತಿಸ್ಸ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 7|| [[ತಿರೂರಂಗಡಿ]] || 40 || 56,632 || ಹಬೀಬಾ ಬಷೀರ್ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 8|| [[ತಿರೂರ್]] || 40 || 56,058 || ಇಬ್ರಾಹಿಂ ಹಾಜಿ ಕೀಳೆದತ್ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 9|| [[ಪೆರಿಂತಲ್ಮನ್ನ]] || 37 || 49,723 || ಸುರಯ್ಯ ಫಾರೂಕ್ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 10|| [[ಕೊಟ್ಟಕ್ಕಲ್ ಪುರಸಭೆ|ಕೊಟ್ಟಕ್ಕಲ್]] || 35 || 48,342 || ಕೆ.ಕೆ. ನಸಾರ್ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 11|| [[ನಿಲಂಬೂರ್]] || 36 || 46,342 || ಪದ್ಮಿನಿ ಗೋಪಿನಾಥ್ || style="background-color:{{party color|Indian National Congress}};" |[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|<span style="color:white;">INC</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|-
| 12|| [[ವಳಾಂಚೇರಿ]] || 34 || 44,437 || ಹಸೀನಾ ವತ್ತೋಳಿ || style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]] || {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
|}
{{clear}}
{{Largest cities
| country = ಮಲಪ್ಪುರಂ ಜಿಲ್ಲೆ, ಕೇರಳ, ಭಾರತ
| stat_ref = ಮೂಲ:<ref name="Malappuram_municipalities" /><ref name="No. of wards in Malappuram">{{cite web |title=ಮಲಪ್ಪುರಂನ ವಾರ್ಡ್ಗಳ ಸಂಖ್ಯೆ |url=https://lsgkerala.gov.in/electionupdates/deStatusLB.php?distID=10 |url-status=live |archive-url=https://web.archive.org/web/20200219141043/http://lsgkerala.gov.in/electionupdates/deStatusLB.php?distID=10 |archive-date=19 February 2020 |access-date=24 June 2020 |website=lsgkerala.gov.in}}</ref>
| list_by_pop =
| div_name =
| div_link = ಕೇರಳದ ತಾಲೂಕುಗಳ ಪಟ್ಟಿ{{!}}ತಾಲೂಕು
| city_1 = ಮಂಜೇರಿ
| div_1 = ಇರನಾಡ್ ತಾಲೂಕು{{!}}ಇರನಾಡ್
| pop_1 = 97,102
| city_2 = ಪೊನ್ನಾನಿ
| div_2 = ಪೊನ್ನಾನಿ ತಾಲೂಕು{{!}}ಪೊನ್ನಾನಿ
| pop_2 = 90,491
| city_3 = ಪರಪ್ಪನಂಗಾಡಿ
| div_3 = ತಿರೂರಂಗಡಿ ತಾಲೂಕು ಕಚೇರಿ{{!}}ತಿರೂರಂಗಡಿ
| pop_3 = 71,239
| city_4 = ತಾನೂರು, ಮಲಪ್ಪುರಂ{{!}}ತಾನೂರು
| div_4 = ತಿರೂರ್ ತಾಲೂಕು{{!}}ತಿರೂರ್
| pop_4 = 69,534
| city_5 = ಮಲಪ್ಪುರಂ
| div_5 = ಇರನಾಡ್ ತಾಲೂಕು{{!}}ಇರನಾಡ್
| pop_5 = 68,088
| city_6 = ಕೊಂಡೊಟ್ಟಿ
| div_6 = ಕೊಂಡೊಟ್ಟಿ ತಾಲೂಕು{{!}}ಕೊಂಡೊಟ್ಟಿ
| pop_6 = 59,256
| city_7 = ತಿರೂರಂಗಡಿ
| div_7 = ತಿರೂರಂಗಡಿ ತಾಲೂಕು ಕಚೇರಿ{{!}}ತಿರೂರಂಗಡಿ
| pop_7 = 56,632
| city_8 = ತಿರೂರ್
| div_8 = ತಿರೂರ್ ತಾಲೂಕು{{!}}ತಿರೂರ್
| pop_8 = 56,058
| city_9 = ಪೆರಿಂತಲ್ಮನ್ನ
| div_9 = ಪೆರಿಂತಲ್ಮನ್ನ ತಾಲೂಕು{{!}}ಪೆರಿಂತಲ್ಮನ್ನ
| pop_9 = 49,723
| city_10 = ಕೊಟ್ಟಕ್ಕಲ್
| div_10 = ತಿರೂರ್ ತಾಲೂಕು{{!}}ತಿರೂರ್
| pop_10 = 48,342
| city_11 = ನಿಲಂಬೂರ್
| div_11 = ನಿಲಂಬೂರ್ ತಾಲೂಕು{{!}}ನಿಲಂಬೂರ್
| pop_11 = 46,342
| city_12 = ವಳಾಂಚೇರಿ
| div_12 = ತಿರೂರ್ ತಾಲೂಕು{{!}}ತಿರೂರ್
| pop_12 = 44,437
}}
===ಗ್ರಾಮೀಣ ಆಡಳಿತ===
{{See also|ಮಲಪ್ಪುರಂ ಜಿಲ್ಲೆಯ ಗ್ರಾಮ ಪಂಚಾಯತ್ಗಳ ಪಟ್ಟಿ}}
ಮಲಪ್ಪುರಂ ಜಿಲ್ಲಾ ಪಂಚಾಯತ್ ಮಲಪ್ಪುರಂ ಜಿಲ್ಲೆಯ ಗ್ರಾಮೀಣ ಆಡಳಿತಕ್ಕೆ ಪ್ರಮುಖ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತದೆ. ಜಿಲ್ಲಾ ಪಂಚಾಯತ್ 33 ವಿಭಾಗಗಳನ್ನು ಹೊಂದಿದ್ದು, ಪ್ರತಿ ವಿಭಾಗದಿಂದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.<ref>{{Cite web |title=ಮಲಪ್ಪುರಂ ಜಿಲ್ಲಾ ಪಂಚಾಯತ್ ಅಂತಿಮ ನಕ್ಷೆ |url=https://wardmap.ksmart.live/FinalN/FinalDP_Malappuram_Malappuram.html |access-date=2025-12-22 |website=wardmap.ksmart.live}}</ref> ಜಿಲ್ಲಾ ಪಂಚಾಯತ್ನ ವ್ಯಾಪ್ತಿಯು ಪುರಸಭಾ ಪ್ರದೇಶಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳನ್ನು ಒಳಗೊಂಡಿದೆ. ಜಿಲ್ಲಾ ಪಂಚಾಯತ್ ಸದಸ್ಯರಿಂದ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿರುತ್ತದೆ, ಮತ್ತು ಅಭಿವೃದ್ಧಿ, ಆರೋಗ್ಯ ಮತ್ತು ಶಿಕ್ಷಣ, ಸಾರ್ವಜನಿಕ ಕಾಮಗಾರಿಗಳು, ಕಲ್ಯಾಣ, ಮತ್ತು ಹಣಕಾಸು ಇಲಾಖೆಗಳಿಗೆ ಐದು ಸ್ಥಾಯಿ ಸಮಿತಿಗಳನ್ನು ಹೊಂದಿದೆ.<ref>{{Cite web |title=ಮಲಪ್ಪುರಂ ಜಿಲ್ಲಾ ಪಂಚಾಯತ್ |url=http://malappuramdistrictpanchayath.kerala.gov.in/general/standingCommittee.htm |archive-url=https://web.archive.org/web/20220617094007/http://malappuramdistrictpanchayath.kerala.gov.in/general/standingCommittee.htm |archive-date=2022-06-17 |access-date=2025-12-26 |website=malappuramdistrictpanchayath.kerala.gov.in}}</ref>
ಬ್ಲಾಕ್ ಮಟ್ಟದ ಆಡಳಿತಕ್ಕಾಗಿ,
ಜಿಲ್ಲೆಯಲ್ಲಿ 15 [[ಬ್ಲಾಕ್ ಪಂಚಾಯತ್]]ಗಳಿವೆ. ಈ ಬ್ಲಾಕ್ ಪಂಚಾಯತ್ಗಳನ್ನು ಮತ್ತಷ್ಟು 250 ವಾರ್ಡ್ಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದನ್ನು ನಿರ್ವಾಚಿತ ಸದಸ್ಯರು ಪ್ರತಿನಿಧಿಸುತ್ತಾರೆ. ಪ್ರತಿ ಬ್ಲಾಕ್ ಪಂಚಾಯತ್ ಸದಸ್ಯರಿಂದ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿರುತ್ತದೆ. [[2025 ಕೇರಳ ಸ್ಥಳೀಯ ಚುನಾವಣೆಗಳು|2025 ರ ಸ್ಥಳೀಯ ಚುನಾವಣೆಗಳಲ್ಲಿ]], [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]] 15 ಬ್ಲಾಕ್ ಪಂಚಾಯತ್ಗಳಲ್ಲಿ 14 ಅನ್ನು ಗೆದ್ದುಕೊಂಡಿತು, ಆದರೆ [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್|LDF]] ಒಂದನ್ನು, ಪೊನ್ನಾನಿ ಬ್ಲಾಕ್ ಪಂಚಾಯತ್ ಅನ್ನು ಗೆದ್ದುಕೊಂಡಿತು.<ref>{{Cite news |date=2025-12-13 |title=ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: UDF ಮಲಪ್ಪುರಂನಲ್ಲಿ ಜಯಭೇರಿ ಬಾರಿಸಿತು |url=https://www.thehindu.com/news/national/kerala/kerala-local-body-polls-udf-sweeps-malappuram/article70391788.ece |access-date=2025-12-26 |work=The Hindu |language=en-IN |issn=0971-751X}}</ref>
ಗ್ರಾಮೀಣ ಜಿಲ್ಲೆಯು 94 ಗ್ರಾಮ ಪಂಚಾಯತ್ಗಳಾಗಿ ವಿಂಗಡಿಸಲಾಗಿದೆ, ಅವು 15 ಬ್ಲಾಕ್ಗಳಲ್ಲಿ ಸೇರಿವೆ, ಅವುಗಳೆಂದರೆ ಅರೀಕೋಡ್, ಕಾಳಿಕಾವು, ಕೊಂಡೊಟ್ಟಿ, [[ಕುಟ್ಟಿಪುರಂ ಬ್ಲಾಕ್ ಪಂಚಾಯತ್|ಕುಟ್ಟಿಪುರಂ]], ಮಲಪ್ಪುರಂ, ಮಂಕಡ, ನಿಲಂಬೂರ್, ಪೆರಿಂತಲ್ಮನ್ನ, ಪೆರುಂಪಡಪ್ಪು, ಪೊನ್ನಾನಿ, ತಾನೂರು, ತಿರೂರ್, ತಿರೂರಂಗಡಿ, ವೆಂಗರ, ಮತ್ತು ವಾಂಡೂರ್.<ref>{{Cite web|url=https://malappuram.nic.in/panchayats/|title=ಮಲಪ್ಪುರಂ ಜಿಲ್ಲೆಯ ಗ್ರಾಮೀಣ ಆಡಳಿತ|access-date=2 August 2020|website=ಮಲಪ್ಪುರಂ ಜಿಲ್ಲೆಯ ಅಧಿಕೃತ ವೆಬ್ಸೈಟ್|archive-date=9 August 2020|archive-url=https://web.archive.org/web/20200809110957/https://malappuram.nic.in/panchayats/|url-status=live}}</ref> ಈ ಬ್ಲಾಕ್ಗಳು ಒಟ್ಟಾಗಿ ಮಲಪ್ಪುರಂ ಜಿಲ್ಲಾ ಪಂಚಾಯತ್ ಅನ್ನು ರೂಪಿಸುತ್ತವೆ, ಇದು ಗ್ರಾಮೀಣ ಆಡಳಿತದ ಪ್ರಮುಖ ಜಿಲ್ಲಾ ಸಂಸ್ಥೆಯಾಗಿದೆ. ಜಿಲ್ಲಾ ಪಂಚಾಯತ್ನ 33 ವಿಭಾಗಗಳಲ್ಲಿ, [[2025 ಕೇರಳ ಸ್ಥಳೀಯ ಚುನಾವಣೆಗಳು|2025 ರ ಚುನಾವಣೆಗಳಲ್ಲಿ]] UDF ಎಲ್ಲಾ 33 ಸ್ಥಾನಗಳನ್ನು ಗೆದ್ದುಕೊಂಡಿತು, ಆದರೆ LDF ಯಾವುದೇ ಸ್ಥಾನವನ್ನು ಗೆಲ್ಲಲಿಲ್ಲ, ಇದರಿಂದಾಗಿ ಯಾವುದೇ ವಿರೋಧ ಪಕ್ಷವಿರಲಿಲ್ಲ.<ref>{{Cite web |title=ಸ್ಥಳೀಯ ಸಂಸ್ಥೆಗಳ ಚುನಾವಣೆ 2025 - ಕೇರಳ ರಾಜ್ಯ ಚುನಾವಣಾ ಆಯೋಗದ ಪ್ರವೃತ್ತಿ |url=https://trend.sec.kerala.gov.in/ |access-date=2025-12-22 |website=trend.sec.kerala.gov.in}}</ref> ಮಲಪ್ಪುರಂ ಜಿಲ್ಲಾ ಪಂಚಾಯತ್ ರಾಜ್ಯದ ಅತಿದೊಡ್ಡ ಜಿಲ್ಲಾ ಪಂಚಾಯತ್ ಮತ್ತು ಅತಿದೊಡ್ಡ ಸ್ಥಳೀಯ ಸಂಸ್ಥೆಯಾಗಿದೆ. 94 ಗ್ರಾಮ ಪಂಚಾಯತ್ಗಳನ್ನು ಮತ್ತಷ್ಟು 2001 ವಾರ್ಡ್ಗಳಾಗಿ ವಿಂಗಡಿಸಲಾಗಿದೆ.<ref>{{Cite web |last=ಡೈಲಿ |first=ಕೇರಳಕೌಮುದಿ |title=ಅಂತಿಮ ಅಧಿಸೂಚನೆ ಹೊರಬಿದ್ದಿದೆ; ಕೇರಳದಲ್ಲಿ 17337 ಹೆಚ್ಚುವರಿ ವಾರ್ಡ್ಗಳು; 1375 ಹೊಸ ವಾರ್ಡ್ಗಳು |url=https://keralakaumudi.com/en/news/news.php?id=1538360&u=final-notification-out-17337-more-wards-in-kerala-1375-new-wards |access-date=2025-12-22 |website=Keralakaumudi Daily |language=en}}</ref> [[ಜನಗಣತಿ ಪಟ್ಟಣ]]ಗಳು (ನಗರ ವೈಶಿಷ್ಟ್ಯಗಳನ್ನು ಹೊಂದಿರುವ ಸಣ್ಣ ಪಟ್ಟಣಗಳು) ಸಹ ಗ್ರಾಮ ಪಂಚಾಯತ್ಗಳ ವ್ಯಾಪ್ತಿಗೆ ಬರುತ್ತವೆ. 2015 ರಲ್ಲಿ [[ಅನಮಂಗಾಡ್]], [[ಅನಂತವೂರ್]], [[ಅರಕ್ಕುಪರಂಬ]], [[ಅರಿಯಲ್ಲೂರ್]], [[ಚೆಂಬ್ರಸ್ಸೇರಿ]], [[ಎಲಂಕೂರ್, ಮಂಜೇರಿ|ಎಲಂಕೂರ್]], [[ಕರಿಪುರ್]], ಕೂಟಾಯಿ, ಕುರುಂಬಲಂಗೋಡ್, [[ಮರುತ, ಭಾರತ|ಮರುತ]], [[ಪಾಂಗ್, ಮಲಪ್ಪುರಂ|ಪಾಂಗ್]], [[ವಣಿಯಂಬಲಂ]], ಮತ್ತು ವೆಲಿಮುಕ್ಕು ಹೊಸ ಗ್ರಾಮ ಪಂಚಾಯತ್ಗಳ ರಚನೆಗೆ ಕರಡು ಅಧಿಸೂಚನೆಗಳನ್ನು ಪ್ರಕಟಿಸಲಾಗಿದ್ದರೂ, ಅವು ಇನ್ನೂ ರೂಪುಗೊಂಡಿಲ್ಲ.<ref>{{Cite web|url=http://delimitation.lsgkerala.gov.in/mlp_notification|title=ಮಲಪ್ಪುರಂನಲ್ಲಿ ಹೊಸ ಸ್ಥಳೀಯ ಸಂಸ್ಥೆಗಳಿಗೆ ಕರಡು ಅಧಿಸೂಚನೆಗಳು|access-date=10 October 2020|website=Delimitation Commission, Kerala|publisher=Government of Kerala|archive-date=25 January 2021|archive-url=https://web.archive.org/web/20210125145004/http://delimitation.lsgkerala.gov.in/mlp_notification|url-status=live}}</ref> ಅವುಗಳ ರಚನೆಯೊಂದಿಗೆ, ಜಿಲ್ಲೆಯ ಗ್ರಾಮ ಪಂಚಾಯತ್ಗಳ ಸಂಖ್ಯೆ 106 ಆಗುತ್ತದೆ.
{| align="left" class="toccolours" cellspacing="1" cellpadding="1" style="margin-right: .5em; margin-top: .4em; font-size: 90%"
|-
|- bgcolor="#cccccc" valign="top"
! colspan="5" |ಮಲಪ್ಪುರಂ ಜಿಲ್ಲೆಯ ಗ್ರಾಮ ಪಂಚಾಯತ್ಗಳು
[[Image:2020 Kerala Local body Elections - Malappuram District (Gram Panchayats and Municipalities).svg|center|250px]]
|- style="background:#efefef;"
! '''ಗ್ರಾಮ ಪಂಚಾಯತ್'''
| style="background: silver" |'''ವಿಸ್ತೀರ್ಣ<br/>(ಚದರ ಕಿಮೀ ನಲ್ಲಿ)'''
| style="background: silver" |'''ಜನಸಂಖ್ಯೆ<br/>(2011)'''
| style="background: silver" |'''ವಾರ್ಡ್ಗಳು'''
{{Small|(2025)}}<ref name="DelimitationKerala2025">
''ಅಂತಿಮ ಅಧಿಸೂಚನೆ'', ಮಿತಿ ಆಯೋಗ, ಕೇರಳ.
[https://wardmap.ksmart.live/index.html ವಾರ್ಡ್ ನಕ್ಷೆ ಪೋರ್ಟಲ್ – KSMART] ಮತ್ತು
[https://delimitation.lsgkerala.gov.in/ ಮಿತಿ – ಸ್ಥಳೀಯ ಸ್ವಯಂ ಆಡಳಿತ ಇಲಾಖೆ, ಕೇರಳ].
</ref>
| style="background: silver" |'''[[ಉಪ-ಜಿಲ್ಲೆ|ತಾಲೂಕು]]'''
|-
| colspan=5 style="text-align: center; background-color: grey; color: white;" | '''ಅರೀಕೋಡ್ ಬ್ಲಾಕ್'''
|-
| [[ಅರೀಕೋಡ್]] || 12.21 || 31,563 || 20 || [[ಇರನಾಡ್ ತಾಲೂಕು|ಇರನಾಡ್]]
|-
| [[ಚೀಕ್ಕೋಡ್]] || 23.96 || 32,867 || 21 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಎಡವನ್ನ]] || 52.10 || 46,128 || 24 || [[ಇರನಾಡ್ ತಾಲೂಕು|ಇರನಾಡ್]]
|-
| [[ಕವನೂರ್]] || 31.30 || 37,977 || 23 || [[ಇರನಾಡ್ ತಾಲೂಕು|ಇರನಾಡ್]]
|-
| [[ಕಿಳುಪರಂಬ]] || 14.99 || 22,062 || 16 || [[ಇರನಾಡ್ ತಾಲೂಕು|ಇರನಾಡ್]]
|-
| [[ಕುಳಿಮನ್ನ ಗ್ರಾಮ ಪಂಚಾಯತ್|ಕುಳಿಮನ್ನ]] || 22.05 || 34,413 || 21 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಪುಲ್ಪಟ್ಟ]] || 30.12 || 42,683 || 24 || [[ಇರನಾಡ್ ತಾಲೂಕು|ಇರನಾಡ್]]
|-
| [[ಉರಂಗಟ್ಟಿರಿ]] || 76.09 || 40,318 || 24 || [[ಇರನಾಡ್ ತಾಲೂಕು|ಇರನಾಡ್]]
|-
| colspan=5 style="text-align: center; background-color: grey; color: white;" | '''ಕಾಳಿಕಾವು ಬ್ಲಾಕ್'''
|-
| [[ಅಮರಂಬಲಂ]] || 84.64 || 35,975 || 22 || [[ನಿಲಂಬೂರ್]]
|-
| [[ಚೊಕ್ಕಾಡ್]] || 76.08 || 32,224 || 20 || [[ನಿಲಂಬೂರ್]]
|-
| [[ಎಡಪ್ಪಟ್ಟ]] || 25.77 || 22,729 || 17 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಕಾಳಿಕಾವು]] || 92.00 || 35,210 || 22 || [[ನಿಲಂಬೂರ್]]
|-
| [[ಕರುಲೈ]] || 131.31 || 23,277 || 17 || [[ನಿಲಂಬೂರ್]]
|-
| [[ಕರುವರಕುಂಡು]] || 78.69 || 41,583 || 24 || [[ನಿಲಂಬೂರ್]]
|-
| [[ತುವ್ವೂರ್]] || 31.38 || 40,297 || 19 || [[ನಿಲಂಬೂರ್]]
|-
| colspan=5 style="text-align: center; background-color: grey; color: white;" | '''ಕೊಂಡೊಟ್ಟಿ ಬ್ಲಾಕ್'''
|-
| [[ಚೆಲೆಂಬ್ರ]] || 15.91 || 34,149 || 21 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಚೆರುಕಾವು]] || 16.87 || 36,773 || 22 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಮುತ್ತುವಲ್ಲೂರ್]] || 21.49 || 26,028 || 18 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಪಳ್ಳಿಕ್ಕಲ್]] || 25.96 || 46,962 || 24 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಪುಳಿಕ್ಕಲ್]] || 28.70 || 40,133 || 24 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ವಾಝಯೂರ್]] || 21.19 || 30,262 || 20 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ವಾಝಕ್ಕಾಡ್]] || 23.89 || 35,774 || 22 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| colspan=5 style="text-align: center; background-color: grey; color: white;" | '''ಕುಟ್ಟಿಪುರಂ ಬ್ಲಾಕ್'''
|-
| [[ಅತವನಾಡ್]] || 26.77 || 41,187 || 24 || [[ತಿರೂರ್ ತಾಲೂಕು|ತಿರೂರ್]]
|-
| [[ಎದಯೂರ್]] || 30.43 || 36,498 || 22 || [[ತಿರೂರ್ ತಾಲೂಕು|ತಿರೂರ್]]
|-
| [[ಇರಿಂಬಿಲಿಯಂ]] || 24.06 || 30,635 || 20 || [[ತಿರೂರ್ ತಾಲೂಕು|ತಿರೂರ್]]
|-
| [[ಕಲ್ಪಕಾಂಚೇರಿ]] || 16.25 || 33,721 || 21 || [[ತಿರೂರ್ ತಾಲೂಕು|ತಿರೂರ್]]
|-
| [[ಕುಟ್ಟಿಪುರಂ]] || 31.32 || 47,023 || 24 || [[ತಿರೂರ್ ತಾಲೂಕು|ತಿರೂರ್]]
|-
| [[ಮರಕ್ಕರ]] || 27.00 || 40,404 || 24 || [[ತಿರೂರ್ ತಾಲೂಕು|ತಿರೂರ್]]
|-
| colspan=5 style="text-align: center; background-color: grey; color: white;" | '''ಮಲಪ್ಪುರಂ ಬ್ಲಾಕ್'''
|-
| [[ಅನಕ್ಕಯಂ]] || 45.23 || 50,634 || 24 || [[ಇರನಾಡ್ ತಾಲೂಕು|ಇರನಾಡ್]]
|-
| [[ಕೊಡೂರ್, ಮಲಪ್ಪುರಂ|ಕೊಡೂರ್]] || 18.42 || 38,258 || 23 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಮೊರಾಯೂರ್]] || 24.57 || 25,261 || 21 || [[ಕೊಂಡೊಟ್ಟಿ ತಾಲೂಕು|ಕೊಂಡೊಟ್ಟಿ]]
|-
| [[ಒತುಕ್ಕುಂಗಲ್]] || 17.28 || 39,139 || 23 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ಪೊನ್ಮಲ]] || 21.65 || 33,922 || 21 || [[ತಿರೂರ್ ತಾಲೂಕು|ತಿರೂರ್]]
|-
| [[ಪೂಕ್ಕೊಟ್ಟೂರ್]] || 20.63 || 28,077 || 23 || [[ಇರನಾಡ್ ತಾಲೂಕು|ಇರನಾಡ್]]
|-
| colspan=5 style="text-align: center; background-color: grey; color: white;" | '''ಮಂಕಡ ಬ್ಲಾಕ್'''
|-
| [[ಕೂಟಿಲಂಗಡಿ]] || 21.54 || 36,602 || 22 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಕುರುವ, ಮಲಪ್ಪುರಂ|ಕುರುವ]] || 35.77 || 45,354 || 24 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ವಡಕ್ಕಂಗರ, ಮಂಜೇರಿ|ಮಕ್ಕರಪರಂಬ]] || 11.17 || 18,702 || 15 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಮಂಕಡ]] || 31.00 || 32,748 || 21 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಮೂರ್ಕನಾಡ್]] || 17.60 || 36,324 || 22 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಪುಳಕ್ಕಟ್ಟಿರಿ]] || 22.72 || 29,886 || 19 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| colspan=5 style="text-align: center; background-color: grey; color: white;" | '''ನಿಲಂಬೂರ್ ಬ್ಲಾಕ್'''
|-
| ಚಾಲಿಯಾರ್ || 125.00 || 20,834 || 16 || [[ನಿಲಂಬೂರ್]]
|-
| [[ಚುಂಗತರ]] || 129.69 || 36,269 || 22 || [[ನಿಲಂಬೂರ್]]
|-
| [[ಎಡಕ್ಕರ]] || 58.09 || 28,162 || 19 || [[ನಿಲಂಬೂರ್]]
|-
| [[ಮೂತೇಡಂ]] || 48.00 || 33,960 || 18 || [[ನಿಲಂಬೂರ್]]
|-
| [[ಪೊತುಕಲ್]] || 77.00 || 29,561 || 19 || [[ನಿಲಂಬೂರ್]]
|-
| [[ವಾಳಿಕ್ಕಡವು]] || 114.00 || 47,322 || 24 || [[ನಿಲಂಬೂರ್]]
|-
| colspan=5 style="text-align: center; background-color: grey; color: white;" | '''ಪೆರಿಂತಲ್ಮನ್ನ ಬ್ಲಾಕ್'''
|-
| [[ಅಲಿಪರಂಬ]] || 34.37 || 41,725 || 24 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಅಂಗಡಿಪುರಂ]] || 38.50 || 56,451 || 24 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಎಲಂಕುಳಂ, ಮಲಪ್ಪುರಂ|ಎಲಂಕುಳಂ]] || 21.31 || 26,456 || 18 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಕೀಳತ್ತೂರ್]] || 40.00 || 36,317 || 22 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಮೇಲತ್ತೂರ್, ಕೇರಳ|ಮೇಲತ್ತೂರ್]] || 27.24 || 27,250 || 18 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ಪುಲಾಮಂತೋಲೆ]] || 32.15 || 37,785 || 23 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ತಾೆಕ್ಕೋಡ್, ಮಲಪ್ಪುರಂ ಜಿಲ್ಲೆ|ತಾೆಕ್ಕೋಡ್]] || 45.02 || 41,982 || 24 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| [[ವೆಟ್ಟತ್ತೂರ್]] || 35.84 || 37,456 || 19 || [[ಪೆರಿಂತಲ್ಮನ್ನ ತಾಲೂಕು|ಪೆರಿಂತಲ್ಮನ್ನ]]
|-
| colspan=5 style="text-align: center; background-color: grey; color: white;" | '''ಪೆರುಂಪಡಪ್ಪು ಬ್ಲಾಕ್'''
|-
| [[ಅಲಂಕೋಡ್, ಎಡಪ್ಪಲ್|ಅಲಂಕೋಡ್]] || 20.50 || 33,918 || 21 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ಮರಾಂಚೇರಿ]] || 20.47 || 35,011 || 22 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ನನ್ನಮುಕ್ಕು]] || 19.35 || 28,989 || 19 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]] || 15.02 || 29,766 || 19 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ವೆಲಿಯಂಕೋಡ್]] || 15.15 || 32,554 || 21 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| colspan=5 style="text-align: center; background-color: grey; color: white;" | '''ಪೊನ್ನಾನಿ ಬ್ಲಾಕ್'''
|-
| [[ಎಡಪ್ಪಲ್]] || 23.70 || 32,550 || 21 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ಕಳಡಿ, ಮಲಪ್ಪುರಂ|ಕಳಡಿ]] || 16.48 || 25,872 || 18 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ತವನೂರ್]] || 25.28 || 34,500 || 21 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| [[ವಟ್ಟಂಕುಳಂ]] || 20.73 || 36,147 || 22 || [[ಪೊನ್ನಾನಿ ತಾಲೂಕು|ಪೊನ್ನಾನಿ]]
|-
| colspan=5 style="text-align: center; background-color: grey; color: white;" | '''ತಾನೂರು ಬ್ಲಾಕ್'''
|-
| [[ಚೇರಿಯಮುಂಡಂ]] || 11.95 || 31,212 || 20 || [[ತಿರೂರ್ ತಾಲೂಕು|ತಿರೂರ್]]
|-
| [[ನಿರಮರುತೂರು]] || 9.20 || 29,846 || 19 || [[ತಿರೂರ್ ತಾಲೂಕು|ತಿರೂರ್]]
|-
| [[ಒಳೂರು]] || 15.92 || 34,016 || 21 || [[ತಿರೂರ್ ತಾಲೂಕು|ತಿರೂರ್]]
|-
| [[ಪೆರುಮನ್ನ-ಕ್ಲಾರಿ]] || 11.48 || 27,278 || 18 || [[ತಿರೂರ್ ತಾಲೂಕು|ತಿರೂರ್]]
|-
| [[ಪೊನ್ಮುಂಡಂ]] || 9.16 || 25,855 || 18 || [[ತಿರೂರ್ ತಾಲೂಕು|ತಿರೂರ್]]
|-
| [[ತಾನಲೂರು]] || 15.12 || 47,976 || 24 || [[ತಿರೂರ್ ತಾಲೂಕು|ತಿರೂರ್]]
|-
| [[ವಳವನ್ನೂರ್]] || 15.28 || 33,159 || 21 || [[ತಿರೂರ್ ತಾಲೂಕು|ತಿರೂರ್]]
|-
| colspan=5 style="text-align: center; background-color: grey; color: white;" | '''ತಿರೂರ್ ಬ್ಲಾಕ್'''
|-
| [[ಮಂಗಲಂ, ತಿರೂರ್|ಮಂಗಲಂ]] || 12.17 || 33,442 || 21 || [[ತಿರೂರ್ ತಾಲೂಕು|ತಿರೂರ್]]
|-
| [[ಪುರತ್ತೂರ್]] || 19.50 || 31,915 || 20 || [[ತಿರೂರ್ ತಾಲೂಕು|ತಿರೂರ್]]
|-
| [[ತಲಕ್ಕಾಡ್]] || 16.30 || 35,820 || 22 || [[ತಿರೂರ್ ತಾಲೂಕು|ತಿರೂರ್]]
|-
| [[ತಿರುನವಾಯ]] || 19.59 || 45,848 || 24 || [[ತಿರೂರ್ ತಾಲೂಕು|ತಿರೂರ್]]
|-
| [[ತ್ರಿಪ್ರಂಗೋಡ್]] || 20.67 || 41,167 || 24 || [[ತಿರೂರ್ ತಾಲೂಕು|ತಿರೂರ್]]
|-
| [[ವೆಟ್ಟೊಂ ಗ್ರಾಮ ಪಂಚಾಯತ್|ವೆಟ್ಟೊಂ]] || 13.46 || 28,104 || 22 || [[ತಿರೂರ್ ತಾಲೂಕು|ತಿರೂರ್]]
|-
| colspan=5 style="text-align: center; background-color: grey; color: white;" | '''ತಿರೂರಂಗಡಿ ಬ್ಲಾಕ್'''
|-
| [[ತಲಪ್ಪರ|ಮೂನ್ನಿಯೂರ್]] || 22.66 || 55,535 || 24 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ನನ್ನಂಬ್ರ]] || 18.35 || 40,543 || 24 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ಪೆರುವಲ್ಲೂರ್]] || 21.19 || 34,941 || 21 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ತೆನಿಪಾಲಂ]] || 17.98 || 32,045 || 20 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ವಲ್ಲಿಕುಣ್ಣು]] || 25.14 || 48,006 || 24 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| colspan=5 style="text-align: center; background-color: grey; color: white;" | '''ವೆಂಗರ ಬ್ಲಾಕ್'''
|-
| [[ಅಬ್ದು ರಹಿಮಾನ್ ನಗರ್]] || 14.83 || 41,993 || 24 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ಎದರಿಕೋಡ್]] || 15.65 || 27,356 || 18 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| ಕನ್ನಮಂಗಲಂ || 28.24 || 41,260 || 24 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ಊರಕಂ]] || 21.65 || 29,157 || 19 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ಪರಪ್ಪೂರ್]] || 18.50 || 36,270 || 22 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ತೆನ್ನಲ]] || 10.00 || 29,190 || 19 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| [[ವೆಂಗರ, ಮಲಪ್ಪುರಂ ಜಿಲ್ಲೆ|ವೆಂಗರ]] || 18.66 || 48,600 || 24 || [[ತಿರೂರಂಗಡಿ ತಾಲೂಕು ಕಚೇರಿ|ತಿರೂರಂಗಡಿ]]
|-
| colspan=5 style="text-align: center; background-color: grey; color: white;" | '''ವಾಂಡೂರ್ ಬ್ಲಾಕ್'''
|-
| [[ಮಂಪಾಡ್]] || 84.67 || 37,221 || 22 || [[ನಿಲಂಬೂರ್]]
|-
| [[ಪಾಂಡಿಕ್ಕಾಡ್]] || 57.01 || 55,213 || 24 || [[ಇರನಾಡ್]]
|-
| [[ಪೊರೂರ್, ಮಲಪ್ಪುರಂ|ಪೊರೂರ್]] || 35.60 || 37,636 || 19 || [[ನಿಲಂಬೂರ್]]
|-
| [[ತಿರುವಾಳಿ]] || 33.83 || 27,734 || 19 || [[ನಿಲಂಬೂರ್]]
|-
| [[ತ್ರಿಕ್ಕಲಂಗೋಡ್]] || 59.99 || 52,090 || 24 || [[ಇರನಾಡ್]]
|-
| [[ವಾಂಡೂರ್]] || 45.45 || 49,013 || 24 || [[ನಿಲಂಬೂರ್]]
|-
| style="font-size: 80%" colspan=6 bgcolor="#cceeff" align="center"| ಮೂಲಗಳು: [[ಭಾರತದ ಜನಗಣತಿ 2011]],<ref name="demomalapuram" /> [[ಕೇರಳ ಸರ್ಕಾರ]]<ref name=Panchayat_Malappuram>{{cite web |title=ಮಲಪ್ಪುರಂನ ಗ್ರಾಮಗಳು |url=https://dop.lsgkerala.gov.in/en/node/1030 |website=lsgkerala.gov.in |access-date=2 August 2020 |archive-date=25 September 2020 |archive-url=https://web.archive.org/web/20200925053634/https://dop.lsgkerala.gov.in/en/node/1030 |url-status=live}}</ref>
|}{{clear}}
== ರಾಜಕೀಯ ==
=== ರಾಜ್ಯ ಶಾಸನಸಭೆ ===
[[ಕೇರಳ ವಿಧಾನಸಭೆ]]ಯಲ್ಲಿ ಮಲಪ್ಪುರಂನ ಪ್ರಾತಿನಿಧ್ಯಕ್ಕಾಗಿ, ಜಿಲ್ಲೆಯಲ್ಲಿ 16 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳನ್ನು 3 ಲೋಕಸಭಾ ಕ್ಷೇತ್ರಗಳಲ್ಲಿ ಸೇರಿಸಲಾಗಿದೆ. ಮಲಪ್ಪುರಂ ರಾಜ್ಯದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಇವುಗಳಲ್ಲಿ, [[ಇರನಾಡ್ (ರಾಜ್ಯ ವಿಧಾನಸಭಾ ಕ್ಷೇತ್ರ)|ಇರನಾಡ್]], [[ನಿಲಂಬೂರ್ (ರಾಜ್ಯ ವಿಧಾನಸಭಾ ಕ್ಷೇತ್ರ)|ನಿಲಂಬೂರ್]] ಮತ್ತು [[ವಾಂಡೂರ್ (ರಾಜ್ಯ ವಿಧಾನಸಭಾ ಕ್ಷೇತ್ರ)|ವಾಂಡೂರ್]] ವಿಧಾನಸಭಾ ಕ್ಷೇತ್ರಗಳು ಒಟ್ಟಾಗಿ [[ವಯನಾಡ್ (ಲೋಕಸಭಾ ಕ್ಷೇತ್ರ)]]ದ ಭಾಗವಾಗಿವೆ, ಆದರೆ [[ತಿರೂರಂಗಡಿ (ರಾಜ್ಯ ವಿಧಾನಸಭಾ ಕ್ಷೇತ್ರ)|ತಿರೂರಂಗಡಿ]], [[ತಾನೂರು (ರಾಜ್ಯ ವಿಧಾನಸಭಾ ಕ್ಷೇತ್ರ)|ತಾನೂರು]], [[ತಿರೂರ್ (ರಾಜ್ಯ ವಿಧಾನಸಭಾ ಕ್ಷೇತ್ರ)|ತಿರೂರ್]], [[ಕೊಟ್ಟಕ್ಕಲ್ (ರಾಜ್ಯ ವಿಧಾನಸಭಾ ಕ್ಷೇತ್ರ)|ಕೊಟ್ಟಕ್ಕಲ್]], [[ತವನೂರ್ (ರಾಜ್ಯ ವಿಧಾನಸಭಾ ಕ್ಷೇತ್ರ)|ತವನೂರ್]] ಮತ್ತು [[ಪೊನ್ನಾನಿ (ರಾಜ್ಯ ವಿಧಾನಸಭಾ ಕ್ಷೇತ್ರ)|ಪೊನ್ನಾನಿ]]ಗಳನ್ನು [[ಪೊನ್ನಾನಿ (ಲೋಕಸಭಾ ಕ್ಷೇತ್ರ)]]ದಲ್ಲಿ ಸೇರಿಸಲಾಗಿದೆ. ಉಳಿದ ಏಳು ವಿಧಾನಸಭಾ ಕ್ಷೇತ್ರಗಳು ಒಟ್ಟಾಗಿ [[ಮಲಪ್ಪುರಂ (ಲೋಕಸಭಾ ಕ್ಷೇತ್ರ)]]ವನ್ನು ರೂಪಿಸುತ್ತವೆ.<ref name="admn_mpm"/><ref>{{cite web |title=ಮಲಪ್ಪುರಂನ ನಿಯಮಸಭಾ ಕ್ಷೇತ್ರಗಳು |url=http://www.ceo.kerala.gov.in/malappuram.html |website=ceo.kerala.gov.in |access-date=25 November 2019 |archive-date=20 August 2019 |archive-url=https://web.archive.org/web/20190820130501/http://www.ceo.kerala.gov.in/malappuram.html |url-status=live }}</ref>
[[ಕೇರಳ ವಿಧಾನಸಭೆ]]ಯ 140 ಸದಸ್ಯರಲ್ಲಿ 16 ಮಂದಿಯನ್ನು ಜಿಲ್ಲೆಯಿಂದ ಆಯ್ಕೆ ಮಾಡಲಾಗುತ್ತದೆ.<ref>{{Cite web|url=http://www.ceo.kerala.gov.in/pdf/03-DELIMITATION/03-DELIMITED-LAC.pdf|title=ಕೇರಳ ವಿಧಾನಸಭೆಗೆ ಕ್ಷೇತ್ರಗಳು – ಜಿಲ್ಲಾವಾರು|access-date=7 November 2020|website=CEO Kerala|archive-date=12 October 2019|archive-url=https://web.archive.org/web/20191012075808/http://www.ceo.kerala.gov.in/pdf/03-DELIMITATION/03-DELIMITED-LAC.pdf|url-status=live}}</ref> [[2026 ಕೇರಳ ವಿಧಾನಸಭಾ ಚುನಾವಣೆ|2026 ರ ಚುನಾವಣೆಗಳಲ್ಲಿ]], [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]] ಜಿಲ್ಲೆಯ ಎಲ್ಲಾ 16 ಸ್ಥಾನಗಳನ್ನು ಗೆದ್ದುಕೊಂಡಿತು.<ref>{{Cite news |last=ನಹಾ |first=ಅಬ್ದುಲ್ ಲತೀಫ್ |date=2026-05-04 |title=ಕೇರಳ ವಿಧಾನಸಭಾ ಚುನಾವಣೆ 2026: IUML ಮಲಬಾರ್ ಪ್ರದೇಶದಲ್ಲಿ UDF ನ ಪುನರಾಗಮನಕ್ಕೆ ಆಧಾರವಾಗಿದೆ |url=https://www.thehindu.com/elections/kerala-assembly/kerala-assembly-polls-2026-iuml-anchors-udfs-comeback-in-malabar-region/article70938892.ece |access-date=2026-05-06 |work=The Hindu |language=en-IN |issn=0971-751X}}</ref>
=== ಸಂಸತ್ ಕ್ಷೇತ್ರಗಳು ===
ಮಲಪ್ಪುರಂ ಜಿಲ್ಲೆಯು ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ: [[ಮಲಪ್ಪುರಂ ಲೋಕಸಭಾ ಕ್ಷೇತ್ರ|ಮಲಪ್ಪುರಂ]] ಮತ್ತು [[ಪೊನ್ನಾನಿ ಲೋಕಸಭಾ ಕ್ಷೇತ್ರ|ಪೊನ್ನಾನಿ]]. ಜಿಲ್ಲೆಯು [[ವಯನಾಡ್ ಲೋಕಸಭಾ ಕ್ಷೇತ್ರ]]ದ ಸಣ್ಣ ಭಾಗವನ್ನು ಸಹ ಹೊಂದಿದೆ.<ref>{{Cite news |author=ಸಿಬ್ಬಂದಿ ವರದಿಗಾರ |date=2021-05-02 |title=ಸಮದಾನಿ ಮಲಪ್ಪುರಂ LS ಉಪಚುನಾವಣೆ ಗೆದ್ದರು|work=The Hindu |url=https://www.thehindu.com/news/national/kerala/malappuram-ls-bypoll-samadani-wins/article34467551.ece |access-date=2023-12-14 |issn=0971-751X}}</ref>
[[ಪಿ. ವಿ. ಅಬ್ದುಲ್ ವಹಾಬ್]], ಕೇರಳವನ್ನು ಪ್ರತಿನಿಧಿಸುವ [[ರಾಜ್ಯಸಭಾ]] ಸಂಸದರು ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಗೆ ಸೇರಿದವರು, ಮಲಪ್ಪುರಂ ಜಿಲ್ಲೆಯ [[ನಿಲಂಬೂರ್]] ನಿಂದ ಬಂದವರು.<ref>{{Cite news |date=2025-02-01 |title=ಎಲ್ಲಾ ವರ್ಗಗಳಿಗೂ ನಿರಾಶಾದಾಯಕ, ವಹಾಬ್ ಹೇಳುತ್ತಾರೆ |url=https://www.thehindu.com/news/national/kerala/disappointing-for-all-sections-alike-says-wahab/article69169277.ece |access-date=2025-12-09 |work=The Hindu |language=en-IN |issn=0971-751X}}</ref>
{| class="toccolours" align="left" cellspacing="1" cellpadding="1" style="margin-right: .5em; margin-top: .4em; font-size: 90%"
|- valign="top" bgcolor="#cccccc"
!ಸಂಸತ್ <br />ಕ್ಷೇತ್ರ
!ರಾಜಕೀಯ <br />ಪಕ್ಷ
!ಪೂರ್ವ-ಚುನಾವಣೆ <br />ಒಕ್ಕೂಟ
!ನಿರ್ವಾಚಿತ <br /> ಪ್ರತಿನಿಧಿ<ref>{{Cite web |title=ಸದಸ್ಯರು - ಕೇರಳ ಶಾಸನಸಭೆ |url=http://www.niyamasabha.org/codes/lokhsabha_members.htm |access-date=2025-12-09 |website=www.niyamasabha.org}}</ref>
|-
| [[ವಯನಾಡ್ (ಲೋಕಸಭಾ ಕ್ಷೇತ್ರ)|ವಯನಾಡ್]] (ಸಣ್ಣ ಭಾಗ)
| style="background-color:{{party color|Indian National Congress}};" |[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|<span style="color:white;">INC</span>]]
| {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
| [[ಪ್ರಿಯಾಂಕಾ ಗಾಂಧಿ]]
|-
| [[ಮಲಪ್ಪುರಂ (ಲೋಕಸಭಾ ಕ್ಷೇತ್ರ)|ಮಲಪ್ಪುರಂ]]
| style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]]
| {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
| [[ಇ. ಟಿ. ಮೊಹಮ್ಮದ್ ಬಷೀರ್]]
|-
| [[ಪೊನ್ನಾನಿ (ಲೋಕಸಭಾ ಕ್ಷೇತ್ರ)|ಪೊನ್ನಾನಿ]] (ಪ್ರಮುಖ ಭಾಗ)
| style="background-color:{{party color|Indian Union Muslim League}};" |[[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|<span style="color:white;">IUML</span>]]
| {{legend2|{{party color|United Democratic Front (Kerala)}}|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]]|border=solid 1px #AAAAAA}}
| [[ಎಂ. ಪಿ. ಅಬ್ದುಸ್ಸಮದ್ ಸಮದಾನಿ]]
|}
{{clear}}
== ಆರ್ಥಿಕತೆ ==
2018–19 ಆರ್ಥಿಕ ವರ್ಷದಲ್ಲಿ ಜಿಲ್ಲೆಯ [[ಸ್ಥೂಲ ಮೌಲ್ಯವರ್ಧನೆ|ಸ್ಥೂಲ ಜಿಲ್ಲಾ ಮೌಲ್ಯವರ್ಧನೆ (GDVA)]] ₹ 698.37 ಬಿಲಿಯನ್ ಎಂದು ಅಂದಾಜಿಸಲಾಗಿದೆ, ಮತ್ತು ಹಿಂದಿನ ವರ್ಷಕ್ಕೆ ಹೋಲಿಸಿದರೆ GDVA ಯಲ್ಲಿನ ಬೆಳವಣಿಗೆಯು 11.30% ಆಗಿದೆ. ಜಿಲ್ಲೆಯು 2018–19 ರಂತೆ [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ]] ಮತ್ತು [[ತಿರುವನಂತಪುರಂ ಜಿಲ್ಲೆ|ತಿರುವನಂತಪುರಂ]] ನಂತರ ಕೇರಳದ ಜಿಲ್ಲೆಗಳಲ್ಲಿ GDVA ಯಲ್ಲಿ ಮೂರನೇ ಸ್ಥಾನದಲ್ಲಿದೆ.<ref name="GDVA_Malappuram">{{cite web |url=http://www.ecostat.kerala.gov.in/index.php/economy-state-mlp |website=ecostat.kerala.gov.in |title=ಮಲಪ್ಪುರಂನ ಆರ್ಥಿಕತೆ |access-date=20 June 2020 |archive-date=1 July 2020 |archive-url=https://web.archive.org/web/20200701171533/http://www.ecostat.kerala.gov.in/index.php/economy-state-mlp |url-status=live }}</ref> 2018–19 ರಲ್ಲಿ ಜಿಲ್ಲೆಯ [[ಮೌಲ್ಯವರ್ಧನೆ|ನಿವ್ವಳ ಜಿಲ್ಲಾ ಮೌಲ್ಯವರ್ಧನೆ (NDVA)]] ₹ 631.90 ಬಿಲಿಯನ್ ಆಗಿದ್ದು, ವಾರ್ಷಿಕ ಬೆಳವಣಿಗೆ ದರವು 11.59% ಆಗಿದೆ. ಪ್ರತಿ ವ್ಯಕ್ತಿ GDVA ಆರ್ಥಿಕ ವರ್ಷದಲ್ಲಿ ₹ 154,463 ಎಂದು ಲೆಕ್ಕಹಾಕಲಾಗಿದೆ. GDVA ಯ ಬೆಳವಣಿಗೆ ದರವು 2017–18 ರಲ್ಲಿ 18.12%, 2016–17 ರಲ್ಲಿ 9.49%, 2015–16 ರಲ್ಲಿ 7.86%, 2014–15 ರಲ್ಲಿ 8.83%, 2013–14 ರಲ್ಲಿ 14.08%, ಮತ್ತು 2012–13 ರಲ್ಲಿ 9.70% ಆಗಿತ್ತು. ಇದು ಏರಿಳಿತದ ಪ್ರವೃತ್ತಿಯನ್ನು ತೋರಿಸುತ್ತದೆ.<ref name="GDVA_Malappuram"/>
ಮಲಪ್ಪುರಂನ ಆರ್ಥಿಕತೆಯು ವಲಸಿಗರ ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ. ಮಲಪ್ಪುರಂನಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ವಲಸಿಗರಿದ್ದಾರೆ. [[ಕೇರಳ ಸರ್ಕಾರ]] ಪ್ರಕಟಿಸಿದ 2016 ರ ಆರ್ಥಿಕ ಸಮೀಕ್ಷಾ ವರದಿಯ ಪ್ರಕಾರ, ಜಿಲ್ಲೆಯ ಪ್ರತಿ 100 ಮನೆಗಳಲ್ಲಿ 54 ಮನೆಗಳು ವಲಸಿಗರ ಮನೆಗಳಾಗಿವೆ.<ref>{{cite web |url=http://spb.kerala.gov.in/EconomicReview2016/web/chapter06_03.php |website=spb.kerala.gov.in |title=ಮಲಪ್ಪುರಂ ಕೇರಳದಿಂದ ವಲಸಿಗರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ |access-date=3 December 2019 |archive-date=21 November 2019 |archive-url=https://web.archive.org/web/20191121020814/http://spb.kerala.gov.in/EconomicReview2016/web/chapter06_03.php |url-status=live}}</ref> ಅವರಲ್ಲಿ ಹೆಚ್ಚಿನವರು [[ಮಧ್ಯಪ್ರಾಚ್ಯ]]ದಲ್ಲಿ ಕೆಲಸ ಮಾಡುತ್ತಾರೆ. ಅವರು ಜಿಲ್ಲಾ ಆರ್ಥಿಕತೆಗೆ ಪ್ರಮುಖ ಕೊಡುಗೆದಾರರಾಗಿದ್ದಾರೆ. [[ಕೇರಳ ಗ್ರಾಮೀಣ ಬ್ಯಾಂಕ್|KGB]] ನ ಪ್ರಧಾನ ಕಚೇರಿಯು ಮಲಪ್ಪುರಂನಲ್ಲಿದೆ.<ref>{{cite web |url=https://www.newindianexpress.com/business/2013/jul/15/kgb-to-expand-operations-in-all-panchayats-496821.html |website=The New Indian Express |title=KGB ಎಲ್ಲಾ ಪಂಚಾಯತ್ಗಳಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ |date=15 July 2013 |access-date=25 June 2020 |archive-date=26 June 2020 |archive-url=https://web.archive.org/web/20200626211219/https://www.newindianexpress.com/business/2013/jul/15/KGB-to-expand-operations-in-all-Panchayats-496821.html |url-status=live}}</ref>
[[File:KGB logo.png|250px|thumb|[[ಕೇರಳ ಗ್ರಾಮೀಣ ಬ್ಯಾಂಕ್|KGB]] ಕೇರಳದ ಅತಿದೊಡ್ಡ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್ ಜಾಲವಾಗಿದೆ]]
=== ಆರ್ಥಿಕ ಖನಿಜಗಳು ===
[[ಲ್ಯಾಟರೈಟ್|ಲ್ಯಾಟರೈಟ್ ಕಲ್ಲು]] ಜಿಲ್ಲೆಯ ಮಧ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. [[ಅಂಗಡಿಪುರಂ ಲ್ಯಾಟರೈಟ್]] [[ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ|ರಾಷ್ಟ್ರೀಯ ಭೂ-ಪರಂಪರೆ ಸ್ಮಾರಕ]]ವಾಗಿ ಗುರುತಿಸಲ್ಪಟ್ಟಿದೆ.<ref name=gsi3>[http://naturalheritage.intach.org/wp-content/uploads/2016/09/Geoheritage-Monograph.pdf ಭಾರತದ ರಾಷ್ಟ್ರೀಯ ಭೂ-ಪರಂಪರೆ] {{Webarchive|url=https://web.archive.org/web/20170111120428/http://naturalheritage.intach.org/wp-content/uploads/2016/09/Geoheritage-Monograph.pdf |date=11 January 2017 }}, [[ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್|INTACH]]</ref> [[ಪರ್ಯಾಯದ್ವೀಪೀಯ ನೈಸ್|ಆರ್ಕಿಯನ್ ನೈಸ್]] ಜಿಲ್ಲೆಯ ಅತ್ಯಂತ ಸಾಮಾನ್ಯ ಭೂವೈಜ್ಞಾನಿಕ ರಚನೆಯಾಗಿದೆ. [[ಮ್ಯಾಗ್ನೆಟೈಟ್|ಕ್ವಾರ್ಟ್ಜ್ ಮ್ಯಾಗ್ನೆಟೈಟ್]], ಇದು [[ಪೊರೂರ್, ಮಲಪ್ಪುರಂ|ಪೊರೂರ್]] ನಲ್ಲಿ ಕಂಡುಬರುತ್ತದೆ, ಇದು ಆರ್ಥಿಕ ಪ್ರಾಮುಖ್ಯತೆಯನ್ನು ಹೊಂದಿರುವ ಖನಿಜಗಳಲ್ಲಿ ಒಂದಾಗಿದೆ. ಕ್ವಾರ್ಟ್ಜ್ ನೈಸ್ಗಳು [[ನಿಲಂಬೂರ್]], [[ಎಡವನ್ನ]], ಮತ್ತು [[ಪಾಂಡಿಕ್ಕಾಡ್]] ಪ್ರದೇಶಗಳಲ್ಲಿ ಕಂಡುಬರುತ್ತವೆ. ಗಾರ್ನೆಲಿಫೋರಸ್ ಕ್ವಾರ್ಟ್ಜ್ [[ಮಂಜೇರಿ]] ಮತ್ತು [[ಕೊಂಡೊಟ್ಟಿ]] ಪ್ರದೇಶಗಳಲ್ಲಿ ಕಂಡುಬರುತ್ತದೆ. [[ಚಾರ್ನೊಕೈಟ್|ಚಾರ್ನೊಕೈಟ್ ಬಂಡೆಗಳು]] ನಿಲಂಬೂರ್ ಮತ್ತು [[ಎಡವನ್ನ]]ಗಳಲ್ಲಿ ಕಂಡುಬರುತ್ತವೆ. [[ಡೈಕ್ (ಭೂವಿಜ್ಞಾನ)|ಡೈಕ್ಗಳು]] ವಿಶಿಷ್ಟವಾದ ಲ್ಯಾಟರೈಟ್ ರಚನೆಯಲ್ಲಿ [[ಪ್ಲೇಜಿಯೋಕ್ಲೇಸ್]], [[ಫೆಲ್ಡ್ಸ್ಪಾರ್]], ಮತ್ತು [[ಪೈರೋಕ್ಸೀನ್]]ಗಳನ್ನು ಒಳಗೊಂಡಿರುತ್ತವೆ, ಇವು ಮಂಜೇರಿಯಲ್ಲಿವೆ. [[ಇರನಾಡ್]] ಪ್ರದೇಶದಿಂದ ಉತ್ತಮ ಗುಣಮಟ್ಟದ ಕಬ್ಬಿಣದ ಅದಿರಿನ ನಿಕ್ಷೇಪಗಳು ವರದಿಯಾಗಿವೆ. ಸುಣ್ಣದ ಚಿಪ್ಪುಗಳ ನಿಕ್ಷೇಪಗಳು ಪೊನ್ನಾನಿ ಮತ್ತು ಕಡಲುಂಡಿನಗರಂನ ಕರಾವಳಿ ಪ್ರದೇಶಗಳಿಂದ ಕಂಡುಬಂದಿವೆ. [[ಪೊನ್ನಾನಿ]] ಮತ್ತು [[ವೆಲಿಯಂಕೋಡ್]]ನ ಕರಾವಳಿ ಮರಳುಗಳು ಹೆಚ್ಚಿನ ಪ್ರಮಾಣದ ಭಾರ ಖನಿಜಗಳು, [[ಇಲ್ಮೆನೈಟ್]] ಮತ್ತು [[ಮೊನಾಜೈಟ್]] ಅನ್ನು ಹೊಂದಿರುತ್ತವೆ. [[ಕಾವೊಲಿನೈಟ್]] ಪೊನ್ನಾನಿ ಮತ್ತು ಪೆರಿಂತಲ್ಮನ್ನ ತಾಲೂಕುಗಳಿಂದ ಕಂಡುಬಂದಿದೆ. [[ಬಾಲ್ ಜೇಡಿಮಣ್ಣು]]ನ ನಿಕ್ಷೇಪಗಳು ತೆಕ್ಕುಮ್ಮುರಿ ಗ್ರಾಮದಿಂದ ಕಂಡುಬಂದಿವೆ. ನಿಲಂಬೂರ್ ಉಪ-ಜಿಲ್ಲೆಯ ಭಾಗಗಳು [[ವಯನಾಡ್]]ನ ಗುಪ್ತ ಚಿನ್ನದ ಗಣಿಗಳಲ್ಲಿ ಸೇರಿವೆ. [[ನಿಲಂಬೂರ್]] ತಾಲೂಕು, [[ವಯನಾಡ್ ಜಿಲ್ಲೆ|ವಯನಾಡ್]] ಮತ್ತು [[ಅಟ್ಟಪ್ಪಾಡಿ]] ಕಣಿವೆಯ ಪಕ್ಕದ ಪ್ರದೇಶಗಳು ನೈಸರ್ಗಿಕ [[ಚಿನ್ನ]]ದ ಗಣಿಗಳಿಗೆ ಹೆಸರುವಾಸಿಯಾಗಿದೆ. ನಿಲಂಬೂರ್ನಲ್ಲಿ [[ಚಾಲಿಯಾರ್]] ನದಿಯ ಕಣಿವೆಯಲ್ಲಿ ಮಾಡಿದ ಅನ್ವೇಷಣೆಗಳು 0.1 ಗ್ರಾಂ ಪ್ರತಿ ಘನ ಮೀಟರ್ಗೆ 2.5 ಮಿಲಿಯನ್ ಘನ ಮೀಟರ್ಗಳಷ್ಟು ಪ್ಲೇಸರ್ಗಳ ಮೀಸಲುಗಳನ್ನು ತೋರಿಸಿವೆ.<ref name="geographymalappuram" /> [[ಬಾಕ್ಸೈಟ್]] [[ಕೊಟ್ಟಕ್ಕಲ್]], ಪರಪ್ಪಿಲ್, [[ಊರಕಂ]], ಮತ್ತು [[ಮೇಲ್ಮುರಿ]] ಸೇರಿದಂತೆ ಜಿಲ್ಲೆಯ ಕೆಲವು ಭಾಗಗಳಿಂದ ಕಂಡುಬಂದಿದೆ.<ref>{{cite web |url=http://industry.kerala.gov.in/images/pdf/malappuram.pdf |website=industry.kerala.gov.in |title=ಮಲಪ್ಪುರಂನ ಖನಿಜಗಳು |page=35 |access-date=21 April 2020 |archive-date=26 April 2021 |archive-url=https://web.archive.org/web/20210426034953/http://industry.kerala.gov.in/images/pdf/malappuram.pdf |url-status=live }}</ref> [[ಕರುವರಕುಂಡು]], ಇದರರ್ಥ "ಕಮ್ಮಾರನ ಸ್ಥಳ", ಕಬ್ಬಿಣದ ಅದಿರು ಕತ್ತರಿಸುವುದು ಮತ್ತು ಕಮ್ಮಾರರ ಕೆಲಸದಿಂದ ವ್ಯುತ್ಪತ್ತಿಯಾಗಿದೆ.<ref>{{cite journal |year=2000 |title=ಭಾರತೀಯ ಇತಿಹಾಸ ಕಾಂಗ್ರೆಸ್ನ ಕಾರ್ಯವಿಧಾನಗಳು |volume=60 |pages=1204 |oclc=1752882 }}</ref>
=== ಕೈಗಾರಿಕೆಗಳು ===
[[File:Manjeri Town Calicut Road View.jpg|thumbnail|[[ಮಂಜೇರಿ]], [[ಮಲಪ್ಪುರಂ ಮಹಾನಗರ ಪ್ರದೇಶ]]ದ ಒಂದು ಘಟಕ ಪಟ್ಟಣ]]
[[ತಿರುನವಾಯ]]ದ ಕೊಡಕ್ಕಲ್ ಟೈಲ್ ಫ್ಯಾಕ್ಟರಿಯನ್ನು 1887 ರಲ್ಲಿ ಸ್ಥಾಪಿಸಲಾಯಿತು, ಇದು ಭಾರತದ ಎರಡನೇ ಟೈಲ್ ಫ್ಯಾಕ್ಟರಿಯಾಗಿದೆ. ಭಾರತದ ಮೊದಲ ಟೈಲ್ ಫ್ಯಾಕ್ಟರಿಯು [[ಫೆರೋಕ್]]ನಲ್ಲಿತ್ತು, ಇದು ಆಗ [[ಇರನಾಡ್ ತಾಲೂಕು]]ನ ಭಾಗವಾಗಿತ್ತು. 2011 ರಲ್ಲಿ ನಡೆಸಿದ ಜನಗಣತಿಯ ಪ್ರಕಾರ, SSI/MMSE ಅಡಿಯಲ್ಲಿ ನೋಂದಾಯಿಸಲಾದ 10,629 ಕೈಗಾರಿಕಾ ಘಟಕಗಳಿವೆ, ಮತ್ತು ಇವುಗಳಲ್ಲಿ 396 ಘಟಕಗಳನ್ನು [[ಪರಿಶಿಷ್ಟ ಜಾತಿಗಳ ಪಟ್ಟಿ|ಪರಿಶಿಷ್ಟ ಜಾತಿಗಳು]], 83 ಅನ್ನು [[ಬುಡಕಟ್ಟು ಜನಾಂಗದವರು|ಪರಿಶಿಷ್ಟ ಪಂಗಡಗಳು]], ಮತ್ತು ಉಳಿದ ಘಟಕಗಳನ್ನು ಸಾಮಾನ್ಯ ವರ್ಗದವರು ಪ್ರೋತ್ಸಾಹಿಸಿದ್ದಾರೆ. ಸ್ವಯಂ ಉದ್ಯೋಗ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ವರ್ಷ ಸುಮಾರು 1,000 ಜನರಿಗೆ ಸಹಾಯ ಮಾಡಲಾಗುತ್ತದೆ. [[ತೆನಿಪಾಲಂ]] ಬಳಿಯ [[ಚೆಲೆಂಬ್ರ|ಕಕ್ಕಾಂಚೇರಿ]]ಯಲ್ಲಿ [[ಕೇರಳ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ|KINFRA]] ಆಹಾರ ಸಂಸ್ಕರಣೆ ಮತ್ತು IT [[ಕೈಗಾರಿಕಾ ಎಸ್ಟೇಟ್]]ಗಳು,<ref>{{cite web | url=http://kinfra.org/departments/kinfra-techno-industrial-park-malappuram | website=kinfra.org | title=KINFRA ಟೆಕ್ನೋ ಇಂಡಸ್ಟ್ರಿಯಲ್ ಪಾರ್ಕ್, ಮಲಪ್ಪುರಂ | access-date=27 November 2019 | archive-date=22 November 2019 | archive-url=https://web.archive.org/web/20191122114925/http://kinfra.org/departments/kinfra-techno-industrial-park-malappuram | url-status=live }}</ref> [[ಮಲಪ್ಪುರಂ]]ನಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ INKEL SME ಪಾರ್ಕ್ ಮತ್ತು [[ಮಂಜೇರಿ]]ಯ [[ಪಯ್ಯನಾಡ್]]ನಲ್ಲಿ ರಬ್ಬರ್ ಪ್ಲಾಂಟ್ ಮತ್ತು ಕೈಗಾರಿಕಾ ಎಸ್ಟೇಟ್ ಇವೆ. [[ಮಲಪ್ಪುರಂ]]ನಲ್ಲಿ 168 ಎಕರೆಗಳಲ್ಲಿ ಹರಡಿರುವ INKEL ಗ್ರೀನ್ಸ್, ಕೈಗಾರಿಕಾ ವಲಯವಾದ 'SME ಪಾರ್ಕ್' ಮತ್ತು ಶೈಕ್ಷಣಿಕ ವಲಯವಾದ 'ಎಜುಸಿಟಿ' ಅನ್ನು ಒಳಗೊಂಡಿದೆ.<ref>{{Cite news|title=ಕೇರಳದ INKEL ₹1000 ಕೋಟಿ ಹೂಡಿಕೆ ತರಲಿದೆ|url=https://economictimes.indiatimes.com/news/economy/infrastructure/keralas-inkel-to-bring-an-invest-of-rs-1000-crore/articleshow/47541323.cms|date=4 June 2015|access-date=6 October 2020|work=The Economic Times|archive-date=13 September 2021|archive-url=https://web.archive.org/web/20210913065709/https://economictimes.indiatimes.com/news/economy/infrastructure/keralas-inkel-to-bring-an-invest-of-rs-1000-crore/articleshow/47541323.cms|url-status=live}}</ref>
MALCOSPIN (ಮಲಪ್ಪುರಂ ಸ್ಪಿನ್ನಿಂಗ್ ಮಿಲ್ಸ್ ಲಿಮಿಟೆಡ್) ರಾಜ್ಯ ಸರ್ಕಾರದ ಅಡಿಯಲ್ಲಿನ ಜಿಲ್ಲೆಯ ಅತ್ಯಂತ ಹಳೆಯ ಕೈಗಾರಿಕಾ ಸ್ಥಾಪನೆಗಳಲ್ಲಿ ಒಂದಾಗಿದೆ. ಮರ-ಸಂಬಂಧಿತ ಕೈಗಾರಿಕೆಗಳು [[ಕೊಟ್ಟಕ್ಕಲ್]], [[ಎಡವನ್ನ]], [[ವಣಿಯಂಬಲಂ]], [[ಕರುಲೈ]], [[ನಿಲಂಬೂರ್]] ಮತ್ತು [[ಮಂಪಾಡ್]]ಗಳಲ್ಲಿ ಸಾಮಾನ್ಯವಾಗಿವೆ. ಗರಗಸದ ಕಾರ್ಖಾನೆಗಳು, ಪೀಠೋಪಕರಣ ತಯಾರಕರು ಮತ್ತು ಮರದ ವ್ಯಾಪಾರವು ಕಳೆದ ದಶಕಗಳವರೆಗೆ ಜಿಲ್ಲೆಯ ಪ್ರಮುಖ ವ್ಯವಹಾರಗಳಾಗಿದ್ದವು. [[ತಿರೂರ್]] ಎಲೆಕ್ಟ್ರಾನಿಕ್ಸ್, ಮೊಬೈಲ್ ಫೋನ್ಗಳು ಮತ್ತು ಇತರ ಗ್ಯಾಜೆಟ್ಗಳಿಗೆ ಪ್ರಮುಖ ಪ್ರಾದೇಶಿಕ ವ್ಯಾಪಾರ ಕೇಂದ್ರವಾಗಿದೆ. [[ನೌಕರರ ರಾಜ್ಯ ವಿಮಾ ನಿಗಮ|ನೌಕರರ ರಾಜ್ಯ ವಿಮೆ]] ತನ್ನ ಶಾಖಾ ಕಚೇರಿಯನ್ನು ಮಲಪ್ಪುರಂನಲ್ಲಿ ಹೊಂದಿದೆ.<ref name="geographymalappuram" /> [[ಕೇರಳ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ|KELTRON]] ಎಲೆಕ್ಟ್ರೋ ಸೆರಾಮಿಕ್ಸ್ (KELCERA) [[ಕುಟ್ಟಿಪುರಂ]]ನಲ್ಲಿ,<ref>{{Cite web|url=http://www.keltronelcera.com/index.php/home.html|title=KELCERA|access-date=30 January 2021|website=keltronelcera|archive-date=5 February 2021|archive-url=https://web.archive.org/web/20210205010009/http://www.keltronelcera.com/index.php/home.html|url-status=live}}</ref> [[ಕೇರಳ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ|KELTRON]] ಟೂಲ್ ರೂಮ್ [[ಕುಟ್ಟಿಪುರಂ]]ನಲ್ಲಿ, [[ಎದರಿಕೋಡ್]]ನ ಎದರಿಕೋಡ್ ಟೆಕ್ಸ್ಟೈಲ್ಸ್, [[ಎಡಪ್ಪಲ್]]ನಲ್ಲಿ [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|KSRTC]] ಬಾಡಿ ವರ್ಕ್ಶಾಪ್, [[ಅತವನಾಡ್]]ನಲ್ಲಿ MALCOTEX (ಮಲಬಾರ್ ಕೋ-ಆಪರೇಟಿವ್ ಟೆಕ್ಸ್ಟೈಲ್ಸ್ ಲಿಮಿಟೆಡ್),<ref>{{Cite web|url=http://www.malcotex.co.in/|title=MALCOTEX|access-date=30 January 2021|website=malcotex|archive-date=13 September 2021|archive-url=https://web.archive.org/web/20210913065710/https://fonts.googleapis.com/css?family=Noto+Serif%3A400%2C400italic%2C700%7COpen+Sans%3A300%2C400%2C600%2C700|url-status=live}}</ref> ಮತ್ತು [[ಅತವನಾಡ್]]ನಲ್ಲಿ KELTEX (ಕೇರಳ ಹೈ-ಟೆಕ್ ಟೆಕ್ಸ್ಟೈಲ್ ಕೋ-ಆಪರೇಟಿವ್ ಲಿಮಿಟೆಡ್),<ref>{{Cite web|url=http://www.keltex.org/|title=KELTEX ಅತವನಾಡ್|access-date=30 January 2021|website=keltex|archive-date=27 January 2021|archive-url=https://web.archive.org/web/20210127203929/http://www.keltex.org/|url-status=live}}</ref> ಸಾರ್ವಜನಿಕ ವಲಯದ ಅಡಿಯಲ್ಲಿನ ಇತರ ಪ್ರಮುಖ ಕೈಗಾರಿಕಾ ಕೇಂದ್ರಗಳಾಗಿವೆ.<ref>{{cite web |url=http://www.msmedithrissur.gov.in/assets/uploads/downloadfile/Malappuram%202017-18.pdf |website=msmedithrissur.gov.in |title=ಮಲಪ್ಪುರಂ ಜಿಲ್ಲೆಯ ಸಂಕ್ಷಿಪ್ತ ಕೈಗಾರಿಕಾ ಪ್ರೊಫೈಲ್ 2017–18 |access-date=13 July 2020 |archive-date=14 July 2020 |archive-url=https://web.archive.org/web/20200714131013/http://www.msmedithrissur.gov.in/assets/uploads/downloadfile/Malappuram%202017-18.pdf |url-status=live }}</ref> ಕೇರಳ ರಾಜ್ಯ ಮಾರ್ಜಕಗಳು ಮತ್ತು ರಾಸಾಯನಿಕಗಳ ಲಿಮಿಟೆಡ್ ಮತ್ತು ಕೇರಳ ರಾಜ್ಯ ಮರ ಕೈಗಾರಿಕೆಗಳ ಲಿಮಿಟೆಡ್ ಕ್ರಮವಾಗಿ [[ಕುಟ್ಟಿಪುರಂ]] ಮತ್ತು [[ನಿಲಂಬೂರ್]]ಗಳಲ್ಲಿ ತಮ್ಮ ಪ್ರಧಾನ ಕಚೇರಿಗಳನ್ನು ಹೊಂದಿವೆ.<ref>{{Cite web|url=https://economictimes.indiatimes.com/company/kerala-state-detergents-and-chemicals-ltd-/U24243KL1976SGC002816|title=ಕೇರಳ ರಾಜ್ಯ ಮಾರ್ಜಕಗಳು ಮತ್ತು ರಾಸಾಯನಿಕಗಳ ಲಿಮಿಟೆಡ್|access-date=29 July 2020|website=The Economic Times|archive-date=13 September 2021|archive-url=https://web.archive.org/web/20210913063631/https://economictimes.indiatimes.com/company/kerala-state-detergents-and-chemicals-ltd/U24243KL1976SGC002816|url-status=live}}</ref><ref>{{Cite web|url=https://economictimes.indiatimes.com/company/kerala-state-wood-industries-ltd-/U36101KL1970SGC003411|title=ಕೇರಳ ರಾಜ್ಯ ಮರ ಕೈಗಾರಿಕೆಗಳ ಲಿಮಿಟೆಡ್|access-date=29 July 2020|website=The Economic Times|archive-date=13 September 2021|archive-url=https://web.archive.org/web/20210913063633/https://economictimes.indiatimes.com/company/kerala-state-wood-industries-ltd/U36101KL1970SGC003411|url-status=live}}</ref> ಪೋಪೀಸ್ ಬೇಬಿ ಕೇರ್, ವಿಶ್ವದ ಅತಿದೊಡ್ಡ ಶಿಶು ವಸ್ತ್ರ ತಯಾರಕ ಬ್ರಾಂಡ್ಗಳಲ್ಲಿ ಒಂದಾಗಿದೆ, ಇದು ಪ್ರಾಥಮಿಕವಾಗಿ ಮಲಪ್ಪುರಂನಲ್ಲಿದೆ.<ref>{{Cite web|url=https://timesofindia.indiatimes.com/city/kozhikode/pvt-firm-gives-out-free-clothes-to-newborns/articleshow/74998448.cms|title=ಪೋಪೀಸ್ ಬೇಬಿ ಕೇರ್|date=6 April 2020|access-date=16 August 2020|website=Times of India|last=TNN|archive-date=13 September 2021|archive-url=https://web.archive.org/web/20210913063642/https://timesofindia.indiatimes.com/city/kozhikode/pvt-firm-gives-out-free-clothes-to-newborns/articleshow/74998448.cms|url-status=live}}</ref>
=== ಕೃಷಿ ===
[[File:Kcaet.JPG|thumb|1963 ರಲ್ಲಿ ಸ್ಥಾಪಿಸಲಾದ [[ತವನೂರ್]]ನಲ್ಲಿನ [[ಕೆಲಪ್ಪಾಜಿ ಕಾಲೇಜ್ ಆಫ್ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ|KCAET]], ರಾಜ್ಯದ ಏಕೈಕ ಕೃಷಿ ಎಂಜಿನಿಯರಿಂಗ್ ಸಂಸ್ಥೆಯಾಗಿದೆ]]
[[File:Agricultural Research Station, Anakkayam - 1.jpg|left|thumb|[[ಅನಕ್ಕಯಂ ಕೃಷಿ ಸಂಶೋಧನಾ ಕೇಂದ್ರ]]]]
[[File:Edappal malappuram(district) kerala infia.jpg|thumbnail|[[ಎಡಪ್ಪಲ್]]ನಲ್ಲಿನ ಒಂದು ಹೊಲ]]
[[ತೆಂಗು]], ತಾಳೆ ಮತ್ತು ಭತ್ತವು ಮುಖ್ಯವಾಗಿ ಮಲಪ್ಪುರಂ ಕರಾವಳಿಯಲ್ಲಿ ಕಂಡುಬರುತ್ತವೆ. [[ಗೋಡಂಬಿ]], ತೆಂಗು, ಮತ್ತು [[ಮರಗೆಣಸು]] ಏರುತಗ್ಗಿನ ಬಯಲಿನಲ್ಲಿ ಕಂಡುಬರುತ್ತವೆ. [[ರಬ್ಬರ್]], ಗೋಡಂಬಿ, [[ಕರಿಮೆಣಸು|ಮೆಣಸು]], ಮತ್ತು ತೆಂಗು ಚಾಲಿಯಾರ್ ನದಿ ಜಲಾನಯನದಲ್ಲಿ ಕಂಡುಬರುವ ಪ್ರಮುಖ ಸಸ್ಯವರ್ಗಗಳಾಗಿವೆ. ನಿಲಂಬೂರ್ ಕಣಿವೆಯು ವ್ಯಾಪಕವಾದ ಪ್ರಭೇದಗಳ ಕೃಷಿಯನ್ನು ಹೊಂದಿದೆ. [[ತೇಗ]]ವು ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಪೆರಿಂತಲ್ಮನ್ನ ಏರುತಗ್ಗಿನ ಮೇಲುನೆಲವು ತೆಂಗು, [[ತಾಳೆ ಮರಗಳು]], ಮೆಣಸು, ರಬ್ಬರ್, ಮತ್ತು ಗೋಡಂಬಿ ಪ್ರಭೇದಗಳ ಕೃಷಿಯನ್ನು ಹೊಂದಿದೆ. ಈ ಪ್ರದೇಶವು [[ಕಡಲುಂಡಿ ನದಿ]]ಯಿಂದ ಹರಿದುಹೋಗುತ್ತದೆ. ಸಾಮಾನ್ಯ ಬೆಳೆಗಳ ಜೊತೆಗೆ, [[ಮಾವು]], [[ಹಲಸು]], [[ಬಾಳೆಹಣ್ಣು|ಬಾಳೆ]], ಇತ್ಯಾದಿ ಪ್ರಭೇದಗಳನ್ನು ಸಹ ಬೆಳೆಯಲಾಗುತ್ತದೆ.<ref name="geographymalappuram"/> ಜಿಲ್ಲೆಯ ಸಾಮಾನ್ಯ ಬೆಟ್ಟದ ಸ್ವಭಾವವು ತಾರಸಿ ಕೃಷಿಯನ್ನು ಬೆಂಬಲಿಸುತ್ತದೆ. [[ತೃಶೂರ್ ಕೋಲೆ ಜೌಗು ಪ್ರದೇಶಗಳು|ತೃಶೂರ್-ಪೊನ್ನಾನಿ ಕೋಲೆ ಜೌಗು ಪ್ರದೇಶಗಳ]] ಒಂದು ಭಾಗವು ಜಿಲ್ಲೆಯ [[ಪೊನ್ನಾನಿ ತಾಲೂಕು]]ನಲ್ಲಿದೆ, ಇದು ಭತ್ತದ ಹೆಚ್ಚು ಉತ್ಪಾದಕ ಕೃಷಿಗೆ ಅನುಕೂಲಕರವಾಗಿದೆ.
2016–17 ರ ಅಂಕಿಅಂಶಗಳ ಪ್ರಕಾರ, ಸ್ಥೂಲ ಬೆಳೆ ಪ್ರದೇಶವು 237,860 ಹೆಕ್ಟೇರ್ಗಳಾಗಿದ್ದರೆ, ನಿವ್ವಳ ಬೆಳೆ ಪ್ರದೇಶವು 173,178 ಹೆಕ್ಟೇರ್ಗಳಾಗಿತ್ತು. ಜಿಲ್ಲೆಯ ಬೆಳೆ ತೀವ್ರತೆಯು 137 ಹೆಕ್ಟೇರ್ಗಳಾಗಿದೆ. 2016–17 ರಲ್ಲಿ ಹೆಚ್ಚು ಉತ್ಪತ್ತಿಯಾದ ಲೆಕ್ಕವಿಲ್ಲದ ಬೆಳೆಯು ಮರಗೆಣಸು (185,880 ಮೆಟ್ರಿಕ್ ಟನ್ಗಳು), ನಂತರ ಬಾಳೆ (58,564 MT), ಮತ್ತು ರಬ್ಬರ್ (40,000 MT). 2016–17 ರಲ್ಲಿ 878 ಮಿಲಿಯನ್ ತೆಂಗಿನಕಾಯಿಗಳು ಮತ್ತು 19 ಮಿಲಿಯನ್ ಹಲಸಿನ ಹಣ್ಣುಗಳನ್ನು ಉತ್ಪಾದಿಸಲಾಯಿತು. ಆದಾಗ್ಯೂ, ಭೂ ಬಳಕೆಯು ತೆಂಗಿನ ಕೃಷಿಗೆ ಗರಿಷ್ಠವಾಗಿತ್ತು (102,836 ಹೆಕ್ಟೇರ್ಗಳು), ನಂತರ ರಬ್ಬರ್ (42,770 ಹೆಕ್ಟೇರ್ಗಳು), ಮತ್ತು ಅಡಕೆ (18,379 ಹೆಕ್ಟೇರ್ಗಳು).<ref>{{cite web |url=http://www.ecostat.kerala.gov.in/index.php/agri-state-mlp |website=ecostat.kerala.gov.in |title=ಮಲಪ್ಪುರಂನಲ್ಲಿ ಕೃಷಿ |access-date=20 June 2020 |archive-date=1 July 2020 |archive-url=https://web.archive.org/web/20200701171416/http://www.ecostat.kerala.gov.in/index.php/agri-state-mlp |url-status=live }}</ref> [[ಅನಕ್ಕಯಂ ಕೃಷಿ ಸಂಶೋಧನಾ ಕೇಂದ್ರ|ಒಂದು ಕೃಷಿ ಸಂಶೋಧನಾ ಕೇಂದ್ರವು]] [[ಅನಕ್ಕಯಂ]]ನಲ್ಲಿ ಕಾರ್ಯನಿರ್ವಹಿಸುತ್ತದೆ. [[ಮುಂದೇರಿ (ಮಲಪ್ಪುರಂ)|ಮುಂದೇರಿ]]ಯಲ್ಲಿನ ಬೀಜ ಉದ್ಯಾನ ಸಂಕೀರ್ಣವು [[ಏಷ್ಯಾ]]ದ ಅತಿದೊಡ್ಡ ಫಾರ್ಮ್ಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ರಾಜ್ಯ ಬೀಜ ಫಾರ್ಮ್ಗಳು [[ಚೊಕ್ಕಾಡ್]], [[ತವನೂರ್]], ಮತ್ತು [[ಅನಕ್ಕಯಂ]]ಗಳಲ್ಲಿವೆ. [[ಚುಂಗತರ]]ದಲ್ಲಿ ಜಿಲ್ಲಾ ಕೃಷಿ ಫಾರ್ಮ್ ಮತ್ತು [[ಪರಪ್ಪನಂಗಾಡಿ]]ಯಲ್ಲಿ ತೆಂಗಿನ ಸಸ್ಯಾಲಯವು ಕಾರ್ಯನಿರ್ವಹಿಸುತ್ತದೆ.<ref>{{Cite web|url=https://www.fibkerala.gov.in/index.php?option=com_content&task=view&id=409&Itemid=156|title=ಮಲಪ್ಪುರಂನ ಪ್ರಮುಖ ಫಾರ್ಮ್ಗಳು|access-date=28 August 2020|website=Farm Information Bureau, Kerala|archive-date=13 September 2021|archive-url=https://web.archive.org/web/20210913063805/https://www.fibkerala.gov.in/index.php?option=com_content&task=view&id=409&Itemid=156|url-status=live}}</ref> [[ತವನೂರ್]]ನಲ್ಲಿನ [[ಕೆಲಪ್ಪಾಜಿ ಕಾಲೇಜ್ ಆಫ್ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ|KCAET]] ರಾಜ್ಯದ ಏಕೈಕ ಕೃಷಿ ಎಂಜಿನಿಯರಿಂಗ್ ಸಂಸ್ಥೆಯಾಗಿದೆ.<ref name=kcaet>{{Cite web|url=http://www.kau.in/kcaet-tavanur|title=ಕೆಲಪ್ಪಾಜಿ ಕಾಲೇಜ್ ಆಫ್ ಅಗ್ರಿಕಲ್ಚರಲ್ ಇಂಜಿನಿಯರಿಂಗ್ & ಟೆಕ್ನಾಲಜಿ, ತವನೂರ್ | ಕೇರಳ ಕೃಷಿ ವಿಶ್ವವಿದ್ಯಾಲಯ|website=kau.in|access-date=30 June 2020|archive-date=2 July 2020|archive-url=https://web.archive.org/web/20200702012845/http://www.kau.in/kcaet-tavanur|url-status=live}}</ref>
== ಸಾರಿಗೆ ==
=== ರಸ್ತೆಗಳು ===
[[File:Wandoor Town 2017.jpg|thumbnail|2017 ರಲ್ಲಿ [[ವಾಂಡೂರ್]] ಪಟ್ಟಣ]]
[[File:Muriyankanni bridge.jpg|thumbnail|[[ಪೆರಿಂತಲ್ಮನ್ನ]]ದ [[ಕರಿಂಕಲ್ಲತ್ತಾನಿ]]ಯಲ್ಲಿ ಮುರಿಯಂಕಣ್ಣಿ ಸೇತುವೆ]]
[[File:Edavannappara.1.jpg|left|thumbnail|[[ಎಲಾಮರಂ]]ನಲ್ಲಿ [[ಚಾಲಿಯಾರ್]] ನದಿಯ ಮೂಲಕ ದೋಣಿ ಸೇವೆ]]
[[File:Bridge -bharatappuzha -kuttippuram (1).jpg|thumb|1953 ರಲ್ಲಿ ನಿರ್ಮಿಸಲಾದ [[ಕುಟ್ಟಿಪುರಂ ಸೇತುವೆ]]]]
ಮಲಪ್ಪುರಂ ರಸ್ತೆಗಳ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ಜಿಲ್ಲೆಯಲ್ಲಿ ನಾಲ್ಕು [[ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ|KSRTC]] ನಿಲ್ದಾಣಗಳಿವೆ.<ref>{{cite web |url=https://www.keralartc.com/unit.html |website=keralartc.com |title=ಮಲಪ್ಪುರಂನ KSRTC ನಿಲ್ದಾಣಗಳು |access-date=6 July 2020 |archive-date=4 June 2021 |archive-url=https://web.archive.org/web/20210604095619/https://www.keralartc.com/unit.html |url-status=live }}</ref> 2 [[ಭಾರತದ ರಾಷ್ಟ್ರೀಯ ಹೆದ್ದಾರಿಗಳು|ರಾಷ್ಟ್ರೀಯ ಹೆದ್ದಾರಿಗಳು]] ಜಿಲ್ಲೆಯ ಮೂಲಕ ಹಾದುಹೋಗುತ್ತವೆ - [[ರಾಷ್ಟ್ರೀಯ ಹೆದ್ದಾರಿ 66 (ಭಾರತ)|NH 66]] ಮತ್ತು [[ರಾಷ್ಟ್ರೀಯ ಹೆದ್ದಾರಿ 966 (ಭಾರತ)|NH 966]]. NH 66 [[ರಾಮನಟ್ಟುಕರ]] ಮೂಲಕ ಜಿಲ್ಲೆಯನ್ನು ತಲುಪುತ್ತದೆ ಮತ್ತು [[ತಿರೂರಂಗಡಿ]], [[ಕಕ್ಕಾಡ್, ಮಲಪ್ಪುರಂ|ಕಕ್ಕಾಡ್]], [[ಕೊಟ್ಟಕ್ಕಲ್]], [[ವಳಾಂಚೇರಿ]], [[ಕುಟ್ಟಿಪುರಂ]], ಮತ್ತು [[ಪೊನ್ನಾನಿ]] ಪಟ್ಟಣಗಳನ್ನು ಸಂಪರ್ಕಿಸುತ್ತದೆ ಮತ್ತು [[ಚವಕ್ಕಾಡ್]] ಮೂಲಕ ಜಿಲ್ಲೆಯಿಂದ ಹೊರಹೋಗುತ್ತದೆ. NH 966 ಮೂಲಕ ಸಂಪರ್ಕ ಹೊಂದಿದ ಪ್ರಮುಖ ನಗರಗಳು/ಪಟ್ಟಣಗಳು [[ಕೊಂಡೊಟ್ಟಿ]] (ಕರಿಪುರ್ ವಿಮಾನ ನಿಲ್ದಾಣ), [[ಮಲಪ್ಪುರಂ]], ಮತ್ತು [[ಪೆರಿಂತಲ್ಮನ್ನ]] ಸೇರಿವೆ. ಜಿಲ್ಲೆಯ [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|ರಾಜ್ಯ ಹೆದ್ದಾರಿಗಳು]] [[ರಾಜ್ಯ ಹೆದ್ದಾರಿ 23 (ಕೇರಳ)|SH 23]] (ಶೋರನೂರ್-ಪೆರಿಂತಲ್ಮನ್ನ), [[ರಾಜ್ಯ ಹೆದ್ದಾರಿ 28 (ಕೇರಳ)|SH 28]] (ಮಲಪ್ಪುರಂ-ವಾಳಿಕ್ಕಡವು), [[ರಾಜ್ಯ ಹೆದ್ದಾರಿ 34 (ಕೇರಳ)|SH 34]] (ಕ್ವಿಲಾಂಡಿ-ಎಡವನ್ನ), [[ರಾಜ್ಯ ಹೆದ್ದಾರಿ 39 (ಕೇರಳ)|SH 39]] (ಪೆರುಂಬಿಳಾವು-ನಿಲಂಬೂರ್), [[ರಾಜ್ಯ ಹೆದ್ದಾರಿ 53 (ಕೇರಳ)|SH 53]] (ಮುಂಡೂರ್-ಪೆರಿಂತಲ್ಮನ್ನ), [[ಹಿಲ್ ಹೆದ್ದಾರಿ (ಕೇರಳ)|ಹಿಲ್ ಹೆದ್ದಾರಿ]], [[ರಾಜ್ಯ ಹೆದ್ದಾರಿ 60 (ಕೇರಳ)|SH 60]] (ಅಂಗಡಿಪುರಂ-ಚೆರುಕರ), [[ರಾಜ್ಯ ಹೆದ್ದಾರಿ 62 (ಕೇರಳ)|SH 62]] (ಗುರುವಾಯೂರ್-ಪೊನ್ನಾನಿ), [[ರಾಜ್ಯ ಹೆದ್ದಾರಿ 65 (ಕೇರಳ)|SH 65]] (ಪರಪ್ಪನಂಗಾಡಿ-ಅರೀಕೋಡ್), [[ರಾಜ್ಯ ಹೆದ್ದಾರಿ 69 (ಕೇರಳ)|SH 69]] (ತೃಶೂರ್-ಕುಟ್ಟಿಪುರಂ), [[ರಾಜ್ಯ ಹೆದ್ದಾರಿ 70 (ಕೇರಳ)|SH 70]] (ಕರುವರಕುಂಡು – ಮೇಲತ್ತೂರ್), [[ರಾಜ್ಯ ಹೆದ್ದಾರಿ 71 (ಕೇರಳ)|SH 71]] (ತಿರೂರ್-ಮಂಜೇರಿ), [[ರಾಜ್ಯ ಹೆದ್ದಾರಿ 72 (ಕೇರಳ)|SH 72]] (ಮಲಪ್ಪುರಂ – ತಿರೂರಂಗಡಿ), ಮತ್ತು [[ರಾಜ್ಯ ಹೆದ್ದಾರಿ 73 (ಕೇರಳ)|SH 73]] (ವಳಾಂಚೇರಿ-ನಿಲಂಬೂರ್). ಜಿಲ್ಲೆಯಲ್ಲಿ ಕೇರಳ PWD ನಿರ್ವಹಿಸುವ ರಸ್ತೆಯ ಉದ್ದವು 2,680 ಕಿಮೀ. ಇದರಲ್ಲಿ, 2,305 ಕಿಮೀ ಜಿಲ್ಲಾ ರಸ್ತೆಗಳನ್ನು ಒಳಗೊಂಡಿದೆ. ಉಳಿದ 375 ಕಿಮೀ ರಾಜ್ಯ ಹೆದ್ದಾರಿಗಳನ್ನು ಒಳಗೊಂಡಿದೆ.<ref>{{Cite web |url=http://www.kerenvis.nic.in/Database/RoadNetworkKerala_2284.aspx |website=kerenvis.nic.in |title=ಮಲಪ್ಪುರಂನಲ್ಲಿ PWD ರಸ್ತೆಗಳ ಉದ್ದ |access-date=19 April 2020 |archive-date=6 March 2020 |archive-url=https://web.archive.org/web/20200306070657/http://www.kerenvis.nic.in/Database/RoadNetworkKerala_2284.aspx |url-status=live }}</ref> ''ನಾಡುಕಾನಿ ಚುರಂ'' [[ಘಾಟ್ ರಸ್ತೆಗಳು|ಘಾಟ್ ರಸ್ತೆ]] ಮಲಪ್ಪುರಂ ಅನ್ನು [[ನೀಲಗಿರಿ ಜಿಲ್ಲೆ|ನೀಲಗಿರಿ]]ಯೊಂದಿಗೆ ಸಂಪರ್ಕಿಸುತ್ತದೆ.<ref name="Nadukani">{{Cite news|title=ನಾಡುಕಾಣಿಚುರಂ ಕರೆಯುತ್ತಿದೆ, ಅಪೂರ್ವ ದೃಶ್ಯಗಳೊಂದಿಗೆ|url=https://www.mathrubhumi.com/travel/kerala/malappuram/rare-beauty-of-nadukani-churam-what-to-see-at-nadukani-pass-1.3901911|last=|date=25 June 2019|access-date=1 March 2021|work=Mathrubhumi|archive-date=28 November 2020|archive-url=https://web.archive.org/web/20201128011007/https://www.mathrubhumi.com/travel/kerala/malappuram/rare-beauty-of-nadukani-churam-what-to-see-at-nadukani-pass-1.3901911|url-status=live}}</ref>
ನಾಡುಕಾನಿ-ಪರಪ್ಪನಂಗಾಡಿ ರಸ್ತೆಯು ಮಲಪ್ಪುರಂ ಜಿಲ್ಲೆಯ ಕರಾವಳಿ ಪ್ರದೇಶವನ್ನು [[ನಿಲಂಬೂರ್]] ಬಳಿ [[ನೀಲಗಿರಿ ಜಿಲ್ಲೆ]]ಯ [[ತಮಿಳುನಾಡು]] ಗಡಿಯಲ್ಲಿರುವ ಪೂರ್ವದ ಅತ್ಯಂತ ಬೆಟ್ಟದ ಗಡಿಯಾದ ''ನಾಡುಕಾನಿ ಚುರಂ'' ಗೆ ಸಂಪರ್ಕಿಸುತ್ತದೆ.<ref name="npr">{{cite news |url=https://www.manoramaonline.com/404.html |title=ನಾಡುಕಾನಿ–ಪರಪ್ಪನಂಗಾಡಿ ರಸ್ತೆ ಟ್ಯಾರಿಂಗ್ ಪ್ರಾರಂಭ; ಅಗಲವರ್ಧನೆ ಮತ್ತು ಒಳಚರಂಡಿ ನಿರ್ಮಾಣ ನಂತರ |date=12 February 2020 |publisher=Manorama Online |access-date=28 March 2021 |archive-date=4 June 2021 |archive-url=https://web.archive.org/web/20210604095618/https://www.manoramaonline.com/district-news/malappuram/2020/02/12/malappuram-tirurangadi-nadukani-parappanangadi-road-taring.amp.html |url-status=live }}</ref> [[ಪರಪ್ಪನಂಗಾಡಿ]]ಯಿಂದ ಪ್ರಾರಂಭವಾಗಿ, ಇದು [[ತಿರೂರಂಗಡಿ]], [[ಮಲಪ್ಪುರಂ]], [[ಮಂಜೇರಿ]], ಮತ್ತು [[ನಿಲಂಬೂರ್]] ಮೂಲಕ ಹಾದುಹೋಗುತ್ತದೆ, ನಂತರ ನಾಡುಕಾನಿ [[ಘಾಟ್ ರಸ್ತೆಗಳು|ಘಾಟ್ ರಸ್ತೆ]] ತಲುಪುತ್ತದೆ.<ref name="npr"/>
ಜಿಲ್ಲೆಯಲ್ಲಿ ಮೊದಲ ಆಧುನಿಕ ರೀತಿಯ ರಸ್ತೆಯನ್ನು ಹದಿನೆಂಟನೇ ಶತಮಾನದಲ್ಲಿ [[ಟಿಪ್ಪು ಸುಲ್ತಾನ್]] ನಿರ್ಮಿಸಿದರು.<ref name="mpm"/> [[ತಿರೂರ್]] ನಿಂದ [[ಚಾಲಿಯಂ]] ವರೆಗಿನ ರಸ್ತೆಯನ್ನು [[ತಾನೂರು, ಮಲಪ್ಪುರಂ|ತಾನೂರು]], [[ಪರಪ್ಪನಂಗಾಡಿ]], ಮತ್ತು [[ವಲ್ಲಿಕುಣ್ಣು]] ಮೂಲಕ ಅವರು ಯೋಜಿಸಿದ್ದರು.<ref name="mpm"/> ಟಿಪ್ಪು ಸುಲ್ತಾನ್ [[ಮಲಪ್ಪುರಂ]] ನಿಂದ [[ತಾಮರಶ್ಶೇರಿ]] ಗೆ, [[ಮಲಪ್ಪುರಂ]] ನಿಂದ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳಿಗೆ]], [[ಫೆರೋಕ್]] ನಿಂದ [[ತಿರೂರಂಗಡಿ]] ಮೂಲಕ [[ಕೊಟ್ಟಕ್ಕಲ್]] ಗೆ, ಮತ್ತು [[ಕೊಟ್ಟಕ್ಕಲ್]] ನಿಂದ [[ಅಂಗಡಿಪುರಂ]] ಗೆ ರಸ್ತೆಗಳನ್ನು ಸಹ ಯೋಜಿಸಿದ್ದರು.<ref name="1961_kkd"/>
{{Panorama
| image = File:GKN Chamravattom Regulator Bridge DSC 0446.JPG
| height = 175
| alt = [[ಚಮ್ರವಟ್ಟೊಂ ನಿಯಂತ್ರಕ-ಸೇತುವೆ]]ಯ ವಿಹಂಗಮ ನೋಟ
| caption = [[ಚಮ್ರವಟ್ಟೊಂ ನಿಯಂತ್ರಕ-ಸೇತುವೆ]]ಯ ವಿಹಂಗಮ ನೋಟ
}}
=== ರೈಲ್ವೇಗಳು ===
[[File:Tirur Railway Station.jpg|thumb|ತಿರೂರ್ನಲ್ಲಿರುವ ರಾಜ್ಯದ ಅತ್ಯಂತ ಹಳೆಯ ರೈಲ್ವೇ ನಿಲ್ದಾಣ. 1861 ರಲ್ಲಿ [[ತಿರೂರ್]] ನಿಂದ [[ಚಾಲಿಯಂ]] ಗೆ ಮೊದಲ ರೈಲು ಮಾರ್ಗವನ್ನು ಹಾಕಲಾಯಿತು]]
[[File:Mankeri kunnu.jpg|thumbnail|[[ಕುಟ್ಟಿಪುರಂ]] ಬಳಿಯ [[ಇರಿಂಬಿಲಿಯಂ]]ನ ಮಂಕೇರಿ ಕುಣ್ಣುವಿನಲ್ಲಿ ರೈಲ್ವೆ]]
[[File:Angadipuram Railway station (2356310689).jpg|left|thumb|[[ಅಂಗಡಿಪುರಂ ರೈಲ್ವೇ ನಿಲ್ದಾಣ]]ವು [[ಮಲಪ್ಪುರಂ]], [[ಪೆರಿಂತಲ್ಮನ್ನ]] ಪಟ್ಟಣಗಳಿಗೆ ಸೇವೆ ಸಲ್ಲಿಸುತ್ತದೆ]]
ಜಿಲ್ಲೆಯ ಮೂಲಕ ಹಾದುಹೋಗುವ ರೈಲು ಮಾರ್ಗದ ಒಟ್ಟು ಉದ್ದವು 142 ಕಿಮೀ.<ref>{{cite web |url=http://industry.kerala.gov.in/images/pdf/malappuram.pdf |website=industry.kerala.gov.in |page=45 |title=ಮಲಪ್ಪುರಂನಲ್ಲಿ ರೈಲ್ವೆ |access-date=21 April 2020 |archive-date=26 April 2021 |archive-url=https://web.archive.org/web/20210426034953/http://industry.kerala.gov.in/images/pdf/malappuram.pdf |url-status=live }}</ref> ಜಿಲ್ಲೆಯಲ್ಲಿನ ರೈಲ್ವೆಯು [[ದಕ್ಷಿಣ ರೈಲ್ವೆ ವಲಯ|ದಕ್ಷಿಣ ರೈಲ್ವೆ]]ಯ ಅಡಿಯಲ್ಲಿನ ಆರು ವಿಭಾಗಗಳಲ್ಲಿ ಒಂದಾದ [[ಪಾಲಕ್ಕಾಡ್ ರೈಲ್ವೆ ವಿಭಾಗ]]ದ ವ್ಯಾಪ್ತಿಗೆ ಬರುತ್ತದೆ. ಕೇರಳದಲ್ಲಿ ರೈಲ್ವೇಗಳ ಇತಿಹಾಸವು ಜಿಲ್ಲೆಯನ್ನು ಹಿಂತಿರುಗಿ ನೋಡುತ್ತದೆ. ರಾಜ್ಯದ ಅತ್ಯಂತ ಹಳೆಯ ರೈಲ್ವೇ ನಿಲ್ದಾಣವು [[ತಿರೂರ್ ರೈಲ್ವೇ ನಿಲ್ದಾಣ|ತಿರೂರ್]] ನಲ್ಲಿದೆ.<ref name="mpm"/> [[ತಾನೂರು ರೈಲ್ವೇ ನಿಲ್ದಾಣ|ತಾನೂರು]], [[ಪರಪ್ಪನಂಗಾಡಿ ರೈಲ್ವೇ ನಿಲ್ದಾಣ|ಪರಪ್ಪನಂಗಾಡಿ]], ಮತ್ತು [[ವಲ್ಲಿಕುಣ್ಣು ರೈಲ್ವೇ ನಿಲ್ದಾಣ|ವಲ್ಲಿಕುಣ್ಣು]] ನಿಲ್ದಾಣಗಳು [[ತಿರೂರ್]] ನಿಂದ [[ಚಾಲಿಯಂ]] ಗೆ ಹಾಕಲಾದ ರಾಜ್ಯದ ಅತ್ಯಂತ ಹಳೆಯ ರೈಲು ಮಾರ್ಗದ ಭಾಗಗಳಾಗಿವೆ.<ref name="mpm"/> ಮಾರ್ಗವನ್ನು 12 ಮಾರ್ಚ್ 1861 ರಂದು ಉದ್ಘಾಟಿಸಲಾಯಿತು.<ref name="ll"/> ಅದೇ ವರ್ಷದಲ್ಲಿ, ಇದನ್ನು [[ತಿರೂರ್]] ನಿಂದ [[ತಿರುನವಾಯ]] ಮೂಲಕ [[ಕುಟ್ಟಿಪುರಂ ರೈಲ್ವೇ ನಿಲ್ದಾಣ|ಕುಟ್ಟಿಪುರಂ]] ಗೆ ವಿಸ್ತರಿಸಲಾಯಿತು.<ref name="mpm"/> ನಂತರ, ಇದನ್ನು 1862 ರಲ್ಲಿ ಕುಟ್ಟಿಪುರಂ ನಿಂದ [[ಪಟ್ಟಾಂಬಿ]] ಗೆ ಮತ್ತಷ್ಟು ವಿಸ್ತರಿಸಲಾಯಿತು, ಮತ್ತು ಅದೇ ವರ್ಷದಲ್ಲಿ ಪಟ್ಟಾಂಬಿ ನಿಂದ [[ಪೊದನೂರು]] ಗೆ ಮತ್ತೆ ವಿಸ್ತರಿಸಲಾಯಿತು.<ref name="mpm"/> ಪ್ರಸ್ತುತ [[ಚೆನ್ನೈ]]-[[ಮಂಗಳೂರು]] ರೈಲು ಮಾರ್ಗವು ನಂತರ ಹೀಗೆ ನಿರ್ಮಿಸಲಾದ [[ಬೇಪೋರ್]] – [[ಪೊದನೂರು]] ಮಾರ್ಗದ ವಿಸ್ತರಣೆಯಾಗಿ ರೂಪುಗೊಂಡಿತು.<ref name="mpm"/>
[[ನಿಲಂಬೂರ್–ಶೋರನೂರ್ ಮಾರ್ಗ]]ವು [[ಭಾರತ]]ದಲ್ಲಿ ಅತ್ಯಂತ ಕಡಿಮೆ ಮತ್ತು ಸುಂದರವಾದ [[ಬ್ರಾಡ್ ಗೇಜ್]] ರೈಲು ಮಾರ್ಗಗಳಲ್ಲಿ ಒಂದಾಗಿದೆ.<ref>{{cite web|url=http://nilamburnews.com/m_train.htm|title=ನಿಲಂಬೂರ್ ನ್ಯೂಸ್|publisher=Kerala Tourism|access-date=13 November 2020|archive-url=https://web.archive.org/web/20160920133828/http://nilamburnews.com/m_train.htm|archive-date=20 September 2016|url-status=dead}}</ref> ಇದನ್ನು ವಸಾಹತುಶಾಹಿ ಯುಗದಲ್ಲಿ ಬ್ರಿಟಿಷರು [[ಕೋಝಿಕ್ಕೋಡ್]] ಮೂಲಕ [[ಯುನೈಟೆಡ್ ಕಿಂಗ್ಡಮ್]] ಗೆ ''ನಿಲಂಬೂರ್ ತೇಗ''ದ ದಿಮ್ಮಿಗಳನ್ನು ಸಾಗಿಸಲು ಹಾಕಿದರು. [[ನಿಲಂಬೂರ್–ನಂಜನಗೂಡು ಮಾರ್ಗ]]ವು ಪ್ರಸ್ತಾವಿತ ರೈಲು ಮಾರ್ಗವಾಗಿದ್ದು, ಇದು [[ನಿಲಂಬೂರ್]] ಅನ್ನು [[ವಯನಾಡ್ ಜಿಲ್ಲೆ|ವಯನಾಡ್]], [[ನೀಲಗಿರಿ ಜಿಲ್ಲೆ|ನೀಲಗಿರಿ]], ಮತ್ತು [[ಮೈಸೂರು ಜಿಲ್ಲೆ|ಮೈಸೂರು]] ಜಿಲ್ಲೆಗಳೊಂದಿಗೆ ಸಂಪರ್ಕಿಸುತ್ತದೆ.<ref>{{cite web |url=https://timesofindia.indiatimes.com/city/thiruvananthapuram/Kerala-govt-inks-deal-on-joint-venture-with-railways/articleshow/53978367.cms |website=The Times of India |title=ನಿಲಂಬೂರ್-ನಂಜನಗೂಡು ಮಾರ್ಗ ಸಾಕಾರಗೊಳ್ಳಲಿದೆ |date=2 September 2016 |access-date=26 June 2020 |archive-date=21 April 2021 |archive-url=https://web.archive.org/web/20210421161817/https://timesofindia.indiatimes.com/city/thiruvananthapuram/Kerala-govt-inks-deal-on-joint-venture-with-railways/articleshow/53978367.cms |url-status=live }}</ref><ref>{{Cite news|title=ನಿಲಂಬೂರ್ ತೇಗ GI ಟ್ಯಾಗ್ ಹೊಂದಿರುವ ಉತ್ಪನ್ನಗಳ ಗಣ್ಯ ಕ್ಲಬ್ಗೆ ಸೇರಲಿದೆ|url=https://www.thehindu.com/news/national/kerala/Nilambur-teak-set-to-enter-elite-club-of-products-with-GI-tag/article17280134.ece|last=ಮುರಿಂಗತೇರಿ|first=ಮಿನಿ|date=10 February 2017|access-date=24 January 2021|work=The Hindu|archive-date=29 January 2021|archive-url=https://web.archive.org/web/20210129101512/https://www.thehindu.com/news/national/kerala/Nilambur-teak-set-to-enter-elite-club-of-products-with-GI-tag/article17280134.ece|url-status=live}}</ref> [[ಗುರುವಾಯೂರ್]]-[[ತಿರುನವಾಯ]] ರೈಲು ಮಾರ್ಗವು ಮತ್ತೊಂದು ಪ್ರಸ್ತಾವಿತ ಯೋಜನೆಯಾಗಿದೆ.<ref>{{Cite news|title=ಗುರುವಾಯೂರ್-ತಿರುನವಾಯ ರೈಲು ಮಾರ್ಗ ಯೋಜನೆ ಮತ್ತೆ ಗಮನ ಸೆಳೆದಿದೆ|url=https://www.thehindu.com/news/cities/kozhikode/guruvayur-thirunavaya-railway-line-project-in-focus-again/article27473510.ece|last=ವಿಶೇಷ ವರದಿಗಾರ|date=4 June 2019|work=The Hindu|access-date=19 May 2021|archive-date=19 May 2021|archive-url=https://web.archive.org/web/20210519071303/https://www.thehindu.com/news/cities/kozhikode/guruvayur-thirunavaya-railway-line-project-in-focus-again/article27473510.ece|url-status=live}}</ref> ರೈಲ್ವೇ ಸಚಿವಾಲಯವು ಕೋಝಿಕ್ಕೋಡ್-ಮಲಪ್ಪುರಂ-ಅಂಗಡಿಪುರಂ ರೈಲು ಮಾರ್ಗವನ್ನು ಸಾಮಾಜಿಕವಾಗಿ ಅಪೇಕ್ಷಣೀಯ ರೈಲು ಮಾರ್ಗವಾಗಿ ತನ್ನ ವಿಷನ್ 2020 ರಲ್ಲಿ ಸೇರಿಸಿದೆ. ಈ ಮಾರ್ಗದಲ್ಲಿ ಈಗಾಗಲೇ ಅನೇಕ ಸಮೀಕ್ಷೆಗಳನ್ನು ಮಾಡಲಾಗಿದೆ. ಭಾರತೀಯ ರೈಲ್ವೆ ಕಂಪ್ಯೂಟರೀಕೃತ ಮೀಸಲಾತಿ ಕೌಂಟರ್ ಡೌನ್ ಹಿಲ್ನಲ್ಲಿರುವ ಫ್ರೆಂಡ್ಸ್ ಜನಸೇವನಾ ಕೇಂದ್ರಂನಲ್ಲಿ ಲಭ್ಯವಿದೆ. ಯಾವುದೇ ರೈಲಿಗೆ ಮೀಸಲಾತಿಯನ್ನು ಇಲ್ಲಿಂದ ಮಾಡಬಹುದು. [[ಮಲಪ್ಪುರಂ]] ನಗರವು [[ಅಂಗಡಿಪುರಂ ರೈಲ್ವೇ ನಿಲ್ದಾಣ|ಅಂಗಡಿಪುರಂ]] ({{cvt|17|km}} ದೂರ), [[ತಿರೂರ್ ರೈಲ್ವೇ ನಿಲ್ದಾಣ|ತಿರೂರ್]], ಮತ್ತು [[ಪರಪ್ಪನಂಗಾಡಿ ರೈಲ್ವೇ ನಿಲ್ದಾಣ|ಪರಪ್ಪನಂಗಾಡಿ]] (ಎರಡೂ 26 ಕಿಮೀ, 40 ನಿಮಿಷಗಳ ಡ್ರೈವ್ ದೂರ) ರೈಲ್ವೇ ನಿಲ್ದಾಣಗಳಿಂದ ಸೇವೆಯನ್ನು ಪಡೆಯುತ್ತದೆ.
{| class="wikitable" style="margin: 1em auto"
|+ಮಲಪ್ಪುರಂ ಜಿಲ್ಲೆಯ ರೈಲ್ವೇ ನಿಲ್ದಾಣಗಳು
|-
| '''[[ಅಂಗಡಿಪುರಂ ರೈಲ್ವೇ ನಿಲ್ದಾಣ|ಅಂಗಡಿಪುರಂ]]'''
| [[ಚೆರುಕರ ರೈಲ್ವೇ ನಿಲ್ದಾಣ|ಚೆರುಕರ]]
| '''[[ಕುಟ್ಟಿಪುರಂ ರೈಲ್ವೇ ನಿಲ್ದಾಣ|ಕುಟ್ಟಿಪುರಂ]]'''
|-
| [[ಮೇಲತ್ತೂರ್ ರೈಲ್ವೇ ನಿಲ್ದಾಣ|ಮೇಲತ್ತೂರ್]]
| '''[[ನಿಲಂಬೂರ್ ರಸ್ತೆ ರೈಲ್ವೇ ನಿಲ್ದಾಣ|ನಿಲಂಬೂರ್ ರಸ್ತೆ]]'''
| [[ಪರಪ್ಪನಂಗಾಡಿ ರೈಲ್ವೇ ನಿಲ್ದಾಣ|ಪರಪ್ಪನಂಗಾಡಿ]]
|-
| [[ಪಟ್ಟಿಕ್ಕಾಡ್ ರೈಲ್ವೇ ನಿಲ್ದಾಣ|ಪಟ್ಟಿಕ್ಕಾಡ್]]
| [[ಕುಟ್ಟಿಪುರಂ|ಪೆರಸ್ಸನ್ನೂರ್]]
| [[ತಾನೂರು ರೈಲ್ವೇ ನಿಲ್ದಾಣ|ತಾನೂರು]]
|-
| [[ಪೊರೂರ್, ಮಲಪ್ಪುರಂ|ಥೋಡಿಕಾಪುಳಂ]]
| [[ತಿರುನ್ನವಾಯ ರೈಲ್ವೇ ನಿಲ್ದಾಣ|ತಿರುನ್ನವಾಯ]]
| '''[[ತಿರೂರ್ ರೈಲ್ವೇ ನಿಲ್ದಾಣ|ತಿರೂರ್]]'''
|-
| [[ತುವ್ವೂರ್ ರೈಲ್ವೇ ನಿಲ್ದಾಣ|ತುವ್ವೂರ್]]
| [[ವಲ್ಲಿಕುಣ್ಣು ರೈಲ್ವೇ ನಿಲ್ದಾಣ|ವಲ್ಲಿಕುಣ್ಣು]]
| [[ವಣಿಯಂಬಲಂ ರೈಲ್ವೇ ನಿಲ್ದಾಣ|ವಣಿಯಂಬಲಂ]]
|}
=== ಮೆಟ್ರೋ ರೈಲು ===
{{Main|ತಿರೂರ್-ನಿಲಂಬೂರ್ ಮೆಟ್ರೋ}}
ಮಲಪ್ಪುರಂ ಜಿಲ್ಲೆಯಲ್ಲಿ, ಜನನಿಬಿಡ [[ಮಲಪ್ಪುರಂ ಮಹಾನಗರ ಪ್ರದೇಶ]]ದ ಸಂಚಾರ ದಟ್ಟಣೆಯನ್ನು ಪರಿಹರಿಸಲು, 2012, 2017 ಮತ್ತು 2025 ರಲ್ಲಿ ವಿವಿಧ ಸಂಸ್ಥೆಗಳು ಮತ್ತು ಶಾಸಕಾಂಗ ಪ್ರತಿನಿಧಿಗಳು ಮೆಟ್ರೋ ರೈಲಿಗೆ ಪ್ರಸ್ತಾವನೆಗಳನ್ನು ಸಲ್ಲಿಸಿದರು. 2025 ರಲ್ಲಿ, [[ತಿರೂರ್ ವಿಧಾನಸಭಾ ಕ್ಷೇತ್ರ]]ದ ಶಾಸಕ [[ಕುರುಕ್ಕೋಲಿ ಮೊಯ್ದೀನ್]] ಅವರು ಕೇರಳ ವಿಧಾನಸಭೆಯಲ್ಲಿ [[ತಿರೂರ್-ನಿಲಂಬೂರ್ ಮೆಟ್ರೋ]] ಪ್ರಸ್ತಾವನೆಯನ್ನು ಮಂಡಿಸಿದರು.<ref>{{cite web | url=https://www.thehindu.com/news/national/kerala/tirur-nilambur-metro-demand-evokes-sharp-riposte-from-cm/article69132501.ece | title=ತಿರೂರ್-ನಿಲಂಬೂರ್ ಮೆಟ್ರೋ ಬೇಡಿಕೆ ಮುಖ್ಯಮಂತ್ರಿಯಿಂದ ತೀಕ್ಷ್ಣ ಪ್ರತಿಪಾದನೆಗೆ ಕಾರಣವಾಯಿತು | work=The Hindu | date=23 January 2025 }}</ref>
=== ವಿಮಾನ ನಿಲ್ದಾಣ ===
[[File:Flights Parked at Calicut Airport.jpg|thumb|[[ಕರಿಪುರ್]]ನ [[ಕಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ದಲ್ಲಿ ನಿಲುಗಡೆ ಮಾಡಲಾದ ವಿಮಾನಗಳು]]
ಮಲಪ್ಪುರಂಗೆ [[ಕರಿಪುರ್]] ನಲ್ಲಿರುವ [[ಕಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]] {{Airport codes|CCJ|VOCL}} ಸೇವೆ ಸಲ್ಲಿಸುತ್ತದೆ, ಇದು ಮಲಪ್ಪುರಂ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ವಿಮಾನ ನಿಲ್ದಾಣವು ಏಪ್ರಿಲ್ 1988 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಎರಡು ಟರ್ಮಿನಲ್ಗಳನ್ನು ಹೊಂದಿದೆ, ಒಂದು ದೇಶೀಯ ವಿಮಾನಗಳಿಗೆ ಮತ್ತು ಇನ್ನೊಂದು ಅಂತಾರಾಷ್ಟ್ರೀಯ ವಿಮಾನಗಳಿಗೆ.<ref>{{Cite news|url=https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms|title=ಬೆಳ್ಳಿ ಹಬ್ಬವು ಕರಿಪುರ್ ವಿಮಾನ ನಿಲ್ದಾಣದ ಬಳಕೆದಾರರಿಗೆ ಸಂತೋಷವನ್ನು ತರುವುದಿಲ್ಲ|work=The Times of India|access-date=13 September 2021|archive-date=4 June 2021|archive-url=https://web.archive.org/web/20210604110846/https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms|url-status=live}}</ref> ವಿಮಾನ ನಿಲ್ದಾಣವು [[ಏರ್ ಇಂಡಿಯಾ ಎಕ್ಸ್ಪ್ರೆಸ್]]ಗೆ ಕಾರ್ಯಾಚರಣೆಯ ನೆಲೆಯಾಗಿ ಸೇವೆ ಸಲ್ಲಿಸುತ್ತದೆ ಮತ್ತು [[ಕೇರಳ]]ದಿಂದ [[ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮದೀನಾ]] ಮತ್ತು [[ರಾಜಾ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಜೆದ್ದಾ]] ಗೆ [[ಹಜ್|ಹಜ್ ಯಾತ್ರಾ]] ಸೇವೆಗಳನ್ನು ನಿರ್ವಹಿಸುತ್ತದೆ. [[ಬೆಂಗಳೂರು]], [[ಚೆನ್ನೈ]], [[ಮುಂಬೈ]], [[ಹೈದರಾಬಾದ್]], [[ಗೋವಾ]], [[ಕೊಚ್ಚಿ]], [[ತಿರುವನಂತಪುರಂ]], [[ಮಂಗಳೂರು]] ಮತ್ತು [[ಕೊಯಿಮತ್ತೂರು]] ಸೇರಿದಂತೆ ಪ್ರಮುಖ ನಗರಗಳಿಗೆ ದೇಶೀಯ ವಿಮಾನ ಸೇವೆಗಳು ಲಭ್ಯವಿದ್ದರೆ, ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಮಲಪ್ಪುರಂ ಅನ್ನು [[ದುಬೈ]], [[ಜೆದ್ದಾ]], [[ರಿಯಾಧ್]], [[ಶಾರ್ಜಾ (ಎಮಿರೇಟ್)|ಶಾರ್ಜಾ]], [[ಅಬು ಧಾಬಿ]], [[ಅಲ್ ಐನ್]], [[ಬಹ್ರೈನ್]], [[ದಮ್ಮಾಮ್]], [[ದೋಹಾ]], [[ಮಸ್ಕತ್, ಒಮಾನ್|ಮಸ್ಕತ್]], [[ಸಲಾಲಾ]] ಮತ್ತು [[ಕುವೈತ್]] ಗಳೊಂದಿಗೆ ಸಂಪರ್ಕಿಸುತ್ತದೆ. ಸಾರಿಗೆಗಾಗಿ ವಿಮಾನ ನಿಲ್ದಾಣಕ್ಕೆ ನೇರ ಬಸ್ಗಳಿವೆ. ಬಸ್ಗಳ ಹೊರತಾಗಿ, ಟ್ಯಾಕ್ಸಿಗಳು, ಆಟೋ ರಿಕ್ಷಾಗಳು ಸಾರಿಗೆಗೆ ಲಭ್ಯವಿವೆ.
[[ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ]] 2019–20 ರಲ್ಲಿ ಒದಗಿಸಿದ ಅಂಕಿಅಂಶಗಳ ಪ್ರಕಾರ, ಇದು ದೇಶದ [[ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ|17ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ]] ಮತ್ತು ರಾಜ್ಯದಲ್ಲಿ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.
== ಜನಸಂಖ್ಯಾಶಾಸ್ತ್ರ ==
=== ಜನಸಂಖ್ಯೆ ===
{{historical populations|11=1901|12=6,82,151|13=1911|14=7,47,929|15=1921|16=7,64,138|17=1931|18=8,74,504|19=1941|20=9,77,085|21=1951|22=11,49,718|23=1961|24=13,87,370|25=1971|26=18,56,357|27=1981|28=24,02,701|29=1991|30=30,96,330|31=2001|32=36,25,471|33=2011|34=41,12,920|35=2018|36=44,94,998|percentages=pagr|footnote=ಮೂಲ:<ref>{{Cite web|url=http://www.censusindia.gov.in/2011census/PCA/A2_Data_Table.html|title=ಭಾರತದ ಜನಗಣತಿ ವೆಬ್ಸೈಟ್ : ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ, ಭಾರತ|website=censusindia.gov.in|access-date=13 September 2021|archive-date=8 August 2019|archive-url=https://web.archive.org/web/20190808131957/http://www.censusindia.gov.in/2011census/PCA/A2_Data_Table.html|url-status=live}}</ref><ref name="mlpdemo_2018"/>|align=center}}
[[File:Distribution of Population in Malappuram District.svg|left|thumbnail|ಸ್ಥಳೀಯ ಸಂಸ್ಥೆಗಳಲ್ಲಿ ಜನಸಂಖ್ಯೆಯ ವಿತರಣೆ (2011)]]
[[ವೈಟಲ್ ಸ್ಟ್ಯಾಟಿಸ್ಟಿಕ್ಸ್ (ಸರ್ಕಾರಿ ದಾಖಲೆಗಳು)|2018 ರ ಅಂಕಿಅಂಶಗಳ ವರದಿ]] ಪ್ರಕಾರ, ಜಿಲ್ಲೆಯು 4,494,998 ಜನಸಂಖ್ಯೆಯನ್ನು ಹೊಂದಿದ್ದು,<ref name="mlpdemo_2018"/> ಇದು ಸ್ಥೂಲವಾಗಿ [[ಮಾರಿಟಾನಿಯಾ]] ಅಥವಾ US ರಾಜ್ಯ [[ಕೆಂಟಕ್ಕಿ]]ಯ ಜನಸಂಖ್ಯೆಗೆ ಸಮಾನವಾಗಿದೆ. ಕೇರಳದ ಒಟ್ಟು ಜನಸಂಖ್ಯೆಯ 12.98% ಮಲಪ್ಪುರಂನಲ್ಲಿ ವಾಸಿಸುತ್ತಿದ್ದಾರೆ.<ref name="mlpdemo_2018"/> ಇದು ಕೇರಳದ ಅತಿ ಹೆಚ್ಚು ಜನಸಂಖ್ಯೆಯ ಜಿಲ್ಲೆಯಾಗಿದೆ ಮತ್ತು ಭಾರತದ 640 ಜಿಲ್ಲೆಗಳಲ್ಲಿ 50ನೇ ಅತಿ ಹೆಚ್ಚು ಜನಸಂಖ್ಯೆಯ ಜಿಲ್ಲೆಯಾಗಿದೆ, ಇದರ ಜನಸಾಂದ್ರತೆಯು {{convert| 1265 |PD/sqkm|PD/sqmi}} ಆಗಿದೆ. 2001 ರಿಂದ 2011 ರವರೆಗಿನ ಜನಸಂಖ್ಯೆಯ ಬೆಳವಣಿಗೆ ದರವು 13.39 ಪ್ರತಿಶತವಾಗಿತ್ತು. [[ಭಾರತದ ಜನಗಣತಿ 2011]] ರ ಪ್ರಕಾರ, ಮಲಪ್ಪುರಂ 1098 ಮಹಿಳೆಯರು 1000 ಪುರುಷರಿಗೆ [[ಮಾನವ ಲಿಂಗಾನುಪಾತ|ಲಿಂಗಾನುಪಾತವನ್ನು]] ಹೊಂದಿದೆ, ಮತ್ತು ಅದರ [[ಭಾರತದಲ್ಲಿ ಸಾಕ್ಷರತೆ|ಸಾಕ್ಷರತಾ ಪ್ರಮಾಣವು]] 93.57 ಪ್ರತಿಶತವಾಗಿದ್ದು, ಇದು ರಾಜ್ಯದ ಸರಾಸರಿ ಸಾಕ್ಷರತಾ ಪ್ರಮಾಣಕ್ಕೆ (93.91%) ಸರಿಸುಮಾರು ಸಮಾನವಾಗಿದೆ. 2011 ರ ಜನಗಣತಿಯ ಒಟ್ಟು ಮಲಪ್ಪುರಂ ಜನಸಂಖ್ಯೆಯಲ್ಲಿ, 44.18 ಪ್ರತಿಶತದಷ್ಟು ಜನರು ಜಿಲ್ಲೆಯ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 2011 ರಲ್ಲಿ, 0–6 ವರ್ಷದೊಳಗಿನ ಮಕ್ಕಳು ಒಟ್ಟು ಜನಸಂಖ್ಯೆಯ 13.96 ಪ್ರತಿಶತವನ್ನು ರೂಪಿಸಿದ್ದಾರೆ, ಇದು 2001 ರಲ್ಲಿ 15.21 ಪ್ರತಿಶತಕ್ಕೆ ಹೋಲಿಸಿದರೆ. ಜನಗಣತಿ 2011 ರ ಪ್ರಕಾರ ಶಿಶು ಲಿಂಗಾನುಪಾತವು 965 ಆಗಿದ್ದು, 2001 ರ ಜನಗಣತಿಯ 960 ಕ್ಕೆ ಹೋಲಿಸಿದರೆ. ಜನಗಣತಿ 2011 ರ ಪ್ರಕಾರ, ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ 0.02% ಮಾತ್ರ ಮನೆಯಿಲ್ಲದವರಾಗಿದ್ದಾರೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಕ್ರಮವಾಗಿ ಜನಸಂಖ್ಯೆಯ 7.50% ಮತ್ತು 0.56% ರಷ್ಟಿದ್ದಾರೆ.<ref name="CensusMalappuram">{{cite web |title=ಜಿಲ್ಲಾ ಜನಗಣತಿ ಕೈಪಿಡಿ: ಮಲಪ್ಪುರಂ |url=https://censusindia.gov.in/nada/index.php/catalog/658/download/2280/DH_2011_3205_PART_A_DCHB_MALAPPURAM.pdf |website=[[ಭಾರತದ ಜನಗಣತಿ]] |publisher=[[ನೋಂದಣಿ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ]]}}</ref>
[[ಪೊನ್ನಾನಿ]] ಪುರಸಭೆಯು ಜಿಲ್ಲೆಯಲ್ಲಿ ಅತಿ ಹೆಚ್ಚು ಜನಸಾಂದ್ರತೆಯ ಸ್ಥಳೀಯ ಸಂಸ್ಥೆಯಾಗಿದ್ದು, ಪ್ರತಿ ಚದರ ಕಿಲೋಮೀಟರ್ಗೆ 3,646 ನಿವಾಸಿಗಳನ್ನು ಹೊಂದಿದೆ, ನಂತರ [[ತಾನೂರು, ಮಲಪ್ಪುರಂ|ತಾನೂರು]] (3,568/ಕಿಮೀ<sup>2</sup>) ಮತ್ತು [[ತಿರೂರ್]] (3,387/ಕಿಮೀ<sup>2</sup>) ಪುರಸಭೆಗಳು 2011 ರಲ್ಲಿ ನಡೆಸಿದ ಜನಗಣತಿಯ ಪ್ರಕಾರ.<ref name="CensusMalappuram"/> ಅತಿ ಕಡಿಮೆ ಜನಸಾಂದ್ರತೆಯ ಸ್ಥಳೀಯ ಸಂಸ್ಥೆಗಳು ಪೂರ್ವದ ಬೆಟ್ಟದ ಪ್ರದೇಶದಲ್ಲಿವೆ.<ref name="CensusMalappuram"/> [[ಚಾಲಿಯಾರ್]] ಕೇವಲ 167 ನಿವಾಸಿಗಳು ಪ್ರತಿ ಚದರ ಕಿಲೋಮೀಟರ್ಗೆ ಅತಿ ಕಡಿಮೆ ಸಾಂದ್ರತೆಯನ್ನು ಹೊಂದಿದೆ, ನಂತರ [[ಕರುಲೈ]] (177/ಕಿಮೀ<sup>2</sup>) ಮತ್ತು [[ಚುಂಗತರ]] (280/ಕಿಮೀ<sup>2</sup>) ಗ್ರಾಮ ಪಂಚಾಯತ್ಗಳು.<ref name="CensusMalappuram"/> ತಾಲೂಕುಗಳಲ್ಲಿ, [[ತಿರೂರಂಗಡಿ]] ಅತಿ ಹೆಚ್ಚು ಜನಸಾಂದ್ರತೆಯನ್ನು ಹೊಂದಿದ್ದರೆ, [[ನಿಲಂಬೂರ್]] ಜನಸಾಂದ್ರತೆಯಲ್ಲಿ ಅತ್ಯಂತ ಕಡಿಮೆ ಸಾಂದ್ರತೆಯನ್ನು ಹೊಂದಿದೆ.<ref name="CensusMalappuram"/> [[ಮಲಪ್ಪುರಂ ಮಹಾನಗರ ಪ್ರದೇಶ]]ವು 1.7 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ.<ref name="census 2011"/> ಜನವರಿ 2020 ರಲ್ಲಿ [[ದಿ ಎಕನಾಮಿಸ್ಟ್]] ಪ್ರಕಟಿಸಿದ ವರದಿಯ ಪ್ರಕಾರ, ಮಲಪ್ಪುರಂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರ ಪ್ರದೇಶವಾಗಿದೆ.<ref>{{cite web |url=https://www.cnbctv18.com/politics/four-of-the-worlds-fastest-growing-cities-in-kerala-5026281.htm |website=cnbctv18.com |title=ಮಲಪ್ಪುರಂ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ |date=9 January 2020 |access-date=28 June 2020 |archive-date=1 July 2020 |archive-url=https://web.archive.org/web/20200701044017/https://www.cnbctv18.com/politics/four-of-the-worlds-fastest-growing-cities-in-kerala-5026281.htm |url-status=live }}</ref><ref>{{cite web |url= https://scroll.in/article/949294/even-with-the-lowest-population-growth-rate-this-indian-state-has-the-worlds-fastest-growing-city |website= scroll.in |title= ಮಲಪ್ಪುರಂ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ |date= 10 January 2020 |access-date= 26 June 2020 |archive-date= 5 August 2020 |archive-url= https://web.archive.org/web/20200805234947/https://scroll.in/article/949294/even-with-the-lowest-population-growth-rate-this-indian-state-has-the-worlds-fastest-growing-city |url-status= live }}</ref><ref>{{cite web |url=https://www.newindianexpress.com/states/kerala/2020/jan/09/malappuram-is-worlds-fastest-growing-city-kozhikode-kollam-also-in-top-10-2087011.html |website=The New Indian Express |title=ಮಲಪ್ಪುರಂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ; ಕೋಝಿಕ್ಕೋಡ್, ಕೊಲ್ಲಂ ಸಹ ಟಾಪ್ 10 ರಲ್ಲಿ |date=9 January 2020 |access-date=26 June 2020 |archive-date=13 January 2020 |archive-url=https://web.archive.org/web/20200113110924/https://www.newindianexpress.com/states/kerala/2020/jan/09/malappuram-is-worlds-fastest-growing-city-kozhikode-kollam-also-in-top-10-2087011.html |url-status=live }}</ref>
=== ನಗರ ರಚನೆ ===
ಮಲಪ್ಪುರಂ [[ನಗರ ಸಮೂಹ]] (UA) ರಾಜ್ಯದಲ್ಲಿ 4ನೇ ಅತಿ ಹೆಚ್ಚು ಜನಸಂಖ್ಯೆಯ UA ಆಗಿದೆ. ಮಲಪ್ಪುರಂ [[ಭಾರತದ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರ ಸಮೂಹಗಳ ಪಟ್ಟಿ|ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ನಗರ ಸಮೂಹಗಳ ಪಟ್ಟಿಯಲ್ಲಿ]] 25ನೇ ಸ್ಥಾನದಲ್ಲಿದೆ. ಇಡೀ ಜಿಲ್ಲೆಯ ಒಟ್ಟು ನಗರ ಜನಸಂಖ್ಯೆಯು ಜಿಲ್ಲೆಯ ಜನಸಂಖ್ಯೆಯ 44.18% ಆಗಿದೆ.<ref name="CensusMalappuram"/> ಮಲಪ್ಪುರಂನ ಮಹಾನಗರ ಪ್ರದೇಶವು [[ಅಬ್ದು ರಹಿಮಾನ್ ನಗರ್]], [[ಅಲಂಕೋಡ್, ಎಡಪ್ಪಲ್|ಅಲಂಕೋಡ್]], [[ಅರಿಯಲ್ಲೂರ್]], [[ಚೆಲೆಂಬ್ರ]], [[ಚೇರಿಯಮುಂಡಂ]], [[ಚೆರುಕಾವು]], [[ಎಡಪ್ಪಲ್]], [[ಇರಿಂಬಿಲಿಯಂ]], [[ಕಳಡಿ, ಮಲಪ್ಪುರಂ|ಕಳಡಿ]], ಕನ್ನಮಂಗಲಂ, [[ಕೊಡೂರ್, ಮಲಪ್ಪುರಂ|ಕೊಡೂರ್]], [[ಕೊಂಡೊಟ್ಟಿ]], [[ಕೂಟಿಲಂಗಡಿ]], [[ಕೊಟ್ಟಕ್ಕಲ್]], [[ಕುಟ್ಟಿಪುರಂ]], [[ಮಂಜೇರಿ]], [[ಮರಾಂಚೇರಿ]], [[ತಲಪ್ಪರ|ಮೂನ್ನಿಯೂರ್]], [[ನಡುವಟ್ಟೊಂ, ಮಲಪ್ಪುರಂ|ನಡುವಟ್ಟೊಂ]], [[ನನ್ನಂಬ್ರ]], [[ನೆದುವ]], [[ಊರಕಂ]], [[ಒತುಕ್ಕುಂಗಲ್]], [[ಪಳ್ಳಿಕ್ಕಲ್ ಬಜಾರ್]], [[ಪರಪ್ಪೂರ್]], [[ಪೆರುಮನ್ನ-ಕ್ಲಾರಿ|ಪೆರುಮನ್ನ]], [[ಪೆರುವಲ್ಲೂರ್]], [[ಪೊನ್ನಾನಿ]], [[ಪೊನ್ಮುಂಡಂ]], [[ತಾನಲೂರು]], [[ತೆನಿಪಾಲಂ]], [[ತಲಕ್ಕಾಡ್]], [[ತೆನ್ನಲ]], [[ತಿರುನವಾಯ]], [[ತಿರೂರ್]], [[ತಿರೂರಂಗಡಿ]], [[ತ್ರಿಕ್ಕಲಂಗೋಡ್]], [[ತ್ರಿಪ್ರಂಗೋಡ್]], [[ವಳಾಂಚೇರಿ]], [[ವಾಝಯೂರ್]], ಮತ್ತು [[ವೆಂಗರ, ಮಲಪ್ಪುರಂ ಜಿಲ್ಲೆ|ವೆಂಗರ]] ಸೇರಿವೆ.<ref name="Mma">{{cite web |url=https://kerala.gov.in/documents/10180/622777/urban |website=kerala.gov.in |title=ಮಲಪ್ಪುರಂ ಮಹಾನಗರ ಪ್ರದೇಶದ ಘಟಕಗಳು |access-date=24 February 2021 |archive-date=30 December 2020 |archive-url=https://web.archive.org/web/20201230044541/https://kerala.gov.in/documents/10180/622777/urban |url-status=live }}</ref>
=== ಧರ್ಮಗಳು ===
{{bar box
|title = ಮಲಪ್ಪುರಂ ಜಿಲ್ಲೆಯಲ್ಲಿ ಧರ್ಮಗಳು (2011)<ref name="religion">{{Cite web|date=2011|title=ಕೋಷ್ಟಕ C-01: ಧಾರ್ಮಿಕ ಸಮುದಾಯದ ಪ್ರಕಾರ ಜನಸಂಖ್ಯೆ: ಕೇರಳ |url=https://censusindia.gov.in/nada/index.php/catalog/11379/download/14492/DDW32C-01%20MDDS.XLS |website=[[ಭಾರತದ ಜನಗಣತಿ]] |publisher=[[ನೋಂದಣಿ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ]]}}</ref>
|titlebar=#Fcd116
|left1=ಧರ್ಮ
|right1=ಶೇಕಡಾವಾರು
|float=left
|bars=
{{bar percent|[[ಕೇರಳದಲ್ಲಿ ಇಸ್ಲಾಂ|ಇಸ್ಲಾಂ]]|green|70.24}}
{{bar percent|[[ಕೇರಳದಲ್ಲಿ ಹಿಂದೂ ಧರ್ಮ|ಹಿಂದೂ ಧರ್ಮ]]|darkorange|27.60}}
{{bar percent|[[ಕೇರಳದಲ್ಲಿ ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮ]]|dodgerblue|1.98}}
{{bar percent|ಇತರೆ ಅಥವಾ ಸೂಚಿಸಲಾಗಿಲ್ಲ|black|0.18}}
}}
ಮಲಪ್ಪುರಂ ಜಿಲ್ಲೆಯ ಪ್ರದೇಶಗಳು ಆರಂಭಿಕ [[ಮಧ್ಯಯುಗ]]ದಿಂದಲೂ ಬಹು-ಜನಾಂಗೀಯ ಮತ್ತು ಬಹು-ಧಾರ್ಮಿಕವಾಗಿವೆ. [[ಅರೇಬಿಯನ್ ಸಮುದ್ರ]]ದಾದ್ಯಂತ ಶತಮಾನಗಳಿಂದ ವ್ಯಾಪಾರವು ಮಲಪ್ಪುರಂಗೆ ವಿಶ್ವವ್ಯಾಪಿ ಜನಸಂಖ್ಯೆಯನ್ನು ನೀಡಿದೆ.<ref>{{Cite book|title=ತುಹ್ಫತ್-ಅಲ್-ಮುಜಾಹಿದೀನ್: ಅರೇಬಿಕ್ ಭಾಷೆಯಲ್ಲಿ ಒಂದು ಐತಿಹಾಸಿಕ ಕೃತಿ|last=ನಯಿನಾರ್|first=ಎಸ್. ಮುಹಮ್ಮದ್ ಹುಸೇನ್|publisher=ಮದ್ರಾಸ್ ವಿಶ್ವವಿದ್ಯಾಲಯ|year=1942|url=https://archive.org/details/Tuhfat-al-MujahidinAnHistoricalWorkInTheArabicLanguage}}</ref> ಜಿಲ್ಲೆಯಲ್ಲಿ ಆಚರಿಸಲಾಗುವ ಧರ್ಮಗಳಲ್ಲಿ [[ಇಸ್ಲಾಂ]], [[ಹಿಂದೂ ಧರ್ಮ]], [[ಕ್ರೈಸ್ತ ಧರ್ಮ]], ಮತ್ತು ಇತರ ಸಣ್ಣ ಧರ್ಮಗಳು ಸೇರಿವೆ.<ref name="ReferenceA">ಪುಟಗಳು 396, ''ಮಲಯಾಳ ಮನೋರಮ ವರ್ಷಪುಸ್ತಕ 2006'', ಕೊಟ್ಟಯಂ, 2006 ISSN 0970-9096</ref> ಮಲಪ್ಪುರಂ [[ದಕ್ಷಿಣ ಭಾರತ]]ದಲ್ಲಿ ಮುಸ್ಲಿಂ ಬಹುಸಂಖ್ಯಾತ ಎರಡು ಜಿಲ್ಲೆಗಳಲ್ಲಿ ಒಂದಾಗಿದೆ, ಇನ್ನೊಂದು [[ಲಕ್ಷದ್ವೀಪ|ಲಕ್ಷದ್ವೀಪ ಜಿಲ್ಲೆ]]. ಜಿಲ್ಲೆಯ ಹೆಚ್ಚಿನ ಕ್ರೈಸ್ತರು 20 ನೇ ಶತಮಾನದಲ್ಲಿ ([[ಮಲಬಾರ್ ವಲಸೆ]]) [[ಉತ್ತರ ವಿಭಾಗ (ತಿರುವಾಂಕೂರು)|ಉತ್ತರ ತಿರುವಾಂಕೂರು]] ನಿಂದ [[ಮಲಬಾರ್ ಜಿಲ್ಲೆ|ಮಲಬಾರ್]] ಗೆ ವಲಸೆ ಬಂದ [[ಸಂತ ಥಾಮಸ್ ಕ್ರೈಸ್ತರು]]ನ ವಂಶಸ್ಥರಾಗಿದ್ದಾರೆ.<ref>{{Cite news|title=ಮಲಬಾರ್ ವಲಸೆ: ಕನಸು ಕೊನೆಗೊಳ್ಳುತ್ತಿದೆಯೇ?|url=https://www.thehindu.com/news/national/kerala/malabar-migration-end-of-a-dream/article30497658.ece|last=ಜೋಸೆಫ್|first=ಮಿಥೋಷ್|date=7 January 2020|access-date=31 October 2020|work=The Hindu|archive-date=10 January 2020|archive-url=https://web.archive.org/web/20200110022037/https://www.thehindu.com/news/national/kerala/malabar-migration-end-of-a-dream/article30497658.ece|url-status=live}}</ref> ಜಿಲ್ಲೆಯಲ್ಲಿನ ಮಲಂಕರ ಆರ್ಥೊಡಾಕ್ಸ್ ಕ್ರೈಸ್ತರನ್ನು [[ಮಲಬಾರ್ ಧರ್ಮಪ್ರಾಂತ್ಯ (ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್)|ಮಲಬಾರ್ ಧರ್ಮಪ್ರಾಂತ್ಯ]] ಪ್ರತಿನಿಧಿಸುತ್ತದೆ, ಇದು ಪ್ರಸ್ತುತ 85 ಪ್ಯಾರಿಷ್ಗಳನ್ನು ಒಳಗೊಂಡಿದೆ. ಮಲಪ್ಪುರಂನಲ್ಲಿನ ಮಲಂಕರ ಆರ್ಥೊಡಾಕ್ಸ್ ಚರ್ಚ್ನ ಅತಿದೊಡ್ಡ ಪ್ಯಾರಿಷ್ [[ಸಂತ ಜಾರ್ಜ್ ಆರ್ಥೊಡಾಕ್ಸ್ ಚರ್ಚ್, ಚುಂಗತರ|ಚುಂಗತರದಲ್ಲಿನ ಸಂತ ಜಾರ್ಜ್ ಆರ್ಥೊಡಾಕ್ಸ್ ಚರ್ಚ್]] ಆಗಿದೆ, ಇದು ವಾರ್ಷಿಕವಾಗಿ ಸಾವಿರಾರು ಮಲಂಕರ ಆರ್ಥೊಡಾಕ್ಸ್ ಕ್ರೈಸ್ತರು ಭಾಗವಹಿಸುವ ಮಲಬಾರ್ನ ಅತಿದೊಡ್ಡ ವಾರ್ಷಿಕ ಆರ್ಥೊಡಾಕ್ಸ್ ಕ್ರೈಸ್ತ ಸಮ್ಮೇಳನದ ಸ್ಥಳವಾಗಿದೆ.
{| class="wikitable sortable"
|+ ಮಲಪ್ಪುರಂ ಜಿಲ್ಲೆಯಲ್ಲಿ ತಾಲೂಕು-ವಾರು ಧರ್ಮ ವಿತರಣೆ (%) (2011 ಜನಗಣತಿ)
|-
! ತಾಲೂಕು !! ಮುಸ್ಲಿಮರು (%) !! ಹಿಂದೂಗಳು (%) !! ಕ್ರೈಸ್ತರು (%) !! ಇತರೆ (%)
|-
| ಇರನಾಡ್ || style="background:#43A047; color:white;" | 72.3 || 26.2 || 1.3 || 0.2
|-
| ಕೊಂಡೊಟ್ಟಿ || style="background:#43A047; color:white;" | 75.9 || 21.7 || 2.4 || 0.0
|-
| ನಿಲಂಬೂರ್ || style="background:#43A047; color:white;" | 57.9 || 33.5 || 8.5 || 0.1
|-
| ಪೆರಿಂತಲ್ಮನ್ನ || style="background:#43A047; color:white;" | 71.1 || 26.9 || 1.8 || 0.2
|-
| ತಿರೂರ್ || style="background:#43A047; color:white;" | 75.5 || 23.8 || 0.5 || 0.2
|-
| ತಿರೂರಂಗಡಿ || style="background:#43A047; color:white;" | 75.5 || 23.9 || 0.5 || 0.1
|-
| ಪೊನ್ನಾನಿ || style="background:#43A047; color:white;" | 59.9 || 39.4 || 0.4 || 0.3
|}
=== ಭಾಷೆಗಳು ===
ಜಿಲ್ಲೆಯಲ್ಲಿ ಬಳಸಲಾಗುವ ಪ್ರಮುಖ ಭಾಷೆಯು [[ಮಲಯಾಳಂ]]. [[ಅರಬಿ ಮಲಯಾಳಂ ಲಿಪಿ]], ''ಪೊನ್ನಾನಿ ಲಿಪಿ'' ಎಂದೂ ಕರೆಯಲ್ಪಡುತ್ತದೆ, ಇದನ್ನು ಕಳೆದ ಶತಮಾನಗಳಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಅಲ್ಪಸಂಖ್ಯಾತ ದ್ರಾವಿಡ ಭಾಷೆಗಳು [[ಅಲ್ಲರ್ ಭಾಷೆ|ಅಲ್ಲರ್]] (ಸುಮಾರು 350 ಮಾತನಾಡುವವರು)<ref name='ethnoallar'>{{cite encyclopedia | editor = ಎಂ. ಪಾಲ್ ಲೆವಿಸ್ | encyclopedia = ಎಥ್ನೋಲೋಗ್: ವಿಶ್ವದ ಭಾಷೆಗಳು | title = ಅಲ್ಲರ್: ಭಾರತದ ಒಂದು ಭಾಷೆ | url = http://www.ethnologue.com/show_language.asp?code=all | access-date = 28 September 2011 | edition = 16th | year = 2009 | publisher = SIL International | location = ಡಲ್ಲಾಸ್, ಟೆಕ್ಸಾಸ್ | archive-date = 5 August 2011 | archive-url = https://web.archive.org/web/20110805101511/http://www.ethnologue.com/show_language.asp?code=all | url-status = live }}</ref> ಮತ್ತು [[ಅರಣದಾನ್ ಭಾಷೆ|ಅರಣದಾನ್]], (ಸುಮಾರು 200 ಮಾತನಾಡುವವರು).<ref name='ethnoaranadan'>{{cite encyclopedia | editor = ಎಂ. ಪಾಲ್ ಲೆವಿಸ್ | encyclopedia = ಎಥ್ನೋಲೋಗ್: ವಿಶ್ವದ ಭಾಷೆಗಳು | title = ಅರಣದಾನ್: ಭಾರತದ ಒಂದು ಭಾಷೆ | url = http://www.ethnologue.com/show_language.asp?code=aaf | access-date = 28 September 2011 | edition = 16th | year = 2009 | publisher = SIL International | location = ಡಲ್ಲಾಸ್, ಟೆಕ್ಸಾಸ್ | archive-date = 11 November 2011 | archive-url = https://web.archive.org/web/20111111015932/http://www.ethnologue.com/show_language.asp?code=aaf | url-status = live }}</ref> [[ತಮಿಳು ಭಾಷೆ|ತಮಿಳು]] ಅನ್ನು ಜನಸಂಖ್ಯೆಯ ಸಣ್ಣ ಭಾಗವು ಮಾತನಾಡುತ್ತದೆ.
[[ಮಲಯಾಳಂ]] ಪ್ರಬಲ ಭಾಷೆಯಾಗಿದ್ದು, 99.46% ಜನಸಂಖ್ಯೆಯು ಮಾತನಾಡುತ್ತಾರೆ.<ref name="languages">{{Cite web |title=ಕೋಷ್ಟಕ C-16 ಮಾತೃಭಾಷೆಯ ಪ್ರಕಾರ ಜನಸಂಖ್ಯೆ: ಕೇರಳ |url=https://censusindia.gov.in/nada/index.php/catalog/10209/download/13321/DDW-C16-STMT-MDDS-3200.XLSX |website=censusindia.gov.in |publisher=[[ನೋಂದಣಿ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ]]}}</ref>
== ಆರೋಗ್ಯ ರಕ್ಷಣೆ ==
[[File:Kottakkal Arya Vaidya Sala OP Block.jpg|left|thumb|[[ಆರ್ಯ ವೈದ್ಯ ಶಾಲೆ|ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಯ]] ಹೊರ ರೋಗಿ ಬ್ಲಾಕ್]]
[[File:പൊന്നാനി 1z .jpg|thumbnail|ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, [[ಪೊನ್ನಾನಿ]]]]
ಆಧುನಿಕ ವೈದ್ಯಕೀಯ, [[ಆಯುರ್ವೇದ]], ಮತ್ತು [[ಹೋಮಿಯೋಪತಿ]] ಜಿಲ್ಲೆಯಲ್ಲಿ ಲಭ್ಯವಿದೆ. [[ಕೇರಳ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ|ಕೇರಳ ಸರ್ಕಾರ]]ದ ಅಡಿಯಲ್ಲಿ ಅಲೋಪತಿಗಾಗಿ ಸಾಮಾನ್ಯ ಆಸ್ಪತ್ರೆ, 3 ಜಿಲ್ಲಾ ಆಸ್ಪತ್ರೆಗಳು, ಮತ್ತು 6 ತಾಲೂಕು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. 2013 ರಲ್ಲಿ ಸ್ಥಾಪಿಸಲಾದ [[ಸರ್ಕಾರಿ ವೈದ್ಯಕೀಯ ಕಾಲೇಜು, ಮಂಜೇರಿ]], ಜಿಲ್ಲೆಯ ಪ್ರಮುಖ ವೈದ್ಯಕೀಯ ಕಾಲೇಜಾಗಿದೆ.<ref>{{cite news |title=31 ವರ್ಷಗಳ ನಂತರ ಕೇರಳದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು |url=https://www.thehindu.com/news/national/kerala/a-new-government-medical-college-in-kerala-after-31-years/article5082996.ece |newspaper=The Hindu |date=2 September 2013 |access-date=13 September 2021 |archive-date=30 August 2021 |archive-url=https://web.archive.org/web/20210830004614/https://www.thehindu.com/news/national/kerala/a-new-government-medical-college-in-kerala-after-31-years/article5082996.ece |url-status=live }}</ref> ಜಿಲ್ಲೆಯಲ್ಲಿ [[ತಿರೂರ್]], [[ಪೆರಿಂತಲ್ಮನ್ನ]], ಮತ್ತು [[ನಿಲಂಬೂರ್]]ಗಳಲ್ಲಿ ಮೂರು ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಿವೆ.<ref name="Malappuram-Public Hospitals – sha">{{Cite web |title=ಮಲಪ್ಪುರಂ-ಸಾರ್ವಜನಿಕ ಆಸ್ಪತ್ರೆಗಳು – sha |url=https://sha.kerala.gov.in/?page_id=530&lang=en |access-date=2025-12-28 |website=sha.kerala.gov.in}}</ref> ಜಿಲ್ಲೆಯಲ್ಲಿ [[ಮಲಪ್ಪುರಂ]], [[ಕೊಂಡೊಟ್ಟಿ]], [[ವಾಂಡೂರ್, ಕೇರಳ|ವಾಂಡೂರ್]], [[ಅರೀಕೋಡ್]], [[ಪೊನ್ನಾನಿ]], ಮತ್ತು [[ತಿರೂರಂಗಡಿ]]ಗಳಲ್ಲಿ ಆರು ಸರ್ಕಾರಿ ತಾಲೂಕು ಆಸ್ಪತ್ರೆಗಳಿವೆ, ಜೊತೆಗೆ [[ಪೊನ್ನಾನಿ]]ಯಲ್ಲಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು [[ಎಡವನ್ನ]]ದಲ್ಲಿ ಸೀತಿಹಾಜಿ ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸಾ ಕೇಂದ್ರವಿದೆ.<ref name="Malappuram-Public Hospitals – sha"/>
ಸ್ಥಳೀಯ ಆರೋಗ್ಯ ಕೇಂದ್ರಗಳ ಜಾಲವು ಸಾರ್ವಜನಿಕ ವಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 66 [[ಪ್ರಾಥಮಿಕ ಆರೋಗ್ಯ ಕೇಂದ್ರ (ಭಾರತ)|ಪ್ರಾಥಮಿಕ ಆರೋಗ್ಯ ಕೇಂದ್ರಗಳು]], 20 ಸರ್ವಕಾಲಿಕ ಕಾರ್ಯನಿರ್ವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 20 [[ಸಮುದಾಯ ಆರೋಗ್ಯ ಕೇಂದ್ರ]]ಗಳು, ಮತ್ತು 2 TBC ಗಳನ್ನು ಒಳಗೊಂಡಿದೆ. 5 ಪ್ರಮುಖ ಸಾರ್ವಜನಿಕ ಆರೋಗ್ಯ ಕೇಂದ್ರಗಳು, 77 ಮಿನಿ ಸಾರ್ವಜನಿಕ ಆರೋಗ್ಯ ಕೇಂದ್ರಗಳು, ಮತ್ತು 565 ಉಪ-ಕೇಂದ್ರಗಳಿವೆ. 3 ಕುಷ್ಠರೋಗ ನಿಯಂತ್ರಣ ಘಟಕಗಳು, 2 ಫೈಲೇರಿಯಾ ನಿಯಂತ್ರಣ ಘಟಕಗಳು, ಇತ್ಯಾದಿಗಳು ಸಾರ್ವಜನಿಕ ವಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಸರ್ಕಾರಿ ಆಸ್ಪತ್ರೆಗಳ ಒಟ್ಟು ಹಾಸಿಗೆ ಸಾಮರ್ಥ್ಯವು 1500 ಆಗಿದೆ. ಅಲೋಪತಿ ಅಡಿಯಲ್ಲಿ ಸೂಪರ್-ಸ್ಪೆಷಾಲಿಟಿ ಘಟಕಗಳನ್ನು ಹೊಂದಿರುವ ಅನೇಕ ಖಾಸಗಿ ಆಸ್ಪತ್ರೆಗಳು ಸಹ ಜಿಲ್ಲೆಯಲ್ಲಿವೆ.<ref>{{cite web |url = http://www.ecostat.kerala.gov.in/index.php/health-state-mlp |website = ecostat.kerala.gov.in |title = ಮಲಪ್ಪುರಂನಲ್ಲಿ ಆರೋಗ್ಯ ರಕ್ಷಣೆ |access-date = 20 June 2020 |archive-date = 28 December 2019 |archive-url = https://web.archive.org/web/20191228215258/http://www.ecostat.kerala.gov.in/index.php/health-state-mlp |url-status = live }}</ref><ref name="Malappuramhealthcare">{{cite web |url = https://malappuram.nic.in/health/ |website = malappuram.nic.in |title = ಮಲಪ್ಪುರಂನಲ್ಲಿ ಆರೋಗ್ಯ ರಕ್ಷಣೆ |access-date = 20 June 2020 |archive-date = 27 September 2020 |archive-url = https://web.archive.org/web/20200927083348/https://malappuram.nic.in/health/ |url-status = live }}</ref>
ಮಲಪ್ಪುರಂ ಜಿಲ್ಲೆಯು ಪೆರಿಂತಲ್ಮನ್ನ ಬಳಿಯ ಪುಲಾಮಂತೋಲೆಯಲ್ಲಿನ ಅಷ್ಟವೈದ್ಯ ವೈದ್ಯರ ಪುಲಾಮಂತೋಲೆ ಮೂಸ್ ವಂಶದ ಮೂಲಕ ಸಾಂಪ್ರದಾಯಿಕ ಆಯುರ್ವೇದ ಅಭ್ಯಾಸದ ಉಪಸ್ಥಿತಿಯನ್ನು ಹೊಂದಿದೆ.<ref>{{cite web |url=https://www.pulamantholemoosshospital.com |title=ಅಷ್ಟವೈದ್ಯನ್ ಪುಲಾಮಂತೋಲೆ ಮೂಸ್ ಆಯುರ್ವೇದ ಆಸ್ಪತ್ರೆ |website=pulamantholemoosshospital.com |access-date=13 May 2026}}</ref>
ಕೊಟ್ಟಕ್ಕಲ್ ಬಳಿಯ [[ಪೊಟ್ಟಿಪ್ಪರ]]ದಲ್ಲಿನ ಸರ್ಕಾರಿ ಆಯುರ್ವೇದ ಸಂಶೋಧನಾ ಸಂಸ್ಥೆ (ಮಾನಸಿಕ ರೋಗಗಳಿಗೆ) [[ಕೇರಳ]]ದ ಏಕೈಕ ಸರ್ಕಾರಿ ಆಯುರ್ವೇದ ಮಾನಸಿಕ ಆಸ್ಪತ್ರೆಯಾಗಿದೆ. ಇದು ದೇಶದ ಸಾರ್ವಜನಿಕ ವಲಯದ ಅಡಿಯಲ್ಲಿ ತನ್ನ ಪ್ರಕಾರದ ಮೊದಲನೆಯದು. ಕೊಟ್ಟಕ್ಕಲ್ ಪ್ರಸಿದ್ಧ ಆಯುರ್ವೇದ ಆರೋಗ್ಯ ಕೇಂದ್ರವಾದ [[ಆರ್ಯ ವೈದ್ಯ ಶಾಲೆ]]ಗೂ ನೆಲೆಯಾಗಿದೆ. ಸರ್ಕಾರಿ ವಲಯದ ಅಡಿಯಲ್ಲಿ, [[ಎದರಿಕೋಡ್]]ನಲ್ಲಿ ಜಿಲ್ಲಾ ಆಯುರ್ವೇದ ಆಸ್ಪತ್ರೆಯು ಕಾರ್ಯನಿರ್ವಹಿಸುತ್ತದೆ. ಮಂಜೇರಿ, [[ತಲಪ್ಪರ|ವೆಲಿಮುಕ್ಕು]], ಪೆರಿಂತಲ್ಮನ್ನ, ಮಲಪ್ಪುರಂ, [[ವೆಂಗರ, ಮಲಪ್ಪುರಂ ಜಿಲ್ಲೆ|ವೆಂಗರ]], [[ಕಲ್ಪಕಾಂಚೇರಿ]], [[ತಿರುವಾಳಿ]], ಮತ್ತು [[ಚೆಲೆಂಬ್ರ]]ಗಳಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳು ಸಹ ಕಾರ್ಯನಿರ್ವಹಿಸುತ್ತವೆ. ಸಾರ್ವಜನಿಕ ವಲಯದ ಅಡಿಯಲ್ಲಿ ಹೋಮಿಯೋಪತಿ ಆಸ್ಪತ್ರೆಗಳು [[ಮಲಪ್ಪುರಂ]], [[ಮಂಜೇರಿ]], [[ವಾಂಡೂರ್]], ಮತ್ತು [[ಕುಟ್ಟಿಪುರಂ]]ಗಳಲ್ಲಿ ಕಾರ್ಯನಿರ್ವಹಿಸುತ್ತವೆ.<ref name ="Malappuramhealthcare" /><ref>{{cite web |url=http://homoeopathy.kerala.gov.in/2018/04/28/malappuram-01/#1525080050368-2f4492de-835c |website=homoeopathy.kerala.gov.in |title=ಮಲಪ್ಪುರಂನಲ್ಲಿ ಹೋಮಿಯೋಪತಿ |access-date=13 July 2020 |archive-date=13 July 2020 |archive-url=https://web.archive.org/web/20200713100512/http://homoeopathy.kerala.gov.in/2018/04/28/malappuram-01/#1525080050368-2f4492de-835c |url-status=live }}</ref> ಅನೇಕ ಆಸ್ಪತ್ರೆಗಳು ಖಾಸಗಿ ವಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.
2003 ರಂತೆ, ಮಲಪ್ಪುರಂ [[ಕೇರಳದ ಜಿಲ್ಲೆಗಳ ಪಟ್ಟಿ|ಕೇರಳದ ಜಿಲ್ಲೆಗಳಲ್ಲಿ]] (13.3) [[ದೇಶಗಳ ಪ್ರಕಾರ ಆತ್ಮಹತ್ಯಾ ಪ್ರಮಾಣ ಪಟ್ಟಿ|ಕಡಿಮೆ ಆತ್ಮಹತ್ಯಾ ಪ್ರಮಾಣವನ್ನು]] ಹೊಂದಿದೆ, ಇದು ರಾಜ್ಯದ ಸರಾಸರಿಗಿಂತ (32.8) ತುಂಬಾ ಕಡಿಮೆಯಾಗಿದೆ.<ref name="unhdi-gdl"/>
== ಶಿಕ್ಷಣ ==
{{Main|ಮಲಪ್ಪುರಂನಲ್ಲಿ ಶಿಕ್ಷಣ}}
{{See also|ಪೆರಿಂತಲ್ಮನ್ನದಲ್ಲಿ ಶಿಕ್ಷಣ}}
[[File:MESCE Kuttippuram.jpg|thumbnail|MESCE ಕುಟ್ಟಿಪುರಂ, ಕೇರಳದ ಮೊದಲ ಸ್ವ-ಹಣಕಾಸು ಎಂಜಿನಿಯರಿಂಗ್ ಕಾಲೇಜು]]
[[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆ]] 14 ಮತ್ತು 16 ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದಿತು. ಖಗೋಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಕೇರಳ ಶಾಲೆಯು ಸ್ವತಂತ್ರವಾಗಿ ಹಲವಾರು ಪ್ರಮುಖ ಗಣಿತ ಪರಿಕಲ್ಪನೆಗಳನ್ನು ಸೃಷ್ಟಿಸಿತು, ಇದರಲ್ಲಿ ತ್ರಿಕೋನಮಿತಿಯ ಕಾರ್ಯಗಳಿಗಾಗಿ [[ಶ್ರೇಣಿ ವಿಸ್ತರಣೆ]] ಸೇರಿದೆ.<ref name="roy" /><ref name="Pingree 1992 554–563"/> ಕೇರಳದ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆಯು [[ತಾನೂರು ಸಾಮ್ರಾಜ್ಯ|''ವೆಟ್ಟತ್ತುನಾಡು'']] ([[ತಿರೂರ್ ತಾಲೂಕು|ತಿರೂರ್ ಪ್ರದೇಶ]]) ದಲ್ಲಿತ್ತು.<ref name="roy"/>
2019–20 ರ ಶಾಲಾ ಅಂಕಿಅಂಶಗಳ ಪ್ರಕಾರ ಜಿಲ್ಲೆಯು ಕೇರಳದಲ್ಲಿ ಅತಿ ಹೆಚ್ಚು ಶಾಲೆಗಳನ್ನು ಹೊಂದಿದೆ. ಜಿಲ್ಲೆಯಲ್ಲಿ 898 ಕೆಳಗಿನ ಪ್ರಾಥಮಿಕ ಶಾಲೆಗಳು,<ref>{{cite web |url=https://sametham.kite.kerala.gov.in/publicView/districtwise/LP |website=sametham.kite.kerala.gov.in |title=ಮಲಪ್ಪುರಂನಲ್ಲಿ LP ಶಾಲೆಗಳು |access-date=17 April 2020 |archive-date=7 August 2020 |archive-url=https://web.archive.org/web/20200807045715/https://sametham.kite.kerala.gov.in/publicView/districtwise/LP |url-status=live }}</ref> 363 ಮೇಲಿನ ಪ್ರಾಥಮಿಕ ಶಾಲೆಗಳು,<ref>{{cite web |url=https://sametham.kite.kerala.gov.in/publicView/districtwise/UP |website=sametham.kite.kerala.gov.in |title=ಮಲಪ್ಪುರಂನಲ್ಲಿ UP ಶಾಲೆಗಳು |access-date=17 April 2020 |archive-date=27 September 2020 |archive-url=https://web.archive.org/web/20200927204905/https://sametham.kite.kerala.gov.in/publicView/districtwise/UP |url-status=live }}</ref> 355 ಪ್ರೌಢಶಾಲೆಗಳು,<ref>{{cite web |url=https://sametham.kite.kerala.gov.in/publicView/districtwise/HS |website=sametham.kite.kerala.gov.in |title=ಮಲಪ್ಪುರಂನಲ್ಲಿ ಪ್ರೌಢಶಾಲೆಗಳು |access-date=17 April 2020 |archive-date=4 August 2020 |archive-url=https://web.archive.org/web/20200804173003/https://sametham.kite.kerala.gov.in/publicView/districtwise/HS |url-status=live }}</ref> 248 ಉನ್ನತ ಮಾಧ್ಯಮಿಕ ಶಾಲೆಗಳು,<ref>{{cite web |url=https://sametham.kite.kerala.gov.in/publicView/schoolconsolidationhse |website=sametham.kite.kerala.gov.in |title=ಮಲಪ್ಪುರಂನಲ್ಲಿ HSE ಶಾಲೆಗಳು |access-date=17 April 2020 |archive-date=4 August 2020 |archive-url=https://web.archive.org/web/20200804174020/https://sametham.kite.kerala.gov.in/publicView/schoolconsolidationhse |url-status=live }}</ref> ಮತ್ತು 27 ವೃತ್ತಿ ಉನ್ನತ ಮಾಧ್ಯಮಿಕ ಶಾಲೆಗಳಿವೆ.<ref>{{cite web |url=https://sametham.kite.kerala.gov.in/publicView/schoolconsolidationvhse |website=sametham.kite.kerala.gov.in |title=ಮಲಪ್ಪುರಂನಲ್ಲಿ VHSE ಶಾಲೆಗಳು |access-date=17 April 2020 |archive-date=21 September 2020 |archive-url=https://web.archive.org/web/20200921171308/https://sametham.kite.kerala.gov.in/publicView/schoolconsolidationvhse |url-status=live }}</ref> ಆದ್ದರಿಂದ ಜಿಲ್ಲೆಯಲ್ಲಿ 1620 ಶಾಲೆಗಳಿವೆ.<ref>{{cite web |url=https://sametham.kite.kerala.gov.in/search/districtWiseSchools/10 |website=sametham.kite.kerala.gov.in |title=ಮಲಪ್ಪುರಂನಲ್ಲಿ ಶಾಲೆಗಳು |access-date=17 April 2020 |archive-date=4 August 2020 |archive-url=https://web.archive.org/web/20200804172322/https://sametham.kite.kerala.gov.in/search/districtWiseSchools/10 |url-status=live }}</ref> ಇವುಗಳ ಜೊತೆಗೆ, 120 [[ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ|CBSE]] ಶಾಲೆಗಳು ಮತ್ತು 3 [[ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ|ICSE]] ಶಾಲೆಗಳಿವೆ.
[[ಕೇರಳ ಸರ್ಕಾರ]]ದಿಂದ ಮಾನ್ಯತೆ ಪಡೆದ 554 ಸರ್ಕಾರಿ ಶಾಲೆಗಳು, 810 ಸಹಾಯಿತ ಶಾಲೆಗಳು, ಮತ್ತು 1 ಸಹಾಯರಹಿತ ಶಾಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.<ref>{{cite web |url=https://sametham.kite.kerala.gov.in/hitech/hitech_reports/advanced_search |website=sametham.kite.kerala.gov.in |title=ಮಲಪ್ಪುರಂನಲ್ಲಿ ಹೈ-ಟೆಕ್ ಶಾಲೆಗಳು |access-date=17 April 2020 |archive-date=2 June 2021 |archive-url=https://web.archive.org/web/20210602221916/https://sametham.kite.kerala.gov.in/hitech/hitech_reports/advanced_search |url-status=live }}</ref> 2019–20 ಶೈಕ್ಷಣಿಕ ವರ್ಷದಲ್ಲಿ, ಕೇರಳ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಓದುತ್ತಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 739,966 – 407,690 ಸಹಾಯಿತ ಶಾಲೆಗಳಲ್ಲಿ, 245,445 ಸರ್ಕಾರಿ ಶಾಲೆಗಳಲ್ಲಿ, ಮತ್ತು 86,831 ಮಾನ್ಯತೆ ಪಡೆದ ಸಹಾಯರಹಿತ ಶಾಲೆಗಳಲ್ಲಿ.<ref>{{cite web|url= https://sametham.kite.kerala.gov.in/welcome/sixthWorkingdayD2019|website= sametham.kite.kerala.gov.in|title= ಮಲಪ್ಪುರಂನಲ್ಲಿ ಶಾಲೆಗಳ ಸಾಮರ್ಥ್ಯ|access-date= 17 April 2020|archive-date= 6 December 2019|archive-url= https://web.archive.org/web/20191206045049/https://sametham.kite.kerala.gov.in/welcome/sixthWorkingdayD2019|url-status= live}}</ref>
ಜಿಲ್ಲೆಯು ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ರಾಜ್ಯದ ಎರಡು ಪ್ರಮುಖ ವಿಶ್ವವಿದ್ಯಾಲಯಗಳಿಗೆ ನೆಲೆಯಾಗಿದೆ - 1968 ರಲ್ಲಿ ಕೇರಳದ ಎರಡನೇ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲಾದ [[ತೆನಿಪಾಲಂ]] ಕೇಂದ್ರೀಕೃತ [[ಕಾಲಿಕಟ್ ವಿಶ್ವವಿದ್ಯಾಲಯ]],<ref>{{cite web |url=https://www.uoc.ac.in/ |website=uoc.ac.in |title=ಕಾಲಿಕಟ್ ವಿಶ್ವವಿದ್ಯಾಲಯ |access-date=28 November 2019 |archive-date=5 March 2020 |archive-url=https://web.archive.org/web/20200305235858/https://uoc.ac.in/ |url-status=live }}</ref> ಮತ್ತು 2012 ರಲ್ಲಿ ಸ್ಥಾಪಿಸಲಾದ [[ತಿರೂರ್ ಪುರಸಭೆ|ತಿರೂರ್]] ಕೇಂದ್ರೀಕೃತ [[ತುಂಚತ್ತ್ ಎಝುತ್ತಚನ್ ಮಲಯಾಳಂ ವಿಶ್ವವಿದ್ಯಾಲಯ]].<ref>{{cite web |url=http://malayalamuniversity.edu.in/en/ |website=malayalamuniversity.edu.in |title=ಮಲಯಾಳಂ ವಿಶ್ವವಿದ್ಯಾಲಯ |access-date=28 November 2019 |archive-date=11 December 2019 |archive-url=https://web.archive.org/web/20191211184029/http://malayalamuniversity.edu.in/en/ |url-status=live }}</ref> [[ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯ]] (AMU) ನ ಮೂರು ಆಫ್-ಕ್ಯಾಂಪಸ್ ಕೇಂದ್ರಗಳಲ್ಲಿ ಒಂದಾದ [[AMU ಮಲಪ್ಪುರಂ ಕ್ಯಾಂಪಸ್|AMU ಮಲಪ್ಪುರಂ]] [[ಚೆರುಕರ]]ದಲ್ಲಿದೆ, ಇದನ್ನು 2010 ರಲ್ಲಿ ಸ್ಥಾಪಿಸಲಾಯಿತು.<ref>{{cite web |url= https://www.amu.ac.in/malappuram/ |website= amu.ac.in |title= ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯ ಮಲಪ್ಪುರಂ ಆಫ್-ಸೆಂಟರ್ |access-date= 28 November 2019 |archive-date= 25 July 2019 |archive-url= https://web.archive.org/web/20190725192823/https://www.amu.ac.in/malappuram/ |url-status= live }}</ref><ref>{{cite web |title=ಮಲಪ್ಪುರಂ ಜಿಲ್ಲೆಯ ವಿಶ್ವವಿದ್ಯಾಲಯಗಳು |url=https://www.malappuramtourism.org/institutions.php |website=malappuramtourism.org |access-date=13 September 2021 |archive-date=5 March 2020 |archive-url=https://web.archive.org/web/20200305125423/https://www.malappuramtourism.org/institutions.php |url-status=live }}</ref> [[ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ]]ದ ಆಫ್-ಕ್ಯಾಂಪಸ್ [[ಪನಕ್ಕಡ್]]ನಲ್ಲಿ ಕಾರ್ಯನಿರ್ವಹಿಸುತ್ತದೆ.<ref>{{cite web |url=https://timesofindia.indiatimes.com/city/kozhikode/Eflu-to-start-courses-in-Malappuram-campus-on-January-31/articleshow/28958910.cms |website=The Times of India |title=ಜನವರಿ-31 ರಂದು ಮಲಪ್ಪುರಂ ಕ್ಯಾಂಪಸ್ನಲ್ಲಿ Eflu ಕೋರ್ಸ್ಗಳನ್ನು ಪ್ರಾರಂಭಿಸಲಿದೆ |date=17 January 2014 |access-date=24 June 2020 |archive-date=9 August 2020 |archive-url=https://web.archive.org/web/20200809211656/https://timesofindia.indiatimes.com/city/kozhikode/Eflu-to-start-courses-in-Malappuram-campus-on-January-31/articleshow/28958910.cms |url-status=live }}</ref> ಜಿಲ್ಲೆಯು [[ತವನೂರ್]]ನಲ್ಲಿ [[ಕೇರಳ ಕೃಷಿ ವಿಶ್ವವಿದ್ಯಾಲಯ]]ದ ಉಪ-ಕೇಂದ್ರವನ್ನು ಮತ್ತು [[ತಿರುನವಾಯ]]ದಲ್ಲಿ [[ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ]]ದ ಉಪ-ಕೇಂದ್ರವನ್ನು ಸಹ ಹೊಂದಿದೆ. [[ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯ]]ದ ಪ್ರಧಾನ ಕಚೇರಿಯು [[ತಿರೂರಂಗಡಿ]]ಯ [[ಚೆಮ್ಮಡ್]] ನಲ್ಲಿದೆ. INKEL ಗ್ರೀನ್ಸ್ ಮಲಪ್ಪುರಂನಲ್ಲಿ ಕೈಗಾರಿಕಾ ವಲಯದೊಂದಿಗೆ ಶೈಕ್ಷಣಿಕ ವಲಯವನ್ನು ಒದಗಿಸುತ್ತದೆ.<ref>{{Cite news|title=Inkel ಗ್ರೀನ್ಸ್ ಮಲಪ್ಪುರಂಗೆ ಕಂಪನಿಗಳನ್ನು ಆಕರ್ಷಿಸುತ್ತದೆ|url=https://www.thehindubusinessline.com/news/national/inkel-greens-beckons-firms-to-malappuram/article8784293.ece|date=28 June 2016|access-date=6 October 2020|work=The Hindu Businessline|archive-date=13 September 2021|archive-url=https://web.archive.org/web/20210913065710/https://www.thehindubusinessline.com/news/national/inkel-greens-beckons-firms-to-malappuram/article8784293.ece|url-status=live}}</ref> [[ಮಂಜೇರಿ]]ಯಲ್ಲಿನ ಇರನಾಡ್ ನಾಲೆಡ್ಜ್ ಸಿಟಿ ರಾಜ್ಯದಲ್ಲಿ ಮೊದಲ ರೀತಿಯ ಯೋಜನೆಯಾಗಿದೆ.<ref>{{Cite web|url=http://www.ekc.edu.in/about|title=ಇರನಾಡ್ ನಾಲೆಡ್ಜ್ ಸಿಟಿ|access-date=4 November 2020|website=eku.edu.in|archive-date=4 June 2020|archive-url=https://web.archive.org/web/20200604171424/http://www.ekc.edu.in/about|url-status=live}}</ref> ಅಲ್ಲದೆ, ಮಲಪ್ಪುರಂ ಭಾರತದ ಮೊದಲ ಇ-ಸಾಕ್ಷರ ಜಿಲ್ಲೆಯಾಗಿದೆ.<ref>ಪಾಸ್ಟ್, ಪ್ರೆಸೆಂಟ್ ಅಂಡ್ ಫ್ಯೂಚರ್ ಆಫ್ ರಿಸರ್ಚ್ ಇನ್ ದಿ ಇನ್ಫರ್ಮೇಷನ್ ಸೊಸೈಟಿ ಬೈ ವೆಸ್ಲಿ ಶ್ರಮ್ ಪು.233</ref>
== ಸಂಸ್ಕೃತಿ ==
[[File:Thunchan Smarakam1.jpg|thumb|[[ತುಂಚತ್ತ್ ಎಝುತ್ತಚನ್]] ಸ್ಮರಣಾರ್ಥವಾಗಿ [[ತಿರೂರ್]]ನಲ್ಲಿನ ''ತುಂಚನ್ ಸ್ಮಾರಕಂ'']]
[[File:Vaidyar.JPG|left|thumb|[[ಕೊಂಡೊಟ್ಟಿ]]ಯಲ್ಲಿನ [[ಮಹಾ ಕವಿ ಮೊಯಿನ್ಕುಟ್ಟಿ ವೈದ್ಯರ್ ಸ್ಮಾರಕ]]]]
ಪ್ರಸ್ತುತ ಅಳವಡಿಸಿಕೊಂಡ ಮಲಯಾಳಂ ವರ್ಣಮಾಲೆಯನ್ನು ಮೊದಲು [[ತುಂಚತ್ತ್ ಎಝುತ್ತಚನ್]] ಅವರು ಸ್ವೀಕರಿಸಿದರು, ಅವರು [[ತಿರೂರ್]] ನಲ್ಲಿ ಜನಿಸಿದರು ಮತ್ತು ಆಧುನಿಕ ಮಲಯಾಳಂ ಭಾಷೆಯ ಪಿತಾಮಹ ಎಂದು ಕರೆಯಲ್ಪಡುತ್ತಾರೆ.<ref name="mal"/> ತಿರೂರ್ ಮಲಯಾಳಂ ಸಂಶೋಧನಾ ಕೇಂದ್ರದ ಪ್ರಧಾನ ಕಚೇರಿಯಾಗಿದೆ. ಅತ್ಯಂತ ಪ್ರಸಿದ್ಧ [[ಮಾಪ್ಪಿಳ್ಳ ಪಾಟ್ಟು]] ಕವಿ [[ಮೊಯಿನ್ಕುಟ್ಟಿ ವೈದ್ಯರ್]] [[ಕೊಂಡೊಟ್ಟಿ]]ಯಲ್ಲಿ ಜನಿಸಿದರು. ಅವರನ್ನು ಮಾಪ್ಪಿಳ್ಳ ಹಾಡುಗಳ ''ಮಹಾಕವಿ'' (ಮಹಾನ್ ಕವಿ ಎಂಬ ಬಿರುದು) ಎಂದು ಪರಿಗಣಿಸಲಾಗುತ್ತದೆ.<ref name="mal"/>
[[ತುಂಚತ್ತ್ ಎಝುತ್ತಚನ್]] ಮತ್ತು [[ಮೊಯಿನ್ಕುಟ್ಟಿ ವೈದ್ಯರ್]] ಅವರ ಜೊತೆಗೆ, [[ಅಚ್ಯುತ ಪಿಷಾರಡಿ]], ಅಲಂಕೋಡ್ ಲೀಲಾಕೃಷ್ಣನ್, [[ಎಡಸ್ಸೇರಿ ಗೋವಿಂದನ್ ನಾಯರ್]], [[ಕೆ. ಪಿ. ರಾಮನುಣ್ಣಿ]], [[ಕುಟ್ಟಿಕೃಷ್ಣ ಮಾರಾರ್]], ಕುಟ್ಟಿಪುರಂ ಕೇಸವನ್ ನಾಯರ್, [[ಮೇಲ್ಪತ್ತೂರ್ ನಾರಾಯಣ ಭಟ್ಟಾತಿರಿ]], ಎನ್. ದಾಮೋದರನ್, [[ನಂದನಾರ್ (ಲೇಖಕ)|ನಂದನಾರ್]], [[ಪೂಂತಾನಂ ನಂಬೂದಿರಿ]], [[ಪುಳಿಕ್ಕೋಟ್ಟಿಲ್ ಹೈದರ್]], [[ಊರೂಬ್]], [[ವಿ. ಸಿ. ಬಾಲಕೃಷ್ಣ ಪಾಣಿಕರ್]], ವಲ್ಲತ್ತೋಲ್ ಗೋಪಾಲ ಮೇನನ್, ಮತ್ತು [[ವಲ್ಲತ್ತೋಲ್ ನಾರಾಯಣ ಮೇನನ್]] ಸೇರಿದಂತೆ [[ಮಲಯಾಳಂ]]ನ ಪ್ರಸಿದ್ಧ ಬರಹಗಾರರು ಜಿಲ್ಲೆಯ ಮೂಲವಾಸಿಗಳಾಗಿದ್ದರು.<ref name="mal"/> [[ಎಂ. ಗೋವಿಂದನ್]], [[ಎಂ. ಟಿ. ವಾಸುದೇವನ್ ನಾಯರ್]], ಮತ್ತು [[ಅಕ್ಕಿತಂ ಅಚ್ಯುತನ್ ನಂಬೂದಿರಿ]] ಅವರು [[ಪೊನ್ನಾನಿ]]ಯಲ್ಲಿನ ''ಪೊನ್ನಾನಿ ಕಲಾರಿ''ಯಿಂದ ಬಂದ ಬರಹಗಾರರು.<ref name="mal"/> [[ನಾಲಪಾಟ್ ನಾರಾಯಣ ಮೇನನ್]], [[ಬಾಲಮಣಿ ಅಮ್ಮ]], [[ವಿ. ಟಿ. ಭಟ್ಟಾತಿರಿಪಾಡ್]], ಮತ್ತು [[ಕಮಲಾ ಸುರಯ್ಯ]] ಕೂಡ ಹಿಂದಿನ [[ಪೊನ್ನಾನಿ ತಾಲೂಕು]]ಗೆ ಸೇರಿದವರು.
ಜಿಲ್ಲೆಯ ಪುಲಾಮಂತೋಲೆ ಪ್ರದೇಶವು ಐತಿಹಾಸಿಕವಾಗಿ ಕೇರಳದಲ್ಲಿ ಆಯುರ್ವೇದದ ಸಾಂಪ್ರದಾಯಿಕ ಅಭ್ಯಾಸದೊಂದಿಗೆ ಸಂಬಂಧಿಸಿದ ಅಷ್ಟವೈದ್ಯ ವಂಶವಾದ ಪುಲಾಮಂತೋಲೆ ಮೂಸ್ ಕುಟುಂಬದೊಂದಿಗೆ ಸಂಬಂಧ ಹೊಂದಿದೆ.<ref>{{Cite web |url=https://www.keralatourism.org/districts/malappuram/ |title=ಮಲಪ್ಪುರಂನ ಜಿಲ್ಲೆ |website=Kerala Tourism}}</ref>
ಮಲಪ್ಪುರಂ ರಾಜ್ಯದಲ್ಲಿ [[ಮಾಪ್ಪಿಳ್ಳ ಪಾಟ್ಟು|''ಮಾಪ್ಪಿಳ್ಳ ಪಾಟ್ಟು'']] ಸಾಹಿತ್ಯದ ಮುಖ್ಯ ಕೇಂದ್ರವಾಗಿತ್ತು.<ref name="mal"/> ಮೊಯಿನ್ಕುಟ್ಟಿ ವೈದ್ಯರ್ ಮತ್ತು ಪುಳಿಕ್ಕೋಟ್ಟಿಲ್ ಹೈದರ್ ಅವರ ಜೊತೆಗೆ, ಕುಲಂಗರ ವೀಟ್ಟಿಲ್ ಮೊಯ್ದು ಮುಸ್ಲಿಯಾರ್ (ಚಕ್ಕೇರಿ ಶುಜಾಯಿ ಎಂದು ಜನಪ್ರಿಯ), ಚಕ್ಕೇರಿ ಮೊಯ್ದೀನ್ಕುಟ್ಟಿ, ಮಾನಕ್ಕರಕ್ಕತ್ ಕುಂಹಿಕೋಯ, ನಲ್ಲಾಳಂ ಬೀರನ್, ಕೆ. ಕೆ. ಮುಹಮ್ಮದ್ ಅಬ್ದುಲ್ ಕರೀಮ್, ಬಾಲಕೃಷ್ಣನ್ ವಲ್ಲಿಕುಣ್ಣು, ಪುನ್ನಾಯೂರ್ಕುಳಂ ಬಾಪು, [[ವೆಲಿಯಂಕೋಡ್ ಉಮರ್ ಖಾಸಿ]], ಇತ್ಯಾದಿ ಹಲವಾರು ''ಮಾಪ್ಪಿಳ್ಳ ಪಾಟ್ಟು'' ಕವಿಗಳು ಮಲಪ್ಪುರಂ ಅನ್ನು ತಮ್ಮ ಕೆಲಸದ ವೇದಿಕೆಯಾಗಿ ಆಯ್ಕೆ ಮಾಡಿಕೊಂಡರು.<ref name="mal"/>
[[File:Tirur, Kerala.jpg|left|thumbnail|[[ತಿರೂರ್]] ಬಳಿಯ ಹಳ್ಳಿಯ ಪ್ರದೇಶ]]
ಜಿಲ್ಲೆಯು ಕೇರಳದ ಶಾಸ್ತ್ರೀಯ ಕಲಾಪ್ರಕಾರವಾದ [[ಕಥಕ್ಕಳಿ]] ಮತ್ತು [[ಆಯುರ್ವೇದ]]ಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ.<ref name="mal"/> [[ಕೊಟ್ಟಕ್ಕಲ್]]ನಲ್ಲಿ [[ವೈದ್ಯರತ್ನಂ ಪಿ. ಎಸ್. ವಾರಿಯರ್]] ಸ್ಥಾಪಿಸಿದ ''ಕೊಟ್ಟಕ್ಕಲ್ ನಾಟ್ಯ ಸಂಗಂ''ದಿಂದ ಬಂದ ಪ್ರಸಿದ್ಧ ಕಥಕ್ಕಳಿ ಕಲಾವಿದರಲ್ಲಿ [[ಕೊಟ್ಟಕ್ಕಲ್ ಚಂದ್ರಶೇಖರನ್]], [[ಕೊಟ್ಟಕ್ಕಲ್ ಶಿವರಾಮನ್]], ಮತ್ತು [[ಕೊಟ್ಟಕ್ಕಲ್ ಮಧು]] ಸೇರಿದ್ದಾರೆ. ಪ್ರಸ್ತುತ ತಿರೂರಂಗಡಿ, ತಿರೂರ್, ಮತ್ತು ಪೊನ್ನಾನಿ ತಾಲೂಕುಗಳ ಭಾಗಗಳನ್ನು ನಿಯಂತ್ರಿಸುತ್ತಿದ್ದ [[ತಾನೂರು ಸಾಮ್ರಾಜ್ಯ|ವೆಟ್ಟತ್ತುನಾಡು]] ಆಡಳಿತಗಾರರು ಕಲೆ ಮತ್ತು ವಿದ್ಯೆಯ ಪ್ರಸಿದ್ಧ ಪೋಷಕರಾಗಿದ್ದರು. ಒಬ್ಬ ವೆಟ್ಟತ್ತುನಾಡು ರಾಜ (1630–1640 ರಲ್ಲಿ ಆಳ್ವಿಕೆ) [[ಕಥಕ್ಕಳಿ]] ಕಲಾಪ್ರಕಾರದಲ್ಲಿ ನಾವೀನ್ಯತೆಗಳನ್ನು ಪರಿಚಯಿಸಿದನೆಂದು ಹೇಳಲಾಗುತ್ತದೆ, ಇದು "ವೆಟ್ಟತ್ತು ಸಂಪ್ರದಾಯ" ಎಂದು ಕರೆಯಲ್ಪಟ್ಟಿತು.<ref>ಮೇನನ್, ಎ ಶ್ರೀಧರ. ''ಎ ಸರ್ವೆ ಆಫ್ ಕೇರಳ ಹಿಸ್ಟರಿ.'' ಕೊಟ್ಟಯಂ: ಡಿಸಿ ಬುಕ್ಸ್, 2007. ಮುದ್ರಣ</ref> ತುಂಚತ್ತ್ ಎಝುತ್ತಚನ್ ಮತ್ತು ವಲ್ಲತ್ತೋಲ್ ನಾರಾಯಣ ಮೇನನ್ ''ವೆಟ್ಟತ್ತುನಾಡಿನಿಂದ'' ಬಂದವರು. ವಲ್ಲತ್ತೋಲ್ ನಾರಾಯಣ ಮೇನನ್ ಅವರನ್ನು ಚೇರುತುರುತಿಯಲ್ಲಿ [[ಕೇರಳ ಕಲಾಮಂಡಲಂ]] ಸ್ಥಾಪನೆಯ ಮೂಲಕ ಆಧುನಿಕ ಕಾಲದಲ್ಲಿ ''ಕಥಕ್ಕಳಿ''ಯ ಪುನರುತ್ಥಾನಕಾರ ಎಂದೂ ಪರಿಗಣಿಸಲಾಗುತ್ತದೆ.<ref name="mal"/> ಪ್ರಮುಖ ''ಕಥಕ್ಕಳಿ'' ತರಬೇತುದಾರರಾದ [[ವಾಝೆಂಕಡ ಕುಂಚು ನಾಯರ್]], ಮತ್ತು ಅತ್ಯಂತ ಜನಪ್ರಿಯ ''ಕಥಕ್ಕಳಿ'' ಗಾಯಕರಲ್ಲಿ ಸೇರಿದ್ದ [[ಶಂಕರನ್ ಎಂಬ್ರಾಂತಿರಿ]] ಮತ್ತು [[ತಿರೂರ್ ನಂಬಿಸ್ಸಾನ್]] ಕೂಡ ಮಲಪ್ಪುರಂನಿಂದ ಬಂದವರು.<ref name="mal"/> ಆಧುನಿಕ ಕೇರಳದಲ್ಲಿ ''ಮೋಹಿನಿಯಾಟ್ಟಂ'' ಅನ್ನು ಪುನರುತ್ಥಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ [[ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ]] ಜಿಲ್ಲೆಯ [[ತಿರುನವಾಯ]]ದಿಂದ ಬಂದವರು.<ref name="mal"/> ಭಾರತೀಯ ಶಾಸ್ತ್ರೀಯ ನರ್ತಕಿಯಾದ [[ಮೃಣಾಲಿನಿ ಸಾರಾಭಾಯ್]] ಹಿಂದಿನ [[ಪೊನ್ನಾನಿ ತಾಲೂಕು]]ಗೆ ಸೇರಿದವರು. [[ಕೊಟ್ಟಕ್ಕಲ್]]ನಲ್ಲಿನ [[ಆರ್ಯ ವೈದ್ಯ ಶಾಲೆ]] ವಿಶ್ವದ ಅತಿದೊಡ್ಡ ಆಯುರ್ವೇದ ಔಷಧೀಯ ಜಾಲಗಳಲ್ಲಿ ಒಂದಾಗಿದೆ.<ref name="mal"/> ಮೊದಲ ಪ್ರಸಿದ್ಧ ಕೇರಳ ಇತಿಹಾಸಕಾರ [[ಜೈನುದ್ದೀನ್ ಮಖ್ದೂಂ II]] ಕೂಡ ಜಿಲ್ಲೆಯಿಂದ ಬಂದವರು.<ref name="mal"/>
[[File:Kottakkal Bypass.jpg|thumbnail|[[ಕೊಟ್ಟಕ್ಕಲ್]], ಪ್ರಸಿದ್ಧ [[ಆರ್ಯ ವೈದ್ಯ ಶಾಲೆ]]ಯ ಕೇಂದ್ರ]]
[[ಕೇರಳ ವರ್ಮ ವಲಿಯ ಕೊಯಿಲ್ ತಂಪುರಾನ್|ಕೇರಳ ವರ್ಮ ವಲಿಯ ಕೋಯಿ ತಂಪುರಾನ್]] (ಕೇರಳ ಕಾಳಿದಾಸನ್), [[ರಾಜ ರಾಜ ವರ್ಮ]] (ಕೇರಳ ಪಾಣಿನಿ) ಮತ್ತು [[ರಾಜ ರವಿ ವರ್ಮ]] (ಪ್ರಸಿದ್ಧ ಚಿತ್ರಕಾರ) ಇವರು [[ಪರಪ್ಪನಾಡ್]] ರಾಜಮನೆತನದ ವಿವಿಧ ಶಾಖೆಗಳಿಗೆ ಸೇರಿದವರು, ಅವರು ನಂತರ [[ಪರಪ್ಪನಂಗಾಡಿ]]ಯಿಂದ ಹರಿಪ್ಪಾಡ್, ಚಂಗನಾಶ್ಶೇರಿ, ಮಾವೆಲಿಕ್ಕರ ಮತ್ತು ಕಿಳಿಮಾನೂರ್ ಗೆ ವಲಸೆ ಬಂದರು.<ref>{{Cite book|title=ವಿಶಾಖಂ ತಿರುನಾಲ್.|date=2012|publisher=Duc|isbn=978-613-9-12064-2|location=[ಪ್ರಕಟಣಾ ಸ್ಥಳ ಗುರುತಿಸಲಾಗಿಲ್ಲ]|oclc=940373421}}</ref> ಕೆಲವು ವಿದ್ವಾಂಸರ ಪ್ರಕಾರ, [[ವೇಲು ತಂಪಿ ದಳವ]]ನ ಪೂರ್ವಜರು ಪರಪ್ಪನಂಗಾಡಿ ಬಳಿಯ [[ವಲ್ಲಿಕುಣ್ಣು]]ಗೆ ಸೇರಿದವರು. ದೈನಂದಿನ "[[ದಿ ಹಿಂದೂ]]" (1898 ರಿಂದ 1905) ನ ಮುಖ್ಯ ಸಂಪಾದಕ ಮತ್ತು "ದಿ ಇಂಡಿಯನ್ ಪೇಟ್ರಿಯಾಟ್" ನ ಸಂಸ್ಥಾಪಕ ಮುಖ್ಯ ಸಂಪಾದಕ ದಿವಾನ್ ಬಹದ್ದೂರ್ ಸಿ. ಕರುಣಾಕರ ಮೇನನ್ (1863–1922) ಕೂಡ ಪರಪ್ಪನಂಗಾಡಿಯಿಂದ ಬಂದವರು.<ref>{{Cite book|url=http://archive.org/details/somemadrasleader00allauoft|title=ಕೆಲವು ಮದ್ರಾಸ್ ನಾಯಕರು|date=1922|publisher=ಅಲಹಾಬಾದ್ ಸ್ಟ್ಯಾಂಡರ್ಡ್ ಪ್ರೆಸ್ನಲ್ಲಿ ಮುದ್ರಿಸಲಾಗಿದೆ}}</ref> [[ಒ. ಚಂದು ಮೇನನ್]] ಪರಪ್ಪನಂಗಾಡಿ ಮುನ್ಸಿಫ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದಾಗ ತಮ್ಮ ಕಾದಂಬರಿಗಳಾದ ''ಇಂದುಲೇಖ'' ಮತ್ತು ''ಶಾರದ'' ಅನ್ನು ಬರೆದರು. ''ಇಂದುಲೇಖ'' [[ಮಲಯಾಳಂ]] ಭಾಷೆಯಲ್ಲಿ ಬರೆಯಲಾದ ಮೊದಲ ಪ್ರಮುಖ ಕಾದಂಬರಿಯಾಗಿದೆ. ''ಮಾತೃಭೂಮಿ'' ದೈನಿಕದ ಸಂಸ್ಥಾಪಕ ಕೆ. ಮಾಧವನ್ ನಾಯರ್ [[ಮಲಪ್ಪುರಂ]]ನಿಂದ ಬಂದವರು. ಪೊನ್ನಾನಿ ಪ್ರದೇಶವು ''ಕೇರಳ ಗಾಂಧಿ'' ಎಂದು ಜನಪ್ರಿಯವಾಗಿರುವ [[ಕೆ. ಕೆಳಪ್ಪನ್]], ಎ. ವಿ. ಕುಟ್ಟಿಮಾಲು ಅಮ್ಮ, ಮತ್ತು [[ಮೊಹಮ್ಮದ್ ಅಬ್ದುರ್ ರಹಿಮಾನ್]], ಮತ್ತು ಹಲವಾರು ಇತರ ಸ್ವಾತಂತ್ರ್ಯ ಹೋರಾಟಗಾರರ ಕೆಲಸದ ವೇದಿಕೆಯಾಗಿತ್ತు.<ref name="mal"/> [[ಪೊನ್ನಾನಿ ತಾಲೂಕು]]ನ ಇತರ ಸ್ವಾತಂತ್ರ್ಯ ಕಾರ್ಯಕರ್ತರಲ್ಲಿ [[ಲಕ್ಷ್ಮೀ ಸೆಹಗಲ್]], [[ವಿ. ಟಿ. ಭಟ್ಟಾತಿರಿಪಾಡ್]], ಮತ್ತು [[ಅಮ್ಮು ಸ್ವಾಮಿನಾಥನ್]] ಸೇರಿದ್ದಾರೆ. [[ಮಹಾತ್ಮ ಗಾಂಧಿ]], [[ಜವಾಹರ್ಲಾಲ್ ನೆಹರು]], ಮತ್ತು [[ಲಾಲ್ ಬಹಾದ್ದೂರ್ ಶಾಸ್ತ್ರಿ]] ಅವರ ಬೂದಿಯನ್ನು [[ಭಾರತಪ್ಪುಳ್ಳ]] ನದಿಯ ದಡದಲ್ಲಿ ಕೇರಳದಲ್ಲಿ [[ತಿರುನವಾಯ]] ದಲ್ಲಿ ಸಮಾಧಿ ಮಾಡಲಾಯಿತು.<ref name="askh"/><ref name="mal"/> ಮಹಾತ್ಮ ಗಾಂಧಿಯವರ ಆತ್ಮಚರಿತ್ರೆಯ ಮಲಯಾಳಂ ಅನುವಾದಕ ಕೆ. ಮಾಧವನಾರ್ ಕೂಡ ಮಲಪ್ಪುರಂನ ಮೂಲವಾಸಿಯಾಗಿದ್ದರು.
[[ಪೊನ್ನಾನಿ]]ಯ ಪ್ರಾಚೀನ ಕಾಲದಿಂದಲೂ ವಿದೇಶಿ ದೇಶಗಳೊಂದಿಗಿನ ವ್ಯಾಪಾರ ಸಂಬಂಧಗಳು ಸಾಂಸ್ಕೃತಿಕ ವಿನಿಮಯಕ್ಕೆ ದಾರಿ ಮಾಡಿಕೊಟ್ಟವು.<ref name="mal"/> ಪರ್ಷಿಯನ್-ಅರಬ್ ಕಲಾ ಪ್ರಕಾರಗಳು ಮತ್ತು ಉತ್ತರ ಭಾರತೀಯ ಸಂಸ್ಕೃತಿಯು ಅಲ್ಲಿಗೆ ಬಂದಿತು. ಭಾಷೆಯಲ್ಲಿಯೂ ಪ್ರತಿಧ್ವನಿಗಳಿದ್ದವು. ಹೀಗೆಯೇ ಹೈಬ್ರಿಡ್ ಭಾಷೆ [[ಅರಬಿ-ಮಲಯಾಳಂ]] ಬಂತು.<ref name="mal"/> ಅನೇಕ ಕವಿತೆಗಳನ್ನು ಈ ಹೈಬ್ರಿಡ್ ಭಾಷೆಯಲ್ಲಿ ಬರೆಯಲಾಗಿದೆ.<ref name="mal"/> ಇಲ್ಲಿ ಸಾಂಸ್ಕೃತಿಕ ವಿನಿಮಯದ ಭಾಗವಾಗಿ ಬಂದ ಹಿಂದೂಸ್ತಾನಿಗಳಿಂದ ಕವ್ವಾಲಿ ಮತ್ತು ಗಝಲ್ಗಳು ಇನ್ನೂ ಪೊನ್ನಾನಿಯಲ್ಲಿ ಬೆಳೆಯುತ್ತಿವೆ. ಇಕೆ ಅಬೂಬಕರ್, ಮೈನ್ ಮತ್ತು ಖಲೀಲ್ ಭಾಯ್ (ಖಲೀಲ್ ರಹಮಾನ್) ಪೊನ್ನಾನಿಯ ಕೆಲವು ಪ್ರಸಿದ್ಧ ಕವ್ವಾಲಿ ಗಾಯಕರಾಗಿದ್ದಾರೆ.
[[File:Nila Nadhi.jpg|left|thumbnail|ಮಧ್ಯಕಾಲೀನ [[ಮಾಮಂಕಂ ಉತ್ಸವ]]ದ ಸ್ಥಾನವಾದ [[ತಿರುನವಾಯ]]]]
ಕೇರಳ [[ನಂಬೂದಿರಿ]] [[ಬ್ರಾಹ್ಮಣ]]ರ ಸರ್ವೋಚ್ಚ ಧಾರ್ಮಿಕ ಮುಖ್ಯಸ್ಥರೆಂದು ಪರಿಗಣಿಸಲ್ಪಟ್ಟಿದ್ದ [[ಅಳ್ವಾಂಚೇರಿ ತಂಪ್ರಕ್ಕಲ್]]ರ ಪ್ರಧಾನ ಕಚೇರಿಯು [[ಅತವನಾಡ್]] ನಲ್ಲಿತ್ತು.<ref name="mal"/> ''[[ಪಾಲಕ್ಕಾಡ್]] ರಾಜರ'' ಮೂಲ ಪ್ರಧಾನ ಕಚೇರಿಯೂ [[ಅತವನಾಡ್]] ನಲ್ಲಿತ್ತು.<ref name="mnn"/> ತಿರೂರ್, ಪೆರಿಂತಲ್ಮನ್ನ, ಮತ್ತು ಪೊನ್ನಾನಿ ತಾಲೂಕುಗಳಲ್ಲಿ ಹಲವಾರು ಶ್ರೀಮಂತ ''ನಂಬೂದಿರಿ ಮನ''ಗಳಿವೆ. ಮಧ್ಯಕಾಲೀನ [[ಮಾಮಂಕಂ ಉತ್ಸವ]]ದ ಸ್ಥಾನವಾದ [[ತಿರುನವಾಯ]] ಜಿಲ್ಲೆಯಲ್ಲಿದೆ. [[ಕೊಚ್ಚಿ ಸಾಮ್ರಾಜ್ಯ]]ದ ಪೂರ್ವಜರ ಪ್ರಧಾನ ಕಚೇರಿಯಾದ [[ಪೆರುಂಪಡಪ್ಪು, ಮಲಪ್ಪುರಂ|ಪೆರುಂಪಡಪ್ಪು]], ಮತ್ತು [[ಕಾಲಿಕಟ್ನ ಜಾಮೋರಿನ್]]ನ ಪೂರ್ವಜರ ಪ್ರಧಾನ ಕಚೇರಿಯಾದ [[ನೆಡಿಯಿರುಪ್ಪು]] ಸಹ ಜಿಲ್ಲೆಯಲ್ಲಿವೆ. [[ಕುಂಹಾಲಿ ಮರಕ್ಕರ್]]ಗಳು ಪೊನ್ನಾನಿ, [[ತಾನೂರು, ಮಲಪ್ಪುರಂ|ತಾನೂರು]], ಮತ್ತು ಪರಪ್ಪನಂಗಾಡಿ ಬಂದರು ಪಟ್ಟಣಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು.<ref name="mal"/> 16 ನೇ ಶತಮಾನ CE ಯಲ್ಲಿ, ಕೊಚ್ಚಿಯು [[ಮಲಬಾರ್ ಕರಾವಳಿ]]ಯಲ್ಲಿ ಪ್ರಮುಖ ಶಕ್ತಿಯಾದಾಗ, [[ಕೊಚ್ಚಿ ಸಾಮ್ರಾಜ್ಯ]]ದ ಕೆಲವು ರಾಜರನ್ನು ಸಾಮಾನ್ಯವಾಗಿ [[ತಾನೂರು ಸಾಮ್ರಾಜ್ಯ]]ದ ರಾಜಮನೆತನದಿಂದ ಎರವಲು ಪಡೆಯಲಾಗುತ್ತಿತ್ತು.<ref name="askh"/> [[ತಿರುವಾಂಕೂರು]]ನ ರಾಣಿಯರ ಅನೇಕ ಸಂಗಾತಿಗಳನ್ನು ಸಾಮಾನ್ಯವಾಗಿ [[ಪರಪ್ಪನಾಡ್]] ರಾಜಮನೆತನದಿಂದ ಆಯ್ಕೆ ಮಾಡಲಾಗುತ್ತಿತ್ತು. ಕೇರಳದ ಮೊದಲ ಮುಖ್ಯಮಂತ್ರಿ [[ಇ. ಎಂ. ಎಸ್. ನಂಬೂದಿರಿಪಾಡ್]] ಜಿಲ್ಲೆಯ [[ಪೆರಿಂತಲ್ಮನ್ನ]]ದಿಂದ ಬಂದವರು.<ref name="mal"/> ಮಧ್ಯಕಾಲೀನ [[ವಲ್ಲುವನಾಡ್ ಸಾಮ್ರಾಜ್ಯ]]ದ ಆಡಳಿತ ಮನೆತನಗಳ ಸ್ಥಾನಗಳಾದ [[ಅಂಗಡಿಪುರಂ]] ಮತ್ತು [[ಮಂಕಡ]] ಪೆರಿಂತಲ್ಮನ್ನದ ಪಕ್ಕದಲ್ಲಿವೆ.
ಮಧ್ಯಯುಗದಲ್ಲಿ, ಜಿಲ್ಲೆಯು [[ವೇದ]] ಮತ್ತು [[ಇಸ್ಲಾಂ]] ಅಧ್ಯಯನಗಳ ಕೇಂದ್ರವಾಗಿತ್ತು.<ref name="mal"/> [[ಮಲಿಕ್ ದೀನಾರ್]] ಪೊನ್ನಾನಿ ಬಂದರು ಪಟ್ಟಣಕ್ಕೆ ಭೇಟಿ ನೀಡಿದ್ದಾರೆಂದು ನಂಬಲಾಗಿದೆ.<ref>{{Cite web|url=https://www.keralatourism.org/malabar/ponnani/68|title=ಪೊನ್ನಾನಿಯ ಇತಿಹಾಸ|access-date=12 October 2020|website=Kerala Tourism|archive-date=13 September 2021|archive-url=https://web.archive.org/web/20210913065714/https://www.keralatourism.org/malabar/ponnani/68|url-status=live}}</ref> [[ಪೊನ್ನಾನಿ]]ಯ ''ವಲಿಯ ಜುಮಾ ಮಸ್ಜಿದ್'' ಮಧ್ಯಯುಗದಲ್ಲಿ [[ಏಷ್ಯಾ]]ದ ಅತಿದೊಡ್ಡ ಇಸ್ಲಾಮಿಕ್ ಅಧ್ಯಯನ ಕೇಂದ್ರಗಳಲ್ಲಿ ಒಂದಾಗಿತ್ತು. [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತ ಶಾಲೆ]]ಯ ಮುಖ್ಯ ಸದಸ್ಯರಾದ [[ಪರಮೇಶ್ವರ]], [[ನಿಲಕಂಠ ಸೋಮಯಾಜಿ]], [[ಜ್ಯೇಷ್ಠದೇವ]], [[ಅಚ್ಯುತ ಪಿಷಾರಡಿ]], ಮತ್ತು ಮೇಲ್ಪತ್ತೂರ್ ನಾರಾಯಣ ಭಟ್ಟಾತಿರಿ ತಿರೂರ್ ಪ್ರದೇಶದಿಂದ ಬಂದವರು.<ref name="mal"/> [[ಅರಬಿ ಮಲಯಾಳಂ ಲಿಪಿ]], ಇಲ್ಲವೇ ಪೊನ್ನಾನಿ ಲಿಪಿ, 16 ನೇ ಶತಮಾನದ ಅಂತ್ಯ ಮತ್ತು 17 ನೇ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡಿತು.<ref name="mal"/> ಕಳೆದ ಶತಮಾನಗಳಲ್ಲಿ ಈ ಲಿಪಿಯನ್ನು ಜಿಲ್ಲೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು.<ref name="mal"/>
ಜಿಲ್ಲೆಯ ನಾಟಕಕಾರರು ಮತ್ತು ನಟರಲ್ಲಿ [[ಕೆ. ಟಿ. ಮುಹಮ್ಮದ್]], [[ನಿಲಂಬೂರ್ ಬಾಲನ್]], [[ನಿಲಂಬೂರ್ ಆಯಿಷಾ]], [[ಅದಿಲ್ ಇಬ್ರಾಹಿಂ]], [[ಅನೀಶ್ ಜಿ. ಮೇನನ್]], [[ಅಪರ್ಣಾ ನಾಯರ್]], [[ಅನಿಕಾ|ಬೇಬಿ ಅನಿಕಾ]], [[ಧನಿಶ್ ಕಾರ್ತಿಕ್]], [[ಹೇಮಂತ್ ಮೇನನ್]], [[ರಶಿನ್ ರಹಮಾನ್]], [[ರವಿ ವಲ್ಲತ್ತೋಲ್]], [[ಸಂಗೀತಾ ಮಾಧವನ್ ನಾಯರ್]], [[ಶ್ವೇತಾ ಮೇನನ್]], [[ಸೂರಜ್ ತೇಲಕ್ಕಾಡ್]], ಇತ್ಯಾದಿ ಸೇರಿದ್ದಾರೆ. ಮಲಯಾಳಂ ಚಲನಚಿತ್ರೋದ್ಯಮದ ಇಬ್ಬರು ಪ್ರಮುಖ ನಟರು ಹಾಗೂ ಹಿನ್ನೆಲೆ ಗಾಯಕರಾದ [[ಪೃಥ್ವಿರಾಜ್ ಸುಕುಮಾರನ್]] ಮತ್ತು [[ಇಂದ್ರಜಿತ್ ಸುಕುಮಾರನ್]] ಅವರ ಪಿತಾಮಹ [[ಸುಕುಮಾರನ್]] ಕೂಡ ಜಿಲ್ಲೆಯ ಮೂಲವಾಸಿಯಾಗಿದ್ದರು. [[ಕೃಷ್ಣಚಂದ್ರನ್]], [[ಪಾರ್ವತಿ ಜಯದೇವನ್]], [[ಶಹಬಾಜ್ ಅಮನ್]], [[ಸಿತಾರಾ (ಗಾಯಕಿ)|ಸಿತಾರಾ ಕೃಷ್ಣಕುಮಾರ್]], ಸುದೀಪ್ ಪಾಲನಾಡ್, ಮತ್ತು [[ಉಣ್ಣಿ ಮೇನನ್]] ಸೇರಿದಂತೆ ಹಿನ್ನೆಲೆ ಗಾಯಕರು ಸಹ ಜಿಲ್ಲೆಯಿಂದ ಬಂದವರು. ಜಿಲ್ಲೆಯು [[ಅರ್ಯಾಡನ್ ಶೌಕತ್]], [[ದೀಪು ಪ್ರದೀಪ್]], [[ಹರಿ ನಾಯರ್]], [[ಇಕ್ಬಾಲ್ ಕುಟ್ಟಿಪುರಂ]], [[ಮಂಕಡ ರವಿ ವರ್ಮ]], [[ಮುಹಮ್ಮದ್ ಮುಸ್ತಫಾ]], [[ಮುಹ್ಸಿನ್ ಪರಾರಿ]], [[ರಾಜೀವ್ ನಾಯರ್]], [[ಸಲಾಂ ಬಪ್ಪು]], [[ಶಾನವಾಸ್ ಕೆ ಬಾವಕುಟ್ಟಿ]], ಶಾನವಾಸ್ ನಾರಣಿಪ್ಪುಳ್ಳ, [[ಟಿ. ಎ. ರಜಾಕ್]], [[ಟಿ. ಎ. ಶಾಹಿದ್]], [[ವಿನಯ್ ಗೋವಿಂದ್]], ಮತ್ತು [[ಝಕಾರಿಯಾ ಮೊಹಮ್ಮದ್]] ಸೇರಿದಂತೆ ಕೆಲವು ಪ್ರಮುಖ ಚಲನಚಿತ್ರ ನಿರ್ಮಾಪಕರು, ಗೀತರಚನೆಕಾರರು, ಛಾಯಾಗ್ರಾಹಕರು, ಮತ್ತು ನಿರ್ದೇಶಕರನ್ನು ಸಹ ನೀಡಿದೆ. ಜಿಲ್ಲೆಯ ಅತ್ಯಂತ ಪ್ರಮುಖ ಚಿತ್ರಕಾರರಲ್ಲಿ [[ನಂಬೂದಿರಿ (ಕಲಾವಿದ)|ಕಲಾವಿದ ನಂಬೂದಿರಿ]], [[ಕೆ. ಸಿ. ಎಸ್. ಪಾಣಿಕರ್]], ಮತ್ತು [[ಟಿ. ಕೆ. ಪದ್ಮಿನಿ]] ಸೇರಿದ್ದಾರೆ.<ref name="mal"/> ಮತ್ತೊಬ್ಬ ಚಿತ್ರಕಾರ [[ಅಕ್ಕಿತಂ ನಾರಾಯಣನ್]] [[ಕುಮಾರನೆಲ್ಲೂರ್]] ನಿಂದ ಬಂದವರು. ಕೇರಳದ ಅತ್ಯಂತ ಪ್ರಮುಖ ಇತಿಹಾಸಕಾರರಲ್ಲಿ ಒಬ್ಬರಾದ [[ಎಂ. ಜಿ. ಎಸ್. ನಾರಾಯಣನ್]] ಕೂಡ ಇಲ್ಲಿಂದ ಬಂದವರು.<ref name="mal"/> ಜಿಲ್ಲೆಯ ಸಮಾಜ ಸುಧಾರಕರಲ್ಲಿ [[ವೆಲಿಯಂಕೋಡ್ ಉಮರ್ ಖಾಸಿ]] (1757–1852), [[ಚಲಿಲಕತ್ ಕುನಹ್ಮದ್ ಹಾಜಿ]], [[ಇ. ಮೊಯ್ದು ಮೌಲವಿ]], ಮತ್ತು [[ಸಯ್ಯಿದ್ ಸನಾಉಲ್ಲಾ ಮಕ್ತಿ ತಂಗಲ್]] (1847–1912) ಸೇರಿದ್ದಾರೆ.<ref name="mal"/>
=== ಪಾಕಪದ್ಧತಿ ===
[[File:Pathiri.jpg|thumb|upright|''[[ಪಾತಿರಿ]]'', [[ಅಕ್ಕಿ ಹಿಟ್ಟು|ಅಕ್ಕಿ ಹಿಟ್ಟಿನ]] ಪ್ಯಾನ್ಕೇಕ್, ಮಲಪ್ಪುರಂನ ಸಾಮಾನ್ಯ ಉಪಹಾರ ಭಕ್ಷ್ಯಗಳಲ್ಲಿ ಒಂದಾಗಿದೆ]]
ಶತಮಾನಗಳ ಸಮುದ್ರ ವ್ಯಾಪಾರವು ಮಲಪ್ಪುರಂಗೆ ವಿಶ್ವವ್ಯಾಪಿ ಪಾಕಪದ್ಧತಿಯನ್ನು ನೀಡಿದೆ. ಪಾಕಪದ್ಧತಿಯು ಸಾಂಪ್ರದಾಯಿಕ [[ಕೇರಳ]], [[ಇರಾನ್ನ ಪಾಕಪದ್ಧತಿ|ಪರ್ಷಿಯನ್]], [[ಯೆಮೆನಿ ಪಾಕಪದ್ಧತಿ|ಯೆಮೆನಿ]] ಮತ್ತು [[ಅರಬ್]] ಆಹಾರ ಸಂಸ್ಕೃತಿಯ ಮಿಶ್ರಣವಾಗಿದೆ.<ref name="MC"/> ಈ ಪಾಕಪದ್ಧತಿಯ ಮುಖ್ಯ ಅಂಶಗಳಲ್ಲಿ ಒಂದಾದ ''[[ಪಾತಿರಿ]]'', ಇದು ಅಕ್ಕಿ ಹಿಟ್ಟಿನಿಂದ ಮಾಡಿದ ಪ್ಯಾನ್ಕೇಕ್. ''ಪಾತಿರಿ''ಯ ಪ್ರಭೇದಗಳಲ್ಲಿ ''ನೇಪಾತಿರಿ'' (ತುಪ್ಪದಿಂದ ಮಾಡಿದ್ದು), ''ಪೊರಿಚಾ ಪಾತಿರಿ'' (ಬೇಯಿಸುವ ಬದಲು ಹುರಿದದ್ದು), ''ಮೀನ್ ಪಾತಿರಿ'' (ಮೀನಿನಿಂದ ತುಂಬಿದ್ದು), ಮತ್ತು ''ಇರಾಚಿ ಪಾತಿರಿ'' (ಗೋಮಾಂಸದಿಂದ ತುಂಬಿದ್ದು) ಸೇರಿವೆ. [[ಕರಿಮೆಣಸು|ಮೆಣಸು]], [[ಏಲಕ್ಕಿ]], ಮತ್ತು [[ಲವಂಗ]]ದಂತಹ ಮಸಾಲೆಗಳನ್ನು ಮಲಪ್ಪುರಂನ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹಬ್ಬಗಳಲ್ಲಿ ಬಳಸುವ ಮುಖ್ಯ ಭಕ್ಷ್ಯವೆಂದರೆ ಮಲಬಾರ್ ಶೈಲಿಯ [[ಬಿರಿಯಾನಿ]]. [[ಸಾಧ್ಯ]] ಮದುವೆ ಮತ್ತು ಹಬ್ಬದ ಸಂದರ್ಭಗಳಲ್ಲಿಯೂ ಕಂಡುಬರುತ್ತದೆ. ಜಿಲ್ಲೆಯ ಪೊನ್ನಾನಿ ಪ್ರದೇಶವು ವ್ಯಾಪಕವಾದ ಸ್ಥಳೀಯ ಭಕ್ಷ್ಯಗಳನ್ನು ಹೊಂದಿದೆ. ''ಅರಿಕಡುಕ್ಕ'', ''ಚಟ್ಟಿಪಾತಿರಿ'', ''ಮುತ್ತಮಾಲ'', ''ಪಳಂ ನಿರಚತ್ತು'', ಮತ್ತು ''ಉನ್ನಕ್ಕಾಯ''ದಂತಹ ತಿಂಡಿಗಳು ಪೊನ್ನಾನಿಯಲ್ಲಿ ತಮ್ಮದೇ ಆದ ಶೈಲಿಯನ್ನು ಹೊಂದಿವೆ. ಇವುಗಳ ಜೊತೆಗೆ, [[ಕೇರಳ]]ದ ಇತರ ಸಾಮಾನ್ಯ ಆಹಾರ ಪದಾರ್ಥಗಳು ಸಹ ಮಲಪ್ಪುರಂನ ಪಾಕಪದ್ಧತಿಯಲ್ಲಿ ಕಂಡುಬರುತ್ತವೆ.<ref>{{cite web |url=https://www.malappuramtourism.org/mappila-cuisine.php |website=malappuramtourism.org |title=ಮಲಪ್ಪುರಂನ ಪಾಕಪದ್ಧತಿ |access-date=18 April 2020 |archive-date=6 April 2020 |archive-url=https://web.archive.org/web/20200406215142/https://www.malappuramtourism.org/mappila-cuisine.php |url-status=live }}</ref> [[ಮಲಬಾರ್ ಜಿಲ್ಲೆ|ಮಲಬಾರ್]] ಆವೃತ್ತಿಯ [[ಬಿರಿಯಾನಿ]], [[ಮಲಯಾಳಂ]]ನಲ್ಲಿ ''ಕುಳಿ ಮಂದಿ'' ಎಂದು ಜನಪ್ರಿಯವಾಗಿದೆ, ಇದು [[ಯೆಮೆನ್]]ನ ಪ್ರಭಾವವನ್ನು ಹೊಂದಿರುವ ಮತ್ತೊಂದು ಜನಪ್ರಿಯ ಭಕ್ಷ್ಯವಾಗಿದೆ.<ref name="MC">{{Cite news|title=ನೇರವಾಗಿ ಮಲಬಾರ್ ಕರಾವಳಿಯಿಂದ|url=https://www.thehindu.com/life-and-style/food/straight-from-the-malabar-coast/article27942808.ece|last=ಸಬ್ನಾನಿ|first=ಧರ ವೋರಾ|date=14 June 2019|access-date=26 January 2021|work=The Hindu|archive-date=2 February 2021|archive-url=https://web.archive.org/web/20210202121206/https://www.thehindu.com/life-and-style/food/straight-from-the-malabar-coast/article27942808.ece|url-status=live}}</ref>
=== ಮಾಧ್ಯಮ ===
[[File:MANJERI F.M 102.7.jpg|thumbnail|[[AIR ಮಂಜೇರಿ FM]] ರೇಡಿಯೋ ನಿಲ್ದಾಣ]]
''[[ಮಲಯಾಳ ಮನೋರಮ]]'', ''[[ಮಾತೃಭೂಮಿ]]'', ''[[ಮಾಧ್ಯಮಂ]]'', ''[[ಚಂದ್ರಿಕಾ (ಮಲಯಾಳಂ ಪತ್ರಿಕೆ)|ಚಂದ್ರಿಕಾ]]'', ''[[ದೇಶಾಭಿಮಾನಿ]]'', ''[[ಸುಪ್ರಭಾತಂ ದೈನಿಕ|ಸುಪ್ರಭಾತಂ]]'', ಮತ್ತು ''[[ಸಿರಾಜ್ ದೈನಿಕ|ಸಿರಾಜ್]]'' ದಿನಪತ್ರಿಕೆಗಳು [[ಮಲಪ್ಪುರಂ]] ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮ ಮುದ್ರಣ ಕೇಂದ್ರಗಳನ್ನು ಹೊಂದಿವೆ. [[ದಿ ಹಿಂದೂ]] ಮಲಪ್ಪುರಂನಲ್ಲಿ ಆವೃತ್ತಿ ಮತ್ತು ಮುದ್ರಣಾಲಯವನ್ನು ಹೊಂದಿದೆ. ಧರ್ಮ ಮತ್ತು ಸಂಸ್ಕೃತಿಗೆ ಮೀಸಲಾದ ಕೆಲವು ನಿಯತಕಾಲಿಕೆಗಳು-ಮಾಸಿಕ, ಪಾಕ್ಷಿಕ ಮತ್ತು ವಾರಪತ್ರಿಕೆಗಳು ಸಹ ಪ್ರಕಟವಾಗುತ್ತವೆ. ಬಹುತೇಕ ಎಲ್ಲಾ ಮಲಯಾಳಂ ಚಾನೆಲ್ಗಳು ಮತ್ತು ಪತ್ರಿಕೆಗಳು ಅಪ್ ಹಿಲ್ನಲ್ಲಿ ತಮ್ಮ ಬ್ಯೂರೋವನ್ನು ಹೊಂದಿವೆ. ಅನೇಕ ಸ್ಥಳೀಯ ಕೇಬಲ್ ದೃಷ್ಟಿಕೋನಗಳು ಮತ್ತು ಅವುಗಳ ಪ್ರಾದೇಶಿಕ ಮಾಧ್ಯಮಗಳಿವೆ. ಮಲಪ್ಪುರಂ ಪ್ರೆಸ್ ಕ್ಲಬ್ ಸಹ ಅಪ್ ಹಿಲ್ನಲ್ಲಿ ನಗರ ಟೌನ್ ಹಾಲ್ನ ಪಕ್ಕದಲ್ಲಿದೆ. [[ದೂರದರ್ಶನ]]ವು ಮಲಪ್ಪುರಂ ಮತ್ತು ಮಂಜೇರಿಯಲ್ಲಿ ಜಿಲ್ಲೆಯಲ್ಲಿ ಎರಡು ಪ್ರಮುಖ ರಿಲೇ ಕೇಂದ್ರಗಳನ್ನು ಹೊಂದಿದೆ. ಭಾರತ ಸರ್ಕಾರದ [[ಪ್ರಸಾರ ಭಾರತಿ]] ರಾಷ್ಟ್ರೀಯ ಸಾರ್ವಜನಿಕ ಸೇವಾ ಪ್ರಸಾರಕವು ಜಿಲ್ಲೆಯಲ್ಲಿ FM ಕೇಂದ್ರವನ್ನು ಹೊಂದಿದೆ ([[AIR ಮಂಜೇರಿ FM]]), ಇದು 102.7 Mhtz ನಲ್ಲಿ ಪ್ರಸಾರ ಮಾಡುತ್ತದೆ. ಯಾವುದೇ ಖಾಸಗಿ FM ಕೇಂದ್ರಗಳಿಲ್ಲದಿದ್ದರೂ, ಮಲಪ್ಪುರಂ, ಪೊನ್ನಾನಿ, ಮತ್ತು ತಿರೂರ್ ಭಾರತದಲ್ಲಿ ಅತಿ ಹೆಚ್ಚು ರೇಡಿಯೋ ಕೇಳುಗರನ್ನು ಹೊಂದಿರುವ ಹತ್ತು ಪಟ್ಟಣಗಳಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳುತ್ತವೆ.<ref>{{cite web|url=http://www.mapsofindia.com/top-ten-cities-of-india/top-ten-towns-in-highest-radio-listenership.html|title=ಅತಿ ಹೆಚ್ಚು ರೇಡಿಯೋ ಕೇಳುಗರನ್ನು ಹೊಂದಿರುವ ಟಾಪ್ ಟೆನ್ ಪಟ್ಟಣಗಳು|access-date=28 July 2015|archive-date=6 September 2015|archive-url=https://web.archive.org/web/20150906202510/http://www.mapsofindia.com/top-ten-cities-of-india/top-ten-towns-in-highest-radio-listenership.html|url-status=live}}</ref>
=== ಕ್ರೀಡೆಗಳು ===
[[File:Manjeri Stadium 2020.jpg|thumb|[[ಮಲಪ್ಪುರಂ ಜಿಲ್ಲಾ ಕ್ರೀಡಾ ಸಂಕೀರ್ಣ ಕ್ರೀಡಾಂಗಣ]]]]
[[File:Malappuram District Sports Complex Stadium.jpg|thumbnail|[[2013–14 ಭಾರತೀಯ ಫೆಡರೇಶನ್ ಕಪ್]] ಸಮಯದಲ್ಲಿ [[ಮಲಪ್ಪುರಂ ಜಿಲ್ಲಾ ಕ್ರೀಡಾ ಸಂಕೀರ್ಣ ಕ್ರೀಡಾಂಗಣ|MDSC ಕ್ರೀಡಾಂಗಣ]]]]
ಮಲಪ್ಪುರಂ ಅನ್ನು ಹೆಚ್ಚಾಗಿ ''ಕೇರಳ ಫುಟ್ಬಾಲ್ನ ಮೆಕ್ಕಾ'' ಎಂದು ಕರೆಯಲಾಗುತ್ತದೆ.<ref name= "Football_a">{{cite news |url=https://www.thehindu.com/news/national/kerala/malabar-premier-league-to-be-launched-in-malappuram/article6953851.ece |title=ಮಲಬಾರ್ ಪ್ರೀಮಿಯರ್ ಲೀಗ್ ಮಲಪ್ಪುರಂನಲ್ಲಿ ಪ್ರಾರಂಭವಾಗಲಿದೆ |newspaper=The Hindu |date=3 March 2015 |access-date=28 November 2019 |archive-date=28 November 2019 |archive-url=https://web.archive.org/web/20191128180448/https://www.thehindu.com/news/national/kerala/malabar-premier-league-to-be-launched-in-malappuram/article6953851.ece |url-status=live }}</ref><ref name= "Football_b">{{cite web |url=https://www.deccanchronicle.com/sports/in-other-news/180716/football-hub-proposed-in-malappuram.html |title=ಮಲಪ್ಪುರಂನಲ್ಲಿ ಫುಟ್ಬಾಲ್ ಕೇಂದ್ರ ಪ್ರಸ್ತಾಪಿಸಲಾಗಿದೆ |website=Deccan Chronicle |date=18 July 2016 |access-date=28 November 2019 |archive-date=28 November 2019 |archive-url=https://web.archive.org/web/20191128180459/https://www.deccanchronicle.com/sports/in-other-news/180716/football-hub-proposed-in-malappuram.html |url-status=live }}</ref> [[ಮಲಪ್ಪುರಂ ಜಿಲ್ಲಾ ಕ್ರೀಡಾ ಸಂಕೀರ್ಣ ಮತ್ತು ಫುಟ್ಬಾಲ್ ಅಕಾಡೆಮಿ]] [[ಮಂಜೇರಿ]]ಯ [[ಪಯ್ಯನಾಡು, ಮಂಜೇರಿ|ಪಯ್ಯನಾಡು]]ದಲ್ಲಿದೆ. [[ಮಲಪ್ಪುರಂ ಜಿಲ್ಲಾ ಕ್ರೀಡಾ ಸಂಕೀರ್ಣ ಕ್ರೀಡಾಂಗಣ|MDSC ಕ್ರೀಡಾಂಗಣ]]ವು [[2013–14 ಭಾರತೀಯ ಫೆಡರೇಶನ್ ಕಪ್]]ನ [[2013–14 ಭಾರತೀಯ ಫೆಡರೇಶನ್ ಕಪ್ ಗುಂಪು ಹಂತ|ಗುಂಪು ಹಂತ]]ಗಳನ್ನು ಆಯೋಜಿಸಲು [[ಜವಾಹರ್ಲಾಲ್ ನೆಹರು ಕ್ರೀಡಾಂಗಣ, ಕೊಚ್ಚಿ|ಜವಾಹರ್ಲಾಲ್ ನೆಹರು ಕ್ರೀಡಾಂಗಣ]]ದ ಜೊತೆಗೆ ಎರಡು ಕ್ರೀಡಾಂಗಣಗಳಲ್ಲಿ ಒಂದಾಗಿ ಆಯ್ಕೆಯಾಯಿತು.<ref name="Federation Cup 2014">{{cite news|title=ಫೆಡರೇಶನ್ ಕಪ್ 2013–14 ಜನವರಿ 14 ರಂದು ಪ್ರಾರಂಭವಾಗಲಿದೆ|url=https://timesofindia.indiatimes.com/sports/football/top-stories/Federation-Cup-2013-14-to-kickoff-on-January-14/articleshow/27291593.cms|archive-url=https://web.archive.org/web/20140113071115/http://articles.timesofindia.indiatimes.com/2013-12-13/top-stories/45161159_1_federation-cup-january-14-group-c|url-status=live|archive-date=13 January 2014|work=[[The Times of India]]|date=13 December 2013 |access-date=12 January 2014}}</ref> ಕ್ರೀಡಾಂಗಣವು ಗುಂಪು B ಮತ್ತು D ಅನ್ನು ಆಯೋಜಿಸಿತು.<ref name="Federation Cup 2014"/> [[ಕೊಟ್ಟಪ್ಪಾಡಿ ಫುಟ್ಬಾಲ್ ಕ್ರೀಡಾಂಗಣ, ಮಲಪ್ಪುರಂ|ಕೊಟ್ಟಪ್ಪಾಡಿ ಫುಟ್ಬಾಲ್ ಕ್ರೀಡಾಂಗಣ]] ಐತಿಹಾಸಿಕ ಫುಟ್ಬಾಲ್ ಕ್ರೀಡಾಂಗಣವಾಗಿದೆ. ಇತರ ಪ್ರಮುಖ ಕ್ರೀಡಾಂಗಣಗಳಲ್ಲಿ ತಿರೂರ್ನ ರಾಜೀವ್ ಗಾಂಧಿ ಮುನ್ಸಿಪಲ್ ಕ್ರೀಡಾಂಗಣ ಮತ್ತು ಪೆರಿಂತಲ್ಮನ್ನದ ಪೆರಿಂತಲ್ಮನ್ನ ಕ್ರಿಕೆಟ್ ಕ್ರೀಡಾಂಗಣ ಸೇರಿವೆ. ತಿರೂರ್ ಮುನ್ಸಿಪಲ್ ಕ್ರೀಡಾಂಗಣದ ಜೊತೆಗೆ ಸಿಂಥೆಟಿಕ್ ಟ್ರ್ಯಾಕ್ ಇದೆ. ಜಿಲ್ಲೆಯಲ್ಲಿ ಫುಟ್ಬಾಲ್ ಅನ್ನು ಬಲಪಡಿಸಲು [[ಮಲಬಾರ್ ಪ್ರೀಮಿಯರ್ ಲೀಗ್]] ಅನ್ನು 2015 ರಲ್ಲಿ ಪ್ರಾರಂಭಿಸಲಾಯಿತು.<ref>{{cite web |url=https://www.thehindu.com/news/national/kerala/malabar-premier-league-to-be-launched-in-malappuram/article6953851.ece |website=The Hindu |title=ಮಲಬಾರ್ ಪ್ರೀಮಿಯರ್ ಲೀಗ್ |date=3 March 2015 |access-date=24 June 2020 |archive-date=28 November 2019 |archive-url=https://web.archive.org/web/20191128180448/https://www.thehindu.com/news/national/kerala/malabar-premier-league-to-be-launched-in-malappuram/article6953851.ece |url-status=live }}</ref> [[ತೆನಿಪಾಲಂ]]ನಲ್ಲಿನ ಕಾಲಿಕಟ್ ವಿಶ್ವವಿದ್ಯಾಲಯ ಸಿಂಥೆಟಿಕ್ ಟ್ರ್ಯಾಕ್ ಜಿಲ್ಲೆಯ ಪ್ರಮುಖ ಸಿಂಥೆಟಿಕ್ ಟ್ರ್ಯಾಕ್ ಆಗಿದೆ. ಇದು ತೆನಿಪಾಲಂನ ಸಿ. ಎಚ್. ಮುಹಮ್ಮದ್ ಕೋಯಾ ಕ್ರೀಡಾಂಗಣದೊಂದಿಗೆ ಸಂಬಂಧ ಹೊಂದಿದೆ.<ref>{{cite web |url=https://www.deccanchronicle.com/nation/in-other-news/020416/new-calicut-university-synthetic-track-gets-ready-to-host-meets.html |website=Deccan Chronicle |title=ತೆನಿಪಾಲಂ ಸಿಂಥೆಟಿಕ್ ಟ್ರ್ಯಾಕ್ |date=2 April 2016 |access-date=24 June 2020 |archive-date=26 June 2020 |archive-url=https://web.archive.org/web/20200626150923/https://www.deccanchronicle.com/nation/in-other-news/020416/new-calicut-university-synthetic-track-gets-ready-to-host-meets.html |url-status=live }}</ref> ಜಿಲ್ಲೆಯ ಇತರ ಪ್ರಮುಖ ಕ್ರೀಡಾಂಗಣಗಳಲ್ಲಿ [[ಅರೀಕೋಡ್]], [[ಕೊಟ್ಟಕ್ಕಲ್]], ಮತ್ತು [[ಪೊನ್ನಾನಿ]]ಗಳಲ್ಲಿನವು ಸೇರಿವೆ. ಜಿಲ್ಲೆಯ ಎಂಟು ಪ್ರಮುಖ ಫುಟ್ಬಾಲ್ ಕ್ರೀಡಾಂಗಣಗಳನ್ನು ಅಂತಾರಾಷ್ಟ್ರೀಕರಣಗೊಳಿಸಲು ಒಂದು ಫುಟ್ಬಾಲ್ ಕೇಂದ್ರವನ್ನು ಪ್ರಸ್ತಾಪಿಸಲಾಗಿದೆ.<ref>{{cite web |url=https://www.deccanchronicle.com/sports/in-other-news/180716/football-hub-proposed-in-malappuram.html |website=Deccan Chronicle |title=ಮಲಪ್ಪುರಂನಲ್ಲಿ ಫುಟ್ಬಾಲ್ ಕೇಂದ್ರ ಪ್ರಸ್ತಾಪಿಸಲಾಗಿದೆ |date=18 July 2016 |access-date=24 June 2020 |archive-date=28 November 2019 |archive-url=https://web.archive.org/web/20191128180459/https://www.deccanchronicle.com/sports/in-other-news/180716/football-hub-proposed-in-malappuram.html |url-status=live }}</ref> [[ತಾನೂರು, ಮಲಪ್ಪುರಂ|ತಾನೂರು]] ಮತ್ತು [[ನಿಲಂಬೂರ್]]ಗಳಲ್ಲಿ ಎರಡು ಹೊಸ ಕ್ರೀಡಾಂಗಣ ಸಂಕೀರ್ಣಗಳ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ.<ref>{{cite web |url=http://www.newsexperts.in/sports-minister-inaugurate-thanur-nilambur-stadium-complexes/ |website=newsexperts.in |title=ತಾನೂರು ಮತ್ತು ನಿಲಂಬೂರ್ ಕ್ರೀಡಾಂಗಣ ಸಂಕೀರ್ಣಗಳು |date=14 February 2019 |access-date=24 June 2020 |archive-date=26 June 2020 |archive-url=https://web.archive.org/web/20200626213013/http://www.newsexperts.in/sports-minister-inaugurate-thanur-nilambur-stadium-complexes/ |url-status=live }}</ref>
== ಪ್ರವಾಸಿ ಆಕರ್ಷಣೆಗಳು ==
{{multiple image
| align = left
| direction = vertical
| total_width = 150
| caption_align = center
| image1 = Adhyan para water fall.jpg
| caption1 = [[ಅಡ್ಯನ್ಪರಾ ಜಲಪಾತ]]
| image2 = Thamara 1.jpg
| caption2 = [[ತಿರುನವಾಯ ಲೋಟಸ್ ಲೇಕ್ ವೆಟ್ಲ್ಯಾಂಡ್|ತಿರುನವಾಯ ಲೋಟಸ್ ಲೇಕ್ ವೆಟ್ಲ್ಯಾಂಡ್]]
| image3 = Kodikuthimala, Malappuram.jpg
| caption3 = [[ಕೋಡಿಕುತಿಮಲ]]
| image4 = Kottakkunnu mazhaveed.jpg
| caption4 = [[ಕೊಟ್ಟಕ್ಕುಣ್ಣು]]
| image5 = DR0034DSC 6627.jpg
| caption5 = [[ಅಂಗಡಿಪುರಂ ರೈಲ್ವೇ ನಿಲ್ದಾಣ|ಅಂಗಡಿಪುರಂ]] ನಲ್ಲಿ [[ನಿಲಂಬೂರ್–ಶೋರನೂರ್ ಮಾರ್ಗ]]
| image6 = Noor Lake - Tirur, Kerala (2).jpg
| caption6 = ನೂರ್ ಸರೋವರ, [[ತಿರೂರ್]]
| image7 = View of Arimbra mala through old rubber plantation of Late Chakeeri Kunhami Umma1.jpg
| caption7 = [[ಅರಿಂಬ್ರಾ ಬೆಟ್ಟಗಳು, ಮಲಪ್ಪುರಂ|ಅರಿಂಬ್ರಾ ಬೆಟ್ಟಗಳು]]
| image8 = Parappanangadi Beach.JPG
| caption8 = [[ಪರಪ್ಪನಂಗಾಡಿ]]ಯಲ್ಲಿ [[ಅರೇಬಿಯನ್ ಸಮುದ್ರ]]
| image9 = Nedumkayam Forest, nilambur - panoramio.jpg
| caption9 = ನಿಲಂಬೂರ್ ಬಳಿಯ [[ನೆಡುಂಕಾಯಂ]] ಮೀಸಲು ಅರಣ್ಯ
| image10 = Padinharekkara beach.png
| caption10 = [[ಪದಿಂಜಾರೆಕ್ಕರ ಕಡಲತೀರ]] - ತಿರೂರ್
}}
* [[ಅಡ್ಯನ್ಪರಾ ಜಲಪಾತ]] - ಕುರುಂಬಲಂಗೋಡ್ನಲ್ಲಿನ ಜಲಪಾತ.<ref>{{cite web|url=https://www.keralatourism.org/destination/adyanpara-waterfalls/38|website=keralatourism.org|title=ಅಡ್ಯನ್ಪರಾ ಜಲಪಾತಗಳು|access-date=22 June 2020|archive-date=25 June 2020|archive-url=https://web.archive.org/web/20200625104803/https://www.keralatourism.org/destination/adyanpara-waterfalls/38|url-status=live}}</ref>
* [[ಅಂಗಿಂಡ ಶಿಖರ]] – [[ಕರುವರಕುಂಡು]] ಬಳಿಯ 2,383 ಮೀ ಎತ್ತರದ ಶಿಖರ.
* [[ಅರಿಂಬ್ರಾ ಬೆಟ್ಟಗಳು, ಮಲಪ್ಪುರಂ|ಅರಿಂಬ್ರಾ ಬೆಟ್ಟಗಳು]], 'ಮಿನಿ-ಊಟಿ' ಎಂದೂ ಕರೆಯಲ್ಪಡುತ್ತದೆ. ಸಮುದ್ರ ಮಟ್ಟದಿಂದ 1050 ಅಡಿ ಎತ್ತರದಲ್ಲಿದೆ.<ref>{{cite web|title=ಅರಿಂಬ್ರಾ ಬೆಟ್ಟಗಳು ಉಪನಾಮ ಮಿನಿ ಊಟಿ ಆಫ್ ಕೇರಳ|url=http://post.artoflegendindia.com/2013/05/arimbra-hills-aka-mini-ooty-of-kerala.html|website=Art of Legend India|access-date=30 May 2015|archive-url=https://web.archive.org/web/20150530182410/http://post.artoflegendindia.com/2013/05/arimbra-hills-aka-mini-ooty-of-kerala.html|archive-date=30 May 2015|url-status=dead}}</ref>
* [[ಆರ್ಯ ವೈದ್ಯ ಶಾಲೆ|ಆರ್ಯ ವೈದ್ಯ ಶಾಲೆ, ಕೊಟ್ಟಕ್ಕಲ್]] – ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಯಾದ ಆಯುರ್ವೇದದಲ್ಲಿ ಅದರ ಪರಂಪರೆ ಮತ್ತು ಪರಿಣತಿಗೆ ಹೆಸರುವಾಸಿಯಾಗಿದೆ.
* [[ಅಯ್ಯಪನೋವ್ ಜಲಪಾತಗಳು]] – [[ವಳಾಂಚೇರಿ]], [[ಅತವನಾಡ್]] ನಲ್ಲಿನ ಜಲಪಾತ.
* [[ಭಾರತಪ್ಪುಳ್ಳ]] – ಕೇರಳದ ಎರಡನೇ ಅತಿ ಉದ್ದದ ನದಿ. ಪೊನ್ನಾನಿ ನದಿ, ನಿಲ ಮತ್ತು ಪೆರಾರ್ ಎಂಬ ಹೆಸರುಗಳಲ್ಲಿಯೂ ಕರೆಯಲ್ಪಡುತ್ತದೆ.<ref>{{cite web
| title=ಮಾಹಿತಿ ಸತ್ಯಗಳು
| work=ಆಲ್ ಕೇರಳ ರಿವರ್ ಪ್ರೊಟೆಕ್ಷನ್ ಕೌನ್ಸಿಲ್
| url=http://puzhakal0.tripod.com/river.html
| access-date=30 January 2006
| archive-date=16 July 2012
| archive-url=https://web.archive.org/web/20120716182531/http://puzhakal0.tripod.com/river.html
| url-status=live
}}</ref>
* ''ಬಿಯ್ಯಂ ಕಾಯಲ್'' - ಪೊನ್ನಾನಿಯಲ್ಲಿನ ಸರೋವರ<ref>{{cite web |url=https://www.nativeplanet.com/ponnani/attractions/biyyam-kayal/ |website=nativeplanet.com |title=ಪೊನ್ನಾನಿಯ ಬಿಯ್ಯಂ ಸರೋವರಗಳು |access-date=22 June 2020 |archive-date=22 June 2020 |archive-url=https://web.archive.org/web/20200622175347/https://www.nativeplanet.com/ponnani/attractions/biyyam-kayal/ |url-status=live }}</ref>
* [[ಚಾಲಿಯಾರ್]] – ಕೇರಳದ ನಾಲ್ಕನೇ ಅತಿ ಉದ್ದದ ನದಿ. ವಿಶ್ವದ ಅತ್ಯಂತ ಹಳೆಯ ತೇಗ ತೋಟವಾದ ಕೊನೊಲಿಯ ಪ್ಲಾಟ್ ಚಾಲಿಯಾರ್ ಪಕ್ಕದಲ್ಲಿರುವ ಕಣಿವೆಯಲ್ಲಿದೆ.
* [[ಚಮ್ರವಟ್ಟೊಂ ನಿಯಂತ್ರಕ-ಸೇತುವೆ]] – ಕೇರಳದ ಅತಿದೊಡ್ಡ ನಿಯಂತ್ರಕ-ಸೇತುವೆ [[ತಿರೂರ್ ತಾಲೂಕು]] ಅನ್ನು [[ಪೊನ್ನಾನಿ]] ಬಂದರಿನೊಂದಿಗೆ ಸಂಪರ್ಕಿಸುತ್ತದೆ.<ref>{{cite web |url=http://www.mathrubhumi.com/story.php?id=272379 |title=ചമ്രവട്ടം പാലം നാളെ നാടിന്റെ സ്വന്തം – Latest News – Mathrubhumi |access-date=16 May 2012 |url-status=dead |archive-url=https://web.archive.org/web/20120516041713/http://www.mathrubhumi.com/story.php?id=272379|archive-date=16 May 2012 }}</ref>
* ಚೆಕ್ಕುಣ್ಣು ಮಲ – [[ಎಡವನ್ನ]]ನ [[ಚಾಲಿಯಾರ್]] ಬಳಿಯ ಮಂಜು ಮುಸುಕಿದ ಹಸಿರು ಬೆಟ್ಟ.<ref>{{Cite web|url=https://www.onmanorama.com/travel/getting-about-kerala/malappuram/2018/07/22/chekkunnu-malappuram-adventure-trek.html|title=ಚೆಕ್ಕುಣ್ಣು ಮಲಪ್ಪುರಂ|access-date=11 August 2020|website=Onmanorama|archive-date=19 September 2020|archive-url=https://web.archive.org/web/20200919013416/https://www.onmanorama.com/travel/getting-about-kerala/malappuram/2018/07/22/chekkunnu-malappuram-adventure-trek.html|url-status=live}}</ref>
* ಚೆರುಂಬ್ ಪ್ರವಾಸಿ ಗ್ರಾಮ – [[ಕರುವರಕುಂಡು]] ನಲ್ಲಿನ ಪರಿಸರ ಗ್ರಾಮ<ref>{{cite web |url=https://www.tripadvisor.in/Attraction_Review-g12461783-d17735187-Reviews-Cherumb_Echo_Village-Karuvarakundu_Malappuram_District_Kerala.html |website=tripadvisor.in |title=ಚೆರುಂಬ್ |access-date=22 June 2020 |archive-date=24 June 2020 |archive-url=https://web.archive.org/web/20200624174617/https://www.tripadvisor.in/Attraction_Review-g12461783-d17735187-Reviews-Cherumb_Echo_Village-Karuvarakundu_Malappuram_District_Kerala.html |url-status=live }}</ref>
* [[ಕಡಲುಂಡಿ ಪಕ್ಷಿ ಧಾಮ]] – ನೂರಕ್ಕೂ ಹೆಚ್ಚು ಪ್ರಭೇದಗಳ ಸ್ಥಳೀಯ ಪಕ್ಷಿಗಳು ಮತ್ತು 60 ಕ್ಕೂ ಹೆಚ್ಚು ಪ್ರಭೇದಗಳ ವಲಸೆ ಪಕ್ಷಿಗಳ ನೆಲೆ<ref>{{cite web |url=https://www.keralatourism.org/kerala-article/kadalundi-bird-sanctuary/122 |website=keralatourism.org |title=ಕಡಲುಂಡಿಯ ಪಕ್ಷಿಗಳು |access-date=22 June 2020 |archive-date=25 June 2020 |archive-url=https://web.archive.org/web/20200625004216/https://www.keralatourism.org/kerala-article/kadalundi-bird-sanctuary/122 |url-status=live }}</ref>
* ಕಡಲುಂಡಿ-ವಲ್ಲಿಕುಣ್ಣು ಸಮುದಾಯ ಮೀಸಲು – ಕೇರಳದ ಮೊದಲ ಸಮುದಾಯ ಮೀಸಲು ಮತ್ತು ಪ್ರವಾಸೋದ್ಯಮ ತಾಣ.<ref name="Vallikkunnu"/>
* [[ಕಕ್ಕಾಂಪೊಯಿಲ್]] – ಚೆರುಪುಳ್ಳದ ದಡದಲ್ಲಿರುವ ಬೆಟ್ಟದ ಗ್ರಾಮ.
* ಕೇರಳಂಕುಂಡು ಜಲಪಾತಗಳು – [[ಕರುವರಕುಂಡು]] ನಲ್ಲಿ ಸಮುದ್ರ ಮಟ್ಟದಿಂದ 1500 ಅಡಿ ಎತ್ತರದಲ್ಲಿದೆ.<ref>{{cite web |url=https://www.keralatourism.org/video-gallery/keralamkundu-waterfalls/1064 |website=keralatourism.org |title=ಕೇರಳಂಕುಂಡು ಜಲಪಾತಗಳು |access-date=27 June 2020 |archive-date=27 June 2020 |archive-url=https://web.archive.org/web/20200627070438/https://www.keralatourism.org/video-gallery/keralamkundu-waterfalls/1064 |url-status=live }}</ref>
* [[ಕೋಡಿಕುತಿಮಲ]] – ಅಮ್ಮಿನಿಕ್ಕಾಡನ್ ಬೆಟ್ಟಗಳಲ್ಲಿ, ಪೆರಿಂತಲ್ಮನ್ನ. ಮಿನಿ-ಊಟಿ ಎಂದೂ ಕರೆಯಲ್ಪಡುತ್ತದೆ.<ref>{{cite web |url= https://www.keralatourism.org/kerala-article/kodukuthimala/873 |website= keralatourism.org |title= ಕೋಡಿಕುತಿಮಲ |access-date= 22 June 2020 |archive-date= 21 October 2019 |archive-url= https://web.archive.org/web/20191021131640/https://www.keralatourism.org/kerala-article/kodukuthimala/873 |url-status= live }}</ref>
* ಕೊಲ್ಲಂ ಕೊಲ್ಲಿ ಜಲಪಾತಗಳು – [[ಅರೀಕೋಡ್]] ಬಳಿಯ ಜಲಪಾತ.
* [[ಕೊಟ್ಟಕ್ಕುಣ್ಣು]] – ಮಲಪ್ಪುರಂ ನಗರದ ಮಧ್ಯದಲ್ಲಿ. ''ಮಲಪ್ಪುರಂನ ಮರೀನ್ ಡ್ರೈವ್'' ಎಂದೂ ಕರೆಯಲ್ಪಡುತ್ತದೆ. ಇಲ್ಲಿ ಹಳೆಯ ಕೋಟೆ, ಜಲ ಉದ್ಯಾನವನ, ಮತ್ತು ಪ್ರಾಚೀನ ಭಿತ್ತಿಚಿತ್ರಗಳು ಕಂಡುಬರುತ್ತವೆ.<ref>{{cite web|url=https://www.keralatourism.org/destination/kottakkunnu-malappuram/396|website=keralatourism.org|title=ಕೊಟ್ಟಕ್ಕುಣ್ಣು|access-date=22 June 2020|archive-date=22 June 2020|archive-url=https://web.archive.org/web/20200622214435/https://www.keralatourism.org/destination/kottakkunnu-malappuram/396|url-status=live}}</ref>
* [[ಕುಟ್ಟಿಪುರಂ ಸೇತುವೆ]] – [[ಭಾರತಪ್ಪುಳ್ಳ]] ನದಿಯ ಮೇಲೆ ನಿರ್ಮಿಸಲಾದ ಅತಿದೊಡ್ಡ ಮತ್ತು ಅತ್ಯಂತ ಹಳೆಯ ಸೇತುವೆಗಳಲ್ಲಿ ಒಂದಾಗಿದ್ದು, ಇದು [[ಮಲಬಾರ್ ಜಿಲ್ಲೆ|ಮಲಬಾರ್ ಪ್ರದೇಶ]]ವನ್ನು ಹಿಂದಿನ [[ತಿರುವಾಂಕೂರು-ಕೊಚ್ಚಿ]] ಯೊಂದಿಗೆ ರಸ್ತೆಯ ಮೂಲಕ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
* [[ತಿರುನವಾಯ ಲೋಟಸ್ ಲೇಕ್ ವೆಟ್ಲ್ಯಾಂಡ್]] – ಲೋಟಸ್ ಲೇಕ್ ಮತ್ತು ವಲಸೆ ಪಕ್ಷಿಗಳ ಅಭಯಾರಣ್ಯ <ref>{{cite news | url=https://timesofindia.indiatimes.com/city/kozhikode/its-gloom-amid-bloom-for-lotus-farmers/articleshow/74870963.cms | title=ಇದು ತಾವರೆ ರೈತರಿಗೆ ಅರಳುವಿಕೆಯ ನಡುವಿನ ಕತ್ತಲು | newspaper=The Times of India | date=29 March 2020 }}</ref>
* [[ಮುಕುರ್ತಿ]] – ದಕ್ಷಿಣ ಭಾರತದ ಐದನೇ ಅತಿ ಎತ್ತರದ ಶಿಖರ (ಸಮುದ್ರ ಮಟ್ಟದಿಂದ 2,554 ಮೀ).
* ''ನಾಡುಕಾನಿ ಚುರಂ'' – [[ನಿಲಂಬೂರ್]] ತಾಲೂಕಿನ ಈಶಾನ್ಯ ಕೊನೆಯಲ್ಲಿರುವ [[ಘಾಟ್ ರಸ್ತೆಗಳು|ಘಾಟ್ ರಸ್ತೆ]], ಇದು ಮಲಪ್ಪುರಂ ಜಿಲ್ಲೆಯನ್ನು [[ತಮಿಳುನಾಡು]]ನ [[ನೀಲಗಿರಿ ಜಿಲ್ಲೆ|ನೀಲಗಿರಿ]] ಬೆಟ್ಟದ ಜಿಲ್ಲೆಯೊಂದಿಗೆ ಸಂಪರ್ಕಿಸುತ್ತದೆ.<ref name="Nadukani"/>
* ನೆಡುಂಕಾಯಂ ಮಳೆಕಾಡು – [[ನೀಲಗಿರಿ ಜೀವಗೋಳ ಮೀಸಲು]]ದ ಭಾಗ. ಇದು ತನ್ನ ಹಸಿರಿಗೆ ಹೆಸರುವಾಸಿಯಾಗಿದೆ.<ref>{{cite web |url=https://www.keralatourism.org/destination/nedumkayam-rainforest/395 |website=keralatourism.org |title=ನೆಡುಂಕಾಯಂ ಮಳೆಕಾಡು |access-date=22 June 2020 |archive-date=25 June 2020 |archive-url=https://web.archive.org/web/20200625154923/https://www.keralatourism.org/destination/nedumkayam-rainforest/395 |url-status=live }}</ref>
* [[ಹೊಸ ಅಮರಂಬಲಂ ಮೀಸಲು ಅರಣ್ಯ]] – [[ನಿಲಂಬೂರ್]] ಬಳಿಯ ವನ್ಯಜೀವಿ ಅಭಯಾರಣ್ಯ.<ref name="birdlife.org">{{cite web|url=http://www.birdlife.org/datazone/sitefactsheet.php?id=18238|title=ಬರ್ಡ್ಲೈಫ್ ಇಂಟರ್ನ್ಯಾಷನಲ್ (2016) ಪ್ರಮುಖ ಹಕ್ಕಿ ಮತ್ತು ಜೈವಿಕ ವೈವಿಧ್ಯತೆಯ ಪ್ರದೇಶದ ಮಾಹಿತಿ ಪತ್ರ: ಅಮರಂಬಲಂ ವನ್ಯಜೀವಿ ಅಭಯಾರಣ್ಯ – ನಿಲಂಬೂರ್|publisher=[[ಬರ್ಡ್ಲೈಫ್ ಇಂಟರ್ನ್ಯಾಷನಲ್]]|access-date=27 June 2020|archive-date=25 November 2015|archive-url=https://web.archive.org/web/20151125112844/http://www.birdlife.org/datazone/sitefactsheet.php?id=18238|url-status=live}}</ref>
* [[ನಿಲಂಬೂರ್ ಸಾಮ್ರಾಜ್ಯ|''ನಿಲಂಬೂರ್ ಕೋವಿಲಕಂ'']] – ನಿಲಂಬೂರ್ ರಾಜಮನೆತನದ ಪ್ರಧಾನ ಕಚೇರಿ.<ref>{{cite web |url=https://www.keralatourism.org/destination/nilambur-kovilakom-malappuram/560 |website=keralatourism.org |title=ನಿಲಂಬೂರ್ ಕೋವಿಲಕಂ |access-date=22 June 2020 |archive-date=25 June 2020 |archive-url=https://web.archive.org/web/20200625030708/https://www.keralatourism.org/destination/nilambur-kovilakom-malappuram/560 |url-status=live }}</ref>
* [[ನಿಲಂಬೂರ್-ಶೋರನೂರ್ ಮಾರ್ಗ]] – ಭಾರತದ ಅತ್ಯಂತ ಕಡಿಮೆ [[ಬ್ರಾಡ್-ಗೇಜ್ ರೈಲು]] ಮಾರ್ಗಗಳಲ್ಲಿ ಒಂದಾಗಿದೆ, ಹಸಿರಿನಿಂದ ಕೂಡಿದೆ.
* [[ತಿರೂರ್|ನೂರ್ ಸರೋವರ]] – [[ತಿರೂರ್]] ನಲ್ಲಿನ ಸರೋವರ.
* [[ಊರಕಂ ಬೆಟ್ಟ]] – [[ಮಲಪ್ಪುರಂ]] ಬಳಿಯ ಪರ್ವತ.
* [[ಪದಿಂಜಾರೆಕ್ಕರ ಕಡಲತೀರ]] – [[ತಿರೂರ್]]ನ ಕೂಟ್ಟಾಯಿಯಲ್ಲಿನ ಕಡಲತೀರ
* ''ಪೂರಪ್ಪುಳ್ಳ'' ನದಿ – [[ವಲ್ಲಿಕುಣ್ಣು]]-[[ಪರಪ್ಪನಂಗಾಡಿ]]-[[ತಾನೂರು, ಮಲಪ್ಪುರಂ|ತಾನೂರು]] ಪ್ರದೇಶದಲ್ಲಿನ [[ಕಡಲುಂಡಿ ನದಿ]]ಯ ಸುಂದರ ಕರಾವಳಿ ಉಪನದಿ.
* [[ಪುರತ್ತೂರ್|''ಪದಿಂಜಾರೆಕರ ಅಳಿಮುಖಂ'']] ಕಡಲತೀರ – ಎರಡು ನದಿಗಳು ([[ತಿರೂರ್ ನದಿ]] ಮತ್ತು [[ಭಾರತಪ್ಪುಳ್ಳ]]) ಇಲ್ಲಿ [[ಅರೇಬಿಯನ್ ಸಮುದ್ರ]]ವನ್ನು ಸೇರುತ್ತವೆ.<ref>{{cite web |url=https://www.keralatourism.org/video-gallery/padinjarekkara-beach/1067 |website=keralatourism.org |title=ಪದಿಂಜಾರೆಕರ ಕಡಲತೀರ |access-date=22 June 2020 |archive-date=22 June 2020 |archive-url=https://web.archive.org/web/20200622224229/https://www.keralatourism.org/video-gallery/padinjarekkara-beach/1067 |url-status=live }}</ref> [[ಪೊನ್ನಾನಿ]] ಬಂದರಿನ ಎದುರಿಗೆ [[ಪುರತ್ತೂರ್]]ನಲ್ಲಿನ ಕಡಲತೀರ, ಮುಖಜಭೂಮಿ, ಮತ್ತು ವಲಸೆ ಹಕ್ಕಿಗಳ ಕೇಂದ್ರ.
* [[ಪಾಲೂರ್ ಕೊಟ್ಟ ಜಲಪಾತಗಳು]] – [[ಪೆರಿಂತಲ್ಮನ್ನ]] ಬಳಿ [[ಟಿಪ್ಪು ಸುಲ್ತಾನ್]] ನಿರ್ಮಿಸಿದ ಪಾಲೂರ್ ಕೋಟೆಯ ಪಕ್ಕದಲ್ಲಿರುವ ಜಲಪಾತ.<ref>{{Cite web|url=https://english.mathrubhumi.com/travel/kerala/kerala-travel/a-trip-to-paloor-kotta-where-tippu-sulthan-once-sought-asylum-1.4049141|title=ಪಾಲೂರ್ ಕೊಟ್ಟಕ್ಕೆ ಒಂದು ಪ್ರವಾಸ|date=18 August 2019|access-date=10 August 2020|website=Mathrubhumi|last=ರಾಜೇಶ್ ಆರ್.|publisher=english.mathrubhumi.com|archive-date=7 August 2020|archive-url=https://web.archive.org/web/20200807121357/https://english.mathrubhumi.com/travel/kerala/kerala-travel/a-trip-to-paloor-kotta-where-tippu-sulthan-once-sought-asylum-1.4049141|url-status=live}}</ref>
* ಪರಪ್ಪನಂಗಾಡಿ ಕಡಲತೀರ – [[ಪರಪ್ಪನಂಗಾಡಿ]] ಕರಾವಳಿ ಪಟ್ಟಣದಲ್ಲಿನ ಕಡಲತೀರ.
* ಪರವನ್ನ ಕಡಲತೀರ – [[ವೆಟ್ಟೊಂ ಗ್ರಾಮ ಪಂಚಾಯತ್|ವೆಟ್ಟೊಂ]]ನಲ್ಲಿನ ಸುಂದರ ಕಡಲತೀರ.
* ಪೊನ್ನಾನಿ ಕಡಲತೀರ – ಪೊನ್ನಾನಿಯಲ್ಲಿನ ಕಡಲತೀರ.
* ''ಪೂಂತಾನಂ ಇಲ್ಲಂ'' – 16 ನೇ ಶತಮಾನದ ಮಲಯಾಳಂ ಕವಿ [[ಪೂಂತಾನಂ ನಂಬೂದಿರಿ]] ಅವರ ಜನ್ಮಸ್ಥಳ [[ಪೆರಿಂತಲ್ಮನ್ನ]] ಬಳಿ.<ref>{{cite news |url=https://www.thehindu.com/society/history-and-culture/the-charms-of-poonthanam-illam/article25308319.ece/ |title=ಪೂಂತಾನಂ ಇಲ್ಲಂನ ಮೋಡಿಗಳು |last=ಅರುಣ್ ನಾರಾಯಣನ್ |date=25 October 2018 |work=The Hindu |access-date=28 March 2021 |archive-date=10 April 2021 |archive-url=https://web.archive.org/web/20210410144928/https://www.thehindu.com/society/history-and-culture/the-charms-of-poonthanam-illam/article25308319.ece/amp/ |url-status=live }}</ref>
* ''ಪೂರಪ್ಪುಳ್ಳ ಅಳಿಮುಖಂ'' – [[ತಾನೂರು, ಮಲಪ್ಪುರಂ|ತಾನೂರು]]ನಲ್ಲಿನ ಮುಖಜಭೂಮಿ.
* [[ಪುತಂತೇರು]] – ಒಂದು ಸಣ್ಣ ಕರಾವಳಿ ಪಟ್ಟಣ.
* [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]] – [[ಕರುವರಕುಂಡು]] ಬಳಿ ಇದೆ.
*ಶಾಂತಿತೀರಂ ಪಾರ್ಕ್ - ಮಲಪ್ಪುರಂ ಪಟ್ಟಣದಲ್ಲಿದೆ
* [[ತಾನೂರು ಕಡಲತೀರ]] – [[ತಾನೂರು, ಮಲಪ್ಪುರಂ|ತಾನೂರು]]ನಲ್ಲಿನ ಕಡಲತೀರ.
* [[ತೇಗ ವಸ್ತುಸಂಗ್ರಹಾಲಯ]] – ನಿಲಂಬೂರ್ನಲ್ಲಿನ ವಿಶ್ವದ ಮೊದಲ ತೇಗ ತೋಟ.<ref>{{cite web |url=https://www.keralatourism.org/destination/teak-museum-nilambur/344 |website=keralatourism.org |title=ತೇಗ ವಸ್ತುಸಂಗ್ರಹಾಲಯ |access-date=22 June 2020 |archive-date=23 June 2020 |archive-url=https://web.archive.org/web/20200623183504/https://www.keralatourism.org/destination/teak-museum-nilambur/344 |url-status=live }}</ref>
* [[ತಿರೂರ್ನ ತುಂಚನ್ ಪರಂಬು|ತುಂಚನ್ ಪರಂಬು]] – ಇದು ಆಧುನಿಕ ಮಲಯಾಳಂ ಭಾಷೆಯ ಪಿತಾಮಹ ಎಂದು ಕರೆಯಲ್ಪಡುವ [[ತುಂಚತ್ತ್ ಎಝುತ್ತಚನ್]] ಅವರ ಜನ್ಮಸ್ಥಳ.
* [[ತಿರೂರ್ ನದಿ]] – [[ತಿರೂರ್ ತಾಲೂಕು]] ಮೂಲಕ ಹರಿಯುವ ತೆಂಗಿನಕಾಯಿಯಿಂದ ಆವೃತವಾದ ಹಸಿರು ನದಿ. [[ಉಪ್ಪುನೀರಿನ ಕಾಡುಗಳು|ಉಪ್ಪುನೀರಿನ ಕಾಡು]] ತೋಟಗಳು ಮತ್ತು ''ಕಡವು''ಗಳು ಅದರ ದಡದಲ್ಲಿ ಕಂಡುಬರುತ್ತವೆ.
* ಯುನಿಟಿ ಹಿಲ್ ವ್ಯೂಪಾಯಿಂಟ್ – [[ಮಂಜೇರಿ]]ಯಲ್ಲಿನ ವೀಕ್ಷಣಾ ತಾಣ.
* ಉಣ್ಣಿಯಾಲ್ ಕಡಲತೀರ – [[ನಿರಮರುತೂರ್]] ನಲ್ಲಿನ ಕಡಲತೀರ.
* ವಕ್ಕಾಡ್ ಕಡಲತೀರ – ತಿರೂರ್ ಮತ್ತು ಪೊನ್ನಾನಿಯ ನಡುವೆ.<ref>{{cite web |url=https://www.keralatourism.org/related-destinations/vakkad-beach-malappuram/ds543 |website=keralatourism.org |title=ವಕ್ಕಾಡ್ ಕಡಲತೀರ |access-date=27 June 2020 |archive-date=27 June 2020 |archive-url=https://web.archive.org/web/20200627074826/https://www.keralatourism.org/related-destinations/vakkad-beach-malappuram/ds543 |url-status=live }}</ref>
* ವಲ್ಲಿಕುಣ್ಣು ಕಡಲತೀರ – ಜಿಲ್ಲೆಯ ವಾಯುವ್ಯ ಕರಾವಳಿಯಲ್ಲಿನ ತೆಂಗಿನಕಾಯಿಯಿಂದ ಆವೃತವಾದ ಕಡಲತೀರ.<ref>{{cite web |url=https://www.keralatourism.org/destination/vallikunnu-beach-malappuram/515 |website=keralatourism.org |title=ವಲ್ಲಿಕುಣ್ಣು ಕಡಲತೀರ |access-date=25 July 2020 |archive-date=27 June 2020 |archive-url=https://web.archive.org/web/20200627075206/https://www.keralatourism.org/destination/vallikunnu-beach-malappuram/515 |url-status=live }}</ref>
* [[ವಾವುಲ್ ಮಲ]] – [[ಚುಂಗತರ]] ಬಳಿಯ 2,339 ಮೀ ಎತ್ತರದ ಪರ್ವತ ಶ್ರೇಣಿ.
== ಗಮನಾರ್ಹ ವ್ಯಕ್ತಿಗಳು ==
{{columns-list|colwidth=22em|
* [[ಎ. ವಿಜಯರಾಘವನ್]] – [[ರಾಜ್ಯಸಭಾ]] ಮಾಜಿ ಸದಸ್ಯ ಮತ್ತು [[ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)|CPI(M)]] ರಾಜ್ಯ ಕಾರ್ಯದರ್ಶಿ.
* [[ಎ. ಪಿ. ಅನಿಲ್ ಕುಮಾರ್]] – ಕೇರಳದ ಮಾಜಿ ಸಚಿವ.
* [[ಎ. ಆರ್. ರಾಜ ರಾಜ ವರ್ಮ]] – [[ಮಲಯಾಳಂ]] ಕವಿ ಮತ್ತು ವ್ಯಾಕರಣಕಾರ ''ಕೇರಳ ಪಾಣಿನಿ'' ಎಂದು ಕರೆಯಲ್ಪಡುತ್ತಾರೆ ([[ಪರಪ್ಪನಾಡ್]] ರಾಜಮನೆತನಕ್ಕೆ ಸೇರಿದವರು).
* [[ಅಬ್ದುಲ್ ನೆಡಿಯೋಡತ್]] – ಫುಟ್ಬಾಲ್ ಆಟಗಾರ.
* [[ಅಬ್ದುರಹಿಮಾನ್ ರಂಡತಾನಿ]] – ರಾಜಕಾರಣಿ.
* [[ಅಚ್ಯುತ ಪಿಷಾರಡಿ]] – [[ಸಂಸ್ಕೃತ ವ್ಯಾಕರಣ|ಸಂಸ್ಕೃತ ವ್ಯಾಕರಣ]]ಕಾರ, [[ಭಾರತೀಯ ಖಗೋಳಶಾಸ್ತ್ರ|ಖಗೋಳಶಾಸ್ತ್ರಜ್ಞ]] ಮತ್ತು [[ಭಾರತೀಯ ಗಣಿತ|ಗಣಿತಜ್ಞ]].
* [[ಅದಿಲ್ ಇಬ್ರಾಹಿಂ]] – ನಟ.
* [[ಅಹ್ಮದ್ ಕುಟ್ಟಿ]] – ಉತ್ತರ ಅಮೆರಿಕಾದ ಇಸ್ಲಾಮಿಕ್ ವಿದ್ವಾಂಸ.
* [[ಅಜಿಜೇಶ್ ಪಚಾತ್]] – [[ಮಲಯಾಳಂ]] [[ಕಾದಂಬರಿಕಾರ]], [[ಸಣ್ಣ ಕಥೆ]] ಬರಹಗಾರ ಮತ್ತು [[ಅಂಕಣಕಾರ]].
* [[ಅಕ್ಕಿತಂ ಅಚ್ಯುತನ್ ನಂಬೂದಿರಿ]] – [[ಮಲಯಾಳಂ]] ಕವಿ ಮತ್ತು ಪ್ರಬಂಧಕಾರ. ([[ಕುಮಾರನೆಲ್ಲೂರ್]] ನಲ್ಲಿ ಜನಿಸಿದರು, ಇದು ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳ ನಡುವಿನ ಗಡಿ ಗ್ರಾಮ. ಅವರು ''ಪೊನ್ನಾನಿ ಕಲಾರಿ''ಯ ಬರಹಗಾರರು.)
* [[ಅಕ್ಕಿತಂ ನಾರಾಯಣನ್]] – ಚಿತ್ರಕಾರ.
* [[ಅಲಿ ಮುಸ್ಲಿಯಾರ್]] – ಸ್ವಾತಂತ್ರ್ಯ ಕಾರ್ಯಕರ್ತ.
* [[ಅಮ್ಮು ಸ್ವಾಮಿನಾಥನ್]] – ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಸಂವಿಧಾನ ಸಭೆಯ ಸದಸ್ಯ.
* [[ಅನಸ್ ಎಡತ್ತೊಡಿಕ]] – ಭಾರತೀಯ ವೃತ್ತಿಪರ [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ಆಟಗಾರ.
* [[ಅನೀಶ್ ಜಿ. ಮೇನನ್]] – ನಟ.<ref>{{cite news |title=ಸಾಮಾನ್ಯ ಮತ್ತು ಅಸಾಮಾನ್ಯ ನಟನಾಗಿರುವುದು: ಅನೀಶ್ ಜಿ ಮೇನನ್ |url=https://www.deccanchronicle.com/entertainment/mollywood/190917/being-the-usual-and-unusual-actor-aneesh-g-menon.html |work=[[Deccan Chronicle]] |date=19 September 2017|access-date=1 December 2019 |archive-date=21 December 2019 |archive-url=https://web.archive.org/web/20191221152248/https://www.deccanchronicle.com/entertainment/mollywood/190917/being-the-usual-and-unusual-actor-aneesh-g-menon.html |url-status=live }}</ref><ref>{{cite news |last=ಪಿಳ್ಳೈ |first=ರಾಧಿಕಾ ಸಿ |date=9 March 2015 |title=ಪಾತ್ರದ ಉದ್ದವು ನನಗೆ ಮುಖ್ಯವಾಗಿದೆ: ಅನೀಶ್ |url=https://timesofindia.indiatimes.com/entertainment/malayalam/movies/news/Length-of-the-character-matters-to-me-Aneesh/articleshow/46492733.cms |work=[[The Times of India]] |access-date=1 April 2021 |archive-date=18 November 2018 |archive-url=https://web.archive.org/web/20181118040720/https://timesofindia.indiatimes.com/entertainment/malayalam/movies/news/Length-of-the-character-matters-to-me-Aneesh/articleshow/46492733.cms |url-status=live }}</ref>
* [[ಅನಿಕಾ]] – ನಟಿ.
* [[ಅಪರ್ಣಾ ನಾಯರ್]] – ನಟಿ.
* [[ಅರ್ಜುನ್ ಜಯರಾಜ್]] – ವೃತ್ತಿಪರ ಫುಟ್ಬಾಲ್ ಆಟಗಾರ.
* [[ನಂಬೂದಿರಿ (ಕಲಾವಿದ)|ಕಲಾವಿದ ನಂಬೂದಿರಿ]] – [[ಚಿತ್ರಕಲೆ|ಚಿತ್ರಕಾರ]].
* [[ಅರ್ಯಾಡನ್ ಮುಹಮ್ಮದ್]] – ಕೇರಳದ ಮಾಜಿ ಸಚಿವ.
* [[ಅರ್ಯಾಡನ್ ಶೌಕತ್]] – ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ರಾಜಕಾರಣಿ
* [[ಅಶಿಕ್ ಕುರುಣಿಯನ್]] – ಭಾರತೀಯ ವೃತ್ತಿಪರ [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ಆಟಗಾರ.
* [[ಅಸಿಫ್ ಸಹೀರ್]] – ಭಾರತೀಯ ಸಾಕರ್ ಆಟಗಾರ.
* [[ಅಝಾದ್ ಮೂಪನ್]] – ವೈದ್ಯ ಮತ್ತು ಲೋಕೋಪಕಾರಿ.<ref>{{cite web | url=http://www.vccircle.com/news/healthcare-services/2014/02/12/we-are-looking-turnover-1b-2017-azad-moopen-chairman-aster-dm | title=ನಾವು 2017 ರ ವೇಳೆಗೆ $1B ವಹಿವಾಟನ್ನು ನೋಡುತ್ತಿದ್ದೇವೆ: ಅಝಾದ್ ಮೂಪನ್, ಆಸ್ಟರ್ DM ಹೆಲ್ತ್ಕೇರ್ ಅಧ್ಯಕ್ಷರು | publisher=VC Circle | date=12 February 2014 | access-date=5 May 2014 | author=ಜಗ್ವಾನಿ, ಲೋಹಿತ್ | archive-date=5 May 2014 | archive-url=https://web.archive.org/web/20140505162506/http://www.vccircle.com/news/healthcare-services/2014/02/12/we-are-looking-turnover-1b-2017-azad-moopen-chairman-aster-dm | url-status=live }}</ref><ref>[http://www.pib.nic.in/newsite/erelease.aspx?relid=69364 ಪದ್ಮ ಪ್ರಶಸ್ತಿಗಳು ಘೋಷಣೆ] {{Webarchive|url=https://web.archive.org/web/20140222101141/http://www.pib.nic.in/newsite/PrintRelease.aspx?relid=102735 |date=22 February 2014 }} ಗೃಹ ವ್ಯವಹಾರಗಳ ಸಚಿವಾಲಯ, 25 ಜನವರಿ 2011</ref><ref name="forbes1">{{cite web|url=http://english.forbesmiddleeast.com/details.php?list=44480&row=3869 |title=ಯುಎಇಯಲ್ಲಿ ಟಾಪ್ 100 ಭಾರತೀಯ ನಾಯಕರು |work=Forbes |access-date=5 May 2014 |url-status=dead |archive-url=https://web.archive.org/web/20140505172839/http://english.forbesmiddleeast.com/details.php?list=44480&row=3869 |archive-date=5 May 2014 }}</ref>
* [[ಅಳ್ವಾಂಚೇರಿ ತಂಪ್ರಕ್ಕಲ್]] – ಕೇರಳದ [[ನಂಬೂದಿರಿ]]ಗಳ ಮಾಜಿ ಮುಖ್ಯಸ್ಥ.
* [[ಬಿ. ಎಂ. ಕುಟ್ಟಿ]] – ಪತ್ರಕರ್ತ ಮತ್ತು ಕಾರ್ಯಕರ್ತ.
* [[ಬಾಲಮಣಿ ಅಮ್ಮ]] – [[ಮಲಯಾಳಂ ಸಾಹಿತ್ಯ]]ದ ಬರಹಗಾರ.
* [[ಸಿ. ಕರುಣಾಕರ ಮೇನನ್]] – ಪತ್ರಕರ್ತ ಮತ್ತು ರಾಜಕಾರಣಿ.
* [[ಸಿ. ರಾಧಾಕೃಷ್ಣನ್]] – [[ಮಲಯಾಳಂ]] ಭಾಷೆಯ ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ.
* [[ಸಿ. ಎನ್. ಅಹ್ಮದ್ ಮೌಲವಿ]] – [[ಮಲಯಾಳಂ ಸಾಹಿತ್ಯ]]ದ ಭಾರತೀಯ ಬರಹಗಾರ.
* [[ಚಕ್ಕೇರಿ ಅಹ್ಮದ್ ಕುಟ್ಟಿ]] – ಕೇರಳದ ಮಾಜಿ ಸಚಿವ ಮತ್ತು [[ಕೇರಳ ವಿಧಾನಸಭೆ]]ಯ ಮಾಜಿ ಸ್ಪೀಕರ್.
* [[ಚಲಿಲಕತ್ ಕುನಹ್ಮದ್ ಹಾಜಿ]] – ಸಮಾಜ ಸುಧಾರಕ.<ref>{{cite journal |last1=ಎಚ್. ಅಬ್ದುಲ್ ರಹಮಾನ್ |title=ವಕ್ಕೊಂ ಮೌಲವಿ ಮತ್ತು ಮುಸ್ಲಿಮರಲ್ಲಿ ನವೋದಯ ಚಳುವಳಿ |journal=University |date=6 April 2009 |publisher=University of Kerala-Shodhganga |location=Conclusion |page=257 |hdl=10603/164340 |url=https://shodhganga.inflibnet.ac.in/handle/10603/164340 |access-date=21 March 2020 |archive-date=21 March 2020 |archive-url=https://web.archive.org/web/20200321184159/https://shodhganga.inflibnet.ac.in/handle/10603/164340 |url-status=live }}</ref>
* [[ಚೇರುಕಡ್|ಚೇರುಕಡ್ ಗೋವಿಂದ ಪಿಷಾರೋಡಿ]] – ಮಲಯಾಳಂ ನಾಟಕಕಾರ, ಕಾದಂಬರಿಕಾರ, ಕವಿ, ಮತ್ತು ರಾಜಕೀಯ ಕಾರ್ಯಕರ್ತ.
* [[ದಾಮೋದರ]] – ಖಗೋಳಶಾಸ್ತ್ರಜ್ಞ-ಗಣಿತಜ್ಞ.
* [[ದೀಪು ಪ್ರದೀಪ್]] – ಚಿತ್ರಕಥೆಗಾರ.
* [[ದೇವ್ದತ್ತ್ ಪಡಿಕ್ಕಲ್]] – ಭಾರತೀಯ ಕ್ರಿಕೆಟ್ ಆಟಗಾರ.
* [[ಧನಿಶ್ ಕಾರ್ತಿಕ್]] – ನಟ.
* [[ದಿಲೀಪ್ ಕೆ. ನಾಯರ್]] – ಶಿಕ್ಷಣತಜ್ಞ, ಕೌಶಲ್ಯ ಅಭಿವೃದ್ಧಿ ಪ್ರಚಾರಕ, ಸಾಮಾಜಿಕ ಕಾರ್ಯಕರ್ತ, ಮತ್ತು ಪ್ರಕಾಶಕ.
* [[ಇ. ಹರಿಕುಮಾರ್]] – [[ಮಲಯಾಳಂ]] [[ಕಾದಂಬರಿಕಾರ]] ಮತ್ತು [[ಸಣ್ಣ ಕಥೆ]] ಬರಹಗಾರ.
* [[ಇ. ಮೊಯ್ದು ಮೌಲವಿ]] – [[ಭಾರತೀಯ ಸ್ವಾತಂತ್ರ್ಯ ಹೋರಾಟಗಾರ]], ಮತ್ತು ಇಸ್ಲಾಮಿಕ್ ವಿದ್ವಾಂಸ.<ref>{{cite news |title=ರಾಷ್ಟ್ರೀಯತೆ ಈಗ ಗುಂಪು ಮನೋವಿಜ್ಞಾನಕ್ಕೆ ಸಂಬಂಧಿಸಿದೆ |url=https://www.thehindu.com/news/cities/kozhikode/nationalism-now-linked-to-mob-psychology/article18868671.ece |access-date=12 March 2020 |work=The Hindu |date=8 June 2017 |archive-date=4 November 2020 |archive-url=https://web.archive.org/web/20201104213235/https://www.thehindu.com/news/cities/kozhikode/nationalism-now-linked-to-mob-psychology/article18868671.ece |url-status=live }}</ref>
* [[ಇ. ಶ್ರೀಧರನ್]] – ಭಾರತದ ಮೆಟ್ರೋ ಮ್ಯಾನ್.
* [[ಇ. ಕೆ. ಇಂಬಿಚಿ ಬಾವ]] – ರಾಜಕಾರಣಿ.
* [[ಇ. ಎಂ. ಎಸ್. ನಂಬೂದಿರಿಪಾಡ್]] – ಕೇರಳದ ಮೊದಲ ಮುಖ್ಯಮಂತ್ರಿ ಮತ್ತು [[ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)|CPI(M)]] ಸ್ಥಾಪಕ.<ref>{{cite news | url=https://www.independent.co.uk/news/obituaries/obituary-e-m-s-namboodiripad-1153957.html | newspaper=[[The Independent]] | first=ಕುಲ್ದೀಪ್ | last=ಸಿಂಗ್ | date=1 April 1998 | title=ಸ್ಮರಣಾರ್ಥ: ಇ. ಎಂ. ಎಸ್. ನಂಬೂದಿರಿಪಾಡ್ | access-date=20 May 2018 | archive-date=26 December 2017 | archive-url=https://web.archive.org/web/20171226090424/http://www.independent.co.uk/news/obituaries/obituary-e-m-s-namboodiripad-1153957.html | url-status=live }}</ref>
* [[ಇ. ಟಿ. ಮೊಹಮ್ಮದ್ ಬಷೀರ್]] – ಕೇರಳದ ಮಾಜಿ ಸಚಿವ ಮತ್ತು [[ಲೋಕಸಭಾ]] ಸದಸ್ಯ.
* [[ಎಡಸ್ಸೇರಿ ಗೋವಿಂದನ್ ನಾಯರ್]] – ಕವಿ.
* [[ಎಲಾಮರಂ ಕರೀಮ್]] – ಕೇರಳದ ಮಾಜಿ ಸಚಿವ ಮತ್ತು [[ರಾಜ್ಯಸಭಾ]] ಸದಸ್ಯ.
* [[ಫೈಸಲ್ ಕುಟ್ಟಿ]] – ವಕೀಲ, ಶಿಕ್ಷಣತಜ್ಞ, ಬರಹಗಾರ, ಸಾರ್ವಜನಿಕ ವಕ್ತಾರ, ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ.<ref>{{cite web|url=http://www.nwitimes.com/news/local/porter/valparaiso/vu-law-professor-among-world-s-most-influential-muslims/article_b6309641-37be-51a4-a76f-0ed6d1da2066.html|title=VU ಕಾನೂನು ಪ್ರಾಧ್ಯಾಪಕರು ವಿಶ್ವದ ಅತ್ಯಂತ ಪ್ರಭಾವಶಾಲಿ ಮುಸ್ಲಿಮರಲ್ಲಿ|publisher=nwitimes.com|date=31 December 2012|access-date=18 February 2013|archive-date=7 January 2013|archive-url=https://web.archive.org/web/20130107013356/http://www.nwitimes.com/news/local/porter/valparaiso/vu-law-professor-among-world-s-most-influential-muslims/article_b6309641-37be-51a4-a76f-0ed6d1da2066.html|url-status=live}}</ref>
* [[ಗೋಪಿನಾಥ್ ಮುತುಕಾಡ್]] – [[ಮಾಂತ್ರಿಕ (ಭ್ರಮೆ)|ಮಾಂತ್ರಿಕ]], ಮತ್ತು [[ಪ್ರೇರಣಾ ಭಾಷಣಕಾರ]].<ref>{{cite web|title=ಭಾರತೀಯ ಮಾಂತ್ರಿಕ ಹೌದಿನಿ-ಶೈಲಿಯ ತಪ್ಪಿಸಿಕೊಳ್ಳುವಿಕೆಯನ್ನು ಪ್ರದರ್ಶಿಸುತ್ತಾನೆ|url=http://www.rediff.com/news/feb/14magic.htm|work=Rediff.com|access-date=3 May 2017|date=14 February 1997|archive-date=30 May 2010|archive-url=https://web.archive.org/web/20100530120526/http://www.rediff.com//news/feb/14magic.htm|url-status=live}}</ref><ref>{{Cite web|url=http://imsmagic.com/2010_ma/2011_yearbook.php |title=2011 ವರ್ಷಪುಸ್ತಕ |website=[[ಅಂತರಾಷ್ಟ್ರೀಯ ಮಾಂತ್ರಿಕರ ಸೊಸೈಟಿ]] |archive-url=https://web.archive.org/web/20160820194038/http://imsmagic.com/2010_ma/2011_yearbook.php |archive-date=20 August 2016 |access-date=20 August 2016 |url-status=dead }}</ref>
* [[ಗೋವಿಂದ ಭಟ್ಟಾತಿರಿ]] – ಭಾರತೀಯ ಜ್ಯೋತಿಷಿ ಮತ್ತು ಖಗೋಳಶಾಸ್ತ್ರಜ್ಞ.
* [[ಹರಿ ನಾಯರ್]] – ಛಾಯಾಗ್ರಾಹಕ.
* [[ಹೇಮಂತ್ ಮೇನನ್]] – ನಟ.
* [[ಇಕ್ಬಾಲ್ ಕುಟ್ಟಿಪುರಂ]] – ಚಿತ್ರಕಥೆಗಾರ ಮತ್ತು [[ಹೋಮಿಯೋಪತಿ|ಹೋಮಿಯೋಪತಿ ವೈದ್ಯ]].<ref name='khal'>{{Cite web |url=http://www.khaleejtimes.ae/DisplayArticleNew.asp?col=§ion=citytimes&xfile=data%2Fcitytimes%2F2007%2FAugust%2Fcitytimes_August183.xml |title=ಕಥೆಗಳ ಪೆಟ್ಟಿಗೆ |access-date=23 March 2020 |archive-url=https://web.archive.org/web/20110725152540/http://www.khaleejtimes.ae/DisplayArticleNew.asp?col=§ion=citytimes&xfile=data%2Fcitytimes%2F2007%2FAugust%2Fcitytimes_August183.xml |archive-date=25 July 2011 |url-status=dead }}</ref>
* [[ಜಯಶ್ರೀ ಕಲಾತಿಲ್]] – ಬರಹಗಾರ, ಅನುವಾದಕ, ಮಾನಸಿಕ ಆರೋಗ್ಯ ಸಂಶೋಧಕ, ಮತ್ತು ಕಾರ್ಯಕರ್ತ.
* [[ಕೆ. ಎ. ರಹಮಾನ್|ಕೆ. ಅಬ್ದುರಹ್ಮಾನ್]] – [[ಚಾಲಿಯಾರ್]] ಚಳುವಳಿಯ ಸ್ಥಾಪಕ.<ref>{{cite news|url=http://www.hindu.com/2009/01/10/stories/2009011054250300.htm|archive-url=https://web.archive.org/web/20121107084532/http://www.hindu.com/2009/01/10/stories/2009011054250300.htm|url-status=dead|archive-date=7 November 2012|title=ಚಾಲಿಯಾರ್ ದಂತಕಥೆಗೆ ಗೌರವ|date=10 January 2009|newspaper=[[The Hindu]]|access-date=25 January 2021}}</ref>
* [[ಕೆ. ಅವುಕಾದರ್ ಕುಟ್ಟಿ ನಹಾ]] – [[ಕೇರಳ]]ದ ಮಾಜಿ [[ಕೇರಳದ ಉಪಮುಖ್ಯಮಂತ್ರಿಗಳ ಪಟ್ಟಿ|ಉಪಮುಖ್ಯಮಂತ್ರಿ]].
* [[ಕೆ. ಸಿ. ಎಸ್. ಪಾಣಿಕರ್]] – ಅಧ್ಯಾತ್ಮಿಕ ಮತ್ತು [[ಅಮೂರ್ತ|ಅಮೂರ್ತ]] ಚಿತ್ರಕಾರ.
* [[ಕೆ. ಸಿ. ಮಾನವೇದನ್ ರಾಜ]] – ಭಾರತೀಯ [[ಶ್ರೀಮಂತ]].
* [[ಕೆ. ಎಂ. ಅಸಿಫ್]] – ಕ್ರಿಕೆಟ್ ಆಟಗಾರ.
* [[ಕೆ. ಎಂ. ಮೌಲವಿ]] – ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಮತ್ತು [[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್|IUML]] ಮಲಬಾರ್ ಜಿಲ್ಲಾ ಸಮಿತಿಯ ಸ್ಥಾಪಕ ಉಪಾಧ್ಯಕ್ಷ.<ref name="SMW19-48-47">{{cite journal |title=ಲೇಖನ |journal=ಸಮಕಾಲಿಕ ಮಲಯಾಳಂ ವೀಕ್ಲಿ |date=22 April 2016 |volume=19 |issue=48 |page=47 |url=http://epaper.malayalamvaarika.com/786340/Malayalam-Vaarika/18042016#page/47/2 |access-date=27 May 2020 |archive-date=17 July 2020 |archive-url=https://web.archive.org/web/20200717035307/https://epaper.malayalamvaarika.com/786340/Malayalam-Vaarika/18042016#page/47/2 |url-status=live }}</ref><ref name="IM115">{{cite book |last1=ಮುಹಮ್ಮದ್ ರಫೀಕ್ |title=ಆಧುನಿಕ ಕಾಲದಲ್ಲಿ ಕೇರಳದಲ್ಲಿ ಇಸ್ಲಾಮಿಕ್ ಚಳುವಳಿಯ ಅಭಿವೃದ್ಧಿ |location=ಇಸ್ಲಾಹಿ ಚಳುವಳಿ |page=115 |url=https://shodhganga.inflibnet.ac.in/bitstream/10603/52387/11/11_chapter%204.pdf#page=28 |access-date=24 October 2019 |archive-date=21 March 2020 |archive-url=https://web.archive.org/web/20200321184205/https://shodhganga.inflibnet.ac.in/bitstream/10603/52387/11/11_chapter%204.pdf#page=28 |url-status=live }}</ref>
* [[ಕೆ. ಪಿ. ಎ. ಮಜೀದ್]] – [[ಕೇರಳ ಸರ್ಕಾರ]]ದ ಮಾಜಿ [[ಮುಖ್ಯ ಸಚೇತಕ]].
* [[ಕೆ. ಪಿ. ರಾಮನುಣ್ಣಿ]] – ಕಾದಂಬರಿಕಾರ ಮತ್ತು ಸಣ್ಣ-ಕಥೆ ಬರಹಗಾರ.<ref>{{cite news|url=http://www.thehindu.com/arts/books/article2520983.ece|title=ವಯಲಾರ್ ಪ್ರಶಸ್ತಿ ಕೆ.ಪಿ. ರಾಮನುಣ್ಣಿ ಅವರಿಗೆ|date=8 October 2011|newspaper=[[The Hindu]]|access-date=12 October 2011|archive-date=11 October 2011|archive-url=https://web.archive.org/web/20111011125321/http://www.thehindu.com/arts/books/article2520983.ece|url-status=live}}</ref><ref>{{cite web|url=http://english.manoramaonline.com/cgi-bin/MMOnline.dll/portal/ep/contentView.do?contentId=10204035&tabId=1&programId=1080132912&channelId=-1073865030&BV_ID=@@@|title=manorama online-english|access-date=12 October 2011|archive-url=https://web.archive.org/web/20120403030848/http://english.manoramaonline.com/cgi-bin/MMOnline.dll/portal/ep/contentView.do?contentId=10204035&tabId=1&programId=1080132912&channelId=-1073865030&BV_ID=@@@|archive-date=3 April 2012|url-status=dead}}</ref>
* [[ಕೆ. ಟಿ. ಇರ್ಫಾನ್]] – ಅಥ್ಲೀಟ್.<ref name=dailysports>{{cite web|title=ಇರ್ಫಾನ್ 20 ಕಿಮೀ ವಾಕ್ನಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದರು. ಅವರು 10 ನೇ ಸ್ಥಾನದಲ್ಲಿ ಫಿನಿಶಿಂಗ್ ಲೈನ್ ಮುಟ್ಟುವ ಮೂಲಕ ವಾಕ್ ಅನ್ನು ಪೂರ್ಣಗೊಳಿಸಿದರು.|url=http://www.dailysports.co/irfan-qualifies-for-olympics-in-20km-walk-2/|publisher=dailysports.co|access-date=2 July 2012|archive-url=https://web.archive.org/web/20140329093542/http://www.dailysports.co/irfan-qualifies-for-olympics-in-20km-walk-2/|archive-date=29 March 2014|url-status=dead}}</ref><ref>{{cite news|title=ಇರ್ಫಾನ್ 20 ಕಿಮೀ ವಾಕ್ನಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ನಂತರ ಖುಷ್ಬೀರ್ ವಿಫಲರಾದರು|url=https://timesofindia.indiatimes.com/sports/more-sports/athletics/Khushbir-fails-after-Irfan-qualifies-for-Olympics-in-20km-walk/articleshow/13121558.cms|archive-url=https://archive.today/20130126110728/http://articles.timesofindia.indiatimes.com/2012-05-13/athletics/31689498_1_london-olympics-federation-cup-olympics-qualification|url-status=live|archive-date=26 January 2013|work=[[The Times of India]]|date=13 May 2012 |access-date=2 July 2012}}</ref><ref>{{cite news|title=ಇರ್ಫಾನ್ ಥೋಡಿ|url=http://timesofindia.indiatimes.com/london-olympics-2012/olympics-2012-teamindia/irfanthodi.cms|access-date=19 July 2013|newspaper=The Times of India|archive-date=5 May 2016|archive-url=https://web.archive.org/web/20160505060142/http://timesofindia.indiatimes.com/london-olympics-2012/olympics-2012-teamindia/irfanthodi.cms|url-status=live}}</ref>
* [[ಕೆ. ಟಿ. ಜಲೀಲ್]] – ಕೇರಳದ ಮಾಜಿ ಸಚಿವ.
* [[ಕೆ. ಟಿ. ಮುಹಮ್ಮದ್]] - ಮಲಯಾಳಂ ನಾಟಕಕಾರ ಮತ್ತು ಚಿತ್ರಕಥೆಗಾರ.
* [[ಕೆ. ವಿ. ರಬಿಯಾ]] – ಸಮಾಜ ಸೇವಕಿ.
* [[ಕೆ. ವಿ. ರಾಮಕೃಷ್ಣನ್]] – ಮಲಯಾಳಂ ಭಾಷೆಯ ಕವಿ ಮತ್ತು ಪತ್ರಕರ್ತ.
* [[ಕಡವನಾಡ್ ಕುಟ್ಟಿಕೃಷ್ಣನ್]] – ಮಲಯಾಳಂ ಕವಿ ಮತ್ತು ಪತ್ರಕರ್ತ.
* [[ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ]] – ಮೋಹಿನಿಯಾಟ್ಟಂನ ಪುನರುತ್ಥಾನಕಾರ.
* [[ಕಮಲಾ ಸುರಯ್ಯ]] – [[ಮಲಯಾಳಂ ಸಾಹಿತ್ಯ]]ದ ಬರಹಗಾರ.
* [[ಕೇರಳ ವರ್ಮ ವಲಿಯ ಕೊಯಿಲ್ ತಂಪುರಾನ್]] – [[ಮಲಯಾಳಂ]] ಕವಿ ಮತ್ತು ಅನುವಾದಕ, ''ಕೇರಳದ ಕಾಳಿದಾಸ'' ಎಂದೂ ಕರೆಯಲ್ಪಡುತ್ತಾರೆ ([[ಪರಪ್ಪನಾಡ್]] ರಾಜಮನೆತನಕ್ಕೆ ಸೇರಿದವರು).
* [[ಕೃಷ್ಣಚಂದ್ರನ್]] – ನಟ, ಡಬ್ಬಿಂಗ್ ಕಲಾವಿದ, ಮತ್ತು ಹಿನ್ನೆಲೆ ಗಾಯಕ.
* [[ಕುಟ್ಟಿಕೃಷ್ಣ ಮಾರಾರ್]] – [[ಮಲಯಾಳಂ ಸಾಹಿತ್ಯ]]ದ [[ಪ್ರಬಂಧಕಾರ]] ಮತ್ತು ಸಾಹಿತ್ಯ ವಿಮರ್ಶಕ.
* [[ಲಕ್ಷ್ಮೀ ಸಾಹಗಲ್]] – ಭಾರತೀಯ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರಿ, [[ಭಾರತೀಯ ರಾಷ್ಟ್ರೀಯ ಸೇನೆ]]ಯ ಅಧಿಕಾರಿ, ಮತ್ತು [[ಆಜಾದ್ ಹಿಂದ್ ಸರ್ಕಾರ|ಆಜಾದ್ ಹಿಂದ್ ಸರ್ಕಾರ]]ದ ಮಹಿಳಾ ವ್ಯವಹಾರಗಳ ಸಚಿವೆ.
* [[ಎಂ. ಗೋವಿಂದನ್]] – [[ಮಲಯಾಳಂ ಸಾಹಿತ್ಯ]]ದ ಬರಹಗಾರ.
* [[ಎಂ. ಸ್ವರಾಜ್]] – ರಾಜಕಾರಣಿ.
* [[ಎಂ. ಜಿ. ಎಸ್. ನಾರಾಯಣನ್]] – ಇತಿಹಾಸಕಾರ, ಮತ್ತು ಶಿಕ್ಷಣತಜ್ಞ ಮತ್ತು ರಾಜಕೀಯ ವಿಮರ್ಶಕ.
* [[ಎಂ. ಕೆ. ವೆಲ್ಲೋಡಿ]] – ಮಾಜಿ ಭಾರತೀಯ ರಾಜತಾಂತ್ರಿಕ.
* [[ಎಂ. ಎಂ. ಅಕ್ಬರ್]] – ಇಸ್ಲಾಮಿಕ್ ವಿದ್ವಾಂಸ, ಮತ್ತು ತುಲನಾತ್ಮಕ ಧರ್ಮದ ತಜ್ಞ.<ref>{{Cite web|url=https://www.arabnews.com/|title=ಅರಬ್ ನ್ಯೂಸ್|website=Arab News|access-date=21 July 2020|archive-date=21 July 2020|archive-url=https://web.archive.org/web/20200721202258/https://www.arabnews.com/|url-status=live}}</ref>
* [[ಎಂ. ಪಿ. ಅಬ್ದುಸ್ಸಮದ್ ಸಮದಾನಿ]] – [[ರಾಜ್ಯಸಭಾ]] ಮಾಜಿ ಸದಸ್ಯ.
* [[ಎಂ. ಪಿ. ಎಂ. ಅಹಮ್ಮದ್ ಕುರಿಕ್ಕಲ್]] – ಕೇರಳದ ಮಾಜಿ ಸಚಿವ.
* [[ಎಂ. ಪಿ. ಎಂ. ಮೇನನ್]] – [[ಭಾರತ]]ೀಯ [[ರಾಜತಾಂತ್ರಿಕ]], ಹಲವಾರು ದೇಶಗಳಿಗೆ [[ರಾಯಭಾರಿ]].<ref>[http://gulfnews.com/news/uae/general/indian-community-in-uae-mourns-death-of-diplomat-1.1146275 "ಯುಎಇಯಲ್ಲಿನ ಭಾರತೀಯ ಸಮುದಾಯ ರಾಜತಾಂತ್ರಿಕನ ಮರಣಕ್ಕೆ ಶೋಕಿಸುತ್ತದೆ"] {{Webarchive|url=https://web.archive.org/web/20210913065712/https://gulfnews.com/uae/indian-community-in-uae-mourns-death-of-diplomat-1.1146275 |date=13 September 2021 }}, ''[[ಗಲ್ಫ್ ನ್ಯೂಸ್]]'', ಅಬು ಧಾಬಿ, 14 ಫೆಬ್ರವರಿ 2013. 14 ಫೆಬ್ರವರಿ 2013 ರಂದು ಮರುಸಂಪಾದಿಸಲಾಗಿದೆ.</ref>
* [[ಎಂ. ಟಿ. ವಾಸುದೇವನ್ ನಾಯರ್]] – [[ಮಲಯಾಳಂ]] ಲೇಖಕ, [[ಚಿತ್ರಕಥೆ]]ಗಾರ ಮತ್ತು ಚಲನಚಿತ್ರ ನಿರ್ದೇಶಕ. ([[ಕುಡಲ್ಲೂರ್]] ನಲ್ಲಿ ಜನಿಸಿದರು, ಇದು ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳ ನಡುವಿನ ಗಡಿ ಗ್ರಾಮ. ಅವರು ''ಪೊನ್ನಾನಿ ಕಲಾರಿ''ಯ ಬರಹಗಾರರು.)
* [[ಮಲಯಾತ್ ಅಪ್ಪುಣ್ಣಿ]] – ಮಲಯಾಳಂ ಭಾಷೆಯ ಕವಿ ಮತ್ತು ಮಕ್ಕಳ ಬರಹಗಾರ.
* [[ಮಂಜಲಂಕುಳಿ ಅಲಿ]] – ಕೇರಳದ ಮಾಜಿ ಸಚಿವ.
* [[ಮಂಕಡ ರವಿ ವರ್ಮ]] – ಛಾಯಾಗ್ರಾಹಕ ಮತ್ತು ನಿರ್ದೇಶಕ.<ref>{{cite news|url=http://www.deccanherald.com/content/112496/directors-cut.html|title=ನಿರ್ದೇಶಕರ ಕಟ್|author=ಎಸ್ ನಂದ ಕುಮಾರ್|newspaper=[[Deccan Herald]]|access-date=23 November 2010|archive-date=22 June 2011|archive-url=https://web.archive.org/web/20110622034945/http://www.deccanherald.com/content/112496/directors-cut.html|url-status=live}}</ref><ref>{{cite news|url=http://www.hindu.com/thehindu/fr/2007/09/07/stories/2007090750230100.htm|archive-url=https://web.archive.org/web/20071203223207/http://www.hindu.com/thehindu/fr/2007/09/07/stories/2007090750230100.htm|url-status=dead|archive-date=3 December 2007|title=ಬೆಳಕಿನಿಂದ ಚಿತ್ರಿಸುವುದು|date=7 September 2007|work=[[The Hindu]]|location=Chennai, India}}</ref><ref>{{cite magazine|url=https://variety.com/2010/film/news/indian-cinematographer-varma-dies-1118027967/|title=ಭಾರತೀಯ ಛಾಯಾಗ್ರಾಹಕ ವರ್ಮ ನಿಧನರಾದರು: ಅವರು ಅದೂರ್ ಗೋಪಾಲಕೃಷ್ಣನ್ ಅವರ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು|date=24 November 2010|magazine=[[Variety (magazine)|Variety]]|first=ಶಾಲಿನಿ|last=ಡೋರ್|access-date=20 February 2020|archive-date=7 November 2012|archive-url=https://web.archive.org/web/20121107052009/http://www.variety.com/article/VR1118027967?refCatId=13|url-status=live}}</ref>
* [[ಮನೋರಮಾ ತಂಪುರಾಟ್ಟಿ]] – [[ಸಂಸ್ಕೃತ]] ಬರಹಗಾರ್ತಿ.
* [[ಮಶೂರ್ ಶೆರೀಫ್]] – ವೃತ್ತಿಪರ ಫುಟ್ಬಾಲ್ ಆಟಗಾರ.
* [[ಮೇಲತ್ತೂರ್ ಸಹದೇವನ್]] – [[ಕರ್ನಾಟಕ ಸಂಗೀತ]] ಗಾಯಕ.
* [[ಮೇಲ್ಪತ್ತೂರ್ ನಾರಾಯಣ ಭಟ್ಟಾತಿರಿ]] – ಗಣಿತ [[ಭಾಷಾಶಾಸ್ತ್ರ]]ಜ್ಞ.
* [[ಮೆರ್ಷೀನಾ ನೀನು]] – ನಟಿ.
* [[ಮೊಹಮ್ಮದ್ ಇರ್ಷಾದ್]] – ವೃತ್ತಿಪರ ಫುಟ್ಬಾಲ್ ಆಟಗಾರ.
* [[ಮೊಹಮದ್ ಸಲಾಹ್ (ಭಾರತೀಯ ಫುಟ್ಬಾಲ್ ಆಟಗಾರ)|ಮೊಹಮದ್ ಸಲಾಹ್]] – ಫುಟ್ಬಾಲ್ ಆಟಗಾರ.
* [[ಮೋಹನಕೃಷ್ಣನ್ ಕಳಡಿ]] – ಮಲಯಾಳಂ ಕವಿ.
* [[ಮೊಯಿನ್ಕುಟ್ಟಿ ವೈದ್ಯರ್]] – [[ಮಾಪ್ಪಿಳ್ಳ ಪಾಟ್ಟು]] ಕವಿ.<ref>{{cite news|url=http://www.hindu.com/2007/03/31/stories/2007033110250500.htm|archive-url=https://web.archive.org/web/20121108104937/http://www.hindu.com/2007/03/31/stories/2007033110250500.htm|url-status=dead|archive-date=8 November 2012|title=ಮಾಪ್ಪಿಳ್ಳ ಹಾಡುಗಳು ಹಿಂದಿನ ಯುಗದ ಸಾಂಸ್ಕೃತಿಕ ಒಸರುಗಳು, MT ಹೇಳುತ್ತಾರೆ|date=31 March 2007|access-date=15 August 2009|work=[[The Hindu]]|location=Chennai, India}}</ref>
* [[ಮೃಣಾಲಿನಿ ಸಾರಾಭಾಯ್]] – ಭಾರತೀಯ ಶಾಸ್ತ್ರೀಯ ನರ್ತಕಿ.
* [[ಮುಹಮ್ಮದ್ ಮುಸ್ತಫಾ]] – ನಟ ಮತ್ತು ನಿರ್ದೇಶಕ.
* [[ಮುಹ್ಸಿನ್ ಪರಾರಿ]] – ನಿರ್ದೇಶಕ, ಬರಹಗಾರ, ಮತ್ತು ಗೀತರಚನೆಕಾರ.
* [[ನಾಲಕತ್ ಸೂಪಿ]] – ಕೇರಳದ ಮಾಜಿ ಸಚಿವ.
* [[ನಾಲಪಾಟ್ ನಾರಾಯಣ ಮೇನನ್]] – [[ಮಲಯಾಳಂ ಸಾಹಿತ್ಯ]]ದ ಬರಹಗಾರ.
* [[ನಂದನಾರ್ (ಲೇಖಕ)|ನಂದನಾರ್]] – [[ಮಲಯಾಳಂ ಸಾಹಿತ್ಯ]]ದ ಬರಹಗಾರ.
* [[ನಿಲಂಬೂರ್ ಆಯಿಷಾ]] – ಮಲಯಾಳಂ ಚಲನಚಿತ್ರೋದ್ಯಮ ಮತ್ತು ನಾಟಕದ ನಟಿ.
* [[ನಿಲಂಬೂರ್ ಬಾಲನ್]] – ಮಲಯಾಳಂ ನಟ.
* [[ನಿರುಪಮಾ ರಾವ್]] – ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ.<ref>[http://www.business-standard.com/india/news/nirupama-rao-takes-over-as-foreign-secy/69625/on ನಿರುಪಮಾ ರಾವ್ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ] {{Webarchive|url=https://web.archive.org/web/20121013134243/http://www.business-standard.com/india/news/nirupama-rao-takes-over-as-foreign-secy/69625/on |date=13 October 2012 }} [[ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ]] / [[ನವ ದೆಹಲಿ]], ''[[ಬಿಸಿನೆಸ್ ಸ್ಟ್ಯಾಂಡರ್ಡ್]]'', 1 ಆಗಸ್ಟ್ 2009.</ref><ref name=toi>[http://timesofindia.indiatimes.com/NEWS/India/Nirupama-Rao-is-Indias-new-foreign-secretary/articleshow/4844580.cms ನಿರುಪಮಾ ರಾವ್ ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿ] {{Webarchive|url=https://web.archive.org/web/20090804072924/http://timesofindia.indiatimes.com/NEWS/India/Nirupama-Rao-is-Indias-new-foreign-secretary/articleshow/4844580.cms |date=4 August 2009 }} ''[[ದಿ ಟೈಮ್ಸ್ ಆಫ್ ಇಂಡಿಯಾ]]'', 1 ಆಗಸ್ಟ್ 2009."ಚೋಕಿಲಾ ಅಯ್ಯರ್ 2001 ರಲ್ಲಿ ಮೊದಲ ಮಹಿಳಾ ಭಾರತೀಯ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು."</ref>
* [[ಪಿ. ಶ್ರೀರಾಮಕೃಷ್ಣನ್]] – [[ಕೇರಳ ವಿಧಾನಸಭೆ]]ಯ ಮಾಜಿ ಸ್ಪೀಕರ್.
* [[ಪಿ. ಸುರೇಂದ್ರನ್]] – ಬರಹಗಾರ, ಅಂಕಣಕಾರ, ಕಲಾ ವಿಮರ್ಶಕ, ಮತ್ತು ಲೋಕೋಪಕಾರಿ.<ref>{{Cite web|title = ಸಣ್ಣ ಕಥೆಗಳಿಗೆ ಪ್ರಶಸ್ತಿ|url = http://www.keralasahityaakademi.org/sp/Writers/ksa/Awards/Stories.htm|website = keralasahityaakademi.org|access-date = 27 October 2015|archive-url = https://web.archive.org/web/20170705154727/http://www.keralasahityaakademi.org/sp/Writers/ksa/Awards/Stories.htm|archive-date = 5 July 2017|url-status = dead}}</ref>
* [[ಪಿ. ಕೆ. ಅಬ್ದು ರಬ್]] – ಕೇರಳದ ಮಾಜಿ ಸಚಿವ.
* [[ಪಿ. ಕೆ. ಕುಂಹಾಲಿಕುಟ್ಟಿ]] – ಕೇರಳದ ಮಾಜಿ ಸಚಿವ.
* [[ಪಿ. ಕೆ. ವಾರಿಯರ್]] – [[ಆಯುರ್ವೇದ|ಆಯುರ್ವೇದ]] ವೈದ್ಯ ಮತ್ತು [[ಪದ್ಮ ಭೂಷಣ]] ಪ್ರಶಸ್ತಿ ವಿಜೇತ.
* [[ಪಿ. ಪಿ. ರಾಮಚಂದ್ರನ್]] – ಮಲಯಾಳಂ ಕವಿ.
* [[ಪಿ. ವಿ. ಅಬ್ದುಲ್ ವಹಾಬ್]] – ಉದ್ಯಮಿ, ಮತ್ತು [[ರಾಜ್ಯಸಭಾ]] ಸದಸ್ಯ.
* [[ಪಾಲೋಲಿ ಮೊಹಮ್ಮದ್ ಕುಟ್ಟಿ]] – ಕೇರಳದ ಮಾಜಿ ಸಚಿವ.
* [[ಪರಮೇಶ್ವರ]] – ಭಾರತೀಯ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ.
* [[ಪಾರ್ವತಿ ಜಯದೇವನ್]] – ಹಿನ್ನೆಲೆ ಗಾಯಕಿ.
* [[ಪೂಂತಾನಂ ನಂಬೂದಿರಿ]] – ಮಲಯಾಳಂ ಕವಿ.<ref>{{cite book|author=ಐ ಕೆ ಕೆ ಮೇನನ್|title=ಕೇರಳದ ಜಾನಪದ ಕಥೆಗಳು|year=1995 |url=https://books.google.com/books?id=pCv2DAAAQBAJ&pg=PT194|publisher=Publications Division Ministry of Information & Broadcasting Government of India|isbn=978-81-230-2188-1|pages=194–|access-date=27 November 2019|archive-date=29 February 2020|archive-url=https://web.archive.org/web/20200229140139/https://books.google.com/books?id=pCv2DAAAQBAJ&pg=PT194|url-status=live}}</ref>
* [[ಪ್ರೇಮ್ಜಿ]] - ಸಮಾಜ ಸುಧಾರಕ, ಸಾಂಸ್ಕೃತಿಕ ನಾಯಕ, ಮತ್ತು ನಟ.
* [[ಪುಲಪ್ರೆ ಬಾಲಕೃಷ್ಣನ್]] – ಅರ್ಥಶಾಸ್ತ್ರಜ್ಞ ಮತ್ತು ಶಿಕ್ಷಣತಜ್ಞ.
* [[ಪುಳಿಕ್ಕೋಟ್ಟಿಲ್ ಹೈದರ್]] – [[ಮಾಪ್ಪಿಳ್ಳ ಪಾಟ್ಟು]] ಕವಿ.<ref name="mlpgov">{{cite web |url=http://www.mlp.kerala.gov.in/heri.htm |title=ಮಲಪ್ಪುರಂ ಜಿಲ್ಲೆಯ ಅಧಿಕೃತ ವೆಬ್ಸೈಟ್ |access-date=25 November 2010 |url-status=dead |archive-url=https://web.archive.org/web/20100629045500/http://www.mlp.kerala.gov.in/heri.htm |archive-date=29 June 2010 }}</ref>
* [[ರಾಜೀವ್ ನಾಯರ್]] – ಬರಹಗಾರ, ಗೀತರಚನೆಕಾರ, ಮತ್ತು ನಿರ್ಮಾಪಕ.
* [[ರಂಜಿತ್ ಪದಿನ್ಹತೀರಿ]] – ಜೈವಿಕ ಭೌತಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ.
* [[ರಹಮಾನ್ (ನಟ)|ರಶಿನ್ ರಹಮಾನ್]] – ನಟ.
* [[ರಾಜ ರವಿ ವರ್ಮ]] – ಭಾರತೀಯ ಚಿತ್ರಕಾರ ಮತ್ತು ಕಲಾವಿದ ([[ಪರಪ್ಪನಾಡ್]] ರಾಜಮನೆತನಕ್ಕೆ ಸೇರಿದವರು).
* [[ರವಿ ಮೇನನ್]] – ನಟ.
* [[ರವಿ ವಲ್ಲತ್ತೋಲ್]] – ನಟ.
* [[ರಿನ್ಷಾದ್ ರೀರಾ]] – ವಿದ್ಯಾರ್ಥಿ ಕಾರ್ಯಕರ್ತ.
* [[ಸಲಾಂ ಬಪ್ಪು]] – ಚಲನಚಿತ್ರ ನಿರ್ದೇಶಕ.
* [[ಸಲ್ಮಾನ್ ಕಲ್ಲಿಯಾತ್]] – ಭಾರತೀಯ ವೃತ್ತಿಪರ ಫುಟ್ಬಾಲ್ ಆಟಗಾರ.
* [[ಸಂಗೀತಾ ಮಾಧವನ್ ನಾಯರ್]] – ನಟಿ.
* [[ಶಂಕರನ್ ಎಂಬ್ರಾಂತಿರಿ]] – [[ಕಥಕ್ಕಳಿ]] ಸಂಗೀತಗಾರ.
* [[ಸಾವಿತ್ರಿ ರಾಜೀವನ್]] – ಭಾರತೀಯ ಕವಿ, ಸಣ್ಣಕಥೆಗಾರ್ತಿ ಮತ್ತು ಚಿತ್ರಕಾರ್ತಿ.
* [[ಸಯ್ಯದ್ ಸನಾವುಲ್ಲಾ ಮಕ್ತಿ ತಂಗಲ್]] – ಸಾಮಾಜಿಕ ಸುಧಾರಕ.<ref>''Journal of Kerala Studies'' Volume 9. (1982): 84.</ref><ref>Mohammed, U. ''Educational Empowerment of Kerala Muslims.'' Calicut (Kerala): Other Books, 2017. 33.</ref>
* [[ಶಹಾಬಾಜ್ ಅಮನ್]] – ಹಿನ್ನೆಲೆ ಗಾಯಕ ಮತ್ತು ಸಂಯೋಜಕ.<ref>{{cite web |url=http://hellobahrain.com/content/shaam-e-ehsas-ghazal-nite-shahabaz-aman |title="Shaam-e-Ehsas" Ghazal Nite by Shahabaz Aman |publisher=Hello Bahrain |date=29 March 2012 |access-date=9 December 2013 |archive-url=https://web.archive.org/web/20131213100614/http://hellobahrain.com/content/shaam-e-ehsas-ghazal-nite-shahabaz-aman |archive-date=13 December 2013 |url-status=dead }}</ref><ref>{{cite news|url=https://timesofindia.indiatimes.com/entertainment/malayalam/music/shahabaz-aman-when-i-die-id-rather-have-people-say-that-malabars-renowned-romantic-passed-away-than-just-a-singer/articleshow/63233070.cms|title=Shahabaz Aman: When I die, I'd rather have people say that Malabar's renowned romantic passed away than just a singer|newspaper=[[The Times of India]]|access-date=14 June 2019|archive-date=15 February 2019|archive-url=https://web.archive.org/web/20190215160141/https://timesofindia.indiatimes.com/entertainment/malayalam/music/shahabaz-aman-when-i-die-id-rather-have-people-say-that-malabars-renowned-romantic-passed-away-than-just-a-singer/articleshow/63233070.cms|url-status=live}}</ref>
* [[ಶಾನವಾಸ್ ಕೆ ಬಾವಕುಟ್ಟಿ]] – ಚಲನಚಿತ್ರ ನಿರ್ದೇಶಕ.
* [[ಶ್ವೇತಾ ಮೆನನ್]] – ಮಾಡೆಲ್, ನಟಿ ಮತ್ತು ಕಿರುತೆರೆ ನಿರೂಪಕಿ.
* [[ಸಿತಾರಾ (ಗಾಯಕಿ)]] – ಹಿನ್ನೆಲೆ ಗಾಯಕಿ, ಸಂಯೋಜಕಿ ಮತ್ತು ನಟಿ.<ref>{{cite news |title=Sithara goes to Kollywood |url=https://timesofindia.indiatimes.com/entertainment/regional/movie-details/news-interviews/sithara-goes-to-kollywood/etarticleshow/12098503.cms |archive-url=https://archive.today/20130216075315/http://articles.timesofindia.indiatimes.com/2012-03-02/news-interviews/31114294_1_kollywood-mollywood-song |url-status=live |archive-date=16 February 2013 |newspaper=[[The Times of India]] |date=2 March 2012}}</ref>
* [[ಸೂರಜ್ ತೇಲಕ್ಕಾಡ್]] – ನಟ.
* [[ಸುಕುಮಾರನ್]] – ಚಲನಚಿತ್ರ ನಟ ಮತ್ತು ನಿರ್ಮಾಪಕ.
* [[ಸನ್ನಿ ವೇನ್]] – ಚಲನಚಿತ್ರ ನಟ (ಉನ್ನತ ಶಿಕ್ಷಣದ ಸಮಯದಲ್ಲಿ ಇಲ್ಲಿದ್ದರು).
* [[ಸಯ್ಯದ್ ಮುಹಮ್ಮದಾಲಿ ಶಿಹಾಬ್ ತಂಗಲ್]] – ಧಾರ್ಮಿಕ ಮುಖಂಡ ಮತ್ತು ರಾಜಕಾರಣಿ.<ref name="articles.timesofindia.indiatimes.com">{{cite news| url=https://timesofindia.indiatimes.com/india/President-PM-Sonia-pay-homage-to-IUML-leader-Thangal/articleshow/4848046.cms | archive-url=https://web.archive.org/web/20120612045904/http://articles.timesofindia.indiatimes.com/2009-08-02/india/28200612_1_iuml-indian-union-muslim-league-homage | url-status=live | archive-date=12 June 2012 | work=[[The Times of India]] | title=President, PM, Sonia pay homage to IUML leader Thangal | date=2 August 2009}}</ref>
* [[ಟಿ. ಎ. ರಜಾಕ್]] – ಚಿತ್ರಕಥೆಗಾರ.
* [[ಟಿ. ಕೆ. ಹಂಸ]] – ಕೇರಳದ ಮಾಜಿ ಸಚಿವರು.
* [[ಟಿ. ಕೆ. ಪದ್ಮಿನಿ]] – ಭಾರತೀಯ ಚಿತ್ರಕಾರ್ತಿ.
* [[ಟಿ. ಎಮ್. ನಾಯರ್]] – [[ದ್ರಾವಿಡ ಚಳವಳಿ]]ಯ ರಾಜಕೀಯ ಕಾರ್ಯಕರ್ತ.
* [[ತುಂಚತ್ತು ಎಳುತಚ್ಚನ್]] - ಮಲಯಾಳಂ ಭಾಷೆಯ ಪಿತಾಮಹ.<ref>Lewis, M. Paul, Gary F. Simons, and Charles D. Fennig (eds.) "[http://www.ethnologue.com/language/mal Malayalam] {{Webarchive|url=https://web.archive.org/web/20160304102619/http://www.ethnologue.com/language/mal |date=4 March 2016 }}" ''Ethnologue: Languages of the World.'' 2014: (Dallas, Texas) Web. 29 September 2014.</ref><ref name="ref002">K. SANTHOSH. [http://www.thehindu.com/news/national/kerala/when-malayalam-found-its-feet/article6217620.ece "When Malayalam found its feet"] {{Webarchive|url=https://web.archive.org/web/20200229125632/http://www.thehindu.com/news/national/kerala/when-malayalam-found-its-feet/article6217620.ece |date=29 February 2020 }} THRISSUR, 17 July 2014 ''The Hindu''</ref>
* [[ತಿರೂರ್ ನಂಬೀಸನ್]] – ''ಕಥಕ್ಕಳಿ'' ಗಾಯಕ.
* [[ಯು. ಎ. ಬೀರನ್]] – ಕೇರಳದ ಮಾಜಿ ಸಚಿವರು.
* [[ಯು. ಶರಫ್ ಅಲಿ]] – ಮಾಜಿ ಭಾರತೀಯ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ.<ref name="hindu_jul09">{{cite news|url=http://www.hindu.com/2009/07/04/stories/2009070456811800.htm|archive-url=https://web.archive.org/web/20090707015857/http://www.hindu.com/2009/07/04/stories/2009070456811800.htm|url-status=dead|archive-date=7 July 2009|title=Minister convenes high-level meet|date=4 July 2009|work=[[The Hindu]]|access-date=10 October 2009}}</ref><ref>{{cite web|url=http://www.universityofcalicut.info/dpe/dpe_stars.htm |title=Department of Physical Education |publisher=[[Calicut University]] |access-date=10 October 2009 |url-status=dead |archive-url=https://web.archive.org/web/20080725053103/http://www.universityofcalicut.info/dpe/dpe_stars.htm |archive-date=25 July 2008 }}</ref>
* [[ಉನ್ನಿ ಮೆನನ್]] – ಹಿನ್ನೆಲೆ ಗಾಯಕ.
* [[ಉರೂಬ್]] – [[ಮಲಯಾಳಂ ಸಾಹಿತ್ಯ]]ದ ಸಾಹಿತಿ.
* [[ವಿ. ಅಬ್ದು ರಹಿಮಾನ್]] – ಕೇರಳದ ಸಚಿವರು.
* [[ವಿ. ಸಿ. ಬಾಲಕೃಷ್ಣ ಪಣಿಕ್ಕರ್]] – ಭಾರತೀಯ ಕವಿ ಮತ್ತು ಬರಹಗಾರ.
* [[ವಿ. ಟಿ. ಭಟ್ಟತಿರಿಪಾಡ್]] – ಸಾಮಾಜಿಕ ಸುಧಾರಕ (ಹಳೆಯ [[ಪೊನ್ನಾನಿ ತಾಲೂಕು]] ಮೂಲದವರು).
* [[ವೈದ್ಯರತ್ನಂ ಪಿ. ಎಸ್. ವಾರಿಯರ್]] – [[ಆಯುರ್ವೇದ]] ವೈದ್ಯರು.<ref name="aryavaidyasala">{{cite web|url=http://www.aryavaidyasala.com/(S(uiytac45y0tizh45dbjufynb))/about_avs.aspx#rec|title=ARYA VAIDYA SALA – Kottakkal|author=mail at aryavaidyasala dot com|publisher=aryavaidyasala.com|access-date=22 March 2015|archive-date=24 March 2015|archive-url=https://web.archive.org/web/20150324015649/http://aryavaidyasala.com/(S(ixhcnwrxysjapimo32dgnx3w))/about_avs.aspx#rec|url-status=live}}</ref>
* [[ವೈದ್ಯರತ್ನಂ ತೃಪ್ರಂಗೋಡ್ ಮೂಸದ್]] – ಆಯುರ್ವೇದ ವೈದ್ಯರು.
* [[ವಳ್ಳತ್ತೋಳ್ ನಾರಾಯಣ ಮೆನನ್]] – ಮಲಯಾಳಂ ಕವಿ.<ref name="Zarrilli">{{cite book |title=Kathakali Dance-Drama: Where Gods and Demons Come to Play |first=Phillip |last=Zarrilli |publisher=Routledge |year=2004 |isbn=9780203197660 |url=https://books.google.com/books?id=eVHCnqglqyoC&pg=PA30 |pages=30–31 |access-date=27 November 2019 |archive-date=28 February 2020 |archive-url=https://web.archive.org/web/20200228232855/https://books.google.com/books?id=eVHCnqglqyoC&pg=PA30 |url-status=live }}</ref>
* [[ವಾರಿಯನ್ ಕುನ್ನತ್ತು ಕುಂಜಹಮ್ಮದ್ ಹಾಜಿ]] – ಭಾರತೀಯ ಸ್ವಾತಂತ್ರ್ಯ ಹೋರಾಟಗಾರ.<ref>{{cite book|title=EncyclopaediaDictionaryIslamMuslimWorld Volume 6|url=https://archive.org/stream/EncyclopaediaDictionaryIslamMuslimWorldEtcGibbKramerScholars.13/06.EncycIslam.NewEdPrepNumLeadOrient.EdEdComCon.BosDonLewPel.etc.UndPatIUA.v6.Mah-Mid.Leid.EJBrill.1990.1991.#page/n481/mode/1up|page=460|year=1988|quote=Contemporary evaluation within India tends to the view that the Malabar Rebellion was a war of liberation, and in 1971 the Kerala Government granted the remaining active participants in the revolt the accolade of Ayagi, "freedom fighter"}}</ref>
* [[ವಾಳೆಂಕಡ ಕುಂಚು ನಾಯರ್]] – [[ಕಥಕ್ಕಳಿ]] ವಿದ್ವಾಂಸ ಮತ್ತು [[ಪದ್ಮಶ್ರೀ]] ಪುರಸ್ಕೃತ.
* [[ವಾಳೆಂಕಡ ವಿಜಯನ್]] – [[ಕೇರಳ ಕಲಾಮಂಡಲಂ]]ನ ನಿವೃತ್ತ ಪ್ರಾಂಶುಪಾಲರು.
* [[ವೆಳಿಯಂಕೋಡ್ ಉಮರ್ ಖಾಜಿ]] – ಸ್ವಾತಂತ್ರ್ಯ ಹೋರಾಟಗಾರ ಮತ್ತು ಕವಿ.
* [[ವಿನಯ್ ಗೋವಿಂದ್]] – ಭಾರತೀಯ ಚಲನಚಿತ್ರ ನಿರ್ದೇಶಕ.
* [[ಜೈನುದ್ದೀನ್ ಮಖ್ದೂಮ್ II]] – [[ತುಹ್ಫತ್ ಉಲ್ ಮುಜಾಹಿದೀನ್]] ಕೃತಿಯ ಲೇಖಕ.
* [[ಜಕರಿಯಾ ಮುಹಮ್ಮದ್]] – ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಟ.<ref>{{Cite news|url=https://timesofindia.indiatimes.com/entertainment/events/kochi/aravindan-puraskaram-awarded-to-zakariya-mohammed/articleshow/68440801.cms|title=Aravindan Puraskaram awarded to Zakariya Mohammed – Times of India|website=The Times of India|date=16 March 2019 |access-date=1 December 2019|archive-date=30 June 2019|archive-url=https://web.archive.org/web/20190630023804/https://timesofindia.indiatimes.com/entertainment/events/kochi/aravindan-puraskaram-awarded-to-zakariya-mohammed/articleshow/68440801.cms|url-status=live}}</ref><ref>{{Cite web|url=https://www.newindianexpress.com/entertainment/malayalam/2019/jun/04/sudani-from-nigeria-wins-audience-choice-award-at-russian-film-festival-1985753.html|title=Sudani from Nigeria wins audience choice award at Russian film festival|website=The New Indian Express|date=4 June 2019 |access-date=1 December 2019|archive-date=31 March 2020|archive-url=https://web.archive.org/web/20200331221711/https://www.newindianexpress.com/entertainment/malayalam/2019/jun/04/sudani-from-nigeria-wins-audience-choice-award-at-russian-film-festival-1985753.html|url-status=live}}</ref>
* [[ಝಕೀರ್ ಮುಂಡಂಪಾರ]] – ಫುಟ್ಬಾಲ್ ಆಟಗಾರ.
* [[ಜೀನತ್]]- ನಟಿ.
}}
== ವಿಭಜನೆಯ ಬೇಡಿಕೆ ==
ಕೆಲವು ವರ್ಷಗಳಿಂದ, [[ತಿರೂರ್]] ಅನ್ನು ಕೇಂದ್ರವಾಗಿಟ್ಟುಕೊಂಡು 'ತಿರೂರ್ ಜಿಲ್ಲೆ' ಎಂಬ ಹೊಸ ಕರಾವಳಿ ಜಿಲ್ಲೆಯನ್ನು ರಚಿಸಬೇಕೆಂಬ ಬೇಡಿಕೆ ಬಲಗೊಳ್ಳುತ್ತಿದೆ. [[ಆಲಪ್ಪುಳ ಜಿಲ್ಲೆ]]ಗಿಂತ ಎರಡರಷ್ಟು ಜನಸಂಖ್ಯೆ ಮತ್ತು ವಿಸ್ತೀರ್ಣವನ್ನು ಹೊಂದಿರುವ ಈ ಜಿಲ್ಲೆಯನ್ನು ಅಭಿವೃದ್ಧಿಯ ದೃಷ್ಟಿಯಿಂದ ಎರಡಾಗಿ ವಿಭಜಿಸುವುದು ಅನಿವಾರ್ಯ ಎಂದು ಅವರು ವಾದಿಸುತ್ತಾರೆ. ಕೇರಳದ ಯಾವುದೇ ಜಿಲ್ಲೆಯಲ್ಲಿಯೂ ಒಂದೇ ಬಾರಿಗೆ ಏಳು ತಾಲೂಕುಗಳು, 94 ಗ್ರಾಮ ಪಂಚಾಯಿತಿಗಳು ಮತ್ತು 12 ಪುರಸಭೆಗಳಿಲ್ಲ. ಇದರ ವಿಸ್ತೀರ್ಣದ ವಿಷಯಕ್ಕೆ ಬಂದರೆ, ತೃಶ್ಶೂರ್ ಜಿಲ್ಲೆಯ ಗಡಿಯಲ್ಲಿರುವ [[ಪೆರುಂಪಡಪ್ಪು, ಮಲಪ್ಪುರಂ]]ಯಿಂದ ತಮಿಳುನಾಡಿನ ಗಡಿಯಲ್ಲಿರುವ [[ವಳಿಕ್ಕಡವು]]ವರೆಗೆ ಪ್ರಯಾಣಿಸಿದರೆ, ಸಾಮಾನ್ಯವಾಗಿ 115 ಕಿಮೀ ದೂರವನ್ನು ಕ್ರಮಿಸಲು 3 ಗಂಟೆಗಿಂತ ಹೆಚ್ಚು ಸಮಯ ಹಿಡಿಯುತ್ತದೆ. ಪರಿಹಾರ ಅಗತ್ಯವಿರುವ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಸಣ್ಣದಲ್ಲ ಎಂಬುದನ್ನೂ ಅವರು ಎತ್ತಿ ತೋರಿಸುತ್ತಾರೆ. ಈ ವಿಷಯವನ್ನು 2019 ರಲ್ಲಿ [[ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್]] ಶಾಸಕ [[ಕೆ. ಎನ್. ಎ. ಖಾದರ್]] ಮತ್ತೆ ಪ್ರಸ್ತಾಪಿಸಿದರು.<ref name="auto1">{{cite web | title = The demand for bifurcation of Malappuram | url = https://www.thenewsminute.com/article/demand-bifurcate-malappuram-district-and-political-tussle-around-it-107975 | website = thenewsminute.com | date = 28 August 2019 | access-date = 25 November 2019 | archive-date = 28 August 2019 | archive-url = https://web.archive.org/web/20190828172833/https://www.thenewsminute.com/article/demand-bifurcate-malappuram-district-and-political-tussle-around-it-107975 | url-status = live }}</ref> ಪ್ರಸ್ತುತ ಇರುವ ಮಲಪ್ಪುರಂ ಜಿಲ್ಲೆಯನ್ನು ವಿಭಜಿಸಿ, ಅದರಿಂದ 'ತಿರೂರ್ ಜಿಲ್ಲೆ' ಎಂಬ ಹೊಸ ಜಿಲ್ಲೆಯನ್ನು ರೂಪಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ.<ref name="auto1"/> [[ಕೇರಳ ಕಾಂಗ್ರೆಸ್ (ಎಂ)]] ಪಕ್ಷವು [[ಎಡಪ್ಪಾಳ್]] ಕೇಂದ್ರಿತ ಹೊಸ ಜಿಲ್ಲೆಗಾಗಿ ಪ್ರಚಾರ ಮಾಡುತ್ತಿದೆ.<ref>{{cite web |url=https://timesofindia.indiatimes.com/city/kozhikode/kcm-to-seek-bifurcation-of-malappuram/articleshow/72090008.cms |website=The Times of India |title=KC(M) to raise new Edappal district |date=17 November 2019 |access-date=15 June 2020 |archive-date=7 August 2020 |archive-url=https://web.archive.org/web/20200807211639/https://timesofindia.indiatimes.com/city/kozhikode/kcm-to-seek-bifurcation-of-malappuram/articleshow/72090008.cms |url-status=live }}</ref> ಹಿರಿಯ ಕಾಂಗ್ರೆಸ್ ನಾಯಕ ಆರ್ಯದನ್ ಮುಹಮ್ಮದ್ ಮತ್ತು ಐಯುಎಂಎಲ್ ಜಿಲ್ಲಾ ಕಾರ್ಯದರ್ಶಿ [[ಯು. ಎ. ಲತೀಫ್]] ಸೇರಿದಂತೆ ಕೆಲವರು ಮಲಪ್ಪುರಂ ವಿಭಜನೆಯನ್ನು ವಿರೋಧಿಸುತ್ತಾರೆ.
ಆದಾಗ್ಯೂ, 2013 ಮತ್ತು 2019 ರಲ್ಲಿ ಕೇರಳವನ್ನು ಆಳಿದ ಎರಡು ಸತತ ಸರ್ಕಾರಗಳು ಈ ಬೇಡಿಕೆಯನ್ನು ತಿರಸ್ಕರಿಸಿದವು. ಆದರೆ ಜಿಲ್ಲೆಯ ವಿಭಜನೆಗೆ ಸಂಬಂಧಿಸಿದ ಅಧ್ಯಯನಗಳು ಇಂದಿಗೂ [[ಕೇರಳ ಸರ್ಕಾರ]]ದ ಪರಿಶೀಲನೆಯಲ್ಲಿವೆ.
== ಇವನ್ನೂ ನೋಡಿ ==
* [[ಮಲಪ್ಪುರಂ ಮೆಟ್ರೋಪಾಲಿಟನ್ ಪ್ರದೇಶ]]
* [[ಮಲಪ್ಪುರಂ]]
* [[ಮಲಪ್ಪುರಂ ಜಿಲ್ಲೆಯ ಆಡಳಿತ]]
* [[ಮಲಪ್ಪುರಂ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಪಟ್ಟಿ]]
* [[ಮಲಪ್ಪುರಂನಲ್ಲಿ ಶಿಕ್ಷಣ]]
* [[ಮಲಪ್ಪುರಂ ಜಿಲ್ಲೆಯ ಇತಿಹಾಸ]]
* [[ಮಲಪ್ಪುರಂ ಜಿಲ್ಲೆಯ ವ್ಯಕ್ತಿಗಳ ಪಟ್ಟಿ]]
* [[ಮಲಪ್ಪುರಂ ಜಿಲ್ಲೆಯಲ್ಲಿ ಸಾರಿಗೆ]]
== ಉಲ್ಲೇಖಗಳು ==
{{Reflist}}
== ಹೆಚ್ಚಿನ ಓದಿಗೆ ==
* ''ಮನೋರಮಾ ಇಯರ್ಬುಕ್ 1995'' (ಮಲಯಾಳಂ ಆವೃತ್ತಿ) {{ISSN|0970-9096}}.
* ''ಮನೋರಮಾ ಇಯರ್ಬುಕ್ 2003'' (ಇಂಗ್ಲಿಷ್ ಆವೃತ್ತಿ) {{ISBN|81-900461-8-7}}.
* {{Citation
| author = ಎಸ್. ಮುಹಮ್ಮದ್ ಹುಸೇನ್ ನೈನಾರ್ | year=1942
| title= ತುಹ್ಫತ್-ಅಲ್-ಮುಜಾಹಿದೀನ್: ಆ Arabic Language Work | publisher=ಮದ್ರಾಸ್ ವಿಶ್ವವಿದ್ಯಾಲಯ
| url= https://archive.org/details/Tuhfat-al-MujahidinAnHistoricalWorkInTheArabicLanguage
}}
* {{Citation
| author = ಮದ್ರಾಸ್ ಸರ್ಕಾರ | year=1953
| title= 1951 ಗಣತಿ ಕೈಪಿಡಿ- ಮಲಬಾರ್ ಜಿಲ್ಲೆ | publisher=ಮದ್ರಾಸ್ ಸರ್ಕಾರಿ ಮುದ್ರಣಾಲಯ
| url= http://lsi.gov.in:8081/jspui/bitstream/123456789/6425/1/20493_1951_MAL.pdf
}}
* {{Citation
| author = ಎಮ್. ಕೆ. ದೇವಸ್ಸಿ | year=1965
| title= 1961 ಗಣತಿ ಕೈಪಿಡಿ- ಕೋಝಿಕ್ಕೋಡ್ ಜಿಲ್ಲೆ | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5665/1/22059_1961_KOZ.pdf
}}
* {{Citation
| author = ಎಮ್. ಕೆ. ದೇವಸ್ಸಿ | year=1965
| title= 1961 ಗಣತಿ ಕೈಪಿಡಿ- ಪಾಲ್ಘಾಟ್ (ಪಾಲಕ್ಕಾಡ್) ಜಿಲ್ಲೆ | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5667/1/51592_1961_PAL.pdf
}}
* {{Citation
| author = ಕೆ. ನಾರಾಯಣನ್ | year=1973
| title= 1971 ಗಣತಿ ಕೈಪಿಡಿ- ಮಲಪ್ಪುರಂ ಜಿಲ್ಲೆ (ಭಾಗ-A&B) | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5688/1/25455_1971_MAL.pdf
}}
* {{Citation
| author = ಕೆ. ನಾರಾಯಣನ್ | year=1973
| title= 1971 ಗಣತಿ ಕೈಪಿಡಿ- ಮಲಪ್ಪುರಂ ಜಿಲ್ಲೆ (ಭಾಗ-C) | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5714/1/51172_1971_MAL.pdf
}}
* {{Citation
| author = ಎಮ್. ವಿಜಯನುಣ್ಣಿ | year=1983
| title= 1981 ಗಣತಿ ಕೈಪಿಡಿ- ಮಲಪ್ಪುರಂ ಜಿಲ್ಲೆ (ಭಾಗ-A&B) | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5733/1/29611_1981_MAL.pdf
}}
* {{Citation
| author = ಶೀಲಾ ಥಾಮಸ್ | year=2003
| title= 2001 ಗಣತಿ ಕೈಪಿಡಿ- ಮಲಪ್ಪುರಂ ಜಿಲ್ಲೆ (ಭಾಗ-A&B) | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= http://lsi.gov.in:8081/jspui/bitstream/123456789/5814/1/43637_2001_MAL.pdf
}}
* {{Citation
| author = ಭಾರತ ಸರ್ಕಾರ | year=2014–15
| title= ಜಿಲ್ಲಾ ಗಣತಿ ಕೈಪಿಡಿ – ಮಲಪ್ಪುರಂ (ಭಾಗ-A) 2011 | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= https://censusindia.gov.in/2011census/dchb/3205_PART_A_MALAPPURAM.pdf
}}
* {{Citation
| author = ಭಾರತ ಸರ್ಕಾರ | year=2014–15
| title= ಜಿಲ್ಲಾ ಗಣತಿ ಕೈಪಿಡಿ – ಮಲಪ್ಪುರಂ (ಭಾಗ-B) 2011 | publisher=ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ, ಕೇರಳ
| url= https://censusindia.gov.in/2011census/dchb/3205_PART_B_MALAPPURAM.pdf
}}
== ಹೊರಗಿನ ಕೊಂಡಿಗಳು ==
{{Commons category|Malappuram district}}
{{Wikivoyage|Malappuram District}}
* {{Official website|http://malappuram.nic.in}}
{{Geographic location
|Centre = ಮಲಪ್ಪುರಂ ಜಿಲ್ಲೆ
|North = [[ವಯನಾಡ್ ಜಿಲ್ಲೆ|Wayanad district]]
|Northeast = [[ನೀಲಗಿರಿ ಜಿಲ್ಲೆ|Nilgiris district]], [[ತಮಿಳುನಾಡು|Tamil Nadu]]
|East =
|Southeast = [[ಪಾಲಕ್ಕಾಡ್ ಜಿಲ್ಲೆ|Palakkad district]]
|South = [[ತ್ರಿಶೂರ್ ಜಿಲ್ಲೆ|Thrissur district]]
|Southwest =
|West = ''[[ಅರೇಬಿಯನ್ ಸಮುದ್ರ|Arabian Sea]]''
|Northwest = [[ಕೋಝಿಕ್ಕೋಡ್ ಜಿಲ್ಲೆ|Kozhikode district]]
}}
{{Kerala}}
{{Authority control}}
{{DEFAULTSORT:Malappuram District}}
[[Category:ಮಲಪ್ಪುರಂ ಜಿಲ್ಲೆ| ]]
[[Category:ಕೇರಳದ ಜಿಲ್ಲೆಗಳು]]
[[Category:1969 ರಲ್ಲಿ ಕೇರಳದಲ್ಲಿ ಸ್ಥಾಪನೆಗೊಂಡವು]]
[[Category:ಭಾರತದಲ್ಲಿನ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳು]]
oinux9iyciv46t5xgf4u33kqfhr75jw
ಚಂದ್ರಮೌಳೀಶ್ವರ ದೇವಸ್ಥಾನ, ಉಡುಪಿ
0
149749
1379571
1346086
2026-08-09T06:57:00Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379571
wikitext
text/x-wiki
'''ಚಂದ್ರಮೌಳೀಶ್ವರ ದೇವಸ್ಥಾನ'''ವು [[ಕರ್ನಾಟಕ|ಕರ್ನಾಟಕದ]] [[ಉಡುಪಿ|ಉಡುಪಿಯಲ್ಲಿದೆ]]. ಈ ದೇವಸ್ಥಾನವು ಉಡುಪಿಯ [[ಕೃಷ್ಣ ಮಠ|ಕೃಷ್ಣ ಮಠದ]] ಮುಖ್ಯದ್ವಾರದ ಎದುರುಗಡೆ ಇದೆ. ಮಠದ ಸುತ್ತಲಿನ ದೇವಾಲಯ ಸಂಕೀರ್ಣದಲ್ಲಿರುವ ಮೊದಲ ದೇವಾಲಯಗಳಲ್ಲಿ ಇದು ಒಂದಾಗಿದೆ. ಈ ಸ್ಥಳವು ತನ್ನದೇ ಆದ ಇತಿಹಾಸವನ್ನು ಹೊಂದಿದೆ ಮತ್ತು ಇದು ಇಲ್ಲಿನ ಕೃಷ್ಣ ಮಠಕ್ಕಿಂತ ಹಳೆಯದಾದ ದೇವಾಲಯವಾಗಿದೆ. ಈ ದೇವಾಲಯವು ಭಗವಾನ್ [[ಶಿವ|ಶಿವನಿಗೆ]] ಅರ್ಪಿತವಾಗಿದೆ.
[[ಚಿತ್ರ:Sri Chandramouleeswara Temple Udupi.JPG|300px|thumb|right|ಚಂದ್ರಮೌಳೀಶ್ವರ ದೇವಸ್ಥಾನ ಉಡುಪಿ]]
==ದೇವಸ್ಥಾನದ ಇತಿಹಾಸ==
ಚಂದ್ರಮೌಳೀಶ್ವರ ದೇವಾಲಯವು [[ಉಡುಪಿ]] ಪಟ್ಟಣದಲ್ಲಿರುವ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಇದರ ಪುರಾತನ ನೋಟದ ಪರಿಣಾಮವಾಗಿ, ಇದನ್ನು '''ಉಡುಪಿಯ ಆಜ್ಯ''' ಎಂದೂ ಕರೆಯುತ್ತಾರೆ.<ref>https://www.nativeplanet.com/udupi/attractions/chandramoulishwara-temple/#overview</ref>
ಈ ದೇವಾಲಯದ ಇತಿಹಾಸವು ೯೦೦ ವರ್ಷಗಳಷ್ಟು ಹಿಂದಿನದು ಮತ್ತು ಈ ದೇವಾಲಯವು ಕೃಷ್ಣ ಮಠಕ್ಕಿಂತ ಹಳೆಯದು. <ref>https://www.holidify.com/places/udupi/chandramoulishwar-temple-sightseeing-3852.html</ref> ಶ್ರೀ ಅನಂತೇಶ್ವರ ದೇವರ ಎದುರುಗಡೆ ಪೂರ್ವದಿಕ್ಕಿನಲ್ಲಿರುವ ದೇವಾಲಯವೇ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ. ಈ ದೇವಾಲಯವು ಪುರಾತನವಾದರೂ ಇದರ ಬಗ್ಗೆ ಹೆಚ್ಚಿನ ಐತಿಹಾಸಿಕ ವಿವರಗಳಿಲ್ಲ. ಬಳಕೆಯಲ್ಲಿರುವ ಒಂದು ಐತಿಹ್ಯ ಹೀಗಿದೆ-
ಉಡುಪಿಯ ಕೇಂದ್ರದಿಂದ ಸುಮಾರು ಅರ್ದ ಕಿ.ಮೀ ದೂರದಲ್ಲಿ ಅಬ್ಜಾರಣ್ಯ(ಪ್ರಸ್ತುತ ಪೂರ್ಣಪ್ರಜ್ಞ ಕಾಲೇಜು)ಎಂಬ ಬನವೊಂದಿದೆ. ಅಲ್ಲಿ ಒಂದು ಪುಷ್ಕರಣಿಯೂ ಇದೆ. ಇಲ್ಲಿ [[ದಕ್ಷ|ದಕ್ಷನಿಂದ]] ಶಾಪಗ್ರಸ್ಥನಾದ [[ಚಂದ್ರ|ಚಂದ್ರನು]], ತನ್ನ ಶಾಪವನ್ನು ನಿವಾರಿಸಲು ತಪಸ್ಸು ಮಾಡಿದನು. ದೇವಾಲಯದಲ್ಲಿನ ಶಿವಲಿಂಗವು ದಕ್ಷನ ಶಾಪವನ್ನು ನಿವಾರಿಸಲು ಚಂದ್ರನು ಮಾಡಿದ ತಪಸ್ಸಿಗೆ ಪ್ರತಿಕ್ರಿಯೆಯಾಗಿ ಶಿವನು ಕಾಣಿಸಿಕೊಂಡದ್ದನ್ನು ಸಂಕೇತಿಸುತ್ತದೆ. ಅದಕ್ಕೆಂದೇ ಈ ಸ್ಥಳಕ್ಕೆ '''ಅಬ್ಜಾರಣ್ಯ''' ಎಂದು ಹೆಸರಿಸಲಾಯಿತು. ಚಂದ್ರನ ತಪಸ್ಸಿಗೆ ಮೆಚ್ಚಿ ಒಲಿದ ಶಿವ ತಾಣವೇ ಚಂದ್ರಮೌಳೀಶ್ವರ ದೇವಾಲಯವಾಗಿದೆ. ಹೀಗೆ ಈ ಒಂದು ನಂಬಿಕೆ ಇಲ್ಲಿ ಪ್ರಚಲಿತವಾಗಿದೆ.<ref>https://itms.kar.nic.in/hrcehome/history.php?tid=163</ref>
==ವಾಸ್ತುಶಿಲ್ಪ==
ದೇವಾಲಯದ ನಿರ್ಮಾಣವು ೭ ಅಥವಾ ೮ ನೇ ಶತಮಾನದಷ್ಟು ಹಿಂದಿನ ಇತಿಹಾಸವನ್ನು ಸಾಬೀತುಪಡಿಸುತ್ತದೆ. ಇದನ್ನು [[ಅನಂತೇಶ್ವರ ದೇವಸ್ಥಾನ, ಉಡುಪಿ|ಅನಂತೇಶ್ವರ ದೇವಾಲಯದ]] ಸಮಯದಲ್ಲಿಯೇ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.<ref>https://www.nativeplanet.com/udupi/attractions/chandramoulishwara-temple/#overview</ref> ಕಲ್ಲಿನ ಶಾಸನಗಳು ೧೧ ನೇ ಶತಮಾನದಷ್ಟು ಹಿಂದಿನದ್ದಾಗಿದ್ದು, ಗಮನಾರ್ಹವಾಗಿದೆ. ದೇವಾಲಯದ ವಾಸ್ತುಶಿಲ್ಪವು ಸರಳವಾಗಿದೆ ಹಾಗೂ ಇದು ಚಾಲುಕ್ಯರ ವಾಸ್ತುಶಿಲ್ಪಕ್ಕೆ ಸೇರಿದೆ. ದೇವಾಲಯವು [[ಗಣೇಶ|ಗಣೇಶನ]] ನೃತ್ಯದ ಚಿತ್ರಗಳು ಮತ್ತು ವಿವಿಧ ದೇವರು ಮತ್ತು ದೇವತೆಗಳ ಇತರ ಚಿತ್ರಗಳಿಂದ ಕೂಡಿದೆ. ದೇವಾಲಯದ ಮುಂಭಾಗದಲ್ಲಿ ನಂದಿಯ ಮೂರ್ತಿಯಿದೆ ಹಾಗೂ ದೇವಾಲಯದಲ್ಲಿನ ಶಾಂತತೆಯು ಇಲ್ಲಿನ ಇನ್ನೊಂದು ವಿಶೇಷತೆಯಾಗಿದೆ.
==ವಿಶೇಷತೆ==
[[ಕೃಷ್ಣ|ಶ್ರೀಕೃಷ್ಣನ]] ದೇವಾಲಯಕ್ಕೆ ಭೇಟಿ ನೀಡುವ ಮೊದಲು ಈ ದೇವಾಲಯಕ್ಕೆ ಭೇಟಿ ನೀಡುವುದು ವಾಡಿಕೆ. ಚಂದ್ರಮೌಳೇಶ್ವರ ದೇವಾಲಯವು [[ಅನಂತೇಶ್ವರ ದೇವಸ್ಥಾನ, ಉಡುಪಿ|ಶ್ರೀ ಅನಂತೇಶ್ವರ ದೇವಾಲಯಕ್ಕೆ]] ಅಭಿಮುಖವಾಗಿದೆ. ಇವೆರಡೂ ಪ್ರಾಚೀನ ದೇವಾಲಯಗಳು. ಅನಂತೇಶ್ವರ ದೇವಾಲಯವನ್ನು '''ಪಡು ದೇವಾಲಯ'''ವೆಂದು ಕರೆಯುತ್ತಾರೆ ಹಾಗೂ ಅದರ ಪೂರ್ವದಲ್ಲಿರುವ ಚಂದ್ರಮೌಳೀಶ್ವರ ದೇವಾಲಯವನ್ನು '''ಮೂಡು ದೇವಾಲಯ'''ವೆಂದು ಕರೆಯುತ್ತಾರೆ.<ref>https://itms.kar.nic.in/hrcehome/history.php?tid=163</ref> ಈ ಚಂದ್ರಮೌಳೀಶ್ವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಚಂದ್ರಮೌಳೀಶ್ವರನ ದೀಪಕ್ಕೆ ಎಣ್ಣೆಯನ್ನು ಅರ್ಪಿಸುವ ಸಂಪ್ರದಾಯವನ್ನು ಅನುಸರಿಸುತ್ತಾರೆ.<ref>{{Cite web |url=https://indiatemple.net/article/id/1296/temple/162/candramauleswara-temple-udupi/chandramauleswara-temple-udupi+ |title=ಆರ್ಕೈವ್ ನಕಲು |access-date=2023-04-07 |archive-date=2023-04-07 |archive-url=https://web.archive.org/web/20230407060404/https://indiatemple.net/article/id/1296/temple/162/candramauleswara-temple-udupi/chandramauleswara-temple-udupi+ |url-status=dead }}</ref> ಇಂದಿಗೂ ಸ್ವಾಮೀಜಿಯವರು [[ಪರ್ಯಾಯ|ಪರ್ಯಾಯಕ್ಕೆ]] ಕೂಡುವ ಮುನ್ನ ಚಂದ್ರಮೌಳೀಶ್ವರ ದೇವರ ದರ್ಶನ ಮಾಡಿ ಅನಂತರ ಶ್ರೀ ಅನಂತೇಶ್ವರ ದೇವರ ದರ್ಶನ ಮಾಡಿ, ನಂತರ ಶ್ರೀಕೃಷ್ಣ ದರ್ಶನ ಮಾಡುವ ಸಂಪ್ರದಾಯ ಇಂದಿಗೂ ನಡೆದುಬಂದಿದೆ.<ref>https://itms.kar.nic.in/hrcehome/history.php?tid=163</ref>
==ಸಹ ನೋಡಿ==
* [[ಅನಂತೇಶ್ವರ ದೇವಸ್ಥಾನ, ಉಡುಪಿ]]
* [[ಕೃಷ್ಣ ಮಠ]]
==ಉಲ್ಲೇಖಗಳು==
<References />
{{Interwikineeded}}
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ]]
[[ವರ್ಗ:ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕ್ಯೂಆರ್ ಕೋಡ್ ಯೋಜನೆ]]
1o5zd3vhnomveivx0zf4cvy4yzu63yc
ಗುರುತ್ವಾಕರ್ಷಣೆಯ ಸಿದ್ಧಾಂತದ ಇತಿಹಾಸ
0
150451
1379565
1379413
2026-08-09T04:49:50Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1379565
wikitext
text/x-wiki
{{Multiple image
| perrow = 2
| total_width = 250
| header = Pioneers of gravitational theory
| header_align = center
| caption_align = center
| image1 = Aristotle Altemps Inv8575.jpg
| caption1 = [[ಅರಿಸ್ಟಾಟಲ್]]
| image2 = After Justus Suttermans - Portrait of Galileo Galilei - 1800-1900.jpg
| caption2 = [[ಗೆಲಿಲಿಯೋ ಗೆಲಿಲಿ]]
| image3 = Sir Isaac Newton by Sir Godfrey Kneller, Bt.jpg
| caption3 = [[ಐಸಾಕ್ ನ್ಯೂಟನ್]]
| image4 = Albert Einstein Head.jpg
| caption4 = [[ಅಲ್ಬರ್ಟ್ ಐನ್ಸ್ಟೈನ್]]
}}
[[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]], [[ಗುರುತ್ವ|ಗುರುತ್ವಾಕರ್ಷಣೆಯ]] ಸಿದ್ಧಾಂತಗಳು ದ್ರವ್ಯರಾಶಿಯೊಂದಿಗೆ ದೇಹಗಳ ಚಲನೆಯನ್ನು ನಿಯಂತ್ರಿಸುವ ಪರಸ್ಪರ ಕ್ರಿಯೆಯ ಕಾರ್ಯವಿಧಾನಗಳನ್ನು ಪ್ರತಿಪಾದಿಸುತ್ತದೆ. ಪ್ರಾಚೀನ ಕಾಲದಿಂದಲೂ ಗುರುತ್ವಾಕರ್ಷಣೆಯ ಹಲವಾರು ಸಿದ್ಧಾಂತಗಳಿವೆ. ಅಂತಹ ಸಿದ್ಧಾಂತಗಳನ್ನು ಚರ್ಚಿಸುವ ಮೊದಲ ಅಸ್ತಿತ್ವದಲ್ಲಿರುವ ಮೂಲಗಳು ಪ್ರಾಚೀನ ಗ್ರೀಕ್ ತತ್ವಶಾಸ್ತ್ರದಲ್ಲಿ ಕಂಡುಬರುತ್ತವೆ. ನವೋದಯ ಮತ್ತು [[ವೈಜ್ಞಾನಿಕ ಕ್ರಾಂತಿ|ವೈಜ್ಞಾನಿಕ ಕ್ರಾಂತಿಯ]] ಸಮಯದಲ್ಲಿ ಮಹತ್ತರವಾದ ದಾಪುಗಾಲುಗಳನ್ನು ಪಡೆಯುವ ಮೊದಲು ಈ ಕೆಲಸವನ್ನು ಭಾರತೀಯ, ಇಸ್ಲಾಮಿಕ್ ಮತ್ತು ಯುರೋಪಿಯನ್ ವಿಜ್ಞಾನಿಗಳು [[ಆಧುನಿಕ ವಿಜ್ಞಾನ|ಮಧ್ಯಯುಗದ]] ಮೂಲಕ ಮುಂದುವರಿಸಿದರು - ನ್ಯೂಟನ್ನ ಗುರುತ್ವಾಕರ್ಷಣೆಯ ನಿಯಮವನ್ನು ರೂಪಿಸುವಲ್ಲಿ ಕೊನೆಗೊಂಡಿತು. 20 ನೇ ಶತಮಾನದ ಆರಂಭದಲ್ಲಿ [[ಅಲ್ಬರ್ಟ್ ಐನ್ಸ್ಟೈನ್|ಆಲ್ಬರ್ಟ್ ಐನ್ಸ್ಟೈನ್]] ಅವರ [[ಸಾಪೇಕ್ಷತ ಸಿದ್ಧಾಂತ|ಸಾಪೇಕ್ಷತಾ ಸಿದ್ಧಾಂತದಿಂದ]] ಇದನ್ನು ರದ್ದುಗೊಳಿಸಲಾಯಿತು.
ಗ್ರೀಕ್ ತತ್ವಜ್ಞಾನಿ [[ಅರಿಸ್ಟಾಟಲ್|ಅರಿಸ್ಟಾಟಲ್]] ( {{fl.|4th century [[BCE]]}} ) ವಸ್ತುಗಳು ತಮ್ಮ ಆಂತರಿಕ ''ಗುರುತ್ವಾಕರ್ಷಣೆಯಿಂದ'' (ಭಾರ) ಒಂದು ಬಿಂದುವಿನ ಕಡೆಗೆ ಒಲವು ತೋರುತ್ತವೆ ಎಂದು ನಂಬಿದ್ದರು. ವಿಟ್ರುವಿಯಸ್ ( {{Fl|1st century BCE|lk=no}} ) ವಸ್ತುಗಳು ಅವುಗಳ ನಿರ್ದಿಷ್ಟ ಗುರುತ್ವಾಕರ್ಷಣೆಯ ಆಧಾರದ ಮೇಲೆ ಬೀಳುತ್ತವೆ ಎಂದು ಅರ್ಥಮಾಡಿಕೊಂಡರು. 6 ನೇ ಶತಮಾನ CE ಯಲ್ಲಿ, ಬೈಜಾಂಟೈನ್ [[ಅಲೆಕ್ಸಾಂಡ್ರಿಯ|ಅಲೆಕ್ಸಾಂಡ್ರಿಯನ್]] ವಿದ್ವಾಂಸ ಜಾನ್ ಫಿಲೋಪೋನಸ್ ಗುರುತ್ವಾಕರ್ಷಣೆಯ ಅರಿಸ್ಟಾಟಲ್ ಪರಿಕಲ್ಪನೆಯನ್ನು ಪ್ರಚೋದನೆಯ ಸಿದ್ಧಾಂತದೊಂದಿಗೆ ಮಾರ್ಪಡಿಸಿದರು. 14 ನೇ ಶತಮಾನದಲ್ಲಿ, ಕೆಲವು ಇಸ್ಲಾಮಿಕ್ ವಿದ್ವಾಂಸರಿಂದ {{Efn|[[Ibn Sina]] and [[Abu'l-Barakat]], respectively<ref name=Sayili/><ref name=Gutman/>}} ಪ್ರಭಾವಿತರಾದ ಯುರೋಪಿಯನ್ ತತ್ವಜ್ಞಾನಿಗಳಾದ ಜೀನ್ ಬುರಿಡಾನ್ ಮತ್ತು ಸ್ಯಾಕ್ಸೋನಿಯ ಆಲ್ಬರ್ಟ್ - ಪ್ರಚೋದನೆಯ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು ಮತ್ತು ಅದನ್ನು ವಸ್ತುಗಳ ವೇಗವರ್ಧನೆ ಮತ್ತು ದ್ರವ್ಯರಾಶಿಗೆ ಜೋಡಿಸಿದರು. ಆಲ್ಬರ್ಟ್ ಮುಕ್ತ ಪತನದಲ್ಲಿ ವಸ್ತುವಿನ ವೇಗ ಮತ್ತು ಕಳೆದ ಸಮಯದ ನಡುವಿನ ಸಂಬಂಧದ ಬಗ್ಗೆ ಅನುಪಾತದ ನಿಯಮವನ್ನು ಅಭಿವೃದ್ಧಿಪಡಿಸಿದರು.
17 ನೇ ಶತಮಾನದ ಆರಂಭದಲ್ಲಿ, [[ಗೆಲಿಲಿಯೋ ಗೆಲಿಲಿ]] ಎಲ್ಲಾ ವಸ್ತುಗಳು ಮುಕ್ತ ಪತನದಲ್ಲಿ ಸಮಾನವಾಗಿ ವೇಗವನ್ನು ಹೊಂದುತ್ತವೆ ಎಂದು ಕಂಡುಕೊಂಡರು. 1632 ರಲ್ಲಿ, ಅವರು ಸಾಪೇಕ್ಷತೆಯ ಮೂಲ ತತ್ವವನ್ನು ಮಂಡಿಸಿದರು. ಗುರುತ್ವಾಕರ್ಷಣೆಯ ಸ್ಥಿರತೆಯ ಅಸ್ತಿತ್ವವನ್ನು 17 ನೇ ಶತಮಾನದ ಮಧ್ಯಭಾಗದಿಂದ ವಿವಿಧ ಸಂಶೋಧಕರು ಅನ್ವೇಷಿಸಿದರು, [[ಸರ್ ಐಸಾಕ್ ನ್ಯೂಟನ್|ಐಸಾಕ್ ನ್ಯೂಟನ್]] ತನ್ನ ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮವನ್ನು ರೂಪಿಸಲು ಸಹಾಯ ಮಾಡಿದರು. 20 ನೇ ಶತಮಾನದ ಆರಂಭದಲ್ಲಿ ಐನ್ಸ್ಟೈನ್ ವಿಶೇಷ ಮತ್ತು ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸಿದಾಗ ನ್ಯೂಟನ್ನ ಶಾಸ್ತ್ರೀಯ ಯಂತ್ರಶಾಸ್ತ್ರವನ್ನು ರದ್ದುಗೊಳಿಸಲಾಯಿತು. ಗುರುತ್ವಾಕರ್ಷಣೆಯ ಕಾಲ್ಪನಿಕ ಬಲದ ವಾಹಕವು ಎಲ್ಲದರ ಸಿದ್ಧಾಂತದ ಹುಡುಕಾಟದಲ್ಲಿ ಹೊರಗುಳಿದಿದೆ, ಇದಕ್ಕಾಗಿ ಕ್ವಾಂಟಮ್ ಗುರುತ್ವಾಕರ್ಷಣೆಯ ವಿವಿಧ ಮಾದರಿಗಳು ಅಭ್ಯರ್ಥಿಗಳಾಗಿವೆ.
==ಪ್ರಾಚೀನತೆ==
===ಶಾಸ್ತ್ರೀಯ ಪ್ರಾಚೀನತೆ===
[[File:Aristotle's laws of motion.svg|thumb|upright=1.15|ಮಾಧ್ಯಮದಲ್ಲಿ ಮುಳುಗಿರುವ ವಸ್ತುಗಳು ಅವುಗಳ ತೂಕಕ್ಕೆ ಅನುಗುಣವಾಗಿ ವೇಗದಲ್ಲಿ ಬೀಳುತ್ತವೆ ಮತ್ತು ಮಾಧ್ಯಮದ ಸಾಂದ್ರತೆಗೆ ವಿಲೋಮ ಅನುಪಾತದಲ್ಲಿರುತ್ತವೆ ಎಂದು ಅರಿಸ್ಟಾಟಲ್ ಕಂಡುಕೊಂಡರು.<ref name=":4">{{cite web|access-date=2023-06-09|language=en-US|title=Part I – B. Aristotle's Theory of Free-Fall {{!}} Relativity of Gravity|url=https://relativityofgravity.com/part1-b/}}<!-- auto-translated by Module:CS1 translator --></ref><ref>{{cite journal|title=Notes on the Laws of Motion in Aristotle|url=https://archive.org/details/sim_american-journal-of-philology_1938_59_1/page/60|last1=Drabkin|first1=Israel E.|date=1938|journal=The American Journal of Philology|volume=59|issue=1|pages=60–84|doi=10.2307/290584|jstor=90584}}</ref><ref name=":002">{{Cite journal|url=https://www.cambridge.org/core/journals/journal-of-the-american-philosophical-association/article/aristotles-physics-a-physicists-look/60964532EE56BA65655971A314FD9717|title=Aristotle's Physics: A Physicist's Look|last=Rovelli|first=Carlo|date=2015|journal=Journal of the American Philosophical Association|volume=1|issue=1|pages=23–40|access-date=2018-11-08|language=en|issn=2053-4477|doi=10.1017/apa.2014.11|arxiv=1312.4057|s2cid=44193681 }}</ref>]]
೬ನೇ ಶತಮಾನದ BCE ಯ ಪ್ರಾರಂಭದಲ್ಲಿ, ಪ್ರಾಚೀನ ಗ್ರೀಕ್ ತತ್ವಜ್ಞಾನಿ ಹೆರಾಕ್ಲಿಟಸ್ ನು ಚಕ್ರವಾತಗಳು, ಗಾಳಿಗಳು ಮತ್ತು ಅಲೆಗಳ ಹಾಗೂ ತಾರಾಸ್ತ್ರಗಳ ಸಂಬಂಧವನ್ನು "ಲೋಗೋಸ್" ಎಂಬ ಪದದಿಂದ ವಿವರಿಸಿದ. ಇದು ಬ್ರಹ್ಮಾಂಡದ ಸಾಮರಸ್ಯ ಮತ್ತು ಚಲನೆಯ ನಿಯಮಗಳ ಬಗ್ಗೆ ಅವನ ತತ್ತ್ವಶಾಸ್ತ್ರದ ಮೂಲಕ ಆವೃತ್ತಿ ನಡೆಸಿತ್ತು. ಉದಾಹರಣೆಗೆ, ಅಣುಗಳ ಭಾರದಂತೆ ಭೂಮಿಯ ಕೆಳಭಾಗದ ಚಲನೆಗೆ ಅವುಗಳ ಸ್ವಭಾವವನ್ನು ಕಾರಣವಾಗಿ ಹೇಳಿದ. ಕ್ರಿಸ್ತಪೂರ್ವ ೪ನೇ ಶತಮಾನದಲ್ಲಿ, ಇನ್ನೊಬ್ಬ ಗ್ರೀಕ್ ತತ್ವಜ್ಞಾನಿ ಮತ್ತು ವಿಜ್ಞಾನಿ ಅರಿಸ್ಟಾಟಲ್ ಕಾರಣತ್ವದ ತತ್ವವನ್ನು ವಿವರಿಸಿದರು. ಪ್ರತಿ ಪರಿಣಾಮ ಅಥವಾ ಚಲನೆಗೆ ಕಾರಣವಿದೆ ಎಂದು ಅವರು ಸಾರಿದರು. ಉದಾಹರಣೆಗೆ, ಭೂಮಿಯ ಭಾರವಾದ ಅಣುಗಳ ಕೆಳಭಾಗ ಚಲನೆಗೆ ಅವುಗಳ ಸ್ವಭಾವದಿಂದಾಗಿ ಇದು ಭೂಮಿಯ ಮಧ್ಯಭಾಗಕ್ಕೆ ಚಲಿಸುತ್ತದೆ. ಮತ್ತೊಂದೆಡೆ, ಬೆಂಕಿಯಂತಹ ಬೆಳಕಿನ ಕಾಯಗಳು ಚಂದ್ರನ ಆಕಾಶ ಗೋಳದ ಕಡೆಗೆ ಮೇಲ್ಮುಖವಾಗಿ ಚಲಿಸುವ ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿವೆ ಎಂದು ನಂಬಲಾಗಿದೆ (ನಾವು ಈಗ ತೇಲುವಿಕೆ ಎಂದು ಅರ್ಥಮಾಡಿಕೊಳ್ಳುತ್ತೇವೆ).
ಗ್ರೀಕ್ ದರ್ಶನಕಾರ ಲ್ಯಾಂಪ್ಸಕಸ್ ಸ್ಟ್ರೇಟೋ, ಹಾಗೂ ಅವರ ದೃಷ್ಟಿಕೋಣ ನೇಸಾರ್ಟೆಲಿಯನ್ "ಸ್ವಾಭಾವಿಕ ಸ್ಥಾನ" ಸಿದ್ಧಾಂತವನ್ನು ತಮ್ಮ ಯಂತ್ರದೃಷ್ಟಿಯಿಂದ ಅನುಸರಿಸದೆ, ಸ್ಥಾನಗಳ ಬದಲಾವಣೆಗಾಗಿ ತಮ್ಮ ದೃಷ್ಟಿಯನ್ನು ವ್ಯಕ್ತಪಡಿಸಿದರು. ಅವರ ನಿರೀಕ್ಷೆಯ ದೃಷ್ಟಿಕೋಣದಲ್ಲಿ, ವಸ್ತುಗಳು ಬೀಳುವಾಗ ಅವು ತಮ್ಮ ಭಾರವನ್ನು ಹೊಂದುವುದಿಲ್ಲ; ಬದಲಾಗಿ, ಗತಿಯ ವೃದ್ಧಿಯಲ್ಲಿರುವ ಹೆಚ್ಚಿನ ಪ್ರಭಾವ ಇದ್ದುದರಿಂದ ಅದರ ಪ್ರಭಾವ ಹೆಚ್ಚಿತು. ಎಪಿಕುರಸ್ (ಸರ್. 341–270 ಹೀಗೆ) ಪರಮಾಣುಗಳ ಭಾರವನ್ನು ಅವುಗಳ ಚಲನೆಗೆ ಪರಿಸರವಾಗಿ ನೋಡಿದರು..<ref>{{Cite book |last=Carrier |first=Richard |url=https://books.google.com/books?id=Qu07DwAAQBAJ&q=For+example%2C+in+his+lost+books+On+Lightness+and+Heaviness+and+On+Motion%2C+Strato+abandoned+the+doctrine+of+%27natural+places%27+in+exchange+for+a+more+mechanical+view+of+why+some+objects+rise+and+others+fall&pg=PT142 |title=The Scientist in the Early Roman Empire |date=2017-12-01 |publisher=Pitchstone Publishing |isbn=978-1-63431-107-6 |location=United States and Canada |page=333 |language=en |quote=For example, in his lost books On Lightness and Heaviness and On Motion, Strato abandoned the doctrine of 'natural places' in exchange for a more mechanical view of why some objects rise and others fall}}</ref><ref>{{Cite book |last=Fortenbaugh |first=William |url=https://books.google.com/books?id=N8s3DwAAQBAJ&pg=PA103 |title=Strato of Lampsacus: Text, Translation and Discussion |date=2017 |publisher=Routledge |isbn=978-1-351-48792-4 |language=en |quote=If someone drops a rock [from] a finger's height above the ground, it certainly won't make a visible impact on the ground, but if someone drops it holding it a hundred feet or more, it will have a strong impact. And there is no other reason for that impact. Because it does not have greater weight, nor is it impelled by greater force; but it moves faster.}}</ref><ref>{{Cite journal |date=2015 |title=Weight in Greek Atomism |url=https://philarchive.org/archive/AUGWIG-3 |journal=[[Philosophia]] |volume=45 |pages=85 }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
ಆರ್ಕಿಮಿಡಿಸ್, ಗ್ರೀಕ್ ಭೌತಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞ 3 ನೇ ಶತಮಾನ BCE ಯಲ್ಲಿ ವಾಸಿಸುತ್ತಿದ್ದರು, ಚಲನೆ ಮತ್ತು ಸಮತೋಲನದ ತಿಳುವಳಿಕೆಗೆ ಗಮನಾರ್ಹ ಕೊಡುಗೆಗಳನ್ನು ನೀಡಿದರು. ಅವರ ಸಾಧನೆಗಳಲ್ಲಿ, ಅವರು ತ್ರಿಕೋನದ ದ್ರವ್ಯರಾಶಿಯ ಕೇಂದ್ರದ ಪರಿಕಲ್ಪನೆಯನ್ನು ಕಂಡುಹಿಡಿದರು, ಇದು ತ್ರಿಕೋನದ ದ್ರವ್ಯರಾಶಿಯ ಸರಾಸರಿ ಸ್ಥಾನವನ್ನು ಪ್ರತಿನಿಧಿಸುವ ಒಂದು ಬಿಂದುವಾಗಿದೆ. ಎರಡು ಸಮಾನ ತೂಕಗಳು ವಿಭಿನ್ನ ಗುರುತ್ವಾಕರ್ಷಣೆಯ ಕೇಂದ್ರಗಳನ್ನು ಹೊಂದಿದ್ದರೆ, ಗುರುತ್ವಾಕರ್ಷಣೆಯ ಕೇಂದ್ರವು ಅವುಗಳನ್ನು ಸಂಪರ್ಕಿಸುವ ರೇಖೆಯ ಉದ್ದಕ್ಕೂ ಇರುತ್ತದೆ ಎಂದು ಆರ್ಕಿಮಿಡೀಸ್ ಪ್ರತಿಪಾದಿಸಿದರು. 1 ನೇ ಶತಮಾನ CE ಯಲ್ಲಿ ವಾಸಿಸುತ್ತಿದ್ದ ಗ್ರೀಕ್ ತತ್ವಜ್ಞಾನಿ ಪ್ಲುಟಾರ್ಕ್, ಗುರುತ್ವಾಕರ್ಷಣೆಯ ಆಕರ್ಷಣೆಯ ಬಲವು ಭೂಮಿಗೆ ವಿಶಿಷ್ಟವಾಗಿಲ್ಲ ಆದರೆ ಬ್ರಹ್ಮಾಂಡದ ಬೇರೆಡೆ ಅಸ್ತಿತ್ವದಲ್ಲಿದೆ ಎಂದು ಸೂಚಿಸಿದರು.
ಗ್ರೀಕ್ ಖಗೋಳಶಾಸ್ತ್ರಜ್ಞ [[ಆರಿಸ್ಟಾರ್ಕಸ್|ಆರಿಸ್ಟಾರ್ಕಸ್ ಆಫ್ ಸಮೋಸ್]] (ಸರ್. 310 – ಸರ್. 230 ಹೀಗೆ) ತನ್ನ ಅಕ್ಷದ ಸುತ್ತ ಮತ್ತು ಭೂಮಿಯ ಕಕ್ಷೆಯ ಸುತ್ತ ಒಂದು ಸೂರ್ಯಕೇಂದ್ರ ವಿಶ್ವವಿಜ್ಞಾನದಲ್ಲಿ ಭೂಮಿಯ ತಿರುಗುವಿಕೆಯನ್ನು ತನ್ನ ದೃಷ್ಟಿಕೋಣದಿಂದ ವಿವರಿಸಿದರು.<ref name=":5">{{Cite web |title=Plutarch, Platonicae quaestiones, Question VIII, section 1 |url=http://www.perseus.tufts.edu/hopper/text?doc=Perseus:text:2008.01.0384:chapter=8:section=1 |access-date=2023-08-27 |website=www.perseus.tufts.edu}}</ref> ಸೆಲ್ಯೂಕಸ್ ಆಫ್ ಲೂಸಿಯಾ(c. 190 - c. 150 BCE) ಅವರು ವಿಶ್ವವಿಜ್ಞಾನವನ್ನು ಬೆಂಬಲಿಸಿದರು.<ref>{{Cite web |last=Strabo |author-link=Strabo |title=Geography — III, 5, 9. |url=https://penelope.uchicago.edu/Thayer/E/Roman/Texts/Strabo/3E*.html |access-date=2023-08-27 |website=penelope.uchicago.edu}}</ref>
1 ನೇ ಶತಮಾನ BCE ಯಲ್ಲಿ ವಾಸಿಸುತ್ತಿದ್ದ ರೋಮನ್ ಇಂಜಿನಿಯರ್ ಮತ್ತು ವಾಸ್ತುಶಿಲ್ಪಿ ವಿಟ್ರುವಿಯಸ್, ಅರಿಸ್ಟಾಟಲ್ನಂತೆಯೇ ಒಂದು ದೃಷ್ಟಿಕೋನವನ್ನು ವ್ಯಕ್ತಪಡಿಸಿದನು, ಗುರುತ್ವಾಕರ್ಷಣೆಯನ್ನು ಅದರ ತೂಕಕ್ಕಿಂತ ಹೆಚ್ಚಾಗಿ ಅದರ "ಸ್ವಭಾವ" ದಿಂದ ನಿರ್ಧರಿಸಲಾಗುತ್ತದೆ ಎಂದು ವಾದಿಸಿದರು. ನಿರ್ದಿಷ್ಟ ಗುರುತ್ವಾಕರ್ಷಣೆಯ ಪರಿಕಲ್ಪನೆಗೆ ಸಂಬಂಧಿಸಿದಂತೆ ಈ ಕಲ್ಪನೆಯನ್ನು ಅರ್ಥೈಸಿಕೊಳ್ಳಬಹುದು, ಇದು ವಸ್ತುವಿನ ಸಾಂದ್ರತೆಯನ್ನು ನೀರಿನೊಂದಿಗೆ ಹೋಲಿಸುತ್ತದೆ. ವಿಭಿನ್ನ ಅವಧಿಗಳ ಈ ಚಿಂತಕರು ಚಲನೆಯ ಸ್ವರೂಪ, ಗುರುತ್ವಾಕರ್ಷಣೆ ಮತ್ತು ಬ್ರಹ್ಮಾಂಡದಲ್ಲಿನ ವಸ್ತುಗಳ ನಡವಳಿಕೆಯನ್ನು ನಿಯಂತ್ರಿಸುವ ಆಧಾರವಾಗಿರುವ ತತ್ವಗಳ ಸುತ್ತಲಿನ ಕಲ್ಪನೆಗಳ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ.<ref><nowiki>https://archive.org/details/manhisgods00smit</nowiki></ref> ಅವರ ಕೆಲವು ಕಲ್ಪನೆಗಳು ನಮ್ಮ ಆಧುನಿಕ ವೈಜ್ಞಾನಿಕ ತಿಳುವಳಿಕೆಯೊಂದಿಗೆ ಹೊಂದಿಕೆಯಾಗದಿದ್ದರೂ, ಅವರ ಕೊಡುಗೆಗಳು ನಂತರದ ಸಿ.<ref>Edward Grant, ''The Foundations of Modern Science in the Middle Ages'', (Cambridge: Cambridge Univ.</ref><ref>Olaf Pedersen, ''Early Physics and Astronomy'', (Cambridge: Cambridge Univ.</ref><ref><cite class="citation book" contenteditable="false">[[Vitruvius|Vitruvius, Marcus Pollio]] (1914). "7". </cite></ref>
<ref name="Vitruvius 1914 215">{{Cite book |last=Vitruvius |first=Marcus Pollio |title=De Architectura libri decem |date=1914 |publisher=Harvard University Press |others=Herbert Langford Warren, Nelson Robinson (illus), Morris Hicky Morgan |editor=Howard |editor-first=Alfred A. |place=Harvard University, Cambridge, Massachusetts |page=215 |language=en-us |trans-title=Ten Books on Architecture |chapter=VII |author-link=Marcus Vitruvius Pollio |chapter-url=http://www.gutenberg.org/files/20239/20239-h/29239-h.htm#Page_215}}</ref><blockquote>[[ಪಾದರಸ]] ಅನ್ನು ಒಂದು ಪಾತ್ರೆಯಲ್ಲಿ ಸುರಿದು, ಅದರ ಮೇಲೆ ನೂರು ಪೌಂಡ್ ತೂಕದ ಕಲ್ಲನ್ನು ಹಾಕಿದರೆ, ಕಲ್ಲು ಮೇಲ್ಮೈಯಲ್ಲಿ ಈಜುತ್ತದೆ ಮತ್ತು ದ್ರವವನ್ನು ತಗ್ಗಿಸಲು ಅಥವಾ ಭೇದಿಸಲು ಅಥವಾ ಬೇರ್ಪಡಿಸಲು ಸಾಧ್ಯವಿಲ್ಲ.. ನಾವು ನೂರು ಪೌಂಡ್ ತೂಕವನ್ನು ತೆಗೆದುಹಾಕಿ ಮತ್ತು ಚಿನ್ನದ ಕವಚವನ್ನು ಹಾಕಿದರೆ, ಅದು ಈಜುವುದಿಲ್ಲ, ಆದರೆ ಅದರ ಸ್ವಂತ ಇಚ್ಛೆಯ ತಳಕ್ಕೆ ಮುಳುಗುತ್ತದೆ. ಆದ್ದರಿಂದ, ವಸ್ತುವಿನ ಗುರುತ್ವಾಕರ್ಷಣೆಯು ಅದರ ತೂಕದ ಪ್ರಮಾಣವನ್ನು ಅವಲಂಬಿಸಿರುವುದಿಲ್ಲ, ಆದರೆ ಅದರ ಸ್ವರೂಪವನ್ನು ಅವಲಂಬಿಸಿರುತ್ತದೆ ಎಂಬುದು ನಿರ್ವಿವಾದವಾಗಿದೆ.<ref name="Vitruvius 1914 215"/></blockquote>
6ನೇ ಶತಮಾನದಲ್ಲಿ, ಅಲೆಕ್ಸಾಂಡ್ರಿಯಾ ನಗರದ ಪಂಡಿತ ಜಾನ್ ಫಿಲೋಪೋನಸ್, ಅರಿಸ್ಟಾಟಲ್ನ ಸಿದ್ಧಾಂತವನ್ನು ಮೀರಿಸಿದ ಹೊಸ ಸಿದ್ಧಾಂತವನ್ನು ಪ್ರಸ್ತುತಪಡಿಸಿದರು. ಅದು ಹೀಗಿದೆ: "ಚಲನೆಯ ಮುಂದುವರಿಕೆಯು ನಿರಂತರ ಶಕ್ತಿಯ ಪ್ರಚಾರದ ಆಧಾರದ ಮೇಲೆ ನಿಂತಿದೆ." ಇದು ಕಾಲಾಂತರದಲ್ಲಿ ಅರಿಸ್ಟಾಟಲ್ನ ಸಿದ್ಧಾಂತವನ್ನು ಕುಗ್ಗಿಸಲಾರಂಭಿಸುತ್ತದೆ. ಅವನ ಭೌತಶಾಸ್ತ್ರ ಕಾಮೆಂಟರಿಯಲ್ಲಿ ಹೇಳಿದಂತೆ, "ಒಂದೇ ಎತ್ತರದಿಂದ ಒಂದೇ ಸಮಯದಲ್ಲಿ ಬೀಳಲು ಅವಕಾಶ ಕೊಡಲು ಎರಡು ದೇಹಗಳು ಭಿನ್ನವಾಗಿರುತ್ತವೆ; ಅವುಗಳ ಚಲನೆಯ ಸಮಯಗಳ ಅನುಪಾತ ಇಲ್ಲ ಎಂದರೆ ಕಂಡುಕೊಳ್ಳಬಹುದು. ಅವುಗಳ ತೂಕದ ಅನುಪಾತಗಳು ಅವರ ಭಿನ್ನತೆಗೆ ಅನುಗುಣವಾಗಿರುತ್ತವೆ, ಆದರೆ ಸಮಯದ ವ್ಯತ್ಯಾಸ ತುಂಬ ಚಿಕ್ಕದಾಗಿದೆ."<ref>{{cite web|access-date=2023-06-09|title=John Philoponus|url=https://www.eoht.info/page/John%20Philoponus|website=www.eoht.info|archive-date=2023-06-09|archive-url=https://web.archive.org/web/20230609172847/https://www.eoht.info/page/John%20Philoponus|url-status=dead}}<!-- auto-translated by Module:CS1 translator --></ref>
==ವೈಜ್ಞಾನಿಕ ಕ್ರಾಂತಿ==
===ಐಸಾಕ್ ನ್ಯೂಟನ್===
1687 ರಲ್ಲಿ ನ್ಯೂಟನ್ರ ಫಿಲಾಸಫಿæ ನ್ಯಾಚುರಲಿಸ್ ಪ್ರಿನ್ಸಿಪಿಯಾ ಮ್ಯಾಥಮೆಟಿಕಾದ ಪ್ರಕಟಣೆಯು ವಿಜ್ಞಾನದ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣವಾಗಿದೆ. ಈ ಮೂಲ ಕೃತಿಯಲ್ಲಿ, ನ್ಯೂಟನ್ ತನ್ನ ಸಾರ್ವತ್ರಿಕ ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ಪರಿಚಯಿಸಿದನು, ಇದು ಎರಡು ವಸ್ತುಗಳ ನಡುವಿನ ಆಕರ್ಷಣೆಯ ಬಲವು ಅವುಗಳ ದ್ರವ್ಯರಾಶಿಗಳ ಉತ್ಪನ್ನಕ್ಕೆ ನೇರವಾಗಿ ಅನುಪಾತದಲ್ಲಿರುತ್ತದೆ ಮತ್ತು ಅವುಗಳ ನಡುವಿನ ಅಂತರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿರುತ್ತದೆ ಎಂದು ಪ್ರತಿಪಾದಿಸುತ್ತದೆ. ಇದನ್ನು ಸಾಮಾನ್ಯವಾಗಿ ಸಾರ್ವತ್ರಿಕ ಗುರುತ್ವಾಕರ್ಷಣೆಯ ವಿಲೋಮ-ಚದರ ನಿಯಮ ಎಂದು ಕರೆಯಲಾಗುತ್ತದೆ.<ref>https://mathshistory.st-andrews.ac.uk/Biographies/Newton/</ref>
ಪ್ರಿನ್ಸಿಪಿಯಾವು ವಿಲೋಮ-ಚೌಕ ನಿಯಮವನ್ನು ಮಾತ್ರ ಪ್ರಸ್ತುತಪಡಿಸಲಿಲ್ಲ ಆದರೆ ಆಕಾಶಕಾಯಗಳ, ವಿಶೇಷವಾಗಿ ಗ್ರಹಗಳ ಚಲನೆಯನ್ನು ವಿವರಿಸಲು ಮತ್ತು ಊಹಿಸಲು ಗಣಿತದ ಚೌಕಟ್ಟನ್ನು ಸಹ ಒದಗಿಸಿದೆ. ನ್ಯೂಟನ್ ತನ್ನ ಚಲನೆಯ ನಿಯಮಗಳು ಮತ್ತು ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮವನ್ನು ಬಳಸಿಕೊಂಡು ಕೆಪ್ಲರ್ನ ಗ್ರಹಗಳ ಚಲನೆಯ ನಿಯಮಗಳನ್ನು ಪಡೆದನು. ಈ ಕಾನೂನುಗಳು ಸೂರ್ಯನ ಸುತ್ತ ಗ್ರಹಗಳ ದೀರ್ಘವೃತ್ತದ ಕಕ್ಷೆಗಳನ್ನು ವಿವರಿಸುತ್ತದೆ, ಗಮನಿಸಿದ ಗ್ರಹಗಳ ಚಲನೆಗಳಿಗೆ ಸಮಗ್ರ ವಿವರಣೆಯನ್ನು ನೀಡುತ್ತದೆ.<ref><nowiki>https://archive.org/details/sirisaacnewtonsm0001newt/page/n10/mode/1up</nowiki></ref>
[[ರಾಬರ್ಟ್ ಹುಕ್]] ಕೂಡ ವಿಲೋಮ-ಚೌಕ ನಿಯಮವನ್ನು ಊಹಿಸಿದ್ದಾರೆ ಮತ್ತು ನ್ಯೂಟನ್ನೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ, ಅವರು ಯಾವುದೇ ಕಾಂಕ್ರೀಟ್ ಪುರಾವೆಗಳನ್ನು ಒದಗಿಸಲಿಲ್ಲ. ಮತ್ತೊಂದೆಡೆ, ನ್ಯೂಟನ್ ಅವರು ತಮ್ಮ ಸಮರ್ಥನೆಗಳನ್ನು ಬೆಂಬಲಿಸಲು ಗಣಿತದ ಅಡಿಪಾಯ ಮತ್ತು ಲೆಕ್ಕಾಚಾರಗಳ ಮೇಲೆ ವ್ಯಾಪಕವಾಗಿ ಕೆಲಸ ಮಾಡಿದರು. ನ್ಯೂಟನ್ನ ವಿಚಾರಗಳ ಮೇಲೆ ಹುಕ್ನ ಪ್ರಭಾವವು ವಿಜ್ಞಾನದ ಇತಿಹಾಸಕಾರರಲ್ಲಿ ಚರ್ಚೆಯ ವಿಷಯವಾಗಿ ಉಳಿದಿದೆ.<ref>https://royalsociety.org/blog/2010/12/hooke-newton-and-the-missing-portrait/</ref>
ಪ್ರಿನ್ಸಿಪಿಯಾದ ಪ್ರಕಟಣೆ ಮತ್ತು ನ್ಯೂಟನ್ರ ಸಿದ್ಧಾಂತಗಳ ನಂತರದ ಅಂಗೀಕಾರವು ಆಕಾಶ ಯಂತ್ರಶಾಸ್ತ್ರದ ವೈಜ್ಞಾನಿಕ ತಿಳುವಳಿಕೆಯನ್ನು ಕ್ರಾಂತಿಗೊಳಿಸಿತು ಮತ್ತು ಶಾಸ್ತ್ರೀಯ ಭೌತಶಾಸ್ತ್ರಕ್ಕೆ ಅಡಿಪಾಯವನ್ನು ಹಾಕಿತು. ನ್ಯೂಟನ್ರನ ಚಲನೆಯ ನಿಯಮಗಳು ಮತ್ತು ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮವು ವೈಜ್ಞಾನಿಕ ಚಿಂತನೆಯ ಮೂಲಾಧಾರವಾಯಿತು ಮತ್ತು ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರದ ಪ್ರಗತಿಗೆ ಗಮನಾರ್ಹವಾಗಿ ಕೊಡುಗೆ ನೀಡಿತು.<ref>https://www.physicsclassroom.com/class/circles/Lesson-3/Newton-s-Law-of-Universal-Gravitation</ref>
== ಉಲ್ಲೇಖಗಳು ==
<references />
{{Interwikineeded}}
q41nlzz0cbt1t4c1zcih85wbxhszes6
ಚಾಂಗ್ಕಿಂಗ್
0
166713
1379572
1374952
2026-08-09T07:15:35Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379572
wikitext
text/x-wiki
{{Infobox Dogbreed
| altname =ಚಾಂಗ್ಕಿಂಗ್, ಪೂರ್ವ ಸಿಚುವಾನ್ ಹೌಂಡ್
| image = Chinese Chongqing Dog Hündin.jpg
| image_caption =
|height=35-45 cm
<!-----Kennel club standards----->
| kc_name = [[China Kennel Union]]
| kc_std = http://old.cku.org.cn/nativedog/hound.html
|weight=33-55 lbs|name=Chongqing Dog|color=Red, black}}
'''ಚಾಂಗ್ಕಿಂಗ್''' ({{lang-zh|s=重庆犬|p=Chóngqìng quǎn}}) ಮಾಸ್ಟಿಫ್ ಟುಗೌ ಐತಿಹಾಸಿಕವಾಗಿ ಚಾಂಗ್ಕಿಂಗ್, [[ಚೀನಾ]] ನಲ್ಲಿ ಬೇಟೆಯಾಡಲು ಮತ್ತು ಕಾವಲು ಕಾಯಲು ಬಳಸಲಾಗಿದೆ.<ref name=":2">{{Cite web |date=2020-01-01 |title=Chinese Dog Breeds – Top List, Origins, Specificities & Prices |url=https://breedingbusiness.com/chinese-dog-breeds/ |access-date=2022-06-14 |website=Breeding Business |language=en-US}}</ref><ref name="CKU" /><ref>{{Cite web |last=Reeves |first=Laura |date=2020-05-21 |title=Chongqing Dogs: Saving a Primitive Breed from Extinction |url=https://puredogtalk.com/captivate-podcast/394-chongqing-dogs-saving-a-primitive-breed-from-extinction/ |access-date=2022-03-12 |website=Pure Dog Talk |language=en-US}}</ref> ಇಂದು ಈ ತಳಿಯನ್ನು ಅವರ ಕುಟುಂಬ ಮತ್ತು ಮನೆಯ ನಿರ್ಭೀತ ಮತ್ತು ಕಠಿಣ ರಕ್ಷಕ ಎಂದು ಗೌರವಿಸಲಾಗಿದೆ.<ref name="CKU" /><ref name=":0">{{Cite web |title=Chinese Chongqing Dog Facts - Wisdom Panel™ Dog Breeds |url=https://www.wisdompanel.com/en-us/dog-breeds/chongqing-dog |access-date=2022-03-12 |website=Wisdom Panel™ |language=en-us}}</ref>
"ಚಾಂಗ್ಕಿಂಗ್ ಡಾಗ್" ಎಂಬ ಪದವನ್ನು ಚುವಾಂಡಾಂಗ್ ಹೌಂಡ್ ಅನ್ನು ಉಲ್ಲೇಖಿಸಲು ಸಹ ಬಳಸಬಹುದು. ಇದು ಸಿಂಗಾಪುರದಲ್ಲಿ ಕಂಡುಬರುತ್ತದೆ. ಎರಡೂ ನಾಯಿಗಳು ಸಾಮಾನ್ಯ ಅಡಿಪಾಯ ಸ್ಟಾಕ್ ಅನ್ನು ಹಂಚಿಕೊಳ್ಳುತ್ತವೆ ಮತ್ತು ತುಗೌನ ಭಾಗವಾಗಿದೆ.<ref name=Embark>{{Cite web |title=Chinese Chongqing Dog |url=https://embarkvet.com/resources/dog-breeds/chinese-chongqing-dog/ |access-date=2022-04-01 |website=Embarkvet |language=en-US}}</ref>
== ವಿವರಣೆ ==
ಚಾಂಗ್ಕಿಂಗ್ ನಾಯಿಗಳು ಸಾಂದ್ರವಾದ ಸ್ನಾಯು ದೇಹಗಳೊಂದಿಗೆ ಮಧ್ಯಮ ಗಾತ್ರದವು. ಅವುಗಳ ಬಾಲವು ಚಿಕ್ಕದಾಗಿರಬೇಕು ಮತ್ತು ನೇರವಾಗಿ ಹಿಡಿದಿರಬೇಕು, ಇದನ್ನು ಸಾಮಾನ್ಯವಾಗಿ "ಬಿದಿರಿನ ಕೋಲು" ಎಂದು ವಿವರಿಸಲಾಗುತ್ತದೆ.<ref name=":1">{{Cite web |title=Breed Information |url=http://www.chongqingdog.com/#breed |access-date=2022-04-01 |website=The Chongqing Dog Conservation Project |archive-date=2022-05-29 |archive-url=https://web.archive.org/web/20220529000454/http://www.chongqingdog.com/#breed |url-status=dead }}</ref> ಅವರ ಕೂದಲಿನ ಕೋಟ್ ಚಿಕ್ಕದಾಗಿದೆ, ಒರಟಾದ ಮತ್ತು ಕೆಂಪು-ಕಂದು ಅಥವಾ ಕಪ್ಪು ಬಣ್ಣವನ್ನು ಹೊಂದಿರುತ್ತದೆ.<ref name="Majestic Chongqing Temple 2020">{{cite web | title=Breed Standard – Majestic Chongqing Temple | website=Majestic Chongqing Temple | date=2020-03-24 | url=https://www.chongqingdogclubuk.com/breed-standard/ | access-date=2022-07-25 | archive-date=2024-12-20 | archive-url=https://web.archive.org/web/20241220012948/https://www.chongqingdogclubuk.com/breed-standard/ | url-status=dead }}</ref><ref>{{cite book |last1=Choron |first1=Sandra |url=https://archive.org/details/planetdog00sand/page/176/mode/2up?q=Chongqing+Dog |title=Planet Dog: A Doglopedia |last2=Choron |first2=Harry |publisher=Houghton Mifflin Co |year=2005 |isbn=978-0618517527 |location=Boston |page=176 |url-access=registration}}</ref> ಅವರು ನೀಲಿ-ಕಪ್ಪು ನಾಲಿಗೆ, ಪ್ರಮುಖ ನಿಲುಗಡೆ ಮತ್ತು ಚದರ ತಲೆಯನ್ನು ಹೊಂದಿದ್ದಾರೆ.<ref name="CKU" /> ಅವರ ಕಿವಿಗಳು ಸ್ವಾಭಾವಿಕವಾಗಿ ಚುಚ್ಚಲಾಗುತ್ತದೆ ಮತ್ತು ಕತ್ತರಿಸಲಾಗುವುದಿಲ್ಲ.<ref>{{Cite journal |last=Beregovoy |first=Vladimir |date=2011-12-01 |title=Aboriginal Dogs of Southern China |url=https://padsociety.org/wp-content/uploads/2018/06/Journal-of-PADS-29.Engl-1.pdf |journal=Primitive and Aboriginal Dog Society |volume=28 |pages=35}}</ref>
ಚಾಂಗ್ಕಿಂಗ್ ನಾಯಿಗಳು ಹೊರಹೋಗುವ ಮನೋಧರ್ಮ, ಆತ್ಮವಿಶ್ವಾಸದ ವರ್ತನೆ, ಬಲವಾದ ಬೇಟೆಯ ಡ್ರೈವ್ ಮತ್ತು ಸಾಹಸ ಮತ್ತು ವಿನೋದಕ್ಕಾಗಿ ಪ್ರೀತಿಯೊಂದಿಗೆ ಬಲವಾದ ಪಾತ್ರಗಳನ್ನು ಹೊಂದಿವೆ. ಅವರು ಸಾಮಾನ್ಯವಾಗಿ ಮಕ್ಕಳನ್ನು ಪ್ರೀತಿಸುತ್ತಾರೆ ಮತ್ತು ಎಚ್ಚರಿಕೆಯ ಮತ್ತು ನಿಷ್ಠಾವಂತ ಕುಟುಂಬ ಸಿಬ್ಬಂದಿ ನಾಯಿಯಾಗಿಯೂ ಸಹ ಕಾರ್ಯನಿರ್ವಹಿಸುತ್ತಾರೆ. ಚಾಂಗ್ಕಿಂಗ್ ನಾಯಿಗಳು ಹೆಚ್ಚಿನ ಬೇಟೆಯ ಡ್ರೈವ್ ಮತ್ತು ಅತ್ಯುತ್ತಮ ಪರಿಮಳ ಸಾಮರ್ಥ್ಯಗಳನ್ನು ಹೊಂದಿವೆ. ಚಾಂಗ್ಕಿಂಗ್ ನಾಯಿಗಳು ಮೊಲಗಳಿಂದ ಹಿಡಿದು ಬ್ಯಾಜರ್ಗಳು, ನರಿಗಳು, ಹಂದಿಗಳು, ಆಡುಗಳು, ಜಿಂಕೆಗಳು ಮತ್ತು ಸಣ್ಣ ಕರಡಿಗಳ ಮೂಲಕ ಬೇಟೆಯಾಡಲು ಏಕಾಂಗಿಯಾಗಿ ಅಥವಾ ಪ್ಯಾಕ್ನಲ್ಲಿ ಬೇಟೆಯಾಡಬಹುದು. ಅವರು 15 ವರ್ಷಗಳವರೆಗೆ ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿದ್ದಾರೆ.<ref name=":1" />
== ಇತಿಹಾಸ ==
ಇತರ ಟುಗೌಗಳಂತೆ, ಚಾಂಗ್ಕಿಂಗ್ ಚೀನಾದ ಸ್ಥಳೀಯರು, ಹಾನ್ ರಾಜವಂಶದ ಅವಧಿಯಲ್ಲಿ ಮೊದಲು ಕಾಣಿಸಿಕೊಂಡರು ಎಂದು ನಂಬಲಾಗಿದೆ.<ref name=":2" /><ref>{{Cite book |last1=Choron |first1=Sandra |url=https://books.google.com/books?id=KuZnxSXErqUC&dq=chongqing+dog&pg=PA355 |title=Planet Dog: A Doglopedia |last2=Choron |first2=Harry |date=2005 |publisher=Houghton Mifflin Harcourt |isbn=978-0-618-51752-7 |pages=176 |language=en}}</ref> ಸುಮಾರು 206 BCE- 220 AD ದಿನಾಂಕದ ಚಾಂಗ್ಕಿಂಗ್ನ ಜಿಯಾಂಗ್ಬೈ ಪ್ರದೇಶದಲ್ಲಿ ಸೆರಾಮಿಕ್ ಚಾಂಗ್ಕಿಂಗ್ ನಾಯಿಯ ಪ್ರತಿಮೆಗಳು ಸ್ಮಶಾನಗಳನ್ನು ಕಾಪಾಡುವುದು ಕಂಡುಬಂದಿದೆ.<ref name="CKU" /><ref name=":0" /> ಮೂಲತಃ ಪೂರ್ವ ಸಿಚುವಾನ್ನ ಪರ್ವತ ಪ್ರದೇಶಗಳಲ್ಲಿ ಬೇಟೆಯಾಡುವ ನಾಯಿಯಾಗಿ ಅಭಿವೃದ್ಧಿಪಡಿಸಲಾಯಿತು, ಚಾಂಗ್ಕಿಂಗ್ನ ತ್ವರಿತ ನಗರೀಕರಣವು ಗಮನಾರ್ಹ ಜನಸಂಖ್ಯೆಯ ಕುಸಿತಕ್ಕೆ ಕಾರಣವಾಯಿತು.<ref name="CKU" /> ಆದಾಗ್ಯೂ, 1970 ರ ದಶಕದಿಂದಲೂ, ತಳಿಯನ್ನು ಪುನಃಸ್ಥಾಪಿಸಲು ಗಂಭೀರ ಪ್ರಯತ್ನಗಳು ನಡೆಯುತ್ತಿವೆ ಮತ್ತು ಅವು ಜನಪ್ರಿಯ ಉಪಯುಕ್ತತೆ ಮತ್ತು ಒಡನಾಡಿ ನಾಯಿಯಾಗಿ ಮಾರ್ಪಟ್ಟಿವೆ.<ref name="CKU">{{Cite web |title=Chongqing Dog |url=http://old.cku.org.cn/nativedog/hound.html |access-date=2022-03-12 |website=CKU: China Native Breed Conservation Club |language=Chinese, English |archive-date=1 January 2019 |archive-url=https://web.archive.org/web/20190101032139/http://old.cku.org.cn/nativedog/hound.html |url-status=dead }}</ref><ref name=Embark /><ref>Dogs: The List of 90 Selected Dog Breed, Lovly John, Osmora Incorporated, 2015, p28</ref>
== ಉಲ್ಲೇಖಗಳು ==
{{reflist}}
{{Chinese dogs}}{{Mastiffs}}
<br />
{{Interwikineeded}}
[[ವರ್ಗ:Dog breeds originating in China]]
[[ವರ್ಗ:ವಿಕಿಪೀಡಿಯ ಏಷ್ಯನ್ ತಿಂಗಳು ೨೦೨೪]]
qb7vfzi8l7tux1bowcodo81ldulagc1
ಗುಬ್ಬಿಯ ಮಲ್ಲಣ್ಣಾರ್ಯ
0
172257
1379564
1345127
2026-08-09T04:43:08Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379564
wikitext
text/x-wiki
'''ಗುಬ್ಬಿಯ ಮಲ್ಲಣ್ಣಾರ್ಯ'''ನು (ಸು. 1513) ''ಭಾವಚಿಂತಾರತ್ನ'' ಮತ್ತು ''ವೀರಶೈವಾಮೃತಪುರಾಣ''ಗಳ ಕರ್ತೃ.<ref>{{Cite web |url=https://indiachapter.in/index.php?/user/article/2/37/55 |title=ಆರ್ಕೈವ್ ನಕಲು |access-date=2024-12-30 |archive-date=2025-12-06 |archive-url=https://web.archive.org/web/20251206114315/https://indiachapter.in/index.php?/user/article/2/37/55 |url-status=dead }}</ref><ref>https://kannadadeevige.blogspot.com/2016/03/blog-post_82.html</ref><ref>[https://www.xn--3rcg0cb2dscb3aa6eh9icbdi3guahd6fwdvhheg.com/2019/04/blog-post.html https://www.ಕನ್ನಡಸಾಹಿತ್ಯಸಂಸ್ಕೃತಿಅಸ್ಮಿತೆ.com/2019/04/blog-post.html]</ref> [[ವೀರಶೈವ]] [[ಕವಿ]]. ಹುಟ್ಟಿದ ಸ್ಥಳ [[ತುಮಕೂರು]] [[ಜಿಲ್ಲೆ|ಜಿಲ್ಲೆಯ]] [[ಗುಬ್ಬಿ]]. ''ಪುರಾತನ ರಗಳೆ'' ಎಂಬ ಗ್ರಂಥವನ್ನೂ ಬರೆದನೆಂಬ ಪ್ರತೀತಿಯಿದೆ. ಆದರೆ ಅದು ಉಪಲಬ್ಧವಿಲ್ಲ. ''ಗಣಭಾಷ್ಯರತ್ನಮಾಲೆ''ಯನ್ನು ಬರೆದ [[ಗುಬ್ಬಿಯ ಮಲ್ಲಣ್ಣ]] (ಸು.1475) ಈತನ ಪಿತಾಮಹ. ಈತನ ಮಗನೇ ''ತೋಂಟದ ಸಿದ್ಧೇಶ್ವರ ಪುರಾಣ''ವನ್ನು ಬರೆದ ಶಾಂತೇಶ (1561).
ವೀರಶೈವಾಮೃತಪುರಾಣದಲ್ಲಿ ಕವಿ ತನ್ನ ಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ. ಅಮರಗುಂಡದ ಮಲ್ಲೇಶ್ವರಾಚಾರ್ಯ; ಅವನ ಶಿಷ್ಯ ಶೂಲವೇರಿದ ಮಹತ್ತ್ವವುಳ್ಳ ಗುರುಭಕ್ತ; ಅವನ ಮಗ ದೇಶಿಕ ಪಟ್ಟವರ್ಧನ ಸೌಂದರ್ಯ ಮಲ್ಲಿಕಾರ್ಜುನ ಪಂಡಿತ; ಅವನ ಮಗ ನಾಗನಾಥಾರ್ಯ; ಅವನ ಮಗ ''ಅಹಿಯಂ ಲಿಂಗಕೆ ಛತ್ರಮಂ'' ಮಾಡಿದ ಅಮರ ಗುಂಡಾರ್ಯ; 'ಅವನ ವಂಶದೊಳು ಗುಬ್ಬಿಯ ಮಲ್ಲಣ್ಣನು ಹುಟ್ಟಿ ಅನುಭವಯೋಗ ಷಟ್ಸ್ಥಲಖ್ಯಾತಮಂ ಗಣಭಾಷ್ಯರತ್ನಮಾಲೆಯಂ ಮಾಡಿ ವಾತೂಲಕ್ಕೆ ಟಿಪ್ಪಣವನೆಸಗಿದಂ'; ಅವನ ಮಗ ಗುರುಭಕ್ತ; ಅವನ ಹೆಂಡತಿ ಸಪ್ಪೆಯಮ್ಮ-ಇವರ ಮಗ ಕವಿ ಗುಬ್ಬಿಯ ಮಲ್ಲಣ್ಣಾರ್ಯ. [[ಶಿವಗಂಗೆ ಬೆಟ್ಟ|ಶಿವಗಂಗೆಯ]] ಶಾಂತನಂಜೇಶ, ಸಿದ್ಧಮಲ್ಲೇ ಈತನಿಗೆ ಗುರುವಾಗಿದ್ದರೆಂದು ತಿಳಿದುಬರುತ್ತದೆ.
== ಕೃತಿಗಳು ==
=== ಭಾವ ಚಿಂತಾರತ್ನ ===
[[ವಾರ್ಧಕ ಷಟ್ಪದಿ|ವಾರ್ಧಕ ಷಟ್ಪದಿಯಲ್ಲಿರುವ]] ಈ [[ಕವನ|ಕಾವ್ಯದಲ್ಲಿ]] 9 ಸಂಧಿಗಳೂ 391 ಪದ್ಯಗಳೂ ಇವೆ. ಇದಕ್ಕೆ ''ಸತ್ಯೇಂದ್ರಚೋಳನಾಥ ಕಥೆ'' ಎಂಬ ಹೆಸರೂ ಇದೆ. ತಿರುಜ್ಞಾನ ಸಂಬಂಧರು ಕುಲಚ್ಚರೆಯಗೆ ಪಂಜಾಕ್ಷರೀ ಮಹಿಮೆಯನ್ನು ತಿಳಿಸುವುದಕ್ಕಾಗಿ ದ್ರಾವಿಡದಲ್ಲಿ ಹೇಳಿದ ಸತ್ಯೇಂದ್ರ ಚೋಳನ ಕಥೆಯನ್ನು ತಾನು [[ಕನ್ನಡ|ಕನ್ನಡದಲ್ಲಿ]] ಹೇಳಿರುವುದಾಗಿ ಕವಿ ತಿಳಿಸುತ್ತಾನೆ. ಈ ಗ್ರಂಥ ಪಂಚಾಕ್ಷರಿಯ ಮಹತ್ತ್ವದ ಬೋಧೆ ಎಂದು ಕವಿ ಸ್ಪಷ್ಟವಾಗಿ ತಿಳಿಸುತ್ತಾನೆ. ಗ್ರಂಥಾವತಾರದಲ್ಲಿ ಅನೇಕ ಕವಿಗಳನ್ನೂ, [[ಬಸವೇಶ್ವರ|ಬಸವ]], ಅಲ್ಲಮ್ಮ [[ಚನ್ನಬಸವೇಶ್ವರ|ಚೆನ್ನಬಸವ]] ಮುಂತಾದ ವಚನಕಾರರನ್ನೂ ಸ್ತುತಿಸಿದ್ದಾನೆ. ಕಾವ್ಯಬಂಧ ಪ್ರೌಢವಾಗಿದೆ.
=== ವೀರಶೈವಾಮೃತಪುರಾಣ ===
ವಾರ್ಧಕ ಷಟ್ಪದಿಯ ಕಾವ್ಯ. ಇದರಲ್ಲಿರುವ ಕಾಂಡ 8, ಸಂಧಿ 136, ಪದ್ಯ 7,099. ಇದರಲ್ಲಿ ವೀರಶೈವ ಸಿದ್ಧಾಂತವನ್ನು ಸವಿಸ್ತಾರವಾಗಿ ಪ್ರತಿಪಾದಿಸಲಾಗಿದೆ. `ಸಾಕ್ಷಿ' ಎಂದು ವೇದಾಗಮ ಪುರಾಣೇತಿಹಾಸ [[ಸ್ಮೃತಿ|ಸ್ಮೃತಿಗಳಿಂದ]] ವಾಕ್ಯಗಳು ಅನುವಾದ ಮಾಡಲ್ಪಟ್ಟಿವೆ. ಅಲ್ಲದೆ [[ಶಿವ|ಶಿವನ]] ಪಂಚವಿಂಶತಿ ಲೀಲೆಗಳು, ಪುರಾತನ ಹಾಗೂ ನೂತನ [[ಶರಣರು|ಶರಣರ]] ಕಥೆಗಳು, ಶೈವ ವೀರಶೈವ ತತ್ತ್ವ ವಿಚಾರ, ಧರ್ಮಾಧರ್ಮ ಸ್ವರೂಪ, [[ಬಸವ ಪುರಾಣ]], ಶಿವತತ್ತ್ವ ಚಿಂತಾಮಣಿ ಮೊದಲಾದ ಕಾವ್ಯಗಳ ಕಥಾಸಂಗ್ರಹ- ಇವನ್ನು ಕಾವ್ಯದಲ್ಲಿ ಕಾಣಬಹುದು. ಶೀಲವಂತಾರ್ಯನ ಕರಜಾತನಾದ ಹಲಗೆಯಾರ್ಯ ತನ್ನ ಶಿಷ್ಯ ಕೆಂಚವೀರನಿಗೆ ಬೋಧಿಸಿದ ಉಪದೇಶವನ್ನು ಪದ್ಯರೂಪವಾಗಿ ರಚಿಸು ಎಂದು ಹೇಳಲು ತಾನು ಅವನ ಆಜ್ಞಾನುಸಾರವಾಗಿ ಈ ಕೃತಿಯನ್ನು ಬರೆದಂತೆ ಕವಿ ಹೇಳಿಕೊಂಡಿದ್ದಾನೆ.
''ಬಸವ ಪುರಾಣಾರ್ಥವಂ ಪೇಳ್ವೋಡೆ ಅರ್ಣವ ಪ್ರಾಂತದ ಭೂಮಿಯೊಳುಪೆಸರಾಗಿರ್ದೆ'' ಎಂದು ಈತನನ್ನು ಇತರರು ಸ್ತುತಿಸಿರುವುದರಿಂದ ಈತ ಉಭಯ [[ಭಾಷೆ|ಭಾಷಾ]] ಕವಿಯೆಂದೂ, ಬಸವ ಪುರಾಣದ ಅರ್ಥವನ್ನು ಹೇಳುವುದರಲ್ಲಿ ಪ್ರಸಿದ್ಧನೆಂದೂ ತಿಳಿದುಬರುತ್ತದೆ. ಇವನಿಗೆ ಬಸವಪುರಾಣದ ಮಲ್ಲಣಾರ್ಯನೆಂಬ ಹೆಸರೂ ಉಂಟು. ಭಾವಚಿಂತಾರತ್ನವನ್ನು 1513ರಲ್ಲೂ ವೀರಶೈವಾಮೃತ ಪುರಾಣವನ್ನು 1530ರಲ್ಲೂ ಬರೆದಂತೆ ಕವಿಯ ಹೇಳಿಕೆಯಿಂದ ಗೊತ್ತಾಗುತ್ತದೆ.
== ಉಲ್ಲೇಖಗಳು ==
{{ಉಲ್ಲೇಖಗಳು}}<references />{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಬ್ಬಿಯ ಮಲ್ಲಣ್ಣಾರ್ಯ}}
{{Interwikineeded}}
[[ವರ್ಗ:ಕನ್ನಡ ಕವಿಗಳು]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
cj48crdoi86uud4wfwalkvlwx9lwmq4
ಸದಸ್ಯ:Basava vinay vp/ನನ್ನ ಪ್ರಯೋಗಪುಟ
2
174462
1379579
1376249
2026-08-09T08:24:33Z
~2026-40914-04
100674
ಕೆಲವು ವಾಕ್ಯಗಳನ್ನ ಸೇರಿಸಿದೆ
1379579
wikitext
text/x-wiki
'''Vinay vp'''
'''ವಿನಯ್ ವಿಪಿ'''
[[File:Vinay Vp.jpg|thumb|Basava vinay vp]]
Vinay vp Indian Writer. poet Basava vinay vp.
'''Full Name''' : Vinay prasad (born on September 11. 1999) is an Indian writer. writes in the Kannada and English languages.
He is the District President, Cultural Wing, Chamarajanagar, from the JDS Party.
'''Education''' : Diploma(CSE) Jss polytechnic Nanjangud.
'''VinayRakshitha (''' ಮೇ 3 2026 ರಂದು ರಕ್ಷಿತಾ ಅವರೊಂದಿಗೆ ಪ್ರೇಮ ವಿವಾಹವಾದರು )
'''Father Name''' : P Chinnapadappa
'''Mother Name''' : Shashikala.
'''Nationality''' India
'''State''' Karnataka
'''Lives''' in Mysore
From Chamarajanagara Harave Village
'''One of his writings:''' ಮೌಢ್ಯ ತೊರೆದು, ಜ್ಞಾನವಂತನಾಗು. ಜಾತಿ ತೊರೆದು, ನೀತಿವಂತನಾಗು. ಅಹಂಕಾರ ತೊರೆದು,ಗುಣವಂತನಾಗು. ಆಗಲೇ ನೀನು ಉತ್ತಮ-ಶ್ರೇಷ್ಠ ವ್ಯಕ್ತಿ ಆಗಲು ಸಾಧ್ಯ.
'''ಉಲ್ಲೇಖಗಳು'''
1 ಶರಣರ ಮಹಾತ್ಮರ-ಮಹಾನ್ ವ್ಯಕ್ತಿಗಳ ತತ್ವಗಳನ್ನ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಹೋಗುವವನೆ ನಿಜವಾದ ದೇಶಪ್ರೇಮಿ....
2 ಮೂರು ನೂರು ಗುಡಿಸುತ್ತರೇನು ಫಲವಿಲ್ಲ, ಅಲ್ಲಿರುವ ಕಲ್ಲಿನ ಮೂರ್ತಿ-ಲೋಹದ ಗೊಂಬೆಯಲ್ಲಿ ಯಾವ ಶಕ್ತಿಯೂ ಇಲ್ಲ, ನಿನಗೆ ನಿನ್ನ ಶಕ್ತಿಯೇ ದೇವರು, ಶ್ರಮಕ್ಕೆ ಪ್ರತಿ ಫಲವೆ ದೇವರು.
3 ಕನ್ನಡವ ಓದು ನೀ ಮನುಜ ಕನ್ನಡವನೆ ಉಸಿರಾಗಿಸಿಕೊ ಮನುಜ ಕರುಡುನಾಡಲೆ ಕನ್ನಡವೇ ತುಂಬಿರಲಿ... ಚಂದನ ವನದ ಕರುನಾಡಲಿ ಮಿಂಚುತ್ತಿರುವುದು ಕನ್ನಡ
ಕನ್ನಡವ ಓದು ನೀ ಮನುಜ ಕನ್ನಡವೇ ನಿತ್ಯ ನೀ ಓದು ಮನುಜ, ಹಾರುತಿರಲಿ ಕರುನಾಡ ಕನ್ನಡದ ಬಾವುಟ,
ಕನ್ನಡವ ಓದು ನೀ ಮನುಜ ಕನ್ನಡವನೆ ನೀ ಮೈ ದುಂಬಿಸಿಕೋ ಮನುಜ ಸಾಧನೆಯ ಹಾದಿಯಲ್ಲಿ ಕನ್ನಡವೆ ತುಂಬಿರಲಿ ಮನುಜ ಪೂಜೆಯ ಮಾಡಿ ಎನನು ಸಾಧಿಸಲು ಆಗದು ನೀ ಮನುಜ..
4 ಜನರು ಜಾತಿ ಧರ್ಮ ಪಕ್ಷಕ್ಕಾಗಿ ಹೋರಾಡುವಷ್ಟು ಸತ್ಯ, ನ್ಯಾಯಕ್ಕಾಗಿ ಹೋರಾಡುವುದಿಲ್ಲ, ನಾವು ಸತ್ಯ, ನ್ಯಾಯಕ್ಕಾಗಿ ಹೋರಾಡಬೇಕು. ಸತ್ಯವೇ ಧರ್ಮ ನ್ಯಾಯವೇ ದೇವರು..
5 ನಾವು ಯಾವಗಲೂ ಸತ್ಯ, ನ್ಯಾಯದ ಜೊತೆ ನಿಲ್ಲಬೇಕು, ಯಾವುದೇ ರಾಜಕೀಯ ಪಕ್ಷದ ಜೊತೆ ಅಲ್ಲ. ಅಧಿಕಾರಕ್ಕಾಗಿ ಎಲ್ಲವನ್ನೂ ಬಳಸಿಕೊಳ್ಳುತ್ತಾರೆ.
6 ನೀನು ಕೆಟ್ಟವನಾಗಿದ್ದರೆ, ಜಗತ್ತು ನಿನ್ನನ್ನು ಒಪ್ಪಿಕೊಳ್ಳುತ್ತದೆ....
7 ನುಡಿ ಕನ್ನಡ, ನಡೆ ಕನ್ನಡ, ತಂಪು ಕನ್ನಡ, ಇಂಪು ಕನ್ನಡ, ಉಸಿರು ಕನ್ನಡ, ಹಸಿರು ಕನ್ನಡ, ಕನ್ನಡ.. ಕನ್ನಡ.. ಎಷ್ಟು ಚಂದ ಕನ್ನಡ ಭಾಷೆ, ಎಲ್ಲಾ ಭಾಷೆಗೂ ಮಿಗಿಲು ನಮ್ಮ ಕನ್ನಡ ಭಾಷೆ...
8 ಬುದ್ಧ,ಬಸವ,ಅಂಬೇಡ್ಕರ್ ಇಂತಹ ಮಹಾನ್ ವ್ಯಕ್ತಿಗಳು ಹುಟ್ಟಿದ ದೇಶ, ಆದರೂ ಮೌಡ್ಯತೆ ಹೆಚ್ಚಿದೆ. ನಮ್ಮ ದೇಶದಲ್ಲಿ ಜ್ಞಾನಿಗಳಿಗಿಂತ, ಅಜ್ಞಾನಿಗಳೆ ಹೆಚ್ಚು.....
9 ಇಂದು ನಿನ್ನ ನೋಡಿ ನಗುವರೆಲ್ಲರೂ, ನಾಳೆ ನಿನ್ನ ಗೆಲುವನ್ನು ನೋಡಿ ಮೌನವಾಗುತ್ತಾರೆ, ವಿರೊಧಿಗಳ ನಗುವೆ ನಿನ್ನ ಯಶಸ್ಸಿಗೆ ಸ್ಪೂರ್ತಿ....
10 ಜಾತಿ - ಪಕ್ಷವನ್ನು ಪ್ರೀತಿಸುವವನು ದೇಶವನ್ನು ಪ್ರೀತಿಸಲಾರ....
11 ಮೂರ್ಖರಿಗೆ,ಅಹಂಕಾರರಿಗೆ,ಮೋಸಗಾರರಿಗೆ ಕಳ್ಳರಿಗೆ,ಮಾನಸಿಕ ಬಯೋತ್ಪದಕರಿಗೆ, ಏನನ್ನು ಉಪದೇಶಿಸಬೇಡಿ ಏಕೆಂದರೆ ಅವರು ಸತ್ಯವನ್ನು ಎಂದೂ ಒಪ್ಪುವುದಿಲ್ಲ.
12 ವೇದ, ಶಾಸ್ತ್ರ, ಪುರಾಣ, ಕಟ್ಟು ಕತೆಗಳಿಗಿಂತ. ವಚನ ಸಾಹಿತ್ಯ ಮತ್ತು ಭಾರತ ಸಂವಿಧಾನ ಇವೆರಡು ಮನುಷ್ಯನಿಗೆ ಅತ್ಯ ಅಮೂಲ್ಯವಾದವು..
13 ನನ್ನ ದೇಶದಲ್ಲಿ ಕಾಲ್ಪನಿಕ ವ್ಯಕ್ತಿ ಅಥವ ಕಟ್ಟು ಕತೆಗಳಿಗೆ ಸಿಕ್ಕ ಪ್ರಾಮುಖ್ಯತೆ,ನೈಜ ಇತಿಹಾಸ ಅಥವ ವ್ಯಕ್ತಿಗಳಿಗೆ ಸಿಗಲಿಲ್ಲ, ದುರದೃಷ್ಟಕರವೆಂದರೆ ಸುಳ್ಳಿನ ಹಿಂದೆ ನನ್ನ ದೇಶ...
14 ಕರೆಯದೆ ಬಂದಳೊ, ಮರೆಯದೆ ನೆನಪಾಗುವಳೊ, ನೆನಪಿನ ನನ್ನೊಳಗ, ನಿನ್ನ ನಗುವೊಂದೆ ಕೊನೆದಾಗಿತೂ.....
15 ಪುಸ್ತಕಗಳನ್ನು ಓದುವುದರಿಂದ ಹೆಚ್ಚು ಜ್ಞಾನವನ್ನ ಪಡೆಯಬಹುದು, ಅದರೆ ಸಾಮಾನ್ಯ ಜ್ಞಾನ ಪಡೆಯಲು ಅಸಾಧ್ಯ....
16 ಒಬ್ಬ ವೈಜ್ಞಾನಿಕ ಮನೋಭಾವ ಇರುವ ವ್ಯಕ್ತಿ ಎರಡನೇ ವಿಜ್ಞಾನಿ ಆಗಿರುತ್ತಾನೆ.
17 ಕನ್ನಡ ನುಡಿಯ ಸುಗಂಧ
ಕನ್ನಡವೇ ಸಂಸ್ಕೃತಿ, ಕನ್ನಡವೇ ವಿಶ್ವ ಜಗದಲಿ ಹೊಳೆಯುವ ಪ್ರಕಾಶದ ಬೆಳಕು. ನಿನ್ನಿಂದೇ ಹುಟ್ಟಿತು ಹೃದಯದ ಭಾಷೆ, ನಿನ್ನ ನುಡಿಗಳಲಿ ಜಗದ ಮಧುರ ರಾಗವೇ!
ಅಕ್ಷರದ ಗರ್ಭದಿ ಕಂಗೊಳ್ಳುವ ನುಡಿ, ಕಾಲದ ಬಿರುಸನು ತಡೆಯುವ ತಳಿ. ಸಾಂಸ್ಕೃತಿಕ ತೋಟದ ಅರಮನೆ ನೀನು ಅಭಿಮಾನಿ ಹೃದಯದ ಮಧುರ ಲಹರಿ ನೀನು.
ಬಸವ, ಪಂಪ, ಕುಮಾರವ್ಯಾಸರ ನುಡಿ, ಅವರ ತತ್ವಕೆ ಹೊತ್ತಿದ್ದೆ ಈ ಉಜ್ವಲ ತಳಿ. ನಿನ್ನ ಪ್ರತಿ ಶಬ್ದದಲಿ ಜೀವದ ಸುಗಂಧ, ನಿನ್ನ ಮಾತುಗಳೇ ನಾಡಿನ ಗಂಧ.
ಒಲವುಗೊಂಡ ನಮ್ಮೆಲ್ಲ ಇತಿಹಾಸ, ಕನ್ನಡವೇ ಜೀವದ ಪ್ರೇರಣಾ ಶಕ್ತಿ ನಿನ್ನ ಉಳಿಸಲು ಕೈಜೋಡಿಸೋಣ ನಾವು, ಎಂದೂ ಮಡಚಲು ಬಿಡದೇ ಬೆಳಗಿಸೋಣ ನಿನ್ನ.
ಕನ್ನಡವೇ ಜೀವ, ಕನ್ನಡವೇ ಧ್ವನಿ. ನಿನ್ನ ಸೇವೆಗೆ ಬದುಕು ಮಾಡೋಣ ಸಮರ್ಪಣೆ. ನಿನ್ನ ಕರುಣೆಯಲಿ ಜೀವದ ಹೊಳೆ, ಎಂದೆಂದಿಗೂ ಉಳಿಸೋಣ ಕನ್ನಡ ನುಡಿಯ ಅಲೆ!
18 ಕಲ್ಪನೆಯ ದಾರಿಯಲಿ.
ಮಿನು ಮಿನುಗು ತಾರೆ.. ನೀ ಕಲ್ಪನೆಯ ದಾರಿಯಲಿ.. ನಾ ಹೃದಯ ತುಂಬಾ ಪ್ರೀತಿ ನೀಡುವೆ.. ನಾ ಬಾರೆ ಎದೆಗೆ ಇಳಿದು ಬಿಡು ಬಾರವಾಗದು ನನ್ನ ಮನ..!
ನಿನ್ನ ಮನದಾಸೆಯ ಹೇಳು ಬಿಡು.. ಕಾತುರದಲಿ ಕಾಯುತಿರುವೆ..! ಕಣ್ಣ ಹಂಚ ಪ್ರೇಮದಲಿ ಹೃದಯ ತುಂಬಿ.. ನೀಡುವೆ ನಾ.. ಪ್ರೀತಿಯ.
ಮನದ ಕದವ ತಗೆದು ಆಸೆಗಳ ಸಾಲಿನಲಿ ಇರಿಸು.. ನೀ ಕಲ್ಪನೆಗೂ ಮಿತಿ ಮೀರಿ.. ಆಸೆಗಳ ಬುತ್ತಿ ಕಟ್ಟಿರುವೆನು.. ನಾ
ಅರೆ ಕ್ಷಣ ನೊಂದರು ನೀ.. ನಾ ತಾಳಲಾಗದು ನನ್ನಿ ಈ ಮನ. ನನ್ನೆದೆಯ ಅರಸಿ ಬಂದೆ ನೀ ಅ ಕಲ್ಪನೆಯ ಗುಂಗಲ್ಲಿ ಚೈತನ್ಯನಾಗಿರುವೆ ನಾ
ನನ್ನ ಎದೆಯ ಗೂಡಲ್ಲಿ ಬಚ್ಚಿಡುವೆ ಎದೆಗೂ ಮಿಗಿಲಿಗೂ ಪ್ರೇಮಿಸುವೆ ನಾ.. ಅ ಕಲ್ಪನೆಗೂ ಮೀತಿ ಮಿರುತಿದೆ ಅನುರಾಗ ಮುಂಜಾನೆ ಮುಸ್ಸಂಜೆ ಎನ್ನದೆ ಕಾಯುತಿದೆ ನನ್ನಿ ಈ ಮನ.
19 "ಪ್ರಕೃತಿಯ ಪ್ರಣಯಗೀತೆ"
ಮಳೆ ಚಿಮುಚಿ, ಮಣ್ಣು ಮುದ್ದಿಸುವೆ, ಗಾಳಿ ಗುಂಗುಟ್ಟು, ಹಾಡಿದ ರಾಗ. ಸೂರ್ಯನ ಕಿರಣದ ಚಿತ್ತಾರ ಹೊದಿಕೊಂಡ, ಪ್ರಕೃತಿಯ ಮೋಡ ಮಡಿಲು ತುಂಬಿಸಿದೆ!
ಹಸಿರು ಪರ್ವತಗಳ ಗುಡ್ಡೆಗೂ ಚುಕ್ಕೆ, ಅಲೆಗಳ ಗಾಜಿನ ಶಬ್ದದ ರಂಜನೆ. ಚಂದನ ಮರದ ಸುಗಂಧ ಕತ್ತಲಿಯಲಿ, ನಗುವ ಪ್ರಪಂಚದ ಬೆಳಕು ಹೊಳೆಯಲಿ.
ನದಿಯ ಹರಿವಿನ ತಾಳದಲಿ ಹಾಡು, ಮೆಟ್ಟಿಲು ಮಣ್ಣುಗಿಂತ ನಯವಾದ ನಾಟು. ಚೆಂಡಿನ ಮೇಘದ ಗುಂಗು ಗುಂಪು, ಅವಳ ನಿಲುವಳಿಯ ಕಾಲವ ಹಾರಿದ ಕನಸು.
ಪಶುಪಕ್ಷಿಗಳ ಹಾರಾಟ, ಬೆಳಗಿನ ಹೊತ್ತಿನಲ್ಲಿ ಅವು, ನಗುವಂತಿವೆ ಮಹತ್ತರ. ಕತ್ತಲಾದ ಮೌನ, ಪ್ರಕೃತಿಯ ಹೃದಯದಿಂದ, ನಗುಹೀನ ಕಲ್ಪನೆ, ಉದಯವನ್ನು ಸೇರಿಕೊಂಡಿತು
'''ಪ್ರಶಸ್ತಿಗಳು'''
1 2025 ಮಾರ್ಚ ರಲ್ಲಿ, ಕನ್ನಡ ಫಿಲಂ ಚೇಂಬರ್ ವತಿಯಿಂದ 'ಡಾ. ಪುನೀತ್ ರಾಜ್ಕುಮಾರ್' ಅವರ ಪ್ರೇರಣೆಯೊಂದಿಗೆ "ಕನ್ನಡ ರಾಜ್ಯೋತ್ಸವ
ಮೊದಲ ಪ್ರಶಸ್ತಿ" ವಿನಯ್ ವಿಪಿಗೆ ಲಭಿಸಿದೆ. ಈ ಪ್ರಶಸ್ತಿ ಅವರಿಗೆ ಬರೆದ ಸಾಹಿತ್ಯ ಕೃತಿಗಳ ಮೂಲಕ ಸಮಾದಲ್ಲಿ ಸಾಹಿತ್ಯ ಬೆಳವಣಿಗೆಯಲ್ಲಿ ಮಾಡಿರುವ ಕೊಡುಗೆಗಾಗಿ ನೀಡಿ ಸನ್ಮಾನಿಸಲಾಯಿತು.
2 ರಾಷ್ಟ್ರ ಮಟ್ಟದ, "ಸಾಹಿತ್ಯ ನವಚೇತನ" ಪ್ರಶಸ್ತಿ 2025 ಮೇ ಯಲ್ಲಿ ದೊರೆಕಿದೆ.
3 ರಾಜ್ಯ ಮಟ್ಟದ "ಬಸವಶ್ರೀ" ಪ್ರಶಸ್ತಿ.
4 ರಾಜ್ಯ ಮಟ್ಟದ "ಕಾವ್ಯಶ್ರೀ" ಪ್ರಶಸ್ತಿ
5 ರಾಜ್ಯ ಮಟ್ಟದ "ಕವಿ ವಿಭೂಷಣ" ಪ್ರಶಸ್ತಿ ಲಭಿಸಿದೆ.6 ರಾಷ್ಟ್ರ ಮಟ್ಟದ ಇಮ್ಮಡಿ ಪುಲಕೇಶಿ. 7 ಪ್ರೈಡ್ ಆಫ್ ಇಂಡಿಯಾ ಅವಾರ್ಡ್.
sxgxsk2athiexezajt23wriy6iuua3z
1379583
1379579
2026-08-09T08:40:00Z
~2026-40914-04
100674
/* */ ವಾಕ್ಯಗಳನ್ನು ಸೇರಿಸಿದೆ
1379583
wikitext
text/x-wiki
'''Vinay vp'''
'''ವಿನಯ್ ವಿಪಿ'''
[[File:Vinay Vp.jpg|thumb|Basava vinay vp]]
Vinay vp Indian Writer. poet Basava vinay vp.
'''Full Name''' : Vinay prasad (born on September 11. 1999) is an Indian writer. writes in the Kannada and English languages.
He is the District President, Cultural Wing, Chamarajanagar, from the JDS Party.
'''Education''' : Diploma(CSE) Jss polytechnic Nanjangud.
'''VinayRakshitha (''' ಮೇ 3 2026 ರಂದು ರಕ್ಷಿತಾ ಅವರೊಂದಿಗೆ ಪ್ರೇಮ ವಿವಾಹವಾದರು )
'''Father Name''' : P Chinnapadappa
'''Mother Name''' : Shashikala.
'''Nationality''' India
'''State''' Karnataka
'''Lives''' in Mysore
From Chamarajanagara Harave Village
'''One of his writings:''' ಮೌಢ್ಯ ತೊರೆದು, ಜ್ಞಾನವಂತನಾಗು. ಜಾತಿ ತೊರೆದು, ನೀತಿವಂತನಾಗು. ಅಹಂಕಾರ ತೊರೆದು,ಗುಣವಂತನಾಗು. ಆಗಲೇ ನೀನು ಉತ್ತಮ-ಶ್ರೇಷ್ಠ ವ್ಯಕ್ತಿ ಆಗಲು ಸಾಧ್ಯ.
'''ಉಲ್ಲೇಖಗಳು'''
1 ಶರಣರ ಮಹಾತ್ಮರ-ಮಹಾನ್ ವ್ಯಕ್ತಿಗಳ ತತ್ವಗಳನ್ನ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಹೋಗುವವನೆ ನಿಜವಾದ ದೇಶಪ್ರೇಮಿ....
2 ಮೂರು ನೂರು ಗುಡಿಸುತ್ತರೇನು ಫಲವಿಲ್ಲ, ಅಲ್ಲಿರುವ ಕಲ್ಲಿನ ಮೂರ್ತಿ-ಲೋಹದ ಗೊಂಬೆಯಲ್ಲಿ ಯಾವ ಶಕ್ತಿಯೂ ಇಲ್ಲ, ನಿನಗೆ ನಿನ್ನ ಶಕ್ತಿಯೇ ದೇವರು, ಶ್ರಮಕ್ಕೆ ಪ್ರತಿ ಫಲವೆ ದೇವರು.
3 ಕನ್ನಡವ ಓದು ನೀ ಮನುಜ ಕನ್ನಡವನೆ ಉಸಿರಾಗಿಸಿಕೊ ಮನುಜ ಕರುಡುನಾಡಲೆ ಕನ್ನಡವೇ ತುಂಬಿರಲಿ... ಚಂದನ ವನದ ಕರುನಾಡಲಿ ಮಿಂಚುತ್ತಿರುವುದು ಕನ್ನಡ
ಕನ್ನಡವ ಓದು ನೀ ಮನುಜ ಕನ್ನಡವೇ ನಿತ್ಯ ನೀ ಓದು ಮನುಜ, ಹಾರುತಿರಲಿ ಕರುನಾಡ ಕನ್ನಡದ ಬಾವುಟ, ಜಾತಿ ಮತಗಳ ಮೀರಿ ಬೆಳಸು ಕನ್ನಡವ ನೀ ಮನುಜ. ಸರ್ವ ಧರ್ಮಗಳ ಪ್ರೀತಿಸು ನೀ ಮನುಜ.
ಕನ್ನಡವ ಓದು ನೀ ಮನುಜ ಕನ್ನಡವನೆ ನೀ ಮೈ ದುಂಬಿಸಿಕೋ ಮನುಜ ಸಾಧನೆಯ ಹಾದಿಯಲ್ಲಿ ಕನ್ನಡವೆ ತುಂಬಿರಲಿ ಮನುಜ ಪೂಜೆಯ ಮಾಡಿ ಎನನು ಸಾಧಿಸಲು ಆಗದು ನೀ ಮನುಜ..
4 ಜನರು ಜಾತಿ ಧರ್ಮ ಪಕ್ಷಕ್ಕಾಗಿ ಹೋರಾಡುವಷ್ಟು ಸತ್ಯ, ನ್ಯಾಯಕ್ಕಾಗಿ ಹೋರಾಡುವುದಿಲ್ಲ, ನಾವು ಸತ್ಯ, ನ್ಯಾಯಕ್ಕಾಗಿ ಹೋರಾಡಬೇಕು. ಸತ್ಯವೇ ಧರ್ಮ ನ್ಯಾಯವೇ ದೇವರು..
5 ನಾವು ಯಾವಗಲೂ ಸತ್ಯ, ನ್ಯಾಯದ ಜೊತೆ ನಿಲ್ಲಬೇಕು, ಯಾವುದೇ ರಾಜಕೀಯ ಪಕ್ಷದ ಜೊತೆ ಅಲ್ಲ. ಅಧಿಕಾರಕ್ಕಾಗಿ ಎಲ್ಲವನ್ನೂ ಬಳಸಿಕೊಳ್ಳುತ್ತಾರೆ.
6 ನೀನು ಕೆಟ್ಟವನಾಗಿದ್ದರೆ, ಜಗತ್ತು ನಿನ್ನನ್ನು ಒಪ್ಪಿಕೊಳ್ಳುತ್ತದೆ....
7 ನುಡಿ ಕನ್ನಡ, ನಡೆ ಕನ್ನಡ, ತಂಪು ಕನ್ನಡ, ಇಂಪು ಕನ್ನಡ, ಉಸಿರು ಕನ್ನಡ, ಹಸಿರು ಕನ್ನಡ, ಕನ್ನಡ.. ಕನ್ನಡ.. ಎಷ್ಟು ಚಂದ ಕನ್ನಡ ಭಾಷೆ, ಎಲ್ಲಾ ಭಾಷೆಗೂ ಮಿಗಿಲು ನಮ್ಮ ಕನ್ನಡ ಭಾಷೆ...
8 ಬುದ್ಧ,ಬಸವ,ಅಂಬೇಡ್ಕರ್ ಇಂತಹ ಮಹಾನ್ ವ್ಯಕ್ತಿಗಳು ಹುಟ್ಟಿದ ದೇಶ, ಆದರೂ ಮೌಡ್ಯತೆ ಹೆಚ್ಚಿದೆ. ನಮ್ಮ ದೇಶದಲ್ಲಿ ಜ್ಞಾನಿಗಳಿಗಿಂತ, ಅಜ್ಞಾನಿಗಳೆ ಹೆಚ್ಚು.....
9 ಇಂದು ನಿನ್ನ ನೋಡಿ ನಗುವರೆಲ್ಲರೂ, ನಾಳೆ ನಿನ್ನ ಗೆಲುವನ್ನು ನೋಡಿ ಮೌನವಾಗುತ್ತಾರೆ, ವಿರೊಧಿಗಳ ನಗುವೆ ನಿನ್ನ ಯಶಸ್ಸಿಗೆ ಸ್ಪೂರ್ತಿ....
10 ಜಾತಿ - ಪಕ್ಷವನ್ನು ಪ್ರೀತಿಸುವವನು ದೇಶವನ್ನು ಪ್ರೀತಿಸಲಾರ....
11 ಮೂರ್ಖರಿಗೆ,ಅಹಂಕಾರರಿಗೆ,ಮೋಸಗಾರರಿಗೆ ಕಳ್ಳರಿಗೆ,ಮಾನಸಿಕ ಬಯೋತ್ಪದಕರಿಗೆ, ಏನನ್ನು ಉಪದೇಶಿಸಬೇಡಿ ಏಕೆಂದರೆ ಅವರು ಸತ್ಯವನ್ನು ಎಂದೂ ಒಪ್ಪುವುದಿಲ್ಲ.
12 ವೇದ, ಶಾಸ್ತ್ರ, ಪುರಾಣ, ಕಟ್ಟು ಕತೆಗಳಿಗಿಂತ. ವಚನ ಸಾಹಿತ್ಯ ಮತ್ತು ಭಾರತ ಸಂವಿಧಾನ ಇವೆರಡು ಮನುಷ್ಯನಿಗೆ ಅತ್ಯ ಅಮೂಲ್ಯವಾದವು..
13 ನನ್ನ ದೇಶದಲ್ಲಿ ಕಾಲ್ಪನಿಕ ವ್ಯಕ್ತಿ ಅಥವ ಕಟ್ಟು ಕತೆಗಳಿಗೆ ಸಿಕ್ಕ ಪ್ರಾಮುಖ್ಯತೆ,ನೈಜ ಇತಿಹಾಸ ಅಥವ ವ್ಯಕ್ತಿಗಳಿಗೆ ಸಿಗಲಿಲ್ಲ, ದುರದೃಷ್ಟಕರವೆಂದರೆ ಸುಳ್ಳಿನ ಹಿಂದೆ ನನ್ನ ದೇಶ...
14 ಕರೆಯದೆ ಬಂದಳೊ, ಮರೆಯದೆ ನೆನಪಾಗುವಳೊ, ನೆನಪಿನ ನನ್ನೊಳಗ, ನಿನ್ನ ನಗುವೊಂದೆ ಕೊನೆದಾಗಿತೂ.....
15 ಪುಸ್ತಕಗಳನ್ನು ಓದುವುದರಿಂದ ಹೆಚ್ಚು ಜ್ಞಾನವನ್ನ ಪಡೆಯಬಹುದು, ಅದರೆ ಸಾಮಾನ್ಯ ಜ್ಞಾನ ಪಡೆಯಲು ಅಸಾಧ್ಯ....
16 ಒಬ್ಬ ವೈಜ್ಞಾನಿಕ ಮನೋಭಾವ ಇರುವ ವ್ಯಕ್ತಿ ಎರಡನೇ ವಿಜ್ಞಾನಿ ಆಗಿರುತ್ತಾನೆ.
17 ಕನ್ನಡ ನುಡಿಯ ಸುಗಂಧ
ಕನ್ನಡವೇ ಸಂಸ್ಕೃತಿ, ಕನ್ನಡವೇ ವಿಶ್ವ ಜಗದಲಿ ಹೊಳೆಯುವ ಪ್ರಕಾಶದ ಬೆಳಕು. ನಿನ್ನಿಂದೇ ಹುಟ್ಟಿತು ಹೃದಯದ ಭಾಷೆ, ನಿನ್ನ ನುಡಿಗಳಲಿ ಜಗದ ಮಧುರ ರಾಗವೇ!
ಅಕ್ಷರದ ಗರ್ಭದಿ ಕಂಗೊಳ್ಳುವ ನುಡಿ, ಕಾಲದ ಬಿರುಸನು ತಡೆಯುವ ತಳಿ. ಸಾಂಸ್ಕೃತಿಕ ತೋಟದ ಅರಮನೆ ನೀನು ಅಭಿಮಾನಿ ಹೃದಯದ ಮಧುರ ಲಹರಿ ನೀನು.
ಬಸವ, ಪಂಪ, ಕುಮಾರವ್ಯಾಸರ ನುಡಿ, ಅವರ ತತ್ವಕೆ ಹೊತ್ತಿದ್ದೆ ಈ ಉಜ್ವಲ ತಳಿ. ನಿನ್ನ ಪ್ರತಿ ಶಬ್ದದಲಿ ಜೀವದ ಸುಗಂಧ, ನಿನ್ನ ಮಾತುಗಳೇ ನಾಡಿನ ಗಂಧ.
ಒಲವುಗೊಂಡ ನಮ್ಮೆಲ್ಲ ಇತಿಹಾಸ, ಕನ್ನಡವೇ ಜೀವದ ಪ್ರೇರಣಾ ಶಕ್ತಿ ನಿನ್ನ ಉಳಿಸಲು ಕೈಜೋಡಿಸೋಣ ನಾವು, ಎಂದೂ ಮಡಚಲು ಬಿಡದೇ ಬೆಳಗಿಸೋಣ ನಿನ್ನ.
ಕನ್ನಡವೇ ಜೀವ, ಕನ್ನಡವೇ ಧ್ವನಿ. ನಿನ್ನ ಸೇವೆಗೆ ಬದುಕು ಮಾಡೋಣ ಸಮರ್ಪಣೆ. ನಿನ್ನ ಕರುಣೆಯಲಿ ಜೀವದ ಹೊಳೆ, ಎಂದೆಂದಿಗೂ ಉಳಿಸೋಣ ಕನ್ನಡ ನುಡಿಯ ಅಲೆ!
18 ಕಲ್ಪನೆಯ ದಾರಿಯಲಿ.
ಮಿನು ಮಿನುಗು ತಾರೆ.. ನೀ ಕಲ್ಪನೆಯ ದಾರಿಯಲಿ.. ನಾ ಹೃದಯ ತುಂಬಾ ಪ್ರೀತಿ ನೀಡುವೆ.. ನಾ ಬಾರೆ ಎದೆಗೆ ಇಳಿದು ಬಿಡು ಬಾರವಾಗದು ನನ್ನ ಮನ..!
ನಿನ್ನ ಮನದಾಸೆಯ ಹೇಳು ಬಿಡು.. ಕಾತುರದಲಿ ಕಾಯುತಿರುವೆ..! ಕಣ್ಣ ಹಂಚ ಪ್ರೇಮದಲಿ ಹೃದಯ ತುಂಬಿ.. ನೀಡುವೆ ನಾ.. ಪ್ರೀತಿಯ.
ಮನದ ಕದವ ತಗೆದು ಆಸೆಗಳ ಸಾಲಿನಲಿ ಇರಿಸು.. ನೀ ಕಲ್ಪನೆಗೂ ಮಿತಿ ಮೀರಿ.. ಆಸೆಗಳ ಬುತ್ತಿ ಕಟ್ಟಿರುವೆನು.. ನಾ
ಅರೆ ಕ್ಷಣ ನೊಂದರು ನೀ.. ನಾ ತಾಳಲಾಗದು ನನ್ನಿ ಈ ಮನ. ನನ್ನೆದೆಯ ಅರಸಿ ಬಂದೆ ನೀ ಅ ಕಲ್ಪನೆಯ ಗುಂಗಲ್ಲಿ ಚೈತನ್ಯನಾಗಿರುವೆ ನಾ
ನನ್ನ ಎದೆಯ ಗೂಡಲ್ಲಿ ಬಚ್ಚಿಡುವೆ ಎದೆಗೂ ಮಿಗಿಲಿಗೂ ಪ್ರೇಮಿಸುವೆ ನಾ.. ಅ ಕಲ್ಪನೆಗೂ ಮೀತಿ ಮಿರುತಿದೆ ಅನುರಾಗ ಮುಂಜಾನೆ ಮುಸ್ಸಂಜೆ ಎನ್ನದೆ ಕಾಯುತಿದೆ ನನ್ನಿ ಈ ಮನ.
19 "ಪ್ರಕೃತಿಯ ಪ್ರಣಯಗೀತೆ"
ಮಳೆ ಚಿಮುಚಿ, ಮಣ್ಣು ಮುದ್ದಿಸುವೆ, ಗಾಳಿ ಗುಂಗುಟ್ಟು, ಹಾಡಿದ ರಾಗ. ಸೂರ್ಯನ ಕಿರಣದ ಚಿತ್ತಾರ ಹೊದಿಕೊಂಡ, ಪ್ರಕೃತಿಯ ಮೋಡ ಮಡಿಲು ತುಂಬಿಸಿದೆ!
ಹಸಿರು ಪರ್ವತಗಳ ಗುಡ್ಡೆಗೂ ಚುಕ್ಕೆ, ಅಲೆಗಳ ಗಾಜಿನ ಶಬ್ದದ ರಂಜನೆ. ಚಂದನ ಮರದ ಸುಗಂಧ ಕತ್ತಲಿಯಲಿ, ನಗುವ ಪ್ರಪಂಚದ ಬೆಳಕು ಹೊಳೆಯಲಿ.
ನದಿಯ ಹರಿವಿನ ತಾಳದಲಿ ಹಾಡು, ಮೆಟ್ಟಿಲು ಮಣ್ಣುಗಿಂತ ನಯವಾದ ನಾಟು. ಚೆಂಡಿನ ಮೇಘದ ಗುಂಗು ಗುಂಪು, ಅವಳ ನಿಲುವಳಿಯ ಕಾಲವ ಹಾರಿದ ಕನಸು.
ಪಶುಪಕ್ಷಿಗಳ ಹಾರಾಟ, ಬೆಳಗಿನ ಹೊತ್ತಿನಲ್ಲಿ ಅವು, ನಗುವಂತಿವೆ ಮಹತ್ತರ. ಕತ್ತಲಾದ ಮೌನ, ಪ್ರಕೃತಿಯ ಹೃದಯದಿಂದ, ನಗುಹೀನ ಕಲ್ಪನೆ, ಉದಯವನ್ನು ಸೇರಿಕೊಂಡಿತು
'''ಪ್ರಶಸ್ತಿಗಳು'''
1 2025 ಮಾರ್ಚ ರಲ್ಲಿ, ಕನ್ನಡ ಫಿಲಂ ಚೇಂಬರ್ ವತಿಯಿಂದ 'ಡಾ. ಪುನೀತ್ ರಾಜ್ಕುಮಾರ್' ಅವರ ಪ್ರೇರಣೆಯೊಂದಿಗೆ "ಕನ್ನಡ ರಾಜ್ಯೋತ್ಸವ
ಮೊದಲ ಪ್ರಶಸ್ತಿ" ವಿನಯ್ ವಿಪಿಗೆ ಲಭಿಸಿದೆ. ಈ ಪ್ರಶಸ್ತಿ ಅವರಿಗೆ ಬರೆದ ಸಾಹಿತ್ಯ ಕೃತಿಗಳ ಮೂಲಕ ಸಮಾದಲ್ಲಿ ಸಾಹಿತ್ಯ ಬೆಳವಣಿಗೆಯಲ್ಲಿ ಮಾಡಿರುವ ಕೊಡುಗೆಗಾಗಿ ನೀಡಿ ಸನ್ಮಾನಿಸಲಾಯಿತು.
2 ರಾಷ್ಟ್ರ ಮಟ್ಟದ, "ಸಾಹಿತ್ಯ ನವಚೇತನ" ಪ್ರಶಸ್ತಿ 2025 ಮೇ ಯಲ್ಲಿ ದೊರೆಕಿದೆ.
3 ರಾಜ್ಯ ಮಟ್ಟದ "ಬಸವಶ್ರೀ" ಪ್ರಶಸ್ತಿ.
4 ರಾಜ್ಯ ಮಟ್ಟದ "ಕಾವ್ಯಶ್ರೀ" ಪ್ರಶಸ್ತಿ
5 ರಾಜ್ಯ ಮಟ್ಟದ "ಕವಿ ವಿಭೂಷಣ" ಪ್ರಶಸ್ತಿ ಲಭಿಸಿದೆ.6 ರಾಷ್ಟ್ರ ಮಟ್ಟದ ಇಮ್ಮಡಿ ಪುಲಕೇಶಿ. 7 ಪ್ರೈಡ್ ಆಫ್ ಇಂಡಿಯಾ ಅವಾರ್ಡ್.
hx1p2zv9k8virazkj8w3jlns8ixefx5
ಗಿರಿರಾಜ ಕೋಳಿ
0
175156
1379562
1344895
2026-08-09T04:23:53Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379562
wikitext
text/x-wiki
{{infobox poultry breed|name=Giriraja|image=Giriraja chicken (2).JPG|image_size=|alt=|image_caption=|status=|altname=|country=[[India]]|distribution=|standard=<!--[url Entity]; use {{Unbulleted list}} if more than one-->|use=Dual: eggs & meat|nickname=<!--nickname; use {{Unbulleted list}} if more than one-->
<!--
| apa =
| aba =
| ee =
| pcgb =
| aps =
-->|maleweight={{convert|3|-|4|kg|lb|0|abbr=on}}|femaleweight={{convert|2|-|3|kg|lb|0|abbr=on}}|skincolor=<!--skin color-->|eggcolor=<!--egg color-->|comb=<!--type (enter only for chickens, leave blank for other types of poultry)-->|note=<!--extra notes-->|type=[[Chicken]]|latin=<!--systematic name-->}}
'''ಗಿರಿರಾಜ ಕೋಳಿಯು''' ಭಾರತದ [[ಬೆಂಗಳೂರು|ಬೆಂಗಳೂರಿನಲ್ಲಿರುವ]] ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಕೋಳಿಯ ತಳಿಯಾಗಿದೆ. ಇದನ್ನು ನಾಟಿ(ದೇಶಿ) ಪಕ್ಷಿಗಳನ್ನು ಹೋಲುವ ಅಪೇಕ್ಷಿತ ಗುಣಲಕ್ಷಣಗಳನ್ನು ಹೊಂದುವಂತೆ ವಿದೇಶಿ ತಳಿಯ ಸಂಕರದ ಮೂಲಕ ಅಭಿವೃದ್ಧಿಪಡಿಸಲಾಗಿದೆ. <ref>{{ಉಲ್ಲೇಖ ಸುದ್ದಿ |date=2014-12-06 |title=Growing demand for Giriraja chicken breed |url=https://www.thehindu.com/news/national/karnataka/growing-demand-for-giriraja-chicken-breed/article6668297.ece |access-date=2025-04-28 |work=The Hindu |language=en-IN |issn=0971-751X}}</ref>
== ಗುಣಲಕ್ಷಣಗಳು ==
ಗಿರಿರಾಜ ಕೋಳಿ ತಳಿಯು ಎರಡು(ಮೊಟ್ಟೆ ಹಾಗೂ ಮಾಂಸ) ಉದ್ದೇಶದ ಕೋಳಿಯಾಗಿದೆ. ೬ ತಿಂಗಳ ವಯಸ್ಸಿನ ಕೋಳಿಗಳು ಸರಾಸರಿ ೩ ಕೆಜಿ ಮತ್ತು ಹುಂಜಗಳು ೪ ಕೆಜಿ ತೂಕವಿರುತ್ತವೆ ಮತ್ತು ಮೊಟ್ಟೆ ಉತ್ಪಾದನೆಯು ವರ್ಷಕ್ಕೆ ೧೮೦-೧೯೦ ಆಗಿದ್ದು, ಮೊಟ್ಟೆಯ ಸರಾಸರಿ ತೂಕ ೫೨-೫೫ ಗ್ರಾಂ.{{Fact}}<sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (May 2025)">ಉಲ್ಲೇಖದ ಅಗತ್ಯವಿದೆ</span>]]'' ]</sup> ಮೊಟ್ಟೆಗಳು ಉತ್ತಮ ಮೊಟ್ಟೆಯೊಡೆಯುವ ಸಾಮರ್ಥ್ಯವನ್ನು ಹೊಂದಿವೆ (ಶೇಕಡಾ ೮೦–೮೫), ಮತ್ತು ರೈತರು ತಮ್ಮದೇ ಕೋಳಿಗಳನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಮೊಟ್ಟೆಯ ಚಿಪ್ಪು ಕಂದು ಬಣ್ಣದಲ್ಲಿರುತ್ತದೆ ಮತ್ತು ಇತರ ವಾಣಿಜ್ಯ ಮೊಟ್ಟೆಗಳಿಗಿಂತ ದಪ್ಪವಾಗಿರುತ್ತದೆ, ಹಾಗಾಗಿ ಒಡೆಯುವುದನ್ನು ತಡೆಯುತ್ತದೆ. ಒಂದು ದಿನ ವಯಸ್ಸಿನ ಮರಿ ೪೨–೪೫ ಗ್ರಾಂ ತೂಗುತ್ತದೆ. ಸ್ಥಳೀಯ ಪ್ರಭೇದಗಳಿಗೆ ಹೋಲಿಸಿದರೆ ಈ ಪಕ್ಷಿಗಳು ಉತ್ತಮ ಬೆಳವಣಿಗೆಯನ್ನು ಹೊಂದುತ್ತವೆ. ಇವು ಫಾರಂ ಮತ್ತು ಮನೆ ಹಿತ್ತಲಿನಲ್ಲೇ ಬೆಳೆಸಲೂ ಸೂಕ್ತವಾಗಿವೆ.{{Fact}}
ಮನೆಯಲ್ಲಿ ಸಾಕುವಾಗ ಸಾಮಾನ್ಯವಾಗಿ ಐದು ಕೋಳಿಗಳು ಮತ್ತು ಒಂದು ಹುಂಜದ ಹಿಂಡನ್ನು ಬೆಳೆಸುತ್ತಾರೆ. ಅವುಗಳನ್ನು ಬೆಳೆಸಲು ಯಾವುದೇ ವಿಶೇಷ ಕಾಳಜಿ ಅಗತ್ಯವಿರುವುದಿಲ್ಲ. ಅವುಗಳನ್ನು ಸ್ವತಂತ್ರವಾಗಿ ಓಡಾಡಲು ಬಿಟ್ಟು ಸಾಕಬಹುದು ಮತ್ತು ಸ್ಥಳೀಯವಾಗಿ ಲಭ್ಯವಿರುವ ಆಹಾರವನ್ನು ನೀಡಬಹುದು. ಮಣ್ಣನ್ನು ಕೆದರಿ ಮತ್ತು ಹುಡುಕಿ ತಿನ್ನುವುದರಿಂದ ಅವು ವಿವಿಧ ಕೀಟಗಳು ಮತ್ತು ಹಸಿರು [[ಎಲೆ|ಎಲೆಗಳನ್ನು]] ತಿನ್ನುತ್ತವೆ. ಅವುಗಳಿಗೆ ಕೃಷಿ ಮತ್ತು ಅಡುಗೆ ತ್ಯಾಜ್ಯವನ್ನೂ ತಿನ್ನಿಸಬಹುದು. ಈ ಪಕ್ಷಿಗಳು ಅನೇಕ ರೋಗಗಳಿಗೆ ನಿರೋಧಕವಾಗಿರುತ್ತವೆ, ಇದಕ್ಕೆ ಅಪವಾದವೆಂದರೆ ''ರಾನಿಖೇತ್ ಕಾಯಿಲೆ'' (ಇದನ್ನು [[:en:NewCastle Disease|ನ್ಯೂಕ್ಯಾಸಲ್ ಕಾಯಿಲೆ]] ಎಂದೂ ಕರೆಯುತ್ತಾರೆ). <ref>{{Cite journal|last=Chitra|date=2021|title=Socio-Economic Upliftment of Rural Women through Backyard Poultry Rearing by using Giriraja Birds|url=https://bioticapublications.com/journal-backend/articlePdf/7ed4d0bf3d.pdf|journal=Biotica Research Today|volume=3|issue=7|pages=563-565|access-date=2025-07-27|archive-date=2025-09-29|archive-url=https://web.archive.org/web/20250929163009/https://bioticapublications.com/journal-backend/articlePdf/7ed4d0bf3d.pdf|url-status=dead}}</ref>
== ಉಲ್ಲೇಖಗಳು ==
{{Interwikineeded}}
[[ವರ್ಗ:ಭಾರತದ ಕೋಳಿ ತಳಿಗಳು]]
lyoq2ucqrpqink6ffybzrrruk3lql2f
ಟರ್ಕಿಯಲ್ಲಿರುವ ವಿಮಾನ ನಿಲ್ದಾಣಗಳ ಪಟ್ಟಿ
0
177406
1379604
1348560
2026-08-09T10:51:30Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379604
wikitext
text/x-wiki
{{Interwikineeded}}
[[ವರ್ಗ:ವಿಕಿಪೀಡಿಯ ಏಷ್ಯನ್ ತಿಂಗಳು ೨೦೨೫ ಲೇಖನ]]
ಇದು [[ಟರ್ಕಿ]]ಯಲ್ಲಿರುವ [[ವಿಮಾನ ನಿಲ್ದಾಣ]]ಗಳ ಪಟ್ಟಿಯಾಗಿದೆ, ಸ್ಥಳದ ಪ್ರಕಾರ ವಿಂಗಡಿಸಲ್ಪಟ್ಟಿದೆ.
[[File:İstanbul Yeni Havalimanı airport Dec 2019.jpg|500px|thumb|[[ಇಸ್ತಾನ್ಬುಲ್ ವಿಮಾನ ನಿಲ್ದಾಣ]] ಜಗತ್ತಿನ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ]]
==ವಿಮಾನ ನಿಲ್ದಾಣಗಳು==
{| class="wikitable sortable"
|+
! ಪ್ರಾಂತ್ಯ
! [[ICAO airport code|ICAO]]
! [[IATA airport code|IATA]]
! ವಿಮಾನ ನಿಲ್ದಾಣದ ಹೆಸರು
! [[Geographic coordinates|ನಿರ್ದೇಶಾಂಕ]]
|-
| [[ಅಂಕಾರಾ]]
| LTAC
| ESB
| '''[[ಎಸೆನ್ಬೋಗಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ|ಅಂಕಾರಾ ಎಸೆನ್ಬೋಗಾ ವಿಮಾನ ನಿಲ್ದಾಣ]]'''
| {{nowrap|{{smaller|{{coord|40|07|41|N|32|59|42|E|region:TR_type:airport|name=ಎಸೆನ್ಬೋಗಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ}}}}}}
|-
| [[ಅಲಾನ್ಯಾ]]
| LTFG
| GZP
| '''[[ಅಲಾನ್ಯಾ ಗಜಿಪಾಶಾ ವಿಮಾನ ನಿಲ್ದಾಣ|ಗಜಿಪಾಶಾ ವಿಮಾನ ನಿಲ್ದಾಣ]]'''
| {{nowrap|{{smaller|{{coord|36.2993|32.3014|region:TR_type:airport|name=ಅಲಾನ್ಯಾ ಗಜಿಪಾಶಾ ವಿಮಾನ ನಿಲ್ದಾಣ}}}}}}
|-
| [[ಆಂಟಾಲ್ಯಾ]]
| LTAI
| AYT
| '''[[ಆಂಟಾಲ್ಯಾ ವಿಮಾನ ನಿಲ್ದಾಣ]]'''
| {{nowrap|{{smaller|{{coord|36|54|01|N|30|47|34|E|region:TR_type:airport|name=ಆಂಟಾಲ್ಯಾ ವಿಮಾನ ನಿಲ್ದಾಣ}}}}}}
|-
| [[ಬಾಲಿಕೇಸಿರ್]]
| LTFD
| EDO
| '''[[ಬಾಲಿಕೇಸಿರ್ ಕೋಸಾ ಸೇಯಿತ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|39|33|16|N|27|00|49|E|region:TR_type:airport|name=ಬಾಲಿಕೇಸಿರ್ ಕೋಸಾ ಸೇಯಿತ್}}}}}}
|-
| [[ಬುರ್ಸಾ]]
| LTBR
| YEI
| '''[[ಬುರ್ಸಾ ಯೆನಿಶೆಹಿರ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|40|15|18|N|29|33|45|E|region:TR_type:airport|name=ಯೆನಿಶೆಹಿರ್ ವಿಮಾನ ನಿಲ್ದಾಣ}}}}}}
|-
| [[ಡೆನಿಜ್ಲಿ]]
| LTAY
| DNZ
| '''[[ಡೆನಿಜ್ಲಿ ಚಾರ್ಡಕ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|37|47|08|N|29|42|04|E|region:TR_type:airport|name=ಡೆನಿಜ್ಲಿ ಚಾರ್ಡಕ್ ವಿಮಾನ ನಿಲ್ದಾಣ}}}}}}
|-
| [[ಡಿಯಾರ್ಬಕಿರ್]]
| LTCC
| DIY
| '''[[ಡಿಯಾರ್ಬಕಿರ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|37|53|38|N|40|12|03|E|region:TR_type:airport|name=ಡಿಯಾರ್ಬಕಿರ್ ವಿಮಾನ ನಿಲ್ದಾಣ}}}}}}
|-
| [[ಎಲಾಜಿಗ್]]
| LTCA
| EZS
| '''[[ಎಲಾಜಿಗ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|38|36|24|N|39|17|29|E|region:TR_type:airport|name=ಎಲಾಜಿಗ್ ವಿಮಾನ ನಿಲ್ದಾಣ}}}}}}
|-
| [[ಎರ್ಜುರುಮ್]]
| LTCE
| ERZ
| '''[[ಎರ್ಜುರುಮ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|39|57|19|N|41|10|09|E|region:TR_type:airport|name=ಎರ್ಜುರುಮ್ ವಿಮಾನ ನಿಲ್ದಾಣ}}}}}}
|-
| [[ಎಸ್ಕಿಶೆಹಿರ್]]
| LTBY
| AOE
| '''[[ಎಸ್ಕಿಶೆಹಿರ್ ಅನಟೋಲಿಯಾ ವಿಮಾನ ನಿಲ್ದಾಣ|ಎಸ್ಕಿಶೆಹಿರ್ ಹಸನ್ ಪೋಲಟ್ಕಾನ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|39|48|36|N|30|31|10|E|region:TR_type:airport|name=ಅನಟೋಲಿಯಾ ವಿಮಾನ ನಿಲ್ದಾಣ}}}}}}
|-
| [[ಗಜಿಯಾಂಟೆಪ್]]
| LTAJ
| GZT
| '''[[ಓಗುಜೆಲಿ ವಿಮಾನ ನಿಲ್ದಾಣ|ಗಜಿಯಾಂಟೆಪ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|36|56|52|N|37|28|44|E|region:TR_type:airport|name=ಗಜಿಯಾಂಟೆಪ್ ಓಗುಜೆಲಿ ವಿಮಾನ ನಿಲ್ದಾಣ}}}}}}
|-
| [[ಹತಾಯ್]]
| LTDA
| HTY
| '''[[ಹತಾಯ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|36|21|46|N|36|16|56|E|region:TR_type:airport|name=ಹತಾಯ್ ವಿಮಾನ ನಿಲ್ದಾಣ}}}}}}
|-
| [[ಇಸ್ಪಾರ್ಟಾ]]
| LTFC
| ISE
| '''[[ಇಸ್ಪಾರ್ಟಾ ಸುಲೇಮಾನ್ ಡೆಮಿರೆಲ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|37|51|54|N|30|22|55|E|region:TR_type:airport|name=ಇಸ್ಪಾರ್ಟಾ ಸುಲೇಮಾನ್ ಡೆಮಿರೆಲ್ ವಿಮಾನ ನಿಲ್ದಾಣ}}}}}}
|-
| [[ಇಸ್ತಾನ್ಬುಲ್]]
| LTFM
| IST
| '''[[ಇಸ್ತಾನ್ಬುಲ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|41|15|46|N|28|44|28|E|region:TR_type:airport|name=ಇಸ್ತಾನ್ಬುಲ್ ನ್ಯೂ ವಿಮಾನ ನಿಲ್ದಾಣ}}}}}}
|-
| [[ಇಸ್ತಾನ್ಬುಲ್]]
| LTFJ
| SAW
| '''[[ಸಬಿಹಾ ಗೋಕ್ಚೆನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ|ಇಸ್ತಾನ್ಬುಲ್ ಸಬಿಹಾ ಗೋಕ್ಚೆನ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|40|53|54|N|29|18|33|E|region:TR_type:airport|name=ಸಬಿಹಾ ಗೋಕ್ಚೆನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ}}}}}}
|-
| [[ಇಜ್ಮಿರ್]]
| LTBJ
| ADB
| '''[[ಅದ್ನಾನ್ ಮೆಂಡೆರೆಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ|ಇಜ್ಮಿರ್ ಅದ್ನಾನ್ ಮೆಂಡೆರೆಸ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|38|17|21|N|27|09|18|E|region:TR_type:airport|name=ಇಜ್ಮಿರ್ ಅದ್ನಾನ್ ಮೆಂಡೆರೆಸ್ ವಿಮಾನ ನಿಲ್ದಾಣ}}}}}}
|-
| [[ಕಾರ್ಸ್]]
| LTCF
| KSY
| '''[[ಕಾರ್ಸ್ ಹರಕಾನಿ ವಿಮಾನ ನಿಲ್ದಾಣ]]'''
| {{nowrap|{{smaller|{{coord|40|33|44|N|43|06|54|E|region:TR_type:airport|name=ಕಾರ್ಸ್ ವಿಮಾನ ನಿಲ್ದಾಣ}}}}}}
|-
| [[ಕಯ್ಸೇರಿ]]
| LTAU
| ASR
| '''[[ಕಯ್ಸೇರಿ ವಿಮಾನ ನಿಲ್ದಾಣ]]'''
| {{nowrap|{{smaller|{{coord|38|46|13|N|35|29|43|E|region:TR_type:airport|name=ಎರ್ಕಿಲೆಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ}}}}}}
|-
| [[ಕೊಕಾಲಿ ಪ್ರಾಂತ್ಯ|ಕೊಕಾಲಿ]]
| LTBQ
| KCO
| '''[[ಕೊಕಾಲಿ ಸೆಂಗಿಜ್ ಟೋಪೆಲ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|40|44|06|N|30|05|00|E|region:TR_type:airport|name=ಕೊಕಾಲಿ ಸೆಂಗಿಜ್ ಟೋಪೆಲ್ ವಿಮಾನ ನಿಲ್ದಾಣ}}}}}}
|-
| [[ಕೋನ್ಯಾ]]
| LTAN
| KYA
| '''[[ಕೋನ್ಯಾ ವಿಮಾನ ನಿಲ್ದಾಣ]]'''
| {{nowrap|{{smaller|{{coord|37|58|44|N|32|33|42|E|region:TR_type:airport|name=ಕೋನ್ಯಾ ವಿಮಾನ ನಿಲ್ದಾಣ}}}}}}
|-
| [[ಕುಟಾಹ್ಯಾ]]
| LTBZ
| KZR
| '''[[ಜಾಫರ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|39|06|41|N|30|07|47|E|region:TR_type:airport|name=ಜಾಫರ್ ವಿಮಾನ ನಿಲ್ದಾಣ}}}}}}
|-
| [[ಮಲಾಟ್ಯಾ]]
| LTAT
| MLX
| '''[[ಮಲಾಟ್ಯಾ ವಿಮಾನ ನಿಲ್ದಾಣ]]'''
| {{nowrap|{{smaller|{{coord|38|26|07|N|38|05|27|E|region:TR_type:airport|name=ಮಲಾಟ್ಯಾ ಎರ್ಹಾಚ್ ವಿಮಾನ ನಿಲ್ದಾಣ}}}}}}
|-
| [[ಮೆರ್ಸಿನ್]]
| LTDB
| COV
|'''[[ಚುಕುರೋವಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ]]'''
| {{nowrap|{{smaller|{{coord|36|53|49|N|35|04|03|E|region:TR_type:airport|name=ಚುಕುರೋವಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ}}}}}}
|-
| [[ಮುಗ್ಲಾ]]
| LTBS
| DLM
| '''[[ಡಾಲಮನ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|36|42|53|N|28|47|34|E|region:TR_type:airport|name=ಡಾಲಮನ್ ವಿಮಾನ ನಿಲ್ದಾಣ}}}}}}
|-
| [[ಮುಗ್ಲಾ]]
| LTFE
| BJV
| '''[[ಮಿಲಾಸ್–ಬೋಡ್ರಮ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|37|15|02|N|27|39|51|E|region:TR_type:airport|name=ಮಿಲಾಸ್–ಬೋಡ್ರಮ್ ವಿಮಾನ ನಿಲ್ದಾಣ}}}}}}
|-
| [[ನೆವ್ಶೆಹಿರ್]]
| LTAZ
| NAV
| '''[[ನೆವ್ಶೆಹಿರ್ ಕಪಾದೋಕ್ಯಾ ವಿಮಾನ ನಿಲ್ದಾಣ]]'''
| {{nowrap|{{smaller|{{coord|38|46|08|N|34|31|35|E|region:TR_type:airport|name=ನೆವ್ಶೆಹಿರ್ ಕಪಾದೋಕ್ಯಾ ವಿಮಾನ ನಿಲ್ದಾಣ}}}}}}
|-
| [[ಒರ್ಡು]]
| LTCB
| OGU
| '''[[ಒರ್ಡು-ಗಿರೆಸುನ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|40|58|05|N|38|04|35|E|region:TR_type:airport|name=}}}}}}
|-
| [[ರಿಜೆ]]
| LTFO
| RZV
| '''[[ರಿಜೆ-ಆರ್ಟ್ವಿನ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|41|10|09|N|40|49|44|E|region:TR_type:airport|name=ರಿಜೆ-ಆರ್ಟ್ವಿನ್ ವಿಮಾನ ನಿಲ್ದಾಣ}}}}}}
|-
| [[ಸಮ್ಸುನ್]]
| LTFH
| SZF
| '''[[ಸಮ್ಸುನ್-ಚರ್ಶಾಂಬಾ ವಿಮಾನ ನಿಲ್ದಾಣ]]'''
| {{nowrap|{{smaller|{{coord|41|15|56|N|36|32|55|E|region:TR_type:airport|name=ಸಮ್ಸುನ್-ಚರ್ಶಾಂಬಾ ವಿಮಾನ ನಿಲ್ದಾಣ}}}}}}
|-
| [[ಸಿನೋಪ್, ಟರ್ಕಿ|ಸಿನೋಪ್]]
| LTCM
| NOP
| '''[[ಸಿನೋಪ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|42|00|57|N|35|03|59|E|region:TR_type:airport|name=ಸಿನೋಪ್ ವಿಮಾನ ನಿಲ್ದಾಣ}}}}}}
|-
| [[ಸಿವಾಸ್]]
| LTAR
| VAS
| '''[[ಸಿವಾಸ್ ವಿಮಾನ ನಿಲ್ದಾಣ|ಸಿವಾಸ್ ನೂರಿ ಡೆಮಿರಾಗ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|39|76|00|N|37|01|00|E|region:TR_type:airport|name=ಸಿವಾಸ್ ವಿಮಾನ ನಿಲ್ದಾಣ}}}}}}
|-
| [[ಶಾನ್ಲಿಯುರ್ಫಾ]]
| LTCS
| GNY
| '''[[ಶಾನ್ಲಿಯುರ್ಫಾ GAP ವಿಮಾನ ನಿಲ್ದಾಣ]]'''
| {{nowrap|{{smaller|{{coord|37|27|00|N|38|54|00|E|type:airport|display=inline,title|name=ಶಾನ್ಲಿಯುರ್ಫಾ GAP ವಿಮಾನ ನಿಲ್ದಾಣ}}}}}}
|-
| [[ಟೆಕಿರ್ದಾಗ್]]
| LTBU
| TEQ
| '''[[ಟೆಕಿರ್ದಾಗ್ ಚೋರ್ಲು ವಿಮಾನ ನಿಲ್ದಾಣ]]'''
| {{nowrap|{{smaller|{{coord|41|08|18|N|27|55|09|E|region:TR_type:airport|name=ಟೆಕಿರ್ದಾಗ್ ಚೋರ್ಲು ವಿಮಾನ ನಿಲ್ದಾಣ}}}}}}
|-
| [[ಟ್ರಾಬ್ಜೋನ್]]
| LTCG
| TZX
| '''[[ಟ್ರಾಬ್ಜೋನ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|40.9951|39.7897|region:TR_type:airport|name=ಟ್ರಾಬ್ಜೋನ್ ವಿಮಾನ ನಿಲ್ದಾಣ}}}}}}
|-
| [[ವಾನ್, ಟರ್ಕಿ|ವಾನ್]]
| LTCI
| VAN
| '''[[ವಾನ್ ಫೆರಿತ್ ಮೆಲೆನ್ ವಿಮಾನ ನಿಲ್ದಾಣ]]'''
| {{nowrap|{{smaller|{{coord|38|28|06|N|43|19|56|E|region:TR_type:airport|name=ವಾನ್ ಫೆರಿತ್ ಮೆಲೆನ್ ವಿಮಾನ ನಿಲ್ದಾಣ}}}}}}
|-
| [[ಜೊಂಗುಲ್ಡಕ್]]
| LTAS
| ONQ
| '''[[ಜೊಂಗುಲ್ಡಕ್ ವಿಮಾನ ನಿಲ್ದಾಣ|ಜೊಂಗುಲ್ಡಕ್ ಚಾಯ್ಜುಮಾ ವಿಮಾನ ನಿಲ್ದಾಣ]]'''
| {{nowrap|{{smaller|{{coord|41.5064|32.0886|region:TR_type:airport|name=ಜೊಂಗುಲ್ಡಕ್ ವಿಮಾನ ನಿಲ್ದಾಣ}}}}}}
|-
! colspan="5" | ದೇಶೀಯ ವಿಮಾನ ನಿಲ್ದಾಣಗಳು
|-
| [[ಅಡಿಯಮನ್]]
| LTCP
| ADF
| [[ಅಡಿಯಮನ್ ವಿಮಾನ ನಿಲ್ದಾಣ]]
| {{nowrap|{{smaller|{{coord|37|73|54|N|38|28|08|E|region:TR_type:airport|name=ಅಡಿಯಮನ್ ವಿಮಾನ ನಿಲ್ದಾಣ}}}}}}
|-
| [[ಅಗ್ರಿ]]
| LTCO
| AJI
| [[ಅಗ್ರಿ ವಿಮಾನ ನಿಲ್ದಾಣ|ಅಗ್ರಿ ಅಹ್ಮದ್-ಇ ಹಾನಿ ವಿಮಾನ ನಿಲ್ದಾಣ]]
| {{nowrap|{{smaller|{{coord|39|59|16|N|43|01|38|E|region:TR_type:airport|name=ಅಗ್ರಿ ವಿಮಾನ ನಿಲ್ದಾಣ}}}}}}
|-
| [[ಅಮಸ್ಯಾ]]
| LTAP
| MZH
| [[ಅಮಸ್ಯಾ ಮೆರ್ಜಿಫೋನ್ ವಿಮಾನ ನಿಲ್ದಾಣ]]
| {{nowrap|{{smaller|{{coord|40|29|45|N|35|31|19|E|region:TR_type:airport|name=ಅಮಸ್ಯಾ ಮೆರ್ಜಿಫೋನ್ ವಿಮಾನ ನಿಲ್ದಾಣ}}}}}}
|-
| [[ಅಯ್ಡಿನ್]]
| LTBD
| CII
| ''[[ಅಯ್ಡಿನ್ ವಿಮಾನ ನಿಲ್ದಾಣ|ಅಯ್ಡಿನ್ ಚಿಲ್ದಿರ್ ವಿಮಾನ ನಿಲ್ದಾಣ]]''
| {{nowrap|{{smaller|{{coord|37|48|54|N|27|89|21|E|region:TR_type:airport|name=ಅಯ್ಡಿನ್ ವಿಮಾನ ನಿಲ್ದಾಣ}}}}}}
|-
| [[ಬಾಲಿಕೇಸಿರ್]]
| LTBF
| BZI
| ''[[ಬಾಲಿಕೇಸಿರ್ ವಿಮಾನ ನಿಲ್ದಾಣ|ಬಾಲಿಕೇಸಿರ್ ಮೆರ್ಕೆಜ್ ವಿಮಾನ ನಿಲ್ದಾಣ]]''
| {{nowrap|{{smaller|{{coord|39|37|09|N|27|55|33|E|region:TR_type:airport|name=ಬಾಲಿಕೇಸಿರ್ ವಿಮಾನ ನಿಲ್ದಾಣ}}}}}}
|-
| [[ಬಾಟ್ಮನ್, ಟರ್ಕಿ|ಬಾಟ್ಮನ್]]
| LTCJ
| BAL
| [[ಬಾಟ್ಮನ್ ವಿಮಾನ ನಿಲ್ದಾಣ]]
| {{nowrap|{{smaller|{{coord|37|55|56|N|41|06|59|E|region:TR_type:airport|name=ಬಾಟ್ಮನ್ ವಿಮಾನ ನಿಲ್ದಾಣ}}}}}}
|-
| [[ಬಿಂಗೋಲ್]]
| LTCU
| BGG
| [[ಬಿಂಗೋಲ್ ವಿಮಾನ ನಿಲ್ದಾಣ]]
| {{nowrap|{{smaller|{{coord|38|51|36|N|40|35|38|E|region:TR_type:airport|name=ಬಿಂಗೋಲ್ ವಿಮಾನ ನಿಲ್ದಾಣ}}}}}}
|-
| [[ಚನಕ್ಕಲೆ]]
| LTBH
| CKZ
| [[ಚನಕ್ಕಲೆ ವಿಮಾನ ನಿಲ್ದಾಣ]]
| {{nowrap|{{smaller|{{coord|40|08|15|N|26|25|36|E|region:TR_type:airport|name=ಚನಕ್ಕಲೆ ವಿಮಾನ ನಿಲ್ದಾಣ}}}}}}
|-
| [[ಚನಕ್ಕಲೆ]]
| LTFK
| GKD
| ''[[ಗೋಕ್ಚೆದಾ ವಿಮಾನ ನಿಲ್ದಾಣ]]''
| {{nowrap|{{smaller|{{coord|40|12|04|N|25|52|56|E|region:TR_type:airport|name=ಗೋಕ್ಚೆದಾ ವಿಮಾನ ನಿಲ್ದಾಣ}}}}}}
|-
| [[ಎರ್ಜಿನ್ಕಾನ್]]
| LTCD
| ERC
| [[ಎರ್ಜಿನ್ಕಾನ್ ವಿಮಾನ ನಿಲ್ದಾಣ]]
| {{nowrap|{{smaller|{{coord|39|72|36|N|39|31|37|E|region:TR_type:airport|name=ಎರ್ಜಿನ್ಕಾನ್ ವಿಮಾನ ನಿಲ್ದಾಣ}}}}}}
|-
| [[ಹಕ್ಕಾರಿ (ನಗರ)|ಹಕ್ಕಾರಿ]]
| LTCW
| YKO
| [[ಹಕ್ಕಾರಿ–ಯುಕ್ಸೆಕೋವಾ ವಿಮಾನ ನಿಲ್ದಾಣ|ಹಕ್ಕಾರಿ–ಯುಕ್ಸೆಕೋವಾ ಸೆಲಾಹದ್ದೀನ್ ಐಯೂಬಿ ವಿಮಾನ ನಿಲ್ದಾಣ]]
| {{nowrap|{{smaller|{{coord|37|53|6|N|44|14|01|E|region:TR_type:airport|name=ಹಕ್ಕಾರಿ–ಯುಕ್ಸೆಕೋವಾ ವಿಮಾನ ನಿಲ್ದಾಣ}}}}}}
|-
| [[ಇಗ್ದಿರ್]]
| LTCT
| IGD
| [[ಇಗ್ದಿರ್ ವಿಮಾನ ನಿಲ್ದಾಣ]]
| {{nowrap|{{smaller|{{coord|39|98|59|N|43|51|59|E|region:TR_type:airport|name=ಇಗ್ದಿರ್ ವಿಮಾನ ನಿಲ್ದಾಣ}}}}}}
|-
| [[ಇಸ್ತಾನ್ಬುಲ್]]
| LTBW
| –
| ''[[ಇಸ್ತಾನ್ಬುಲ್ ಹೆಜಾರ್ಫೆನ್ ವಿಮಾನ ನಿಲ್ದಾಣ]]''
| {{nowrap|{{smaller|{{coord|41|06|16|N|28|53|00|E|region:TR_type:airport|name=ಇಸ್ತಾನ್ಬುಲ್ ಹೆಜಾರ್ಫೆನ್ ವಿಮಾನ ನಿಲ್ದಾಣ}}}}}}
|-
| [[ಇಜ್ಮಿರ್]]
| LTFB
| –
| ''[[ಸೆಲ್ಚುಕ್–ಎಫೆಸ್ ವಿಮಾನ ನಿಲ್ದಾಣ]]''
| {{nowrap|{{smaller|{{coord|37|57|02|N|27|39|45|E|region:TR_type:airport|name=ಸೆಲ್ಚುಕ್–ಎಫೆಸ್ ವಿಮಾನ ನಿಲ್ದಾಣ}}}}}}
|-
| [[ಕಹ್ರಮನ್ಮರಾಸ್]]
| LTCN
| KCM
| [[ಕಹ್ರಮನ್ಮರಾಸ್ ವಿಮಾನ ನಿಲ್ದಾಣ]]
| {{nowrap|{{smaller|{{coord|37|32|20|N|36|57|12|E|region:TR_type:airport|name=ಕಹ್ರಮನ್ಮರಾಸ್ ವಿಮಾನ ನಿಲ್ದಾಣ}}}}}}
|-
| [[ಕಸ್ತಮೋನು]]
| LTAL
| KFS
| [[ಕಸ್ತಮೋನು ವಿಮಾನ ನಿಲ್ದಾಣ]]
| {{nowrap|{{smaller|{{coord|41.3138|33.7949|region:TR_type:airport|name=ಕಸ್ತಮೋನು ವಿಮಾನ ನಿಲ್ದಾಣ}}}}}}
|-
| [[ಮಾರ್ಡಿನ್]]
| LTCR
| MQM
| [[ಮಾರ್ಡಿನ್ ವಿಮಾನ ನಿಲ್ದಾಣ]]
| {{nowrap|{{smaller|{{coord|37|23|58|N|40|38|26|E|region:TR_type:airport|name=ಮಾರ್ಡಿನ್ ವಿಮಾನ ನಿಲ್ದಾಣ}}}}}}
|-
| [[ಮುಶ್]]
| LTCK
| MSR
| [[ಮುಶ್ ವಿಮಾನ ನಿಲ್ದಾಣ]]
| {{nowrap|{{smaller|{{coord|38|44|41|N|41|59|14|E|region:TR_type:airport|name=ಮುಶ್ ವಿಮಾನ ನಿಲ್ದಾಣ}}}}}}
|-
| [[ಸೀರ್ಟ್]]
| LTCL
| SXZ
| [[ಸೀರ್ಟ್ ವಿಮಾನ ನಿಲ್ದಾಣ]]
| {{nowrap|{{smaller|{{coord|37|98|00|N|41|50|00|E|region:TR_type:airport|name=ಸೀರ್ಟ್ ವಿಮಾನ ನಿಲ್ದಾಣ}}}}}}
|-
| [[ಶಿರ್ನಾಕ್]]
| LTCV
| NKT
| [[ಶಿರ್ನಾಕ್ ವಿಮಾನ ನಿಲ್ದಾಣ|ಶಿರ್ನಾಕ್ ಶೆರಾಫೆಟ್ಟಿನ್ ಎಲ್ಚಿ ವಿಮಾನ ನಿಲ್ದಾಣ]]
| {{nowrap|{{smaller|{{coord|37|51|48|N|42|03|35|E|region:TR_type:airport|name=ಶಿರ್ನಾಕ್ ವಿಮಾನ ನಿಲ್ದಾಣ}}}}}}
|-
| [[ಟೊಕಾಟ್]]
| LTAW
| TJK
| [[ಟೊಕಾಟ್ ವಿಮಾನ ನಿಲ್ದಾಣ]]
| {{nowrap|{{smaller|{{coord|40|38|42|N|36|22|25|E|region:TR_type:airport|name=ಟೊಕಾಟ್ ವಿಮಾನ ನಿಲ್ದಾಣ}}}}}}
|-
| [[ಉಶಾಕ್]]
| LTBO
| USQ
| [[ಉಶಾಕ್ ವಿಮಾನ ನಿಲ್ದಾಣ]]
| {{nowrap|{{smaller|{{coord|38.6796|29.4816|region:TR_type:airport|name=ಉಶಾಕ್ ವಿಮಾನ ನಿಲ್ದಾಣ}}}}}}
|-
! colspan="5" | ಮಿಲಿಟರಿ ವಿಮಾನ ನಿಲ್ದಾಣಗಳು
|-
| [[ಅಡಾನಾ]]
| LTAG
| UAB<ref>{{cite web|url=http://www.iata.org/publications/Pages/code-search.aspx|title=ಏರ್ಲೈನ್ ಮತ್ತು ಏರ್ಪೋರ್ಟ್ ಕೋಡ್ ಸರ್ಚ್| publisher=[[ಅಂತರರಾಷ್ಟ್ರೀಯ ವಿಮಾನ ಸಾರಿಗೆ ಸಂಘ|IATA]]|access-date=18 ಅಕ್ಟೋಬರ್ 2015}}</ref>
| [[ಇನ್ಸಿರ್ಲಿಕ್ ಏರ್ ಬೇಸ್]]
| {{nowrap|{{smaller|{{coord|37|00|07|N|35|25|33|E|region:TR_type:airport|name=ಇನ್ಸಿರ್ಲಿಕ್ ಏರ್ ಬೇಸ್}}}}}}
|-
| [[ಅಫ್ಯೋನ್]]
| LTAH
| AFY
| [[ಅಫ್ಯೋನ್ ವಿಮಾನ ನಿಲ್ದಾಣ]]
| {{nowrap|{{smaller|{{coord|38|73|35|N|30|36|04|E|region:TR_type:airport|name=}}}}}}
|-
| [[ಅಮಸ್ಯಾ]]
| LTAP
| MZH
| [[ಮೆರ್ಜಿಫೋನ್ ಏರ್ ಬೇಸ್]]
| {{nowrap|{{smaller|{{coord|40|29|45|N|35|31|19|E|region:TR_type:airport|name=ಮೆರ್ಜಿಫೋನ್ ಏರ್ ಬೇಸ್}}}}}}
|-
| [[ಅಂಕಾರಾ]]
| LTAD
| ANK
| [[ಎಟಿಮೆಸ್ಗುಟ್ ಏರ್ ಬೇಸ್]]
| {{nowrap|{{smaller|{{coord|39|96|59|N|32|41|19|E|region:TR_type:airport|name=ಎಟಿಮೆಸ್ಗುಟ್ ಏರ್ ಬೇಸ್}}}}}}
|-
| [[ಅಂಕಾರಾ]]
| LTAB
| –
| [[ಗುವೆರ್ಚಿನ್ಲಿಕ್ ಆರ್ಮಿ ಏರ್ ಬೇಸ್]]
| {{nowrap|{{smaller|{{coord|39|96|05|N|32|74|26|E|region:TR_type:airport|name=ಗುವೆರ್ಚಿನ್ಲಿಕ್ ಆರ್ಮಿ ಏರ್ ಬೇಸ್}}}}}}
|-
| [[ಅಂಕಾರಾ]]
| LTAE
| –
| [[ಮುರ್ಟೆಡ್ ಏರ್ ಬೇಸ್]]
| {{nowrap|{{smaller|{{coord|40|74|44|N|32|53|56|E|region:TR_type:airport|name=ಮುರ್ಟೆಡ್ ಏರ್ ಬೇಸ್}}}}}}
|-
| [[ಬಾಲಿಕೇಸಿರ್]]
| LTBF
| BZI
| [[ಬಾಲಿಕೇಸಿರ್ ವಿಮಾನ ನಿಲ್ದಾಣ|ಬಾಲಿಕೇಸಿರ್ ಏರ್ ಬೇಸ್]]
| {{nowrap|{{smaller|{{coord|39|37|09|N|27|55|33|E|region:TR_type:airport|name=ಬಾಲಿಕೇಸಿರ್ ವಿಮಾನ ನಿಲ್ದಾಣ}}}}}}
|-
| [[ಬಾಲಿಕೇಸಿರ್]]
| LTBG
| BDM
| [[ಬಂದಿರ್ಮಾ ವಿಮಾನ ನಿಲ್ದಾಣ|ಬಂದಿರ್ಮಾ ಏರ್ ಬೇಸ್]]
| {{nowrap|{{smaller|{{coord|40|39|04|N|27|98|39|E|region:TR_type:airport|name=ಬಂದಿರ್ಮಾ ವಿಮಾನ ನಿಲ್ದಾಣ}}}}}}
|-
| [[ಬುರ್ಸಾ]]
| LTBE
| -
| [[ಬುರ್ಸಾ ಯುನುಸೆಲಿ ವಿಮಾನ ನಿಲ್ದಾಣ]]
| {{nowrap|{{smaller|{{coord|40|23|50|N|29|00|40|E|region:TR_type:airport|name=ಬುರ್ಸಾ ಯುನುಸೆಲಿ ವಿಮಾನ ನಿಲ್ದಾಣ}}}}}}
|-
| [[ಡಿಯಾರ್ಬಕಿರ್]]
| LTCC
| DIY
| [[ಡಿಯಾರ್ಬಕಿರ್ ವಿಮಾನ ನಿಲ್ದಾಣ|ಡಿಯಾರ್ಬಕಿರ್ ಏರ್ ಬೇಸ್]]
| {{nowrap|{{smaller|{{coord|37|89|38|N|40|12|03|E|region:TR_type:airport|name=ಡಿಯಾರ್ಬಕಿರ್ ವಿಮಾನ ನಿಲ್ದಾಣ}}}}}}
|-
| [[ಎಡಿರ್ನೆ]]
| LTFL
| –
| [[ಕೆಶಾನ್ ಆರ್ಮಿ ಏರ್ ಬೇಸ್]]
| {{nowrap|{{smaller|{{coord|40|97|14|N|26|36|24|E|region:TR_type:airport|name=ಕೆಶಾನ್ ಏರ್ ಬೇಸ್}}}}}}
|-
| [[ಎಸ್ಕಿಶೆಹಿರ್]]
| LTBI
| ESK
| [[ಎಸ್ಕಿಶೆಹಿರ್ ವಿಮಾನ ನಿಲ್ದಾಣ|ಎಸ್ಕಿಶೆಹಿರ್ ಏರ್ ಬೇಸ್]]
| {{nowrap|{{smaller|{{coord|39|97|02|N|30|74|55|E|region:TR_type:airport|name=ಎಸ್ಕಿಶೆಹಿರ್ ವಿಮಾನ ನಿಲ್ದಾಣ}}}}}}
|-
| [[ಎಸ್ಕಿಶೆಹಿರ್]]
| LTAV
| –
| [[ಸಿವ್ರಿಹಿಸಾರ್ ಏರ್ ಬೇಸ್]]
| {{nowrap|{{smaller|{{coord|39|57|05|N|31|51|55|E|region:TR_type:airport|name=ಸಿವ್ರಿಹಿಸಾರ್ ಏರ್ ಬೇಸ್}}}}}}
|-
| [[ಇಸ್ತಾನ್ಬುಲ್]]
| LTBX
| –
| [[ಇಸ್ತಾನ್ಬುಲ್ ಸಮಂದಿರಾ ಆರ್ಮಿ ಏರ್ ಬೇಸ್]]
| {{nowrap|{{smaller|{{coord|40|99|34|N|29|22|56|E|region:TR_type:airport|name=ಸಮಂದಿರಾ ಆರ್ಮಿ ಏರ್ ಬೇಸ್}}}}}}
|-
| [[ಇಜ್ಮಿರ್]]
| LTBL
| IGL
| [[ಚಿಗ್ಲಿ ಏರ್ ಬೇಸ್]]
| {{nowrap|{{smaller|{{coord|38|50|46|N|27|00|36|E|region:TR_type:airport|name=ಚಿಗ್ಲಿ ಏರ್ ಬೇಸ್}}}}}}
|-
| [[ಇಜ್ಮಿರ್]]
| LTBK
| –
| [[ಗಜಿಯೆಮಿರ್ ಏರ್ ಬೇಸ್|ಗಜಿಯೆಮಿರ್ ಆರ್ಮಿ ಏರ್ ಬೇಸ್]]
| {{nowrap|{{smaller|{{coord|38|59|08|N|27|39|33|E|region:TR_type:airport|name=ಗಜಿಯೆಮಿರ್ ಏರ್ ಬೇಸ್}}}}}}
|-
| [[ಇಜ್ಮಿರ್]]
| LTFA
| –
| [[ಕಕ್ಲಿಚ್ ಏರ್ ಬೇಸ್]]
| {{nowrap|{{smaller|{{coord|38|51|26|N|26|98|28|E|region:TR_type:airport|name=ಕಕ್ಲಿಚ್ ಏರ್ ಬೇಸ್}}}}}}
|-
| [[ಕಯ್ಸೇರಿ]]
| LTAU
| ASR
| [[ಎರ್ಕಿಲೆಟ್ ಏರ್ ಬೇಸ್]]
| {{nowrap|{{smaller|{{coord|38|76|13|N|35|49|43|E|region:TR_type:airport|name=ಎರ್ಕಿಲೆಟ್ ಏರ್ ಬೇಸ್}}}}}}
|-
| [[ಇಜ್ಮಿತ್|ಕೊಕಾಲಿ]]
| LTBQ
| KCO
| [[ಸೆಂಗಿಜ್ ಟೋಪೆಲ್ ನೌಕಾ ವಿಮಾನ ನಿಲ್ದಾಣ]]
| {{nowrap|{{smaller|{{coord|40|74|06|N|30|05|00|E|region:TR_type:airport|name=ಸೆಂಗಿಜ್ ಟೋಪೆಲ್ ನೌಕಾ ವಿಮಾನ ನಿಲ್ದಾಣ}}}}}}
|-
| [[ಕೋನ್ಯಾ]]
| LTAN
| KYA
| [[ಕೋನ್ಯಾ ಏರ್ ಬೇಸ್]]
| {{nowrap|{{smaller|{{coord|37|98|44|N|32|53|42|E|region:TR_type:airport|name=ಕೋನ್ಯಾ ಏರ್ ಬೇಸ್}}}}}}
|-
| [[ಕುಟಾಹ್ಯಾ]]
| LTBN
| –
| [[ಕುಟಾಹ್ಯಾ ಏರ್ ಬೇಸ್]]
| {{nowrap|{{smaller|{{coord|39|45|36|N|30|01|00|E|region:TR_type:airport|name=ಕುಟಾಹ್ಯಾ ಏರ್ ಬೇಸ್}}}}}}
|-
| [[ಮಲಾಟ್ಯಾ]]
| LTAT
| MLX
| [[ಎರ್ಹಾಚ್ ಏರ್ ಬೇಸ್]]
| {{nowrap|{{smaller|{{coord|38|46|07|N|38|05|27|E|region:TR_type:airport|name=ಎರ್ಹಾಚ್ ಏರ್ ಬೇಸ್}}}}}}
|-
| [[ಮಲಾಟ್ಯಾ]]
| LTAO
| –
| [[ಮಲಾಟ್ಯಾ ತುಲ್ಗಾ ಆರ್ಮಿ ಏರ್ ಬೇಸ್]]
| {{nowrap|{{smaller|{{coord|38|51|14|N|38|35|14|E|region:TR_type:airport|name=ಮಲಾಟ್ಯಾ ತುಲ್ಗಾ ಏರ್ ಬೇಸ್}}}}}}
|-
| [[ಮನಿಸಾ]]
| LTBT
| –
| [[ಅಖಿಸಾರ್ ಏರ್ ಬೇಸ್]]
| {{nowrap|{{smaller|{{coord|38|48|34|N|27|50|06|E|region:TR_type:airport|name=ಅಖಿಸಾರ್ ಏರ್ ಬೇಸ್}}}}}}
|-
| [[ಮುಗ್ಲಾ]]
| LTBV
| BXN
| [[ಬೋಡ್ರಮ್-ಇಮ್ಸಿಕ್ ವಿಮಾನ ನಿಲ್ದಾಣ]]
| {{nowrap|{{smaller|{{coord|37|18|25|N|27|60|11|E|region:TR_type:airport|name=ಬೋಡ್ರಮ್-ಇಮ್ಸಿಕ್ ವಿಮಾನ ನಿಲ್ದಾಣ}}}}}}
|-
| [[ಯಲೋವಾ]]
| LTBP
| –
| [[ಯಲೋವಾ ಏರ್ ಬೇಸ್]]
| {{nowrap|{{smaller|{{coord|40|71|02|N|29|32|34|E|region:TR_type:airport|name=ಯಲೋವಾ ಏರ್ ಬೇಸ್}}}}}}
|-
! colspan="5" | ನಿಷ್ಕ್ರಿಯ ವಿಮಾನ ನಿಲ್ದಾಣಗಳು
|-
| [[ಅಡಾನಾ]]
| LTAF
| ADA
| [[ಅಡಾನಾ ವಿಮಾನ ನಿಲ್ದಾಣ]]
| {{nowrap|{{smaller|{{coord|36|98|55|N|35|36|49|E|region:TR_type:airport|name=ಅಡಾನಾ ವಿಮಾನ ನಿಲ್ದಾಣ}}}}}}
|-
| [[ಹತಾಯ್]]
| LTAK
| –
| [[ಇಸ್ಕೆಂದೆರುನ್ ವಿಮಾನ ನಿಲ್ದಾಣ]]
| {{nowrap|{{smaller|{{coord|36|74|28|N|36|39|12|E|region:TR_type:airport|name=ಇಸ್ಕೆಂದೆರುನ್ ವಿಮಾನ ನಿಲ್ದಾಣ}}}}}}
|-
| [[ಇಸ್ತಾನ್ಬುಲ್]]
| LTBA
| ISL
| [[ಅತಾತುರ್ಕ್ ವಿಮಾನ ನಿಲ್ದಾಣ]]
| {{nowrap|{{smaller|{{coord|40|98|34|N|28|48|51|E|region:TR_type:airport|name=ಅತಾತುರ್ಕ್ ವಿಮಾನ ನಿಲ್ದಾಣ}}}}}}
|-
| [[ಸಮ್ಸುನ್]]
| LTAQ
| SSX
| [[ಸಮ್ಸುನ್ ಸಮೈರ್ ವಿಮಾನ ನಿಲ್ದಾಣ]]
| {{nowrap|{{smaller|{{coord|41|36|43|N|36|38|19|E|region:TR_type:airport|name=ಸಮ್ಸುನ್ ಸಮೈರ್ ವಿಮಾನ ನಿಲ್ದಾಣ}}}}}}
|-
| [[ಉರ್ಫಾ|ಶಾನ್ಲಿಯುರ್ಫಾ]]
| LTCH
| SFQ
| [[ಶಾನ್ಲಿಯುರ್ಫಾ ವಿಮಾನ ನಿಲ್ದಾಣ]]
| {{nowrap|{{smaller|{{coord|37|06|01|N|38|50|34|E|region:TR_type:airport|name=ಶಾನ್ಲಿಯುರ್ಫಾ ವಿಮಾನ ನಿಲ್ದಾಣ}}}}}}
|-
! colspan="5" | ಯೋಜನೆಯಲ್ಲಿರುವ ವಿಮಾನ ನಿಲ್ದಾಣಗಳು
|-
| [[ಆಂಟಾಲ್ಯಾ]]
|
|
| [[ಕಾಶ್-ಡೆಮ್ರೆ ಬಟಿ ಆಂಟಾಲ್ಯಾ ವಿಮಾನ ನಿಲ್ದಾಣ]]
| {{nowrap|{{smaller|{{coord|36|33|47|N|29|71|12|E|region:TR_type:airport|name=ವೆಸ್ಟ್ ಆಂಟಾಲ್ಯಾ ವಿಮಾನ ನಿಲ್ದಾಣ}}}}}}
|-
| [[ಬಿಟ್ಲಿಸ್]]
|
|
| [[ಟಾಟ್ವಾನ್ ವಿಮಾನ ನಿಲ್ದಾಣ]]
| {{nowrap|{{smaller|{{coord|38|74|15|N|42|50|51|E|region:TR_type:airport|name=ಟಾಟ್ವಾನ್ ವಿಮಾನ ನಿಲ್ದಾಣ}}}}}}
|-
| [[ಎಡಿರ್ನೆ]]
|
|
| [[ಎಡಿರ್ನೆ-ಕಿರ್ಕ್ಲಾರೆಲಿ ವಿಮಾನ ನಿಲ್ದಾಣ]]
| {{nowrap|{{smaller|{{coord|41|37|43|N|26|93|18|E|region:TR_type:airport|name=ಎಡಿರ್ನೆ-ಕಿರ್ಕ್ಲಾರೆಲಿ ವಿಮಾನ ನಿಲ್ದಾಣ}}}}}}
|-
| [[ಇಜ್ಮಿರ್]]
|
|
| [[ಚೆಶ್ಮೆ-ಅಲಾಚತಿ ವಿಮಾನ ನಿಲ್ದಾಣ]]
| {{nowrap|{{smaller|{{coord|38|44|19|N|26|45|22|E|region:TR_type:airport|name=ಚೆಶ್ಮೆ-ಅಲಾಚತಿ ವಿಮಾನ ನಿಲ್ದಾಣ}}}}}}
|-
| [[ಗುಮುಶಾನೆ]]
|
|
| [[ಗುಮುಶಾನೆ-ಬಾಯ್ಬುರ್ಟ್ ವಿಮಾನ ನಿಲ್ದಾಣ]]
| {{nowrap|{{smaller|{{coord|40|33|23|N|39|97|34|E|region:TR_type:airport|name=ಗುಮುಶಾನೆ-ಬಾಯ್ಬುರ್ಟ್ ವಿಮಾನ ನಿಲ್ದಾಣ}}}}}}
|-
| [[ಕರಮನ್]]
|
|
| [[ಕರಮನ್ ವಿಮಾನ ನಿಲ್ದಾಣ]]
| {{nowrap|{{smaller|{{coord|37|36|48|N|33|46|17|E|region:TR_type:airport|name=ಕರಮನ್ ವಿಮಾನ ನಿಲ್ದಾಣ}}}}}}
|-
| [[ನಿಗ್ಡೆ]]
|
|
| [[ಹಸಂದಗಿ (ನಿಗ್ಡೆ ಅಕ್ಸರಾಯ್) ವಿಮಾನ ನಿಲ್ದಾಣ]]
| {{nowrap|{{smaller|{{coord|37|50|45|N|34|68|23|E|region:TR_type:airport|name=ಹಸಂದಗಿ ವಿಮಾನ ನಿಲ್ದಾಣ}}}}}}
|-
| [[ಯೋಜ್ಗಟ್]]
|
|
| [[ಯೋಜ್ಗಟ್ ವಿಮಾನ ನಿಲ್ದಾಣ]]
| {{nowrap|{{smaller|{{coord|39|93|21|N|34|99|24|E|region:TR_type:airport|name=ಯೋಜ್ಗಟ್ ವಿಮಾನ ನಿಲ್ದಾಣ}}}}}}
|}
==ಉಲ್ಲೇಖಗಳು==
{{Reflist}}
* {{in lang|tr}} [https://web.archive.org/web/20071213110822/http://www.dhmi.gov.tr/dosyalar/limanvemeydanlar/limanvemeydanlar.asp ದೆವ್ಲೆಟ್ ಹವಾ ಮೆಯ್ದನ್ಲಾರಿ ಇಶ್ಲೆಟ್ಮೆಸಿ (DHMİ)] (ಸ್ಟೇಟ್ ಏರ್ಪೋರ್ಟ್ಸ್ ಅಥಾರಿಟಿ)
* {{cite web|url=http://www.icao.int/anb/aig/Taxonomy/R4CDLocationIndicatorsbystate.pdf|title=ICAO ಲೊಕೇಶನ್ ಇಂಡಿಕೇಟರ್ಸ್ ಬೈ ಸ್ಟೇಟ್|publisher=[[ಅಂತರರಾಷ್ಟ್ರೀಯ ನಾಗರಿಕ ವೈಮಾನಿಕ ಸಂಘಟನೆ]]|date=2006-01-12|access-date=2007-12-15|archive-date=2007-09-26|archive-url=https://web.archive.org/web/20070926235554/http://www.icao.int/anb/aig/Taxonomy/R4CDLocationIndicatorsbystate.pdf|url-status=dead}}
* {{cite web|url=http://www.unece.org/cefact/locode/tr.htm|title=UN ಲೊಕೇಶನ್ ಕೋಡ್ಸ್: ಟರ್ಕಿ (IATA ಕೋಡ್ಸ್ ಒಳಗೊಂಡಿದೆ)|work=[[UN/LOCODE]] 2006-2|publisher=[[ಸಂಯುಕ್ತ ರಾಷ್ಟ್ರಗಳ ಆರ್ಥಿಕ ಆಯೋಗ ಯುರೋಪ್|UNECE]]|date=2007-04-30}}
==ಬಾಹ್ಯ ಕೊಂಡಿಗಳು==
* ಟರ್ಕಿಯಲ್ಲಿ ವಿಮಾನ ನಿಲ್ದಾಣಗಳ ಪಟ್ಟಿಗಳು:
** [http://gc.kls2.com/cgi-bin/gclookup?Q=country:TR ಗ್ರೇಟ್ ಸರ್ಕಲ್ ಮ್ಯಾಪರ್]
** [http://www.fallingrain.com/world/TU/airports.html ಫಾಲಿಂಗ್ರೈನ್.ಕಾಂ]
** [http://www.aircraft-charter-world.com/airports/europe/turkey.htm ಏರ್ಕ್ರಾಫ್ಟ್ ಚಾರ್ಟರ್ ವರ್ಲ್ಡ್] {{Webarchive|url=https://web.archive.org/web/20191102213041/http://www.aircraft-charter-world.com/airports/europe/turkey.htm |date=2019-11-02 }}
** [https://kmhesaplama.com/havaalani/ ತುರ್ಕಿಯೆ ಹವಾಲನ್ಲಾರಿ] {{Webarchive|url=https://web.archive.org/web/20210331092555/https://kmhesaplama.com/havaalani/ |date=2021-03-31 }} {{in lang|tr}}
** [https://web.archive.org/web/20060327055727/http://www.the-airport-guide.com/search.php?by=country&search=Turkey ದಿ ಏರ್ಪೋರ್ಟ್ ಗೈಡ್]
** {{usurped|1=[https://archive.today/20130105071624/http://www.worldaerodata.com/countries/Turkey.php ವರ್ಲ್ಡ್ ಏರೋ ಡೇಟಾ]}}
** [https://web.archive.org/web/20090710000828/http://www.atmairport.aero/ ATM ಡಾಲಮನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ]
[[ವರ್ಗ:ಟರ್ಕಿಯಲ್ಲಿ ವಿಮಾನ ನಿಲ್ದಾಣಗಳ ಪಟ್ಟಿಗಳು| ]]
[[ವರ್ಗ:ಟರ್ಕಿಯಲ್ಲಿ ವಿಮಾನ ನಿಲ್ದಾಣಗಳು| ]]
[[ವರ್ಗ:ದೇಶದಿಂದ ವಿಮಾನ ನಿಲ್ದಾಣಗಳ ಪಟ್ಟಿಗಳು|ಟರ್ಕಿ]]
[[ವರ್ಗ:ಯುರೋಪ್ನಲ್ಲಿ ವಿಮಾನ ನಿಲ್ದಾಣಗಳ ಪಟ್ಟಿಗಳು|ಟರ್ಕಿ]]
[[ವರ್ಗ:ಏಷ್ಯಾದಲ್ಲಿ ವಿಮಾನ ನಿಲ್ದಾಣಗಳ ಪಟ್ಟಿಗಳು|ಟರ್ಕಿ]]
ce19mcio200he2fi879urh13vfc1yxc
ಗ್ರೀಸಿನ ಶಿಕ್ಷಣ ಪದ್ಧತಿ
0
178746
1379569
1372501
2026-08-09T06:29:41Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379569
wikitext
text/x-wiki
[[ಭಾರತ|ಭಾರತದಂತೆ]] [[ಗ್ರೀಸ್]] ದೇಶವೂ ಪ್ರಾಚೀನ ಕಾಲದಲ್ಲಿ [[ನಾಗರೀಕತೆ|ನಾಗರಿಕತೆಯ]] ಉತ್ತುಂಗ ಶಿಖರವನ್ನೇರಿ [[ಸಾಹಿತ್ಯ]], [[ಲಲಿತಕಲೆ]], [[ವಿಜ್ಞಾನ]] ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಮುನ್ನಡೆ ಸಾಧಿಸಿತ್ತು. ಪಾಶ್ಚಾತ್ಯ [[ಜ್ಞಾನ]] ರಾಜ್ಯದ ಮೇಲೆ ಇತ್ತೀಚಿನವರೆಗೂ ತನ್ನ ಪ್ರಭಾವವನ್ನು ಬೀರುತ್ತ ಬಂತು. ಹಾಗೆಯೆ ಪ್ರಾಚೀನ ಗ್ರೀಕರ [[ಶಿಕ್ಷಣ]] ಪದ್ಧತಿ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು [[:en:Western_education|ಪಾಶ್ಚಾತ್ಯ ಶಿಕ್ಷಣವನ್ನು]] ಇಂದಿಗೂ ಪರಿಣಾಮಗೊಳಿಸುತ್ತ ಬಂದಿದೆ. ಅಲ್ಲಿ ಸದ್ಯದಲ್ಲಿ ಅಸ್ತಿತ್ವದಲ್ಲಿರುವ ಶಿಕ್ಷಣ ಅಂಥ ವೈಶಿಷ್ಟ್ಯಗಳಿಂದ ಕೂಡಿರದಿದ್ದರೂ ಆ ದೇಶ ಪಾಶ್ಚಾತ್ಯ ಶಿಕ್ಷಣರಂಗದ ಮೇಲೆ ಬೀರಿರುವ ಪ್ರಭಾವದ ದೃಷ್ಟಿಯಿಂದ ಪರಿಶೀಲನಾರ್ಹವೆನಿಸುತ್ತದೆ.
== ಪ್ರಾಚೀನ ಗ್ರೀಸಿನಲ್ಲಿ ಶಿಕ್ಷಣ ==
ಯುವಜನರನ್ನು ಒಳ್ಳೆಯ ಪೌರರನ್ನಾಗಿ ಮಾಡಲು ಶಿಕ್ಷಣ ಒಳ್ಳೆಯ ಸಾಧನವೆಂಬುದನ್ನು ಅರಿತಿದ್ದ ಪ್ರಾಚೀನ ಗ್ರೀಕರು ಶಿಕ್ಷಣವನ್ನು ಆದ್ಯತೆಯ ಸೇವಾವ್ಯವಸ್ಥೆಯೆಂದು ಪರಿಗಣಿಸಿದ್ದರು. ಆಗಾಗ ಒದಗುತ್ತಿದ್ದ ಬಾಹ್ಯ [[ಶತ್ರು|ಶತ್ರುಗಳ]] [[ದಾಳಿ|ದಾಳಿಯನ್ನೂ]], [[:en:City-state|ನಗರರಾಜ್ಯಗಳಿಂದಾಗುತ್ತಿದ್ದ]] ಆಂತರಿಕ ದಾಳಿಗಳನ್ನೂ ಎದುರಿಸಿ ಅವರು ಆತ್ಮರಕ್ಷಣೆ ಮಾಡಿಕೊಳ್ಳಬೇಕಾಗಿತ್ತು. ಅಲ್ಲದೆ, ಅಲ್ಲಿ ಅಧಿಕ ಸಂಖ್ಯೆಯಲ್ಲಿದ್ದ [[ಗುಲಾಮಗಿರಿ|ಗುಲಾಮರ]] ಮೇಲೆ ತಮ್ಮ ವರಿಷ್ಠ ಅಧಿಕಾರವನ್ನು ಉಳಿಸಿಕೊಂಡು ಹೋಗಬೇಕಾಗಿತ್ತು. ಆದ್ದರಿಂದ ಶಿಕ್ಷಣ, [[ಸೈನಿಕ]] ಕಾರ್ಯಾಚರಣೆಯಲ್ಲಿ ಸಾಹಸದಿಂದ ಭಾಗವಹಿಸಬಲ್ಲ ದೃಢಕಾಯರಾದ ಯುವಕರನ್ನು ರೂಪಿಸಬೇಕಾಗಿತ್ತು. ಈ ಜೀವನ ಪರಿಸ್ಥಿತಿಗೆ ಅನುಕೂಲಿಸುವಂತೆ ಅಂದಿನ ಶಿಕ್ಷಣಪದ್ಧತಿ ಏರ್ಪಟ್ಟಿತ್ತು. ಆತ್ಮರಕ್ಷಣೆಗೂ, ಸಮರಸೇವೆಗೂ ಸಿದ್ಧಪಡಿಸುವುದು ಶಿಕ್ಷಣದ ಪ್ರಧಾನ ಗುರಿಯಾಗಿತ್ತು. ಶ್ರೀಮಂತರು [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]], [[ಉದ್ಯೋಗ]] ಮುಂತಾದ ಕಸಬುಗಳು ತಮ್ಮ ಆತ್ಮಗೌರವಕ್ಕೆ ತಕ್ಕವಲ್ಲವೆಂದು ಭಾವಿಸಿದ್ದುದರಿಂದ ಅವನ್ನು ಅಲ್ಲಿನ ಜಿತ ಜನಾಂಗ ನಿರ್ವಹಿಸುತ್ತಿತ್ತು. ಆದ್ದರಿಂದ ಅವರ ಶಿಕ್ಷಣ ಪದ್ಧತಿಯಲ್ಲಿ ತಾಂತ್ರಿಕ ಮತ್ತು ವಾಣಿಜ್ಯೋದ್ಯಮಗಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿರಲಿಲ್ಲ.
ಪ್ರಾಚೀನ ಗ್ರೀಸಿನ ಶಿಕ್ಷಣ ಪದ್ಧತಿಯಲ್ಲಿ ಎರಡು ಪ್ರಕಾರಗಳನ್ನು ಗುರುತಿಸಬಹುದು. ಬೌದ್ಧಿಕ ಶಿಕ್ಷಣಕ್ಕೆ ಬೆನ್ನು ತಿರುಗಿಸಿ ಯುವಕರನ್ನು ಸಮರಶೂರರನ್ನಾಗಿ ಮಾಡುವ ಉದೇಶವನ್ನು ಹೊಂದಿದ್ದ ಪ್ರಕಾರ [[ಸ್ಪಾರ್ಟಾ|ಸ್ಪಾರ್ಟದಂಥ]] ಕೆಲವು ನಗರರಾಜ್ಯಗಳಲ್ಲೂ, [[ಮಗು|ಮಕ್ಕಳು]] ಸರ್ವಾಂಗೀಣ ಶಿಕ್ಷಣವನ್ನು ಪಡೆಯಬೇಕೆಂಬ ದೃಷ್ಟಿಯನ್ನು ಹೊಂದಿದ್ದ ಇನ್ನೊಂದು ಪ್ರಕಾರ [[ಅಥೆನ್ಸ್|ಆಥೆನ್ಸಿನಂಥ]] ನಗರರಾಜ್ಯಗಳಲ್ಲೂ ಅಸ್ತಿತ್ವದಲ್ಲಿದ್ದುವು.<ref>https://athenslivingmuseum.com/ancient-greek-education-system/</ref> ಈ ಭಿನ್ನತೆಗೆ ಆಯಾ ನಗರರಾಜ್ಯದಲ್ಲಿದ್ದ ಭಿನ್ನ [[ಜೀವನ]] ಪರಿಸ್ಥಿತಿಯೂ, ಅಲ್ಲಿನ ಜನತೆ ತಳೆದಿದ್ದ ಜೀವನದೃಷ್ಟಿಯೂ ಕಾರಣವೆನಿಸಿದ್ದುವು. ಮೇಲೆ ಸೂಚಿಸಿರುವ ಎರಡು ನಗರರಾಜ್ಯಗಳ ಶಿಕ್ಷಣ ಪ್ರಕಾರಗಳ ಪರಿಶೀಲನೆಯಿಂದ ಪ್ರಾಚೀನ ಗ್ರೀಸಿನ ಶಿಕ್ಷಣ ಪದ್ಧತಿಯನ್ನು ಪರಿಚಯ ಮಾಡಿಕೊಳ್ಳಬಹುದು.
=== ಸ್ಪಾರ್ಟನ್ನರ ಶಿಕ್ಷಣ ===
ತಮ್ಮ ನಗರರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿದ್ದ ಸ್ಪಾರ್ಟನ್ನರು ಅಲ್ಲಿಯ ಬಹುಸಂಖ್ಯಾತ ಗುಲಾಮರ ಮೇಲೆ ತಮ್ಮ ಅಧಿಕಾರವನ್ನು ಮುಂದುವರಿಸಿಕೊಂಡು ಬರಬೇಕಾಗಿತ್ತು. ಆಗಾಗ ಆಗುತ್ತಿದ್ದ ದಾಳಿಗಳಿಂದಲೂ ರಕ್ಷಿಸಿಕೊಳ್ಳಬೇಕಾಗಿತ್ತು. ಆದ್ದರಿಂದ ಯುವಕರನ್ನು ಸಮರಸೇವೆಗೆ ಸಿದ್ಧಪಡಿಸುವುದು ಅವರ ಶಿಕ್ಷಣದ ಮುಖ್ಯೋದ್ದೇಶವಾಗಿತ್ತು.<ref>Plut. Lives. Lyc. 16</ref> ಮಕ್ಕಳಲ್ಲಿ [[ಧೈರ್ಯ]]ಸ್ಥೈರ್ಯಾದಿ ಗುಣಗಳನ್ನು ಬೆಳೆಸಿ ಶೂರ ಯೋಧರನ್ನಾಗಿ ಮಾಡುವುದು ಶಿಕ್ಷಣದ ಕರ್ತವ್ಯವಾಗಿತ್ತು. ಅದಕ್ಕನುಕೂಲಿಸುವಂತೆ ಹುಟ್ಟಿದ ಮಕ್ಕಳನ್ನೆಲ್ಲ [[ನಿಸರ್ಗ|ನಿಸರ್ಗದ]] ಕರಾಳ [[ಪರೀಕ್ಷೆ|ಪರೀಕ್ಷೆಗೆ]] ಒಡ್ಡಿ [[ಅಂಗವಿಕಲತೆ|ಅಂಗವಿಕಲರನ್ನೂ]], ನಿರ್ಬಲ [[ಶಿಶು|ಶಿಶುಗಳನ್ನೂ]] ಕೊಂದುಹಾಕುತ್ತಿದ್ದರು.<ref>https://www.greece-is.com/disability-in-ancient-greece/</ref> ಹಾಗೂ ಉಳಿದುಕೊಂಡ ಮಕ್ಕಳನ್ನು 7 ನೆಯ ವರ್ಷದಿಂದ ತಂದೆತಾಯಿಗಳಿಂದ ಬೇರ್ಪಡಿಸಿ ಶಿಕ್ಷಣ ಶಿಬಿರಕ್ಕೆ ಸಾಗಿಸುತ್ತಿದ್ದರು.<ref name="Adkins, 2005">Adkins and Adkins, ''Handbook to Life in Ancient Greece'' (New York: Facts On File, Inc., 2005), 104.</ref> 14 ವರ್ಷದವರೆಗೆ ಕಠಿಣ ರೀತಿಯ ಸೈನಿಕ [[ತರಬೇತಿ]] ನೀಡುತ್ತಿದ್ದರು. ಅವರನ್ನು ತಂಡಗಳನ್ನಾಗಿ ವಿಂಗಡಿಸಿ ಅವರಲ್ಲೇ ಸಾಹಸಿ ಬಾಲಕನೊಬ್ಬನನ್ನು ನಾಯಕನನ್ನಾಗಿ ನೇಮಿಸುತ್ತಿದ್ದರು. ಈ ಶಿಕ್ಷಣ ರಾಜ್ಯದ ನೇರ ನಿಯಂತ್ರಣದಲ್ಲಿ ನಡೆಯುತ್ತಿತ್ತು. ಶಿಸ್ತಿನ ಸೈನಿಕ ಶಿಕ್ಷಣದಲ್ಲಿ ದೇಹದಂಡನೆ ಪ್ರಧಾನ ಅಂಶವಾಗಿತ್ತು. ಅದನ್ನು ಶಿಕ್ಷೆಯ ರೂಪದಲ್ಲದೆ ಸಹನೆ, ಸಹಿಷ್ಣುತೆ ಮುಂತಾದ ಗುಣಗಳನ್ನು ಪರೀಕ್ಷಿಸುವಾಗಲೂ ಪ್ರಯೋಗಿಸುತ್ತಿದ್ದರು. ಅವರಲ್ಲಿ ಯುದ್ಧಾಚರಣೆಯ ಸಾಹಸಪೂರ್ಣ ಹೋರಾಟದ ಪ್ರವೃತ್ತಿಯನ್ನು ಬೆಳೆಸಲು [[ಮುಷ್ಟಿಯುದ್ಧ]] ಮಾಡಿಸುತ್ತಿದ್ದರು.<ref>Mark, Joshua J.. "Agoge, the Spartan Education Program." ''World History Encyclopedia'', 15 Jun 2021, <nowiki>https://www.worldhistory.org/article/342/agoge-the-spartan-education-program/</nowiki>.</ref> ಹದಿನಾರನೆಯ ವರ್ಷದ ಪೂರ್ತ ಸೈನಿಕ ಶಿಕ್ಷಣ ಪಡೆದ ಯುವಕರು ರಕ್ಷಕ [[ಸೈನ್ಯ|ಸೇನೆಯನ್ನು]] ಸೇರುತ್ತಿದ್ದರು. ಅಲ್ಲಿ ಎರಡು ವರ್ಷಗಳ ಕಾಲ ರಕ್ಷಣಾ ಕಾರ್ಯದಲ್ಲಿ ಕಠಿಣ ಶಿಸ್ತಿನ ತರೆಬೇತು ಹೊಂದಿ 30 ನೇ ವರ್ಷದಿಂದ [[ಪೌರತ್ವ|ಪೌರತ್ವವನ್ನು]] ಪಡೆಯುತ್ತಿದ್ದರು.<ref name=":02">{{Cite book |last=Ducat |first=Jean |title=Spartan education: youth and society in the classical period |date=2006 |publisher=Classical Press of Wales |others=Emma Stafford, Pamela-Jane Shaw, Anton Powell |isbn=1-905125-07-0 |location=Swansea |pages= |oclc=76892341}}</ref> ಆದರೂ ಅವರು ತೀರ ವಯಸ್ಸಾಗಿ ದುರ್ಬಲರಾಗುವವರೆಗೂ ಸಮರಸೇವೆಯನ್ನು ನಿರ್ವಹಿಸಬೇಕಾಗಿದ್ದುದರ ಜೊತೆಗೆ ಅಗತ್ಯವೆನಿಸುವ ತರಬೇತಿಯನ್ನೂ ಪಡೆಯಬೇಕಾಗಿತ್ತು. ಸ್ಟಾರ್ಟನ್ನರ ಶಿಕ್ಷಣ ವ್ಯವಸ್ಥೆಯಲ್ಲಿ ಓದುಬರೆಹ ಕಲಿಸುತ್ತಿದ್ದರೆ ಇಲ್ಲವೆ ಎಂಬ ಅಂಶ ತಿಳಿದುಬಂದಿಲ್ಲ.<ref name=":03">Richer, Nicolas (2017). ''Spartan Education in the Classical Period.'' In ''A Companion to Sparta,'' eds. Anton Powell. John Wiley & Sons, Ltd. pp. 525-542</ref><ref>Plut. Lives. Lyc. 16.6</ref> ಅವರಿಗೆ [[:en:Ceramic|ಕುಂಭಕಲೆಯಲ್ಲಾಗಲಿ]] ಲಲಿತವಿದ್ಯೆಗಳಲ್ಲಾಗಲಿ ಆಸಕ್ತಿ ಇದ್ದಂತೆ ತೋರುವುದಿಲ್ಲ. ಆದರೆ ಯುದ್ಧದಲ್ಲಿ ಹೋರಾಡಿದ ಶೂರರ [[ಕವನ|ಕಾವ್ಯಗಳನ್ನೂ]], ರಣಗೀತೆಗಳನ್ನೂ ಪಠಿಸುತ್ತಿದ್ದರು. [[ಕುಸ್ತಿ]], [[ಕವಾಯತು]] ಮುಂತಾದ ಶಿಸ್ತಿನ ಅಭ್ಯಾಸಗಳನ್ನೊಳಗೊಂಡ [[ನೃತ್ಯ|ನೃತ್ಯಗಳಲ್ಲೂ]] ಅವರಿಗೆ ಆಸಕ್ತಿಯಿತ್ತು.<ref name=":0">Smith 1890, p. 594.</ref> ಗ್ರೀಸಿನ ಇತರ ನಗರರಾಜ್ಯಗಳಲ್ಲಿ [[ಸ್ತ್ರೀ|ಮಹಿಳೆಯರಿಗೆ]] ತಾಯ್ತನದ ಶಿಕ್ಷಣವನ್ನು ಮಾತ್ರ ಕೊಡುತ್ತಿದ್ದಾಗ ಸ್ಪಾರ್ಟನ್ನರು ಅವರಿಗೆ ಗಂಡಸರಂತೆ [[ವ್ಯಾಯಾಮ|ಅಂಗಸಾಧನೆಯಲ್ಲೂ]], ಹೊರಗಿನ ಚಟುವಟಿಕೆಗಳಲ್ಲೂ ಶಿಕ್ಷಣವೀಯುತ್ತಿದ್ದರು.<ref>https://pressbooks.pub/anne1/chapter/ancient-spartan-sts/</ref> ಅಂಥ ಶಿಕ್ಷಣದಿಂದ ಅವರ ಮಕ್ಕಳು ಬಲಾಢ್ಯರೂ, ಶೂರರೂ ಆಗುವರೆಂಬ ಆಶೋತ್ತರವೇ ಇದಕ್ಕೆ ಕಾರಣ. ಆದರೆ ಅವರನ್ನು ತಂದೆ ತಾಯಿಗಳಿಂದ ಬೇರ್ಪಡಿಸುತ್ತಿರಲಿಲ್ಲ. ಒಟ್ಟನಲ್ಲಿ ಸ್ಟಾರ್ಟನ್ನರ ಶಿಕ್ಷಣ ಅವರ ಸಂಕುಚಿತ ಗುರಿಯ ಪರಿಮಿತಿಯಲ್ಲಿ ಪರಿಣಾಮಕಾರಿಯಾಗಿಯೇನೊ ಇರುತ್ತಿತ್ತು.
=== ಆಥೀನಿಯನ್ನರ ಶಿಕ್ಷಣ ===
ಆಥೆನ್ಸ್ ನಗರರಾಜ್ಯದ ಜನತೆ ಸ್ಪಾರ್ಟನರಿಗಿಂತ ಭಿನ್ನವಾದ ಜೀವನದೃಷ್ಟಿಯನ್ನು ಹೊಂದಿದ್ದರು. ಅವರ ಸ್ಥಿತಿಗತಿಗಳೂ ಭಿನ್ನವಾಗಿದ್ದುವು. ಯುವಕರು ಯುದ್ಧಕಾಲದ ಸೈನಿಕರಾಗಿ ಹೋರಾಡುವುದರ ಜೊತೆಗೆ ಶಾಂತಿಕಾಲದ ಸತ್ಪೌರರಾಗಿಯೂ ಬಾಳಬೇಕೆಂಬುದು ಅವರ ಆಶಯವಾಗಿತ್ತು. ಅವರು ಪ್ರತಿಭಾವಂತರಾಗಿ ಬಾಳಿ ತಮ್ಮ [[ಪ್ರತಿಭೆ|ಪ್ರತಿಭೆಯ]] ಕಾಣಿಕೆಯನ್ನು ದೇಶಕ್ಕೆ ಸಲ್ಲಿಸಿ [[ಸಂಸ್ಕೃತಿ]], ನಾಗರಿಕತೆಗಳ ರಕ್ಷಕರೂ, ಪೋಷಕರೂ ಆಗಬೇಕೆಂದು ಆಶಿಸಿದ್ದರು. ಈ ದೃಷ್ಟಿ ಅವರ ಶಿಕ್ಷಣದ ಸ್ವರೂಪದಲ್ಲಿ ಪ್ರತಿಬಿಂಬಿಸಿತ್ತು. ಶಿಕ್ಷಣ ಮಕ್ಕಳನ್ನು ಸೈನಿಕ ಕಾರ್ಯಾಚರಣೆಗೆ ಸಿದ್ಧಪಡಿಸುವುದರ ಜೊತೆಗೆ ಅವರ ಬೌದ್ಧಿಕ, ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳೆವಣಿಗೆಯನ್ನು ಸಮರ್ಪಕವಾಗಿ, ಸಮರಸವಾಗಿ ಸಾಧಿಸಿ ಅವರನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ಮಾಡಬೇಕಾಗಿತ್ತು. ಎಂದರೆ ಶಿಕ್ಷಣ [[ವ್ಯಕ್ತಿತ್ವ|ವ್ಯಕ್ತಿತ್ವದ]] ಬೆಳೆವಣಿಗೆಯಲ್ಲಿ ಯಾವುದನ್ನೂ ನಿರ್ಲಕ್ಷಿಸಬಾರದು; ಯಾವುದನ್ನೂ ಅತಿಯಾಗಿ ಮಾಡಹೋಗಬಾರದು ಎಂಬುದು ಅವರ ನಿತ್ಯ ಮಂತ್ರವಾಗಿತ್ತು. ಇಂಥ ಸಮರಸ ವ್ಯಕ್ತಿತ್ವದ ರೂಪಣೆಗಾಗಿ ಶಿಕ್ಷಣವನ್ನು ಎರಡು ಹಂತಗಳಾಗಿ ವ್ಯವಸ್ಥೆಗೊಳಿಸಿದ್ದರು. 7 ರಿಂದ 16 ನೆಯ ವರ್ಷದ ತನಕ ಮೂಲ ಅಥವಾ ಪ್ರಾಥಮಿಕ ಶಿಕ್ಷಣ;<ref name=":04">Joyal, MacDougall, and Yardley, ''Greek and Roman Education'', 59.</ref> 14 ರಿಂದ 18 ರ ವರೆಗೆ ಪ್ರೌಢಶಿಕ್ಷಣ. ಶಿಕ್ಷಣ ವ್ಯವಸ್ಥೆ [[ಸರಕಾರ|ಸರ್ಕಾರದ]] ನಿಯಂತ್ರಣಕ್ಕೆ ಒಳಪಟ್ಟಿರದೆ ವೈಯಕ್ತಿಕವಾಗಿತ್ತು. ಹದಿನೆಂಟು ತುಂಬಿದ ಯುವಕರು ಎರಡು ವರ್ಷಕಾಲ ಕಡ್ಡಾಯ ಸೈನಿಕ ಶಿಕ್ಷಣ ಪಡೆಯುತ್ತಿದ್ದರು.<ref>{{Cite book |last=Plato |title=Republic |publisher=Harvard University Press |year=2013 |location=Cambridge |pages=186}}</ref> ಮುಂದೆ ಆ ನಗರ ರಾಜ್ಯ [[ಉತ್ತರ ಮ್ಯಾಸೆಡೊನಿಯ|ಮ್ಯಾಸಿಡೋನಿಯದ]] ಅಧೀನಕ್ಕೆ ಬಂದ ಮೇಲೆ ರಕ್ಷಣೆಯ ಆವಶ್ಯಕತೆ ಅಷ್ಟಾಗಿ ಇಲ್ಲದ್ದರಿಂದ ಕಡ್ಡಾಯ ಸೈನಿಕ ಶಿಕ್ಷಣದ ಈ ಕಾಲವನ್ನು [[ತತ್ತ್ವಶಾಸ್ತ್ರ]], [[ಸಾಹಿತ್ಯ]] ಮುಂತಾದ ಜ್ಞಾನಪ್ರದ ವಿಷಯಗಳ ವ್ಯಾಸಂಗಕ್ಕೆ ವಿನಯೋಗಿಸುತ್ತಿದ್ದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತಗಳಲ್ಲಿ ಸಾಹಿತ್ಯ ಮತ್ತು ಕಲಾಪ್ರದ [[ಸಂಗೀತ|ಸಂಗೀತದ]] ಅಭ್ಯಾಸಕ್ಕೆ ಪ್ರಾಶಸ್ತ್ಯವಿತ್ತು. ದೈಹಿಕ ಶಿಕ್ಷಣಕ್ಕೆ ಪ್ರಾಶಸ್ತ್ಯವಿದ್ದರೂ ದೇಹವರ್ಧನವೊಂದೇ ಅದರ ಉದ್ದೇಶವಾಗಿರದೆ ವ್ಯಕ್ತಿಯ ನಡೆನಿಲವುಗಳನ್ನು ಸಿರಪಡಿಸಿ ಅಂಗಸೌಷ್ಠವಾದಿ ಸೌಂದರ್ಯಸಾಧನೆಯೂ ಅದರಲ್ಲಿ ಸೇರಿತ್ತು. ಪಠ್ಯಕ್ರಮದಲ್ಲಿ ಓದು ಬರೆಹ, ಕಾವ್ಯವಾಚನ, [[ಅಂಕಗಣಿತ]], ಅಂಗಸಾಧನೆ, ಸಂಗೀತ-ಇವೆಲ್ಲ ಸೇರಿದ್ದವು.<ref>Beck, ''Greek Education, 450–350 B.C.'', 114-126.</ref> ಹೆಣ್ಣುಮಕ್ಕಳಿಗೆ ಮನೆಯಲ್ಲೇ ಶಿಕ್ಷಣವೀಯುತ್ತಿದ್ದರು. ಅವರು ಸಾಮಾಜಿಕವಾಗಿ ಮುಂದೆ ಬರುವುದು ಸಂಪ್ರದಾಯಕ್ಕೆ ಒಪ್ಪುತ್ತಿರಲಿಲ್ಲ.
ಒಟ್ಟಿನಲ್ಲಿ ಪ್ರಾಚೀನ ಗ್ರೀಕ್ ಶಿಕ್ಷಣ ಆಯಾ ನಗರರಾಜ್ಯದ ಜೀವನ ಪರಿಸ್ಥಿತಿಗೆ ಒಪ್ಪುವಂತೆ ವ್ಯವಸ್ಥೆಗೊಂಡಿತ್ತು. ಜೀವನದೃಷ್ಟಿಗೂ, ಅವಶ್ಯಕತೆಗೂ ಅನುಗುಣವಾಗಿ ರೂಪುಗೊಂಡಿತ್ತು.
=== ಸಾಫಿಸ್ಟರ ಪ್ರಭಾವ ===
ಭಾರತದಂತೆ ಪ್ರಾಚೀನ ಆಥೀನಿಯನರಲ್ಲೂ ಹಿಂದೆ, [[ಗುರು|ಗುರುಗಳು]] ಯಾವ ಪ್ರತಿಫಲವೂ ಇಲ್ಲದೆ ಶಿಷ್ಯರಿಗೆ [[ವಿದ್ಯೆ]] ಕಲಿಸುತ್ತಿದ್ದರು. ಆದರೆ ಅವರಲ್ಲಿ ಕ್ರಿ.ಪೂ. 5 ನೆಯ ಶತಮಾನದಲ್ಲಿ ಆರ್ಥಿಕ ಆಶೋತ್ತರ ಹುಟ್ಟಿಕೊಂಡು ಜ್ಞಾನವನ್ನು ವಿಕ್ರಯಿಸುವ ಸಂಪ್ರದಾಯ ಆರಂಭವಾಯಿತು. [[:en:Sophist|ಸಾಫಿಸ್ಟರೆಂಬ]] [[ಕೂಲಿ]] [[ಪಂಡಿತ|ಪಂಡಿತರು]] [[ಹಣ|ದುಡ್ಡಿಗೆ]] ಪಾಠ ಹೇಳುವ ವೃತ್ತಿಯನ್ನೇ ಅವಲಂಬಿಸಿದ್ದರು. ಶ್ರೀಮಂತರು ಅವರಿಂದ ತತ್ತ್ವಶಾಸ್ತ್ರ, [[ಅಲಂಕಾರ]], ವಾಙ್ಮಯಕಲೆ ಮುಂತಾದವನ್ನು ಹೇಳಿಸಿಕೊಂಡು ಹಣ ಕೊಡುತ್ತಿದ್ದರು. ಸುಲಭವಾಗಿ ಹಣಗಳಿಸಬಹುದಾದ ಈ ಕಸಬನ್ನು ಅವಲಂಬಿಸಿದ, ಅಷ್ಟಾಗಿ ಪಾಂಡಿತ್ಯವಿಲ್ಲದ ಕೆಲವರು ಕುತರ್ಕದ ತಮ್ಮ ಕೌಶಲ್ಯದಿಂದ ಜನರನ್ನು ಭ್ರಮೆಗೊಳಿಸುವ ಕಲೆಯಲ್ಲಿ ಕುಶಲರೆನಿಸಿದ್ದರು. ಅಂಥವರು ಇಡೀ ಗುರುಕುಲಕ್ಕೆ ಅಪಕೀರ್ತಿ ತಂದರು.
'''ಉನ್ನತ ಶಿಕ್ಷಣ'''
18 ರಿಂದ 20 ವರ್ಷದವರೆಗೆ [[ಕಲೆ]], ಸಾಹಿತ್ಯ, ತತ್ತ್ವಶಾಸ್ತ್ರ, ಮುಂತಾದ ಜ್ಞಾನವನ್ನು ಯುವಕರಿಗೆ ಹಿಂದಿನಿಂದಲೂ ಅಲ್ಲಿ ಬೋಧಿಸುತ್ತಿದ್ದರು. ಸಾಫಿಸ್ಟರು ಕುಟಿಲ ಕೌಶಲದ ಕೂಲಿ ಪಂಡಿತರಾಗಿದ್ದರೂ ಅವರಲ್ಲಿ ಕೆಲವರಾದರೂ ನಿಜವಾದ ಜ್ಞಾನಿಗಳಾಗಿದ್ದು ಉದ್ದಾಮ ಪಂಡಿತರೆನಿಸಿದ್ದರು; ತಮ್ಮ ಶಿಷ್ಯರಿಗೆ ಆಳವಾದ ವ್ಯಾಸಂಗ ಮಾಡಿಸುತ್ತಿದ್ದರು. ಅಂಥವರ ಯತ್ನದಿಂದ ಅಲ್ಲಿ ಉನ್ನತ ಶಿಕ್ಷಣಕ್ಕೆ ನಿರ್ದಿಷ್ಟ ತಳಹದಿ ರೂಪುಗೊಂಡಿತು. ಅದಕ್ಕಾಗಿ ಅನೇಕ ವಿದ್ಯಾಲಯಗಳು (ಸ್ಕೂಲ್ಸ್) ಆರಂಭವಾದವು. [[ಭಾಷೆ]], ಅಲಂಕರಶಾಸ್ತ್ರ, [[ವ್ಯಾಕರಣ]], ತತ್ತ್ವಶಾಸ್ತ್ರ,-ಇವುಗಳ ಆಳವಾದ ವ್ಯಾಸಂಗಕ್ಕೆ ಪ್ರೋತ್ಸಾಹ ದೊರೆಯಿತು. ಆ ವಿದ್ಯಾಲಯಗಳು ಕಾಲಕ್ರಮದಲ್ಲಿ ಗ್ರೀಕ್ ಮತ್ತು [[:en:Latin_literature|ರೋಮನ್ ಸಾಹಿತ್ಯದ]] ಮೇಲೆ ಪ್ರಭಾವ ಬೀರಿದುವು. [[:en:Protagoras|ಪ್ರೊಟಾಗೋರಾಸನಂಥ]] ಪಂಡಿತರು ವ್ಯಾಕರಣ ಶಾಸ್ತ್ರವನ್ನು ರಚಿಸಿಕೊಟ್ಟರು.<ref name="stan">{{cite encyclopedia|url=http://plato.stanford.edu/entries/sophists/#Pro|title=The Sophists|encyclopedia=[[Stanford Encyclopedia of Philosophy]]|access-date=2012-05-01}}</ref><ref>Aristotle 1407b [https://www.perseus.tufts.edu/hopper/text?doc=Perseus%3Atext%3A1999.01.0059%3Abekker%20page%3D1407b Greek from Tufts U., with decipherment tools], [http://perseus.uchicago.edu/perseus-cgi/citequery3.pl?dbname=GreekFeb2011&query=Arist.%20Rh.%201407b&getid=1 English and Greek from University of Chicago]{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }} both in the Perseus Digital Library. The page is from Rhetoric, Book III, Chapter 5.</ref> [[ಪ್ಲೇಟೊ]] ಮತ್ತು ಅವನ ಶಿಷ್ಯ [[ಅರಿಸ್ಟಾಟಲ್|ಅರಿಸ್ಟಾಟಲರಂಥ]] ಪಂಡಿತರು ಆ ಕಾಲದಲ್ಲಿದ್ದು ಜ್ಞಾನರಾಜ್ಯಕ್ಕೆ ಮಹತ್ತರವಾದ ಕಾಣಿಕೆಯನ್ನು ಸಲ್ಲಿಸಿದರು.
'''ವಯಸ್ಕರ ಶಿಕ್ಷಣ'''
ಸಾಫಿಸ್ಟರ ಯತ್ನದಿಂದ ಉನ್ನತ ಶಿಕ್ಷಣಕ್ಕೆ ತಳಹದಿ ದೊರೆತಂತೆ ವಯಸ್ಕರ ಶಿಕ್ಷಣಕ್ಕೂ ಅವಕಾಶವಾಯಿತು. ಶ್ರೀಮಂತರನೇಕರು ಆಜೀವವೂ ಜ್ಞಾನಾರ್ಜನೆಯಲ್ಲಿ ತೊಡಗಿರುವುದು ಒಂದು ಬಗೆಯ ವಿಲಾಸ ಜೀವನವೆನಿಸುತ್ತ ಬಂತು. ಹೇಗೇ ಆಗಲಿ, ವಯಸ್ಕರಲ್ಲಿ ವಿದ್ಯಾಪ್ರಚಾರ ಸಾರ್ವತ್ರಿಕವಾಗಿ ನಡೆಯಲು ಅವಕಾಶವಾಯಿತು.<ref>https://digital.library.unt.edu/ark:/67531/metadc330707/</ref>
=== ಪ್ಲೇಟೊ ಮತ್ತು ಆರಿಸ್ಟಾಟಲ್ರ ಶಿಕ್ಷಣ ದೃಷ್ಟಿ ===
ಅಂದಿನ ಆಥೆನ್ಸಿನ ವಿದ್ವದ್ವಾತಾವರಣದ ಫಲವಾಗಿ ಜ್ಞಾನರಾಜ್ಯದ ಅಮೂಲ್ಯ ಕೃತಿಗಳ ರಚನೆಗೆ ಅವಕಾಶವಾಯಿತು. ಪ್ಲೇಟೊ ಮತ್ತು ಆರಿಸ್ಟಾಟಲರಂಥ ಮಹಾಪಂಡಿತರು ನಡೆಸಿದ ತತ್ತ್ವಚಿಂತನೆ ಅವರ ಕಾಲದಂತೆ ಇಂದಿಗೂ ಮಾನ್ಯವೆನಿಸುವಂತಿದೆ. ಆದ್ದರಿಂದಲೇ ಅವರ ಯತ್ನ ಪಾಶ್ಚಾತ್ಯ ಸಾಹಿತ್ಯ, [[ಸಂಸ್ಕೃತಿ]], ನಾಗರಿಕತೆಗಳ ಮೇಲೆ ಇತ್ತೀಚಿನವರೆಗೂ ಪ್ರಭಾವ ಬೀರುತ್ತ ಬಂದಿರುವುದು.
ಪ್ಲೇಟೊ ತನ್ನ [[:en:Republic_(Plato)|ರಿಪಬ್ಲಿಕ್]] ಮತ್ತು [[:en:Laws_(dialogue)|ಲಾಸ್]] ಎಂಬ ಕೃತಿಗಳಲ್ಲಿ ಶಿಕ್ಷಣದ ಬಗ್ಗೆ ತನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾನೆ.<ref>{{Cite book |last=Plato |title=Republic |publisher=Harvard University Press |year=2013 |location=Cambridge |pages=186}}</ref> ರಿಪಬ್ಲಿಕ್ [[ರಾಜ್ಯಶಾಸ್ತ್ರ]] ಗ್ರಂಥವಿರಬಹುದೆಂದು ತೋರಿದರೂ ಅದು ನಿಜವಾಗಿ ಶಿಕ್ಷಣ ಶಾಸ್ತ್ರಕ್ಕೆ ಸಂಬಂಧಿಸಿದ ಮಹಾಕೃತಿ. ಅದರ ಮಹತ್ತ್ವವನ್ನೂ ಅರಿತಿದ್ದ [[ಜೀನ್-ಜಾಕ್ವೆಸ್ ರೂಸೋ|ರೂಸೊ]] `ಸಾರ್ವತ್ರಿಕ ಶಿಕ್ಷಣದ ಆರ್ಥವನ್ನು ತಿಳಿಯಬೇಕಾದರೆ ಪ್ಲೇಟೊವಿನ ರಿಪಬ್ಲಿಕ್ ಗ್ರಂಥವನ್ನು ಓದು’ ಎಂದು ತನ್ನ [[:en:Emile,_or_On_Education|ಈಮೈಲ್]] [[ಕಾದಂಬರಿ|ಕಾದಂಬರಿಯಲ್ಲಿ]] ಸೂಚಿಸಿದ್ದಾನೆ. ಅವನ ಶಿಷ್ಯ ಆರಿಸ್ಟಾಟಲನೂ ತನ್ನ [[:en:Politics_(Aristotle)|ಪಾಲಿಟಿಕ್ಸ್]] ಎಂಬ ಕೃತಿಯಲ್ಲಿ ಶಿಕ್ಷಣದ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಾನೆ.{{r|Politics|at=VII.17–VIII.4}}
ಯಾವ ರಾಜಕೀಯ ವ್ಯವಸ್ಥೆಯಲ್ಲೇ ಆಗಲಿ ಅದಕ್ಕೆ ಪೌರಶಿಕ್ಷಣ ಆಧಾರವೆಂದು ಭಾವಿಸಿದ್ದ ಪ್ಲೇಟೊ ವ್ಯಕ್ತಿ ಶಿಕ್ಷಣಕ್ಕೆ ಪ್ರಾಧಾನ್ಯವಿತ್ತಿದ್ದಾನೆ. ಒಳ್ಳೆಯ ಶಿಕ್ಷಣದಿಂದ ಒಳ್ಳೆಯ ವ್ಯಕ್ತಿಯಾದರೆ [[ಮನುಷ್ಯ]] ತನ್ನ ಜೀವನದಲ್ಲಿ ಒಳ್ಳೆಯ ಮಾನವನಂತೆ ನಡೆದುಕೊಳ್ಳವನೆಂಬುದು ಆತನ ವಾದ. ಅಂಥ ಶಿಕ್ಷಣ ಬರೀ ವ್ಯಕ್ತಿಗತವಾಗಿರದೆ ಸಮಾಜದ ಸೃಜನಾತ್ಮಕ ಶಕ್ತಿಯೂ ಆಗಬಲ್ಲುದೆಂದು ಆತ ಪ್ರತಿಪಾದಿಸಿದ್ದಾನೆ. ಆದರೆ ಕುಟುಂಬಜೀವನದ ಸ್ಥಾನಮಾನಗಳನ್ನು ಕಡೆಗಣಿಸಿ ಮಕ್ಕಳನ್ನು [[ಸಮಾಜ|ಸಮಾಜದ]] ಒಡೆತನಕ್ಕೆ ಒಪ್ಪಿಸುವ ಅಗತ್ಯವನ್ನು ಎತ್ತಿಹಿಡಿದಿದ್ದಾನೆ. ಆರಿಸ್ಟಾಟಲ್ ತನ್ನ ಗುರುವಿನ ಅನೇಕ ಭಾವನೆಗಳನ್ನು ಒಪ್ಪಿದ್ದರೂ ಈ ಅಭಿಪ್ರಾಯವನ್ನು ಒಪ್ಪಿರಲಿಲ್ಲ. ರೂಸೋ ಆ ಬಗ್ಗೆ ಟೀಕಿಸುತ್ತ `ನಮ್ಮ ಕುಟುಂಬದ ಹತ್ತಿರದ ಬಂಧುವರ್ಗದವರಲ್ಲಿ ಬೆಳೆಯದ ಬಾಂಧವ್ಯ ರಾಷ್ಟ್ರಪ್ರೇಮಕ್ಕೆ ಹೇಗೆ ಅನುವುಮಾಡಿ ಕೊಟ್ಟೀತು? ಒಳ್ಳೆಯ ತಂದೆಯಾಗಿರದೆ, ಒಳ್ಳೆಯ ಮಗನಾಗಿರದೆ ಒಳ್ಳೆಯ ಪತ್ನಿಯಾಗಿರದೆ ಒಳ್ಳೆಯ ಪೌರನಾಗಬಲ್ಲನೆ? ಎಂದು ಟೀಕಿಸಿದ್ದಾನೆ.
ಪ್ಲೇಟೋ ಶ್ರೀಮಂತ ಪಕ್ಷಪಾತಿ. ಅತನ ಶಿಕ್ಷಣ ದೃಷ್ಟಿ ಶ್ರೀಮಂತರ ವಿಲಾಸಜೀವನಕ್ಕೆ ಒಪ್ಪುವಂತಿದ್ದು ಕಾರ್ಮಿಕರ ಮತ್ತು ವಾಣಿಜ್ಯೋದ್ಯಮಿಗಳ ಆಸಕ್ತಿಯನ್ನು ನಿರ್ಲಕ್ಷಿಸಿತ್ತು. ಪ್ರತಿಭಾವಂತ ಶ್ರೀಮಂತರಿಗೆ ದೀರ್ಘಾವಧಿಯ ಸಾಂಸ್ಕೃತಿಕ ಶಿಕ್ಷಣವಿತ್ತು. ಸೈನ್ಯದ ಮತ್ತು ಸಾರ್ವಜನಿಕ ಉನ್ನತ ಸ್ಥಾನಗಳಿಗೆ ನೇಮಿಸಬೇಕೆಂದು ಮಿಕ್ಕ ಪ್ರಯೋಗಸಾಮರ್ಥ್ಯವುಳ್ಳವರಿಗೆ ಸೈನಿಕ ಶಿಕ್ಷಣವಿತ್ತು ಸೈನ್ಯದಲ್ಲಿ ಯೋಧರನ್ನಾಗಿಯೂ, ಕೆಳದರ್ಜೆಯ ಸಾರ್ವಜನಿಕ ಸ್ಥಾನಗಳಿಗೂ ನೇಮಿಸಬೇಕೆಂದು ಪ್ರತಿಪಾದಿಸಿದ್ದಾನೆ. ಶ್ರೀಮಂತ ಪ್ರತಿಭಾವಂತರಿಗೆ 20 ನೆಯ ವರ್ಷದಿಂದ 10 ವರ್ಷಗಳ ಕಾಲ [[ಗಣಿತ|ಗಣಿತಶಾಸ್ತ್ರವನ್ನೊಳಗೊಂಡ]] ಶಿಸ್ತಿನ ಶಿಕ್ಷಣವನ್ನೂ, ಮೂವತ್ತನೆಯ ವರ್ಷದಿಂದ ಅದರಲ್ಲಿ ಆಯ್ದ ಕೆಲವರಿಗೆ ತತ್ತ್ವಶಾಸ್ತ್ರ ಮತ್ತು [[ತರ್ಕಶಾಸ್ತ್ರ|ತರ್ಕಶಾಸ್ತ್ರಗಳಲ್ಲಿ]] ಮತ್ತೆ ಐದು ವರ್ಷಗಳ ಶಿಕ್ಷಣವನ್ನೂ ಕೊಟ್ಟು ಉನ್ನತ ಸಾರ್ವಜನಿಕ ಹುದ್ದೆಗಳಿಗೆ ಸಿದ್ಧಪಡಿಸಬೇಕಾಗಿತ್ತು. ಐವತ್ತನೆಯ ವಯಸ್ಸಿನಲ್ಲಿ ಅವರು ನಿವೃತ್ತರಾಗಿ [[ಧ್ಯಾನ]] ಮತ್ತು ತತ್ವಚಿಂತನೆಯ ಜೀವನ ನಡೆಸಬೇಕೆಂದು ಆತ ಸಲಹೆ ಮಾಡಿದ್ದಾನೆ. ಅಂಥ ಸುಸಂಸ್ಕೃತರು ಅವನ ಕನಸಿನ ರಾಜ್ಯದ ಸಂರಕ್ಷಕರೂ ಪ್ರಗತಿ ಸಾಧಕರೂ ಆಗುವರೆಂದು ಆತನ ಭಾವನೆ.<ref>{{Cite book |last=Plato |title=Republic |pages=188}}</ref> ಪ್ಲೇಟೋವಿನ ಶಿಕ್ಷಣ ಕ್ಷೇತ್ರದ ಈ ಪಕ್ಷಪಾತ ನೀತಿಯನ್ನು ಕೆಲವರು [[ಪ್ರಜಾಪ್ರಭುತ್ವ|ಲೋಕಸತ್ತೆಗೆ]] ಒಪ್ಪದ ನೀತಿಯೆಂದು ಟೀಕಿಸಿದರೆ ಮತ್ತೆ ಕೆಲವರು ಅದು ಅವರವರಿಗೊಪ್ಪುವ ಶಿಕ್ಷಣವೀಯಬೇಕೆಂಬ ಆಧುನಿಕ ನೀತಿಯೆಂದು ಪ್ರಶಂಸಿದ್ದಾರೆ.
== ಪಾಶ್ಚಾತ್ಯ ಶಿಕ್ಷಣದ ಮೇಲೆ ಗ್ರೀಕರ ಪ್ರಭಾವ ==
ಪ್ಲೇಟೊ ಮತ್ತು ಆರಿಸ್ಟಾಟಲ್ರು ಉದ್ಘಾಟಿಸಿದ ಪ್ರಾಚೀನ ಗ್ರೀಕರ ಶಿಕ್ಷಣದೃಷ್ಟಿ ಆಧುನಿಕ ಕಾಲದವರೆಗೂ [[:en:Western_education|ಪಾಶ್ಚಾತ್ಯ ಶಿಕ್ಷಣ]] ಕ್ಷೇತ್ರದ ಮೇಲೆ ತನ್ನ ಪ್ರಭಾವ ಬೀರುತ್ತ ಬಂದಿದೆ. ಮಹಿಳೆಯರಿಗೂ [[ಪುರುಷ|ಗಂಡಸರಿಗೆ]] ಕೊಡುವ ಶಿಕ್ಞಣವನ್ನೇ ಕೊಡಬೇಕೆಂಬ ತತ್ತ್ವವನ್ನು [[ಇಂಗ್ಲೆಂಡ್|ಇಂಗ್ಲೆಂಡಿನಂಥ]] ಕೆಲವು ರಾಷ್ಟ್ರಗಳು ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೂ ಒಪ್ಪಿರಲಿಲ್ಲ.<ref>https://www.oxford-royale.com/articles/history-womens-education-uk</ref> ಅದರೆ ಈಚೆಗೆ ಕಾರ್ಯಕ್ಷೇತ್ರದಲ್ಲಿ ಅವರ ದೃಷ್ಟಿ ಅನುಷ್ಠಾನಕ್ಕೆ ಬರುತ್ತಿದೆ. [[ಎಂಜಿನಿಯರಿಂಗ್]] ಆದಿಯಾದ ಎಂಥ ಕಠಿಣ ಶ್ರಮದ ಶಿಕ್ಷಣಕ್ಕೂ ಈಗ ಮಹಿಳೆಯರು ಬರುತ್ತಿರುವುದನ್ನು ನೋಡಿದರೆ ಈ ಅಂಶ ಸ್ಪಷ್ಟಪಡುತ್ತದೆ. ಹಾಗೆಯೇ ವಯಸ್ಕರ ಶಿಕ್ಷಣ, ಉನ್ನತ ಸಾಂಸ್ಕೃತಿಕ ಶಿಕ್ಷಣ, ಶಕ್ತಿಸಾಮರ್ಥ್ಯಗಳನ್ನವಲಂಬಿಸಿ ನೀಡುವ ಶಿಕ್ಷಣಕ್ಕೆ ವೈಯಕ್ತಿಕ ಗಮನ, ತತ್ತ್ವಶಾಸ್ತ್ರದಂಥ ವಿಷಯಗಳ ವ್ಯಾಸಂಗಕ್ಕೆ ವ್ಯಕ್ತಿ ಅನುಭವವನ್ನೂ, ಪ್ರೌಢಿಮೆಯನ್ನೂ ಗಳಿಸಿರಬೇಕೆಂಬ ನಿಯಮ ಮುಂತಾದ ಆಧುನಿಕ ಪ್ರವೃತ್ತಿಗಳಿಗೆಲ್ಲ ಅವರು ಜನಕರೆನ್ನಬಹುದು. ಎಲ್ಲ ಶಿಕ್ಷಣವೂ ಮಾನವರಲ್ಲಿ ಒಳಿತನ್ನು ಬೆಳಸಬೇಕೆಂಬ ಪ್ಲೇಟೊವಿನ ದೃಷ್ಟಿ ಎಲ್ಲ ದೇಶಗಳ ಶಿಕ್ಷಣದ ಗುರಿಯ ಮೇಲೂ ತನ್ನ ಪ್ರಭಾವವನ್ನು ಬೀರಿದೆ. ಆರಿಸ್ಟಾಟಲ್ ತನ್ನ ಪಾಲಿಟಿಕ್ಸ್ ಕೃತಿಯಲ್ಲಿ ಶಿಕ್ಷಣ ಸೇವಾವ್ಯವಸ್ಥೆಯನ್ನೂ ರಾಜ್ಯ ನಿಯಂತ್ರಿಸಬೇಕೆಂದೂ, ಪೌರ ಶಿಕ್ಷಣ ಅದರ ಮುಖ್ಯ ಉದ್ದೇಶವಾಗಿರಬೇಕೆಂದೂ ಮಾಡಿರುವ ಸಲಹೆ ಈಚೆಗೆ ಅನುಷ್ಠಾನಕ್ಕೆ ಬರುತ್ತಿದೆ. ಸರ್ಕಾರ ಪೌರರನ್ನು ತನ್ನ ದೃಷ್ಟಿಪಥಕ್ಕೊಪ್ಪುವಂತೆ ರೂಪಿಸಬೇಕೆಂಬ ಅವನ ಸಲಹೆ [[ಕಮ್ಯೂನಿಸಮ್|ಕಮ್ಯೂನಿಸ್ಟ್]] ರಾಷ್ಟ್ರಗಳಿಗೆ ತುಂಬ ಪ್ರಿಯವೆನಿಸಿದೆ. ಶಿಕ್ಷಣ ಮಕ್ಕಳಲ್ಲಿ ಸಾಮಾಜಿಕ ವ್ಯಕ್ತಿತ್ವವನ್ನೂ ರೂಪಿಸಬೇಕೆಂಬ ಸಲಹೆ 1926 ರಲ್ಲಿ [[ಯುನೈಟೆಡ್ ಕಿಂಗ್ಡಂ|ಬ್ರಿಟನ್ನಿನಲ್ಲಿ]] ನೇಮಕವಾಗಿದ್ದ [[:en:William_Henry_Hadow|ಹ್ಯಾಡೊ]] ಸಮಿತಿಯ ಶಿಕ್ಷಣ ಸುಧಾರಣೆಯ ವರದಿಯಲ್ಲಿ ಅಂಗೀಕಾರ ಪಡೆದಿರುವಂತಿದೆ.<ref>https://education-uk.org/documents/hadow1926/hadow1926.html</ref> ವ್ಯಕ್ತಿ ಸಮಾಜವನ್ನೂ, ರಾಷ್ಟ್ರವನ್ನೂ ಸದ್ಭಾವನೆಯಿಂದ ಕಾಣಬೇಕೆಂಬ ಅವನ ಸಲಹೆ ಆಧುನಿಕ ಶಿಕ್ಷಣಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿರುವ ಭಾವನಾತ್ಮಕ ಶಿಕ್ಷಣಕ್ಕೆ ತಳಹದಿಯೆನಿಸುವಂತಿದೆ. ಶಿಕ್ಷಣ ಜೀವನದ ಪರಿಸ್ಥಿತಿಯನ್ನೂ, ತತ್ತ್ವದೃಷ್ಟಿಯನ್ನೂ ಆಧಾರ ಮಾಡಿಕೊಂಡು ಜನತೆಯ ಆಶೋತ್ತರಗಳನ್ನು ಪೂರೈಸುವಂತೆ ರೂಪುಗೊಳ್ಳಬೇಕೆಂಬ ವಾದ ಗ್ರೀಕರ ಶಿಕ್ಷಣ ಪದ್ಧತಿಯಲ್ಲಿ ಪುರಸ್ಕಾರ ಪಡೆದಿದೆ.
ಒಟ್ಟಿನಲ್ಲಿ ಎರಡೂವರೆ ಸಹಸ್ರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಗ್ರೀಸಿನ ಶಿಕ್ಷಣ ಏಕಪ್ರಕಾರವಾಗಿ ಪಾಶ್ಚಾತ್ಯ ಶಿಕ್ಷಣವನ್ನು ಪರಿಣಾಮಗೊಳಿಸುತ್ತ ಬಂದಿದೆ.
== ಆಧುನಿಕ ಗ್ರೀಸಿನಲ್ಲಿ ಶಿಕ್ಷಣ ==
ಆಧುನಿಕ ಗ್ರೀಸಿನಲ್ಲಿ ಶಿಕ್ಷಣ ಮೂರು ಅಂತಸ್ತುಗಳಲ್ಲಿ ವ್ಯವಸ್ಥೆಗೊಂಡಿದೆ.
# 2 ವರ್ಷಗಳ [[ಶಿಶುವಿಹಾರ|ಕಿಂಡರ್ಗಾರ್ಟನ್]]<ref>{{cite web |title=Law 4521/2018, Article 33(3), Government Gazette 38/A/2-3-2018 |url=https://www.hellenicparliament.gr/UserFiles/bcc26661-143b-4f2d-8916-0e0e66ba4c50/i-uniwest-pap-olo.pdf#page=33 |website=Hellenic Parliament |language=el}}</ref> ಮತ್ತು 6 ವರ್ಷಗಳ [[ಪ್ರಾಥಮಿಕ ಶಾಲೆ]] ಇವನ್ನೊಳಗೊಂಡಂತೆ [[ಪ್ರಾಥಮಿಕ ಶಿಕ್ಷಣ]]-ಒಟ್ಟು 8 ವರ್ಷಗಳ ಅವಧಿಯದು;<ref>{{cite web |date=11 February 2019 |title=School Guide for Primary and Preschool Education |url=https://www.minedu.gov.gr/publications/docs2018/25_02_19sch_odigos.pdf |url-status=live |archive-url=https://web.archive.org/web/20220531094728/https://www.minedu.gov.gr/publications/docs2018/25_02_19sch_odigos.pdf |archive-date=31 May 2022 |publisher=[[:el:Ινστιτούτο Τεχνολογίας Υπολογιστών και Εκδόσεων|Computer Technology Institute and Press (CTI) "Diophantus"]] |language=el |via=Ministry of Education}}</ref><ref name="ebooksedugr">{{cite web |title=School E-Books of Primary, Gymnasium, General Lyceum, EPAL Lyceum |url=http://ebooks.edu.gr/ebooks/v2/allcourses.jsp |website=ebooks.edu.gr |publisher=CTI "Diophantus" |language=el}}</ref><ref name="code55">{{cite news |title=Institute of Educational Policy (IEP) Book Collection |url=http://e-library.iep.edu.gr/iep/index.html |website=e-library.iep.edu.gr |publisher=Institute of Educational Policy (IEP). The digital historical collection of school textbooks}}</ref>
# ಪ್ರೌಢಶಿಕ್ಷಣ 3 ವರ್ಷಗಳ ಕಿರಿಯ [[ಪ್ರೌಢಶಾಲೆ]] (Gymnasium) ಮತ್ತು 3 ವರ್ಷಗಳ ಹಿರಿಯ ಪ್ರೌಢಶಾಲೆ (Lyceum)-ಒಟ್ಟು 6 ವರ್ಷಗಳ ಅವಧಿಯದು;
# ಉನ್ನತ ಶಿಕ್ಷಣ, ಕಿಂಡರ್ಗಾರ್ಟನ್ ಅಧ್ಯಾಪಕರ ವೃತ್ತಿ ಒಂದು ವರ್ಷಗಳದೂ, ಎಂಜಿನಿಯರಿಂಗ್ ಮುಂತಾದ [[ವೃತ್ತಿಶಿಕ್ಷಣ]] 6 ವರ್ಷಗಳದೂ ಆಗಿರುತ್ತದೆ.
ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ನಡೆಸುತ್ತಿದ್ದರೂ ಅನ್ಯಭಾಷಾ ಬೋಧನೆಗೂ, [[ವಿಶ್ವವಿದ್ಯಾನಿಲಯ|ವಿಶ್ವವಿದ್ಯಾಲಯಕ್ಕೆ]] [[ವಿದ್ಯಾರ್ಥಿ|ವಿದ್ಯಾರ್ಥಿಗಳನ್ನು]] ಸಿದ್ಧಪಡಿಸುವುದಕ್ಕೂ ಅನೇಕ ಖಾಸಗಿ ಶಾಲೆಗಳು ಅಸ್ತಿತ್ವದಲ್ಲಿವೆ. ಅವು ಸರ್ಕಾರಿ ಶಾಲೆಗಳಿಗಿಂತ ಉತ್ತಮವಾದ ಶಿಕ್ಷಣಮಟ್ಟವನ್ನು ಸಾಧಿಸುತ್ತಿರುವುದಲ್ಲದೆ ([[:en:Gymnasium_(school)|ಜಿಮ್ನ್ಯಾಸಿಯಂ]]) ಶಿಕ್ಷಣಾನಂತರ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕದ]] ವಿಶ್ವವಿದ್ಯಾಲಯಗಳಿಗೆ ಸೇರಲು ಅನುಮತಿ ದೊರಕುವುದು. ವೃತ್ತಿ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳೂ ಪ್ರೌಢಶಾಲಾ ಮಟ್ಟದ ಶಿಕ್ಷಣವನ್ನೊದಗಿಸುತ್ತವೆ. ಆದರೆ ಅಲ್ಲಿಯ ಶಿಕ್ಷಣ ಮುಗಿಸಿದವರು ವಿಶ್ವವಿದ್ಯಾಲಯಕ್ಕೆ ಸೇರಲು ಅವಕಾಶವಿರುವುದಿಲ್ಲ. 1962 ರ [[ಜನಗಣತಿ (ಗಣತಿ)|ಜನಗಣತಿಯ]] ಪ್ರಕಾರ ಹತ್ತು ವರ್ಷಗಳಿಗೆ ಮೇಲ್ಪಟ್ಟ ವಯೋಮಾನದ ಸೇ. 82.2 ರಷ್ಟು ಅಕ್ಷರಸ್ಥರಿರುವರು. ಗಂಡಸರಲ್ಲಿ ಅಕ್ಷರಸ್ಥರ ಸೇ. ಪ್ರಮಾಣ 92.4, ಹೆಂಗಸರಲ್ಲಿ 72. ಅವರಲ್ಲಿ ಸೇ. 1.8 ರಷ್ಟು ಉನ್ನತ ಶಿಕ್ಷಣವನ್ನೂ, ಸೇ. 8.9ರಷ್ಟು ಪ್ರೌಢಶಿಕ್ಷಣವನ್ನೂ, ಸೇ. 43.3 ರಷ್ಟು ಮಂದಿ ಪ್ರಾಥಮಿಕ ಶಿಕ್ಷಣವನ್ನೂ ಮುಗಿಸಿರುವರು. ವರ್ಷಂಪ್ರತಿ 8 ಲಕ್ಷ ಮಂದಿ ಪ್ರಾಥಮಿಕ ಶಾಲೆಗೂ, 3 ಲಕ್ಷ ಮಂದಿ ಪ್ರೌಢಶಾಲೆಗೂ ಸೇರುವರು. ಪ್ರಾಥಮಿಕ ಶಾಲೆಯಲ್ಲಿ 6 ವರ್ಷಕಾಲ ಕಾನೂನಿನ ಪ್ರಕಾರ ಕಡ್ಡಾಯ ಶಿಕ್ಷಣ ಆಚರಣೆಯಲ್ಲಿದೆ. ಅದನ್ನು 9 ವರ್ಷಕ್ಕೆ ಹೆಚ್ಚಿಸುವ ಯೋಜನೆ ಸರ್ಕಾರದ ಮುಂದಿತ್ತು ಮತ್ತು ಈಗ ಅನುಷ್ಠಾನಗೊಂಡಿದೆ.<ref>{{cite web |title=Greece Geodata Government Maps |url=http://geodata.gov.gr/maps/?locale=en |publisher=Information Management Systems Institute (IMSI). Research and Innovation Center "Athena" |language=el, en |access-date=2026-03-18 |archive-date=2020-09-29 |archive-url=https://web.archive.org/web/20200929225814/http://geodata.gov.gr/maps/?locale=en |url-status=dead }}</ref>
1832 ರಲ್ಲಿ [[:en:Kingdom_of_Bavaria|ಬವೇರಿಯದ]] [[:en:Otto_of_Greece|ಪ್ರಿನ್ಸ್ ಆಟೊ]] ಅಲ್ಲಿನ ಮೊದಲ [[ಅರಸ|ದೊರೆಯಾದಾಗ]] ಅಲ್ಲಿ ಪೂರ್ಣವಾಗಿ ಕೇಂದ್ರೀಯ ನಿಯಂತ್ರಣದ ಶಿಕ್ಷಣ ಪದ್ಧತಿ ಅನುಷ್ಠಾನಕ್ಕೆ ಬಂತು. ಸರ್ಕಾರದ [[ಶಾಲೆ|ಶಾಲೆಯ]] [[ಶಿಕ್ಷಕ|ಅಧ್ಯಾಪಕರೂ]], ಶಿಕ್ಷಣದ ಆಡಳಿತಗಾರರೂ ಸರ್ಕಾರಿ ಅಧಿಕಾರಿಗಳೇ ಆಗಿದ್ದರು. 1967 ರ ತನಕ ಚುನಾಯಿತ ಮಂತ್ರಿಯೊಬ್ಬ ಶಿಕ್ಷಣ ಶಾಖೆಯನ್ನು ನೋಡಿಕೊಳ್ಳುತ್ತಿದ್ದ. ಅನಂತರ ಮುಖ್ಯಮಂತ್ರಿ [[ಸಂಸತ್ತು|ಪಾರ್ಲಿಮೆಂಟಿನ]] ಚುನಾಯಿತ ಸದಸ್ಯರೊಬ್ಬರನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸುತ್ತಿದ್ದ. ಶಿಕ್ಷಣ ಸಚಿವಾಲಯ ಪಠ್ಯಕ್ರಮ, ಪರೀಕ್ಷಾಪದ್ಧತಿ, [[ಪಠ್ಯಪುಸ್ತಕ|ಪಠ್ಯಪುಸ್ತಕಗಳ]] ಆಯ್ಕೆ ಮುಂತಾದವನ್ನು ನಿಯಂತ್ರಿಸುತ್ತದೆ. ಅಧ್ಯಾಪಕರನ್ನು ಸ್ಪರ್ಧಾಪರೀಕ್ಷೆಯೊಂದರ ಮೂಲಕ ಆಯ್ದು ಬೇರೆ ಬೇರೆ ಶಾಲೆಗಳಿಗೆ ನೇಮಿಸಿಕೊಳ್ಳುವರು. ಅನುಭವವುಳ್ಳ ಅಧ್ಯಾಪಕರನ್ನು ಮುಂದೆ ತನಿಖಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳುವುದುಂಟು.
=== ಪಠ್ಯಕ್ರಮ ===
ಹತ್ತೊಂಬತ್ತನೆಯ ಶತಮಾನದ ಆದಿಯಿಂದ ಗ್ರೀಕ್ [[ಕ್ರೈಸ್ತ ಧರ್ಮ|ಕ್ರೈಸ್ತ]] ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವುದು ಶಾಲಾ ಶಿಕ್ಷಣದ ಗುರಿಯಾಗಿತ್ತು. 1952 ರಲ್ಲಿ ಆಚರಣೆಗೆ ಬಂದ ರಾಷ್ಟ್ರಘಟನೆ ಮಕ್ಕಳಲ್ಲಿ ನೈತಿಕ ಮತ್ತು ಬೌದ್ಧಿಕ ಬೆಳೆವಣಿಗೆಯನ್ನು ಸಾಧಿಸುವುದರ ಜೊತೆಗೆ ಗ್ರೀಕ್ ಕ್ರೈಸ್ತ ನಾಗರಿಕತೆಯನ್ನನುಸರಿಸಿ ರಾಷ್ಟ್ರೀಯ ಪ್ರಜ್ಞೆಯನ್ನೂ ಮೂಡಿಸಬೇಕೆಂದು ಸೂಚಿಸಿದೆ. 1967 ರಲ್ಲಿ ಅಸ್ತಿತ್ವಕ್ಕೆ ಬಂದ ಸೈನ್ಯಾಡಳಿತ ಇದೇ ಗುರಿಯನ್ನು ಒತ್ತಿ ಹೇಳುತ್ತ ಬಂತು. ಅದಕ್ಕಾಗಿ ಸೂಕ್ತರೀತಿಯ ಪಠ್ಯಕ್ರಮವನ್ನೂ ಗೊತ್ತು ಮಾಡಿತು.
ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಗ್ರೀಕ್ [[ತಾಯಿನಾಡು|ಮಾತೃಭೂಮಿಯ]] [[ಪ್ರೇಮ]], ಕ್ರೈಸ್ತಮತದವರಲ್ಲಿ ಭಕ್ತಿ, ನೈತಿಕ ಜೀವನ- ಇವನ್ನು ಬೆಳೆಸಲು ಯತ್ನಿಸುವರು. ಅದಕ್ಕನುಕೂಲಿಸುವಂತೆ ಅಲ್ಲಿ ಧಾರ್ಮಿಕ ಶಿಕ್ಷಣವನ್ನೂ, ಗ್ರೀಕ್ ಸಾಹಿತ್ಯದ ವ್ಯಾಸಂಗವನ್ನೂ ಸೇರಿಸಿರುವರು. ಜೊತೆಗೆ, ಇತರ ಸಾಂಪ್ರದಾಯಿಕ ಪಠ್ಯವಿಷಯಗಳನ್ನೂ ಬೋಧಿಸುವರು. ಗ್ರೀಕ್ ಆರ್ತೊಡಾಕ್ಸ್ [[ಧರ್ಮ|ಧರ್ಮದವರಲ್ಲದವರು]] ಧಾರ್ಮಿಕ ಶಿಕ್ಷಣ ಬೋಧನೆಗೆ ಸೇರುವಂತಿಲ್ಲ. ವಯಸ್ಕರಿಗಾಗಿ ಸರ್ಕಾರದ ಮತ್ತು ಖಾಸಗಿ ರಾತ್ರಿ ಶಾಲೆಗಳೂ ಇವೆ. ಅಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯದ, 12 ವರ್ಷಗಳಿಂದ 20 ವರ್ಷಗಳವರೆಗಿನ ವಯಸ್ಕರೆಲ್ಲ ಕಡ್ಡಾಯವಾಗಿ ಹಾಜರಾಗಬೇಕು.
ಪ್ರೌಢಶಾಲೆಯಲ್ಲೂ ಪ್ರಾಥಮಿಕ ಶಿಕ್ಷಣದ ಉದ್ದೇಶವನ್ನೇ ಮುಂದುವರಿಸುವರು. ಅದಕ್ಕಾಗಿ ಅಲ್ಲಿ ಗ್ರೀಕ ಸಾಹಿತ್ಯದ ಮತ್ತು ಧರ್ಮದ ಆಳವಾದ ಅಧ್ಯಯನ ನಡೆಯುವುದು. ಒಂದು ದೃಷ್ಟಿಯಲ್ಲಿ ಸರ್ಕಾರದ ಪ್ರೌಢಶಾಲೆಗಳಲ್ಲಿ [[:en:Culture_of_Greece|ಗ್ರೀಕ್ ಸಂಸ್ಕೃತಿಯ]] ಹಾಗೂ ಧರ್ಮದ ಪ್ರಚಾರ ತೀಕ್ಷ್ಣವಾಗಿ ನಡೆಯುತ್ತದೆ.
ಕೆಲವು ಪ್ರೌಢಶಾಲೆಗಳು [[ಗಣಿತ]] ಮತ್ತು [[ಭೌತಶಾಸ್ತ್ರ|ಭೌತಶಾಸ್ತ್ರದ]] ವ್ಯಾಸಂಗಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿರುತ್ತವೆ. ಲಾಕ್ಷಣಿಕ ಪ್ರೌಢಶಾಲೆಗಳಲ್ಲಿ ಮುಖ್ಯವಾಗಿ ಸಾಹಿತ್ಯ ಮತ್ತು ಧರ್ಮ ಸಂಸ್ಕೃತಿಗಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯವುಂಟು. ಸಾಮಾನ್ಯವಾಗಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಅಷ್ಟಾಗಿ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ.
ಉನ್ನತ ಶಿಕ್ಷಣಕ್ಕಾಗಿ ವಿದ್ಯಾಲಯ ಸಮುದಾಯಗಳು ಏರ್ಪಟ್ಟಿವೆ. ತತ್ತ್ವಶಾಸ್ತ್ರ, [[ನ್ಯಾಯಶಾಸ್ತ್ರ]], ಎಂಜಿನಿಯರಿಂಗ್, [[:en:Natural_science|ನಿಸರ್ಗ ವಿಜ್ಞಾನ]], ಗಣಿತ ಶಾಸ್ತ್ರ, [[:en:Agricultural_science|ಕೃಷಿ ವಿಜ್ಞಾನ]], [[ವೈದ್ಯವಿಜ್ಞಾನ|ವೈದ್ಯಶಾಸ್ತ್ರ]], [[ಔಷಧಿ]] ನಿರ್ಮಾಣ ಶಾಸ್ತ್ರ, ಶಿಕ್ಷಣ ಶಾಸ್ತ್ರ, [[ಧರ್ಮಶಾಸ್ತ್ರ]], ಕೈಗಾರಿಕಾ ವಿಜ್ಞಾನ, ಕಿಂಡರ್ಗಾರ್ಟನ್ ಬೋಧನೆ-ಮುಂತಾದ ವಿಷಯಗಳಲ್ಲಿ ಉನ್ನತ ಶಿಕ್ಷಣವೀಯುವ ವಿದ್ಯಾಲಯಗಳಿವೆ. ಪ್ರತಿ ವಿದ್ಯಾಲಯ ಸಮೂಹವೂ ಅನೇಕ [[ಕಾಲೇಜು ಶಿಕ್ಷಣ|ಕಾಲೇಜು]] ಮತ್ತು ವಿಶ್ವವಿದ್ಯಾಲಯಗಳ ವಿಭಾಗಗಳನ್ನೊಳಗೊಂಡಿರುತ್ತವೆ. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಬೇಕೆಂದಿರುವ ವಿಷಯವನ್ನೂ ವಿದ್ಯಾಲಯವ್ಯೂಹದಲ್ಲಿ ಯಾವ ಸಂಸ್ಥೆಯಲ್ಲಿ ಓದಬೇಕೆಂದಿರುವವರೆಂಬುದನ್ನೂ ಸೂಚಿಸಬೇಕು. ಅದರ ಆಧಾರದ ಮೇಲೆ ಹಾಗೂ ಅವರು ಅದುತನಕ ಸಾಧಿಸಿರುವ ಶಿಕ್ಷಣಾಭಿವ್ಥದ್ಧಿಯ ಮಟ್ಟವನ್ನೂ ಆಧಾರ ಮಾಡಿಕೊಂಡು ಅವರಿಗೆ ಪ್ರವೇಶ ನೀಡಲಾಗುವುದು.
== ಸದ್ಯದ ಪ್ರವೃತ್ತಿಗಳು ==
ಗ್ರೀಸ್ ಅಭಿವೃದ್ಧಿಶೀಲ ರಾಷ್ಟ್ರ. ಅಲ್ಲಿನ ಆರ್ಥಿಕಾಭಿವೃದ್ಧಿಗೆ ಅಗತ್ಯವಾಗುವ ವಿಷಯಗಳು ಅಷ್ಟಾಗಿ ಪಠ್ಯವಸ್ತುವಿನಲ್ಲಿ ಸೇರಿಲ್ಲ. [[ಮಹಾಯುದ್ಧಗಳು|ಮಹಾಯುದ್ಧಾನಂತರ]] ಅಲ್ಲಿಗೆ ಅಧಿಕ ಸಂಖ್ಯೆಯಲ್ಲಿ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕ]] ಮತ್ತು [[ಯುರೋಪ್|ಯೂರೋಪಿನ]] ಜನ ಬಂದು ನೆಲೆಸುತ್ತಿರುವರು. ಆದ್ದರಿಂದ [[ಇಂಗ್ಲಿಷ್]] ಮತ್ತು [[ಫ್ರೆಂಚ್ ಭಾಷೆ|ಫ್ರೆಂಚ್ ಭಾಷೆಗಳ]] ಬೋಧನೆಗೆ ಪಠ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಹಾಗೆಯೆ, ವಾಣಿಜ್ಯ ವ್ಯವಹಾರದ ವಿಷಯಗಳೂ ಸೇರುತ್ತಿವೆ. 1964 ರಿಂದ 15 ವರ್ಷದ ವಯಸ್ಸಿನವರೆಗೆ ಶಿಕ್ಷಣ ಕಡ್ಡಾಯ ಮಾಡಲಾಯಿತು. ಪ್ರೌಢಶಾಲೆಯಲ್ಲಿ ಬಗೆಬಗೆಯ ಐಚ್ಛಿಕ ವಿಷಯಗಳು ಸೇರುತ್ತಿವೆ. ಮುಖ್ಯವಾಗಿ ಅನ್ಯಭಾಷೆಗಳು ಆಕರ್ಷಣೀಯ ವಿಷಯಗಳಾಗುತ್ತಿವೆ. ಹಾಗೆಯೇ, ಪೂರ್ಣವಾಗಿ ಕೇಂದ್ರೀಕರಿಸಲಾಗಿದ್ದ ಶಿಕ್ಷಣದ ಆಡಳಿತವನ್ನು ವಿಕೇಂದ್ರೀಕರಿಸಿ ಸ್ಥಳೀಯ ಘಟಕಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲಾಗುತ್ತಿದೆ. ಇದರಿಂದ ಗ್ರೀಕ್, ಸಾಹಿತ್ಯ, ಸಂಸ್ಕೃತಿ, ಧರ್ಮ-ಇವಕ್ಕೆ ಸುಧಾರಣೆಗಳಿಂದ ಧಕ್ಕೆ ಬರುವುದೆಂದು ಸಾಂಪ್ರದಾಯಿಕ ಸಂಸ್ಥೆಗಳು ಪ್ರತಿಭಟಿಸಿದವು. 1967ರಲ್ಲಿ ನಡೆದ ಕ್ರಾಂತಿಯ ಅನಂತರ ಬಂದ ಸೇನಾಪ್ರಭುತ್ವ ಆಚರಣೆಗೆ ಬರುತ್ತಿದ್ದ ಸುಧಾರಣೆಗಳನ್ನು ಮೊಟಕು ಮಾಡಿತು.
== ಉಲ್ಲೇಖಗಳು ==
{{ಉಲ್ಲೇಖಗಳು}}
== ಗ್ರಂಥಸೂಚಿ ==
* Plutarch. Lives. [http://www.perseus.tufts.edu/hopper/text?doc=Perseus:text:2008.01.0047 Life of Lycurgus]
* [[William Smith (lexicographer)|Smith, William]] (1890). [[iarchive:adictionarygree01smitgoog/page/594/mode/2up|"Saltatio"]]. In Smith, William; Wayte, William; Marindin, G. E. (eds.). ''[[A Dictionary of Greek and Roman Antiquities]]''. 3rd ed. London: John Murray. p. 594. {{PD-notice}}
== ಹೊರಗಿನ ಕೊಂಡಿಗಳು ==
* {{URL|https://www.minedu.gov.gr|Ministry of Education}}
* [https://maps.sch.gr/main.html Map of schools of the GSN] {{Webarchive|url=https://web.archive.org/web/20260222021841/http://maps.sch.gr/main.html |date=2026-02-22 }} {{in lang|el}}
* [https://www.sch.gr/English Greek School Network (GSN)] {{in lang|el}}
* [https://www.sch.gr/sites/sch-units/sites Websites of schools of the GSN] {{in lang|el}}
* {{URL|https://www.gov.gr/upourgeia/upourgeio-paideias-kai-threskeumaton|Ministry of Education - services via gov.gr}} {{in lang|el}}
* {{URL|https://www.gov.gr/en/upourgeia/upourgeio-paideias-kai-threskeumaton|Ministry of Education - services via gov.gr}} {{in lang|en}} via eTranslation [[Digital Europe Programme]]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರೀಸಿನ ಶಿಕ್ಷಣ ಪದ್ಧತಿ}}
{{Interwikineeded}}
[[ವರ್ಗ:ಶಿಕ್ಷಣ]]
[[ವರ್ಗ:ಗ್ರೀಸ್]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
7yga1lomc0exwp278qzppv3881qqo98
ಕಾಯಂಕುಲಂ ಕಾಯಲ್
0
179833
1379545
1377859
2026-08-08T23:07:42Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379545
wikitext
text/x-wiki
'''{{databox}}'''{{Infobox body of water
| name = ಕಾಯಂಕುಳಂ ಕಾಯಲ್
| native_name ={{native name|ml|കായംകുളം കായൽ}}
| pushpin_map=Kerala
| pushpin_map_alt= ಕೇರಳದೊಳಗೆ ಕಾಯಂಕುಳಂ ಸರೋವರದ ಸ್ಥಳ
| other_name = {{Plainlist |
*ಕಾಯಂಕುಳಂ ಸರೋವರ
*ಕಾಯಂಕುಳಂ ಅಳಿವೆ
}}
| image = Kattil Kadavu 1.jpg
| caption = ಕಾಯಂಕುಳಂ ಸರೋವರದ ನೋಟ
| alt = ಕಾಯಂಕುಳಂ ಸರೋವರದ ನೋಟ
| image_bathymetry =
| caption_bathymetry =
| location =
| coordinates = {{coord|9|10|N|76|28|E|region:IN_type:waterbody_source:GNS-enwiki|display=inline,title}}
| type =
| inflow = [[ಅಚನ್ಕೋವಿಲ್]], [[ಪಂಬಾ ನದಿ|ಪಂಬಾ]] (ಕಾಲುವೆಗಳ ಮೂಲಕ)
| outflow =
| catchment =
| countries = ಭಾರತ
| length = {{convert|30.4|km}}<ref>{{cite book|author1=Shree Narain Dwivedi |author2=V. S. Bhatt |author3=Pradeep Chaturvedi |title=Coastal Zone Management in India|year=1989|publisher=Indian Association for the Advancement of Science}}</ref>
| width = {{convert|2.74|km}}<ref>{{cite journal|last=University of Cochin. Dept. of Marine Sciences|first=University of Cochin. Dept. of Marine Biology and Oceanography|journal=Bulletin of the Department of Marine Sciences|year=1971|volume=5-7}}</ref>
| area = {{convert|1652.33|ha}}<ref>{{cite journal|last=Thomson|first=K T|title=Economic and Social Management of Estuarine Biodiversity in the West Coast of India|journal=Cochin University of Science and Technology, Cochin|date=February 2003}}</ref>
| depth = {{convert|1.77|m}}
| max-depth = {{convert|2.5|m}}
| volume =
| residence_time =
| shore =
| elevation = {{convert|1|m|ft}}ಕ್ಕಿಂತ ಕಡಿಮೆ
| islands =
| settlements = [[ಕಾಯಂಕುಳಂ]]
}}
'''ಕಾಯಂಕುಳಂ ಕಾಯಲ್''', '''ಕಾಯಂಕುಳಂ ಸರೋವರ''' ಅಥವಾ '''ಕಾಯಂಕುಳಂ ಅಳಿವೆ'''ಯು [[ಪನ್ಮನ]] ಮತ್ತು [[ಕಾರ್ತಿಕಪಲ್ಲಿ]] ನಡುವೆ ಹರಡಿರುವ ಆಳವಿಲ್ಲದ ಲವಣಜಲ ಸರೋವರವಾಗಿದೆ. ಇದು ಕಾಯಂಕುಳಂ ಅಣೆಕಟ್ಟಿನಲ್ಲಿ [[ಅರೇಬಿಯನ್ ಸಮುದ್ರ]]ಕ್ಕೆ ಒಂದು ನಿರ್ಗಮನವನ್ನು ಹೊಂದಿದೆ.<ref>{{cite web|title=Alappuzha Rivers & Lakes |url=http://alappuzha.nic.in/aboutalpy/rivers.htm |publisher=Collectorate, Alappuzha District, Kerala State, India. |access-date=27 September 2013 |url-status=dead |archive-url=https://web.archive.org/web/20131013075932/http://alappuzha.nic.in/aboutalpy/rivers.htm |archive-date=13 October 2013 }}</ref> ಕಾಯಲ್ ಹೆಚ್ಚಿನ ಸಮಯ ಸಮುದ್ರಕ್ಕೆ ಸಂಪರ್ಕ ಹೊಂದಿರುತ್ತಿತ್ತು, ಆದರೆ ಒಣಗಾಲದಲ್ಲಿ ಒಂದು ಮರಳು ದಿಬ್ಬದಂತಹ ರಚನೆಯು ಅದನ್ನು ಸಮುದ್ರದಿಂದ ಪ್ರತ್ಯೇಕಿಸುತ್ತಿತ್ತು.<ref name="ccpp2" /> ಈಗ ಕಾಯಂಕುಳಂ ಮೀನುಗಾರಿಕಾ ಬಂದರಿನ ನಿರ್ಮಾಣಕ್ಕಾಗಿ ಆ ದಿಬ್ಬವನ್ನು ಶಾಶ್ವತವಾಗಿ ತೆರೆಯಲಾಗಿದೆ.<ref name=chloro/> ಕಾಯಂಕುಳಂ ದೋಣಿ ಪಂದ್ಯವನ್ನು ಕಾಯಂಕುಳಂ ಕಾಯಲ್ನಲ್ಲಿ ನಡೆಸಲಾಗುತ್ತದೆ.<ref name=race/> ಕಾಯಂಕುಳಂ ಕಾಯಲ್ ಕೇರಳದ ಮೂರನೇ ಅತಿದೊಡ್ಡ ಕಾಯಲ್ (ಒಳನಾಡಿನ ಲವಣಜಲ ಸರೋವರ) ಆಗಿದೆ.
==ಇತಿಹಾಸ==
ಕಾಯಂಕುಳಂ ಕಾಯಲ್ ಒಮ್ಮೆ ಹಸಿರು ಹೊಲಗಳಾಗಿದ್ದವು ಮತ್ತು ತಿರುವಾಂಕೂರು ರಾಜ [[ಮಾರ್ತಾಂಡ ವರ್ಮ]]ನಿಂದ ಸೋಲಿಸಲ್ಪಟ್ಟ ಕಾಯಂಕುಳಂ ರಾಜನು ತನ್ನ ನೌಕಾ ಅಧಿಕಾರಿಗಳಾದ ಅರಟ್ಟುಪುಳ ಅರಯರಿಗೆ ಸಮುದ್ರದಿಂದ ಅದನ್ನು ಬೇರ್ಪಡಿಸುವ ಅಡ್ಡಗೋಡೆಯನ್ನು ಒಡೆದು ಉಪ್ಪುನೀರನ್ನು ಒಳಗೆ ಬಿಡಲು ಆದೇಶಿಸಿದನು, ಇದರಿಂದ ಕೃಷಿಭೂಮಿಗಳು ಬೇಸಾಯಕ್ಕೆ ಅನುಪಯುಕ್ತವಾಗುತ್ತವೆ ಎಂಬ ಜನಪ್ರಿಯ ನಂಬಿಕೆಯಿದೆ.<ref>{{cite web|title=കായംകുളം സാമൂഹ്യസാംസ്കാരിക ചരിത്രം|url=http://www.kayamkulammunicipality.in/ml/history|publisher=Kayamkulam Municipality|access-date=27 September 2013|archive-date=31 January 2016|archive-url=https://web.archive.org/web/20160131041414/http://www.kayamkulammunicipality.in/ml/history|url-status=dead}}</ref> ಕಾಯಂಕುಳಂ ವಿಲೀನಗೊಂಡಾಗ ರಾಜನು ತನ್ನ [[ಕೃಷ್ಣಪುರಂ ಅರಮನೆ|ಅರಮನೆ]]ಯಲ್ಲಿನ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಕಾಯಂಕುಳಂ ಸರೋವರಕ್ಕೆ ಎಸೆದು ಸಾಮ್ರಾಜ್ಯದಿಂದ ಪಲಾಯನ ಮಾಡಿದನು ಎಂದು ನಂಬಲಾಗಿದೆ.<ref>{{cite book|last=Menon|first=A. Sreedhara|title=A survey of Kerala history|year=2007|publisher=D C Books|location=Kerala State, India|isbn=9788126415786|pages=229–230}}</ref>
[[ಐತಿಹ್ಯಮಾಲಾ]]ದಲ್ಲಿ [[ಕಾಯಂಕುಳಂ ಕೊಚುಣ್ಣಿ]] ತನ್ನ ಅತ್ತೆಯನ್ನು ಕೊಂದ ನಂತರ ಕಾಯಂಕುಳಂ ಸರೋವರದಲ್ಲಿ ಮುಳುಗಿಸಿದನು ಎಂದು ಉಲ್ಲೇಖಿಸಲಾಗಿದೆ.<ref>{{cite book|last=ശങ്കുണ്ണി|first=കൊട്ടാരത്തിൽ|title=ഐതിഹ്യമാല കായംകുളം കൊച്ചുണ്ണി|publisher=വിക്കിഗ്രന്ഥശാല (Malayalam Wikisource)|url=https://ml.wikisource.org/wiki/%E0%B4%90%E0%B4%A4%E0%B4%BF%E0%B4%B9%E0%B5%8D%E0%B4%AF%E0%B4%AE%E0%B4%BE%E0%B4%B2/%E0%B4%95%E0%B4%BE%E0%B4%AF%E0%B4%82%E0%B4%95%E0%B5%81%E0%B4%B3%E0%B4%82_%E0%B4%95%E0%B5%8A%E0%B4%9A%E0%B5%8D%E0%B4%9A%E0%B5%81%E0%B4%A3%E0%B5%8D%E0%B4%A3%E0%B4%BF}}</ref>
==ಭೌಗೋಳಿಕತೆ==
[[File:Kayamkulam Kayal Openstreetmap.png|thumbnail|ಕಾಯಂಕುಳಂ ಕಾಯಲ್ನ ನಕ್ಷೆ]]
ಕಾಯಂಕುಳಂ ಕಾಯಲ್ 9°2'N ನಿಂದ 9°16'N ಅಕ್ಷಾಂಶಗಳು ಮತ್ತು 76°25'E ನಿಂದ 76°32'E ರೇಖಾಂಶಗಳ ನಡುವೆ ಇದೆ. ಈ ಒಳನಾಡಿನ ಜಲರಾಶಿಯು ಆಲಪ್ಪುಳ ಜಿಲ್ಲೆ ಮತ್ತು ಕೊಲ್ಲಂ ಜಿಲ್ಲೆ ಎರಡರಲ್ಲೂ ವ್ಯಾಪಿಸಿದೆ; ಒಟ್ಟು {{convert|1652.33|ha}} ಪೈಕಿ, {{convert|140.58|ha}} ಕೊಲ್ಲಂ ಜಿಲ್ಲೆಯಲ್ಲಿಯೂ, ಉಳಿದ {{convert|1511.75|ha}} ಆಲಪ್ಪುಳ ಜಿಲ್ಲೆಯಲ್ಲಿಯೂ ಇದೆ.<ref>{{Cite web |url=http://www.fisheries.kerala.gov.in/images/publications/Inland%20%20Statistics%202010%20Final.docx.pdf |title=KERALA INLAND FISHERIES STATISTICS 2010 DEPARTMENT OF FISHERIES THIRUVANANTHAPURAM |access-date=2026-07-26 |archive-date=2016-03-04 |archive-url=https://web.archive.org/web/20160304040128/http://www.fisheries.kerala.gov.in/images/publications/Inland%20%20Statistics%202010%20Final.docx.pdf |url-status=dead }}</ref> ಕಾಯಲ್ ಹೆಚ್ಚಿನ ಉದ್ದ-ಅಗಲ ಅನುಪಾತವನ್ನು ಹೊಂದಿದ್ದು, ಬಹುತೇಕ ರೇಖೀಯ ಜಲರಾಶಿಯಾಗಿದೆ. ಇದು ಸರ್ವೇ ಆಫ್ ಇಂಡಿಯಾ (SOI) ಸ್ಥಳಾಕೃತಿ ನಕ್ಷೆಗಳ 58C/8 ಮತ್ತು 58C/12 ರ ವ್ಯಾಪ್ತಿಯಲ್ಲಿ ಬರುತ್ತದೆ. ಕಾಯಲ್ ಉತ್ತರದಲ್ಲಿ [[ವೇಂಬನಾಡ್ ಕಾಯಲ್]]ಗೂ ಮತ್ತು ದಕ್ಷಿಣದಲ್ಲಿ [[ಅಷ್ಟಮುಡಿ ಕಾಯಲ್]]ಗೂ ಸಂಪರ್ಕ ಹೊಂದಿದೆ.<ref name =sri>{{cite book|last=Srinivas|first=Reji|title=GEOCHEMICAL, SEDIMENTOLOGICAL AND REMOTE SENSING STUDIES OF KAYAMKULAM ESTUARY, SOUTH WEST COAST OF INDIA - A GIS APPROACH|year=2001|publisher=Department of Marine Geology and Geophysics School of Marine Sciences Cochin University of Science and Technology|location=Kochi,Kerala}}</ref>
==ಹವಾಮಾನಶಾಸ್ತ್ರ ಮತ್ತು ಹವಾಮಾನ==
ಕಾಯಲ್ ಪ್ರದೇಶವು ಕಾಲಾವಧಿಯ ಭಾರೀ ಮಳೆಯಿಂದ ಪ್ರಭಾವಿತವಾದ ಆರ್ದ್ರ ಮತ್ತು ಸಮುದ್ರೋಪಾಂತ ಉಷ್ಣವಲಯದ ಹವಾಮಾನವನ್ನು ಹೊಂದಿದೆ. ಇದು ವಾರ್ಷಿಕವಾಗಿ 2000 ಮಿ.ಮೀ. ಗಿಂತ ಹೆಚ್ಚು ಮಳೆಯನ್ನು ಪಡೆಯುತ್ತದೆ, ಇದರಲ್ಲಿ 70% ಕ್ಕಿಂತ ಹೆಚ್ಚು ನೈಋತ್ಯ ಬೇಸಿಗೆ ಮಾನ್ಸೂನ್ (ಇಡವಪ್ಪಾತಿ) ನಿಂದ ಮತ್ತು ಉಳಿದದ್ದು ಈಶಾನ್ಯ ಚಳಿಗಾಲದ ಮಾನ್ಸೂನ್ (ತುಲಾವರ್ಷಂ) ನಿಂದ ಬರುತ್ತದೆ. ವಾರ್ಷಿಕ ಸರಾಸರಿ ಕನಿಷ್ಠ ಮತ್ತು ಗರಿಷ್ಠ ತಾಪಮಾನವು ಸುಮಾರು {{convert|25|C}} ಮತ್ತು {{convert|30|C}} ಆಗಿರುತ್ತದೆ. ಆರ್ದ್ರತೆಯು ಮಧ್ಯಾಹ್ನಕ್ಕಿಂತ ಬೆಳಿಗ್ಗೆ ಹೆಚ್ಚಾಗಿರುತ್ತದೆ.
ಕಾಯಲ್ ಹೆಚ್ಚಿನ ಸಮಯ ಸಮುದ್ರಕ್ಕೆ ಸಂಪರ್ಕ ಹೊಂದಿರುತ್ತಿತ್ತು, ಆದರೆ ಒಣಗಾಲದಲ್ಲಿ ಒಳಹರಿವಿನಿಂದ ಬರುವ ಸೆಡಿಮೆಂಟ್ಗಳು ಕಾಯಲ್ ಅನ್ನು ಸಮುದ್ರದಿಂದ ಪ್ರತ್ಯೇಕಿಸಿ ಒಂದು ಮರಳು ದಿಬ್ಬದಂತಹ ರಚನೆಯನ್ನು ರೂಪಿಸುತ್ತಿದ್ದವು ಮತ್ತು ಮಳೆಗಾಲದಲ್ಲಿ ನದಿಗಳು ಆ ದಿಬ್ಬವನ್ನು ಕತ್ತರಿಸಿ ಕಾಯಲ್ ಸಮುದ್ರಕ್ಕೆ ಸಂಪರ್ಕ ಹೊಂದುತ್ತಿತ್ತು.<ref name="ccpp2" /> ಈಗ ಕಾಯಂಕುಳಂ ಮೀನುಗಾರಿಕಾ ಬಂದರಿನ ನಿರ್ಮಾಣಕ್ಕಾಗಿ ಆ ದಿಬ್ಬವನ್ನು ಶಾಶ್ವತವಾಗಿ ತೆರೆಯಲಾಗಿದೆ.<ref name=chloro/>
==ನೀರಿನ ಗುಣಮಟ್ಟ==
ಕಾಯಲ್ನಲ್ಲಿನ ನೀರಿನ ಗುಣಮಟ್ಟವು ಸಮುದ್ರ ಮತ್ತು ಸಿಹಿನೀರಿನ ನದಿಗಳೆರಡಕ್ಕೂ ಸಂಪರ್ಕ ಹೊಂದಿರುವುದರಿಂದ ಋತುವಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ನೀರಿನ ಲವಣಾಂಶವು ಋತುವಿನ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಇದು ಒಂದು ಇಳಿಜಾರನ್ನು ಸಹ ಪ್ರದರ್ಶಿಸುತ್ತದೆ. ಮಾನ್ಸೂನ್ ಋತುವಿನಲ್ಲಿ ಲವಣಾಂಶವು 11% ಆಗಿದ್ದರೆ, ಒಣಗಾಲದಲ್ಲಿ ಅದು 30% ಆಗಿರುತ್ತದೆ, ಇದು ಸಮುದ್ರ ವ್ಯವಸ್ಥೆಯಷ್ಟೇ ಇರುತ್ತದೆ. ಭಾರೀ ಲೋಹಗಳ ಉಪಸ್ಥಿತಿಯು ಸಾಕಷ್ಟು ಕಡಿಮೆಯಾಗಿದ್ದು, ಮಾನ್ಸೂನ್ ಋತುವಿನಲ್ಲಿ ಹೆಚ್ಚಿನ ಒಳಹರಿವಿನಿಂದಾಗಿ ಗಮನಾರ್ಹ ಇಳಿಕೆ ಕಂಡುಬರುತ್ತದೆ. ವಿಷಕಾರಿ ವಸ್ತುಗಳ ಮಟ್ಟವು ಪತ್ತೆ ಮಾಡಬಹುದಾದ ಮಿತಿಗಿಂತ ಕಡಿಮೆಯಾಗಿದೆ. ಈ ಅಂದಾಜುಗಳು ಕಾಯಲ್ನ ದಂಡೆಯಲ್ಲಿ ರಾಜೀವ್ ಗಾಂಧಿ CCPP ಅನ್ನು ಸ್ಥಾಪಿಸುವ ಮೊದಲು ಮಾಡಲಾಗಿದ್ದವು. ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ನಂತರದ ಒಂದು ಅಧ್ಯಯನವು ತಂಪಾಗಿಸುವ ಸ್ಥಾವರದ ತ್ಯಾಜ್ಯನೀರಿನ ಉಷ್ಣತೆಯು ಸರೋವರದ ನೀರಿಗಿಂತ ಗಮನಾರ್ಹವಾಗಿ ಹೆಚ್ಚಿತ್ತು ಮತ್ತು ವಿದ್ಯುತ್ ಸ್ಥಾವರದ ಸ್ಥಳದ ಬಳಿ ಕರಗಿದ ಆಮ್ಲಜನಕದ ಅಂಶವೂ ಕುಸಿದಿದೆ ಎಂದು ವರದಿ ಮಾಡಿದೆ.<ref>CURRENT STATUS OF WATER QUALITY PARAMETERS IN THE ESTUARINE WATERS SUBJECTED TO EFFLUENT DISCHARGE FROM THE NTPC POWER STATION, KAYAMKULAM, KERALA
November, 2O12 Submitted to UGC, Bangalore By Dr Padma. P., M.Sc., M.Phil., PhD., Associate Professor, Department Of Chemistry, SSV College, Valayanchirangara, Perumbavoor, Kerala</ref>
NTPC ಸ್ಥಾಪನೆಯ ನಂತರ ನೀರನ್ನು ಕೇಂದ್ರೀಯ ಒಳನಾಡು ಮೀನುಗಾರಿಕಾ ಸಂಶೋಧನಾ ಸಂಸ್ಥೆಯು ಅಧ್ಯಯನ ಮಾಡಿತು. pH ಮೌಲ್ಯಗಳು 6.75 (ಮೇ 2000) ರಿಂದ 8.3 (ಏಪ್ರಿಲ್ 2002) ವರೆಗೆ ವ್ಯತ್ಯಾಸವಾಗುತ್ತವೆ. ಸರಾಸರಿ ನೀರಿನ ತಾಪಮಾನವು {{convert|29.5|C}} (2002). ಜೈವಿಕ ಆಮ್ಲಜನಕ ಬೇಡಿಕೆ (BOD5) ಮೌಲ್ಯಗಳು, ರಾಸಾಯನಿಕ ಆಮ್ಲಜನಕ ಬೇಡಿಕೆ (COD) ಮೌಲ್ಯಗಳು ಮತ್ತು ಪೋಷಕಾಂಶಗಳ ಅಂಶವು ಹೆಚ್ಚಿತ್ತು, ಇವು NTPC ತ್ಯಾಜ್ಯನೀರಿನ ಹೊರಸೂಸುವಿಕೆ ಮತ್ತು ತೆಂಗಿನ ಸಿಪ್ಪೆಯ ನೆನೆಸುವಿಕೆ (retting) ಗೆ ಕಾರಣವಾಗಿವೆ.<ref name=140pdf/>
==ಪಾಚಿಗಳು==
ಕಾಯಲ್ನ ಆಳವಿಲ್ಲದ ಬೆಚ್ಚಗಿನ ನೀರು ಸಸ್ಯವರ್ಗ ಮತ್ತು [[ಪ್ಲ್ಯಾಂಕ್ಟನ್]]ಗಳಿಂದ ಸಮೃದ್ಧವಾಗಿದೆ. ಪಾಚಿಗಳ ಹಂಚಿಕೆಯು ಹವಾಮಾನವನ್ನು ಅವಲಂಬಿಸಿದ್ದು, ಗಮನಾರ್ಹ ಬದಲಾವಣೆಗಳನ್ನು ತೋರಿಸುತ್ತದೆ. 2001-02ರ ಒಂದು ಅಧ್ಯಯನವು ನಲವತ್ತೊಂದು ಜಾತಿಯ ಪಾಚಿಗಳು, ಮೈಕ್ಸೋಫೈಸಿಯೇ (Myxophyceae) ಏಳು ಜಾತಿಗಳು, ಕ್ಲೋರೋಫೈಸಿಯೇ (Chlorophyceae) ಇಪ್ಪತ್ತೊಂದು ಜಾತಿಗಳು, ಡೆಸ್ಮಿಡಿಯೇಸಿ (Desmidiaceae) ಐದು ಜಾತಿಗಳು ಮತ್ತು ಬ್ಯಾಸಿಲಾರಿಯೋಫೈಸಿಯೇ (Bacillariophyceae) ಎಂಟು ಜಾತಿಗಳ ಉಪಸ್ಥಿತಿಯನ್ನು ವರದಿ ಮಾಡಿದೆ. ಇದು ಹದಿನೈದು ಪ್ರಾಣಿ ಪ್ಲ್ಯಾಂಕ್ಟನ್ಗಳ ಉಪಸ್ಥಿತಿಯನ್ನೂ ವರದಿ ಮಾಡಿದೆ, ಇದರಲ್ಲಿ ಪ್ರೋಟೋಜೋವಾದ ನಾಲ್ಕು ಜಾತಿಗಳು, ರೋಟಿಫೆರಾ (Rotifera) ಎಂಟು ಜಾತಿಗಳು ಮತ್ತು ಕೋಪೆಪೋಡಾ (Copepoda) ಮೂರು ಜಾತಿಗಳು ಸೇರಿವೆ.<ref name=140pdf>{{cite journal|last=Nandan|first=Dr. S. Bijoy|title=FISHERY OF SELECTED PRAWN SPECIES IN KAYAMKULAM BACKWATER|journal=Central Inland Fisheries Research Institute|date=January 2005|issue=140|url=http://www.cifri.ernet.in/140.pdf|access-date=28 September 2013|archive-date=2 October 2013|archive-url=https://web.archive.org/web/20131002092222/http://www.cifri.ernet.in/140.pdf|url-status=dead}}</ref> 2012ರ ಒಂದು ಅಧ್ಯಯನವು ಕ್ಲೋರೋಫೈಸಿಯೇ (Chlorophyceae) ಹತ್ತು ಜಾತಿಗಳ ಉಪಸ್ಥಿತಿಯನ್ನು ವರದಿ ಮಾಡಿದೆ. ಈ ಅಧ್ಯಯನವು ಪಾಚಿಗಳ ಜನಸಂಖ್ಯೆಯ ಕಾಲಾವಧಿಯ ಏರಿಳಿತವನ್ನೂ ಗಮನಿಸುತ್ತದೆ ಮತ್ತು ಮಾನ್ಸೂನ್ ನಂತರದಲ್ಲಿ ಕ್ಲೋರೋಫೈಸಿಯೇ ಜನಸಂಖ್ಯೆಯು ಉತ್ತುಂಗಕ್ಕೇರುತ್ತದೆ ಎಂದು ವರದಿ ಮಾಡಿದೆ.<ref name=chloro>{{cite journal|author1=Amina S|author2=Sivakami R|author3=Latha C|author4=Anthoni Samy A|title=SEASONAL DISTRIBUTION OF CHLOROPHYCEAE IN KAYAMKULAM BACK WATER|journal=International Journal of Institutional Pharmacy and Life Sciences|date=May 2012|url=http://ijipls.com/uploaded/journal_files/120504070557.pdf|access-date=28 September 2013|archive-date=4 ಮಾರ್ಚ್ 2016|archive-url=https://web.archive.org/web/20160304082149/http://ijipls.com/uploaded/journal_files/120504070557.pdf|url-status=dead}}</ref> ಸರೋವರದ ಆಳವಾದ ಭಾಗವು ನೀಲಿ-ಹಸಿರು ಪಾಚಿ [[ಆಸಿಲೇಟೋರಿಯಾ]] (Oscillatoria) ಯ ಪೊರೆಯನ್ನು ಹೊರತುಪಡಿಸಿ ಸಸ್ಯವರ್ಗದಲ್ಲಿ ಕಳಪೆಯಾಗಿದೆ.<ref name=140pdf /> 1975ರ ಒಂದು ಅಧ್ಯಯನವು [[ಫೋರಮಿನಿಫೆರನ್ಸ್]] (foraminiferans) ಹದಿನಾರು ಜಾತಿಗಳ ಉಪಸ್ಥಿತಿಯನ್ನು ವರದಿ ಮಾಡಿದೆ.<ref>Antony.A.1975 Foraminifera from the Kayamkulam lake, Department of Marine Science University of Cochin VII(2) 251-262p.</ref>
==ಸೆಡಿಮೆಂಟ್ಗಳು==
ಮರಳು, ಕೆಸರು ಮತ್ತು ಜೇಡಿಮಣ್ಣಿನ ಶೇಕಡಾವಾರು ಪ್ರಮಾಣವು ಸ್ಥಳ ಮತ್ತು ಋತುವಿನೊಂದಿಗೆ ವ್ಯಾಪಕವಾಗಿ ಬದಲಾಗುತ್ತದೆ, ಮಾನ್ಸೂನ್ ನಂತರದ ಋತುವಿನಲ್ಲಿ ಮಾನ್ಸೂನ್ ಪೂರ್ವಕ್ಕಿಂತ ಹೆಚ್ಚಿನ ಮರಳು ಶೇಕಡಾವಾರು ಪ್ರಮಾಣವಿರುತ್ತದೆ. ಕೆಸರು ಮತ್ತು ಜೇಡಿಮಣ್ಣಿನ ಅಂಶವು ಮಾನ್ಸೂನ್ ಪೂರ್ವದಲ್ಲಿ ಹೆಚ್ಚಾಗಿರುತ್ತದೆ. ಮರಳಿನ ಕಣಗಳು ಮುಖ್ಯವಾಗಿ ವೆಂಟ್ವರ್ತ್ ಕಣ ಗಾತ್ರ ಮಾನದಂಡದ ಮಧ್ಯಮದಿಂದ ಅತಿಸೂಕ್ಷ್ಮ ಮರಳು ಶ್ರೇಣಿಗೆ ಬರುತ್ತವೆ. ಉತ್ತರ ಭಾಗವು ಕೆಸರು ಮಿಶ್ರಿತ ಅಥವಾ ಜೇಡಿಮಣ್ಣಿನ ಕೇಂದ್ರವನ್ನು ಹೊಂದಿದ್ದು, ಹೆಚ್ಚಾಗಿ ಮರಳಿನಿಂದ ಕೂಡಿದೆ ಮತ್ತು ದಕ್ಷಿಣ ಭಾಗವು ಹೆಚ್ಚಾಗಿ ಕೆಸರು ಮಿಶ್ರಿತವಾಗಿದೆ, ಆದರೆ ನಡುವೆ ಹೆಚ್ಚಿನ ವ್ಯತ್ಯಾಸಗಳಿವೆ.<ref name=sri/>
ಕಾಯಂಕುಳಂನಲ್ಲಿ ರಾಜೀವ್ ಗಾಂಧಿ CCP ಅನ್ನು ಸ್ಥಾಪಿಸುವ ಮೊದಲು ನಡೆಸಿದ ಪರಿಸರ ಪರಿಣಾಮದ ಮೌಲ್ಯಮಾಪನವು ಸೆಡಿಮೆಂಟ್ಗಳಲ್ಲಿನ ಪಾದರಸ ಮತ್ತು ನಿಕಲ್ನ ಸಾಂದ್ರತೆಯು ಕ್ರಸ್ಟ್ ಬಂಡೆಗಳಿಗಿಂತ ತುಂಬಾ ಕಡಿಮೆಯಾಗಿದೆ ಎಂದು ಗಮನಿಸಿದೆ. ತಾಮ್ರದ ಹಂಚಿಕೆಯು ಅಸಮಂಜಸವಾಗಿದ್ದು ಪ್ರಾದೇಶಿಕವಾಗಿ ಬದಲಾಗುತ್ತದೆ. ಸೀಸದ ಸಾಂದ್ರತೆಯು ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ, ಆದರೆ ಅವು ಸಾಮಾನ್ಯವಾಗಿ ಕೈಲೇಟ್ಗಳು ಮತ್ತು ಇತರ ಸಾವಯವ ಪದಾರ್ಥಗಳೊಂದಿಗೆ ಸಂಬಂಧ ಹೊಂದಿವೆ ಮತ್ತು ಸೆಡಿಮೆಂಟ್ ಮ್ಯಾಟ್ರಿಕ್ಸ್ನಲ್ಲಿ ಸ್ಥಿರಗೊಂಡಿವೆ ಮತ್ತು ಲೀಚ್ ಮಾಡಲಾಗುವುದಿಲ್ಲ. ಸೆಡಿಮೆಂಟ್ ಕಬ್ಬಿಣದ ಅಂಶದಲ್ಲಿ ಹೆಚ್ಚಿದೆ, ಬಹುಶಃ ಚಾರ್ನೊಕೈಟ್ ಮತ್ತು ಪೆಗ್ಮಟೈಟ್ ಬಂಡೆಗಳ ಹವಾಮಾನದ ಕಾರಣದಿಂದಾಗಿರಬಹುದು.<ref name=ccpp2/>
==ಜಲಜೀವಿಗಳು==
1955ರಲ್ಲಿ ಮೇರಿ ಜಾನ್ ನಡೆಸಿದ ಅಧ್ಯಯನವು ಹದಿನೈದು ಜಾತಿಯ [[ಮುಲ್ಲೆಟ್ (ಮೀನು)|ಬೂದು ಮುಲ್ಲೆಟ್]]ಗಳನ್ನು ಗುರುತಿಸಿದೆ. ಹೆಚ್ಚಿನ ಜಾತಿಯ ಬೂದು ಮುಲ್ಲೆಟ್ಗಳು ಕಾಯಲ್ ಸಮುದ್ರಕ್ಕೆ ಸಂಪರ್ಕ ಹೊಂದಿರುವ ತಿಂಗಳುಗಳಲ್ಲಿ ಸರೋವರಕ್ಕೆ ವಲಸೆ ಬರುತ್ತವೆ ಎಂದು ಅವರು ವರದಿ ಮಾಡಿದ್ದಾರೆ.<ref>[https://www.jstor.org/stable/1440466 The Grey Mullets of Kayamkulam Lake, India, and Their Fishery C. Mary John Copeia Vol. 1955, No. 3 (19 August 1955), pp. 225-230 Published by: American Society of Ichthyologists and Herpetologists (ASIH)]</ref> ಕಾಯಲ್ [[ಸೀಗಡಿ]]ಗಳಿಂದ ಸಮೃದ್ಧವಾಗಿದೆ.<ref name=140pdf /> ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ (NTPC) ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ನಡೆಸಿದ ಪರಿಸರ ಪರಿಣಾಮದ ಮೌಲ್ಯಮಾಪನವು ಕಾಯಲ್ನಲ್ಲಿ ಸುಮಾರು 70 ಜಾತಿಯ ಮೀನುಗಳನ್ನು ಪಟ್ಟಿ ಮಾಡಿದೆ. ಸುಮಾರು 40 ವಾಣಿಜ್ಯಿಕವಾಗಿ ಮುಖ್ಯವಾದ ಮೀನು ಪ್ರಭೇದಗಳಿವೆ, ಇವುಗಳಲ್ಲಿ [[ಫ್ಲಾಟ್ಹೆಡ್ ಮುಲ್ಲೆಟ್]], ಗ್ರೀನ್ಬ್ಯಾಕ್ ಮುಲ್ಲೆಟ್, ಲಾಂಗಾರ್ಮ್ ಮುಲ್ಲೆಟ್, [[ಲಾರ್ಜ್ಸ್ಕೇಲ್ ಮುಲ್ಲೆಟ್]], [[ಗೋಲ್ಡ್-ಸ್ಪಾಟ್ ಮುಲ್ಲೆಟ್]], [[ಬ್ಲೂಸ್ಪಾಟ್ ಮುಲ್ಲೆಟ್]], ಟೇಡ್ ಬೂದು ಮುಲ್ಲೆಟ್, ಬ್ಲೂಟೇಲ್ ಮುಲ್ಲೆಟ್, ಕಮ್ಮರ್ಸನ್ಸ್ ಗ್ಲಾಸಿ ಪರ್ಚ್ಲೆಟ್, ಬಾಲ್ಡ್ ಗ್ಲಾಸಿ ಪರ್ಚ್ಲೆಟ್, [[ಗ್ರೀಸಿ ಗ್ರೂಪರ್]], [[ಟೈಗರ್ ಪರ್ಚ್]], [[ಸ್ಪಾಟೆಡ್ ಕ್ಯಾಟ್ಫಿಶ್]], [[ಮಿಲ್ಕ್ಫಿಶ್]], [[ಪಿಸೊಡೊನೊಫಿಸ್ ಕ್ಯಾನ್ಸ್ರಿವೋರಸ್|ಲಾಂಗ್ಫಿನ್ ಸ್ನೇಕ್-ಈಲ್]], [[ಸೂಡೋರ್ಹೋಂಬಸ್ ಆರ್ಸಿಯಸ್|ಲಾರ್ಜ್ಟೂತ್ ಫ್ಲೌಂಡರ್]], ''ಸೋಲಿಯಾ ಇಂಡಿಕಾ'', ರಫ್ಸ್ಕೇಲ್ ಟಂಗ್ಸೋಲ್, ಸ್ಪೆಕ್ಲ್ಡ್ ಟಂಗ್ಸೋಲ್, [[ಬ್ಯಾರಕುಡಾ]], [[ಗ್ರೀನ್ ಕ್ರೋಮೈಡ್|ಪರ್ಲ್ಸ್ಪಾಟ್]], [[ಆರೆಂಜ್ ಕ್ರೋಮೈಡ್]], ಸಲ್ಫರ್ ಗೋಟ್ಫಿಶ್, [[ಸ್ಕಾಟೋಫಾಗಸ್ ಆರ್ಗಸ್|ಸ್ಪಾಟೆಡ್ ಸ್ಕ್ಯಾಟ್]], [[ಜೆರೆಸ್ ಫಿಲಮೆಂಟೋಸಸ್|ವಿಪ್ಫಿನ್ ಸಿಲ್ವರ್-ಬಿಡ್ಡಿ]], [[ಜೆರೆಸ್ ಓಬ್ಲೋಂಗಸ್|ಸ್ಲೆಂಡರ್ ಸಿಲ್ವರ್-ಬಿಡ್ಡಿ]], ಸ್ಮಾಲ್ ಬೆಂಗಾಲ್ ಸಿಲ್ವರ್-ಬಿಡ್ಡಿ, [[ಲಿಯೋಗ್ನಾಥಸ್ ಇಕ್ವುಲಸ್|ಕಾಮನ್ ಪೋನಿಫಿಶ್]], [[ಯೂಬ್ಲಿಕೇರಿಯಾ ಸ್ಪ್ಲೆಂಡೆನ್ಸ್|ಸ್ಪ್ಲೆಂಡಿಡ್ ಪೋನಿಫಿಶ್]], [[ಲಿಯೋಗ್ನಾಥಸ್ ಬ್ರೆವಿರೋಸ್ಟ್ರಿಸ್|ಶಾರ್ಟ್ನೋಸ್ ಪೋನಿಫಿಶ್]], [[ಇಂಡೋ-ಪೆಸಿಫಿಕ್ ಟಾರ್ಪನ್]], [[ಎಲೋಪ್ಸ್ ಮಾಕ್ನಾಟಾ|ಟೆನ್ಪೌಂಡರ್]], [[ಫ್ರಿಂಜ್ಸ್ಕೇಲ್ ಸಾರ್ಡಿನೆಲ್ಲಾ]], [[ಇಂಡಿಯನ್ ಆಂಚೊವಿ]], [[ಸ್ಟೋಲೆಫೋರಸ್ ಕಮ್ಮರ್ಸೋನ್ನಿ|ಕಮ್ಮರ್ಸನ್ನ ಆಂಚೊವಿ]], [[ಥ್ರಿಸ್ಸಾ ಮಲಬಾರಿಕಾ|ಮಲಬಾರ್ ಥ್ರಿಸ್ಸಾ]] ಮತ್ತು [[ವಾಕಿಂಗ್ ಕ್ಯಾಟ್ಫಿಶ್]] ಸೇರಿವೆ. ವಾಣಿಜ್ಯಿಕವಾಗಿ ಮುಖ್ಯವಾದ ಪ್ರಭೇದಗಳ ಜೊತೆಗೆ ಸುಮಾರು 30 ಇತರ ಜಾತಿಯ ಮೀನುಗಳಿವೆ, ಇವುಗಳಲ್ಲಿ [[ನಾರ್ದರ್ನ್ ವೈಟಿಂಗ್]], [[ಬಿಗ್ಐ ಟ್ರೆವಲ್ಲಿ]], [[ಕ್ರೆವಲ್ಲೆ ಜಾಕ್|ಬ್ಲಾಕ್-ಟೇಲ್ಡ್ ಟ್ರೆವಲ್ಲಿ]], [[ಕಾಂಗಟೂರಿ ಹಾಫ್ಬೀಕ್]], [[ರಿಂಕೋರ್ಹಾಂಫಸ್ ಜಾರ್ಜಿ|ಲಾಂಗ್-ಬಿಲ್ಡ್ ಹಾಫ್ಬೀಕ್]], ಕ್ವಾಯ್ಸ್ ಗಾರ್ಫಿಶ್, [[ಅನೋಡೋಂಟೊಸ್ಟೋಮಾ ಚಕುಂಡಾ|ಚಕುಂಡಾ ಗಿಜ್ಜರ್ಡ್ ಶಾಡ್]], ಮಿಲ್ಕ್ಸ್ಪಾಟೆಡ್ ಪಫರ್, [[ಡಯೋಡನ್]], [[ಪ್ಸೆಟ್ಟೋಡ್ಸ್ ಎರುಮೇಯ್|ಇಂಡಿಯನ್ ಹ್ಯಾಲಿಬಟ್]], ಕೋರಿನೆಮಸ್, [[ಎಲಿಯೋಟ್ರಿಸ್ ಫುಸ್ಕಾ|ಡಸ್ಕಿ ಸ್ಲೀಪರ್]], [[ಗ್ಲೋಸೊಗೋಬಿಯಸ್ ಗಿಯುರಿಸ್|ಟ್ಯಾಂಕ್ ಗೋಬಿ]], [[ಮ್ಯಾಂಗ್ರೋವ್ ರೆಡ್ ಸ್ನ್ಯಾಪರ್]], [[ಡೋರಿ ಸ್ನ್ಯಾಪರ್]], [[ಸ್ಲೀಪಿ ಗೋಬಿ]], [[ಒಲಿಗೋಲೆಪಿಸ್ ಅಕ್ಯೂಟಿಪೆನ್ನಿಸ್|ಶಾರ್ಪ್ಟೇಲ್ ಗೋಬಿ]], ಸ್ಪಾಟ್ಫಿನ್ ಸ್ನೌಟೆಡ್ ಗೋಬಿ, [[ಆಂಗುಲ್ಲಾ ಬೈಕಲರ್ ಪಸಿಫಿಕಾ|ಇಂಡಿಯನ್ ಶಾರ್ಟ್-ಫಿನ್ಡ್ ಈಲ್]], ''ಮ್ಯಾಕ್ರೋಗ್ನಾಥಸ್ ಗುಂಥೇರಿ'', [[ಮೈಸ್ಟಸ್ ಗುಲಿಯೋ|ಲಾಂಗ್ ವಿಸ್ಕರ್ಸ್ ಕ್ಯಾಟ್ಫಿಶ್]], [[ಹೋರಾಬಾಗ್ರಸ್ ಬ್ರಾಕಿಸೋಮಾ|ಯೆಲ್ಲೋ ಕ್ಯಾಟ್ಫಿಶ್]], [[ಮೈಸ್ಟಸ್ ವಿಟ್ಟಾಟಸ್|ಸ್ಟ್ರೈಪ್ಡ್ ಡ್ವಾರ್ಫ್ ಕ್ಯಾಟ್ಫಿಶ್]], [[ಸ್ಕಾರ್ಲೆಟ್-ಬ್ಯಾಂಡೆಡ್ ಬಾರ್ಬ್]], [[ಗ್ರೀನ್ಸ್ಟ್ರೈಪ್ ಬಾರ್ಬ್]], [[ಅನಾಬಾಸ್ ಟೆಸ್ಟುಡಿನಿಯಸ್|ಕ್ಲೈಂಬಿಂಗ್ ಪರ್ಚ್]], [[ಆಂಬ್ಲಿಫಾರಿಂಗೊಡಾನ್ ಮೈಕ್ರೋಲೆಪಿಸ್|ಇಂಡಿಯನ್ ಕಾರ್ಪ್ಲೆಟ್]] ಮತ್ತು [[ಚನ್ನಾ ಪಂಕ್ಟಾಟಾ|ಸ್ಪಾಟೆಡ್ ಸ್ನೇಕ್ಹೆಡ್]] ಸೇರಿವೆ.<ref name=wb3/>
ಕಾಯಲ್ನಲ್ಲಿ ಸುಮಾರು ಹದಿನೈದು ಜಾತಿಯ ಸೀಗಡಿಗಳಿವೆ, ಅವುಗಳಲ್ಲಿ ಹನ್ನೊಂದು ವಾಣಿಜ್ಯಿಕವಾಗಿ ಮುಖ್ಯವಾದವು. ವಾಣಿಜ್ಯಿಕವಾಗಿ ಮುಖ್ಯವಾದ ಪ್ರಭೇದಗಳಲ್ಲಿ [[ಪೆನಿಯಸ್ ಮೊನೊಡಾನ್|ಜೈಂಟ್ ಟೈಗರ್ ಪ್ರಾನ್]], [[ಇಂಡಿಯನ್ ಪ್ರಾನ್]], [[ಪೆನಿಯಸ್ ಸೆಮಿಸುಲ್ಕೇಟಸ್|ಗ್ರೀನ್ ಟೈಗರ್ ಪ್ರಾನ್]], ''ಮೆಟಾಪೆನಿಯಸ್ ಡಾಬ್ಸೋನಿ'', [[ಮೆಟಾಪೆನಿಯಸ್ ಮೊನೊಸೆರೋಸ್|ಸ್ಪೆಕ್ಲ್ಡ್ ಶ್ರಿಂಪ್]], ಜಿಂಗಾ ಶ್ರಿಂಪ್, [[ಮ್ಯಾಕ್ರೋಬ್ರಾಚಿಯಮ್ ರೋಸೆನ್ಬರ್ಗಿ|ಜೈಂಟ್ ಫ್ರೆಶ್ವಾಟರ್ ಪ್ರಾನ್]], ''ಮ್ಯಾಕ್ರೋಬ್ರಾಚಿಯಮ್ ಇಡೇ'', ''[[ಮ್ಯಾಕ್ರೋಬ್ರಾಚಿಯಮ್]]'' ಸ್ಪೆನ್ಸ್, ''ಮ್ಯಾಕ್ರೋಬ್ರಾಚಿಯಮ್ ಇಡೆಲ್ಲಾ'', ''ಮ್ಯಾಕ್ರೋಬ್ರಾಚಿಯಮ್ ಸ್ಕಾಬ್ರಿಕ್ಯುಲಮ್'' ಸೇರಿವೆ ಮತ್ತು ಇತರ ಪ್ರಭೇದಗಳಲ್ಲಿ ''[[ಕ್ಯಾರಿಡಿನಾ ನಿಲೋಟಿಕಾ]]'', ಆರೆಂಜ್ ಶ್ರಿಂಪ್, ''ಮೆಟಾಪೆನಿಯಸ್ ಬ್ರೆವಿಕಾರ್ನಿಸ್'' ಮತ್ತು ''ಮ್ಯಾಕ್ರೋಬ್ರಾಚಿಯಮ್ ಇಕ್ವಿಡೆನ್ಸ್'' ಸೇರಿವೆ.<ref name=wb3/>
ಕಾಯಲ್ ಏಡಿ ಪ್ರಭೇದಗಳಾದ ''[[ಸೈಲ್ಲಾ ಸೆರಾಟಾ]]'' ಮತ್ತು ''[[ಪೋರ್ಟುನಸ್ ಪೆಲಾಜಿಕಸ್]]'' ಗಳಿಗೂ ನೆಲೆಯಾಗಿದೆ.<ref name=wb3/>
===ಒಳನಾಡು ಮೀನುಗಾರಿಕೆ===
[[File:Kattil Kadvu 2.jpg|thumbnail|ಮೀನುಗಾರಿಕಾ ಬಲೆ]]
ಕಾಯಲ್ ಸಾವಿರಾರು ಮೀನುಗಾರರ ಜೀವನೋಪಾಯದ ನೇರ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಮುಖ್ಯ ಬೇಟೆಯು ಬೂದು ಮುಲ್ಲೆಟ್ಗಳು ಮತ್ತು ಸೀಗಡಿಗಳು. ಮುಖ್ಯ ಮೀನುಗಾರಿಕಾ ಋತುವು ಅಕ್ಟೋಬರ್ನಿಂದ ಜನವರಿಯವರೆಗೆ, ಈ ಸಮಯದಲ್ಲಿ ಕಾಯಲ್ ಸಮುದ್ರಕ್ಕೆ ಸಂಪರ್ಕ ಹೊಂದಿರುತ್ತದೆ. ಹೆಚ್ಚಿನ ಮೀನುಗಳನ್ನು ಬೀಸುಬಲೆ, ಜಾಲರಿಬಲೆ, ಸ್ಕೇರ್ ನೆಟ್, ಸೀನ್ ನೆಟ್, ಡಿಪ್ ನೆಟ್, ರಿಂಗ್ ನೆಟ್, ಸ್ಕೂಪ್ ನೆಟ್ ಅಥವಾ ಕೆದಕುಬಲೆಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ಹಿಡಿಯಲಾಗುತ್ತದೆ. ಕಾಯಂಕುಳಂ ಕಾಯಲ್ನ ದಂಡೆಯ ಮೇಲಿನ ಮೀನುಗಾರಿಕಾ ಗ್ರಾಮವಾದ ಅರಟ್ಟುಪುಳವು ಹೆಚ್ಚಿನ ಪ್ರಮಾಣದ ಮೀನು ಮತ್ತು ಸೀಗಡಿಗಳು ಒಟ್ಟುಗೂಡುವುದರಿಂದ ಉಂಟಾಗುವ [[ಚಕರಾ]] ಕೆಸರು ರಚನೆಗೆ ಪ್ರಸಿದ್ಧವಾಗಿದೆ.<ref name=140pdf />
==ಪಕ್ಷಿಜೀವಿಗಳು==
NTPC ನಡೆಸಿದ ಪರಿಸರ ಪರಿಣಾಮದ ಮೌಲ್ಯಮಾಪನ ಸಮೀಕ್ಷೆಯು 25 ವಿಭಿನ್ನ ಪ್ರಭೇದಗಳಿಗೆ ಸೇರಿದ 27 ಜಾತಿಯ ಪಕ್ಷಿಗಳ ಉಪಸ್ಥಿತಿಯನ್ನು ವರದಿ ಮಾಡಿದೆ. ಈ ಪಕ್ಷಿಗಳಲ್ಲಿ [[ಕಾಮನ್ ಮೈನಾ]], [[ಕಾಮನ್ ಕಿಂಗ್ಫಿಶರ್]], [[ಮಲಬಾರ್ ಪೈಡ್ ಹಾರ್ನ್ಬಿಲ್]], [[ಸ್ನೇಕ್ಬರ್ಡ್]], [[ಕ್ಯಾಟಲ್ ಎಗ್ರೆಟ್]], [[ಲಿಟಲ್ ರಿಂಗ್ಡ್ ಪ್ಲೋವರ್]], [[ಇಂಡಿಯನ್ ರೋಲರ್]], [[ಹೌಸ್ ಕ್ರೋ]], [[ಜಂಗಲ್ ಕ್ರೋ]], [[ಜಂಗಲ್ ಫೌಲ್]], [[ಫೋರ್ಕ್-ಟೇಲ್ಡ್ ಡ್ರಾಂಗೊ]], [[ಬ್ಲಾಕ್-ರಂಪ್ಡ್ ಫ್ಲೇಮ್ಬ್ಯಾಕ್]], [[ಲಿಟಲ್ ಎಗ್ರೆಟ್]], [[ಏಷ್ಯನ್ ಕೋಲ್]], [[ಕಾಮನ್ ಮೂರ್ಹೆನ್]], [[ಬ್ಲಾಕ್-ಕ್ಯಾಪ್ಡ್ ಕಿಂಗ್ಫಿಶರ್]], [[ಹೌಸ್ ಸ್ಪ್ಯಾರೊ]], [[ಬ್ಲಾಕ್ ಕೈಟ್]], [[ವೈಟ್-ಥ್ರೋಟೆಡ್ ಕಿಂಗ್ಫಿಶರ್]], [[ಯೆಲ್ಲೋ-ಥ್ರೋಟೆಡ್ ಸ್ಪ್ಯಾರೊ]], [[ಸ್ಟೋರ್ಕ್-ಬಿಲ್ಡ್ ಕಿಂಗ್ಫಿಶರ್]], [[ಬಯಾ ವೀವರ್]], [[ರೆಡ್-ವೆಂಟೆಡ್ ಬುಲ್ಬುಲ್]], [[ಗ್ರೇಟರ್ ಪೇಂಟೆಡ್-ಸ್ನೈಪ್]], [[ಬ್ಲಾಕ್-ಹೆಡೆಡ್ ಇಬಿಸ್]], [[ಕಾಮನ್ ಬ್ಯಾಬ್ಲರ್]] ಮತ್ತು [[ಹೂಪೋ]] ಸೇರಿವೆ.<ref name=wb3>[http://documents.worldbank.org/curated/en/1996/03/441178/india-kayamkulam-combined-cycle-power-plant-project-environmental-impact-assessment-vol-3-3 National Thermal Power Corporation Ltd.. 1996. India - Kayamkulam Combined Cycle Power Plant Project : environmental impact assessment. Vol. 3 of India - Kayamkulam Combined Cycle Power Plant Project : environmental impact assessment. World Development Sources, WDS 1997-2. New Delhi, India: National Thermal Power Corporation Ltd]</ref>
==ಬೆಂಥಿಕ್ ಪ್ರಾಣಿಗಳು==
NTPC ನಡೆಸಿದ ಪರಿಸರ ಪರಿಣಾಮದ ಮೌಲ್ಯಮಾಪನ ಸಮೀಕ್ಷೆಯು ಸರೋವರದ ತಳದಲ್ಲಿ [[ಆಂಫಿಪೋಡಾ]], [[ಬೈವಾಲ್ವಿಯಾ]], [[ಗ್ಯಾಸ್ಟ್ರೋಪೋಡಾ]], [[ಗ್ಯಾಸ್ಟ್ರೋಟ್ರಿಚಾ]], [[ಐಸೋಪೋಡಾ]], [[ನೆಮೆರ್ಟಿಯಾ]] (ರಿಬ್ಬನ್ ವರ್ಮ್), [[ಒಲಿಗೋಕೀಟಾ]], [[ಪಾಲಿಕೀಟ್ಗಳು]], [[ಸೈಪುಂಕ್ಯುಲಾ]] (ಪೀನಟ್ ವರ್ಮ್) ಮತ್ತು [[ಟಾನೈಡೇಶಿಯಾ]] ಇರುವಿಕೆಯನ್ನು ದಾಖಲಿಸಿದೆ.<ref name=ccpp2>[http://documents.worldbank.org/curated/en/1996/03/441179/india-kayamkulam-combined-cycle-power-plant-project-environmental-impact-assessment-vol-2-3 National Thermal Power Corporation Ltd.. 1996. India - Kayamkulam Combined Cycle Power Plant Project : environmental impact assessment. Vol. 2 of India - Kayamkulam Combined Cycle Power Plant Project : environmental impact assessment. World Development Sources, WDS 1997-2. New Delhi, India: National Thermal Power Corporation Ltd]</ref> ಕಾಯಲ್ ಮೃದ್ವಂಗಿಗಳಿಗೆ ನೆಲೆಯಾಗಿದೆ, ಕಾಯಂಕುಳಂ ಕಾಯಲ್ನಲ್ಲಿ ಎರಡು ಮಸ್ಸೆಲ್ ಪ್ರಭೇದಗಳು [[ಪೆರ್ನಾ ವಿರಿಡಿಸ್|ಏಷ್ಯನ್ ಗ್ರೀನ್ ಮಸ್ಸೆಲ್]] ಮತ್ತು [[ಪೆರ್ನಾ ಪೆರ್ನಾ|ಬ್ರೌನ್ ಮಸ್ಸೆಲ್]], ಸಿಂಪಿ ಪ್ರಭೇದ ''[[ಕ್ರಾಸ್ಸೋಸ್ಟ್ರಿಯಾ]] ಬಿಲಿನೇಟಾ'' ಮತ್ತು ''ಮೆರೆಟ್ರಿಕ್ಸ್'' ಮತ್ತು [[ವಿಲ್ಲೋರಿಟಾ ಸೈಪ್ರಿನಾಯ್ಡಿಸ್|ಬ್ಲಾಕ್ ಕ್ಲಾಮ್]] ಜಾತಿಯ ಚಿಪ್ಪುಗಳು ಕಂಡುಬರುತ್ತವೆ.<ref name=wb3/>
==ಆಲಪ್ಪುಳ ಮೆಗಾ ಪ್ರವಾಸೋದ್ಯಮ ಯೋಜನೆ==
[[File:Kayamkulam Kayal.jpg|thumb|center|alt=Kayamkulam Kayal|''[[ಕ್ಲಪ್ಪನಾ]]''ದಲ್ಲಿ]]
ಕಾಯಂಕುಳಂ ಕಾಯಲ್ ಪ್ರದೇಶವು ನೆಹರು ಪ್ರಶಸ್ತಿ ದೋಣಿ ಪಂದ್ಯವನ್ನು ವೀಕ್ಷಿಸಲು ಆಲಪ್ಪುಳಕ್ಕೆ ಭೇಟಿ ನೀಡಿದಾಗ ಭಾರತದ ರಾಷ್ಟ್ರಪತಿಗಳು ಘೋಷಿಸಿದ ಆಲಪ್ಪುಳ ಮೆಗಾ ಪ್ರವಾಸೋದ್ಯಮ ಯೋಜನೆಯ ಲಾಭಾರ್ಥಿಗಳಲ್ಲಿ ಒಂದಾಗಿದೆ. ಕಾಯಂಕುಳಂ ಮತ್ತು ಸುತ್ತಮುತ್ತಲಿನ ಪ್ರದೇಶದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿರುವ ಈ ಪ್ರವಾಸೋದ್ಯಮ ಯೋಜನೆಯು ಕಾಯಂಕುಳಂ ಸರೋವರ ಮತ್ತು ರಾಷ್ಟ್ರೀಯ ಜಲಮಾರ್ಗವನ್ನು ಸಂಪರ್ಕಿಸುವ ಜಲಮಾರ್ಗ, ಜಲ ಕ್ರೀಡಾ ಸಂಕೀರ್ಣ, ಸೀಸ್ಟಿಂಗ್ ಗ್ಯಾಲರಿ, ಸುನಾಮಿ ಸ್ಮಾರಕ, ವಸ್ತುಸಂಗ್ರಹಾಲಯ, ಸೈಕ್ಲಿಂಗ್ ಟ್ರ್ಯಾಕ್, ಫ್ಲೋಟಿಂಗ್ ರೆಸ್ಟೋರೆಂಟ್, ಮನರಂಜನಾ ವಲಯ, ಸಾಹಸ ವಲಯ ಮತ್ತು ಪ್ರವಾಸಿಗರ ಆಗಮನ ಕೇಂದ್ರ, ಪ್ರವಾಸಿ ಮಧ್ಯಸ್ಥಿಕೆ ರಕ್ಷಣಾ ಕೇಂದ್ರ, ಬೋರ್ಡ್ವಾಕ್ ಮತ್ತು ವೀಕ್ಷಣಾ ತಾಣ, ಭೂದೃಶ್ಯೀಕರಣ, ಅಂಗಳದ ಬೆಳಕು, ಹೌಸ್ಬೋಟ್ ಜೆಟ್ಟಿ ಮತ್ತು ದೋಣಿಗಳಿಗೆ ಜಲಮಾರ್ಗದಂತಹ ಸೌಕರ್ಯಗಳೊಂದಿಗೆ ಹೌಸ್ ಬೋಟ್ ಟರ್ಮಿನಲ್ ನಿರ್ಮಿಸುವ ಗುರಿಯನ್ನು ಹೊಂದಿದೆ.<ref>{{cite news|title=കായംകുളം കായല് ടൂറിസം വികസനത്തിന് വഴിതെളിയുന്നു |url=http://www.madhyamam.com/news/194339/121006 |access-date=29 September 2013 |newspaper=Madhyamam. |date=10 June 2012 |url-status=dead |archive-url=https://web.archive.org/web/20131002062116/http://www.madhyamam.com/news/194339/121006 |archive-date= 2 October 2013 }}</ref> ಹಣದ ದುರುಪಯೋಗದ ಆರೋಪಗಳೂ ಇವೆ.<ref>{{cite news|title=കായംകുളം കായൽ ശൂന്യം, കോടികൾ പാഴായി |url=http://www.thejasnews.com/index.jsp?tp=det&det=yes&news_id=20121010015627938 |access-date=29 September 2013 |newspaper=Thejas |date=10 October 2012 |url-status=dead |archive-url=https://web.archive.org/web/20131003031754/http://www.thejasnews.com/index.jsp?tp=det&det=yes&news_id=20121010015627938 |archive-date= 3 October 2013 }}</ref>
==ರಾಜೀವ್ ಗಾಂಧಿ CCPP ಕಾಯಂಕುಳಂ==
[[NTPC ಕಾಯಂಕುಳಂ|ರಾಜೀವ್ ಗಾಂಧಿ ಸಂಯೋಜಿತ ಚಕ್ರ ವಿದ್ಯುತ್ ಸ್ಥಾವರ ಕಾಯಂಕುಳಂ]] ಅಥವಾ [[NTPC ಕಾಯಂಕುಳಂ]] ಕಾಯಂಕುಳಂ ಕಾಯಲ್ನ ದಂಡೆಯಲ್ಲಿದೆ. ಸ್ಥಾವರದ ಹೆಚ್ಚಿನ ಭಾಗವು ಕಾಯಲ್ನಿಂದ ಪುನರ್ವಸತಿ ಮಾಡಲಾದ ಭೂಮಿಯಾಗಿದೆ, ಇದು ಮೂಲತಃ ಕೇರಳ ರಾಜ್ಯ ಕೃಷಿ ಇಲಾಖೆಗೆ ಸೇರಿತ್ತು ಮತ್ತು ಹುಲ್ಲು ಕೃಷಿಗೆ ಬಳಸಲಾಗುತ್ತಿತ್ತು. ನಂತರ NTPC ಈ ಸ್ಥಳವನ್ನು ಸ್ವಾಧೀನಪಡಿಸಿಕೊಂಡಿತು. ಕಾಯಲ್ನ ಹೂಳನ್ನು ತೆಗೆದು ಅದರ ಹಾಸಿಗೆಯ ವಸ್ತುಗಳನ್ನು ಸ್ಥಾವರದ ಸ್ಥಳವನ್ನು ಸಮನಾಗಿಸಲು ಬಳಸಲಾಯಿತು. ಸ್ಥಾವರದಿಂದ ತ್ಯಾಜ್ಯ ಮತ್ತು ಇತರ ತ್ಯಾಜ್ಯಗಳನ್ನು ಸಂಸ್ಕರಿಸಿದ ನಂತರ ಕಾಯಂಕುಳಂ ಕಾಯಲ್ಗೆ ಹೊರಹಾಕಲಾಗುತ್ತದೆ.<ref name=ccpp2/>
==ರಾಷ್ಟ್ರೀಯ ಜಲಮಾರ್ಗ 3==
ರಾಷ್ಟ್ರೀಯ ಜಲಮಾರ್ಗ 3 ಕಾಯಂಕುಳಂ ಕಾಯಲ್ ಮೂಲಕ ಹಾದುಹೋಗುತ್ತದೆ. ಕಾಯಲ್ನಲ್ಲಿನ ಜಲಮಾರ್ಗದ ಒಟ್ಟು ಉದ್ದವು ಸುಮಾರು {{convert|25|km}} ಮತ್ತು ಕನಿಷ್ಠ ಲಭ್ಯವಿರುವ ಆಳವು ಕನಿಷ್ಠ {{convert|1.5|m}} ಆಗಿದೆ. ಜಲಮಾರ್ಗದ ನಿರ್ಮಾಣಕ್ಕಾಗಿ ಕಾಯಂಕುಳಂ ಕಾಯಲ್ನ ಹೂಳನ್ನು ತೆಗೆಯಲಾಗಿತ್ತು. ಕಾಯಂಕುಳಂನಲ್ಲಿ {{convert|1.6304|acre}} ವಿಸ್ತೀರ್ಣವನ್ನು ಆಕ್ರಮಿಸಿಕೊಂಡಿರುವ IWT ಟರ್ಮಿನಲ್ ಇದೆ.<ref>{{cite web|title=National Waterway No. 3 |url=http://iwai.gov.in/waterwaysnw3.html |publisher=Inland Waterways Authority of India |access-date=13 October 2013 |url-status=dead |archive-url=https://web.archive.org/web/20130808144258/http://iwai.gov.in/waterwaysnw3.html |archive-date= 8 August 2013 }}</ref>
==ಕಾಯಂಕುಳಂ ದೋಣಿ ಪಂದ್ಯ==
ಕಾಯಂಕುಳಂ ದೋಣಿ ಪಂದ್ಯವನ್ನು ಕಾಯಂಕುಳಂ ಕಾಯಲ್ನಲ್ಲಿ ನಡೆಸಲಾಗುತ್ತದೆ. ಪಂದ್ಯದ ಟ್ರ್ಯಾಕ್ {{convert|1200|m}} ಉದ್ದ, {{convert|70|m}} ಅಗಲ ಮತ್ತು {{convert|2|m}} ಆಳವನ್ನು ಹೊಂದಿದೆ. ಪುನಃಸ್ಥಾಪನೆ ಕಾರ್ಯಕ್ಕಾಗಿ 2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಉದ್ಘಾಟನಾ ದೋಣಿ ಪಂದ್ಯವನ್ನು 28 ಆಗಸ್ಟ್ 2010 ರಂದು ನಡೆಸಲಾಯಿತು. ಕಾಯಂಕುಳಂ ದೋಣಿ ಪಂದ್ಯವು ಶಾಸಕ ಸಿ.ಕೆ. ಸದಾಶಿವನ್ ಅವರ ಕಲ್ಪನೆಯಾಗಿದೆ.<ref name=race>{{cite news|title=Kerala to have a new boat race |url=http://www.mathrubhumi.com/english/story.php?id=94816 |access-date=29 September 2013 |newspaper=Mathrubhumi |date=13 July 2010 |url-status=dead |archive-url=https://web.archive.org/web/20131002220300/http://www.mathrubhumi.com/english/story.php?id=94816 |archive-date= 2 October 2013 }}</ref> ಮೊದಲ ದೋಣಿ ಪಂದ್ಯವನ್ನು ಮುಖ್ಯಮಂತ್ರಿ [[ವಿ.ಎಸ್. ಅಚ್ಯುತಾನಂದನ್|ವಿ.ಎಸ್. ಅಚ್ಯುತಾನಂದನ್]] ಉದ್ಘಾಟಿಸಿದರು. [[ಸ್ನೇಕ್ ಬೋಟ್]] ದೋಣಿ ಪಂದ್ಯವು ಮುಖ್ಯ ಕಾರ್ಯಕ್ರಮವಾಗಿದೆ. ಮುಖ್ಯ ವಿಭಾಗದ ಜೊತೆಗೆ ಇತರ ವಿಭಾಗಗಳಲ್ಲಿ ಥೆಕ್ಕೆನೋಡಿ ಮಹಿಳಾ ವಿಭಾಗ, ವೆಪ್ಪು ಎ ಗ್ರೇಡ್ ವಿಭಾಗ, ವೆಪ್ಪು ಬಿ ಗ್ರೇಡ್ ವಿಭಾಗ, ಚುರುಲನ್ ವಿಭಾಗ ಮತ್ತು ಇರುಟ್ಟುಕುತಿ ಎ ಗ್ರೇಡ್ ವಿಭಾಗ ಸೇರಿವೆ.<ref name= hindu1>{{cite news|title=Payipad wins inaugural Kayamkulam boat race|url=http://www.thehindu.com/news/national/kerala/payipad-wins-inaugural-kayamkulam-boat-race/article600498.ece|access-date=28 September 2013|newspaper=The Hindu|date=28 August 2010}}</ref>
{| class="wikitable"
|-
! ಕ್ರ.ಸಂ. !! ದಿನಾಂಕ !! ವಿಜೇತ !! ಉಲ್ಲೇಖ
|-
| 1 || 28 ಆಗಸ್ಟ್ 2010 || ಪಯಿಪಾಡ್ ಚುಂಡನ್||<ref name=hindu1 />
|-
| 2 || 27 ಆಗಸ್ಟ್ 2011 || ಶ್ರೀ ಗಣೇಶ್ ಚುಂಡನ್||
|-
| 3 || 25 ಆಗಸ್ಟ್ 2012 || ಜವಾಹರ್ ಥಯಾಂಕಾರಿ ಚುಂಡನ್||<ref>{{cite news|title=Kayamkulam Boat Race ends in photo finish|url=http://www.thehindu.com/todays-paper/tp-national/tp-kerala/kayamkulam-boat-race-ends-in-photo-finish/article3823523.ece|access-date=28 September 2013|newspaper=The Hindu|date=26 August 2012}}</ref>
|-
| 4 || 7 ಸೆಪ್ಟೆಂಬರ್ 2013 || ಜವಾಹರ್ ಥಯಾಂಕಾರಿ ಚುಂಡನ್||<ref>{{cite news|title=Jawahar Thayankari wins Kayamkulam boat race|url=http://articles.timesofindia.indiatimes.com/2013-09-08/kochi/41873011_1_captain-kayamkulam-alappuzha|archive-url=https://archive.today/20130928125758/http://articles.timesofindia.indiatimes.com/2013-09-08/kochi/41873011_1_captain-kayamkulam-alappuzha|url-status=dead|archive-date=28 September 2013|access-date=28 September 2013|newspaper=[[The Times of India]]|date=8 September 2013}}</ref>
|}
==2004ರ ಸುನಾಮಿ==
ಕಾಯಂಕುಳಂ ಕಾಯಲ್ ಮತ್ತು ಅದರ ದಂಡೆಯು ಕೇರಳದಲ್ಲಿ ಅತ್ಯಂತ ಹೆಚ್ಚು ಪರಿಣಾಮ ಬೀರಿದ ಭಾಗಗಳಾಗಿವೆ. ಇಲ್ಲಿ ಸುನಾಮಿಯು ಹೆಚ್ಚಿನ ಉಬ್ಬರವಿಳಿತದೊಂದಿಗೆ ಸಂಘಟಿಸಿ ಹಾನಿಯನ್ನು ವರ್ಧಿಸಿತು. ಕಾಯಂಕುಳಂ ಪ್ರವೇಶದ್ವಾರದ ಉತ್ತರಕ್ಕೆ ಕಾಯಂಕುಳಂ ಸರೋವರದ ದಂಡೆಯಲ್ಲಿರುವ ಚೆರಿಯಾಳಿಕ್ಕಲ್ ಎಂಬ ಗ್ರಾಮವು 5 ಮೀಟರ್ ನೀರಿನ ಏರಿಕೆಯನ್ನು ಹೊಂದಿತ್ತು. ಕಾಯಂಕುಳಂ ಪ್ರವೇಶದ್ವಾರದ ದಕ್ಷಿಣ ಭಾಗದಲ್ಲಿರುವ ಅಳಿಕ್ಕಲ್ 4.5 ಮೀಟರ್ ನೀರಿನ ಏರಿಕೆಯನ್ನು ಹೊಂದಿತ್ತು.<ref>{{cite journal|author1=N. P. Kurian |author2=Abilash P. |author3=Pillai, K. |author4=Rajith, B. T. |author5=Murali Krishnan |author6=P. Kalaiarasan|title=Inundation characteristics and geomorphological impacts of December 2004 tsunami on Kerala coast|journal=Current Science|date=25 January 2006|volume=90|issue=2|url=http://www.iisc.ernet.in/currsci/jan252006/240.pdf|access-date=28 September 2013}}</ref> ಘಟನೆಯ ಸ್ಮರಣಾರ್ಥವಾಗಿ ಅಳಿಕ್ಕಲ್ನಲ್ಲಿ ಸುನಾಮಿ ಸ್ಮಾರಕವನ್ನು ನಿರ್ಮಿಸಲಾಗಿದೆ.{{fact|date=January 2020}}
== ಉಲ್ಲೇಖಗಳು ==
{{Reflist}}
[[Category:ಕೇರಳದ ಭೂರೂಪಗಳು]]
[[Category:ಭಾರತದ ಅಳಿವೆಗಳು]]
[[Category:ಭಾರತದ ಸರೋವರಗಳು]]
[[Category:ಕೊಲ್ಲಂ ಜಿಲ್ಲೆಯ ಜೌಗು ಪ್ರದೇಶಗಳು]]
0pu7mrd98exver7acfrpu8nh34p8tdk
ಕೊಂಡೋಟ್ಟಿ ನೇರ್ಚಾ
0
179856
1379448
1377374
2026-08-08T12:56:11Z
Ashwini Rai K
98657
"[[:en:Special:Redirect/revision/1366804802|Kondotty Nercha]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
1379448
wikitext
text/x-wiki
[[ಚಿತ್ರ:Kondotty_Nercha-Thattanpetti_Varavu1.jpg|thumb| "ಗೋಲ್ಡ್ಸ್ಮಿತ್ ಬಾಕ್ಸ್" ಆಗಮನ]]
[[ಚಿತ್ರ:Kondotty_Qubba.2.jpg|thumb| ಕೊಂಡೋಟ್ಟಿ ಕುಬ್ಬಾ]]
[[ಚಿತ್ರ:Pazhayangadi_Mosque-Kondotty3.jpg|thumb| ಪಳಯಂಗಡಿ ಮಸೀದಿ, ಕೊಂಡೋಟ್ಟಿ]]
'''ಕೊಂಡೋಟ್ಟಿ ನೇರ್ಚವು''' ಭಾರತದ ಕೇರಳದ [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಜಿಲ್ಲೆಯ ಕೊಂಡೋಟಿಯಲ್ಲಿರುವ [[ದರಗ|ದರ್ಗಾದಲ್ಲಿ]] ಸಂತ '''ಮುಹಮ್ಮದ್ ಷಾ ಅವರ''' ಸ್ಮರಣಾರ್ಥ ಪ್ರತಿ ವರ್ಷ ನಡೆಸುವ ಉತ್ಸವವಾಗಿದೆ. <ref name="malappuramtourism">{{Cite web |title=Kondotty Nercha | Festivals and Fairs in Malappuram |url=http://www.malappuramtourism.org/kondotty-nercha.php |access-date=2016-01-31 |publisher=malappuramtourism.org}}</ref>
== ಮುಹಮ್ಮದ್ ಶಾ ==
ಕೊಂಡೋಟ್ಟಿ ತಂಙಳ್ ಎಂದೇ ಪೂಜಿಸಲ್ಪಡುವ [[ಸೂಫಿಪಂಥ|ಸೂಫಿ]] ಸಂತ '''ಮೊಹಮ್ಮದ್ ಷಾ''' ಅವರ ಸ್ಮರಣಾರ್ಥ ಕೊಂಡೋಟ್ಟಿ ನೆರ್ಚ ವನ್ನು ಪ್ರತಿ ವರ್ಷ ನಡೆಸಲಾಗುತ್ತದೆ. <ref name="keralatourism_harmony">{{Cite web |title=Interfaith Harmony in Kerala |url=https://www.keralatourism.org/islam-in-kerala/assimilation/interfaith-harmony |access-date=30 July 2026 |website=Kerala Tourism |publisher=Department of Tourism, Government of Kerala}}</ref> 18 ನೇ ಶತಮಾನದಲ್ಲಿ ಮೊಘಲ್ ಶೈಲಿಯಲ್ಲಿ ಬಿಳಿ ಗುಮ್ಮಟದೊಂದಿಗೆ ನಿರ್ಮಿಸಲಾದ ಅವರ ಸಮಾಧಿಯು ಕೊಂಡೊಟ್ಟಿಯಲ್ಲಿದೆ ಮತ್ತು ಇದನ್ನು ''ಕೊಂಡೊಟ್ಟಿ ಕುಬ್ಬಾ'' ಎಂದು ಕರೆಯಲಾಗುತ್ತದೆ. <ref name="keralatourism_mosque">{{Cite web |title=Pazhayangadi Mosque, Kondotty |url=https://www.keralatourism.org/islam-in-kerala/photo-gallery/pazhayangadi-mosque-kondotty/3190 |access-date=30 July 2026 |website=Kerala Tourism |publisher=Department of Tourism, Government of Kerala}}</ref>
== ವಸಂತ ಹಬ್ಬ ==
ಕೊಂಡೋಟ್ಟಿ '''ನೇರ್ಚ''' ಮೂಲತಃ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ನಡೆಯುವ ವಸಂತ ಉತ್ಸವವಾಗಿದೆ. ಕೊಯ್ಲು ಮುಗಿದ ನಂತರ, ಕೊಂಡೋಟ್ಟಿಯ ಭತ್ತದ ಗದ್ದೆಗಳು ಸಾಕಷ್ಟು ಖಾಲಿಯಾಗಿರುತ್ತವೆ ಮತ್ತು ದೊಡ್ಡ ಪ್ರಮಾಣದ ಸ್ಥಳೀಯ ಉತ್ಸವವನ್ನು ನಡೆಸುವಷ್ಟು ಸಮತಟ್ಟಾಗಿರುತ್ತವೆ. ಹಬ್ಬದ ಆರಂಭವನ್ನು ಘೋಷಿಸಲು ಫಿರಂಗಿ ಮೊಳಗಿಸಲಾಗುತ್ತದೆ. <ref name="youtube">{{Cite web |title=kondotty nercha - YouTube |url=https://www.youtube.com/watch?v=nd95M_a8Lb4 |access-date=2016-01-31 |publisher=youtube.com}}</ref>
== ಇತಿಹಾಸ ==
ಈ ಪ್ರದೇಶದ ಮುಸ್ಲಿಮರು ಹಿಂದೆ ಪೊನ್ನಾನಿಯ ಮಖ್ದೂಮ್ ಮತ್ತು ಮಂಬುರಂನ ಅಲಿದ್ ಸಯ್ಯದ್ ನಾಯಕತ್ವದಲ್ಲಿ ಇದ್ದರು. ಮೊಹಮ್ಮದ್ ಷಾ ೧೭೧೭ ರಲ್ಲಿ ಕೊಂಡೋಟ್ಟಿಗೆ ಬಂದರು, ಮತ್ತು ಅವರ ವಂಶಸ್ಥರು '''ಕೊಂಡೋಟ್ಟಿ ತಂಙಲ್''' ಕುಟುಂಬ ಎಂದು ಪ್ರಸಿದ್ಧರಾದರು. ತಂಙಳ್ ಕುಟುಂಬದ ಜೀವನ ಚರಿತ್ರೆಯನ್ನು ಅರೆಕ್ಕೋಡ್ ಕುಂಞವ ಬರೆದಿದ್ದಾರೆ. ಮೊಹಮ್ಮದ್ ಷಾ ೧೭೬೬ ಅಥವಾ ೧೭೬೭ ರಲ್ಲಿ ನಿಧನರಾದರು, ಮತ್ತು ಕೊಂಡೋಟ್ಟಿ ನೇರ್ಚವನ್ನು ಪ್ರತಿ ವರ್ಷ ಕೊಂಡೋಟ್ಟಿಯಲ್ಲಿರುವ ಅವರ ಸಮಾಧಿಯಲ್ಲಿ ನಡೆಸಲಾಗುತ್ತದೆ. <ref name="keralatourism_harmony">{{Cite web |title=Interfaith Harmony in Kerala |url=https://www.keralatourism.org/islam-in-kerala/assimilation/interfaith-harmony |access-date=30 July 2026 |website=Kerala Tourism |publisher=Department of Tourism, Government of Kerala}}<cite class="citation web cs1" data-ve-ignore="">[https://www.keralatourism.org/islam-in-kerala/assimilation/interfaith-harmony "Interfaith Harmony in Kerala"]. ''Kerala Tourism''. Department of Tourism, Government of Kerala<span class="reference-accessdate">. Retrieved <span class="nowrap">30 July</span> 2026</span>.</cite></ref>
== ನೆರ್ಚಾದ ಆಚರಣೆಗಳು ==
* ಹಬ್ಬದ ಆಗಮನವನ್ನು ಘೋಷಿಸಲು ಕೊಂಡೋಟ್ಟಿಯ ಭತ್ತದ ಗದ್ದೆಗಳಲ್ಲಿ ಮೂರು ದೊಡ್ಡ ಫಿರಂಗಿಗಳನ್ನು ಹಾರಿಸಲಾಗುವುದು.
* ಹಬ್ಬದ ಶಾಂತಿಯುತ ಸ್ವರೂಪವನ್ನು ಪ್ರಕಟಿಸಲು ಕೊಂಡೋಟ್ಟಿಯ ತಂಙಲ್ ಜಂಕ್ಷನ್ನಲ್ಲಿ ಬಿಳಿ ಧ್ವಜವನ್ನು ಹಾರಿಸಲಾಗುತ್ತದೆ.
* ದರ್ಗಾಕ್ಕೆ ಆಗಮಿಸುವ ಮೊದಲ ಮೆರವಣಿಗೆ ಪೆರಿಂಥಲ್ಮನ್ನಾದಿಂದ ಬರುವ ವೆಲ್ಲಡ್ ಮೆರವಣಿಗೆ.
* ಪಟ್ಟಣದಲ್ಲಿ ಕೋಲ್ಕಳಿ, ಹಾಡುಗಳು ಮತ್ತು ನೃತ್ಯಗಳಂತಹ ವಿವಿಧ ಮನರಂಜನೆಗಳನ್ನು ಆಯೋಜಿಸಲಾಗುತ್ತದೆ.
* ತಂಗಲ್ ಅರಮನೆಯ ಬಂದೂಕುಗಳನ್ನು ಸ್ವಚ್ಛಗೊಳಿಸುವುದು ಇನ್ನೊಂದು ಆಚರಣೆಯಾಗಿದೆ. ಉಳಿದ ಎಣ್ಣೆಯು ಔಷಧೀಯ ಮೌಲ್ಯಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಈ ಸಂದರ್ಭದಲ್ಲಿ ಹಿಂದೂ ಶೈಲಿಯ ದೀಪವನ್ನು ಸಹ ಬೆಳಗಿಸಲಾಗುತ್ತದೆ.
* ವಿವಿಧ ಹಳ್ಳಿಗಳಿಂದ ವಿವಿಧ ಮೆರವಣಿಗೆಗಳು ವಿವಿಧ ದಿನಗಳಲ್ಲಿ ಕೊಂಡೋಟ್ಟಿಗೆ ಬರುತ್ತವೆ. ಮಾರ್ಗದುದ್ದಕ್ಕೂ ಗ್ರಾಮಸ್ಥರು ಪಟಾಕಿ ಸಿಡಿಸಿ ಮತ್ತು ಹಬ್ಬಗಳೊಂದಿಗೆ ಮೆರವಣಿಗೆಯನ್ನು ಸ್ವಾಗತಿಸುತ್ತಾರೆ.
* ಎಲ್ಲಾ ಪೋಷಕ ಹಳ್ಳಿಗಳು [[ಜಿಲೇಬಿ]] ಮಾರಾಟ ಮಳಿಗೆಗಳನ್ನು ನಿರ್ಮಿಸುವ ಮೂಲಕ ಹಬ್ಬದಲ್ಲಿ ಸೇರುತ್ತವೆ. ಎರಡು ರೀತಿಯ ಜಿಲೇಬಿಗಳನ್ನು ತಯಾರಿಸಲಾಗುತ್ತದೆ: ಬಿಳಿ ಮತ್ತು ದುಬಾರಿ ಸಕ್ಕರೆ ಜಿಲೇಬಿಗಳು ಮತ್ತು ಕಪ್ಪು ಮತ್ತು ಅಗ್ಗದ [[ಬೆಲ್ಲ]] ಜಿಲೇಬಿಗಳು.
* ಹಬ್ಬದ ಆಗಮನವನ್ನು ಘೋಷಿಸಲು ಕೊಂಡೋಟ್ಟಿಯ ಭತ್ತದ ಗದ್ದೆಗಳಲ್ಲಿ ಮೂರು ದೊಡ್ಡ ಫಿರಂಗಿಗಳನ್ನು ಹಾರಿಸಲಾಗುವುದು.
* ಹಬ್ಬದ ಶಾಂತಿಯುತ ಸ್ವರೂಪವನ್ನು ಪ್ರಕಟಿಸಲು ಕೊಂಡೋಟ್ಟಿಯ ತಂಙಲ್ ಜಂಕ್ಷನ್ನಲ್ಲಿ ಬಿಳಿ ಧ್ವಜವನ್ನು ಹಾರಿಸಲಾಗುತ್ತದೆ.
* ದರ್ಗಾಕ್ಕೆ ಆಗಮಿಸುವ ಮೊದಲ ಮೆರವಣಿಗೆ ಪೆರಿಂಥಲ್ಮನ್ನಾದಿಂದ ಬರುವ ವೆಲ್ಲಡ್ ಮೆರವಣಿಗೆ.
* ಪಟ್ಟಣದಲ್ಲಿ ಕೋಲ್ಕಳಿ, ಹಾಡುಗಳು ಮತ್ತು ನೃತ್ಯಗಳಂತಹ ವಿವಿಧ ಮನರಂಜನೆಗಳನ್ನು ಆಯೋಜಿಸಲಾಗುತ್ತದೆ.
* ತಂಗಲ್ ಅರಮನೆಯ ಬಂದೂಕುಗಳನ್ನು ಸ್ವಚ್ಛಗೊಳಿಸುವುದು ಇನ್ನೊಂದು ಆಚರಣೆಯಾಗಿದೆ. ಉಳಿದ ಎಣ್ಣೆಯು ಔಷಧೀಯ ಮೌಲ್ಯಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಈ ಸಂದರ್ಭದಲ್ಲಿ ಹಿಂದೂ ಶೈಲಿಯ ದೀಪವನ್ನು ಸಹ ಬೆಳಗಿಸಲಾಗುತ್ತದೆ.
* ವಿವಿಧ ಹಳ್ಳಿಗಳಿಂದ ವಿವಿಧ ಮೆರವಣಿಗೆಗಳು ವಿವಿಧ ದಿನಗಳಲ್ಲಿ ಕೊಂಡೋಟ್ಟಿಗೆ ಬರುತ್ತವೆ. ಮಾರ್ಗದುದ್ದಕ್ಕೂ ಗ್ರಾಮಸ್ಥರು ಪಟಾಕಿ ಸಿಡಿಸಿ ಮತ್ತು ಹಬ್ಬಗಳೊಂದಿಗೆ ಮೆರವಣಿಗೆಯನ್ನು ಸ್ವಾಗತಿಸುತ್ತಾರೆ.
* ಎಲ್ಲಾ ಪೋಷಕ ಹಳ್ಳಿಗಳು [[ಜಿಲೇಬಿ]] ಮಾರಾಟ ಮಳಿಗೆಗಳನ್ನು ನಿರ್ಮಿಸುವ ಮೂಲಕ ಹಬ್ಬದಲ್ಲಿ ಸೇರುತ್ತವೆ. ಎರಡು ರೀತಿಯ ಜಿಲೇಬಿಗಳನ್ನು ತಯಾರಿಸಲಾಗುತ್ತದೆ: ಬಿಳಿ ಮತ್ತು ದುಬಾರಿ ಸಕ್ಕರೆ ಜಿಲೇಬಿಗಳು ಮತ್ತು ಕಪ್ಪು ಮತ್ತು ಅಗ್ಗದ [[ಬೆಲ್ಲ]] ಜಿಲೇಬಿಗಳು.
== ಮರೀದಾ ಸಿಹಿತಿಂಡಿ ವಿತರಣೆ ==
ಹಬ್ಬದ ಕೊನೆಯಲ್ಲಿ ಮುಘಲ್ ಖಾದ್ಯವಾದ '''ಮರೀಧವನ್ನು''' ಭಕ್ತರಿಗೆ ವಿತರಿಸಲಾಗುತ್ತದೆ. ಮರೀಧಾ ಅನ್ನ, [[ತುಪ್ಪ]] ಮತ್ತು ವಿವಿಧ ಮಸಾಲೆಗಳಿಂದ ತಯಾರಿಸಿದ ವಿಶೇಷ ಸಿಹಿ ಪುಡಿಯಾಗಿದೆ.{{Fact|date=May 2019}}<sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (May 2019)">ಉಲ್ಲೇಖದ ಅಗತ್ಯವಿದೆ</span>]]'' ]</sup>
== ಗೋಲ್ಡ್ ಸ್ಮಿತ್ ಬಾಕ್ಸ್ ಮೆರವಣಿಗೆ ==
[[ಚಿತ್ರ:Kondotty_Town-Busstand.jpg|thumb| ಕೊಂಡೋಟ್ಟಿ ಬಸ್ ನಿಲ್ದಾಣ]]
ಉತ್ಸವದ ಅಂತ್ಯವೆಂದರೆ ಸ್ಥಳೀಯ ವ್ಯಾಪಾರಿಗಳು ಮತ್ತು ಭಕ್ತರ ಮೆರವಣಿಗೆಯಾದ '''ತಟ್ಟಂತೆ ಪೆಟ್ಟಿ''' ಅಥವಾ ''ಚಿನ್ನದ ಕೆಲಸಗಾರರ ಪೆಟ್ಟಿಗೆಯ'' ಆಗಮನ. ಈ ಮೆರವಣಿಗೆಯಲ್ಲಿ ಕೊಂಡೋಟ್ಟಿಯ ನೆರೆಯ ಹಳ್ಳಿಗಳು ಮಾತ್ರ ಸೇರುತ್ತವೆ. ಈ ದಿನದಂದು, ಕೊಂಡೋಟ್ಟಿಯ ತಂಙಳ್ ಕುದುರೆಯ ಮೇಲೆ ಬಂದು ಭಕ್ತರನ್ನು ಸ್ವಾಗತಿಸುತ್ತಾರೆ. <ref name="blogspot">{{Cite web |title=Kondotty News - Kondotty Images : Kondotty Nercha festival Photos News |url=http://kondotty-news.blogspot.in/2013/05/kondotty-nercha-festival-photos-news.html |access-date=2016-01-31 |publisher=kondotty-news.blogspot.in}}</ref>
ಕೊಂಡೋಟ್ಟಿ ನೇರ್ಚವು ಜಾತ್ಯತೀತವಾದ ಹಬ್ಬವಾಗಿದ್ದು, ಇದನ್ನು ಕೊಂಡೋಟ್ಟಿಯ ಮುಸ್ಲಿಂ ಮತ್ತು ಹಿಂದೂ ಸಮುದಾಯವು ಜಂಟಿಯಾಗಿ ಆಚರಿಸುತ್ತದೆ. ಚಿನ್ನದ ಅಕ್ಕಸಾಲಿಗ ಪೆಟ್ಟಿಗೆಯ ಕೊನೆಯ ಮೆರವಣಿಗೆಯನ್ನು ಸಾಮಾನ್ಯವಾಗಿ ಕೊಂಡೋಟ್ಟಿಯ ಹಿಂದೂ ವ್ಯಾಪಾರಿಗಳು ನಿರ್ವಹಿಸುತ್ತಾರೆ.
== ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ==
ಕೊಂಡೋಟ್ಟಿಯ ಜಿವಿಎಚ್ಎಸ್ ಶಾಲೆಯ ವಿದ್ಯಾರ್ಥಿಗಳ ಒಂದು ಸಣ್ಣ ಗುಂಪು ಕೊಂಡೋಟ್ಟಿ ನೇರ್ಚ ಕುರಿತು ಕಿರುಚಿತ್ರವನ್ನು ನಿರ್ಮಿಸಿದೆ. ಈ 45 ನಿಮಿಷಗಳ ಸಾಕ್ಷ್ಯಚಿತ್ರವು ಸ್ಥಳೀಯವಾಗಿ ಪ್ರಸಿದ್ಧಿಯಾಗಿದ್ದು, ನಾಲ್ಕು ರಾಜ್ಯ ಪ್ರಶಸ್ತಿಗಳು ಮತ್ತು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ. ಈ ಚಿತ್ರವು ಉತ್ಸವದ 100 ವರ್ಷಗಳ ಹಳೆಯ ಇತಿಹಾಸವನ್ನು ತೋರಿಸುತ್ತದೆ ಮತ್ತು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ನಿರ್ಮಾಣದಲ್ಲಿ ಭಾಗವಹಿಸಿದ್ದರು. ಈ ಚಿತ್ರವನ್ನು ಕೇರಳದ ಕೊಲ್ಲಂನಲ್ಲಿ ನಡೆದ ಕೇರಳ ರಾಜ್ಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಎಂಟನೇ ತರಗತಿಯ ವಿದ್ಯಾರ್ಥಿನಿ ಎಂ.ಟಿ.ಶಹಮಾ ಬಾಥೂಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ‘ನೇರ್ಚ ಒರು ನೇರಕಳಚ’ ಎಂದು ಹೆಸರಿಡಲಾಗಿದೆ. ಹಬ್ಬದ ಸಮಯದಲ್ಲಿ ನಡೆಯುವ ಧಾರ್ಮಿಕ ಮೆರವಣಿಗೆ ಮತ್ತು ಜಾತ್ರೆಗಳಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. <ref name="thehindu">{{Cite web |title=Students make film on Kondotty Nercha, get closer to roots - KERALA - The Hindu |url=http://www.thehindu.com/todays-paper/tp-national/tp-kerala/students-make-film-on-kondotty-nercha-get-closer-to-roots/article745287.ece |access-date=2016-01-31 |publisher=thehindu.com}}</ref>
== ಟೀಕೆ ==
ಮುಜಾಹಿದ್ಗಳು ಮತ್ತು ಜಮಾತೆ ಇಸ್ಲಾಮಿಯಂತಹ ಕೆಲವು ಮುಸ್ಲಿಂ ಗುಂಪುಗಳು [[ದರಗ|ದರ್ಗಾಗಳ]] ಸುತ್ತಲೂ ಆಯೋಜಿಸುವ ಆಚರಣೆಗಳನ್ನು ವಿರೋಧಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಅವರು ಉತ್ಸವದ ಭಾಗಶಃ ಬಹಿಷ್ಕಾರವನ್ನು ಆಯೋಜಿಸಿದ್ದಾರೆ.{{Fact|date=February 2016}}<sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (February 2016)">ಉಲ್ಲೇಖದ ಅಗತ್ಯವಿದೆ</span>]]'' ]</sup>
== ಉಲ್ಲೇಖಗಳು ==
<templatestyles src="Reflist/styles.css" />{{ಉಲ್ಲೇಖಗಳು}}
75sku3fzn15rpn0cjfil5erztfwoh5m
1379451
1379448
2026-08-08T14:22:06Z
A826
72368
Reverted 1 edit by [[Special:Contributions/Ashwini Rai K|Ashwini Rai K]] ([[User talk:Ashwini Rai K|talk]])(TwinkleGlobal)
1379451
wikitext
text/x-wiki
[[ಚಿತ್ರ:Kondotty_Nercha-Thattanpetti_Varavu1.jpg|thumb| "ಗೋಲ್ಡ್ಸ್ಮಿತ್ ಬಾಕ್ಸ್" ಆಗಮನ]]
[[ಚಿತ್ರ:Kondotty_Qubba.2.jpg|thumb| ಕೊಂಡೋಟ್ಟಿ ಕುಬ್ಬಾ]]
[[ಚಿತ್ರ:Pazhayangadi_Mosque-Kondotty3.jpg|thumb| ಪಳಯಂಗಡಿ ಮಸೀದಿ, ಕೊಂಡೋಟ್ಟಿ]]
'''ಕೊಂಡೋಟ್ಟಿ ನೇರ್ಚಾ''' ಎಂಬುದು [[ಭಾರತ]]ದ [[ಕೇರಳ]] ರಾಜ್ಯದ [[ಮಲಪ್ಪುರಂ]] ಜಿಲ್ಲೆಯ ಕೊಂಡೋಟ್ಟಿಯಲ್ಲಿರುವ ದರ್ಗಾದಲ್ಲಿ ಸಂತ ಮುಹಮ್ಮದ್ ಶಾ ಅವರ ನೆನಪಿಗಾಗಿ ಪ್ರತಿ ವರ್ಷ ಆಚರಿಸಲಾಗುವ ಒಂದು ಹಬ್ಬವಾಗಿದೆ.
== ಮುಹಮ್ಮದ್ ಶಾ ==
'''ಕೊಂಡೋಟ್ಟಿ ನೇರ್ಚಾ''' ಹಬ್ಬವನ್ನು ಮುಂಬೈನ ಶಿಯಾ ಸಂತ ಮುಹಮ್ಮದ್ ಶಾ ಅವರ ನೆನಪಿಗಾಗಿ ಪ್ರತಿ ವರ್ಷ ಆಚರಿಸಲಾಗುತ್ತದೆ. 18 ನೇ ಶತಮಾನದಲ್ಲಿ ಮೊಘಲ್ ಶೈಲಿಯಲ್ಲಿ ನಿರ್ಮಿಸಲಾದ ಅವರ ಸಮಾಧಿಯು (ಮಕ್ಬರಾ) ಕೊಂಡೋಟ್ಟಿಯಲ್ಲಿದೆ ಮತ್ತು ಇದನ್ನು '''<nowiki/>'ಕೊಂಡೋಟ್ಟಿ ಕುಬ್ಬಾ'''' ಎಂದು ಕರೆಯಲಾಗುತ್ತದೆ.
== ವಸಂತ ಹಬ್ಬ ==
'''ಕೊಂಡೋಟ್ಟಿ ನೇರ್ಚಾ''' ಮೂಲಭೂತವಾಗಿ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಒಂದು ವಸಂತೋತ್ಸವವಾಗಿದೆ. ಒಮ್ಮೆ ಕೊಯ್ಲು ಮುಗಿದ ನಂತರ, ಕೊಂಡೋಟ್ಟಿಯ ಭತ್ತದ ಗದ್ದೆಗಳು ದೊಡ್ಡ ಮಟ್ಟದ ಸ್ಥಳೀಯ ಹಬ್ಬವನ್ನು ಆಯೋಜಿಸಲು ಸಾಕಷ್ಟು ಖಾಲಿಯಾಗುತ್ತವೆ ಮತ್ತು ಸಮತಟ್ಟಾಗುತ್ತವೆ. ಈ ಹಬ್ಬದ ಆರಂಭವನ್ನು ಸಾರಲು ಫಿರಂಗಿ (ಕುಂದಣಿ) ಸೌಂಡ್ ಮಾಡಲಾಗುತ್ತದೆ.<ref name="youtube">{{cite web|url=https://www.youtube.com/watch?v=nd95M_a8Lb4|title=kondotty nercha - YouTube|publisher=youtube.com|accessdate=2016-01-31}}</ref>
== ಇತಿಹಾಸ ==
ಈ ಪ್ರದೇಶದ ಮುಸ್ಲಿಮರು ಈ ಹಿಂದೆ ಪೊನ್ನಾನಿಯ ಮಖ್ದೂಮ್ಗಳು ಮತ್ತು ಮಂಬುರಂನ ಅಲಿಡ್ ಸಯ್ಯದ್ಗಳ ನಾಯಕತ್ವದಲ್ಲಿದ್ದರು. ಮಹಾರಾಷ್ಟ್ರದ ಶಿಯಾ ಸಂತರಾದ ಮುಹಮ್ಮದ್ ಶಾ ಅವರು 1717 ರಲ್ಲಿ ಕೊಂಡೋಟ್ಟಿಗೆ ಬಂದರು. ನಂತರ ಇವರು 'ಕೊಂಡೋಟ್ಟಿ ತಂಙಳ್' (Kondotty Thangal) ಕುಟುಂಬ ಎಂದು ಪ್ರಸಿದ್ಧರಾದರು. ಈ ತಂಙಳ್ ಕುಟುಂಬದ ಜೀವನ ಚರಿತ್ರೆಯನ್ನು ಅರೀಕ್ಕೋಡ್ ಕುಞಾವಾ ಅವರು ಬರೆದಿದ್ದಾರೆ. ಸಂತ ಮುಹಮ್ಮದ್ ಶಾ ಅವರು 1766 ರಲ್ಲಿ ನಿಧನರಾದರು. ಪ್ರತಿ ವರ್ಷ ಕೊಂಡೋಟ್ಟಿಯಲ್ಲಿರುವ ಅವರ ಸಮಾಧಿಯ (ಮಕ್ಬರಾ) ಬಳಿ 'ಕೊಂಡೋಟ್ಟಿ ನೇರ್ಚಾ' ಹಬ್ಬವನ್ನು ಆಚರಿಸಲಾಗುತ್ತದೆ.
[[ಚಿತ್ರ:Kondotty_Nercha-Thattanpetti_Varavu2.jpg|thumb| ''ಗೋಲ್ಡ್ ಸ್ಮಿತ್ ಬಾಕ್ಸ್'' ಆಗಮನ]]
ತಪ್ಪು ಊಹೆ.
ಸಯ್ಯದ್ ಮುಹಮ್ಮದ್ ಶಾ ಅವರು ಇಸ್ಲಾಂ ಧರ್ಮದ ಶಿಯಾ ಪಂಥಕ್ಕೆ ಸೇರಿದವರಾಗಿದ್ದರು ಎಂಬುದು ಇತಿಹಾಸದ ಒಂದು ತಪ್ಪು ಕಲ್ಪನೆಯಾಗಿದೆ. ಅವರು ಶಿಯಾ ನಾಯಕರಾಗಿದ್ದರು ಎಂಬ ತೀರ್ಮಾನಕ್ಕೆ ಯಾವುದೇ ಪುರಾವೆಗಳಿಲ್ಲ.
ಅಂಬಂಕುನ್ನು ಬೀರನ್ ಔಲಿಯಾ, ಕುತ್ಬುಲ್ ಆಲಂ ಮಡವೂರ್ ವಲಿಯುಲ್ಲಾಹಿ, ವೆಳಿಯಂಕೋಡ್ ಉಮರ್ ಖಾಜಿ, ಶಂಸುಲ್ ಉಲಮಾ ಇ.ಕೆ. ಅಬೂಬಕರ್ ಮುಸ್ಲಿಯಾರ್, ವಲಿಯುಲ್ಲಾಹಿ ತ್ರಿಪ್ಪನಾಚಿ ಉಸ್ತಾದ್ ಮತ್ತು ವಲಿಯುಲ್ಲಾಹಿ ಕನ್ಯಾಲ ಮೌಲಾ ಅವರಂತಹ ಮಹಾನ್ ಸೂಫಿ ಸಂತರು ಸಯ್ಯದ್ ಮುಹಮ್ಮದ್ ಶಾ ತಂಙಳ್ ಅವರನ್ನು ಒಬ್ಬ ಮಹಾನ್ ಸೂಫಿ ಗುರು ಎಂದು ಗುರುತಿಸಿದ್ದಾರೆ. ಅವರು ಹಲವು ಬಾರಿ ಇವರನ್ನು ಭೇಟಿ ಮಾಡಿದ್ದರು. ಪೊನ್ನಾನಿಯ ಮಖ್ದೂಮ್ ವಿದ್ವಾಂಸರು ಕೂಡ ಇವರನ್ನು ಒಬ್ಬ ಮಹಾನ್ ಸೂಫಿ ಗುರು ಎಂದು ಒಪ್ಪಿಕೊಂಡಿದ್ದಾರೆ. ಈ ವಿಷಯದಲ್ಲಿ ಪೊನ್ನಾನಿಯ ಕೆಲವೇ ಕೆಲವು ವಿದ್ವಾಂಸರು ಮಾತ್ರ ಮಖ್ದೂಮ್ ಅವರನ್ನು ವಿರೋಧಿಸಿದ್ದರು.
ಈ ನಿಟ್ಟಿನಲ್ಲಿ ಈ ಕೆಳಗಿನ ಅಂಶಗಳನ್ನು ಸಹ ಗಮನಿಸಬೇಕಾಗಿದೆ.
1.ಸಯ್ಯದ್ ಮುಹಮ್ಮದ್ ಶಾ ಅವರಿಗೆ ಶಿಯಾ ಪಂಥದೊಂದಿಗೆ ಸಂಪರ್ಕವಿತ್ತು ಎಂಬುದಕ್ಕೆ ಯಾವುದೇ ಪುರಾವೆಗಳು ಲಭ್ಯವಿಲ್ಲ.
2. ಅವರ ಪವಿತ್ರ ದರ್ಗಾದ ಆವರಣದಲ್ಲಿಯೂ ಸಹ ಯಾವುದೇ ಶಿಯಾ ಪಂಥದ ಜನರು ವಾಸಿಸುತ್ತಿಲ್ಲ. ಒಂದು ವೇಳೆ ಸಯ್ಯದ್ ಮುಹಮ್ಮದ್ ಶಾ ಅವರಿಗೆ ಶಿಯಾ ಪಂಥದೊಂದಿಗೆ ಸಂಪರ್ಕವಿದ್ದಿದ್ದರೆ, ಶಿಯಾ ಆಚರಣೆಗಳನ್ನು ಅನುಸರಿಸುವ ಕನಿಷ್ಠ ಕೆಲವು ಕುಟುಂಬಗಳಾದರೂ ಕೊಂಡೋಟ್ಟಿಯಲ್ಲಿ ಇರುತ್ತಿದ್ದವು.
3. ಕೊಂಡೋಟ್ಟಿಯಲ್ಲಿ ಯಾವುದೇ ರೀತಿಯ ಶಿಯಾ ಪಂಥದ ಉಪಸ್ಥಿತಿ ಅಥವಾ ಪ್ರಭಾವ ಕಂಡುಬರುವುದಿಲ್ಲ. ಸಯ್ಯದ್ ಅವರು ಶಿಯಾ ಪಂಥಕ್ಕೆ ಸೇರಿದವರಾಗಿರಲಿಲ್ಲ ಮತ್ತು ಅವರು ತಮ್ಮ ಜೀವಿತಾವಧಿಯ ಯಾವುದೇ ಹಂತದಲ್ಲೂ ಶಿಯಾ ನಂಬಿಕೆ ಅಥವಾ ಪದ್ಧತಿಗಳನ್ನು ಹರಡಲು ಪ್ರಯತ್ನಿಸಲಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ.
4. ದರ್ಗಾ ಉತ್ಸವಗಳಿಗೆ ಸಂಬಂಧಿಸಿದ ಪ್ರಮುಖ ಹಬ್ಬವಾದ '''ಕೊಂಡೋಟ್ಟಿ ನೇರ್ಚಾವನ್ನು''' ಸುನ್ನಿ ಮುಸ್ಲಿಮರು ಆಚರಿಸುತ್ತಾರೆ.
5.ಒಂದು ವೇಳೆ ಸಿಲ್ಸಿಲಾದ (ಸೂಫಿ ಪಂಥದ) ಮುರೀದರು (ಶಿಷ್ಯರು) ಮರಣ ಹೊಂದಿದರೆ, ಅವರ ಅಂತ್ಯಸಂಸ್ಕಾರವನ್ನು ಸುನ್ನಿ ನಂಬಿಕೆ ಮತ್ತು ಆಚರಣೆಗಳ ಪ್ರಕಾರವೇ ಮಾಡಲಾಗುತ್ತದೆ.
6. ದರ್ಗಾ ಶರೀಫ್ನಲ್ಲಿ '''<nowiki/>'ಅಹ್ಲ್-ಅಲ್-ಅಬಾ'''' (Ahl-al-aba / ಪ್ರವಾದಿ ಮುಹಮ್ಮದ್ ಅವರ ಪವಿತ್ರ ಕುಟುಂಬಸ್ಥರು) ಅವರಿಗೆ ಅತ್ಯಂತ ಗೌರವ ಮತ್ತು ಆದರವನ್ನು ನೀಡಲಾಗುತ್ತದೆ. ಸಯ್ಯದ್ ಮುಹಮ್ಮದ್ ಶಾ ಅವರು ಶಿಯಾ ಪಂಥದ ಅನುಯಾಯಿಯಾಗಿದ್ದರು ಎಂಬ ತಪ್ಪು ಕಲ್ಪನೆ ಮೂಡಲು ಪ್ರಮುಖವಾಗಿ ಇದೇ ಕಾರಣ ಇರಬಹುದು.
7. ಅಲ್ಲಿ ಪ್ರತಿವಾರ ನಡೆಸಲಾಗುವ '''ಸ್ವಲಾತ್ ಮಜ್ಲಿಸ್''' (ಸ್ವಲಾತ್ ಕೂಟ) ಸುನ್ನಿ ಪದ್ಧತಿಗಳ ಪ್ರಕಾರವೇ ಇರುತ್ತದೆ ಎಂಬುದನ್ನು ಸಹ ಇಲ್ಲಿ ಗಮನಿಸಬೇಕಾಗಿದೆ.
8. ಹತ್ತಿರದಿಂದ ಗಮನಿಸಿದಾಗ ಮತ್ತು ಆಳವಾದ ಅಧ್ಯಯನವನ್ನು ಮಾಡಿದಾಗ, ಕುಬ್ಬಕ್ಕಲ್ನಲ್ಲಿ (ಕೊಂಡೋಟ್ಟಿ ದರ್ಗಾ) ನಡೆಸುವ ಧಾರ್ಮಿಕ ಆಚರಣೆಗಳು '''ಅಜ್ಮೀರ್ ಶರೀಫ್'''ನ (Ajmer Sharif) ಆಚರಣೆಗಳಿಗೆ ಹತ್ತಿರವಾಗಿವೆ ಅಥವಾ ಹೋಲಿಕೆಯನ್ನು ಹೊಂದಿವೆ ಎಂಬುದು ತಿಳಿದುಬರುತ್ತದೆ.
9. ಕೊಂಡೋಟ್ಟಿಯ ಪವಿತ್ರ ದರ್ಗಾವನ್ನು '''<nowiki/>'ಕೇರಳದ ಅಜ್ಮೀರ್'''' ಎಂದೇ ಕರೆಯಲಾಗುತ್ತದೆ.
== ನೆರ್ಚಾದ ಆಚರಣೆಗಳು ==
ಈ ಹಬ್ಬವನ್ನು ''ಕೊಂಡೋಟ್ಟಿ ನೆರಚ'' ಎಂದೂ ಕರೆಯುತ್ತಾರೆ.
* ಹಬ್ಬದ ಆಗಮನವನ್ನು ಸಾರಲು ಕೊಂಡೋಟ್ಟಿಯ ಭತ್ತದ ಗದ್ದೆಗಳಲ್ಲಿ '''ಮೂರು ದೊಡ್ಡ ಫಿರಂಗಿಗಳನ್ನು''' (ಕುಂದಣಿ) ಸಿಡಿಸಲಾಗುತ್ತದೆ.
* ಹಬ್ಬದ ಶಾಂತಿಯುತ ಸ್ವರೂಪವನ್ನು ಸಾರಲು ಕೊಂಡೋಟ್ಟಿಯ ತಂಙಳ್ ಜಂಕ್ಷನ್ನಲ್ಲಿ '''ಬಿಳಿ ಧ್ವಜವನ್ನು''' ಹಾರಿಸಲಾಗುತ್ತದೆ.
* ದರ್ಗಾಕ್ಕೆ ಬರುವ ಮೊದಲ ಮೆರವಣಿಗೆಯೆಂದರೆ ಪೆರಿಂತಲ್ಮಣ್ಣದಿಂದ ಬರುವ '''<nowiki/>'ವೆಳ್ಳಾಡ್' ಮೆರವಣಿಗೆ'''.
* ಪಟ್ಟಣದಲ್ಲಿ '''ಕೋಲ್ಕಲಿ''', ಸಾಂಪ್ರದಾಯಿಕ ಹಾಡುಗಳು ಮತ್ತು ನೃತ್ಯದಂತಹ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
* ತಂಙಳ್ ಅರಮನೆಯ ಬಂದೂಕುಗಳನ್ನು ಸ್ವಚ್ಛಗೊಳಿಸುವುದು ಇಲ್ಲಿನ ಮತ್ತೊಂದು ವಿಶಿಷ್ಟ ಆಚರಣೆಯಾಗಿದೆ. ಅದಕ್ಕೆ ಬಳಸಿ ಉಳಿದ ಎಣ್ಣೆಯು '''ಔಷಧೀಯ ಗುಣಗಳನ್ನು''' ಹೊಂದಿದೆ ಎಂದು ನಂಬಲಾಗುತ್ತದೆ. ಈ ಸಂದರ್ಭದಲ್ಲಿ '''ಹಿಂದೂ ಶೈಲಿಯ ದೀಪವನ್ನು''' ಸಹ ಬೆಳಗಿಸಲಾಗುತ್ತದೆ.
* ವಿವಿಧ ಗ್ರಾಮಗಳ ವಿಭಿನ್ನ ಮೆರವಣಿಗೆಗಳು ಬೇರೆ ಬೇರೆ ದಿನಗಳಲ್ಲಿ ಕೊಂಡೋಟ್ಟಿಗೆ ಬರುತ್ತವೆ. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಗ್ರಾಮಸ್ಥರು ಬಾಣಬಿರುಸುಗಳು ಮತ್ತು ಸಂಭ್ರಮಾಚರಣೆಯೊಂದಿಗೆ ಅದನ್ನು ಸ್ವಾಗತಿಸುತ್ತಾರೆ.
* ಹಬ್ಬಕ್ಕೆ ಬೆಂಬಲ ನೀಡುವ ಎಲ್ಲಾ ಹಳ್ಳಿಗಳ ಜನರು '''ಜಿಲೇಬಿಗಳನ್ನು''' ಮಾರಾಟ ಮಾಡಲು ಮಳಿಗೆಗಳನ್ನು (Stalls) ಹಾಕುವ ಮೂಲಕ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಇಲ್ಲಿ ಎರಡು ರೀತಿಯ ಜಿಲೇಬಿಗಳನ್ನು ತಯಾರಿಸಲಾಗುತ್ತದೆ: [[ಸಕ್ಕರೆ]]ಯಿಂದ ಮಾಡಿದ ಬಿಳಿ ಬಣ್ಣದ ದುಬಾರಿ [[ಜಿಲೇಬಿಗಳು]] ಮತ್ತು [[ಬೆಲ್ಲ]]ದಿಂದ ಮಾಡಿದ ಕಪ್ಪು ಬಣ್ಣದ ಅಗ್ಗದ ಜಿಲೇಬಿಗಳು.
== ಮರೀದಾ ಸಿಹಿ ವಿತರಣೆ ==
ಹಬ್ಬದ ಮುಕ್ತಾಯದ ಸಮಯದಲ್ಲಿ ಭಕ್ತರಿಗೆ ಮೊಘಲ್ ಶೈಲಿಯ ಪ್ರಸಾದವಾದ '''<nowiki/>'ಮರೀದಾ'''' ವನ್ನು ವಿತರಿಸಲಾಗುತ್ತದೆ. ಮರೀದಾ ಎಂಬುದು ಅಕ್ಕಿ, [[ತುಪ್ಪ]] ಮತ್ತು ವಿವಿಧ ಮಸಾಲೆ ಪದಾರ್ಥಗಳಿಂದ ತಯಾರಿಸಲಾಗುವ ಒಂದು ವಿಶೇಷವಾದ ಸಿಹಿ ಪುಡಿಯಾಗಿದೆ.{{citation needed|date=May 2019}}
== ಗೋಲ್ಡ್ ಸ್ಮಿತ್ ಬಾಕ್ಸ್ ಮೆರವಣಿಗೆ ==
[[ಚಿತ್ರ:Kondotty_Town-Busstand.jpg|thumb| ಕೊಂಡೋಟ್ಟಿ ಬಸ್ ನಿಲ್ದಾಣ]]
ಈ ಹಬ್ಬದ ಅತ್ಯುನ್ನತ ಮತ್ತು ಸಮಾರೋಪದ ಕ್ಷಣವೆಂದರೆ ಸ್ಥಳೀಯ ವ್ಯಾಪಾರಿಗಳು ಮತ್ತು ಭಕ್ತರ ಮೆರವಣಿಗೆಯಾದ '''<nowiki/>'ತಟ್ಟಂತೆ ಪೆಟ್ಟಿ'''' (ಚಿನ್ನದ ಕೆಲಸಗಾರರ ಪೆಟ್ಟಿಗೆ ಅಥವಾ Goldsmith Box) ಆಗಮನವಾಗಿದೆ. ಈ ಮೆರವಣಿಗೆಯಲ್ಲಿ ಕೊಂಡೋಟ್ಟಿಯ ನೆರೆಯ ಹಳ್ಳಿಗಳ ಜನರು ಮಾತ್ರ ಪಾಲ್ಗೊಳ್ಳಬಹುದು. ಈ ವಿಶೇಷ ದಿನದಂದು, ಕೊಂಡೋಟ್ಟಿಯ ತಂಙಳ್ ಅವರು ಕುದುರೆಯ ಮೇಲೆ ಕುಳಿತು ಬಂದು ಭಕ್ತರನ್ನು ವಂದಿಸುತ್ತಾರೆ.<ref name="blogspot">{{cite web|url=http://kondotty-news.blogspot.in/2013/05/kondotty-nercha-festival-photos-news.html|title=Kondotty News - Kondotty Images : Kondotty Nercha festival Photos News|publisher=kondotty-news.blogspot.in|accessdate=2016-01-31}}</ref>
'''ಕೊಂಡೋಟ್ಟಿ ನೇರ್ಚಾ''' ಹಬ್ಬವು ಧರ್ಮನಿರಪೇಕ್ಷ (ಜಾತ್ಯತೀತ) ಸ್ವರೂಪವನ್ನು ಹೊಂದಿದೆ. ಏಕೆಂದರೆ ಇದನ್ನು ಕೊಂಡೋಟ್ಟಿಯ ಮುಸ್ಲಿಂ ಮತ್ತು ಹಿಂದೂ ಸಮುದಾಯದವರು ಜಂಟಿಯಾಗಿ ಆಚರಿಸುತ್ತಾರೆ. ಹಬ್ಬದ ಕೊನೆಯ ಮೆರವಣಿಗೆಯಾದ 'ತಟ್ಟಂತೆ ಪೆಟ್ಟಿ' (ಚಿನ್ನದ ಕೆಲಸಗಾರರ ಪೆಟ್ಟಿಗೆ) ಆಚರಣೆಯನ್ನು ಸಾಮಾನ್ಯವಾಗಿ ಕೊಂಡೋಟ್ಟಿಯ ಹಿಂದೂ ವ್ಯಾಪಾರಿಗಳೇ ನಿರ್ವಹಿಸುತ್ತಾರೆ.
== ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ==
'''ಜಿ.ವಿ.ಎಚ್.ಎಸ್ (GVHS) ಶಾಲೆ ಕೊಂಡೋಟ್ಟಿಯ''' ವಿದ್ಯಾರ್ಥಿಗಳ ಸಣ್ಣ ಗುಂಪೊಂದು 'ಕೊಂಡೋಟ್ಟಿ ನೇರ್ಚಾ' ಹಬ್ಬದ ಕುರಿತು ಕಿರುಚಿತ್ರವೊಂದನ್ನು ನಿರ್ಮಿಸಿದೆ. 45 ನಿಮಿಷಗಳ ಈ ಸಾಕ್ಷ್ಯಚಿತ್ರವು ಸ್ಥಳೀಯವಾಗಿ ಅತ್ಯಂತ ಪ್ರಸಿದ್ಧಿ ಪಡೆದಿದ್ದು, ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ಹಾಗೂ ಒಂದು ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಚಿತ್ರವು ಹಬ್ಬದ 100 ವರ್ಷಗಳ ಹಳೆಯ ಇತಿಹಾಸವನ್ನು ತೋರಿಸುತ್ತದೆ ಮತ್ತು ಇದರ ನಿರ್ಮಾಣದಲ್ಲಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಚಿತ್ರವನ್ನು ಕೇರಳದ ಕೊಲ್ಲಂನಲ್ಲಿ ನಡೆದ 'ಕೇರಳ ರಾಜ್ಯ ಮಕ್ಕಳ ಚಲನಚಿತ್ರೋತ್ಸವ'ದಲ್ಲಿ ಪ್ರದರ್ಶಿಸಲಾಯಿತು. ಎಂಟನೇ ತರಗತಿಯ ವಿದ್ಯಾರ್ಥಿನಿಯಾದ '''ಎಮ್.ಟಿ. ಶಹಾಮಾ ಬತ್ತೂಲ್''' ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ '''‘ನೇರ್ಚಾ ಒರು ನೇರ್ಕಾಝ್ಚಾ’''' (Nercha Oru Nerkazhcha) ಎಂದು ಹೆಸರಿಡಲಾಗಿದೆ. ಈ ಹಬ್ಬದ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಮೆರವಣಿಗೆಗಳು ಮತ್ತು ಜಾತ್ರೆಗಳಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ.<ref name="thehindu">{{cite web|url=http://www.thehindu.com/todays-paper/tp-national/tp-kerala/students-make-film-on-kondotty-nercha-get-closer-to-roots/article745287.ece|title=Students make film on Kondotty Nercha, get closer to roots - KERALA - The Hindu|publisher=thehindu.com|accessdate=2016-01-31}}</ref>
== ಟೀಕೆ ==
'''[[ಮುಜಾಹಿದ್]]ಗಳು''' ಮತ್ತು '''[[ಜಮಾತ್-ಎ-ಇಸ್ಲಾಮಿ]]''' ನಂತಹ ಕೆಲವು ಮುಸ್ಲಿಂ ಸಂಘಟನೆಗಳು [[ದರ್ಗಾ]]ಗಳ ಸುತ್ತ ಆಯೋಜಿಸಲಾಗುವ ಇಂತಹ ಆಚರಣೆಗಳನ್ನು ವಿರೋಧಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಈ ಹಬ್ಬವನ್ನು ಭಾಗಶಃ ಬಹಿಷ್ಕರಿಸುವಂತೆ ಅವುಗಳು ಕರೆ ನೀಡಿವೆ.{{Fact|date=February 2016}}<sup class="noprint Inline-Template Template-Fact" style="white-space:nowrap;">[ ''[[ವಿಕಿಪೀಡಿಯ:Citation needed|<span title="This claim needs references to reliable sources. (February 2016)">ಉಲ್ಲೇಖದ ಅಗತ್ಯವಿದೆ</span>]]'' ]</sup>
== ಉಲ್ಲೇಖಗಳು ==
{{ಉಲ್ಲೇಖಗಳು}}
[[ವರ್ಗ:Pages with unreviewed translations]]
[[ವರ್ಗ:ಮಲಪ್ಪುರಂ ಜಿಲ್ಲೆಯ ಹಬ್ಬಗಳು]]
s06jh9evyzeck9ziv0ps8vi8un5dooy
ಕೊಚ್ಚಿ ನಗರ ನಿಗಮ
0
179861
1379551
1377393
2026-08-09T01:46:35Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379551
wikitext
text/x-wiki
{{databox}}
{{Infobox legislature
|name = ಕೊಚ್ಚಿ ನಗರ ನಿಗಮ
|house_type = [[ಭಾರತದಲ್ಲಿ ನಗರ ನಿಗಮಗಳು|ನಗರ ನಿಗಮ]]
|leader1_type = [[ಮೇಯರ್ (ಭಾರತ)|ಮೇಯರ್]]
|leader1 = ಅಡ್ವಾ. ಮಿನಿಮೋಲ್ ವಿ ಕೆ
|party1 = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
|election1 =
|leader2_type = [[ಉಪ ಮೇಯರ್]]
|leader2 = ದೀಪಕ್ ಜಾಯ್
|party2 = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
|election2 =
|leader3_type = ವಿರೋಧ ಪಕ್ಷದ ನಾಯಕ
|leader3 =
|party3 =
|election3 =
|leader4_type = [[ನಗರ ಆಯುಕ್ತ (ಭಾರತ)|ನಗರ ನಿಗಮ ಕಾರ್ಯದರ್ಶಿ]]
|leader4 = ಪಿ.ಎಸ್. ಶಿಬು<ref>https://kochicorporation.lsgkerala.gov.in/en/secretary/370</ref>
|seats = 76<ref>https://www.thehindu.com/news/cities/Kochi/boundaries-number-of-divisions-in-kochi-corporation-undergo-sweeping-changes-as-per-draft-of-delimitation-of-wards/article68885752.ece</ref>
|jurisdiction =
|term_limits = 5 ವರ್ಷಗಳು
|foundation = 1967
|house1 =
|structure1 = {{Switcher|[[File:India Kerala Kochi Municipal Corporation Election Partywise 2025.svg|300px]]|ಪಕ್ಷವಾರು|[[File:India Kerala Kochi Municipal Corporation Election Alliance Wise 2025.svg|300px]]|ಮೈತ್ರಿಯಾರು}}
|political_groups1 =
'''[[ಸರ್ಕಾರ]] (48)''' <br />
{{colorbox|#046FFF}} [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|UDF]] (48)
*{{colorbox|#00BFFF}} [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]] (42)
*{{colorbox|#228B22}} [[ಭಾರತೀಯ ಯೂನಿಯನ್ ಮುಸ್ಲಿಂ ಲೀಗ್|IUML]] (3)
*{{colorbox|#CC6600}} [[ಕೇರಳ ಕಾಂಗ್ರೆಸ್|KEC]] (1)
*{{colorbox|#B2B2B2}} [[ಸ್ವತಂತ್ರ ರಾಜಕಾರಣಿ|IND]] (2)
'''ಅಧಿಕೃತ ವಿರೋಧ ಪಕ್ಷ (20)''' <br />
{{colorbox|#FF0000}} [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|LDF]] (20)
*{{colorbox|#CC0D0D}} [[ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)|CPI(M)]] (17)
*{{colorbox|#F9001B}} [[ಭಾರತೀಯ ಕಮ್ಯುನಿಸ್ಟ್ ಪಕ್ಷ|CPI]] (2)
*{{colorbox|#FF7F7F}} [[ಕಾಂಗ್ರೆಸ್ (ಸೆಕ್ಯುಲರ್)|CON(S)]] (1)
'''ಇತರೆ ವಿರೋಧ ಪಕ್ಷಗಳು (9)''' <br />
*{{colorbox|#FF9933}} [[ಭಾರತೀಯ ಜನತಾ ಪಕ್ಷ|BJP]] (6)
*{{colorbox|#B2B2B2}} [[ಸ್ವತಂತ್ರ ರಾಜಕಾರಣಿ|IND]] (2)
|committees1 = {{collapsible list|bullets=yes
| title = 8
| 1 = ಅಭಿವೃದ್ಧಿ ಸ್ಥಾಯಿ ಸಮಿತಿ
| 2 = ಶಿಕ್ಷಣ ಮತ್ತು ಕ್ರೀಡಾ ಸ್ಥಾಯಿ ಸಮಿತಿ
| 3 = ಹಣಕಾಸು ಸ್ಥಾಯಿ ಸಮಿತಿ
| 4 = ಆರೋಗ್ಯ ಸ್ಥಾಯಿ ಸಮಿತಿ
| 5 = ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ
| 6 = ತೆರಿಗೆ ಮೇಲ್ಮನವಿ ಸ್ಥಾಯಿ ಸಮಿತಿ
| 7 = ನಗರ ಯೋಜನೆ ಸ್ಥಾಯಿ ಸಮಿತಿ
| 8 = ಕಲ್ಯಾಣ ಸ್ಥಾಯಿ ಸಮಿತಿ
}}
|last_election1 = [[2025 ಕೇರಳ ಸ್ಥಳೀಯ ಚುನಾವಣೆಗಳು|9 ಡಿಸೆಂಬರ್ 2025]]
|next_election1 = ಡಿಸೆಂಬರ್ 2030
|session_room = Kochi Municipal Corporation IMG 20180916 140014.jpg
|session_res = 250px
|meeting_place = ಪಾರ್ಕ್ ಅವೆನ್ಯೂ, [[ಎರ್ನಾಕುಲಂ]] ನಲ್ಲಿರುವ ಹಳೆಯ ನಿಗಮ ಕಚೇರಿ
|website = {{url|https://kochicorporation.lsgkerala.gov.in}}
}}
'''ಕೊಚ್ಚಿ ನಗರ ನಿಗಮ'''ವು [[ಕೇರಳ]] ರಾಜ್ಯದ [[ಕೊಚ್ಚಿ]] ನಗರವನ್ನು ಆಳುವ [[ನಗರ ನಿಗಮ]]ವಾಗಿದೆ. ಈ ನಿಗಮವು ಕೊಚ್ಚಿ ನಗರದ 94.88 ಕಿಮೀ<sup>2</sup> ಪ್ರದೇಶವನ್ನು ನಿರ್ವಹಿಸುತ್ತದೆ ಮತ್ತು ಈ ಪ್ರದೇಶದೊಳಗೆ 677,381 ಜನಸಂಖ್ಯೆಯನ್ನು ಹೊಂದಿದೆ.<ref name="Corporation Stats">{{cite web| url=https://cochinmunicipalcorporation.kerala.gov.in/web/guest/poverty-reduction| title=Profile of Kochi| publisher=Kochi Municipal Corporation| access-date=15 August 2018}}</ref> ಇದು ರಾಜ್ಯದ ಅತಿ ಹೆಚ್ಚು ಜನಸಾಂದ್ರತೆಯ ನಗರ ನಿಗಮವಾಗಿದೆ.<ref>{{cite web|url=http://www.corporationofcochin.net/general.html |title=Official Website of Coorporation of Cochin |access-date=2015-12-15 |url-status=dead |archive-url=https://web.archive.org/web/20150717083458/http://www.corporationofcochin.net/general.html |archive-date=17 July 2015 }}</ref> ಕೊಚ್ಚಿ ನಗರ ನಿಗಮವು ಪಟ್ಟಣದ ಮೂಲಸೌಕರ್ಯವನ್ನು ಸುಧಾರಿಸಲು [[ನಗರ_ನಿಗಮ_(ಭಾರತ)#ಕಾರ್ಯಗಳು|ಕಾರ್ಯಗಳೊಂದಿಗೆ]] ರಚಿಸಲಾಗಿದೆ.
== ಇತಿಹಾಸ ==
ಮಧ್ಯಕಾಲೀನ ಕೇರಳ ಕರಾವಳಿಯಲ್ಲಿ [[ಕೋಝಿಕ್ಕೋಡ್]] ನ ಬಂದರು ಪ್ರಮುಖ ಆರ್ಥಿಕ ಮತ್ತು ರಾಜಕೀಯ ಸ್ಥಾನವನ್ನು ಹೊಂದಿತ್ತು, ಆದರೆ [[ಕಣ್ಣೂರು]], [[ಕೊಲ್ಲಂ]], ಮತ್ತು ಕೊಚ್ಚಿಗಳು ವಾಣಿಜ್ಯಿಕವಾಗಿ ಮುಖ್ಯವಾದ ದ್ವಿತೀಯ ಬಂದರುಗಳಾಗಿದ್ದವು, ಅಲ್ಲಿ ವಿಶ್ವದ ವಿವಿಧ ಭಾಗಗಳಿಂದ ವ್ಯಾಪಾರಿಗಳು ಸೇರುತ್ತಿದ್ದರು.<ref name="Malekandathil">''The Portuguese, Indian Ocean and European Bridgeheads 1500–1800''. Festschrift in Honour of Prof. K. S. Mathew (2001). Edited by: Pius Malekandathil and T. Jamal Mohammed. Fundacoa Oriente. Institute for Research in Social Sciences and Humanities of MESHAR (Kerala)</ref> [[ಭೌಗೋಳಿಕ ಅನ್ವೇಷಣೆಯ ಯುಗ]]ದಲ್ಲಿ, 1498 ರಲ್ಲಿ [[ಕಪ್ಪಾಡ್]], [[ಕೋಝಿಕ್ಕೋಡ್]] ನಲ್ಲಿ ಪೋರ್ಚುಗೀಸರ ಆಗಮನವು [[ಯುರೋಪ್]] ನಿಂದ [[ಭಾರತ]]ಕ್ಕೆ ನೇರ ಸಮುದ್ರ ಮಾರ್ಗವನ್ನು ತೆರೆಯಿತು.<ref>DC Books, Kottayam (2007), A. Sreedhara Menon, A Survey of Kerala History</ref> ಆದರೆ ಪೋರ್ಚುಗೀಸರ ಆಗಮನದೊಂದಿಗೆ, [[ಜಾಮೋರಿನ್]] ರ ಶಕ್ತಿಯು ಕುಸಿಯಲಾರಂಭಿಸಿತು ಮತ್ತು [[ಕೊಚ್ಚಿ]] ಕರಾವಳಿಯ ಅತಿದೊಡ್ಡ ಬಂದರು ನಗರವಾಗಿ ಹೊರಹೊಮ್ಮಲಾರಂಭಿಸಿತು.<ref>DC Books, Kottayam (2007), A. Shreedhara Menon, A Survey of Kerala History</ref> [[File:Fort Kochi City Map 1672.png|thumb|584x584px|left|ಡಚ್ ಆಳ್ವಿಕೆಯಲ್ಲಿ ಫೋರ್ಟ್ ಕೊಚ್ಚಿ ಪುರಸಭೆಯ ನಕ್ಷೆ, ಫೋರ್ಟ್ ಸ್ಟೋರ್ಮ್ಬರ್ಗ್ (ಕೊಚ್ಚಿ ಕೋಟೆ) ಸಹಿತ]]
[[ಫೋರ್ಟ್ ಕೊಚ್ಚಿ]] ತನ್ನ ಮೊದಲ ಪುರಸಭೆಯನ್ನು ಡಚ್ ಪ್ರಭಾವದ ಅಡಿಯಲ್ಲಿ 18 ಏಪ್ರಿಲ್ 1664 ರಂದು ಸ್ಥಾಪಿಸಿತು, ಅದು ಡಚ್ ಆಕ್ರಮಿತ ಕೊಚ್ಚಿ ಸ್ಟೋರ್ಮ್ಬರ್ಗ್ ಕೋಟೆಯೊಳಗೆ ([[ಫೋರ್ಟ್ ಇಮ್ಯಾನ್ಯುಯೆಲ್|ಇಮ್ಯಾನ್ಯುಯೆಲ್ ಕೋಟೆ]]) ಸೀಮಿತವಾಗಿತ್ತು, ಇದು ಭಾರತೀಯ ಉಪಖಂಡದ ಅತ್ಯಂತ ಹಳೆಯ ಪುರಸಭೆಯಾಗಿದೆ. ಆದಾಗ್ಯೂ, [[ಆಂಗ್ಲೋ-ಡಚ್ ಒಪ್ಪಂದ 1814|ಆಂಗ್ಲೋ-ಡಚ್ ಒಪ್ಪಂದ]]ದ ಭಾಗವಾಗಿ ಕೊಚ್ಚಿಯನ್ನು ಬ್ರಿಟಿಷರಿಗೆ ಹಸ್ತಾಂತರಿಸಿದಾಗ, ಫೋರ್ಟ್ ಕೊಚ್ಚಿಯ ಪುರಸಭೆಯನ್ನು ವಿಸರ್ಜಿಸಲಾಯಿತು ಮತ್ತು ಸ್ಥಳೀಯ ಆಡಳಿತದ ಹೆಚ್ಚಿನ ಭಾಗವನ್ನು ನಂತರ ''ಪಂಡಾರ'' ಅಧಿಕಾರಿಗಳು ([[ಕೊಚ್ಚಿನ್ ಸಾಮ್ರಾಜ್ಯ|ಕೊಚ್ಚಿ ಸಾಮ್ರಾಜ್ಯ]]ದ ಆದಾಯ ಇಲಾಖೆ) ನಿರ್ವಹಿಸುತ್ತಿದ್ದರು. [[ಎರ್ನಾಕುಲಂ]] ಪಟ್ಟಣವು ಕೊಚ್ಚಿಯ ಬ್ರಿಟಿಷ್ ರೆಸಿಡೆಂಟ್ ನ ನೇರ ರಕ್ಷಣೆಯಲ್ಲಿತ್ತು. ಬ್ರಿಟಿಷ್ ರೆಸಿಡೆಂಟ್ ಅಧ್ಯಕ್ಷತೆಯಲ್ಲಿ 1823 ರಲ್ಲಿ ಎರ್ನಾಕುಲಂ ಪಟ್ಟಣವನ್ನು ಆಡಳಿತ ನಡೆಸಲು ಒಂದು ಪುರಸಭೆಯನ್ನು ನಿಯೋಜಿಸಲಾಯಿತು. ಆದಾಗ್ಯೂ ಅದು ಸ್ಥಳೀಯ ಪ್ರಾತಿನಿಧ್ಯವನ್ನು ಹೊಂದಿರಲಿಲ್ಲ, ಬದಲಿಗೆ [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯ ಮಿಲಿಟರಿ ಅಧಿಕಾರಿಗಳಿಂದ ರಚಿಸಲ್ಪಟ್ಟಿತು.
ಫೋರ್ಟ್ ಕೊಚ್ಚಿ, 1956 ರವರೆಗೆ [[ಮಲಬಾರ್ ಜಿಲ್ಲೆ]]ಯ ಭಾಗವಾಗಿತ್ತು, 1 ನವೆಂಬರ್ 1866 ರಂದು, [[ಕಣ್ಣೂರು]], [[ತಲಶ್ಶೇರಿ]], [[ಕೋಝಿಕ್ಕೋಡ್]], ಮತ್ತು [[ಪಾಲಕ್ಕಾಡ್]] ಜೊತೆಗೆ, ಮದ್ರಾಸ್ ಕಾಯ್ದೆ 10 ಆಫ್ 1865 (ಪಟ್ಟಣಗಳ ಸುಧಾರಣಾ ಕಾಯ್ದೆ 1850 ರ ತಿದ್ದುಪಡಿ) ಪ್ರಕಾರ ಪುರಸಭೆಯನ್ನಾಗಿ ಮಾಡಲಾಯಿತು.<ref name="Ref1">{{cite web |url=http://www.lawmin.nic.in/chronology.doc |title=CHRONOLOGICAL LIST OF CENTRAL ACTS (Updated up to 17-10-2014) |website=Lawmin.nic.in |access-date=2016-08-07 |archive-date=7 January 2018 |archive-url=https://web.archive.org/web/20180107091128/http://lawmin.nic.in/chronology.doc |url-status=dead }}</ref><ref>{{cite book |last1=Lewis McIver |first1=G. Stokes |title=Imperial Census of 1881 Operations and Results in the Presidency of Madras |date=1883 |publisher=E.Keys at the Government Press |location=Madras |page=444 |edition=(Vol II) |url=https://books.google.com/books?id=b_YIAAAAQAAJ |access-date=5 December 2020}}</ref><ref name="google.co.in">{{cite book |last1=Presidency |first1=Madras (India |title=Madras District Gazetteers, Statistical Appendix For Malabar District. |date=1915 |publisher=The Superintendent, Government Press |location=Madras |page=20 |edition=Vol.2 |url=https://books.google.com/books?id=aUEwnQEACAAJ |access-date=2 December 2020 |language=en}}</ref><ref>{{cite book |last1=HENRY FROWDE, M.A. |first1=Imperial Gazetteer of India |title=Imperial Gazetteer of India |date=1908–1909 |publisher=Clarendon Press |location=Oxford |edition=New |url=https://dsal.uchicago.edu/reference/gazetteer/ |access-date=2 December 2020}}</ref> ಇದರ ಮೊದಲ [[ನಗರ ಸಭೆ]]ಯ ಸ್ಪರ್ಧಾತ್ಮಕ ಆಸನವು 1883 ರಲ್ಲಿ ನಡೆಯಿತು. ಇದು ಪ್ರದೇಶದ ಮೊದಲ ಆಧುನಿಕ ಪುರಸಭೆಯಾಗಿದ್ದು, ದೇಶದ ಮೊದಲ ಸ್ಥಳೀಯ (ಬ್ರಿಟಿಷ್ ಭಾರತದ ಅಡಿಯಲ್ಲಿಲ್ಲದ) ಪುರಸಭೆಯೂ ಆಗಿತ್ತು. ಸ್ಥಳೀಯ ಆಡಳಿತದಲ್ಲಿ ಕೊಚ್ಚಿಯ ಪ್ರಗತಿಯ ಹೆಚ್ಚಿನ ಭಾಗವು ಮಹಾರಾಜ ರಾಮ ವರ್ಮಾ ಅವರ ಆಳ್ವಿಕೆಯಲ್ಲಿ ಮತ್ತು ದಿವಾನ್ ಶಂಕುನ್ನಿ ಮೆನನ್ ಅವರ ಬೆಂಬಲದಿಂದ ಬಂದಿತು. 1873 ರಲ್ಲಿ, [[ಮಟ್ಟಂಚೇರಿ]] ಪ್ರದೇಶಗಳನ್ನು ಫೋರ್ಟ್ ಕೊಚ್ಚಿಯಿಂದ ಪ್ರತ್ಯೇಕಿಸಿ ಹೊಸ ಪುರಸಭಾ ಮಂಡಳಿಯನ್ನು ರಚಿಸಲಾಯಿತು. 1896 ರಲ್ಲಿ, ಮಹಾರಾಜರು ಎರ್ನಾಕುಲಂ ಪಟ್ಟಣಕ್ಕಾಗಿ ಪುರಸಭಾ ಮಂಡಳಿಯ ಸ್ಥಾಪನೆಯನ್ನು ಘೋಷಿಸಿದರು, ಇದು ಅರಮನೆಯಿಂದ 4 ಸದಸ್ಯರು, ಸ್ಥಳೀಯ ಸಮುದಾಯಗಳಿಂದ 2 ಸದಸ್ಯರು, ಒಬ್ಬ ಇಂಗ್ಲಿಷ್ ವ್ಯಕ್ತಿ ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರಿಂದ 2 ಸದಸ್ಯರನ್ನು ಒಳಗೊಂಡಿತ್ತು. ಮೇಯರ್ ಅವರನ್ನು ಮಹಾರಾಜರು ನಾಮನಿರ್ದೇಶನ ಮಾಡುತ್ತಿದ್ದರು. ಇವು ನಗರದಲ್ಲಿ ಆಧುನಿಕ ಪುರಸಭೆಗಳನ್ನು ಸ್ಥಾಪಿಸುವ ಮೊದಲ ಹೆಜ್ಜೆಗಳಾಗಿವೆ.
ಸ್ವಾತಂತ್ರ್ಯದ ನಂತರ, ಈ 3 ಪುರಸಭೆಗಳು ಮುಂದುವರೆದವು ಮತ್ತು ಭಾರತೀಯ ಕಾನೂನುಗಳ ಅಡಿಯಲ್ಲಿ ತರಲಾಯಿತು. 1956 ರಲ್ಲಿ ಮಾಜಿ ಎಲಂಕುಲಂ ಪಂಚಾಯತ್ ಮತ್ತು ಚೇರಾನಲ್ಲೂರು ಪಂಚಾಯತ್ನ ಒಂದು ಭಾಗವನ್ನು (ಪಚಾಲಂ - ವಡುತಲ) ಎರ್ನಾಕುಲಂ ಪುರಸಭೆಗೆ ವಿಲೀನಗೊಳಿಸಲಾಯಿತು. 1962 ರಲ್ಲಿ ಪಳ್ಳುರುತಿ ಪಂಚಾಯತ್ನ ಒಂದು ಭಾಗವನ್ನು (ಮುಂಡಮ್ವೇಲಿ ಪ್ರದೇಶ) ಆಗಿನ ಮಟ್ಟಂಚೇರಿ ಪುರಸಭೆಗೆ ವಿಲೀನಗೊಳಿಸಲಾಯಿತು. ಎಡಪ್ಪಲ್ಲಿ ಪಂಚಾಯತ್ 1946 ರಲ್ಲೂ, ಪಳ್ಳುರುತಿ ಮತ್ತು ವೈಟ್ಟಿಲ 1953 ರಲ್ಲೂ ರಚನೆಯಾದವು. ಕೊಚ್ಚಿ ನಗರ ನಿಗಮದ ರಚನೆಯ ಹಿಂದಿನ ಕಲ್ಪನೆಯು<ref>{{Cite web |url=http://www.corporationofcochin.net/urban_kb/EVOLUTION.pdf |title=Archived copy |access-date=17 August 2010 |archive-url=https://web.archive.org/web/20110719140058/http://www.corporationofcochin.net/urban_kb/EVOLUTION.pdf |archive-date=19 July 2011 |url-status=dead }}</ref> ಮೊದಲು ಮಟ್ಟಂಚೇರಿ ನಗರ ಸಭೆಯಲ್ಲಿ ರೂಪುಗೊಂಡಿತು. ಸಭೆಯು 9 ಜುಲೈ 1960 ರಂದು ಎರ್ನಾಕುಲಂ, ಮಟ್ಟಂಚೇರಿ ಮತ್ತು ಫೋರ್ಟ್ ಕೊಚ್ಚಿ ಪುರಸಭೆಗಳನ್ನು ವಿಲೀನಗೊಳಿಸಿ ಕೊಚ್ಚಿ ನಗರ ನಿಗಮವನ್ನು ರಚಿಸಬೇಕೆಂದು ಸರ್ಕಾರವನ್ನು ಕೋರುವ ನಿರ್ಣಯವನ್ನು ಅಂಗೀಕರಿಸಿತು. ಆದಾಗ್ಯೂ, ಮಾಜಿ ಫೋರ್ಟ್ ಕೊಚ್ಚಿ ನಗರ ಸಭೆಯು ಈ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿತು.
ಕೇರಳ ವಿಧಾನಸಭೆಯು ಕೊಚ್ಚಿ ನಗರ ನಿಗಮದ ಪ್ರಸ್ತಾಪವನ್ನು ಅಂಗೀಕರಿಸಿತು. [[ಕೇರಳ ಸರ್ಕಾರ]]ವು ತಮ್ಮ ಆದೇಶ G.O. (MS) 276/67/DD ದಿನಾಂಕ 27/9/67 ರಂತೆ, ರಾಜ್ಯದ ಮೂರು ಐತಿಹಾಸಿಕ ಪುರಸಭೆಗಳನ್ನು (ಎರ್ನಾಕುಲಂ, ಮಟ್ಟಂಚೇರಿ ಮತ್ತು ಫೋರ್ಟ್ ಕೊಚ್ಚಿ) ವಿಲ್ಲಿಂಗ್ಡನ್ ದ್ವೀಪ, ನಾಲ್ಕು [[ಪಂಚಾಯತ್ ರಾಜ್|ಪಂಚಾಯತ್ಗಳು]] (ಪಳ್ಳುರುತಿ, ವೆನ್ನಾಲ, ವೈಟ್ಟಿಲ ಮತ್ತು ಎಡಪ್ಪಲ್ಲಿ) ಮತ್ತು ಗುಂಡು ದ್ವೀಪು, ರಾಮನುರುತು ಸಣ್ಣ ದ್ವೀಪಗಳೊಂದಿಗೆ ವಿಲೀನಗೊಳಿಸಿ ಕೊಚ್ಚಿ ನಗರ ನಿಗಮದ ರಚನೆಯನ್ನು ಅಧಿಸೂಚಿಸಿತು. ಹೊಸ ನಿಗಮವು 1 ನವೆಂಬರ್ 1967 ರಂದು ಅಸ್ತಿತ್ವಕ್ಕೆ ಬಂದಿತು, ಇದು 83.524 ಕಿಮೀ<sup>2</sup> ಒಟ್ಟು ವಿಸ್ತೀರ್ಣವನ್ನು ಹೊಂದಿತ್ತು. ನಿಗಮದ ಹೆಸರನ್ನು ಸ್ಥಳೀಯ ಹೆಸರನ್ನು ಪ್ರತಿಬಿಂಬಿಸಲು ನಂತರ ಕೊಚ್ಚಿ ನಗರ ನಿಗಮ ಎಂದು ಬದಲಾಯಿಸಲಾಯಿತು.
== ರಚನೆ ==
ನಿಗಮವು [[ಮೇಯರ್]] ನೇತೃತ್ವದಲ್ಲಿದೆ. ಪ್ರಸ್ತುತ ಮೇಯರ್ ಆಗಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]ನ ವಿ.ಕೆ. ಮಿನಿಮೋಲ್ ಅವರಿದ್ದಾರೆ, ಇವರಿಗೆ ದೀಪಕ್ ಜಾಯ್ ಉಪ ಮೇಯರ್ ಆಗಿ ಸಹಾಯಕರಾಗಿದ್ದಾರೆ. ಮಾಜಿ ಮೇಯರ್ಗಳು ಮತ್ತು ಉಪ ಮೇಯರ್ಗಳಲ್ಲಿ [[ಮರ್ಸಿ ವಿಲಿಯಮ್ಸ್]] ಮತ್ತು [[ಸಿ.ಕೆ. ಮಣಿಶಂಕರ್]] ಸೇರಿದ್ದಾರೆ. ನಗರವನ್ನು 76 ಆಡಳಿತಾತ್ಮಕ ವಾರ್ಡುಗಳಾಗಿ ವಿಂಗಡಿಸಲಾಗಿದೆ, ಇವುಗಳಿಂದ ನಿಗಮ ಸಭೆಯ ಸದಸ್ಯರನ್ನು ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ನಿಗಮವು ತನ್ನ ಕೇಂದ್ರ ಕಚೇರಿಯನ್ನು [[ಎರ್ನಾಕುಲಂ]] ನಲ್ಲಿ ಹೊಂದಿದ್ದು, [[ಫೋರ್ಟ್ ಕೊಚ್ಚಿ]], [[ಮಟ್ಟಂಚೇರಿ]], [[ಪಳ್ಳುರುತಿ]], [[ಎಡಪ್ಪಲ್ಲಿ]], [[ವಡುತಲ]] ಮತ್ತು [[ವೈಟ್ಟಿಲ]] ಗಳಲ್ಲಿ ವಲಯ ಕಚೇರಿಗಳನ್ನು ಹೊಂದಿದೆ.
ಆಡಳಿತದ ಉದ್ದೇಶಕ್ಕಾಗಿ, ನಿಗಮವನ್ನು ವಿವಿಧ ಇಲಾಖೆಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದೂ ನಗರದ ಅಭಿವೃದ್ಧಿ ಮತ್ತು ಕಲ್ಯಾಣದ ವಿಭಿನ್ನ ಅಂಶಗಳನ್ನು ಪೂರೈಸುತ್ತದೆ. [[ಕೇರಳ ಸರ್ಕಾರ]]ದಿಂದ ನೇಮಕಗೊಂಡ ನಿಗಮ ಕಾರ್ಯದರ್ಶಿಯು ಕೊಚ್ಚಿ ನಗರ ನಿಗಮದ ಆಡಳಿತಾತ್ಮಕ ವಿಭಾಗದ ಮುಖ್ಯಸ್ಥರಾಗಿದ್ದು, ಅದರ ಆಡಳಿತಾತ್ಮಕ ವ್ಯವಹಾರಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ವೈಯಕ್ತಿಕ ಇಲಾಖೆಯು ನಗರದ ಸಾಮಾನ್ಯ ಆಡಳಿತವನ್ನು ನೋಡಿಕೊಳ್ಳುತ್ತದೆ. ವಿವಿಧ ಇಲಾಖೆಗಳಲ್ಲಿ [[ನಗರ ಯೋಜನೆ|ನಗರ ಯೋಜನೆ]], [[ಆರೋಗ್ಯ]], [[ಎಂಜಿನಿಯರಿಂಗ್]], [[ಆದಾಯ]], [[ಲೆಕ್ಕಪತ್ರ (ಅಕೌಂಟೆನ್ಸಿ)|ಲೆಕ್ಕಪತ್ರ]] ಮತ್ತು ಸಭಾ ವಿಭಾಗ ಸೇರಿವೆ. ನಿಗಮವು ''ಜನಸೇವನಾಕೇಂದ್ರ'' ವನ್ನು ಹೊಂದಿದ್ದು, ಅದು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುತ್ತದೆ. ನಿಗಮವು ನಗರದಲ್ಲಿ ಎಂಟು [[ಮಾತೃತ್ವ]] ಮತ್ತು [[ಮಕ್ಕಳ ಕಲ್ಯಾಣ|ಮಕ್ಕಳ ಕಲ್ಯಾಣ]] ಕೇಂದ್ರಗಳನ್ನು ಸಹ ನಿರ್ವಹಿಸುತ್ತದೆ.
===ವಾರ್ಡುಗಳು===
2025 ರಲ್ಲಿ ವಾರ್ಡ್ [[ಮತಕ್ಷೇತ್ರದ ಗಡಿ ನಿರ್ಣಯ|ಗಡಿ ನಿರ್ಣಯ]]ದ ನಂತರ, ಕೊಚ್ಚಿ ನಗರ ನಿಗಮದ ವಾರ್ಡುಗಳ ಸಂಖ್ಯೆ 74 ರಿಂದ 76 ಕ್ಕೆ ಹೆಚ್ಚಾಯಿತು.<ref>{{Cite web |title=Kochi Municipal Corporation; Wards - Kerala State Election Commission |url=https://sec.kerala.gov.in/public/cnstncy/wd/d0f41644-754b-4b6e-a8dc-97ecbf5fee16}}</ref><ref>{{Cite news |last= |first= |date=2025-11-05 |title=38 divisions in Kochi Corporation reserved for women after fresh draw of lots |url=https://www.thehindu.com/news/national/kerala/38-divisions-in-kochi-corporation-reserved-for-women-after-fresh-draw-of-lots/article70245461.ece |access-date=2025-11-12 |work=The Hindu |language=en-IN |issn=0971-751X}}</ref>
== ಅಧಿಕಾರ ವಹಿಸಿದವರು ==
{| class="wikitable sortable"
|+ ಕೊಚ್ಚಿ ನಗರ ನಿಗಮ — ಅಧಿಕಾರ ವಹಿಸಿದವರು (2025–2030)<ref>{{Cite web |title=Corporation of Kochi |url=https://kochicorporation.lsgkerala.gov.in/en/list-councilors-2025-2030/647}}</ref>
|-
! ಹುದ್ದೆ !! ಹೆಸರು !! ಟಿಪ್ಪಣಿಗಳು
|-
| [[ಮೇಯರ್]] || ವಿ. ಕೆ. ಮಿನಿಮೋಲ್
([[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]])
| ಮೇಯರ್ ಆಗಿ ಆಯ್ಕೆ; 2025 ರ ಸಭೆ ಚುನಾವಣೆಯ ನಂತರ ಅವಧಿಯ ಮೊದಲ ಅರ್ಧಭಾಗವನ್ನು ಸೇವೆ ಸಲ್ಲಿಸುತ್ತಿದ್ದಾರೆ; [[ಪಾಲರಿವಟ್ಟಂ]] ವಿಭಾಗದಿಂದ ಸಭಾ ಸದಸ್ಯ
|-
| [[ಉಪ ಮೇಯರ್]] || ದೀಪಕ್ ಜಾಯ್
([[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]])
| ಉಪ ಮೇಯರ್ ಆಗಿ ಆಯ್ಕೆ; ಅವಧಿಯ ಮೊದಲ ಭಾಗವನ್ನು ಸೇವೆ ಸಲ್ಲಿಸುತ್ತಿದ್ದಾರೆ.
|-
| ಹಣಕಾಸು ಸ್ಥಾಯಿ ಸಮಿತಿ, ಅಧ್ಯಕ್ಷರು
|ದೀಪಕ್ ಜಾಯ್
|ಉಪ ಮೇಯರ್ [[ಹುದ್ದೆಯಿಂದಾಗಿ ಸದಸ್ಯ|ಹುದ್ದೆಯಿಂದಾಗಿ]]
|-
| ಅಭಿವೃದ್ಧಿ ಸ್ಥಾಯಿ ಸಮಿತಿ, ಅಧ್ಯಕ್ಷರು
|ಶಕೃತ
(INC)
|<ref name=":4">{{Cite web |title=Standing committee members - Kochi Corporation |url=https://kochicorporation.lsgkerala.gov.in/en/standing-committee-members/648}}</ref>
|-
| ಕಲ್ಯಾಣ ಸ್ಥಾಯಿ ಸಮಿತಿ, ಅಧ್ಯಕ್ಷರು
|ಆಂಟನಿ ಪೈನುತಾರ
(INC)
|<ref name=":4" />
|-
| ಆರೋಗ್ಯ ಸ್ಥಾಯಿ ಸಮಿತಿ, ಅಧ್ಯಕ್ಷರು
|ಸೀನಾ ಟೀಚರ್
(INC)
|<ref>{{Cite web |last=ലേഖിക |first=സ്വന്തം |date=2026-01-08 |title=കൊച്ചി കോർപറേഷൻ; മത്സരമില്ല, സ്ഥിരംസമിതി അംഗങ്ങളായി {{!}} Kochi Corporation; No contest, standing committee members appointed {{!}} Madhyamam |url=https://www.madhyamam.com/kerala/local-news/ernakulam/kochi/kochi-corporation-no-contest-standing-committee-members-appointed-1484208 |access-date=2026-01-08 |website=www.madhyamam.com |language=ml}}</ref>
|-
|ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ, ಅಧ್ಯಕ್ಷರು
|ಅಶ್ರಫ್ ಟಿ.ಕೆ.
([[IUML]])
|<ref name=":4" />
|-
|ನಗರ ಯೋಜನೆ ಸ್ಥಾಯಿ ಸಮಿತಿ, ಅಧ್ಯಕ್ಷರು
|ಅಡ್ವಾ. ಪಿ.ಎಂ. ನಸೀಮಾ
(INC)
|<ref name=":4" />
|-
|ತೆರಿಗೆ ಮೇಲ್ಮನವಿ ಸ್ಥಾಯಿ ಸಮಿತಿ, ಅಧ್ಯಕ್ಷರು
|ಕೆ.ಎ. ಮನಾಫ್
(INC)
|<ref name=":4" />
|-
|ಶಿಕ್ಷಣ ಮತ್ತು ಕ್ರೀಡಾ ಸ್ಥಾಯಿ ಸಮಿತಿ, ಅಧ್ಯಕ್ಷರು
|ಜಿಸ್ಮಿ ಜೆರಾಲ್ಡ್
(INC)
|<ref name=":4" />
|-
|[[ನಗರ ಆಯುಕ್ತ (ಭಾರತ)|ನಿಗಮ ಕಾರ್ಯದರ್ಶಿ]]
|ಪಿ.ಎಸ್. ಶಿಬು
|[[ಸ್ಥಳೀಯ ಸ್ವಯಂ ಆಡಳಿತ ಇಲಾಖೆ (ಕೇರಳ)|ಕೇರಳ ಸರ್ಕಾರ]]ದಿಂದ ನೇಮಕಗೊಂಡ ಅಧಿಕಾರಿ.<ref>https://kochicorporation.lsgkerala.gov.in/en/secretary/370</ref>
|}
=== ಕಾರ್ಯನಿರ್ವಾಹಕ ಅಧಿಕಾರಿಗಳು ===
{| class="wikitable" style="text-align:center; width:100%;"
|-
! colspan="7" style="background-color:#0000FF; color:white; font-size:110%;" | ಕೊಚ್ಚಿ ನಗರ ನಿಗಮ ನಾಯಕತ್ವ
|-
! ಹುದ್ದೆ
! ಹೆಸರು
! ವಿಭಾಗ
! colspan="2" | ಪಕ್ಷ
! colspan="2" | ಮೈತ್ರಿ
|-
| style="background-color:#e6f2ff;" | ಮೇಯರ್
| '''ಅಡ್ವಾ. ಮಿನಿಮೋಲ್ ವಿ. ಕೆ.'''
| ಪಾಲರಿವಟ್ಟಂ (33)
| {{Full party name with color|Indian National Congress}}
| {{Party name with color|United Democratic Front (Kerala)}}
|-
| style="background-color:#e6f2ff;" | ಉಪ ಮೇಯರ್
| ಖಾಲಿ
|
| {{Full party name with color|Indian National Congress}}
| {{Party name with color|United Democratic Front (Kerala)}}
|}
=== ಪ್ರಸ್ತುತ ಸದಸ್ಯರು ===
ಕೊಚ್ಚಿ ನಗರ ನಿಗಮದ 76 ವಾರ್ಡುಗಳು ಮತ್ತು ಅವರ ಸಭಾ ಸದಸ್ಯರನ್ನು ಕೆಳಗೆ ಅನುಕ್ರಮವಾರು ಪಟ್ಟಿ ಮಾಡಲಾಗಿದೆ.<ref>{{cite web|url=https://sec.kerala.gov.in/|title=2025 Kerala local election results|work=SEC Kerala|accessdate=15 January 2026}}</ref>
{| class="wikitable sortable" style="text-align:center; width:100%;"
|-
! rowspan=2|ವಿಧಾನಸಭಾ ಕ್ಷೇತ್ರ
! colspan=2|ವಾರ್ಡ್ ವಿವರಗಳು
! rowspan=2|ಸಭಾ ಸದಸ್ಯ
! rowspan=2 colspan=2 | ಪಕ್ಷ
! rowspan=2 colspan=2 | ಮೈತ್ರಿ
! rowspan=2|ಟಿಪ್ಪಣಿಗಳು
|-
!ಸಂ.ಖ.
!ಹೆಸರು
|-
| rowspan=8|[[ಕೊಚ್ಚಿ ವಿಧಾನಸಭಾ ಕ್ಷೇತ್ರ|ಕೊಚ್ಚಿ]] || 1 || ಫೋರ್ಟ್ ಕೊಚ್ಚಿ || ಶೈನಿ ಮ್ಯಾಥ್ಯೂ || {{Full party name with color|Indian National Congress}} || {{Party name with color|United Democratic Front (Kerala)}}
| ಮೇಯರ್-ನಿಯುಕ್ತ (ಅವಧಿ 2)
|-
| 2 || ಕಾಲ್ವತಿ || ಫೌಸಿಯಾ ಮೊಹಮ್ಮದ್ || {{Full party name with color|Indian Union Muslim League}} || {{Party name with color|United Democratic Front (Kerala)}}
|
|-
| 3 || ಈರವೇಲಿ || ರಹೀನಾ ರಫೀಕ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 4 || ಕರಿಪ್ಪಾಳಂ || ಮನಾಫ್ ಕೆ. ಎ. || {{Full party name with color|Indian National Congress}} || {{Party name with color|United Democratic Front (Kerala)}}
|
|-
| 5 || ಚೇರಾಲಯಿ || ಪ್ರವಿತಾ ವಿಜಯಕುಮಾರ್ || {{Full party name with color|Bharatiya Janata Party}} || {{Party name with color|National Democratic Alliance}}
|
|-
| 6 || ಮಟ್ಟಂಚೇರಿ || ಶೀಜಾ ನವಾಸ್ || {{Full party name with color|Indian Union Muslim League}} || {{Party name with color|United Democratic Front (Kerala)}}
|
|-
| 7 || ಚಕ್ಕಾಮಡಂ || ಸುಹಾನಾ ಸುಬೈರ್ || {{Full party name with color|Communist Party of India (Marxist)|dab=yes}} || {{Party name with color|Left Democratic Front (Kerala)}}
|
|-
| 8 || ಕರುವೇಲಿಪ್ಪಾಡಿ || ಕವಿತಾ ಹರಿಕುಮಾರ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| rowspan=8|[[ಎರ್ನಾಕುಲಂ ವಿಧಾನಸಭಾ ಕ್ಷೇತ್ರ|ಎರ್ನಾಕುಲಂ]] || 9 || ಐಲೆಂಡ್ ನಾರ್ತ್ || ಪದ್ಮಕುಮಾರಿ ಟಿ. || {{Full party name with color|Bharatiya Janata Party}} || {{Party name with color|National Democratic Alliance}}
|
|-
| 10 || ರವಿಪುರಂ || ಎಸ್. ಶಶಿಕಲಾ || {{Party name with color|Independent}} || {{party color cell|Others}}
|
|-
| 11 || ಎರ್ನಾಕುಲಂ ಸೌತ್ || ಕೆ. ವಿ. ಪಿ. ಕೃಷ್ಣಕುಮಾರ್ || {{Full party name with color|Indian National Congress}} || {{Party name with color|United Democratic Front (Kerala)}}
| ಉಪ ಮೇಯರ್-ನಿಯುಕ್ತ (ಅವಧಿ 2)
|-
| 12 || ಗಾಂಧಿ ನಗರ || ನಿರ್ಮಲಾ ಟೀಚರ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 13 || ಕತ್ರಿಕಾಡವು || ರಿಯಾ ಲಾರೆನ್ಸ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 14 || ಎರ್ನಾಕುಲಂ ಸೆಂಟ್ರಲ್ || ಸುಧಾ ದಿಲೀಪ್ಕುಮಾರ್ || {{Full party name with color|Bharatiya Janata Party}} || {{Party name with color|National Democratic Alliance}}
|
|-
| 15 || ಎರ್ನಾಕುಲಂ ನಾರ್ತ್ || ಅಗಸ್ಟೀನ್ ಸೆಬಾಸ್ಟಿಯನ್ ಪಿ. ಎಂ. || {{Full party name with color|Indian National Congress}} || {{Party name with color|United Democratic Front (Kerala)}}
|
|-
| 16 || ಕಲೂರ್ ಸೌತ್ || ಅರಿಸ್ಟಾಟಲ್ ಎಂ. ಜಿ. || {{Full party name with color|Indian National Congress}} || {{Party name with color|United Democratic Front (Kerala)}}
|
|-
| rowspan=1|[[ತ್ರಿಕ್ಕಾಕರ ವಿಧಾನಸಭಾ ಕ್ಷೇತ್ರ|ತ್ರಿಕ್ಕಾಕರ]] || 17 || ಕಲೂರ್ ನಾರ್ತ್ || ಅಶ್ರಫ್ ಟಿ. ಕೆ. || {{Full party name with color|Indian Union Muslim League}} || {{Party name with color|United Democratic Front (Kerala)}}
|
|-
| rowspan=11|[[ಎರ್ನಾಕುಲಂ ವಿಧಾನಸಭಾ ಕ್ಷೇತ್ರ|ಎರ್ನಾಕುಲಂ]] || 18 || ತ್ರಿಕ್ಕಾನಾರ್ವಟ್ಟಂ || ಡಾ. ಜಲಜಾ ಎಸ್. ಆಚಾರ್ಯ || {{Full party name with color|Bharatiya Janata Party}} || {{Party name with color|National Democratic Alliance}}
|
|-
| 19 || ಅಯ್ಯಪ್ಪಂಕಾವು || ದೀಪಕ್ ಜಾಯ್ || {{Full party name with color|Indian National Congress}} || {{Party name with color|United Democratic Front (Kerala)}}
| ಉಪ ಮೇಯರ್
|-
| 20 || ಪೊಟ್ಟಕುಳಿ || ಬ್ರಿಜಿತ್ ಆಶಿನ್ || {{Full party name with color|Communist Party of India |dab=yes}} || {{Party name with color|Left Democratic Front (Kerala)}}
|
|-
| 21 || ಎಲಮಕ್ಕರ ಸೌತ್ || ವಿ. ಆರ್. ಸುಧೀರ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 22 || ಪಚಾಲಂ || ಆಲ್ಬರ್ಟ್ ಅಂಬಲತಿಂಗಲ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 23 || ತಟ್ಟಾಝಂ || ಸಿಬಿ ಜಾನ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 24 || ವಡುತಲ ವೆಸ್ಟ್ || ಜಿಸ್ಮಿ ಜೆರಾಲ್ಡ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 25 || ವಡುತಲ ಈಸ್ಟ್ || ಹೆನ್ರಿ ಆಸ್ಟಿನ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 26 || ಎಲಮಕ್ಕರ ನಾರ್ತ್ || ಬೀನಾ ಮಹೇಶ್ || {{Full party name with color|Communist Party of India (Marxist)|dab=yes}} || {{Party name with color|Left Democratic Front (Kerala)}}
|
|-
| 27 || ಪುತುಕ್ಕಲವಟ್ಟಂ || ಸೀನಾ ಟೀಚರ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 28 || ಕುನ್ನುಂಪುರಂ || ಜಗದಂಬಿಕಾ || {{Full party name with color|Communist Party of India (Marxist)|dab=yes}} || {{Party name with color|Left Democratic Front (Kerala)}}
|
|-
| rowspan=22|[[ತ್ರಿಕ್ಕಾಕರ ವಿಧಾನಸಭಾ ಕ್ಷೇತ್ರ|ತ್ರಿಕ್ಕಾಕರ]] || 29 || ಪೊನೆಕ್ಕಾರ || ನಿಮ್ಮಿ ಮರಿಯಂ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 30 || ಎಡಪ್ಪಲ್ಲಿ || ಅಬ್ದುಲ್ ಲತೀಫ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 31 || ಚಂಗಂಪುಳ || ಸಿನಿ ಆನಂದ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 32 || ದೇವನ್ಕುಲಂಗರ || ವಿಜಯಕುಮಾರ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 33 || ಪಾಲರಿವಟ್ಟಂ || ಅಡ್ವಾ. ಮಿನಿಮೋಲ್ ವಿ. ಕೆ. || {{Full party name with color|Indian National Congress}} || {{Party name with color|United Democratic Front (Kerala)}}
| ಮೇಯರ್
|-
| 34 || ಸ್ಟೇಡಿಯಂ || ಅಡ್ವಾ. ದೀಪ್ತಿ ಮೇರಿ ವರ್ಗೀಸ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 35 || ಕರಣಕ್ಕೋಡಂ || ಗಿರ್ಲಿ ರಾಬರ್ಟ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 36 || ಪುತಿಯರೋಡ್ || ಮಾಲಿ ಚಾರ್ಲಿ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 37 || ಪಡಿವಟ್ಟಂ || ಶಿಬಿ ಸೋಮನ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 38 || ವೆನ್ನಾಲ || ಸಾಬು ಕೊರೋತ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 39 || ಚಕ್ಕರಪರಂಬು || ಅಡ್ವಾ. ಪಿ. ಎಂ. ನಸೀಮಾ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 40 || ಚಾಲಿಕ್ಕವಟ್ಟಂ || ಬಿಂದು ವಿಜು || {{Full party name with color|Indian National Congress}} || {{Party name with color|United Democratic Front (Kerala)}}
|
|-
| 41 || ತಮ್ಮನಂ || ದಿವ್ಯಾ ರಾಜೇಶ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 42 || ಎಲಂಕುಳಂ || ನಿಶಾ ಪಿ. ಡಿ. || {{Full party name with color|Indian National Congress}} || {{Party name with color|United Democratic Front (Kerala)}}
|
|-
| 43 || ಗಿರಿನಗರ || ಪಿ. ಡಿ. ಮಾರ್ಟಿನ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 44 || ಪೊನ್ನುರುನ್ನಿ || ಎಂ. ಎಕ್ಸ್. ಸೆಬಾಸ್ಟಿಯನ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 45 || ಪೊನ್ನುರುನ್ನಿ ಈಸ್ಟ್ || ಬೀನಾ ದಿವಾಕರನ್ || {{Full party name with color|Communist Party of India (Marxist)|dab=yes}} || {{Party name with color|Left Democratic Front (Kerala)}}
|
|-
| 46 || ವೈಟ್ಟಿಲ || ವಿ. ಪಿ. ಚಂದ್ರನ್ || {{Party name with color|Independent politician}} || {{Party name with color|United Democratic Front (Kerala)}}
| UDF ಸ್ವತಂತ್ರ
|-
| 47 || ಪೂನಿತುರ || ಝೇವಿಯರ್ ಪಿ. ಆಂಟನಿ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 48 || ವೈಟ್ಟಿಲ ಜನತಾ || ಅಂಜು ಕೆ. ಥಾಂಕಚನ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 49 || ಕಡವಂತ್ರ || ಜಿಸನ್ ಜಾರ್ಜ್ || {{Full party name with color|Kerala Congress}} || {{Party name with color|United Democratic Front (Kerala)}}
|
|-
| 50 || ಪನಂಪಿಲ್ಲಿ ನಗರ || ಆಂಟನಿ ಪೈನುತಾರ || {{Full party name with color|Indian National Congress}} || {{Party name with color|United Democratic Front (Kerala)}}
|
|-
| rowspan=4|[[ಎರ್ನಾಕುಲಂ ವಿಧಾನಸಭಾ ಕ್ಷೇತ್ರ|ಎರ್ನಾಕುಲಂ]] || 51 || ಪೆರುಮನೂರು || ಕೆ. ಎಕ್ಸ್. ಫ್ರಾನ್ಸಿಸ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 52 || ಕೊಂತುರುತಿ || ಅಭಿಷೇಕ್ ಕೆ. ಎಸ್. || {{Full party name with color|Indian National Congress}} || {{Party name with color|United Democratic Front (Kerala)}}
|
|-
| 53 || ತೇವರ || ಎಲಿಜಬೆತ್ ಟೀಚರ್ || {{Full party name with color|Communist Party of India (Marxist)|dab=yes}} || {{Party name with color|Left Democratic Front (Kerala)}}
|
|-
| 54 || ಐಲೆಂಡ್ ಸೌತ್ || ಶಕೃತ || {{Full party name with color|Indian National Congress}} || {{Party name with color|United Democratic Front (Kerala)}}
|
|-
| rowspan=9|[[ತೃಪ್ಪೂನಿತುರ ವಿಧಾನಸಭಾ ಕ್ಷೇತ್ರ|ತೃಪ್ಪೂನಿತುರ]] || 55 || ಕಡೆಭಾಗಂ || ಅಶ್ವತಿ ಜೋಶಿ || {{Full party name with color|Communist Party of India (Marxist)|dab=yes}} || {{Party name with color|Left Democratic Front (Kerala)}}
|
|-
| 56 || ಪಳ್ಳುರುತಿ ಈಸ್ಟ್ || ಎನ್. ಪಿ. ಶಾಂತಿನಿ || {{Full party name with color|Communist Party of India (Marxist)|dab=yes}} || {{Party name with color|Left Democratic Front (Kerala)}}
|
|-
| 57 || ತಾಳುಪ್ಪು || ಸುಜಾತ ಸಾಬು || {{Full party name with color|Communist Party of India (Marxist)|dab=yes}} || {{Party name with color|Left Democratic Front (Kerala)}}
|
|-
| 58 || ಈಡಾಕೊಚ್ಚಿ ನಾರ್ತ್ || ಕೆ. ಜೆ. ಬಾಸಿಲ್ || {{Full party name with color|Congress (Secular)|dab=yes}} || {{Party name with color|Left Democratic Front (Kerala)}}
|
|-
| 59 || ಈಡಾಕೊಚ್ಚಿ ಸೌತ್ || ಲಸಿತಾ ಪೀಟರ್ || {{Full party name with color|Indian National Congress}} || {{Party name with color|United Democratic Front (Kerala)}}
|
|-
| 60 || ಪೆರುಂಬಡಪ್ಪು || ಲಿಕಿತಾ ಎನ್. ಎಕ್ಸ್. || {{Full party name with color|Communist Party of India |dab=yes}} || {{Party name with color|Left Democratic Front (Kerala)}}
|
|-
| 61 || ಕೋನಂ || ಸಿ. ಆರ್. ಬಿಜು || {{Full party name with color|Communist Party of India (Marxist)|dab=yes}} || {{Party name with color|Left Democratic Front (Kerala)}}
|
|-
| 62 || ಪಳ್ಳುರುತಿ ಕಚೇರಿಪಾಡಿ || ವಿ. ಎ. ಶ್ರೀಜಿತ್ || {{Full party name with color|Communist Party of India (Marxist)|dab=yes}} || {{Party name with color|Left Democratic Front (Kerala)}}
|
|-
| 63 || ನಂಬ್ಯಾಪುರಂ || ರಶಿದಾ ಹುಸೇನ್ || {{Full party name with color|Communist Party of India (Marxist)}} || {{Party name with color|Left Democratic Front (Kerala)}}
|-
| rowspan=13|[[ಕೊಚ್ಚಿ ವಿಧಾನಸಭಾ ಕ್ಷೇತ್ರ|ಕೊಚ್ಚಿ]] || 64 || ಪಳ್ಳುರುತಿ || ಗೀತಾ ಪ್ರಭಾಕರನ್ || {{Full party name with color|Indian National Congress}} || {{Party name with color|United Democratic Front (Kerala)}}
|-
| 65 || ಪುಲ್ಲಾರ್ದೇಶಂ || ಹೇಮಾ ಟೀಚರ್ || {{Full party name with color|Communist Party of India (Marxist)}} || {{Party name with color|Left Democratic Front (Kerala)}}
|-
| 66 || ತರೇಭಾಗಂ || ಲವಿತಾ ನೆಲ್ಸನ್ || {{Full party name with color|Communist Party of India (Marxist)}} || {{Party name with color|Left Democratic Front (Kerala)}}
|-
| 67 || ತೊಪ್ಪುಂಪಾಡಿ || ಜೋಸೆಫ್ ಸುಮಿತ್ || {{Full party name with color|Indian National Congress}} || {{Party name with color|United Democratic Front (Kerala)}}
|-
| 68 || ಮುಂಡಮ್ವೇಲಿ ಈಸ್ಟ್ || ಕೆ. ಜೆ. ಪ್ರಕಾಶನ್ || {{Full party name with color|Independent politician}} || OTH
|-
| 69 || ಮುಂಡಮ್ವೇಲಿ || ಲಿಸಿ ಸುಮಿ || {{Full party name with color|Indian National Congress}} || {{Party name with color|United Democratic Front (Kerala)}}
|-
| 70 || ಮನಸ್ಸೇರಿ || ನಿಶಾ ಜೋಸೆಫ್ || {{Full party name with color|Communist Party of India (Marxist)}} || {{Party name with color|Left Democratic Front (Kerala)}}
|-
| 71 || ಮೂಳಂಕುಳಿ || ಜೋಸೆಫ್ ಫರ್ನಾಂಡಿಸ್ (ಜೋಸಿಕುಟ್ಟಿ) || {{Full party name with color|Communist Party of India (Marxist)}} || {{Party name with color|Left Democratic Front (Kerala)}}
|-
| 72 || ಚುಳ್ಳಿಕಲ್ || ಬಾಸ್ಟಿನ್ ಬಾಬು || {{Party name with color|Independent politician}} || {{Party name with color|United Democratic Front (Kerala)}}
| UDF ಸ್ವತಂತ್ರ
|-
| 73 || ನಸ್ರತು || ಯೇಸುದಾಸ್ (ಪಿ. ಜೆ. ದಾಸನ್) || {{Full party name with color|Communist Party of India (Marxist)}} || {{Party name with color|Left Democratic Front (Kerala)}}
|-
| 74 || ಪನಯಪ್ಪಿಲ್ಲಿ || ಅಶ್ವತಿ ಗಿರೀಶ್ || {{Full party name with color|Bharatiya Janata Party}} || {{Party name with color|National Democratic Alliance (India)}}
|-
| 75 || ಅಮರಾವತಿ || ಅಡ್ವಾ. ಪ್ರಿಯಾ ಪ್ರಶಾಂತ್ || {{Full party name with color|Bharatiya Janata Party}} || {{Party name with color|National Democratic Alliance (India)}}
|-
| 76 || ಫೋರ್ಟ್ಕೊಚ್ಚಿ ವೇಲಿ || ಮಂಜುಲಾ ಅನಿಲ್ ಕುಮಾರ್ || {{Full party name with color|Communist Party of India (Marxist)}} || {{Party name with color|Left Democratic Front (Kerala)}}
|
|}
=== ವಿಧಾನಸಭಾ ಕ್ಷೇತ್ರವಾರು ವಾರ್ಡ್ ವಿಭಜನೆ ===
{| class="wikitable" style="text-align:center; width:100%; border-collapse: collapse;"
|-
! style="background-color:#333333; color:white; width:25%;" | ವಿಧಾನಸಭಾ ಕ್ಷೇತ್ರ
! style="background-color:#333333; color:white; width:15%;" | ಒಟ್ಟು ವಾರ್ಡುಗಳು
! style="background-color:#0072C6; color:white; width:15%;" | UDF
! style="background-color:#CC0000; color:white; width:15%;" | LDF
! style="background-color:#FF9933; color:white; width:15%;" | NDA
! style="background-color:#808080; color:white; width:15%;" | OTH
! style="background-color:#333333; color:white; width:15%;" | ಪ್ರಮುಖ ಮೈತ್ರಿ
|-
| align="left" | [[ತ್ರಿಕ್ಕಾಕರ ವಿಧಾನಸಭಾ ಕ್ಷೇತ್ರ|ತ್ರಿಕ್ಕಾಕರ]]
| '''23'''
| style="background-color:#e6f2ff; color:#000000;" | '''22'''
| 1
| 0
| 0
| style="background-color:#0072C6; color:white;" | UDF
|-
| align="left" | [[ಎರ್ನಾಕುಲಂ ವಿಧಾನಸಭಾ ಕ್ಷೇತ್ರ|ಎರ್ನಾಕುಲಂ]]
| '''23'''
| style="background-color:#e6f2ff; color:#000000;" | '''15'''
| 4
| 3
| 1
| style="background-color:#0072C6; color:white;" | UDF
|-
| align="left" | [[ಕೊಚ್ಚಿ ವಿಧಾನಸಭಾ ಕ್ಷೇತ್ರ|ಕೊಚ್ಚಿ]]
| '''21'''
| style="background-color:#e6f2ff; color:#000000;" | '''10'''
| 7
| 3
| 1
| style="background-color:#0072C6; color:white;" | UDF
|-
| align="left" | [[ತೃಪ್ಪೂನಿತುರ ವಿಧಾನಸಭಾ ಕ್ಷೇತ್ರ|ತೃಪ್ಪೂನಿತುರ]]
| '''9'''
| 1
| style="background-color:#ffe6e6; color:#000000;" | '''8'''
| 0
| 0
| style="background-color:#CC0000; color:white;" | LDF
|-
! style="background-color:#DCDCDC;" align="right" | ಒಟ್ಟು
! style="background-color:#DCDCDC;" | 76
! style="background-color:#0072C6;" | 48
! style="background-color:#CC0000;" | 20
! style="background-color:#FF9933;" | 6
! style="background-color:#D3D3D3;" | 2
! style="background-color:#0072C6;" | UDF
|}
== ಜನಸಂಖ್ಯಾಶಾಸ್ತ್ರ ==
ಕೊಚ್ಚಿ ನಗರವು 2001 ರ ಭಾರತೀಯ ಜನಗಣತಿಯ ಪ್ರಕಾರ 596,473 ಜನಸಂಖ್ಯೆಯನ್ನು ಹೊಂದಿದೆ. ಕೊಚ್ಚಿ ಕಳೆದ 30 ವರ್ಷಗಳಲ್ಲಿ ವೇಗದ ಜನಸಂಖ್ಯಾ ಬೆಳವಣಿಗೆಯನ್ನು ಕಂಡಿದೆ. ಕೊಚ್ಚಿ ನಿಗಮದಲ್ಲಿ ಸರಾಸರಿ ದಶಕದ ಬೆಳವಣಿಗೆ 7.83% ಆಗಿದ್ದರೆ, ಸಮೀಪದ ಪುರಸಭಾ ಪ್ರದೇಶಗಳು 18.65% ದಶಕದ ಸರಾಸರಿಯನ್ನು ನೋಂದಾಯಿಸಿವೆ, ಮತ್ತು ಪಕ್ಕದ ಪಂಚಾಯತ್ಗಳು 12.13% ಸರಾಸರಿ ದಶಕದ ಬೆಳವಣಿಗೆಯನ್ನು ಹೊಂದಿದ್ದವು. ನಗರದ ಸುತ್ತಮುತ್ತಲಿನ ಉಪನಗರ ಪ್ರದೇಶಗಳು ಹೆಚ್ಚಿನ ಜನಸಂಖ್ಯಾ ಬೆಳವಣಿಗೆಯ ಪ್ರಮಾಣವನ್ನು ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರವೃತ್ತಿಗಳನ್ನು ತೋರಿಸುತ್ತಿವೆ. ಸಾಕ್ಷರತಾ ಪ್ರಮಾಣವು 95.5% ಆಗಿದೆ.
== ಆದಾಯದ ಮೂಲಗಳು ==
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿಗಮಕ್ಕೆ ಬರುವ ಆದಾಯದ ಮೂಲಗಳು ಈ ಕೆಳಗಿನಂತಿವೆ.<ref name="Ko11">{{cite news |last1=Jadhav |first1=Radheshyam |title=Why civic bodies in India need municipal bonds |url=https://www.thehindubusinessline.com/news/why-civic-bodies-in-india-need-municipal-bonds/article33237962.ece |access-date=18 May 2022 |publisher=www.thehindubusinessline.com |date=3 December 2020 |language=en}}</ref><ref name="Ko12">{{cite news |title=Municipal corporations under severe strain as revenues sink: RBI Report |url=https://www.businesstoday.in/latest/economy/story/municipal-corporations-under-severe-strain-as-revenues-sink-rbi-report-314215-2021-12-02 |access-date=18 May 2022 |publisher=Business Today |date=2 December 2021 |language=en}}</ref><ref name="Ko13">{{cite news |title=If cities are to deliver better quality life, need to have business models which are sustainable |url=https://www.financialexpress.com/opinion/if-cities-are-to-deliver-better-quality-life-need-to-have-business-models-which-are-sustainable/642276/ |access-date=18 May 2022 |publisher=Financialexpress |date=17 May 2022 |language=en}}</ref>
=== ತೆರಿಗೆಗಳಿಂದ ಆದಾಯ ===
ನಿಗಮಕ್ಕೆ ತೆರಿಗೆ ಸಂಬಂಧಿತ ಆದಾಯವು ಈ ಕೆಳಗಿನಂತಿದೆ.
* ಆಸ್ತಿ ತೆರಿಗೆ.
* ವೃತ್ತಿ ತೆರಿಗೆ.
* ಮನರಂಜನಾ ತೆರಿಗೆ.
* ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನಗಳು ಉದಾಹರಣೆಗೆ ಸರಕು ಮತ್ತು ಸೇವಾ ತೆರಿಗೆ.
* ಜಾಹೀರಾತು ತೆರಿಗೆ.
=== ತೆರಿಗೆಯೇತರ ಮೂಲಗಳಿಂದ ಆದಾಯ ===
ನಿಗಮಕ್ಕೆ ತೆರಿಗೆಯೇತರ ಸಂಬಂಧಿತ ಆದಾಯವು ಈ ಕೆಳಗಿನಂತಿದೆ.
* ನೀರಿನ ಬಳಕೆಯ ಶುಲ್ಕಗಳು.
* ದಸ್ತಾವೇಜು ಸೇವೆಗಳ ಶುಲ್ಕಗಳು.
* ನಗರ ಆಸ್ತಿಯಿಂದ ಬಾಡಿಗೆ.
* ನಗರ ಬಾಂಡ್ಗಳಿಂದ ನಿಧಿಗಳು.
* ಶುಲ್ಕಗಳು ಮತ್ತು ಬಳಕೆದಾರರ ಶುಲ್ಕಗಳು
* ಮಾರಾಟ ಮತ್ತು ಬಾಡಿಗೆ ಶುಲ್ಕಗಳು
== ಚುನಾವಣಾ ಇತಿಹಾಸ ==
=== ನಿಗಮ ಚುನಾವಣೆ 2025 ===
{|class="sortable wikitable"
|-
! ಕ್ರ.ಸಂ.
! ಪಕ್ಷದ ಹೆಸರು
! ಪಕ್ಷದ ಚಿಹ್ನೆ
! ಸಭಾ ಸದಸ್ಯರ ಸಂಖ್ಯೆ
! ಬದಲಾವಣೆ
!ನಕ್ಷೆ
|-
|! style="text-align:center; background:{{party color|United Democratic Front (Kerala)}};color:white"|'''1.'''
| align="center"| [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|'''UDF''']]
| [[File:UDF logo.png|50px]]
| align="center"| '''48'''
| align="center"| {{increase}} '''18'''
| rowspan="4" |[[File:C07003 - Cochin Municipal Corporation 2025.svg|frameless]]
|-
|! style="text-align:center; background:{{party color|Left Democratic Front (Kerala)}};color:white"|'''2.'''
| align="center"| [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|'''LDF''']]
| [[File:Left Democratic Front (Kerala) Logo.svg|50px]]
| align="center"| '''20'''
| align="center"| {{decrease}} '''9'''
|-
|! style="text-align:center; background:{{party color|Bharatiya Janata Party}};color:white"|'''3.'''
| align="center"| [[ಭಾರತೀಯ ಜನತಾ ಪಕ್ಷ|'''BJP''']]
| [[File:Logo of the Bharatiya Janata Party.svg|50px]]
| align="center"| '''06'''
| align="center"| {{increase}} '''1'''
|-
|! style="text-align:center; background:{{party color|Independent politician}};color:white"|'''4.'''
| align="center"| [[ಸ್ವತಂತ್ರ ರಾಜಕಾರಣಿ|'''IND''']]
| [[File:No flag.svg|50px]]
| align="center"| '''02'''
| align="center"| {{decrease}} '''8'''
|-
|}
=== ನಿಗಮ ಚುನಾವಣೆ 2020 ===
{|class="sortable wikitable"
|-
! ಕ್ರ.ಸಂ.
! ಪಕ್ಷದ ಹೆಸರು
! ಪಕ್ಷದ ಚಿಹ್ನೆ
! ಸಭಾ ಸದಸ್ಯರ ಸಂಖ್ಯೆ
! ಬದಲಾವಣೆ
|-
|! style="text-align:center; background:{{party color|United Democratic Front (Kerala)}};color:white"|'''1.'''
| align="center"| [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|'''UDF''']]
| [[File:UDF logo.png|50px]]
| align="center"| '''30'''
| align="center"| {{decrease}} '''8'''
|-
|! style="text-align:center; background:{{party color|Left Democratic Front (Kerala)}};color:white"|'''2.'''
| align="center"| [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|'''LDF''']]
| [[File:Left Democratic Front (Kerala) Logo.svg|50px]]
| align="center"| '''29'''
| align="center"| {{increase}} '''6'''
|-
|! style="text-align:center; background:{{party color|Others}};color:white"|'''3.'''
| align="center"| '''ಇತರೆ'''
| [[File:No flag.svg|50px]]
| align="center"| '''10'''
| align="center"| {{decrease}} '''1'''
|-
|! style="text-align:center; background:{{party color|Bharatiya Janata Party}};color:white"|'''4.'''
| align="center"| [[ಭಾರತೀಯ ಜನತಾ ಪಕ್ಷ|'''BJP''']]
| [[File:Logo of the Bharatiya Janata Party.svg|50px]]
| align="center"| '''05'''
| align="center"| {{increase}} '''3'''
|-
|}
=== [[2015 ಕೇರಳ ಸ್ಥಳೀಯ ಚುನಾವಣೆಗಳು|2015 ಸ್ಥಳೀಯ ಸಂಸ್ಥೆ ಚುನಾವಣೆಗಳು]] ===
[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]ನ ಸೌಮಿನಿ ಜೈನ್ ಅವರು 2015 ರಲ್ಲಿ ಕೊಚ್ಚಿ ನಿಗಮದ [[ಮೇಯರ್]] ಆಗಿ ಸೇವೆ ಸಲ್ಲಿಸಿದರು.<ref name=":0">{{Cite web |title=CORPORATION {{!}} Ernakulam District Website {{!}} India |url=https://ernakulam.nic.in/corporation/ |access-date=2020-12-10 |language=en-US}}</ref><ref name=":1">{{Cite web |date=2019-10-31 |title=Thiruvananthapuram: Soumini Jain sails through for now |url=https://www.deccanchronicle.com/nation/current-affairs/311019/thiruvananthapuram-soumini-jain-sails-through-for-now.html |access-date=2020-07-31 |website=[[Deccan Chronicle]] |language=en}}</ref><ref name=":2">{{Cite web |title=Soumini Jain to step down; Shiny likely to be next Kochi mayor |url=https://www.newindianexpress.com/cities/kochi/2019/dec/07/soumini-jain-to-step-down-shiny-likely-to-be-next-kochi-mayor-2072579.html |access-date=2020-07-31 |website=[[The New Indian Express]] |date=7 December 2019 }}</ref><ref name=":3">{{Cite news |date=2015-11-18 |title=Soumini Jain to be Kochi Mayor |url=https://www.thehindu.com/news/cities/Kochi/soumini-jain-to-be-kochi-mayor/article7890302.ece |access-date=2020-07-31 |work=[[The Hindu]] |language=en-IN}}</ref> ಸಭೆಯಲ್ಲಿ, ಸೌಮಿನಿ ಅವರು ನಗರ ನಿಗಮದ 36 ನೇ ವಿಭಾಗವನ್ನು (ಎಲಂಕುಳಂ) ಪ್ರತಿನಿಧಿಸಿದರು.<ref name=":11">{{Cite news |date=2020-12-27 |title=Anil Kumar likely to be Kochi Mayor, Ansiya Deputy Mayor |url=https://www.onmanorama.com/kerala/top-news/2020/12/27/anil-kumar-likely-to-be-kochi-mayor-ansiya-deputy-mayor.html |work=[[Manorama News|Manorama]] |language=en-IN |access-date=2026-07-27 |archive-date=2020-12-27 |archive-url=https://web.archive.org/web/20201227083537/https://www.onmanorama.com/kerala/top-news/2020/12/27/anil-kumar-likely-to-be-kochi-mayor-ansiya-deputy-mayor.html |url-status=dead }}</ref>
{| class="sortable wikitable"
!ಕ್ರ.ಸಂ.
!ರಾಜಕೀಯ ಮುಂಭಾಗ/ಪಕ್ಷ
!ಸಭಾ ಸದಸ್ಯರ ಸಂಖ್ಯೆ
|-
|1
|[[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್]] (UDF)
|38
|-
|2
|[[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್]] (LDF)
|23
|-
|3
|[[ಭಾರತೀಯ ಜನತಾ ಪಕ್ಷ|ನ್ಯಾಷನಲ್ ಡೆಮೋಕ್ರಟಿಕ್ ಅಲಯನ್ಸ್]] (NDA)
|02
|-
|4
|ಇತರೆ
|11
|}
== ಸಮಸ್ಯೆಗಳು ==
ಕೊಚ್ಚಿ ನಗರ ನಿಗಮವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದೆಂದರೆ, 1967 ರಲ್ಲಿ ಕೊನೆಯದಾಗಿ ವ್ಯಾಖ್ಯಾನಿಸಲಾದ ಅಧಿಕೃತ ನಗರ ಮಿತಿಯ ಹೊರಗೆ ಆಧುನಿಕ ನಗರದ ಹೆಚ್ಚಿನ ಭಾಗವು ಅಭಿವೃದ್ಧಿಗೊಂಡಿದೆ. ಪರಿಣಾಮವಾಗಿ, ವಿಸ್ತೃತ ನಗರ ಸಮೂಹವು ಭಾರತದ ಯಾವುದೇ ನಗರಕ್ಕಿಂತ ಹೆಚ್ಚು ಬೆಳೆಯಿತು, ನಿಗಮವು ಸಂಪನ್ಮೂಲಗಳಲ್ಲಿ ಬರಿದಾಗುವಂತೆ ಮಾಡಿತು. ಕೊಚ್ಚಿ ಪ್ರಮುಖ ಉದ್ಯಮ ಮತ್ತು ಸಮೃದ್ಧ ಆಧುನಿಕ ಬಂದರು ನಗರವಾಗಿರುವುದರಿಂದ, ಇದಕ್ಕೆ ಹೆಚ್ಚು ಪ್ರಬಲವಾದ ನಾಯಕತ್ವ ಮತ್ತು ಯೋಜನೆಗಳ ಅಗತ್ಯವಿತ್ತು, ಅದು ಇಲ್ಲಿಯವರೆಗೆ ಎಂದಿಗೂ ಸಾಕಾರಗೊಂಡಿಲ್ಲ. ಯಾವುದೇ ಮಾಸ್ಟರ್ ಪ್ಲಾನ್ ಇಲ್ಲದೆ ನಗರವು ಅನಿಯೋಜಿತ ರೀತಿಯಲ್ಲಿ ಬೆಳೆಯಿತು, ಇದು ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸಿತು. ಸಾರಿಗೆ, ವಿದ್ಯುತ್, ನೀರು ವಿತರಣೆಯಂತಹ ಹೆಚ್ಚಿನ ನಗರ ಯೋಜನಾ ಸಂಸ್ಥೆಗಳನ್ನು [[ಕೇರಳ ಸರ್ಕಾರ]]ವು ನಿರ್ವಹಿಸುತ್ತಿದ್ದುದರಿಂದ, ಕೊಚ್ಚಿ ನಿಗಮವು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿವಿಧ ಸಂಸ್ಥೆಗಳನ್ನು ಸಮನ್ವಯಗೊಳಿಸುವಲ್ಲಿ ವಿಫಲವಾಯಿತು. ಇವೆಲ್ಲದರ ಜೊತೆಗೆ, ನಗರಕ್ಕೆ ಮೂಲಸೌಕರ್ಯ ಅಭಿವೃದ್ಧಿ ನಿಧಿಯ ಹೆಚ್ಚಿನ ಭಾಗವನ್ನು ಗ್ರೇಟರ್ ಕೊಚ್ಚಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಯಿತು, ಇದು ಆಗಾಗ್ಗೆ ಆಡಳಿತಾತ್ಮಕ ಘರ್ಷಣೆಗಳು ಮತ್ತು ಅನುಷ್ಠಾನದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.
ನಗರವು ಮೊದಲು ಎದುರಿಸಿದ ಪ್ರಮುಖ ಸಮಸ್ಯೆಯೆಂದರೆ ತ್ಯಾಜ್ಯ ನಿರ್ವಹಣೆ, ಇದು 2002 ರಲ್ಲಿ ಉಲ್ಬಣಗೊಂಡಿತು, 2008 ರಲ್ಲಿ [[ಬ್ರಹ್ಮಪುರಂ ಭೂಕುಸಿತ|ಬ್ರಹ್ಮಪುರಂ ತ್ಯಾಜ್ಯ ನಿರ್ವಹಣಾ ಘಟಕ]]ವನ್ನು ಸ್ಥಾಪಿಸುವ ಮೂಲಕ ಭಾಗಶಃ ಪರಿಹರಿಸಲಾಯಿತು. ಆದಾಗ್ಯೂ ಇದು ಕ್ರಮೇಣ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಯಿತು. 2023 ರಲ್ಲಿ, ಬ್ರಹ್ಮಪುರಂ ಘಟಕದಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿತು, ಇದರ ಪರಿಣಾಮವಾಗಿ ಕೊಚ್ಚಿ ನಗರದ ಪ್ರಮುಖ ಭಾಗಗಳು ಹೊಗೆಯಲ್ಲಿ ಆವೃತವಾದವು.<ref>{{Cite web |date=2023-03-05 |title=Toxic fumes continue to engulf Kochi nearly 3 days into fire at Brahmapuram waste plant |url=https://indianexpress.com/article/cities/thiruvananthapuram/toxic-fumes-engulf-kochi-3-days-fire-brahmapuram-waste-plant-8480517/ |access-date=2023-03-06 |website=The Indian Express |language=en}}</ref>
==ಇವನ್ನೂ ನೋಡಿ==
*[[ಕೊಚ್ಚಿ ಮಹಾನಗರ ಪ್ರದೇಶ]]
==ಉಲ್ಲೇಖಗಳು==
{{Reflist}}
==ಬಾಹ್ಯ ಕೊಂಡಿಗಳು==
* [https://web.archive.org/web/20100809114442/http://www.corporationofcochin.net/ Website1]
* [https://cochinmunicipalcorporation.kerala.gov.in/ Website2]
{{Authority control}}
[[Category:ಕೊಚ್ಚಿ]]
9rvzzlxk7qp6n18pxhd6iuuc408dy26
ಕೇರಳಂ
0
180019
1379550
1378579
2026-08-09T01:29:32Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1379550
wikitext
text/x-wiki
{{databox}}
{{Infobox Indian state or territory
| name = ಕೇರಳ
| official_name =
| type = ರಾಜ್ಯ
| image_seal = Government of Kerala Logo.svg{{!}}class=skin-invert
| image_skyline = <!-- Do not add additional pictures here without discussion, per consensus [[Talk:Kerala/Archive_6#Infobox montage]]--> Boathouse (7063399547).jpg
| image_caption = [[ಕೇರಳದ ಬ್ಯಾಕ್ವಾಟರ್ಗಳು|ಕೇರಳದ ಬ್ಯಾಕ್ವಾಟರ್ಗಳಲ್ಲಿ]] ಒಂದು [[ಹೌಸ್ ಬೋಟ್]]
| nickname = "[[ಗಾಡ್ಸ್ ಓನ್ ಕಂಟ್ರಿ#ಕೇರಳ|ದೇವರ ಸ್ವಂತ ನಾಡು]]"
| image_map = IN-KL.svg
| coordinates = {{coord|10.0|N|76.3|E|region:IN-KL|display=inline,title}}
| region = ದಕ್ಷಿಣ ಭಾರತ
| before_was = [[ತಿರುವಾಂಕೂರು-ಕೊಚ್ಚಿ]]<br>[[ಮಲಬಾರ್ ಜಿಲ್ಲೆ]]<br>[[ದಕ್ಷಿಣ ಕನ್ನಡ]]
| formation_date4 = 1 ನವೆಂಬರ್ 1956
| capital = ತಿರುವನಂತಪುರ
| districts = [[ಕೇರಳದ ಜಿಲ್ಲೆಗಳ ಪಟ್ಟಿ|14]]
| governor = [[ರಾಜೇಂದ್ರ ಅರ್ಲೇಕರ್]]
| chief_minister = [[ವಿ. ಡಿ. ಸತೀಶನ್]]
| party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|INC]]
| judiciary = [[ಕೇರಳ ಉಚ್ಚ ನ್ಯಾಯಾಲಯ]]
| chief_secretary = ಬಿಶ್ವನಾಥ್ ಸಿನ್ಹಾ I.A.S.
| legislature_type = ಏಕಸಭಾ
| assembly = [[ಕೇರಳ ವಿಧಾನಸಭೆ]]
| assembly_seats = 140 ಸ್ಥಾನಗಳು
| rajya_sabha_seats = 9 ಸ್ಥಾನಗಳು
| lok_sabha_seats = 20 ಸ್ಥಾನಗಳು
| area_total_km2 = 38863
| area_footnotes = <ref>{{Cite web |title=About Kerala
|url=https://kerala.gov.in/subdetail/NTM1ODMxNzQuNDg=/MjA0ODc2ODQuMzY= |access-date=10 March 2025 |language=en-US }}</ref>
| area_rank = 21ನೇ
| length_km = 560
| width_km = 70
| elevation_footnotes = <ref>{{Cite web |title=Kerala Physiography {{!}} Geographical location {{!}} Kerala {{!}} Kerala |url=https://kerala.me/geography |access-date=24 March 2023 |language=en-US |archive-date=24 March 2023 |archive-url=https://web.archive.org/web/20230324220056/https://kerala.me/geography |url-status=live }}</ref>
| elevation_m = 900
| elevation_max_m = 2,695
| elevation_max_point = [[ಅನಮುಡಿ]]<ref>{{Cite web |title=Anamudi – Peakbagger.com |url=https://www.peakbagger.com/peak.aspx?pid=10664 |access-date=24 March 2023 |website=www.peakbagger.com |archive-date=24 March 2023 |archive-url=https://web.archive.org/web/20230324210042/https://www.peakbagger.com/peak.aspx?pid=10664 |url-status=live }}</ref>
| elevation_min_m = −2.7
| elevation_min_point = [[ಕುಟ್ಟನಾಡು]]<ref>{{Cite web |title=Kuttanadan.com : Explore the Rice Bowl of Kerala |url=https://kuttanadan.com/ |access-date=24 March 2023 |website=Kuttanadan Website |language=en-US |archive-date=24 March 2023 |archive-url=https://web.archive.org/web/20230324210043/https://kuttanadan.com/ |url-status=live }}</ref>
| population_footnotes = <ref>{{cite book | url=https://ruralindiaonline.org/en/library/resource/population-projections-for-india-and-states-2011-2036/ | title=Population Projections for India and States, 2011–2036 | date=July 2020 | access-date=25 March 2023 | archive-date=13 March 2023 | archive-url=https://web.archive.org/web/20230313055356/https://ruralindiaonline.org/en/library/resource/population-projections-for-india-and-states-2011-2036/ | url-status=live }}</ref>
| population_total = 36,111,000
| population_as_of = 2025
| population_rank = 13ನೇ
| population_urban = 79.42%
| population_rural = 20.58%
| population_density = 890
| population_demonym = [[ಕೇರಳೀಯ]],<ref>{{Cite web|url=https://www.theguardian.com/world/2026/feb/25/india-state-kerala-to-be-renamed-keralam-malayalam-language|title=Indian state of Kerala to be renamed Keralam to reflect local pronunciation|first=Penelope|last=MacRae|work=The Guardian |date=25 February 2026}}</ref> [[ಮಲಯಾಳಿಗಳು|ಮಲಯಾಳಿ]]
| official_langs = [[ಮಲಯಾಳಂ]]<ref name="OfficialLang">{{cite web |url=https://prsindia.org/files/bills_acts/acts_states/kerala/2026/Act3of2026KL.pdf |title=The Malayalam Language Act, 2025 |publisher=prsindia.org |date=5 March 2026 |access-date=22 April 2026 }}</ref>
| GDP_footnotes = <ref name="MOSPI">{{cite web|url=http://mospi.nic.in/sites/default/files/press_releases_statements/State_wise_SDP_15_03_2021.xls|title=MOSPI State Domestic Product, Ministry of Statistics and Programme Implementation, Government of India|date=15 March 2021|accessdate=28 March 2021}}</ref>
| GDP_total = {{Increase}} $167.90 billion (nominal)<br/>{{Increase}} $707.26 billion (PPP)
| GDP_year = 2025-26
| GDP_rank = 11ನೇ
| GDP_per_capita = {{Increase}} {{INRConvert|317723|lk=r}} (nominal)<br/>{{Increase}} $19,586 (PPP)
| GDP_per_capita_rank = 11ನೇ
| HDI = {{Increase}} 0.804 {{colour|#090|ಅತಿ ಹೆಚ್ಚು}}<ref name="UNDP">{{cite report|title=Subnational HDI|url=https://globaldatalab.org/shdi/table/shdi/IND/?levels=1+4&interpolation=0&extrapolation=0|access-date=1 April 2026|work=Global Data Lab, [[United Nations Development Programme]]}}</ref>
| HDI_year = 2023
| HDI_rank = 2ನೇ
| literacy = 95.3%<ref>{{Cite book |url=https://www.mospi.gov.in/sites/default/files/publication_reports/AnnualReport_PLFS2023-24L2.pdf |title=Annual Report, Periodic Labour Force Survey (PLFS) (July 2023 – June 2024) |date=23 September 2024 |publisher=National Sample Survey Office, Ministry of Statistics and Programme Implementation, Government of India |pages=A-10 |chapter=Appendix-A: Detailed tables, Table (7): Literacy rate (in per cent) of persons of different age groups for each State/UT (persons, age-group (years): 7 & above, rural+urban (column 6))}}</ref>
| literacy_year = 2024
| literacy_rank = 4ನೇ
| sex_ratio = 1084[[female|♀]]/1000 [[male|♂]]<ref name="pc-census2011" />
| sexratio_year = 2025
| sexratio_rank = 17ನೇ
| iso_code = IN-KL
| registration_plate = KL
| website = kerala.gov.in
| foundation_day = 1 ನವೆಂಬರ್
| mammal = [[ಭಾರತೀಯ ಆನೆ]]<ref name="ENVIS">{{Cite web |date=1 December 2017 |title=State Symbols of India |url=http://wiienvis.nic.in/KidsCentre/state_symbols_india_8411.aspx |archive-url=https://web.archive.org/web/20210415100206/http://wiienvis.nic.in/KidsCentre/state_symbols_india_8411.aspx |archive-date=15 April 2021 |access-date=3 June 2022 |publisher=ENVIS Centre on Wildlife & Protected Areas}}</ref>
| bird = [[ಮಹಾಶಿಖಿ]]<ref name="ENVIS" />
| fish = [[ಗ್ರೀನ್ ಕ್ರೋಮೈಡ್]]
| butterfly = [[ಪಾಪಿಲಿಯೋ ಬುದ್ಧ]]<ref>{{Cite news |last=Jacob |first=Aneesh |title='Budha Mayoori' to be named Kerala's state butterfly |language=en |work=Mathrubhumi |url=https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |url-status=dead |access-date=30 March 2019 |archive-url=https://web.archive.org/web/20190330094056/https://english.mathrubhumi.com/technology/science/budha-mayoori-to-be-named-kerala-s-state-butterfly-1.3305480 |archive-date=30 March 2019}}</ref>
| flower = [[ಕಸ್ಸಿಯಾ ಫಿಸ್ಟುಲಾ|ಸ್ವರ್ಣ ಮರ]]<ref name="ENVIS" />
| tree = [[ತೆಂಗಿನ]] ಮರ<ref name="ENVIS" />
| fruit = [[ಹಲಸು]]<ref>{{Cite news |date=17 March 2018 |title=Jackfruit to be Kerala's state fruit; declaration on March 21 |work=[[The Indian Express]] |agency=[[Press Trust of India|PTI]] |url=https://indianexpress.com/article/india/jackfruit-to-be-keralas-state-fruit-declaration-on-march-21-5101170/ |access-date=22 March 2018 |archive-date=22 March 2018 |archive-url=https://web.archive.org/web/20180322144926/http://indianexpress.com/article/india/jackfruit-to-be-keralas-state-fruit-declaration-on-march-21-5101170/ |url-status=live }}</ref>
| image_highway = SH IN-KL.png
| sh_numbers = [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|SH KL1 – SH KL79]]
}}
'''ಕೇರಳ'''{{efn|[[ಭಾರತೀಯ ಇಂಗ್ಲಿಷ್]]: [[Help:IPA/English|/ˈkɛrələ/]] {{audio|Kerala (English Pronunciation).ogg| }}, {{respell|KERR|ə|lə}} <br/> {{IPA|ml|ˈkeːɾɐɭɐm|lang|Ml-Keralam.ogg}} ''[[ISO 15919|ಕೇರಳಂ]]''}} [[ದಕ್ಷಿಣ ಭಾರತ]]ದ [[ಮಲಬಾರ್ ಕರಾವಳಿ]]ಯಲ್ಲಿರುವ ಒಂದು [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]]ವಾಗಿದೆ. ಇದನ್ನು 1 ನವೆಂಬರ್ 1956 ರಂದು [[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ರಚಿಸಲಾಯಿತು, ಇದು ದೇಶದ [[ಮಲಯಾಳಂ]] ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿ ಏಕೀಕರಿಸಿತು. {{cvt|38863|km2|sqmi|0}} ವ್ಯಾಪಿಸಿರುವ ಕೇರಳವು ಪ್ರಾಥಮಿಕವಾಗಿ [[ಪಶ್ಚಿಮ ಘಟ್ಟಗಳು]] ಮತ್ತು [[ಲಕ್ಷದ್ವೀಪ ಸಮುದ್ರ]]ದ ನಡುವೆ ಸ್ಯಾಂಡ್ವಿಚ್ ಆಗಿರುವ [[ಪಶ್ಚಿಮ ಕರಾವಳಿ ಬಯಲು|ಕರಾವಳಿ ಬಯಲು]]ಗಳ ಪಟ್ಟಿಯಾಗಿದ್ದು, ಈಶಾನ್ಯಕ್ಕೆ [[ಕರ್ನಾಟಕ]], ಪೂರ್ವಕ್ಕೆ [[ತಮಿಳುನಾಡು]] ಮತ್ತು ಪಶ್ಚಿಮ ಸಮೀಪದಲ್ಲಿ [[ಲಕ್ಷದ್ವೀಪ]] ದ್ವೀಪಗಳಿಂದ ಸುತ್ತುವರೆದಿದೆ. [[2011 ರ ಭಾರತದ ಜನಗಣತಿ|2011 ರ ಜನಗಣತಿಯ]] ಪ್ರಕಾರ 33 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಕೇರಳವು ಭಾರತದ [[ಜನಸಂಖ್ಯೆಯ ಪ್ರಕಾರ ಭಾರತದ ರಾಜ್ಯಗಳ ಪಟ್ಟಿ|13 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ]]. [[ತಿರುವನಂತಪುರ]]ವು ರಾಜಧಾನಿ ನಗರವಾಗಿದ್ದರೆ [[ಕೊಚ್ಚಿ ಮಹಾನಗರ ಪ್ರದೇಶ]]ವು ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶವಾಗಿದೆ. ಮಲಯಾಳಂ ಅತಿ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದ್ದು, ಇಂಗ್ಲಿಷ್ ಜೊತೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ.
ಕೇರಳವು 3000 [[ಸಾಮಾನ್ಯ ಯುಗ|BCE]] ಯಿಂದಲೂ ಮಸಾಲೆಗಳ ಪ್ರಮುಖ ರಫ್ತುದಾರನಾಗಿದೆ. [[ಚೇರ ಸಾಮ್ರಾಜ್ಯ|ಚೇರ]] ರಾಜವಂಶವು, ಈ ಪ್ರದೇಶದ ಮೊದಲ ಪ್ರಮುಖ ಸಾಮ್ರಾಜ್ಯವು, ಸಮುದ್ರ ವಾಣಿಜ್ಯದ ಮೂಲಕ ಪ್ರಾಮುಖ್ಯತೆಗೆ ಏರಿತು ಆದರೆ ಆಗಾಗ್ಗೆ ನೆರೆಯ [[ಚೋಳ]] ಮತ್ತು [[ಪಾಂಡ್ಯ]] ರಾಜವಂಶಗಳ ದಾಳಿಗಳನ್ನು ಎದುರಿಸಿತು. 15 ನೇ ಶತಮಾನದಲ್ಲಿ, ಮಸಾಲೆ ವ್ಯಾಪಾರವು ಪೋರ್ಚುಗೀಸ್ ವ್ಯಾಪಾರಿಗಳನ್ನು ಕೇರಳಕ್ಕೆ ಆಕರ್ಷಿಸಿತು, ಇದು ಭಾರತದಲ್ಲಿ [[ವಸಾಹತುಶಾಹಿ ಭಾರತ|ಯುರೋಪಿಯನ್ ವಸಾಹತುಶಾಹಿಯನ್ನು]] ಪ್ರಾರಂಭಿಸಿತು. [[ಭಾರತೀಯ ಸ್ವಾತಂತ್ರ್ಯ ಚಳುವಳಿ|1947 ರಲ್ಲಿ ಭಾರತದ ಸ್ವಾತಂತ್ರ್ಯದ]] ನಂತರ, [[ತಿರುವಾಂಕೂರು]] ಮತ್ತು [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿ]] ಸಾಮ್ರಾಜ್ಯಗಳು ಹೊಸದಾಗಿ ರೂಪುಗೊಂಡ ಗಣರಾಜ್ಯಕ್ಕೆ ಸೇರಿಕೊಂಡವು ಮತ್ತು 1949 ರಲ್ಲಿ [[ತಿರುವಾಂಕೂರು-ಕೊಚ್ಚಿ]] ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. 1956 ರಲ್ಲಿ, ಆಧುನಿಕ ಕೇರಳ ರಾಜ್ಯವನ್ನು ಹಿಂದಿನ [[ಮದ್ರಾಸ್ ರಾಜ್ಯ]]ದೊಂದಿಗೆ ಪರಿಧಿಯ ಪ್ರದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸ್ಥಾಪಿಸಲಾಯಿತು; [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡ ಜಿಲ್ಲೆಯ]] [[ಕಾಸರಗೋಡು]] ತಾಲೂಕನ್ನು ಕೇರಳವನ್ನು ರೂಪಿಸಲು ತಿರುವಾಂಕೂರು-ಕೊಚ್ಚಿಯೊಂದಿಗೆ ವಿಲೀನಗೊಳಿಸಲಾಯಿತು, ಆದರೆ [[ಕನ್ಯಾಕುಮಾರಿ ಜಿಲ್ಲೆ]] ಮತ್ತು [[ಶೆಂಕೋಟ್ಟೈ ತಾಲೂಕಿನ]] ಭಾಗಗಳನ್ನು ಮದ್ರಾಸ್ ರಾಜ್ಯಕ್ಕೆ ಸೇರಿಸಲಾಯಿತು. ಕೇರಳವು 1984 ರಿಂದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಒಳಗೊಂಡಿದೆ.
ಕೇರಳವು ಅತ್ಯಧಿಕ [[ಮಾನವ ಅಭಿವೃದ್ಧಿ ಸೂಚ್ಯಂಕ|ಮಾನವ ಅಭಿವೃದ್ಧಿ ಸೂಚ್ಯಂಕವನ್ನು]] ಹೊಂದಿದೆ, 2018 ರಲ್ಲಿ 0.784; ಅತ್ಯಧಿಕ ಸಾಕ್ಷರತಾ ಪ್ರಮಾಣ, 2018 ರಲ್ಲಿ 96.2%; ಅತ್ಯಧಿಕ ಜೀವಿತಾವಧಿ, 77.3 ವರ್ಷಗಳು; ಮತ್ತು ಅತ್ಯಧಿಕ [[ಲಿಂಗಾನುಪಾತ]], 1,000 ಪುರುಷರಿಗೆ 1,084 ಮಹಿಳೆಯರು ಮತ್ತು ಭಾರತದಲ್ಲಿ ಅತ್ಯಂತ ಕಡಿಮೆ ಧನಾತ್ಮಕ ಜನಸಂಖ್ಯಾ ಬೆಳವಣಿಗೆ ದರ (3.44%). ಇದು ದೇಶದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಕಡಿಮೆ ಬಡತನ ಹೊಂದಿರುವ]] ಮತ್ತು [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ]] ರಾಜ್ಯವಾಗಿದೆ. ರಾಜ್ಯವು ಗಮನಾರ್ಹವಾದ ವಲಸೆಯನ್ನು ಕಂಡಿದೆ, ವಿಶೇಷವಾಗಿ 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಿಗೆ]], ಮತ್ತು ಅದರ ಆರ್ಥಿಕತೆಯು ದೊಡ್ಡ [[ಮಲಯಾಳಿ]] ವಲಸೆ ಜನಸಂಖ್ಯೆಯಿಂದ ಸ್ಥಳಾಂತರ ವರ್ಗಾವಣೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. [[ಕೇರಳದಲ್ಲಿ ಧರ್ಮ|ಜನಸಂಖ್ಯೆಯ 54% ಕ್ಕಿಂತ ಹೆಚ್ಚು]] ಜನರು ಹಿಂದೂ ಧರ್ಮವನ್ನು ಆಚರಿಸುತ್ತಾರೆ, ನಂತರ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು. ಸಂಸ್ಕೃತಿಯು [[ಆರ್ಯ]] ಮತ್ತು [[ದ್ರಾವಿಡರು|ದ್ರಾವಿಡ]] ಸಂಪ್ರದಾಯಗಳ ಸಮ್ಮಿಳನವಾಗಿದ್ದು, ಸಹಸ್ರಮಾನಗಳಿಂದ ಭಾರತ ಮತ್ತು ವಿದೇಶಗಳಿಂದ ಪ್ರಭಾವಗಳಿಂದ ರೂಪುಗೊಂಡಿದೆ.
[[ಕರಿ ಮೆಣಸು]] ಮತ್ತು [[ನೈಸರ್ಗಿಕ ರಬ್ಬರ್]] ಉತ್ಪಾದನೆಯು ರಾಷ್ಟ್ರೀಯ ಉತ್ಪಾದನೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಕೃಷಿ ವಲಯದಲ್ಲಿ, ತೆಂಗು, ಚಹಾ, ಕಾಫಿ, ಗೋಡಂಬಿ ಮತ್ತು ಮಸಾಲೆಗಳು ಪ್ರಮುಖ ಬೆಳೆಗಳಾಗಿವೆ. ರಾಜ್ಯವು {{convert|595|km|mi}} ಕರಾವಳಿಯನ್ನು ಹೊಂದಿದೆ, ಮತ್ತು 1.1 ಮಿಲಿಯನ್ ಜನರು ಮೀನುಗಾರಿಕಾ ಉದ್ಯಮವನ್ನು ಅವಲಂಬಿಸಿದ್ದಾರೆ, ಇದು ರಾಜ್ಯದ ಆದಾಯದ ಸುಮಾರು 3% ರಷ್ಟಿದೆ. ಆರ್ಥಿಕತೆಯು ಹೆಚ್ಚಾಗಿ ಸೇವಾ ವಲಯ ಆಧಾರಿತವಾಗಿದ್ದರೆ, ಪ್ರಾಥಮಿಕ ವಲಯವು ತುಲನಾತ್ಮಕವಾಗಿ ಚಿಕ್ಕ ಪಾಲನ್ನು ನೀಡುತ್ತದೆ. ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರವನ್ನು]] ಹೊಂದಿದ್ದು, ಒಂಬತ್ತು ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸುತ್ತದೆ, ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್. ಕೇರಳವು ಭಾರತದ ಪ್ರಮುಖ [[ಕೇರಳದ ಪ್ರವಾಸೋದ್ಯಮ|ಪ್ರವಾಸಿ ತಾಣಗಳಲ್ಲಿ]] ಒಂದಾಗಿದೆ, [[ಕೇರಳದ ಬೀಚ್ಗಳು|ತೆಂಗಿನ ಗಿಡಗಳಿಂದ ಕೂಡಿದ ಮರಳು ಕಡಲತೀರಗಳು]], [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳು]], [[ಬೆಟ್ಟದ ತಾಣ]]ಗಳು, [[ಆಯುರ್ವೇದ|ಆಯುರ್ವೇದ ಪ್ರವಾಸೋದ್ಯಮ]] ಮತ್ತು [[ಉಷ್ಣವಲಯದ]] ಹಸಿರು ಅದರ ಪ್ರಮುಖ ಆಕರ್ಷಣೆಗಳಾಗಿವೆ.
== ಹೆಸರು ==
=== ವ್ಯುತ್ಪತ್ತಿ ===
"ಕೇರಳ" ಪದವನ್ನು ಮೊದಲು "ಕೇರಳಪುಟೊ" ('[[ಚೇರ ಸಾಮ್ರಾಜ್ಯ|ಚೇರ]] ರ ಮಗ[ಗಳು]') ಎಂದು [[ಮೌರ್ಯ ಸಾಮ್ರಾಜ್ಯ|ಮೌರ್ಯ ಚಕ್ರವರ್ತಿ]] [[ಅಶೋಕ]] (274–237 BCE) ಅವರು ತಮ್ಮ [[ಅಶೋಕನ ಶಾಸನಗಳು|ಶಾಸನಗಳಲ್ಲಿ]] ಒಂದಾದ ಕಲ್ಯಾಣಕ್ಕೆ ಸಂಬಂಧಿಸಿದ 3 ನೇ ಶತಮಾನದ BCE ಯ ಬಂಡೆಯ ಕೆತ್ತನೆಯಲ್ಲಿ ದಾಖಲಿಸಲಾಗಿದೆ.<ref>{{Cite book |last=P. C. Alexander |title=Buddhism in Kerala |pages=23}}</ref> ಆ ಸಮಯದಲ್ಲಿ, ಈ ಪ್ರದೇಶದ ಮೂರು ರಾಜ್ಯಗಳಲ್ಲಿ ಒಂದನ್ನು ಶಾಸ್ತ್ರೀಯ ತಮಿಳಿನಲ್ಲಿ [[ಚೇರ ಸಾಮ್ರಾಜ್ಯ|{{transliteration|ta|ISO|Ceralam}}]] (ಚೇರಲಂ) ಎಂದು ಕರೆಯಲಾಗುತ್ತಿತ್ತು: {{transliteration|ta|ISO|Cera}} (ಚೇರ) ಮತ್ತು {{transliteration|ta|ISO|Kera}} (ಕೇರ) ಒಂದೇ ಪದದ ರೂಪಾಂತರಗಳಾಗಿವೆ.<ref name="Sainz1972">{{Cite book |last=Nicasio Silverio Sainz |url=https://books.google.com/books?id=AOEBAAAAMAAJ |title=Cuba y la Casa de Austria |publisher=Ediciones Universal |year=1972 |page=120 |access-date=6 January 2013}}</ref> {{transliteration|ta|ISO|Cer al}} (ಚೇರಲ್) ಪದವು ಕೇರಳ ರಾಜರ ಅತ್ಯಂತ ಹಳೆಯ ರಾಜವಂಶವನ್ನು ಸೂಚಿಸುತ್ತದೆ ಮತ್ತು ಇದು ಹಳೆಯ ತಮಿಳು ಪದದಿಂದ 'ಸರೋವರ' ಎಂದು ಬಂದಿದೆ.<ref name="Marr1985">{{Cite book |last=John R. Marr |url=https://books.google.com/books?id=x3gOAAAAYAAJ |title=The Eight Anthologies: A Study in Early Tamil Literature |publisher=Institute of Asian Studies |year=1985 |page=263}}</ref> {{transliteration|ta|ISO|Keralam}} (ಕೇರಳಂ) ಶಾಸ್ತ್ರೀಯ [[ತಮಿಳು ಭಾಷೆ|ತಮಿಳು]] {{transliteration|ta|ISO|cerive-alam}} (ಚೆರಿವೆ-ಆಲಂ) 'ಗುಡ್ಡ ಅಥವಾ ಬೆಟ್ಟದ ಇಳಿಜಾರು'<ref name="AlexDeborah2014">{{Cite book |last1=Rayson K. Alex |url=https://books.google.com/books?id=1swxBwAAQBAJ&pg=PA226 |title=Culture and Media: Ecocritical Explorations |last2=S. Susan Deborah |last3=Sachindev P.S. |publisher=Cambridge Scholars Publishing |year=2014 |isbn=978-1-4438-6190-8 |page=226}}</ref> ಅಥವಾ {{transliteration|ta|ISO|cera alam}} (ಚೇರ ಆಲಂ) 'ಚೇರರ ಭೂಮಿ' ಎಂಬುದರಿಂದ ಹುಟ್ಟಿಕೊಂಡಿರಬಹುದು. ಒಂದು [[ಜಾನಪದ ವ್ಯುತ್ಪತ್ತಿ]] ''ಕೇರಳ'' ವನ್ನು [[ಮಲಯಾಳಂ]] ಪದ {{transliteration|ml|ISO|kera}} (ಕೇರ) 'ತೆಂಗಿನ ಮರ' ಮತ್ತು {{transliteration|ml|ISO|alam}} (ಆಲಂ) 'ಭೂಮಿ' ಎಂಬುದರಿಂದ ಪಡೆಯುತ್ತದೆ; ಹೀಗೆ, 'ತೆಂಗಿನ ಮರಗಳ ನಾಡು',<ref name="Sadasivan2000">{{Cite book |last=S. N. Sadasivan |url=https://books.google.com/books?id=Be3PCvzf-BYC&pg=PA101 |title=A Social History of India |publisher=APH Publishing |year=2000 |isbn=978-8176481700 |page=101}}</ref> ಇದು ತೆಂಗಿನ ಮರಗಳ ಸಮೃದ್ಧಿಯಿಂದಾಗಿ ಸ್ಥಳೀಯರು ಬಳಸುವ ರಾಜ್ಯದ ಅಡ್ಡಹೆಸರಾಗಿದೆ.<ref name="PreedyWatson2011">{{Cite book |last1=Victor R. Preedy |url=https://books.google.com/books?id=C6lYoH8rwywC&pg=PT400 |title=Nuts and Seeds in Health and Disease Prevention |last2=Ronald Ross Watson |last3=Vinood B. Patel |publisher=Academic Press |year=2011 |isbn=978-0-12-375689-3 |page=400}}</ref> ಕೇರಳವನ್ನು [[ಭಾರತೀಯ ಮಹಾಸಾಗರದ ವ್ಯಾಪಾರ|ವಿದೇಶಿ ವ್ಯಾಪಾರ ವಲಯಗಳಲ್ಲಿ]] ಪರ್ಯಾಯವಾಗಿ ''[[ಮಲಬಾರ್ ಕರಾವಳಿ|ಮಲಬಾರ್]]'' ಎಂದು ಕರೆಯಲಾಗುತ್ತಿತ್ತು. [[ಕಾಸ್ಮಾಸ್ ಇಂಡಿಕೋಪ್ಲ್ಯೂಸ್ಟೆಸ್]] (6 ನೇ ಶತಮಾನ CE) ಕಾಲದಿಂದಲೂ, [[ಅರಬ್ಬರು|ಅರಬ್]] ನಾವಿಕರು ಕೇರಳವನ್ನು ''ಮೇಲ್'' ಎಂದು ಕರೆಯುತ್ತಿದ್ದರು.{{citation needed|date=October 2025}}
=== ಕೇರಳಂ ಎಂದು ಮರುನಾಮಕರಣ ===
ರಾಜ್ಯದ [[ಮಲಯಾಳಂ]] ಹೆಸರಾದ ಕೇರಳಂ ಎಂದು ಹೆಸರನ್ನು ಬದಲಾಯಿಸಲು ದೀರ್ಘಕಾಲದಿಂದ ಬೇಡಿಕೆಗಳಿವೆ. ಅಧಿಕೃತವಾಗಿ, ರಾಜ್ಯದ ಹೆಸರು ಮಲಯಾಳಂನಲ್ಲಿ 'ಕೇರಳಂ' (കേരളം) ಆಗಿದ್ದರೆ, ಅದರ ಇಂಗ್ಲಿಷ್ ಹೆಸರು 'ಕೇರಳ' ಆಗಿದೆ.<ref>{{Cite web |last=Vineeth |first=T. K. |date=2026-03-07 |title=KERALA-M: What's in a name? |url=https://www.newindianexpress.com/explainers/2026/Mar/07/kerala-m-whats-in-a-name |access-date=2026-03-13 |website=The New Indian Express |language=en}}</ref><ref>{{Cite web |title=Renaming Kerala: Modi Hails Kerala's New Name Keralam |url=https://www.deccanherald.com/india/kerala/rightful-name-as-per-malayali-culture-pm-modi-praises-renaming-of-kerala-to-keralam-3927718 |access-date=2026-03-13 |website=Deccan Herald |language=en}}</ref> [[ಕೇರಳ ವಿಧಾನಸಭೆ]]ಯು ಜೂನ್ 2024 ರಲ್ಲಿ ರಾಜ್ಯದ ಹೆಸರನ್ನು 'ಕೇರಳ' ದಿಂದ 'ಕೇರಳಂ' ಗೆ ಬದಲಾಯಿಸಲು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು, ಇದು ಆಗಸ್ಟ್ 2023 ರ ಹಿಂದಿನ ಸರ್ವಾನುಮತದ ನಿರ್ಣಯವನ್ನು ಅನುಸರಿಸಿತು. [[ಕೇರಳದ ಮುಖ್ಯಮಂತ್ರಿ|ಮುಖ್ಯಮಂತ್ರಿ]] [[ಪಿಣರಾಯಿ ವಿಜಯನ್]] ಅವರು ಎರಡೂ ನಿರ್ಣಯಗಳನ್ನು ಮಂಡಿಸಿದ್ದರು, ಇದು ಅದರ [[ಮಲಯಾಳಿ]] ಗುರುತನ್ನು ಪ್ರತಿಬಿಂಬಿಸಲು ಸಂವಿಧಾನದ ಅನುಚ್ಛೇದ 3 ರ ಅಡಿಯಲ್ಲಿ ರಾಜ್ಯದ ಹೆಸರನ್ನು ತಿದ್ದುಪಡಿ ಮಾಡಲು ಪ್ರಯತ್ನಿಸಿತು.<ref name="auto1">{{cite web | last=TNIE online desk | first=Agencies | title=Ahead of polls, Union Cabinet approves Kerala's renaming to 'Keralam' | website=The New Indian Express | date=2026-02-24 | url=https://www.newindianexpress.com/states/kerala/2026/Feb/24/union-cabinet-approves-keralas-renaming-to-keralam-ahead-of-polls | access-date=2026-02-24}}</ref>
[[ಮೂರನೇ ಮೋದಿ ಸಚಿವ ಸಂಪುಟ|ಕೇಂದ್ರ ಸಚಿವ ಸಂಪುಟ]]ವು ಈ ಪ್ರಸ್ತಾಪವನ್ನು ಫೆಬ್ರವರಿ 24, 2026 ರಂದು ಅನುಮೋದಿಸಿತು. ಸಚಿವ ಸಂಪುಟದ ಅನುಮೋದನೆಯ ನಂತರ, [[ಭಾರತದ ರಾಷ್ಟ್ರಪತಿ]]ಗಳು ಕೇರಳ (ಹೆಸರು ಬದಲಾವಣೆ) ಮಸೂದೆ, 2026 ಅನ್ನು ಭಾರತದ ಸಂವಿಧಾನದ ಅನುಚ್ಛೇದ 3 ರ ಷರತ್ತಿನ ಅಡಿಯಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು [[ಕೇರಳ ವಿಧಾನಸಭೆ|ರಾಜ್ಯ ವಿಧಾನಸಭೆಗೆ]] ಉಲ್ಲೇಖಿಸುತ್ತಾರೆ.<ref name="auto">{{cite web | title=Kerala will now be called Keralam | website=India Today | date=2026-02-24 | url=https://www.indiatoday.in/india/story/union-cabinet-approves-proposal-renaming-kerala-to-keralam-2873528-2026-02-24 | access-date=2026-02-24}}</ref>
[[ಕೇರಳ ವಿಧಾನಸಭೆ]]ಯ ಅನುಮೋದನೆಯ ನಂತರ, ಈ ಮಸೂದೆಯನ್ನು [[ಭಾರತದ ಸಂಸತ್ತಿನಲ್ಲಿ]] ಮಂಡಿಸಲಾಗುವುದು ಮತ್ತು ಅಂಗೀಕರಿಸಿದರೆ, ರಾಜ್ಯದ ಹೆಸರು ಅಧಿಕೃತವಾಗಿ ಕೇರಳಂ ಆಗುತ್ತದೆ.
== ಇತಿಹಾಸ ==
{{Main|ಕೇರಳದ ಇತಿಹಾಸ}}
=== ದಂತಕಥೆ ===
[[File:Parshuramsaraswats.jpg|thumb|[[ಪರಶುರಾಮ]]ನನ್ನು ಚಿತ್ರಿಸುವ ವರ್ಣಚಿತ್ರ, ವಸಾಹತುಗಾರರಿಂದ ಸುತ್ತುವರಿದು, [[ವರುಣ]] ([[ಹಿಂದೂ]] ಜಲದೇವತೆ) ನನ್ನು ಸಮುದ್ರಗಳನ್ನು ಬೇರ್ಪಡಿಸಲು ಆಜ್ಞಾಪಿಸುತ್ತಾನೆ]]
[[ಹಿಂದೂ]] ಪುರಾಣಗಳ [[ದಶಾವತಾರ]] ಕಥೆಗಳಲ್ಲಿ, ಕೇರಳದ ಭೂಮಿಯನ್ನು ಕೊಡಲಿ-ಧಾರಿಯ ವೀರ ಋಷಿ [[ಪರಶುರಾಮ]]ನು, [[ವಿಷ್ಣು]]ವಿನ ಆರನೇ [[ಅವತಾರ]] (ಅವತಾರ), ಸಮುದ್ರದಿಂದ ಮರಳಿ ಪಡೆದನು. ಪರಿಣಾಮವಾಗಿ, ಕೇರಳವನ್ನು ಸಾಂಪ್ರದಾಯಿಕವಾಗಿ ''ಪರಶುರಾಮ ಕ್ಷೇತ್ರಂ'' ("ಪರಶುರಾಮನ ನಾಡು") ಎಂದು ಕರೆಯಲಾಗುತ್ತದೆ.<ref>S. C. Bhatt, Gopal K. Bhargava (2006) "Land and People of Indian States and Union Territories: Volume 14.", p.18</ref> ದಂತಕಥೆಯ ಪ್ರಕಾರ, ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರದ ಮೇಲೆ ಎಸೆದನು, ಮತ್ತು ಅದು ಬಿದ್ದ ಸ್ಥಳದವರೆಗೆ ನೀರು ಹಿಂಜರಿಯಿತು. ಈ ರೀತಿ ಹೊರಹೊಮ್ಮಿದ ಭೂಮಿಯು [[ಗೋಕರ್ಣ]]ದಿಂದ [[ಕನ್ಯಾಕುಮಾರಿ]]ಯವರೆಗೆ ವಿಸ್ತರಿಸಿತು.<ref>{{cite book |author=Aiya VN |title=The Travancore State Manual|publisher=Travancore Government Press |pages=210–212 |year=1906 |accessdate=12 November 2007 |url=https://books.google.com/books?id=RdzaPW-kEvQC}}</ref> ಹೊರಹೊಮ್ಮಿದ ಭೂಮಿಯು ಲವಣಯುಕ್ತ ಮತ್ತು ವಾಸಯೋಗ್ಯವಾಗಿರಲಿಲ್ಲ, ಆದ್ದರಿಂದ ಪರಶುರಾಮನು ಸರ್ಪರಾಜ [[ವಾಸುಕಿ]]ಯನ್ನು ಪ್ರಾರ್ಥಿಸಿದನು, ಅವನು ಮಣ್ಣನ್ನು ಶುದ್ಧೀಕರಿಸಲು ಪವಿತ್ರ ವಿಷವನ್ನು ಉಗುಳಿದನು, ಅದನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದನು. ಗೌರವದಿಂದ, ವಾಸುಕಿ ಮತ್ತು ಎಲ್ಲಾ ಹಾವುಗಳನ್ನು ಭೂಮಿಯ ರಕ್ಷಕರಾಗಿ ನೇಮಿಸಲಾಯಿತು. ಈ ದಂತಕಥೆಯನ್ನು 17 ನೇ ಅಥವಾ 18 ನೇ ಶತಮಾನದ ಪಠ್ಯ ''[[ಕೇರಳೋಲ್ಪತ್ತಿ]]'' ಯಲ್ಲಿ ವಿಸ್ತರಿಸಲಾಯಿತು ಮತ್ತು ಸಂಹಿತೆಗೊಳಿಸಲಾಯಿತು. ಇದು ಆರಂಭಿಕ ಕೇರಳ ಸಂಸ್ಥೆಗಳ{{mdash}}ಉದಾಹರಣೆಗೆ ಭೂ ಹಿಡುವಳಿ ಮತ್ತು ಆಡಳಿತ{{mdash}}ಮೂಲವನ್ನು ಪರಶುರಾಮನ ಕಥೆಗೆ ಸಂಪರ್ಕಿಸುತ್ತದೆ.<ref>{{cite book|author=M. T. Narayanan|title=Agrarian Relations in Late Medieval Malabar|url=https://books.google.com/books?id=kHtbkuXruzwC&pg=PA17|accessdate=28 July 2012|date=1 January 2003|publisher=Northern Book Centre|isbn=978-81-7211-135-9|pages=16–18}}</ref> ಮಧ್ಯಕಾಲೀನ ಯುಗದಲ್ಲಿ, [[ಚೇರ]] ರಾಜ [[ಚೆಂಕುಟ್ಟುವನ್]] ತನ್ನ ಈಟಿಯನ್ನು ಸಮುದ್ರಕ್ಕೆ ಎಸೆಯುವ ಮೂಲಕ ಪರಶುರಾಮ ಸಂಪ್ರದಾಯವನ್ನು ಅನುಕರಿಸಿರಬಹುದು, ಅದರ ಮೇಲಿನ ತನ್ನ ಪ್ರಭುತ್ವವನ್ನು ಸಂಕೇತಿಸಲು.<ref>{{Cite book |last=Srinivisa Iyengar |first=P. T. |title=History of the Tamils: From the Earliest Times to 600 A.D. |publisher=Asian Educational Services |year=1929 |isbn=978-8120601451 |location=Madras |page=515}}</ref>
ಕೇರಳದೊಂದಿಗೆ ಸಂಬಂಧಿಸಿದ ಪ್ರಮುಖ [[ಪೌರಾಣಿಕ]] ವ್ಯಕ್ತಿಯೆಂದರೆ [[ಮಹಾಬಲಿ]], ಒಬ್ಬ [[ಅಸುರ]] ಮತ್ತು ಮಾದರಿ ನ್ಯಾಯಪ್ರಿಯ ರಾಜ, ಅವರು ಕೇರಳದಿಂದ ಭೂಮಿಯನ್ನು ಆಳಿದರು ಎಂದು ಹೇಳಲಾಗುತ್ತದೆ. ಅವನು ಯುದ್ಧದಲ್ಲಿ [[ದೇವ (ಹಿಂದೂ ಧರ್ಮ)|ದೇವ]] ಗಳನ್ನು ಸೋಲಿಸಿ, ಅವರನ್ನು ಗಡಿಪಾರು ಮಾಡಿದನು. ಪ್ರತಿಕ್ರಿಯೆಯಾಗಿ, ದೇವರುಗಳು ವಿಷ್ಣುವಿಗೆ ಮನವಿ ಮಾಡಿದರು, ಅವರು [[ವಾಮನ]]ನಾಗಿ ತಮ್ಮ ಐದನೇ ಅವತಾರವನ್ನು ತಾಳಿದರು ಮತ್ತು ಕ್ರಮವನ್ನು ಪುನಃಸ್ಥಾಪಿಸಲು, ಮಹಾಬಲಿಯನ್ನು [[ಪಾತಾಳ]] (ಪಾತಾಳ ಲೋಕ) ಕೆಳಗೆ ತಳ್ಳಿದರು. ಜನಪ್ರಿಯ ನಂಬಿಕೆಯ ಪ್ರಕಾರ, ಮಹಾಬಲಿ ವರ್ಷಕ್ಕೊಮ್ಮೆ ಕೇರಳಕ್ಕೆ ಹಿಂತಿರುಗುತ್ತಾನೆ, ಇದನ್ನು [[ಓಣಂ]] ಹಬ್ಬವಾಗಿ ಆಚರಿಸಲಾಗುತ್ತದೆ.<ref name="Rinehart2004">{{cite book|author=Robin Rinehart|title=Contemporary Hinduism: Ritual, Culture, and Practice|url=https://books.google.com/books?id=hMPYnfS_R90C&pg=PA146|accessdate=28 July 2012|year=2004|publisher=ABC-CLIO|isbn=978-1-57607-905-8|page=146}}</ref> 18 [[ಪುರಾಣಗಳಲ್ಲಿ]] ಅತ್ಯಂತ ಹಳೆಯದಾದ ''[[ಮತ್ಸ್ಯ ಪುರಾಣ]]''ವು,<ref>{{cite book|last=Goldberg|first=Ellen|title=The Lord who is Half Woman: Ardhanārīśvara in Indian and Feminist Perspective|url=https://books.google.com/books?id=xUhlxBozntoC&pg=PA20|year=2002|publisher=SUNY Press|isbn=978-0-7914-5325-4|page=20|accessdate=30 May 2015}}</ref><ref>{{cite book|last=Kemmerer|first=Lisa|title=Animals and World Religions|url=https://books.google.com/books?id=iFEL2yjkbAAC&pg=PA78|year=2011|publisher=Oxford University Press|isbn=978-0-19-991255-1|page=78|accessdate=30 May 2015}}</ref> [[ಮತ್ಸ್ಯ]]ದ{{mdash}}ವಿಷ್ಣುವಿನ ಮೊದಲ ಅವತಾರ{{mdash}}ಮತ್ತು ರಾಜ [[ಮನು (ಹಿಂದೂ ಧರ್ಮ)|ಮನು]]ನ ಕಥೆಯನ್ನು, ಮೊದಲ ಮನುಷ್ಯ ಮತ್ತು ಈ ಪ್ರದೇಶದ ಆಡಳಿತಗಾರ, ಕೇರಳ ಮತ್ತು [[ತಮಿಳುನಾಡಿನ]] [[ಮಲಯ ಪರ್ವತಗಳಲ್ಲಿ]] ಇರಿಸುತ್ತದೆ.<ref>{{cite book|last=Dalal|first=Roshen|title=Hinduism: An Alphabetical Guide|url=https://books.google.com/books?id=DH0vmD8ghdMC&pg=PA250|year=2011|publisher=Penguin Books India|isbn=978-0-14-341421-6|page=250|accessdate=30 May 2015}}</ref><ref>{{cite book|last=Ragozin|first=Zenaide A.|title=Vedic India As Embodied Principally in the Rig-veda|url=https://books.google.com/books?id=T16d-eRG5VkC&pg=PA341|year=2005|publisher=Kessinger Publishing|isbn=978-1-4179-4463-7|page=341|accessdate=21 March 2013}}</ref>
=== ಪ್ರಾಗಿತಿಹಾಸ ===
[[File:MarayoorDolmen.JPG|thumb|[[ಮಾರಯೂರು|ಮಾರಯೂರಿನಲ್ಲಿ]] ನವಶಿಲಾಯುಗದ ಜನರು ನಿರ್ಮಿಸಿದ [[ಡಾಲ್ಮೆನ್]]]]
ಪ್ರಸ್ತುತ ಕೇರಳದ ಗಣನೀಯ ಭಾಗವು ಪ್ರಾಚೀನ ಕಾಲದಲ್ಲಿ ಸಮುದ್ರದ ಅಡಿಯಲ್ಲಿ ಮುಳುಗಿತ್ತು ಎಂದು ನಂಬಲಾಗಿದೆ. ಚಂಗನಾಶ್ಶೇರಿಯ ಬಳಿ ಸಾಗರಿಕ ಪಳೆಯುಳಿಕೆಗಳ ಆವಿಷ್ಕಾರವು ಈ ಊಹೆಯನ್ನು ಬೆಂಬಲಿಸುತ್ತದೆ.<ref name="Menon2007">{{cite book|author=A. Sreedhara Menon|title=A Survey of Kerala History|url=https://books.google.com/books?id=FVsw35oEBv4C&pg=PA20|accessdate=27 July 2012|date=1 January 2007|publisher=DC Books|isbn=978-81-264-1578-6|pages=20–21}}</ref> ಕೇರಳದಲ್ಲಿನ ಪ್ರಾಗೈತಿಹಾಸಿಕ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರಗಳು ಇಡುಕ್ಕಿ ಜಿಲ್ಲೆಯ [[ಮಾರಯೂರು]] ಪ್ರದೇಶದಲ್ಲಿ [[ನವಶಿಲಾಯುಗ]]-ಯುಗದ [[ಡಾಲ್ಮೆನ್]]ಗಳನ್ನು ಒಳಗೊಂಡಿವೆ, ಸ್ಥಳೀಯವಾಗಿ ''ಮುನಿಯಾರ'' ಎಂದು ಕರೆಯಲಾಗುತ್ತದೆ{{mdash}}''ಮುನಿ'' (ಸನ್ಯಾಸಿ ಅಥವಾ ಋಷಿ) ಮತ್ತು ''ಆರ'' (ಡಾಲ್ಮೆನ್) ನಿಂದ ಬಂದಿದೆ.<ref name="Unlocking the secrets of history">{{cite news|url=http://www.hindu.com/2004/12/06/stories/2004120604900300.htm | location=Chennai, India | work=The Hindu | title=Unlocking the secrets of history | date=6 December 2004 | accessdate= 12 November 2015}}</ref> [[ವಯನಾಡಿನ]] [[ಎಡಕ್ಕಲ್ ಗುಹೆಗಳು|ಎಡಕ್ಕಲ್ ಗುಹೆಗಳಲ್ಲಿನ]] ಬಂಡೆಯ ಕೆತ್ತನೆಗಳು ಸುಮಾರು 6000 BCE ಯ ನವಶಿಲಾಯುಗದ ಅವಧಿಯ ಹಿಂದಿನವು.<ref name="Kapoor2002">{{cite book|author=Subodh Kapoor|title=The Indian Encyclopaedia|url=https://books.google.com/books?id=gxIpYtnyzu4C&pg=PA2184|accessdate=1 August 2012|date=1 July 2002|publisher=Cosmo Publications|isbn=978-81-7755-257-7|page=2184}}</ref><ref>{{cite web|title=Travel and Tourism|url=http://www.kerala.gov.in/index.php?option=com_content&view=article&id=3792:travel-and-tourism&catid=271:about-kerala&Itemid=2267|website=kerala.gov.in|publisher=Government of Kerala|accessdate=12 November 2015|archive-date=14 ಜನವರಿ 2016|archive-url=https://web.archive.org/web/20160114080354/http://www.kerala.gov.in/index.php?option=com_content&view=article&id=3792%3Atravel-and-tourism&catid=271%3Aabout-kerala&Itemid=2267|url-status=dead}}</ref> ಪುರಾತತ್ತ್ವ ಶಾಸ್ತ್ರದ ಅಧ್ಯಯನಗಳು ಈ ಪ್ರದೇಶದಾದ್ಯಂತ [[ಮಧ್ಯಶಿಲಾಯುಗ]], ನವಶಿಲಾಯುಗ ಮತ್ತು [[ಮೆಗಾಲಿಥಿಕ್]] ತಾಣಗಳನ್ನು ಗುರುತಿಸಿವೆ.<ref name="AroraSingh116">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=116}}</ref> ಈ ಆವಿಷ್ಕಾರಗಳು ಆರಂಭಿಕ ಕೇರಳ ಸಮಾಜ ಮತ್ತು ಸಂಸ್ಕೃತಿಯ ಅಭಿವೃದ್ಧಿಯು [[ಪ್ಯಾಲಿಯೋಲಿಥಿಕ್|ಪ್ಯಾಲಿಯೋಲಿಥಿಕ್ ಯುಗದಲ್ಲಿ]] ಪ್ರಾರಂಭವಾಯಿತು ಮತ್ತು ಮಧ್ಯಶಿಲಾಯುಗ, ನವಶಿಲಾಯುಗ ಮತ್ತು ಮೆಗಾಲಿಥಿಕ್ ಅವಧಿಗಳ ಮೂಲಕ ಮುಂದುವರೆಯಿತು ಎಂದು ಸೂಚಿಸುತ್ತವೆ.<ref name="google">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|pages=118, 123}}</ref> ವಿದೇಶಿ ಸಾಂಸ್ಕೃತಿಕ ಸಂವಹನಗಳು ಸಹ ಈ ಅಭಿವೃದ್ಧಿಯನ್ನು ರೂಪಿಸುವಲ್ಲಿ ಪಾತ್ರವಹಿಸಿವೆ;<ref name="AroraSingh1999">{{cite book|author1=Udai Prakash Arora|author2=A. K. Singh|title=Currents in Indian History, Art, and Archaeology|url=https://books.google.com/books?id=ZFROamyZS7IC&pg=PA122|accessdate=6 October 2012|date=1 January 1999|publisher=Anamika Publishers & Distributors|isbn=978-81-86565-44-5|page=123}}</ref> ಕೆಲವು ಇತಿಹಾಸಕಾರರು ಕೊನೆಯ [[ಕಂಚಿನ ಯುಗ]] ಮತ್ತು ಆರಂಭಿಕ [[ಕಬ್ಬಿಣ ಯುಗ|ಕಬ್ಬಿಣದ ಯುಗ]]ದಲ್ಲಿ [[ಸಿಂಧೂ ಕಣಿವೆ ನಾಗರಿಕತೆ]]ಯೊಂದಿಗೆ ಸಂಭವನೀಯ ಸಂಪರ್ಕಗಳನ್ನು ಸೂಚಿಸುತ್ತಾರೆ.<ref>{{cite news|url=http://www.thehindu.com/news/states/article26324.ece | work=The Hindu | title=Symbols akin to Indus valley culture discovered in Kerala | date=29 September 2009 |accessdate= 12 November 2015}}</ref>
=== ಪ್ರಾಚೀನ ಇತಿಹಾಸ ===
[[File:Silk route copy.jpg|thumb|225px|[[ರೇಷ್ಮೆ ಮಾರ್ಗ]] ನಕ್ಷೆ. ಮಸಾಲೆ ವ್ಯಾಪಾರವು ಜಲಮಾರ್ಗಗಳಲ್ಲಿತ್ತು (ನೀಲಿ).]]
[[ಸುಮೇರ್|ಸುಮೇರಿಯನ್]] ದಾಖಲೆಗಳ ಪ್ರಕಾರ, ಕೇರಳವು ಕನಿಷ್ಠ 3000 BCE ಯಿಂದಲೂ ಪ್ರಮುಖ ಮಸಾಲೆ ರಫ್ತುದಾರನಾಗಿದೆ ಮತ್ತು ಇದು "ಮಸಾಲೆಗಳ ತೋಟ" ಅಥವಾ "ಭಾರತದ ಮಸಾಲೆ ತೋಟ" ಎಂದು ಉಲ್ಲೇಖಿಸಲ್ಪಡುತ್ತದೆ.<ref>{{cite news|url=http://www.thehindu.com/todays-paper/tp-national/tp-kerala/of-kerala-egypt-and-the-spice-link/article5625620.ece | first = Kaavya | last = Pradeep Kumar | work=The Hindu | title=Of Kerala, Egypt, and the Spice link | date=28 January 2014 | accessdate=12 November 2015}}</ref><ref>[https://books.google.com/books?id=gOrvghLklKoC ''Striving for sustainability, environmental stress and democratic initiatives in Kerala''], p. 79; ISBN 81-8069-294-9, Srikumar Chattopadhyay, Richard W. Franke; Year: 2006.</ref><ref name="spiceHindu">{{Cite news |title=Route it through the seas |newspaper=The Hindu |date=December 2016 |url=https://www.thehindu.com/children/ROUTE-it-through-the-seas/article16735515.ece |access-date=2024-01-08 |archive-date=5 March 2022 |archive-url=https://web.archive.org/web/20220305035957/https://www.thehindu.com/children/ROUTE-it-through-the-seas/article16735515.ece |url-status=live |last1=Subramanian |first1=Archana }}</ref> ಈ ಪ್ರದೇಶದ ಮಸಾಲೆಗಳು 3 ಮತ್ತು 2 ನೇ ಸಹಸ್ರಮಾನ BCE ಯಲ್ಲಿ ಮಲಬಾರ್ ಕರಾವಳಿಗೆ ಪ್ರಾಚೀನ [[ಬ್ಯಾಬಿಲೋನಿಯನ್ನರು]], [[ಅಸಿರಿಯನ್ನರು]] ಮತ್ತು [[ಈಜಿಪ್ಟಿನವರು|ಈಜಿಪ್ಟಿನವರನ್ನು]] ಆಕರ್ಷಿಸಿದವು. [[ಅರಬ್ಬರು]] ಮತ್ತು [[ಫೀನಿಷಿಯನ್ನರು]] ಸಹ ಈ ಅವಧಿಯಲ್ಲಿ ಕೇರಳದೊಂದಿಗೆ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಿದರು.<ref name="Menon57">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA57|accessdate=10 October 2012|date=1 January 2007|publisher=DC Books|isbn=978-81-264-1578-6|pages=57–58}}</ref> ಕೇರಳಪುತ್ರದ ಭೂಮಿಯು ಚಕ್ರವರ್ತಿ ಅಶೋಕನ ಕಾಲದಲ್ಲಿ ದಕ್ಷಿಣ ಭಾರತದ ನಾಲ್ಕು ಸ್ವತಂತ್ರ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು, [[ಚೋಳ ಸಾಮ್ರಾಜ್ಯ|ಚೋಳ]], [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಮತ್ತು [[ಸತಿಯಪುತ್ರರು|ಸತಿಯಪುತ್ರ]] ಸಾಮ್ರಾಜ್ಯಗಳ ಜೊತೆಗೆ.<ref name="SmithJackson2008">{{cite book|author1=Vincent A. Smith|author2=A. V. Williams Jackson|title=History of India, in Nine Volumes: Vol. II – From the Sixth Century BCE to the Mohammedan Conquest, Including the Invasion of Alexander the Great|url=https://books.google.com/books?id=bP7DzXQBoM4C&pg=PA166|accessdate=1 August 2012|date=30 November 2008|publisher=Cosimo, Inc.|isbn=978-1-60520-492-5|page=166}}</ref> ವಿದ್ವಾಂಸರು ಸಾಮಾನ್ಯವಾಗಿ ಕೇರಳಪುತ್ರವನ್ನು [[ಚೇರ ಸಾಮ್ರಾಜ್ಯ|ಚೇರರು]] ಎಂದು ಗುರುತಿಸುತ್ತಾರೆ, ಇದು ಕೇರಳದ ಅತ್ಯಂತ ಹಳೆಯ ಪ್ರಮುಖ ರಾಜವಂಶವಾಗಿದೆ.<ref name="The Cambridge Shorter History of India">{{cite book|title=The Cambridge Shorter History of India|url=https://books.google.com/books?id=9_48AAAAIAAJ&pg=PA193|accessdate=10 October 2012|publisher=CUP Archive|page=193|id=GGKEY:2W0QHXZ7K40}}</ref><ref name="Dwivedi1994">{{cite book|author=Bhanwar Lal Dwivedi|title=Evolution of Education Thought in India|url=https://books.google.com/books?id=idERT6Tg4MMC&pg=PA164|accessdate=10 October 2012|date=1 January 1994|publisher=Northern Book Centre|isbn=978-81-7211-059-8|page=164}}</ref> ಈ ದಕ್ಷಿಣ ಪ್ರದೇಶಗಳು ಒಮ್ಮೆ ಸಾಮಾನ್ಯ ಭಾಷೆ ಮತ್ತು ಸಾಂಸ್ಕೃತಿಕ ಚೌಕಟ್ಟನ್ನು ಹಂಚಿಕೊಂಡಿದ್ದವು, ಇತಿಹಾಸದಲ್ಲಿ [[ತಮಿಳಕಂ]] ಎಂದು ಕರೆಯಲ್ಪಡುವ ಪ್ರದೇಶದೊಳಗೆ.<ref>{{Cite book
| last=Kanakasabhai | first=V.
| title=The Tamils Eighteen Hundred Years Ago
| url=https://books.google.com/books?id=VuvshP5_hg8C
| year=1997
| publisher=Asian Educational Services
| isbn=978-81-206-0150-5
| accessdate=16 June 2009}}</ref> ಚೇರರು ಪ್ರಸ್ತುತ ಕೇರಳದ ಹೆಚ್ಚಿನ ಭಾಗವನ್ನು ಆಳಿದರೆ, ಪ್ರದೇಶದ ದಕ್ಷಿಣ ತುದಿಯು [[ಪಾಂಡ್ಯರ]] ನಿಯಂತ್ರಣಕ್ಕೆ ಒಳಪಟ್ಟಿತ್ತು,<ref name="Singh2008">{{cite book|author=Upinder Singh|title=A History of Ancient and Early Medieval India: From the Stone Age to the 12th Century|url=https://books.google.com/books?id=GW5Gx0HSXKUC&pg=PA385|accessdate=10 October 2012|year=2008|publisher=Pearson Education India|isbn=978-81-317-1677-9|page=385}}</ref> ಅವರ ವ್ಯಾಪಾರ ಬಂದರನ್ನು ಪ್ರಾಚೀನ ಪಾಶ್ಚಾತ್ಯ ಮೂಲಗಳಲ್ಲಿ [[ನೆಲ್ಸಿಂಡಾ]] (ಅಥವಾ ನಿಯಾಸಿಂಡಿ) ಎಂದು ಗುರುತಿಸಲಾಗಿದೆ.<ref name="Books.google.co.in">{{Cite book|url=https://books.google.com/books?id=rQipbjusDyQC&dq=nelcynda&pg=PA301 |title=History of ancient geography – Google Books |author=James Oliver Thomson|publisher=Biblo & Tannen Publishers, 1948|accessdate=30 July 2009|isbn=978-0-8196-0143-8|year=1948}}</ref> ನಂತರ, ಈ ಪ್ರದೇಶದ ನಿಯಂತ್ರಣವು ಪಾಂಡ್ಯರು, ಚೇರರು ಮತ್ತು ಚೋಳರ ನಡುವೆ ಪರ್ಯಾಯವಾಗಿತ್ತು. [[ಆಯ್ ಸಾಮ್ರಾಜ್ಯ|ಆಯ್ಸ್]] ಮತ್ತು [[ಎಝಿಮಲ ಸಾಮ್ರಾಜ್ಯ|ಮುಷಿಕರು]] ಪ್ರಾಚೀನ ಕೇರಳದ ಇತರ ಎರಡು ರಾಜವಂಶಗಳಾಗಿದ್ದು, ಕ್ರಮವಾಗಿ ಚೇರ ಪ್ರದೇಶದ ದಕ್ಷಿಣ ಮತ್ತು ಉತ್ತರಕ್ಕೆ ನೆಲೆಗೊಂಡಿದ್ದವು.<ref name="Shashi1996">{{cite book|author=S. S. Shashi|title=Encyclopaedia Indica: India, Pakistan, Bangladesh|url=https://books.google.com/books?id=lwswAQAAIAAJ|accessdate=10 October 2012|year=1996|publisher=Anmol Publications|isbn=978-81-7041-859-7|page=1207}}</ref><ref name="Ramunny1993">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA3|accessdate=10 October 2012|date=1 January 1993|publisher=Northern Book Centre|isbn=978-81-7211-052-9|page=3}}</ref>
ಕೊನೆಯ ಶತಮಾನಗಳ BCE ಯ ಹೊತ್ತಿಗೆ, ಕರಾವಳಿಯು ಗ್ರೀಕ್ ಮತ್ತು ರೋಮನ್ ವ್ಯಾಪಾರಕ್ಕೆ, ವಿಶೇಷವಾಗಿ [[ಕರಿ ಮೆಣಸು|ಕರಿಮೆಣಸಿನಲ್ಲಿ]] ಪ್ರಮುಖ ಕೇಂದ್ರವಾಗಿತ್ತು. ಚೇರರು [[ಪ್ರಾಚೀನ ಚೀನಾ]], [[ಪಶ್ಚಿಮ ಏಷ್ಯಾ]], ಈಜಿಪ್ಟ್, ಗ್ರೀಸ್ ಮತ್ತು [[ರೋಮನ್ ಸಾಮ್ರಾಜ್ಯ]]ದೊಂದಿಗೆ ವಾಣಿಜ್ಯ ಸಂಪರ್ಕಗಳನ್ನು ಹೊಂದಿದ್ದರು. ವಿದೇಶಿ ವ್ಯಾಪಾರ ದಾಖಲೆಗಳಲ್ಲಿ, ಈ ಪ್ರದೇಶವನ್ನು ಮೇಲ್ ಅಥವಾ [[ಮಲಬಾರ್ ಕರಾವಳಿ|ಮಲಬಾರ್]] ಎಂದು ಕರೆಯಲಾಗುತ್ತಿತ್ತು.<ref>{{cite web | url=http://www.siamese-heritage.org/jsspdf/1961/JSS_054_1c_Minattur_MalayaWhatsInAName.pdf | title=Malaya: What's in the name | publisher=siamese-heritage.org | accessdate=7 August 2012 | author=Joseph Minattur | page=1}}</ref> ಆ ಕಾಲದ ಪ್ರಮುಖ ಬಂದರುಗಳು [[ಮುಝಿರಿಸ್]], ಬೆರ್ಕರೈ ಮತ್ತು ನೆಲ್ಸಿಂಡಾ.<ref name="Kusuman">{{cite book |author=K. K. Kusuman |title=A History of Trade & Commerce in Travancore |publisher=Mittal Publications |year=1987 |isbn=978-81-7099-026-0 |url=https://books.google.com/books?id=qbNuyHswr1cC |pages=1–2 |accessdate=30 May 2015}}</ref> ರೋಮ್ನ ವಾರ್ಷಿಕ ವ್ಯಾಪಾರದ ಮೌಲ್ಯವನ್ನು 50 ಮಿಲಿಯನ್ [[ಸೆಸ್ಟರ್ಸಸ್]] ಎಂದು ಅಂದಾಜಿಸಲಾಗಿದೆ.<ref>According to [[Pliny the Elder]], goods from India were sold in the Empire at 100 times their original purchase price. See [https://web.archive.org/web/20131106031753/http://www.cartage.org.lb/en/themes/BookLibrary/books/bibliographie/P/Plinyelder/elder/pliny-india.html]</ref> ಸಮಕಾಲೀನ [[ಸಂಗಮ್ ಸಾಹಿತ್ಯ]]ವು ಮೆಣಸಿನ ಬದಲಿಗೆ ಚಿನ್ನದಿಂದ ತುಂಬಿದ ರೋಮನ್ ಹಡಗುಗಳು ಮುಝಿರಿಸ್ಗೆ ಆಗಮಿಸುವುದನ್ನು ವಿವರಿಸುತ್ತದೆ. ಕೇರಳವನ್ನು ತಲುಪಲು ಮಾನ್ಸೂನ್ ಗಾಳಿಯನ್ನು ನ್ಯಾವಿಗೇಟ್ ಮಾಡಿದ ಮೊದಲ ಪಶ್ಚಿಮ ವ್ಯಾಪಾರಿಗಳಲ್ಲಿ ಒಬ್ಬರು [[ಸೈಜಿಕಸ್ನ ಯುಡೋಕ್ಸಸ್]], ಅವರು ಈಜಿಪ್ಟ್ನ [[ಹೆಲ್ಲೆನಿಸ್ಟಿಕ್ ನಾಗರಿಕತೆ|ಹೆಲ್ಲೆನಿಸ್ಟಿಕ್]] [[ಟಾಲಮಿಕ್ ರಾಜವಂಶ]]ದ ರಾಜ [[ಟಾಲಮಿ VIII ಫಿಸ್ಕಾನ್|ಟಾಲಮಿ VIII]] ರ ಆಶ್ರಯದಲ್ಲಿ ಸುಮಾರು 118 ಅಥವಾ 166 BCE ಯಲ್ಲಿ ಪ್ರಯಾಣ ಮಾಡಿದರು. ಈ ಪ್ರದೇಶದ ಬಂದರು ನಗರಗಳಲ್ಲಿನ ರೋಮನ್ ಸ್ಥಾಪನೆಗಳು{{mdash}}[[ಆಗಸ್ಟಸ್]] ದೇವಾಲಯ ಮತ್ತು ರೋಮನ್ ಸೈನಿಕರಿಗೆ ಬ್ಯಾರಕ್ಗಳು ಸೇರಿದಂತೆ{{mdash}}ರೋಮನ್ ''[[ಕರ್ಸಸ್ ಪಬ್ಲಿಕಸ್]]'' ನ ಏಕೈಕ ಉಳಿದಿರುವ ನಕ್ಷೆಯಾದ ''[[ಟ್ಯಾಬುಲಾ ಪ್ಯೂಟಿಂಗೇರಿಯಾನಾ]]'' ದಲ್ಲಿ ದಾಖಲಿಸಲಾಗಿದೆ.<ref>{{cite book|author=Abraham Eraly|title=The First Spring: The Golden Age of India|url=https://books.google.com/books?id=te1sqTzTxD8C&pg=PA246|accessdate=7 August 2012|date=1 December 2011|publisher=Penguin Books India|isbn=978-0-670-08478-4|pages=246–}}</ref><ref name="Iyengar_2001">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |accessdate=29 December 2008}}</ref>
ಪಶ್ಚಿಮ ಏಷ್ಯಾ ಮತ್ತು ದಕ್ಷಿಣ ಯುರೋಪಿನ ವ್ಯಾಪಾರಿಗಳು ಕೇರಳದಲ್ಲಿ ಕರಾವಳಿ ಠಾಣ್ಯಗಳು ಮತ್ತು ವಸಾಹತುಗಳನ್ನು ಸ್ಥಾಪಿಸಿದರು.<ref name="google2">{{cite book |author=Iyengar PTS |year=2001 |title=History Of The Tamils: From the Earliest Times to 600 A.D. |publisher=Asian Educational Services |isbn=81-206-0145-9 |url=https://books.google.com/books?id=ERq-OCn2cloC |pages=192–195 |accessdate=29 December 2008}}</ref> ಕೇರಳದೊಂದಿಗಿನ ಯಹೂದಿ ಸಂಪರ್ಕವು 573 BCE ಯ ಹಿಂದಿನದು ಎಂದು ನಂಬಲಾಗಿದೆ.<ref name="Orpa Slapak">[https://books.google.co.in/books?id=qhKGPprbQaYC&printsec=frontcover&dq=isbn:9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA#v=onepage&q=two%20millennia&f=true ''The Jews of India: A Story of Three Communities''] by Orpa Slapak. The Israel Museum, Jerusalem. 2003. p. 27. ISBN 965-278-179-7.</ref><ref name="Hillel1832">{{cite book|author=David D'Beth Hillel|title=The Travels of Rabbi David D'Beth Hillel: From Jerusalem, Through Arabia, Koordistan, Part of Persia, and India to Madras|url=https://books.google.com/books?id=j5NeAAAAcAAJ&pg=PR9|year=1832|publisher=author|page=135}}</ref><ref>{{cite book|title=The Jews in India and the Far East|url=https://books.google.com/books?id=w_v-nQEACAAJ|year=1976|publisher=Greenwood Press|pages=24–26 | isbn=978-0-8371-2615-9 }}</ref> ಅರಬ್ ವ್ಯಾಪಾರಿಗಳು ಕನಿಷ್ಠ 4 ನೇ ಶತಮಾನ BCE ಯಿಂದಲೂ ಕೇರಳದೊಂದಿಗೆ ಸಂಪರ್ಕ ಹೊಂದಿದ್ದರು; [[ಹೆರೊಡೋಟಸ್]] (484–413 BCE) ಅರಬ್ಬರು ಕೇರಳದಿಂದ ತಂದ ಸರಕುಗಳನ್ನು ಈಡನ್ನಲ್ಲಿರುವ ಯಹೂದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಗಮನಿಸಿದರು.<ref name="Kusuman"/> ಈ ಅರಬ್ ವ್ಯಾಪಾರಿಗಳು ಸ್ಥಳೀಯ ಸಮುದಾಯಗಳೊಂದಿಗೆ ಮದುವೆಯಾದರು, ಇದು ಮುಸ್ಲಿಂ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಸಮುದಾಯದ ರಚನೆಗೆ ಕಾರಣವಾಯಿತು.<ref name="Dialogue">{{cite book |author=Rolland E. Miller |title=Hindu-Christian Dialogue: Perspectives and Encounters |publisher=Motilal Banarsidass Publications |year=1993 |isbn=978-81-208-1158-4 |url=https://books.google.com/books?id=6eHgNyNimoAC |page=50}}</ref> 4 ನೇ ಶತಮಾನ CE ಯಲ್ಲಿ, ಕೆಲವು ಕ್ರೈಸ್ತರು [[ಪರ್ಷಿಯಾ]]ದಿಂದ ವಲಸೆ ಬಂದರು ಮತ್ತು ಆರಂಭಿಕ [[ಸೇಂಟ್ ತಾಮಸ್ ಕ್ರೈಸ್ತರು|ಸಿರಿಯನ್ ಕ್ರಿಶ್ಚಿಯನ್]] ಸಮುದಾಯಕ್ಕೆ ಸೇರ್ಪಡೆಗೊಂಡರು, ಇದು 1 ನೇ ಶತಮಾನ CE ಯಲ್ಲಿ [[ತಾಮಸ್ ಪ್ರೇರಿತ]]ನ ಪ್ರಚಾರ ಚಟುವಟಿಕೆಗಳಿಂದ ತನ್ನ ಮೂಲವನ್ನು ಪತ್ತೆಹಚ್ಚುತ್ತದೆ.<ref name="Erwin Fahlbusch">[https://books.google.co.in/books?id=lZUBZlth2qgC&printsec=frontcover&dq=isbn:9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA#v=onepage&q=Muziris&f=true ''The Encyclopedia of Christianity, Volume 5''] by Erwin Fahlbusch. Wm. B. Eerdmans Publishing - 2008. p. 285. ISBN 978-0-8028-2417-2.</ref><ref>{{cite book |author=Geoffrey Wainwright |title=The Oxford History Of Christian Worship |publisher=Oxford University Press |year=2006 |isbn=978-0-19-513886-3 |url=https://books.google.com/books?id=h5VQUdZhx1gC |page=666 |accessdate=30 May 2015}}</ref> ಮಾಪ್ಪಿಲ ಎಂಬ ಪದವು{{mdash}}ಮೂಲತಃ ಗೌರವಾನ್ವಿತ ವಿದೇಶಿ ಸಂದರ್ಶಕರಿಗೆ ಅನ್ವಯಿಸುವ ಗೌರವಾರ್ಥ ಪದವಾಗಿದ್ದು{{mdash}}ನಂತರ ಯಹೂದಿ, ಸಿರಿಯನ್ ಕ್ರಿಶ್ಚಿಯನ್ ಮತ್ತು ಮುಸ್ಲಿಂ ವಲಸಿಗರ ವಂಶಸ್ಥರೊಂದಿಗೆ ಸಂಬಂಧ ಹೊಂದಿತು, ಇದು ಕ್ರಮವಾಗಿ [[ಯೆಹೂದ ಮಾಪ್ಪಿಲ]]ಗಳು, [[ಸೇಂಟ್ ತಾಮಸ್ ಕ್ರೈಸ್ತರು|ನಸ್ರಾನಿ ಮಾಪ್ಪಿಲ]]ಗಳು ಮತ್ತು [[ಮಲಬಾರ್ ಮುಸ್ಲಿಮರು|ಮುಸ್ಲಿಂ ಮಾಪ್ಪಿಲ]]ಗಳ ಪದಗಳಿಗೆ ಕಾರಣವಾಯಿತು.<ref name="BMalieckal">* Bindu Malieckal (2005) Muslims, Matriliny, and A Midsummer Night's Dream: European Encounters with the Mappilas of Malabar, India; The Muslim World Volume 95 Issue 2</ref><ref>{{cite book |author=Milton J, Skeat WW, Pollard AW, Brown L |title=The Indian Christians of St Thomas |publisher=Cambridge University Press |date=31 August 1982 |isbn=0-521-21258-8 |page=171}}</ref> ಈ ಸಮುದಾಯಗಳ ಸಂಪ್ರದಾಯಗಳ ಪ್ರಕಾರ, ಭಾರತದಲ್ಲಿನ ಕೆಲವು ಆರಂಭಿಕ ಧಾರ್ಮಿಕ ಸ್ಥಾಪನೆಗಳನ್ನು ಕೇರಳದಲ್ಲಿ ನಿರ್ಮಿಸಲಾಯಿತು.<ref name="Dialogue"/> ಇವುಗಳಲ್ಲಿ [[ಸೇಂಟ್ ತಾಮಸ್ ಕ್ರಿಶ್ಚಿಯನ್ ಚರ್ಚುಗಳು]],<ref>{{cite book |author=Susan Bayly |title=Saints, Goddesses and Kings |publisher=Cambridge University Press |year=2004 |isbn=978-0-521-89103-5 |url=https://books.google.com/books?id=Fxqtx8SflEsC |page=40 |accessdate=30 May 2015}}</ref> [[ಚೇರಮನ್ ಜುಮಾ ಮಸೀದಿ]] (629 CE ಯಲ್ಲಿ ಸ್ಥಾಪಿಸಲಾಯಿತು), ಭಾರತದ ಮೊದಲ ಮಸೀದಿ,<ref>{{cite book |author=Jonathan Goldstein |title=The Jews of China |publisher=M.E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123 |accessdate=30 May 2015}}</ref> ಮತ್ತು [[ಪರದೇಶಿ ಸಿನಾಗೋಗ್]] (1568 CE ಯಲ್ಲಿ ನಿರ್ಮಿಸಲಾಯಿತು), [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಕ್ರಿಯ ಸಿನಾಗೋಗ್ ಸೇರಿವೆ.<ref>{{cite book |author=Nathan Katz |title=Who Are the Jews of India? |publisher=University of California Press |year=2000 |isbn=978-0-520-21323-4 |url=https://books.google.com/books?id=ZWX6pF2PTJwC |page=245 |accessdate=30 May 2015}}</ref>
=== ಮಧ್ಯಕಾಲೀನ ಅವಧಿ ===
[[File:3rd Tiruvalla Copper Plate.jpg|thumb|[[ಸೇಂಟ್ ತಾಮಸ್ ಕ್ರೈಸ್ತರು|ಸೇಂಟ್ ತಾಮಸ್ ಕ್ರೈಸ್ತರಿಗೆ]] ನೀಡಲಾದ [[ಥರಿಸಪಲ್ಲಿ ತಟ್ಟೆಗಳು]] ವ್ಯಾಪಾರಿ ಸಂಘಗಳು ಮತ್ತು ವ್ಯಾಪಾರ ನಿಗಮಗಳು ಕುಲಶೇಖರ ಅವಧಿಯಲ್ಲಿ ಆರ್ಥಿಕತೆ ಮತ್ತು ಸಾಮಾಜಿಕ ಜೀವನದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದವು ಎಂದು ಸಾಕ್ಷ್ಯ ನೀಡುತ್ತವೆ.]]
ಎರಡನೇ ಚೇರ ಸಾಮ್ರಾಜ್ಯ (c. 800–1102), ಇದನ್ನು [[ಮಹೋದಯಪುರಂ]]ನ ಕುಲಶೇಖರ ರಾಜವಂಶ ಎಂದೂ ಕರೆಯುತ್ತಾರೆ, ಇದನ್ನು [[ಕುಲಶೇಖರ ಆಳ್ವಾರ್|ಕುಲಶೇಖರ ವರ್ಮನ್]] ಸ್ಥಾಪಿಸಿದರು ಮತ್ತು ಪ್ರಸ್ತುತ ಕೇರಳದ ಹೆಚ್ಚಿನ ಭಾಗ ಮತ್ತು ಆಧುನಿಕ ತಮಿಳುನಾಡಿನ ಭಾಗಗಳನ್ನು ಒಳಗೊಂಡ ಪ್ರದೇಶವನ್ನು ಆಳಿದರು. ಕುಲಶೇಖರ ಅವಧಿಯ ಆರಂಭಿಕ ಹಂತದಲ್ಲಿ, ದಕ್ಷಿಣ ಪ್ರದೇಶವು{{mdash}}[[ನಾಗರ್ಕೋವಿಲ್]] ನಿಂದ [[ತಿರುವಲ್ಲ]] ವರೆಗೆ{{mdash}}[[ಆಯ್ಸ್ (ಕೇರಳ)|ಆಯ್]] ರಾಜವಂಶದ ನಿಯಂತ್ರಣದಲ್ಲಿತ್ತು. 10 ನೇ ಶತಮಾನದ ವೇಳೆಗೆ, ಆಯ್ಸ್ ತಮ್ಮ ಶಕ್ತಿಯನ್ನು ಕಳೆದುಕೊಂಡರು ಮತ್ತು ಈ ಪ್ರದೇಶವನ್ನು ಕುಲಶೇಖರ ಸಾಮ್ರಾಜ್ಯಕ್ಕೆ ಸೇರಿಸಲಾಯಿತು.<ref name="Balachand">{{cite book|author=K. Balachandran Nayar|title=In quest of Kerala|url=https://books.google.com/books?id=EXIeAAAAMAAJ|accessdate=8 August 2012|year=1974|publisher=Accent Publications|page=86}}</ref><ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|page=97}}</ref> ಕುಲಶೇಖರ ಆಳ್ವಿಕೆಯಲ್ಲಿ, ಕೇರಳವು ಕಲೆ, ಸಾಹಿತ್ಯ, ವ್ಯಾಪಾರ ಮತ್ತು ಹಿಂದೂ ಧರ್ಮದಲ್ಲಿ [[ಭಕ್ತಿ ಚಳುವಳಿ]] ಯಲ್ಲಿ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟ ಒಂದು ಅಭಿವೃದ್ಧಿ ಹೊಂದಿದ ಅವಧಿಯನ್ನು ಅನುಭವಿಸಿತು.<ref name="Sreedhar123">{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=8 August 2012|date=1 January 2007|publisher=DC Books|isbn=978-81-264-1578-6|pages=123–131}}</ref> ಈ ಸಮಯದಲ್ಲಿ ವಿಶಿಷ್ಟವಾದ ಕೇರಳೀಯ ಗುರುತು ಹೊರಹೊಮ್ಮಲು ಪ್ರಾರಂಭಿಸಿತು, ವಿಶೇಷವಾಗಿ ಭಾಷಾ ವ್ಯತ್ಯಾಸದ ಮೂಲಕ ತಮಿಳು ಸಂಸ್ಕೃತಿಯಿಂದ ಪ್ರತ್ಯೇಕವಾಯಿತು.<ref name="AsherKumari1997">{{cite book|author1=R. E. Asher|author2=T. C. Kumari|title=Malayalam|url=https://books.google.com/books?id=uFQG2DCaIsIC|year=1997|publisher=Psychology Press|isbn=978-0-415-02242-2|pages=24–27}}</ref> ಆಡಳಿತ ಉದ್ದೇಶಗಳಿಗಾಗಿ, ಸಾಮ್ರಾಜ್ಯವನ್ನು [[ನಾಡುವಾಜಿ]]ಗಳು ಎಂದು ಕರೆಯಲ್ಪಡುವ ಸ್ಥಳೀಯ ಮುಖಂಡರು ಆಳುವ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ಪ್ರಾಂತ್ಯವನ್ನು ಮತ್ತಷ್ಟು ''ದೇಶಂ'' ಗಳಾಗಿ ವಿಂಗಡಿಸಲಾಗಿತ್ತು, ಅವುಗಳನ್ನು ದೇಶವಾಝಿಗಳು ಮೇಲ್ವಿಚಾರಣೆ ಮಾಡುತ್ತಿದ್ದರು.<ref name="Sreedhar123"/>
11 ನೇ ಶತಮಾನದಲ್ಲಿ ಚೇರ-ಚೋಳ ಸಂಘರ್ಷಗಳ ಸರಣಿಯು ಕೇರಳದ ಬಂದರುಗಳ ಮೂಲಕ ವಿದೇಶಿ ವ್ಯಾಪಾರಕ್ಕೆ ಅಡ್ಡಿಯಾಯಿತು. ಈ ಅವಧಿಯಲ್ಲಿ, ಹಿಂದೂ ಧರ್ಮದೊಂದಿಗೆ ಹಿಂದೆ ಸಹಬಾಳ್ವೆ ನಡೆಸಿದ್ದ [[ಬೌದ್ಧ]] ಮತ್ತು [[ಜೈನ]] ಧರ್ಮಗಳು ಕ್ಷೀಣಿಸಿದವು ಮತ್ತು ಅಂತಿಮವಾಗಿ ಈ ಪ್ರದೇಶದಿಂದ ಕಣ್ಮರೆಯಾಯಿತು.<ref>{{cite web |url=http://www.kerala.cc/keralahistory/index34.htm |title=The Buddhist History of Kerala |publisher=Kerala.cc |accessdate=25 September 2013 |archive-date=4 March 2016 |archive-url=https://web.archive.org/web/20160304215933/http://www.kerala.cc/keralahistory/index34.htm |url-status=dead }}</ref> ಸಾಮಾಜಿಕ ರಚನೆಗಳು ಹೆಚ್ಚು ಬಿಗಿಯಾದವು, ಮತ್ತು [[ಕೇರಳದಲ್ಲಿ ಜಾತಿ ವ್ಯವಸ್ಥೆ|ಜಾತಿ ವಿಭಾಗಗಳು]] ಆಳವಾದವು.<ref>{{cite book|author=A Sreedhara Menon|title=A Survey Of Kerala History|url=https://books.google.com/books?id=FVsw35oEBv4C&pg=PA166|accessdate=9 August 2012|date=1 January 2007|publisher=DC Books|isbn=978-81-264-1578-6|page=138}}</ref> ಕುಲಶೇಖರ ರಾಜವಂಶವು ಅಂತಿಮವಾಗಿ 1102 CE ಯಲ್ಲಿ [[ನಂತರದ ಪಾಂಡ್ಯರು]] ಮತ್ತು [[ನಂತರದ ಚೋಳರು]] ನ ಸಂಯೋಜಿತ ದಾಳಿಯ ನಂತರ ಕುಸಿಯಿತು.<ref name="Balachand"/> 14 ನೇ ಶತಮಾನದಲ್ಲಿ, ದಕ್ಷಿಣ [[ವೇಣಾಡ್|ವೇಣಾಡ್ ಸಾಮ್ರಾಜ್ಯ]]ದ ರವಿ ವರ್ಮ ಕುಲಶೇಖರ (r. 1299–1314) ದಕ್ಷಿಣ ಭಾರತದ ಹೆಚ್ಚಿನ ಭಾಗದಲ್ಲಿ ಸಂಕ್ಷಿಪ್ತವಾಗಿ ಅಲ್ಪಕಾಲಿಕ ಪ್ರಾಮುಖ್ಯತೆಯನ್ನು ಸ್ಥಾಪಿಸಿದರು. ಅವರ ಮರಣದ ನಂತರ, ಮತ್ತು ಬಲವಾದ ಕೇಂದ್ರ ಅಧಿಕಾರದ ಅನುಪಸ್ಥಿತಿಯಲ್ಲಿ, ಈ ಪ್ರದೇಶವು ಮೂವತ್ತು ಸಣ್ಣ, ಆಗಾಗ್ಗೆ ಯುದ್ಧ ಮಾಡುವ ಸಂಸ್ಥಾನಗಳಾಗಿ ವಿಭಜನೆಯಾಯಿತು. ಅತ್ಯಂತ ಶಕ್ತಿಶಾಲಿಗಳೆಂದರೆ ಉತ್ತರದಲ್ಲಿ [[ಸಮೂತಿರಿ]] (ಜಾಮೋರಿನ್) ಸಾಮ್ರಾಜ್ಯ, ದಕ್ಷಿಣದಲ್ಲಿ ವೇಣಾಡ್ ಮತ್ತು ಮಧ್ಯ ಪ್ರದೇಶದಲ್ಲಿ ಕೊಚ್ಚಿ. 18 ನೇ ಶತಮಾನದಲ್ಲಿ, ತಿರುವಾಂಕೂರಿನ ರಾಜ [[ಅನಿಝಂ ತಿರುನಾಳ್ ಮಾರ್ತಾಂಡ ವರ್ಮ]] ಅವರು ಸೈನ್ಯದ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಿದರು ಮತ್ತು ಉತ್ತರ ಕೇರಳದವರೆಗೆ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡರು, ಈ ಪ್ರದೇಶದಲ್ಲಿ ತಿರುವಾಂಕೂರನ್ನು ಪ್ರಬಲ ಶಕ್ತಿಯಾಗಿ ಸ್ಥಾಪಿಸಿದರು. ಕೊಚ್ಚಿ ಆಡಳಿತಗಾರನು ಶಾಂತಿಗಾಗಿ ಮೊಕದ್ದಮೆ ಹೂಡಿದನು, ಮತ್ತು ಮಲಬಾರ್ ಪ್ರದೇಶವು ಅಂತಿಮವಾಗಿ [[1947 ರಲ್ಲಿ ಭಾರತದ ಸ್ವಾತಂತ್ರ್ಯ|ಭಾರತದ ಸ್ವಾತಂತ್ರ್ಯ]] ದವರೆಗೆ ನೇರ [[ಬ್ರಿಟಿಷ್ ಆಳ್ವಿಕೆ|ಬ್ರಿಟಿಷ್ ಆಳ್ವಿಕೆ]] ಯ ಅಡಿಯಲ್ಲಿ ಬಂದಿತು.<ref>{{cite book|author=Educational Britannica Educational|title=The Geography of India: Sacred and Historic Places|url=https://books.google.com/books?id=xPUvqtdfjyAC&pg=PA311|accessdate=15 September 2012|date=15 August 2010|publisher=The Rosen Publishing Group|isbn=978-1-61530-202-4|page=311}}</ref><ref>{{cite book |last1=Boland-Crewe |first1=Tara |last2=Lea |first2=David |title=The Territories and States of India |date=2003 |doi=10.4324/9780203402900 |isbn=978-1-135-35625-5 |pages=144–146 }}</ref>
=== ವಸಾಹತುಶಾಹಿ ಆಳ್ವಿಕೆ ===
[[File:Caminho maritimo para a India.png|thumb|ಕೇರಳವನ್ನು ತಲುಪಲು [[ವಾಸ್ಕೋ ಡ ಗಾಮಾ]] ತೆಗೆದುಕೊಂಡ ಮಾರ್ಗ (ಕಪ್ಪು ಬಣ್ಣದಲ್ಲಿ ಸೂಚಿಸಲಾಗಿದೆ)]]
[[ಮಧ್ಯಯುಗ|ಉಚ್ಚ]] ಮತ್ತು [[ಕೊನೆಯ ಮಧ್ಯಯುಗ]]ದಲ್ಲಿ, ಅರಬ್ ವ್ಯಾಪಾರಿಗಳು [[ಹಿಂದೂ ಮಹಾಸಾಗರ]]ದಲ್ಲಿ ಮಸಾಲೆ ವ್ಯಾಪಾರದ ಮೇಲೆ ಸಮುದ್ರ ಏಕಸ್ವಾಮ್ಯವನ್ನು ಹೊಂದಿದ್ದರು. ಯುರೋಪಿಯನ್ [[ಭೌಗೋಳಿಕ ಅನ್ವೇಷಣೆಗಳ ಯುಗ]] ದಲ್ಲಿ ಮಸಾಲೆ ವ್ಯಾಪಾರವು{{mdash}}ವಿಶೇಷವಾಗಿ ಕರಿಮೆಣಸಿನಲ್ಲಿ{{mdash}}ಯುರೋಪಿಯನ್ ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾದಾಗ ಈ ಪ್ರಾಬಲ್ಯವನ್ನು ಸವಾಲು ಮಾಡಲಾಯಿತು.<ref>{{cite book | last = Corn | first = Charles |author2=Glasserman, Debbie | title = The Scents of Eden: A History of the Spice Trade | publisher = Kodansha America |date=March 1999 | isbn = 1-56836-249-8}}</ref> 15 ನೇ ಶತಮಾನದ ವೇಳೆಗೆ, ಪೋರ್ಚುಗೀಸರು ಪೂರ್ವ ಸಮುದ್ರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಾರಂಭಿಸಿದರು, ಇದು 1498 ರಲ್ಲಿ [[ಕೋಝಿಕೋಡ್]] (ಕ್ಯಾಲಿಕಟ್) ಬಳಿಯ [[ಕಪ್ಪಾಡ್]] ನಲ್ಲಿ [[ವಾಸ್ಕೋ ಡ ಗಾಮಾ]] ಆಗಮನದೊಂದಿಗೆ ಕೊನೆಗೊಂಡಿತು.<ref>{{Cite book |author=Ravindran PN |title=Black Pepper: Piper Nigrum |publisher=CRC Press |year=2000 |accessdate=11 November 2007 |url=https://books.google.com/books?id=VaGCgSLrdr4C |page=3 |isbn=978-90-5702-453-5}}</ref><ref name="Curtin1984">{{cite book|author=Philip D. Curtin|title=Cross-Cultural Trade in World History|url=https://books.google.com/books?id=R4IiYFhliv4C|date=25 May 1984|publisher=Cambridge University Press|isbn=978-0-521-26931-5|page=144}}</ref> ಕೋಝಿಕೋಡ್ನ [[ಜಾಮೋರಿನ್]] ಪೋರ್ಚುಗೀಸರಿಗೆ ತನ್ನ ಪ್ರಜೆಗಳೊಂದಿಗೆ ವ್ಯಾಪಾರ ಮಾಡಲು ಅನುಮತಿ ನೀಡಿದರು, ಇದು ಸಮೃದ್ಧ ಪೋರ್ಚುಗೀಸ್ [[ಕಾರ್ಖಾನೆ (ವ್ಯಾಪಾರ ಠಾಣ್ಯ)|ಕಾರ್ಖಾನೆ]] ಮತ್ತು ಕೋಟೆಯ ಸ್ಥಾಪನೆಗೆ ಕಾರಣವಾಯಿತು.<ref name="Mehta2005" />
ಆದಾಗ್ಯೂ, ಪೋರ್ಚುಗೀಸರು ಜಾಮೋರಿನ್ ರಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಬ್ ವ್ಯಾಪಾರಿಗಳ ಮೇಲೆ ದಾಳಿ ಮಾಡಿದಾಗ ಉದ್ವಿಗ್ನತೆಗಳು ಹುಟ್ಟಿಕೊಂಡವು, ಇದು ಸಂಬಂಧಗಳಲ್ಲಿ ಕುಸಿತಕ್ಕೆ ಕಾರಣವಾಯಿತು. ಜಾಮೋರಿನ್ ಮತ್ತು ಕೊಚ್ಚಿ ರಾಜನ ನಡುವಿನ ಪೈಪೋಟಿಯಿಂದ ಪ್ರಯೋಜನ ಪಡೆಯುವ ಅವಕಾಶವನ್ನು ಬಳಸಿಕೊಂಡು, ಪೋರ್ಚುಗೀಸರು ಕೊಚ್ಚಿಯೊಂದಿಗೆ ಮೈತ್ರಿ ಮಾಡಿಕೊಂಡರು. [[ಫ್ರಾನ್ಸಿಸ್ಕೋ ಡಿ ಅಲ್ಮೇಡಾ]] 1505 ರಲ್ಲಿ ಪೋರ್ಚುಗೀಸ್ ಭಾರತದ ವೈಸರಾಯ್ ಆಗಿ ನೇಮಕಗೊಂಡಾಗ, ಅವರು ತಮ್ಮ ಪ್ರಧಾನ ಕಛೇರಿಯನ್ನು ಕೋಝಿಕೋಡ್ನಲ್ಲಿ ಅಲ್ಲ, ಬದಲಿಗೆ [[ಫೋರ್ಟ್ ಕೊಚ್ಚಿ]] ([[ಫೋರ್ಟ್ ಇಮ್ಯಾನುಯೆಲ್]]) ಯಲ್ಲಿ ಸ್ಥಾಪಿಸಿದರು. ಅವರ ಆಡಳಿತದ ಅಡಿಯಲ್ಲಿ, ಪೋರ್ಚುಗೀಸರು ಮಲಬಾರ್ ಕರಾವಳಿಯಲ್ಲಿ ಹಲವಾರು ಕೋಟೆಗಳನ್ನು ನಿರ್ಮಿಸುವ ಮೂಲಕ ತಮ್ಮ ಪ್ರಭಾವವನ್ನು ಬಲಪಡಿಸಿದರು.<ref name="Mehta2005">{{cite book|author=J. L. Mehta|title=Advanced Study in the History of Modern India: Volume One: 1707–1813|url=https://books.google.com/books?id=d1wUgKKzawoC&pg=PA324|accessdate=9 August 2012|date=1 January 2005|publisher=Sterling Publishers Pvt. Ltd|isbn=978-1-932705-54-6|pages=324–327}}</ref> ಈ ಮುನ್ನಡೆಗಳ ಹೊರತಾಗಿಯೂ, ಪೋರ್ಚುಗೀಸರು ಜಾಮೋರಿನ್ನ ನೌಕಾ ಪಡೆಗಳಿಂದ ಗಮನಾರ್ಹ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ ಕೋಝಿಕೋಡ್ನ ಅಡ್ಮಿರಲ್ಗಳಾದ [[ಕುಂಜಲಿ ಮರಕ್ಕರ್]]ರ ಆಜ್ಞೆಯಡಿಯಲ್ಲಿ, ಅವರು ಪರಿಣಾಮಕಾರಿ ಸಮುದ್ರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರು. ಈ ಪ್ರತಿರೋಧವು ಅಂತಿಮವಾಗಿ ಪೋರ್ಚುಗೀಸರನ್ನು ಒಪ್ಪಂದಕ್ಕೆ ಒತ್ತಾಯಿಸಿತು. 1571 ರಲ್ಲಿ, ಜಾಮೋರಿನ್ ಪಡೆಗಳು [[ತಾನೂರ್ ಸಾಮ್ರಾಜ್ಯ#ಚಾಲಿಯಮ್ ಕೋಟೆಯ ಕದನಗಳು|ಚಾಲಿಯಮ್ ಕೋಟೆಯ ಕದನದಲ್ಲಿ]] ಪೋರ್ಚುಗೀಸರನ್ನು ಸೋಲಿಸಿದವು, ಇದು ಈ ಪ್ರದೇಶದಲ್ಲಿ ಪೋರ್ಚುಗೀಸ್ ಮಹತ್ವಾಕಾಂಕ್ಷೆಗಳಿಗೆ ದೊಡ್ಡ ಹಿನ್ನಡೆಯನ್ನು ಗುರುತಿಸಿತು.<ref>{{cite book|author=K. K. N. Kurup|title=India's Naval Traditions: The Role of Kunhali Marakkars|url=https://books.google.com/books?id=HKmXcBCKEcAC&pg=PA51|accessdate=9 August 2012|date=1 January 1997|publisher=Northern Book Centre|isbn=978-81-7211-083-3|pages=37–38}}</ref>
ಪೋರ್ಚುಗೀಸರು ಅಂತಿಮವಾಗಿ [[ಡಚ್ ಈಸ್ಟ್ ಇಂಡಿಯಾ ಕಂಪನಿ]]ಯಿಂದ ಸ್ಥಳಾಂತರಿಸಲ್ಪಟ್ಟರು, ಇದು ಈ ಪ್ರದೇಶದಲ್ಲಿ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲು ಕೋಝಿಕೋಡ್ ಮತ್ತು ಕೊಚ್ಚಿ ನಡುವಿನ ನಡೆಯುತ್ತಿರುವ ಸಂಘರ್ಷಗಳ ಲಾಭವನ್ನು ಪಡೆಯಿತು.<ref name="South Asia 2006">{{cite book|title=South Asia 2006|url=https://books.google.com/books?id=YG8bAQAAMAAJ|accessdate=18 November 2012|date=1 December 2005|publisher=Taylor & Francis|page=289}}</ref> ಆದಾಗ್ಯೂ, ಡಚ್ಚರು ಸಹ ಸೈನ್ಯದ ಪ್ರತಿರೋಧವನ್ನು ಎದುರಿಸಿದರು, ವಿಶೇಷವಾಗಿ [[ತಿರುವಾಂಕೂರು ರಾಜಮನೆತನ]]ದ [[ಮಾರ್ತಾಂಡ ವರ್ಮ]]ರಿಂದ. 1741 ರಲ್ಲಿ [[ಕೊಲಾಚೆಲ್ ಕದನ]]ದಲ್ಲಿ ನಿರ್ಣಾಯಕ ಡಚ್ ಸೋಲಿನ ನಂತರ,<ref name="google3">{{cite book|author=Murkot Ramunny|title=Ezhimala: The Abode of the Naval Academy|url=https://books.google.com/books?id=7Hue54bWk6IC&pg=PA57|accessdate=18 November 2012|date=1 January 1993|publisher=Northern Book Centre|isbn=978-81-7211-052-9|pages=57–70}}</ref> 1753 ರಲ್ಲಿ ಮಾವೆಲಿಕ್ಕರ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಡಚ್ಚರು ಪ್ರಾದೇಶಿಕ ರಾಜಕೀಯ ವ್ಯವಹಾರಗಳಿಂದ ಹಿಂತೆಗೆದುಕೊಳ್ಳಲು ಮತ್ತು ಅವರ ಪಾತ್ರವನ್ನು ವ್ಯಾಪಾರಕ್ಕೆ ಸೀಮಿತಗೊಳಿಸಲು ಒತ್ತಾಯಿಸಲಾಯಿತು.<ref name="Singh2010">{{cite book|author=Anjana Singh|title=Fort Kochi in Kerala, 1750–1830: The Social Condition of a Dutch Community in an Indian Milieu|url=https://books.google.com/books?id=LFy4pWUlnfwC&pg=PA22|accessdate=18 November 2012|date=30 April 2010|publisher=BRILL|isbn=978-90-04-16816-9|pages=22–52}}</ref><ref name="Iyer1995">{{cite book|author=S. Krishna Iyer|title=Travancore Dutch relations, 1729–1741|url=https://books.google.com/books?id=rUtuAAAAMAAJ|accessdate=18 November 2012|year=1995|publisher=CBH Publications|isbn=978-81-85381-42-8|page=49}}</ref><ref name="Lannoy1997">{{cite book|author=Mark de Lannoy|title=The Kulasekhara Perumals of Travancore: history and state formation in Travancore from 1671 to 1758|url=https://books.google.com/books?id=pKjZAAAAMAAJ|accessdate=18 November 2012|year=1997|publisher=Leiden University|isbn=978-90-73782-92-1|page=190}}</ref> ಮಾರ್ತಾಂಡ ವರ್ಮ ತಮ್ಮ ಸೈನ್ಯದ ಕಾರ್ಯಾಚರಣೆಗಳನ್ನು ಮುಂದುವರೆಸಿದರು, ಕೇರಳದಲ್ಲಿ ತಿರುವಾಂಕೂರನ್ನು ಪ್ರಮುಖ ಶಕ್ತಿಯಾಗಿ ಸ್ಥಾಪಿಸಿದರು.<ref>{{cite book|author=A. Sreedhara Menon|title=Political History of Modern Kerala|url=https://books.google.com/books?id=wnAjqjhc1VcC&pg=PA140|accessdate=10 August 2012|year=1987|publisher=D C Books|isbn=978-81-264-2156-5|page=140}}</ref>
1766 ರಲ್ಲಿ, [[ಮೈಸೂರು ಸಾಮ್ರಾಜ್ಯ|ಮೈಸೂರಿನ]] ಆಡಳಿತಗಾರ [[ಹೈದರ್ ಅಲಿ]], [[ಮೈಸೂರಿನ ಕೇರಳ ಆಕ್ರಮಣ#ಹೈದರ್ ಅಲಿಯ ಆಕ್ರಮಣ|ಉತ್ತರ ಕೇರಳವನ್ನು ಆಕ್ರಮಿಸಿದನು]],<ref name="Rai">{{cite book|author=Raghunath Rai|title=History|url=https://books.google.com/books?id=Z4-8Z0gqBkoC&pg=PA14|accessdate=18 November 2012|publisher=FK Publications|isbn=978-81-87139-69-0|pages=14–}}</ref> ಮತ್ತು ಅವನ ಮಗ ಮತ್ತು ಉತ್ತರಾಧಿಕಾರಿ, [[ಟಿಪ್ಪು ಸುಲ್ತಾನ್]], ವಿಸ್ತರಿಸುತ್ತಿರುವ [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]] ವಿರುದ್ಧ [[ಮೈಸೂರಿನ ಕೇರಳ ಆಕ್ರಮಣ#ಟಿಪ್ಪು ಸುಲ್ತಾನನ ಆಕ್ರಮಣಗಳು|ಸೈನ್ಯದ ಕಾರ್ಯಾಚರಣೆಗಳನ್ನು]] ಪ್ರಾರಂಭಿಸಿದರು. ಈ ಮುಖಾಮುಖಿಗಳು ನಾಲ್ಕು [[ಆಂಗ್ಲೋ-ಮೈಸೂರು ಯುದ್ಧಗಳಲ್ಲಿ]] ಎರಡಕ್ಕೆ ಕೊಡುಗೆ ನೀಡಿದವು.<ref name="MuseumDallapiccola2010">{{cite book|author1=British Museum|author2=Anna Libera Dallapiccola|title=South Indian Paintings: A Catalogue of the British Museum Collection|url=https://books.google.com/books?id=FIzWapiacQcC&pg=PA12|accessdate=18 November 2012|date=22 June 2010|publisher=Mapin Publishing Pvt Ltd|isbn=978-0-7141-2424-7|pages=12–}}</ref><ref name="ThorpeEdgar">{{cite book|author1=Edgar Thorpe, Showick Thorpe|author2=Thorpe Edgar|title=The Pearson CSAT Manual 2011|url=https://books.google.com/books?id=WuBFs6yFRwcC&pg=RA1-PA99|accessdate=18 November 2012|publisher=Pearson Education India|isbn=978-81-317-5830-4|page=99}}</ref> 1790 ರ ದಶಕದ ಆರಂಭದ ವೇಳೆಗೆ, ಟಿಪ್ಪು ಸುಲ್ತಾನ್ [[ಮಲಬಾರ್ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ವನ್ನು ಬ್ರಿಟಿಷರಿಗೆ ಬಿಟ್ಟುಕೊಡಲು ಒತ್ತಾಯಿಸಲಾಯಿತು, ಮತ್ತು ಈ ಪ್ರದೇಶಗಳನ್ನು 1792 ರಲ್ಲಿ [[ಬ್ರಿಟಿಷ್ ಭಾರತ]]ದ [[ಮದ್ರಾಸ್ ಪ್ರೆಸಿಡೆನ್ಸಿ]] ಗೆ ಸೇರಿಸಲಾಯಿತು.<ref name="The Edinburgh Gazetteer: Or, Geographical Dictionary: Containing a Description of the Various Countries, Kingdoms, States, Cities, Towns, Mountains, &c. of the World; an Account of the Government, Customs, and Religion of the Inhabitants; the Boundaries and Natural Productions of Each Country, &c. &c. Forming a Complete Body of Geography, Physical, Political, Statistical, and Commercial with Addenda, Containing the Present State of the New Governments in South America...">{{cite book|title=The Edinburgh Gazetteer|url=https://books.google.com/books?id=xRIyAQAAMAAJ&pg=PA63|accessdate=18 November 2012|year=1827|publisher=Longman, Rees, Orme, Brown, and Green|pages=63–}}</ref><ref name="Kumar1965">{{cite book|author=Dharma Kumar|title=Land and Caste in South India: Agricultural Labor in the Madras Presidency During the Nineteenth Century|url=https://books.google.com/books?id=psw5AAAAIAAJ&pg=PA87|accessdate=18 November 2012|year=1965|publisher=CUP Archive|pages=87–|id=GGKEY:T72DPF9AZDK}}</ref><ref name="Ittaman2003">{{cite book|author=K.P. Ittaman|title=History of Mughal Architecture Volume Ii|url=https://books.google.com/books?id=ZQ5lFywZAqYC&pg=PA30|accessdate=18 November 2012|date=1 June 2003|publisher=Abhinav Publications|isbn=978-81-7017-034-1|pages=30–}}</ref> ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 1791 ರಲ್ಲಿ ಕೊಚ್ಚಿ ಮತ್ತು 1795 ರಲ್ಲಿ ತಿರುವಾಂಕೂರಿನೊಂದಿಗೆ ಸಹಾಯಕ ಮೈತ್ರಿಗಳನ್ನು ಸುರಕ್ಷಿತಗೊಳಿಸಿತು.<ref>{{Cite book |author=Superintendent of Government Printing |title=Imperial Gazetteer of India (Provincial Series): Madras |publisher=Government of India |location=Calcutta |year=1908 |accessdate=11 November 2007 |url=https://books.google.com/books?id=xXglUxeS_WkC |page=22}}</ref> 18 ನೇ ಶತಮಾನದ ಅಂತ್ಯದ ವೇಳೆಗೆ, ಕೇರಳವು ಸಂಪೂರ್ಣವಾಗಿ ಬ್ರಿಟಿಷರಿಂದ ನೇರವಾಗಿ ಆಡಳಿತ ನಡೆಸಲ್ಪಡುತ್ತಿತ್ತು ಅಥವಾ ಅವರ [[ಸಾಮಂತತ್ವ]]ದ ಅಡಿಯಲ್ಲಿತ್ತು.<ref name="RajTharakan1981">{{cite book|author1=Kakkadan Nandanath Raj|author2=Michael Tharakan|title=Agrarian reform in Kerala and its impact on the rural economy: a preliminary assessment|url=https://books.google.com/books?id=JF6FAAAAIAAJ|accessdate=18 November 2012|year=1981|publisher=International Labour Office|pages=2–3}}</ref>
20 ನೇ ಶತಮಾನದಲ್ಲಿ, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಕೇರಳವು ಹಲವಾರು ಪ್ರಮುಖ ದಂಗೆಗಳ ತಾಣವಾಗಿತ್ತು. ಇವುಗಳಲ್ಲಿ ಅತ್ಯಂತ ಗಮನಾರ್ಹವಾದುದು 1921 ರ [[ಮಲಬಾರ್ ದಂಗೆ]], ಇದರಲ್ಲಿ ಮಲಬಾರ್ ಪ್ರದೇಶದ ಮಾಪ್ಪಿಲ ಮುಸ್ಲಿಮರು ಹಿಂದೂ [[ಜಮೀನ್ದಾರ್]]ಗಳು (ಭೂಮಾಲೀಕರು) ಮತ್ತು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳ ವಿರುದ್ಧ ಗಲಭೆ ನಡೆಸಿದರು.<ref name="Qureshi1999">{{cite book|author=M. Naeem Qureshi|title=Pan-Islam in British Indian Politics: A Study of the Khilafat Movement, 1918–1924|url=https://books.google.com/books?id=czKYZPyoyx0C|year=1999|publisher=BRILL|isbn=90-04-11371-1|pages=445–447}}</ref> ಸಾಮಾಜಿಕ ಸುಧಾರಣೆಯ ಕ್ಷಣಗಳು ಸಹ ಈ ಅವಧಿಯಲ್ಲಿ ವೇಗವನ್ನು ಪಡೆದುಕೊಂಡವು, ವಿಶೇಷವಾಗಿ ಜಾತಿ-ಆಧಾರಿತ ತಾರತಮ್ಯವನ್ನು ಸವಾಲು ಮಾಡುವವು. ಒಂದು ಪ್ರಮುಖ ಮೈಲಿಗಲ್ಲು 1936 ರ ತಿರುವಾಂಕೂರಿನ [[ದೇವಾಲಯ ಪ್ರವೇಶ ಘೋಷಣೆ]]ಯಾಗಿದ್ದು, ಇದು ಕೆಳ ಜಾತಿಯ ಹಿಂದೂಗಳಿಗೆ ಹಿಂದೆ ಉನ್ನತ ಜಾತಿಗಳಿಗೆ ಸೀಮಿತವಾಗಿದ್ದ ದೇವಾಲಯಗಳನ್ನು ಪ್ರವೇಶಿಸುವ ಹಕ್ಕನ್ನು ನೀಡಿತು.<ref name="Smith1976">{{cite book|author=Bardwell L. Smith|title=Religion and Social Conflict in South Asia|url=https://books.google.com/books?id=07Y3AAAAIAAJ&pg=PA42|accessdate=31 July 2012|year=1976|publisher=BRILL|isbn=978-90-04-04510-1|pages=35–42}}</ref>
=== ಭಾರತದ ರಾಜ್ಯ ===
1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಸ್ವತಂತ್ರ ಪ್ರಭುತ್ವಗಳಾಗಿ [[ಭಾರತದ ವಿಭಜನೆ]] ಯ ನಂತರ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು [[ಭಾರತದ ಪ್ರಭುತ್ವ|ಭಾರತದ ಒಕ್ಕೂಟಕ್ಕೆ]] ಸೇರಿಕೊಂಡವು. 1 ಜುಲೈ 1949 ರಂದು, ಎರಡೂ ರಾಜ್ಯಗಳನ್ನು ವಿಲೀನಗೊಳಿಸಿ [[ತಿರುವಾಂಕೂರು-ಕೊಚ್ಚಿ]] ರೂಪಿಸಲಾಯಿತು.<ref name="Sabharwal2007">{{cite book|author=Gopa Sabharwal|title=India Since 1947: The Independent Years|url=https://books.google.com/books?id=LKySGJAGVEQC&pg=PA23|accessdate=18 November 2012|year=2007|publisher=Penguin Books India|isbn=978-0-14-310274-8|pages=23–}}</ref> 1 ನವೆಂಬರ್ 1956 ರಂದು, ಮದ್ರಾಸಿನ ದಕ್ಷಿಣ ಕನ್ನಡ ಜಿಲ್ಲೆಯ [[ಕಾಸರಗೋಡು ಜಿಲ್ಲೆ|ಕಾಸರಗೋಡು]] ತಾಲೂಕು, [[ಮದ್ರಾಸ್ ರಾಜ್ಯ]]ದ [[ಮಲಬಾರ್ ಜಿಲ್ಲೆ]] ([[ನೀಲಗಿರಿ ಜಿಲ್ಲೆಯ]] [[ಗುಡಾಲೂರು ತಾಲೂಕು]], [[ಲಕ್ಷದ್ವೀಪ]], [[ಟಾಪ್ಸ್ಲಿಪ್]], ಮತ್ತು ಅನಕಟ್ಟಿಯ ಪೂರ್ವದ [[ಅಟ್ಟಪ್ಪಾಡಿ]] ಕಾಡು ಹೊರತುಪಡಿಸಿ), ಮತ್ತು ತಿರುವಾಂಕೂರು-ಕೊಚ್ಚಿ ರಾಜ್ಯವು{{mdash}}ನಾಲ್ಕು ದಕ್ಷಿಣ ತಾಲೂಕುಗಳನ್ನು ([[ಕನ್ಯಾಕುಮಾರಿ ಜಿಲ್ಲೆ]] ಮತ್ತು ಶೆಂಕೋಟ್ಟೈ ತಾಲೂಕುಗಳು) ಹೊರತುಪಡಿಸಿ, ಅವುಗಳನ್ನು ತಮಿಳುನಾಡಿಗೆ ವರ್ಗಾಯಿಸಲಾಯಿತು{{mdash}}[[ರಾಜ್ಯ ಪುನರ್ರಚನಾ ಕಾಯ್ದೆ]]ಯಡಿಯಲ್ಲಿ ಕೇರಳ ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು.<ref name="Tmh">{{cite book|author=Tmh|title=General Knowledge Digest 2010|url=https://books.google.com/books?id=RyLmXWTKHXgC&pg=SA3-PA106|accessdate=18 November 2012|publisher=Tata McGraw-Hill Education|isbn=978-0-07-069939-7|page=3}}</ref><ref name="SinghKarafin2009">{{cite book|author1=Sarina Singh|author2=Amy Karafin|author3=Anirban Mahapatra|title=South India|url=https://books.google.com/books?id=8KnLFpjEHpUC|accessdate=6 January 2013|date=1 September 2009|publisher=Lonely Planet|isbn=978-1-74179-155-6}}</ref><ref name="Kerala">{{Cite web |title=The States Reorganisation Act, 1956 |url=https://legislative.gov.in/sites/default/files/A1956-37.pdf |url-status=live |archive-url=https://web.archive.org/web/20211117014954/https://legislative.gov.in/sites/default/files/A1956-37.pdf |archive-date=17 November 2021 |access-date=11 May 2021 |website=legislative.gov.in |publisher=Government of India}}</ref> 1957 ರಲ್ಲಿ ಹೊಸ ಕೇರಳ ವಿಧಾನಸಭೆಗೆ ಮೊದಲ ಚುನಾವಣೆಗಳ ನಂತರ [[ಇ. ಎಂ. ಎಸ್. ನಂಬೂದಿರಿಪಾಡ್]] ನೇತೃತ್ವದ [[ಕಮ್ಯುನಿಸ್ಟ್]] ಸರ್ಕಾರವು ರೂಪುಗೊಂಡಿತು.<ref name="SinghKarafin2009"/> ಇದು 1945 ರಲ್ಲಿ [[ಸ್ಯಾನ್ ಮರಿನೋ ಗಣರಾಜ್ಯ]]ದಲ್ಲಿ ಕಮ್ಯುನಿಸ್ಟ್ ಚುನಾವಣಾ ಯಶಸ್ಸಿನ ನಂತರ ವಿಶ್ವದ ಆರಂಭಿಕ ಪ್ರಜಾಪ್ರಭುತ್ವವಾಗಿ ಚುನಾಯಿತ ಕಮ್ಯುನಿಸ್ಟ್ ಸರ್ಕಾರಗಳಲ್ಲಿ ಒಂದಾಗಿದೆ.<ref name=Hindu>{{cite news|title=50 years of development|url=http://www.thehindubusinessline.com/todays-paper/tp-others/tp-states/50-years-of-development/article1655056.ece?ref=archive|accessdate=30 August 2013|newspaper=The Hindu|date=12 April 2007|author=K.G. Kumar}}</ref><ref name="Desai2006">{{cite book|author=Manali Desai|title=State Formation and Radical Democracy in India|url=https://books.google.com/books?id=60m9znJQmmkC&pg=PA142|accessdate=31 August 2013|date=27 November 2006|publisher=Taylor & Francis|isbn=978-0-203-96774-4|page=142}}</ref><ref name="ChitkaraŚarmā1997">{{cite book|author1=Madan Gopal Chitkara|author2=Baṃśī Rāma Śarmā|title=Indian Republic: Issues and Perspective|url=https://books.google.com/books?id=7YrmNURVoroC&pg=PA134|accessdate=18 November 2012|date=1 January 1997|publisher=APH Publishing|isbn=978-81-7024-836-1|pages=134–}}</ref>
== ಭೌಗೋಳಿಕತೆ ==
{{Main|ಕೇರಳದ ಭೌಗೋಳಿಕತೆ}}
{{Multiple image
| direction = vertical
| width = 220
| image1 = AnaimudiPeak DSC 4834.jpg
| caption1 = [[ಅನಮುಡಿ]], [[ದಕ್ಷಿಣ ಭಾರತ]]ದ ಅತಿ ಎತ್ತರದ ಶಿಖರ.
| image2 = DR0071DSC 9245.jpg
| caption2 = [[ವಯನಾಡು|ವಯನಾಡಿನ]] ಬೆಟ್ಟ ಪ್ರದೇಶಗಳಲ್ಲಿ [[ಚಹಾ]] ಮತ್ತು [[ಕಾಫಿ]] ಉತ್ಪಾದಿಸಲಾಗುತ್ತದೆ.
| image3 = Kumarkom.jpg
| caption3 = [[ವೇಂಬನಾಡು]], [[ಕೇರಳ ಬ್ಯಾಕ್ವಾಟರ್ಗಳ]] ಒಂದು ಭಾಗ, ಭಾರತದ ಅತಿ ಉದ್ದದ ಸರೋವರ.
| image4 = Light house in Ponnani.jpg
| caption4 = [[ಪೊನ್ನಾನಿ]] ಲೈಟ್ ಹೌಸ್ ಬೀಚ್
}}
ರಾಜ್ಯವು [[ಲಕ್ಷದ್ವೀಪ ಸಮುದ್ರ]] ಮತ್ತು [[ಪಶ್ಚಿಮ ಘಟ್ಟಗಳ]] ನಡುವೆ ಸಿಕ್ಕಿಕೊಂಡಿದೆ.<ref>{{Cite web |year=1953 |title=Limits of Oceans and Seas, 3rd edition |url=https://iho.int/uploads/user/pubs/standards/s-23/S-23_Ed3_1953_EN.pdf |archive-url=https://web.archive.org/web/20181005131902/https://www.iho.int/iho_pubs/standard/S-23/S-23_Ed3_1953_EN.pdf |archive-date=5 October 2018 |access-date=28 December 2020 |publisher=International Hydrographic Organization}}</ref> ಉತ್ತರ ಅಕ್ಷಾಂಶ 8°18' ಮತ್ತು 12°48' ಮತ್ತು ಪೂರ್ವ ರೇಖಾಂಶ 74°52' ಮತ್ತು 77°22' ನಡುವೆ ಇದೆ,<ref>{{cite web |title=Physical and Anatomical Characteristic of Wood of Some Less-Known Tree Species of Kerala |url=https://docs.kfri.res.in/KFRI-RR/KFRI-RR096.pdf |work=Kerala Forest Research Institute |publisher=Government of Kerala |access-date=18 November 2012 |archive-date=9 July 2013 |archive-url=https://web.archive.org/web/20130709150101/http://docs.kfri.res.in/KFRI-RR/KFRI-RR096.pdf |url-status=live }}</ref> ಕೇರಳವು ಕೆಲವು ಚಂಡಮಾರುತಗಳೊಂದಿಗೆ ಆರ್ದ್ರ [[ಉಷ್ಣವಲಯದ ಮಳೆಕಾಡು ಹವಾಮಾನ]]ವನ್ನು ಹೊಂದಿದೆ. ರಾಜ್ಯವು {{cvt|590|km|mi}} ಕರಾವಳಿಯನ್ನು ಹೊಂದಿದೆ<ref>{{cite web |title=Marine Fisheries |url=https://www.fisheries.kerala.gov.in/index.php?option=com_content&view=article&id=76&Itemid=44 |website=fisheries.kerala.gov.in |publisher=Department of Fisheries, Government of Kerala |access-date=13 November 2015 |archive-date=17 November 2015 |archive-url=https://web.archive.org/web/20151117021802/http://www.fisheries.kerala.gov.in/index.php?option=com_content&view=article&id=76&Itemid=44 |url-status=live }}</ref> ಮತ್ತು ರಾಜ್ಯದ ಅಗಲವು {{convert|11|and|121|km|mi|0}} ನಡುವೆ ಬದಲಾಗುತ್ತದೆ.<ref name="Nair1994">{{cite book |author=V. Balakrishnan Nair |title=Social Development and Demographic Changes in South India: Focus on Kerala |url=https://books.google.com/books?id=sTS4OO9lcdgC&pg=PA15 |access-date=18 November 2012 |year=1994 |publisher=M.D. Publications Pvt. Ltd. |isbn=978-8185880501 |page=15}}</ref> ಭೌಗೋಳಿಕವಾಗಿ, ಕೇರಳವನ್ನು ಮೂರು ಹವಾಮಾನದ ಪ್ರತ್ಯೇಕ ಪ್ರದೇಶಗಳಾಗಿ ವಿಂಗಡಿಸಬಹುದು: ಪೂರ್ವ ಎತ್ತರದ ಪ್ರದೇಶಗಳು; ಒರಟು ಮತ್ತು ತಂಪಾದ ಪರ್ವತ ಪ್ರದೇಶ, ಮಧ್ಯ ಮಧ್ಯ-ನೆಲಗಳು; ರೋಲಿಂಗ್ ಬೆಟ್ಟಗಳು, ಮತ್ತು ಪಶ್ಚಿಮ ತಗ್ಗು ಪ್ರದೇಶಗಳು; ಕರಾವಳಿ ಬಯಲುಗಳು.<ref name="ChattopadhyayFranke2006">{{cite book |author1=Srikumar Chattopadhyay |author2=Richard W. Franke |title=Striving for Sustainability: Environmental Stress and Democratic Initiatives in Kerala |url=https://books.google.com/books?id=gOrvghLklKoC&pg=PA110 |access-date=19 March 2019 |year=2006 |publisher=Concept Publishing Company |isbn=978-8180692949}}</ref>{{rp|110}} [[ಪೂರ್ವ-ಕೇಂಬ್ರಿಯನ್]] ಮತ್ತು [[ಪ್ಲಿಸ್ಟೊಸೀನ್]] ಭೂವೈಜ್ಞಾನಿಕ ರಚನೆಗಳು ಕೇರಳದ ಭೂಪ್ರದೇಶದ ಬಹುಭಾಗವನ್ನು ರೂಪಿಸುತ್ತವೆ.<ref name="Geological Survey Water-supply Paper">{{cite book |title=Geological Survey Water-supply Paper |url=https://books.google.com/books?id=0qUYAQAAIAAJ&pg=SL4-PA6 |access-date=19 March 2019 |year=1961 |publisher=U.S. Government Printing Office |page=4}}</ref><ref name="SharmaKumari2008">{{cite book |author1=Pradeep Sharma |author2=Y. Dharnai Kumari |author3=Tirunagaram Lakshmamma |title=Status Of Women And Family Planning |url=https://books.google.com/books?id=2b6Ok2EcnBIC&pg=PA217 |access-date=18 November 2012 |year=2008 |publisher=Discovery Publishing House |isbn=978-8183563260 |page=217}}</ref> 1341 CE ಯಲ್ಲಿ ಕೇರಳದಲ್ಲಿ ವಿನಾಶಕಾರಿ ಪ್ರವಾಹವು ಅದರ ಭೂಪ್ರದೇಶವನ್ನು ಆಮೂಲಾಗ್ರವಾಗಿ ಬದಲಾಯಿಸಿತು ಮತ್ತು ಅದರ ಇತಿಹಾಸದ ಮೇಲೆ ಪರಿಣಾಮ ಬೀರಿತು; ಇದು ಮಸಾಲೆ ಸಾಗಣೆಗೆ ನೈಸರ್ಗಿಕ ಬಂದರನ್ನು ಸೃಷ್ಟಿಸಿತು.<ref name="LimitedKitchen2010">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA100 |access-date=18 November 2012 |year=2010 |publisher=Murdoch Books |isbn=978-1-74196-438-7 |page=100}}</ref>
ಕೇರಳದ ಪೂರ್ವ ಪ್ರದೇಶವು ಪಶ್ಚಿಮ ಘಟ್ಟಗಳ [[ಮಳೆ ನೆರಳು]] ಯ ಪಶ್ಚಿಮಕ್ಕೆ ತಕ್ಷಣವೇ ಎತ್ತರದ ಪರ್ವತಗಳು, ಕಮರಿಗಳು ಮತ್ತು ಆಳವಾದ ಕತ್ತರಿಸಿದ ಕಣಿವೆಗಳನ್ನು ಒಳಗೊಂಡಿದೆ.<ref name=ChattopadhyayFranke2006 />{{rp|110}} ಕೇರಳದ ಪಶ್ಚಿಮಕ್ಕೆ ಹರಿಯುವ 41 ನದಿಗಳು,<ref name="Sadasivan2003">{{cite book |author=S. N. Sadasivan |title=River Disputes in India: Kerala Rivers Under Siege |url=https://books.google.com/books?id=hhrRboi5kOcC&pg=PA223 |access-date=18 November 2012 |year=2003 |publisher=Mittal Publications |isbn=978-8170999133 |page=223}}</ref> ಮತ್ತು ಅದರ ಪೂರ್ವಕ್ಕೆ ಹರಿಯುವ 3 ನದಿಗಳು ಈ ಪ್ರದೇಶದಲ್ಲಿ ಹುಟ್ಟುತ್ತವೆ.<ref name="Darpan2006">{{cite book |author=Pratiyogita Darpan |title=Pratiyogita Darpan |url=https://books.google.com/books?id=QegDAAAAMBAJ&pg=PT72 |access-date=18 November 2012 |date=September 2006 |publisher=Pratiyogita Darpan |page=72}}</ref><ref name="India2008">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA11 |access-date=18 November 2012 |year=2008 |publisher=Sura Books |isbn=978-8174781642 |page=11}}</ref> ಪಶ್ಚಿಮ ಘಟ್ಟಗಳು [[ಪಾಲಕ್ಕಾಡ್]] ಬಳಿ ಮಾತ್ರ ಅಡ್ಡಿಪಡಿಸುವ ಪರ್ವತಗಳ ಗೋಡೆಯನ್ನು ರೂಪಿಸುತ್ತವೆ; ಆದ್ದರಿಂದ ಪಾಲ್''ಘಾಟ್'' ಎಂದೂ ಕರೆಯಲ್ಪಡುತ್ತದೆ, ಅಲ್ಲಿ [[ಪಾಲಕ್ಕಾಡ್ ಅಂತರ]]ವು ಮುರಿಯುತ್ತದೆ.<ref>{{cite web |last1=Chandran Nair |first1=Dr.S.Sathis |title=India – Silent Valley Rainforest Under Threat Once More |url=https://www.rainforestinfo.org.au/wrr2004/silentvalley.htm |website=rainforestinfo.org.au |access-date=12 November 2015 |archive-date=24 September 2015 |archive-url=https://web.archive.org/web/20150924084520/http://www.rainforestinfo.org.au/wrr2004/silentvalley.htm |url-status=live }}</ref> ಪಶ್ಚಿಮ ಘಟ್ಟಗಳು ಸರಾಸರಿ {{convert|1500|m|ft|lk=out|abbr=off}} [[ಸಮುದ್ರ ಮಟ್ಟ]]ದವರೆಗೆ ಏರುತ್ತವೆ,<ref name="Biju2006">{{cite book |author=M.R. Biju |title=Sustainable Dimensions Of Tourism Management |url=https://books.google.com/books?id=AkAdvTbg0dEC&pg=PA63 |access-date=18 November 2012 |year=2006 |publisher=Mittal Publications |isbn=978-8183241298 |page=63}}</ref> ಆದರೆ ಅತಿ ಎತ್ತರದ ಶಿಖರಗಳು ಸುಮಾರು {{convert|2500|m|ft|abbr=off}} ತಲುಪುತ್ತವೆ.<ref name="Hussain">{{cite book |author=Hussain |title=Geography Of India For Civil Ser Exam |url=https://books.google.com/books?id=wUzKCZxvNQoC&pg=SA2-PA9 |access-date=18 November 2012 |publisher=Tata McGraw-Hill Education |isbn=978-0-07-066772-3 |page=2}}</ref> [[ಇಡುಕ್ಕಿ]] ಜಿಲ್ಲೆಯ [[ಅನಮುಡಿ]] ದಕ್ಷಿಣ ಭಾರತದ ಅತಿ ಎತ್ತರದ ಶಿಖರವಾಗಿದ್ದು, {{cvt|2,695|m}} ಎತ್ತರದಲ್ಲಿದೆ.<ref name="gazetteer">{{cite book |last1=Frowde |first1=Henry |url=https://dsal.uchicago.edu/reference/gazetteer/ |title=Imperial Gazetteer of India |date=1908–1909 |publisher=Clarendon Press |edition=New |location=Oxford |access-date=2 December 2020 |archive-url=https://web.archive.org/web/20081216124143/http://dsal.uchicago.edu/reference/gazetteer/ |archive-date=16 December 2008 |url-status=live}}</ref> ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯು ವಿಶ್ವದ ಎಂಟು "ಅತ್ಯಂತ ಬಿಸಿಯಾದ ಜೈವಿಕ ವೈವಿಧ್ಯತೆಯ ಹಾಟ್ಸ್ಪಾಟ್ಗಳಲ್ಲಿ" ಒಂದಾಗಿ ಗುರುತಿಸಲ್ಪಟ್ಟಿದೆ ಮತ್ತು [[UNESCO]] [[ವಿಶ್ವ ಪರಂಪರೆಯ ತಾಣ]]ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.<ref name="UNESCO">{{cite news |url=https://timesofindia.indiatimes.com/home/environment/flora-fauna/UN-designates-Western-Ghats-as-world-heritage-site/articleshow/14595602.cms |archive-url=https://web.archive.org/web/20130131192257/https://articles.timesofindia.indiatimes.com/2012-07-02/flora-fauna/32507340_1_world-heritage-list-western-ghats-border-town |url-status=live |archive-date=31 January 2013 |title=UN designates Western Ghats as world heritage site |date=2 July 2012 |newspaper=[[The Times of India]] |access-date=27 November 2018}}</ref> ಈ ಶ್ರೇಣಿಯ ಕಾಡುಗಳು ಹಿಮಾಲಯ ಪರ್ವತಗಳಿಗಿಂತ ಹಳೆಯದು ಎಂದು ಪರಿಗಣಿಸಲಾಗಿದೆ.<ref name="UNESCO" /> ಪಶ್ಚಿಮ ಘಟ್ಟಗಳ ಹಿನ್ನೆಲೆಯಲ್ಲಿ ನೆಲೆಗೊಂಡಿರುವ [[ಅತಿರಪ್ಪಿಲ್ಲಿ ಜಲಪಾತ]]ವನ್ನು ''ಭಾರತದ [[ನಯಾಗರ ಜಲಪಾತ|ನಯಾಗರ]]'' ಎಂದೂ ಕರೆಯಲಾಗುತ್ತದೆ.<ref name="Athirappilly">{{cite news |url=https://articles.timesofindia.indiatimes.com/2013-05-30/travel/33064279_1_palm-trees-trek-coconut-trees |title=The Times of India: Latest News India, World & Business News, Cricket & Sports, Bollywood |access-date=2 July 2013 |archive-url=https://web.archive.org/web/20130621233624/https://articles.timesofindia.indiatimes.com/2013-05-30/travel/33064279_1_palm-trees-trek-coconut-trees |archive-date=21 June 2013 |work=[[The Times of India]] |url-status=dead}}</ref> ಇದು [[ಚಾಲಕ್ಕುಡಿ ನದಿ]]ಯಲ್ಲಿದೆ ಮತ್ತು ರಾಜ್ಯದ ಅತಿ ದೊಡ್ಡ ಜಲಪಾತವಾಗಿದೆ.<ref name="Athirappilly" /> [[ವಯನಾಡು]] ಕೇರಳದ ಏಕೈಕ [[ಪ್ರಸ್ಥಭೂಮಿ]]ಯಾಗಿದೆ.<ref>{{cite book |author=William Logan |year=1887 |title=Malabar Manual (Volume-II) |publisher=Madras Government Press |url=https://archive.org/details/malabar_manual_volume2/mode/2up}}</ref> [[ವಯನಾಡು ಜಿಲ್ಲೆ|ವಯನಾಡು]], [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ([[ನಿಲಂಬೂರು|ನಿಲಂಬೂರಿನ]] [[ಚಾಲಿಯಾರ್]] ಕಣಿವೆ), ಮತ್ತು [[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡ್]] ([[ಅಟ್ಟಪ್ಪಾಡಿ]] ಕಣಿವೆ) ಜಿಲ್ಲೆಗಳಲ್ಲಿನ ಪೂರ್ವ ಪ್ರದೇಶಗಳು, ಒಟ್ಟಾಗಿ [[ನೀಲಗಿರಿ ಜೀವಗೋಳ ಮೀಸಲು]] ಮತ್ತು [[ಮೈಸೂರು ಪ್ರಸ್ಥಭೂಮಿ]]ಯ ಮುಂದುವರಿಕೆಯ ಭಾಗಗಳಾಗಿವೆ, ಇವು ನೈಸರ್ಗಿಕ [[ಚಿನ್ನ]]ದ ಹೊಲಗಳಿಗೆ ಹೆಸರುವಾಸಿಯಾಗಿದೆ, ಜೊತೆಗೆ [[ಕರ್ನಾಟಕ]]ದ ಪಕ್ಕದ ಜಿಲ್ಲೆಗಳು.<ref>{{Cite web |url=https://dmg.kerala.gov.in/mineral-resources/ |title=Mineral Resources |website=Department of Mining and Geology – Government of Kerala |access-date=4 April 2022 |archive-date=13 May 2022 |archive-url=https://web.archive.org/web/20220513124121/https://dmg.kerala.gov.in/mineral-resources/ |url-status=live }}</ref> [[ಇಲ್ಮೆನೈಟ್]], [[ಮೊನಾಜೈಟ್]], [[ಥೋರಿಯಮ್]], ಮತ್ತು [[ಟೈಟಾನಿಯಮ್]] ಸೇರಿದಂತೆ ಖನಿಜಗಳು ಕೇರಳದ ಕರಾವಳಿ ಪಟ್ಟಿಯಲ್ಲಿ ಕಂಡುಬರುತ್ತವೆ.{{sfn|Chandran|2018|p=343}} ಕೇರಳದ [[ಕರುನಾಗಪ್ಪಳ್ಳಿ]] ಕರಾವಳಿ ಪಟ್ಟಿಯು [[ಥೋರಿಯಮ್]]-ಹೊಂದಿರುವ [[ಮೊನಾಜೈಟ್]] ಮರಳಿನಿಂದ ಹೆಚ್ಚಿನ ಹಿನ್ನೆಲೆ ವಿಕಿರಣಕ್ಕೆ ಹೆಸರುವಾಸಿಯಾಗಿದೆ. ಕೆಲವು ಕರಾವಳಿ ಪಂಚಾಯತ್ಗಳಲ್ಲಿ, ಸರಾಸರಿ ಹೊರಾಂಗಣ ವಿಕಿರಣ ಮಟ್ಟಗಳು 4 [[ಗ್ರೇ (ಘಟಕ)#ದೇಹದ ಮೇಲಿನ ಪರಿಣಾಮ|mGy/yr]] ಗಿಂತ ಹೆಚ್ಚು ಮತ್ತು ಕರಾವಳಿಯ ಕೆಲವು ಸ್ಥಳಗಳಲ್ಲಿ, ಇದು 70 mGy/yr ನಷ್ಟು ಹೆಚ್ಚಾಗಿದೆ.<ref>{{Cite news |vauthors=Nair RR, Rajan B, Akiba S, Jayalekshmi P, Nair MK, Gangadharan P, Koga T, Morishima H, Nakamura S, Sugahara T |title=Background radiation and cancer incidence in Kerala, India-Karanagappally cohort study. |publisher=Health Physics |date=January 2009 |pmid=19066487}}</ref>
ಕೇರಳದ ಪಶ್ಚಿಮ ಕರಾವಳಿ ಪಟ್ಟಿಯು ಪೂರ್ವ ಪ್ರದೇಶಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಸಮತಟ್ಟಾಗಿದೆ,<ref name="ChattopadhyayFranke2006" />{{rp|33}} ಮತ್ತು ಅಂತರ್ಸಂಪರ್ಕಿತ [[ಉಪ್ಪುನೀರಿನ]] ಕಾಲುವೆಗಳು, ಸರೋವರಗಳು, [[ಅಳಿವೆ]]ಗಳು,<ref name="Moss2010">{{cite book |author=Danny Moss |title=Public Relations Cases: International Perspectives |url=https://books.google.com/books?id=s0-CJ3djEdEC&pg=PA41 |access-date=18 November 2012 |year=2010 |publisher=Taylor & Francis |isbn=978-0-415-77336-2 |page=41}}</ref> ಮತ್ತು [[ಕೇರಳ ಬ್ಯಾಕ್ವಾಟರ್ಗಳು]] ಎಂದು ಕರೆಯಲ್ಪಡುವ ನದಿಗಳ ಜಾಲದಿಂದ ಕೂಡಿದೆ.<ref name="Thorpe2012">{{cite book |author=Edgar Thorpe |title=The Pearson CSAT Manual 2012 |url=https://books.google.com/books?id=1cruroSVFoUC&pg=RA3-PA38 |access-date=18 November 2012 |year=2012 |publisher=Pearson Education India |isbn=978-8131767344 |page=3}}</ref> ''ಕೇರಳದ ಅಕ್ಕಿಯ ಬಟ್ಟಲು'' ಎಂದೂ ಕರೆಯಲ್ಪಡುವ [[ಕುಟ್ಟನಾಡು]] ಭಾರತದಲ್ಲಿ [[ಭಾರತದ ತೀವ್ರ ಬಿಂದುಗಳ ಪಟ್ಟಿ#ಎತ್ತರಗಳು|ಅತ್ಯಂತ ಕಡಿಮೆ ಎತ್ತರವನ್ನು]] ಹೊಂದಿದೆ, ಮತ್ತು ಇದು ಸಮುದ್ರ ಮಟ್ಟಕ್ಕಿಂತ ಕೆಳಗೆ ಬೇಸಾಯ ನಡೆಯುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿದೆ.<ref>{{Cite news |title=Kerala Boat Ferries Lone Passenger To Help Her Take Exam |url=https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |last=Press Trust of India |date=1 June 2020 |access-date=17 November 2020 |work=NDTV |archive-date=16 November 2021 |archive-url=https://web.archive.org/web/20211116093316/https://www.ndtv.com/kerala-news/coronavirus-lockdown4-kerala-government-boat-ferries-lone-passenger-sandra-babu-to-help-her-take-exam-2238752 |url-status=live }}</ref><ref>{{Cite web |url=https://www.hindu.com/mag/2003/07/13/stories/2003071300600200.htm |title=Thirst below sea level |last=Suchitra |first=M |date=13 August 2003 |work=[[The Hindu]] |access-date=17 November 2020 |archive-url=https://web.archive.org/web/20190922101804/https://www.thehindu.com/todays-paper/tp-features/tp-sundaymagazine/thirst-below-sea-level/article28523147.ece |archive-date=22 September 2019}}</ref> ದೇಶದ ಅತಿ ಉದ್ದದ ಸರೋವರ [[ವೇಂಬನಾಡು ಸರೋವರ|ವೇಂಬನಾಡು]] ಬ್ಯಾಕ್ವಾಟರ್ಗಳಲ್ಲಿ ಪ್ರಾಬಲ್ಯ ಹೊಂದಿದೆ; ಇದು [[ಆಲಪ್ಪುಳ]] ಮತ್ತು [[ಕೊಚ್ಚಿ]] ನಡುವೆ ಇದೆ ಮತ್ತು ಸುಮಾರು {{cvt|200|km2|sqmi}} ಪ್ರದೇಶದಲ್ಲಿದೆ.<ref name="Husain">{{cite book |author=Majid Husain |title=Understanding: Geographical: Map Entries: for Civil Services Examinations: Second Edition |url=https://books.google.com/books?id=_9VGKfQ-sQsC&pg=RA9-PT18 |access-date=18 November 2012 |publisher=Tata McGraw-Hill Education |isbn=978-0-07-070288-2 |page=9 |year=2011}}</ref> ಭಾರತದ ಸುಮಾರು ಎಂಟು ಪ್ರತಿಶತದಷ್ಟು ಜಲಮಾರ್ಗಗಳು ಕೇರಳದಲ್ಲಿ ಕಂಡುಬರುತ್ತವೆ.<ref name="IWAI_2005">{{Cite journal |author=Inland Waterways Authority of India (IWAI—Ministry of Shipping) |year=2005 |title=Introduction to Inland Water Transport |journal=IWAI (Ministry of Shipping) |url=https://iwai.nic.in/Introduction.html |archive-url=https://archive.today/20050204175110/http://iwai.nic.in/Introduction.html |url-status=dead |archive-date=4 February 2005 |access-date=19 January 2006}}</ref> ಕೇರಳದ [[ಕೇರಳದ ನದಿಗಳ ಪಟ್ಟಿ|44 ನದಿಗಳು]] [[ಪೆರಿಯಾರ್ ನದಿ|ಪೆರಿಯಾರ್]]; {{convert|244|km|mi|0}}, [[ಭಾರತಪುಳ]]; {{convert|209|km|mi|0}}, [[ಪಂಬಾ ನದಿ|ಪಂಬಾ]]; {{convert|176|km|mi|0}}, [[ಚಾಲಿಯಾರ್ ನದಿ|ಚಾಲಿಯಾರ್]]; {{convert|169|km|mi|0}}, [[ಕಡಲುಂಡಿಪುಳ ನದಿ|ಕಡಲುಂಡಿಪುಳ]]; {{convert|130|km|mi|0}}, [[ಚಾಲಕ್ಕುಡಿ ನದಿ|ಚಾಲಕ್ಕುಡಿಪುಳ]]; {{convert|130|km|mi|0}}, [[ವಲಪಟ್ಟಣಂ ನದಿ|ವಲಪಟ್ಟಣಂ]]; {{convert|129|km|mi|0}} ಮತ್ತು [[ಅಚನ್ಕೋವಿಲ್ ನದಿ]]; {{convert|128|km|mi|0}}. ನದಿಗಳ ಸರಾಸರಿ ಉದ್ದ {{convert|64|km|mi|0}}. ಅನೇಕ ನದಿಗಳು ಚಿಕ್ಕದಾಗಿರುತ್ತವೆ ಮತ್ತು ಸಂಪೂರ್ಣವಾಗಿ ಮಳೆಗಾಲದ ಮಳೆಯಿಂದ ಪೋಷಿಸಲ್ಪಡುತ್ತವೆ.<ref name=riverreport>{{cite book |last=India. |first=Planning Commission |title=Kerala Development Report |year=2008 |publisher=Academic Foundation |isbn=978-8171885947 |page=224 |url=https://books.google.com/books?isbn=8171885942}}</ref> ಕೇರಳದ ನದಿಗಳು ಚಿಕ್ಕದಾಗಿರುವುದರಿಂದ ಮತ್ತು [[ನದೀಮುಖಜ ಭೂಮಿ|ಮುಖಜ ಭೂಮಿಯ]] ಕೊರತೆಯಿಂದಾಗಿ, ಅವು ಪರಿಸರ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತವೆ. ನದಿಗಳು ಮರಳು ಗಣಿಗಾರಿಕೆ ಮತ್ತು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತವೆ.<ref name="Padmalal">{{cite journal | url=https://doi.org/10.1007/s00254-007-0870-z | doi=10.1007/s00254-007-0870-z | title=Environmental effects of river sand mining: A case from the river catchments of Vembanad lake, Southwest coast of India | year=2008 | last1=Padmalal | first1=D. | last2=Maya | first2=K. | last3=Sreebha | first3=S. | last4=Sreeja | first4=R. | journal=Environmental Geology | volume=54 | issue=4 | pages=879–889 | bibcode=2008EnGeo..54..879P | s2cid=129312081 | access-date=12 February 2020 | archive-date=25 November 2023 | archive-url=https://web.archive.org/web/20231125191757/https://link.springer.com/article/10.1007/s00254-007-0870-z | url-status=live | issn = 0943-0105 | url-access=subscription }}</ref> ರಾಜ್ಯವು ಭೂಕುಸಿತ, ಪ್ರವಾಹ ಮತ್ತು ಬರಗಾಲದಂತಹ ಹಲವಾರು ನೈಸರ್ಗಿಕ ಅಪಾಯಗಳನ್ನು ಅನುಭವಿಸುತ್ತದೆ. 2004 ರ [[2004 ರ ಹಿಂದೂ ಮಹಾಸಾಗರದ ಭೂಕಂಪ ಮತ್ತು ಸುನಾಮಿ|ಹಿಂದೂ ಮಹಾಸಾಗರದ ಸುನಾಮಿ]] ಯಿಂದ ರಾಜ್ಯವು ಸಹ ಪರಿಣಾಮ ಬೀರಿತು,<ref name="Jha2010">{{cite book |author=M.K. Jha |title=Natural and Anthropogenic Disasters: Vulnerability, Preparedness and Mitigation |url=https://books.google.com/books?id=fICXQSPJwx8C&pg=PA81 |access-date=18 November 2012 |year=2010 |publisher=Springer |isbn=978-9048124978 |page=81}}</ref> ಮತ್ತು 2018 ರಲ್ಲಿ ಸುಮಾರು ಒಂದು ಶತಮಾನದಲ್ಲಿ [[2018 ಕೇರಳ ಪ್ರವಾಹ|ಕೆಟ್ಟ ಪ್ರವಾಹವನ್ನು]] ಅನುಭವಿಸಿತು.<ref>{{Cite news |url=https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |title=Worst floods in nearly a century kill 44 in India's Kerala state amid torrential monsoon rains |last=Baynes |first=Chris |date=15 August 2018 |work=The Independent |access-date=16 August 2018 |archive-date=23 May 2019 |archive-url=https://web.archive.org/web/20190523232643/https://www.independent.co.uk/news/world/asia/india-worst-floods-flooding-death-monsoon-rain-dead-kerala-kochi-a8493011.html |url-status=live }}</ref> 2024 ರಲ್ಲಿ, ಕೇರಳವು ತನ್ನ ಇತಿಹಾಸದಲ್ಲಿ [[2024 ವಯನಾಡು ಭೂಕುಸಿತ|ಕೆಟ್ಟ ಭೂಕುಸಿತಗಳನ್ನು]] ಅನುಭವಿಸಿತು.<ref>{{Cite news |url=https://www.onmanorama.com/news/kerala/2024/07/30/wayand-landslide-kerala-rain-live.html |title=Wayanad landslides: 133 dead, 481 saved, at least 98 missing |date=30 July 2024 |work=[[Onmanorama]] |access-date=31 July 2024 |archive-date=30 July 2024|archive-url=https://web.archive.org/web/20240730073647/https://www.onmanorama.com/news/kerala/2024/07/30/wayand-landslide-kerala-rain-live.html |url-status=live }}</ref>
=== ಹವಾಮಾನ ===
ವರ್ಷಕ್ಕೆ ಸುಮಾರು 120–140 ಮಳೆಯ ದಿನಗಳೊಂದಿಗೆ,<ref name="Chacko_2002">{{Cite journal |last1=Chacko |first1=T. |last2=Renuka |first2=G. |year=2002 |title=Temperature mapping, thermal diffusivity and subsoil heat flux at Kariavattom, Kerala |journal=Proc Indian Acad Sci (Earth Planet Sci) |volume=111 |issue=1 |pages=79 |title-link=Kariavattom |bibcode=2002InEPS.111...79T |doi=10.1007/BF02702224 |doi-access=free}}</ref>{{rp|80}} ಕೇರಳವು [[ನೈಋತ್ಯ ಮಾನ್ಸೂನ್|ನೈಋತ್ಯ ಬೇಸಿಗೆ ಮಾನ್ಸೂನ್]] ಮತ್ತು [[ಈಶಾನ್ಯ ಮಾನ್ಸೂನ್|ಈಶಾನ್ಯ ಚಳಿಗಾಲದ ಮಾನ್ಸೂನ್]] ನ ಕಾಲಿಕ ಭಾರೀ ಮಳೆಯಿಂದ ಪ್ರಭಾವಿತವಾದ ಆರ್ದ್ರ ಮತ್ತು ಸಮುದ್ರಯಾನ ಉಷ್ಣವಲಯದ ಹವಾಮಾನವನ್ನು ಹೊಂದಿದೆ.<ref name="Devrep">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=223 |access-date=30 May 2015}}</ref> ಸುಮಾರು 65% ಮಳೆಯು ಜೂನ್ ನಿಂದ ಆಗಸ್ಟ್ ವರೆಗೆ ನೈಋತ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ, ಮತ್ತು ಉಳಿದವು ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಈಶಾನ್ಯ ಮಾನ್ಸೂನ್ಗೆ ಅನುಗುಣವಾಗಿ ಬೀಳುತ್ತದೆ.<ref name="Devrep" /> ನೈಋತ್ಯ ಮಾನ್ಸೂನ್ನ ತೇವಾಂಶ-ಹೊತ್ತ ಗಾಳಿಗಳು, [[ಭಾರತೀಯ ಪರ್ಯಾಯ ದ್ವೀಪ]]ದ ಅತ್ಯಂತ ದಕ್ಷಿಣದ ಬಿಂದುವನ್ನು ತಲುಪಿದಾಗ, ಅದರ ಸ್ಥಳಾಕೃತಿಯ ಕಾರಣದಿಂದಾಗಿ, ಎರಡು ಶಾಖೆಗಳಾಗಿ ವಿಭಜನೆಯಾಗುತ್ತವೆ; "ಅರೇಬಿಯನ್ ಸಮುದ್ರ ಶಾಖೆ" ಮತ್ತು "ಬಂಗಾಳ ಕೊಲ್ಲಿಯ ಶಾಖೆ".<ref name="Jain">{{cite book |author=RK Jain |title=Geography 10 |url=https://books.google.com/books?id=7hOybWJeZN0C&pg=PA110 |access-date=18 November 2012 |publisher=Ratna Sagar |isbn=978-8183320818 |page=110}}</ref> ನೈಋತ್ಯ ಮಾನ್ಸೂನ್ನ "ಅರೇಬಿಯನ್ ಸಮುದ್ರ ಶಾಖೆ" ಮೊದಲು ಪಶ್ಚಿಮ ಘಟ್ಟಗಳಿಗೆ ಬಡಿಯುತ್ತದೆ,<ref name="Together with Social Science Term II">{{cite book |title=Together with Social Science Term II |url=https://books.google.com/books?id=oOA1nsSU8JYC&pg=PA112 |access-date=18 November 2012 |publisher=Rachna Sagar |isbn=978-8181373991 |page=112}}</ref> ನೈಋತ್ಯ ಮಾನ್ಸೂನ್ನಿಂದ ಮಳೆಯನ್ನು ಪಡೆಯುವ ಭಾರತದ ಮೊದಲ ರಾಜ್ಯವಾಗಿ ಕೇರಳವನ್ನು ಮಾಡುತ್ತದೆ.<ref name="google6">{{cite book |author1=Edgar Thorpe, Showick Thorpe |author2=Thorpe Edgar |title=The Pearson CSAT Manual 2011 |url=https://books.google.com/books?id=WuBFs6yFRwcC&pg=SL7-PA168 |access-date=18 November 2012 |publisher=Pearson Education India |isbn=978-8131758304 |page=7}}</ref><ref name="Aggarwal">{{cite book |author1=N.N. Kher |author2=Jaideep Aggarwal |title=A Text Book of Social Sciences |url=https://books.google.com/books?id=jV6k0FvIC4sC&pg=RA5-PA16 |access-date=18 November 2012 |publisher=Pitambar Publishing |isbn=978-8120914667 |page=5}}</ref> ಈಶಾನ್ಯ ಮಾನ್ಸೂನ್ನಲ್ಲಿ ಒತ್ತಡದ ಮಾದರಿಗಳ ವಿತರಣೆಯು ಹಿಮ್ಮುಖವಾಗುತ್ತದೆ, ಈ ಋತುವಿನಲ್ಲಿ ಉತ್ತರ ಭಾರತದಿಂದ ತಣ್ಣನೆಯ ಗಾಳಿಗಳು ಬಂಗಾಳ ಕೊಲ್ಲಿಯಿಂದ ತೇವಾಂಶವನ್ನು ಪಡೆದುಕೊಳ್ಳುತ್ತವೆ ಮತ್ತು ಪರ್ಯಾಯ ದ್ವೀಪ ಭಾರತದ ಪೂರ್ವ ಕರಾವಳಿಯಲ್ಲಿ ಅದನ್ನು ಮಳೆಯಾಗಿ ಸುರಿಸುತ್ತವೆ.<ref name="google7">{{cite book |author1=Sarina Singh |author2=Amy Karafin |author3=Anirban Mahapatra |title=South India |url=https://books.google.com/books?id=8KnLFpjEHpUC&pg=PA15 |access-date=18 November 2012 |year=2009 |publisher=Lonely Planet |isbn=978-1-74179-155-6 |page=15}}</ref><ref name="Reddy">{{cite book |author=S.V. Jeevananda Reddy |title=Climate Change: Myths and Realities |url=https://books.google.com/books?id=y_GMTXRtxJ8C&pg=PA71 |access-date=18 November 2012 |publisher=Jeevananda Reddy |page=71 |id=GGKEY:WDFHBL1XHK3}}</ref> ಕೇರಳದಲ್ಲಿ, ಈಶಾನ್ಯ ಮಾನ್ಸೂನ್ನ ಪ್ರಭಾವವು ದಕ್ಷಿಣ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುತ್ತದೆ.<ref>{{Cite book |author=Rao |title=Agricultural Meteorology |url=https://books.google.com/books?id=Kd-3lt-yAtAC&pg=PA173 |publisher=PHI Learning |year=2008 |isbn=978-8120333383 |pages=173–74 |access-date=30 May 2015}}</ref> ಕೇರಳದ ಮಳೆಯು ವಾರ್ಷಿಕವಾಗಿ ಸರಾಸರಿ 2,923 mm (115 in) ಆಗಿದೆ.<ref name="IMD">{{cite web |url=https://www.imd.gov.in/section/hydro/dynamic/rfmaps/updated.html |title=Hydromet Division Updated/Real Time Maps |publisher=[[India Meteorological Department]] |access-date=21 October 2014 |archive-url=https://web.archive.org/web/20160305062728/https://www.imd.gov.in/section/hydro/dynamic/rfmaps/updated.html |archive-date=5 March 2016 |url-status=dead}}</ref> ಕೇರಳದ ಕೆಲವು ಶುಷ್ಕ ತಗ್ಗು ಪ್ರದೇಶಗಳು ಸರಾಸರಿ ಕೇವಲ 1,250 mm (49 in) ಪಡೆಯುತ್ತವೆ; ಪೂರ್ವ [[ಇಡುಕ್ಕಿ ಜಿಲ್ಲೆ]]ಯ ಪರ್ವತಗಳು 5,000 mm (197 in) ಗಿಂತ ಹೆಚ್ಚು [[ಮಳೆ (ಹವಾಮಾನಶಾಸ್ತ್ರ)#ಶಿಲಾವೃಷ್ಟಿ ಮಳೆ|ಶಿಲಾವೃಷ್ಟಿ ಮಳೆಯನ್ನು]] ಪಡೆಯುತ್ತವೆ: ರಾಜ್ಯದಲ್ಲಿ ಅತಿ ಹೆಚ್ಚು. ಪೂರ್ವ ಕೇರಳದಲ್ಲಿ, ಶುಷ್ಕ ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಹವಾಮಾನವು ಪ್ರಚಲಿತವಾಗಿದೆ. ಬೇಸಿಗೆಯಲ್ಲಿ, ರಾಜ್ಯವು ಭಾರಿ ಗಾಳಿ, ಸುಂಟರಗಾಳಿ, ಚಂಡಮಾರುತ-ಸಂಬಂಧಿತ ಧಾರಾಕಾರ ಮಳೆ, ಸಾಂದರ್ಭಿಕ ಬರಗಾಲ ಮತ್ತು ಸಮುದ್ರ ಮಟ್ಟದ ಏರಿಕೆಗೆ ಒಳಗಾಗುತ್ತದೆ.<ref name="Brenkert_Malone_2003">{{Cite journal |last1=Brenkert |first1=A. |last2=Malone |first2=E. |year=2003 |title=Vulnerability and resilience of India and Indian states to climate change: a first-order approximation |journal=Joint Global Change Research Institute}}</ref>{{rp|26, 46, 52}} ಸರಾಸರಿ ದೈನಂದಿನ ತಾಪಮಾನವು 19.8 °C ನಿಂದ 36.7 °C ವರೆಗೆ ಇರುತ್ತದೆ.<ref name="moef">{{cite web |last=Sudha |first=T. M. |title=Opportunities in participatory planning to Evolve a Landuse Policy for Western Ghats Region in Kerala |url=https://moef.nic.in/downloads/public-information/tenth/Annexure%203.pdf |publisher=Department of Town and Country Planning, Kerala |page=14 |access-date=18 January 2015 |archive-url=https://web.archive.org/web/20160325095604/https://www.moef.nic.in/downloads/public-information/tenth/Annexure%203.pdf |archive-date=25 March 2016 |url-status=dead}}</ref> ವಾರ್ಷಿಕ ಸರಾಸರಿ ತಾಪಮಾನವು ಕರಾವಳಿ ತಗ್ಗು ಪ್ರದೇಶಗಳಲ್ಲಿ 25.0 ರಿಂದ 27.5 °C ವರೆಗೆ ಮತ್ತು ಪೂರ್ವ ಎತ್ತರದ ಪ್ರದೇಶಗಳಲ್ಲಿ 20.0–22.5 °C ವರೆಗೆ ಇರುತ್ತದೆ.<ref name="Brenkert_Malone_2003" />{{rp|65}}
=== ಸಸ್ಯ ಮತ್ತು ಪ್ರಾಣಿ ===
{{Main|ಕೇರಳದ ಸಸ್ಯ ಮತ್ತು ಪ್ರಾಣಿ}}
{{Multiple image
| direction = vertical
| width = 220
| image1 = Ichthyaetus ichthyaetus Kadalundi.jpg
| caption1 = [[ಕಡಲುಂಡಿ ಪಕ್ಷಿ ಅಭಯಾರಣ್ಯ|ಕಡಲುಂಡಿ ಪಕ್ಷಿ ಅಭಯಾರಣ್ಯದಲ್ಲಿ]] ಒಂದು ವಲಸೆ ''[[ಇಚ್ಥ್ಯಾಏಟಸ್]]''
| image2 = Highland Grassland Shola of Silent Valley National Park.jpg
| caption2 = [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]]
| image3 = Munnarhills.jpg
| caption3 = [[ಏಲಕ್ಕಿ ಬೆಟ್ಟಗಳು]] ತಮ್ಮ [[ಜೈವಿಕ ವೈವಿಧ್ಯತೆ]]ಗೆ ಹೆಸರುವಾಸಿಯಾಗಿದೆ
}}
ಹೆಚ್ಚಿನ [[ಜೈವಿಕ ವೈವಿಧ್ಯತೆ]]ಯು [[ಪಶ್ಚಿಮ ಘಟ್ಟಗಳಲ್ಲಿ]] ಕೇಂದ್ರೀಕೃತವಾಗಿದೆ ಮತ್ತು ರಕ್ಷಿಸಲ್ಪಟ್ಟಿದೆ. 18 ನೇ ಶತಮಾನದವರೆಗೆ ಕೇರಳದ ಮೂರು-ನಾಲ್ಕು ಭಾಗದಷ್ಟು ಭೂ ಪ್ರದೇಶವು ದಟ್ಟವಾದ ಅರಣ್ಯದ ಅಡಿಯಲ್ಲಿತ್ತು.<ref name="History">{{cite web |url=https://www.forest.kerala.gov.in/index.php?option=com_content&view=article&id=46&Itemid=2 |title=History |access-date=12 August 2015 |publisher=Kerala forests and wildlife department |archive-date=12 September 2015 |archive-url=https://web.archive.org/web/20150912231001/http://www.forest.kerala.gov.in/index.php?option=com_content&view=article&id=46&Itemid=2 |url-status=dead }}</ref> 2004 ರಂತೆ, ಭಾರತದ 15,000 ಸಸ್ಯ ಪ್ರಭೇದಗಳಲ್ಲಿ 25% ಕ್ಕಿಂತ ಹೆಚ್ಚು ಕೇರಳದಲ್ಲಿವೆ. 4,000 [[ಹೂಬಿಡುವ ಸಸ್ಯ]] ಪ್ರಭೇದಗಳಲ್ಲಿ; ಅವುಗಳಲ್ಲಿ 1,272 [[ಸ್ಥಳೀಯ (ಪರಿಸರ ವಿಜ್ಞಾನ)|ಕೇರಳಕ್ಕೆ ಸ್ಥಳೀಯವಾಗಿವೆ]], 900 [[ಸಸ್ಯವೈದ್ಯ|ಔಷಧೀಯವಾಗಿವೆ]], ಮತ್ತು 159 [[ಅಳಿವಿನಂಚಿನಲ್ಲಿರುವ ಪ್ರಭೇದಗಳು|ಬೆದರಿಕೆಗೆ ಒಳಗಾಗಿವೆ]].<ref name="Sreedharan_2004">{{Cite journal |author=Sreedharan TP |year=2004 |title=Biological Diversity of Kerala: A survey of Kalliasseri panchayat, Kannur district |journal=Centre for Development Studies |url=https://krpcds.org/publication/downloads/62.pdf |archive-url=https://web.archive.org/web/20090326054155/https://krpcds.org/publication/downloads/62.pdf |archive-date=26 March 2009 |access-date=28 December 2008}}</ref>{{rp|11}} ಇದರ {{cvt|9,400|km2}} ಕಾಡುಗಳು ಉಷ್ಣವಲಯದ ಆರ್ದ್ರ ನಿತ್ಯಹಸಿರು ಮತ್ತು ಅರೆ-ನಿತ್ಯಹಸಿರು ಕಾಡುಗಳು (ಕೆಳ ಮತ್ತು ಮಧ್ಯಮ ಎತ್ತರಗಳು—3,470 km<sup>2</sup>), ಉಷ್ಣವಲಯದ ಆರ್ದ್ರ ಮತ್ತು ಶುಷ್ಕ ಪತನಶೀಲ ಕಾಡುಗಳು (ಮಧ್ಯಮ ಎತ್ತರಗಳು—4,100 km<sup>2</sup> ಮತ್ತು {{cvt|100|km2}}, ಕ್ರಮವಾಗಿ), ಮತ್ತು ಪರ್ವತ ಉಪೋಷ್ಣವಲಯ ಮತ್ತು [[ಸಮಶೀತೋಷ್ಣ]] (''ಶೋಲ'') ಕಾಡುಗಳು (ಅತಿ ಎತ್ತರದ ಎತ್ತರಗಳು—100 km<sup>2</sup>) ಒಳಗೊಂಡಿವೆ. ಒಟ್ಟಾರೆಯಾಗಿ, ಕೇರಳದ 24% ಅರಣ್ಯವಾಗಿದೆ.<ref name="Sreedharan_2004" />{{rp|12}} ವಿಶ್ವದ [[ರಾಮ್ಸರ್ ಒಪ್ಪಂದ]]ದಲ್ಲಿ ಪಟ್ಟಿ ಮಾಡಲಾದ ನಾಲ್ಕು [[ಜವುಗು ಪ್ರದೇಶ]]ಗಳು—[[ಶಾಸ್ತಾಂಕೋಟ್ಟ ಸರೋವರ|ಸರೋವರ ಶಾಸ್ತಾಂಕೋಟ್ಟ]], [[ಅಷ್ಟಮುಡಿ ಸರೋವರ]], [[ತೃಶೂರ್-ಪೊನ್ನಾನಿ ಕೋಲ್ ಜವುಗು ಪ್ರದೇಶಗಳು]], ಮತ್ತು ವೇಂಬನಾಡು-ಕೋಲ್ ಜವುಗು ಪ್ರದೇಶಗಳು—ಕೇರಳದಲ್ಲಿವೆ,{{sfn|Chandran|2018|p=342}} ಜೊತೆಗೆ ವಿಶಾಲವಾದ [[ನೀಲಗಿರಿ ಜೀವಗೋಳ ಮೀಸಲು]]ಯ {{cvt|1455.4|km2}} ಮತ್ತು [[ಅಗಸ್ತ್ಯಮಲೈ ಜೀವಗೋಳ ಮೀಸಲು]]ಯ {{cvt|1828|km2}} ಸೇರಿವೆ.{{sfn|Chandran|2018|p=347}} 20 ನೇ ಶತಮಾನದಲ್ಲಿ ಬೇಸಾಯಕ್ಕಾಗಿ ವ್ಯಾಪಕವಾಗಿ ತೆರವುಗೊಳಿಸಲ್ಪಟ್ಟಿದ್ದು,<ref name="Jayarajan_2004">{{Cite journal |author=Jayarajan M |year=2004 |title=Sacred Groves of North Malabar |journal=Centre for Development Studies |url=https://krpcds.org/publication/downloads/92.pdf |archive-url=https://web.archive.org/web/20090326054142/https://krpcds.org/publication/downloads/92.pdf |archive-date=26 March 2009 |access-date=28 December 2008}}</ref>{{rp|6–7}} ಉಳಿದ ಅರಣ್ಯ ಹೊದಿಕೆಯ ಹೆಚ್ಚಿನ ಭಾಗವನ್ನು ಈಗ [[ಸ್ಪಷ್ಟ ಕಡಿತ]]ದಿಂದ ರಕ್ಷಿಸಲಾಗಿದೆ.<ref name="Evans2008">{{cite book |author=Julian Evans |title=The Forests Handbook, Applying Forest Science for Sustainable Management |url=https://books.google.com/books?id=Ol_CCkYQNKIC&pg=PA235 |access-date=18 November 2012 |year=2008 |publisher=John Wiley & Sons |isbn=978-0-470-75683-6 |page=235}}</ref> ಪೂರ್ವ ಕೇರಳದ ಗಾಳಿಗೆ ಮುಖವಾದ ಪರ್ವತಗಳು [[ಉಷ್ಣವಲಯ ಮತ್ತು ಉಪೋಷ್ಣವಲಯದ ಆರ್ದ್ರ ಪರ್ಣಪಾತಿ ಕಾಡುಗಳು|ಉಷ್ಣವಲಯದ ಆರ್ದ್ರ ಕಾಡುಗಳನ್ನು]] ಮತ್ತು [[ಉಷ್ಣವಲಯ ಮತ್ತು ಉಪೋಷ್ಣವಲಯದ ಶುಷ್ಕ ಪರ್ಣಪಾತಿ ಕಾಡುಗಳು|ಉಷ್ಣವಲಯದ ಶುಷ್ಕ ಕಾಡುಗಳನ್ನು]] ಆಶ್ರಯಿಸುತ್ತವೆ, ಇವು ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿವೆ.<ref name="google8">{{cite book |author1=R. P. Singh |author2=Zubairul Islam |title=Environmental Studies |url=https://books.google.com/books?id=gaQptMlw3X8C&pg=PA172 |access-date=18 November 2012 |publisher=Concept Publishing Company |isbn=978-8180697746 |page=172 |year=2012 |archive-date=25 November 2023 |archive-url=https://web.archive.org/web/20231125191749/https://books.google.com/books?id=gaQptMlw3X8C&pg=PA172#v=onepage&q&f=false |url-status=live }}</ref><ref name="Geer2008">{{cite book |author=Alexandra Anna Enrica van der Geer |title=Animals in Stone: Indian Mammals Sculptured Through Time |url=https://books.google.com/books?id=oQ3quxh9gsgC&pg=PA7 |access-date=18 November 2012 |year=2008 |publisher=Brill |isbn=978-9004168190 |page=7}}</ref> ವಿಶ್ವದ ಅತ್ಯಂತ ಹಳೆಯ ತೇಗದ ತೋಟ 'ಕೊನೊಲ್ಲಿಸ್ ಪ್ಲಾಟ್' [[ನಿಲಂಬೂರು|ನಿಲಂಬೂರಿನಲ್ಲಿದೆ]].<ref>{{Cite web |url=https://www.dnaindia.com/india/report-world-s-oldest-teak-trees-dying-in-kerala-1255723 |title=World's oldest teak trees dying in Kerala |date=13 May 2009 |website=DNA India |access-date=25 November 2020 |archive-date=15 April 2021 |archive-url=https://web.archive.org/web/20210415102931/https://www.dnaindia.com/india/report-world-s-oldest-teak-trees-dying-in-kerala-1255723 |url-status=live }}</ref>
ಕೇರಳದ ಪ್ರಾಣಿಗಳು ಅವುಗಳ ವೈವಿಧ್ಯತೆ ಮತ್ತು ಹೆಚ್ಚಿನ ಸ್ಥಳೀಯತೆಯ ಪ್ರಮಾಣಕ್ಕೆ ಗಮನಾರ್ಹವಾಗಿವೆ: ಇದು 118 [[ಸಸ್ತನಿ]] ಪ್ರಭೇದಗಳನ್ನು (1 ಸ್ಥಳೀಯ), [[ಕೇರಳದ ಪಕ್ಷಿಗಳ ಪಟ್ಟಿ|500 ಪಕ್ಷಿ ಪ್ರಭೇದಗಳು]], 189 ಸಿಹಿನೀರಿನ ಮೀನು ಪ್ರಭೇದಗಳು, 173 [[ಸರೀಸೃಪ]] ಪ್ರಭೇದಗಳು (ಅವುಗಳಲ್ಲಿ 10 ಸ್ಥಳೀಯ), ಮತ್ತು 151 [[ಉಭಯಚರ]] ಪ್ರಭೇದಗಳನ್ನು (36 ಸ್ಥಳೀಯ) ಒಳಗೊಂಡಿದೆ.<ref>{{Cite web |url=https://threatenedtaxa.org/index.php/JoTT/article/view/1999/3443 |archive-url=https://web.archive.org/web/20161007224232/https://threatenedtaxa.org/index.php/JoTT/article/view/1999/3443 |url-status=dead |title=View of A checklist of the vertebrates of Kerala State, India | Journal of Threatened Taxa |archive-date=7 October 2016 |website=threatenedtaxa.org}}</ref> ಇವುಗಳು ವ್ಯಾಪಕವಾದ ಆವಾಸಸ್ಥಾನ ನಾಶ, ಮಣ್ಣಿನ ಸವಕಳಿ, ಭೂಕುಸಿತ, [[ಮಣ್ಣಿನ ಲವಣೀಕರಣ|ಉಪ್ಪಿನಂಶ]], ಮತ್ತು ಸಂಪನ್ಮೂಲ ಹೊರತೆಗೆಯುವಿಕೆಯಿಂದ ಬೆದರಿಕೆಗೆ ಒಳಗಾಗಿವೆ. ಕಾಡುಗಳಲ್ಲಿ, ''ಸೋನೋಕೆಲಿಂಗ್'', ''[[ಡಾಲ್ಬರ್ಗಿಯಾ ಲ್ಯಾಟಿಫೋಲಿಯಾ]]'', ''ಅಂಜಿಲಿ'', ''ಮುಲ್ಲುಮುರಿಕ್ಕು'', ''[[ಎರಿಥ್ರಿನಾ]]'', ಮತ್ತು ''[[ಸಿನ್ನಮೋಮಮ್ ಕ್ಯಾಸಿಯಾ|ಕ್ಯಾಸಿಯಾ]]'' ಕೇರಳದ 1,000 ಕ್ಕೂ ಹೆಚ್ಚು ಮರ ಪ್ರಭೇದಗಳಲ್ಲಿ ಸೇರಿವೆ. ಇತರ ಸಸ್ಯಗಳಲ್ಲಿ [[ಬಿದಿರು]], ಕಾಡು ಕರಿಮೆಣಸು, ಕಾಡು [[ಏಲಕ್ಕಿ]], [[ಕ್ಯಾಲಮಸ್ (ತಾಳೆ)|ಕ್ಯಾಲಮಸ್]] [[ರಟ್ಟನ್]] ತಾಳೆ, ಮತ್ತು ಸುಗಂಧಯುಕ್ತ ವೆಟಿವರ್ ಹುಲ್ಲು, ''ವೆಟಿವೇರಿಯಾ ಝಿಝಾನಿಯಾಯ್ಡ್ಸ್'' ಸೇರಿವೆ.<ref name="Sreedharan_2004" />{{rp|12}} [[ಭಾರತೀಯ ಆನೆ]], [[ಬಂಗಾಳ ಹುಲಿ]], [[ಭಾರತೀಯ ಚಿರತೆ]], [[ನೀಲಗಿರಿ ತಾರ್]], [[ಸಾಮಾನ್ಯ ತಾಳೆ ನರಿ]], ಮತ್ತು [[ಬೂದು ದೈತ್ಯ ಅಳಿಲು]]ಗಳು ಸಹ ಕಾಡುಗಳಲ್ಲಿ ಕಂಡುಬರುತ್ತವೆ.<ref name="Sreedharan_2004" />{{rp|12, 174–75}} ಸರೀಸೃಪಗಳಲ್ಲಿ [[ರಾಜ ನಾಗ]], [[ವೈಪೆರಿಡೆ|ಹಾವು]], [[ಪೈಥಾನ್]], ಮತ್ತು [[ಚಿಪ್ಪು ಮೊಸಳೆ]] ಸೇರಿವೆ. ಕೇರಳದ ಪಕ್ಷಿಗಳಲ್ಲಿ [[ಮಲಬಾರ್ ಟ್ರೋಗನ್]], [[ಮಹಾಶಿಖಿ]], [[ಕೇರಳ ಕುಕ್ಕುರ]], [[ಡಾರ್ಟರ್]] ಮತ್ತು [[ದಕ್ಷಿಣ ಬೆಟ್ಟ ಮೈನಾ]] ಸೇರಿವೆ. ಸರೋವರಗಳು, ಜವುಗು ಪ್ರದೇಶಗಳು ಮತ್ತು ಜಲಮಾರ್ಗಗಳಲ್ಲಿ, [[ಹೆಟೆರೋಪ್ನ್ಯೂಸ್ಟಿಸ್ ಫಾಸಿಲಿಸ್|ಕಾಡು]], [[ರೆಡ್ ಲೈನ್ ಟಾರ್ಪಿಡೋ ಬಾರ್ಬ್]] ಮತ್ತು ''ಚೂಟ್ಟಾಚಿ''; [[ಆರೆಂಜ್ ಕ್ರೋಮೈಡ್]]—''ಎಟ್ರೋಪ್ಲಸ್ ಮ್ಯಾಕುಲಾಟಸ್'' ಮುಂತಾದ ಮೀನುಗಳು ಕಂಡುಬರುತ್ತವೆ.<ref>{{cite book |last1=Institute |first1=Kerala Forest Research |title=Biodiversity Documentation for Kerala: Freshwater fishes |year=2003 |publisher=Kerala Forest Research Institute |isbn=978-8185041544 |url=https://books.google.com/books?id=SYcPAQAAMAAJ&q=fishes+in+kerala |language=en |access-date=18 October 2020 |archive-date=25 November 2023 |archive-url=https://web.archive.org/web/20231125192259/https://books.google.com/books?id=SYcPAQAAMAAJ&q=fishes+in+kerala |url-status=live }}</ref><ref name="Sreedharan_2004" />{{rp|163–65}} ಇತ್ತೀಚೆಗೆ, ಕೇರಳದ ವಡಕರಾ ಕರಾವಳಿಯಿಂದ ಸಂಗ್ರಹಿಸಿದ ಹೊಸದಾಗಿ ವಿವರಿಸಲಾದ ಟಾರ್ಡಿಗ್ರೇಡ್ (ನೀರಿನ ಕರಡಿಗಳು) ಪ್ರಭೇದವನ್ನು ಕೇರಳ ರಾಜ್ಯದ ಹೆಸರಿನಿಂದ ಹೆಸರಿಸಲಾಗಿದೆ; ''[[ಸ್ಟೈಗಾರ್ಕ್ಟಸ್ ಕೇರಳೆನ್ಸಿಸ್]]''.<ref>{{cite journal |last1=Vishnudattan |first1=N. K. |display-authors=etal |title=A new Tardigrade species, Stygarctus keralensis sp. nov. (Arthrotardigrada: Stygarctidae) from the intertidal zone of Southwest coast of India |url=https://www.mapress.com/zt/article/view/42726 |date=15 June 2021 |journal=[[Zootaxa]] |volume=4985 |issue=3 |page=381391 |doi=10.11646/zootaxa.4985.3.5 |pmid=34186802 |s2cid=235688035 |access-date=22 June 2021 |archive-date=27 November 2021 |archive-url=https://web.archive.org/web/20211127214807/https://www.mapress.com/zt/article/view/zootaxa.4985.3.5 |url-status=live |url-access=subscription }}</ref>
== ಪ್ರದೇಶಗಳು, ಜಿಲ್ಲೆಗಳು ಮತ್ತು ನಗರಗಳು ==
{{Main|ಕೇರಳದ ಆಡಳಿತ ವಿಭಾಗಗಳು|ಕೇರಳದ ಜಿಲ್ಲೆಗಳು|ಕೇರಳದ ಆದಾಯ ವಿಭಾಗಗಳ ಪಟ್ಟಿ|ಕೇರಳದ ತಾಲೂಕುಗಳ ಪಟ್ಟಿ|ಕೇರಳದ ನಗರಗಳು ಮತ್ತು ಪಟ್ಟಣಗಳ ಪಟ್ಟಿ}}
{{See also|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ರಾಜ್ಯದ [[ಕೇರಳದ ಜಿಲ್ಲೆಗಳ ಪಟ್ಟಿ|14 ಜಿಲ್ಲೆಗಳನ್ನು]] ಆರು ಪ್ರದೇಶಗಳಾಗಿ ವಿತರಿಸಲಾಗಿದೆ: [[ಉತ್ತರ ಮಲಬಾರ್]] (ದೂರದ-ಉತ್ತರ ಕೇರಳ), [[ದಕ್ಷಿಣ ಮಲಬಾರ್]] (ಉತ್ತರ-ಮಧ್ಯ ಕೇರಳ), [[ಕೊಚ್ಚಿ]] (ಮಧ್ಯ ಕೇರಳ), [[ಉತ್ತರ ತಿರುವಾಂಕೂರು]] (ದಕ್ಷಿಣ-ಮಧ್ಯ ಕೇರಳ), [[ಮಧ್ಯ ತಿರುವಾಂಕೂರು]] (ದಕ್ಷಿಣ ಕೇರಳ) ಮತ್ತು [[ದಕ್ಷಿಣ ತಿರುವಾಂಕೂರು]] (ದೂರದ-ದಕ್ಷಿಣ ಕೇರಳ). ತೆರಿಗೆ ಮತ್ತು ಭೂ ಆದಾಯ ಉದ್ದೇಶಗಳಿಗಾಗಿ ಆಡಳಿತ ಪ್ರದೇಶಗಳಾಗಿ ಕಾರ್ಯನಿರ್ವಹಿಸುವ ಜಿಲ್ಲೆಗಳನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳು|27 ಆದಾಯ ವಿಭಾಗಗಳಾಗಿ]] ಮತ್ತು [[ಕೇರಳದ ತಾಲೂಕುಗಳ ಪಟ್ಟಿ|77 ತಾಲೂಕುಗಳಾಗಿ]] ವಿಂಗಡಿಸಲಾಗಿದೆ, ಇವುಗಳು ತಮ್ಮ ಗಡಿಗಳೊಳಗಿನ ವಸಾಹತುಗಳ ಮೇಲೆ ಆಡಳಿತ ಮತ್ತು ಆರ್ಥಿಕ ಅಧಿಕಾರಗಳನ್ನು ಹೊಂದಿವೆ, ಸ್ಥಳೀಯ ಭೂ ದಾಖಲೆಗಳ ನಿರ್ವಹಣೆ ಸೇರಿದಂತೆ. ಕೇರಳದ ತಾಲೂಕುಗಳನ್ನು ಮತ್ತಷ್ಟು 1,674 [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ.<ref>{{cite web |url=https://ildm.kerala.gov.in/wp-content/uploads/2018/01/Revenue-Guide-2018.pdf |title=Revenue Guide 2018 |date= |website=[[Government of Kerala]] |access-date=28 September 2020 |archive-date=20 September 2020 |archive-url=https://web.archive.org/web/20200920133932/https://ildm.kerala.gov.in/wp-content/uploads/2018/01/Revenue-Guide-2018.pdf |url-status=live }}</ref><ref>{{Cite web |url=https://kerala.gov.in/revenue-department |title=Revenue department, government of Kerala |access-date=28 September 2020 |archive-date=17 August 2021 |archive-url=https://web.archive.org/web/20210817225825/https://kerala.gov.in/revenue-department |url-status=dead}}</ref>
[[ಭಾರತದ ಸಂವಿಧಾನದ ತಿದ್ದುಪಡಿಗಳ ಪಟ್ಟಿ|73 ಮತ್ತು 74 ನೇ]] ಸಾಂವಿಧಾನಿಕ ತಿದ್ದುಪಡಿಗಳಿಂದ, ಕೇರಳದಲ್ಲಿ ಸ್ಥಳೀಯ ಸ್ವಯಂ-ಸರ್ಕಾರಿ ಸಂಸ್ಥೆಗಳು ಸರ್ಕಾರದ ಮೂರನೇ ಹಂತವಾಗಿ ಕಾರ್ಯನಿರ್ವಹಿಸುತ್ತವೆ, ಗ್ರಾಮೀಣ ಆಡಳಿತಕ್ಕಾಗಿ 14 [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳು]], 152 [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು 941 [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], ಮತ್ತು ನಗರ ಆಡಳಿತಕ್ಕಾಗಿ 87 [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]], ಆರು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿವೆ.<ref>{{cite web |title=Local Self Governance in Kerala |url=https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |publisher=Government of Kerala |access-date=28 September 2020 |archive-date=28 September 2021 |archive-url=https://web.archive.org/web/20210928223404/https://kerala.gov.in/local-self-governance#:~:text=Local%20Self-Governance%20Page&text=At%20present,%20there%20are%201200,Municipalities%20and%206%20Municipal%20Corporations |url-status=dead}}</ref>
[[ಮಾಹೆ, ಭಾರತ|ಮಾಹೆ]], ಭಾರತೀಯ [[ಕೇಂದ್ರಾಡಳಿತ ಪ್ರದೇಶ]] [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]]ಯ ಒಂದು ಭಾಗವಾಗಿದ್ದು,<ref>{{cite web |url=https://www.censusindia.net/results/town.php?stad=A&state5=999 |archive-url=https://web.archive.org/web/20040616075334/https://www.censusindia.net/results/town.php?stad=A&state5=999 |archive-date=16 June 2004 |title=Census of India 2001: Data from the 2001 Census, including cities, villages and towns (Provisional) |access-date=1 November 2008 |publisher=Census Commission of India}}</ref> ಇದು {{convert|647|km}} ದೂರದಲ್ಲಿದ್ದರೂ,<ref name="ShiraAssociates.2012">{{cite book |author1=Dezan Shira |author2=Associates. |title=Doing Business in India |url=https://books.google.com/books?id=9YjXW41yMwQC&pg=PT313 |access-date=18 November 2012 |year=2012 |publisher=Springer |isbn=978-3-642-27618-7 |pages=313–}}</ref> ಇದು ಕೇರಳದಿಂದ ಅದರ ಎಲ್ಲಾ ಭೂಮುಖ ವಿಧಾನಗಳಲ್ಲಿ ಸುತ್ತುವರೆದಿರುವ ಕರಾವಳಿ ಬಹಿರಂಗವಾಗಿದೆ. [[ಕಣ್ಣೂರು ಜಿಲ್ಲೆ|ಕಣ್ಣೂರು ಜಿಲ್ಲೆಯು]] ಮೂರು ಕಡೆ ಮಾಹೆಯನ್ನು ಸುತ್ತುವರೆದಿದೆ ಮತ್ತು ನಾಲ್ಕನೇ ಕಡೆ [[ಕೋಝಿಕೋಡ್ ಜಿಲ್ಲೆ|ಕೋಝಿಕೋಡ್ ಜಿಲ್ಲೆಯಿದೆ]].<ref name="Menon2002">{{cite book |author1=D Banerjea |author2=N. R. Madhava Menon |title=Criminal Justice India Series, Vol. 20 |url=https://books.google.com/books?id=Axfuc5A8mxMC&pg=PA9 |access-date=18 November 2012 |year=2002 |publisher=Allied Publishers |isbn=978-8177648713 |pages=9–}}</ref>
1664 ರಲ್ಲಿ, [[ಫೋರ್ಟ್ ಕೊಚ್ಚಿ]] ಪುರಸಭೆಯನ್ನು [[ಡಚ್ ಮಲಬಾರ್]] ಸ್ಥಾಪಿಸಿತು, ಇದು [[ಭಾರತೀಯ ಉಪಖಂಡ]]ದ ಮೊದಲ ಪುರಸಭೆಯಾಗಿದೆ, ಇದು 18 ನೇ ಶತಮಾನದಲ್ಲಿ ಡಚ್ ಅಧಿಕಾರವು ದುರ್ಬಲಗೊಂಡಾಗ ವಿಸರ್ಜಿಸಲಾಯಿತು.<ref name="d_1664">{{Cite news |title=50 years on, Kochi still has a long way to go |url=https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |last=M K Sunil Kumar |date=26 September 2017 |access-date=1 June 2021 |work=The Times of India |archive-date=2 June 2021 |archive-url=https://web.archive.org/web/20210602230954/https://timesofindia.indiatimes.com/city/kochi/50-years-on-kochi-still-has-a-long-way-to-go/articleshow/60835311.cms |url-status=live }}</ref> [[ಕೋಝಿಕೋಡ್]], [[ಪಾಲಕ್ಕಾಡ್]], [[ಫೋರ್ಟ್ ಕೊಚ್ಚಿ]], [[ಕಣ್ಣೂರು]], ಮತ್ತು [[ತಲಶ್ಶೇರಿ]] ಪುರಸಭೆಗಳನ್ನು 1 ನವೆಂಬರ್ 1866 ರಂದು<ref name="Ref1">{{cite web |title=Chronological List of Central Acts (Updated up to 17-10-2014) |url=https://www.lawmin.nic.in/chronology.doc |url-status=dead |archive-url=https://web.archive.org/web/20180107091128/http://lawmin.nic.in/chronology.doc |archive-date=7 January 2018 |access-date=7 August 2016 |website=Lawmin.nic.in}}</ref><ref name="c1881">{{cite book |last1=Lewis McIver |first1=G. Stokes |url=https://books.google.com/books?id=b_YIAAAAQAAJ |title=Imperial Census of 1881 Operations and Results in the Presidency of Madras |publisher=E.Keys at the Government Press |year=1883 |edition=(Vol II) |location=Madras |page=444 |access-date=5 December 2020 |archive-url=https://web.archive.org/web/20230327063433/https://books.google.com/books?id=b_YIAAAAQAAJ |archive-date=27 March 2023 |url-status=live}}</ref><ref name="google.co.in">{{cite book |last1=Presidency |first1=Madras (India |url=https://books.google.com/books?id=aUEwnQEACAAJ |title=Madras District Gazetteers, Statistical Appendix For Malabar District. |publisher=The Superintendent, Government Press |year=1915 |edition=Vol.2 |location=Madras |page=20 |language=en |access-date=2 December 2020 |archive-url=https://web.archive.org/web/20230327063433/https://books.google.com/books?id=aUEwnQEACAAJ |archive-date=27 March 2023 |url-status=live}}</ref><ref name="gazetteer" /> [[ಬ್ರಿಟಿಷ್ ಭಾರತ ಸಾಮ್ರಾಜ್ಯ]]ದಲ್ಲಿ ಸ್ಥಾಪಿಸಲಾಯಿತು, ಇದು ಕೇರಳ ರಾಜ್ಯದ ಮೊದಲ ಆಧುನಿಕ ಪುರಸಭೆಗಳಾಗಿವೆ. [[ತಿರುವನಂತಪುರ]] ಪುರಸಭೆಯು 1920 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಎರಡು ದಶಕಗಳ ನಂತರ, [[ಶ್ರೀ ಚಿತಿರಾ ತಿರುನಾಳ್]] ರ ಆಳ್ವಿಕೆಯಲ್ಲಿ, ತಿರುವನಂತಪುರ ಪುರಸಭೆಯನ್ನು 30 ಅಕ್ಟೋಬರ್ 1940 ರಂದು ನಿಗಮವಾಗಿ ಪರಿವರ್ತಿಸಲಾಯಿತು, ಇದು ಕೇರಳದ ಅತ್ಯಂತ ಹಳೆಯ ನಗರ ನಿಗಮವಾಗಿದೆ.<ref>{{cite web |title=Thiruvananthapuram |url=https://www.corporationoftrivandrum.org/index.php?option=com_content&view=article&id=158&Itemid=11 |date=2010 |url-status=usurped |archive-url=https://web.archive.org/web/20100918085703/https://www.corporationoftrivandrum.org/index.php?option=com_content&view=article&id=158&Itemid=11 |archive-date=18 September 2010 |access-date=4 April 2022}} Year of becoming a corporation</ref> [[ಭಾರತ]]ದ ಸ್ವಾತಂತ್ರ್ಯದ ನಂತರ ಸ್ಥಾಪಿಸಲಾದ ಮೊದಲ ನಗರ ನಿಗಮ ಮತ್ತು ರಾಜ್ಯದ ಎರಡನೇ ಅತ್ಯಂತ ಹಳೆಯ ನಗರ ನಿಗಮವು 1962 ರಲ್ಲಿ [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]] ನಲ್ಲಿದೆ.<ref>[https://web.archive.org/web/20080209134539/https://www.hindu.com/2008/02/05/stories/2008020561140500.htm Kozhikode Lok Sabha constituency redrawn Delimitation impact], ''The Hindu'' 5 February 2008</ref> ಕೇರಳದಲ್ಲಿ ಆರು [[ಭಾರತದಲ್ಲಿ ನಗರ ನಿಗಮಗಳು|ನಗರ ನಿಗಮಗಳಿವೆ]], ಅವು [[ತಿರುವನಂತಪುರ ನಗರ ನಿಗಮ|ತಿರುವನಂತಪುರ]], [[ಕೋಝಿಕೋಡ್ ನಗರ ನಿಗಮ|ಕೋಝಿಕೋಡ್]], [[ಕೊಚ್ಚಿ ನಗರ ನಿಗಮ|ಕೊಚ್ಚಿ]], [[ಕೊಲ್ಲಂ ನಗರ ನಿಗಮ|ಕೊಲ್ಲಂ]], [[ತೃಶೂರ್ ನಗರ ನಿಗಮ|ತೃಶೂರ್]], ಮತ್ತು [[ಕಣ್ಣೂರು ನಗರ ನಿಗಮ|ಕಣ್ಣೂರು]] ನಗರಗಳನ್ನು ಆಳುತ್ತವೆ.<ref>{{cite web |title=Kerala Sustainable Urban Development Project |url=https://www.ksudp.org/ |publisher=Local Self Government Department |access-date=7 February 2022 |archive-date=20 September 2020 |archive-url=https://web.archive.org/web/20200920051936/http://ksudp.org/ |url-status=dead }}</ref> [[ತಿರುವನಂತಪುರ ನಗರ ನಿಗಮ]]ವು ಕೇರಳದ ಅತಿದೊಡ್ಡ ನಿಗಮವಾಗಿದ್ದರೆ ಕೊಚ್ಚಿ ಮಹಾನಗರ ಪ್ರದೇಶವನ್ನು [[ಕೊಚ್ಚಿ UA]] ಎಂದು ಕರೆಯಲಾಗುತ್ತದೆ, ಇದು ಅತಿದೊಡ್ಡ ನಗರ ಸಮೂಹವಾಗಿದೆ.<ref>{{cite web |title=City Information |url=https://cial.aero/contents/viewcontent.aspx?linkIdLvl2=32&linkid=32 |work=Cochin International Airport |publisher=Government of Kerala |access-date=18 November 2012 |archive-date=10 December 2012 |archive-url=https://web.archive.org/web/20121210070804/http://cial.aero/contents/viewcontent.aspx?linkIdLvl2=32&linkid=32 |url-status=live }}</ref> ಅರ್ಥಶಾಸ್ತ್ರ ಸಂಶೋಧನಾ ಸಂಸ್ಥೆ ಇಂಡಿಕಸ್ ಅನಾಲಿಟಿಕ್ಸ್ 2007 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, [[ತಿರುವನಂತಪುರ]], [[ಕೋಝಿಕೋಡ್]], [[ಕೊಚ್ಚಿ]], [[ಕೊಲ್ಲಂ]], [[ತೃಶೂರ್]] "ಭಾರತದಲ್ಲಿ ವಾಸಿಸಲು ಅತ್ಯುತ್ತಮ ನಗರಗಳಲ್ಲಿ" ಸೇರಿವೆ; ಸಮೀಕ್ಷೆಯು ನಗರಗಳನ್ನು ಶ್ರೇಣೀಕರಿಸಲು ಆರೋಗ್ಯ, ಶಿಕ್ಷಣ, ಪರಿಸರ, ಸುರಕ್ಷತೆ, ಸಾರ್ವಜನಿಕ ಸೌಲಭ್ಯಗಳು ಮತ್ತು ಮನರಂಜನೆಯಂತಹ ನಿಯತಾಂಕಗಳನ್ನು ಬಳಸಿದೆ.<ref>{{cite news |title=Cities best to earn a living are not the best to live: Survey |url=https://articles.economictimes.indiatimes.com/2007-11-26/news/27682663_1_cities-entertainment-indicus-analytics |work=The Times of India |date=26 November 2007 |access-date=7 February 2022 |archive-date=5 March 2016 |archive-url=https://web.archive.org/web/20160305021646/http://articles.economictimes.indiatimes.com/2007-11-26/news/27682663_1_cities-entertainment-indicus-analytics |url-status=dead }}</ref>
== ಸರ್ಕಾರ ಮತ್ತು ಆಡಳಿತ ==
{{Main|ಕೇರಳ ಸರ್ಕಾರ|ಕೇರಳ ವಿಧಾನಸಭೆ|ಕೇರಳದಲ್ಲಿ ಸ್ಥಳೀಯ ಸರ್ಕಾರ|ಕೇರಳ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಪಟ್ಟಿ|ಕೇರಳದ ಆಡಳಿತ ವಿಭಾಗಗಳು|l4 = ಕೇರಳ ಸರ್ಕಾರದ ಇಲಾಖೆಗಳ ಪಟ್ಟಿ}}
{{See also|ಕೇರಳದ ರಾಜಕೀಯ|ಕೇರಳದಲ್ಲಿ ರಾಜಕೀಯ ಪಕ್ಷಗಳು|ಕೇರಳದಲ್ಲಿ ಚುನಾವಣೆಗಳು}}
{{Multiple image
| direction = vertical
| width = 220
| header_align = center
| footer_align = center
| image1 = Kerala Legislative Assembly, Thiruvananthapuram.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಧಾನಸಭೆ]] ಕಟ್ಟಡ
| image2 = Kerala Government Secretariat.jpg
| caption2 = [[ಕೇರಳ ಸರ್ಕಾರದ ಕಚೇರಿ|ಸರ್ಕಾರಿ ಕಚೇರಿ]] [[ತಿರುವನಂತಪುರ|ತಿರುವನಂತಪುರದಲ್ಲಿ]] – ಕೇರಳದ ಕಾರ್ಯನಿರ್ವಾಹಕ ಆಡಳಿತದ ಆಸನ
| image3 = High Court of Kerala Building.jpg
| caption3 = [[ಕೊಚ್ಚಿ|ಕೊಚ್ಚಿಯ]] [[ಕೇರಳ ಉಚ್ಚ ನ್ಯಾಯಾಲಯ]] ಸಂಕೀರ್ಣ
}}
ರಾಜ್ಯವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯಿಂದ ಆಳಲ್ಪಡುತ್ತದೆ. ಕೇರಳವು [[ಏಕಸಭಾ]] ಶಾಸಕಾಂಗವನ್ನು ಹೊಂದಿದೆ. [[ಕೇರಳ ವಿಧಾನಸಭೆ]]ಯು ನಿಯಮಸಭೆ ಎಂದೂ ಕರೆಯಲ್ಪಡುತ್ತದೆ, ಇದು 140 ಸದಸ್ಯರನ್ನು ಒಳಗೊಂಡಿದ್ದು, ಅವರು ಐದು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.<ref>{{cite web |title=History of Kerala Legislature |url=https://kerala.gov.in/index.php?option=com_content&view=article&id=3776&Itemid=3022 |publisher=Government of Kerala |access-date=17 November 2012 |archive-url=https://web.archive.org/web/20120619040353/https://www.kerala.gov.in/index.php?option=com_content&view=article&id=3776&Itemid=3022 |archive-date=19 June 2012 |url-status=dead}}</ref> ರಾಜ್ಯವು [[ಭಾರತದ ಸಂಸತ್ತು|ಭಾರತೀಯ ಸಂಸತ್ತಿನ]] ಕೆಳಮನೆಯಾದ [[ಲೋಕಸಭೆ]]ಗೆ 20 ಸದಸ್ಯರನ್ನು ಮತ್ತು [[ರಾಜ್ಯಸಭೆ]]ಗೆ 9 ಸದಸ್ಯರನ್ನು ಚುನಾಯಿಸುತ್ತದೆ.<ref>{{cite web |url=https://www.parliamentofindia.nic.in/ls/intro/p1.htm |title=Our Parliament |publisher=Parliamentofindia.nic.in |access-date=25 February 2010 |archive-date=10 February 2010 |archive-url=https://web.archive.org/web/20100210043333/http://www.parliamentofindia.nic.in/ls/intro/p1.htm |url-status=live }}</ref>
[[ಕೇರಳ ಸರ್ಕಾರ]]ವು ಭಾರತದಲ್ಲಿ [[ಪ್ರಜಾಪ್ರಭುತ್ವ|ಪ್ರಜಾಪ್ರಭುತ್ವ]] ರೀತಿಯಲ್ಲಿ ಚುನಾಯಿತ ಸಂಸ್ಥೆಯಾಗಿದ್ದು, [[ಕೇರಳದ ರಾಜ್ಯಪಾಲರು|ರಾಜ್ಯಪಾಲರು]] ಇದರ ಸಾಂವಿಧಾನಿಕ ಮುಖ್ಯಸ್ಥರಾಗಿದ್ದಾರೆ ಮತ್ತು [[ಭಾರತದ ರಾಷ್ಟ್ರಪತಿ]]ಗಳಿಂದ ಐದು ವರ್ಷಗಳ ಅವಧಿಗೆ ನೇಮಕಗೊಳ್ಳುತ್ತಾರೆ.<ref name="govern">{{cite web |url=https://www.rajbhavan.kerala.gov.in/index.php?option=com_content&view=article&id=44&Itemid=2 |archive-url=https://web.archive.org/web/20090731095433/https://rajbhavan.kerala.gov.in/index.php?option=com_content&view=article&id=44&Itemid=2 |url-status=dead |archive-date=31 July 2009 |title=Responsibilities |access-date=13 November 2015 |publisher=Kerala Rajbhavan}}</ref> [[ಕೇರಳ ವಿಧಾನಸಭೆ|ವಿಧಾನಸಭೆಯಲ್ಲಿ]] ಬಹುಮತ ಹೊಂದಿರುವ ಪಕ್ಷ ಅಥವಾ ಒಕ್ಕೂಟದ ನಾಯಕನನ್ನು ರಾಜ್ಯಪಾಲರಿಂದ [[ಕೇರಳದ ಮುಖ್ಯಮಂತ್ರಿಗಳ ಪಟ್ಟಿ|ಮುಖ್ಯಮಂತ್ರಿಯಾಗಿ]] ನೇಮಿಸಲಾಗುತ್ತದೆ, ಮತ್ತು [[ಕೇರಳ ಸಚಿವ ಸಂಪುಟ|ಸಚಿವರ ಸಂಪುಟವನ್ನು]] ಮುಖ್ಯಮಂತ್ರಿಯ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಿಸುತ್ತಾರೆ.<ref name=govern /> ರಾಜ್ಯಪಾಲರು ರಾಜ್ಯದ ಆಚಾರಪೂರ್ಣ ಮುಖ್ಯಸ್ಥರಾಗಿ ಉಳಿಯುತ್ತಾರೆ, ಆದರೆ ಮುಖ್ಯಮಂತ್ರಿ ಮತ್ತು ಅವರ ಸಂಪುಟವು ದೈನಂದಿನ ಸರ್ಕಾರಿ ಕಾರ್ಯಗಳಿಗೆ ಜವಾಬ್ದಾರರಾಗಿರುತ್ತಾರೆ. ಸಚಿವರ ಸಂಪುಟವು ಸಚಿವ ಸಂಪುಟದ ಸಚಿವರು ಮತ್ತು ರಾಜ್ಯ ಸಚಿವರನ್ನು (MoS) ಒಳಗೊಂಡಿದೆ. [[ಕೇರಳ ಸರ್ಕಾರದ ಕಚೇರಿ|ಕಾರ್ಯದರ್ಶಿ]] [[ಮುಖ್ಯ ಕಾರ್ಯದರ್ಶಿ (ಭಾರತ)|ಮುಖ್ಯ ಕಾರ್ಯದರ್ಶಿ]] ನೇತೃತ್ವದಲ್ಲಿ, ಸಚಿವ ಸಂಪುಟಕ್ಕೆ ಸರ್ಕಾರಿ ನೀತಿಗಳ ರಚನೆ ಮತ್ತು ಅನುಷ್ಠಾನದಲ್ಲಿ ಸಹಾಯ ಮಾಡುತ್ತದೆ. ಮುಖ್ಯ ಕಾರ್ಯದರ್ಶಿಯು ಹಿರಿಯ [[ನಾಗರಿಕ ಸೇವೆ|ನಾಗರಿಕ ಸೇವಕ]] ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ರಾಜ್ಯ ಸರ್ಕಾರದ ಆಡಳಿತವು 47 ಕಾರ್ಯದರ್ಶಿ ಇಲಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ.<ref name=":0" /> ಪ್ರತಿಯೊಂದು ಸರ್ಕಾರಿ ಇಲಾಖೆಯನ್ನು ರಾಜಕೀಯವಾಗಿ ಸಚಿವರು ಮತ್ತು ಆಡಳಿತಾತ್ಮಕವಾಗಿ ಸರ್ಕಾರದ ಕಾರ್ಯದರ್ಶಿಯು ಮುಖ್ಯಸ್ಥರಾಗಿರುತ್ತಾರೆ, ಇವರು [[ಹೆಚ್ಚುವರಿ ಮುಖ್ಯ ಕಾರ್ಯದರ್ಶಿ|ಹೆಚ್ಚುವರಿ ಮುಖ್ಯ ಕಾರ್ಯದರ್ಶಿ]], [[ಪ್ರಿನ್ಸಿಪಾಲ್ ಕಾರ್ಯದರ್ಶಿ (ಭಾರತ)|ಪ್ರಿನ್ಸಿಪಾಲ್ ಕಾರ್ಯದರ್ಶಿ]], ಅಥವಾ [[ಕಾರ್ಯದರ್ಶಿ]] ಹುದ್ದೆಯಲ್ಲಿರುತ್ತಾರೆ, ಇವರು ಸಾಮಾನ್ಯವಾಗಿ [[ಭಾರತೀಯ ಆಡಳಿತ ಸೇವೆ]] (IAS) ನ ಅಧಿಕಾರಿಯಾಗಿರುತ್ತಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು/ಪ್ರಿನ್ಸಿಪಾಲ್ ಕಾರ್ಯದರ್ಶಿಗಳು ತಮಗೆ ನಿಯೋಜಿಸಲಾದ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರತಿಯೊಂದು ಇಲಾಖೆಯು ವಿಶೇಷ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಂಡರ್ ಸೆಕ್ರೆಟರಿ ಮತ್ತು ಇತರ ಸಹಾಯಕ ಅಧಿಕಾರಿಗಳ ಹುದ್ದೆಗಳನ್ನು ಸಹ ಹೊಂದಿದೆ. ಈ ಕಾರ್ಯದರ್ಶಿ ಇಲಾಖೆಗಳು ನೀತಿ ರಚನೆ ಮತ್ತು ಆಡಳಿತಾತ್ಮಕ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುತ್ತವೆ, ಆದರೆ ರೇಖಾ ಇಲಾಖೆಗಳು ಮತ್ತು ಇತರ ಕಾರ್ಯನಿರ್ವಾಹಕ ಸಂಸ್ಥೆಗಳು ಸರ್ಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಕ್ಷೇತ್ರ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತವೆ.
ಪ್ರತಿಯೊಂದು ಕಾರ್ಯದರ್ಶಿ ಇಲಾಖೆಯು ಒಂದು ಅಥವಾ ಹೆಚ್ಚು ರೇಖಾ ಇಲಾಖೆಗಳು, ನಿರ್ದೇಶನಾಲಯಗಳು, ಆಯುಕ್ತ ಕಚೇರಿಗಳು, ಮಂಡಳಿಗಳು, ಅಥವಾ ಅಂತಹುದೇ ಕಾರ್ಯನಿರ್ವಾಹಕ ಸಂಸ್ಥೆಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಚಲಾಯಿಸುತ್ತದೆ. ಈ ಸಂಸ್ಥೆಗಳು ಸರ್ಕಾರಿ ನೀತಿಗಳನ್ನು ಅನುಷ್ಠಾನಗೊಳಿಸಲು, ನಿಯಂತ್ರಕ ಆಡಳಿತ, ಜಾರಿ, ಸಾರ್ವಜನಿಕ ಸೇವೆಗಳನ್ನು ಒದಗಿಸಲು ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯಗಳನ್ನು ನಿರ್ವಹಿಸಲು ಜವಾಬ್ದಾರರಾಗಿರುತ್ತವೆ. ಅವುಗಳನ್ನು ಸಾಮಾನ್ಯವಾಗಿ ನಿರ್ದೇಶಕರು, ಆಯುಕ್ತರು, ಅಥವಾ ಅಂತಹುದೇ ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ, ಅವರು ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ, ಇದು ಸಂಸ್ಥೆಯ ಸ್ವರೂಪವನ್ನು ಅವಲಂಬಿಸಿರುತ್ತದೆ. ಈ ಪ್ರತಿಯೊಂದು ಇಲಾಖೆಗಳು/ಸಂಸ್ಥೆಗಳು ತಮ್ಮದೇ ಆದ ಆಡಳಿತಾತ್ಮಕ ಉಪವಿಭಾಗಗಳನ್ನು ಹೊಂದಿವೆ.<ref>Rules of Business of [[Government of Kerala]]
PART II
FIRST SCHEDULE
https://gad.kerala.gov.in/sites/default/files/general_attachment/Rules%20of%20Business%20-%20Part%20II.pdf</ref>
ರಾಜ್ಯವನ್ನು ಹದಿನಾಲ್ಕು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದೂ ಜಿಲ್ಲಾ ಆಡಳಿತದ ಪ್ರಧಾನ ಕಚೇರಿಯಾಗಿ ಕಲೆಕ್ಟರೇಟ್ ಅನ್ನು ಹೊಂದಿದೆ. [[ಜಿಲ್ಲಾ ಮ್ಯಾಜಿಸ್ಟ್ರೇಟ್|ಜಿಲ್ಲಾ ಕಲೆಕ್ಟರ್]] ಜಿಲ್ಲಾ ಆಡಳಿತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭೂ ಆದಾಯ ಆಡಳಿತ, ವಿಪತ್ತು ನಿರ್ವಹಣೆ, ಚುನಾವಣೆಗಳು, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಮತ್ತು ಜಿಲ್ಲೆಯೊಳಗಿನ ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯಕ್ಕೆ ಜವಾಬ್ದಾರರಾಗಿರುತ್ತಾರೆ.<ref>{{Cite web |title=Collectorate {{!}} District Thiruvananthapuram, Government of Kerala {{!}} India |url=https://trivandrum.nic.in/en/collectrate/ |access-date=2026-04-04 |language=en-US}}</ref> ಆಡಳಿತಾತ್ಮಕ ಅನುಕೂಲಕ್ಕಾಗಿ, ಪ್ರತಿಯೊಂದು ಜಿಲ್ಲೆಯನ್ನು ಮತ್ತಷ್ಟು [[ಕೇರಳದ ಆದಾಯ ವಿಭಾಗಗಳ ಪಟ್ಟಿ|ಆದಾಯ ವಿಭಾಗಗಳಾಗಿ]], [[ತಹಸೀಲ್ದಾರ್|ತಾಲೂಕುಗಳಾಗಿ]], ಮತ್ತು [[ಆದಾಯ ಗ್ರಾಮ|ಆದಾಯ ಗ್ರಾಮಗಳಾಗಿ]] ವಿಂಗಡಿಸಲಾಗಿದೆ, ಪ್ರಾಥಮಿಕವಾಗಿ ಭೂ ಆದಾಯ ಆಡಳಿತದ ಉದ್ದೇಶಕ್ಕಾಗಿ.<ref>{{Cite web |last=Admin |date=2025-01-22 |title=Land revenue administration, Government of Kerala |url=https://clr.kerala.gov.in/eng/index.php/department/organisation-structure |access-date=2026-01-01 |website=Department of Land Revenue |language=en-gb}}</ref>
ಕೇರಳದಲ್ಲಿ ಕಾನೂನು ಜಾರಿಯನ್ನು ಪ್ರಾಥಮಿಕವಾಗಿ [[ಕೇರಳ ಪೊಲೀಸ್]] ನಡೆಸುತ್ತದೆ, ಇದು ಕೇರಳ ಸರ್ಕಾರದ [[ಗೃಹ ಇಲಾಖೆ (ಕೇರಳ)|ಗೃಹ ಇಲಾಖೆಯ]] ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇರಳ ಪೊಲೀಸ್ ಅನ್ನು ಎರಡು ಪೊಲೀಸ್ ವಲಯಗಳಾಗಿ (ಉತ್ತರ ಮತ್ತು ದಕ್ಷಿಣ) ರಚಿಸಲಾಗಿದೆ, ಅವುಗಳನ್ನು ಮತ್ತಷ್ಟು ವ್ಯಾಪ್ತಿಗಳು, ಪೊಲೀಸ್ ಜಿಲ್ಲೆಗಳು, ಉಪವಿಭಾಗಗಳು ಮತ್ತು ಪೊಲೀಸ್ ಠಾಣೆಗಳಾಗಿ ವಿಂಗಡಿಸಲಾಗಿದೆ. ಪ್ರಾಥಮಿಕ ಕಾನೂನು ಜಾರಿಗೆ ಜವಾಬ್ದಾರರಾಗಿರುವ 484 ಸ್ಥಳೀಯ ಪೊಲೀಸ್ ಠಾಣೆಗಳಿವೆ.<ref>{{Cite web |title=Official Website of Kerala Police |url=https://keralapolice.gov.in/ |access-date=2026-04-24 |website=keralapolice.gov.in |language=en}}</ref>
[[ನ್ಯಾಯಾಂಗ]]ವು [[ಕೇರಳ ಉಚ್ಚ ನ್ಯಾಯಾಲಯ]] ಮತ್ತು ಕೆಳ ನ್ಯಾಯಾಲಯಗಳ ವ್ಯವಸ್ಥೆಯನ್ನು ಒಳಗೊಂಡಿದೆ.<ref>{{cite web |title=History of Judiciary |url=https://www.allindiajudges.org/Judgment/FNJPC2.htm |publisher=All-India Judges Association |access-date=29 April 2015 |archive-date=1 October 2015 |archive-url=https://web.archive.org/web/20151001072113/http://www.allindiajudges.org/Judgment/FNJPC2.htm |url-status=dead }}</ref> [[ಕೊಚ್ಚಿ|ಕೊಚ್ಚಿಯಲ್ಲಿ]] ನೆಲೆಗೊಂಡಿರುವ ಉಚ್ಚ ನ್ಯಾಯಾಲಯವು,<ref name="Congress (US)2010">{{cite book |author1=U S Congress |author2=Congress (U.S.) |title=Congressional Record, V. 153, Pt. 1, January 4, 2007 to January 17, 2007 |url=https://books.google.com/books?id=M3bLOwbeOZYC&pg=PA1198 |access-date=18 November 2012 |year=2010 |publisher=Government Printing Office |isbn=978-0-16-086824-5 |page=1198}}</ref>as ರಂತೆ ಮುಖ್ಯ ನ್ಯಾಯಮೂರ್ತಿ ಮತ್ತು 35 ಖಾಯಂ ಮತ್ತು ಹನ್ನೆರಡು ಹೆಚ್ಚುವರಿ ''[[ಪ್ರೋ ಟೆಂಪೋರ್]]'' ನ್ಯಾಯಮೂರ್ತಿಗಳನ್ನು ಹೊಂದಿದೆ.<ref>{{cite web |title=High Court of Kerala Profile |url=https://highcourtofkerala.nic.in/profile.html |publisher=High Court of Kerala |access-date=18 November 2012 |archive-date=31 October 2012 |archive-url=https://web.archive.org/web/20121031233641/http://highcourtofkerala.nic.in/profile.html |url-status=live }}</ref> ಉಚ್ಚ ನ್ಯಾಯಾಲಯವು [[ಲಕ್ಷದ್ವೀಪ]] ಕೇಂದ್ರಾಡಳಿತ ಪ್ರದೇಶದ ಪ್ರಕರಣಗಳನ್ನು ಸಹ ವಿಚಾರಣೆಗೆ ತೆಗೆದುಕೊಳ್ಳುತ್ತದೆ.<ref name="Banerjea2002">{{cite book |author=D. Banerjea |title=Criminal Justice India Series, Vol. 21 |url=https://books.google.com/books?id=L6NWL-a14mkC&pg=PA80 |access-date=18 November 2012 |year=2002 |publisher=Allied Publishers |isbn=978-8177648720 |page=80}}</ref><ref name="SharmaB.k.2007">{{cite book |author1=Sharma |author2=Sharma B.k. |title=Intro. to the Constitution of India, 4/e |url=https://books.google.com/books?id=srDytmFE3KMC&pg=PA261 |access-date=18 November 2012 |year=2007 |publisher=PHI Learning Pvt. Ltd. |isbn=978-8120332461 |page=261}}</ref> ರಾಜ್ಯದ ಅಧೀನ ನ್ಯಾಯಾಂಗವು ಪ್ರತಿಯೊಂದು 14 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳನ್ನು ಒಳಗೊಂಡಿದೆ, ಇವುಗಳನ್ನು ಜಿಲ್ಲಾ ನ್ಯಾಯಾಧೀಶರು ಮುಖ್ಯಸ್ಥರಾಗಿರುತ್ತಾರೆ, ಜೊತೆಗೆ ನಾಗರಿಕ ನ್ಯಾಯಾಲಯಗಳು (''ಮುನ್ಸಿಫ್ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು'') ಮತ್ತು ಅಪರಾಧ ನ್ಯಾಯಾಲಯಗಳು (''ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ಗಳು, ಮತ್ತು ಸೆಷನ್ಸ್ ನ್ಯಾಯಾಲಯಗಳು'') ತಮ್ಮ ಅಧಿಕಾರ ವ್ಯಾಪ್ತಿಯ ಪ್ರಕಾರ ಪ್ರಕರಣಗಳನ್ನು ನಿರ್ವಹಿಸುತ್ತವೆ.
=== ಸ್ಥಳೀಯ ಸರ್ಕಾರ ===
{{Main|ಕೇರಳದಲ್ಲಿ ಸ್ಥಳೀಯ ಸರ್ಕಾರ}}
ಕೇರಳದಲ್ಲಿ, ಪಂಚಾಯತ್ಗಳು, ಪುರಸಭೆಗಳು ಮತ್ತು ನಿಗಮಗಳಂತಹ ಸ್ಥಳೀಯ ಸರ್ಕಾರಿ ಸಂಸ್ಥೆಗಳು 1959 ರಿಂದಲೂ ಅಸ್ತಿತ್ವದಲ್ಲಿವೆ. ಆದಾಗ್ಯೂ, ಗಮನಾರ್ಹವಾದ ವಿಕೇಂದ್ರೀಕರಣ ಉಪಕ್ರಮವು 1993 ರಲ್ಲಿ ಪ್ರಾರಂಭವಾಯಿತು, ಇದು [[ಭಾರತ ಸರ್ಕಾರ|ಕೇಂದ್ರ ಸರ್ಕಾರ]]ದ ಸಾಂವಿಧಾನಿಕ ತಿದ್ದುಪಡಿಗಳೊಂದಿಗೆ ಹೊಂದಾಣಿಕೆಯಾಯಿತು.<ref name="Capdeck">{{cite web |url=https://www.lenobl.ru/Document/1412700121.pdf |title=An Introduction to local self governments in Kerala |publisher=SDC CAPDECK |access-date=17 November 2012 |author=Mariamma Sanu George |pages=17–20 |archive-date=30 May 2015 |archive-url=https://web.archive.org/web/20150530224012/http://www.lenobl.ru/Document/1412700121.pdf |url-status=live }}</ref><ref name="KILA">{{cite web |url=https://www.kilaonline.org/site_docu/pub200904a.pdf |archive-url=https://web.archive.org/web/20130513015050/https://www.kilaonline.org/site_docu/pub200904a.pdf |archive-date=13 May 2013 |title=Kerala – A Case Study of Classical Democratic Decentralisation |publisher=Kerala Institute of Local Administration |date=April 2009 |access-date=17 November 2012 |author=S M Vijayanand }}</ref>{{rp|page=12}} ಕೇರಳ ಪಂಚಾಯತ್ ರಾಜ್ ಕಾಯ್ದೆ ಮತ್ತು ಕೇರಳ ಪುರಸಭೆ ಕಾಯ್ದೆಯನ್ನು 1994 ರಲ್ಲಿ ಜಾರಿಗೊಳಿಸಲಾಯಿತು, ಇದು ಗ್ರಾಮೀಣ ಆಡಳಿತಕ್ಕಾಗಿ ಮೂರು-ಹಂತದ ವ್ಯವಸ್ಥೆಯನ್ನು ಮತ್ತು ನಗರ ಆಡಳಿತಕ್ಕಾಗಿ ಏಕ-ಹಂತದ ವ್ಯವಸ್ಥೆಯನ್ನು ಸ್ಥಾಪಿಸಿತು.<ref>{{cite act
| title = Kerala Panchayat Raj Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref><ref>{{cite act
| title = Kerala Municipality Act, 1994
| year = 1994
| jurisdiction = Government of Kerala
| url = https://www.indiacode.nic.in
| access-date = 31 December 2025
}}</ref>
ಗ್ರಾಮೀಣ ಆಡಳಿತದ ಮೂರು-ಹಂತದ ರಚನೆಯು [[ಗ್ರಾಮ ಪಂಚಾಯತ್|ಗ್ರಾಮ ಪಂಚಾಯತ್ಗಳು]], [[ಪಂಚಾಯತ್ ಸಮಿತಿ|ಬ್ಲಾಕ್ ಪಂಚಾಯತ್ಗಳು]], ಮತ್ತು [[ಜಿಲ್ಲಾ ಪಂಚಾಯತ್|ಜಿಲ್ಲಾ ಪಂಚಾಯತ್ಗಳನ್ನು]] ಒಳಗೊಂಡಿದೆ.<ref name="TandonMohanty2006">{{cite book |author1=Rajesh Tandon |author2=Ranjita Mohanty |title=Participatory Citizenship: Identity, Exclusion, Inclusion |url=https://books.google.com/books?id=oPByu7CWoUEC&pg=PA199 |access-date=17 November 2012 |year=2006 |publisher=Sage |isbn=978-0-7619-3467-7 |page=199}}</ref> ಕೇರಳ ಪಂಚಾಯತ್ ರಾಜ್ ಕಾಯ್ದೆ, 1994 ಈ ಸಂಸ್ಥೆಗಳಿಗೆ ಸ್ಪಷ್ಟವಾದ ಅಧಿಕಾರಗಳನ್ನು ವ್ಯಾಖ್ಯಾನಿಸುತ್ತದೆ.<ref name="Capdeck" /> ನಗರ ಪ್ರದೇಶಗಳಿಗೆ, ಕೇರಳ ಪುರಸಭೆ ಕಾಯ್ದೆಯು ಏಕ-ಹಂತದ ವ್ಯವಸ್ಥೆಯನ್ನು ಒದಗಿಸುತ್ತದೆ, ಇದು [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ|ಪುರಸಭೆಗಳು]] ಮತ್ತು [[ಕೇರಳದ ನಗರ ನಿಗಮಗಳ ಪಟ್ಟಿ|ನಗರ ನಿಗಮಗಳನ್ನು]] ಒಳಗೊಂಡಿದೆ, ಅವು ಸ್ಥಳೀಯ ಆಡಳಿತ ಮತ್ತು ನಾಗರಿಕ ಆಡಳಿತಕ್ಕೆ ಜವಾಬ್ದಾರರಾಗಿರುತ್ತವೆ. ಈ ಸಂಸ್ಥೆಗಳನ್ನು ನಿಯಮಿತವಾಗಿ [[ಕೇರಳದಲ್ಲಿ ಚುನಾವಣೆಗಳು|ಸ್ಥಳೀಯ ಸಂಸ್ಥೆಗಳ ಚುನಾವಣೆಗಳ]] ಮೂಲಕ ರಚಿಸಲಾಗುತ್ತದೆ.<ref name="Chaudhary2009">{{cite book |author=Shyam Nandan Chaudhary |title=Tribal Development Since Independence |url=https://books.google.com/books?id=KBX1EJVhjGEC&pg=PA235 |access-date=18 November 2012 |year=2009 |publisher=Concept Publishing Company |isbn=978-8180696220 |page=235}}</ref> ಈ ಸಂಸ್ಥೆಗಳು ಪರಿಣಾಮಕಾರಿ ವಿಕೇಂದ್ರೀಕರಣವನ್ನು ಖಚಿತಪಡಿಸಿಕೊಳ್ಳಲು ಗಣನೀಯ ಆಡಳಿತಾತ್ಮಕ, ಕಾನೂನು ಮತ್ತು ಆರ್ಥಿಕ ಅಧಿಕಾರಗಳನ್ನು ಪಡೆಯುತ್ತವೆ.<ref name="KILA" />{{rp|page=13}} ಪ್ರಸ್ತುತ, ರಾಜ್ಯ ಸರ್ಕಾರವು ರಾಜ್ಯ ಯೋಜನಾ ವಿನಿಯೋಗದ ಸುಮಾರು 40% ಅನ್ನು ಸ್ಥಳೀಯ ಸರ್ಕಾರಗಳಿಗೆ ನಿಯೋಜಿಸುತ್ತದೆ.<ref name="IsaacFranke2002">{{cite book |author1=T. M. Thomas Isaac |author2=Richard W. Franke |title=Local Democracy and Development: The Kerala People's Campaign for Decentralized Planning |url=https://books.google.com/books?id=x6v6F2a3Gs0C&pg=PR13 |year=2002 |publisher=Rowman & Littlefield |isbn=978-0-7425-1607-6 |page=13}}</ref> ಕೇರಳವು 1,200 ಸ್ಥಳೀಯ ಸಂಸ್ಥೆಗಳನ್ನು ಹೊಂದಿದೆ, ಇವುಗಳಲ್ಲಿ 941 ಗ್ರಾಮ ಪಂಚಾಯತ್ಗಳು, 152 ಬ್ಲಾಕ್ ಪಂಚಾಯತ್ಗಳು, 14 ಜಿಲ್ಲಾ ಪಂಚಾಯತ್ಗಳು, 87 ಪುರಸಭೆಗಳು, ಮತ್ತು 6 ನಗರ ನಿಗಮಗಳು ಸೇರಿವೆ.<ref>{{Cite web |title=Local Bodies {{!}} Local Self Government Department |url=https://lsgkerala.gov.in/en/lsgd/localbody-list |access-date=2025-07-08 |website=lsgkerala.gov.in |archive-date=2 June 2023 |archive-url=https://web.archive.org/web/20230602134126/https://lsgkerala.gov.in/en/lsgd/localbody-list |url-status=dead }}</ref>
ಕೇರಳವನ್ನು 2016 ರಲ್ಲಿ ಭಾರತದ ಮೊದಲ ಡಿಜಿಟಲ್ ರಾಜ್ಯವೆಂದು ಘೋಷಿಸಲಾಯಿತು ಮತ್ತು [[ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್]] ನ 2019 ರ ಭಾರತ ಭ್ರಷ್ಟಾಚಾರ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕನಿಷ್ಠ ಭ್ರಷ್ಟ ರಾಜ್ಯವೆಂದು ಪರಿಗಣಿಸಲಾಗಿದೆ.<ref>{{Cite book |title=India Corruption Survey 2019 – Report |last= |publisher=Transparency International India |year=2019 |location= |pages=22 |url=https://transparencyindia.org/wp-content/uploads/2019/11/India-Corruption-Survey-2019.pdf |access-date=18 June 2021 |archive-date=10 July 2021 |archive-url=https://web.archive.org/web/20210710100154/https://transparencyindia.org/wp-content/uploads/2019/11/India-Corruption-Survey-2019.pdf |url-status=live }}</ref><ref>{{Cite news |title=Kerala the first digital State |url=https://www.thehindu.com/news/cities/kozhikode/kerala-the-first-digital-state/article8291466.ece |last=Special currespondent |date=28 February 2016 |access-date=17 November 2020 |work=The Hindu |archive-date=15 April 2021 |archive-url=https://web.archive.org/web/20210415102347/https://www.thehindu.com/news/cities/kozhikode/kerala-the-first-digital-state/article8291466.ece |url-status=live }}</ref> ಪಬ್ಲಿಕ್ ಅಫೇರ್ಸ್ ಇಂಡೆಕ್ಸ್-2020 ಕೇರಳವನ್ನು ಭಾರತದ ಅತ್ಯುತ್ತಮ ಆಡಳಿತ ರಾಜ್ಯವೆಂದು ಗೊತ್ತುಪಡಿಸಿತು.<ref>{{Cite news |title=Kerala, Tamil Nadu and Goa best governed States: report |url=https://www.thehindu.com/news/national/kerala-goa-and-chandigarh-best-governed-states-ut-report/article32985716.ece |last=PTI |date=30 October 2020 |access-date=20 June 2021 |work=The Hindu |archive-date=7 October 2021 |archive-url=https://web.archive.org/web/20211007210542/https://www.thehindu.com/news/national/kerala-goa-and-chandigarh-best-governed-states-ut-report/article32985716.ece |url-status=live }}</ref>
=== ರಾಜಕೀಯ ===
ಕೇರಳವು ತನ್ನ ಬಲವಾದ ಸಾಮಾಜಿಕ ಕಲ್ಯಾಣ ನೀತಿಗಳು, ಭೂ ಸುಧಾರಣೆಗಳು ಮತ್ತು ಉನ್ನತ ಮಾನವ ಅಭಿವೃದ್ಧಿ ಸೂಚಕಗಳಿಂದಾಗಿ ಭಾರತದ ಅತ್ಯಂತ [[ಸಮಾನತಾವಾದ|ಸಮಾನತಾವಾದಿ]] ರಾಜ್ಯಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ.<ref>{{Cite journal |last1=B |first1=Bibimol R. |last2=Seena |first2=Dr Anand Lali |last3=Thanammal |first3=Dr K. K. |date=2023-11-30 |title=C.Achutha Menon's Social Reforms: Paving The Way For A Progressive Kerala |url=https://kuey.net/index.php/kuey/article/view/8887 |journal=Educational Administration: Theory and Practice |language=en |volume=29 |issue=4 |pages=4074–4079 |doi=10.53555/kuey.v29i4.8887 |doi-broken-date=15 June 2026 |issn=2148-2403}}</ref><ref>{{Cite journal |last=Duran |first=Jane |date=April 2025 |title=Egalitarianism and Justice in Kerala |url=https://www.cambridge.org/core/journals/think/article/abs/egalitarianism-and-justice-in-kerala/5B093820090E9266A4852C40F93F5A51 |journal=Think |language=en |volume=24 |issue=70 |pages=23–29 |doi=10.1017/S147717562500017X |issn=1477-1756}}</ref><ref>{{Cite journal |last1=Thiranagama |first1=Sharika |title=Rural Civilities: Caste, Gender and Public Life in Kerala |journal=South Asia: Journal of South Asian Studies |date=2019 |volume=42 |issue=2 |pages=310–327 |doi=10.1080/00856401.2019.1582190}}</ref><ref>{{Cite journal |last=Devika |first=J. |date=August 2010 |title=Egalitarian Developmentalism, Communist Mobilization, and the Question of Caste in Kerala State, India |url=https://www.cambridge.org/core/journals/journal-of-asian-studies/article/abs/egalitarian-developmentalism-communist-mobilization-and-the-question-of-caste-in-kerala-state-india/8F65915C540DB6AC5D3EEE6DE800DB3B? |journal=The Journal of Asian Studies |language=en |volume=69 |issue=3 |pages=799–820 |doi=10.1017/S0021911810001506 |issn=1752-0401}}</ref> ಕೇರಳದ ರಾಜಕೀಯವು ಪ್ರಾಥಮಿಕವಾಗಿ [[ಭಾರತದಲ್ಲಿ ಕಮ್ಯುನಿಸಂ|ಕಮ್ಯುನಿಸಂ]], [[ಪ್ರಜಾಪ್ರಭುತ್ವ ಸಮಾಜವಾದ]], [[ಜಾತ್ಯತೀತತೆ]], [[ಮಧ್ಯಮಾರ್ಗ#ಭಾರತ|ಮಧ್ಯಮಾರ್ಗ]] ಮತ್ತು ಪ್ರಾದೇಶಿಕ ಹಿತಾಸಕ್ತಿಗಳಿಂದ ರೂಪುಗೊಂಡಿದೆ. [[ಬಲಪಂಥೀಯ ರಾಜಕೀಯ#ಭಾರತ|ಬಲಪಂಥೀಯ ರಾಜಕೀಯ]]ವು ತುಲನಾತ್ಮಕವಾಗಿ ಚಿಕ್ಕ ಶಕ್ತಿಯಾಗಿದ್ದು, ಇದನ್ನು ಪ್ರಾಥಮಿಕವಾಗಿ [[ಭಾರತೀಯ ಜನತಾ ಪಕ್ಷ]]-ನೇತೃತ್ವದ [[ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ|NDA]] ಪ್ರತಿನಿಧಿಸುತ್ತದೆ.<ref>{{Cite journal |title=Hindu Nationalism in South India: The Rise of Saffron in Kerala |url=https://www.researchgate.net/publication/381937210_Hindu_Nationalism_in_South_India_The_Rise_of_Saffron_in_Kerala |journal=}}</ref><ref>{{Cite journal |last=Nair |first=A. Balakrishnan |date=1994 |title=The Dynamics of Kerala Politics |url=https://www.jstor.org/stable/41855697 |journal=The Indian Journal of Political Science |volume=55 |issue=3 |pages=251–260 |issn=0019-5510}}</ref>
ಕೇರಳವು ಎರಡು ಪ್ರಮುಖ ರಾಜಕೀಯ ಮೈತ್ರಿಗಳನ್ನು ಹೊಂದಿದೆ: [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ನೇತೃತ್ವದ [[ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್]] (UDF); ಮತ್ತು [[ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)]] (CPI(M)) ನೇತೃತ್ವದ [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್ (ಕೇರಳ)|ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್]] (LDF). 1980 ರಿಂದ, ಕೇರಳದ ರಾಜಕೀಯವು LDF ಮತ್ತು UDF ನಿಂದ ಪ್ರಾಬಲ್ಯ ಹೊಂದಿದೆ, ಸರ್ಕಾರಗಳು ಹೆಚ್ಚಾಗಿ ಎರಡು ಮೈತ್ರಿಗಳ ನಡುವೆ ಪರ್ಯಾಯವಾಗಿವೆ.<ref>{{Cite news |date=2026-05-22 |title=Kerala election wrap-up: How UDF ended LDF’s 10-year rule |url=https://timesofindia.indiatimes.com/india/kerala-election-wrap-up-how-udf-ended-ldfs-10-year-rule/articleshow/131249440.cms |access-date=2026-06-19 |work=The Times of India |issn=0971-8257}}</ref> [[2026 ಕೇರಳ ವಿಧಾನಸಭಾ ಚುನಾವಣೆ]]ಯ ಪ್ರಕಾರ, UDF ಆಡಳಿತ ಒಕ್ಕೂಟವಾಗಿದೆ, ಮತ್ತು [[ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್|LDF]] ಅಧಿಕೃತ ವಿರೋಧ ಪಕ್ಷವಾಗಿದೆ.<ref>{{Cite web |title=Pinarayi Vijayan elected as Leader of Opposition in Kerala |url=https://www.deccanherald.com/india/kerala/pinarayi-vijayan-elected-as-leader-of-opposition-in-kerala-4003109 |access-date=2026-05-15 |website=Deccan Herald |language=en}}</ref><ref>{{Cite news |last=Parthasarathy |first=Srinivasan Ramani , Pon Vasanth B. A. , Nitika Francis , Devyanshi Bihani , Areena Arora & Sambavi |date=2026-05-06 |title=UDF's near three-fourths majority marked a historic victory for the Congress-led coalition |url=https://www.thehindu.com/news/national/kerala/udfs-near-three-fourths-majority-marked-a-historicvictory-for-the-congress-led-coalition/article70944163.ece |access-date=2026-05-15 |work=The Hindu |language=en-IN |issn=0971-751X}}</ref>
[[ಭಾರತದ ಸಂವಿಧಾನ]]ದ ಪ್ರಕಾರ, ಕೇರಳವು [[ಪ್ರತಿನಿಧಿ ಪ್ರಜಾಪ್ರಭುತ್ವ]]ದ [[ಸಂಸದೀಯ ವ್ಯವಸ್ಥೆ]]ಯನ್ನು ಹೊಂದಿದೆ; [[ಸಾರ್ವತ್ರಿಕ ಮತದಾನ]]ವನ್ನು ನಿವಾಸಿಗಳಿಗೆ ನೀಡಲಾಗಿದೆ.<ref name=":0">{{cite web |url=https://niyamasabha.org/codes/govt_2.htm |title=Kerala Government – Legislature |publisher=Government of Kerala |access-date=19 November 2012 |archive-date=8 December 2012 |archive-url=https://web.archive.org/web/20121208011357/http://www.niyamasabha.org/codes/govt_2.htm |url-status=dead }}</ref>
== ಆರ್ಥಿಕತೆ ==
{{Main|ಕೇರಳದ ಆರ್ಥಿಕತೆ}}
ಸ್ವಾತಂತ್ರ್ಯದ ನಂತರ, ರಾಜ್ಯವನ್ನು [[ಸಾಮಾಜಿಕ ಪ್ರಜಾಪ್ರಭುತ್ವ|ಸಾಮಾಜಿಕ ಪ್ರಜಾಪ್ರಭುತ್ವ]] [[ಕಲ್ಯಾಣ ಆರ್ಥಿಕತೆ]]ಯಾಗಿ ನಿರ್ವಹಿಸಲಾಯಿತು.<ref>{{Cite news |title=A virus, social democracy, and dividends for Kerala |url=https://www.thehindu.com/opinion/lead/a-virus-social-democracy-and-dividends-for-kerala/article31370554.ece |last=Heller |first=Patrick |date=18 April 2020 |access-date=2 February 2021 |work=The Hindu |archive-date=19 November 2021 |archive-url=https://web.archive.org/web/20211119130557/https://www.thehindu.com/opinion/lead/a-virus-social-democracy-and-dividends-for-kerala/article31370554.ece |url-status=live }}</ref> ಅತ್ಯಧಿಕ ಮಾನವ ಅಭಿವೃದ್ಧಿ ಮತ್ತು ತುಲನಾತ್ಮಕವಾಗಿ ಕಡಿಮೆ ಆರ್ಥಿಕ ಅಭಿವೃದ್ಧಿಯ "ಕೇರಳ ವಿದ್ಯಮಾನ" ಅಥವಾ "[[ಕೇರಳ ಮಾದರಿ]]" ಅಭಿವೃದ್ಧಿಯು ಬಲವಾದ ಸೇವಾ ವಲಯದಿಂದ ಉಂಟಾಗಿದೆ.<ref name="Brenkert_Malone_2003" />{{rp|48}}<ref name="Tharamangalam_2005">{{Cite journal |author=Tharamangalam J |year=2005 |title=The Perils of Social Development without Economic Growth: The Development Debacle of Kerala, India |journal=Political Economy for Environmental Planners |url=https://www.infra.kth.se/courses/1H1142/Kerala_Paper_4.pdf |archive-url=https://web.archive.org/web/20131115072025/https://www.infra.kth.se/courses/1H1142/Kerala_Paper_4.pdf |archive-date=15 November 2013 |access-date=28 December 2008}}</ref>{{rp|1}} 2019–20 ರಲ್ಲಿ, ಕೇರಳದ ಆರ್ಥಿಕತೆಯು {{INRConvert|8.55|t}} ಸ್ಥೂಲ ರಾಜ್ಯ ಆಂತರಿಕ ಉತ್ಪನ್ನ (GSDP) ಮತ್ತು {{INRConvert|222|k}} ತಲಾ ನಿವ್ವಳ ರಾಜ್ಯ ಆಂತರಿಕ ಉತ್ಪನ್ನದೊಂದಿಗೆ ಭಾರತದಲ್ಲಿ [[ಸ್ಥೂಲ ರಾಜ್ಯ ಆಂತರಿಕ ಉತ್ಪನ್ನದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|8 ನೇ ಅತಿದೊಡ್ಡದಾಗಿದೆ]].<ref>{{Cite web |date=15 March 2021 |title=MOSPI State Domestic Product, Ministry of Statistics and Programme Implementation, Government of India |url=https://mospi.nic.in/sites/default/files/press_releases_statements/State_wise_SDP_15_03_2021.xls |access-date=23 June 2021 |archive-date=17 June 2021 |archive-url=https://web.archive.org/web/20210617193238/http://mospi.nic.in/sites/default/files/press_releases_statements/State_wise_SDP_15_03_2021.xls |url-status=live }}</ref> 2019–20 ರಲ್ಲಿ, [[ಆರ್ಥಿಕತೆಯ ತೃತೀಯ ವಲಯ|ತೃತೀಯ ವಲಯ]]ವು ರಾಜ್ಯದ [[ಸ್ಥೂಲ ಮೌಲ್ಯವರ್ಧಿತ|GSVA]] ಯ ಸುಮಾರು 63% ಕೊಡುಗೆ ನೀಡಿದೆ, ಇದಕ್ಕೆ [[ಆರ್ಥಿಕತೆಯ ದ್ವಿತೀಯ ವಲಯ|ದ್ವಿತೀಯ ವಲಯ]] 28% ಮತ್ತು [[ಆರ್ಥಿಕತೆಯ ಪ್ರಾಥಮಿಕ ವಲಯ|ಪ್ರಾಥಮಿಕ ವಲಯ]] 8% ಕೊಡುಗೆ ನೀಡಿದೆ.<ref name="eco">{{Cite book |last=Government of Kerala |url=https://spb.kerala.gov.in/sites/default/files/2021-01/English-Vol-1_0.pdf |title=Economic Review 2020 – Volume I |publisher=Kerala State Planning Board |year=2021 |location=Thiruvananthapuram |access-date=18 June 2021 |archive-date=2 May 2021 |archive-url=https://web.archive.org/web/20210502171017/https://spb.kerala.gov.in/sites/default/files/2021-01/English-Vol-1_0.pdf |url-status=live }}</ref> 1960 ಮತ್ತು 2020 ರ ಅವಧಿಯಲ್ಲಿ, ಕೇರಳದ ಆರ್ಥಿಕತೆಯು ಕೃಷಿ ಆರ್ಥಿಕತೆಯಿಂದ ಸೇವಾ ಆಧಾರಿತ ಆರ್ಥಿಕತೆಗೆ ಕ್ರಮೇಣ ಬದಲಾಗುತ್ತಿತ್ತು.<ref name="eco" />
{{multiple image
| direction = vertical
| width = 220
| image1 = Technopark Trivandum Ganga and Yamuna Buildings.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಟೆಕ್ನೋಪಾರ್ಕ್, ತಿರುವನಂತಪುರ|ಟೆಕ್ನೋಪಾರ್ಕ್]], ಭಾರತದ ಮೊದಲ ಮತ್ತು ಅತಿದೊಡ್ಡ [[ಮಾಹಿತಿ ತಂತ್ರಜ್ಞಾನ]] (IT) ಉದ್ಯಾನವನ
| image2 = Container terminal.JPG
| caption2 = [[ಕೊಚ್ಚಿ|ಕೊಚ್ಚಿಯ]] [[ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್, ಕೊಚ್ಚಿ|ವಲ್ಲಾರ್ಪಾಡಂ ಟರ್ಮಿನಲ್]], ಭಾರತದ ಮೊದಲ [[ಕಂಟೇನರ್ ಟರ್ಮಿನಲ್|ಟ್ರಾನ್ಸ್ಶಿಪ್ಮೆಂಟ್ ಟರ್ಮಿನಲ್]]
| image4 = Mappila bay.JPG
| caption4 = [[ಕಣ್ಣೂರು|ಕಣ್ಣೂರಿನ]] [[ಮಾಪ್ಪಿಲ ಕೊಲ್ಲಿ]] ಬಂದರು
}}
ರಾಜ್ಯದ [[ಆರ್ಥಿಕತೆಯ ತೃತೀಯ ವಲಯ|ಸೇವಾ ವಲಯ]]ವು ಅದರ ಆದಾಯದ ಸುಮಾರು 63% ರಷ್ಟಿದ್ದು, ಇದು ಮುಖ್ಯವಾಗಿ [[ಆತಿಥ್ಯ ಉದ್ಯಮ]], [[ಕೇರಳದ ಪ್ರವಾಸೋದ್ಯಮ|ಪ್ರವಾಸೋದ್ಯಮ]], [[ಆಯುರ್ವೇದ]] ಮತ್ತು ವೈದ್ಯಕೀಯ ಸೇವೆಗಳು, ಯಾತ್ರಾ ಸ್ಥಳಗಳು, [[ಮಾಹಿತಿ ತಂತ್ರಜ್ಞಾನ]], [[ಕೇರಳದ ರಸ್ತೆಗಳು|ಸಾರಿಗೆ]], ಹಣಕಾಸು ವಲಯ, ಮತ್ತು [[ಕೇರಳದಲ್ಲಿ ಶಿಕ್ಷಣ|ಶಿಕ್ಷಣ]]ವನ್ನು ಆಧರಿಸಿದೆ.<ref name=":15">{{Cite web |url=https://slbckerala.com/Economy.aspx |title=Economy of Kerala – 2016 |website=slbckerala.com |access-date=7 February 2022 |archive-date=28 March 2022 |archive-url=https://web.archive.org/web/20220328191455/http://slbckerala.com/Economy.aspx |url-status=dead }}</ref> ಕೈಗಾರಿಕಾ ವಲಯದಡಿಯಲ್ಲಿನ ಪ್ರಮುಖ ಉಪಕ್ರಮಗಳಲ್ಲಿ [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ]], ಹಡಗು ನಿರ್ಮಾಣ, ತೈಲ ಸಂಸ್ಕರಣಾಗಾರ, ಸಾಫ್ಟ್ವೇರ್ ಉದ್ಯಮ, ಕರಾವಳಿ ಖನಿಜ ಉದ್ಯಮಗಳು,{{sfn|Chandran|2018|p=343}} ಆಹಾರ ಸಂಸ್ಕರಣೆ, ಸಮುದ್ರ ಉತ್ಪನ್ನಗಳ ಸಂಸ್ಕರಣೆ, ಮತ್ತು ರಬ್ಬರ್ ಆಧಾರಿತ ಉತ್ಪನ್ನಗಳು ಸೇರಿವೆ. ರಾಜ್ಯದ ಪ್ರಾಥಮಿಕ ವಲಯವು ಮುಖ್ಯವಾಗಿ [[ವಾಣಿಜ್ಯ ಬೆಳೆ]]ಗಳನ್ನು ಆಧರಿಸಿದೆ.{{sfn|Chandran|2018|p=409}} ಕೇರಳವು ಭಾರತದಲ್ಲಿ [[ತೆಂಗು]], [[ಚಹಾ]], [[ಕಾಫಿ]], [[ಮಲಬಾರ್ ಮೆಣಸು|ಮೆಣಸು]], [[ನೈಸರ್ಗಿಕ ರಬ್ಬರ್]], [[ಏಲಕ್ಕಿ]], ಮತ್ತು [[ಗೋಡಂಬಿ]] ಮುಂತಾದ ವಾಣಿಜ್ಯ ಬೆಳೆಗಳ ರಾಷ್ಟ್ರೀಯ ಉತ್ಪಾದನೆಯ ಗಮನಾರ್ಹ ಪ್ರಮಾಣವನ್ನು ಉತ್ಪಾದಿಸುತ್ತದೆ.{{sfn|Chandran|2018|p=409}} ಆಹಾರ ಬೆಳೆಗಳ ಕೃಷಿಯು 1950 ರ ದಶಕದಿಂದ ಕಡಿಮೆಯಾಗಲು ಪ್ರಾರಂಭಿಸಿತು.{{sfn|Chandran|2018|p=409}}
ಕೇರಳದ ಆರ್ಥಿಕತೆಯು [[ಕೇರಳ ಗಲ್ಫ್ ವಲಸೆ|ವಿದೇಶಗಳಲ್ಲಿ ಕೆಲಸ ಮಾಡುವ ವಲಸಿಗರ]] ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ, ಮುಖ್ಯವಾಗಿ [[ಪರ್ಷಿಯನ್ ಗಲ್ಫ್ನ ಅರಬ್ ರಾಜ್ಯಗಳಲ್ಲಿ]], ಮತ್ತು ವಾರ್ಷಿಕ ಸ್ಥಳಾಂತರ ವರ್ಗಾವಣೆಗಳು GSDP ಯ ಐದನೇ ಒಂದು ಭಾಗಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ.<ref name="rem1">{{cite report |author1=K.P. Kannan |author2=K.S. Hari |title=Kerala's Gulf connection: Emigration, remittances and their macroeconomic impact, 1972–2000 |url=https://ideas.repec.org/p/ind/cdswpp/328.html |year=2002 |website=[[Research Papers in Economics]] |access-date=4 April 2022 |archive-date=28 June 2021 |archive-url=https://web.archive.org/web/20210628135450/https://ideas.repec.org/p/ind/cdswpp/328.html |url-status=live }}</ref> 1970 ಮತ್ತು 1980 ರ ದಶಕದ ಆರಂಭದ [[ಕೇರಳ ಗಲ್ಫ್ ವಲಸೆ#ಗಲ್ಫ್ ಬೂಮ್|ಗಲ್ಫ್ ಬೂಮ್]] ಸಮಯದಲ್ಲಿ ರಾಜ್ಯವು ಗಮನಾರ್ಹ ವಲಸೆಯನ್ನು ಕಂಡಿತು. 2012 ರಲ್ಲಿ, ಕೇರಳವು ಎಲ್ಲಾ ರಾಜ್ಯಗಳ ಅತಿ ಹೆಚ್ಚು ಸ್ಥಳಾಂತರ ವರ್ಗಾವಣೆಗಳನ್ನು ಪಡೆಯಿತು: US$11.3 ಬಿಲಿಯನ್, ಇದು ದೇಶಕ್ಕೆ US$71 ಬಿಲಿಯನ್ ಸ್ಥಳಾಂತರ ವರ್ಗಾವಣೆಗಳಲ್ಲಿ ಸುಮಾರು 16% ಆಗಿತ್ತು.<ref>{{cite news |url=https://in.finance.yahoo.com/news/remittances--kerala-drives-dollar-flows-to-india-053414379.html |title=Remittances: Kerala drives dollar flows to India |work=[[Yahoo! Finance]] |date=5 November 2013 |access-date=8 November 2013 |archive-date=7 November 2013 |archive-url=https://web.archive.org/web/20131107053009/http://in.finance.yahoo.com/news/remittances--kerala-drives-dollar-flows-to-india-053414379.html |url-status=live }}</ref> 2015 ರಲ್ಲಿ, ಕೇರಳದಲ್ಲಿ NRI ಠೇವಣಿಗಳು {{INRConvert|1|lc}} ಕ್ಕಿಂತ ಹೆಚ್ಚಾಗಿದ್ದು, ಇದು NRI ಖಾತೆಗಳಲ್ಲಿ ಠೇವಣಿಯಾದ ಎಲ್ಲಾ ಹಣದ ಆರನೇ ಒಂದು ಭಾಗಕ್ಕೆ ಸಮನಾಗಿರುತ್ತದೆ, ಇದು ಸುಮಾರು {{INRConvert|7|lc}} ಆಗಿದೆ.<ref>{{cite news |url=https://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |title=NRI deposits in Kerala banks cross Rs 1 lakh crore |date=22 June 2015 |access-date=13 November 2015 |work=[[The Times of India]] |archive-date=25 June 2015 |archive-url=https://web.archive.org/web/20150625121200/http://timesofindia.indiatimes.com/nri/other-news/NRI-deposits-in-Kerala-banks-cross-Rs-1-lakh-crore/articleshow/47769012.cms |url-status=live }}</ref> [[ಮಲಪ್ಪುರಂ ಜಿಲ್ಲೆ]]ಯು ರಾಜ್ಯದಲ್ಲಿ ಅತಿ ಹೆಚ್ಚು ವಲಸೆ ಕುಟುಂಬಗಳ ಪ್ರಮಾಣವನ್ನು ಹೊಂದಿದೆ.<ref name="eco" /> [[ಕೇರಳ ರಾಜ್ಯ ಯೋಜನಾ ಮಂಡಳಿ]]ಯು ನಿಯೋಜಿಸಿದ ಅಧ್ಯಯನವು, ತನ್ನ ವೆಚ್ಚಕ್ಕೆ ಹಣಕಾಸು ಒದಗಿಸಲು ಸ್ಥಳಾಂತರ ವರ್ಗಾವಣೆಗಳ ಮೇಲೆ ಅವಲಂಬಿಸುವ ಬದಲು ರಾಜ್ಯವು ಇತರ ವಿಶ್ವಾಸಾರ್ಹ ಆದಾಯದ ಮೂಲಗಳನ್ನು ಹುಡುಕಬೇಕೆಂದು ಸೂಚಿಸಿದೆ.<ref name="Commission2008b">{{cite book |author=India. Planning Commission |title=Kerala Development Report |url=https://books.google.com/books?id=Ul-OkF5gUJQC&pg=PA457 |year=2008 |publisher=Academic Foundation |isbn=978-8171885947 |page=396}}</ref>
ಮಾರ್ಚ್ 2002 ರಂತೆ, ಕೇರಳದ ಬ್ಯಾಂಕಿಂಗ್ ವಲಯವು 3341 ಸ್ಥಳೀಯ ಶಾಖೆಗಳನ್ನು ಒಳಗೊಂಡಿತ್ತು: ಪ್ರತಿ ಶಾಖೆಯು 10,000 ಜನರಿಗೆ ಸೇವೆ ಸಲ್ಲಿಸಿತು, ಇದು ರಾಷ್ಟ್ರೀಯ ಸರಾಸರಿ 16,000 ಕ್ಕಿಂತ ಕಡಿಮೆಯಾಗಿದೆ; ರಾಜ್ಯವು ಭಾರತೀಯ ರಾಜ್ಯಗಳಲ್ಲಿ ಮೂರನೇ ಅತಿ ಹೆಚ್ಚು ಬ್ಯಾಂಕ್ ಪ್ರವೇಶವನ್ನು ಹೊಂದಿದೆ.<ref name="RBI_2002">{{cite web |url=https://rbidocs.rbi.org.in/rdocs/Publications/PDFs/35585.pdf |title=State/Union Territory-Wise Number of Branches of Scheduled Commercial Banks and Average Population Per Bank Branch |date=March 2002 |work=Reserve Bank of India |access-date=28 December 2008 |url-status=dead |archive-url=https://web.archive.org/web/20070810094850/https://rbidocs.rbi.org.in/rdocs/Publications/PDFs/35585.pdf |archive-date=10 August 2007}}</ref> 1 ಅಕ್ಟೋಬರ್ 2011 ರಂದು, ಕೇರಳವು ಪ್ರತಿ ಗ್ರಾಮದಲ್ಲಿ ಕನಿಷ್ಠ ಒಂದು ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಯಿತು.<ref>{{cite news |url=https://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |work=The Times of India |title=Now, you can bank on every village in Kerala |date=1 October 2011 |access-date=13 November 2015 |archive-date=4 January 2017 |archive-url=https://web.archive.org/web/20170104180910/http://timesofindia.indiatimes.com/city/kochi/Now-you-can-bank-on-every-village-in-Kerala/articleshow/10194261.cms |url-status=live }}</ref> [[ಕೇರಳದಲ್ಲಿ ನಿರುದ್ಯೋಗ|2007 ರಲ್ಲಿ ನಿರುದ್ಯೋಗವು]] 9.4% ಎಂದು ಅಂದಾಜಿಸಲಾಗಿದೆ;<ref>{{cite news |author=Kumar KG |title=Jobless no more? |newspaper=Business Line |date=8 October 2007 |url=https://www.thehindubusinessline.com/todays-paper/tp-economy/article1671367.ece |quote=A study by K.C. Zacharia and S. Irudaya Rajan, two economists at the Centre for Development Studies (CDS), unemployment in Kerala has dropped from 19.1[%] in 2003 to 9.4[%] in 2007. |access-date=16 November 2012 |archive-date=6 November 2013 |archive-url=https://web.archive.org/web/20131106032604/http://www.thehindubusinessline.com/todays-paper/tp-economy/article1671367.ece |url-status=live }}</ref> ದೀರ್ಘಕಾಲದ ಸಮಸ್ಯೆಗಳೆಂದರೆ [[ನಿರುದ್ಯೋಗ]], ಯುವಜನರ ಕಡಿಮೆ ಉದ್ಯೋಗಸಾಧ್ಯತೆ, ಮತ್ತು ಕೇವಲ 13.5% ರಷ್ಟಿರುವ ಕಡಿಮೆ ಮಹಿಳಾ [[ಕಾರ್ಮಿಕ|ಕಾರ್ಮಿಕ ಭಾಗವಹಿಸುವಿಕೆ ದರ]],<ref name="Nair_2004">{{Cite book |author=Nair NG |veditors=Nair PR, Shaji H |title=Measurement of Employment, Unemployment, and Underemployment |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621751 |url=https://www.cds.ac.in/krpcds/publication/downloads/72.pdf |access-date=31 December 2008 |archive-date=30 May 2015 |archive-url=https://web.archive.org/web/20150530210334/http://www.cds.ac.in/krpcds/publication/downloads/72.pdf |url-status=live }}</ref>{{rp|5, 13}} ಜೊತೆಗೆ ''[[ನೋಕ್ಕು ಕೂಲಿ]]'' ("ನೋಡುವಿಕೆಗೆ ವೇತನ") ಪದ್ಧತಿಯೂ ಇತ್ತು.<ref name="Outlook-2008">{{cite news |url=https://www.outlookindia.com/article.aspx?237419 |first=John |last=Mary |title=Men (Not) At Work |work=[[Outlook (Indian magazine)|Outlook]] |date=12 May 2008 |access-date=13 November 2015 |archive-date=6 November 2013 |archive-url=https://web.archive.org/web/20131106032651/http://www.outlookindia.com/article.aspx?237419 |url-status=live }}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6">{{Cite report |last=Deaton |first=Angus |title=Regional poverty estimates for India, 1999–2000 |url=https://www.princeton.edu/rpds/papers/pdfs/deaton_regionalpovertyindia.pdf |date=22 August 2003 |archive-url=https://web.archive.org/web/20110628193845/https://www.princeton.edu/rpds/papers/pdfs/deaton_regionalpovertyindia.pdf |archive-date=28 June 2011 |url-status=dead |page=10 |access-date=4 April 2022}}</ref>
2020–2021 ರ ರಾಜ್ಯದ ಬಜೆಟ್ {{INRConvert|1.15|lc}} ಆಗಿತ್ತು.<ref name="Budget">{{cite web |url=https://www.finance.kerala.gov.in/bdgtDcs.jsp |title=Budget In Brief |format=PDF |website=finance.kerala.gov.in |publisher=Government of Kerala |access-date=4 December 2020 |archive-date=25 November 2020 |archive-url=https://web.archive.org/web/20201125214731/http://www.finance.kerala.gov.in/bdgtDcs.jsp |url-status=live }}</ref> ರಾಜ್ಯ ಸರ್ಕಾರದ ತೆರಿಗೆ ಆದಾಯವು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–21 ರಲ್ಲಿ {{INRConvert|674|b}} ಆಗಿತ್ತು; 2019–20 ರಲ್ಲಿ {{INRConvert|557|b}} ರಿಂದ ಹೆಚ್ಚಾಗಿದೆ. ಕೇರಳ ಸರ್ಕಾರದ ಅದರ [[ತೆರಿಗೆ-ಅಲ್ಲದ ಆದಾಯ]]ಗಳು (ಕೇಂದ್ರ ತೆರಿಗೆ ಪೂಲ್ನ ಪಾಲುಗಳನ್ನು ಹೊರತುಪಡಿಸಿ) 2020–2021 ರಲ್ಲಿ {{INRConvert|146|b}} ತಲುಪಿದೆ.<ref name="Budget" /> ಆದಾಗ್ಯೂ, ಕೇರಳದ GSDP ಗೆ ತೆರಿಗೆಯ ಹೆಚ್ಚಿನ ಅನುಪಾತವು ದೀರ್ಘಕಾಲದ ಬಜೆಟ್ ಕೊರತೆಗಳು ಮತ್ತು ಸುಸ್ಥಿರವಲ್ಲದ ಮಟ್ಟದ ಸರ್ಕಾರಿ ಸಾಲವನ್ನು ನಿವಾರಿಸಿಲ್ಲ, ಇದು ಸಾಮಾಜಿಕ ಸೇವೆಗಳ ಮೇಲೆ ಪರಿಣಾಮ ಬೀರಿದೆ.<ref>{{cite web |url=https://fincomindia.nic.in/pubsugg/memo_ker.pdf |archive-url=https://web.archive.org/web/20080626195846/https://fincomindia.nic.in/pubsugg/memo_ker.pdf |archive-date=26 June 2008 |title=Memoranda from States: Kerala |website=fincomindia.nic.in |access-date=25 September 2013}}</ref> 2006 ರಲ್ಲಿ ಒಟ್ಟು 223 [[ಹರ್ತಾಲ್]]ಗಳು ನಡೆದಿದ್ದವು, ಇದರ ಪರಿಣಾಮವಾಗಿ {{INRConvert|20|b}} ಕ್ಕಿಂತ ಹೆಚ್ಚು ಆದಾಯ ನಷ್ಟವಾಗಿದೆ.<ref>[https://www.rediff.com/news/2008/jul/06kerala.htm Kerala: Hartals Own Country?] {{webarchive |url=https://web.archive.org/web/20160304043808/https://www.rediff.com/news/2008/jul/06kerala.htm |date=4 March 2016 }} 6 July 2008</ref> ಕೇರಳದ GDP ಯಲ್ಲಿ 10% ಏರಿಕೆಯು ರಾಷ್ಟ್ರೀಯ GDP ಗಿಂತ 3% ಹೆಚ್ಚಾಗಿದೆ. 2013 ರಲ್ಲಿ, ಬಂಡವಾಳ ವೆಚ್ಚವು ರಾಷ್ಟ್ರೀಯ ಸರಾಸರಿ 5% ಕ್ಕೆ ಹೋಲಿಸಿದರೆ 30% ರಷ್ಟು ಏರಿತು, ದ್ವಿಚಕ್ರ ವಾಹನಗಳ ಮಾಲೀಕರು ರಾಷ್ಟ್ರೀಯ ದರ 15% ಕ್ಕೆ ಹೋಲಿಸಿದರೆ 35% ರಷ್ಟು ಏರಿತು, ಮತ್ತು ಶಿಕ್ಷಕ-ವಿದ್ಯಾರ್ಥಿ ಅನುಪಾತವು 2:100 ರಿಂದ 4:100 ಕ್ಕೆ 50% ರಷ್ಟು ಏರಿತು.<ref>{{cite web |url=https://www.keralacm.gov.in/index.php/news2catleist/2443-23-12-2013-india-today |archive-url=https://web.archive.org/web/20131224091613/https://www.keralacm.gov.in/index.php/news2catleist/2443-23-12-2013-india-today |url-status=dead |archive-date=24 December 2013 |title=India Today On Cm |publisher=Keralacm.gov.in |access-date=11 January 2014}}</ref>
[[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ]]ಯು ರಾಜ್ಯದ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು, ರಾಜ್ಯದ ಆದಾಯದ ಹೊರಗಿನಿಂದ ಮೂಲಸೌಕರ್ಯ ಅಭಿವೃದ್ಧಿಗೆ ನಿಧಿಯನ್ನು ಸಜ್ಜುಗೊಳಿಸಲು ರಾಜ್ಯದ ಸರ್ಕಾರಿ-ಸ್ವಾಮ್ಯದ [[ಹಣಕಾಸು ಸಂಸ್ಥೆ]]ಯಾಗಿದೆ.<ref>{{Cite news |url=https://www.thehindu.com/news/national/kerala/big-push-for-infrastructure-in-budget/article17403255.ece |title=Big push for infrastructure in Budget |newspaper=The Hindu |date=3 March 2017 |via=www.thehindu.com |access-date=25 November 2020 |archive-date=29 January 2021 |archive-url=https://web.archive.org/web/20210129210933/https://www.thehindu.com/news/national/kerala/big-push-for-infrastructure-in-budget/article17403255.ece |url-status=live }}</ref><ref>{{Cite web |url=https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |title=Kerala Budget: Infrastructure projects get a major fillip |website=The New Indian Express |date=4 March 2017 |access-date=25 November 2020 |archive-date=30 January 2021 |archive-url=https://web.archive.org/web/20210130030958/https://www.newindianexpress.com/states/kerala/2017/mar/04/kerala-budget-infrastructure-projects-get-a-major-fillip-1577360.html |url-status=live }}</ref>
ನವೆಂಬರ್ 2015 ರಲ್ಲಿ, [[ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯ|ನಗರಾಭಿವೃದ್ಧಿ ಸಚಿವಾಲಯ]]ವು [[ಅಟಲ್ ನವೀಕರಣ ಮತ್ತು ನಗರ ಪರಿವರ್ತನೆಗಾಗಿ ಮಿಷನ್]] (AMRUT) ಎಂದು ಕರೆಯಲ್ಪಡುವ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಕೇರಳದ ಏಳು ನಗರಗಳನ್ನು ಆಯ್ಕೆ ಮಾಡಿತು.<ref>{{cite news |title=Modi to address heads of civic bodies on urban revamp |url=https://www.thehindu.com/news/national/modi-to-address-heads-of-civic-bodies-on-urban-revamp/article7336851.ece |date=20 June 2015 |newspaper=[[The Hindu]] |access-date=25 June 2015 |archive-date=2 February 2021 |archive-url=https://web.archive.org/web/20210202155935/https://www.thehindu.com/news/national/modi-to-address-heads-of-civic-bodies-on-urban-revamp/article7336851.ece |url-status=live }}</ref> ಸೇವಾ ಮಟ್ಟದ ಸುಧಾರಣಾ ಯೋಜನೆಯನ್ನು (SLIP) ಅಭಿವೃದ್ಧಿಪಡಿಸಲು ಪ್ರತಿ ನಗರಕ್ಕೆ {{INRConvert|2.5|m}} ನ ಪ್ಯಾಕೇಜ್ ಅನ್ನು ಘೋಷಿಸಲಾಯಿತು, ಇದು ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಕೊಚ್ಚಿ, ತೃಶೂರ್, ಕೋಝಿಕೋಡ್, ಮತ್ತು ಪಾಲಕ್ಕಾಡ್ ನಗರಗಳಲ್ಲಿ ಸ್ಥಳೀಯ ನಗರ ಸಂಸ್ಥೆಗಳ ಉತ್ತಮ ಕಾರ್ಯನಿರ್ವಹಣೆಗೆ ಯೋಜನೆಯಾಗಿದೆ.<ref>{{cite news |last=R. Ramabhadran |first=Pillai |title=AMRUT to roll out on a smaller scale |url=https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |access-date=12 November 2015 |work=The Hindu |issue=12 November 2015 |archive-date=7 February 2021 |archive-url=https://web.archive.org/web/20210207052652/https://www.thehindu.com/todays-paper/tp-national/tp-kerala/amrut-to-roll-out-on-a-smaller-scale/article7868199.ece |url-status=live }}</ref> [[ಗ್ರ್ಯಾಂಡ್ ಕೇರಳ ಶಾಪಿಂಗ್ ಫೆಸ್ಟಿವಲ್]] (GKSF) ಅನ್ನು 2007 ರಲ್ಲಿ ಪ್ರಾರಂಭಿಸಲಾಯಿತು, ಇದು ಕೇರಳದ ಒಂಬತ್ತು ನಗರಗಳಾದ್ಯಂತ 3000 ಕ್ಕೂ ಹೆಚ್ಚು ಮಳಿಗೆಗಳನ್ನು ದೊಡ್ಡ ತೆರಿಗೆ ರಿಯಾಯಿತಿಗಳು, VAT ಮರುಪಾವತಿಗಳು ಮತ್ತು ದೊಡ್ಡ ಪ್ರಮಾಣದ ಬಹುಮಾನಗಳೊಂದಿಗೆ ಒಳಗೊಂಡಿದೆ.<ref name="GKSF begins">{{cite news |title=Shopping festival begins |url=https://www.thehindu.com/todays-paper/tp-national/tp-kerala/shopping-festival-begins/article1959420.ece |work=The Hindu |date=2 December 2007 |access-date=24 January 2013 |archive-date=27 September 2013 |archive-url=https://web.archive.org/web/20130927054507/http://www.thehindu.com/todays-paper/tp-national/tp-kerala/shopping-festival-begins/article1959420.ece |url-status=live }}</ref> [[ತಿರುವನಂತಪುರ|ತಿರುವನಂತಪುರದ]] [[ಲುಲು ಮಾಲ್, ತಿರುವನಂತಪುರ|ಲುಲು ಇಂಟರ್ನ್ಯಾಷನಲ್ ಮಾಲ್]] ಭಾರತದ ಅತಿದೊಡ್ಡ [[ಶಾಪಿಂಗ್ ಮಾಲ್|ಶಾಪಿಂಗ್ ಮಾಲ್]] ಆಗಿದೆ.<ref>{{cite news |title=LuLu Group: Going places |url=https://www.khaleejtimes.com/business/local/lulu-group-going-places |work=[[Khaleej Times]] |access-date=13 November 2020 |archive-date=26 April 2021 |archive-url=https://web.archive.org/web/20210426172244/https://www.khaleejtimes.com/business/local/lulu-group-going-places |url-status=live }}</ref>
ಅನೇಕ ಸಾಧನೆಗಳ ಹೊರತಾಗಿಯೂ, ಕೇರಳವು ವಿದ್ಯಾವಂತ ಮಹಿಳೆಯರ ಮೇಲೆ ಅಸಮಾನವಾಗಿ ಪರಿಣಾಮ ಬೀರುವ ಹೆಚ್ಚಿನ ಮಟ್ಟದ ನಿರುದ್ಯೋಗ, ಹೆಚ್ಚಿನ ಮಟ್ಟದ ಜಾಗತಿಕ ಪ್ರಭಾವ ಮತ್ತು ಅತ್ಯಂತ ಸೂಕ್ಷ್ಮ ಪರಿಸರದಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದೆ.<ref name="Hindu2021">{{cite journal |title=Making sense of Kerala |journal=The Hindu |date=13 December 2021 |last1=Heller |first1=Patrick |last2=Törnquist |first2=Olle |url=https://www.thehindu.com/news/national/kerala/making-sense-of-kerala/article37942860.ece |archive-url=https://web.archive.org/web/20211214151547/https://www.thehindu.com/news/national/kerala/making-sense-of-kerala/article37942860.ece |accessdate=5 March 2022 |archive-date=14 December 2021 |quote=Kerala has specific challenges: persistently high levels of unemployment that disproportionately impact educated women, a high degree of global exposure and a very fragile environment. More broadly, as the 21st century unfolds, it becomes increasingly clearer that the role of the State in supporting development must fundamentally change. First, in highly educated societies like Kerala, industrialisation is no longer the path to economic prosperity.}}</ref>
=== ಕೈಗಾರಿಕೆಗಳು ===
ಸಾಂಪ್ರದಾಯಿಕ ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳು; [[ತೆಂಗಿನ ನಾರು]], [[ಕೈಮಗ್ಗ]]ಗಳು, ಮತ್ತು [[ಕರಕುಶಲ]]ಗಳು ಸುಮಾರು ಒಂದು ಮಿಲಿಯನ್ ಜನರನ್ನು ಉದ್ಯೋಗಿಸುತ್ತವೆ.<ref name="KumarKerala2007">{{cite book |author1=S. Rajitha Kumar |author2=University of Kerala |title=Traditional Industries of India in the Globalised World |url=https://books.google.com/books?id=aBvtAAAAMAAJ |year=2007 |publisher=University of Kerala |isbn=978-8177081435 |page=223}}</ref> ಕೇರಳವು ಬಿಳಿ ತೆಂಗಿನ ನಾರಿನ ನಾರಿನ ಒಟ್ಟು ಜಾಗತಿಕ ಉತ್ಪಾದನೆಯ 60% ಅನ್ನು ಪೂರೈಸುತ್ತದೆ. ಭಾರತದ ಮೊದಲ ತೆಂಗಿನ ನಾರಿನ ಕಾರ್ಖಾನೆಯನ್ನು [[ಆಲಪ್ಪುಳ]]ದಲ್ಲಿ 1859–60 ರಲ್ಲಿ ಸ್ಥಾಪಿಸಲಾಯಿತು.<ref>{{cite web |title=Indian Coir Industry |url=https://www.indianmirror.com/indian-industries/coir.html |work=Indian Mirror |access-date=29 April 2014 |archive-date=2 May 2014 |archive-url=https://web.archive.org/web/20140502033302/http://www.indianmirror.com/indian-industries/coir.html |url-status=live }}</ref> ಕೇಂದ್ರ ತೆಂಗಿನ ನಾರಿನ ಸಂಶೋಧನಾ ಸಂಸ್ಥೆಯನ್ನು ಅಲ್ಲಿ 1959 ರಲ್ಲಿ ಸ್ಥಾಪಿಸಲಾಯಿತು. 2006–2007 ರ [[SIDBI]] ಯ ಜನಗಣತಿಯ ಪ್ರಕಾರ, ಕೇರಳದಲ್ಲಿ {{formatnum:1468104}} [[ಸಣ್ಣ ಮತ್ತು ಮಧ್ಯಮ ಉದ್ಯಮಗಳು#ಭಾರತ|ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿವೆ]], ಇವು {{formatnum:3031272}} ಜನರನ್ನು ಉದ್ಯೋಗಿಸುತ್ತವೆ.<ref name="SIDBI Report 2010">{{cite book |title=SIDBI Report on Micro, Small and Medium Enterprises Sector, 2010 |publisher=Small Industries Development Bank of India |year=2010}}</ref><ref>{{cite journal |title=A Study on the Position of Small and Medium Enterprises in Kerala vis a vis the National Scenario |author=N. Rajeevan |journal=International Journal of Research in Commerce, Economics and Management |date=March 2012 |volume=2 |issue=3}}</ref> [[KSIDC]] ಕೇರಳದಲ್ಲಿ 650 ಕ್ಕೂ ಹೆಚ್ಚು ಮಧ್ಯಮ ಮತ್ತು ದೊಡ್ಡ ಉತ್ಪಾದನಾ ಸಂಸ್ಥೆಗಳನ್ನು ಪ್ರೋತ್ಸಾಹಿಸಿದೆ, 72,500 ಜನರಿಗೆ ಉದ್ಯೋಗವನ್ನು ಸೃಷ್ಟಿಸಿದೆ.<ref>{{cite web |url=https://www.ksidc.org/about-functions.php |archive-url=https://web.archive.org/web/20140709062837/https://www.ksidc.org/about-functions.php |archive-date=9 July 2014 |title=Functions, KSIDC, Thiruvananthapuram |publisher=Kerala State Industrial Development Corporation |access-date=6 December 2013}}</ref> GSDP ಯ 0.3% ರಷ್ಟಿರುವ ಗಣಿಗಾರಿಕಾ ವಲಯವು [[ಇಲ್ಮೆನೈಟ್]], [[ಕಯೋಲಿನ್]], [[ಬಾಕ್ಸೈಟ್]], [[ಸಿಲಿಕಾ]], [[ಕ್ವಾರ್ಟ್ಜ್]], [[ರುಟೈಲ್]], [[ಜಿರ್ಕಾನ್]], ಮತ್ತು [[ಸಿಲ್ಲಿಮನೈಟ್]] ಹೊರತೆಗೆಯುವಿಕೆಯನ್ನು ಒಳಗೊಂಡಿದೆ.<ref name="GOK_2005c">{{Cite journal |author=Government of Kerala |year=2005 |title=Kerala at a Glance |journal=Government of Kerala |url=https://www.kerala.gov.in/ |access-date=22 January 2006 |url-status=dead |archive-url=https://web.archive.org/web/20060118031516/https://www.kerala.gov.in/ |archive-date=18 January 2006}}</ref> ಇತರ ಪ್ರಮುಖ ವಲಯಗಳೆಂದರೆ [[ಕೇರಳದಲ್ಲಿ ಪ್ರವಾಸೋದ್ಯಮ|ಪ್ರವಾಸೋದ್ಯಮ]], ವೈದ್ಯಕೀಯ ವಲಯ, [[ಕೇರಳದಲ್ಲಿ ಶಿಕ್ಷಣ|ಶೈಕ್ಷಣಿಕ ವಲಯ]], ಬ್ಯಾಂಕಿಂಗ್, [[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಹಡಗು ನಿರ್ಮಾಣ]], [[ಕೊಚ್ಚಿ ಸಂಸ್ಕರಣಾಗಾರ|ತೈಲ ಸಂಸ್ಕರಣಾಗಾರ]], ಮೂಲಸೌಕರ್ಯ, ಉತ್ಪಾದನೆ, [[ವಸತಿ ಉದ್ಯಾನ|ಮನೆ ತೋಟಗಳು]], ಪಶುಪಾಲನೆ ಮತ್ತು [[ವ್ಯಾಪಾರ ಪ್ರಕ್ರಿಯೆಯ ಹೊರಗುತ್ತಿಗೆ]].{{citation needed|date=October 2025}}
=== ಕೃಷಿ ===
[[File:Tea plantations in Munnar, Kerala.jpg|thumb|[[ಮುನ್ನಾರ್|ಮುನ್ನಾರಿನಲ್ಲಿ]] ಚಹಾ ತೋಟಗಳು, ಕೇರಳ]]
[[File:Nemmara-paddy.jpg|alt=A field|thumb|[[ಪಾಲಕ್ಕಾಡ್ ಜಿಲ್ಲೆ|ಪಾಲಕ್ಕಾಡಿನ]] ಒಂದು ಭತ್ತದ ಗದ್ದೆ, ಇದನ್ನು ''ಕೇರಳದ ಧಾನ್ಯದ ಬುಟ್ಟಿ'' ಎಂದೂ ಕರೆಯುತ್ತಾರೆ]]
ಕೇರಳದಲ್ಲಿ ಕೃಷಿಯಲ್ಲಿ ಪ್ರಮುಖ ಬದಲಾವಣೆಯು 1970 ರ ದಶಕದಲ್ಲಿ ಸಂಭವಿಸಿತು, ಭಾರತಾದ್ಯಂತ ಅಕ್ಕಿಯ ಲಭ್ಯತೆ ಹೆಚ್ಚಾದ ಕಾರಣ ಮತ್ತು ಕಾರ್ಮಿಕರ ಲಭ್ಯತೆ ಕಡಿಮೆಯಾದ ಕಾರಣ ಅಕ್ಕಿ ಉತ್ಪಾದನೆಯು ಕುಸಿಯಿತು.<ref name="Sinha2003">{{cite book |author=B.R. Sinha |title=Encyclopaedia Of Professional Education (10 Vol.) |url=https://books.google.com/books?id=mdjGoXN3y1AC&pg=PA205 |access-date=18 November 2012 |year=2003 |publisher=Sarup & Sons |isbn=978-8176254106 |pages=204–05}}</ref> ಪರಿಣಾಮವಾಗಿ, ಅಕ್ಕಿ ಉತ್ಪಾದನೆಯಲ್ಲಿ ಹೂಡಿಕೆ ಕಡಿಮೆಯಾಯಿತು ಮತ್ತು ಭೂಮಿಯ ಗಮನಾರ್ಹ ಭಾಗವು ದೀರ್ಘಕಾಲಿಕ ಮರದ ಬೆಳೆಗಳು ಮತ್ತು ಕಾಲಿಕ ಬೆಳೆಗಳ ಕೃಷಿಗೆ ಬದಲಾಯಿತು.<ref name="Remesh2010">{{cite book |author=Babu P. Remesh |title=Dynamics of Rural Labour: A Study of Small Holding Rubber Tappers in Kerala |url=https://books.google.com/books?id=uOyNsKXSa0gC&pg=PA52 |access-date=18 November 2012 |year=2010 |publisher=Concept Publishing Company |isbn=978-8180696602 |pages=52–}}</ref><ref name="Commission2008">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA66 |access-date=18 November 2012 |year=2008 |publisher=Academic Foundation |isbn=978-8171885947 |pages=66–}}</ref> ಕೃಷಿ ಕಾರ್ಮಿಕರ ಕೊರತೆ, ಭೂಮಿಯ ಹೆಚ್ಚಿನ ಬೆಲೆ ಮತ್ತು ಕಾರ್ಯಾಚರಣೆಯ ಹಿಡುವಳಿಗಳ ಅನಾರೋಗ್ಯಕರ ಗಾತ್ರದಿಂದಾಗಿ ಬೆಳೆಗಳ ಲಾಭದಾಯಕತೆಯು ಕುಸಿಯಿತು.<ref name="google9">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=66 |access-date=30 May 2015}}</ref> ಕೇರಳದಲ್ಲಿ ಕೇವಲ 27.3% ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿವೆ, ಇದು ಭಾರತದಲ್ಲಿ ಅತ್ಯಂತ ಕಡಿಮೆ ಪ್ರಮಾಣವಾಗಿದೆ.{{sfn|Chandran|2018|p=406}}
ಕೇರಳವು ಕರಿಮೆಣಸಿನ ರಾಷ್ಟ್ರೀಯ ಉತ್ಪಾದನೆಯ 97% ಅನ್ನು ಉತ್ಪಾದಿಸುತ್ತದೆ<ref name="Limca Book of Records">{{cite book |title=Limca Book of Records |url=https://books.google.com/books?id=Y-JtAAAAMAAJ |access-date=18 November 2012 |year=2001 |publisher=Bisleri Beverages Limited |page=97}}</ref> ಮತ್ತು ದೇಶದ [[ನೈಸರ್ಗಿಕ ರಬ್ಬರ್]]ನ 85% ರಷ್ಟಿದೆ.<ref name="google10">{{cite book |title=South Asia 2006 |url=https://books.google.com/books?id=YG8bAQAAMAAJ |access-date=18 November 2012 |year=2005 |publisher=Taylor & Francis |page=291 |isbn=978-1-85743-318-0}}</ref><ref name="Economic Affairs">{{cite book |title=Economic Affairs |url=https://books.google.com/books?id=StHsAAAAMAAJ |access-date=18 November 2012 |year=1998 |publisher=H. Roy |page=47}}</ref> [[ತೆಂಗು]], [[ಚಹಾ]], [[ಕಾಫಿ]], [[ಗೋಡಂಬಿ]], ಮತ್ತು ಮಸಾಲೆಗಳು—ಏಲಕ್ಕಿ, [[ವೆನಿಲ್ಲಾ]], [[ದಾಲ್ಚಿನ್ನಿ]], ಮತ್ತು [[ಜಾಯಿಕಾಯಿ]] ಪ್ರಮುಖ ಕೃಷಿ ಉತ್ಪನ್ನಗಳಾಗಿವೆ.<ref name="ChattopadhyayFranke2006" />{{rp|74}}<ref name="Newton">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT3 |access-date=18 November 2012 |publisher=Springwood emedia |isbn=978-1-4761-2308-0 |pages=3–}}</ref><ref name="B.L.MarkoseMarkose2007">{{cite book |author1=Rajan, S. & B.L.Markose |author2=Baby Lissy Markose |title=Propagation of Horticultural Crops: Vol.06. Horticulture Science Series |url=https://books.google.com/books?id=19zgbxw-YhYC&pg=PA212 |access-date=18 November 2012 |year=2007 |publisher=New India Publishing |isbn=978-8189422486 |pages=212–}}</ref><ref name="Pradhan2009">{{cite book |author=Pradhan |title=Retailing Management 3E |url=https://books.google.com/books?id=8y7Zb_D-_oYC&pg=PA256 |access-date=18 November 2012 |year=2009 |publisher=Tata McGraw-Hill Education |isbn=978-0-07-015256-4 |pages=256–}}</ref><ref name="PradeepkumarPradeep2008">{{cite book |author1=T. Pradeepkumar |author2=Kumar, Pradeep |title=Management of Horticultural Crops: Vol.11 Horticulture Science Series: In 2 Parts |url=https://books.google.com/books?id=VHmokNZXbHUC&pg=PA509 |access-date=18 November 2012 |year=2008 |publisher=New India Publishing |isbn=978-8189422493 |pages=509–}}</ref><ref name="OsellaOsella2000">{{cite book |author1=Filippo Osella |author2=Caroline Osella |title=Social Mobility In Kerala: Modernity and Identity in Conflict |url=https://books.google.com/books?id=rMRw0gTZSJwC&pg=PA235 |access-date=18 November 2012 |year=2000 |publisher=Pluto Press |isbn=978-0-7453-1693-2 |pages=235–}}</ref> [[ಭಾರತ]]ದ ರಫ್ತು ಗುಣಮಟ್ಟದ ಗೋಡಂಬಿ ಬೀಜಗಳಲ್ಲಿ ಸುಮಾರು 80% ಅನ್ನು [[ಕೊಲ್ಲಂ]]ನಲ್ಲಿ ತಯಾರಿಸಲಾಗುತ್ತದೆ.<ref>{{cite news |url=https://www.thehindu.com/news/national/kerala/cashew-sector-in-a-tailspin/article8767346.ece |title=Cashew sector in a tailspin |newspaper=The Hindu |access-date=24 June 2016 |archive-date=24 June 2016 |archive-url=https://web.archive.org/web/20160624004205/http://www.thehindu.com/news/national/kerala/cashew-sector-in-a-tailspin/article8767346.ece |url-status=live }}</ref> ಪ್ರಮುಖ ವಾಣಿಜ್ಯ ಬೆಳೆ [[ತೆಂಗು]] ಮತ್ತು ಕೇರಳವು ಭಾರತದಲ್ಲಿ ತೆಂಗಿನ ಕೃಷಿ ಪ್ರದೇಶದಲ್ಲಿ ಮೊದಲ ಸ್ಥಾನದಲ್ಲಿದೆ.{{sfn|Chandran|2018|p=407}} ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಏಲಕ್ಕಿ]]ಯಲ್ಲಿ ಸುಮಾರು 90% ಕೇರಳದಿಂದ ಬರುತ್ತದೆ.<ref name="eco" /> ಭಾರತವು ವಿಶ್ವದಲ್ಲಿ ಏಲಕ್ಕಿಯ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ.<ref name="eco" /> ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು [[ಕಾಫಿ]]ಯಲ್ಲಿ ಸುಮಾರು 20% ಕೇರಳದಿಂದ ಬರುತ್ತದೆ.{{sfn|Chandran|2018|p=409}} ಪ್ರಮುಖ ಕೃಷಿ ಪ್ರಧಾನ ಆಹಾರವೆಂದರೆ ಅಕ್ಕಿ, ವಿವಿಧ ಪ್ರಭೇದಗಳನ್ನು ವ್ಯಾಪಕವಾದ ಭತ್ತದ ಗದ್ದೆಗಳಲ್ಲಿ ಬೆಳೆಯಲಾಗುತ್ತದೆ.<ref name="VarshneyRzóska1976">{{cite book |author1=C.K. Varshney |author2=J. Rzóska |title=Aquatic Weeds in South East Asia |url=https://books.google.com/books?id=lW3fHiDjHNcC&pg=PA100 |access-date=18 November 2012 |year=1976 |publisher=Springer |isbn=978-9061935568 |pages=100–}}</ref> ಮನೆ ತೋಟಗಳು ಕೃಷಿ ವಲಯದ ಗಮನಾರ್ಹ ಭಾಗವನ್ನು ರೂಪಿಸಿದವು.<ref name="Dobbie2006">{{cite book |author=Aline Dobbie |title=India the Elephants Blessing |url=https://books.google.com/books?id=ckpEd4emnCkC&pg=PA123 |access-date=18 November 2012 |year=2006 |publisher=Melrose Press |isbn=978-1-905226-85-6 |pages=123–}}</ref>
=== ಮೀನುಗಾರಿಕೆ ===
{{convert|590|km|mi|lk=out|abbr=off}} ಕರಾವಳಿ ಪಟ್ಟಿಯೊಂದಿಗೆ,<ref>{{cite web |title=Kerala: Natural Resources |url=https://india.gov.in/knowindia/state_uts.php?id=70 |archive-url=https://web.archive.org/web/20111218084509/https://india.gov.in/knowindia/state_uts.php?id=70 |archive-date=18 December 2011 |publisher=Government of India |access-date=18 November 2012}}</ref> 400,000 ಹೆಕ್ಟೇರ್ ಒಳನಾಡಿನ ಜಲ ಸಂಪನ್ಮೂಲಗಳು<ref>{{cite web |title=Kerala: April 2012 |url=https://www.ibef.org/download/Kerala_060710.pdf |publisher=Indian Brand Equity Fund |access-date=18 November 2012 |archive-date=10 May 2013 |archive-url=https://web.archive.org/web/20130510151146/http://www.ibef.org/download/Kerala_060710.pdf |url-status=live }}</ref> ಮತ್ತು ಸರಿಸುಮಾರು 220,000 ಸಕ್ರಿಯ ಮೀನುಗಾರರು,<ref name="Commission1961">{{cite book |author=India. Planning Commission |title=Third five year plan |url=https://books.google.com/books?id=5_G5AAAAIAAJ |access-date=18 November 2012 |year=1961 |publisher=Manager of Publications |page=359}}</ref> ಕೇರಳವು ಭಾರತದ ಪ್ರಮುಖ ಮೀನು ಉತ್ಪಾದಕರಲ್ಲಿ ಒಂದಾಗಿದೆ.<ref name="google13">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA51 |access-date=18 November 2012 |year=2008 |publisher=Academic Foundation |isbn=978-8171885947 |page=51}}</ref> 2003–04 ರ ವರದಿಗಳ ಪ್ರಕಾರ, ಸುಮಾರು 11 ಲಕ್ಷ (1.1 ಮಿಲಿಯನ್) ಜನರು ಮೀನುಗಾರಿಕೆ ಮತ್ತು ಒಣಗಿಸುವಿಕೆ, ಸಂಸ್ಕರಣೆ, ಪ್ಯಾಕೇಜಿಂಗ್, ರಫ್ತು ಮತ್ತು ಮೀನುಗಾರಿಕೆ ಸಾಗಣೆಯಂತಹ ಸಂಯೋಜಿತ ಚಟುವಟಿಕೆಗಳಿಂದ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ. 2003–04 ರಲ್ಲಿ ವಲಯದ ವಾರ್ಷಿಕ ಇಳುವರಿಯನ್ನು 6,08,000 ಟನ್ ಎಂದು ಅಂದಾಜಿಸಲಾಗಿದೆ.<ref>{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=51 |access-date=30 May 2015}}</ref> ಇದು ರಾಜ್ಯದ ಒಟ್ಟು ಆರ್ಥಿಕತೆಯ ಸುಮಾರು 3% ರಷ್ಟು ಕೊಡುಗೆ ನೀಡುತ್ತದೆ. 2006 ರಲ್ಲಿ, ಒಟ್ಟು ಭಾರತೀಯ ಸಮುದ್ರ ಮೀನುಗಾರಿಕೆ ಇಳುವರಿಯಲ್ಲಿ ಸುಮಾರು 22% ಕೇರಳದಿಂದ ಬಂದಿದೆ.<ref name="Handbook" /> ನೈಋತ್ಯ ಮಾನ್ಸೂನ್ ಸಮಯದಲ್ಲಿ, ತೀರದ ಉದ್ದಕ್ಕೂ ಅಮಾನತುಗೊಂಡ ಮಣ್ಣಿನ ಬ್ಯಾಂಕ್ ಬೆಳೆಯುತ್ತದೆ, ಇದು ಪ್ರಶಾಂತ ಸಮುದ್ರದ ನೀರಿಗೆ ಕಾರಣವಾಗುತ್ತದೆ, ಇದು ಮೀನುಗಾರಿಕಾ ಉದ್ಯಮದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ವಿದ್ಯಮಾನವನ್ನು ಸ್ಥಳೀಯವಾಗಿ ''[[ಚಕರ]]'' ಎಂದು ಕರೆಯಲಾಗುತ್ತದೆ.<ref name="Gulati1984">{{cite book |author=Leela Gulati |title=Fisherwomen on the Kerala Coast: Demographic and Socio-Economic Impact of a Fisheries Development Project |url=https://archive.org/details/fisherwomenonker0000gula |url-access=registration |access-date=18 November 2012 |year=1984 |publisher=International Labour Organization |isbn=978-9221036265 |page=[https://archive.org/details/fisherwomenonker0000gula/page/103 103]}}</ref><ref name="Journal of Kerala Studies">{{cite book |title=Journal of Kerala Studies |url=https://books.google.com/books?id=EgSSAAAAIAAJ |access-date=18 November 2012 |year=1987 |publisher=University of Kerala. |page=201}}</ref> ಜಲಗಳು ವಿವಿಧ ರೀತಿಯ ಮೀನುಗಳನ್ನು ಒದಗಿಸುತ್ತವೆ: [[ಪೆಲಾಜಿಕ್ ಮೀನು|ಪೆಲಾಜಿಕ್ ಪ್ರಭೇದಗಳು]]; 59%, [[ಡೆಮರ್ಸಲ್ ಮೀನು|ಡೆಮರ್ಸಲ್ ಪ್ರಭೇದಗಳು]]; 23%, [[ಕಠಿಣಚರ್ಮಿಗಳು]], [[ಮೃದ್ವಂಗಿಗಳು]] ಮತ್ತು ಇತರವುಗಳು 18% ರಷ್ಟಿವೆ.<ref name="Handbook">{{cite book |title=Handbook of Marine Fisheries Conservation and Management |url=https://archive.org/details/handbookmarinefi00graf |url-access=limited |publisher=Oxford University Press |author1=R. Quentin Grafton |author2=Ray Hilborn |author3=Dale Squires |year=2009 |pages=[https://archive.org/details/handbookmarinefi00graf/page/n24 10]–12 |isbn=978-0-19-537028-7}}</ref> ಸುಮಾರು 1,050,000 (1.050 ಮಿಲಿಯನ್) ಮೀನುಗಾರರು 1999–2000 ರ ಅಂದಾಜಿನಂತೆ 668,000 ಟನ್ ವಾರ್ಷಿಕ ಕ್ಯಾಚ್ ಅನ್ನು ಎಳೆಯುತ್ತಾರೆ; 222 ಮೀನುಗಾರಿಕಾ ಗ್ರಾಮಗಳು {{convert|590|km|adj=on|abbr=off}} ಕರಾವಳಿಯ ಉದ್ದಕ್ಕೂ ಹರಡಿವೆ. ಇನ್ನೂ 113 ಮೀನುಗಾರಿಕಾ ಗ್ರಾಮಗಳು ಒಳನಾಡಿನಲ್ಲಿ ಹರಡಿವೆ.{{citation needed|date=October 2025}}
== ಸಾರಿಗೆ ==
=== ರಸ್ತೆಗಳು ===
{{Main|ಕೇರಳದ ರಸ್ತೆಗಳು}}
{{See also|ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ}}{{multiple image
<!-- Layout parameters -->| align = <!-- right (default), left, centre, none -->
| direction = vertical
| width = 240
| image1 = Thrissur sixlane.jpg
| caption1 = [[ತೃಶೂರ್]] ನಿಂದ [[ವಡಕ್ಕೆಂಚೇರಿ]] ವರೆಗಿನ [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ನ ಆರು ಪಥದ ವಿಭಾಗ
<!--image 2-->}}
ಕೇರಳವು {{convert|331904|km|mi}} ರಸ್ತೆಗಳನ್ನು ಹೊಂದಿದೆ, ಇದು ಭಾರತದ ಒಟ್ಟು ರಸ್ತೆಗಳ 5.6% ರಷ್ಟಿದೆ.<ref name="eco" /><ref name="road">{{Cite book |title=Ministry Annual Report (2019–20) |publisher=Ministry of Road Transport & Highways Transport Research Wing, Government of India |year=2020 |location=New Delhi |url=https://morth.nic.in/sites/default/files/Ministry%20Annual%20Report_2019-20.pdf |archive-date=28 October 2021 |access-date=20 June 2021 |archive-url=https://web.archive.org/web/20211028140933/https://morth.nic.in/sites/default/files/Ministry%20Annual%20Report_2019-20.pdf |url-status=live }}</ref> ಇದು ಪ್ರತಿ ಸಾವಿರ ಜನರಿಗೆ ಸುಮಾರು {{convert|9.94|km|mi|2}} ರಸ್ತೆ ಎಂದು ಅನುವಾದಿಸುತ್ತದೆ, ಇದು ದೇಶದ ಸರಾಸರಿ {{convert|4.87|km|mi|2}} ಗೆ ಹೋಲಿಸಿದರೆ.<ref name="eco" /><ref name="road" /> ಕೇರಳದ ರಸ್ತೆಗಳು {{convert|1812|km|mi}} ರಾಷ್ಟ್ರೀಯ ಹೆದ್ದಾರಿಯನ್ನು ಒಳಗೊಂಡಿವೆ; ರಾಷ್ಟ್ರದ ಒಟ್ಟು 1.6%, {{convert|4342|km|mi}} ರಾಜ್ಯ ಹೆದ್ದಾರಿ; ರಾಷ್ಟ್ರದ ಒಟ್ಟು 2.5%, {{convert|27470|km|mi}} ಜಿಲ್ಲಾ ರಸ್ತೆಗಳು; ರಾಷ್ಟ್ರದ ಒಟ್ಟು 4.7%, {{convert|33201|km|mi}} ನಗರ (ಪುರಸಭೆ) ರಸ್ತೆಗಳು; ರಾಷ್ಟ್ರದ ಒಟ್ಟು 6.3%, ಮತ್ತು {{convert|158775|km|mi}} ಗ್ರಾಮೀಣ ರಸ್ತೆಗಳು; ರಾಷ್ಟ್ರದ ಒಟ್ಟು 3.8%.<ref name=":16-17">{{Cite book |title=Basic Road Statistics of India (2016–17) |publisher=Ministry of Road Transport & Highways Transport Research Wing, Government of India |year=2019 |location=New Delhi |pages=7–18 |url=https://morth.nic.in/sites/default/files/Basic%20_Road_Statics_of_India.pdf |archive-date=28 August 2021 |access-date=25 November 2020 |archive-url=https://web.archive.org/web/20210828082929/https://www.morth.nic.in/sites/default/files/Basic%20_Road_Statics_of_India.pdf |url-status=live }}</ref> [[ಕೋಟ್ಟಯಂ ಜಿಲ್ಲೆ|ಕೋಟ್ಟಯಂ]] [[ಕೇರಳದ ಜಿಲ್ಲೆಗಳ ಪಟ್ಟಿ|ಕೇರಳದ ಜಿಲ್ಲೆಗಳಲ್ಲಿ]] ಅತಿ ಉದ್ದದ ರಸ್ತೆಗಳನ್ನು ಹೊಂದಿದ್ದರೆ, [[ವಯನಾಡು]] ಕಡಿಮೆ ಪ್ರಮಾಣವನ್ನು ಹೊಂದಿದೆ.{{sfn|Chandran|2018|p=422}} ಕೇರಳದ ಪಶ್ಚಿಮ ಕರಾವಳಿಯ ಹೆಚ್ಚಿನ ಭಾಗವು [[ರಾಷ್ಟ್ರೀಯ ಹೆದ್ದಾರಿ 66 (ಭಾರತ)|NH 66]] (ಹಿಂದೆ NH 17 ಮತ್ತು 47) ಮೂಲಕ ಪ್ರವೇಶಿಸಬಹುದು; ಮತ್ತು ಪೂರ್ವ ಭಾಗವು ರಾಜ್ಯ ಹೆದ್ದಾರಿಗಳ ಮೂಲಕ ಪ್ರವೇಶಿಸಬಹುದು.<ref name="Kerala PWD">{{cite web |title=National Highways in Kerala |url=https://www.keralapwd.gov.in/getPage.php%3Fpage%3DNH%2520in%2520Kerala%26pageId%3D301&ved=2ahUKEwjRh7jHod7YAhWFmZQKHWSeAeoQFjAOegQIBxAB&usg=AOvVaw15WM6wG3ueKFD1qj28WEps |work=Kerala Public Works Department |publisher=Government of Kerala}} {{dead link|date=September 2019 |bot=InternetArchiveBot |fix-attempted=yes }}</ref> ಬೆಟ್ಟ ಮತ್ತು ಕರಾವಳಿ ಹೆದ್ದಾರಿಗಳಿಗೆ ಹೊಸ ಯೋಜನೆಗಳನ್ನು ಇತ್ತೀಚೆಗೆ [[ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ|KIIFB]] ಅಡಿಯಲ್ಲಿ ಘೋಷಿಸಲಾಯಿತು.<ref>{{cite news |title=Coastal, Hill Highways to become a reality |url=https://www.thehindu.com/news/national/kerala/coastal-hill-highways-to-become-a-reality/article19262450.ece |date=12 July 2017 |newspaper=The Hindu |access-date=12 February 2019 |archive-date=15 April 2021 |archive-url=https://web.archive.org/web/20210415092848/https://www.thehindu.com/news/national/kerala/coastal-hill-highways-to-become-a-reality/article19262450.ece |url-status=live }}</ref> ಅತಿ ಉದ್ದದ ರಸ್ತೆ ({{convert|1622|km|mi}}) ಹೊಂದಿರುವ ರಾಷ್ಟ್ರೀಯ ಹೆದ್ದಾರಿ 66, [[ಕನ್ಯಾಕುಮಾರಿ]]ಯನ್ನು [[ಮುಂಬೈ]]ಗೆ ಸಂಪರ್ಕಿಸುತ್ತದೆ; ಇದು [[ಕಾಸರಗೋಡು|ಕಾಸರಗೋಡಿನ]] [[ತಲಪಾಡಿ]] ಮೂಲಕ ಕೇರಳವನ್ನು ಪ್ರವೇಶಿಸುತ್ತದೆ ಮತ್ತು [[ಕಣ್ಣೂರು]], [[ಕೋಝಿಕೋಡ್]], [[ಮಲಪ್ಪುರಂ]], [[ಗುರುವಾಯೂರು]], [[ಕೊಚ್ಚಿ]], [[ಆಲಪ್ಪುಳ]], [[ಕೊಲ್ಲಂ]], [[ತಿರುವನಂತಪುರ]] ಮೂಲಕ ಹಾದುಹೋಗುವ ಮೊದಲು [[ತಮಿಳುನಾಡು]] ಪ್ರವೇಶಿಸುತ್ತದೆ.<ref name="Kerala PWD" /> [[ಪಾಲಕ್ಕಾಡ್ ಜಿಲ್ಲೆ]]ಯನ್ನು ಸಾಮಾನ್ಯವಾಗಿ ಕೇರಳದ ಪ್ರವೇಶದ್ವಾರ ಎಂದು ಕರೆಯಲಾಗುತ್ತದೆ, ಪಶ್ಚಿಮ ಘಟ್ಟಗಳಲ್ಲಿ ಪಾಲಕ್ಕಾಡ್ ಅಂತರದ ಉಪಸ್ಥಿತಿಯಿಂದಾಗಿ, ಅದರ ಮೂಲಕ ಕೇರಳದ ಉತ್ತರ ([[ಮಲಬಾರ್ ಪ್ರದೇಶ|ಮಲಬಾರ್]]) ಮತ್ತು ದಕ್ಷಿಣ (ತಿರುವಾಂಕೂರು) ಭಾಗಗಳು ರಸ್ತೆ ಮತ್ತು ರೈಲು ಮೂಲಕ ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಿವೆ. ರಾಜ್ಯದ ಅತಿದೊಡ್ಡ ತಪಾಸಣಾ ಕೇಂದ್ರ, [[ವಾಲಯಾರ್]], [[ರಾಷ್ಟ್ರೀಯ ಹೆದ್ದಾರಿ 544 (ಭಾರತ)|NH 544]] ರಲ್ಲಿದೆ, ಕೇರಳ ಮತ್ತು [[ತಮಿಳುನಾಡು]] ನಡುವಿನ ಗಡಿ ಪಟ್ಟಣದಲ್ಲಿ, ಅದರ ಮೂಲಕ ದೊಡ್ಡ ಪ್ರಮಾಣದ ಸಾರ್ವಜನಿಕ ಮತ್ತು ವಾಣಿಜ್ಯ ಸಾರಿಗೆಯು ಕೇರಳದ ಉತ್ತರ ಮತ್ತು ಮಧ್ಯ ಜಿಲ್ಲೆಗಳನ್ನು ತಲುಪುತ್ತದೆ.<ref>{{cite web |url=https://www.keralatourism.org/districts/palakkad/ |title=District of Palakkad – the granary of Kerala, Silent Valley National Park, Nelliyampathy |publisher=keralatourism.org |access-date=30 May 2015 |archive-date=15 April 2021 |archive-url=https://web.archive.org/web/20210415114106/https://www.keralatourism.org/districts/palakkad/ |url-status=live }}</ref>
[[ಸಾರ್ವಜನಿಕ ಕಾರ್ಯಗಳ ಇಲಾಖೆ (ಕೇರಳ)|ಸಾರ್ವಜನಿಕ ಕಾರ್ಯಗಳ ಇಲಾಖೆ]] [[ಕೇರಳದ ರಾಜ್ಯ ಹೆದ್ದಾರಿಗಳ ಪಟ್ಟಿ|ರಾಜ್ಯ ಹೆದ್ದಾರಿ ವ್ಯವಸ್ಥೆ]] ಮತ್ತು ಪ್ರಮುಖ ಜಿಲ್ಲಾ ರಸ್ತೆಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ.<ref>{{cite web |title=About us |url=https://www.keralapwd.gov.in/getPage.php?page=About%20Us&pageId=256&link=About%20PWD |archive-url=https://web.archive.org/web/20101201055142/https://www.keralapwd.gov.in/getPage.php?page=About%20Us&pageId=256&link=About%20PWD |url-status=dead |archive-date=1 December 2010 |work=Kerala Public Works Department |publisher=Government of Kerala |access-date=18 November 2012}}</ref> ಕೇರಳ ರಾಜ್ಯ ಸಾರಿಗೆ ಯೋಜನೆ (KSTP), ಇದು [[GIS]]-ಆಧಾರಿತ ರಸ್ತೆ ಮಾಹಿತಿ ಮತ್ತು ನಿರ್ವಹಣಾ ಯೋಜನೆಯನ್ನು (RIMS) ಒಳಗೊಂಡಿದೆ, ಕೇರಳದ ರಾಜ್ಯ ಹೆದ್ದಾರಿಗಳನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಕೆಲವು ಪ್ರಮುಖ ಜಿಲ್ಲಾ ರಸ್ತೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ.<ref>{{Cite news |author=Kumar VS |title=Kerala State transport project second phase to be launched next month |work=The Hindu |date=20 January 2006 |access-date=11 November 2007 |url=https://www.thehindubusinessline.com/2006/01/20/stories/2006012002272100.htm |archive-url=https://web.archive.org/web/20070304181402/https://www.thehindubusinessline.com/2006/01/20/stories/2006012002272100.htm |archive-date=4 March 2007}}</ref><ref>{{cite web |author=Kumar VS |title=Institutional Strengthening Action Plan (ISAP) |work=Kerala Public Works Department |publisher=Government of Kerala |year=2003 |access-date=11 November 2007 |url=https://www.keralapwd.gov.in/pwd/public/isap.jsp |archive-url=https://web.archive.org/web/20080512054304/https://www.keralapwd.gov.in/pwd/public/isap.jsp |archive-date=12 May 2008}}</ref> ಕೇರಳದಲ್ಲಿ ಸಾರಿಗೆಯು ಪ್ರತಿ ವರ್ಷ 10-11% ದರದಲ್ಲಿ ಬೆಳೆಯುತ್ತಿದೆ, ಇದು ಹೆಚ್ಚಿನ ಸಾರಿಗೆ ಮತ್ತು ರಸ್ತೆಗಳ ಮೇಲಿನ ಒತ್ತಡಕ್ಕೆ ಕಾರಣವಾಗಿದೆ. ಸಾರಿಗೆ ಸಾಂದ್ರತೆಯು ರಾಷ್ಟ್ರೀಯ ಸರಾಸರಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ, ಇದು ರಾಜ್ಯದ ಹೆಚ್ಚಿನ ಜನಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ. ಕೇರಳದ ವಾರ್ಷಿಕ ಒಟ್ಟು ರಸ್ತೆ ಅಪಘಾತಗಳು ರಾಷ್ಟ್ರದಲ್ಲಿ ಅತಿ ಹೆಚ್ಚಿನದಾಗಿದೆ. ಅಪಘಾತಗಳು ಮುಖ್ಯವಾಗಿ ಕಿರಿದಾದ ರಸ್ತೆಗಳು ಮತ್ತು ಅಜಾಗರೂಕ ಚಾಲನೆಯ ಪರಿಣಾಮವಾಗಿದೆ.<ref>{{Cite news |author=Kumar KG |title=Accidentally notorious |work=The Hindu |date=22 September 2003 |access-date=11 November 2007 |url=https://www.thehindubusinessline.in/2003/09/22/stories/2003092201111300.htm |archive-date=10 August 2011 |archive-url=https://web.archive.org/web/20110810210809/http://www.thehindubusinessline.in/2003/09/22/stories/2003092201111300.htm |url-status=live }}</ref> ಕೇರಳದ ರಾಷ್ಟ್ರೀಯ ಹೆದ್ದಾರಿಗಳು ದೇಶದಲ್ಲಿ ಅತ್ಯಂತ ಕಿರಿದಾದವುಗಳಲ್ಲಿ ಸೇರಿವೆ ಮತ್ತು ಮುಂದಿನ ಭವಿಷ್ಯಕ್ಕೂ ಹಾಗೆಯೇ ಉಳಿಯುತ್ತವೆ, ಏಕೆಂದರೆ ರಾಜ್ಯ ಸರ್ಕಾರವು ಕಿರಿದಾದ ರಾಷ್ಟ್ರೀಯ ಹೆದ್ದಾರಿಗಳನ್ನು ಅನುಮತಿಸುವ ವಿನಾಯಿತಿಯನ್ನು ಪಡೆದುಕೊಂಡಿದೆ. ಕೇರಳದಲ್ಲಿ, ಹೆದ್ದಾರಿಗಳು {{convert|45|m|abbr=off}} ಅಗಲವಾಗಿವೆ. ಇತರ ರಾಜ್ಯಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ದರ್ಜೆಯಿಂದ ಪ್ರತ್ಯೇಕಿಸಲ್ಪಟ್ಟಿವೆ, {{convert|60|m|abbr=off}} ಅಗಲವಾಗಿದ್ದು ಕನಿಷ್ಠ ನಾಲ್ಕು ಪಥಗಳನ್ನು ಹೊಂದಿವೆ, ಜೊತೆಗೆ 6 ಅಥವಾ 8-ಪಥದ ಪ್ರವೇಶ-ನಿಯಂತ್ರಿತ ಎಕ್ಸ್ಪ್ರೆಸ್ವೇಗಳನ್ನು ಹೊಂದಿವೆ.<ref>{{cite web |url=https://www.indianexpress.com/news/kerala-parties-finally-toe-nhai-line-of-45m-wide-highways/661729/ |title=Kerala parties finally toe NHAI line of 45-m wide highways |work=Indian Express |date=18 August 2010 |access-date=25 September 2013}}</ref><ref>{{cite web |url=https://www.rediff.com/business/slide-show/slide-show-1-indias-13-super-highways/20110705.htm |title=Check out India's 13 super expressways |work=Rediff.com |date=5 July 2011 |access-date=25 September 2013 |archive-date=28 September 2013 |archive-url=https://web.archive.org/web/20130928024436/http://www.rediff.com/business/slide-show/slide-show-1-indias-13-super-highways/20110705.htm |url-status=live }}</ref> ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೇರಳ ಸರ್ಕಾರಕ್ಕೆ, ಕೇರಳದಲ್ಲಿ ಉತ್ತಮ ಹೆದ್ದಾರಿಗಳಿಗೆ ರಾಜಕೀಯ ಬದ್ಧತೆಯ ಕೊರತೆಯಿರುವುದರಿಂದ ಹೆದ್ದಾರಿ ಅಭಿವೃದ್ಧಿಯಲ್ಲಿ ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಬೆದರಿಕೆ ಹಾಕಿದೆ.<ref>{{Cite news |title=Kerala against development of five NHs |url=https://www.thehindu.com/news/national/kerala/kerala-against-development-of-five-nhs/article4555024.ece |url-access=subscription |newspaper=[[The Hindu]] |date=28 March 2013 |access-date=29 September 2024 |archive-date=4 December 2024 |archive-url=https://web.archive.org/web/20241204153945/https://www.thehindu.com/news/national/kerala/kerala-against-development-of-five-nhs/article4555024.ece |url-status=live }}</ref> ೨೦೧೩ ರಂತೆ, ಕೇರಳವು ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ದರವನ್ನು ಹೊಂದಿತ್ತು, ಹೆಚ್ಚಿನ ಮಾರಣಾಂತಿಕ ಅಪಘಾತಗಳು ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ.<ref>{{Cite news |url=https://www.thehindu.com/todays-paper/tp-national/tp-kerala/states-troubled-highways-a-shocking-revelation-for-centre/article4865464.ece |title=State's troubled highways a shocking revelation for Centre |journal=The Hindu |date=30 June 2013 |access-date=25 September 2013 |author=Staff Reporter}}</ref>
=== ರೈಲುಮಾರ್ಗಗಳು ===
{{Main|ಕೇರಳದ ರೈಲು ನಿಲ್ದಾಣಗಳ ಪಟ್ಟಿ}}
{{See also|ಕೊಚ್ಚಿ ಮೆಟ್ರೋ}}
[[ಭಾರತೀಯ ರೈಲ್ವೆ]]ಯ [[ದಕ್ಷಿಣ ರೈಲ್ವೆ]] ವಲಯವು [[ಇಡುಕ್ಕಿ ಜಿಲ್ಲೆ|ಇಡುಕ್ಕಿ]] ಮತ್ತು [[ವಯನಾಡು ಜಿಲ್ಲೆ|ವಯನಾಡು]] ಎತ್ತರದ ಜಿಲ್ಲೆಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರಮುಖ ಪಟ್ಟಣಗಳು ಮತ್ತು ನಗರಗಳನ್ನು ಸಂಪರ್ಕಿಸುವ ರಾಜ್ಯದ ಎಲ್ಲಾ ರೈಲು ಮಾರ್ಗಗಳನ್ನು ನಿರ್ವಹಿಸುತ್ತದೆ.<ref>{{cite web |title=Introduction |url=https://khsrcl.com/downloads/ch-1.pdf |publisher=Delhi Metro Rail Corporation |access-date=18 November 2012 |url-status=dead |archive-url=https://web.archive.org/web/20120906213234/https://khsrcl.com/downloads/ch-1.pdf |archive-date=6 September 2012}}</ref> ರಾಜ್ಯದ ರೈಲು ಜಾಲವು [[ದಕ್ಷಿಣ ರೈಲ್ವೆ ವಲಯ|ದಕ್ಷಿಣ ರೈಲ್ವೆಯ]] ಆರು ವಿಭಾಗಗಳಲ್ಲಿ ಎರಡರ ನಿಯಂತ್ರಣದಲ್ಲಿದೆ; [[ತಿರುವನಂತಪುರ]] ಮೂಲಸ್ಥಾನವನ್ನು ಹೊಂದಿರುವ [[ತಿರುವನಂತಪುರ ರೈಲ್ವೆ ವಿಭಾಗ]] ಮತ್ತು [[ಪಾಲಕ್ಕಾಡ್]] ಮೂಲಸ್ಥಾನವನ್ನು ಹೊಂದಿರುವ [[ಪಾಲಕ್ಕಾಡ್ ರೈಲ್ವೆ ವಿಭಾಗ]].<ref>{{cite web |title=The Zonal Dream Of Railway Kerala |url=https://www.yentha.com/news/view/features/the-zonal-dream-of-railway-kerala |work=yentha.com |access-date=18 November 2012 |archive-url=https://web.archive.org/web/20121025033001/https://www.yentha.com/news/view/features/the-zonal-dream-of-railway-kerala |archive-date=25 October 2012 |url-status=dead}}</ref> [[ತಿರುವನಂತಪುರ ಸೆಂಟ್ರಲ್]] (TVC) ರಾಜ್ಯದ ಅತಿ ಜನನಿಬಿಡ ರೈಲು ನಿಲ್ದಾಣವಾಗಿದೆ.<ref>{{Cite news |url=https://www.thehindu.com/todays-paper/tp-national/tp-kerala/article1807051.ece |title=Thiruvananthapuram Central to be made a world-class station |date=7 March 2007 |newspaper=The Hindu |language=en-IN |issn=0971-751X |access-date=8 May 2016}}</ref> ಕೇರಳದ ಪ್ರಮುಖ ರೈಲು ನಿಲ್ದಾಣಗಳು:
{{columns-list|colwidth=19em|
* [[ತಿರುವನಂತಪುರ ಸೆಂಟ್ರಲ್]] (TVC)
* [[ಎರ್ನಾಕುಳಂ ಜಂಕ್ಷನ್ ರೈಲು ನಿಲ್ದಾಣ|ಎರ್ನಾಕುಳಂ ಜಂಕ್ಷನ್ (ದಕ್ಷಿಣ)]] (ERS)
* [[ಕೋಝಿಕೋಡ್ ರೈಲು ನಿಲ್ದಾಣ|ಕೋಝಿಕೋಡ್]] (CLT)
* [[ಕೊಲ್ಲಂ ಜಂಕ್ಷನ್ ರೈಲು ನಿಲ್ದಾಣ|ಕೊಲ್ಲಂ ಜಂಕ್ಷನ್]] (QLN)
* [[ತೃಶೂರ್ ರೈಲು ನಿಲ್ದಾಣ|ತೃಶೂರ್]] (TCR)
* [[ಪಾಲಕ್ಕಾಡ್ ಜಂಕ್ಷನ್]] (PGT)
* [[ಕಣ್ಣೂರು ರೈಲು ನಿಲ್ದಾಣ|ಕಣ್ಣೂರು]] (CAN)
* [[ಶೊರಾನೂರು ಜಂಕ್ಷನ್]] (SRR)
* [[ಎರ್ನಾಕುಳಂ ಟೌನ್]] (ಉತ್ತರ) (ERN)
* [[ಕೋಟ್ಟಯಂ ರೈಲು ನಿಲ್ದಾಣ|ಕೋಟ್ಟಯಂ]] (KTYM)
* [[ಚೆಂಗನ್ನೂರು ರೈಲು ನಿಲ್ದಾಣ|ಚೆಂಗನ್ನೂರು]] (CNGR)
* [[ಆಲಪ್ಪುಳ ರೈಲು ನಿಲ್ದಾಣ|ಆಲಪ್ಪುಳ]] (ALLP)
* [[ತಿರುವನಂತಪುರ ಉತ್ತರ ರೈಲು ನಿಲ್ದಾಣ|ತಿರುವನಂತಪುರ ಉತ್ತರ]] (TVCN)
* [[ಕಾಯಂಕುಲಂ]] ಜಂಕ್ಷನ್ (KYJ)
* [[ತಿರೂರ್ ರೈಲು ನಿಲ್ದಾಣ|ತಿರೂರ್]] (TIR)
* [[ಕಾಸರಗೋಡು ರೈಲು ನಿಲ್ದಾಣ|ಕಾಸರಗೋಡು]] (KGQ)
* [[ಆಲುವಾ ರೈಲು ನಿಲ್ದಾಣ|ಆಲುವಾ]] (AWY)
* [[ತಲಶ್ಶೇರಿ]] (TLY)}}
=== ವಿಮಾನ ನಿಲ್ದಾಣಗಳು ===
{{Main|ಕೇರಳ ರಾಜ್ಯದ ವಿಮಾನ ನಿಲ್ದಾಣಗಳ ಪಟ್ಟಿ}}
[[File:Cochin International Airport Limited.jpg|right|thumb|[[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]], ರಾಜ್ಯದ ಅತಿ ಜನನಿಬಿಡ ವಿಮಾನ ನಿಲ್ದಾಣವು ಸೌರಶಕ್ತಿಯಿಂದ ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ]]
ಕೇರಳವು ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ: {{Cast listing|
* [[ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
* [[ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]
}}
ಮದ್ರಾಸ್ ಪ್ರೆಸಿಡೆನ್ಸಿಯಡಿಯಲ್ಲಿ ಸ್ಥಾಪಿಸಲಾದ [[ಕೊಲ್ಲಂ ವಿಮಾನ ನಿಲ್ದಾಣ]]ವು ನಂತರ ಮುಚ್ಚಲ್ಪಟ್ಟಿತು, ಇದು ಕೇರಳದ ಮೊದಲ ವಿಮಾನ ನಿಲ್ದಾಣವಾಗಿತ್ತು.<ref>{{Cite news |url=https://www.thehindu.com/todays-paper/tp-national/tp-kerala/article252269.ece |title=Aviation school proposal evokes mixed response |journal=The Hindu |date=8 June 2009 |access-date=21 July 2015 |archive-date=20 December 2016 |archive-url=https://web.archive.org/web/20161220075251/http://www.thehindu.com/todays-paper/tp-national/tp-kerala/article252269.ece |url-status=live }}</ref> [[ಕಣ್ಣೂರು]] 1935 ರಷ್ಟು ಹಿಂದೆಯೇ ವಾಣಿಜ್ಯ ವಿಮಾನಯಾನಕ್ಕೆ ಬಳಸಲ್ಪಟ್ಟ ವಿಮಾನ ನಿಲ್ದಾಣವನ್ನು ಹೊಂದಿತ್ತು, [[ಟಾಟಾ ಗ್ರೂಪ್|ಟಾಟಾ]] ಏರ್ಲೈನ್ಸ್ [[ಮುಂಬೈ]] ಮತ್ತು ತಿರುವನಂತಪುರ ನಡುವೆ ಸಾಪ್ತಾಹಿಕ ವಿಮಾನಗಳನ್ನು ನಡೆಸುತ್ತಿತ್ತು – [[ಗೋವಾ]] ಮತ್ತು ಕಣ್ಣೂರಿನಲ್ಲಿ ನಿಲ್ಲುತ್ತಿತ್ತು.<ref>{{cite news |author=Sudhakaran, P |url=https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |title=Kannur flew, way before its first airport |newspaper=The Times of India |date=14 September 2015 |publisher=Timesofindia.indiatimes.com |access-date=13 November 2020 |url-status=live |archive-url=https://web.archive.org/web/20170518022943/https://timesofindia.indiatimes.com/city/kozhikode/Kannur-flew-way-before-its-first-airport/articleshow/48951701.cms |archive-date=18 May 2017}}</ref> ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ವಿಮಾನ ನಿಲ್ದಾಣ ಪ್ರಾಧಿಕಾರ]]ದಿಂದ ನಿರ್ವಹಿಸಲ್ಪಡುತ್ತದೆ, ಇದು ದಕ್ಷಿಣ ಭಾರತದ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. 1988 ರಲ್ಲಿ ತೆರೆಯಲ್ಪಟ್ಟ [[ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ವು ಕೇರಳದ ಎರಡನೇ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣ ಮತ್ತು [[ಮಲಬಾರ್ ಪ್ರದೇಶ|ಮಲಬಾರ್ ಪ್ರದೇಶದಲ್ಲಿ]] ಅತ್ಯಂತ ಹಳೆಯದಾಗಿದೆ.<ref>{{cite news |url=https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |work=The Times of India |title=Silver jubilee does not bring cheer to Karipur airport users |date=2 April 2012 |archive-date=4 June 2021 |access-date=7 February 2022 |archive-url=https://web.archive.org/web/20210604110846/https://timesofindia.indiatimes.com/city/kozhikode/Silver-jubilee-does-not-bring-cheer-to-Karipur-airport-users/articleshow/12498757.cms |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಜ್ಯದಲ್ಲಿ ಅತಿ ಜನನಿಬಿಡವಾಗಿದೆ ಮತ್ತು [[ಭಾರತದ ಅತಿ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ|ದೇಶದಲ್ಲಿ ಏಳನೇ ಅತಿ ಜನನಿಬಿಡವಾಗಿದೆ]]. ಇದು [[CIAL ಸೌರಶಕ್ತಿ ಯೋಜನೆ|ಸೌರಶಕ್ತಿಯಿಂದ]] ಸಂಪೂರ್ಣವಾಗಿ ಚಾಲಿತವಾಗುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿದೆ<ref name="BBC">{{cite news |last=Menon |first=Supriya |url=https://www.bbc.com/news/world-asia-india-34421419 |title=How is the world's first solar-powered airport faring? – BBC News |publisher=Bbc.com |date=9 October 2015 |access-date=21 December 2018 |work=BBC News |archive-date=25 May 2023 |archive-url=https://web.archive.org/web/20230525214353/https://www.bbc.com/news/world-asia-india-34421419 |url-status=live }}</ref> ಮತ್ತು [[ಸಂಯುಕ್ತ ರಾಷ್ಟ್ರಗಳು]] ಸ್ಥಾಪಿಸಿದ ಅತ್ಯುನ್ನತ ಪರಿಸರ ಗೌರವವಾದ [[ಚಾಂಪಿಯನ್ಸ್ ಆಫ್ ದಿ ಅರ್ಥ್|ಚಾಂಪಿಯನ್ ಆಫ್ ದಿ ಅರ್ಥ್]] ಪ್ರಶಸ್ತಿಯನ್ನು ಗೆದ್ದುಕೊಂಡಿದೆ.<ref name="UN">{{cite news |url=https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |title=CIAL chosen for UN environmental honour |newspaper=[[The New Indian Express]] |date=26 July 2018 |archive-date=7 April 2023 |access-date=7 February 2022 |archive-url=https://web.archive.org/web/20230407102227/https://www.newindianexpress.com/cities/kochi/2018/jul/26/cial-chosen-for-un-environmental-honour-1848990.html |url-status=live }}</ref> ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಪಬ್ಲಿಕ್ ಲಿಮಿಟೆಡ್ ಕಂಪನಿ]]ಯಾಗಿ ಸೇರಿಸಲ್ಪಟ್ಟ ಮೊದಲ ಭಾರತೀಯ ವಿಮಾನ ನಿಲ್ದಾಣವಾಗಿದೆ; ಇದನ್ನು 30 ದೇಶಗಳ ಸುಮಾರು 10,000 [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಅನಿವಾಸಿ ಭಾರತೀಯರು]] ಹಣಕಾಸು ಒದಗಿಸಿದ್ದಾರೆ.<ref>{{Cite news |title=The three airports in Kerala can be in business without affecting each other |publisher=[[Rediff.com|Rediff]] |date=6 December 1999 |access-date=11 November 2007 |url=https://www.rediff.com/business/1999/dec/06inter.htm |archive-date=20 January 2008 |archive-url=https://web.archive.org/web/20080120015042/http://www.rediff.com/business/1999/dec/06inter.htm |url-status=live }}</ref>
ನಾಗರಿಕ ವಿಮಾನ ನಿಲ್ದಾಣಗಳ ಜೊತೆಗೆ, [[ಕೊಚ್ಚಿ]] [[INS ಗರುಡ]] ಎಂಬ ನೌಕಾ ವಿಮಾನ ನಿಲ್ದಾಣವನ್ನು ಹೊಂದಿದೆ. ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು [[ಭಾರತೀಯ ವಾಯುಪಡೆ]]ಯ ದಕ್ಷಿಣ ವಾಯು ಕಮಾಂಡ್ನೊಂದಿಗೆ ನಾಗರಿಕ ಸೌಲಭ್ಯಗಳನ್ನು ಹಂಚಿಕೊಳ್ಳುತ್ತದೆ. ಈ ಸೌಲಭ್ಯಗಳನ್ನು ಹೆಚ್ಚಾಗಿ ಕೇರಳಕ್ಕೆ ಭೇಟಿ ನೀಡುವ ಕೇಂದ್ರ ಸರ್ಕಾರದ VIP ಗಳು ಬಳಸುತ್ತಾರೆ.{{citation needed|date=October 2025}}
=== ಜಲ ಸಾರಿಗೆ ===
{{Main|ಕೇರಳದ ಬಂದರುಗಳು}}
{{See also|ಕೊಚ್ಚಿ ವಾಟರ್ ಮೆಟ್ರೋ}}[[File:Cochin Ship Yard Cranes.JPG|alt=|thumb|230px|[[ಕೊಚ್ಚಿ ಹಡಗು ನಿರ್ಮಾಣ ಕೇಂದ್ರ|ಕೊಚ್ಚಿ ಹಡಗು ನಿರ್ಮಾಣ ಕೇಂದ್ರದಲ್ಲಿ]] ಕ್ರೇನ್ಗಳು]]
ಕೇರಳವು [[ಕೇರಳದ ಬಂದರುಗಳು|ಎರಡು ಪ್ರಮುಖ ಬಂದರುಗಳು, ನಾಲ್ಕು ಮಧ್ಯಂತರ ಬಂದರುಗಳು, ಮತ್ತು 13 ಸಣ್ಣ ಬಂದರುಗಳನ್ನು]] ಹೊಂದಿದೆ, ಅವುಗಳಲ್ಲಿ 4 ವಲಸೆ ತಪಾಸಣಾ ಸೌಲಭ್ಯಗಳನ್ನು ಹೊಂದಿವೆ.<ref>{{cite web |url=https://www.thehindu.com/news/national/kerala/kollam-port-gets-icp-clearance/article68293607.ece |date=15 Jun 2024 |title=Kollam port gets ICP clearance |work=The Hindu |access-date=16 Jun 2024 |archive-date=16 June 2024 |archive-url=https://web.archive.org/web/20240616013704/https://www.thehindu.com/news/national/kerala/kollam-port-gets-icp-clearance/article68293607.ece |url-status=live }}</ref><ref>{{cite web |url=https://www.mha.gov.in/sites/default/files/2024-03/ICPList_05032024..pdf |date= |title=LIST OF IMMIGRATION CHECK POSTs |publisher=Ministry of Home Affairs - Govt. of India |access-date=16 Jun 2024 |archive-date=31 July 2024 |archive-url=https://web.archive.org/web/20240731204706/https://www.mha.gov.in/sites/default/files/2024-03/ICPList_05032024..pdf |url-status=live }}</ref> ರಾಜ್ಯದ ಪ್ರಮುಖ ಬಂದರು [[ಕೊಚ್ಚಿ ಬಂದರು|ಕೊಚ್ಚಿಯಲ್ಲಿದೆ]], ಇದು {{cvt|8.27|km2}} ವಿಸ್ತೀರ್ಣವನ್ನು ಹೊಂದಿದೆ.{{sfn|Chandran|2018|p=424}} [[ವಿಝಿನ್ಜಂ ಅಂತಾರಾಷ್ಟ್ರೀಯ ಸಮುದ್ರ ಬಂದರು ತಿರುವನಂತಪುರ]], ಇದನ್ನು ಪ್ರಸ್ತುತ ಪ್ರಮುಖ ಬಂದರಾಗಿ ವರ್ಗೀಕರಿಸಲಾಗಿದೆ, ಇತರೆ ನಿರ್ಮಾಣ ಹಂತದಲ್ಲಿರುವುದರಿಂದ ಹಂತ I ಮಾತ್ರ ಪೂರ್ಣಗೊಂಡಿದೆ.{{sfn|Chandran|2018|p=424}} ಇತರ ಮಧ್ಯಂತರ ಬಂದರುಗಳು [[ಬೇಪುರ]], [[ಕೊಲ್ಲಂ]], ಮತ್ತು [[ಅಝಿಕೋಡ್ ಮತ್ತು ಅಝಿಕ್ಕಲ್|ಅಝೀಕಲ್]].{{sfn|Chandran|2018|p=424}} ಉಳಿದ ಬಂದರುಗಳನ್ನು ಸಣ್ಣ ಬಂದರುಗಳಾಗಿ ವರ್ಗೀಕರಿಸಲಾಗಿದೆ, ಇವುಗಳಲ್ಲಿ [[ಮಂಜೇಶ್ವರಂ]], [[ಕಾಸರಗೋಡು]], [[ನೀಲೇಶ್ವರಂ]], [[ಕಣ್ಣೂರು]], [[ತಲಶ್ಶೇರಿ]], [[ವಡಕರ]], [[ಪೊನ್ನಾನಿ]], [[ಮುನಂಬಂ]], ಮನಕೋಡಂ, [[ಆಲಪ್ಪುಳ]], [[ಕಾಯಂಕುಲಂ]], [[ನೀಂದಕರ]], ಮತ್ತು [[ವಲಿಯತುರ]] ಸೇರಿವೆ.{{sfn|Chandran|2018|p=424}} [[ಕೇರಳ ಸಮುದ್ರ ಸಂಸ್ಥೆ]]ಯ ಪ್ರಧಾನ ಕಛೇರಿಯು [[ನೀಂದಕರ]]ದಲ್ಲಿದೆ, ಇದು [[ಕೊಡುಂಗಲ್ಲೂರು]] ನಲ್ಲಿ ಹೆಚ್ಚುವರಿ ಉಪಕೇಂದ್ರವನ್ನು ಸಹ ಹೊಂದಿದೆ.{{sfn|Chandran|2018|p=424}} ರಾಜ್ಯವು ಹಲವಾರು [[ಕೇರಳ ಬ್ಯಾಕ್ವಾಟರ್ಗಳು|ಬ್ಯಾಕ್ವಾಟರ್ಗಳನ್ನು]] ಹೊಂದಿದೆ, ಅವುಗಳನ್ನು ವಾಣಿಜ್ಯ [[ಒಳನಾಡಿನ ನ್ಯಾವಿಗೇಷನ್]] ಗೆ ಬಳಸಲಾಗುತ್ತದೆ. ಸಾರಿಗೆ ಸೇವೆಗಳನ್ನು ಮುಖ್ಯವಾಗಿ ದೇಶೀಯ ದೋಣಿಗಳು ಮತ್ತು ಪ್ರಯಾಣಿಕ ಹಡಗುಗಳು ಒದಗಿಸುತ್ತವೆ. ರಾಜ್ಯದಲ್ಲಿ 67 ನ್ಯಾವಿಗೇಬಲ್ ನದಿಗಳಿವೆ, ಒಳನಾಡಿನ ಜಲಮಾರ್ಗಗಳ ಒಟ್ಟು ಉದ್ದ {{convert|1687|km}} ಆಗಿದೆ.<ref name="google14">{{cite book |author=Government of India Planning Commission |title=Kerala Development Report |url=https://books.google.com/books?id=Ul-OkF5gUJQC&pg=PA207 |access-date=18 November 2012 |year=2008 |publisher=Academic Foundation |isbn=978-8171885947 |page=207}}</ref> ಒಳನಾಡಿನ ನ್ಯಾವಿಗೇಷನ್ ವಿಸ್ತರಣೆಗೆ ಮುಖ್ಯ ಅಡೆತಡೆಗಳೆಂದರೆ; ಮಣ್ಣು ತುಂಬುವಿಕೆಯಿಂದ ಜಲಮಾರ್ಗಗಳಲ್ಲಿ ಆಳದ ಕೊರತೆ, ನ್ಯಾವಿಗೇಷನ್ ವ್ಯವಸ್ಥೆಗಳು ಮತ್ತು ದಂಡೆ ರಕ್ಷಣೆಯ ನಿರ್ವಹಣೆಯ ಕೊರತೆ, [[ನೀರಿನ ಹಯಸಿಂತ್]] ನ ವೇಗವರ್ಧಿತ ಬೆಳವಣಿಗೆ, ಆಧುನಿಕ ಒಳನಾಡಿನ ಕ್ರಾಫ್ಟ್ ಟರ್ಮಿನಲ್ಗಳ ಕೊರತೆ, ಮತ್ತು ಸರಕು ನಿರ್ವಹಣಾ ವ್ಯವಸ್ಥೆಯ ಕೊರತೆ.{{citation needed|date=October 2025}}
ಕೇರಳವು ಭಾರತದ ಮೊದಲ ಜಲ ಮೆಟ್ರೋವನ್ನು ಸಹ ಹೊಂದಿದೆ, ಇದನ್ನು 'ಕೊಚ್ಚಿ ವಾಟರ್ ಮೆಟ್ರೋ' ಎಂದು ಕರೆಯಲಾಗುತ್ತದೆ.<ref>{{Cite web |last=Prabhakaran |first=Aishwarya |date=2024-04-28 |title='Sustainable, scenic': Kochi Water Metro carves niche & new paths |url=https://www.newindianexpress.com/states/kerala/2024/Apr/28/sustainable-scenic-kochi-water-metro-carves-niche-new-paths |access-date=2025-03-08 |website=The New Indian Express |language=en}}</ref> ಕೊಚ್ಚಿ ವಾಟರ್ ಮೆಟ್ರೋ ಯೋಜನೆಯು 15 ಮಾರ್ಗಗಳನ್ನು ಗುರುತಿಸಿದೆ, 10 ದ್ವೀಪಗಳನ್ನು 78 ಕಿಮೀ ವ್ಯಾಪಿಸಿರುವ ಮಾರ್ಗಗಳ ಜಾಲದೊಂದಿಗೆ 78 ವೇಗದ ಮತ್ತು ಸಂಪೂರ್ಣವಾಗಿ ವಿದ್ಯುತ್ ಚಾಲಿತ ಹೈಬ್ರಿಡ್ ದೋಣಿಗಳ ತಂಡದೊಂದಿಗೆ ಸಂಪರ್ಕಿಸುತ್ತದೆ.<ref>{{Cite web |title=Kochi Water Metro {{!}} About Us |url=https://watermetro.co.in/about |access-date=2025-03-08 |website=Kochi Water Metro |language=en}}</ref>
{{convert|616|km}} ಉದ್ದದ ಪಶ್ಚಿಮ-ಕರಾವಳಿ ಕಾಲುವೆಯು [[ಕಾಸರಗೋಡು]]ವನ್ನು [[ಪೂವಾರ್]] ಗೆ ಸಂಪರ್ಕಿಸುವ ರಾಜ್ಯದ ಅತಿ ಉದ್ದದ ಜಲಮಾರ್ಗವಾಗಿದೆ.{{sfn|Chandran|2018|p=423}} ಇದನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ: {{convert|41|km}} ಉದ್ದದ [[ಕಾಸರಗೋಡು]]-[[ನೀಲೇಶ್ವರಂ]] ವ್ಯಾಪ್ತಿ, {{convert|188|km}} ಉದ್ದದ [[ನೀಲೇಶ್ವರಂ]]-[[ಕೋಝಿಕೋಡ್]] ವ್ಯಾಪ್ತಿ, {{convert|160|km}} [[ಕೋಝಿಕೋಡ್]]-[[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]] ವ್ಯಾಪ್ತಿ, {{convert|168|km}} ಉದ್ದದ [[ರಾಷ್ಟ್ರೀಯ ಜಲಮಾರ್ಗ 3]] ([[ಕೊಟ್ಟಪುರಂ, ತೃಶೂರ್|ಕೊಟ್ಟಪುರಂ]]-[[ಕೊಲ್ಲಂ]] ವ್ಯಾಪ್ತಿ), ಮತ್ತು {{convert|74|km}} ಉದ್ದದ [[ಕೊಲ್ಲಂ]]-[[ವಿಝಿನ್ಜಂ]] ವ್ಯಾಪ್ತಿ.<ref name="eco" /> ಪಶ್ಚಿಮ-ಕರಾವಳಿ ಕಾಲುವೆಯ ಒಂದು ಭಾಗವಾದ [[ಕೊನೊಲ್ಲಿ ಕಾಲುವೆ]]ಯು [[ಕೋಝಿಕೋಡ್]] ನಗರವನ್ನು [[ಪೊನ್ನಾನಿ]] ಮೂಲಕ [[ಕೊಚ್ಚಿ]] ಗೆ ಸಂಪರ್ಕಿಸುತ್ತದೆ, [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಮತ್ತು [[ತೃಶೂರ್ ಜಿಲ್ಲೆ|ತೃಶೂರ್]] ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು [[ವಡಕರ]] ದಲ್ಲಿ ಪ್ರಾರಂಭವಾಗುತ್ತದೆ.<ref name="hindu_jan08" /> ಇದನ್ನು 1848 ರಲ್ಲಿ ಆಗಿನ [[ಮಲಬಾರ್ ಜಿಲ್ಲೆ|ಮಲಬಾರಿನ]] [[ಜಿಲ್ಲಾ ಕಲೆಕ್ಟರ್]] ಎಚ್. ವಿ. ಕೊನೊಲ್ಲಿ ಅವರ ಆದೇಶದಂತೆ ನಿರ್ಮಿಸಲಾಯಿತು, ಆರಂಭದಲ್ಲಿ ಮಲಬಾರಿನ ಒಳನಾಡಿನಿಂದ [[ಕುಟ್ಟಿಯಾಡಿ]] ಮತ್ತು [[ಕೊರಪುಳ]] ನದಿ ವ್ಯವಸ್ಥೆಗಳ ಮೂಲಕ [[ಕಲ್ಲಾಯಿ]] ಬಂದರಿಗೆ ಸರಕುಗಳ ಚಲನೆಯನ್ನು ಸುಗಮಗೊಳಿಸಲು.<ref name="hindu_jan08">{{cite news |url=https://www.hindu.com/pp/2008/01/05/stories/2008010550730300.htm |archive-url=https://web.archive.org/web/20100923092718/https://www.hindu.com/pp/2008/01/05/stories/2008010550730300.htm |url-status=dead |archive-date=23 September 2010 |title=Reviving the historic Canoly Canal |date=5 January 2005 |work=[[The Hindu]] |access-date=16 August 2009}}</ref> ಒಂದು ಶತಮಾನಕ್ಕೂ ಹೆಚ್ಚು ಕಾಲ ಕೋಝಿಕೋಡ್ ಮತ್ತು ಕೊಚ್ಚಿ ನಡುವೆ [[ಪೊನ್ನಾನಿ]] ಮೂಲಕ ಸರಕು ಸಾಗಣೆಗೆ ಇದು ಮುಖ್ಯ ಜಲಮಾರ್ಗವಾಗಿತ್ತು.<ref name="hindu_jan08" /> ಕೇರಳದ ಇತರ ಪ್ರಮುಖ ಜಲಮಾರ್ಗಗಳಲ್ಲಿ [[ಆಲಪ್ಪುಳ]]-[[ಚಂಗನಾಶ್ಶೇರಿ]] ಕಾಲುವೆ, [[ಆಲಪ್ಪುಳ]]-[[ಕೋಟ್ಟಯಂ]]-[[ಅತಿರಂಪುಳ]] ಕಾಲುವೆ, ಮತ್ತು [[ಕೋಟ್ಟಯಂ]]-[[ವೈಕೋಂ]] ಕಾಲುವೆ ಸೇರಿವೆ.{{sfn|Chandran|2018|p=424}}
== ಜನಸಂಖ್ಯಾಶಾಸ್ತ್ರ ==
{{Main|ಕೇರಳದ ಜನಸಂಖ್ಯಾಶಾಸ್ತ್ರ}}
{{See also|ಕೇರಳದ ಜನಾಂಗೀಯ ಗುಂಪುಗಳು|ಕೇರಳದ ಜನರ ಪಟ್ಟಿ}}
[[File:Kerala Population Pyramid in 5-year age groups (2011 census).png|thumbnail|ಕೇರಳದ [[ಜನಸಂಖ್ಯಾ ಪಿರಮಿಡ್]]]]
ಕೇರಳವು ಭಾರತದ ಜನಸಂಖ್ಯೆಯ 2.8% ರಷ್ಟಿದೆ; 859 ವ್ಯಕ್ತಿಗಳ ಪ್ರತಿ km<sup>2</sup> ಸಾಂದ್ರತೆಯೊಂದಿಗೆ, ಅದರ ಭೂಮಿಯು ರಾಷ್ಟ್ರೀಯ ಸರಾಸರಿ 370 ವ್ಯಕ್ತಿಗಳ ಪ್ರತಿ km<sup>2</sup> ಗಿಂತ ಸುಮಾರು ಮೂರು ಪಟ್ಟು ಹೆಚ್ಚು ಜನನಿಬಿಡವಾಗಿದೆ.<ref name="Census 2011">{{cite web |title=Size, Growth Rate and Distribution of Population |url=https://www.censusindia.gov.in/2011-prov-results/data_files/india/Final_PPT_2011_chapter3.pdf |website=Census 2011 |publisher=Government of India |access-date=13 November 2015 |archive-date=23 September 2015 |archive-url=https://web.archive.org/web/20150923224858/http://www.censusindia.gov.in/2011-prov-results/data_files/india/Final_PPT_2011_chapter3.pdf |url-status=live }}</ref> 2011 ರಂತೆ, ತಿರುವನಂತಪುರವು ಕೇರಳದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ.<ref name="Census2011cities">{{cite web|title=Provisional Population Totals, Census of India 2011|url=http://urbanaffairskerala.org/images/downloads/ulb_population2011.pdf|work=Population of the urban local bodies in Kerala (2011)|publisher=Government of Kerala|accessdate=4 December 2020|archive-date=24 September 2020|archive-url=https://web.archive.org/web/20200924173424/http://urbanaffairskerala.org/images/downloads/ulb_population2011.pdf|url-status=dead}}</ref> ರಾಜ್ಯದಲ್ಲಿ, ಜನಸಂಖ್ಯಾ ಬೆಳವಣಿಗೆಯ ಪ್ರಮಾಣವು ಭಾರತದಲ್ಲಿ ಅತ್ಯಂತ ಕಡಿಮೆಯಾಗಿದೆ, ಮತ್ತು 2011 ರಲ್ಲಿ 4.9% ರಷ್ಟಿರುವ ದಶಕೀಯ ಬೆಳವಣಿಗೆಯು ಅಖಿಲ ಭಾರತ ಸರಾಸರಿ 17.6% ರಷ್ಟಕ್ಕಿಂತ ಕಡಿಮೆಯಾಗಿದೆ.<ref name="Census 2011" /> ಕೇರಳದ ಜನಸಂಖ್ಯೆಯು 1951 ಮತ್ತು 1991 ರ ನಡುವೆ ಎರಡು ಪಟ್ಟು ಹೆಚ್ಚಾಗಿ 15.6 ಮಿಲಿಯನ್ ಜನರನ್ನು ಸೇರಿಸಿ 1991 ರಲ್ಲಿ 29.1 ಮಿಲಿಯನ್ ನಿವಾಸಿಗಳನ್ನು ತಲುಪಿತು; 2011 ರ ವೇಳೆಗೆ ಜನಸಂಖ್ಯೆಯು 33.3 ಮಿಲಿಯನ್ ಆಗಿತ್ತು.<ref name="Census 2011" /> ಕೇರಳದ ಕರಾವಳಿ ಪ್ರದೇಶಗಳು 2022 ವ್ಯಕ್ತಿಗಳ ಪ್ರತಿ km<sup>2</sup> ಜನಸಂಖ್ಯೆಯೊಂದಿಗೆ ಅತಿ ಹೆಚ್ಚು ಜನನಿಬಿಡವಾಗಿವೆ, ಇದು ರಾಜ್ಯದ ಒಟ್ಟಾರೆ ಜನಸಂಖ್ಯಾ ಸಾಂದ್ರತೆ 859 ವ್ಯಕ್ತಿಗಳ ಪ್ರತಿ km<sup>2</sup> ಗಿಂತ 2.5 ಪಟ್ಟು ಹೆಚ್ಚಾಗಿದ್ದು, ಪೂರ್ವದ ಬೆಟ್ಟಗಳು ಮತ್ತು ಪರ್ವತಗಳನ್ನು ತುಲನಾತ್ಮಕವಾಗಿ ವಿರಳವಾಗಿ ಜನಸಂಖ್ಯೆ ಹೊಂದಿರುವಂತೆ ಬಿಡುತ್ತದೆ.<ref name="kerala_fact_sheet">{{cite book |url=https://www.ncscm.org/cms/geo/pdf/research/kerala_fact_sheet.pdf |title=Shoreline change assessment for Kerala coast |publisher=National Centre for Sustainable Coastal Management, Ministry of Environment and Forests |author1=R Ramesh |author2=R Purvaja |author3=A Senthil Vel |access-date=30 May 2015 |archive-date=30 May 2015 |archive-url=https://web.archive.org/web/20150530204904/http://www.ncscm.org/cms/geo/pdf/research/kerala_fact_sheet.pdf |url-status=dead }}</ref> ಕೇರಳವು [[2011 ರ ಭಾರತದ ಜನಗಣತಿ]]ಯ ಪ್ರಕಾರ [[ಭಾರತದಲ್ಲಿ ನಗರೀಕರಣ|ಎರಡನೇ ಅತಿ ಹೆಚ್ಚು ನಗರೀಕರಣಗೊಂಡ ಪ್ರಮುಖ ರಾಜ್ಯವಾಗಿದ್ದು]] [[ಕೇರಳದಲ್ಲಿನ ನಗರ ಪ್ರದೇಶದ ಬೆಳವಣಿಗೆಯ ಪ್ರಕಾರ ನಗರಗಳ ಪಟ್ಟಿ|47.7% ನಗರ ಜನಸಂಖ್ಯೆಯನ್ನು]] ಹೊಂದಿದೆ.<ref name="ubn">{{Cite web |url=https://mohua.gov.in/cms/level-of-urbanisation.php |title=Level of Urbanisation in Indian States |date= |website=mohua.gov.in |publisher=Ministry of Housing and Urban Affairs, Government of India |access-date=7 February 2022 |archive-date=7 February 2022 |archive-url=https://web.archive.org/web/20220207105118/https://mohua.gov.in/cms/level-of-urbanisation.php |url-status=live }}</ref> ಸುಮಾರು 31.8 ಮಿಲಿಯನ್ ಕೇರಳೀಯರು ಪ್ರಧಾನವಾಗಿ ಮಲಯಾಳಿಗಳಾಗಿದ್ದಾರೆ.<ref name="Census 2011" /> ರಾಜ್ಯದ 321,000 ಸ್ಥಳೀಯ ಬುಡಕಟ್ಟು ''[[ಆದಿವಾಸಿ]]''ಗಳು, ಜನಸಂಖ್ಯೆಯ 1.1%, ಪೂರ್ವದಲ್ಲಿ ಕೇಂದ್ರೀಕೃತವಾಗಿವೆ.<ref name="Kalathil_2004">{{Cite book |author=Kalathil MJ |year=2004 |veditors=Nair PR, Shaji H |title=Withering Valli: Alienation, Degradation, and Enslavement of Tribal Women in Attappady |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621690 |url=https://www.cds.ac.in/krpcds/publication/downloads/66.pdf |access-date=29 December 2008 |archive-date=30 May 2015 |archive-url=https://web.archive.org/web/20150530205641/http://www.cds.ac.in/krpcds/publication/downloads/66.pdf |url-status=live }}</ref>{{rp|10–12}}
=== ಲಿಂಗ ===
ಕೇರಳದಲ್ಲಿ ಮಾತೃವಂಶೀಯ ಅನುವಂಶಿಕತೆಯ ಸಂಪ್ರದಾಯವಿದೆ, ಅಲ್ಲಿ ತಾಯಿ ಮನೆಯ ಮುಖ್ಯಸ್ಥೆಯಾಗಿರುತ್ತಾಳೆ.<ref>{{Cite web |date=5 March 2017 |title=International Women's Day 2017: Kerala and the myth of matriarchy |url=https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |access-date=16 July 2021 |website=Firstpost |archive-date=16 July 2021 |archive-url=https://web.archive.org/web/20210716051101/https://www.firstpost.com/living/kerala-and-the-myth-of-matriarchy-misogyny-is-as-much-part-of-the-state-as-matrilineal-communities-3315458.html |url-status=live }}</ref> ಪರಿಣಾಮವಾಗಿ, ಕೇರಳದ ಮಹಿಳೆಯರು ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಮತ್ತು ಪ್ರಭಾವವನ್ನು ಹೊಂದಿದ್ದಾರೆ. ಇದು ಕೆಲವು ಪ್ರಭಾವಶಾಲಿ ಜಾತಿಗಳಲ್ಲಿ ಸಾಮಾನ್ಯವಾಗಿತ್ತು ಮತ್ತು ಹೆಣ್ಣು ಮಕ್ಕಳಿಗೆ ನೀಡಲಾಗುವ ಮೌಲ್ಯದಲ್ಲಿ ಒಂದು ಅಂಶವಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಬಡ ಕುಟುಂಬಗಳ ಹುಡುಗಿಯರಿಗೆ ಶಾಲೆಗಳನ್ನು ಪ್ರಾರಂಭಿಸಿದ ಕಾರಣ ಅವರು ಮಲಯಾಳಿ ಮಹಿಳೆಯರ ಮೇಲೆ ಪ್ರಭಾವ ಬೀರಿದರು.<ref>{{cite journal |author1-link=Tomila Lankina|author1=Lankina |author2=Tomila V. |author3=Getachew, Lullit |year=2013 |url=https://researchonline.lse.ac.uk/id/eprint/44929/ |title=Competitive religious entrepreneurs: Christian missionaries and female education in colonial and post-colonial India |journal=British Journal of Political Science |volume=43 |pages=103–31 |doi=10.1017/s0007123412000178 |s2cid=145185494 |archive-date=25 February 2021 |access-date=2 February 2016 |archive-url=https://web.archive.org/web/20210225144811/https://researchonline.lse.ac.uk/id/eprint/44929/ |url-status=live }}</ref> ಶಿಕ್ಷಣ ಮತ್ತು ಲಾಭದಾಯಕ ಉದ್ಯೋಗದಂತಹ ಮಹಿಳೆಯರಿಗೆ ಅವಕಾಶಗಳು ಸಾಮಾನ್ಯವಾಗಿ ಕಡಿಮೆ ಜನನ ದರಕ್ಕೆ ಕಾರಣವಾಗುತ್ತವೆ,<ref>{{Cite web |last=ലേഖകൻ |first=മാധ്യമം |date=10 July 2021 |title=ജനസംഖ്യാദിനം; അറിയാം 21 കാര്യങ്ങൾ|url=https://www.madhyamam.com/velicham/special-stories/july-11-world-population-day-821671 |access-date=16 July 2021 |website=Madhyamam |language=en |archive-date=16 July 2021 |archive-url=https://web.archive.org/web/20210716051106/https://www.madhyamam.com/velicham/special-stories/july-11-world-population-day-821671 |url-status=live }}</ref> ಇದು ಪ್ರತಿಯಾಗಿ, ಶಿಕ್ಷಣ ಮತ್ತು ಉದ್ಯೋಗವನ್ನು ಮಹಿಳೆಯರಿಗೆ ಹೆಚ್ಚು ಪ್ರವೇಶಿಸುವಂತೆ ಮತ್ತು ಹೆಚ್ಚು ಪ್ರಯೋಜನಕಾರಿಯಾಗಿಸುತ್ತದೆ. ಇದು ಸಮುದಾಯದ ಮಹಿಳೆಯರು ಮತ್ತು ಮಕ್ಕಳಿಗಾಗಿ ಮೇಲ್ಮುಖವಾದ ಸುರುಳಿಯನ್ನು ಸೃಷ್ಟಿಸುತ್ತದೆ, ಅದು ಮುಂದಿನ ಪೀಳಿಗೆಗೆ ರವಾನಿಸಲ್ಪಡುತ್ತದೆ. 1996 ರ ಮಾನವ ಅಭಿವೃದ್ಧಿ ವರದಿಯ ಪ್ರಕಾರ, ಕೇರಳದ [[ಲಿಂಗ ಅಭಿವೃದ್ಧಿ ಸೂಚ್ಯಂಕ]] 597 ಆಗಿತ್ತು; ಇದು ಭಾರತದ ಯಾವುದೇ ರಾಜ್ಯಕ್ಕಿಂತ ಹೆಚ್ಚಾಗಿತ್ತು. ಹೆಚ್ಚಿನ ಮಹಿಳಾ ಸಾಕ್ಷರತೆ, ಶಿಕ್ಷಣ, ಕೆಲಸದ ಭಾಗವಹಿಸುವಿಕೆ ಮತ್ತು ಜೀವಿತಾವಧಿಯ ಪ್ರಮಾಣಗಳು, ಅನುಕೂಲಕರ [[ಮಾನವ ಲಿಂಗಾನುಪಾತ|ಲಿಂಗಾನುಪಾತ]]ದ ಜೊತೆಗೆ, ಅದಕ್ಕೆ ಕೊಡುಗೆ ನೀಡಿವೆ.<ref name="Joseph">{{cite book |author=Ammu Joseph |editor=Oommen M.A. |year=1999 |title=Rethinking Development: Kerala's Development Experience |publisher=Concept Publishing Company |isbn=978-8170227656 |url=https://books.google.com/books?id=lzV3bQh-L94C |pages=479–86 |access-date=30 May 2015}}</ref>
ಕೇರಳದ ಲಿಂಗಾನುಪಾತ 1.084 (ಸ್ತ್ರೀಯರು ಪುರುಷರಿಗೆ) ಭಾರತದ ಉಳಿದ ಭಾಗಗಳಿಗಿಂತ ಹೆಚ್ಚಾಗಿದೆ; ಮಹಿಳೆಯರು ಪುರುಷರನ್ನು ಮೀರಿಸುವ ಏಕೈಕ ರಾಜ್ಯವಾಗಿದೆ.<ref name="Tharamangalam_2005" />{{rp|2}} ಶಿಕ್ಷಣವು ಒದಗಿಸುವ ಅವಕಾಶಗಳನ್ನು ಹೊಂದಿರುವಾಗ, ಉದಾಹರಣೆಗೆ ರಾಜಕೀಯ ಭಾಗವಹಿಸುವಿಕೆ, ಪ್ರಸ್ತುತ ಘಟನೆಗಳೊಂದಿಗೆ ನವೀಕೃತವಾಗಿರುವುದು, ಧಾರ್ಮಿಕ ಗ್ರಂಥಗಳನ್ನು ಓದುವುದು ಇತ್ಯಾದಿ, ಈ ಉಪಕರಣಗಳು ಇನ್ನೂ ಕೇರಳದ ಮಹಿಳೆಯರಿಗೆ ಸಂಪೂರ್ಣ, [[ಮಹಿಳೆಯರ ಹಕ್ಕುಗಳು|ಸಮಾನ ಹಕ್ಕುಗಳಾಗಿ]] ಅನುವಾದಗೊಂಡಿಲ್ಲ. ಮಹಿಳೆಯರನ್ನು ಅವರ ಸ್ವಂತ ಪ್ರಯೋಜನಕ್ಕಾಗಿ ನಿರ್ಬಂಧಿಸಬೇಕು ಎಂಬ ಸಾಮಾನ್ಯ ಮನೋಭಾವವಿದೆ. ರಾಜ್ಯದಲ್ಲಿ, ಸಾಮಾಜಿಕ ಪ್ರಗತಿಯ ಹೊರತಾಗಿಯೂ, ಲಿಂಗವು ಇನ್ನೂ [[ಸಾಮಾಜಿಕ ಚಲನಶೀಲತೆ]] ಯ ಮೇಲೆ ಪ್ರಭಾವ ಬೀರುತ್ತದೆ.<ref>Brenda Maddox mentions in: Maddox, Brenda. "A Marxist Paradise For Women?" New Statesman. (London, England: 1996) 128 no4440 30 January 14, 1999.</ref><ref>Antherjanam, Lalithambika. Cast Me Out If You Will. New York: The Feminist Press, 1997.</ref><ref>{{cite journal |last1=Jeffrey |first1=Robin |year=1987 |title=Governments and Culture: How Women Made Kerala Literate |url=https://archive.org/details/sim_pacific-affairs_fall-1987_60_3/page/447 |journal=Pacific Affairs |volume=60 |issue=3 |pages=447–72 |doi=10.2307/2758883 |jstor=2758883}}</ref>
==== LGBT ಹಕ್ಕುಗಳು ====
{{Main|ಕೇರಳದಲ್ಲಿ LGBT ಹಕ್ಕುಗಳು}}
ಕೇರಳವು [[ಭಾರತ]]ದಲ್ಲಿ LGBT ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿದೆ.<ref>{{Cite web |url=https://www.huffingtonpost.in/2015/11/12/kerala-government-transge_n_8543410.html |title=Kerala Government Has Unveiled A Policy To Enforce Constitutional Rights Of Transgenders |website=The Huffington Post |date=12 November 2015 |access-date=28 June 2016 |archive-date=10 May 2017 |archive-url=https://web.archive.org/web/20170510075414/http://www.huffingtonpost.in/2015/11/12/kerala-government-transge_n_8543410.html |url-status=live }}</ref> ಕೇರಳವು ಟ್ರಾನ್ಸ್ಜೆಂಡರ್ ಸಮುದಾಯಕ್ಕಾಗಿ ಕಲ್ಯಾಣ ನೀತಿಯನ್ನು ರೂಪಿಸಿದ [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತದ ಮೊದಲ ರಾಜ್ಯಗಳಲ್ಲಿ]] ಒಂದಾಗಿದೆ. 2016 ರಲ್ಲಿ, ಕೇರಳ ಸರ್ಕಾರವು ಸರ್ಕಾರಿ ಆಸ್ಪತ್ರೆಗಳ ಮೂಲಕ ಉಚಿತ [[ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ]]ಯನ್ನು ಪರಿಚಯಿಸಿತು.<ref>{{Cite web |url=https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |title=Why Kerala's free sex-change surgeries will offer a new lifeline for the transgender community |last=Devasia |first=T. K. |website=Scroll.in |date=19 March 2016 |language=en-US |access-date=5 July 2019 |archive-date=29 June 2019 |archive-url=https://web.archive.org/web/20190629061452/https://scroll.in/article/804496/why-keralas-free-sex-change-surgeries-will-offer-a-new-lifeline-for-the-transgender-community |url-status=live }}</ref><ref>{{cite news |url=https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |title=After She-Taxi, Kerala to launch G-Taxi for transgenders |work=[[The Times of India]] |date=31 January 2016 |agency=PTI |access-date=25 March 2016 |location=Thiruvananthapuram |archive-date=29 October 2019 |archive-url=https://web.archive.org/web/20191029184249/https://timesofindia.indiatimes.com/india/After-She-Taxi-Kerala-to-launch-G-Taxi-for-transgenders/articleshow/50792517.cms |url-status=live }}</ref><ref>{{Cite web |url=https://www.dnaindia.com/india/report-how-kerala-left-the-country-behind-on-transgender-rights-2145017 |title=How Kerala left the country behind on transgender rights |website=dna |language=en-US |access-date=19 March 2016 |date=14 November 2015 |archive-date=29 June 2019 |archive-url=https://web.archive.org/web/20190629021111/https://www.dnaindia.com/india/report-how-kerala-left-the-country-behind-on-transgender-rights-2145017 |url-status=live }}</ref> [[ಕ್ವೀರಳ]] ಕೇರಳದ ಪ್ರಮುಖ LGBT ಸಂಸ್ಥೆಗಳಲ್ಲಿ ಒಂದಾಗಿದೆ. ಇದು LGBT ಜನರ ಅರಿವನ್ನು ಹೆಚ್ಚಿಸಲು ಮತ್ತು ಆರೋಗ್ಯ ಸೇವೆಗಳು, ಕೆಲಸದ ಸ್ಥಳ ನೀತಿಗಳು ಮತ್ತು ಶೈಕ್ಷಣಿಕ ಪಠ್ಯಕ್ರಮಕ್ಕೆ ಸಂಬಂಧಿಸಿದ ಸಂವೇದನಾಶೀಲತೆಯ ಬಗ್ಗೆ ಪ್ರಚಾರ ಮಾಡುತ್ತದೆ.<ref>{{Cite news |title=Affirming their right, they march with pride |url=https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |date=13 August 2017 |work=The Hindu |language=en-IN |issn=0971-751X |access-date=4 April 2022 |archive-date=28 December 2019 |archive-url=https://web.archive.org/web/20191228100119/https://www.thehindu.com/todays-paper/tp-national/tp-kerala/affirming-their-right-they-march-with-pride/article19484625.ece |url-status=live }}</ref> 2010 ರಿಂದ, [[ಕೇರಳ ಕ್ವೀರ್ ಪ್ರೈಡ್]] ಅನ್ನು ಕೇರಳದ ವಿವಿಧ ನಗರಗಳಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತಿದೆ.<ref>{{cite web |url=https://timesofindia.indiatimes.com/india/Kerala-to-host-its-first-gay-parade/articleshow/6112610.cms |title=Kerala to host its first gay parade |website=The Times of India |date=30 June 2010}}</ref>
ಜೂನ್ 2019 ರಲ್ಲಿ, ಕೇರಳ ಸರ್ಕಾರವು ಟ್ರಾನ್ಸ್ಜೆಂಡರ್ ಸಮುದಾಯದ ಸದಸ್ಯರನ್ನು ಸರ್ಕಾರದ ಸಂವಹನಗಳಲ್ಲಿ "[[ಮೂರನೇ ಲಿಂಗ]]" ಅಥವಾ "ಇತರ ಲಿಂಗ" ಎಂದು ಕರೆಯಬಾರದು ಎಂದು ಹೊಸ ಆದೇಶವನ್ನು ಅಂಗೀಕರಿಸಿತು. ಬದಲಾಗಿ, "ಟ್ರಾನ್ಸ್ಜೆಂಡರ್" ಪದವನ್ನು ಬಳಸಬೇಕು. ಹಿಂದೆ, ಸರ್ಕಾರಿ ನಮೂನೆಗಳು ಮತ್ತು ದಾಖಲೆಗಳಲ್ಲಿ ಒದಗಿಸಲಾದ ಲಿಂಗ ಆಯ್ಕೆಗಳು ಪುರುಷ, ಮಹಿಳೆ ಮತ್ತು ಇತರ/ಮೂರನೇ ಲಿಂಗವನ್ನು ಒಳಗೊಂಡಿದ್ದವು.<ref>{{Cite web |url=https://www.thenewsminute.com/article/kerala-govt-passes-order-use-transgender-instead-thirdother-gender-104584 |website=www.thenewsminute.com |access-date=8 July 2019 |title=Kerala govt passes order to use 'transgender' instead of 'third/other gender' |date=30 June 2019}}</ref><ref>{{Cite news |url=https://www.thehindu.com/news/national/kerala/only-transgender-in-official-communication/article28235748.ece |title=Only 'transgender' in official communication |last=Roshni |first=R. k |date=30 June 2019 |work=The Hindu |access-date=8 July 2019 |language=en-IN |issn=0971-751X}}</ref>
=== ಮಾನವ ಅಭಿವೃದ್ಧಿ ಸೂಚ್ಯಂಕ ===
{{See also|ಕೇರಳ ಮಾದರಿ}}
[[File:2006 Human Development Index for India map by states, HDI data by GoI and UNDP India.svg|thumb|[[ಭಾರತ ಸರ್ಕಾರ]] ಮತ್ತು [[ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮ]]ದಿಂದ ಲೆಕ್ಕಾಚಾರ ಮಾಡಿದಂತೆ 2006 ರಲ್ಲಿ ಭಾರತೀಯ ರಾಜ್ಯಗಳಿಗೆ [[ಮಾನವ ಅಭಿವೃದ್ಧಿ ಸೂಚ್ಯಂಕ]] ನಕ್ಷೆ.<ref>{{cite web |url=https://www.in.undp.org/content/dam/india/docs/gendering_human_development_indices_summary_report.pdf |title=Gendering Human Development Indices |date=March 2009 |publisher=Ministry of Women and Child Development, Government of India with UNDP India }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>]]
ಪ್ರಜಾಪ್ರಭುತ್ವದ ಕಮ್ಯುನಿಸ್ಟ್ ಸ್ಥಳೀಯ ಸರ್ಕಾರದ ಅಡಿಯಲ್ಲಿ, ಕೇರಳವು ಭಾರತೀಯ ಸರಾಸರಿಗಿಂತ ಹೆಚ್ಚು ಮುಂದುವರಿದ ಸಾಮಾಜಿಕ ಅಭಿವೃದ್ಧಿಯ ದಾಖಲೆಯನ್ನು ಸಾಧಿಸಿದೆ.<ref>{{Cite book |last=Lin |first=Chun |title=The transformation of Chinese socialism |date=2006 |publisher=[[Duke University Press]] |isbn=978-0-8223-3785-0 |location=Durham [N.C.] |pages=298 |oclc=63178961}}</ref> 2015 ರಂತೆ, ಕೇರಳವು 0.770 ರ [[ಮಾನವ ಅಭಿವೃದ್ಧಿ ಸೂಚ್ಯಂಕ]] (HDI) ಅನ್ನು ಹೊಂದಿದೆ, ಇದು "ಹೆಚ್ಚಿನ" ವರ್ಗದಲ್ಲಿದೆ, ಇದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.<ref name="snhdi-gdl">{{cite web |title=Sub-national HDI – Area Database |url=https://hdi.globaldatalab.org/areadata/shdi/ |website=Global Data Lab |publisher=Institute for Management Research, Radboud University |access-date=25 September 2018 |language=en}}</ref> ಇದು 2007–08 ರಲ್ಲಿ 0.790 ಆಗಿತ್ತು<ref name="IDHR 2011">{{cite web |title=India Human Development Report 2011: Towards Social Inclusion |url=https://www.im4change.org/docs/340IHDR_Summary.pdf |publisher=Institute of Applied Manpower Research, [[Planning Commission (India)|Planning Commission]], [[Government of India]] |access-date=24 October 2014 |archive-date=21 October 2013 |archive-url=https://web.archive.org/web/20131021081939/http://www.im4change.org/docs/340IHDR_Summary.pdf |url-status=dead }}</ref> ಮತ್ತು ಇದು 0.920 ರ ಬಳಕೆ-ಆಧಾರಿತ HDI ಅನ್ನು ಹೊಂದಿತ್ತು, ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮವಾಗಿದೆ.<ref name="IDHR 2011" /> 19 ನೇ ಶತಮಾನದಿಂದ [[ಪ್ರಾಥಮಿಕ ಶಿಕ್ಷಣ|ಪ್ರಾಥಮಿಕ ಮಟ್ಟದ ಶಿಕ್ಷಣ]], [[ಆರೋಗ್ಯ ರಕ್ಷಣೆ]] ಮತ್ತು [[ಭಾರತದಲ್ಲಿ ಬಡತನ|ಬಡತನ]] ನಿರ್ಮೂಲನೆಗೆ ಸರ್ಕಾರದ ತುಲನಾತ್ಮಕವಾಗಿ ಹೆಚ್ಚಿನ ವೆಚ್ಚವು ರಾಜ್ಯವು ಅಸಾಧಾರಣವಾಗಿ ಹೆಚ್ಚಿನ HDI ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ;<ref name="UNDP2005">{{cite web |title=Kerala HDR 2005 |url=https://hdr.undp.org/en/reports/nationalreports/asiathepacific/india/name,3397,en.html |work=Human Development Report |publisher=United Nations |location=Asia and the Pacific |access-date=30 May 2015}}</ref><ref name="UNDP20054">{{cite web |title=Human Development Report 2005 |url=https://hdr.undp.org/en/media/HDR05_complete.pdf |work=Human Development Report |publisher=United Nations |location=Asia and the Pacific |access-date=14 November 2015 |archive-url=https://web.archive.org/web/20110310193948/https://hdr.undp.org/en/media/HDR05_complete.pdf |archive-date=10 March 2011 |url-status=dead}}</ref> ಈ ವರದಿಯನ್ನು ಕೇಂದ್ರ ಸರ್ಕಾರದ [[ಅನ್ವಯಿಕ ಜನಶಕ್ತಿ ಸಂಶೋಧನಾ ಸಂಸ್ಥೆ]] ತಯಾರಿಸಿತು.<ref name="hdi kerala chart">{{cite web |url=https://www.moneycontrol.com/news/wire-news/human-development-index-rose-21-per-cent-kerala-tops-chart_603650.html |title=Human Development Index rose 21 per cent; Kerala tops chart |date=21 October 2011 |work=[[CNBC]] |access-date=14 November 2015}}</ref><ref name="hdi kerala">{{Cite news |url=https://economictimes.indiatimes.com/news/economy/finance/growth-reforms-lift-living-standards-in-india-human-development-index/articleshow/10447495.cms |title=Growth, reforms lift living standards in India: Human development Index |date=22 October 2011 |access-date=14 November 2015 |work=Economic Times}}</ref> ಆದಾಗ್ಯೂ, ಅಭಿವೃದ್ಧಿ ಅಧ್ಯಯನ ಕೇಂದ್ರವು ತಯಾರಿಸಿದ ಮಾನವ ಅಭಿವೃದ್ಧಿ ವರದಿ 2005, ರಾಜ್ಯದಲ್ಲಿ ಮಾನವ ಅಭಿವೃದ್ಧಿಯ ಪ್ರಗತಿಯು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡಲು ಪ್ರಾರಂಭಿಸಿದ್ದರಿಂದ ರಾಜ್ಯಕ್ಕೆ ಸಮಾವೇಶಕ ಅಭಿವೃದ್ಧಿಯ ಗುಣಾತ್ಮಕ ಹಂತವನ್ನು ಊಹಿಸುತ್ತದೆ.<ref name="UNDP2005" /> ಕೇರಳವು ಭಾರತದಲ್ಲಿ ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರ ರಾಜ್ಯವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ.<ref>{{cite book |author1=Sunil Mani |author2=Anjini Kochar |title=Kerala's Economy: Crouching Tiger, Sacred Cows |url=https://books.google.com/books?id=wKeRAtvXl8oC&pg=PA121 |access-date=24 September 2012 |year=2006 |publisher=D.C. Books |isbn=978-8126413591 |page=121}}</ref>
2011 ರ ಜನಗಣತಿಯ ಪ್ರಕಾರ, ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಹೆಚ್ಚು [[ಸಾಕ್ಷರತಾ ಪ್ರಮಾಣ]] (94%) ಹೊಂದಿದೆ. 2018 ರಲ್ಲಿ, ಭಾರತದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ನಡೆಸಿದ 2018 ರ ಸಾಕ್ಷರತಾ ಸಮೀಕ್ಷೆಯಲ್ಲಿ ಸಾಕ್ಷರತಾ ಪ್ರಮಾಣವನ್ನು 96.2% ಎಂದು ಲೆಕ್ಕಹಾಕಲಾಯಿತು.<ref name="Literacy survey_2018">{{Cite web |date=8 September 2020 |title=Literacy Survey, India (2017–18) |url=https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |access-date=9 September 2020 |publisher=Firstpost |archive-date=2 November 2021 |archive-url=https://web.archive.org/web/20211102214441/https://www.firstpost.com/india/at-96-2-kerala-tops-indias-literacy-rate-chart-again-andhra-pradesh-ranks-lowest-with-66-4-8796401.html |url-status=live }}</ref> [[ಕೋಟ್ಟಯಂ ಜಿಲ್ಲೆ]]ಯಲ್ಲಿ, ಸಾಕ್ಷರತಾ ಪ್ರಮಾಣವು 97% ಆಗಿತ್ತು.<ref>{{Cite web |url=https://www.pincodeindia.net/literacy-rate-of-kerala.php |title=Literacy Rate in Kerala – 2018 |access-date=7 February 2022 |archive-date=7 February 2022 |archive-url=https://web.archive.org/web/20220207105113/https://www.pincodeindia.net/literacy-rate-of-kerala.php |url-status=dead }}</ref><ref name="pc-census2011">{{Cite web |title=Census 2011 (Final Data) – Demographic details, Literate Population (Total, Rural & Urban) |url=https://planningcommission.gov.in/data/datatable/data_2312/DatabookDec2014%20307.pdf |url-status=dead |archive-url=https://web.archive.org/web/20180127163347/https://planningcommission.gov.in/data/datatable/data_2312/DatabookDec2014%20307.pdf |archive-date=27 January 2018 |access-date=3 October 2018 |website=planningcommission.gov.in |publisher=Planning Commission, Government of India}}</ref><ref name="IBNLiteracy2013" /> ಕೇರಳದಲ್ಲಿ [[ಜೀವಿತಾವಧಿ]]ಯು 74 ವರ್ಷಗಳು, 2011 ರಂತೆ ಭಾರತದಲ್ಲಿ ಅತಿ ಹೆಚ್ಚಿನದಾಗಿದೆ.<ref>{{cite news |url=https://thehindu.com/news/national/kerala/kerala-tops-in-literacy-rate-health-services/article2562589.ece |location=Chennai, India |work=The Hindu |title=Kerala tops in literacy rate, health services |date=22 October 2011 |first=J. |last=Balaji |access-date=30 May 2015}}</ref> ಕೇರಳದ ಗ್ರಾಮೀಣ ಬಡತನ ಪ್ರಮಾಣವು 59% (1973–1974) ರಿಂದ 12% (1999–2010) ಕ್ಕೆ ಇಳಿದಿದೆ; ಒಟ್ಟಾರೆ (ನಗರ ಮತ್ತು ಗ್ರಾಮೀಣ) ಬಡತನ ಪ್ರಮಾಣವು 1970 ಮತ್ತು 2000 ರ ದಶಕಗಳ ನಡುವೆ 47% ರಷ್ಟು ಕಡಿಮೆಯಾಗಿದ್ದು, ಭಾರತದಲ್ಲಿ ಒಟ್ಟಾರೆ ಬಡತನ ಪ್ರಮಾಣದಲ್ಲಿ 29% ರಷ್ಟು ಕುಸಿತಕ್ಕೆ ವಿರುದ್ಧವಾಗಿದೆ.<ref>{{cite book |title=Human Development Report 2005 Kerala |publisher=State Planning Board |author=Centre for Development Studies Thiruvananthapuram |year=2006 |location=Thiruvananthapuram, Kerala}}</ref> 1999–2000 ರ ವೇಳೆಗೆ, ಗ್ರಾಮೀಣ ಮತ್ತು ನಗರ ಬಡತನ ಪ್ರಮಾಣವು ಕ್ರಮವಾಗಿ 10.0% ಮತ್ತು 9.6% ಕ್ಕೆ ಇಳಿದಿದೆ.<ref name="princeton6" /> 2013 ರ ಟೆಂಡೂಲ್ಕರ್ ಸಮಿತಿ ವರದಿಯು ಗ್ರಾಮೀಣ ಮತ್ತು ನಗರ ಕೇರಳದಲ್ಲಿ ಬಡತನ ರೇಖೆಯ ಕೆಳಗೆ ವಾಸಿಸುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಕ್ರಮವಾಗಿ 9.1% ಮತ್ತು 5.0% ಎಂದು ಅಂದಾಜಿಸಿದೆ.<ref>{{cite web |title=Press Note on Poverty Estimates, 2011–12 |url=https://planningcommission.nic.in/news/pre_pov2307.pdf |website=planningcommission.gov.in |publisher=Planning Commission, Government of India |access-date=27 November 2018 |archive-url=https://web.archive.org/web/20140628120737/https://planningcommission.nic.in/news/pre_pov2307.pdf |archive-date=28 June 2014 |url-status=dead}}</ref> ಈ ಬದಲಾವಣೆಗಳು ಹೆಚ್ಚಾಗಿ 19 ನೇ ಶತಮಾನದ ಕೊನೆಯಲ್ಲಿ ಕೊಚ್ಚಿ ಮತ್ತು ತಿರುವಾಂಕೂರು ಸಾಮ್ರಾಜ್ಯಗಳು ಸಾಮಾಜಿಕ ಕಲ್ಯಾಣವನ್ನು ಹೆಚ್ಚಿಸಲು ಪ್ರಾರಂಭಿಸಿದ ಪ್ರಯತ್ನಗಳಿಂದ ಉಂಟಾಗಿವೆ.<ref>{{Cite report |title=EFA [Education for All] Global Monitoring Report |url=https://www.unesco.org/education/efa_report/chapter4.pdf |year=2003 |archive-url=https://web.archive.org/web/20040923014605/https://www.unesco.org/education/efa_report/chapter4.pdf |archive-date=23 September 2004 |page=156 |publisher=[[UNESCO]] |access-date=4 April 2022}}</ref><ref>{{Cite journal |author=Kutty VR |year=2000 |title=Historical analysis of the development of health care facilities in Kerala State, India |journal=Health Policy and Planning |volume=15 |issue=1 |pages=103–09 |doi=10.1093/heapol/15.1.103 |pmid=10731241 |s2cid=7634887 |doi-access=free }}</ref> ಈ ಗಮನವನ್ನು ಕೇರಳದ ಸ್ವಾತಂತ್ರ್ಯೋತ್ತರ ಸರ್ಕಾರವು ಉಳಿಸಿಕೊಂಡಿದೆ.<ref name="Brenkert_Malone_2003" /><ref name="Varma_2005">{{Cite news |author=Varma MS |title=Nap on HDI scores may land Kerala in an equilibrium trap |work=The Financial Express |date=4 April 2005 |access-date=12 November 2007 |url=https://www.financialexpress.com/old/print.php?content_id=86925 |archive-url=https://web.archive.org/web/20080617134031/https://www.financialexpress.com/old/print.php?content_id=86925 |archive-date=17 June 2008}}</ref>{{rp|48}} ಕೇರಳವು [[NITI ಆಯೋಗ]]ದ ಸುಸ್ಥಿರ ಅಭಿವೃದ್ಧಿ ಗುರಿಗಳ ಡ್ಯಾಶ್ಬೋರ್ಡ್ ಮತ್ತು [[ಭಾರತೀಯ ರಿಸರ್ವ್ ಬ್ಯಾಂಕ್]]ನ ''ಇಂಡಿಯನ್ ಎಕಾನಮಿಯ ಹ್ಯಾಂಡ್ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್'' ಪ್ರಕಾರ ಭಾರತದ [[ಬಡತನ ಪ್ರಮಾಣದ ಪ್ರಕಾರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ|ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿದೆ]].<ref>{{Cite web |title=SDG India – Index 2021–22 – Partnerships in the Decade of Action |url=https://sdgindiaindex.niti.gov.in/#/ranking |date=2021 |url-status=dead |archive-url=https://web.archive.org/web/20210613021943/https://niti.gov.in/writereaddata/files/SDG_3.0_Final_04.03.2021_Web_Spreads.pdf |archive-date=13 June 2021 |website=[[NITI Aayog]] |access-date=29 September 2024}}</ref><ref>{{Cite web |title=Handbook of Statistics on Indian Economy. Table 154 : Number and Percentage of Population Below Poverty Line. (2011-12) |url=https://www.rbi.org.in/scripts/PublicationsView.aspx?id=19887 |access-date=13 September 2021 |website=Reserve Bank of India |archive-date=13 September 2021 |archive-url=https://web.archive.org/web/20210913133540/https://www.rbi.org.in/scripts/PublicationsView.aspx?id=19887 |url-status=live }}</ref>
ಕೇರಳವು [[ಕೆನಡಾ]], [[ಜಪಾನ್]], ಮತ್ತು [[ನಾರ್ವೆ]] ನಂತಹ [[ಅಭಿವೃದ್ಧಿ ಹೊಂದಿದ ರಾಷ್ಟ್ರಗಳ]] ವಿಶಿಷ್ಟವಾದ "[[ಜನಸಂಖ್ಯಾ ಪರಿವರ್ತನೆ]]" ಯನ್ನು ಅನುಭವಿಸಿದೆ.<ref name="Tharamangalam_2005" />{{rp|1}} 2005 ರಲ್ಲಿ, 11.2% ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು.<ref name="Varma_2005" /> 2023 ರಲ್ಲಿ, ಬಿಬಿಸಿಯು ಕೇರಳದಿಂದ ವಲಸೆಯಿಂದ ಉಂಟಾದ ಸಮಸ್ಯೆಗಳು ಮತ್ತು ಪ್ರಯೋಜನಗಳ ಬಗ್ಗೆ ವರದಿ ಮಾಡಿತು, ಕುಂಬನಾಡ್ ಗ್ರಾಮದ ಮೇಲೆ ಕೇಂದ್ರೀಕರಿಸಿತು.<ref>{{cite web |url=https://www.bbc.co.uk/news/world-asia-india-64936519 |title=Kerala: A ghost town in the world's most populated country |last= |first= |date=26 March 2023 |website=www.bbc.co.uk |publisher=BBC News |access-date=26 March 2023}}</ref>
2004 ರಲ್ಲಿ, ಜನನ ದರವು 18 ಪ್ರತಿ 1,000 ಕ್ಕೆ ಕಡಿಮೆಯಾಗಿತ್ತು.<ref name="Kutty_2004_6">{{Cite book |author=Kutty VR |veditors=Nair PR, Shaji H |year=2004 |title=Why low birth weight (LBW) is still a problem in Kerala: A preliminary exploration |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621607 |access-date=12 November 2007 |url=https://www.cds.ac.in/krpcds/publication/downloads/57.pdf |page=6}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 1.6 ರ ಒಟ್ಟು ಫಲವತ್ತತೆ ಪ್ರಮಾಣವನ್ನು (TFR) ಹೊಂದಿತ್ತು. ಮಲಪ್ಪುರಂ ಜಿಲ್ಲೆಯನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳು 2 ಕ್ಕಿಂತ ಕಡಿಮೆ ಫಲವತ್ತತೆ ಪ್ರಮಾಣವನ್ನು ಹೊಂದಿದ್ದವು. ಫಲವತ್ತತೆ ಪ್ರಮಾಣವು [[ಮಲಪ್ಪುರಂ ಜಿಲ್ಲೆ]]ಯಲ್ಲಿ (2.2) ಅತಿ ಹೆಚ್ಚು ಮತ್ತು [[ಪತ್ತನಂತಿಟ್ಟ ಜಿಲ್ಲೆ]]ಯಲ್ಲಿ (1.3) ಅತಿ ಕಡಿಮೆಯಾಗಿದೆ.<ref>{{cite web |title=Fertility at District Level in India:Lessons from the 2011 Census |url=https://www.ceped.org/IMG/pdf/ceped_wp30.pdf&ved=2ahUKEwio7YjXv9nsAhVJzjgGHUy2BTE4FBAWMAR6BAgJEAE&usg=AOvVaw2PL5xTsjiaBMS96pAhMEX1 |author=Christophe Z Guilmoto and Irudaya Rajan |page=31 |format=PDF |access-date=29 October 2020}}</ref> 2001 ರಲ್ಲಿ, ಮುಸ್ಲಿಮರು 2.6 ರ TFR ಅನ್ನು ಹೊಂದಿದ್ದರು, ಹಿಂದೂಗಳಿಗೆ 1.5 ಮತ್ತು ಕ್ರೈಸ್ತರಿಗೆ 1.7 ರಷ್ಟಿತ್ತು.<ref>{{Cite news |url=https://www.deccanchronicle.com/nation/current-affairs/170316/fertility-rate-to-even-out-in-20-years-in-kerala.html |title=Fertility rate to even out in 20 years in Kerala |website=Deccan Chronicle |access-date=29 October 2020}}</ref> CMS ಇಂಡಿಯನ್ ಕರಪ್ಷನ್ ಸ್ಟಡಿ (CMS-ICS) ನಡೆಸಿದ ಸಮೀಕ್ಷೆಗಳ ಪ್ರಕಾರ ರಾಜ್ಯವು "ಅತ್ಯಂತ ಕಡಿಮೆ ಭ್ರಷ್ಟ ಭಾರತೀಯ ರಾಜ್ಯ" ಎಂದೂ ಪರಿಗಣಿಸಲ್ಪಟ್ಟಿದೆ<ref>{{Cite web |url=https://www.onmanorama.com/news/nation/2017/04/28/kerala-least-corrupt-states-india-karnatak-highest-petty-corruptionkerala-least-corrupt-states-india-karnatak-highest-petty-corruption.html |title=Kerala among the least corrupt states in India, Karnataka tops the list: study |website=OnManorama}}</ref> ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ (2005)<ref>{{cite web |title=India Corruption Study – 2005 |publisher=[[Transparency International]] |date=June 2005 |access-date=11 November 2007 |url=https://archive.transparency.org/regional_pages/asia_pacific/newsroom/news_archive2/india_corruption_study_2005 |archive-url=https://web.archive.org/web/20130413044112/https://archive.transparency.org/regional_pages/asia_pacific/newsroom/news_archive2/india_corruption_study_2005 |url-status=dead |archive-date=13 April 2013}}</ref> ಮತ್ತು ''ಇಂಡಿಯಾ ಟುಡೇ'' (1997).<ref>{{cite book |author1=Jean Dreze |author2=Amartya Sen |title=India: Development and Participation |url=https://books.google.com/books?id=UpOl35r8UHQC&pg=PA368 |access-date=24 September 2012 |year=2002 |publisher=Oxford University Press |isbn=978-0-19-925749-2 |page=368}}</ref> ಕೇರಳವು ಭಾರತೀಯ ರಾಜ್ಯಗಳಲ್ಲಿ ಅತಿ ಕಡಿಮೆ [[ಕೊಲೆ]] ಪ್ರಮಾಣವನ್ನು ಹೊಂದಿದೆ, 2011 ರಲ್ಲಿ 1.1 ಪ್ರತಿ 100,000 ಕ್ಕೆ.<ref name="ncrb">{{cite web |url=https://ncrb.nic.in/CD-CII2011/cii-2011/Table%203.1.pdf |archive-url=https://web.archive.org/web/20130928024506/https://ncrb.nic.in/CD-CII2011/cii-2011/Table%203.1.pdf |url-status=dead |archive-date=28 September 2013 |date=21 June 2012 |title=Table–3.1 Incidence And Rate Of Violent Crimes During 2011 |access-date=24 September 2014}}</ref> ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ, ಹೆಚ್ಚಿನ [[ಆತ್ಮಹತ್ಯೆ]] ಪ್ರಮಾಣ, ಕಡಿಮೆ [[ಗಳಿಸಿದ ಆದಾಯ]]ದ ಪಾಲು, [[ಬಾಲ್ಯ ವಿವಾಹ]],<ref>{{Cite news |title=Child marriages remain Kerala's secret shame |url=https://www.thehindu.com/news/national/kerala/child-marriages-remain-keralas-secret-shame/article7613216.ece |newspaper=The Hindu |date=4 September 2015 |access-date=4 September 2015 |issn=0971-751X}}</ref> [[ಲೈಂಗಿಕ ಕಿರುಕುಳ]] ದೂರುಗಳು ಮತ್ತು ಸೀಮಿತ ಸ್ವಾತಂತ್ರ್ಯದಂತಹ ಕೆಲವು ನಕಾರಾತ್ಮಕ ಅಂಶಗಳು ವರದಿಯಾಗಿವೆ.<ref name="Joseph" /> ಕೇರಳದಲ್ಲಿ ಬಾಲ್ಯ ವಿವಾಹವು ಕಡಿಮೆಯಾಗಿದೆ. ಮಲಪ್ಪುರಂ ಜಿಲ್ಲೆಯು ಅತಿ ಹೆಚ್ಚು ಬಾಲ್ಯ ವಿವಾಹಗಳನ್ನು ಹೊಂದಿದೆ ಮತ್ತು ಅಂತಹ ಪ್ರಕರಣಗಳ ಸಂಖ್ಯೆಯು ಮಲಪ್ಪುರಂನಲ್ಲಿ ಹೆಚ್ಚುತ್ತಿದೆ. ಬಾಲ್ಯ ವಿವಾಹಗಳು ವಿಶೇಷವಾಗಿ [[ಕೇರಳದಲ್ಲಿ ಮುಸ್ಲಿಮರಲ್ಲಿ ಬಾಲ್ಯ ವಿವಾಹ|ಮುಸ್ಲಿಂ ಸಮುದಾಯದಲ್ಲಿ]] ಹೆಚ್ಚಾಗಿದೆ.<ref>{{cite news |last=Naha |first=Abdul Latheef |title=Child marriage cases go up in Malappuram |url=https://www.thehindu.com/news/national/kerala/child-marriage-cases-go-up-in-malappuram/article22751598.ece |date=18 February 2018 |newspaper=The Hindu |access-date=31 December 2019}}</ref><ref>{{Cite web |url=https://www.onmanorama.com/news/kerala/2018/10/26/child-marriages-shoot-up-in-the-most-unlikely-places-in-kerala.html |title=Child marriages shoot up in the most unlikely places in Kerala |website=OnManorama |access-date=2026-08-03 |archive-date=2021-05-08 |archive-url=https://web.archive.org/web/20210508163841/https://www.onmanorama.com/news/kerala/2018/10/26/child-marriages-shoot-up-in-the-most-unlikely-places-in-kerala.html |url-status=dead }}</ref> 2019 ರಲ್ಲಿ, ಕೇರಳವು ಭಾರತದಲ್ಲಿ ಅತಿ ಹೆಚ್ಚು ಮಕ್ಕಳ ಲೈಂಗಿಕ ದುರುಪಯೋಗ ದೂರುಗಳನ್ನು ದಾಖಲಿಸಿತು.<ref>{{cite news |last=Natu |first=Nitasha |title=Kerala No. 1 in child sex abuse complaints; Tamil Nadu, Maharashtra follow |url=https://timesofindia.indiatimes.com/india/kerala-no-1-in-child-sex-abuse-complaints-tamil-nadu-maharashtra-follow/articleshow/72972619.cms |date=25 December 2019 |newspaper=The Time of India |access-date=31 December 2019}}</ref>
2015 ರಲ್ಲಿ, ಕೇರಳವು ಯಾವುದೇ ರಾಜ್ಯದ ಅತಿ ಹೆಚ್ಚು ಶಿಕ್ಷೆಯ ಪ್ರಮಾಣವನ್ನು ಹೊಂದಿತ್ತು, 77% ಕ್ಕಿಂತ ಹೆಚ್ಚು.<ref>{{cite news |url=https://timesofindia.indiatimes.com/india/Conviction-rate-up-Kerala-tops-with-over-77/articleshow/48408220.cms |location=New Delhi, India |work=The Times of India |title=Conviction rate up, Kerala tops with over 77% link |date=9 August 2015 |access-date=14 November 2015}}</ref> ಕೇರಳವು ಗ್ರಾಮೀಣ ಭಾರತದಲ್ಲಿ ಅತಿ ಕಡಿಮೆ ಮನೆಯಿಲ್ಲದ ಜನರ ಪ್ರಮಾಣವನ್ನು ಹೊಂದಿದೆ, <0.1%,<ref>{{cite news |url=https://timesofindia.indiatimes.com/india/Population-of-homeless-in-rural-India-dips/articleshow/26981896.cms |location=India |work=The Times of India |title=Population of homeless in rural India dips |date=7 December 2013 |access-date=14 November 2015}}</ref> ಮತ್ತು ರಾಜ್ಯವು ಮೊದಲ "ಶೂನ್ಯ ಮನೆಯಿಲ್ಲದ ರಾಜ್ಯ" ವಾಗುವ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ, ಇದರ ಜೊತೆಗೆ ಅದರ ಶ್ಲಾಘನೀಯ "ಶೂನ್ಯ ಭೂರಹಿತ ಯೋಜನೆ" ಯನ್ನು ಹೊಂದಿದೆ, ಖಾಸಗಿ ಸಂಸ್ಥೆಗಳು ಮತ್ತು ವಲಸೆ ಮಲಯಾಳಿ ಸಮುದಾಯವು ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸಲು ಯೋಜನೆಗಳಿಗೆ ಹಣಕಾಸು ಒದಗಿಸುತ್ತಿದೆ.<ref>{{cite news |url=https://www.thehindu.com/news/national/kerala/cm-told-to-pursue-zero-homeless-kerala-project/article5309749.ece |location=Pathanamthitta, India |work=The Hindu |title=CM told to pursue Zero Homeless Kerala project link |date=3 November 2013}}</ref> ರಾಜ್ಯವು [[ಭಾರತ ರಾಜ್ಯ ಹಸಿವು ಸೂಚ್ಯಂಕ]]ದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು, ಇದು [[ಪಂಜಾಬ್, ಭಾರತ|ಪಂಜಾಬ್]] ನ ನಂತರದ ಸ್ಥಾನದಲ್ಲಿದೆ. 2015 ರಲ್ಲಿ ಕೇರಳವು ಇ-ಗವರ್ನೆನ್ಸ್ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಮೊದಲ "ಸಂಪೂರ್ಣ ಡಿಜಿಟಲ್ ರಾಜ್ಯ" ವಾಯಿತು.<ref>{{cite news |url=https://timesofindia.indiatimes.com/india/Kerala-becomes-Indias-first-complete-digital-state/articleshow/48494982.cms |location=New Delhi, India |work=The Times of India |title=Kerala-becomes-Indias-first-complete-digital-state link |date=15 August 2015}}</ref>
=== ಆರೋಗ್ಯ ರಕ್ಷಣೆ ===
{{Multiple image
| direction = vertical
| width = 220
| image1 = Regional Cancer Centre, Trivandrum.jpg
| caption1 = [[ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ, ತಿರುವನಂತಪುರ]]
}}
{{See also|ಕೇರಳದ ಸರ್ಕಾರಿ ಆಸ್ಪತ್ರೆಗಳ ಪಟ್ಟಿ}}
ಕೇರಳವು [[ಸಾರ್ವತ್ರಿಕ ಆರೋಗ್ಯ ರಕ್ಷಣೆ]] ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಪ್ರವರ್ತಕವಾಗಿದೆ.<ref>{{cite news |last1=Maya |first1=C |title=The road to universal health care in State |url=https://www.thehindu.com/todays-paper/tp-national/tp-kerala/the-road-to-universal-health-care-in-state/article5450319.ece |access-date=14 November 2015 |work=The Hindu |date=12 December 2013}}</ref> [[ಉಪ-ಬದಲಿ ಫಲವತ್ತತೆ]] ಮಟ್ಟ ಮತ್ತು [[ಶಿಶು ಮರಣ ಪ್ರಮಾಣ]]ವು ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ, ಇದು 12<ref name="Brenkert_Malone_2003" /><ref name="Kutty_2004_6" />{{rp|49}} ರಿಂದ 14<ref name="Krishnaswami_2004">{{Cite book |author=Krishnaswami P |veditors=Neelakantan S, Nair PR, Shaji H |year=2004 |title=Morbidity Study: Incidence, Prevalence, Consequences, and Associates |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621669 |url=https://www.cds.ac.in/krpcds/publication/downloads/63.pdf |access-date=31 December 2008}}</ref>{{rp|5}} ಪ್ರತಿ 1,000 ಜೀವಂತ ಜನನಗಳಿಗೆ ಸಾವುಗಳು ಎಂದು ಅಂದಾಜಿಸಲಾಗಿದೆ; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16 ರ ಪ್ರಕಾರ, ಇದು 6 ಕ್ಕೆ ಇಳಿದಿದೆ.<ref>{{Cite news |url=https://timesofindia.indiatimes.com/india/kerala-as-good-as-us-oecd-in-saving-newborn-children/articleshow/57438366.cms |title=Kerala as good as US, OECD in saving newborn children |work=The Times of India |access-date=9 March 2017}}</ref> [[ಲಿಯಾನ್ ಯಿಂಗ್ ಚೌ|ಲಿಯಾನ್]] ಫೌಂಡೇಶನ್, [[ಸಿಂಗಾಪುರ]]-ಆಧಾರಿತ ಪರೋಪಕಾರಿ ಸಂಸ್ಥೆ, ನಿಯೋಜಿಸಿದ ಅಧ್ಯಯನದ ಪ್ರಕಾರ, ಗಂಭೀರ ಅನಾರೋಗ್ಯದ ರೋಗಿಗಳಿಗೆ ರಾಜ್ಯದ ಉಪಶಮನ ಆರೈಕೆಯನ್ನು ಒದಗಿಸುವ ಆಧಾರದ ಮೇಲೆ ಕೇರಳವನ್ನು ಭಾರತದಲ್ಲಿ ಸಾಯಲು ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗಿದೆ.<ref>{{cite news |last1=Patel |first1=Atish |title=Why Kerala is the best place in India to die |url=https://www.bbc.com/news/world-asia-india-36137285 |date=4 May 2016}}</ref> ಆದಾಗ್ಯೂ, ಕೇರಳದ [[ಅನಾರೋಗ್ಯ ಪ್ರಮಾಣ]]ವು ಯಾವುದೇ ಇತರ ಭಾರತೀಯ ರಾಜ್ಯಕ್ಕಿಂತ ಹೆಚ್ಚಾಗಿದೆ—118 (ಗ್ರಾಮೀಣ) ಮತ್ತು 88 (ನಗರ) ಪ್ರತಿ 1,000 ಜನರಿಗೆ. ಅನುಗುಣವಾದ ಅಂಕಿಅಂಶಗಳು ಅಖಿಲ ಭಾರತಕ್ಕೆ 55 ಮತ್ತು 54 ಪ್ರತಿ 1,000 ಆಗಿತ್ತು 2005ರಂತೆ.<ref name="Krishnaswami_2004" />{{rp|5}} ಕೇರಳದ 13.3% [[ಕಡಿಮೆ ಜನನ ತೂಕ]] [[ಪ್ರಪಂಚದ ಮೊದಲ ರಾಷ್ಟ್ರಗಳಲ್ಲಿ]] ಅನೇಕಕ್ಕಿಂತ ಹೆಚ್ಚಾಗಿದೆ.<ref name="Kutty_2004_6" /> 50% ಕ್ಕಿಂತ ಹೆಚ್ಚು ಜನರು ಅವಲಂಬಿಸಿರುವ 3 ಮಿಲಿಯನ್ [[ನೀರಿನ ಬಾವಿ]]ಗಳ ನಡುವೆ [[ನೀರಿನಿಂದ ಹರಡುವ ರೋಗ]]ಗಳಾದ [[ಅತಿಸಾರ]], [[ಭೇದಿ]], [[ಹೆಪಟೈಟಿಸ್]], ಮತ್ತು [[ಟೈಫಾಯಿಡ್]] ಏಕಾಏಕಿ ಸಮಸ್ಯೆಯು [[ನೈರ್ಮಲ್ಯ ಒಳಚರಂಡಿ|ಒಳಚರಂಡಿ]] ಕೊರತೆಯಿಂದ ಉಲ್ಬಣಗೊಂಡಿದೆ.<ref name="Roy_2004">{{Cite journal |author=Roy MKP |year=2004 |title=Water quality and health status in Kollam Municipality |journal=Centre for Development Studies |url=https://services.iriskf.org/data/articles/Document1168200520.8355524.pdf |access-date=28 December 2008 |archive-date=21 December 2016 |archive-url=https://web.archive.org/web/20161221084934/http://services.iriskf.org/data/articles/Document1168200520.8355524.pdf |url-status=dead }}</ref>{{rp|5–7}} 2017 ರಂತೆ, ರಾಜ್ಯವು ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಮತ್ತು ಭಾರತದಲ್ಲಿ ರೋಗದ ಅತಿ ಹೆಚ್ಚು ಹರಡುವಿಕೆಯ ಪ್ರಮಾಣವನ್ನು ಹೊಂದಿದೆ.<ref>{{Cite web |url=https://timesofindia.indiatimes.com/city/kochi/diabetic-patients-kerala-tops-list-of-indian-states/articleshow/61974164.cms |title=Diabetic patients: Kerala tops list of Indian states |date=8 December 2017 |website=The Times of India |language=en |access-date=28 October 2019}}</ref>
[[ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ]] (UNICEF) ಮತ್ತು [[ವಿಶ್ವ ಆರೋಗ್ಯ ಸಂಸ್ಥೆ]] ಸೂತ್ರಗಳ ಮೇಲೆ ಸ್ತನ್ಯಪಾನದ ಪರಿಣಾಮಕಾರಿ ಪ್ರೋತ್ಸಾಹದಿಂದಾಗಿ ಕೇರಳವನ್ನು ವಿಶ್ವದ ಮೊದಲ "[[ಶಿಶು ಸ್ನೇಹಿ ಆಸ್ಪತ್ರೆ ಉಪಕ್ರಮ|ಶಿಶು-ಸ್ನೇಹಿ]] ರಾಜ್ಯ" ಎಂದು ಗೊತ್ತುಪಡಿಸಿತು.<ref>{{cite web |date=August 2002 |title=Kerala Named World's First WHO-UNICEF "Baby-Friendly State" |work=United Nations Foundation |url=https://www.unwire.org/unwire/20020801/28062_story.asp |archive-url=https://web.archive.org/web/20100306205352/https://www.unwire.org/unwire/20020801/28062_story.asp |archive-date=6 March 2010 |access-date=14 March 2009}}</ref><ref>{{cite news |url=https://news.bbc.co.uk/2/hi/south_asia/2166677.stm |location=Kochi, India |work=BBC News |title=Indian state wins 'baby-friendly' award |date=1 August 2002}}</ref> 95% ಕ್ಕಿಂತ ಹೆಚ್ಚು ಕೇರಳೀಯ ಜನನಗಳು ಆಸ್ಪತ್ರೆಯಲ್ಲಿ ನಡೆಯುತ್ತವೆ ಮತ್ತು ರಾಜ್ಯವು ದೇಶದಲ್ಲಿ ಅತಿ ಕಡಿಮೆ ಶಿಶು ಮರಣ ಪ್ರಮಾಣವನ್ನು ಸಹ ಹೊಂದಿದೆ. ಮೂರನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು 100% ಜನನಗಳು ವೈದ್ಯಕೀಯ ಸೌಲಭ್ಯಗಳಲ್ಲಿ ನಡೆಯುತ್ತಿರುವುದರೊಂದಿಗೆ "ಸಾಂಸ್ಥಿಕ ಪ್ರಸವ" ದಲ್ಲಿ ಕೇರಳವನ್ನು ಮೊದಲ ಸ್ಥಾನದಲ್ಲಿರಿಸುತ್ತದೆ.<ref name="kerala_fact_sheet"/> [[ಆಯುರ್ವೇದ]],<ref name="Unnikrishnan_2004">{{Cite journal |last=Unnikrishnan |first=E |year=2004 |title=''Materia Medica'' of the Local Health Traditions of Payyannur |journal=Centre for Development Studies |url=https://www.cds.ac.in/krpcds/publication/downloads/80.pdf |access-date=22 January 2006}}</ref>{{rp|13}} ''[[ಸಿದ್ಧ]]'', ಮತ್ತು ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯವಾಗಿ ಕಂಡುಬರುವ [[ಸಾಂಪ್ರದಾಯಿಕ ಔಷಧ]] ವಿಧಾನಗಳು, ''ಕಳರಿ'', ''ಮರ್ಮಚಿಕಿತ್ಸ'' ಮತ್ತು ''ವಿಷವೈದ್ಯ'' ಸೇರಿದಂತೆ, ಅಭ್ಯಾಸ ಮಾಡಲಾಗುತ್ತದೆ. [[ಕಣಿಯಾರ್]] ನಂತಹ ಕೆಲವು ವೃತ್ತಿಪರ ಸಮುದಾಯಗಳು ತಮ್ಮ ಸಾಂಪ್ರದಾಯಿಕ ವೃತ್ತಿಯ ಜೊತೆಗೆ ಅಂತಹ ವೈದ್ಯಕೀಯ ವ್ಯವಸ್ಥೆಗಳ ಅಭ್ಯಾಸಕ್ಕೆ ಸಂಬಂಧಿಸಿದಂತೆ ಸ್ಥಳೀಯ ವೈದ್ಯರು ಎಂದು ಕರೆಯಲ್ಪಡುತ್ತಿದ್ದರು.<ref>Angus Stewart, woodburn The Religious attitude: A psychological study of its differentiation, 1927</ref> ಇವುಗಳು ''[[ಗುರುಕುಲ]]'' ಶಿಷ್ಯತ್ವದ ಮೂಲಕ ಪ್ರಚಾರಗೊಳ್ಳುತ್ತವೆ,<ref name="Unnikrishnan_2004" />{{rp|5–6}} ಮತ್ತು ಔಷಧೀಯ ಮತ್ತು ಪರ್ಯಾಯ ಚಿಕಿತ್ಸೆಗಳ ಮಿಶ್ರಣವನ್ನು ಒಳಗೊಂಡಿರುತ್ತವೆ.<ref name="Unnikrishnan_2004" />{{rp|15}} [[ವೈದ್ಯರತ್ನಂ ಪಿ. ಎಸ್. ವಾರಿಯರ್]] 1902 ರಲ್ಲಿ [[ಕೊಟ್ಟಕ್ಕಲ್]] ನಲ್ಲಿ ([[ಮಲಪ್ಪುರಂ]] ನಿಂದ ಸುಮಾರು 10 ಕಿಮೀ) ಸ್ಥಾಪಿಸಿದ ''[[ಆರ್ಯ ವೈದ್ಯ ಸಲಾ]]'' ರಾಜ್ಯದ ಅತಿದೊಡ್ಡ ಆಯುರ್ವೇದ ಔಷಧೀಯ ಜಾಲ ಮತ್ತು ಆರೋಗ್ಯ ಕೇಂದ್ರವಾಗಿದೆ.<ref name="Warrier">{{cite news |url=https://www.thehindu.com/todays-paper/tp-national/pk-warrier-turns-90/article2080601.ece |title=PK Warrier turns 90 |work=The Hindu |date=6 June 2011}}</ref><ref name="Arya Vaidya Sala Kottakkal – Part 1">{{cite AV media |url=https://www.youtube.com/watch?v=nj6YqhsUo0c |archive-url=https://ghostarchive.org/varchive/youtube/20211222/nj6YqhsUo0c |archive-date=22 December 2021 |url-status=live |title=Arya Vaidya Sala Kottakkal – Part 1 |publisher=BBC World – India Business Report |date=30 May 2013 |medium=Documentary}}{{cbignore}}</ref><ref name="mal">{{Cite news |title=അമ്പതിന്റെ നിറവില് മലപ്പുറം; മലപ്പുറത്തിന്റെ മാനവിക മഹാപൈതൃകം |url=https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |last=Leelakrishnan |first=Alamkode |date=17 June 2019 |work=Mathrubhumi |access-date=24 April 2021 |archive-date=7 May 2021 |archive-url=https://web.archive.org/web/20210507091729/https://www.mathrubhumi.com/malappuram/specials/50-years-of-malappuram/alamkode-leelakrishnan-writes-about-malappuram-1.3880292 |url-status=dead}}</ref> ಇದು ವಿಶ್ವದ ಅತಿದೊಡ್ಡ ಆಯುರ್ವೇದ ಔಷಧೀಯ ಬ್ರಾಂಡ್ಗಳಲ್ಲಿ ಒಂದಾಗಿದೆ.<ref name="Warrier" /><ref name="Arya Vaidya Sala Kottakkal – Part 1" /><ref name="mal" />
2014 ರಲ್ಲಿ, ಕೇರಳವು ಸುಕೃತಂ ಎಂಬ ಕಾರ್ಯಕ್ರಮದ ಮೂಲಕ ಬಡವರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುವ ಭಾರತದ ಮೊದಲ ರಾಜ್ಯವಾಯಿತು.<ref>{{cite web |url=https://www.freepressjournal.in/kerala-becomes-first-state-to-provide-free-cancer-treatment/457976 |title=Kerala becomes first state to provide free cancer treatment – Free Press Journal |website=www.freepressjournal.in |access-date=18 May 2016 |date=11 October 2014}}</ref> ಕೇರಳದ ಜನರು [[ಕ್ಯಾನ್ಸರ್]]ಗಳು, [[ಯಕೃತ್ತು]] ಮತ್ತು [[ಮೂತ್ರಪಿಂಡ]] ಕಾಯಿಲೆಗಳ ಹೆಚ್ಚಿನ ಘಟನೆಗಳನ್ನು ಅನುಭವಿಸುತ್ತಾರೆ.<ref>{{Cite web |url=https://www.indushealthplus.com/kerala-health-statistics.html |title=Health Statistics and Public Health issues in Kerala |website=[[Indus Health Plus]] |language=en |access-date=28 October 2019}}</ref> ಏಪ್ರಿಲ್ 2016 ರಲ್ಲಿ, ''ಎಕನಾಮಿಕ್ ಟೈಮ್ಸ್'' 250,000 ನಿವಾಸಿಗಳು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ ಎಂದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 150 ರಿಂದ 200 ಯಕೃತ್ತು ಕಸಿಗಳು ಪ್ರದೇಶದ ಆಸ್ಪತ್ರೆಗಳಲ್ಲಿ ನಡೆಯುತ್ತವೆ ಎಂದು ಸಹ ಇದು ವರದಿ ಮಾಡಿದೆ. ಪ್ರತಿ ವರ್ಷ ಸರಿಸುಮಾರು 42,000 ಕ್ಯಾನ್ಸರ್ ಪ್ರಕರಣಗಳು ಪ್ರದೇಶದಲ್ಲಿ ವರದಿಯಾಗುತ್ತವೆ. ಖಾಸಗಿ ಆಸ್ಪತ್ರೆಗಳು ತಮ್ಮ ಅಂಕಿಅಂಶಗಳನ್ನು ವರದಿ ಮಾಡದಿರಬಹುದು ಎಂದು ಇದು ಕಡಿಮೆ ಅಂದಾಜು ಎಂದು ನಂಬಲಾಗಿದೆ. ಮೂತ್ರಪಿಂಡ ದಾನಕ್ಕೆ ದೀರ್ಘ ಕಾಯುವ ಪಟ್ಟಿಗಳು ಮಾನವ ಮೂತ್ರಪಿಂಡಗಳ ಅಕ್ರಮ ವ್ಯಾಪಾರವನ್ನು ಉತ್ತೇಜಿಸಿದೆ, ಮತ್ತು ಆರ್ಥಿಕವಾಗಿ ಅನನುಕೂಲಕರ ರೋಗಿಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಕಿಡ್ನಿ ಫೆಡರೇಶನ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣವಾಗಿದೆ.<ref>{{Cite news |url=https://economictimes.indiatimes.com/industry/healthcare/biotech/healthcare/health-crisis-in-kerala-the-increase-in-cancer-kidney-and-liver-diseases/articleshow/51950836.cms?intenttarget=no |title=Health crisis in Kerala: The increase in cancer, kidney and liver diseases – The Economic Times |journal=The Economic Times |access-date=18 May 2016 |date=23 April 2016 |last1=Krishnakumar |first1=P. K. |last2=Sanandakumar |first2=S.}}</ref> 2017–18 ರಂತೆ, [[ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಕೇರಳ)|ಆರೋಗ್ಯ ಸೇವೆಗಳ ಇಲಾಖೆ]]ಯಡಿಯಲ್ಲಿ 6,691 ಆಧುನಿಕ ಔಷಧ ಸಂಸ್ಥೆಗಳಿವೆ, ಅವುಗಳಲ್ಲಿ ಒಟ್ಟು ಹಾಸಿಗೆ ಸಾಮರ್ಥ್ಯ 37,843; 15,780 ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 22,063 ನಗರ ಪ್ರದೇಶಗಳಲ್ಲಿ.<ref name="dhs">{{Cite book |title=List of modern medicine institutions (2017–18) |last=Statistics Wing |first=Health Information Cell |publisher=Directorate of Health Services, Government of Kerala |year=2019 |location=Thiruvananthapuram |pages=1, 7 |url=https://dhs.kerala.gov.in/wp-content/uploads/2020/03/list_10052019.pdf}}</ref>
=== ಭಾಷೆ ===
[[File:Language Map of Kerala (2011 Census).svg|thumb|200px|ಜಿಲ್ಲೆಯ ಪ್ರಕಾರ ಭಾಷೆಗಳು:<br> {{col-begin}}
{{col-2}}
'''ಮಲಯಾಳಂ'''
{{legend|#009deb|80–90%}}
{{legend|#0088cc|90–100%}}
{{col-end}}
]]
[[ಮಲಯಾಳಂ]] ಕೇರಳದ ಅಧಿಕೃತ ಭಾಷೆಯಾಗಿದೆ ಮತ್ತು [[ಭಾರತದ ಭಾಷೆಗಳು|ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ]] ಒಂದಾಗಿದೆ.<ref name="thehindu20130524">{{cite news |url=https://www.thehindu.com/todays-paper/tp-national/classical-status-for-malayalam/article4744630.ece |title='Classical' status for Malayalam |work=[[The Hindu]] |date=24 May 2013 |access-date=25 May 2013 |location=Thiruvananthapuram, India}}</ref><ref>{{Cite web |title=Kerala – Principal Language |url=https://archive.india.gov.in/knowindia/state_uts.php?id=73 |url-status=dead |archive-url=https://web.archive.org/web/20200610111356/https://archive.india.gov.in/knowindia/state_uts.php?id=73 |archive-date=10 June 2020 |access-date=27 November 2018 |website=Government of India}}</ref> [[ಇಡುಕ್ಕಿ ಜಿಲ್ಲೆ]] ಮತ್ತು [[ಪಾಲಕ್ಕಾಡ್ ಜಿಲ್ಲೆ]]ಯಲ್ಲಿ ಗಮನಾರ್ಹವಾದ [[ತಮಿಳು ಭಾಷೆ|ತಮಿಳು]] ಮಾತನಾಡುವ ಜನಸಂಖ್ಯೆಯಿದೆ, ಇದು ಕ್ರಮವಾಗಿ ಎರಡು ಜಿಲ್ಲೆಗಳ ಜನಸಂಖ್ಯೆಯ 17.48% ಮತ್ತು 4.8% ರಷ್ಟಿದೆ.<ref name="lg">{{cite web |title=Census of India – Language |url=https://censusindia.gov.in/2011census/C-16.html |website=censusindia.gov.in}}</ref> [[ತುಳು ಭಾಷೆ|ತುಳು]] ಮತ್ತು [[ಕನ್ನಡ]]ವನ್ನು ಮುಖ್ಯವಾಗಿ [[ಕಾಸರಗೋಡು ಜಿಲ್ಲೆ]]ಯ ಉತ್ತರ ಭಾಗಗಳಲ್ಲಿ ಮಾತನಾಡಲಾಗುತ್ತದೆ, ಪ್ರತಿಯೊಂದೂ ಕ್ರಮವಾಗಿ ಜಿಲ್ಲೆಯ ಒಟ್ಟು ಜನಸಂಖ್ಯೆಯ 8.77% ಮತ್ತು 4.23% ರಷ್ಟಿದೆ.<ref name="lg" /><ref>{{cite news |title=Kerala government to appoint officer to study issues of linguistic minorities |url=https://timesofindia.indiatimes.com/city/thiruvananthapuram/government-to-appoint-officer-to-study-issues-of-linguistic-minorities/articleshow/59892625.cms |date=2 August 2017 |newspaper=The Times of India |department=City: Thiruvananthapuram |agency=TNN |access-date=29 December 2019}}</ref>
=== ಧರ್ಮ ===
{{Main|ಕೇರಳದಲ್ಲಿ ಧರ್ಮ}}
{{multiple image
| direction = vertical
| total_width = 200
| caption_align = left
| image1 = Jain temple, Wayanad IMG 3494 by Joseph Lazer.jpg
| caption1 = [[ಸುಲ್ತಾನ್ ಬತ್ತೇರಿ|ಸುಲ್ತಾನ್ ಬತ್ತೇರಿಯ]] [[ಜೈನ ದೇವಾಲಯ, ಕಿಡಂಗನಾಡ್|ಜೈನ ದೇವಾಲಯ]].
| image3 = Cheraman juma masjid Old.jpg
| caption3 = ಮೂಲ [[ಚೇರಮನ್ ಜುಮಾ ಮಸೀದಿ]]ಯ ಮಾದರಿ.
| image4 = Palayoor St. Thomas Syro-Malabar Church.jpg
| caption4 = [[ಸೇಂಟ್ ತಾಮಸ್ ಸಿರೋ-ಮಲಬಾರ್ ಚರ್ಚ್, ಪಾಲಯೂರು]].
}}
{{Pie chart
|thumb = right
|caption = '''ಕೇರಳದಲ್ಲಿ ಧರ್ಮ''' (2011)<ref name="census_2016_religion">{{cite web |url=https://www.censusindia.gov.in/2011census/C-01/DDW00C-01%20MDDS.XLS |title=Population by religious community – 2011 |publisher=Office of the Registrar General & Census Commissioner |work=[[2011 Census of India]] |access-date=25 August 2015 |archive-url=https://web.archive.org/web/20150825155850/https://www.censusindia.gov.in/2011census/C-01/DDW00C-01%20MDDS.XLS |archive-date=25 August 2015}}</ref>
|label1 = [[ಕೇರಳದಲ್ಲಿ ಹಿಂದೂ ಧರ್ಮ|ಹಿಂದೂ ಧರ್ಮ]]
|value1 = 54.73
|color1 = darkorange
|label2 = [[ಕೇರಳದಲ್ಲಿ ಇಸ್ಲಾಂ|ಇಸ್ಲಾಂ]]
|value2 = 26.56
|color2 = Green
|label3 = [[ಕೇರಳದಲ್ಲಿ ಕ್ರಿಶ್ಚಿಯನ್ ಧರ್ಮ|ಕ್ರಿಶ್ಚಿಯನ್ ಧರ್ಮ]]
|value3 = 18.38
|color3 = dodgerblue
|label4 = ಇತರೆ ಅಥವಾ ಯಾವುದೂ ಅಲ್ಲ
|value4 = 0.32
|color4 = grey
}}
[[File:Kerala religions 2011.png|thumb|ಕೇರಳದ ಪ್ರತಿಯೊಂದು ತಾಲೂಕಿನಲ್ಲಿ ಅತ್ಯಂತ ಜನಪ್ರಿಯ ಧರ್ಮದ ಶೇಕಡಾವಾರು]]
ಕೇರಳವು [[ಹಿಂದೂಗಳು]], [[ಮುಸ್ಲಿಮರು]] ಮತ್ತು [[ಕ್ರೈಸ್ತರು]] ರಾಜ್ಯಾದ್ಯಂತ ಗಮನಾರ್ಹ ಜನಸಂಖ್ಯೆಯನ್ನು ಹೊಂದಿರುವ ಧಾರ್ಮಿಕವಾಗಿ ಬಹಳ ವೈವಿಧ್ಯಮಯವಾಗಿದೆ. ಕೇರಳವನ್ನು ಸಾಮಾನ್ಯವಾಗಿ ಭಾರತದ ಅತ್ಯಂತ ವೈವಿಧ್ಯಮಯ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref>{{cite web |url=https://thegroundtruthproject.org/paradox-indias-religiously-diverse-state/ |title=The paradox of India's most religiously diverse state |date=7 April 2019 |publisher=The Ground Truth Project |access-date=7 April 2019}}</ref><ref>{{cite web |url=https://www.huffpost.com/entry/kerala-religion-gender_b_9577234 |title=There's a Place in India Where Religions Coexist Beautifully and Gender Equality Is Unmatched |date=6 April 2016 |publisher=Huffpost |access-date=6 April 2016}}</ref> [[ಹಿಂದೂ ಧರ್ಮ]]ವು ಕೇರಳದಲ್ಲಿ ಅತಿ ವ್ಯಾಪಕವಾಗಿ ಅನುಸರಿಸಲ್ಪಡುವ ನಂಬಿಕೆಯಾಗಿದ್ದು, [[ಇಸ್ಲಾಂ]] ಮತ್ತು [[ಕ್ರಿಶ್ಚಿಯನ್ ಧರ್ಮ]]ಕ್ಕೆ ಗಮನಾರ್ಹ ಸಂಖ್ಯೆಯ ಅನುಯಾಯಿಗಳಿದ್ದಾರೆ. ಭಾರತದ ಉಳಿದ ಭಾಗಗಳಿಗೆ ಹೋಲಿಸಿದರೆ, ಕೇರಳವು ತುಲನಾತ್ಮಕವಾಗಿ ಕಡಿಮೆ [[ಸಂಪ್ರದಾಯವಾದ]]ವನ್ನು ಅನುಭವಿಸುತ್ತದೆ.<ref>{{Cite journal |last=Heller |first=Patrick |title=Social capital as a product of class mobilization and state intervention: Industrial workers in Kerala, India |journal=[[World Development (journal)|World Development]] |volume=24 |issue=6 |pages=1055–1071 |date=June 1996 |doi=10.1016/0305-750X(96)00015-0 <!-- |access-date=4 April 2022 --> |doi-access=free}}</ref> [[2011 ರ ಭಾರತದ ಜನಗಣತಿ]] ಅಂಕಿಅಂಶಗಳ ಪ್ರಕಾರ, ಕೇರಳದ ನಿವಾಸಿಗಳಲ್ಲಿ 54.7% ಹಿಂದೂಗಳು, 26.6% ಮುಸ್ಲಿಮರು, 18.4% ಕ್ರೈಸ್ತರು, ಮತ್ತು ಉಳಿದ 0.3% ರಷ್ಟು ಜನರು ಇನ್ನೊಂದು ಧರ್ಮವನ್ನು ಅನುಸರಿಸುತ್ತಾರೆ ಅಥವಾ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿಲ್ಲ.<ref name="censusindia2011religion">{{cite web |title=Population by religious communities |work=Census of India |url=https://www.censusindia.gov.in/2011census/C-01.html |publisher=Government of India |access-date=26 August 2015}}</ref> [[ಮಲಪ್ಪುರಂ ಜಿಲ್ಲೆ|ಮಲಪ್ಪುರಂ]] ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂಗಳು ಅತಿದೊಡ್ಡ ಧಾರ್ಮಿಕ ಗುಂಪನ್ನು ಪ್ರತಿನಿಧಿಸುತ್ತಾರೆ, ಅಲ್ಲಿ ಅವರು ಮುಸ್ಲಿಮರಿಂದ ಹಿಂದಿಕ್ಕಲ್ಪಟ್ಟಿದ್ದಾರೆ.<ref name="thehindu1">{{cite news |url=https://www.hindu.com/2004/09/23/stories/2004092306010500.htm |archive-url=https://web.archive.org/web/20041128124211/https://www.hindu.com/2004/09/23/stories/2004092306010500.htm |url-status=dead |archive-date=28 November 2004 |location=Chennai, India |title=Increase in Muslim population in the State |date=23 September 2004 |work=[[The Hindu]] |access-date=13 November 2015}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>{{cite news |url=https://timesofindia.indiatimes.com/india/Kerala-not-Goa-has-maximum-no-of-Christians/articleshow/2649158.cms |title=Kerala, not Goa, has maximum no. of Christians |work=The Times of India |date=25 December 2007 |publisher=The Times Group}}</ref> 2016 ರಂತೆ, ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಇತರರು ರಾಜ್ಯದಲ್ಲಿ ಒಟ್ಟು ಜನನಗಳ ಕ್ರಮವಾಗಿ 41.9%, 42.6%, 15.4% ಮತ್ತು 0.2% ರಷ್ಟಿದ್ದಾರೆ.<ref>{{Cite web |url=https://www.ecostat.kerala.gov.in/images/pdf/publications/Vital_Statistics/data/vital_statistics_2016.pdf |title=Vital Statistics 2016 |website=Ecostat, Kerala Government. |access-date=7 June 2019 |archive-date=11 July 2019 |archive-url=https://web.archive.org/web/20190711011809/http://www.ecostat.kerala.gov.in/images/pdf/publications/Vital_Statistics/data/vital_statistics_2016.pdf |url-status=dead}}</ref>
ಇಸ್ಲಾಂ ಕೇರಳಕ್ಕೆ ಬಂದಿತು, ಇದು ದೊಡ್ಡ [[ಹಿಂದೂ ಮಹಾಸಾಗರ]]ದ ಅಂಚಿನ ಭಾಗವಾಗಿದ್ದು, [[ಮಧ್ಯಪ್ರಾಚ್ಯ]]ದಿಂದ ಮಸಾಲೆ ಮತ್ತು ರೇಷ್ಮೆ ವ್ಯಾಪಾರಿಗಳ ಮೂಲಕ ಬಂದಿತು. ಇತಿಹಾಸಕಾರರು ಇಸ್ಲಾಂನ್ನು ಕೇರಳಕ್ಕೆ 7 ನೇ ಶತಮಾನ CE ಯಷ್ಟು ಹಿಂದೆಯೇ ಪರಿಚಯಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ.<ref name="indiatimes3">{{cite web |url=https://timesofindia.indiatimes.com/india/Trade-not-invasion-brought-Islam-to-India/articleshow/2144414.cms |title=Trade, not invasion brought Islam to India |last=Sethi |first=Atul |date=24 June 2007 |work=[[The Times of India]] |access-date=24 September 2014}}</ref><ref name="autogenerated20002">Katz 2000; Koder 1973; Thomas Puthiakunnel 1973; David de Beth Hillel, 1832; Lord, James Henry 1977.</ref> ಗಮನಾರ್ಹವಾಗಿ [[ಚೇರಮನ್ ಪೆರುಮಾಳ್ ತಾಜುದ್ದೀನ್]] ರ ದಂತಕಥೆಯು ಕಂಡುಬಂದಿದೆ, ಇದು [[ಅರೇಬಿಯಾ]]ಕ್ಕೆ ತೆರಳಿ [[ಮುಹಮ್ಮದ್]] ರನ್ನು ಭೇಟಿಯಾದ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪೌರಾಣಿಕ ಹಿಂದೂ ರಾಜನ ಕಥೆಯಾಗಿದೆ.<ref>{{cite book |last1=Varghese |first1=Theresa |title=Stark World Kerala |year=2006 |publisher=Stark World Pub. |isbn=978-8190250511 |url=https://books.google.com/books?id=lDhuAAAAMAAJ&q=cheraman+perumal+tajuddin |language=en}}</ref><ref>{{cite book |last1=Kumar |first1=Satish |title=India's National Security: Annual Review 2009 |year=2012 |url=https://books.google.com/books?id=x-esAgAAQBAJ&q=cheraman+perumal+tajuddin&pg=PA346 |publisher=Routledge |language=en |isbn=978-1-136-70491-8}}</ref><ref>Minu Ittyipe; [[Solomon]] to Cheraman; Outlook Indian Magazine; 2012</ref> ಕೇರಳ ಮುಸ್ಲಿಮರನ್ನು ಸಾಮಾನ್ಯವಾಗಿ [[ಮಲಬಾರ್ ಮುಸ್ಲಿಮರು|ಮಾಪ್ಪಿಲ]] ಎಂದು ಕರೆಯಲಾಗುತ್ತದೆ. ಮಾಪ್ಪಿಲರು ಕೇರಳದ ಮುಸ್ಲಿಂ ಜನಸಂಖ್ಯೆಯನ್ನು ರೂಪಿಸುವ ಅನೇಕ ಸಮುದಾಯಗಳಲ್ಲಿ ಒಂದಾಗಿದೆ.<ref name="KunhaliV2">Kunhali, V. "Muslim Communities in Kerala to 1798" PhD Dissertation Aligarh Muslim University (1986) [https://ir.amu.ac.in/2736/1/T%205242.pdf]</ref><ref name="Divakaruni20112">{{cite book |url=https://books.google.com/books?id=W0wLgfQyvFAC |title=The Palace of Illusions |author=Chitra Divakaruni |year=2011 |publisher=Pan Macmillan |isbn=978-0-330-47865-6 |access-date=18 November 2012}}</ref> [[ಚೇರಮನ್ ಪೆರುಮಾಳ್ಸ್ ದಂತಕಥೆ]]ಯ ಪ್ರಕಾರ, ಮೊದಲ ಭಾರತೀಯ ಮಸೀದಿಯನ್ನು {{CE|624}} ರಲ್ಲಿ [[ಕೊಡುಂಗಲ್ಲೂರು]] ನಲ್ಲಿ [[ಚೇರ ಸಾಮ್ರಾಜ್ಯ]]ದ ಕೊನೆಯ ಆಡಳಿತಗಾರ (ಚೇರಮನ್ ಪೆರುಮಾಳ್) ರ ಆದೇಶದಂತೆ ನಿರ್ಮಿಸಲಾಯಿತು, ಅವರು [[ಮುಹಮ್ಮದ್]] ({{Circa|570}}–632) ರ ಜೀವಿತಾವಧಿಯಲ್ಲಿ ಇಸ್ಲಾಂಗೆ ಮತಾಂತರಗೊಂಡರು.<ref>{{cite book |author=Jonathan Goldstein |title=The Jews of China |publisher=M. E. Sharpe |year=1999 |isbn=978-0-7656-0104-9 |url=https://books.google.com/books?id=8Z6DlzyT2vwC |page=123}}</ref><ref name="SimpsonKresse2008">{{cite book |author1=Edward Simpson |author2=Kai Kresse |title=Struggling with History: Islam and Cosmopolitanism in the Western Indian Ocean |url=https://books.google.com/books?id=w0qHKA7zEaEC&pg=PA333 |access-date=24 July 2012 |year=2008 |publisher=Columbia University Press |isbn=978-0-231-70024-5 |pages=333}}</ref><ref name="Kupferschmidt1987">{{cite book |author=Uri M. Kupferschmidt |url=https://books.google.com/books?id=ChEVAAAAIAAJ&pg=PA458 |title=The Supreme Muslim Council: Islam Under the British Mandate for Palestine |publisher=Brill |year=1987 |isbn=978-9004079298 |pages=458–59 |access-date=25 July 2012 |archive-url=https://web.archive.org/web/20231125191234/https://books.google.com/books?id=ChEVAAAAIAAJ&pg=PA458 |archive-date=25 November 2023 |url-status=live}}</ref><ref name="Raṇṭattāṇi2007">{{cite book |author=Husain Raṇṭattāṇi |title=Mappila Muslims: A Study on Society and Anti Colonial Struggles |url=https://books.google.com/books?id=xlb5BrabQd8C&pg=PA179 |access-date=25 July 2012 |year=2007 |publisher=Other Books |isbn=978-8190388788 |pages=179–}}</ref>
ಪ್ರಾಚೀನ ಕ್ರಿಶ್ಚಿಯನ್ ಸಂಪ್ರದಾಯವು ಕ್ರಿಶ್ಚಿಯನ್ ಧರ್ಮವು 52 CE ಯಲ್ಲಿ [[ಯೇಸು ಕ್ರಿಸ್ತ]]ನ [[ಹನ್ನೆರಡು ಪ್ರೇರಿತರು|ಹನ್ನೆರಡು ಪ್ರೇರಿತರಲ್ಲಿ]] ಒಬ್ಬರಾದ [[ತಾಮಸ್ ಪ್ರೇರಿತ]]ನ ಆಗಮನದೊಂದಿಗೆ ಕೇರಳದ ತೀರವನ್ನು ತಲುಪಿತು ಎಂದು ಹೇಳುತ್ತದೆ.<ref>[https://books.google.com/books?id=lZUBZlth2qgC&q=Muziris ''The Encyclopedia of Christianity, Volume 5''] {{webarchive|url=https://web.archive.org/web/20161226115908/https://books.google.com/books?id=lZUBZlth2qgC&printsec=frontcover&dq=isbn%3A9780802824172&hl=en&sa=X&ei=i5ncVJiVJ4u4uATrlIGoAg&ved=0CB8Q6wEwAA|date=26 December 2016}} by Erwin Fahlbusch. Wm. B. Eerdmans Publishing – 2008. p. 285. {{ISBN|978-0802824172}}.</ref><ref>{{cite book |chapter-url=https://books.google.com/books?id=qhKGPprbQaYC&pg=PA27 |title=The Jews of India: A Story of Three Communities |editor-first=Orpa |editor-last=Slapak |publisher=The Israel Museum |location=Jerusalem |year=2003 |page=27 |isbn=9652781797 |chapter=The Cochin Jews Of Kerala |first=Barbara C. |last=Johnson}}</ref><ref name="Encyclopædia Britannica">{{cite web |url=https://www.britannica.com/EBchecked/topic/592851/Saint-Thomas |title=Saint Thomas |website=Encyclopædia Britannica |date=1 January 2019}}</ref><ref name="Menachery">Menachery G; 1973, 1998; Mundalan, A. M; 1984; Podipara, Placid J. 1970; Leslie Brown, 1956</ref> [[ಸೇಂಟ್ ತಾಮಸ್ ಕ್ರೈಸ್ತರು]] [[ಸಿರೋ-ಮಲಬಾರ್ ಚರ್ಚ್|ಸಿರೋ-ಮಲಬಾರ್ ಕ್ಯಾಥೋಲಿಕ್]],<ref name="Ponnumuthan1996">{{cite book |author=Selvister Ponnumuthan |title=Authentic Interpretation in Canon Law: Reflections on a Distinctively Canonical Institution |url=https://books.google.com/books?id=zcedqS4jOusC&pg=PA103 |access-date=18 November 2012 |year=1996 |publisher=Gregorian&Biblical BookShop |isbn=978-8876527210 |pages=103–}}</ref> [[ಸಿರೋ-ಮಲಂಕರ ಕ್ಯಾಥೋಲಿಕ್ ಚರ್ಚ್|ಸಿರೋ-ಮಲಂಕರ ಕ್ಯಾಥೋಲಿಕ್]],<ref name="Williams1996">{{cite book |author=Raymond Brady Williams |title=Christian Pluralism in the United States: The Indian Immigrant Experience |url=https://books.google.com/books?id=w1uk6zZQKzAC&pg=PA144 |access-date=18 November 2012 |year=1996 |publisher=Cambridge University Press |isbn=978-0-521-57016-9 |pages=144–}}</ref> [[ಜಾಕೋಬೈಟ್ ಸಿರಿಯನ್ ಕ್ರಿಶ್ಚಿಯನ್ ಚರ್ಚ್]],<ref name="AndersonTang2005">{{cite book |author1=Allan Anderson |author2=Edmond Tang |title=Asian and Pentecostal: The Charismatic Face of Christianity in Asia |url=https://books.google.com/books?id=LDZgKELq7AoC&pg=PA248 |access-date=18 November 2012 |year=2005 |publisher=OCMS |isbn=978-1-870345-43-9 |pages=248–}}</ref> [[ಮಾರ್ ತೋಮಾ ಸಿರಿಯನ್ ಚರ್ಚ್]],<ref>{{Cite book |title=John Anthony McGuckin (15 December 2010). The Encyclopedia of Eastern Orthodox Christianity. pp. 377–. Retrieved 18 November 2012. |publisher=John Wiley & Sons. |isbn=978-1-4443-9254-8 |year=2010}}</ref> [[ಮಲಂಕರ ಓರ್ಥೊಡಾಕ್ಸ್ ಸಿರಿಯನ್ ಚರ್ಚ್]],<ref name="Russell2010">{{cite book |author=Thomas Arthur Russell |title=Comparative Christianity: A Student's Guide to a Religion and Its Diverse Traditions |url=https://books.google.com/books?id=FmMarHDbglgC&pg=PT40 |access-date=18 November 2012 |year=2010 |publisher=Universal-Publishers |isbn=978-1-59942-877-2 |pages=40–}}</ref> [[CSI|CSI]] ಯ [[ಸೇಂಟ್ ತಾಮಸ್ ಆಂಗ್ಲಿಕನ್ನರು|ಸಿರಿಯನ್ ಆಂಗ್ಲಿಕನ್ನರು]]<ref>{{cite book |author=Stephen Neill |title=A History of Christianity in India: 1707–1858 |url=https://books.google.com/books?id=Xi-tvrYbYxMC&pg=PA240 |access-date=31 August 2012 |year=2002 |publisher=Cambridge University Press |isbn=978-0-521-89332-9 |pages=247–251}}</ref> ಮತ್ತು [[ಪೆಂಟೆಕೋಸ್ಟಲ್ ಸೇಂಟ್ ತಾಮಸ್ ಕ್ರೈಸ್ತರು]]<ref>{{cite book |last1=Bergunder |first1=Michael |title=The South Indian Pentecostal Movement in the Twentieth Century |year=2008 |publisher=Wm. B. Eerdmans Publishing |isbn=978-0-8028-2734-0 |pages=15–16, 26–30, 37–57 |url=https://books.google.com/books?id=XGiv3riaunQC&q=Pentecostal+evangelical+saint+thomas+syrian+christian |language=en}}</ref> ಸೇರಿದ್ದಾರೆ. ಕೇರಳದಲ್ಲಿ [[ಲ್ಯಾಟಿನ್ ಚರ್ಚ್|ಲ್ಯಾಟಿನ್ ಕ್ಯಾಥೋಲಿಕ್]] ಕ್ರೈಸ್ತರ ಮೂಲವು 16 ನೇ ಶತಮಾನದಲ್ಲಿ ಪೋರ್ಚುಗೀಸ್ [[ಪಡ್ರೊಡೊ]]ನ ಮಿಷನರಿ ಪ್ರಯತ್ನಗಳ ಪರಿಣಾಮವಾಗಿದೆ.<ref name="autogenerated1">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA192 |access-date=18 November 2012 |year=2007 |publisher=DC Books |isbn=978-8126415786 |pages=192–}}</ref><ref name="RakRaj2008">{{cite book |author1=Knut A. Jacobsen, Selva J. Rak |author2=Selva J. Raj |title=South Asian Christian Diaspora: Invisible Diaspora in Europe and North America |url=https://books.google.com/books?id=6L5MxlMIcG0C&pg=PA172 |access-date=18 November 2012 |year=2008 |publisher=Ashgate Publishing, Ltd. |isbn=978-0-7546-6261-7 |pages=172–}}</ref><ref name="Subramanian2009">{{cite book |author=Ajantha Subramanian |title=Shorelines: Space and Rights in South India |url=https://books.google.com/books?id=lsd55y4KbeYC&pg=PA95 |access-date=18 November 2012 |year=2009 |publisher=Stanford University Press |isbn=978-0-8047-8685-0 |pages=95–}}</ref> ವಸಾಹತುಶಾಹಿ ವಲಸಿಗರೊಂದಿಗೆ ಶತಮಾನಗಳ ಮಿಶ್ರಣದ ಪರಿಣಾಮವಾಗಿ, ಪೋರ್ಚುಗೀಸ್, ಡಚ್, ಫ್ರೆಂಚ್, ಬ್ರಿಟಿಷ್ ಮತ್ತು ಇತರ ಯುರೋಪಿಯನ್ನರಿಂದ ಪ್ರಾರಂಭಿಸಿ, ಕೇರಳದಲ್ಲಿ ಮಿಶ್ರ ಯುರೋಪಿಯನ್ ಮತ್ತು ಭಾರತೀಯ ಪೋಷಕತ್ವ ಅಥವಾ ಪೂರ್ವಜರ ಆಂಗ್ಲೋ-ಇಂಡಿಯನ್ ಸಮುದಾಯವಿದೆ. ಕೇರಳವು ಭಾರತದ ಎಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು ಕ್ರೈಸ್ತರ ಜನಸಂಖ್ಯೆಯನ್ನು ಹೊಂದಿದೆ.<ref>Singh, Anjana. "Fort Cochin in Kerala 1750–1830 The Social Condition of a Dutch Community in an Indian Milieu." Brill, Leiden Boston: 2010, 3: 92.</ref>
[[ಯಹೂದಿ ಧರ್ಮ]]ವು 10 ನೇ ಶತಮಾನ BCE ಯಲ್ಲಿ [[ಸೊಲೊಮನ್|ರಾಜ ಸೊಲೊಮನ್]] ಕಾಲದಲ್ಲಿ ಕೇರಳವನ್ನು ತಲುಪಿತು.<ref>Weil, Shalva. "Jews in India." in M.Avrum Erlich (ed.) ''Encyclopedia of the Jewish Diaspora'', Santa Barbara, CA: ABC CLIO. 2008, 3: 1204–12.</ref> ಅವರನ್ನು [[ಕೊಚ್ಚಿ ಯಹೂದಿಗಳು]] ಅಥವಾ ಮಲಬಾರ್ ಯಹೂದಿಗಳು ಎಂದು ಕರೆಯಲಾಗುತ್ತದೆ ಮತ್ತು ಅವರು [[ಭಾರತದಲ್ಲಿ ಯಹೂದಿಗಳ ಇತಿಹಾಸ|ಭಾರತದಲ್ಲಿ ಅತ್ಯಂತ ಹಳೆಯ ಯಹೂದಿಗಳ ಗುಂಪು]] ಆಗಿದ್ದಾರೆ.<ref>[https://books.google.com/books?id=qhKGPprbQaYC&q=two+millennia ''The Israelis (Jews) of India: A Story of Three Communities''] {{webarchive|url=https://web.archive.org/web/20161226115854/https://books.google.com/books?id=qhKGPprbQaYC&printsec=frontcover&dq=isbn%3A9652781797&hl=en&sa=X&ei=UNa1VM-AFc_kuQSLiYLIAQ&ved=0CB8Q6wEwAA|date=26 December 2016}} by Orpa Slapak. The Israel Museum, Jerusalem. 2003. p. 27. {{ISBN|978-9652781796}}.</ref><ref>Weil, Shalva. India's Jewish Heritage: Ritual, Art and Life-Cycle, Mumbai: Marg Publications, 2009. [first published in 2002; 3rd edn.]. Katz 200/*Religion */ 0; Koder 1973; Menachery 1998</ref> 20 ನೇ ಶತಮಾನದವರೆಗೆ ಕೇರಳದಲ್ಲಿ ಗಮನಾರ್ಹವಾದ ಯಹೂದಿ ಸಮುದಾಯವು ಅಸ್ತಿತ್ವದಲ್ಲಿತ್ತು, ಅವರಲ್ಲಿ ಹೆಚ್ಚಿನವರು [[ಅಲಿಯಾ|ಇಸ್ರೇಲ್ಗೆ ವಲಸೆ]] ಹೋದರು.<ref name="Roland1998">{{cite book |author=Joan G. Roland |title=The Jewish Communities of India: Identity in a Colonial Era |url=https://books.google.com/books?id=kHJccZ92IecC&pg=PA283 |access-date=18 November 2012 |year=1998 |publisher=Transaction Publishers |isbn=978-0-7658-0439-6 |pages=283–}}</ref> [[ಕೊಚ್ಚಿ ಸಿನಾಗೋಗ್|ಪರದೇಶಿ ಸಿನಾಗೋಗ್]] [[ಕೊಚ್ಚಿ|ಕೊಚ್ಚಿಯಲ್ಲಿ]] [[ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ]] ಅತ್ಯಂತ ಹಳೆಯ ಸಿನಾಗೋಗ್ ಆಗಿದೆ.<ref>{{cite web |title=Paradesi Synagogue – tourist attractions at Mattancherry, Ernakulam Kerala Tourism |url=https://www.keralatourism.org/kochi/paradeso-synagogue-mattancherry.php |website=www.keralatourism.org}}</ref> [[ಕೇರಳದಲ್ಲಿ ಜೈನ ಧರ್ಮ|ಜೈನ ಧರ್ಮ]]ವು [[ವಯನಾಡು ಜಿಲ್ಲೆ]]ಯಲ್ಲಿ ಗಣನೀಯ ಅನುಯಾಯಿಗಳನ್ನು ಹೊಂದಿದೆ.<ref name="LockieCarpenter2012">{{cite book |author1=Stewart Lockie |author2=David Carpenter |title=Agriculture, Biodiversity and Markets: Livelihoods and Agroecology in Comparative Perspective |url=https://books.google.com/books?id=cZvlmpwviuMC&pg=PT258 |access-date=18 November 2012 |year=2012 |publisher=Routledge |isbn=978-1-136-54649-5 |page=258}}</ref><ref name="MathewBaviskar2009">{{cite book |author1=George Mathew |author2=B S Baviskar |title=Inclusion and Exclusion in Local Governance: Field Studies from Rural India |url=https://books.google.com/books?id=DsDOrvROzPEC&pg=PA204 |access-date=18 November 2012 |year=2009 |publisher=Sage Publications |isbn=978-8178298603 |page=204}}</ref>
== ಶಿಕ್ಷಣ ==
{{Main|ಕೇರಳದಲ್ಲಿ ಶಿಕ್ಷಣ}}
{{multiple image
<!-- Layout parameters -->| align = <!-- right (default), left, centre, none -->
| direction = vertical
| width = 225
<!--image1-->| image1 = University of Kerala.jpg
| caption1 = [[ತಿರುವನಂತಪುರ|ತಿರುವನಂತಪುರದ]] [[ಕೇರಳ ವಿಶ್ವವಿದ್ಯಾಲಯ]]
<!--image 2-->}}
[[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]] 14 ಮತ್ತು 16 ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದಿತು. ಖಗೋಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಕೇರಳ ಶಾಲೆಯು ಸ್ವತಂತ್ರವಾಗಿ ಹಲವಾರು ಪ್ರಮುಖ ಗಣಿತ ಪರಿಕಲ್ಪನೆಗಳನ್ನು ರಚಿಸಿತು, ಇವುಗಳಲ್ಲಿ ತ್ರಿಕೋನಮಿತಿಯ ಕಾರ್ಯಗಳಿಗಾಗಿ [[ಸರಣಿ ವಿಸ್ತರಣೆ]] ಸೇರಿದೆ.<ref name="roy">{{cite journal |last=Roy |first=Ranjan |year=1990 |title=Discovery of the Series Formula for π by Leibniz, Gregory, and Nilakantha |url=https://archive.org/details/sim_mathematics-magazine_1990-12_63_5/page/291 |journal=Mathematics Magazine |volume=63 |issue=5 |pages=291–306 |doi=10.2307/2690896 |jstor=2690896}}</ref><ref>{{Citation |last=Pingree |first=David |author-link=David Pingree |title=Hellenophilia versus the History of Science |year=1992 |journal=Isis |volume=83 |issue=4 |pages=554–63 |jstor=234257 |doi=10.1086/356288 |quote=One example I can give you relates to the Indian Mādhava's demonstration, in about 1400 A.D., of the infinite power series of trigonometrical functions using geometrical and algebraic arguments. When this was first described in English by Charles Whish, in the 1830s, it was heralded as the Indians' discovery of the calculus. This claim and Mādhava's achievements were ignored by Western historians, presumably at first because they could not admit that an Indian discovered the calculus, but later because no one read anymore the ''Transactions of the Royal Asiatic Society'', in which Whish's article was published. The matter resurfaced in the 1950s, and now we have the Sanskrit texts properly edited, and we understand the clever way that Mādhava derived the series ''without'' the calculus, but many historians still find it impossible to conceive of the problem and its solution in terms of anything other than the calculus and proclaim that the calculus is what Mādhava found. In this case, the elegance and brilliance of Mādhava's mathematics are being distorted as they are buried under the current mathematical solution to a problem to which he discovered an alternate and powerful solution. |bibcode=1992Isis...83..554P |s2cid=68570164}}</ref> 19 ನೇ ಶತಮಾನದ ಆರಂಭಿಕ ದಶಕಗಳಲ್ಲಿ, ಕೇರಳದ ಆಧುನಿಕ ಶೈಕ್ಷಣಿಕ ಪರಿವರ್ತನೆಯು ಸಾಮೂಹಿಕ ಶಿಕ್ಷಣವನ್ನು ಉತ್ತೇಜಿಸಲು [[ಚರ್ಚ್ ಮಿಷನ್ ಸೊಸೈಟಿ]] ಮಿಷನರಿಗಳ ಪ್ರಯತ್ನಗಳಿಂದ ಪ್ರೇರೇಪಿಸಲ್ಪಟ್ಟಿತು.<ref>{{cite news |title=Missionaries led State to renaissance: Pinarayi |newspaper=The Hindu |date=13 November 2016 |url=https://www.thehindu.com/news/national/kerala/Missionaries-led-State-to-renaissance-Pinarayi/article16444369.ece |quote=Inaugurating on Saturday the valedictory of the bicentenary celebration of the arrival of Church Mission Society (CMS) missionaries to the shores of Kerala, Mr. Vijayan said it was their pioneering work in the fields of education, literature, printing, publishing, women's education, education of the differently-abled and, in general, a new social approach through the inclusion of marginalised sections into the mainstream which brought the idea of 'equality' into the realm of public consciousness. This had raised the standard of public consciousness and paved the way for the emergence of the renaissance movements in the State.}}</ref><ref>{{cite web |title=Kerala to celebrate CMS mission |url=https://churchmissionsociety.org/our-stories/kerala-celebrate-cms-mission |date=9 November 2016 |website=Church Mission Society |access-date=4 April 2022 |quote=Indian President Pranab Mukherjee, visited CMS College in Kerala, the oldest college in India, and laid the foundation stone of the bicentenary block. He said, 'CMS college is a pioneer of modern education in Kerala. It has been the source of strong currents of knowledge and critical inquiry that have moulded the scholastic and socio-cultural landscape of Kerala and propelled the State to the forefront of social development.'{{hsp}} }}</ref><ref>{{Cite journal |last1=Mathew |first1=E. T. |url=https://www.epw.in/journal/1999/39/special-articles/growth-literacy-kerala.html |title=Growth of Literacy in Kerala |date=5 June 2015 |journal=Economic and Political Weekly |volume=34 |issue=1999 |pages=7–8 |via=www.epw.in}}</ref><ref>{{cite book |title=District Handbooks of Kerala |url=https://www.kerala.gov.in/district_handbook/Kottayam.pdf |date=March 2003 |archive-url=https://web.archive.org/web/20090319183020/https://www.kerala.gov.in/district_handbook/Kottayam.pdf |archive-date=19 March 2009 |url-status=dead |pages=19–20 |publisher=Department of Information & Public Relations Government of Kerala |access-date=4 April 2022}}</ref><ref>{{cite book |last=Menon |first=Sreedhara |title=A survey of Kerala History |year=1996 |publisher=S.Viswanathan Printers and Publishers |location=Madras |pages=339, 348–49 |isbn=978-8126415786 |url=https://onlinestore.dcbooks.com/books/a-survey-of-kerala-history |access-date=20 March 2019 |archive-date=24 August 2019 |archive-url=https://web.archive.org/web/20190824143707/https://onlinestore.dcbooks.com/books/a-survey-of-kerala-history |url-status=dead}}</ref> 1854 ರ [[ವುಡ್ಸ್ ಡೆಸ್ಪ್ಯಾಚ್]] ನ ಶಿಫಾರಸುಗಳನ್ನು ಅನುಸರಿಸಿ, ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು ಮುಖ್ಯವಾಗಿ ಜಾತಿಗಳು ಮತ್ತು ಸಮುದಾಯಗಳ ಆಧಾರದ ಮೇಲೆ ಸಾಮೂಹಿಕ ಶಿಕ್ಷಣ ಅಭಿಯಾನಗಳನ್ನು ಪ್ರಾರಂಭಿಸಿದವು ಮತ್ತು ಹೆಚ್ಚು ಖಾಸಗಿ ಉಪಕ್ರಮಗಳನ್ನು ಆಕರ್ಷಿಸಲು [[ಅನುದಾನ-ಸಹಾಯ]] ವ್ಯವಸ್ಥೆಯನ್ನು ಪರಿಚಯಿಸಿದವು.<ref name="Devrep53-58" /> [[ಸೇಂಟ್ ತಾಮಸ್ ಕಾಲೇಜು, ತೃಶೂರ್|ಸೇಂಟ್ ತಾಮಸ್ ಕಾಲೇಜು ತೃಶೂರ್]] ಮತ್ತು [[ಸೇಂಟ್ ಬರ್ಚ್ಮನ್ಸ್ ಕಾಲೇಜು|ಎಸ್ಬಿ ಕಾಲೇಜು ಚಂಗನಾಶ್ಶೇರಿ]] ನಂತಹ ಕ್ಯಾಥೋಲಿಕ್ ಸಂಸ್ಥೆಗಳನ್ನು ಕ್ಯಾಥೋಲಿಕ್ ಚರ್ಚ್ನ ನೇತೃತ್ವದಲ್ಲಿ ಸ್ಥಾಪಿಸಲಾಯಿತು. [[ಕುರಿಯಾಕೋಸ್ ಎಲಿಯಾಸ್ ಚಾವರ|ಫಾ. ಕುರಿಯಾಕೋಸ್ ಎಲಿಯಾಸ್ ಚಾವರ]], [[ಚಾರ್ಲ್ಸ್ ಲಾವಿಗ್ನೆ|ಮಾರ್ ಚಾರ್ಲ್ಸ್ ಲಾವಿಗ್ನೆ SJ]], [[ಆಯ್ಯಾ ವೈಕುಂಡರ್|ವೈಕುಂಡ ಸ್ವಾಮಿ]], [[ನಾರಾಯಣ ಗುರು]] ಮತ್ತು [[ಅಯ್ಯಂಕಾಳಿ]] ರಂತಹ ನಾಯಕರ ಪ್ರಯತ್ನಗಳು ರಾಜ್ಯದಲ್ಲಿ ಸಾಮಾಜಿಕವಾಗಿ ತಾರತಮ್ಯಕ್ಕೊಳಗಾದ ಜಾತಿಗಳಿಗೆ ಸಹಾಯ ಮಾಡುವಲ್ಲಿ—[[ನಾಯರ್ ಸೇವಾ ಸೊಸೈಟಿ]], [[ಶ್ರೀ ನಾರಾಯಣ ಟ್ರಸ್ಟ್|ಎಸ್ಎನ್ಡಿಪಿ]], [[ಮುಸ್ಲಿಂ ಶೈಕ್ಷಣಿಕ ಸೊಸೈಟಿ]], ಮುಸ್ಲಿಂ ಮಹಾಜನ ಸಭಾ, ಯೋಗ ಕ್ಷೇಮ ಸಭಾ (ನಂಬೂದಿರಿಗಳ) ಮತ್ತು ಕ್ರಿಶ್ಚಿಯನ್ ಚರ್ಚುಗಳ ಸಭೆಗಳಂತಹ ಸಮುದಾಯ-ಆಧಾರಿತ ಸಂಸ್ಥೆಗಳ ಸಹಾಯದಿಂದ—ಕೇರಳದಲ್ಲಿ ಸಾಮೂಹಿಕ ಶಿಕ್ಷಣದ ಮತ್ತಷ್ಟು ಅಭಿವೃದ್ಧಿಗೆ ಕಾರಣವಾಯಿತು.<ref name="Devrep53-58">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=53–58 |access-date=30 May 2015}}</ref>
1991 ರಲ್ಲಿ, ಕೇರಳವು ಸಂಪೂರ್ಣವಾಗಿ ಸಾಕ್ಷರವೆಂದು ಗುರುತಿಸಲ್ಪಟ್ಟ ಭಾರತದ ಮೊದಲ ರಾಜ್ಯವಾಯಿತು, ಆ ಸಮಯದಲ್ಲಿ ಪರಿಣಾಮಕಾರಿ ಸಾಕ್ಷರತಾ ಪ್ರಮಾಣವು ಕೇವಲ 90% ಆಗಿತ್ತು.<ref name="Soundarapandian2000">{{cite book |author=Mookkiah Soundarapandian |title=Literacy Campaign in India |url=https://books.google.com/books?id=KVhHEC449yoC&pg=PA21 |year=2000 |publisher=Discovery Publishing House |isbn=978-8171415533 |page=21}}</ref> 2006–2007 ರಲ್ಲಿ, ರಾಜ್ಯವು ಭಾರತದ 21 ಪ್ರಮುಖ ರಾಜ್ಯಗಳಲ್ಲಿ ಶಿಕ್ಷಣ ಅಭಿವೃದ್ಧಿ ಸೂಚ್ಯಂಕದಲ್ಲಿ (EDI) ಅಗ್ರಸ್ಥಾನದಲ್ಲಿತ್ತು.<ref>{{Cite news |author=D Suresh Kumar |url=https://timesofindia.indiatimes.com/india/Kerala-tops-primary-education-index/articleshow/3587924.cms |title=Kerala tops primary education index |work=The Times of India |date=13 October 2008 |access-date=30 July 2009}}</ref> ೨೦೦೭ ರಂತೆ, ಪ್ರಾಥಮಿಕ ಶಿಕ್ಷಣದಲ್ಲಿ ದಾಖಲಾತಿಯು ಸುಮಾರು 100% ಆಗಿತ್ತು; ಮತ್ತು, ಭಾರತದ ಇತರ ರಾಜ್ಯಗಳಿಗಿಂತ ಭಿನ್ನವಾಗಿ, ಶೈಕ್ಷಣಿಕ ಅವಕಾಶವು ಲಿಂಗಗಳು, ಸಾಮಾಜಿಕ ಗುಂಪುಗಳು ಮತ್ತು ಪ್ರದೇಶಗಳ ನಡುವೆ ಸುಮಾರು ಸಮಾನವಾಗಿ ಹಂಚಿಕೆಯಾಗಿತ್ತು.<ref name="Devrep255-258">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |pages=255–58 |access-date=30 May 2015}}</ref> 2011 ರ ಜನಗಣತಿಯ ಪ್ರಕಾರ, ಕೇರಳವು 93.9% ಸಾಕ್ಷರತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸಾಕ್ಷರತಾ ಪ್ರಮಾಣ 74.0% ಕ್ಕೆ ಹೋಲಿಸಿದರೆ.<ref name="IBNLiteracy2013">{{cite news |title=Tripura tops literacy rate with 94.65 per cent, leaves behind Kerala |url=https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |archive-url=https://web.archive.org/web/20130913005546/https://ibnlive.in.com/news/tripura-tops-literacy-rate-with-with-9465-per-cent-leaves-behind-kerala/420560-3-224.html |url-status=dead |archive-date=13 September 2013 |access-date=12 February 2015 |work=IBNLive |date=9 September 2013}}</ref> ಜನವರಿ 2016 ರಲ್ಲಿ, ಕೇರಳವು ತನ್ನ ''ಅಥುಲ್ಯಂ'' ಸಾಕ್ಷರತಾ ಕಾರ್ಯಕ್ರಮದ ಮೂಲಕ 100% ಪ್ರಾಥಮಿಕ ಶಿಕ್ಷಣವನ್ನು ಸಾಧಿಸಿದ ಭಾರತದ ಮೊದಲ ರಾಜ್ಯವಾಯಿತು.<ref>{{cite news |url=https://www.ibtimes.co.in/kerala-becomes-1st-indian-state-achieve-100-primary-education-662878 |title=Kerala becomes 1st Indian state to achieve 100% primary education |date=12 January 2016 |access-date=14 January 2016 |work=International Business Times}}</ref>
ರಾಜ್ಯದ ಶಾಲೆಗಳಲ್ಲಿ ಪ್ರಚಲಿತದಲ್ಲಿರುವ ಶಿಕ್ಷಣ ವ್ಯವಸ್ಥೆಯು 10-ವರ್ಷದ ಅಧ್ಯಯನದ ಆರಂಭಿಕ ಕೋರ್ಸ್ ಅನ್ನು ನಿರ್ದಿಷ್ಟಪಡಿಸುತ್ತದೆ, ಇದನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ: ಕೆಳಗಿನ ಪ್ರಾಥಮಿಕ, ಮೇಲಿನ ಪ್ರಾಥಮಿಕ, ಮತ್ತು ಮಾಧ್ಯಮಿಕ ಶಾಲೆ—''4+3+3'' ಎಂದು ಕರೆಯಲ್ಪಡುತ್ತದೆ, ಇದು ಪ್ರತಿ ಹಂತದ ವರ್ಷಗಳ ಸಂಖ್ಯೆಯನ್ನು ಸೂಚಿಸುತ್ತದೆ.<ref name="Devrep255-258" /> ಮೊದಲ 10 ವರ್ಷಗಳ ಶಾಲಾ ಶಿಕ್ಷಣದ ನಂತರ, ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ಪ್ರಮುಖ ವಿಷಯಗಳಲ್ಲಿ ಒಂದರಲ್ಲಿ—[[ಉದಾರ ಕಲೆಗಳು]], ವಾಣಿಜ್ಯ, ಅಥವಾ ವಿಜ್ಞಾನ—[[ಜೂನಿಯರ್ ಕಾಲೇಜು|ಹೈಯರ್ ಸೆಕೆಂಡರಿ ಶಾಲಾ]] ಶಿಕ್ಷಣಕ್ಕೆ ದಾಖಲಾಗುತ್ತಾರೆ.<ref name="Edu_Ker" /> ಹೆಚ್ಚಿನ ಸರ್ಕಾರಿ ಶಾಲೆಗಳು [[ಕೇರಳ ಬೋರ್ಡ್ ಆಫ್ ಪಬ್ಲಿಕ್ ಎಕ್ಸಾಮಿನೇಷನ್]] ನೊಂದಿಗೆ ಸಂಯೋಜಿತವಾಗಿವೆ.<ref>{{Cite web |url=https://sametham.kite.kerala.gov.in/ |title=Kerala School Data Bank |access-date=5 December 2020 |website=sametham.kite.kerala.gov.in |publisher=Government of Kerala}}</ref> ಇತರ ಶೈಕ್ಷಣಿಕ ಮಂಡಳಿಗಳೆಂದರೆ [[ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ]] (ICSE), [[ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ]] (CBSE), ಮತ್ತು [[ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ]] (NIOS).<ref name="Edu_Ker">{{cite web |title=Education in Kerala |url=https://india.gov.in/knowindia/state_uts.php?id=54 |archive-url=https://web.archive.org/web/20111218082340/https://india.gov.in/knowindia/state_uts.php?id=54 |archive-date=18 December 2011 |publisher=Government of India |access-date=30 May 2015}}</ref>
== ಸಂಸ್ಕೃತಿ ==
{{Main|ಕೇರಳದ ಸಂಸ್ಕೃತಿ}}
{{Multiple image
| direction = vertical
| width = 220
| image1 = Kathakali BNC.jpg
| alt1 = Kathakali Performance
| caption1 = ಒಬ್ಬ [[ಕಥಕ್ಕಳಿ]] ಕಲಾವಿದ
| image4 = 5 image collage of floral arrangement during the Hindu festival of Onam Kerala.jpg
| alt4 = Pookkalam
| caption4 = [[ಓಣಂ]] ಸಮಯದಲ್ಲಿ, ಕೇರಳದ ಅತಿದೊಡ್ಡ ಆಚರಣೆ, ಕೇರಳೀಯರು ತಮ್ಮ ಮನೆಗಳ ಮುಂದೆ ''ಪೂಕ್ಕಲಂ'' (ಹೂವಿನ ಕಾರ್ಪೆಟ್) ವಿನ್ಯಾಸಗಳನ್ನು ರಚಿಸುತ್ತಾರೆ.
| image5 = ThrissurPooram-Kuda.jpg
| alt5 = Thrissur Pooram festival
| caption5 = [[ತೃಶೂರ್ ಪೂರಂ]] ಹಬ್ಬ
| image6 = Mohiniyattam at Kerala School Kalolsavam 2019 02.jpg
| alt6 = Mohiniattam
| caption6 = ಒಂದು ''[[ಮೋಹಿನಿಯಾಟ್ಟಂ]]'' ಪ್ರದರ್ಶನ
| image8 = sadhya DSW.jpg
| caption8 = ಓಣಂ [[ಸಾಧ್ಯ]]
| total_width =
}}
ಕೇರಳದ ಸಂಸ್ಕೃತಿಯು ಮಿಶ್ರ ಮತ್ತು ವಿಶ್ವವ್ಯಾಪಿ ಸ್ವರೂಪದ್ದಾಗಿದೆ ಮತ್ತು ಇದು [[ಭಾರತೀಯ ಸಂಸ್ಕೃತಿ]]ಯ ಅವಿಭಾಜ್ಯ ಅಂಗವಾಗಿದೆ.<ref name="Menon3">{{cite book |title=Cultural Heritage of Kerala |author=A. Sreedhara Menon |publisher=D C Books |year=2008 |isbn=978-8126419036 |pages=13–15 |url=https://books.google.com/books?id=S9RMxjdjUVAC |access-date=30 May 2015}}</ref> ಇದು [[ಇಂಡೋ-ಆರ್ಯನ್ ಜನರು|ಆರ್ಯ]], [[ದಕ್ಷಿಣ ಭಾರತೀಯ ಸಂಸ್ಕೃತಿ|ದ್ರಾವಿಡ]], [[ಅರಬ್ ಸಂಸ್ಕೃತಿ|ಅರಬ್]], ಮತ್ತು [[ಯುರೋಪಿನ ಸಂಸ್ಕೃತಿ|ಯುರೋಪಿಯನ್]] ಸಂಸ್ಕೃತಿಗಳ ಸಮ್ಮಿಳನವಾಗಿದೆ,<ref>{{Cite book |url=https://books.google.com/books?id=FVsw35oEBv4C |title=A Survey Of Kerala History |last=Menon |first=A. Sreedhara |year=2007 |publisher=DC Books |isbn=978-8126415786 |page=55 |language=en}}</ref> ಇದು ಸಹಸ್ರಮಾನಗಳಲ್ಲಿ, ಭಾರತದ ಇತರ ಭಾಗಗಳು ಮತ್ತು ವಿದೇಶಗಳಿಂದ ಪ್ರಭಾವಗಳ ಅಡಿಯಲ್ಲಿ ಅಭಿವೃದ್ಧಿಗೊಂಡಿದೆ.<ref name="Menon1978a">{{cite book |author=A. Sreedhara Menon |title=Cultural Heritage of Kerala: An Introduction |url=https://books.google.com/books?id=px5BAAAAMAAJ |year=1978 |publisher=East-West Publications |page=10}}</ref> ಇದು ಅದರ ಪ್ರಾಚೀನತೆ ಮತ್ತು [[ಮಲಯಾಳಿ ಜನರು]] ನಿರ್ವಹಿಸುವ ಸಾವಯವ ನಿರಂತರತೆಯಿಂದ ವ್ಯಾಖ್ಯಾನಿಸಲ್ಪಟ್ಟಿದೆ.<ref>{{cite book |title=Contribution of Travancore to Karnatic Music |url=https://books.google.com/books?id=VVftZwEACAAJ |year=2004 |publisher=Information & Public Relations Department, Government of Kerala |pages=7–37}}</ref> ಇದು ನೆರೆಯ ಮತ್ತು ವಿದೇಶಿ ಸಂಸ್ಕೃತಿಗಳೊಂದಿಗೆ ಶತಮಾನಗಳ ಸಂಪರ್ಕದ ಮೂಲಕ ವಿಸ್ತರಿಸಲ್ಪಟ್ಟಿದೆ.<ref name="Bhagyalekshmy_2004d_29">{{cite book |author=S. Bhagyalekshmy |title=Contribution of Travancore to Karnatic Music |url=https://books.google.com/books?id=VVftZwEACAAJ |access-date=6 January 2013 |year=2004 |publisher=Information & Public Relations Department, Government of Kerala}}</ref> ಆದಾಗ್ಯೂ, ಕೇರಳದ ದೇಶದ ಉಳಿದ ಭಾಗಗಳಿಂದ ಭೌಗೋಳಿಕ ಪ್ರತ್ಯೇಕತೆಯು ವಿಶಿಷ್ಟವಾದ ಜೀವನಶೈಲಿ, ಕಲೆ, ವಾಸ್ತುಶಿಲ್ಪ, ಭಾಷೆ, ಸಾಹಿತ್ಯ ಮತ್ತು ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿಗೆ ಕಾರಣವಾಗಿದೆ.<ref name="Menon3" /> ರಾಜ್ಯದಲ್ಲಿ ಪ್ರತಿ ವರ್ಷ 10,000 ಕ್ಕೂ ಹೆಚ್ಚು ಹಬ್ಬಗಳನ್ನು ಆಚರಿಸಲಾಗುತ್ತದೆ.<ref name="1000hrs">{{cite news |date=4 March 2010 |title=India's overworked elephants |url=https://news.bbc.co.uk/2/hi/south_asia/8533776.stm |access-date=30 May 2015 |work=BBC}}</ref> ಕೇರಳದಲ್ಲಿ 825 CE ಯಿಂದ ಪ್ರಾರಂಭವಾದ ಸೌರ ನಾಕ್ಷತ್ರಿಕ ಕ್ಯಾಲೆಂಡರ್ ಆಗಿರುವ [[ಮಲಯಾಳಂ ಕ್ಯಾಲೆಂಡರ್]],<ref name="Devika2005">{{cite book |author=J. Devika |title=Her-self: Early Writings on Gender by Malayalee Women, 1898–1938 |url=https://books.google.com/books?id=Xyr6gXmva-gC&pg=PA5 |access-date=17 November 2012 |year=2005 |publisher=Popular Prakashan |isbn=978-8185604749 |page=5}}</ref> ಕೃಷಿ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಯೋಜಿಸುವಲ್ಲಿ ಸಾಮಾನ್ಯ ಬಳಕೆಯನ್ನು ಕಂಡುಕೊಳ್ಳುತ್ತದೆ.<ref name="Singh2004">{{cite book |author=Kumar Suresh Singh |title=People of India: Maharashtra |url=https://books.google.com/books?id=4bfmnmsBfQ4C&pg=PA1524 |access-date=17 November 2012 |year=2004 |publisher=Popular Prakashan |isbn=978-8179911020 |page=1524}}</ref> ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ [[ಮಲಯಾಳಂ]] ಕೇರಳದ [[ಅಧಿಕೃತ ಭಾಷೆ]]ಯಾಗಿದೆ.<ref name="Benedikter2009">{{cite book |author=Thomas Benedikter |title=Language Policy and Linguistic Minorities in India: An Appraisal of the Linguistic Rights of Minorities in India |url=https://books.google.com/books?id=vpZv2GHM7VQC&pg=PA90 |access-date=18 November 2012 |year=2009 |publisher=LIT Verlag Münster |isbn=978-3-643-10231-7 |page=90}}</ref> ಭಾರತದಲ್ಲಿ [[ಅಧಿಕೃತ ಸ್ಥಾನಮಾನ ಹೊಂದಿರುವ ಭಾಷೆಗಳು|ನಿಗದಿತ ಮತ್ತು ಅನಿಗದಿತ]] ಭಾಷೆಗಳಲ್ಲಿ ಒಂದು ಡಜನ್ಗಿಂತಲೂ ಹೆಚ್ಚು ಭಾಷೆಗಳನ್ನು ಮಾತನಾಡಲಾಗುತ್ತದೆ.<ref name="census2011-langreport">{{cite web |title=Language – India, States and Union Territories |url=https://www.censusindia.gov.in/2011Census/C-16_25062018_NEW.pdf |work=Census of India 2011 |publisher=Office of the Registrar General |pages=13–14}}</ref> ಕೇರಳವು ಭಾರತದಲ್ಲಿ ಅತಿ ಹೆಚ್ಚು ಮದ್ಯ ಸೇವನೆಯನ್ನು ಹೊಂದಿದೆ.<ref>{{Cite news |url=https://www.bbc.co.uk/news/world-asia-india-51372583 |title=Shock after alcohol flows from kitchen taps in Kerala |work=BBC News |date=6 February 2020}}</ref>
=== ಹಬ್ಬಗಳು ===
{{Main|ಕೇರಳದ ದೇವಾಲಯ ಹಬ್ಬಗಳು|ಓಣಂ}}
ಕೇರಳದಲ್ಲಿನ ಅನೇಕ ದೇವಾಲಯಗಳು ವರ್ಷದ ನಿರ್ದಿಷ್ಟ ದಿನಗಳಲ್ಲಿ ಹಬ್ಬಗಳನ್ನು ನಡೆಸುತ್ತವೆ.<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA76 |year=2008 |publisher=D.C. Books |isbn=978-8126419036 |page=76}}</ref> ಈ ಹಬ್ಬಗಳ ಸಾಮಾನ್ಯ ಲಕ್ಷಣವೆಂದರೆ ಪವಿತ್ರ ಧ್ವಜವನ್ನು ಏರಿಸುವುದು, ಅದನ್ನು ಹಬ್ಬದ ಕೊನೆಯ ದಿನದಂದು ದೇವತೆಯನ್ನು ಮುಳುಗಿಸಿದ ನಂತರ ಇಳಿಸಲಾಗುತ್ತದೆ.<ref>{{cite book |title=The Legacy of Kerala |url=https://books.google.com/books?id=S9RMxjdjUVAC&pg=PA34 |year=1982 |publisher=Department of Public Relations, Government of Kerala |isbn=978-8126437986 |page=34}}</ref> ಕೆಲವು ಹಬ್ಬಗಳು ಪೂರಂಗಳನ್ನು ಒಳಗೊಂಡಿವೆ, ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು [[ತೃಶೂರ್ ಪೂರಂ]].<ref>{{cite book |title=World Encyclopaedia of Interfaith Studies: World religions |url=https://books.google.com/books?id=fFwi7qRRgosC |year=2009 |publisher=Jnanada Prakashan |isbn=978-8171392803 |pages=704–10}}</ref> "ಆನೆಗಳು, ಪಟಾಕಿ ಪ್ರದರ್ಶನಗಳು ಮತ್ತು ದೊಡ್ಡ ಗುಂಪುಗಳು" ತೃಶೂರ್ ಪೂರಂನ ಪ್ರಮುಖ ಆಕರ್ಷಣೆಗಳಾಗಿವೆ.<ref>{{Cite news |title=The stars of Pooram show are jumbos |date=26 May 2006 |access-date=11 November 2007 |url=https://www.hindu.com/2006/05/26/stories/2006052610410500.htm |archive-url=https://web.archive.org/web/20071118212644/https://www.hindu.com/2006/05/26/stories/2006052610410500.htm |url-status=dead |archive-date=18 November 2007 |work=[[The Hindu]] |location=Chennai, India}}</ref> ಇತರ ಪ್ರಸಿದ್ಧ ಹಬ್ಬಗಳೆಂದರೆ [[ಮಕರವಿಳಕ್ಕು]],<ref name="Ltd.2013b">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA433 |year=2013 |publisher=Biju Mathew |isbn=978-8192128443 |page=433}}</ref> [[ಚಿನಕ್ಕತ್ತೂರು ಪೂರಂ]], [[ಅಟ್ಟುಕಲ್ ಪೊಂಗಲ]] ಮತ್ತು [[ನೆನ್ಮಾರ ವಲ್ಲಂಗಿ ವೇಳ]]<ref name="Stott2014">{{cite book |author=David Stott |title=Kerala Footprint Focus Guide: Includes Kochi, Alappuzha, Thrissur, Periyar, River Nila |url=https://books.google.com/books?id=-Jx8AwAAQBAJ&pg=PA94 |year=2014 |publisher=Footprint Travel Guides |isbn=978-1-909268-79-1 |page=94}}</ref> ಇವುಗಳ ಜೊತೆಗೆ, ಸ್ಥಳೀಯವಾಗಿ [[ಉತ್ಸವ]]ಗಳು ಎಂದು ಕರೆಯಲ್ಪಡುವ ಹಬ್ಬಗಳನ್ನು ಹೆಚ್ಚಿನ ದೇವಾಲಯಗಳು ವಾರ್ಷಿಕ ಆಧಾರದ ಮೇಲೆ ನಡೆಸುತ್ತವೆ. ಅದನ್ನು ಪಡೆದುಕೊಳ್ಳುವ ದೇವಾಲಯಗಳು ಸಾಮಾನ್ಯವಾಗಿ ಹಬ್ಬದ ಭಾಗವಾಗಿ ಕನಿಷ್ಠ ಒಂದು ಶ್ರೀಮಂತವಾಗಿ ಅಲಂಕರಿಸಿದ ಆನೆಯನ್ನು ಒಳಗೊಳ್ಳುತ್ತವೆ. ದೇವಾಲಯದಲ್ಲಿನ ವಿಗ್ರಹವನ್ನು ಈ ಆನೆಯ ಮೇಲೆ ಗ್ರಾಮಾಂತರದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ಮೆರವಣಿಗೆಯು ದೇವಾಲಯದ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿದಾಗ, ಜನರು ಸಾಮಾನ್ಯವಾಗಿ ಅಕ್ಕಿ, ತೆಂಗಿನಕಾಯಿ ಮತ್ತು ಇತರ ಕಾಣಿಕೆಗಳನ್ನು ನೀಡುತ್ತಾರೆ.<ref name="NarayananKurup1976">{{cite book |author1=M. G. S. Narayanan |author2=K. K. N. Kurup |title=Historical Studies in Kerala |url=https://books.google.com/books?id=mvELAAAAIAAJ |year=1976 |publisher=Department of History, University of Calicut |pages=68–81}}</ref> ಮೆರವಣಿಗೆಗಳು ಹೆಚ್ಚಾಗಿ [[ಪಂಚಾರಿ ಮೇಳಂ]] ಅಥವಾ [[ಪಂಚವಾದ್ಯ]]ದಂತಹ ಸಾಂಪ್ರದಾಯಿಕ ಸಂಗೀತವನ್ನು ಒಳಗೊಂಡಿರುತ್ತವೆ.<ref name="Killius2006">{{cite book |author=Rolf Killius |title=Ritual Music and Hindu Rituals of Kerala |url=https://books.google.com/books?id=c_fZAAAAMAAJ |year=2006 |publisher=B.R. Rhythms |isbn=978-8188827077 |page=61}}</ref> [[ಈದ್ ಅಲ್-ಫಿತರ್]] ಮತ್ತು [[ಈದ್ ಅಲ್-ಅಧಾ]] ಅನ್ನು ರಾಜ್ಯದ ಮುಸ್ಲಿಂ ಸಮುದಾಯವು ಆಚರಿಸುತ್ತದೆ, ಆದರೆ [[ಕ್ರಿಸ್ಮಸ್]] ಮತ್ತು [[ಈಸ್ಟರ್]] ನಂತಹ ಹಬ್ಬಗಳನ್ನು ಕ್ರೈಸ್ತರು ಆಚರಿಸುತ್ತಾರೆ.<ref name="Malabar">{{Cite book |last=Sreedhara Menon |first=A. |url=https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |title=''Kerala Charitram'' |publisher=DC Books |year=2007 |isbn=978-8126415885 |edition=2007 |location=Kottayam |access-date=19 July 2020 |archive-url=https://web.archive.org/web/20211113141403/https://books.google.com/books?id=FAlXPgAACAAJ&q=%E0%B4%95%E0%B5%87%E0%B4%B0%E0%B4%B3+%E0%B4%9A%E0%B4%B0%E0%B4%BF%E0%B4%A4%E0%B5%8D%E0%B4%B0%E0%B4%82 |archive-date=13 November 2021 |url-status=live}}</ref> ಓಣಂ ಕೇರಳದ ಜನರು ಆಚರಿಸುವ ಸುಗ್ಗಿಯ ಹಬ್ಬವಾಗಿದೆ ಮತ್ತು ಇದು ರಾಜ್ಯದ ಕೃಷಿ ಹಿಂದಿನ ಕಾಲವನ್ನು ನೆನಪಿಸುತ್ತದೆ.<ref name="Choondal1980">{{cite book |author=Chummar Choondal |title=Kerala Folk Literature |year=1980 |url=https://books.google.com/books?id=EnQOAAAAYAAJ |publisher=Kerala Folklore Academy}}</ref><ref name="Menon2007b">{{cite book |author=A Sreedhara Menon |title=A Survey Of Kerala History |url=https://books.google.com/books?id=FVsw35oEBv4C&pg=PA80 |year=2007 |publisher=DC Books |isbn=978-8126415786 |pages=80–}}</ref> ಇದು ಕೇರಳದ ಸ್ಥಳೀಯ ಹಬ್ಬವಾಗಿದೆ<ref name="Darpan2006b">{{cite book |author=Pratiyogita Darpan |title=Pratiyogita Darpan |url=https://books.google.com/books?id=lugDAAAAMBAJ&pg=PT83 |year=2006 |publisher=Pratiyogita Darpan |page=624}}</ref> ಇದು ನಾಲ್ಕು ದಿನಗಳ ಸಾರ್ವಜನಿಕ ರಜಾದಿನಗಳನ್ನು ಒಳಗೊಂಡಿದೆ; ಓಣಂ ಮುನ್ನಾದಿನದಿಂದ (ಉತ್ತ್ರಾಡಂ) ನಾಲ್ಕನೇ ಓಣಂ ದಿನದವರೆಗೆ.<ref>{{cite book |title=Purāṇam |url=https://books.google.com/books?id=sfxjAAAAMAAJ |year=2004 |publisher=All-India Kasiraja Trust. |page=17}}</ref> ಓಣಂ ಮಲಯಾಳಂ ತಿಂಗಳು ಚಿಂಗಂ (ಆಗಸ್ಟ್–ಸೆಪ್ಟೆಂಬರ್) ನಲ್ಲಿ ಬರುತ್ತದೆ<ref>{{cite book |title=Cultural Heritage of Kerala |url=https://books.google.com/books?id=R7QNGkZKc5wC&pg=PA66 |year=2008 |publisher=D.C. Books |isbn=978-8126419036 |page=66}}</ref> ಮತ್ತು ಇದು ರಾಜ [[ಮಹಾಬಲಿ]]ಯ ಮನೆಗೆ ಮರಳುವ ಸ್ಮರಣೆಯನ್ನು ಸೂಚಿಸುತ್ತದೆ.<ref name="MythOnam">{{cite news |last1=Praveen |first1=M. P. |title=Myth, mystique, and traditions of Onam |url=https://www.thehindu.com/todays-paper/tp-features/tp-editorialfeatures/myth-mystique-and-traditions-of-onam/article2433921.ece |access-date=12 November 2015 |work=The Hindu |date=8 September 2011}}</ref> ಓಣಂನ ಒಟ್ಟು ಅವಧಿಯು 10 ದಿನಗಳು ಮತ್ತು ಇದನ್ನು ಕೇರಳದಾದ್ಯಂತ ಆಚರಿಸಲಾಗುತ್ತದೆ. ಇದು [[ವಲ್ಲಂ ಕಳಿ]],<ref>{{Cite web |title=Vallamkali – Resplendent Water Regattas of Kerala {{!}} Kerala Boat Races{{!}} Onam{{!}} Kerala Backwaters {{!}} Kerala |url=https://www.keralatourism.org/kerala-article/2020/vallamkali-resplendent-water-regattas-of-kerala/1017 |access-date=9 June 2021|website=Kerala Tourism |language=en}}</ref> [[ಪುಲಿಕಳಿ]],<ref name="Ltd.2013">{{cite book |author=Infokerala Communications Pvt. Ltd. |title=Pilgrimage to Temple Heritage |url=https://books.google.com/books?id=nAt8AgAAQBAJ&pg=PA535 |year=2013 |publisher=Biju Mathew |isbn=978-8192128443 |page=535}}</ref> ಪೂಕ್ಕಲಂ,<ref>{{cite book |title=A Biblical Approach to Indian Traditions and Beliefs |url=https://books.google.com/books?id=f35VH7LrZ1IC&pg=PA90 |year=2008 |publisher=Armour Publishing Pte Ltd |isbn=978-9814222396 |page=90}}</ref> ತುಂಬಿ ತುಳ್ಳಲ್<ref name="Mohapatra2013">{{cite book |author=J Mohapatra |title=Wellness In Indian Festivals & Rituals |url=https://books.google.com/books?id=UdpzAgAAQBAJ&pg=PA142 |year=2013 |publisher=Partridge Pub |isbn=978-1-4828-1690-7 |page=142}}</ref> ಮತ್ತು [[ಓನವಿಲ್ಲು]]<ref name="(Princess.)1998">{{cite book |author=Gouri Lakshmi Bayi (Princess.) |title=Thulasi garland |url=https://books.google.com/books?id=5lcvAAAAYAAJ |year=1998 |publisher=Bharatiya Vidya Bhavan |isbn=978-8172761103}}</ref> ನಂತಹ ಸಾಂಸ್ಕೃತಿಕ ಅಂಶಗಳೊಂದಿಗೆ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ.
### ಸಂಗೀತ ಮತ್ತು ನೃತ್ಯ
{{Main|ಕೇರಳದ ಕಲೆಗಳು|ಕೇರಳದ ಸಂಗೀತ}}
ಕೇರಳವು ಹಲವಾರು [[ಪ್ರದರ್ಶನ ಕಲೆಗಳ]] ನೆಲೆಯಾಗಿದೆ. ಇವುಗಳಲ್ಲಿ ಐದು ಶಾಸ್ತ್ರೀಯ ನೃತ್ಯ ಪ್ರಕಾರಗಳು ಸೇರಿವೆ: [[ಕಥಕ್ಕಳಿ]], [[ಮೋಹಿನಿಯಾಟ್ಟಂ]], [[ಕೂಡಿಯಾಟ್ಟಂ]], [[ಒಟ್ಟನ್ ತುಳ್ಳಲ್|ತುಳ್ಳಲ್]] ಮತ್ತು [[ಕೃಷ್ಣನಾಟ್ಟಂ]], ಇವು ಶಾಸ್ತ್ರೀಯ ಅವಧಿಯಲ್ಲಿ ರಾಜಮನೆತನಗಳ ಆಶ್ರಯದಲ್ಲಿ ದೇವಾಲಯದ ರಂಗಮಂದಿರಗಳಲ್ಲಿ ಹುಟ್ಟಿ ಅಭಿವೃದ್ಧಿಗೊಂಡವು.<ref>{{cite journal |url=https://www.sruti.org/library/sruti%20ranjani/2004/sruti_ranjani_2004.pdf |title=Classical Dance Art Forms of Kerala |author=Kala Menon |journal=Sruti Ranjini |date=November 2004 |volume=14 |issue=1 |page=11 |access-date=7 February 2022 |archive-date=4 March 2016 |archive-url=https://web.archive.org/web/20160304091717/http://www.sruti.org/library/sruti%20ranjani/2004/sruti_ranjani_2004.pdf |url-status=dead }}</ref> [[ಕೇರಳ ನಾಟನಂ]], [[ಥಿರಯಾಟ್ಟಂ]],<ref>"Thirayattam" (Folklore Text-Malayalam), State Institute of language, Kerala {{ISBN|978-8120042940}}</ref> [[ಕಳಿಯಾಟ್ಟಂ]], [[ಥೆಯ್ಯಂ]], [[ಕೂತು]] ಮತ್ತು [[ಪದಯಾನಿ]] ಈ ಪ್ರದೇಶದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಇತರ ನೃತ್ಯ ಪ್ರಕಾರಗಳಾಗಿವೆ.<ref name="Menon2008">{{cite book |author=A Sreedhara Menon |title=Cultural heritage of Kerala |url=https://books.google.com/books?id=R7QNGkZKc5wC&pg=PA106 |access-date=17 November 2012 |year=2008 |publisher=D C Books |isbn=978-8126419036 |page=106}}</ref> [[ಒಪ್ಪನ]] ಮತ್ತು [[ದಫ್ ಮುಟ್ಟು]] ನಂತಹ ಕೆಲವು ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ರಾಜ್ಯದ ಮುಸ್ಲಿಮರಲ್ಲಿ ಜನಪ್ರಿಯವಾಗಿದ್ದವು,<ref name="google19">{{cite book |author=Motilal (UK) Books of India |title=Tourist Guide Kerala |url=https://books.google.com/books?id=ZYfRBcLdTNYC&pg=PA8 |access-date=17 November 2012 |year=2008 |publisher=Sura Books |isbn=978-8174781642 |page=8}}</ref> ಆದರೆ [[ಮಾರ್ಗಂಕಳಿ]] ಮತ್ತು [[ಪರಿಚಮುಟ್ಟುಕಳಿ]] ಸಿರಿಯನ್ ಕ್ರೈಸ್ತರಲ್ಲಿ ಜನಪ್ರಿಯವಾಗಿವೆ ಮತ್ತು [[ಚವಿಟ್ಟು ನಾಟಕಂ]] ಲ್ಯಾಟಿನ್ ಕ್ರೈಸ್ತರಲ್ಲಿ ಜನಪ್ರಿಯವಾಗಿದೆ.<ref name="Nārāyaṇappaṇikkar1991">{{cite book |author=Kāvālaṃ Nārāyaṇappaṇikkar |title=Folklore of Kerala |url=https://books.google.com/books?id=xH6BAAAAMAAJ |access-date=17 November 2012 |year=1991 |publisher=National Book Trust, India |page=146 |isbn=978-8123725932}}</ref><ref name="Kasbekar2006">{{cite book |author=Asha Kasbekar |title=Pop Culture India!: Media, Arts, And Lifestyle |url=https://books.google.com/books?id=Sv7Uk0UcdM8C&pg=PA43 |access-date=17 November 2012 |year=2006 |publisher=ABC-CLIO |isbn=978-1-85109-636-7 |pages=43–44}}</ref> ಕೇರಳದಲ್ಲಿ ಶಾಸ್ತ್ರೀಯ ಸಂಗೀತದ ಅಭಿವೃದ್ಧಿಯು ಕೇರಳದ ದೇವಾಲಯದ ಸಂಸ್ಕೃತಿಗೆ ಸಂಬಂಧಿಸಿದ ಸಾಂಪ್ರದಾಯಿಕ ಪ್ರದರ್ಶನ ಕಲೆಗಳು ನೀಡಿದ ಕೊಡುಗೆಗಳಿಗೆ ಕಾರಣವಾಗಿದೆ.<ref name="Menon2">{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |pages=48–51 |url=https://books.google.com/books?id=S9RMxjdjUVAC |access-date=30 May 2015}}</ref> ಸ್ಥಳೀಯ ಶಾಸ್ತ್ರೀಯ ಸಂಗೀತ ಪ್ರಕಾರವಾದ [[ಸೋಪಾನ ಸಂಗೀತ]]ದ ಅಭಿವೃದ್ಧಿಯು ದೇವಾಲಯದ ಸಂಸ್ಕೃತಿಯು ಕೇರಳದ ಕಲೆಗಳಿಗೆ ನೀಡಿದ ಶ್ರೀಮಂತ ಕೊಡುಗೆಯನ್ನು ವಿವರಿಸುತ್ತದೆ.<ref name="Menon2" /> [[ಕರ್ನಾಟಕ ಸಂಗೀತ]]ವು ಕೇರಳೀಯ ಸಾಂಪ್ರದಾಯಿಕ ಸಂಗೀತದಲ್ಲಿ ಪ್ರಾಬಲ್ಯ ಹೊಂದಿದೆ. ಇದು 19 ನೇ ಶತಮಾನದಲ್ಲಿ [[ಸ್ವಾತಿ ತಿರುನಾಳ್ ರಾಮ ವರ್ಮ]] ಅವರು ಈ ಪ್ರಕಾರವನ್ನು ಜನಪ್ರಿಯಗೊಳಿಸಿದ ಪರಿಣಾಮವಾಗಿದೆ.<ref name="Bhagyalekshmy_2004d_29" /> ರಾಗ-ಆಧಾರಿತ ವ್ಯಾಖ್ಯಾನಗಳು ''ಸೋಪಾನಂ'' ಎಂದು ಕರೆಯಲ್ಪಡುತ್ತವೆ, ಇವು ''ಕಥಕ್ಕಳಿ'' ಪ್ರದರ್ಶನಗಳೊಂದಿಗೆ ಸೇರುತ್ತವೆ.<ref name="SchechnerAppel1990">{{cite book |author1=Richard Schechner |author2=Willa Appel |title=By Means of Performance: Intercultural Studies of Theatre and Ritual |url=https://books.google.com/books?id=K5ZuV_nn7KkC&pg=PA145 |access-date=18 November 2012 |year=1990 |publisher=Cambridge University Press |isbn=978-0-521-33915-5 |page=145}}</ref> ''ಮೇಳಂ'', ''ಪಾಂಡಿ'' ಮತ್ತು ''ಪಂಚಾರಿ'' ರೂಪಾಂತರಗಳನ್ನು ಒಳಗೊಂಡಂತೆ, ಹೆಚ್ಚು ತಾಳವಾದ್ಯ ಶೈಲಿಯ ಸಂಗೀತವಾಗಿದೆ;<ref name="BroughtonEllingham2000">{{cite book |author1=Simon Broughton |author2=Mark Ellingham |author3=Richard Trillo |title=World Music Volume 2 Latin and North America, Caribbean, India, Asia and Pacific: The Rough Guide |url=https://books.google.com/books?id=QzX8THIgRjUC&pg=PA97 |access-date=18 November 2012 |year=2000 |publisher=Rough Guides |isbn=978-1-85828-636-5 |page=97}}</ref> ಇದನ್ನು ''[[ಹಿಂದೂ ದೇವಾಲಯ|ಕ್ಷೇತ್ರಮ್]]''-ಕೇಂದ್ರಿತ ಹಬ್ಬಗಳಲ್ಲಿ ''[[ಚೆಂಡ]]'' ಬಳಸಿ ಪ್ರದರ್ಶಿಸಲಾಗುತ್ತದೆ. ''ಪಂಚವಾದ್ಯ'' ತಾಳವಾದ್ಯ ಸಮೂಹದ ಒಂದು ರೂಪವಾಗಿದೆ, ಇದರಲ್ಲಿ ಕಲಾವಿದರು ಐದು ವಿಧದ ತಾಳವಾದ್ಯ ವಾದ್ಯಗಳನ್ನು ಬಳಸುತ್ತಾರೆ.<ref name="BroughtonEllingham2000" /> ಕೇರಳದ ದೃಶ್ಯ ಕಲೆಗಳು [[ಕೇರಳದ ಭಿತ್ತಿಚಿತ್ರಗಳು|ಸಾಂಪ್ರದಾಯಿಕ ಭಿತ್ತಿಚಿತ್ರಗಳಿಂದ]] ರಾಜ್ಯದ ಅತ್ಯಂತ ಪ್ರಸಿದ್ಧ ವರ್ಣಚಿತ್ರಕಾರನಾದ [[ರಾಜಾ ರವಿ ವರ್ಮ]] ಅವರ ಕೃತಿಗಳವರೆಗೆ ವಿಸ್ತರಿಸಿವೆ.<ref name="Menon2" /> ಕೇರಳದ ಹೆಚ್ಚಿನ ಜಾತಿಗಳು ಮತ್ತು ಸಮುದಾಯಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದ ಜಾನಪದ ಗೀತೆಗಳು ಮತ್ತು ಗೀತೆಗಳ ಶ್ರೀಮಂತ ಸಂಗ್ರಹಗಳನ್ನು ಹೊಂದಿವೆ; ''[[ವಡಕ್ಕನ್ ಪಟ್ಟುಕಲ್]]'' (ಉತ್ತರ ಗೀತೆಗಳು), ''ತೆಕ್ಕನ್ ಪಟ್ಟುಕಲ್'' (ದಕ್ಷಿಣ ಗೀತೆಗಳು), ''ವಂಚಿ ಪಟ್ಟುಕಲ್'' (ದೋಣಿ ಹಾಡುಗಳು), ''[[ಮಾಪ್ಪಿಲ ಪಟ್ಟುಕಲ್]]'' (ಮುಸ್ಲಿಂ ಹಾಡುಗಳು) ಮತ್ತು ''ಪಲ್ಲಿಪಟ್ಟುಕಲ್'' (ಚರ್ಚ್ ಹಾಡುಗಳು) ಅವುಗಳಲ್ಲಿ ಕೆಲವು.<ref>{{cite book |title=The Legacy of Kerala |author=A. Sreedhara Menon |publisher=D C Books |year=1982 |isbn=978-8126421572 |page=41 |url=https://books.google.com/books?id=S9RMxjdjUVAC |access-date=30 May 2015}}</ref>
=== ಸಿನಿಮಾ ===
{{Main|ಮಲಯಾಳಂ ಸಿನಿಮಾ}}
[[ಮಲಯಾಳಂ ಸಿನಿಮಾ|ಮಲಯಾಳಂ ಚಲನಚಿತ್ರಗಳು]] ಸಾಮಾಜಿಕ ವಿಷಯಗಳ ಪ್ರಸ್ತುತಿಯೊಂದಿಗೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಸ್ಥಾನವನ್ನು ಕೆತ್ತಿಕೊಂಡಿವೆ.<ref name="Menon">{{cite book |title=Cultural Heritage of Kerala |first=Sreedhara |last=Menon |publisher=D C Books |year=2008 |url=https://books.google.com/books?id=R7QNGkZKc5wC |isbn=978-8126419036 |pages=128–29 |access-date=30 May 2015}}</ref><ref>{{cite book |title=Encyclopaedia of Indian Literature |first=Amaresh |last=Datta |publisher=Sahitya Akademi |year=1987 |url=https://books.google.com/books?id=ObFCT5_taSgC |isbn=978-8126018031 |pages=751–53}}</ref> [[ಅಡೂರ್ ಗೋಪಾಲಕೃಷ್ಣನ್]], [[ಮಂಕಡ ರವಿ ವರ್ಮ]], [[ಜಿ. ಅರವಿಂದನ್]], [[ಭರತನ್]], [[ಪಿ. ಪದ್ಮರಾಜನ್]], [[ಎಂ.ಟಿ. ವಾಸುದೇವನ್ ನಾಯರ್]], [[ಕೆ.ಜಿ. ಜಾರ್ಜ್]], [[ಪ್ರಿಯದರ್ಶನ್]], [[ಜಾನ್ ಅಬ್ರಹಾಂ (ನಿರ್ದೇಶಕ)|ಜಾನ್ ಅಬ್ರಹಾಂ]], [[ರಾಮು ಕಾರ್ಯಾಟ್]], [[ಕೆ ಎಸ್ ಸೇತುಮಾಧವನ್]], [[ಎ. ವಿನ್ಸೆಂಟ್]] ಮತ್ತು [[ಶಾಜಿ ಎನ್ ಕರುಣ್]] ನಂತಹ ಕೇರಳದ ನಿರ್ದೇಶಕರು ಭಾರತೀಯ [[ಸಮಾನಾಂತರ ಸಿನಿಮಾ]]ಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಕೇರಳವು [[ಮೋಹನ್ಲಾಲ್]], [[ಮಮ್ಮೂಟ್ಟಿ]], [[ಸತ್ಯನ್]], [[ಪ್ರೇಮ್ ನಝೀರ್]], [[ಮಧು (ನಟ)|ಮಧು]], [[ಶೀಲಾ]], [[ಶಾರದ (ನಟಿ)|ಶಾರದಾ]], [[ಮಿಸ್ ಕುಮಾರಿ]], [[ಜಯನ್]], [[ಅಡೂರ್ ಭಾಸಿ]], [[ಸೀಮಾ (ನಟಿ)|ಸೀಮಾ]], [[ಭರತ್ ಗೋಪಿ]], [[ತಿಲಕನ್]], [[ವಿಜಯ ರಾಘವನ್]], [[ಕಲಾಭವನ್ ಮಣಿ]], [[ಇಂದ್ರನ್ಸ್]], [[ಶೋಭನಾ]], [[ನಿವಿನ್ ಪೌಲಿ]], [[ಶ್ರೀನಿವಾಸನ್]], [[ಉರ್ವಶಿ (ನಟಿ)|ಉರ್ವಶಿ]], [[ಮಂಜು ವಾರಿಯರ್]], [[ಸುರೇಶ್ ಗೋಪಿ]], [[ಜಯರಾಂ]], [[ಮುರಳಿ (ಮಲಯಾಳಂ ನಟ)|ಮುರಳಿ]], [[ಶಂಕರಾಡಿ]], [[ಕಾವ್ಯ ಮಾಧವನ್]], [[ಭಾವನಾ ಮೇನನ್]], [[ಪೃಥ್ವಿರಾಜ್ ಸುಕುಮಾರನ್|ಪೃಥ್ವಿರಾಜ್]], [[ಪಾರ್ವತಿ ತಿರುವೋತು|ಪಾರ್ವತಿ]], [[ಜಯಸೂರ್ಯ]], [[ದುಲ್ಕರ್ ಸಲ್ಮಾನ್]], [[ಒಡುವಿಲ್ ಉನ್ನಿಕೃಷ್ಣನ್]], [[ಜಗತಿ ಶ್ರೀಕುಮಾರ್]], [[ನೆಡುಮುಡಿ ವೇಣು]], [[ಕೆಪಿಎಸಿ ಲಲಿತಾ]], [[ಇನ್ನೋಸೆಂಟ್ (ನಟ)|ಇನ್ನೋಸೆಂಟ್]] ಮತ್ತು [[ಫಹಾದ್ ಫಾಜಿಲ್]] ನಂತಹ ಅಸಂಖ್ಯಾತ ನಟರಿಗೆ ಜನ್ಮ ನೀಡಿದೆ. ಕೊನೆಯ ಮಲಯಾಳಂ ನಟ ಪ್ರೇಮ್ ನಝೀರ್ 720 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.<ref>{{Cite news |last=Gangadhar |first=V. |title=Magic of Sophia Loren |url=https://www.hindu.com/mag/2003/11/02/stories/2003110200250500.htm |archive-url=https://web.archive.org/web/20031130011344/https://www.hindu.com/mag/2003/11/02/stories/2003110200250500.htm |url-status=dead |archive-date=30 November 2003 |date=2 October 2003 |department=Sunday Magazine |newspaper=[[The Hindu]] |location=Chennai, India |access-date=18 January 2015}}</ref> 1980 ರ ದಶಕದಿಂದ, ನಟರು [[ಮೋಹನ್ಲಾಲ್]] ಮತ್ತು [[ಮಮ್ಮೂಟ್ಟಿ]] ಅವರು ಚಲನಚಿತ್ರ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದಾರೆ; ಮೋಹನ್ಲಾಲ್ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (ನಾಲ್ಕು ಅಭಿನಯಕ್ಕಾಗಿ) ಗೆದ್ದಿದ್ದಾರೆ, ಆದರೆ ಮಮ್ಮೂಟ್ಟಿ ಅವರು ಅಭಿನಯಕ್ಕಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹೊಂದಿದ್ದಾರೆ.<ref>{{cite book |title=Sura's Year Book 2006 |author=Subburaj V.V.K |page=620 |isbn=978-8172541248 |url=https://books.google.com/books?id=Fz2WDD8sB0MC |publisher=Sura Books |access-date=30 May 2015}}</ref> ಮಲಯಾಳಂ ಸಿನಿಮಾ [[ಕೆ. ಜೆ. ಯೇಸುದಾಸ್]], [[ಕೆ.ಎಸ್. ಚಿತ್ರಾ]], [[ಎಂ. ಜಿ. ಶ್ರೀಕುಮಾರ್|ಎಂ.ಜಿ. ಶ್ರೀಕುಮಾರ್]], [[ವಯಲಾರ್ ರಾಮ ವರ್ಮ]], [[ವಿ. ಮಧುಸೂದನನ್ ನಾಯರ್]], [[ಎಂ.ಟಿ. ವಾಸುದೇವನ್ ನಾಯರ್]] ಮತ್ತು [[ಒ.ಎನ್.ವಿ. ಕುರುಪ್]] ನಂತಹ ಕೆಲವು ಹೆಚ್ಚು ಗಮನಾರ್ಹ ವ್ಯಕ್ತಿಗಳನ್ನು ಸಹ ನಿರ್ಮಿಸಿದೆ,<ref name="indiatimes2">{{cite news |url=https://timesofindia.indiatimes.com/india/Jnanpith-Awards-for-ONV-Kurup-Akhlaq-Khan-Shahryar/articleshow/6621243.cms |date=24 September 2014 |title=Jnanpith Awards for ONV Kurup, Akhlaq Khan Shahryar |work=The Times of India |access-date=24 September 2014}}</ref> ಕೊನೆಯಲ್ಲಿ ಉಲ್ಲೇಖಿಸಲಾದ ಇಬ್ಬರು [[ಜ್ಞಾನಪೀಠ ಪ್ರಶಸ್ತಿ]] ಪಡೆದವರು, ಇದು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದೆ.<ref name="upscguide">{{cite web |url=https://upscguide.com/content/jnanpith-award-winners |archive-url=https://web.archive.org/web/20121219193030/https://upscguide.com/content/jnanpith-award-winners |url-status=dead |archive-date=19 December 2012 |title=Jnanpith Award Winners | UPSC Guide |publisher=upscguide.com |access-date=24 September 2014}}</ref> ಕೇರಳದವರಾದ [[ರೆಸುಲ್ ಪೂಕ್ಕುಟ್ಟಿ]] ಅವರು [[ಸ್ಲಮ್ಡಾಗ್ ಮಿಲಿಯನೇರ್]] ಅದ್ಭುತ ಚಿತ್ರಕ್ಕಾಗಿ [[ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್|ಅಕಾಡೆಮಿ ಪ್ರಶಸ್ತಿ ಉತ್ತಮ ಸೌಂಡ್ ಮಿಕ್ಸಿಂಗ್]] ಗೆದ್ದ ಏಕೈಕ ಭಾರತೀಯರಾಗಿದ್ದಾರೆ. 2018 ರಂತೆ, [[ಮಲಯಾಳಂ ಸಿನಿಮಾ]] [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], [[ಭಾರತ]]ದಲ್ಲಿ ಅತ್ಯುತ್ತಮ ನಟಿಗೆ 14 ಪ್ರಶಸ್ತಿಗಳು, ಅತ್ಯುತ್ತಮ ನಟಿಗೆ 6, ಅತ್ಯುತ್ತಮ ಚಿತ್ರಕ್ಕೆ 11, ಮತ್ತು ಅತ್ಯುತ್ತಮ ಚಲನಚಿತ್ರ ನಿರ್ದೇಶಕರಿಗೆ 13 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.{{sfn|Chandran|2018|p=358-361}}
=== ಸಾಹಿತ್ಯ ===
{{Main|ಮಲಯಾಳಂ ಸಾಹಿತ್ಯ}}
[[ಸಂಗಮ್ ಸಾಹಿತ್ಯ]]ವನ್ನು [[ಮಲಯಾಳಂ]]ನ ಪ್ರಾಚೀನ ಪೂರ್ವವರ್ತಿ ಎಂದು ಪರಿಗಣಿಸಬಹುದು.{{sfn|Chandran|2018|p=450}} [[ಮಲಯಾಳಂ ಸಾಹಿತ್ಯ]]ವು [[ಹಳೆಯ ಮಲಯಾಳಂ]] ಅವಧಿಯಿಂದ (9 ನೇ–13 ನೇ ಶತಮಾನ CE) ಪ್ರಾರಂಭವಾಗುತ್ತದೆ ಮತ್ತು 14 ನೇ ಶತಮಾನದ [[ನಿರಣಂ ಕವಿಗಳು]] (ಮಾಧವ ಪಣಿಕ್ಕರ್, ಶಂಕರ ಪಣಿಕ್ಕರ್ ಮತ್ತು ರಾಮ ಪಣಿಕ್ಕರ್),<ref name="Nair1967">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |page=296}}</ref><ref name="Laet1994">{{cite book |author=Sigfried J. de Laet |title=History of Humanity: From the seventh to the sixteenth century |url=https://books.google.com/books?id=ixCyd2lByggC&pg=PA407 |access-date=18 November 2012 |year=1994 |publisher=UNESCO |isbn=978-9231028137 |page=407}}</ref> ಮತ್ತು 16 ನೇ ಶತಮಾನದ ಕವಿ [[ಎಳುತ್ತಚ್ಚನ್|ತುಂಚತ್ತು ಎಳುತ್ತಚ್ಚನ್]] ಅವರನ್ನು ಒಳಗೊಂಡಿದೆ, ಅವರ ಕೃತಿಗಳು ಆಧುನಿಕ ಮಲಯಾಳಂ ಭಾಷೆ ಮತ್ತು ಅದರ ಕಾವ್ಯದ ಆರಂಭವನ್ನು ಸೂಚಿಸುತ್ತವೆ.<ref name="George1998">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA58 |access-date=18 November 2012 |year=1998 |publisher=Sahitya Akademi |isbn=978-8126004133 |page=58}}</ref> [[ಕೊಲ್ಲಂ ಯುಗ|ಮಲಯಾಳಂ ಕ್ಯಾಲೆಂಡರ್]] ನ ಮೊದಲ 600 ವರ್ಷಗಳಲ್ಲಿ, ಸಾಹಿತ್ಯವು ಮುಖ್ಯವಾಗಿ [[ಉತ್ತರ ಮಲಬಾರ್|ಉತ್ತರ ಮಲಬಾರಿನ]] ''[[ವಡಕ್ಕನ್ ಪಟ್ಟುಕಲ್]]'' ಮತ್ತು [[ದಕ್ಷಿಣ ವಿಭಾಗ (ತಿರುವಾಂಕೂರು)|ದಕ್ಷಿಣ ತಿರುವಾಂಕೂರಿನ]] ''ತೆಕ್ಕನ್ ಪಟ್ಟುಕಲ್'' ನಂತಹ ಮೌಖಿಕ [[ಗೀತೆ]]ಗಳನ್ನು ಒಳಗೊಂಡಿತ್ತು.{{sfn|Chandran|2018|p=453}} 2013 ರಲ್ಲಿ "[[ಭಾರತದಲ್ಲಿ ಶಾಸ್ತ್ರೀಯ ಭಾಷೆ]]" ಎಂದು ಗೊತ್ತುಪಡಿಸಲಾಯಿತು,<ref name="thehindu20130524"/> ಇದು ಪ್ರಸ್ತುತ ರೂಪಕ್ಕೆ ಮುಖ್ಯವಾಗಿ 15 ಮತ್ತು 16 ನೇ ಶತಮಾನಗಳಲ್ಲಿ [[ಸಾಮಾನ್ಯ ಯುಗ]]ದ ಕವಿಗಳಾದ [[ಚೆರುಶ್ಶೇರಿ ನಂಬೂದಿರಿ]],<ref name="Cherussery (Krishnagadha) Malayalam author books">{{Cite web |url=https://keralaliterature.com/old/author.php?authid=1473 |title=Cherussery (Krishnagadha) Malayalam author books |website=keralaliterature.com |archive-url=https://web.archive.org/web/20190407052549/https://keralaliterature.com/old/author.php%3Fauthid%3D1473 |archive-date=7 April 2019 |url-status=dead}}</ref><ref name="mlm" /> [[ತುಂಚತ್ತು ಎಳುತ್ತಚ್ಚನ್]],<ref name="mlm" /> ಮತ್ತು [[ಪೂಂತಾನಂ ನಂಬೂದಿರಿ]]<ref name="mlm" /><ref>{{cite news |url=https://www.thehindu.com/society/history-and-culture/the-charms-of-poonthanam-illam/article25308319.ece/ |title=The Charms of Poonthanam Illam |last=Arun Narayanan |date=25 October 2018 |work=The Hindu}}</ref> ರವರ ಪ್ರಭಾವದಿಂದ ಅಭಿವೃದ್ಧಿಗೊಂಡಿತು.<ref name="mlm">{{cite book |title=A Short History of Malayalam Literature |author=Dr. K. Ayyappa Panicker |url=https://archive.org/details/ASHORTHISTORYOFMALAYALAMLITERATURE |year=2006 |location=Thiruvananthapuram |publisher=Department of Information and Public Relations, Kerala}}</ref><ref>Freeman, Rich (2003). "Genre and Society: The Literary Culture of Premodern Kerala". In Literary Cultures in History: Reconstructions from South Asia</ref> 17/18 ನೇ ಶತಮಾನ CE ಯ ಸಂಭವನೀಯ ಕವಿಯಾದ [[ಉನ್ನಾಯಿ ವರಿಯಾರ್]],<ref name="Attakatha sahithyam">{{Cite book |last=Krishna Kaimal |first=Aymanam |title=Attakatha sahithyam |url=https://mgucat.mgu.ac.in/cgi-bin/koha/opac-detail.pl?biblionumber=133514&shelfbrowse_itemnumber=132435 |date=1989 |publisher=Trivandrum State Institute of Language}}</ref> ಮತ್ತು 18 ನೇ ಶತಮಾನ CE ಯ ಕವಿಯಾದ [[ಕುಂಚನ್ ನಂಬಿಯಾರ್]] ಅವರು ಆಧುನಿಕ ಮಲಯಾಳಂ ಸಾಹಿತ್ಯದ ಬೆಳವಣಿಗೆಯಲ್ಲಿ ತಮ್ಮ ಅಪಕ್ವ ರೂಪದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ.<ref name="mlm" /> [[ಭಾರತಪುಳ]] ನದಿ, ಇದನ್ನು [[ಪೊನ್ನಾನಿ|ಪೊನ್ನಾನಿ ನದಿ]] ಎಂದೂ ಕರೆಯುತ್ತಾರೆ, ಮತ್ತು ಅದರ ಉಪನದಿಗಳು ಆಧುನಿಕ ಮಲಯಾಳಂ ಸಾಹಿತ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.<ref>{{Cite news |title=The river sutra |url=https://www.thehindu.com/society/rivers-have-nurtured-malayalam-literature-and-poetry-since-time-immemorial/article25058214.ece |last=Binoy |first=Rasmi |date=27 September 2018 |access-date=24 January 2021 |work=The Hindu}}</ref>
[[ಪರೆಮ್ಮಕ್ಕಲ್ ತೋಮಾ ಕಥನಾರ್]] ಮತ್ತು [[ಕೇರಳ ವರ್ಮ ವಲಿಯಕೋಯಿ ತಂಪುರಾನ್]] ಮಲಯಾಳಂ ಗದ್ಯಕ್ಕೆ ತಮ್ಮ ಕೊಡುಗೆಗೆ ಹೆಸರುವಾಸಿಯಾಗಿದ್ದಾರೆ.<ref name="google24">{{cite book |author=P. K. Parameswaran Nair |title=History of Malayalam literature |url=https://books.google.com/books?id=cHNkAAAAMAAJ |access-date=18 November 2012 |year=1967 |publisher=Sahitya Akademi |pages=118–21}}</ref><ref name="Sinhā2009">{{cite book |author=Madhubālā Sinhā |title=Encyclopaedia of South Indian literature |url=https://books.google.com/books?id=8qQpAQAAIAAJ |access-date=18 November 2012 |year=2009 |publisher=Anmol Publ. |isbn=978-8126137404 |page=97}}</ref><ref name="Vilanilam1987">{{cite book |author=John V. Vilanilam |title=Religious communication in India |url=https://books.google.com/books?id=a0UeAAAAMAAJ |access-date=18 November 2012 |year=1987 |publisher=Kairali Books International |page=66}}</ref> "[[ಆಧುನಿಕ ಮಲಯಾಳಂನ ಕವಿತ್ರಯ|ಕವಿಗಳ ತ್ರಿಮೂರ್ತಿಗಳು]]" (''ಕವಿತ್ರಯಂ''): [[ಕುಮಾರನ್ ಆಶಾನ್]], [[ವಳ್ಳತ್ತೋಳ್ ನಾರಾಯಣ ಮೇನನ್]], ಮತ್ತು [[ಉಳ್ಳೂರ್ ಎಸ್. ಪರಮೇಶ್ವರ ಅಯ್ಯರ್]] ಅವರು ಕೇರಳೀಯ ಕಾವ್ಯವನ್ನು ಪ್ರಾಚೀನ ಚಾತುರ್ಯ ಮತ್ತು ಅಧ್ಯಾತ್ಮಶಾಸ್ತ್ರದಿಂದ ಹೆಚ್ಚು [[ಗೀತಾತ್ಮಕ|ಗೀತಾತ್ಮಕ]] ಶೈಲಿಯತ್ತ ತಿರುಗಿಸಿದ್ದಾರೆಂದು ಗುರುತಿಸಲ್ಪಟ್ಟಿದ್ದಾರೆ.<ref name="Al̲ikkōṭȧ1979">{{cite book |author=Sukumār Al̲ikkōṭȧ |title=Mahakavi Ulloor |url=https://books.google.com/books?id=1VkOAAAAYAAJ |access-date=18 November 2012 |year=1979 |publisher=Sahitya Akademi |page=52}}</ref><ref name="Indian and Foreign Review">{{cite book |title=Indian and Foreign Review |url=https://books.google.com/books?id=XaRnAAAAMAAJ |access-date=18 November 2012 |year=1983 |publisher=Publications Division of the Ministry of Information and Broadcasting, Government of India |page=25}}</ref><ref name="Tarakan1990">{{cite book |author=Ke. Eṃ Tarakan |title=A brief survey of Malayalam literature: history of literature |url=https://books.google.com/books?id=3nhkAAAAMAAJ |access-date=18 November 2012 |year=1990 |publisher=K.M. Tharakan |pages=41–52}}</ref> [[ಮೊಯಿಂಕುಟ್ಟಿ ವೈದ್ಯರ್]] ಮತ್ತು [[ಪುಲಿಕ್ಕೋಟ್ಟಿಲ್ ಹೈದರ್]] ನಂತಹ ಕವಿಗಳು [[ಮಾಪ್ಪಿಲ ಹಾಡುಗಳಿಗೆ]] ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ, ಇದು [[ಅರಬಿ ಮಲಯಾಳಂ]] ಸಾಹಿತ್ಯದ ಪ್ರಕಾರವಾಗಿದೆ.<ref>{{cite news |url=https://www.hindu.com/2007/03/31/stories/2007033110250500.htm |archive-url=https://web.archive.org/web/20121108104937/https://www.hindu.com/2007/03/31/stories/2007033110250500.htm |url-status=dead |archive-date=8 November 2012 |title=Mappila songs cultural fountains of a bygone age, says MT |date=31 March 2007 |access-date=15 August 2009 |work=[[The Hindu]] |location=Chennai, India}}</ref><ref>Pg 167, Mappila Muslims: a study on society and anti colonial struggles By Husain Raṇdathaṇi, Other Books, Kozhikode 2007</ref> ಯಾವುದೇ ಭಾರತೀಯ ಭಾಷೆಯಲ್ಲಿ ಮೊದಲ ಪ್ರವಾಸ ಕಥನವು ಮಲಯಾಳಂ ''[[ವರ್ತಮಾನಪುಸ್ತಕಂ]]'' ಆಗಿದೆ, ಇದನ್ನು [[ಪರೆಮ್ಮಕ್ಕಲ್ ತೋಮಾ ಕಥನಾರ್]] 1785 ರಲ್ಲಿ ಬರೆದರು.<ref name="legacy">{{cite book |last=Menon |first=A. Sreedhara |title=The legacy of Kerala |year=2008 |publisher=D C Books |location=Kottayam, Kerala |isbn=978-81-264-2157-2 |edition=1st DCB}}</ref><ref>{{cite web |url=https://nasrani.net/2010/08/23/the-varthamanappusthakam-cathanar-paremmakkal/ |title=August 23, 2010 Archives |url-status=dead |archive-url=https://web.archive.org/web/20130427073541/https://nasrani.net/2010/08/23/the-varthamanappusthakam-cathanar-paremmakkal/ |archive-date=27 April 2013}}</ref> ಗದ್ಯ ಸಾಹಿತ್ಯ, [[ಮಲಯಾಳಂ ಪತ್ರಿಕೋದ್ಯಮ]], ಮತ್ತು ವಿಮರ್ಶೆಯು 18 ನೇ ಶತಮಾನದ ಉತ್ತರಾರ್ಧದ ನಂತರ ಪ್ರಾರಂಭವಾಯಿತು.<ref name="legacy" /> ಸಮಕಾಲೀನ ಮಲಯಾಳಂ ಸಾಹಿತ್ಯವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನದ ಸಂದರ್ಭವನ್ನು ವ್ಯವಹರಿಸುತ್ತದೆ. ಆಧುನಿಕ ಸಾಹಿತ್ಯದ ಪ್ರವೃತ್ತಿಯು ಹೆಚ್ಚಾಗಿ [[ರಾಜಕೀಯ ತೀವ್ರವಾದ]]ದ ಕಡೆಗೆ ಇರುತ್ತದೆ.<ref>{{cite encyclopedia |url=https://www.britannica.com/EBchecked/topic/556016/South-Asian-arts/65212/Tamil#toc65213 |title=South Asian arts |encyclopedia=Encyclopedia Britannica |access-date=15 September 2017}}</ref> [[ಮಲಯಾಳಂ ಸಾಹಿತ್ಯ]]ವು 6 [[ಜ್ಞಾನಪೀಠ ಪ್ರಶಸ್ತಿ|ಜ್ಞಾನಪೀಠ ಪ್ರಶಸ್ತಿಗಳನ್ನು]] ಪಡೆದುಕೊಂಡಿದೆ, ಇದು ಯಾವುದೇ ದ್ರಾವಿಡ ಭಾಷೆಗೆ ಎರಡನೇ ಅತಿ ಹೆಚ್ಚು ಮತ್ತು ಯಾವುದೇ ಭಾರತೀಯ ಭಾಷೆಗೆ ಮೂರನೇ ಅತಿ ಹೆಚ್ಚು.<ref>{{Cite news |title=Jnanpith given to Akkitham |url=https://www.thehindu.com/news/national/kerala/jnanpith-given-to-akkitham/article32685581.ece |last=Naha |first=Abdul Latheef |date=24 September 2020 |access-date=12 June 2021 |work=The Hindu}}</ref><ref>{{Cite news |title=Celebrated Malayalam poet Akkitham wins 2019 Jnanpith Award |url=https://www.business-standard.com/article/news-ani/celebrated-malayalam-poet-akkitham-wins-2019-jnanpith-award-119112900926_1.html |last=ANI |date=29 November 2019 |access-date=12 June 2021 |publisher=Business Standard}}</ref> 20 ನೇ ಶತಮಾನದ ಉತ್ತರಾರ್ಧದಲ್ಲಿ, [[ಜ್ಞಾನಪೀಠ]] ಪ್ರಶಸ್ತಿ ವಿಜೇತ ಕವಿಗಳು ಮತ್ತು ಬರಹಗಾರರಾದ [[ಜಿ. ಶಂಕರ ಕುರುಪ್]], [[ಎಸ್. ಕೆ. ಪೊಟ್ಟೆಕ್ಕಾಟ್]], [[ತಕಳಿ ಶಿವಶಂಕರ ಪಿಳ್ಳೈ]], [[ಎಂ. ಟಿ. ವಾಸುದೇವನ್ ನಾಯರ್]], [[ಒ. ಎನ್. ವಿ. ಕುರುಪ್]], ಮತ್ತು [[ಅಕ್ಕಿತಂ ಅಚ್ಯುತನ್ ನಂಬೂದಿರಿ]] ಅವರು ಆಧುನಿಕ ಮಲಯಾಳಂ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.<ref name="google25">{{cite book |author=Subodh Kapoor |title=The Indian Encyclopaedia: Biographical, Historical, Religious, Administrative, Ethnological, Commercial and Scientific. Mahi-Mewat |url=https://books.google.com/books?id=mc6C5dVHbGAC&pg=PA4542 |access-date=18 November 2012 |year=2002 |publisher=Cosmo |isbn=978-8177552720 |page=4542}}</ref><ref name="Accessions List, South Asia">{{cite book |title=Accessions List, South Asia |url=https://books.google.com/books?id=lPcoAQAAIAAJ |access-date=18 November 2012 |year=1994 |publisher=E.G. Smith for the U.S. Library of Congress Office, New Delhi |page=21}}</ref><ref name="Indian Writing Today">{{cite book |title=Indian Writing Today |url=https://books.google.com/books?id=1wUtAQAAIAAJ |access-date=18 November 2012 |year=1967 |publisher=Nirmala Sadanand Publishers |page=21}}</ref><ref name="DattaAkademi1987">{{cite book |author1=Amaresh Datta |author2=Sahitya Akademi |title=Encyclopaedia of Indian Literature: K to Navalram |url=https://books.google.com/books?id=QaIRAQAAMAAJ |access-date=18 November 2012 |year=1987 |publisher=Sahitya Akademi |page=2394 |isbn=978-0-8364-2423-2}}</ref><ref name="Malayalam Literary Survey">{{cite book |title=Malayalam Literary Survey |url=https://books.google.com/books?id=k5JkAAAAMAAJ |access-date=18 November 2012 |year=1993 |publisher=Kerala Sahitya Akademi |page=19}}</ref> ನಂತರ, [[ಒ. ವಿ. ವಿಜಯನ್]], [[ಕಮಲಾದಾಸ್]], [[ಎಂ. ಮುಕುಂದನ್]], [[ಅರುಂಧತಿ ರಾಯ್]], [[ವೈಕಂ ಮುಹಮ್ಮದ್ ಬಷೀರ್]] ನಂತಹ ಬರಹಗಾರರು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ.<ref name="MukundanPillai2004">{{cite book |author1=Eṃ Mukundan |author2=C. Gopinathan Pillai |title=Eng Adityan Radha And Others |url=https://books.google.com/books?id=1N5QcHakKdoC&pg=PP3 |access-date=18 November 2012 |year=2004 |publisher=Sahitya Akademi |isbn=978-8126018833 |page=3}}</ref><ref name="Maheshwari2002">{{cite book |author=Ed. Vinod Kumar Maheshwari |title=Perspectives On Indian English Literature |url=https://books.google.com/books?id=JcY2-ldWIKsC&pg=PA126 |access-date=18 November 2012 |year=2002 |publisher=Atlantic Publishers & Dist |isbn=978-8126900930 |page=126}}</ref><ref name="Chaudhuri2008">{{cite book |author=Amit Chaudhuri |title=Clearing a Space: Reflections On India, Literature, and Culture |url=https://books.google.com/books?id=AQeN2PoAx2IC&pg=PA44 |access-date=18 November 2012 |year=2008 |publisher=Peter Lang |isbn=978-1-906165-01-7 |pages=44–45}}</ref><ref>{{Cite news |title=Indian's First Novel Wins Booker Prize in Britain |work=[[The New York Times]] |date=15 October 1997 |access-date=11 November 2007 |url=https://query.nytimes.com/gst/fullpage.html?res=9A01E6DD173FF936A25753C1A961958260 |first=Sarah |last=Lyall}}</ref>
=== ಪಾಕಪದ್ಧತಿ ===
{{Main|ಕೇರಳದ ಪಾಕಪದ್ಧತಿ}}
ಕೇರಳದ ಪಾಕಪದ್ಧತಿಯು ಮೀನು, ಕೋಳಿ ಮತ್ತು ಮಾಂಸವನ್ನು ಬಳಸಿ ತಯಾರಿಸಿದ ವಿವಿಧ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿದೆ. ಪಾಕಶಾಸ್ತ್ರದ ಮಸಾಲೆಗಳನ್ನು ಕೇರಳದಲ್ಲಿ ಸಹಸ್ರಮಾನಗಳಿಂದ ಬೆಳೆಯಲಾಗುತ್ತಿದೆ ಮತ್ತು ಅವು ಅದರ ಪಾಕಪದ್ಧತಿಯ ವಿಶಿಷ್ಟ ಲಕ್ಷಣಗಳಾಗಿವೆ.<ref name="google26">{{cite book |author1=Murdoch Books Pty Limited |author2=Murdoch Books Test Kitchen |title=India |url=https://books.google.com/books?id=d_cHBuYD3CQC&pg=PA10 |access-date=17 November 2012 |year=2010 |publisher=Murdoch Books |isbn=978-1-74196-438-7 |page=10}}</ref> ಅಕ್ಕಿಯು ಪ್ರಮುಖ ಪ್ರಧಾನ ಆಹಾರವಾಗಿದ್ದು, ಇದನ್ನು ಎಲ್ಲಾ ಸಮಯದಲ್ಲೂ ಸೇವಿಸಲಾಗುತ್ತದೆ.<ref name="Majumdar2010">{{cite book |author=Majumdar |title=Consumer Behaviour: Insights From Indian Market |url=https://books.google.com/books?id=KF57x1Nrn2UC&pg=RA1-PA79 |access-date=17 November 2012 |year=2010 |publisher=PHI Learning Pvt. Ltd. |isbn=978-8120339637 |page=181}}</ref> ಕೇರಳದಲ್ಲಿ ಹೆಚ್ಚಿನ ಉಪಾಹಾರ ಆಹಾರಗಳನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ, ಒಂದು ರೂಪದಲ್ಲಿ ಅಥವಾ ಇನ್ನೊಂದು ರೂಪದಲ್ಲಿ (''[[ಇಡ್ಲಿ]]'', ''[[ದೋಸೆ (ಆಹಾರ)|ದೋಸೆ]]'', ''[[ಪುಟ್ಟು]]'', ''[[ಪತ್ತಿರಿ]]'', ''[[ಅಪ್ಪಂ]]'', ಅಥವಾ ''[[ಇಡಿಯಪ್ಪಂ]]''), [[ಮರಗೆಣಸು]] ತಯಾರಿಕೆಗಳು, ಅಥವಾ ದ್ವಿದಳ ಧಾನ್ಯ-ಆಧಾರಿತ [[ವಡೆ (ಆಹಾರ)|ವಡೆ]].<ref name="Muthachen1970">{{cite book |author=Rachel Muthachen |title=Regional Indian Recipes |url=https://books.google.com/books?id=h5xXz_UFV7QC&pg=PA1 |access-date=17 November 2012 |year=1970 |publisher=Jaico Publishing House |isbn=978-8172240356 |page=1}}</ref> ಇವುಗಳು [[ಚಟ್ನಿ]], ''[[ಕಡಲೆ]]'', ''[[ಪಾಯಸಂ]]'', ''[[ಹೆಸರು ಕಾಳು|ಪಯರ್]] [[ಪಪ್ಪಡಂ]]'', ''[[ಅಪ್ಪಂ]]'', ಚಿಕನ್ ಕರಿ, ಗೋಮಾಂಸ ಫ್ರೈ, ಎಗ್ ಮಸಾಲಾ ಮತ್ತು ಮೀನು ಕರಿಯೊಂದಿಗೆ ಸೇರಿಕೊಳ್ಳಬಹುದು.<ref name="Newton" /> [[ಪೊರೊಟ್ಟ]] ಮತ್ತು [[ಬಿರಿಯಾನಿ]] ಸಹ ಸಾಮಾನ್ಯವಾಗಿ ಕೇರಳದ ರೆಸ್ಟೋರೆಂಟ್ಗಳಲ್ಲಿ ಕಂಡುಬರುತ್ತವೆ. ತಲಶ್ಶೇರಿ ಬಿರಿಯಾನಿ ಜನಾಂಗೀಯ ಬ್ರ್ಯಾಂಡ್ ಆಗಿ ಜನಪ್ರಿಯವಾಗಿದೆ. ಮಧ್ಯಾಹ್ನದ ಊಟದ ಭಕ್ಷ್ಯಗಳು [[ಅಕ್ಕಿ]] ಮತ್ತು [[ಕರಿ]] ಜೊತೆಗೆ ''[[ರಸಂ (ಭಕ್ಷ್ಯ)|ರಸಂ]]'', ''ಪುಳಿಶ್ಶೇರಿ'' ಮತ್ತು ''[[ಸಾಂಬಾರ್ (ಭಕ್ಷ್ಯ)|ಸಾಂಬಾರ್]]'' ಅನ್ನು ಒಳಗೊಂಡಿವೆ.<ref name="google27">{{cite book |author=James Newton |title=Jay Rai's Kitchen – Keralan Cuisine |date=2012 |url=https://books.google.com/books?id=5zDWhOU-I04C&pg=PT4 |access-date=17 November 2012 |publisher=Springwood emedia |isbn=978-1-4761-2308-0 |pages=4–}}</ref> ''[[ಸಾಧ್ಯ]]'' ಸಸ್ಯಾಹಾರಿ ಊಟವಾಗಿದ್ದು, ಇದನ್ನು ಬಾಳೆ ಎಲೆಯಲ್ಲಿ ಬಡಿಸಲಾಗುತ್ತದೆ ಮತ್ತು ನಂತರ ಒಂದು ಕಪ್ ಪಾಯಸಂನೊಂದಿಗೆ ಸೇರಿಸಲಾಗುತ್ತದೆ.<ref name="Kannampilly2003">{{cite book |author=Vijayan Kannampilly |title=Essential Kerala Cook Book |url=https://books.google.com/books?id=pYfOCaAPb3sC&pg=PA11 |access-date=17 November 2012 |year=2003 |publisher=Penguin Books India |isbn=978-0-14-302950-2 |pages=10–11}}</ref> ಜನಪ್ರಿಯ ತಿಂಡಿಗಳಲ್ಲಿ [[ಬಾಳೆಹಣ್ಣಿನ ಚಿಪ್ಸ್]], ಯಾಮ್ ಕ್ರಿಸ್ಪ್ಸ್, [[ಮರಗೆಣಸು ಚಿಪ್ಸ್]], [[ಅಚ್ಚಪ್ಪಂ]], [[ಉನ್ನಿ ಅಪ್ಪಂ]] ಮತ್ತು ''ಕುಳಲಪ್ಪಂ'' ಸೇರಿವೆ.<ref name="Kerala with Lakshadweep">{{cite book |title=Kerala with Lakshadweep |url=https://books.google.com/books?id=yJJuAAAAMAAJ |access-date=17 November 2012 |year=2005 |publisher=Outlook Publishing |page=27 |isbn=978-8189449018}}</ref><ref name="Koilparampil1982">{{cite book |author=George Koilparampil |title=Caste in the Catholic community in Kerala: a study of caste elements in the inter rite relationships of Syrians and Latins |url=https://books.google.com/books?id=nXnaAAAAMAAJ |access-date=17 November 2012 |year=1982 |publisher=Dept. of Sociology, St. Teresa's College |page=233}}</ref><ref name="(Swami.)2000">{{cite book |author=Paramatmananda (Swami.) |title=Talks |url=https://books.google.com/books?id=p77mUECpIjgC |access-date=17 November 2012 |year=2000 |publisher=Mata Amritanandamayi Center |isbn=978-1-879410-79-4 |page=24}}</ref> ಸಮುದ್ರಾಹಾರ ವಿಶೇಷ ಭಕ್ಷ್ಯಗಳಲ್ಲಿ [[ಕರಿಮೀನ್]], ಸೀಗಡಿ, ಏಡಿ ಮತ್ತು ಇತರ ಕಠಿಣಚರ್ಮಿ ಭಕ್ಷ್ಯಗಳು ಸೇರಿವೆ.<ref>{{cite web |title=Kerala Cuisine |url=https://www.ecotours.in/kerala-cuisine.htm |publisher=Ecotours |access-date=30 May 2015 |archive-date=13 August 2015 |archive-url=https://web.archive.org/web/20150813003443/http://ecotours.in/kerala-cuisine.htm |url-status=dead }}</ref> [[ತಲಶ್ಶೇರಿ ಪಾಕಪದ್ಧತಿ]] ವೈವಿಧ್ಯಮಯವಾಗಿದೆ ಮತ್ತು ಇದು ಅನೇಕ ಪ್ರಭಾವಗಳ ಮಿಶ್ರಣವಾಗಿದೆ.
== ಮಾಧ್ಯಮ ==
{{Main|ಕೇರಳದಲ್ಲಿ ಮಾಧ್ಯಮ}}
ಮಾಧ್ಯಮ, ದೂರಸಂಪರ್ಕ, ಪ್ರಸಾರ ಮತ್ತು ಕೇಬಲ್ ಸೇವೆಗಳನ್ನು [[ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ]] (TRAI) ನಿಯಂತ್ರಿಸುತ್ತದೆ.<ref>{{cite book |title=The Telecom Regulatory Authority of India Act, 1997 |url=https://books.google.com/books?id=0gfeQc1ZBqIC&pg=PA112 |publisher=Georg Thieme Verlag |page=112 |id=GGKEY:BJ6HEPE0NRE}}</ref> 2015–16 ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 4, ಕೇರಳವನ್ನು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]] ಹೊಂದಿರುವ ರಾಜ್ಯ ಎಂದು ಶ್ರೇಣೀಕರಿಸಿತು.<ref>{{cite web |title=National Family Health Survey (NFHS-4) |url=https://rchiips.org/nfhs/NFHS-4Reports/Kerala.pdf |website=International Institute for Population SciencesDeonar |access-date=7 February 2022 |archive-date=23 February 2022 |archive-url=https://web.archive.org/web/20220223120050/http://rchiips.org/nfhs/NFHS-4Reports/Kerala.pdf |url-status=dead }}</ref> ಡಜನ್ಗಟ್ಟಲೆ ಪತ್ರಿಕೆಗಳು ಕೇರಳದಲ್ಲಿ ಪ್ರಕಟವಾಗುತ್ತವೆ, ಒಂಬತ್ತು ಪ್ರಮುಖ ಭಾಷೆಗಳಲ್ಲಿ,<ref name=rniindia>{{cite web |url=https://rni.nic.in/pii.htm |archive-url=https://web.archive.org/web/20070927070139/https://rni.nic.in/pii.htm |archive-date=27 September 2007 |url-status=dead |title=General Review |access-date=1 September 2006 |publisher=Registrar of Newspapers for India}}</ref> ಆದರೆ ಪ್ರಾಥಮಿಕವಾಗಿ ಮಲಯಾಳಂ ಮತ್ತು ಇಂಗ್ಲಿಷ್.<ref name="google28">{{cite book |author=K. M. George |title=Eng when Poetry Comes |url=https://books.google.com/books?id=MZqqyxVkufQC&pg=PA186 |access-date=17 November 2012 |year=1998 |publisher=Sahitya Akademi |isbn=978-8126004133 |page=186}}</ref> ಕೇರಳವು ಭಾರತದಲ್ಲಿ [[ಮಾಧ್ಯಮ ಪ್ರಸಾರದ ಪ್ರಕಾರ ಭಾರತೀಯ ರಾಜ್ಯಗಳ ಶ್ರೇಯಾಂಕ|ಅತಿ ಹೆಚ್ಚು ಮಾಧ್ಯಮ ಪ್ರಸಾರ]]ವನ್ನು ಹೊಂದಿದೆ.<ref>{{cite web |title=The DHS Program – India: Standard DHS, 2015–16 |url=https://dhsprogram.com/what-we-do/survey/survey-display-355.cfm |website=dhsprogram.com}}</ref><ref>{{cite web |title=National Family Health Survey |url=https://rchiips.org/nfhs/NFHS-4Report.shtml |website=rchiips.org |access-date=7 February 2022 |archive-date=7 March 2022 |archive-url=https://web.archive.org/web/20220307101917/http://rchiips.org/nfhs/NFHS-4Report.shtml |url-status=dead}}</ref> ಅತಿ ವ್ಯಾಪಕವಾಗಿ ಪ್ರಸಾರವಾಗುವ [[ಮಲಯಾಳಂ ಭಾಷಾ ಪತ್ರಿಕೆಗಳ ಪಟ್ಟಿ|ಮಲಯಾಳಂ-ಭಾಷಾ ಪತ್ರಿಕೆಗಳೆಂದರೆ]] ''[[ಮಲಯಾಳ ಮನೋರಮ]], [[ಮಾತೃಭೂಮಿ]], [[ದೇಶಾಭಿಮಾನಿ]], [[ಮಧ್ಯಮಂ]], [[ಕೇರಳ ಕೌಮುದಿ]], [[ಮಂಗಳಂ ಪಬ್ಲಿಕೇಷನ್ಸ್|ಮಂಗಳಂ]], [[ಚಂದ್ರಿಕಾ (ಮಲಯಾಳಂ ಪತ್ರಿಕೆ)|ಚಂದ್ರಿಕಾ]], [[ದೀಪಿಕಾ (ಪತ್ರಿಕೆ)|ದೀಪಿಕಾ]], [[ಜನಯುಗಂ]], [[ಜನ್ಮಭೂಮಿ]], [[ಸಿರಾಜ್ ಡೈಲಿ]]'' ಮತ್ತು ''[[ಸುಪ್ರಭಾತಂ ಡೈಲಿ|ಸುಪ್ರಭಾತಂ]]''. [[ಮಲಯಾಳಂ ಭಾಷಾ ನಿಯತಕಾಲಿಕೆಗಳ ಪಟ್ಟಿ|ಪ್ರಮುಖ ಮಲಯಾಳಂ ನಿಯತಕಾಲಿಕೆಗಳು]] ''[[ಮಾತೃಭೂಮಿ ಅಳಚಪ್ಪತಿಪ್ಪು]], [[ವನಿತಾ]], [[ಇಂಡಿಯಾ ಟುಡೇ]] ಮಲಯಾಳಂ, [[ಮಧ್ಯಮಂ ವೀಕ್ಲಿ]], [[ಗೃಹಲಕ್ಷ್ಮೀ (ನಿಯತಕಾಲಿಕೆ)|ಗೃಹಲಕ್ಷ್ಮೀ]], [[ಧನಂ (ವ್ಯಾಪಾರ ನಿಯತಕಾಲಿಕೆ)|ಧನಂ]], [[ಚಿತ್ರಭೂಮಿ]]'' ಮತ್ತು ''[[ಭಾಷಾಪೋಷಿಣಿ]]''.
[[File:Malayala Manorama New Press in Kollam-3, Apr 2016.jpg|right|thumb|[[ಕೊಟ್ಟಿಯಂ]], [[ಕೊಲ್ಲಂ|ಕೊಲ್ಲಂನ]] [[ಮಲಯಾಳ ಮನೋರಮ]] ಕಚೇರಿ]]
[[ಡಿಡಿ ಮಲಯಾಳಂ]] ಸರ್ಕಾರಿ-ಸ್ವಾಮ್ಯದ ದೂರದರ್ಶನ ಪ್ರಸಾರಕವಾಗಿದೆ. [[ಬಹು-ವ್ಯವಸ್ಥಾಪಕ ವ್ಯವಸ್ಥೆಗಳು|ಬಹು-ವ್ಯವಸ್ಥಾಪಕ ವ್ಯವಸ್ಥೆಗಳು]] ಮಲಯಾಳಂ, ಇಂಗ್ಲಿಷ್, ಇತರ ಭಾರತೀಯ ಭಾಷೆಗಳು ಮತ್ತು ಅಂತಾರಾಷ್ಟ್ರೀಯ ಚಾನೆಲ್ಗಳ ಮಿಶ್ರಣವನ್ನು ಒದಗಿಸುತ್ತವೆ. ಕೆಲವು ಜನಪ್ರಿಯ ಮಲಯಾಳಂ ದೂರದರ್ಶನ ಚಾನೆಲ್ಗಳು [[ಏಷ್ಯಾನೆಟ್ (ದೂರದರ್ಶನ ಚಾನೆಲ್)|ಏಷ್ಯಾನೆಟ್]], [[ಏಷ್ಯಾನೆಟ್ ನ್ಯೂಸ್]], [[ಏಷ್ಯಾನೆಟ್ ಪ್ಲಸ್]], [[ಏಷ್ಯಾನೆಟ್ ಮೂವೀಸ್]], [[ಸೂರ್ಯ ಟಿವಿ]], [[ಸೂರ್ಯ ಮೂವೀಸ್]], [[ಮಝವಿಲ್ ಮನೋರಮ]], [[ಮನೋರಮ ನ್ಯೂಸ್]], [[ಕೈರಳಿ ಟಿವಿ]], [[ಕೈರಳಿ ಟಿವಿ|ಕೈರಳಿ ನ್ಯೂಸ್]], [[ಫ್ಲವರ್ಸ್ (ದೂರದರ್ಶನ ಚಾನೆಲ್)|ಫ್ಲವರ್ಸ್]], [[ಮೀಡಿಯಾ ವನ್ ಟಿವಿ]], [[ಮಾತೃಭೂಮಿ ನ್ಯೂಸ್]], [[ಕಪ್ಪಾ ಟಿವಿ]], [[ಅಮೃತ ಟಿವಿ]], [[ರಿಪೋರ್ಟರ್ ಟಿವಿ]], [[ಜೈಹಿಂದ್]], [[ಜನಂ ಟಿವಿ]], [[ಜೀವನ್ ಟಿವಿ]], [[ಕೌಮುದಿ ಟಿವಿ]] ಮತ್ತು [[ಶಾಲೋಮ್ (ದೂರದರ್ಶನ ಚಾನೆಲ್)|ಶಾಲೋಮ್ ಟಿವಿ]]. ಭಾರತದಲ್ಲಿ ಎರಡನೇ ಅತಿ ಹೆಚ್ಚು ಇಂಟರ್ನೆಟ್ ಪ್ರವೇಶ ಪ್ರಮಾಣದೊಂದಿಗೆ,<ref>{{Cite web |title=Delhi ranks top in Internet penetration, Kerala comes second |url=https://www.thehindubusinessline.com/info-tech/delhi-ranks-top-in-internet-penetration-kerala-comes-second/article31516751.ece/ |date=6 May 2020 |access-date=27 June 2021 |website=The Hindu Business Line}}</ref> [[ಡಿಜಿಟಲ್ ಮೀಡಿಯಾ]] [[ಸಾಮಾಜಿಕ ಮಾಧ್ಯಮ]] ಮತ್ತು [[ಭಾರತದಲ್ಲಿ ಓವರ್-ದಿ-ಟಾಪ್ ಮೀಡಿಯಾ ಸೇವೆಗಳು|OTT ಸೇವೆಗಳು]] ಸೇರಿದಂತೆ ರಾಜ್ಯದಲ್ಲಿ ಮಾಹಿತಿ ಮತ್ತು ಮನರಂಜನೆಯ ಪ್ರಮುಖ ಮೂಲವಾಗಿದೆ. ರಾಜ್ಯದಲ್ಲಿ ಗಮನಾರ್ಹವಾದ [[ಜನ ವಿಜ್ಞಾನ ಚಳುವಳಿ]] ಬೇರೂರಿದೆ, ಮತ್ತು ಬರಹಗಾರರ ಸಹಕಾರಿ ಸಂಘಗಳಂತಹ ಚಟುವಟಿಕೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ.<ref name="Tharamangalam_2005" /><ref name="Ranjith_2004">{{Cite book |author=Ranjith KS |veditors=Nair PR, Shaji H |year=2004 |title=Rural Libraries of Kerala |series=Kerala Research Programme on Local Level Development |publisher=Centre for Development Studies |location=Thiruvananthapuram |isbn=978-8187621812 |pages=20–21 |url=https://www.cds.ac.in/krpcds/publication/downloads/78.pdf |access-date=28 December 2008}}</ref> [[ಬಿಎಸ್ಎನ್ಎಲ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ಜಿಯೋ]] ಪ್ರಮುಖ ಸೆಲ್ ಫೋನ್ ಸೇವಾ ಪೂರೈಕೆದಾರರಾಗಿದ್ದಾರೆ.<ref>{{cite web |title=Highlights ofTelecom Subscription Data as on 28thFebruary, 2019 |url=https://main.trai.gov.in/sites/default/files/PR_No.27of2019_0.pdf |access-date=16 May 2019 |archive-date=18 April 2019 |archive-url=https://web.archive.org/web/20190418140404/https://main.trai.gov.in/sites/default/files/PR_No.27of2019_0.pdf |url-status=dead }}</ref> ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಲಭ್ಯವಿವೆ; ಕೆಲವು ಪ್ರಮುಖ [[ಇಂಟರ್ನೆಟ್ ಸೇವಾ ಪೂರೈಕೆದಾರರು]] [[ಬಿಎಸ್ಎನ್ಎಲ್]], [[ಏಷ್ಯಾನೆಟ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್]], [[ಭಾರತಿ ಏರ್ಟೆಲ್|ಏರ್ಟೆಲ್]], [[ವೋಡಾಫೋನ್ ಐಡಿಯಾ ಲಿಮಿಟೆಡ್]], [[ರೈಲ್ಟೆಲ್|ರೈಲ್ವೈರ್]], ಮತ್ತು [[ಟಾಟಾ ಕಮ್ಯುನಿಕೇಷನ್ಸ್]].
== ಕ್ರೀಡೆ ==
{{Main|ಕೇರಳದಲ್ಲಿ ಕ್ರೀಡೆ}}
[[File:Kerala boatrace.jpg|thumb|ವಾರ್ಷಿಕ [[ವಲ್ಲಂ ಕಳಿ|ಹಾವು ದೋಣಿ ಪಂದ್ಯವನ್ನು]] [[ಪಂಬಾ ನದಿ|ಪಂಬಾ ನದಿಯಲ್ಲಿ]] [[ಓಣಂ]] ಸಮಯದಲ್ಲಿ ನಡೆಸಲಾಗುತ್ತದೆ]]21 ನೇ ಶತಮಾನದ ವೇಳೆಗೆ, ಕೇರಳದ ಬಹುತೇಕ ಎಲ್ಲಾ ಸ್ಥಳೀಯ ಕ್ರೀಡೆಗಳು ಮತ್ತು ಆಟಗಳು ಕಣ್ಮರೆಯಾಗಿದ್ದವು ಅಥವಾ ಸ್ಥಳೀಯ ಹಬ್ಬಗಳ ಸಮಯದಲ್ಲಿ ಪ್ರದರ್ಶಿಸಲಾಗುವ ಒಂದು ಕಲಾ ಪ್ರಕಾರವಾಗಿ ಮಾರ್ಪಟ್ಟಿದ್ದವು; ಇವುಗಳಲ್ಲಿ [[ಪೂರಕ್ಕಳಿ]], ಪದಯಾನಿ, ತಲಪ್ಪಂದುಕಳಿ, ಓನತಲ್ಲು, ಪರಿಚಮುಟ್ಟುಕಳಿ, ವೇಳಾಕಳಿ, ಮತ್ತು ಕಿಳಿತತ್ತುಕಳಿ ಸೇರಿವೆ.<ref name="PRD-sports">{{cite web |url=https://www.prd.kerala.gov.in/sportsmain.htm |title=Sports and Games in Kerala |publisher=Public Relations Dept, Kerala |year=2002 |access-date=9 June 2012 |url-status=dead |archive-url=https://web.archive.org/web/20060428081830/https://www.prd.kerala.gov.in/sportsmain.htm |archive-date=28 April 2006}}</ref> ಆದಾಗ್ಯೂ, "ವಿಶ್ವದ ಎಲ್ಲಾ ಸಮರ ಕಲೆಗಳ ತಾಯಿ" ಎಂದು ಪರಿಗಣಿಸಲ್ಪಟ್ಟ ''[[ಕಳರಿಪಯಟ್ಟು]]'' ಒಂದು ಅಪವಾದವಾಗಿದೆ ಮತ್ತು ಇದನ್ನು ಸ್ಥಳೀಯ ಸಮರ ಕ್ರೀಡೆಯಾಗಿ ಅಭ್ಯಾಸ ಮಾಡಲಾಗುತ್ತದೆ.<ref>{{cite book |title=Muay Thai |publisher=Meyer & Meyer Verlag |author=Arnaud Van Der Veere |year=2012 |page=8 |isbn=978-1-84126-328-1}}</ref> ಕೇರಳದ ಮತ್ತೊಂದು ಸಾಂಪ್ರದಾಯಿಕ ಕ್ರೀಡೆಯೆಂದರೆ ದೋಣಿ ಪಂದ್ಯ, ವಿಶೇಷವಾಗಿ [[ಹಾವು ದೋಣಿ]]ಗಳ ಪಂದ್ಯ.<ref name="PRD-sports" />
[[ಕ್ರಿಕೆಟ್]] ಮತ್ತು [[ಅಸೋಸಿಯೇಷನ್ ಫುಟ್ಬಾಲ್|ಫುಟ್ಬಾಲ್]] ರಾಜ್ಯದಲ್ಲಿ ಜನಪ್ರಿಯವಾಯಿತು; ಎರಡನ್ನೂ 19 ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಮಲಬಾರ್ನಲ್ಲಿ ಪರಿಚಯಿಸಲಾಯಿತು. [[ಟಿನು ಯೋಹಾನನ್]], [[ಅಬೇ ಕುರುವಿಲ್ಲ]], [[ಚುಂಡಂಗಪೊಯಿಲ್ ರಿಝ್ವಾನ್]], [[ಶ್ರೀಶಾಂತ್]], [[ಸಂಜು ಸ್ಯಾಮ್ಸನ್]] ಮತ್ತು [[ಬಾಸಿಲ್ ತಂಪಿ]] ಅಂತಹ ಕ್ರಿಕೆಟಿಗರು ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದರು. ಕೇರಳದ ಕ್ರಿಕೆಟ್ ಫ್ರ್ಯಾಂಚೈಸಿ, [[ಕೊಚ್ಚಿ ಟಸ್ಕರ್ಸ್ ಕೇರಳ|ಕೊಚ್ಚಿ ಟಸ್ಕರ್ಸ್]], [[ಇಂಡಿಯನ್ ಪ್ರೀಮಿಯರ್ ಲೀಗ್]]ನ [[2011 ಇಂಡಿಯನ್ ಪ್ರೀಮಿಯರ್ ಲೀಗ್|ನಾಲ್ಕನೇ ಸೀಸನ್]] ನಲ್ಲಿ ಆಡಿತು. ಆದಾಗ್ಯೂ, ಅದರ ಫ್ರ್ಯಾಂಚೈಸಿಗಳ ನಡುವಿನ ಹಿತಾಸಕ್ತಿ ಸಂಘರ್ಷದಿಂದಾಗಿ ಸೀಸನ್ ನಂತರ ಈ ತಂಡವನ್ನು ವಿಸರ್ಜಿಸಲಾಯಿತು.<ref name="India Wins World Twenty20 Thriller">{{Cite news |title=India Wins World Twenty20 Thriller |date=25 September 2007 |access-date=11 November 2007 |url=https://www.hindu.com/2007/09/25/stories/2007092559400100.htm |archive-url=https://web.archive.org/web/20131106033222/http://www.hindu.com/2007/09/25/stories/2007092559400100.htm |url-status=dead |archive-date=6 November 2013 |work=[[The Hindu]] |location=Chennai, India }}</ref><ref name="hindu_jul09">{{cite news |url=https://www.hindu.com/2009/07/04/stories/2009070456811800.htm |archive-url=https://web.archive.org/web/20090707015857/https://www.hindu.com/2009/07/04/stories/2009070456811800.htm |url-status=dead |archive-date=7 July 2009 |work=[[The Hindu]] |title=Minister convenes high-level meet |date=4 July 2009}}</ref> ಕೇರಳವು ಇತ್ತೀಚೆಗೆ [[ರಣಜಿ ಟ್ರೋಫಿ]] ಕ್ರಿಕೆಟ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದೆ, 2017–18 ರಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ವಾರ್ಟರ್ಫೈನಲ್ಗೆ ತಲುಪಿದೆ.<ref name="PRD-sports" /><ref>{{cite news |title=Ranji Trophy: In historic first, Kerala join defending champions Gujarat in quarter-finals |url=https://timesofindia.indiatimes.com/sports/cricket/india-domestic/ranji-trophy/ranji-trophy-in-historic-first-kerala-join-defending-champions-gujarat-in-quarter-finals/articleshow/61836301.cms |date=28 November 2017 |newspaper=The Times of India |access-date=19 December 2017}}</ref> ಫುಟ್ಬಾಲ್ ಕ್ಲಬ್ ಮತ್ತು ಜಿಲ್ಲಾ ಮಟ್ಟದ ಪಂದ್ಯಗಳಿಗೆ ಈ ರಾಜ್ಯದಲ್ಲಿ ಅತಿ ಹೆಚ್ಚು ಆಡಲ್ಪಡುವ ಮತ್ತು ವೀಕ್ಷಿಸಲ್ಪಡುವ ಕ್ರೀಡೆಗಳಲ್ಲಿ ಒಂದಾಗಿದೆ. ಕೊಚ್ಚಿ [[ಇಂಡಿಯನ್ ಸೂಪರ್ ಲೀಗ್]] ನಲ್ಲಿ [[ಕೇರಳ ಬ್ಲಾಸ್ಟರ್ಸ್ ಎಫ್ಸಿ]]ಯನ್ನು ಆಯೋಜಿಸುತ್ತದೆ. ಬ್ಲಾಸ್ಟರ್ಸ್ ದೇಶದಲ್ಲಿ ಅತಿ ಹೆಚ್ಚು ಬೆಂಬಲಿತ ಕ್ಲಬ್ಗಳಲ್ಲಿ ಒಂದಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ [[ಏಷ್ಯಾ]]ದಿಂದ ಐದನೇ ಅತಿ ಹೆಚ್ಚು ಅನುಸರಿಸಲ್ಪಡುವ ಫುಟ್ಬಾಲ್ ಕ್ಲಬ್ ಆಗಿದೆ.<ref>{{Cite web |last=Salikha |first=Adelaida |title=Top FIVE Asian Clubs With Highest Social Media Followers, Up to October 2018 {{!}} Seasia.co |url=https://seasia.co/2018/10/31/top-five-asian-clubs-with-highest-social-media-followers-up-to-october-2018 |access-date=17 September 2020|website=Good News from Southeast Asia |language=en}}</ref><ref>{{Cite web |date=18 June 2020 |title=Indian Football: Five most-followed clubs on social media |url=https://khelnow.com/football/indian-football-clubs-social-media-followers/ |access-date=10 September 2020 |website=Khel Now |language=en-US |archive-date=13 November 2021 |archive-url=https://web.archive.org/web/20211113014231/https://khelnow.com/football/indian-football-clubs-social-media-followers |url-status=dead }}</ref><ref>{{Cite web |title=Malayalam News – kerala blasters become fifth Asian club with the biggest social media following {{!}} News18 Kerala, Sports Latest Malayalam News {{!}} ലേറ്റസ്റ്റ് മലയാളം വാർത്ത |url=https://malayalam.news18.com/news/sports/kerala-blasters-become-fifth-asian-club-with-the-biggest-social-media-following-50113.html |access-date=5 December 2020 |website=malayalam.news18.com |date=25 October 2018 |archive-date=8 ಫೆಬ್ರವರಿ 2023 |archive-url=https://web.archive.org/web/20230208160346/https://malayalam.news18.com/news/sports/kerala-blasters-become-fifth-asian-club-with-the-biggest-social-media-following-50113.html |url-status=dead }}</ref> ಅಲ್ಲದೆ, ಕೋಝಿಕೋಡ್ [[ಐ-ಲೀಗ್]] ನಲ್ಲಿ [[ಗೋಕುಲಂ ಕೇರಳ ಎಫ್ಸಿ]] ಮತ್ತು [[ಸೈಟ್ ನಾಗ್ಜೀ ಫುಟ್ಬಾಲ್ ಟೂರ್ನಮೆಂಟ್]] ಅನ್ನು ಆಯೋಜಿಸುತ್ತದೆ. ಕೇರಳವು ಪಶ್ಚಿಮ ಬಂಗಾಳ ಮತ್ತು ಗೋವಾ ಜೊತೆಗೆ ಭಾರತದ ಪ್ರಮುಖ ಫುಟ್ಬಾಲ್ ರಾಜ್ಯಗಳಲ್ಲಿ ಒಂದಾಗಿದೆ ಮತ್ತು [[ಐ. ಎಂ. ವಿಜಯನ್]], ಸಿ. ವಿ. ಪಪ್ಪಚನ್, [[ವಿ. ಪಿ. ಸತ್ಯನ್]], [[ಯು. ಶರಾಫ್ ಅಲಿ]], [[ಜೋ ಪಾಲ್ ಅಂಚೇರಿ]], [[ಆಶಿಕ್ ಕುರುಣಿಯನ್]], [[ಮೊಹಮ್ಮದ್ ರಫಿ (ಫುಟ್ಬಾಲ್ ಆಟಗಾರ)|ಮುಹಮ್ಮದ್ ರಫಿ]], [[ಜಿಜು ಜಾಕೋಬ್]], [[ಮಶೂರ್ ಶರೀಫ್]], [[ಪಪ್ಪಚನ್ ಪ್ರದೀಪ್]], [[ಸಿ.ಕೆ. ವಿನೀತ್]], [[ಅನಸ್ ಎಡತೋಡಿಕಾ]], [[ಸಹಲ್ ಅಬ್ದುಲ್ ಸಮದ್]], ಮತ್ತು [[ರಿನೊ ಆಂಟೊ]] ನಂತಹ ರಾಷ್ಟ್ರೀಯ ಆಟಗಾರರನ್ನು ಉತ್ಪಾದಿಸಿದೆ.<ref>{{cite web |url=https://www.the-aiff.com/awards.php |archive-url=https://web.archive.org/web/20090217141248/https://the-aiff.com/awards.php |archive-date=17 February 2009 |title=AIFF Award Player of the Year |publisher=All India Football Federation |access-date=15 November 2015 |url-status=dead}}</ref><ref>{{cite web |author1=James Wray |author2=Ulf Stabe |url=https://twocircles.net/2007sep14/viva_marks_resurgence_kerala_football.html |title=Viva marks the resurgence of Kerala football |publisher=Monstersandcritics.com |date=15 September 2007 |access-date=30 July 2009 |archive-date=31 ಮೇ 2015 |archive-url=https://web.archive.org/web/20150531010433/http://twocircles.net/2007sep14/viva_marks_resurgence_kerala_football.html |url-status=dead }}</ref><ref name="india">{{cite web |url=https://zeenews.india.com/news/sports/indian-football-team-suffer-humiliating-1-9-defeat-to-kuwait_668128.html |publisher=zeenews.india.com |title=Indian football team suffer humiliating 1–9 defeat to Kuwait |date=14 November 2010 |access-date=13 November 2016}}</ref><ref>{{Cite web |last=Sportstar |first=Team |title=Sahal recalls journey from university football to senior national team |url=https://sportstar.thehindu.com/football/intercontinental-cup-indian-football-sahal-abdul-samad-kerala-blasters-college-university-system/article28436294.ece |access-date=6 June 2020 |website=Sportstar |date=15 July 2019 |language=en}}</ref><ref>{{cite web |url=https://scroll.in/field/988334/india-football-stimac-names-10-new-players-in-35-man-probables-list-for-oman-uae-friendlies |title=Bipin Singh, Ishan Pandita in 35-man probables list for Oman, UAE friendlies |website=thescroll.in |date=2 March 2021}}</ref> ಕೇರಳ ರಾಜ್ಯ ಫುಟ್ಬಾಲ್ ತಂಡವು [[ಸಂತೋಷ್ ಟ್ರೋಫಿ]]ಯನ್ನು ಏಳು ಬಾರಿ ಗೆದ್ದಿದೆ; 1973, 1992, 1993, 2001, 2004, 2018, ಮತ್ತು 2022 ರಲ್ಲಿ. ಅವರು ಎಂಟು ಬಾರಿ ರನ್ನರ್-ಅಪ್ ಆಗಿದ್ದರು.<ref>{{cite web |url=https://www.the-aiff.com/pages/tournament/tournament-history.php?tournamentdetail=22 |archive-url=https://web.archive.org/web/20120524035900/https://www.the-aiff.com/pages/tournament/tournament-history.php?tournamentdetail=22 |archive-date=24 May 2012 |title=Past Winners |publisher=All India Football Federation |access-date=9 June 2012}}</ref>
ರಾಜ್ಯದ ಪ್ರಮುಖ ಕ್ರೀಡಾಪಟುಗಳಲ್ಲಿ [[ಪಿ. ಟಿ. ಉಷಾ]], [[ಶೈನಿ ವಿಲ್ಸನ್]] ಮತ್ತು [[ಎಂ.ಡಿ. ವಾಲ್ಸಮ್ಮ]] ಸೇರಿದ್ದಾರೆ, ಇವರೆಲ್ಲರೂ [[ಪದ್ಮಶ್ರೀ]] ಮತ್ತು [[ಅರ್ಜುನ ಪ್ರಶಸ್ತಿ]] ಪಡೆದವರಾಗಿದ್ದಾರೆ, ಆದರೆ [[ಕೆ. ಎಂ. ಬೀನಾಮೋಲ್]] ಮತ್ತು [[ಅಂಜು ಬಾಬಿ ಜಾರ್ಜ್]] [[ರಾಜೀವ್ ಗಾಂಧಿ ಖೇಲ್ ರತ್ನ]] ಮತ್ತು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ. [[ಟಿ. ಸಿ. ಯೋಹಾನನ್]], [[ಸುರೇಶ್ ಬಾಬು (ಲಾಂಗ್ ಜಂಪರ್)|ಸುರೇಶ್ ಬಾಬು]], [[ಸಿನಿಮೋಲ್ ಪೌಲೋಸ್]], ಏಂಜಲ್ ಮೇರಿ ಜೋಸೆಫ್, [[ಮರ್ಸಿ ಕುಟ್ಟನ್]], ಕೆ. ಸರಮ್ಮ, [[ರೋಸಾ ಕುಟ್ಟಿ|ಕೆ. ಸಿ. ರೋಸಾಕುಟ್ಟಿ]], ಪದ್ಮಿನಿ ಸೆಲ್ವನ್ ಮತ್ತು ಟಿಂಟು ಲುಕಾ ಕೇರಳದ ಇತರ ಅರ್ಜುನ ಪ್ರಶಸ್ತಿ ವಿಜೇತರು.<ref name="PRD-sports" /><ref>{{cite web |url=https://keralaathletics.org/history.html |title=Kerala State Athletics Association: History |publisher=Kerala State Athletics Association |access-date=12 June 2012 |archive-date=24 June 2012 |archive-url=https://web.archive.org/web/20120624082221/http://keralaathletics.org/history.html |url-status=dead }}</ref> ವಾಲಿಬಾಲ್ ಮತ್ತೊಂದು ಜನಪ್ರಿಯ ಕ್ರೀಡೆಯಾಗಿದ್ದು, ಇದನ್ನು ಹೆಚ್ಚಾಗಿ ಕರಾವಳಿಯ ಮರಳು ಕಡಲತೀರಗಳಲ್ಲಿ ತಾತ್ಕಾಲಿಕ ಅಂಗಣಗಳಲ್ಲಿ ಆಡಲಾಗುತ್ತದೆ.<ref>{{cite book |title=The Rough Guide to South India |author1=David Abram |author2=Nick Edwards |publisher=Rough Guides |year=2004 |isbn=978-1-84353-103-6 |page=64}}</ref> [[ಜಿಮ್ಮಿ ಜಾರ್ಜ್]] ಒಬ್ಬ ಪ್ರಮುಖ ಭಾರತೀಯ ವಾಲಿಬಾಲ್ ಆಟಗಾರ, ಅವರ ಪ್ರಧಾನ ಸಮಯದಲ್ಲಿ ವಿಶ್ವದ ಹತ್ತು ಅತ್ಯುತ್ತಮ ಆಟಗಾರರಲ್ಲಿ ಶ್ರೇಣೀಕರಿಸಲ್ಪಟ್ಟಿದ್ದರು.<ref>{{cite web |title=Jimmy George |work=Sports Portal |publisher=Ministry of Youth Affairs and Sports |access-date=11 November 2007 |url=https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-url=https://web.archive.org/web/20080514040141/https://sportal.nic.in/legenddetails.asp?sno=667&moduleid=&maincatid=59&subid=0&comid=55 |archive-date=14 May 2008 |url-status=dead}}</ref> ಇತರ ಜನಪ್ರಿಯ ಕ್ರೀಡೆಗಳಲ್ಲಿ [[ಬ್ಯಾಡ್ಮಿಂಟನ್]], [[ಬ್ಯಾಸ್ಕೆಟ್ಬಾಲ್]] ಮತ್ತು [[ಕಬಡ್ಡಿ]] ಸೇರಿವೆ.<ref name="Reddy2005">{{cite book |author=P.A. Reddy |title=Sports Promotion In India |url=https://books.google.com/books?id=T37m8eRAEX0C&pg=PA119 |access-date=17 November 2012 |year=2005 |publisher=Discovery Publishing House |isbn=978-8171419272 |pages=31–42}}</ref> ಭಾರತೀಯ ಹಾಕಿ ತಂಡದ ನಾಯಕ [[ಪಿ. ಆರ್. ಶ್ರೀಜೇಶ್]], ಅಗ್ರ ಗೋಲ್ಕೀಪರ್ ಕೇರಳದವರು. ರಾಜ್ಯದ ಅಂತಾರಾಷ್ಟ್ರೀಯ ವಾಕರ್ಸ್ [[ಕೆ. ಟಿ. ಇರ್ಫಾನ್]] ಸೇರಿದ್ದಾರೆ.<ref>{{cite news |last=Irfan |first=KT |title=KT Irfan, World Athletics Championships, Moscow |url=https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |newspaper=NDTV Sports |archive-url=https://web.archive.org/web/20130814035243/https://sports.ndtv.com/othersports/athletics/212223-indians-disappoint-in-mens-20km-race-walk-in-athletics-worlds |archive-date=14 August 2013 |url-status=dead}}</ref>
[[2017 FIFA U-17 ವಿಶ್ವಕಪ್]] [[ಭಾರತ]]ದಲ್ಲಿ, [[ಜವಾಹರಲಾಲ್ ನೆಹರು ಕ್ರೀಡಾಂಗಣ (ಕೊಚ್ಚಿ)]] ಅನ್ನು [[ಭಾರತ]]ದಲ್ಲಿ ಆಟವನ್ನು ಆಯೋಜಿಸುವ ಆರು ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಯಿತು.<ref>{{cite web |url=https://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |archive-url=https://web.archive.org/web/20160308104258/http://www.newindianexpress.com/cities/kochi/FIFA-Event-at-Kochi-Time-is-Ticking-Away/2016/03/07/article3313714.ece |url-status=dead |archive-date=8 March 2016 |title=FIFA Event at Kochi: Time is Ticking Away |website=The New Indian Express |access-date=3 April 2016}}</ref> [[ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ]]ವು ತಿರುವನಂತಪುರ ನಗರದ ಕಾರಿಯಾವಟ್ಟಂನಲ್ಲಿದೆ, ಇದು ಭಾರತದ ಮೊದಲ DBOT (ವಿನ್ಯಾಸ, ನಿರ್ಮಿಸಿ, ನಿರ್ವಹಿಸಿ ಮತ್ತು ವರ್ಗಾಯಿಸಿ) ಮಾದರಿಯ ಹೊರಾಂಗಣ ಕ್ರೀಡಾಂಗಣವಾಗಿದ್ದು, ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಮತ್ತು [[2015 SAFF ಚಾಂಪಿಯನ್ಶಿಪ್]] ಸೇರಿದಂತೆ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಿದೆ.<ref name="SAFF Cup Dates">{{cite news |last1=Chaudhuri |first1=Arunava |title=Trivandrum will host upcoming SAFF Cup in December 2015/January 2016 |url=http://www.sportskeeda.com/football/trivandrum-will-host-upcoming-saff-cup-in-december-2015january-2016 |access-date=22 December 2015 |work=SportsKeeda |date=2 July 2015}}</ref>
== ಪ್ರವಾಸೋದ್ಯಮ ==
{{Main|ಕೇರಳದಲ್ಲಿ ಪ್ರವಾಸೋದ್ಯಮ}}
ಕೇರಳದ ಸಂಸ್ಕೃತಿ ಮತ್ತು ಸಂಪ್ರದಾಯಗಳು, ಅದರ ವೈವಿಧ್ಯಮಯ [[ಕೇರಳದ ಜನಸಂಖ್ಯಾಶಾಸ್ತ್ರ|ಜನಸಂಖ್ಯಾಶಾಸ್ತ್ರ]]ದೊಂದಿಗೆ, ರಾಜ್ಯವನ್ನು ಭಾರತದಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ. 2012 ರಲ್ಲಿ, [[ನ್ಯಾಷನಲ್ ಜಿಯಾಗ್ರಫಿಕ್|ನ್ಯಾಷನಲ್ ಜಿಯಾಗ್ರಫಿಕ್]] ನ ''[[ನ್ಯಾಷನಲ್ ಜಿಯಾಗ್ರಫಿಕ್ ಟ್ರಾವೆಲರ್|ಟ್ರಾವೆಲರ್]]'' ನಿಯತಕಾಲಿಕೆಯು ಕೇರಳವನ್ನು "ವಿಶ್ವದ ಹತ್ತು ಸ್ವರ್ಗಗಳಲ್ಲಿ" ಒಂದಾಗಿ<ref name="Kerala Tourism">{{cite web |title=Kerala Tourism: Paradises in the world |url=https://www.hindu.com/edu/2004/05/11/stories/2004051100040100.htm |archive-url=https://web.archive.org/web/20040904094648/https://www.hindu.com/edu/2004/05/11/stories/2004051100040100.htm |url-status=dead |archive-date=4 September 2004 |work=[[The Hindu]] |access-date=20 February 2012}}</ref><ref>{{cite web |url=https://www.pravasikairali.com/Homepage.aspx?p=articles&news=447 |archive-url=https://web.archive.org/web/20141108151228/https://www.pravasikairali.com/Homepage.aspx?p=articles&news=447 |archive-date=8 November 2014 |title=Pravasi KairaLi Home |publisher=Pravasikairali.com |url-status=usurped |access-date=11 January 2014}}</ref><ref>{{Cite news |date=7 February 2014 |title=Kerala: A vacation in paradise |work=[[The Times of India]] |url=https://timesofindia.indiatimes.com/kerala-a-vacation-in-paradise/articleshow/26251595.cms |access-date=17 January 2023 |archive-date=25 November 2023 |archive-url=https://web.archive.org/web/20231125190237/https://timesofindia.indiatimes.com/kerala-a-vacation-in-paradise/articleshow/26251595.cms |url-status=live }}</ref> ಮತ್ತು "ಜೀವಮಾನದಲ್ಲಿ ನೋಡಲೇಬೇಕಾದ 50 ಸ್ಥಳಗಳು" ಎಂದು ಹೆಸರಿಸಿತು.<ref name="Kerala India">{{cite web |title=Kerala – The Gateway of India |url=https://forbesindia.com/printcontent/26162 |work=[[Forbes]] |access-date=3 January 2012}}</ref> ''[[ಟ್ರಾವೆಲ್ ಅಂಡ್ ಲೀಷರ್]]'' ಕೂಡ ಕೇರಳವನ್ನು "21 ನೇ ಶತಮಾನದ 100 ಉತ್ತಮ ಪ್ರವಾಸಗಳಲ್ಲಿ ಒಂದು" ಎಂದು ವಿವರಿಸಿದೆ.<ref name="Kerala Tourism" /><ref>{{Cite news |title=Kerala : National Geographic Traveler selects Kerala as 'one of the 50 must-see destinations of a lifetime' |publisher=Travel Portal of India |date=27 January 2009 |access-date=11 June 2011 |url=https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |url-status=dead |archive-url=https://web.archive.org/web/20110904030433/https://www.travelportalofindia.com/2009/07/kerala-national-geographic-traveler-selects-kerala-as-one-of-the-50-must-see-destinations-of-a-lifetime/ |archive-date=4 September 2011}}</ref> 2012 ರಲ್ಲಿ, ಇದು [[ತಾಜ್ ಮಹಲ್]] ಅನ್ನು ಹಿಂದಿಕ್ಕಿ ಭಾರತಕ್ಕಾಗಿ ಗೂಗಲ್ನ ಹುಡುಕಾಟ ಪ್ರವೃತ್ತಿಗಳಲ್ಲಿ ಪ್ರಥಮ ಪ್ರವಾಸಿ ತಾಣವಾಯಿತು.<ref>{{Cite news |title=Kerala beats Taj in Google Search Trends for 2012 |work=Indian Express |date=28 December 2012 |access-date=11 January 2012 |url=https://www.indianexpress.com/news/tourism-kerala-beats-taj-in-google-search-trends-for-2012/1051412}}</ref> [[CNN ಟ್ರಾವೆಲ್]] ತನ್ನ '2019 ರಲ್ಲಿ ಭೇಟಿ ನೀಡಲು 19 ಅತ್ಯುತ್ತಮ ಸ್ಥಳಗಳ' ಪಟ್ಟಿಯಲ್ಲಿ ಕೇರಳವನ್ನು ಸೇರಿಸಿದೆ.<ref>{{Cite web |title=CNN Travel's 19 places to visit in 2019 |url=https://www.cnn.com/travel/article/places-to-visit-2019/index.html |website=CNN Travel |date=22 May 2019 |language=en |access-date=4 April 2022}}</ref> ಕೇರಳವನ್ನು [[Time (magazine)|''TIME'']] ನಿಯತಕಾಲಿಕೆಯು 2022 ರಲ್ಲಿ ತನ್ನ ವಿಶ್ವದ ಅತ್ಯುತ್ತಮ ಸ್ಥಳಗಳ ಪಟ್ಟಿಯಲ್ಲಿ ಅನ್ವೇಷಿಸಲು 50 ಅಸಾಧಾರಣ ಸ್ಥಳಗಳಲ್ಲಿ ಹೆಸರಿಸಿತು.<ref>{{Cite web |url=https://www.indiatoday.in/lifestyle/travel/story/ahmedabad-and-kerala-on-time-magazine-s-list-of-world-s-greatest-places-of-2022-1975386-2022-07-14 |title=Ahmedabad and Kerala on TIME magazine's list of World's Greatest Places of 2022 |website=India Today|date=14 July 2022 }}</ref> 2025 ರಲ್ಲಿ, ಕೇರಳವನ್ನು [[ರಫ್ ಗೈಡ್ಸ್]] ನ '2026 ರ ವಿಶ್ವದ 26 ಪ್ರಮುಖ ಸ್ಥಳಗಳ' ಪಟ್ಟಿಯಲ್ಲಿ 16 ನೇ ಸ್ಥಾನದಲ್ಲಿ ಶ್ರೇಣೀಕರಿಸಲಾಯಿತು, ಇದು ಅಂತಾರಾಷ್ಟ್ರೀಯ ಪ್ರವಾಸ ಮಾರ್ಗದರ್ಶಿಯ ವಾರ್ಷಿಕ ಜಾಗತಿಕ ಸ್ಥಳಗಳ ಶ್ರೇಯಾಂಕದಲ್ಲಿ ಸೇರಿಸಲ್ಪಟ್ಟ ಏಕೈಕ ಭಾರತೀಯ ರಾಜ್ಯವಾಗಿದೆ.<ref>{{Cite news |date=2025-12-27 |title=This is the only Indian state to make it to the list of 'World's Top 26 Destinations For 2026' |url=https://timesofindia.indiatimes.com/life-style/travel/destinations/this-is-the-only-indian-state-to-make-it-to-the-list-of-worlds-top-26-destinations-for-2026/articleshow/126194678.cms |access-date=2025-12-30 |work=The Times of India |issn=0971-8257}}</ref>
ಕೇರಳದ ಬೀಚ್ಗಳು, ಬ್ಯಾಕ್ವಾಟರ್ಗಳು, ಸರೋವರಗಳು, ಪರ್ವತ ಶ್ರೇಣಿಗಳು, ಜಲಪಾತಗಳು, ಪ್ರಾಚೀನ ಬಂದರುಗಳು, ಅರಮನೆಗಳು, ಧಾರ್ಮಿಕ ಸಂಸ್ಥೆಗಳು<ref name="Ltd.2012">{{cite book |author=Infokerala Communications Pvt. Ltd. |title=Kerala Tradition & Fascinating Destinations |url=https://books.google.com/books?id=vTunBAAAQBAJ&pg=PA314 |year=2012 |publisher=Biju Mathew {{!}} Info Kerala Communications Pvt Ltd |isbn=978-8192128481 |page=314}}</ref> ಮತ್ತು ವನ್ಯಜೀವಿ ಅಭಯಾರಣ್ಯಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಗಳಾಗಿವೆ.<ref name="Tripays">{{cite web |url=https://www.tripays.com/kerala-family-tour-packages/ |date=6 August 2011 |title=Kerala Family Tour Packages |author=Admin |access-date=2 July 2019 |archive-date=21 November 2021 |archive-url=https://web.archive.org/web/20211121233843/https://www.tripays.com/kerala-family-tour-packages/ |url-status=dead }}</ref> ಕೊಚ್ಚಿ ನಗರವು ಕೇರಳದಲ್ಲಿ ಒಟ್ಟು ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.<ref name="keralatourism">{{cite web |url=https://www.keralatourism.org/destination-wise-foreign-2010.pdf |date=6 August 2011 |title=Destination Wise Number of Foreign Tourists Visited Kerala During 2010 |author=Saju |access-date=24 September 2014}}</ref><ref name="Tourism Statistics">{{cite web |publisher=Government of Kerala, Tourism Department |url=https://www.keralatourism.org/tourismstatistics/Tourist-Statistics2008.pdf |title=Tourist statistics – 2008 |access-date=22 October 2010}}</ref> 1980 ರ ದಶಕದ ಆರಂಭದವರೆಗೆ, ಕೇರಳವು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಅಪರಿಚಿತ ತಾಣವಾಗಿತ್ತು.<ref name="HinduTourism">{{Cite news |author=Santhanam K |title=An ideal getaway |date=27 January 2002 |access-date=11 November 2007 |url=https://www.hindu.com/thehindu/mag/2002/01/27/stories/2002012700400800.htm |archive-url=https://web.archive.org/web/20030623124553/https://www.hindu.com/thehindu/mag/2002/01/27/stories/2002012700400800.htm |url-status=dead |archive-date=23 June 2003 |work=[[The Hindu]] |location=Chennai, India}}</ref> 1986 ರಲ್ಲಿ ಕೇರಳ ಸರ್ಕಾರವು ಪ್ರವಾಸೋದ್ಯಮವನ್ನು ಪ್ರಮುಖ ಉದ್ಯಮವೆಂದು ಘೋಷಿಸಿತು ಮತ್ತು ಅದನ್ನು ಹಾಗೆ ಮಾಡಿದ ಭಾರತದ ಮೊದಲ ರಾಜ್ಯವಾಗಿದೆ.<ref name="Kerala Tourism"/> [[ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ]], ರಾಜ್ಯದ ಪ್ರವಾಸೋದ್ಯಮ ನಿರೀಕ್ಷೆಗಳನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಂಸ್ಥೆ, ಪ್ರಾರಂಭಿಸಿದ ಮಾರ್ಕೆಟಿಂಗ್ ಅಭಿಯಾನಗಳು ಪ್ರವಾಸೋದ್ಯಮ ಉದ್ಯಮದ ಬೆಳವಣಿಗೆಗೆ ಕಾರಣವಾಯಿತು.<ref name="Tourism">{{cite book |title=Tourism Marketing |author=Dasgupta Devashish |publisher=Pearson Education India |year=2011 |isbn=978-8131731826 |page=203 |url=https://books.google.com/books?id=oXWAEjcG-FsC |access-date=30 May 2015}}</ref> ಅನೇಕ ಜಾಹೀರಾತುಗಳು ಕೇರಳವನ್ನು ''[[ಗಾಡ್ಸ್ ಓನ್ ಕಂಟ್ರಿ|ಕೇರಳ, ಗಾಡ್ಸ್ ಓನ್ ಕಂಟ್ರಿ]]'' ಎಂಬ ಸ್ಲೋಗನ್ನೊಂದಿಗೆ ಬ್ರಾಂಡ್ ಮಾಡಿದವು.<ref name="Tourism" /> ಕೇರಳ ಪ್ರವಾಸೋದ್ಯಮವು ಜಾಗತಿಕ ಬ್ರ್ಯಾಂಡ್ ಆಗಿದ್ದು, ಅತಿ ಹೆಚ್ಚು ನೆನಪಿನ ಶಕ್ತಿಯನ್ನು ಹೊಂದಿರುವ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.<ref name="Tourism" /> 2006 ರಲ್ಲಿ, ಕೇರಳವು 8.5 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿತು, ಇದು ಹಿಂದಿನ ವರ್ಷಕ್ಕಿಂತ 23.7% ರಷ್ಟು ಹೆಚ್ಚಳವಾಗಿದೆ, ಇದು ರಾಜ್ಯವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜನಪ್ರಿಯ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ.<ref>{{cite web |title=Tourist Statistics – 2006 |work=Department of Tourism |publisher=Government of Kerala |year=2006 |access-date=11 November 2007 |url=https://www.keralatourism.org/php/media/data/tourismstatistics/TS2006.pdf |archive-url=https://web.archive.org/web/20080626195845/https://www.keralatourism.org/php/media/data/tourismstatistics/TS2006.pdf |archive-date=26 June 2008}}</ref> 2011 ರಲ್ಲಿ, ಕೇರಳಕ್ಕೆ ಪ್ರವಾಸಿಗರ ಒಳಹರಿವು 10-ಮಿಲಿಯನ್ ಗಡಿಯನ್ನು ದಾಟಿತು.<ref name="bizstd">{{Cite news |title=Tourist inflow to Kerala crosses 10 million mark |work=Business-Standard |access-date=15 November 2015 |url=https://www.business-standard.com/india/news/tourist-inflow-to-kerala-crosses-10-million-mark/474524/ |date=16 May 2012 |last1=Joseph |first1=George}}</ref>
ಆಯುರ್ವೇದ ಪ್ರವಾಸೋದ್ಯಮವು 1990 ರ ದಶಕದಿಂದಲೂ ಬಹಳ ಜನಪ್ರಿಯವಾಗಿದೆ, ಮತ್ತು ಖಾಸಗಿ ಸಂಸ್ಥೆಗಳು ಪ್ರವಾಸೋದ್ಯಮ ಇಲಾಖೆಯ ಉಪಕ್ರಮಗಳೊಂದಿಗೆ ಗಮನಾರ್ಹ ಪಾತ್ರವನ್ನು ವಹಿಸಿವೆ.<ref name="HinduTourism" /> ಕೇರಳವು ತನ್ನ [[ಪರಿಸರ ಪ್ರವಾಸೋದ್ಯಮ]] ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ, ಇವುಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಪರ್ವತಾರೋಹಣ, ಟ್ರೆಕ್ಕಿಂಗ್ ಮತ್ತು ಪಕ್ಷಿ ವೀಕ್ಷಣಾ ಕಾರ್ಯಕ್ರಮಗಳು ಪ್ರಮುಖ ಚಟುವಟಿಕೆಗಳಾಗಿವೆ.<ref name="Devrep47">{{Cite book |author=Planning Commission, India |title=Kerala Development Report |url=https://books.google.com/books?id=Ul-OkF5gUJQC |publisher=Academic Foundation |year=2007 |isbn=978-8171885947 |page=47 |access-date=30 May 2015}}</ref> ರಾಜ್ಯದ ಪ್ರವಾಸೋದ್ಯಮ ಉದ್ಯಮವು [[ಕೇರಳದ ಆರ್ಥಿಕತೆ|ರಾಜ್ಯದ ಆರ್ಥಿಕತೆಗೆ]] ಪ್ರಮುಖ ಕೊಡುಗೆಯಾಗಿದೆ, 13.3% ದರದಲ್ಲಿ ಬೆಳೆಯುತ್ತಿದೆ.<ref>{{cite web |title=Tourist Statistics – 2005 (Provisional) |work=Department of Tourism |publisher=Government of Kerala |year=2005 |access-date=11 November 2007 |url=https://www.keralatourism.org/php/media/data/tourismstatistics/TOURISTSTATISTICS2005.pdf |archive-url=https://web.archive.org/web/20080626195846/https://www.keralatourism.org/php/media/data/tourismstatistics/TOURISTSTATISTICS2005.pdf |archive-date=26 June 2008}}</ref> ಪ್ರವಾಸೋದ್ಯಮದಿಂದ ಬರುವ ಆದಾಯವು 2001 ಮತ್ತು 2011 ರ ನಡುವೆ ಐದು ಪಟ್ಟು ಹೆಚ್ಚಾಗಿ 2011 ರಲ್ಲಿ {{INR}} 190 ಬಿಲಿಯನ್ ಗಡಿಯನ್ನು ದಾಟಿತು. ಎಕನಾಮಿಕ್ ಟೈಮ್ಸ್ ಪ್ರಕಾರ<ref>{{Cite news |url=https://economictimes.indiatimes.com/industry/services/travel/kerala-records-6-rise-in-tourist-arrivals-despite-floods-and-nipah-virus-scare/articleshow/67995390.cms |title=Kerala records 6% rise in tourist arrivals despite floods and Nipah virus scare |date=14 February 2019 |work=The Economic Times |access-date=14 August 2019}}</ref> ಕೇರಳವು 2018 ರಲ್ಲಿ ಪ್ರವಾಸೋದ್ಯಮ ವಲಯದಿಂದ INR 365280.1 ಮಿಲಿಯನ್ ದಾಖಲೆಯ ಆದಾಯವನ್ನು ಗಳಿಸಿತು, ಇದು ಹಿಂದಿನ ವರ್ಷಕ್ಕಿಂತ Rs 28743.3 ಮಿಲಿಯನ್ ಹೆಚ್ಚಳವಾಗಿದೆ. 2018 ರಲ್ಲಿ 16.7 ಮಿಲಿಯನ್ ಕ್ಕೂ ಹೆಚ್ಚು ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡಿದ್ದಾರೆ, ಇದು ಹಿಂದಿನ ವರ್ಷ 15.76 ಮಿಲಿಯನ್ ಗೆ ಹೋಲಿಸಿದರೆ 5.9% ರಷ್ಟು ಹೆಚ್ಚಳವಾಗಿದೆ. ಈ ಉದ್ಯಮವು ಸರಿಸುಮಾರು 1.2 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ.<ref name="bizstd" />
ರಾಜ್ಯದ ಏಕೈಕ ಡ್ರೈವ್-ಇನ್ ಬೀಚ್, ಕಣ್ಣೂರಿನ [[ಮುಝಪ್ಪಿಲಂಗಡ್ ಬೀಚ್]], ಇದು {{convert|5|km}} ಮರಳಿನಲ್ಲಿ ಹರಡಿದೆ, ಇದನ್ನು ಬಿಬಿಸಿ 2016 ರಲ್ಲಿ ವಿಶ್ವದ ಆರು ಪ್ರಮುಖ ಡ್ರೈವ್-ಇನ್ ಬೀಚ್ಗಳಲ್ಲಿ ಒಂದಾಗಿ ಆಯ್ಕೆ ಮಾಡಿತು.<ref>{{cite web |url=https://www.bbc.com/autos/story/20160617-the-worlds-best-beaches-for-driving |title=The best beaches for driving |first=David K. |last=Gibson |work=BBC Autos |date=11 June 2021}}</ref> [[ಇಡುಕ್ಕಿ ಅಣೆಕಟ್ಟು]], ವಿಶ್ವದ ಎರಡನೇ ಕಮಾನು ಅಣೆಕಟ್ಟು, ಮತ್ತು ಏಷ್ಯಾದ ಮೊದಲನೆಯದು [[ಇಡುಕ್ಕಿ|ಇಡುಕ್ಕಿಯಲ್ಲಿದೆ]]. ಪ್ರಮುಖ ಬೀಚ್ಗಳು [[ಕೋವಳಂ]], [[ವರ್ಕಲ]], [[ಕೋಝಿಕೋಡ್]], [[ಫೋರ್ಟ್ ಕೊಚ್ಚಿ]], [[ಚೇರಾಯಿ]], [[ಆಲಪ್ಪುಳ]], [[ಪೊನ್ನಾನಿ]], [[ಕಡಲುಂಡಿ]], [[ತಾನೂರು, ಮಲಪ್ಪುರಂ|ತಾನೂರು]], [[ಚಾಲಿಯಂ]], [[ಪಾಯ್ಯಂಬಲಂ]], ಕಪ್ಪಾಡ್, [[ಮುಝಪ್ಪಿಲಂಗಡ್ ಬೀಚ್|ಮುಝಪ್ಪಿಲಂಗಡ್]] ಮತ್ತು [[ಬೇಕಲ್]]. ಜನಪ್ರಿಯ [[ಬೆಟ್ಟದ ತಾಣ]]ಗಳೆಂದರೆ [[ಪೊನ್ಮುಡಿ]], [[ವಯನಾಡು]], [[ವಗಮನ್]], [[ಮುನ್ನಾರ್]], [[ಪೀರ್ಮೇಡ್]], [[ರಾಮಕ್ಕಲ್ಮೇಡು]], [[ಅರಿಂಬ್ರ ಬೆಟ್ಟಗಳು, ಮಲಪ್ಪುರಂ|ಅರಿಂಬ್ರ]], [[ಪೈತಲ್ಮಲ]] [[ಇಡುಕ್ಕಿ|ಕಣ್ಣೂರು]] ಜಿಲ್ಲೆಯ, [[ಕೊಡಿಕುತಿಮಲ]], ಮತ್ತು [[ನೆಲ್ಲಿಯಂಪತಿ]].<ref>{{cite book |author=Tapan K Panda |title=Tourism Marketing |publisher=ICFAI Books |year=2007 |isbn=978-8131404690 |url=https://books.google.com/books?id=4A0j6ZlJQfkC |pages=173–77 |access-date=30 May 2015}}</ref> ಮುನ್ನಾರ್ ಸಮುದ್ರ ಮಟ್ಟದಿಂದ 4,500 ಅಡಿ ಎತ್ತರದಲ್ಲಿದೆ ಮತ್ತು ಚಹಾ ತೋಟಗಳು ಮತ್ತು ವಿವಿಧ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ.<ref name="FPJ">{{cite news |title=Kerala: Spellbound by this natural beauty |newspaper=The Free Press Journal |url=https://www.freepressjournal.in/travel/kerala-spellbound-by-this-natural-beauty/636904 |date=2 August 2015 |access-date=27 November 2015}}</ref> ಕೇರಳದ ಪರಿಸರ ಪ್ರವಾಸೋದ್ಯಮ ತಾಣಗಳು 12 ವನ್ಯಜೀವಿ ಅಭಯಾರಣ್ಯಗಳು ಮತ್ತು ಎರಡು ರಾಷ್ಟ್ರೀಯ ಉದ್ಯಾನವನಗಳನ್ನು ಒಳಗೊಂಡಿವೆ: [[ಪೆರಿಯಾರ್ ಹುಲಿ ಮೀಸಲು]], [[ಪರಂಬಿಕುಳಂ ವನ್ಯಜೀವಿ ಅಭಯಾರಣ್ಯ]], [[ಚಿನ್ನಾರ್ ವನ್ಯಜೀವಿ ಅಭಯಾರಣ್ಯ]], [[ಥಟ್ಟೆಕ್ಕಾಡ್ ಪಕ್ಷಿ ಅಭಯಾರಣ್ಯ]], [[ವಯನಾಡು ವನ್ಯಜೀವಿ ಅಭಯಾರಣ್ಯ]], [[ಕಡಲುಂಡಿ ಪಕ್ಷಿ ಅಭಯಾರಣ್ಯ]], [[ಕರಿಂಪುಳ ವನ್ಯಜೀವಿ ಅಭಯಾರಣ್ಯ]], [[ಮುತ್ತಂಗ]] ವನ್ಯಜೀವಿ ಅಭಯಾರಣ್ಯ, [[ಅರಳಂ ವನ್ಯಜೀವಿ ಅಭಯಾರಣ್ಯ]], [[ಎರವಿಕುಳಂ ರಾಷ್ಟ್ರೀಯ ಉದ್ಯಾನವನ]], ಮತ್ತು [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]] ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ.<ref>{{cite book |author=M.R. Biju |title=Sustainable Dimensions Of Tourism Management |publisher=Mittal Publications |year=2006 |isbn=978-8183241298 |url=https://books.google.com/books?id=AkAdvTbg0dEC |pages=151–65 |access-date=30 May 2015}}</ref> ಕೇರಳ ಬ್ಯಾಕ್ವಾಟರ್ಗಳು ಅಂತರ್ಸಂಪರ್ಕಿತ ನದಿಗಳ (41 ಪಶ್ಚಿಮಕ್ಕೆ ಹರಿಯುವ ನದಿಗಳು), ಸರೋವರಗಳು ಮತ್ತು ಕಾಲುವೆಗಳ ವ್ಯಾಪಕ ಜಾಲವಾಗಿದ್ದು, ಇದು ಆಲಪ್ಪುಳ, [[ಕುಮಾರಕೋಂ]], [[ಪೊನ್ನಾನಿ]], [[ನೀಲೇಶ್ವರಂ]], ಮತ್ತು [[ಪುನ್ನಮದ]] (ಅಲ್ಲಿ ವಾರ್ಷಿಕ ನೆಹರು ಟ್ರೋಫಿ ದೋಣಿ ಪಂದ್ಯವನ್ನು ಆಗಸ್ಟ್ನಲ್ಲಿ ನಡೆಸಲಾಗುತ್ತದೆ), [[ಪತ್ತಿರಮಣಲ್]] [[ಮುಹಮ್ಮ]] ದಲ್ಲಿನ ಸಣ್ಣ ದ್ವೀಪವನ್ನು ಕೇಂದ್ರೀಕರಿಸುತ್ತದೆ. [[ಪದ್ಮನಾಭಪುರಂ ಅರಮನೆ]] ಮತ್ತು [[ಮತ್ತಂಚೇರಿ ಅರಮನೆ]] ಎರಡು ಸಮೀಪದ ಪರಂಪರೆಯ ತಾಣಗಳಾಗಿವೆ.<ref>{{cite web |url=https://www.keralatourism.org/destination/padmanabhapuram-palace/244 |title=Padmanabhapuram Palace |publisher=Kerala Tourism |access-date=2 December 2016}}</ref><ref>{{cite web |url=https://www.keralatourism.org/destination/mattancherry-palace-kochi/178 |title=Mattancherry Palace |publisher=Kerala Tourism |access-date=2 December 2016}}</ref>
== ಸಹ ನೋಡಿ ==
{{stack|{{Portal|ಭಾರತ}}}}
* [[ಕೇರಳದ ರೂಪರೇಖೆ]]
* [[ದಕ್ಷಿಣ ಭಾರತ]]
* [[ದ್ರಾವಿಡರು]]
* [[ಕೇರಳದ ನಗರ ನಿಗಮಗಳ ಪಟ್ಟಿ]]
* [[ಕೇರಳದ ತಾಲೂಕುಗಳ ಪಟ್ಟಿ]]
* [[ಕೇರಳದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ]]
* [[ಕೇರಳದ ಜಿಲ್ಲೆಗಳ ಪಟ್ಟಿ]]
* [[ಕೇರಳದ ಆದಾಯ ವಿಭಾಗಗಳ ಪಟ್ಟಿ]]
* [[ಕೇರಳದ ಖಗೋಳಶಾಸ್ತ್ರ ಮತ್ತು ಗಣಿತದ ಶಾಲೆ]]
== ಉಲ್ಲೇಖಗಳು ==
{{Reflist}}
==ಟಿಪ್ಪಣಿಗಳು==
{{notelist}}
=== ಮೂಲಗಳು ===
{{refbegin}}
* {{cite book |title=Mathrubhumi Yearbook Plus – 2019 |publisher=Mathrubhumi Printing & Publishing Company Limited |year=2018 |location=[[Kozhikode]] |editor-last=Chandran |editor-first=V. P. |id={{ASIN|8182676444 |country=in}} |language=Malayalam }}
{{refend}}
== ಹೆಚ್ಚಿನ ಓದುವಿಕೆ ==
{{Further|ಕೇರಳದ ಇತಿಹಾಸ#ಹೆಚ್ಚಿನ ಓದುವಿಕೆ}}
* Bose, Satheese Chandra and Varughese, Shiju Sam (eds.) 2015. ''[https://web.archive.org/web/20150102071757/https://www.orientblackswan.com/display.asp?categoryID=0&isbn=978-8125057222 Kerala Modernity: Ideas, Spaces and Practices in Transition]''. Hyderabad: Orient Blackswan.
* {{cite journal |pmc=7510531 |year=2021 |last1=Chathukulam |first1=Jos |last2=Tharamangalam |first2=Joseph |title=The Kerala model in the time of COVID19: Rethinking state, society and democracy |journal=World Development |volume=137 |article-number=105207 |doi=10.1016/j.worlddev.2020.105207 |pmid=32989341}}
* {{cite journal |url=https://journals.sagepub.com/doi/abs/10.1177/0971521516656077 |doi=10.1177/0971521516656077 |title=The 'Kudumbashree Woman' and the Kerala Model Woman: Women and Politics in Contemporary Kerala |year=2016 |last1=Devika |first1=J. |journal=Indian Journal of Gender Studies |volume=23 |issue=3 |pages=393–414 |s2cid=151752480|url-access=subscription }}
* {{cite journal |url=https://openresearch-repository.anu.edu.au/bitstream/1885/19062/2/01_Jeffrey_Legacies_of_Matriliny%3A__the_2005.pdf |jstor=40023536 |title=Legacies of Matriliny: The Place of Women and the "Kerala Model" |last1=Jeffrey |first1=Robin |journal=Pacific Affairs |year=2004 |volume=77 |issue=4 |pages=647–664}}
* {{cite journal |url=http://keralamediaacademy.org/wp-content/uploads/2015/02/Robin-Jeffery.pdf |doi=10.1017/S0021911809000679 |s2cid=146795894 |title=Testing Concepts about Print, Newspapers, and Politics: Kerala, India, 1800–2009 |year=2009 |last1=Jeffrey |first1=Robin |journal=The Journal of Asian Studies |volume=68 |issue=2 |page=465 |access-date=2026-08-03 |archive-date=2022-12-02 |archive-url=https://web.archive.org/web/20221202171902/http://keralamediaacademy.org/wp-content/uploads/2015/02/Robin-Jeffery.pdf |url-status=dead }}
* {{cite book |title=Politics, Women and Well-Being: How Kerala became 'a Model' |isbn=978-1-349-12252-3 |last1=Jeffrey |first1=Robin |date=27 July 2016 |publisher=Springer}}
* {{cite book |last1=Ramanathaiyer |first1=Sundar |first2=Stewart |last2=MacPherson |title=Social Development in Kerala: Illusion or Reality? |edition=2nd |publisher=Routledge |year=2018}}
== ಬಾಹ್ಯ ಕೊಂಡಿಗಳು ==
{{Sister project links|voy=Kerala|Kerala}}
; ಸರ್ಕಾರ
* {{official website|https://www.kerala.gov.in/}} {{Webarchive|url=https://web.archive.org/web/20060118031516/https://www.kerala.gov.in/ |date=18 January 2006 }} ಕೇರಳ ಸರ್ಕಾರದ
* {{official website|https://www.keralatourism.org/}} ಕೇರಳ ಪ್ರವಾಸೋದ್ಯಮದ
; ಸಾಮಾನ್ಯ ಮಾಹಿತಿ
* {{OSM relation|2018151}}
{{Clear}}
{{Kerala |show=show }}
[[ವರ್ಗ:ಕೇರಳ| ]]
[[ವರ್ಗ:ದಕ್ಷಿಣ ಭಾರತ|.]]
[[ವರ್ಗ:1956 ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರದೇಶಗಳು]]
[[ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
iv7ioh3j9oucda34s05jyx150n3it60
ಎತಿಹಾದ್ ಏರ್ವೇಸ್
0
180081
1379516
1378817
2026-08-08T18:28:05Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1379516
wikitext
text/x-wiki
ಎತಿಹಾದ್ ಏರ್ವೇಸ್ ಯುನೈಟೆಡ್ ಅರಬ್ ಎಮಿರೇಟ್ಸ್ನ ಎರಡು ಫ್ಲ್ಯಾಗ್ ಕ್ಯಾರಿಯರ್ ಏರ್ಲೈನ್ಗಳಲ್ಲಿ<ref>https://web.archive.org/web/20160617214620/http://atwonline.com/airports-routes/etihad-avianca-brasil-ink-new-codeshare</ref> ಒಂದಾಗಿದೆ (ಇನ್ನೊಂದು ಎಮಿರೇಟ್ಸ್). ಇದರ ಪ್ರಧಾನ ಕಚೇರಿ ಅಬುಧಾಬಿಯ ಖಲೀಫಾ ನಗರದಲ್ಲಿ, ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇದೆ.<ref>https://gulfnews.com/companies/etihad-airways</ref> ವಿಮಾನಯಾನ ಸಂಸ್ಥೆಯು ನವೆಂಬರ್ 2003 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಎಮಿರೇಟ್ಸ್ ನಂತರ ಯುಎಇಯಲ್ಲಿ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ.<ref>http://www.etihadairways.com/sites/Etihad/Etihad%20Images/Resources/EY-Factsheet.pdf</ref>
ವಿಮಾನಯಾನ ಸಂಸ್ಥೆಯು ವಾರಕ್ಕೆ 1,000 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತದೆ, ಮಧ್ಯಪ್ರಾಚ್ಯ, ಆಫ್ರಿಕಾ, ಯುರೋಪ್, ಏಷ್ಯಾ, ಆಸ್ಟ್ರೇಲಿಯಾ ಮತ್ತು ಉತ್ತರ ಅಮೆರಿಕಾದಲ್ಲಿ 120 ಕ್ಕೂ ಹೆಚ್ಚು ಪ್ರಯಾಣಿಕ ಮತ್ತು ಸರಕು ಸಾಗಣೆ ತಾಣಗಳಿಗೆ, ಜುಲೈ 2025 ರ ಹೊತ್ತಿಗೆ 107 ಏರ್ಬಸ್ ಮತ್ತು ಬೋಯಿಂಗ್ ವಿಮಾನಗಳ ಫ್ಲೀಟ್ನೊಂದಿಗೆ. ಇದರ ಮುಖ್ಯ ನೆಲೆ ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದೆ.<ref>https://en.wikipedia.org/wiki/Flight_International</ref> ಪ್ರಯಾಣಿಕರ ಸಾಗಣೆಯ ಮುಖ್ಯ ಚಟುವಟಿಕೆಯ ಜೊತೆಗೆ, ಎತಿಹಾದ್ ಎತಿಹಾದ್ ಹಾಲಿಡೇಸ್ ಮತ್ತು ಎತಿಹಾದ್ ಕಾರ್ಗೋವನ್ನು ಸಹ ನಿರ್ವಹಿಸುತ್ತದೆ.<ref>http://www.etihadairways.com/sites/Etihad/Etihad%20Images/Resources/EY-Factsheet.pdf</ref>
=ಇತಿಹಾಸ=
'''ಹಿನ್ನೆಲೆ'''
ಅಬುಧಾಬಿ ಎಮಿರೇಟ್, ಬಹ್ರೇನ್, ಕತಾರ್ ಮತ್ತು ಓಮನ್ ಸುಲ್ತಾನೇಟ್ ಜೊತೆಗೆ ಗಲ್ಫ್ ಏರ್ನ ಜಂಟಿ ಮಾಲೀಕತ್ವವನ್ನು ಹೊಂದಿತ್ತು. ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 1970 ರಿಂದ 2005 ರವರೆಗೆ ಗಲ್ಫ್ ಏರ್ನ ನೆಲೆಗಳು ಮತ್ತು ಕೇಂದ್ರಗಳಲ್ಲಿ ಒಂದಾಗಿತ್ತು, ಯುಎಇ ವಿಮಾನಯಾನ ಸಂಸ್ಥೆಯಿಂದ ಹಿಂದೆ ಸರಿಯಿತು. 2007 ರಲ್ಲಿ ಓಮನ್ ನಿರ್ಗಮಿಸುವವರೆಗೆ ಗಲ್ಫ್ ಏರ್ ಎರಡು-ರಾಜ್ಯ ವಾಹಕವಾಗಿ ಉಳಿಯಿತು ಮತ್ತು ಓಮನ್ ಏರ್ ಮೇಲೆ ಕೇಂದ್ರೀಕರಿಸಿತು ಮತ್ತು ಇಂದು, ಗಲ್ಫ್ ಏರ್ ಸಂಪೂರ್ಣವಾಗಿ ಬಹ್ರೇನ್ನ ಒಡೆತನದಲ್ಲಿದೆ.<ref>https://www.ft.com/content/47823cc0-247a-11da-a5d0-00000e2511c8</ref>
'''ಹೆಸರು'''
ಎತಿಹಾದ್ ಎಂದರೆ ಅರೇಬಿಕ್ ಭಾಷೆಯಲ್ಲಿ "ಒಕ್ಕೂಟ" ಅಥವಾ "ಏಕತೆ", ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನ ಏಳು ಎಮಿರೇಟ್ಗಳ (ಅಬುಧಾಬಿ, ದುಬೈ, ಶಾರ್ಜಾ, ಅಜ್ಮಾನ್, ಉಮ್ ಅಲ್ ಕುವೈನ್, ರಾಸ್ ಅಲ್ ಖೈಮಾ ಮತ್ತು ಫುಜೈರಾ) ಏಕತೆಯನ್ನು ಪ್ರತಿನಿಧಿಸುತ್ತದೆ.
'''ಅಡಿಪಾಯ'''
ಜುಲೈ 2003 ರಲ್ಲಿ, ಅಬುಧಾಬಿಗೆ ವಿಮಾನಯಾನ ಸಂಸ್ಥೆಯನ್ನು ಬಯಸಿದ್ದ ಯುಎಇಯ ಭವಿಷ್ಯದ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್, ಎತಿಹಾದ್ ಏರ್ವೇಸ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿ ಸ್ಥಾಪಿಸುವ ಅಮಿರಿ ಆದೇಶವನ್ನು ಹೊರಡಿಸಿದರು. ಶೇಖ್ ಅಹ್ಮದ್ ಬಿನ್ ಸೈಫ್ ಅಲ್ ನಹ್ಯಾನ್ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿದರು ಮತ್ತು AED500 ಮಿಲಿಯನ್ ಸ್ಟಾರ್ಟ್-ಅಪ್ ಬಂಡವಾಳವನ್ನು ಬಳಸಿಕೊಂಡರು. ನವೆಂಬರ್ 5, 2003 ರಂದು ಅಲ್ ಐನ್ಗೆ ವಿಧ್ಯುಕ್ತ ಹಾರಾಟದೊಂದಿಗೆ ಸೇವೆಗಳನ್ನು ಪ್ರಾರಂಭಿಸಲಾಯಿತು. ನವೆಂಬರ್ 12, 2003 ರಂದು, ಎತಿಹಾದ್ ಲೆಬನಾನ್ನ ಬೈರುತ್ಗೆ ಸೇವೆಗಳನ್ನು ಪ್ರಾರಂಭಿಸುವ ಮೂಲಕ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಜೂನ್ 2004 ರಲ್ಲಿ, ವಿಮಾನಯಾನ ಸಂಸ್ಥೆಯು 10 ಏರ್ಬಸ್ A380 ಗಳನ್ನು ಒಳಗೊಂಡಂತೆ ಆರು ಬೋಯಿಂಗ್ 777-200 ಮತ್ತು 24 ಏರ್ಬಸ್ ವಿಮಾನಗಳಿಗೆ US$8 ಬಿಲಿಯನ್ ವಿಮಾನ ಆದೇಶವನ್ನು ನೀಡಿತು. ಎತಿಹಾದ್ನ ಮೊದಲ A380 ಅನ್ನು ಡಿಸೆಂಬರ್ 2014 ರಲ್ಲಿ ವಿತರಿಸಲಾಯಿತು.<ref>http://globalaviationexpress.blogspot.com.au/2014/05/first-glimpse-of-etihad-airways-special.html</ref>
ಜೂನ್ 2008 ರಲ್ಲಿ, ಫಾರ್ನ್ಬರೋ ಏರ್ಶೋನಲ್ಲಿ, ವಿಮಾನಯಾನ ಸಂಸ್ಥೆಯು 35 ಬೋಯಿಂಗ್ 787 ಮತ್ತು 10 777 ವಿಮಾನಗಳಿಗೆ ಆದೇಶವನ್ನು, 25 787 ಮತ್ತು 10 777 ವಿಮಾನಗಳಿಗೆ ಆಯ್ಕೆಗಳನ್ನು ಮತ್ತು 10 787 ಮತ್ತು 5 777 ವಿಮಾನಗಳ ಖರೀದಿ ಹಕ್ಕುಗಳನ್ನು ಘೋಷಿಸಿತು.<ref>https://www.flightglobal.com/farnborough-2008-etihad-orders-up-to-95-boeing-787s-777s/81492.article</ref> 2006 ರಲ್ಲಿ ಸಿಇಒ ಜೇಮ್ಸ್ ಹೊಗನ್ ಘೋಷಿಸಿದ ಕಾರ್ಯತಂತ್ರದ ಯೋಜನೆಗೆ ಅನುಗುಣವಾಗಿ, ಎತಿಹಾಡ್ 2011 ರಲ್ಲಿ ತನ್ನ ಮೊದಲ ಪೂರ್ಣ-ವರ್ಷದ ನಿವ್ವಳ ಲಾಭವನ್ನು US$14 ಮಿಲಿಯನ್ ಎಂದು ವರದಿ ಮಾಡಿದೆ.<ref>https://web.archive.org/web/20120711181251/http://www.thenational.ae/thenationalconversation/industry-insights/aviation/etihad-airways-lands-first-profit</ref>
'''ಇಕ್ವಿಟಿ ಅಲೈಯನ್ಸ್'''
ಡಿಸೆಂಬರ್ 2011 ರಲ್ಲಿ, ಎತಿಹಾದ್ ಯುರೋಪ್ನ ಆರನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಏರ್ ಬರ್ಲಿನ್ನಲ್ಲಿ 29.21% ಪಾಲನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಘೋಷಿಸಿತು ಮತ್ತು ಹೊಗನ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದರ ನಂತರ ಇದು ಇತರ ವಿಮಾನಯಾನ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ಪಾಲನ್ನು ಹೊಂದಿತು - ಏರ್ ಸೀಶೆಲ್ಸ್ (40%), <ref>http://www.centreforaviation.com/analysis/etihad-airways-stake-in-air-seychelles-gives-realistic-way-forward-to-the-island-carriers-future-66995</ref> ಏರ್ ಲಿಂಗಸ್ (2.987%), <ref>https://www.bloomberg.com/news/2012-05-01/etihad-takes-aer-lingus-stake-seeks-pact-to-feed-abu-dhabi-1-.html</ref> ವರ್ಜಿನ್ ಆಸ್ಟ್ರೇಲಿಯಾ (10%). <ref>http://www.abc.net.au/news/2012-09-03/etihad-increases-virgin-stake/4239464?section=business</ref>
ಆಗಸ್ಟ್ 1, 2013 ರಂದು, ಕಂಪನಿಯ ಅಧ್ಯಕ್ಷ ಹೊಗನ್, ಸೆರ್ಬಿಯಾದ ಮೊದಲ ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ವುಸಿಕ್ ಅವರೊಂದಿಗೆ ಬೆಲ್ಗ್ರೇಡ್ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು, ಸೆರ್ಬಿಯಾದ ರಾಷ್ಟ್ರೀಯ ವಾಹಕ ಜಾಟ್ ಏರ್ವೇಸ್ನಲ್ಲಿ ಎತಿಹಾದ್ಗೆ 49% ಪಾಲನ್ನು ನೀಡಿದರು. <ref>http://exyuaviation.blogspot.com/2013/07/jat-takeover-expected-next-monday.html</ref> ಸೆರ್ಬಿಯನ್ ಸರ್ಕಾರವು 51% ಷೇರುಗಳನ್ನು ಉಳಿಸಿಕೊಂಡಿತು, ಕಂಪನಿಯನ್ನು ಏರ್ ಸೆರ್ಬಿಯಾ ಎಂದು ಮರುನಾಮಕರಣ ಮಾಡಲಾಯಿತು. <ref>http://www.b92.net/biz/vesti/srbija.php?yyyy=2013&mm=08&dd=01&nav_id=738238</ref> ಸೆಪ್ಟೆಂಬರ್ 2012 ರಲ್ಲಿ, ವಿದೇಶಿ ವಿಮಾನಯಾನ ಸಂಸ್ಥೆಗಳು ಭಾರತೀಯ ವಾಹಕಗಳಲ್ಲಿ 49% ಪಾಲನ್ನು ಹೊಂದಬಹುದು ಎಂದು ಭಾರತ ಸರ್ಕಾರ ಘೋಷಿಸಿತು. ಏಪ್ರಿಲ್ 24, 2013 ರಂದು, ಜೆಟ್ ಏರ್ವೇಸ್ ಎತಿಹಾದ್ಗೆ 24% ಪಾಲನ್ನು US$379 ಮಿಲಿಯನ್ಗೆ ಮಾರಾಟ ಮಾಡಲು ಸಿದ್ಧವಾಗಿದೆ ಎಂದು ಘೋಷಿಸಿತು. ಒಪ್ಪಂದವು ನವೆಂಬರ್ 12, 2013 ರಂದು ಪೂರ್ಣಗೊಂಡಿತು.
2013 ರ ದುಬೈ ಏರ್ ಶೋನಲ್ಲಿ, ಎತಿಹಾದ್ ಸ್ವಿಸ್ ವಾಹಕ ಡಾರ್ವಿನ್ ಏರ್ಲೈನ್ನಲ್ಲಿ 33.3% ಪಾಲನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದಾಗಿ ಘೋಷಿಸಿತು, ಇದನ್ನು ಮಾರ್ಚ್ 2014 ರಲ್ಲಿ ಎತಿಹಾದ್ ಪ್ರಾದೇಶಿಕ ಎಂದು ಮರುನಾಮಕರಣ ಮಾಡಲಾಯಿತು.<ref>http://centreforaviation.com/analysis/etihad-airways-connects-the-dots-by-acquiring-swiss-darwin-airlines-first-etihad-regional-carrier-139925</ref> ಎತಿಹಾದ್ 2017 ರಲ್ಲಿ ಡಾರ್ವಿನ್ನಲ್ಲಿ ತನ್ನ ಪಾಲನ್ನು ಮಾರಾಟ ಮಾಡಿತು.<ref>http://www.exyuaviation.com/2017/07/adria-airways-owners-buy-etihad-regional.html</ref>
ಆಗಸ್ಟ್ 1, 2014 ರಂದು, ಎತಿಹಾದ್ ಇಟಾಲಿಯನ್ ಧ್ವಜ ವಾಹಕ ಅಲಿಟಾಲಿಯಾದಲ್ಲಿ 49% ಪಾಲನ್ನು ಅಂದಾಜು €560 ಮಿಲಿಯನ್ಗೆ ಸ್ವಾಧೀನಪಡಿಸಿಕೊಳ್ಳಲು ಒಪ್ಪಿಕೊಂಡಿತು. ಈ ಒಪ್ಪಂದವನ್ನು ಆಗಸ್ಟ್ 8, 2014 ರಂದು ಅಂತಿಮಗೊಳಿಸಲಾಯಿತು.[20] ಜನವರಿ 1, 2015 ರಂದು, ಅಲಿಟಾಲಿಯಾ-CAI ತನ್ನ ಕಾರ್ಯಾಚರಣೆಗಳನ್ನು ಅಲಿಟಾಲಿಯಾ-SAI ಗೆ ಔಪಚಾರಿಕವಾಗಿ ವರ್ಗಾಯಿಸಿತು, ಇದು ಹೊಸ ಘಟಕವಾದ ಎತಿಹಾದ್ 49% ಮತ್ತು ಅಲಿಟಾಲಿಯಾ-CAI ಷೇರುದಾರರು 51% ಒಡೆತನವನ್ನು ಹೊಂದಿತ್ತು.<ref>http://www.alitalia.com/it_en/news/informativa-privacy-cai-sai.html</ref>
ವಿಮಾನಯಾನ ಸಂಸ್ಥೆಯು ತನ್ನ ವಿಮಾನಯಾನ ಮೈತ್ರಿಕೂಟ, ಎತಿಹಾದ್ ಏರ್ವೇಸ್ ಪಾರ್ಟ್ನರ್ಸ್ ಅನ್ನು ಅಕ್ಟೋಬರ್ 2015 ರಲ್ಲಿ ಸ್ಥಾಪಿಸಿತು. ಅದರ ಹಲವಾರು ಸದಸ್ಯರು ಹಣಕಾಸಿನ ತೊಂದರೆಗಳಿಗೆ ಸಿಲುಕಿದ ನಂತರ ಅದು 2018 ರಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಿತು.<ref>http://blogs.crikey.com.au/planetalking/2014/10/08/etihad-targets-star-oneworld-with-new-partners-alliance/</ref><ref>http://www.airliners.de/etihad-beitritt-luftfahrt-buendnis/45723</ref> ಎತಿಹಾದ್ ಭಾಗವಹಿಸುವ ವಿಮಾನಯಾನ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ಹೂಡಿಕೆಗಳನ್ನು ಹೊಂದಿತ್ತು ಮತ್ತು ಏಪ್ರಿಲ್ 2020 ರಲ್ಲಿ ದಿವಾಳಿಯಾಗುವವರೆಗೂ ವರ್ಜಿನ್ ಆಸ್ಟ್ರೇಲಿಯಾದಲ್ಲಿ ಪಾಲನ್ನು ಹೊಂದಿತ್ತು, ಹೂಡಿಕೆಯ ಮೇಲೆ ಯಾವುದೇ ಲಾಭವಿಲ್ಲ.<ref>https://asia.nikkei.com/Business/Transportation/Virgin-Australia-creditors-approve-2.6bn-sale-to-Bain</ref> ಮೇ 2016 ರಲ್ಲಿ, ಹೊಗನ್ ಏರ್ಲೈನ್ನ ಮೂಲ ಕಂಪನಿಯಾದ ಎತಿಹಾದ್ ಏವಿಯೇಷನ್ ಗ್ರೂಪ್ನ ಸಿಇಒ ಆಗಿ ನೇಮಕಗೊಂಡಂತೆ ನಿರ್ವಹಣಾ ರಚನೆಯನ್ನು ಪುನರ್ರಚಿಸಲಾಯಿತು. ಹಿಂದೆ ಏರ್ಲೈನ್ನ ಮುಖ್ಯ ವಾಣಿಜ್ಯ ಅಧಿಕಾರಿಯಾಗಿದ್ದ ಪೀಟರ್ ಬಾಮ್ಗಾರ್ಟ್ನರ್, ಹೊಗನ್ಗೆ ವರದಿ ಮಾಡುವ ಮೂಲಕ ಏರ್ಲೈನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದರು.<ref>https://www.bloomberg.com/news/articles/2016-05-08/etihad-airways-hogan-to-lead-wider-group-in-management-shake-up</ref> ಡಿಸೆಂಬರ್ 2016 ರಲ್ಲಿ ಹ್ಯಾಂಡೆಲ್ಸ್ಬ್ಲಾಟ್ ಗ್ಲೋಬಲ್ "ಯುರೋಪ್ನಲ್ಲಿ ವಿಫಲವಾದ ಸ್ವಾಧೀನಗಳ ನಂತರ" ಹೊಗನ್ ಅವರನ್ನು ವಜಾಗೊಳಿಸುವ ನಿರೀಕ್ಷೆಯಿದೆ ಎಂದು ವರದಿ ಮಾಡಿದೆ.<ref>https://www.handelsblatt.com/unternehmen/dienstleister/arabische-airline-in-der-krise-etihad-hadert-mit-europa/19158946.html</ref>
ಜನವರಿ 24, 2017 ರಂದು, ಎತಿಹಾದ್ ಏವಿಯೇಷನ್ ಗ್ರೂಪ್ ಬೋರ್ಡ್ ಆಫ್ ಡೈರೆಕ್ಟರ್ಸ್, ಹೊಗನ್ (ಗ್ರೂಪ್ ಸಿಎಫ್ಒ ಜೇಮ್ಸ್ ರಿಗ್ನಿ ಜೊತೆಗೆ) "2017 ರ ದ್ವಿತೀಯಾರ್ಧದಲ್ಲಿ" ರಾಜೀನಾಮೆ ನೀಡಲಿದ್ದಾರೆ ಎಂದು ಘೋಷಿಸಿತು. <ref>https://www.reuters.com/article/us-etihad-airways-ceo-idUSKBN1580K5</ref> ಏರ್ ಬರ್ಲಿನ್ ಮತ್ತು ಅಲಿಟಾಲಿಯಾದಲ್ಲಿನ ಹೂಡಿಕೆಗಳಿಂದ ಹೆಚ್ಚುತ್ತಿರುವ ನಷ್ಟವನ್ನು ಎದುರಿಸಿದ ಕಾರಣ, (ವಿಮಾನಯಾನ ಸಂಸ್ಥೆಯ ಮಾಜಿ ಸಿಇಒ) ಪೀಟರ್ ಬಾಮ್ಗಾರ್ಟ್ನರ್ ಹಂಗಾಮಿ ಸಿಇಒ ಆದರು. <ref>https://www.bloomberg.com/news/articles/2017-01-24/etihad-ceo-hogan-to-quit-as-carrier-struggles-with-investments</ref> ಮೇ 2, 2017 ರಂದು, ಅಲಿಟಾಲಿಯಾ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದರು. <ref>https://www.bloomberg.com/news/articles/2017-04-24/alitalia-risks-collapse-after-unions-reject-restructuring-plan</ref> ಆ ತಿಂಗಳ ಕೊನೆಯಲ್ಲಿ ಹೊಗನ್ ಮತ್ತು ರಿಗ್ನಿ ಎತಿಹಾದ್ ತೊರೆದರು. <ref>https://www.forbes.com/sites/danielreed/2017/05/10/airline-chess-master-did-etihads-james-hogan-outsmart-himself/?sh=125dc6485691</ref> ಜುಲೈ 27 ರಂದು, ಎತಿಹಾದ್ 2016 ಕ್ಕೆ US$1.873 ಬಿಲಿಯನ್ ನಷ್ಟವನ್ನು ವರದಿ ಮಾಡಿದೆ. <ref>https://newsroom.aviator.aero/etihad-airways-reports-net-loss-for-2016-one-off-impairments-impact-bottom-line-while-passenger-revenues-remain-stable/</ref> ಆಗಸ್ಟ್ 15 ರಂದು, ಎತಿಹಾದ್ ತನ್ನ ಹಣಕಾಸಿನ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಏರ್ ಬರ್ಲಿನ್ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿತು. <ref>https://www.reuters.com/article/us-air-berlin-lufthansa-idUSKCN1AV14E</ref>
ಮಧ್ಯಂತರ ಕ್ರಮವಾಗಿ, ಶಾಶ್ವತ ಬದಲಿಗಾಗಿ ಹುಡುಕುವಾಗ ಮಂಡಳಿಯು ರೇ ಗ್ಯಾಮೆಲ್ ಅವರನ್ನು ಸಿಇಒ (ಹಿಂದೆ ಮುಖ್ಯ ಜನರು ಮತ್ತು ಕಾರ್ಯಕ್ಷಮತೆ ಅಧಿಕಾರಿ) ಆಗಿ ನೇಮಿಸಿತು. <ref>http://www.etihad.com/en-gb/about-us/etihad-news/archive/2017/interim-group-ceo-confirmed/</ref> ಜನವರಿ 9, 2018 ರಂದು, ಎತಿಹಾದ್ ಏರ್ವೇಸ್ ಮಾರ್ಕ್ ಪವರ್ಸ್ ಅವರನ್ನು ಗ್ರೂಪ್ ಸಿಎಫ್ಒ ಆಗಿ ನೇಮಿಸಿತು, ಮಧ್ಯಂತರ ಗ್ರೂಪ್ ಸಿಎಫ್ಒ ರಿಕಿ ಥಿರಿಯನ್ ಬದಲಿಗೆ.<ref>{{Cite web |url=https://www.forbesmiddleeast.com/en/etihad-appoints-mark-powers-as-chief-financial-officer/ |title=ಆರ್ಕೈವ್ ನಕಲು |access-date=2026-08-07 |archive-date=2018-08-14 |archive-url=https://web.archive.org/web/20180814235053/https://www.forbesmiddleeast.com/en/etihad-appoints-mark-powers-as-chief-financial-officer/ |url-status=dead }}</ref> ಜುಲೈ 2, 2017 ರಂದು, ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಎತಿಹಾದ್ ಏರ್ವೇಸ್ ಮೇಲಿನ ಎಲೆಕ್ಟ್ರಾನಿಕ್ಸ್ ನಿಷೇಧವನ್ನು ತೆಗೆದುಹಾಕಿತು, ವಿಮಾನಯಾನ ಸಂಸ್ಥೆಯು ತನ್ನ ಪ್ರಯಾಣಿಕರ ಸ್ಕ್ರೀನಿಂಗ್ ಪ್ರಕ್ರಿಯೆಗಳನ್ನು ಹೆಚ್ಚಿಸಿದ ನಂತರ.<ref>https://www.nytimes.com/2017/07/02/business/etihad-laptop-ban.html</ref>
ಜೂನ್ 2018 ರಲ್ಲಿ, ಎತಿಹಾದ್ 2017 ಕ್ಕೆ US$1.52 ಬಿಲಿಯನ್ ನಿವ್ವಳ ನಷ್ಟವನ್ನು ವರದಿ ಮಾಡಿದೆ.<ref>https://www.reuters.com/article/us-etihad-airways-results/etihad-airways-hit-by-second-consecutive-annual-loss-idUSKBN1JA0V1</ref>
ಫೆಬ್ರವರಿ 2019 ರಲ್ಲಿ, ಎತಿಹಾದ್ ಏರ್ಬಸ್ ಮತ್ತು ಬೋಯಿಂಗ್ ವಿಮಾನಗಳೆರಡಕ್ಕೂ ದೊಡ್ಡ ಆದೇಶ ರದ್ದತಿಯನ್ನು ಘೋಷಿಸಿತು. ವಿಮಾನಯಾನ ಸಂಸ್ಥೆಯು ಎಲ್ಲಾ 42 ಏರ್ಬಸ್ A350-900s, ಎರಡು A350-1000s ಮತ್ತು 24 ರಲ್ಲಿ 19 ಬೋಯಿಂಗ್ 777X ಗೆ ಒಪ್ಪಂದಗಳನ್ನು ಮುಕ್ತಾಯಗೊಳಿಸಿತು.<ref>https://www.aero.de/news-30960/Etihad-Airways-storniert-A350-Auftraege.html</ref>
1 ಮೇ 2021 ರಂದು, ಎತಿಹಾದ್ ಏರ್ವೇಸ್ ಏರ್ ಸೀಶೆಲ್ಸ್ನಲ್ಲಿನ ತನ್ನ 40% ಪಾಲನ್ನು ಸೀಶೆಲ್ಸ್ ಸರ್ಕಾರಕ್ಕೆ ಮಾರಾಟ ಮಾಡಿದೆ ಎಂದು ಘೋಷಿಸಲಾಯಿತು.<ref>https://www.thenationalnews.com/business/aviation/etihad-divests-full-stake-in-air-seychelles-1.1214447</ref>
13 ಮೇ 2023 ರಂದು, ಸರ್ಬಿಯನ್ ಸರ್ಕಾರವು ಏರ್ ಸರ್ಬಿಯಾದಲ್ಲಿ 100% ಇಕ್ವಿಟಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಪೂರ್ಣಗೊಳಿಸಿದೆ ಎಂದು ಘೋಷಿಸಿತು, ಹಲವಾರು ವರ್ಷಗಳ ನಂತರ ಎತಿಹಾದ್ನಿಂದ ಷೇರುಗಳನ್ನು ಹಿಂತೆಗೆದುಕೊಂಡಿತು.<ref>https://www.exyuaviation.com/2023/11/state-takes-over-remaining-etihad-stake.html</ref>
'''COVID-19 ಪರಿಣಾಮ'''
ಮೇ 2020 ರಲ್ಲಿ, COVID-19 ಸಾಂಕ್ರಾಮಿಕ ರೋಗದಿಂದಾಗಿ ಏರ್ ಫ್ರಾನ್ಸ್ ತನ್ನ ಸಂಪೂರ್ಣ ಏರ್ಬಸ್ A380 ಫ್ಲೀಟ್ ಅನ್ನು ನಿವೃತ್ತಿಗೊಳಿಸಿದ ಸ್ವಲ್ಪ ಸಮಯದ ನಂತರ, COVID-19 ಸಾಂಕ್ರಾಮಿಕ ರೋಗದಿಂದ ಉಂಟಾದ ಹೆಚ್ಚಿನ ಆರ್ಥಿಕ ನಷ್ಟಗಳಿಂದಾಗಿ ಎತಿಹಾದ್ ಏರ್ವೇಸ್ ತನ್ನ ಉಳಿದ ಎಲ್ಲಾ ಏರ್ಬಸ್ A350 ಆರ್ಡರ್ಗಳನ್ನು ರದ್ದುಗೊಳಿಸಲು ಮತ್ತು ಅದರ ಸಂಪೂರ್ಣ ಏರ್ಬಸ್ A380 ಫ್ಲೀಟ್ ಅನ್ನು ನಿವೃತ್ತಿಗೊಳಿಸಲು ಪರಿಗಣಿಸುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು. ಎತಿಹಾದ್ನ ಸಿಇಒ ಟೋನಿ ಡೌಗ್ಲಾಸ್, ಎತಿಹಾದ್ನ A380 ಫ್ಲೀಟ್ ಮತ್ತೆ ಪ್ರಯಾಣಿಕರ ಸೇವೆಯಲ್ಲಿ ಹಾರಾಟ ನಡೆಸದಿರುವ ಸಾಧ್ಯತೆಯಿದೆ ಮತ್ತು ಆದ್ದರಿಂದ ಕೇವಲ ಏಳು ವರ್ಷಗಳ ಸೇವೆಯ ನಂತರ ಅದನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು. ಈ ಕ್ರಮವು ಏರ್ ಫ್ರಾನ್ಸ್-ಕೆಎಲ್ಎಂ ಮತ್ತು ಹೈ ಫ್ಲೈ ಮಾಲ್ಟಾ ನಂತರ ಎತಿಹಾದ್ ತನ್ನ ಏರ್ಬಸ್ A380 ಫ್ಲೀಟ್ ಅನ್ನು ನಿವೃತ್ತಿಗೊಳಿಸುತ್ತಿರುವ ಮೂರನೇ ಏರ್ಬಸ್ A380 ಆಪರೇಟರ್ ಆಗಲಿದೆ. <ref>https://onemileatatime.com/etihad-airways-retire-a380-never-fly-a350/</ref> ಆದಾಗ್ಯೂ, ಮೇ 26, 2020 ರ ಹೊತ್ತಿಗೆ, ಎತಿಹಾದ್ ತನ್ನ ಉಳಿದ ಏರ್ಬಸ್ A350 ಆರ್ಡರ್ಗಳನ್ನು ರದ್ದುಗೊಳಿಸುವುದಿಲ್ಲ ಎಂದು ದೃಢಪಡಿಸಿತು ಮತ್ತು ಅವರೊಂದಿಗೆ ಮುಂದುವರಿಯಲು ಯೋಜಿಸಿದೆ. COVID-19 ಸಾಂಕ್ರಾಮಿಕ ರೋಗದ ಹೊರತಾಗಿಯೂ, ಏರ್ ಫ್ರಾನ್ಸ್ನಂತೆ ತನ್ನ ಏರ್ಬಸ್ A380 ಫ್ಲೀಟ್ ಅನ್ನು ಆರಂಭಿಕ ನಿವೃತ್ತಿಗೆ ಬಿಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿತು.<ref>https://www.executivetraveller.com/news/etihad-airbus-a380-a350</ref>
ಆದಾಗ್ಯೂ, ಅಕ್ಟೋಬರ್ 2020 ರ ಹೊತ್ತಿಗೆ, ಕೆಲವು ಮೂಲಗಳು ಎತಿಹಾದ್ ಏರ್ಬಸ್ A380 ವಿಮಾನ ಮಾರುಕಟ್ಟೆ ಬದಲಾವಣೆಗಳು ಮತ್ತು COVID-19 ಸಾಂಕ್ರಾಮಿಕ ರೋಗದಿಂದ ಉಂಟಾದ ಬೇಡಿಕೆಯಿಂದಾಗಿ ಇನ್ನೂ ಆರಂಭಿಕ ನಿವೃತ್ತಿಯ ಸಾಧ್ಯತೆಯನ್ನು ಹೊಂದಿದೆ ಎಂದು ಹೇಳಿವೆ, ಏಕೆಂದರೆ ಡೌಗ್ಲಾಸ್ ಏರ್ಬಸ್ A380 ಅನ್ನು ಎರಡು ಎಂಜಿನ್ಗಳ ಅತಿಯಾದ ಬಳಕೆಯಿಂದ ಹೆಚ್ಚು ಅಸಮರ್ಥ ಅಂಗವಿಕಲ ಬೆಹೆಮೊತ್ ಎಂದು ಉಲ್ಲೇಖಿಸಿದ್ದಾರೆ. ಬೋಯಿಂಗ್ 777X, 787, ಮತ್ತು ಏರ್ಬಸ್ A350 ನಂತಹ ಸಣ್ಣ ದೀರ್ಘ-ಶ್ರೇಣಿಯ ಅವಳಿ-ಜೆಟ್ ವಿಮಾನಗಳು A380 ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸುಸ್ಥಿರವಾಗಿ ಕೆಲಸವನ್ನು ಮಾಡಬಹುದು ಎಂದು ಡೌಗ್ಲಾಸ್ ಹೇಳಿದರು.<ref>https://web.archive.org/web/20201017013400/https://www.aerotime.aero/rytis.beresnevicius/26154-etihad-airways-future-fleet-with-no-a380</ref>
ಫೆಬ್ರವರಿ 2021 ರಲ್ಲಿ, ಎತಿಹಾದ್ ಏರ್ವೇಸ್ ತನ್ನ ಎಲ್ಲಾ ಕಾರ್ಯಾಚರಣಾ ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ COVID-19 ವಿರುದ್ಧ ಲಸಿಕೆ ಹಾಕಿತು, ಇದು ತನ್ನ ಎಲ್ಲಾ ಕಾರ್ಯಾಚರಣಾ ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಲಸಿಕೆ ಹಾಕಿದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ.<ref>https://www.arabianaerospace.aero/etihad-is-the-first-airline-with-100-of-crew-on-board-vaccinated.html</ref> ಮಾರ್ಚ್ ಮತ್ತು ಜೂನ್ 2020 ರ ನಡುವೆ ಎತಿಹಾದ್ನ ಹೆಚ್ಚಿನ ವಿಮಾನಗಳು ಸ್ಥಗಿತಗೊಂಡ ಕಾರಣ, ವಿಮಾನಯಾನ ಸಂಸ್ಥೆಯ ಪ್ರಯಾಣಿಕರ ದಟ್ಟಣೆಯು 76% ರಷ್ಟು ಕಡಿಮೆಯಾಗಿ 2020 ರಲ್ಲಿ 4.2 ಮಿಲಿಯನ್ಗೆ ಇಳಿದಿದೆ.<ref>https://www.reuters.com/article/etihad-results-int-idUSKBN2AW12A</ref> 2020 ರ ಉದ್ದಕ್ಕೂ, COVID-19 ಸಾಂಕ್ರಾಮಿಕ ರೋಗದಿಂದಾಗಿ, ಎತಿಹಾದ್ ಏರ್ವೇಸ್ 1,000 ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಮತ್ತು ಪೈಲಟ್ಗಳನ್ನು ಕೆಲಸದಿಂದ ತೆಗೆದುಹಾಕಿತು. ಸಾಂಕ್ರಾಮಿಕ ರೋಗಕ್ಕೂ ಮುಂಚೆಯೇ ಎತಿಹಾದ್ ಗಮನಾರ್ಹ ನಷ್ಟವನ್ನು ವರದಿ ಮಾಡಿತ್ತು; 2016 ರಿಂದ, ಇದು $5.62 ಬಿಲಿಯನ್ಗಿಂತಲೂ ಹೆಚ್ಚು ನಷ್ಟವನ್ನು ಅನುಭವಿಸಿತು ಮತ್ತು 2019 ರಲ್ಲಿ ನಷ್ಟವು $870 ಮಿಲಿಯನ್ಗೆ ತಲುಪಿತ್ತು.<ref>https://www.arabnews.com/node/1819836/business-economy</ref> ವಿಮಾನಯಾನ ಸಂಸ್ಥೆಯ ಪೂರ್ಣ-ವರ್ಷದ ನಷ್ಟವು 2020 ರಲ್ಲಿ $1.7 ಬಿಲಿಯನ್,<ref>https://www.cnbc.com/2021/08/10/etihad-airways-expects-demand-surge-as-h1-losses-halve-.html</ref> ಮತ್ತು 2021 ರಲ್ಲಿ $476 ಮಿಲಿಯನ್ ಆಗಿತ್ತು.<ref>https://www.reuters.com/business/aerospace-defense/abu-dhabis-etihad-airways-trims-losses-higher-cargo-revenues-cost-control-2022-03-01/</ref>
'''ಲಾಭದಾಯಕತೆಗೆ ಹಿಂತಿರುಗಿ'''
2021 ರಲ್ಲಿ, ಎತಿಹಾದ್ ಏರ್ವೇಸ್ ತನ್ನ ಸೋನಿಕ್ ಗುರುತನ್ನು ಪರಿಚಯಿಸಿತು, ಇದನ್ನು ಸಿಕ್ಸಿಯೆಮ್ ಸನ್ ಏಜೆನ್ಸಿಯ ಸಹಭಾಗಿತ್ವದಲ್ಲಿ ರಚಿಸಲಾಯಿತು, ಮಧ್ಯಪ್ರಾಚ್ಯದಲ್ಲಿ ಅದರ ಟಚ್ಪಾಯಿಂಟ್ಗಳಲ್ಲಿ ಸಮಗ್ರ ಆಡಿಯೊ ಬ್ರ್ಯಾಂಡಿಂಗ್ ವ್ಯವಸ್ಥೆಯನ್ನು ನಿಯೋಜಿಸಿದ ಮೊದಲ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ <ref>https://www.etihad.com/en/news/etihad-airways-nominated-in-two-categories-at-transform-awards-for-its-new-sound-identity</ref><ref>https://www.marketing-interactive.com/etihad-airways-takes-flight-with-sonic-branding-inspired-by-emirati-weaving-method</ref>. ಸಾಂಪ್ರದಾಯಿಕ ಅಲ್ ಸಾದು ನೇಯ್ಗೆ ತಂತ್ರದಿಂದ ಪ್ರೇರಿತವಾದ ಸೋನಿಕ್ ಗುರುತು ಎಮಿರಾಟಿ ವಾದ್ಯಗಳನ್ನು ಸಮಕಾಲೀನ ಟೆಕಶ್ಚರ್ಗಳೊಂದಿಗೆ ಸಂಯೋಜಿಸುತ್ತದೆ ಮತ್ತು ಕ್ಯಾಬಿನ್ಗಳು, ಲಾಂಜ್ಗಳು, ಗ್ರಾಹಕರ ಸಂವಹನ ಮತ್ತು ಬ್ರ್ಯಾಂಡ್ ಸಂವಹನಗಳಲ್ಲಿ ನಿಯೋಜಿಸಲಾಗಿದೆ <ref>https://www.sixiemeson.com/our-work/sonic-branding/etihad-sonic-identity/</ref>.
ಜುಲೈ 2022 ರಲ್ಲಿ, ಎತಿಹಾದ್ $296 ಮಿಲಿಯನ್ನ ದಾಖಲೆಯ ಮೊದಲಾರ್ಧದ ಲಾಭದಾಯಕತೆಯನ್ನು ಘೋಷಿಸಿತು. ಹೆಚ್ಚಿದ ಪ್ರಯಾಣಿಕರ ಪ್ರಯಾಣದ ಬೇಡಿಕೆಯಿಂದಾಗಿ ಇದನ್ನು ಸಾಧಿಸಲಾಯಿತು. 2021 ರ ಮೊದಲಾರ್ಧಕ್ಕೆ ಹೋಲಿಸಿದರೆ 2022 ರ ಮೊದಲಾರ್ಧದಲ್ಲಿ ಎತಿಹಾದ್ 3 ಮಿಲಿಯನ್ ಹೆಚ್ಚು ಪ್ರಯಾಣಿಕರನ್ನು ಸಾಗಿಸಿತು. ಅಕ್ಟೋಬರ್ 2022 ರಲ್ಲಿ ಎತಿಹಾದ್ ಏರ್ವೇಸ್ ಮಾಲೀಕತ್ವವನ್ನು ಅಬುಧಾಬಿ ಸಾರ್ವಭೌಮ ಸಂಪತ್ತು ನಿಧಿ ADQ ಗೆ ವರ್ಗಾಯಿಸಲಾಯಿತು. ಎತಿಹಾದ್, ವಿಜ್ ಏರ್ ಅಬುಧಾಬಿ, ಅಬುಧಾಬಿ ವಿಮಾನ ನಿಲ್ದಾಣಗಳು, ಎತಿಹಾದ್ ಹಾಲಿಡೇಸ್ ಮತ್ತು ಹೆಚ್ಚಿನವುಗಳನ್ನು ಸಾಮಾನ್ಯ ಮಾಲೀಕತ್ವಕ್ಕೆ ತರಲಾಯಿತು.<ref>https://www.adq.ae/newsroom/etihad-aviation-group-transferred-to-adqs-portfolio/</ref> ವಿಮಾನಯಾನ ಸಂಸ್ಥೆಯು ತನ್ನ 10 A380-800 ವಿಮಾನಗಳ ಫ್ಲೀಟ್ ಅನ್ನು ಸ್ಥಗಿತಗೊಳಿಸಿದ್ದರೂ, ಅವುಗಳನ್ನು ಮತ್ತೆ ನಿಯೋಜಿಸುವ ಯಾವುದೇ ಆರಂಭಿಕ ಯೋಜನೆಗಳಿಲ್ಲದಿದ್ದರೂ, ಅವು ಮತ್ತೆ ಸೇವೆಗೆ ಮರಳಲು ನಿರ್ಧರಿಸಲಾಯಿತು. 2023 ರಲ್ಲಿ, ಎತಿಹಾದ್ ತನ್ನ 10 ಜಂಬೋ ಜೆಟ್ಗಳಲ್ಲಿ ನಾಲ್ಕನ್ನು ಲಂಡನ್-ಹೀಥ್ರೂ ಸೇವೆಗೆ ಮರು ನಿಯೋಜಿಸಿತು, ನಂತರ ಹೆಚ್ಚುವರಿ A380 ಫ್ಲೀಟ್ಗೆ ಮರಳುತ್ತದೆ ಎಂದು ನಿರ್ಧರಿಸಲಾಯಿತು.
ನಂತರ ವಿಮಾನಯಾನ ಸಂಸ್ಥೆಯು ತಮ್ಮ A380 ವಿಮಾನವನ್ನು ಏಪ್ರಿಲ್ 2024 ರಲ್ಲಿ ತಮ್ಮ ನ್ಯೂಯಾರ್ಕ್-ಜೆಎಫ್ಕೆ ಮಾರ್ಗಕ್ಕೆ ಹಾಗೂ ನವೆಂಬರ್ 2024 ರಿಂದ ಪ್ಯಾರಿಸ್-ಚಾರ್ಲ್ಸ್ ಡಿ ಗೌಲ್ಗೆ, <ref>https://www.businessinsider.com/etihads-a380-returning-to-nyc-see-residence-first-class-suite-2023-12</ref> ಫೆಬ್ರವರಿ 2025 ರಿಂದ ಸಿಂಗಾಪುರಕ್ಕೆ ಮತ್ತು ಜೂನ್ 2025 ರಿಂದ ಟೊರೊಂಟೊ-ಪಿಯರ್ಸನ್ಗೆ ಮರು ನಿಯೋಜನೆ ಮಾಡುವುದಾಗಿ ಘೋಷಿಸಿತು. <ref>https://www.travelandtourworld.com/news/article/etihad-airways-grows-presence-in-asia-with-new-a380-route-to-singapore-and-expanded-thailand-services/</ref> ಗಾಜಾ ಯುದ್ಧದ ಸಮಯದಲ್ಲಿ ಎತಿಹಾದ್ ಟೆಲ್ ಅವಿವ್ನಲ್ಲಿರುವ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆಯನ್ನು ಮುಂದುವರೆಸಿತು, <ref>https://www.timesofisrael.com/as-most-airlines-avoid-israel-emirati-carriers-keep-up-flights-for-diplomacy-profit/</ref> ಮತ್ತು ಡಿಸೆಂಬರ್ 2025 ರಲ್ಲಿ ಆರು ದೈನಂದಿನ ವಿಮಾನಗಳೊಂದಿಗೆ ಅದನ್ನು ತಮ್ಮ ಅತ್ಯಂತ ಜನನಿಬಿಡ ಮಾರ್ಗವನ್ನಾಗಿ ಮಾಡಿತು, ಈ ಆವರ್ತನವನ್ನು ಹೊಂದಿರುವ ಮೊದಲ ಎತಿಹಾದ್ ಮಾರ್ಗವಾಗಿದೆ. <ref>https://www.jpost.com/business-and-innovation/all-news/article-897398</ref> 2026 ರ ಮೊದಲ ತ್ರೈಮಾಸಿಕದಲ್ಲಿ AUH-TLV ಮಾರ್ಗವು 100,000 ಪ್ರಯಾಣಿಕರನ್ನು ಹೊಂದಿತ್ತು, ಮೂರನೇ ಎರಡರಷ್ಟು ಜನರು ಏಷ್ಯಾದ ಬೇರೆಡೆ ಎತಿಹಾದ್ ತಾಣಗಳಿಗೆ ಪ್ರಯಾಣಿಸಲು ಅಬುಧಾಬಿಯನ್ನು ಕೇಂದ್ರವಾಗಿ ಬಳಸಿಕೊಂಡರು. <ref>https://www.jpost.com/business-and-innovation/all-news/article-897398</ref>
=ಕಾರ್ಪೊರೇಟ್ ವ್ಯವಹಾರಗಳು=
'''ಪ್ರಧಾನ ಕಚೇರಿ'''
ಎತಿಹಾದ್ ತನ್ನ ಪ್ರಧಾನ ಕಚೇರಿಯನ್ನು ಅಬುಧಾಬಿಯ ಖಲೀಫಾ ನಗರದಲ್ಲಿ, <ref>http://www.etihadairways.com/sites/Etihad/us/en/aboutetihad/OurOffices/Pages/Offices.aspx</ref> ಅಬುಧಾಬಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹೊಂದಿದೆ. <ref>http://www.tehrantimes.com/index_View.asp?code=201144</ref> ಎತಿಹಾದ್ ತನ್ನ ಹೊಸ ಪ್ರಧಾನ ಕಚೇರಿ ಮತ್ತು ತರಬೇತಿ ಕೇಂದ್ರವನ್ನು ನಿರ್ಮಿಸಲು 2007 ರಲ್ಲಿ 183.6 ಮಿಲಿಯನ್ ಯುಎಇ ದಿರ್ಹಾಮ್ಗಳನ್ನು (US$50 ಮಿಲಿಯನ್) ಖರ್ಚು ಮಾಡಿತು. ಹೊಸ ಪ್ರಧಾನ ಕಚೇರಿ 2007 ರಲ್ಲಿ ಪೂರ್ಣಗೊಂಡಿತು. <ref>http://www.zawya.com/marketing.cfm?zp&p=/story.cfm/sidGN_17042007_10118775/%20Airline%20to%20shift%20to%20new%20headquarters%20by%202008?cc</ref>
'''ರಚನೆ'''
ಎತಿಹಾದ್ ಅನ್ನು ಮೊಹಮ್ಮದ್ ಮುಬಾರಕ್ ಅಲ್ ಮಜ್ರೂಯಿ ಅಧ್ಯಕ್ಷತೆಯ ನಿರ್ದೇಶಕರ ಮಂಡಳಿಯು ನಿಯಂತ್ರಿಸುತ್ತದೆ ಮತ್ತು ಅದರ ಸ್ಥಾಪಕ ಶಾಸನ ಮತ್ತು ಕಂಪನಿಯ ಸಂಘದ ಲೇಖನಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಮಂಡಳಿಯು ಏಳು ಸ್ವತಂತ್ರ ಕಾರ್ಯನಿರ್ವಾಹಕರಲ್ಲದ ಸದಸ್ಯರನ್ನು ಒಳಗೊಂಡಿದೆ ಮತ್ತು ಎರಡು ಉಪ-ಸಮಿತಿಗಳು, ಕಾರ್ಯಕಾರಿ ಸಮಿತಿ ಮತ್ತು ಲೆಕ್ಕಪರಿಶೋಧನಾ ಸಮಿತಿಯನ್ನು ಹೊಂದಿದೆ, ಪ್ರತಿಯೊಂದೂ ಅದರ ಚಾರ್ಟರ್ ಮತ್ತು ಅಧ್ಯಕ್ಷರನ್ನು ಹೊಂದಿದೆ. ಮಂಡಳಿಯ ಇತರ ಸದಸ್ಯರಲ್ಲಿ ಅಹ್ಮದ್ ಅಲಿ ಅಲ್ ಸಯೆಗ್, ಹೆಚ್. ಇ. ಮೊಹಮ್ಮದ್ ಖಲೀಫಾ ಅಲ್ ಮುಬಾರಕ್, ಮೊಹಮ್ಮದ್ ಹರೇಬ್ ಸುಲ್ತಾನ್ ಅಲ್ ಯೂಸೆಫ್, ಹಮದ್ ಅಬ್ದುಲ್ಲಾ ಅಲ್ ಶಮ್ಸಿ, ಖಲೀಫಾ ಸುಲ್ತಾನ್ ಅಲ್ ಸುವೈದಿ ಮತ್ತು ಅಹ್ಮದ್ ಅಲಿ ಮಾತಾರ್ ಅಲ್ ರೊಮೈಥಿ ಸೇರಿದ್ದಾರೆ. <ref>https://web.archive.org/web/20190621172137/https://www.etihad.com/en-us/about-us/corporate-profile/</ref>
ಈ ವಿಮಾನಯಾನ ಸಂಸ್ಥೆಯನ್ನು ಈ ಹಿಂದೆ ಜೇಮ್ಸ್ ಹೊಗನ್ (ಗಲ್ಫ್ ಏರ್ನ ಹಿಂದಿನ ಸಿಇಒ) ನೇತೃತ್ವ ವಹಿಸಿದ್ದರು, ಅವರನ್ನು ಸೆಪ್ಟೆಂಬರ್ 10, 2006 ರಿಂದ ಜನವರಿ 2018 ರವರೆಗೆ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಯಿತು. ಅವರ ನಂತರ ಟೋನಿ ಡೌಗ್ಲಾಸ್ ನೇಮಕಗೊಂಡರು, ಅವರು ಅಕ್ಟೋಬರ್ 2022 ರವರೆಗೆ ಈ ಹುದ್ದೆಯನ್ನು ಅಲಂಕರಿಸಿದ್ದರು. <ref>https://web.archive.org/web/20190217142215/https://www.businessinsider.com/etihad-airways-group-names-tony-douglas-as-new-ceo-2017-9</ref> ಎತಿಹಾದ್ ಗ್ರೂಪ್ನ ಪ್ರಸ್ತುತ ಸಿಇಒ ಆಂಟೊನೊಲ್ಡೊ ನೆವ್ಸ್.<ref>https://web.archive.org/web/20221220002824/https://www.reuters.com/business/aerospace-defense/abu-dhabi-airline-etihad-gets-new-ceo-after-wealth-fund-adqs-takeover-2022-10-19/</ref>
'''ಎತಿಹಾದ್ ಏರ್ವೇಸ್ ಇಕ್ವಿಟಿ ಮೈತ್ರಿ'''
ಎತಿಹಾದ್ನ ಈಕ್ವಿಟಿ ಮೈತ್ರಿಕೂಟವು ಎತಿಹಾದ್ ಅಲ್ಪಸಂಖ್ಯಾತ ಷೇರುಗಳನ್ನು ಹೊಂದಿರುವ ವಿಮಾನಯಾನ ಸಂಸ್ಥೆಗಳಿಂದ ಕೂಡಿದೆ. ಇವು ಏರ್ ಬರ್ಲಿನ್, ಏರ್ ಸೆರ್ಬಿಯಾ, ಏರ್ ಸೀಶೆಲ್ಸ್, ಅಲಿಟಾಲಿಯಾ ಮತ್ತು ವರ್ಜಿನ್ ಆಸ್ಟ್ರೇಲಿಯಾದಲ್ಲಿ ಪಾಲನ್ನು ಒಳಗೊಂಡಿವೆ. 2023 ರ ವರ್ಷಾಂತ್ಯದ ವೇಳೆಗೆ, ಎತಿಹಾದ್ ಈ ಎಲ್ಲಾ ಹಿಡುವಳಿಗಳಿಂದ ನಿರ್ಗಮಿಸಿದೆ. ವರ್ಜಿನ್ ಆಸ್ಟ್ರೇಲಿಯಾದ ದಿವಾಳಿತನ ಮತ್ತು ನಂತರದ ಪುನರ್ರಚನೆಯೊಂದಿಗೆ, ವಿಮಾನಯಾನ ಸಂಸ್ಥೆಯಲ್ಲಿ ಕಂಪನಿಯ ಷೇರುಗಳು ಸಂಪೂರ್ಣವಾಗಿ ಕೊನೆಗೊಂಡವು. ಡಿಸೆಂಬರ್ 2020 ರ ಅಂತ್ಯದಲ್ಲಿ, ಸೆರ್ಬಿಯಾ ಸರ್ಕಾರವು ಏರ್ ಸೆರ್ಬಿಯಾವನ್ನು ಮರು ಬಂಡವಾಳೀಕರಣಗೊಳಿಸಿತು, ಅದರ ಪಾಲನ್ನು 82% ಕ್ಕೆ ಹೆಚ್ಚಿಸಿತು, ಹೀಗಾಗಿ ಎತಿಹಾದ್ನ ಪಾಲನ್ನು 18% ಕ್ಕೆ ಇಳಿಸಿತು. ವಿಮಾನಯಾನ ಕಂಪನಿಯು 2015 ಮತ್ತು 2018 ರ ನಡುವೆ ಈಗ ವಿಸರ್ಜಿಸಲಾದ ಎತಿಹಾದ್ ಏರ್ವೇಸ್ ಪಾಲುದಾರರ ಮೈತ್ರಿಕೂಟದ ಭಾಗವಾಗಿತ್ತು.
'''ಸರಕು'''
ಎತಿಹಾದ್ ಕಾರ್ಗೋ, ಹಿಂದೆ ಎತಿಹಾದ್ ಕ್ರಿಸ್ಟಲ್ ಕಾರ್ಗೋ ಆಗಿದ್ದ, ಎತಿಹಾದ್ನ ಮೀಸಲಾದ ಸರಕು ಕಾರ್ಯಾಚರಣೆ ಶಾಖೆಯಾಗಿದೆ. ವಾಹಕವು ಜೂನ್ 2012 ರಲ್ಲಿ "ಕ್ರಿಸ್ಟಲ್" ಭಾಗವನ್ನು ಕೈಬಿಟ್ಟು ತನ್ನ ಬ್ರಾಂಡ್ ಇಮೇಜ್ ಅನ್ನು ನವೀಕರಿಸಿತು, ಪೂರ್ಣ ಎತಿಹಾದ್ ಕಾರ್ಗೋ ಶೀರ್ಷಿಕೆಗಳು ಈಗ ವಿಮಾನಯಾನ ಸಂಸ್ಥೆಯ ಪ್ರಸ್ತುತ ಕಾರ್ಪೊರೇಟ್ ವಿನ್ಯಾಸಕ್ಕೆ ಅನುಗುಣವಾಗಿ ಬಿಲ್ಬೋರ್ಡ್ ಶೈಲಿಯನ್ನು ಅನ್ವಯಿಸಿವೆ. ಎತಿಹಾದ್ ಕಾರ್ಗೋ ಆರು ಬೋಯಿಂಗ್ 777F ಗಳನ್ನು ನಿರ್ವಹಿಸುತ್ತದೆ. ಇದು ಹಿಂದೆ ಬೋಯಿಂಗ್ 747-400F ಮತ್ತು ಬೋಯಿಂಗ್ 747-8F ಅನ್ನು ನಿರ್ವಹಿಸಿದೆ, ಎರಡೂ ಅಟ್ಲಾಸ್ ಏರ್ನಿಂದ ಗುತ್ತಿಗೆ ಪಡೆದವು ಆದರೆ ಪೂರ್ಣ ಎತಿಹಾದ್ ಕಾರ್ಗೋ ಬಣ್ಣಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಜನವರಿ 2018 ರಲ್ಲಿ, ಎತಿಹಾದ್ ಕಾರ್ಯತಂತ್ರದಲ್ಲಿನ ಬದಲಾವಣೆ ಮತ್ತು ಸರಕು ಸಾಮರ್ಥ್ಯದಲ್ಲಿನ ಕಡಿತದಿಂದಾಗಿ ನಿವೃತ್ತಿ ಹೊಂದುವುದಾಗಿ ಮತ್ತು ತನ್ನ ಐದು ತುಲನಾತ್ಮಕವಾಗಿ ಹೊಸ ಏರ್ಬಸ್ A330-200F ಸರಕು ವಿಮಾನಗಳನ್ನು ಮಾರಾಟ ಮಾಡುವುದಾಗಿ ಅಥವಾ ಗುತ್ತಿಗೆಗೆ ನೀಡುವುದಾಗಿ ಘೋಷಿಸಿತು.<ref>http://www.aero.de/news-28451/Etihad-parkt-ihre-Airbus-Frachter.html</ref> ಆಗಸ್ಟ್ 2018 ರಲ್ಲಿ, ಎಲ್ಲಾ ಐದು A330 ಸರಕು ವಿಮಾನಗಳನ್ನು DHL ಏವಿಯೇಷನ್ಗೆ ಮಾರಾಟ ಮಾಡಲಾಗಿದೆ ಎಂದು ಘೋಷಿಸಲಾಯಿತು.<ref>http://www.airliners.de/dhl-flotte-leipzig/46518</ref>
೨೦೧೨ ರಲ್ಲಿ ಎತಿಹಾದ್ ಕಾರ್ಗೋ ೩೬೮,೦೦೦ ಟನ್ ಸರಕುಗಳನ್ನು ತಲುಪಿಸಿತು, ಲಭ್ಯವಿರುವ ಟನ್ನೇಜ್ ಕಿಲೋಮೀಟರ್ಗಳಲ್ಲಿ ಶೇ.೧೪ ರಷ್ಟು ಸಾಮರ್ಥ್ಯದ ಹೆಚ್ಚಳದ ಹಿನ್ನೆಲೆಯಲ್ಲಿ ಶೇ.೧೯ ರಷ್ಟು ಟನ್ ಬೆಳವಣಿಗೆ ಕಂಡುಬಂದಿದೆ. ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಎತಿಹಾದ್ನ ಹೊಸ ಸೌಲಭ್ಯವು ವಾರ್ಷಿಕವಾಗಿ ೫೦೦,೦೦೦ ಟನ್ಗಳಿಗಿಂತ ಹೆಚ್ಚು ನಿರ್ವಹಿಸಲು ಸಜ್ಜಾಗಿದೆ. <ref>http://centreforaviation.com/news/etihad-airways-reports-103-million-passengers-and-365000-tonnes-of-cargo-in-2012-197156</ref> ಸೆಪ್ಟೆಂಬರ್ ೨೦೧೮ ರಲ್ಲಿ, ಎತಿಹಾದ್ ಕಾರ್ಗೋ ಕಡಿಮೆಯಾದ ಫ್ಲೀಟ್ ಅನ್ನು ಪ್ರತಿಬಿಂಬಿಸಲು ಮತ್ತು ಪ್ರಮುಖ ಸರಕು ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸಲು ಸರಕು ತಾಣಗಳ ಪರಿಷ್ಕೃತ ಮತ್ತು ತೀವ್ರವಾಗಿ ಕಡಿಮೆಗೊಳಿಸಿದ ಜಾಲವನ್ನು ಘೋಷಿಸಿತು.<ref>https://www.arabianaerospace.aero/etihad-cargo-introduces-new-freighter-network.html</ref>
'''ಗಮ್ಯಸ್ಥಾನಗಳು'''
ಜೂನ್ 2023 ರ ಹೊತ್ತಿಗೆ, ಎತಿಹಾದ್ ಆಫ್ರಿಕಾ, ಯುರೋಪ್, ಉತ್ತರ ಅಮೆರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾದಾದ್ಯಂತ 81 ಪ್ರಯಾಣಿಕ ಮತ್ತು ಸರಕು ಸಾಗಣೆ ತಾಣಗಳಿಗೆ ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ತನ್ನ ಕೇಂದ್ರದಿಂದ ಸೇವೆ ಸಲ್ಲಿಸುತ್ತದೆ.<ref>https://web.archive.org/web/20190815033008/https://www.etihad.com/Documents/PDFs/Corporate%20profile/Fast%20facts/fast-facts-and-figures-oct2015-en.pdf</ref> ಮಾರ್ಚ್ 2017 ರ ಅಂತ್ಯದಲ್ಲಿ ಸಾವೊ ಪಾಲೊ ಸೇವೆಯನ್ನು ಕೊನೆಗೊಳಿಸುವವರೆಗೆ, ಎತಿಹಾದ್ ಏರ್ವೇಸ್ ಆರು ಜನವಸತಿ ಖಂಡಗಳಿಗೆ ಪ್ರಯಾಣಿಕರ ಸೇವೆಗಳನ್ನು ಹೊಂದಿರುವ ಕೆಲವೇ ವಾಹಕಗಳಲ್ಲಿ ಒಂದಾಗಿದೆ.<ref>{{Cite web |url=http://www.emirates247.com/business/corporate/etihad-launches-flights-to-brazil-2013-06-02-1.508871 |title=ಆರ್ಕೈವ್ ನಕಲು |access-date=2026-08-07 |archive-date=2015-09-22 |archive-url=https://web.archive.org/web/20150922084417/http://www.emirates247.com/business/corporate/etihad-launches-flights-to-brazil-2013-06-02-1.508871 |url-status=dead }}</ref><ref>http://flights.etihad.com/en/sitemap/destinations-by-city</ref>
2021 ಪ್ರಾರಂಭವಾದಂತೆ, ವಿಮಾನಯಾನ ಸಂಸ್ಥೆಯು ನೆಟ್ವರ್ಕ್ ಕಾರ್ಯಕ್ಷಮತೆಯ ನಿರಂತರ ಪರಿಶೀಲನೆಯ ಭಾಗವಾಗಿ ದಕ್ಷಿಣ ಆಫ್ರಿಕಾಕ್ಕೆ ತನ್ನ ವಿಮಾನಗಳನ್ನು ಸ್ಥಗಿತಗೊಳಿಸಿತು.<ref>https://www.businessinsider.co.za/etihad-airways-suspends-operations-in-sa-but-could-return-in-2021-2020-11</ref> ಏಪ್ರಿಲ್ 2021 ರಲ್ಲಿ ಇಸ್ರೇಲ್ನ ಟೆಲ್ ಅವೀವ್ಗೆ ವಾರಕ್ಕೆ ಎರಡು ಬಾರಿ ಮಾರ್ಗವನ್ನು ಎತಿಹಾದ್ ತೆರೆಯಿತು.<ref>https://www.forbes.com/sites/michaelgoldstein/2021/04/07/etihad-airways-launches-historic-service-from-abu-dhabi-to-israel/?sh=7233ef8c31ba</ref> ನಂತರ ಜೂನ್ 2023 ರಲ್ಲಿ, ಅಬುಧಾಬಿಯಿಂದ ರೋಮ್ಗೆ ವಿಮಾನಗಳ ಆವರ್ತನವನ್ನು ವಾರಕ್ಕೆ ಏಳರಿಂದ ಹನ್ನೊಂದು ಬಾರಿ ವಿಸ್ತರಿಸುವಂತಹ ಕೆಲವು ಮಾರ್ಗಗಳ ವಿಸ್ತರಣೆಗಳನ್ನು ವಿಮಾನಯಾನ ಸಂಸ್ಥೆ ಘೋಷಿಸಿತು.<ref><ref>https://www.timesaerospace.aero/news/air-transport/etihad-increases-services-to-rome</ref></ref>
ನವೆಂಬರ್ 25, 2024 ರಂದು, ಎತಿಹಾದ್ ತಮ್ಮ ತ್ವರಿತ ವಿಸ್ತರಣಾ ಕಾರ್ಯಕ್ರಮದ ಭಾಗವಾಗಿ ಯುಎಇಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ 10 ಹೊಸ ತಾಣಗಳ ಸಾರ್ವಜನಿಕ ಘೋಷಣೆಯನ್ನು ಮಾಡಿತು. ಆಡಿಸ್ ಅಬಾಬಾ, ಅಲ್ಜಿಯರ್ಸ್, ಅಟ್ಲಾಂಟಾ, ಚಿಯಾಂಗ್ ಮಾಯ್, ಹನೋಯ್, ಹಾಂಗ್ ಕಾಂಗ್, ಕ್ರಾಬಿ, ಮೆಡಾನ್, ನೋಮ್ ಪೆನ್, ತೈಪೆ ಮತ್ತು ಟುನಿಸ್ ಇವುಗಳ ಗಮ್ಯಸ್ಥಾನಗಳಾಗಿವೆ.<ref>https://www.etihad.com/en/news/ten-new-routes-in-one-day-historic-moment-for-etihad</ref>
=ಫ್ಲೀಟ್=
ಎತಿಹಾದ್ ಏರ್ವೇಸ್ ಏರ್ಬಸ್ನಿಂದ ಕಿರಿದಾದ-ದೇಹದ ವಿಮಾನಗಳು ಮತ್ತು ಏರ್ಬಸ್ ಮತ್ತು ಬೋಯಿಂಗ್ನಿಂದ ವಿಶಾಲ-ದೇಹದ ವಿಮಾನಗಳ ಸಮೂಹವನ್ನು ನಿರ್ವಹಿಸುತ್ತದೆ. ಎತಿಹಾದ್ನ ಫ್ಲೀಟ್ ಆರು ವಿಮಾನ ಕುಟುಂಬಗಳಿಂದ 100 ಏರ್ಬಸ್ ಮತ್ತು ಬೋಯಿಂಗ್ ವಿಮಾನಗಳನ್ನು ಒಳಗೊಂಡಿದೆ: ಏರ್ಬಸ್ A320 ಕುಟುಂಬ, ಏರ್ಬಸ್ A320neo ಕುಟುಂಬ, ಏರ್ಬಸ್ A350-1000, ಏರ್ಬಸ್ A380-800, ಬೋಯಿಂಗ್ 777 ಮತ್ತು ಬೋಯಿಂಗ್ 787 ಡ್ರೀಮ್ಲೈನರ್.<ref>https://web.archive.org/web/20240518040707/https://www.etihad.com/en/fly-etihad/our-fleet</ref>
COVID-19 ಸಾಂಕ್ರಾಮಿಕ ಸಮಯದಲ್ಲಿ, ಎತಿಹಾದ್ ಏರ್ವೇಸ್ ಎಲ್ಲಾ 10 ಏರ್ಬಸ್ A380-800 ವಿಮಾನಗಳನ್ನು ಸ್ಥಗಿತಗೊಳಿಸಿತು ಮತ್ತು ಸಾಂಕ್ರಾಮಿಕ ರೋಗದ ನಂತರ ಅವುಗಳನ್ನು ಸೇವೆಗೆ ಮರಳಿಸುವ ಯಾವುದೇ ಯೋಜನೆಯನ್ನು ಆರಂಭದಲ್ಲಿ ಹೊಂದಿರಲಿಲ್ಲ. ಆದಾಗ್ಯೂ, 2023 ರಿಂದ, ನಾಲ್ಕು ಏರ್ಬಸ್ A380-800 ವಿಮಾನಗಳು ಸೇವೆಗಳಿಗೆ ಮರಳಿದವು, ಲಂಡನ್-ಹೀಥ್ರೂ ಮಾರ್ಗದಲ್ಲಿ ಹಾರಾಟ ನಡೆಸಿದವು; 2024 ರಲ್ಲಿ, A380 ಸೇವೆಯು ನ್ಯೂಯಾರ್ಕ್-ಜೆಎಫ್ಕೆ ಮತ್ತು ಪ್ಯಾರಿಸ್-ಚಾರ್ಲ್ಸ್ ಡಿ ಗೌಲ್ಗೆ ಪುನರಾರಂಭವಾಯಿತು. 2013 ರಲ್ಲಿ ಎತಿಹಾದ್ 25 ಬೋಯಿಂಗ್ 777X ವಿಮಾನಗಳಿಗೆ ಆರ್ಡರ್ ನೀಡಿದ್ದರೂ, ಮೇ 2024 ರ ಹೊತ್ತಿಗೆ, ಸಿಇಒ ಆಂಟೊನೊಲ್ಡೊ ನೆವ್ಸ್ ಬೋಯಿಂಗ್ ಜೊತೆಗಿನ ಒಪ್ಪಂದಗಳನ್ನು ಪುನರ್ರಚಿಸಲಾಗಿದೆ ಎಂದು ದೃಢಪಡಿಸಿದರು. ಪರಿಣಾಮವಾಗಿ, ಎತಿಹಾದ್ ಈಗ 777X ವಿಮಾನಗಳನ್ನು ಖರೀದಿಸುವ ಆಯ್ಕೆಯನ್ನು ಹೊಂದಿದೆ ಆದರೆ ಹೆಚ್ಚಿನ 787 ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳುವ ಆಯ್ಕೆಯನ್ನು ಸಹ ಹೊಂದಿದೆ. 777X ಎತಿಹಾದ್ನ ಐದು ವರ್ಷಗಳ ಯೋಜನೆಯ ಭಾಗವಲ್ಲ ಎಂದು ನೆವ್ಸ್ ಮತ್ತಷ್ಟು ಸ್ಪಷ್ಟಪಡಿಸಿದರು.
=ಲೈವರಿ=
'''ಪ್ರಸ್ತುತ ಲಿವರಿ'''
ಪ್ರಸ್ತುತ ಇರುವ ಲೈವರಿ - ಫೇಸೆಟ್ಸ್ ಆಫ್ ಅಬುಧಾಬಿ<ref>https://www.youtube.com/watch?v=fp01PXJ5UmE</ref> ಎಂದು ಹೆಸರಿಸಲಾಗಿದೆ - ಸೆಪ್ಟೆಂಬರ್ 2014 ರಲ್ಲಿ ಏರ್ಲೈನ್ನ ಹೊಸ A380 ಗಳಲ್ಲಿ ಮೊದಲನೆಯದರಲ್ಲಿ ಅನಾವರಣಗೊಳಿಸಲಾಯಿತು. <ref>https://www.businesstraveller.com/news/2014/09/26/etihad-reveals-its-new-livery-design/</ref> ಇದು ಲಂಬವಾದ ಸ್ಟೆಬಿಲೈಜರ್ ಮತ್ತು ಹಿಂಭಾಗದ ಫ್ಯೂಸ್ಲೇಜ್ನಲ್ಲಿ ಚಿನ್ನ ಮತ್ತು ಬೆಳ್ಳಿಯ ತ್ರಿಕೋನ ಟೆಸ್ಸಲೇಷನ್ ಅನ್ನು ಹೊಂದಿದೆ. ಕಿಟಕಿಗಳ ಮೇಲೆ ಚಿನ್ನದ ಎತಿಹಾದ್ ಲೋಗೋ ಮತ್ತು ಯುಎಇ ಲಾಂಛನವನ್ನು ಹೊಂದಿದೆ, ಮುಂಭಾಗದ ಬಾಗಿಲಿನ ಮೇಲೆ ಯುಎಇ ಧ್ವಜವನ್ನು ಚಿತ್ರಿಸಲಾಗಿದೆ. ಹಿನ್ನೆಲೆಯನ್ನು ತಿಳಿ ಬೀಜ್ ಬಣ್ಣದಲ್ಲಿ ಚಿತ್ರಿಸಲಾಗಿದೆ ಮತ್ತು ರೆಕ್ಕೆಯ ತುದಿಯಲ್ಲಿ ಯುಎಇ ಲಾಂಛನವೂ ಇದೆ. ಚಿನ್ನದ ಬಣ್ಣವು ಅರೇಬಿಯನ್ ಮರುಭೂಮಿಯ ಬಣ್ಣದಿಂದ ಪ್ರೇರಿತವಾಗಿದೆ.<ref>https://www.flightglobal.com/news/articles/etihad-shows-off-new-colours-on-a380-404157/</ref>
'''ಹಿಂದಿನ ಲಿವರಿ (2003–2017)'''
ಹಿಂದಿನ ಲೈವರಿ ಯುಎಇ ಧ್ವಜ ಮತ್ತು ಲಂಬವಾದ ಸ್ಟೇಬಿಲೈಸರ್ ಮೇಲೆ ರಾಷ್ಟ್ರೀಯ ಫಾಲ್ಕನ್ ಲಾಂಛನ ಮತ್ತು ಕಿಟಕಿಗಳ ಮೇಲೆ ಚಿನ್ನದ ಎತಿಹಾದ್ ಲೋಗೋವನ್ನು ಹೊಂದಿದೆ. ವಿಮಾನದ ವಿಮಾನದ ಮೇಲೆ ಕೆಂಪು ಮತ್ತು ಚಿನ್ನದ ಪಟ್ಟೆಗಳನ್ನು ಚಿತ್ರಿಸಲಾಗಿದೆ. ಈ ಲೈವರಿ ಇನ್ನೂ ಕೆಲವು ಬೋಯಿಂಗ್ 777-300ER ಗಳು ಮತ್ತು ಏರ್ಬಸ್ A320 ಗಳಲ್ಲಿ ಇದೆ.<ref>https://www.flightglobal.com/news/articles/etihads-entire-fleet-to-get-new-livery-by-end-2017-404214/</ref>
=ವಿಮಾನದೊಳಗೆ ಮನರಂಜನೆ=
ಎತಿಹಾದ್ ತನ್ನ ಹೊಸ ದೀರ್ಘ-ಶ್ರೇಣಿಯ ವಿಮಾನಗಳು ಮತ್ತು ಕೆಲವು ಹೊಸ A320-200 ವಿಮಾನಗಳಲ್ಲಿ AVOD ಹೊಂದಿರುವ ಪ್ಯಾನಾಸೋನಿಕ್ eX2, eX3 ಮತ್ತು ಥೇಲ್ಸ್ ಟಾಪ್ಸೀರೀಸ್ i5000 ಇನ್-ಫ್ಲೈಟ್ ಮನರಂಜನಾ ವ್ಯವಸ್ಥೆಯನ್ನು ಬಳಸುತ್ತದೆ.<ref>https://web.archive.org/web/20150402114008/https://www.thalesgroup.com/en/content/etihad-airways-selects-thales-inflight-entertainment-system-its-entire-fleet</ref>
ಏಪ್ರಿಲ್ 28, 2019 ರಂದು, ಎತಿಹಾದ್ ತನ್ನ ಕಿರಿದಾದ-ಬಾಡಿ ಏರ್ಬಸ್ A320 ಮತ್ತು A321 ವಿಮಾನಗಳ 23 ಎಕಾನಮಿ ವಿಭಾಗದಲ್ಲಿ ಸೀಟ್-ಬ್ಯಾಕ್ ಸ್ಕ್ರೀನ್ಗಳನ್ನು ತೆಗೆದುಹಾಕುವುದಾಗಿ ಘೋಷಿಸಿತು, ಇವುಗಳನ್ನು ಐದು ಗಂಟೆಗಳವರೆಗೆ ಹಾರಾಟಕ್ಕಾಗಿ ಬಳಸಲಾಗುತ್ತದೆ.<ref>https://www.etihad.com/en-sg/about-us/etihad-news/archive/2019/etihad-airways-launches-new-fully-customisable-economy-experience/</ref> ಬ್ರಾಡ್ಬ್ಯಾಂಡ್ ಇಂಟರ್ನೆಟ್ ಮತ್ತು ಲೈವ್ ಟಿವಿ ಸೇರಿದಂತೆ ಇನ್-ಫ್ಲೈಟ್ ಮನರಂಜನೆಯನ್ನು ಒದಗಿಸಲು ಎತಿಹಾದ್ 2011 ರಲ್ಲಿ ಪ್ಯಾನಾಸೋನಿಕ್ ಅವಿಯೋನಿಕ್ಸ್ ಕಾರ್ಪೊರೇಷನ್ನೊಂದಿಗೆ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತು. <ref>http://www.arabianbusiness.com/etihad-set-launch-live-tv-on-long-haul-flights-430563.html</ref> ಅಟ್ಲಾಸ್ ವಿಮಾನಯಾನ ಸಂಸ್ಥೆಯ ಅಧಿಕೃತ ಇನ್-ಫ್ಲೈಟ್ ನಿಯತಕಾಲಿಕೆಯಾಗಿದೆ.<ref>https://atlas.etihad.com/</ref>
=ನಿಷ್ಠೆ ಕಾರ್ಯಕ್ರಮ
ಎತಿಹಾದ್ ಗೆಸ್ಟ್ ಏರ್ಲೈನ್ನ ಆಗಾಗ್ಗೆ ಹಾರಾಟ ನಡೆಸುವವರ ಕಾರ್ಯಕ್ರಮವಾಗಿದ್ದು, ಆಗಸ್ಟ್ 30, 2006 ರಂದು ಪ್ರಾರಂಭವಾಯಿತು. ಇದು ಸದಸ್ಯರಿಗೆ ರಿಯಾಯಿತಿ ವೆಬ್ ಅಂಗಡಿಯನ್ನು ಮತ್ತು ಹೆಚ್ಚುವರಿ ಸಾಮಾನು ಸರಂಜಾಮು ಮತ್ತು ಆಗಾಗ್ಗೆ ಹಾರಾಟ ನಡೆಸುವವರಿಗೆ ಆದ್ಯತೆಯ ಚೆಕ್-ಇನ್ನಂತಹ ಬಹು ಪ್ರಯೋಜನಗಳನ್ನು ನೀಡುತ್ತದೆ. ಟಿಕೆಟ್ಗಳು ಅಥವಾ ವರ್ಗ ಅಪ್ಗ್ರೇಡ್ಗಳಿಗಾಗಿ ಪಾಯಿಂಟ್ಗಳನ್ನು ಸಹ ರಿಡೀಮ್ ಮಾಡಬಹುದು. ಎತಿಹಾದ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸಮುದಾಯ ಅಭಿವೃದ್ಧಿ ಸಚಿವಾಲಯದ ನಡುವಿನ ಒಪ್ಪಂದದ ಭಾಗವಾಗಿ, ಹಿರಿಯ ಎಮಿರಾಟಿ ನಾಗರಿಕರು ಎತಿಹಾದ್ನ ಲಾಯಲ್ಟಿ ಪ್ರೋಗ್ರಾಂಗೆ ತ್ವರಿತ ಪ್ರವೇಶವನ್ನು ಪಡೆಯುತ್ತಾರೆ ಮತ್ತು ಹೆಚ್ಚಿನ ಏರ್ ಮೈಲಿಗಳು, ರಿಯಾಯಿತಿ ಟಿಕೆಟ್ಗಳು, ಆದ್ಯತೆಯ ಚೆಕ್-ಇನ್ ಮತ್ತು ಹೆಚ್ಚುವರಿ ಬ್ಯಾಗೇಜ್ಗಳ ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ.<ref><ref>https://www.thenationalnews.com/uae/senior-emiratis-get-new-travel-benefits-with-etihad-1.864450</ref></ref>
ಅಮೇರಿಕನ್ ಏರ್ಲೈನ್ಸ್ನೊಂದಿಗಿನ ಪಾಲುದಾರಿಕೆಯ ಭಾಗವಾಗಿ, ಅಮೇರಿಕನ್ ಏರ್ಲೈನ್ ಲಾಯಲ್ಟಿ ಪ್ರೋಗ್ರಾಂ AAdvantage ಅನ್ನು ಎತಿಹಾದ್ನಲ್ಲಿ ಟಿಕೆಟ್ಗಳಿಗಾಗಿ ರಿಡೀಮ್ ಮಾಡಬಹುದು.<ref>https://www.forbes.com/sites/geoffwhitmore/2019/05/13/etihad-flights-online-with-american-airlines-miles/</ref> ಸ್ಕ್ಯಾಂಡಿನೇವಿಯನ್ ಏರ್ಲೈನ್ಸ್ ಲಾಯಲ್ಟಿ ಪ್ರೋಗ್ರಾಂ ಯುರೋಬೋನಸ್ಗೂ ಇದೇ ರೀತಿಯ ಪಾಲುದಾರಿಕೆ ಅಸ್ತಿತ್ವದಲ್ಲಿದೆ, ಅಲ್ಲಿ ಸದಸ್ಯರು ಆಯ್ದ ವಿಮಾನಗಳಲ್ಲಿ ಬೋನಸ್ ಅಂಕಗಳನ್ನು ಗಳಿಸಬಹುದು ಮತ್ತು ಖರ್ಚು ಮಾಡಬಹುದು.<ref>https://www.sasgroup.net/newsroom/press-releases/2014/sas-and-etihad-airways-announce-codeshare-plans/</ref> 2019 ರಲ್ಲಿ booking.com ಮತ್ತು Etihad ಏರ್ವೇಸ್ ನಡುವೆ ಸಹಿ ಹಾಕಲಾದ ಒಪ್ಪಂದದ ಪರಿಣಾಮವಾಗಿ, booking.com ಮೂಲಕ ವಸತಿ ಸೌಕರ್ಯಗಳನ್ನು ಕಾಯ್ದಿರಿಸಿದಾಗ ಎತಿಹಾದ್ ಅತಿಥಿ ಲಾಯಲ್ಟಿ ಸದಸ್ಯರಿಗೆ ಎತಿಹಾದ್ ಮೈಲುಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.<ref>https://www.hoteliermiddleeast.com/business/107276-etihads-loyalty-programme-inks-deal-with-bookingcom</ref>
=ಅಪಘಾತಗಳು ಮತ್ತು ಘಟನೆಗಳು=
15 ನವೆಂಬರ್ 2007 - ಎತಿಹಾದ್ ಏರ್ವೇಸ್ಗೆ ತಲುಪಿಸಬೇಕಿದ್ದ ಹೊಸ A340-600, ನೋಂದಣಿ A6-EHG, ಫ್ರಾನ್ಸ್ನ ಟೌಲೌಸ್ ಬ್ಲಾಗ್ನಾಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಏರ್ಬಸ್ ಸೌಲಭ್ಯಗಳಲ್ಲಿ ನೆಲದ ಪರೀಕ್ಷೆಯ ಸಮಯದಲ್ಲಿ ದುರಸ್ತಿಗೆ ಮೀರಿ ಹಾನಿಗೊಳಗಾಯಿತು. ವಿತರಣಾ ಪೂರ್ವ ಎಂಜಿನ್ ಪರೀಕ್ಷೆಯ ಸಮಯದಲ್ಲಿ, ಎಂಜಿನಿಯರ್ಗಳು ಬಹು ಸುರಕ್ಷತಾ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸಿದ್ದರು, ಇದರಿಂದಾಗಿ ಮುಚ್ಚಿಹೋಗದ ವಿಮಾನವು 31 ನಾಟ್ಗಳಿಗೆ (57 ಕಿಮೀ/ಗಂ) ವೇಗವನ್ನು ಹೆಚ್ಚಿಸಿತು ಮತ್ತು ಕಾಂಕ್ರೀಟ್ ಬ್ಲಾಸ್ಟ್ ಡಿಫ್ಲೆಕ್ಷನ್ ಗೋಡೆಗೆ ಡಿಕ್ಕಿ ಹೊಡೆದಿದೆ. ವಿಮಾನಕ್ಕೆ ತೀವ್ರ ಹಾನಿಯಾಯಿತು ಮತ್ತು ವಿಮಾನದಲ್ಲಿದ್ದ ಒಂಬತ್ತು ಜನರು ಗಾಯಗೊಂಡರು, ಅವರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡರು. ಬಲ-ರೆಕ್ಕೆ, ಬಾಲ ಮತ್ತು ಎಡ ಎಂಜಿನ್ಗಳು ನೆಲ ಅಥವಾ ಗೋಡೆಯೊಂದಿಗೆ ಸಂಪರ್ಕಕ್ಕೆ ಬಂದವು, ವಿಮಾನದ ಮುಂಭಾಗದ ಭಾಗವು ಹಲವಾರು ಮೀಟರ್ ಎತ್ತರಕ್ಕೆ ಹೋಯಿತು ಮತ್ತು ಕಾಕ್ಪಿಟ್ ಮುರಿದುಹೋಯಿತು.
=ಉಲ್ಲೇಖಗಳು=
a5y9ugmh7sz3wwl7y6a2kpd5xcgmmn4
ಕೊಲ್ಲಂ ಬಂದರು
0
180090
1379554
1378872
2026-08-09T02:04:11Z
InternetArchiveBot
69876
Rescuing 2 sources and tagging 4 as dead.) #IABot (v2.0.9.5
1379554
wikitext
text/x-wiki
{{Infobox Port
| name = ಕೊಲ್ಲಂ ಬಂದರು <br /> കൊല്ലം തുറമുഖം
| image = Port of Kollam, Mar 2016.jpg
| image_caption = ಕೊಲ್ಲಂ ಬಂದರು
| image_size = 200px
| country = {{flagicon|India}} ಭಾರತ
| location = [[ಕೊಲ್ಲಂ|ಕೊಲ್ಲಂ ನಗರ]]
| coordinates = {{coord|8.87749|N|76.58314|E|display=title,inline}}
| locode = IN KUK
| opened = AD 825<br />2007 ರಲ್ಲಿ ನವೀಕರಿಸಲಾಗಿದೆ
| operated = [[ಕೇರಳ ಸಮುದ್ರ ಮಂಡಳಿ]], ಕೇರಳ ಸರ್ಕಾರ
| owner = ಕೇರಳ ಸರ್ಕಾರ
| sizewater =
| sizeland = {{convert|10.6|acre|km2}}
| size = {{convert|44|acre|km2}}
| berths = 2
| wharfs = 1 (178 ಮೀಟರ್)<br />2 (101 ಮೀಟರ್)
| piers =
| employees =
| leadershiptitle = ಬಂದರು ಅಧಿಕಾರಿ
| leader = ಅರುಣ್ ಕುಮಾರ್ ಪಿ ಕೆ<ref>{{cite web | url = http://kmb.kerala.gov.in/en/contact | title = ನಮ್ಮನ್ನು ಸಂಪರ್ಕಿಸಿ - ಕೇರಳ ಸಮುದ್ರ ಮಂಡಳಿ | publisher = ಕೇರಳ ಸರ್ಕಾರ | access-date = 2023-03-01 }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
| blankdetailstitle1 = ವಿಶ್ವ ಬಂದರು ಸೂಚ್ಯಂಕ ಸಂಖ್ಯೆ
| blankdetails1 = '''49160'''<ref>{{cite web | url = http://msi.nga.mil/NGAPortal/MSI.portal?_nfpb=true&_pageLabel=msi_portal_page_62&pubCode=0015 | title = ವಿಶ್ವ ಬಂದರು ಸೂಚ್ಯಂಕ | publisher = ರಾಷ್ಟ್ರೀಯ ಭೌಗೋಳಿಕ ಗುಪ್ತಚರ ಸಂಸ್ಥೆ | year = 2015}}</ref>
| blankdetailstitle2 = ಎಲೆಕ್ಟ್ರಾನಿಕ್ ಡೇಟಾ ಇಂಟರ್ಚೇಂಜ್ ಕೋಡ್ (EDI)
| blankdetails2 = '''INKUK1'''<ref>{{cite web | url = https://www.icegate.gov.in/TrackAtICES/beTrackIces | title = ಕೊಲ್ಲಂ ಬಂದರು SEA(INKUK1) - ಇ-ಕಾಮರ್ಸ್ ಪೋರ್ಟಲ್ ಕೇಂದ್ರ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿ | publisher = ಕೇಂದ್ರ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿ | year = 2015 | access-date = 2026-08-07 | archive-date = 2015-04-23 | archive-url = https://web.archive.org/web/20150423054657/https://www.icegate.gov.in/TrackAtICES/beTrackIces | url-status = dead }}</ref>
| blankdetailstitle3 = ವಲಸೆ ತಪಾಸಣಾ ಕೇಂದ್ರ
| blankdetails3 = ಹೌದು
| arrivals = 163 <small>(2007 ರ ನಂತರ)</small>
| cargotonnage =
| containervolume =
| cargovalue = 2.2 ದಶಲಕ್ಷ ಟನ್ಗಳು
| passengertraffic =
| revenue = ₹3 ಕೋಟಿ <small>(2024)</small><br>₹62 ಲಕ್ಷ <small>(2013)</small><ref>http://www.keralaports.gov.in/doc/Kollam%20Final%20DFR/Annexures%20to%20DFR/Annexure%2013/Annexure%2013.1%20-%20Scenario%201%20Option%201.pdf{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }} ಕೊಲ್ಲಂ ಬಂದರಿನ ಲಾಭ ಮತ್ತು ನಷ್ಟ ಹೇಳಿಕೆ</ref>
| profit =
| blankstatstitle1 = ಕ್ರೇನ್ಗಳು
| blankstats1 = 2
| blankstatstitle2 = ಮುಖ್ಯ ಆಮದುಗಳು
| blankstats2 = ಮರಳು, ಗೋಡಂಬಿ, ಹೆಂಚುಗಳು
| blankstatstitle3 = ಪ್ರಯಾಣಿಕರ ಟರ್ಮಿನಲ್
| blankstats3 = 288ಮೀ
| website = {{URL|http://www.keralaports.gov.in/}}
}}
'''ಕೊಲ್ಲಂ ಬಂದರು''' ಅಥವಾ '''ಕ್ವಿಲಾನ್ ಬಂದರು''' ಇದು ಅತ್ಯಂತ ಹಳೆಯ ಬಂದರುಗಳಲ್ಲಿ ಒಂದಾಗಿದೆ (AD 825 ರಲ್ಲಿ ಸ್ಥಾಪಿಸಲಾಯಿತು) ಇದು [[ಕೊಲ್ಲಂ ನಗರ ಕೇಂದ್ರ|ಡೌನ್ಟೌನ್]] [[ಕೊಲ್ಲಂ]] (ಹಿಂದೆ ಕ್ವಿಲಾನ್) ನಿಂದ {{convert|4|km}} ದೂರದಲ್ಲಿದೆ.<ref>[https://web.archive.org/web/20111101143805/http://articles.economictimes.indiatimes.com/2011-09-22/news/30189382_1_kollam-backwaters-tourism-infrastructure ಕೊಲ್ಲಂ, ಅಷ್ಟಮುಡಿ ಸರೋವರ - ಕೊಚ್ಚಿ, ವೆಂಬನಾಡ್ ಸರೋವರಕ್ಕೆ ಉತ್ತಮ ಪರ್ಯಾಯಗಳು]</ref> ಇದು ನಿರ್ವಹಿಸುವ ಸರಕುಗಳ ಪ್ರಮಾಣ ಮತ್ತು ಸೌಲಭ್ಯಗಳ ಮೂಲಕ [[ಕೇರಳದ ಬಂದರುಗಳು|ಕೇರಳದ]] ಮೂರನೇ ಅತಿದೊಡ್ಡ ಬಂದರಾಗಿದೆ ಮತ್ತು ವಲಸೆ ತಪಾಸಣಾ ಕೇಂದ್ರ (ICP) ಸೌಲಭ್ಯವನ್ನು ಹೊಂದಿರುವ ನಾಲ್ಕು ಕೇರಳ ಬಂದರುಗಳಲ್ಲಿ ಒಂದಾಗಿದೆ.<ref>{{cite web|url=https://www.thehindu.com/news/national/kerala/kollam-port-gets-icp-clearance/article68293607.ece |date=15 Jun 2024 |title=ಕೊಲ್ಲಂ ಬಂದರಿಗೆ ICP ಅನುಮೋದನೆ |publisher=ದಿ ಹಿಂದೂ |access-date=16 Jun 2024}}</ref> ಭಾರತದ ನೈಋತ್ಯ ಕರಾವಳಿಯಲ್ಲಿರುವ ಇದು 9 ನೇ ನಿಂದ 17 ನೇ ಶತಮಾನಗಳವರೆಗೆ ಪ್ರಮುಖ ಬಂದರಾಗಿತ್ತು. [[ಇಬ್ನ್ ಬತೂತ]] ಭೇಟಿ ನೀಡಿದ ಐದು ಭಾರತೀಯ ಬಂದರುಗಳಲ್ಲಿ ಕೊಲ್ಲಂ ಒಂದಾಗಿದೆ.<ref>{{cite book|date=2010|title=ದಿ ಅಡ್ವೆಂಚರ್ಸ್ ಆಫ್ ಇಬ್ನ್ ಬತೂತ: ಎ ಮುಸ್ಲಿಂ ಟ್ರಾವೆಲರ್ ಆಫ್ ದ ಫೋರ್ಟೀನ್ತ್ ಸೆಂಚುರಿ |publisher=ರಾಸ್ ಇ. ಡನ್ |isbn=9780520931718}}</ref><ref>{{cite web|url=https://www.deccanchronicle.com/nation/in-other-news/011117/a-requiem-for-ashtamudi.html|title=ಅಷ್ಟಮುಡಿಗೆ ಒಂದು ವಿದಾಯ|date=2017-11-01|access-date=2017-11-01|publisher=ಡೆಕ್ಕನ್ ಕ್ರಾನಿಕಲ್}}</ref><ref>{{cite web|url=http://cw.routledge.com/textbooks/9780415485432/18.asp|title=ಇಬ್ನ್ ಬತೂತ: ಮಲಬಾರ್ ಕರಾವಳಿಯಲ್ಲಿ ಅಂತರಾಷ್ಟ್ರೀಯ ವ್ಯಾಪಾರ|access-date=2017-11-01|publisher=ರೂಟ್ಲೆಡ್ಜ್}}</ref>
== ಇತಿಹಾಸ ==
[[File:Quilon 1505 verbessert.jpg|thumb|left|150px|1500 ರ ದಶಕದಲ್ಲಿ [[ಕೊಲ್ಲಂ]]]]
[[ಕೊಲ್ಲಂ]] ಸ್ವತಂತ್ರ [[ವೆನಾಡ್]] ಸಾಮ್ರಾಜ್ಯದ ಸ್ಥಾಪನೆಯವರೆಗೂ [[ಚೇರ ಸಾಮ್ರಾಜ್ಯ]]ದ ಬಂದರು ನಗರವಾಗಿತ್ತು, ಮತ್ತು ಅದು ಅದರ ರಾಜಧಾನಿಯಾಯಿತು. ಅದಕ್ಕೂ ಮೊದಲು, ಕೊಲ್ಲಂ 13 ನೇ ಶತಮಾನದ ಸುಮಾರಿಗೆ ಜಾಗತಿಕ ಸಮುದ್ರ ವ್ಯಾಪಾರದಲ್ಲಿ ನಾಲ್ಕು ಆರಂಭಿಕ ವ್ಯಾಪಾರ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು, ಈಜಿಪ್ಟ್ನ ಅಲೆಕ್ಸಾಂಡ್ರಿಯಾ ಮತ್ತು ಕೈರೋ, ಚೀನಾದ ಕ್ವಾನ್ಝೌ ನಗರ, ಮತ್ತು ಮಲೇಷಿಯನ್ ದ್ವೀಪಸಮೂಹದ ಮಲಕ್ಕಾ ಸೇರಿದಂತೆ.<ref name=Tignor>{{cite book|last=et al]|first=ರಾಬರ್ಟ್ ಟಿಗ್ನರ್ [et|title=ವರ್ಲ್ಡ್ಸ್ ಟುಗೆದರ್, ವರ್ಲ್ಡ್ಸ್ ಅಪಾರ್ಟ್ : ಎ ಹಿಸ್ಟರಿ ಆಫ್ ದಿ ವರ್ಲ್ಡ್ ಫ್ರಮ್ ದಿ ಬಿಗಿನಿಂಗ್ಸ್ ಆಫ್ ಹ್ಯೂಮನ್ಕೈಂಡ್ ಟು ದಿ ಪ್ರೆಸೆಂಟ್|year=2010|publisher=W.W. ನಾರ್ಟನ್ & ಕಂ.|location=ನ್ಯೂಯಾರ್ಕ್|isbn=9780393934922|page=365|url=http://books.wwnorton.com/books/detail.aspx?ID=17166|edition=3ನೇ}}</ref>
[[File:Ashramam Relief, Kollam port.jpg|thumb|ಅಶ್ರಮಂ, ಕೊಲ್ಲಂನಲ್ಲಿ ಪರಿಹಾರ]]
ಈ ಬಂದರನ್ನು 825 ರಲ್ಲಿ ವೆನಾಡ್ನ ತಮಿಳು ರಾಜ ಉದಯಮಾರ್ತಾಂಡವರ್ಮನ ಅನುಮತಿಯೊಂದಿಗೆ ಮಾರ್ ಅಬೊ ಸ್ಥಾಪಿಸಿದರು, ಇದು ಬ್ಯಾಕರೆ (ತೆವಲಕರ) ಬಳಿಯ ಕೊರೆ-ಕೆ-ನಿ ಕೊಲ್ಲಂನ ಒಳನಾಡಿನ ಬಂದರನ್ನು ಪುನಃ ತೆರೆಯಲು ಪರ್ಯಾಯವಾಗಿತ್ತು. ಇದು ರೋಮನ್ನರು ಮತ್ತು ಗ್ರೀಕರಿಗೆ ನೆಲ್ಸಿಂಡಾ ಮತ್ತು ಟಿಂಡಿಸ್ ಎಂದು ಮತ್ತು ತಮಿಳರಿಗೆ ತೊಂಡಿ ಎಂದು ಕರೆಯಲ್ಪಡುತ್ತಿತ್ತು ಮತ್ತು ಇದು ಹೊಸ ನಗರದ ಸ್ಥಾಪನೆಯೂ ಆಗಿದೆ. 6 ನೇ ಶತಮಾನ AD ಯಲ್ಲಿ [[ಪಲ್ಲವ ಸಾಮ್ರಾಜ್ಯ|ಪಲ್ಲವರು]] ಚೇರರನ್ನು ಆಕ್ರಮಿಸಿಕೊಂಡು ಮಲಬಾರ್ ಕರಾವಳಿಯ ಮಸಾಲೆ ವ್ಯಾಪಾರವನ್ನು ಕೊನೆಗೊಳಿಸಿದ್ದರಿಂದ, ಹಲವಾರು ಶತಮಾನಗಳಿಂದ ವ್ಯಾಪಾರವಿಲ್ಲದೆ ನಿಷ್ಕ್ರಿಯವಾಗಿದ್ದ ಬಹುತೇಕ ಕಣ್ಮರೆಯಾದ ಟಿಂಡಿಸ್ ಅಥವಾ ನೆಲ್ಸಿಂಡಾ ಒಳನಾಡಿನ ಬಂದರನ್ನು (ಕೊರೆ-ಕೆ-ನಿ) ನವೀಕರಿಸುವ ಅವರ ಕೋರಿಕೆಯ ಬದಲಿಗೆ [[ಕೊಲ್ಲಂ]] ಬಳಿ ಹೊಸ ಬಂದರು ಪಟ್ಟಣವನ್ನು ರಚಿಸಲು ಮಾರ್ ಅಬೊ ಸ್ವಯಂಪ್ರೇರಿತರಾದರು ಎಂದು ನಂಬಲಾಗಿದೆ. ಇದು ಮಾರ್ ಅಬೊ ಅವರು ಚೇರ ಸಾಮ್ರಾಜ್ಯದಲ್ಲಿ ಹಲವು ದಶಕಗಳ ಕಾಲ ಉಳಿಯಲು ಮತ್ತು ಸಂಸ್ಕೃತ ಮತ್ತು ವೇದ ಪ್ರಾರ್ಥನೆಗಳನ್ನು ಬದಲಾಯಿಸದೆ, ತ್ರಿತ್ವದ ಸಿದ್ಧಾಂತಕ್ಕೆ ಆಧಾರವಾಗಿ ಸಿರಿಯನ್ ಆರಾಧನೆಯೊಂದಿಗೆ ಸಂತ ಥಾಮಸ್ ಸಂಪ್ರದಾಯದಲ್ಲಿ ನಾಂಪೂತಿರಿ ವೈಷ್ಣವರು ಮತ್ತು ನಾಯರ್ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಸುವ್ಯವಸ್ಥಿತಗೊಳಿಸಲು ಅವಕಾಶ ಮಾಡಿಕೊಟ್ಟಿತು.<ref>[[ಕೊಲ್ಲಂ|ಕೊಲ್ಲಂ ನಗರ]] ಮತ್ತು ಕೊಲ್ಲಂ ಬಂದರಿನ ಇತಿಹಾಸ [http://www.quilon.com/history.htm Quilon.com]</ref> ಚೀನೀ ವ್ಯಾಪಾರಿಗಳು [[ಕೊಲ್ಲಂ]]ನಲ್ಲಿ ನೆಲೆಸಿದ ಅತ್ಯಂತ ಹಳೆಯ ವಿದೇಶಿ ಸಮುದಾಯಗಳಲ್ಲಿ ಒಂದಾಗಿದ್ದರು. ಅದು [[ಕೊಲ್ಲಂ]] ಮಲಬಾರ್ ಕರಾವಳಿಯ ಪ್ರಮುಖ ವ್ಯಾಪಾರ ಕೇಂದ್ರವಾಗಿ (ಮಸಾಲೆಗಳ) ಮತ್ತು ಪ್ರಮುಖ ಬಂದರಾಗಿ ವಿಕಸನಗೊಂಡ ಅವಧಿಯಾಗಿತ್ತು.
[[File:Kerala cities at time of Cabral (1500).gif|thumb|left|250px|ಸುಮಾರು 1500 ರಲ್ಲಿ [[ಕೇರಳ]]ದ ಬಂದರುಗಳು ಮತ್ತು ನಗರಗಳು]]
ಜನವರಿ 2014 ರಲ್ಲಿ, ಬಂದರು ಪ್ರಾಧಿಕಾರವು ಕೊಲ್ಲಂ ಬಂದರಿನಲ್ಲಿ ಸಾವಿರಾರು ಚೀನೀ ನಾಣ್ಯಗಳು ಮತ್ತು ಶಿಲಾಯುಗದ ಆಯುಧಗಳನ್ನು ಪತ್ತೆ ಮಾಡಿತು, ಇದು ಬಂದರು ನಗರದ ಐತಿಹಾಸಿಕ ಹಿನ್ನೆಲೆ ಮತ್ತು ವ್ಯಾಪಾರ ಸಂಸ್ಕೃತಿಯನ್ನು ಬಹಿರಂಗಪಡಿಸಿತು.<ref>[http://i1173.photobucket.com/albums/r599/ArunVR/Silayudham.jpg ಕೊಲ್ಲಂ ಬಂದರಿನಿಂದ ಕಂಡುಬಂದ ನಾಣ್ಯಗಳು]</ref><ref>http://articles.timesofindia.indiatimes.com/2014-02-17/thiruvananthapuram/47411545_1_artefacts-kollam-coins{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref>
ಇದು ಭಾರತದ ಬಂದರಿನಲ್ಲಿ ಇಂತಹ ಪ್ರಮಾಣದ ಕಲಾಕೃತಿಗಳ ಮೊದಲ ಶೋಧವಾಗಿತ್ತು. ಈ ಶೋಧಗಳು ಕೊಲ್ಲಂ ಭಾರತದ ಅತ್ಯಂತ ಪ್ರಮುಖ ಬಂದರು ನಗರವಾಗಿದೆ ಎಂದು ಬಹಿರಂಗಪಡಿಸುತ್ತವೆ, ಇದು [[ಚೀನಾ]], [[ಮಧ್ಯಪ್ರಾಚ್ಯ]], [[ನೆದರ್ಲ್ಯಾಂಡ್ಸ್]], [[ಪೋರ್ಚುಗಲ್]], [[ಬ್ರೆಜಿಲ್]] ಮತ್ತು ಇತರ [[ಪೂರ್ವ ಮೆಡಿಟರೇನಿಯನ್|ಪೂರ್ವ ಮೆಡಿಟರೇನಿಯನ್ ದೇಶಗಳ]] ಜನರ ವ್ಯಾಪಾರ ಕೇಂದ್ರವಾಗಿ ಸೇವೆ ಸಲ್ಲಿಸಿತು.<ref>[http://www.thehindu.com/news/national/kerala/emergence-of-antiques-triggers-treasure-hunt-in-kollam/article5711850.ece ಪ್ರಾಚೀನ ವಸ್ತುಗಳ ಹೊರಹೊಮ್ಮುವಿಕೆಯು ಕೊಲ್ಲಂನಲ್ಲಿ ನಿಧಿ ಬೇಟೆಯನ್ನು ಪ್ರಚೋದಿಸುತ್ತದೆ]</ref><ref>[http://www.thehindu.com/news/national/kerala/shards-of-the-past-point-to-kollam-ports-glory-days/article5728896.ece ಭೂತಕಾಲದ ಚೂರುಗಳು ಕೊಲ್ಲಂ ಬಂದರಿನ ವೈಭವದ ದಿನಗಳನ್ನು ಸೂಚಿಸುತ್ತವೆ]</ref> ಪುರಾತತ್ವಶಾಸ್ತ್ರಜ್ಞರು ಪ್ರಸ್ತುತ ಕೊಲ್ಲಂ ಬಂದರಿನ ಸಮುದ್ರ ತಳದಲ್ಲಿ ಮುಳುಗಿರುವ ನಗರವಿದೆ ಎಂದು ನಂಬುತ್ತಾರೆ.
ಇಂದು, ಹಡಗುಗಳು ಸಾಗಾಣಿಕೆ ಕಾರ್ಯಾಚರಣೆಗಳಿಗೆ ಮತ್ತು ಅಗತ್ಯವಿದ್ದಾಗ ತುರ್ತು ರಿಪೇರಿಗಾಗಿ ಬಂದರಿನಲ್ಲಿ ಆಗಾಗ್ಗೆ ನಿಲ್ಲುತ್ತವೆ.<ref>[http://www.thehindu.com/todays-paper/tp-national/tp-kerala/ship-berths-at-kollam-port/article165373.ece ಕೊಲ್ಲಂ ಬಂದರಿನಲ್ಲಿ ಹಡಗು ನಿಲ್ಲುತ್ತದೆ]</ref> ಮುಖ್ಯಮಂತ್ರಿ [[ಉಮ್ಮನ್ ಚಾಂಡಿ]] 9{{nbsp}}ನವೆಂಬರ್ 2013 ರಂದು ಕೊಲ್ಲಂ ಬಂದರಿನಲ್ಲಿ ಕರಾವಳಿ ಸಾಗಾಣಿಕೆ ಯೋಜನೆ (CSP) ಅನ್ನು ಉದ್ಘಾಟಿಸಿದರು, ಆದರೆ ಪ್ರಯಾಣಿಕರ ಹಡಗುಗಳು 2014 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.<ref>''[http://www.thehindu.com/news/national/kerala/passenger-ships-will-start-from-kollam-this-year-chandy/article5333839.ece ಕೊಲ್ಲಂನಿಂದ ಪ್ರಯಾಣಿಕರ ಹಡಗುಗಳು ಈ ವರ್ಷ ಪ್ರಾರಂಭವಾಗಲಿವೆ: ಚಾಂಡಿ]''. 17 ಡಿಸೆಂಬರ್ 2013 ರಂದು ಪ್ರವೇಶಿಸಲಾಗಿದೆ.</ref> ಮೊದಲ ಕಂಟೇನರ್ ಹಡಗು, ''MV ಸೂರ್ಯಮುಖಿ'' 18{{nbsp}}ಜನವರಿ 2014 ರಂದು, ಎರಡು ತಿಂಗಳ ವಿಳಂಬದ ನಂತರ ಕರಾವಳಿ ಸಾಗಾಣಿಕೆ ಯೋಜನೆಯ ಭಾಗವಾಗಿ ಕೊಲ್ಲಂ ಬಂದರಿಗೆ ಆಗಮಿಸಿತು.<ref>[https://web.archive.org/web/20140520053720/http://www.newindianexpress.com/states/kerala/First-Container-Ship-in-Kollam-Port/2014/01/19/article2007910.ece#.U0JridLHm-0 ಕೊಲ್ಲಂ ಬಂದರಿನಲ್ಲಿ ಮೊದಲ ಕಂಟೇನರ್ ಹಡಗು]</ref> ಪ್ರಮುಖ ಸಾಗಾಣಿಕಾ ಕಂಪನಿಗಳು ಈಗ ಸಾಗಾಣಿಕಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಬಂದರಿನಲ್ಲಿ ಆಸಕ್ತಿ ತೋರಿಸುತ್ತಿವೆ. ಕಂಪನಿಗಳು ಬಂದರನ್ನು ಮಧ್ಯಂತರ ನೆಲೆಯಾಗಿ ಆಯ್ಕೆ ಮಾಡಲು ಯೋಜನೆಗಳನ್ನು ಹೊಂದಿವೆ. ಪ್ರಸ್ತುತ, ಸುಮಾರು ನಾಲ್ಕು ಕಂಪನಿಗಳು ಬಂದರಿನಲ್ಲಿ ತಮ್ಮ ನಿಯಮಿತ ಉಪಸ್ಥಿತಿಯನ್ನು ಖಾತರಿಪಡಿಸಿವೆ. ಕೇರಳ ರಾಜ್ಯ ಸಮುದ್ರ ಅಭಿವೃದ್ಧಿ ನಿಗಮದ ಚಾರ್ಟರ್ಡ್ ಹಡಗು ಸೂರ್ಯಮುಖಿ ಗುಜರಾತ್ನ ಮುದ್ರಾ ಬಂದರಿಗೆ ಹೆಂಚುಗಳು ಮತ್ತು ಕಟ್ಟಡ ಸಾಮಗ್ರಿಗಳನ್ನು ಹೇರಲು ಪ್ರಯಾಣ ಬೆಳೆಸಿದೆ. ಗ್ರೇಟ್ ಸೀ ಶಿಪ್ಪಿಂಗ್ ಕಂಪನಿಯು ಕೊಚ್ಚಿಯಿಂದ ಗೋಡಂಬಿಯನ್ನು ಹೊತ್ತುಕೊಂಡು ಶೀಘ್ರದಲ್ಲೇ ಬಂದರಿನಲ್ಲಿ ನಿಲ್ಲಲಿದೆ.<ref>[https://www.deccanchronicle.com/131119/news-current-affairs/article/shipping-companies-evince-interest-kollam-port ಸಾಗಾಣಿಕಾ ಕಂಪನಿಗಳು ಕೊಲ್ಲಂ ಬಂದರಿನಲ್ಲಿ ಆಸಕ್ತಿ ವ್ಯಕ್ತಪಡಿಸಿವೆ]</ref>
ಬಂದರಿನ ಆಧುನೀಕರಣದ ನಂತರ, 4 ಏಪ್ರಿಲ್ 2014 ರಂದು ಮೊದಲ ವಿದೇಶಿ ಹಡಗು ಬಂದರಿನಲ್ಲಿ ನಿಲ್ಲಿಸಿತು.<ref>[https://web.archive.org/web/20140408225152/http://www.newindianexpress.com/states/kerala/Foreign-Ship-Reaches-Kollam-Port/2014/04/05/article2150731.ece#.U0Jt2NLHm-0 ವಿದೇಶಿ ಹಡಗು ಕೊಲ್ಲಂ ಬಂದರನ್ನು ತಲುಪಿದೆ]</ref> ಈಗ ಬೃಹತ್ ವಿದೇಶಿ ಹಡಗುಗಳು ಕೊಲ್ಲಂ ಬಂದರಿನಿಂದ ಸುಲಭವಾಗಿ ಕಾರ್ಯನಿರ್ವಹಿಸಬಹುದು ಎಂದು ಸಾಬೀತಾಗಿದೆ. ''MT ಚಾಲಿಯಾರ್'' ಮತ್ತು ''MT ಕೇರಳ'' ಟಗ್ಗಳು ಮತ್ತು ಹೊಸ ಜರ್ಮನ್-ನಿರ್ಮಿತ ರೂ. 12 ಕೋಟಿ ಕ್ರೇನ್ ಅನ್ನು ಬಂದರಿನಲ್ಲಿ ಸಮುದ್ರ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ.
[[File:View of Kollam Port from Thangassery Harbour.jpg|right|thumb|[[ಥಂಗಸ್ಸೇರಿ]] ಬಂದರಿನಿಂದ ಕೊಲ್ಲಂ ಬಂದರಿನ ದೂರದ ನೋಟ]]
== ವಿನ್ಯಾಸ ==
ಕೊಲ್ಲಂ ಬಂದರಿನ ಉದ್ದ {{convert|177|m}} ಮತ್ತು ಅಗಲ {{convert|12|m}} ಆಗಿದ್ದು, ಲಭ್ಯವಿರುವ ನೀರಿನ ಆಳ {{convert|6.5|m}} ಇದೆ, ಇದರಿಂದಾಗಿ 15,000 DWT ವರೆಗಿನ ಹಡಗುಗಳು ನೇರವಾಗಿ ನಿಲ್ಲಬಹುದು. ಬಂದರಿನಲ್ಲಿ ಆಳವನ್ನು {{convert|10|m}} ಗೆ ಹೆಚ್ಚಿಸಲು ರೂ.5.7 ಕೋಟಿ ವೆಚ್ಚದಲ್ಲಿ ಡ್ರೆಡ್ಜಿಂಗ್ ಕಾರ್ಯಗಳು ನಡೆಯುತ್ತಿವೆ{{when|date=May 2015}}, ಇದರಿಂದಾಗಿ {{convert|170|m}} ಮತ್ತು ಅದಕ್ಕಿಂತ ಹೆಚ್ಚಿನ ಹಡಗುಗಳು [[ಕೊಚ್ಚಿ]], [[ತೂತುಕುಡಿ]] ಅಥವಾ [[ಚೆನ್ನೈ]] ಗೆ ಮುಂದೆ ಪ್ರಯಾಣಿಸುವ ಅಗತ್ಯವಿಲ್ಲದೆ ಸುಲಭವಾಗಿ ನಿಲ್ಲಬಹುದು. ಉದ್ದನೆಯ ರಕ್ಷಣಾ ಕಲ್ಲುಗೋಡೆಯು {{convert|2100|m}} ಸಮುದ್ರದ ರಕ್ಷಣಾ ಕಲ್ಲುಗೋಡೆ ಮತ್ತು {{convert|500|m}} ಗಾಳಿಯ ರಕ್ಷಣಾ ಕಲ್ಲುಗೋಡೆಯಿಂದ ಅಲೆಗಳಿಂದ ರಕ್ಷಿಸಲ್ಪಟ್ಟಿದೆ. ಉದ್ದನೆಯ ರಕ್ಷಣಾ ಕಲ್ಲುಗೋಡೆಯ ಉದ್ದವನ್ನು ಕಾಲಾನಂತರದಲ್ಲಿ {{convert|200|m}} ಗೆ ಹೆಚ್ಚಿಸಲಾಗುವುದು. 2007 ರಲ್ಲಿ, ಕೊಲ್ಲಂ ಬಂದರು ಸುಮಾರು 500,000 ಟನ್ಗಳಷ್ಟು ಸರಕುಗಳನ್ನು ನಿರ್ವಹಿಸಿತು.<ref>{{Cite web |url=http://www.keralaports.gov.in/doc/Kollam%20Final%20DFR/Final%20DFR%20Kollam%20Report.pdf |title=ಕೊಲ್ಲಂ ಬಂದರು |access-date=7 April 2014 |archive-url=https://web.archive.org/web/20160303213028/http://www.keralaports.gov.in/doc/Kollam%20Final%20DFR/Final%20DFR%20Kollam%20Report.pdf |archive-date=3 March 2016 |url-status=dead }}</ref><ref>[https://web.archive.org/web/20071020151407/http://hindu.com/2007/10/19/stories/2007101951080300.htm ವಿ.ಎಸ್ ಅವರು ಕೊಲ್ಲಂ ಬಂದರನ್ನು ಉದ್ಘಾಟಿಸಲಿದ್ದಾರೆ]</ref>
== ಹಿನ್ನೆಲೆ ಪ್ರದೇಶ ಮತ್ತು ಸರಕು ==
[[File:Quilon 1670 verbessert.jpg|right|thumb|1661 ರಲ್ಲಿ [[ಕೊಲ್ಲಂ]] ವಶಪಡಿಸಿಕೊಳ್ಳುವಿಕೆ]]
[[File:Quilon 1745.jpg|right|thumb|1800 ರ ದಶಕದಲ್ಲಿ [[ಕೊಲ್ಲಂ]]]]
ಕೊಲ್ಲಂ ಬಂದರಿನ ಪ್ರಾಥಮಿಕ ಹಿನ್ನೆಲೆ ಪ್ರದೇಶವು [[ಪಥನಂತಿಟ್ಟ]] ಮತ್ತು [[ಕೊಟ್ಟಾಯಂ ಜಿಲ್ಲೆ|ಕೊಟ್ಟಾಯಂ]] ಮತ್ತು [[ಇಡುಕ್ಕಿ ಜಿಲ್ಲೆ|ಇಡುಕ್ಕಿ]] ಜಿಲ್ಲೆಗಳ ದಕ್ಷಿಣ ಭಾಗಗಳಿಗೆ; [[ಆಲಪ್ಪುಳ ಜಿಲ್ಲೆ]]ಯ ಮಧ್ಯ ಮತ್ತು ದಕ್ಷಿಣ ಭಾಗಗಳು, [[ಕೊಲ್ಲಂ ಜಿಲ್ಲೆ]] ಮತ್ತು [[ತಿರುವನಂತಪುರ ಜಿಲ್ಲೆ]] [[ತಮಿಳುನಾಡು]]ನ [[ಕನ್ಯಾಕುಮಾರಿ ಜಿಲ್ಲೆ|ಕನ್ಯಾಕುಮಾರಿ]]-[[ತಿರುನೆಲ್ವೇಲಿ ಜಿಲ್ಲೆ|ತಿರುನೆಲ್ವೇಲಿ]]-[[ಮಧುರೈ ಜಿಲ್ಲೆ|ಮಧುರೈ]] ಮತ್ತು [[ತೇನಿ ಜಿಲ್ಲೆ|ತೇನಿ]] ಜಿಲ್ಲೆಗಳೊಂದಿಗೆ ವಿಸ್ತರಿಸುತ್ತದೆ. ಪ್ರಸ್ತುತ ನಿರ್ವಹಿಸಲ್ಪಡುತ್ತಿರುವ ಅಥವಾ ಬಂದರಿಗೆ ಯೋಜಿಸಲಾಗಿರುವ ಸರಕುಗಳಲ್ಲಿ ಅಮೃತಶಿಲೆ, ಹೆಂಚುಗಳು, ಮರಳು, ಟೈಟಾನಿಯಂ ಅದಿರು, ಗೋಡಂಬಿ ಬೀಜಗಳು, ಬೀಜಗಳು ಮತ್ತು ಬೀಜದ ಚಿಪ್ಪಿನ ದ್ರವ, ಸಮುದ್ರ ಆಹಾರ, ಜೇಡಿಮಣ್ಣು, ಮರದ ದಿಮ್ಮಿಗಳು, ಸಿಲ್ಲಿಮನೈಟ್, ಟೈಟಾನಿಯಂ ಡೈಆಕ್ಸೈಡ್, ರಕ್ತ ಉತ್ಪನ್ನಗಳು, ಸುದ್ದಿಪತ್ರ ಮತ್ತು ಹಳೆಯ ಕಾಗದ, ಸಿಮೆಂಟ್, ಯೂರಿಯಾ ಮತ್ತು ಪೊಟ್ಯಾಷ್ ಮ್ಯೂರಿಯೇಟ್ (ರಸಗೊಬ್ಬರಕ್ಕಾಗಿ), ರಬ್ಬರ್, ಆಹಾರ, ಕೃಷಿ ಉತ್ಪನ್ನಗಳು ಮತ್ತು ಸಿಮೆಂಟ್ ಹಾಗೂ [[ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ|ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ]] ಮತ್ತು [[ಕೇರಳ ಖನಿಜ ಮತ್ತು ಲೋಹಗಳು]] ನಂತಹ ಸ್ಥಳೀಯ ಕಂಪನಿಗಳಿಗೆ ಇತರ ಸರಕುಗಳು ಮತ್ತು ಉತ್ಪನ್ನಗಳು ಸೇರಿವೆ.
== ಅಭಿವೃದ್ಧಿ ಮತ್ತು ಆಧುನೀಕರಣ ==
[[File:Dredger "Hansitha" at Kollam(Quilon) coast, Jul 2016.jpg|right|thumb|ಕೊಲ್ಲಂ ಬಂದರಿನಿಂದ 2 ಕಿಮೀ ದೂರದಲ್ಲಿರುವ [[ಮುಂಡಕ್ಕಲ್ ಬೀಚ್]] ನಲ್ಲಿ ದಡಕ್ಕೆ ತೇಲಿ ಬಂದ ಡ್ರೆಡ್ಜರ್ ಹಡಗು]]
ಕೊಲ್ಲಂ ಅನ್ನು "ಕೇರಳದ ಬಂದರು ನಗರ"ವಾಗಿ ಪರಿವರ್ತಿಸುವ ಸಲುವಾಗಿ ಮಾಲ್ಡೀವ್ಸ್ ಬಂದರಿನೊಂದಿಗೆ ಹಲವಾರು ಪ್ರಮುಖ ಆಧುನೀಕರಣ ಯೋಜನೆಗಳನ್ನು ಕೊಲ್ಲಂಗೆ ಪ್ರಸ್ತಾಪಿಸಲಾಗಿದೆ. ಈಗಾಗಲೇ ಯೋಜಿಸಲಾಗಿರುವ ಯೋಜನೆಗಳು ರಾಜ್ಯಕ್ಕೆ ಇದುವರೆಗೆ ಪ್ರಸ್ತಾಪಿಸಲಾದ ಕೆಲವು ದೊಡ್ಡ ಯೋಜನೆಗಳಾಗಿವೆ. ಸರ್ಕಾರವು "ಕೊಲ್ಲಂ ಬಂದರು ನಗರ" ಯೋಜನೆಯ ಭಾಗವಾಗಿ ಮಾರುತಡಿ-ಇರವಿಪುರಂ ಪ್ರದೇಶದ ನವೀಕರಣವನ್ನು ಕೈಗೊಳ್ಳಲಿದ್ದು, ಕ್ರೀಡೆ, ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಮನರಂಜನೆಗಾಗಿ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.<ref>{{cite web | url = http://i1324.photobucket.com/albums/u606/quilonsky/Mathrubhumi_zps52ba640e.png | title = ಕೊಲ್ಲಂ - ಬಂದರು ನಗರ ಯೋಜನೆ | year = 2013}}</ref> ದೊಡ್ಡ ಹಡಗುಗಳು ಸುಲಭವಾಗಿ ಬಂದರಿನಲ್ಲಿ ನಿಲ್ಲುವಂತೆ ಬಂದರಿನ ಆಳವನ್ನು ಹೆಚ್ಚಿಸಲು ಡ್ರೆಡ್ಜಿಂಗ್ ಕಾರ್ಯಗಳು ನಡೆಯುತ್ತಿವೆ. ಆಧುನೀಕರಣದ ಭಾಗವಾಗಿ, ಕೇರಳ ಸರ್ಕಾರವು [[ಕೊಲ್ಲಂ]] ನಗರದ [[ನೀಂದಕರ]]ದಲ್ಲಿ [[ಕೇರಳ ಸಮುದ್ರ ಸಂಸ್ಥೆ|ಸಮುದ್ರ ಸಂಸ್ಥೆಯನ್ನು]] ಸ್ಥಾಪಿಸಿದೆ.<ref>{{cite web|url=http://www.newindianexpress.com/states/kerala/article348421.ece |archive-url=https://web.archive.org/web/20160301222407/http://www.newindianexpress.com/states/kerala/article348421.ece |url-status=dead |archive-date=1 March 2016 |title=ಸಮುದ್ರ ಸಂಸ್ಥೆಗೆ ರೂ 24.8 ಕೋಟಿ ಅನುಮೋದನೆ |publisher=ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ |access-date=21 February 2016}}</ref><ref>{{cite web|url=http://www.newindianexpress.com/states/kerala/article348421.ece |archive-url=https://web.archive.org/web/20160301222407/http://www.newindianexpress.com/states/kerala/article348421.ece |url-status=dead |archive-date=1 March 2016 |title=ಸಮುದ್ರ ಸಂಸ್ಥೆಗೆ ರೂ 24.8 ಕೋಟಿ ಅನುಮೋದನೆ |publisher=ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ |access-date=15 March 2016}}</ref><ref>{{cite web|url=http://www.newindianexpress.com/states/kerala/Kerala-Maritime-Institute-Inaugurated/2016/02/22/article3289896.ece |archive-url=https://web.archive.org/web/20160223102351/http://www.newindianexpress.com/states/kerala/Kerala-Maritime-Institute-Inaugurated/2016/02/22/article3289896.ece |url-status=dead |archive-date=23 February 2016 |title=ಕೇರಳ ಸಮುದ್ರ ಸಂಸ್ಥೆ ಉದ್ಘಾಟನೆ |publisher=ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ |date=22 February 2016 |access-date=22 February 2016}}</ref>
;ಹಣಕಾಸು
[[File:Port of Kollam.jpg|thumb|right|[[ಕೊಲ್ಲಂ]] ಬಂದರು]]
ಭಾರತೀಯ ರಾಜ್ಯ ಸಚಿವ ಸಂಪುಟವು ಏಪ್ರಿಲ್ 2012 ರಲ್ಲಿ ಬಂದರನ್ನು ಅಭಿವೃದ್ಧಿಪಡಿಸಲು ವಿವರವಾದ ಯೋಜನಾ ವರದಿಯನ್ನು ಅನುಮೋದಿಸಿತು. ಎರಡು ಹಂತಗಳಾಗಿ ವಿಂಗಡಿಸಲಾಗಿದ್ದು, ಮೊದಲನೆಯದು ರೂ 1.11 ಶತಕೋಟಿ ಮತ್ತು ಎರಡನೆಯದು ರೂ 12.5 ಶತಕೋಟಿ ಹೂಡಿಕೆಯ ಅಗತ್ಯವಿದೆ. ಸರ್ಕಾರವು ಈಗಾಗಲೇ ಮೊದಲ ಹಂತದ ಭಾಗವಾಗಿ ರೂ 7.106 ಶತಕೋಟಿ ಹೂಡಿಕೆ ಮಾಡಿದೆ. ಅಭಿವೃದ್ಧಿಯ ಎರಡನೇ ಹಂತದಲ್ಲಿ ಬಂದರಿನ ಆಗ್ನೇಯಕ್ಕೆ ಉದ್ದನೆಯ ರಕ್ಷಣಾ ಕಲ್ಲುಗೋಡೆಯನ್ನು ನಿರ್ಮಿಸಲಾಗುವುದು.<ref name="Kollam - Port City Project - News published in Mathrubhumi Daily">{{cite web | url = http://www.thehindubusinessline.com/industry-and-economy/logistics/thangassery-port-plans-get-cabinet-nod/article3320903.ece | title = ಥಂಗಸ್ಸೇರಿ ಬಂದರು ಯೋಜನೆಗಳಿಗೆ ಸಚಿವ ಸಂಪುಟದ ಅನುಮತಿ | year = 2014}}</ref> ಒಂದು ಸಮಯದಲ್ಲಿ ಆರು ಹಡಗುಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯದ ಉದ್ದನೆಯ ರಕ್ಷಣಾ ಕಲ್ಲುಗೋಡೆಯನ್ನು ಸಹ ಯೋಜಿಸಲಾಗಿದೆ.
;EDI ಮತ್ತು ಆನ್ಲೈನ್ ಕಸ್ಟಮ್ಸ್ ಕ್ಲಿಯರೆನ್ಸ್ ಸೌಲಭ್ಯಗಳು
[[File:Dredgers and ships near Kollam Port, Mar 2017.jpg|thumb|right|ಕೊಲ್ಲಂ ಬಂದರಿನಲ್ಲಿ ನಿಲ್ಲಿಸಲಾದ ಡ್ರೆಡ್ಜರ್ ಹಡಗುಗಳು]]
ಕೊಲ್ಲಂ ಬಂದರು [[ಎಲೆಕ್ಟ್ರಾನಿಕ್ ಡೇಟಾ ಇಂಟರ್ಚೇಂಜ್]] (EDI) ನ ಸಹಾಯದಿಂದ ಬಂದರಿನಲ್ಲಿ ಆನ್ಲೈನ್ ಕಸ್ಟಮ್ಸ್ ಕ್ಲಿಯರೆನ್ಸ್ ಅನ್ನು ಒದಗಿಸುವ ಸೌಲಭ್ಯವನ್ನು ಹೊಂದಿರುವ ಕೇರಳದ ಎರಡು ಬಂದರುಗಳಲ್ಲಿ ಒಂದಾಗಿದೆ. ಕೊಲ್ಲಂ ಬಂದರಿನ EDI ಲೋಕೇಟರ್ ಕೋಡ್ '''INKUK1''' ಆಗಿದೆ. ಕೊಲ್ಲಂ ಬಂದರಿನ ಕಸ್ಟಮ್ಸ್ನ ಎಲೆಕ್ಟ್ರಾನಿಕ್ ಡೇಟಾ ಇಂಟರ್ಫೇಸ್ (EDI) ಸೌಲಭ್ಯವನ್ನು 6 ಜನವರಿ 2016 ರಂದು ಪ್ರಾರಂಭಿಸಲಾಯಿತು ಮತ್ತು ಇದು ಆಮದುದಾರರು ಮತ್ತು ರಫ್ತುದಾರರಿಗೆ ವಿಶ್ವದ ಎಲ್ಲಿಂದಲಾದರೂ ಕೊಲ್ಲಂಗೆ ಉದ್ದೇಶಿಸಲಾದ ಸರಕುಗಳನ್ನು ನಿರ್ವಹಿಸಲು ಅನುವು ಮಾಡಿಕೊಟ್ಟಿತು. ನಿರ್ದಿಷ್ಟ ಕೋಡ್ನೊಂದಿಗಿನ ಸೌಲಭ್ಯವು 24 ಗಂಟೆಗಳ ಕಾಲ ಲಭ್ಯವಿತ್ತು. ಇದು ಬಂದರಿನಲ್ಲಿ ಕಸ್ಟಮ್ಸ್ ಕ್ಲಿಯರೆನ್ಸ್ಗಾಗಿ ಕೈಪಿಡಿ ವ್ಯವಸ್ಥೆಯನ್ನು ಬದಲಾಯಿಸಿತು.<ref>{{cite web | url = https://www.icegate.gov.in/SMTPList.html | title = EDI ಸ್ಥಳ ಕೋಡ್ಗಳು ಮತ್ತು ಸ್ಥಳಗಳು(No.130 ಕೊಲ್ಲಂ ಬಂದರು) - ಇ-ಕಾಮರ್ಸ್ ಪೋರ್ಟಲ್ ಕೇಂದ್ರ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿ | publisher = ಕೇಂದ್ರ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿ | year = 2015 | access-date = 2026-08-07 | archive-date = 2022-08-13 | archive-url = https://web.archive.org/web/20220813162536/https://www.icegate.gov.in/SMTPList.html | url-status = dead }}</ref>
ಈ ತಂತ್ರಜ್ಞಾನದ ಸಹಾಯದಿಂದ, ಸರಕುಗಳ ಆಮದು ಮತ್ತು ರಫ್ತು ವಿವರಗಳು, ತೆರಿಗೆ ಮೊತ್ತಗಳು ಮತ್ತು ಪಾವತಿಗಳನ್ನು ಎಲೆಕ್ಟ್ರಾನಿಕ್ ಸ್ವರೂಪಕ್ಕೆ ಪರಿವರ್ತಿಸಲಾಗುತ್ತದೆ. ಇದು ಬಂದರಿನ ಮೂಲಕ ಸರಕುಗಳ ಸುಗಮ ಮತ್ತು ವೇಗದ ಸಾಗಣೆಗೆ ಅನುವು ಮಾಡಿಕೊಡುತ್ತದೆ. ಈ ಕ್ರಮವನ್ನು ಸುಲಭಗೊಳಿಸಲು, ಬಂದರಿನಲ್ಲಿ ಹೈ-ಸ್ಪೀಡ್ ಸಮರ್ಪಿತ [[ಮಲ್ಟಿಪ್ರೊಟೋಕಾಲ್ ಲೇಬಲ್ ಸ್ವಿಚಿಂಗ್]] ಸಕ್ರಿಯಗೊಳಿಸಿದ ಇಂಟರ್ನೆಟ್ ಸಂಪರ್ಕವನ್ನು ಅಳವಡಿಸಲಾಗಿದೆ. ಕೊಲ್ಲಂ ಎರಡನೇ ಕೇರಳ ಬಂದರಾಗಿ EDI ಸಕ್ರಿಯಗೊಳಿಸಿದ ತಂತ್ರಜ್ಞಾನವನ್ನು ನೀಡುತ್ತದೆ, ಇದು [[ಕೊಚ್ಚಿ ಬಂದರು]] ಮತ್ತು [[ತೂತುಕುಡಿ ಬಂದರು]] ಗಿಂತ ಹೆಚ್ಚು ಅನುಕೂಲಕರವಾದ ಕಂಟೇನರ್ ನಿರ್ವಹಣೆ ಮತ್ತು ಸಾರಿಗೆ ಚಟುವಟಿಕೆಗಳನ್ನು ನೀಡಲು ಅನುವು ಮಾಡಿಕೊಡುತ್ತದೆ, ಏಕೆಂದರೆ ಕೊಲ್ಲಂ ಬಂದರಿನಲ್ಲಿ ರಫ್ತು-ಆಮದು ದರಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ಕೊಲ್ಲಂ ಬಂದರಿನಿಂದ [[ಮಾಲ್ಡೀವ್ಸ್]] ಗೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡುವ ಪ್ರಸ್ತಾಪವೂ ಇದೆ.<ref>{{cite web|url=http://www.madhyamam.com/news/313464/141013 |title=കൊല്ലം തുറമുഖത്തെ കസ്റ്റംസ് ക്ളിയറന്സുകള് ഓണ്ലൈന് സംവിധാനത്തിലേക്ക്| madhyamam |access-date=2014-11-14 |url-status=dead |archive-url=https://web.archive.org/web/20141022170950/http://www.madhyamam.com/news/313464/141013 |archive-date=22 October 2014 }} ಆನ್ಲೈನ್ ಕಸ್ಟಮ್ಸ್ ಕ್ಲಿಯರೆನ್ಸ್ ಸೌಲಭ್ಯವು ಒಂದು ತಿಂಗಳಲ್ಲಿ ಕೊಲ್ಲಂ ಬಂದರಿಗೆ ಸಿದ್ಧವಾಗಲಿದೆ</ref>
;ತೂತುಕುಡಿ ಬಂದರಿನೊಂದಿಗೆ ಸಹಕಾರ
ಕೊಚ್ಚಿ ಬಂದರು ಸಂಪೂರ್ಣ ಸಾಮರ್ಥ್ಯವನ್ನು ಸಮೀಪಿಸುತ್ತಿದ್ದಂತೆ, ಕೇರಳದ ಬಂದರು ಇಲಾಖೆ ಮತ್ತು [[ಭಾರತದ ಗೋಡಂಬಿ ರಫ್ತು ಪ್ರೋತ್ಸಾಹಕ ಮಂಡಳಿ]] (CEPCI) [[ಕೊಲ್ಲಂ ಮೂಲದ ಗೋಡಂಬಿ ಕಾರ್ಖಾನೆಗಳಿಗೆ|ಕೊಲ್ಲಂ ಮೂಲದ ಗೋಡಂಬಿ ಕಾರ್ಖಾನೆಗಳಿಗೆ]] ಕಚ್ಚಾ ಗೋಡಂಬಿಗಳನ್ನು ಆಮದು ಮಾಡಿಕೊಳ್ಳಲು ತೂತುಕುಡಿ ಬಂದರಿನೊಂದಿಗೆ ಸಹಕರಿಸಲು ನಿರ್ಧರಿಸಿವೆ. ಯೋಜನೆಯ ಪ್ರಕಾರ, ಕಚ್ಚಾ ಗೋಡಂಬಿಗಳು ತೂತುಕುಡಿ ಬಂದರಿಗೆ ಆಗಮಿಸುತ್ತವೆ ಮತ್ತು ನಂತರ ಸಣ್ಣ ಕಂಟೇನರ್ ಹಡಗುಗಳಲ್ಲಿ ಕೊಲ್ಲಂ ಬಂದರಿಗೆ ಸಾಗಿಸಲ್ಪಡುತ್ತವೆ.<ref>{{cite web | url = http://www.thehindu.com/todays-paper/tp-national/tp-kerala/kollam-tuticorin-ports-plan-tieup/article6232529.ece | title = ಕೊಲ್ಲಂ, ತೂತುಕುಡಿ ಬಂದರುಗಳು ಒಕ್ಕೂಟವನ್ನು ಯೋಜಿಸಿವೆ | website = [[ದಿ ಹಿಂದೂ]] | year = 2014}}</ref><ref>{{cite web | url = http://i1303.photobucket.com/albums/ag151/babusr03/492_94_1930_702_zpsb5f16083.jpg | title = ಕಚ್ಚಾ ಗೋಡಂಬಿಗಳೊಂದಿಗೆ ಕೊಲ್ಲಂಗೆ ಹಡಗುಗಳು | year = 2014}}</ref> CEPCI ಯ ಬೆಂಬಲದೊಂದಿಗೆ ಬಂದರಿನಲ್ಲಿ ಕ್ವಾರಂಟೈನ್ ಸೌಲಭ್ಯ ಮತ್ತು ಗೋಡಂಬಿ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲು ಯೋಜನೆಯೂ ಇದೆ.<ref>[https://www.deccanchronicle.com/140910/nation-current-affairs/article/kollam-port-tourism-enthusiasts-too] ಪ್ರವಾಸಿಗರಿಗೂ ಕೊಲ್ಲಂ ಬಂದರು</ref>
;ಹಡಗು ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ವ್ಯವಸ್ಥೆ (VTMS)
[[ಕೇರಳ ಸರ್ಕಾರ|ಕೇರಳ ಸರ್ಕಾರದ]] ಬಂದರು ಇಲಾಖೆಯು ಬಂದರಿನಲ್ಲಿ ಹಡಗು ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ವ್ಯವಸ್ಥೆಯನ್ನು (VTMS) ಸ್ಥಾಪಿಸಲು ರೂ. 28.8 ದಶಲಕ್ಷ ಅನುಮೋದಿಸಿದೆ.<ref>[https://web.archive.org/web/20141207185259/http://www.newindianexpress.com/cities/thiruvananthapuram/Rs-2.88-cr-Sanctioned/2014/10/18/article2482917.ece] ರೂ 2.88 ಕೋಟಿ ಅನುಮೋದನೆ</ref>
;ಕ್ರೂಸ್ ಹಡಗು ಮತ್ತು ಹೋವರ್ಕ್ರಾಫ್ಟ್ ಸೇವೆಗಳು
[[File:Water tank inside the Port of Quilon, Mar 2017.jpg|right|thumb|ಬಂದರಿನೊಳಗಿನ ನೀರಿನ ಟ್ಯಾಂಕ್]]
ಬಂದರು ಇಲಾಖೆಯು ಕಸ್ಟಮ್ಸ್ ಅಧಿಕಾರಿಗಳು ಮತ್ತು ಪ್ರವಾಸ ನಿರ್ವಾಹಕರೊಂದಿಗೆ ಏಪ್ರಿಲ್ 2014 ರಿಂದ ಕೊಲ್ಲಂ ಆಧಾರಿತ ಕ್ರೂಸ್ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಒಪ್ಪಿಗೆ ನೀಡಿತು. ಆರಂಭದಲ್ಲಿ, ದೇಶೀಯ ಸೇವೆಗಳು ಮಾತ್ರ ಲಭ್ಯವಿವೆ ಆದರೆ ಇವುಗಳನ್ನು ನಂತರ ಅಂತಾರಾಷ್ಟ್ರೀಯ ಸೇವೆಗಳಿಗೆ ವಿಸ್ತರಿಸಬಹುದು. ಸುತ್ತಮುತ್ತಲಿನ ಪ್ರದೇಶಗಳ ಪ್ರವಾಸೋದ್ಯಮ ಸಾಮರ್ಥ್ಯದಿಂದಾಗಿ ಬಂದರಿಗೆ ಅಂತಾರಾಷ್ಟ್ರೀಯ ಕ್ರೂಸ್ ಕಾರ್ಯಾಚರಣೆಗಳ ಸಾಮರ್ಥ್ಯವಿದೆ ಎಂದು ಪ್ರವಾಸ ನಿರ್ವಾಹಕರು ಒಪ್ಪುತ್ತಾರೆ ಮತ್ತು ಬಂದರಿನ ಮೂಲಸೌಕರ್ಯವು ಕ್ರೂಸ್ ಕಾರ್ಯಾಚರಣೆಗಳ ಅಗತ್ಯತೆಗಳನ್ನು ಪೂರೈಸುತ್ತದೆ ಎಂದು ಹೇಳಿದ್ದಾರೆ. ಅವರು ಬಂದರಿನಿಂದ ಹೋವರ್ಕ್ರಾಫ್ಟ್ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆಗಳನ್ನು ಸಹ ಅನ್ವೇಷಿಸಿದ್ದಾರೆ. ಯೋಜನೆಯು ಕೊಲ್ಲಂ-ಕೊಚ್ಚಿ ಸೇವೆಯೊಂದಿಗೆ ಪ್ರಾರಂಭಿಸುವುದಾಗಿದ್ದು, ದೂರವನ್ನು ಕ್ರಮಿಸಲು ಸುಮಾರು ಮೂರು ಗಂಟೆ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.<ref name="Kollam Port ready for cruise operations - News published in The Hindu">{{cite web | url = http://www.thehindu.com/todays-paper/tp-national/tp-kerala/kollam-port-ready-for-cruise-operations/article6540031.ece | title = ಕೊಲ್ಲಂ ಬಂದರು ಕ್ರೂಸ್ ಕಾರ್ಯಾಚರಣೆಗಳಿಗೆ ಸಿದ್ಧವಾಗಿದೆ | website = [[ದಿ ಹಿಂದೂ]] | year = 2014}}</ref>
;ಕೈಗಾರಿಕಾ ಅಭಿವೃದ್ಧಿ ವಲಯಗಳು
ಕೇರಳ ಸರ್ಕಾರವು ಕೇರಳದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಸುತ್ತಲೂ ಕೈಗಾರಿಕಾ ಅಭಿವೃದ್ಧಿ ಯೋಜನೆಗಳನ್ನು ನಿರ್ಧರಿಸಿದೆ. ಬಂದರು ಪ್ರದೇಶದಲ್ಲಿನ ಯೋಜನೆಗಳನ್ನು [[ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ಕಂಪನಿ]] ಸಹಾಯದಿಂದ ಕೈಗೊಳ್ಳಲಾಗುವುದು. [[ಕೋಳಿಕೋಡ್ ಜಿಲ್ಲೆ|ಕೋಳಿಕೋಡ್]], [[ಎರ್ನಾಕುಳಂ ಜಿಲ್ಲೆ|ಎರ್ನಾಕುಳಂ]], [[ತಿರುವನಂತಪುರ ಜಿಲ್ಲೆ|ತಿರುವನಂತಪುರ]], [[ಕಣ್ಣೂರು ಜಿಲ್ಲೆ|ಕಣ್ಣೂರು]] ಮತ್ತು [[ಕೊಲ್ಲಂ ಜಿಲ್ಲೆ|ಕೊಲ್ಲಂ]] ನಂತಹ ಬಂದರುಗಳು ಅಥವಾ ವಿಮಾನ ನಿಲ್ದಾಣಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ ವಲಯಗಳನ್ನು ಸ್ಥಾಪಿಸಲಾಗುವುದು. ಈ ಸೌಲಭ್ಯಗಳ ಪಕ್ಕದಲ್ಲಿ ಪಟ್ಟಣಗಳನ್ನೂ ನಿರ್ಮಿಸಲಾಗುವುದು.<ref name="Impetus for Projects Around Ports, Airports - News published in The New Indian Express">{{cite web | url = http://www.newindianexpress.com/cities/thiruvananthapuram/Impetus-for-Projects-Around-Ports-Airports/2014/11/05/article2507990.ece | archive-url = https://web.archive.org/web/20141213105506/http://www.newindianexpress.com/cities/thiruvananthapuram/Impetus-for-Projects-Around-Ports-Airports/2014/11/05/article2507990.ece | url-status = dead | archive-date = 13 December 2014 | title = ಬಂದರುಗಳು, ವಿಮಾನ ನಿಲ್ದಾಣಗಳ ಸುತ್ತಲಿನ ಯೋಜನೆಗಳಿಗೆ ಪ್ರಚೋದನೆ | year = 2014}}</ref>
;ಹೊಸ ಪ್ರಯಾಣಿಕರ ಟರ್ಮಿನಲ್ ಮತ್ತು ಸರಕು ಟರ್ಮಿನಲ್
[[File:View of Kollam Port from Port Road, Oct 2016.jpg|right|thumb|ನಿರ್ಮಾಣ ಹಂತದಲ್ಲಿರುವ ಪ್ರಯಾಣಿಕರ ಟರ್ಮಿನಲ್]]
ಮುಖ್ಯಮಂತ್ರಿ [[ಉಮ್ಮನ್ ಚಾಂಡಿ]] 14 ಆಗಸ್ಟ್ 2015 ರಂದು ಕೊಲ್ಲಂ ಬಂದರಿನಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್ನ ನಿರ್ಮಾಣ ಕಾರ್ಯಗಳನ್ನು ಉದ್ಘಾಟಿಸಿದರು.<ref name="INAUGURATION OF CONSTRUCTION OF THE NEW PASSENGER TERMINAL AT KOLLAM PORT - Allevents.in">{{cite web | url = https://allevents.in/varkala/inauguration-of-construction-of-the-new-passenger-terminal-at-kollam-port/898341750256147 | title = ಕೊಲ್ಲಂ ಬಂದರಿನಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್ನ ನಿರ್ಮಾಣದ ಉದ್ಘಾಟನೆ | year = 2015}}</ref> [[ಕೊಲ್ಲಂ]] ನಗರವನ್ನು ಸಂಪರ್ಕಿಸುವ [[ರಾಷ್ಟ್ರೀಯ ಜಲಮಾರ್ಗ 3 (ಭಾರತ)|ರಾಷ್ಟ್ರೀಯ ಜಲಮಾರ್ಗ-3]] ತೆರೆಯುವಿಕೆಯು [[ಕೊಲ್ಲಂ]]ಗೆ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುತ್ತದೆ. ಇದಲ್ಲದೆ, ಕೊಲ್ಲಂ ನಗರವು [[ಕೊಚ್ಚಿ]]ಗೆ ಹೋಲಿಸಿದರೆ [[ಮಿನಿಕಾಯ್]]ಗೆ ಬಹಳ ಹತ್ತಿರದಲ್ಲಿರುವುದರಿಂದ, [[ಲಕ್ಷದ್ವೀಪ]] ಸರ್ಕಾರದ [[ಕೊಲ್ಲಂ]] ನಗರಕ್ಕೆ ಪ್ರಯಾಣಿಕರ ಹಡಗು ಸೇವೆಗಳನ್ನು ಪ್ರಾರಂಭಿಸುವ ಯೋಜನೆಗಳನ್ನು ಗುರಿಯಾಗಿಟ್ಟುಕೊಂಡು ಕೊಲ್ಲಂ ಬಂದರಿನಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್ ಅನ್ನು ನಿರ್ಮಿಸಲಾಗುತ್ತಿದೆ.<ref>{{cite web|url=http://www.thehindu.com/todays-paper/tp-national/tp-kerala/lakshadweep-keen-on-investing-in-kollam-port/article86649.ece|title= ಕೊಲ್ಲಂ ಬಂದರಿನಲ್ಲಿ ಹೂಡಿಕೆ ಮಾಡಲು ಲಕ್ಷದ್ವೀಪ ಉತ್ಸುಕವಾಗಿದೆ|access-date=2014-08-27|work= ದಿ ಹಿಂದೂ}}</ref>
ಕೊಲ್ಲಂ ಬಂದರು [[ಮಿನಿಕಾಯ್|ಮಿನಿಕಾಯ್ ದ್ವೀಪಕ್ಕೆ]] ಹತ್ತಿರವಿರುವ ಸಮುದ್ರ ಬಂದರಾಗಿದೆ. ಇದು ಮಿನಿಕಾಯ್ನಿಂದ ಕೇವಲ 200 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದೆ.<ref>{{cite news|url=https://www.thehindu.com/news/national/kerala/why-kollam-port-stands-to-gain-from-lakshadweeps-big-tourism-plans/article36537275.ece|title= ಲಕ್ಷದ್ವೀಪದ ಪ್ರಮುಖ ಪ್ರವಾಸೋದ್ಯಮ ಯೋಜನೆಗಳಿಂದ ಕೊಲ್ಲಂ ಬಂದರಿಗೆ ಲಾಭವಾಗಲು ಕಾರಣವೇನು?|access-date=2021-09-18|work= ದಿ ಹಿಂದೂ|date= 18 September 2021|last1= ಸುಧಿಶ್|first1= ನವಮಿ}}</ref>
;ಕಚ್ಚಾ ಗೋಡಂಬಿಯೊಂದಿಗೆ ಅಂತಾರಾಷ್ಟ್ರೀಯ ಹಡಗು ಆಗಮನ
'ಇಂಟರ್ಮರೀನ್', [[ಸಿಂಗಾಪುರ]]ದಿಂದ ಬಂದ ಅಂತಾರಾಷ್ಟ್ರೀಯ ಹಡಗು, 47 ವರ್ಷಗಳ ದೀರ್ಘ ಅಂತರದ ನಂತರ 30 ಆಗಸ್ಟ್ 2015 ರಂದು [[ಪಶ್ಚಿಮ ಆಫ್ರಿಕಾ|ಪಶ್ಚಿಮ ಆಫ್ರಿಕನ್]] ದೇಶವಾದ [[ಗಿನಿ-ಬಿಸ್ಸಾವ್]] ನಿಂದ 5,600 ಟನ್ಗಳಷ್ಟು ಕಚ್ಚಾ ಗೋಡಂಬಿಯನ್ನು ಹೊತ್ತುಕೊಂಡು ಕೊಲ್ಲಂ ಬಂದರಿನಲ್ಲಿ ನಿಲ್ಲಿಸಿತು.<ref>{{cite news|url=http://www.thehindu.com/news/national/kerala/ship-brings-cheer-to-kollam-cashew-industry/article7598579.ece|title= ನೇರ ಆಮದುಗಳು ಗೋಡಂಬಿ ಉದ್ಯಮಕ್ಕೆ ಉತ್ಸಾಹ ತಂದಿವೆ|access-date=2015-09-08|work= ದಿ ಹಿಂದೂ|date= 30 August 2015|last1= ಪೆರೆಯಿರ|first1= ಇಗ್ನೇಷಿಯಸ್}}</ref> ಇದು ಕೊಲ್ಲಂ ಬಂದರಿಗೆ ಅಗತ್ಯವಾದ ಸೌಲಭ್ಯಗಳನ್ನು ಅಂತಾರಾಷ್ಟ್ರೀಯ ಬೃಹತ್ ಹಡಗುಗಳಿಗೆ ಒದಗಿಸಲು ದಾರಿ ಮಾಡಿಕೊಟ್ಟಿತು ಮತ್ತು [[ಕೊಲ್ಲಂ]] ನಗರದಲ್ಲಿ ಗೋಡಂಬಿ ಉದ್ಯಮವನ್ನು ಪುನರುಜ್ಜೀವನಗೊಳಿಸಿತು.<ref>{{cite web|url=http://www.newindianexpress.com/states/kerala/Direct-Imports-Cheer-up-Cashew-Industry/2015/09/08/article3015911.ece|archive-url=https://web.archive.org/web/20150910172106/http://www.newindianexpress.com/states/kerala/Direct-Imports-Cheer-up-Cashew-Industry/2015/09/08/article3015911.ece|url-status=dead|archive-date=10 September 2015|title= ನೇರ ಆಮದುಗಳು ಗೋಡಂಬಿ ಉದ್ಯಮಕ್ಕೆ ಉತ್ಸಾಹ ತಂದಿವೆ|access-date=2015-09-08|publisher= TNIE}}</ref> ಕೊಲ್ಲಂ ಬಂದರು ಮತ್ತು [[ಆಫ್ರಿಕಾ]]ದಿಂದ ಅಂತಾರಾಷ್ಟ್ರೀಯ ಕಚ್ಚಾ ಗೋಡಂಬಿ ರಫ್ತುದಾರರ ನಡುವಿನ ನೇರ ವ್ಯಾಪಾರವು [[ಕೊಲ್ಲಂ]] ನಗರದ ಬೃಹತ್ ಗೋಡಂಬಿ ವ್ಯಾಪಾರ ಗುಂಪುಗಳಿಗೆ ಹೊಸ ಭರವಸೆಯನ್ನು ನೀಡಿದೆ, ಏಕೆಂದರೆ ಕಚ್ಚಾ ಗೋಡಂಬಿ ಕಂಟೇನರ್ನ ಪೂರ್ಣ ಲೋಡ್ ಅನ್ನು ಕೊಲ್ಲಂ ಬಂದರಿನಿಂದ ಸಂಸ್ಕರಣಾ ಘಟಕಗಳಿಗೆ ರೂ. 3000–4000 ವೆಚ್ಚದಲ್ಲಿ ವರ್ಗಾಯಿಸಬಹುದು. ಹಿಂದೆ ಇದು [[ಕೊಚ್ಚಿ ಬಂದರು]]/[[ತೂತುಕುಡಿ ಬಂದರು]] ನಿಂದ [[ಕೊಲ್ಲಂ]] ಗೆ ವರ್ಗಾಯಿಸಲು ರೂ. 17000-18000 ಆಗಿತ್ತು.
;ಕೊಚ್ಚಿ ಅಂತಾರಾಷ್ಟ್ರೀಯ ಕಂಟೇನರ್ ಸಾಗಣೆ ಟರ್ಮಿನಲ್ಗೆ ವಾರಕ್ಕೊಮ್ಮೆ ಸೇವೆ
ಜನವರಿ 2016 ರಲ್ಲಿ, [[ಕೊಲ್ಲಂ]] ನಗರ ಮತ್ತು ನೆರೆಯ ಸ್ಥಳಗಳಲ್ಲಿ ಗೋಡಂಬಿ ವ್ಯಾಪಾರ ಮತ್ತು ಇತರ ವ್ಯಾಪಾರಗಳನ್ನು ಹೆಚ್ಚಿಸುವ ಸಲುವಾಗಿ ಕೊಲ್ಲಂ ಬಂದರನ್ನು [[ಕೊಚ್ಚಿ]]ನ [[ಅಂತಾರಾಷ್ಟ್ರೀಯ ಕಂಟೇನರ್ ಸಾಗಣೆ ಟರ್ಮಿನಲ್, ಕೊಚ್ಚಿ|ಅಂತಾರಾಷ್ಟ್ರೀಯ ಕಂಟೇನರ್ ಸಾಗಣೆ ಟರ್ಮಿನಲ್]] ನೊಂದಿಗೆ ಸಂಪರ್ಕಿಸುವ ವಾರಕ್ಕೊಮ್ಮೆ ಸೇವೆಯನ್ನು ಪ್ರಾರಂಭಿಸಲಾಯಿತು. [[ಟಾಂಜೇನಿಯಾ]]ದಿಂದ 30 ಕಂಟೇನರ್ ಲೋಡ್ಗಳ ಕಚ್ಚಾ ಗೋಡಂಬಿಯೊಂದಿಗೆ ಮೊದಲ ಫೀಡರ್ ಹಡಗು 6 ಜನವರಿ 2016 ರಂದು [[ಕೊಲ್ಲಂ]]ನಲ್ಲಿ ನಿಲ್ಲಿಸಿತು.<ref>{{cite web|url=http://www.thehindu.com/news/national/kerala/first-container-ship-with-raw-cashew-calls-at-kollam/article8075221.ece|title= ಕಚ್ಚಾ ಗೋಡಂಬಿಯೊಂದಿಗೆ ಮೊದಲ ಕಂಟೇನರ್ ಹಡಗು ಕೊಲ್ಲಂಗೆ ಆಗಮಿಸಿದೆ|access-date=2016-01-09|work= ದಿ ಹಿಂದೂ}}</ref> ಟಾಂಜೇನಿಯಾದಿಂದ ಸರಕುಗಳೊಂದಿಗೆ ವಲ್ಲಾರ್ಪಾಡಂಗೆ ಆಗಮಿಸಿದ ಹಡಗಿನಿಂದ ಕಂಟೇನರ್ಗಳನ್ನು ಫೀಡರ್ ಹಡಗಿನಲ್ಲಿ ಹೇರಲಾಯಿತು.<ref>{{cite web|url=http://www.hellenicshippingnews.com/ictt-records-stronger-business-growth-in-2015/|title=ಹೆಲೆನಿಕ್ ಶಿಪ್ಪಿಂಗ್ ನ್ಯೂಸ್ ವರ್ಲ್ಡ್ವೈಡ್|access-date=2016-01-09|publisher=TNIE}}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref> [[ಕೊಲ್ಲಂ]]ನಲ್ಲಿ ಸರಕುಗಳು ಇಳಿಯುವುದು ಉತ್ತಮ ಗೋಚರತೆ ಮತ್ತು ದಾಸ್ತಾನು ಮೇಲಿನ ನಿಯಂತ್ರಣವನ್ನು ಖಚಿತಪಡಿಸುತ್ತದೆ, ಜೊತೆಗೆ ವೆಚ್ಚವನ್ನು ಉಳಿಸುತ್ತದೆ, ಇದು ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ ಎಂದು ನಿರೀಕ್ಷಿಸಲಾಗಿದೆ. ಕೊಲ್ಲಂ ಬಂದರು ದಕ್ಷಿಣ ಕೇರಳದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಏಕೈಕ ಆಧುನಿಕ ಬಂದರಾಗಿರುವುದರಿಂದ, ಫೀಡರ್ ಸೇವೆಯು [[ತಿರುವನಂತಪುರ]], [[ಪಥನಂತಿಟ್ಟ]], [[ನಾಗರ್ಕೋವಿಲ್]], [[ಮಾರ್ತಾಂಡಂ]] ಮತ್ತು [[ಕನ್ಯಾಕುಮಾರಿ]]ಗಳಲ್ಲಿನ ವ್ಯಾಪಾರಿಗಳು ಮತ್ತು ವ್ಯಾಪಾರಸ್ಥರಿಗೆ ಕೊಲ್ಲಂ ಬಂದರಿನಿಂದ ಕಡಿಮೆ-ವೆಚ್ಚದ ಸರಕು ಸಾಗಣೆ ಮತ್ತು ರಫ್ತು-ಆಮದು ಸೌಲಭ್ಯಗಳೊಂದಿಗೆ ಪ್ರಯೋಜನವನ್ನು ನೀಡುತ್ತದೆ.<ref>{{cite web|url=http://www.newindianexpress.com/cities/kochi/ICTT-Records-Stronger-Business-Growth-in-2015/2016/01/08/article3217126.ece|archive-url=https://web.archive.org/web/20160108211736/http://www.newindianexpress.com/cities/kochi/ICTT-Records-Stronger-Business-Growth-in-2015/2016/01/08/article3217126.ece|url-status=dead|archive-date=8 January 2016|title= ICTT 2015 ರಲ್ಲಿ ಪ್ರಬಲ ವ್ಯಾಪಾರ ಬೆಳವಣಿಗೆಯನ್ನು ದಾಖಲಿಸಿದೆ|access-date=2016-01-09|publisher= TNIE}}</ref> [[ಕೊಲ್ಲಂ]]ನಿಂದ ಸಾಗಾಣಿಕಾ ಸೌಲಭ್ಯದ ಪರಿಚಯವು ಸಂಸ್ಕಾರಕಗಳಿಗೆ ಸ್ವಲ್ಪ ಮಟ್ಟಿಗೆ ವೆಚ್ಚವನ್ನು ಕಡಿತಗೊಳಿಸಲು ಅನುವು ಮಾಡಿಕೊಡುತ್ತದೆ. ಇದು ರಸ್ತೆಗಳ ಮೇಲಿನ ದಟ್ಟಣೆಯನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.
;ಬಂದರು ಸಂಕೀರ್ಣ
ಸಚಿವ [[ಕೆ. ಬಾಬು]] 14 ಜನವರಿ 2016 ರಂದು ರೂ. 5-ಕೋಟಿ ಮೌಲ್ಯದ ಕೊಲ್ಲಂ ಬಂದರು ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.<ref>{{cite web|url=http://www.thehindu.com/news/national/kerala/work-on-port-office-building-begins/article8110137.ece|title=ಬಂದರು ಕಚೇರಿ ಕಟ್ಟಡದ ಕೆಲಸ ಪ್ರಾರಂಭವಾಗಿದೆ|access-date=2016-03-01|work=ದಿ ಹಿಂದೂ}}</ref>
;ರೋಲ್-ಆನ್, ರೋಲ್-ಆಫ್ (ರೋ-ರೋ) ಹಡಗು ಸೇವೆಯ ಪ್ರಾರಂಭ
MV ಮಾರಿಯಾ, 160-ಮೀಟರ್ ಉದ್ದದ ರೋ-ರೋ ಹಡಗು, 150 ಲೋಡೆಡ್ ಟ್ರಕ್ಗಳು ಮತ್ತು 210 ಕಾರುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, 17 ಮಾರ್ಚ್ 2016 ರಂದು [[ಪನಂಬೂರು|ನ್ಯೂ ಮಂಗಳೂರು ಬಂದರು]] ನಿಂದ ಕೊಲ್ಲಂ ಬಂದರಿನಲ್ಲಿ ನಿಲ್ಲಿಸಿತು. ಇದು [[ಕೇರಳ]]ದ ಯಾವುದೇ ಬಂದರಿಗೆ ಕರೆ ಮಾಡಿದ ಮೊದಲ ರೋ-ರೋ ಹಡಗು.<ref>{{cite news|url=http://www.thehindu.com/news/national/kerala/roro-ship-to-call-at-kollam-today/article8363409.ece|title=ರೋ-ರೋ ಹಡಗು ಇಂದು ಕೊಲ್ಲಂಗೆ ಕರೆ ಮಾಡಲಿದೆ|access-date=2016-03-17|work=ದಿ ಹಿಂದೂ|date=16 March 2016 |last1=ಪೆರೆಯಿರ |first1=ಇಗ್ನೇಷಿಯಸ್ }}</ref>
;ಲಕ್ಷದ್ವೀಪ ದ್ವೀಪಗಳಿಗೆ ಪ್ರಯಾಣಿಕರ ಹಡಗು ಸೇವೆ
ಅಕ್ಟೋಬರ್ 2016 ರಲ್ಲಿ, ಕೇರಳ ಬಂದರುಗಳ ಸಚಿವ [[ಕಡಣಪ್ಪಳ್ಳಿ ರಾಮಚಂದ್ರನ್]] ಅವರು ದ್ವೀಪಗಳನ್ನು ಮುಖ್ಯಭೂಮಿಗೆ ಸಂಪರ್ಕಿಸುವ ಎರಡು ಹೊಸ ಸಂಪರ್ಕಗಳನ್ನು ತೆರೆಯಲು ಕೊಲ್ಲಂ ಬಂದರು ಮತ್ತು ಅಜೀಕಲ್ ಬಂದರಿನಿಂದ ಲಕ್ಷದ್ವೀಪಕ್ಕೆ ಪ್ರಯಾಣಿಕರ ಹಡಗು ಸೇವೆಗಳನ್ನು ಪ್ರಕಟಿಸಿದರು.<ref>{{cite web|url=http://www.thehindu.com/news/cities/Thiruvananthapuram/hydrofoil-ferry-service-soon/article9182343.ece|title=ಹೈಡ್ರೋಫಾಯಿಲ್ ದೋಣಿ ಸೇವೆ ಶೀಘ್ರ|access-date=2016-10-04|work=ದಿ ಹಿಂದೂ}}</ref> [[ಕೇರಳ ಸರ್ಕಾರ]] ಮತ್ತು [[ಕೊಲ್ಲಂ ನಗರ ಸಭೆ]]ಯ ಅಧಿಕಾರಿಗಳು [[ಲಕ್ಷದ್ವೀಪ]]ದ ಅತ್ಯಂತ ದಕ್ಷಿಣದ ಹವಳದ ದ್ವೀಪವಾದ [[ಮಿನಿಕಾಯ್]] ಗೆ ಶೀಘ್ರದಲ್ಲೇ ಭೇಟಿ ನೀಡಿ, [[ಕೊಲ್ಲಂ]] ನಗರಕ್ಕೆ ಪ್ರಸ್ತಾವಿತ ದೋಣಿ ಸೇವೆಯ ಸಾಮರ್ಥ್ಯವನ್ನು ಅಧ್ಯಯನ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಯೋಜನೆಗಳು [[ಮಾಲ್ಡೀವ್ಸ್]] ಮತ್ತು [[ಲಕ್ಷದ್ವೀಪ]]ದಿಂದ ಪ್ರವಾಸಿಗರನ್ನು [[ಕೊಲ್ಲಂ]]ಗೆ ಕರೆತಂದು ಇಲ್ಲಿಯ ಸಮರ್ಥ ಆದರೆ ಅಗ್ಗದ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಅವರಿಗೆ ತಿಳಿಸಲು ಕ್ರಮಗಳನ್ನು ಕೈಗೊಳ್ಳುತ್ತಿವೆ.<ref>{{cite web|url=https://www.newindianexpress.com/states/kerala/2016/oct/25/ferry-service-to-ldweep-to-open-up-new-vistas-1531476.html|title=ಲಕ್ಷದ್ವೀಪಕ್ಕೆ ದೋಣಿ ಸೇವೆ ಹೊಸ ಹಾರಿಜಾನ್ಗಳನ್ನು ತೆರೆಯಲಿದೆ|date=2016-10-25|access-date=2016-10-25|publisher=TNIE}}</ref><ref>{{cite web|url=https://www.deccanchronicle.com/150915/nation-current-affairs/article/road-show-maldives-attract-tourists-kollam|title=ಕೊಲ್ಲಂಗೆ ಪ್ರವಾಸಿಗರನ್ನು ಆಕರ್ಷಿಸಲು ಮಾಲ್ಡೀವ್ಸ್ನಲ್ಲಿ ರಸ್ತೆ ಪ್ರದರ್ಶನ|date=2015-09-15|access-date=2016-10-26|publisher=TNIE}}</ref>
;ಕೇರಳ ಕರಾವಳಿ ಹೆದ್ದಾರಿ ಯೋಜನೆ
[[File:Port Road UC at Kollam, Oct 2016.jpg|right|thumb|[[ಥಂಗಸ್ಸೇರಿ]]ಯಲ್ಲಿನ [[ಬಂದರು ರಸ್ತೆ, ಕೊಲ್ಲಂ|ಕೊಲ್ಲಂ ಬಂದರು ರಸ್ತೆ]]. ಈ ರಸ್ತೆಯು ವಾಸ್ತವಗೊಂಡ ನಂತರ ಕರಾವಳಿ ಹೆದ್ದಾರಿಯ ಭಾಗವಾಗುತ್ತದೆ]]
[[ಕೇರಳ ಸರ್ಕಾರ]]ವು ರಾಜ್ಯಕ್ಕಾಗಿ 6,500 ಕೋಟಿ ಮೌಲ್ಯದ ಕರಾವಳಿ ಹೆದ್ದಾರಿ ಯೋಜನೆಯನ್ನು ಅನುಮೋದಿಸಿದೆ. ಹೆದ್ದಾರಿಯು [[ಕೊಲ್ಲಂ]] ಸೇರಿದಂತೆ ಕೇರಳದ ಬಹುತೇಕ ಎಲ್ಲಾ ಪ್ರಮುಖ ಕರಾವಳಿ ನಗರಗಳ ಮೂಲಕ ಹಾದುಹೋಗುತ್ತದೆ.<ref>{{cite web|url=http://english.mathrubhumi.com/news/kerala/kerala%E2%80%99s-623-km-long-coastal-highway-to-be-ready-by-2020-hill-highway-infrastructure-kiifb-1.2254511|title=ಕೇರಳದ 623-ಕಿಮೀ-ಉದ್ದದ ಕರಾವಳಿ ಹೆದ್ದಾರಿಯು 2020 ರ ವೇಳೆಗೆ ಸಿದ್ಧವಾಗಲಿದೆ|date=2017-09-21|access-date=2017-09-22|publisher=ಮಾತೃಭೂಮಿ}}</ref> ಕರಾವಳಿ ಹೆದ್ದಾರಿಯು ರಾಜ್ಯದ ಒಂಬತ್ತು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ, ಇದು [[ಅಂತಾರಾಷ್ಟ್ರೀಯ ಕಂಟೇನರ್ ಸಾಗಣೆ ಟರ್ಮಿನಲ್, ಕೊಚ್ಚಿ|ವಲ್ಲಾರ್ಪಾಡಂ]], ಕೊಲ್ಲಂ, [[ವಿಝಿಂಜಂ ಅಂತಾರಾಷ್ಟ್ರೀಯ ಸಮುದ್ರ ಬಂದರು|ವಿಝಿಂಜಂ]] ನ ಪ್ರಮುಖ ಬಂದರುಗಳನ್ನು ಮತ್ತು ಹಲವಾರು ಸಣ್ಣ ಬಂದರುಗಳನ್ನು ಸಂಪರ್ಕಿಸುತ್ತದೆ.<ref>{{cite web|url=http://www.thehindu.com/news/national/kerala/pallikkara-rob-work-to-begin-soon/article19722310.ece|title=ಪಳ್ಳಿಕ್ಕರ ROB ಕೆಲಸ ಶೀಘ್ರ ಪ್ರಾರಂಭವಾಗಲಿದೆ|date=2017-09-20|access-date=2017-09-21|work=ದಿ ಹಿಂದೂ}}</ref>
;ಕೊಲ್ಲಂ-ಕೊಲಂಬೊ ಹಡಗು ಸೇವೆ
2018 ಅಕ್ಟೋಬರ್ನಲ್ಲಿ, ಸಿಂಗಾಪುರ ಮೂಲದ ಎಕ್ಸ್-ಪ್ರೆಸ್ ಫೀಡರ್ಸ್ ಗ್ರೂಪ್ನ ಹಿರಿಯ ನಿರ್ದೇಶಕ, ನೆಲ್ಸನ್ ಸೆಕೆರಾ, [[ಬ್ರಿಟಿಷ್ ರೆಸಿಡೆನ್ಸಿ|ಅಶ್ರಮಂ ಸರ್ಕಾರಿ ಅತಿಥಿ ಗೃಹದಲ್ಲಿ]] ಬಂದರುಗಳ ಕೇರಳ ಸಚಿವ [[ಕಡಣಪ್ಪಳ್ಳಿ ರಾಮಚಂದ್ರನ್]] ಅವರನ್ನು ಭೇಟಿಯಾಗಿ [[ಕೊಲಂಬೊ]]-[[ಕೊಲ್ಲಂ]] ಹಡಗು ಸೇವೆಗಳನ್ನು ಪ್ರಾರಂಭಿಸಲು ತಮ್ಮ ಸಿದ್ಧತೆಯನ್ನು ವ್ಯಕ್ತಪಡಿಸಿದರು. ಎಕ್ಸ್-ಪ್ರೆಸ್ ಫೀಡರ್ಸ್ ಸುಮಾರು 100 ಹಡಗುಗಳನ್ನು ಹೊಂದಿದೆ.<ref>{{cite web|url=https://english.mathrubhumi.com/news/good-news/colombo-kollam-ship-service-to-become-a-reality-1.3254688|title=ಕೊಲಂಬೊ-ಕೊಲ್ಲಂ ಹಡಗು ಸೇವೆ ವಾಸ್ತವವಾಗಲಿದೆ|date=2018-10-25|access-date=2018-10-26|publisher=ಮಾತೃಭೂಮಿ}}</ref>
;ಭಾರತದಿಂದ ನಿರ್ಗಮನ ಮತ್ತು ಪ್ರವೇಶಕ್ಕಾಗಿ ವಲಸೆ ತಪಾಸಣಾ ಕೇಂದ್ರ (ICP)
ಕೊಲ್ಲಂ ಬಂದರು ಎಲ್ಲಾ ವರ್ಗದ ಪ್ರಯಾಣಿಕರಿಗೆ ಅಗತ್ಯವಾದ ಮಾನ್ಯ ಪ್ರಯಾಣ ದಾಖಲೆಗಳೊಂದಿಗೆ ಭಾರತದಿಂದ ಪ್ರವೇಶಿಸಲು ಮತ್ತು ನಿರ್ಗಮಿಸಲು ಅಧಿಕೃತ ವಲಸೆ ತಪಾಸಣಾ ಕೇಂದ್ರ (ICP) ಆಗಿದೆ. [[ಭಾರತ ಗೃಹ ಸಚಿವಾಲಯ|ಭಾರತೀಯ ಒಕ್ಕೂಟ ಗೃಹ ಸಚಿವಾಲಯ (MHA)]] 17 ಜೂನ್ 2024 ರಂದು ಅಧಿಸೂಚನೆಯನ್ನು ಹೊರಡಿಸಿತು ಮತ್ತು ಪ್ರಯಾಣಿಕರು ದೇಶದಿಂದ ಪ್ರವೇಶಿಸಲು ಮತ್ತು ನಿರ್ಗಮಿಸಲು ಅನುಮತಿಸುವ 31 ಅಧಿಕೃತ ಸಮುದ್ರ ಬಂದರು ವಲಸೆ ತಪಾಸಣಾ ಕೇಂದ್ರಗಳಲ್ಲಿ ಕೊಲ್ಲಂ ಬಂದರನ್ನು ಗೊತ್ತುಪಡಿಸಿತು.<ref>{{cite web|url=https://www.thehindu.com/news/national/home-ministry-designates-kollam-port-as-immigration-check-post/article68305340.ece|title=ಗೃಹ ಸಚಿವಾಲಯವು ಕೊಲ್ಲಂ ಬಂದರನ್ನು ವಲಸೆ ತಪಾಸಣಾ ಕೇಂದ್ರವಾಗಿ ಗೊತ್ತುಪಡಿಸಿದೆ|date=2024-06-18|access-date=2026-02-20|publisher=ದಿ ಹಿಂದೂ}}</ref><ref>{{cite web|url=https://xn--i1b5bzbybhfo5c8b4bxh.xn--11b7cb3a6a.xn--h2brj9c/sites/default/files/2026-01/List_of_ICPs_%28Immigration_Checkpost%29_20012026.pdf|title=ವಲಸೆ ತಪಾಸಣಾ ಕೇಂದ್ರಗಳ ಪಟ್ಟಿ (IPs) 30.12.2025 ರಂತೆ|date=|access-date=2026-02-20|publisher=ಒಕ್ಕೂಟ ಗೃಹ ಸಚಿವಾಲಯ}}</ref>
== ಬಂದರಿನಲ್ಲಿ ಲಭ್ಯವಿರುವ ಸೇವೆಗಳು ==
ಕೆಲವು ಅಂತಾರಾಷ್ಟ್ರೀಯ ಸಾಗಾಣಿಕಾ ಸೇವಾ ಪೂರೈಕೆದಾರರು ಈಗಾಗಲೇ ಕೊಲ್ಲಂ ಬಂದರಿನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಕೊಲ್ಲಂ ಬಂದರಿಗೆ ಮತ್ತು ಅಲ್ಲಿಂದ ಸರಕು ಸಾಗಣೆಯನ್ನು ಸುಲಭಗೊಳಿಸಲು, ಹಡಗು ಚಂದ್ಲಿಂಗ್, ಹಡಗು ಹಸ್ಬೆಂಡ್ರಿ ಸೇವೆಗಳು, ಹಡಗು ಬಿಡಿಭಾಗಗಳ ಲಾಜಿಸ್ಟಿಕ್ಸ್, ಬಂಕರಿಂಗ್ ಸೇವೆಗಳು ಇತ್ಯಾದಿಗಳನ್ನು ಒದಗಿಸುತ್ತಿವೆ.
== ಕೊಲ್ಲಂ ಒಳನಾಡು ಬಂದರು ==
[[ಅಷ್ಟಮುಡಿ ಸರೋವರ]]ದಲ್ಲಿನ [[ರಾಷ್ಟ್ರೀಯ ಜಲಮಾರ್ಗ 3]] ರ ಮೇಲೆ [[ಅಶ್ರಾಮಂ]]ನಲ್ಲಿ [[ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ]]ದ ಒಳನಾಡು ಟರ್ಮಿನಲ್ ಇದೆ. ಈ ಬಂದರು ಮುಖ್ಯವಾಗಿ ದೋಣಿಗಳನ್ನು ನಿರ್ವಹಿಸಲು ಆಗಿದೆ. ಇದು ನಿಲ್ಲಲು 30 ಮೀ RCC ಉದ್ದನೆಯ ರಕ್ಷಣಾ ಕಲ್ಲುಗೋಡೆಯನ್ನು ಹೊಂದಿದೆ ಮತ್ತು 18 T ಮೊಬೈಲ್ ಹೈಡ್ರಾಲಿಕ್ ಕ್ರೇನ್ ಮತ್ತು ಮೂರು ಫೋರ್ಕ್ ಲಿಫ್ಟ್ಗಳನ್ನು ಹೊಂದಿದೆ. ಇದು 100 ಚದರ ಮೀಟರ್ಗಳ ಕಚೇರಿ ಸ್ಥಳ ಮತ್ತು 280 ಚದರ ಮೀಟರ್ಗಳ ಮುಚ್ಚಿದ ಶೇಖರಣಾ ಸ್ಥಳವನ್ನು ಹೊಂದಿದೆ. ಒಟ್ಟು ತೆರೆದ ಶೇಖರಣೆಯು 3500 ಚದರ ಮೀಟರ್ ಆಗಿದೆ. ಇದು ಇನ್ನೂ ಪೂರ್ಣ ಪ್ರಮಾಣದ ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಬೇಕಾಗಿದೆ. ಈ ಟರ್ಮಿನಲ್ ಅನ್ನು [[ಕೊಲ್ಲಂ ಬಂದರು ರಸ್ತೆ|ಕೊಚ್ಚುಪಿಳಮೂಡು]]ನಲ್ಲಿ [[ಕೊಲ್ಲಂ ಕಾಲುವೆ]] ಮೂಲಕ ಒಳನಾಡು ಜಲಮಾರ್ಗಗಳ ಮೂಲಕ ಸಮುದ್ರ ಬಂದರಿಗೆ ಸಂಪರ್ಕಿಸಬಹುದು.
== ಇವನ್ನೂ ನೋಡಿ ==
{{Portal|India}}
* [[ಕೊಲ್ಲಂ|ಕೊಲ್ಲಂ ನಗರ]]
* [[ಕೊಲ್ಲಂ ವಿಮಾನ ನಿಲ್ದಾಣ|ಕೊಲ್ಲಂ ವಿಮಾನ ನಿಲ್ದಾಣ (ಕಾರ್ಯನಿರ್ವಹಣೆಯಲ್ಲಿಲ್ಲ.)]]
* [[ಕೊಲ್ಲಂ ಬೀಚ್]]
* [[ಕೊಲ್ಲಂ ಜಿಲ್ಲೆ]]
* [[ಬಂದರು ಕೊಲ್ಲಂ ಚರ್ಚ್]]
* [[ಬಂದರು ರಸ್ತೆ, ಕೊಲ್ಲಂ]]
== ಉಲ್ಲೇಖಗಳು ==
{{reflist|2}}
== ಬಾಹ್ಯ ಕೊಂಡಿಗಳು ==
{{Commons category|Kollam Port}}
* [https://web.archive.org/web/20160303213028/http://www.keralaports.gov.in/doc/Kollam%20Final%20DFR/Final%20DFR%20Kollam%20Report.pdf ಕೊಲ್ಲಂ ಬಂದರಿನ ಅಭಿವೃದ್ಧಿಗೆ ವಿವರವಾದ ಯೋಜನಾ ವರದಿ]
{{Kollam |state=expanded}}
{{Cashew business in Kollam |state=collapsed}}
[[ವರ್ಗ: ಕೊಲ್ಲಂನ ಇತಿಹಾಸ]]
[[ವರ್ಗ: ಅರೇಬಿಯನ್ ಸಮುದ್ರದ ಬಂದರುಗಳು ಮತ್ತು ಬಂದರುಗಳು]]
[[ವರ್ಗ: ಕೇರಳದ ಬಂದರುಗಳು ಮತ್ತು ಬಂದರುಗಳು]]
[[ವರ್ಗ: ಕೊಲ್ಲಂನಲ್ಲಿ ಜಲಸಾರಿಗೆ]]
[[ವರ್ಗ: ಕೊಲ್ಲಂನ ಆರ್ಥಿಕತೆ]]
[[ವರ್ಗ: ಕೊಲ್ಲಂನಲ್ಲಿ ಕಟ್ಟಡಗಳು ಮತ್ತು ರಚನೆಗಳು]]
4h4o1ytc5orqk76fq1t9hm6vnf79l7p
ಇನ್ಫೋಪಾರ್ಕ್ ಕೊಚ್ಚಿ
0
180094
1379462
1378956
2026-08-08T16:03:36Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379462
wikitext
text/x-wiki
{{short description|IT Park situated in Kochi, India}}
{{Use dmy dates|date=September 2018}}
{{Use Indian English|date=September 2018}}
{{Infobox company
| name = Infoparks Kerala
| logo =
| image = [[File:Infopark, Kakkanad, Kochi, Kerala, India.jpg|280px]]
| image_caption = Aerial view of Infopark Phase I in 2012
| type = Government Owned
| founder =
| area_served =
| key_people = [[Chief Minister of Kerala]] {{small|(Chairman)}} <br>
Susanth Kurunthil {{small|(CEO)}}
| industry = [[Information Technology]] Business Park
| genre = Infrastructure Service Provider
| owner = [[Government of Kerala]]
| num_employees = 72,000 (2025)<ref name="Infopark Employment">
{{ Cite web
| url = https://infopark.in/
| title = Infoparks Kerala – Leading IT Park {{!}} Innovative IT Hub
| year = 2025
| website = infopark.in
| publisher = Infoparks Kerala
| access-date = 2025-07-08
| url-status = live
| archive-url = https://web.archive.org/web/20250703194849/https://infopark.in/
| archive-date = 2025-07-03
}}
</ref>
| subsidiaries =
| footnotes =
| founded = {{Start date and age|df=yes|2004|7|18}}
| hq_location_city = [[Kochi]]
| hq_location_country = India
| hq_location = <!-- this parameter modifies "Headquarters" -->
| num_locations = [[Kochi]], [[Infopark Thrissur|Thrissur]], [[Infopark Cherthala|Cherthala]]
| origins =
| slogan =
| website =
| defunct =
}}
ಇನ್ಫೋಪಾರ್ಕ್, ಕೊಚ್ಚಿ ಭಾರತದ [[ಕೇರಳದ ಇತಿಹಾಸ|ಕೇರಳದ]] [[ಕೊಚ್ಚಿ]] ನಗರದಲ್ಲಿ ನೆಲೆಗೊಂಡಿರುವ ಒಂದು ಮಾಹಿತಿ ತಂತ್ರಜ್ಞಾನ ಉದ್ಯಾನವನವಾಗಿದೆ. ಕೇರಳ ಸರ್ಕಾರವು 2004 ರಲ್ಲಿ ಸ್ಥಾಪಿಸಿದ <ref>https://www.thehindu.com/2004/07/19/stories/2004071911270300.htm</ref> ಈ ಉದ್ಯಾನವನವು 323 acres (130.7 ha) ವಿಸ್ತೀರ್ಣದಲ್ಲಿ ಹರಡಿದೆ. ಎರಡು ಹಂತಗಳಲ್ಲಿ ಕ್ಯಾಂಪಸ್, 2025 ರ ಹೊತ್ತಿಗೆ ಸುಮಾರು 72,000 ವೃತ್ತಿಪರರನ್ನು ನೇಮಿಸಿಕೊಳ್ಳುವ 582 ಕಂಪನಿಗಳನ್ನು ಹೊಂದಿದೆ.<ref>https://infopark.in/</ref>
ಹಂತ 1 ಕ್ಯಾಂಪಸ್ 101 acres (40.9 ha) ವಿಸ್ತೀರ್ಣದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ. 7 million sq ft (650 thousand m2) ಕ್ಕಿಂತ ಹೆಚ್ಚು ಕಾರ್ಯನಿರ್ವಹಿಸುತ್ತಿರುವ ಕಟ್ಟಡಗಳಿವೆ. ಇನ್ಫೋಪಾರ್ಕ್ ಹಂತ II 160 acres (64.7 ha) ಒಟ್ಟು 8 million sq ft (740 thousand m2) ನಿರ್ಮಿತ ಜಾಗವನ್ನು ಹೊಂದಿರುವ ಕ್ಯಾಂಪಸ್ ಪ್ರದೇಶ ಪೂರ್ಣಗೊಂಡ ನಂತರ ಇಲ್ಲಿ 100,000 ಕ್ಕೂ ಹೆಚ್ಚು ವೃತ್ತಿಪರರನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ. ಈ ಉದ್ಯಾನವನದ ಗಮನಾರ್ಹ ಬಾಡಿಗೆದಾರರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ವಿಪ್ರೋ, ಎಚ್ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಎಲ್ಟಿಐಮೈಂಡ್ಟ್ರೀ, ಯುಎಸ್ಟಿ ಗ್ಲೋಬಲ್ನಂತಹ ಭಾರತೀಯ ತಂತ್ರಜ್ಞಾನ ದೈಊತ್ಯರು ಮತ್ತು ಐಬಿಎಂ, ಕಾಗ್ನಿಜೆಂಟ್, ಕೆಪಿಎಂಜಿ, ಅರ್ನ್ಸ್ಟ್ & ಯಂಗ್, ಐಕ್ಯೂವಿಐಎ, ಜೆರಾಕ್ಸ್, ಕಂಡೂಯೆಂಟ್, ಎನ್ಒವಿ, ಇನ್ವೆಸ್ಕೊ, ಇಎಕ್ಸ್ಎಲ್ ಸರ್ವಿಸ್, ಹಬ್ಬೆಲ್, ಅಲೈಟ್, ನೀಲ್ಸನ್, ಜಿಯೋಡಿಸ್ ಮತ್ತು ಬಕ್ನಂತಹ ದೊಡ್ಡ ದೊಡ್ಡ ಕಂಪನಿಗಳು ಕಾರ್ಯನಿರ್ವಹಿಸುತ್ತವೆ .
ಇನ್ಫೋಪಾರ್ಕ್ ಕ್ಯಾಂಪಸ್ ಪ್ರಸ್ತುತ 9.2 million sq ft (850 thousand m2) ಹೊಂದಿದೆ ಕಟ್ಟಡ ನಿರ್ಮಾಣ ಪ್ರದೇಶವನ್ನು ಹೊಂದಿದ್ದು, ಕೇರಳ ರಾಜ್ಯದಿಂದ ಐಟಿ ರಫ್ತು ಆದಾಯಕ್ಕೆ ಪ್ರಮುಖ ಕೊಡುಗೆ ನೀಡುತ್ತದೆ. ಇನ್ಫೋಪಾರ್ಕ್ ನಿಂದ ₹೩೨ billion (US$೩೩೦ million) ನಷ್ಟು ಐಟಿ ರಫ್ತು ಆಗಿದೆ. 2016–17 ರಲ್ಲಿ, 4 ವರ್ಷಗಳ ಅವಧಿಯಲ್ಲಿ ದ್ವಿಗುಣಗೊಂಡು ₹೬೩.೧ billion (US$೬೬೦ million) ಗೆ ಏರಿತು. 2020–21 ರಲ್ಲಿ.<ref>https://www.newindianexpress.com/states/kerala/2021/jul/07/despite-covid-19-pandemic-it-exports-from-kochi-infopark-grew-by-rs-1110-crore-last-year-2326855.html</ref> ಇನ್ಫೋಪಾರ್ಕ್ ಪ್ರಪಂಚದಾದ್ಯಂತದ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸಲು ಪ್ರಾರಂಭಿಸಿದ ಕೂಡಲೇ ಬೃಹತ್ ರಿಯಲ್ ಎಸ್ಟೇಟ್ ಉತ್ಕರ್ಷಕ್ಕೆ ನಾಂದಿ ಹಾಡಿತು. ಇನ್ಫೋಪಾರ್ಕ್ [[ಕೊಚ್ಚಿ ಸಾಮ್ರಾಜ್ಯ|ಕೊಚ್ಚಿಯ]] ಭೂದೃಶ್ಯ ಮತ್ತು ಜೀವನಶೈಲಿಯನ್ನು, ವಿಶೇಷವಾಗಿ ಕಕ್ಕನಾಡ್ ಪ್ರದೇಶವನ್ನು ಬದಲಾಯಿಸಿತು. ಹೊಸ ಸಂಸ್ಕೃತಿ ವಿಕಸನಗೊಂಡಿತು ಮತ್ತು ಹೆಚ್ಚು ಹೆಚ್ಚು ವಾಣಿಜ್ಯ ಮತ್ತು ವಸತಿ ಉದ್ಯಮಗಳು ತಲೆ ಎತ್ತಲು ಪ್ರಾರಂಭಿಸಿದವು, ಇದು ನಂತರ ಕೊಚ್ಚಿ ನಗರದ ಮಿತಿಗಳನ್ನು ಉತ್ತರದ ತುದಿಗೆ ವಿಸ್ತರಿಸಿತು.<ref>{{Cite web |url=http://www.jairajbuilders.com/villas-in-kochi |title=ಆರ್ಕೈವ್ ನಕಲು |access-date=7 ಆಗಸ್ಟ್ 2026 |archive-date=22 ಮಾರ್ಚ್ 2016 |archive-url=https://web.archive.org/web/20160322234439/http://www.jairajbuilders.com/villas-in-kochi |url-status=dead }}</ref>
ಕೇರಳದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮದ ಅಭಿವೃದ್ಧಿಗಾಗಿ ಈ ಉದ್ಯಾನವನವನ್ನು 'ಹಬ್ ಮತ್ತು ಸ್ಪೋಕ್ ಮಾದರಿ'ಯಲ್ಲಿ ನಿರ್ಮಿಸಲಾಗಿದೆ. ತ್ರಿಶೂರ್ ಮತ್ತು ಚೆರ್ತಲಾದಲ್ಲಿರುವ ಉಪಕೇಂದ್ರಗಳಿಗೆ ಇನ್ಫೋಪಾರ್ಕ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.<ref>http://www.business-standard.com/india/news/koratty-infopark-set-to-take-off/21/06/372523/</ref>
==ಸ್ಥಳ ಮತ್ತು ಸಂಪರ್ಕ ==
[[File:Carnival Info Park Phase - 4.jpg|thumb|Infopark, Kochi, Kerala, India]]
ಇನ್ಫೋಪಾರ್ಕ್ 10 kilometres (6 mi) ಕೊಚ್ಚಿ ನಗರ ಕೇಂದ್ರದಿಂದ ಮತ್ತು 22 kilometres (14 mi) ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ . [೧] ಇನ್ಫೋಪಾರ್ಕ್ , ಸೀಪೋರ್ಟ್-ವಿಮಾನ ನಿಲ್ದಾಣ ರಸ್ತೆಗೆ ಇನ್ಫೋಪಾರ್ಕ್ ಎಕ್ಸ್ಪ್ರೆಸ್ವೇ ಮೂಲಕ ಸಂಪರ್ಕ ಹೊಂದಿದೆ, ಇದು 4-ಲೇನ್ಗಳ ರಸ್ತೆಯಾಗಿದೆ. [೨] [೩] ಕೇರಳ ರಾಜ್ಯ ಜಲ ಸಾರಿಗೆ ಇಲಾಖೆಯು ಕಕ್ಕನಾಡ್ ಮತ್ತು ವೈಟ್ಟಿಲ ಮೊಬಿಲಿಟಿ ಹಬ್ ನಡುವೆ ದೋಣಿ ಸೇವೆಯನ್ನು ನಿರ್ವಹಿಸುತ್ತದೆ. ಕೊಚ್ಚಿ ನಗರವನ್ನು ಒಳಗೊಂಡಿರುವ ಎರ್ನಾಕುಲಂ ಜಿಲ್ಲಾಡಳಿತವು ಇನ್ಫೋಪಾರ್ಕ್ ಅನ್ನು ಕೊಚ್ಚಿಯ ಮೆರೈನ್ ಡ್ರೈವ್ಗೆ ಸಂಪರ್ಕಿಸುವ ಜಲಮಾರ್ಗವನ್ನು ಪ್ರಸ್ತಾಪಿಸಿದೆ.
ಇನ್ಫೋಪಾರ್ಕ್ ಕ್ಯಾಂಪಸ್ ಕೊಚ್ಚಿಯ ಸ್ಮಾರ್ಟ್ಸಿಟಿಯ ಪಕ್ಕದಲ್ಲಿದೆ, ಇದು ಮಾಹಿತಿ ತಂತ್ರಜ್ಞಾನ ಉದ್ಯಾನವನವಾಗಿದೆ.
VSNL ನ ಸಂವಹನ ದ್ವಾರವು ಇನ್ಫೋಪಾರ್ಕ್ಗೆ ಹತ್ತಿರದಲ್ಲಿದೆ. ಎರಡು ಜಲಾಂತರ್ಗಾಮಿ ಕೇಬಲ್ಗಳು, SAFE ಮತ್ತು SEA-ME-WE 3, ಗೇಟ್ವೇಯಲ್ಲಿ ತಮ್ಮ ಲ್ಯಾಂಡಿಂಗ್ ಪಾಯಿಂಟ್ಗಳನ್ನು ಹೊಂದಿವೆ. ಇನ್ಫೋಪಾರ್ಕ್ ಅನ್ನು ಆಪ್ಟಿಕಲ್ ಫೈಬರ್ ಮೂಲಕ VSNL ನ ಗಿಗಾಬೈಟ್ ರೂಟರ್ಗೆ ನೇರವಾಗಿ ಸಂಪರ್ಕಿಸಲಾಗಿದೆ, ಇದು ಪಾರ್ಕ್ಗೆ 100% ಅಪ್ಟೈಮ್ ಡೇಟಾ ಸಂಪರ್ಕವನ್ನು ಒದಗಿಸುತ್ತದೆ.
==ಶಿಕ್ಷಣ ಮತ್ತು ಸಂಸ್ಥೆಗಳು ==
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕೋಝಿಕೋಡ್ (ಐಐಎಂ–ಕೆ) ತನ್ನ ಮೊದಲ ಉಪಗ್ರಹ ಕ್ಯಾಂಪಸ್ ಅನ್ನು ಇನ್ಫೋಪಾರ್ಕ್ನಲ್ಲಿರುವ ಅತುಲ್ಯ ಕಟ್ಟಡದಲ್ಲಿ ಸ್ಥಾಪಿಸಿದೆ. ಈ ಉಪಗ್ರಹ ಕ್ಯಾಂಪಸ್ ಆರಂಭದಲ್ಲಿ ಒಂದು ವರ್ಷದ ವಸತಿ ಕಾರ್ಯನಿರ್ವಾಹಕ ಎಂಬಿಎ ಕಾರ್ಯಕ್ರಮ ಮತ್ತು ಎರಡು ವರ್ಷಗಳ ಅರೆಕಾಲಿಕ ಕಾರ್ಯಕ್ರಮಗಳನ್ನು ನೀಡುತ್ತದೆ, ಜೊತೆಗೆ ಹಲವಾರು ಅಲ್ಪಾವಧಿ ಮತ್ತು ದೀರ್ಘಾವಧಿಯ ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುತ್ತದೆ. ಇನ್ಫೋಪಾರ್ಕ್ ಒಳಗೆ ಪೂರ್ಣ ಪ್ರಮಾಣದ ಕ್ಯಾಂಪಸ್ಗಾಗಿ ಕೇರಳ ಸರ್ಕಾರ ಐದು ಎಕರೆ ಭೂಮಿಯನ್ನು ನೀಡಿದೆ.
==ಮೂಲಸೌಕರ್ಯ==
ಇನ್ಫೋಪಾರ್ಕ್ ಆವರಣವನ್ನು ವಿಶೇಷ ಆರ್ಥಿಕ ವಲಯ (SEZ) ಮತ್ತು SEZ ಅಲ್ಲದ ಸೌಲಭ್ಯಗಳಾಗಿ ವಿಂಗಡಿಸಲಾಗಿದೆ. ಇನ್ಫೋಪಾರ್ಕ್ನ ಅಸ್ತಿತ್ವದಲ್ಲಿರುವ 98.25 ಎಕರೆಗಳಲ್ಲಿ, 75 ಎಕರೆಗಳನ್ನು ಭಾರತ ಸರ್ಕಾರದ ವಾಣಿಜ್ಯ ಸಚಿವಾಲಯವು ವಿಶೇಷ ಆರ್ಥಿಕ ವಲಯವೆಂದು ಸೂಚಿಸಿದೆ. ಉದ್ಯಾನವನದಲ್ಲಿ ಅಭಿವೃದ್ಧಿಪಡಿಸಲಾದ ಮೂಲಸೌಕರ್ಯವನ್ನು ಬಹು-ಬಾಡಿಗೆ ಸೌಲಭ್ಯ (MTF) ಮತ್ತು ಅಂತರ್ನಿರ್ಮಿತ-ಸೂಟ್ (BTS) ಎಂದು ವರ್ಗೀಕರಿಸಲಾಗಿದೆ.
ಇನ್ಫೋಪಾರ್ಕ್ ಒಡೆತನದ ಮೂಲಸೌಕರ್ಯಗಳ (ಥಪಸ್ಯ, ವಿಸ್ಮಯ, ಅತುಲ್ಯ) ಹೊರತಾಗಿ, ಲೀಲಾ ಸಾಫ್ಟ್, ಎಲ್ & ಟಿ ಟೆಕ್ಪಾರ್ಕ್ ಮತ್ತು ಬ್ರಿಗೇಡ್ ಎಂಟರ್ಪ್ರೈಸಸ್ನಂತಹ ಸಹ-ಅಭಿವೃದ್ಧಿದಾರರಿಂದ ಸಮಾನಾಂತರ ಅಭಿವೃದ್ಧಿಗಳು ಸಹ ಕ್ಯಾಂಪಸ್ನಲ್ಲಿ ರೂಪುಗೊಳ್ಳುತ್ತಿವೆ. ಹೀಗಾಗಿ ಐಟಿ ಕಂಪನಿಗಳಿಗೆ ಅವರ ಅವಶ್ಯಕತೆ ಮತ್ತು ಬಜೆಟ್ಗೆ ಸರಿಹೊಂದುವಂತೆ ಕಚೇರಿ ಸ್ಥಳ ಪರಿಹಾರಗಳ ಆಯ್ಕೆಯನ್ನು ನೀಡುತ್ತಿದೆ. ವಿಪ್ರೋ, ಟಿಸಿಎಸ್ ಮತ್ತು ಐಬಿಎಸ್ ಸಾಫ್ಟ್ವೇರ್ನಿಂದ ಪ್ರಮುಖ ಖಾಸಗಿ ಐಟಿ ಕ್ಯಾಂಪಸ್ಗಳು ಸಹ ಪ್ರಗತಿಯಲ್ಲಿವೆ. ಇನ್ಫೋಪಾರ್ಕ್ ಕೊಚ್ಚಿ ಹಂತ-I ಸಂಪೂರ್ಣವಾಗಿ ಅಭಿವೃದ್ಧಿಗೊಂಡಾಗ ಒಟ್ಟು 5 ಮಿಲಿಯನ್ ಚದರ ಅಡಿಯ ಸೂಪರ್ ಬಿಲ್ಟ್-ಅಪ್ ಪ್ರದೇಶವು ಪೂರ್ಣಗೊಳ್ಳುತ್ತದೆ. ಕ್ಯಾಂಪಸ್ ಆಹಾರ ನ್ಯಾಯಾಲಯಗಳು, ಬ್ಯಾಂಕಿಂಗ್ ಕೌಂಟರ್ಗಳು, ಎಟಿಎಂ, ಶಾಪಿಂಗ್ ಆರ್ಕೇಡ್ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದೆ.
೨೦೧೪ ರಲ್ಲಿ, ಲೀಲಾ ಲೇಸ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಒಡೆತನದ SEZ ಅಲ್ಲದ ಸೌಲಭ್ಯವಾದ ಲೀಲಾ ಇನ್ಫೋಪಾರ್ಕ್ ಅನ್ನು ಮುಂಬೈ ಮೂಲದ ಕಾರ್ನಿವಲ್ ಗ್ರೂಪ್ ೨೮೦ ಕೋಟಿ ರೂ.ಗಳಿಗೆ ಸ್ವಾಧೀನಪಡಿಸಿಕೊಂಡಿತು ಮತ್ತು ಯೋಜನೆಯ ಹೆಸರನ್ನು ಕಾರ್ನಿವಲ್ ಇನ್ಫೋಪಾರ್ಕ್ ಎಂದು ಬದಲಾಯಿಸಲಾಯಿತು. ಲುಲು ಗ್ರೂಪ್ ಎಲ್ & ಟಿ ಟೆಕ್ ಪಾರ್ಕ್ ಅನ್ನು ೧೫೦ ಕೋಟಿ ರೂ.ಗಳಿಗೆ ಸ್ವಾಧೀನಪಡಿಸಿಕೊಂಡಿತು ಮತ್ತು ಯೋಜನೆಯ ಹೆಸರನ್ನು ಲುಲು ಟೆಕ್ ಪಾರ್ಕ್ ಎಂದು ಬದಲಾಯಿಸಲಾಯಿತು.
ಇನ್ಫೋಪಾರ್ಕ್ನಲ್ಲಿರುವ ಪ್ಲಗ್ ಮತ್ತು ಪ್ಲೇ ಸೌಲಭ್ಯದಿಂದ ಭಾರತೀಯ ಮತ್ತು ವಿದೇಶಿ ಐಟಿ/ಐಟಿಇಎಸ್ ಮತ್ತು ಜ್ಞಾನ ಆಧಾರಿತ ಕಂಪನಿಗಳು ತಕ್ಷಣ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಅನುಕೂಲವಾಗುವಂತೆ ಸ್ಮಾರ್ಟ್ ಬಿಸಿನೆಸ್ ಸೆಂಟರ್ (ಎಸ್ಬಿಸಿ) ಅನ್ನು ಒದಗಿಸಲಾಗಿದೆ.
===ಇನ್ಫೋಪಾರ್ಕ್ ಹಂತ II===
ಇನ್ಫೋಪಾರ್ಕ್ ಕೊಚ್ಚಿ ತನ್ನ ಚಟುವಟಿಕೆಗಳನ್ನು ಇನ್ಫೋಪಾರ್ಕ್ ಹಂತ II ರಲ್ಲಿ ವಿಸ್ತರಿಸುತ್ತಿದೆ. ಜನವರಿ 22, 2017 ರಂದು ಕೇರಳದ ಮುಖ್ಯಮಂತ್ರಿ ಉದ್ಘಾಟಿಸಿದ ಜ್ಯೋತಿರ್ಮಯ ಕಟ್ಟಡ [೧] ಸುಮಾರು 1.6 ಮೀ ದೂರದಲ್ಲಿದೆ. ಹಂತ I ಕ್ಯಾಂಪಸ್ನಿಂದ ಕಿಮೀ ದೂರದಲ್ಲಿದೆ ಮತ್ತು ಕಡಂಪರಾಯರ್ ನದಿಯ ಬದಿಯಲ್ಲಿದೆ. ಈ ಹೊಸ ಉದ್ಯಾನವನವು ಕೇರಳದ ಐಟಿ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಲಿದ್ದು, ವಿಶೇಷ ಆರ್ಥಿಕ ವಲಯ (SEZ) ಮತ್ತು ವಿಶೇಷ ಆರ್ಥಿಕ ವಲಯ (SEZ) ಅಲ್ಲದ ಪ್ರದೇಶಗಳೆರಡರಲ್ಲೂ ಅಭಿವೃದ್ಧಿ ಮತ್ತು ಸಾಮಾಜಿಕ ಮೂಲಸೌಕರ್ಯವನ್ನು ಕಲ್ಪಿಸಲಾಗಿದೆ. ಹೊಸ ಉದ್ಯಾನವನವು ಎರ್ನಾಕುಲಂ ಜಿಲ್ಲೆಯ ಕುನ್ನತುನಾಡ್ ತಾಲ್ಲೂಕಿನ ನೆರೆಯ ಕುನ್ನತುನಾಡ್-ಪುಥೆನ್ಕ್ರೂಜ್ ಗ್ರಾಮಗಳಲ್ಲಿ 160 ಎಕರೆಗಳಷ್ಟು ವಿಸ್ತಾರದಲ್ಲಿದೆ. ಕೇಂದ್ರ ವಾಣಿಜ್ಯ ಸಚಿವಾಲಯದ ಅನುಮೋದನೆ ಮಂಡಳಿ (BoA) ಇನ್ಫೋಪಾರ್ಕ್ ಹಂತ II ರಲ್ಲಿರುವ 98 ಎಕರೆಗಳಿಗೆ SEZ ಸ್ಥಾನಮಾನವನ್ನು ನೀಡಿದೆ.
ಎರಡನೇ ಹಂತದ ಮಾಸ್ಟರ್ ಪ್ಲಾನ್, SEZ ಮತ್ತು SEZ ಅಲ್ಲದ ಕ್ಲಸ್ಟರ್ಗಳಲ್ಲಿನ ಅಭಿವೃದ್ಧಿ ಬ್ಲಾಕ್ಗಳು, BPO ಸಂಕೀರ್ಣಗಳು, ಸಬ್ಸ್ಟೇಷನ್ ಸೇರಿದಂತೆ ಉಪಯುಕ್ತತೆ ಸೇವೆಗಳು, ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ, ರಸ್ತೆ ಜಾಲ ಇತ್ಯಾದಿಗಳಿಗೆ ಮೂಲಸೌಕರ್ಯ ಅಭಿವೃದ್ಧಿಯನ್ನು ಕಲ್ಪಿಸುತ್ತದೆ. ಹೆಚ್ಚಿನ ಇಂಧನ ಉಳಿತಾಯ ಕ್ರಮಗಳು ಮತ್ತು ಕನಿಷ್ಠ ಇಂಗಾಲದ ಹೊರಸೂಸುವಿಕೆಯೊಂದಿಗೆ ಈ ಉದ್ಯಾನವನವನ್ನು ಪರಿಸರ ಸ್ನೇಹಿ ಹಸಿರು ಉದ್ಯಾನವನವಾಗಿ ವಿನ್ಯಾಸಗೊಳಿಸಲಾಗುವುದು. ಐಟಿಗಾಗಿ ನಿರ್ಮಿಸಲಾದ ಸ್ಥಳದ ಹೊರತಾಗಿ, ಉದ್ಯಾನವನವು ದೊಡ್ಡ ವ್ಯಾಪಾರ ಸಮಾವೇಶ ಕೇಂದ್ರ, ಬಜೆಟ್ ಹೋಟೆಲ್ಗಳು, ಶಾಪಿಂಗ್ ಸಂಕೀರ್ಣಗಳು, ವಾಣಿಜ್ಯ ಕೇಂದ್ರಗಳು, ಮನರಂಜನೆ ಮತ್ತು ಮನರಂಜನಾ ಕೇಂದ್ರಗಳನ್ನು ಹೊಂದಿರುತ್ತದೆ.
ಇನ್ಫೋಪಾರ್ಕ್ ತನ್ನ ಸಹ-ಅಭಿವೃದ್ಧಿದಾರರೊಂದಿಗೆ 8 ಮಿಲಿಯನ್ ಚದರ ಅಡಿ ವಿಸ್ತೀರ್ಣದ ಐಟಿ/ಐಟಿಇಎಸ್/ಬಿಪಿಒ ಮತ್ತು ಸಂಬಂಧಿತ ಮೂಲಸೌಕರ್ಯ ಮತ್ತು ವಾಣಿಜ್ಯ ಮತ್ತು ಸಾಮಾಜಿಕ ಮೂಲಸೌಕರ್ಯ ಜಾಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇನ್ಫೋಪಾರ್ಕ್ ಅಭಿವೃದ್ಧಿಪಡಿಸುವ ಮೂಲಸೌಕರ್ಯವು ವಿತರಣಾ ಸೌಲಭ್ಯಗಳು, ಪ್ರವೇಶ ಮತ್ತು ಆಂತರಿಕ ರಸ್ತೆಗಳು, ಮಳೆನೀರಿನ ಚರಂಡಿಗಳು, ಕೇಬಲ್ ಕಂದಕಗಳು, ನೀರಿನ ಸಂಸ್ಕರಣೆ ಮತ್ತು ಪೂರೈಕೆ, ದತ್ತಾಂಶ ಸಂಪರ್ಕ ಇತ್ಯಾದಿಗಳನ್ನು ಹೊಂದಿರುವ 220 kV ಗ್ಯಾಸ್ ಇನ್ಸುಲೇಟೆಡ್ ಸಬ್ಸ್ಟೇಷನ್ (GIS) ಅನ್ನು ಒಳಗೊಂಡಿರುತ್ತದೆ. ಪಾರ್ಕ್ನ ಮಾಸ್ಟರ್ ಪ್ಲಾನ್ ಅನ್ನು ನ್ಯೂಯಾರ್ಕ್ ಮೂಲದ ವಾಸ್ತುಶಿಲ್ಪ ಸಲಹೆಗಾರ ಕ್ಯಾನನ್ಡಿಸೈನ್ ಅಭಿವೃದ್ಧಿಪಡಿಸಿದೆ. [೧]
ಕೊಚ್ಚಿಯ ಇನ್ಫೋಪಾರ್ಕ್ನ 2,500 ಕೋಟಿ ರೂ.ಗಳ 8 ಮಿಲಿಯನ್ ಚದರ ಅಡಿ ವಿಸ್ತೀರ್ಣದ ಎರಡನೇ ಹಂತದಲ್ಲಿ ಮೂರು ಬಹುರಾಷ್ಟ್ರೀಯ ಕಂಪನಿಗಳು ಈಗಾಗಲೇ ಆಸಕ್ತಿ ತೋರಿಸಿವೆ. ಎರಡನೇ ಹಂತವು ಎಂಟು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. [೧] ಮೂಲಸೌಕರ್ಯ ಅಭಿವೃದ್ಧಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಮತ್ತು 2011 ರ ವೇಳೆಗೆ ಪೂರ್ಣಗೊಳ್ಳಲಿದೆ. ಸುಮಾರು 5 ಲಕ್ಷ ಚದರ ಅಡಿ ವಿಸ್ತೀರ್ಣದ ಮೊದಲ ಐಟಿ ಕಟ್ಟಡದ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಡಿಸೆಂಬರ್ 2012 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಪೂರ್ಣ ಪೂರ್ಣಗೊಂಡ ನಂತರ, ಈ ಹೊಸ ಕ್ಯಾಂಪಸ್ನಲ್ಲಿ ಒಟ್ಟು 80,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. [೨]
==ಶಾಖೆಗಳು==
ಇನ್ಫೋಪಾರ್ಕ್ ಹತ್ತಿರದ ನಗರಗಳು ಮತ್ತು ಪಟ್ಟಣಗಳಿಗೆ ಕವಲೊಡೆದಿದೆ. ಕೇರಳದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮದ ಅಭಿವೃದ್ಧಿಗಾಗಿ ಈ ಉದ್ಯಾನವನವು ಹಬ್ ಮತ್ತು ಸ್ಪೋಕ್ ಮಾದರಿಯನ್ನು ಅನುಸರಿಸುತ್ತದೆ. ಕೊಚ್ಚಿಯ ಇನ್ಫೋಪಾರ್ಕ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ತ್ರಿಶೂರ್ ಮತ್ತು ಚೇರ್ತಲಾದಲ್ಲಿ ಉಪಕೇಂದ್ರಗಳಿವೆ.
==ಇನ್ಫೋಪಾರ್ಕ್ ತ್ರಿಶೂರ್==
ಇನ್ಫೋಪಾರ್ಕ್ ತ್ರಿಶೂರ್ ಕೊರಟ್ಟಿಯಲ್ಲಿದ್ದು, ಇದು ಸುಮಾರು 45 ಕಿ.ಮೀ ದೂರದಲ್ಲಿದೆ. ತ್ರಿಶೂರ್ ಜಿಲ್ಲೆಯ ಕೊಚ್ಚಿಯಿಂದ ಕಿ.ಮೀ. ಇದು ಸರಿಸುಮಾರು 20 ನೆಡುಂಬಸ್ಸೇರಿಯಲ್ಲಿರುವ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಿ.ಮೀ. ಈ ಉದ್ಯಾನವನವು ರಾಷ್ಟ್ರೀಯ ಹೆದ್ದಾರಿ 544 ಗೆ ಬಹಳ ಹತ್ತಿರದಲ್ಲಿದೆ. ಪ್ರಸ್ತುತ, ತ್ರಿಶೂರ್ನ ಇನ್ಫೋಪಾರ್ಕ್ 30 ಎಕರೆ ಅವಿಭಾಜ್ಯ ಭೂಮಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಉದ್ಯಾನವನಕ್ಕೆ ಇನ್ನೂ ಸ್ವಲ್ಪ ಭೂಮಿ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಉದ್ಯಾನವನದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿವೆ. ಪ್ಲಗ್ ಮತ್ತು ಪ್ಲೇ ಸೌಲಭ್ಯಗಳನ್ನು ಹೊಂದಿರುವ ಸುಮಾರು 40,000 ಚದರ ಅಡಿ ವಿಸ್ತೀರ್ಣದ ಐಟಿ ಕಟ್ಟಡಗಳ ಮೊದಲ ಸೆಟ್ ಸಿದ್ಧವಾಗಿದ್ದು, ಕಂಪನಿಗಳು ತ್ರಿಶೂರ್ನಲ್ಲಿ ಸ್ಥಾಪನೆ ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ. ಎರಡನೇ ಹಂತವು ಅಕ್ಟೋಬರ್ 2015 ರ ವೇಳೆಗೆ ಹೆಚ್ಚುವರಿಯಾಗಿ 3,30 ಲಕ್ಷ ಚದರ ಅಡಿ ಜಾಗ ಹಂಚಿಕೆಗೆ ಸಿದ್ಧವಾಗಲಿದೆ.
==ಇನ್ಫೋಪಾರ್ಕ್ ಚೇರ್ತಾಲ==
ಆಲಪ್ಪುಳ ಜಿಲ್ಲೆಯ ಚೇರ್ತಾಲ ತಾಲೂಕಿನ ಪಲ್ಲಿಪುರಂ ಗ್ರಾಮದಲ್ಲಿದೆ. ಉದ್ಯಾನವನದ ಒಟ್ಟು ವಿಸ್ತೀರ್ಣ 66 ಎಕರೆಗಳಾಗಿದ್ದು, ಅದರಲ್ಲಿ 60 ಎಕರೆಗಳನ್ನು ಭಾರತ ಸರ್ಕಾರದ ವಾಣಿಜ್ಯ ಸಚಿವಾಲಯವು ಜೂನ್ 8, 2009 ರಂದು ಹೊರಡಿಸಿದ ಅಧಿಸೂಚನೆಯ ಮೂಲಕ ವಲಯ-ನಿರ್ದಿಷ್ಟ ವಿಶೇಷ ಆರ್ಥಿಕ ವಲಯವೆಂದು ಸೂಚಿಸಿದೆ. ಇನ್ಫೋಪಾರ್ಕ್ನ 2.4 ಲಕ್ಷ ಚದರ ಅಡಿ ವಿಸ್ತೀರ್ಣದ ಮೊದಲ ಐಟಿ ಕಟ್ಟಡವು ಈಗ ಕಾರ್ಯಾಚರಣೆಗೆ ಸಿದ್ಧವಾಗಿದೆ.
===ಸಾರಿಗೆ ===
ಕೊಚ್ಚಿ ನಗರದ ವಿವಿಧ ಮೂಲೆಗಳಾದ ಅಲುವಾ, ಎರ್ನಾಕುಲಂ ನಗರ ಕೇಂದ್ರ ಮತ್ತು ತ್ರಿಪುಣಿತುರಗಳಿಂದ ಇನ್ಫೋಪಾರ್ಕ್ ಕ್ಯಾಂಪಸ್ಗೆ ಕಡಿಮೆ ಸಂಖ್ಯೆಯ ಖಾಸಗಿ ಬಸ್ಗಳು ಕಾರ್ಯನಿರ್ವಹಿಸುತ್ತವೆ. ಹೆಚ್ಚಾಗಿ ಖಾಸಗಿ ಬಸ್ಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಮತ್ತು ಕೆಲಸ ಮಾಡುವ ಜನರು ಆಟೋ ರಿಕ್ಷಾ ಅಥವಾ ಟ್ಯಾಕ್ಸಿಗಳ ಮೂಲಕ ಪ್ರಯಾಣಿಸಬೇಕಾಗುತ್ತದೆ.
ಇನ್ಫೋಪಾರ್ಕ್ ಎಕ್ಸ್ಪ್ರೆಸ್ವೇಗೆ ಹತ್ತಿರದಲ್ಲಿರುವ ವೈಟ್ಟಿಲ ಮೊಬಿಲಿಟಿ ಹಬ್ ಮತ್ತು ಕಕ್ಕನಾಡ್ ಜೆಟ್ಟಿ ನಡುವೆ ದೋಣಿ ಸೇವೆ ಲಭ್ಯವಿದೆ. ಈ ದೋಣಿ ವೈಟ್ಟಿಲ ಮತ್ತು ಕಕ್ಕನಾಡ್ ನಡುವಿನ ದೂರವನ್ನು 20 ನಿಮಿಷಗಳಲ್ಲಿ ಕ್ರಮಿಸುತ್ತದೆ. ಕೆಎಂಆರ್ಎಲ್ ಕಕ್ಕನಾಡ್ ವಾಟರ್ ಮೆಟ್ರೋ ನಿಲ್ದಾಣದಿಂದ ಇನ್ಫೋಪಾರ್ಕ್ಗೆ ಎಸಿ ಲೋ-ಫ್ಲೋರ್ ಫೀಡರ್ ಬಸ್ ಸೇವೆಗಳನ್ನು ನಿರ್ವಹಿಸುತ್ತದೆ.
ಕೊಚ್ಚಿ ಮೆಟ್ರೋ ರೈಲು ಕಾಲೂರ್ ಸ್ಟೇಡಿಯಂನಿಂದ ಕಾಕ್ಕನಾಡಿಗೆ ತನ್ನ ವಿಸ್ತರಣೆಯನ್ನು ಯೋಜಿಸಿದೆ. ಈ ವಿಸ್ತರಣೆಯು ಇನ್ಫೋಪಾರ್ಕ್ನಲ್ಲಿ ಹಂತ-I ಮತ್ತು ಹಂತ-II ಕ್ಯಾಂಪಸ್ಗಳಲ್ಲಿ ತಲಾ ಒಂದು ಮೆಟ್ರೋ ನಿಲ್ದಾಣದೊಂದಿಗೆ ಕೊನೆಗೊಳ್ಳುತ್ತದೆ, ಹೀಗಾಗಿ ಐಟಿ ಪಾರ್ಕ್ಗೆ ಪರಿಣಾಮಕಾರಿ ಮೆಟ್ರೋ ರೈಲು ಸಂಪರ್ಕವನ್ನು ನೀಡುತ್ತದೆ.
30,000 ಜನರಿರುವ ಕಾಕನಾಡ್ನಲ್ಲಿರುವ ಇನ್ಫೋಪಾರ್ಕ್ಗೆ ಸಾರಿಗೆ ಸಂಪರ್ಕದ ಕೊರತೆಯು ಒಂದು ಪ್ರಮುಖ ಅಡಚಣೆಯಾಗಿದೆ. ಕೊಚ್ಚಿಯ ಸಾರ್ವಜನಿಕ ನೀತಿ ಸಂಶೋಧನಾ ಕೇಂದ್ರ (ಸಿಪಿಪಿಆರ್) ಮತ್ತು ವಿಶ್ವ ವ್ಯಾಪಾರ ಕೇಂದ್ರ (ಡಬ್ಲ್ಯೂಟಿಸಿ) ಇತ್ತೀಚೆಗೆ ಆಯೋಜಿಸಿದ್ದ 'ಸಾರ್ವಜನಿಕ ಸಾರಿಗೆಯಲ್ಲಿ ಚುಕ್ಕೆಗಳನ್ನು ಸಂಪರ್ಕಿಸುವುದು' ಎಂಬ ಕಾರ್ಯಾಗಾರದಲ್ಲಿ, ಈ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆಯನ್ನು ಅಭಿವೃದ್ಧಿಪಡಿಸಲು ಹಲವಾರು ಪ್ರಸ್ತಾಪಗಳನ್ನು ಮಾಡಲಾಯಿತು. ಇವುಗಳಲ್ಲಿ ಬಸ್ಗಳ ಮಾರ್ಗ ಬದಲಾವಣೆ ಅಥವಾ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸುವುದು, ಬೇಡಿಕೆ ಆಧಾರಿತ ಬಸ್ ವ್ಯವಸ್ಥೆಗಳಂತಹ ಆಧುನಿಕ ಸಾರಿಗೆ ಮೂಲಸೌಕರ್ಯಗಳನ್ನು ಪರಿಚಯಿಸುವುದು ಮತ್ತು ಪ್ರದೇಶಕ್ಕೆ ಅಸ್ತಿತ್ವದಲ್ಲಿರುವ ನೀರು ಮತ್ತು ರಸ್ತೆ ಸಂಪರ್ಕವನ್ನು ಸುಧಾರಿಸುವುದು ಸೇರಿವೆ.
==ಉಲ್ಲೇಖಗಳು==
hierq26cya36tfls63xty4t7meudwes
ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ
0
180100
1379549
1379327
2026-08-09T01:18:46Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1379549
wikitext
text/x-wiki
{{Infobox university
| name = ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾಲಯ
| native_name =
| image_name = Kerala Veterinary and Animal Sciences University 05922.JPG
| image_size =
| image_alt =
| caption =
| latin_name =
| motto =
| mottoeng = ಕಾರ್ಯರೂಪಕ್ಕೆ ಬರುವ ಆಲೋಚನೆಗಳು
| established = 12 ಜೂನ್ 2010
| closed =
| type = ಸಾರ್ವಜನಿಕ ವಿಶ್ವವಿದ್ಯಾಲಯ
| affiliation =
| endowment =
| budget =
| officer_in_charge =
| chairman =
| chancellor = ಕೇರಳ ರಾಜ್ಯಪಾಲರು
| president =
| vice-president =
| superintendent =
| provost =
| vice_chancellor = ಡಾ. ಎಂ. ಆರ್. ಶಶೀಂದ್ರನಾಥ್
| rector =
| principal =
| dean =
| director =
| head_label =
| head =
| academic_staff =
| administrative_staff =
| students =
| undergrad =
| postgrad =
| doctoral =
| other =
| city = ಪೂಕ್ಕೋಡ್
| state =
| province = [[ವಯನಾಡು ಜಿಲ್ಲೆ|ವಯನಾಡು]]
| country = [[ಭಾರತ]]
| coor =
| campus = ಗ್ರಾಮೀಣ
| former_names =
| free_label =
| free =
| colors =
| colours =
| athletics =
| sports =
| nickname =
| mascot =
| affiliations =
| website = [[http://www.kvasu.ac.in/|kvasu.ac.in]]
| logo =
| footnotes =
}}
ಕೇರಳದ ವಯನಾಡ್ ಜಿಲ್ಲೆಯ ಪೂಕೋಡ್ನಲ್ಲಿ '''ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ''' (Kerala Veterinary and Animal Sciences University) ನೆಲೆಗೊಂಡಿದೆ. ಕೇರಳ ಸರ್ಕಾರದ ಅಡಿಯಲ್ಲಿ 2010ರಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾಲಯವು, 2013ರಲ್ಲಿ ಪ್ರಮುಖ ವಿಶ್ವವಿದ್ಯಾಲಯಗಳ ಜಾಗತಿಕ ಜಾಲವಾದ 'ವರ್ಲ್ಡ್ವೈಡ್ ಯೂನಿವರ್ಸಿಟೀಸ್ ನೆಟ್ವರ್ಕ್'ಗೆ (Worldwide Universities Network) ಸೇರ್ಪಡೆಗೊಂಡಿತು.<ref>{{Cite web |url=http://www.mathrubhumi.com/palakkad/news/2308539-local_news-alanalloor-%E0%B4%85%E0%B4%B2%E0%B4%A8%E0%B4%B2%E0%B5%8D%E0%B4%B2%E0%B5%82%E0%B4%B0%E0%B5%8D%E2%80%8D.html |title=മാതൃഭൂമി വാർത്ത ശേഖരിച്ചത്: 2013 മെയ് 30 |access-date=2013-06-11 |archive-date=2013-05-30 |archive-url=https://web.archive.org/web/20130530134445/http://www.mathrubhumi.com/palakkad/news/2308539-local_news-alanalloor-%E0%B4%85%E0%B4%B2%E0%B4%A8%E0%B4%B2%E0%B5%8D%E0%B4%B2%E0%B5%82%E0%B4%B0%E0%B5%8D%E2%80%8D.html |url-status=dead }}</ref> ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಿರುವಿಜಮ್ಕುನ್ನುವಿನ ಸಂಸ್ಥೆಗೆ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಸ್ಥಾನಮಾನವನ್ನು ನೀಡಲಾಗಿದೆ.<ref>{{Cite web |url=http://www.deccanchronicle.com/130601/news-current-affairs/article/livestock-centre-alanallur-achieves-rare-feat |title=ಆರ್ಕೈವ್ ನಕಲು |access-date=2026-08-08 |archive-date=2024-01-13 |archive-url=https://web.archive.org/web/20240113102835/https://www.deccanchronicle.com/130601/news-current-affairs/article/livestock-centre-alanallur-achieves-rare-feat |url-status=dead }}</ref>
==ವಿಶ್ವವಿದ್ಯಾಲಯದ ಅಡಿಯಲ್ಲಿರುವ ಸಂಸ್ಥೆಗಳು==
# ಕೇರಳ ಪಶುವೈದ್ಯಕೀಯ ಕಾಲೇಜು, ಮನ್ನುಥಿ
# ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ಕಾಲೇಜು, ಪೂಕೋಡ್
# ಕ್ಲಿನಿಕಲ್ ವೆಟರ್ನರಿ ಕಾಂಪ್ಲೆಕ್ಸ್, ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ಕಾಲೇಜು, ಪೂಕೋಡ್
# ಡೈರಿ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲೇಜು, ಮನ್ನುಥಿ
# ಬೋಧನಾ ಕ್ಷೇತ್ರಗಳು (Instructional Farms), ಪೂಕೋಡ್
# ಪಶುಸಂಪತ್ತು ಸಂಶೋಧನಾ ಕೇಂದ್ರ, ತಿರುವಳಂಕುನ್ನು, ಪಾಲಕ್ಕಾಡ್
# ಮೂಲ ಕ್ಷೇತ್ರ (Base Farm), ಕೋಲಹಲಮೇಡು, ಇಡುಕ್ಕಿ
# ವನ್ಯಜೀವಿ ಅಧ್ಯಯನ ಕೇಂದ್ರ, ಪೂಕೋಡ್
# ವಿಶ್ವವಿದ್ಯಾಲಯದ ಕೋಳಿ ಮತ್ತು ಬಾತುಕೋಳಿ ಸಾಕಣೆ ಕೇಂದ್ರ, ಮನ್ನುತಿ.
# ಹಂದಿ ತಳಿ ಅಭಿವೃದ್ಧಿ ಕೇಂದ್ರ, ಮನ್ನುತಿ.
# ಮೇಕೆ ಮತ್ತು ಕುರಿ ಸಾಕಣೆ ಕೇಂದ್ರ, ಮನ್ನುತಿ.
# ಪ್ರಾದೇಶಿಕ ದನಗಳ ಬಂಜೆತನ ಸಂಶೋಧನಾ ಕೇಂದ್ರ, ಕೋಝಿಕ್ಕೋಡ್.
# ವಿಶ್ವವಿದ್ಯಾಲಯದ ಪಶುಸಂಪತ್ತು ಸಾಕಣೆ ಕೇಂದ್ರ ಹಾಗೂ ಮೇವು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆ, ಮನ್ನುತಿ.
# ಕೋಳಿ ಸಾಕಣೆ ಕುರಿತ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆ, ಮನ್ನುತಿ.
# ಕೋಳಿ ವಿಜ್ಞಾನದಲ್ಲಿನ ಉನ್ನತ ಅಧ್ಯಯನ ಕೇಂದ್ರ, ಮನ್ನುತಿ.
# ಪ್ರಾಣಿ ತಳಿ ಅಭಿವೃದ್ಧಿ ಮತ್ತು ಅನುವಂಶೀಯತೆ ಕುರಿತ ಉನ್ನತ ಅಧ್ಯಯನ ಕೇಂದ್ರ, ಮನ್ನುತಿ.
# ಮಾಂಸ ಸಂಸ್ಕರಣಾ ಘಟಕ, ಮನ್ನುತಿ.
# ಹೈನು ಸಂಸ್ಕರಣಾ ಘಟಕ, ಮನ್ನುತಿ.
# ಪಶುವೈದ್ಯಕೀಯ ಆಸ್ಪತ್ರೆ, ಕೊಕ್ಕಲೈ, ತ್ರಿಶೂರ್.
# ಪಶುವೈದ್ಯಕೀಯ ಆಸ್ಪತ್ರೆ, ಮನ್ನುತಿ.
# ದನಗಳ ತಳಿ ಅಭಿವೃದ್ಧಿ ಕೇಂದ್ರ, ತುಂಬುರ್ಮುಝಿ.
==ಅಧಿಕೃತ ಜಾಲತಾಣ ==
{{commons category|Kerala Veterinary and Animal Sciences University}}
* [http://www.kvasu.ac.in/ Home page of KVASU]
==ಉಲ್ಲೇಖಗಳು==
[[ವರ್ಗ:ಕೇರಳ ಸಂಸ್ಕೃತಿ ಮಾಸ ೨೦೨೬ ]]
dvffndjslnx2rs2duy3xkxbhtbmj7xp
ಸದಸ್ಯರ ಚರ್ಚೆಪುಟ:THIRTHANANDA H L
3
180105
1379447
2026-08-08T12:19:05Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1379447
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=THIRTHANANDA H L}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೭:೪೯, ೮ ಆಗಸ್ಟ್ ೨೦೨೬ (IST)
jrs0crjicrgwhumovuwahtjotj9fu6p
ಸದಸ್ಯರ ಚರ್ಚೆಪುಟ:Ningappahosapete
3
180106
1379450
2026-08-08T13:18:19Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1379450
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Ningappahosapete}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೮:೪೮, ೮ ಆಗಸ್ಟ್ ೨೦೨೬ (IST)
3n86cjat0vbg1e31cb26r63vap0s3kw
ಶ್ವೇತ ಮೋಹನ್
0
180107
1379452
2026-08-08T14:55:38Z
A826
72368
ಹೊಸ ಪುಟ: {{Infobox person | name = ಶ್ವೇತಾ ಮೋಹನ್ | image = Shweta Mohan.jpg | caption = | birth_date = {{birth date and age|df=yes|1985|11|19}} | birth_place = ಮದ್ರಾಸ್, ತಮಿಳುನಾಡು, ಭಾರತ | education = ಸ್ಟೆಲ್ಲಾ ಮಾರಿಸ್ ಕಾಲೇಜು, ಚೆನ್ನೈ | occupation = {{hlist|ಗಾಯಕಿ|ಸಂಗೀತ ನಿರ್ಮ...
1379452
wikitext
text/x-wiki
{{Infobox person
| name = ಶ್ವೇತಾ ಮೋಹನ್
| image = Shweta Mohan.jpg
| caption =
| birth_date = {{birth date and age|df=yes|1985|11|19}}
| birth_place = ಮದ್ರಾಸ್, ತಮಿಳುನಾಡು, ಭಾರತ
| education = ಸ್ಟೆಲ್ಲಾ ಮಾರಿಸ್ ಕಾಲೇಜು, ಚೆನ್ನೈ
| occupation = {{hlist|ಗಾಯಕಿ|ಸಂಗೀತ ನಿರ್ಮಾಪಕಿ}}
| years_active = 2003–ಪ್ರಸ್ತುತ
| mother = [[ಸುಜಾತಾ ಮೋಹನ್]]
| relatives = ಪರಾವೂರು ಟಿ. ಕೆ. ನಾರಾಯಣ ಪಿಳ್ಳೈ (ಮುತ್ತಜ್ಜ)
ಜಿ. ವೇಣುಗೋಪಾಲ್ (ಚಿಕ್ಕಪ್ಪ)
ರಾಧಿಕಾ ತಿಲಕ್ (ಚಿಕ್ಕಮ್ಮ)
| children = 1<ref name=mathrubhumi/>
| module = {{Infobox musical artist|embed=yes
| background = person
| genre = {{flatlist|
* ಚಲನಚಿತ್ರ ಸಂಗೀತ
* ಪಾಪ್
* ಘಝಲ್
* ಭಾರತೀಯ ಶಾಸ್ತ್ರೀಯ ಸಂಗೀತ
* ಭಜನೆ
}}
| instrument = ಗಾಯನ
| label = ಸ್ವತಂತ್ರ ಕಲಾವಿದೆ
}}
| website = {{URL|shwetamohan.com}}
}}
'''ಶ್ವೇತಾ ಮೋಹನ್''' (ಜನನ 19 ನವೆಂಬರ್ 1985)<ref>{{cite news |url=https://timesofindia.indiatimes.com/topic/Shweta-Mohan |title=Shweta Mohan Playback singer |work=The Times of India |date=13 August 2020}}</ref> ಭಾರತೀಯ ಹಿನ್ನೆಲೆ ಗಾಯಕಿ ಮತ್ತು ಸಂಗೀತ ನಿರ್ಮಾಪಕಿ.<ref>{{cite news |url=https://timesofindia.indiatimes.com/entertainment/hindi/music/news/Shweta-Mohan-is-happy/etarticleshow/5513702.cms|archive-url=https://web.archive.org/web/20110811062128/http://articles.timesofindia.indiatimes.com/2010-01-30/news-and-interviews/28126139_1_awards-galore-ashwin-music|url-status=live|archive-date=11 August 2011 |title=Shweta Mohan is happy |date=30 January 2010 |work=[[The Times of India]] |access-date=7 May 2010 |first1=Sindhu |last1=Vijayakumar}}</ref> ಅವರು ನಾಲ್ಕು ದಕ್ಷಿಣ ಭಾರತೀಯ ಚಿತ್ರರಂಗಗಳಾದ ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಸೇರಿದಂತೆ ಕೆಲವು ಹಿಂದಿ ಚಿತ್ರಗಳು ಮತ್ತು ಬೆಂಗಾಲಿ ಭಾಷೆಯ ಆಲ್ಬಂಗಳಿಗೆ ಚಿತ್ರಗಳು ಮತ್ತು ಆಲ್ಬಂಗಳಿಗೆ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.
ಹಿನ್ನೆಲೆ ಗಾಯಕಿ ಸುಜಾತಾ ಮೋಹನ್ ಮತ್ತು ಕೃಷ್ಣ ಮೋಹನ್ ಅವರ ಪುತ್ರಿಯಾಗಿ ಜನಿಸಿದ ಶ್ವೇತಾ ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಆರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು (ದಕ್ಷಿಣ), ಒಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಒಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. 2023 ರಲ್ಲಿ ತಮಿಳುನಾಡು ಸರ್ಕಾರದಿಂದ ಆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕಲೈಮಾಮಣಿ ಪ್ರಶಸ್ತಿಯನ್ನು ಸಹ ಅವರು ಗೌರವಿಸಲ್ಪಟ್ಟಿದ್ದಾರೆ.<ref>{{cite web|url=https://timesofindia.indiatimes.com/entertainment/tamil/movies/news/kalaimamani-awards-anirudh-kj-yesudas-manikandan-and-others-selected-ceremomy-scheduled-for-next-month/articleshow/124084043.cms|title=Kalaimamani Awards: Anirudh, KJ Yesudas, Manikandan, and others selected; Ceremony scheduled for next month|website=TimesofIndia.com|date=24 September 2025}}</ref>
ಹಿನ್ನೆಲೆ ಗಾಯನದ ಜೊತೆಗೆ, ಶ್ವೇತಾ ಅವರು ಹಲವಾರು ದೂರದರ್ಶನ ರಿಯಾಲಿಟಿ ಶೋಗಳಲ್ಲಿ ಮತ್ತು ಸಂಗೀತ ವೀಡಿಯೊಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಅವರು ಹಲವಾರು ಕಲಾವಿದರೊಂದಿಗೆ ಸಹಕರಿಸಿದ್ದಾರೆ ಮತ್ತು ಸ್ವತಂತ್ರ ಸಿಂಗಲ್ಗಳನ್ನು ನಿರ್ಮಿಸಿದ್ದಾರೆ.<ref>{{cite web|url=https://www.thehindu.com/entertainment/music/shweta-mohan-on-her-first-indie-song/article24278207.ece|title=Shweta Mohan releases her first indie song|work=TheHindu.com|date=28 June 2018}}</ref>
{{TOC limit|2}}
== ಆರಂಭಿಕ ಜೀವನ ==
ಶ್ವೇತಾ ಮೋಹನ್ ಅವರು 19 ನವೆಂಬರ್ 1985 ರಂದು ತಮಿಳುನಾಡಿನ ಚೆನ್ನೈನಲ್ಲಿ ಮಲಯಾಳಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ, ವಿ. ಕೃಷ್ಣ ಮೋಹನ್ ಅವರು ಶಿಶುವೈದ್ಯರು ಮತ್ತು ಸಂಗೀತ ಉತ್ಸಾಹಿಯೂ ಆಗಿದ್ದು, ಸಾಂದರ್ಭಿಕವಾಗಿ ಸಂಗೀತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ,<ref>{{cite web|url=https://timesofindia.indiatimes.com/entertainment/malayalam/music/shweta-mohans-dad-turns-singer-to-wish-mohanlal-on-his-birthday/articleshow/75865548.cms|title=Shweta Mohan's dad turns singer to wish Mohanlal on his birthday|work=TheTimesofIndia.com|date=21 May 2020}}</ref> ಮತ್ತು ಅವರ ತಾಯಿ, ಸುಜಾತಾ ಮೋಹನ್, ಅವರು ಪ್ರತಿಭಾವಂತ ಹಿನ್ನೆಲೆ ಗಾಯಕಿ.<ref>{{cite web|url=https://www.newindianexpress.com/entertainment/malayalam/2013/Apr/16/to-mom-with-love-shweta-mohan-468642.html|title=To mom with love: Shweta Mohan|work=TheNewIndianExpress.com|date=16 April 2013}}</ref> ಅವರು ಗುಡ್ ಶೆಫರ್ಡ್ ಕಾನ್ವೆಂಟ್, ಚೆನ್ನೈನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಸ್ಟೆಲ್ಲಾ ಮಾರಿಸ್ ಕಾಲೇಜು, ಚೆನ್ನೈನಿಂದ ಪದವಿ ಪಡೆದರು.<ref name=newindianexpress>[https://www.newindianexpress.com/cities/kochi/2012/jun/25/a-timeless-melody-380408.html A timeless melody].</ref>
ಸಂಗೀತದಲ್ಲಿ ಆಸಕ್ತಿ ಹೊಂದಿದ್ದರೂ, ತನ್ನ ಧ್ವನಿಯು ಹಿನ್ನೆಲೆ ಗಾಯನಕ್ಕೆ ಸಾಕಷ್ಟು ಉತ್ತಮವಾಗಿಲ್ಲ ಎಂದು ಪರಿಗಣಿಸಿ ಶ್ವೇತಾ ಅವರು ಆರಂಭದಲ್ಲಿ ಹಾಡುವ ಬಗ್ಗೆ ಹಿಂಜರಿಕೆ ವ್ಯಕ್ತಪಡಿಸಿದರು. ಅವರ 10 ನೇ ತರಗತಿಯ ಸಮಯದಲ್ಲಿ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ, ಗಾಯಕ-ಸಂಗೀತ ನಿರ್ದೇಶಕರಾದ ಭವತಾರಿಣಿ ಅವರು ನಿರ್ಣಯಿಸಿದ ಏಕವ್ಯಕ್ತಿ ಸುತ್ತಿನಲ್ಲಿ ಅವರು ಚಿತ್ರದ "ಬೋಲೆ ರೆ ಪಪಿಹಾರ" ಹಾಡನ್ನು ಹಾಡಿದರು.<ref>{{cite web|url=https://timesofindia.indiatimes.com/entertainment/malayalam/movies/news/shweta-mohan-mourns-the-demise-of-bhavatharini/articleshow/107168519.cms|title=Shweta Mohan mourns the demise of Bhavatharini: She told my mum that I sang well and that I must train in music|work=TheTimesofIndia.com|date=26 January 2024}}</ref> ಅವರು ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗೆದ್ದರು ಮತ್ತು ಭವತಾರಿಣಿ ಅವರು ಹಾಡನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಈ ಪ್ರೋತ್ಸಾಹ ಮತ್ತು ಮಾನ್ಯತೆಯು ಹಾಡುವ ಬಗ್ಗೆ ಅವರ ಉತ್ಸಾಹವನ್ನು ಹುಟ್ಟುಹಾಕಿತು ಮತ್ತು ಸಂಗೀತವನ್ನು ತಮ್ಮ ವೃತ್ತಿಯಾಗಿ ತೆಗೆದುಕೊಳ್ಳುವಂತೆ ಮಾಡಿತು.
ಒಂಬತ್ತನೇ ವಯಸ್ಸಿನಲ್ಲಿ, ಶ್ವೇತಾ ಅವರು ಶಾಸ್ತ್ರೀಯ ಸಂಗೀತದಲ್ಲಿ ಔಪಚಾರಿಕ ತರಬೇತಿಯನ್ನು ಪ್ರಾರಂಭಿಸಿದರು. ನಂತರ, ಅವರು ಗಾಯಕಿ ಬಿನ್ನಿ ಕೃಷ್ಣಕುಮಾರ್ ಅವರಿಂದ ತರಬೇತಿ ಪಡೆದು ಕಾರ್ನಾಟಿಕ್ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತಮ್ಮ ಪಾಠಗಳನ್ನು ಪ್ರಾರಂಭಿಸಿದರು,<ref>{{cite news |url=http://www.thehindu.com/features/friday-review/music/and-quiet-flows-the-karamana-two-of-a-kind/article3968866.ece |title=And Quiet Flows The Karamana: Two of a kind |date=5 October 2012 |work=[[The Hindu]]}}</ref><ref>{{cite web|url=https://www.indulgexpress.com/culture/music/2023/Apr/13/my-amma-is-my-idolsays-singer-shweta-mohan-48288.html|title='My Amma is my idol,' says singer Shweta Mohan|website=Indulgexpress.com|date=13 April 2023}}</ref> ಮತ್ತು ಆಗಸ್ಟೀನ್ ಪಾಲ್ ಅವರ ಅಡಿಯಲ್ಲಿ ಪಾಶ್ಚಾತ್ಯ ಗಾಯನ ಮತ್ತು ಪಿಯಾನೋವನ್ನು ಕಲಿತರು.<ref>{{cite web|url=https://www.indulgexpress.com/culture/music/2018/Oct/26/swetha-mohan--augustine-paul-an-interaction-about-their-personal-journeys-collaborations-and-fut-10795.html|title=Singer Shweta Mohan and music director Augustine Paul an interaction about their personal journeys, collaborations and future projects|work=Indulgexpress.com|date=26 October 2018}}</ref> ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರೊಂದಿಗಿನ ಹಾಡಿನ ರೆಕಾರ್ಡಿಂಗ್ಗಳಿಗಾಗಿ ತಮ್ಮ ತಾಯಿಯೊಂದಿಗಿನ ಒಂದು ಪಾಲ್ಗೊಳ್ಳುವಿಕೆಯ ಸಮಯದಲ್ಲಿ, ಅವರ "ಕುಚಿ ಕುಚಿ ರಕ್ಕಮ್ಮ" (ಬಾಂಬೆ, 1995) ಮತ್ತು "ಅಚ್ಚಮ್ ಅಚ್ಚಮ್ ಇಲ್ಲೈ" (ಇಂದಿರಾ, 1995) ಹಾಡುಗಳಿಗಾಗಿ ಮಕ್ಕಳ ಗಾಯಕ ತಂಡದ ಭಾಗವಾಗಲು ಕೇಳಲಾಯಿತು.<ref>{{cite web|url=https://timesofindia.indiatimes.com/entertainment/malayalam/movies/news/shweta-mohan-on-ar-rahmans-birthday-you-are-special-because-you-spread-magic-everywhere-with-the-wand-of-your-music/articleshow/88728257.cms|title=Shweta Mohan on AR Rahman's birthday: You are special because you spread magic everywhere with the wand of your music|work=TheTimesofIndia.com|date=6 January 2022}}</ref>
== ವೃತ್ತಿ ==
===ಹಿನ್ನೆಲೆ ಗಾಯನ===
====2003–2010: ಪ್ರಾರಂಭ, ಪ್ರಗತಿ ಮತ್ತು ಪ್ರಶಸ್ತಿಗಳು====
2003 ರಲ್ಲಿ ಶ್ವೇತಾ ಅವರು 11 ನೇ ತರಗತಿಯಲ್ಲಿದ್ದಾಗ, ನವರಾತ್ರಿ ಹಬ್ಬದ ಸಂದರ್ಭದಲ್ಲಿ ತಮ್ಮ ಮಗಳು ಭವತಾರಿಣಿ ಅವರ ಆಹ್ವಾನದ ಮೇರೆಗೆ ಸಂಗೀತ ನಿರ್ದೇಶಕ ಇಳಯರಾಜ ಅವರ ಮನೆಗೆ ಭೇಟಿ ನೀಡಿದರು. ಅಲ್ಲಿ, ಅವರು ಇಳಯರಾಜ ಅವರ ಹಿರಿಯ ಮಗ ಮತ್ತು ಸಂಗೀತ ನಿರ್ದೇಶಕ ಕಾರ್ತಿಕ್ ರಾಜ ಅವರನ್ನು ಎದುರಿಸಿದರು, ಅವರು ತಾವು ಗಾಯಕಿ ಸುಜಾತಾ ಅವರ ಪುತ್ರಿ ಎಂದು ತಿಳಿದ ನಂತರ, ಚಿತ್ರದಲ್ಲಿ ಎರಡು ಹಾಡುಗಳಿಗೆ ತಮ್ಮ ಧ್ವನಿಯನ್ನು ರೆಕಾರ್ಡ್ ಮಾಡಲು ಅವಕಾಶ ನೀಡಿದರು.<ref>{{cite web|url=https://www.thehindu.com/features/friday-review/music/On-the-same-wavelength/article11642286.ece|title=On the same wavelength|work=Hindu.com|date=13 August 2010}}</ref> ಎರಡೂ ಹಾಡುಗಳು, "ಮೆಯ್ಯನಾಧ" ಮತ್ತು "ಸೆವ್ವೈ ದೇಸಂ" ಗಾಯಕ ಕಾರ್ತಿಕ್ ಅವರೊಂದಿಗಿನ ಯುಗಳ ಗೀತೆಗಳಾಗಿವೆ. ಇದರ ನಂತರ, ಅವರು ತಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ ಮರಳಿದರು ಮತ್ತು ತಮ್ಮ 12 ನೇ ತರಗತಿಯನ್ನು ಮುಗಿಸಿ ಪದವಿ ಪ್ರಾರಂಭಿಸಿದರು. 2005 ರಲ್ಲಿ, ಸಂಗೀತ ನಿರ್ದೇಶಕ ಪ್ರವೀಣ್ ಮಣಿ ಅವರು ತಮ್ಮ ಮಲಯಾಳಂ ಚಿತ್ರಕ್ಕಾಗಿ ಬ್ಯಾಂಡ್ S5 ನೊಂದಿಗೆ ಸಹಕರಿಸಿದರು. ಶ್ವೇತಾ ಅವರನ್ನು ಬ್ಯಾಂಡ್ನೊಂದಿಗೆ ಸಹಕರಿಸಲು ಮತ್ತು ಚಿತ್ರದ ಎಲ್ಲಾ ಹಾಡುಗಳನ್ನು ಹಾಡಲು ಕರೆಯಲಾಯಿತು, ಇದರಿಂದಾಗಿ ಅವರ ಮಲಯಾಳಂ ಚೊಚ್ಚಲ ಪ್ರವೇಶವನ್ನು ಗುರುತಿಸಲಾಯಿತು. ಶೀಘ್ರದಲ್ಲೇ, ಕಾರ್ತಿಕ್ ರಾಜ ಮತ್ತು ಭವತಾರಿಣಿ ಅವರ ಕಿರಿಯ ಸಹೋದರ ಯುವನ್ ಶಂಕರ್ ರಾಜಾ ಅವರು ತಮ್ಮ ತೆಲುಗು ಸಂಯೋಜನೆಗಳಿಗಾಗಿ ರಾಮ್ (2006), ಆದವಾರಿ ಮಾಟಲಾಕು ಅರ್ಥಾಲೆ ವೇರುಲೆ (2007) ಮತ್ತು ತಮಿಳು ಸಂಯೋಜನೆಗಳಿಗಾಗಿ ಪಟ್ಟಿಯಾಲ್ (2006) ಮತ್ತು ಕಣ್ಣಮೂಚಿ ಯೇನಾಡ (2007) ಚಿತ್ರಗಳಿಗೆ ಹಾಡಲು ಕರೆದರು. ಅವರು ಮಲಯಾಳಂ ಚಿತ್ರ ವಿನೋದಯಾತ್ರ (2007) ಗಾಗಿ ಇಳಯರಾಜ ಅವರೊಂದಿಗೆ ಮತ್ತು ಕನ್ನಡ ಚಿತ್ರ ಸಜಿನಿ (2007) ಗಾಗಿ ಎ. ಆರ್. ರೆಹಮಾನ್ ಅವರೊಂದಿಗೆ ತಮ್ಮ ಮೊದಲ ಹಾಡನ್ನು ರೆಕಾರ್ಡ್ ಮಾಡಿದರು.
[[File:SwethaMohan.jpg|thumb|right|upright|200px|alt=Shwetha during her beginning career stage|ಶ್ವೇತಾ ಅವರ ಆರಂಭಿಕ ವೃತ್ತಿ ಹಂತದಲ್ಲಿ]]
ಅವರ ಅತಿದೊಡ್ಡ ಪ್ರಗತಿಯು ಜಿ. ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಚಿತ್ರ ಕಿರೀಡಂ (2007) ನಲ್ಲಿ ಸೋನು ನಿಗಮ್ ಅವರೊಂದಿಗಿನ "ವಿಳಿಯಿಲ್ ಉನ್ ವಿಳಿಯಿಲ್" ಎಂಬ ಯುಗಳ ಗೀತೆ ಮತ್ತು ಮಣಿ ಶರ್ಮಾ ಅವರ ಸಂಯೋಜನೆಯ ಚಿತ್ರ ಪೊಕ್ಕಿರಿಗಾಗಿ "ನೀ ಮುತ್ತಂ ಒಂದ್ರು" ಹಾಡುಗಳೊಂದಿಗೆ ಬಂದಿತು. 2007 ರ ವರ್ಷವು ಸಂಗೀತ ನಿರ್ದೇಶಕ ಎಂ. ಜಯಚಂದ್ರನ್ ಅವರೊಂದಿಗಿನ ಅವರ ಸಹವಾಸವನ್ನು ಸಹ ಗುರುತಿಸಿತು, ಅವರು ಚಿತ್ರ ನಿವೇದ್ಯಂನಲ್ಲಿ ಮೂರು ಹಾಡುಗಳನ್ನು ನೀಡಿದರು. "ಕೊಲಕ್ಕುಳಲ್ ವಿಳಿ ಕೇಟ್ಟೋ" ಹಾಡು 2007 ರ ವರ್ಷಕ್ಕೆ ಅತ್ಯುತ್ತಮ ಗಾಯಕಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು.<ref>{{cite web|url=https://www.news18.com/news/movies/on-shweta-mohans-birthday-a-look-at-her-award-winning-songs-6412219.html|title=Happy Birthday Shweta Mohan: Award-Winning Songs of Shweta|work=News18.com|date=19 November 2022}}</ref> ಚಿತ್ರ ನಾವೆಲ್ (2008) ಗಾಗಿ ಅವರ ಮುಂದಿನ ಸಹಯೋಗವು "ಕುಯಿಲೆ" ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು. ಇದರ ನಂತರ 2008 ರಲ್ಲಿ ಚಿತ್ರ ಓರೆ ಕಡಲ್ನಿಂದ ಔಸೇಪ್ಪಚನ್ ಸಂಯೋಜಿಸಿದ "ಯಮುನಾ ವೇರುಥೆ" ಹಾಡಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗಳ ದಕ್ಷಿಣದಲ್ಲಿ ಅವರ ಮೊದಲ ಗೆಲುವು ಬಂದಿತು.<ref>{{cite web|url=https://timesofindia.indiatimes.com/topic/Shweta-Mohan/awards|title=List of awards and nominations received by Shweta Mohan|work=TheTimesofIndia.com|accessdate=23 October 2025}}</ref> ಸಂಗೀತ ನಿರ್ದೇಶಕ ವಿದ್ಯಾಸಾಗರ್ ಅವರೊಂದಿಗಿನ ಅವರ ಸಹವಾಸವು ಚಿತ್ರ ಗೋಲ್ (2007) ನ "ಎಂತಾನಿನ್ನೆನ್ನೋಡೊನ್ನುಂ" ಜನಪ್ರಿಯ ಹಾಡಿನೊಂದಿಗೆ ಪ್ರಾರಂಭವಾಯಿತು ಮತ್ತು ಚಿತ್ರ ಪಿರಿವೋಮ್ ಸಂಧಿಪೋಮ್ (2008) ನ "ಕಂಡೇನ್ ಕಂಡೇನ್" ಹಾಡಿಗೆ ಫಿಲ್ಮ್ಫೇರ್ ಪ್ರಶಸ್ತಿ ನಾಮನಿರ್ದೇಶನವನ್ನು ಗಳಿಸಿದರು. ಸಂಗೀತ ನಿರ್ದೇಶಕ ಗುರುಕಿರಣ್ ಅವರು ಚಿತ್ರ ಅರಮನೆ (2008) ನ "ಪಾತ್ರ ಬರೇಯಾಲ" ಜನಪ್ರಿಯ ಹಾಡಿನ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಅವಕಾಶ ನೀಡಿದರು. ಅವರು ತಮಿಳಿನಲ್ಲಿ ಶಿವ ಮನಸುಲ ಶಕ್ತಿ, ಆನಂದ ತಾಂಡವಂ ಮತ್ತು ಗುರು ಎನ್ ಆಳು, ಮಲಯಾಳಂನಲ್ಲಿ ರಾಬಿನ್ಹುಡ್, ಡ್ಯಾಡಿ ಕೂಲ್ ಮತ್ತು ಭಾಗ್ಯದೇವತಾ, ತೆಲುಗು ಚಿತ್ರರಂಗದಲ್ಲಿ ರೆಚಿಪೋ ಮತ್ತು ಸಾರೈ ವೀರ್ರಾಜು ಮುಂತಾದ ದೊಡ್ಡ ನಿರ್ಮಾಣದ ಚಿತ್ರಗಳಿಗೆ ಹಾಡುವುದನ್ನು ಮುಂದುವರಿಸಿದರು.
2010 ರಲ್ಲಿ, ಅವರು ಎಸ್. ಶಂಕರ್ ಅವರ ಅತ್ಯಂತ ನಿರೀಕ್ಷಿತ ವಿಜ್ಞಾನ ಕಾಲ್ಪನಿಕ ಚಿತ್ರ ಎಂತಿರನ್ಗಾಗಿ ಎ. ಆರ್. ರೆಹಮಾನ್ ಅವರೊಂದಿಗೆ ಸಹಕರಿಸಿದರು. "ಬೂಮ್ ಬೂಮ್ ರೋಬೋಟ್ ಡಾ" ಹಾಡು ಅವರ ಸಹ-ಗಾಯಕರಾದ ಯೋಗಿ ಬಿ, ಕೀರ್ತಿ ಸಾಗಥಿಯಾ ಮತ್ತು ತನ್ವಿ ಷಾ ಅವರೊಂದಿಗೆ ಪ್ರಮುಖವಾಗಿ ಅವರ ಗಾಯನವನ್ನು ಒಳಗೊಂಡಿತ್ತು. ಧ್ವನಿಪಥವು ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಬಿಡುಗಡೆಯಾದ ಎರಡನೇ ದಿನದಂದು, ಆಲ್ಬಮ್ US ಐಟ್ಯೂನ್ಸ್ ಟಾಪ್ 10 ವರ್ಲ್ಡ್ ಆಲ್ಬಮ್ಸ್ ಚಾರ್ಟ್ನಲ್ಲಿ ಅಗ್ರಸ್ಥಾನದಲ್ಲಿತ್ತು, ಇದು ಸ್ಥಾನವನ್ನು ತಲುಪಿದ ಮೊದಲ ಭಾರತೀಯ ಆಲ್ಬಮ್ ಆಗಿದೆ.<ref>{{cite web|author= Indiaglitz|year=2010|title='Endhiran' tops Apple list|website=IndiaGlitz|access-date=3 August 2010|url=http://www.indiaglitz.com/channels/tamil/article/59090.html|archive-url=https://web.archive.org/web/20100804005527/http://www.indiaglitz.com/channels/tamil/article/59090.html|url-status=dead|archive-date=4 August 2010}}</ref> ಮೂಲ ತಮಿಳು ಹಾಡಿನ ಜೊತೆಗೆ, ಅವರು ತೆಲುಗು ಡಬ್ ಮಾಡಿದ ಆವೃತ್ತಿಗೂ ಗಾಯನ ನೀಡಿದರು. ಅವರ ಮುಂದಿನ ಜನಪ್ರಿಯ ಹಾಡು "ಓ ಮಹಾ ಝೀಯಾ", ಹರಿಹರನ್ ಅವರೊಂದಿಗಿನ ಯುಗಳ ಗೀತೆ, ಚಿತ್ರ ತಮಿಳ್ ಪದಂನಿಂದ, ಇದು ಕಣ್ಣನ್ ಅವರ ಸಂಗೀತವನ್ನು ಹೊಂದಿತ್ತು. ಹಾಡು ಹಿಂದಿನ ಕೆಲವು ಜನಪ್ರಿಯ ತಮಿಳು ಹಾಡುಗಳಿಂದ ಪಡೆದ ಹಲವಾರು ಅಸ್ಪಷ್ಟ ಪದಗಳನ್ನು ಒಳಗೊಂಡಿತ್ತು.<ref>{{Cite web |last=Rao |first=Subha J |date=21 June 2018 |title=CS Amudhan Interview: 'I Don't Dream Of Directing Big Stars And Moving To The Next Level' |url=https://silverscreenindia.com/movies/interviews/cs-amudhan-interview-i-dont-dream-of-directing-big-stars-and-moving-to-the-next-level/ |url-status=live |archive-url=https://archive.today/20250912014517/https://silverscreenindia.com/movies/interviews/cs-amudhan-interview-i-dont-dream-of-directing-big-stars-and-moving-to-the-next-level/ |archive-date=2025-09-12 |access-date=2025-09-12 |website=Silverscreen India |language=en}}</ref> ಎಂ. ಜಿ. ಶ್ರೀಕುಮಾರ್ ಸಂಯೋಜಿಸಿದ ಚಿತ್ರ ಒರು ನಾಳ್ ವರುಮ್ನ ಮಲಯಾಳಂ ಹಾಡು "ಮಾವಿನ್ ಚೋಟ್ಟಿಲೆ" ಅವರಿಗೆ ಏಷ್ಯಾವಿಷನ್ ಪ್ರಶಸ್ತಿ ಮತ್ತು ಜೈಹಿಂದ್ ಟಿವಿ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಆಗಾಥನ್, ಫೋರ್ ಫ್ರೆಂಡ್ಸ್, ಕಧಾ ತುಡರುನ್ನು, ಸಕುಡುಂಬಂ ಶ್ಯಾಮಲ ಮತ್ತು ಎಲ್ಸಮ್ಮಾ ಎನ್ನ ಆಂಕುಟ್ಟಿ ಮುಂತಾದ ಮಲಯಾಳಂ ಚಿತ್ರಗಳಲ್ಲಿನ ಅವರ ಹಾಡುಗಳು ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದುಕೊಟ್ಟವು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿದವು. ಎ. ಆರ್. ರೆಹಮಾನ್ ಸಂಯೋಜಿಸಿದ ಚಿತ್ರ ಪುಳಿ (2010) ಗಾಗಿನ ತೆಲುಗು ಹಾಡು "ಅಮ್ಮ ಥಲ್ಲೆ" ಅನ್ನು ಸಾಹಿತ್ಯವನ್ನು ವೇಗವಾಗಿ ಓಡಿಸಲು ಒಂದು ತಂತ್ರವನ್ನು ಬಳಸಿ ರೆಕಾರ್ಡ್ ಮಾಡಲಾಯಿತು. 2011 ರ ವರ್ಷಕ್ಕೆ ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ದಕ್ಷಿಣದಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಅವರು ಗೆದ್ದರು. ಪ್ರಿಥ್ವಿ (2010) ನ ಕನ್ನಡ ಹಾಡುಗಳು "ಹೆಜ್ಜೆಗೊಂಡು ಹೆಜ್ಜೆ" ಮತ್ತು ಎನೋ ಒಂತಾರ (2010) ನ "ದಿಲ್ ಕುಶ್" ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿದ್ದವು ಮತ್ತು ಮಾಧ್ಯಮಗಳಲ್ಲಿ ಪದೇ ಪದೇ ಪ್ರಸಾರವಾಗುತ್ತಿದ್ದವು.
====2011–2020: ಯಶಸ್ವಿ ಸಹಯೋಗಗಳು ಮತ್ತು ಹೆಚ್ಚಿನ ಮಾನ್ಯತೆ====
2011 ರ ವರ್ಷವು ಶ್ವೇತಾ ಅವರ ಸಂಗೀತ ನಿರ್ದೇಶಕ ಶರ್ರೆತ್ ಅವರೊಂದಿಗಿನ ಸಹವಾಸದ ಪ್ರಾರಂಭವನ್ನು ತಮಿಳು-ತೆಲುಗು ದ್ವಿಭಾಷಾ ಚಿತ್ರ 180 ಮೂಲಕ ಗುರುತಿಸಿತು. ಧ್ವನಿಪಥವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು, ವಿಶೇಷವಾಗಿ ಕಾರ್ತಿಕ್ ಅವರೊಂದಿಗಿನ ಅವರ ಯುಗಳ ಗೀತೆ "ನೀ ಕೋರಿನಾಲ್" 59 ನೇ ಫಿಲ್ಮ್ಫೇರ್ ಅವಾರ್ಡ್ಸ್ ದಕ್ಷಿಣದಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ನಾಮನಿರ್ದೇಶನವನ್ನು ಪಡೆಯಿತು.<ref>{{Cite web |url=http://www.filmfare.com/news/59th-idea-filmfare-awards-south-winners-list-809.html |title=59th Idea Filmfare Awards South (Winners list) |date=9 July 2012 |website=[[Filmfare]] |url-status=live |archive-url=https://web.archive.org/web/20150811102950/http://www.filmfare.com/news/59th-idea-filmfare-awards-south-winners-list-809.html |archive-date=11 August 2015 |access-date=11 August 2015}}</ref><ref>{{Cite news |url=http://timesofindia.indiatimes.com/entertainment/tamil/movies/news/The-59th-Idea-Filmfare-Awards-2011South/articleshow/14742576.cms |title=The 59th Idea Filmfare Awards 2011(South) |date=8 July 2012 |work=The Times of India |access-date=11 August 2015 |url-status=live |archive-url=https://web.archive.org/web/20150811103446/http://timesofindia.indiatimes.com/entertainment/tamil/movies/news/The-59th-Idea-Filmfare-Awards-2011South/articleshow/14742576.cms |archive-date=11 August 2015}}</ref> ಹಾಡು ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ದಕ್ಷಿಣದಲ್ಲಿ ಶ್ರೋತೃಗಳ ಆಯ್ಕೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.<ref>{{Cite web |url=http://www.radiomirchi.com/mma2011/tamil/listners_choice.html |title=Mirchi Music Awards Listener's Choice |publisher=Radio Mirchi |url-status=live |archive-url=https://web.archive.org/web/20150811131053/http://www.radiomirchi.com/mma2011/tamil/listners_choice.html |archive-date=11 August 2015 |access-date=11 August 2015}}</ref> ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಅವರೊಂದಿಗಿನ ಅವರ ಸಹವಾಸವು ಕೊ ಮತ್ತು 7 ಆಮ್ ಅರಿವು ಚಿತ್ರಗಳೊಂದಿಗೆ ಪ್ರಾರಂಭವಾಯಿತು. 2011 ರ ವರ್ಷದಲ್ಲಿ ಅವರು ತಮಿಳಿನಲ್ಲಿ ಅನೇಕ ಜನಪ್ರಿಯ ಹಾಡುಗಳನ್ನು ಹೊಂದಿದ್ದರು ಮತ್ತು ಕಾವಲನ್, ವೆಟ್ಟೈ, ತಂಬಿಕೋಟ್ಟೈ, ವೆಪ್ಪಂ ಮತ್ತು ವಿತಗನ್ ಸೇರಿದಂತೆ ಅನೇಕ ಚಿತ್ರಗಳಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಪಡೆದರು.<ref>{{cite news|url=http://www.thehindu.com/entertainment/movies/tn-govt-announces-tamil-film-awards-for-six-years/article19273078.ece|title=TN Govt. announces Tamil Film Awards for six years|work=[[The Hindu]]|accessdate=2017-07-14|location=Chennai, India|date=2017-07-14|archive-url=https://archive.today/20231110140448/https://www.thehindu.com/entertainment/movies/tn-govt-announces-tamil-film-awards-for-six-years/article19273078.ece|archive-date=10 November 2023}}</ref> ಮಲಯಾಳಂನಲ್ಲಿ, ಅವರು ಚಿತ್ರ ಉರುಮಿಗಾಗಿ ದೀಪಕ್ ದೇವ್ ಸಂಯೋಜಿಸಿದ "ಆರೋ ನೀ ಆರೋ" ಯುಗಳ ಗೀತೆಯೊಂದಿಗೆ ಪ್ರಶಂಸಿತ ಗಾಯಕ ಕೆ. ಜೆ. ಯೇಸುದಾಸ್ ಅವರೊಂದಿಗೆ ಮೊದಲ ಬಾರಿಗೆ ಸಹಕರಿಸಿದರು. 2011 ರ ವರ್ಷದ ಇತರ ಜನಪ್ರಿಯ ಮಲಯಾಳಂ ಹಾಡುಗಳು ಕ್ರಿಶ್ಚಿಯನ್ ಬ್ರದರ್ಸ್, ಮೂರು ಕಿಂಗ್ಸ್, ಬ್ಯಾಂಕಾಕ್ ಸಮ್ಮರ್ ಮತ್ತು ಸ್ನೇಹವೀಡು ಚಿತ್ರಗಳ ಮೂಲಕ ಬಂದವು. ಇಳಯರಾಜ ಸಂಗೀತ ಸಂಯೋಜಿಸಿದ ಮಹಾಕಾವ್ಯದ ಭಕ್ತಿ ತೆಲುಗು ಚಿತ್ರ ಶ್ರೀ ರಾಮ ರಾಜ್ಯಂ ಮೂಲ ಮತ್ತು ಡಬ್ ಮಾಡಿದ ಆವೃತ್ತಿಗಳಲ್ಲಿ ಶ್ವೇತಾ ಅವರು ಅನೇಕ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.<ref>{{Cite web |last=Rajamani |first=Radhika |date=2011-11-16 |title=Ramayana magic recreated in Telugu |url=https://www.rediff.com/movies/slide-show/slide-show-1-ramayana-magic-to-be-recreated-in-telugu/20111116.htm |url-status=live |archive-url=https://web.archive.org/web/20111118040741/https://www.rediff.com/movies/slide-show/slide-show-1-ramayana-magic-to-be-recreated-in-telugu/20111116.htm |archive-date=2011-11-18 |access-date=2025-02-20 |website=[[Rediff.com]] |language=en}}</ref> ತೆಲುಗು ಚಿತ್ರ 100% ಲವ್ ಅವರ ಧ್ವನಿಯಲ್ಲಿ ಎರಡು ಜನಪ್ರಿಯ ಹಾಡುಗಳನ್ನು ಒಳಗೊಂಡಿತ್ತು.
2012 ರ ವರ್ಷವು ತಮಿಳು ಚಿತ್ರ 3 ಮೂಲಕ "ಹೊಸ-ಪೀಳಿಗೆಯ" ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರೊಂದಿಗಿನ ಶ್ವೇತಾ ಅವರ ಸಹವಾಸದ ಪ್ರಾರಂಭವನ್ನು ಗುರುತಿಸಿತು. ವಿಜಯ್ ಯೇಸುದಾಸ್ ಅವರೊಂದಿಗಿನ "ನೀ ಪಾರ್ಥ ವಿಳಿಗಲ್" ಪ್ರಣಯ ಯುಗಳ ಗೀತೆಯು ಬಿಡುಗಡೆಯಾದಾಗ ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿತ್ತು.<ref>{{Cite web|title=Review: 3's music is more than Kolaveri Di|url=https://www.rediff.com/movies/review/music-review-three/20111226.htm|website=Rediff|language=en|access-date=2019-09-28|df=dmy-all}}</ref> ಔಸೇಪ್ಪಚನ್ ಸಂಯೋಜಿಸಿದ ಅರಿಕೆ ಚಿತ್ರದ ಮಲಯಾಳಂ ಹಾಡು "ಶ್ಯಾಮ ಹರೇ" ಅವರ ಹಾಡುವಿಕೆಗೆ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು ಮತ್ತು ಅತ್ಯುತ್ತಮ ಗಾಯಕಿಗಾಗಿ ಎರಡನೇ ಫಿಲ್ಮ್ಫೇರ್ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು.<ref>[http://ibnlive.in.com/news/filmfare-awards-south-dhanush-eega-win-big-awards/408186-71-177.html Filmfare Awards (South): The complete list of Winners<!-- Bot generated title -->] {{webarchive|url=https://web.archive.org/web/20150510051756/http://ibnlive.in.com/news/filmfare-awards-south-dhanush-eega-win-big-awards/408186-71-177.html |date=10 May 2015 }}</ref> "ನೀ ಪಾರ್ಥ" ಮತ್ತು "ಶ್ಯಾಮ ಹರೇ" ಎರಡೂ ಅವರ ಹಿನ್ನೆಲೆ ಗಾಯನಕ್ಕಾಗಿ 2 ನೇ SIIMA ಪ್ರಶಸ್ತಿಗಳಲ್ಲಿ ಮೊದಲ ನಾಮನಿರ್ದೇಶನಗಳನ್ನು ಗಳಿಸಿದವು.<ref>{{cite web |url=http://www.thehindu.com/features/cinema/stars-in-sharjah/article5128642.ece |title=Stars in Sharjah |work=The Hindu |access-date=15 September 2013 |author=Sudish Kamath |archive-date=19 February 2014 |archive-url=https://web.archive.org/web/20140219131946/http://www.thehindu.com/features/cinema/stars-in-sharjah/article5128642.ece |url-status=live }}</ref> 2013 ರಲ್ಲಿ, ಸಂಗೀತ ನಿರ್ದೇಶಕರಾದ ದೇವಿ ಶ್ರೀ ಪ್ರಸಾದ್, ಘಿಬ್ರಾನ್, ಜೇಮ್ಸ್ ವಸಂತನ್, ಎಸ್. ಎ. ರಾಜ್ಕುಮಾರ್, ಶಹಬಾಜ್ ಅಮನ್, ಅಲೆಕ್ಸ್ ಪಾಲ್, ಪ್ರಶಾಂತ್ ಪಿಳ್ಳೈ ಮತ್ತು ರಮಣ ಗೋಗುಲಾ ಅವರೊಂದಿಗಿನ ಅವರ ಸಹಯೋಗವು ಅವರ ಸಂಯೋಜನೆಗಳಲ್ಲಿ ಅವರಿಗೆ ಹಾಡುಗಳನ್ನು ನೀಡುವ ಮೂಲಕ ವಿಸ್ತರಿಸಿತು. ಭರತ್ ಬಾಲ ನಿರ್ದೇಶಿಸಿದ ಬದುಕುಳಿಯುವ ನಾಟಕ ಚಿತ್ರ ಮರಿಯನ್ ಎ. ಆರ್. ರೆಹಮಾನ್ ಸಂಯೋಜಿಸಿದ ಮತ್ತು ವಿಜಯ್ ಪ್ರಕಾಶ್ ಅವರೊಂದಿಗೆ ಸಹ-ಗಾಯನದ "ಇನ್ನುಂ ಕೊಂಜಂ ನೇರಂ" ಹಾಡಿನೊಂದಿಗೆ ಅವರ ಹಾಡುವ ವೃತ್ತಿಯನ್ನು ಮತ್ತಷ್ಟು ಹೆಚ್ಚಿಸಿತು. ಹಾಡು ಅದರ ಬಿಡುಗಡೆಯ ಒಂದು ತಿಂಗಳ ನಂತರವೂ ರೇಡಿಯೋ ಮಿರ್ಚಿ ಸೌತ್ ಟಾಪ್ 20 ಚಾರ್ಟ್ನಲ್ಲಿ 18 ನೇ ಸ್ಥಾನದಲ್ಲಿ ಉತ್ತಮ ಸ್ಥಾನವನ್ನು ಪಡೆಯಿತು.<ref>{{cite web |url=http://www.radiomirchi.com/chennai/countdown/tamil-top-20|title=TAMIL TOP 20 – Radio Mirchi|publisher=radiomirchi.com|date=19 June 2013|access-date=19 June 2013}}</ref><ref>{{cite tweet|user=bharatbala|author=Bharatbala Ganapathy|number=342940705922101250|date=7 June 2013|title=Maryan song Kadal Rasa no #1 on RadioMirchi top 20.}}</ref> ಅವರು 8 ನೇ ವಿಜಯ್ ಪ್ರಶಸ್ತಿಗಳು ಮತ್ತು 3 ನೇ SIIMA ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿ ಸಮಾರಂಭಗಳಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ವಿಭಾಗದಲ್ಲಿ ನಾಮನಿರ್ದೇಶನಗೊಂಡರು.<ref>{{cite web|title=And-the-SIIMA-Awards-go-to|url=http://timesofindia.indiatimes.com/entertainment/kannada/movies/news/And-the-SIIMA-Awards-go-to-/articleshow/42532423.cms|website=indiatimes|date=16 September 2014 |publisher=timesofindia|access-date=12 October 2015|archive-date=19 September 2014|archive-url=https://web.archive.org/web/20140919095812/http://timesofindia.indiatimes.com/entertainment/kannada/movies/news/And-the-SIIMA-Awards-go-to-/articleshow/42532423.cms|url-status=live}}</ref> ಅವರು ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರ ಡೇವಿಡ್ನಲ್ಲಿ "ಯುನ್ ಹಿ ರೆ" ಹಾಡಿನೊಂದಿಗೆ ತಮ್ಮ ಬಾಲಿವುಡ್ ಚೊಚ್ಚಲ ಪ್ರವೇಶವನ್ನು ಮಾಡಿದರು. 2014 ರಲ್ಲಿ, ಅವರ ಅತಿದೊಡ್ಡ ಯಶಸ್ಸುಗಳಲ್ಲಿ ಎ. ಆರ್. ರೆಹಮಾನ್ ಸಂಗೀತ ಚಿತ್ರ ಕಾವಿಯ ತಲೈವನ್ ನಿಂದ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆದ "ಯಾರುಮಿಲ್ಲ" ಮತ್ತು ಚಿತ್ರ ಒಟ್ಟಮಂದರಂನಿಂದ "ಒನ್ನನಾಂ ಕೊಂಬಾತೆ" ಸೇರಿವೆ. ಈ ಎರಡೂ ಹಾಡುಗಳು ವಿವಿಧ ಪ್ರಶಸ್ತಿ ಸಮಾರಂಭಗಳಲ್ಲಿ ಹಲವಾರು ನಾಮನಿರ್ದೇಶನಗಳು ಮತ್ತು ಪ್ರಶಸ್ತಿಗಳನ್ನು ಅವರಿಗೆ ತಂದುಕೊಟ್ಟವು.
2015 ರಲ್ಲಿ ಬಿಡುಗಡೆಯಾದ ಚಿತ್ರ ತಂಗ ಮಗನ್ ಅನಿರುದ್ಧ್ ರವಿಚಂದರ್ ಸಂಯೋಜಿಸಿದ ಅವರ ಏಕವ್ಯಕ್ತಿ ಹಾಡು "ಎನ್ನ ಸೊಲ್ಲ" ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಮೂರನೇ ಫಿಲ್ಮ್ಫೇರ್ ಪ್ರಶಸ್ತಿಯನ್ನು ಮತ್ತು ಮೊದಲ SIIMA ಪ್ರಶಸ್ತಿಯನ್ನು ಗೆದ್ದುಕೊಳ್ಳುವ ಮೂಲಕ ಶ್ವೇತಾ ಅವರ ಹಿನ್ನೆಲೆ ಗಾಯನ ವೃತ್ತಿಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಬೀತುಪಡಿಸಿತು.<ref>{{Cite web |date=18 June 2016 |title=Winners of the 63rd Britannia Filmfare Awards (South) |url=https://www.filmfare.com/news/winners-of-the-63rd-britannia-filmfare-awards-south-13996.html |url-status=live |archive-url=https://web.archive.org/web/20250919185059/https://www.filmfare.com/news/winners-of-the-63rd-britannia-filmfare-awards-south-13996.html |archive-date=19 September 2025 |access-date=30 September 2025 |website=[[Filmfare]] |language=en}}</ref> ಅವರು ಬಾಹುಬಲಿ: ದಿ ಬಿಗಿನಿಂಗ್ನ ಮಲಯಾಳಂ ಡಬ್ ಮಾಡಿದ ಆವೃತ್ತಿಯಲ್ಲಿ ಹಾಡುಗಳನ್ನು ಹಾಡಲು ಅವಕಾಶ ಪಡೆದರು. ಆ ವರ್ಷದ ಅವರ ಇತರ ಮಲಯಾಳಂ ಯಶಸ್ಸುಗಳು ಭಾಸ್ಕರ್ ದಿ ರಾಸ್ಕಲ್ ಮತ್ತು ಅನಾರ್ಕಲಿ ಚಿತ್ರಗಳಿಂದ ಬಂದವು. ಜಯಂತ್ ಕೈಕಿನಿ ಬರೆದ ಮತ್ತು ವಿ. ಹರಿಕೃಷ್ಣ ಸಂಯೋಜಿಸಿದ ಚಿತ್ರ ಕೆಂದಸಂಪಿಗೆಗಾಗಿ ಕನ್ನಡ ಹಾಡು "ಕನಸಲಿ ನಡೆಸು" ಬಿಡುಗಡೆಯಾದಾಗ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು. 2016 ರ ವರ್ಷವು ಸಂತೋಷ್ ನಾರಾಯಣನ್ ಅವರೊಂದಿಗಿನ ಅವರ ಮೊದಲ ಸಹಯೋಗದೊಂದಿಗೆ ಕಬಾಲಿ ಮತ್ತು ಕೋಡಿ ಚಿತ್ರಗಳೊಂದಿಗೆ ಪ್ರಾರಂಭವಾಯಿತು. ಮೊದಲನೆಯದು ರಜಿನೀಕಾಂತ್ ಅಭಿನಯದ ಚಿತ್ರವಾಗಿದ್ದು, "ಮಾಯಾ ನಾಧಿ" ಹಾಡು ಅತ್ಯುತ್ತಮ ಗಾಯಕಿಗಾಗಿ ನಾಲ್ಕನೇ ಫಿಲ್ಮ್ಫೇರ್ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು.<ref>{{Cite web|url=https://www.filmfare.com/awards/filmfare-awards-south-2017/tamil/nominations|title=Filmfare Awards South 2017 Tamil Nominations {{!}} Filmfare|website=filmfare.com|language=en|access-date=2019-09-28}}</ref><ref>{{Cite web|url=https://www.filmfare.com/news/winners-of-the-64th-jio-filmfare-awards-south-21594.html|archive-url=https://web.archive.org/web/20180617113606/https://www.filmfare.com/news/winners-of-the-64th-jio-filmfare-awards-south-21594.html|url-status=dead|archive-date=2018-06-17|title=Winners of the 64th Jio Filmfare Awards (South) {{!}} filmfare.com|date=2018-06-17|access-date=2019-09-28}}</ref> ಈ ವರ್ಷ ಶ್ವೇತಾ ಅವರು ನೇನು ಸೈಲಜ, ಜನತಾ ಗ್ಯಾರೇಜ್ ನಂತಹ ದೊಡ್ಡ ತೆಲುಗು ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಮತ್ತು ವೈಟ್, ತೋಪ್ಪಿಲ್ ಜೋಪ್ಪನ್ ಮತ್ತು ಆಕ್ಷನ್ ಹೀರೋ ಬಿಜು ನಂತಹ ಮಲಯಾಳಂ ಚಿತ್ರಗಳಲ್ಲಿ ಸಹವಾಸ ಹೊಂದಿದ್ದರು. ಬಿಜಿಬಾಲ್ ಸಂಯೋಜಿಸಿದ ಮಲಯಾಳಂ ಚಿತ್ರ ಮುಂತಿರಿವಳ್ಳಿಕಲ್ ತಾಳಿರ್ಕ್ಕುಂಬೋಲ್ (2017) ನ "ಒರು ಪುಳಯಾರಿಕಿಲ್" ಹಾಡು ಅವರಿಗೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಎ. ಆರ್. ರೆಹಮಾನ್ ಸಂಯೋಜಿಸಿದ ಮೆರ್ಸಲ್ (2017) ನ "ಮಾಚೋ ಎನ್ನಾಚೋ" ಹಾಡು ಗಾಯಕ ಸಿದ್ ಶ್ರೀರಾಮ್ ಅವರೊಂದಿಗಿನ ಅವರ ಮೊದಲ ಯುಗಳ ಗೀತೆಯನ್ನು ನೀಡಿತು ಮತ್ತು ಫಿಲ್ಮ್ಫೇರ್ ಪ್ರಶಸ್ತಿ ನಾಮನಿರ್ದೇಶನವನ್ನು ಸಹ ಗಳಿಸಿತು.<ref>{{cite web|date=4 June 2018|title=Nominations for the 65th Jio Filmfare Awards (South) 2018|url=https://www.filmfare.com/features/nominations-for-the-65th-jio-filmfare-awards-south-2018_-28652-1.html|url-status=live|work=[[Filmfare]]|accessdate=4 June 2018|archiveurl=https://web.archive.org/web/20180604163156/https://www.filmfare.com/features/nominations-for-the-65th-jio-filmfare-awards-south-2018_-28652.html|archivedate=4 June 2018}}</ref><ref>{{cite news|date=17 June 2018|title=Winners: 65th Jio Filmfare Awards (South) 2018|work=[[The Times of India]]|url=https://timesofindia.indiatimes.com/entertainment/tamil/movies/news/winners-65th-jio-filmfare-awards-south-2018/articleshow/64617904.cms|url-status=live|accessdate=17 June 2018|archiveurl=https://web.archive.org/web/20180617071126/https://timesofindia.indiatimes.com/entertainment/tamil/movies/news/winners-65th-jio-filmfare-awards-south-2018/articleshow/64617904.cms|archivedate=17 June 2018}}</ref> ಸಂತೋಷ್ ನಾರಾಯಣನ್ ಅವರು ತಮಿಳು ಚಿತ್ರ ಕಾಲ (2018) ನ ತೆಲುಗು ಮತ್ತು ಹಿಂದಿ ಡಬ್ ಮಾಡಿದ ಆವೃತ್ತಿಯ ಹಾಡುಗಳನ್ನು ಹಾಡಲು ಅವರನ್ನು ಕರೆದರು. 2019 ರಲ್ಲಿ, ಅವರು ತೆಲುಗು ಚಿತ್ರ ಸಾಹೋಗಾಗಿ ಬಾಲಿವುಡ್ ಸಂಯೋಜಕರಾದ ಶಂಕರ್-ಮಹಾದೇವನ್-ಲೋಯ್ ಅವರೊಂದಿಗೆ ಸಹಕರಿಸಿದರು. ಅವರ ಹಾಡುಗಳು "ಏಥೋ ಮಝಯಿಲ್" (ಮಲಯಾಳಂ ಚಿತ್ರ ವಿಜಯ್ ಸೂಪರಮ್ ಪೌರ್ಣಮಿಯಮ್) ಮತ್ತು "ಝುಮ್ಮಾ ಝುಮ್ಮಾ" (ಕನ್ನಡ ಚಿತ್ರ ಕುರುಕ್ಷೇತ್ರ) ಅದೇ ವರ್ಷದಲ್ಲಿ ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿದ್ದವು. ಅವರು 2020 ರಲ್ಲಿ ಆಲ್ ಮಲ್ಲು, ವರಣೆ ಅವಶ್ಯಮುಂಡ್, ಕಪ್ಪೇಲ ಮತ್ತು ನಾಡೋಡಿಗಲ್ 2 ಸೇರಿದಂತೆ ಮಲಯಾಳಂ ಮತ್ತು ತಮಿಳು ಚಿತ್ರಗಳಿಗೆ ಜನಪ್ರಿಯ ಹಾಡುಗಳನ್ನು ಹಾಡುವುದನ್ನು ಮುಂದುವರಿಸಿದರು.
====2021–ಪ್ರಸ್ತುತ: ಬಹುಭಾಷಾ ಹಾಡುಗಳು ಮತ್ತು ವೃತ್ತಿ ವಿಸ್ತರಣೆಗಳು====
2021 ರಲ್ಲಿ, ಶ್ವೇತಾ ಅವರು ಎರಡು ಬಹುಭಾಷಾ ಚಿತ್ರಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದರು: ಮರಕ್ಕರ್ - ಅರಬಿಕ್ಕಡಲಿಂಟೆ ಸಿಂಹಂ ಮತ್ತು 99 ಸಾಂಗ್ಸ್. ಮೊದಲಿನ ಹಾಡು ರೋನಿ ರಾಫೆಲ್ ಸಂಯೋಜಿಸಿದ್ದು, ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅವರ ಧ್ವನಿಯನ್ನು ಒಳಗೊಂಡಿತ್ತು. ಎರಡನೆಯದು, ಎ. ಆರ್. ರೆಹಮಾನ್ ನಿರ್ಮಿಸಿ ಸಂಯೋಜಿಸಿದ್ದು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ರೆಕಾರ್ಡ್ ಮಾಡಲಾಯಿತು. ಇದರ ನಂತರ 2022 ರಲ್ಲಿ ಚಿತ್ರ ಮಲಯಂಕುಂಜುಗಾಗಿ ರೆಹಮಾನ್ ಅವರ ಮತ್ತೊಂದು ಸಂಯೋಜನೆಯು ಬಂದಿತು. "ಮನ್ನುಂ ನಿರಂಜೆ" ಹಾಡು ಶ್ವೇತಾ ಅವರ ಧ್ವನಿಯಲ್ಲಿ ಇತರ ವಿವಿಧ ಭಾಷೆಗಳಲ್ಲಿ ರೆಕಾರ್ಡ್ ಮಾಡಲಾಯಿತು.
2023 ರಲ್ಲಿ, ಶ್ವೇತಾ ಅವರು ತಮ್ಮ ತಮಿಳು-ತೆಲುಗು ದ್ವಿಭಾಷಾ ಚಿತ್ರ ವಾಥಿಗಾಗಿ ಧನುಷ್ ಮತ್ತು ಜಿ. ವಿ. ಪ್ರಕಾಶ್ ಕುಮಾರ್ ಅವರೊಂದಿಗೆ ಮತ್ತೆ ಜೊತೆಯಾದರು. "ವಾ ವಾಥಿ" (ತೆಲುಗಿನಲ್ಲಿ "ಮಸ್ತಾರು ಮಸ್ತಾರು") ಹಾಡು ಶ್ವೇತಾ ಅವರಿಗೆ ಆನಂದ ವಿಕಟನ್ ಸಿನೆಮಾ ಪ್ರಶಸ್ತಿಗಳು<ref>{{Cite web |date=21 May 2024 |title=Ananda Vikatan Cinema Awards 2023 |url=https://awards.vikatan.com/cinema-awards |url-status=live |archive-url=https://web.archive.org/web/20240521163957/https://awards.vikatan.com/cinema-awards |archive-date=21 May 2024 |access-date=23 August 2024 |publisher=[[Ananda Vikatan Cinema Awards]]}}</ref> ಮತ್ತು ಫಿಲ್ಮ್ಫೇರ್ ಪ್ರಶಸ್ತಿ ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಟ್ಟಿತು.<ref>{{Cite news |date=4 August 2024 |title=69th Sobha Filmfare Awards South 2024: Check out the winners |url=https://timesofindia.indiatimes.com/entertainment/tamil/movies/news/69th-sobha-filmfare-awards-south-2024-check-out-the-winners/articleshow/112251936.cms |url-status=live |archive-url=https://web.archive.org/web/20240804052432/https://timesofindia.indiatimes.com/entertainment/tamil/movies/news/69th-sobha-filmfare-awards-south-2024-check-out-the-winners/articleshow/112251936.cms |archive-date=4 August 2024 |access-date=23 August 2024 |work=[[The Times of India]] |issn=0971-8257}}</ref> ಅವರು IIFA ಉತ್ಸವಂ ಮತ್ತು SIIMA ಪ್ರಶಸ್ತಿಗಳಲ್ಲಿ (ತಮಿಳು ಮತ್ತು ತೆಲುಗು ಹಾಡುಗಳಿಗೆ) ನಾಮನಿರ್ದೇಶನಗೊಂಡರು.<ref>{{Cite web |date=16 September 2024 |title=SIIMA Awards 2024 Tamil complete winners list: Jailer named Best Film; Vikram, Nayanthara, Aishwarya Rai win Best Actor awards |url=https://indianexpress.com/article/entertainment/tamil/siima-awards-2024-tamil-complete-winners-list-jailer-best-film-vikram-nayanthara-aishwarya-rai-best-actor-awards-9570253/ |url-status=live |archive-url=https://web.archive.org/web/20240921070446/https://indianexpress.com/article/entertainment/tamil/siima-awards-2024-tamil-complete-winners-list-jailer-best-film-vikram-nayanthara-aishwarya-rai-best-actor-awards-9570253/ |archive-date=21 September 2024 |access-date=17 October 2024 |website=[[The Indian Express]]}}</ref> ಅವರು ಪೊನ್ನಿಯಿನ್ ಸೆಲ್ವನ್: II, ಆದಿಪುರುಷ್, ಲಕ್ಕಿ ಬಾಸ್ಕರ್, ಶಾಕುಂತಲಂ ಮತ್ತು ವಲತ್ತಿ ನಂತಹ ಪ್ಯಾನ್-ಇಂಡಿಯನ್ ಚಿತ್ರಗಳಲ್ಲಿ ವಿವಿಧ ಹಾಡುಗಳನ್ನು ರೆಕಾರ್ಡ್ ಮಾಡುವುದನ್ನು ಮುಂದುವರಿಸಿದರು.
"ವಾಟರ್ ಪ್ಯಾಕೆಟ್" (ರಾಯನ್, ಎ. ಆರ್. ರೆಹಮಾನ್ ಸಂಯೋಜಿಸಿದ) ಮತ್ತು "ಹೇ ಮಿನ್ನಾಲೆ" (ಅಮರನ್, ಜಿ. ವಿ. ಪ್ರಕಾಶ್ ಕುಮಾರ್ ಸಂಯೋಜಿಸಿದ) ಹಾಡುಗಳು 2024 ರಲ್ಲಿ ಸಂಗೀತ ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿದ್ದವು. ಅವರ ಜಿ. ವಿ. ಪ್ರಕಾಶ್ ಕುಮಾರ್ ಅವರೊಂದಿಗಿನ ಸಹಯೋಗವು 2025 ರಲ್ಲಿ "ಕಲ್ಲೂರುಂ" (ವೀರ ಧೀರ ಸೂರನ್: ಭಾಗ 2) ಮತ್ತು "ಎನ್ನ ಸುಗಮ್" (ಇಡ್ಲಿ ಕಡೈ) ನಂತಹ ಜನಪ್ರಿಯ ಹಾಡುಗಳನ್ನು ಮತ್ತಷ್ಟು ನಿರ್ಮಿಸಿತು. ಅವರು ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಅವರೊಂದಿಗೆ ತಮ್ಮ ಸ್ವಂತ ಮಲಯಾಳಂ ಹಾಡಾದ "ಪೊಟ್ಟು ತೋಟ್ಟ ಪೌರ್ಣಮಿ" ಯ ತಮಿಳು ಆವೃತ್ತಿಗಾಗಿ ಚಿತ್ರ ಮಾಮನ್ ನಲ್ಲಿ ಸಹಕರಿಸಿದರು.
===ಸ್ವತಂತ್ರ ಸಿಂಗಲ್ಗಳು ಮತ್ತು ವೇದಿಕೆ ಪ್ರದರ್ಶನಗಳು===
[[File:SwethaMohan performs.jpg|thumb|right|upright|250px|alt=Shwetha performing on stage|ಶ್ವೇತಾ ಅವರು ಸಂಗೀತ ಕಚೇರಿಯೊಂದರಲ್ಲಿ ಪ್ರದರ್ಶನ ನೀಡುತ್ತಿದ್ದಾರೆ]]
ಚಲನಚಿತ್ರ ಹಿನ್ನೆಲೆ ಗಾಯನದ ಜೊತೆಗೆ, ಶ್ವೇತಾ ಅವರು ಸ್ವತಂತ್ರ ಪಾಪ್ ಸಿಂಗಲ್ಗಳನ್ನು ಸಕ್ರಿಯವಾಗಿ ಪ್ರದರ್ಶಿಸುತ್ತಿದ್ದಾರೆ ಮತ್ತು ನಿರ್ಮಿಸುತ್ತಿದ್ದಾರೆ.<ref>{{cite web|url=https://indianexpress.com/article/entertainment/tamil/singer-shweta-mohan-on-yaavum-enadhe-single-5246791/|title=The independent music scene is a blessing for musicians and music lovers: Shweta Mohan|work=IndianExpress.com|date=5 July 2018}}</ref> ಅವರ ಮೊದಲ ಸಿಂಗಲ್ 2018 ರಲ್ಲಿ ಬಿಡುಗಡೆಯಾದ ತಮಿಳು-ಹಿಂದಿ ದ್ವಿಭಾಷಾ "ಯಾವುಂ ಎನಾಧೆ"/"ಸಬ್ ಮೇರಾ ಹೈ" ಆಗಿದ್ದು, ಗಿಟಾರ್ ವಾದಕ ಬೆನೆಟ್ ರೋಲ್ಯಾಂಡ್ ಸಂಯೋಜಿಸಿದ್ದಾರೆ, ಅವರೊಂದಿಗೆ ಅವರು ದೀರ್ಘಕಾಲದ ಸಹವಾಸವನ್ನು ಹೊಂದಿದ್ದರು ಮತ್ತು ಹಲವಾರು ಬಾರಿ ಜಾಮ್ ಸೆಷನ್ಗಳನ್ನು ನಡೆಸಿದ್ದರು.<ref>{{cite web|url=https://www.thenewsminute.com/flix/i-m-happy-space-now-shweta-mohan-releases-her-first-indie-single-yaavum-enadhe-83836|title='I'm in a happy space now': Shweta Mohan releases her first indie single 'Yaavum Enadhe'|work=TheNewsMinute.com|date=28 June 2018}}</ref> ಅವರ ಮುಂದಿನ ಸಿಂಗಲ್, "ಅಮ್ಮ" ಅನ್ನು 2023 ರಲ್ಲಿ ತಮ್ಮ ತಾಯಿ ಸುಜಾತಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದ್ದಕ್ಕೆ ಸಮರ್ಪಣೆಯಾಗಿ ಬಿಡುಗಡೆ ಮಾಡಲಾಯಿತು. 2025 ರಲ್ಲಿ, ಅವರು ಸಂಗೀತ ನಿರ್ದೇಶಕ ವಿದ್ಯಾಸಾಗರ್ ಅವರೊಂದಿಗೆ ತಮ್ಮ ಮುಂದಿನ ಸಿಂಗಲ್ "ಮಾತೆಯ್" ಅನ್ನು ಸಂಯೋಜಿಸಲು ಸಹಕರಿಸಿದರು, ಇದರಲ್ಲಿ ಸುಜಾತಾ ಮೋಹನ್ ಅವರು ಕಾಣಿಸಿಕೊಂಡಿದ್ದಾರೆ.<ref>{{cite web|url=https://english.mathrubhumi.com/movies-music/news/sujatha-shweta-pearle-on-husbands-being-their-biggest-support-ad2c7191|title='He slept on the studio floor for me': Sujatha Mohan reveals 3 men behind her success|work=Mathrubhumi.com|date=14 April 2025}}</ref> ನಂತರ, ಅದೇ ವರ್ಷ, ಅವರು ತಮ್ಮ ಮುಂದಿನ ತಮಿಳು-ಹಿಂದಿ ದ್ವಿಭಾಷಾ ಸಿಂಗಲ್ ಅನ್ನು "ಐ ಲವ್ ಯು ಸೊಲ್ಲಡ" (ತಮಿಳು) /"ಐ ಲವ್ ಯು ಲವ್ ಯು ರೆ" (ಹಿಂದಿ) ಎಂದು ಸಂಯೋಜಿಸಿ ಹಾಡಿದರು.
ಶ್ವೇತಾ ಅವರು ಲೈವ್ ಸಂಗೀತ ಕಚೇರಿಗಳಲ್ಲಿ ವ್ಯಾಪಕವಾಗಿ ಪ್ರದರ್ಶನ ನೀಡುತ್ತಿದ್ದಾರೆ, ವಿಶೇಷವಾಗಿ ಸಂಗೀತ ನಿರ್ದೇಶಕರಾದ ಎ. ಆರ್. ರೆಹಮಾನ್, ಇಳಯರಾಜ ಮತ್ತು ವಿದ್ಯಾಸಾಗರ್ ಅವರೊಂದಿಗೆ ವಿಶ್ವ ಪ್ರವಾಸ ಮಾಡುತ್ತಿದ್ದಾರೆ.<ref>{{cite web|url=https://www.indiatoday.in/movies/regional-cinema/story/singer-shweta-mohan-on-ar-rahman-concert-does-he-deserve-perpetrators-2434590-2023-09-12|title=Singer Shweta Mohan on AR Rahman concert|work=Indiatoday.com|date=12 September 2023}}</ref> ಅವರು ತಮ್ಮ ಕಲಾತ್ಮಕ ಅಭಿವ್ಯಕ್ತಿಯ "ಹೃದಯ ಬಡಿತ" ಎಂದು ಲೈವ್ ಪ್ರದರ್ಶನಗಳನ್ನು ವಿವರಿಸಿದ್ದಾರೆ, ಪ್ರೇಕ್ಷಕರೊಂದಿಗಿನ ಶಕ್ತಿ ಮತ್ತು ಸಂಪರ್ಕವನ್ನು ಒತ್ತಿಹೇಳಿದ್ದಾರೆ, ಆದಾಗ್ಯೂ ಅವರು ಸ್ಟುಡಿಯೊದಲ್ಲಿ ವಿರುದ್ಧವಾಗಿ ಕೆಲವು ಹಾಡುಗಳನ್ನು ಲೈವ್ ಪ್ರದರ್ಶಿಸುವ ಬಗ್ಗೆ ಹಿಂಜರಿಕೆಯನ್ನು ವ್ಯಕ್ತಪಡಿಸಿದ್ದಾರೆ.<ref>{{cite web|url=https://www.thehindu.com/features/metroplus/going-live-and-solo/article3938770.ece|title=Going 'live' and solo|work=TheHindu.com|date=26 September 2012}}</ref>
==ವೈಯಕ್ತಿಕ ಜೀವನ==
ಶ್ವೇತಾ ಅವರು ತಮ್ಮ ದೀರ್ಘಕಾಲದ ಸ್ನೇಹಿತ ಮತ್ತು ಸಾಫ್ಟ್ವೇರ್ ಎಂಜಿನಿಯರ್-ಉದ್ಯಮಿ ಆಶ್ವಿನ್ ಶಶಿ ಅವರನ್ನು 16 ಜನವರಿ 2011 ರಂದು ವಿವಾಹವಾದರು.<ref>{{cite web|url=https://timesofindia.indiatimes.com/entertainment/regional/movie-details/news-interviews/shweta-mohan-ties-the-knot/articleshow/7310563.cms|title=Shweta Mohan ties the knot|work=TheTimesofIndia.com|date=18 January 2011}}</ref><ref>[https://web.archive.org/web/20140116160801/http://www.newindianexpress.com/cities/kochi/article550048.ece A Timeless Melody], ''The New Indian Express'' (25 June 2012). Retrieved on 25 August 2019.</ref> ಈ ದಂಪತಿಗೆ ಒಬ್ಬ ಪುತ್ರಿಯಿದ್ದಾರೆ.<ref name=mathrubhumi>[http://english.mathrubhumi.com/movies-music/movie-news/singer-shweta-mohan-blessed-with-a-baby-girl-1.2427172 Singer Shweta Mohan blessed with a baby n girl named Sreshta] {{Webarchive|url=https://web.archive.org/web/20180521122805/http://english.mathrubhumi.com/movies-music/movie-news/singer-shweta-mohan-blessed-with-a-baby-girl-1.2427172 |date=21 May 2018 }}. English.mathrubhumi.com (1 December 2017). Retrieved on 2019-08-25.</ref>
==ಧ್ವನಿಮುದ್ರಿಕೆ==
=== ಶ್ವೇತಾ ಮೋಹನ್ ಅವರು ರೆಕಾರ್ಡ್ ಮಾಡಿದ ಕನ್ನಡ ಹಾಡುಗಳ ಪಟ್ಟಿ ===
[[File:SwethaMohan.jpg|thumb|200px|ಶ್ವೇತಾ ಮೋಹನ್]]
'''ಶ್ವೇತಾ ಮೋಹನ್''' (ಜನನ 19 ನವೆಂಬರ್ 1985) ಭಾರತೀಯ ಹಿನ್ನೆಲೆ ಗಾಯಕಿ. ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿಗಳನ್ನು (ದಕ್ಷಿಣ), ಒಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ, ಮತ್ತು ಒಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಲನಚಿತ್ರ ಸಂಗೀತ ಮತ್ತು ಆಲ್ಬಂಗಳಿಗೆ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಅವರ ಸ್ಫೂರ್ತಿಗಳಲ್ಲಿ ಸುಜಾತಾ ಮೋಹನ್ (ಅವರ ತಾಯಿ), ಅಲ್ಕಾ ಯಾಗ್ನಿಕ್ ಮತ್ತು ಕೆ.ಎಸ್. ಚಿತ್ರಾ ಸೇರಿದ್ದಾರೆ.<ref>{{cite news|url=https://timesofindia.indiatimes.com/entertainment/hindi/music/news/Shweta-Mohan-is-happy/etarticleshow/5513702.cms|archive-url=https://web.archive.org/web/20110811062128/http://articles.timesofindia.indiatimes.com/2010-01-30/news-and-interviews/28126139_1_awards-galore-ashwin-music|url-status=live|archive-date=11 August 2011|title=Shweta Mohan is happy|date=30 January 2010|work=[[The Times of India]]|access-date=7 May 2010|first1=Sindhu|last1=Vijayakumar}}</ref>
{{TOC limit|2}}
== ಚಲನಚಿತ್ರ ಹಾಡುಗಳು ==
===2007===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಸಜಿನಿ''
|1
| "ಲವ್ಲಿ ಲಂಡನ್"
|ಎ. ಆರ್. ರೆಹಮಾನ್
|ಬೆಲ್ಲೂರಿ ರಾಮಮೂರ್ತಿ
|
|-
!''ರೈಟ್ ಆದ್ರೆ''
|2
| "ಗುಸು ಗುಸು"
|ನೀಲ್
|ಮಯೂರ
|ನರೇಶ್ ಅಯ್ಯರ್
|}
===2008===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಅರಮನೆ''
|3
| "ಪಾತ್ರ ಬರೇಯಾಲ"
|ಗುರುಕಿರಣ್
|rowspan="2"|ಕವಿರಾಜ್
|rowspan="3"|ಕಾರ್ತಿಕ್
|-
! rowspan="2" |''ಪುಕ್''
|4
| "ನಾವಿರುವಾಡು ಹೀಗೆ"
|rowspan="2"|ಜೆ ರವಿರಾಜ್
|-
|5
| "ಯೆಡಯೆಂತ"
|ಹಂಸಲೇಖ
|-
!''ಅಂಜದಿರು''
|6
| "ಮನಸ್ಸಾಲು ಮನಸ್ಸಾಲು"
|ಸುಂದರ್ ಸಿ ಬಾಬು
|ಪಂಚ ಜನ್ಯ
|
|-
!''ನನ್ನುಸಿರೆ''
|7
| "ನನ್ನುಸಿರೆ"
|ಪ್ರೇಮ್ಜಿ ಗಂಗೈ ಅಮರನ್
|ಹೃದಯ ಶಿವ
|ನವೀನ್
|}
===2010===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
! rowspan="2" |''ಪ್ರಿಥ್ವಿ''
|8
| "ಹೆಜ್ಜೆಗೊಂಡು ಹೆಜ್ಜೆ"
|rowspan="2"|ಮಣಿಕಾಂತ್ ಕದ್ರಿ
|rowspan="3"|ಕವಿರಾಜ್
|rowspan="2"|ಕ್ಲಿಂಟನ್ ಸೆರೆಜೊ, ಬೆನ್ನಿ ದಯಾಲ್
|-
|9
| "ಹೆಜ್ಜೆಗೊಂಡು ಹೆಜ್ಜೆ (ರೀಮಿಕ್ಸ್)"
|-
!''ಗಾಣ ಬಜಾಣ''
|10
| "ಹೊಸದೊಂದು ಹೆಸರಿಡು"
|ಜೋಶುವಾ ಶ್ರೀಧರ್
|ಕಾರ್ತಿಕ್
|-
!''ಏನೋ ಒಂತಾರ''
|11
| "ದಿಲ್ಕುಶ್"
|ವಿ. ಹರಿಕೃಷ್ಣ
|ಜಯಂತ್ ಕೈಕಿನಿ
|ಸೋನು ನಿಗಮ್
|-
!''ಪರೋಲ್''
|12
| "ಜಡುವಾಗಿ"
|ಬಾಲಾಜಿ ಕೆ ಮಿತ್ರನ್
|ಎಸ್. ಬಹುಬಲಿ
|ರಾಜೇಶ್ ಕೃಷ್ಣನ್
|-
!''ಜಮಾನ''
|13
| "ಏಳು ಏಳು ಜನ್ಮಕು"
|ಕಾರ್ತಿಕ್ ರಾಜ
|ಸುದರ್ಶನ್
|ಇಳಯರಾಜ
|}
===2011===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಡಬಲ್ ಡೆಕ್ಕರ್''
|14
| "ಕನಸೆ ನನ್ನ"
|ಜಯಪಾಲ್
|ರಾಮ್ ನಾರಾಯಣ್
|ಅನುರಾಧಾ ಶ್ರೀರಾಮ್
|-
! rowspan="2" |''ದೇವದಾಸ್''
|15
| "ಸಯ್ಯಾರೆ ಸಯ್ಯಾರೆ"
|rowspan="2"|ಜೋಶುವಾ ಶ್ರೀಧರ್
|rowspan="2"|ವಿ. ನಾಗೇಂದ್ರ ಪ್ರಸಾದ್
|rowspan="2"|ಕಾರ್ತಿಕ್
|-
|16
| "ಕೋ ಕೋ"
|}
===2012===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
! rowspan="2" |''ಗಾಡ್ಫಾದರ್''
|17
| "ಸಂಚಾರಿ ಮನಸು"
|rowspan="2"|ಎ ಆರ್ ರೆಹಮಾನ್
|rowspan="2"|ಕೆ. ಕಲ್ಯಾಣ್
|ನಿವಾಸ್
|-
|18
| "ಸರಿಗಮ ಸಂಗಮವೆ"
| ಮೇಘಾ
|-
!''ಅಜಂತ''
|19
| "ಹಕ್ಕ ಬಾ ಒಂದು"
|ಇಳಯರಾಜ
|ಕವಿರಾಜ್
|ತಿಪ್ಪು
|-
!''ನೀನೇನ ಭಗವಂತ''
|20
| "ಚಂದಮಾಮ"
|ಗಿರಿಧರ್ ದಿವಾನ್
|ಪ್ರೀತಮ್ ಸಾಗರ್
|ರಾಜೇಶ್ ಕೃಷ್ಣನ್
|}
===2013===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಆಂಥರಾಯ''
|21
| "ಏ ನಶೇಯು"
| rowspan="2" |ಗಿರಿಧರ್
|ವಿ. ನಾಗೇಂದ್ರ ಪ್ರಸಾದ್
|ಉದಿತ್ ನಾರಾಯಣ್
|-
!''ಜಿದ್ದಿ''
|22
|"ಒಲವದೆ ನೀನು"
|
|
|-
!''ಸಿಹಿಗಲಿ''
|23
| "ನಿನ್ನ ನೆನದಾರೆ"
|ಟಿ ರವಿರಾಜ್
|ಜಿ ಆರ್ ಶಂಕರ್
|ಸರಸ್ವತಿ ನಾಯ್ಡು
|}
===2014===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಬ್ರಹ್ಮ''
|24
| "ತುಂತ ತುಂತ"
|ಗುರುಕಿರಣ್
|ಕವಿರಾಜ್
|
|-
!''ಕಾ''
|25
|"ಶುರುವಾಯಿತು"(ಮಹಿಳಾ)
|ಆರ್ ಎಸ್ ಗಣೇಶ್ ನಾರಾಯಣ್
|
|
|}
===2015===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ದಕ್ಷ''
|26
|"ಮಮ್ಮಿ ಡ್ಯಾಡಿ"
|ಎಸ್. ನಾರಾಯಣ್
|
|ಹರಿಚರಣ್
|-
!''ಕೆಂದಸಂಪಿಗೆ''
|27
| "ಕನಸಲಿ ನಡೆಸು"
|ವಿ. ಹರಿಕೃಷ್ಣ
|ಜಯಂತ್ ಕೈಕಿನಿ
|ಸ್ವತಂತ್ರ
|-
!''ಕಟ್ಟೆ''
|28
|"ಸನಿಹಕೆ"
|ಎಸ್. ಎ. ರಾಜ್ಕುಮಾರ್
|ನಾಗೇಂದ್ರ ಪ್ರಸಾದ್
|ಉದಿತ್ ನಾರಾಯಣ್
|}
===2016===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಅಪೂರ್ವ''
|29
|"ಪ್ರಪಂಚವು"(ಯುಗಳ)
| colspan="2" |ವಿ ರವಿಚಂದ್ರನ್
|
|-
!''ದೊಡ್ಡಮನೆ ಹುಡ್ಗ''
|30
| "ಕನಸಿವನೆ ನೂರಾರು"
|ವಿ. ಹರಿಕೃಷ್ಣ
|ಜಯಂತ್ ಕೈಕಿನಿ
|ಕಾರ್ತಿಕ್
|}
===2017===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಸಾಹೇಬ''
|31
| "ಸಾಹೇಬ"
|ವಿ. ಹರಿಕೃಷ್ಣ
|rowspan="2"|ಕವಿರಾಜ್
|rowspan="2"|ಕಾರ್ತಿಕ್
|-
!''ಮಾರ್ಚ್ 22''
|32
| "ಎಂದಾರು"
|ಮಣಿಕಾಂತ್ ಕದ್ರಿ
|-
!''ಕಾಲೇಜ್ ಕುಮಾರ್''
|33
| "ಹಸಿ ಬಿಸಿ"
|ಅರ್ಜುನ್ ಜನ್ಯ
|ಜಯಂತ್ ಕೈಕಿನಿ
|ಸ್ವತಂತ್ರ
|-
!''ಜಾನಿ''
|34
| "ಎಲ್ಲೆಲು ನೀನೆ ನೀನೆ"
|ಜಾಸ್ಸಿ ಗಿಫ್ಟ್
|ಶಿವನಂಜೆ ಗೌಡ
|ಉದಿತ್ ನಾರಾಯಣ್
|}
===2018===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
! rowspan="2" |''ಧ್ವಜ''
|35
| "ಅಗಲೆ ಎಷ್ಟೋ"
|rowspan="2"|ಸಂತೋಷ್ ನಾರಾಯಣನ್
|ಕವಿರಾಜ್
|ಸೋನು ನಿಗಮ್
|-
|36
| "ಜೋಗಾಲುವೆ ಜೋಗಾಲುವೆ"
|ಕೆ. ಕಲ್ಯಾಣ್
|
|-
!''ಭೈರವ ಗೀತ''
|37
| "ಮೊದಲ ಮೊದಲ"
|ರವಿ ಶಂಕರ್
|ಅಜ್ಞಾತ
|ವಿಜಯ್ ಪ್ರಕಾಶ್
|-
!''ಎಡಕಲ್ಲು ಗುಡ್ಡದ ಮೇಲೆ''
|38
| "ಬೆಳಕಾಗಿದೆ"
|ಅಶಿಕ್ ಅರುಣ್
|ಗುರುಕಿರಣ್
|
|}
=== 2019 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಕುರುಕ್ಷೇತ್ರ''
|39
| "ಝುಮ್ಮ ಝುಮ್ಮ"
| ವಿ. ಹರಿಕೃಷ್ಣ
| rowspan="3" | ವಿ. ನಾಗೇಂದ್ರ ಪ್ರಸಾದ್
| ಅನುರಾಧಾ ಭಟ್
|-
! rowspan="2" |''ರಂಧಾವ''
|40
|"ಯೆಲ್ಲಿ ನೋಡಲಲ್ಲೆಲ್ಲ"(ಮಹಿಳಾ)
| rowspan="2" |ಶಶಾಂಕ್ ಶೇಷಗಿರಿ
|
|-
|41
|"ಯೆಲ್ಲಿ ನೋಡಲಲ್ಲೆಲ್ಲ"(ಯುಗಳ)
|ಶಶಾಂಕ್ ಶೇಷಗಿರಿ
|-
!''ನನ್ನ ಪ್ರಕಾರ''
|42
| "ನಾ ಆಕರ್ಷಿತಳಾಗಿರುವೆ"
| ಅರ್ಜುನ್ ರಾಮು
|ಕವಿರಾಜ್
| ಸಂತೋಷ್ ವೆಂಕಿ
|-
!''ಲುಂಗಿ''
|43
| "ನಾಗಬೇಡ ಅಂದೆ ನಾನು"
| ಅರ್ಜುನ್ ಲೆವಿಸ್
|
| ಅರ್ಮಾನ್ ಮಲಿಕ್
|}
=== 2021 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಸೀತಾಯನ''
| 44
|"ಸಂಜೆ ಗಗನ"
|ಪದ್ಮನಾಭ ಭಾರದ್ವಾಜ್
|ಕವಿರಾಜ್
| rowspan="2" |
|-
!''ಟಾಮ್ ಅಂಡ್ ಜೆರ್ರಿ''
|45
|"ಕಾಧಲ್"
|ಮ್ಯಾಥ್ಯೂಸ್ ಮನು
|ಅಥನ್ಯ ರಚನ
|}
=== 2023 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
! scope="col" width=18% | ಟಿಪ್ಪಣಿ(ಗಳು)
|-
!''ಶಾಕುಂತಲಂ''
| 46
|"ಮಧುರ ಗಾಥ ಬಾ"
|ಮಣಿ ಶರ್ಮಾ
|ವರದರಾಜ್ ಚಿಕ್ಕಬಳ್ಳಾಪುರ
|ಸತ್ಯ ಪ್ರಕಾಶ್
|rowspan="3"|ಡಬ್ ಮಾಡಿದ ಆವೃತ್ತಿ
|-
!''ಆದಿಪುರುಷ್''
|47
|"ನಿನ್ನ ಅರಸೋ ನನಗೆ"
|ಅಜಯ್-ಅತುಲ್
|ಪ್ರಮೋದ್ ಮರವಂತೆ
|ಕಾರ್ತಿಕ್
|-
!''ವಲತ್ತಿ''
|48
|"ಸನಿಹ"
|ವರುಣ್ ಸುನಿಲ್
|ಕಿರಣ್ ಕಾವೇರಪ್ಪ
|ಅಯ್ರಾನ್
|-
!''ಬರೀ 10% ಬಡ್ಡಿ''
|49
|"ನಾನು ಮೈಸೂರು ಮಲ್ಲಿಗೆ"
|ಡಾ. ನಾರಾಯಣ್ ಸ್ವಾಮಿ
|ಡಾ. ನಾರಾಯಣ್ ಸ್ವಾಮಿ
|
|-
|}
=== 2024 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ರೋನಿ-ದಿ ರೂಲರ್''
| 50
|"ಸುಗುಣ ಸುಗುಣ"
|ಕದ್ರಿ ಮಣಿಕಾಂತ್
|ಪ್ರಮೋದ್ ಮರವಂತೆ
|
|-
!''ರುದ್ರ ಗರುಡ ಪುರಾಣ''
| 51`
|"ಕಣ್ಣ ಮುಂದೆ ಬಂದು"
|ಕೃಷ್ಣ ಪ್ರಸಾದ್
|ಚಿನ್ಮಯ್ ಭಾವಿಕೇರಿ
|ಕಪಿಲ್ ಕಪಿಲನ್
|-
|}
=== 2025 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ರುದ್ರ ಗರುಡ ಪುರಾಣ''
| 52
|"ಕಣ್ಣ ಮುಂದೆ ಬಂದು"
|ಕೆಪಿ
|ಚಿನ್ಮಯ್ ಭಾವಿಕೇರಿ
|ಕಪಿಲ್ ಕಪಿಲನ್
|-
|}
=== 2026 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ರಣಬಾಳಿ'' (ಡಿ)
|53
|"ಏನಯ್ಯ ಸಾಮಿ"
|ಅಜಯ್-ಅತುಲ್
|ವರದರಾಜ್ ಚಿಕ್ಕಬಳ್ಳಾಪುರ
|ಕಾರ್ತಿಕ್
|-
!''ಲೈಫ್ ಟುಡೇ''
|54
|"ನೀನೆ ನೀನೆ"
|ಶ್ರೀಧರ್ ವಿ ಸಂಭ್ರಮ್
|ಕವಿರಾಜ್
|
|-
|}
== ಉಲ್ಲೇಖಗಳು ==
<references />
== ಬಾಹ್ಯ ಕೊಂಡಿಗಳು ==
* [https://www.raaga.com/kannada/singer/Shweta-Mohan ರಾಗದಲ್ಲಿ ಶ್ವೇತಾ ಮೋಹನ್ ಕನ್ನಡ ಹಾಡುಗಳು]
[[Category:ಶ್ವೇತಾ ಮೋಹನ್ ರೆಕಾರ್ಡ್ ಮಾಡಿದ ಹಾಡುಗಳ ಪಟ್ಟಿಗಳು|ಕನ್ನಡ]]
[[Category:ಕನ್ನಡ ಭಾಷೆಯ ಹಾಡುಗಳು|ಮೋಹನ್, ಶ್ವೇತಾ]]
== ದೂರದರ್ಶನ ==
{| class="wikitable sortable"
|+ ದೂರದರ್ಶನ ಕಾರ್ಯಕ್ರಮಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! scope="col" | ಚಾನೆಲ್
! scope="col" class="unsortable" |ಟಿಪ್ಪಣಿಗಳು
|-
|2011–2014
|''ಬಡೆ ಅಚ್ಛೆ ಲಗ್ತೇ ಹೈನ್''
|ಗಾಯಕಿ
|ಸೋನಿ ಟೆಲಿವಿಷನ್
|ತಮಿಳಿನಲ್ಲಿ ಶೀರ್ಷಿಕೆ ಗೀತೆ ಹಾಡಿದ್ದಾರೆ
|-
| rowspan="2" | 2015
|''ಮ್ಯೂಸಿಕ್ ಇಂಡಿಯಾ''
| style="text-align:center;" | ತೀರ್ಪುಗಾರ
|ಏಷ್ಯಾನೆಟ್
|ಗೋಪಿ ಸುಂದರ್, ದೀಪಕ್ ದೇವ್ ಅವರೊಂದಿಗೆ ಕಾರ್ಯಕ್ರಮದ ಸೆಮಿಫೈನಲ್ ಮತ್ತು ಫೈನಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
|-
|''ಬೋಲ್ ಬೇಬಿ ಬೋಲ್''
| style="text-align:center;" | ತೀರ್ಪುಗಾರ
|ಸೂರ್ಯ ಟಿವಿ
|ಗೋಪಿ ಸುಂದರ್ ಅವರೊಂದಿಗೆ
|-
| rowspan="1" | 2018
|''ಸೂಪರ್ ಸಿಂಗರ್ 6''
| style="text-align:center;" |ತೀರ್ಪುಗಾರ
|ವಿಜಯ್ ಟಿವಿ
|ಪಿ. ಉನ್ನಿಕೃಷ್ಣನ್, ಅನುರಾಧಾ ಶ್ರೀರಾಮ್ ಮತ್ತು ಬೆನ್ನಿ ದಯಾಲ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
| rowspan="1" |2019
|''ಸೂಪರ್ ಸಿಂಗರ್ 7''
|ತೀರ್ಪುಗಾರ
|ವಿಜಯ್ ಟಿವಿ
|ಪಿ. ಉನ್ನಿಕೃಷ್ಣನ್, ಅನುರಾಧಾ ಶ್ರೀರಾಮ್ ಮತ್ತು ಬೆನ್ನಿ ದಯಾಲ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
| rowspan="1" |2020
|ಸೂಪರ್ ಸಿಂಗರ್ ಚಾಂಪಿಯನ್ ಆಫ್ ಚಾಂಪಿಯನ್ಸ್
|ತೀರ್ಪುಗಾರ
|ಸ್ಟಾರ್ ವಿಜಯ್
|
|-
|2021
|''ಸೂಪರ್ ಸಿಂಗರ್ 8''
|ತೀರ್ಪುಗಾರ
|ವಿಜಯ್ ಟಿವಿ
|ಪಿ. ಉನ್ನಿಕೃಷ್ಣನ್, ಅನುರಾಧಾ ಶ್ರೀರಾಮ್ ಮತ್ತು ಬೆನ್ನಿ ದಯಾಲ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2022–2023
|''ಸೂಪರ್ ಸಿಂಗರ್ 9''
|ತೀರ್ಪುಗಾರ
|ವಿಜಯ್ ಟಿವಿ
|ಪಿ. ಉನ್ನಿಕೃಷ್ಣನ್, ಅನುರಾಧಾ ಶ್ರೀರಾಮ್ ಮತ್ತು ಬೆನ್ನಿ ದಯಾಲ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2023
|ಸೂಪರ್ ಸಿಂಗರ್ 3 (ತೆಲುಗು)
|ತೀರ್ಪುಗಾರ
|ಸ್ಟಾರ್ ಮಾ
|ರಾಹುಲ್ ಸಿಪ್ಲಿಗುಂಜ್, ಅನಂತ ಶ್ರೀರಾಮ್ ಮತ್ತು ಮಂಗ್ಲಿ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2024
|''ಸೂಪರ್ ಸಿಂಗರ್ 10''
|ಅತಿಥಿ
|ಸ್ಟಾರ್ ವಿಜಯ್
|ತಮ್ಮ ತಾಯಿ ಸುಜಾತಾ ಮೋಹನ್ ಅವರ ಜನ್ಮದಿನವನ್ನು ಆಚರಿಸಲು.
|-
|2024
|''ಸಾ ರೇ ಗಾ ಮಾ ಪಾ ಸೀನಿಯರ್ಸ್ 4''
|ಅತಿಥಿ ತೀರ್ಪುಗಾರ
|ಜೀ ತಮಿಳು
|ಮೆಗಾ ಆಡಿಷನ್ಗಳಿಗಾಗಿ ಕೆ. ಎಸ್. ರವಿಕುಮಾರ್ ಅವರೊಂದಿಗೆ ಅತಿಥಿ ತೀರ್ಪುಗಾರ
|-
|2024
|''ಸಾ ರೇ ಗಾ ಮಾ ಪಾ ಲಿಲ್ ಚಾಂಪ್ಸ್ 4''
| rowspan="2" |ತೀರ್ಪುಗಾರ
| rowspan="2" |ಜೀ ತಮಿಳು
|ಶ್ರೀನಿವಾಸ್, ಎಸ್. ಪಿ. ಚರಣ್ ಮತ್ತು ಸೈಂಧವಿ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2025
|''ಸಾ ರೇ ಗಾ ಮಾ ಪಾ ಸೀನಿಯರ್ಸ್ 5''
|ಶ್ರೀನಿವಾಸ್, ವಿಜಯ್ ಪ್ರಕಾಶ್, ಕಾರ್ತಿಕ್, ಸೈಂಧವಿ ಮತ್ತು ಎಸ್. ಪಿ. ಚರಣ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2025
|''ಸಾ ರೇ ಗಾ ಮಾ ಪಾ ಕೇರಳಂ ಸೀಸನ್ 3''
| ಅತಿಥಿ
| ಜೀ ಕೇರಳಂ
|
|-
|2025
|''ಸಾ ರೇ ಗಾ ಮಾ ಪಾ ಲಿಲ್ ಚಾಂಪ್ಸ್ 5''
|ತೀರ್ಪುಗಾರ
|ಜೀ ತಮಿಳು
|ಶ್ರೀನಿವಾಸ್, ಎಸ್. ಪಿ. ಚರಣ್ ಮತ್ತು ಸೈಂಧವಿ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|}
==ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು==
# ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ – ತಮಿಳು 2018, 2017, 2016 & 2025
# ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ – ಮಲಯಾಳಂ 2018, 2017, 2016.
# ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ವಿಜಯ್ ಪ್ರಶಸ್ತಿ 2014, 2012, 2009.
# ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ IIFA ಉತ್ಸವಂ ಪ್ರಶಸ್ತಿ ಕನ್ನಡ 2016.
# ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ (2023)
=== ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ===
'''ಶ್ವೇತಾ ಮೋಹನ್''' (ಜನನ 19 ನವೆಂಬರ್ 1985) ಭಾರತೀಯ ಹಿನ್ನೆಲೆ ಗಾಯಕಿ. ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಐದು ಫಿಲ್ಮ್ಫೇರ್ ಪ್ರಶಸ್ತಿಗಳನ್ನು (ದಕ್ಷಿಣ), ಒಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಒಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಲನಚಿತ್ರ ಸಂಗೀತ ಮತ್ತು ಆಲ್ಬಂಗಳಿಗೆ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಅವರ ಸ್ಫೂರ್ತಿಗಳಲ್ಲಿ ಸುಜಾತಾ ಮೋಹನ್ (ಅವರ ತಾಯಿ), ಶ್ರೇಯಾ ಘೋಷಾಲ್, ಅಲ್ಕಾ ಯಾಗ್ನಿಕ್, ಸಾಧನಾ ಸರ್ಗಮ್ ಮತ್ತು ಕೆ.ಎಸ್. ಚಿತ್ರಾ ಸೇರಿದ್ದಾರೆ.<ref>{{cite news|url=https://timesofindia.indiatimes.com/entertainment/hindi/music/news/Shweta-Mohan-is-happy/etarticleshow/5513702.cms|archive-url=https://web.archive.org/web/20110811062128/http://articles.timesofindia.indiatimes.com/2010-01-30/news-and-interviews/28126139_1_awards-galore-ashwin-music|url-status=live|archive-date=11 August 2011|title=Shweta Mohan is happy|date=30 January 2010|work=[[The Times of India]]|access-date=7 May 2010|first1=Sindhu|last1=Vijayakumar}}</ref>
==== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ====
'''[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]]'''ಗಳು [[ಕೇರಳದ ಚಲನಚಿತ್ರ|ಕೇರಳದಲ್ಲಿ ನಿರ್ಮಿಸಲಾದ ಚಲನಚಿತ್ರಕ್ಕಾಗಿ]] ನೀಡುವ ಚಲನಚಿತ್ರ ಪ್ರಶಸ್ತಿಗಳಾಗಿವೆ. ಪ್ರಶಸ್ತಿಗಳನ್ನು 1998 ರಿಂದ [[ಕೇರಳ ರಾಜ್ಯ ಚಲಚಿತ್ರ ಅಕಾಡೆಮಿ]]ಯು ಭಾರತದ ಕೇರಳ ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಪರವಾಗಿ ನೀಡುತ್ತದೆ. ಶ್ವೇತಾ ಅವರು ಒಂದು ಪ್ರಶಸ್ತಿಯನ್ನು ಪಡೆದಿದ್ದಾರೆ.
{| class="wikitable plainrowheaders" width="100%"
! scope="col" width=5% | ವರ್ಷ
! scope="col" width=39% | ಚಿತ್ರ
! scope="col" width=39% | ನಾಮನಿರ್ದೇಶನಗೊಂಡ ಹಾಡು
! scope="col" width=15% | ಫಲಿತಾಂಶ
! scope="col" width=2% | ಉಲ್ಲೇಖ
|-
! scope="row"| 2007
|''ನಿವೇದ್ಯಂ''
| "ಕೊಲಕ್ಕುಳಲ್ ವಿಳಿ ಕೇಟ್ಟೋ"
| {{won}}
|
|}
==== ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ====
'''[[ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ]]'''ಗಳು ಭಾರತದಲ್ಲಿ [[ತಮಿಳು ಚಿತ್ರಗಳಿಗೆ]] ನೀಡಲಾಗುವ ಅತ್ಯಂತ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಾಗಿವೆ. ಅವುಗಳನ್ನು ಪ್ರತಿವರ್ಷ ಪ್ರತಿಭೆಗಳನ್ನು ಗೌರವಿಸಲು ಮತ್ತು [[ದಕ್ಷಿಣ ಭಾರತೀಯ]] [[ಚಲನಚಿತ್ರೋದ್ಯಮ]]ಕ್ಕೆ ಪ್ರೋತ್ಸಾಹ ಮತ್ತು ಪ್ರೇರಣೆಯನ್ನು ನೀಡಲು '''[[ತಮಿಳುನಾಡು ಸರ್ಕಾರ]]'''ವು ನೀಡುತ್ತದೆ. ಶ್ವೇತಾ ಅವರು ಒಂದು ಪ್ರಶಸ್ತಿಯನ್ನು ಪಡೆದಿದ್ದಾರೆ.
{| class="wikitable plainrowheaders" width="100%"
! scope="col" width=5% | ವರ್ಷ
! scope="col" width=39% | ಚಿತ್ರ
! scope="col" width=39% | ನಾಮನಿರ್ದೇಶನಗೊಂಡ ಹಾಡು
! scope="col" width=15% | ಫಲಿತಾಂಶ
! scope="col" width=2% | ಉಲ್ಲೇಖ
|-
! scope="row"|2011
| '' ಬಹು ಚಿತ್ರಗಳು''
| " ವಿವಿಧ ಹಾಡುಗಳು "
| {{won}}
|
|}
==== ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ====
'''[[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]]'''ವು ವಾರ್ಷಿಕ '''[[ಫಿಲ್ಮ್ಫೇರ್ ಪ್ರಶಸ್ತಿ]]'''ಗಳ [[ದಕ್ಷಿಣ ಭಾರತ]] ವಿಭಾಗವಾಗಿದ್ದು, '''[[ದಿ ಟೈಮ್ಸ್ ಗ್ರೂಪ್]]''' ಸಂಸ್ಥೆಯು [[ದಕ್ಷಿಣ ಭಾರತೀಯ ಚಲನಚಿತ್ರೋದ್ಯಮ]]ದ ವೃತ್ತಿಪರರ ಕಲಾತ್ಮಕ ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸಲು ಪ್ರಸ್ತುತಪಡಿಸುತ್ತದೆ. ಶ್ವೇತಾ ಅವರು ಫಿಲ್ಮ್ಫೇರ್ ದಕ್ಷಿಣದಿಂದ ಪ್ರಶಸ್ತಿ ಪಡೆದ ಮತ್ತು ನಾಮನಿರ್ದೇಶನಗೊಂಡ ಗಾಯಕಿಯಾಗಿದ್ದು, 3 ಭಾಷೆಗಳಲ್ಲಿ 20 ನಾಮನಿರ್ದೇಶನಗಳಿಂದ 6 ಪ್ರಶಸ್ತಿಗಳನ್ನು ಪಡೆದಿದ್ದಾರೆ.
{| class="wikitable plainrowheaders" width="100%"
! scope="col" width=5% | ವರ್ಷ
! scope="col" width=39% | ಭಾಷೆ
! scope="col" width=39% | ಚಿತ್ರ
! scope="col" width=39% | ನಾಮನಿರ್ದೇಶನಗೊಂಡ ಹಾಡು
! scope="col" width=15% | ಫಲಿತಾಂಶ
! scope="col" width=2% | ಉಲ್ಲೇಖ
|-
! scope="row" |''2008''
|ಮಲಯಾಳಂ
|''ಓರೆ ಕಡಲ್''
|"ಯಮುನಾ ವೇರುಥೆ"
| {{Won}}
|
|-
! scope="row" |''2009''
|ತಮಿಳು
|''ಪಿರಿವೋಮ್ ಸಂಧಿಪೋಮ್''
|"ಕಂಡೇನ್ ಕಂಡೇನ್"
| rowspan="5" {{Nominated}}
|
|-
! scope="row" rowspan="2"|''2010''
|rowspan="3"| ಮಲಯಾಳಂ
|''ಮೋಜ್ & ಕ್ಯಾಟ್''
|"ತೊಟ್ಟಾಲ್ ಪೂಕ್ಕುಂ"
|
|-
|''ರಾಬಿನ್ಹುಡ್''
|"ಪ್ರಿಯಾನು ಮಾತ್ರಂ"
|
|-
! scope="row" |''2011''
|''ಒರು ನಾಳ್ ವರುಂ''
|"ಮಾವಿನ್ ಚೋಟ್ಟಿಲೆ"
|
|-
! scope="row" |''2012''
|ತಮಿಳು
|''180''
|"ನೀ ಕೂರಿನಾಲ್"
|
|-
! scope="row" |''2013''
|rowspan="2"| ಮಲಯಾಳಂ
|''ಅರಿಕೆ''
|"ಶ್ಯಾಮ ಹರೇ"
| {{Won}}
|
|-
! scope="row" rowspan="2" |''2015''
|''ಒಟ್ಟಮಂದರಂ''
|"ಒನ್ನನಾಂ ಕೊಂಬಾತೆ"
| rowspan="3" {{Nominated}}
|
|-
|ತಮಿಳು
|''ಕಾವಿಯ ತಲೈವನ್''
|"ಯಾರುಮಿಲ್ಲ "
|
|-
! scope="row" rowspan="2" |''2016''
|ಮಲಯಾಳಂ
|''ಸು ಸು ಸುಧಿ ವಾತ್ಮೀಕಂ''
|"ಕಯಾಂಬೂ ನಿರಮಾಯಿ"
|
|-
|ತಮಿಳು
|''ತಂಗಮಗನ್''
|"ಎನ್ನ ಸೊಲ್ಲ"
| {{Won}}
|
|-
! scope="row" rowspan="2" |''2017''
|ಮಲಯಾಳಂ
|''ವೈಟ್''
|"ಒರುವೇಳ ವೀಂಡುಮೀ"
| {{Nominated}}
|
|-
|ತಮಿಳು
|''ಕಬಾಲಿ''
|"ಮಾಯನಾಧಿ"
| {{Won}}
|
|-
! scope="row" rowspan="2" |''2018''
|ಮಲಯಾಳಂ
|''ಮುಂತಿರಿವಳ್ಳಿಕಲ್ ತಾಳಿರ್ಕ್ಕುಂಬೋಲ್''
|"ಒರು ಪುಳಯಾರಿಕಿಲ್"
|rowspan="4" {{Nominated}}
|
|-
|ತಮಿಳು
|''ಮೆರ್ಸಲ್''
|"ಮಾಚೋ"
|
|-
! scope="row" |''2022''
|ಮಲಯಾಳಂ
|''ವರಣೆ ಅವಶ್ಯಮುಂಡ್''
|"ಮುತ್ತುನ್ನೆ ಕಣ್ಣುಕಳಿಲ್"
|
|-
! scope="row" |''2023''
|ಮಲಯಾಳಂ
|''ಮಲಯಂಕುಂಜು''
|"ಮನ್ನುಂ ನಿರಂಜೆ"
|
|-
! scope="row" |''2024''
|ತೆಲುಗು
|''ಸರ್''
|"ಮಸ್ತಾರು ಮಸ್ತಾರು"
|{{won}}
|
|-
! scope="row" rowspan ="2"|''2025''
|ತಮಿಳು
|''ಅಮರನ್''
|"ಹೇ ಮಿನ್ನಾಲೆ"
|{{won}}
|
|-
|ಮಲಯಾಳಂ
|''ರೈಫಲ್ ಕ್ಲಬ್''
|"ಗಂಧರ್ವ ಗಾನಂ"
|{{Nominated}}
|
|}
==== ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ====
'''[[ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]'''ಗಳು, SIIMA ಪ್ರಶಸ್ತಿಗಳು ಎಂದೂ ಕರೆಯಲ್ಪಡುತ್ತವೆ, ಇದು 2012 ರಲ್ಲಿ ಪ್ರಾರಂಭವಾಯಿತು, ಇದು [[ದಕ್ಷಿಣ ಭಾರತೀಯ ಚಲನಚಿತ್ರೋದ್ಯಮ]]ದ ಕಲಾತ್ಮಕ ಮತ್ತು ತಾಂತ್ರಿಕ ಸಾಧನೆಗಳಿಗೆ ಪ್ರಶಸ್ತಿಗಳನ್ನು ನೀಡುತ್ತದೆ. ಶ್ವೇತಾ ಅವರು 21 ನಾಮನಿರ್ದೇಶನಗಳಿಂದ ಒಂದು ಪ್ರಶಸ್ತಿಯನ್ನು ಪಡೆದಿದ್ದಾರೆ.
{| class="wikitable plainrowheaders" width="100%"
! scope="col" width=5% | ವರ್ಷ
! scope="col" width=39% | ಭಾಷೆ
! scope="col" width=39% | ಚಿತ್ರ
! scope="col" width=39% | ನಾಮನಿರ್ದೇಶನಗೊಂಡ ಹಾಡು
! scope="col" width=15% | ಫಲಿತಾಂಶ
! scope="col" width=2% | ಉಲ್ಲೇಖ
|-
! scope="row" rowspan="2" | 2013
|ಮಲಯಾಳಂ
|''ಅರಿಕೆ''
|"ಶ್ಯಾಮ ಹರೇ"
| rowspan="8" {{nom}}
|
|-
|ತಮಿಳು
|''3''
|"ನೀ ಪಾರ್ಥ"
|
|-
! scope="row" rowspan="2 | 2014
|ಮಲಯಾಳಂ
|''ಕಧಾವೀಡು''
|"ಕಟ್ಟಿಲೆ ಪೂಮನಂ"
|
|-
|ತಮಿಳು
|''ಮರಿಯನ್''
|"ಇನ್ನುಂ ಕೊಂಜಂ"
|
|-
! scope="row" rowspan="2" | 2015
|ಮಲಯಾಳಂ
|''ಒಟ್ಟಮಂದರಂ''
|"ಒನ್ನನಾಂ ಕೊಂಬಾತೆ"
|
|-
|ತಮಿಳು
|''ಕಾವಿಯ ತಲೈವನ್''
|"ಯಾರುಮಿಲ್ಲ"
|
|-
! scope="row" rowspan="3" | 2016
|ಮಲಯಾಳಂ
|''ಅನಾರ್ಕಲಿ''
|"ಏ ತನುಥ"
|
|-
|ಕನ್ನಡ
|''ಕೆಂದಸಂಪಿಗೆ''
|"ಕನಸಲಿ ನಡೆಸು"
|
|-
|ತಮಿಳು
|''ತಂಗಮಗನ್''
|"ಎನ್ನ ಸೊಲ್ಲ"
|{{won}}
|
|-
! scope="row" | 2017
|ಮಲಯಾಳಂ
|''ವೈಟ್''
|"ಒರುವೇಳ ವೀಂಡುಮೀ"
| rowspan="12" {{nom}}
|
|-
! scope="row" rowspan="2" | 2018
|ಮಲಯಾಳಂ
|''ಒರು ಸಿನೆಮಕ್ಕಾರನ್''
|"ಒಳುಕಿ ಒಳುಕಿ"
|
|-
|rowspan="2" |ತಮಿಳು
|''ಪಾ. ಪಾಂಡಿ''
|"ಪಾರ್ಥೇನ್"
|
|-
! scope="row" rowspan="1" | 2019
|''ನಿಮಿರ್''
|"ಪೂವುಕ್ಕು"
|
|-
! scope="row" rowspan="2" | 2021
| rowspan="4" | ಮಲಯಾಳಂ
|''ವಿಜಯ್ ಸೂಪರಮ್ ಪೌರ್ಣಮಿಯಮ್''
|"ಏಥೋ ಮಝಯಿಲ್"
|
|-
|''ಕಪ್ಪೇಲ''
|"ಕಣ್ಣಿಲ್"
|
|-
! scope="row" rowspan="1" | 2022
|''ಚತುರ್ ಮುಖಂ''
|"ಮಾಯಕೊಂಡು"
|
|-
! scope="row" rowspan="1" | 2023
|''ಮಲಯಂಕುಂಜು''
|"ಮನ್ನುಂ ನಿರಂಜೆ"
|
|-
! scope="row" rowspan="2" | 2024
|ತಮಿಳು
|''ವಾಥಿ''
|"ವ ವಾಥಿ"
|
|-
|ತೆಲುಗು
|''ಸರ್''
|"ಮಸ್ತಾರು ಮಸ್ತಾರು"
|
|-
! scope="row" rowspan="2" | 2025
|ತಮಿಳು
|''ಅಮರನ್''
|"ಹೇ ಮಿನ್ನಾಲೆ"
|
|-
|ತೆಲುಗು
|''ಲಕ್ಕಿ ಬಾಸ್ಕರ್''
|"ಶ್ರೀಮತಿ ಗಾರು"
|
|-
|}
==== ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು ====
'''[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿ]]'''ಯು [[ಮಲಯಾಳಂ ಚಿತ್ರಗಳಿಗೆ]] '''[[ಏಷ್ಯಾನೆಟ್ (ಟಿವಿ ಚಾನೆಲ್)|ಏಷ್ಯಾನೆಟ್]]''' ಪ್ರತಿವರ್ಷ ನೀಡುವ ಪ್ರಶಸ್ತಿ ಸಮಾರಂಭವಾಗಿದೆ, ಇದು [[ಕೇರಳ]] ರಾಜ್ಯದ [[ದಕ್ಷಿಣ ಭಾರತ|ದಕ್ಷಿಣ-ಭಾರತೀಯ]] [[ಮಲಯಾಳಂ]]-ಭಾಷೆಯ ದೂರದರ್ಶನ ಜಾಲವಾಗಿದೆ. ಶ್ವೇತಾ ಅವರು ಮೂರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2008
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ನಾವೆಲ್
|ಕುಯಿಲೆ
|rowspan="3"{{won}}
|-
|2014
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಒಟ್ಟಮಂದರಂ
|ಒನ್ನನಾಂ ಕೊಂಬಾತೆ
|-
|2017
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಮುಂತಿರಿವಳ್ಳಿಕಲ್ ತಾಳಿರ್ಕ್ಕುಂಬೋಲ್
|ಒರು ಪುಳಯಾರಿಕಿಲ್
|}
==== ವನಿತಾ ಚಲನಚಿತ್ರ ಪ್ರಶಸ್ತಿಗಳು ====
'''ವನಿತಾ ಚಲನಚಿತ್ರ ಪ್ರಶಸ್ತಿ'''ಗಳನ್ನು [[ಭಾರತ]]ದ [[ಮಲಯಾಳ ಮನೋರಮ]] ಗುಂಪಿನ ''[[ವನಿತಾ]]'' ನಿಯತಕಾಲಿಕೆಯು [[ಕೇರಳ]] ರಾಜ್ಯದಲ್ಲಿ ಪ್ರತಿವರ್ಷ ಪ್ರದಾನ ಮಾಡುತ್ತದೆ.<ref>{{Cite news|url=http://english.manoramaonline.com/entertainment/entertainment-news/vanitha-film-awards-mohanlal-manju-warrier-win.html|title=Vanitha-Cera film awards 2017: Mohanlal, Manju Warrier win top honors|newspaper=OnManorama|access-date=2017-02-08}}</ref> [[ಮಲಯಾಳಂ ಭಾಷೆ]] ಚಲನಚಿತ್ರೋದ್ಯಮದಲ್ಲಿ ಕಲಾತ್ಮಕ ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸಲು ಪ್ರಶಸ್ತಿ ಸಮಾರಂಭವನ್ನು ಸ್ಥಾಪಿಸಲಾಗಿದೆ. 1998 ರಿಂದ ಪ್ರತಿವರ್ಷ ನಡೆಯುತ್ತದೆ ಮತ್ತು ಪ್ರಸಾರವಾಗುತ್ತದೆ. [[ಶ್ವೇತಾ ಮೋಹನ್]] ಅವರು ಎರಡು ವಿಭಿನ್ನ ಹಾಡುಗಳಿಗೆ ಒಂದು ಪ್ರಶಸ್ತಿಯನ್ನು ಗೆದ್ದಿದ್ದಾರೆ.
{| class="wikitable sortable"
!ವರ್ಷ
!ವರ್ಗ
!ಚಿತ್ರ(ಗಳು)
!ಹಾಡು(ಗಳು)
!ಫಲಿತಾಂಶ
|-
|row rowspan="2"|2017
|row rowspan="2"|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಬಾಹುಬಲಿ 2: ದಿ ಕನ್ಕ್ಲೂಷನ್
|ಕಣ್ಣ ನೀ ಉರಂಗೇಡ
|rowspan="2"{{won}}
|-
|ಮುಂತಿರಿವಳ್ಳಿಕಲ್ ತಾಳಿರ್ಕ್ಕುಂಬೋಲ್
|ಒರು ಪುಳಯಾರಿಕಿಲ್
|}
==== ಅಮೃತ ಟಿವಿ ಚಾನೆಲ್ ಪ್ರಶಸ್ತಿ ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2007
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ನಿವೇದ್ಯಂ
|ಕೊಲಕ್ಕುಳಲ್
| {{won}}
|}
==== ವಿ4 ಮನರಂಜಕರ ಪ್ರಶಸ್ತಿ ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2014
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಕಾವಿಯ ತಲೈವನ್
| ಯಾರುಮಿಲ್ಲ ತನಿ
| {{won}}
|}
==== ಜೈಹಿಂದ್ ಟಿವಿ ಚಲನಚಿತ್ರ ಪ್ರಶಸ್ತಿಗಳು ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2010
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಒರು ನಾಳ್ ವರುಂ
| ಮಾವಿನ್ ಚೋಟ್ಟಿಲೆ
| {{won}}
|}
==== ಏಷ್ಯಾವಿಷನ್ ಚಲನಚಿತ್ರ ಪ್ರಶಸ್ತಿಗಳು ====
'''[[ಏಷ್ಯಾವಿಷನ್ ಪ್ರಶಸ್ತಿಗಳು|ಏಷ್ಯಾವಿಷನ್ ಚಲನಚಿತ್ರ ಪ್ರಶಸ್ತಿ]]'''ಗಳು [[ದಕ್ಷಿಣ ಭಾರತೀಯ ಚಲನಚಿತ್ರ]]ದ ಕಲಾವಿದರು ಮತ್ತು ತಂತ್ರಜ್ಞರನ್ನು ಗೌರವಿಸಲು 2006 ರಿಂದ ಪ್ರತಿವರ್ಷ ನಡೆಯುತ್ತವೆ. ಶ್ವೇತಾ ಅವರು ಒಂದು ಪ್ರಶಸ್ತಿಯನ್ನು ಪಡೆದಿದ್ದಾರೆ.
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2010
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಒರು ನಾಳ್ ವರುಂ
| ಮಾವಿನ್ ಚೋಟ್ಟಿಲೆ
|{{won}}
|}
==== ಮಿರ್ಚಿ ಮ್ಯೂಸಿಕ್ ಪ್ರಶಸ್ತಿಗಳು ದಕ್ಷಿಣ ====
'''[[ಮಿರ್ಚಿ ಮ್ಯೂಸಿಕ್ ಪ್ರಶಸ್ತಿಗಳು ದಕ್ಷಿಣ]]'''ವು ವಾರ್ಷಿಕ '''[[ಮಿರ್ಚಿ ಮ್ಯೂಸಿಕ್ ಪ್ರಶಸ್ತಿ]]'''ಗಳ ದಕ್ಷಿಣ ಭಾರತ ವಿಭಾಗವಾಗಿದ್ದು, [[ದಕ್ಷಿಣ ಭಾರತೀಯ ಸಂಗೀತೋದ್ಯಮ]]ದ ವೃತ್ತಿಪರರ ಕಲಾತ್ಮಕ ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸಲು 2010 ರಲ್ಲಿ '''[[ರೇಡಿಯೋ ಮಿರ್ಚಿ]]''' ಪ್ರಾರಂಭಿಸಿತು.
{| class="wikitable sortable"
!ವರ್ಷ
!ವರ್ಗ
!ಭಾಷೆ
!ಚಿತ್ರ
!ಹಾಡು
!ಫಲಿತಾಂಶ
|-
|2011
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ತೆಲುಗು
|ಕೋಮರಂ ಪುಳಿ
| ಅಮ್ಮ ಥಲ್ಲೆ
| {{won}}
|}
==== ವಿಜಯ್ ಮ್ಯೂಸಿಕ್ ಪ್ರಶಸ್ತಿಗಳು ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2011
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|180
| ನೀ ಕೂರಿನಾಲ್
| {{won}}
|}
==== ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿಗಳು ====
'''[[ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿ]]'''ಯು, ತಮಿಳು ಚಲನಚಿತ್ರ ವಿಭಾಗವಾಗಿದ್ದು, ವಾರ್ಷಿಕ '''[[ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿ]]'''ಯು, ತಮಿಳು ಭಾರತೀಯ ಸಂಗೀತೋದ್ಯಮದ ವೃತ್ತಿಪರರ ಕಲಾತ್ಮಕ ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸುತ್ತದೆ.
{| class="wikitable sortable"
!ವರ್ಷ
!ವರ್ಗ
!ಫಲಿತಾಂಶ
|-
|2012
| ಮಹಿಳಾ ಹಿನ್ನೆಲೆ ಗಾಯಕಿ ತೀರ್ಪುಗಾರರ ಪ್ರಶಸ್ತಿ
| {{won}}<ref>{{cite news|url=http://timesofindia.indiatimes.com/entertainment/hindi/music/news/Shweta-Mohan-bags-award/articleshow/12145168.cms|title=Shweta Mohan bags award|work=[[The Times of India]]}}</ref>
|}
==== ದಕ್ಷಿಣ ಭಾರತೀಯ ಛಾಯಾಗ್ರಾಹಕರ ಸಂಘ ಪ್ರಶಸ್ತಿಗಳು ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2014
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಕಾವಿಯ ತಲೈವನ್
| ಯಾರುಮಿಲ್ಲ ತನಿ
| {{won}}
|}
== ಇತರ ಪ್ರಮುಖ ಗೌರವಗಳು ಮತ್ತು ಮಾನ್ಯತೆಗಳು ==
* 2007: ದೂರದರ್ಶನದ ಯುವ ಪ್ರಶಸ್ತಿ "ಕೊಲಕುಳಲ್ ವಿಳಿ ಕೇಟ್ಟೋ ರಾಧೇ" ನಿವೇದ್ಯಂ (ಮಲಯಾಳಂ)
* 2007: ಸನ್ಫೀಸ್ಟ್ ಇಸೈ ಅರುವಿ ಪ್ರಶಸ್ತಿ
* 2007: ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಚಲನಚಿತ್ರ ವಿಮರ್ಶಕರ ಪ್ರಶಸ್ತಿ
* 2011: ಬಿಗ್ ತಮಿಳು ಮೆಲೋಡಿ ಪ್ರಶಸ್ತಿಗಳು ಅತ್ಯುತ್ತಮ ಮಧುರ ಮಹಿಳಾ ಹಿನ್ನೆಲೆ ಗಾಯಕಿ - "ನೀ ಕೂರಿನಾಲ್" (180)
* 2012: BIG FM ನಲ್ಲಿ ಅತಿ ಹೆಚ್ಚು ಪ್ರಸಾರಗಳಿಗಾಗಿ ಪ್ರಶಸ್ತಿ - "ನೀ ಪಾರ್ಥ ವಿಳಿಗಲ್"(3) (ವಿಜಯ್ ಯೇಸುದಾಸ್ ಅವರೊಂದಿಗೆ)
* 2014: ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ತಿಕ್ಕುರಿಸ್ಸಿ ಚಲನಚಿತ್ರ ಪ್ರಶಸ್ತಿ 2014 - ' 'ಒಟ್ಟಮಂದರಂ' ' (ಸುಜಾತಾ ಮೋಹನ್ ಅವರೊಂದಿಗೆ ಹಂಚಿಕೊಂಡಿದ್ದಾರೆ)
* 2014: ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ SICA ಪ್ರಶಸ್ತಿ 2014 - "ಯಾರುಮಿಲ್ಲ"
==ಉಲ್ಲೇಖಗಳು==
{{reflist}}
==ಬಾಹ್ಯ ಕೊಂಡಿಗಳು==
* {{IMDb name|2895650}}
* {{Facebook|shwetamohanofficial|ಶ್ವೇತಾ ಮೋಹನ್}}
* {{Twitter|_shwetamohan_|ಶ್ವೇತಾ ಮೋಹನ್}}
{{DEFAULTSORT:ಮೋಹನ್, ಶ್ವೇತಾ}}
[[Category:1985 ಜನನಗಳು]]
[[Category:21ನೇ ಶತಮಾನದ ಭಾರತೀಯ ಮಹಿಳಾ ಗಾಯಕಿಯರು]]
[[Category:ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ವಿಜೇತರು]]
[[Category:ಭಾರತೀಯ ಪಾಪ್ ಗಾಯಕಿಯರು]]
[[Category:ಭಾರತೀಯ ಮಹಿಳಾ ಹಿನ್ನೆಲೆ ಗಾಯಕಿಯರು]]
[[Category:ಭಾರತೀಯ ಮಹಿಳಾ ಪಾಪ್ ಗಾಯಕಿಯರು]]
[[Category:ಕನ್ನಡ ಭಾಷೆಯ ಹಿನ್ನೆಲೆ ಗಾಯಕಿಯರು]]
[[Category:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[Category:ಜೀವಂತ ವ್ಯಕ್ತಿಗಳು]]
[[Category:ಮಲಯಾಳಂ ಭಾಷೆಯ ಹಿನ್ನೆಲೆ ಗಾಯಕಿಯರು]]
[[Category:ಚೆನ್ನೈನ ಗಾಯಕಿಯರು]]
[[Category:ಸ್ಟೆಲ್ಲಾ ಮಾರಿಸ್ ಕಾಲೇಜು, ಚೆನ್ನೈ ಹಳೆಯ ವಿದ್ಯಾರ್ಥಿಗಳು]]
[[Category:ತಮಿಳು ಭಾಷೆಯ ಹಿನ್ನೆಲೆ ಗಾಯಕಿಯರು]]
[[Category:ತಮಿಳುನಾಡಿನ ಮಹಿಳಾ ಸಂಗೀತಗಾರರು]]
[[Category:ಭಾರತೀಯ ಸಂಗೀತಗಾರ ಪಡೆದ ಪ್ರಶಸ್ತಿಗಳ ಪಟ್ಟಿಗಳು|ಮೋಹನ್, ಶ್ವೇತಾ]]
[[Category:ಶ್ವೇತಾ ಮೋಹನ್|ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು]]
[[Category:ಶ್ವೇತಾ ಮೋಹನ್| ]]
nwxl1161zh16y0o82zsvczozwjgk0na
1379455
1379452
2026-08-08T15:03:30Z
A826
72368
1379455
wikitext
text/x-wiki
{{databox}}
{{Infobox person
| name = ಶ್ವೇತಾ ಮೋಹನ್
| image = Shweta Mohan.jpg
| caption =
| birth_date = {{birth date and age|df=yes|1985|11|19}}
| birth_place = ಮದ್ರಾಸ್, ತಮಿಳುನಾಡು, ಭಾರತ
| education = ಸ್ಟೆಲ್ಲಾ ಮಾರಿಸ್ ಕಾಲೇಜು, ಚೆನ್ನೈ
| occupation = {{hlist|ಗಾಯಕಿ|ಸಂಗೀತ ನಿರ್ಮಾಪಕಿ}}
| years_active = 2003–ಪ್ರಸ್ತುತ
| mother = [[ಸುಜಾತಾ ಮೋಹನ್]]
| relatives = ಪರಾವೂರು ಟಿ. ಕೆ. ನಾರಾಯಣ ಪಿಳ್ಳೈ (ಮುತ್ತಜ್ಜ)
ಜಿ. ವೇಣುಗೋಪಾಲ್ (ಚಿಕ್ಕಪ್ಪ)
ರಾಧಿಕಾ ತಿಲಕ್ (ಚಿಕ್ಕಮ್ಮ)
| children = 1<ref name=mathrubhumi/>
| module = {{Infobox musical artist|embed=yes
| background = person
| genre = {{flatlist|
* ಚಲನಚಿತ್ರ ಸಂಗೀತ
* ಪಾಪ್
* ಘಝಲ್
* ಭಾರತೀಯ ಶಾಸ್ತ್ರೀಯ ಸಂಗೀತ
* ಭಜನೆ
}}
| instrument = ಗಾಯನ
| label = ಸ್ವತಂತ್ರ ಕಲಾವಿದೆ
}}
| website = {{URL|shwetamohan.com}}
}}
'''ಶ್ವೇತಾ ಮೋಹನ್''' (ಜನನ ೧೯ ನವೆಂಬರ್ ೧೯೮೫)<ref>{{cite news |url=https://timesofindia.indiatimes.com/topic/Shweta-Mohan |title=Shweta Mohan Playback singer |work=The Times of India |date=13 August 2020}}</ref> ಭಾರತೀಯ ಹಿನ್ನೆಲೆ ಗಾಯಕಿ ಮತ್ತು ಸಂಗೀತ ನಿರ್ಮಾಪಕಿ.<ref>{{cite news |url=https://timesofindia.indiatimes.com/entertainment/hindi/music/news/Shweta-Mohan-is-happy/etarticleshow/5513702.cms|archive-url=https://web.archive.org/web/20110811062128/http://articles.timesofindia.indiatimes.com/2010-01-30/news-and-interviews/28126139_1_awards-galore-ashwin-music|url-status=live|archive-date=11 August 2011 |title=Shweta Mohan is happy |date=30 January 2010 |work=[[The Times of India]] |access-date=7 May 2010 |first1=Sindhu |last1=Vijayakumar}}</ref> ಅವರು ನಾಲ್ಕು ದಕ್ಷಿಣ ಭಾರತೀಯ ಚಿತ್ರರಂಗಗಳಾದ ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಸೇರಿದಂತೆ ಕೆಲವು ಹಿಂದಿ ಚಿತ್ರಗಳು ಮತ್ತು ಬೆಂಗಾಲಿ ಭಾಷೆಯ ಆಲ್ಬಂಗಳಿಗೆ ಚಿತ್ರಗಳು ಮತ್ತು ಆಲ್ಬಂಗಳಿಗೆ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.
ಹಿನ್ನೆಲೆ ಗಾಯಕಿ ಸುಜಾತಾ ಮೋಹನ್ ಮತ್ತು ಕೃಷ್ಣ ಮೋಹನ್ ಅವರ ಪುತ್ರಿಯಾಗಿ ಜನಿಸಿದ ಶ್ವೇತಾ ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಆರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು (ದಕ್ಷಿಣ), ಒಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಒಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ೨೦೨೩ ರಲ್ಲಿ ತಮಿಳುನಾಡು ಸರ್ಕಾರದಿಂದ ಆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕಲೈಮಾಮಣಿ ಪ್ರಶಸ್ತಿಯನ್ನು ಸಹ ಅವರು ಗೌರವಿಸಲ್ಪಟ್ಟಿದ್ದಾರೆ.<ref>{{cite web|url=https://timesofindia.indiatimes.com/entertainment/tamil/movies/news/kalaimamani-awards-anirudh-kj-yesudas-manikandan-and-others-selected-ceremomy-scheduled-for-next-month/articleshow/124084043.cms|title=Kalaimamani Awards: Anirudh, KJ Yesudas, Manikandan, and others selected; Ceremony scheduled for next month|website=TimesofIndia.com|date=24 September 2025}}</ref>
ಹಿನ್ನೆಲೆ ಗಾಯನದ ಜೊತೆಗೆ, ಶ್ವೇತಾ ಅವರು ಹಲವಾರು ದೂರದರ್ಶನ ರಿಯಾಲಿಟಿ ಶೋಗಳಲ್ಲಿ ಮತ್ತು ಸಂಗೀತ ವೀಡಿಯೊಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಅವರು ಹಲವಾರು ಕಲಾವಿದರೊಂದಿಗೆ ಸಹಕರಿಸಿದ್ದಾರೆ ಮತ್ತು ಸ್ವತಂತ್ರ ಸಿಂಗಲ್ಗಳನ್ನು ನಿರ್ಮಿಸಿದ್ದಾರೆ.<ref>{{cite web|url=https://www.thehindu.com/entertainment/music/shweta-mohan-on-her-first-indie-song/article24278207.ece|title=Shweta Mohan releases her first indie song|work=TheHindu.com|date=28 June 2018}}</ref>
{{TOC limit|2}}
== ಆರಂಭಿಕ ಜೀವನ ==
ಶ್ವೇತಾ ಮೋಹನ್ ಅವರು ೧೯ ನವೆಂಬರ್ ೧೯೮೫ ರಂದು ತಮಿಳುನಾಡಿನ ಚೆನ್ನೈನಲ್ಲಿ ಮಲಯಾಳಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ, ವಿ. ಕೃಷ್ಣ ಮೋಹನ್ ಅವರು ಶಿಶುವೈದ್ಯರು ಮತ್ತು ಸಂಗೀತ ಉತ್ಸಾಹಿಯೂ ಆಗಿದ್ದು, ಸಾಂದರ್ಭಿಕವಾಗಿ ಸಂಗೀತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ,<ref>{{cite web|url=https://timesofindia.indiatimes.com/entertainment/malayalam/music/shweta-mohans-dad-turns-singer-to-wish-mohanlal-on-his-birthday/articleshow/75865548.cms|title=Shweta Mohan's dad turns singer to wish Mohanlal on his birthday|work=TheTimesofIndia.com|date=21 May 2020}}</ref> ಮತ್ತು ಅವರ ತಾಯಿ, ಸುಜಾತಾ ಮೋಹನ್, ಅವರು ಪ್ರತಿಭಾವಂತ ಹಿನ್ನೆಲೆ ಗಾಯಕಿ.<ref>{{cite web|url=https://www.newindianexpress.com/entertainment/malayalam/2013/Apr/16/to-mom-with-love-shweta-mohan-468642.html|title=To mom with love: Shweta Mohan|work=TheNewIndianExpress.com|date=16 April 2013}}</ref> ಅವರು ಗುಡ್ ಶೆಫರ್ಡ್ ಕಾನ್ವೆಂಟ್, ಚೆನ್ನೈನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಸ್ಟೆಲ್ಲಾ ಮಾರಿಸ್ ಕಾಲೇಜು, ಚೆನ್ನೈನಿಂದ ಪದವಿ ಪಡೆದರು.<ref name=newindianexpress>[https://www.newindianexpress.com/cities/kochi/2012/jun/25/a-timeless-melody-380408.html A timeless melody].</ref>
ಸಂಗೀತದಲ್ಲಿ ಆಸಕ್ತಿ ಹೊಂದಿದ್ದರೂ, ತನ್ನ ಧ್ವನಿಯು ಹಿನ್ನೆಲೆ ಗಾಯನಕ್ಕೆ ಸಾಕಷ್ಟು ಉತ್ತಮವಾಗಿಲ್ಲ ಎಂದು ಪರಿಗಣಿಸಿ ಶ್ವೇತಾ ಅವರು ಆರಂಭದಲ್ಲಿ ಹಾಡುವ ಬಗ್ಗೆ ಹಿಂಜರಿಕೆ ವ್ಯಕ್ತಪಡಿಸಿದರು. ಅವರ 10 ನೇ ತರಗತಿಯ ಸಮಯದಲ್ಲಿ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ, ಗಾಯಕ-ಸಂಗೀತ ನಿರ್ದೇಶಕರಾದ ಭವತಾರಿಣಿ ಅವರು ನಿರ್ಣಯಿಸಿದ ಏಕವ್ಯಕ್ತಿ ಸುತ್ತಿನಲ್ಲಿ ಅವರು ಚಿತ್ರದ "ಬೋಲೆ ರೆ ಪಪಿಹಾರ" ಹಾಡನ್ನು ಹಾಡಿದರು.<ref>{{cite web|url=https://timesofindia.indiatimes.com/entertainment/malayalam/movies/news/shweta-mohan-mourns-the-demise-of-bhavatharini/articleshow/107168519.cms|title=Shweta Mohan mourns the demise of Bhavatharini: She told my mum that I sang well and that I must train in music|work=TheTimesofIndia.com|date=26 January 2024}}</ref> ಅವರು ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗೆದ್ದರು ಮತ್ತು ಭವತಾರಿಣಿ ಅವರು ಹಾಡನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಈ ಪ್ರೋತ್ಸಾಹ ಮತ್ತು ಮಾನ್ಯತೆಯು ಹಾಡುವ ಬಗ್ಗೆ ಅವರ ಉತ್ಸಾಹವನ್ನು ಹುಟ್ಟುಹಾಕಿತು ಮತ್ತು ಸಂಗೀತವನ್ನು ತಮ್ಮ ವೃತ್ತಿಯಾಗಿ ತೆಗೆದುಕೊಳ್ಳುವಂತೆ ಮಾಡಿತು.
ಒಂಬತ್ತನೇ ವಯಸ್ಸಿನಲ್ಲಿ, ಶ್ವೇತಾ ಅವರು ಶಾಸ್ತ್ರೀಯ ಸಂಗೀತದಲ್ಲಿ ಔಪಚಾರಿಕ ತರಬೇತಿಯನ್ನು ಪ್ರಾರಂಭಿಸಿದರು. ನಂತರ, ಅವರು ಗಾಯಕಿ ಬಿನ್ನಿ ಕೃಷ್ಣಕುಮಾರ್ ಅವರಿಂದ ತರಬೇತಿ ಪಡೆದು ಕಾರ್ನಾಟಿಕ್ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತಮ್ಮ ಪಾಠಗಳನ್ನು ಪ್ರಾರಂಭಿಸಿದರು,<ref>{{cite news |url=http://www.thehindu.com/features/friday-review/music/and-quiet-flows-the-karamana-two-of-a-kind/article3968866.ece |title=And Quiet Flows The Karamana: Two of a kind |date=5 October 2012 |work=[[The Hindu]]}}</ref><ref>{{cite web|url=https://www.indulgexpress.com/culture/music/2023/Apr/13/my-amma-is-my-idolsays-singer-shweta-mohan-48288.html|title='My Amma is my idol,' says singer Shweta Mohan|website=Indulgexpress.com|date=13 April 2023}}</ref> ಮತ್ತು ಆಗಸ್ಟೀನ್ ಪಾಲ್ ಅವರ ಅಡಿಯಲ್ಲಿ ಪಾಶ್ಚಾತ್ಯ ಗಾಯನ ಮತ್ತು ಪಿಯಾನೋವನ್ನು ಕಲಿತರು.<ref>{{cite web|url=https://www.indulgexpress.com/culture/music/2018/Oct/26/swetha-mohan--augustine-paul-an-interaction-about-their-personal-journeys-collaborations-and-fut-10795.html|title=Singer Shweta Mohan and music director Augustine Paul an interaction about their personal journeys, collaborations and future projects|work=Indulgexpress.com|date=26 October 2018}}</ref> ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರೊಂದಿಗಿನ ಹಾಡಿನ ರೆಕಾರ್ಡಿಂಗ್ಗಳಿಗಾಗಿ ತಮ್ಮ ತಾಯಿಯೊಂದಿಗಿನ ಒಂದು ಪಾಲ್ಗೊಳ್ಳುವಿಕೆಯ ಸಮಯದಲ್ಲಿ, ಅವರ "ಕುಚಿ ಕುಚಿ ರಕ್ಕಮ್ಮ" (ಬಾಂಬೆ, 1995) ಮತ್ತು "ಅಚ್ಚಮ್ ಅಚ್ಚಮ್ ಇಲ್ಲೈ" (ಇಂದಿರಾ, 1995) ಹಾಡುಗಳಿಗಾಗಿ ಮಕ್ಕಳ ಗಾಯಕ ತಂಡದ ಭಾಗವಾಗಲು ಕೇಳಲಾಯಿತು.<ref>{{cite web|url=https://timesofindia.indiatimes.com/entertainment/malayalam/movies/news/shweta-mohan-on-ar-rahmans-birthday-you-are-special-because-you-spread-magic-everywhere-with-the-wand-of-your-music/articleshow/88728257.cms|title=Shweta Mohan on AR Rahman's birthday: You are special because you spread magic everywhere with the wand of your music|work=TheTimesofIndia.com|date=6 January 2022}}</ref>
== ವೃತ್ತಿ ==
===ಹಿನ್ನೆಲೆ ಗಾಯನ===
====2003–2010: ಪ್ರಾರಂಭ, ಪ್ರಗತಿ ಮತ್ತು ಪ್ರಶಸ್ತಿಗಳು====
2003 ರಲ್ಲಿ ಶ್ವೇತಾ ಅವರು 11 ನೇ ತರಗತಿಯಲ್ಲಿದ್ದಾಗ, ನವರಾತ್ರಿ ಹಬ್ಬದ ಸಂದರ್ಭದಲ್ಲಿ ತಮ್ಮ ಮಗಳು ಭವತಾರಿಣಿ ಅವರ ಆಹ್ವಾನದ ಮೇರೆಗೆ ಸಂಗೀತ ನಿರ್ದೇಶಕ ಇಳಯರಾಜ ಅವರ ಮನೆಗೆ ಭೇಟಿ ನೀಡಿದರು. ಅಲ್ಲಿ, ಅವರು ಇಳಯರಾಜ ಅವರ ಹಿರಿಯ ಮಗ ಮತ್ತು ಸಂಗೀತ ನಿರ್ದೇಶಕ ಕಾರ್ತಿಕ್ ರಾಜ ಅವರನ್ನು ಎದುರಿಸಿದರು, ಅವರು ತಾವು ಗಾಯಕಿ ಸುಜಾತಾ ಅವರ ಪುತ್ರಿ ಎಂದು ತಿಳಿದ ನಂತರ, ಚಿತ್ರದಲ್ಲಿ ಎರಡು ಹಾಡುಗಳಿಗೆ ತಮ್ಮ ಧ್ವನಿಯನ್ನು ರೆಕಾರ್ಡ್ ಮಾಡಲು ಅವಕಾಶ ನೀಡಿದರು.<ref>{{cite web|url=https://www.thehindu.com/features/friday-review/music/On-the-same-wavelength/article11642286.ece|title=On the same wavelength|work=Hindu.com|date=13 August 2010}}</ref> ಎರಡೂ ಹಾಡುಗಳು, "ಮೆಯ್ಯನಾಧ" ಮತ್ತು "ಸೆವ್ವೈ ದೇಸಂ" ಗಾಯಕ ಕಾರ್ತಿಕ್ ಅವರೊಂದಿಗಿನ ಯುಗಳ ಗೀತೆಗಳಾಗಿವೆ. ಇದರ ನಂತರ, ಅವರು ತಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ ಮರಳಿದರು ಮತ್ತು ತಮ್ಮ 12 ನೇ ತರಗತಿಯನ್ನು ಮುಗಿಸಿ ಪದವಿ ಪ್ರಾರಂಭಿಸಿದರು. 2005 ರಲ್ಲಿ, ಸಂಗೀತ ನಿರ್ದೇಶಕ ಪ್ರವೀಣ್ ಮಣಿ ಅವರು ತಮ್ಮ ಮಲಯಾಳಂ ಚಿತ್ರಕ್ಕಾಗಿ ಬ್ಯಾಂಡ್ S5 ನೊಂದಿಗೆ ಸಹಕರಿಸಿದರು. ಶ್ವೇತಾ ಅವರನ್ನು ಬ್ಯಾಂಡ್ನೊಂದಿಗೆ ಸಹಕರಿಸಲು ಮತ್ತು ಚಿತ್ರದ ಎಲ್ಲಾ ಹಾಡುಗಳನ್ನು ಹಾಡಲು ಕರೆಯಲಾಯಿತು, ಇದರಿಂದಾಗಿ ಅವರ ಮಲಯಾಳಂ ಚೊಚ್ಚಲ ಪ್ರವೇಶವನ್ನು ಗುರುತಿಸಲಾಯಿತು. ಶೀಘ್ರದಲ್ಲೇ, ಕಾರ್ತಿಕ್ ರಾಜ ಮತ್ತು ಭವತಾರಿಣಿ ಅವರ ಕಿರಿಯ ಸಹೋದರ ಯುವನ್ ಶಂಕರ್ ರಾಜಾ ಅವರು ತಮ್ಮ ತೆಲುಗು ಸಂಯೋಜನೆಗಳಿಗಾಗಿ ರಾಮ್ (2006), ಆದವಾರಿ ಮಾಟಲಾಕು ಅರ್ಥಾಲೆ ವೇರುಲೆ (2007) ಮತ್ತು ತಮಿಳು ಸಂಯೋಜನೆಗಳಿಗಾಗಿ ಪಟ್ಟಿಯಾಲ್ (2006) ಮತ್ತು ಕಣ್ಣಮೂಚಿ ಯೇನಾಡ (2007) ಚಿತ್ರಗಳಿಗೆ ಹಾಡಲು ಕರೆದರು. ಅವರು ಮಲಯಾಳಂ ಚಿತ್ರ ವಿನೋದಯಾತ್ರ (2007) ಗಾಗಿ ಇಳಯರಾಜ ಅವರೊಂದಿಗೆ ಮತ್ತು ಕನ್ನಡ ಚಿತ್ರ ಸಜಿನಿ (2007) ಗಾಗಿ ಎ. ಆರ್. ರೆಹಮಾನ್ ಅವರೊಂದಿಗೆ ತಮ್ಮ ಮೊದಲ ಹಾಡನ್ನು ರೆಕಾರ್ಡ್ ಮಾಡಿದರು.
[[File:SwethaMohan.jpg|thumb|right|upright|200px|alt=Shwetha during her beginning career stage|ಶ್ವೇತಾ ಅವರ ಆರಂಭಿಕ ವೃತ್ತಿ ಹಂತದಲ್ಲಿ]]
ಅವರ ಅತಿದೊಡ್ಡ ಪ್ರಗತಿಯು ಜಿ. ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಚಿತ್ರ ಕಿರೀಡಂ (2007) ನಲ್ಲಿ ಸೋನು ನಿಗಮ್ ಅವರೊಂದಿಗಿನ "ವಿಳಿಯಿಲ್ ಉನ್ ವಿಳಿಯಿಲ್" ಎಂಬ ಯುಗಳ ಗೀತೆ ಮತ್ತು ಮಣಿ ಶರ್ಮಾ ಅವರ ಸಂಯೋಜನೆಯ ಚಿತ್ರ ಪೊಕ್ಕಿರಿಗಾಗಿ "ನೀ ಮುತ್ತಂ ಒಂದ್ರು" ಹಾಡುಗಳೊಂದಿಗೆ ಬಂದಿತು. 2007 ರ ವರ್ಷವು ಸಂಗೀತ ನಿರ್ದೇಶಕ ಎಂ. ಜಯಚಂದ್ರನ್ ಅವರೊಂದಿಗಿನ ಅವರ ಸಹವಾಸವನ್ನು ಸಹ ಗುರುತಿಸಿತು, ಅವರು ಚಿತ್ರ ನಿವೇದ್ಯಂನಲ್ಲಿ ಮೂರು ಹಾಡುಗಳನ್ನು ನೀಡಿದರು. "ಕೊಲಕ್ಕುಳಲ್ ವಿಳಿ ಕೇಟ್ಟೋ" ಹಾಡು 2007 ರ ವರ್ಷಕ್ಕೆ ಅತ್ಯುತ್ತಮ ಗಾಯಕಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು.<ref>{{cite web|url=https://www.news18.com/news/movies/on-shweta-mohans-birthday-a-look-at-her-award-winning-songs-6412219.html|title=Happy Birthday Shweta Mohan: Award-Winning Songs of Shweta|work=News18.com|date=19 November 2022}}</ref> ಚಿತ್ರ ನಾವೆಲ್ (2008) ಗಾಗಿ ಅವರ ಮುಂದಿನ ಸಹಯೋಗವು "ಕುಯಿಲೆ" ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು. ಇದರ ನಂತರ 2008 ರಲ್ಲಿ ಚಿತ್ರ ಓರೆ ಕಡಲ್ನಿಂದ ಔಸೇಪ್ಪಚನ್ ಸಂಯೋಜಿಸಿದ "ಯಮುನಾ ವೇರುಥೆ" ಹಾಡಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗಳ ದಕ್ಷಿಣದಲ್ಲಿ ಅವರ ಮೊದಲ ಗೆಲುವು ಬಂದಿತು.<ref>{{cite web|url=https://timesofindia.indiatimes.com/topic/Shweta-Mohan/awards|title=List of awards and nominations received by Shweta Mohan|work=TheTimesofIndia.com|accessdate=23 October 2025}}</ref> ಸಂಗೀತ ನಿರ್ದೇಶಕ ವಿದ್ಯಾಸಾಗರ್ ಅವರೊಂದಿಗಿನ ಅವರ ಸಹವಾಸವು ಚಿತ್ರ ಗೋಲ್ (2007) ನ "ಎಂತಾನಿನ್ನೆನ್ನೋಡೊನ್ನುಂ" ಜನಪ್ರಿಯ ಹಾಡಿನೊಂದಿಗೆ ಪ್ರಾರಂಭವಾಯಿತು ಮತ್ತು ಚಿತ್ರ ಪಿರಿವೋಮ್ ಸಂಧಿಪೋಮ್ (2008) ನ "ಕಂಡೇನ್ ಕಂಡೇನ್" ಹಾಡಿಗೆ ಫಿಲ್ಮ್ಫೇರ್ ಪ್ರಶಸ್ತಿ ನಾಮನಿರ್ದೇಶನವನ್ನು ಗಳಿಸಿದರು. ಸಂಗೀತ ನಿರ್ದೇಶಕ ಗುರುಕಿರಣ್ ಅವರು ಚಿತ್ರ ಅರಮನೆ (2008) ನ "ಪಾತ್ರ ಬರೇಯಾಲ" ಜನಪ್ರಿಯ ಹಾಡಿನ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಅವಕಾಶ ನೀಡಿದರು. ಅವರು ತಮಿಳಿನಲ್ಲಿ ಶಿವ ಮನಸುಲ ಶಕ್ತಿ, ಆನಂದ ತಾಂಡವಂ ಮತ್ತು ಗುರು ಎನ್ ಆಳು, ಮಲಯಾಳಂನಲ್ಲಿ ರಾಬಿನ್ಹುಡ್, ಡ್ಯಾಡಿ ಕೂಲ್ ಮತ್ತು ಭಾಗ್ಯದೇವತಾ, ತೆಲುಗು ಚಿತ್ರರಂಗದಲ್ಲಿ ರೆಚಿಪೋ ಮತ್ತು ಸಾರೈ ವೀರ್ರಾಜು ಮುಂತಾದ ದೊಡ್ಡ ನಿರ್ಮಾಣದ ಚಿತ್ರಗಳಿಗೆ ಹಾಡುವುದನ್ನು ಮುಂದುವರಿಸಿದರು.
2010 ರಲ್ಲಿ, ಅವರು ಎಸ್. ಶಂಕರ್ ಅವರ ಅತ್ಯಂತ ನಿರೀಕ್ಷಿತ ವಿಜ್ಞಾನ ಕಾಲ್ಪನಿಕ ಚಿತ್ರ ಎಂತಿರನ್ಗಾಗಿ ಎ. ಆರ್. ರೆಹಮಾನ್ ಅವರೊಂದಿಗೆ ಸಹಕರಿಸಿದರು. "ಬೂಮ್ ಬೂಮ್ ರೋಬೋಟ್ ಡಾ" ಹಾಡು ಅವರ ಸಹ-ಗಾಯಕರಾದ ಯೋಗಿ ಬಿ, ಕೀರ್ತಿ ಸಾಗಥಿಯಾ ಮತ್ತು ತನ್ವಿ ಷಾ ಅವರೊಂದಿಗೆ ಪ್ರಮುಖವಾಗಿ ಅವರ ಗಾಯನವನ್ನು ಒಳಗೊಂಡಿತ್ತು. ಧ್ವನಿಪಥವು ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಬಿಡುಗಡೆಯಾದ ಎರಡನೇ ದಿನದಂದು, ಆಲ್ಬಮ್ US ಐಟ್ಯೂನ್ಸ್ ಟಾಪ್ 10 ವರ್ಲ್ಡ್ ಆಲ್ಬಮ್ಸ್ ಚಾರ್ಟ್ನಲ್ಲಿ ಅಗ್ರಸ್ಥಾನದಲ್ಲಿತ್ತು, ಇದು ಸ್ಥಾನವನ್ನು ತಲುಪಿದ ಮೊದಲ ಭಾರತೀಯ ಆಲ್ಬಮ್ ಆಗಿದೆ.<ref>{{cite web|author= Indiaglitz|year=2010|title='Endhiran' tops Apple list|website=IndiaGlitz|access-date=3 August 2010|url=http://www.indiaglitz.com/channels/tamil/article/59090.html|archive-url=https://web.archive.org/web/20100804005527/http://www.indiaglitz.com/channels/tamil/article/59090.html|url-status=dead|archive-date=4 August 2010}}</ref> ಮೂಲ ತಮಿಳು ಹಾಡಿನ ಜೊತೆಗೆ, ಅವರು ತೆಲುಗು ಡಬ್ ಮಾಡಿದ ಆವೃತ್ತಿಗೂ ಗಾಯನ ನೀಡಿದರು. ಅವರ ಮುಂದಿನ ಜನಪ್ರಿಯ ಹಾಡು "ಓ ಮಹಾ ಝೀಯಾ", ಹರಿಹರನ್ ಅವರೊಂದಿಗಿನ ಯುಗಳ ಗೀತೆ, ಚಿತ್ರ ತಮಿಳ್ ಪದಂನಿಂದ, ಇದು ಕಣ್ಣನ್ ಅವರ ಸಂಗೀತವನ್ನು ಹೊಂದಿತ್ತು. ಹಾಡು ಹಿಂದಿನ ಕೆಲವು ಜನಪ್ರಿಯ ತಮಿಳು ಹಾಡುಗಳಿಂದ ಪಡೆದ ಹಲವಾರು ಅಸ್ಪಷ್ಟ ಪದಗಳನ್ನು ಒಳಗೊಂಡಿತ್ತು.<ref>{{Cite web |last=Rao |first=Subha J |date=21 June 2018 |title=CS Amudhan Interview: 'I Don't Dream Of Directing Big Stars And Moving To The Next Level' |url=https://silverscreenindia.com/movies/interviews/cs-amudhan-interview-i-dont-dream-of-directing-big-stars-and-moving-to-the-next-level/ |url-status=live |archive-url=https://archive.today/20250912014517/https://silverscreenindia.com/movies/interviews/cs-amudhan-interview-i-dont-dream-of-directing-big-stars-and-moving-to-the-next-level/ |archive-date=2025-09-12 |access-date=2025-09-12 |website=Silverscreen India |language=en}}</ref> ಎಂ. ಜಿ. ಶ್ರೀಕುಮಾರ್ ಸಂಯೋಜಿಸಿದ ಚಿತ್ರ ಒರು ನಾಳ್ ವರುಮ್ನ ಮಲಯಾಳಂ ಹಾಡು "ಮಾವಿನ್ ಚೋಟ್ಟಿಲೆ" ಅವರಿಗೆ ಏಷ್ಯಾವಿಷನ್ ಪ್ರಶಸ್ತಿ ಮತ್ತು ಜೈಹಿಂದ್ ಟಿವಿ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಆಗಾಥನ್, ಫೋರ್ ಫ್ರೆಂಡ್ಸ್, ಕಧಾ ತುಡರುನ್ನು, ಸಕುಡುಂಬಂ ಶ್ಯಾಮಲ ಮತ್ತು ಎಲ್ಸಮ್ಮಾ ಎನ್ನ ಆಂಕುಟ್ಟಿ ಮುಂತಾದ ಮಲಯಾಳಂ ಚಿತ್ರಗಳಲ್ಲಿನ ಅವರ ಹಾಡುಗಳು ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದುಕೊಟ್ಟವು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿದವು. ಎ. ಆರ್. ರೆಹಮಾನ್ ಸಂಯೋಜಿಸಿದ ಚಿತ್ರ ಪುಳಿ (2010) ಗಾಗಿನ ತೆಲುಗು ಹಾಡು "ಅಮ್ಮ ಥಲ್ಲೆ" ಅನ್ನು ಸಾಹಿತ್ಯವನ್ನು ವೇಗವಾಗಿ ಓಡಿಸಲು ಒಂದು ತಂತ್ರವನ್ನು ಬಳಸಿ ರೆಕಾರ್ಡ್ ಮಾಡಲಾಯಿತು. 2011 ರ ವರ್ಷಕ್ಕೆ ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ದಕ್ಷಿಣದಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಅವರು ಗೆದ್ದರು. ಪ್ರಿಥ್ವಿ (2010) ನ ಕನ್ನಡ ಹಾಡುಗಳು "ಹೆಜ್ಜೆಗೊಂಡು ಹೆಜ್ಜೆ" ಮತ್ತು ಎನೋ ಒಂತಾರ (2010) ನ "ದಿಲ್ ಕುಶ್" ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿದ್ದವು ಮತ್ತು ಮಾಧ್ಯಮಗಳಲ್ಲಿ ಪದೇ ಪದೇ ಪ್ರಸಾರವಾಗುತ್ತಿದ್ದವು.
====2011–2020: ಯಶಸ್ವಿ ಸಹಯೋಗಗಳು ಮತ್ತು ಹೆಚ್ಚಿನ ಮಾನ್ಯತೆ====
2011 ರ ವರ್ಷವು ಶ್ವೇತಾ ಅವರ ಸಂಗೀತ ನಿರ್ದೇಶಕ ಶರ್ರೆತ್ ಅವರೊಂದಿಗಿನ ಸಹವಾಸದ ಪ್ರಾರಂಭವನ್ನು ತಮಿಳು-ತೆಲುಗು ದ್ವಿಭಾಷಾ ಚಿತ್ರ 180 ಮೂಲಕ ಗುರುತಿಸಿತು. ಧ್ವನಿಪಥವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು, ವಿಶೇಷವಾಗಿ ಕಾರ್ತಿಕ್ ಅವರೊಂದಿಗಿನ ಅವರ ಯುಗಳ ಗೀತೆ "ನೀ ಕೋರಿನಾಲ್" 59 ನೇ ಫಿಲ್ಮ್ಫೇರ್ ಅವಾರ್ಡ್ಸ್ ದಕ್ಷಿಣದಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ನಾಮನಿರ್ದೇಶನವನ್ನು ಪಡೆಯಿತು.<ref>{{Cite web |url=http://www.filmfare.com/news/59th-idea-filmfare-awards-south-winners-list-809.html |title=59th Idea Filmfare Awards South (Winners list) |date=9 July 2012 |website=[[Filmfare]] |url-status=live |archive-url=https://web.archive.org/web/20150811102950/http://www.filmfare.com/news/59th-idea-filmfare-awards-south-winners-list-809.html |archive-date=11 August 2015 |access-date=11 August 2015}}</ref><ref>{{Cite news |url=http://timesofindia.indiatimes.com/entertainment/tamil/movies/news/The-59th-Idea-Filmfare-Awards-2011South/articleshow/14742576.cms |title=The 59th Idea Filmfare Awards 2011(South) |date=8 July 2012 |work=The Times of India |access-date=11 August 2015 |url-status=live |archive-url=https://web.archive.org/web/20150811103446/http://timesofindia.indiatimes.com/entertainment/tamil/movies/news/The-59th-Idea-Filmfare-Awards-2011South/articleshow/14742576.cms |archive-date=11 August 2015}}</ref> ಹಾಡು ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ದಕ್ಷಿಣದಲ್ಲಿ ಶ್ರೋತೃಗಳ ಆಯ್ಕೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.<ref>{{Cite web |url=http://www.radiomirchi.com/mma2011/tamil/listners_choice.html |title=Mirchi Music Awards Listener's Choice |publisher=Radio Mirchi |url-status=live |archive-url=https://web.archive.org/web/20150811131053/http://www.radiomirchi.com/mma2011/tamil/listners_choice.html |archive-date=11 August 2015 |access-date=11 August 2015}}</ref> ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಅವರೊಂದಿಗಿನ ಅವರ ಸಹವಾಸವು ಕೊ ಮತ್ತು 7 ಆಮ್ ಅರಿವು ಚಿತ್ರಗಳೊಂದಿಗೆ ಪ್ರಾರಂಭವಾಯಿತು. 2011 ರ ವರ್ಷದಲ್ಲಿ ಅವರು ತಮಿಳಿನಲ್ಲಿ ಅನೇಕ ಜನಪ್ರಿಯ ಹಾಡುಗಳನ್ನು ಹೊಂದಿದ್ದರು ಮತ್ತು ಕಾವಲನ್, ವೆಟ್ಟೈ, ತಂಬಿಕೋಟ್ಟೈ, ವೆಪ್ಪಂ ಮತ್ತು ವಿತಗನ್ ಸೇರಿದಂತೆ ಅನೇಕ ಚಿತ್ರಗಳಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಪಡೆದರು.<ref>{{cite news|url=http://www.thehindu.com/entertainment/movies/tn-govt-announces-tamil-film-awards-for-six-years/article19273078.ece|title=TN Govt. announces Tamil Film Awards for six years|work=[[The Hindu]]|accessdate=2017-07-14|location=Chennai, India|date=2017-07-14|archive-url=https://archive.today/20231110140448/https://www.thehindu.com/entertainment/movies/tn-govt-announces-tamil-film-awards-for-six-years/article19273078.ece|archive-date=10 November 2023}}</ref> ಮಲಯಾಳಂನಲ್ಲಿ, ಅವರು ಚಿತ್ರ ಉರುಮಿಗಾಗಿ ದೀಪಕ್ ದೇವ್ ಸಂಯೋಜಿಸಿದ "ಆರೋ ನೀ ಆರೋ" ಯುಗಳ ಗೀತೆಯೊಂದಿಗೆ ಪ್ರಶಂಸಿತ ಗಾಯಕ ಕೆ. ಜೆ. ಯೇಸುದಾಸ್ ಅವರೊಂದಿಗೆ ಮೊದಲ ಬಾರಿಗೆ ಸಹಕರಿಸಿದರು. 2011 ರ ವರ್ಷದ ಇತರ ಜನಪ್ರಿಯ ಮಲಯಾಳಂ ಹಾಡುಗಳು ಕ್ರಿಶ್ಚಿಯನ್ ಬ್ರದರ್ಸ್, ಮೂರು ಕಿಂಗ್ಸ್, ಬ್ಯಾಂಕಾಕ್ ಸಮ್ಮರ್ ಮತ್ತು ಸ್ನೇಹವೀಡು ಚಿತ್ರಗಳ ಮೂಲಕ ಬಂದವು. ಇಳಯರಾಜ ಸಂಗೀತ ಸಂಯೋಜಿಸಿದ ಮಹಾಕಾವ್ಯದ ಭಕ್ತಿ ತೆಲುಗು ಚಿತ್ರ ಶ್ರೀ ರಾಮ ರಾಜ್ಯಂ ಮೂಲ ಮತ್ತು ಡಬ್ ಮಾಡಿದ ಆವೃತ್ತಿಗಳಲ್ಲಿ ಶ್ವೇತಾ ಅವರು ಅನೇಕ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.<ref>{{Cite web |last=Rajamani |first=Radhika |date=2011-11-16 |title=Ramayana magic recreated in Telugu |url=https://www.rediff.com/movies/slide-show/slide-show-1-ramayana-magic-to-be-recreated-in-telugu/20111116.htm |url-status=live |archive-url=https://web.archive.org/web/20111118040741/https://www.rediff.com/movies/slide-show/slide-show-1-ramayana-magic-to-be-recreated-in-telugu/20111116.htm |archive-date=2011-11-18 |access-date=2025-02-20 |website=[[Rediff.com]] |language=en}}</ref> ತೆಲುಗು ಚಿತ್ರ 100% ಲವ್ ಅವರ ಧ್ವನಿಯಲ್ಲಿ ಎರಡು ಜನಪ್ರಿಯ ಹಾಡುಗಳನ್ನು ಒಳಗೊಂಡಿತ್ತು.
2012 ರ ವರ್ಷವು ತಮಿಳು ಚಿತ್ರ 3 ಮೂಲಕ "ಹೊಸ-ಪೀಳಿಗೆಯ" ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರೊಂದಿಗಿನ ಶ್ವೇತಾ ಅವರ ಸಹವಾಸದ ಪ್ರಾರಂಭವನ್ನು ಗುರುತಿಸಿತು. ವಿಜಯ್ ಯೇಸುದಾಸ್ ಅವರೊಂದಿಗಿನ "ನೀ ಪಾರ್ಥ ವಿಳಿಗಲ್" ಪ್ರಣಯ ಯುಗಳ ಗೀತೆಯು ಬಿಡುಗಡೆಯಾದಾಗ ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿತ್ತು.<ref>{{Cite web|title=Review: 3's music is more than Kolaveri Di|url=https://www.rediff.com/movies/review/music-review-three/20111226.htm|website=Rediff|language=en|access-date=2019-09-28|df=dmy-all}}</ref> ಔಸೇಪ್ಪಚನ್ ಸಂಯೋಜಿಸಿದ ಅರಿಕೆ ಚಿತ್ರದ ಮಲಯಾಳಂ ಹಾಡು "ಶ್ಯಾಮ ಹರೇ" ಅವರ ಹಾಡುವಿಕೆಗೆ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು ಮತ್ತು ಅತ್ಯುತ್ತಮ ಗಾಯಕಿಗಾಗಿ ಎರಡನೇ ಫಿಲ್ಮ್ಫೇರ್ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು.<ref>[http://ibnlive.in.com/news/filmfare-awards-south-dhanush-eega-win-big-awards/408186-71-177.html Filmfare Awards (South): The complete list of Winners<!-- Bot generated title -->] {{webarchive|url=https://web.archive.org/web/20150510051756/http://ibnlive.in.com/news/filmfare-awards-south-dhanush-eega-win-big-awards/408186-71-177.html |date=10 May 2015 }}</ref> "ನೀ ಪಾರ್ಥ" ಮತ್ತು "ಶ್ಯಾಮ ಹರೇ" ಎರಡೂ ಅವರ ಹಿನ್ನೆಲೆ ಗಾಯನಕ್ಕಾಗಿ 2 ನೇ SIIMA ಪ್ರಶಸ್ತಿಗಳಲ್ಲಿ ಮೊದಲ ನಾಮನಿರ್ದೇಶನಗಳನ್ನು ಗಳಿಸಿದವು.<ref>{{cite web |url=http://www.thehindu.com/features/cinema/stars-in-sharjah/article5128642.ece |title=Stars in Sharjah |work=The Hindu |access-date=15 September 2013 |author=Sudish Kamath |archive-date=19 February 2014 |archive-url=https://web.archive.org/web/20140219131946/http://www.thehindu.com/features/cinema/stars-in-sharjah/article5128642.ece |url-status=live }}</ref> 2013 ರಲ್ಲಿ, ಸಂಗೀತ ನಿರ್ದೇಶಕರಾದ ದೇವಿ ಶ್ರೀ ಪ್ರಸಾದ್, ಘಿಬ್ರಾನ್, ಜೇಮ್ಸ್ ವಸಂತನ್, ಎಸ್. ಎ. ರಾಜ್ಕುಮಾರ್, ಶಹಬಾಜ್ ಅಮನ್, ಅಲೆಕ್ಸ್ ಪಾಲ್, ಪ್ರಶಾಂತ್ ಪಿಳ್ಳೈ ಮತ್ತು ರಮಣ ಗೋಗುಲಾ ಅವರೊಂದಿಗಿನ ಅವರ ಸಹಯೋಗವು ಅವರ ಸಂಯೋಜನೆಗಳಲ್ಲಿ ಅವರಿಗೆ ಹಾಡುಗಳನ್ನು ನೀಡುವ ಮೂಲಕ ವಿಸ್ತರಿಸಿತು. ಭರತ್ ಬಾಲ ನಿರ್ದೇಶಿಸಿದ ಬದುಕುಳಿಯುವ ನಾಟಕ ಚಿತ್ರ ಮರಿಯನ್ ಎ. ಆರ್. ರೆಹಮಾನ್ ಸಂಯೋಜಿಸಿದ ಮತ್ತು ವಿಜಯ್ ಪ್ರಕಾಶ್ ಅವರೊಂದಿಗೆ ಸಹ-ಗಾಯನದ "ಇನ್ನುಂ ಕೊಂಜಂ ನೇರಂ" ಹಾಡಿನೊಂದಿಗೆ ಅವರ ಹಾಡುವ ವೃತ್ತಿಯನ್ನು ಮತ್ತಷ್ಟು ಹೆಚ್ಚಿಸಿತು. ಹಾಡು ಅದರ ಬಿಡುಗಡೆಯ ಒಂದು ತಿಂಗಳ ನಂತರವೂ ರೇಡಿಯೋ ಮಿರ್ಚಿ ಸೌತ್ ಟಾಪ್ 20 ಚಾರ್ಟ್ನಲ್ಲಿ 18 ನೇ ಸ್ಥಾನದಲ್ಲಿ ಉತ್ತಮ ಸ್ಥಾನವನ್ನು ಪಡೆಯಿತು.<ref>{{cite web |url=http://www.radiomirchi.com/chennai/countdown/tamil-top-20|title=TAMIL TOP 20 – Radio Mirchi|publisher=radiomirchi.com|date=19 June 2013|access-date=19 June 2013}}</ref><ref>{{cite tweet|user=bharatbala|author=Bharatbala Ganapathy|number=342940705922101250|date=7 June 2013|title=Maryan song Kadal Rasa no #1 on RadioMirchi top 20.}}</ref> ಅವರು 8 ನೇ ವಿಜಯ್ ಪ್ರಶಸ್ತಿಗಳು ಮತ್ತು 3 ನೇ SIIMA ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿ ಸಮಾರಂಭಗಳಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ವಿಭಾಗದಲ್ಲಿ ನಾಮನಿರ್ದೇಶನಗೊಂಡರು.<ref>{{cite web|title=And-the-SIIMA-Awards-go-to|url=http://timesofindia.indiatimes.com/entertainment/kannada/movies/news/And-the-SIIMA-Awards-go-to-/articleshow/42532423.cms|website=indiatimes|date=16 September 2014 |publisher=timesofindia|access-date=12 October 2015|archive-date=19 September 2014|archive-url=https://web.archive.org/web/20140919095812/http://timesofindia.indiatimes.com/entertainment/kannada/movies/news/And-the-SIIMA-Awards-go-to-/articleshow/42532423.cms|url-status=live}}</ref> ಅವರು ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರ ಡೇವಿಡ್ನಲ್ಲಿ "ಯುನ್ ಹಿ ರೆ" ಹಾಡಿನೊಂದಿಗೆ ತಮ್ಮ ಬಾಲಿವುಡ್ ಚೊಚ್ಚಲ ಪ್ರವೇಶವನ್ನು ಮಾಡಿದರು. 2014 ರಲ್ಲಿ, ಅವರ ಅತಿದೊಡ್ಡ ಯಶಸ್ಸುಗಳಲ್ಲಿ ಎ. ಆರ್. ರೆಹಮಾನ್ ಸಂಗೀತ ಚಿತ್ರ ಕಾವಿಯ ತಲೈವನ್ ನಿಂದ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆದ "ಯಾರುಮಿಲ್ಲ" ಮತ್ತು ಚಿತ್ರ ಒಟ್ಟಮಂದರಂನಿಂದ "ಒನ್ನನಾಂ ಕೊಂಬಾತೆ" ಸೇರಿವೆ. ಈ ಎರಡೂ ಹಾಡುಗಳು ವಿವಿಧ ಪ್ರಶಸ್ತಿ ಸಮಾರಂಭಗಳಲ್ಲಿ ಹಲವಾರು ನಾಮನಿರ್ದೇಶನಗಳು ಮತ್ತು ಪ್ರಶಸ್ತಿಗಳನ್ನು ಅವರಿಗೆ ತಂದುಕೊಟ್ಟವು.
2015 ರಲ್ಲಿ ಬಿಡುಗಡೆಯಾದ ಚಿತ್ರ ತಂಗ ಮಗನ್ ಅನಿರುದ್ಧ್ ರವಿಚಂದರ್ ಸಂಯೋಜಿಸಿದ ಅವರ ಏಕವ್ಯಕ್ತಿ ಹಾಡು "ಎನ್ನ ಸೊಲ್ಲ" ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಮೂರನೇ ಫಿಲ್ಮ್ಫೇರ್ ಪ್ರಶಸ್ತಿಯನ್ನು ಮತ್ತು ಮೊದಲ SIIMA ಪ್ರಶಸ್ತಿಯನ್ನು ಗೆದ್ದುಕೊಳ್ಳುವ ಮೂಲಕ ಶ್ವೇತಾ ಅವರ ಹಿನ್ನೆಲೆ ಗಾಯನ ವೃತ್ತಿಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಬೀತುಪಡಿಸಿತು.<ref>{{Cite web |date=18 June 2016 |title=Winners of the 63rd Britannia Filmfare Awards (South) |url=https://www.filmfare.com/news/winners-of-the-63rd-britannia-filmfare-awards-south-13996.html |url-status=live |archive-url=https://web.archive.org/web/20250919185059/https://www.filmfare.com/news/winners-of-the-63rd-britannia-filmfare-awards-south-13996.html |archive-date=19 September 2025 |access-date=30 September 2025 |website=[[Filmfare]] |language=en}}</ref> ಅವರು ಬಾಹುಬಲಿ: ದಿ ಬಿಗಿನಿಂಗ್ನ ಮಲಯಾಳಂ ಡಬ್ ಮಾಡಿದ ಆವೃತ್ತಿಯಲ್ಲಿ ಹಾಡುಗಳನ್ನು ಹಾಡಲು ಅವಕಾಶ ಪಡೆದರು. ಆ ವರ್ಷದ ಅವರ ಇತರ ಮಲಯಾಳಂ ಯಶಸ್ಸುಗಳು ಭಾಸ್ಕರ್ ದಿ ರಾಸ್ಕಲ್ ಮತ್ತು ಅನಾರ್ಕಲಿ ಚಿತ್ರಗಳಿಂದ ಬಂದವು. ಜಯಂತ್ ಕೈಕಿನಿ ಬರೆದ ಮತ್ತು ವಿ. ಹರಿಕೃಷ್ಣ ಸಂಯೋಜಿಸಿದ ಚಿತ್ರ ಕೆಂದಸಂಪಿಗೆಗಾಗಿ ಕನ್ನಡ ಹಾಡು "ಕನಸಲಿ ನಡೆಸು" ಬಿಡುಗಡೆಯಾದಾಗ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು. 2016 ರ ವರ್ಷವು ಸಂತೋಷ್ ನಾರಾಯಣನ್ ಅವರೊಂದಿಗಿನ ಅವರ ಮೊದಲ ಸಹಯೋಗದೊಂದಿಗೆ ಕಬಾಲಿ ಮತ್ತು ಕೋಡಿ ಚಿತ್ರಗಳೊಂದಿಗೆ ಪ್ರಾರಂಭವಾಯಿತು. ಮೊದಲನೆಯದು ರಜಿನೀಕಾಂತ್ ಅಭಿನಯದ ಚಿತ್ರವಾಗಿದ್ದು, "ಮಾಯಾ ನಾಧಿ" ಹಾಡು ಅತ್ಯುತ್ತಮ ಗಾಯಕಿಗಾಗಿ ನಾಲ್ಕನೇ ಫಿಲ್ಮ್ಫೇರ್ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು.<ref>{{Cite web|url=https://www.filmfare.com/awards/filmfare-awards-south-2017/tamil/nominations|title=Filmfare Awards South 2017 Tamil Nominations {{!}} Filmfare|website=filmfare.com|language=en|access-date=2019-09-28}}</ref><ref>{{Cite web|url=https://www.filmfare.com/news/winners-of-the-64th-jio-filmfare-awards-south-21594.html|archive-url=https://web.archive.org/web/20180617113606/https://www.filmfare.com/news/winners-of-the-64th-jio-filmfare-awards-south-21594.html|url-status=dead|archive-date=2018-06-17|title=Winners of the 64th Jio Filmfare Awards (South) {{!}} filmfare.com|date=2018-06-17|access-date=2019-09-28}}</ref> ಈ ವರ್ಷ ಶ್ವೇತಾ ಅವರು ನೇನು ಸೈಲಜ, ಜನತಾ ಗ್ಯಾರೇಜ್ ನಂತಹ ದೊಡ್ಡ ತೆಲುಗು ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಮತ್ತು ವೈಟ್, ತೋಪ್ಪಿಲ್ ಜೋಪ್ಪನ್ ಮತ್ತು ಆಕ್ಷನ್ ಹೀರೋ ಬಿಜು ನಂತಹ ಮಲಯಾಳಂ ಚಿತ್ರಗಳಲ್ಲಿ ಸಹವಾಸ ಹೊಂದಿದ್ದರು. ಬಿಜಿಬಾಲ್ ಸಂಯೋಜಿಸಿದ ಮಲಯಾಳಂ ಚಿತ್ರ ಮುಂತಿರಿವಳ್ಳಿಕಲ್ ತಾಳಿರ್ಕ್ಕುಂಬೋಲ್ (2017) ನ "ಒರು ಪುಳಯಾರಿಕಿಲ್" ಹಾಡು ಅವರಿಗೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಎ. ಆರ್. ರೆಹಮಾನ್ ಸಂಯೋಜಿಸಿದ ಮೆರ್ಸಲ್ (2017) ನ "ಮಾಚೋ ಎನ್ನಾಚೋ" ಹಾಡು ಗಾಯಕ ಸಿದ್ ಶ್ರೀರಾಮ್ ಅವರೊಂದಿಗಿನ ಅವರ ಮೊದಲ ಯುಗಳ ಗೀತೆಯನ್ನು ನೀಡಿತು ಮತ್ತು ಫಿಲ್ಮ್ಫೇರ್ ಪ್ರಶಸ್ತಿ ನಾಮನಿರ್ದೇಶನವನ್ನು ಸಹ ಗಳಿಸಿತು.<ref>{{cite web|date=4 June 2018|title=Nominations for the 65th Jio Filmfare Awards (South) 2018|url=https://www.filmfare.com/features/nominations-for-the-65th-jio-filmfare-awards-south-2018_-28652-1.html|url-status=live|work=[[Filmfare]]|accessdate=4 June 2018|archiveurl=https://web.archive.org/web/20180604163156/https://www.filmfare.com/features/nominations-for-the-65th-jio-filmfare-awards-south-2018_-28652.html|archivedate=4 June 2018}}</ref><ref>{{cite news|date=17 June 2018|title=Winners: 65th Jio Filmfare Awards (South) 2018|work=[[The Times of India]]|url=https://timesofindia.indiatimes.com/entertainment/tamil/movies/news/winners-65th-jio-filmfare-awards-south-2018/articleshow/64617904.cms|url-status=live|accessdate=17 June 2018|archiveurl=https://web.archive.org/web/20180617071126/https://timesofindia.indiatimes.com/entertainment/tamil/movies/news/winners-65th-jio-filmfare-awards-south-2018/articleshow/64617904.cms|archivedate=17 June 2018}}</ref> ಸಂತೋಷ್ ನಾರಾಯಣನ್ ಅವರು ತಮಿಳು ಚಿತ್ರ ಕಾಲ (2018) ನ ತೆಲುಗು ಮತ್ತು ಹಿಂದಿ ಡಬ್ ಮಾಡಿದ ಆವೃತ್ತಿಯ ಹಾಡುಗಳನ್ನು ಹಾಡಲು ಅವರನ್ನು ಕರೆದರು. 2019 ರಲ್ಲಿ, ಅವರು ತೆಲುಗು ಚಿತ್ರ ಸಾಹೋಗಾಗಿ ಬಾಲಿವುಡ್ ಸಂಯೋಜಕರಾದ ಶಂಕರ್-ಮಹಾದೇವನ್-ಲೋಯ್ ಅವರೊಂದಿಗೆ ಸಹಕರಿಸಿದರು. ಅವರ ಹಾಡುಗಳು "ಏಥೋ ಮಝಯಿಲ್" (ಮಲಯಾಳಂ ಚಿತ್ರ ವಿಜಯ್ ಸೂಪರಮ್ ಪೌರ್ಣಮಿಯಮ್) ಮತ್ತು "ಝುಮ್ಮಾ ಝುಮ್ಮಾ" (ಕನ್ನಡ ಚಿತ್ರ ಕುರುಕ್ಷೇತ್ರ) ಅದೇ ವರ್ಷದಲ್ಲಿ ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿದ್ದವು. ಅವರು 2020 ರಲ್ಲಿ ಆಲ್ ಮಲ್ಲು, ವರಣೆ ಅವಶ್ಯಮುಂಡ್, ಕಪ್ಪೇಲ ಮತ್ತು ನಾಡೋಡಿಗಲ್ 2 ಸೇರಿದಂತೆ ಮಲಯಾಳಂ ಮತ್ತು ತಮಿಳು ಚಿತ್ರಗಳಿಗೆ ಜನಪ್ರಿಯ ಹಾಡುಗಳನ್ನು ಹಾಡುವುದನ್ನು ಮುಂದುವರಿಸಿದರು.
====2021–ಪ್ರಸ್ತುತ: ಬಹುಭಾಷಾ ಹಾಡುಗಳು ಮತ್ತು ವೃತ್ತಿ ವಿಸ್ತರಣೆಗಳು====
2021 ರಲ್ಲಿ, ಶ್ವೇತಾ ಅವರು ಎರಡು ಬಹುಭಾಷಾ ಚಿತ್ರಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದರು: ಮರಕ್ಕರ್ - ಅರಬಿಕ್ಕಡಲಿಂಟೆ ಸಿಂಹಂ ಮತ್ತು 99 ಸಾಂಗ್ಸ್. ಮೊದಲಿನ ಹಾಡು ರೋನಿ ರಾಫೆಲ್ ಸಂಯೋಜಿಸಿದ್ದು, ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅವರ ಧ್ವನಿಯನ್ನು ಒಳಗೊಂಡಿತ್ತು. ಎರಡನೆಯದು, ಎ. ಆರ್. ರೆಹಮಾನ್ ನಿರ್ಮಿಸಿ ಸಂಯೋಜಿಸಿದ್ದು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ರೆಕಾರ್ಡ್ ಮಾಡಲಾಯಿತು. ಇದರ ನಂತರ 2022 ರಲ್ಲಿ ಚಿತ್ರ ಮಲಯಂಕುಂಜುಗಾಗಿ ರೆಹಮಾನ್ ಅವರ ಮತ್ತೊಂದು ಸಂಯೋಜನೆಯು ಬಂದಿತು. "ಮನ್ನುಂ ನಿರಂಜೆ" ಹಾಡು ಶ್ವೇತಾ ಅವರ ಧ್ವನಿಯಲ್ಲಿ ಇತರ ವಿವಿಧ ಭಾಷೆಗಳಲ್ಲಿ ರೆಕಾರ್ಡ್ ಮಾಡಲಾಯಿತು.
2023 ರಲ್ಲಿ, ಶ್ವೇತಾ ಅವರು ತಮ್ಮ ತಮಿಳು-ತೆಲುಗು ದ್ವಿಭಾಷಾ ಚಿತ್ರ ವಾಥಿಗಾಗಿ ಧನುಷ್ ಮತ್ತು ಜಿ. ವಿ. ಪ್ರಕಾಶ್ ಕುಮಾರ್ ಅವರೊಂದಿಗೆ ಮತ್ತೆ ಜೊತೆಯಾದರು. "ವಾ ವಾಥಿ" (ತೆಲುಗಿನಲ್ಲಿ "ಮಸ್ತಾರು ಮಸ್ತಾರು") ಹಾಡು ಶ್ವೇತಾ ಅವರಿಗೆ ಆನಂದ ವಿಕಟನ್ ಸಿನೆಮಾ ಪ್ರಶಸ್ತಿಗಳು<ref>{{Cite web |date=21 May 2024 |title=Ananda Vikatan Cinema Awards 2023 |url=https://awards.vikatan.com/cinema-awards |url-status=live |archive-url=https://web.archive.org/web/20240521163957/https://awards.vikatan.com/cinema-awards |archive-date=21 May 2024 |access-date=23 August 2024 |publisher=[[Ananda Vikatan Cinema Awards]]}}</ref> ಮತ್ತು ಫಿಲ್ಮ್ಫೇರ್ ಪ್ರಶಸ್ತಿ ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಟ್ಟಿತು.<ref>{{Cite news |date=4 August 2024 |title=69th Sobha Filmfare Awards South 2024: Check out the winners |url=https://timesofindia.indiatimes.com/entertainment/tamil/movies/news/69th-sobha-filmfare-awards-south-2024-check-out-the-winners/articleshow/112251936.cms |url-status=live |archive-url=https://web.archive.org/web/20240804052432/https://timesofindia.indiatimes.com/entertainment/tamil/movies/news/69th-sobha-filmfare-awards-south-2024-check-out-the-winners/articleshow/112251936.cms |archive-date=4 August 2024 |access-date=23 August 2024 |work=[[The Times of India]] |issn=0971-8257}}</ref> ಅವರು IIFA ಉತ್ಸವಂ ಮತ್ತು SIIMA ಪ್ರಶಸ್ತಿಗಳಲ್ಲಿ (ತಮಿಳು ಮತ್ತು ತೆಲುಗು ಹಾಡುಗಳಿಗೆ) ನಾಮನಿರ್ದೇಶನಗೊಂಡರು.<ref>{{Cite web |date=16 September 2024 |title=SIIMA Awards 2024 Tamil complete winners list: Jailer named Best Film; Vikram, Nayanthara, Aishwarya Rai win Best Actor awards |url=https://indianexpress.com/article/entertainment/tamil/siima-awards-2024-tamil-complete-winners-list-jailer-best-film-vikram-nayanthara-aishwarya-rai-best-actor-awards-9570253/ |url-status=live |archive-url=https://web.archive.org/web/20240921070446/https://indianexpress.com/article/entertainment/tamil/siima-awards-2024-tamil-complete-winners-list-jailer-best-film-vikram-nayanthara-aishwarya-rai-best-actor-awards-9570253/ |archive-date=21 September 2024 |access-date=17 October 2024 |website=[[The Indian Express]]}}</ref> ಅವರು ಪೊನ್ನಿಯಿನ್ ಸೆಲ್ವನ್: II, ಆದಿಪುರುಷ್, ಲಕ್ಕಿ ಬಾಸ್ಕರ್, ಶಾಕುಂತಲಂ ಮತ್ತು ವಲತ್ತಿ ನಂತಹ ಪ್ಯಾನ್-ಇಂಡಿಯನ್ ಚಿತ್ರಗಳಲ್ಲಿ ವಿವಿಧ ಹಾಡುಗಳನ್ನು ರೆಕಾರ್ಡ್ ಮಾಡುವುದನ್ನು ಮುಂದುವರಿಸಿದರು.
"ವಾಟರ್ ಪ್ಯಾಕೆಟ್" (ರಾಯನ್, ಎ. ಆರ್. ರೆಹಮಾನ್ ಸಂಯೋಜಿಸಿದ) ಮತ್ತು "ಹೇ ಮಿನ್ನಾಲೆ" (ಅಮರನ್, ಜಿ. ವಿ. ಪ್ರಕಾಶ್ ಕುಮಾರ್ ಸಂಯೋಜಿಸಿದ) ಹಾಡುಗಳು 2024 ರಲ್ಲಿ ಸಂಗೀತ ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿದ್ದವು. ಅವರ ಜಿ. ವಿ. ಪ್ರಕಾಶ್ ಕುಮಾರ್ ಅವರೊಂದಿಗಿನ ಸಹಯೋಗವು 2025 ರಲ್ಲಿ "ಕಲ್ಲೂರುಂ" (ವೀರ ಧೀರ ಸೂರನ್: ಭಾಗ 2) ಮತ್ತು "ಎನ್ನ ಸುಗಮ್" (ಇಡ್ಲಿ ಕಡೈ) ನಂತಹ ಜನಪ್ರಿಯ ಹಾಡುಗಳನ್ನು ಮತ್ತಷ್ಟು ನಿರ್ಮಿಸಿತು. ಅವರು ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಅವರೊಂದಿಗೆ ತಮ್ಮ ಸ್ವಂತ ಮಲಯಾಳಂ ಹಾಡಾದ "ಪೊಟ್ಟು ತೋಟ್ಟ ಪೌರ್ಣಮಿ" ಯ ತಮಿಳು ಆವೃತ್ತಿಗಾಗಿ ಚಿತ್ರ ಮಾಮನ್ ನಲ್ಲಿ ಸಹಕರಿಸಿದರು.
===ಸ್ವತಂತ್ರ ಸಿಂಗಲ್ಗಳು ಮತ್ತು ವೇದಿಕೆ ಪ್ರದರ್ಶನಗಳು===
[[File:SwethaMohan performs.jpg|thumb|right|upright|250px|alt=Shwetha performing on stage|ಶ್ವೇತಾ ಅವರು ಸಂಗೀತ ಕಚೇರಿಯೊಂದರಲ್ಲಿ ಪ್ರದರ್ಶನ ನೀಡುತ್ತಿದ್ದಾರೆ]]
ಚಲನಚಿತ್ರ ಹಿನ್ನೆಲೆ ಗಾಯನದ ಜೊತೆಗೆ, ಶ್ವೇತಾ ಅವರು ಸ್ವತಂತ್ರ ಪಾಪ್ ಸಿಂಗಲ್ಗಳನ್ನು ಸಕ್ರಿಯವಾಗಿ ಪ್ರದರ್ಶಿಸುತ್ತಿದ್ದಾರೆ ಮತ್ತು ನಿರ್ಮಿಸುತ್ತಿದ್ದಾರೆ.<ref>{{cite web|url=https://indianexpress.com/article/entertainment/tamil/singer-shweta-mohan-on-yaavum-enadhe-single-5246791/|title=The independent music scene is a blessing for musicians and music lovers: Shweta Mohan|work=IndianExpress.com|date=5 July 2018}}</ref> ಅವರ ಮೊದಲ ಸಿಂಗಲ್ 2018 ರಲ್ಲಿ ಬಿಡುಗಡೆಯಾದ ತಮಿಳು-ಹಿಂದಿ ದ್ವಿಭಾಷಾ "ಯಾವುಂ ಎನಾಧೆ"/"ಸಬ್ ಮೇರಾ ಹೈ" ಆಗಿದ್ದು, ಗಿಟಾರ್ ವಾದಕ ಬೆನೆಟ್ ರೋಲ್ಯಾಂಡ್ ಸಂಯೋಜಿಸಿದ್ದಾರೆ, ಅವರೊಂದಿಗೆ ಅವರು ದೀರ್ಘಕಾಲದ ಸಹವಾಸವನ್ನು ಹೊಂದಿದ್ದರು ಮತ್ತು ಹಲವಾರು ಬಾರಿ ಜಾಮ್ ಸೆಷನ್ಗಳನ್ನು ನಡೆಸಿದ್ದರು.<ref>{{cite web|url=https://www.thenewsminute.com/flix/i-m-happy-space-now-shweta-mohan-releases-her-first-indie-single-yaavum-enadhe-83836|title='I'm in a happy space now': Shweta Mohan releases her first indie single 'Yaavum Enadhe'|work=TheNewsMinute.com|date=28 June 2018}}</ref> ಅವರ ಮುಂದಿನ ಸಿಂಗಲ್, "ಅಮ್ಮ" ಅನ್ನು 2023 ರಲ್ಲಿ ತಮ್ಮ ತಾಯಿ ಸುಜಾತಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದ್ದಕ್ಕೆ ಸಮರ್ಪಣೆಯಾಗಿ ಬಿಡುಗಡೆ ಮಾಡಲಾಯಿತು. 2025 ರಲ್ಲಿ, ಅವರು ಸಂಗೀತ ನಿರ್ದೇಶಕ ವಿದ್ಯಾಸಾಗರ್ ಅವರೊಂದಿಗೆ ತಮ್ಮ ಮುಂದಿನ ಸಿಂಗಲ್ "ಮಾತೆಯ್" ಅನ್ನು ಸಂಯೋಜಿಸಲು ಸಹಕರಿಸಿದರು, ಇದರಲ್ಲಿ ಸುಜಾತಾ ಮೋಹನ್ ಅವರು ಕಾಣಿಸಿಕೊಂಡಿದ್ದಾರೆ.<ref>{{cite web|url=https://english.mathrubhumi.com/movies-music/news/sujatha-shweta-pearle-on-husbands-being-their-biggest-support-ad2c7191|title='He slept on the studio floor for me': Sujatha Mohan reveals 3 men behind her success|work=Mathrubhumi.com|date=14 April 2025}}</ref> ನಂತರ, ಅದೇ ವರ್ಷ, ಅವರು ತಮ್ಮ ಮುಂದಿನ ತಮಿಳು-ಹಿಂದಿ ದ್ವಿಭಾಷಾ ಸಿಂಗಲ್ ಅನ್ನು "ಐ ಲವ್ ಯು ಸೊಲ್ಲಡ" (ತಮಿಳು) /"ಐ ಲವ್ ಯು ಲವ್ ಯು ರೆ" (ಹಿಂದಿ) ಎಂದು ಸಂಯೋಜಿಸಿ ಹಾಡಿದರು.
ಶ್ವೇತಾ ಅವರು ಲೈವ್ ಸಂಗೀತ ಕಚೇರಿಗಳಲ್ಲಿ ವ್ಯಾಪಕವಾಗಿ ಪ್ರದರ್ಶನ ನೀಡುತ್ತಿದ್ದಾರೆ, ವಿಶೇಷವಾಗಿ ಸಂಗೀತ ನಿರ್ದೇಶಕರಾದ ಎ. ಆರ್. ರೆಹಮಾನ್, ಇಳಯರಾಜ ಮತ್ತು ವಿದ್ಯಾಸಾಗರ್ ಅವರೊಂದಿಗೆ ವಿಶ್ವ ಪ್ರವಾಸ ಮಾಡುತ್ತಿದ್ದಾರೆ.<ref>{{cite web|url=https://www.indiatoday.in/movies/regional-cinema/story/singer-shweta-mohan-on-ar-rahman-concert-does-he-deserve-perpetrators-2434590-2023-09-12|title=Singer Shweta Mohan on AR Rahman concert|work=Indiatoday.com|date=12 September 2023}}</ref> ಅವರು ತಮ್ಮ ಕಲಾತ್ಮಕ ಅಭಿವ್ಯಕ್ತಿಯ "ಹೃದಯ ಬಡಿತ" ಎಂದು ಲೈವ್ ಪ್ರದರ್ಶನಗಳನ್ನು ವಿವರಿಸಿದ್ದಾರೆ, ಪ್ರೇಕ್ಷಕರೊಂದಿಗಿನ ಶಕ್ತಿ ಮತ್ತು ಸಂಪರ್ಕವನ್ನು ಒತ್ತಿಹೇಳಿದ್ದಾರೆ, ಆದಾಗ್ಯೂ ಅವರು ಸ್ಟುಡಿಯೊದಲ್ಲಿ ವಿರುದ್ಧವಾಗಿ ಕೆಲವು ಹಾಡುಗಳನ್ನು ಲೈವ್ ಪ್ರದರ್ಶಿಸುವ ಬಗ್ಗೆ ಹಿಂಜರಿಕೆಯನ್ನು ವ್ಯಕ್ತಪಡಿಸಿದ್ದಾರೆ.<ref>{{cite web|url=https://www.thehindu.com/features/metroplus/going-live-and-solo/article3938770.ece|title=Going 'live' and solo|work=TheHindu.com|date=26 September 2012}}</ref>
==ವೈಯಕ್ತಿಕ ಜೀವನ==
ಶ್ವೇತಾ ಅವರು ತಮ್ಮ ದೀರ್ಘಕಾಲದ ಸ್ನೇಹಿತ ಮತ್ತು ಸಾಫ್ಟ್ವೇರ್ ಎಂಜಿನಿಯರ್-ಉದ್ಯಮಿ ಆಶ್ವಿನ್ ಶಶಿ ಅವರನ್ನು 16 ಜನವರಿ 2011 ರಂದು ವಿವಾಹವಾದರು.<ref>{{cite web|url=https://timesofindia.indiatimes.com/entertainment/regional/movie-details/news-interviews/shweta-mohan-ties-the-knot/articleshow/7310563.cms|title=Shweta Mohan ties the knot|work=TheTimesofIndia.com|date=18 January 2011}}</ref><ref>[https://web.archive.org/web/20140116160801/http://www.newindianexpress.com/cities/kochi/article550048.ece A Timeless Melody], ''The New Indian Express'' (25 June 2012). Retrieved on 25 August 2019.</ref> ಈ ದಂಪತಿಗೆ ಒಬ್ಬ ಪುತ್ರಿಯಿದ್ದಾರೆ.<ref name=mathrubhumi>[http://english.mathrubhumi.com/movies-music/movie-news/singer-shweta-mohan-blessed-with-a-baby-girl-1.2427172 Singer Shweta Mohan blessed with a baby n girl named Sreshta] {{Webarchive|url=https://web.archive.org/web/20180521122805/http://english.mathrubhumi.com/movies-music/movie-news/singer-shweta-mohan-blessed-with-a-baby-girl-1.2427172 |date=21 May 2018 }}. English.mathrubhumi.com (1 December 2017). Retrieved on 2019-08-25.</ref>
==ಧ್ವನಿಮುದ್ರಿಕೆ==
=== ಶ್ವೇತಾ ಮೋಹನ್ ಅವರು ರೆಕಾರ್ಡ್ ಮಾಡಿದ ಕನ್ನಡ ಹಾಡುಗಳ ಪಟ್ಟಿ ===
[[File:SwethaMohan.jpg|thumb|200px|ಶ್ವೇತಾ ಮೋಹನ್]]
'''ಶ್ವೇತಾ ಮೋಹನ್''' (ಜನನ 19 ನವೆಂಬರ್ 1985) ಭಾರತೀಯ ಹಿನ್ನೆಲೆ ಗಾಯಕಿ. ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿಗಳನ್ನು (ದಕ್ಷಿಣ), ಒಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ, ಮತ್ತು ಒಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಲನಚಿತ್ರ ಸಂಗೀತ ಮತ್ತು ಆಲ್ಬಂಗಳಿಗೆ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಅವರ ಸ್ಫೂರ್ತಿಗಳಲ್ಲಿ ಸುಜಾತಾ ಮೋಹನ್ (ಅವರ ತಾಯಿ), ಅಲ್ಕಾ ಯಾಗ್ನಿಕ್ ಮತ್ತು ಕೆ.ಎಸ್. ಚಿತ್ರಾ ಸೇರಿದ್ದಾರೆ.<ref>{{cite news|url=https://timesofindia.indiatimes.com/entertainment/hindi/music/news/Shweta-Mohan-is-happy/etarticleshow/5513702.cms|archive-url=https://web.archive.org/web/20110811062128/http://articles.timesofindia.indiatimes.com/2010-01-30/news-and-interviews/28126139_1_awards-galore-ashwin-music|url-status=live|archive-date=11 August 2011|title=Shweta Mohan is happy|date=30 January 2010|work=[[The Times of India]]|access-date=7 May 2010|first1=Sindhu|last1=Vijayakumar}}</ref>
{{TOC limit|2}}
== ಚಲನಚಿತ್ರ ಹಾಡುಗಳು ==
===2007===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಸಜಿನಿ''
|1
| "ಲವ್ಲಿ ಲಂಡನ್"
|ಎ. ಆರ್. ರೆಹಮಾನ್
|ಬೆಲ್ಲೂರಿ ರಾಮಮೂರ್ತಿ
|
|-
!''ರೈಟ್ ಆದ್ರೆ''
|2
| "ಗುಸು ಗುಸು"
|ನೀಲ್
|ಮಯೂರ
|ನರೇಶ್ ಅಯ್ಯರ್
|}
===2008===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಅರಮನೆ''
|3
| "ಪಾತ್ರ ಬರೇಯಾಲ"
|ಗುರುಕಿರಣ್
|rowspan="2"|ಕವಿರಾಜ್
|rowspan="3"|ಕಾರ್ತಿಕ್
|-
! rowspan="2" |''ಪುಕ್''
|4
| "ನಾವಿರುವಾಡು ಹೀಗೆ"
|rowspan="2"|ಜೆ ರವಿರಾಜ್
|-
|5
| "ಯೆಡಯೆಂತ"
|ಹಂಸಲೇಖ
|-
!''ಅಂಜದಿರು''
|6
| "ಮನಸ್ಸಾಲು ಮನಸ್ಸಾಲು"
|ಸುಂದರ್ ಸಿ ಬಾಬು
|ಪಂಚ ಜನ್ಯ
|
|-
!''ನನ್ನುಸಿರೆ''
|7
| "ನನ್ನುಸಿರೆ"
|ಪ್ರೇಮ್ಜಿ ಗಂಗೈ ಅಮರನ್
|ಹೃದಯ ಶಿವ
|ನವೀನ್
|}
===2010===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
! rowspan="2" |''ಪ್ರಿಥ್ವಿ''
|8
| "ಹೆಜ್ಜೆಗೊಂಡು ಹೆಜ್ಜೆ"
|rowspan="2"|ಮಣಿಕಾಂತ್ ಕದ್ರಿ
|rowspan="3"|ಕವಿರಾಜ್
|rowspan="2"|ಕ್ಲಿಂಟನ್ ಸೆರೆಜೊ, ಬೆನ್ನಿ ದಯಾಲ್
|-
|9
| "ಹೆಜ್ಜೆಗೊಂಡು ಹೆಜ್ಜೆ (ರೀಮಿಕ್ಸ್)"
|-
!''ಗಾಣ ಬಜಾಣ''
|10
| "ಹೊಸದೊಂದು ಹೆಸರಿಡು"
|ಜೋಶುವಾ ಶ್ರೀಧರ್
|ಕಾರ್ತಿಕ್
|-
!''ಏನೋ ಒಂತಾರ''
|11
| "ದಿಲ್ಕುಶ್"
|ವಿ. ಹರಿಕೃಷ್ಣ
|ಜಯಂತ್ ಕೈಕಿನಿ
|ಸೋನು ನಿಗಮ್
|-
!''ಪರೋಲ್''
|12
| "ಜಡುವಾಗಿ"
|ಬಾಲಾಜಿ ಕೆ ಮಿತ್ರನ್
|ಎಸ್. ಬಹುಬಲಿ
|ರಾಜೇಶ್ ಕೃಷ್ಣನ್
|-
!''ಜಮಾನ''
|13
| "ಏಳು ಏಳು ಜನ್ಮಕು"
|ಕಾರ್ತಿಕ್ ರಾಜ
|ಸುದರ್ಶನ್
|ಇಳಯರಾಜ
|}
===2011===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಡಬಲ್ ಡೆಕ್ಕರ್''
|14
| "ಕನಸೆ ನನ್ನ"
|ಜಯಪಾಲ್
|ರಾಮ್ ನಾರಾಯಣ್
|ಅನುರಾಧಾ ಶ್ರೀರಾಮ್
|-
! rowspan="2" |''ದೇವದಾಸ್''
|15
| "ಸಯ್ಯಾರೆ ಸಯ್ಯಾರೆ"
|rowspan="2"|ಜೋಶುವಾ ಶ್ರೀಧರ್
|rowspan="2"|ವಿ. ನಾಗೇಂದ್ರ ಪ್ರಸಾದ್
|rowspan="2"|ಕಾರ್ತಿಕ್
|-
|16
| "ಕೋ ಕೋ"
|}
===2012===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
! rowspan="2" |''ಗಾಡ್ಫಾದರ್''
|17
| "ಸಂಚಾರಿ ಮನಸು"
|rowspan="2"|ಎ ಆರ್ ರೆಹಮಾನ್
|rowspan="2"|ಕೆ. ಕಲ್ಯಾಣ್
|ನಿವಾಸ್
|-
|18
| "ಸರಿಗಮ ಸಂಗಮವೆ"
| ಮೇಘಾ
|-
!''ಅಜಂತ''
|19
| "ಹಕ್ಕ ಬಾ ಒಂದು"
|ಇಳಯರಾಜ
|ಕವಿರಾಜ್
|ತಿಪ್ಪು
|-
!''ನೀನೇನ ಭಗವಂತ''
|20
| "ಚಂದಮಾಮ"
|ಗಿರಿಧರ್ ದಿವಾನ್
|ಪ್ರೀತಮ್ ಸಾಗರ್
|ರಾಜೇಶ್ ಕೃಷ್ಣನ್
|}
===2013===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಆಂಥರಾಯ''
|21
| "ಏ ನಶೇಯು"
| rowspan="2" |ಗಿರಿಧರ್
|ವಿ. ನಾಗೇಂದ್ರ ಪ್ರಸಾದ್
|ಉದಿತ್ ನಾರಾಯಣ್
|-
!''ಜಿದ್ದಿ''
|22
|"ಒಲವದೆ ನೀನು"
|
|
|-
!''ಸಿಹಿಗಲಿ''
|23
| "ನಿನ್ನ ನೆನದಾರೆ"
|ಟಿ ರವಿರಾಜ್
|ಜಿ ಆರ್ ಶಂಕರ್
|ಸರಸ್ವತಿ ನಾಯ್ಡು
|}
===2014===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಬ್ರಹ್ಮ''
|24
| "ತುಂತ ತುಂತ"
|ಗುರುಕಿರಣ್
|ಕವಿರಾಜ್
|
|-
!''ಕಾ''
|25
|"ಶುರುವಾಯಿತು"(ಮಹಿಳಾ)
|ಆರ್ ಎಸ್ ಗಣೇಶ್ ನಾರಾಯಣ್
|
|
|}
===2015===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ದಕ್ಷ''
|26
|"ಮಮ್ಮಿ ಡ್ಯಾಡಿ"
|ಎಸ್. ನಾರಾಯಣ್
|
|ಹರಿಚರಣ್
|-
!''ಕೆಂದಸಂಪಿಗೆ''
|27
| "ಕನಸಲಿ ನಡೆಸು"
|ವಿ. ಹರಿಕೃಷ್ಣ
|ಜಯಂತ್ ಕೈಕಿನಿ
|ಸ್ವತಂತ್ರ
|-
!''ಕಟ್ಟೆ''
|28
|"ಸನಿಹಕೆ"
|ಎಸ್. ಎ. ರಾಜ್ಕುಮಾರ್
|ನಾಗೇಂದ್ರ ಪ್ರಸಾದ್
|ಉದಿತ್ ನಾರಾಯಣ್
|}
===2016===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಅಪೂರ್ವ''
|29
|"ಪ್ರಪಂಚವು"(ಯುಗಳ)
| colspan="2" |ವಿ ರವಿಚಂದ್ರನ್
|
|-
!''ದೊಡ್ಡಮನೆ ಹುಡ್ಗ''
|30
| "ಕನಸಿವನೆ ನೂರಾರು"
|ವಿ. ಹರಿಕೃಷ್ಣ
|ಜಯಂತ್ ಕೈಕಿನಿ
|ಕಾರ್ತಿಕ್
|}
===2017===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಸಾಹೇಬ''
|31
| "ಸಾಹೇಬ"
|ವಿ. ಹರಿಕೃಷ್ಣ
|rowspan="2"|ಕವಿರಾಜ್
|rowspan="2"|ಕಾರ್ತಿಕ್
|-
!''ಮಾರ್ಚ್ 22''
|32
| "ಎಂದಾರು"
|ಮಣಿಕಾಂತ್ ಕದ್ರಿ
|-
!''ಕಾಲೇಜ್ ಕುಮಾರ್''
|33
| "ಹಸಿ ಬಿಸಿ"
|ಅರ್ಜುನ್ ಜನ್ಯ
|ಜಯಂತ್ ಕೈಕಿನಿ
|ಸ್ವತಂತ್ರ
|-
!''ಜಾನಿ''
|34
| "ಎಲ್ಲೆಲು ನೀನೆ ನೀನೆ"
|ಜಾಸ್ಸಿ ಗಿಫ್ಟ್
|ಶಿವನಂಜೆ ಗೌಡ
|ಉದಿತ್ ನಾರಾಯಣ್
|}
===2018===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
! rowspan="2" |''ಧ್ವಜ''
|35
| "ಅಗಲೆ ಎಷ್ಟೋ"
|rowspan="2"|ಸಂತೋಷ್ ನಾರಾಯಣನ್
|ಕವಿರಾಜ್
|ಸೋನು ನಿಗಮ್
|-
|36
| "ಜೋಗಾಲುವೆ ಜೋಗಾಲುವೆ"
|ಕೆ. ಕಲ್ಯಾಣ್
|
|-
!''ಭೈರವ ಗೀತ''
|37
| "ಮೊದಲ ಮೊದಲ"
|ರವಿ ಶಂಕರ್
|ಅಜ್ಞಾತ
|ವಿಜಯ್ ಪ್ರಕಾಶ್
|-
!''ಎಡಕಲ್ಲು ಗುಡ್ಡದ ಮೇಲೆ''
|38
| "ಬೆಳಕಾಗಿದೆ"
|ಅಶಿಕ್ ಅರುಣ್
|ಗುರುಕಿರಣ್
|
|}
=== 2019 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಕುರುಕ್ಷೇತ್ರ''
|39
| "ಝುಮ್ಮ ಝುಮ್ಮ"
| ವಿ. ಹರಿಕೃಷ್ಣ
| rowspan="3" | ವಿ. ನಾಗೇಂದ್ರ ಪ್ರಸಾದ್
| ಅನುರಾಧಾ ಭಟ್
|-
! rowspan="2" |''ರಂಧಾವ''
|40
|"ಯೆಲ್ಲಿ ನೋಡಲಲ್ಲೆಲ್ಲ"(ಮಹಿಳಾ)
| rowspan="2" |ಶಶಾಂಕ್ ಶೇಷಗಿರಿ
|
|-
|41
|"ಯೆಲ್ಲಿ ನೋಡಲಲ್ಲೆಲ್ಲ"(ಯುಗಳ)
|ಶಶಾಂಕ್ ಶೇಷಗಿರಿ
|-
!''ನನ್ನ ಪ್ರಕಾರ''
|42
| "ನಾ ಆಕರ್ಷಿತಳಾಗಿರುವೆ"
| ಅರ್ಜುನ್ ರಾಮು
|ಕವಿರಾಜ್
| ಸಂತೋಷ್ ವೆಂಕಿ
|-
!''ಲುಂಗಿ''
|43
| "ನಾಗಬೇಡ ಅಂದೆ ನಾನು"
| ಅರ್ಜುನ್ ಲೆವಿಸ್
|
| ಅರ್ಮಾನ್ ಮಲಿಕ್
|}
=== 2021 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಸೀತಾಯನ''
| 44
|"ಸಂಜೆ ಗಗನ"
|ಪದ್ಮನಾಭ ಭಾರದ್ವಾಜ್
|ಕವಿರಾಜ್
| rowspan="2" |
|-
!''ಟಾಮ್ ಅಂಡ್ ಜೆರ್ರಿ''
|45
|"ಕಾಧಲ್"
|ಮ್ಯಾಥ್ಯೂಸ್ ಮನು
|ಅಥನ್ಯ ರಚನ
|}
=== 2023 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
! scope="col" width=18% | ಟಿಪ್ಪಣಿ(ಗಳು)
|-
!''ಶಾಕುಂತಲಂ''
| 46
|"ಮಧುರ ಗಾಥ ಬಾ"
|ಮಣಿ ಶರ್ಮಾ
|ವರದರಾಜ್ ಚಿಕ್ಕಬಳ್ಳಾಪುರ
|ಸತ್ಯ ಪ್ರಕಾಶ್
|rowspan="3"|ಡಬ್ ಮಾಡಿದ ಆವೃತ್ತಿ
|-
!''ಆದಿಪುರುಷ್''
|47
|"ನಿನ್ನ ಅರಸೋ ನನಗೆ"
|ಅಜಯ್-ಅತುಲ್
|ಪ್ರಮೋದ್ ಮರವಂತೆ
|ಕಾರ್ತಿಕ್
|-
!''ವಲತ್ತಿ''
|48
|"ಸನಿಹ"
|ವರುಣ್ ಸುನಿಲ್
|ಕಿರಣ್ ಕಾವೇರಪ್ಪ
|ಅಯ್ರಾನ್
|-
!''ಬರೀ 10% ಬಡ್ಡಿ''
|49
|"ನಾನು ಮೈಸೂರು ಮಲ್ಲಿಗೆ"
|ಡಾ. ನಾರಾಯಣ್ ಸ್ವಾಮಿ
|ಡಾ. ನಾರಾಯಣ್ ಸ್ವಾಮಿ
|
|-
|}
=== 2024 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ರೋನಿ-ದಿ ರೂಲರ್''
| 50
|"ಸುಗುಣ ಸುಗುಣ"
|ಕದ್ರಿ ಮಣಿಕಾಂತ್
|ಪ್ರಮೋದ್ ಮರವಂತೆ
|
|-
!''ರುದ್ರ ಗರುಡ ಪುರಾಣ''
| 51`
|"ಕಣ್ಣ ಮುಂದೆ ಬಂದು"
|ಕೃಷ್ಣ ಪ್ರಸಾದ್
|ಚಿನ್ಮಯ್ ಭಾವಿಕೇರಿ
|ಕಪಿಲ್ ಕಪಿಲನ್
|-
|}
=== 2025 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ರುದ್ರ ಗರುಡ ಪುರಾಣ''
| 52
|"ಕಣ್ಣ ಮುಂದೆ ಬಂದು"
|ಕೆಪಿ
|ಚಿನ್ಮಯ್ ಭಾವಿಕೇರಿ
|ಕಪಿಲ್ ಕಪಿಲನ್
|-
|}
=== 2026 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ರಣಬಾಳಿ'' (ಡಿ)
|53
|"ಏನಯ್ಯ ಸಾಮಿ"
|ಅಜಯ್-ಅತುಲ್
|ವರದರಾಜ್ ಚಿಕ್ಕಬಳ್ಳಾಪುರ
|ಕಾರ್ತಿಕ್
|-
!''ಲೈಫ್ ಟುಡೇ''
|54
|"ನೀನೆ ನೀನೆ"
|ಶ್ರೀಧರ್ ವಿ ಸಂಭ್ರಮ್
|ಕವಿರಾಜ್
|
|-
|}
== ಉಲ್ಲೇಖಗಳು ==
<references />
== ಬಾಹ್ಯ ಕೊಂಡಿಗಳು ==
* [https://www.raaga.com/kannada/singer/Shweta-Mohan ರಾಗದಲ್ಲಿ ಶ್ವೇತಾ ಮೋಹನ್ ಕನ್ನಡ ಹಾಡುಗಳು]
[[Category:ಶ್ವೇತಾ ಮೋಹನ್ ರೆಕಾರ್ಡ್ ಮಾಡಿದ ಹಾಡುಗಳ ಪಟ್ಟಿಗಳು|ಕನ್ನಡ]]
[[Category:ಕನ್ನಡ ಭಾಷೆಯ ಹಾಡುಗಳು|ಮೋಹನ್, ಶ್ವೇತಾ]]
== ದೂರದರ್ಶನ ==
{| class="wikitable sortable"
|+ ದೂರದರ್ಶನ ಕಾರ್ಯಕ್ರಮಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! scope="col" | ಚಾನೆಲ್
! scope="col" class="unsortable" |ಟಿಪ್ಪಣಿಗಳು
|-
|2011–2014
|''ಬಡೆ ಅಚ್ಛೆ ಲಗ್ತೇ ಹೈನ್''
|ಗಾಯಕಿ
|ಸೋನಿ ಟೆಲಿವಿಷನ್
|ತಮಿಳಿನಲ್ಲಿ ಶೀರ್ಷಿಕೆ ಗೀತೆ ಹಾಡಿದ್ದಾರೆ
|-
| rowspan="2" | 2015
|''ಮ್ಯೂಸಿಕ್ ಇಂಡಿಯಾ''
| style="text-align:center;" | ತೀರ್ಪುಗಾರ
|ಏಷ್ಯಾನೆಟ್
|ಗೋಪಿ ಸುಂದರ್, ದೀಪಕ್ ದೇವ್ ಅವರೊಂದಿಗೆ ಕಾರ್ಯಕ್ರಮದ ಸೆಮಿಫೈನಲ್ ಮತ್ತು ಫೈನಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
|-
|''ಬೋಲ್ ಬೇಬಿ ಬೋಲ್''
| style="text-align:center;" | ತೀರ್ಪುಗಾರ
|ಸೂರ್ಯ ಟಿವಿ
|ಗೋಪಿ ಸುಂದರ್ ಅವರೊಂದಿಗೆ
|-
| rowspan="1" | 2018
|''ಸೂಪರ್ ಸಿಂಗರ್ 6''
| style="text-align:center;" |ತೀರ್ಪುಗಾರ
|ವಿಜಯ್ ಟಿವಿ
|ಪಿ. ಉನ್ನಿಕೃಷ್ಣನ್, ಅನುರಾಧಾ ಶ್ರೀರಾಮ್ ಮತ್ತು ಬೆನ್ನಿ ದಯಾಲ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
| rowspan="1" |2019
|''ಸೂಪರ್ ಸಿಂಗರ್ 7''
|ತೀರ್ಪುಗಾರ
|ವಿಜಯ್ ಟಿವಿ
|ಪಿ. ಉನ್ನಿಕೃಷ್ಣನ್, ಅನುರಾಧಾ ಶ್ರೀರಾಮ್ ಮತ್ತು ಬೆನ್ನಿ ದಯಾಲ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
| rowspan="1" |2020
|ಸೂಪರ್ ಸಿಂಗರ್ ಚಾಂಪಿಯನ್ ಆಫ್ ಚಾಂಪಿಯನ್ಸ್
|ತೀರ್ಪುಗಾರ
|ಸ್ಟಾರ್ ವಿಜಯ್
|
|-
|2021
|''ಸೂಪರ್ ಸಿಂಗರ್ 8''
|ತೀರ್ಪುಗಾರ
|ವಿಜಯ್ ಟಿವಿ
|ಪಿ. ಉನ್ನಿಕೃಷ್ಣನ್, ಅನುರಾಧಾ ಶ್ರೀರಾಮ್ ಮತ್ತು ಬೆನ್ನಿ ದಯಾಲ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2022–2023
|''ಸೂಪರ್ ಸಿಂಗರ್ 9''
|ತೀರ್ಪುಗಾರ
|ವಿಜಯ್ ಟಿವಿ
|ಪಿ. ಉನ್ನಿಕೃಷ್ಣನ್, ಅನುರಾಧಾ ಶ್ರೀರಾಮ್ ಮತ್ತು ಬೆನ್ನಿ ದಯಾಲ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2023
|ಸೂಪರ್ ಸಿಂಗರ್ 3 (ತೆಲುಗು)
|ತೀರ್ಪುಗಾರ
|ಸ್ಟಾರ್ ಮಾ
|ರಾಹುಲ್ ಸಿಪ್ಲಿಗುಂಜ್, ಅನಂತ ಶ್ರೀರಾಮ್ ಮತ್ತು ಮಂಗ್ಲಿ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2024
|''ಸೂಪರ್ ಸಿಂಗರ್ 10''
|ಅತಿಥಿ
|ಸ್ಟಾರ್ ವಿಜಯ್
|ತಮ್ಮ ತಾಯಿ ಸುಜಾತಾ ಮೋಹನ್ ಅವರ ಜನ್ಮದಿನವನ್ನು ಆಚರಿಸಲು.
|-
|2024
|''ಸಾ ರೇ ಗಾ ಮಾ ಪಾ ಸೀನಿಯರ್ಸ್ 4''
|ಅತಿಥಿ ತೀರ್ಪುಗಾರ
|ಜೀ ತಮಿಳು
|ಮೆಗಾ ಆಡಿಷನ್ಗಳಿಗಾಗಿ ಕೆ. ಎಸ್. ರವಿಕುಮಾರ್ ಅವರೊಂದಿಗೆ ಅತಿಥಿ ತೀರ್ಪುಗಾರ
|-
|2024
|''ಸಾ ರೇ ಗಾ ಮಾ ಪಾ ಲಿಲ್ ಚಾಂಪ್ಸ್ 4''
| rowspan="2" |ತೀರ್ಪುಗಾರ
| rowspan="2" |ಜೀ ತಮಿಳು
|ಶ್ರೀನಿವಾಸ್, ಎಸ್. ಪಿ. ಚರಣ್ ಮತ್ತು ಸೈಂಧವಿ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2025
|''ಸಾ ರೇ ಗಾ ಮಾ ಪಾ ಸೀನಿಯರ್ಸ್ 5''
|ಶ್ರೀನಿವಾಸ್, ವಿಜಯ್ ಪ್ರಕಾಶ್, ಕಾರ್ತಿಕ್, ಸೈಂಧವಿ ಮತ್ತು ಎಸ್. ಪಿ. ಚರಣ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2025
|''ಸಾ ರೇ ಗಾ ಮಾ ಪಾ ಕೇರಳಂ ಸೀಸನ್ 3''
| ಅತಿಥಿ
| ಜೀ ಕೇರಳಂ
|
|-
|2025
|''ಸಾ ರೇ ಗಾ ಮಾ ಪಾ ಲಿಲ್ ಚಾಂಪ್ಸ್ 5''
|ತೀರ್ಪುಗಾರ
|ಜೀ ತಮಿಳು
|ಶ್ರೀನಿವಾಸ್, ಎಸ್. ಪಿ. ಚರಣ್ ಮತ್ತು ಸೈಂಧವಿ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|}
==ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು==
# ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ – ತಮಿಳು 2018, 2017, 2016 & 2025
# ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ – ಮಲಯಾಳಂ 2018, 2017, 2016.
# ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ವಿಜಯ್ ಪ್ರಶಸ್ತಿ 2014, 2012, 2009.
# ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ IIFA ಉತ್ಸವಂ ಪ್ರಶಸ್ತಿ ಕನ್ನಡ 2016.
# ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ (2023)
=== ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ===
'''ಶ್ವೇತಾ ಮೋಹನ್''' (ಜನನ 19 ನವೆಂಬರ್ 1985) ಭಾರತೀಯ ಹಿನ್ನೆಲೆ ಗಾಯಕಿ. ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಐದು ಫಿಲ್ಮ್ಫೇರ್ ಪ್ರಶಸ್ತಿಗಳನ್ನು (ದಕ್ಷಿಣ), ಒಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಒಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಲನಚಿತ್ರ ಸಂಗೀತ ಮತ್ತು ಆಲ್ಬಂಗಳಿಗೆ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಅವರ ಸ್ಫೂರ್ತಿಗಳಲ್ಲಿ ಸುಜಾತಾ ಮೋಹನ್ (ಅವರ ತಾಯಿ), ಶ್ರೇಯಾ ಘೋಷಾಲ್, ಅಲ್ಕಾ ಯಾಗ್ನಿಕ್, ಸಾಧನಾ ಸರ್ಗಮ್ ಮತ್ತು ಕೆ.ಎಸ್. ಚಿತ್ರಾ ಸೇರಿದ್ದಾರೆ.<ref>{{cite news|url=https://timesofindia.indiatimes.com/entertainment/hindi/music/news/Shweta-Mohan-is-happy/etarticleshow/5513702.cms|archive-url=https://web.archive.org/web/20110811062128/http://articles.timesofindia.indiatimes.com/2010-01-30/news-and-interviews/28126139_1_awards-galore-ashwin-music|url-status=live|archive-date=11 August 2011|title=Shweta Mohan is happy|date=30 January 2010|work=[[The Times of India]]|access-date=7 May 2010|first1=Sindhu|last1=Vijayakumar}}</ref>
==== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ====
'''[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]]'''ಗಳು [[ಕೇರಳದ ಚಲನಚಿತ್ರ|ಕೇರಳದಲ್ಲಿ ನಿರ್ಮಿಸಲಾದ ಚಲನಚಿತ್ರಕ್ಕಾಗಿ]] ನೀಡುವ ಚಲನಚಿತ್ರ ಪ್ರಶಸ್ತಿಗಳಾಗಿವೆ. ಪ್ರಶಸ್ತಿಗಳನ್ನು 1998 ರಿಂದ [[ಕೇರಳ ರಾಜ್ಯ ಚಲಚಿತ್ರ ಅಕಾಡೆಮಿ]]ಯು ಭಾರತದ ಕೇರಳ ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಪರವಾಗಿ ನೀಡುತ್ತದೆ. ಶ್ವೇತಾ ಅವರು ಒಂದು ಪ್ರಶಸ್ತಿಯನ್ನು ಪಡೆದಿದ್ದಾರೆ.
{| class="wikitable plainrowheaders" width="100%"
! scope="col" width=5% | ವರ್ಷ
! scope="col" width=39% | ಚಿತ್ರ
! scope="col" width=39% | ನಾಮನಿರ್ದೇಶನಗೊಂಡ ಹಾಡು
! scope="col" width=15% | ಫಲಿತಾಂಶ
! scope="col" width=2% | ಉಲ್ಲೇಖ
|-
! scope="row"| 2007
|''ನಿವೇದ್ಯಂ''
| "ಕೊಲಕ್ಕುಳಲ್ ವಿಳಿ ಕೇಟ್ಟೋ"
| {{won}}
|
|}
==== ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ====
'''[[ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ]]'''ಗಳು ಭಾರತದಲ್ಲಿ [[ತಮಿಳು ಚಿತ್ರಗಳಿಗೆ]] ನೀಡಲಾಗುವ ಅತ್ಯಂತ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಾಗಿವೆ. ಅವುಗಳನ್ನು ಪ್ರತಿವರ್ಷ ಪ್ರತಿಭೆಗಳನ್ನು ಗೌರವಿಸಲು ಮತ್ತು [[ದಕ್ಷಿಣ ಭಾರತೀಯ]] [[ಚಲನಚಿತ್ರೋದ್ಯಮ]]ಕ್ಕೆ ಪ್ರೋತ್ಸಾಹ ಮತ್ತು ಪ್ರೇರಣೆಯನ್ನು ನೀಡಲು '''[[ತಮಿಳುನಾಡು ಸರ್ಕಾರ]]'''ವು ನೀಡುತ್ತದೆ. ಶ್ವೇತಾ ಅವರು ಒಂದು ಪ್ರಶಸ್ತಿಯನ್ನು ಪಡೆದಿದ್ದಾರೆ.
{| class="wikitable plainrowheaders" width="100%"
! scope="col" width=5% | ವರ್ಷ
! scope="col" width=39% | ಚಿತ್ರ
! scope="col" width=39% | ನಾಮನಿರ್ದೇಶನಗೊಂಡ ಹಾಡು
! scope="col" width=15% | ಫಲಿತಾಂಶ
! scope="col" width=2% | ಉಲ್ಲೇಖ
|-
! scope="row"|2011
| '' ಬಹು ಚಿತ್ರಗಳು''
| " ವಿವಿಧ ಹಾಡುಗಳು "
| {{won}}
|
|}
==== ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ====
'''[[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]]'''ವು ವಾರ್ಷಿಕ '''[[ಫಿಲ್ಮ್ಫೇರ್ ಪ್ರಶಸ್ತಿ]]'''ಗಳ [[ದಕ್ಷಿಣ ಭಾರತ]] ವಿಭಾಗವಾಗಿದ್ದು, '''[[ದಿ ಟೈಮ್ಸ್ ಗ್ರೂಪ್]]''' ಸಂಸ್ಥೆಯು [[ದಕ್ಷಿಣ ಭಾರತೀಯ ಚಲನಚಿತ್ರೋದ್ಯಮ]]ದ ವೃತ್ತಿಪರರ ಕಲಾತ್ಮಕ ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸಲು ಪ್ರಸ್ತುತಪಡಿಸುತ್ತದೆ. ಶ್ವೇತಾ ಅವರು ಫಿಲ್ಮ್ಫೇರ್ ದಕ್ಷಿಣದಿಂದ ಪ್ರಶಸ್ತಿ ಪಡೆದ ಮತ್ತು ನಾಮನಿರ್ದೇಶನಗೊಂಡ ಗಾಯಕಿಯಾಗಿದ್ದು, 3 ಭಾಷೆಗಳಲ್ಲಿ 20 ನಾಮನಿರ್ದೇಶನಗಳಿಂದ 6 ಪ್ರಶಸ್ತಿಗಳನ್ನು ಪಡೆದಿದ್ದಾರೆ.
{| class="wikitable plainrowheaders" width="100%"
! scope="col" width=5% | ವರ್ಷ
! scope="col" width=39% | ಭಾಷೆ
! scope="col" width=39% | ಚಿತ್ರ
! scope="col" width=39% | ನಾಮನಿರ್ದೇಶನಗೊಂಡ ಹಾಡು
! scope="col" width=15% | ಫಲಿತಾಂಶ
! scope="col" width=2% | ಉಲ್ಲೇಖ
|-
! scope="row" |''2008''
|ಮಲಯಾಳಂ
|''ಓರೆ ಕಡಲ್''
|"ಯಮುನಾ ವೇರುಥೆ"
| {{Won}}
|
|-
! scope="row" |''2009''
|ತಮಿಳು
|''ಪಿರಿವೋಮ್ ಸಂಧಿಪೋಮ್''
|"ಕಂಡೇನ್ ಕಂಡೇನ್"
| rowspan="5" {{Nominated}}
|
|-
! scope="row" rowspan="2"|''2010''
|rowspan="3"| ಮಲಯಾಳಂ
|''ಮೋಜ್ & ಕ್ಯಾಟ್''
|"ತೊಟ್ಟಾಲ್ ಪೂಕ್ಕುಂ"
|
|-
|''ರಾಬಿನ್ಹುಡ್''
|"ಪ್ರಿಯಾನು ಮಾತ್ರಂ"
|
|-
! scope="row" |''2011''
|''ಒರು ನಾಳ್ ವರುಂ''
|"ಮಾವಿನ್ ಚೋಟ್ಟಿಲೆ"
|
|-
! scope="row" |''2012''
|ತಮಿಳು
|''180''
|"ನೀ ಕೂರಿನಾಲ್"
|
|-
! scope="row" |''2013''
|rowspan="2"| ಮಲಯಾಳಂ
|''ಅರಿಕೆ''
|"ಶ್ಯಾಮ ಹರೇ"
| {{Won}}
|
|-
! scope="row" rowspan="2" |''2015''
|''ಒಟ್ಟಮಂದರಂ''
|"ಒನ್ನನಾಂ ಕೊಂಬಾತೆ"
| rowspan="3" {{Nominated}}
|
|-
|ತಮಿಳು
|''ಕಾವಿಯ ತಲೈವನ್''
|"ಯಾರುಮಿಲ್ಲ "
|
|-
! scope="row" rowspan="2" |''2016''
|ಮಲಯಾಳಂ
|''ಸು ಸು ಸುಧಿ ವಾತ್ಮೀಕಂ''
|"ಕಯಾಂಬೂ ನಿರಮಾಯಿ"
|
|-
|ತಮಿಳು
|''ತಂಗಮಗನ್''
|"ಎನ್ನ ಸೊಲ್ಲ"
| {{Won}}
|
|-
! scope="row" rowspan="2" |''2017''
|ಮಲಯಾಳಂ
|''ವೈಟ್''
|"ಒರುವೇಳ ವೀಂಡುಮೀ"
| {{Nominated}}
|
|-
|ತಮಿಳು
|''ಕಬಾಲಿ''
|"ಮಾಯನಾಧಿ"
| {{Won}}
|
|-
! scope="row" rowspan="2" |''2018''
|ಮಲಯಾಳಂ
|''ಮುಂತಿರಿವಳ್ಳಿಕಲ್ ತಾಳಿರ್ಕ್ಕುಂಬೋಲ್''
|"ಒರು ಪುಳಯಾರಿಕಿಲ್"
|rowspan="4" {{Nominated}}
|
|-
|ತಮಿಳು
|''ಮೆರ್ಸಲ್''
|"ಮಾಚೋ"
|
|-
! scope="row" |''2022''
|ಮಲಯಾಳಂ
|''ವರಣೆ ಅವಶ್ಯಮುಂಡ್''
|"ಮುತ್ತುನ್ನೆ ಕಣ್ಣುಕಳಿಲ್"
|
|-
! scope="row" |''2023''
|ಮಲಯಾಳಂ
|''ಮಲಯಂಕುಂಜು''
|"ಮನ್ನುಂ ನಿರಂಜೆ"
|
|-
! scope="row" |''2024''
|ತೆಲುಗು
|''ಸರ್''
|"ಮಸ್ತಾರು ಮಸ್ತಾರು"
|{{won}}
|
|-
! scope="row" rowspan ="2"|''2025''
|ತಮಿಳು
|''ಅಮರನ್''
|"ಹೇ ಮಿನ್ನಾಲೆ"
|{{won}}
|
|-
|ಮಲಯಾಳಂ
|''ರೈಫಲ್ ಕ್ಲಬ್''
|"ಗಂಧರ್ವ ಗಾನಂ"
|{{Nominated}}
|
|}
==== ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ====
'''[[ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]'''ಗಳು, SIIMA ಪ್ರಶಸ್ತಿಗಳು ಎಂದೂ ಕರೆಯಲ್ಪಡುತ್ತವೆ, ಇದು 2012 ರಲ್ಲಿ ಪ್ರಾರಂಭವಾಯಿತು, ಇದು [[ದಕ್ಷಿಣ ಭಾರತೀಯ ಚಲನಚಿತ್ರೋದ್ಯಮ]]ದ ಕಲಾತ್ಮಕ ಮತ್ತು ತಾಂತ್ರಿಕ ಸಾಧನೆಗಳಿಗೆ ಪ್ರಶಸ್ತಿಗಳನ್ನು ನೀಡುತ್ತದೆ. ಶ್ವೇತಾ ಅವರು 21 ನಾಮನಿರ್ದೇಶನಗಳಿಂದ ಒಂದು ಪ್ರಶಸ್ತಿಯನ್ನು ಪಡೆದಿದ್ದಾರೆ.
{| class="wikitable plainrowheaders" width="100%"
! scope="col" width=5% | ವರ್ಷ
! scope="col" width=39% | ಭಾಷೆ
! scope="col" width=39% | ಚಿತ್ರ
! scope="col" width=39% | ನಾಮನಿರ್ದೇಶನಗೊಂಡ ಹಾಡು
! scope="col" width=15% | ಫಲಿತಾಂಶ
! scope="col" width=2% | ಉಲ್ಲೇಖ
|-
! scope="row" rowspan="2" | 2013
|ಮಲಯಾಳಂ
|''ಅರಿಕೆ''
|"ಶ್ಯಾಮ ಹರೇ"
| rowspan="8" {{nom}}
|
|-
|ತಮಿಳು
|''3''
|"ನೀ ಪಾರ್ಥ"
|
|-
! scope="row" rowspan="2 | 2014
|ಮಲಯಾಳಂ
|''ಕಧಾವೀಡು''
|"ಕಟ್ಟಿಲೆ ಪೂಮನಂ"
|
|-
|ತಮಿಳು
|''ಮರಿಯನ್''
|"ಇನ್ನುಂ ಕೊಂಜಂ"
|
|-
! scope="row" rowspan="2" | 2015
|ಮಲಯಾಳಂ
|''ಒಟ್ಟಮಂದರಂ''
|"ಒನ್ನನಾಂ ಕೊಂಬಾತೆ"
|
|-
|ತಮಿಳು
|''ಕಾವಿಯ ತಲೈವನ್''
|"ಯಾರುಮಿಲ್ಲ"
|
|-
! scope="row" rowspan="3" | 2016
|ಮಲಯಾಳಂ
|''ಅನಾರ್ಕಲಿ''
|"ಏ ತನುಥ"
|
|-
|ಕನ್ನಡ
|''ಕೆಂದಸಂಪಿಗೆ''
|"ಕನಸಲಿ ನಡೆಸು"
|
|-
|ತಮಿಳು
|''ತಂಗಮಗನ್''
|"ಎನ್ನ ಸೊಲ್ಲ"
|{{won}}
|
|-
! scope="row" | 2017
|ಮಲಯಾಳಂ
|''ವೈಟ್''
|"ಒರುವೇಳ ವೀಂಡುಮೀ"
| rowspan="12" {{nom}}
|
|-
! scope="row" rowspan="2" | 2018
|ಮಲಯಾಳಂ
|''ಒರು ಸಿನೆಮಕ್ಕಾರನ್''
|"ಒಳುಕಿ ಒಳುಕಿ"
|
|-
|rowspan="2" |ತಮಿಳು
|''ಪಾ. ಪಾಂಡಿ''
|"ಪಾರ್ಥೇನ್"
|
|-
! scope="row" rowspan="1" | 2019
|''ನಿಮಿರ್''
|"ಪೂವುಕ್ಕು"
|
|-
! scope="row" rowspan="2" | 2021
| rowspan="4" | ಮಲಯಾಳಂ
|''ವಿಜಯ್ ಸೂಪರಮ್ ಪೌರ್ಣಮಿಯಮ್''
|"ಏಥೋ ಮಝಯಿಲ್"
|
|-
|''ಕಪ್ಪೇಲ''
|"ಕಣ್ಣಿಲ್"
|
|-
! scope="row" rowspan="1" | 2022
|''ಚತುರ್ ಮುಖಂ''
|"ಮಾಯಕೊಂಡು"
|
|-
! scope="row" rowspan="1" | 2023
|''ಮಲಯಂಕುಂಜು''
|"ಮನ್ನುಂ ನಿರಂಜೆ"
|
|-
! scope="row" rowspan="2" | 2024
|ತಮಿಳು
|''ವಾಥಿ''
|"ವ ವಾಥಿ"
|
|-
|ತೆಲುಗು
|''ಸರ್''
|"ಮಸ್ತಾರು ಮಸ್ತಾರು"
|
|-
! scope="row" rowspan="2" | 2025
|ತಮಿಳು
|''ಅಮರನ್''
|"ಹೇ ಮಿನ್ನಾಲೆ"
|
|-
|ತೆಲುಗು
|''ಲಕ್ಕಿ ಬಾಸ್ಕರ್''
|"ಶ್ರೀಮತಿ ಗಾರು"
|
|-
|}
==== ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು ====
'''[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿ]]'''ಯು [[ಮಲಯಾಳಂ ಚಿತ್ರಗಳಿಗೆ]] '''[[ಏಷ್ಯಾನೆಟ್ (ಟಿವಿ ಚಾನೆಲ್)|ಏಷ್ಯಾನೆಟ್]]''' ಪ್ರತಿವರ್ಷ ನೀಡುವ ಪ್ರಶಸ್ತಿ ಸಮಾರಂಭವಾಗಿದೆ, ಇದು [[ಕೇರಳ]] ರಾಜ್ಯದ [[ದಕ್ಷಿಣ ಭಾರತ|ದಕ್ಷಿಣ-ಭಾರತೀಯ]] [[ಮಲಯಾಳಂ]]-ಭಾಷೆಯ ದೂರದರ್ಶನ ಜಾಲವಾಗಿದೆ. ಶ್ವೇತಾ ಅವರು ಮೂರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2008
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ನಾವೆಲ್
|ಕುಯಿಲೆ
|rowspan="3"{{won}}
|-
|2014
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಒಟ್ಟಮಂದರಂ
|ಒನ್ನನಾಂ ಕೊಂಬಾತೆ
|-
|2017
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಮುಂತಿರಿವಳ್ಳಿಕಲ್ ತಾಳಿರ್ಕ್ಕುಂಬೋಲ್
|ಒರು ಪುಳಯಾರಿಕಿಲ್
|}
==== ವನಿತಾ ಚಲನಚಿತ್ರ ಪ್ರಶಸ್ತಿಗಳು ====
'''ವನಿತಾ ಚಲನಚಿತ್ರ ಪ್ರಶಸ್ತಿ'''ಗಳನ್ನು [[ಭಾರತ]]ದ [[ಮಲಯಾಳ ಮನೋರಮ]] ಗುಂಪಿನ ''[[ವನಿತಾ]]'' ನಿಯತಕಾಲಿಕೆಯು [[ಕೇರಳ]] ರಾಜ್ಯದಲ್ಲಿ ಪ್ರತಿವರ್ಷ ಪ್ರದಾನ ಮಾಡುತ್ತದೆ.<ref>{{Cite news|url=http://english.manoramaonline.com/entertainment/entertainment-news/vanitha-film-awards-mohanlal-manju-warrier-win.html|title=Vanitha-Cera film awards 2017: Mohanlal, Manju Warrier win top honors|newspaper=OnManorama|access-date=2017-02-08}}</ref> [[ಮಲಯಾಳಂ ಭಾಷೆ]] ಚಲನಚಿತ್ರೋದ್ಯಮದಲ್ಲಿ ಕಲಾತ್ಮಕ ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸಲು ಪ್ರಶಸ್ತಿ ಸಮಾರಂಭವನ್ನು ಸ್ಥಾಪಿಸಲಾಗಿದೆ. 1998 ರಿಂದ ಪ್ರತಿವರ್ಷ ನಡೆಯುತ್ತದೆ ಮತ್ತು ಪ್ರಸಾರವಾಗುತ್ತದೆ. [[ಶ್ವೇತಾ ಮೋಹನ್]] ಅವರು ಎರಡು ವಿಭಿನ್ನ ಹಾಡುಗಳಿಗೆ ಒಂದು ಪ್ರಶಸ್ತಿಯನ್ನು ಗೆದ್ದಿದ್ದಾರೆ.
{| class="wikitable sortable"
!ವರ್ಷ
!ವರ್ಗ
!ಚಿತ್ರ(ಗಳು)
!ಹಾಡು(ಗಳು)
!ಫಲಿತಾಂಶ
|-
|row rowspan="2"|2017
|row rowspan="2"|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಬಾಹುಬಲಿ 2: ದಿ ಕನ್ಕ್ಲೂಷನ್
|ಕಣ್ಣ ನೀ ಉರಂಗೇಡ
|rowspan="2"{{won}}
|-
|ಮುಂತಿರಿವಳ್ಳಿಕಲ್ ತಾಳಿರ್ಕ್ಕುಂಬೋಲ್
|ಒರು ಪುಳಯಾರಿಕಿಲ್
|}
==== ಅಮೃತ ಟಿವಿ ಚಾನೆಲ್ ಪ್ರಶಸ್ತಿ ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2007
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ನಿವೇದ್ಯಂ
|ಕೊಲಕ್ಕುಳಲ್
| {{won}}
|}
==== ವಿ4 ಮನರಂಜಕರ ಪ್ರಶಸ್ತಿ ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2014
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಕಾವಿಯ ತಲೈವನ್
| ಯಾರುಮಿಲ್ಲ ತನಿ
| {{won}}
|}
==== ಜೈಹಿಂದ್ ಟಿವಿ ಚಲನಚಿತ್ರ ಪ್ರಶಸ್ತಿಗಳು ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2010
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಒರು ನಾಳ್ ವರುಂ
| ಮಾವಿನ್ ಚೋಟ್ಟಿಲೆ
| {{won}}
|}
==== ಏಷ್ಯಾವಿಷನ್ ಚಲನಚಿತ್ರ ಪ್ರಶಸ್ತಿಗಳು ====
'''[[ಏಷ್ಯಾವಿಷನ್ ಪ್ರಶಸ್ತಿಗಳು|ಏಷ್ಯಾವಿಷನ್ ಚಲನಚಿತ್ರ ಪ್ರಶಸ್ತಿ]]'''ಗಳು [[ದಕ್ಷಿಣ ಭಾರತೀಯ ಚಲನಚಿತ್ರ]]ದ ಕಲಾವಿದರು ಮತ್ತು ತಂತ್ರಜ್ಞರನ್ನು ಗೌರವಿಸಲು 2006 ರಿಂದ ಪ್ರತಿವರ್ಷ ನಡೆಯುತ್ತವೆ. ಶ್ವೇತಾ ಅವರು ಒಂದು ಪ್ರಶಸ್ತಿಯನ್ನು ಪಡೆದಿದ್ದಾರೆ.
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2010
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಒರು ನಾಳ್ ವರುಂ
| ಮಾವಿನ್ ಚೋಟ್ಟಿಲೆ
|{{won}}
|}
==== ಮಿರ್ಚಿ ಮ್ಯೂಸಿಕ್ ಪ್ರಶಸ್ತಿಗಳು ದಕ್ಷಿಣ ====
'''[[ಮಿರ್ಚಿ ಮ್ಯೂಸಿಕ್ ಪ್ರಶಸ್ತಿಗಳು ದಕ್ಷಿಣ]]'''ವು ವಾರ್ಷಿಕ '''[[ಮಿರ್ಚಿ ಮ್ಯೂಸಿಕ್ ಪ್ರಶಸ್ತಿ]]'''ಗಳ ದಕ್ಷಿಣ ಭಾರತ ವಿಭಾಗವಾಗಿದ್ದು, [[ದಕ್ಷಿಣ ಭಾರತೀಯ ಸಂಗೀತೋದ್ಯಮ]]ದ ವೃತ್ತಿಪರರ ಕಲಾತ್ಮಕ ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸಲು 2010 ರಲ್ಲಿ '''[[ರೇಡಿಯೋ ಮಿರ್ಚಿ]]''' ಪ್ರಾರಂಭಿಸಿತು.
{| class="wikitable sortable"
!ವರ್ಷ
!ವರ್ಗ
!ಭಾಷೆ
!ಚಿತ್ರ
!ಹಾಡು
!ಫಲಿತಾಂಶ
|-
|2011
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ತೆಲುಗು
|ಕೋಮರಂ ಪುಳಿ
| ಅಮ್ಮ ಥಲ್ಲೆ
| {{won}}
|}
==== ವಿಜಯ್ ಮ್ಯೂಸಿಕ್ ಪ್ರಶಸ್ತಿಗಳು ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2011
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|180
| ನೀ ಕೂರಿನಾಲ್
| {{won}}
|}
==== ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿಗಳು ====
'''[[ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿ]]'''ಯು, ತಮಿಳು ಚಲನಚಿತ್ರ ವಿಭಾಗವಾಗಿದ್ದು, ವಾರ್ಷಿಕ '''[[ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿ]]'''ಯು, ತಮಿಳು ಭಾರತೀಯ ಸಂಗೀತೋದ್ಯಮದ ವೃತ್ತಿಪರರ ಕಲಾತ್ಮಕ ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸುತ್ತದೆ.
{| class="wikitable sortable"
!ವರ್ಷ
!ವರ್ಗ
!ಫಲಿತಾಂಶ
|-
|2012
| ಮಹಿಳಾ ಹಿನ್ನೆಲೆ ಗಾಯಕಿ ತೀರ್ಪುಗಾರರ ಪ್ರಶಸ್ತಿ
| {{won}}<ref>{{cite news|url=http://timesofindia.indiatimes.com/entertainment/hindi/music/news/Shweta-Mohan-bags-award/articleshow/12145168.cms|title=Shweta Mohan bags award|work=[[The Times of India]]}}</ref>
|}
==== ದಕ್ಷಿಣ ಭಾರತೀಯ ಛಾಯಾಗ್ರಾಹಕರ ಸಂಘ ಪ್ರಶಸ್ತಿಗಳು ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2014
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಕಾವಿಯ ತಲೈವನ್
| ಯಾರುಮಿಲ್ಲ ತನಿ
| {{won}}
|}
== ಇತರ ಪ್ರಮುಖ ಗೌರವಗಳು ಮತ್ತು ಮಾನ್ಯತೆಗಳು ==
* 2007: ದೂರದರ್ಶನದ ಯುವ ಪ್ರಶಸ್ತಿ "ಕೊಲಕುಳಲ್ ವಿಳಿ ಕೇಟ್ಟೋ ರಾಧೇ" ನಿವೇದ್ಯಂ (ಮಲಯಾಳಂ)
* 2007: ಸನ್ಫೀಸ್ಟ್ ಇಸೈ ಅರುವಿ ಪ್ರಶಸ್ತಿ
* 2007: ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಚಲನಚಿತ್ರ ವಿಮರ್ಶಕರ ಪ್ರಶಸ್ತಿ
* 2011: ಬಿಗ್ ತಮಿಳು ಮೆಲೋಡಿ ಪ್ರಶಸ್ತಿಗಳು ಅತ್ಯುತ್ತಮ ಮಧುರ ಮಹಿಳಾ ಹಿನ್ನೆಲೆ ಗಾಯಕಿ - "ನೀ ಕೂರಿನಾಲ್" (180)
* 2012: BIG FM ನಲ್ಲಿ ಅತಿ ಹೆಚ್ಚು ಪ್ರಸಾರಗಳಿಗಾಗಿ ಪ್ರಶಸ್ತಿ - "ನೀ ಪಾರ್ಥ ವಿಳಿಗಲ್"(3) (ವಿಜಯ್ ಯೇಸುದಾಸ್ ಅವರೊಂದಿಗೆ)
* 2014: ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ತಿಕ್ಕುರಿಸ್ಸಿ ಚಲನಚಿತ್ರ ಪ್ರಶಸ್ತಿ 2014 - ' 'ಒಟ್ಟಮಂದರಂ' ' (ಸುಜಾತಾ ಮೋಹನ್ ಅವರೊಂದಿಗೆ ಹಂಚಿಕೊಂಡಿದ್ದಾರೆ)
* 2014: ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ SICA ಪ್ರಶಸ್ತಿ 2014 - "ಯಾರುಮಿಲ್ಲ"
==ಉಲ್ಲೇಖಗಳು==
{{reflist}}
==ಬಾಹ್ಯ ಕೊಂಡಿಗಳು==
* {{IMDb name|2895650}}
* {{Facebook|shwetamohanofficial|ಶ್ವೇತಾ ಮೋಹನ್}}
* {{Twitter|_shwetamohan_|ಶ್ವೇತಾ ಮೋಹನ್}}
{{DEFAULTSORT:ಮೋಹನ್, ಶ್ವೇತಾ}}
[[Category:1985 ಜನನಗಳು]]
[[Category:21ನೇ ಶತಮಾನದ ಭಾರತೀಯ ಮಹಿಳಾ ಗಾಯಕಿಯರು]]
[[Category:ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ವಿಜೇತರು]]
[[Category:ಭಾರತೀಯ ಪಾಪ್ ಗಾಯಕಿಯರು]]
[[Category:ಭಾರತೀಯ ಮಹಿಳಾ ಹಿನ್ನೆಲೆ ಗಾಯಕಿಯರು]]
[[Category:ಭಾರತೀಯ ಮಹಿಳಾ ಪಾಪ್ ಗಾಯಕಿಯರು]]
[[Category:ಕನ್ನಡ ಭಾಷೆಯ ಹಿನ್ನೆಲೆ ಗಾಯಕಿಯರು]]
[[Category:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[Category:ಜೀವಂತ ವ್ಯಕ್ತಿಗಳು]]
[[Category:ಮಲಯಾಳಂ ಭಾಷೆಯ ಹಿನ್ನೆಲೆ ಗಾಯಕಿಯರು]]
[[Category:ಚೆನ್ನೈನ ಗಾಯಕಿಯರು]]
[[Category:ಸ್ಟೆಲ್ಲಾ ಮಾರಿಸ್ ಕಾಲೇಜು, ಚೆನ್ನೈ ಹಳೆಯ ವಿದ್ಯಾರ್ಥಿಗಳು]]
[[Category:ತಮಿಳು ಭಾಷೆಯ ಹಿನ್ನೆಲೆ ಗಾಯಕಿಯರು]]
[[Category:ತಮಿಳುನಾಡಿನ ಮಹಿಳಾ ಸಂಗೀತಗಾರರು]]
[[Category:ಭಾರತೀಯ ಸಂಗೀತಗಾರ ಪಡೆದ ಪ್ರಶಸ್ತಿಗಳ ಪಟ್ಟಿಗಳು|ಮೋಹನ್, ಶ್ವೇತಾ]]
[[Category:ಶ್ವೇತಾ ಮೋಹನ್|ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು]]
[[Category:ಶ್ವೇತಾ ಮೋಹನ್| ]]
m4oe0y662jv2kcwdmca29kxg3h9aqhq
ಸದಸ್ಯರ ಚರ್ಚೆಪುಟ:Sanjay Chigari
3
180108
1379453
2026-08-08T14:55:50Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1379453
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Sanjay Chigari}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೦:೨೫, ೮ ಆಗಸ್ಟ್ ೨೦೨೬ (IST)
cdle0euo632m6w1bkgwbo7y4rpt8tm0
ಕರಿಯಾಂಕೋಡೆ ನದಿ
0
180109
1379456
2026-08-08T15:14:41Z
A826
72368
ಹೊಸ ಪುಟ: {{Infobox river | name = ಕರಿಯಾಂಕೋಡೆ ನದಿ | native_name = | native_name_lang = | other_name = ತೇಜಸ್ವಿನಿ ನದಿ | image = Karyangod River.png | image_size = | image_caption = | pushpin_map = | pushpin_map_size = | pushpin_caption = | subdivision_type1 = ದೇಶ | subdivision_name1 = ಭಾರತ | subdivision_type2 = ರಾಜ್ಯ...
1379456
wikitext
text/x-wiki
{{Infobox river
| name = ಕರಿಯಾಂಕೋಡೆ ನದಿ
| native_name =
| native_name_lang =
| other_name = ತೇಜಸ್ವಿನಿ ನದಿ
| image = Karyangod River.png
| image_size =
| image_caption =
| pushpin_map =
| pushpin_map_size =
| pushpin_caption =
| subdivision_type1 = ದೇಶ
| subdivision_name1 = ಭಾರತ
| subdivision_type2 = ರಾಜ್ಯಗಳು
| subdivision_name2 = [[ಕೇರಳ]], [[ಕರ್ನಾಟಕ]]
| subdivision_type3 = ಜಿಲ್ಲೆ
| subdivision_name3 = [[ಕಾಸರಗೋಡು ಜಿಲ್ಲೆ|ಕಾಸರಗೋಡು]], [[ಕಣ್ಣೂರು ಜಿಲ್ಲೆ|ಕಣ್ಣೂರು]], [[ಕೊಡಗು ಜಿಲ್ಲೆ|ಕೊಡಗು]]
| subdivision_type4 = ಪಟ್ಟಣಗಳು
| subdivision_name4 = [[ಪುಲಿಂಗೋಮ್]], [[ಚೆರುಪುಳ (ಕಣ್ಣೂರು)|ಚೆರುಪುಳ]], [[ಕಯ್ಯೂರ್]], [[ನೀಲೇಶ್ವರಂ]]
| length = 64km
| source1 = ಪಡಿನಾಲ್ಕಾಡ್ ಘಾಟ್ ಮೀಸಲು ಅರಣ್ಯ, [[ಕರ್ನಾಟಕ]]
| source1_location = [[ಕೊಡಗು|ಕೊಡಗು ಜಿಲ್ಲೆ]], ಭಾರತ
| source1_coordinates =
| source1_elevation = 1520 ಮೀ
| mouth = [[ಅರೇಬಿಯನ್ ಸಮುದ್ರ]]
| mouth_location = ತುರುತಿ ಬಳಿ, [[ನೀಲೇಶ್ವರಂ]], ಭಾರತ
| mouth_coordinates =
| mouth_elevation = {{convert|0|m|abbr=on}}
| progression =
| river_system =
| basin_size =
| tributaries_left =
| tributaries_right =
| custom_label =
| custom_data =
| extra =
}}
'''ಕರಿಯಾಂಕೋಡೆ ನದಿ'''ಯನ್ನು '''ತೇಜಸ್ವಿನಿ ನದಿ''' ಎಂದೂ ಕರೆಯಲಾಗುತ್ತದೆ. ಇದು [[ಕೇರಳ ರಾಜ್ಯ]]ದಲ್ಲಿ ಹರಿಯುವ 44 ನದಿಗಳಲ್ಲಿ ಒಂದಾಗಿದೆ. ಕರಿಯಾಂಕೋಡೆ ನದಿಯು ಕೇರಳ ರಾಜ್ಯದ [[ಕಾಸರಗೋಡು ಜಿಲ್ಲೆ]] ಮತ್ತು [[ಕಣ್ಣೂರು ಜಿಲ್ಲೆ]]ಗಳ ನಡುವಿನ ಗಡಿಯನ್ನು ರೂಪಿಸುವ ಪ್ರಮುಖ ನದಿಯಾಗಿದೆ. ಇದು [[ವೆಳ್ಳಾರಿಕುಂಡು]], [[ಹೊಸದುರ್ಗ]] ಮತ್ತು [[ಪಯ್ಯನ್ನೂರು]] [[ಕೇರಳದ ತಾಲೂಕುಗಳು|ತಾಲೂಕುಗಳ]] ಬೆಟ್ಟಗಳು ಮತ್ತು ಕಣಿವೆಗಳ ಮೂಲಕ ಹರಿಯುವ ಕಾಸರಗೋಡು ಜಿಲ್ಲೆಯ ಎರಡನೇ ಅತಿದೊಡ್ಡ ನದಿಯಾಗಿದೆ. [[ಪುಲಿಂಗೋಮ್]], [[ಚೆರುಪುಳ (ಕಣ್ಣೂರು)|ಚೆರುಪುಳ]], ಕಕ್ಕಡವು, ಪೆರುಂಬಟ್ಟ, ಮುಕ್ಕಡ, [[ಕಯ್ಯೂರ್]], [[ಕಿಳಾಯಿಕೋಡ್]] ಮತ್ತು ಅಂಡೋಲ್ ನಂತಹ ಸ್ಥಳಗಳು ಈ ನದಿಯ ದಂಡೆಯಲ್ಲಿವೆ.<ref>{{Cite web |url=http://www.stateofkerala.in/districts/kasaragod.php |title=Kerala State - Everything about Kerala}}</ref><ref>{{Cite web |url=https://puzhakal0.tripod.com/river.html |title=About the Rivers of Kerala}}</ref>
==ಉಗಮ==
'''ಕರಿಯಾಂಗೋಡೆ ನದಿ'''ಯು [[ಕರ್ನಾಟಕ]] ರಾಜ್ಯದ [[ಕೊಡಗು|ಕೊಡಗು ಬೆಟ್ಟಗಳ]] ಮೀಸಲು ಅರಣ್ಯದಿಂದ ಉಗಮಿಸುತ್ತದೆ.
==ಉಪನದಿಗಳು==
ಚೈತ್ರವಾಹಿನಿ ನದಿ ಮತ್ತು ಪುಲಿಂಗೋಮ್ ನದಿ ಕರಿಯಾಂಗೋಡೆ ನದಿಯ ಎರಡು ಉಪನದಿಗಳಾಗಿವೆ.
==ಪ್ರವಾಸೋದ್ಯಮ==
ಕರಿಯಾಂಗೋಡೆ ನದಿಯಲ್ಲಿ, ತೇಜಸ್ವಿನಿ ನದಿ ಎಂದೂ ಕರೆಯಲ್ಪಡುವ, ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಕಣ್ಣೂರು ಜಿಲ್ಲೆಯ [[ಚೆರುಪುಳ, ಕಣ್ಣೂರು|ಚೆರುಪುಳ]] ಬಳಿ ಕರಿಯಾಂಗೋಡೆ ನದಿಯ ಭಾಗಗಳಲ್ಲಿ [[ವೈಟ್-ವಾಟರ್ ರಾಫ್ಟಿಂಗ್]] ಅನ್ನು ನಡೆಸಲಾಗುತ್ತದೆ. ಮಳೆಗಾಲ ಮತ್ತು ಮಳೆಗಾಲದ ನಂತರದ ಅವಧಿಯಲ್ಲಿ ರಾಫ್ಟಿಂಗ್ಗಾಗಿ 12.5 ಕಿ.ಮೀ. ವಿಭಾಗವನ್ನು ಬಳಸಲಾಗುತ್ತದೆ. ರಾಫ್ಟ್ಗಳು ಸಾಮಾನ್ಯವಾಗಿ 6 ರಿಂದ 7 ಭಾಗವಹಿಸುವವರನ್ನು ಹೊಂದಿರುತ್ತವೆ ಮತ್ತು ತರಬೇತಿ ಪಡೆದ ಮಾರ್ಗದರ್ಶಕರಿಂದ ನಡೆಸಲ್ಪಡುತ್ತವೆ. ಸ್ಥಳೀಯ ಅಧಿಕಾರಿಗಳು ನಿಗದಿಪಡಿಸಿದ ಸುರಕ್ಷತಾ ಪ್ರೋಟೋಕಾಲ್ಗಳ ಅಡಿಯಲ್ಲಿ ಪರವಾನಗಿ ಪಡೆದ ನಿರ್ವಾಹಕರು ಈ ಚಟುವಟಿಕೆಯನ್ನು ನಿರ್ವಹಿಸುತ್ತಾರೆ.<ref>{{cite web|url=https://kannurwhitewaterrafting.com/ |title=Cherupuzha white river rafting}}</ref><ref>{{cite web |url=https://www.keralatourism.org/kerala-article/2013/rafting-thejaswini-river/437 |title=Rafting on Tejaswini River |website=keralatourism.org}}</ref>
==ಕರಿಯಾಂಕೋಡೆ ನದಿಯ ಮೇಲಿನ ಸೇತುವೆಗಳು==
ಕರಿಯಾಂಕೋಡೆ ನದಿಯ ಮೇಲೆ ಅನೇಕ ಸೇತುವೆಗಳಿವೆ. ಮುಖ್ಯ ಸೇತುವೆಗಳಲ್ಲಿ ಪುಲಿಂಗೋಮ್ ಸೇತುವೆ, [[ಚೆರುಪುಳ (ಕಣ್ಣೂರು)|ಚೆರುಪುಳ]] ಸೇತುವೆ, ಕೊಲ್ಲಡ ಸೇತುವೆ, ಕಕ್ಕಡವು ಸೇತುವೆ, ಪೆರುಂಬಟ್ಟ ಸೇತುವೆ, ಮುಕ್ಕಡ ಸೇತುವೆ, ಅರಯಕಡವ್ ಸೇತುವೆ, ಅಂಡೋಲ್ ಪೂರಕ್ಕಡವ್ ತೂಗು ಸೇತುವೆ, ಕರಿಯಾಂಕೋಡೆ ಸೇತುವೆ ಮತ್ತು ಕೊಟ್ಟಾಪುರಂ ಸೇತುವೆ ಸೇರಿವೆ.
==ಉಲ್ಲೇಖಗಳು==
{{reflist}}
[[Category:ಕಾಸರಗೋಡು ಜಿಲ್ಲೆಯ ನದಿಗಳು]]
0zfuc683s5uwgtpb1bwocnx5fitxss8
1379541
1379456
2026-08-08T21:29:04Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1379541
wikitext
text/x-wiki
{{Infobox river
| name = ಕರಿಯಾಂಕೋಡೆ ನದಿ
| native_name =
| native_name_lang =
| other_name = ತೇಜಸ್ವಿನಿ ನದಿ
| image = Karyangod River.png
| image_size =
| image_caption =
| pushpin_map =
| pushpin_map_size =
| pushpin_caption =
| subdivision_type1 = ದೇಶ
| subdivision_name1 = ಭಾರತ
| subdivision_type2 = ರಾಜ್ಯಗಳು
| subdivision_name2 = [[ಕೇರಳ]], [[ಕರ್ನಾಟಕ]]
| subdivision_type3 = ಜಿಲ್ಲೆ
| subdivision_name3 = [[ಕಾಸರಗೋಡು ಜಿಲ್ಲೆ|ಕಾಸರಗೋಡು]], [[ಕಣ್ಣೂರು ಜಿಲ್ಲೆ|ಕಣ್ಣೂರು]], [[ಕೊಡಗು ಜಿಲ್ಲೆ|ಕೊಡಗು]]
| subdivision_type4 = ಪಟ್ಟಣಗಳು
| subdivision_name4 = [[ಪುಲಿಂಗೋಮ್]], [[ಚೆರುಪುಳ (ಕಣ್ಣೂರು)|ಚೆರುಪುಳ]], [[ಕಯ್ಯೂರ್]], [[ನೀಲೇಶ್ವರಂ]]
| length = 64km
| source1 = ಪಡಿನಾಲ್ಕಾಡ್ ಘಾಟ್ ಮೀಸಲು ಅರಣ್ಯ, [[ಕರ್ನಾಟಕ]]
| source1_location = [[ಕೊಡಗು|ಕೊಡಗು ಜಿಲ್ಲೆ]], ಭಾರತ
| source1_coordinates =
| source1_elevation = 1520 ಮೀ
| mouth = [[ಅರೇಬಿಯನ್ ಸಮುದ್ರ]]
| mouth_location = ತುರುತಿ ಬಳಿ, [[ನೀಲೇಶ್ವರಂ]], ಭಾರತ
| mouth_coordinates =
| mouth_elevation = {{convert|0|m|abbr=on}}
| progression =
| river_system =
| basin_size =
| tributaries_left =
| tributaries_right =
| custom_label =
| custom_data =
| extra =
}}
'''ಕರಿಯಾಂಕೋಡೆ ನದಿ'''ಯನ್ನು '''ತೇಜಸ್ವಿನಿ ನದಿ''' ಎಂದೂ ಕರೆಯಲಾಗುತ್ತದೆ. ಇದು [[ಕೇರಳ ರಾಜ್ಯ]]ದಲ್ಲಿ ಹರಿಯುವ 44 ನದಿಗಳಲ್ಲಿ ಒಂದಾಗಿದೆ. ಕರಿಯಾಂಕೋಡೆ ನದಿಯು ಕೇರಳ ರಾಜ್ಯದ [[ಕಾಸರಗೋಡು ಜಿಲ್ಲೆ]] ಮತ್ತು [[ಕಣ್ಣೂರು ಜಿಲ್ಲೆ]]ಗಳ ನಡುವಿನ ಗಡಿಯನ್ನು ರೂಪಿಸುವ ಪ್ರಮುಖ ನದಿಯಾಗಿದೆ. ಇದು [[ವೆಳ್ಳಾರಿಕುಂಡು]], [[ಹೊಸದುರ್ಗ]] ಮತ್ತು [[ಪಯ್ಯನ್ನೂರು]] [[ಕೇರಳದ ತಾಲೂಕುಗಳು|ತಾಲೂಕುಗಳ]] ಬೆಟ್ಟಗಳು ಮತ್ತು ಕಣಿವೆಗಳ ಮೂಲಕ ಹರಿಯುವ ಕಾಸರಗೋಡು ಜಿಲ್ಲೆಯ ಎರಡನೇ ಅತಿದೊಡ್ಡ ನದಿಯಾಗಿದೆ. [[ಪುಲಿಂಗೋಮ್]], [[ಚೆರುಪುಳ (ಕಣ್ಣೂರು)|ಚೆರುಪುಳ]], ಕಕ್ಕಡವು, ಪೆರುಂಬಟ್ಟ, ಮುಕ್ಕಡ, [[ಕಯ್ಯೂರ್]], [[ಕಿಳಾಯಿಕೋಡ್]] ಮತ್ತು ಅಂಡೋಲ್ ನಂತಹ ಸ್ಥಳಗಳು ಈ ನದಿಯ ದಂಡೆಯಲ್ಲಿವೆ.<ref>{{Cite web |url=http://www.stateofkerala.in/districts/kasaragod.php |title=Kerala State - Everything about Kerala |access-date=2026-08-08 |archive-date=2023-07-25 |archive-url=https://web.archive.org/web/20230725102718/https://www.stateofkerala.in/districts/kasaragod.php |url-status=dead }}</ref><ref>{{Cite web |url=https://puzhakal0.tripod.com/river.html |title=About the Rivers of Kerala |access-date=2026-08-08 |archive-date=2021-04-20 |archive-url=https://web.archive.org/web/20210420173444/https://puzhakal0.tripod.com/river.html |url-status=dead }}</ref>
==ಉಗಮ==
'''ಕರಿಯಾಂಗೋಡೆ ನದಿ'''ಯು [[ಕರ್ನಾಟಕ]] ರಾಜ್ಯದ [[ಕೊಡಗು|ಕೊಡಗು ಬೆಟ್ಟಗಳ]] ಮೀಸಲು ಅರಣ್ಯದಿಂದ ಉಗಮಿಸುತ್ತದೆ.
==ಉಪನದಿಗಳು==
ಚೈತ್ರವಾಹಿನಿ ನದಿ ಮತ್ತು ಪುಲಿಂಗೋಮ್ ನದಿ ಕರಿಯಾಂಗೋಡೆ ನದಿಯ ಎರಡು ಉಪನದಿಗಳಾಗಿವೆ.
==ಪ್ರವಾಸೋದ್ಯಮ==
ಕರಿಯಾಂಗೋಡೆ ನದಿಯಲ್ಲಿ, ತೇಜಸ್ವಿನಿ ನದಿ ಎಂದೂ ಕರೆಯಲ್ಪಡುವ, ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಕಣ್ಣೂರು ಜಿಲ್ಲೆಯ [[ಚೆರುಪುಳ, ಕಣ್ಣೂರು|ಚೆರುಪುಳ]] ಬಳಿ ಕರಿಯಾಂಗೋಡೆ ನದಿಯ ಭಾಗಗಳಲ್ಲಿ [[ವೈಟ್-ವಾಟರ್ ರಾಫ್ಟಿಂಗ್]] ಅನ್ನು ನಡೆಸಲಾಗುತ್ತದೆ. ಮಳೆಗಾಲ ಮತ್ತು ಮಳೆಗಾಲದ ನಂತರದ ಅವಧಿಯಲ್ಲಿ ರಾಫ್ಟಿಂಗ್ಗಾಗಿ 12.5 ಕಿ.ಮೀ. ವಿಭಾಗವನ್ನು ಬಳಸಲಾಗುತ್ತದೆ. ರಾಫ್ಟ್ಗಳು ಸಾಮಾನ್ಯವಾಗಿ 6 ರಿಂದ 7 ಭಾಗವಹಿಸುವವರನ್ನು ಹೊಂದಿರುತ್ತವೆ ಮತ್ತು ತರಬೇತಿ ಪಡೆದ ಮಾರ್ಗದರ್ಶಕರಿಂದ ನಡೆಸಲ್ಪಡುತ್ತವೆ. ಸ್ಥಳೀಯ ಅಧಿಕಾರಿಗಳು ನಿಗದಿಪಡಿಸಿದ ಸುರಕ್ಷತಾ ಪ್ರೋಟೋಕಾಲ್ಗಳ ಅಡಿಯಲ್ಲಿ ಪರವಾನಗಿ ಪಡೆದ ನಿರ್ವಾಹಕರು ಈ ಚಟುವಟಿಕೆಯನ್ನು ನಿರ್ವಹಿಸುತ್ತಾರೆ.<ref>{{cite web|url=https://kannurwhitewaterrafting.com/ |title=Cherupuzha white river rafting}}</ref><ref>{{cite web |url=https://www.keralatourism.org/kerala-article/2013/rafting-thejaswini-river/437 |title=Rafting on Tejaswini River |website=keralatourism.org}}</ref>
==ಕರಿಯಾಂಕೋಡೆ ನದಿಯ ಮೇಲಿನ ಸೇತುವೆಗಳು==
ಕರಿಯಾಂಕೋಡೆ ನದಿಯ ಮೇಲೆ ಅನೇಕ ಸೇತುವೆಗಳಿವೆ. ಮುಖ್ಯ ಸೇತುವೆಗಳಲ್ಲಿ ಪುಲಿಂಗೋಮ್ ಸೇತುವೆ, [[ಚೆರುಪುಳ (ಕಣ್ಣೂರು)|ಚೆರುಪುಳ]] ಸೇತುವೆ, ಕೊಲ್ಲಡ ಸೇತುವೆ, ಕಕ್ಕಡವು ಸೇತುವೆ, ಪೆರುಂಬಟ್ಟ ಸೇತುವೆ, ಮುಕ್ಕಡ ಸೇತುವೆ, ಅರಯಕಡವ್ ಸೇತುವೆ, ಅಂಡೋಲ್ ಪೂರಕ್ಕಡವ್ ತೂಗು ಸೇತುವೆ, ಕರಿಯಾಂಕೋಡೆ ಸೇತುವೆ ಮತ್ತು ಕೊಟ್ಟಾಪುರಂ ಸೇತುವೆ ಸೇರಿವೆ.
==ಉಲ್ಲೇಖಗಳು==
{{reflist}}
[[Category:ಕಾಸರಗೋಡು ಜಿಲ್ಲೆಯ ನದಿಗಳು]]
384hn1t9gmja323uzh6olgxxd48fpgj
ಕುಂಭವುರುಟ್ಟಿ ಜಲಪಾತ
0
180110
1379458
2026-08-08T15:56:13Z
Santhosh Notagar99
82732
ಹೊಸ ಪುಟ: {{Use dmy dates|date=July 2019}} {{Use Indian English|date=July 2019}} {{Infobox waterfall | name = ಕುಂಭವುರುಟ್ಟಿ ಜಲಪಾತ | alt_name = ಕುಂಭವುರುಟ್ಟಿ ಜಲಪಾತ<br>'''കുംഭാവുരുട്ടി വെള്ളച്ചാട്ടം''' | image = Kumbavuruty water falls2.jpg | image_size = | caption = ಕುಂಭವುರುಟ್ಟಿ ಜಲಪಾತ | location = ಕೊಲ್ಲಂ ಜಿಲ್...
1379458
wikitext
text/x-wiki
{{Use dmy dates|date=July 2019}}
{{Use Indian English|date=July 2019}}
{{Infobox waterfall
| name = ಕುಂಭವುರುಟ್ಟಿ ಜಲಪಾತ
| alt_name = ಕುಂಭವುರುಟ್ಟಿ ಜಲಪಾತ<br>'''കുംഭാവുരുട്ടി വെള്ളച്ചാട്ടം'''
| image = Kumbavuruty water falls2.jpg
| image_size =
| caption = ಕುಂಭವುರುಟ್ಟಿ ಜಲಪಾತ
| location = ಕೊಲ್ಲಂ ಜಿಲ್ಲೆ, ಕೇರಳ, ಭಾರತ
| coordinates = {{coord|9|5|5|N|77|10|22|E|type:waterbody_region:India Kerala_scale:50000|format=dms|display=inline,title}}
| elevation = <!--- {{convert|80|m|abbr=on}} --->
| type = ವಿಭಾಗೀಯ
| height = <!--- {{convert|18|m|abbr=on}} --->
| width = <!--- {{convert|54|m|abbr=on}} --->
| height_longest =
| average_width =
| number_drops = 2
| average_flow = <!--- 52 m<sup>3</sup>/s (1010 cu ft/s)--->
| watercourse = ಅಚನ್ಕೋವಿಲ್ ನದಿ
| world_rank =
}}
ಕುಂಭವುರುಟ್ಟಿ ಜಲಪಾತವು ದಕ್ಷಿಣ ಭಾರತದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದ್ದು, ಕೇರಳದ ಕೊಲ್ಲಂ ಜಿಲ್ಲೆಯ ಆರ್ಯಂಕಾವು ಪಂಚಾಯತ್ ವ್ಯಾಪ್ತಿಯಲ್ಲಿ, ಕೇರಳ–ತಮಿಳುನಾಡು ಗಡಿಯ ಸಮೀಪದಲ್ಲಿದೆ. ಈ ಜಲಪಾತವು ಅಚೆಂಕೋವಿಲ್ನಿಂದ ಸುಮಾರು 6.5 ಕಿಲೋಮೀಟರ್ ದೂರದಲ್ಲಿದ್ದು, ಪಶ್ಚಿಮ ಘಟ್ಟಗಳ ಹಸಿರು ಕಾಡುಗಳು ಮತ್ತು ನೈಸರ್ಗಿಕ ಸೌಂದರ್ಯದಿಂದ ಸುತ್ತುವರಿದಿದೆ. ಕಲ್ಲಿನ ಬಂಡೆಗಳ ನಡುವೆ ನೀರು ಧುಮ್ಮಿಕ್ಕಿ ಹರಿಯುವ ದೃಶ್ಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
== ನೈಸರ್ಗಿಕ ಸೌಂದರ್ಯ ==
ಕುಂಭವುರುಟ್ಟಿ ಜಲಪಾತವು ದಟ್ಟವಾದ ಅರಣ್ಯ, ಹಸಿರು ಸಸ್ಯವರ್ಗ, ಬಂಡೆಗಳು ಮತ್ತು ಹೊಳೆಗಳಿಂದ ಕೂಡಿದ ಸುಂದರ ನೈಸರ್ಗಿಕ ಪರಿಸರವನ್ನು ಹೊಂದಿದೆ. ಕಾಡಿನ ನಡುವೆ ಧುಮ್ಮಿಕ್ಕಿ ಹರಿಯುವ ಜಲಪಾತವು ಪ್ರವಾಸಿಗರಿಗೆ ಮನಸ್ಸಿಗೆ ಮುದ ನೀಡುವ ಅನುಭವವನ್ನು ನೀಡುತ್ತದೆ. ನಗರ ಪ್ರದೇಶದ ಗದ್ದಲದಿಂದ ದೂರವಾಗಿ ಪ್ರಕೃತಿಯೊಂದಿಗೆ ಸಮಯ ಕಳೆಯಲು ಬಯಸುವ ಪ್ರಕೃತಿ ಪ್ರಿಯರು ಮತ್ತು ಪ್ರವಾಸಿಗರಿಗೆ ಈ ಸ್ಥಳವು ಆಕರ್ಷಕ ತಾಣವಾಗಿದೆ.
== ಸಮೀಪದ ಪ್ರವಾಸಿ ಆಕರ್ಷಣೆಗಳು ==
ಕುಂಭವುರುಟ್ಟಿ ಜಲಪಾತದ ಸಮೀಪದಲ್ಲೇ ಪಾಲರುವಿ ಜಲಪಾತ ಸೇರಿದಂತೆ ಹಲವು ನೈಸರ್ಗಿಕ ಪ್ರವಾಸಿ ತಾಣಗಳಿವೆ. ಅಚೆಂಕೋವಿಲ್ ಮತ್ತು ಕೇರಳ–ತಮಿಳುನಾಡು ಗಡಿಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಈ ಪ್ರದೇಶದ ಪ್ರವಾಸಿ ಮಹತ್ವವನ್ನು ಹೆಚ್ಚಿಸಿವೆ. ಜಲಪಾತ, ದಟ್ಟ ಅರಣ್ಯ ಮತ್ತು ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯದ ಸಂಯೋಜನೆಯಿಂದ ಕುಂಭವುರುಟ್ಟಿ ಜಲಪಾತವು ದಕ್ಷಿಣ ಕೇರಳದ ಪ್ರಮುಖ ನೈಸರ್ಗಿಕ ಆಕರ್ಷಣೆಗಳಲ್ಲಿ ಒಂದಾಗಿದೆ.
2y2ldn2e3kv8fj6uhuv59dcxx3eyh3d
1379459
1379458
2026-08-08T15:56:58Z
Santhosh Notagar99
82732
1379459
wikitext
text/x-wiki
{{Use dmy dates|date=July 2019}}
{{Use Indian English|date=July 2019}}
{{Infobox waterfall
| name = ಕುಂಭವುರುಟ್ಟಿ ಜಲಪಾತ
| alt_name = ಕುಂಭವುರುಟ್ಟಿ ಜಲಪಾತ<br>'''കുംഭാവുരുട്ടി വെള്ളച്ചാട്ടം'''
| image = Kumbavuruty water falls2.jpg
| image_size =
| caption = ಕುಂಭವುರುಟ್ಟಿ ಜಲಪಾತ
| location = ಕೊಲ್ಲಂ ಜಿಲ್ಲೆ, ಕೇರಳ, ಭಾರತ
| coordinates = {{coord|9|5|5|N|77|10|22|E|type:waterbody_region:India Kerala_scale:50000|format=dms|display=inline,title}}
| elevation = <!--- {{convert|80|m|abbr=on}} --->
| type = ವಿಭಾಗೀಯ
| height = <!--- {{convert|18|m|abbr=on}} --->
| width = <!--- {{convert|54|m|abbr=on}} --->
| height_longest =
| average_width =
| number_drops = 2
| average_flow = <!--- 52 m<sup>3</sup>/s (1010 cu ft/s)--->
| watercourse = ಅಚನ್ಕೋವಿಲ್ ನದಿ
| world_rank =
}}
ಕುಂಭವುರುಟ್ಟಿ ಜಲಪಾತವು ದಕ್ಷಿಣ ಭಾರತದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದ್ದು, ಕೇರಳದ ಕೊಲ್ಲಂ ಜಿಲ್ಲೆಯ ಆರ್ಯಂಕಾವು ಪಂಚಾಯತ್ ವ್ಯಾಪ್ತಿಯಲ್ಲಿ, ಕೇರಳ–ತಮಿಳುನಾಡು ಗಡಿಯ ಸಮೀಪದಲ್ಲಿದೆ. ಈ ಜಲಪಾತವು ಅಚೆಂಕೋವಿಲ್ನಿಂದ ಸುಮಾರು 6.5 ಕಿಲೋಮೀಟರ್ ದೂರದಲ್ಲಿದ್ದು, ಪಶ್ಚಿಮ ಘಟ್ಟಗಳ ಹಸಿರು ಕಾಡುಗಳು ಮತ್ತು ನೈಸರ್ಗಿಕ ಸೌಂದರ್ಯದಿಂದ ಸುತ್ತುವರಿದಿದೆ.<ref>[http://www.keralatourism.org/routes-locations/kumbhavurutty/id/8143 Kumbhavurutty Waterfall - Kollam]</ref> ಕಲ್ಲಿನ ಬಂಡೆಗಳ ನಡುವೆ ನೀರು ಧುಮ್ಮಿಕ್ಕಿ ಹರಿಯುವ ದೃಶ್ಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
== ನೈಸರ್ಗಿಕ ಸೌಂದರ್ಯ ==
ಕುಂಭವುರುಟ್ಟಿ ಜಲಪಾತವು ದಟ್ಟವಾದ ಅರಣ್ಯ, ಹಸಿರು ಸಸ್ಯವರ್ಗ, ಬಂಡೆಗಳು ಮತ್ತು ಹೊಳೆಗಳಿಂದ ಕೂಡಿದ ಸುಂದರ ನೈಸರ್ಗಿಕ ಪರಿಸರವನ್ನು ಹೊಂದಿದೆ. ಕಾಡಿನ ನಡುವೆ ಧುಮ್ಮಿಕ್ಕಿ ಹರಿಯುವ ಜಲಪಾತವು ಪ್ರವಾಸಿಗರಿಗೆ ಮನಸ್ಸಿಗೆ ಮುದ ನೀಡುವ ಅನುಭವವನ್ನು ನೀಡುತ್ತದೆ. ನಗರ ಪ್ರದೇಶದ ಗದ್ದಲದಿಂದ ದೂರವಾಗಿ ಪ್ರಕೃತಿಯೊಂದಿಗೆ ಸಮಯ ಕಳೆಯಲು ಬಯಸುವ ಪ್ರಕೃತಿ ಪ್ರಿಯರು ಮತ್ತು ಪ್ರವಾಸಿಗರಿಗೆ ಈ ಸ್ಥಳವು ಆಕರ್ಷಕ ತಾಣವಾಗಿದೆ.
== ಸಮೀಪದ ಪ್ರವಾಸಿ ಆಕರ್ಷಣೆಗಳು ==
ಕುಂಭವುರುಟ್ಟಿ ಜಲಪಾತದ ಸಮೀಪದಲ್ಲೇ ಪಾಲರುವಿ ಜಲಪಾತ ಸೇರಿದಂತೆ ಹಲವು ನೈಸರ್ಗಿಕ ಪ್ರವಾಸಿ ತಾಣಗಳಿವೆ. ಅಚೆಂಕೋವಿಲ್ ಮತ್ತು ಕೇರಳ–ತಮಿಳುನಾಡು ಗಡಿಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಈ ಪ್ರದೇಶದ ಪ್ರವಾಸಿ ಮಹತ್ವವನ್ನು ಹೆಚ್ಚಿಸಿವೆ. ಜಲಪಾತ, ದಟ್ಟ ಅರಣ್ಯ ಮತ್ತು ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯದ ಸಂಯೋಜನೆಯಿಂದ ಕುಂಭವುರುಟ್ಟಿ ಜಲಪಾತವು ದಕ್ಷಿಣ ಕೇರಳದ ಪ್ರಮುಖ ನೈಸರ್ಗಿಕ ಆಕರ್ಷಣೆಗಳಲ್ಲಿ ಒಂದಾಗಿದೆ.
7lh3wuvlzlrm531mfk0z2w4nbzmveks
1379460
1379459
2026-08-08T15:57:51Z
Santhosh Notagar99
82732
1379460
wikitext
text/x-wiki
{{Use dmy dates|date=July 2019}}
{{Use Indian English|date=July 2019}}
{{Infobox waterfall
| name = ಕುಂಭವುರುಟ್ಟಿ ಜಲಪಾತ
| alt_name = ಕುಂಭವುರುಟ್ಟಿ ಜಲಪಾತ<br>'''കുംഭാവുരുട്ടി വെള്ളച്ചാട്ടം'''
| image = Kumbavuruty water falls2.jpg
| image_size =
| caption = ಕುಂಭವುರುಟ್ಟಿ ಜಲಪಾತ
| location = ಕೊಲ್ಲಂ ಜಿಲ್ಲೆ, ಕೇರಳ, ಭಾರತ
| coordinates = {{coord|9|5|5|N|77|10|22|E|type:waterbody_region:India Kerala_scale:50000|format=dms|display=inline,title}}
| elevation = <!--- {{convert|80|m|abbr=on}} --->
| type = ವಿಭಾಗೀಯ
| height = <!--- {{convert|18|m|abbr=on}} --->
| width = <!--- {{convert|54|m|abbr=on}} --->
| height_longest =
| average_width =
| number_drops = 2
| average_flow = <!--- 52 m<sup>3</sup>/s (1010 cu ft/s)--->
| watercourse = ಅಚನ್ಕೋವಿಲ್ ನದಿ
| world_rank =
}}
ಕುಂಭವುರುಟ್ಟಿ ಜಲಪಾತವು ದಕ್ಷಿಣ ಭಾರತದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದ್ದು, ಕೇರಳದ ಕೊಲ್ಲಂ ಜಿಲ್ಲೆಯ ಆರ್ಯಂಕಾವು ಪಂಚಾಯತ್ ವ್ಯಾಪ್ತಿಯಲ್ಲಿ, ಕೇರಳ–ತಮಿಳುನಾಡು ಗಡಿಯ ಸಮೀಪದಲ್ಲಿದೆ. ಈ ಜಲಪಾತವು ಅಚೆಂಕೋವಿಲ್ನಿಂದ ಸುಮಾರು 6.5 ಕಿಲೋಮೀಟರ್ ದೂರದಲ್ಲಿದ್ದು, ಪಶ್ಚಿಮ ಘಟ್ಟಗಳ ಹಸಿರು ಕಾಡುಗಳು ಮತ್ತು ನೈಸರ್ಗಿಕ ಸೌಂದರ್ಯದಿಂದ ಸುತ್ತುವರಿದಿದೆ.<ref>[http://www.keralatourism.org/routes-locations/kumbhavurutty/id/8143 Kumbhavurutty Waterfall - Kollam]</ref> ಕಲ್ಲಿನ ಬಂಡೆಗಳ ನಡುವೆ ನೀರು ಧುಮ್ಮಿಕ್ಕಿ ಹರಿಯುವ ದೃಶ್ಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. <ref>{{Cite web |url=http://traveltokerala.blogspot.in/2009/11/kumbhavurutty-waterfalls.html |title=Kumbhavurutti Waterfall, Kollam District |access-date=17 October 2014 |archive-url=https://web.archive.org/web/20141026034450/http://traveltokerala.blogspot.in/2009/11/kumbhavurutty-waterfalls.html |archive-date=26 October 2014 |url-status=dead }}</ref
== ನೈಸರ್ಗಿಕ ಸೌಂದರ್ಯ ==
ಕುಂಭವುರುಟ್ಟಿ ಜಲಪಾತವು ದಟ್ಟವಾದ ಅರಣ್ಯ, ಹಸಿರು ಸಸ್ಯವರ್ಗ, ಬಂಡೆಗಳು ಮತ್ತು ಹೊಳೆಗಳಿಂದ ಕೂಡಿದ ಸುಂದರ ನೈಸರ್ಗಿಕ ಪರಿಸರವನ್ನು ಹೊಂದಿದೆ. ಕಾಡಿನ ನಡುವೆ ಧುಮ್ಮಿಕ್ಕಿ ಹರಿಯುವ ಜಲಪಾತವು ಪ್ರವಾಸಿಗರಿಗೆ ಮನಸ್ಸಿಗೆ ಮುದ ನೀಡುವ ಅನುಭವವನ್ನು ನೀಡುತ್ತದೆ. ನಗರ ಪ್ರದೇಶದ ಗದ್ದಲದಿಂದ ದೂರವಾಗಿ ಪ್ರಕೃತಿಯೊಂದಿಗೆ ಸಮಯ ಕಳೆಯಲು ಬಯಸುವ ಪ್ರಕೃತಿ ಪ್ರಿಯರು ಮತ್ತು ಪ್ರವಾಸಿಗರಿಗೆ ಈ ಸ್ಥಳವು ಆಕರ್ಷಕ ತಾಣವಾಗಿದೆ.
== ಸಮೀಪದ ಪ್ರವಾಸಿ ಆಕರ್ಷಣೆಗಳು ==
ಕುಂಭವುರುಟ್ಟಿ ಜಲಪಾತದ ಸಮೀಪದಲ್ಲೇ ಪಾಲರುವಿ ಜಲಪಾತ ಸೇರಿದಂತೆ ಹಲವು ನೈಸರ್ಗಿಕ ಪ್ರವಾಸಿ ತಾಣಗಳಿವೆ. ಅಚೆಂಕೋವಿಲ್ ಮತ್ತು ಕೇರಳ–ತಮಿಳುನಾಡು ಗಡಿಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಈ ಪ್ರದೇಶದ ಪ್ರವಾಸಿ ಮಹತ್ವವನ್ನು ಹೆಚ್ಚಿಸಿವೆ. ಜಲಪಾತ, ದಟ್ಟ ಅರಣ್ಯ ಮತ್ತು ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯದ ಸಂಯೋಜನೆಯಿಂದ ಕುಂಭವುರುಟ್ಟಿ ಜಲಪಾತವು ದಕ್ಷಿಣ ಕೇರಳದ ಪ್ರಮುಖ ನೈಸರ್ಗಿಕ ಆಕರ್ಷಣೆಗಳಲ್ಲಿ ಒಂದಾಗಿದೆ.
0uyymobl3895ullgdr2wtqb5qnwxmbd
1379461
1379460
2026-08-08T15:59:20Z
Santhosh Notagar99
82732
1379461
wikitext
text/x-wiki
{{Use dmy dates|date=July 2019}}
{{Use Indian English|date=July 2019}}
{{Infobox waterfall
| name = ಕುಂಭವುರುಟ್ಟಿ ಜಲಪಾತ
| alt_name = ಕುಂಭವುರುಟ್ಟಿ ಜಲಪಾತ<br>'''കുംഭാവുരുട്ടി വെള്ളച്ചാട്ടം'''
| image = Kumbavuruty water falls2.jpg
| image_size =
| caption = ಕುಂಭವುರುಟ್ಟಿ ಜಲಪಾತ
| location = ಕೊಲ್ಲಂ ಜಿಲ್ಲೆ, ಕೇರಳ, ಭಾರತ
| coordinates = {{coord|9|5|5|N|77|10|22|E|type:waterbody_region:India Kerala_scale:50000|format=dms|display=inline,title}}
| elevation = <!--- {{convert|80|m|abbr=on}} --->
| type = ವಿಭಾಗೀಯ
| height = <!--- {{convert|18|m|abbr=on}} --->
| width = <!--- {{convert|54|m|abbr=on}} --->
| height_longest =
| average_width =
| number_drops = 2
| average_flow = <!--- 52 m<sup>3</sup>/s (1010 cu ft/s)--->
| watercourse = ಅಚನ್ಕೋವಿಲ್ ನದಿ
| world_rank =
}}
ಕುಂಭವುರುಟ್ಟಿ ಜಲಪಾತವು ದಕ್ಷಿಣ ಭಾರತದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದ್ದು, ಕೇರಳದ ಕೊಲ್ಲಂ ಜಿಲ್ಲೆಯ ಆರ್ಯಂಕಾವು ಪಂಚಾಯತ್ ವ್ಯಾಪ್ತಿಯಲ್ಲಿ, ಕೇರಳ–ತಮಿಳುನಾಡು ಗಡಿಯ ಸಮೀಪದಲ್ಲಿದೆ. ಈ ಜಲಪಾತವು ಅಚೆಂಕೋವಿಲ್ನಿಂದ ಸುಮಾರು 6.5 ಕಿಲೋಮೀಟರ್ ದೂರದಲ್ಲಿದ್ದು, ಪಶ್ಚಿಮ ಘಟ್ಟಗಳ ಹಸಿರು ಕಾಡುಗಳು ಮತ್ತು ನೈಸರ್ಗಿಕ ಸೌಂದರ್ಯದಿಂದ ಸುತ್ತುವರಿದಿದೆ.<ref>[http://www.keralatourism.org/routes-locations/kumbhavurutty/id/8143 Kumbhavurutty Waterfall - Kollam]</ref> ಕಲ್ಲಿನ ಬಂಡೆಗಳ ನಡುವೆ ನೀರು ಧುಮ್ಮಿಕ್ಕಿ ಹರಿಯುವ ದೃಶ್ಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. <ref>{{Cite web |url=http://traveltokerala.blogspot.in/2009/11/kumbhavurutty-waterfalls.html |title=Kumbhavurutti Waterfall, Kollam District |access-date=17 October 2014 |archive-url=https://web.archive.org/web/20141026034450/http://traveltokerala.blogspot.in/2009/11/kumbhavurutty-waterfalls.html |archive-date=26 October 2014 |url-status=dead }}</ref>
== ನೈಸರ್ಗಿಕ ಸೌಂದರ್ಯ ==
ಕುಂಭವುರುಟ್ಟಿ ಜಲಪಾತವು ದಟ್ಟವಾದ ಅರಣ್ಯ, ಹಸಿರು ಸಸ್ಯವರ್ಗ, ಬಂಡೆಗಳು ಮತ್ತು ಹೊಳೆಗಳಿಂದ ಕೂಡಿದ ಸುಂದರ ನೈಸರ್ಗಿಕ ಪರಿಸರವನ್ನು ಹೊಂದಿದೆ. ಕಾಡಿನ ನಡುವೆ ಧುಮ್ಮಿಕ್ಕಿ ಹರಿಯುವ ಜಲಪಾತವು ಪ್ರವಾಸಿಗರಿಗೆ ಮನಸ್ಸಿಗೆ ಮುದ ನೀಡುವ ಅನುಭವವನ್ನು ನೀಡುತ್ತದೆ. ನಗರ ಪ್ರದೇಶದ ಗದ್ದಲದಿಂದ ದೂರವಾಗಿ ಪ್ರಕೃತಿಯೊಂದಿಗೆ ಸಮಯ ಕಳೆಯಲು ಬಯಸುವ ಪ್ರಕೃತಿ ಪ್ರಿಯರು ಮತ್ತು ಪ್ರವಾಸಿಗರಿಗೆ ಈ ಸ್ಥಳವು ಆಕರ್ಷಕ ತಾಣವಾಗಿದೆ.<ref>[http://www.townplanning.kerala.gov.in/pages/ldp/kollam/iddp_v1_klm_ch_27.pdf Town Planning - Kollam]</ref>
== ಸಮೀಪದ ಪ್ರವಾಸಿ ಆಕರ್ಷಣೆಗಳು ==
ಕುಂಭವುರುಟ್ಟಿ ಜಲಪಾತದ ಸಮೀಪದಲ್ಲೇ ಪಾಲರುವಿ ಜಲಪಾತ ಸೇರಿದಂತೆ ಹಲವು ನೈಸರ್ಗಿಕ ಪ್ರವಾಸಿ ತಾಣಗಳಿವೆ. ಅಚೆಂಕೋವಿಲ್ ಮತ್ತು ಕೇರಳ–ತಮಿಳುನಾಡು ಗಡಿಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಈ ಪ್ರದೇಶದ ಪ್ರವಾಸಿ ಮಹತ್ವವನ್ನು ಹೆಚ್ಚಿಸಿವೆ. ಜಲಪಾತ, ದಟ್ಟ ಅರಣ್ಯ ಮತ್ತು ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯದ ಸಂಯೋಜನೆಯಿಂದ ಕುಂಭವುರುಟ್ಟಿ ಜಲಪಾತವು ದಕ್ಷಿಣ ಕೇರಳದ ಪ್ರಮುಖ ನೈಸರ್ಗಿಕ ಆಕರ್ಷಣೆಗಳಲ್ಲಿ ಒಂದಾಗಿದೆ.
==ಉಲ್ಲೇಖಗಳು==
l5x10z7g6bgjwy09dehb7x0uld9tf0g
ಚಾವಕ್ಕಾಡ್ ಕಡಲತೀರ
0
180111
1379463
2026-08-08T16:14:19Z
Santhosh Notagar99
82732
ಹೊಸ ಪುಟ: {{Short description|Beach in Kerala, India}} {{more citations needed|date=June 2018}}{{Use dmy dates|date=June 2018}} {{Use Indian English|date=June 2018}} {{Infobox landform | water = | name = ಚಾವಕ್ಕಾಡ್ ಕಡಲತೀರ | native_name = | other_name = | type = ಕಡಲತೀರ | image = Chavakkad1.jpg | image_size = | alt = | cap...
1379463
wikitext
text/x-wiki
{{Short description|Beach in Kerala, India}}
{{more citations needed|date=June 2018}}{{Use dmy dates|date=June 2018}}
{{Use Indian English|date=June 2018}}
{{Infobox landform
| water =
| name = ಚಾವಕ್ಕಾಡ್ ಕಡಲತೀರ
| native_name =
| other_name =
| type = ಕಡಲತೀರ
| image = Chavakkad1.jpg
| image_size =
| alt =
| caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| pushpin_map = India Kerala
| pushpin_label = Chavakkad Beach
| pushpin_caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| mapframe =
| coordinates = {{coord|10.572|N|76.008|E|type:landmark_region:IN|display=inline,title}}
| coordinates_ref =
| location = ಚಾವಕ್ಕಾಡ್, ತ್ರಿಶೂರ್ ಜಿಲ್ಲೆ, ಕೇರಳಂ
| grid_ref =
| grid_ref_UK =
| grid_ref_Ireland =
| range =
| part_of =
| water_bodies =
| age =
| orogeny =
| formed_by =
| geology =
| etymology =
| nickname =
| authority =
| operator =
| area =
| area_km2 =
| area_mi2 =
| area_ref =
| length =
| width =
| depth =
| drop =
| height =
| elevation =
| elevation_m = 20.07
| elevation_ft =
| elevation_ref =
| surface_elevation =
| surface_elevation_m =
| surface_elevation_ft =
| surface_elevation_ref =
| highest_point =
| highest_elevation =
| highest_coords =
| volcanic_zone =
| volcanic_arc =
| volcanic_belt =
| volcanic_field =
| last_eruption =
| topo =
| designation =
| free_label_1 =
| free_data_1 =
| free_label_2 =
| free_data_2 =
| free_label_3 =
| free_data_3 =
| website =
| embedded =
}}
'''ಚಾವಕ್ಕಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಪುರಸಭೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಗೊಂಡಿದ್ದು, ತನ್ನ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಡಲತೀರವು ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ.
ನೈಸರ್ಗಿಕ ಸೌಂದರ್ಯ
ಚಾವಕ್ಕಾಡ್ ಕಡಲತೀರದ ಪ್ರಮುಖ ಆಕರ್ಷಣೆಗಳಲ್ಲಿ ನದಿ ಮತ್ತು ಸಮುದ್ರ ಸೇರುವ ಸ್ಥಳವೂ ಒಂದು. ಇಲ್ಲಿ ನದಿಯು ಅರಬ್ಬಿ ಸಮುದ್ರವನ್ನು ಸೇರುವುದರಿಂದ ನದಿಮುಖ (Estuary) ನಿರ್ಮಾಣವಾಗಿದೆ. ಈ ಸ್ಥಳವನ್ನು ಮಲಯಾಳಂನಲ್ಲಿ ‘ಅಝಿಮುಖಂ’ (Azhimukham) ಎಂದು ಕರೆಯಲಾಗುತ್ತದೆ. ನದಿ, ಸಮುದ್ರ ಮತ್ತು ಕರಾವಳಿ ಭೂದೃಶ್ಯದ ಸುಂದರ ಸಂಯೋಜನೆಯು ಈ ಪ್ರದೇಶಕ್ಕೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.
ಪ್ರವಾಸಿ ಆಕರ್ಷಣೆ
ಚಾವಕ್ಕಾಡ್ ಕಡಲತೀರವು ಕೇರಳದ ಜನಪ್ರಿಯ ಕಡಲತೀರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ದೇಶೀಯ ಪ್ರವಾಸಿಗರಿಂದ ಇನ್ನೂ ಹೆಚ್ಚು ಅನ್ವೇಷಿಸಲ್ಪಡದಿರುವುದರಿಂದ, ಇಲ್ಲಿನ ನೈಸರ್ಗಿಕ ಮತ್ತು ಶಾಂತ ವಾತಾವರಣವು ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಗುರುವಾಯೂರು ದೇವಸ್ಥಾನಕ್ಕೆ ಸಮೀಪದಲ್ಲಿರುವುದರಿಂದ, ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾವಕ್ಕಾಡ್ ಕಡಲತೀರಕ್ಕೂ ಭೇಟಿ ನೀಡುತ್ತಾರೆ. ಕಡಲತೀರದ ನೈಸರ್ಗಿಕ ಸೌಂದರ್ಯ, ನದಿಮುಖ ಮತ್ತು ಅರಬ್ಬಿ ಸಮುದ್ರದ ವಿಶಾಲ ದೃಶ್ಯಗಳು ಇದನ್ನು ಕೇರಳದ ಪ್ರಮುಖ ಕರಾವಳಿ ಪ್ರವಾಸಿ ತಾಣವನ್ನಾಗಿ ಮಾಡಿವೆ.
7wph4q9742qgttth3gfoja4ra4tf0iu
1379464
1379463
2026-08-08T16:14:57Z
Santhosh Notagar99
82732
1379464
wikitext
text/x-wiki
{{Short description|Beach in Kerala, India}}
{{more citations needed|date=June 2018}}{{Use dmy dates|date=June 2018}}
{{Use Indian English|date=June 2018}}
{{Infobox landform
| water =
| name = ಚಾವಕ್ಕಾಡ್ ಕಡಲತೀರ
| native_name =
| other_name =
| type = ಕಡಲತೀರ
| image = Chavakkad1.jpg
| image_size =
| alt =
| caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| pushpin_map = India Kerala
| pushpin_label = Chavakkad Beach
| pushpin_caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| mapframe =
| coordinates = {{coord|10.572|N|76.008|E|type:landmark_region:IN|display=inline,title}}
| coordinates_ref =
| location = ಚಾವಕ್ಕಾಡ್, ತ್ರಿಶೂರ್ ಜಿಲ್ಲೆ, ಕೇರಳಂ
| grid_ref =
| grid_ref_UK =
| grid_ref_Ireland =
| range =
| part_of =
| water_bodies =
| age =
| orogeny =
| formed_by =
| geology =
| etymology =
| nickname =
| authority =
| operator =
| area =
| area_km2 =
| area_mi2 =
| area_ref =
| length =
| width =
| depth =
| drop =
| height =
| elevation =
| elevation_m = 20.07
| elevation_ft =
| elevation_ref =
| surface_elevation =
| surface_elevation_m =
| surface_elevation_ft =
| surface_elevation_ref =
| highest_point =
| highest_elevation =
| highest_coords =
| volcanic_zone =
| volcanic_arc =
| volcanic_belt =
| volcanic_field =
| last_eruption =
| topo =
| designation =
| free_label_1 =
| free_data_1 =
| free_label_2 =
| free_data_2 =
| free_label_3 =
| free_data_3 =
| website =
| embedded =
}}
'''ಚಾವಕ್ಕಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಪುರಸಭೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಗೊಂಡಿದ್ದು, ತನ್ನ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಡಲತೀರವು ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ.
'''ನೈಸರ್ಗಿಕ ಸೌಂದರ್ಯ'''
ಚಾವಕ್ಕಾಡ್ ಕಡಲತೀರದ ಪ್ರಮುಖ ಆಕರ್ಷಣೆಗಳಲ್ಲಿ ನದಿ ಮತ್ತು ಸಮುದ್ರ ಸೇರುವ ಸ್ಥಳವೂ ಒಂದು. ಇಲ್ಲಿ ನದಿಯು ಅರಬ್ಬಿ ಸಮುದ್ರವನ್ನು ಸೇರುವುದರಿಂದ ನದಿಮುಖ (Estuary) ನಿರ್ಮಾಣವಾಗಿದೆ. ಈ ಸ್ಥಳವನ್ನು ಮಲಯಾಳಂನಲ್ಲಿ ‘ಅಝಿಮುಖಂ’ (Azhimukham) ಎಂದು ಕರೆಯಲಾಗುತ್ತದೆ. ನದಿ, ಸಮುದ್ರ ಮತ್ತು ಕರಾವಳಿ ಭೂದೃಶ್ಯದ ಸುಂದರ ಸಂಯೋಜನೆಯು ಈ ಪ್ರದೇಶಕ್ಕೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.
'''ಪ್ರವಾಸಿ ಆಕರ್ಷಣೆ'''
ಚಾವಕ್ಕಾಡ್ ಕಡಲತೀರವು ಕೇರಳದ ಜನಪ್ರಿಯ ಕಡಲತೀರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ದೇಶೀಯ ಪ್ರವಾಸಿಗರಿಂದ ಇನ್ನೂ ಹೆಚ್ಚು ಅನ್ವೇಷಿಸಲ್ಪಡದಿರುವುದರಿಂದ, ಇಲ್ಲಿನ ನೈಸರ್ಗಿಕ ಮತ್ತು ಶಾಂತ ವಾತಾವರಣವು ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಗುರುವಾಯೂರು ದೇವಸ್ಥಾನಕ್ಕೆ ಸಮೀಪದಲ್ಲಿರುವುದರಿಂದ, ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾವಕ್ಕಾಡ್ ಕಡಲತೀರಕ್ಕೂ ಭೇಟಿ ನೀಡುತ್ತಾರೆ. ಕಡಲತೀರದ ನೈಸರ್ಗಿಕ ಸೌಂದರ್ಯ, ನದಿಮುಖ ಮತ್ತು ಅರಬ್ಬಿ ಸಮುದ್ರದ ವಿಶಾಲ ದೃಶ್ಯಗಳು ಇದನ್ನು ಕೇರಳದ ಪ್ರಮುಖ ಕರಾವಳಿ ಪ್ರವಾಸಿ ತಾಣವನ್ನಾಗಿ ಮಾಡಿವೆ.
ti5h4y7kosx9j4f7ranxd0682kek7el
1379465
1379464
2026-08-08T16:15:53Z
Santhosh Notagar99
82732
1379465
wikitext
text/x-wiki
{{Short description|Beach in Kerala, India}}
{{more citations needed|date=June 2018}}{{Use dmy dates|date=June 2018}}
{{Use Indian English|date=June 2018}}
{{Infobox landform
| water =
| name = ಚಾವಕ್ಕಾಡ್ ಕಡಲತೀರ
| native_name =
| other_name =
| type = ಕಡಲತೀರ
| image = Chavakkad1.jpg
| image_size =
| alt =
| caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| pushpin_map = India Kerala
| pushpin_label = Chavakkad Beach
| pushpin_caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| mapframe =
| coordinates = {{coord|10.572|N|76.008|E|type:landmark_region:IN|display=inline,title}}
| coordinates_ref =
| location = ಚಾವಕ್ಕಾಡ್, ತ್ರಿಶೂರ್ ಜಿಲ್ಲೆ, ಕೇರಳಂ
| grid_ref =
| grid_ref_UK =
| grid_ref_Ireland =
| range =
| part_of =
| water_bodies =
| age =
| orogeny =
| formed_by =
| geology =
| etymology =
| nickname =
| authority =
| operator =
| area =
| area_km2 =
| area_mi2 =
| area_ref =
| length =
| width =
| depth =
| drop =
| height =
| elevation =
| elevation_m = 20.07
| elevation_ft =
| elevation_ref =
| surface_elevation =
| surface_elevation_m =
| surface_elevation_ft =
| surface_elevation_ref =
| highest_point =
| highest_elevation =
| highest_coords =
| volcanic_zone =
| volcanic_arc =
| volcanic_belt =
| volcanic_field =
| last_eruption =
| topo =
| designation =
| free_label_1 =
| free_data_1 =
| free_label_2 =
| free_data_2 =
| free_label_3 =
| free_data_3 =
| website =
| embedded =
}}
'''ಚಾವಕ್ಕಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಪುರಸಭೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ.<ref>{{Cite web |url=https://www.keralatourism.org/destination/chavakkad-beach-thrissur/547/ |title=Chavakkad Beach in Thrissur |website=www.keralatourism.org |language=en |access-date=2026-07-28}}</ref> ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಗೊಂಡಿದ್ದು, ತನ್ನ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಡಲತೀರವು ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ.
'''ನೈಸರ್ಗಿಕ ಸೌಂದರ್ಯ'''
ಚಾವಕ್ಕಾಡ್ ಕಡಲತೀರದ ಪ್ರಮುಖ ಆಕರ್ಷಣೆಗಳಲ್ಲಿ ನದಿ ಮತ್ತು ಸಮುದ್ರ ಸೇರುವ ಸ್ಥಳವೂ ಒಂದು. ಇಲ್ಲಿ ನದಿಯು ಅರಬ್ಬಿ ಸಮುದ್ರವನ್ನು ಸೇರುವುದರಿಂದ ನದಿಮುಖ (Estuary) ನಿರ್ಮಾಣವಾಗಿದೆ. ಈ ಸ್ಥಳವನ್ನು ಮಲಯಾಳಂನಲ್ಲಿ ‘ಅಝಿಮುಖಂ’ (Azhimukham) ಎಂದು ಕರೆಯಲಾಗುತ್ತದೆ. ನದಿ, ಸಮುದ್ರ ಮತ್ತು ಕರಾವಳಿ ಭೂದೃಶ್ಯದ ಸುಂದರ ಸಂಯೋಜನೆಯು ಈ ಪ್ರದೇಶಕ್ಕೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.
'''ಪ್ರವಾಸಿ ಆಕರ್ಷಣೆ'''
ಚಾವಕ್ಕಾಡ್ ಕಡಲತೀರವು ಕೇರಳದ ಜನಪ್ರಿಯ ಕಡಲತೀರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ದೇಶೀಯ ಪ್ರವಾಸಿಗರಿಂದ ಇನ್ನೂ ಹೆಚ್ಚು ಅನ್ವೇಷಿಸಲ್ಪಡದಿರುವುದರಿಂದ, ಇಲ್ಲಿನ ನೈಸರ್ಗಿಕ ಮತ್ತು ಶಾಂತ ವಾತಾವರಣವು ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಗುರುವಾಯೂರು ದೇವಸ್ಥಾನಕ್ಕೆ ಸಮೀಪದಲ್ಲಿರುವುದರಿಂದ, ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾವಕ್ಕಾಡ್ ಕಡಲತೀರಕ್ಕೂ ಭೇಟಿ ನೀಡುತ್ತಾರೆ. ಕಡಲತೀರದ ನೈಸರ್ಗಿಕ ಸೌಂದರ್ಯ, ನದಿಮುಖ ಮತ್ತು ಅರಬ್ಬಿ ಸಮುದ್ರದ ವಿಶಾಲ ದೃಶ್ಯಗಳು ಇದನ್ನು ಕೇರಳದ ಪ್ರಮುಖ ಕರಾವಳಿ ಪ್ರವಾಸಿ ತಾಣವನ್ನಾಗಿ ಮಾಡಿವೆ.
nwouo74aq2fdrsyx2fb7ptaao964t6n
1379466
1379465
2026-08-08T16:16:27Z
Santhosh Notagar99
82732
1379466
wikitext
text/x-wiki
{{Short description|Beach in Kerala, India}}
{{more citations needed|date=June 2018}}{{Use dmy dates|date=June 2018}}
{{Use Indian English|date=June 2018}}
{{Infobox landform
| water =
| name = ಚಾವಕ್ಕಾಡ್ ಕಡಲತೀರ
| native_name =
| other_name =
| type = ಕಡಲತೀರ
| image = Chavakkad1.jpg
| image_size =
| alt =
| caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| pushpin_map = India Kerala
| pushpin_label = Chavakkad Beach
| pushpin_caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| mapframe =
| coordinates = {{coord|10.572|N|76.008|E|type:landmark_region:IN|display=inline,title}}
| coordinates_ref =
| location = ಚಾವಕ್ಕಾಡ್, ತ್ರಿಶೂರ್ ಜಿಲ್ಲೆ, ಕೇರಳಂ
| grid_ref =
| grid_ref_UK =
| grid_ref_Ireland =
| range =
| part_of =
| water_bodies =
| age =
| orogeny =
| formed_by =
| geology =
| etymology =
| nickname =
| authority =
| operator =
| area =
| area_km2 =
| area_mi2 =
| area_ref =
| length =
| width =
| depth =
| drop =
| height =
| elevation =
| elevation_m = 20.07
| elevation_ft =
| elevation_ref =
| surface_elevation =
| surface_elevation_m =
| surface_elevation_ft =
| surface_elevation_ref =
| highest_point =
| highest_elevation =
| highest_coords =
| volcanic_zone =
| volcanic_arc =
| volcanic_belt =
| volcanic_field =
| last_eruption =
| topo =
| designation =
| free_label_1 =
| free_data_1 =
| free_label_2 =
| free_data_2 =
| free_label_3 =
| free_data_3 =
| website =
| embedded =
}}
'''ಚಾವಕ್ಕಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಪುರಸಭೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ.<ref>{{Cite web |url=https://www.keralatourism.org/destination/chavakkad-beach-thrissur/547/ |title=Chavakkad Beach in Thrissur |website=www.keralatourism.org |language=en |access-date=2026-07-28}}</ref> ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಗೊಂಡಿದ್ದು, ತನ್ನ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಡಲತೀರವು ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ.<ref>{{Cite web |url=https://www.tripoto.com/thrissur/places-to-visit/chavakkad-beach |title=Chavakkad Beach: View Images, Timing and Reviews |website=Tripoto |language=en |access-date=2026-07-28}}</ref><ref>{{Cite web |url=https://www.keralatourism.org/adventure-tourism/watersports/chavakkad-beach |title=Chavakkad Beach Boat Rides {{!}} Fun Watersports on Open Kerala Coastline |website=Adventure Tourism |language=en |access-date=2026-07-28}}</ref>
'''ನೈಸರ್ಗಿಕ ಸೌಂದರ್ಯ'''
ಚಾವಕ್ಕಾಡ್ ಕಡಲತೀರದ ಪ್ರಮುಖ ಆಕರ್ಷಣೆಗಳಲ್ಲಿ ನದಿ ಮತ್ತು ಸಮುದ್ರ ಸೇರುವ ಸ್ಥಳವೂ ಒಂದು. ಇಲ್ಲಿ ನದಿಯು ಅರಬ್ಬಿ ಸಮುದ್ರವನ್ನು ಸೇರುವುದರಿಂದ ನದಿಮುಖ (Estuary) ನಿರ್ಮಾಣವಾಗಿದೆ. ಈ ಸ್ಥಳವನ್ನು ಮಲಯಾಳಂನಲ್ಲಿ ‘ಅಝಿಮುಖಂ’ (Azhimukham) ಎಂದು ಕರೆಯಲಾಗುತ್ತದೆ. ನದಿ, ಸಮುದ್ರ ಮತ್ತು ಕರಾವಳಿ ಭೂದೃಶ್ಯದ ಸುಂದರ ಸಂಯೋಜನೆಯು ಈ ಪ್ರದೇಶಕ್ಕೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.
'''ಪ್ರವಾಸಿ ಆಕರ್ಷಣೆ'''
ಚಾವಕ್ಕಾಡ್ ಕಡಲತೀರವು ಕೇರಳದ ಜನಪ್ರಿಯ ಕಡಲತೀರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ದೇಶೀಯ ಪ್ರವಾಸಿಗರಿಂದ ಇನ್ನೂ ಹೆಚ್ಚು ಅನ್ವೇಷಿಸಲ್ಪಡದಿರುವುದರಿಂದ, ಇಲ್ಲಿನ ನೈಸರ್ಗಿಕ ಮತ್ತು ಶಾಂತ ವಾತಾವರಣವು ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಗುರುವಾಯೂರು ದೇವಸ್ಥಾನಕ್ಕೆ ಸಮೀಪದಲ್ಲಿರುವುದರಿಂದ, ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾವಕ್ಕಾಡ್ ಕಡಲತೀರಕ್ಕೂ ಭೇಟಿ ನೀಡುತ್ತಾರೆ. ಕಡಲತೀರದ ನೈಸರ್ಗಿಕ ಸೌಂದರ್ಯ, ನದಿಮುಖ ಮತ್ತು ಅರಬ್ಬಿ ಸಮುದ್ರದ ವಿಶಾಲ ದೃಶ್ಯಗಳು ಇದನ್ನು ಕೇರಳದ ಪ್ರಮುಖ ಕರಾವಳಿ ಪ್ರವಾಸಿ ತಾಣವನ್ನಾಗಿ ಮಾಡಿವೆ.
eu0rl04bnxt4um00500q6t8ycm5icjn
1379467
1379466
2026-08-08T16:16:47Z
Santhosh Notagar99
82732
1379467
wikitext
text/x-wiki
{{Short description|Beach in Kerala, India}}
{{more citations needed|date=June 2018}}{{Use dmy dates|date=June 2018}}
{{Use Indian English|date=June 2018}}
{{Infobox landform
| water =
| name = ಚಾವಕ್ಕಾಡ್ ಕಡಲತೀರ
| native_name =
| other_name =
| type = ಕಡಲತೀರ
| image = Chavakkad1.jpg
| image_size =
| alt =
| caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| pushpin_map = India Kerala
| pushpin_label = Chavakkad Beach
| pushpin_caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| mapframe =
| coordinates = {{coord|10.572|N|76.008|E|type:landmark_region:IN|display=inline,title}}
| coordinates_ref =
| location = ಚಾವಕ್ಕಾಡ್, ತ್ರಿಶೂರ್ ಜಿಲ್ಲೆ, ಕೇರಳಂ
| grid_ref =
| grid_ref_UK =
| grid_ref_Ireland =
| range =
| part_of =
| water_bodies =
| age =
| orogeny =
| formed_by =
| geology =
| etymology =
| nickname =
| authority =
| operator =
| area =
| area_km2 =
| area_mi2 =
| area_ref =
| length =
| width =
| depth =
| drop =
| height =
| elevation =
| elevation_m = 20.07
| elevation_ft =
| elevation_ref =
| surface_elevation =
| surface_elevation_m =
| surface_elevation_ft =
| surface_elevation_ref =
| highest_point =
| highest_elevation =
| highest_coords =
| volcanic_zone =
| volcanic_arc =
| volcanic_belt =
| volcanic_field =
| last_eruption =
| topo =
| designation =
| free_label_1 =
| free_data_1 =
| free_label_2 =
| free_data_2 =
| free_label_3 =
| free_data_3 =
| website =
| embedded =
}}
'''ಚಾವಕ್ಕಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಪುರಸಭೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ.<ref>{{Cite web |url=https://www.keralatourism.org/destination/chavakkad-beach-thrissur/547/ |title=Chavakkad Beach in Thrissur |website=www.keralatourism.org |language=en |access-date=2026-07-28}}</ref> ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಗೊಂಡಿದ್ದು, ತನ್ನ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಡಲತೀರವು ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ.<ref>{{Cite web |url=https://www.tripoto.com/thrissur/places-to-visit/chavakkad-beach |title=Chavakkad Beach: View Images, Timing and Reviews |website=Tripoto |language=en |access-date=2026-07-28}}</ref><ref>{{Cite web |url=https://www.keralatourism.org/adventure-tourism/watersports/chavakkad-beach |title=Chavakkad Beach Boat Rides {{!}} Fun Watersports on Open Kerala Coastline |website=Adventure Tourism |language=en |access-date=2026-07-28}}</ref>
'''ನೈಸರ್ಗಿಕ ಸೌಂದರ್ಯ'''
ಚಾವಕ್ಕಾಡ್ ಕಡಲತೀರದ ಪ್ರಮುಖ ಆಕರ್ಷಣೆಗಳಲ್ಲಿ ನದಿ ಮತ್ತು ಸಮುದ್ರ ಸೇರುವ ಸ್ಥಳವೂ ಒಂದು. ಇಲ್ಲಿ ನದಿಯು ಅರಬ್ಬಿ ಸಮುದ್ರವನ್ನು ಸೇರುವುದರಿಂದ ನದಿಮುಖ (Estuary) ನಿರ್ಮಾಣವಾಗಿದೆ. ಈ ಸ್ಥಳವನ್ನು ಮಲಯಾಳಂನಲ್ಲಿ ‘ಅಝಿಮುಖಂ’ (Azhimukham) ಎಂದು ಕರೆಯಲಾಗುತ್ತದೆ. ನದಿ, ಸಮುದ್ರ ಮತ್ತು ಕರಾವಳಿ ಭೂದೃಶ್ಯದ ಸುಂದರ ಸಂಯೋಜನೆಯು ಈ ಪ್ರದೇಶಕ್ಕೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.<ref>{{Cite web |url=https://www.tripuntold.com/india/kerala/thrissur/chavakkad-beach/ |title=tripuntold |website=www.tripuntold.com |access-date=2026-07-28}}</ref>
'''ಪ್ರವಾಸಿ ಆಕರ್ಷಣೆ'''
ಚಾವಕ್ಕಾಡ್ ಕಡಲತೀರವು ಕೇರಳದ ಜನಪ್ರಿಯ ಕಡಲತೀರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ದೇಶೀಯ ಪ್ರವಾಸಿಗರಿಂದ ಇನ್ನೂ ಹೆಚ್ಚು ಅನ್ವೇಷಿಸಲ್ಪಡದಿರುವುದರಿಂದ, ಇಲ್ಲಿನ ನೈಸರ್ಗಿಕ ಮತ್ತು ಶಾಂತ ವಾತಾವರಣವು ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಗುರುವಾಯೂರು ದೇವಸ್ಥಾನಕ್ಕೆ ಸಮೀಪದಲ್ಲಿರುವುದರಿಂದ, ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾವಕ್ಕಾಡ್ ಕಡಲತೀರಕ್ಕೂ ಭೇಟಿ ನೀಡುತ್ತಾರೆ. ಕಡಲತೀರದ ನೈಸರ್ಗಿಕ ಸೌಂದರ್ಯ, ನದಿಮುಖ ಮತ್ತು ಅರಬ್ಬಿ ಸಮುದ್ರದ ವಿಶಾಲ ದೃಶ್ಯಗಳು ಇದನ್ನು ಕೇರಳದ ಪ್ರಮುಖ ಕರಾವಳಿ ಪ್ರವಾಸಿ ತಾಣವನ್ನಾಗಿ ಮಾಡಿವೆ.
o1k0iachs75c7ebaqqciexsyhhyg0nm
1379468
1379467
2026-08-08T16:18:01Z
Santhosh Notagar99
82732
1379468
wikitext
text/x-wiki
{{Short description|Beach in Kerala, India}}
{{more citations needed|date=June 2018}}{{Use dmy dates|date=June 2018}}
{{Use Indian English|date=June 2018}}
{{Infobox landform
| water =
| name = ಚಾವಕ್ಕಾಡ್ ಕಡಲತೀರ
| native_name =
| other_name =
| type = ಕಡಲತೀರ
| image = Chavakkad1.jpg
| image_size =
| alt =
| caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| pushpin_map = India Kerala
| pushpin_label = Chavakkad Beach
| pushpin_caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| mapframe =
| coordinates = {{coord|10.572|N|76.008|E|type:landmark_region:IN|display=inline,title}}
| coordinates_ref =
| location = ಚಾವಕ್ಕಾಡ್, ತ್ರಿಶೂರ್ ಜಿಲ್ಲೆ, ಕೇರಳಂ
| grid_ref =
| grid_ref_UK =
| grid_ref_Ireland =
| range =
| part_of =
| water_bodies =
| age =
| orogeny =
| formed_by =
| geology =
| etymology =
| nickname =
| authority =
| operator =
| area =
| area_km2 =
| area_mi2 =
| area_ref =
| length =
| width =
| depth =
| drop =
| height =
| elevation =
| elevation_m = 20.07
| elevation_ft =
| elevation_ref =
| surface_elevation =
| surface_elevation_m =
| surface_elevation_ft =
| surface_elevation_ref =
| highest_point =
| highest_elevation =
| highest_coords =
| volcanic_zone =
| volcanic_arc =
| volcanic_belt =
| volcanic_field =
| last_eruption =
| topo =
| designation =
| free_label_1 =
| free_data_1 =
| free_label_2 =
| free_data_2 =
| free_label_3 =
| free_data_3 =
| website =
| embedded =
}}
'''ಚಾವಕ್ಕಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಪುರಸಭೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ.<ref>{{Cite web |url=https://www.keralatourism.org/destination/chavakkad-beach-thrissur/547/ |title=Chavakkad Beach in Thrissur |website=www.keralatourism.org |language=en |access-date=2026-07-28}}</ref> ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಗೊಂಡಿದ್ದು, ತನ್ನ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಡಲತೀರವು ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ.<ref>{{Cite web |url=https://www.tripoto.com/thrissur/places-to-visit/chavakkad-beach |title=Chavakkad Beach: View Images, Timing and Reviews |website=Tripoto |language=en |access-date=2026-07-28}}</ref><ref>{{Cite web |url=https://www.keralatourism.org/adventure-tourism/watersports/chavakkad-beach |title=Chavakkad Beach Boat Rides {{!}} Fun Watersports on Open Kerala Coastline |website=Adventure Tourism |language=en |access-date=2026-07-28}}</ref>
'''ನೈಸರ್ಗಿಕ ಸೌಂದರ್ಯ'''
ಚಾವಕ್ಕಾಡ್ ಕಡಲತೀರದ ಪ್ರಮುಖ ಆಕರ್ಷಣೆಗಳಲ್ಲಿ ನದಿ ಮತ್ತು ಸಮುದ್ರ ಸೇರುವ ಸ್ಥಳವೂ ಒಂದು. ಇಲ್ಲಿ ನದಿಯು ಅರಬ್ಬಿ ಸಮುದ್ರವನ್ನು ಸೇರುವುದರಿಂದ ನದಿಮುಖ (Estuary) ನಿರ್ಮಾಣವಾಗಿದೆ. ಈ ಸ್ಥಳವನ್ನು ಮಲಯಾಳಂನಲ್ಲಿ ‘ಅಝಿಮುಖಂ’ (Azhimukham) ಎಂದು ಕರೆಯಲಾಗುತ್ತದೆ. ನದಿ, ಸಮುದ್ರ ಮತ್ತು ಕರಾವಳಿ ಭೂದೃಶ್ಯದ ಸುಂದರ ಸಂಯೋಜನೆಯು ಈ ಪ್ರದೇಶಕ್ಕೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.<ref>{{Cite web |url=https://www.tripuntold.com/india/kerala/thrissur/chavakkad-beach/ |title=tripuntold |website=www.tripuntold.com |access-date=2026-07-28}}</ref>
'''ಪ್ರವಾಸಿ ಆಕರ್ಷಣೆ'''
ಚಾವಕ್ಕಾಡ್ ಕಡಲತೀರವು ಕೇರಳದ ಜನಪ್ರಿಯ ಕಡಲತೀರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ದೇಶೀಯ ಪ್ರವಾಸಿಗರಿಂದ ಇನ್ನೂ ಹೆಚ್ಚು ಅನ್ವೇಷಿಸಲ್ಪಡದಿರುವುದರಿಂದ, ಇಲ್ಲಿನ ನೈಸರ್ಗಿಕ ಮತ್ತು ಶಾಂತ ವಾತಾವರಣವು ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಗುರುವಾಯೂರು ದೇವಸ್ಥಾನಕ್ಕೆ ಸಮೀಪದಲ್ಲಿರುವುದರಿಂದ, ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾವಕ್ಕಾಡ್ ಕಡಲತೀರಕ್ಕೂ ಭೇಟಿ ನೀಡುತ್ತಾರೆ. ಕಡಲತೀರದ ನೈಸರ್ಗಿಕ ಸೌಂದರ್ಯ, ನದಿಮುಖ ಮತ್ತು ಅರಬ್ಬಿ ಸಮುದ್ರದ ವಿಶಾಲ ದೃಶ್ಯಗಳು ಇದನ್ನು ಕೇರಳದ ಪ್ರಮುಖ ಕರಾವಳಿ ಪ್ರವಾಸಿ ತಾಣವನ್ನಾಗಿ ಮಾಡಿವೆ.<ref>https://en.wikipedia.org/wiki/Chavakkad_Beach</ref>
poxe4s9y4mztqpbhp8txcd68pndxmns
1379469
1379468
2026-08-08T16:18:22Z
Santhosh Notagar99
82732
1379469
wikitext
text/x-wiki
{{Short description|Beach in Kerala, India}}
{{more citations needed|date=June 2018}}{{Use dmy dates|date=June 2018}}
{{Use Indian English|date=June 2018}}
{{Infobox landform
| water =
| name = ಚಾವಕ್ಕಾಡ್ ಕಡಲತೀರ
| native_name =
| other_name =
| type = ಕಡಲತೀರ
| image = Chavakkad1.jpg
| image_size =
| alt =
| caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| pushpin_map = India Kerala
| pushpin_label = Chavakkad Beach
| pushpin_caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| mapframe =
| coordinates = {{coord|10.572|N|76.008|E|type:landmark_region:IN|display=inline,title}}
| coordinates_ref =
| location = ಚಾವಕ್ಕಾಡ್, ತ್ರಿಶೂರ್ ಜಿಲ್ಲೆ, ಕೇರಳಂ
| grid_ref =
| grid_ref_UK =
| grid_ref_Ireland =
| range =
| part_of =
| water_bodies =
| age =
| orogeny =
| formed_by =
| geology =
| etymology =
| nickname =
| authority =
| operator =
| area =
| area_km2 =
| area_mi2 =
| area_ref =
| length =
| width =
| depth =
| drop =
| height =
| elevation =
| elevation_m = 20.07
| elevation_ft =
| elevation_ref =
| surface_elevation =
| surface_elevation_m =
| surface_elevation_ft =
| surface_elevation_ref =
| highest_point =
| highest_elevation =
| highest_coords =
| volcanic_zone =
| volcanic_arc =
| volcanic_belt =
| volcanic_field =
| last_eruption =
| topo =
| designation =
| free_label_1 =
| free_data_1 =
| free_label_2 =
| free_data_2 =
| free_label_3 =
| free_data_3 =
| website =
| embedded =
}}
'''ಚಾವಕ್ಕಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಪುರಸಭೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ.<ref>{{Cite web |url=https://www.keralatourism.org/destination/chavakkad-beach-thrissur/547/ |title=Chavakkad Beach in Thrissur |website=www.keralatourism.org |language=en |access-date=2026-07-28}}</ref> ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಗೊಂಡಿದ್ದು, ತನ್ನ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಡಲತೀರವು ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ.<ref>{{Cite web |url=https://www.tripoto.com/thrissur/places-to-visit/chavakkad-beach |title=Chavakkad Beach: View Images, Timing and Reviews |website=Tripoto |language=en |access-date=2026-07-28}}</ref><ref>{{Cite web |url=https://www.keralatourism.org/adventure-tourism/watersports/chavakkad-beach |title=Chavakkad Beach Boat Rides {{!}} Fun Watersports on Open Kerala Coastline |website=Adventure Tourism |language=en |access-date=2026-07-28}}</ref>
'''ನೈಸರ್ಗಿಕ ಸೌಂದರ್ಯ'''
ಚಾವಕ್ಕಾಡ್ ಕಡಲತೀರದ ಪ್ರಮುಖ ಆಕರ್ಷಣೆಗಳಲ್ಲಿ ನದಿ ಮತ್ತು ಸಮುದ್ರ ಸೇರುವ ಸ್ಥಳವೂ ಒಂದು. ಇಲ್ಲಿ ನದಿಯು ಅರಬ್ಬಿ ಸಮುದ್ರವನ್ನು ಸೇರುವುದರಿಂದ ನದಿಮುಖ (Estuary) ನಿರ್ಮಾಣವಾಗಿದೆ. ಈ ಸ್ಥಳವನ್ನು ಮಲಯಾಳಂನಲ್ಲಿ ‘ಅಝಿಮುಖಂ’ (Azhimukham) ಎಂದು ಕರೆಯಲಾಗುತ್ತದೆ. ನದಿ, ಸಮುದ್ರ ಮತ್ತು ಕರಾವಳಿ ಭೂದೃಶ್ಯದ ಸುಂದರ ಸಂಯೋಜನೆಯು ಈ ಪ್ರದೇಶಕ್ಕೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.<ref>{{Cite web |url=https://www.tripuntold.com/india/kerala/thrissur/chavakkad-beach/ |title=tripuntold |website=www.tripuntold.com |access-date=2026-07-28}}</ref>
'''ಪ್ರವಾಸಿ ಆಕರ್ಷಣೆ'''
ಚಾವಕ್ಕಾಡ್ ಕಡಲತೀರವು ಕೇರಳದ ಜನಪ್ರಿಯ ಕಡಲತೀರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ದೇಶೀಯ ಪ್ರವಾಸಿಗರಿಂದ ಇನ್ನೂ ಹೆಚ್ಚು ಅನ್ವೇಷಿಸಲ್ಪಡದಿರುವುದರಿಂದ, ಇಲ್ಲಿನ ನೈಸರ್ಗಿಕ ಮತ್ತು ಶಾಂತ ವಾತಾವರಣವು ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಗುರುವಾಯೂರು ದೇವಸ್ಥಾನಕ್ಕೆ ಸಮೀಪದಲ್ಲಿರುವುದರಿಂದ, ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾವಕ್ಕಾಡ್ ಕಡಲತೀರಕ್ಕೂ ಭೇಟಿ ನೀಡುತ್ತಾರೆ. ಕಡಲತೀರದ ನೈಸರ್ಗಿಕ ಸೌಂದರ್ಯ, ನದಿಮುಖ ಮತ್ತು ಅರಬ್ಬಿ ಸಮುದ್ರದ ವಿಶಾಲ ದೃಶ್ಯಗಳು ಇದನ್ನು ಕೇರಳದ ಪ್ರಮುಖ ಕರಾವಳಿ ಪ್ರವಾಸಿ ತಾಣವನ್ನಾಗಿ ಮಾಡಿವೆ.<ref>https://en.wikipedia.org/wiki/Chavakkad_Beach</ref>
==ಉಲ್ಲೇಖಗಳು==
cv6ojj9ony6zek036ktse2474sopihw
1379470
1379469
2026-08-08T16:27:21Z
Santhosh Notagar99
82732
1379470
wikitext
text/x-wiki
{{Short description|Beach in Kerala, India}}
{{more citations needed|date=June 2018}}{{Use dmy dates|date=June 2018}}
{{Use Indian English|date=June 2018}}
{{Infobox landform
| water =
| name = ಚಾವಕ್ಕಾಡ್ ಕಡಲತೀರ
| native_name =
| other_name =
| type = ಕಡಲತೀರ
| image = Chavakkad1.jpg
| image_size =
| alt =
| caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| pushpin_map = India Kerala
| pushpin_label = Chavakkad Beach
| pushpin_caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| mapframe =
| coordinates = {{coord|10.572|N|76.008|E|type:landmark_region:IN|display=inline,title}}
| coordinates_ref =
| location = ಚಾವಕ್ಕಾಡ್, ತ್ರಿಶೂರ್ ಜಿಲ್ಲೆ, ಕೇರಳಂ
| grid_ref =
| grid_ref_UK =
| grid_ref_Ireland =
| range =
| part_of =
| water_bodies =
| age =
| orogeny =
| formed_by =
| geology =
| etymology =
| nickname =
| authority =
| operator =
| area =
| area_km2 =
| area_mi2 =
| area_ref =
| length =
| width =
| depth =
| drop =
| height =
| elevation =
| elevation_m = 20.07
| elevation_ft =
| elevation_ref =
| surface_elevation =
| surface_elevation_m =
| surface_elevation_ft =
| surface_elevation_ref =
| highest_point =
| highest_elevation =
| highest_coords =
| volcanic_zone =
| volcanic_arc =
| volcanic_belt =
| volcanic_field =
| last_eruption =
| topo =
| designation =
| free_label_1 =
| free_data_1 =
| free_label_2 =
| free_data_2 =
| free_label_3 =
| free_data_3 =
| website =
| embedded =
}}
'''ಚಾವಕ್ಕಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಪುರಸಭೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ.<ref>{{Cite web |url=https://www.keralatourism.org/destination/chavakkad-beach-thrissur/547/ |title=Chavakkad Beach in Thrissur |website=www.keralatourism.org |language=en |access-date=2026-07-28}}</ref> ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಗೊಂಡಿದ್ದು, ತನ್ನ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಡಲತೀರವು ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ.<ref>{{Cite web |url=https://www.tripoto.com/thrissur/places-to-visit/chavakkad-beach |title=Chavakkad Beach: View Images, Timing and Reviews |website=Tripoto |language=en |access-date=2026-07-28}}</ref><ref>{{Cite web |url=https://www.keralatourism.org/adventure-tourism/watersports/chavakkad-beach |title=Chavakkad Beach Boat Rides {{!}} Fun Watersports on Open Kerala Coastline |website=Adventure Tourism |language=en |access-date=2026-07-28}}</ref>
'''ನೈಸರ್ಗಿಕ ಸೌಂದರ್ಯ'''
ಚಾವಕ್ಕಾಡ್ ಕಡಲತೀರದ ಪ್ರಮುಖ ಆಕರ್ಷಣೆಗಳಲ್ಲಿ ನದಿ ಮತ್ತು ಸಮುದ್ರ ಸೇರುವ ಸ್ಥಳವೂ ಒಂದು. ಇಲ್ಲಿ ನದಿಯು ಅರಬ್ಬಿ ಸಮುದ್ರವನ್ನು ಸೇರುವುದರಿಂದ ನದಿಮುಖ (Estuary) ನಿರ್ಮಾಣವಾಗಿದೆ. ಈ ಸ್ಥಳವನ್ನು ಮಲಯಾಳಂನಲ್ಲಿ ‘ಅಝಿಮುಖಂ’ (Azhimukham) ಎಂದು ಕರೆಯಲಾಗುತ್ತದೆ. ನದಿ, ಸಮುದ್ರ ಮತ್ತು ಕರಾವಳಿ ಭೂದೃಶ್ಯದ ಸುಂದರ ಸಂಯೋಜನೆಯು ಈ ಪ್ರದೇಶಕ್ಕೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.<ref>{{Cite web |url=https://www.tripuntold.com/india/kerala/thrissur/chavakkad-beach/ |title=tripuntold |website=www.tripuntold.com |access-date=2026-07-28}}<ref>https://wanderlog.com/place/details/7179/chavakkad-beach</ref>
'''ಪ್ರವಾಸಿ ಆಕರ್ಷಣೆ'''
ಚಾವಕ್ಕಾಡ್ ಕಡಲತೀರವು ಕೇರಳದ ಜನಪ್ರಿಯ ಕಡಲತೀರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ದೇಶೀಯ ಪ್ರವಾಸಿಗರಿಂದ ಇನ್ನೂ ಹೆಚ್ಚು ಅನ್ವೇಷಿಸಲ್ಪಡದಿರುವುದರಿಂದ, ಇಲ್ಲಿನ ನೈಸರ್ಗಿಕ ಮತ್ತು ಶಾಂತ ವಾತಾವರಣವು ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಗುರುವಾಯೂರು ದೇವಸ್ಥಾನಕ್ಕೆ ಸಮೀಪದಲ್ಲಿರುವುದರಿಂದ, ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾವಕ್ಕಾಡ್ ಕಡಲತೀರಕ್ಕೂ ಭೇಟಿ ನೀಡುತ್ತಾರೆ. ಕಡಲತೀರದ ನೈಸರ್ಗಿಕ ಸೌಂದರ್ಯ, ನದಿಮುಖ ಮತ್ತು ಅರಬ್ಬಿ ಸಮುದ್ರದ ವಿಶಾಲ ದೃಶ್ಯಗಳು ಇದನ್ನು ಕೇರಳದ ಪ್ರಮುಖ ಕರಾವಳಿ ಪ್ರವಾಸಿ ತಾಣವನ್ನಾಗಿ ಮಾಡಿವೆ.<ref>https://en.wikipedia.org/wiki/Chavakkad_Beach</ref>
==ಉಲ್ಲೇಖಗಳು==
1vxpehwryewzh05idx6prw9x99tku43
1379471
1379470
2026-08-08T16:28:19Z
Santhosh Notagar99
82732
1379471
wikitext
text/x-wiki
{{Short description|Beach in Kerala, India}}
{{more citations needed|date=June 2018}}{{Use dmy dates|date=June 2018}}
{{Use Indian English|date=June 2018}}
{{Infobox landform
| water =
| name = ಚಾವಕ್ಕಾಡ್ ಕಡಲತೀರ
| native_name =
| other_name =
| type = ಕಡಲತೀರ
| image = Chavakkad1.jpg
| image_size =
| alt =
| caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| pushpin_map = India Kerala
| pushpin_label = Chavakkad Beach
| pushpin_caption = ಚಾವಕ್ಕಾಡ್ ಕಡಲತೀರ,
ತ್ರಿಶೂರ್ ಜಿಲ್ಲೆ, ಕೇರಳ
| mapframe =
| coordinates = {{coord|10.572|N|76.008|E|type:landmark_region:IN|display=inline,title}}
| coordinates_ref =
| location = ಚಾವಕ್ಕಾಡ್, ತ್ರಿಶೂರ್ ಜಿಲ್ಲೆ, ಕೇರಳಂ
| grid_ref =
| grid_ref_UK =
| grid_ref_Ireland =
| range =
| part_of =
| water_bodies =
| age =
| orogeny =
| formed_by =
| geology =
| etymology =
| nickname =
| authority =
| operator =
| area =
| area_km2 =
| area_mi2 =
| area_ref =
| length =
| width =
| depth =
| drop =
| height =
| elevation =
| elevation_m = 20.07
| elevation_ft =
| elevation_ref =
| surface_elevation =
| surface_elevation_m =
| surface_elevation_ft =
| surface_elevation_ref =
| highest_point =
| highest_elevation =
| highest_coords =
| volcanic_zone =
| volcanic_arc =
| volcanic_belt =
| volcanic_field =
| last_eruption =
| topo =
| designation =
| free_label_1 =
| free_data_1 =
| free_label_2 =
| free_data_2 =
| free_label_3 =
| free_data_3 =
| website =
| embedded =
}}
'''ಚಾವಕ್ಕಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಪುರಸಭೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ.<ref>{{Cite web |url=https://www.keralatourism.org/destination/chavakkad-beach-thrissur/547/ |title=Chavakkad Beach in Thrissur |website=www.keralatourism.org |language=en |access-date=2026-07-28}}</ref> ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಗೊಂಡಿದ್ದು, ತನ್ನ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಡಲತೀರವು ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ.<ref>{{Cite web |url=https://www.tripoto.com/thrissur/places-to-visit/chavakkad-beach |title=Chavakkad Beach: View Images, Timing and Reviews |website=Tripoto |language=en |access-date=2026-07-28}}</ref><ref>{{Cite web |url=https://www.keralatourism.org/adventure-tourism/watersports/chavakkad-beach |title=Chavakkad Beach Boat Rides {{!}} Fun Watersports on Open Kerala Coastline |website=Adventure Tourism |language=en |access-date=2026-07-28}}</ref>
'''ನೈಸರ್ಗಿಕ ಸೌಂದರ್ಯ'''
ಚಾವಕ್ಕಾಡ್ ಕಡಲತೀರದ ಪ್ರಮುಖ ಆಕರ್ಷಣೆಗಳಲ್ಲಿ ನದಿ ಮತ್ತು ಸಮುದ್ರ ಸೇರುವ ಸ್ಥಳವೂ ಒಂದು. ಇಲ್ಲಿ ನದಿಯು ಅರಬ್ಬಿ ಸಮುದ್ರವನ್ನು ಸೇರುವುದರಿಂದ ನದಿಮುಖ (Estuary) ನಿರ್ಮಾಣವಾಗಿದೆ. ಈ ಸ್ಥಳವನ್ನು ಮಲಯಾಳಂನಲ್ಲಿ ‘ಅಝಿಮುಖಂ’ (Azhimukham) ಎಂದು ಕರೆಯಲಾಗುತ್ತದೆ. ನದಿ, ಸಮುದ್ರ ಮತ್ತು ಕರಾವಳಿ ಭೂದೃಶ್ಯದ ಸುಂದರ ಸಂಯೋಜನೆಯು ಈ ಪ್ರದೇಶಕ್ಕೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.<ref>{{Cite web |url=https://www.tripuntold.com/india/kerala/thrissur/chavakkad-beach/ |title=tripuntold |website=www.tripuntold.com |access-date=2026-07-28}}</ref><ref>https://wanderlog.com/place/details/7179/chavakkad-beach</ref>
'''ಪ್ರವಾಸಿ ಆಕರ್ಷಣೆ'''
ಚಾವಕ್ಕಾಡ್ ಕಡಲತೀರವು ಕೇರಳದ ಜನಪ್ರಿಯ ಕಡಲತೀರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ದೇಶೀಯ ಪ್ರವಾಸಿಗರಿಂದ ಇನ್ನೂ ಹೆಚ್ಚು ಅನ್ವೇಷಿಸಲ್ಪಡದಿರುವುದರಿಂದ, ಇಲ್ಲಿನ ನೈಸರ್ಗಿಕ ಮತ್ತು ಶಾಂತ ವಾತಾವರಣವು ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಗುರುವಾಯೂರು ದೇವಸ್ಥಾನಕ್ಕೆ ಸಮೀಪದಲ್ಲಿರುವುದರಿಂದ, ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾವಕ್ಕಾಡ್ ಕಡಲತೀರಕ್ಕೂ ಭೇಟಿ ನೀಡುತ್ತಾರೆ. ಕಡಲತೀರದ ನೈಸರ್ಗಿಕ ಸೌಂದರ್ಯ, ನದಿಮುಖ ಮತ್ತು ಅರಬ್ಬಿ ಸಮುದ್ರದ ವಿಶಾಲ ದೃಶ್ಯಗಳು ಇದನ್ನು ಕೇರಳದ ಪ್ರಮುಖ ಕರಾವಳಿ ಪ್ರವಾಸಿ ತಾಣವನ್ನಾಗಿ ಮಾಡಿವೆ.<ref>https://en.wikipedia.org/wiki/Chavakkad_Beach</ref>
==ಉಲ್ಲೇಖಗಳು==
2e4un0o9mcjrpf2sn1kuw91zmvxb8qd
ಕಪ್ಪಾಡ್ ಕಡಲತೀರ
0
180112
1379472
2026-08-08T17:17:11Z
Santhosh Notagar99
82732
ಹೊಸ ಪುಟ: '''ಕಪ್ಪಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಸಮೀಪದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಗ್ರಾಮವಾಗಿದೆ. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ತಾಣವು ಐತಿಹಾಸಿಕ ಮಹತ್ವವನ್ನೂ...
1379472
wikitext
text/x-wiki
'''ಕಪ್ಪಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಸಮೀಪದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಗ್ರಾಮವಾಗಿದೆ. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ತಾಣವು ಐತಿಹಾಸಿಕ ಮಹತ್ವವನ್ನೂ ಹೊಂದಿದೆ. 1498ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೊ ಡ ಗಾಮಾ ಭಾರತಕ್ಕೆ ಸಮುದ್ರಮಾರ್ಗವಾಗಿ ಆಗಮಿಸಿದ ಸ್ಥಳವೆಂದು ಕಪ್ಪಾಡ್ ಪ್ರಸಿದ್ಧವಾಗಿದೆ. ಈ ಐತಿಹಾಸಿಕ ಘಟನೆಯನ್ನು ಸ್ಮರಿಸಲು ಕೇರಳ ಸರ್ಕಾರವು ಇಲ್ಲಿ ಸ್ಮಾರಕ ಶಿಲೆಯನ್ನು ಸ್ಥಾಪಿಸಿದ್ದು, ಅದರಲ್ಲಿ “Vasco da Gama landed here, Kappakadavu, in the year 1498” ಎಂಬ ಶಾಸನವಿದೆ.
== ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ==
ಕಪ್ಪಾಡ್ ಕಡಲತೀರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ 2007ರಲ್ಲಿ ₹1.5 ಕೋಟಿ ವೆಚ್ಚದ ಸೌಂದರ್ಯೀಕರಣ ಯೋಜನೆಯನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಆರಂಭಿಸಿತು. ಈ ಯೋಜನೆಯಡಿ ಕಡಲತೀರದಲ್ಲಿ ಕಾರ್ನಿಷ್ ಮತ್ತು ಉದ್ಯಾನವನವನ್ನು ನಿರ್ಮಿಸಲಾಯಿತು. ಉದ್ಯಾನವನದಲ್ಲಿ ಸಾರ್ವಜನಿಕ ಶೌಚಾಲಯ, ರೆಸ್ಟೋರೆಂಟ್ ಹಾಗೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನಗಳಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಂದರವಾದ ಕರಾವಳಿ ಪರಿಸರದ ಜೊತೆಗೆ ಐತಿಹಾಸಿಕ ಹಿನ್ನೆಲೆಯೂ ಇರುವುದರಿಂದ ಕಪ್ಪಾಡ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.
== ಸಾರಿಗೆ ಮತ್ತು ಮಾನ್ಯತೆ ==
ಕಪ್ಪಾಡ್ಗೆ ಸಮೀಪದ ಪ್ರಮುಖ ರೈಲು ನಿಲ್ದಾಣ ಕೊಯಿಲಾಂಡಿ ರೈಲು ನಿಲ್ದಾಣ, ಇದು ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವು ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಕೋಝಿಕ್ಕೋಡ್ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಕೋಝಿಕ್ಕೋಡ್ ಮತ್ತು ವಡಕರ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಿರುವಂಗೂರ್ನಲ್ಲಿ ಇಳಿದು ಅಲ್ಲಿಂದ ಕಪ್ಪಾಡ್ ಕಡಲತೀರವನ್ನು ತಲುಪಬಹುದು. ಕಪ್ಪಾಡ್ ಕಡಲತೀರವು ತನ್ನ ಸ್ವಚ್ಛತೆ, ಪರಿಸರ ನಿರ್ವಹಣೆ ಮತ್ತು ಪ್ರವಾಸಿಗರಿಗೆ ಒದಗಿಸುವ ಸೌಲಭ್ಯಗಳಿಗಾಗಿ ಬ್ಲೂ ಫ್ಲ್ಯಾಗ್ ಕಡಲತೀರ ಎಂಬ ಅಂತರರಾಷ್ಟ್ರೀಯ ಮಾನ್ಯತೆಯನ್ನೂ ಪಡೆದಿದೆ.
6f8e820wqduhksh3vqb30nux1spvq7p
1379473
1379472
2026-08-08T17:17:36Z
Santhosh Notagar99
82732
1379473
wikitext
text/x-wiki
{{Use Indian English|date=July 2016}}
{{Use dmy dates|date=September 2019}}
{{Infobox settlement
| name = Kappad
| native_name =
| native_name_lang =
| other_name = Kappakadavu
| nickname =
| type = beach and village
| image = Kappad Beach.jpg
| alt =
| caption = Kappad beach
| pushpin_map =
| pushpin_label_position = right
| pushpin_alt =
| pushpin_caption = Location in Kerala, India
| coordinates = {{coord|11|23|6|N|75|43|3|E|display=inline,title}}
| subdivision_type = Country
| subdivision_name = {{flagu|India}}
| subdivision_type1 = State
| subdivision_name1 = [[Kerala]]
| subdivision_type2 = [[List of districts of India|District]]
| subdivision_name2 = [[Kozhikode district|Kozhikode]]
| established_title = <!-- Established -->
| established_date =
| founder =
| named_for =
| parts_type = [[Taluka]]s
| parts = Koyilandy
| government_type =
| governing_body = [[Gram panchayat|Grama Panchayat]]
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of = 2001
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Malayalam language|Malayalam]], and [[English language|English]]
| time_zone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 673304
| area_code_type = Telephone code
| area_code = 91496
| registration_plate =
| website =
| iso_code = [[ISO 3166-2:IN|IN-KL]]
| footnotes =
}}
'''ಕಪ್ಪಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಸಮೀಪದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಗ್ರಾಮವಾಗಿದೆ. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ತಾಣವು ಐತಿಹಾಸಿಕ ಮಹತ್ವವನ್ನೂ ಹೊಂದಿದೆ. 1498ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೊ ಡ ಗಾಮಾ ಭಾರತಕ್ಕೆ ಸಮುದ್ರಮಾರ್ಗವಾಗಿ ಆಗಮಿಸಿದ ಸ್ಥಳವೆಂದು ಕಪ್ಪಾಡ್ ಪ್ರಸಿದ್ಧವಾಗಿದೆ. ಈ ಐತಿಹಾಸಿಕ ಘಟನೆಯನ್ನು ಸ್ಮರಿಸಲು ಕೇರಳ ಸರ್ಕಾರವು ಇಲ್ಲಿ ಸ್ಮಾರಕ ಶಿಲೆಯನ್ನು ಸ್ಥಾಪಿಸಿದ್ದು, ಅದರಲ್ಲಿ “Vasco da Gama landed here, Kappakadavu, in the year 1498” ಎಂಬ ಶಾಸನವಿದೆ.
== ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ==
ಕಪ್ಪಾಡ್ ಕಡಲತೀರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ 2007ರಲ್ಲಿ ₹1.5 ಕೋಟಿ ವೆಚ್ಚದ ಸೌಂದರ್ಯೀಕರಣ ಯೋಜನೆಯನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಆರಂಭಿಸಿತು. ಈ ಯೋಜನೆಯಡಿ ಕಡಲತೀರದಲ್ಲಿ ಕಾರ್ನಿಷ್ ಮತ್ತು ಉದ್ಯಾನವನವನ್ನು ನಿರ್ಮಿಸಲಾಯಿತು. ಉದ್ಯಾನವನದಲ್ಲಿ ಸಾರ್ವಜನಿಕ ಶೌಚಾಲಯ, ರೆಸ್ಟೋರೆಂಟ್ ಹಾಗೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನಗಳಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಂದರವಾದ ಕರಾವಳಿ ಪರಿಸರದ ಜೊತೆಗೆ ಐತಿಹಾಸಿಕ ಹಿನ್ನೆಲೆಯೂ ಇರುವುದರಿಂದ ಕಪ್ಪಾಡ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.
== ಸಾರಿಗೆ ಮತ್ತು ಮಾನ್ಯತೆ ==
ಕಪ್ಪಾಡ್ಗೆ ಸಮೀಪದ ಪ್ರಮುಖ ರೈಲು ನಿಲ್ದಾಣ ಕೊಯಿಲಾಂಡಿ ರೈಲು ನಿಲ್ದಾಣ, ಇದು ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವು ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಕೋಝಿಕ್ಕೋಡ್ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಕೋಝಿಕ್ಕೋಡ್ ಮತ್ತು ವಡಕರ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಿರುವಂಗೂರ್ನಲ್ಲಿ ಇಳಿದು ಅಲ್ಲಿಂದ ಕಪ್ಪಾಡ್ ಕಡಲತೀರವನ್ನು ತಲುಪಬಹುದು. ಕಪ್ಪಾಡ್ ಕಡಲತೀರವು ತನ್ನ ಸ್ವಚ್ಛತೆ, ಪರಿಸರ ನಿರ್ವಹಣೆ ಮತ್ತು ಪ್ರವಾಸಿಗರಿಗೆ ಒದಗಿಸುವ ಸೌಲಭ್ಯಗಳಿಗಾಗಿ ಬ್ಲೂ ಫ್ಲ್ಯಾಗ್ ಕಡಲತೀರ ಎಂಬ ಅಂತರರಾಷ್ಟ್ರೀಯ ಮಾನ್ಯತೆಯನ್ನೂ ಪಡೆದಿದೆ.
3wyf0wyn1f2mhagyp79kiyxnfc9r9nk
1379474
1379473
2026-08-08T17:18:50Z
Santhosh Notagar99
82732
1379474
wikitext
text/x-wiki
{{Use Indian English|date=July 2016}}
{{Use dmy dates|date=September 2019}}
{{Infobox settlement
| name = ಕಪ್ಪಾಡ್
| native_name =
| native_name_lang =
| other_name = ಕಪ್ಪಕಡವು
| nickname =
| type = ಕಡಲತೀರ ಮತ್ತು ಹಳ್ಳಿ
| image = Kappad Beach.jpg
| alt =
| caption = ಕಪ್ಪಾಡ್ ಕಡಲತೀರ
| pushpin_map =
| pushpin_label_position = right
| pushpin_alt =
| pushpin_caption = Location in Kerala, India
| coordinates = {{coord|11|23|6|N|75|43|3|E|display=inline,title}}
| subdivision_type = Country
| subdivision_name = {{flagu|India}}
| subdivision_type1 = State
| subdivision_name1 = [[Kerala]]
| subdivision_type2 = [[List of districts of India|District]]
| subdivision_name2 = [[Kozhikode district|Kozhikode]]
| established_title = <!-- Established -->
| established_date =
| founder =
| named_for =
| parts_type = [[Taluka]]s
| parts = Koyilandy
| government_type =
| governing_body = [[Gram panchayat|Grama Panchayat]]
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of = 2001
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Malayalam language|Malayalam]], and [[English language|English]]
| time_zone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 673304
| area_code_type = Telephone code
| area_code = 91496
| registration_plate =
| website =
| iso_code = [[ISO 3166-2:IN|IN-KL]]
| footnotes =
}}
'''ಕಪ್ಪಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಸಮೀಪದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಗ್ರಾಮವಾಗಿದೆ. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ತಾಣವು ಐತಿಹಾಸಿಕ ಮಹತ್ವವನ್ನೂ ಹೊಂದಿದೆ. 1498ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೊ ಡ ಗಾಮಾ ಭಾರತಕ್ಕೆ ಸಮುದ್ರಮಾರ್ಗವಾಗಿ ಆಗಮಿಸಿದ ಸ್ಥಳವೆಂದು ಕಪ್ಪಾಡ್ ಪ್ರಸಿದ್ಧವಾಗಿದೆ. ಈ ಐತಿಹಾಸಿಕ ಘಟನೆಯನ್ನು ಸ್ಮರಿಸಲು ಕೇರಳ ಸರ್ಕಾರವು ಇಲ್ಲಿ ಸ್ಮಾರಕ ಶಿಲೆಯನ್ನು ಸ್ಥಾಪಿಸಿದ್ದು, ಅದರಲ್ಲಿ “Vasco da Gama landed here, Kappakadavu, in the year 1498” ಎಂಬ ಶಾಸನವಿದೆ.
== ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ==
ಕಪ್ಪಾಡ್ ಕಡಲತೀರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ 2007ರಲ್ಲಿ ₹1.5 ಕೋಟಿ ವೆಚ್ಚದ ಸೌಂದರ್ಯೀಕರಣ ಯೋಜನೆಯನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಆರಂಭಿಸಿತು. ಈ ಯೋಜನೆಯಡಿ ಕಡಲತೀರದಲ್ಲಿ ಕಾರ್ನಿಷ್ ಮತ್ತು ಉದ್ಯಾನವನವನ್ನು ನಿರ್ಮಿಸಲಾಯಿತು. ಉದ್ಯಾನವನದಲ್ಲಿ ಸಾರ್ವಜನಿಕ ಶೌಚಾಲಯ, ರೆಸ್ಟೋರೆಂಟ್ ಹಾಗೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನಗಳಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಂದರವಾದ ಕರಾವಳಿ ಪರಿಸರದ ಜೊತೆಗೆ ಐತಿಹಾಸಿಕ ಹಿನ್ನೆಲೆಯೂ ಇರುವುದರಿಂದ ಕಪ್ಪಾಡ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.
== ಸಾರಿಗೆ ಮತ್ತು ಮಾನ್ಯತೆ ==
ಕಪ್ಪಾಡ್ಗೆ ಸಮೀಪದ ಪ್ರಮುಖ ರೈಲು ನಿಲ್ದಾಣ ಕೊಯಿಲಾಂಡಿ ರೈಲು ನಿಲ್ದಾಣ, ಇದು ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವು ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಕೋಝಿಕ್ಕೋಡ್ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಕೋಝಿಕ್ಕೋಡ್ ಮತ್ತು ವಡಕರ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಿರುವಂಗೂರ್ನಲ್ಲಿ ಇಳಿದು ಅಲ್ಲಿಂದ ಕಪ್ಪಾಡ್ ಕಡಲತೀರವನ್ನು ತಲುಪಬಹುದು. ಕಪ್ಪಾಡ್ ಕಡಲತೀರವು ತನ್ನ ಸ್ವಚ್ಛತೆ, ಪರಿಸರ ನಿರ್ವಹಣೆ ಮತ್ತು ಪ್ರವಾಸಿಗರಿಗೆ ಒದಗಿಸುವ ಸೌಲಭ್ಯಗಳಿಗಾಗಿ ಬ್ಲೂ ಫ್ಲ್ಯಾಗ್ ಕಡಲತೀರ ಎಂಬ ಅಂತರರಾಷ್ಟ್ರೀಯ ಮಾನ್ಯತೆಯನ್ನೂ ಪಡೆದಿದೆ.
louvkc8lcbs6hqw93crnk76dfh1hgyn
1379475
1379474
2026-08-08T17:20:08Z
Santhosh Notagar99
82732
1379475
wikitext
text/x-wiki
{{Use Indian English|date=July 2016}}
{{Use dmy dates|date=September 2019}}
{{Infobox settlement
| name = ಕಪ್ಪಾಡ್
| native_name =
| native_name_lang =
| other_name = ಕಪ್ಪಕಡವು
| nickname =
| type = ಕಡಲತೀರ ಮತ್ತು ಹಳ್ಳಿ
| image = Kappad Beach.jpg
| alt =
| caption = ಕಪ್ಪಾಡ್ ಕಡಲತೀರ
| pushpin_map =
| pushpin_label_position = right
| pushpin_alt =
| pushpin_caption = Location in Kerala, India
| coordinates = {{coord|11|23|6|N|75|43|3|E|display=inline,title}}
| subdivision_type = Country
| subdivision_name = {{flagu|India}}
| subdivision_type1 = State
| subdivision_name1 = [[Kerala]]
| subdivision_type2 = [[List of districts of India|District]]
| subdivision_name2 = [[Kozhikode district|Kozhikode]]
| established_title = <!-- Established -->
| established_date =
| founder =
| named_for =
| parts_type = [[Taluka]]s
| parts = Koyilandy
| government_type =
| governing_body = [[Gram panchayat|Grama Panchayat]]
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of = 2001
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Malayalam language|Malayalam]], and [[English language|English]]
| time_zone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 673304
| area_code_type = Telephone code
| area_code = 91496
| registration_plate =
| website =
| iso_code = [[ISO 3166-2:IN|IN-KL]]
| footnotes =
}}
'''ಕಪ್ಪಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಸಮೀಪದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಗ್ರಾಮವಾಗಿದೆ. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ತಾಣವು ಐತಿಹಾಸಿಕ ಮಹತ್ವವನ್ನೂ ಹೊಂದಿದೆ.<ref>{{Cite web |url=https://www.incredibleindia.gov.in/en/kerala/kozhikode/kappad-beach |title=Kappad Beach |website=Incredible India |language=en |access-date=2026-07-29}}</ref><ref>{{Cite web |url=https://www.dtpckozhikode.com/destination/kappad-beach |title=Kappad Beach {{!}} DTPC |website=DTPC kozhikode |language=en |access-date=2026-07-29}}</ref> 1498ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೊ ಡ ಗಾಮಾ ಭಾರತಕ್ಕೆ ಸಮುದ್ರಮಾರ್ಗವಾಗಿ ಆಗಮಿಸಿದ ಸ್ಥಳವೆಂದು ಕಪ್ಪಾಡ್ ಪ್ರಸಿದ್ಧವಾಗಿದೆ. ಈ ಐತಿಹಾಸಿಕ ಘಟನೆಯನ್ನು ಸ್ಮರಿಸಲು ಕೇರಳ ಸರ್ಕಾರವು ಇಲ್ಲಿ ಸ್ಮಾರಕ ಶಿಲೆಯನ್ನು ಸ್ಥಾಪಿಸಿದ್ದು, ಅದರಲ್ಲಿ “Vasco da Gama landed here, Kappakadavu, in the year 1498” ಎಂಬ ಶಾಸನವಿದೆ.
== ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ==
ಕಪ್ಪಾಡ್ ಕಡಲತೀರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ 2007ರಲ್ಲಿ ₹1.5 ಕೋಟಿ ವೆಚ್ಚದ ಸೌಂದರ್ಯೀಕರಣ ಯೋಜನೆಯನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಆರಂಭಿಸಿತು. ಈ ಯೋಜನೆಯಡಿ ಕಡಲತೀರದಲ್ಲಿ ಕಾರ್ನಿಷ್ ಮತ್ತು ಉದ್ಯಾನವನವನ್ನು ನಿರ್ಮಿಸಲಾಯಿತು. ಉದ್ಯಾನವನದಲ್ಲಿ ಸಾರ್ವಜನಿಕ ಶೌಚಾಲಯ, ರೆಸ್ಟೋರೆಂಟ್ ಹಾಗೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನಗಳಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಂದರವಾದ ಕರಾವಳಿ ಪರಿಸರದ ಜೊತೆಗೆ ಐತಿಹಾಸಿಕ ಹಿನ್ನೆಲೆಯೂ ಇರುವುದರಿಂದ ಕಪ್ಪಾಡ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.
== ಸಾರಿಗೆ ಮತ್ತು ಮಾನ್ಯತೆ ==
ಕಪ್ಪಾಡ್ಗೆ ಸಮೀಪದ ಪ್ರಮುಖ ರೈಲು ನಿಲ್ದಾಣ ಕೊಯಿಲಾಂಡಿ ರೈಲು ನಿಲ್ದಾಣ, ಇದು ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವು ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಕೋಝಿಕ್ಕೋಡ್ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಕೋಝಿಕ್ಕೋಡ್ ಮತ್ತು ವಡಕರ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಿರುವಂಗೂರ್ನಲ್ಲಿ ಇಳಿದು ಅಲ್ಲಿಂದ ಕಪ್ಪಾಡ್ ಕಡಲತೀರವನ್ನು ತಲುಪಬಹುದು. ಕಪ್ಪಾಡ್ ಕಡಲತೀರವು ತನ್ನ ಸ್ವಚ್ಛತೆ, ಪರಿಸರ ನಿರ್ವಹಣೆ ಮತ್ತು ಪ್ರವಾಸಿಗರಿಗೆ ಒದಗಿಸುವ ಸೌಲಭ್ಯಗಳಿಗಾಗಿ ಬ್ಲೂ ಫ್ಲ್ಯಾಗ್ ಕಡಲತೀರ ಎಂಬ ಅಂತರರಾಷ್ಟ್ರೀಯ ಮಾನ್ಯತೆಯನ್ನೂ ಪಡೆದಿದೆ.
js2lrtkclm5fw1an3offhpwkirg4ru6
1379476
1379475
2026-08-08T17:20:31Z
Santhosh Notagar99
82732
1379476
wikitext
text/x-wiki
{{Use Indian English|date=July 2016}}
{{Use dmy dates|date=September 2019}}
{{Infobox settlement
| name = ಕಪ್ಪಾಡ್
| native_name =
| native_name_lang =
| other_name = ಕಪ್ಪಕಡವು
| nickname =
| type = ಕಡಲತೀರ ಮತ್ತು ಹಳ್ಳಿ
| image = Kappad Beach.jpg
| alt =
| caption = ಕಪ್ಪಾಡ್ ಕಡಲತೀರ
| pushpin_map =
| pushpin_label_position = right
| pushpin_alt =
| pushpin_caption = Location in Kerala, India
| coordinates = {{coord|11|23|6|N|75|43|3|E|display=inline,title}}
| subdivision_type = Country
| subdivision_name = {{flagu|India}}
| subdivision_type1 = State
| subdivision_name1 = [[Kerala]]
| subdivision_type2 = [[List of districts of India|District]]
| subdivision_name2 = [[Kozhikode district|Kozhikode]]
| established_title = <!-- Established -->
| established_date =
| founder =
| named_for =
| parts_type = [[Taluka]]s
| parts = Koyilandy
| government_type =
| governing_body = [[Gram panchayat|Grama Panchayat]]
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of = 2001
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Malayalam language|Malayalam]], and [[English language|English]]
| time_zone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 673304
| area_code_type = Telephone code
| area_code = 91496
| registration_plate =
| website =
| iso_code = [[ISO 3166-2:IN|IN-KL]]
| footnotes =
}}
'''ಕಪ್ಪಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಸಮೀಪದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಗ್ರಾಮವಾಗಿದೆ. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ತಾಣವು ಐತಿಹಾಸಿಕ ಮಹತ್ವವನ್ನೂ ಹೊಂದಿದೆ.<ref>{{Cite web |url=https://www.incredibleindia.gov.in/en/kerala/kozhikode/kappad-beach |title=Kappad Beach |website=Incredible India |language=en |access-date=2026-07-29}}</ref><ref>{{Cite web |url=https://www.dtpckozhikode.com/destination/kappad-beach |title=Kappad Beach {{!}} DTPC |website=DTPC kozhikode |language=en |access-date=2026-07-29}}</ref> 1498ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೊ ಡ ಗಾಮಾ ಭಾರತಕ್ಕೆ ಸಮುದ್ರಮಾರ್ಗವಾಗಿ ಆಗಮಿಸಿದ ಸ್ಥಳವೆಂದು ಕಪ್ಪಾಡ್ ಪ್ರಸಿದ್ಧವಾಗಿದೆ. ಈ ಐತಿಹಾಸಿಕ ಘಟನೆಯನ್ನು ಸ್ಮರಿಸಲು ಕೇರಳ ಸರ್ಕಾರವು ಇಲ್ಲಿ ಸ್ಮಾರಕ ಶಿಲೆಯನ್ನು ಸ್ಥಾಪಿಸಿದ್ದು, ಅದರಲ್ಲಿ “Vasco da Gama landed here, Kappakadavu, in the year 1498” ಎಂಬ ಶಾಸನವಿದೆ.<ref>{{Cite web |author=Anto P. Cheerotha |url=https://thesouthfirst.com/kerala/toilet-monument-and-a-vanishing-turtle-walking-through-keralas-blue-flag-certified-kappad-beach/ |title=Toilet, monument and a vanishing turtle: Walking through Kerala's Blue-Flag-certified Kappad Beach |date=2026-07-01 |website=The South First {{!}} News, Politics, Sports, Entertainment & Live Updates |language=en-IN |access-date=2026-07-29}}</ref>
== ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ==
ಕಪ್ಪಾಡ್ ಕಡಲತೀರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ 2007ರಲ್ಲಿ ₹1.5 ಕೋಟಿ ವೆಚ್ಚದ ಸೌಂದರ್ಯೀಕರಣ ಯೋಜನೆಯನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಆರಂಭಿಸಿತು. ಈ ಯೋಜನೆಯಡಿ ಕಡಲತೀರದಲ್ಲಿ ಕಾರ್ನಿಷ್ ಮತ್ತು ಉದ್ಯಾನವನವನ್ನು ನಿರ್ಮಿಸಲಾಯಿತು. ಉದ್ಯಾನವನದಲ್ಲಿ ಸಾರ್ವಜನಿಕ ಶೌಚಾಲಯ, ರೆಸ್ಟೋರೆಂಟ್ ಹಾಗೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನಗಳಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಂದರವಾದ ಕರಾವಳಿ ಪರಿಸರದ ಜೊತೆಗೆ ಐತಿಹಾಸಿಕ ಹಿನ್ನೆಲೆಯೂ ಇರುವುದರಿಂದ ಕಪ್ಪಾಡ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.
== ಸಾರಿಗೆ ಮತ್ತು ಮಾನ್ಯತೆ ==
ಕಪ್ಪಾಡ್ಗೆ ಸಮೀಪದ ಪ್ರಮುಖ ರೈಲು ನಿಲ್ದಾಣ ಕೊಯಿಲಾಂಡಿ ರೈಲು ನಿಲ್ದಾಣ, ಇದು ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವು ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಕೋಝಿಕ್ಕೋಡ್ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಕೋಝಿಕ್ಕೋಡ್ ಮತ್ತು ವಡಕರ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಿರುವಂಗೂರ್ನಲ್ಲಿ ಇಳಿದು ಅಲ್ಲಿಂದ ಕಪ್ಪಾಡ್ ಕಡಲತೀರವನ್ನು ತಲುಪಬಹುದು. ಕಪ್ಪಾಡ್ ಕಡಲತೀರವು ತನ್ನ ಸ್ವಚ್ಛತೆ, ಪರಿಸರ ನಿರ್ವಹಣೆ ಮತ್ತು ಪ್ರವಾಸಿಗರಿಗೆ ಒದಗಿಸುವ ಸೌಲಭ್ಯಗಳಿಗಾಗಿ ಬ್ಲೂ ಫ್ಲ್ಯಾಗ್ ಕಡಲತೀರ ಎಂಬ ಅಂತರರಾಷ್ಟ್ರೀಯ ಮಾನ್ಯತೆಯನ್ನೂ ಪಡೆದಿದೆ.
0hom262mvfybna5p7uedxo6ks987rer
1379477
1379476
2026-08-08T17:20:49Z
Santhosh Notagar99
82732
/* ಅಭಿವೃದ್ಧಿ ಮತ್ತು ಪ್ರವಾಸೋದ್ಯಮ */
1379477
wikitext
text/x-wiki
{{Use Indian English|date=July 2016}}
{{Use dmy dates|date=September 2019}}
{{Infobox settlement
| name = ಕಪ್ಪಾಡ್
| native_name =
| native_name_lang =
| other_name = ಕಪ್ಪಕಡವು
| nickname =
| type = ಕಡಲತೀರ ಮತ್ತು ಹಳ್ಳಿ
| image = Kappad Beach.jpg
| alt =
| caption = ಕಪ್ಪಾಡ್ ಕಡಲತೀರ
| pushpin_map =
| pushpin_label_position = right
| pushpin_alt =
| pushpin_caption = Location in Kerala, India
| coordinates = {{coord|11|23|6|N|75|43|3|E|display=inline,title}}
| subdivision_type = Country
| subdivision_name = {{flagu|India}}
| subdivision_type1 = State
| subdivision_name1 = [[Kerala]]
| subdivision_type2 = [[List of districts of India|District]]
| subdivision_name2 = [[Kozhikode district|Kozhikode]]
| established_title = <!-- Established -->
| established_date =
| founder =
| named_for =
| parts_type = [[Taluka]]s
| parts = Koyilandy
| government_type =
| governing_body = [[Gram panchayat|Grama Panchayat]]
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of = 2001
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Malayalam language|Malayalam]], and [[English language|English]]
| time_zone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 673304
| area_code_type = Telephone code
| area_code = 91496
| registration_plate =
| website =
| iso_code = [[ISO 3166-2:IN|IN-KL]]
| footnotes =
}}
'''ಕಪ್ಪಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಸಮೀಪದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಗ್ರಾಮವಾಗಿದೆ. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ತಾಣವು ಐತಿಹಾಸಿಕ ಮಹತ್ವವನ್ನೂ ಹೊಂದಿದೆ.<ref>{{Cite web |url=https://www.incredibleindia.gov.in/en/kerala/kozhikode/kappad-beach |title=Kappad Beach |website=Incredible India |language=en |access-date=2026-07-29}}</ref><ref>{{Cite web |url=https://www.dtpckozhikode.com/destination/kappad-beach |title=Kappad Beach {{!}} DTPC |website=DTPC kozhikode |language=en |access-date=2026-07-29}}</ref> 1498ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೊ ಡ ಗಾಮಾ ಭಾರತಕ್ಕೆ ಸಮುದ್ರಮಾರ್ಗವಾಗಿ ಆಗಮಿಸಿದ ಸ್ಥಳವೆಂದು ಕಪ್ಪಾಡ್ ಪ್ರಸಿದ್ಧವಾಗಿದೆ. ಈ ಐತಿಹಾಸಿಕ ಘಟನೆಯನ್ನು ಸ್ಮರಿಸಲು ಕೇರಳ ಸರ್ಕಾರವು ಇಲ್ಲಿ ಸ್ಮಾರಕ ಶಿಲೆಯನ್ನು ಸ್ಥಾಪಿಸಿದ್ದು, ಅದರಲ್ಲಿ “Vasco da Gama landed here, Kappakadavu, in the year 1498” ಎಂಬ ಶಾಸನವಿದೆ.<ref>{{Cite web |author=Anto P. Cheerotha |url=https://thesouthfirst.com/kerala/toilet-monument-and-a-vanishing-turtle-walking-through-keralas-blue-flag-certified-kappad-beach/ |title=Toilet, monument and a vanishing turtle: Walking through Kerala's Blue-Flag-certified Kappad Beach |date=2026-07-01 |website=The South First {{!}} News, Politics, Sports, Entertainment & Live Updates |language=en-IN |access-date=2026-07-29}}</ref>
== ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ==
ಕಪ್ಪಾಡ್ ಕಡಲತೀರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ 2007ರಲ್ಲಿ ₹1.5 ಕೋಟಿ ವೆಚ್ಚದ ಸೌಂದರ್ಯೀಕರಣ ಯೋಜನೆಯನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಆರಂಭಿಸಿತು. ಈ ಯೋಜನೆಯಡಿ ಕಡಲತೀರದಲ್ಲಿ ಕಾರ್ನಿಷ್ ಮತ್ತು ಉದ್ಯಾನವನವನ್ನು ನಿರ್ಮಿಸಲಾಯಿತು. ಉದ್ಯಾನವನದಲ್ಲಿ ಸಾರ್ವಜನಿಕ ಶೌಚಾಲಯ, ರೆಸ್ಟೋರೆಂಟ್ ಹಾಗೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನಗಳಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಂದರವಾದ ಕರಾವಳಿ ಪರಿಸರದ ಜೊತೆಗೆ ಐತಿಹಾಸಿಕ ಹಿನ್ನೆಲೆಯೂ ಇರುವುದರಿಂದ ಕಪ್ಪಾಡ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.<ref>[https://www.thehindu.com/news/national/kerala/kappad-blue-flag-beach-to-undergo-5-crore-infrastructure-overhaul/article70925100.ece Kappad Blue Flag beach ...]</ref>
== ಸಾರಿಗೆ ಮತ್ತು ಮಾನ್ಯತೆ ==
ಕಪ್ಪಾಡ್ಗೆ ಸಮೀಪದ ಪ್ರಮುಖ ರೈಲು ನಿಲ್ದಾಣ ಕೊಯಿಲಾಂಡಿ ರೈಲು ನಿಲ್ದಾಣ, ಇದು ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವು ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಕೋಝಿಕ್ಕೋಡ್ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಕೋಝಿಕ್ಕೋಡ್ ಮತ್ತು ವಡಕರ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಿರುವಂಗೂರ್ನಲ್ಲಿ ಇಳಿದು ಅಲ್ಲಿಂದ ಕಪ್ಪಾಡ್ ಕಡಲತೀರವನ್ನು ತಲುಪಬಹುದು. ಕಪ್ಪಾಡ್ ಕಡಲತೀರವು ತನ್ನ ಸ್ವಚ್ಛತೆ, ಪರಿಸರ ನಿರ್ವಹಣೆ ಮತ್ತು ಪ್ರವಾಸಿಗರಿಗೆ ಒದಗಿಸುವ ಸೌಲಭ್ಯಗಳಿಗಾಗಿ ಬ್ಲೂ ಫ್ಲ್ಯಾಗ್ ಕಡಲತೀರ ಎಂಬ ಅಂತರರಾಷ್ಟ್ರೀಯ ಮಾನ್ಯತೆಯನ್ನೂ ಪಡೆದಿದೆ.
0gb44alkp3278qlw7oeo6srd9ne1vph
1379478
1379477
2026-08-08T17:22:04Z
Santhosh Notagar99
82732
/* ಸಾರಿಗೆ ಮತ್ತು ಮಾನ್ಯತೆ */
1379478
wikitext
text/x-wiki
{{Use Indian English|date=July 2016}}
{{Use dmy dates|date=September 2019}}
{{Infobox settlement
| name = ಕಪ್ಪಾಡ್
| native_name =
| native_name_lang =
| other_name = ಕಪ್ಪಕಡವು
| nickname =
| type = ಕಡಲತೀರ ಮತ್ತು ಹಳ್ಳಿ
| image = Kappad Beach.jpg
| alt =
| caption = ಕಪ್ಪಾಡ್ ಕಡಲತೀರ
| pushpin_map =
| pushpin_label_position = right
| pushpin_alt =
| pushpin_caption = Location in Kerala, India
| coordinates = {{coord|11|23|6|N|75|43|3|E|display=inline,title}}
| subdivision_type = Country
| subdivision_name = {{flagu|India}}
| subdivision_type1 = State
| subdivision_name1 = [[Kerala]]
| subdivision_type2 = [[List of districts of India|District]]
| subdivision_name2 = [[Kozhikode district|Kozhikode]]
| established_title = <!-- Established -->
| established_date =
| founder =
| named_for =
| parts_type = [[Taluka]]s
| parts = Koyilandy
| government_type =
| governing_body = [[Gram panchayat|Grama Panchayat]]
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of = 2001
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Malayalam language|Malayalam]], and [[English language|English]]
| time_zone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 673304
| area_code_type = Telephone code
| area_code = 91496
| registration_plate =
| website =
| iso_code = [[ISO 3166-2:IN|IN-KL]]
| footnotes =
}}
'''ಕಪ್ಪಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಸಮೀಪದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಗ್ರಾಮವಾಗಿದೆ. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ತಾಣವು ಐತಿಹಾಸಿಕ ಮಹತ್ವವನ್ನೂ ಹೊಂದಿದೆ.<ref>{{Cite web |url=https://www.incredibleindia.gov.in/en/kerala/kozhikode/kappad-beach |title=Kappad Beach |website=Incredible India |language=en |access-date=2026-07-29}}</ref><ref>{{Cite web |url=https://www.dtpckozhikode.com/destination/kappad-beach |title=Kappad Beach {{!}} DTPC |website=DTPC kozhikode |language=en |access-date=2026-07-29}}</ref> 1498ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೊ ಡ ಗಾಮಾ ಭಾರತಕ್ಕೆ ಸಮುದ್ರಮಾರ್ಗವಾಗಿ ಆಗಮಿಸಿದ ಸ್ಥಳವೆಂದು ಕಪ್ಪಾಡ್ ಪ್ರಸಿದ್ಧವಾಗಿದೆ. ಈ ಐತಿಹಾಸಿಕ ಘಟನೆಯನ್ನು ಸ್ಮರಿಸಲು ಕೇರಳ ಸರ್ಕಾರವು ಇಲ್ಲಿ ಸ್ಮಾರಕ ಶಿಲೆಯನ್ನು ಸ್ಥಾಪಿಸಿದ್ದು, ಅದರಲ್ಲಿ “Vasco da Gama landed here, Kappakadavu, in the year 1498” ಎಂಬ ಶಾಸನವಿದೆ.<ref>{{Cite web |author=Anto P. Cheerotha |url=https://thesouthfirst.com/kerala/toilet-monument-and-a-vanishing-turtle-walking-through-keralas-blue-flag-certified-kappad-beach/ |title=Toilet, monument and a vanishing turtle: Walking through Kerala's Blue-Flag-certified Kappad Beach |date=2026-07-01 |website=The South First {{!}} News, Politics, Sports, Entertainment & Live Updates |language=en-IN |access-date=2026-07-29}}</ref>
== ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ==
ಕಪ್ಪಾಡ್ ಕಡಲತೀರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ 2007ರಲ್ಲಿ ₹1.5 ಕೋಟಿ ವೆಚ್ಚದ ಸೌಂದರ್ಯೀಕರಣ ಯೋಜನೆಯನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಆರಂಭಿಸಿತು. ಈ ಯೋಜನೆಯಡಿ ಕಡಲತೀರದಲ್ಲಿ ಕಾರ್ನಿಷ್ ಮತ್ತು ಉದ್ಯಾನವನವನ್ನು ನಿರ್ಮಿಸಲಾಯಿತು. ಉದ್ಯಾನವನದಲ್ಲಿ ಸಾರ್ವಜನಿಕ ಶೌಚಾಲಯ, ರೆಸ್ಟೋರೆಂಟ್ ಹಾಗೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನಗಳಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಂದರವಾದ ಕರಾವಳಿ ಪರಿಸರದ ಜೊತೆಗೆ ಐತಿಹಾಸಿಕ ಹಿನ್ನೆಲೆಯೂ ಇರುವುದರಿಂದ ಕಪ್ಪಾಡ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.<ref>[https://www.thehindu.com/news/national/kerala/kappad-blue-flag-beach-to-undergo-5-crore-infrastructure-overhaul/article70925100.ece Kappad Blue Flag beach ...]</ref>
== ಸಾರಿಗೆ ಮತ್ತು ಮಾನ್ಯತೆ ==
ಕಪ್ಪಾಡ್ಗೆ ಸಮೀಪದ ಪ್ರಮುಖ ರೈಲು ನಿಲ್ದಾಣ ಕೊಯಿಲಾಂಡಿ ರೈಲು ನಿಲ್ದಾಣ, ಇದು ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವು ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಕೋಝಿಕ್ಕೋಡ್ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಕೋಝಿಕ್ಕೋಡ್ ಮತ್ತು ವಡಕರ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಿರುವಂಗೂರ್ನಲ್ಲಿ ಇಳಿದು ಅಲ್ಲಿಂದ ಕಪ್ಪಾಡ್ ಕಡಲತೀರವನ್ನು ತಲುಪಬಹುದು. ಕಪ್ಪಾಡ್ ಕಡಲತೀರವು ತನ್ನ ಸ್ವಚ್ಛತೆ, ಪರಿಸರ ನಿರ್ವಹಣೆ ಮತ್ತು ಪ್ರವಾಸಿಗರಿಗೆ ಒದಗಿಸುವ ಸೌಲಭ್ಯಗಳಿಗಾಗಿ ಬ್ಲೂ ಫ್ಲ್ಯಾಗ್ ಕಡಲತೀರ ಎಂಬ ಅಂತರರಾಷ್ಟ್ರೀಯ ಮಾನ್ಯತೆಯನ್ನೂ ಪಡೆದಿದೆ. <ref>{{cite news|url=http://www.hindu.com/2007/01/12/stories/2007011203270300.htm|title=Project to beautify Kappad beach|archive-url=https://web.archive.org/web/20071213061058/http://www.hindu.com/2007/01/12/stories/2007011203270300.htm|archive-date=13 December 2007|work=[[The Hindu]]|date=12 January 2007|access-date=20 April 2021}}</ref>
tq85l9msy0ynbaqkwc7zj47x3ezh3fh
1379479
1379478
2026-08-08T17:25:35Z
Santhosh Notagar99
82732
1379479
wikitext
text/x-wiki
{{Use Indian English|date=July 2016}}
{{Use dmy dates|date=September 2019}}
{{Infobox settlement
| name = ಕಪ್ಪಾಡ್
| native_name =
| native_name_lang =
| other_name = ಕಪ್ಪಕಡವು
| nickname =
| type = ಕಡಲತೀರ ಮತ್ತು ಹಳ್ಳಿ
| image = Kappad Beach.jpg
| alt =
| caption = ಕಪ್ಪಾಡ್ ಕಡಲತೀರ
| pushpin_map =
| pushpin_label_position = right
| pushpin_alt =
| pushpin_caption = Location in Kerala, India
| coordinates = {{coord|11|23|6|N|75|43|3|E|display=inline,title}}
| subdivision_type = Country
| subdivision_name = {{flagu|India}}
| subdivision_type1 = ರಾಜ್ಯ
| subdivision_name1 = ಕೇರಳ
| subdivision_type2 = ಜಿಲ್ಲೆ
| subdivision_name2 = ಕೋಝಿಕ್ಕೋಡ್ ಜಿಲ್ಲೆ
}}
'''ಕಪ್ಪಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಸಮೀಪದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಗ್ರಾಮವಾಗಿದೆ. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ತಾಣವು ಐತಿಹಾಸಿಕ ಮಹತ್ವವನ್ನೂ ಹೊಂದಿದೆ.<ref>{{Cite web |url=https://www.incredibleindia.gov.in/en/kerala/kozhikode/kappad-beach |title=Kappad Beach |website=Incredible India |language=en |access-date=2026-07-29}}</ref><ref>{{Cite web |url=https://www.dtpckozhikode.com/destination/kappad-beach |title=Kappad Beach {{!}} DTPC |website=DTPC kozhikode |language=en |access-date=2026-07-29}}</ref> 1498ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೊ ಡ ಗಾಮಾ ಭಾರತಕ್ಕೆ ಸಮುದ್ರಮಾರ್ಗವಾಗಿ ಆಗಮಿಸಿದ ಸ್ಥಳವೆಂದು ಕಪ್ಪಾಡ್ ಪ್ರಸಿದ್ಧವಾಗಿದೆ. ಈ ಐತಿಹಾಸಿಕ ಘಟನೆಯನ್ನು ಸ್ಮರಿಸಲು ಕೇರಳ ಸರ್ಕಾರವು ಇಲ್ಲಿ ಸ್ಮಾರಕ ಶಿಲೆಯನ್ನು ಸ್ಥಾಪಿಸಿದ್ದು, ಅದರಲ್ಲಿ “Vasco da Gama landed here, Kappakadavu, in the year 1498” ಎಂಬ ಶಾಸನವಿದೆ.<ref>{{Cite web |author=Anto P. Cheerotha |url=https://thesouthfirst.com/kerala/toilet-monument-and-a-vanishing-turtle-walking-through-keralas-blue-flag-certified-kappad-beach/ |title=Toilet, monument and a vanishing turtle: Walking through Kerala's Blue-Flag-certified Kappad Beach |date=2026-07-01 |website=The South First {{!}} News, Politics, Sports, Entertainment & Live Updates |language=en-IN |access-date=2026-07-29}}</ref>
== ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ==
ಕಪ್ಪಾಡ್ ಕಡಲತೀರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ 2007ರಲ್ಲಿ ₹1.5 ಕೋಟಿ ವೆಚ್ಚದ ಸೌಂದರ್ಯೀಕರಣ ಯೋಜನೆಯನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಆರಂಭಿಸಿತು. ಈ ಯೋಜನೆಯಡಿ ಕಡಲತೀರದಲ್ಲಿ ಕಾರ್ನಿಷ್ ಮತ್ತು ಉದ್ಯಾನವನವನ್ನು ನಿರ್ಮಿಸಲಾಯಿತು. ಉದ್ಯಾನವನದಲ್ಲಿ ಸಾರ್ವಜನಿಕ ಶೌಚಾಲಯ, ರೆಸ್ಟೋರೆಂಟ್ ಹಾಗೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನಗಳಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಂದರವಾದ ಕರಾವಳಿ ಪರಿಸರದ ಜೊತೆಗೆ ಐತಿಹಾಸಿಕ ಹಿನ್ನೆಲೆಯೂ ಇರುವುದರಿಂದ ಕಪ್ಪಾಡ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.<ref>[https://www.thehindu.com/news/national/kerala/kappad-blue-flag-beach-to-undergo-5-crore-infrastructure-overhaul/article70925100.ece Kappad Blue Flag beach ...]</ref>
== ಸಾರಿಗೆ ಮತ್ತು ಮಾನ್ಯತೆ ==
ಕಪ್ಪಾಡ್ಗೆ ಸಮೀಪದ ಪ್ರಮುಖ ರೈಲು ನಿಲ್ದಾಣ ಕೊಯಿಲಾಂಡಿ ರೈಲು ನಿಲ್ದಾಣ, ಇದು ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವು ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಕೋಝಿಕ್ಕೋಡ್ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಕೋಝಿಕ್ಕೋಡ್ ಮತ್ತು ವಡಕರ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಿರುವಂಗೂರ್ನಲ್ಲಿ ಇಳಿದು ಅಲ್ಲಿಂದ ಕಪ್ಪಾಡ್ ಕಡಲತೀರವನ್ನು ತಲುಪಬಹುದು. ಕಪ್ಪಾಡ್ ಕಡಲತೀರವು ತನ್ನ ಸ್ವಚ್ಛತೆ, ಪರಿಸರ ನಿರ್ವಹಣೆ ಮತ್ತು ಪ್ರವಾಸಿಗರಿಗೆ ಒದಗಿಸುವ ಸೌಲಭ್ಯಗಳಿಗಾಗಿ ಬ್ಲೂ ಫ್ಲ್ಯಾಗ್ ಕಡಲತೀರ ಎಂಬ ಅಂತರರಾಷ್ಟ್ರೀಯ ಮಾನ್ಯತೆಯನ್ನೂ ಪಡೆದಿದೆ. <ref>{{cite news|url=http://www.hindu.com/2007/01/12/stories/2007011203270300.htm|title=Project to beautify Kappad beach|archive-url=https://web.archive.org/web/20071213061058/http://www.hindu.com/2007/01/12/stories/2007011203270300.htm|archive-date=13 December 2007|work=[[The Hindu]]|date=12 January 2007|access-date=20 April 2021}}</ref>
==ಉಲ್ಲೇಖಗಳು==
mx4u9w0bvtes126egxr0kz6q87d01xy
1379480
1379479
2026-08-08T17:26:03Z
Santhosh Notagar99
82732
1379480
wikitext
text/x-wiki
{{Use Indian English|date=July 2016}}
{{Use dmy dates|date=September 2019}}
{{Infobox settlement
| name = ಕಪ್ಪಾಡ್
| native_name =
| native_name_lang =
| other_name = ಕಪ್ಪಕಡವು
| nickname =
| type = ಕಡಲತೀರ ಮತ್ತು ಹಳ್ಳಿ
| image = Kappad Beach.jpg
| alt =
| caption = ಕಪ್ಪಾಡ್ ಕಡಲತೀರ
| pushpin_map =
| pushpin_label_position = right
| pushpin_alt =
| pushpin_caption = Location in Kerala, India
| coordinates = {{coord|11|23|6|N|75|43|3|E|display=inline,title}}
| subdivision_type = Country
| subdivision_name = {{flagu|India}}
| subdivision_type1 = ರಾಜ್ಯ
| subdivision_name1 = ಕೇರಳ
| subdivision_type2 = ಜಿಲ್ಲೆ
| subdivision_name2 = ಕೋಝಿಕ್ಕೋಡ್ ಜಿಲ್ಲೆ
}}
'''ಕಪ್ಪಾಡ್ ಕಡಲತೀರ'''ವು ಭಾರತದ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಸಮೀಪದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಗ್ರಾಮವಾಗಿದೆ. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ತಾಣವು ಐತಿಹಾಸಿಕ ಮಹತ್ವವನ್ನೂ ಹೊಂದಿದೆ.<ref>{{Cite web |url=https://www.incredibleindia.gov.in/en/kerala/kozhikode/kappad-beach |title=Kappad Beach |website=Incredible India |language=en |access-date=2026-07-29}}</ref><ref>{{Cite web |url=https://www.dtpckozhikode.com/destination/kappad-beach |title=Kappad Beach {{!}} DTPC |website=DTPC kozhikode |language=en |access-date=2026-07-29}}</ref> 1498ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೊ ಡ ಗಾಮಾ ಭಾರತಕ್ಕೆ ಸಮುದ್ರಮಾರ್ಗವಾಗಿ ಆಗಮಿಸಿದ ಸ್ಥಳವೆಂದು ಕಪ್ಪಾಡ್ ಪ್ರಸಿದ್ಧವಾಗಿದೆ. ಈ ಐತಿಹಾಸಿಕ ಘಟನೆಯನ್ನು ಸ್ಮರಿಸಲು ಕೇರಳ ಸರ್ಕಾರವು ಇಲ್ಲಿ ಸ್ಮಾರಕ ಶಿಲೆಯನ್ನು ಸ್ಥಾಪಿಸಿದ್ದು, ಅದರಲ್ಲಿ “Vasco da Gama landed here, Kappakadavu, in the year 1498” ಎಂಬ ಶಾಸನವಿದೆ.<ref>{{Cite web |author=Anto P. Cheerotha |url=https://thesouthfirst.com/kerala/toilet-monument-and-a-vanishing-turtle-walking-through-keralas-blue-flag-certified-kappad-beach/ |title=Toilet, monument and a vanishing turtle: Walking through Kerala's Blue-Flag-certified Kappad Beach |date=2026-07-01 |website=The South First {{!}} News, Politics, Sports, Entertainment & Live Updates |language=en-IN |access-date=2026-07-29}}</ref>
== ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ==
ಕಪ್ಪಾಡ್ ಕಡಲತೀರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ 2007ರಲ್ಲಿ ₹1.5 ಕೋಟಿ ವೆಚ್ಚದ ಸೌಂದರ್ಯೀಕರಣ ಯೋಜನೆಯನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಆರಂಭಿಸಿತು. ಈ ಯೋಜನೆಯಡಿ ಕಡಲತೀರದಲ್ಲಿ ಕಾರ್ನಿಷ್ ಮತ್ತು ಉದ್ಯಾನವನವನ್ನು ನಿರ್ಮಿಸಲಾಯಿತು. ಉದ್ಯಾನವನದಲ್ಲಿ ಸಾರ್ವಜನಿಕ ಶೌಚಾಲಯ, ರೆಸ್ಟೋರೆಂಟ್ ಹಾಗೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನಗಳಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಂದರವಾದ ಕರಾವಳಿ ಪರಿಸರದ ಜೊತೆಗೆ ಐತಿಹಾಸಿಕ ಹಿನ್ನೆಲೆಯೂ ಇರುವುದರಿಂದ ಕಪ್ಪಾಡ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.<ref>[https://www.thehindu.com/news/national/kerala/kappad-blue-flag-beach-to-undergo-5-crore-infrastructure-overhaul/article70925100.ece Kappad Blue Flag beach ...]</ref>
== ಸಾರಿಗೆ ಮತ್ತು ಮಾನ್ಯತೆ ==
ಕಪ್ಪಾಡ್ಗೆ ಸಮೀಪದ ಪ್ರಮುಖ ರೈಲು ನಿಲ್ದಾಣ ಕೊಯಿಲಾಂಡಿ ರೈಲು ನಿಲ್ದಾಣ, ಇದು ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವು ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಕೋಝಿಕ್ಕೋಡ್ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಕೋಝಿಕ್ಕೋಡ್ ಮತ್ತು ವಡಕರ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಿರುವಂಗೂರ್ನಲ್ಲಿ ಇಳಿದು ಅಲ್ಲಿಂದ ಕಪ್ಪಾಡ್ ಕಡಲತೀರವನ್ನು ತಲುಪಬಹುದು. ಕಪ್ಪಾಡ್ ಕಡಲತೀರವು ತನ್ನ ಸ್ವಚ್ಛತೆ, ಪರಿಸರ ನಿರ್ವಹಣೆ ಮತ್ತು ಪ್ರವಾಸಿಗರಿಗೆ ಒದಗಿಸುವ ಸೌಲಭ್ಯಗಳಿಗಾಗಿ ಬ್ಲೂ ಫ್ಲ್ಯಾಗ್ ಕಡಲತೀರ ಎಂಬ ಅಂತರರಾಷ್ಟ್ರೀಯ ಮಾನ್ಯತೆಯನ್ನೂ ಪಡೆದಿದೆ. <ref>{{cite news|url=http://www.hindu.com/2007/01/12/stories/2007011203270300.htm|title=Project to beautify Kappad beach|archive-url=https://web.archive.org/web/20071213061058/http://www.hindu.com/2007/01/12/stories/2007011203270300.htm|archive-date=13 December 2007|work=[[The Hindu]]|date=12 January 2007|access-date=20 April 2021}}</ref>
==ಉಲ್ಲೇಖಗಳು==
1yabu57vb2i9bhyyci8ijjsqdmrtklx
ದಿಲೀಪ್
0
180113
1379481
2026-08-08T17:30:10Z
Pragathi. BH
88266
ಹೊಸ ಪುಟ: ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 15...
1379481
wikitext
text/x-wiki
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು [೧] [೨] [೩] ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು. [೨] 2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. ಮಹಾಬಲಿ ಕೇರಳಕ್ಕೆ ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ ಮೋಹನ್ ಲಾಲ್ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. [೪] ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. [೫] ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. [೨] ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. [೧] ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ [೩] ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. [೨] ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. [೧] ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. [೫] ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. [೬] ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. [೧] ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. [೧] ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. [೨] ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು. [೩] ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು. [೧] ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". [೨] ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. [೩] ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016). [೪] ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು. [೫] ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
o5l6sxg0svlfeg095u89zudu74z5l2e
1379482
1379481
2026-08-08T17:31:24Z
Pragathi. BH
88266
1379482
wikitext
text/x-wiki
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು [೧] [೨] [೩] ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು. [೨] 2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. ಮಹಾಬಲಿ ಕೇರಳಕ್ಕೆ ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ ಮೋಹನ್ ಲಾಲ್ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. [೪] ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. [೫] ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. [೨] ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. [೧] ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ [೩] ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. [೨] ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. [೧] ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. [೫] ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. [೬] ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. [೧] ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. [೧] ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. [೨] ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು. [೩] ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು. [೧] ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". [೨] ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. [೩] ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016). [೪] ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು. [೫] ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
1h8ns9dazucs5usatkmph08pvap8ota
1379483
1379482
2026-08-08T17:33:15Z
Pragathi. BH
88266
1379483
wikitext
text/x-wiki
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು [೧] [೨] [೩] ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು. [೨] 2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. ಮಹಾಬಲಿ ಕೇರಳಕ್ಕೆ ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ ಮೋಹನ್ ಲಾಲ್ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. [೪] ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. [೫] ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. [೨] ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. [೧] ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ [೩] ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. [೨] ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. [೧] ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. [೫] ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. [೬] ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. [೧] ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. [೧] ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. [೨] ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು. [೩] ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು. [೧] ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. [೩] ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016). [೪] ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. [೧] ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ. [೩] ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು. [೧] ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. [೨] ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. [೩] ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [೧] ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
ctey160d5h02pxuljvhifgf62ya4kgq
1379488
1379483
2026-08-08T17:35:09Z
Pragathi. BH
88266
1379488
wikitext
text/x-wiki
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು [೧] [೨] [೩] ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು. [೨] 2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. ಮಹಾಬಲಿ ಕೇರಳಕ್ಕೆ ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ ಮೋಹನ್ ಲಾಲ್ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. [೪] ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. [೫] ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. [೨] ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. [೧] ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ [೩] ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. [೨] ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. [೧] ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. [೫] ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. [೬] ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. [೧] ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. [೧] ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. [೨] ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು. [೩] ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು. [೧] ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. [೩] ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016). [೪] ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. [೧] ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ. [೩] ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು. [೧] ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. [೨] ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. [೩] ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [೧] ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
jgfi4oxbt9x70nquw9lrxv0erx9g539
1379492
1379488
2026-08-08T17:38:04Z
Pragathi. BH
88266
1379492
wikitext
text/x-wiki
{{Short description|Indian actor and producer}}
{{about|the Indian actor|other uses}}
{{pp-blp|small=yes}}
{{Use Indian English|date=July 2015}}
{{Use dmy dates|date=April 2024}}
{{Indian name|Gopalakrishnan or Dileep|Padmanabhan}}
{{Infobox person
| name = Dilieep|ದಿಲೀಪ್
| image = Dileep2016.jpg
| caption = Dileep in 2016
| birth_name = Gopalakrishnan Padmanabhan
| birth_date = {{Birth date and age|df=yes|1967|10|27}}
| birth_place = [[Edavanakkad]], [[Ernakulam district]], Kerala<ref>{{cite web|title=കണ്ണ് റഞ്ഞ് കോളേജിന്റെ പടികൾ ഇറങ്ങിയ ദിലീപ് {{!}} Dileep {{!}} Interview {{!}} G S Pradeep {{!}}| date=26 October 2020 |url=https://www.youtube.com/watch?v=nhNGLfN8Ul4|publisher=[[Kairali TV]]|access-date=27 October 2020|language=ml}}</ref>
| alma_mater = [[Mahatma Gandhi University, Kerala|ಮಹಾತ್ಮ ಗಾಂಧಿ ಯೂನಿವರ್ಸಿಟಿ]]
| occupation = {{hlist|Actor|producer|businessman|ಆಕ್ಟರ್}}
| years_active = 1991{{Endash}}present
| works = [[Dileep filmography|Full list]]
| spouse = {{Plainlist|
* {{marriage|[[Manju Warrier]]|1998|2015|reason=divorced}}
* {{marriage|[[Kavya Madhavan]]|2016}}
}}
| children = 2
| awards = {{Plainlist|
* [[Kerala State Film Awards]]
* [[Filmfare Awards South]]
}}
}}
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು [೧] [೨] [೩] ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು. [೨] 2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. ಮಹಾಬಲಿ ಕೇರಳಕ್ಕೆ ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ ಮೋಹನ್ ಲಾಲ್ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. [೪] ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. [೫] ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. [೨] ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. [೧] ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ [೩] ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. [೨] ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. [೧] ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. [೫] ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. [೬] ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. [೧] ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. [೧] ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. [೨] ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು. [೩] ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು. [೧] ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. [೩] ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016). [೪] ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. [೧] ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ. [೩] ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು. [೧] ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. [೨] ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. [೩] ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [೧] ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
bsdrgkrh19s6gcwfegxc43o1qrv041y
1379493
1379492
2026-08-08T17:40:20Z
Pragathi. BH
88266
1379493
wikitext
text/x-wiki
{{Short description|Indian actor and producer}}
{{about|the Indian actor|other uses}}
{{pp-blp|small=yes}}
{{Use Indian English|date=July 2015}}
{{Use dmy dates|date=April 2024}}
{{Indian name|Gopalakrishnan or Dileep|Padmanabhan}}
{{Infobox person
| name = Dilieep|ದಿಲೀಪ್
| image = Dileep2016.jpg
| caption = Dileep in 2016
| birth_name = Gopalakrishnan Padmanabhan
| birth_date = {{Birth date and age|df=yes|1967|10|27}}
| birth_place = [[Edavanakkad]], [[Ernakulam district]], Kerala<ref>{{cite web|title=കണ്ണ് റഞ്ഞ് കോളേജിന്റെ പടികൾ ഇറങ്ങിയ ദിലീപ് {{!}} Dileep {{!}} Interview {{!}} G S Pradeep {{!}}| date=26 October 2020 |url=https://www.youtube.com/watch?v=nhNGLfN8Ul4|publisher=[[Kairali TV]]|access-date=27 October 2020|language=ml}}</ref>
| alma_mater = [[Mahatma Gandhi University, Kerala|ಮಹಾತ್ಮ ಗಾಂಧಿ ಯೂನಿವರ್ಸಿಟಿ]]
| occupation = {{hlist|Actor|producer|businessman|ಆಕ್ಟರ್}}
| years_active = 1991{{Endash}}present
| works = [[Dileep filmography|Full list]]
| spouse = {{Plainlist|
* {{marriage|[[Manju Warrier]]|1998|2015|reason=divorced}}
* {{marriage|[[Kavya Madhavan]]|2016}}
}}
| children = 2
| awards = {{Plainlist|
* [[Kerala State Film Awards]]
* [[Filmfare Awards South]]
}}
}}
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು<ref>https://timesofindia.indiatimes.com/entertainment/malayalam/movies/news/makers-of-thankamani-drop-the-second-look-poster-on-dileeps-birthday/articleshow/104750344.cms</ref> ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು. [೨] 2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. ಮಹಾಬಲಿ ಕೇರಳಕ್ಕೆ ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ ಮೋಹನ್ ಲಾಲ್ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. [೪] ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. [೫] ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. [೨] ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. [೧] ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ [೩] ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. [೨] ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. [೧] ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. [೫] ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. [೬] ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. [೧] ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. [೧] ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. [೨] ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು. [೩] ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು. [೧] ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. [೩] ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016). [೪] ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. [೧] ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ. [೩] ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು. [೧] ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. [೨] ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. [೩] ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [೧] ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
t9jj8o74u3wlqt00gjo4q93kbsm4vjd
1379494
1379493
2026-08-08T17:41:03Z
Pragathi. BH
88266
1379494
wikitext
text/x-wiki
{{Short description|Indian actor and producer}}
{{about|the Indian actor|other uses}}
{{pp-blp|small=yes}}
{{Use Indian English|date=July 2015}}
{{Use dmy dates|date=April 2024}}
{{Indian name|Gopalakrishnan or Dileep|Padmanabhan}}
{{Infobox person
| name = Dilieep|ದಿಲೀಪ್
| image = Dileep2016.jpg
| caption = Dileep in 2016
| birth_name = Gopalakrishnan Padmanabhan
| birth_date = {{Birth date and age|df=yes|1967|10|27}}
| birth_place = [[Edavanakkad]], [[Ernakulam district]], Kerala<ref>{{cite web|title=കണ്ണ് റഞ്ഞ് കോളേജിന്റെ പടികൾ ഇറങ്ങിയ ദിലീപ് {{!}} Dileep {{!}} Interview {{!}} G S Pradeep {{!}}| date=26 October 2020 |url=https://www.youtube.com/watch?v=nhNGLfN8Ul4|publisher=[[Kairali TV]]|access-date=27 October 2020|language=ml}}</ref>
| alma_mater = [[Mahatma Gandhi University, Kerala|ಮಹಾತ್ಮ ಗಾಂಧಿ ಯೂನಿವರ್ಸಿಟಿ]]
| occupation = {{hlist|Actor|producer|businessman|ಆಕ್ಟರ್}}
| years_active = 1991{{Endash}}present
| works = [[Dileep filmography|Full list]]
| spouse = {{Plainlist|
* {{marriage|[[Manju Warrier]]|1998|2015|reason=divorced}}
* {{marriage|[[Kavya Madhavan]]|2016}}
}}
| children = 2
| awards = {{Plainlist|
* [[Kerala State Film Awards]]
* [[Filmfare Awards South]]
}}
}}
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು<ref>https://timesofindia.indiatimes.com/entertainment/malayalam/movies/news/makers-of-thankamani-drop-the-second-look-poster-on-dileeps-birthday/articleshow/104750344.cms</ref><ref>https://timesofindia.indiatimes.com/entertainment/malayalam/movies/news/suresh-gopi-tamannaah-bhatia-and-other-celebs-extend-birthday-wishes-to-dileep/articleshow/95120338.cms</ref> ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು. [೨] 2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. ಮಹಾಬಲಿ ಕೇರಳಕ್ಕೆ ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ ಮೋಹನ್ ಲಾಲ್ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. [೪] ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. [೫] ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. [೨] ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. [೧] ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ [೩] ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. [೨] ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. [೧] ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. [೫] ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. [೬] ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. [೧] ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. [೧] ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. [೨] ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು. [೩] ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು. [೧] ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. [೩] ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016). [೪] ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. [೧] ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ. [೩] ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು. [೧] ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. [೨] ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. [೩] ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [೧] ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
d8qvnooamkb4jmk0a777zy9u1khigs0
1379495
1379494
2026-08-08T17:43:07Z
Pragathi. BH
88266
1379495
wikitext
text/x-wiki
{{Short description|Indian actor and producer}}
{{about|the Indian actor|other uses}}
{{pp-blp|small=yes}}
{{Use Indian English|date=July 2015}}
{{Use dmy dates|date=April 2024}}
{{Indian name|Gopalakrishnan or Dileep|Padmanabhan}}
{{Infobox person
| name = Dilieep|ದಿಲೀಪ್
| image = Dileep2016.jpg
| caption = Dileep in 2016
| birth_name = Gopalakrishnan Padmanabhan
| birth_date = {{Birth date and age|df=yes|1967|10|27}}
| birth_place = [[Edavanakkad]], [[Ernakulam district]], Kerala<ref>{{cite web|title=കണ്ണ് റഞ്ഞ് കോളേജിന്റെ പടികൾ ഇറങ്ങിയ ദിലീപ് {{!}} Dileep {{!}} Interview {{!}} G S Pradeep {{!}}| date=26 October 2020 |url=https://www.youtube.com/watch?v=nhNGLfN8Ul4|publisher=[[Kairali TV]]|access-date=27 October 2020|language=ml}}</ref>
| alma_mater = [[Mahatma Gandhi University, Kerala|ಮಹಾತ್ಮ ಗಾಂಧಿ ಯೂನಿವರ್ಸಿಟಿ]]
| occupation = {{hlist|Actor|producer|businessman|ಆಕ್ಟರ್}}
| years_active = 1991{{Endash}}present
| works = [[Dileep filmography|Full list]]
| spouse = {{Plainlist|
* {{marriage|[[Manju Warrier]]|1998|2015|reason=divorced}}
* {{marriage|[[Kavya Madhavan]]|2016}}
}}
| children = 2
| awards = {{Plainlist|
* [[Kerala State Film Awards]]
* [[Filmfare Awards South]]
}}
}}
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು<ref>https://timesofindia.indiatimes.com/entertainment/malayalam/movies/news/makers-of-thankamani-drop-the-second-look-poster-on-dileeps-birthday/articleshow/104750344.cms</ref><ref>https://timesofindia.indiatimes.com/entertainment/malayalam/movies/news/suresh-gopi-tamannaah-bhatia-and-other-celebs-extend-birthday-wishes-to-dileep/articleshow/95120338.cms</ref> ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ [[ಕ್ರಿಶ್ಚಿಯನ್ನರು/ಕ್ರೈಸ್ತರು|ಕ್ರಿಶ್ಚಿಯನ್]] ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು. [೨] 2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. [[ಮಹಾಬಲಿಪುರ|ಮಹಾಬಲಿ]] [[ಕೇರಳಕ್ಕ|ಕೇರಳಕ್ಕೆ]] ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ [[ಮೋಹನ್ ಲಾಲ್|ಮೋಹನ್ ಲಾಲ್]]ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. [೪] ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. [೫] ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. [೨] ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. [೧] ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ [೩] ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. [೨] ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. [೧] ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. [೫] ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. [೬] ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. [೧] ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. [೧] ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. [೨] ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು. [೩] ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು. [೧] ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. [೩] ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016). [೪] ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. [೧] ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ. [೩] ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು. [೧] ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. [೨] ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. [೩] ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [೧] ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
6id8eoy8m1mkzi1ep5odl2brqpujjc0
1379497
1379495
2026-08-08T17:43:55Z
Pragathi. BH
88266
1379497
wikitext
text/x-wiki
{{Short description|Indian actor and producer}}
{{about|the Indian actor|other uses}}
{{pp-blp|small=yes}}
{{Use Indian English|date=July 2015}}
{{Use dmy dates|date=April 2024}}
{{Indian name|Gopalakrishnan or Dileep|Padmanabhan}}
{{Infobox person
| name = Dilieep|ದಿಲೀಪ್
| image = Dileep2016.jpg
| caption = Dileep in 2016
| birth_name = Gopalakrishnan Padmanabhan
| birth_date = {{Birth date and age|df=yes|1967|10|27}}
| birth_place = [[Edavanakkad]], [[Ernakulam district]], Kerala<ref>{{cite web|title=കണ്ണ് റഞ്ഞ് കോളേജിന്റെ പടികൾ ഇറങ്ങിയ ദിലീപ് {{!}} Dileep {{!}} Interview {{!}} G S Pradeep {{!}}| date=26 October 2020 |url=https://www.youtube.com/watch?v=nhNGLfN8Ul4|publisher=[[Kairali TV]]|access-date=27 October 2020|language=ml}}</ref>
| alma_mater = [[Mahatma Gandhi University, Kerala|ಮಹಾತ್ಮ ಗಾಂಧಿ ಯೂನಿವರ್ಸಿಟಿ]]
| occupation = {{hlist|Actor|producer|businessman|ಆಕ್ಟರ್}}
| years_active = 1991{{Endash}}present
| works = [[Dileep filmography|Full list]]
| spouse = {{Plainlist|
* {{marriage|[[Manju Warrier]]|1998|2015|reason=divorced}}
* {{marriage|[[Kavya Madhavan]]|2016}}
}}
| children = 2
| awards = {{Plainlist|
* [[Kerala State Film Awards]]
* [[Filmfare Awards South]]
}}
}}
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು<ref>https://timesofindia.indiatimes.com/entertainment/malayalam/movies/news/makers-of-thankamani-drop-the-second-look-poster-on-dileeps-birthday/articleshow/104750344.cms</ref><ref>https://timesofindia.indiatimes.com/entertainment/malayalam/movies/news/suresh-gopi-tamannaah-bhatia-and-other-celebs-extend-birthday-wishes-to-dileep/articleshow/95120338.cms</ref> ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ [[ಕ್ರಿಶ್ಚಿಯನ್ನರು/ಕ್ರೈಸ್ತರು|ಕ್ರಿಶ್ಚಿಯನ್]] ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.<ref>http://www.zonkerala.com/achievers/article.php?id=8</ref>
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು. [೨] 2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. [[ಮಹಾಬಲಿಪುರ|ಮಹಾಬಲಿ]] [[ಕೇರಳಕ್ಕ|ಕೇರಳಕ್ಕೆ]] ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ [[ಮೋಹನ್ ಲಾಲ್|ಮೋಹನ್ ಲಾಲ್]]ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. [೪] ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. [೫] ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. [೨] ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. [೧] ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ [೩] ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. [೨] ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. [೧] ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. [೫] ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. [೬] ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. [೧] ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. [೧] ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. [೨] ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು. [೩] ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು. [೧] ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. [೩] ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016). [೪] ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. [೧] ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ. [೩] ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು. [೧] ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. [೨] ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. [೩] ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [೧] ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
1zvmrew5dsvgj22xa9gpqfencjoirr8
1379498
1379497
2026-08-08T17:45:05Z
Pragathi. BH
88266
1379498
wikitext
text/x-wiki
{{Short description|Indian actor and producer}}
{{about|the Indian actor|other uses}}
{{pp-blp|small=yes}}
{{Use Indian English|date=July 2015}}
{{Use dmy dates|date=April 2024}}
{{Indian name|Gopalakrishnan or Dileep|Padmanabhan}}
{{Infobox person
| name = Dilieep|ದಿಲೀಪ್
| image = Dileep2016.jpg
| caption = Dileep in 2016
| birth_name = Gopalakrishnan Padmanabhan
| birth_date = {{Birth date and age|df=yes|1967|10|27}}
| birth_place = [[Edavanakkad]], [[Ernakulam district]], Kerala<ref>{{cite web|title=കണ്ണ് റഞ്ഞ് കോളേജിന്റെ പടികൾ ഇറങ്ങിയ ദിലീപ് {{!}} Dileep {{!}} Interview {{!}} G S Pradeep {{!}}| date=26 October 2020 |url=https://www.youtube.com/watch?v=nhNGLfN8Ul4|publisher=[[Kairali TV]]|access-date=27 October 2020|language=ml}}</ref>
| alma_mater = [[Mahatma Gandhi University, Kerala|ಮಹಾತ್ಮ ಗಾಂಧಿ ಯೂನಿವರ್ಸಿಟಿ]]
| occupation = {{hlist|Actor|producer|businessman|ಆಕ್ಟರ್}}
| years_active = 1991{{Endash}}present
| works = [[Dileep filmography|Full list]]
| spouse = {{Plainlist|
* {{marriage|[[Manju Warrier]]|1998|2015|reason=divorced}}
* {{marriage|[[Kavya Madhavan]]|2016}}
}}
| children = 2
| awards = {{Plainlist|
* [[Kerala State Film Awards]]
* [[Filmfare Awards South]]
}}
}}
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು<ref>https://timesofindia.indiatimes.com/entertainment/malayalam/movies/news/makers-of-thankamani-drop-the-second-look-poster-on-dileeps-birthday/articleshow/104750344.cms</ref><ref>https://timesofindia.indiatimes.com/entertainment/malayalam/movies/news/suresh-gopi-tamannaah-bhatia-and-other-celebs-extend-birthday-wishes-to-dileep/articleshow/95120338.cms</ref> ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ [[ಕ್ರಿಶ್ಚಿಯನ್ನರು/ಕ್ರೈಸ್ತರು|ಕ್ರಿಶ್ಚಿಯನ್]] ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.<ref>http://www.zonkerala.com/achievers/article.php?id=8</ref>
[[File:Dileep 2008.jpg|thumb|Dileep 2008]]
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು. [೨] 2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. [[ಮಹಾಬಲಿಪುರ|ಮಹಾಬಲಿ]] [[ಕೇರಳಕ್ಕ|ಕೇರಳಕ್ಕೆ]] ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ [[ಮೋಹನ್ ಲಾಲ್|ಮೋಹನ್ ಲಾಲ್]]ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. [೪] ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. [೫] ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. [೨] ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. [೧] ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ [೩] ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. [೨] ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. [೧] ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. [೫] ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. [೬] ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. [೧] ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. [೧] ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. [೨] ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು. [೩] ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು. [೧] ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. [೩] ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016). [೪] ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. [೧] ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ. [೩] ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು. [೧] ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. [೨] ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. [೩] ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [೧] ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
kitc9j7eg6l9t0n8razl0sfusczx5e6
1379499
1379498
2026-08-08T17:46:42Z
Pragathi. BH
88266
1379499
wikitext
text/x-wiki
{{Short description|Indian actor and producer}}
{{about|the Indian actor|other uses}}
{{pp-blp|small=yes}}
{{Use Indian English|date=July 2015}}
{{Use dmy dates|date=April 2024}}
{{Indian name|Gopalakrishnan or Dileep|Padmanabhan}}
{{Infobox person
| name = Dilieep|ದಿಲೀಪ್
| image = Dileep2016.jpg
| caption = Dileep in 2016
| birth_name = Gopalakrishnan Padmanabhan
| birth_date = {{Birth date and age|df=yes|1967|10|27}}
| birth_place = [[Edavanakkad]], [[Ernakulam district]], Kerala<ref>{{cite web|title=കണ്ണ് റഞ്ഞ് കോളേജിന്റെ പടികൾ ഇറങ്ങിയ ദിലീപ് {{!}} Dileep {{!}} Interview {{!}} G S Pradeep {{!}}| date=26 October 2020 |url=https://www.youtube.com/watch?v=nhNGLfN8Ul4|publisher=[[Kairali TV]]|access-date=27 October 2020|language=ml}}</ref>
| alma_mater = [[Mahatma Gandhi University, Kerala|ಮಹಾತ್ಮ ಗಾಂಧಿ ಯೂನಿವರ್ಸಿಟಿ]]
| occupation = {{hlist|Actor|producer|businessman|ಆಕ್ಟರ್}}
| years_active = 1991{{Endash}}present
| works = [[Dileep filmography|Full list]]
| spouse = {{Plainlist|
* {{marriage|[[Manju Warrier]]|1998|2015|reason=divorced}}
* {{marriage|[[Kavya Madhavan]]|2016}}
}}
| children = 2
| awards = {{Plainlist|
* [[Kerala State Film Awards]]
* [[Filmfare Awards South]]
}}
}}
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು<ref>https://timesofindia.indiatimes.com/entertainment/malayalam/movies/news/makers-of-thankamani-drop-the-second-look-poster-on-dileeps-birthday/articleshow/104750344.cms</ref><ref>https://timesofindia.indiatimes.com/entertainment/malayalam/movies/news/suresh-gopi-tamannaah-bhatia-and-other-celebs-extend-birthday-wishes-to-dileep/articleshow/95120338.cms</ref> ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ [[ಕ್ರಿಶ್ಚಿಯನ್ನರು/ಕ್ರೈಸ್ತರು|ಕ್ರಿಶ್ಚಿಯನ್]] ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.<ref>http://www.zonkerala.com/achievers/article.php?id=8</ref>
[[File:Dileep 2008.jpg|thumb|Dileep 2008]]
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು.2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. [[ಮಹಾಬಲಿಪುರ|ಮಹಾಬಲಿ]] [[ಕೇರಳಕ್ಕ|ಕೇರಳಕ್ಕೆ]] ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ [[ಮೋಹನ್ ಲಾಲ್|ಮೋಹನ್ ಲಾಲ್]]ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. [೨] ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. [೧] ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ [೩] ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. [೨] ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. [೧] ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. [೫] ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. [೬] ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. [೧] ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. [೧] ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. [೨] ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು. [೩] ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು. [೧] ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. [೩] ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016). [೪] ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. [೧] ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ. [೩] ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.<ref>https://www.moneycontrol.com/news/trends/entertainment/keshu-ee-veedinte-nadhan-review-a-funny-take-on-families-and-lottery-money-7889431.html</ref>
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು. [೧] ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. [೨] ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. [೩] ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [೧] ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
6lvj6gi8gqi8vldksij5ogss1a0zrca
1379500
1379499
2026-08-08T17:49:50Z
Pragathi. BH
88266
1379500
wikitext
text/x-wiki
{{Short description|Indian actor and producer}}
{{about|the Indian actor|other uses}}
{{pp-blp|small=yes}}
{{Use Indian English|date=July 2015}}
{{Use dmy dates|date=April 2024}}
{{Indian name|Gopalakrishnan or Dileep|Padmanabhan}}
{{Infobox person
| name = Dilieep|ದಿಲೀಪ್
| image = Dileep2016.jpg
| caption = Dileep in 2016
| birth_name = Gopalakrishnan Padmanabhan
| birth_date = {{Birth date and age|df=yes|1967|10|27}}
| birth_place = [[Edavanakkad]], [[Ernakulam district]], Kerala<ref>{{cite web|title=കണ്ണ് റഞ്ഞ് കോളേജിന്റെ പടികൾ ഇറങ്ങിയ ദിലീപ് {{!}} Dileep {{!}} Interview {{!}} G S Pradeep {{!}}| date=26 October 2020 |url=https://www.youtube.com/watch?v=nhNGLfN8Ul4|publisher=[[Kairali TV]]|access-date=27 October 2020|language=ml}}</ref>
| alma_mater = [[Mahatma Gandhi University, Kerala|ಮಹಾತ್ಮ ಗಾಂಧಿ ಯೂನಿವರ್ಸಿಟಿ]]
| occupation = {{hlist|Actor|producer|businessman|ಆಕ್ಟರ್}}
| years_active = 1991{{Endash}}present
| works = [[Dileep filmography|Full list]]
| spouse = {{Plainlist|
* {{marriage|[[Manju Warrier]]|1998|2015|reason=divorced}}
* {{marriage|[[Kavya Madhavan]]|2016}}
}}
| children = 2
| awards = {{Plainlist|
* [[Kerala State Film Awards]]
* [[Filmfare Awards South]]
}}
}}
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು<ref>https://timesofindia.indiatimes.com/entertainment/malayalam/movies/news/makers-of-thankamani-drop-the-second-look-poster-on-dileeps-birthday/articleshow/104750344.cms</ref><ref>https://timesofindia.indiatimes.com/entertainment/malayalam/movies/news/suresh-gopi-tamannaah-bhatia-and-other-celebs-extend-birthday-wishes-to-dileep/articleshow/95120338.cms</ref> ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ [[ಕ್ರಿಶ್ಚಿಯನ್ನರು/ಕ್ರೈಸ್ತರು|ಕ್ರಿಶ್ಚಿಯನ್]] ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.<ref>http://www.zonkerala.com/achievers/article.php?id=8</ref>
[[File:Dileep 2008.jpg|thumb|Dileep 2008]]
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು.2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. [[ಮಹಾಬಲಿಪುರ|ಮಹಾಬಲಿ]] [[ಕೇರಳಕ್ಕ|ಕೇರಳಕ್ಕೆ]] ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ [[ಮೋಹನ್ ಲಾಲ್|ಮೋಹನ್ ಲಾಲ್]]ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. [೨] ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. [೧] ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ [೩] ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. [೨] ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. [೧] ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. [೫] ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. [೬] ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. [೧] ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. [೧] ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. [೨] ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು. [೩] ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು. [೧] ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. [೩] ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016). [೪] ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. [೧] ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ. [೩] ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.<ref>https://www.moneycontrol.com/news/trends/entertainment/keshu-ee-veedinte-nadhan-review-a-funny-take-on-families-and-lottery-money-7889431.html</ref>
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು.<ref>https://timesofindia.indiatimes.com/entertainment/malayalam/movies/box-office/voice-of-sathyanathan-box-office-collections-dileep-starrer-crosses-rs-23-crores/articleshow/102912115.cms</ref> [೧] ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. [೨] ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. [೩] ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [೧] ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
2a6aszehcp4aov67cxaqqqre6vzcilj
1379502
1379500
2026-08-08T17:51:50Z
Pragathi. BH
88266
1379502
wikitext
text/x-wiki
{{Short description|Indian actor and producer}}
{{about|the Indian actor|other uses}}
{{pp-blp|small=yes}}
{{Use Indian English|date=July 2015}}
{{Use dmy dates|date=April 2024}}
{{Indian name|Gopalakrishnan or Dileep|Padmanabhan}}
{{Infobox person
| name = Dilieep|ದಿಲೀಪ್
| image = Dileep2016.jpg
| caption = Dileep in 2016
| birth_name = Gopalakrishnan Padmanabhan
| birth_date = {{Birth date and age|df=yes|1967|10|27}}
| birth_place = [[Edavanakkad]], [[Ernakulam district]], Kerala<ref>{{cite web|title=കണ്ണ് റഞ്ഞ് കോളേജിന്റെ പടികൾ ഇറങ്ങിയ ദിലീപ് {{!}} Dileep {{!}} Interview {{!}} G S Pradeep {{!}}| date=26 October 2020 |url=https://www.youtube.com/watch?v=nhNGLfN8Ul4|publisher=[[Kairali TV]]|access-date=27 October 2020|language=ml}}</ref>
| alma_mater = [[Mahatma Gandhi University, Kerala|ಮಹಾತ್ಮ ಗಾಂಧಿ ಯೂನಿವರ್ಸಿಟಿ]]
| occupation = {{hlist|Actor|producer|businessman|ಆಕ್ಟರ್}}
| years_active = 1991{{Endash}}present
| works = [[Dileep filmography|Full list]]
| spouse = {{Plainlist|
* {{marriage|[[Manju Warrier]]|1998|2015|reason=divorced}}
* {{marriage|[[Kavya Madhavan]]|2016}}
}}
| children = 2
| awards = {{Plainlist|
* [[Kerala State Film Awards]]
* [[Filmfare Awards South]]
}}
}}
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು<ref>https://timesofindia.indiatimes.com/entertainment/malayalam/movies/news/makers-of-thankamani-drop-the-second-look-poster-on-dileeps-birthday/articleshow/104750344.cms</ref><ref>https://timesofindia.indiatimes.com/entertainment/malayalam/movies/news/suresh-gopi-tamannaah-bhatia-and-other-celebs-extend-birthday-wishes-to-dileep/articleshow/95120338.cms</ref> ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ [[ಕ್ರಿಶ್ಚಿಯನ್ನರು/ಕ್ರೈಸ್ತರು|ಕ್ರಿಶ್ಚಿಯನ್]] ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.<ref>http://www.zonkerala.com/achievers/article.php?id=8</ref>
[[File:Dileep 2008.jpg|thumb|Dileep 2008]]
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. [೧] ನಂತರ ಅವರು ಕೊಚ್ಚಿನ್ ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು.2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. [[ಮಹಾಬಲಿಪುರ|ಮಹಾಬಲಿ]] [[ಕೇರಳಕ್ಕ|ಕೇರಳಕ್ಕೆ]] ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ದೂರದರ್ಶನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ [[ಮೋಹನ್ ಲಾಲ್|ಮೋಹನ್ ಲಾಲ್]]ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. [೧] ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು. [೨] 1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. [೧] ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. [೨] ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. [೩] ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. [೪] ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. [೧] ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. [೨] ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. [೩] ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು.ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು.ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016).ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ.ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.<ref>https://www.moneycontrol.com/news/trends/entertainment/keshu-ee-veedinte-nadhan-review-a-funny-take-on-families-and-lottery-money-7889431.html</ref>
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು.<ref>https://timesofindia.indiatimes.com/entertainment/malayalam/movies/box-office/voice-of-sathyanathan-box-office-collections-dileep-starrer-crosses-rs-23-crores/articleshow/102912115.cms</ref> [೧] ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. [೨] ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. [೩] ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [೧] ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
21t27rwvc15zwgu1mlkvwc4ozwxvxne
1379503
1379502
2026-08-08T17:55:28Z
Pragathi. BH
88266
1379503
wikitext
text/x-wiki
{{Short description|Indian actor and producer}}
{{about|the Indian actor|other uses}}
{{pp-blp|small=yes}}
{{Use Indian English|date=July 2015}}
{{Use dmy dates|date=April 2024}}
{{Indian name|Gopalakrishnan or Dileep|Padmanabhan}}
{{Infobox person
| name = Dilieep|ದಿಲೀಪ್
| image = Dileep2016.jpg
| caption = Dileep in 2016
| birth_name = Gopalakrishnan Padmanabhan
| birth_date = {{Birth date and age|df=yes|1967|10|27}}
| birth_place = [[Edavanakkad]], [[Ernakulam district]], Kerala<ref>{{cite web|title=കണ്ണ് റഞ്ഞ് കോളേജിന്റെ പടികൾ ഇറങ്ങിയ ദിലീപ് {{!}} Dileep {{!}} Interview {{!}} G S Pradeep {{!}}| date=26 October 2020 |url=https://www.youtube.com/watch?v=nhNGLfN8Ul4|publisher=[[Kairali TV]]|access-date=27 October 2020|language=ml}}</ref>
| alma_mater = [[Mahatma Gandhi University, Kerala|ಮಹಾತ್ಮ ಗಾಂಧಿ ಯೂನಿವರ್ಸಿಟಿ]]
| occupation = {{hlist|Actor|producer|businessman|ಆಕ್ಟರ್}}
| years_active = 1991{{Endash}}present
| works = [[Dileep filmography|Full list]]
| spouse = {{Plainlist|
* {{marriage|[[Manju Warrier]]|1998|2015|reason=divorced}}
* {{marriage|[[Kavya Madhavan]]|2016}}
}}
| children = 2
| awards = {{Plainlist|
* [[Kerala State Film Awards]]
* [[Filmfare Awards South]]
}}
}}
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ ಗೋಪಾಲಕೃಷ್ಣನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು<ref>https://timesofindia.indiatimes.com/entertainment/malayalam/movies/news/makers-of-thankamani-drop-the-second-look-poster-on-dileeps-birthday/articleshow/104750344.cms</ref><ref>https://timesofindia.indiatimes.com/entertainment/malayalam/movies/news/suresh-gopi-tamannaah-bhatia-and-other-celebs-extend-birthday-wishes-to-dileep/articleshow/95120338.cms</ref> ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ [[ಕ್ರಿಶ್ಚಿಯನ್ನರು/ಕ್ರೈಸ್ತರು|ಕ್ರಿಶ್ಚಿಯನ್]] ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.<ref>http://www.zonkerala.com/achievers/article.php?id=8</ref>
[[File:Dileep 2008.jpg|thumb|Dileep 2008]]
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. ನಂತರ ಅವರು [[ಕೊಚ್ಚಿನ್ ಪೋರ್ಚುಗೀಸ್ ಕ್ರಿಯೋಲ್ ಭಾಷೆ|ಕೊಚ್ಚಿನ್]] ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು.2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. [[ಮಹಾಬಲಿಪುರ|ಮಹಾಬಲಿ]] [[ಕೇರಳಕ್ಕ|ಕೇರಳಕ್ಕೆ]] ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ [[ದೂರದರ್ಶನ]]ದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ [[ಮೋಹನ್ ಲಾಲ್|ಮೋಹನ್ ಲಾಲ್]]ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು.1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು.ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು.ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016).ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ.ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.<ref>https://www.moneycontrol.com/news/trends/entertainment/keshu-ee-veedinte-nadhan-review-a-funny-take-on-families-and-lottery-money-7889431.html</ref>
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು.<ref>https://timesofindia.indiatimes.com/entertainment/malayalam/movies/box-office/voice-of-sathyanathan-box-office-collections-dileep-starrer-crosses-rs-23-crores/articleshow/102912115.cms</ref> ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
pkjtke9mmtjbmrudc8l1gu5cri8wkun
1379504
1379503
2026-08-08T17:58:28Z
Pragathi. BH
88266
1379504
wikitext
text/x-wiki
{{Short description|Indian actor and producer}}
{{about|the Indian actor|other uses}}
{{pp-blp|small=yes}}
{{Use Indian English|date=July 2015}}
{{Use dmy dates|date=April 2024}}
{{Indian name|Gopalakrishnan or Dileep|Padmanabhan}}
{{Infobox person
| name = Dilieep|ದಿಲೀಪ್
| image = Dileep2016.jpg
| caption = Dileep in 2016
| birth_name = Gopalakrishnan Padmanabhan
| birth_date = {{Birth date and age|df=yes|1967|10|27}}
| birth_place = [[Edavanakkad]], [[Ernakulam district]], Kerala<ref>{{cite web|title=കണ്ണ് റഞ്ഞ് കോളേജിന്റെ പടികൾ ഇറങ്ങിയ ദിലീപ് {{!}} Dileep {{!}} Interview {{!}} G S Pradeep {{!}}| date=26 October 2020 |url=https://www.youtube.com/watch?v=nhNGLfN8Ul4|publisher=[[Kairali TV]]|access-date=27 October 2020|language=ml}}</ref>
| alma_mater = [[Mahatma Gandhi University, Kerala|ಮಹಾತ್ಮ ಗಾಂಧಿ ಯೂನಿವರ್ಸಿಟಿ]]
| occupation = {{hlist|Actor|producer|businessman|ಆಕ್ಟರ್}}
| years_active = 1991{{Endash}}present
| works = [[Dileep filmography|Full list]]
| spouse = {{Plainlist|
* {{marriage|[[Manju Warrier]]|1998|2015|reason=divorced}}
* {{marriage|[[Kavya Madhavan]]|2016}}
}}
| children = 2
| awards = {{Plainlist|
* [[Kerala State Film Awards]]
* [[Filmfare Awards South]]
}}
}}
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ [[ಗೋಪಾಲಕೃಷ್ಣ ಗೋಖಲೆ|ಗೋಪಾಲಕೃಷ್ಣ]]ನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು ಮಲಯಾಳಂನಲ್ಲಿ ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು ರಾಮಲೀಲಾ (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು<ref>https://timesofindia.indiatimes.com/entertainment/malayalam/movies/news/makers-of-thankamani-drop-the-second-look-poster-on-dileeps-birthday/articleshow/104750344.cms</ref><ref>https://timesofindia.indiatimes.com/entertainment/malayalam/movies/news/suresh-gopi-tamannaah-bhatia-and-other-celebs-extend-birthday-wishes-to-dileep/articleshow/95120338.cms</ref> ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ [[ಕ್ರಿಶ್ಚಿಯನ್ನರು/ಕ್ರೈಸ್ತರು|ಕ್ರಿಶ್ಚಿಯನ್]] ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.<ref>http://www.zonkerala.com/achievers/article.php?id=8</ref>
[[File:Dileep 2008.jpg|thumb|Dileep 2008]]
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. ನಂತರ ಅವರು [[ಕೊಚ್ಚಿನ್ ಪೋರ್ಚುಗೀಸ್ ಕ್ರಿಯೋಲ್ ಭಾಷೆ|ಕೊಚ್ಚಿನ್]] ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು.2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. [[ಮಹಾಬಲಿಪುರ|ಮಹಾಬಲಿ]] [[ಕೇರಳಕ್ಕ|ಕೇರಳಕ್ಕೆ]] ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ [[ದೂರದರ್ಶನ]]ದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ [[ಮೋಹನ್ ಲಾಲ್|ಮೋಹನ್ ಲಾಲ್]]ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು.1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು.ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು.ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016).ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ.ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.<ref>https://www.moneycontrol.com/news/trends/entertainment/keshu-ee-veedinte-nadhan-review-a-funny-take-on-families-and-lottery-money-7889431.html</ref>
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು.<ref>https://timesofindia.indiatimes.com/entertainment/malayalam/movies/box-office/voice-of-sathyanathan-box-office-collections-dileep-starrer-crosses-rs-23-crores/articleshow/102912115.cms</ref> ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
rbv85pvmkphxkjz03haqanh6s90d5hm
1379558
1379504
2026-08-09T03:55:52Z
Pragathi. BH
88266
1379558
wikitext
text/x-wiki
{{Short description|Indian actor and producer}}
{{about|the Indian actor|other uses}}
{{pp-blp|small=yes}}
{{Use Indian English|date=July 2015}}
{{Use dmy dates|date=April 2024}}
{{Indian name|Gopalakrishnan or Dileep|Padmanabhan}}
{{Infobox person
| name = Dilieep|ದಿಲೀಪ್
| image = Dileep2016.jpg
| caption = Dileep in 2016
| birth_name = Gopalakrishnan Padmanabhan
| birth_date = {{Birth date and age|df=yes|1967|10|27}}
| birth_place = [[Edavanakkad]], [[Ernakulam district]], Kerala<ref>{{cite web|title=കണ്ണ് റഞ്ഞ് കോളേജിന്റെ പടികൾ ഇറങ്ങിയ ദിലീപ് {{!}} Dileep {{!}} Interview {{!}} G S Pradeep {{!}}| date=26 October 2020 |url=https://www.youtube.com/watch?v=nhNGLfN8Ul4|publisher=[[Kairali TV]]|access-date=27 October 2020|language=ml}}</ref>
| alma_mater = [[Mahatma Gandhi University, Kerala|ಮಹಾತ್ಮ ಗಾಂಧಿ ಯೂನಿವರ್ಸಿಟಿ]]
| occupation = {{hlist|Actor|producer|businessman|ಆಕ್ಟರ್}}
| years_active = 1991{{Endash}}present
| works = [[Dileep filmography|Full list]]
| spouse = {{Plainlist|
* {{marriage|[[Manju Warrier]]|1998|2015|reason=divorced}}
* {{marriage|[[Kavya Madhavan]]|2016}}
}}
| children = 2
| awards = {{Plainlist|
* [[Kerala State Film Awards]]
* [[Filmfare Awards South]]
}}
}}
ದಿಲೀಪ್ ಅಥವಾ ದಿಲೀಪ್ ಎಂಬ ಹೆಸರಿನಿಂದ ಕರೆಯಲ್ಪಡುವ [[ಗೋಪಾಲಕೃಷ್ಣ ಗೋಖಲೆ|ಗೋಪಾಲಕೃಷ್ಣ]]ನ್ ಪದ್ಮನಾಭನ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಉದ್ಯಮಿ, ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸ್ಟೇಜ್ ಮಿಮಿಕ್ ಆಗಿ ಪ್ರಾರಂಭಿಸಿ, ದಿಲೀಪ್ ಆರಂಭದಲ್ಲಿ ಧೇ ಮಾವೇಲಿ ಕೊಂಬತ್ತು ಎಂಬ ಕಾಮಿಡಿ ಆಡಿಯೋ ಸರಣಿ ಮತ್ತು ಏಷ್ಯಾನೆಟ್ನಲ್ಲಿ ದೂರದರ್ಶನ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ ಗಮನ ಸೆಳೆದರು. ಅವರು ವಿಷ್ಣುಲೋಕಂ (1991) ಚಿತ್ರದಿಂದ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳನ್ನು ಪ್ರವೇಶಿಸಿದರು ಮತ್ತು ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಪ್ರಮುಖ ಪಾತ್ರವು ಮನತೆ ಕೊಟ್ಟಾರಂ (1994), ನಂತರ 1996 ರಲ್ಲಿ ಸಲ್ಲಾಪಮ್ ಮತ್ತು ಈ ಪೂಜಯುಮ್ ಕಡನ್ನು ನಲ್ಲಿ ಅದ್ಭುತ ಪಾತ್ರಗಳು ಬಂದವು, ಇದು ಅವರನ್ನು ಬ್ಯಾಂಕಬಲ್ ನಟನಾಗಿ ಸ್ಥಾಪಿಸಿತು. ೧೯೯೦ರ ದಶಕದ ಅಂತ್ಯ ಮತ್ತು ೨೦೦೦ದ ದಶಕದ ಆರಂಭದ ವೇಳೆಗೆ, ಅವರು ಪಂಜಾಬಿ ಹೌಸ್ (೧೯೯೮), ತೆಂಕಸಿಪಟ್ಟಣಂ (೨೦೦೦), ಡಾರ್ಲಿಂಗ್ ಡಾರ್ಲಿಂಗ್ (೨೦೦೦), ಈ ಪರಕ್ಕುಂ ಥಾಲಿಕಾ (೨೦೦೧), ಮತ್ತು ಇಷ್ಟಂ (೨೦೦೧) ನಂತಹ ಸ್ಲ್ಯಾಪ್ ಸ್ಟಿಕ್ ಹಾಸ್ಯಚಿತ್ರಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದರು.
ಮೀಸೆ ಮಾಧವನ್ (2002) ಚಿತ್ರದ ಯಶಸ್ಸು ಅವರನ್ನು ತಾರೆಯ ಮಟ್ಟಕ್ಕೆ ಏರಿಸಿತು ಮತ್ತು [[ಮಲಯಾಳಂ ಲಿಪಿ|ಮಲಯಾಳಂನಲ್ಲಿ]] ಅತ್ಯುತ್ತಮ ನಟನಿಗಾಗಿರುವ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ವರ್ಷ, ಅವರು ಕುಂಜಿಕೂನನ್ ಚಿತ್ರಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು, ನಂತರ ಚಂತುಪೊಟ್ಟು (2005) ಚಿತ್ರಕ್ಕಾಗಿ ವಿಶೇಷ ಉಲ್ಲೇಖವನ್ನು ಪಡೆದರು . 2003 ರಲ್ಲಿ, ಅವರು ಗ್ರಾಂಡ್ ಪ್ರೊಡಕ್ಷನ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು, ಇದು ಸಿಐಡಿ ಮೂಸಾ ಮೂಲಕ ಪಾದಾರ್ಪಣೆ ಮಾಡಿತು. ಅವರು ಕಥಾವಶೇಷನ್ (ಅವರು ನಿರ್ಮಿಸಿದ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ) ಮತ್ತು ಪೆರುಮಝಕ್ಕಲಂ ನಂತಹ ಆಫ್-ಬೀಟ್ ಕೃತಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ, ಅವರು ಅಮ್ಮಾ ಪರವಾಗಿ ಟ್ವೆಂಟಿ:20 ಚಿತ್ರವನ್ನು ನಿರ್ಮಿಸಿದರು, ಇದು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು.
ವೆಳ್ಳರಿಪ್ರವಿಂತೆ ಚಂಗತಿ (2011) ಗಾಗಿ ದಿಲೀಪ್ ಅತ್ಯುತ್ತಮ ನಟನೆಗಾಗಿ [[ಕೇರಳದ ಇತಿಹಾಸ|ಕೇರಳ]] ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರ ನಂತರದ ಚಿತ್ರಗಳಾದ ಟು ಕಂಟ್ರಿಸ್ (2015) ಮತ್ತು [[ರಾಮ್-ಲೀಲಾ (ಚಲನಚಿತ್ರ)|ರಾಮಲೀಲಾ]] (2017) ತಲಾ ₹ 50 ಕೋಟಿಗೂ ಹೆಚ್ಚು ಗಳಿಸಿ, ಆಯಾ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಚಲನಚಿತ್ರಗಳಲ್ಲದೆ, ಅವರು ಮಲ್ಟಿಪ್ಲೆಕ್ಸ್ ಥಿಯೇಟರ್ ಮತ್ತು ರೆಸ್ಟೋರೆಂಟ್ ಸರಪಳಿಗಳನ್ನು ಹೊಂದಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ದಿಲೀಪ್ ಅವರು 27 ಅಕ್ಟೋಬರ್ 1967 ರಂದು ಕೇರಳದ [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ]] ಜಿಲ್ಲೆಯ ಎಡವನಕಾಡ್ನಲ್ಲಿ ಗೋಪಾಲಕೃಷ್ಣನ್ ಪದ್ಮನಾಭನ್ ಆಗಿ ಪದ್ಮನಾಭನ್ ಪಿಳ್ಳೈ ಮತ್ತು ಸರೋಜಮ್ ದಂಪತಿಗೆ ಜನಿಸಿದರು<ref>https://timesofindia.indiatimes.com/entertainment/malayalam/movies/news/makers-of-thankamani-drop-the-second-look-poster-on-dileeps-birthday/articleshow/104750344.cms</ref><ref>https://timesofindia.indiatimes.com/entertainment/malayalam/movies/news/suresh-gopi-tamannaah-bhatia-and-other-celebs-extend-birthday-wishes-to-dileep/articleshow/95120338.cms</ref> ಅವರು ಮೂವರು ಮಕ್ಕಳಲ್ಲಿ ಹಿರಿಯರು.
ದಿಲೀಪ್ ಅವರು ಆಲುವಾದ ವಿದ್ಯಾಧಿರಾಜ ವಿದ್ಯಾಭವನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. 1985ರಲ್ಲಿ ಅವರು 10ನೇ ತರಗತಿಯನ್ನು ಪೂರ್ಣಗೊಳಿಸಿದರು.ನಂತರ 1985ರಿಂದ 1987ರವರೆಗೆ ಆಲುವಾದ ಯೂನಿಯನ್ [[ಕ್ರಿಶ್ಚಿಯನ್ನರು/ಕ್ರೈಸ್ತರು|ಕ್ರಿಶ್ಚಿಯನ್]] ಕಾಲೇಜಿನಲ್ಲಿ ಪ್ರೀ-ಡಿಗ್ರಿ ಶಿಕ್ಷಣವನ್ನು ಪಡೆದರು.ಆಮೇಲೆ ಅವರು ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಿದರು.<ref>http://www.zonkerala.com/achievers/article.php?id=8</ref>
[[File:Dileep 2008.jpg|thumb|Dileep 2008]]
ಹರಿಶ್ರೀ ತಂಡದ ಸಕ್ರಿಯ ಸದಸ್ಯರಾದ ನಂತರ ದಿಲೀಪ್ ವೇದಿಕೆಯಲ್ಲಿ ಮಿಮಿಕ್ರಿ ಪ್ರದರ್ಶಿಸಲು ಪ್ರಾರಂಭಿಸಿದರು. ನಂತರ ಅವರು [[ಕೊಚ್ಚಿನ್ ಪೋರ್ಚುಗೀಸ್ ಕ್ರಿಯೋಲ್ ಭಾಷೆ|ಕೊಚ್ಚಿನ್]] ಗಿನ್ನೆಸ್ ಸೇರಿದಂತೆ ಇತರ ತಂಡಗಳೊಂದಿಗೆ ಕೆಲಸ ಮಾಡಿದರು.2000 ರ ದಶಕದ ಮಧ್ಯಭಾಗದಲ್ಲಿ, ದಿಲೀಪ್, ನಾದಿರ್ಷಾ ಜೊತೆಗೂಡಿ ಧೇ ಮಾವೇಲಿ ಕೊಂಬತ್ತು ಎಂಬ ಹಾಸ್ಯಮಯ ಆಡಿಯೋ ಕ್ಯಾಸೆಟ್ ಸರಣಿಯನ್ನು ವಾರ್ಷಿಕವಾಗಿ ಓಣಂ ಸಮಯದಲ್ಲಿ ಬಿಡುಗಡೆ ಮಾಡಿದರು. [[ಮಹಾಬಲಿಪುರ|ಮಹಾಬಲಿ]] [[ಕೇರಳಕ್ಕ|ಕೇರಳಕ್ಕೆ]] ಭೇಟಿ ನೀಡುವುದನ್ನು ಚಿತ್ರಿಸುವ ಈ ಸರಣಿಯು ವ್ಯಾಪಕ ಯಶಸ್ಸನ್ನು ಕಂಡಿತು. ಅದೇ ಸಮಯದಲ್ಲಿ, ದಿಲೀಪ್ ಏಷ್ಯಾನೆಟ್ನ ಹಾಸ್ಯ ಕಾರ್ಯಕ್ರಮಗಳಾದ ಕಾಮಿಕೋಲಾ ಮತ್ತು ಸಿನಿಮಾಲಾ ಮೂಲಕ [[ದೂರದರ್ಶನ]]ದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ನಟ ಜಯರಾಮ್ ಅವರ ಬೆಂಬಲದೊಂದಿಗೆ, ದಿಲೀಪ್ ಚಲನಚಿತ್ರ ನಿರ್ಮಾಪಕ ಕಮಲ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು, ಇದು ವಿಷ್ಣುಲೋಕಂ (1991) ನಿಂದ ಪ್ರಾರಂಭವಾಯಿತು. ಸೆಟ್ನಲ್ಲಿ ಅವರ ಮೊದಲ ಕೆಲಸವೆಂದರೆ ನಾಯಕ ನಟ [[ಮೋಹನ್ ಲಾಲ್|ಮೋಹನ್ ಲಾಲ್]]ಗಾಗಿ ಕ್ಲಾಪ್ಪರ್ಬೋರ್ಡ್ ಅನ್ನು ನಿರ್ವಹಿಸುವುದು. ಅವರನ್ನು ತೆರೆಯ ಮೇಲೆ "ದಿಲೀಪ್" ಎಂದು ಕರೆಯಲಾಗುತ್ತಿತ್ತು. ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದರೂ, ನಟನೆ ಯಾವಾಗಲೂ ಅವರ ಮಹತ್ವಾಕಾಂಕ್ಷೆಯಾಗಿತ್ತು, ಮತ್ತು ಅವರು ಉಲ್ಲಡಕ್ಕಂ (1991), ಚಂಪಾಕುಲಂ ಥಚನ್ (1992), ಮತ್ತು ಗಜಲ್ (1993) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಮಲ್ಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. ನಿಗದಿತ ನಟನೊಬ್ಬ ಕಾಣಿಸಿಕೊಳ್ಳಲು ವಿಫಲವಾದ ನಂತರ, ದಿಲೀಪ್ ಕಮಲ್ ಅವರ ಎನ್ನೋದಿಷ್ಟಂ ಕೂಡಮೋ (1992) ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಸೈನ್ಯಂ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಅವರು ಮತ್ತಷ್ಟು ಗೋಚರತೆಯನ್ನು ಪಡೆದರು.
ಹಾಸ್ಯ ಪೋಷಕ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಲೀಪ್ ಶೀಘ್ರದಲ್ಲೇ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು, ನಂತರ ಮಾಧ್ಯಮಗಳು ಇದನ್ನು "ಸ್ನೇಹಪರ, ಪಕ್ಕದ ಮನೆಯ ಹುಡುಗ" ಚಿತ್ರಣಗಳು ಎಂದು ನಿರೂಪಿಸಿದವು. ಅವರ ಮೊದಲ ಪ್ರಗತಿಯು ಹಾಸ್ಯ-ನಾಟಕ ಮನತೆ ಕೊಟ್ಟಾರಂ (1994) ನಲ್ಲಿ ಬಂದಿತು, ಇದರಲ್ಲಿ ಅವರು ನಾದಿರ್ಷಾ, ಹರಿಶ್ರೀ ಅಶೋಕನ್ ಮತ್ತು ಖುಷ್ಬು ಅವರೊಂದಿಗೆ ನಟಿಸಿದರು; ಚಲನಚಿತ್ರವು ಮಧ್ಯಮ ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ತ್ರೀ ಮೆನ್ ಆರ್ಮಿ ಮತ್ತು ಎಝರಕೂಟಂ (ಎರಡೂ 1995) ನಂತಹ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುಂದುವರೆದರು - ಎರಡನೆಯದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು ಮತ್ತು ಭವಿಷ್ಯದ ಪ್ರಮುಖ ಪಾತ್ರಗಳಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿತು.
೧೯೯೬ ರಿಂದ, ದಿಲೀಪ್ ಒಬ್ಬ ಯಶಸ್ವಿ ನಾಯಕ ನಟನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು. ಎಝರಕ್ಕೂಟಂನಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಸುಂದರ್ ದಾಸ್ ಅವರು ಮಂಜು ವಾರಿಯರ್ ಒಳಗೊಂಡಿರುವ ಸಲ್ಲಾಪಮ್ (1996) ನಾಟಕದಲ್ಲಿ ಅವರನ್ನು ನಾಯಕನನ್ನಾಗಿ ಮಾಡಿದರು. ಈ ಚಿತ್ರವು ನಾಯಕನಾಗಿ ಅವರಿಗೆ ಒಂದು ಮಹತ್ವದ ತಿರುವು ನೀಡಿತು ಮತ್ತು ಅದೇ ವರ್ಷದ ನಂತರ ಕಮಲ್ ನಿರ್ದೇಶಿಸಿದ ಮತ್ತು ಅದೇ ಪ್ರಮುಖ ಜೋಡಿಯನ್ನು ಒಳಗೊಂಡ ಈ ಪುಳಯುಮ್ ಕಡನ್ನು (1996) ಚಿತ್ರವು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಕಂಡಿತು. ಈ ಚಿತ್ರಗಳು ತೆರೆಯ ಮೇಲಿನ ಪ್ರಣಯ ಜೋಡಿಯನ್ನು ಜನಪ್ರಿಯಗೊಳಿಸಿದವು, ಮತ್ತು ನಂತರ ಇಬ್ಬರೂ 1998 ರಲ್ಲಿ ವಿವಾಹವಾದರು. 1990 ರ ದಶಕದ ಅಂತ್ಯ ಮತ್ತು 2000 ರ ದಶಕದ ಆರಂಭದ ವೇಳೆಗೆ, ದಿಲೀಪ್ ವ್ಯಾಪಕ ಪ್ರೇಕ್ಷಕರ ಆಕರ್ಷಣೆಯನ್ನು ಗಳಿಸಿದ್ದರು, ವಿಶೇಷವಾಗಿ ಸ್ಲ್ಯಾಪ್ ಸ್ಟಿಕ್ ಹಾಸ್ಯಗಳ ಮೂಲಕ. ಮೋಹನ್ ಲಾಲ್ ಅವರು ಬಿಟ್ಟುಹೋದ ಸ್ಲ್ಯಾಪ್ ಸ್ಟಿಕ್-ಹಾಸ್ಯ ಮಾರುಕಟ್ಟೆಯಲ್ಲಿನ ಅಂತರವನ್ನು ದಿಲೀಪ್ ತುಂಬಿದರು ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಗಮನಿಸುತ್ತಾರೆ, ಆದರೆ ಮೋಹನ್ ಲಾಲ್ ಅವರು ಈ ಪ್ರಕಾರದಿಂದ ದೂರ ಸರಿದು ಇತರ ರೀತಿಯ ಪಾತ್ರಗಳತ್ತ ಗಮನಹರಿಸಿದ್ದರು.
ಮಂತ್ರ ಮೋತಿರಂ (1997) ನಂತಹ ಚಲನಚಿತ್ರಗಳೊಂದಿಗೆ ಅವರು ತಮ್ಮ ಬ್ಯಾಂಕಬಲ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. 1998 ರ ಹಾಸ್ಯ ಚಿತ್ರ ಪಂಜಾಬಿ ಹೌಸ್ ಅನ್ನು ಮಾಧ್ಯಮಗಳು ಅವರ ಮೊದಲ "ಬ್ಲಾಕ್ಬಸ್ಟರ್" ಎಂದು ಬಣ್ಣಿಸಿವೆ. ಈ ಚಿತ್ರವು ದಿಲೀಪ್ ಮತ್ತು ಹರಿಶ್ರೀ ಅಶೋಕನ್ ಅವರ ಹಾಸ್ಯ ಜೋಡಿಯ ಆರಂಭವನ್ನು ಗುರುತಿಸಿತು.1999 ರ ಚಲನಚಿತ್ರ ಚಂದ್ರನುಡಿಕ್ಕುನ್ನ ದಿಕ್ಕಿಲ್ ಕಾವ್ಯ ಮಾಧವನ್ ಮತ್ತು ನಿರ್ದೇಶಕ ಲಾಲ್ ಜೋಸ್ ಇಬ್ಬರೊಂದಿಗೆ ದಿಲೀಪ್ ಅವರ ಮೊದಲ ಸಹಯೋಗವಾಗಿತ್ತು. ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ, ಈ ಜೋಡಿ ನಂತರದ ಚಿತ್ರಗಳಲ್ಲಿ ಯಶಸ್ವಿಯಾಯಿತು.
ಚಿತ್ರದೊಂದಿಗೆ ಅವರ ನಟನ ವ್ಯಾಪ್ತಿ ಮನ್ನಣೆ ಗಳಿಸಿತು; ನಂತರ ಚಲನಚಿತ್ರ ನಿರ್ಮಾಪಕ ಲಾಲ್ ಜೋಸ್ "ಲೋಹಿತ್ದಾಸ್ ಅವರ ಜೋಕರ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಂತರ ಉದ್ಯಮದ ದೊಡ್ಡ ಹೆಸರುಗಳು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಪ್ರಾರಂಭಿಸಿದವು" ಎಂದು ಗಮನಿಸಿದರು. ಈ ಹೊತ್ತಿಗೆ ಈಗಾಗಲೇ ಒಂದು ಪ್ರಮುಖ ನಾಯಕನಾಗಿದ್ದು, ದಿಲೀಪ್ ಸುರೇಶ್ ಗೋಪಿ ಮತ್ತು ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ತೆಂಕಸಿಪಟ್ಟಣಂ ಚಿತ್ರದಲ್ಲಿ ಪೋಷಕ ಹಾಸ್ಯ ಪಾತ್ರವನ್ನು ಆರಿಸಿಕೊಂಡರು - ಈ ಅಭಿನಯವು ಅವರಿಗೆ ಮೆಚ್ಚುಗೆಯನ್ನು ಗಳಿಸಿತು. ಈ ಚಿತ್ರವು ಪ್ರಮುಖ ವಾಣಿಜ್ಯಿಕ ಯಶಸ್ಸನ್ನು ಸಹ ಕಂಡಿತು. ಅವರು ಡಾರ್ಲಿಂಗ್ ಡಾರ್ಲಿಂಗ್ (2000), ಈ ಪರಕ್ಕುಮ್ ಥಾಲಿಕಾ (2001), ಮತ್ತು ಇಷ್ಟಮ್ (2001) ನಂತಹ ಚಿತ್ರಗಳೊಂದಿಗೆ ತಮ್ಮ ಯಶಸ್ಸನ್ನು ಮುಂದುವರೆಸಿದರು.
2002ರಲ್ಲಿ ದಿಲೀಪ್ ಅವರು ಲಾಲ್ ಜೋಸ್ ನಿರ್ದೇಶನದ ಮೀಶ ಮಾಧವನ್ ಚಿತ್ರದಲ್ಲಿ ಸಣ್ಣ ಪಟ್ಟಣದ ಒಬ್ಬ ಕಳ್ಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಹಾಸ್ಯ-ನಾಟಕ ಚಿತ್ರವು ದಿಲೀಪ್ ಅವರ ಜನಪ್ರಿಯತೆ ಮತ್ತು ಸ್ಟಾರ್ಡಮ್ ಹೆಚ್ಚಲು ಪ್ರಮುಖ ಕಾರಣವಾಯಿತುಅದೇ ವರ್ಷ ಅವರು ** ಕುಂಜಿಕ್ಕೂನನ್ ** ಚಿತ್ರದಲ್ಲಿ ಬೆನ್ನು ಬಾಗಿದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಪಾತ್ರಕ್ಕಾಗಿ ದಿಲೀಪ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ವಿಶೇಷ ಜ್ಯೂರಿ ಪ್ರಶಸ್ತಿ ದೊರೆಯಿತು.
2004 ರಲ್ಲಿ, ಅವರ ಆಕ್ಷನ್ ಹಾಸ್ಯ ಚಿತ್ರ ರನ್ವೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಆದಾಗ್ಯೂ, ರಸಿಕನ್ ಪ್ರೇಕ್ಷಕರಿಂದ ನೀರಸ ಸ್ವಾಗತವನ್ನು ಪಡೆಯಿತು. ಪ್ರಿಯದರ್ಶನ್ ಅವರ ಹಾಸ್ಯ ಚಿತ್ರ ವೆಟ್ಟಂ ವಾಣಿಜ್ಯಿಕವಾಗಿ ವಿಫಲವಾಯಿತು ಆದರೆ ನಂತರದ ವರ್ಷಗಳಲ್ಲಿ ಅಭಿಮಾನಿಗಳ ಗುಂಪನ್ನು ಬೆಳೆಸಿಕೊಂಡಿತು. ದಿಲೀಪ್ 'ಕಥಾವಶೇಷನ್' (2004) ಎಂಬ ನಾಟಕದ ಮೂಲಕ ಆಫ್-ಬೀಟ್ ಸಿನಿಮಾ ರಂಗಕ್ಕೂ ಕಾಲಿಟ್ಟರು, ಅದನ್ನು ಅವರೇ ನಿರ್ಮಿಸಿದರು. ಈ ಚಿತ್ರವು ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅದರಲ್ಲಿ ಎರಡನೇ ಅತ್ಯುತ್ತಮ ಚಿತ್ರವೂ ಸೇರಿದೆ. ಇದರ ನಂತರ ನೈಜ ಘಟನೆಯನ್ನು ಆಧರಿಸಿದ ದುರಂತ ನಾಟಕ ಪೆರುಮಝಕ್ಕಲಂ (2004) ಬಿಡುಗಡೆಯಾಯಿತು, ಇದರಲ್ಲಿ ಅವರು ಮರಣದಂಡನೆ ಎದುರಿಸುತ್ತಿರುವ ಅಪರಾಧಿಯ ಪಾತ್ರವನ್ನು ನಿರ್ವಹಿಸಿದರು. ಅದೇನೇ ಇದ್ದರೂ, 2005 ರ ಸಂದರ್ಶನವೊಂದರಲ್ಲಿ, ದಿಲೀಪ್ "ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ತಿಳಿದಿದ್ದೇನೆ" ಎಂದು ಹೇಳುತ್ತಾ, ಸ್ಲ್ಯಾಪ್ ಸ್ಟಿಕ್ ಹಾಸ್ಯಗಳಿಂದ ದೂರ ಸರಿಯುವ ಉದ್ದೇಶವಿಲ್ಲ ಎಂದು ಹೇಳಿದರು.
೨೦೦೫ ರಲ್ಲಿ, ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಎಂಟರ್ಟೈನರ್ ಕೊಚ್ಚಿ ರಾಜವು ಚಿತ್ರದಲ್ಲಿ ನಟಿಸಿದರು. ಅದೇ ವರ್ಷ, ಅವರು ಲಾಲ್ ಜೋಸ್ ಅವರ ಹಾಸ್ಯ ಚಿತ್ರ ಚಂತುಪೊಟ್ಟು ನಲ್ಲಿ ಸ್ತ್ರೀಲಿಂಗ ಪುರುಷನ ಪಾತ್ರವನ್ನು ನಿರ್ವಹಿಸಿದರು. ಅವರ ಅಭಿನಯವು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಪ್ರಶಂಸೆಯನ್ನು ಗಳಿಸಿತು. ದಿ ಹಿಂದೂ ನಂತರ ಮೀಶಾ ಮಾಧವನ್ ಮತ್ತು ಚಾಂತುಪೊಟ್ಟು "ದಿಲೀಪ್ ಅವರ ವೃತ್ತಿಜೀವನದಲ್ಲಿ ಎರಡು ಮಹತ್ವದ ಚಿತ್ರಗಳು" ಎಂದು ಹೈಲೈಟ್ ಮಾಡಿತು. ೨೦೦೬ ರಲ್ಲಿ, ಸಿಫಿ.ಕಾಮ್ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರನ್ನು "ಆಧುನಿಕ ಕಾಲದ ಅತ್ಯಂತ ಪ್ರಣಯ ಜೋಡಿ ... ತೆರೆಯ ಮೇಲಿನ ಈ ಜೋಡಿಯ ನಡುವಿನ ರಸಾಯನಶಾಸ್ತ್ರವು ಅವರನ್ನು ಮಲಯಾಳಂನ ಅತ್ಯಂತ ಹಾಟ್ ಜೋಡಿಯನ್ನಾಗಿ ಮಾಡಿದೆ" ಎಂದು ಬಣ್ಣಿಸಿತು.
ದಿಲೀಪ್ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದ್ದು, ಜುಲೈ 4 ರಂದು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ ಈ ಅಭ್ಯಾಸವು ಈ ಪರಾಕ್ಕುಂ ತಾಳಿಕಾದಿಂದ ಪ್ರಾರಂಭವಾಯಿತು ಮತ್ತು ಮೀಶಾ ಮಾಧವನ್, ಸಿಐಡಿ ಮೂಸಾ ಮತ್ತು ಪಾಂಡಿಪ್ಪದವರೊಂದಿಗೆ ಮುಂದುವರೆಯಿತು. ವಿಪರ್ಯಾಸವೆಂದರೆ, ಅವರ ಜುಲೈ 4 (2007) ಚಿತ್ರವು ಒಂದು ದಿನದಷ್ಟು ದಿನಾಂಕವನ್ನು ತಪ್ಪಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೦೮ ರಲ್ಲಿ, ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪರವಾಗಿ ಬಹುತಾರಾಗಣ ಹೊಂದಿರುವ ಟ್ವೆಂಟಿ:೨೦ ಚಿತ್ರವನ್ನು ನಿರ್ಮಿಸಿದರು, ಇದರಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಆ ಸಮಯದಲ್ಲಿ ಆ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಯಿತು, ₹31.4 ಕೋಟಿ ಗಳಿಸಿತು.
೨೦೧೨ ರಲ್ಲಿ, ದಿಲೀಪ್ ಅವರ ಚಲನಚಿತ್ರಗಳು ಒಟ್ಟಾರೆಯಾಗಿ ₹೩೨.೭ ಕೋಟಿ ಗಳಿಸಿದವು - ಆ ವರ್ಷ ಯಾವುದೇ ಮಲಯಾಳಂ ನಟನಿಗೆ ಇದು ಅತ್ಯಧಿಕ. ವರ್ಷವು ಸ್ಪ್ಯಾನಿಷ್ ಮಸಾಲಾ ವೈಫಲ್ಯದೊಂದಿಗೆ ಪ್ರಾರಂಭವಾಯಿತು, ಆದರೆ ಮಾಯಾಮೋಹಿನಿ ಅವರ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಅರಿಕೆ ಕಳಪೆ ಪ್ರದರ್ಶನ ನೀಡಿದ್ದರೂ, ಮೈ ಬಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಶ್ರೀ ಮರುಮಕನ್ ತನ್ನ ಹೂಡಿಕೆಯನ್ನು ಮರಳಿ ಪಡೆದರು. ೨೦೧೩ ರ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಣಯಿಸುತ್ತಾ, ದಿ ಹಿಂದೂ "ಜನಸಾಮಾನ್ಯರ ಪ್ರಶ್ನಾತೀತ ನಾಯಕ ದಿಲೀಪ್ ... ಕೆಲವು [ಚಲನಚಿತ್ರಗಳು] ಸಂಪೂರ್ಣವಾಗಿ ಕಳಪೆಯಾಗಿದ್ದವು ಆದರೆ ಅವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದವು" ಎಂದು ಗಮನಿಸಿತು. ಹಾಸ್ಯ ಚಿತ್ರಗಳಾದ ಸೌಂಡ್ ತೋಮ ಮತ್ತು ಶೃಂಗಾರವೇಲನ್ ಅವರ ಪ್ರಮುಖ ನಾಟಕೀಯ ಯಶಸ್ಸನ್ನು ಕಂಡರೆ, ಕಮ್ಮತ್ ಮತ್ತು ಕಮ್ಮತ್, ನಾಡೋಡಿಮನ್ನನ್, ಮತ್ತು ಎಜು ಸುಂದರ ರಾತ್ರಿಗಳು ಉಪಗ್ರಹ-ಹಕ್ಕುಗಳ ಆದಾಯವನ್ನು ಲೆಕ್ಕಹಾಕಿದ ನಂತರ ಲಾಭದಾಯಕವಾದವು. "ನನಗೆ ಗೊಂದಲವಾಗಿದೆ. ನನ್ನ ಸಿನಿಮಾಗಳು ಓಡಿದರೆ, ಅವುಗಳನ್ನು ಬುದ್ಧಿಹೀನ ಮನರಂಜನಾ ಚಿತ್ರಗಳೆಂದು ಬ್ರಾಂಡ್ ಮಾಡಲಾಗುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಯೇ ಎಂದು ಕೇಳಲಾಗುತ್ತದೆ!" ಎಂದು ದಿಲೀಪ್ ಟೀಕಿಸಿದರು.
೨೦೧೪ ರಲ್ಲಿ, ರಫಿ ನಿರ್ದೇಶನದ ರಿಂಗ್ ಮಾಸ್ಟರ್ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ವಾಣಿಜ್ಯಿಕವಾಗಿ ಉತ್ತಮ ಪ್ರದರ್ಶನ ನೀಡಿತು. ಇದರ ನಂತರ 'ವಿಲ್ಲಾಲಿ ವೀರನ್' ಚಿತ್ರ ಬಂದಿತು, ಇದು "ಬಾಕ್ಸ್ ಆಫೀಸ್ ದಾಖಲೆಗಳನ್ನು ಸೋಲಿಸಿಲ್ಲ ಆದರೆ ವರದಿಗಳು ಹೇಳುವಂತೆ, ನಿರ್ಮಾಪಕರ ಜೇಬಿಗೆ ಯಾವುದೇ ಹೊಡೆತ ನೀಡುವುದಿಲ್ಲ" ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಆ ವರ್ಷ, ದಿ ಹಿಂದೂ ಪತ್ರಿಕೆಯು ಅವರ ಚಿತ್ರಗಳು "ವಿರಳವಾಗಿ ಉತ್ತಮ ವಿಮರ್ಶೆಗಳನ್ನು ಪಡೆಯುತ್ತವೆ ಮತ್ತು ಹೆಚ್ಚಾಗಿ ಗ್ಯಾಲರಿಗೆ ಹೋಗುತ್ತವೆ" ಎಂದು ಕೇಳಿದಾಗ, ದಿಲೀಪ್ ವಿಮರ್ಶೆಗಳಿಗಿಂತ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಆದ್ಯತೆ ನೀಡುವುದಾಗಿ ಉತ್ತರಿಸಿದರು.ಅದೇ ರೀತಿ, "ದಿಲೀಪ್ ಬ್ರ್ಯಾಂಡ್ ಮಲಯಾಳಂ ಮನರಂಜನಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮನರಂಜನಾ ಉತ್ಪನ್ನವಾಗಿ ಬೆಳೆದಿದೆ ಎಂಬುದು ನಿರ್ವಿವಾದದ ಸತ್ಯ" ಎಂದು ಆನ್ಮನೋರಮಾ ಗಮನಿಸಿದೆ.
ತೆಲುಗು ಚಿತ್ರದ ರಿಮೇಕ್ ಆದ ಇವಾನ್ ಮರ್ಯಾದರಾಮನ್ (2015) ವಿಫಲವಾದ ನಂತರ, ದಿಲೀಪ್ "ರಿಮೇಕ್ಗಳೊಂದಿಗೆ ನನ್ನ ಸಮಯವನ್ನು ವ್ಯರ್ಥ ಮಾಡುವ ಬದಲು ಮೂಲ ಸ್ಕ್ರಿಪ್ಟ್ಗಳನ್ನು ಇಷ್ಟಪಡುತ್ತೇನೆ" ಎಂದು ಹೇಳಿ "ನಾನು ರಿಮೇಕ್ಗಳನ್ನು ಮುಗಿಸಿದ್ದೇನೆ" ಎಂದು ಘೋಷಿಸಿದರು.ಅವರ ತಕ್ಷಣ ಬಿಡುಗಡೆಯಾದ ಚಂದ್ರೆತ್ತನ್ ಎವಿದೇಯ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ಆದರೆ ನಂತರದ ಚಿತ್ರಗಳಾದ ಲವ್ 24x7 ಮತ್ತು ಲೈಫ್ ಆಫ್ ಜೋಸುಟ್ಟಿ "ಗಲ್ಲಾಪೆಟ್ಟಿಗೆಯನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ". ಆ ವರ್ಷವು ಟು ಕಂಟ್ರಿಸ್ನೊಂದಿಗೆ ಕೊನೆಗೊಂಡಿತು, ಇದು ಅಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾಯಿತು. ಅದರ ನಂತರ ಅವರು ಮತ್ತೊಂದು ವಾಣಿಜ್ಯ ಯಶಸ್ಸನ್ನು ಕಂಡರು, ಸ್ಲ್ಯಾಪ್ಸ್ಟಿಕ್ ಹಾಸ್ಯ ಕಿಂಗ್ ಲೈಯರ್ (2016).ಅವರು ಅಡೂರ್ ಗೋಪಾಲಕೃಷ್ಣನ್ ಅವರ ಪಿನ್ನೆಯುಮ್ ನಾಟಕದಲ್ಲಿ ಕಾವ್ಯ ಮಾಧವನ್ ಅವರೊಂದಿಗೆ ಜೋಡಿಯಾಗಿದ್ದರು.ಸುಂದರ್ ದಾಸ್ ಅವರ ವೆಲ್ಕಮ್ ಟು ಸೆಂಟ್ರಲ್ ಜೈಲ್, ಇತರ ಐದು ಚಿತ್ರಗಳ ಜೊತೆಗೆ ಬಿಡುಗಡೆಯಾಯಿತು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ " ಓಣಂ ದಿನಗಳಲ್ಲಿ ಎಲ್ಲಾ ಆರು ಚಿತ್ರಗಳು ಉತ್ತಮ ಕಲೆಕ್ಷನ್ ದಾಖಲಿಸಿವೆ" ಎಂದು ಗಮನಿಸಿದೆ.
ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019) ನಲ್ಲಿ, ಅವರು ತೊದಲುವಿಕೆಯೊಂದಿಗೆ ವಕೀಲರನ್ನು ಚಿತ್ರಿಸಿದ್ದಾರೆ. ಆ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ದಿಲೀಪ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸಿದ ಸುಭರಾತ್ರಿಯೊಂದಿಗೆ ಸ್ವರ ಬದಲಾವಣೆಯಾಯಿತು; ನಾಟಕ-ಥ್ರಿಲ್ಲರ್ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ವಿಶೇಷವಾಗಿ ಅವರ ಅಭಿನಯಕ್ಕಾಗಿ. ನಂತರ ಅವರು ಅರ್ಜುನ್ ಸರ್ಜಾ ಅವರೊಂದಿಗೆ ಜ್ಯಾಕ್ & ಡೇನಿಯಲ್ ಎಂಬ ಆಕ್ಷನ್ ಚಿತ್ರದಲ್ಲಿ ನಟಿಸಿದರು, ವಿಮರ್ಶಕ ಅನ್ನಾ ಎಂಎಂ ವೆಟ್ಟಿಕಾಡ್ ಈ ಚಿತ್ರವನ್ನು "ಸಿಲ್ಲಿ, ಅಸಲಿ ಅಲ್ಲದ ಆದರೆ ಸಹನೀಯ ಟೈಮ್ಪಾಸ್" ಎಂದು ಬಣ್ಣಿಸಿದ್ದಾರೆ.ಅವರ ಕ್ರಿಸ್ಮಸ್ ಚಿತ್ರ ಮೈ ಸಾಂಟಾ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು.
===೨೦೨೦- ಇಲ್ಲಿಯವರೆಗೂ===
2020 ಮತ್ತು 2022 ರ ನಡುವೆ, ದಿಲೀಪ್ ನಿರ್ಮಿಸಿ, ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದ ಥಟ್ಟಸ್ಸೇರಿ ಕೂಟ್ಟಂ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಅವರ 2021 ರ ಚಲನಚಿತ್ರ ಕೇಶು ಈ ವೀಡಿಂತೆ ನಾಧನ್, ಬಹುಕಾಲದ ಗೆಳೆಯ ನಾದಿರ್ಷಾ ನಿರ್ದೇಶಿಸಿದ್ದು, ನೇರವಾಗಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಹಾಸ್ಯ-ನಾಟಕದಲ್ಲಿ, ಅವರು ಲಾಟರಿ ಗೆಲ್ಲುವ ವೃದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು, Moneycontrol.com ಈ ಚಿತ್ರವನ್ನು "ಭಾಷೆಯನ್ನು ಮೀರಿದ ಹಾಸ್ಯ"ದ ಭಾಗವೆಂದು ವಿವರಿಸಿದೆ.<ref>https://www.moneycontrol.com/news/trends/entertainment/keshu-ee-veedinte-nadhan-review-a-funny-take-on-families-and-lottery-money-7889431.html</ref>
2023 ರಲ್ಲಿ, ಅವರು ಜೋಜು ಜಾರ್ಜ್ ಅವರೊಂದಿಗೆ ವಾಯ್ಸ್ ಆಫ್ ಸತ್ಯನಾಥನ್ ಚಿತ್ರವನ್ನು ನಿರ್ಮಿಸಿ ಸಹನಟನಾಗಿ ನಟಿಸಿದರು. ಪ್ರತಿಕೂಲವಾದ ವಿಮರ್ಶೆಗಳ ಹೊರತಾಗಿಯೂ, ಇದು ನಾಲ್ಕು ವಾರಗಳಲ್ಲಿ ₹23 ಕೋಟಿಗೂ ಹೆಚ್ಚು ಗಳಿಸಿತು.<ref>https://timesofindia.indiatimes.com/entertainment/malayalam/movies/box-office/voice-of-sathyanathan-box-office-collections-dileep-starrer-crosses-rs-23-crores/articleshow/102912115.cms</ref> ಅವರು ಅರುಣ್ ಗೋಪಿ ನಿರ್ದೇಶನದ ಬಾಂದ್ರಾ ಚಿತ್ರದಲ್ಲಿ ನಟಿಸಿದ್ದಾರೆ, ಇದು ನಷ್ಟವನ್ನುಂಟುಮಾಡಿತು ಮತ್ತು ವ್ಯಾಪಕ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ನಿರ್ಮಾಪಕರು ವಿಮರ್ಶೆ ಬಾಂಬ್ ದಾಳಿಯನ್ನು ಆರೋಪಿಸಿದರು. ೨೦೨೪ ರಲ್ಲಿ, ದಿಲೀಪ್ ೧೯೮೬ ರ ಘಟನೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರ 'ಥಂಕಮಣಿ' ಯಲ್ಲಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ವಿಫಲವಾಯಿತು. ನಂತರ ಅವರು ಪವಿ ಕೇರ್ಟೇಕರ್ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದನ್ನು ಹಿಂದೂಸ್ತಾನ್ ಟೈಮ್ಸ್ ಅವರ ಹಿಂದಿನ ಸ್ಲ್ಯಾಪ್ಸ್ಟಿಕ್ ಪಾತ್ರಗಳನ್ನು ನೆನಪಿಸುತ್ತದೆ ಎಂದು ಬಣ್ಣಿಸಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (2025) ಚಿತ್ರದಲ್ಲಿ, ಅವರು ಉತ್ಸಾಹಭರಿತ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿಯನ್ನು ಮದುವೆಯಾದ ನಂತರ ಜೀವನವು ತಿರುವು ಪಡೆಯುವ ಸಾಧಾರಣ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಮಿಶ್ರ ವಿಮರ್ಶೆಗಳನ್ನು ಪಡೆದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.ಅವರ ಮುಂದಿನ ಬಿಡುಗಡೆ ಭಾ ಭಾ ಬಾ, ಇದರಲ್ಲಿ ಅವರು ವಿನೀತ್ ಶ್ರೀನಿವಾಸನ್ ಮತ್ತು ಧ್ಯಾನ್ ಶ್ರೀನಿವಾಸನ್ ಅವರೊಂದಿಗೆ ನಟಿಸಿದ್ದಾರೆ.
==ಉಲ್ಲೇಖಗಳು==
iiztvtg9b30c6uvqu8p0gm2n7c18ww6
ಕೋಝಿಕ್ಕೋಡ್ ಕಡಲತೀರ
0
180114
1379484
2026-08-08T17:34:10Z
Santhosh Notagar99
82732
ಹೊಸ ಪುಟ: '''ಕೋಝಿಕ್ಕೋಡ್ ಕಡಲತೀರ'''ವು ಭಾರತದ ಮಲಬಾರ್ ಕರಾವಳಿಯಲ್ಲಿರುವ ಕೋಝಿಕ್ಕೋಡ್ ನಗರದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಕಡಲತೀರವಾಗಿದೆ. ನಗರದಿಂದ ಕಡಲತೀರವನ್ನು ತಲುಪಲು ನಾಲ್ಕು ರಸ್ತೆ ಮೇಲ್ಸೇತುವೆಗಳ...
1379484
wikitext
text/x-wiki
'''ಕೋಝಿಕ್ಕೋಡ್ ಕಡಲತೀರ'''ವು ಭಾರತದ ಮಲಬಾರ್ ಕರಾವಳಿಯಲ್ಲಿರುವ ಕೋಝಿಕ್ಕೋಡ್ ನಗರದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಕಡಲತೀರವಾಗಿದೆ. ನಗರದಿಂದ ಕಡಲತೀರವನ್ನು ತಲುಪಲು ನಾಲ್ಕು ರಸ್ತೆ ಮೇಲ್ಸೇತುವೆಗಳ ಮೂಲಕ ಸಂಪರ್ಕವಿದೆ. <ref>https://en.wikipedia.org/wiki/Kozhikode_Beach</ref> ಕಡಲತೀರದಲ್ಲಿ ಸುಸಜ್ಜಿತ ಕಲ್ಲಿನ ಹಾಸುಗಳು ಮತ್ತು ಬೆಳಕಿನ ವ್ಯವಸ್ಥೆ ಇದ್ದು, ಮಕ್ಕಳಿಗಾಗಿ ಲಯನ್ಸ್ ಪಾರ್ಕ್ ಹಾಗೂ ಅಕ್ವೇರಿಯಂ ಕೂಡ ಇದೆ. ಕೋಝಿಕ್ಕೋಡ್ ಕಡಲತೀರವು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿಯೂ ದೀರ್ಘಕಾಲದಿಂದ ಪ್ರಸಿದ್ಧವಾಗಿದೆ. 1934ರಲ್ಲಿ ಮಹಾತ್ಮ ಗಾಂಧೀಜಿ ಕೋಝಿಕ್ಕೋಡ್ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಕಡಲತೀರದ ರಸ್ತೆಗೆ ‘ಗಾಂಧಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು. 1950ರ ಏಪ್ರಿಲ್ನಲ್ಲಿ ಸರ್ಕಾರಿ ಪ್ರಧಾನ ಆಸ್ಪತ್ರೆಯನ್ನು ನಿರ್ಮಿಸಲು ಕೋಝಿಕ್ಕೋಡ್ ಕಡಲತೀರದ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. <ref>{{Cite news|title=Story of the streets|url=https://www.thehindu.com/features/metroplus/kozhikode-street-names/article6621905.ece|work=The Hindu|date=2014-11-21|access-date=2025-11-28|issn=0971-751X|language=en-IN}}</ref>
== ಅಪರೂಪದ ನೈಸರ್ಗಿಕ ವಿದ್ಯಮಾನ ==
2025ರ ಅಕ್ಟೋಬರ್ನಲ್ಲಿ ಕೋಝಿಕ್ಕೋಡ್ ಕಡಲತೀರದಲ್ಲಿ ಅಪರೂಪದ ನೈಸರ್ಗಿಕ ವಿದ್ಯಮಾನವೊಂದು ದಾಖಲಾಗಿತ್ತು. ದಕ್ಷಿಣ ಕಡಲತೀರದ ಸುಮಾರು 1.5 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಸಮುದ್ರದ ನೀರು ಸುಮಾರು 200 ಮೀಟರ್ಗಳಷ್ಟು ಹಿಂದಕ್ಕೆ ಸರಿದಿತ್ತು. ಕಡಲತೀರದ ವಿಶಾಲ ಭಾಗವು ನೀರಿನಿಂದ ಮುಕ್ತವಾಗಿ ಕಾಣಿಸಿಕೊಂಡ ಈ ವಿದ್ಯಮಾನವು ಸ್ಥಳೀಯರು ಮತ್ತು ಪ್ರವಾಸಿಗರ ಗಮನ ಸೆಳೆಯಿತು. ಇಂತಹ ಸಮುದ್ರದ ನೀರಿನ ಹಿಂಜರಿತವು ಕರಾವಳಿ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ನೈಸರ್ಗಿಕ ವಿದ್ಯಮಾನವಾಗಿದೆ.
== ಕಡಲತೀರದ ರಸ್ತೆ ಮತ್ತು ವ್ಯಾಪ್ತಿ ==
ಕೋಝಿಕ್ಕೋಡ್ ಕಡಲತೀರದ ರಸ್ತೆ ದಕ್ಷಿಣದಲ್ಲಿರುವ ಬೇಪೂರ್ನಿಂದ ಉತ್ತರದಲ್ಲಿರುವ ಕಪ್ಪಾಡ್ವರೆಗೆ ದೀರ್ಘವಾದ ಕರಾವಳಿ ಮಾರ್ಗವಾಗಿ ಸಾಗುತ್ತದೆ. ಈ ಕರಾವಳಿ ವ್ಯಾಪ್ತಿಯಲ್ಲಿ ಬೇಪೂರ್, ಪಯ್ಯನಕ್ಕಲ್, ಮರಾಡ್, ಕಲ್ಲಾಯಿ, ಕುಟ್ಟಿಚಿರ, ತೆಕ್ಕೆಪುರಂ, ವೆಳ್ಳಯಿಲ್, ಸೌತ್ ಬೀಚ್, ವಲಿಯಂಗಾಡಿ, ಕಂಬುರಂ, ಪುತ್ತಿಯಪ್ಪ, ಎಲತ್ತೂರ್, ಕೋನಾಡ್ ಮತ್ತು ಭಟ್ ರೋಡ್ ಸೇರಿದಂತೆ ಹಲವು ಕಡಲತೀರ ಪ್ರದೇಶಗಳು ಸೇರಿವೆ. ಈ ವಿಶಾಲ ಕರಾವಳಿ ಪ್ರದೇಶವು ಕೋಝಿಕ್ಕೋಡ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
97se9haq6cxjbteos05jlg538iddkhk
1379485
1379484
2026-08-08T17:34:28Z
Santhosh Notagar99
82732
1379485
wikitext
text/x-wiki
'''ಕೋಝಿಕ್ಕೋಡ್ ಕಡಲತೀರ'''ವು ಭಾರತದ ಮಲಬಾರ್ ಕರಾವಳಿಯಲ್ಲಿರುವ ಕೋಝಿಕ್ಕೋಡ್ ನಗರದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಕಡಲತೀರವಾಗಿದೆ. ನಗರದಿಂದ ಕಡಲತೀರವನ್ನು ತಲುಪಲು ನಾಲ್ಕು ರಸ್ತೆ ಮೇಲ್ಸೇತುವೆಗಳ ಮೂಲಕ ಸಂಪರ್ಕವಿದೆ. <ref>https://en.wikipedia.org/wiki/Kozhikode_Beach</ref> ಕಡಲತೀರದಲ್ಲಿ ಸುಸಜ್ಜಿತ ಕಲ್ಲಿನ ಹಾಸುಗಳು ಮತ್ತು ಬೆಳಕಿನ ವ್ಯವಸ್ಥೆ ಇದ್ದು, ಮಕ್ಕಳಿಗಾಗಿ ಲಯನ್ಸ್ ಪಾರ್ಕ್ ಹಾಗೂ ಅಕ್ವೇರಿಯಂ ಕೂಡ ಇದೆ. ಕೋಝಿಕ್ಕೋಡ್ ಕಡಲತೀರವು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿಯೂ ದೀರ್ಘಕಾಲದಿಂದ ಪ್ರಸಿದ್ಧವಾಗಿದೆ. 1934ರಲ್ಲಿ ಮಹಾತ್ಮ ಗಾಂಧೀಜಿ ಕೋಝಿಕ್ಕೋಡ್ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಕಡಲತೀರದ ರಸ್ತೆಗೆ ‘ಗಾಂಧಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು. 1950ರ ಏಪ್ರಿಲ್ನಲ್ಲಿ ಸರ್ಕಾರಿ ಪ್ರಧಾನ ಆಸ್ಪತ್ರೆಯನ್ನು ನಿರ್ಮಿಸಲು ಕೋಝಿಕ್ಕೋಡ್ ಕಡಲತೀರದ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. <ref>{{Cite news|title=Story of the streets|url=https://www.thehindu.com/features/metroplus/kozhikode-street-names/article6621905.ece|work=The Hindu|date=2014-11-21|access-date=2025-11-28|issn=0971-751X|language=en-IN}}</ref> <ref>{{Cite book|title=The Indian Express|url=https://books.google.com/books?id=j7w-AAAAIBAJ&dq=%22Kozhikode+Beach%22&pg=PA10&article_id=2307,2895671|publisher=The Indian Express|language=en}}</ref>
== ಅಪರೂಪದ ನೈಸರ್ಗಿಕ ವಿದ್ಯಮಾನ ==
2025ರ ಅಕ್ಟೋಬರ್ನಲ್ಲಿ ಕೋಝಿಕ್ಕೋಡ್ ಕಡಲತೀರದಲ್ಲಿ ಅಪರೂಪದ ನೈಸರ್ಗಿಕ ವಿದ್ಯಮಾನವೊಂದು ದಾಖಲಾಗಿತ್ತು. ದಕ್ಷಿಣ ಕಡಲತೀರದ ಸುಮಾರು 1.5 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಸಮುದ್ರದ ನೀರು ಸುಮಾರು 200 ಮೀಟರ್ಗಳಷ್ಟು ಹಿಂದಕ್ಕೆ ಸರಿದಿತ್ತು. ಕಡಲತೀರದ ವಿಶಾಲ ಭಾಗವು ನೀರಿನಿಂದ ಮುಕ್ತವಾಗಿ ಕಾಣಿಸಿಕೊಂಡ ಈ ವಿದ್ಯಮಾನವು ಸ್ಥಳೀಯರು ಮತ್ತು ಪ್ರವಾಸಿಗರ ಗಮನ ಸೆಳೆಯಿತು. ಇಂತಹ ಸಮುದ್ರದ ನೀರಿನ ಹಿಂಜರಿತವು ಕರಾವಳಿ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ನೈಸರ್ಗಿಕ ವಿದ್ಯಮಾನವಾಗಿದೆ.
== ಕಡಲತೀರದ ರಸ್ತೆ ಮತ್ತು ವ್ಯಾಪ್ತಿ ==
ಕೋಝಿಕ್ಕೋಡ್ ಕಡಲತೀರದ ರಸ್ತೆ ದಕ್ಷಿಣದಲ್ಲಿರುವ ಬೇಪೂರ್ನಿಂದ ಉತ್ತರದಲ್ಲಿರುವ ಕಪ್ಪಾಡ್ವರೆಗೆ ದೀರ್ಘವಾದ ಕರಾವಳಿ ಮಾರ್ಗವಾಗಿ ಸಾಗುತ್ತದೆ. ಈ ಕರಾವಳಿ ವ್ಯಾಪ್ತಿಯಲ್ಲಿ ಬೇಪೂರ್, ಪಯ್ಯನಕ್ಕಲ್, ಮರಾಡ್, ಕಲ್ಲಾಯಿ, ಕುಟ್ಟಿಚಿರ, ತೆಕ್ಕೆಪುರಂ, ವೆಳ್ಳಯಿಲ್, ಸೌತ್ ಬೀಚ್, ವಲಿಯಂಗಾಡಿ, ಕಂಬುರಂ, ಪುತ್ತಿಯಪ್ಪ, ಎಲತ್ತೂರ್, ಕೋನಾಡ್ ಮತ್ತು ಭಟ್ ರೋಡ್ ಸೇರಿದಂತೆ ಹಲವು ಕಡಲತೀರ ಪ್ರದೇಶಗಳು ಸೇರಿವೆ. ಈ ವಿಶಾಲ ಕರಾವಳಿ ಪ್ರದೇಶವು ಕೋಝಿಕ್ಕೋಡ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
ax4wsu9kcwihdzve92w0kx2cmdtfnxi
1379486
1379485
2026-08-08T17:34:48Z
Santhosh Notagar99
82732
1379486
wikitext
text/x-wiki
'''ಕೋಝಿಕ್ಕೋಡ್ ಕಡಲತೀರ'''ವು ಭಾರತದ ಮಲಬಾರ್ ಕರಾವಳಿಯಲ್ಲಿರುವ ಕೋಝಿಕ್ಕೋಡ್ ನಗರದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಕಡಲತೀರವಾಗಿದೆ. ನಗರದಿಂದ ಕಡಲತೀರವನ್ನು ತಲುಪಲು ನಾಲ್ಕು ರಸ್ತೆ ಮೇಲ್ಸೇತುವೆಗಳ ಮೂಲಕ ಸಂಪರ್ಕವಿದೆ. <ref>https://en.wikipedia.org/wiki/Kozhikode_Beach</ref> ಕಡಲತೀರದಲ್ಲಿ ಸುಸಜ್ಜಿತ ಕಲ್ಲಿನ ಹಾಸುಗಳು ಮತ್ತು ಬೆಳಕಿನ ವ್ಯವಸ್ಥೆ ಇದ್ದು, ಮಕ್ಕಳಿಗಾಗಿ ಲಯನ್ಸ್ ಪಾರ್ಕ್ ಹಾಗೂ ಅಕ್ವೇರಿಯಂ ಕೂಡ ಇದೆ. ಕೋಝಿಕ್ಕೋಡ್ ಕಡಲತೀರವು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿಯೂ ದೀರ್ಘಕಾಲದಿಂದ ಪ್ರಸಿದ್ಧವಾಗಿದೆ. 1934ರಲ್ಲಿ ಮಹಾತ್ಮ ಗಾಂಧೀಜಿ ಕೋಝಿಕ್ಕೋಡ್ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಕಡಲತೀರದ ರಸ್ತೆಗೆ ‘ಗಾಂಧಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು. 1950ರ ಏಪ್ರಿಲ್ನಲ್ಲಿ ಸರ್ಕಾರಿ ಪ್ರಧಾನ ಆಸ್ಪತ್ರೆಯನ್ನು ನಿರ್ಮಿಸಲು ಕೋಝಿಕ್ಕೋಡ್ ಕಡಲತೀರದ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. <ref>{{Cite news|title=Story of the streets|url=https://www.thehindu.com/features/metroplus/kozhikode-street-names/article6621905.ece|work=The Hindu|date=2014-11-21|access-date=2025-11-28|issn=0971-751X|language=en-IN}}</ref> <ref>{{Cite book|title=The Indian Express|url=https://books.google.com/books?id=j7w-AAAAIBAJ&dq=%22Kozhikode+Beach%22&pg=PA10&article_id=2307,2895671|publisher=The Indian Express|language=en}}</ref>
== ಅಪರೂಪದ ನೈಸರ್ಗಿಕ ವಿದ್ಯಮಾನ ==
2025ರ ಅಕ್ಟೋಬರ್ನಲ್ಲಿ ಕೋಝಿಕ್ಕೋಡ್ ಕಡಲತೀರದಲ್ಲಿ ಅಪರೂಪದ ನೈಸರ್ಗಿಕ ವಿದ್ಯಮಾನವೊಂದು ದಾಖಲಾಗಿತ್ತು. ದಕ್ಷಿಣ ಕಡಲತೀರದ ಸುಮಾರು 1.5 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಸಮುದ್ರದ ನೀರು ಸುಮಾರು 200 ಮೀಟರ್ಗಳಷ್ಟು ಹಿಂದಕ್ಕೆ ಸರಿದಿತ್ತು. ಕಡಲತೀರದ ವಿಶಾಲ ಭಾಗವು ನೀರಿನಿಂದ ಮುಕ್ತವಾಗಿ ಕಾಣಿಸಿಕೊಂಡ ಈ ವಿದ್ಯಮಾನವು ಸ್ಥಳೀಯರು ಮತ್ತು ಪ್ರವಾಸಿಗರ ಗಮನ ಸೆಳೆಯಿತು. ಇಂತಹ ಸಮುದ್ರದ ನೀರಿನ ಹಿಂಜರಿತವು ಕರಾವಳಿ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ನೈಸರ್ಗಿಕ ವಿದ್ಯಮಾನವಾಗಿದೆ. <ref>{{Cite web|title=Water recedes at Kozhikode beach in rare phenomenon|url=https://www.onmanorama.com/news/kerala/2025/10/16/kozhikode-beach-water-receding.html|website=Water recedes at Kozhikode beach in rare phenomenon|access-date=2025-11-28|language=en}}</ref><ref>{{Cite web|title=Water mysteriously pulls back at Kozhikode South Beach, revealing vast seabed stretch|url=https://english.mathrubhumi.com/news/kerala/water-mysteriously-pulls-back-at-kozhikode-south-beach-revealing-vast-seabed-stretch-lyyubh6a|website=@mathrubhumi|date=2025-10-16|access-date=2025-11-28|language=en}}</ref>
== ಕಡಲತೀರದ ರಸ್ತೆ ಮತ್ತು ವ್ಯಾಪ್ತಿ ==
ಕೋಝಿಕ್ಕೋಡ್ ಕಡಲತೀರದ ರಸ್ತೆ ದಕ್ಷಿಣದಲ್ಲಿರುವ ಬೇಪೂರ್ನಿಂದ ಉತ್ತರದಲ್ಲಿರುವ ಕಪ್ಪಾಡ್ವರೆಗೆ ದೀರ್ಘವಾದ ಕರಾವಳಿ ಮಾರ್ಗವಾಗಿ ಸಾಗುತ್ತದೆ. ಈ ಕರಾವಳಿ ವ್ಯಾಪ್ತಿಯಲ್ಲಿ ಬೇಪೂರ್, ಪಯ್ಯನಕ್ಕಲ್, ಮರಾಡ್, ಕಲ್ಲಾಯಿ, ಕುಟ್ಟಿಚಿರ, ತೆಕ್ಕೆಪುರಂ, ವೆಳ್ಳಯಿಲ್, ಸೌತ್ ಬೀಚ್, ವಲಿಯಂಗಾಡಿ, ಕಂಬುರಂ, ಪುತ್ತಿಯಪ್ಪ, ಎಲತ್ತೂರ್, ಕೋನಾಡ್ ಮತ್ತು ಭಟ್ ರೋಡ್ ಸೇರಿದಂತೆ ಹಲವು ಕಡಲತೀರ ಪ್ರದೇಶಗಳು ಸೇರಿವೆ. ಈ ವಿಶಾಲ ಕರಾವಳಿ ಪ್ರದೇಶವು ಕೋಝಿಕ್ಕೋಡ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
pwaudte8bp2yweppxdg9b3yfjbwrxcu
1379487
1379486
2026-08-08T17:35:03Z
Santhosh Notagar99
82732
1379487
wikitext
text/x-wiki
'''ಕೋಝಿಕ್ಕೋಡ್ ಕಡಲತೀರ'''ವು ಭಾರತದ ಮಲಬಾರ್ ಕರಾವಳಿಯಲ್ಲಿರುವ ಕೋಝಿಕ್ಕೋಡ್ ನಗರದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಕಡಲತೀರವಾಗಿದೆ. ನಗರದಿಂದ ಕಡಲತೀರವನ್ನು ತಲುಪಲು ನಾಲ್ಕು ರಸ್ತೆ ಮೇಲ್ಸೇತುವೆಗಳ ಮೂಲಕ ಸಂಪರ್ಕವಿದೆ. <ref>https://en.wikipedia.org/wiki/Kozhikode_Beach</ref> ಕಡಲತೀರದಲ್ಲಿ ಸುಸಜ್ಜಿತ ಕಲ್ಲಿನ ಹಾಸುಗಳು ಮತ್ತು ಬೆಳಕಿನ ವ್ಯವಸ್ಥೆ ಇದ್ದು, ಮಕ್ಕಳಿಗಾಗಿ ಲಯನ್ಸ್ ಪಾರ್ಕ್ ಹಾಗೂ ಅಕ್ವೇರಿಯಂ ಕೂಡ ಇದೆ. ಕೋಝಿಕ್ಕೋಡ್ ಕಡಲತೀರವು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿಯೂ ದೀರ್ಘಕಾಲದಿಂದ ಪ್ರಸಿದ್ಧವಾಗಿದೆ. 1934ರಲ್ಲಿ ಮಹಾತ್ಮ ಗಾಂಧೀಜಿ ಕೋಝಿಕ್ಕೋಡ್ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಕಡಲತೀರದ ರಸ್ತೆಗೆ ‘ಗಾಂಧಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು. 1950ರ ಏಪ್ರಿಲ್ನಲ್ಲಿ ಸರ್ಕಾರಿ ಪ್ರಧಾನ ಆಸ್ಪತ್ರೆಯನ್ನು ನಿರ್ಮಿಸಲು ಕೋಝಿಕ್ಕೋಡ್ ಕಡಲತೀರದ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. <ref>{{Cite news|title=Story of the streets|url=https://www.thehindu.com/features/metroplus/kozhikode-street-names/article6621905.ece|work=The Hindu|date=2014-11-21|access-date=2025-11-28|issn=0971-751X|language=en-IN}}</ref> <ref>{{Cite book|title=The Indian Express|url=https://books.google.com/books?id=j7w-AAAAIBAJ&dq=%22Kozhikode+Beach%22&pg=PA10&article_id=2307,2895671|publisher=The Indian Express|language=en}}</ref>
== ಅಪರೂಪದ ನೈಸರ್ಗಿಕ ವಿದ್ಯಮಾನ ==
2025ರ ಅಕ್ಟೋಬರ್ನಲ್ಲಿ ಕೋಝಿಕ್ಕೋಡ್ ಕಡಲತೀರದಲ್ಲಿ ಅಪರೂಪದ ನೈಸರ್ಗಿಕ ವಿದ್ಯಮಾನವೊಂದು ದಾಖಲಾಗಿತ್ತು. ದಕ್ಷಿಣ ಕಡಲತೀರದ ಸುಮಾರು 1.5 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಸಮುದ್ರದ ನೀರು ಸುಮಾರು 200 ಮೀಟರ್ಗಳಷ್ಟು ಹಿಂದಕ್ಕೆ ಸರಿದಿತ್ತು. ಕಡಲತೀರದ ವಿಶಾಲ ಭಾಗವು ನೀರಿನಿಂದ ಮುಕ್ತವಾಗಿ ಕಾಣಿಸಿಕೊಂಡ ಈ ವಿದ್ಯಮಾನವು ಸ್ಥಳೀಯರು ಮತ್ತು ಪ್ರವಾಸಿಗರ ಗಮನ ಸೆಳೆಯಿತು. ಇಂತಹ ಸಮುದ್ರದ ನೀರಿನ ಹಿಂಜರಿತವು ಕರಾವಳಿ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ನೈಸರ್ಗಿಕ ವಿದ್ಯಮಾನವಾಗಿದೆ. <ref>{{Cite web|title=Water recedes at Kozhikode beach in rare phenomenon|url=https://www.onmanorama.com/news/kerala/2025/10/16/kozhikode-beach-water-receding.html|website=Water recedes at Kozhikode beach in rare phenomenon|access-date=2025-11-28|language=en}}</ref><ref>{{Cite web|title=Water mysteriously pulls back at Kozhikode South Beach, revealing vast seabed stretch|url=https://english.mathrubhumi.com/news/kerala/water-mysteriously-pulls-back-at-kozhikode-south-beach-revealing-vast-seabed-stretch-lyyubh6a|website=@mathrubhumi|date=2025-10-16|access-date=2025-11-28|language=en}}</ref>
== ಕಡಲತೀರದ ರಸ್ತೆ ಮತ್ತು ವ್ಯಾಪ್ತಿ ==
ಕೋಝಿಕ್ಕೋಡ್ ಕಡಲತೀರದ ರಸ್ತೆ ದಕ್ಷಿಣದಲ್ಲಿರುವ ಬೇಪೂರ್ನಿಂದ ಉತ್ತರದಲ್ಲಿರುವ ಕಪ್ಪಾಡ್ವರೆಗೆ ದೀರ್ಘವಾದ ಕರಾವಳಿ ಮಾರ್ಗವಾಗಿ ಸಾಗುತ್ತದೆ. ಈ ಕರಾವಳಿ ವ್ಯಾಪ್ತಿಯಲ್ಲಿ ಬೇಪೂರ್, ಪಯ್ಯನಕ್ಕಲ್, ಮರಾಡ್, ಕಲ್ಲಾಯಿ, ಕುಟ್ಟಿಚಿರ, ತೆಕ್ಕೆಪುರಂ, ವೆಳ್ಳಯಿಲ್, ಸೌತ್ ಬೀಚ್, ವಲಿಯಂಗಾಡಿ, ಕಂಬುರಂ, ಪುತ್ತಿಯಪ್ಪ, ಎಲತ್ತೂರ್, ಕೋನಾಡ್ ಮತ್ತು ಭಟ್ ರೋಡ್ ಸೇರಿದಂತೆ ಹಲವು ಕಡಲತೀರ ಪ್ರದೇಶಗಳು ಸೇರಿವೆ. ಈ ವಿಶಾಲ ಕರಾವಳಿ ಪ್ರದೇಶವು ಕೋಝಿಕ್ಕೋಡ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
==ಉಲ್ಲೇಖಗಳು==
g724j086dmtuhtux8jel6ap3phk8d53
1379489
1379487
2026-08-08T17:36:43Z
Santhosh Notagar99
82732
1379489
wikitext
text/x-wiki
{{Short description|Beach in Kerala, India}}
{{Use dmy dates|date=March 2016}}
{{Use Indian English|date=March 2016}}
{{Infobox settlement
| name = Kozhikode Beach
| image_skyline = File:Kozhikode Beach Coastline.jpg
| image_caption = Kozhikode Beach
| coordinates = {{coord|11.25607|75.76940|display=inline,title}}
| subdivision_type = Country
| subdivision_name = [[India]]
| subdivision_type1 = State
| subdivision_name1 = [[Kerala]]
}}
}}
'''ಕೋಝಿಕ್ಕೋಡ್ ಕಡಲತೀರ'''ವು ಭಾರತದ ಮಲಬಾರ್ ಕರಾವಳಿಯಲ್ಲಿರುವ ಕೋಝಿಕ್ಕೋಡ್ ನಗರದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಕಡಲತೀರವಾಗಿದೆ. ನಗರದಿಂದ ಕಡಲತೀರವನ್ನು ತಲುಪಲು ನಾಲ್ಕು ರಸ್ತೆ ಮೇಲ್ಸೇತುವೆಗಳ ಮೂಲಕ ಸಂಪರ್ಕವಿದೆ. <ref>https://en.wikipedia.org/wiki/Kozhikode_Beach</ref> ಕಡಲತೀರದಲ್ಲಿ ಸುಸಜ್ಜಿತ ಕಲ್ಲಿನ ಹಾಸುಗಳು ಮತ್ತು ಬೆಳಕಿನ ವ್ಯವಸ್ಥೆ ಇದ್ದು, ಮಕ್ಕಳಿಗಾಗಿ ಲಯನ್ಸ್ ಪಾರ್ಕ್ ಹಾಗೂ ಅಕ್ವೇರಿಯಂ ಕೂಡ ಇದೆ. ಕೋಝಿಕ್ಕೋಡ್ ಕಡಲತೀರವು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿಯೂ ದೀರ್ಘಕಾಲದಿಂದ ಪ್ರಸಿದ್ಧವಾಗಿದೆ. 1934ರಲ್ಲಿ ಮಹಾತ್ಮ ಗಾಂಧೀಜಿ ಕೋಝಿಕ್ಕೋಡ್ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಕಡಲತೀರದ ರಸ್ತೆಗೆ ‘ಗಾಂಧಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು. 1950ರ ಏಪ್ರಿಲ್ನಲ್ಲಿ ಸರ್ಕಾರಿ ಪ್ರಧಾನ ಆಸ್ಪತ್ರೆಯನ್ನು ನಿರ್ಮಿಸಲು ಕೋಝಿಕ್ಕೋಡ್ ಕಡಲತೀರದ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. <ref>{{Cite news|title=Story of the streets|url=https://www.thehindu.com/features/metroplus/kozhikode-street-names/article6621905.ece|work=The Hindu|date=2014-11-21|access-date=2025-11-28|issn=0971-751X|language=en-IN}}</ref> <ref>{{Cite book|title=The Indian Express|url=https://books.google.com/books?id=j7w-AAAAIBAJ&dq=%22Kozhikode+Beach%22&pg=PA10&article_id=2307,2895671|publisher=The Indian Express|language=en}}</ref>
== ಅಪರೂಪದ ನೈಸರ್ಗಿಕ ವಿದ್ಯಮಾನ ==
2025ರ ಅಕ್ಟೋಬರ್ನಲ್ಲಿ ಕೋಝಿಕ್ಕೋಡ್ ಕಡಲತೀರದಲ್ಲಿ ಅಪರೂಪದ ನೈಸರ್ಗಿಕ ವಿದ್ಯಮಾನವೊಂದು ದಾಖಲಾಗಿತ್ತು. ದಕ್ಷಿಣ ಕಡಲತೀರದ ಸುಮಾರು 1.5 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಸಮುದ್ರದ ನೀರು ಸುಮಾರು 200 ಮೀಟರ್ಗಳಷ್ಟು ಹಿಂದಕ್ಕೆ ಸರಿದಿತ್ತು. ಕಡಲತೀರದ ವಿಶಾಲ ಭಾಗವು ನೀರಿನಿಂದ ಮುಕ್ತವಾಗಿ ಕಾಣಿಸಿಕೊಂಡ ಈ ವಿದ್ಯಮಾನವು ಸ್ಥಳೀಯರು ಮತ್ತು ಪ್ರವಾಸಿಗರ ಗಮನ ಸೆಳೆಯಿತು. ಇಂತಹ ಸಮುದ್ರದ ನೀರಿನ ಹಿಂಜರಿತವು ಕರಾವಳಿ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ನೈಸರ್ಗಿಕ ವಿದ್ಯಮಾನವಾಗಿದೆ. <ref>{{Cite web|title=Water recedes at Kozhikode beach in rare phenomenon|url=https://www.onmanorama.com/news/kerala/2025/10/16/kozhikode-beach-water-receding.html|website=Water recedes at Kozhikode beach in rare phenomenon|access-date=2025-11-28|language=en}}</ref><ref>{{Cite web|title=Water mysteriously pulls back at Kozhikode South Beach, revealing vast seabed stretch|url=https://english.mathrubhumi.com/news/kerala/water-mysteriously-pulls-back-at-kozhikode-south-beach-revealing-vast-seabed-stretch-lyyubh6a|website=@mathrubhumi|date=2025-10-16|access-date=2025-11-28|language=en}}</ref>
== ಕಡಲತೀರದ ರಸ್ತೆ ಮತ್ತು ವ್ಯಾಪ್ತಿ ==
ಕೋಝಿಕ್ಕೋಡ್ ಕಡಲತೀರದ ರಸ್ತೆ ದಕ್ಷಿಣದಲ್ಲಿರುವ ಬೇಪೂರ್ನಿಂದ ಉತ್ತರದಲ್ಲಿರುವ ಕಪ್ಪಾಡ್ವರೆಗೆ ದೀರ್ಘವಾದ ಕರಾವಳಿ ಮಾರ್ಗವಾಗಿ ಸಾಗುತ್ತದೆ. ಈ ಕರಾವಳಿ ವ್ಯಾಪ್ತಿಯಲ್ಲಿ ಬೇಪೂರ್, ಪಯ್ಯನಕ್ಕಲ್, ಮರಾಡ್, ಕಲ್ಲಾಯಿ, ಕುಟ್ಟಿಚಿರ, ತೆಕ್ಕೆಪುರಂ, ವೆಳ್ಳಯಿಲ್, ಸೌತ್ ಬೀಚ್, ವಲಿಯಂಗಾಡಿ, ಕಂಬುರಂ, ಪುತ್ತಿಯಪ್ಪ, ಎಲತ್ತೂರ್, ಕೋನಾಡ್ ಮತ್ತು ಭಟ್ ರೋಡ್ ಸೇರಿದಂತೆ ಹಲವು ಕಡಲತೀರ ಪ್ರದೇಶಗಳು ಸೇರಿವೆ. ಈ ವಿಶಾಲ ಕರಾವಳಿ ಪ್ರದೇಶವು ಕೋಝಿಕ್ಕೋಡ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
==ಉಲ್ಲೇಖಗಳು==
bc1mfxdp61hgsgw2z0k5dplihv4pat6
1379490
1379489
2026-08-08T17:37:17Z
Santhosh Notagar99
82732
1379490
wikitext
text/x-wiki
{{Short description|Beach in Kerala, India}}
{{Use dmy dates|date=March 2016}}
{{Use Indian English|date=March 2016}}
{{Infobox settlement
| name = Kozhikode Beach
| image_skyline = File:Kozhikode Beach Coastline.jpg
| image_caption = Kozhikode Beach
| coordinates = {{coord|11.25607|75.76940|display=inline,title}}
| subdivision_type = Country
| subdivision_name = [[India]]
| subdivision_type1 = State
| subdivision_name1 = [[Kerala]]
}}
'''ಕೋಝಿಕ್ಕೋಡ್ ಕಡಲತೀರ'''ವು ಭಾರತದ ಮಲಬಾರ್ ಕರಾವಳಿಯಲ್ಲಿರುವ ಕೋಝಿಕ್ಕೋಡ್ ನಗರದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಕಡಲತೀರವಾಗಿದೆ. ನಗರದಿಂದ ಕಡಲತೀರವನ್ನು ತಲುಪಲು ನಾಲ್ಕು ರಸ್ತೆ ಮೇಲ್ಸೇತುವೆಗಳ ಮೂಲಕ ಸಂಪರ್ಕವಿದೆ. <ref>https://en.wikipedia.org/wiki/Kozhikode_Beach</ref> ಕಡಲತೀರದಲ್ಲಿ ಸುಸಜ್ಜಿತ ಕಲ್ಲಿನ ಹಾಸುಗಳು ಮತ್ತು ಬೆಳಕಿನ ವ್ಯವಸ್ಥೆ ಇದ್ದು, ಮಕ್ಕಳಿಗಾಗಿ ಲಯನ್ಸ್ ಪಾರ್ಕ್ ಹಾಗೂ ಅಕ್ವೇರಿಯಂ ಕೂಡ ಇದೆ. ಕೋಝಿಕ್ಕೋಡ್ ಕಡಲತೀರವು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿಯೂ ದೀರ್ಘಕಾಲದಿಂದ ಪ್ರಸಿದ್ಧವಾಗಿದೆ. 1934ರಲ್ಲಿ ಮಹಾತ್ಮ ಗಾಂಧೀಜಿ ಕೋಝಿಕ್ಕೋಡ್ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಕಡಲತೀರದ ರಸ್ತೆಗೆ ‘ಗಾಂಧಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು. 1950ರ ಏಪ್ರಿಲ್ನಲ್ಲಿ ಸರ್ಕಾರಿ ಪ್ರಧಾನ ಆಸ್ಪತ್ರೆಯನ್ನು ನಿರ್ಮಿಸಲು ಕೋಝಿಕ್ಕೋಡ್ ಕಡಲತೀರದ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. <ref>{{Cite news|title=Story of the streets|url=https://www.thehindu.com/features/metroplus/kozhikode-street-names/article6621905.ece|work=The Hindu|date=2014-11-21|access-date=2025-11-28|issn=0971-751X|language=en-IN}}</ref> <ref>{{Cite book|title=The Indian Express|url=https://books.google.com/books?id=j7w-AAAAIBAJ&dq=%22Kozhikode+Beach%22&pg=PA10&article_id=2307,2895671|publisher=The Indian Express|language=en}}</ref>
== ಅಪರೂಪದ ನೈಸರ್ಗಿಕ ವಿದ್ಯಮಾನ ==
2025ರ ಅಕ್ಟೋಬರ್ನಲ್ಲಿ ಕೋಝಿಕ್ಕೋಡ್ ಕಡಲತೀರದಲ್ಲಿ ಅಪರೂಪದ ನೈಸರ್ಗಿಕ ವಿದ್ಯಮಾನವೊಂದು ದಾಖಲಾಗಿತ್ತು. ದಕ್ಷಿಣ ಕಡಲತೀರದ ಸುಮಾರು 1.5 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಸಮುದ್ರದ ನೀರು ಸುಮಾರು 200 ಮೀಟರ್ಗಳಷ್ಟು ಹಿಂದಕ್ಕೆ ಸರಿದಿತ್ತು. ಕಡಲತೀರದ ವಿಶಾಲ ಭಾಗವು ನೀರಿನಿಂದ ಮುಕ್ತವಾಗಿ ಕಾಣಿಸಿಕೊಂಡ ಈ ವಿದ್ಯಮಾನವು ಸ್ಥಳೀಯರು ಮತ್ತು ಪ್ರವಾಸಿಗರ ಗಮನ ಸೆಳೆಯಿತು. ಇಂತಹ ಸಮುದ್ರದ ನೀರಿನ ಹಿಂಜರಿತವು ಕರಾವಳಿ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ನೈಸರ್ಗಿಕ ವಿದ್ಯಮಾನವಾಗಿದೆ. <ref>{{Cite web|title=Water recedes at Kozhikode beach in rare phenomenon|url=https://www.onmanorama.com/news/kerala/2025/10/16/kozhikode-beach-water-receding.html|website=Water recedes at Kozhikode beach in rare phenomenon|access-date=2025-11-28|language=en}}</ref><ref>{{Cite web|title=Water mysteriously pulls back at Kozhikode South Beach, revealing vast seabed stretch|url=https://english.mathrubhumi.com/news/kerala/water-mysteriously-pulls-back-at-kozhikode-south-beach-revealing-vast-seabed-stretch-lyyubh6a|website=@mathrubhumi|date=2025-10-16|access-date=2025-11-28|language=en}}</ref>
== ಕಡಲತೀರದ ರಸ್ತೆ ಮತ್ತು ವ್ಯಾಪ್ತಿ ==
ಕೋಝಿಕ್ಕೋಡ್ ಕಡಲತೀರದ ರಸ್ತೆ ದಕ್ಷಿಣದಲ್ಲಿರುವ ಬೇಪೂರ್ನಿಂದ ಉತ್ತರದಲ್ಲಿರುವ ಕಪ್ಪಾಡ್ವರೆಗೆ ದೀರ್ಘವಾದ ಕರಾವಳಿ ಮಾರ್ಗವಾಗಿ ಸಾಗುತ್ತದೆ. ಈ ಕರಾವಳಿ ವ್ಯಾಪ್ತಿಯಲ್ಲಿ ಬೇಪೂರ್, ಪಯ್ಯನಕ್ಕಲ್, ಮರಾಡ್, ಕಲ್ಲಾಯಿ, ಕುಟ್ಟಿಚಿರ, ತೆಕ್ಕೆಪುರಂ, ವೆಳ್ಳಯಿಲ್, ಸೌತ್ ಬೀಚ್, ವಲಿಯಂಗಾಡಿ, ಕಂಬುರಂ, ಪುತ್ತಿಯಪ್ಪ, ಎಲತ್ತೂರ್, ಕೋನಾಡ್ ಮತ್ತು ಭಟ್ ರೋಡ್ ಸೇರಿದಂತೆ ಹಲವು ಕಡಲತೀರ ಪ್ರದೇಶಗಳು ಸೇರಿವೆ. ಈ ವಿಶಾಲ ಕರಾವಳಿ ಪ್ರದೇಶವು ಕೋಝಿಕ್ಕೋಡ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
==ಉಲ್ಲೇಖಗಳು==
2jznrbwltcfekkl214a0hrl24yqh0u5
1379491
1379490
2026-08-08T17:37:41Z
Santhosh Notagar99
82732
1379491
wikitext
text/x-wiki
{{Short description|Beach in Kerala, India}}
{{Use dmy dates|date=March 2016}}
{{Use Indian English|date=March 2016}}
{{Infobox settlement
| name = Kozhikode Beach
| image_skyline = File:Kozhikode Beach Coastline.jpg
| image_caption = Kozhikode Beach
| coordinates = {{coord|11.25607|75.76940|display=inline,title}}
| subdivision_type = Country
| subdivision_name = [[India]]
| subdivision_type1 = State
| subdivision_name1 = [[Kerala]]
}}
'''ಕೋಝಿಕ್ಕೋಡ್ ಕಡಲತೀರ'''ವು ಭಾರತದ ಮಲಬಾರ್ ಕರಾವಳಿಯಲ್ಲಿರುವ ಕೋಝಿಕ್ಕೋಡ್ ನಗರದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಕಡಲತೀರವಾಗಿದೆ. ನಗರದಿಂದ ಕಡಲತೀರವನ್ನು ತಲುಪಲು ನಾಲ್ಕು ರಸ್ತೆ ಮೇಲ್ಸೇತುವೆಗಳ ಮೂಲಕ ಸಂಪರ್ಕವಿದೆ. <ref>https://en.wikipedia.org/wiki/Kozhikode_Beach</ref> ಕಡಲತೀರದಲ್ಲಿ ಸುಸಜ್ಜಿತ ಕಲ್ಲಿನ ಹಾಸುಗಳು ಮತ್ತು ಬೆಳಕಿನ ವ್ಯವಸ್ಥೆ ಇದ್ದು, ಮಕ್ಕಳಿಗಾಗಿ ಲಯನ್ಸ್ ಪಾರ್ಕ್ ಹಾಗೂ ಅಕ್ವೇರಿಯಂ ಕೂಡ ಇದೆ. ಕೋಝಿಕ್ಕೋಡ್ ಕಡಲತೀರವು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿಯೂ ದೀರ್ಘಕಾಲದಿಂದ ಪ್ರಸಿದ್ಧವಾಗಿದೆ. 1934ರಲ್ಲಿ ಮಹಾತ್ಮ ಗಾಂಧೀಜಿ ಕೋಝಿಕ್ಕೋಡ್ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಕಡಲತೀರದ ರಸ್ತೆಗೆ ‘ಗಾಂಧಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು. 1950ರ ಏಪ್ರಿಲ್ನಲ್ಲಿ ಸರ್ಕಾರಿ ಪ್ರಧಾನ ಆಸ್ಪತ್ರೆಯನ್ನು ನಿರ್ಮಿಸಲು ಕೋಝಿಕ್ಕೋಡ್ ಕಡಲತೀರದ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. <ref>{{Cite news|title=Story of the streets|url=https://www.thehindu.com/features/metroplus/kozhikode-street-names/article6621905.ece|work=The Hindu|date=2014-11-21|access-date=2025-11-28|issn=0971-751X|language=en-IN}}</ref> <ref>{{Cite book|title=The Indian Express|url=https://books.google.com/books?id=j7w-AAAAIBAJ&dq=%22Kozhikode+Beach%22&pg=PA10&article_id=2307,2895671|publisher=The Indian Express|language=en}}</ref>
== ಅಪರೂಪದ ನೈಸರ್ಗಿಕ ವಿದ್ಯಮಾನ ==
2025ರ ಅಕ್ಟೋಬರ್ನಲ್ಲಿ ಕೋಝಿಕ್ಕೋಡ್ ಕಡಲತೀರದಲ್ಲಿ ಅಪರೂಪದ ನೈಸರ್ಗಿಕ ವಿದ್ಯಮಾನವೊಂದು ದಾಖಲಾಗಿತ್ತು. ದಕ್ಷಿಣ ಕಡಲತೀರದ ಸುಮಾರು 1.5 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಸಮುದ್ರದ ನೀರು ಸುಮಾರು 200 ಮೀಟರ್ಗಳಷ್ಟು ಹಿಂದಕ್ಕೆ ಸರಿದಿತ್ತು. ಕಡಲತೀರದ ವಿಶಾಲ ಭಾಗವು ನೀರಿನಿಂದ ಮುಕ್ತವಾಗಿ ಕಾಣಿಸಿಕೊಂಡ ಈ ವಿದ್ಯಮಾನವು ಸ್ಥಳೀಯರು ಮತ್ತು ಪ್ರವಾಸಿಗರ ಗಮನ ಸೆಳೆಯಿತು. ಇಂತಹ ಸಮುದ್ರದ ನೀರಿನ ಹಿಂಜರಿತವು ಕರಾವಳಿ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ನೈಸರ್ಗಿಕ ವಿದ್ಯಮಾನವಾಗಿದೆ. <ref>{{Cite web|title=Water recedes at Kozhikode beach in rare phenomenon|url=https://www.onmanorama.com/news/kerala/2025/10/16/kozhikode-beach-water-receding.html|website=Water recedes at Kozhikode beach in rare phenomenon|access-date=2025-11-28|language=en}}</ref><ref>{{Cite web|title=Water mysteriously pulls back at Kozhikode South Beach, revealing vast seabed stretch|url=https://english.mathrubhumi.com/news/kerala/water-mysteriously-pulls-back-at-kozhikode-south-beach-revealing-vast-seabed-stretch-lyyubh6a|website=@mathrubhumi|date=2025-10-16|access-date=2025-11-28|language=en}}</ref>
== ಕಡಲತೀರದ ರಸ್ತೆ ಮತ್ತು ವ್ಯಾಪ್ತಿ ==
ಕೋಝಿಕ್ಕೋಡ್ ಕಡಲತೀರದ ರಸ್ತೆ ದಕ್ಷಿಣದಲ್ಲಿರುವ ಬೇಪೂರ್ನಿಂದ ಉತ್ತರದಲ್ಲಿರುವ ಕಪ್ಪಾಡ್ವರೆಗೆ ದೀರ್ಘವಾದ ಕರಾವಳಿ ಮಾರ್ಗವಾಗಿ ಸಾಗುತ್ತದೆ. ಈ ಕರಾವಳಿ ವ್ಯಾಪ್ತಿಯಲ್ಲಿ ಬೇಪೂರ್, ಪಯ್ಯನಕ್ಕಲ್, ಮರಾಡ್, ಕಲ್ಲಾಯಿ, ಕುಟ್ಟಿಚಿರ, ತೆಕ್ಕೆಪುರಂ, ವೆಳ್ಳಯಿಲ್, ಸೌತ್ ಬೀಚ್, ವಲಿಯಂಗಾಡಿ, ಕಂಬುರಂ, ಪುತ್ತಿಯಪ್ಪ, ಎಲತ್ತೂರ್, ಕೋನಾಡ್ ಮತ್ತು ಭಟ್ ರೋಡ್ ಸೇರಿದಂತೆ ಹಲವು ಕಡಲತೀರ ಪ್ರದೇಶಗಳು ಸೇರಿವೆ. ಈ ವಿಶಾಲ ಕರಾವಳಿ ಪ್ರದೇಶವು ಕೋಝಿಕ್ಕೋಡ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
==ಉಲ್ಲೇಖಗಳು==
t7b3pdk9mkr0ztz8orvwb98akcg0rpu
1379501
1379491
2026-08-08T17:51:44Z
Santhosh Notagar99
82732
1379501
wikitext
text/x-wiki
{{Short description|Beach in Kerala, India}}
{{Use dmy dates|date=March 2016}}
{{Use Indian English|date=March 2016}}
{{Infobox settlement
| name = Kozhikode Beach
| image_skyline = File:Kozhikode Beach Coastline.jpg
| image_caption = Kozhikode Beach
| coordinates = {{coord|11.25607|75.76940|display=inline,title}}
| subdivision_type = Country
| subdivision_name = ಭಾರತ
| subdivision_type1 = State
| subdivision_name1 = ಕೇರಳ
}}
'''ಕೋಝಿಕ್ಕೋಡ್ ಕಡಲತೀರ'''ವು ಭಾರತದ ಮಲಬಾರ್ ಕರಾವಳಿಯಲ್ಲಿರುವ ಕೋಝಿಕ್ಕೋಡ್ ನಗರದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಕಡಲತೀರವಾಗಿದೆ. ನಗರದಿಂದ ಕಡಲತೀರವನ್ನು ತಲುಪಲು ನಾಲ್ಕು ರಸ್ತೆ ಮೇಲ್ಸೇತುವೆಗಳ ಮೂಲಕ ಸಂಪರ್ಕವಿದೆ. <ref>https://en.wikipedia.org/wiki/Kozhikode_Beach</ref> ಕಡಲತೀರದಲ್ಲಿ ಸುಸಜ್ಜಿತ ಕಲ್ಲಿನ ಹಾಸುಗಳು ಮತ್ತು ಬೆಳಕಿನ ವ್ಯವಸ್ಥೆ ಇದ್ದು, ಮಕ್ಕಳಿಗಾಗಿ ಲಯನ್ಸ್ ಪಾರ್ಕ್ ಹಾಗೂ ಅಕ್ವೇರಿಯಂ ಕೂಡ ಇದೆ. ಕೋಝಿಕ್ಕೋಡ್ ಕಡಲತೀರವು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿಯೂ ದೀರ್ಘಕಾಲದಿಂದ ಪ್ರಸಿದ್ಧವಾಗಿದೆ. 1934ರಲ್ಲಿ ಮಹಾತ್ಮ ಗಾಂಧೀಜಿ ಕೋಝಿಕ್ಕೋಡ್ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಕಡಲತೀರದ ರಸ್ತೆಗೆ ‘ಗಾಂಧಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು. 1950ರ ಏಪ್ರಿಲ್ನಲ್ಲಿ ಸರ್ಕಾರಿ ಪ್ರಧಾನ ಆಸ್ಪತ್ರೆಯನ್ನು ನಿರ್ಮಿಸಲು ಕೋಝಿಕ್ಕೋಡ್ ಕಡಲತೀರದ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. <ref>{{Cite news|title=Story of the streets|url=https://www.thehindu.com/features/metroplus/kozhikode-street-names/article6621905.ece|work=The Hindu|date=2014-11-21|access-date=2025-11-28|issn=0971-751X|language=en-IN}}</ref> <ref>{{Cite book|title=The Indian Express|url=https://books.google.com/books?id=j7w-AAAAIBAJ&dq=%22Kozhikode+Beach%22&pg=PA10&article_id=2307,2895671|publisher=The Indian Express|language=en}}</ref>
== ಅಪರೂಪದ ನೈಸರ್ಗಿಕ ವಿದ್ಯಮಾನ ==
2025ರ ಅಕ್ಟೋಬರ್ನಲ್ಲಿ ಕೋಝಿಕ್ಕೋಡ್ ಕಡಲತೀರದಲ್ಲಿ ಅಪರೂಪದ ನೈಸರ್ಗಿಕ ವಿದ್ಯಮಾನವೊಂದು ದಾಖಲಾಗಿತ್ತು. ದಕ್ಷಿಣ ಕಡಲತೀರದ ಸುಮಾರು 1.5 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಸಮುದ್ರದ ನೀರು ಸುಮಾರು 200 ಮೀಟರ್ಗಳಷ್ಟು ಹಿಂದಕ್ಕೆ ಸರಿದಿತ್ತು. ಕಡಲತೀರದ ವಿಶಾಲ ಭಾಗವು ನೀರಿನಿಂದ ಮುಕ್ತವಾಗಿ ಕಾಣಿಸಿಕೊಂಡ ಈ ವಿದ್ಯಮಾನವು ಸ್ಥಳೀಯರು ಮತ್ತು ಪ್ರವಾಸಿಗರ ಗಮನ ಸೆಳೆಯಿತು. ಇಂತಹ ಸಮುದ್ರದ ನೀರಿನ ಹಿಂಜರಿತವು ಕರಾವಳಿ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ನೈಸರ್ಗಿಕ ವಿದ್ಯಮಾನವಾಗಿದೆ. <ref>{{Cite web|title=Water recedes at Kozhikode beach in rare phenomenon|url=https://www.onmanorama.com/news/kerala/2025/10/16/kozhikode-beach-water-receding.html|website=Water recedes at Kozhikode beach in rare phenomenon|access-date=2025-11-28|language=en}}</ref><ref>{{Cite web|title=Water mysteriously pulls back at Kozhikode South Beach, revealing vast seabed stretch|url=https://english.mathrubhumi.com/news/kerala/water-mysteriously-pulls-back-at-kozhikode-south-beach-revealing-vast-seabed-stretch-lyyubh6a|website=@mathrubhumi|date=2025-10-16|access-date=2025-11-28|language=en}}</ref>
== ಕಡಲತೀರದ ರಸ್ತೆ ಮತ್ತು ವ್ಯಾಪ್ತಿ ==
ಕೋಝಿಕ್ಕೋಡ್ ಕಡಲತೀರದ ರಸ್ತೆ ದಕ್ಷಿಣದಲ್ಲಿರುವ ಬೇಪೂರ್ನಿಂದ ಉತ್ತರದಲ್ಲಿರುವ ಕಪ್ಪಾಡ್ವರೆಗೆ ದೀರ್ಘವಾದ ಕರಾವಳಿ ಮಾರ್ಗವಾಗಿ ಸಾಗುತ್ತದೆ. ಈ ಕರಾವಳಿ ವ್ಯಾಪ್ತಿಯಲ್ಲಿ ಬೇಪೂರ್, ಪಯ್ಯನಕ್ಕಲ್, ಮರಾಡ್, ಕಲ್ಲಾಯಿ, ಕುಟ್ಟಿಚಿರ, ತೆಕ್ಕೆಪುರಂ, ವೆಳ್ಳಯಿಲ್, ಸೌತ್ ಬೀಚ್, ವಲಿಯಂಗಾಡಿ, ಕಂಬುರಂ, ಪುತ್ತಿಯಪ್ಪ, ಎಲತ್ತೂರ್, ಕೋನಾಡ್ ಮತ್ತು ಭಟ್ ರೋಡ್ ಸೇರಿದಂತೆ ಹಲವು ಕಡಲತೀರ ಪ್ರದೇಶಗಳು ಸೇರಿವೆ. ಈ ವಿಶಾಲ ಕರಾವಳಿ ಪ್ರದೇಶವು ಕೋಝಿಕ್ಕೋಡ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
==ಉಲ್ಲೇಖಗಳು==
5axprnfwavalw3ie89ggmxktd66neul
1379506
1379501
2026-08-08T18:04:08Z
Pragathi. BH
88266
1379506
wikitext
text/x-wiki
{{Short description|Beach in Kerala, India}}
{{Use dmy dates|date=March 2016}}
{{Use Indian English|date=March 2016}}
{{Infobox settlement
| name = Kozhikode Beach
| image_skyline = File:Kozhikode Beach Coastline.jpg
| image_caption = Kozhikode Beach
| coordinates = {{coord|11.25607|75.76940|display=inline,title}}
| subdivision_type = Country
| subdivision_name = ಭಾರತ
| subdivision_type1 = State
| subdivision_name1 = ಕೇರಳ
}}
'''ಕೋಝಿಕ್ಕೋಡ್ ಕಡಲತೀರ'''ವು [[ಭಾರತದ ಇತಿಹಾಸ|ಭಾರತದ]] [[ಮಲಬಾರ್ ಕರಾವಳಿ|ಮಲಬಾರ್]] ಕರಾವಳಿಯಲ್ಲಿರುವ ಕೋಝಿಕ್ಕೋಡ್ ನಗರದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಕಡಲತೀರವಾಗಿದೆ. ನಗರದಿಂದ ಕಡಲತೀರವನ್ನು ತಲುಪಲು ನಾಲ್ಕು ರಸ್ತೆ ಮೇಲ್ಸೇತುವೆಗಳ ಮೂಲಕ ಸಂಪರ್ಕವಿದೆ. <ref>https://en.wikipedia.org/wiki/Kozhikode_Beach</ref> ಕಡಲತೀರದಲ್ಲಿ ಸುಸಜ್ಜಿತ ಕಲ್ಲಿನ ಹಾಸುಗಳು ಮತ್ತು ಬೆಳಕಿನ ವ್ಯವಸ್ಥೆ ಇದ್ದು, ಮಕ್ಕಳಿಗಾಗಿ ಲಯನ್ಸ್ ಪಾರ್ಕ್ ಹಾಗೂ ಅಕ್ವೇರಿಯಂ ಕೂಡ ಇದೆ. ಕೋಝಿಕ್ಕೋಡ್ ಕಡಲತೀರವು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿಯೂ ದೀರ್ಘಕಾಲದಿಂದ ಪ್ರಸಿದ್ಧವಾಗಿದೆ. 1934ರಲ್ಲಿ ಮಹಾತ್ಮ ಗಾಂಧೀಜಿ ಕೋಝಿಕ್ಕೋಡ್ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಕಡಲತೀರದ ರಸ್ತೆಗೆ ‘ಗಾಂಧಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು. 1950ರ ಏಪ್ರಿಲ್ನಲ್ಲಿ ಸರ್ಕಾರಿ ಪ್ರಧಾನ ಆಸ್ಪತ್ರೆಯನ್ನು ನಿರ್ಮಿಸಲು [[ಕೋಝಿಕ್ಕೋಡ್]] ಕಡಲತೀರದ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. <ref>{{Cite news|title=Story of the streets|url=https://www.thehindu.com/features/metroplus/kozhikode-street-names/article6621905.ece|work=The Hindu|date=2014-11-21|access-date=2025-11-28|issn=0971-751X|language=en-IN}}</ref> <ref>{{Cite book|title=The Indian Express|url=https://books.google.com/books?id=j7w-AAAAIBAJ&dq=%22Kozhikode+Beach%22&pg=PA10&article_id=2307,2895671|publisher=The Indian Express|language=en}}</ref>
== ಅಪರೂಪದ ನೈಸರ್ಗಿಕ ವಿದ್ಯಮಾನ ==
2025ರ ಅಕ್ಟೋಬರ್ನಲ್ಲಿ ಕೋಝಿಕ್ಕೋಡ್ ಕಡಲತೀರದಲ್ಲಿ ಅಪರೂಪದ ನೈಸರ್ಗಿಕ ವಿದ್ಯಮಾನವೊಂದು ದಾಖಲಾಗಿತ್ತು. ದಕ್ಷಿಣ ಕಡಲತೀರದ ಸುಮಾರು 1.5 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಸಮುದ್ರದ ನೀರು ಸುಮಾರು 200 ಮೀಟರ್ಗಳಷ್ಟು ಹಿಂದಕ್ಕೆ ಸರಿದಿತ್ತು. ಕಡಲತೀರದ ವಿಶಾಲ ಭಾಗವು ನೀರಿನಿಂದ ಮುಕ್ತವಾಗಿ ಕಾಣಿಸಿಕೊಂಡ ಈ ವಿದ್ಯಮಾನವು ಸ್ಥಳೀಯರು ಮತ್ತು ಪ್ರವಾಸಿಗರ ಗಮನ ಸೆಳೆಯಿತು. ಇಂತಹ ಸಮುದ್ರದ ನೀರಿನ ಹಿಂಜರಿತವು ಕರಾವಳಿ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ನೈಸರ್ಗಿಕ ವಿದ್ಯಮಾನವಾಗಿದೆ. <ref>{{Cite web|title=Water recedes at Kozhikode beach in rare phenomenon|url=https://www.onmanorama.com/news/kerala/2025/10/16/kozhikode-beach-water-receding.html|website=Water recedes at Kozhikode beach in rare phenomenon|access-date=2025-11-28|language=en}}</ref><ref>{{Cite web|title=Water mysteriously pulls back at Kozhikode South Beach, revealing vast seabed stretch|url=https://english.mathrubhumi.com/news/kerala/water-mysteriously-pulls-back-at-kozhikode-south-beach-revealing-vast-seabed-stretch-lyyubh6a|website=@mathrubhumi|date=2025-10-16|access-date=2025-11-28|language=en}}</ref>
== ಕಡಲತೀರದ ರಸ್ತೆ ಮತ್ತು ವ್ಯಾಪ್ತಿ ==
ಕೋಝಿಕ್ಕೋಡ್ ಕಡಲತೀರದ ರಸ್ತೆ ದಕ್ಷಿಣದಲ್ಲಿರುವ ಬೇಪೂರ್ನಿಂದ ಉತ್ತರದಲ್ಲಿರುವ ಕಪ್ಪಾಡ್ವರೆಗೆ ದೀರ್ಘವಾದ ಕರಾವಳಿ ಮಾರ್ಗವಾಗಿ ಸಾಗುತ್ತದೆ. ಈ ಕರಾವಳಿ ವ್ಯಾಪ್ತಿಯಲ್ಲಿ ಬೇಪೂರ್, ಪಯ್ಯನಕ್ಕಲ್, ಮರಾಡ್, ಕಲ್ಲಾಯಿ, ಕುಟ್ಟಿಚಿರ, ತೆಕ್ಕೆಪುರಂ, ವೆಳ್ಳಯಿಲ್, ಸೌತ್ ಬೀಚ್, ವಲಿಯಂಗಾಡಿ, ಕಂಬುರಂ, ಪುತ್ತಿಯಪ್ಪ, ಎಲತ್ತೂರ್, ಕೋನಾಡ್ ಮತ್ತು ಭಟ್ ರೋಡ್ ಸೇರಿದಂತೆ ಹಲವು ಕಡಲತೀರ ಪ್ರದೇಶಗಳು ಸೇರಿವೆ. ಈ ವಿಶಾಲ ಕರಾವಳಿ ಪ್ರದೇಶವು ಕೋಝಿಕ್ಕೋಡ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
==ಉಲ್ಲೇಖಗಳು==
cif9yonxr771v87h157mauq0020l4nb
1379508
1379506
2026-08-08T18:04:59Z
Pragathi. BH
88266
1379508
wikitext
text/x-wiki
{{Short description|Beach in Kerala, India}}
{{Use dmy dates|date=March 2016}}
{{Use Indian English|date=March 2016}}
{{Infobox settlement
| name = Kozhikode Beach
| image_skyline = File:Kozhikode Beach Coastline.jpg
| image_caption = Kozhikode Beach
| coordinates = {{coord|11.25607|75.76940|display=inline,title}}
| subdivision_type = Country
| subdivision_name = ಭಾರತ
| subdivision_type1 = State
| subdivision_name1 = ಕೇರಳ
}}
'''ಕೋಝಿಕ್ಕೋಡ್ ಕಡಲತೀರ'''ವು [[ಭಾರತದ ಇತಿಹಾಸ|ಭಾರತದ]] [[ಮಲಬಾರ್ ಕರಾವಳಿ|ಮಲಬಾರ್]] ಕರಾವಳಿಯಲ್ಲಿರುವ ಕೋಝಿಕ್ಕೋಡ್ ನಗರದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಕಡಲತೀರವಾಗಿದೆ. ನಗರದಿಂದ ಕಡಲತೀರವನ್ನು ತಲುಪಲು ನಾಲ್ಕು ರಸ್ತೆ ಮೇಲ್ಸೇತುವೆಗಳ ಮೂಲಕ ಸಂಪರ್ಕವಿದೆ. <ref>https://en.wikipedia.org/wiki/Kozhikode_Beach</ref> ಕಡಲತೀರದಲ್ಲಿ ಸುಸಜ್ಜಿತ ಕಲ್ಲಿನ ಹಾಸುಗಳು ಮತ್ತು ಬೆಳಕಿನ ವ್ಯವಸ್ಥೆ ಇದ್ದು, ಮಕ್ಕಳಿಗಾಗಿ ಲಯನ್ಸ್ ಪಾರ್ಕ್ ಹಾಗೂ ಅಕ್ವೇರಿಯಂ ಕೂಡ ಇದೆ. ಕೋಝಿಕ್ಕೋಡ್ ಕಡಲತೀರವು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿಯೂ ದೀರ್ಘಕಾಲದಿಂದ ಪ್ರಸಿದ್ಧವಾಗಿದೆ. 1934ರಲ್ಲಿ [[ಮಹಾತ್ಮ ಗಾಂಧಿ|ಮಹಾತ್ಮ ಗಾಂಧೀಜಿ]] ಕೋಝಿಕ್ಕೋಡ್ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಕಡಲತೀರದ ರಸ್ತೆಗೆ ‘ಗಾಂಧಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು. 1950ರ ಏಪ್ರಿಲ್ನಲ್ಲಿ ಸರ್ಕಾರಿ ಪ್ರಧಾನ ಆಸ್ಪತ್ರೆಯನ್ನು ನಿರ್ಮಿಸಲು [[ಕೋಝಿಕ್ಕೋಡ್]] ಕಡಲತೀರದ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. <ref>{{Cite news|title=Story of the streets|url=https://www.thehindu.com/features/metroplus/kozhikode-street-names/article6621905.ece|work=The Hindu|date=2014-11-21|access-date=2025-11-28|issn=0971-751X|language=en-IN}}</ref> <ref>{{Cite book|title=The Indian Express|url=https://books.google.com/books?id=j7w-AAAAIBAJ&dq=%22Kozhikode+Beach%22&pg=PA10&article_id=2307,2895671|publisher=The Indian Express|language=en}}</ref>
== ಅಪರೂಪದ ನೈಸರ್ಗಿಕ ವಿದ್ಯಮಾನ ==
2025ರ ಅಕ್ಟೋಬರ್ನಲ್ಲಿ ಕೋಝಿಕ್ಕೋಡ್ [[ಕಡಲತೀರ|ಕಡಲತೀರದಲ್ಲಿ]] ಅಪರೂಪದ ನೈಸರ್ಗಿಕ ವಿದ್ಯಮಾನವೊಂದು ದಾಖಲಾಗಿತ್ತು. ದಕ್ಷಿಣ ಕಡಲತೀರದ ಸುಮಾರು 1.5 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಸಮುದ್ರದ ನೀರು ಸುಮಾರು 200 ಮೀಟರ್ಗಳಷ್ಟು ಹಿಂದಕ್ಕೆ ಸರಿದಿತ್ತು. ಕಡಲತೀರದ ವಿಶಾಲ ಭಾಗವು ನೀರಿನಿಂದ ಮುಕ್ತವಾಗಿ ಕಾಣಿಸಿಕೊಂಡ ಈ ವಿದ್ಯಮಾನವು ಸ್ಥಳೀಯರು ಮತ್ತು ಪ್ರವಾಸಿಗರ ಗಮನ ಸೆಳೆಯಿತು. ಇಂತಹ ಸಮುದ್ರದ ನೀರಿನ ಹಿಂಜರಿತವು ಕರಾವಳಿ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ನೈಸರ್ಗಿಕ ವಿದ್ಯಮಾನವಾಗಿದೆ. <ref>{{Cite web|title=Water recedes at Kozhikode beach in rare phenomenon|url=https://www.onmanorama.com/news/kerala/2025/10/16/kozhikode-beach-water-receding.html|website=Water recedes at Kozhikode beach in rare phenomenon|access-date=2025-11-28|language=en}}</ref><ref>{{Cite web|title=Water mysteriously pulls back at Kozhikode South Beach, revealing vast seabed stretch|url=https://english.mathrubhumi.com/news/kerala/water-mysteriously-pulls-back-at-kozhikode-south-beach-revealing-vast-seabed-stretch-lyyubh6a|website=@mathrubhumi|date=2025-10-16|access-date=2025-11-28|language=en}}</ref>
== ಕಡಲತೀರದ ರಸ್ತೆ ಮತ್ತು ವ್ಯಾಪ್ತಿ ==
ಕೋಝಿಕ್ಕೋಡ್ ಕಡಲತೀರದ ರಸ್ತೆ ದಕ್ಷಿಣದಲ್ಲಿರುವ ಬೇಪೂರ್ನಿಂದ ಉತ್ತರದಲ್ಲಿರುವ ಕಪ್ಪಾಡ್ವರೆಗೆ ದೀರ್ಘವಾದ ಕರಾವಳಿ ಮಾರ್ಗವಾಗಿ ಸಾಗುತ್ತದೆ. ಈ ಕರಾವಳಿ ವ್ಯಾಪ್ತಿಯಲ್ಲಿ ಬೇಪೂರ್, ಪಯ್ಯನಕ್ಕಲ್, ಮರಾಡ್, ಕಲ್ಲಾಯಿ, ಕುಟ್ಟಿಚಿರ, ತೆಕ್ಕೆಪುರಂ, ವೆಳ್ಳಯಿಲ್, ಸೌತ್ ಬೀಚ್, ವಲಿಯಂಗಾಡಿ, ಕಂಬುರಂ, ಪುತ್ತಿಯಪ್ಪ, ಎಲತ್ತೂರ್, ಕೋನಾಡ್ ಮತ್ತು ಭಟ್ ರೋಡ್ ಸೇರಿದಂತೆ ಹಲವು ಕಡಲತೀರ ಪ್ರದೇಶಗಳು ಸೇರಿವೆ. ಈ ವಿಶಾಲ ಕರಾವಳಿ ಪ್ರದೇಶವು ಕೋಝಿಕ್ಕೋಡ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
==ಉಲ್ಲೇಖಗಳು==
8ag2bv878mrgk66hvmnssuhnjym28ab
1379509
1379508
2026-08-08T18:05:53Z
Pragathi. BH
88266
1379509
wikitext
text/x-wiki
{{Short description|Beach in Kerala, India}}
{{Use dmy dates|date=March 2016}}
{{Use Indian English|date=March 2016}}
{{Infobox settlement
| name = Kozhikode Beach
| image_skyline = File:Kozhikode Beach Coastline.jpg
| image_caption = Kozhikode Beach
| coordinates = {{coord|11.25607|75.76940|display=inline,title}}
| subdivision_type = Country
| subdivision_name = ಭಾರತ
| subdivision_type1 = State
| subdivision_name1 = ಕೇರಳ
}}
'''ಕೋಝಿಕ್ಕೋಡ್ ಕಡಲತೀರ'''ವು [[ಭಾರತದ ಇತಿಹಾಸ|ಭಾರತದ]] [[ಮಲಬಾರ್ ಕರಾವಳಿ|ಮಲಬಾರ್]] ಕರಾವಳಿಯಲ್ಲಿರುವ ಕೋಝಿಕ್ಕೋಡ್ ನಗರದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಕಡಲತೀರವಾಗಿದೆ. ನಗರದಿಂದ ಕಡಲತೀರವನ್ನು ತಲುಪಲು ನಾಲ್ಕು ರಸ್ತೆ ಮೇಲ್ಸೇತುವೆಗಳ ಮೂಲಕ ಸಂಪರ್ಕವಿದೆ. <ref>https://en.wikipedia.org/wiki/Kozhikode_Beach</ref> ಕಡಲತೀರದಲ್ಲಿ ಸುಸಜ್ಜಿತ ಕಲ್ಲಿನ ಹಾಸುಗಳು ಮತ್ತು ಬೆಳಕಿನ ವ್ಯವಸ್ಥೆ ಇದ್ದು, ಮಕ್ಕಳಿಗಾಗಿ ಲಯನ್ಸ್ ಪಾರ್ಕ್ ಹಾಗೂ ಅಕ್ವೇರಿಯಂ ಕೂಡ ಇದೆ. ಕೋಝಿಕ್ಕೋಡ್ ಕಡಲತೀರವು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿಯೂ ದೀರ್ಘಕಾಲದಿಂದ ಪ್ರಸಿದ್ಧವಾಗಿದೆ. 1934ರಲ್ಲಿ [[ಮಹಾತ್ಮ ಗಾಂಧಿ|ಮಹಾತ್ಮ ಗಾಂಧೀಜಿ]] ಕೋಝಿಕ್ಕೋಡ್ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಕಡಲತೀರದ ರಸ್ತೆಗೆ ‘ಗಾಂಧಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು. 1950ರ ಏಪ್ರಿಲ್ನಲ್ಲಿ ಸರ್ಕಾರಿ ಪ್ರಧಾನ ಆಸ್ಪತ್ರೆಯನ್ನು ನಿರ್ಮಿಸಲು [[ಕೋಝಿಕ್ಕೋಡ್]] ಕಡಲತೀರದ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. <ref>{{Cite news|title=Story of the streets|url=https://www.thehindu.com/features/metroplus/kozhikode-street-names/article6621905.ece|work=The Hindu|date=2014-11-21|access-date=2025-11-28|issn=0971-751X|language=en-IN}}</ref> <ref>{{Cite book|title=The Indian Express|url=https://books.google.com/books?id=j7w-AAAAIBAJ&dq=%22Kozhikode+Beach%22&pg=PA10&article_id=2307,2895671|publisher=The Indian Express|language=en}}</ref>
== ಅಪರೂಪದ ನೈಸರ್ಗಿಕ ವಿದ್ಯಮಾನ ==
2025ರ [[[[ಅಕ್ಟೋಬರ್ ೨೬|ಅಕ್ಟೋಬರ್ನಲ್ಲ]]|ಅಕ್ಟೋಬರ್ನಲ್ಲಿ]] ಕೋಝಿಕ್ಕೋಡ್ [[ಕಡಲತೀರ|ಕಡಲತೀರದಲ್ಲಿ]] ಅಪರೂಪದ ನೈಸರ್ಗಿಕ ವಿದ್ಯಮಾನವೊಂದು ದಾಖಲಾಗಿತ್ತು. ದಕ್ಷಿಣ ಕಡಲತೀರದ ಸುಮಾರು 1.5 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಸಮುದ್ರದ ನೀರು ಸುಮಾರು 200 ಮೀಟರ್ಗಳಷ್ಟು ಹಿಂದಕ್ಕೆ ಸರಿದಿತ್ತು. ಕಡಲತೀರದ ವಿಶಾಲ ಭಾಗವು ನೀರಿನಿಂದ ಮುಕ್ತವಾಗಿ ಕಾಣಿಸಿಕೊಂಡ ಈ ವಿದ್ಯಮಾನವು ಸ್ಥಳೀಯರು ಮತ್ತು ಪ್ರವಾಸಿಗರ ಗಮನ ಸೆಳೆಯಿತು. ಇಂತಹ ಸಮುದ್ರದ ನೀರಿನ ಹಿಂಜರಿತವು ಕರಾವಳಿ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡುಬರುವ ನೈಸರ್ಗಿಕ ವಿದ್ಯಮಾನವಾಗಿದೆ. <ref>{{Cite web|title=Water recedes at Kozhikode beach in rare phenomenon|url=https://www.onmanorama.com/news/kerala/2025/10/16/kozhikode-beach-water-receding.html|website=Water recedes at Kozhikode beach in rare phenomenon|access-date=2025-11-28|language=en}}</ref><ref>{{Cite web|title=Water mysteriously pulls back at Kozhikode South Beach, revealing vast seabed stretch|url=https://english.mathrubhumi.com/news/kerala/water-mysteriously-pulls-back-at-kozhikode-south-beach-revealing-vast-seabed-stretch-lyyubh6a|website=@mathrubhumi|date=2025-10-16|access-date=2025-11-28|language=en}}</ref>
== ಕಡಲತೀರದ ರಸ್ತೆ ಮತ್ತು ವ್ಯಾಪ್ತಿ ==
ಕೋಝಿಕ್ಕೋಡ್ ಕಡಲತೀರದ ರಸ್ತೆ ದಕ್ಷಿಣದಲ್ಲಿರುವ ಬೇಪೂರ್ನಿಂದ ಉತ್ತರದಲ್ಲಿರುವ ಕಪ್ಪಾಡ್ವರೆಗೆ ದೀರ್ಘವಾದ ಕರಾವಳಿ ಮಾರ್ಗವಾಗಿ ಸಾಗುತ್ತದೆ. ಈ ಕರಾವಳಿ ವ್ಯಾಪ್ತಿಯಲ್ಲಿ ಬೇಪೂರ್, ಪಯ್ಯನಕ್ಕಲ್, ಮರಾಡ್, ಕಲ್ಲಾಯಿ, ಕುಟ್ಟಿಚಿರ, ತೆಕ್ಕೆಪುರಂ, ವೆಳ್ಳಯಿಲ್, ಸೌತ್ ಬೀಚ್, ವಲಿಯಂಗಾಡಿ, ಕಂಬುರಂ, ಪುತ್ತಿಯಪ್ಪ, ಎಲತ್ತೂರ್, ಕೋನಾಡ್ ಮತ್ತು ಭಟ್ ರೋಡ್ ಸೇರಿದಂತೆ ಹಲವು ಕಡಲತೀರ ಪ್ರದೇಶಗಳು ಸೇರಿವೆ. ಈ ವಿಶಾಲ ಕರಾವಳಿ ಪ್ರದೇಶವು ಕೋಝಿಕ್ಕೋಡ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಪ್ರವಾಸಿಗರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
==ಉಲ್ಲೇಖಗಳು==
73k0gm4uzx2yloh223yen476a9ickdr
ಮರಾರಿ ಕಡಲತೀರ
0
180115
1379505
2026-08-08T17:59:26Z
Santhosh Notagar99
82732
ಹೊಸ ಪುಟ: {{Use dmy dates|date=August 2019}} {{Use Indian English|date=August 2019}} {{Refimprove|date=September 2007}} {{Infobox settlement | name = ಮರಾರಿ ಕಡಲತೀರ | native_name = | native_name_lang = | other_name = ಮಾರಾರಿಕುಲಂ | nickname = | settlement_type = city | image_skyline = Marari Beach Sunset 01.JPG | image_alt = A view of the suns...
1379505
wikitext
text/x-wiki
{{Use dmy dates|date=August 2019}}
{{Use Indian English|date=August 2019}}
{{Refimprove|date=September 2007}}
{{Infobox settlement
| name = ಮರಾರಿ ಕಡಲತೀರ
| native_name =
| native_name_lang =
| other_name = ಮಾರಾರಿಕುಲಂ
| nickname =
| settlement_type = city
| image_skyline = Marari Beach Sunset 01.JPG
| image_alt = A view of the sunset at the Marari beach
| image_caption = A view of the sunset at the Marari beach
| pushpin_map = India Kerala#India
| pushpin_label_position =
| pushpin_map_alt =
| pushpin_map_caption = Location in Kerala, India
| coordinates = {{coord|9.602527|N|76.299877|E|display=inline,title}}
| subdivision_type = Country
| subdivision_name = {{flag|India}}
| subdivision_type1 = [[States and territories of India|State]]
| subdivision_name1 = [[Kerala]]
| subdivision_type2 = [[List of districts of India|District]]
| subdivision_name2 = [[Alappuzha District]]
| established_title = <!-- Established -->
| established_date =
| founder =
| named_for =
| government_type =
| governing_body = Govt of Kerala
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Malayalam language|Malayalam]], [[English language|English]]
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 688549
| area_code_type = Telephone code
| area_code = +91
| registration_plate = KL-04 or KL-32
| website =
| footnotes =
}}
'''ಮರಾರಿ ಕಡಲತೀರ'''ವು ಭಾರತದ ಕೇರಳ ರಾಜ್ಯದ ಆಲಪ್ಪುಳ ಜಿಲ್ಲೆಯ ಮರಾರಿಕುಳಂ ಗ್ರಾಮದಲ್ಲಿರುವ ಸುಂದರವಾದ ಕಡಲತೀರವಾಗಿದೆ. ಇದು ಆಲಪ್ಪುಳ ಪಟ್ಟಣದಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದೆ. ತೆಂಗಿನ ಮರಗಳಿಂದ ಆವೃತವಾದ ಕರಾವಳಿ, ವಿಶಾಲವಾದ ಮರಳು ಪ್ರದೇಶ ಮತ್ತು ಅರಬ್ಬಿ ಸಮುದ್ರದ ಶಾಂತ ಅಲೆಗಳು ಮರಾರಿ ಕಡಲತೀರದ ಪ್ರಮುಖ ಆಕರ್ಷಣೆಗಳಾಗಿವೆ. ನಗರ ಪ್ರದೇಶದ ಗದ್ದಲದಿಂದ ದೂರವಾಗಿ ಪ್ರಕೃತಿಯ ಶಾಂತ ವಾತಾವರಣವನ್ನು ಅನುಭವಿಸಲು ಬಯಸುವ ಪ್ರವಾಸಿಗರಿಗೆ ಇದು ಜನಪ್ರಿಯ ತಾಣವಾಗಿದೆ.
== ಸಂಪರ್ಕ ಮತ್ತು ಪ್ರವಾಸೋದ್ಯಮ ==
ಮರಾರಿಕುಳಂ ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ಮರಾರಿಕುಳಂನಲ್ಲಿ ಅದೇ ಹೆಸರಿನ ರೈಲು ನಿಲ್ದಾಣವಿದ್ದು, ರಸ್ತೆ ಮೂಲಕವೂ ಸುಲಭವಾಗಿ ತಲುಪಬಹುದು. ರಾಷ್ಟ್ರೀಯ ಹೆದ್ದಾರಿ 66 ಮರಾರಿಕುಳಂನಿಂದ ಸುಮಾರು 5 ಕಿಲೋಮೀಟರ್ ಪೂರ್ವದಲ್ಲಿರುವ ಎಸ್.ಎಲ್.ಪುರಂ ಮೂಲಕ ಹಾದುಹೋಗುತ್ತದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವೆಂದರೆ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ನ್ಯಾಷನಲ್ ಜಿಯೋಗ್ರಾಫಿಕ್ ನಡೆಸಿದ ಸಮೀಕ್ಷೆಯಲ್ಲಿ ಮರಾರಿ ಕಡಲತೀರವು ವಿಶ್ವದ ಪ್ರಮುಖ ಐದು ‘ಹ್ಯಾಮಾಕ್ ಬೀಚ್’ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ. ಮರಾರಿಯ CGH Earth Marari Beach Resort ಕೂಡ ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲರ್ ಮತ್ತು ITB ಬರ್ಲಿನ್ ಸಹಭಾಗಿತ್ವದಲ್ಲಿ ನೀಡುವ ‘World Legacy Award’ನ ‘Sense of Place’ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.
== ಪ್ರವಾಸಿಗರ ನೆಚ್ಚಿನ ತಾಣ ==
ದಕ್ಷಿಣ ಕೇರಳದ ಹೆಚ್ಚು ಪ್ರಸಿದ್ಧ ಕೋವಳಂ ಕಡಲತೀರಕ್ಕೆ ಪರ್ಯಾಯವಾಗಿ ಮರಾರಿ ಕಡಲತೀರವನ್ನು ಪ್ರವಾಸಿಗರು ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದಾರೆ. ಕೇರಳ ಪ್ರವಾಸದ ಸಂದರ್ಭದಲ್ಲಿ ಕೊಚ್ಚಿ ಬಂದರು ನಗರ, ಮುನ್ನಾರ್ನ ಚಹಾ ತೋಟಗಳು, ಪೆರಿಯಾರ್ನ ವನ್ಯಜೀವಿ ಪ್ರದೇಶ, ಆಲಪ್ಪುಳದ ಹಿನ್ನೀರಿನ ಹೌಸ್ಬೋಟ್ಗಳು ಮುಂತಾದ ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಿದ ನಂತರ ಮರಾರಿಯಲ್ಲಿ ಸಮುದ್ರತೀರದ ಸೌಂದರ್ಯವನ್ನು ಆನಂದಿಸಬಹುದು. ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮರಾರಿ ಕಡಲತೀರವು ಸುಮಾರು ಒಂದೂವರೆ ಗಂಟೆಯ ಪ್ರಯಾಣದ ದೂರದಲ್ಲಿರುವುದರಿಂದ, ಕೇರಳ ಪ್ರವಾಸದ ಅಂತಿಮ ಹಂತದಲ್ಲಿ ವಿಶ್ರಾಂತಿ ಪಡೆಯಲು ಇದು ಅನುಕೂಲಕರ ತಾಣವಾಗಿದೆ.
3qam5qtpblln0av01go45qhk7g699j0
1379507
1379505
2026-08-08T18:04:49Z
Santhosh Notagar99
82732
1379507
wikitext
text/x-wiki
{{Use dmy dates|date=August 2019}}
{{Use Indian English|date=August 2019}}
{{Refimprove|date=September 2007}}
{{Infobox settlement
| name = ಮರಾರಿ ಕಡಲತೀರ
| native_name =
| native_name_lang =
| other_name = ಮಾರಾರಿಕುಲಂ
| nickname =
| settlement_type =
ನಗರ
| image_skyline = Marari Beach Sunset 01.JPG
| image_alt = ಮರಾರಿ ಕಡಲತೀರದ ಸೂರ್ಯಾಸ್ತ
| image_caption = ಮರಾರಿ ಕಡಲತೀರದ ಸೂರ್ಯಾಸ್ತ
| pushpin_map = India Kerala#India
| pushpin_label_position =
| pushpin_map_alt =
| pushpin_map_caption = Location in Kerala, India
| coordinates = {{coord|9.602527|N|76.299877|E|display=inline,title}}
| subdivision_type = Country
| subdivision_name = {{flag|ಭಾರತ}}
| subdivision_type1 = ರಾಜ್ಯ
| subdivision_name1 = ಕೇರಳ
| subdivision_type2 = District
| subdivision_name2 = ಆಲಪ್ಪುಳ ಜಿಲ್ಲೆ
| established_title = <!-- Established -->
| established_date =
| founder =
| named_for =
| government_type =
| governing_body = Govt of Kerala
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = ಮಲಯಾಳಂ ಭಾಷೆ, ಇಂಗ್ಲಿಷ್
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 688549
| area_code_type = Telephone code
| area_code = +91
| registration_plate = KL-04 or KL-32
| website =
| footnotes =
}}
'''ಮರಾರಿ ಕಡಲತೀರ'''ವು ಭಾರತದ ಕೇರಳ ರಾಜ್ಯದ ಆಲಪ್ಪುಳ ಜಿಲ್ಲೆಯ ಮರಾರಿಕುಳಂ ಗ್ರಾಮದಲ್ಲಿರುವ ಸುಂದರವಾದ ಕಡಲತೀರವಾಗಿದೆ. ಇದು ಆಲಪ್ಪುಳ ಪಟ್ಟಣದಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದೆ. ತೆಂಗಿನ ಮರಗಳಿಂದ ಆವೃತವಾದ ಕರಾವಳಿ, ವಿಶಾಲವಾದ ಮರಳು ಪ್ರದೇಶ ಮತ್ತು ಅರಬ್ಬಿ ಸಮುದ್ರದ ಶಾಂತ ಅಲೆಗಳು ಮರಾರಿ ಕಡಲತೀರದ ಪ್ರಮುಖ ಆಕರ್ಷಣೆಗಳಾಗಿವೆ. ನಗರ ಪ್ರದೇಶದ ಗದ್ದಲದಿಂದ ದೂರವಾಗಿ ಪ್ರಕೃತಿಯ ಶಾಂತ ವಾತಾವರಣವನ್ನು ಅನುಭವಿಸಲು ಬಯಸುವ ಪ್ರವಾಸಿಗರಿಗೆ ಇದು ಜನಪ್ರಿಯ ತಾಣವಾಗಿದೆ.
== ಸಂಪರ್ಕ ಮತ್ತು ಪ್ರವಾಸೋದ್ಯಮ ==
ಮರಾರಿಕುಳಂ ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ಮರಾರಿಕುಳಂನಲ್ಲಿ ಅದೇ ಹೆಸರಿನ ರೈಲು ನಿಲ್ದಾಣವಿದ್ದು, ರಸ್ತೆ ಮೂಲಕವೂ ಸುಲಭವಾಗಿ ತಲುಪಬಹುದು. ರಾಷ್ಟ್ರೀಯ ಹೆದ್ದಾರಿ 66 ಮರಾರಿಕುಳಂನಿಂದ ಸುಮಾರು 5 ಕಿಲೋಮೀಟರ್ ಪೂರ್ವದಲ್ಲಿರುವ ಎಸ್.ಎಲ್.ಪುರಂ ಮೂಲಕ ಹಾದುಹೋಗುತ್ತದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವೆಂದರೆ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ನ್ಯಾಷನಲ್ ಜಿಯೋಗ್ರಾಫಿಕ್ ನಡೆಸಿದ ಸಮೀಕ್ಷೆಯಲ್ಲಿ ಮರಾರಿ ಕಡಲತೀರವು ವಿಶ್ವದ ಪ್ರಮುಖ ಐದು ‘ಹ್ಯಾಮಾಕ್ ಬೀಚ್’ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ. ಮರಾರಿಯ CGH Earth Marari Beach Resort ಕೂಡ ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲರ್ ಮತ್ತು ITB ಬರ್ಲಿನ್ ಸಹಭಾಗಿತ್ವದಲ್ಲಿ ನೀಡುವ ‘World Legacy Award’ನ ‘Sense of Place’ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.
== ಪ್ರವಾಸಿಗರ ನೆಚ್ಚಿನ ತಾಣ ==
ದಕ್ಷಿಣ ಕೇರಳದ ಹೆಚ್ಚು ಪ್ರಸಿದ್ಧ ಕೋವಳಂ ಕಡಲತೀರಕ್ಕೆ ಪರ್ಯಾಯವಾಗಿ ಮರಾರಿ ಕಡಲತೀರವನ್ನು ಪ್ರವಾಸಿಗರು ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದಾರೆ. ಕೇರಳ ಪ್ರವಾಸದ ಸಂದರ್ಭದಲ್ಲಿ ಕೊಚ್ಚಿ ಬಂದರು ನಗರ, ಮುನ್ನಾರ್ನ ಚಹಾ ತೋಟಗಳು, ಪೆರಿಯಾರ್ನ ವನ್ಯಜೀವಿ ಪ್ರದೇಶ, ಆಲಪ್ಪುಳದ ಹಿನ್ನೀರಿನ ಹೌಸ್ಬೋಟ್ಗಳು ಮುಂತಾದ ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಿದ ನಂತರ ಮರಾರಿಯಲ್ಲಿ ಸಮುದ್ರತೀರದ ಸೌಂದರ್ಯವನ್ನು ಆನಂದಿಸಬಹುದು. ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮರಾರಿ ಕಡಲತೀರವು ಸುಮಾರು ಒಂದೂವರೆ ಗಂಟೆಯ ಪ್ರಯಾಣದ ದೂರದಲ್ಲಿರುವುದರಿಂದ, ಕೇರಳ ಪ್ರವಾಸದ ಅಂತಿಮ ಹಂತದಲ್ಲಿ ವಿಶ್ರಾಂತಿ ಪಡೆಯಲು ಇದು ಅನುಕೂಲಕರ ತಾಣವಾಗಿದೆ.
acq39voirtvraa27vyef74l0dogb77v
1379510
1379507
2026-08-08T18:07:11Z
Santhosh Notagar99
82732
1379510
wikitext
text/x-wiki
{{Use dmy dates|date=August 2019}}
{{Use Indian English|date=August 2019}}
{{Refimprove|date=September 2007}}
{{Infobox settlement
| name = ಮರಾರಿ ಕಡಲತೀರ
| native_name =
| native_name_lang =
| other_name = ಮಾರಾರಿಕುಲಂ
| nickname =
| settlement_type =
ನಗರ
| image_skyline = Marari Beach Sunset 01.JPG
| image_alt = ಮರಾರಿ ಕಡಲತೀರದ ಸೂರ್ಯಾಸ್ತ
| image_caption = ಮರಾರಿ ಕಡಲತೀರದ ಸೂರ್ಯಾಸ್ತ
| pushpin_map = India Kerala#India
| pushpin_label_position =
| pushpin_map_alt =
| pushpin_map_caption = Location in Kerala, India
| coordinates = {{coord|9.602527|N|76.299877|E|display=inline,title}}
| subdivision_type = Country
| subdivision_name = {{flag|ಭಾರತ}}
| subdivision_type1 = ರಾಜ್ಯ
| subdivision_name1 = ಕೇರಳ
| subdivision_type2 = District
| subdivision_name2 = ಆಲಪ್ಪುಳ ಜಿಲ್ಲೆ
| established_title = <!-- Established -->
| established_date =
| founder =
| named_for =
| government_type =
| governing_body = Govt of Kerala
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = ಮಲಯಾಳಂ ಭಾಷೆ, ಇಂಗ್ಲಿಷ್
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 688549
| area_code_type = Telephone code
| area_code = +91
| registration_plate = KL-04 or KL-32
| website =
| footnotes =
}}
'''ಮರಾರಿ ಕಡಲತೀರ'''ವು ಭಾರತದ ಕೇರಳ ರಾಜ್ಯದ ಆಲಪ್ಪುಳ ಜಿಲ್ಲೆಯ ಮರಾರಿಕುಳಂ ಗ್ರಾಮದಲ್ಲಿರುವ ಸುಂದರವಾದ ಕಡಲತೀರವಾಗಿದೆ. ಇದು ಆಲಪ್ಪುಳ ಪಟ್ಟಣದಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದೆ. ತೆಂಗಿನ ಮರಗಳಿಂದ ಆವೃತವಾದ ಕರಾವಳಿ, ವಿಶಾಲವಾದ ಮರಳು ಪ್ರದೇಶ ಮತ್ತು ಅರಬ್ಬಿ ಸಮುದ್ರದ ಶಾಂತ ಅಲೆಗಳು ಮರಾರಿ ಕಡಲತೀರದ ಪ್ರಮುಖ ಆಕರ್ಷಣೆಗಳಾಗಿವೆ.<ref>{{Cite web |url=https://www.moneycontrol.com/travel/9-surprisingly-scenic-beaches-in-india-you-probably-didn-t-know-about-article-13854711.html |title=9 surprisingly scenic beaches in India you probably didn’t know about |website=Moneycontrol |language=en-US |access-date=2026-07-29}}</ref> ನಗರ ಪ್ರದೇಶದ ಗದ್ದಲದಿಂದ ದೂರವಾಗಿ ಪ್ರಕೃತಿಯ ಶಾಂತ ವಾತಾವರಣವನ್ನು ಅನುಭವಿಸಲು ಬಯಸುವ ಪ್ರವಾಸಿಗರಿಗೆ ಇದು ಜನಪ್ರಿಯ ತಾಣವಾಗಿದೆ.<ref>{{Cite web |author=Bejal |url=https://be-lavie.com/marari-beach-travel-guide/ |title=BEAUTIFUL MARARI BEACH TRAVEL GUIDE: WHAT TO KNOW |date=2024-04-04 |language=en-GB |access-date=2026-07-29}}</ref>
== ಸಂಪರ್ಕ ಮತ್ತು ಪ್ರವಾಸೋದ್ಯಮ ==
ಮರಾರಿಕುಳಂ ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ಮರಾರಿಕುಳಂನಲ್ಲಿ ಅದೇ ಹೆಸರಿನ ರೈಲು ನಿಲ್ದಾಣವಿದ್ದು, ರಸ್ತೆ ಮೂಲಕವೂ ಸುಲಭವಾಗಿ ತಲುಪಬಹುದು. ರಾಷ್ಟ್ರೀಯ ಹೆದ್ದಾರಿ 66 ಮರಾರಿಕುಳಂನಿಂದ ಸುಮಾರು 5 ಕಿಲೋಮೀಟರ್ ಪೂರ್ವದಲ್ಲಿರುವ ಎಸ್.ಎಲ್.ಪುರಂ ಮೂಲಕ ಹಾದುಹೋಗುತ್ತದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವೆಂದರೆ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ನ್ಯಾಷನಲ್ ಜಿಯೋಗ್ರಾಫಿಕ್ ನಡೆಸಿದ ಸಮೀಕ್ಷೆಯಲ್ಲಿ ಮರಾರಿ ಕಡಲತೀರವು ವಿಶ್ವದ ಪ್ರಮುಖ ಐದು ‘ಹ್ಯಾಮಾಕ್ ಬೀಚ್’ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ. ಮರಾರಿಯ CGH Earth Marari Beach Resort ಕೂಡ ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲರ್ ಮತ್ತು ITB ಬರ್ಲಿನ್ ಸಹಭಾಗಿತ್ವದಲ್ಲಿ ನೀಡುವ ‘World Legacy Award’ನ ‘Sense of Place’ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.
== ಪ್ರವಾಸಿಗರ ನೆಚ್ಚಿನ ತಾಣ ==
ದಕ್ಷಿಣ ಕೇರಳದ ಹೆಚ್ಚು ಪ್ರಸಿದ್ಧ ಕೋವಳಂ ಕಡಲತೀರಕ್ಕೆ ಪರ್ಯಾಯವಾಗಿ ಮರಾರಿ ಕಡಲತೀರವನ್ನು ಪ್ರವಾಸಿಗರು ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದಾರೆ. ಕೇರಳ ಪ್ರವಾಸದ ಸಂದರ್ಭದಲ್ಲಿ ಕೊಚ್ಚಿ ಬಂದರು ನಗರ, ಮುನ್ನಾರ್ನ ಚಹಾ ತೋಟಗಳು, ಪೆರಿಯಾರ್ನ ವನ್ಯಜೀವಿ ಪ್ರದೇಶ, ಆಲಪ್ಪುಳದ ಹಿನ್ನೀರಿನ ಹೌಸ್ಬೋಟ್ಗಳು ಮುಂತಾದ ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಿದ ನಂತರ ಮರಾರಿಯಲ್ಲಿ ಸಮುದ್ರತೀರದ ಸೌಂದರ್ಯವನ್ನು ಆನಂದಿಸಬಹುದು. ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮರಾರಿ ಕಡಲತೀರವು ಸುಮಾರು ಒಂದೂವರೆ ಗಂಟೆಯ ಪ್ರಯಾಣದ ದೂರದಲ್ಲಿರುವುದರಿಂದ, ಕೇರಳ ಪ್ರವಾಸದ ಅಂತಿಮ ಹಂತದಲ್ಲಿ ವಿಶ್ರಾಂತಿ ಪಡೆಯಲು ಇದು ಅನುಕೂಲಕರ ತಾಣವಾಗಿದೆ.
88of6ajz3bm2m4f6lcxzksw0emym07k
1379511
1379510
2026-08-08T18:07:42Z
Santhosh Notagar99
82732
1379511
wikitext
text/x-wiki
{{Use dmy dates|date=August 2019}}
{{Use Indian English|date=August 2019}}
{{Refimprove|date=September 2007}}
{{Infobox settlement
| name = ಮರಾರಿ ಕಡಲತೀರ
| native_name =
| native_name_lang =
| other_name = ಮಾರಾರಿಕುಲಂ
| nickname =
| settlement_type =
ನಗರ
| image_skyline = Marari Beach Sunset 01.JPG
| image_alt = ಮರಾರಿ ಕಡಲತೀರದ ಸೂರ್ಯಾಸ್ತ
| image_caption = ಮರಾರಿ ಕಡಲತೀರದ ಸೂರ್ಯಾಸ್ತ
| pushpin_map = India Kerala#India
| pushpin_label_position =
| pushpin_map_alt =
| pushpin_map_caption = Location in Kerala, India
| coordinates = {{coord|9.602527|N|76.299877|E|display=inline,title}}
| subdivision_type = Country
| subdivision_name = {{flag|ಭಾರತ}}
| subdivision_type1 = ರಾಜ್ಯ
| subdivision_name1 = ಕೇರಳ
| subdivision_type2 = District
| subdivision_name2 = ಆಲಪ್ಪುಳ ಜಿಲ್ಲೆ
| established_title = <!-- Established -->
| established_date =
| founder =
| named_for =
| government_type =
| governing_body = Govt of Kerala
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = ಮಲಯಾಳಂ ಭಾಷೆ, ಇಂಗ್ಲಿಷ್
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 688549
| area_code_type = Telephone code
| area_code = +91
| registration_plate = KL-04 or KL-32
| website =
| footnotes =
}}
'''ಮರಾರಿ ಕಡಲತೀರ'''ವು ಭಾರತದ ಕೇರಳ ರಾಜ್ಯದ ಆಲಪ್ಪುಳ ಜಿಲ್ಲೆಯ ಮರಾರಿಕುಳಂ ಗ್ರಾಮದಲ್ಲಿರುವ ಸುಂದರವಾದ ಕಡಲತೀರವಾಗಿದೆ. ಇದು ಆಲಪ್ಪುಳ ಪಟ್ಟಣದಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದೆ. ತೆಂಗಿನ ಮರಗಳಿಂದ ಆವೃತವಾದ ಕರಾವಳಿ, ವಿಶಾಲವಾದ ಮರಳು ಪ್ರದೇಶ ಮತ್ತು ಅರಬ್ಬಿ ಸಮುದ್ರದ ಶಾಂತ ಅಲೆಗಳು ಮರಾರಿ ಕಡಲತೀರದ ಪ್ರಮುಖ ಆಕರ್ಷಣೆಗಳಾಗಿವೆ.<ref>{{Cite web |url=https://www.moneycontrol.com/travel/9-surprisingly-scenic-beaches-in-india-you-probably-didn-t-know-about-article-13854711.html |title=9 surprisingly scenic beaches in India you probably didn’t know about |website=Moneycontrol |language=en-US |access-date=2026-07-29}}</ref> ನಗರ ಪ್ರದೇಶದ ಗದ್ದಲದಿಂದ ದೂರವಾಗಿ ಪ್ರಕೃತಿಯ ಶಾಂತ ವಾತಾವರಣವನ್ನು ಅನುಭವಿಸಲು ಬಯಸುವ ಪ್ರವಾಸಿಗರಿಗೆ ಇದು ಜನಪ್ರಿಯ ತಾಣವಾಗಿದೆ.<ref>{{Cite web |author=Bejal |url=https://be-lavie.com/marari-beach-travel-guide/ |title=BEAUTIFUL MARARI BEACH TRAVEL GUIDE: WHAT TO KNOW |date=2024-04-04 |language=en-GB |access-date=2026-07-29}}</ref> <ref>{{Cite web |author=Bejal |url=https://be-lavie.com/marari-beach-travel-guide/ |title=BEAUTIFUL MARARI BEACH TRAVEL GUIDE: WHAT TO KNOW |date=2024-04-04 |language=en-GB |access-date=2026-07-29}}</ref>
== ಸಂಪರ್ಕ ಮತ್ತು ಪ್ರವಾಸೋದ್ಯಮ ==
ಮರಾರಿಕುಳಂ ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ಮರಾರಿಕುಳಂನಲ್ಲಿ ಅದೇ ಹೆಸರಿನ ರೈಲು ನಿಲ್ದಾಣವಿದ್ದು, ರಸ್ತೆ ಮೂಲಕವೂ ಸುಲಭವಾಗಿ ತಲುಪಬಹುದು. ರಾಷ್ಟ್ರೀಯ ಹೆದ್ದಾರಿ 66 ಮರಾರಿಕುಳಂನಿಂದ ಸುಮಾರು 5 ಕಿಲೋಮೀಟರ್ ಪೂರ್ವದಲ್ಲಿರುವ ಎಸ್.ಎಲ್.ಪುರಂ ಮೂಲಕ ಹಾದುಹೋಗುತ್ತದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವೆಂದರೆ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ನ್ಯಾಷನಲ್ ಜಿಯೋಗ್ರಾಫಿಕ್ ನಡೆಸಿದ ಸಮೀಕ್ಷೆಯಲ್ಲಿ ಮರಾರಿ ಕಡಲತೀರವು ವಿಶ್ವದ ಪ್ರಮುಖ ಐದು ‘ಹ್ಯಾಮಾಕ್ ಬೀಚ್’ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ. ಮರಾರಿಯ CGH Earth Marari Beach Resort ಕೂಡ ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲರ್ ಮತ್ತು ITB ಬರ್ಲಿನ್ ಸಹಭಾಗಿತ್ವದಲ್ಲಿ ನೀಡುವ ‘World Legacy Award’ನ ‘Sense of Place’ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.
== ಪ್ರವಾಸಿಗರ ನೆಚ್ಚಿನ ತಾಣ ==
ದಕ್ಷಿಣ ಕೇರಳದ ಹೆಚ್ಚು ಪ್ರಸಿದ್ಧ ಕೋವಳಂ ಕಡಲತೀರಕ್ಕೆ ಪರ್ಯಾಯವಾಗಿ ಮರಾರಿ ಕಡಲತೀರವನ್ನು ಪ್ರವಾಸಿಗರು ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದಾರೆ. ಕೇರಳ ಪ್ರವಾಸದ ಸಂದರ್ಭದಲ್ಲಿ ಕೊಚ್ಚಿ ಬಂದರು ನಗರ, ಮುನ್ನಾರ್ನ ಚಹಾ ತೋಟಗಳು, ಪೆರಿಯಾರ್ನ ವನ್ಯಜೀವಿ ಪ್ರದೇಶ, ಆಲಪ್ಪುಳದ ಹಿನ್ನೀರಿನ ಹೌಸ್ಬೋಟ್ಗಳು ಮುಂತಾದ ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಿದ ನಂತರ ಮರಾರಿಯಲ್ಲಿ ಸಮುದ್ರತೀರದ ಸೌಂದರ್ಯವನ್ನು ಆನಂದಿಸಬಹುದು. ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮರಾರಿ ಕಡಲತೀರವು ಸುಮಾರು ಒಂದೂವರೆ ಗಂಟೆಯ ಪ್ರಯಾಣದ ದೂರದಲ್ಲಿರುವುದರಿಂದ, ಕೇರಳ ಪ್ರವಾಸದ ಅಂತಿಮ ಹಂತದಲ್ಲಿ ವಿಶ್ರಾಂತಿ ಪಡೆಯಲು ಇದು ಅನುಕೂಲಕರ ತಾಣವಾಗಿದೆ.
hlvqc2h1yityn2h5hgfeabx8sfw8hnf
1379512
1379511
2026-08-08T18:09:01Z
Santhosh Notagar99
82732
1379512
wikitext
text/x-wiki
{{Use dmy dates|date=August 2019}}
{{Use Indian English|date=August 2019}}
{{Refimprove|date=September 2007}}
{{Infobox settlement
| name = ಮರಾರಿ ಕಡಲತೀರ
| native_name =
| native_name_lang =
| other_name = ಮಾರಾರಿಕುಲಂ
| nickname =
| settlement_type =
ನಗರ
| image_skyline = Marari Beach Sunset 01.JPG
| image_alt = ಮರಾರಿ ಕಡಲತೀರದ ಸೂರ್ಯಾಸ್ತ
| image_caption = ಮರಾರಿ ಕಡಲತೀರದ ಸೂರ್ಯಾಸ್ತ
| pushpin_map = India Kerala#India
| pushpin_label_position =
| pushpin_map_alt =
| pushpin_map_caption = Location in Kerala, India
| coordinates = {{coord|9.602527|N|76.299877|E|display=inline,title}}
| subdivision_type = Country
| subdivision_name = {{flag|ಭಾರತ}}
| subdivision_type1 = ರಾಜ್ಯ
| subdivision_name1 = ಕೇರಳ
| subdivision_type2 = District
| subdivision_name2 = ಆಲಪ್ಪುಳ ಜಿಲ್ಲೆ
| established_title = <!-- Established -->
| established_date =
| founder =
| named_for =
| government_type =
| governing_body = Govt of Kerala
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = ಮಲಯಾಳಂ ಭಾಷೆ, ಇಂಗ್ಲಿಷ್
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 688549
| area_code_type = Telephone code
| area_code = +91
| registration_plate = KL-04 or KL-32
| website =
| footnotes =
}}
'''ಮರಾರಿ ಕಡಲತೀರ'''ವು ಭಾರತದ ಕೇರಳ ರಾಜ್ಯದ ಆಲಪ್ಪುಳ ಜಿಲ್ಲೆಯ ಮರಾರಿಕುಳಂ ಗ್ರಾಮದಲ್ಲಿರುವ ಸುಂದರವಾದ ಕಡಲತೀರವಾಗಿದೆ. ಇದು ಆಲಪ್ಪುಳ ಪಟ್ಟಣದಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದೆ. ತೆಂಗಿನ ಮರಗಳಿಂದ ಆವೃತವಾದ ಕರಾವಳಿ, ವಿಶಾಲವಾದ ಮರಳು ಪ್ರದೇಶ ಮತ್ತು ಅರಬ್ಬಿ ಸಮುದ್ರದ ಶಾಂತ ಅಲೆಗಳು ಮರಾರಿ ಕಡಲತೀರದ ಪ್ರಮುಖ ಆಕರ್ಷಣೆಗಳಾಗಿವೆ.<ref>{{Cite web |url=https://www.moneycontrol.com/travel/9-surprisingly-scenic-beaches-in-india-you-probably-didn-t-know-about-article-13854711.html |title=9 surprisingly scenic beaches in India you probably didn’t know about |website=Moneycontrol |language=en-US |access-date=2026-07-29}}</ref> ನಗರ ಪ್ರದೇಶದ ಗದ್ದಲದಿಂದ ದೂರವಾಗಿ ಪ್ರಕೃತಿಯ ಶಾಂತ ವಾತಾವರಣವನ್ನು ಅನುಭವಿಸಲು ಬಯಸುವ ಪ್ರವಾಸಿಗರಿಗೆ ಇದು ಜನಪ್ರಿಯ ತಾಣವಾಗಿದೆ.<ref>{{Cite web |author=Bejal |url=https://be-lavie.com/marari-beach-travel-guide/ |title=BEAUTIFUL MARARI BEACH TRAVEL GUIDE: WHAT TO KNOW |date=2024-04-04 |language=en-GB |access-date=2026-07-29}}</ref> <ref>{{Cite web |author=Bejal |url=https://be-lavie.com/marari-beach-travel-guide/ |title=BEAUTIFUL MARARI BEACH TRAVEL GUIDE: WHAT TO KNOW |date=2024-04-04 |language=en-GB |access-date=2026-07-29}}</ref>
== ಸಂಪರ್ಕ ಮತ್ತು ಪ್ರವಾಸೋದ್ಯಮ ==
ಮರಾರಿಕುಳಂ ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ಮರಾರಿಕುಳಂನಲ್ಲಿ ಅದೇ ಹೆಸರಿನ ರೈಲು ನಿಲ್ದಾಣವಿದ್ದು, ರಸ್ತೆ ಮೂಲಕವೂ ಸುಲಭವಾಗಿ ತಲುಪಬಹುದು. ರಾಷ್ಟ್ರೀಯ ಹೆದ್ದಾರಿ 66 ಮರಾರಿಕುಳಂನಿಂದ ಸುಮಾರು 5 ಕಿಲೋಮೀಟರ್ ಪೂರ್ವದಲ್ಲಿರುವ ಎಸ್.ಎಲ್.ಪುರಂ ಮೂಲಕ ಹಾದುಹೋಗುತ್ತದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವೆಂದರೆ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ನ್ಯಾಷನಲ್ ಜಿಯೋಗ್ರಾಫಿಕ್ ನಡೆಸಿದ ಸಮೀಕ್ಷೆಯಲ್ಲಿ ಮರಾರಿ ಕಡಲತೀರವು ವಿಶ್ವದ ಪ್ರಮುಖ ಐದು ‘ಹ್ಯಾಮಾಕ್ ಬೀಚ್’ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ. ಮರಾರಿಯ CGH Earth Marari Beach Resort ಕೂಡ ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲರ್ ಮತ್ತು ITB ಬರ್ಲಿನ್ ಸಹಭಾಗಿತ್ವದಲ್ಲಿ ನೀಡುವ ‘World Legacy Award’ನ ‘Sense of Place’ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. <ref>https://en.wikipedia.org/wiki/Marari_Beach</ref>
== ಪ್ರವಾಸಿಗರ ನೆಚ್ಚಿನ ತಾಣ ==
ದಕ್ಷಿಣ ಕೇರಳದ ಹೆಚ್ಚು ಪ್ರಸಿದ್ಧ ಕೋವಳಂ ಕಡಲತೀರಕ್ಕೆ ಪರ್ಯಾಯವಾಗಿ ಮರಾರಿ ಕಡಲತೀರವನ್ನು ಪ್ರವಾಸಿಗರು ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದಾರೆ. ಕೇರಳ ಪ್ರವಾಸದ ಸಂದರ್ಭದಲ್ಲಿ ಕೊಚ್ಚಿ ಬಂದರು ನಗರ, ಮುನ್ನಾರ್ನ ಚಹಾ ತೋಟಗಳು, ಪೆರಿಯಾರ್ನ ವನ್ಯಜೀವಿ ಪ್ರದೇಶ, ಆಲಪ್ಪುಳದ ಹಿನ್ನೀರಿನ ಹೌಸ್ಬೋಟ್ಗಳು ಮುಂತಾದ ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಿದ ನಂತರ ಮರಾರಿಯಲ್ಲಿ ಸಮುದ್ರತೀರದ ಸೌಂದರ್ಯವನ್ನು ಆನಂದಿಸಬಹುದು. ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮರಾರಿ ಕಡಲತೀರವು ಸುಮಾರು ಒಂದೂವರೆ ಗಂಟೆಯ ಪ್ರಯಾಣದ ದೂರದಲ್ಲಿರುವುದರಿಂದ, ಕೇರಳ ಪ್ರವಾಸದ ಅಂತಿಮ ಹಂತದಲ್ಲಿ ವಿಶ್ರಾಂತಿ ಪಡೆಯಲು ಇದು ಅನುಕೂಲಕರ ತಾಣವಾಗಿದೆ.
s4bv2ppssaq4hvre1knrv5pdnrxtbe7
1379513
1379512
2026-08-08T18:09:42Z
Santhosh Notagar99
82732
1379513
wikitext
text/x-wiki
{{Use dmy dates|date=August 2019}}
{{Use Indian English|date=August 2019}}
{{Refimprove|date=September 2007}}
{{Infobox settlement
| name = ಮರಾರಿ ಕಡಲತೀರ
| native_name =
| native_name_lang =
| other_name = ಮಾರಾರಿಕುಲಂ
| nickname =
| settlement_type =
ನಗರ
| image_skyline = Marari Beach Sunset 01.JPG
| image_alt = ಮರಾರಿ ಕಡಲತೀರದ ಸೂರ್ಯಾಸ್ತ
| image_caption = ಮರಾರಿ ಕಡಲತೀರದ ಸೂರ್ಯಾಸ್ತ
| pushpin_map = India Kerala#India
| pushpin_label_position =
| pushpin_map_alt =
| pushpin_map_caption = Location in Kerala, India
| coordinates = {{coord|9.602527|N|76.299877|E|display=inline,title}}
| subdivision_type = Country
| subdivision_name = {{flag|ಭಾರತ}}
| subdivision_type1 = ರಾಜ್ಯ
| subdivision_name1 = ಕೇರಳ
| subdivision_type2 = District
| subdivision_name2 = ಆಲಪ್ಪುಳ ಜಿಲ್ಲೆ
| established_title = <!-- Established -->
| established_date =
| founder =
| named_for =
| government_type =
| governing_body = Govt of Kerala
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = ಮಲಯಾಳಂ ಭಾಷೆ, ಇಂಗ್ಲಿಷ್
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 688549
| area_code_type = Telephone code
| area_code = +91
| registration_plate = KL-04 or KL-32
| website =
| footnotes =
}}
'''ಮರಾರಿ ಕಡಲತೀರ'''ವು ಭಾರತದ ಕೇರಳ ರಾಜ್ಯದ ಆಲಪ್ಪುಳ ಜಿಲ್ಲೆಯ ಮರಾರಿಕುಳಂ ಗ್ರಾಮದಲ್ಲಿರುವ ಸುಂದರವಾದ ಕಡಲತೀರವಾಗಿದೆ. ಇದು ಆಲಪ್ಪುಳ ಪಟ್ಟಣದಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದೆ. ತೆಂಗಿನ ಮರಗಳಿಂದ ಆವೃತವಾದ ಕರಾವಳಿ, ವಿಶಾಲವಾದ ಮರಳು ಪ್ರದೇಶ ಮತ್ತು ಅರಬ್ಬಿ ಸಮುದ್ರದ ಶಾಂತ ಅಲೆಗಳು ಮರಾರಿ ಕಡಲತೀರದ ಪ್ರಮುಖ ಆಕರ್ಷಣೆಗಳಾಗಿವೆ.<ref>{{Cite web |url=https://www.moneycontrol.com/travel/9-surprisingly-scenic-beaches-in-india-you-probably-didn-t-know-about-article-13854711.html |title=9 surprisingly scenic beaches in India you probably didn’t know about |website=Moneycontrol |language=en-US |access-date=2026-07-29}}</ref> ನಗರ ಪ್ರದೇಶದ ಗದ್ದಲದಿಂದ ದೂರವಾಗಿ ಪ್ರಕೃತಿಯ ಶಾಂತ ವಾತಾವರಣವನ್ನು ಅನುಭವಿಸಲು ಬಯಸುವ ಪ್ರವಾಸಿಗರಿಗೆ ಇದು ಜನಪ್ರಿಯ ತಾಣವಾಗಿದೆ.<ref>{{Cite web |author=Bejal |url=https://be-lavie.com/marari-beach-travel-guide/ |title=BEAUTIFUL MARARI BEACH TRAVEL GUIDE: WHAT TO KNOW |date=2024-04-04 |language=en-GB |access-date=2026-07-29}}</ref> <ref>{{Cite web |author=Bejal |url=https://be-lavie.com/marari-beach-travel-guide/ |title=BEAUTIFUL MARARI BEACH TRAVEL GUIDE: WHAT TO KNOW |date=2024-04-04 |language=en-GB |access-date=2026-07-29}}</ref>
== ಸಂಪರ್ಕ ಮತ್ತು ಪ್ರವಾಸೋದ್ಯಮ ==
ಮರಾರಿಕುಳಂ ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ಮರಾರಿಕುಳಂನಲ್ಲಿ ಅದೇ ಹೆಸರಿನ ರೈಲು ನಿಲ್ದಾಣವಿದ್ದು, ರಸ್ತೆ ಮೂಲಕವೂ ಸುಲಭವಾಗಿ ತಲುಪಬಹುದು. ರಾಷ್ಟ್ರೀಯ ಹೆದ್ದಾರಿ 66 ಮರಾರಿಕುಳಂನಿಂದ ಸುಮಾರು 5 ಕಿಲೋಮೀಟರ್ ಪೂರ್ವದಲ್ಲಿರುವ ಎಸ್.ಎಲ್.ಪುರಂ ಮೂಲಕ ಹಾದುಹೋಗುತ್ತದೆ. ಸಮೀಪದ ಪ್ರಮುಖ ವಿಮಾನ ನಿಲ್ದಾಣವೆಂದರೆ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ನ್ಯಾಷನಲ್ ಜಿಯೋಗ್ರಾಫಿಕ್ ನಡೆಸಿದ ಸಮೀಕ್ಷೆಯಲ್ಲಿ ಮರಾರಿ ಕಡಲತೀರವು ವಿಶ್ವದ ಪ್ರಮುಖ ಐದು ‘ಹ್ಯಾಮಾಕ್ ಬೀಚ್’ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ. ಮರಾರಿಯ CGH Earth Marari Beach Resort ಕೂಡ ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲರ್ ಮತ್ತು ITB ಬರ್ಲಿನ್ ಸಹಭಾಗಿತ್ವದಲ್ಲಿ ನೀಡುವ ‘World Legacy Award’ನ ‘Sense of Place’ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. <ref>https://en.wikipedia.org/wiki/Marari_Beach</ref>
== ಪ್ರವಾಸಿಗರ ನೆಚ್ಚಿನ ತಾಣ ==
ದಕ್ಷಿಣ ಕೇರಳದ ಹೆಚ್ಚು ಪ್ರಸಿದ್ಧ ಕೋವಳಂ ಕಡಲತೀರಕ್ಕೆ ಪರ್ಯಾಯವಾಗಿ ಮರಾರಿ ಕಡಲತೀರವನ್ನು ಪ್ರವಾಸಿಗರು ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದಾರೆ. ಕೇರಳ ಪ್ರವಾಸದ ಸಂದರ್ಭದಲ್ಲಿ ಕೊಚ್ಚಿ ಬಂದರು ನಗರ, ಮುನ್ನಾರ್ನ ಚಹಾ ತೋಟಗಳು, ಪೆರಿಯಾರ್ನ ವನ್ಯಜೀವಿ ಪ್ರದೇಶ, ಆಲಪ್ಪುಳದ ಹಿನ್ನೀರಿನ ಹೌಸ್ಬೋಟ್ಗಳು ಮುಂತಾದ ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಿದ ನಂತರ ಮರಾರಿಯಲ್ಲಿ ಸಮುದ್ರತೀರದ ಸೌಂದರ್ಯವನ್ನು ಆನಂದಿಸಬಹುದು. ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮರಾರಿ ಕಡಲತೀರವು ಸುಮಾರು ಒಂದೂವರೆ ಗಂಟೆಯ ಪ್ರಯಾಣದ ದೂರದಲ್ಲಿರುವುದರಿಂದ, ಕೇರಳ ಪ್ರವಾಸದ ಅಂತಿಮ ಹಂತದಲ್ಲಿ ವಿಶ್ರಾಂತಿ ಪಡೆಯಲು ಇದು ಅನುಕೂಲಕರ ತಾಣವಾಗಿದೆ.
==ಉಲ್ಲೇಖಗಳು==
5ha341magkzl6dgg9pte84vvq2cklbp
ಮುನಕ್ಕಲ್ ಕಡಲತೀರ
0
180116
1379514
2026-08-08T18:23:42Z
Santhosh Notagar99
82732
ಹೊಸ ಪುಟ: '''ಮುನಕ್ಕಲ್ ಕಡಲತೀರ'''ವು ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಅಝಿಕ್ಕೋಡ್ ಪ್ರದೇಶದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಗೊಂಡಿದ್ದು, ತ್ರಿಶೂರ್ ಜಿಲ್ಲೆಯಲ್ಲಿರುವ ಅತಿ...
1379514
wikitext
text/x-wiki
'''ಮುನಕ್ಕಲ್ ಕಡಲತೀರ'''ವು ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಅಝಿಕ್ಕೋಡ್ ಪ್ರದೇಶದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಗೊಂಡಿದ್ದು, ತ್ರಿಶೂರ್ ಜಿಲ್ಲೆಯಲ್ಲಿರುವ ಅತಿದೊಡ್ಡ ಕಡಲತೀರವೆಂದು ಪರಿಗಣಿಸಲಾಗಿದೆ. ಈ ಕಡಲತೀರವು ಕೊಡುಂಗಲ್ಲೂರು ಪಟ್ಟಣದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿದೆ. ವಿಶಾಲವಾದ ಮರಳು ಪ್ರದೇಶ ಮತ್ತು ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯದಿಂದ ಮುನಕ್ಕಲ್ ಕಡಲತೀರವು ಪ್ರವಾಸಿಗರನ್ನು ಆಕರ್ಷಿಸುತ್ತದೆ.<ref>{{Cite web |url=https://www.keralatourism.org/muziris/beaches/munakkal |title=Munakkal beach {{!}} Azhikode {{!}} Thrissur {{!}} Kodungallur {{!}} Arabian Sea |website=muziris Project |language=en |access-date=2026-07-29}}</ref><ref>{{Cite web |url=https://www.holidify.com/places/thrissur/munakkal-beach-sightseeing-125241.html |title=Munakkal Beach, Thrissur (2026) - Images, Timings {{!}} Holidify |website=www.holidify.com |access-date=2026-07-29}}</ref><ref>{{Cite web |url=https://www.keralatourism.org/newsletter/news/2010/azhikode-munakkal-beach/1407 |title=Azhikode- Munakkal beach, Newsbytes, Newsletter, India |website=Kerala Tourism |language=en |access-date=2026-07-29}}</ref>
[[File:Photo of Azhikode Munakkal Beach.jpg|thumb|right|300px|ಮುನಕ್ಕಲ್ ಕಡಲತೀರದಲ್ಲಿ ಒಂದು ಸಂಜೆ]]
== ಪ್ರವಾಸಿ ಸೌಲಭ್ಯಗಳು ==
ಮುನಕ್ಕಲ್ ಕಡಲತೀರವನ್ನು ಹಾರ್ಬರ್ ಎಂಜಿನಿಯರಿಂಗ್ ಇಲಾಖೆಯ ಸುನಾಮಿ ಪುನರ್ವಸತಿ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಸುಮಾರು 400 ಮೀಟರ್ ಉದ್ದದ ತೆರೆದ ಸಭಾಂಗಣ, 1,300 ಮೀಟರ್ ಉದ್ದದ ವಾಕಿಂಗ್ ಪಥ, ಶೌಚಾಲಯಗಳು, ಆಹಾರ ಮಳಿಗೆಗಳು, ಮಕ್ಕಳಿಗಾಗಿ ಸ್ಕೇಟ್ಬೋರ್ಡಿಂಗ್ ಗ್ರಿಪ್ ಹಾಗೂ ಮಳೆಯಿಂದ ರಕ್ಷಣೆ ಪಡೆಯಲು ರೈನ್ ಶೆಲ್ಟರ್ಗಳನ್ನು ನಿರ್ಮಿಸಲಾಗಿದೆ. ಈ ಸೌಲಭ್ಯಗಳು ಕಡಲತೀರವನ್ನು ಕುಟುಂಬ ಸಮೇತ ಭೇಟಿ ನೀಡಲು ಸೂಕ್ತವಾದ ಪ್ರವಾಸಿ ತಾಣವನ್ನಾಗಿ ಮಾಡಿವೆ. <ref>{{cite web
|url=http://www.hindu.com/2009/06/08/stories/2009060850740200.htm
|archive-url=https://archive.today/20131011232550/http://www.hindu.com/2009/06/08/stories/2009060850740200.htm
|url-status=dead
|archive-date=2013-10-11
|work=[[The Hindu]]
|title=Beaches near Kochi being beautified
|date=2009-06-08
|access-date=2013-10-11}}</ref>
== ಕ್ಯಾಸುರಿನಾ ಅರಣ್ಯ ==
ಮುನಕ್ಕಲ್ ಕಡಲತೀರದ ಮತ್ತೊಂದು ಪ್ರಮುಖ ಆಕರ್ಷಣೆ ಕೇರಳ ಅರಣ್ಯ ಇಲಾಖೆಯು ಬೆಳೆಸಿರುವ ಕ್ಯಾಸುರಿನಾ ಮರಗಳ ಅರಣ್ಯವಾಗಿದೆ. ಸಮುದ್ರ ತೀರದ ಉದ್ದಕ್ಕೂ ಹರಡಿರುವ ಈ ಹಸಿರು ಪ್ರದೇಶವು ಕಡಲತೀರದ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಪ್ರವಾಸಿಗರಿಗೆ ನೆರಳು ಮತ್ತು ವಿಶ್ರಾಂತಿಯ ವಾತಾವರಣವನ್ನು ಒದಗಿಸುತ್ತದೆ. ಕಡಲತೀರದ ವಿಶಾಲತೆ, ಅಭಿವೃದ್ಧಿಪಡಿಸಲಾದ ಸೌಲಭ್ಯಗಳು ಮತ್ತು ಹಸಿರು ಪರಿಸರದ ಸಂಯೋಜನೆಯಿಂದ ಮುನಕ್ಕಲ್ ಕಡಲತೀರವು ತ್ರಿಶೂರ್ ಜಿಲ್ಲೆಯ ಪ್ರಮುಖ ಕರಾವಳಿ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
qtjna0wtodicn3v3lznzcyld13vzmco
1379515
1379514
2026-08-08T18:23:56Z
Santhosh Notagar99
82732
1379515
wikitext
text/x-wiki
'''ಮುನಕ್ಕಲ್ ಕಡಲತೀರ'''ವು ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಅಝಿಕ್ಕೋಡ್ ಪ್ರದೇಶದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಗೊಂಡಿದ್ದು, ತ್ರಿಶೂರ್ ಜಿಲ್ಲೆಯಲ್ಲಿರುವ ಅತಿದೊಡ್ಡ ಕಡಲತೀರವೆಂದು ಪರಿಗಣಿಸಲಾಗಿದೆ. ಈ ಕಡಲತೀರವು ಕೊಡುಂಗಲ್ಲೂರು ಪಟ್ಟಣದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿದೆ. ವಿಶಾಲವಾದ ಮರಳು ಪ್ರದೇಶ ಮತ್ತು ಅರಬ್ಬಿ ಸಮುದ್ರದ ನೈಸರ್ಗಿಕ ಸೌಂದರ್ಯದಿಂದ ಮುನಕ್ಕಲ್ ಕಡಲತೀರವು ಪ್ರವಾಸಿಗರನ್ನು ಆಕರ್ಷಿಸುತ್ತದೆ.<ref>{{Cite web |url=https://www.keralatourism.org/muziris/beaches/munakkal |title=Munakkal beach {{!}} Azhikode {{!}} Thrissur {{!}} Kodungallur {{!}} Arabian Sea |website=muziris Project |language=en |access-date=2026-07-29}}</ref><ref>{{Cite web |url=https://www.holidify.com/places/thrissur/munakkal-beach-sightseeing-125241.html |title=Munakkal Beach, Thrissur (2026) - Images, Timings {{!}} Holidify |website=www.holidify.com |access-date=2026-07-29}}</ref><ref>{{Cite web |url=https://www.keralatourism.org/newsletter/news/2010/azhikode-munakkal-beach/1407 |title=Azhikode- Munakkal beach, Newsbytes, Newsletter, India |website=Kerala Tourism |language=en |access-date=2026-07-29}}</ref>
[[File:Photo of Azhikode Munakkal Beach.jpg|thumb|right|300px|ಮುನಕ್ಕಲ್ ಕಡಲತೀರದಲ್ಲಿ ಒಂದು ಸಂಜೆ]]
== ಪ್ರವಾಸಿ ಸೌಲಭ್ಯಗಳು ==
ಮುನಕ್ಕಲ್ ಕಡಲತೀರವನ್ನು ಹಾರ್ಬರ್ ಎಂಜಿನಿಯರಿಂಗ್ ಇಲಾಖೆಯ ಸುನಾಮಿ ಪುನರ್ವಸತಿ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಸುಮಾರು 400 ಮೀಟರ್ ಉದ್ದದ ತೆರೆದ ಸಭಾಂಗಣ, 1,300 ಮೀಟರ್ ಉದ್ದದ ವಾಕಿಂಗ್ ಪಥ, ಶೌಚಾಲಯಗಳು, ಆಹಾರ ಮಳಿಗೆಗಳು, ಮಕ್ಕಳಿಗಾಗಿ ಸ್ಕೇಟ್ಬೋರ್ಡಿಂಗ್ ಗ್ರಿಪ್ ಹಾಗೂ ಮಳೆಯಿಂದ ರಕ್ಷಣೆ ಪಡೆಯಲು ರೈನ್ ಶೆಲ್ಟರ್ಗಳನ್ನು ನಿರ್ಮಿಸಲಾಗಿದೆ. ಈ ಸೌಲಭ್ಯಗಳು ಕಡಲತೀರವನ್ನು ಕುಟುಂಬ ಸಮೇತ ಭೇಟಿ ನೀಡಲು ಸೂಕ್ತವಾದ ಪ್ರವಾಸಿ ತಾಣವನ್ನಾಗಿ ಮಾಡಿವೆ. <ref>{{cite web
|url=http://www.hindu.com/2009/06/08/stories/2009060850740200.htm
|archive-url=https://archive.today/20131011232550/http://www.hindu.com/2009/06/08/stories/2009060850740200.htm
|url-status=dead
|archive-date=2013-10-11
|work=[[The Hindu]]
|title=Beaches near Kochi being beautified
|date=2009-06-08
|access-date=2013-10-11}}</ref>
== ಕ್ಯಾಸುರಿನಾ ಅರಣ್ಯ ==
ಮುನಕ್ಕಲ್ ಕಡಲತೀರದ ಮತ್ತೊಂದು ಪ್ರಮುಖ ಆಕರ್ಷಣೆ ಕೇರಳ ಅರಣ್ಯ ಇಲಾಖೆಯು ಬೆಳೆಸಿರುವ ಕ್ಯಾಸುರಿನಾ ಮರಗಳ ಅರಣ್ಯವಾಗಿದೆ. ಸಮುದ್ರ ತೀರದ ಉದ್ದಕ್ಕೂ ಹರಡಿರುವ ಈ ಹಸಿರು ಪ್ರದೇಶವು ಕಡಲತೀರದ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಪ್ರವಾಸಿಗರಿಗೆ ನೆರಳು ಮತ್ತು ವಿಶ್ರಾಂತಿಯ ವಾತಾವರಣವನ್ನು ಒದಗಿಸುತ್ತದೆ. ಕಡಲತೀರದ ವಿಶಾಲತೆ, ಅಭಿವೃದ್ಧಿಪಡಿಸಲಾದ ಸೌಲಭ್ಯಗಳು ಮತ್ತು ಹಸಿರು ಪರಿಸರದ ಸಂಯೋಜನೆಯಿಂದ ಮುನಕ್ಕಲ್ ಕಡಲತೀರವು ತ್ರಿಶೂರ್ ಜಿಲ್ಲೆಯ ಪ್ರಮುಖ ಕರಾವಳಿ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
==ಉಲ್ಲೇಖಗಳು==
3aq3e3f3xzkv1yz5ecxmnxavej3pxh1
ಮುಂಡಕ್ಕಲ್ ಕಡಲತೀರ
0
180117
1379517
2026-08-08T18:29:24Z
Santhosh Notagar99
82732
ಹೊಸ ಪುಟ: ಮುಂಡಕ್ಕಲ್ ಕಡಲತೀರ (ಮಲಯಾಳಂ: മുണ്ടയ്ക്കല് ബീച്ച്)ವು ಕೇರಳದ ಕೊಲ್ಲಂ ನಗರದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಸ್ಥಳೀಯವಾಗಿ ಗೋಡಂಬಿ ಸಂಸ್ಕರಣಾ ಕೇಂದ್ರವಾಗಿರುವ ಮುಂಡಕ್ಕಲ್ ಪ್ರದೇಶದಲ್ಲಿದೆ. ಈ ಕಡಲ...
1379517
wikitext
text/x-wiki
ಮುಂಡಕ್ಕಲ್ ಕಡಲತೀರ (ಮಲಯಾಳಂ: മുണ്ടയ്ക്കല് ബീച്ച്)ವು ಕೇರಳದ ಕೊಲ್ಲಂ ನಗರದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಸ್ಥಳೀಯವಾಗಿ ಗೋಡಂಬಿ ಸಂಸ್ಕರಣಾ ಕೇಂದ್ರವಾಗಿರುವ ಮುಂಡಕ್ಕಲ್ ಪ್ರದೇಶದಲ್ಲಿದೆ. ಈ ಕಡಲತೀರವು ‘ಮುಂಡಕ್ಕಲ್ ಪಾಪನಾಶಂ ಬೀಚ್’ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮುಂಡಕ್ಕಲ್ ಪಾಪನಾಶಂ ಕಡಲತೀರದ ನೀರಿನಲ್ಲಿ ಸ್ನಾನ ಮಾಡುವುದರಿಂದ ಜೀವನದಲ್ಲಿನ ಪಾಪಗಳು ನಿವಾರಣೆಯಾಗುತ್ತವೆ ಎಂದು ಭಕ್ತರು ನಂಬುತ್ತಾರೆ. 2016ರ ಜೂನ್ 21ರಂದು ‘ಹನ್ಸಿತಾ’ ಎಂಬ ಡ್ರೆಜರ್ ಹಡಗು ಸಮುದ್ರದ ಅಲೆಗಳ ರಭಸದಿಂದ ಕಡಲತೀರಕ್ಕೆ ಬಂದು ದಡ ಸೇರಿದ್ದು, 2017ರ ಅಕ್ಟೋಬರ್ 18ರಂದು ಅದರ ತೆರವು ಕಾರ್ಯ ಆರಂಭವಾಯಿತು.
== ಸ್ಥಳ ==
ಮುಂಡಕ್ಕಲ್ ಕಡಲತೀರವು ಕೊಲ್ಲಂ–ಪರವೂರ್ ಕರಾವಳಿ ರಸ್ತೆಯ ಪಕ್ಕದಲ್ಲಿದೆ. ಇದು ಕೊಲ್ಲಂ ನಗರದ ಪ್ರಮುಖ ಪ್ರದೇಶವಾದ ಚಿನ್ನಕ್ಕಡದಿಂದ ಸುಮಾರು 4 ಕಿಲೋಮೀಟರ್ ಮತ್ತು ಪರವೂರಿನಿಂದ ಸುಮಾರು 11.2 ಕಿಲೋಮೀಟರ್ ದೂರದಲ್ಲಿದೆ. ನಗರದ ಸಮೀಪದಲ್ಲಿರುವುದರಿಂದ ರಸ್ತೆ ಮಾರ್ಗದ ಮೂಲಕ ಕಡಲತೀರವನ್ನು ಸುಲಭವಾಗಿ ತಲುಪಬಹುದು. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯ ಮತ್ತು ಧಾರ್ಮಿಕ ಮಹತ್ವದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
== ಪ್ರವಾಸೋದ್ಯಮ ಮತ್ತು ಧಾರ್ಮಿಕ ಮಹತ್ವ ==
‘ಹನ್ಸಿತಾ’ ಡ್ರೆಜರ್ ಹಡಗು ದಡಕ್ಕೆ ಬಂದು ನಿಂತ ನಂತರ ಮುಂಡಕ್ಕಲ್ ಕಡಲತೀರವು ಕೊಲ್ಲಂ ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೆಚ್ಚಿನ ಗಮನ ಸೆಳೆಯಿತು. ಈ ಹಡಗು 2013ರ ನವೆಂಬರ್ನಿಂದ ಕೊಲ್ಲಂ ಕರಾವಳಿಯಿಂದ ಸುಮಾರು 3 ನಾಟಿಕಲ್ ಮೈಲು ದೂರದಲ್ಲಿ ಲಂಗರು ಹಾಕಲಾಗಿತ್ತು. 2016ರ ಜೂನ್ನಲ್ಲಿ ಉಂಟಾದ ಭಾರೀ ಅಲೆಗಳ ಪರಿಣಾಮವಾಗಿ ಅದು ಮುಂಡಕ್ಕಲ್ ಕಡಲತೀರಕ್ಕೆ ಕೊಚ್ಚಿಕೊಂಡು ಬಂದು ದಡ ಸೇರಿತು. ಕಡಲತೀರವು ವಾರ್ಷಿಕ ‘ಬಲಿತರ್ಪಣ’ ಆಚರಣೆಯ ಪ್ರಮುಖ ಸ್ಥಳವೂ ಆಗಿದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ಮಲಯಾಳಂ ತಿಂಗಳ ಕರ್ಕಿಡಕಂನ ಅಮಾವಾಸ್ಯೆಯಂದು ನಡೆಸುವ ಈ ವಿಧಿಯು ಪೂರ್ವಜರ ಆತ್ಮಗಳಿಗೆ ಶಾಂತಿ ನೀಡುತ್ತದೆ ಮತ್ತು ಮುಂದಿನ ವರ್ಷದಲ್ಲಿ ಶುಭಫಲವನ್ನು ತರುತ್ತದೆ ಎಂದು ನಂಬಲಾಗುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ, ಮುಂಡಕ್ಕಲ್ ಮತ್ತು ತಿರುವುಳ್ಳವರಂ ಕಡಲತೀರಗಳಲ್ಲಿ ಬಲಿಕರ್ಮವನ್ನು ನೆರವೇರಿಸುತ್ತಾರೆ
1l431g4b1v3c48who87h0ecv32ljsby
1379518
1379517
2026-08-08T18:33:44Z
Santhosh Notagar99
82732
1379518
wikitext
text/x-wiki
{{Short description|Tourism beach in Kollam, Kerala, India}}
{{Use dmy dates|date=November 2017}}
{{Use Indian English|date=November 2017}}
{{Infobox landform
| name = ಮುಂಡಕ್ಕಲ್ Beach<br>മുണ്ടയ്ക്കല് ബീച്ച്
| other_name =
| image = Dredger ship "Hansitha" at Kollam Mundakkal coast, July 2016.jpg
| image_size =
| alt =
| caption = A dredger ship washed up on the Mundakkal beach
| pushpin_map = India Kollam#Kerala#India
| map_width =
| map_caption =
| pushpin_alt =
| pushpin_relief =
| pushpin_label =
| mark =
| marker_size =
| location = [[Mundakkal]], [[Kollam]], [[India]]
| grid_ref =
| grid_ref_UK =
| grid_ref_Ireland =
| coordinates = {{coord|8|51|46.5|N|76|36|21.7|E|display=inline}}
| coordinates_ref =
| range =
| part_of =
| water_bodies =
| length = 350+ m
| formed_by =
| type = Beach
| free_label_1 = Patrolled by
| free_data_1 =
| free_label_2 = Hazard rating
| free_data_2 = <span style="color:#090">'''Low'''</span>
| free_label_3 = Access
| free_data_3 = [[Kollam KSRTC Bus Station|Bus Station]] {{rint|bus}} - 4.7 km,<br>[[Kollam Junction railway station|Railway Station]] {{rint|rail}} - 3.9 km, <br>[[Kollam KSWTD Ferry Terminal|Ferry Terminal]] {{rint|ferry}} - 4.7 km
| embedded = {{succession links|left=[[Thanni Beach]]|right=[[Kollam Beach]]}}
}}
ಮುಂಡಕ್ಕಲ್ ಕಡಲತೀರ (ಮಲಯಾಳಂ: മുണ്ടയ്ക്കല് ബീച്ച്)ವು ಕೇರಳದ ಕೊಲ್ಲಂ ನಗರದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಸ್ಥಳೀಯವಾಗಿ ಗೋಡಂಬಿ ಸಂಸ್ಕರಣಾ ಕೇಂದ್ರವಾಗಿರುವ ಮುಂಡಕ್ಕಲ್ ಪ್ರದೇಶದಲ್ಲಿದೆ. ಈ ಕಡಲತೀರವು ‘ಮುಂಡಕ್ಕಲ್ ಪಾಪನಾಶಂ ಬೀಚ್’ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮುಂಡಕ್ಕಲ್ ಪಾಪನಾಶಂ ಕಡಲತೀರದ ನೀರಿನಲ್ಲಿ ಸ್ನಾನ ಮಾಡುವುದರಿಂದ ಜೀವನದಲ್ಲಿನ ಪಾಪಗಳು ನಿವಾರಣೆಯಾಗುತ್ತವೆ ಎಂದು ಭಕ್ತರು ನಂಬುತ್ತಾರೆ. 2016ರ ಜೂನ್ 21ರಂದು ‘ಹನ್ಸಿತಾ’ ಎಂಬ ಡ್ರೆಜರ್ ಹಡಗು ಸಮುದ್ರದ ಅಲೆಗಳ ರಭಸದಿಂದ ಕಡಲತೀರಕ್ಕೆ ಬಂದು ದಡ ಸೇರಿದ್ದು, 2017ರ ಅಕ್ಟೋಬರ್ 18ರಂದು ಅದರ ತೆರವು ಕಾರ್ಯ ಆರಂಭವಾಯಿತು.
== ಸ್ಥಳ ==
ಮುಂಡಕ್ಕಲ್ ಕಡಲತೀರವು ಕೊಲ್ಲಂ–ಪರವೂರ್ ಕರಾವಳಿ ರಸ್ತೆಯ ಪಕ್ಕದಲ್ಲಿದೆ. ಇದು ಕೊಲ್ಲಂ ನಗರದ ಪ್ರಮುಖ ಪ್ರದೇಶವಾದ ಚಿನ್ನಕ್ಕಡದಿಂದ ಸುಮಾರು 4 ಕಿಲೋಮೀಟರ್ ಮತ್ತು ಪರವೂರಿನಿಂದ ಸುಮಾರು 11.2 ಕಿಲೋಮೀಟರ್ ದೂರದಲ್ಲಿದೆ. ನಗರದ ಸಮೀಪದಲ್ಲಿರುವುದರಿಂದ ರಸ್ತೆ ಮಾರ್ಗದ ಮೂಲಕ ಕಡಲತೀರವನ್ನು ಸುಲಭವಾಗಿ ತಲುಪಬಹುದು. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯ ಮತ್ತು ಧಾರ್ಮಿಕ ಮಹತ್ವದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
== ಪ್ರವಾಸೋದ್ಯಮ ಮತ್ತು ಧಾರ್ಮಿಕ ಮಹತ್ವ ==
‘ಹನ್ಸಿತಾ’ ಡ್ರೆಜರ್ ಹಡಗು ದಡಕ್ಕೆ ಬಂದು ನಿಂತ ನಂತರ ಮುಂಡಕ್ಕಲ್ ಕಡಲತೀರವು ಕೊಲ್ಲಂ ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೆಚ್ಚಿನ ಗಮನ ಸೆಳೆಯಿತು. ಈ ಹಡಗು 2013ರ ನವೆಂಬರ್ನಿಂದ ಕೊಲ್ಲಂ ಕರಾವಳಿಯಿಂದ ಸುಮಾರು 3 ನಾಟಿಕಲ್ ಮೈಲು ದೂರದಲ್ಲಿ ಲಂಗರು ಹಾಕಲಾಗಿತ್ತು. 2016ರ ಜೂನ್ನಲ್ಲಿ ಉಂಟಾದ ಭಾರೀ ಅಲೆಗಳ ಪರಿಣಾಮವಾಗಿ ಅದು ಮುಂಡಕ್ಕಲ್ ಕಡಲತೀರಕ್ಕೆ ಕೊಚ್ಚಿಕೊಂಡು ಬಂದು ದಡ ಸೇರಿತು. ಕಡಲತೀರವು ವಾರ್ಷಿಕ ‘ಬಲಿತರ್ಪಣ’ ಆಚರಣೆಯ ಪ್ರಮುಖ ಸ್ಥಳವೂ ಆಗಿದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ಮಲಯಾಳಂ ತಿಂಗಳ ಕರ್ಕಿಡಕಂನ ಅಮಾವಾಸ್ಯೆಯಂದು ನಡೆಸುವ ಈ ವಿಧಿಯು ಪೂರ್ವಜರ ಆತ್ಮಗಳಿಗೆ ಶಾಂತಿ ನೀಡುತ್ತದೆ ಮತ್ತು ಮುಂದಿನ ವರ್ಷದಲ್ಲಿ ಶುಭಫಲವನ್ನು ತರುತ್ತದೆ ಎಂದು ನಂಬಲಾಗುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ, ಮುಂಡಕ್ಕಲ್ ಮತ್ತು ತಿರುವುಳ್ಳವರಂ ಕಡಲತೀರಗಳಲ್ಲಿ ಬಲಿಕರ್ಮವನ್ನು ನೆರವೇರಿಸುತ್ತಾರೆ
==ಉಲ್ಲೇಖಗಳು==
m9q1cyttn96ana2f18c3mh43m7gj8yg
1379519
1379518
2026-08-08T18:36:51Z
Santhosh Notagar99
82732
1379519
wikitext
text/x-wiki
{{Short description|Tourism beach in Kollam, Kerala, India}}
{{Use dmy dates|date=November 2017}}
{{Use Indian English|date=November 2017}}
{{Infobox landform
| name = ಮುಂಡಕ್ಕಲ್ Beach<br>മുണ്ടയ്ക്കല് ബീച്ച്
| other_name =
| image = Dredger ship "Hansitha" at Kollam Mundakkal coast, July 2016.jpg
| image_size =
| alt =
| caption = A dredger ship washed up on the Mundakkal beach
| pushpin_map = India Kollam#Kerala#India
| map_width =
| map_caption =
| pushpin_alt =
| pushpin_relief =
| pushpin_label =
| mark =
| marker_size =
}}
ಮುಂಡಕ್ಕಲ್ ಕಡಲತೀರ (ಮಲಯಾಳಂ: മുണ്ടയ്ക്കല് ബീച്ച്)ವು ಕೇರಳದ ಕೊಲ್ಲಂ ನಗರದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಸ್ಥಳೀಯವಾಗಿ ಗೋಡಂಬಿ ಸಂಸ್ಕರಣಾ ಕೇಂದ್ರವಾಗಿರುವ ಮುಂಡಕ್ಕಲ್ ಪ್ರದೇಶದಲ್ಲಿದೆ. ಈ ಕಡಲತೀರವು ‘ಮುಂಡಕ್ಕಲ್ ಪಾಪನಾಶಂ ಬೀಚ್’ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮುಂಡಕ್ಕಲ್ ಪಾಪನಾಶಂ ಕಡಲತೀರದ ನೀರಿನಲ್ಲಿ ಸ್ನಾನ ಮಾಡುವುದರಿಂದ ಜೀವನದಲ್ಲಿನ ಪಾಪಗಳು ನಿವಾರಣೆಯಾಗುತ್ತವೆ ಎಂದು ಭಕ್ತರು ನಂಬುತ್ತಾರೆ. 2016ರ ಜೂನ್ 21ರಂದು ‘ಹನ್ಸಿತಾ’ ಎಂಬ ಡ್ರೆಜರ್ ಹಡಗು ಸಮುದ್ರದ ಅಲೆಗಳ ರಭಸದಿಂದ ಕಡಲತೀರಕ್ಕೆ ಬಂದು ದಡ ಸೇರಿದ್ದು, 2017ರ ಅಕ್ಟೋಬರ್ 18ರಂದು ಅದರ ತೆರವು ಕಾರ್ಯ ಆರಂಭವಾಯಿತು.
== ಸ್ಥಳ ==
ಮುಂಡಕ್ಕಲ್ ಕಡಲತೀರವು ಕೊಲ್ಲಂ–ಪರವೂರ್ ಕರಾವಳಿ ರಸ್ತೆಯ ಪಕ್ಕದಲ್ಲಿದೆ. ಇದು ಕೊಲ್ಲಂ ನಗರದ ಪ್ರಮುಖ ಪ್ರದೇಶವಾದ ಚಿನ್ನಕ್ಕಡದಿಂದ ಸುಮಾರು 4 ಕಿಲೋಮೀಟರ್ ಮತ್ತು ಪರವೂರಿನಿಂದ ಸುಮಾರು 11.2 ಕಿಲೋಮೀಟರ್ ದೂರದಲ್ಲಿದೆ. ನಗರದ ಸಮೀಪದಲ್ಲಿರುವುದರಿಂದ ರಸ್ತೆ ಮಾರ್ಗದ ಮೂಲಕ ಕಡಲತೀರವನ್ನು ಸುಲಭವಾಗಿ ತಲುಪಬಹುದು. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯ ಮತ್ತು ಧಾರ್ಮಿಕ ಮಹತ್ವದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
== ಪ್ರವಾಸೋದ್ಯಮ ಮತ್ತು ಧಾರ್ಮಿಕ ಮಹತ್ವ ==
‘ಹನ್ಸಿತಾ’ ಡ್ರೆಜರ್ ಹಡಗು ದಡಕ್ಕೆ ಬಂದು ನಿಂತ ನಂತರ ಮುಂಡಕ್ಕಲ್ ಕಡಲತೀರವು ಕೊಲ್ಲಂ ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೆಚ್ಚಿನ ಗಮನ ಸೆಳೆಯಿತು. ಈ ಹಡಗು 2013ರ ನವೆಂಬರ್ನಿಂದ ಕೊಲ್ಲಂ ಕರಾವಳಿಯಿಂದ ಸುಮಾರು 3 ನಾಟಿಕಲ್ ಮೈಲು ದೂರದಲ್ಲಿ ಲಂಗರು ಹಾಕಲಾಗಿತ್ತು. 2016ರ ಜೂನ್ನಲ್ಲಿ ಉಂಟಾದ ಭಾರೀ ಅಲೆಗಳ ಪರಿಣಾಮವಾಗಿ ಅದು ಮುಂಡಕ್ಕಲ್ ಕಡಲತೀರಕ್ಕೆ ಕೊಚ್ಚಿಕೊಂಡು ಬಂದು ದಡ ಸೇರಿತು. ಕಡಲತೀರವು ವಾರ್ಷಿಕ ‘ಬಲಿತರ್ಪಣ’ ಆಚರಣೆಯ ಪ್ರಮುಖ ಸ್ಥಳವೂ ಆಗಿದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ಮಲಯಾಳಂ ತಿಂಗಳ ಕರ್ಕಿಡಕಂನ ಅಮಾವಾಸ್ಯೆಯಂದು ನಡೆಸುವ ಈ ವಿಧಿಯು ಪೂರ್ವಜರ ಆತ್ಮಗಳಿಗೆ ಶಾಂತಿ ನೀಡುತ್ತದೆ ಮತ್ತು ಮುಂದಿನ ವರ್ಷದಲ್ಲಿ ಶುಭಫಲವನ್ನು ತರುತ್ತದೆ ಎಂದು ನಂಬಲಾಗುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ, ಮುಂಡಕ್ಕಲ್ ಮತ್ತು ತಿರುವುಳ್ಳವರಂ ಕಡಲತೀರಗಳಲ್ಲಿ ಬಲಿಕರ್ಮವನ್ನು ನೆರವೇರಿಸುತ್ತಾರೆ
==ಉಲ್ಲೇಖಗಳು==
9v0vf52pxi4p9xi56amy8759g8n0vxc
1379520
1379519
2026-08-08T18:39:37Z
Santhosh Notagar99
82732
1379520
wikitext
text/x-wiki
{{Short description|Tourism beach in Kollam, Kerala, India}}
{{Use dmy dates|date=November 2017}}
{{Use Indian English|date=November 2017}}
{{Infobox landform
| name = ಮುಂಡಕ್ಕಲ್ Beach<br>മുണ്ടയ്ക്കല് ബീച്ച്
| other_name =
| image = Dredger ship "Hansitha" at Kollam Mundakkal coast, July 2016.jpg
| image_size =
| alt =
| caption = A dredger ship washed up on the Mundakkal beach
| pushpin_map = India Kollam#Kerala#India
| map_width =
| map_caption =
| pushpin_alt =
| pushpin_relief =
| pushpin_label =
| mark =
| marker_size =
}}
ಮುಂಡಕ್ಕಲ್ ಕಡಲತೀರ (ಮಲಯಾಳಂ: മുണ്ടയ്ക്കല് ബീച്ച്)ವು ಕೇರಳದ ಕೊಲ್ಲಂ ನಗರದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಸ್ಥಳೀಯವಾಗಿ ಗೋಡಂಬಿ ಸಂಸ್ಕರಣಾ ಕೇಂದ್ರವಾಗಿರುವ ಮುಂಡಕ್ಕಲ್ ಪ್ರದೇಶದಲ್ಲಿದೆ. ಈ ಕಡಲತೀರವು ‘ಮುಂಡಕ್ಕಲ್ ಪಾಪನಾಶಂ ಬೀಚ್’ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮುಂಡಕ್ಕಲ್ ಪಾಪನಾಶಂ ಕಡಲತೀರದ ನೀರಿನಲ್ಲಿ ಸ್ನಾನ ಮಾಡುವುದರಿಂದ ಜೀವನದಲ್ಲಿನ ಪಾಪಗಳು ನಿವಾರಣೆಯಾಗುತ್ತವೆ ಎಂದು ಭಕ್ತರು ನಂಬುತ್ತಾರೆ. 2016ರ ಜೂನ್ 21ರಂದು ‘ಹನ್ಸಿತಾ’ ಎಂಬ ಡ್ರೆಜರ್ ಹಡಗು ಸಮುದ್ರದ ಅಲೆಗಳ ರಭಸದಿಂದ ಕಡಲತೀರಕ್ಕೆ ಬಂದು ದಡ ಸೇರಿದ್ದು, 2017ರ ಅಕ್ಟೋಬರ್ 18ರಂದು ಅದರ ತೆರವು ಕಾರ್ಯ ಆರಂಭವಾಯಿತು. <ref>{{Cite web |url=https://www.dtpckollam.com/destination/mundakkal-beach |title=Mundakkal Beach {{!}} DTPC |website=DTPC kollam |language=en |access-date=2026-07-29}}</ref><ref>{{Cite web |author=Copyright-The World Beach Guide|website=World Beach Guide |url=https://www.worldbeachguide.com/india/mundakkal-beach.htm |title=Mundakkal Beach / Kerala / India |language=en |access-date=2026-07-29}}</ref><ref>{{Cite web |url=https://hikollam.com/mundakkalbeach.html |title=Mundakkal Beach Kollam - Hi Kollam |website=hikollam.com |access-date=2026-07-29}}</ref>
<ref>{{cite web|url=http://www.thehindu.com/news/national/kerala/Dredger-on-Mundakkal-beach-gets-many-visitors/article14404722.ece |title=Dredger on Mundakkal beach gets many visitors |publisher=The Hindu |date=27 June 2016| access-date=9 June 2017}}</ref> <ref>{{cite web|url=http://www.thehindu.com/news/national/kerala/scrapping-of-dredger-hansita-begins/article19883501.ece |title=Scrapping of dredger Hansita begins |publisher=The Hindu |date=19 October 2017| access-date=20 October 2017}}</ref>
== ಸ್ಥಳ ==
ಮುಂಡಕ್ಕಲ್ ಕಡಲತೀರವು ಕೊಲ್ಲಂ–ಪರವೂರ್ ಕರಾವಳಿ ರಸ್ತೆಯ ಪಕ್ಕದಲ್ಲಿದೆ. ಇದು ಕೊಲ್ಲಂ ನಗರದ ಪ್ರಮುಖ ಪ್ರದೇಶವಾದ ಚಿನ್ನಕ್ಕಡದಿಂದ ಸುಮಾರು 4 ಕಿಲೋಮೀಟರ್ ಮತ್ತು ಪರವೂರಿನಿಂದ ಸುಮಾರು 11.2 ಕಿಲೋಮೀಟರ್ ದೂರದಲ್ಲಿದೆ. ನಗರದ ಸಮೀಪದಲ್ಲಿರುವುದರಿಂದ ರಸ್ತೆ ಮಾರ್ಗದ ಮೂಲಕ ಕಡಲತೀರವನ್ನು ಸುಲಭವಾಗಿ ತಲುಪಬಹುದು. ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಈ ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯ ಮತ್ತು ಧಾರ್ಮಿಕ ಮಹತ್ವದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
== ಪ್ರವಾಸೋದ್ಯಮ ಮತ್ತು ಧಾರ್ಮಿಕ ಮಹತ್ವ ==
‘ಹನ್ಸಿತಾ’ ಡ್ರೆಜರ್ ಹಡಗು ದಡಕ್ಕೆ ಬಂದು ನಿಂತ ನಂತರ ಮುಂಡಕ್ಕಲ್ ಕಡಲತೀರವು ಕೊಲ್ಲಂ ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೆಚ್ಚಿನ ಗಮನ ಸೆಳೆಯಿತು. ಈ ಹಡಗು 2013ರ ನವೆಂಬರ್ನಿಂದ ಕೊಲ್ಲಂ ಕರಾವಳಿಯಿಂದ ಸುಮಾರು 3 ನಾಟಿಕಲ್ ಮೈಲು ದೂರದಲ್ಲಿ ಲಂಗರು ಹಾಕಲಾಗಿತ್ತು. 2016ರ ಜೂನ್ನಲ್ಲಿ ಉಂಟಾದ ಭಾರೀ ಅಲೆಗಳ ಪರಿಣಾಮವಾಗಿ ಅದು ಮುಂಡಕ್ಕಲ್ ಕಡಲತೀರಕ್ಕೆ ಕೊಚ್ಚಿಕೊಂಡು ಬಂದು ದಡ ಸೇರಿತು. ಕಡಲತೀರವು ವಾರ್ಷಿಕ ‘ಬಲಿತರ್ಪಣ’ ಆಚರಣೆಯ ಪ್ರಮುಖ ಸ್ಥಳವೂ ಆಗಿದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ಮಲಯಾಳಂ ತಿಂಗಳ ಕರ್ಕಿಡಕಂನ ಅಮಾವಾಸ್ಯೆಯಂದು ನಡೆಸುವ ಈ ವಿಧಿಯು ಪೂರ್ವಜರ ಆತ್ಮಗಳಿಗೆ ಶಾಂತಿ ನೀಡುತ್ತದೆ ಮತ್ತು ಮುಂದಿನ ವರ್ಷದಲ್ಲಿ ಶುಭಫಲವನ್ನು ತರುತ್ತದೆ ಎಂದು ನಂಬಲಾಗುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ, ಮುಂಡಕ್ಕಲ್ ಮತ್ತು ತಿರುವುಳ್ಳವರಂ ಕಡಲತೀರಗಳಲ್ಲಿ ಬಲಿಕರ್ಮವನ್ನು ನೆರವೇರಿಸುತ್ತಾರೆ. <ref>https://en.wikipedia.org/wiki/Mundakkal_Beach</ref>
==ಉಲ್ಲೇಖಗಳು==
44k1fe0emob26tb1thlee40nip481ib
ಪಡಿಂಜರೆಕ್ಕರ ಕಡಲತೀರ
0
180118
1379522
2026-08-08T18:50:11Z
Santhosh Notagar99
82732
ಹೊಸ ಪುಟ: ಪಡಿಂಜರೆಕ್ಕರ ಕಡಲತೀರ (Padinjarekkara Beach), ಅಝಿಮುಖಂ ಕಡಲತೀರ ಎಂದೂ ಕರೆಯಲ್ಪಡುವ, ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರು ಪ್ರದೇಶದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಪ್ರವಾಸಿ ತಾಣವಾಗಿದೆ. ಅರಬ್ಬಿ ಸಮುದ್ರ ಮತ್ತು ನದಿಮುಖ...
1379522
wikitext
text/x-wiki
ಪಡಿಂಜರೆಕ್ಕರ ಕಡಲತೀರ (Padinjarekkara Beach), ಅಝಿಮುಖಂ ಕಡಲತೀರ ಎಂದೂ ಕರೆಯಲ್ಪಡುವ, ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರು ಪ್ರದೇಶದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಪ್ರವಾಸಿ ತಾಣವಾಗಿದೆ. ಅರಬ್ಬಿ ಸಮುದ್ರ ಮತ್ತು ನದಿಮುಖ ಪ್ರದೇಶದ ಸುಂದರ ನೈಸರ್ಗಿಕ ದೃಶ್ಯಗಳನ್ನು ಹೊಂದಿರುವ ಈ ಕಡಲತೀರವು ತನ್ನ ವಿಶಾಲವಾದ ಮರಳು ಪ್ರದೇಶ, ಸಮುದ್ರದ ಗಾಳಿ ಮತ್ತು ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕರಾವಳಿ ಸೌಂದರ್ಯದ ಜೊತೆಗೆ ಸಾಹಸ ಮತ್ತು ಮನರಂಜನಾ ಚಟುವಟಿಕೆಗಳಿಗೂ ಈ ಪ್ರದೇಶವು ಪ್ರಸಿದ್ಧವಾಗಿದೆ. <ref name="charmed">{{Cite web |title=Charmed by kites on Koottayi beach |url=https://www.thehindu.com/news/national/kerala/charmed-by-kites-on-koottayi-beach/article6997802.ece |work=[[The Hindu]] |date=16 March 2015 |access-date=2 August 2023}}</ref>
== ಕಾರ್ಯಕ್ರಮಗಳು ==
ಪಡಿಂಜರೆಕ್ಕರ ಕಡಲತೀರವು ಕೇರಳದಲ್ಲಿ ಗಾಳಿಪಟ ಹಾರಿಸುವ ಕಾರ್ಯಕ್ರಮವನ್ನು ಆಯೋಜಿಸಿದ ಮೊದಲ ಕಡಲತೀರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಲ್ಲಿ ನಡೆಯುವ ಗಾಳಿಪಟ ಹಾರಿಸುವ ಕಾರ್ಯಕ್ರಮ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ವಿವಿಧ ಬಣ್ಣಗಳು ಮತ್ತು ಆಕಾರಗಳ ಗಾಳಿಪಟಗಳು ಆಕಾಶದಲ್ಲಿ ಹಾರಾಡುವ ದೃಶ್ಯವು ಕಡಲತೀರದ ವಾತಾವರಣವನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ. ಕುಟುಂಬಗಳು, ಮಕ್ಕಳು ಮತ್ತು ಪ್ರವಾಸಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಥವಾ ವೀಕ್ಷಿಸಿ ಮನರಂಜನೆಯನ್ನು ಪಡೆಯುತ್ತಾರೆ. <ref>{{Cite web |title=Paramotoring launched at Padinjarekkara Beach |url=https://www.thehindu.com/news/national/kerala/paramotoring-launched-at-padinjarekkara-beach/article26561912.ece |work=[[The Hindu]] |date=17 March 2019 |access-date=2 August 2023}}</ref>
== ಪ್ರವಾಸಿ ಆಕರ್ಷಣೆಗಳು ==
ಪಡಿಂಜರೆಕ್ಕರ ಕಡಲತೀರದ ಪ್ರಮುಖ ಸಾಹಸ ಚಟುವಟಿಕೆಗಳಲ್ಲಿ ಪ್ಯಾರಾಮೋಟರಿಂಗ್ ಕೂಡ ಒಂದಾಗಿದೆ. ಮೋಟಾರ್ ಚಾಲಿತ ಪ್ಯಾರಾಗ್ಲೈಡರ್ನ ಸಹಾಯದಿಂದ ಆಕಾಶದಲ್ಲಿ ಹಾರುತ್ತಾ ಕಡಲತೀರ, ಸಮುದ್ರ ಮತ್ತು ಸುತ್ತಮುತ್ತಲಿನ ನೈಸರ್ಗಿಕ ಭೂದೃಶ್ಯವನ್ನು ಮೇಲಿನಿಂದ ವೀಕ್ಷಿಸುವ ಅವಕಾಶವನ್ನು ಇದು ನೀಡುತ್ತದೆ. ವಿಶೇಷವಾಗಿ ಸಾಹಸ ಪ್ರವಾಸವನ್ನು ಇಷ್ಟಪಡುವವರಿಗೆ ಪ್ಯಾರಾಮೋಟರಿಂಗ್ ವಿಭಿನ್ನ ಅನುಭವವನ್ನು ಒದಗಿಸುತ್ತದೆ. ಕಡಲತೀರದ ನೈಸರ್ಗಿಕ ಸೌಂದರ್ಯ, ಗಾಳಿಪಟ ಹಾರಿಸುವ ಕಾರ್ಯಕ್ರಮ ಮತ್ತು ಸಾಹಸ ಚಟುವಟಿಕೆಗಳ ಸಂಯೋಜನೆಯಿಂದ ಪಡಿಂಜರೆಕ್ಕರ ಕಡಲತೀರವು ಮಲಪ್ಪುರಂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
== ಚಿತ್ರಗಳು ==
<gallery mode="packed-hover" heights="160">
File:Padinjarekara Azhimukham Beach 3.png
File:Padinjarekara Azhimukham Beach 5.png
</gallery>
==ಉಲ್ಲೇಖಗಳು==
7xbeaymvzo2i3by71ppkthvy95kwjbc
1379523
1379522
2026-08-08T18:51:11Z
Santhosh Notagar99
82732
1379523
wikitext
text/x-wiki
ಪಡಿಂಜರೆಕ್ಕರ ಕಡಲತೀರ (Padinjarekkara Beach), ಅಝಿಮುಖಂ ಕಡಲತೀರ ಎಂದೂ ಕರೆಯಲ್ಪಡುವ, ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರು ಪ್ರದೇಶದಲ್ಲಿರುವ ಪ್ರಸಿದ್ಧ ಕಡಲತೀರ ಮತ್ತು ಪ್ರವಾಸಿ ತಾಣವಾಗಿದೆ. ಅರಬ್ಬಿ ಸಮುದ್ರ ಮತ್ತು ನದಿಮುಖ ಪ್ರದೇಶದ ಸುಂದರ ನೈಸರ್ಗಿಕ ದೃಶ್ಯಗಳನ್ನು ಹೊಂದಿರುವ ಈ ಕಡಲತೀರವು ತನ್ನ ವಿಶಾಲವಾದ ಮರಳು ಪ್ರದೇಶ, ಸಮುದ್ರದ ಗಾಳಿ ಮತ್ತು ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕರಾವಳಿ ಸೌಂದರ್ಯದ ಜೊತೆಗೆ ಸಾಹಸ ಮತ್ತು ಮನರಂಜನಾ ಚಟುವಟಿಕೆಗಳಿಗೂ ಈ ಪ್ರದೇಶವು ಪ್ರಸಿದ್ಧವಾಗಿದೆ. <ref name="charmed">{{Cite web |title=Charmed by kites on Koottayi beach |url=https://www.thehindu.com/news/national/kerala/charmed-by-kites-on-koottayi-beach/article6997802.ece |work=[[The Hindu]] |date=16 March 2015 |access-date=2 August 2023}}</ref>
== ಕಾರ್ಯಕ್ರಮಗಳು ==
ಪಡಿಂಜರೆಕ್ಕರ ಕಡಲತೀರವು ಕೇರಳದಲ್ಲಿ ಗಾಳಿಪಟ ಹಾರಿಸುವ ಕಾರ್ಯಕ್ರಮವನ್ನು ಆಯೋಜಿಸಿದ ಮೊದಲ ಕಡಲತೀರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಲ್ಲಿ ನಡೆಯುವ ಗಾಳಿಪಟ ಹಾರಿಸುವ ಕಾರ್ಯಕ್ರಮ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ವಿವಿಧ ಬಣ್ಣಗಳು ಮತ್ತು ಆಕಾರಗಳ ಗಾಳಿಪಟಗಳು ಆಕಾಶದಲ್ಲಿ ಹಾರಾಡುವ ದೃಶ್ಯವು ಕಡಲತೀರದ ವಾತಾವರಣವನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ. ಕುಟುಂಬಗಳು, ಮಕ್ಕಳು ಮತ್ತು ಪ್ರವಾಸಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಥವಾ ವೀಕ್ಷಿಸಿ ಮನರಂಜನೆಯನ್ನು ಪಡೆಯುತ್ತಾರೆ. <ref>{{Cite web |title=Paramotoring launched at Padinjarekkara Beach |url=https://www.thehindu.com/news/national/kerala/paramotoring-launched-at-padinjarekkara-beach/article26561912.ece |work=[[The Hindu]] |date=17 March 2019 |access-date=2 August 2023}}</ref>
== ಪ್ರವಾಸಿ ಆಕರ್ಷಣೆಗಳು ==
ಪಡಿಂಜರೆಕ್ಕರ ಕಡಲತೀರದ ಪ್ರಮುಖ ಸಾಹಸ ಚಟುವಟಿಕೆಗಳಲ್ಲಿ ಪ್ಯಾರಾಮೋಟರಿಂಗ್ ಕೂಡ ಒಂದಾಗಿದೆ. ಮೋಟಾರ್ ಚಾಲಿತ ಪ್ಯಾರಾಗ್ಲೈಡರ್ನ ಸಹಾಯದಿಂದ ಆಕಾಶದಲ್ಲಿ ಹಾರುತ್ತಾ ಕಡಲತೀರ, ಸಮುದ್ರ ಮತ್ತು ಸುತ್ತಮುತ್ತಲಿನ ನೈಸರ್ಗಿಕ ಭೂದೃಶ್ಯವನ್ನು ಮೇಲಿನಿಂದ ವೀಕ್ಷಿಸುವ ಅವಕಾಶವನ್ನು ಇದು ನೀಡುತ್ತದೆ. ವಿಶೇಷವಾಗಿ ಸಾಹಸ ಪ್ರವಾಸವನ್ನು ಇಷ್ಟಪಡುವವರಿಗೆ ಪ್ಯಾರಾಮೋಟರಿಂಗ್ ವಿಭಿನ್ನ ಅನುಭವವನ್ನು ಒದಗಿಸುತ್ತದೆ. ಕಡಲತೀರದ ನೈಸರ್ಗಿಕ ಸೌಂದರ್ಯ, ಗಾಳಿಪಟ ಹಾರಿಸುವ ಕಾರ್ಯಕ್ರಮ ಮತ್ತು ಸಾಹಸ ಚಟುವಟಿಕೆಗಳ ಸಂಯೋಜನೆಯಿಂದ ಪಡಿಂಜರೆಕ್ಕರ ಕಡಲತೀರವು ಮಲಪ್ಪುರಂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.<ref>https://en.wikipedia.org/wiki/Padinjarekkara_Beach</ref>
== ಚಿತ್ರಗಳು ==
<gallery mode="packed-hover" heights="160">
File:Padinjarekara Azhimukham Beach 3.png
File:Padinjarekara Azhimukham Beach 5.png
</gallery>
==ಉಲ್ಲೇಖಗಳು==
6jmhdt84prk80e7t7477ol2te02l62g
ಸ್ನೇಹತೀರಂ ಕಡಲತೀರ
0
180119
1379524
2026-08-08T18:56:43Z
Santhosh Notagar99
82732
ಹೊಸ ಪುಟ: '''ಸ್ನೇಹತೀರಂ ಕಡಲತೀರ''' (Snehatheeram Beach), ಲವ್ ಶೋರ್ (Love Shore) ಎಂದೂ ಕರೆಯಲ್ಪಡುವ, ಕೇರಳದ ತ್ರಿಶೂರ್ ಜಿಲ್ಲೆಯ ತಳಿಕುಳಂ ಪ್ರದೇಶದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿದ್ದು, ವರ್ಷವಿಡೀ ದ...
1379524
wikitext
text/x-wiki
'''ಸ್ನೇಹತೀರಂ ಕಡಲತೀರ''' (Snehatheeram Beach), ಲವ್ ಶೋರ್ (Love Shore) ಎಂದೂ ಕರೆಯಲ್ಪಡುವ, ಕೇರಳದ ತ್ರಿಶೂರ್ ಜಿಲ್ಲೆಯ ತಳಿಕುಳಂ ಪ್ರದೇಶದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿದ್ದು, ವರ್ಷವಿಡೀ ದೇಶೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ತನ್ನ ನೈಸರ್ಗಿಕ ಸೌಂದರ್ಯ ಮತ್ತು ಉತ್ತಮ ಪ್ರವಾಸಿ ಸೌಲಭ್ಯಗಳಿಗಾಗಿ ಈ ಕಡಲತೀರವು ಪ್ರಸಿದ್ಧವಾಗಿದೆ. 2010ರಲ್ಲಿ ಕೇರಳ ಪ್ರವಾಸೋದ್ಯಮ ಇಲಾಖೆಯು ಸ್ನೇಹತೀರಂ ಕಡಲತೀರವನ್ನು ಅತ್ಯುತ್ತಮ ಕಡಲತೀರ ಪ್ರವಾಸೋದ್ಯಮ ತಾಣವಾಗಿ ಆಯ್ಕೆ ಮಾಡಿತ್ತು. ಕಡಲತೀರದ ನಿರ್ವಹಣೆಯನ್ನು ಕೇರಳ ಪ್ರವಾಸೋದ್ಯಮ ಇಲಾಖೆಯು ಮಾಡುತ್ತದೆ.
== ಪ್ರವಾಸಿ ಸೌಲಭ್ಯಗಳು ==
ಕಡಲತೀರದ ಸಮೀಪದಲ್ಲಿ ಮಕ್ಕಳಿಗಾಗಿ ವಿವಿಧ ಸೌಲಭ್ಯಗಳನ್ನು ಹೊಂದಿರುವ ಮಕ್ಕಳ ಉದ್ಯಾನವನವಿದೆ. ಉದ್ಯಾನವನಕ್ಕೆ ಪ್ರವೇಶ ಶುಲ್ಕವಾಗಿ ವಯಸ್ಕರಿಗೆ ₹10 ಮತ್ತು ಮಕ್ಕಳಿಗೆ ₹5 ವಿಧಿಸಲಾಗುತ್ತದೆ. ಸಮುದ್ರ ಜೀವಿಗಳ ದೊಡ್ಡ ಸಂಗ್ರಹವನ್ನು ಹೊಂದಿರುವ ಅಕ್ವೇರಿಯಂ, ಸುಂದರವಾಗಿ ನಿರ್ವಹಿಸಲಾದ ಉದ್ಯಾನವನ ಮತ್ತು ಟೈಲ್ಸ್ ಅಳವಡಿಸಿರುವ ನಡಿಗೆ ಮಾರ್ಗಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಗಳಾಗಿವೆ. ಇವುಗಳ ಜೊತೆಗೆ ಇತ್ತೀಚೆಗೆ ಅಭಿವೃದ್ಧಿಪಡಿಸಲಾದ ಮಕ್ಕಳ ಆಟದ ಪ್ರದೇಶದಲ್ಲಿ 5ರಿಂದ 10 ವಿವಿಧ ಆಟಗಳ ಸೌಲಭ್ಯವಿದ್ದು, ಪ್ರತಿ ಆಟಕ್ಕೆ ಅಥವಾ ಐದು ಆಟಗಳ ಪ್ಯಾಕೇಜ್ಗೆ ಶುಲ್ಕ ವಿಧಿಸಲಾಗುತ್ತದೆ.
== ಆಹಾರ ಮತ್ತು ಮನರಂಜನೆ ==
ಪ್ರವಾಸಿಗರಿಗಾಗಿ ಕಡಲತೀರದ ಸಮೀಪದಲ್ಲಿ ‘ನಾಲುಕಟ್ಟು’ (Naalukettu) ಎಂಬ ರೆಸ್ಟೋರೆಂಟ್ ಕೂಡ ಇದೆ. ಇಲ್ಲಿ ತ್ರಿಶೂರ್ ಕರಾವಳಿ ಪ್ರದೇಶದ ವಿವಿಧ ಸಮುದ್ರಾಹಾರ ಖಾದ್ಯಗಳನ್ನು ಸವಿಯುವ ಅವಕಾಶವಿದೆ. ಮಕ್ಕಳ ಉದ್ಯಾನವನ, ಅಕ್ವೇರಿಯಂ, ಹಸಿರು ಉದ್ಯಾನ, ನಡಿಗೆ ಮಾರ್ಗ, ಆಟದ ಪ್ರದೇಶ ಮತ್ತು ಸ್ಥಳೀಯ ಸಮುದ್ರಾಹಾರದ ಸೌಲಭ್ಯಗಳೊಂದಿಗೆ ಸ್ನೇಹತೀರಂ ಕಡಲತೀರವು ಕುಟುಂಬ ಸಮೇತ ಪ್ರವಾಸ ಕೈಗೊಳ್ಳಲು ಸೂಕ್ತವಾದ ಪ್ರವಾಸಿ ತಾಣವಾಗಿದೆ.
e7lyv80xp8ykoxv0fahjid40nkpq5no
1379525
1379524
2026-08-08T18:58:27Z
Santhosh Notagar99
82732
1379525
wikitext
text/x-wiki
'''ಸ್ನೇಹತೀರಂ ಕಡಲತೀರ''' (Snehatheeram Beach), ಲವ್ ಶೋರ್ (Love Shore) ಎಂದೂ ಕರೆಯಲ್ಪಡುವ, ಕೇರಳದ ತ್ರಿಶೂರ್ ಜಿಲ್ಲೆಯ ತಳಿಕುಳಂ ಪ್ರದೇಶದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿದ್ದು, ವರ್ಷವಿಡೀ ದೇಶೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ತನ್ನ ನೈಸರ್ಗಿಕ ಸೌಂದರ್ಯ ಮತ್ತು ಉತ್ತಮ ಪ್ರವಾಸಿ ಸೌಲಭ್ಯಗಳಿಗಾಗಿ ಈ ಕಡಲತೀರವು ಪ್ರಸಿದ್ಧವಾಗಿದೆ. 2010ರಲ್ಲಿ ಕೇರಳ ಪ್ರವಾಸೋದ್ಯಮ ಇಲಾಖೆಯು ಸ್ನೇಹತೀರಂ ಕಡಲತೀರವನ್ನು ಅತ್ಯುತ್ತಮ ಕಡಲತೀರ ಪ್ರವಾಸೋದ್ಯಮ ತಾಣವಾಗಿ ಆಯ್ಕೆ ಮಾಡಿತ್ತು. ಕಡಲತೀರದ ನಿರ್ವಹಣೆಯನ್ನು ಕೇರಳ ಪ್ರವಾಸೋದ್ಯಮ ಇಲಾಖೆಯು ಮಾಡುತ್ತದೆ. <ref>{{Cite web |url=https://www.keralatourism.org/destination/thalikulam-snehatheeram-beach-thrissur/549/ |title=Thalikulam Snehatheeram Beach, Thrissur {{!}} Kerala Tourism |website=www.keralatourism.org |language=en |access-date=2026-07-29}}</ref><ref>{{Cite web |url=https://www.tripoto.com/thrissur/places-to-visit/snehatheeram-beach |title=Snehatheeram Beach: View Images, Timing and Reviews |website=Tripoto |language=en |access-date=2026-07-29}}</ref><ref>{{Cite web |url=https://www.holidify.com/places/thrissur/snehatheeram-beach-sightseeing-121092.html |title=Snehatheeram Beach Thrissur {{!}} Things To Do, Timings & Entry Fees |website=www.holidify.com |access-date=2026-07-29}}</ref>
== ಪ್ರವಾಸಿ ಸೌಲಭ್ಯಗಳು ==
ಕಡಲತೀರದ ಸಮೀಪದಲ್ಲಿ ಮಕ್ಕಳಿಗಾಗಿ ವಿವಿಧ ಸೌಲಭ್ಯಗಳನ್ನು ಹೊಂದಿರುವ ಮಕ್ಕಳ ಉದ್ಯಾನವನವಿದೆ. ಉದ್ಯಾನವನಕ್ಕೆ ಪ್ರವೇಶ ಶುಲ್ಕವಾಗಿ ವಯಸ್ಕರಿಗೆ ₹10 ಮತ್ತು ಮಕ್ಕಳಿಗೆ ₹5 ವಿಧಿಸಲಾಗುತ್ತದೆ. ಸಮುದ್ರ ಜೀವಿಗಳ ದೊಡ್ಡ ಸಂಗ್ರಹವನ್ನು ಹೊಂದಿರುವ ಅಕ್ವೇರಿಯಂ, ಸುಂದರವಾಗಿ ನಿರ್ವಹಿಸಲಾದ ಉದ್ಯಾನವನ ಮತ್ತು ಟೈಲ್ಸ್ ಅಳವಡಿಸಿರುವ ನಡಿಗೆ ಮಾರ್ಗಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಗಳಾಗಿವೆ. ಇವುಗಳ ಜೊತೆಗೆ ಇತ್ತೀಚೆಗೆ ಅಭಿವೃದ್ಧಿಪಡಿಸಲಾದ ಮಕ್ಕಳ ಆಟದ ಪ್ರದೇಶದಲ್ಲಿ 5ರಿಂದ 10 ವಿವಿಧ ಆಟಗಳ ಸೌಲಭ್ಯವಿದ್ದು, ಪ್ರತಿ ಆಟಕ್ಕೆ ಅಥವಾ ಐದು ಆಟಗಳ ಪ್ಯಾಕೇಜ್ಗೆ ಶುಲ್ಕ ವಿಧಿಸಲಾಗುತ್ತದೆ. <ref name=":0">{{cite web
|url=http://www.deccanchronicle.com/channels/lifestyle/wanderlust/virgin-beach-called-love-shore-200
|archive-url=https://web.archive.org/web/20120113083500/http://www.deccanchronicle.com/channels/lifestyle/wanderlust/virgin-beach-called-love-shore-200
|url-status=dead
|archive-date=13 January 2012
|title=A virgin beach called Love Shore
|work=Deccan Chronicle
|access-date=2012-09-03}}</ref>
== ಆಹಾರ ಮತ್ತು ಮನರಂಜನೆ ==
ಪ್ರವಾಸಿಗರಿಗಾಗಿ ಕಡಲತೀರದ ಸಮೀಪದಲ್ಲಿ ‘ನಾಲುಕಟ್ಟು’ (Naalukettu) ಎಂಬ ರೆಸ್ಟೋರೆಂಟ್ ಕೂಡ ಇದೆ. ಇಲ್ಲಿ ತ್ರಿಶೂರ್ ಕರಾವಳಿ ಪ್ರದೇಶದ ವಿವಿಧ ಸಮುದ್ರಾಹಾರ ಖಾದ್ಯಗಳನ್ನು ಸವಿಯುವ ಅವಕಾಶವಿದೆ. ಮಕ್ಕಳ ಉದ್ಯಾನವನ, ಅಕ್ವೇರಿಯಂ, ಹಸಿರು ಉದ್ಯಾನ, ನಡಿಗೆ ಮಾರ್ಗ, ಆಟದ ಪ್ರದೇಶ ಮತ್ತು ಸ್ಥಳೀಯ ಸಮುದ್ರಾಹಾರದ ಸೌಲಭ್ಯಗಳೊಂದಿಗೆ ಸ್ನೇಹತೀರಂ ಕಡಲತೀರವು ಕುಟುಂಬ ಸಮೇತ ಪ್ರವಾಸ ಕೈಗೊಳ್ಳಲು ಸೂಕ್ತವಾದ ಪ್ರವಾಸಿ ತಾಣವಾಗಿದೆ.
==ಉಲ್ಲೇಖಗಳು==
qs9yu4m0sag8ik667mbk6jtgk1dupvx
1379526
1379525
2026-08-08T19:00:42Z
Santhosh Notagar99
82732
1379526
wikitext
text/x-wiki
'''ಸ್ನೇಹತೀರಂ ಕಡಲತೀರ''' (Snehatheeram Beach), ಲವ್ ಶೋರ್ (Love Shore) ಎಂದೂ ಕರೆಯಲ್ಪಡುವ, ಕೇರಳದ ತ್ರಿಶೂರ್ ಜಿಲ್ಲೆಯ ತಳಿಕುಳಂ ಪ್ರದೇಶದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಇದು ಅರಬ್ಬಿ ಸಮುದ್ರದ ಕರಾವಳಿಯಲ್ಲಿದ್ದು, ವರ್ಷವಿಡೀ ದೇಶೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ತನ್ನ ನೈಸರ್ಗಿಕ ಸೌಂದರ್ಯ ಮತ್ತು ಉತ್ತಮ ಪ್ರವಾಸಿ ಸೌಲಭ್ಯಗಳಿಗಾಗಿ ಈ ಕಡಲತೀರವು ಪ್ರಸಿದ್ಧವಾಗಿದೆ. 2010ರಲ್ಲಿ ಕೇರಳ ಪ್ರವಾಸೋದ್ಯಮ ಇಲಾಖೆಯು ಸ್ನೇಹತೀರಂ ಕಡಲತೀರವನ್ನು ಅತ್ಯುತ್ತಮ ಕಡಲತೀರ ಪ್ರವಾಸೋದ್ಯಮ ತಾಣವಾಗಿ ಆಯ್ಕೆ ಮಾಡಿತ್ತು. ಕಡಲತೀರದ ನಿರ್ವಹಣೆಯನ್ನು ಕೇರಳ ಪ್ರವಾಸೋದ್ಯಮ ಇಲಾಖೆಯು ಮಾಡುತ್ತದೆ. <ref>{{Cite web |url=https://www.keralatourism.org/destination/thalikulam-snehatheeram-beach-thrissur/549/ |title=Thalikulam Snehatheeram Beach, Thrissur {{!}} Kerala Tourism |website=www.keralatourism.org |language=en |access-date=2026-07-29}}</ref><ref>{{Cite web |url=https://www.tripoto.com/thrissur/places-to-visit/snehatheeram-beach |title=Snehatheeram Beach: View Images, Timing and Reviews |website=Tripoto |language=en |access-date=2026-07-29}}</ref><ref>{{Cite web |url=https://www.holidify.com/places/thrissur/snehatheeram-beach-sightseeing-121092.html |title=Snehatheeram Beach Thrissur {{!}} Things To Do, Timings & Entry Fees |website=www.holidify.com |access-date=2026-07-29}}</ref>
[[File:Snehatheeram-Beach-Thrissur-Kavadam4.jpg|thumb|right|300px|ಸ್ನೇಹತೀರಂ ಬೀಚ್ ಪ್ರವೇಶ]]
== ಪ್ರವಾಸಿ ಸೌಲಭ್ಯಗಳು ==
ಕಡಲತೀರದ ಸಮೀಪದಲ್ಲಿ ಮಕ್ಕಳಿಗಾಗಿ ವಿವಿಧ ಸೌಲಭ್ಯಗಳನ್ನು ಹೊಂದಿರುವ ಮಕ್ಕಳ ಉದ್ಯಾನವನವಿದೆ. ಉದ್ಯಾನವನಕ್ಕೆ ಪ್ರವೇಶ ಶುಲ್ಕವಾಗಿ ವಯಸ್ಕರಿಗೆ ₹10 ಮತ್ತು ಮಕ್ಕಳಿಗೆ ₹5 ವಿಧಿಸಲಾಗುತ್ತದೆ. ಸಮುದ್ರ ಜೀವಿಗಳ ದೊಡ್ಡ ಸಂಗ್ರಹವನ್ನು ಹೊಂದಿರುವ ಅಕ್ವೇರಿಯಂ, ಸುಂದರವಾಗಿ ನಿರ್ವಹಿಸಲಾದ ಉದ್ಯಾನವನ ಮತ್ತು ಟೈಲ್ಸ್ ಅಳವಡಿಸಿರುವ ನಡಿಗೆ ಮಾರ್ಗಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಗಳಾಗಿವೆ. ಇವುಗಳ ಜೊತೆಗೆ ಇತ್ತೀಚೆಗೆ ಅಭಿವೃದ್ಧಿಪಡಿಸಲಾದ ಮಕ್ಕಳ ಆಟದ ಪ್ರದೇಶದಲ್ಲಿ 5ರಿಂದ 10 ವಿವಿಧ ಆಟಗಳ ಸೌಲಭ್ಯವಿದ್ದು, ಪ್ರತಿ ಆಟಕ್ಕೆ ಅಥವಾ ಐದು ಆಟಗಳ ಪ್ಯಾಕೇಜ್ಗೆ ಶುಲ್ಕ ವಿಧಿಸಲಾಗುತ್ತದೆ. <ref name=":0">{{cite web
|url=http://www.deccanchronicle.com/channels/lifestyle/wanderlust/virgin-beach-called-love-shore-200
|archive-url=https://web.archive.org/web/20120113083500/http://www.deccanchronicle.com/channels/lifestyle/wanderlust/virgin-beach-called-love-shore-200
|url-status=dead
|archive-date=13 January 2012
|title=A virgin beach called Love Shore
|work=Deccan Chronicle
|access-date=2012-09-03}}</ref>
== ಆಹಾರ ಮತ್ತು ಮನರಂಜನೆ ==
ಪ್ರವಾಸಿಗರಿಗಾಗಿ ಕಡಲತೀರದ ಸಮೀಪದಲ್ಲಿ ‘ನಾಲುಕಟ್ಟು’ (Naalukettu) ಎಂಬ ರೆಸ್ಟೋರೆಂಟ್ ಕೂಡ ಇದೆ. ಇಲ್ಲಿ ತ್ರಿಶೂರ್ ಕರಾವಳಿ ಪ್ರದೇಶದ ವಿವಿಧ ಸಮುದ್ರಾಹಾರ ಖಾದ್ಯಗಳನ್ನು ಸವಿಯುವ ಅವಕಾಶವಿದೆ. ಮಕ್ಕಳ ಉದ್ಯಾನವನ, ಅಕ್ವೇರಿಯಂ, ಹಸಿರು ಉದ್ಯಾನ, ನಡಿಗೆ ಮಾರ್ಗ, ಆಟದ ಪ್ರದೇಶ ಮತ್ತು ಸ್ಥಳೀಯ ಸಮುದ್ರಾಹಾರದ ಸೌಲಭ್ಯಗಳೊಂದಿಗೆ ಸ್ನೇಹತೀರಂ ಕಡಲತೀರವು ಕುಟುಂಬ ಸಮೇತ ಪ್ರವಾಸ ಕೈಗೊಳ್ಳಲು ಸೂಕ್ತವಾದ ಪ್ರವಾಸಿ ತಾಣವಾಗಿದೆ.
==ಉಲ್ಲೇಖಗಳು==
klidyujbf1qnumfz53yy50xm73lo7tr
ತಣ್ಣಿ ಬೀಚ್
0
180120
1379527
2026-08-08T19:09:32Z
Santhosh Notagar99
82732
ಹೊಸ ಪುಟ: '''ತಣ್ಣಿ ಬೀಚ್''' (Thanni Beach)ವು ಕೇರಳದ ಕೊಲ್ಲಂ ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಸುಂದರವಾದ ಕಡಲತೀರವಾಗಿದೆ. ಇದು ಕೊಲ್ಲಂ ಕರಾವಳಿ ರಸ್ತೆಯ ಪಕ್ಕದಲ್ಲಿದ್ದು, ಕೊಲ್ಲಂ ಬೀಚ್ ಮತ್ತು ಮಯ್ಯನാട് ಪ್ರದೇಶಗಳಿಂದ...
1379527
wikitext
text/x-wiki
'''ತಣ್ಣಿ ಬೀಚ್''' (Thanni Beach)ವು ಕೇರಳದ ಕೊಲ್ಲಂ ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಸುಂದರವಾದ ಕಡಲತೀರವಾಗಿದೆ. ಇದು ಕೊಲ್ಲಂ ಕರಾವಳಿ ರಸ್ತೆಯ ಪಕ್ಕದಲ್ಲಿದ್ದು, ಕೊಲ್ಲಂ ಬೀಚ್ ಮತ್ತು ಮಯ್ಯನാട് ಪ್ರದೇಶಗಳಿಂದ ತಣ್ಣಿ ಸೇತುವೆಯ ಮೂಲಕವೂ ತಲುಪಬಹುದು. ಈ ಸುಲಭ ಸಂಪರ್ಕದ ಕಾರಣದಿಂದ ತಣ್ಣಿ ಬೀಚ್ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.<ref>{{cite web |title=താന്നി ബീച്ച് പരിസരത്തെ മാലിന്യം നീക്കാൻ നടപടി |url=https://www.manoramaonline.com/district-news/kollam/2022/06/29/kollam-thanny-beach-road-waste-removed.html |website=www.manoramaonline.com |language=ml}}</ref> ಸಮುದ್ರದ ಅಲೆಗಳ ತೀವ್ರತೆಯನ್ನು ಕಡಿಮೆ ಮಾಡಲು ಕರಾವಳಿಯುದ್ದಕ್ಕೂ ಟೆಟ್ರಾಪಾಡ್ ಅಲೆತಡೆಗೋಡೆಗಳನ್ನು, ಸ್ಥಳೀಯವಾಗಿ ‘ಪುಲಿಮುಟ್ಟು’ ಎಂದು ಕರೆಯಲಾಗುತ್ತದೆ, ನಿರ್ಮಿಸಲಾಗಿದೆ. ಇವು ಕಡಲತೀರದಲ್ಲಿ ಸುರಕ್ಷಿತ ಈಜು ಪ್ರದೇಶವನ್ನು ರೂಪಿಸಲು ಸಹಾಯ ಮಾಡುತ್ತವೆ. <ref>{{cite web |title=Thanni Beach (Pozhikkara) {{!}} DTPC |url=https://www.dtpckollam.com/destination/thanni-beach-pozhikkara |website=DTPC kollam |language=en}}</ref> <ref>{{Cite web|url=https://prdlive.kerala.gov.in/news/101673|title=PRD Live - നവീകരിച്ച താന്നി ബീച്ച് നാടിന് സമര്പ്പിച്ചു}}</ref><ref>{{Cite web |author=QResorts Admin |date=2021-04-25 |title=Thanni Beach a must visit attraction in Kollam. |url=https://qresorts.in/blog/tourist-attractions-kollam/thanni-beach-a-must-visit-attraction/215/ |access-date=2024-06-04 |website=Quilon Beach Hotel |language=en-US}}</ref>
== ಹಿನ್ನೀರು ಮತ್ತು ಸಮುದ್ರದ ಸಂಗಮದ ಅನುಭವ ==
ತಣ್ಣಿ ಬೀಚ್ನ ವಿಶಿಷ್ಟ ವೈಶಿಷ್ಟ್ಯವೆಂದರೆ ಪರವೂರು ಸರೋವರ ಮತ್ತು ಅರಬ್ಬಿ ಸಮುದ್ರದ ನಡುವೆ ಇರುವ ತೆಳುವಾದ ಭೂಭಾಗ. ಒಂದೇ ಸ್ಥಳದ ಸಮೀಪದಲ್ಲಿ ಹಿನ್ನೀರಿನ ಸೌಂದರ್ಯ ಮತ್ತು ಸಮುದ್ರತೀರದ ನೈಸರ್ಗಿಕ ದೃಶ್ಯವನ್ನು ಅನುಭವಿಸಲು ಇಲ್ಲಿ ಅವಕಾಶವಿದೆ. ಒಂದು ಬದಿಯಲ್ಲಿ ಶಾಂತವಾದ ಹಿನ್ನೀರು ಮತ್ತು ಮತ್ತೊಂದು ಬದಿಯಲ್ಲಿ ವಿಶಾಲವಾದ ಸಮುದ್ರದ ಅಲೆಗಳನ್ನು ಕಾಣಬಹುದಾದ್ದರಿಂದ ತಣ್ಣಿ ಬೀಚ್ ಪ್ರವಾಸಿಗರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ನೈಸರ್ಗಿಕ ಸೌಂದರ್ಯ, ಸುಲಭ ಸಂಪರ್ಕ ಮತ್ತು ಸಮುದ್ರ–ಹಿನ್ನೀರಿನ ಸಮೀಪದ ವಿಶಿಷ್ಟ ಭೌಗೋಳಿಕ ವಿನ್ಯಾಸದಿಂದ ಇದು ಕೊಲ್ಲಂ ಜಿಲ್ಲೆಯ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
go8lkpdh5vakhyks5lhxw4vr281a3np
1379528
1379527
2026-08-08T19:09:48Z
Santhosh Notagar99
82732
1379528
wikitext
text/x-wiki
'''ತಣ್ಣಿ ಬೀಚ್''' (Thanni Beach)ವು ಕೇರಳದ ಕೊಲ್ಲಂ ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಸುಂದರವಾದ ಕಡಲತೀರವಾಗಿದೆ. ಇದು ಕೊಲ್ಲಂ ಕರಾವಳಿ ರಸ್ತೆಯ ಪಕ್ಕದಲ್ಲಿದ್ದು, ಕೊಲ್ಲಂ ಬೀಚ್ ಮತ್ತು ಮಯ್ಯನാട് ಪ್ರದೇಶಗಳಿಂದ ತಣ್ಣಿ ಸೇತುವೆಯ ಮೂಲಕವೂ ತಲುಪಬಹುದು. ಈ ಸುಲಭ ಸಂಪರ್ಕದ ಕಾರಣದಿಂದ ತಣ್ಣಿ ಬೀಚ್ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.<ref>{{cite web |title=താന്നി ബീച്ച് പരിസരത്തെ മാലിന്യം നീക്കാൻ നടപടി |url=https://www.manoramaonline.com/district-news/kollam/2022/06/29/kollam-thanny-beach-road-waste-removed.html |website=www.manoramaonline.com |language=ml}}</ref> ಸಮುದ್ರದ ಅಲೆಗಳ ತೀವ್ರತೆಯನ್ನು ಕಡಿಮೆ ಮಾಡಲು ಕರಾವಳಿಯುದ್ದಕ್ಕೂ ಟೆಟ್ರಾಪಾಡ್ ಅಲೆತಡೆಗೋಡೆಗಳನ್ನು, ಸ್ಥಳೀಯವಾಗಿ ‘ಪುಲಿಮುಟ್ಟು’ ಎಂದು ಕರೆಯಲಾಗುತ್ತದೆ, ನಿರ್ಮಿಸಲಾಗಿದೆ. ಇವು ಕಡಲತೀರದಲ್ಲಿ ಸುರಕ್ಷಿತ ಈಜು ಪ್ರದೇಶವನ್ನು ರೂಪಿಸಲು ಸಹಾಯ ಮಾಡುತ್ತವೆ. <ref>{{cite web |title=Thanni Beach (Pozhikkara) {{!}} DTPC |url=https://www.dtpckollam.com/destination/thanni-beach-pozhikkara |website=DTPC kollam |language=en}}</ref> <ref>{{Cite web|url=https://prdlive.kerala.gov.in/news/101673|title=PRD Live - നവീകരിച്ച താന്നി ബീച്ച് നാടിന് സമര്പ്പിച്ചു}}</ref><ref>{{Cite web |author=QResorts Admin |date=2021-04-25 |title=Thanni Beach a must visit attraction in Kollam. |url=https://qresorts.in/blog/tourist-attractions-kollam/thanni-beach-a-must-visit-attraction/215/ |access-date=2024-06-04 |website=Quilon Beach Hotel |language=en-US}}</ref>
==ಉಲ್ಲೇಖಗಳು==
== ಹಿನ್ನೀರು ಮತ್ತು ಸಮುದ್ರದ ಸಂಗಮದ ಅನುಭವ ==
ತಣ್ಣಿ ಬೀಚ್ನ ವಿಶಿಷ್ಟ ವೈಶಿಷ್ಟ್ಯವೆಂದರೆ ಪರವೂರು ಸರೋವರ ಮತ್ತು ಅರಬ್ಬಿ ಸಮುದ್ರದ ನಡುವೆ ಇರುವ ತೆಳುವಾದ ಭೂಭಾಗ. ಒಂದೇ ಸ್ಥಳದ ಸಮೀಪದಲ್ಲಿ ಹಿನ್ನೀರಿನ ಸೌಂದರ್ಯ ಮತ್ತು ಸಮುದ್ರತೀರದ ನೈಸರ್ಗಿಕ ದೃಶ್ಯವನ್ನು ಅನುಭವಿಸಲು ಇಲ್ಲಿ ಅವಕಾಶವಿದೆ. ಒಂದು ಬದಿಯಲ್ಲಿ ಶಾಂತವಾದ ಹಿನ್ನೀರು ಮತ್ತು ಮತ್ತೊಂದು ಬದಿಯಲ್ಲಿ ವಿಶಾಲವಾದ ಸಮುದ್ರದ ಅಲೆಗಳನ್ನು ಕಾಣಬಹುದಾದ್ದರಿಂದ ತಣ್ಣಿ ಬೀಚ್ ಪ್ರವಾಸಿಗರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ನೈಸರ್ಗಿಕ ಸೌಂದರ್ಯ, ಸುಲಭ ಸಂಪರ್ಕ ಮತ್ತು ಸಮುದ್ರ–ಹಿನ್ನೀರಿನ ಸಮೀಪದ ವಿಶಿಷ್ಟ ಭೌಗೋಳಿಕ ವಿನ್ಯಾಸದಿಂದ ಇದು ಕೊಲ್ಲಂ ಜಿಲ್ಲೆಯ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
hwyffvwzj62sjsnsnmrvoq67h696g57
1379529
1379528
2026-08-08T19:11:44Z
Santhosh Notagar99
82732
1379529
wikitext
text/x-wiki
{{Short description|One of the important beach in Kerala}}
{{Use dmy dates|date=June 2024}}
{{Use Indian English|date=June 2024}}
{{Infobox landform
| name = ತಣ್ಣಿ ಬೀಚ್
| image = Paravur-Kollam Coastal Road at Thanni, Dec 2015.jpg
| caption = ಥನ್ನಿ ಬೀಚ್ ಹತ್ತಿರದ ಕರಾವಳಿ ರಸ್ತೆ
| pushpin_map = India Kerala
| location = Mukkam, [[Kollam]], [[India]]
| length = 400+ m
| type = ಕಡಲತೀರ
| coordinates = {{coord|8.824|76.641|type:landmark_region:IN|display=inline,title}}
| free_label_2 = Hazard rating
| free_data_2 = <span style="color:#090">'''Low'''</span>
| free_label_3 = Access
| free_data_3 = [[Kollam KSRTC Bus Station|Bus Station]] {{rint|bus}} - 11.2 m,<br>[[Paravur railway station|Railway Station]] {{rint|rail}} - 7.1 km, <br>[[Kollam KSWTD Ferry Terminal|Ferry Terminal]] {{rint|ferry}} - 11.2 km
| embedded = {{succession links|left=Pozhikkara Beach|right=[[Mundakkal Beach]]}}
}}
'''ತಣ್ಣಿ ಬೀಚ್''' (Thanni Beach)ವು ಕೇರಳದ ಕೊಲ್ಲಂ ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಸುಂದರವಾದ ಕಡಲತೀರವಾಗಿದೆ. ಇದು ಕೊಲ್ಲಂ ಕರಾವಳಿ ರಸ್ತೆಯ ಪಕ್ಕದಲ್ಲಿದ್ದು, ಕೊಲ್ಲಂ ಬೀಚ್ ಮತ್ತು ಮಯ್ಯನാട് ಪ್ರದೇಶಗಳಿಂದ ತಣ್ಣಿ ಸೇತುವೆಯ ಮೂಲಕವೂ ತಲುಪಬಹುದು. ಈ ಸುಲಭ ಸಂಪರ್ಕದ ಕಾರಣದಿಂದ ತಣ್ಣಿ ಬೀಚ್ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.<ref>{{cite web |title=താന്നി ബീച്ച് പരിസരത്തെ മാലിന്യം നീക്കാൻ നടപടി |url=https://www.manoramaonline.com/district-news/kollam/2022/06/29/kollam-thanny-beach-road-waste-removed.html |website=www.manoramaonline.com |language=ml}}</ref> ಸಮುದ್ರದ ಅಲೆಗಳ ತೀವ್ರತೆಯನ್ನು ಕಡಿಮೆ ಮಾಡಲು ಕರಾವಳಿಯುದ್ದಕ್ಕೂ ಟೆಟ್ರಾಪಾಡ್ ಅಲೆತಡೆಗೋಡೆಗಳನ್ನು, ಸ್ಥಳೀಯವಾಗಿ ‘ಪುಲಿಮುಟ್ಟು’ ಎಂದು ಕರೆಯಲಾಗುತ್ತದೆ, ನಿರ್ಮಿಸಲಾಗಿದೆ. ಇವು ಕಡಲತೀರದಲ್ಲಿ ಸುರಕ್ಷಿತ ಈಜು ಪ್ರದೇಶವನ್ನು ರೂಪಿಸಲು ಸಹಾಯ ಮಾಡುತ್ತವೆ. <ref>{{cite web |title=Thanni Beach (Pozhikkara) {{!}} DTPC |url=https://www.dtpckollam.com/destination/thanni-beach-pozhikkara |website=DTPC kollam |language=en}}</ref> <ref>{{Cite web|url=https://prdlive.kerala.gov.in/news/101673|title=PRD Live - നവീകരിച്ച താന്നി ബീച്ച് നാടിന് സമര്പ്പിച്ചു}}</ref><ref>{{Cite web |author=QResorts Admin |date=2021-04-25 |title=Thanni Beach a must visit attraction in Kollam. |url=https://qresorts.in/blog/tourist-attractions-kollam/thanni-beach-a-must-visit-attraction/215/ |access-date=2024-06-04 |website=Quilon Beach Hotel |language=en-US}}</ref>
==ಉಲ್ಲೇಖಗಳು==
== ಹಿನ್ನೀರು ಮತ್ತು ಸಮುದ್ರದ ಸಂಗಮದ ಅನುಭವ ==
ತಣ್ಣಿ ಬೀಚ್ನ ವಿಶಿಷ್ಟ ವೈಶಿಷ್ಟ್ಯವೆಂದರೆ ಪರವೂರು ಸರೋವರ ಮತ್ತು ಅರಬ್ಬಿ ಸಮುದ್ರದ ನಡುವೆ ಇರುವ ತೆಳುವಾದ ಭೂಭಾಗ. ಒಂದೇ ಸ್ಥಳದ ಸಮೀಪದಲ್ಲಿ ಹಿನ್ನೀರಿನ ಸೌಂದರ್ಯ ಮತ್ತು ಸಮುದ್ರತೀರದ ನೈಸರ್ಗಿಕ ದೃಶ್ಯವನ್ನು ಅನುಭವಿಸಲು ಇಲ್ಲಿ ಅವಕಾಶವಿದೆ. ಒಂದು ಬದಿಯಲ್ಲಿ ಶಾಂತವಾದ ಹಿನ್ನೀರು ಮತ್ತು ಮತ್ತೊಂದು ಬದಿಯಲ್ಲಿ ವಿಶಾಲವಾದ ಸಮುದ್ರದ ಅಲೆಗಳನ್ನು ಕಾಣಬಹುದಾದ್ದರಿಂದ ತಣ್ಣಿ ಬೀಚ್ ಪ್ರವಾಸಿಗರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ನೈಸರ್ಗಿಕ ಸೌಂದರ್ಯ, ಸುಲಭ ಸಂಪರ್ಕ ಮತ್ತು ಸಮುದ್ರ–ಹಿನ್ನೀರಿನ ಸಮೀಪದ ವಿಶಿಷ್ಟ ಭೌಗೋಳಿಕ ವಿನ್ಯಾಸದಿಂದ ಇದು ಕೊಲ್ಲಂ ಜಿಲ್ಲೆಯ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
fuuhtwj7y168tv0nos3wgmxfl12c75x
1379557
1379529
2026-08-09T03:53:25Z
A826
72368
1379557
wikitext
text/x-wiki
{{Short description|One of the important beach in Kerala}}
{{Use dmy dates|date=June 2024}}
{{Use Indian English|date=June 2024}}
{{Infobox landform
| name = ತಣ್ಣಿ ಬೀಚ್
| image = Paravur-Kollam Coastal Road at Thanni, Dec 2015.jpg
| caption = ಥನ್ನಿ ಬೀಚ್ ಹತ್ತಿರದ ಕರಾವಳಿ ರಸ್ತೆ
| pushpin_map = India Kerala
| location = Mukkam, [[Kollam]], [[India]]
| length = 400+ m
| type = ಕಡಲತೀರ
| coordinates = {{coord|8.824|76.641|type:landmark_region:IN|display=inline,title}}
| free_label_2 = Hazard rating
| free_data_2 = <span style="color:#090">'''Low'''</span>
| free_label_3 = Access
| free_data_3 = [[Kollam KSRTC Bus Station|Bus Station]] {{rint|bus}} - 11.2 m,<br>[[Paravur railway station|Railway Station]] {{rint|rail}} - 7.1 km, <br>[[Kollam KSWTD Ferry Terminal|Ferry Terminal]] {{rint|ferry}} - 11.2 km
| embedded = {{succession links|left=Pozhikkara Beach|right=[[Mundakkal Beach]]}}
}}
'''ತಣ್ಣಿ ಬೀಚ್''' (Thanni Beach)ವು ಕೇರಳದ ಕೊಲ್ಲಂ ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಸುಂದರವಾದ ಕಡಲತೀರವಾಗಿದೆ. ಇದು ಕೊಲ್ಲಂ ಕರಾವಳಿ ರಸ್ತೆಯ ಪಕ್ಕದಲ್ಲಿದ್ದು, ಕೊಲ್ಲಂ ಬೀಚ್ ಮತ್ತು ಮಯ್ಯನಾಡು ಪ್ರದೇಶಗಳಿಂದ ತಣ್ಣಿ ಸೇತುವೆಯ ಮೂಲಕವೂ ತಲುಪಬಹುದು. ಈ ಸುಲಭ ಸಂಪರ್ಕದ ಕಾರಣದಿಂದ ತಣ್ಣಿ ಬೀಚ್ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.<ref>{{cite web |title=താന്നി ബീച്ച് പരിസരത്തെ മാലിന്യം നീക്കാൻ നടപടി |url=https://www.manoramaonline.com/district-news/kollam/2022/06/29/kollam-thanny-beach-road-waste-removed.html |website=www.manoramaonline.com |language=ml}}</ref> ಸಮುದ್ರದ ಅಲೆಗಳ ತೀವ್ರತೆಯನ್ನು ಕಡಿಮೆ ಮಾಡಲು ಕರಾವಳಿಯುದ್ದಕ್ಕೂ ಟೆಟ್ರಾಪಾಡ್ ಅಲೆತಡೆಗೋಡೆಗಳನ್ನು, ಸ್ಥಳೀಯವಾಗಿ ‘ಪುಲಿಮುಟ್ಟು’ ಎಂದು ಕರೆಯಲಾಗುತ್ತದೆ, ನಿರ್ಮಿಸಲಾಗಿದೆ. ಇವು ಕಡಲತೀರದಲ್ಲಿ ಸುರಕ್ಷಿತ ಈಜು ಪ್ರದೇಶವನ್ನು ರೂಪಿಸಲು ಸಹಾಯ ಮಾಡುತ್ತವೆ. <ref>{{cite web |title=Thanni Beach (Pozhikkara) {{!}} DTPC |url=https://www.dtpckollam.com/destination/thanni-beach-pozhikkara |website=DTPC kollam |language=en}}</ref> <ref>{{Cite web|url=https://prdlive.kerala.gov.in/news/101673|title=PRD Live - നവീകരിച്ച താന്നി ബീച്ച് നാടിന് സമര്പ്പിച്ചു}}</ref><ref>{{Cite web |author=QResorts Admin |date=2021-04-25 |title=Thanni Beach a must visit attraction in Kollam. |url=https://qresorts.in/blog/tourist-attractions-kollam/thanni-beach-a-must-visit-attraction/215/ |access-date=2024-06-04 |website=Quilon Beach Hotel |language=en-US}}</ref>
==ಉಲ್ಲೇಖಗಳು==
== ಹಿನ್ನೀರು ಮತ್ತು ಸಮುದ್ರದ ಸಂಗಮದ ಅನುಭವ ==
ತಣ್ಣಿ ಬೀಚ್ನ ವಿಶಿಷ್ಟ ವೈಶಿಷ್ಟ್ಯವೆಂದರೆ ಪರವೂರು ಸರೋವರ ಮತ್ತು ಅರಬ್ಬಿ ಸಮುದ್ರದ ನಡುವೆ ಇರುವ ತೆಳುವಾದ ಭೂಭಾಗ. ಒಂದೇ ಸ್ಥಳದ ಸಮೀಪದಲ್ಲಿ ಹಿನ್ನೀರಿನ ಸೌಂದರ್ಯ ಮತ್ತು ಸಮುದ್ರತೀರದ ನೈಸರ್ಗಿಕ ದೃಶ್ಯವನ್ನು ಅನುಭವಿಸಲು ಇಲ್ಲಿ ಅವಕಾಶವಿದೆ. ಒಂದು ಬದಿಯಲ್ಲಿ ಶಾಂತವಾದ ಹಿನ್ನೀರು ಮತ್ತು ಮತ್ತೊಂದು ಬದಿಯಲ್ಲಿ ವಿಶಾಲವಾದ ಸಮುದ್ರದ ಅಲೆಗಳನ್ನು ಕಾಣಬಹುದಾದ್ದರಿಂದ ತಣ್ಣಿ ಬೀಚ್ ಪ್ರವಾಸಿಗರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ನೈಸರ್ಗಿಕ ಸೌಂದರ್ಯ, ಸುಲಭ ಸಂಪರ್ಕ ಮತ್ತು ಸಮುದ್ರ–ಹಿನ್ನೀರಿನ ಸಮೀಪದ ವಿಶಿಷ್ಟ ಭೌಗೋಳಿಕ ವಿನ್ಯಾಸದಿಂದ ಇದು ಕೊಲ್ಲಂ ಜಿಲ್ಲೆಯ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
s1ajuq1rt3n2m0ohty6oqb9ugei99d0
ಚೆರುತೋಣಿ ಪಟ್ಟಣ
0
180121
1379531
2026-08-08T19:17:43Z
Santhosh Notagar99
82732
ಹೊಸ ಪುಟ: ಚೆರುತೋಣಿವು ದಕ್ಷಿಣ ಭಾರತದ ಕೇರಳ ರಾಜ್ಯದ ಪೆರಿಯಾರ್ ನದಿಯ ಪ್ರಮುಖ ಉಪನದಿಯಾದ ಚೆರುತೋಣಿ ನದಿಯ ದಡದಲ್ಲಿರುವ ಒಂದು ಪಟ್ಟಣವಾಗಿದೆ. ಪೆರಿಯಾರ್ ನದಿಯು ಕೇರಳದ ಎರಡನೇ ಅತಿ ಉದ್ದದ ನದಿಯಾಗಿದ್ದು, ಚೆರುತೋಣಿ ಪ್ರದೇಶ...
1379531
wikitext
text/x-wiki
ಚೆರುತೋಣಿವು ದಕ್ಷಿಣ ಭಾರತದ ಕೇರಳ ರಾಜ್ಯದ ಪೆರಿಯಾರ್ ನದಿಯ ಪ್ರಮುಖ ಉಪನದಿಯಾದ ಚೆರುತೋಣಿ ನದಿಯ ದಡದಲ್ಲಿರುವ ಒಂದು ಪಟ್ಟಣವಾಗಿದೆ. ಪೆರಿಯಾರ್ ನದಿಯು ಕೇರಳದ ಎರಡನೇ ಅತಿ ಉದ್ದದ ನದಿಯಾಗಿದ್ದು, ಚೆರುತೋಣಿ ಪ್ರದೇಶವು ತನ್ನ ಚೆರುತೋಣಿ ಅಣೆಕಟ್ಟು ಮತ್ತು ಜಲವಿದ್ಯುತ್ ಯೋಜನೆಗಾಗಿ ಪ್ರಸಿದ್ಧವಾಗಿದೆ. ಚೆರುತೋಣಿ ಅಣೆಕಟ್ಟು ಇಡುಕ್ಕಿ ಜಲಾಶಯದ ಒಂದು ಭಾಗವಾಗಿದ್ದು, ಈ ಜಲಾಶಯವು ಕೇರಳದ ಪ್ರಮುಖ ಜಲವಿದ್ಯುತ್ ಯೋಜನೆಗಳಲ್ಲಿ ಒಂದಾಗಿದೆ. ಅಣೆಕಟ್ಟುಗಳು ಮತ್ತು ಪರ್ವತ ಪ್ರದೇಶಗಳಿಂದ ಕೂಡಿದ ಇಲ್ಲಿನ ಭೌಗೋಳಿಕ ಪರಿಸರವು ಪಟ್ಟಣಕ್ಕೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.<ref>{{Cite news|url=https://www.thehindu.com/news/national/kerala/live-updates-rains-in-kerala/article24639461.ece|title=Shutter of Cheruthoni dam opened after 26 years|newspaper=The Hindu |date=9 August 2018 }}</ref>
== ಸ್ಥಳ ==
ಚೆರುತೋಣಿ ಪಟ್ಟಣವು ಪ್ರಸಿದ್ಧ ಇಡುಕ್ಕಿ ಕಮಾನು ಅಣೆಕಟ್ಟು ಮತ್ತು ಚೆರುತೋಣಿ ಅಣೆಕಟ್ಟುಗಳಿಗೆ ಸಮೀಪದಲ್ಲಿದೆ. ಈ ಎರಡು ಅಣೆಕಟ್ಟುಗಳ ಜೊತೆಗೆ ಕುಳಮಾವು ಅಣೆಕಟ್ಟು ಸೇರಿ ಇಡುಕ್ಕಿ ಜಲಾಶಯವನ್ನು ರೂಪಿಸುತ್ತವೆ. ಚೆರುತೋಣಿ ಇಡುಕ್ಕಿ ಜಿಲ್ಲೆಯ ವാഴತೋಪ್ ಪಂಚಾಯತ್ ವ್ಯಾಪ್ತಿಯಲ್ಲಿದೆ. ಇದರ ಸುತ್ತಮುತ್ತ ವാഴತೋಪ್, ತಡಿಯಂಪಾಡು, ಕರಿಂಬನ್, ಮಂಜಪ್ಪಾರ, ಮಣಿಯಾರಂಕುಡಿ, ಭೂಮಿಯಂಕುಳಂ, ಪೆಪ್ಪಾರ, ಮಂಜಿಕ್ಕವಲ ಮತ್ತು ಪೈನಾವು ಸೇರಿದಂತೆ ಹಲವು ಗ್ರಾಮಗಳಿವೆ. ಇಡುಕ್ಕಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಚೆರುತೋಣಿ ಪ್ರಮುಖ ಪ್ರವೇಶ ಮತ್ತು ವಾಸಸ್ಥಳಗಳಲ್ಲಿ ಒಂದಾಗಿದೆ. <ref>https://en.wikipedia.org/wiki/Cheruthoni</ref>
== ಮೂಲ ಮತ್ತು ಅಭಿವೃದ್ಧಿ ==
ಚೆರುತೋಣಿ ಪ್ರದೇಶದ ಆಧುನಿಕ ವಸಾಹತು ಇತಿಹಾಸವನ್ನು 1940ರ ದಶಕದವರೆಗೆ ಗುರುತಿಸಬಹುದು. ಆ ಕಾಲದಲ್ಲಿ ಉಂಟಾದ ಕ್ಷಾಮದ ಹಿನ್ನೆಲೆಯಲ್ಲಿ, ಸರ್ಕಾರವು ಪರ್ವತ ಪ್ರದೇಶಗಳಲ್ಲಿದ್ದ ಬಳಕೆಯಾಗದ ಕೃಷಿಯೋಗ್ಯ ಭೂಮಿಗೆ ರೈತರು ವಲಸೆ ಹೋಗಲು ಅವಕಾಶ ನೀಡಿತು. ರೈತರು ಕಾಡು ಪ್ರದೇಶಗಳನ್ನು ತೆರವುಗೊಳಿಸಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದರು. ನಂತರ ಈ ಪ್ರದೇಶವು ಜಲವಿದ್ಯುತ್ ಯೋಜನೆಗೆ ಸೂಕ್ತ ಸ್ಥಳವೆಂದು ಗುರುತಿಸಲಾಯಿತು. ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಪರವಾಗಿ ಅಣೆಕಟ್ಟುಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ಹಿಂದುಸ್ತಾನ್ ಕನ್ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಯಿತು. ಇಡುಕ್ಕಿ ಜಲಾಶಯ ಮತ್ತು ಜಲವಿದ್ಯುತ್ ಯೋಜನೆಯ ಅಭಿವೃದ್ಧಿಯೊಂದಿಗೆ ಚೆರುತೋಣಿ ಪ್ರಮುಖ ಪಟ್ಟಣವಾಗಿ ಬೆಳೆಯಿತು.
jx3xyp4zwjmjrfz2e8z1xte3n3nymhf
1379532
1379531
2026-08-08T19:19:21Z
Santhosh Notagar99
82732
1379532
wikitext
text/x-wiki
{{Use dmy dates|date=August 2019}}
{{One source|date=January 2025}}
{{Infobox settlement
| name = ಚೆರುತೋಣಿ
| other_name =
| nickname =
| settlement_type =
ಗ್ರಾಮ
| image_skyline = Cheruthony town.jpg
| image_alt =
| image_caption =
| pushpin_map = India Kerala#India
| pushpin_label_position = left
| pushpin_map_alt =
| pushpin_map_caption = Location in Kerala, India
}}
ಚೆರುತೋಣಿವು ದಕ್ಷಿಣ ಭಾರತದ ಕೇರಳ ರಾಜ್ಯದ ಪೆರಿಯಾರ್ ನದಿಯ ಪ್ರಮುಖ ಉಪನದಿಯಾದ ಚೆರುತೋಣಿ ನದಿಯ ದಡದಲ್ಲಿರುವ ಒಂದು ಪಟ್ಟಣವಾಗಿದೆ. ಪೆರಿಯಾರ್ ನದಿಯು ಕೇರಳದ ಎರಡನೇ ಅತಿ ಉದ್ದದ ನದಿಯಾಗಿದ್ದು, ಚೆರುತೋಣಿ ಪ್ರದೇಶವು ತನ್ನ ಚೆರುತೋಣಿ ಅಣೆಕಟ್ಟು ಮತ್ತು ಜಲವಿದ್ಯುತ್ ಯೋಜನೆಗಾಗಿ ಪ್ರಸಿದ್ಧವಾಗಿದೆ. ಚೆರುತೋಣಿ ಅಣೆಕಟ್ಟು ಇಡುಕ್ಕಿ ಜಲಾಶಯದ ಒಂದು ಭಾಗವಾಗಿದ್ದು, ಈ ಜಲಾಶಯವು ಕೇರಳದ ಪ್ರಮುಖ ಜಲವಿದ್ಯುತ್ ಯೋಜನೆಗಳಲ್ಲಿ ಒಂದಾಗಿದೆ. ಅಣೆಕಟ್ಟುಗಳು ಮತ್ತು ಪರ್ವತ ಪ್ರದೇಶಗಳಿಂದ ಕೂಡಿದ ಇಲ್ಲಿನ ಭೌಗೋಳಿಕ ಪರಿಸರವು ಪಟ್ಟಣಕ್ಕೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.<ref>{{Cite news|url=https://www.thehindu.com/news/national/kerala/live-updates-rains-in-kerala/article24639461.ece|title=Shutter of Cheruthoni dam opened after 26 years|newspaper=The Hindu |date=9 August 2018 }}</ref>
== ಸ್ಥಳ ==
ಚೆರುತೋಣಿ ಪಟ್ಟಣವು ಪ್ರಸಿದ್ಧ ಇಡುಕ್ಕಿ ಕಮಾನು ಅಣೆಕಟ್ಟು ಮತ್ತು ಚೆರುತೋಣಿ ಅಣೆಕಟ್ಟುಗಳಿಗೆ ಸಮೀಪದಲ್ಲಿದೆ. ಈ ಎರಡು ಅಣೆಕಟ್ಟುಗಳ ಜೊತೆಗೆ ಕುಳಮಾವು ಅಣೆಕಟ್ಟು ಸೇರಿ ಇಡುಕ್ಕಿ ಜಲಾಶಯವನ್ನು ರೂಪಿಸುತ್ತವೆ. ಚೆರುತೋಣಿ ಇಡುಕ್ಕಿ ಜಿಲ್ಲೆಯ ವാഴತೋಪ್ ಪಂಚಾಯತ್ ವ್ಯಾಪ್ತಿಯಲ್ಲಿದೆ. ಇದರ ಸುತ್ತಮುತ್ತ ವാഴತೋಪ್, ತಡಿಯಂಪಾಡು, ಕರಿಂಬನ್, ಮಂಜಪ್ಪಾರ, ಮಣಿಯಾರಂಕುಡಿ, ಭೂಮಿಯಂಕುಳಂ, ಪೆಪ್ಪಾರ, ಮಂಜಿಕ್ಕವಲ ಮತ್ತು ಪೈನಾವು ಸೇರಿದಂತೆ ಹಲವು ಗ್ರಾಮಗಳಿವೆ. ಇಡುಕ್ಕಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಚೆರುತೋಣಿ ಪ್ರಮುಖ ಪ್ರವೇಶ ಮತ್ತು ವಾಸಸ್ಥಳಗಳಲ್ಲಿ ಒಂದಾಗಿದೆ. <ref>https://en.wikipedia.org/wiki/Cheruthoni</ref>
== ಮೂಲ ಮತ್ತು ಅಭಿವೃದ್ಧಿ ==
ಚೆರುತೋಣಿ ಪ್ರದೇಶದ ಆಧುನಿಕ ವಸಾಹತು ಇತಿಹಾಸವನ್ನು 1940ರ ದಶಕದವರೆಗೆ ಗುರುತಿಸಬಹುದು. ಆ ಕಾಲದಲ್ಲಿ ಉಂಟಾದ ಕ್ಷಾಮದ ಹಿನ್ನೆಲೆಯಲ್ಲಿ, ಸರ್ಕಾರವು ಪರ್ವತ ಪ್ರದೇಶಗಳಲ್ಲಿದ್ದ ಬಳಕೆಯಾಗದ ಕೃಷಿಯೋಗ್ಯ ಭೂಮಿಗೆ ರೈತರು ವಲಸೆ ಹೋಗಲು ಅವಕಾಶ ನೀಡಿತು. ರೈತರು ಕಾಡು ಪ್ರದೇಶಗಳನ್ನು ತೆರವುಗೊಳಿಸಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದರು. ನಂತರ ಈ ಪ್ರದೇಶವು ಜಲವಿದ್ಯುತ್ ಯೋಜನೆಗೆ ಸೂಕ್ತ ಸ್ಥಳವೆಂದು ಗುರುತಿಸಲಾಯಿತು. ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಪರವಾಗಿ ಅಣೆಕಟ್ಟುಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ಹಿಂದುಸ್ತಾನ್ ಕನ್ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಯಿತು. ಇಡುಕ್ಕಿ ಜಲಾಶಯ ಮತ್ತು ಜಲವಿದ್ಯುತ್ ಯೋಜನೆಯ ಅಭಿವೃದ್ಧಿಯೊಂದಿಗೆ ಚೆರುತೋಣಿ ಪ್ರಮುಖ ಪಟ್ಟಣವಾಗಿ ಬೆಳೆಯಿತು.
gpkfe399sob3m1otq3ao4lnti9cch8d
1379533
1379532
2026-08-08T19:20:21Z
Santhosh Notagar99
82732
1379533
wikitext
text/x-wiki
{{Use dmy dates|date=August 2019}}
{{One source|date=January 2025}}
{{Infobox settlement
| name = ಚೆರುತೋಣಿ
| other_name =
| nickname =
| settlement_type =
ಗ್ರಾಮ
| image_skyline = Cheruthony town.jpg
| image_alt =
| image_caption =
| pushpin_map = India Kerala#India
| pushpin_label_position = left
| pushpin_map_alt =
| pushpin_map_caption = Location in Kerala, India
| coordinates = {{coord|9|46|25|N|77|2|07|E|display=inline,title}}
| subdivision_type = Country
| subdivision_name = {{flag|India}}
| subdivision_type1 = [[States and territories of India|State]]
| subdivision_name1 = [[Kerala]]
| subdivision_type2 = [[List of districts of India|District]]
| subdivision_name2 = [[Idukki district|Idukki]]
| established_title = <!-- Established -->
| established_date =
| founder =
| named_for =
| government_type = [[Panchayath]]
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Malayalam language|Malayalam]], [[English language|English]]
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 685602
| registration_plate = [[List of RTO districts in India#KL.E2.80.94Kerala|KL-06]]
| blank1_name_sec1 = Nearest city
| blank1_info_sec1 = [[Kattappana]], [[Thopramkudy]]
| website =
| footnotes =
}}
ಚೆರುತೋಣಿವು ದಕ್ಷಿಣ ಭಾರತದ ಕೇರಳ ರಾಜ್ಯದ ಪೆರಿಯಾರ್ ನದಿಯ ಪ್ರಮುಖ ಉಪನದಿಯಾದ ಚೆರುತೋಣಿ ನದಿಯ ದಡದಲ್ಲಿರುವ ಒಂದು ಪಟ್ಟಣವಾಗಿದೆ. ಪೆರಿಯಾರ್ ನದಿಯು ಕೇರಳದ ಎರಡನೇ ಅತಿ ಉದ್ದದ ನದಿಯಾಗಿದ್ದು, ಚೆರುತೋಣಿ ಪ್ರದೇಶವು ತನ್ನ ಚೆರುತೋಣಿ ಅಣೆಕಟ್ಟು ಮತ್ತು ಜಲವಿದ್ಯುತ್ ಯೋಜನೆಗಾಗಿ ಪ್ರಸಿದ್ಧವಾಗಿದೆ. ಚೆರುತೋಣಿ ಅಣೆಕಟ್ಟು ಇಡುಕ್ಕಿ ಜಲಾಶಯದ ಒಂದು ಭಾಗವಾಗಿದ್ದು, ಈ ಜಲಾಶಯವು ಕೇರಳದ ಪ್ರಮುಖ ಜಲವಿದ್ಯುತ್ ಯೋಜನೆಗಳಲ್ಲಿ ಒಂದಾಗಿದೆ. ಅಣೆಕಟ್ಟುಗಳು ಮತ್ತು ಪರ್ವತ ಪ್ರದೇಶಗಳಿಂದ ಕೂಡಿದ ಇಲ್ಲಿನ ಭೌಗೋಳಿಕ ಪರಿಸರವು ಪಟ್ಟಣಕ್ಕೆ ವಿಶಿಷ್ಟವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತದೆ.<ref>{{Cite news|url=https://www.thehindu.com/news/national/kerala/live-updates-rains-in-kerala/article24639461.ece|title=Shutter of Cheruthoni dam opened after 26 years|newspaper=The Hindu |date=9 August 2018 }}</ref>
== ಸ್ಥಳ ==
ಚೆರುತೋಣಿ ಪಟ್ಟಣವು ಪ್ರಸಿದ್ಧ ಇಡುಕ್ಕಿ ಕಮಾನು ಅಣೆಕಟ್ಟು ಮತ್ತು ಚೆರುತೋಣಿ ಅಣೆಕಟ್ಟುಗಳಿಗೆ ಸಮೀಪದಲ್ಲಿದೆ. ಈ ಎರಡು ಅಣೆಕಟ್ಟುಗಳ ಜೊತೆಗೆ ಕುಳಮಾವು ಅಣೆಕಟ್ಟು ಸೇರಿ ಇಡುಕ್ಕಿ ಜಲಾಶಯವನ್ನು ರೂಪಿಸುತ್ತವೆ. ಚೆರುತೋಣಿ ಇಡುಕ್ಕಿ ಜಿಲ್ಲೆಯ ವാഴತೋಪ್ ಪಂಚಾಯತ್ ವ್ಯಾಪ್ತಿಯಲ್ಲಿದೆ. ಇದರ ಸುತ್ತಮುತ್ತ ವാഴತೋಪ್, ತಡಿಯಂಪಾಡು, ಕರಿಂಬನ್, ಮಂಜಪ್ಪಾರ, ಮಣಿಯಾರಂಕುಡಿ, ಭೂಮಿಯಂಕುಳಂ, ಪೆಪ್ಪಾರ, ಮಂಜಿಕ್ಕವಲ ಮತ್ತು ಪೈನಾವು ಸೇರಿದಂತೆ ಹಲವು ಗ್ರಾಮಗಳಿವೆ. ಇಡುಕ್ಕಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಚೆರುತೋಣಿ ಪ್ರಮುಖ ಪ್ರವೇಶ ಮತ್ತು ವಾಸಸ್ಥಳಗಳಲ್ಲಿ ಒಂದಾಗಿದೆ. <ref>https://en.wikipedia.org/wiki/Cheruthoni</ref>
== ಮೂಲ ಮತ್ತು ಅಭಿವೃದ್ಧಿ ==
ಚೆರುತೋಣಿ ಪ್ರದೇಶದ ಆಧುನಿಕ ವಸಾಹತು ಇತಿಹಾಸವನ್ನು 1940ರ ದಶಕದವರೆಗೆ ಗುರುತಿಸಬಹುದು. ಆ ಕಾಲದಲ್ಲಿ ಉಂಟಾದ ಕ್ಷಾಮದ ಹಿನ್ನೆಲೆಯಲ್ಲಿ, ಸರ್ಕಾರವು ಪರ್ವತ ಪ್ರದೇಶಗಳಲ್ಲಿದ್ದ ಬಳಕೆಯಾಗದ ಕೃಷಿಯೋಗ್ಯ ಭೂಮಿಗೆ ರೈತರು ವಲಸೆ ಹೋಗಲು ಅವಕಾಶ ನೀಡಿತು. ರೈತರು ಕಾಡು ಪ್ರದೇಶಗಳನ್ನು ತೆರವುಗೊಳಿಸಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದರು. ನಂತರ ಈ ಪ್ರದೇಶವು ಜಲವಿದ್ಯುತ್ ಯೋಜನೆಗೆ ಸೂಕ್ತ ಸ್ಥಳವೆಂದು ಗುರುತಿಸಲಾಯಿತು. ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಪರವಾಗಿ ಅಣೆಕಟ್ಟುಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ಹಿಂದುಸ್ತಾನ್ ಕನ್ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಯಿತು. ಇಡುಕ್ಕಿ ಜಲಾಶಯ ಮತ್ತು ಜಲವಿದ್ಯುತ್ ಯೋಜನೆಯ ಅಭಿವೃದ್ಧಿಯೊಂದಿಗೆ ಚೆರುತೋಣಿ ಪ್ರಮುಖ ಪಟ್ಟಣವಾಗಿ ಬೆಳೆಯಿತು.
qt0vrf4deeqpdve4chbnhaxoem4ejiq
ಚೆಂಬ್ರ ಬೆಟ್ಟ
0
180122
1379534
2026-08-08T19:23:56Z
Santhosh Notagar99
82732
ಹೊಸ ಪುಟ: '''ಚೆಂಬ್ರ ಬೆಟ್ಟ''' (Chembra Peak), ಚೆಂಬ್ರ ಮಲ ಎಂದೂ ಕರೆಯಲ್ಪಡುವ, ಭಾರತದ ಕೇರಳ ರಾಜ್ಯದಲ್ಲಿರುವ ಪ್ರಸಿದ್ಧ ಪರ್ವತ ಶಿಖರವಾಗಿದೆ. ಸಮುದ್ರಮಟ್ಟದಿಂದ ಸುಮಾರು 2,100 ಮೀಟರ್ (6,890 ಅಡಿ) ಎತ್ತರದಲ್ಲಿರುವ ಇದು ವಯನಾಡ್ ಬೆಟ್ಟಗಳಲ್ಲಿ...
1379534
wikitext
text/x-wiki
'''ಚೆಂಬ್ರ ಬೆಟ್ಟ''' (Chembra Peak), ಚೆಂಬ್ರ ಮಲ ಎಂದೂ ಕರೆಯಲ್ಪಡುವ, ಭಾರತದ ಕೇರಳ ರಾಜ್ಯದಲ್ಲಿರುವ ಪ್ರಸಿದ್ಧ ಪರ್ವತ ಶಿಖರವಾಗಿದೆ. ಸಮುದ್ರಮಟ್ಟದಿಂದ ಸುಮಾರು 2,100 ಮೀಟರ್ (6,890 ಅಡಿ) ಎತ್ತರದಲ್ಲಿರುವ ಇದು ವಯನಾಡ್ ಬೆಟ್ಟಗಳಲ್ಲಿನ ಅತಿ ಎತ್ತರದ ಶಿಖರವಾಗಿದ್ದು, ಪಶ್ಚಿಮ ಘಟ್ಟಗಳ ಪ್ರಮುಖ ಎತ್ತರದ ಶಿಖರಗಳಲ್ಲಿ ಒಂದಾಗಿದೆ. ನೀಲಗಿರಿ ಬೆಟ್ಟಗಳು ಮತ್ತು ವೆಳ್ಳರಿಮಲದ ಸಮೀಪದಲ್ಲಿರುವ ಈ ಶಿಖರವು ಕೇರಳದ ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಕಲ್ಪೆಟ್ಟ ಪಟ್ಟಣ ಮತ್ತು ನಿಲಂಬೂರ್ ತಾಲ್ಲೂಕಿನ ಸಮೀಪದಲ್ಲಿದೆ. ಪರ್ವತದ ಹಸಿರು ಪರಿಸರ ಮತ್ತು ವಿಶಾಲವಾದ ನೈಸರ್ಗಿಕ ದೃಶ್ಯಗಳು ಚೆಂಬ್ರ ಶಿಖರವನ್ನು ಪ್ರವಾಸಿಗರು ಮತ್ತು ಚಾರಣಿಗರ ಜನಪ್ರಿಯ ತಾಣವನ್ನಾಗಿ ಮಾಡಿವೆ.
== ಚಾರಣ ಮತ್ತು ಪ್ರವಾಸೋದ್ಯಮ ==
ಚೆಂಬ್ರ ಶಿಖರಕ್ಕೆ ಭೇಟಿ ನೀಡುವ ಪ್ರವಾಸಿಗರ ಚಾರಣ ಚಟುವಟಿಕೆಗಳನ್ನು ದಕ್ಷಿಣ ವಯನಾಡ್ ಅರಣ್ಯ ಅಭಿವೃದ್ಧಿ ಸಂಸ್ಥೆಯ ನಿಯಂತ್ರಣದಲ್ಲಿರುವ ಚೆಂಬ್ರ ಪೀಕ್ VSS ಆಯೋಜಿಸುತ್ತದೆ. ಚಾರಣಿಗರಿಗೆ ಮಾರ್ಗದರ್ಶಕರನ್ನು ಒದಗಿಸಲಾಗುತ್ತದೆ ಮತ್ತು ಮೇಪ್ಪಾಡಿಯಿಂದ ಕಾಲ್ನಡಿಗೆಯಲ್ಲಿ ಶಿಖರವನ್ನು ತಲುಪಬಹುದು. ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಮಂಡಳಿಯು ಪ್ರವಾಸಿಗರಿಗೆ ಶುಲ್ಕದ ಆಧಾರದ ಮೇಲೆ ಮಾರ್ಗದರ್ಶಕರು ಮತ್ತು ಅಗತ್ಯ ಚಾರಣೋಪಕರಣಗಳನ್ನು ಒದಗಿಸುತ್ತದೆ. ಚೆಂಬ್ರ ಶಿಖರದ ಸುತ್ತಮುತ್ತಲಿನ ನೈಸರ್ಗಿಕ ಪ್ರದೇಶಗಳಲ್ಲಿ ಬಾಣಾಸುರ ಸಾಗರ ಅಣೆಕಟ್ಟು ಮತ್ತು ಬಾಣಾಸುರ ಬೆಟ್ಟ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.
5xrjo9btw4ssgpqoydi7zdmeymbc0ro
1379535
1379534
2026-08-08T19:25:10Z
Santhosh Notagar99
82732
1379535
wikitext
text/x-wiki
'''ಚೆಂಬ್ರ ಬೆಟ್ಟ''' (Chembra Peak), ಚೆಂಬ್ರ ಮಲ ಎಂದೂ ಕರೆಯಲ್ಪಡುವ, ಭಾರತದ ಕೇರಳ ರಾಜ್ಯದಲ್ಲಿರುವ ಪ್ರಸಿದ್ಧ ಪರ್ವತ ಶಿಖರವಾಗಿದೆ. ಸಮುದ್ರಮಟ್ಟದಿಂದ ಸುಮಾರು 2,100 ಮೀಟರ್ (6,890 ಅಡಿ) ಎತ್ತರದಲ್ಲಿರುವ ಇದು ವಯನಾಡ್ ಬೆಟ್ಟಗಳಲ್ಲಿನ ಅತಿ ಎತ್ತರದ ಶಿಖರವಾಗಿದ್ದು, ಪಶ್ಚಿಮ ಘಟ್ಟಗಳ ಪ್ರಮುಖ ಎತ್ತರದ ಶಿಖರಗಳಲ್ಲಿ ಒಂದಾಗಿದೆ. ನೀಲಗಿರಿ ಬೆಟ್ಟಗಳು ಮತ್ತು ವೆಳ್ಳರಿಮಲದ ಸಮೀಪದಲ್ಲಿರುವ ಈ ಶಿಖರವು ಕೇರಳದ ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಕಲ್ಪೆಟ್ಟ ಪಟ್ಟಣ ಮತ್ತು ನಿಲಂಬೂರ್ ತಾಲ್ಲೂಕಿನ ಸಮೀಪದಲ್ಲಿದೆ. ಪರ್ವತದ ಹಸಿರು ಪರಿಸರ ಮತ್ತು ವಿಶಾಲವಾದ ನೈಸರ್ಗಿಕ ದೃಶ್ಯಗಳು ಚೆಂಬ್ರ ಶಿಖರವನ್ನು ಪ್ರವಾಸಿಗರು ಮತ್ತು ಚಾರಣಿಗರ ಜನಪ್ರಿಯ ತಾಣವನ್ನಾಗಿ ಮಾಡಿವೆ. <ref name="colway">{{cite web|url=http://wayanad.nic.in/docs/Order%20of%20the%20DDMA.pdf|title=Proceedings of the Chairman, District Disaster Management Authority and the District Magistrate, Wayanad|publisher=Collectorate, Wayanad|access-date=2017-01-16|archive-url=https://web.archive.org/web/20160717042312/http://wayanad.nic.in/docs/Order%20of%20the%20DDMA.pdf|archive-date=2016-07-17|url-status=dead}}</ref><ref>{{Cite web |url=https://www.keralatourism.org/destination/chembra-peak-wayanad/508/ |title=Chembra peak - ideal place for trekking in Wayanad {{!}} Kerala Tourism |website=www.keralatourism.org |language=en |access-date=2026-07-30}}</ref><ref>{{Cite web |author=Prateek Dham |url=https://www.tripoto.com/kerala/trips/chembra-peak-wayanad |title=Why It Is Criminal To Not Visit Chembra: The Most Surreal Mountain Peak In South India |website=Tripoto |language=en |access-date=2026-07-30}}</ref><ref>{{Cite web |url=https://www.keralatourism.org/ecotourism/trekking-programs/chembra-trek/14 |title=Chembra Peak Trekking and the heart-shaped lake{{!}} Trekking Packages Wayanad {{!}} Eco Tourism in Kerala |website=Ecotourism |language=en |access-date=2026-07-30}}</ref>
== ಚಾರಣ ಮತ್ತು ಪ್ರವಾಸೋದ್ಯಮ ==
ಚೆಂಬ್ರ ಶಿಖರಕ್ಕೆ ಭೇಟಿ ನೀಡುವ ಪ್ರವಾಸಿಗರ ಚಾರಣ ಚಟುವಟಿಕೆಗಳನ್ನು ದಕ್ಷಿಣ ವಯನಾಡ್ ಅರಣ್ಯ ಅಭಿವೃದ್ಧಿ ಸಂಸ್ಥೆಯ ನಿಯಂತ್ರಣದಲ್ಲಿರುವ ಚೆಂಬ್ರ ಪೀಕ್ VSS ಆಯೋಜಿಸುತ್ತದೆ. ಚಾರಣಿಗರಿಗೆ ಮಾರ್ಗದರ್ಶಕರನ್ನು ಒದಗಿಸಲಾಗುತ್ತದೆ ಮತ್ತು ಮೇಪ್ಪಾಡಿಯಿಂದ ಕಾಲ್ನಡಿಗೆಯಲ್ಲಿ ಶಿಖರವನ್ನು ತಲುಪಬಹುದು. ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಮಂಡಳಿಯು ಪ್ರವಾಸಿಗರಿಗೆ ಶುಲ್ಕದ ಆಧಾರದ ಮೇಲೆ ಮಾರ್ಗದರ್ಶಕರು ಮತ್ತು ಅಗತ್ಯ ಚಾರಣೋಪಕರಣಗಳನ್ನು ಒದಗಿಸುತ್ತದೆ. ಚೆಂಬ್ರ ಶಿಖರದ ಸುತ್ತಮುತ್ತಲಿನ ನೈಸರ್ಗಿಕ ಪ್ರದೇಶಗಳಲ್ಲಿ ಬಾಣಾಸುರ ಸಾಗರ ಅಣೆಕಟ್ಟು ಮತ್ತು ಬಾಣಾಸುರ ಬೆಟ್ಟ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.<ref>{{cite web
|url=http://keralatourism.gov.in/index.php?source=desti&destid=6636014&catid=&zone=1
|title= Official website of Kerala Tourism
|access-date=2007-10-01
}}</ref>
ll9ifn18vi57bmru4g5n8f71sbshttp
1379536
1379535
2026-08-08T19:25:25Z
Santhosh Notagar99
82732
1379536
wikitext
text/x-wiki
'''ಚೆಂಬ್ರ ಬೆಟ್ಟ''' (Chembra Peak), ಚೆಂಬ್ರ ಮಲ ಎಂದೂ ಕರೆಯಲ್ಪಡುವ, ಭಾರತದ ಕೇರಳ ರಾಜ್ಯದಲ್ಲಿರುವ ಪ್ರಸಿದ್ಧ ಪರ್ವತ ಶಿಖರವಾಗಿದೆ. ಸಮುದ್ರಮಟ್ಟದಿಂದ ಸುಮಾರು 2,100 ಮೀಟರ್ (6,890 ಅಡಿ) ಎತ್ತರದಲ್ಲಿರುವ ಇದು ವಯನಾಡ್ ಬೆಟ್ಟಗಳಲ್ಲಿನ ಅತಿ ಎತ್ತರದ ಶಿಖರವಾಗಿದ್ದು, ಪಶ್ಚಿಮ ಘಟ್ಟಗಳ ಪ್ರಮುಖ ಎತ್ತರದ ಶಿಖರಗಳಲ್ಲಿ ಒಂದಾಗಿದೆ. ನೀಲಗಿರಿ ಬೆಟ್ಟಗಳು ಮತ್ತು ವೆಳ್ಳರಿಮಲದ ಸಮೀಪದಲ್ಲಿರುವ ಈ ಶಿಖರವು ಕೇರಳದ ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಕಲ್ಪೆಟ್ಟ ಪಟ್ಟಣ ಮತ್ತು ನಿಲಂಬೂರ್ ತಾಲ್ಲೂಕಿನ ಸಮೀಪದಲ್ಲಿದೆ. ಪರ್ವತದ ಹಸಿರು ಪರಿಸರ ಮತ್ತು ವಿಶಾಲವಾದ ನೈಸರ್ಗಿಕ ದೃಶ್ಯಗಳು ಚೆಂಬ್ರ ಶಿಖರವನ್ನು ಪ್ರವಾಸಿಗರು ಮತ್ತು ಚಾರಣಿಗರ ಜನಪ್ರಿಯ ತಾಣವನ್ನಾಗಿ ಮಾಡಿವೆ. <ref name="colway">{{cite web|url=http://wayanad.nic.in/docs/Order%20of%20the%20DDMA.pdf|title=Proceedings of the Chairman, District Disaster Management Authority and the District Magistrate, Wayanad|publisher=Collectorate, Wayanad|access-date=2017-01-16|archive-url=https://web.archive.org/web/20160717042312/http://wayanad.nic.in/docs/Order%20of%20the%20DDMA.pdf|archive-date=2016-07-17|url-status=dead}}</ref><ref>{{Cite web |url=https://www.keralatourism.org/destination/chembra-peak-wayanad/508/ |title=Chembra peak - ideal place for trekking in Wayanad {{!}} Kerala Tourism |website=www.keralatourism.org |language=en |access-date=2026-07-30}}</ref><ref>{{Cite web |author=Prateek Dham |url=https://www.tripoto.com/kerala/trips/chembra-peak-wayanad |title=Why It Is Criminal To Not Visit Chembra: The Most Surreal Mountain Peak In South India |website=Tripoto |language=en |access-date=2026-07-30}}</ref><ref>{{Cite web |url=https://www.keralatourism.org/ecotourism/trekking-programs/chembra-trek/14 |title=Chembra Peak Trekking and the heart-shaped lake{{!}} Trekking Packages Wayanad {{!}} Eco Tourism in Kerala |website=Ecotourism |language=en |access-date=2026-07-30}}</ref>
== ಚಾರಣ ಮತ್ತು ಪ್ರವಾಸೋದ್ಯಮ ==
ಚೆಂಬ್ರ ಶಿಖರಕ್ಕೆ ಭೇಟಿ ನೀಡುವ ಪ್ರವಾಸಿಗರ ಚಾರಣ ಚಟುವಟಿಕೆಗಳನ್ನು ದಕ್ಷಿಣ ವಯನಾಡ್ ಅರಣ್ಯ ಅಭಿವೃದ್ಧಿ ಸಂಸ್ಥೆಯ ನಿಯಂತ್ರಣದಲ್ಲಿರುವ ಚೆಂಬ್ರ ಪೀಕ್ VSS ಆಯೋಜಿಸುತ್ತದೆ. ಚಾರಣಿಗರಿಗೆ ಮಾರ್ಗದರ್ಶಕರನ್ನು ಒದಗಿಸಲಾಗುತ್ತದೆ ಮತ್ತು ಮೇಪ್ಪಾಡಿಯಿಂದ ಕಾಲ್ನಡಿಗೆಯಲ್ಲಿ ಶಿಖರವನ್ನು ತಲುಪಬಹುದು. ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಮಂಡಳಿಯು ಪ್ರವಾಸಿಗರಿಗೆ ಶುಲ್ಕದ ಆಧಾರದ ಮೇಲೆ ಮಾರ್ಗದರ್ಶಕರು ಮತ್ತು ಅಗತ್ಯ ಚಾರಣೋಪಕರಣಗಳನ್ನು ಒದಗಿಸುತ್ತದೆ. ಚೆಂಬ್ರ ಶಿಖರದ ಸುತ್ತಮುತ್ತಲಿನ ನೈಸರ್ಗಿಕ ಪ್ರದೇಶಗಳಲ್ಲಿ ಬಾಣಾಸುರ ಸಾಗರ ಅಣೆಕಟ್ಟು ಮತ್ತು ಬಾಣಾಸುರ ಬೆಟ್ಟ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.<ref>{{cite web
|url=http://keralatourism.gov.in/index.php?source=desti&destid=6636014&catid=&zone=1
|title= Official website of Kerala Tourism
|access-date=2007-10-01
}}</ref>
==ಉಲ್ಲೇಖಗಳು==
3yk424pyxpz2h2l3qjhx73q3evd07iv
1379537
1379536
2026-08-08T19:27:07Z
Santhosh Notagar99
82732
1379537
wikitext
text/x-wiki
{{short description|Mountain in Kerala, India}}
{{Use dmy dates|date=July 2019}}
{{Use Indian English|date=July 2019}}
{{Infobox mountain
| name = ಚೆಂಬ್ರ ಬೆಟ್ಟ
| native_name = {{native name |ml|ചെമ്പ്ര കൊടുമുടി}}
| image = Chembra.jpg
| image_caption = View of Chembra Peak
| elevation = {{convert|2100|m|ft|sigfig=4|abbr=on}}
| elevation_ref = <ref name="colway">{{cite web|url=http://wayanad.nic.in/docs/Order%20of%20the%20DDMA.pdf|title=Proceedings of the Chairman, District Disaster Management Authority and the District Magistrate, Wayanad|publisher=Collectorate, Wayanad|access-date=2017-01-16|archive-url=https://web.archive.org/web/20160717042312/http://wayanad.nic.in/docs/Order%20of%20the%20DDMA.pdf|archive-date=2016-07-17|url-status=dead}}</ref>
| prominence_m =
| prominence_ref =
| range = [[Western Ghats]]
| location = ವೈತಿರಿ ತಾಲೂಕು, ವಯನಾಡು ಜಿಲ್ಲೆ, ಕೇರಳ, ಭಾರತ
| map = India Kerala
| range_coordinates =
| map_size = 220
| label_position = left
| coordinates = {{coord|11|30|44|N|76|05|22|E|type:mountain_region:IN_scale:100000|format=dms|display=inline,title}}
| coordinates_ref =
| topo_map =
| type =
| age =
| first_ascent =
| easiest_route = Hike
}}
'''ಚೆಂಬ್ರ ಬೆಟ್ಟ''' (Chembra Peak), ಚೆಂಬ್ರ ಮಲ ಎಂದೂ ಕರೆಯಲ್ಪಡುವ, ಭಾರತದ ಕೇರಳ ರಾಜ್ಯದಲ್ಲಿರುವ ಪ್ರಸಿದ್ಧ ಪರ್ವತ ಶಿಖರವಾಗಿದೆ. ಸಮುದ್ರಮಟ್ಟದಿಂದ ಸುಮಾರು 2,100 ಮೀಟರ್ (6,890 ಅಡಿ) ಎತ್ತರದಲ್ಲಿರುವ ಇದು ವಯನಾಡ್ ಬೆಟ್ಟಗಳಲ್ಲಿನ ಅತಿ ಎತ್ತರದ ಶಿಖರವಾಗಿದ್ದು, ಪಶ್ಚಿಮ ಘಟ್ಟಗಳ ಪ್ರಮುಖ ಎತ್ತರದ ಶಿಖರಗಳಲ್ಲಿ ಒಂದಾಗಿದೆ. ನೀಲಗಿರಿ ಬೆಟ್ಟಗಳು ಮತ್ತು ವೆಳ್ಳರಿಮಲದ ಸಮೀಪದಲ್ಲಿರುವ ಈ ಶಿಖರವು ಕೇರಳದ ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಕಲ್ಪೆಟ್ಟ ಪಟ್ಟಣ ಮತ್ತು ನಿಲಂಬೂರ್ ತಾಲ್ಲೂಕಿನ ಸಮೀಪದಲ್ಲಿದೆ. ಪರ್ವತದ ಹಸಿರು ಪರಿಸರ ಮತ್ತು ವಿಶಾಲವಾದ ನೈಸರ್ಗಿಕ ದೃಶ್ಯಗಳು ಚೆಂಬ್ರ ಶಿಖರವನ್ನು ಪ್ರವಾಸಿಗರು ಮತ್ತು ಚಾರಣಿಗರ ಜನಪ್ರಿಯ ತಾಣವನ್ನಾಗಿ ಮಾಡಿವೆ. <ref name="colway">{{cite web|url=http://wayanad.nic.in/docs/Order%20of%20the%20DDMA.pdf|title=Proceedings of the Chairman, District Disaster Management Authority and the District Magistrate, Wayanad|publisher=Collectorate, Wayanad|access-date=2017-01-16|archive-url=https://web.archive.org/web/20160717042312/http://wayanad.nic.in/docs/Order%20of%20the%20DDMA.pdf|archive-date=2016-07-17|url-status=dead}}</ref><ref>{{Cite web |url=https://www.keralatourism.org/destination/chembra-peak-wayanad/508/ |title=Chembra peak - ideal place for trekking in Wayanad {{!}} Kerala Tourism |website=www.keralatourism.org |language=en |access-date=2026-07-30}}</ref><ref>{{Cite web |author=Prateek Dham |url=https://www.tripoto.com/kerala/trips/chembra-peak-wayanad |title=Why It Is Criminal To Not Visit Chembra: The Most Surreal Mountain Peak In South India |website=Tripoto |language=en |access-date=2026-07-30}}</ref><ref>{{Cite web |url=https://www.keralatourism.org/ecotourism/trekking-programs/chembra-trek/14 |title=Chembra Peak Trekking and the heart-shaped lake{{!}} Trekking Packages Wayanad {{!}} Eco Tourism in Kerala |website=Ecotourism |language=en |access-date=2026-07-30}}</ref>
== ಚಾರಣ ಮತ್ತು ಪ್ರವಾಸೋದ್ಯಮ ==
ಚೆಂಬ್ರ ಶಿಖರಕ್ಕೆ ಭೇಟಿ ನೀಡುವ ಪ್ರವಾಸಿಗರ ಚಾರಣ ಚಟುವಟಿಕೆಗಳನ್ನು ದಕ್ಷಿಣ ವಯನಾಡ್ ಅರಣ್ಯ ಅಭಿವೃದ್ಧಿ ಸಂಸ್ಥೆಯ ನಿಯಂತ್ರಣದಲ್ಲಿರುವ ಚೆಂಬ್ರ ಪೀಕ್ VSS ಆಯೋಜಿಸುತ್ತದೆ. ಚಾರಣಿಗರಿಗೆ ಮಾರ್ಗದರ್ಶಕರನ್ನು ಒದಗಿಸಲಾಗುತ್ತದೆ ಮತ್ತು ಮೇಪ್ಪಾಡಿಯಿಂದ ಕಾಲ್ನಡಿಗೆಯಲ್ಲಿ ಶಿಖರವನ್ನು ತಲುಪಬಹುದು. ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಮಂಡಳಿಯು ಪ್ರವಾಸಿಗರಿಗೆ ಶುಲ್ಕದ ಆಧಾರದ ಮೇಲೆ ಮಾರ್ಗದರ್ಶಕರು ಮತ್ತು ಅಗತ್ಯ ಚಾರಣೋಪಕರಣಗಳನ್ನು ಒದಗಿಸುತ್ತದೆ. ಚೆಂಬ್ರ ಶಿಖರದ ಸುತ್ತಮುತ್ತಲಿನ ನೈಸರ್ಗಿಕ ಪ್ರದೇಶಗಳಲ್ಲಿ ಬಾಣಾಸುರ ಸಾಗರ ಅಣೆಕಟ್ಟು ಮತ್ತು ಬಾಣಾಸುರ ಬೆಟ್ಟ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.<ref>{{cite web
|url=http://keralatourism.gov.in/index.php?source=desti&destid=6636014&catid=&zone=1
|title= Official website of Kerala Tourism
|access-date=2007-10-01
}}</ref>
==ಉಲ್ಲೇಖಗಳು==
662iyl4w1khlj69eysxsksy5werte31
1379538
1379537
2026-08-08T19:30:21Z
Santhosh Notagar99
82732
1379538
wikitext
text/x-wiki
{{short description|Mountain in Kerala, India}}
{{Use dmy dates|date=July 2019}}
{{Use Indian English|date=July 2019}}
{{Infobox mountain
| name = ಚೆಂಬ್ರ ಬೆಟ್ಟ
| native_name = {{native name |ml|ചെമ്പ്ര കൊടുമുടി}}
| image = Chembra.jpg
| image_caption = View of Chembra Peak
| elevation = {{convert|2100|m|ft|sigfig=4|abbr=on}}
| elevation_ref = <ref name="colway">{{cite web|url=http://wayanad.nic.in/docs/Order%20of%20the%20DDMA.pdf|title=Proceedings of the Chairman, District Disaster Management Authority and the District Magistrate, Wayanad|publisher=Collectorate, Wayanad|access-date=2017-01-16|archive-url=https://web.archive.org/web/20160717042312/http://wayanad.nic.in/docs/Order%20of%20the%20DDMA.pdf|archive-date=2016-07-17|url-status=dead}}</ref>
| prominence_m =
| prominence_ref =
| range = [[Western Ghats]]
| location = ವೈತಿರಿ ತಾಲೂಕು, ವಯನಾಡು ಜಿಲ್ಲೆ, ಕೇರಳ, ಭಾರತ
| map = India Kerala
| range_coordinates =
| map_size = 220
| label_position = left
| coordinates = {{coord|11|30|44|N|76|05|22|E|type:mountain_region:IN_scale:100000|format=dms|display=inline,title}}
| coordinates_ref =
| topo_map =
| type =
| age =
| first_ascent =
| easiest_route = Hike
}}
'''ಚೆಂಬ್ರ ಬೆಟ್ಟ''' (Chembra Peak), ಚೆಂಬ್ರ ಮಲ ಎಂದೂ ಕರೆಯಲ್ಪಡುವ, ಭಾರತದ ಕೇರಳ ರಾಜ್ಯದಲ್ಲಿರುವ ಪ್ರಸಿದ್ಧ ಪರ್ವತ ಶಿಖರವಾಗಿದೆ. ಸಮುದ್ರಮಟ್ಟದಿಂದ ಸುಮಾರು 2,100 ಮೀಟರ್ (6,890 ಅಡಿ) ಎತ್ತರದಲ್ಲಿರುವ ಇದು ವಯನಾಡ್ ಬೆಟ್ಟಗಳಲ್ಲಿನ ಅತಿ ಎತ್ತರದ ಶಿಖರವಾಗಿದ್ದು, ಪಶ್ಚಿಮ ಘಟ್ಟಗಳ ಪ್ರಮುಖ ಎತ್ತರದ ಶಿಖರಗಳಲ್ಲಿ ಒಂದಾಗಿದೆ. ನೀಲಗಿರಿ ಬೆಟ್ಟಗಳು ಮತ್ತು ವೆಳ್ಳರಿಮಲದ ಸಮೀಪದಲ್ಲಿರುವ ಈ ಶಿಖರವು ಕೇರಳದ ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಕಲ್ಪೆಟ್ಟ ಪಟ್ಟಣ ಮತ್ತು ನಿಲಂಬೂರ್ ತಾಲ್ಲೂಕಿನ ಸಮೀಪದಲ್ಲಿದೆ. ಪರ್ವತದ ಹಸಿರು ಪರಿಸರ ಮತ್ತು ವಿಶಾಲವಾದ ನೈಸರ್ಗಿಕ ದೃಶ್ಯಗಳು ಚೆಂಬ್ರ ಶಿಖರವನ್ನು ಪ್ರವಾಸಿಗರು ಮತ್ತು ಚಾರಣಿಗರ ಜನಪ್ರಿಯ ತಾಣವನ್ನಾಗಿ ಮಾಡಿವೆ. <ref name="colway">{{cite web|url=http://wayanad.nic.in/docs/Order%20of%20the%20DDMA.pdf|title=Proceedings of the Chairman, District Disaster Management Authority and the District Magistrate, Wayanad|publisher=Collectorate, Wayanad|access-date=2017-01-16|archive-url=https://web.archive.org/web/20160717042312/http://wayanad.nic.in/docs/Order%20of%20the%20DDMA.pdf|archive-date=2016-07-17|url-status=dead}}</ref><ref>{{Cite web |url=https://www.keralatourism.org/destination/chembra-peak-wayanad/508/ |title=Chembra peak - ideal place for trekking in Wayanad {{!}} Kerala Tourism |website=www.keralatourism.org |language=en |access-date=2026-07-30}}</ref><ref>{{Cite web |author=Prateek Dham |url=https://www.tripoto.com/kerala/trips/chembra-peak-wayanad |title=Why It Is Criminal To Not Visit Chembra: The Most Surreal Mountain Peak In South India |website=Tripoto |language=en |access-date=2026-07-30}}</ref><ref>{{Cite web |url=https://www.keralatourism.org/ecotourism/trekking-programs/chembra-trek/14 |title=Chembra Peak Trekking and the heart-shaped lake{{!}} Trekking Packages Wayanad {{!}} Eco Tourism in Kerala |website=Ecotourism |language=en |access-date=2026-07-30}}</ref>
== ಚಾರಣ ಮತ್ತು ಪ್ರವಾಸೋದ್ಯಮ ==
ಚೆಂಬ್ರ ಶಿಖರಕ್ಕೆ ಭೇಟಿ ನೀಡುವ ಪ್ರವಾಸಿಗರ ಚಾರಣ ಚಟುವಟಿಕೆಗಳನ್ನು ದಕ್ಷಿಣ ವಯನಾಡ್ ಅರಣ್ಯ ಅಭಿವೃದ್ಧಿ ಸಂಸ್ಥೆಯ ನಿಯಂತ್ರಣದಲ್ಲಿರುವ ಚೆಂಬ್ರ ಪೀಕ್ VSS ಆಯೋಜಿಸುತ್ತದೆ. ಚಾರಣಿಗರಿಗೆ ಮಾರ್ಗದರ್ಶಕರನ್ನು ಒದಗಿಸಲಾಗುತ್ತದೆ ಮತ್ತು ಮೇಪ್ಪಾಡಿಯಿಂದ ಕಾಲ್ನಡಿಗೆಯಲ್ಲಿ ಶಿಖರವನ್ನು ತಲುಪಬಹುದು. ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಮಂಡಳಿಯು ಪ್ರವಾಸಿಗರಿಗೆ ಶುಲ್ಕದ ಆಧಾರದ ಮೇಲೆ ಮಾರ್ಗದರ್ಶಕರು ಮತ್ತು ಅಗತ್ಯ ಚಾರಣೋಪಕರಣಗಳನ್ನು ಒದಗಿಸುತ್ತದೆ. ಚೆಂಬ್ರ ಶಿಖರದ ಸುತ್ತಮುತ್ತಲಿನ ನೈಸರ್ಗಿಕ ಪ್ರದೇಶಗಳಲ್ಲಿ ಬಾಣಾಸುರ ಸಾಗರ ಅಣೆಕಟ್ಟು ಮತ್ತು ಬಾಣಾಸುರ ಬೆಟ್ಟ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.<ref>{{cite web
|url=http://keralatourism.gov.in/index.php?source=desti&destid=6636014&catid=&zone=1
|title= Official website of Kerala Tourism
|access-date=2007-10-01
}}</ref>
==ಛಾಯಾಚಿತ್ರಗಳು==
<gallery mode="packed">
File:Chembra lake.jpg|ಚೆಂಬ್ರಾ ಶಿಖರದ ಮೇಲ್ಭಾಗಕ್ಕೆ ಹೋಗುವ ದಾರಿಯಲ್ಲಿರುವ ಸರೋವರ
File:Chembra Peak.JPG|ಮೇಲಿನ ನೋಟ
File:Chembra Peak.jpg|ಮೆಪ್ಪಾಡಿಯಿಂದ ಕಾಣುವ ದೃಶ್ಯ
File:Tea plantations, Chembra peak, Western Ghats Kerala.jpg|ಚಹಾ ತೋಟಗಳು, ಚೆಂಬ್ರಾ ಶಿಖರ, ಪಶ್ಚಿಮ ಘಟ್ಟಗಳು
File:Chembra peak heart shape lake.jpg|ಹೃದಯಾಕಾರದ ಸರೋವರ
</gallery>
==ಉಲ್ಲೇಖಗಳು==
nldq5vrj875zvxmqd67pcdrwc31iyhe
ಪೊನ್ಮುಡಿ
0
180123
1379570
2026-08-09T06:55:00Z
Pragathi. BH
88266
ಹೊಸ ಪುಟ: ಪೊನ್ಮುಡಿ ಎಂದರೆ "ಚಿನ್ನದ ಶಿಖರ"(ಗೋಲ್ಡನ್ ಪೀಕ್) ಎಂದರ್ಥ .ಭಾರತದ ಕೇರಳದ ತಿರುವನಂತಪುರಂ ಜಿಲ್ಲೆಯ ಪೆರಿಂಗಮಲ ಗ್ರಾಮಪಂಚಾಯತ್ನಲ್ಲಿರುವ ಒಂದು ಗಿರಿಧಾಮವಾಗಿದೆ. ಇದು ವಿಥುರ ಪಟ್ಟಣದಿಂದ ಪಶ್ಚಿಮಕ್ಕೆ 22 ಕಿ.ಮೀ ದೂ...
1379570
wikitext
text/x-wiki
ಪೊನ್ಮುಡಿ ಎಂದರೆ "ಚಿನ್ನದ ಶಿಖರ"(ಗೋಲ್ಡನ್ ಪೀಕ್) ಎಂದರ್ಥ .ಭಾರತದ ಕೇರಳದ ತಿರುವನಂತಪುರಂ ಜಿಲ್ಲೆಯ ಪೆರಿಂಗಮಲ ಗ್ರಾಮಪಂಚಾಯತ್ನಲ್ಲಿರುವ ಒಂದು ಗಿರಿಧಾಮವಾಗಿದೆ. ಇದು ವಿಥುರ ಪಟ್ಟಣದಿಂದ ಪಶ್ಚಿಮಕ್ಕೆ 22 ಕಿ.ಮೀ ದೂರದಲ್ಲಿದೆ. ತಿರುವನಂತಪುರಂ ನಗರದಿಂದ ಈಶಾನ್ಯಕ್ಕೆ , 78ಕಿ.ಮೀ. ವರ್ಕಲಾ ಪಟ್ಟಣದ ಆಗ್ನೇಯಕ್ಕೆ, ಕೋವಲಂ ಬೀಚ್ ನಿಂದ 69 ಕಿ.ಮೀ ಈಶಾನ್ಯಕ್ಕೆ ಮತ್ತು ಸಮುದ್ರ ಮಟ್ಟದಿಂದ 1,100 ಮೀ ಎತ್ತರದಲ್ಲಿದ. ಪೊನ್ಮುಡಿ ( ವರಯದುಮೊಟ್ಟ ) ಶಿಖರವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಇದು ಅರೇಬಿಯನ್ ಸಮುದ್ರಕ್ಕೆ ಸಮಾನಾಂತರವಾಗಿ ಸಾಗುತ್ತದೆ. ಪೊನ್ಮುಡಿ ದಕ್ಷಿಣ ಭಾರತದ ಜನಪ್ರಿಯ ಹನಿಮೂನ್ ತಾಣವಾಗಿದೆ. ಪೊನ್ಮುಡಿಯ ಸಾಮಾನ್ಯ ತಾಪಮಾನ 14 and 25 ನಡುವೆ ಇರುತ್ತದೆ. . ಚಳಿಗಾಲದಲ್ಲಿ, ತಾಪಮಾನವು 10 and 19 ಇಳಿಯುತ್ತದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ. ಪೊನ್ಮುಡಿಯಲ್ಲಿ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನ 8°C.
ಪೊನ್ಮುಡಿ ತಿರುವನಂತಪುರಂಗೆ ದ್ವಿಪಥ ಹೆದ್ದಾರಿಯ ಮೂಲಕ (SH2 & SH 45) ಸಂಪರ್ಕ ಹೊಂದಿದೆ. ಅನಪರದಿಂದ ಪ್ರಾರಂಭವಾಗುವ ಕೊನೆಯ 18 ಕಿ.ಮೀ. ಪರ್ವತಗಳು ಮತ್ತು ಚಹಾ ತೋಟಗಳ ಮೂಲಕ ಹಾದುಹೋಗುವಾಗ, ರಮಣೀಯ ನೋಟಗಳನ್ನು ನೀಡುತ್ತದೆ. ಚಾಲಕರು ಮತ್ತು ಸವಾರರು 22 ಹೇರ್ ಪಿನ್ ತಿರುವುಗಳಲ್ಲಿ ಸಂಚರಿಸಬೇಕಾಗಿರುವುದರಿಂದ ಈ ಹಾದಿಯಲ್ಲಿ ಪ್ರಯಾಣವು ರೋಮಾಂಚಕ ಅನುಭವವನ್ನು ನೀಡುತ್ತದೆ. [ ಸ್ವರ ] ಪೊನ್ಮುಡಿ ಬೆನ್ನುಹೊರೆಯ ಸವಾರಿ ಮತ್ತು ಚಾರಣಕ್ಕೆ ಜನಪ್ರಿಯ ತಾಣವಾಗಿದೆ. [ ಉಲ್ಲೇಖದ ಅಗತ್ಯವಿದೆ ] ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ.
ಪೊನ್ಮುಡಿ ಬಳಿಯ ಇತರ ಆಕರ್ಷಣೆಗಳಲ್ಲಿ ಗೋಲ್ಡನ್ ವ್ಯಾಲಿ ಮತ್ತು ಹಲವಾರು ಹೊಳೆಗಳು ಮತ್ತು ರಭಸದ ಹೊಳೆಗಳು ಸೇರಿವೆ, ಕೆಲವು ರಸ್ತೆಯಾದ್ಯಂತವೂ ಇವೆ. ಈ ಹಚ್ಚ ಹಸಿರಿನ ಅರಣ್ಯ ಪ್ರದೇಶವು ಉಷ್ಣವಲಯದ ಸಸ್ಯವರ್ಗವನ್ನು ಹೊಂದಿದೆ. [೧] ಬೆಟ್ಟಗಳಲ್ಲಿ ವಿವಿಧ ರೀತಿಯ ವನ್ಯಜೀವಿಗಳು ವಾಸಿಸುತ್ತವೆ. ಗೋಲ್ಡನ್ ವ್ಯಾಲಿ ಬೆಟ್ಟಗಳ ನೋಟಗಳನ್ನು ಮತ್ತು ಕಲ್ಲಾರ್ ನದಿಗೆ ಪ್ರವೇಶವನ್ನು ನೀಡುತ್ತದೆ. ಅರಣ್ಯ ಪ್ರದೇಶದ ಮೂಲಕ ಹರಿಯುವ ಇದು ದುಂಡಗಿನ ಬೆಣಚುಕಲ್ಲುಗಳು, ತಂಪಾದ ನೀರು, ಮೀನುಗಳು ಮತ್ತು ಹಚ್ಚ ಹಸಿರಿನ ಮರಗಳನ್ನು ಹೊಂದಿದೆ.
ಪೊನ್ಮುಡಿಯಲ್ಲಿರುವ ಕೆಲವು ಗಮನಾರ್ಹ ಪ್ರವಾಸಿ ಆಕರ್ಷಣೆಗಳೆಂದರೆ ಪೆಪ್ಪರಾ ವನ್ಯಜೀವಿ ಅಭಯಾರಣ್ಯ, ಎಕೋ ಪಾಯಿಂಟ್ ಮತ್ತು ವಿವಿಧ ಚಾರಣ ತಾಣಗಳು. ಮಂಜಿನಿಂದ ಕೂಡಿದ ಕಣಿವೆಗಳು, ವಿಶೇಷವಾಗಿ ಕಲ್ಲಾರ್ ನದಿಯ ಬಳಿಯ ಗೋಲ್ಡನ್ ವ್ಯಾಲಿ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಜಿಂಕೆ ಉದ್ಯಾನವನ ಮತ್ತು ಪ್ರಕಾಶಮಾನವಾದ ಬಣ್ಣಗಳಲ್ಲಿ ಅಲಂಕರಿಸಲ್ಪಟ್ಟ ಮರ ಮತ್ತು ಕಲ್ಲಿನ ಕುಟೀರಗಳನ್ನು ಕಾಣಬಹುದು.. ಪೊನ್ಮುಡಿ ಜಲಪಾತವು ಗಿರಿಧಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಪೊನ್ಮುಡಿ ರೆಸಾರ್ಟ್ ನಿಂದ 3 ಕಿ.ಮೀ ದೂರದಲ್ಲಿ ಜಿಂಕೆ ಉದ್ಯಾನವನವಿದೆ. ಈ ಪ್ರದೇಶದ ಮತ್ತೊಂದು ಪ್ರವಾಸಿ ಆಕರ್ಷಣೆಯಾದ ಮೀನ್ಮಟ್ಟಿ ಜಲಪಾತವು ಸುಮಾರು ಕಲ್ಲಾರ್ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪೊನ್ಮುಡಿಯ ಹೊರವಲಯದಲ್ಲಿರುವ ಪೆಪ್ಪರ ವನ್ಯಜೀವಿ ಅಭಯಾರಣ್ಯವು 53 ಚಂದ್ರ ಕಿಮೀವಿಸ್ತೀರ್ಣ ಹೊಂದಿರುವ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ವಿವಿಧ ರೀತಿಯ ವನ್ಯಜೀವಿಗಳು ಮತ್ತು ಪಕ್ಷಿಗಳು ಕಂಡುಬರುತ್ತವೆ. ಏಷ್ಯನ್ ಆನೆಗಳು, ಸಾಂಬಾರ್, ಚಿರತೆಗಳು, ಸಿಂಹ ಬಾಲದ ಮಕಾಕ್ಗಳು, ಮಲಬಾರ್ ಬೂದು ಹಾರ್ನ್ಬಿಲ್ಗಳು ಮುಂತಾದ ವಿವಿಧ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸ್ಥಳಾವಕಾಶ ನೀಡುತ್ತದೆ.
ಈ ಪ್ರದೇಶದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಅಗಸ್ತ್ಯಕೂಡಂ, ಇದು ಪಶ್ಚಿಮ ಘಟ್ಟಗಳ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ, ಇದರ ಎತ್ತರ 1868 ಮೀ ರ ಅತಿ ಎತ್ತರದ ಶಿಖರವನ್ನು ಹೊಂದಿದೆ. ಈ ಶಿಖರವು ತನ್ನ ಅರಣ್ಯಕ್ಕೆ ಹೆಸರುವಾಸಿಯಾಗಿದ್ದು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಮಾತ್ರ ಪ್ರವೇಶಿಸಬಹುದು. ಅಗಸ್ತ್ಯಮಲೈ ಬಯೋಸ್ಫಿಯರ್ ರಿಸರ್ವ್ ನೆಯ್ಯರ್, ಪೆಪ್ಪಾರ, ಶೆಂದೂರ್ನಿ ವನ್ಯಜೀವಿ ಅಭಯಾರಣ್ಯಗಳು ಮತ್ತು ಅಚೆನ್ಕೋಯಿಲ್, ತೆನ್ಮಲ, ಕೊನ್ನಿ, ಪುನಲೂರ್ ಮತ್ತು ತಿರುವನಂತಪುರಂ ವಿಭಾಗಗಳನ್ನು ಒಳಗೊಂಡ ಮತ್ತೊಂದು ಆಕರ್ಷಣೆಯಾಗಿದೆ.
ಪೊನ್ಮುಡಿಯ ಭೂದೃಶ್ಯವು ಕಾಡುಗಳು ಮತ್ತು ತೋಟಗಳೊಂದಿಗೆ ಕಣಿವೆಗಳು ಮತ್ತು ಬೆಟ್ಟಗಳ ಮಧ್ಯದ ರಚನೆಯಾಗಿದೆ. ಪೊನ್ಮುಡಿಯಲ್ಲಿ ಜೀವವೈವಿಧ್ಯತೆಯು ಅಪಾರ ಪ್ರಾಮುಖ್ಯತೆಯನ್ನು ಹೊಂದಿದ್ದು, ಇದು ಪ್ರದೇಶದ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೊನ್ಮುಡಿಯಲ್ಲಿ 283 ಜಾತಿಯ ಪಕ್ಷಿಗಳಿಗೆ ಆತಿಥೇಯವಾಗಿದ್ದು, ಅವುಗಳಲ್ಲಿ ಹಲವು ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿದೆ. [೧] ಈ ಪ್ರದೇಶಕ್ಕೆ ಸ್ಥಳೀಯವಾಗಿರುವ ಪಕ್ಷಿಗಳಲ್ಲಿ ಪೇಂಟೆಡ್ ಬುಷ್ ಕ್ವಿಲ್, ಮಲಬಾರ್ ಗ್ರೇ ಹಾರ್ನ್ಬಿಲ್, ವಯನಾಡ್ ಲಾಫಿಂಗ್ಥ್ರಷ್, ಅಗಲ ಬಾಲದ ಹುಲ್ಲು ಹಕ್ಕಿ ಮತ್ತು ನೀಲಗಿರಿ ಪಿಪಿಟ್ ಸೇರಿವೆ. ಪೊನ್ಮುಡಿಯ ಹುಲ್ಲುಗಾವಲುಗಳು ಅಳಿವಿನಂಚಿನಲ್ಲಿರುವ ಜಾತಿಯ ಅಗಲ ಬಾಲದ ಹುಲ್ಲು ಹಕ್ಕಿಯ ಸಂತಾನೋತ್ಪತ್ತಿ ಸ್ಥಳಗಳಾಗಿವೆ. ಕೇರಳದಲ್ಲಿರುವ 483 ಪಕ್ಷಿ ಪ್ರಭೇದಗಳಲ್ಲಿ ಶೇಕಡಾ ಐವತ್ತೊಂಬತ್ತು ಪಕ್ಷಿ ಪ್ರಭೇದಗಳು ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ 16 ಪಕ್ಷಿ ಪ್ರಭೇದಗಳಲ್ಲಿ 15 ಪೊನ್ಮುಡಿಯಲ್ಲಿವೆ. ಪಶ್ಚಿಮ ಘಟ್ಟಗಳಲ್ಲಿರುವ 332 ಜಾತಿಯ ಚಿಟ್ಟೆಗಳಲ್ಲಿ 195 ಜಾತಿಗಳು ಇಲ್ಲಿ ಕಂಡುಬರುತ್ತವೆ. ಘಟ್ಟಗಳಿಗೆ ಸ್ಥಳೀಯವಾಗಿರುವ 37 ಚಿಟ್ಟೆ ಪ್ರಭೇದಗಳಲ್ಲಿ 24 ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಇಸ್ರೋ ಭೂಮಿ ಬರುವ ಕುಲಚಿಕರೈ-ಪಣಯಂ-ಮರ್ಚಿಸ್ಟನ್ ಪ್ರದೇಶದಲ್ಲಿ ಸ್ಪಾಟ್ ಪಫಿನ್ ಎಂಬ ಅಪರೂಪದ ಚಿಟ್ಟೆ ಕಾಣಿಸಿಕೊಂಡಿದೆ. ಅದೇ ರೀತಿ, ಪೊನ್ಮುಡಿಯು ಹಲವು ಜಾತಿಯ ಸರೀಸೃಪಗಳು ಮತ್ತು ಉಭಯಚರಗಳಿಗೆ ನೆಲೆಯಾಗಿದೆ, ಅವುಗಳಲ್ಲಿ ಅತ್ಯಂತ ಅಳಿವಿನಂಚಿನಲ್ಲಿರುವ ತಿರುವಾಂಕೂರು ಆಮೆ, ಮಲಬಾರ್ ಗ್ಲೈಡಿಂಗ್ ಫ್ರಾಗ್ ಮತ್ತು ಮಲಬಾರ್ ಟ್ರೀ ಟೋಡ್ ಸೇರಿವೆ. ನೀಲಗಿರಿ ತಹರ್ ಪೊನ್ಮುಡಿ ಬೆಟ್ಟದ ತುದಿಯಲ್ಲಿಯೂ ಕಂಡುಬರುತ್ತದೆ.
==ಕಲ್ಲಾರ್ ಮತ್ತು ಮೆನ್ಮುಟ್ಟಿ ಜಲಪಾತಗಳು==
ಪೊನ್ಮುಡಿ ಗಿರಿಧಾಮಕ್ಕೆ ಹೋಗುವ ದಾರಿಯಲ್ಲಿ ಕಲ್ಲಾರ್ ಇದ್ದು, ಈ ಪ್ರದೇಶದ ಮೂಲಕ ಹರಿಯುವ ಕಲ್ಲಾರ್ ನದಿಯಿಂದ ಕಲ್ಲಾರ್ ತನ್ನ ಹೆಸರನ್ನು ಪಡೆದುಕೊಂಡಿದೆ. ಕಲ್ಲು ಎಂದರೆ 'ಕಲ್ಲು' ಮತ್ತು ಆರು ಎಂದರೆ 'ನದಿ', ಆದ್ದರಿಂದ ಕಲ್ಲಾರ್ ಎಂಬ ಹೆಸರು ಬಂದಿದೆ. ಈ ನದಿಯು ಆಕರ್ಷಕವಾದ, ದುಂಡಗಿನ ಆಕಾರದ ಬಂಡೆಗಳು ಮತ್ತು ಬೆಣಚುಕಲ್ಲುಗಳ ಸಮೃದ್ಧಿಗೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಅದರ ಮೇಲ್ಭಾಗ ಮತ್ತು ಮಧ್ಯ ಭಾಗದಲ್ಲಿ. ಇಲ್ಲಿ ಸ್ಫಟಿಕ ಸ್ಪಷ್ಟ ನೀರಿನಲ್ಲಿ ಸ್ನಾನ ಮಾಡಿ ತಣ್ಣಗಾಗಬಹುದು, ಜೊತೆಗೆ ಈ ಪ್ರದೇಶದಲ್ಲಿ ನದಿಯ ಹೆಚ್ಚಿನ ಭಾಗವನ್ನು ಸುತ್ತುವರೆದಿರುವ ಅನೇಕ ರಭಸವಾದ ಹೊಳೆಗಳು ಮತ್ತು ಸಣ್ಣ ಕೊಳಗಳನ್ನು ವೀಕ್ಷಿಸಬಹುದು.
3vzk2am9rikwi8of9ulc4jw45sp2o7c
1379589
1379570
2026-08-09T08:56:20Z
Pragathi. BH
88266
1379589
wikitext
text/x-wiki
ಪೊನ್ಮುಡಿ ಎಂದರೆ "ಚಿನ್ನದ ಶಿಖರ"(ಗೋಲ್ಡನ್ ಪೀಕ್) ಎಂದರ್ಥ .ಭಾರತದ ಕೇರಳದ ತಿರುವನಂತಪುರಂ ಜಿಲ್ಲೆಯ ಪೆರಿಂಗಮಲ ಗ್ರಾಮಪಂಚಾಯತ್ನಲ್ಲಿರುವ ಒಂದು ಗಿರಿಧಾಮವಾಗಿದೆ. ಇದು ವಿಥುರ ಪಟ್ಟಣದಿಂದ ಪಶ್ಚಿಮಕ್ಕೆ 22 ಕಿ.ಮೀ ದೂರದಲ್ಲಿದೆ. ತಿರುವನಂತಪುರಂ ನಗರದಿಂದ ಈಶಾನ್ಯಕ್ಕೆ , 78ಕಿ.ಮೀ. ವರ್ಕಲಾ ಪಟ್ಟಣದ ಆಗ್ನೇಯಕ್ಕೆ, ಕೋವಲಂ ಬೀಚ್ ನಿಂದ 69 ಕಿ.ಮೀ ಈಶಾನ್ಯಕ್ಕೆ ಮತ್ತು ಸಮುದ್ರ ಮಟ್ಟದಿಂದ 1,100 ಮೀ ಎತ್ತರದಲ್ಲಿದ. ಪೊನ್ಮುಡಿ ( ವರಯದುಮೊಟ್ಟ ) ಶಿಖರವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಇದು ಅರೇಬಿಯನ್ ಸಮುದ್ರಕ್ಕೆ ಸಮಾನಾಂತರವಾಗಿ ಸಾಗುತ್ತದೆ. ಪೊನ್ಮುಡಿ ದಕ್ಷಿಣ ಭಾರತದ ಜನಪ್ರಿಯ ಹನಿಮೂನ್ ತಾಣವಾಗಿದೆ. ಪೊನ್ಮುಡಿಯ ಸಾಮಾನ್ಯ ತಾಪಮಾನ 14 and 25 ನಡುವೆ ಇರುತ್ತದೆ. . ಚಳಿಗಾಲದಲ್ಲಿ, ತಾಪಮಾನವು 10 and 19 ಇಳಿಯುತ್ತದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ. ಪೊನ್ಮುಡಿಯಲ್ಲಿ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನ 8°C.
ಪೊನ್ಮುಡಿ ತಿರುವನಂತಪುರಂಗೆ ದ್ವಿಪಥ ಹೆದ್ದಾರಿಯ ಮೂಲಕ (SH2 & SH 45) ಸಂಪರ್ಕ ಹೊಂದಿದೆ. ಅನಪರದಿಂದ ಪ್ರಾರಂಭವಾಗುವ ಕೊನೆಯ 18 ಕಿ.ಮೀ. ಪರ್ವತಗಳು ಮತ್ತು ಚಹಾ ತೋಟಗಳ ಮೂಲಕ ಹಾದುಹೋಗುವಾಗ, ರಮಣೀಯ ನೋಟಗಳನ್ನು ನೀಡುತ್ತದೆ. ಚಾಲಕರು ಮತ್ತು ಸವಾರರು 22 ಹೇರ್ ಪಿನ್ ತಿರುವುಗಳಲ್ಲಿ ಸಂಚರಿಸಬೇಕಾಗಿರುವುದರಿಂದ ಈ ಹಾದಿಯಲ್ಲಿ ಪ್ರಯಾಣವು ರೋಮಾಂಚಕ ಅನುಭವವನ್ನು ನೀಡುತ್ತದೆ. [ ಸ್ವರ ] ಪೊನ್ಮುಡಿ ಬೆನ್ನುಹೊರೆಯ ಸವಾರಿ ಮತ್ತು ಚಾರಣಕ್ಕೆ ಜನಪ್ರಿಯ ತಾಣವಾಗಿದೆ. [ ಉಲ್ಲೇಖದ ಅಗತ್ಯವಿದೆ ] ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ.
ಪೊನ್ಮುಡಿ ಬಳಿಯ ಇತರ ಆಕರ್ಷಣೆಗಳಲ್ಲಿ ಗೋಲ್ಡನ್ ವ್ಯಾಲಿ ಮತ್ತು ಹಲವಾರು ಹೊಳೆಗಳು ಮತ್ತು ರಭಸದ ಹೊಳೆಗಳು ಸೇರಿವೆ, ಕೆಲವು ರಸ್ತೆಯಾದ್ಯಂತವೂ ಇವೆ. ಈ ಹಚ್ಚ ಹಸಿರಿನ ಅರಣ್ಯ ಪ್ರದೇಶವು ಉಷ್ಣವಲಯದ ಸಸ್ಯವರ್ಗವನ್ನು ಹೊಂದಿದೆ. [೧] ಬೆಟ್ಟಗಳಲ್ಲಿ ವಿವಿಧ ರೀತಿಯ ವನ್ಯಜೀವಿಗಳು ವಾಸಿಸುತ್ತವೆ. ಗೋಲ್ಡನ್ ವ್ಯಾಲಿ ಬೆಟ್ಟಗಳ ನೋಟಗಳನ್ನು ಮತ್ತು ಕಲ್ಲಾರ್ ನದಿಗೆ ಪ್ರವೇಶವನ್ನು ನೀಡುತ್ತದೆ. ಅರಣ್ಯ ಪ್ರದೇಶದ ಮೂಲಕ ಹರಿಯುವ ಇದು ದುಂಡಗಿನ ಬೆಣಚುಕಲ್ಲುಗಳು, ತಂಪಾದ ನೀರು, ಮೀನುಗಳು ಮತ್ತು ಹಚ್ಚ ಹಸಿರಿನ ಮರಗಳನ್ನು ಹೊಂದಿದೆ.
ಪೊನ್ಮುಡಿಯಲ್ಲಿರುವ ಕೆಲವು ಗಮನಾರ್ಹ ಪ್ರವಾಸಿ ಆಕರ್ಷಣೆಗಳೆಂದರೆ ಪೆಪ್ಪರಾ ವನ್ಯಜೀವಿ ಅಭಯಾರಣ್ಯ, ಎಕೋ ಪಾಯಿಂಟ್ ಮತ್ತು ವಿವಿಧ ಚಾರಣ ತಾಣಗಳು. ಮಂಜಿನಿಂದ ಕೂಡಿದ ಕಣಿವೆಗಳು, ವಿಶೇಷವಾಗಿ ಕಲ್ಲಾರ್ ನದಿಯ ಬಳಿಯ ಗೋಲ್ಡನ್ ವ್ಯಾಲಿ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಜಿಂಕೆ ಉದ್ಯಾನವನ ಮತ್ತು ಪ್ರಕಾಶಮಾನವಾದ ಬಣ್ಣಗಳಲ್ಲಿ ಅಲಂಕರಿಸಲ್ಪಟ್ಟ ಮರ ಮತ್ತು ಕಲ್ಲಿನ ಕುಟೀರಗಳನ್ನು ಕಾಣಬಹುದು.. ಪೊನ್ಮುಡಿ ಜಲಪಾತವು ಗಿರಿಧಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಪೊನ್ಮುಡಿ ರೆಸಾರ್ಟ್ ನಿಂದ 3 ಕಿ.ಮೀ ದೂರದಲ್ಲಿ ಜಿಂಕೆ ಉದ್ಯಾನವನವಿದೆ. ಈ ಪ್ರದೇಶದ ಮತ್ತೊಂದು ಪ್ರವಾಸಿ ಆಕರ್ಷಣೆಯಾದ ಮೀನ್ಮಟ್ಟಿ ಜಲಪಾತವು ಸುಮಾರು ಕಲ್ಲಾರ್ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪೊನ್ಮುಡಿಯ ಹೊರವಲಯದಲ್ಲಿರುವ ಪೆಪ್ಪರ ವನ್ಯಜೀವಿ ಅಭಯಾರಣ್ಯವು 53 ಚಂದ್ರ ಕಿಮೀವಿಸ್ತೀರ್ಣ ಹೊಂದಿರುವ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ವಿವಿಧ ರೀತಿಯ ವನ್ಯಜೀವಿಗಳು ಮತ್ತು ಪಕ್ಷಿಗಳು ಕಂಡುಬರುತ್ತವೆ. ಏಷ್ಯನ್ ಆನೆಗಳು, ಸಾಂಬಾರ್, ಚಿರತೆಗಳು, ಸಿಂಹ ಬಾಲದ ಮಕಾಕ್ಗಳು, ಮಲಬಾರ್ ಬೂದು ಹಾರ್ನ್ಬಿಲ್ಗಳು ಮುಂತಾದ ವಿವಿಧ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸ್ಥಳಾವಕಾಶ ನೀಡುತ್ತದೆ.
ಈ ಪ್ರದೇಶದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಅಗಸ್ತ್ಯಕೂಡಂ, ಇದು ಪಶ್ಚಿಮ ಘಟ್ಟಗಳ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ, ಇದರ ಎತ್ತರ 1868 ಮೀ ರ ಅತಿ ಎತ್ತರದ ಶಿಖರವನ್ನು ಹೊಂದಿದೆ. ಈ ಶಿಖರವು ತನ್ನ ಅರಣ್ಯಕ್ಕೆ ಹೆಸರುವಾಸಿಯಾಗಿದ್ದು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಮಾತ್ರ ಪ್ರವೇಶಿಸಬಹುದು. ಅಗಸ್ತ್ಯಮಲೈ ಬಯೋಸ್ಫಿಯರ್ ರಿಸರ್ವ್ ನೆಯ್ಯರ್, ಪೆಪ್ಪಾರ, ಶೆಂದೂರ್ನಿ ವನ್ಯಜೀವಿ ಅಭಯಾರಣ್ಯಗಳು ಮತ್ತು ಅಚೆನ್ಕೋಯಿಲ್, ತೆನ್ಮಲ, ಕೊನ್ನಿ, ಪುನಲೂರ್ ಮತ್ತು ತಿರುವನಂತಪುರಂ ವಿಭಾಗಗಳನ್ನು ಒಳಗೊಂಡ ಮತ್ತೊಂದು ಆಕರ್ಷಣೆಯಾಗಿದೆ.
ಪೊನ್ಮುಡಿಯ ಭೂದೃಶ್ಯವು ಕಾಡುಗಳು ಮತ್ತು ತೋಟಗಳೊಂದಿಗೆ ಕಣಿವೆಗಳು ಮತ್ತು ಬೆಟ್ಟಗಳ ಮಧ್ಯದ ರಚನೆಯಾಗಿದೆ. ಪೊನ್ಮುಡಿಯಲ್ಲಿ ಜೀವವೈವಿಧ್ಯತೆಯು ಅಪಾರ ಪ್ರಾಮುಖ್ಯತೆಯನ್ನು ಹೊಂದಿದ್ದು, ಇದು ಪ್ರದೇಶದ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೊನ್ಮುಡಿಯಲ್ಲಿ 283 ಜಾತಿಯ ಪಕ್ಷಿಗಳಿಗೆ ಆತಿಥೇಯವಾಗಿದ್ದು, ಅವುಗಳಲ್ಲಿ ಹಲವು ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿದೆ. [೧] ಈ ಪ್ರದೇಶಕ್ಕೆ ಸ್ಥಳೀಯವಾಗಿರುವ ಪಕ್ಷಿಗಳಲ್ಲಿ ಪೇಂಟೆಡ್ ಬುಷ್ ಕ್ವಿಲ್, ಮಲಬಾರ್ ಗ್ರೇ ಹಾರ್ನ್ಬಿಲ್, ವಯನಾಡ್ ಲಾಫಿಂಗ್ಥ್ರಷ್, ಅಗಲ ಬಾಲದ ಹುಲ್ಲು ಹಕ್ಕಿ ಮತ್ತು ನೀಲಗಿರಿ ಪಿಪಿಟ್ ಸೇರಿವೆ. ಪೊನ್ಮುಡಿಯ ಹುಲ್ಲುಗಾವಲುಗಳು ಅಳಿವಿನಂಚಿನಲ್ಲಿರುವ ಜಾತಿಯ ಅಗಲ ಬಾಲದ ಹುಲ್ಲು ಹಕ್ಕಿಯ ಸಂತಾನೋತ್ಪತ್ತಿ ಸ್ಥಳಗಳಾಗಿವೆ. ಕೇರಳದಲ್ಲಿರುವ 483 ಪಕ್ಷಿ ಪ್ರಭೇದಗಳಲ್ಲಿ ಶೇಕಡಾ ಐವತ್ತೊಂಬತ್ತು ಪಕ್ಷಿ ಪ್ರಭೇದಗಳು ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ 16 ಪಕ್ಷಿ ಪ್ರಭೇದಗಳಲ್ಲಿ 15 ಪೊನ್ಮುಡಿಯಲ್ಲಿವೆ. ಪಶ್ಚಿಮ ಘಟ್ಟಗಳಲ್ಲಿರುವ 332 ಜಾತಿಯ ಚಿಟ್ಟೆಗಳಲ್ಲಿ 195 ಜಾತಿಗಳು ಇಲ್ಲಿ ಕಂಡುಬರುತ್ತವೆ. ಘಟ್ಟಗಳಿಗೆ ಸ್ಥಳೀಯವಾಗಿರುವ 37 ಚಿಟ್ಟೆ ಪ್ರಭೇದಗಳಲ್ಲಿ 24 ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಇಸ್ರೋ ಭೂಮಿ ಬರುವ ಕುಲಚಿಕರೈ-ಪಣಯಂ-ಮರ್ಚಿಸ್ಟನ್ ಪ್ರದೇಶದಲ್ಲಿ ಸ್ಪಾಟ್ ಪಫಿನ್ ಎಂಬ ಅಪರೂಪದ ಚಿಟ್ಟೆ ಕಾಣಿಸಿಕೊಂಡಿದೆ. ಅದೇ ರೀತಿ, ಪೊನ್ಮುಡಿಯು ಹಲವು ಜಾತಿಯ ಸರೀಸೃಪಗಳು ಮತ್ತು ಉಭಯಚರಗಳಿಗೆ ನೆಲೆಯಾಗಿದೆ, ಅವುಗಳಲ್ಲಿ ಅತ್ಯಂತ ಅಳಿವಿನಂಚಿನಲ್ಲಿರುವ ತಿರುವಾಂಕೂರು ಆಮೆ, ಮಲಬಾರ್ ಗ್ಲೈಡಿಂಗ್ ಫ್ರಾಗ್ ಮತ್ತು ಮಲಬಾರ್ ಟ್ರೀ ಟೋಡ್ ಸೇರಿವೆ. ನೀಲಗಿರಿ ತಹರ್ ಪೊನ್ಮುಡಿ ಬೆಟ್ಟದ ತುದಿಯಲ್ಲಿಯೂ ಕಂಡುಬರುತ್ತದೆ.
==ಕಲ್ಲಾರ್ ಮತ್ತು ಮೆನ್ಮುಟ್ಟಿ ಜಲಪಾತಗಳು==
ಪೊನ್ಮುಡಿ ಗಿರಿಧಾಮಕ್ಕೆ ಹೋಗುವ ದಾರಿಯಲ್ಲಿ ಕಲ್ಲಾರ್ ಇದ್ದು, ಈ ಪ್ರದೇಶದ ಮೂಲಕ ಹರಿಯುವ ಕಲ್ಲಾರ್ ನದಿಯಿಂದ ಕಲ್ಲಾರ್ ತನ್ನ ಹೆಸರನ್ನು ಪಡೆದುಕೊಂಡಿದೆ. ಕಲ್ಲು ಎಂದರೆ 'ಕಲ್ಲು' ಮತ್ತು ಆರು ಎಂದರೆ 'ನದಿ', ಆದ್ದರಿಂದ ಕಲ್ಲಾರ್ ಎಂಬ ಹೆಸರು ಬಂದಿದೆ. ಈ ನದಿಯು ಆಕರ್ಷಕವಾದ, ದುಂಡಗಿನ ಆಕಾರದ ಬಂಡೆಗಳು ಮತ್ತು ಬೆಣಚುಕಲ್ಲುಗಳ ಸಮೃದ್ಧಿಗೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಅದರ ಮೇಲ್ಭಾಗ ಮತ್ತು ಮಧ್ಯ ಭಾಗದಲ್ಲಿ. ಇಲ್ಲಿ ಸ್ಫಟಿಕ ಸ್ಪಷ್ಟ ನೀರಿನಲ್ಲಿ ಸ್ನಾನ ಮಾಡಿ ತಣ್ಣಗಾಗಬಹುದು, ಜೊತೆಗೆ ಈ ಪ್ರದೇಶದಲ್ಲಿ ನದಿಯ ಹೆಚ್ಚಿನ ಭಾಗವನ್ನು ಸುತ್ತುವರೆದಿರುವ ಅನೇಕ ರಭಸವಾದ ಹೊಳೆಗಳು ಮತ್ತು ಸಣ್ಣ ಕೊಳಗಳನ್ನು ವೀಕ್ಷಿಸಬಹುದು.
ತಿರುವನಂತಪುರಂನ ಮೀನ್ಮುಟ್ಟಿ ಜಲಪಾತವು ಪೊನ್ಮುಡಿ ಬೆಟ್ಟಗಳ ಬಳಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಇದು ಸುಮಾರು 45 ಮೀಟರ್ ದೂರದಲ್ಲಿದೆ. ತಿರುವನಂತಪುರಂನಿಂದ ಈ ಜಲಪಾತವು ಸುಮಾರು ಕಲ್ಲಾರ್-ಪೊನ್ಮುಡಿ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪ್ರಮುಖ ಆಕರ್ಷಣೆಗಳೆಂದರೆ ಜಲಪಾತಗಳು ಮತ್ತು ಜಲಪಾತಗಳಿಗೆ ಹೋಗುವ ದಾರಿಯ ಪಕ್ಕದಲ್ಲಿರುವ ಸಣ್ಣ ನೈಸರ್ಗಿಕ ಕೊಳಗಳು ಮತ್ತು ಬಂಡೆಗಳು. ಈ ಸ್ಥಳವನ್ನು ತಲುಪಲು, ಅರಣ್ಯ ಇಲಾಖೆಯಿಂದ ವಿಶೇಷ ಅನುಮತಿ ಪಡೆದು ದಟ್ಟವಾದ ಕಾಡುಗಳ ಮೂಲಕ ಹಾದುಹೋಗುವ ದೀರ್ಘ ಪಾದಯಾತ್ರೆಯನ್ನು ಕೈಗೊಳ್ಳಬೇಕು. ಜಲಪಾತಕ್ಕೆ ಪ್ರವಾಸಿ ಗುಂಪುಗಳೊಂದಿಗೆ ಮಾರ್ಗದರ್ಶಿಯನ್ನು ಕಳುಹಿಸಲಾಗುವುದು. ಕಲ್ಲಾರ್ನಲ್ಲಿರುವ ಅರಣ್ಯ ಸಂರಕ್ಷಣಾ ಗುಂಪು ಕಲ್ಲಾರ್ ವನ ಸಂರಕ್ಷಣಾ ಸಮಿತಿಯಲ್ಲಿ ಚಾರಣಕ್ಕೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಲಾಗುತ್ತದೆ.
==ಸಾರಿಗೆ==
ಪೊನ್ಮುಡಿ ಗಿರಿಧಾಮವು ತಿರುವನಂತಪುರಂ ಮತ್ತು ಕೇರಳಕ್ಕೆ ವಿಶಾಲವಾದ ರಸ್ತೆ ಜಾಲದ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ತಿರುವನಂತಪುರಂನ ಕೇಂದ್ರ ನಿಲ್ದಾಣ ಮತ್ತು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.
===ರೈಲು===
ಹತ್ತಿರದ ರೈಲು ನಿಲ್ದಾಣ ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣ .
===ವಿಮಾನ===
ಹತ್ತಿರದ ವಿಮಾನ ನಿಲ್ದಾಣ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ .
==ತಿರುವನಂತಪುರ ಪೊನ್ಮುಡಿ ರೋಪ್ ವೇ==
ತಿರುವನಂತಪುರಂ–ಪೊನ್ಮುಡಿ ರೋಪ್ವೇ ಯೋಜನೆ ಕೇರಳದ ಪಶ್ಚಿಮ ಘಟ್ಟದಲ್ಲಿರುವ ಪೊನ್ಮುಡಿ ಗಿರಿಧಾಮದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಪ್ರಸ್ತಾಪಿಸಲಾದ ಯೋಜನೆಯಾಗಿದೆ.
ಈ ಯೋಜನೆಯಡಿ ರೋಪ್ವೇ (ಕೇಬಲ್ ಕಾರ್) ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶವಿದೆ. ಇದರಿಂದ ಪ್ರವಾಸಿಗರು ಸುಲಭವಾಗಿ ಪೊನ್ಮುಡಿಯ ಬೆಟ್ಟದ ಮೇಲ್ಭಾಗಕ್ಕೆ ತಲುಪಬಹುದು ಮತ್ತು ಸುತ್ತಮುತ್ತಲಿನ ಸುಂದರ ಪ್ರಕೃತಿ ದೃಶ್ಯಗಳನ್ನು ವಿಶಾಲವಾಗಿ ವೀಕ್ಷಿಸಬಹುದು.
==ಘಟನೆಗಳು==
ಜುಲೈ 15, 1990 ರಂದು, ಭಾರತೀಯ ವಾಯುಪಡೆಯ An-32 ವಿಮಾನವು ತಂಬರಂ ವಾಯುಪಡೆ ನಿಲ್ದಾಣದಿಂದ ಭಾರತದ ತಿರುವನಂತಪುರಂಗೆ ಹೋಗುತ್ತಿದ್ದಾಗ ಪೊನ್ಮುಡಿ ಪರ್ವತ ಶ್ರೇಣಿಯಲ್ಲಿ ಅಪಘಾತಕ್ಕೀಡಾಯಿತು.
==ಉಲ್ಲೇಖಗಳು==
1ntyecd4ppylrqt0mvv0gvcgw34klr4
1379590
1379589
2026-08-09T08:57:28Z
Pragathi. BH
88266
1379590
wikitext
text/x-wiki
{{Short description|Hill station, Town in Kerala, India}}
{{Use dmy dates|date=January 2019}}
{{Use Indian English|date=January 2019}}
{{refimprove|date=October 2013}}
{{for|the film|Ponmudi (film)}}
{{Infobox mountain
| name = Ponmudi
| image = Morning at Ponmudi.jpg
| image_caption = Morning view from Ponmudi
| elevation_m = 1100
| elevation_ref =
| translation =
| language = [[Malayalam]]
| location = Peringamala, Vithura [[Thiruvananthapuram district]], [[Kerala]], [[India]]
| range = [[Western Ghats]]
| map = Kerala#India
| range_coordinates =
| coordinates = {{coord|8|45|37|N|77|07|00|E|type:mountain_region:IN_scale:100000|format=dms|display=inline,title}}
| coordinates_ref =
| topo =
| type =
| age =
| first_ascent =
| easiest_route = Hike
}}
ಪೊನ್ಮುಡಿ ಎಂದರೆ "ಚಿನ್ನದ ಶಿಖರ"(ಗೋಲ್ಡನ್ ಪೀಕ್) ಎಂದರ್ಥ .ಭಾರತದ ಕೇರಳದ ತಿರುವನಂತಪುರಂ ಜಿಲ್ಲೆಯ ಪೆರಿಂಗಮಲ ಗ್ರಾಮಪಂಚಾಯತ್ನಲ್ಲಿರುವ ಒಂದು ಗಿರಿಧಾಮವಾಗಿದೆ. ಇದು ವಿಥುರ ಪಟ್ಟಣದಿಂದ ಪಶ್ಚಿಮಕ್ಕೆ 22 ಕಿ.ಮೀ ದೂರದಲ್ಲಿದೆ. ತಿರುವನಂತಪುರಂ ನಗರದಿಂದ ಈಶಾನ್ಯಕ್ಕೆ , 78ಕಿ.ಮೀ. ವರ್ಕಲಾ ಪಟ್ಟಣದ ಆಗ್ನೇಯಕ್ಕೆ, ಕೋವಲಂ ಬೀಚ್ ನಿಂದ 69 ಕಿ.ಮೀ ಈಶಾನ್ಯಕ್ಕೆ ಮತ್ತು ಸಮುದ್ರ ಮಟ್ಟದಿಂದ 1,100 ಮೀ ಎತ್ತರದಲ್ಲಿದ. ಪೊನ್ಮುಡಿ ( ವರಯದುಮೊಟ್ಟ ) ಶಿಖರವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಇದು ಅರೇಬಿಯನ್ ಸಮುದ್ರಕ್ಕೆ ಸಮಾನಾಂತರವಾಗಿ ಸಾಗುತ್ತದೆ. ಪೊನ್ಮುಡಿ ದಕ್ಷಿಣ ಭಾರತದ ಜನಪ್ರಿಯ ಹನಿಮೂನ್ ತಾಣವಾಗಿದೆ. ಪೊನ್ಮುಡಿಯ ಸಾಮಾನ್ಯ ತಾಪಮಾನ 14 and 25 ನಡುವೆ ಇರುತ್ತದೆ. . ಚಳಿಗಾಲದಲ್ಲಿ, ತಾಪಮಾನವು 10 and 19 ಇಳಿಯುತ್ತದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ. ಪೊನ್ಮುಡಿಯಲ್ಲಿ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನ 8°C.
ಪೊನ್ಮುಡಿ ತಿರುವನಂತಪುರಂಗೆ ದ್ವಿಪಥ ಹೆದ್ದಾರಿಯ ಮೂಲಕ (SH2 & SH 45) ಸಂಪರ್ಕ ಹೊಂದಿದೆ. ಅನಪರದಿಂದ ಪ್ರಾರಂಭವಾಗುವ ಕೊನೆಯ 18 ಕಿ.ಮೀ. ಪರ್ವತಗಳು ಮತ್ತು ಚಹಾ ತೋಟಗಳ ಮೂಲಕ ಹಾದುಹೋಗುವಾಗ, ರಮಣೀಯ ನೋಟಗಳನ್ನು ನೀಡುತ್ತದೆ. ಚಾಲಕರು ಮತ್ತು ಸವಾರರು 22 ಹೇರ್ ಪಿನ್ ತಿರುವುಗಳಲ್ಲಿ ಸಂಚರಿಸಬೇಕಾಗಿರುವುದರಿಂದ ಈ ಹಾದಿಯಲ್ಲಿ ಪ್ರಯಾಣವು ರೋಮಾಂಚಕ ಅನುಭವವನ್ನು ನೀಡುತ್ತದೆ. [ ಸ್ವರ ] ಪೊನ್ಮುಡಿ ಬೆನ್ನುಹೊರೆಯ ಸವಾರಿ ಮತ್ತು ಚಾರಣಕ್ಕೆ ಜನಪ್ರಿಯ ತಾಣವಾಗಿದೆ. [ ಉಲ್ಲೇಖದ ಅಗತ್ಯವಿದೆ ] ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ.
ಪೊನ್ಮುಡಿ ಬಳಿಯ ಇತರ ಆಕರ್ಷಣೆಗಳಲ್ಲಿ ಗೋಲ್ಡನ್ ವ್ಯಾಲಿ ಮತ್ತು ಹಲವಾರು ಹೊಳೆಗಳು ಮತ್ತು ರಭಸದ ಹೊಳೆಗಳು ಸೇರಿವೆ, ಕೆಲವು ರಸ್ತೆಯಾದ್ಯಂತವೂ ಇವೆ. ಈ ಹಚ್ಚ ಹಸಿರಿನ ಅರಣ್ಯ ಪ್ರದೇಶವು ಉಷ್ಣವಲಯದ ಸಸ್ಯವರ್ಗವನ್ನು ಹೊಂದಿದೆ. [೧] ಬೆಟ್ಟಗಳಲ್ಲಿ ವಿವಿಧ ರೀತಿಯ ವನ್ಯಜೀವಿಗಳು ವಾಸಿಸುತ್ತವೆ. ಗೋಲ್ಡನ್ ವ್ಯಾಲಿ ಬೆಟ್ಟಗಳ ನೋಟಗಳನ್ನು ಮತ್ತು ಕಲ್ಲಾರ್ ನದಿಗೆ ಪ್ರವೇಶವನ್ನು ನೀಡುತ್ತದೆ. ಅರಣ್ಯ ಪ್ರದೇಶದ ಮೂಲಕ ಹರಿಯುವ ಇದು ದುಂಡಗಿನ ಬೆಣಚುಕಲ್ಲುಗಳು, ತಂಪಾದ ನೀರು, ಮೀನುಗಳು ಮತ್ತು ಹಚ್ಚ ಹಸಿರಿನ ಮರಗಳನ್ನು ಹೊಂದಿದೆ.
ಪೊನ್ಮುಡಿಯಲ್ಲಿರುವ ಕೆಲವು ಗಮನಾರ್ಹ ಪ್ರವಾಸಿ ಆಕರ್ಷಣೆಗಳೆಂದರೆ ಪೆಪ್ಪರಾ ವನ್ಯಜೀವಿ ಅಭಯಾರಣ್ಯ, ಎಕೋ ಪಾಯಿಂಟ್ ಮತ್ತು ವಿವಿಧ ಚಾರಣ ತಾಣಗಳು. ಮಂಜಿನಿಂದ ಕೂಡಿದ ಕಣಿವೆಗಳು, ವಿಶೇಷವಾಗಿ ಕಲ್ಲಾರ್ ನದಿಯ ಬಳಿಯ ಗೋಲ್ಡನ್ ವ್ಯಾಲಿ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಜಿಂಕೆ ಉದ್ಯಾನವನ ಮತ್ತು ಪ್ರಕಾಶಮಾನವಾದ ಬಣ್ಣಗಳಲ್ಲಿ ಅಲಂಕರಿಸಲ್ಪಟ್ಟ ಮರ ಮತ್ತು ಕಲ್ಲಿನ ಕುಟೀರಗಳನ್ನು ಕಾಣಬಹುದು.. ಪೊನ್ಮುಡಿ ಜಲಪಾತವು ಗಿರಿಧಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಪೊನ್ಮುಡಿ ರೆಸಾರ್ಟ್ ನಿಂದ 3 ಕಿ.ಮೀ ದೂರದಲ್ಲಿ ಜಿಂಕೆ ಉದ್ಯಾನವನವಿದೆ. ಈ ಪ್ರದೇಶದ ಮತ್ತೊಂದು ಪ್ರವಾಸಿ ಆಕರ್ಷಣೆಯಾದ ಮೀನ್ಮಟ್ಟಿ ಜಲಪಾತವು ಸುಮಾರು ಕಲ್ಲಾರ್ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪೊನ್ಮುಡಿಯ ಹೊರವಲಯದಲ್ಲಿರುವ ಪೆಪ್ಪರ ವನ್ಯಜೀವಿ ಅಭಯಾರಣ್ಯವು 53 ಚಂದ್ರ ಕಿಮೀವಿಸ್ತೀರ್ಣ ಹೊಂದಿರುವ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ವಿವಿಧ ರೀತಿಯ ವನ್ಯಜೀವಿಗಳು ಮತ್ತು ಪಕ್ಷಿಗಳು ಕಂಡುಬರುತ್ತವೆ. ಏಷ್ಯನ್ ಆನೆಗಳು, ಸಾಂಬಾರ್, ಚಿರತೆಗಳು, ಸಿಂಹ ಬಾಲದ ಮಕಾಕ್ಗಳು, ಮಲಬಾರ್ ಬೂದು ಹಾರ್ನ್ಬಿಲ್ಗಳು ಮುಂತಾದ ವಿವಿಧ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸ್ಥಳಾವಕಾಶ ನೀಡುತ್ತದೆ.
ಈ ಪ್ರದೇಶದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಅಗಸ್ತ್ಯಕೂಡಂ, ಇದು ಪಶ್ಚಿಮ ಘಟ್ಟಗಳ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ, ಇದರ ಎತ್ತರ 1868 ಮೀ ರ ಅತಿ ಎತ್ತರದ ಶಿಖರವನ್ನು ಹೊಂದಿದೆ. ಈ ಶಿಖರವು ತನ್ನ ಅರಣ್ಯಕ್ಕೆ ಹೆಸರುವಾಸಿಯಾಗಿದ್ದು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಮಾತ್ರ ಪ್ರವೇಶಿಸಬಹುದು. ಅಗಸ್ತ್ಯಮಲೈ ಬಯೋಸ್ಫಿಯರ್ ರಿಸರ್ವ್ ನೆಯ್ಯರ್, ಪೆಪ್ಪಾರ, ಶೆಂದೂರ್ನಿ ವನ್ಯಜೀವಿ ಅಭಯಾರಣ್ಯಗಳು ಮತ್ತು ಅಚೆನ್ಕೋಯಿಲ್, ತೆನ್ಮಲ, ಕೊನ್ನಿ, ಪುನಲೂರ್ ಮತ್ತು ತಿರುವನಂತಪುರಂ ವಿಭಾಗಗಳನ್ನು ಒಳಗೊಂಡ ಮತ್ತೊಂದು ಆಕರ್ಷಣೆಯಾಗಿದೆ.
ಪೊನ್ಮುಡಿಯ ಭೂದೃಶ್ಯವು ಕಾಡುಗಳು ಮತ್ತು ತೋಟಗಳೊಂದಿಗೆ ಕಣಿವೆಗಳು ಮತ್ತು ಬೆಟ್ಟಗಳ ಮಧ್ಯದ ರಚನೆಯಾಗಿದೆ. ಪೊನ್ಮುಡಿಯಲ್ಲಿ ಜೀವವೈವಿಧ್ಯತೆಯು ಅಪಾರ ಪ್ರಾಮುಖ್ಯತೆಯನ್ನು ಹೊಂದಿದ್ದು, ಇದು ಪ್ರದೇಶದ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೊನ್ಮುಡಿಯಲ್ಲಿ 283 ಜಾತಿಯ ಪಕ್ಷಿಗಳಿಗೆ ಆತಿಥೇಯವಾಗಿದ್ದು, ಅವುಗಳಲ್ಲಿ ಹಲವು ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿದೆ. [೧] ಈ ಪ್ರದೇಶಕ್ಕೆ ಸ್ಥಳೀಯವಾಗಿರುವ ಪಕ್ಷಿಗಳಲ್ಲಿ ಪೇಂಟೆಡ್ ಬುಷ್ ಕ್ವಿಲ್, ಮಲಬಾರ್ ಗ್ರೇ ಹಾರ್ನ್ಬಿಲ್, ವಯನಾಡ್ ಲಾಫಿಂಗ್ಥ್ರಷ್, ಅಗಲ ಬಾಲದ ಹುಲ್ಲು ಹಕ್ಕಿ ಮತ್ತು ನೀಲಗಿರಿ ಪಿಪಿಟ್ ಸೇರಿವೆ. ಪೊನ್ಮುಡಿಯ ಹುಲ್ಲುಗಾವಲುಗಳು ಅಳಿವಿನಂಚಿನಲ್ಲಿರುವ ಜಾತಿಯ ಅಗಲ ಬಾಲದ ಹುಲ್ಲು ಹಕ್ಕಿಯ ಸಂತಾನೋತ್ಪತ್ತಿ ಸ್ಥಳಗಳಾಗಿವೆ. ಕೇರಳದಲ್ಲಿರುವ 483 ಪಕ್ಷಿ ಪ್ರಭೇದಗಳಲ್ಲಿ ಶೇಕಡಾ ಐವತ್ತೊಂಬತ್ತು ಪಕ್ಷಿ ಪ್ರಭೇದಗಳು ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ 16 ಪಕ್ಷಿ ಪ್ರಭೇದಗಳಲ್ಲಿ 15 ಪೊನ್ಮುಡಿಯಲ್ಲಿವೆ. ಪಶ್ಚಿಮ ಘಟ್ಟಗಳಲ್ಲಿರುವ 332 ಜಾತಿಯ ಚಿಟ್ಟೆಗಳಲ್ಲಿ 195 ಜಾತಿಗಳು ಇಲ್ಲಿ ಕಂಡುಬರುತ್ತವೆ. ಘಟ್ಟಗಳಿಗೆ ಸ್ಥಳೀಯವಾಗಿರುವ 37 ಚಿಟ್ಟೆ ಪ್ರಭೇದಗಳಲ್ಲಿ 24 ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಇಸ್ರೋ ಭೂಮಿ ಬರುವ ಕುಲಚಿಕರೈ-ಪಣಯಂ-ಮರ್ಚಿಸ್ಟನ್ ಪ್ರದೇಶದಲ್ಲಿ ಸ್ಪಾಟ್ ಪಫಿನ್ ಎಂಬ ಅಪರೂಪದ ಚಿಟ್ಟೆ ಕಾಣಿಸಿಕೊಂಡಿದೆ. ಅದೇ ರೀತಿ, ಪೊನ್ಮುಡಿಯು ಹಲವು ಜಾತಿಯ ಸರೀಸೃಪಗಳು ಮತ್ತು ಉಭಯಚರಗಳಿಗೆ ನೆಲೆಯಾಗಿದೆ, ಅವುಗಳಲ್ಲಿ ಅತ್ಯಂತ ಅಳಿವಿನಂಚಿನಲ್ಲಿರುವ ತಿರುವಾಂಕೂರು ಆಮೆ, ಮಲಬಾರ್ ಗ್ಲೈಡಿಂಗ್ ಫ್ರಾಗ್ ಮತ್ತು ಮಲಬಾರ್ ಟ್ರೀ ಟೋಡ್ ಸೇರಿವೆ. ನೀಲಗಿರಿ ತಹರ್ ಪೊನ್ಮುಡಿ ಬೆಟ್ಟದ ತುದಿಯಲ್ಲಿಯೂ ಕಂಡುಬರುತ್ತದೆ.
==ಕಲ್ಲಾರ್ ಮತ್ತು ಮೆನ್ಮುಟ್ಟಿ ಜಲಪಾತಗಳು==
ಪೊನ್ಮುಡಿ ಗಿರಿಧಾಮಕ್ಕೆ ಹೋಗುವ ದಾರಿಯಲ್ಲಿ ಕಲ್ಲಾರ್ ಇದ್ದು, ಈ ಪ್ರದೇಶದ ಮೂಲಕ ಹರಿಯುವ ಕಲ್ಲಾರ್ ನದಿಯಿಂದ ಕಲ್ಲಾರ್ ತನ್ನ ಹೆಸರನ್ನು ಪಡೆದುಕೊಂಡಿದೆ. ಕಲ್ಲು ಎಂದರೆ 'ಕಲ್ಲು' ಮತ್ತು ಆರು ಎಂದರೆ 'ನದಿ', ಆದ್ದರಿಂದ ಕಲ್ಲಾರ್ ಎಂಬ ಹೆಸರು ಬಂದಿದೆ. ಈ ನದಿಯು ಆಕರ್ಷಕವಾದ, ದುಂಡಗಿನ ಆಕಾರದ ಬಂಡೆಗಳು ಮತ್ತು ಬೆಣಚುಕಲ್ಲುಗಳ ಸಮೃದ್ಧಿಗೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಅದರ ಮೇಲ್ಭಾಗ ಮತ್ತು ಮಧ್ಯ ಭಾಗದಲ್ಲಿ. ಇಲ್ಲಿ ಸ್ಫಟಿಕ ಸ್ಪಷ್ಟ ನೀರಿನಲ್ಲಿ ಸ್ನಾನ ಮಾಡಿ ತಣ್ಣಗಾಗಬಹುದು, ಜೊತೆಗೆ ಈ ಪ್ರದೇಶದಲ್ಲಿ ನದಿಯ ಹೆಚ್ಚಿನ ಭಾಗವನ್ನು ಸುತ್ತುವರೆದಿರುವ ಅನೇಕ ರಭಸವಾದ ಹೊಳೆಗಳು ಮತ್ತು ಸಣ್ಣ ಕೊಳಗಳನ್ನು ವೀಕ್ಷಿಸಬಹುದು.
ತಿರುವನಂತಪುರಂನ ಮೀನ್ಮುಟ್ಟಿ ಜಲಪಾತವು ಪೊನ್ಮುಡಿ ಬೆಟ್ಟಗಳ ಬಳಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಇದು ಸುಮಾರು 45 ಮೀಟರ್ ದೂರದಲ್ಲಿದೆ. ತಿರುವನಂತಪುರಂನಿಂದ ಈ ಜಲಪಾತವು ಸುಮಾರು ಕಲ್ಲಾರ್-ಪೊನ್ಮುಡಿ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪ್ರಮುಖ ಆಕರ್ಷಣೆಗಳೆಂದರೆ ಜಲಪಾತಗಳು ಮತ್ತು ಜಲಪಾತಗಳಿಗೆ ಹೋಗುವ ದಾರಿಯ ಪಕ್ಕದಲ್ಲಿರುವ ಸಣ್ಣ ನೈಸರ್ಗಿಕ ಕೊಳಗಳು ಮತ್ತು ಬಂಡೆಗಳು. ಈ ಸ್ಥಳವನ್ನು ತಲುಪಲು, ಅರಣ್ಯ ಇಲಾಖೆಯಿಂದ ವಿಶೇಷ ಅನುಮತಿ ಪಡೆದು ದಟ್ಟವಾದ ಕಾಡುಗಳ ಮೂಲಕ ಹಾದುಹೋಗುವ ದೀರ್ಘ ಪಾದಯಾತ್ರೆಯನ್ನು ಕೈಗೊಳ್ಳಬೇಕು. ಜಲಪಾತಕ್ಕೆ ಪ್ರವಾಸಿ ಗುಂಪುಗಳೊಂದಿಗೆ ಮಾರ್ಗದರ್ಶಿಯನ್ನು ಕಳುಹಿಸಲಾಗುವುದು. ಕಲ್ಲಾರ್ನಲ್ಲಿರುವ ಅರಣ್ಯ ಸಂರಕ್ಷಣಾ ಗುಂಪು ಕಲ್ಲಾರ್ ವನ ಸಂರಕ್ಷಣಾ ಸಮಿತಿಯಲ್ಲಿ ಚಾರಣಕ್ಕೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಲಾಗುತ್ತದೆ.
==ಸಾರಿಗೆ==
ಪೊನ್ಮುಡಿ ಗಿರಿಧಾಮವು ತಿರುವನಂತಪುರಂ ಮತ್ತು ಕೇರಳಕ್ಕೆ ವಿಶಾಲವಾದ ರಸ್ತೆ ಜಾಲದ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ತಿರುವನಂತಪುರಂನ ಕೇಂದ್ರ ನಿಲ್ದಾಣ ಮತ್ತು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.
===ರೈಲು===
ಹತ್ತಿರದ ರೈಲು ನಿಲ್ದಾಣ ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣ .
===ವಿಮಾನ===
ಹತ್ತಿರದ ವಿಮಾನ ನಿಲ್ದಾಣ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ .
==ತಿರುವನಂತಪುರ ಪೊನ್ಮುಡಿ ರೋಪ್ ವೇ==
ತಿರುವನಂತಪುರಂ–ಪೊನ್ಮುಡಿ ರೋಪ್ವೇ ಯೋಜನೆ ಕೇರಳದ ಪಶ್ಚಿಮ ಘಟ್ಟದಲ್ಲಿರುವ ಪೊನ್ಮುಡಿ ಗಿರಿಧಾಮದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಪ್ರಸ್ತಾಪಿಸಲಾದ ಯೋಜನೆಯಾಗಿದೆ.
ಈ ಯೋಜನೆಯಡಿ ರೋಪ್ವೇ (ಕೇಬಲ್ ಕಾರ್) ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶವಿದೆ. ಇದರಿಂದ ಪ್ರವಾಸಿಗರು ಸುಲಭವಾಗಿ ಪೊನ್ಮುಡಿಯ ಬೆಟ್ಟದ ಮೇಲ್ಭಾಗಕ್ಕೆ ತಲುಪಬಹುದು ಮತ್ತು ಸುತ್ತಮುತ್ತಲಿನ ಸುಂದರ ಪ್ರಕೃತಿ ದೃಶ್ಯಗಳನ್ನು ವಿಶಾಲವಾಗಿ ವೀಕ್ಷಿಸಬಹುದು.
==ಘಟನೆಗಳು==
ಜುಲೈ 15, 1990 ರಂದು, ಭಾರತೀಯ ವಾಯುಪಡೆಯ An-32 ವಿಮಾನವು ತಂಬರಂ ವಾಯುಪಡೆ ನಿಲ್ದಾಣದಿಂದ ಭಾರತದ ತಿರುವನಂತಪುರಂಗೆ ಹೋಗುತ್ತಿದ್ದಾಗ ಪೊನ್ಮುಡಿ ಪರ್ವತ ಶ್ರೇಣಿಯಲ್ಲಿ ಅಪಘಾತಕ್ಕೀಡಾಯಿತು.
==ಉಲ್ಲೇಖಗಳು==
5goetyphmlima1wpm5f9bub6kfwd510
1379592
1379590
2026-08-09T08:58:35Z
Pragathi. BH
88266
1379592
wikitext
text/x-wiki
{{Short description|Hill station, Town in Kerala, India}}
{{Use dmy dates|date=January 2019}}
{{Use Indian English|date=January 2019}}
{{refimprove|date=October 2013}}
{{for|the film|Ponmudi (film)}}
{{Infobox mountain
| name = Ponmudi
| image = Morning at Ponmudi.jpg
| image_caption = Morning view from Ponmudi
| elevation_m = 1100
| elevation_ref =
| translation =
| language = [[Malayalam]]
| location = Peringamala, Vithura [[Thiruvananthapuram district]], [[Kerala]], [[India]]
| range = [[Western Ghats]]
| map = Kerala#India
| range_coordinates =
| coordinates = {{coord|8|45|37|N|77|07|00|E|type:mountain_region:IN_scale:100000|format=dms|display=inline,title}}
| coordinates_ref =
| topo =
| type =
| age =
| first_ascent =
| easiest_route = Hike
}}
ಪೊನ್ಮುಡಿ ಎಂದರೆ "ಚಿನ್ನದ ಶಿಖರ"(ಗೋಲ್ಡನ್ ಪೀಕ್) ಎಂದರ್ಥ .ಭಾರತದ ಕೇರಳದ ತಿರುವನಂತಪುರಂ ಜಿಲ್ಲೆಯ ಪೆರಿಂಗಮಲ ಗ್ರಾಮಪಂಚಾಯತ್ನಲ್ಲಿರುವ ಒಂದು ಗಿರಿಧಾಮವಾಗಿದೆ. ಇದು ವಿಥುರ ಪಟ್ಟಣದಿಂದ ಪಶ್ಚಿಮಕ್ಕೆ 22 ಕಿ.ಮೀ ದೂರದಲ್ಲಿದೆ. ತಿರುವನಂತಪುರಂ ನಗರದಿಂದ ಈಶಾನ್ಯಕ್ಕೆ , 78ಕಿ.ಮೀ. ವರ್ಕಲಾ ಪಟ್ಟಣದ ಆಗ್ನೇಯಕ್ಕೆ, ಕೋವಲಂ ಬೀಚ್ ನಿಂದ 69 ಕಿ.ಮೀ ಈಶಾನ್ಯಕ್ಕೆ ಮತ್ತು ಸಮುದ್ರ ಮಟ್ಟದಿಂದ 1,100 ಮೀ ಎತ್ತರದಲ್ಲಿದ. ಪೊನ್ಮುಡಿ ( ವರಯದುಮೊಟ್ಟ ) ಶಿಖರವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಇದು ಅರೇಬಿಯನ್ ಸಮುದ್ರಕ್ಕೆ ಸಮಾನಾಂತರವಾಗಿ ಸಾಗುತ್ತದೆ. ಪೊನ್ಮುಡಿ ದಕ್ಷಿಣ ಭಾರತದ ಜನಪ್ರಿಯ ಹನಿಮೂನ್ ತಾಣವಾಗಿದೆ. ಪೊನ್ಮುಡಿಯ ಸಾಮಾನ್ಯ ತಾಪಮಾನ 14 and 25 ನಡುವೆ ಇರುತ್ತದೆ. . ಚಳಿಗಾಲದಲ್ಲಿ, ತಾಪಮಾನವು 10 and 19 ಇಳಿಯುತ್ತದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ. ಪೊನ್ಮುಡಿಯಲ್ಲಿ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನ 8°C.
ಪೊನ್ಮುಡಿ ತಿರುವನಂತಪುರಂಗೆ ದ್ವಿಪಥ ಹೆದ್ದಾರಿಯ ಮೂಲಕ (SH2 & SH 45) ಸಂಪರ್ಕ ಹೊಂದಿದೆ. ಅನಪರದಿಂದ ಪ್ರಾರಂಭವಾಗುವ ಕೊನೆಯ 18 ಕಿ.ಮೀ. ಪರ್ವತಗಳು ಮತ್ತು ಚಹಾ ತೋಟಗಳ ಮೂಲಕ ಹಾದುಹೋಗುವಾಗ, ರಮಣೀಯ ನೋಟಗಳನ್ನು ನೀಡುತ್ತದೆ. ಚಾಲಕರು ಮತ್ತು ಸವಾರರು 22 ಹೇರ್ ಪಿನ್ ತಿರುವುಗಳಲ್ಲಿ ಸಂಚರಿಸಬೇಕಾಗಿರುವುದರಿಂದ ಈ ಹಾದಿಯಲ್ಲಿ ಪ್ರಯಾಣವು ರೋಮಾಂಚಕ ಅನುಭವವನ್ನು ನೀಡುತ್ತದೆ. [ ಸ್ವರ ] ಪೊನ್ಮುಡಿ ಬೆನ್ನುಹೊರೆಯ ಸವಾರಿ ಮತ್ತು ಚಾರಣಕ್ಕೆ ಜನಪ್ರಿಯ ತಾಣವಾಗಿದೆ. [ ಉಲ್ಲೇಖದ ಅಗತ್ಯವಿದೆ ] ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ.
ಪೊನ್ಮುಡಿ ಬಳಿಯ ಇತರ ಆಕರ್ಷಣೆಗಳಲ್ಲಿ ಗೋಲ್ಡನ್ ವ್ಯಾಲಿ ಮತ್ತು ಹಲವಾರು ಹೊಳೆಗಳು ಮತ್ತು ರಭಸದ ಹೊಳೆಗಳು ಸೇರಿವೆ, ಕೆಲವು ರಸ್ತೆಯಾದ್ಯಂತವೂ ಇವೆ. ಈ ಹಚ್ಚ ಹಸಿರಿನ ಅರಣ್ಯ ಪ್ರದೇಶವು ಉಷ್ಣವಲಯದ ಸಸ್ಯವರ್ಗವನ್ನು ಹೊಂದಿದೆ. [೧] ಬೆಟ್ಟಗಳಲ್ಲಿ ವಿವಿಧ ರೀತಿಯ ವನ್ಯಜೀವಿಗಳು ವಾಸಿಸುತ್ತವೆ. ಗೋಲ್ಡನ್ ವ್ಯಾಲಿ ಬೆಟ್ಟಗಳ ನೋಟಗಳನ್ನು ಮತ್ತು ಕಲ್ಲಾರ್ ನದಿಗೆ ಪ್ರವೇಶವನ್ನು ನೀಡುತ್ತದೆ. ಅರಣ್ಯ ಪ್ರದೇಶದ ಮೂಲಕ ಹರಿಯುವ ಇದು ದುಂಡಗಿನ ಬೆಣಚುಕಲ್ಲುಗಳು, ತಂಪಾದ ನೀರು, ಮೀನುಗಳು ಮತ್ತು ಹಚ್ಚ ಹಸಿರಿನ ಮರಗಳನ್ನು ಹೊಂದಿದೆ.
ಪೊನ್ಮುಡಿಯಲ್ಲಿರುವ ಕೆಲವು ಗಮನಾರ್ಹ ಪ್ರವಾಸಿ ಆಕರ್ಷಣೆಗಳೆಂದರೆ ಪೆಪ್ಪರಾ ವನ್ಯಜೀವಿ ಅಭಯಾರಣ್ಯ, ಎಕೋ ಪಾಯಿಂಟ್ ಮತ್ತು ವಿವಿಧ ಚಾರಣ ತಾಣಗಳು. ಮಂಜಿನಿಂದ ಕೂಡಿದ ಕಣಿವೆಗಳು, ವಿಶೇಷವಾಗಿ ಕಲ್ಲಾರ್ ನದಿಯ ಬಳಿಯ ಗೋಲ್ಡನ್ ವ್ಯಾಲಿ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಜಿಂಕೆ ಉದ್ಯಾನವನ ಮತ್ತು ಪ್ರಕಾಶಮಾನವಾದ ಬಣ್ಣಗಳಲ್ಲಿ ಅಲಂಕರಿಸಲ್ಪಟ್ಟ ಮರ ಮತ್ತು ಕಲ್ಲಿನ ಕುಟೀರಗಳನ್ನು ಕಾಣಬಹುದು.. ಪೊನ್ಮುಡಿ ಜಲಪಾತವು ಗಿರಿಧಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಪೊನ್ಮುಡಿ ರೆಸಾರ್ಟ್ ನಿಂದ 3 ಕಿ.ಮೀ ದೂರದಲ್ಲಿ ಜಿಂಕೆ ಉದ್ಯಾನವನವಿದೆ. ಈ ಪ್ರದೇಶದ ಮತ್ತೊಂದು ಪ್ರವಾಸಿ ಆಕರ್ಷಣೆಯಾದ ಮೀನ್ಮಟ್ಟಿ ಜಲಪಾತವು ಸುಮಾರು ಕಲ್ಲಾರ್ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪೊನ್ಮುಡಿಯ ಹೊರವಲಯದಲ್ಲಿರುವ ಪೆಪ್ಪರ ವನ್ಯಜೀವಿ ಅಭಯಾರಣ್ಯವು 53 ಚಂದ್ರ ಕಿಮೀವಿಸ್ತೀರ್ಣ ಹೊಂದಿರುವ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ವಿವಿಧ ರೀತಿಯ ವನ್ಯಜೀವಿಗಳು ಮತ್ತು ಪಕ್ಷಿಗಳು ಕಂಡುಬರುತ್ತವೆ. ಏಷ್ಯನ್ ಆನೆಗಳು, ಸಾಂಬಾರ್, ಚಿರತೆಗಳು, ಸಿಂಹ ಬಾಲದ ಮಕಾಕ್ಗಳು, ಮಲಬಾರ್ ಬೂದು ಹಾರ್ನ್ಬಿಲ್ಗಳು ಮುಂತಾದ ವಿವಿಧ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸ್ಥಳಾವಕಾಶ ನೀಡುತ್ತದೆ.
ಈ ಪ್ರದೇಶದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಅಗಸ್ತ್ಯಕೂಡಂ, ಇದು ಪಶ್ಚಿಮ ಘಟ್ಟಗಳ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ, ಇದರ ಎತ್ತರ 1868 ಮೀ ರ ಅತಿ ಎತ್ತರದ ಶಿಖರವನ್ನು ಹೊಂದಿದೆ. ಈ ಶಿಖರವು ತನ್ನ ಅರಣ್ಯಕ್ಕೆ ಹೆಸರುವಾಸಿಯಾಗಿದ್ದು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಮಾತ್ರ ಪ್ರವೇಶಿಸಬಹುದು. ಅಗಸ್ತ್ಯಮಲೈ ಬಯೋಸ್ಫಿಯರ್ ರಿಸರ್ವ್ ನೆಯ್ಯರ್, ಪೆಪ್ಪಾರ, ಶೆಂದೂರ್ನಿ ವನ್ಯಜೀವಿ ಅಭಯಾರಣ್ಯಗಳು ಮತ್ತು ಅಚೆನ್ಕೋಯಿಲ್, ತೆನ್ಮಲ, ಕೊನ್ನಿ, ಪುನಲೂರ್ ಮತ್ತು ತಿರುವನಂತಪುರಂ ವಿಭಾಗಗಳನ್ನು ಒಳಗೊಂಡ ಮತ್ತೊಂದು ಆಕರ್ಷಣೆಯಾಗಿದೆ.
ಪೊನ್ಮುಡಿಯ ಭೂದೃಶ್ಯವು ಕಾಡುಗಳು ಮತ್ತು ತೋಟಗಳೊಂದಿಗೆ ಕಣಿವೆಗಳು ಮತ್ತು ಬೆಟ್ಟಗಳ ಮಧ್ಯದ ರಚನೆಯಾಗಿದೆ. ಪೊನ್ಮುಡಿಯಲ್ಲಿ ಜೀವವೈವಿಧ್ಯತೆಯು ಅಪಾರ ಪ್ರಾಮುಖ್ಯತೆಯನ್ನು ಹೊಂದಿದ್ದು, ಇದು ಪ್ರದೇಶದ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೊನ್ಮುಡಿಯಲ್ಲಿ 283 ಜಾತಿಯ ಪಕ್ಷಿಗಳಿಗೆ ಆತಿಥೇಯವಾಗಿದ್ದು, ಅವುಗಳಲ್ಲಿ ಹಲವು ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿದೆ. [೧] ಈ ಪ್ರದೇಶಕ್ಕೆ ಸ್ಥಳೀಯವಾಗಿರುವ ಪಕ್ಷಿಗಳಲ್ಲಿ ಪೇಂಟೆಡ್ ಬುಷ್ ಕ್ವಿಲ್, ಮಲಬಾರ್ ಗ್ರೇ ಹಾರ್ನ್ಬಿಲ್, ವಯನಾಡ್ ಲಾಫಿಂಗ್ಥ್ರಷ್, ಅಗಲ ಬಾಲದ ಹುಲ್ಲು ಹಕ್ಕಿ ಮತ್ತು ನೀಲಗಿರಿ ಪಿಪಿಟ್ ಸೇರಿವೆ. ಪೊನ್ಮುಡಿಯ ಹುಲ್ಲುಗಾವಲುಗಳು ಅಳಿವಿನಂಚಿನಲ್ಲಿರುವ ಜಾತಿಯ ಅಗಲ ಬಾಲದ ಹುಲ್ಲು ಹಕ್ಕಿಯ ಸಂತಾನೋತ್ಪತ್ತಿ ಸ್ಥಳಗಳಾಗಿವೆ. ಕೇರಳದಲ್ಲಿರುವ 483 ಪಕ್ಷಿ ಪ್ರಭೇದಗಳಲ್ಲಿ ಶೇಕಡಾ ಐವತ್ತೊಂಬತ್ತು ಪಕ್ಷಿ ಪ್ರಭೇದಗಳು ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ 16 ಪಕ್ಷಿ ಪ್ರಭೇದಗಳಲ್ಲಿ 15 ಪೊನ್ಮುಡಿಯಲ್ಲಿವೆ. ಪಶ್ಚಿಮ ಘಟ್ಟಗಳಲ್ಲಿರುವ 332 ಜಾತಿಯ ಚಿಟ್ಟೆಗಳಲ್ಲಿ 195 ಜಾತಿಗಳು ಇಲ್ಲಿ ಕಂಡುಬರುತ್ತವೆ. ಘಟ್ಟಗಳಿಗೆ ಸ್ಥಳೀಯವಾಗಿರುವ 37 ಚಿಟ್ಟೆ ಪ್ರಭೇದಗಳಲ್ಲಿ 24 ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಇಸ್ರೋ ಭೂಮಿ ಬರುವ ಕುಲಚಿಕರೈ-ಪಣಯಂ-ಮರ್ಚಿಸ್ಟನ್ ಪ್ರದೇಶದಲ್ಲಿ ಸ್ಪಾಟ್ ಪಫಿನ್ ಎಂಬ ಅಪರೂಪದ ಚಿಟ್ಟೆ ಕಾಣಿಸಿಕೊಂಡಿದೆ. ಅದೇ ರೀತಿ, ಪೊನ್ಮುಡಿಯು ಹಲವು ಜಾತಿಯ ಸರೀಸೃಪಗಳು ಮತ್ತು ಉಭಯಚರಗಳಿಗೆ ನೆಲೆಯಾಗಿದೆ, ಅವುಗಳಲ್ಲಿ ಅತ್ಯಂತ ಅಳಿವಿನಂಚಿನಲ್ಲಿರುವ ತಿರುವಾಂಕೂರು ಆಮೆ, ಮಲಬಾರ್ ಗ್ಲೈಡಿಂಗ್ ಫ್ರಾಗ್ ಮತ್ತು ಮಲಬಾರ್ ಟ್ರೀ ಟೋಡ್ ಸೇರಿವೆ. ನೀಲಗಿರಿ ತಹರ್ ಪೊನ್ಮುಡಿ ಬೆಟ್ಟದ ತುದಿಯಲ್ಲಿಯೂ ಕಂಡುಬರುತ್ತದೆ.
==ಕಲ್ಲಾರ್ ಮತ್ತು ಮೆನ್ಮುಟ್ಟಿ ಜಲಪಾತಗಳು==
ಪೊನ್ಮುಡಿ ಗಿರಿಧಾಮಕ್ಕೆ ಹೋಗುವ ದಾರಿಯಲ್ಲಿ ಕಲ್ಲಾರ್ ಇದ್ದು, ಈ ಪ್ರದೇಶದ ಮೂಲಕ ಹರಿಯುವ ಕಲ್ಲಾರ್ ನದಿಯಿಂದ ಕಲ್ಲಾರ್ ತನ್ನ ಹೆಸರನ್ನು ಪಡೆದುಕೊಂಡಿದೆ. ಕಲ್ಲು ಎಂದರೆ 'ಕಲ್ಲು' ಮತ್ತು ಆರು ಎಂದರೆ 'ನದಿ', ಆದ್ದರಿಂದ ಕಲ್ಲಾರ್ ಎಂಬ ಹೆಸರು ಬಂದಿದೆ. ಈ ನದಿಯು ಆಕರ್ಷಕವಾದ, ದುಂಡಗಿನ ಆಕಾರದ ಬಂಡೆಗಳು ಮತ್ತು ಬೆಣಚುಕಲ್ಲುಗಳ ಸಮೃದ್ಧಿಗೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಅದರ ಮೇಲ್ಭಾಗ ಮತ್ತು ಮಧ್ಯ ಭಾಗದಲ್ಲಿ. ಇಲ್ಲಿ ಸ್ಫಟಿಕ ಸ್ಪಷ್ಟ ನೀರಿನಲ್ಲಿ ಸ್ನಾನ ಮಾಡಿ ತಣ್ಣಗಾಗಬಹುದು, ಜೊತೆಗೆ ಈ ಪ್ರದೇಶದಲ್ಲಿ ನದಿಯ ಹೆಚ್ಚಿನ ಭಾಗವನ್ನು ಸುತ್ತುವರೆದಿರುವ ಅನೇಕ ರಭಸವಾದ ಹೊಳೆಗಳು ಮತ್ತು ಸಣ್ಣ ಕೊಳಗಳನ್ನು ವೀಕ್ಷಿಸಬಹುದು.
ತಿರುವನಂತಪುರಂನ ಮೀನ್ಮುಟ್ಟಿ ಜಲಪಾತವು ಪೊನ್ಮುಡಿ ಬೆಟ್ಟಗಳ ಬಳಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಇದು ಸುಮಾರು 45 ಮೀಟರ್ ದೂರದಲ್ಲಿದೆ. ತಿರುವನಂತಪುರಂನಿಂದ ಈ ಜಲಪಾತವು ಸುಮಾರು ಕಲ್ಲಾರ್-ಪೊನ್ಮುಡಿ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪ್ರಮುಖ ಆಕರ್ಷಣೆಗಳೆಂದರೆ ಜಲಪಾತಗಳು ಮತ್ತು ಜಲಪಾತಗಳಿಗೆ ಹೋಗುವ ದಾರಿಯ ಪಕ್ಕದಲ್ಲಿರುವ ಸಣ್ಣ ನೈಸರ್ಗಿಕ ಕೊಳಗಳು ಮತ್ತು ಬಂಡೆಗಳು. ಈ ಸ್ಥಳವನ್ನು ತಲುಪಲು, ಅರಣ್ಯ ಇಲಾಖೆಯಿಂದ ವಿಶೇಷ ಅನುಮತಿ ಪಡೆದು ದಟ್ಟವಾದ ಕಾಡುಗಳ ಮೂಲಕ ಹಾದುಹೋಗುವ ದೀರ್ಘ ಪಾದಯಾತ್ರೆಯನ್ನು ಕೈಗೊಳ್ಳಬೇಕು. ಜಲಪಾತಕ್ಕೆ ಪ್ರವಾಸಿ ಗುಂಪುಗಳೊಂದಿಗೆ ಮಾರ್ಗದರ್ಶಿಯನ್ನು ಕಳುಹಿಸಲಾಗುವುದು. ಕಲ್ಲಾರ್ನಲ್ಲಿರುವ ಅರಣ್ಯ ಸಂರಕ್ಷಣಾ ಗುಂಪು ಕಲ್ಲಾರ್ ವನ ಸಂರಕ್ಷಣಾ ಸಮಿತಿಯಲ್ಲಿ ಚಾರಣಕ್ಕೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಲಾಗುತ್ತದೆ.
==ಸಾರಿಗೆ==
ಪೊನ್ಮುಡಿ ಗಿರಿಧಾಮವು ತಿರುವನಂತಪುರಂ ಮತ್ತು ಕೇರಳಕ್ಕೆ ವಿಶಾಲವಾದ ರಸ್ತೆ ಜಾಲದ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ತಿರುವನಂತಪುರಂನ ಕೇಂದ್ರ ನಿಲ್ದಾಣ ಮತ್ತು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.
===ರೈಲು===
ಹತ್ತಿರದ ರೈಲು ನಿಲ್ದಾಣ ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣ .
===ವಿಮಾನ===
ಹತ್ತಿರದ ವಿಮಾನ ನಿಲ್ದಾಣ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ .
==ತಿರುವನಂತಪುರ ಪೊನ್ಮುಡಿ ರೋಪ್ ವೇ==
ತಿರುವನಂತಪುರಂ–ಪೊನ್ಮುಡಿ ರೋಪ್ವೇ ಯೋಜನೆ ಕೇರಳದ ಪಶ್ಚಿಮ ಘಟ್ಟದಲ್ಲಿರುವ ಪೊನ್ಮುಡಿ ಗಿರಿಧಾಮದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಪ್ರಸ್ತಾಪಿಸಲಾದ ಯೋಜನೆಯಾಗಿದೆ.
ಈ ಯೋಜನೆಯಡಿ ರೋಪ್ವೇ (ಕೇಬಲ್ ಕಾರ್) ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶವಿದೆ. ಇದರಿಂದ ಪ್ರವಾಸಿಗರು ಸುಲಭವಾಗಿ ಪೊನ್ಮುಡಿಯ ಬೆಟ್ಟದ ಮೇಲ್ಭಾಗಕ್ಕೆ ತಲುಪಬಹುದು ಮತ್ತು ಸುತ್ತಮುತ್ತಲಿನ ಸುಂದರ ಪ್ರಕೃತಿ ದೃಶ್ಯಗಳನ್ನು ವಿಶಾಲವಾಗಿ ವೀಕ್ಷಿಸಬಹುದು.
==ಘಟನೆಗಳು==
ಜುಲೈ 15, 1990 ರಂದು, ಭಾರತೀಯ ವಾಯುಪಡೆಯ An-32 ವಿಮಾನವು ತಂಬರಂ ವಾಯುಪಡೆ ನಿಲ್ದಾಣದಿಂದ ಭಾರತದ ತಿರುವನಂತಪುರಂಗೆ ಹೋಗುತ್ತಿದ್ದಾಗ ಪೊನ್ಮುಡಿ ಪರ್ವತ ಶ್ರೇಣಿಯಲ್ಲಿ ಅಪಘಾತಕ್ಕೀಡಾಯಿತು.
==Gallery==
[[File:Ponmudi-View from Ponmudi.jpg|thumb|View from Ponmudi]]
[[File:Ponmudi sunshine.jpg|thumb|Rays @ Ponmudi]]
<gallery mode="packed-hover" heights="180">
File:Ponmudi ktdc.jpg|Interpretation Centre
File:Ponmudi travelogue 1.jpg | Ponmudi Hills and Road
File:Kallar and meenmutty falls.jpg | Kallar
File:PONMUDI.jpg|Ponmudi
File:Ponmudi panorama.jpg | Ponmudi Panorama
</gallery>
==ಉಲ್ಲೇಖಗಳು==
9b94k4ha0qqjcpuokxr7latfjp0nsho
1379595
1379592
2026-08-09T09:00:16Z
Pragathi. BH
88266
1379595
wikitext
text/x-wiki
{{Short description|Hill station, Town in Kerala, India}}
{{Use dmy dates|date=January 2019}}
{{Use Indian English|date=January 2019}}
{{refimprove|date=October 2013}}
{{for|the film|Ponmudi (film)}}
{{Infobox mountain
| name = Ponmudi
| image = Morning at Ponmudi.jpg
| image_caption = Morning view from Ponmudi
| elevation_m = 1100
| elevation_ref =
| translation =
| language = [[Malayalam]]
| location = Peringamala, Vithura [[Thiruvananthapuram district]], [[Kerala]], [[India]]
| range = [[Western Ghats]]
| map = Kerala#India
| range_coordinates =
| coordinates = {{coord|8|45|37|N|77|07|00|E|type:mountain_region:IN_scale:100000|format=dms|display=inline,title}}
| coordinates_ref =
| topo =
| type =
| age =
| first_ascent =
| easiest_route = Hike
}}
ಪೊನ್ಮುಡಿ<ref>https://www.keralatourism.org/destination/ponmudi-hills/243</ref> ಎಂದರೆ "ಚಿನ್ನದ ಶಿಖರ"(ಗೋಲ್ಡನ್ ಪೀಕ್) ಎಂದರ್ಥ .ಭಾರತದ ಕೇರಳದ ತಿರುವನಂತಪುರಂ ಜಿಲ್ಲೆಯ ಪೆರಿಂಗಮಲ ಗ್ರಾಮಪಂಚಾಯತ್ನಲ್ಲಿರುವ ಒಂದು ಗಿರಿಧಾಮವಾಗಿದೆ. ಇದು ವಿಥುರ ಪಟ್ಟಣದಿಂದ ಪಶ್ಚಿಮಕ್ಕೆ 22 ಕಿ.ಮೀ ದೂರದಲ್ಲಿದೆ. ತಿರುವನಂತಪುರಂ ನಗರದಿಂದ ಈಶಾನ್ಯಕ್ಕೆ , 78ಕಿ.ಮೀ. ವರ್ಕಲಾ ಪಟ್ಟಣದ ಆಗ್ನೇಯಕ್ಕೆ, ಕೋವಲಂ ಬೀಚ್ ನಿಂದ 69 ಕಿ.ಮೀ ಈಶಾನ್ಯಕ್ಕೆ ಮತ್ತು ಸಮುದ್ರ ಮಟ್ಟದಿಂದ 1,100 ಮೀ ಎತ್ತರದಲ್ಲಿದ. ಪೊನ್ಮುಡಿ ( ವರಯದುಮೊಟ್ಟ ) ಶಿಖರವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಇದು ಅರೇಬಿಯನ್ ಸಮುದ್ರಕ್ಕೆ ಸಮಾನಾಂತರವಾಗಿ ಸಾಗುತ್ತದೆ. ಪೊನ್ಮುಡಿ ದಕ್ಷಿಣ ಭಾರತದ ಜನಪ್ರಿಯ ಹನಿಮೂನ್ ತಾಣವಾಗಿದೆ. ಪೊನ್ಮುಡಿಯ ಸಾಮಾನ್ಯ ತಾಪಮಾನ 14 and 25 ನಡುವೆ ಇರುತ್ತದೆ. . ಚಳಿಗಾಲದಲ್ಲಿ, ತಾಪಮಾನವು 10 and 19 ಇಳಿಯುತ್ತದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ. ಪೊನ್ಮುಡಿಯಲ್ಲಿ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನ 8°C.
ಪೊನ್ಮುಡಿ ತಿರುವನಂತಪುರಂಗೆ ದ್ವಿಪಥ ಹೆದ್ದಾರಿಯ ಮೂಲಕ (SH2 & SH 45) ಸಂಪರ್ಕ ಹೊಂದಿದೆ. ಅನಪರದಿಂದ ಪ್ರಾರಂಭವಾಗುವ ಕೊನೆಯ 18 ಕಿ.ಮೀ. ಪರ್ವತಗಳು ಮತ್ತು ಚಹಾ ತೋಟಗಳ ಮೂಲಕ ಹಾದುಹೋಗುವಾಗ, ರಮಣೀಯ ನೋಟಗಳನ್ನು ನೀಡುತ್ತದೆ. ಚಾಲಕರು ಮತ್ತು ಸವಾರರು 22 ಹೇರ್ ಪಿನ್ ತಿರುವುಗಳಲ್ಲಿ ಸಂಚರಿಸಬೇಕಾಗಿರುವುದರಿಂದ ಈ ಹಾದಿಯಲ್ಲಿ ಪ್ರಯಾಣವು ರೋಮಾಂಚಕ ಅನುಭವವನ್ನು ನೀಡುತ್ತದೆ. [ ಸ್ವರ ] ಪೊನ್ಮುಡಿ ಬೆನ್ನುಹೊರೆಯ ಸವಾರಿ ಮತ್ತು ಚಾರಣಕ್ಕೆ ಜನಪ್ರಿಯ ತಾಣವಾಗಿದೆ. [ ಉಲ್ಲೇಖದ ಅಗತ್ಯವಿದೆ ] ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ.
ಪೊನ್ಮುಡಿ ಬಳಿಯ ಇತರ ಆಕರ್ಷಣೆಗಳಲ್ಲಿ ಗೋಲ್ಡನ್ ವ್ಯಾಲಿ ಮತ್ತು ಹಲವಾರು ಹೊಳೆಗಳು ಮತ್ತು ರಭಸದ ಹೊಳೆಗಳು ಸೇರಿವೆ, ಕೆಲವು ರಸ್ತೆಯಾದ್ಯಂತವೂ ಇವೆ. ಈ ಹಚ್ಚ ಹಸಿರಿನ ಅರಣ್ಯ ಪ್ರದೇಶವು ಉಷ್ಣವಲಯದ ಸಸ್ಯವರ್ಗವನ್ನು ಹೊಂದಿದೆ. [೧] ಬೆಟ್ಟಗಳಲ್ಲಿ ವಿವಿಧ ರೀತಿಯ ವನ್ಯಜೀವಿಗಳು ವಾಸಿಸುತ್ತವೆ. ಗೋಲ್ಡನ್ ವ್ಯಾಲಿ ಬೆಟ್ಟಗಳ ನೋಟಗಳನ್ನು ಮತ್ತು ಕಲ್ಲಾರ್ ನದಿಗೆ ಪ್ರವೇಶವನ್ನು ನೀಡುತ್ತದೆ. ಅರಣ್ಯ ಪ್ರದೇಶದ ಮೂಲಕ ಹರಿಯುವ ಇದು ದುಂಡಗಿನ ಬೆಣಚುಕಲ್ಲುಗಳು, ತಂಪಾದ ನೀರು, ಮೀನುಗಳು ಮತ್ತು ಹಚ್ಚ ಹಸಿರಿನ ಮರಗಳನ್ನು ಹೊಂದಿದೆ.
ಪೊನ್ಮುಡಿಯಲ್ಲಿರುವ ಕೆಲವು ಗಮನಾರ್ಹ ಪ್ರವಾಸಿ ಆಕರ್ಷಣೆಗಳೆಂದರೆ ಪೆಪ್ಪರಾ ವನ್ಯಜೀವಿ ಅಭಯಾರಣ್ಯ, ಎಕೋ ಪಾಯಿಂಟ್ ಮತ್ತು ವಿವಿಧ ಚಾರಣ ತಾಣಗಳು. ಮಂಜಿನಿಂದ ಕೂಡಿದ ಕಣಿವೆಗಳು, ವಿಶೇಷವಾಗಿ ಕಲ್ಲಾರ್ ನದಿಯ ಬಳಿಯ ಗೋಲ್ಡನ್ ವ್ಯಾಲಿ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಜಿಂಕೆ ಉದ್ಯಾನವನ ಮತ್ತು ಪ್ರಕಾಶಮಾನವಾದ ಬಣ್ಣಗಳಲ್ಲಿ ಅಲಂಕರಿಸಲ್ಪಟ್ಟ ಮರ ಮತ್ತು ಕಲ್ಲಿನ ಕುಟೀರಗಳನ್ನು ಕಾಣಬಹುದು.. ಪೊನ್ಮುಡಿ ಜಲಪಾತವು ಗಿರಿಧಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಪೊನ್ಮುಡಿ ರೆಸಾರ್ಟ್ ನಿಂದ 3 ಕಿ.ಮೀ ದೂರದಲ್ಲಿ ಜಿಂಕೆ ಉದ್ಯಾನವನವಿದೆ. ಈ ಪ್ರದೇಶದ ಮತ್ತೊಂದು ಪ್ರವಾಸಿ ಆಕರ್ಷಣೆಯಾದ ಮೀನ್ಮಟ್ಟಿ ಜಲಪಾತವು ಸುಮಾರು ಕಲ್ಲಾರ್ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪೊನ್ಮುಡಿಯ ಹೊರವಲಯದಲ್ಲಿರುವ ಪೆಪ್ಪರ ವನ್ಯಜೀವಿ ಅಭಯಾರಣ್ಯವು 53 ಚಂದ್ರ ಕಿಮೀವಿಸ್ತೀರ್ಣ ಹೊಂದಿರುವ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ವಿವಿಧ ರೀತಿಯ ವನ್ಯಜೀವಿಗಳು ಮತ್ತು ಪಕ್ಷಿಗಳು ಕಂಡುಬರುತ್ತವೆ. ಏಷ್ಯನ್ ಆನೆಗಳು, ಸಾಂಬಾರ್, ಚಿರತೆಗಳು, ಸಿಂಹ ಬಾಲದ ಮಕಾಕ್ಗಳು, ಮಲಬಾರ್ ಬೂದು ಹಾರ್ನ್ಬಿಲ್ಗಳು ಮುಂತಾದ ವಿವಿಧ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸ್ಥಳಾವಕಾಶ ನೀಡುತ್ತದೆ.
ಈ ಪ್ರದೇಶದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಅಗಸ್ತ್ಯಕೂಡಂ, ಇದು ಪಶ್ಚಿಮ ಘಟ್ಟಗಳ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ, ಇದರ ಎತ್ತರ 1868 ಮೀ ರ ಅತಿ ಎತ್ತರದ ಶಿಖರವನ್ನು ಹೊಂದಿದೆ. ಈ ಶಿಖರವು ತನ್ನ ಅರಣ್ಯಕ್ಕೆ ಹೆಸರುವಾಸಿಯಾಗಿದ್ದು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಮಾತ್ರ ಪ್ರವೇಶಿಸಬಹುದು. ಅಗಸ್ತ್ಯಮಲೈ ಬಯೋಸ್ಫಿಯರ್ ರಿಸರ್ವ್ ನೆಯ್ಯರ್, ಪೆಪ್ಪಾರ, ಶೆಂದೂರ್ನಿ ವನ್ಯಜೀವಿ ಅಭಯಾರಣ್ಯಗಳು ಮತ್ತು ಅಚೆನ್ಕೋಯಿಲ್, ತೆನ್ಮಲ, ಕೊನ್ನಿ, ಪುನಲೂರ್ ಮತ್ತು ತಿರುವನಂತಪುರಂ ವಿಭಾಗಗಳನ್ನು ಒಳಗೊಂಡ ಮತ್ತೊಂದು ಆಕರ್ಷಣೆಯಾಗಿದೆ.
ಪೊನ್ಮುಡಿಯ ಭೂದೃಶ್ಯವು ಕಾಡುಗಳು ಮತ್ತು ತೋಟಗಳೊಂದಿಗೆ ಕಣಿವೆಗಳು ಮತ್ತು ಬೆಟ್ಟಗಳ ಮಧ್ಯದ ರಚನೆಯಾಗಿದೆ. ಪೊನ್ಮುಡಿಯಲ್ಲಿ ಜೀವವೈವಿಧ್ಯತೆಯು ಅಪಾರ ಪ್ರಾಮುಖ್ಯತೆಯನ್ನು ಹೊಂದಿದ್ದು, ಇದು ಪ್ರದೇಶದ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೊನ್ಮುಡಿಯಲ್ಲಿ 283 ಜಾತಿಯ ಪಕ್ಷಿಗಳಿಗೆ ಆತಿಥೇಯವಾಗಿದ್ದು, ಅವುಗಳಲ್ಲಿ ಹಲವು ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿದೆ. [೧] ಈ ಪ್ರದೇಶಕ್ಕೆ ಸ್ಥಳೀಯವಾಗಿರುವ ಪಕ್ಷಿಗಳಲ್ಲಿ ಪೇಂಟೆಡ್ ಬುಷ್ ಕ್ವಿಲ್, ಮಲಬಾರ್ ಗ್ರೇ ಹಾರ್ನ್ಬಿಲ್, ವಯನಾಡ್ ಲಾಫಿಂಗ್ಥ್ರಷ್, ಅಗಲ ಬಾಲದ ಹುಲ್ಲು ಹಕ್ಕಿ ಮತ್ತು ನೀಲಗಿರಿ ಪಿಪಿಟ್ ಸೇರಿವೆ. ಪೊನ್ಮುಡಿಯ ಹುಲ್ಲುಗಾವಲುಗಳು ಅಳಿವಿನಂಚಿನಲ್ಲಿರುವ ಜಾತಿಯ ಅಗಲ ಬಾಲದ ಹುಲ್ಲು ಹಕ್ಕಿಯ ಸಂತಾನೋತ್ಪತ್ತಿ ಸ್ಥಳಗಳಾಗಿವೆ. ಕೇರಳದಲ್ಲಿರುವ 483 ಪಕ್ಷಿ ಪ್ರಭೇದಗಳಲ್ಲಿ ಶೇಕಡಾ ಐವತ್ತೊಂಬತ್ತು ಪಕ್ಷಿ ಪ್ರಭೇದಗಳು ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ 16 ಪಕ್ಷಿ ಪ್ರಭೇದಗಳಲ್ಲಿ 15 ಪೊನ್ಮುಡಿಯಲ್ಲಿವೆ. ಪಶ್ಚಿಮ ಘಟ್ಟಗಳಲ್ಲಿರುವ 332 ಜಾತಿಯ ಚಿಟ್ಟೆಗಳಲ್ಲಿ 195 ಜಾತಿಗಳು ಇಲ್ಲಿ ಕಂಡುಬರುತ್ತವೆ. ಘಟ್ಟಗಳಿಗೆ ಸ್ಥಳೀಯವಾಗಿರುವ 37 ಚಿಟ್ಟೆ ಪ್ರಭೇದಗಳಲ್ಲಿ 24 ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಇಸ್ರೋ ಭೂಮಿ ಬರುವ ಕುಲಚಿಕರೈ-ಪಣಯಂ-ಮರ್ಚಿಸ್ಟನ್ ಪ್ರದೇಶದಲ್ಲಿ ಸ್ಪಾಟ್ ಪಫಿನ್ ಎಂಬ ಅಪರೂಪದ ಚಿಟ್ಟೆ ಕಾಣಿಸಿಕೊಂಡಿದೆ. ಅದೇ ರೀತಿ, ಪೊನ್ಮುಡಿಯು ಹಲವು ಜಾತಿಯ ಸರೀಸೃಪಗಳು ಮತ್ತು ಉಭಯಚರಗಳಿಗೆ ನೆಲೆಯಾಗಿದೆ, ಅವುಗಳಲ್ಲಿ ಅತ್ಯಂತ ಅಳಿವಿನಂಚಿನಲ್ಲಿರುವ ತಿರುವಾಂಕೂರು ಆಮೆ, ಮಲಬಾರ್ ಗ್ಲೈಡಿಂಗ್ ಫ್ರಾಗ್ ಮತ್ತು ಮಲಬಾರ್ ಟ್ರೀ ಟೋಡ್ ಸೇರಿವೆ. ನೀಲಗಿರಿ ತಹರ್ ಪೊನ್ಮುಡಿ ಬೆಟ್ಟದ ತುದಿಯಲ್ಲಿಯೂ ಕಂಡುಬರುತ್ತದೆ.
==ಕಲ್ಲಾರ್ ಮತ್ತು ಮೆನ್ಮುಟ್ಟಿ ಜಲಪಾತಗಳು==
ಪೊನ್ಮುಡಿ ಗಿರಿಧಾಮಕ್ಕೆ ಹೋಗುವ ದಾರಿಯಲ್ಲಿ ಕಲ್ಲಾರ್ ಇದ್ದು, ಈ ಪ್ರದೇಶದ ಮೂಲಕ ಹರಿಯುವ ಕಲ್ಲಾರ್ ನದಿಯಿಂದ ಕಲ್ಲಾರ್ ತನ್ನ ಹೆಸರನ್ನು ಪಡೆದುಕೊಂಡಿದೆ. ಕಲ್ಲು ಎಂದರೆ 'ಕಲ್ಲು' ಮತ್ತು ಆರು ಎಂದರೆ 'ನದಿ', ಆದ್ದರಿಂದ ಕಲ್ಲಾರ್ ಎಂಬ ಹೆಸರು ಬಂದಿದೆ. ಈ ನದಿಯು ಆಕರ್ಷಕವಾದ, ದುಂಡಗಿನ ಆಕಾರದ ಬಂಡೆಗಳು ಮತ್ತು ಬೆಣಚುಕಲ್ಲುಗಳ ಸಮೃದ್ಧಿಗೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಅದರ ಮೇಲ್ಭಾಗ ಮತ್ತು ಮಧ್ಯ ಭಾಗದಲ್ಲಿ. ಇಲ್ಲಿ ಸ್ಫಟಿಕ ಸ್ಪಷ್ಟ ನೀರಿನಲ್ಲಿ ಸ್ನಾನ ಮಾಡಿ ತಣ್ಣಗಾಗಬಹುದು, ಜೊತೆಗೆ ಈ ಪ್ರದೇಶದಲ್ಲಿ ನದಿಯ ಹೆಚ್ಚಿನ ಭಾಗವನ್ನು ಸುತ್ತುವರೆದಿರುವ ಅನೇಕ ರಭಸವಾದ ಹೊಳೆಗಳು ಮತ್ತು ಸಣ್ಣ ಕೊಳಗಳನ್ನು ವೀಕ್ಷಿಸಬಹುದು.
ತಿರುವನಂತಪುರಂನ ಮೀನ್ಮುಟ್ಟಿ ಜಲಪಾತವು ಪೊನ್ಮುಡಿ ಬೆಟ್ಟಗಳ ಬಳಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಇದು ಸುಮಾರು 45 ಮೀಟರ್ ದೂರದಲ್ಲಿದೆ. ತಿರುವನಂತಪುರಂನಿಂದ ಈ ಜಲಪಾತವು ಸುಮಾರು ಕಲ್ಲಾರ್-ಪೊನ್ಮುಡಿ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪ್ರಮುಖ ಆಕರ್ಷಣೆಗಳೆಂದರೆ ಜಲಪಾತಗಳು ಮತ್ತು ಜಲಪಾತಗಳಿಗೆ ಹೋಗುವ ದಾರಿಯ ಪಕ್ಕದಲ್ಲಿರುವ ಸಣ್ಣ ನೈಸರ್ಗಿಕ ಕೊಳಗಳು ಮತ್ತು ಬಂಡೆಗಳು. ಈ ಸ್ಥಳವನ್ನು ತಲುಪಲು, ಅರಣ್ಯ ಇಲಾಖೆಯಿಂದ ವಿಶೇಷ ಅನುಮತಿ ಪಡೆದು ದಟ್ಟವಾದ ಕಾಡುಗಳ ಮೂಲಕ ಹಾದುಹೋಗುವ ದೀರ್ಘ ಪಾದಯಾತ್ರೆಯನ್ನು ಕೈಗೊಳ್ಳಬೇಕು. ಜಲಪಾತಕ್ಕೆ ಪ್ರವಾಸಿ ಗುಂಪುಗಳೊಂದಿಗೆ ಮಾರ್ಗದರ್ಶಿಯನ್ನು ಕಳುಹಿಸಲಾಗುವುದು. ಕಲ್ಲಾರ್ನಲ್ಲಿರುವ ಅರಣ್ಯ ಸಂರಕ್ಷಣಾ ಗುಂಪು ಕಲ್ಲಾರ್ ವನ ಸಂರಕ್ಷಣಾ ಸಮಿತಿಯಲ್ಲಿ ಚಾರಣಕ್ಕೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಲಾಗುತ್ತದೆ.
==ಸಾರಿಗೆ==
ಪೊನ್ಮುಡಿ ಗಿರಿಧಾಮವು ತಿರುವನಂತಪುರಂ ಮತ್ತು ಕೇರಳಕ್ಕೆ ವಿಶಾಲವಾದ ರಸ್ತೆ ಜಾಲದ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ತಿರುವನಂತಪುರಂನ ಕೇಂದ್ರ ನಿಲ್ದಾಣ ಮತ್ತು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.
===ರೈಲು===
ಹತ್ತಿರದ ರೈಲು ನಿಲ್ದಾಣ ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣ .
===ವಿಮಾನ===
ಹತ್ತಿರದ ವಿಮಾನ ನಿಲ್ದಾಣ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ .
==ತಿರುವನಂತಪುರ ಪೊನ್ಮುಡಿ ರೋಪ್ ವೇ==
ತಿರುವನಂತಪುರಂ–ಪೊನ್ಮುಡಿ ರೋಪ್ವೇ ಯೋಜನೆ ಕೇರಳದ ಪಶ್ಚಿಮ ಘಟ್ಟದಲ್ಲಿರುವ ಪೊನ್ಮುಡಿ ಗಿರಿಧಾಮದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಪ್ರಸ್ತಾಪಿಸಲಾದ ಯೋಜನೆಯಾಗಿದೆ.
ಈ ಯೋಜನೆಯಡಿ ರೋಪ್ವೇ (ಕೇಬಲ್ ಕಾರ್) ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶವಿದೆ. ಇದರಿಂದ ಪ್ರವಾಸಿಗರು ಸುಲಭವಾಗಿ ಪೊನ್ಮುಡಿಯ ಬೆಟ್ಟದ ಮೇಲ್ಭಾಗಕ್ಕೆ ತಲುಪಬಹುದು ಮತ್ತು ಸುತ್ತಮುತ್ತಲಿನ ಸುಂದರ ಪ್ರಕೃತಿ ದೃಶ್ಯಗಳನ್ನು ವಿಶಾಲವಾಗಿ ವೀಕ್ಷಿಸಬಹುದು.
==ಘಟನೆಗಳು==
ಜುಲೈ 15, 1990 ರಂದು, ಭಾರತೀಯ ವಾಯುಪಡೆಯ An-32 ವಿಮಾನವು ತಂಬರಂ ವಾಯುಪಡೆ ನಿಲ್ದಾಣದಿಂದ ಭಾರತದ ತಿರುವನಂತಪುರಂಗೆ ಹೋಗುತ್ತಿದ್ದಾಗ ಪೊನ್ಮುಡಿ ಪರ್ವತ ಶ್ರೇಣಿಯಲ್ಲಿ ಅಪಘಾತಕ್ಕೀಡಾಯಿತು.
==Gallery==
[[File:Ponmudi-View from Ponmudi.jpg|thumb|View from Ponmudi]]
[[File:Ponmudi sunshine.jpg|thumb|Rays @ Ponmudi]]
<gallery mode="packed-hover" heights="180">
File:Ponmudi ktdc.jpg|Interpretation Centre
File:Ponmudi travelogue 1.jpg | Ponmudi Hills and Road
File:Kallar and meenmutty falls.jpg | Kallar
File:PONMUDI.jpg|Ponmudi
File:Ponmudi panorama.jpg | Ponmudi Panorama
</gallery>
==ಉಲ್ಲೇಖಗಳು==
nmjt25idlls5mwht9ys38nlual5xilz
1379596
1379595
2026-08-09T09:01:52Z
Pragathi. BH
88266
1379596
wikitext
text/x-wiki
{{Short description|Hill station, Town in Kerala, India}}
{{Use dmy dates|date=January 2019}}
{{Use Indian English|date=January 2019}}
{{refimprove|date=October 2013}}
{{for|the film|Ponmudi (film)}}
{{Infobox mountain
| name = Ponmudi
| image = Morning at Ponmudi.jpg
| image_caption = Morning view from Ponmudi
| elevation_m = 1100
| elevation_ref =
| translation =
| language = [[Malayalam]]
| location = Peringamala, Vithura [[Thiruvananthapuram district]], [[Kerala]], [[India]]
| range = [[Western Ghats]]
| map = Kerala#India
| range_coordinates =
| coordinates = {{coord|8|45|37|N|77|07|00|E|type:mountain_region:IN_scale:100000|format=dms|display=inline,title}}
| coordinates_ref =
| topo =
| type =
| age =
| first_ascent =
| easiest_route = Hike
}}
ಪೊನ್ಮುಡಿ<ref>https://www.keralatourism.org/destination/ponmudi-hills/243</ref> ಎಂದರೆ "ಚಿನ್ನದ ಶಿಖರ"(ಗೋಲ್ಡನ್ ಪೀಕ್) ಎಂದರ್ಥ .ಭಾರತದ ಕೇರಳದ ತಿರುವನಂತಪುರಂ ಜಿಲ್ಲೆಯ ಪೆರಿಂಗಮಲ ಗ್ರಾಮಪಂಚಾಯತ್ನಲ್ಲಿರುವ ಒಂದು ಗಿರಿಧಾಮವಾಗಿದೆ.<ref>https://www.keralatourism.org/destination/ponmudi-hills/243/</ref><ref>https://www.keralatourism.org/destination/ponmudi-hills/243/</ref> ಇದು ವಿಥುರ ಪಟ್ಟಣದಿಂದ ಪಶ್ಚಿಮಕ್ಕೆ 22 ಕಿ.ಮೀ ದೂರದಲ್ಲಿದೆ. ತಿರುವನಂತಪುರಂ ನಗರದಿಂದ ಈಶಾನ್ಯಕ್ಕೆ , 78ಕಿ.ಮೀ. ವರ್ಕಲಾ ಪಟ್ಟಣದ ಆಗ್ನೇಯಕ್ಕೆ, ಕೋವಲಂ ಬೀಚ್ ನಿಂದ 69 ಕಿ.ಮೀ ಈಶಾನ್ಯಕ್ಕೆ ಮತ್ತು ಸಮುದ್ರ ಮಟ್ಟದಿಂದ 1,100 ಮೀ ಎತ್ತರದಲ್ಲಿದ. ಪೊನ್ಮುಡಿ ( ವರಯದುಮೊಟ್ಟ ) ಶಿಖರವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಇದು ಅರೇಬಿಯನ್ ಸಮುದ್ರಕ್ಕೆ ಸಮಾನಾಂತರವಾಗಿ ಸಾಗುತ್ತದೆ. ಪೊನ್ಮುಡಿ ದಕ್ಷಿಣ ಭಾರತದ ಜನಪ್ರಿಯ ಹನಿಮೂನ್ ತಾಣವಾಗಿದೆ. ಪೊನ್ಮುಡಿಯ ಸಾಮಾನ್ಯ ತಾಪಮಾನ 14 and 25 ನಡುವೆ ಇರುತ್ತದೆ. . ಚಳಿಗಾಲದಲ್ಲಿ, ತಾಪಮಾನವು 10 and 19 ಇಳಿಯುತ್ತದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ. ಪೊನ್ಮುಡಿಯಲ್ಲಿ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನ 8°C.
ಪೊನ್ಮುಡಿ ತಿರುವನಂತಪುರಂಗೆ ದ್ವಿಪಥ ಹೆದ್ದಾರಿಯ ಮೂಲಕ (SH2 & SH 45) ಸಂಪರ್ಕ ಹೊಂದಿದೆ. ಅನಪರದಿಂದ ಪ್ರಾರಂಭವಾಗುವ ಕೊನೆಯ 18 ಕಿ.ಮೀ. ಪರ್ವತಗಳು ಮತ್ತು ಚಹಾ ತೋಟಗಳ ಮೂಲಕ ಹಾದುಹೋಗುವಾಗ, ರಮಣೀಯ ನೋಟಗಳನ್ನು ನೀಡುತ್ತದೆ. ಚಾಲಕರು ಮತ್ತು ಸವಾರರು 22 ಹೇರ್ ಪಿನ್ ತಿರುವುಗಳಲ್ಲಿ ಸಂಚರಿಸಬೇಕಾಗಿರುವುದರಿಂದ ಈ ಹಾದಿಯಲ್ಲಿ ಪ್ರಯಾಣವು ರೋಮಾಂಚಕ ಅನುಭವವನ್ನು ನೀಡುತ್ತದೆ. [ ಸ್ವರ ] ಪೊನ್ಮುಡಿ ಬೆನ್ನುಹೊರೆಯ ಸವಾರಿ ಮತ್ತು ಚಾರಣಕ್ಕೆ ಜನಪ್ರಿಯ ತಾಣವಾಗಿದೆ. [ ಉಲ್ಲೇಖದ ಅಗತ್ಯವಿದೆ ] ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ.
ಪೊನ್ಮುಡಿ ಬಳಿಯ ಇತರ ಆಕರ್ಷಣೆಗಳಲ್ಲಿ ಗೋಲ್ಡನ್ ವ್ಯಾಲಿ ಮತ್ತು ಹಲವಾರು ಹೊಳೆಗಳು ಮತ್ತು ರಭಸದ ಹೊಳೆಗಳು ಸೇರಿವೆ, ಕೆಲವು ರಸ್ತೆಯಾದ್ಯಂತವೂ ಇವೆ. ಈ ಹಚ್ಚ ಹಸಿರಿನ ಅರಣ್ಯ ಪ್ರದೇಶವು ಉಷ್ಣವಲಯದ ಸಸ್ಯವರ್ಗವನ್ನು ಹೊಂದಿದೆ. [೧] ಬೆಟ್ಟಗಳಲ್ಲಿ ವಿವಿಧ ರೀತಿಯ ವನ್ಯಜೀವಿಗಳು ವಾಸಿಸುತ್ತವೆ. ಗೋಲ್ಡನ್ ವ್ಯಾಲಿ ಬೆಟ್ಟಗಳ ನೋಟಗಳನ್ನು ಮತ್ತು ಕಲ್ಲಾರ್ ನದಿಗೆ ಪ್ರವೇಶವನ್ನು ನೀಡುತ್ತದೆ. ಅರಣ್ಯ ಪ್ರದೇಶದ ಮೂಲಕ ಹರಿಯುವ ಇದು ದುಂಡಗಿನ ಬೆಣಚುಕಲ್ಲುಗಳು, ತಂಪಾದ ನೀರು, ಮೀನುಗಳು ಮತ್ತು ಹಚ್ಚ ಹಸಿರಿನ ಮರಗಳನ್ನು ಹೊಂದಿದೆ.
ಪೊನ್ಮುಡಿಯಲ್ಲಿರುವ ಕೆಲವು ಗಮನಾರ್ಹ ಪ್ರವಾಸಿ ಆಕರ್ಷಣೆಗಳೆಂದರೆ ಪೆಪ್ಪರಾ ವನ್ಯಜೀವಿ ಅಭಯಾರಣ್ಯ, ಎಕೋ ಪಾಯಿಂಟ್ ಮತ್ತು ವಿವಿಧ ಚಾರಣ ತಾಣಗಳು. ಮಂಜಿನಿಂದ ಕೂಡಿದ ಕಣಿವೆಗಳು, ವಿಶೇಷವಾಗಿ ಕಲ್ಲಾರ್ ನದಿಯ ಬಳಿಯ ಗೋಲ್ಡನ್ ವ್ಯಾಲಿ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಜಿಂಕೆ ಉದ್ಯಾನವನ ಮತ್ತು ಪ್ರಕಾಶಮಾನವಾದ ಬಣ್ಣಗಳಲ್ಲಿ ಅಲಂಕರಿಸಲ್ಪಟ್ಟ ಮರ ಮತ್ತು ಕಲ್ಲಿನ ಕುಟೀರಗಳನ್ನು ಕಾಣಬಹುದು.. ಪೊನ್ಮುಡಿ ಜಲಪಾತವು ಗಿರಿಧಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಪೊನ್ಮುಡಿ ರೆಸಾರ್ಟ್ ನಿಂದ 3 ಕಿ.ಮೀ ದೂರದಲ್ಲಿ ಜಿಂಕೆ ಉದ್ಯಾನವನವಿದೆ. ಈ ಪ್ರದೇಶದ ಮತ್ತೊಂದು ಪ್ರವಾಸಿ ಆಕರ್ಷಣೆಯಾದ ಮೀನ್ಮಟ್ಟಿ ಜಲಪಾತವು ಸುಮಾರು ಕಲ್ಲಾರ್ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪೊನ್ಮುಡಿಯ ಹೊರವಲಯದಲ್ಲಿರುವ ಪೆಪ್ಪರ ವನ್ಯಜೀವಿ ಅಭಯಾರಣ್ಯವು 53 ಚಂದ್ರ ಕಿಮೀವಿಸ್ತೀರ್ಣ ಹೊಂದಿರುವ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ವಿವಿಧ ರೀತಿಯ ವನ್ಯಜೀವಿಗಳು ಮತ್ತು ಪಕ್ಷಿಗಳು ಕಂಡುಬರುತ್ತವೆ. ಏಷ್ಯನ್ ಆನೆಗಳು, ಸಾಂಬಾರ್, ಚಿರತೆಗಳು, ಸಿಂಹ ಬಾಲದ ಮಕಾಕ್ಗಳು, ಮಲಬಾರ್ ಬೂದು ಹಾರ್ನ್ಬಿಲ್ಗಳು ಮುಂತಾದ ವಿವಿಧ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸ್ಥಳಾವಕಾಶ ನೀಡುತ್ತದೆ.
ಈ ಪ್ರದೇಶದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಅಗಸ್ತ್ಯಕೂಡಂ, ಇದು ಪಶ್ಚಿಮ ಘಟ್ಟಗಳ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ, ಇದರ ಎತ್ತರ 1868 ಮೀ ರ ಅತಿ ಎತ್ತರದ ಶಿಖರವನ್ನು ಹೊಂದಿದೆ. ಈ ಶಿಖರವು ತನ್ನ ಅರಣ್ಯಕ್ಕೆ ಹೆಸರುವಾಸಿಯಾಗಿದ್ದು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಮಾತ್ರ ಪ್ರವೇಶಿಸಬಹುದು. ಅಗಸ್ತ್ಯಮಲೈ ಬಯೋಸ್ಫಿಯರ್ ರಿಸರ್ವ್ ನೆಯ್ಯರ್, ಪೆಪ್ಪಾರ, ಶೆಂದೂರ್ನಿ ವನ್ಯಜೀವಿ ಅಭಯಾರಣ್ಯಗಳು ಮತ್ತು ಅಚೆನ್ಕೋಯಿಲ್, ತೆನ್ಮಲ, ಕೊನ್ನಿ, ಪುನಲೂರ್ ಮತ್ತು ತಿರುವನಂತಪುರಂ ವಿಭಾಗಗಳನ್ನು ಒಳಗೊಂಡ ಮತ್ತೊಂದು ಆಕರ್ಷಣೆಯಾಗಿದೆ.
ಪೊನ್ಮುಡಿಯ ಭೂದೃಶ್ಯವು ಕಾಡುಗಳು ಮತ್ತು ತೋಟಗಳೊಂದಿಗೆ ಕಣಿವೆಗಳು ಮತ್ತು ಬೆಟ್ಟಗಳ ಮಧ್ಯದ ರಚನೆಯಾಗಿದೆ. ಪೊನ್ಮುಡಿಯಲ್ಲಿ ಜೀವವೈವಿಧ್ಯತೆಯು ಅಪಾರ ಪ್ರಾಮುಖ್ಯತೆಯನ್ನು ಹೊಂದಿದ್ದು, ಇದು ಪ್ರದೇಶದ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೊನ್ಮುಡಿಯಲ್ಲಿ 283 ಜಾತಿಯ ಪಕ್ಷಿಗಳಿಗೆ ಆತಿಥೇಯವಾಗಿದ್ದು, ಅವುಗಳಲ್ಲಿ ಹಲವು ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿದೆ. [೧] ಈ ಪ್ರದೇಶಕ್ಕೆ ಸ್ಥಳೀಯವಾಗಿರುವ ಪಕ್ಷಿಗಳಲ್ಲಿ ಪೇಂಟೆಡ್ ಬುಷ್ ಕ್ವಿಲ್, ಮಲಬಾರ್ ಗ್ರೇ ಹಾರ್ನ್ಬಿಲ್, ವಯನಾಡ್ ಲಾಫಿಂಗ್ಥ್ರಷ್, ಅಗಲ ಬಾಲದ ಹುಲ್ಲು ಹಕ್ಕಿ ಮತ್ತು ನೀಲಗಿರಿ ಪಿಪಿಟ್ ಸೇರಿವೆ. ಪೊನ್ಮುಡಿಯ ಹುಲ್ಲುಗಾವಲುಗಳು ಅಳಿವಿನಂಚಿನಲ್ಲಿರುವ ಜಾತಿಯ ಅಗಲ ಬಾಲದ ಹುಲ್ಲು ಹಕ್ಕಿಯ ಸಂತಾನೋತ್ಪತ್ತಿ ಸ್ಥಳಗಳಾಗಿವೆ. ಕೇರಳದಲ್ಲಿರುವ 483 ಪಕ್ಷಿ ಪ್ರಭೇದಗಳಲ್ಲಿ ಶೇಕಡಾ ಐವತ್ತೊಂಬತ್ತು ಪಕ್ಷಿ ಪ್ರಭೇದಗಳು ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ 16 ಪಕ್ಷಿ ಪ್ರಭೇದಗಳಲ್ಲಿ 15 ಪೊನ್ಮುಡಿಯಲ್ಲಿವೆ. ಪಶ್ಚಿಮ ಘಟ್ಟಗಳಲ್ಲಿರುವ 332 ಜಾತಿಯ ಚಿಟ್ಟೆಗಳಲ್ಲಿ 195 ಜಾತಿಗಳು ಇಲ್ಲಿ ಕಂಡುಬರುತ್ತವೆ. ಘಟ್ಟಗಳಿಗೆ ಸ್ಥಳೀಯವಾಗಿರುವ 37 ಚಿಟ್ಟೆ ಪ್ರಭೇದಗಳಲ್ಲಿ 24 ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಇಸ್ರೋ ಭೂಮಿ ಬರುವ ಕುಲಚಿಕರೈ-ಪಣಯಂ-ಮರ್ಚಿಸ್ಟನ್ ಪ್ರದೇಶದಲ್ಲಿ ಸ್ಪಾಟ್ ಪಫಿನ್ ಎಂಬ ಅಪರೂಪದ ಚಿಟ್ಟೆ ಕಾಣಿಸಿಕೊಂಡಿದೆ. ಅದೇ ರೀತಿ, ಪೊನ್ಮುಡಿಯು ಹಲವು ಜಾತಿಯ ಸರೀಸೃಪಗಳು ಮತ್ತು ಉಭಯಚರಗಳಿಗೆ ನೆಲೆಯಾಗಿದೆ, ಅವುಗಳಲ್ಲಿ ಅತ್ಯಂತ ಅಳಿವಿನಂಚಿನಲ್ಲಿರುವ ತಿರುವಾಂಕೂರು ಆಮೆ, ಮಲಬಾರ್ ಗ್ಲೈಡಿಂಗ್ ಫ್ರಾಗ್ ಮತ್ತು ಮಲಬಾರ್ ಟ್ರೀ ಟೋಡ್ ಸೇರಿವೆ. ನೀಲಗಿರಿ ತಹರ್ ಪೊನ್ಮುಡಿ ಬೆಟ್ಟದ ತುದಿಯಲ್ಲಿಯೂ ಕಂಡುಬರುತ್ತದೆ.
==ಕಲ್ಲಾರ್ ಮತ್ತು ಮೆನ್ಮುಟ್ಟಿ ಜಲಪಾತಗಳು==
ಪೊನ್ಮುಡಿ ಗಿರಿಧಾಮಕ್ಕೆ ಹೋಗುವ ದಾರಿಯಲ್ಲಿ ಕಲ್ಲಾರ್ ಇದ್ದು, ಈ ಪ್ರದೇಶದ ಮೂಲಕ ಹರಿಯುವ ಕಲ್ಲಾರ್ ನದಿಯಿಂದ ಕಲ್ಲಾರ್ ತನ್ನ ಹೆಸರನ್ನು ಪಡೆದುಕೊಂಡಿದೆ. ಕಲ್ಲು ಎಂದರೆ 'ಕಲ್ಲು' ಮತ್ತು ಆರು ಎಂದರೆ 'ನದಿ', ಆದ್ದರಿಂದ ಕಲ್ಲಾರ್ ಎಂಬ ಹೆಸರು ಬಂದಿದೆ. ಈ ನದಿಯು ಆಕರ್ಷಕವಾದ, ದುಂಡಗಿನ ಆಕಾರದ ಬಂಡೆಗಳು ಮತ್ತು ಬೆಣಚುಕಲ್ಲುಗಳ ಸಮೃದ್ಧಿಗೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಅದರ ಮೇಲ್ಭಾಗ ಮತ್ತು ಮಧ್ಯ ಭಾಗದಲ್ಲಿ. ಇಲ್ಲಿ ಸ್ಫಟಿಕ ಸ್ಪಷ್ಟ ನೀರಿನಲ್ಲಿ ಸ್ನಾನ ಮಾಡಿ ತಣ್ಣಗಾಗಬಹುದು, ಜೊತೆಗೆ ಈ ಪ್ರದೇಶದಲ್ಲಿ ನದಿಯ ಹೆಚ್ಚಿನ ಭಾಗವನ್ನು ಸುತ್ತುವರೆದಿರುವ ಅನೇಕ ರಭಸವಾದ ಹೊಳೆಗಳು ಮತ್ತು ಸಣ್ಣ ಕೊಳಗಳನ್ನು ವೀಕ್ಷಿಸಬಹುದು.
ತಿರುವನಂತಪುರಂನ ಮೀನ್ಮುಟ್ಟಿ ಜಲಪಾತವು ಪೊನ್ಮುಡಿ ಬೆಟ್ಟಗಳ ಬಳಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಇದು ಸುಮಾರು 45 ಮೀಟರ್ ದೂರದಲ್ಲಿದೆ. ತಿರುವನಂತಪುರಂನಿಂದ ಈ ಜಲಪಾತವು ಸುಮಾರು ಕಲ್ಲಾರ್-ಪೊನ್ಮುಡಿ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪ್ರಮುಖ ಆಕರ್ಷಣೆಗಳೆಂದರೆ ಜಲಪಾತಗಳು ಮತ್ತು ಜಲಪಾತಗಳಿಗೆ ಹೋಗುವ ದಾರಿಯ ಪಕ್ಕದಲ್ಲಿರುವ ಸಣ್ಣ ನೈಸರ್ಗಿಕ ಕೊಳಗಳು ಮತ್ತು ಬಂಡೆಗಳು. ಈ ಸ್ಥಳವನ್ನು ತಲುಪಲು, ಅರಣ್ಯ ಇಲಾಖೆಯಿಂದ ವಿಶೇಷ ಅನುಮತಿ ಪಡೆದು ದಟ್ಟವಾದ ಕಾಡುಗಳ ಮೂಲಕ ಹಾದುಹೋಗುವ ದೀರ್ಘ ಪಾದಯಾತ್ರೆಯನ್ನು ಕೈಗೊಳ್ಳಬೇಕು. ಜಲಪಾತಕ್ಕೆ ಪ್ರವಾಸಿ ಗುಂಪುಗಳೊಂದಿಗೆ ಮಾರ್ಗದರ್ಶಿಯನ್ನು ಕಳುಹಿಸಲಾಗುವುದು. ಕಲ್ಲಾರ್ನಲ್ಲಿರುವ ಅರಣ್ಯ ಸಂರಕ್ಷಣಾ ಗುಂಪು ಕಲ್ಲಾರ್ ವನ ಸಂರಕ್ಷಣಾ ಸಮಿತಿಯಲ್ಲಿ ಚಾರಣಕ್ಕೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಲಾಗುತ್ತದೆ.
==ಸಾರಿಗೆ==
ಪೊನ್ಮುಡಿ ಗಿರಿಧಾಮವು ತಿರುವನಂತಪುರಂ ಮತ್ತು ಕೇರಳಕ್ಕೆ ವಿಶಾಲವಾದ ರಸ್ತೆ ಜಾಲದ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ತಿರುವನಂತಪುರಂನ ಕೇಂದ್ರ ನಿಲ್ದಾಣ ಮತ್ತು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.
===ರೈಲು===
ಹತ್ತಿರದ ರೈಲು ನಿಲ್ದಾಣ ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣ .
===ವಿಮಾನ===
ಹತ್ತಿರದ ವಿಮಾನ ನಿಲ್ದಾಣ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ .
==ತಿರುವನಂತಪುರ ಪೊನ್ಮುಡಿ ರೋಪ್ ವೇ==
ತಿರುವನಂತಪುರಂ–ಪೊನ್ಮುಡಿ ರೋಪ್ವೇ ಯೋಜನೆ ಕೇರಳದ ಪಶ್ಚಿಮ ಘಟ್ಟದಲ್ಲಿರುವ ಪೊನ್ಮುಡಿ ಗಿರಿಧಾಮದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಪ್ರಸ್ತಾಪಿಸಲಾದ ಯೋಜನೆಯಾಗಿದೆ.
ಈ ಯೋಜನೆಯಡಿ ರೋಪ್ವೇ (ಕೇಬಲ್ ಕಾರ್) ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶವಿದೆ. ಇದರಿಂದ ಪ್ರವಾಸಿಗರು ಸುಲಭವಾಗಿ ಪೊನ್ಮುಡಿಯ ಬೆಟ್ಟದ ಮೇಲ್ಭಾಗಕ್ಕೆ ತಲುಪಬಹುದು ಮತ್ತು ಸುತ್ತಮುತ್ತಲಿನ ಸುಂದರ ಪ್ರಕೃತಿ ದೃಶ್ಯಗಳನ್ನು ವಿಶಾಲವಾಗಿ ವೀಕ್ಷಿಸಬಹುದು.
==ಘಟನೆಗಳು==
ಜುಲೈ 15, 1990 ರಂದು, ಭಾರತೀಯ ವಾಯುಪಡೆಯ An-32 ವಿಮಾನವು ತಂಬರಂ ವಾಯುಪಡೆ ನಿಲ್ದಾಣದಿಂದ ಭಾರತದ ತಿರುವನಂತಪುರಂಗೆ ಹೋಗುತ್ತಿದ್ದಾಗ ಪೊನ್ಮುಡಿ ಪರ್ವತ ಶ್ರೇಣಿಯಲ್ಲಿ ಅಪಘಾತಕ್ಕೀಡಾಯಿತು.
==Gallery==
[[File:Ponmudi-View from Ponmudi.jpg|thumb|View from Ponmudi]]
[[File:Ponmudi sunshine.jpg|thumb|Rays @ Ponmudi]]
<gallery mode="packed-hover" heights="180">
File:Ponmudi ktdc.jpg|Interpretation Centre
File:Ponmudi travelogue 1.jpg | Ponmudi Hills and Road
File:Kallar and meenmutty falls.jpg | Kallar
File:PONMUDI.jpg|Ponmudi
File:Ponmudi panorama.jpg | Ponmudi Panorama
</gallery>
==ಉಲ್ಲೇಖಗಳು==
rkutrheyx1lo89zr9cyz04jkp3huyrb
1379597
1379596
2026-08-09T09:03:38Z
Pragathi. BH
88266
1379597
wikitext
text/x-wiki
{{Short description|Hill station, Town in Kerala, India}}
{{Use dmy dates|date=January 2019}}
{{Use Indian English|date=January 2019}}
{{refimprove|date=October 2013}}
{{for|the film|Ponmudi (film)}}
{{Infobox mountain
| name = Ponmudi
| image = Morning at Ponmudi.jpg
| image_caption = Morning view from Ponmudi
| elevation_m = 1100
| elevation_ref =
| translation =
| language = [[Malayalam]]
| location = Peringamala, Vithura [[Thiruvananthapuram district]], [[Kerala]], [[India]]
| range = [[Western Ghats]]
| map = Kerala#India
| range_coordinates =
| coordinates = {{coord|8|45|37|N|77|07|00|E|type:mountain_region:IN_scale:100000|format=dms|display=inline,title}}
| coordinates_ref =
| topo =
| type =
| age =
| first_ascent =
| easiest_route = Hike
}}
ಪೊನ್ಮುಡಿ<ref>https://www.keralatourism.org/destination/ponmudi-hills/243</ref> ಎಂದರೆ "ಚಿನ್ನದ ಶಿಖರ"(ಗೋಲ್ಡನ್ ಪೀಕ್) ಎಂದರ್ಥ .ಭಾರತದ ಕೇರಳದ ತಿರುವನಂತಪುರಂ ಜಿಲ್ಲೆಯ ಪೆರಿಂಗಮಲ ಗ್ರಾಮಪಂಚಾಯತ್ನಲ್ಲಿರುವ ಒಂದು ಗಿರಿಧಾಮವಾಗಿದೆ.<ref>https://www.keralatourism.org/destination/ponmudi-hills/243/</ref><ref>https://www.keralatourism.org/destination/ponmudi-hills/243/</ref><ref>https://www.keralabackwater.com/ponmudi/</ref> ಇದು ವಿಥುರ ಪಟ್ಟಣದಿಂದ ಪಶ್ಚಿಮಕ್ಕೆ 22 ಕಿ.ಮೀ ದೂರದಲ್ಲಿದೆ. ತಿರುವನಂತಪುರಂ ನಗರದಿಂದ ಈಶಾನ್ಯಕ್ಕೆ , 78ಕಿ.ಮೀ. ವರ್ಕಲಾ ಪಟ್ಟಣದ ಆಗ್ನೇಯಕ್ಕೆ, ಕೋವಲಂ ಬೀಚ್ ನಿಂದ 69 ಕಿ.ಮೀ ಈಶಾನ್ಯಕ್ಕೆ ಮತ್ತು ಸಮುದ್ರ ಮಟ್ಟದಿಂದ 1,100 ಮೀ ಎತ್ತರದಲ್ಲಿದ. ಪೊನ್ಮುಡಿ ( ವರಯದುಮೊಟ್ಟ ) ಶಿಖರವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಇದು ಅರೇಬಿಯನ್ ಸಮುದ್ರಕ್ಕೆ ಸಮಾನಾಂತರವಾಗಿ ಸಾಗುತ್ತದೆ. ಪೊನ್ಮುಡಿ ದಕ್ಷಿಣ ಭಾರತದ ಜನಪ್ರಿಯ ಹನಿಮೂನ್ ತಾಣವಾಗಿದೆ. ಪೊನ್ಮುಡಿಯ ಸಾಮಾನ್ಯ ತಾಪಮಾನ 14 and 25 ನಡುವೆ ಇರುತ್ತದೆ. . ಚಳಿಗಾಲದಲ್ಲಿ, ತಾಪಮಾನವು 10 and 19 ಇಳಿಯುತ್ತದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ. ಪೊನ್ಮುಡಿಯಲ್ಲಿ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನ 8°C.
ಪೊನ್ಮುಡಿ ತಿರುವನಂತಪುರಂಗೆ ದ್ವಿಪಥ ಹೆದ್ದಾರಿಯ ಮೂಲಕ (SH2 & SH 45) ಸಂಪರ್ಕ ಹೊಂದಿದೆ. ಅನಪರದಿಂದ ಪ್ರಾರಂಭವಾಗುವ ಕೊನೆಯ 18 ಕಿ.ಮೀ. ಪರ್ವತಗಳು ಮತ್ತು ಚಹಾ ತೋಟಗಳ ಮೂಲಕ ಹಾದುಹೋಗುವಾಗ, ರಮಣೀಯ ನೋಟಗಳನ್ನು ನೀಡುತ್ತದೆ. ಚಾಲಕರು ಮತ್ತು ಸವಾರರು 22 ಹೇರ್ ಪಿನ್ ತಿರುವುಗಳಲ್ಲಿ ಸಂಚರಿಸಬೇಕಾಗಿರುವುದರಿಂದ ಈ ಹಾದಿಯಲ್ಲಿ ಪ್ರಯಾಣವು ರೋಮಾಂಚಕ ಅನುಭವವನ್ನು ನೀಡುತ್ತದೆ. [ ಸ್ವರ ] ಪೊನ್ಮುಡಿ ಬೆನ್ನುಹೊರೆಯ ಸವಾರಿ ಮತ್ತು ಚಾರಣಕ್ಕೆ ಜನಪ್ರಿಯ ತಾಣವಾಗಿದೆ. [ ಉಲ್ಲೇಖದ ಅಗತ್ಯವಿದೆ ] ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ.
ಪೊನ್ಮುಡಿ ಬಳಿಯ ಇತರ ಆಕರ್ಷಣೆಗಳಲ್ಲಿ ಗೋಲ್ಡನ್ ವ್ಯಾಲಿ ಮತ್ತು ಹಲವಾರು ಹೊಳೆಗಳು ಮತ್ತು ರಭಸದ ಹೊಳೆಗಳು ಸೇರಿವೆ, ಕೆಲವು ರಸ್ತೆಯಾದ್ಯಂತವೂ ಇವೆ. ಈ ಹಚ್ಚ ಹಸಿರಿನ ಅರಣ್ಯ ಪ್ರದೇಶವು ಉಷ್ಣವಲಯದ ಸಸ್ಯವರ್ಗವನ್ನು ಹೊಂದಿದೆ. [೧] ಬೆಟ್ಟಗಳಲ್ಲಿ ವಿವಿಧ ರೀತಿಯ ವನ್ಯಜೀವಿಗಳು ವಾಸಿಸುತ್ತವೆ. ಗೋಲ್ಡನ್ ವ್ಯಾಲಿ ಬೆಟ್ಟಗಳ ನೋಟಗಳನ್ನು ಮತ್ತು ಕಲ್ಲಾರ್ ನದಿಗೆ ಪ್ರವೇಶವನ್ನು ನೀಡುತ್ತದೆ. ಅರಣ್ಯ ಪ್ರದೇಶದ ಮೂಲಕ ಹರಿಯುವ ಇದು ದುಂಡಗಿನ ಬೆಣಚುಕಲ್ಲುಗಳು, ತಂಪಾದ ನೀರು, ಮೀನುಗಳು ಮತ್ತು ಹಚ್ಚ ಹಸಿರಿನ ಮರಗಳನ್ನು ಹೊಂದಿದೆ.
ಪೊನ್ಮುಡಿಯಲ್ಲಿರುವ ಕೆಲವು ಗಮನಾರ್ಹ ಪ್ರವಾಸಿ ಆಕರ್ಷಣೆಗಳೆಂದರೆ ಪೆಪ್ಪರಾ ವನ್ಯಜೀವಿ ಅಭಯಾರಣ್ಯ, ಎಕೋ ಪಾಯಿಂಟ್ ಮತ್ತು ವಿವಿಧ ಚಾರಣ ತಾಣಗಳು. ಮಂಜಿನಿಂದ ಕೂಡಿದ ಕಣಿವೆಗಳು, ವಿಶೇಷವಾಗಿ ಕಲ್ಲಾರ್ ನದಿಯ ಬಳಿಯ ಗೋಲ್ಡನ್ ವ್ಯಾಲಿ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಜಿಂಕೆ ಉದ್ಯಾನವನ ಮತ್ತು ಪ್ರಕಾಶಮಾನವಾದ ಬಣ್ಣಗಳಲ್ಲಿ ಅಲಂಕರಿಸಲ್ಪಟ್ಟ ಮರ ಮತ್ತು ಕಲ್ಲಿನ ಕುಟೀರಗಳನ್ನು ಕಾಣಬಹುದು.. ಪೊನ್ಮುಡಿ ಜಲಪಾತವು ಗಿರಿಧಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಪೊನ್ಮುಡಿ ರೆಸಾರ್ಟ್ ನಿಂದ 3 ಕಿ.ಮೀ ದೂರದಲ್ಲಿ ಜಿಂಕೆ ಉದ್ಯಾನವನವಿದೆ. ಈ ಪ್ರದೇಶದ ಮತ್ತೊಂದು ಪ್ರವಾಸಿ ಆಕರ್ಷಣೆಯಾದ ಮೀನ್ಮಟ್ಟಿ ಜಲಪಾತವು ಸುಮಾರು ಕಲ್ಲಾರ್ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪೊನ್ಮುಡಿಯ ಹೊರವಲಯದಲ್ಲಿರುವ ಪೆಪ್ಪರ ವನ್ಯಜೀವಿ ಅಭಯಾರಣ್ಯವು 53 ಚಂದ್ರ ಕಿಮೀವಿಸ್ತೀರ್ಣ ಹೊಂದಿರುವ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ವಿವಿಧ ರೀತಿಯ ವನ್ಯಜೀವಿಗಳು ಮತ್ತು ಪಕ್ಷಿಗಳು ಕಂಡುಬರುತ್ತವೆ. ಏಷ್ಯನ್ ಆನೆಗಳು, ಸಾಂಬಾರ್, ಚಿರತೆಗಳು, ಸಿಂಹ ಬಾಲದ ಮಕಾಕ್ಗಳು, ಮಲಬಾರ್ ಬೂದು ಹಾರ್ನ್ಬಿಲ್ಗಳು ಮುಂತಾದ ವಿವಿಧ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸ್ಥಳಾವಕಾಶ ನೀಡುತ್ತದೆ.
ಈ ಪ್ರದೇಶದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಅಗಸ್ತ್ಯಕೂಡಂ, ಇದು ಪಶ್ಚಿಮ ಘಟ್ಟಗಳ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ, ಇದರ ಎತ್ತರ 1868 ಮೀ ರ ಅತಿ ಎತ್ತರದ ಶಿಖರವನ್ನು ಹೊಂದಿದೆ. ಈ ಶಿಖರವು ತನ್ನ ಅರಣ್ಯಕ್ಕೆ ಹೆಸರುವಾಸಿಯಾಗಿದ್ದು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಮಾತ್ರ ಪ್ರವೇಶಿಸಬಹುದು. ಅಗಸ್ತ್ಯಮಲೈ ಬಯೋಸ್ಫಿಯರ್ ರಿಸರ್ವ್ ನೆಯ್ಯರ್, ಪೆಪ್ಪಾರ, ಶೆಂದೂರ್ನಿ ವನ್ಯಜೀವಿ ಅಭಯಾರಣ್ಯಗಳು ಮತ್ತು ಅಚೆನ್ಕೋಯಿಲ್, ತೆನ್ಮಲ, ಕೊನ್ನಿ, ಪುನಲೂರ್ ಮತ್ತು ತಿರುವನಂತಪುರಂ ವಿಭಾಗಗಳನ್ನು ಒಳಗೊಂಡ ಮತ್ತೊಂದು ಆಕರ್ಷಣೆಯಾಗಿದೆ.
ಪೊನ್ಮುಡಿಯ ಭೂದೃಶ್ಯವು ಕಾಡುಗಳು ಮತ್ತು ತೋಟಗಳೊಂದಿಗೆ ಕಣಿವೆಗಳು ಮತ್ತು ಬೆಟ್ಟಗಳ ಮಧ್ಯದ ರಚನೆಯಾಗಿದೆ. ಪೊನ್ಮುಡಿಯಲ್ಲಿ ಜೀವವೈವಿಧ್ಯತೆಯು ಅಪಾರ ಪ್ರಾಮುಖ್ಯತೆಯನ್ನು ಹೊಂದಿದ್ದು, ಇದು ಪ್ರದೇಶದ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೊನ್ಮುಡಿಯಲ್ಲಿ 283 ಜಾತಿಯ ಪಕ್ಷಿಗಳಿಗೆ ಆತಿಥೇಯವಾಗಿದ್ದು, ಅವುಗಳಲ್ಲಿ ಹಲವು ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿದೆ. [೧] ಈ ಪ್ರದೇಶಕ್ಕೆ ಸ್ಥಳೀಯವಾಗಿರುವ ಪಕ್ಷಿಗಳಲ್ಲಿ ಪೇಂಟೆಡ್ ಬುಷ್ ಕ್ವಿಲ್, ಮಲಬಾರ್ ಗ್ರೇ ಹಾರ್ನ್ಬಿಲ್, ವಯನಾಡ್ ಲಾಫಿಂಗ್ಥ್ರಷ್, ಅಗಲ ಬಾಲದ ಹುಲ್ಲು ಹಕ್ಕಿ ಮತ್ತು ನೀಲಗಿರಿ ಪಿಪಿಟ್ ಸೇರಿವೆ. ಪೊನ್ಮುಡಿಯ ಹುಲ್ಲುಗಾವಲುಗಳು ಅಳಿವಿನಂಚಿನಲ್ಲಿರುವ ಜಾತಿಯ ಅಗಲ ಬಾಲದ ಹುಲ್ಲು ಹಕ್ಕಿಯ ಸಂತಾನೋತ್ಪತ್ತಿ ಸ್ಥಳಗಳಾಗಿವೆ. ಕೇರಳದಲ್ಲಿರುವ 483 ಪಕ್ಷಿ ಪ್ರಭೇದಗಳಲ್ಲಿ ಶೇಕಡಾ ಐವತ್ತೊಂಬತ್ತು ಪಕ್ಷಿ ಪ್ರಭೇದಗಳು ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ 16 ಪಕ್ಷಿ ಪ್ರಭೇದಗಳಲ್ಲಿ 15 ಪೊನ್ಮುಡಿಯಲ್ಲಿವೆ. ಪಶ್ಚಿಮ ಘಟ್ಟಗಳಲ್ಲಿರುವ 332 ಜಾತಿಯ ಚಿಟ್ಟೆಗಳಲ್ಲಿ 195 ಜಾತಿಗಳು ಇಲ್ಲಿ ಕಂಡುಬರುತ್ತವೆ. ಘಟ್ಟಗಳಿಗೆ ಸ್ಥಳೀಯವಾಗಿರುವ 37 ಚಿಟ್ಟೆ ಪ್ರಭೇದಗಳಲ್ಲಿ 24 ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಇಸ್ರೋ ಭೂಮಿ ಬರುವ ಕುಲಚಿಕರೈ-ಪಣಯಂ-ಮರ್ಚಿಸ್ಟನ್ ಪ್ರದೇಶದಲ್ಲಿ ಸ್ಪಾಟ್ ಪಫಿನ್ ಎಂಬ ಅಪರೂಪದ ಚಿಟ್ಟೆ ಕಾಣಿಸಿಕೊಂಡಿದೆ. ಅದೇ ರೀತಿ, ಪೊನ್ಮುಡಿಯು ಹಲವು ಜಾತಿಯ ಸರೀಸೃಪಗಳು ಮತ್ತು ಉಭಯಚರಗಳಿಗೆ ನೆಲೆಯಾಗಿದೆ, ಅವುಗಳಲ್ಲಿ ಅತ್ಯಂತ ಅಳಿವಿನಂಚಿನಲ್ಲಿರುವ ತಿರುವಾಂಕೂರು ಆಮೆ, ಮಲಬಾರ್ ಗ್ಲೈಡಿಂಗ್ ಫ್ರಾಗ್ ಮತ್ತು ಮಲಬಾರ್ ಟ್ರೀ ಟೋಡ್ ಸೇರಿವೆ. ನೀಲಗಿರಿ ತಹರ್ ಪೊನ್ಮುಡಿ ಬೆಟ್ಟದ ತುದಿಯಲ್ಲಿಯೂ ಕಂಡುಬರುತ್ತದೆ.
==ಕಲ್ಲಾರ್ ಮತ್ತು ಮೆನ್ಮುಟ್ಟಿ ಜಲಪಾತಗಳು==
ಪೊನ್ಮುಡಿ ಗಿರಿಧಾಮಕ್ಕೆ ಹೋಗುವ ದಾರಿಯಲ್ಲಿ ಕಲ್ಲಾರ್ ಇದ್ದು, ಈ ಪ್ರದೇಶದ ಮೂಲಕ ಹರಿಯುವ ಕಲ್ಲಾರ್ ನದಿಯಿಂದ ಕಲ್ಲಾರ್ ತನ್ನ ಹೆಸರನ್ನು ಪಡೆದುಕೊಂಡಿದೆ. ಕಲ್ಲು ಎಂದರೆ 'ಕಲ್ಲು' ಮತ್ತು ಆರು ಎಂದರೆ 'ನದಿ', ಆದ್ದರಿಂದ ಕಲ್ಲಾರ್ ಎಂಬ ಹೆಸರು ಬಂದಿದೆ. ಈ ನದಿಯು ಆಕರ್ಷಕವಾದ, ದುಂಡಗಿನ ಆಕಾರದ ಬಂಡೆಗಳು ಮತ್ತು ಬೆಣಚುಕಲ್ಲುಗಳ ಸಮೃದ್ಧಿಗೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಅದರ ಮೇಲ್ಭಾಗ ಮತ್ತು ಮಧ್ಯ ಭಾಗದಲ್ಲಿ. ಇಲ್ಲಿ ಸ್ಫಟಿಕ ಸ್ಪಷ್ಟ ನೀರಿನಲ್ಲಿ ಸ್ನಾನ ಮಾಡಿ ತಣ್ಣಗಾಗಬಹುದು, ಜೊತೆಗೆ ಈ ಪ್ರದೇಶದಲ್ಲಿ ನದಿಯ ಹೆಚ್ಚಿನ ಭಾಗವನ್ನು ಸುತ್ತುವರೆದಿರುವ ಅನೇಕ ರಭಸವಾದ ಹೊಳೆಗಳು ಮತ್ತು ಸಣ್ಣ ಕೊಳಗಳನ್ನು ವೀಕ್ಷಿಸಬಹುದು.
ತಿರುವನಂತಪುರಂನ ಮೀನ್ಮುಟ್ಟಿ ಜಲಪಾತವು ಪೊನ್ಮುಡಿ ಬೆಟ್ಟಗಳ ಬಳಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಇದು ಸುಮಾರು 45 ಮೀಟರ್ ದೂರದಲ್ಲಿದೆ. ತಿರುವನಂತಪುರಂನಿಂದ ಈ ಜಲಪಾತವು ಸುಮಾರು ಕಲ್ಲಾರ್-ಪೊನ್ಮುಡಿ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪ್ರಮುಖ ಆಕರ್ಷಣೆಗಳೆಂದರೆ ಜಲಪಾತಗಳು ಮತ್ತು ಜಲಪಾತಗಳಿಗೆ ಹೋಗುವ ದಾರಿಯ ಪಕ್ಕದಲ್ಲಿರುವ ಸಣ್ಣ ನೈಸರ್ಗಿಕ ಕೊಳಗಳು ಮತ್ತು ಬಂಡೆಗಳು. ಈ ಸ್ಥಳವನ್ನು ತಲುಪಲು, ಅರಣ್ಯ ಇಲಾಖೆಯಿಂದ ವಿಶೇಷ ಅನುಮತಿ ಪಡೆದು ದಟ್ಟವಾದ ಕಾಡುಗಳ ಮೂಲಕ ಹಾದುಹೋಗುವ ದೀರ್ಘ ಪಾದಯಾತ್ರೆಯನ್ನು ಕೈಗೊಳ್ಳಬೇಕು. ಜಲಪಾತಕ್ಕೆ ಪ್ರವಾಸಿ ಗುಂಪುಗಳೊಂದಿಗೆ ಮಾರ್ಗದರ್ಶಿಯನ್ನು ಕಳುಹಿಸಲಾಗುವುದು. ಕಲ್ಲಾರ್ನಲ್ಲಿರುವ ಅರಣ್ಯ ಸಂರಕ್ಷಣಾ ಗುಂಪು ಕಲ್ಲಾರ್ ವನ ಸಂರಕ್ಷಣಾ ಸಮಿತಿಯಲ್ಲಿ ಚಾರಣಕ್ಕೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಲಾಗುತ್ತದೆ.
==ಸಾರಿಗೆ==
ಪೊನ್ಮುಡಿ ಗಿರಿಧಾಮವು ತಿರುವನಂತಪುರಂ ಮತ್ತು ಕೇರಳಕ್ಕೆ ವಿಶಾಲವಾದ ರಸ್ತೆ ಜಾಲದ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ತಿರುವನಂತಪುರಂನ ಕೇಂದ್ರ ನಿಲ್ದಾಣ ಮತ್ತು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.
===ರೈಲು===
ಹತ್ತಿರದ ರೈಲು ನಿಲ್ದಾಣ ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣ .
===ವಿಮಾನ===
ಹತ್ತಿರದ ವಿಮಾನ ನಿಲ್ದಾಣ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ .
==ತಿರುವನಂತಪುರ ಪೊನ್ಮುಡಿ ರೋಪ್ ವೇ==
ತಿರುವನಂತಪುರಂ–ಪೊನ್ಮುಡಿ ರೋಪ್ವೇ ಯೋಜನೆ ಕೇರಳದ ಪಶ್ಚಿಮ ಘಟ್ಟದಲ್ಲಿರುವ ಪೊನ್ಮುಡಿ ಗಿರಿಧಾಮದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಪ್ರಸ್ತಾಪಿಸಲಾದ ಯೋಜನೆಯಾಗಿದೆ.
ಈ ಯೋಜನೆಯಡಿ ರೋಪ್ವೇ (ಕೇಬಲ್ ಕಾರ್) ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶವಿದೆ. ಇದರಿಂದ ಪ್ರವಾಸಿಗರು ಸುಲಭವಾಗಿ ಪೊನ್ಮುಡಿಯ ಬೆಟ್ಟದ ಮೇಲ್ಭಾಗಕ್ಕೆ ತಲುಪಬಹುದು ಮತ್ತು ಸುತ್ತಮುತ್ತಲಿನ ಸುಂದರ ಪ್ರಕೃತಿ ದೃಶ್ಯಗಳನ್ನು ವಿಶಾಲವಾಗಿ ವೀಕ್ಷಿಸಬಹುದು.
==ಘಟನೆಗಳು==
ಜುಲೈ 15, 1990 ರಂದು, ಭಾರತೀಯ ವಾಯುಪಡೆಯ An-32 ವಿಮಾನವು ತಂಬರಂ ವಾಯುಪಡೆ ನಿಲ್ದಾಣದಿಂದ ಭಾರತದ ತಿರುವನಂತಪುರಂಗೆ ಹೋಗುತ್ತಿದ್ದಾಗ ಪೊನ್ಮುಡಿ ಪರ್ವತ ಶ್ರೇಣಿಯಲ್ಲಿ ಅಪಘಾತಕ್ಕೀಡಾಯಿತು.
==Gallery==
[[File:Ponmudi-View from Ponmudi.jpg|thumb|View from Ponmudi]]
[[File:Ponmudi sunshine.jpg|thumb|Rays @ Ponmudi]]
<gallery mode="packed-hover" heights="180">
File:Ponmudi ktdc.jpg|Interpretation Centre
File:Ponmudi travelogue 1.jpg | Ponmudi Hills and Road
File:Kallar and meenmutty falls.jpg | Kallar
File:PONMUDI.jpg|Ponmudi
File:Ponmudi panorama.jpg | Ponmudi Panorama
</gallery>
==ಉಲ್ಲೇಖಗಳು==
e8x7usahbkvqzij1fmk5qf3jasy3uk3
1379598
1379597
2026-08-09T09:05:00Z
Pragathi. BH
88266
1379598
wikitext
text/x-wiki
{{Short description|Hill station, Town in Kerala, India}}
{{Use dmy dates|date=January 2019}}
{{Use Indian English|date=January 2019}}
{{refimprove|date=October 2013}}
{{for|the film|Ponmudi (film)}}
{{Infobox mountain
| name = Ponmudi
| image = Morning at Ponmudi.jpg
| image_caption = Morning view from Ponmudi
| elevation_m = 1100
| elevation_ref =
| translation =
| language = [[Malayalam]]
| location = Peringamala, Vithura [[Thiruvananthapuram district]], [[Kerala]], [[India]]
| range = [[Western Ghats]]
| map = Kerala#India
| range_coordinates =
| coordinates = {{coord|8|45|37|N|77|07|00|E|type:mountain_region:IN_scale:100000|format=dms|display=inline,title}}
| coordinates_ref =
| topo =
| type =
| age =
| first_ascent =
| easiest_route = Hike
}}
ಪೊನ್ಮುಡಿ<ref>https://www.keralatourism.org/destination/ponmudi-hills/243</ref> ಎಂದರೆ "ಚಿನ್ನದ ಶಿಖರ"(ಗೋಲ್ಡನ್ ಪೀಕ್) ಎಂದರ್ಥ .ಭಾರತದ ಕೇರಳದ ತಿರುವನಂತಪುರಂ ಜಿಲ್ಲೆಯ ಪೆರಿಂಗಮಲ ಗ್ರಾಮಪಂಚಾಯತ್ನಲ್ಲಿರುವ ಒಂದು ಗಿರಿಧಾಮವಾಗಿದೆ.<ref>https://www.keralatourism.org/destination/ponmudi-hills/243/</ref><ref>https://www.keralatourism.org/destination/ponmudi-hills/243/</ref><ref>https://www.keralabackwater.com/ponmudi/</ref> ಇದು ವಿಥುರ ಪಟ್ಟಣದಿಂದ ಪಶ್ಚಿಮಕ್ಕೆ 22 ಕಿ.ಮೀ ದೂರದಲ್ಲಿದೆ. ತಿರುವನಂತಪುರಂ ನಗರದಿಂದ ಈಶಾನ್ಯಕ್ಕೆ , 78ಕಿ.ಮೀ. ವರ್ಕಲಾ ಪಟ್ಟಣದ ಆಗ್ನೇಯಕ್ಕೆ, ಕೋವಲಂ ಬೀಚ್ ನಿಂದ 69 ಕಿ.ಮೀ ಈಶಾನ್ಯಕ್ಕೆ ಮತ್ತು ಸಮುದ್ರ ಮಟ್ಟದಿಂದ 1,100 ಮೀ ಎತ್ತರದಲ್ಲಿದ. ಪೊನ್ಮುಡಿ ( ವರಯದುಮೊಟ್ಟ ) ಶಿಖರವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಇದು ಅರೇಬಿಯನ್ ಸಮುದ್ರಕ್ಕೆ ಸಮಾನಾಂತರವಾಗಿ ಸಾಗುತ್ತದೆ. ಪೊನ್ಮುಡಿ ದಕ್ಷಿಣ ಭಾರತದ ಜನಪ್ರಿಯ ಹನಿಮೂನ್ ತಾಣವಾಗಿದೆ. ಪೊನ್ಮುಡಿಯ ಸಾಮಾನ್ಯ ತಾಪಮಾನ 14 and 25 ನಡುವೆ ಇರುತ್ತದೆ. . ಚಳಿಗಾಲದಲ್ಲಿ, ತಾಪಮಾನವು 10 and 19 ಇಳಿಯುತ್ತದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ. ಪೊನ್ಮುಡಿಯಲ್ಲಿ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನ 8°C.
ಪೊನ್ಮುಡಿ ತಿರುವನಂತಪುರಂಗೆ ದ್ವಿಪಥ ಹೆದ್ದಾರಿಯ ಮೂಲಕ (SH2 & SH 45) ಸಂಪರ್ಕ ಹೊಂದಿದೆ. ಅನಪರದಿಂದ ಪ್ರಾರಂಭವಾಗುವ ಕೊನೆಯ 18 ಕಿ.ಮೀ. ಪರ್ವತಗಳು ಮತ್ತು ಚಹಾ ತೋಟಗಳ ಮೂಲಕ ಹಾದುಹೋಗುವಾಗ, ರಮಣೀಯ ನೋಟಗಳನ್ನು ನೀಡುತ್ತದೆ. ಚಾಲಕರು ಮತ್ತು ಸವಾರರು 22 ಹೇರ್ ಪಿನ್ ತಿರುವುಗಳಲ್ಲಿ ಸಂಚರಿಸಬೇಕಾಗಿರುವುದರಿಂದ ಈ ಹಾದಿಯಲ್ಲಿ ಪ್ರಯಾಣವು ರೋಮಾಂಚಕ ಅನುಭವವನ್ನು ನೀಡುತ್ತದೆ. [ ಸ್ವರ ] ಪೊನ್ಮುಡಿ ಬೆನ್ನುಹೊರೆಯ ಸವಾರಿ ಮತ್ತು ಚಾರಣಕ್ಕೆ ಜನಪ್ರಿಯ ತಾಣವಾಗಿದೆ. [ ಉಲ್ಲೇಖದ ಅಗತ್ಯವಿದೆ ] ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ.<ref>https://www.newindianexpress.com/cities/thiruvananthapuram/2014/dec/01/2014-688816.html</ref>
ಪೊನ್ಮುಡಿ ಬಳಿಯ ಇತರ ಆಕರ್ಷಣೆಗಳಲ್ಲಿ ಗೋಲ್ಡನ್ ವ್ಯಾಲಿ ಮತ್ತು ಹಲವಾರು ಹೊಳೆಗಳು ಮತ್ತು ರಭಸದ ಹೊಳೆಗಳು ಸೇರಿವೆ, ಕೆಲವು ರಸ್ತೆಯಾದ್ಯಂತವೂ ಇವೆ. ಈ ಹಚ್ಚ ಹಸಿರಿನ ಅರಣ್ಯ ಪ್ರದೇಶವು ಉಷ್ಣವಲಯದ ಸಸ್ಯವರ್ಗವನ್ನು ಹೊಂದಿದೆ. ಬೆಟ್ಟಗಳಲ್ಲಿ ವಿವಿಧ ರೀತಿಯ ವನ್ಯಜೀವಿಗಳು ವಾಸಿಸುತ್ತವೆ. ಗೋಲ್ಡನ್ ವ್ಯಾಲಿ ಬೆಟ್ಟಗಳ ನೋಟಗಳನ್ನು ಮತ್ತು ಕಲ್ಲಾರ್ ನದಿಗೆ ಪ್ರವೇಶವನ್ನು ನೀಡುತ್ತದೆ. ಅರಣ್ಯ ಪ್ರದೇಶದ ಮೂಲಕ ಹರಿಯುವ ಇದು ದುಂಡಗಿನ ಬೆಣಚುಕಲ್ಲುಗಳು, ತಂಪಾದ ನೀರು, ಮೀನುಗಳು ಮತ್ತು ಹಚ್ಚ ಹಸಿರಿನ ಮರಗಳನ್ನು ಹೊಂದಿದೆ.
ಪೊನ್ಮುಡಿಯಲ್ಲಿರುವ ಕೆಲವು ಗಮನಾರ್ಹ ಪ್ರವಾಸಿ ಆಕರ್ಷಣೆಗಳೆಂದರೆ ಪೆಪ್ಪರಾ ವನ್ಯಜೀವಿ ಅಭಯಾರಣ್ಯ, ಎಕೋ ಪಾಯಿಂಟ್ ಮತ್ತು ವಿವಿಧ ಚಾರಣ ತಾಣಗಳು. ಮಂಜಿನಿಂದ ಕೂಡಿದ ಕಣಿವೆಗಳು, ವಿಶೇಷವಾಗಿ ಕಲ್ಲಾರ್ ನದಿಯ ಬಳಿಯ ಗೋಲ್ಡನ್ ವ್ಯಾಲಿ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಜಿಂಕೆ ಉದ್ಯಾನವನ ಮತ್ತು ಪ್ರಕಾಶಮಾನವಾದ ಬಣ್ಣಗಳಲ್ಲಿ ಅಲಂಕರಿಸಲ್ಪಟ್ಟ ಮರ ಮತ್ತು ಕಲ್ಲಿನ ಕುಟೀರಗಳನ್ನು ಕಾಣಬಹುದು.. ಪೊನ್ಮುಡಿ ಜಲಪಾತವು ಗಿರಿಧಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಪೊನ್ಮುಡಿ ರೆಸಾರ್ಟ್ ನಿಂದ 3 ಕಿ.ಮೀ ದೂರದಲ್ಲಿ ಜಿಂಕೆ ಉದ್ಯಾನವನವಿದೆ. ಈ ಪ್ರದೇಶದ ಮತ್ತೊಂದು ಪ್ರವಾಸಿ ಆಕರ್ಷಣೆಯಾದ ಮೀನ್ಮಟ್ಟಿ ಜಲಪಾತವು ಸುಮಾರು ಕಲ್ಲಾರ್ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪೊನ್ಮುಡಿಯ ಹೊರವಲಯದಲ್ಲಿರುವ ಪೆಪ್ಪರ ವನ್ಯಜೀವಿ ಅಭಯಾರಣ್ಯವು 53 ಚಂದ್ರ ಕಿಮೀವಿಸ್ತೀರ್ಣ ಹೊಂದಿರುವ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ವಿವಿಧ ರೀತಿಯ ವನ್ಯಜೀವಿಗಳು ಮತ್ತು ಪಕ್ಷಿಗಳು ಕಂಡುಬರುತ್ತವೆ. ಏಷ್ಯನ್ ಆನೆಗಳು, ಸಾಂಬಾರ್, ಚಿರತೆಗಳು, ಸಿಂಹ ಬಾಲದ ಮಕಾಕ್ಗಳು, ಮಲಬಾರ್ ಬೂದು ಹಾರ್ನ್ಬಿಲ್ಗಳು ಮುಂತಾದ ವಿವಿಧ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸ್ಥಳಾವಕಾಶ ನೀಡುತ್ತದೆ.
ಈ ಪ್ರದೇಶದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಅಗಸ್ತ್ಯಕೂಡಂ, ಇದು ಪಶ್ಚಿಮ ಘಟ್ಟಗಳ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ, ಇದರ ಎತ್ತರ 1868 ಮೀ ರ ಅತಿ ಎತ್ತರದ ಶಿಖರವನ್ನು ಹೊಂದಿದೆ. ಈ ಶಿಖರವು ತನ್ನ ಅರಣ್ಯಕ್ಕೆ ಹೆಸರುವಾಸಿಯಾಗಿದ್ದು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಮಾತ್ರ ಪ್ರವೇಶಿಸಬಹುದು. ಅಗಸ್ತ್ಯಮಲೈ ಬಯೋಸ್ಫಿಯರ್ ರಿಸರ್ವ್ ನೆಯ್ಯರ್, ಪೆಪ್ಪಾರ, ಶೆಂದೂರ್ನಿ ವನ್ಯಜೀವಿ ಅಭಯಾರಣ್ಯಗಳು ಮತ್ತು ಅಚೆನ್ಕೋಯಿಲ್, ತೆನ್ಮಲ, ಕೊನ್ನಿ, ಪುನಲೂರ್ ಮತ್ತು ತಿರುವನಂತಪುರಂ ವಿಭಾಗಗಳನ್ನು ಒಳಗೊಂಡ ಮತ್ತೊಂದು ಆಕರ್ಷಣೆಯಾಗಿದೆ.
ಪೊನ್ಮುಡಿಯ ಭೂದೃಶ್ಯವು ಕಾಡುಗಳು ಮತ್ತು ತೋಟಗಳೊಂದಿಗೆ ಕಣಿವೆಗಳು ಮತ್ತು ಬೆಟ್ಟಗಳ ಮಧ್ಯದ ರಚನೆಯಾಗಿದೆ. ಪೊನ್ಮುಡಿಯಲ್ಲಿ ಜೀವವೈವಿಧ್ಯತೆಯು ಅಪಾರ ಪ್ರಾಮುಖ್ಯತೆಯನ್ನು ಹೊಂದಿದ್ದು, ಇದು ಪ್ರದೇಶದ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೊನ್ಮುಡಿಯಲ್ಲಿ 283 ಜಾತಿಯ ಪಕ್ಷಿಗಳಿಗೆ ಆತಿಥೇಯವಾಗಿದ್ದು, ಅವುಗಳಲ್ಲಿ ಹಲವು ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿದೆ. ಈ ಪ್ರದೇಶಕ್ಕೆ ಸ್ಥಳೀಯವಾಗಿರುವ ಪಕ್ಷಿಗಳಲ್ಲಿ ಪೇಂಟೆಡ್ ಬುಷ್ ಕ್ವಿಲ್, ಮಲಬಾರ್ ಗ್ರೇ ಹಾರ್ನ್ಬಿಲ್, ವಯನಾಡ್ ಲಾಫಿಂಗ್ಥ್ರಷ್, ಅಗಲ ಬಾಲದ ಹುಲ್ಲು ಹಕ್ಕಿ ಮತ್ತು ನೀಲಗಿರಿ ಪಿಪಿಟ್ ಸೇರಿವೆ. ಪೊನ್ಮುಡಿಯ ಹುಲ್ಲುಗಾವಲುಗಳು ಅಳಿವಿನಂಚಿನಲ್ಲಿರುವ ಜಾತಿಯ ಅಗಲ ಬಾಲದ ಹುಲ್ಲು ಹಕ್ಕಿಯ ಸಂತಾನೋತ್ಪತ್ತಿ ಸ್ಥಳಗಳಾಗಿವೆ. ಕೇರಳದಲ್ಲಿರುವ 483 ಪಕ್ಷಿ ಪ್ರಭೇದಗಳಲ್ಲಿ ಶೇಕಡಾ ಐವತ್ತೊಂಬತ್ತು ಪಕ್ಷಿ ಪ್ರಭೇದಗಳು ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ 16 ಪಕ್ಷಿ ಪ್ರಭೇದಗಳಲ್ಲಿ 15 ಪೊನ್ಮುಡಿಯಲ್ಲಿವೆ. ಪಶ್ಚಿಮ ಘಟ್ಟಗಳಲ್ಲಿರುವ 332 ಜಾತಿಯ ಚಿಟ್ಟೆಗಳಲ್ಲಿ 195 ಜಾತಿಗಳು ಇಲ್ಲಿ ಕಂಡುಬರುತ್ತವೆ. ಘಟ್ಟಗಳಿಗೆ ಸ್ಥಳೀಯವಾಗಿರುವ 37 ಚಿಟ್ಟೆ ಪ್ರಭೇದಗಳಲ್ಲಿ 24 ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಇಸ್ರೋ ಭೂಮಿ ಬರುವ ಕುಲಚಿಕರೈ-ಪಣಯಂ-ಮರ್ಚಿಸ್ಟನ್ ಪ್ರದೇಶದಲ್ಲಿ ಸ್ಪಾಟ್ ಪಫಿನ್ ಎಂಬ ಅಪರೂಪದ ಚಿಟ್ಟೆ ಕಾಣಿಸಿಕೊಂಡಿದೆ. ಅದೇ ರೀತಿ, ಪೊನ್ಮುಡಿಯು ಹಲವು ಜಾತಿಯ ಸರೀಸೃಪಗಳು ಮತ್ತು ಉಭಯಚರಗಳಿಗೆ ನೆಲೆಯಾಗಿದೆ, ಅವುಗಳಲ್ಲಿ ಅತ್ಯಂತ ಅಳಿವಿನಂಚಿನಲ್ಲಿರುವ ತಿರುವಾಂಕೂರು ಆಮೆ, ಮಲಬಾರ್ ಗ್ಲೈಡಿಂಗ್ ಫ್ರಾಗ್ ಮತ್ತು ಮಲಬಾರ್ ಟ್ರೀ ಟೋಡ್ ಸೇರಿವೆ. ನೀಲಗಿರಿ ತಹರ್ ಪೊನ್ಮುಡಿ ಬೆಟ್ಟದ ತುದಿಯಲ್ಲಿಯೂ ಕಂಡುಬರುತ್ತದೆ.
==ಕಲ್ಲಾರ್ ಮತ್ತು ಮೆನ್ಮುಟ್ಟಿ ಜಲಪಾತಗಳು==
ಪೊನ್ಮುಡಿ ಗಿರಿಧಾಮಕ್ಕೆ ಹೋಗುವ ದಾರಿಯಲ್ಲಿ ಕಲ್ಲಾರ್ ಇದ್ದು, ಈ ಪ್ರದೇಶದ ಮೂಲಕ ಹರಿಯುವ ಕಲ್ಲಾರ್ ನದಿಯಿಂದ ಕಲ್ಲಾರ್ ತನ್ನ ಹೆಸರನ್ನು ಪಡೆದುಕೊಂಡಿದೆ. ಕಲ್ಲು ಎಂದರೆ 'ಕಲ್ಲು' ಮತ್ತು ಆರು ಎಂದರೆ 'ನದಿ', ಆದ್ದರಿಂದ ಕಲ್ಲಾರ್ ಎಂಬ ಹೆಸರು ಬಂದಿದೆ. ಈ ನದಿಯು ಆಕರ್ಷಕವಾದ, ದುಂಡಗಿನ ಆಕಾರದ ಬಂಡೆಗಳು ಮತ್ತು ಬೆಣಚುಕಲ್ಲುಗಳ ಸಮೃದ್ಧಿಗೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಅದರ ಮೇಲ್ಭಾಗ ಮತ್ತು ಮಧ್ಯ ಭಾಗದಲ್ಲಿ. ಇಲ್ಲಿ ಸ್ಫಟಿಕ ಸ್ಪಷ್ಟ ನೀರಿನಲ್ಲಿ ಸ್ನಾನ ಮಾಡಿ ತಣ್ಣಗಾಗಬಹುದು, ಜೊತೆಗೆ ಈ ಪ್ರದೇಶದಲ್ಲಿ ನದಿಯ ಹೆಚ್ಚಿನ ಭಾಗವನ್ನು ಸುತ್ತುವರೆದಿರುವ ಅನೇಕ ರಭಸವಾದ ಹೊಳೆಗಳು ಮತ್ತು ಸಣ್ಣ ಕೊಳಗಳನ್ನು ವೀಕ್ಷಿಸಬಹುದು.
ತಿರುವನಂತಪುರಂನ ಮೀನ್ಮುಟ್ಟಿ ಜಲಪಾತವು ಪೊನ್ಮುಡಿ ಬೆಟ್ಟಗಳ ಬಳಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಇದು ಸುಮಾರು 45 ಮೀಟರ್ ದೂರದಲ್ಲಿದೆ. ತಿರುವನಂತಪುರಂನಿಂದ ಈ ಜಲಪಾತವು ಸುಮಾರು ಕಲ್ಲಾರ್-ಪೊನ್ಮುಡಿ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪ್ರಮುಖ ಆಕರ್ಷಣೆಗಳೆಂದರೆ ಜಲಪಾತಗಳು ಮತ್ತು ಜಲಪಾತಗಳಿಗೆ ಹೋಗುವ ದಾರಿಯ ಪಕ್ಕದಲ್ಲಿರುವ ಸಣ್ಣ ನೈಸರ್ಗಿಕ ಕೊಳಗಳು ಮತ್ತು ಬಂಡೆಗಳು. ಈ ಸ್ಥಳವನ್ನು ತಲುಪಲು, ಅರಣ್ಯ ಇಲಾಖೆಯಿಂದ ವಿಶೇಷ ಅನುಮತಿ ಪಡೆದು ದಟ್ಟವಾದ ಕಾಡುಗಳ ಮೂಲಕ ಹಾದುಹೋಗುವ ದೀರ್ಘ ಪಾದಯಾತ್ರೆಯನ್ನು ಕೈಗೊಳ್ಳಬೇಕು. ಜಲಪಾತಕ್ಕೆ ಪ್ರವಾಸಿ ಗುಂಪುಗಳೊಂದಿಗೆ ಮಾರ್ಗದರ್ಶಿಯನ್ನು ಕಳುಹಿಸಲಾಗುವುದು. ಕಲ್ಲಾರ್ನಲ್ಲಿರುವ ಅರಣ್ಯ ಸಂರಕ್ಷಣಾ ಗುಂಪು ಕಲ್ಲಾರ್ ವನ ಸಂರಕ್ಷಣಾ ಸಮಿತಿಯಲ್ಲಿ ಚಾರಣಕ್ಕೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಲಾಗುತ್ತದೆ.
==ಸಾರಿಗೆ==
ಪೊನ್ಮುಡಿ ಗಿರಿಧಾಮವು ತಿರುವನಂತಪುರಂ ಮತ್ತು ಕೇರಳಕ್ಕೆ ವಿಶಾಲವಾದ ರಸ್ತೆ ಜಾಲದ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ತಿರುವನಂತಪುರಂನ ಕೇಂದ್ರ ನಿಲ್ದಾಣ ಮತ್ತು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.
===ರೈಲು===
ಹತ್ತಿರದ ರೈಲು ನಿಲ್ದಾಣ ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣ .
===ವಿಮಾನ===
ಹತ್ತಿರದ ವಿಮಾನ ನಿಲ್ದಾಣ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ .
==ತಿರುವನಂತಪುರ ಪೊನ್ಮುಡಿ ರೋಪ್ ವೇ==
ತಿರುವನಂತಪುರಂ–ಪೊನ್ಮುಡಿ ರೋಪ್ವೇ ಯೋಜನೆ ಕೇರಳದ ಪಶ್ಚಿಮ ಘಟ್ಟದಲ್ಲಿರುವ ಪೊನ್ಮುಡಿ ಗಿರಿಧಾಮದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಪ್ರಸ್ತಾಪಿಸಲಾದ ಯೋಜನೆಯಾಗಿದೆ.
ಈ ಯೋಜನೆಯಡಿ ರೋಪ್ವೇ (ಕೇಬಲ್ ಕಾರ್) ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶವಿದೆ. ಇದರಿಂದ ಪ್ರವಾಸಿಗರು ಸುಲಭವಾಗಿ ಪೊನ್ಮುಡಿಯ ಬೆಟ್ಟದ ಮೇಲ್ಭಾಗಕ್ಕೆ ತಲುಪಬಹುದು ಮತ್ತು ಸುತ್ತಮುತ್ತಲಿನ ಸುಂದರ ಪ್ರಕೃತಿ ದೃಶ್ಯಗಳನ್ನು ವಿಶಾಲವಾಗಿ ವೀಕ್ಷಿಸಬಹುದು.
==ಘಟನೆಗಳು==
ಜುಲೈ 15, 1990 ರಂದು, ಭಾರತೀಯ ವಾಯುಪಡೆಯ An-32 ವಿಮಾನವು ತಂಬರಂ ವಾಯುಪಡೆ ನಿಲ್ದಾಣದಿಂದ ಭಾರತದ ತಿರುವನಂತಪುರಂಗೆ ಹೋಗುತ್ತಿದ್ದಾಗ ಪೊನ್ಮುಡಿ ಪರ್ವತ ಶ್ರೇಣಿಯಲ್ಲಿ ಅಪಘಾತಕ್ಕೀಡಾಯಿತು.
==Gallery==
[[File:Ponmudi-View from Ponmudi.jpg|thumb|View from Ponmudi]]
[[File:Ponmudi sunshine.jpg|thumb|Rays @ Ponmudi]]
<gallery mode="packed-hover" heights="180">
File:Ponmudi ktdc.jpg|Interpretation Centre
File:Ponmudi travelogue 1.jpg | Ponmudi Hills and Road
File:Kallar and meenmutty falls.jpg | Kallar
File:PONMUDI.jpg|Ponmudi
File:Ponmudi panorama.jpg | Ponmudi Panorama
</gallery>
==ಉಲ್ಲೇಖಗಳು==
t1ahd5h9ocwcx4hxyg54qklojl4zte7
1379599
1379598
2026-08-09T09:07:22Z
Pragathi. BH
88266
1379599
wikitext
text/x-wiki
{{Short description|Hill station, Town in Kerala, India}}
{{Use dmy dates|date=January 2019}}
{{Use Indian English|date=January 2019}}
{{refimprove|date=October 2013}}
{{for|the film|Ponmudi (film)}}
{{Infobox mountain
| name = Ponmudi
| image = Morning at Ponmudi.jpg
| image_caption = Morning view from Ponmudi
| elevation_m = 1100
| elevation_ref =
| translation =
| language = [[Malayalam]]
| location = Peringamala, Vithura [[Thiruvananthapuram district]], [[Kerala]], [[India]]
| range = [[Western Ghats]]
| map = Kerala#India
| range_coordinates =
| coordinates = {{coord|8|45|37|N|77|07|00|E|type:mountain_region:IN_scale:100000|format=dms|display=inline,title}}
| coordinates_ref =
| topo =
| type =
| age =
| first_ascent =
| easiest_route = Hike
}}
ಪೊನ್ಮುಡಿ<ref>https://www.keralatourism.org/destination/ponmudi-hills/243</ref> ಎಂದರೆ "ಚಿನ್ನದ ಶಿಖರ"(ಗೋಲ್ಡನ್ ಪೀಕ್) ಎಂದರ್ಥ .ಭಾರತದ ಕೇರಳದ [[ತಿರುವನಂತಪುರಂ ಜಿಲ್ಲೆ|ತಿರುವನಂತಪುರಂ]] ಜಿಲ್ಲೆಯ ಪೆರಿಂಗಮಲ ಗ್ರಾಮಪಂಚಾಯತ್ನಲ್ಲಿರುವ ಒಂದು ಗಿರಿಧಾಮವಾಗಿದೆ.<ref>https://www.keralatourism.org/destination/ponmudi-hills/243/</ref><ref>https://www.keralatourism.org/destination/ponmudi-hills/243/</ref><ref>https://www.keralabackwater.com/ponmudi/</ref> ಇದು ವಿಥುರ ಪಟ್ಟಣದಿಂದ ಪಶ್ಚಿಮಕ್ಕೆ 22 ಕಿ.ಮೀ ದೂರದಲ್ಲಿದೆ. ತಿರುವನಂತಪುರಂ ನಗರದಿಂದ ಈಶಾನ್ಯಕ್ಕೆ , 78ಕಿ.ಮೀ. ವರ್ಕಲಾ ಪಟ್ಟಣದ [[ಆಗ್ನೇಯ|ಆಗ್ನೇಯಕ್ಕೆ]], ಕೋವಲಂ ಬೀಚ್ ನಿಂದ 69 ಕಿ.ಮೀ [[ಈಶಾನ್ಯ|ಈಶಾನ್ಯಕ್ಕೆ]] ಮತ್ತು ಸಮುದ್ರ ಮಟ್ಟದಿಂದ 1,100 ಮೀ ಎತ್ತರದಲ್ಲಿದ. ಪೊನ್ಮುಡಿ ( ವರಯದುಮೊಟ್ಟ ) ಶಿಖರವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಇದು [[ಅರೇಬಿಯನ್ ಪರ್ಯಾಯ ದ್ವೀಪ|ಅರೇಬಿಯನ್]] ಸಮುದ್ರಕ್ಕೆ ಸಮಾನಾಂತರವಾಗಿ ಸಾಗುತ್ತದೆ. ಪೊನ್ಮುಡಿ [[ದಕ್ಷಿಣ ಭಾರತದ ಸಂಸ್ಕೃತಿ|ದಕ್ಷಿಣ ಭಾರತದ]] ಜನಪ್ರಿಯ ಹನಿಮೂನ್ ತಾಣವಾಗಿದೆ. ಪೊನ್ಮುಡಿಯ ಸಾಮಾನ್ಯ ತಾಪಮಾನ 14 and 25 ನಡುವೆ ಇರುತ್ತದೆ. . ಚಳಿಗಾಲದಲ್ಲಿ, ತಾಪಮಾನವು 10 and 19 ಇಳಿಯುತ್ತದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ. ಪೊನ್ಮುಡಿಯಲ್ಲಿ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನ 8°C.
ಪೊನ್ಮುಡಿ ತಿರುವನಂತಪುರಂಗೆ ದ್ವಿಪಥ ಹೆದ್ದಾರಿಯ ಮೂಲಕ (SH2 & SH 45) ಸಂಪರ್ಕ ಹೊಂದಿದೆ. ಅನಪರದಿಂದ ಪ್ರಾರಂಭವಾಗುವ ಕೊನೆಯ 18 ಕಿ.ಮೀ. ಪರ್ವತಗಳು ಮತ್ತು ಚಹಾ ತೋಟಗಳ ಮೂಲಕ ಹಾದುಹೋಗುವಾಗ, ರಮಣೀಯ ನೋಟಗಳನ್ನು ನೀಡುತ್ತದೆ. ಚಾಲಕರು ಮತ್ತು ಸವಾರರು 22 ಹೇರ್ ಪಿನ್ ತಿರುವುಗಳಲ್ಲಿ ಸಂಚರಿಸಬೇಕಾಗಿರುವುದರಿಂದ ಈ ಹಾದಿಯಲ್ಲಿ ಪ್ರಯಾಣವು ರೋಮಾಂಚಕ ಅನುಭವವನ್ನು ನೀಡುತ್ತದೆ. [ ಸ್ವರ ] ಪೊನ್ಮುಡಿ ಬೆನ್ನುಹೊರೆಯ ಸವಾರಿ ಮತ್ತು ಚಾರಣಕ್ಕೆ ಜನಪ್ರಿಯ ತಾಣವಾಗಿದೆ. [ ಉಲ್ಲೇಖದ ಅಗತ್ಯವಿದೆ ] ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ.<ref>https://www.newindianexpress.com/cities/thiruvananthapuram/2014/dec/01/2014-688816.html</ref>
ಪೊನ್ಮುಡಿ ಬಳಿಯ ಇತರ ಆಕರ್ಷಣೆಗಳಲ್ಲಿ ಗೋಲ್ಡನ್ ವ್ಯಾಲಿ ಮತ್ತು ಹಲವಾರು ಹೊಳೆಗಳು ಮತ್ತು ರಭಸದ ಹೊಳೆಗಳು ಸೇರಿವೆ, ಕೆಲವು ರಸ್ತೆಯಾದ್ಯಂತವೂ ಇವೆ. ಈ ಹಚ್ಚ ಹಸಿರಿನ ಅರಣ್ಯ ಪ್ರದೇಶವು ಉಷ್ಣವಲಯದ ಸಸ್ಯವರ್ಗವನ್ನು ಹೊಂದಿದೆ. ಬೆಟ್ಟಗಳಲ್ಲಿ ವಿವಿಧ ರೀತಿಯ ವನ್ಯಜೀವಿಗಳು ವಾಸಿಸುತ್ತವೆ. ಗೋಲ್ಡನ್ ವ್ಯಾಲಿ ಬೆಟ್ಟಗಳ ನೋಟಗಳನ್ನು ಮತ್ತು ಕಲ್ಲಾರ್ ನದಿಗೆ ಪ್ರವೇಶವನ್ನು ನೀಡುತ್ತದೆ. ಅರಣ್ಯ ಪ್ರದೇಶದ ಮೂಲಕ ಹರಿಯುವ ಇದು ದುಂಡಗಿನ ಬೆಣಚುಕಲ್ಲುಗಳು, ತಂಪಾದ ನೀರು, ಮೀನುಗಳು ಮತ್ತು ಹಚ್ಚ ಹಸಿರಿನ ಮರಗಳನ್ನು ಹೊಂದಿದೆ.
ಪೊನ್ಮುಡಿಯಲ್ಲಿರುವ ಕೆಲವು ಗಮನಾರ್ಹ ಪ್ರವಾಸಿ ಆಕರ್ಷಣೆಗಳೆಂದರೆ ಪೆಪ್ಪರಾ ವನ್ಯಜೀವಿ ಅಭಯಾರಣ್ಯ, ಎಕೋ ಪಾಯಿಂಟ್ ಮತ್ತು ವಿವಿಧ ಚಾರಣ ತಾಣಗಳು. ಮಂಜಿನಿಂದ ಕೂಡಿದ ಕಣಿವೆಗಳು, ವಿಶೇಷವಾಗಿ ಕಲ್ಲಾರ್ ನದಿಯ ಬಳಿಯ ಗೋಲ್ಡನ್ ವ್ಯಾಲಿ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಜಿಂಕೆ ಉದ್ಯಾನವನ ಮತ್ತು ಪ್ರಕಾಶಮಾನವಾದ ಬಣ್ಣಗಳಲ್ಲಿ ಅಲಂಕರಿಸಲ್ಪಟ್ಟ ಮರ ಮತ್ತು ಕಲ್ಲಿನ ಕುಟೀರಗಳನ್ನು ಕಾಣಬಹುದು.. ಪೊನ್ಮುಡಿ ಜಲಪಾತವು ಗಿರಿಧಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಪೊನ್ಮುಡಿ ರೆಸಾರ್ಟ್ ನಿಂದ 3 ಕಿ.ಮೀ ದೂರದಲ್ಲಿ ಜಿಂಕೆ ಉದ್ಯಾನವನವಿದೆ. ಈ ಪ್ರದೇಶದ ಮತ್ತೊಂದು ಪ್ರವಾಸಿ ಆಕರ್ಷಣೆಯಾದ ಮೀನ್ಮಟ್ಟಿ ಜಲಪಾತವು ಸುಮಾರು ಕಲ್ಲಾರ್ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪೊನ್ಮುಡಿಯ ಹೊರವಲಯದಲ್ಲಿರುವ ಪೆಪ್ಪರ ವನ್ಯಜೀವಿ ಅಭಯಾರಣ್ಯವು 53 ಚಂದ್ರ ಕಿಮೀವಿಸ್ತೀರ್ಣ ಹೊಂದಿರುವ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ವಿವಿಧ ರೀತಿಯ ವನ್ಯಜೀವಿಗಳು ಮತ್ತು ಪಕ್ಷಿಗಳು ಕಂಡುಬರುತ್ತವೆ. ಏಷ್ಯನ್ ಆನೆಗಳು, ಸಾಂಬಾರ್, ಚಿರತೆಗಳು, ಸಿಂಹ ಬಾಲದ ಮಕಾಕ್ಗಳು, ಮಲಬಾರ್ ಬೂದು ಹಾರ್ನ್ಬಿಲ್ಗಳು ಮುಂತಾದ ವಿವಿಧ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸ್ಥಳಾವಕಾಶ ನೀಡುತ್ತದೆ.
ಈ ಪ್ರದೇಶದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಅಗಸ್ತ್ಯಕೂಡಂ, ಇದು ಪಶ್ಚಿಮ ಘಟ್ಟಗಳ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ, ಇದರ ಎತ್ತರ 1868 ಮೀ ರ ಅತಿ ಎತ್ತರದ ಶಿಖರವನ್ನು ಹೊಂದಿದೆ. ಈ ಶಿಖರವು ತನ್ನ ಅರಣ್ಯಕ್ಕೆ ಹೆಸರುವಾಸಿಯಾಗಿದ್ದು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಮಾತ್ರ ಪ್ರವೇಶಿಸಬಹುದು. ಅಗಸ್ತ್ಯಮಲೈ ಬಯೋಸ್ಫಿಯರ್ ರಿಸರ್ವ್ ನೆಯ್ಯರ್, ಪೆಪ್ಪಾರ, ಶೆಂದೂರ್ನಿ ವನ್ಯಜೀವಿ ಅಭಯಾರಣ್ಯಗಳು ಮತ್ತು ಅಚೆನ್ಕೋಯಿಲ್, ತೆನ್ಮಲ, ಕೊನ್ನಿ, ಪುನಲೂರ್ ಮತ್ತು ತಿರುವನಂತಪುರಂ ವಿಭಾಗಗಳನ್ನು ಒಳಗೊಂಡ ಮತ್ತೊಂದು ಆಕರ್ಷಣೆಯಾಗಿದೆ.
ಪೊನ್ಮುಡಿಯ ಭೂದೃಶ್ಯವು ಕಾಡುಗಳು ಮತ್ತು ತೋಟಗಳೊಂದಿಗೆ ಕಣಿವೆಗಳು ಮತ್ತು ಬೆಟ್ಟಗಳ ಮಧ್ಯದ ರಚನೆಯಾಗಿದೆ. ಪೊನ್ಮುಡಿಯಲ್ಲಿ ಜೀವವೈವಿಧ್ಯತೆಯು ಅಪಾರ ಪ್ರಾಮುಖ್ಯತೆಯನ್ನು ಹೊಂದಿದ್ದು, ಇದು ಪ್ರದೇಶದ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೊನ್ಮುಡಿಯಲ್ಲಿ 283 ಜಾತಿಯ ಪಕ್ಷಿಗಳಿಗೆ ಆತಿಥೇಯವಾಗಿದ್ದು, ಅವುಗಳಲ್ಲಿ ಹಲವು ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿದೆ. ಈ ಪ್ರದೇಶಕ್ಕೆ ಸ್ಥಳೀಯವಾಗಿರುವ ಪಕ್ಷಿಗಳಲ್ಲಿ ಪೇಂಟೆಡ್ ಬುಷ್ ಕ್ವಿಲ್, ಮಲಬಾರ್ ಗ್ರೇ ಹಾರ್ನ್ಬಿಲ್, ವಯನಾಡ್ ಲಾಫಿಂಗ್ಥ್ರಷ್, ಅಗಲ ಬಾಲದ ಹುಲ್ಲು ಹಕ್ಕಿ ಮತ್ತು ನೀಲಗಿರಿ ಪಿಪಿಟ್ ಸೇರಿವೆ. ಪೊನ್ಮುಡಿಯ ಹುಲ್ಲುಗಾವಲುಗಳು ಅಳಿವಿನಂಚಿನಲ್ಲಿರುವ ಜಾತಿಯ ಅಗಲ ಬಾಲದ ಹುಲ್ಲು ಹಕ್ಕಿಯ ಸಂತಾನೋತ್ಪತ್ತಿ ಸ್ಥಳಗಳಾಗಿವೆ. ಕೇರಳದಲ್ಲಿರುವ 483 ಪಕ್ಷಿ ಪ್ರಭೇದಗಳಲ್ಲಿ ಶೇಕಡಾ ಐವತ್ತೊಂಬತ್ತು ಪಕ್ಷಿ ಪ್ರಭೇದಗಳು ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ 16 ಪಕ್ಷಿ ಪ್ರಭೇದಗಳಲ್ಲಿ 15 ಪೊನ್ಮುಡಿಯಲ್ಲಿವೆ. ಪಶ್ಚಿಮ ಘಟ್ಟಗಳಲ್ಲಿರುವ 332 ಜಾತಿಯ ಚಿಟ್ಟೆಗಳಲ್ಲಿ 195 ಜಾತಿಗಳು ಇಲ್ಲಿ ಕಂಡುಬರುತ್ತವೆ. ಘಟ್ಟಗಳಿಗೆ ಸ್ಥಳೀಯವಾಗಿರುವ 37 ಚಿಟ್ಟೆ ಪ್ರಭೇದಗಳಲ್ಲಿ 24 ಪೊನ್ಮುಡಿಯಲ್ಲಿ ಕಂಡುಬರುತ್ತವೆ. ಇಸ್ರೋ ಭೂಮಿ ಬರುವ ಕುಲಚಿಕರೈ-ಪಣಯಂ-ಮರ್ಚಿಸ್ಟನ್ ಪ್ರದೇಶದಲ್ಲಿ ಸ್ಪಾಟ್ ಪಫಿನ್ ಎಂಬ ಅಪರೂಪದ ಚಿಟ್ಟೆ ಕಾಣಿಸಿಕೊಂಡಿದೆ. ಅದೇ ರೀತಿ, ಪೊನ್ಮುಡಿಯು ಹಲವು ಜಾತಿಯ ಸರೀಸೃಪಗಳು ಮತ್ತು ಉಭಯಚರಗಳಿಗೆ ನೆಲೆಯಾಗಿದೆ, ಅವುಗಳಲ್ಲಿ ಅತ್ಯಂತ ಅಳಿವಿನಂಚಿನಲ್ಲಿರುವ ತಿರುವಾಂಕೂರು ಆಮೆ, ಮಲಬಾರ್ ಗ್ಲೈಡಿಂಗ್ ಫ್ರಾಗ್ ಮತ್ತು ಮಲಬಾರ್ ಟ್ರೀ ಟೋಡ್ ಸೇರಿವೆ. ನೀಲಗಿರಿ ತಹರ್ ಪೊನ್ಮುಡಿ ಬೆಟ್ಟದ ತುದಿಯಲ್ಲಿಯೂ ಕಂಡುಬರುತ್ತದೆ.
==ಕಲ್ಲಾರ್ ಮತ್ತು ಮೆನ್ಮುಟ್ಟಿ ಜಲಪಾತಗಳು==
ಪೊನ್ಮುಡಿ ಗಿರಿಧಾಮಕ್ಕೆ ಹೋಗುವ ದಾರಿಯಲ್ಲಿ ಕಲ್ಲಾರ್ ಇದ್ದು, ಈ ಪ್ರದೇಶದ ಮೂಲಕ ಹರಿಯುವ ಕಲ್ಲಾರ್ ನದಿಯಿಂದ ಕಲ್ಲಾರ್ ತನ್ನ ಹೆಸರನ್ನು ಪಡೆದುಕೊಂಡಿದೆ. ಕಲ್ಲು ಎಂದರೆ 'ಕಲ್ಲು' ಮತ್ತು ಆರು ಎಂದರೆ 'ನದಿ', ಆದ್ದರಿಂದ ಕಲ್ಲಾರ್ ಎಂಬ ಹೆಸರು ಬಂದಿದೆ. ಈ ನದಿಯು ಆಕರ್ಷಕವಾದ, ದುಂಡಗಿನ ಆಕಾರದ ಬಂಡೆಗಳು ಮತ್ತು ಬೆಣಚುಕಲ್ಲುಗಳ ಸಮೃದ್ಧಿಗೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಅದರ ಮೇಲ್ಭಾಗ ಮತ್ತು ಮಧ್ಯ ಭಾಗದಲ್ಲಿ. ಇಲ್ಲಿ ಸ್ಫಟಿಕ ಸ್ಪಷ್ಟ ನೀರಿನಲ್ಲಿ ಸ್ನಾನ ಮಾಡಿ ತಣ್ಣಗಾಗಬಹುದು, ಜೊತೆಗೆ ಈ ಪ್ರದೇಶದಲ್ಲಿ ನದಿಯ ಹೆಚ್ಚಿನ ಭಾಗವನ್ನು ಸುತ್ತುವರೆದಿರುವ ಅನೇಕ ರಭಸವಾದ ಹೊಳೆಗಳು ಮತ್ತು ಸಣ್ಣ ಕೊಳಗಳನ್ನು ವೀಕ್ಷಿಸಬಹುದು.
ತಿರುವನಂತಪುರಂನ ಮೀನ್ಮುಟ್ಟಿ ಜಲಪಾತವು ಪೊನ್ಮುಡಿ ಬೆಟ್ಟಗಳ ಬಳಿ ಇರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ಇದು ಸುಮಾರು 45 ಮೀಟರ್ ದೂರದಲ್ಲಿದೆ. ತಿರುವನಂತಪುರಂನಿಂದ ಈ ಜಲಪಾತವು ಸುಮಾರು ಕಲ್ಲಾರ್-ಪೊನ್ಮುಡಿ ರಸ್ತೆಯಿಂದ 3 ಕಿ.ಮೀ ದೂರದಲ್ಲಿದೆ. ಪ್ರಮುಖ ಆಕರ್ಷಣೆಗಳೆಂದರೆ ಜಲಪಾತಗಳು ಮತ್ತು ಜಲಪಾತಗಳಿಗೆ ಹೋಗುವ ದಾರಿಯ ಪಕ್ಕದಲ್ಲಿರುವ ಸಣ್ಣ ನೈಸರ್ಗಿಕ ಕೊಳಗಳು ಮತ್ತು ಬಂಡೆಗಳು. ಈ ಸ್ಥಳವನ್ನು ತಲುಪಲು, ಅರಣ್ಯ ಇಲಾಖೆಯಿಂದ ವಿಶೇಷ ಅನುಮತಿ ಪಡೆದು ದಟ್ಟವಾದ ಕಾಡುಗಳ ಮೂಲಕ ಹಾದುಹೋಗುವ ದೀರ್ಘ ಪಾದಯಾತ್ರೆಯನ್ನು ಕೈಗೊಳ್ಳಬೇಕು. ಜಲಪಾತಕ್ಕೆ ಪ್ರವಾಸಿ ಗುಂಪುಗಳೊಂದಿಗೆ ಮಾರ್ಗದರ್ಶಿಯನ್ನು ಕಳುಹಿಸಲಾಗುವುದು. ಕಲ್ಲಾರ್ನಲ್ಲಿರುವ ಅರಣ್ಯ ಸಂರಕ್ಷಣಾ ಗುಂಪು ಕಲ್ಲಾರ್ ವನ ಸಂರಕ್ಷಣಾ ಸಮಿತಿಯಲ್ಲಿ ಚಾರಣಕ್ಕೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಲಾಗುತ್ತದೆ.
==ಸಾರಿಗೆ==
ಪೊನ್ಮುಡಿ ಗಿರಿಧಾಮವು ತಿರುವನಂತಪುರಂ ಮತ್ತು ಕೇರಳಕ್ಕೆ ವಿಶಾಲವಾದ ರಸ್ತೆ ಜಾಲದ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ತಿರುವನಂತಪುರಂನ ಕೇಂದ್ರ ನಿಲ್ದಾಣ ಮತ್ತು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.
===ರೈಲು===
ಹತ್ತಿರದ ರೈಲು ನಿಲ್ದಾಣ ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣ .
===ವಿಮಾನ===
ಹತ್ತಿರದ ವಿಮಾನ ನಿಲ್ದಾಣ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ .
==ತಿರುವನಂತಪುರ ಪೊನ್ಮುಡಿ ರೋಪ್ ವೇ==
ತಿರುವನಂತಪುರಂ–ಪೊನ್ಮುಡಿ ರೋಪ್ವೇ ಯೋಜನೆ ಕೇರಳದ ಪಶ್ಚಿಮ ಘಟ್ಟದಲ್ಲಿರುವ ಪೊನ್ಮುಡಿ ಗಿರಿಧಾಮದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಪ್ರಸ್ತಾಪಿಸಲಾದ ಯೋಜನೆಯಾಗಿದೆ.
ಈ ಯೋಜನೆಯಡಿ ರೋಪ್ವೇ (ಕೇಬಲ್ ಕಾರ್) ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶವಿದೆ. ಇದರಿಂದ ಪ್ರವಾಸಿಗರು ಸುಲಭವಾಗಿ ಪೊನ್ಮುಡಿಯ ಬೆಟ್ಟದ ಮೇಲ್ಭಾಗಕ್ಕೆ ತಲುಪಬಹುದು ಮತ್ತು ಸುತ್ತಮುತ್ತಲಿನ ಸುಂದರ ಪ್ರಕೃತಿ ದೃಶ್ಯಗಳನ್ನು ವಿಶಾಲವಾಗಿ ವೀಕ್ಷಿಸಬಹುದು.
==ಘಟನೆಗಳು==
ಜುಲೈ 15, 1990 ರಂದು, ಭಾರತೀಯ ವಾಯುಪಡೆಯ An-32 ವಿಮಾನವು ತಂಬರಂ ವಾಯುಪಡೆ ನಿಲ್ದಾಣದಿಂದ ಭಾರತದ ತಿರುವನಂತಪುರಂಗೆ ಹೋಗುತ್ತಿದ್ದಾಗ ಪೊನ್ಮುಡಿ ಪರ್ವತ ಶ್ರೇಣಿಯಲ್ಲಿ ಅಪಘಾತಕ್ಕೀಡಾಯಿತು.
==Gallery==
[[File:Ponmudi-View from Ponmudi.jpg|thumb|View from Ponmudi]]
[[File:Ponmudi sunshine.jpg|thumb|Rays @ Ponmudi]]
<gallery mode="packed-hover" heights="180">
File:Ponmudi ktdc.jpg|Interpretation Centre
File:Ponmudi travelogue 1.jpg | Ponmudi Hills and Road
File:Kallar and meenmutty falls.jpg | Kallar
File:PONMUDI.jpg|Ponmudi
File:Ponmudi panorama.jpg | Ponmudi Panorama
</gallery>
==ಉಲ್ಲೇಖಗಳು==
jehz9r2zj4mtzo5ujm86ofzs55daa80
ಸದಸ್ಯರ ಚರ್ಚೆಪುಟ:Thanugowda
3
180124
1379573
2026-08-09T07:49:32Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1379573
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Thanugowda}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೧೯, ೯ ಆಗಸ್ಟ್ ೨೦೨೬ (IST)
9b5fxstpzfm8g7t3wcisl4of9stydj5
ಅಲೆಪ್ಪಿ ತೆಂಗಿನ ನಾರು
0
180125
1379575
2026-08-09T08:10:34Z
Santhosh Notagar99
82732
ಹೊಸ ಪುಟ: '''ಅಲೆಪ್ಪಿ ತೆಂಗಿನ ನಾರು''' ಎಂಬುದು ಭಾರತದ ಕೇರಳ ರಾಜ್ಯದ ಅಲಪ್ಪುಳ ಜಿಲ್ಲೆಯ ಅಂಬಲಪ್ಪುಳ ಮತ್ತು ಚೇರ್ತಲ ತಾಲೂಕುಗಳಲ್ಲಿ ತಯಾರಿಸಲಾಗುವ ತೆಂಗಿನ ನಾರು ಉತ್ಪನ್ನಗಳನ್ನು ಸೂಚಿಸುತ್ತದೆ. ಈ ಪ್ರದೇಶದಲ್ಲಿ ತೆಂಗಿನ ನ...
1379575
wikitext
text/x-wiki
'''ಅಲೆಪ್ಪಿ ತೆಂಗಿನ ನಾರು''' ಎಂಬುದು ಭಾರತದ ಕೇರಳ ರಾಜ್ಯದ ಅಲಪ್ಪುಳ ಜಿಲ್ಲೆಯ ಅಂಬಲಪ್ಪುಳ ಮತ್ತು ಚೇರ್ತಲ ತಾಲೂಕುಗಳಲ್ಲಿ ತಯಾರಿಸಲಾಗುವ ತೆಂಗಿನ ನಾರು ಉತ್ಪನ್ನಗಳನ್ನು ಸೂಚಿಸುತ್ತದೆ. ಈ ಪ್ರದೇಶದಲ್ಲಿ ತೆಂಗಿನ ನಾರು ಉತ್ಪಾದನೆಯು 1859ರಷ್ಟು ಹಿಂದೆಯೇ ಆರಂಭವಾಗಿತ್ತು. 2007ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆಯು (WTO) "ಅಲೆಪ್ಪಿ ತೆಂಗಿನ ನಾರು"ಗೆ ಭೌಗೋಳಿಕ ಸೂಚಕ (Geographical Indication) ಸ್ಥಾನಮಾನವನ್ನು ನೀಡಿತು.
== ಮುಖ್ಯ ಉತ್ಪನ್ನಗಳು ==
* ತೆಂಗಿನ ನಾರಿನ ಹಾಸಿಗೆ
* ತೆಂಗಿನ ನಾರಿನ ಚಾಪೆ
* ತೆಂಗಿನ ನಾರಿನ ಕಾರ್ಪೆಟ್
== ಇತಿಹಾಸ ==
ಅಲಪ್ಪುಳದಲ್ಲಿ ತೆಂಗಿನ ನಾರು ಉತ್ಪಾದನೆಯು ಶತಮಾನಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಅರಬ್ ಪ್ರವಾಸಿಗರ ಪ್ರವಾಸ ಕಥನಗಳಲ್ಲಿ ಹಾಗೂ ರಾಮಾಯಣದಂತಹ ಪುರಾಣ ಗ್ರಂಥಗಳಲ್ಲಿ ತೆಂಗಿನ ನಾರಿನ ಉಲ್ಲೇಖಗಳು ಕಂಡುಬರುತ್ತವೆ.
19ನೇ ಶತಮಾನದ ಮಧ್ಯಭಾಗದವರೆಗೆ ಅಲಪ್ಪುಳದಲ್ಲಿ ತೆಂಗಿನ ನಾರು ಉತ್ಪಾದನೆಯು ಯಾಂತ್ರೀಕರಣವಿಲ್ಲದೆ ಮತ್ತು ಅಸಂಘಟಿತ ರೀತಿಯಲ್ಲಿ ನಡೆಯುತ್ತಿತ್ತು. 1859ರಲ್ಲಿ ಐರಿಷ್-ಅಮೆರಿಕನ್ ಉದ್ಯಮಿ ಜೇಮ್ಸ್ ಡ್ಯಾರಾಗ್ ಅವರು ಅಲೆಪ್ಪಿಯಲ್ಲಿ ಭಾರತದ ಮೊದಲ ತೆಂಗಿನ ನಾರು ಕಾರ್ಖಾನೆಯಾದ Darragh Smail & Companyಯನ್ನು ಸ್ಥಾಪಿಸಿದರು. ಅಮೆರಿಕನ್ ಇಂಗ್ಲಿಷ್ನಲ್ಲಿ ತೆಂಗಿನ ನಾರನ್ನು "Cocoa Mats" ಎಂದು ಕರೆಯಲಾಗುತ್ತಿತ್ತು. Darragh Smail & Co. Ltd. ಸಂಸ್ಥೆಯ ಕಚೇರಿ ಮತ್ತು ಮಾರಾಟ ಮಳಿಗೆಗಳು ನ್ಯೂಯಾರ್ಕ್ ನಗರದ 177, ವಾಟರ್ ಸ್ಟ್ರೀಟ್ನಲ್ಲಿ ಇದ್ದವು.
ಮುಂದಿನ ಒಂದು ಶತಮಾನದಲ್ಲಿ ಅನೇಕ ಪ್ರಮುಖ ಯುರೋಪಿಯನ್ ಕಂಪನಿಗಳು ಅಲಪ್ಪುಳದಿಂದ ತೆಂಗಿನ ನಾರಿನ ಉತ್ಪನ್ನಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದವು. ಅವುಗಳಲ್ಲಿ Aspinwall & Co., Pierce Lesley & Co. Ltd., William Goodacre & Sons India Pvt. Ltd. ಮತ್ತು Volkart Brothers ಪ್ರಮುಖವಾಗಿದ್ದವು.
1940ರ ದಶಕದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಟ್ರಾವಂಕೂರ್ ಪ್ರದೇಶದಲ್ಲಿನ ಕಾರ್ಮಿಕ ಚಳವಳಿಯ ಪರಿಣಾಮವಾಗಿ ಯುರೋಪಿಯನ್ ಕಂಪನಿಗಳು ಈ ಪ್ರದೇಶದಿಂದ ಹೊರನಡೆದವು. ಇದರ ನಂತರ ತೆಂಗಿನ ನಾರು ಉತ್ಪಾದನೆಯ ವಿಕೇಂದ್ರೀಕರಣ ನಡೆಯಿತು.
ಪ್ರಸ್ತುತ, Coir Board of India ತೆಂಗಿನ ನಾರು ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ನಿಯಂತ್ರಿಸುವ ಪ್ರಮುಖ ಸಂಸ್ಥೆಯಾಗಿದೆ.
k4pi1baky0ne08eec3gh6tco00ilb4j
1379576
1379575
2026-08-09T08:11:53Z
Santhosh Notagar99
82732
1379576
wikitext
text/x-wiki
'''ಅಲೆಪ್ಪಿ ತೆಂಗಿನ ನಾರು''' ಎಂಬುದು ಭಾರತದ ಕೇರಳ ರಾಜ್ಯದ ಅಲಪ್ಪುಳ ಜಿಲ್ಲೆಯ ಅಂಬಲಪ್ಪುಳ ಮತ್ತು ಚೇರ್ತಲ ತಾಲೂಕುಗಳಲ್ಲಿ ತಯಾರಿಸಲಾಗುವ ತೆಂಗಿನ ನಾರು ಉತ್ಪನ್ನಗಳನ್ನು ಸೂಚಿಸುತ್ತದೆ. ಈ ಪ್ರದೇಶದಲ್ಲಿ ತೆಂಗಿನ ನಾರು ಉತ್ಪಾದನೆಯು 1859ರಷ್ಟು ಹಿಂದೆಯೇ ಆರಂಭವಾಗಿತ್ತು. 2007ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆಯು (WTO) "ಅಲೆಪ್ಪಿ ತೆಂಗಿನ ನಾರು"ಗೆ ಭೌಗೋಳಿಕ ಸೂಚಕ (Geographical Indication) ಸ್ಥಾನಮಾನವನ್ನು ನೀಡಿತು. <ref>[http://www.thehindubusinessline.com/todays-paper/tp-agri-biz-and-commodity/the-unique-power-of-coir/article1667738.ece Geographical Indication status to Alleppey Coir]</ref>
== ಮುಖ್ಯ ಉತ್ಪನ್ನಗಳು ==
* ತೆಂಗಿನ ನಾರಿನ ಹಾಸಿಗೆ
* ತೆಂಗಿನ ನಾರಿನ ಚಾಪೆ
* ತೆಂಗಿನ ನಾರಿನ ಕಾರ್ಪೆಟ್
== ಇತಿಹಾಸ ==
ಅಲಪ್ಪುಳದಲ್ಲಿ ತೆಂಗಿನ ನಾರು ಉತ್ಪಾದನೆಯು ಶತಮಾನಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಅರಬ್ ಪ್ರವಾಸಿಗರ ಪ್ರವಾಸ ಕಥನಗಳಲ್ಲಿ ಹಾಗೂ ರಾಮಾಯಣದಂತಹ ಪುರಾಣ ಗ್ರಂಥಗಳಲ್ಲಿ ತೆಂಗಿನ ನಾರಿನ ಉಲ್ಲೇಖಗಳು ಕಂಡುಬರುತ್ತವೆ.<ref>{{Cite web |title=History {{!}} Coirboard |url=http://coirboard.gov.in/?page_id=58 |access-date=2022-05-30 |language=en-US}}</ref>
19ನೇ ಶತಮಾನದ ಮಧ್ಯಭಾಗದವರೆಗೆ ಅಲಪ್ಪುಳದಲ್ಲಿ ತೆಂಗಿನ ನಾರು ಉತ್ಪಾದನೆಯು ಯಾಂತ್ರೀಕರಣವಿಲ್ಲದೆ ಮತ್ತು ಅಸಂಘಟಿತ ರೀತಿಯಲ್ಲಿ ನಡೆಯುತ್ತಿತ್ತು. 1859ರಲ್ಲಿ ಐರಿಷ್-ಅಮೆರಿಕನ್ ಉದ್ಯಮಿ ಜೇಮ್ಸ್ ಡ್ಯಾರಾಗ್ ಅವರು ಅಲೆಪ್ಪಿಯಲ್ಲಿ ಭಾರತದ ಮೊದಲ ತೆಂಗಿನ ನಾರು ಕಾರ್ಖಾನೆಯಾದ Darragh Smail & Companyಯನ್ನು ಸ್ಥಾಪಿಸಿದರು. ಅಮೆರಿಕನ್ ಇಂಗ್ಲಿಷ್ನಲ್ಲಿ ತೆಂಗಿನ ನಾರನ್ನು "Cocoa Mats" ಎಂದು ಕರೆಯಲಾಗುತ್ತಿತ್ತು. Darragh Smail & Co. Ltd. ಸಂಸ್ಥೆಯ ಕಚೇರಿ ಮತ್ತು ಮಾರಾಟ ಮಳಿಗೆಗಳು ನ್ಯೂಯಾರ್ಕ್ ನಗರದ 177, ವಾಟರ್ ಸ್ಟ್ರೀಟ್ನಲ್ಲಿ ಇದ್ದವು.<ref>[http://1.bp.blogspot.com/-E7b7IZshb2U/VBRBQZUz02I/AAAAAAAAIKk/5qRx-Km2J5Y/s1600/ds.jpg Darragh Smail & Company]</ref>
ಮುಂದಿನ ಒಂದು ಶತಮಾನದಲ್ಲಿ ಅನೇಕ ಪ್ರಮುಖ ಯುರೋಪಿಯನ್ ಕಂಪನಿಗಳು ಅಲಪ್ಪುಳದಿಂದ ತೆಂಗಿನ ನಾರಿನ ಉತ್ಪನ್ನಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದವು. ಅವುಗಳಲ್ಲಿ Aspinwall & Co., Pierce Lesley & Co. Ltd., William Goodacre & Sons India Pvt. Ltd. ಮತ್ತು Volkart Brothers ಪ್ರಮುಖವಾಗಿದ್ದವು.
1940ರ ದಶಕದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಟ್ರಾವಂಕೂರ್ ಪ್ರದೇಶದಲ್ಲಿನ ಕಾರ್ಮಿಕ ಚಳವಳಿಯ ಪರಿಣಾಮವಾಗಿ ಯುರೋಪಿಯನ್ ಕಂಪನಿಗಳು ಈ ಪ್ರದೇಶದಿಂದ ಹೊರನಡೆದವು. ಇದರ ನಂತರ ತೆಂಗಿನ ನಾರು ಉತ್ಪಾದನೆಯ ವಿಕೇಂದ್ರೀಕರಣ ನಡೆಯಿತು.
ಪ್ರಸ್ತುತ, Coir Board of India ತೆಂಗಿನ ನಾರು ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ನಿಯಂತ್ರಿಸುವ ಪ್ರಮುಖ ಸಂಸ್ಥೆಯಾಗಿದೆ.
mjd5cseu8o5tnwxmsi9pf0mo9gsu37t
1379577
1379576
2026-08-09T08:12:14Z
Santhosh Notagar99
82732
1379577
wikitext
text/x-wiki
'''ಅಲೆಪ್ಪಿ ತೆಂಗಿನ ನಾರು''' ಎಂಬುದು ಭಾರತದ ಕೇರಳ ರಾಜ್ಯದ ಅಲಪ್ಪುಳ ಜಿಲ್ಲೆಯ ಅಂಬಲಪ್ಪುಳ ಮತ್ತು ಚೇರ್ತಲ ತಾಲೂಕುಗಳಲ್ಲಿ ತಯಾರಿಸಲಾಗುವ ತೆಂಗಿನ ನಾರು ಉತ್ಪನ್ನಗಳನ್ನು ಸೂಚಿಸುತ್ತದೆ. ಈ ಪ್ರದೇಶದಲ್ಲಿ ತೆಂಗಿನ ನಾರು ಉತ್ಪಾದನೆಯು 1859ರಷ್ಟು ಹಿಂದೆಯೇ ಆರಂಭವಾಗಿತ್ತು. 2007ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆಯು (WTO) "ಅಲೆಪ್ಪಿ ತೆಂಗಿನ ನಾರು"ಗೆ ಭೌಗೋಳಿಕ ಸೂಚಕ (Geographical Indication) ಸ್ಥಾನಮಾನವನ್ನು ನೀಡಿತು. <ref>[http://www.thehindubusinessline.com/todays-paper/tp-agri-biz-and-commodity/the-unique-power-of-coir/article1667738.ece Geographical Indication status to Alleppey Coir]</ref><ref>https://en.wikipedia.org/wiki/Alleppy_Coir</ref>
== ಮುಖ್ಯ ಉತ್ಪನ್ನಗಳು ==
* ತೆಂಗಿನ ನಾರಿನ ಹಾಸಿಗೆ
* ತೆಂಗಿನ ನಾರಿನ ಚಾಪೆ
* ತೆಂಗಿನ ನಾರಿನ ಕಾರ್ಪೆಟ್
== ಇತಿಹಾಸ ==
ಅಲಪ್ಪುಳದಲ್ಲಿ ತೆಂಗಿನ ನಾರು ಉತ್ಪಾದನೆಯು ಶತಮಾನಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಅರಬ್ ಪ್ರವಾಸಿಗರ ಪ್ರವಾಸ ಕಥನಗಳಲ್ಲಿ ಹಾಗೂ ರಾಮಾಯಣದಂತಹ ಪುರಾಣ ಗ್ರಂಥಗಳಲ್ಲಿ ತೆಂಗಿನ ನಾರಿನ ಉಲ್ಲೇಖಗಳು ಕಂಡುಬರುತ್ತವೆ.<ref>{{Cite web |title=History {{!}} Coirboard |url=http://coirboard.gov.in/?page_id=58 |access-date=2022-05-30 |language=en-US}}</ref>
19ನೇ ಶತಮಾನದ ಮಧ್ಯಭಾಗದವರೆಗೆ ಅಲಪ್ಪುಳದಲ್ಲಿ ತೆಂಗಿನ ನಾರು ಉತ್ಪಾದನೆಯು ಯಾಂತ್ರೀಕರಣವಿಲ್ಲದೆ ಮತ್ತು ಅಸಂಘಟಿತ ರೀತಿಯಲ್ಲಿ ನಡೆಯುತ್ತಿತ್ತು. 1859ರಲ್ಲಿ ಐರಿಷ್-ಅಮೆರಿಕನ್ ಉದ್ಯಮಿ ಜೇಮ್ಸ್ ಡ್ಯಾರಾಗ್ ಅವರು ಅಲೆಪ್ಪಿಯಲ್ಲಿ ಭಾರತದ ಮೊದಲ ತೆಂಗಿನ ನಾರು ಕಾರ್ಖಾನೆಯಾದ Darragh Smail & Companyಯನ್ನು ಸ್ಥಾಪಿಸಿದರು. ಅಮೆರಿಕನ್ ಇಂಗ್ಲಿಷ್ನಲ್ಲಿ ತೆಂಗಿನ ನಾರನ್ನು "Cocoa Mats" ಎಂದು ಕರೆಯಲಾಗುತ್ತಿತ್ತು. Darragh Smail & Co. Ltd. ಸಂಸ್ಥೆಯ ಕಚೇರಿ ಮತ್ತು ಮಾರಾಟ ಮಳಿಗೆಗಳು ನ್ಯೂಯಾರ್ಕ್ ನಗರದ 177, ವಾಟರ್ ಸ್ಟ್ರೀಟ್ನಲ್ಲಿ ಇದ್ದವು.<ref>[http://1.bp.blogspot.com/-E7b7IZshb2U/VBRBQZUz02I/AAAAAAAAIKk/5qRx-Km2J5Y/s1600/ds.jpg Darragh Smail & Company]</ref>
ಮುಂದಿನ ಒಂದು ಶತಮಾನದಲ್ಲಿ ಅನೇಕ ಪ್ರಮುಖ ಯುರೋಪಿಯನ್ ಕಂಪನಿಗಳು ಅಲಪ್ಪುಳದಿಂದ ತೆಂಗಿನ ನಾರಿನ ಉತ್ಪನ್ನಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದವು. ಅವುಗಳಲ್ಲಿ Aspinwall & Co., Pierce Lesley & Co. Ltd., William Goodacre & Sons India Pvt. Ltd. ಮತ್ತು Volkart Brothers ಪ್ರಮುಖವಾಗಿದ್ದವು.
1940ರ ದಶಕದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಟ್ರಾವಂಕೂರ್ ಪ್ರದೇಶದಲ್ಲಿನ ಕಾರ್ಮಿಕ ಚಳವಳಿಯ ಪರಿಣಾಮವಾಗಿ ಯುರೋಪಿಯನ್ ಕಂಪನಿಗಳು ಈ ಪ್ರದೇಶದಿಂದ ಹೊರನಡೆದವು. ಇದರ ನಂತರ ತೆಂಗಿನ ನಾರು ಉತ್ಪಾದನೆಯ ವಿಕೇಂದ್ರೀಕರಣ ನಡೆಯಿತು.
ಪ್ರಸ್ತುತ, Coir Board of India ತೆಂಗಿನ ನಾರು ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ನಿಯಂತ್ರಿಸುವ ಪ್ರಮುಖ ಸಂಸ್ಥೆಯಾಗಿದೆ.
59oc817881nijqu08wyb9bmjytxwtrr
1379578
1379577
2026-08-09T08:13:48Z
Santhosh Notagar99
82732
1379578
wikitext
text/x-wiki
'''ಅಲೆಪ್ಪಿ ತೆಂಗಿನ ನಾರು''' ಎಂಬುದು ಭಾರತದ ಕೇರಳ ರಾಜ್ಯದ ಅಲಪ್ಪುಳ ಜಿಲ್ಲೆಯ ಅಂಬಲಪ್ಪುಳ ಮತ್ತು ಚೇರ್ತಲ ತಾಲೂಕುಗಳಲ್ಲಿ ತಯಾರಿಸಲಾಗುವ ತೆಂಗಿನ ನಾರು ಉತ್ಪನ್ನಗಳನ್ನು ಸೂಚಿಸುತ್ತದೆ. ಈ ಪ್ರದೇಶದಲ್ಲಿ ತೆಂಗಿನ ನಾರು ಉತ್ಪಾದನೆಯು 1859ರಷ್ಟು ಹಿಂದೆಯೇ ಆರಂಭವಾಗಿತ್ತು. 2007ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆಯು (WTO) "ಅಲೆಪ್ಪಿ ತೆಂಗಿನ ನಾರು"ಗೆ ಭೌಗೋಳಿಕ ಸೂಚಕ (Geographical Indication) ಸ್ಥಾನಮಾನವನ್ನು ನೀಡಿತು. <ref>[http://www.thehindubusinessline.com/todays-paper/tp-agri-biz-and-commodity/the-unique-power-of-coir/article1667738.ece Geographical Indication status to Alleppey Coir]</ref><ref>https://en.wikipedia.org/wiki/Alleppy_Coir</ref>
== ಮುಖ್ಯ ಉತ್ಪನ್ನಗಳು ==
* ತೆಂಗಿನ ನಾರಿನ ಹಾಸಿಗೆ
* ತೆಂಗಿನ ನಾರಿನ ಚಾಪೆ
* ತೆಂಗಿನ ನಾರಿನ ಕಾರ್ಪೆಟ್
== ಇತಿಹಾಸ ==
ಅಲಪ್ಪುಳದಲ್ಲಿ ತೆಂಗಿನ ನಾರು ಉತ್ಪಾದನೆಯು ಶತಮಾನಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಅರಬ್ ಪ್ರವಾಸಿಗರ ಪ್ರವಾಸ ಕಥನಗಳಲ್ಲಿ ಹಾಗೂ ರಾಮಾಯಣದಂತಹ ಪುರಾಣ ಗ್ರಂಥಗಳಲ್ಲಿ ತೆಂಗಿನ ನಾರಿನ ಉಲ್ಲೇಖಗಳು ಕಂಡುಬರುತ್ತವೆ.<ref>{{Cite web |title=History {{!}} Coirboard |url=http://coirboard.gov.in/?page_id=58 |access-date=2022-05-30 |language=en-US}}</ref>
19ನೇ ಶತಮಾನದ ಮಧ್ಯಭಾಗದವರೆಗೆ ಅಲಪ್ಪುಳದಲ್ಲಿ ತೆಂಗಿನ ನಾರು ಉತ್ಪಾದನೆಯು ಯಾಂತ್ರೀಕರಣವಿಲ್ಲದೆ ಮತ್ತು ಅಸಂಘಟಿತ ರೀತಿಯಲ್ಲಿ ನಡೆಯುತ್ತಿತ್ತು. 1859ರಲ್ಲಿ ಐರಿಷ್-ಅಮೆರಿಕನ್ ಉದ್ಯಮಿ ಜೇಮ್ಸ್ ಡ್ಯಾರಾಗ್ ಅವರು ಅಲೆಪ್ಪಿಯಲ್ಲಿ ಭಾರತದ ಮೊದಲ ತೆಂಗಿನ ನಾರು ಕಾರ್ಖಾನೆಯಾದ Darragh Smail & Companyಯನ್ನು ಸ್ಥಾಪಿಸಿದರು. ಅಮೆರಿಕನ್ ಇಂಗ್ಲಿಷ್ನಲ್ಲಿ ತೆಂಗಿನ ನಾರನ್ನು "Cocoa Mats" ಎಂದು ಕರೆಯಲಾಗುತ್ತಿತ್ತು. Darragh Smail & Co. Ltd. ಸಂಸ್ಥೆಯ ಕಚೇರಿ ಮತ್ತು ಮಾರಾಟ ಮಳಿಗೆಗಳು ನ್ಯೂಯಾರ್ಕ್ ನಗರದ 177, ವಾಟರ್ ಸ್ಟ್ರೀಟ್ನಲ್ಲಿ ಇದ್ದವು.<ref>[http://1.bp.blogspot.com/-E7b7IZshb2U/VBRBQZUz02I/AAAAAAAAIKk/5qRx-Km2J5Y/s1600/ds.jpg Darragh Smail & Company]</ref>
ಮುಂದಿನ ಒಂದು ಶತಮಾನದಲ್ಲಿ ಅನೇಕ ಪ್ರಮುಖ ಯುರೋಪಿಯನ್ ಕಂಪನಿಗಳು ಅಲಪ್ಪುಳದಿಂದ ತೆಂಗಿನ ನಾರಿನ ಉತ್ಪನ್ನಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದವು. ಅವುಗಳಲ್ಲಿ Aspinwall & Co., Pierce Lesley & Co. Ltd., William Goodacre & Sons India Pvt. Ltd. ಮತ್ತು Volkart Brothers ಪ್ರಮುಖವಾಗಿದ್ದವು.
1940ರ ದಶಕದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಟ್ರಾವಂಕೂರ್ ಪ್ರದೇಶದಲ್ಲಿನ ಕಾರ್ಮಿಕ ಚಳವಳಿಯ ಪರಿಣಾಮವಾಗಿ ಯುರೋಪಿಯನ್ ಕಂಪನಿಗಳು ಈ ಪ್ರದೇಶದಿಂದ ಹೊರನಡೆದವು. ಇದರ ನಂತರ ತೆಂಗಿನ ನಾರು ಉತ್ಪಾದನೆಯ ವಿಕೇಂದ್ರೀಕರಣ ನಡೆಯಿತು.
ಪ್ರಸ್ತುತ, Coir Board of India ತೆಂಗಿನ ನಾರು ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ನಿಯಂತ್ರಿಸುವ ಪ್ರಮುಖ ಸಂಸ್ಥೆಯಾಗಿದೆ.
== ಉಲ್ಲೇಖಗಳು ==
0cbtfilp5zdhtecyco2zdg0ti4o17pe
ಅರನ್ಮುಳ ಕನ್ನಡಿ
0
180126
1379580
2026-08-09T08:34:53Z
Santhosh Notagar99
82732
ಹೊಸ ಪುಟ: '''ಅರನ್ಮುಳ ಕನ್ನಡಿ''' ಎಂದರೆ ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಅರನ್ಮುಳ ಎಂಬ ಸಣ್ಣ ಪಟ್ಟಣದಲ್ಲಿ ಕೈಯಿಂದ ತಯಾರಿಸಲಾಗುವ ಲೋಹದ ಮಿಶ್ರಲೋಹದಿಂದ ಮಾಡಿದ ಮುಂಭಾಗದ ಪ್ರತಿಫಲನ ಕನ್ನಡಿ. ಇದು ಸಾಮಾನ್ಯ ಗಾಜಿನ ಕನ್ನ...
1379580
wikitext
text/x-wiki
'''ಅರನ್ಮುಳ ಕನ್ನಡಿ''' ಎಂದರೆ ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಅರನ್ಮುಳ ಎಂಬ ಸಣ್ಣ ಪಟ್ಟಣದಲ್ಲಿ ಕೈಯಿಂದ ತಯಾರಿಸಲಾಗುವ ಲೋಹದ ಮಿಶ್ರಲೋಹದಿಂದ ಮಾಡಿದ ಮುಂಭಾಗದ ಪ್ರತಿಫಲನ ಕನ್ನಡಿ. ಇದು ಸಾಮಾನ್ಯ ಗಾಜಿನ ಕನ್ನಡಿಗಳಿಗಿಂತ ಭಿನ್ನವಾದ ವಿಶಿಷ್ಟ ಸಾಂಪ್ರದಾಯಿಕ ಕನ್ನಡಿಯಾಗಿದೆ.
== ವಿವರಣೆ ==
ಸಾಮಾನ್ಯವಾಗಿ ಬೆಳ್ಳಿಯ ಲೇಪನ ಹೊಂದಿರುವ ಗಾಜಿನ ಕನ್ನಡಿಗಳಿಗಿಂತ ಭಿನ್ನವಾಗಿ, ಅರನ್ಮುಳ ಕನ್ನಡಿ ಲೋಹದ ಮಿಶ್ರಲೋಹದಿಂದ ತಯಾರಿಸಲಾದ ಮುಂಭಾಗದ ಪ್ರತಿಫಲನ ಕನ್ನಡಿಯಾಗಿದೆ. ಇದರಿಂದ ಹಿಂಭಾಗದ ಪ್ರತಿಫಲನ ಹೊಂದಿರುವ ಸಾಮಾನ್ಯ ಕನ್ನಡಿಗಳಲ್ಲಿ ಕಂಡುಬರುವ ದ್ವಿತೀಯ ಪ್ರತಿಫಲನ ಮತ್ತು ಚಿತ್ರ ವಿರೂಪತೆಗಳನ್ನು ತಪ್ಪಿಸಬಹುದು. ಅರನ್ಮುಳದಲ್ಲಿ ಒಂದು ವಿಸ್ತೃತ ಕುಟುಂಬವು ಈ ಕನ್ನಡಿಗಳನ್ನು ತಯಾರಿಸುತ್ತಿದೆ.
ಈ ಕನ್ನಡಿಯಲ್ಲಿ ಬಳಸುವ ನಿಖರವಾದ ಲೋಹಗಳ ಸಂಯೋಜನೆಯನ್ನು ಕುಟುಂಬದ ರಹಸ್ಯವಾಗಿ ಕಾಪಾಡಿಕೊಳ್ಳಲಾಗಿದೆ. ಲೋಹಶಾಸ್ತ್ರಜ್ಞರ ಪ್ರಕಾರ, ಈ ಮಿಶ್ರಲೋಹವು ತಾಮ್ರ ಮತ್ತು ತವರಿನ ಸಂಯೋಜನೆಯಾಗಿರಬಹುದು. ಆದ್ದರಿಂದ ಇದನ್ನು ಕಂಚಿನ ಕನ್ನಡಿಯ ಒಂದು ವಿಧವೆಂದು ಪರಿಗಣಿಸಲಾಗುತ್ತದೆ.
ಕನ್ನಡಿಯ ಪ್ರತಿಫಲನ ಮೇಲ್ಮೈಯನ್ನು ಪಡೆಯಲು ಅದನ್ನು ಹಲವಾರು ದಿನಗಳ ಕಾಲ ಹೊಳಪು ಮಾಡಲಾಗುತ್ತದೆ. ಇದಕ್ಕಾಗಿ ಮರೊಟ್ಟಿ (Hydnocarpus pentandrus) ಬೀಜಗಳಿಂದ ತೆಗೆದ ಎಣ್ಣೆಯೊಂದಿಗೆ ಅಕ್ಕಿಯ ಹೊಟ್ಟು ಬೆರೆಸಿ ತಯಾರಿಸಿದ ಅಪಘರ್ಷಕ ಪೇಸ್ಟ್ ಅನ್ನು ಬಳಸಲಾಗುತ್ತದೆ.
== ಸಾಂಸ್ಕೃತಿಕ ಮಹತ್ವ ==
ಅರನ್ಮುಳ ಕನ್ನಡಿಯ ಮೂಲವು ಅರನ್ಮುಳ ಪಾರ್ಥಸಾರಥಿ ದೇವಸ್ಥಾನದೊಂದಿಗೆ ಸಂಬಂಧ ಹೊಂದಿದೆ. ದಂತಕಥೆಯ ಪ್ರಕಾರ, ಹಲವು ಶತಮಾನಗಳ ಹಿಂದೆ ರಾಜಮನೆತನದ ಮುಖ್ಯಸ್ಥರು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಿಂದ ಎಂಟು ಕುಟುಂಬಗಳ ದೇವಾಲಯದ ಕುಶಲಕರ್ಮಿಗಳು ಮತ್ತು ಕರಕುಶಲಗಾರರನ್ನು ಅರನ್ಮುಳಕ್ಕೆ ಕರೆತಂದು ದೇವಸ್ಥಾನದಲ್ಲಿ ಕನ್ನಡಿಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿಸಿದರು. ಅರನ್ಮುಳದಲ್ಲಿ ನೆಲೆಸಿದ್ದ ತಮಿಳು ಕಮ್ಮಾಳರ್ ಕುಟುಂಬಗಳು ಈ ಕನ್ನಡಿಯನ್ನು ತಯಾರಿಸುವ ತಂತ್ರವನ್ನು ರಹಸ್ಯವಾಗಿ ಸಂರಕ್ಷಿಸಿಕೊಂಡು ಬಂದವು. ಪ್ರಸ್ತುತ ತಿರುವನಂತಪುರದಲ್ಲಿರುವ ಕಾಲೇಜ್ ಆಫ್ ಫೈನ್ ಆರ್ಟ್ಸ್ನಲ್ಲಿಯೂ ಅರನ್ಮುಳ ಕನ್ನಡಿಯನ್ನು ತಯಾರಿಸಲಾಗುತ್ತದೆ.
ಈ ವಿಶಿಷ್ಟ ಕನ್ನಡಿಗಳು ಕೇರಳದ ಶ್ರೀಮಂತ ಸಾಂಸ್ಕೃತಿಕ ಮತ್ತು ಲೋಹಶಾಸ್ತ್ರೀಯ ಪರಂಪರೆಯ ಪ್ರತೀಕವಾಗಿವೆ. ಅವುಗಳಿಗೆ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವಿದ್ದು, ಅದೃಷ್ಟವನ್ನು ತರುತ್ತವೆ ಎಂಬ ನಂಬಿಕೆಯೂ ಇದೆ. ಮದುವೆ ಸಮಾರಂಭದ ಸ್ಥಳಕ್ಕೆ ವಧುವಿನ ಪ್ರವೇಶದ ಸಂದರ್ಭದಲ್ಲಿ ಬಳಸುವ ಅಷ್ಟಮಂಗಲ ಅಥವಾ ಅಷ್ಟಮಂಗಲ್ಯದ ಎಂಟು ಶುಭ ವಸ್ತುಗಳಲ್ಲಿ ಅರನ್ಮುಳ ಕನ್ನಡಿಯನ್ನೂ ಒಂದಾಗಿ ಪರಿಗಣಿಸಲಾಗುತ್ತದೆ.
2017ರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಹ್ರೇನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ರಾಜ ಹಮದ್ ಬಿನ್ ಈಸಾ ಅಲ್ ಖಲೀಫಾ ಅವರಿಗೆ ಅರನ್ಮುಳ ಕನ್ನಡಿಯನ್ನು ಉಡುಗೊರೆಯಾಗಿ ನೀಡಿದರು.
ಲಂಡನ್ನ ಬ್ರಿಟಿಷ್ ಮ್ಯೂಸಿಯಂನ ಸಂಗ್ರಹದಲ್ಲಿಯೂ ಸುಮಾರು 45 ಸೆಂಟಿಮೀಟರ್ ಎತ್ತರದ ಅರನ್ಮುಳ ಕನ್ನಡಿಯೊಂದು ಇದೆ. ಅರನ್ಮುಳ ಕನ್ನಡಿಗೆ 2004–05ರಲ್ಲಿ ಭೌಗೋಳಿಕ ಸೂಚಕ (GI) ಮಾನ್ಯತೆ ದೊರೆಯಿತು.
fu0rmdcf0epr1pwv2qcdy21uvjs5ynj
1379581
1379580
2026-08-09T08:35:46Z
Santhosh Notagar99
82732
1379581
wikitext
text/x-wiki
{{Short description|Indian handmade metal-alloy mirrors}}
{{Use dmy dates|date=July 2017}}
[[File:Aranmula mirror high quality bronze mirror.jpg|thumb|New Aranmula Kannadi]]
[[File:Aranmula kannadi.jpg|thumb|{{lang|ml-Latn|Aranmula kannadi}}]]
[[File:ARANMULA KANNADI RAW.jpg|thumb|{{lang|ml-Latn|Aranmula kannadi}} in its raw, unpolished form]]
[[File:Aranmula Mirrors.jpg|thumb|{{lang|ml-Latn|Aranmula kannadi}} in various etched brass frames on display]]
'''ಅರನ್ಮುಳ ಕನ್ನಡಿ''' ಎಂದರೆ ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಅರನ್ಮುಳ ಎಂಬ ಸಣ್ಣ ಪಟ್ಟಣದಲ್ಲಿ ಕೈಯಿಂದ ತಯಾರಿಸಲಾಗುವ ಲೋಹದ ಮಿಶ್ರಲೋಹದಿಂದ ಮಾಡಿದ ಮುಂಭಾಗದ ಪ್ರತಿಫಲನ ಕನ್ನಡಿ. ಇದು ಸಾಮಾನ್ಯ ಗಾಜಿನ ಕನ್ನಡಿಗಳಿಗಿಂತ ಭಿನ್ನವಾದ ವಿಶಿಷ್ಟ ಸಾಂಪ್ರದಾಯಿಕ ಕನ್ನಡಿಯಾಗಿದೆ.
== ವಿವರಣೆ ==
ಸಾಮಾನ್ಯವಾಗಿ ಬೆಳ್ಳಿಯ ಲೇಪನ ಹೊಂದಿರುವ ಗಾಜಿನ ಕನ್ನಡಿಗಳಿಗಿಂತ ಭಿನ್ನವಾಗಿ, ಅರನ್ಮುಳ ಕನ್ನಡಿ ಲೋಹದ ಮಿಶ್ರಲೋಹದಿಂದ ತಯಾರಿಸಲಾದ ಮುಂಭಾಗದ ಪ್ರತಿಫಲನ ಕನ್ನಡಿಯಾಗಿದೆ. ಇದರಿಂದ ಹಿಂಭಾಗದ ಪ್ರತಿಫಲನ ಹೊಂದಿರುವ ಸಾಮಾನ್ಯ ಕನ್ನಡಿಗಳಲ್ಲಿ ಕಂಡುಬರುವ ದ್ವಿತೀಯ ಪ್ರತಿಫಲನ ಮತ್ತು ಚಿತ್ರ ವಿರೂಪತೆಗಳನ್ನು ತಪ್ಪಿಸಬಹುದು. ಅರನ್ಮುಳದಲ್ಲಿ ಒಂದು ವಿಸ್ತೃತ ಕುಟುಂಬವು ಈ ಕನ್ನಡಿಗಳನ್ನು ತಯಾರಿಸುತ್ತಿದೆ.
ಈ ಕನ್ನಡಿಯಲ್ಲಿ ಬಳಸುವ ನಿಖರವಾದ ಲೋಹಗಳ ಸಂಯೋಜನೆಯನ್ನು ಕುಟುಂಬದ ರಹಸ್ಯವಾಗಿ ಕಾಪಾಡಿಕೊಳ್ಳಲಾಗಿದೆ. ಲೋಹಶಾಸ್ತ್ರಜ್ಞರ ಪ್ರಕಾರ, ಈ ಮಿಶ್ರಲೋಹವು ತಾಮ್ರ ಮತ್ತು ತವರಿನ ಸಂಯೋಜನೆಯಾಗಿರಬಹುದು. ಆದ್ದರಿಂದ ಇದನ್ನು ಕಂಚಿನ ಕನ್ನಡಿಯ ಒಂದು ವಿಧವೆಂದು ಪರಿಗಣಿಸಲಾಗುತ್ತದೆ.
ಕನ್ನಡಿಯ ಪ್ರತಿಫಲನ ಮೇಲ್ಮೈಯನ್ನು ಪಡೆಯಲು ಅದನ್ನು ಹಲವಾರು ದಿನಗಳ ಕಾಲ ಹೊಳಪು ಮಾಡಲಾಗುತ್ತದೆ. ಇದಕ್ಕಾಗಿ ಮರೊಟ್ಟಿ (Hydnocarpus pentandrus) ಬೀಜಗಳಿಂದ ತೆಗೆದ ಎಣ್ಣೆಯೊಂದಿಗೆ ಅಕ್ಕಿಯ ಹೊಟ್ಟು ಬೆರೆಸಿ ತಯಾರಿಸಿದ ಅಪಘರ್ಷಕ ಪೇಸ್ಟ್ ಅನ್ನು ಬಳಸಲಾಗುತ್ತದೆ.
== ಸಾಂಸ್ಕೃತಿಕ ಮಹತ್ವ ==
ಅರನ್ಮುಳ ಕನ್ನಡಿಯ ಮೂಲವು ಅರನ್ಮುಳ ಪಾರ್ಥಸಾರಥಿ ದೇವಸ್ಥಾನದೊಂದಿಗೆ ಸಂಬಂಧ ಹೊಂದಿದೆ. ದಂತಕಥೆಯ ಪ್ರಕಾರ, ಹಲವು ಶತಮಾನಗಳ ಹಿಂದೆ ರಾಜಮನೆತನದ ಮುಖ್ಯಸ್ಥರು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಿಂದ ಎಂಟು ಕುಟುಂಬಗಳ ದೇವಾಲಯದ ಕುಶಲಕರ್ಮಿಗಳು ಮತ್ತು ಕರಕುಶಲಗಾರರನ್ನು ಅರನ್ಮುಳಕ್ಕೆ ಕರೆತಂದು ದೇವಸ್ಥಾನದಲ್ಲಿ ಕನ್ನಡಿಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿಸಿದರು. ಅರನ್ಮುಳದಲ್ಲಿ ನೆಲೆಸಿದ್ದ ತಮಿಳು ಕಮ್ಮಾಳರ್ ಕುಟುಂಬಗಳು ಈ ಕನ್ನಡಿಯನ್ನು ತಯಾರಿಸುವ ತಂತ್ರವನ್ನು ರಹಸ್ಯವಾಗಿ ಸಂರಕ್ಷಿಸಿಕೊಂಡು ಬಂದವು. ಪ್ರಸ್ತುತ ತಿರುವನಂತಪುರದಲ್ಲಿರುವ ಕಾಲೇಜ್ ಆಫ್ ಫೈನ್ ಆರ್ಟ್ಸ್ನಲ್ಲಿಯೂ ಅರನ್ಮುಳ ಕನ್ನಡಿಯನ್ನು ತಯಾರಿಸಲಾಗುತ್ತದೆ.
ಈ ವಿಶಿಷ್ಟ ಕನ್ನಡಿಗಳು ಕೇರಳದ ಶ್ರೀಮಂತ ಸಾಂಸ್ಕೃತಿಕ ಮತ್ತು ಲೋಹಶಾಸ್ತ್ರೀಯ ಪರಂಪರೆಯ ಪ್ರತೀಕವಾಗಿವೆ. ಅವುಗಳಿಗೆ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವಿದ್ದು, ಅದೃಷ್ಟವನ್ನು ತರುತ್ತವೆ ಎಂಬ ನಂಬಿಕೆಯೂ ಇದೆ. ಮದುವೆ ಸಮಾರಂಭದ ಸ್ಥಳಕ್ಕೆ ವಧುವಿನ ಪ್ರವೇಶದ ಸಂದರ್ಭದಲ್ಲಿ ಬಳಸುವ ಅಷ್ಟಮಂಗಲ ಅಥವಾ ಅಷ್ಟಮಂಗಲ್ಯದ ಎಂಟು ಶುಭ ವಸ್ತುಗಳಲ್ಲಿ ಅರನ್ಮುಳ ಕನ್ನಡಿಯನ್ನೂ ಒಂದಾಗಿ ಪರಿಗಣಿಸಲಾಗುತ್ತದೆ.
2017ರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಹ್ರೇನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ರಾಜ ಹಮದ್ ಬಿನ್ ಈಸಾ ಅಲ್ ಖಲೀಫಾ ಅವರಿಗೆ ಅರನ್ಮುಳ ಕನ್ನಡಿಯನ್ನು ಉಡುಗೊರೆಯಾಗಿ ನೀಡಿದರು.
ಲಂಡನ್ನ ಬ್ರಿಟಿಷ್ ಮ್ಯೂಸಿಯಂನ ಸಂಗ್ರಹದಲ್ಲಿಯೂ ಸುಮಾರು 45 ಸೆಂಟಿಮೀಟರ್ ಎತ್ತರದ ಅರನ್ಮುಳ ಕನ್ನಡಿಯೊಂದು ಇದೆ. ಅರನ್ಮುಳ ಕನ್ನಡಿಗೆ 2004–05ರಲ್ಲಿ ಭೌಗೋಳಿಕ ಸೂಚಕ (GI) ಮಾನ್ಯತೆ ದೊರೆಯಿತು.
9g3tu78stiz4bhng7mmnfu36k6n9r7q
1379584
1379581
2026-08-09T08:40:20Z
Santhosh Notagar99
82732
1379584
wikitext
text/x-wiki
{{Short description|Indian handmade metal-alloy mirrors}}
{{Use dmy dates|date=July 2017}}
[[File:Aranmula mirror high quality bronze mirror.jpg|thumb|ಹೊಸ ಅರನ್ಮುಳ ಕನ್ನಡಿ]]
[[File:ARANMULA KANNADI RAW.jpg|thumb|ಅರನ್ಮುಳ ಕನ್ನಡಿ - ಅದರ ಕಚ್ಚಾ, ಸಂಸ್ಕರಿಸದ ರೂಪದಲ್ಲಿ]]
'''ಅರನ್ಮುಳ ಕನ್ನಡಿ''' ಎಂದರೆ ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಅರನ್ಮುಳ ಎಂಬ ಸಣ್ಣ ಪಟ್ಟಣದಲ್ಲಿ ಕೈಯಿಂದ ತಯಾರಿಸಲಾಗುವ ಲೋಹದ ಮಿಶ್ರಲೋಹದಿಂದ ಮಾಡಿದ ಮುಂಭಾಗದ ಪ್ರತಿಫಲನ ಕನ್ನಡಿ. ಇದು ಸಾಮಾನ್ಯ ಗಾಜಿನ ಕನ್ನಡಿಗಳಿಗಿಂತ ಭಿನ್ನವಾದ ವಿಶಿಷ್ಟ ಸಾಂಪ್ರದಾಯಿಕ ಕನ್ನಡಿಯಾಗಿದೆ.
== ವಿವರಣೆ ==
ಸಾಮಾನ್ಯವಾಗಿ ಬೆಳ್ಳಿಯ ಲೇಪನ ಹೊಂದಿರುವ ಗಾಜಿನ ಕನ್ನಡಿಗಳಿಗಿಂತ ಭಿನ್ನವಾಗಿ, ಅರನ್ಮುಳ ಕನ್ನಡಿ ಲೋಹದ ಮಿಶ್ರಲೋಹದಿಂದ ತಯಾರಿಸಲಾದ ಮುಂಭಾಗದ ಪ್ರತಿಫಲನ ಕನ್ನಡಿಯಾಗಿದೆ. ಇದರಿಂದ ಹಿಂಭಾಗದ ಪ್ರತಿಫಲನ ಹೊಂದಿರುವ ಸಾಮಾನ್ಯ ಕನ್ನಡಿಗಳಲ್ಲಿ ಕಂಡುಬರುವ ದ್ವಿತೀಯ ಪ್ರತಿಫಲನ ಮತ್ತು ಚಿತ್ರ ವಿರೂಪತೆಗಳನ್ನು ತಪ್ಪಿಸಬಹುದು. ಅರನ್ಮುಳದಲ್ಲಿ ಒಂದು ವಿಸ್ತೃತ ಕುಟುಂಬವು ಈ ಕನ್ನಡಿಗಳನ್ನು ತಯಾರಿಸುತ್ತಿದೆ.
ಈ ಕನ್ನಡಿಯಲ್ಲಿ ಬಳಸುವ ನಿಖರವಾದ ಲೋಹಗಳ ಸಂಯೋಜನೆಯನ್ನು ಕುಟುಂಬದ ರಹಸ್ಯವಾಗಿ ಕಾಪಾಡಿಕೊಳ್ಳಲಾಗಿದೆ. ಲೋಹಶಾಸ್ತ್ರಜ್ಞರ ಪ್ರಕಾರ, ಈ ಮಿಶ್ರಲೋಹವು ತಾಮ್ರ ಮತ್ತು ತವರಿನ ಸಂಯೋಜನೆಯಾಗಿರಬಹುದು. ಆದ್ದರಿಂದ ಇದನ್ನು ಕಂಚಿನ ಕನ್ನಡಿಯ ಒಂದು ವಿಧವೆಂದು ಪರಿಗಣಿಸಲಾಗುತ್ತದೆ.
ಕನ್ನಡಿಯ ಪ್ರತಿಫಲನ ಮೇಲ್ಮೈಯನ್ನು ಪಡೆಯಲು ಅದನ್ನು ಹಲವಾರು ದಿನಗಳ ಕಾಲ ಹೊಳಪು ಮಾಡಲಾಗುತ್ತದೆ. ಇದಕ್ಕಾಗಿ ಮರೊಟ್ಟಿ (Hydnocarpus pentandrus) ಬೀಜಗಳಿಂದ ತೆಗೆದ ಎಣ್ಣೆಯೊಂದಿಗೆ ಅಕ್ಕಿಯ ಹೊಟ್ಟು ಬೆರೆಸಿ ತಯಾರಿಸಿದ ಅಪಘರ್ಷಕ ಪೇಸ್ಟ್ ಅನ್ನು ಬಳಸಲಾಗುತ್ತದೆ.
== ಸಾಂಸ್ಕೃತಿಕ ಮಹತ್ವ ==
ಅರನ್ಮುಳ ಕನ್ನಡಿಯ ಮೂಲವು ಅರನ್ಮುಳ ಪಾರ್ಥಸಾರಥಿ ದೇವಸ್ಥಾನದೊಂದಿಗೆ ಸಂಬಂಧ ಹೊಂದಿದೆ. ದಂತಕಥೆಯ ಪ್ರಕಾರ, ಹಲವು ಶತಮಾನಗಳ ಹಿಂದೆ ರಾಜಮನೆತನದ ಮುಖ್ಯಸ್ಥರು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಿಂದ ಎಂಟು ಕುಟುಂಬಗಳ ದೇವಾಲಯದ ಕುಶಲಕರ್ಮಿಗಳು ಮತ್ತು ಕರಕುಶಲಗಾರರನ್ನು ಅರನ್ಮುಳಕ್ಕೆ ಕರೆತಂದು ದೇವಸ್ಥಾನದಲ್ಲಿ ಕನ್ನಡಿಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿಸಿದರು. ಅರನ್ಮುಳದಲ್ಲಿ ನೆಲೆಸಿದ್ದ ತಮಿಳು ಕಮ್ಮಾಳರ್ ಕುಟುಂಬಗಳು ಈ ಕನ್ನಡಿಯನ್ನು ತಯಾರಿಸುವ ತಂತ್ರವನ್ನು ರಹಸ್ಯವಾಗಿ ಸಂರಕ್ಷಿಸಿಕೊಂಡು ಬಂದವು. ಪ್ರಸ್ತುತ ತಿರುವನಂತಪುರದಲ್ಲಿರುವ ಕಾಲೇಜ್ ಆಫ್ ಫೈನ್ ಆರ್ಟ್ಸ್ನಲ್ಲಿಯೂ ಅರನ್ಮುಳ ಕನ್ನಡಿಯನ್ನು ತಯಾರಿಸಲಾಗುತ್ತದೆ.
ಈ ವಿಶಿಷ್ಟ ಕನ್ನಡಿಗಳು ಕೇರಳದ ಶ್ರೀಮಂತ ಸಾಂಸ್ಕೃತಿಕ ಮತ್ತು ಲೋಹಶಾಸ್ತ್ರೀಯ ಪರಂಪರೆಯ ಪ್ರತೀಕವಾಗಿವೆ. ಅವುಗಳಿಗೆ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವಿದ್ದು, ಅದೃಷ್ಟವನ್ನು ತರುತ್ತವೆ ಎಂಬ ನಂಬಿಕೆಯೂ ಇದೆ. ಮದುವೆ ಸಮಾರಂಭದ ಸ್ಥಳಕ್ಕೆ ವಧುವಿನ ಪ್ರವೇಶದ ಸಂದರ್ಭದಲ್ಲಿ ಬಳಸುವ ಅಷ್ಟಮಂಗಲ ಅಥವಾ ಅಷ್ಟಮಂಗಲ್ಯದ ಎಂಟು ಶುಭ ವಸ್ತುಗಳಲ್ಲಿ ಅರನ್ಮುಳ ಕನ್ನಡಿಯನ್ನೂ ಒಂದಾಗಿ ಪರಿಗಣಿಸಲಾಗುತ್ತದೆ.
2017ರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಹ್ರೇನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ರಾಜ ಹಮದ್ ಬಿನ್ ಈಸಾ ಅಲ್ ಖಲೀಫಾ ಅವರಿಗೆ ಅರನ್ಮುಳ ಕನ್ನಡಿಯನ್ನು ಉಡುಗೊರೆಯಾಗಿ ನೀಡಿದರು.
ಲಂಡನ್ನ ಬ್ರಿಟಿಷ್ ಮ್ಯೂಸಿಯಂನ ಸಂಗ್ರಹದಲ್ಲಿಯೂ ಸುಮಾರು 45 ಸೆಂಟಿಮೀಟರ್ ಎತ್ತರದ ಅರನ್ಮುಳ ಕನ್ನಡಿಯೊಂದು ಇದೆ. ಅರನ್ಮುಳ ಕನ್ನಡಿಗೆ 2004–05ರಲ್ಲಿ ಭೌಗೋಳಿಕ ಸೂಚಕ (GI) ಮಾನ್ಯತೆ ದೊರೆಯಿತು.
jzqlpvnsq7pkfzz0jw6pvlgx8uvpba8
1379585
1379584
2026-08-09T08:42:59Z
Santhosh Notagar99
82732
1379585
wikitext
text/x-wiki
{{Short description|Indian handmade metal-alloy mirrors}}
{{Use dmy dates|date=July 2017}}
[[File:Aranmula mirror high quality bronze mirror.jpg|thumb|ಹೊಸ ಅರನ್ಮುಳ ಕನ್ನಡಿ]]
[[File:ARANMULA KANNADI RAW.jpg|thumb|ಅರನ್ಮುಳ ಕನ್ನಡಿ - ಅದರ ಕಚ್ಚಾ, ಸಂಸ್ಕರಿಸದ ರೂಪದಲ್ಲಿ]]
'''ಅರನ್ಮುಳ ಕನ್ನಡಿ''' ಎಂದರೆ ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಅರನ್ಮುಳ ಎಂಬ ಸಣ್ಣ ಪಟ್ಟಣದಲ್ಲಿ ಕೈಯಿಂದ ತಯಾರಿಸಲಾಗುವ ಲೋಹದ ಮಿಶ್ರಲೋಹದಿಂದ ಮಾಡಿದ ಮುಂಭಾಗದ ಪ್ರತಿಫಲನ ಕನ್ನಡಿ. ಇದು ಸಾಮಾನ್ಯ ಗಾಜಿನ ಕನ್ನಡಿಗಳಿಗಿಂತ ಭಿನ್ನವಾದ ವಿಶಿಷ್ಟ ಸಾಂಪ್ರದಾಯಿಕ ಕನ್ನಡಿಯಾಗಿದೆ. <ref>https://aranmulakannadi.org/</ref>
== ವಿವರಣೆ ==
ಸಾಮಾನ್ಯವಾಗಿ ಬೆಳ್ಳಿಯ ಲೇಪನ ಹೊಂದಿರುವ ಗಾಜಿನ ಕನ್ನಡಿಗಳಿಗಿಂತ ಭಿನ್ನವಾಗಿ, ಅರನ್ಮುಳ ಕನ್ನಡಿ ಲೋಹದ ಮಿಶ್ರಲೋಹದಿಂದ ತಯಾರಿಸಲಾದ ಮುಂಭಾಗದ ಪ್ರತಿಫಲನ ಕನ್ನಡಿಯಾಗಿದೆ. ಇದರಿಂದ ಹಿಂಭಾಗದ ಪ್ರತಿಫಲನ ಹೊಂದಿರುವ ಸಾಮಾನ್ಯ ಕನ್ನಡಿಗಳಲ್ಲಿ ಕಂಡುಬರುವ ದ್ವಿತೀಯ ಪ್ರತಿಫಲನ ಮತ್ತು ಚಿತ್ರ ವಿರೂಪತೆಗಳನ್ನು ತಪ್ಪಿಸಬಹುದು. ಅರನ್ಮುಳದಲ್ಲಿ ಒಂದು ವಿಸ್ತೃತ ಕುಟುಂಬವು ಈ ಕನ್ನಡಿಗಳನ್ನು ತಯಾರಿಸುತ್ತಿದೆ.
ಈ ಕನ್ನಡಿಯಲ್ಲಿ ಬಳಸುವ ನಿಖರವಾದ ಲೋಹಗಳ ಸಂಯೋಜನೆಯನ್ನು ಕುಟುಂಬದ ರಹಸ್ಯವಾಗಿ ಕಾಪಾಡಿಕೊಳ್ಳಲಾಗಿದೆ. ಲೋಹಶಾಸ್ತ್ರಜ್ಞರ ಪ್ರಕಾರ, ಈ ಮಿಶ್ರಲೋಹವು ತಾಮ್ರ ಮತ್ತು ತವರಿನ ಸಂಯೋಜನೆಯಾಗಿರಬಹುದು. ಆದ್ದರಿಂದ ಇದನ್ನು ಕಂಚಿನ ಕನ್ನಡಿಯ ಒಂದು ವಿಧವೆಂದು ಪರಿಗಣಿಸಲಾಗುತ್ತದೆ.
ಕನ್ನಡಿಯ ಪ್ರತಿಫಲನ ಮೇಲ್ಮೈಯನ್ನು ಪಡೆಯಲು ಅದನ್ನು ಹಲವಾರು ದಿನಗಳ ಕಾಲ ಹೊಳಪು ಮಾಡಲಾಗುತ್ತದೆ. ಇದಕ್ಕಾಗಿ ಮರೊಟ್ಟಿ (Hydnocarpus pentandrus) ಬೀಜಗಳಿಂದ ತೆಗೆದ ಎಣ್ಣೆಯೊಂದಿಗೆ ಅಕ್ಕಿಯ ಹೊಟ್ಟು ಬೆರೆಸಿ ತಯಾರಿಸಿದ ಅಪಘರ್ಷಕ ಪೇಸ್ಟ್ ಅನ್ನು ಬಳಸಲಾಗುತ್ತದೆ.
== ಸಾಂಸ್ಕೃತಿಕ ಮಹತ್ವ ==
ಅರನ್ಮುಳ ಕನ್ನಡಿಯ ಮೂಲವು ಅರನ್ಮುಳ ಪಾರ್ಥಸಾರಥಿ ದೇವಸ್ಥಾನದೊಂದಿಗೆ ಸಂಬಂಧ ಹೊಂದಿದೆ. ದಂತಕಥೆಯ ಪ್ರಕಾರ, ಹಲವು ಶತಮಾನಗಳ ಹಿಂದೆ ರಾಜಮನೆತನದ ಮುಖ್ಯಸ್ಥರು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಿಂದ ಎಂಟು ಕುಟುಂಬಗಳ ದೇವಾಲಯದ ಕುಶಲಕರ್ಮಿಗಳು ಮತ್ತು ಕರಕುಶಲಗಾರರನ್ನು ಅರನ್ಮುಳಕ್ಕೆ ಕರೆತಂದು ದೇವಸ್ಥಾನದಲ್ಲಿ ಕನ್ನಡಿಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿಸಿದರು. ಅರನ್ಮುಳದಲ್ಲಿ ನೆಲೆಸಿದ್ದ ತಮಿಳು ಕಮ್ಮಾಳರ್ ಕುಟುಂಬಗಳು ಈ ಕನ್ನಡಿಯನ್ನು ತಯಾರಿಸುವ ತಂತ್ರವನ್ನು ರಹಸ್ಯವಾಗಿ ಸಂರಕ್ಷಿಸಿಕೊಂಡು ಬಂದವು. ಪ್ರಸ್ತುತ ತಿರುವನಂತಪುರದಲ್ಲಿರುವ ಕಾಲೇಜ್ ಆಫ್ ಫೈನ್ ಆರ್ಟ್ಸ್ನಲ್ಲಿಯೂ ಅರನ್ಮುಳ ಕನ್ನಡಿಯನ್ನು ತಯಾರಿಸಲಾಗುತ್ತದೆ.
ಈ ವಿಶಿಷ್ಟ ಕನ್ನಡಿಗಳು ಕೇರಳದ ಶ್ರೀಮಂತ ಸಾಂಸ್ಕೃತಿಕ ಮತ್ತು ಲೋಹಶಾಸ್ತ್ರೀಯ ಪರಂಪರೆಯ ಪ್ರತೀಕವಾಗಿವೆ. ಅವುಗಳಿಗೆ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವಿದ್ದು, ಅದೃಷ್ಟವನ್ನು ತರುತ್ತವೆ ಎಂಬ ನಂಬಿಕೆಯೂ ಇದೆ. ಮದುವೆ ಸಮಾರಂಭದ ಸ್ಥಳಕ್ಕೆ ವಧುವಿನ ಪ್ರವೇಶದ ಸಂದರ್ಭದಲ್ಲಿ ಬಳಸುವ ಅಷ್ಟಮಂಗಲ ಅಥವಾ ಅಷ್ಟಮಂಗಲ್ಯದ ಎಂಟು ಶುಭ ವಸ್ತುಗಳಲ್ಲಿ ಅರನ್ಮುಳ ಕನ್ನಡಿಯನ್ನೂ ಒಂದಾಗಿ ಪರಿಗಣಿಸಲಾಗುತ್ತದೆ.
2017ರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಹ್ರೇನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ರಾಜ ಹಮದ್ ಬಿನ್ ಈಸಾ ಅಲ್ ಖಲೀಫಾ ಅವರಿಗೆ ಅರನ್ಮುಳ ಕನ್ನಡಿಯನ್ನು ಉಡುಗೊರೆಯಾಗಿ ನೀಡಿದರು.
ಲಂಡನ್ನ ಬ್ರಿಟಿಷ್ ಮ್ಯೂಸಿಯಂನ ಸಂಗ್ರಹದಲ್ಲಿಯೂ ಸುಮಾರು 45 ಸೆಂಟಿಮೀಟರ್ ಎತ್ತರದ ಅರನ್ಮುಳ ಕನ್ನಡಿಯೊಂದು ಇದೆ. ಅರನ್ಮುಳ ಕನ್ನಡಿಗೆ 2004–05ರಲ್ಲಿ ಭೌಗೋಳಿಕ ಸೂಚಕ (GI) ಮಾನ್ಯತೆ ದೊರೆಯಿತು.
rmgyi80j9c0yhp9tnm000vq416hwd1k
1379586
1379585
2026-08-09T08:43:38Z
Santhosh Notagar99
82732
1379586
wikitext
text/x-wiki
{{Short description|Indian handmade metal-alloy mirrors}}
{{Use dmy dates|date=July 2017}}
[[File:Aranmula mirror high quality bronze mirror.jpg|thumb|ಹೊಸ ಅರನ್ಮುಳ ಕನ್ನಡಿ]]
[[File:ARANMULA KANNADI RAW.jpg|thumb|ಅರನ್ಮುಳ ಕನ್ನಡಿ - ಅದರ ಕಚ್ಚಾ, ಸಂಸ್ಕರಿಸದ ರೂಪದಲ್ಲಿ]]
'''ಅರನ್ಮುಳ ಕನ್ನಡಿ''' ಎಂದರೆ ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಅರನ್ಮುಳ ಎಂಬ ಸಣ್ಣ ಪಟ್ಟಣದಲ್ಲಿ ಕೈಯಿಂದ ತಯಾರಿಸಲಾಗುವ ಲೋಹದ ಮಿಶ್ರಲೋಹದಿಂದ ಮಾಡಿದ ಮುಂಭಾಗದ ಪ್ರತಿಫಲನ ಕನ್ನಡಿ. ಇದು ಸಾಮಾನ್ಯ ಗಾಜಿನ ಕನ್ನಡಿಗಳಿಗಿಂತ ಭಿನ್ನವಾದ ವಿಶಿಷ್ಟ ಸಾಂಪ್ರದಾಯಿಕ ಕನ್ನಡಿಯಾಗಿದೆ. <ref>https://aranmulakannadi.org/</ref>
== ವಿವರಣೆ ==
ಸಾಮಾನ್ಯವಾಗಿ ಬೆಳ್ಳಿಯ ಲೇಪನ ಹೊಂದಿರುವ ಗಾಜಿನ ಕನ್ನಡಿಗಳಿಗಿಂತ ಭಿನ್ನವಾಗಿ, ಅರನ್ಮುಳ ಕನ್ನಡಿ ಲೋಹದ ಮಿಶ್ರಲೋಹದಿಂದ ತಯಾರಿಸಲಾದ ಮುಂಭಾಗದ ಪ್ರತಿಫಲನ ಕನ್ನಡಿಯಾಗಿದೆ. ಇದರಿಂದ ಹಿಂಭಾಗದ ಪ್ರತಿಫಲನ ಹೊಂದಿರುವ ಸಾಮಾನ್ಯ ಕನ್ನಡಿಗಳಲ್ಲಿ ಕಂಡುಬರುವ ದ್ವಿತೀಯ ಪ್ರತಿಫಲನ ಮತ್ತು ಚಿತ್ರ ವಿರೂಪತೆಗಳನ್ನು ತಪ್ಪಿಸಬಹುದು. ಅರನ್ಮುಳದಲ್ಲಿ ಒಂದು ವಿಸ್ತೃತ ಕುಟುಂಬವು ಈ ಕನ್ನಡಿಗಳನ್ನು ತಯಾರಿಸುತ್ತಿದೆ.
ಈ ಕನ್ನಡಿಯಲ್ಲಿ ಬಳಸುವ ನಿಖರವಾದ ಲೋಹಗಳ ಸಂಯೋಜನೆಯನ್ನು ಕುಟುಂಬದ ರಹಸ್ಯವಾಗಿ ಕಾಪಾಡಿಕೊಳ್ಳಲಾಗಿದೆ. ಲೋಹಶಾಸ್ತ್ರಜ್ಞರ ಪ್ರಕಾರ, ಈ ಮಿಶ್ರಲೋಹವು ತಾಮ್ರ ಮತ್ತು ತವರಿನ ಸಂಯೋಜನೆಯಾಗಿರಬಹುದು. ಆದ್ದರಿಂದ ಇದನ್ನು ಕಂಚಿನ ಕನ್ನಡಿಯ ಒಂದು ವಿಧವೆಂದು ಪರಿಗಣಿಸಲಾಗುತ್ತದೆ.<ref>https://en.wikipedia.org/wiki/Aranmula_kannadi</ref>
ಕನ್ನಡಿಯ ಪ್ರತಿಫಲನ ಮೇಲ್ಮೈಯನ್ನು ಪಡೆಯಲು ಅದನ್ನು ಹಲವಾರು ದಿನಗಳ ಕಾಲ ಹೊಳಪು ಮಾಡಲಾಗುತ್ತದೆ. ಇದಕ್ಕಾಗಿ ಮರೊಟ್ಟಿ (Hydnocarpus pentandrus) ಬೀಜಗಳಿಂದ ತೆಗೆದ ಎಣ್ಣೆಯೊಂದಿಗೆ ಅಕ್ಕಿಯ ಹೊಟ್ಟು ಬೆರೆಸಿ ತಯಾರಿಸಿದ ಅಪಘರ್ಷಕ ಪೇಸ್ಟ್ ಅನ್ನು ಬಳಸಲಾಗುತ್ತದೆ.
== ಸಾಂಸ್ಕೃತಿಕ ಮಹತ್ವ ==
ಅರನ್ಮುಳ ಕನ್ನಡಿಯ ಮೂಲವು ಅರನ್ಮುಳ ಪಾರ್ಥಸಾರಥಿ ದೇವಸ್ಥಾನದೊಂದಿಗೆ ಸಂಬಂಧ ಹೊಂದಿದೆ. ದಂತಕಥೆಯ ಪ್ರಕಾರ, ಹಲವು ಶತಮಾನಗಳ ಹಿಂದೆ ರಾಜಮನೆತನದ ಮುಖ್ಯಸ್ಥರು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಿಂದ ಎಂಟು ಕುಟುಂಬಗಳ ದೇವಾಲಯದ ಕುಶಲಕರ್ಮಿಗಳು ಮತ್ತು ಕರಕುಶಲಗಾರರನ್ನು ಅರನ್ಮುಳಕ್ಕೆ ಕರೆತಂದು ದೇವಸ್ಥಾನದಲ್ಲಿ ಕನ್ನಡಿಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿಸಿದರು. ಅರನ್ಮುಳದಲ್ಲಿ ನೆಲೆಸಿದ್ದ ತಮಿಳು ಕಮ್ಮಾಳರ್ ಕುಟುಂಬಗಳು ಈ ಕನ್ನಡಿಯನ್ನು ತಯಾರಿಸುವ ತಂತ್ರವನ್ನು ರಹಸ್ಯವಾಗಿ ಸಂರಕ್ಷಿಸಿಕೊಂಡು ಬಂದವು. ಪ್ರಸ್ತುತ ತಿರುವನಂತಪುರದಲ್ಲಿರುವ ಕಾಲೇಜ್ ಆಫ್ ಫೈನ್ ಆರ್ಟ್ಸ್ನಲ್ಲಿಯೂ ಅರನ್ಮುಳ ಕನ್ನಡಿಯನ್ನು ತಯಾರಿಸಲಾಗುತ್ತದೆ.
ಈ ವಿಶಿಷ್ಟ ಕನ್ನಡಿಗಳು ಕೇರಳದ ಶ್ರೀಮಂತ ಸಾಂಸ್ಕೃತಿಕ ಮತ್ತು ಲೋಹಶಾಸ್ತ್ರೀಯ ಪರಂಪರೆಯ ಪ್ರತೀಕವಾಗಿವೆ. ಅವುಗಳಿಗೆ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವಿದ್ದು, ಅದೃಷ್ಟವನ್ನು ತರುತ್ತವೆ ಎಂಬ ನಂಬಿಕೆಯೂ ಇದೆ. ಮದುವೆ ಸಮಾರಂಭದ ಸ್ಥಳಕ್ಕೆ ವಧುವಿನ ಪ್ರವೇಶದ ಸಂದರ್ಭದಲ್ಲಿ ಬಳಸುವ ಅಷ್ಟಮಂಗಲ ಅಥವಾ ಅಷ್ಟಮಂಗಲ್ಯದ ಎಂಟು ಶುಭ ವಸ್ತುಗಳಲ್ಲಿ ಅರನ್ಮುಳ ಕನ್ನಡಿಯನ್ನೂ ಒಂದಾಗಿ ಪರಿಗಣಿಸಲಾಗುತ್ತದೆ.
2017ರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಹ್ರೇನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ರಾಜ ಹಮದ್ ಬಿನ್ ಈಸಾ ಅಲ್ ಖಲೀಫಾ ಅವರಿಗೆ ಅರನ್ಮುಳ ಕನ್ನಡಿಯನ್ನು ಉಡುಗೊರೆಯಾಗಿ ನೀಡಿದರು.
ಲಂಡನ್ನ ಬ್ರಿಟಿಷ್ ಮ್ಯೂಸಿಯಂನ ಸಂಗ್ರಹದಲ್ಲಿಯೂ ಸುಮಾರು 45 ಸೆಂಟಿಮೀಟರ್ ಎತ್ತರದ ಅರನ್ಮುಳ ಕನ್ನಡಿಯೊಂದು ಇದೆ. ಅರನ್ಮುಳ ಕನ್ನಡಿಗೆ 2004–05ರಲ್ಲಿ ಭೌಗೋಳಿಕ ಸೂಚಕ (GI) ಮಾನ್ಯತೆ ದೊರೆಯಿತು.
3o987kwidrhy82chxis1aqhg7ywdcv0
1379587
1379586
2026-08-09T08:44:10Z
Santhosh Notagar99
82732
1379587
wikitext
text/x-wiki
{{Short description|Indian handmade metal-alloy mirrors}}
{{Use dmy dates|date=July 2017}}
[[File:Aranmula mirror high quality bronze mirror.jpg|thumb|ಹೊಸ ಅರನ್ಮುಳ ಕನ್ನಡಿ]]
[[File:ARANMULA KANNADI RAW.jpg|thumb|ಅರನ್ಮುಳ ಕನ್ನಡಿ - ಅದರ ಕಚ್ಚಾ, ಸಂಸ್ಕರಿಸದ ರೂಪದಲ್ಲಿ]]
'''ಅರನ್ಮುಳ ಕನ್ನಡಿ''' ಎಂದರೆ ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಅರನ್ಮುಳ ಎಂಬ ಸಣ್ಣ ಪಟ್ಟಣದಲ್ಲಿ ಕೈಯಿಂದ ತಯಾರಿಸಲಾಗುವ ಲೋಹದ ಮಿಶ್ರಲೋಹದಿಂದ ಮಾಡಿದ ಮುಂಭಾಗದ ಪ್ರತಿಫಲನ ಕನ್ನಡಿ. ಇದು ಸಾಮಾನ್ಯ ಗಾಜಿನ ಕನ್ನಡಿಗಳಿಗಿಂತ ಭಿನ್ನವಾದ ವಿಶಿಷ್ಟ ಸಾಂಪ್ರದಾಯಿಕ ಕನ್ನಡಿಯಾಗಿದೆ. <ref>https://aranmulakannadi.org/</ref>
== ವಿವರಣೆ ==
ಸಾಮಾನ್ಯವಾಗಿ ಬೆಳ್ಳಿಯ ಲೇಪನ ಹೊಂದಿರುವ ಗಾಜಿನ ಕನ್ನಡಿಗಳಿಗಿಂತ ಭಿನ್ನವಾಗಿ, ಅರನ್ಮುಳ ಕನ್ನಡಿ ಲೋಹದ ಮಿಶ್ರಲೋಹದಿಂದ ತಯಾರಿಸಲಾದ ಮುಂಭಾಗದ ಪ್ರತಿಫಲನ ಕನ್ನಡಿಯಾಗಿದೆ. ಇದರಿಂದ ಹಿಂಭಾಗದ ಪ್ರತಿಫಲನ ಹೊಂದಿರುವ ಸಾಮಾನ್ಯ ಕನ್ನಡಿಗಳಲ್ಲಿ ಕಂಡುಬರುವ ದ್ವಿತೀಯ ಪ್ರತಿಫಲನ ಮತ್ತು ಚಿತ್ರ ವಿರೂಪತೆಗಳನ್ನು ತಪ್ಪಿಸಬಹುದು. ಅರನ್ಮುಳದಲ್ಲಿ ಒಂದು ವಿಸ್ತೃತ ಕುಟುಂಬವು ಈ ಕನ್ನಡಿಗಳನ್ನು ತಯಾರಿಸುತ್ತಿದೆ.
ಈ ಕನ್ನಡಿಯಲ್ಲಿ ಬಳಸುವ ನಿಖರವಾದ ಲೋಹಗಳ ಸಂಯೋಜನೆಯನ್ನು ಕುಟುಂಬದ ರಹಸ್ಯವಾಗಿ ಕಾಪಾಡಿಕೊಳ್ಳಲಾಗಿದೆ. ಲೋಹಶಾಸ್ತ್ರಜ್ಞರ ಪ್ರಕಾರ, ಈ ಮಿಶ್ರಲೋಹವು ತಾಮ್ರ ಮತ್ತು ತವರಿನ ಸಂಯೋಜನೆಯಾಗಿರಬಹುದು. ಆದ್ದರಿಂದ ಇದನ್ನು ಕಂಚಿನ ಕನ್ನಡಿಯ ಒಂದು ವಿಧವೆಂದು ಪರಿಗಣಿಸಲಾಗುತ್ತದೆ.<ref>https://en.wikipedia.org/wiki/Aranmula_kannadi</ref>
ಕನ್ನಡಿಯ ಪ್ರತಿಫಲನ ಮೇಲ್ಮೈಯನ್ನು ಪಡೆಯಲು ಅದನ್ನು ಹಲವಾರು ದಿನಗಳ ಕಾಲ ಹೊಳಪು ಮಾಡಲಾಗುತ್ತದೆ. ಇದಕ್ಕಾಗಿ ಮರೊಟ್ಟಿ (Hydnocarpus pentandrus) ಬೀಜಗಳಿಂದ ತೆಗೆದ ಎಣ್ಣೆಯೊಂದಿಗೆ ಅಕ್ಕಿಯ ಹೊಟ್ಟು ಬೆರೆಸಿ ತಯಾರಿಸಿದ ಅಪಘರ್ಷಕ ಪೇಸ್ಟ್ ಅನ್ನು ಬಳಸಲಾಗುತ್ತದೆ.
== ಸಾಂಸ್ಕೃತಿಕ ಮಹತ್ವ ==
ಅರನ್ಮುಳ ಕನ್ನಡಿಯ ಮೂಲವು ಅರನ್ಮುಳ ಪಾರ್ಥಸಾರಥಿ ದೇವಸ್ಥಾನದೊಂದಿಗೆ ಸಂಬಂಧ ಹೊಂದಿದೆ. ದಂತಕಥೆಯ ಪ್ರಕಾರ, ಹಲವು ಶತಮಾನಗಳ ಹಿಂದೆ ರಾಜಮನೆತನದ ಮುಖ್ಯಸ್ಥರು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಿಂದ ಎಂಟು ಕುಟುಂಬಗಳ ದೇವಾಲಯದ ಕುಶಲಕರ್ಮಿಗಳು ಮತ್ತು ಕರಕುಶಲಗಾರರನ್ನು ಅರನ್ಮುಳಕ್ಕೆ ಕರೆತಂದು ದೇವಸ್ಥಾನದಲ್ಲಿ ಕನ್ನಡಿಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿಸಿದರು. ಅರನ್ಮುಳದಲ್ಲಿ ನೆಲೆಸಿದ್ದ ತಮಿಳು ಕಮ್ಮಾಳರ್ ಕುಟುಂಬಗಳು ಈ ಕನ್ನಡಿಯನ್ನು ತಯಾರಿಸುವ ತಂತ್ರವನ್ನು ರಹಸ್ಯವಾಗಿ ಸಂರಕ್ಷಿಸಿಕೊಂಡು ಬಂದವು. ಪ್ರಸ್ತುತ ತಿರುವನಂತಪುರದಲ್ಲಿರುವ ಕಾಲೇಜ್ ಆಫ್ ಫೈನ್ ಆರ್ಟ್ಸ್ನಲ್ಲಿಯೂ ಅರನ್ಮುಳ ಕನ್ನಡಿಯನ್ನು ತಯಾರಿಸಲಾಗುತ್ತದೆ.
ಈ ವಿಶಿಷ್ಟ ಕನ್ನಡಿಗಳು ಕೇರಳದ ಶ್ರೀಮಂತ ಸಾಂಸ್ಕೃತಿಕ ಮತ್ತು ಲೋಹಶಾಸ್ತ್ರೀಯ ಪರಂಪರೆಯ ಪ್ರತೀಕವಾಗಿವೆ. ಅವುಗಳಿಗೆ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವಿದ್ದು, ಅದೃಷ್ಟವನ್ನು ತರುತ್ತವೆ ಎಂಬ ನಂಬಿಕೆಯೂ ಇದೆ. ಮದುವೆ ಸಮಾರಂಭದ ಸ್ಥಳಕ್ಕೆ ವಧುವಿನ ಪ್ರವೇಶದ ಸಂದರ್ಭದಲ್ಲಿ ಬಳಸುವ ಅಷ್ಟಮಂಗಲ ಅಥವಾ ಅಷ್ಟಮಂಗಲ್ಯದ ಎಂಟು ಶುಭ ವಸ್ತುಗಳಲ್ಲಿ ಅರನ್ಮುಳ ಕನ್ನಡಿಯನ್ನೂ ಒಂದಾಗಿ ಪರಿಗಣಿಸಲಾಗುತ್ತದೆ.
2017ರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಹ್ರೇನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ರಾಜ ಹಮದ್ ಬಿನ್ ಈಸಾ ಅಲ್ ಖಲೀಫಾ ಅವರಿಗೆ ಅರನ್ಮುಳ ಕನ್ನಡಿಯನ್ನು ಉಡುಗೊರೆಯಾಗಿ ನೀಡಿದರು.
ಲಂಡನ್ನ ಬ್ರಿಟಿಷ್ ಮ್ಯೂಸಿಯಂನ ಸಂಗ್ರಹದಲ್ಲಿಯೂ ಸುಮಾರು 45 ಸೆಂಟಿಮೀಟರ್ ಎತ್ತರದ ಅರನ್ಮುಳ ಕನ್ನಡಿಯೊಂದು ಇದೆ. ಅರನ್ಮುಳ ಕನ್ನಡಿಗೆ 2004–05ರಲ್ಲಿ ಭೌಗೋಳಿಕ ಸೂಚಕ (GI) ಮಾನ್ಯತೆ ದೊರೆಯಿತು.
== ಉಲ್ಲೇಖಗಳು ==
d9j0u4iwqa5br1a6wg7j2u6elp60spa
ಚೆಂಡಮಂಗಲಂ ಸೀರೆ
0
180127
1379588
2026-08-09T08:54:38Z
Santhosh Notagar99
82732
ಹೊಸ ಪುಟ: '''ಚೆಂಡಮಂಗಲಂ ಸೀರೆ''' ಕೇರಳದ ಎರ್ನಾಕುಲಂ ಜಿಲ್ಲೆಯ ಚೆಂಡಮಂಗಲಂನಲ್ಲಿ ತಯಾರಿಸಲಾಗುವ ಸಾಂಪ್ರದಾಯಿಕ ಕೈಮಗ್ಗದ ಹತ್ತಿ ಸೀರೆಯಾಗಿದೆ. ಈ ಸೀರೆ ಕೇರಳದ ಚೆಂಡಮಂಗಲಂ ಕೈಮಗ್ಗ ಪರಂಪರೆಯ ಒಂದು ಪ್ರಮುಖ ಭಾಗವಾಗಿದೆ. == ಇತಿಹ...
1379588
wikitext
text/x-wiki
'''ಚೆಂಡಮಂಗಲಂ ಸೀರೆ''' ಕೇರಳದ ಎರ್ನಾಕುಲಂ ಜಿಲ್ಲೆಯ ಚೆಂಡಮಂಗಲಂನಲ್ಲಿ ತಯಾರಿಸಲಾಗುವ ಸಾಂಪ್ರದಾಯಿಕ ಕೈಮಗ್ಗದ ಹತ್ತಿ ಸೀರೆಯಾಗಿದೆ. ಈ ಸೀರೆ ಕೇರಳದ ಚೆಂಡಮಂಗಲಂ ಕೈಮಗ್ಗ ಪರಂಪರೆಯ ಒಂದು ಪ್ರಮುಖ ಭಾಗವಾಗಿದೆ.
== ಇತಿಹಾಸ ==
ಚೆಂಡಮಂಗಲಂನಲ್ಲಿನ ಈ ನೇಯ್ಗೆ ಪರಂಪರೆಯನ್ನು 16ನೇ ಶತಮಾನದಲ್ಲಿ ಅಲ್ಲಿಗೆ ನೆಲೆಸಿದ್ದ ದೇವಾಂಗ ಚೆಟ್ಟಿಯಾರ್ ಸಮುದಾಯವು ಆರಂಭಿಸಿತು. ಇವರು ಕೊಚ್ಚಿ ಸಂಸ್ಥಾನದ ಅಧೀನದಲ್ಲಿದ್ದ ಪಾಳಿಯಂ ಸ್ವರೂಪಂನ ಆನುವಂಶಿಕ ಪ್ರಧಾನ ಮಂತ್ರಿ ಮತ್ತು ರಾಜರಾಗಿದ್ದ ಪಾಳಿಯತ್ ಅಚನ್ ಕುಟುಂಬಕ್ಕಾಗಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಇವರು ಉಂಗುರದ ಮೂಲಕ ಹಾದುಹೋಗುವಷ್ಟು ಸೂಕ್ಷ್ಮವಾದ ಮುಸ್ಲಿನ್ ಧೋತಿಗಳನ್ನು ನೇಯುತ್ತಿದ್ದರು. ನಂತರ ಕೊಚ್ಚಿಯ ರಾಜಮನೆತನದ ಆಶ್ರಯದಲ್ಲಿ ಈ ಕೈಮಗ್ಗ ಪರಂಪರೆಯು ಸೀರೆಗಳು ಮತ್ತು ಇತರ ಬಟ್ಟೆಗಳ ತಯಾರಿಕೆಗೆ ವಿಸ್ತರಿಸಿತು.
20ನೇ ಶತಮಾನದ ಆರಂಭದಲ್ಲಿ ರಾಜಾಶ್ರಯ ಕಡಿಮೆಯಾದ ಪರಿಣಾಮ ನೇಯ್ಗೆ ಉದ್ಯಮವು ಕುಸಿತ ಕಂಡಿತು. ಆದಾಗ್ಯೂ, 1954ರಲ್ಲಿ ಸ್ಥಾಪನೆಯಾದ ಚೆಂಡಮಂಗಲಂ ಕೈಮಗ್ಗ ಸಹಕಾರ ಸಂಘ ಮತ್ತು 1969ರ ಕೇರಳ ಸಹಕಾರ ಸಂಘಗಳ ಕಾಯ್ದೆಯ ಮೂಲಕ ಕೈಮಗ್ಗ ಉದ್ಯಮಕ್ಕೆ ಪುನರುಜ್ಜೀವನ ದೊರೆಯಿತು.
2018ರ ಕೇರಳ ಪ್ರವಾಹದಿಂದ ಈ ಪ್ರದೇಶದ ನೇಕಾರರು ಅಪಾರ ನಷ್ಟವನ್ನು ಅನುಭವಿಸಿದರು. ನಂತರ ಹಿರಿಯ ಫ್ಯಾಷನ್ ಉದ್ಯಮ ವೃತ್ತಿಪರ ರಮೇಶ್ ಮೆನನ್ ಅವರ Save The Loom ಉಪಕ್ರಮದ ಪ್ರಯತ್ನಗಳಿಂದ ಕೈಮಗ್ಗ ಉದ್ಯಮವು ಮತ್ತೆ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲು ಸಾಧ್ಯವಾಯಿತು. 2021ರ ಮೇ ತಿಂಗಳಲ್ಲಿ ಭಾರತದ ಮೊದಲ ಮಹಿಳಾ ನ್ಯಾಯಾಧೀಶೆ ಅನ್ನಾ ಚಾಂಡಿ ಅವರ ಜನ್ಮವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಕಾನೂನು ಕ್ಷೇತ್ರದ ಮಹಿಳೆಯರಿಗಾಗಿ ವಿಶೇಷ ಸೀರೆಗಳ ಹೊಸ ಸಂಗ್ರಹವನ್ನೂ ತಯಾರಿಸಲಾಯಿತು.
== ವೈಶಿಷ್ಟ್ಯಗಳು ==
ಚೆಂಡಮಂಗಲಂ ಸೀರೆ ಪ್ರಸ್ತುತ ಕೇರಳದಲ್ಲಿ ಅಸ್ತಿತ್ವದಲ್ಲಿರುವ ನಾಲ್ಕು ಪ್ರಸಿದ್ಧ ಕೈಮಗ್ಗ ಪರಂಪರೆಗಳಲ್ಲಿ ಒಂದಾಗಿದೆ. ಸೀರೆಯ ವಿಶಿಷ್ಟ ಲಕ್ಷಣವೆಂದರೆ ಪುಲಿಯಿಲಕರ (ಹುಣಸೆ ಎಲೆಯ ಅಂಚು) ಎಂದು ಕರೆಯಲಾಗುವ ಅಂಚು. ಇದು ಸೀರೆಯ ಅಂಚಿಗೆ ಸಮಾನಾಂತರವಾಗಿ ಸಾಗುವ ತೆಳುವಾದ ಕಪ್ಪು ರೇಖೆಯನ್ನು ಹೊಂದಿರುತ್ತದೆ. ಸೀರೆಯಲ್ಲಿ ಹೆಚ್ಚುವರಿ ನೂಲು ಬಳಸಿ ನೇಯಲಾದ ಚುಟ್ಟಿಕರ ವಿನ್ಯಾಸದ ಜೊತೆಗೆ ವಿವಿಧ ಅಗಲಗಳ ಪಟ್ಟೆಗಳು ಮತ್ತು ಚೌಕ ವಿನ್ಯಾಸಗಳೂ ಕಂಡುಬರುತ್ತವೆ.
ಚೆಂಡಮಂಗಲಂ ಸೀರೆ ಸಾಂಪ್ರದಾಯಿಕ ಕೇರಳ ಸೀರೆಯ ಒಂದು ರೂಪವಾಗಿದ್ದು, ಇದರಲ್ಲಿ ಕಸಾವು ಬಳಸಲಾಗುತ್ತದೆ. ಈ ಸೀರೆಗಳನ್ನು 80ರಿಂದ 120ರವರೆಗಿನ ಹೆಚ್ಚಿನ ನೂಲು ಸಾಂದ್ರತೆಯಲ್ಲಿ ತಯಾರಿಸಲಾಗುತ್ತದೆ. ಒಂದು ಸೀರೆಯನ್ನು ಕೈಯಿಂದ ನೇಯಲು ಸಾಮಾನ್ಯವಾಗಿ ಎರಡುರಿಂದ ನಾಲ್ಕು ದಿನಗಳವರೆಗೆ ಸಮಯ ಬೇಕಾಗುತ್ತದೆ.
== ಭೌಗೋಳಿಕ ಸೂಚಕ ಮಾನ್ಯತೆ ==
2010ರಲ್ಲಿ ಕೇರಳ ಸರ್ಕಾರವು ಚೆಂಡಮಂಗಲಂ ಧೋತಿಗಳು, ಸೀರೆಗಳು ಮತ್ತು ಸೆಟ್ ಮುಂಡುಗಳಿಗೆ ಭೌಗೋಳಿಕ ಸೂಚಕ (Geographical Indication) ಮಾನ್ಯತೆಗಾಗಿ ಅರ್ಜಿ ಸಲ್ಲಿಸಿತು. ಭಾರತ ಸರ್ಕಾರವು 2011ರಲ್ಲಿ ಚೆಂಡಮಂಗಲಂ ಧೋತಿಗಳು, ಸೀರೆಗಳು ಮತ್ತು ಸೆಟ್ ಮುಂಡುಗಳನ್ನು ಅಧಿಕೃತವಾಗಿ ಭೌಗೋಳಿಕ ಸೂಚಕ ಉತ್ಪನ್ನಗಳಾಗಿ ಮಾನ್ಯತೆ ನೀಡಿತು.
h0hhlq3fs397ple7i49zttzjivvmel1
1379591
1379588
2026-08-09T08:57:31Z
Santhosh Notagar99
82732
1379591
wikitext
text/x-wiki
'''ಚೆಂಡಮಂಗಲಂ ಸೀರೆ''' ಕೇರಳದ ಎರ್ನಾಕುಲಂ ಜಿಲ್ಲೆಯ ಚೆಂಡಮಂಗಲಂನಲ್ಲಿ ತಯಾರಿಸಲಾಗುವ ಸಾಂಪ್ರದಾಯಿಕ ಕೈಮಗ್ಗದ ಹತ್ತಿ ಸೀರೆಯಾಗಿದೆ. ಈ ಸೀರೆ ಕೇರಳದ ಚೆಂಡಮಂಗಲಂ ಕೈಮಗ್ಗ ಪರಂಪರೆಯ ಒಂದು ಪ್ರಮುಖ ಭಾಗವಾಗಿದೆ.<ref>{{Cite web|last=Sarvaiya|first=Nupur|title=Save The Loom's weavers give a modern spin to traditional kasavu saris|url=https://www.vogue.in/fashion/content/save-the-looms-weavers-give-a-modern-spin-to-traditional-kerala-kasavu-saris|access-date=2021-05-30|website=Vogue India|date=25 August 2020 |language=en-IN}}</ref>
== ಇತಿಹಾಸ ==
ಚೆಂಡಮಂಗಲಂನಲ್ಲಿನ ಈ ನೇಯ್ಗೆ ಪರಂಪರೆಯನ್ನು 16ನೇ ಶತಮಾನದಲ್ಲಿ ಅಲ್ಲಿಗೆ ನೆಲೆಸಿದ್ದ ದೇವಾಂಗ ಚೆಟ್ಟಿಯಾರ್ ಸಮುದಾಯವು ಆರಂಭಿಸಿತು. ಇವರು ಕೊಚ್ಚಿ ಸಂಸ್ಥಾನದ ಅಧೀನದಲ್ಲಿದ್ದ ಪಾಳಿಯಂ ಸ್ವರೂಪಂನ ಆನುವಂಶಿಕ ಪ್ರಧಾನ ಮಂತ್ರಿ ಮತ್ತು ರಾಜರಾಗಿದ್ದ ಪಾಳಿಯತ್ ಅಚನ್ ಕುಟುಂಬಕ್ಕಾಗಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಇವರು ಉಂಗುರದ ಮೂಲಕ ಹಾದುಹೋಗುವಷ್ಟು ಸೂಕ್ಷ್ಮವಾದ ಮುಸ್ಲಿನ್ ಧೋತಿಗಳನ್ನು ನೇಯುತ್ತಿದ್ದರು. ನಂತರ ಕೊಚ್ಚಿಯ ರಾಜಮನೆತನದ ಆಶ್ರಯದಲ್ಲಿ ಈ ಕೈಮಗ್ಗ ಪರಂಪರೆಯು ಸೀರೆಗಳು ಮತ್ತು ಇತರ ಬಟ್ಟೆಗಳ ತಯಾರಿಕೆಗೆ ವಿಸ್ತರಿಸಿತು.<ref>{{Cite web|title=They weave magic to stand on their feet|url=https://www.newindianexpress.com/cities/kochi/2019/jan/13/they-weave-magic-to-stand-on-their-feet-1924657.html|access-date=2021-05-30|website=The New Indian Express|archive-date=2021-06-02|archive-url=https://web.archive.org/web/20210602214720/https://www.newindianexpress.com/cities/kochi/2019/jan/13/they-weave-magic-to-stand-on-their-feet-1924657.html|url-status=dead}}</ref>
20ನೇ ಶತಮಾನದ ಆರಂಭದಲ್ಲಿ ರಾಜಾಶ್ರಯ ಕಡಿಮೆಯಾದ ಪರಿಣಾಮ ನೇಯ್ಗೆ ಉದ್ಯಮವು ಕುಸಿತ ಕಂಡಿತು. ಆದಾಗ್ಯೂ, 1954ರಲ್ಲಿ ಸ್ಥಾಪನೆಯಾದ ಚೆಂಡಮಂಗಲಂ ಕೈಮಗ್ಗ ಸಹಕಾರ ಸಂಘ ಮತ್ತು 1969ರ ಕೇರಳ ಸಹಕಾರ ಸಂಘಗಳ ಕಾಯ್ದೆಯ ಮೂಲಕ ಕೈಮಗ್ಗ ಉದ್ಯಮಕ್ಕೆ ಪುನರುಜ್ಜೀವನ ದೊರೆಯಿತು.
2018ರ ಕೇರಳ ಪ್ರವಾಹದಿಂದ ಈ ಪ್ರದೇಶದ ನೇಕಾರರು ಅಪಾರ ನಷ್ಟವನ್ನು ಅನುಭವಿಸಿದರು. ನಂತರ ಹಿರಿಯ ಫ್ಯಾಷನ್ ಉದ್ಯಮ ವೃತ್ತಿಪರ ರಮೇಶ್ ಮೆನನ್ ಅವರ Save The Loom ಉಪಕ್ರಮದ ಪ್ರಯತ್ನಗಳಿಂದ ಕೈಮಗ್ಗ ಉದ್ಯಮವು ಮತ್ತೆ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲು ಸಾಧ್ಯವಾಯಿತು. 2021ರ ಮೇ ತಿಂಗಳಲ್ಲಿ ಭಾರತದ ಮೊದಲ ಮಹಿಳಾ ನ್ಯಾಯಾಧೀಶೆ ಅನ್ನಾ ಚಾಂಡಿ ಅವರ ಜನ್ಮವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಕಾನೂನು ಕ್ಷೇತ್ರದ ಮಹಿಳೆಯರಿಗಾಗಿ ವಿಶೇಷ ಸೀರೆಗಳ ಹೊಸ ಸಂಗ್ರಹವನ್ನೂ ತಯಾರಿಸಲಾಯಿತು.<ref>{{Cite news|last=James|first=Shalini|date=2019-12-20|title=Read about the regained looms of Chendamangalam|language=en-IN|work=The Hindu|url=https://www.thehindu.com/society/keralas-design-community-got-together-to-bat-for-chendamangalam-handloom-in-2019/article30358790.ece|access-date=2021-05-30|issn=0971-751X}}</ref>
== ವೈಶಿಷ್ಟ್ಯಗಳು ==
ಚೆಂಡಮಂಗಲಂ ಸೀರೆ ಪ್ರಸ್ತುತ ಕೇರಳದಲ್ಲಿ ಅಸ್ತಿತ್ವದಲ್ಲಿರುವ ನಾಲ್ಕು ಪ್ರಸಿದ್ಧ ಕೈಮಗ್ಗ ಪರಂಪರೆಗಳಲ್ಲಿ ಒಂದಾಗಿದೆ. ಸೀರೆಯ ವಿಶಿಷ್ಟ ಲಕ್ಷಣವೆಂದರೆ ಪುಲಿಯಿಲಕರ (ಹುಣಸೆ ಎಲೆಯ ಅಂಚು) ಎಂದು ಕರೆಯಲಾಗುವ ಅಂಚು. ಇದು ಸೀರೆಯ ಅಂಚಿಗೆ ಸಮಾನಾಂತರವಾಗಿ ಸಾಗುವ ತೆಳುವಾದ ಕಪ್ಪು ರೇಖೆಯನ್ನು ಹೊಂದಿರುತ್ತದೆ. ಸೀರೆಯಲ್ಲಿ ಹೆಚ್ಚುವರಿ ನೂಲು ಬಳಸಿ ನೇಯಲಾದ ಚುಟ್ಟಿಕರ ವಿನ್ಯಾಸದ ಜೊತೆಗೆ ವಿವಿಧ ಅಗಲಗಳ ಪಟ್ಟೆಗಳು ಮತ್ತು ಚೌಕ ವಿನ್ಯಾಸಗಳೂ ಕಂಡುಬರುತ್ತವೆ.
ಚೆಂಡಮಂಗಲಂ ಸೀರೆ ಸಾಂಪ್ರದಾಯಿಕ ಕೇರಳ ಸೀರೆಯ ಒಂದು ರೂಪವಾಗಿದ್ದು, ಇದರಲ್ಲಿ ಕಸಾವು ಬಳಸಲಾಗುತ್ತದೆ. ಈ ಸೀರೆಗಳನ್ನು 80ರಿಂದ 120ರವರೆಗಿನ ಹೆಚ್ಚಿನ ನೂಲು ಸಾಂದ್ರತೆಯಲ್ಲಿ ತಯಾರಿಸಲಾಗುತ್ತದೆ. ಒಂದು ಸೀರೆಯನ್ನು ಕೈಯಿಂದ ನೇಯಲು ಸಾಮಾನ್ಯವಾಗಿ ಎರಡುರಿಂದ ನಾಲ್ಕು ದಿನಗಳವರೆಗೆ ಸಮಯ ಬೇಕಾಗುತ್ತದೆ.
== ಭೌಗೋಳಿಕ ಸೂಚಕ ಮಾನ್ಯತೆ ==
2010ರಲ್ಲಿ ಕೇರಳ ಸರ್ಕಾರವು ಚೆಂಡಮಂಗಲಂ ಧೋತಿಗಳು, ಸೀರೆಗಳು ಮತ್ತು ಸೆಟ್ ಮುಂಡುಗಳಿಗೆ ಭೌಗೋಳಿಕ ಸೂಚಕ (Geographical Indication) ಮಾನ್ಯತೆಗಾಗಿ ಅರ್ಜಿ ಸಲ್ಲಿಸಿತು. ಭಾರತ ಸರ್ಕಾರವು 2011ರಲ್ಲಿ ಚೆಂಡಮಂಗಲಂ ಧೋತಿಗಳು, ಸೀರೆಗಳು ಮತ್ತು ಸೆಟ್ ಮುಂಡುಗಳನ್ನು ಅಧಿಕೃತವಾಗಿ ಭೌಗೋಳಿಕ ಸೂಚಕ ಉತ್ಪನ್ನಗಳಾಗಿ ಮಾನ್ಯತೆ ನೀಡಿತು.
d2ml99hwbmpqnk5snnwooupeyjjh82r
1379593
1379591
2026-08-09T08:58:48Z
Santhosh Notagar99
82732
1379593
wikitext
text/x-wiki
'''ಚೆಂಡಮಂಗಲಂ ಸೀರೆ''' ಕೇರಳದ ಎರ್ನಾಕುಲಂ ಜಿಲ್ಲೆಯ ಚೆಂಡಮಂಗಲಂನಲ್ಲಿ ತಯಾರಿಸಲಾಗುವ ಸಾಂಪ್ರದಾಯಿಕ ಕೈಮಗ್ಗದ ಹತ್ತಿ ಸೀರೆಯಾಗಿದೆ. ಈ ಸೀರೆ ಕೇರಳದ ಚೆಂಡಮಂಗಲಂ ಕೈಮಗ್ಗ ಪರಂಪರೆಯ ಒಂದು ಪ್ರಮುಖ ಭಾಗವಾಗಿದೆ.<ref>{{Cite web|last=Sarvaiya|first=Nupur|title=Save The Loom's weavers give a modern spin to traditional kasavu saris|url=https://www.vogue.in/fashion/content/save-the-looms-weavers-give-a-modern-spin-to-traditional-kerala-kasavu-saris|access-date=2021-05-30|website=Vogue India|date=25 August 2020 |language=en-IN}}</ref>
== ಇತಿಹಾಸ ==
ಚೆಂಡಮಂಗಲಂನಲ್ಲಿನ ಈ ನೇಯ್ಗೆ ಪರಂಪರೆಯನ್ನು 16ನೇ ಶತಮಾನದಲ್ಲಿ ಅಲ್ಲಿಗೆ ನೆಲೆಸಿದ್ದ ದೇವಾಂಗ ಚೆಟ್ಟಿಯಾರ್ ಸಮುದಾಯವು ಆರಂಭಿಸಿತು. ಇವರು ಕೊಚ್ಚಿ ಸಂಸ್ಥಾನದ ಅಧೀನದಲ್ಲಿದ್ದ ಪಾಳಿಯಂ ಸ್ವರೂಪಂನ ಆನುವಂಶಿಕ ಪ್ರಧಾನ ಮಂತ್ರಿ ಮತ್ತು ರಾಜರಾಗಿದ್ದ ಪಾಳಿಯತ್ ಅಚನ್ ಕುಟುಂಬಕ್ಕಾಗಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಇವರು ಉಂಗುರದ ಮೂಲಕ ಹಾದುಹೋಗುವಷ್ಟು ಸೂಕ್ಷ್ಮವಾದ ಮುಸ್ಲಿನ್ ಧೋತಿಗಳನ್ನು ನೇಯುತ್ತಿದ್ದರು. ನಂತರ ಕೊಚ್ಚಿಯ ರಾಜಮನೆತನದ ಆಶ್ರಯದಲ್ಲಿ ಈ ಕೈಮಗ್ಗ ಪರಂಪರೆಯು ಸೀರೆಗಳು ಮತ್ತು ಇತರ ಬಟ್ಟೆಗಳ ತಯಾರಿಕೆಗೆ ವಿಸ್ತರಿಸಿತು.<ref>{{Cite web|title=They weave magic to stand on their feet|url=https://www.newindianexpress.com/cities/kochi/2019/jan/13/they-weave-magic-to-stand-on-their-feet-1924657.html|access-date=2021-05-30|website=The New Indian Express|archive-date=2021-06-02|archive-url=https://web.archive.org/web/20210602214720/https://www.newindianexpress.com/cities/kochi/2019/jan/13/they-weave-magic-to-stand-on-their-feet-1924657.html|url-status=dead}}</ref>
20ನೇ ಶತಮಾನದ ಆರಂಭದಲ್ಲಿ ರಾಜಾಶ್ರಯ ಕಡಿಮೆಯಾದ ಪರಿಣಾಮ ನೇಯ್ಗೆ ಉದ್ಯಮವು ಕುಸಿತ ಕಂಡಿತು. ಆದಾಗ್ಯೂ, 1954ರಲ್ಲಿ ಸ್ಥಾಪನೆಯಾದ ಚೆಂಡಮಂಗಲಂ ಕೈಮಗ್ಗ ಸಹಕಾರ ಸಂಘ ಮತ್ತು 1969ರ ಕೇರಳ ಸಹಕಾರ ಸಂಘಗಳ ಕಾಯ್ದೆಯ ಮೂಲಕ ಕೈಮಗ್ಗ ಉದ್ಯಮಕ್ಕೆ ಪುನರುಜ್ಜೀವನ ದೊರೆಯಿತು.
2018ರ ಕೇರಳ ಪ್ರವಾಹದಿಂದ ಈ ಪ್ರದೇಶದ ನೇಕಾರರು ಅಪಾರ ನಷ್ಟವನ್ನು ಅನುಭವಿಸಿದರು. ನಂತರ ಹಿರಿಯ ಫ್ಯಾಷನ್ ಉದ್ಯಮ ವೃತ್ತಿಪರ ರಮೇಶ್ ಮೆನನ್ ಅವರ Save The Loom ಉಪಕ್ರಮದ ಪ್ರಯತ್ನಗಳಿಂದ ಕೈಮಗ್ಗ ಉದ್ಯಮವು ಮತ್ತೆ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲು ಸಾಧ್ಯವಾಯಿತು. 2021ರ ಮೇ ತಿಂಗಳಲ್ಲಿ ಭಾರತದ ಮೊದಲ ಮಹಿಳಾ ನ್ಯಾಯಾಧೀಶೆ ಅನ್ನಾ ಚಾಂಡಿ ಅವರ ಜನ್ಮವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಕಾನೂನು ಕ್ಷೇತ್ರದ ಮಹಿಳೆಯರಿಗಾಗಿ ವಿಶೇಷ ಸೀರೆಗಳ ಹೊಸ ಸಂಗ್ರಹವನ್ನೂ ತಯಾರಿಸಲಾಯಿತು.<ref>{{Cite news|last=James|first=Shalini|date=2019-12-20|title=Read about the regained looms of Chendamangalam|language=en-IN|work=The Hindu|url=https://www.thehindu.com/society/keralas-design-community-got-together-to-bat-for-chendamangalam-handloom-in-2019/article30358790.ece|access-date=2021-05-30|issn=0971-751X}}</ref>
== ವೈಶಿಷ್ಟ್ಯಗಳು ==
ಚೆಂಡಮಂಗಲಂ ಸೀರೆ ಪ್ರಸ್ತುತ ಕೇರಳದಲ್ಲಿ ಅಸ್ತಿತ್ವದಲ್ಲಿರುವ ನಾಲ್ಕು ಪ್ರಸಿದ್ಧ ಕೈಮಗ್ಗ ಪರಂಪರೆಗಳಲ್ಲಿ ಒಂದಾಗಿದೆ. ಸೀರೆಯ ವಿಶಿಷ್ಟ ಲಕ್ಷಣವೆಂದರೆ ಪುಲಿಯಿಲಕರ (ಹುಣಸೆ ಎಲೆಯ ಅಂಚು) ಎಂದು ಕರೆಯಲಾಗುವ ಅಂಚು. ಇದು ಸೀರೆಯ ಅಂಚಿಗೆ ಸಮಾನಾಂತರವಾಗಿ ಸಾಗುವ ತೆಳುವಾದ ಕಪ್ಪು ರೇಖೆಯನ್ನು ಹೊಂದಿರುತ್ತದೆ. ಸೀರೆಯಲ್ಲಿ ಹೆಚ್ಚುವರಿ ನೂಲು ಬಳಸಿ ನೇಯಲಾದ ಚುಟ್ಟಿಕರ ವಿನ್ಯಾಸದ ಜೊತೆಗೆ ವಿವಿಧ ಅಗಲಗಳ ಪಟ್ಟೆಗಳು ಮತ್ತು ಚೌಕ ವಿನ್ಯಾಸಗಳೂ ಕಂಡುಬರುತ್ತವೆ.<ref>{{Cite web|date=2020-08-31|title=All you need to know about the simple, classy Kerala kasavu saree|url=https://www.hindustantimes.com/fashion-and-trends/happy-onam-2020-all-you-need-to-know-about-the-simple-classy-kerala-kasavu-saree/story-K9845TLTJy92nzFG16y0aJ.html|access-date=2021-05-30|website=Hindustan Times|language=en}}</ref>
ಚೆಂಡಮಂಗಲಂ ಸೀರೆ ಸಾಂಪ್ರದಾಯಿಕ ಕೇರಳ ಸೀರೆಯ ಒಂದು ರೂಪವಾಗಿದ್ದು, ಇದರಲ್ಲಿ ಕಸಾವು ಬಳಸಲಾಗುತ್ತದೆ. ಈ ಸೀರೆಗಳನ್ನು 80ರಿಂದ 120ರವರೆಗಿನ ಹೆಚ್ಚಿನ ನೂಲು ಸಾಂದ್ರತೆಯಲ್ಲಿ ತಯಾರಿಸಲಾಗುತ್ತದೆ. ಒಂದು ಸೀರೆಯನ್ನು ಕೈಯಿಂದ ನೇಯಲು ಸಾಮಾನ್ಯವಾಗಿ ಎರಡುರಿಂದ ನಾಲ್ಕು ದಿನಗಳವರೆಗೆ ಸಮಯ ಬೇಕಾಗುತ್ತದೆ.<ref>{{Cite news|last=Alexander|first=Deepa|date=2020-09-19|title=Chendamangalam sari: a saga of hope and resilience|language=en-IN|work=The Hindu|url=https://www.thehindu.com/life-and-style/fashion/chendamangalam-sari-a-saga-of-hope-and-resilience/article32647783.ece|access-date=2021-05-30|issn=0971-751X}}</ref>
== ಭೌಗೋಳಿಕ ಸೂಚಕ ಮಾನ್ಯತೆ ==
2010ರಲ್ಲಿ ಕೇರಳ ಸರ್ಕಾರವು ಚೆಂಡಮಂಗಲಂ ಧೋತಿಗಳು, ಸೀರೆಗಳು ಮತ್ತು ಸೆಟ್ ಮುಂಡುಗಳಿಗೆ ಭೌಗೋಳಿಕ ಸೂಚಕ (Geographical Indication) ಮಾನ್ಯತೆಗಾಗಿ ಅರ್ಜಿ ಸಲ್ಲಿಸಿತು. ಭಾರತ ಸರ್ಕಾರವು 2011ರಲ್ಲಿ ಚೆಂಡಮಂಗಲಂ ಧೋತಿಗಳು, ಸೀರೆಗಳು ಮತ್ತು ಸೆಟ್ ಮುಂಡುಗಳನ್ನು ಅಧಿಕೃತವಾಗಿ ಭೌಗೋಳಿಕ ಸೂಚಕ ಉತ್ಪನ್ನಗಳಾಗಿ ಮಾನ್ಯತೆ ನೀಡಿತು.<ref>{{Cite web|title=Details {{!}} Geographical Indications {{!}} Intellectual Property India|url=http://ipindiaservices.gov.in/GIRPublic/Application/Details/225|access-date=2021-05-30|website=ipindiaservices.gov.in}}</ref>
a57sgmoxkq3wbkgv2j3us1x4p2iqab9
1379594
1379593
2026-08-09T08:59:07Z
Santhosh Notagar99
82732
1379594
wikitext
text/x-wiki
'''ಚೆಂಡಮಂಗಲಂ ಸೀರೆ''' ಕೇರಳದ ಎರ್ನಾಕುಲಂ ಜಿಲ್ಲೆಯ ಚೆಂಡಮಂಗಲಂನಲ್ಲಿ ತಯಾರಿಸಲಾಗುವ ಸಾಂಪ್ರದಾಯಿಕ ಕೈಮಗ್ಗದ ಹತ್ತಿ ಸೀರೆಯಾಗಿದೆ. ಈ ಸೀರೆ ಕೇರಳದ ಚೆಂಡಮಂಗಲಂ ಕೈಮಗ್ಗ ಪರಂಪರೆಯ ಒಂದು ಪ್ರಮುಖ ಭಾಗವಾಗಿದೆ.<ref>{{Cite web|last=Sarvaiya|first=Nupur|title=Save The Loom's weavers give a modern spin to traditional kasavu saris|url=https://www.vogue.in/fashion/content/save-the-looms-weavers-give-a-modern-spin-to-traditional-kerala-kasavu-saris|access-date=2021-05-30|website=Vogue India|date=25 August 2020 |language=en-IN}}</ref>
== ಇತಿಹಾಸ ==
ಚೆಂಡಮಂಗಲಂನಲ್ಲಿನ ಈ ನೇಯ್ಗೆ ಪರಂಪರೆಯನ್ನು 16ನೇ ಶತಮಾನದಲ್ಲಿ ಅಲ್ಲಿಗೆ ನೆಲೆಸಿದ್ದ ದೇವಾಂಗ ಚೆಟ್ಟಿಯಾರ್ ಸಮುದಾಯವು ಆರಂಭಿಸಿತು. ಇವರು ಕೊಚ್ಚಿ ಸಂಸ್ಥಾನದ ಅಧೀನದಲ್ಲಿದ್ದ ಪಾಳಿಯಂ ಸ್ವರೂಪಂನ ಆನುವಂಶಿಕ ಪ್ರಧಾನ ಮಂತ್ರಿ ಮತ್ತು ರಾಜರಾಗಿದ್ದ ಪಾಳಿಯತ್ ಅಚನ್ ಕುಟುಂಬಕ್ಕಾಗಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಇವರು ಉಂಗುರದ ಮೂಲಕ ಹಾದುಹೋಗುವಷ್ಟು ಸೂಕ್ಷ್ಮವಾದ ಮುಸ್ಲಿನ್ ಧೋತಿಗಳನ್ನು ನೇಯುತ್ತಿದ್ದರು. ನಂತರ ಕೊಚ್ಚಿಯ ರಾಜಮನೆತನದ ಆಶ್ರಯದಲ್ಲಿ ಈ ಕೈಮಗ್ಗ ಪರಂಪರೆಯು ಸೀರೆಗಳು ಮತ್ತು ಇತರ ಬಟ್ಟೆಗಳ ತಯಾರಿಕೆಗೆ ವಿಸ್ತರಿಸಿತು.<ref>{{Cite web|title=They weave magic to stand on their feet|url=https://www.newindianexpress.com/cities/kochi/2019/jan/13/they-weave-magic-to-stand-on-their-feet-1924657.html|access-date=2021-05-30|website=The New Indian Express|archive-date=2021-06-02|archive-url=https://web.archive.org/web/20210602214720/https://www.newindianexpress.com/cities/kochi/2019/jan/13/they-weave-magic-to-stand-on-their-feet-1924657.html|url-status=dead}}</ref>
20ನೇ ಶತಮಾನದ ಆರಂಭದಲ್ಲಿ ರಾಜಾಶ್ರಯ ಕಡಿಮೆಯಾದ ಪರಿಣಾಮ ನೇಯ್ಗೆ ಉದ್ಯಮವು ಕುಸಿತ ಕಂಡಿತು. ಆದಾಗ್ಯೂ, 1954ರಲ್ಲಿ ಸ್ಥಾಪನೆಯಾದ ಚೆಂಡಮಂಗಲಂ ಕೈಮಗ್ಗ ಸಹಕಾರ ಸಂಘ ಮತ್ತು 1969ರ ಕೇರಳ ಸಹಕಾರ ಸಂಘಗಳ ಕಾಯ್ದೆಯ ಮೂಲಕ ಕೈಮಗ್ಗ ಉದ್ಯಮಕ್ಕೆ ಪುನರುಜ್ಜೀವನ ದೊರೆಯಿತು.
2018ರ ಕೇರಳ ಪ್ರವಾಹದಿಂದ ಈ ಪ್ರದೇಶದ ನೇಕಾರರು ಅಪಾರ ನಷ್ಟವನ್ನು ಅನುಭವಿಸಿದರು. ನಂತರ ಹಿರಿಯ ಫ್ಯಾಷನ್ ಉದ್ಯಮ ವೃತ್ತಿಪರ ರಮೇಶ್ ಮೆನನ್ ಅವರ Save The Loom ಉಪಕ್ರಮದ ಪ್ರಯತ್ನಗಳಿಂದ ಕೈಮಗ್ಗ ಉದ್ಯಮವು ಮತ್ತೆ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲು ಸಾಧ್ಯವಾಯಿತು. 2021ರ ಮೇ ತಿಂಗಳಲ್ಲಿ ಭಾರತದ ಮೊದಲ ಮಹಿಳಾ ನ್ಯಾಯಾಧೀಶೆ ಅನ್ನಾ ಚಾಂಡಿ ಅವರ ಜನ್ಮವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಕಾನೂನು ಕ್ಷೇತ್ರದ ಮಹಿಳೆಯರಿಗಾಗಿ ವಿಶೇಷ ಸೀರೆಗಳ ಹೊಸ ಸಂಗ್ರಹವನ್ನೂ ತಯಾರಿಸಲಾಯಿತು.<ref>{{Cite news|last=James|first=Shalini|date=2019-12-20|title=Read about the regained looms of Chendamangalam|language=en-IN|work=The Hindu|url=https://www.thehindu.com/society/keralas-design-community-got-together-to-bat-for-chendamangalam-handloom-in-2019/article30358790.ece|access-date=2021-05-30|issn=0971-751X}}</ref>
== ವೈಶಿಷ್ಟ್ಯಗಳು ==
ಚೆಂಡಮಂಗಲಂ ಸೀರೆ ಪ್ರಸ್ತುತ ಕೇರಳದಲ್ಲಿ ಅಸ್ತಿತ್ವದಲ್ಲಿರುವ ನಾಲ್ಕು ಪ್ರಸಿದ್ಧ ಕೈಮಗ್ಗ ಪರಂಪರೆಗಳಲ್ಲಿ ಒಂದಾಗಿದೆ. ಸೀರೆಯ ವಿಶಿಷ್ಟ ಲಕ್ಷಣವೆಂದರೆ ಪುಲಿಯಿಲಕರ (ಹುಣಸೆ ಎಲೆಯ ಅಂಚು) ಎಂದು ಕರೆಯಲಾಗುವ ಅಂಚು. ಇದು ಸೀರೆಯ ಅಂಚಿಗೆ ಸಮಾನಾಂತರವಾಗಿ ಸಾಗುವ ತೆಳುವಾದ ಕಪ್ಪು ರೇಖೆಯನ್ನು ಹೊಂದಿರುತ್ತದೆ. ಸೀರೆಯಲ್ಲಿ ಹೆಚ್ಚುವರಿ ನೂಲು ಬಳಸಿ ನೇಯಲಾದ ಚುಟ್ಟಿಕರ ವಿನ್ಯಾಸದ ಜೊತೆಗೆ ವಿವಿಧ ಅಗಲಗಳ ಪಟ್ಟೆಗಳು ಮತ್ತು ಚೌಕ ವಿನ್ಯಾಸಗಳೂ ಕಂಡುಬರುತ್ತವೆ.<ref>{{Cite web|date=2020-08-31|title=All you need to know about the simple, classy Kerala kasavu saree|url=https://www.hindustantimes.com/fashion-and-trends/happy-onam-2020-all-you-need-to-know-about-the-simple-classy-kerala-kasavu-saree/story-K9845TLTJy92nzFG16y0aJ.html|access-date=2021-05-30|website=Hindustan Times|language=en}}</ref>
ಚೆಂಡಮಂಗಲಂ ಸೀರೆ ಸಾಂಪ್ರದಾಯಿಕ ಕೇರಳ ಸೀರೆಯ ಒಂದು ರೂಪವಾಗಿದ್ದು, ಇದರಲ್ಲಿ ಕಸಾವು ಬಳಸಲಾಗುತ್ತದೆ. ಈ ಸೀರೆಗಳನ್ನು 80ರಿಂದ 120ರವರೆಗಿನ ಹೆಚ್ಚಿನ ನೂಲು ಸಾಂದ್ರತೆಯಲ್ಲಿ ತಯಾರಿಸಲಾಗುತ್ತದೆ. ಒಂದು ಸೀರೆಯನ್ನು ಕೈಯಿಂದ ನೇಯಲು ಸಾಮಾನ್ಯವಾಗಿ ಎರಡುರಿಂದ ನಾಲ್ಕು ದಿನಗಳವರೆಗೆ ಸಮಯ ಬೇಕಾಗುತ್ತದೆ.<ref>{{Cite news|last=Alexander|first=Deepa|date=2020-09-19|title=Chendamangalam sari: a saga of hope and resilience|language=en-IN|work=The Hindu|url=https://www.thehindu.com/life-and-style/fashion/chendamangalam-sari-a-saga-of-hope-and-resilience/article32647783.ece|access-date=2021-05-30|issn=0971-751X}}</ref>
== ಭೌಗೋಳಿಕ ಸೂಚಕ ಮಾನ್ಯತೆ ==
2010ರಲ್ಲಿ ಕೇರಳ ಸರ್ಕಾರವು ಚೆಂಡಮಂಗಲಂ ಧೋತಿಗಳು, ಸೀರೆಗಳು ಮತ್ತು ಸೆಟ್ ಮುಂಡುಗಳಿಗೆ ಭೌಗೋಳಿಕ ಸೂಚಕ (Geographical Indication) ಮಾನ್ಯತೆಗಾಗಿ ಅರ್ಜಿ ಸಲ್ಲಿಸಿತು. ಭಾರತ ಸರ್ಕಾರವು 2011ರಲ್ಲಿ ಚೆಂಡಮಂಗಲಂ ಧೋತಿಗಳು, ಸೀರೆಗಳು ಮತ್ತು ಸೆಟ್ ಮುಂಡುಗಳನ್ನು ಅಧಿಕೃತವಾಗಿ ಭೌಗೋಳಿಕ ಸೂಚಕ ಉತ್ಪನ್ನಗಳಾಗಿ ಮಾನ್ಯತೆ ನೀಡಿತು.<ref>{{Cite web|title=Details {{!}} Geographical Indications {{!}} Intellectual Property India|url=http://ipindiaservices.gov.in/GIRPublic/Application/Details/225|access-date=2021-05-30|website=ipindiaservices.gov.in}}</ref>
== ಉಲ್ಲೇಖಗಳು ==
lz87hm42xtkjn2nxai6hpq154q9hatt
ಎಡೆಯೂರು ಮೆಣಸಿನಕಾಯಿ
0
180128
1379600
2026-08-09T09:17:58Z
Santhosh Notagar99
82732
ಹೊಸ ಪುಟ: '''ಎಡೆಯೂರು ಮೆಣಸಿನಕಾಯಿ''' ಕೇರಳ ರಾಜ್ಯದಲ್ಲಿ ಮುಖ್ಯವಾಗಿ ಬೆಳೆಯಲಾಗುವ ಒಂದು ಬಗೆಯ ಮೆಣಸಿನಕಾಯಿಯಾಗಿದೆ. ಇದು ಕೇರಳದ ಮಲಪ್ಪುರಂ ಜಿಲ್ಲೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರಧಾನವಾಗಿ ಬೆಳೆಯುವ ಸ್ಥಳೀಯ ತಳಿ...
1379600
wikitext
text/x-wiki
'''ಎಡೆಯೂರು ಮೆಣಸಿನಕಾಯಿ''' ಕೇರಳ ರಾಜ್ಯದಲ್ಲಿ ಮುಖ್ಯವಾಗಿ ಬೆಳೆಯಲಾಗುವ ಒಂದು ಬಗೆಯ ಮೆಣಸಿನಕಾಯಿಯಾಗಿದೆ. ಇದು ಕೇರಳದ ಮಲಪ್ಪುರಂ ಜಿಲ್ಲೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರಧಾನವಾಗಿ ಬೆಳೆಯುವ ಸ್ಥಳೀಯ ತಳಿಯಾಗಿದೆ.
ಎಡೆಯೂರು ಮೆಣಸಿನಕಾಯಿಯನ್ನು ಮುಖ್ಯವಾಗಿ ವಲಂಚೇರಿ ಬ್ಲಾಕ್ನ ಎಡೆಯೂರು, ಆತವನಾಡ್, ಮರಕ್ಕರ, ಇರಿಂಬಿಲಿಯಂ, ಕಲ್ಪಕಂಚೇರಿ ಮತ್ತು ವಲಂಚೇರಿ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಅಂಗಾಡಿಪುರಂ ಬ್ಲಾಕ್ನ ಮೂರ್ಕನಾಡ್ ಮತ್ತು ಕುರುವ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆಯಲಾಗುತ್ತದೆ.
== ಹೆಸರು ==
ಎಡೆಯೂರು ಮೆಣಸಿನಕಾಯಿ ಎಂಬ ಹೆಸರು ಇದರ ಮೂಲಸ್ಥಳವಾದ ಎಡೆಯೂರು ಗ್ರಾಮದಿಂದ ಬಂದಿದೆ. ಎಡೆಯೂರು ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ಈ ಪ್ರದೇಶದಲ್ಲಿ ಎಡೆಯೂರು ಮೆಣಸಿನಕಾಯಿಯ ಕೃಷಿ ಕನಿಷ್ಠ 150 ವರ್ಷಗಳಷ್ಟು ಹಳೆಯದಾಗಿದೆ.
'''ಸ್ಥಳೀಯ ಹೆಸರು'''<br>
ಇದನ್ನು ಸ್ಥಳೀಯವಾಗಿ ಎಡೆಯೂರು ಮುಳಕು ಎಂದು ಕರೆಯಲಾಗುತ್ತದೆ. ಕೇರಳದ ಸ್ಥಳೀಯ ಭಾಷೆಯಾದ ಮಲಯಾಳಂನಲ್ಲಿ ಮುಳಕು ಎಂದರೆ ಮೆಣಸಿನಕಾಯಿ ಎಂದರ್ಥ.
== ವಿವರಣೆ ==
'''ಕೃಷಿ'''<br>
ಎಡೆಯೂರು ಮೆಣಸಿನಕಾಯಿಯ ಸಾಂಪ್ರದಾಯಿಕ ಕೃಷಿ ಪ್ರದೇಶಗಳಲ್ಲಿ ಬೆಟ್ಟಗಳು, ಗುಡ್ಡಗಳು ಮತ್ತು ಲ್ಯಾಟರೈಟ್ ಮಣ್ಣಿನ ಪ್ರದೇಶಗಳು ಸೇರಿವೆ.
'''ಭೌತಿಕ ಲಕ್ಷಣಗಳು'''<br>
ಎಡೆಯೂರು ಮೆಣಸಿನಕಾಯಿಯ ಹಣ್ಣುಗಳು ಸಾಮಾನ್ಯವಾಗಿ ಕೆಳಮುಖವಾಗಿ ನೇತಾಡುತ್ತವೆ ಮತ್ತು ಒಂದೊಂದಾಗಿ ಬೆಳೆಯುತ್ತವೆ. ಅವು ಮಧ್ಯಮ ಗಾತ್ರದ ತ್ರಿಕೋನಾಕಾರದ ಆಕಾರವನ್ನು ಹೊಂದಿದ್ದು, ಮೇಲ್ಮೈ ನಯವಾಗಿರುತ್ತದೆ.
'''ಖಾರ ಮತ್ತು ಬಳಕೆ'''<br>
ಎಡೆಯೂರು ಮೆಣಸಿನಕಾಯಿಯನ್ನು ಮುಖ್ಯವಾಗಿ ಕೇರಳದ ಸಾಂಪ್ರದಾಯಿಕ ಖಾದ್ಯವಾದ "ಕೊಂಡಾಟ್ಟಂ" ತಯಾರಿಸಲು ಬಳಸಲಾಗುತ್ತದೆ. ಕೊಂಡಾಟ್ಟಂ ಅನ್ನು ಮೊಸರಿನಲ್ಲಿ ನೆನೆಸಿದ ಮೆಣಸಿನಕಾಯಿಗಳನ್ನು ಬಿಸಿಲಿನಲ್ಲಿ ಒಣಗಿಸಿ ತಯಾರಿಸಲಾಗುತ್ತದೆ. ಒಣಗಿಸಿದ ಕೊಂಡಾಟ್ಟಂ ಮುಳಕುಗಳನ್ನು ಹಲವು ತಿಂಗಳುಗಳವರೆಗೆ ಸಂಗ್ರಹಿಸಿಡಬಹುದು ಮತ್ತು ಅವುಗಳ ವಿಶಿಷ್ಟ ರುಚಿಯನ್ನು ಕಾಪಾಡಿಕೊಳ್ಳುತ್ತವೆ.
ಕೊಂಡಾಟ್ಟಂ ಮುಳಕುವನ್ನು ಎಣ್ಣೆಯಲ್ಲಿ ಹುರಿದು ಮೊಸರಿನೊಂದಿಗೆ ಸೇವಿಸಲಾಗುತ್ತದೆ. ಇದು ಸರಳವಾದರೂ ರುಚಿಕರವಾದ ಸಾಂಪ್ರದಾಯಿಕ ಭೋಜನದ ಸೈಡ್ ಡಿಶ್ ಆಗಿ ಬಳಸಲಾಗುತ್ತದೆ.
n6bxidbmeiar7ucm4rgme8h4c81xo1l
1379601
1379600
2026-08-09T09:20:49Z
Santhosh Notagar99
82732
1379601
wikitext
text/x-wiki
{{Short description|Chilli variety grown in Kerala, India}}
{{Infobox cultivar
| name = Edayur chilli (ಎಡೆಯೂರು ಮೆಣಸಿನಕಾಯಿ)
| image = Unripened Green Edayur chilli.jpg
| image_caption = ಎಡೆಯೂರು ಮೆಣಸಿನಕಾಯಿ
| species = ''ಕ್ಯಾಪ್ಸಿಕಂ''
| origin = ಕೇರಳ, ಭಾರತ
| module = {{Infobox pepper
|embed = yes
|heat =
|scoville = 1968<ref>{{cite journal |title=Edayur Chilli - GI Application No. 662 |journal=Government of India Geographical Indications Journal |issue=137 |date=May 29, 2020 |page=22 |url=https://www.ipindia.gov.in/writereaddata/Portal/Images/pdf/Journal_137.pdf |access-date=25 October 2024}}</ref>
}}
}}
'''ಎಡೆಯೂರು ಮೆಣಸಿನಕಾಯಿ''' ಕೇರಳ ರಾಜ್ಯದಲ್ಲಿ ಮುಖ್ಯವಾಗಿ ಬೆಳೆಯಲಾಗುವ ಒಂದು ಬಗೆಯ ಮೆಣಸಿನಕಾಯಿಯಾಗಿದೆ. ಇದು ಕೇರಳದ ಮಲಪ್ಪುರಂ ಜಿಲ್ಲೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರಧಾನವಾಗಿ ಬೆಳೆಯುವ ಸ್ಥಳೀಯ ತಳಿಯಾಗಿದೆ.
ಎಡೆಯೂರು ಮೆಣಸಿನಕಾಯಿಯನ್ನು ಮುಖ್ಯವಾಗಿ ವಲಂಚೇರಿ ಬ್ಲಾಕ್ನ ಎಡೆಯೂರು, ಆತವನಾಡ್, ಮರಕ್ಕರ, ಇರಿಂಬಿಲಿಯಂ, ಕಲ್ಪಕಂಚೇರಿ ಮತ್ತು ವಲಂಚೇರಿ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಅಂಗಾಡಿಪುರಂ ಬ್ಲಾಕ್ನ ಮೂರ್ಕನಾಡ್ ಮತ್ತು ಕುರುವ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆಯಲಾಗುತ್ತದೆ.
== ಹೆಸರು ==
ಎಡೆಯೂರು ಮೆಣಸಿನಕಾಯಿ ಎಂಬ ಹೆಸರು ಇದರ ಮೂಲಸ್ಥಳವಾದ ಎಡೆಯೂರು ಗ್ರಾಮದಿಂದ ಬಂದಿದೆ. ಎಡೆಯೂರು ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ಈ ಪ್ರದೇಶದಲ್ಲಿ ಎಡೆಯೂರು ಮೆಣಸಿನಕಾಯಿಯ ಕೃಷಿ ಕನಿಷ್ಠ 150 ವರ್ಷಗಳಷ್ಟು ಹಳೆಯದಾಗಿದೆ.
'''ಸ್ಥಳೀಯ ಹೆಸರು'''<br>
ಇದನ್ನು ಸ್ಥಳೀಯವಾಗಿ ಎಡೆಯೂರು ಮುಳಕು ಎಂದು ಕರೆಯಲಾಗುತ್ತದೆ. ಕೇರಳದ ಸ್ಥಳೀಯ ಭಾಷೆಯಾದ ಮಲಯಾಳಂನಲ್ಲಿ ಮುಳಕು ಎಂದರೆ ಮೆಣಸಿನಕಾಯಿ ಎಂದರ್ಥ.
== ವಿವರಣೆ ==
'''ಕೃಷಿ'''<br>
ಎಡೆಯೂರು ಮೆಣಸಿನಕಾಯಿಯ ಸಾಂಪ್ರದಾಯಿಕ ಕೃಷಿ ಪ್ರದೇಶಗಳಲ್ಲಿ ಬೆಟ್ಟಗಳು, ಗುಡ್ಡಗಳು ಮತ್ತು ಲ್ಯಾಟರೈಟ್ ಮಣ್ಣಿನ ಪ್ರದೇಶಗಳು ಸೇರಿವೆ.
'''ಭೌತಿಕ ಲಕ್ಷಣಗಳು'''<br>
ಎಡೆಯೂರು ಮೆಣಸಿನಕಾಯಿಯ ಹಣ್ಣುಗಳು ಸಾಮಾನ್ಯವಾಗಿ ಕೆಳಮುಖವಾಗಿ ನೇತಾಡುತ್ತವೆ ಮತ್ತು ಒಂದೊಂದಾಗಿ ಬೆಳೆಯುತ್ತವೆ. ಅವು ಮಧ್ಯಮ ಗಾತ್ರದ ತ್ರಿಕೋನಾಕಾರದ ಆಕಾರವನ್ನು ಹೊಂದಿದ್ದು, ಮೇಲ್ಮೈ ನಯವಾಗಿರುತ್ತದೆ.
'''ಖಾರ ಮತ್ತು ಬಳಕೆ'''<br>
ಎಡೆಯೂರು ಮೆಣಸಿನಕಾಯಿಯನ್ನು ಮುಖ್ಯವಾಗಿ ಕೇರಳದ ಸಾಂಪ್ರದಾಯಿಕ ಖಾದ್ಯವಾದ "ಕೊಂಡಾಟ್ಟಂ" ತಯಾರಿಸಲು ಬಳಸಲಾಗುತ್ತದೆ. ಕೊಂಡಾಟ್ಟಂ ಅನ್ನು ಮೊಸರಿನಲ್ಲಿ ನೆನೆಸಿದ ಮೆಣಸಿನಕಾಯಿಗಳನ್ನು ಬಿಸಿಲಿನಲ್ಲಿ ಒಣಗಿಸಿ ತಯಾರಿಸಲಾಗುತ್ತದೆ. ಒಣಗಿಸಿದ ಕೊಂಡಾಟ್ಟಂ ಮುಳಕುಗಳನ್ನು ಹಲವು ತಿಂಗಳುಗಳವರೆಗೆ ಸಂಗ್ರಹಿಸಿಡಬಹುದು ಮತ್ತು ಅವುಗಳ ವಿಶಿಷ್ಟ ರುಚಿಯನ್ನು ಕಾಪಾಡಿಕೊಳ್ಳುತ್ತವೆ.
ಕೊಂಡಾಟ್ಟಂ ಮುಳಕುವನ್ನು ಎಣ್ಣೆಯಲ್ಲಿ ಹುರಿದು ಮೊಸರಿನೊಂದಿಗೆ ಸೇವಿಸಲಾಗುತ್ತದೆ. ಇದು ಸರಳವಾದರೂ ರುಚಿಕರವಾದ ಸಾಂಪ್ರದಾಯಿಕ ಭೋಜನದ ಸೈಡ್ ಡಿಶ್ ಆಗಿ ಬಳಸಲಾಗುತ್ತದೆ.
l21uqf1s435ilg8bp1vxkm1a9hv3tnw
1379602
1379601
2026-08-09T09:22:51Z
Santhosh Notagar99
82732
1379602
wikitext
text/x-wiki
{{Short description|Chilli variety grown in Kerala, India}}
{{Infobox cultivar
| name = Edayur chilli (ಎಡೆಯೂರು ಮೆಣಸಿನಕಾಯಿ)
| image = Unripened Green Edayur chilli.jpg
| image_caption = ಎಡೆಯೂರು ಮೆಣಸಿನಕಾಯಿ
| species = ''ಕ್ಯಾಪ್ಸಿಕಂ''
| origin = ಕೇರಳ, ಭಾರತ
| module = {{Infobox pepper
|embed = yes
|heat =
|scoville = 1968<ref>{{cite journal |title=Edayur Chilli - GI Application No. 662 |journal=Government of India Geographical Indications Journal |issue=137 |date=May 29, 2020 |page=22 |url=https://www.ipindia.gov.in/writereaddata/Portal/Images/pdf/Journal_137.pdf |access-date=25 October 2024}}</ref>
}}
}}
'''ಎಡೆಯೂರು ಮೆಣಸಿನಕಾಯಿ''' ಕೇರಳ ರಾಜ್ಯದಲ್ಲಿ ಮುಖ್ಯವಾಗಿ ಬೆಳೆಯಲಾಗುವ ಒಂದು ಬಗೆಯ ಮೆಣಸಿನಕಾಯಿಯಾಗಿದೆ. ಇದು ಕೇರಳದ ಮಲಪ್ಪುರಂ ಜಿಲ್ಲೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರಧಾನವಾಗಿ ಬೆಳೆಯುವ ಸ್ಥಳೀಯ ತಳಿಯಾಗಿದೆ.<ref>{{cite book |last1=Variyar |first1=Prasad S. |last2=Singh |first2=Inder Pal |last3=Adiani |first3=Vanshika |last4=Suprasanna |first4=Penna |title=Peppers: Biological, Health, and Postharvest Perspectives |date=8 November 2024 |publisher=CRC Press |isbn=978-1-040-15384-0 |url=https://books.google.com/books?id=L-EoEQAAQBAJ&dq=Edayur+chilli&pg=PA19 |access-date=10 November 2024 |language=en}}</ref>
ಎಡೆಯೂರು ಮೆಣಸಿನಕಾಯಿಯನ್ನು ಮುಖ್ಯವಾಗಿ ವಲಂಚೇರಿ ಬ್ಲಾಕ್ನ ಎಡೆಯೂರು, ಆತವನಾಡ್, ಮರಕ್ಕರ, ಇರಿಂಬಿಲಿಯಂ, ಕಲ್ಪಕಂಚೇರಿ ಮತ್ತು ವಲಂಚೇರಿ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಅಂಗಾಡಿಪುರಂ ಬ್ಲಾಕ್ನ ಮೂರ್ಕನಾಡ್ ಮತ್ತು ಕುರುವ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆಯಲಾಗುತ್ತದೆ.<ref>{{cite journal |title=Edayur Chilli - GI Application No. 662 |journal=Government of India Geographical Indications Journal |issue=137 |date=May 29, 2020 |page=18 |url=https://www.ipindia.gov.in/writereaddata/Portal/Images/pdf/Journal_137.pdf |access-date=25 October 2024}}</ref>
== ಹೆಸರು ==
ಎಡೆಯೂರು ಮೆಣಸಿನಕಾಯಿ ಎಂಬ ಹೆಸರು ಇದರ ಮೂಲಸ್ಥಳವಾದ ಎಡೆಯೂರು ಗ್ರಾಮದಿಂದ ಬಂದಿದೆ. ಎಡೆಯೂರು ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ಈ ಪ್ರದೇಶದಲ್ಲಿ ಎಡೆಯೂರು ಮೆಣಸಿನಕಾಯಿಯ ಕೃಷಿ ಕನಿಷ್ಠ 150 ವರ್ಷಗಳಷ್ಟು ಹಳೆಯದಾಗಿದೆ.<ref>{{cite book |last1=Ravindran |first1=P. N. |last2=Sivaraman |first2=K. |last3=Devasahayam |first3=S. |last4=Babu |first4=K. Nirmal |title=Handbook of Spices in India: 75 Years of Research and Development |date=2024 |publisher=Springer Nature |isbn=978-981-19-3728-6 |url=https://books.google.com/books?id=Vz4QEQAAQBAJ&dq=Edayur+chilli&pg=PA2041 |access-date=10 November 2024 |language=en}}</ref>
'''ಸ್ಥಳೀಯ ಹೆಸರು'''<br>
ಇದನ್ನು ಸ್ಥಳೀಯವಾಗಿ ಎಡೆಯೂರು ಮುಳಕು ಎಂದು ಕರೆಯಲಾಗುತ್ತದೆ. ಕೇರಳದ ಸ್ಥಳೀಯ ಭಾಷೆಯಾದ ಮಲಯಾಳಂನಲ್ಲಿ ಮುಳಕು ಎಂದರೆ ಮೆಣಸಿನಕಾಯಿ ಎಂದರ್ಥ.
== ವಿವರಣೆ ==
'''ಕೃಷಿ'''<br>
ಎಡೆಯೂರು ಮೆಣಸಿನಕಾಯಿಯ ಸಾಂಪ್ರದಾಯಿಕ ಕೃಷಿ ಪ್ರದೇಶಗಳಲ್ಲಿ ಬೆಟ್ಟಗಳು, ಗುಡ್ಡಗಳು ಮತ್ತು ಲ್ಯಾಟರೈಟ್ ಮಣ್ಣಿನ ಪ್ರದೇಶಗಳು ಸೇರಿವೆ.
'''ಭೌತಿಕ ಲಕ್ಷಣಗಳು'''<br>
ಎಡೆಯೂರು ಮೆಣಸಿನಕಾಯಿಯ ಹಣ್ಣುಗಳು ಸಾಮಾನ್ಯವಾಗಿ ಕೆಳಮುಖವಾಗಿ ನೇತಾಡುತ್ತವೆ ಮತ್ತು ಒಂದೊಂದಾಗಿ ಬೆಳೆಯುತ್ತವೆ. ಅವು ಮಧ್ಯಮ ಗಾತ್ರದ ತ್ರಿಕೋನಾಕಾರದ ಆಕಾರವನ್ನು ಹೊಂದಿದ್ದು, ಮೇಲ್ಮೈ ನಯವಾಗಿರುತ್ತದೆ.
'''ಖಾರ ಮತ್ತು ಬಳಕೆ'''<br>
ಎಡೆಯೂರು ಮೆಣಸಿನಕಾಯಿಯನ್ನು ಮುಖ್ಯವಾಗಿ ಕೇರಳದ ಸಾಂಪ್ರದಾಯಿಕ ಖಾದ್ಯವಾದ "ಕೊಂಡಾಟ್ಟಂ" ತಯಾರಿಸಲು ಬಳಸಲಾಗುತ್ತದೆ. ಕೊಂಡಾಟ್ಟಂ ಅನ್ನು ಮೊಸರಿನಲ್ಲಿ ನೆನೆಸಿದ ಮೆಣಸಿನಕಾಯಿಗಳನ್ನು ಬಿಸಿಲಿನಲ್ಲಿ ಒಣಗಿಸಿ ತಯಾರಿಸಲಾಗುತ್ತದೆ. ಒಣಗಿಸಿದ ಕೊಂಡಾಟ್ಟಂ ಮುಳಕುಗಳನ್ನು ಹಲವು ತಿಂಗಳುಗಳವರೆಗೆ ಸಂಗ್ರಹಿಸಿಡಬಹುದು ಮತ್ತು ಅವುಗಳ ವಿಶಿಷ್ಟ ರುಚಿಯನ್ನು ಕಾಪಾಡಿಕೊಳ್ಳುತ್ತವೆ.<ref>{{cite news |title=GI tag for Kerala's Kuttiattoor mango & Edayur chilli |url=https://timesofindia.indiatimes.com/city/kochi/gi-tag-for-keralas-kuttiattoor-mango-edayur-chilli/articleshow/86905783.cms |access-date=25 October 2024 |work=The Times of India |date=10 October 2021}}</ref>
ಕೊಂಡಾಟ್ಟಂ ಮುಳಕುವನ್ನು ಎಣ್ಣೆಯಲ್ಲಿ ಹುರಿದು ಮೊಸರಿನೊಂದಿಗೆ ಸೇವಿಸಲಾಗುತ್ತದೆ. ಇದು ಸರಳವಾದರೂ ರುಚಿಕರವಾದ ಸಾಂಪ್ರದಾಯಿಕ ಭೋಜನದ ಸೈಡ್ ಡಿಶ್ ಆಗಿ ಬಳಸಲಾಗುತ್ತದೆ.<ref>{{cite book |last1=Prasad |first1=Rajendra |title=Current Affairs Year Book 2022: Geography |publisher=MYUPSC |url=https://books.google.com/books?id=OcxkEAAAQBAJ&dq=Kondattom&pg=PT48 |access-date=10 November 2024 |language=en}}</ref><ref>{{cite book |last1=Sen |first1=Colleen Taylor |last2=Bhattacharyya |first2=Sourish |last3=Saberi |first3=Helen |title=The Bloomsbury Handbook of Indian Cuisine |date=23 February 2023 |publisher=Bloomsbury Publishing |isbn=978-1-350-12865-1 |url=https://books.google.com/books?id=AzysEAAAQBAJ&dq=Edayur+chilli&pg=PT112 |access-date=10 November 2024 |language=en}}</ref>
2cqtg92ap4tt8b4w4bacf3cqnjf2xi7
1379603
1379602
2026-08-09T09:23:18Z
Santhosh Notagar99
82732
1379603
wikitext
text/x-wiki
{{Short description|Chilli variety grown in Kerala, India}}
{{Infobox cultivar
| name = Edayur chilli (ಎಡೆಯೂರು ಮೆಣಸಿನಕಾಯಿ)
| image = Unripened Green Edayur chilli.jpg
| image_caption = ಎಡೆಯೂರು ಮೆಣಸಿನಕಾಯಿ
| species = ''ಕ್ಯಾಪ್ಸಿಕಂ''
| origin = ಕೇರಳ, ಭಾರತ
| module = {{Infobox pepper
|embed = yes
|heat =
|scoville = 1968<ref>{{cite journal |title=Edayur Chilli - GI Application No. 662 |journal=Government of India Geographical Indications Journal |issue=137 |date=May 29, 2020 |page=22 |url=https://www.ipindia.gov.in/writereaddata/Portal/Images/pdf/Journal_137.pdf |access-date=25 October 2024}}</ref>
}}
}}
'''ಎಡೆಯೂರು ಮೆಣಸಿನಕಾಯಿ''' ಕೇರಳ ರಾಜ್ಯದಲ್ಲಿ ಮುಖ್ಯವಾಗಿ ಬೆಳೆಯಲಾಗುವ ಒಂದು ಬಗೆಯ ಮೆಣಸಿನಕಾಯಿಯಾಗಿದೆ. ಇದು ಕೇರಳದ ಮಲಪ್ಪುರಂ ಜಿಲ್ಲೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರಧಾನವಾಗಿ ಬೆಳೆಯುವ ಸ್ಥಳೀಯ ತಳಿಯಾಗಿದೆ.<ref>{{cite book |last1=Variyar |first1=Prasad S. |last2=Singh |first2=Inder Pal |last3=Adiani |first3=Vanshika |last4=Suprasanna |first4=Penna |title=Peppers: Biological, Health, and Postharvest Perspectives |date=8 November 2024 |publisher=CRC Press |isbn=978-1-040-15384-0 |url=https://books.google.com/books?id=L-EoEQAAQBAJ&dq=Edayur+chilli&pg=PA19 |access-date=10 November 2024 |language=en}}</ref>
ಎಡೆಯೂರು ಮೆಣಸಿನಕಾಯಿಯನ್ನು ಮುಖ್ಯವಾಗಿ ವಲಂಚೇರಿ ಬ್ಲಾಕ್ನ ಎಡೆಯೂರು, ಆತವನಾಡ್, ಮರಕ್ಕರ, ಇರಿಂಬಿಲಿಯಂ, ಕಲ್ಪಕಂಚೇರಿ ಮತ್ತು ವಲಂಚೇರಿ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಅಂಗಾಡಿಪುರಂ ಬ್ಲಾಕ್ನ ಮೂರ್ಕನಾಡ್ ಮತ್ತು ಕುರುವ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆಯಲಾಗುತ್ತದೆ.<ref>{{cite journal |title=Edayur Chilli - GI Application No. 662 |journal=Government of India Geographical Indications Journal |issue=137 |date=May 29, 2020 |page=18 |url=https://www.ipindia.gov.in/writereaddata/Portal/Images/pdf/Journal_137.pdf |access-date=25 October 2024}}</ref>
== ಹೆಸರು ==
ಎಡೆಯೂರು ಮೆಣಸಿನಕಾಯಿ ಎಂಬ ಹೆಸರು ಇದರ ಮೂಲಸ್ಥಳವಾದ ಎಡೆಯೂರು ಗ್ರಾಮದಿಂದ ಬಂದಿದೆ. ಎಡೆಯೂರು ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ಈ ಪ್ರದೇಶದಲ್ಲಿ ಎಡೆಯೂರು ಮೆಣಸಿನಕಾಯಿಯ ಕೃಷಿ ಕನಿಷ್ಠ 150 ವರ್ಷಗಳಷ್ಟು ಹಳೆಯದಾಗಿದೆ.<ref>{{cite book |last1=Ravindran |first1=P. N. |last2=Sivaraman |first2=K. |last3=Devasahayam |first3=S. |last4=Babu |first4=K. Nirmal |title=Handbook of Spices in India: 75 Years of Research and Development |date=2024 |publisher=Springer Nature |isbn=978-981-19-3728-6 |url=https://books.google.com/books?id=Vz4QEQAAQBAJ&dq=Edayur+chilli&pg=PA2041 |access-date=10 November 2024 |language=en}}</ref>
'''ಸ್ಥಳೀಯ ಹೆಸರು'''<br>
ಇದನ್ನು ಸ್ಥಳೀಯವಾಗಿ ಎಡೆಯೂರು ಮುಳಕು ಎಂದು ಕರೆಯಲಾಗುತ್ತದೆ. ಕೇರಳದ ಸ್ಥಳೀಯ ಭಾಷೆಯಾದ ಮಲಯಾಳಂನಲ್ಲಿ ಮುಳಕು ಎಂದರೆ ಮೆಣಸಿನಕಾಯಿ ಎಂದರ್ಥ.
== ವಿವರಣೆ ==
'''ಕೃಷಿ'''<br>
ಎಡೆಯೂರು ಮೆಣಸಿನಕಾಯಿಯ ಸಾಂಪ್ರದಾಯಿಕ ಕೃಷಿ ಪ್ರದೇಶಗಳಲ್ಲಿ ಬೆಟ್ಟಗಳು, ಗುಡ್ಡಗಳು ಮತ್ತು ಲ್ಯಾಟರೈಟ್ ಮಣ್ಣಿನ ಪ್ರದೇಶಗಳು ಸೇರಿವೆ.
'''ಭೌತಿಕ ಲಕ್ಷಣಗಳು'''<br>
ಎಡೆಯೂರು ಮೆಣಸಿನಕಾಯಿಯ ಹಣ್ಣುಗಳು ಸಾಮಾನ್ಯವಾಗಿ ಕೆಳಮುಖವಾಗಿ ನೇತಾಡುತ್ತವೆ ಮತ್ತು ಒಂದೊಂದಾಗಿ ಬೆಳೆಯುತ್ತವೆ. ಅವು ಮಧ್ಯಮ ಗಾತ್ರದ ತ್ರಿಕೋನಾಕಾರದ ಆಕಾರವನ್ನು ಹೊಂದಿದ್ದು, ಮೇಲ್ಮೈ ನಯವಾಗಿರುತ್ತದೆ.
'''ಖಾರ ಮತ್ತು ಬಳಕೆ'''<br>
ಎಡೆಯೂರು ಮೆಣಸಿನಕಾಯಿಯನ್ನು ಮುಖ್ಯವಾಗಿ ಕೇರಳದ ಸಾಂಪ್ರದಾಯಿಕ ಖಾದ್ಯವಾದ "ಕೊಂಡಾಟ್ಟಂ" ತಯಾರಿಸಲು ಬಳಸಲಾಗುತ್ತದೆ. ಕೊಂಡಾಟ್ಟಂ ಅನ್ನು ಮೊಸರಿನಲ್ಲಿ ನೆನೆಸಿದ ಮೆಣಸಿನಕಾಯಿಗಳನ್ನು ಬಿಸಿಲಿನಲ್ಲಿ ಒಣಗಿಸಿ ತಯಾರಿಸಲಾಗುತ್ತದೆ. ಒಣಗಿಸಿದ ಕೊಂಡಾಟ್ಟಂ ಮುಳಕುಗಳನ್ನು ಹಲವು ತಿಂಗಳುಗಳವರೆಗೆ ಸಂಗ್ರಹಿಸಿಡಬಹುದು ಮತ್ತು ಅವುಗಳ ವಿಶಿಷ್ಟ ರುಚಿಯನ್ನು ಕಾಪಾಡಿಕೊಳ್ಳುತ್ತವೆ.<ref>{{cite news |title=GI tag for Kerala's Kuttiattoor mango & Edayur chilli |url=https://timesofindia.indiatimes.com/city/kochi/gi-tag-for-keralas-kuttiattoor-mango-edayur-chilli/articleshow/86905783.cms |access-date=25 October 2024 |work=The Times of India |date=10 October 2021}}</ref>
ಕೊಂಡಾಟ್ಟಂ ಮುಳಕುವನ್ನು ಎಣ್ಣೆಯಲ್ಲಿ ಹುರಿದು ಮೊಸರಿನೊಂದಿಗೆ ಸೇವಿಸಲಾಗುತ್ತದೆ. ಇದು ಸರಳವಾದರೂ ರುಚಿಕರವಾದ ಸಾಂಪ್ರದಾಯಿಕ ಭೋಜನದ ಸೈಡ್ ಡಿಶ್ ಆಗಿ ಬಳಸಲಾಗುತ್ತದೆ.<ref>{{cite book |last1=Prasad |first1=Rajendra |title=Current Affairs Year Book 2022: Geography |publisher=MYUPSC |url=https://books.google.com/books?id=OcxkEAAAQBAJ&dq=Kondattom&pg=PT48 |access-date=10 November 2024 |language=en}}</ref><ref>{{cite book |last1=Sen |first1=Colleen Taylor |last2=Bhattacharyya |first2=Sourish |last3=Saberi |first3=Helen |title=The Bloomsbury Handbook of Indian Cuisine |date=23 February 2023 |publisher=Bloomsbury Publishing |isbn=978-1-350-12865-1 |url=https://books.google.com/books?id=AzysEAAAQBAJ&dq=Edayur+chilli&pg=PT112 |access-date=10 November 2024 |language=en}}</ref>
== ಉಲ್ಲೇಖಗಳು ==
386a73qvn2ncygef1s8h2xn0uwi2rao